<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 23 Apr 2026 20:20:08 +0530</lastBuildDate>
        <atom:link href="https://kannada.asianetnews.com/rss/kodagu" rel="self" type="application/rss+xml"/>
        <item>
            <title><![CDATA[ಕೊಡಗು ಕಾಡಿನಲ್ಲಿ ಕಳೆದಿದ್ದ ಮಗಳು ಶರಣ್ಯಳ ಪತ್ತೆಗಾಗಿ ಕಂಡ-ಕಂಡವರ ಬೇಡಿದ್ದ ತಾಯಿ; ಫೋನಲ್ಲಿ ಮೊದಲು ಹೇಳಿದ್ದೇನು?]]></title>
            <link>https://kannada.asianetnews.com/karnataka-districts/kodagu-missing-trekker-techie-saranya-found-mother-emotional-reaction-first-phone-call-sat/articleshow-08xupbm</link>
            <guid isPermaLink="true">https://kannada.asianetnews.com/karnataka-districts/kodagu-missing-trekker-techie-saranya-found-mother-emotional-reaction-first-phone-call-sat/articleshow-08xupbm</guid>
            <pubDate>Sun, 05 Apr 2026 20:41:22 +0530</pubDate>
            <description><![CDATA[&lt;p&gt;ಕೊಡಗಿನಲ್ಲಿ ಟ್ರೆಕ್ಕಿಂಗ್&zwnj;ಗೆ ಹೋಗಿ ದಾರಿ ತಪ್ಪಿ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ, 3 ದಿನಗಳ ತೀವ್ರ ಶೋಧ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಇದಾದ ಬಳಿಕ ಶರಣ್ಯ ಅವರು ತಮ್ಮ ತಾಯಿಗೆ ಕರೆ ಮಾಡಿ ಮಾತನಾಡಿದ್ದು, ಅವರ ತಾಯಿ ಕೇಳಿದ ಮೊದಲ ಮಾತು ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kney8xn2rawkd70c79edejry,imgname-saranya-123-1775396746914.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಡಗಿನಲ್ಲಿ ಟ್ರೆಕ್ಕಿಂಗ್&zwnj;ಗೆ ಹೋಗಿ ದಾರಿ ತಪ್ಪಿ ನಾಪತ್ತೆಯಾಗಿದ್ದ ಕೇರಳದ ಕೋಯಿಕ್ಕೋಡ್&zwnj;ನ ನಾಡಾಪುರಂ ನಿವಾಸಿ ಟೆಕ್ಕಿ ಶರಣ್ಯ, ಬರೋಬ್ಬರಿ 3 ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಶೋಧ ತಂಡದವರು ಶರಣ್ಯರನ್ನು ಪತ್ತೆ ಮಾಡಿದ ತಕ್ಷಣ, ಅವರು ತಮ್ಮ ತಾಯಿಗೆ ಫೋನ್ ಮಾಡಿ ಮಾತನಾಡಿದ್ದಾರೆ. ಮಗಳು ಸಿಕ್ಕ ಖುಷಿಯಲ್ಲಿ ತಾಯಿ ಆನಂದಭಾಷ್ಪ ಸುರಿಸಿದ್ದಾರೆ. ಆದರೆ, ತಾಯಿ ಮಗಳೊಂದಿಗೆ ಮಾತನಾಡುವ ಕೇಳಿದ ಮೊದಲ ಮಾತು ಏನೆಂಬುದು ನೀವೇ ನೋಡಿ..&lt;/p&gt;&lt;p&gt;ಕೊಡಗಿನ ದಟ್ಟಾರಣ್ಯದಲ್ಲಿ ಕಳೆದು ಹೋಗಿದ್ದ ಕೇರಳದ ಟೆಕ್ಕಿ ಶರಣ್ಯಗಾಗಿ ಕರ್ನಾಟಕದ ಅರಣ್ಯ ಇಲಾಖೆ ತಂಡ ಹಗಲು-ರಾತ್ರಿ ಜೀವಭಯವನ್ನು ಬಿಟ್ಟು ಶೋಧ ಕಾರ್ಯ ಮಾಡಿತ್ತು. ಸತತ 4ನೇ ದಿನದ ಶೋಧ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಆದಿವಾಸಿಗಳ ತಂಡ ಶರಣ್ಯರನ್ನು ಪತ್ತೆ ಮಾಡಿದೆ. ಸದ್ಯ ಶರಣ್ಯ ಅವರು ಆರೋಗ್ಯವಾಗಿದ್ದು, ಹೆಚ್ಚಿನ ತಪಾಸಣೆಗಾಗಿ ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷೆಗಳ ನಂತರ ಅವರನ್ನು ಊರಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶರಣ್ಯ ಅವರಿಗೆ ಈ ಹಿಂದಿನ ಟ್ರೆಕ್ಕಿಂಗ್ ಅನುಭವವೇ ಈ ಕಠಿಣ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳಲು ಸಹಾಯ ಮಾಡಿದೆ. ತಂಡದ ಜೊತೆ ಹೋಗುತ್ತಿದ್ದಾಗ ಅವರು ದಾರಿ ತಪ್ಪಿ ಒಂಟಿಯಾಗಿದ್ದರು.&lt;/p&gt;&lt;h3&gt;&lt;strong&gt;ಒಟ್ಟು 8 ತಂಡಗಳಾಗಿ ಶೋಧ ಕಾರ್ಯ&lt;/strong&gt;&lt;/h3&gt;&lt;p&gt;'ಈ ಖುಷಿಯನ್ನು ಹೇಳಲು ಪದಗಳೇ ಸಿಗುತ್ತಿಲ್ಲ' ಎಂದು ಶರಣ್ಯರ ಸಹೋದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಸಹೋದರ ಕೂಡ ಇದೊಂದು ಸಂತೋಷದ ಸುದ್ದಿ ಎಂದಿದ್ದಾರೆ. ಥರ್ಮಲ್ ಡ್ರೋನ್ ಬಳಸಿ ನಡೆಸಿದ ತಪಾಸಣೆಯಲ್ಲಿ ಶರಣ್ಯ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ತಕ್ಷಣ ಅವರನ್ನು ತಡಿಯಂಡಮೋಳ್ ಟ್ರೆಕ್ಕಿಂಗ್ ಕ್ಯಾಂಪ್ ಕಚೇರಿಗೆ ಕರೆತರಲಾಯಿತು. ಶೋಧ ಕಾರ್ಯಾಚರಣೆಗಾಗಿ ಒಟ್ಟು ಎಂಟು ತಂಡಗಳನ್ನು ರಚಿಸಲಾಗಿತ್ತು. ಈ ಪೈಕಿ ಆರು ತಂಡಗಳು ಈಗಾಗಲೇ ವಾಪಸ್ ಆಗಿದ್ದವು. ಇನ್ನೊಂದು ತಂಡ ಕೂಡ ವಾಪಸ್ ಹೊರಡಲು ಸಿದ್ಧವಾಗುತ್ತಿದ್ದಾಗ ಶರಣ್ಯ ಪತ್ತೆಯಾಗಿದ್ದಾರೆ. ನಕ್ಸಲ್ ನಿಗ್ರಹ ದಳ ಕೂಡ ಈ ಶೋಧದಲ್ಲಿ ಭಾಗಿಯಾಗಿತ್ತು.&lt;/p&gt;&lt;h2&gt;&lt;strong&gt;ಕೋಟಿ ನಮಸ್ಕಾರ ಎಂದ ತಾಯಿ:&lt;/strong&gt;&lt;/h2&gt;&lt;p&gt;ಶರಣ್ಯಳನ್ನು ಫೋನ್ ಸಿಗ್ನಲ್ ಸಿಗುವ ಪ್ರದೇಶಕ್ಕೆ ಕರೆತಂದ ಕೂಡಲೇ ಆಕೆಯ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಶರಣ್ಯ ಸಿಕ್ಕಿರುವ ಮಾಹಿತಿ ಕೇಳುತ್ತಿದ್ದಂತೆ ಕಣ್ಣಾಲಿಗಳನ್ನು ತುಂಬಿಕೊಂಡ ಅವರ ತಾಯಿ, ನನಗೆ ಸಂತೋಷವನ್ನ ಹೇಳಲಿಕ್ಕೆ ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗೆ ತುಂಬಾ ಧನ್ಯವಾದ, ನಿಮಗೆ ಇಲ್ಲಿಂದಲೇ ಕೋಟಿ ನಮಸ್ಕಾರ ಮಾಡ್ತೇನೆ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ಶರಣ್ಯ ಕೂಡ ಅಮ್ಮನೊಂದಿಗೆ ಮಾತನಾಡಿ, 'ಆರೋಗ್ಯವಾಗಿದ್ದೇನೆ ನಾನು ಚಿಂತೆ ಬೇಡ, ಬೇಗ ಮನೆಗೆ ಬರ್ತೇನೆ' ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಶರಣ್ಯಾಗೆ ಅನುಭವವೇ ಧೈರ್ಯವಾಗಿತ್ತು:&lt;/strong&gt;&lt;/h3&gt;&lt;p&gt;ಕಾಡಿನಲ್ಲಿ ಅನ್ನ-ಆಹಾರ ಇಲ್ಲದಿದ್ದರೂ ಬದುಕುಳಿದ ಬಗ್ಗೆ ಮಾತನಾಡಿದ ಶರಣ್ಯ, 'ನಾನು ನನ್ನ ಸ್ನೇಹಿತರಿಗೆ ಕರೆ ಮಾಡಲು ಪ್ರಯತ್ನಿಸಿದೆ, ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಒಂದೇ ಒಂದು ಬಾಟಲಿ ನೀರು ಮಾತ್ರ. ಡ್ರೋನ್ ಬಳಸಿ ಹುಡುಕಾಟ ನಡೆಸುತ್ತಾರೆ ಎಂಬ ನಿರೀಕ್ಷೆ ಇತ್ತು. ಹಾಗಾಗಿ, ಡ್ರೋನ್&zwnj;ಗೆ ಕಾಣಿಸುವಂತಹ ತೆರೆದ ಜಾಗದಲ್ಲಿಯೇ ಉಳಿದುಕೊಂಡಿದ್ದೆ' ಎಂದು ಹೇಳಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯನ್ನು ನಿರಂತರವಾಗಿ ವರದಿ ಮಾಡಿದ ಏಷ್ಯಾನೆಟ್ ನ್ಯೂಸ್&zwnj;ಗೆ ಶರಣ್ಯ ಕುಟುಂಬ ವಿಶೇಷ ಧನ್ಯವಾದ ತಿಳಿಸಿದೆ.&lt;/p&gt;&lt;h3&gt;&lt;strong&gt;ಡ್ರೋನ್ ಕ್ಯಾಮೆರಾ ಬರುತ್ತೆಂದು ನಿರೀಕ್ಷಿಸಿದ್ದ ಶರಣ್ಯ:&lt;/strong&gt;&lt;/h3&gt;&lt;p&gt;ಕಾಡಿನಲ್ಲಿ ಡ್ರೋನ್ ಹಾರಾಟ ಮಾಡುತ್ತಿದ್ದಂತೆ, ಎತ್ತರದ ಮತ್ತು ಸ್ವಲ್ಪ ಬಯಲಾದ ಜಾಗದಲ್ಲಿಯೇ ನಿಂತುಕೊಂಡಿದ್ದ ಶರಣ್ಯ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾಗೆ ಕಂಡ ಕೂಡಲೇ ಅವರನ್ನು ರಕ್ಷಣೆ ಮಾಡಲಾಗಿದೆ. ಇದಾದ ನಂತರ ಶರಣ್ಯ ಇದ್ದ ದುರ್ಗಮ ಹಾದಿಯತ್ತ ಸಾಗಿದ ಅರಣ್ಯ ಇಲಾಖೆ ಸಿಬ್ಬಂದಿ ನಂತರ ಆಕೆಯನ್ನು ರಕ್ಷಣೆ ಕರೆತರಲಾಯಿತು. ಒಂದು ವೇಳೆ ಅರಣ್ಯದಲ್ಲಿ ಕಾಡು ಪ್ರಾಣಿಗಳ ಭಯದಿಂದ ಎಲ್ಲಿಯಾದಗೂ ಮರದ ಪೊಟರೆಗಳು ಅಥವಾ ಕಲ್ಲಿನ ಬಂಡೆಗಳ ಪಕ್ಕದಲ್ಲಿ ಅಡಗಿ ಕುಳಿತಿದ್ದರೆ ಅರಣ್ಯ ಇಲಾಖೆಯ ಡ್ರೋನ್ ಕ್ಯಾಮೆರಾಗೂ ಸಿಗುತ್ತಿರಲಿಲ್ಲ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kodagu-missing-trekker-techie-saranya-found-mother-emotional-reaction-first-phone-call-sat/articleshow-08xupbm"/>
        </item>
        <item>
            <title><![CDATA[ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ]]></title>
            <link>https://kannada.asianetnews.com/gallery/relationship/vijay-devarakonda-spoke-in-kannada-in-kodagu-during-reception-suc-dbtdyq1</link>
            <guid isPermaLink="true">https://kannada.asianetnews.com/gallery/relationship/vijay-devarakonda-spoke-in-kannada-in-kodagu-during-reception-suc-dbtdyq1</guid>
            <pubDate>Wed, 08 Apr 2026 11:48:49 +0530</pubDate>
            <description><![CDATA[ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಯು ಕೊಡಗಿನ ವಿರಾಜಪೇಟೆಯಲ್ಲಿ ತಮ್ಮ ವಿವಾಹದ ರಿಸೆಪ್ಷನ್ ಹಮ್ಮಿಕೊಂಡಿದ್ದರು. ಈ ಸಮಾರಂಭದಲ್ಲಿ ರಶ್ಮಿಕಾ ಕೊಡವ ಸಂಪ್ರದಾಯದಂತೆ ಮಿಂಚಿದರೆ, ವಿಜಯ್ ದೇವರಕೊಂಡ ಕನ್ನಡದಲ್ಲಿ ಮಾತನಾಡಿ ಎಲ್ಲರನ್ನೂ, ವಿಶೇಷವಾಗಿ ರಶ್ಮಿಕಾರನ್ನು ಅಚ್ಚರಿಗೊಳಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01knnvnm5b08rz36b48hsb5v40,imgname-rashmika-mandanna-and-vijay-devarakonda-1775628898475.jpg" type="image/jpeg" height="390" width="690"/>
            <content:encoded><![CDATA[ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಯು ಕೊಡಗಿನ ವಿರಾಜಪೇಟೆಯಲ್ಲಿ ತಮ್ಮ ವಿವಾಹದ ರಿಸೆಪ್ಷನ್ ಹಮ್ಮಿಕೊಂಡಿದ್ದರು. ಈ ಸಮಾರಂಭದಲ್ಲಿ ರಶ್ಮಿಕಾ ಕೊಡವ ಸಂಪ್ರದಾಯದಂತೆ ಮಿಂಚಿದರೆ, ವಿಜಯ್ ದೇವರಕೊಂಡ ಕನ್ನಡದಲ್ಲಿ ಮಾತನಾಡಿ ಎಲ್ಲರನ್ನೂ, ವಿಶೇಷವಾಗಿ ರಶ್ಮಿಕಾರನ್ನು ಅಚ್ಚರಿಗೊಳಿಸಿದರು.&lt;img&gt;&lt;p&gt;ನ್ಯಾಷನಲ್​ ಕ್ರಷ್​, ಕನ್ನಡದ ಕುವರಿ ರಶ್ಮಿಕಾ ಮಂದಣ್ಣ, ಸದ್ಯ ಟಾಲಿವುಡ್ ರೌಡಿ ಸ್ಟಾರ್ ಎಂದೇ ಫೇಮಸ್​ ಆಗಿರೋ ವಿಜಯ್ ದೇವರಕೊಂಡ ಅವರ ಜೊತೆ ದಾಂಪತ್ಯ ಜೀವನವನ್ನು ಎಂಜಾಯ್​ ಮಾಡುತ್ತಿದ್ದಾರೆ. ಇದರ ನಡುವೆಯೇ, ಕೊಡಗಿನ ವಿರಾಜಪೇಟೆಯಲ್ಲಿ ಮೊನ್ನೆ ಜೋಡಿ ರಶ್ಮಿಕಾ ಕುಟುಂಬದ ಆಪ್ತರು ಮತ್ತು ಸಂಬಂಧಿಕರಿಗಾಗಿ ಅದ್ದೂರಿ ರಿಸೆಪ್ಷನ್ ಹಮ್ಮಿಕೊಂಡಿತ್ತು.&lt;/p&gt;&lt;img&gt;&lt;p&gt;ಕೊಡವ ಸಂಪ್ರದಾಯದಂತೆ ಮತ್ತು ತೆಲುಗು ಸಂಪ್ರದಾಯದಂತೆ ಉದಯಪುರದಲ್ಲಿ ಇವರ ವಿವಾಹವಾಗಿತ್ತು. ಇದೀಗ ಕೊಡವ ಸಂಪ್ರದಾಯದಂತೆ ರಶ್ಮಿಕಾ ಸಂಪೂರ್ಣವಾಗಿ ಕೊಡವತಿಯಾಗಿ ಮಿಂಚಿದರು. ಅವರ ಹೇರ್ ಸ್ಟೈಲ್, ಆಭರಣ, ಬಟ್ಟೆ ಬರೆ ಎಲ್ಲವೂ ಕೊಡವ ಸಂಪ್ರದಾಯದಂತೆಯೇ ಇತ್ತು. ತೆಲುಗಿನ ಸೊಸೆಯಾಗಿರುವ ರಶ್ಮಿಕಾ ತನ್ನ ತವರು ಮನೆಯಲ್ಲಿ ತಾನು ಬೆಳೆದು ಬಂದ ಸಂಪ್ರದಾಯವನ್ನೇ ಅನುಸರಿಸಿದ್ದು ಖುಷಿಯ ಸಂಗತಿಯಾಗಿದೆ. ಇನ್ನು ಪತಿ ವಿಜಯ್ ದೇವರಕೊಂಡ ಕಪ್ಪು ಮತ್ತು ಬಿಳಿ ಕಾಂಬಿನೇಷನ್ ನಲ್ಲಿ ಸೂಟ್&zwnj;, ಬಿಳಿಬಣ್ಣದ ಬೂಟು ಧರಿಸಿದ್ದರು.&lt;/p&gt;&lt;img&gt;&lt;p&gt;ಇಲ್ಲಿ ಹೈಲೈಟ್ ಆದದ್ದು ವಿಜಯ ದೇವರಕೊಂಡ ಅವರು ಕನ್ನಡದಲ್ಲಿಯೇ ತಮ್ಮ ಮಾತನ್ನು ಆರಂಭಿಸಿದ್ದು. ಅಷ್ಟಕ್ಕೂ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಕನ್ನಡ ಚೆನ್ನಾಗಿಯೇ ಬರುತ್ತದೆ. ಕೆಲವೊಮ್ಮೆ ಕನ್ನಡ ಬರುವುದಿಲ್ಲ ಎನ್ನುವಂತೆ ಮಾತನಾಡಿದ್ದರೂ, ಈ ಹಿಂದೆ ಕನ್ನಡದಲ್ಲಿ ಚೆನ್ನಾಗಿ ಮಾತನಾಡಿರುವ ವಿಡಿಯೋಗಳೂ ಇವೆ. ಆದರೆ ಈಗ ಹೈಲೈಟ್ ಆದದ್ದು ವಿಜಯ ದೇವರಕೊಂಡ ಅವರ ಕನ್ನಡ.&lt;/p&gt;&lt;img&gt;&lt;p&gt;ಕೊಡವರನ್ನು ಉದ್ದೇಶಿಸಿ ವಿಜಯ ದೇವರಕೊಂಡ (Vijay Devarakonda) ಅವರು, ಎಲ್ಲರಿಗೂ ನಮಸ್ಕಾರ, ಎಲ್ಲರೂ ಹೇಗಿದ್ದೀರಾ ಎಂದು ಕನ್ನಡದಲ್ಲಿ ಮಾತನ್ನು ಆರಂಭಿಸಿದಾಗ ಅಲ್ಲಿದ್ದವರೆಲ್ಲಾ ಚಪ್ಪಾಳೆಗಳ ಸುರಿಮಳೆಯನ್ನೇ ಸುರಿಸಿದರು. ಖುದ್ದು ರಶ್ಮಿಕಾ ಕೂಡ ಪತಿಯ ಕನ್ನಡ ಕೇಳಿ ಶಾಕ್​ ಆದರು.&lt;/p&gt;&lt;img&gt;&lt;p&gt;ಬಳಿಕ, ವಿಜಯ್​ ಅವರು ಇಂಗ್ಲಿಷ್​ನಲ್ಲಿ ಮಾತನ್ನು ಆರಂಭಿಸಿ, ನಾನು ರಶ್ಮಿಕಾಳಿಂದ ಸ್ವಲ್ಪ ಕನ್ನಡ ಮತ್ತು ಕೊಡವ ಭಾಷೆಯನ್ನು ಕಲಿತಿರುವುದಾಗಿ ಕೆಲವೊಂದು ಶಬ್ದಗಳನ್ನು ಹೇಳಿದರು. ಅಲ್ಲಿದ್ದವರೆಲ್ಲಾ ಮತ್ತಷ್ಟು ಖುಷಿಯಿಂದ ಚಪ್ಪಾಳೆ ತಟ್ಟಿದರು.&lt;/p&gt;&lt;img&gt;&lt;p&gt;ಅಷ್ಟಕ್ಕೂ ಈ ಜೋಡಿ ರಾಜಸ್ಥಾನದ ಉದಯಪುರದಲ್ಲಿ ಗಣ್ಯರ ಸಮ್ಮುಖದಲ್ಲಿ ಮದುವೆಯಾಗಿತ್ತು. ವಿವಾಹ ಮಹೋತ್ಸವಕ್ಕೆ ಕೊಡಗಿನ ಅನೇಕ ಸಂಬಂಧಿಕರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮಂದಣ್ಣ ಕುಟುಂಬದವರು ತಮ್ಮ ಜಿಲ್ಲೆಯ ಹಾಗೂ ರಾಜ್ಯದ ಆಪ್ತರಿಗಾಗಿ ಮತ್ತು ಮಂದಣ್ಣ ಕುಟುಂಬದ ದೊಡ್ಡ ಬಳಗಕ್ಕಾಗಿ ಈ ವಿಶೇಷ ರಿಸೆಪ್ಷನ್ ಏರ್ಪಡಿಸಿದ್ದರು.&lt;/p&gt;]]></content:encoded>
            <category>kodagu</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/vijay-devarakonda-spoke-in-kannada-in-kodagu-during-reception-suc-dbtdyq1"/>
        </item>
        <item>
            <title><![CDATA[ಕೊಡಗು: ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ ತಂಡದಿಂದ ಮಹಿಳೆ ನಿಗೂಢ ನಾಪತ್ತೆ!  2 ದಿನದಿಂದ ಶರಣ್ಯಗಾಗಿ ಹುಡುಕಾಟ]]></title>
            <link>https://kannada.asianetnews.com/karnataka-districts/kodagu-trekking-incident-kerala-woman-missing-on-tadiandamol-hills-search-intensified-gdp/articleshow-ers459b</link>
            <guid isPermaLink="true">https://kannada.asianetnews.com/karnataka-districts/kodagu-trekking-incident-kerala-woman-missing-on-tadiandamol-hills-search-intensified-gdp/articleshow-ers459b</guid>
            <pubDate>Fri, 03 Apr 2026 13:20:30 +0530</pubDate>
            <description><![CDATA[ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಶರಣ್ಯ ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ, ಅವರ ಯಾವುದೇ ಸುಳಿವು ಲಭ್ಯವಾಗಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kn93w0w6hz9czyf1ndd5xkb9,imgname-tadiandamol-1775201289094.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ: &lt;/strong&gt;ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದವರನ್ನು ಶರಣ್ಯ (36) ಎಂದು ಗುರುತಿಸಲಾಗಿದ್ದು, ಕಳೆದ ಎರಡು ದಿನಗಳಿಂದ ಅವರ ಸುಳಿವು ಸಿಕ್ಕಿಲ್ಲ. ಶರಣ್ಯ ಅವರು ವಿರಾಜಪೇಟೆ ತಾಲ್ಲೂಕಿನ ಯವಕಪಾಡಿ ಪ್ರದೇಶದಲ್ಲಿರುವ ಹೋಂಸ್ಟೇಯಲ್ಲಿ ತಂಗಿದ್ದು, ಪ್ರವಾಸದ ಭಾಗವಾಗಿ ಗುರುವಾರ (ಏಪ್ರಿಲ್ 2) ಚಾರಣಕ್ಕೆ ತೆರಳಿದ್ದರು. ಆರಂಭದಲ್ಲಿ ಇತರರೊಂದಿಗೆ ಚಾರಣಕ್ಕೆ ಹೊರಟಿದ್ದರೂ, ನಂತರ ಯಾವ ಹಂತದಲ್ಲಿ ಅವರು ತಂಡದಿಂದ ಬೇರ್ಪಟ್ಟರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.&lt;/p&gt;&lt;h2&gt;ಎರಡು ದಿನಗಳಿಂದ ಸುಳಿವು ಇಲ್ಲ&lt;/h2&gt;&lt;p&gt;ಚಾರಣಕ್ಕೆ ತೆರಳಿದ ಬಳಿಕ ಶರಣ್ಯ ಅವರ ಸಂಪರ್ಕ ಕಡಿತಗೊಂಡಿದ್ದು, ಎರಡು ದಿನಗಳಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದರಿಂದ ಕುಟುಂಬದವರು ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ತಡಿಯಂಡಮೋಳ್ ಬೆಟ್ಟದ ಅರಣ್ಯ ಪ್ರದೇಶಗಳಲ್ಲಿ ತಂಡಗಳು ವ್ಯಾಪಕವಾಗಿ ಹುಡುಕಾಟ ನಡೆಸುತ್ತಿವೆ.&lt;/p&gt;&lt;p&gt;ನಿನ್ನೆ ತಡರಾತ್ರಿವರೆಗೂ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಶರಣ್ಯ ಅವರಿಗಾಗಿ ಹುಡುಕಾಟ ಮುಂದುವರಿಸಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇಂದೂ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.&lt;/p&gt;&lt;h2&gt;ಆತಂಕದಲ್ಲಿರುವ ಕುಟುಂಬಸ್ಥರು&lt;/h2&gt;&lt;p&gt;ಪ್ರವಾಸಕ್ಕಾಗಿ ಕೊಡಗಿಗೆ ಬಂದಿದ್ದ ಶರಣ್ಯ ಅವರ ನಾಪತ್ತೆ ಪ್ರಕರಣ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಶೀಘ್ರದಲ್ಲೇ ಮಹಿಳೆಯನ್ನು ಪತ್ತೆಹಚ್ಚಲು ಅಧಿಕಾರಿಗಳು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರಸ್ತುತ ಪೊಲೀಸರು ಮತ್ತು ಅರಣ್ಯ ಇಲಾಖೆ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮುಂದಿನ ಪ್ರತೀ ಕ್ಷಣವೂ ಅತ್ಯಂತ ಮಹತ್ವದ್ದಾಗಿವೆ.&lt;/p&gt;&lt;h2&gt;ಬೆಟ್ಟದ ಬಗ್ಗೆ ಎಷ್ಟು ಗೊತ್ತು?&lt;/h2&gt;&lt;p&gt;ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯಲ್ಲಿರುವ ಅತ್ಯಂತ ಎತ್ತರವಾದ ಬೆಟ್ಟ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇದು ಸಮುದ್ರ ಮಟ್ಟದಿಂದ 1,748 ಮೀಟರ್ ಎತ್ತರದಲ್ಲಿದೆ. ತಡಿಯಂಡಮೋಳ್ ಬೆಟ್ಟವನ್ನು1994ರಿಂದಲೂ ಏರುತ್ತಿದ್ದಾರೆ. ಇದು ವಿರಾಜಪೇಟೆಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಬೆಟ್ಟದ ಮೇಲೆ ಹುಲ್ಲುಗಾವಲು ಇದ್ದು, ಬೆಟ್ಟದ ಸುತ್ತ ಶೋಲ ಅರಣ್ಯವಿದೆ. ಬೆಟ್ಟದ ಕೆಳಭಾಗದಲ್ಲಿ ನಾಲ್ಕು ನಾಡು ಅರಮನೆ ಇದೆ. ಈ ಅರಮನೆಗೆ ಕೆಲವು ಶತಮಾನಗಳ ಇತಿಹಾಸವಿದೆ. ಸ್ಥಳೀಯ ಭಾಷೆಯಲ್ಲಿ ತಡಿಯಂಡಮೋಳ್ ಎಂದರೆ ಎತ್ತರವಾದ ಬೆಟ್ಟ ಎಂದು ಅರ್ಥ.&lt;/p&gt;]]></content:encoded>
            <category>kodagu</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kodagu-trekking-incident-kerala-woman-missing-on-tadiandamol-hills-search-intensified-gdp/articleshow-ers459b"/>
        </item>
        <item>
            <title><![CDATA[ಕೊಡಗು ಜಿಲ್ಲೆಯ ಈ ಗ್ರಾಮದಲ್ಲಿ ರೆಸಾರ್ಟ್‌, ಹೋಮ್‌ಸ್ಟೇ ಬ್ಯಾನ್‌!]]></title>
            <link>https://kannada.asianetnews.com/karnataka-districts/kodagu-village-bans-resorts-homestays-poradu-grama-panchayat-decision-san/articleshow-esgrb9l</link>
            <guid isPermaLink="true">https://kannada.asianetnews.com/karnataka-districts/kodagu-village-bans-resorts-homestays-poradu-grama-panchayat-decision-san/articleshow-esgrb9l</guid>
            <pubDate>Mon, 13 Apr 2026 08:43:08 +0530</pubDate>
            <description><![CDATA[&lt;p&gt;ಪೊನ್ನಂಪೇಟೆ ತಾಲೂಕಿನ ಪೊರಾಡು ಗ್ರಾಮದಲ್ಲಿ, ಪ್ರವಾಸೋದ್ಯಮವು ಗ್ರಾಮಕ್ಕೆ ಮಾರಕವಾಗಲಿದೆ ಎಂಬ ಆತಂಕದಿಂದ ರೆಸಾರ್ಟ್ ಮತ್ತು ಹೋಂ ಸ್ಟೇ ಸ್ಥಾಪನೆಗೆ ಅವಕಾಶ ನೀಡದಿರಲು ಗ್ರಾಮಸ್ಥರು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k93zeqkqnrn1mk9gmrsc65vg,imgname-homestay-1762143985271.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮಡಿಕೇರಿ (ಏ.13): ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ರೆಸಾರ್ಟ್, ಹೋಂ ಸ್ಟೇ ಸ್ಥಾಪನೆಗೆ ಅವಕಾಶ ನೀಡದಿರಲು ಗ್ರಾಮಸ್ಥರು ನಿರ್ಣಯ ಕೈಗೊಂಡಿದ್ದಾರೆ. ಊರೋರ್ಮೆಯಲ್ಲಿ ಈ ಹಿಂದೆಯೇ ಈ ಬಗ್ಗೆ ಕೈಗೊಂಡ ನಿರ್ಣಯವನ್ನು ಸರ್ವಾನುಮತದಿಂದ ವಿಶೇಷ ಮಹಾಸಭೆಯಲ್ಲಿ ಅಂಗೀಕರಿಸಲಾಯಿತು. ಪ್ರವಾಸೋದ್ಯಮ ಗ್ರಾಮಕ್ಕೆ ಮಾರಕವಾಗಲಿದೆ ಎಂಬ ಮುನ್ನೆಚ್ಚರಿಕೆಯಿಂದ ಈ ನಿರ್ಣಯವನ್ನು ಗ್ರಾಮದ ಅಧ್ಯಕ್ಷ ಬಲ್ಯ ಮೀದೇರಿರ ಪ್ರಕಾಶ್ ಅಧ್ಯಕ್ಷತೆಯಲ್ಲಿ ಕೈಗೊಂಡಿದ್ದಾರೆ.&lt;/p&gt;&lt;p&gt;ನಿರ್ಣಯದ ಪ್ರತಿಯನ್ನು ಬಿರುನಾಣೆ ಗ್ರಾಮ ಪಂಚಾಯಿತಿ ಅವಧಿ ಪೂರ್ವ ಅಧ್ಯಕ್ಷ ಅಮ್ಮತ್ತಿರ ರಾಜೇಶ್ ಹಾಗೂ ಪಿಡಿಒ ಪ್ರಕಾಶ್ ಮತ್ತು ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ರವೀಂದ್ರ ಅವರನ್ನು ಗ್ರಾಮಕ್ಕೆ ಕರೆದು ನಿರ್ಣಯದ ಪ್ರತಿಯನ್ನು ನೀಡಿದರು. ಈ ಸಂದರ್ಭ ಸುಮಾರು 15 ವರ್ಷಗಳ ಹಿಂದೆಯೇ ಗ್ರಾಮದಲ್ಲಿ ಯಾವುದೇ ಹೋಂ ಸ್ಟೇ ಹಾಗೂ ರೆಸಾರ್ಟ್ ನಿರ್ಮಾಣಕ್ಕೆ ನಿರಪೇಕ್ಷಣಾ ಪತ್ರ ನೀಡದಂತೆ ಗ್ರಾಮಸ್ಥರು ಮನವಿ ಮಾಡಿದ್ದು, ಅದರಂತೆ ಇದುವರೆಗೆ ಯಾವುದೇ ರೆಸಾರ್ಟ್ ಹಾಗೂ ಹೋಂ ಸ್ಟೇಗೆ ನಿರಪೇಕ್ಷಣಾ ಪತ್ರ ನೀಡಿಲ್ಲ ಎಂದು ಗ್ರಾಮಕ್ಕೆ ಆಗಮಿಸಿದ ಗ್ರಾಪಂ ಅವಧಿ ಪೂರ್ವ ಅಧ್ಯಕ್ಷರು ಹಾಗೂ ಪಿಡಿಒ ಸ್ಪಷ್ಟಪಡಿಸಿದರು. ಗ್ರಾಮ ಪಂಚಾಯಿತಿಯಿಂದಲೂ ನಿರ್ಣಯ ಕೈಗೊಳ್ಳಲಾಗಿದ್ದು, ಇದನ್ನು ಪೊರಾಡು ಗ್ರಾಮದಲ್ಲಿ ಹೋಂ ಸ್ಟೇ, ರೆಸಾರ್ಟ್ ನಿರ್ಮಿಸುತ್ತಿರುವ ಮಾಲೀಕರಿಗೆ ಸ್ಥಳದಲೇ ನೀಡಿ ತಿಳಿವಳಿಕೆ ನೀಡಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kodagu</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/kodagu-village-bans-resorts-homestays-poradu-grama-panchayat-decision-san/articleshow-esgrb9l"/>
        </item>
        <item>
            <title><![CDATA[ಕೇರಳ ಯುವತಿ ಶರಣ್ಯ ಪತ್ತೆಗೆ ಅಭಯಹಸ್ತ ನೀಡಿದ್ದ ಡಿ.ಕೆ. ಶಿವಕುಮಾರ್; ತಾಯಿಗೆ ಕೊಟ್ಟ ಮಾತು ಗಂಟೆಗಳಲ್ಲೇ ಈಡೇರಿತು!]]></title>
            <link>https://kannada.asianetnews.com/state/kerala-techie-sharanya-missing-kodagu-forest-after-3-days-found-dk-shivakumar-intervention-sat/articleshow-fkwi52e</link>
            <guid isPermaLink="true">https://kannada.asianetnews.com/state/kerala-techie-sharanya-missing-kodagu-forest-after-3-days-found-dk-shivakumar-intervention-sat/articleshow-fkwi52e</guid>
            <pubDate>Mon, 06 Apr 2026 17:52:06 +0530</pubDate>
            <description><![CDATA[ಕೊಡಗಿನ ತಡಿಯಂಡಮೋಳ್ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮಯೋಚಿತ ಹಸ್ತಕ್ಷೇಪದಿಂದಾಗಿ, 170ಕ್ಕೂ ಹೆಚ್ಚು ಜನರ ಬೃಹತ್ ತಂಡವು ಯುವತಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knhbsk49mk3v7n44p4bpyjnq,imgname-kerala-sharanya-dk-shivakumar-1775478033545.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರ/ಕೊಡಗು (ಏ.06): ಕೊ&lt;/strong&gt;ಡಗಿನ ಅತ್ಯಂತ ಎತ್ತರದ ಶಿಖರಗಳಲ್ಲಿ ಒಂದಾದ ತಡಿಯಂಡಮೋಳ್ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಶರಣ್ಯ ಅವರು ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯ ಹಿಂದೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮಯೋಚಿತ ಹಸ್ತಕ್ಷೇಪ ಹಾಗೂ ರಾಜ್ಯದ ಅಧಿಕಾರಿಗಳ ಅವಿರತ ಶ್ರಮ ಅಡಗಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಕೇರಳ ಮೂಲದ ಶರಣ್ಯ ಎಂಬ ಯುವತಿ ಕೊಡಗು ಜಿಲ್ಲೆಯ ತಡಿಯಂಡಮೋಳ್ ಅರಣ್ಯ ಪ್ರದೇಶಕ್ಕೆ ಚಾರಣಕ್ಕಾಗಿ (Trekking) ಬಂದಿದ್ದರು. ಆದರೆ, ದಟ್ಟ ಅರಣ್ಯದ ನಡುವೆ ದಾರಿ ತಪ್ಪಿದ ಅವರು ಕಳೆದ ಎರಡು ದಿನಗಳಿಂದ ಹೊರಜಗತ್ತಿನ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದ್ದರು. ಮಗಳು ನಾಪತ್ತೆಯಾದ ವಿಷಯ ತಿಳಿದು ಕಂಗಾಲಾಗಿದ್ದ ಆಕೆಯ ತಾಯಿ, ಏನು ಮಾಡಬೇಕೆಂದು ತೋಚದೆ ಕಣ್ಣೀರಿಡುತ್ತಿದ್ದರು.&lt;/p&gt;&lt;h2&gt;&lt;strong&gt;ವೇದಿಕೆಯಲ್ಲೇ ನೆರವಾದ ಡಿ.ಕೆ. ಶಿವಕುಮಾರ್:&lt;/strong&gt;&lt;/h2&gt;&lt;p&gt;ಸದ್ಯ ಕೇರಳ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಕಾರ್ಯನಿರತರಾಗಿರುವ ಡಿ.ಕೆ. ಶಿವಕುಮಾರ್ ಅವರು ಒರ್ಕಟ್ಟೇರಿಯಲ್ಲಿ ಚುನಾವಣಾ ರ&zwj;್ಯಾಲಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಶರಣ್ಯ ಅವರ ತಾಯಿ ಡಿಸಿಎಂ ಅವರನ್ನು ಭೇಟಿ ಮಾಡಿ, ಮಗಳ ನಾಪತ್ತೆಯ ಬಗ್ಗೆ ಅಳಲು ತೋಡಿಕೊಂಡರು. ತಾಯಿಯ ಆಕ್ರಂದನಕ್ಕೆ ತಕ್ಷಣವೇ ಸ್ಪಂದಿಸಿದ ಶಿವಕುಮಾರ್ ಅವರು, ಪ್ರಚಾರದ ವೇದಿಕೆಯಿಂದಲೇ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರು. ತಕ್ಷಣವೇ ಕಾರ್ಯಾಚರಣೆಯನ್ನು ತೀವ್ರಗೊಳಿಸಿ ಯುವತಿಯನ್ನು ಪತ್ತೆ ಹಚ್ಚುವಂತೆ ಖಡಕ್ ಸೂಚನೆ ನೀಡಿದರು.&lt;/p&gt;&lt;h3&gt;&lt;strong&gt;170 ಜನರ ಬೃಹತ್ ಕಾರ್ಯಾಚರಣೆ:&lt;/strong&gt;&lt;/h3&gt;&lt;p&gt;ಡಿಸಿಎಂ ಸೂಚನೆ ಬೆನ್ನಲ್ಲೇ ಕೊಡಗು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿತು. ಸುಮಾರು 170ಕ್ಕೂ ಹೆಚ್ಚು ಜನರ ತಂಡವನ್ನು ರಚಿಸಲಾಯಿತು. ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯ ಬುಡಕಟ್ಟು ಸಮುದಾಯದ ನುರಿತ ಜನರು ಪಾಲ್ಗೊಂಡಿದ್ದರು. ಭಾನುವಾರ ಸಂಜೆ ದಟ್ಟ ಅರಣ್ಯದ ನಡುವೆ ಶರಣ್ಯ ಅವರನ್ನು ಪತ್ತೆ ಮಾಡುವಲ್ಲಿ ಈ ತಂಡ ಯಶಸ್ವಿಯಾಯಿತು.&lt;/p&gt;&lt;h3&gt;&lt;strong&gt;ಧೈರ್ಯಗುಂದದ ಶರಣ್ಯ:&lt;/strong&gt;&lt;/h3&gt;&lt;p&gt;ಶರಣ್ಯ ಪತ್ತೆಯಾದ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಯುವತಿಯ ಧೈರ್ಯವನ್ನು ಶ್ಲಾಘಿಸಿದರು. 'ಶರಣ್ಯ ಅವರು ಕಳೆದ ಒಂದು ದಿನದಿಂದ ಧಾರಾಕಾರ ಮಳೆಯ ನಡುವೆಯೂ ಎದೆಗುಂದದೆ ಕಾಡಿನಲ್ಲಿ ಕಾಲ ಕಳೆದಿದ್ದಾರೆ. ಆಹಾರವಿಲ್ಲದೆ ಕೇವಲ ನೀರನ್ನು ಸೇವಿಸಿ ಜೀವ ಉಳಿಸಿಕೊಂಡಿದ್ದಾರೆ. ಆಕೆ ಬಹಳ ಧೈರ್ಯಶಾಲಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;h3&gt;&lt;strong&gt;ಅಧಿಕಾರಿಗಳಿಗೆ ಹಾಗೂ ಬುಡಕಟ್ಟು ಜನರಿಗೆ ಅಭಿನಂದನೆ:&lt;/strong&gt;&lt;/h3&gt;&lt;p&gt;ಸೋಮವಾರ ತಿರುವನಂತಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ, 'ಅಯ್ಯಪ್ಪಸ್ವಾಮಿ ಹಾಗೂ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ನಾಪತ್ತೆಯಾಗಿದ್ದ ಮಗಳನ್ನು ಮರಳಿ ತಾಯಿಯ ಮಡಿಲಿಗೆ ಸೇರಿಸಿದ ತೃಪ್ತಿ ನನಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ನಮ್ಮ ರಾಜ್ಯದ ಅಧಿಕಾರಿಗಳು, ಪೊಲೀಸರು ಹಾಗೂ ವಿಶೇಷವಾಗಿ ಕಾಡಿನ ಹಾದಿಗಳನ್ನು ಬಲ್ಲ ಬುಡಕಟ್ಟು ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ' ಎಂದು ತಿಳಿಸಿದರು.&lt;/p&gt;&lt;p&gt;ಈ ಘಟನೆಯು ರಾಜಕಾರಣಿಯೊಬ್ಬರು ಸಂಕಷ್ಟದಲ್ಲಿರುವ ಜನರ ಅಳಲಿಗೆ ಹೇಗೆ ತಕ್ಷಣವೇ ಸ್ಪಂದಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಶರಣ್ಯ ಅವರ ಪತ್ತೆಯಿಂದಾಗಿ ಕಳೆದ ಎರಡು ದಿನಗಳಿಂದ ಆತಂಕದಲ್ಲಿದ್ದ ಕುಟುಂಬಸ್ಥರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kerala-techie-sharanya-missing-kodagu-forest-after-3-days-found-dk-shivakumar-intervention-sat/articleshow-fkwi52e"/>
        </item>
        <item>
            <title><![CDATA[ಕರ್ನಾಟಕದಲ್ಲಿ ಚಾರಣ ಹೋಗುವ ಹೆಣ್ಮಕ್ಕಳು ಮಿಸ್ಸಿಂಗ್ ಪ್ರಕರಣ, ಟ್ರೆಕ್ಕಿಂಗ್ ಹೋಗೋರಿಗೆ ಸರ್ಕಾರದಿಂದ ಹೊಸ ರೂಲ್ಸ್!]]></title>
            <link>https://kannada.asianetnews.com/state/trekker-safety-in-karnataka-govt-plans-tracking-app-insurance-and-sop-after-missing-cases-gdp/articleshow-g036t5k</link>
            <guid isPermaLink="true">https://kannada.asianetnews.com/state/trekker-safety-in-karnataka-govt-plans-tracking-app-insurance-and-sop-after-missing-cases-gdp/articleshow-g036t5k</guid>
            <pubDate>Thu, 09 Apr 2026 13:38:23 +0530</pubDate>
            <description><![CDATA[ಇತ್ತೀಚೆಗೆ ಚಾರಣಿಗರು ನಾಪತ್ತೆಯಾದ ಘಟನೆಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಚಾರಣಿಗರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ಈ ನಿಟ್ಟಿನಲ್ಲಿ, ಚಾರಣಿಗರನ್ನು ಪತ್ತೆಹಚ್ಚಲು ವಿಶೇಷ ಟ್ರ್ಯಾಕಿಂಗ್ ಆಪ್, ಕಡ್ಡಾಯ ಗುಂಪು ವಿಮೆ, ಮತ್ತು ಗೈಡ್&zwnj;ಗಳಿಗೆ ಹೆಚ್ಚಿನ ಹೊಣೆಗಾರಿಕೆ ನೀಡುವಂತಹ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲು ಅರಣ್ಯ ಸಚಿವರು ಸೂಚಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knrm5cvcmncbm8jg9tnaetf5,imgname-trekker-safety-in-karnataka-1775721689964.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚಾರಣಿಗರ ನಾಪತ್ತೆ ಘಟನೆಗಳ ಹಿನ್ನೆಲೆಯಲ್ಲಿ ಟ್ರೆಕ್ಕಿಂಗ್ ಹೋಗಲು &amp;nbsp;ಬಯಸುವವರ ಸುರಕ್ಷತೆ ಕುರಿತಾಗಿ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಚಾರಣಿಗರ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಸಮಗ್ರ ಮಾರ್ಗಸೂಚಿ (SOP) ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.&lt;/p&gt;&lt;h2&gt;ಕೊಡಗು, ಚಿಕ್ಕಮಗಳೂರು ಪರ್ವತ ಪ್ರದೇಶದಲ್ಲಿ ಚಾರಣಿಗರ ನಾಪತ್ತೆ&lt;/h2&gt;&lt;p&gt;ಇತ್ತೀಚೆಗೆ ಕೊಡಗು ಜಿಲ್ಲೆಯ ತಡಿಯಾಂಡಮೋಲ್ ಪರ್ವತದಲ್ಲಿ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಶರಣ್ಯ ಎಂಬ ಮಹಿಳೆ ಮೂರು ದಿನಗಳ ಕಾಲ ಕಾಡಿನಲ್ಲಿ ನಾಪತ್ತೆಯಾಗಿದ್ದ ಘಟನೆ ಸಾಕಷ್ಟು ಆತಂಕ ಹುಟ್ಟಿಸಿತ್ತು. ಇದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ನಾಪತ್ತೆಯಾಗಿರುವ ಪ್ರಕರಣವೂ ಗಮನ ಸೆಳೆದಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮತ್ತು ಚಾರಣಿಗರ ಸುರಕ್ಷತೆಯನ್ನು ಖಚಿತಪಡಿಸಲು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವ ಈಶ್ವರ ಖಂಡ್ರೆ ಅವರು ಲಿಖಿತ ಸೂಚನೆ ನೀಡಿದ್ದು, ಚಾರಣ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಹಾಗೂ ಕಟ್ಟುನಿಟ್ಟಿನ SOP ರೂಪಿಸುವಂತೆ ತಿಳಿಸಿದ್ದಾರೆ. ಇದರ ಮೂಲಕ ಚಾರಣಕ್ಕೆ ಪ್ರಮಾಣಿತ ಮಾನದಂಡಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ.&lt;/p&gt;&lt;h2&gt;ಚಾರಣಿಗರಿಗಾಗಿ ಪ್ರತ್ಯೇಕ ಟ್ರ್ಯಾಕಿಂಗ್ ಆಪ್ ಅಭಿವೃದ್ಧಿಪಡಿಸಲು ಸೂಚನೆ&lt;/h2&gt;&lt;p&gt;ಚಾರಣಿಗರ ಮೇಲ್ವಿಚಾರಣೆಗೆ ತಂತ್ರಜ್ಞಾನವನ್ನು ಬಳಸುವ ದಿಸೆಯಲ್ಲಿ ವಿಶೇಷ ಗಮನ ಹರಿಸಲು ಸೂಚಿಸಿರುವ ಸಚಿವರು, ಅರಣ್ಯ ಇಲಾಖೆ ಈಗಾಗಲೇ ಅಭಿವೃದ್ಧಿಪಡಿಸಿರುವ ಇ-ಗಸ್ತು (e-Patrolling) ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸುವಂತೆ ತಿಳಿಸಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಎಂ-ಸ್ಟ್ರೈಪ್ಸ್ (M-STrIPES) ಆಪ್ ಮಾದರಿಯಲ್ಲೇ ಚಾರಣಿಗರಿಗಾಗಿ ಪ್ರತ್ಯೇಕ ಟ್ರ್ಯಾಕಿಂಗ್ ಆಪ್ ಅಭಿವೃದ್ಧಿಪಡಿಸಲು ಸೂಚನೆ ನೀಡಿದ್ದಾರೆ.&lt;/p&gt;&lt;p&gt;ಈ ಆಪ್ ಅನ್ನು ಚಾರಣ ಅವಧಿಯಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಮೊಬೈಲ್&zwnj;ಗಳಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಯಾರಾದರೂ ದಾರಿ ತಪ್ಪಿದ ಸಂದರ್ಭದಲ್ಲಿ ಅವರ ಸ್ಥಳವನ್ನು ಸುಲಭವಾಗಿ ಪತ್ತೆಹಚ್ಚಿ ಶೋಧ ಕಾರ್ಯಾಚರಣೆಗಳನ್ನು ವೇಗವಾಗಿ ನಡೆಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆಪ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ, ಚಾರಣಿಗರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಗುಂಪು ವಿಮೆ (Group Insurance) ಮಾಡಿಸುವುದನ್ನೂ ಕಡ್ಡಾಯಗೊಳಿಸಲು ನಿರ್ದೇಶನ ನೀಡಲಾಗಿದೆ. ಅಪಘಾತಗಳು ಅಥವಾ ಅನಾಹುತಗಳು ಸಂಭವಿಸಿದಲ್ಲಿ ಚಾರಣಿಗರಿಗೆ ಆರ್ಥಿಕ ಭದ್ರತೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.&lt;/p&gt;&lt;p&gt;ಚಾರಣದ ವೇಳೆ ಮಾರ್ಗದರ್ಶನ ನೀಡುವ ನೇಚರ್ ಗೈಡ್&zwnj;ಗಳಿಗೆ ಸಹ ಹೆಚ್ಚಿನ ಹೊಣೆಗಾರಿಕೆ ನೀಡಲು ಸರ್ಕಾರ ಮುಂದಾಗಿದೆ. ಗೈಡ್&zwnj;ಗಳಿಗೆ ಕಡ್ಡಾಯವಾಗಿ ವೈರ್&zwnj;ಲೆಸ್ ಸೆಟ್&zwnj;ಗಳನ್ನು ಒದಗಿಸುವುದರಿಂದ ಅರಣ್ಯ ಇಲಾಖೆ ಹಾಗೂ ರಕ್ಷಣಾ ತಂಡಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ತಕ್ಷಣ ನೆರವು ಒದಗಿಸುವುದು ಸುಲಭವಾಗಲಿದೆ.&lt;/p&gt;&lt;p&gt;ಅದೇ ವೇಳೆ, ಚಾರಣಿಗರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಗೈಡ್&zwnj;ಗಳ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ನಿಗದಿಪಡಿಸಲು ಸಚಿವರು ಸೂಚನೆ ನೀಡಿದ್ದಾರೆ. ಇದರಿಂದ ಚಾರಣದ ವೇಳೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗುತ್ತದೆ ಮತ್ತು ಯಾವುದೇ ನಿರ್ಲಕ್ಷ್ಯದಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಬಹುದು.&lt;/p&gt;&lt;p&gt;ಒಟ್ಟಿನಲ್ಲಿ, ಇತ್ತೀಚಿನ ನಾಪತ್ತೆ ಪ್ರಕರಣಗಳು ಸರ್ಕಾರವನ್ನು ಎಚ್ಚರಕ್ಕೆ ತಂದಿದ್ದು, ಚಾರಣ ಚಟುವಟಿಕೆಗಳನ್ನು ಸುರಕ್ಷಿತವಾಗಿಸಲು ತಂತ್ರಜ್ಞಾನ ಹಾಗೂ ನಿಯಮಾವಳಿಗಳ ಸಮನ್ವಯದೊಂದಿಗೆ ಸಮಗ್ರ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಕ್ರಮಗಳು ಜಾರಿಯಾದಲ್ಲಿ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಮಹತ್ವದ ನೆರವಾಗಲಿದೆ.&lt;/p&gt;]]></content:encoded>
            <category>kodagu</category>
            <dc:creator>Gowthami K</dc:creator>
            <atom:link href="https://kannada.asianetnews.com/state/trekker-safety-in-karnataka-govt-plans-tracking-app-insurance-and-sop-after-missing-cases-gdp/articleshow-g036t5k"/>
        </item>
        <item>
            <title><![CDATA[ಮಡಿಕೇರಿ ಕಾಫಿ ತೋಟದ ಕಂದಕಕ್ಕೆ ಕಾರಿನ ಸಮೇತ ಬಿದ್ದ ಕುಂದಾಪುರದ ಸಿರಾಜ್; ದಾರಿಹೋಕರಿಂದ ಚಾಲಕನ ರಕ್ಷಣೆ!]]></title>
            <link>https://kannada.asianetnews.com/karnataka-districts/kodagu-madikeri-accident-car-plunges-into-gorge-neerukolli-siraj-injured-sat/articleshow-g0wg7ul</link>
            <guid isPermaLink="true">https://kannada.asianetnews.com/karnataka-districts/kodagu-madikeri-accident-car-plunges-into-gorge-neerukolli-siraj-injured-sat/articleshow-g0wg7ul</guid>
            <pubDate>Mon, 30 Mar 2026 16:19:53 +0530</pubDate>
            <description><![CDATA[&lt;p&gt;ಮಡಿಕೇರಿ ಸಮೀಪದ ನೀರುಕೊಲ್ಲಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿ ಬದಿಯ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ಕುಂದಾಪುರ ಮೂಲದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರು ಸಕಾಲದಲ್ಲಿ ರಕ್ಷಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmz5s676t81tb96hqvpzs8jr,imgname-madikeri-car-accident-1774867749091.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ (ಮಾ.30): ಕೊ&lt;/strong&gt;ಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನೀರುಕೊಲ್ಲಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಕುಂದಾಪುರ ಮೂಲದ ಸಿರಾಜ್ ಎಂಬುವವರು ತಮ್ಮ ಕಾರಿನಲ್ಲಿ ಕುಂದಾಪುರದಿಂದ ಮಡಿಕೇರಿಗೆ ಬರುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 275 ರ ಮಡಿಕೇರಿ ಮತ್ತು ಸಂಪಾಜೆ ನಡುವಿನ ನೀರುಕೊಲ್ಲಿ ಎಂಬ ಪ್ರದೇಶ ತಲುಪಿದಾಗ, ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ತಡೆಗೋಡೆಯನ್ನು ದಾಟಿ ನೇರವಾಗಿ ಕಂದಕಕ್ಕೆ ಉರುಳಿದೆ. ಕಡಿದಾದ ತಿರುವುಗಳು ಮತ್ತು ಹಳ್ಳತಿಟ್ಟುಗಳಿಂದ ಕೂಡಿದ ಈ ಪ್ರದೇಶದಲ್ಲಿ ಕಾರು ಉರುಳಿ ಬಿದ್ದ ರಭಸಕ್ಕೆ ವಾಹನ ಜಖಂಗೊಂಡಿದೆ.&lt;/p&gt;&lt;h2&gt;&lt;strong&gt;ಸ್ಥಳೀಯರಿಂದ ಕ್ಷಿಪ್ರ ಕಾರ್ಯಾಚರಣೆ:&lt;/strong&gt;&lt;/h2&gt;&lt;p&gt;ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿಗಳು ಮತ್ತು ಇತರ ವಾಹನ ಸವಾರರು, ಪ್ರಾಣದ ಹಂಗು ತೊರೆದು ಕಂದಕಕ್ಕೆ ಇಳಿದು ಚಾಲಕ ಸಿರಾಜ್ ಅವರನ್ನು ರಕ್ಷಿಸಿದ್ದಾರೆ. ಕಾರಿನೊಳಗೆ ಸಿಲುಕಿಕೊಂಡಿದ್ದ ಸಿರಾಜ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಕಾಲದಲ್ಲಿ ಸ್ಥಳೀಯರು ಸ್ಪಂದಿಸಿದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.&lt;/p&gt;&lt;h2&gt;&lt;strong&gt;ಅಪಘಾತಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿಯು ಕಡಿದಾದ ತಿರುವುಗಳನ್ನು ಹೊಂದಿದ್ದು, ಚಾಲಕರು ಅತಿ ವೇಗವಾಗಿ ಚಲಿಸುವುದು ಅಥವಾ ದಣಿವು ಹಾಗೂ ನಿದ್ರೆಯ ಮಂಪರಿನಿಂದ ನಿಯಂತ್ರಣ ಕಳೆದುಕೊಳ್ಳುವುದು ಇಂತಹ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ನೀರುಕೊಲ್ಲಿ ಭಾಗದಲ್ಲಿ ಈ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿದ್ದು, ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವಾಗ ಹೆಚ್ಚಿನ ಜಾಗರೂಕತೆ ವಹಿಸುವ ಅಗತ್ಯವಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಭೇಟಿ:&lt;/strong&gt;&lt;/h2&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಜೆಸಿಬಿ ಸಹಾಯದಿಂದ ಕಂದಕಕ್ಕೆ ಬಿದ್ದ ಕಾರನ್ನು ಮೇಲೆತ್ತುವ ಪ್ರಕ್ರಿಯೆ ನಡೆಯುತ್ತಿದೆ. ಕೊಡಗಿನ ಘಟ್ಟ ಪ್ರದೇಶಗಳಲ್ಲಿ ಸಂಚರಿಸುವ ಚಾಲಕರು ರಸ್ತೆಯ ತಿರುವುಗಳ ಬಗ್ಗೆ ಎಚ್ಚರದಿಂದ ಇರಬೇಕು ಮತ್ತು ವೇಗದ ಮಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kodagu-madikeri-accident-car-plunges-into-gorge-neerukolli-siraj-injured-sat/articleshow-g0wg7ul"/>
        </item>
        <item>
            <title><![CDATA[ಕಿಕ್ಕೇರಿ ಜಾತ್ರೆಯ ವಿಚಿತ್ರ ಆಚರಣೆ:  ಸೊಂಟಕ್ಕೆ ಮರದ ಗುಪ್ತಾಂಗ ಕಟ್ಕೊಂಡು ಕುಣಿತ, ಹಾಡು]]></title>
            <link>https://kannada.asianetnews.com/karnataka-districts/madikeri-s-kikkeramman-s-jatye-held-in-kikkeri-town-celebrated-in-a-special-way-mrq/articleshow-gw4ktbn</link>
            <guid isPermaLink="true">https://kannada.asianetnews.com/karnataka-districts/madikeri-s-kikkeramman-s-jatye-held-in-kikkeri-town-celebrated-in-a-special-way-mrq/articleshow-gw4ktbn</guid>
            <pubDate>Sat, 28 Mar 2026 08:38:18 +0530</pubDate>
            <description><![CDATA[&lt;p&gt;ಕಿಕ್ಕೇರಿ ಪಟ್ಟಣದಲ್ಲಿ ನಡೆದ ಕಿಕ್ಕೇರಮ್ಮನ ಜಾತ್ರೆಯ ಅಂಗವಾಗಿ ವಸಕೊಂತನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಈ ಹಬ್ಬದಲ್ಲಿ ದೇವರಗುಡ್ಡಪ್ಪನು ಸೊಂಟಕ್ಕೆ ಮರದ ಗುಪ್ತಾಂಗವನ್ನು ಕಟ್ಟಿಕೊಂಡು ಕುಣಿಯುವುದು ಮತ್ತು ಹಿರಿಯರು ದೇವಿಯನ್ನು ಅಶ್ಲೀಲವಾಗಿ ಮೂದಲಿಸಿ ಹಾಡುವುದು ಪ್ರಮುಖ ಆಚರಣೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kms6e9m1qatp5a39epbf4y1z,imgname-kikkeri-1774667114113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ: &lt;/strong&gt;ಕಿಕ್ಕೇರಿ ಪಟ್ಟಣದಲ್ಲಿ ಜರುಗಿದ ಕಿಕ್ಕೇರಮ್ಮನವರ ಜಾತ್ರೆಯ ವಿಶೇಷತೆಯಲ್ಲಿ ಒಂದಾದ ವಸಕೊಂತನ ಹಬ್ಬ, ವಸಂತನ, ಬೈಗುಳ ಹಬ್ಬ ವೀಕ್ಷಣೆಗೆ ವಿವಿಧೆಡೆಯಿಂದ ಜನತೆ ಅಧಿಕವಾಗಿ ಪಾಲ್ಗೊಂಡಿದ್ದರು.&lt;/p&gt;&lt;p&gt;ಮಡಿಕೇರಿಯ ಬುಂಡೆ ಹಬ್ಬದ ಸಾಮೀಪ್ಯತೆ ಹಬ್ಬವಾದ ಈ ವಸಕೊಂತನಕುಣಿತ ವೀಕ್ಷಣೆ ಮಾಡಿ ನಮಿಸಿದರೆ ಸಂತಾನ ಪ್ರಾಪ್ತಿ ಲಭಿಸಲಿದೆ ಎಂಬ ನಂಬುಗೆಯಿಂದ ಜನಸಾಗರ ಹೆಚ್ಚಾಗಿತ್ತು.&lt;/p&gt;&lt;p&gt;ಕಿಕ್ಕೇರಿ-ಲಕ್ಷ್ಮೀಪುರಗ್ರಾಮ ಹೃದಯ ಭಾಗದ ಕಿಕ್ಕೇರಮ್ಮನ ಗುಡಿಯಲ್ಲಿ ದೇವಿಗೆ ವಿಶೇಷ ಆರತಿ ಎತ್ತಿ, ದೇವರಗುಡಿಯಲ್ಲಿ ಭದ್ರ ಲಕೋಟೆಯಲ್ಲಿ ಜೋಪಾನವಾಗಿಟ್ಟಿದ್ದ ಕೊಂತಪ್ಪ ದೇವರ ಹೊರತೆಗೆದು ಪೂಜಿಸಲಾಯಿತು.&lt;/p&gt;&lt;h2&gt;&lt;strong&gt;ಕೆಂಪು, ಹಳದಿ ನಾಮ ಹಾಕಿ ಸೊಂಟಕ್ಕೆ ಮರದ ಗುಪ್ತಾಂಗ ಕಟ್ಟೋದು&lt;/strong&gt;&lt;/h2&gt;&lt;p&gt;ನಂತರ ದೇವರ ಒಕ್ಕಲಿನ ರಂಗೇನಹಳ್ಳಿಯ ದೇವರಗುಡ್ಡಪ್ಪನಿಗೆ ರೇಷ್ಮೆರು ಮಾಲು ಪೇಟ, ಹಣೆಗೆದೊಡ್ಡ ಕೆಂಪು, ಹಳದಿ ನಾಮ ಹಾಕಿ ಸೊಂಟಕ್ಕೆ ಮರದ ಗುಪ್ತಾಂಗವನ್ನು ಕಟ್ಟಲಾಯಿತು. ಮೇಲು ಹೊದಿಕೆಯಾಗಿ ಹಸಿರು ಜರತಾರಿ ಶಾಲು ಹೊದಿಸಲಾಯಿತು. ಸಹ ಗುಡ್ಡಪ್ಪ, ಮೇಳಧಾರಿಗಳು ಗುಡ್ಡಪ್ಪನಿಗೆ ಸಾಥ್ ನೀಡಿದರು.&lt;/p&gt;&lt;p&gt;ಮೇಳಧಾರಿ ಗುಡ್ಡಪ್ಪರು ಪ್ರಾಸಬದ್ಧವಾಗಿ ಚಕ್ರವಾದ್ಯದ ನಾದದೊಂದಿಗೆದೇವಿ ಹಾಡು ಹೇಳುವಾಗ ಗುಡ್ಡಪ್ಪನು ಮರೆ ಮಾಚಿದ್ದ ಮರದ ಗುಪ್ತಾಂಗವನ್ನು ತೋರಿಸುತ್ತ ಉಯ್&zwnj; ಎಂದು ಕುಣಿಯಲು ಆರಂಭಿಸಿದನು. ಊರಿನ ಹೊಸಬೀದಿ, ರಥಬೀದಿ, ಕೋಟೆಗಣಪತಿ ಬೀದಿ, ಕೆ.ಎಸ್. ನರಸಿಂಹಸ್ವಾಮಿ ಬೀದಿ, ಜನಾರ್ಧನ ಬೀದಿಗಳಲ್ಲಿ ಸಾಗಿದಾಗ ಭಕ್ತರು ದೇವಿಗೆ ಹಣ್ಣು ಕಾಯಿ ಅರ್ಪಿಸಿ ಕೊಂತಪ್ಪದೇವರಿಗೆ ಭಕ್ತಿಯಿಂದ ನಮಿಸಿದರು.&lt;/p&gt;&lt;h3&gt;&lt;strong&gt;ಅಶ್ಲೀಲಕರವಾಗಿ ದೇವರನ್ನು ಮೂದಲಿಸಿ, ರಮಿಸುವಂತೆ ಪ್ರಾಸಕಟ್ಟಿ ಹಾಡು&lt;/strong&gt;&lt;/h3&gt;&lt;p&gt;ಲಕ್ಷ್ಮೀದೇವಿ (ಕಿಕ್ಕೇರಮ್ಮ)ಯನ್ನು ರಮಿಸಲು ಹಬ್ಬದ ವಾಡಿಕೆಯಂತೆ ಗ್ರಾಮದ ಹಿರಿಯಕೆ.ಎನ್. ನಾಗೇಗೌಡರೊಂದಿಗೆ ಸಂಗಡಿಗರು ಅಶ್ಲೀಲಕರವಾಗಿ ದೇವರನ್ನು ಮೂದಲಿಸಿ, ರಮಿಸುವಂತೆ ಪ್ರಾಸಕಟ್ಟಿ ಹಾಡಿದರು. ಈ ವಿನೋದದ ಹಾಡು ಕೇಳಿ ಮಹಿಳೆಯರು ಮುಸಿ ಮುಸಿ ನಕ್ಕರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೇಂದ್ರದ ಪೆಟ್ರೋಲ್, ಡೀಸೆಲ್ ಸುಂಕ ಕಡಿತ ಚುನಾವಣಾ ಗಿಮಿಕ್, ಇದರಿಂದ ಜನರಿಗಲ್ಲ, ತೈಲ ಕಂಪನಿಗಳಿಗೆ ಲಾಭ: ಕಾಂಗ್ರೆಸ್&lt;/strong&gt;&lt;/p&gt;&lt;p&gt;ಜನಾರ್ಧನ ಬೀದಿಯಲ್ಲಿರುವ ಲಕ್ಷ್ಮೀದೇವಿ ಗುಡಿ ಬಳಿ ಸಾಗಿದಾದ ಜ್ಯೋತಿಪಣ ಸಮಾಜದವರು ಆರತಿ ಎತ್ತಿದೇವಿಗೆ ನಮಸಿ ಪ್ರಸಾದ ವಿತರಿಸಿದರು. ಅಮಾನಿಕೆರೆಯ ಗಂಗೆ ಕಡಕ್ಕೆ ತೆರಳಿ ಸೊಳ್ಳೇಪುರ ಗ್ರಾಮಸ್ಥರಿಂದ ಪೂಜೆ ಸ್ವೀಕರಿಸಲಾಯಿತು. ಅಂತಿಮವಾಗಿ ಬೆಳಗ್ಗಿನಿಂದ ಉಪವಾಸ ವ್ರತಾಚರಣೆಯಲ್ಲಿದ್ದ ಲಕ್ಷ್ಮೀಪುರಗ್ರಾಮಕ್ಕೆದೇವಿ ಮೆರವಣಿಗೆ ಸಾಗಿ ಪ್ರತಿ ಮನೆಗಳಲ್ಲಿನ ಪೂಜೆಯನ್ನು ದೇವಿಗೆ ಅರ್ಪಿಸಲಾಯಿತು.&lt;/p&gt;&lt;p&gt;ಲಕ್ಕಮ್ಮನ ಒಕ್ಕಲಿನ ಬೂನಾಸಿ, ಕೆಂಚಮ್ಮ, ದೊಡ್ಡಹಟ್ಟಿ, ಮಾರಮ್ಮನ ವಠಾರದ ಮುಖಂಡರು, ಮತ್ತಿತರರು ಹಾಜರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ಪತ್ತೆ! ಲೋಕಾಯುಕ್ತ ತನಿಖೆಯಿಂದ ಆಘಾತಕಾರಿ ವಿಷ್ಯ ಬಯಲು!&lt;/strong&gt;&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/madikeri-s-kikkeramman-s-jatye-held-in-kikkeri-town-celebrated-in-a-special-way-mrq/articleshow-gw4ktbn"/>
        </item>
        <item>
            <title><![CDATA[ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು!]]></title>
            <link>https://kannada.asianetnews.com/state/horrific-road-accident-in-kodagu-actor-harish-dies-on-the-spot-rav/articleshow-nyqk07y</link>
            <guid isPermaLink="true">https://kannada.asianetnews.com/state/horrific-road-accident-in-kodagu-actor-harish-dies-on-the-spot-rav/articleshow-nyqk07y</guid>
            <pubDate>Sun, 12 Apr 2026 09:32:56 +0530</pubDate>
            <description><![CDATA[ಕೊಡಗು ಜಿಲ್ಲೆಯ ಕುಶಾಲನಗರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಡರಾತ್ರಿ ತಮ್ಮ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ರಸ್ತೆಬದಿ ನಿಂತಿದ್ದ ಟ್ಯಾಂಕರ್&zwnj;ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knzxepzmw7t489xhxcst34y7,imgname-----------------------2026-04-12t092533.955-1775966313460.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಏ.12)&lt;/strong&gt;: ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್ (40) ದಾರುಣವಾಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ನಡೆದಿದೆ.&lt;/p&gt;&lt;h2&gt;ಭೀಕರ ಅಪಘಾತಕ್ಕೆ ಸ್ಥಳದಲ್ಲೇ ನಟ ಹರೀಶ್ ದುರಂತ ಸಾವು&lt;/h2&gt;&lt;p&gt;ರಾಷ್ಟ್ರೀಯ ಹೆದ್ದಾರಿ 275 ರ ಆನೆಕಾಡು ಸಮೀಪದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ನಿನ್ನೆ ಕೆಲಸ ಮುಗಿಸಿಕೊಂಡು ತಡರಾತ್ರಿ ಹರೀಶ್ ಅವರು ಕುಶಾಲನಗರದಿಂದ ತಮ್ಮ ಸ್ವಗ್ರಾಮವಾದ ಹೊಸಕೋಟೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್&zwnj;ಗೆ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಟ್ಯಾಂಕರ್&zwnj;ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಹರೀಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;h3&gt;ಹಲವು ಸಿನಿಮಾದಲ್ಲಿ ನಟಿಸಿದ್ದ ಮೃತ ಹರೀಶ್&lt;/h3&gt;&lt;p&gt;ಮೃತ ಹರೀಶ್ ಅವರು ಬಹುಮುಖಿ ಪ್ರತಿಭೆಯಾಗಿದ್ದರು. ಅವರು ವೃತ್ತಿಜೀವನದ ಜೊತೆಗೇ ಹಲವು ಕನ್ನಡ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಮತ್ತು ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರು.&lt;/p&gt;&lt;p&gt;&lt;strong&gt;ಸ್ಥಳಕ್ಕೆ ಪೊಲೀಸರು ಭೇಟಿ&lt;/strong&gt;&lt;/p&gt;&lt;p&gt;ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>kodagu</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/horrific-road-accident-in-kodagu-actor-harish-dies-on-the-spot-rav/articleshow-nyqk07y"/>
        </item>
        <item>
            <title><![CDATA[ರಶ್ಮಿಕಾ ಮಂದಣ್ಣಗೆ ಪೋಷಕರಿಂದ ಭರ್ಜರಿ ಮದುವೆ ಗಿಫ್ಟ್; ಕೋಟಿ ಬೆಲೆಯ ಐಶಾರಾಮಿ ಮನೆ ಮಗಳ ಹೆಸರಿಗೆ ವರ್ಗಾವಣೆ!]]></title>
            <link>https://kannada.asianetnews.com/sandalwood/rashmika-mandanna-gets-luxury-house-as-wedding-gift-from-parents-kodagu-sat/articleshow-p6fagai</link>
            <guid isPermaLink="true">https://kannada.asianetnews.com/sandalwood/rashmika-mandanna-gets-luxury-house-as-wedding-gift-from-parents-kodagu-sat/articleshow-p6fagai</guid>
            <pubDate>Mon, 06 Apr 2026 20:14:52 +0530</pubDate>
            <description><![CDATA[ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮಕ್ಕೆ ರಶ್ಮಿಕಾ ಪೋಷಕರು ಕೊಡಗಿನ ವಿರಾಜಪೇಟೆಯಲ್ಲಿರುವ ತಮ್ಮ 'ಸೆರಿನಿಟಿ' ಐಶಾರಾಮಿ ಬಂಗಲೆಯನ್ನು ಮದುವೆ ಉಡುಗೊರೆಯಾಗಿ ನೀಡಿದ್ದಾರೆ. ಈ ಆಸ್ತಿ ಹಸ್ತಾಂತರದ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knhkdj280zz9ffqyfq69hzw5,imgname-rashmika-mandanna-home-registration-1775486027848.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಏ.06):ಕೊ&lt;/strong&gt;ಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದ ಬೆನ್ನಲ್ಲೇ ರಶ್ಮಿಕಾ ಪೋಷಕರು ತಮ್ಮ ಮಗಳಿಗೆ ತವರಿನಿಂದ ಅತ್ಯಂತ ಬೆಲೆಬಾಳುವ 'ಮದುವೆ ಉಡುಗೊರೆ'ಯನ್ನು ನೀಡಿದ್ದಾರೆ. ವಿರಾಜಪೇಟೆಯಲ್ಲಿದ್ದ ಐಶಾರಾಮಿ ಬಂಗಲೆ ಹಾಗೂ ಸುತ್ತಲಿನ ಜಾಗವನ್ನು ಮಗಳ ಹೆಸರಿಗೆ ಮಾಡಿಕೊಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಮಗಳ ಹೆಸರಿಗೆ 'ಸೆರಿನಿಟಿ' ಬಂಗಲೆ ಹಸ್ತಾಂತರ:&lt;/strong&gt;&lt;/h2&gt;&lt;p&gt;ರಶ್ಮಿಕಾ ಮಂದಣ್ಣ ಅವರ ತಂದೆ ಮದನ್ ಮಂದಣ್ಣ ಮತ್ತು ತಾಯಿ ಸುಮನ್ ಮಂದಣ್ಣ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಕ್ಲೂರಿನಲ್ಲಿರುವ ತಮ್ಮ ಕನಸಿನ ಐಶಾರಾಮಿ ಮನೆ 'ಸೆರಿನಿಟಿ'ಯನ್ನು (Serenity) ಈಗ ಅಧಿಕೃತವಾಗಿ ಮಗಳ ಹೆಸರಿಗೆ ವರ್ಗಾಯಿಸಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ವಿಶೇಷ ಉಡುಗೊರೆಯಾಗಿ ಈ ಆಸ್ತಿಯನ್ನು ಹಸ್ತಾಂತರಿಸಲಾಗಿದೆ.&lt;/p&gt;&lt;h2&gt;&lt;strong&gt;ನೋಂದಣಿ ಪ್ರಕ್ರಿಯೆ ಪೂರ್ಣ:&lt;/strong&gt;&lt;/h2&gt;&lt;p&gt;ವಿರಾಜಪೇಟೆಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈ ಆಸ್ತಿ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಕುಕ್ಲೂರು ಗ್ರಾಮದ ಸರ್ವೆ ನಂಬರ್ 142/1 ಹಾಗೂ 142/2 ರಲ್ಲಿರುವ ಈ ಬಂಗಲೆಯು ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರು ತಮ್ಮ ಹೆಸರಿನಲ್ಲಿದ್ದ ಈ ಆಸ್ತಿಯ ಖಾತೆಯನ್ನು ಮಗಳ ಹೆಸರಿಗೆ ಬದಲಾಯಿಸಿಕೊಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಕೊಡಗಿನಲ್ಲಿ ವಾಸ್ತವ್ಯ:&lt;/strong&gt;&lt;/h3&gt;&lt;p&gt;ಮದುವೆಯ ನಂತರ ಕೊಡಗಿಗೆ ಬಂದಿರುವ ನಟಿ ರಶ್ಮಿಕಾ ಮಂದಣ್ಣ ಪ್ರಕೃತಿಯ ನಡುವೆ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ಜೋಡಿಯ ಕೊಡಗು ಭೇಟಿಯು ಕೇವಲ ಪ್ರವಾಸವಾಗಿರದೆ, ಮದುವೆಯ ನಂತರದ ವಿಧಿವಿಧಾನಗಳು ಹಾಗೂ ಕುಟುಂಬದ ಆಸ್ತಿ ಹಸ್ತಾಂತರದ ಕಾರ್ಯಗಳಿಗಾಗಿಯೇ ಇತ್ತು ಎಂಬುದು ಈಗ ಸ್ಪಷ್ಟವಾಗಿದೆ.&lt;/p&gt;&lt;h3&gt;&lt;strong&gt;ಕುಟುಂಬದ ಆಪ್ತರಿಂದ ದೃಢ:&lt;/strong&gt;&lt;/h3&gt;&lt;p&gt;ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಕೊಡಗಿನ ಸಂಪ್ರದಾಯ ಹಾಗೂ ತಮ್ಮ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಈಗ ವಿಜಯ್ ದೇವರಕೊಂಡ ಅವರ ಜೊತೆಗಿನ ಜೀವನಕ್ಕೆ ಪೋಷಕರು ಆಶೀರ್ವಾದದ ರೂಪದಲ್ಲಿ ಈ ಮನೆಯನ್ನು ನೀಡಿದ್ದು, ಕೊಡಗಿನ ಕುವರಿ ಈಗ ಅಧಿಕೃತವಾಗಿ ತನ್ನ ನೆಚ್ಚಿನ 'ಸೆರಿನಿಟಿ' ಮನೆಯ ಒಡತಿಯಾಗಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/sandalwood/rashmika-mandanna-gets-luxury-house-as-wedding-gift-from-parents-kodagu-sat/articleshow-p6fagai"/>
        </item>
        <item>
            <title><![CDATA[Kodagu: ಅನಾಥ ಆಶ್ರಮದಲ್ಲಿ ಮದುವೆ ಸಂಭ್ರಮ: ಪೂವಣ್ಣನೊಂದಿಗೆ ಹಸೆಮಣೆ ಏರಿದ ಮೈನಾ]]></title>
            <link>https://kannada.asianetnews.com/karnataka-districts/kodagu-orphanage-wedding-inspiring-story-madikeri-thanal-ashrama-gvd/articleshow-pbgx92y</link>
            <guid isPermaLink="true">https://kannada.asianetnews.com/karnataka-districts/kodagu-orphanage-wedding-inspiring-story-madikeri-thanal-ashrama-gvd/articleshow-pbgx92y</guid>
            <pubDate>Thu, 23 Apr 2026 20:20:02 +0530</pubDate>
            <description><![CDATA[&lt;p&gt;ಅದೊಂದು ಅನಾಥ ಆಶ್ರಮ, ಇಲ್ಲಿಗೆ ಬರುವವರ ಬದುಕಿನಲ್ಲಿ ಎಲ್ಲವೂ ಮುಗಿದು ಅನಾಥರಾಗಿದ್ದೇವೆ ಎನ್ನುವ ಭಾವವೇ ಸಂಪೂರ್ಣ ತುಂಬಿರುತ್ತದೆ. ಅಂತಹ ಆಶ್ರಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpxd359gjxpjynpvtnr1zwmm,imgname-n-n-1776955790640.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಏ.23): &lt;/strong&gt;ಅದೊಂದು ಅನಾಥ ಆಶ್ರಮ, ಇಲ್ಲಿಗೆ ಬರುವವರ ಬದುಕಿನಲ್ಲಿ ಎಲ್ಲವೂ ಮುಗಿದು ಅನಾಥರಾಗಿದ್ದೇವೆ ಎನ್ನುವ ಭಾವವೇ ಸಂಪೂರ್ಣ ತುಂಬಿರುತ್ತದೆ. ಅಂತಹ ಆಶ್ರಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಅನಾಥೆಯಾಗಿದ್ದ ಆಕೆಯ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಆಕೆ ಹಸೆಮಣೆ ಏರಿ ತುಂಬು ಕುಟುಂಬವನ್ನು ಕೂಡಿದ್ದಾಳೆ. ಆ ಸಂಭ್ರಮ ಹೇಗಿತ್ತು ನೀವು ನೋಡಿ. ಇದು ಹೆಸರೆ ಸೂಚಿಸುವಂತೆ ತನಲ್ ಅಂದ್ರೆ ನೆರಳು. ಅಂದರೆ ಬದುಕಿನಲ್ಲಿ ಯಾರು ಇಲ್ಲ ಎನ್ನುವವರಿಗೆ ಆಶ್ರಯ ನೀಡುವ ಆಶ್ರಮ ಇದು.&lt;/p&gt;&lt;p&gt;ಹೌದು ಮಡಿಕೇರಿಯ ಈ ಆಶ್ರಮದಲ್ಲಿ ಗುರುವಾರ ಮದುವೆ ಸಂಭ್ರಮ ಮನೆ ಮಾಡಿತ್ತು. ಹಸಿರು ತಳಿರು ತೋರಣ, ಹೂವುಗಳಿಂದ ಸಿಂಗಾರಗೊಂಡಿತ್ತು. ತೆಂಗಿನ ಗರಿ, ಗೊನೆತೂಗುವ ಬಾಳೆ ಮರಗಳ ನಿಲ್ಲಿಸಿ ಚಪ್ಪರ ಹಾಕಲಾಗಿತ್ತು. ನಿತ್ಯ ಇಲ್ಲಿ ಎಲ್ಲವೂ ಶೂನ್ಯ ಎನ್ನುವಂತಿದ್ದ ಆಶ್ರಮದಲ್ಲಿ ನಗುವೇ ತುಂಬಿತ್ತು. ಔದು ಎಲ್ಲರನ್ನು ಕಳೆದುಕೊಂಡು ಯಾರು ಇಲ್ಲವೆಂದು ತನಲ್ ಆಶ್ರಮ ಸೇರಿ ನಾಲ್ಕು ವರ್ಷಗಳಿಂದ ಇಲ್ಲಿಯೇ ಬದುಕು ದೂಡುತ್ತಿದ್ದ ಮೈನಾನ ಮದುವೆ ಸಂಭ್ರಮ ಮನೆ ಮಾಡಿತ್ತು.&lt;/p&gt;&lt;p&gt;ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನ ಪೂವಣ್ಣ ಅವರೊಂದಿಗೆ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ತನಲ್ ಸಂಸ್ಥೆ ತವರು ಮನೆಯಂತೆ, ಸಂಸ್ಥೆಯ ವ್ಯವಸ್ಥಾಪಕ ಮೊಹಮ್ಮದ್ ಅವರು ವಧು ಮೈನಾ ಅವರ ತಂದೆಯ ಸ್ಥಾನದಲ್ಲಿ ನಿಂತು ಧಾರೆ ಎರೆದರು. ತಾವು ಮುಸಲ್ಮಾನರಾದರೂ ಕೊಡವ ಸಂಪ್ರದಾಯದಂತೆ ಮದುವೆ ಮಾಡಿದ್ದು ವಿಶೇಷವಾಗಿತ್ತು. ಹಿಂದೂ ಮುಸಲ್ಮಾನರು ಎನ್ನುವ ಯಾವ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ನಿಂತು ಮದುವೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿತ್ತು.&lt;/p&gt;&lt;h2&gt;&lt;strong&gt;ಚಪ್ಪರದಲ್ಲಿ ಕೂರಿಸಿ ಮುಹೂರ್ತ&lt;/strong&gt;&lt;/h2&gt;&lt;p&gt;ಕೊಡವ ಸಂಪ್ರದಾಯದಂತೆ ವಿವಾಹ ನಡೆದಿದ್ದರಿಂದ ನಿನ್ನೆಯಿಂದಲೇ ಎಲ್ಲಾ ಶಾಸ್ತ್ರ ಸಂಪ್ರದಾಯಗಳು ನೆರವೇರಿದ್ದವು. ಇಂದು ಬೆಳಿಗ್ಗೆ ತಮ್ಮ ಬಂಧು ಬಾಂಧವರೊಂದಿಗೆ ತಮ್ಮೂರಿನಿಂದ ಮಡಿಕೇರಿಗೆ ಆಗಮಿಸಿದ ಮದುಮಗ ಪೂವಣ್ಣ ಅವರನ್ನು ತನಲ್ ಸಂಸ್ಥೆ ಎಲ್ಲಾ ಪದಾಧಿಕಾರಿಗಳು ಹಾಗೂ ನೆರೆದಿದ್ದ ಜನರು ಗೌರವದಿಂದ ಬರಮಾಡಿಕೊಂಡರು. ಬಳಿಕ ಕೊಡವ ಧಿರಿಸಿನಲ್ಲಿ ಸಿಂಗಾರಗೊಂಡಿದ್ದ ಮೈನಾ ಅವರನ್ನು ತನಲ್ ಸಂಸ್ಥೆಯ ಒಳಗಿನಿಂದ ಕರೆತಂದು ಚಪ್ಪರದಲ್ಲಿ ಕೂರಿಸಿ ಮುಹೂರ್ತ ನೆರವೇರಿಸಿದರು.&lt;/p&gt;&lt;p&gt;ಎಲ್ಲರೂ ಕೊಡವ ಸಂಪ್ರದಾಯದಂತೆ ಅಕ್ಷತೆ ಹಾಕಿ ಉಡುಗೊರೆ ನೀಡಿ ಹರಸಿ, ಹಾರೈಸಿದರು. ಮದುವೆಗೆ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಶುಭ, ರಾಜಕೀಯ ಮುಖಂಡರು, ವರ ಪೂವಣ್ಣ ಅವರ ಬಂದು ಬಳಗ ಎಲ್ಲರೂ ಸಾಕ್ಷಿಯಾದರು. ಕಷ್ಟದ ದಿನಗಳಿಂದ ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟ ನವ ವಧುವರರು ಕೂಡ ಮದುವೆ ಆಗುತ್ತಿರುವುದಕ್ಕೆ ಸಂಭ್ರಮ ಹಂಚಿಕೊಂಡರು. ಇನ್ನು ಎಲ್ಲಾ ಮದುವೆಗಳಂತೆ ಭರ್ಜರಿ ಬೂರಿ ಭೋಜನವಿತ್ತು.&lt;/p&gt;&lt;p&gt;ಗೀರೈಸ್, ಚಿಕನ್ ಮಸಾಲ, ಕಬಾಬ್, ಪರೋಟ ಚಿಕನ್ ಸುಕ್ಕಾ, ಮೊಸರನ್ನ ಪಾಯಸ ಹೀಗೆ ಭರ್ಜರಿ ಊಟವನ್ನೂ ಎಲ್ಲರೂ ಸವಿದರು. ಈ ಸಂದರ್ಭ ಮಾತನಾಡಿದ ವಧುವರರು ಕೂಡ ಖುಷಿಯನ್ನು ವ್ಯಕ್ತಪಡಿಸಿದರು. ಒಟ್ಟಿನಲ್ಲಿ ತನ್ನವರೆನ್ನುವವರು ಯಾರೂ ಇಲ್ಲ, ನನ್ನದೆನ್ನುವುದು ಮನೆಯಿಲ್ಲ ಎಂದು ಆಶ್ರಮದಲ್ಲಿ ಬದುಕುತ್ತಿದ್ದ ಮೈನಾ ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟಿದ್ದು ನವ ಜೋಡಿಯ ಬದುಕು ಖುಷಿಯಾಗಿರಲಿ ಎಂದು ನಾವೂ ಹಾರೈಸೋಣ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-orphanage-wedding-inspiring-story-madikeri-thanal-ashrama-gvd/articleshow-pbgx92y"/>
        </item>
        <item>
            <title><![CDATA[ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಯ ಅತ್ಯಾ*ಚಾರ ಪ್ರಕರಣ: ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ ಇದು]]></title>
            <link>https://kannada.asianetnews.com/state/foreign-woman-assault-case-in-kodagu-home-minister-dr-g-parameshwara-warns-strict-action-against-homestay-violations-gdp/articleshow-ptgca9n</link>
            <guid isPermaLink="true">https://kannada.asianetnews.com/state/foreign-woman-assault-case-in-kodagu-home-minister-dr-g-parameshwara-warns-strict-action-against-homestay-violations-gdp/articleshow-ptgca9n</guid>
            <pubDate>Wed, 22 Apr 2026 12:43:53 +0530</pubDate>
            <description><![CDATA[ಕೊಡಗಿನ ಹೋಂಸ್ಟೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೋಂಸ್ಟೇ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ ಪ್ರತಿಕ್ರಿಯಿಸಿದ್ದು, ಹೋಂಸ್ಟೇಗಳು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpt0jtjxpzkp9hhx0909adc7,imgname-foreign-woman-assault-in-kodagu-1776842009180.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು &lt;/strong&gt;ಜಿಲ್ಲೆಯಲ್ಲಿ ವಿದೇಶಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದ್ದು, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಹಾಗೂ ಸಾರ್ವಜನಿಕ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಹೋಂಸ್ಟೇಗಳಿಗೆ ಈಗಾಗಲೇ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಯಲ್ಲಿದೆ. ಹೋಂಸ್ಟೇಗಳನ್ನು ನಡೆಸುವವರು ನಿಗದಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಲೈಸೆನ್ಸ್ ಹೊಂದಿರುವುದರಿಂದ ಹಿಡಿದು ಸುರಕ್ಷತಾ ಕ್ರಮಗಳವರೆಗೆ ಎಲ್ಲ ನಿಯಮಗಳನ್ನು ಅನುಸರಿಸುವುದು ಕಡ್ಡಾಯ. ಈ ನಿಯಮಗಳನ್ನು ಮೀರಿ ಇಂತಹ ಘಟನೆಗಳು ನಡೆದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.&lt;/p&gt;&lt;p&gt;ಘಟನೆ ತಿಳಿದ ಕೂಡಲೇ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿದೆ . ಇಂತಹ ಘಟನೆಗಳು ರಾಜ್ಯಕ್ಕಾಗಲಿ, ಸಮಾಜಕ್ಕಾಗಲಿ ಒಳ್ಳೆಯ ಸಂದೇಶ ನೀಡುವುದಿಲ್ಲ. ವಿಶೇಷವಾಗಿ ವಿದೇಶದಿಂದ ಬಂದವರ ಮೇಲೆ ಇಂತಹ ಅಪರಾಧಗಳು ನಡೆದರೆ, ದೇಶದ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಪರಮೇಶ್ವರ ಆತಂಕ ವ್ಯಕ್ತಪಡಿಸಿದರು.&lt;/p&gt;&lt;p&gt;ಇಂತಹ ಪ್ರಕರಣಗಳಲ್ಲಿ ಯಾವುದೇ ಸಡಿಲಿಕೆ ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಜೊತೆಗೆ, ಹೋಂಸ್ಟೇ ಮಾಲೀಕರು ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದರು.&lt;/p&gt;&lt;h2&gt;ಘಟನೆ ಹಿನ್ನೆಲೆ&lt;/h2&gt;&lt;p&gt;ಕುಟ್ಟ ಪ್ರದೇಶದಲ್ಲಿರುವ ಖಾಸಗಿ ಹೋಂಸ್ಟೇಯಲ್ಲಿ ಈ ಘಟನೆ ನಡೆದಿದ್ದು, ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆ ಮೇಲೆ ಅತ್ಯಾ*ಚಾರ ನಡೆದಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.&lt;/p&gt;&lt;p&gt;ಘಟನೆ ಏಪ್ರಿಲ್ 19ರಂದು ನಡೆದಿದ್ದು, &lsquo;ದೇವಿ ವಿಲ್ಲಾ&rsquo; ಎಂಬ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಅಲ್ಲಿನ ಸಿಬ್ಬಂದಿ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕುರಿತು ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ವೃಜೇಶ್ ಕುಮಾರ್ ಹಾಗೂ ಹೋಂಸ್ಟೇ ಮಾಲೀಕ ವಿಶಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.&lt;/p&gt;&lt;h2&gt;ಪ್ರಕರಣ ಮುಚ್ಚಿಹಾಕಲು ಪ್ರಯತ್ನ&lt;/h2&gt;&lt;p&gt;ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಘಟನೆಯ ನಂತರ ಅದನ್ನು ಮುಚ್ಚಿಹಾಕಲು ಪ್ರಯತ್ನ ನಡೆದಿರುವ ಸಾಧ್ಯತೆಯೂ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಯು ಜಾರ್ಖಂಡ್ ಮೂಲದವನು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ವಿವರಗಳು ತನಿಖೆಯ ಬಳಿಕ ಸ್ಪಷ್ಟವಾಗಲಿವೆ.&lt;/p&gt;&lt;p&gt;ಒಟ್ಟಾರೆ, ಕೊಡಗಿನಂತಹ ಪ್ರವಾಸಿ ತಾಣದಲ್ಲಿ ನಡೆದ ಈ ಘಟನೆ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರ ಭದ್ರತೆಗಾಗಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದೆ.&lt;/p&gt;]]></content:encoded>
            <category>kodagu</category>
            <dc:creator>Gowthami K</dc:creator>
            <atom:link href="https://kannada.asianetnews.com/state/foreign-woman-assault-case-in-kodagu-home-minister-dr-g-parameshwara-warns-strict-action-against-homestay-violations-gdp/articleshow-ptgca9n"/>
        </item>
        <item>
            <title><![CDATA[ಕೊಡಗಿನ ಕಾಡಲ್ಲಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ ಆಹಾರವಿಲ್ಲದೇ 4 ದಿನ ಬದುಕಿದ್ದೇಗೆ? ಇಲ್ಲಿದೆ ಫಸ್ಟ್ ರಿಯಾಕ್ಷನ್!]]></title>
            <link>https://kannada.asianetnews.com/state/kodagu-tadiandamol-trekker-kerala-techie-saranya-found-safe-four-days-survival-story-first-reaction-sat/articleshow-qcnm4o3</link>
            <guid isPermaLink="true">https://kannada.asianetnews.com/state/kodagu-tadiandamol-trekker-kerala-techie-saranya-found-safe-four-days-survival-story-first-reaction-sat/articleshow-qcnm4o3</guid>
            <pubDate>Sun, 05 Apr 2026 19:56:15 +0530</pubDate>
            <description><![CDATA[ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ನಾಲ್ಕು ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ದಟ್ಟಾರಣ್ಯದಲ್ಲಿ ಕೇವಲ ಒಂದು ಬಾಟಲಿ ನೀರಿನಿಂದ ಬದುಕುಳಿದ ಅವರು, ತಮ್ಮ ಸಮಯಪ್ರಜ್ಞೆಯಿಂದ ಡ್ರೋಣ್ ಕಣ್ಣಿಗೆ ಬೀಳುವಂತೆ ಬಯಲು ಜಾಗದಲ್ಲಿ ಉಳಿದುಕೊಂಡಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kneyfwt81qe27kgjat4v9g0h,imgname-saranya-found-1775396975432.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಏ.05): ಕೊ&lt;/strong&gt;ಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಕೊನೆಗೂ 4 ದಿನದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ದಟ್ಟಾರಣ್ಯದಲ್ಲಿ ಆಹಾರವಿಲ್ಲದೆ, ಕೇವಲ ಒಂದು ಬಾಟಲಿ ನೀರಿನ ಸಹಾಯದಿಂದ ಬದುಕುಳಿದಿದ್ದ ಈ ಸಾಹಸಿ ಯುವತಿ ಇಂದು ನಗುಮೊಗದಲ್ಲೇ ಕಾಡಿನಿಂದ ಹೊರಬಂದಿದ್ದಾರೆ. ಇದರ ಬೆನ್ನಲ್ಲಿಯೇ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ತಾನು ಹೇಗೆ ದಟ್ಟಾರಣ್ಯದಲ್ಲಿ ಬದುಕುಳಿದೆ ಎಂದು ವಿವರಿಸಿದ್ದಾರೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಯಿಕ್ಕೋಡ್&zwnj;ನ ನಾದಾಪುರಂ ಮೂಲದ ಶರಣ್ಯ, ಏಪ್ರಿಲ್ 2 ರಂದು ಕೊಡಗಿಗೆ ಟ್ರೆಕ್ಕಿಂಗ್&zwnj;ಗಾಗಿ ಬಂದಿದ್ದರು. ಆನ್&zwnj;ಲೈನ್ ಮೂಲಕ ಟ್ರೆಕ್ಕಿಂಗ್ ಬುಕ್ ಮಾಡಿದ್ದ ಅವರು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಜನರ ತಂಡದ ಜೊತೆ ತಡಿಯಂಡಮೋಳ್ ಬೆಟ್ಟ ಹತ್ತಲು ಆರಂಭಿಸಿದ್ದರು. ಆದರೆ, ಬೆಟ್ಟದ ಮೇಲೆ ತಂಡದೊಂದಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಶರಣ್ಯ ಹಿಂದೆ ಉಳಿದಿದ್ದರು. ಇದೇ ವೇಳೆ ಅವರು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು.&lt;/p&gt;&lt;h2&gt;&lt;strong&gt;ನಾಲ್ಕು ದಿನಗಳ ಕಾಲ ಕಾಡಲ್ಲಿ ಬದುಕುಳಿದಿದ್ದೇಗೆ?&lt;/strong&gt;&lt;/h2&gt;&lt;p&gt;ಕಾಡಿನಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ಯ, ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. 'ನಾನು ಆರೋಗ್ಯವಾಗಿದ್ದೇನೆ. ಕಾಡಿನಲ್ಲಿ ದಾರಿ ತಪ್ಪಿದಾಗ ನನ್ನ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಕೇವಲ ಒಂದು ಬಾಟಲಿ ನೀರು ಮಾತ್ರ. ರಕ್ಷಣಾ ತಂಡವು ನನ್ನನ್ನು ಹುಡುಕಲು ಡ್ರೋಣ್ ಬಳಸಬಹುದು ಎಂದು ನನಗೆ ತಿಳಿದಿತ್ತು. ಹಾಗಾಗಿ ಡ್ರೋಣ್&zwnj;ಗೆ ಕಾಣಿಸುವಂತಹ ಬಯಲು ಜಾಗದಲ್ಲೇ ನಾನು ಹೆಚ್ಚಾಗಿ ನಿಂತಿದ್ದೆ' ಎಂದು ಅವರು ವಿವರಿಸಿದ್ದಾರೆ. ಅವರ ಈ ಸಮಯಪ್ರಜ್ಞೆಯೇ ಅವರ ಪ್ರಾಣ ಉಳಿಸಿದೆ ಎನ್ನಬಹುದು.&lt;/p&gt;&lt;h3&gt;&lt;strong&gt;ರಕ್ಷಣಾ ಕಾರ್ಯಾಚರಣೆಯ ಯಶಸ್ಸು:&lt;/strong&gt;&lt;/h3&gt;&lt;p&gt;ಶರಣ್ಯ ನಾಪತ್ತೆಯಾದ ದಿನದಿಂದಲೂ ಕೊಡಗು ಜಿಲ್ಲಾ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಎಎನ್&zwnj;ಎಫ್ (ನಕ್ಸಲ್ ನಿಗ್ರಹ ಪಡೆ) ಮತ್ತು ಸ್ಥಳೀಯ ನಿವಾಸಿಗಳು ಹಗಲಿರುಳು ಶೋಧ ನಡೆಸಿದ್ದರು. ಡ್ರೋಣ್, ಥರ್ಮಲ್ ಡ್ರೋಣ್ ಮತ್ತು ಶ್ವಾನ ದಳವನ್ನು ಬಳಸಲಾಗಿತ್ತು. ಕೊನೆಗೆ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ವಿಚಿತ್ರ ಶಬ್ದ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ. &quot;ನಾವು ಶಬ್ದ ಕೇಳಿದ ಜಾಗಕ್ಕೆ ಹೋದಾಗ ಶರಣ್ಯ ಅಲ್ಲಿ ಕುಳಿತಿದ್ದರು,&quot; ಎಂದು ಅವರನ್ನು ಪತ್ತೆ ಮಾಡಿದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಹೋಂಸ್ಟೇ ಸಿಬ್ಬಂದಿಗೆ ಕಳಿಸಿದ್ದರು ಮೆಸೇಜ್:&lt;/strong&gt;&lt;/h2&gt;&lt;p&gt;ಶರಣ್ಯ ದಾರಿ ತಪ್ಪಿದ ಕೂಡಲೇ ತಾವು ತಂಗಿದ್ದ ಕಕ್ಕಬ್ಬೆ ಸಮೀಪದ ಯಾವಕಪಾಡಿಯ ಹೋಂಸ್ಟೇ ಸಿಬ್ಬಂದಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೆಸೇಜ್ ಕಳುಹಿಸಿದ್ದರು. ಆದರೆ ಅದರ ಬೆನ್ನಲ್ಲೇ ಅವರ ಫೋನ್ ಬ್ಯಾಟರಿ ಖಾಲಿಯಾಗಿ ಸ್ವಿಚ್ ಆಫ್ ಆಗಿತ್ತು. ಅವರ ಜೊತೆಗಿದ್ದ ತಂಡದವರು ಸಂಜೆ ವಾಪಸ್ ಬಂದಾಗ ಶರಣ್ಯ ಅವರ ಬಗ್ಗೆ ವಿಚಾರಿಸಿದಾಗ, ಅವರು ನಾಯಿಯೊಂದಿಗೆ ಆಟವಾಡುತ್ತಾ ಬೆಟ್ಟದ ಮೇಲೆಯೇ ನಿಂತಿದ್ದರು ಎಂದು ತಿಳಿಸಿದ್ದರು.&lt;/p&gt;&lt;h3&gt;&lt;strong&gt;ಸದ್ಯದ ಪರಿಸ್ಥಿತಿ:&lt;/strong&gt;&lt;/h3&gt;&lt;p&gt;ಕಾಡಿನಿಂದ ಸುರಕ್ಷಿತವಾಗಿ ಕರೆತರಲಾದ ಶರಣ್ಯ ಅವರನ್ನು ಸಮೀಪದ ಕಾಕಬೆ ಗ್ರಾಮಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ತೀವ್ರ ಹಸಿವು ಮತ್ತು ಸುಸ್ತಿನಿಂದ ಬಳಲಿದ್ದರೂ ಅವರ ಮಾನಸಿಕ ಸ್ಥಿತಿ ದೃಢವಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಮಡಿಕೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ವೈದ್ಯರು ಗ್ರೀನ್ ಸಿಗ್ನಲ್ ನೀಡಿದ ನಂತರ ಅವರನ್ನು ಕುಟುಂಬಸ್ಥರೊಂದಿಗೆ ಕೇರಳಕ್ಕೆ ಕಳುಹಿಸಿಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kodagu-tadiandamol-trekker-kerala-techie-saranya-found-safe-four-days-survival-story-first-reaction-sat/articleshow-qcnm4o3"/>
        </item>
        <item>
            <title><![CDATA[ಕೊಡಗು ಹೋಂ ಸ್ಟೇಯಲ್ಲಿ ಕರಾಳ ಘಟನೆ: ಸಿಬ್ಬಂದಿಯಿಂದಲೇ ವಿದೇಶಿ ಮಹಿಳೆ ಮೇಲೆ ರೇ**ಪ್]]></title>
            <link>https://kannada.asianetnews.com/crime/kodagu-homestay-horror-us-woman-brutally-assaulted-in-coorg-2-arrested/articleshow-t9k8ns1</link>
            <guid isPermaLink="true">https://kannada.asianetnews.com/crime/kodagu-homestay-horror-us-woman-brutally-assaulted-in-coorg-2-arrested/articleshow-t9k8ns1</guid>
            <pubDate>Wed, 22 Apr 2026 12:31:17 +0530</pubDate>
            <description><![CDATA[&lt;p&gt;ಕೊಡಗಿನ ಪ್ರವಾಸಿ ಹೋಂಸ್ಟೇಯೊಂದರಲ್ಲಿ ಅಮೆರಿಕ ಮೂಲದ ವಿದೇಶಿ ಮಹಿಳೆಯ ಮೇಲೆ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿ, ಸಂತ್ರಸ್ತೆಯನ್ನು ಕೂಡಿಹಾಕಿದ ಆರೋಪದ ಮೇಲೆ ಈಗ ಹೋಂಸ್ಟೇ ಮಾಲೀಕ ಮತ್ತು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpszgx5g6cvf30mqgnyhhyzm,imgname-homestay-1776840897712.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಕೊಡಗು ಹೋಂ ಸ್ಟೇನಲ್ಲಿ ಕರಾಳ ಘಟನೆ&lt;/strong&gt;&lt;/h2&gt;&lt;p&gt;ಕೊಡಗು: ಪ್ರವಾಸಿ ತಾಣ ಕೊಡಗಿನ ಹೋಂ ಸ್ಟೇಯೊಂದರಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಅಮೆರಿಕಾ ಮೂಲದ ವಿದೇಶಿ ಮಹಿಳೆಯೊಬ್ಬಳ ಮೇಲೆ ಹೋಂಸ್ಟೇಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಅತ್ಯಾ*ಚಾರವೆಸಗಿ ಆಕೆಯನ್ನು ಕೂಡಿ ಹಾಕಿ ದೌರ್ಜನ್ಯವೆಸಗಿದ್ದಾರೆ. ಅತ್ಯಾಚಾರವೆಸಗಿದ ಸಿಬ್ಬಂದಿ ಜಾರ್ಖಂಡ್ ಮೂಲದವ ಎಂದು ತಿಳಿದು ಬಂದಿದೆ. ಹೋಂ ಸ್ಟೇಯಲ್ಲಿ ವಿದೇಶಿ ಮಹಿಳೆ ಇದ್ದ ಕೊಠಡಿಗೆ ನುಗ್ಗಿದ ಆರೋಪಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹೋಂ ಸ್ಟೇ ಮಾಲೀಕರಿಗೆ ತಿಳಿದಿತ್ತು. ಆದರೂ ಪ್ರಕರಣವನ್ನು ಮುಚ್ಚಿ ಹಾಕಿ ಆರೋಪಿಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.&lt;/p&gt;&lt;h3&gt;&lt;strong&gt;ಮೂರು ದಿನಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ್ದ &amp;nbsp;ಹೋಂ ಸ್ಟೇ ಮಾಲೀಕ&lt;/strong&gt;&lt;/h3&gt;&lt;p&gt;ಹೋಂ ಸ್ಟೇ ಮಾಲೀಕ ಸಂತ್ರಸ್ತ ಮಹಿಳೆಗೆ ಸಹಾಯ ಮಾಡುವ ಬದಲು ಆಕೆಯನ್ನು ಮೂರು ದಿನಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ್ದಾನೆ. ಆಕೆಯ ಬಳಿ ಇದ್ದ ಮೊಬೈಲ್ ಫೋನ್&zwnj; ಅನ್ನು ಕಸಿದು ಕೊಂಡಿದ್ದಾನೆ. ಅಲ್ಲದೇ ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.&lt;/p&gt;&lt;p&gt;ನಂತರ ಅವರು ಮಹಿಳೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆ ನಂತರ ಅಲ್ಲಿಂದ ಮೈಸೂರಿಗೆ ಬಂದಿದ್ದಾಳೆ. ಬಳಿಕ ಆಕೆ ಅಮೆರಿಕಾದ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಮೆರಿಕಾ ರಾಯಭಾರ ಕಚೇರಿಯಿಂದ ಬಂದ ಮಾಹಿತಿಯ ಮೇರೆಗೆ ಕರ್ನಾಟಕ ಪೊಲೀಸರು ಈ ಘಟನೆ ಸಂಬಂಧ ಎಫ್&zwnj;ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಕಸ ಎಸೆದು ಬರ್ತೀನಿ ಅಂತ ಹೇಳಿ ಕಟ್ಟಿಂಗ್ ಶಾಪ್&zwnj;ನವನ ಜೊತೆ ಓಡಿದ ಆಂಟಿ: ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್&lt;/p&gt;&lt;p&gt;ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಹೋಮ್&zwnj; ಸ್ಟೇ ಮಾಲೀಕನನ್ನು ಬಂಧಿಸಲಾಗಿದ್ದು, ಇಬ್ಬರನ್ನು ಮೇ 3ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಕೊಡಗು ಜಿಲ್ಲಾ ಎಸ್&zwnj;ಪಿ ಈ ಘಟನೆ ಹಾಗೂ ಆರೋಪಿಗಳ ಬಂಧನ ಆಗಿರುವ ಬಗ್ಗೆ ಖಚಿತಪಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;1050 ಕೋಟಿ ಮೌಲ್ಯದ ಆಸ್ತಿ ಒಡೆಯನಾದ್ರು ವಿರಾಟ್&zwnj; ಕೊಹ್ಲಿಗೆ ಒಂದು ಪೋಟೋ ಲೈಕ್ ಮಾಡುವ ಸ್ವಾತಂತ್ರ್ಯ ಇಲ್ವಾ?&lt;/strong&gt;&lt;strong&gt;&amp;nbsp;&lt;/strong&gt;ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ಕೊಡಗಿನ ವಿರಾಜಪೇಟೆ ಸಮೀಪದ ಕುಟ್ಟಾ ಬಳಿ ಇರುವ ದೇವಿ ವಿಲ್ಲಾ ಎಂಬ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅಲ್ಲಿ ಸಿಬ್ಬಂದಿಯಾಗಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಆ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವೃಜೇಶ್ ಕುಮಾರ್ ಹಾಗೂ ಹೋಂಸ್ಟೇ ಮಾಲೀಕ ವಿಶಾಲ್ ಎಂಬಾತನನ್ನು ಬಂಧಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;The horrific assault on a foreign woman in Kutta village of Kodagu is deeply shameful and unacceptable. Such incidents strike at the very soul of India&rsquo;s ethos of Atithi Devo Bhava.This is not just a crime against an individual, but a blot on our nation&rsquo;s image and values.I&hellip; pic.twitter.com/s7UnHxDWq7&lt;/p&gt;&lt;p&gt;&mdash; Dr. Ravi C. T  ಡಾ. ರವಿ ಸಿ. ಟಿ (@CTRavi_BJP) April 21, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಹೋಂ ಸ್ಟೇ ಗಳಿಗೆ ಈಗಾಗಲೇ ಎಸ್ಓಪಿ ನೀಡಲಾಗಿದೆ. ಅದರ ಪ್ರಕಾರ ಹೋಂಸ್ಟೇ ಮಾಲೀಕರು ನಡೆದುಕೊಳ್ಳಬೇಕು. ಅವರಿಗೆ ಲೈಸೆನ್ಸ್ ಇದೆಯಾ ಇಲ್ವಾ ಹೋಂಸ್ಟೇ ಮಾಡಬೇಕಾದರೆ ಏನೇನು ಮಾಡಬೇಕು ಎಲ್ಲದರ ಬಗ್ಗೆ ಸುತ್ತೋಲೆ ಇದೆ. ಅದನ್ನ ಮೀರಿ ಇಂಥ ಘಟನೆಗಳಾದಾಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಘಟನೆ ಗೊತ್ತಾಗ್ತಿದ್ದ ಹಾಗೆ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ.&lt;/p&gt;&lt;p&gt;ಕಾನೂನು ಪ್ರಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ಇದು ರಾಜ್ಯಕ್ಕಾಗಲೀ ಸಮಾಜಕ್ಕಾಗಲೀ ಒಳ್ಳೆಯ ಸಂದೇಶ ಕೊಡುವ ಘಟನೆ ಅಲ್ಲ. ಹೊರಗಿನಿಂದ ಬಂದವರ ಮೇಲೆ ಇತರ ಆದಾಗ ಏನು ಸಂದೇಶ ಹೋಗುತ್ತೆ. ನಮ್ಮ ದೇಶದ ಬಗ್ಗೆ ಎಂಥಾ ಸಂದೇಶ ಹೋಗುತ್ತೆ. ಇಂಥ ವಿಚಾರದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಘಟನೆ ಆದಮೇಲೆ ಮುಚ್ಚಿ ಹಾಕುವುದಕ್ಕೆ ಪ್ರಯತ್ನ ಮಾಡಿದ್ದಾರೆ ಅಂತ ಅನ್ಸುತ್ತೆ. ಪೊಲೀಸರಿಗೆ ಗೊತ್ತಾದ ತಕ್ಷಣ ಅವರನ್ನ ಅರೆಸ್ಟ್ ಮಾಡಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಜಾರ್ಖಂಡ್ ಅವನು ಅಂತ ಹೇಳ್ತಿದ್ದಾರೆ ಹೆಚ್ಚಿನ ವಿವರಗಳು ಬರಬೇಕಿದೆ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Anusha Kb</dc:creator>
            <atom:link href="https://kannada.asianetnews.com/crime/kodagu-homestay-horror-us-woman-brutally-assaulted-in-coorg-2-arrested/articleshow-t9k8ns1"/>
        </item>
        <item>
            <title><![CDATA[Iran-India Love story: ಮಧ್ಯಪ್ರಾಚ್ಯ ಯುದ್ಧದಿಂದ ವಿಮಾನ ರದ್ದು,  ಕೊಡಗಿನಲ್ಲಿ ಸಿಲುಕಿದ ಇರಾನ್ ದಂಪತಿ!]]></title>
            <link>https://kannada.asianetnews.com/state/iran-india-love-story-flight-canceled-due-to-middle-east-war-iranian-couple-stranded-in-kodagu-rav/articleshow-tycmbon</link>
            <guid isPermaLink="true">https://kannada.asianetnews.com/state/iran-india-love-story-flight-canceled-due-to-middle-east-war-iranian-couple-stranded-in-kodagu-rav/articleshow-tycmbon</guid>
            <pubDate>Tue, 07 Apr 2026 11:07:08 +0530</pubDate>
            <description><![CDATA[ಇರಾನ್&zwnj;ನಿಂದ ಕೊಡಗಿಗೆ ರಜೆಯ ಮೇಲೆ ಬಂದಿದ್ದ ದಂಪತಿ, ಯುದ್ಧದ ಪರಿಣಾಮವಾಗಿ ವಿಮಾನ ಸೇವೆ ರದ್ದಾದ ಕಾರಣ ತವರಲ್ಲೇ ಸಿಲುಕಿಕೊಂಡಿದ್ದಾರೆ. ಪಾಸ್&zwnj;ಪೋರ್ಟ್&zwnj; ಅವಧಿ ಮುಕ್ತಾಯದ ಹಂತದಲ್ಲಿದ್ದು, ಇರಾನ್&zwnj;ನಲ್ಲಿರುವ ತಮ್ಮ ಮಕ್ಕಳನ್ನು ಸಂಪರ್ಕಿಸಲಾಗದೆ ಆತಂಕದಲ್ಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knk6z1fxqaxkeaenvgyp7d2r,imgname----------------------82--1775540078077.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ (ಏ.7): &lt;/strong&gt;ದೀರ್ಘ ರಜೆ ಮೇಲೆ ತಮ್ಮ ಮಕ್ಕಳನ್ನ ಬಿಟ್ಟು ಇರಾನ್&zwnj;ನಿಂದ ಬಂದಿದ್ದ ದಂಪತಿ ಕೊಡಗಿನಲ್ಲೇ ಸಿಲುಕಿಕೊಂಡಿದ್ದಾರೆ.&lt;/p&gt;&lt;p&gt;ವಿಮಾನ ಸೇವೆ ರದ್ದಾದ ಕಾರಣ ಇರಾನ್&zwnj;ಗೆ ಮರಳಲಾಗದೆ ಕೊಡಗಿನಲ್ಲೇ ಉಳಿಯುವಂತಾಗಿದೆ. ಮತ್ತೊಂದು ಕಡೆ ದಂಪತಿಯ ಪಾಸ್&zwnj;ಪೋರ್ಟ್&zwnj; ಅವಧಿ ಮುಕ್ತಾಗೊಳ್ಳುವ ಹಂತದಲ್ಲಿದ್ದು, ಮತ್ತೆ ಇರಾನ್&zwnj;ಗೆ ಹೋಗಲು ಸಾಧ್ಯವಾಗುತ್ತೋ ಎಂಬ ಆತಂಕದಲ್ಲಿದ್ದಾರೆ.&lt;/p&gt;&lt;p&gt;ಇರಾನ್&zwnj; ಪ್ರಜೆಯೊಂದಿಗೆ ವಿವಾಹವಾಗಿದ್ದ ಕೊಡಗು ಮೂಲದ ಮಹಿಳೆ ದೀರ್ಘ ರಜೆ ಮೇಲೆ ತವರೂರಾದ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಾಂತೂರಿಗೆ ಬಂದಿದ್ದರು. ಕೊಡಗು ಮೂಲದ ನವೀನ್&zwnj; ಅವರು 40 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಇರಾನ್&zwnj;ನ ನಾದರ್&zwnj; ಅವರೊಂದಿಗೆ ಪರಿಚಯವಾಗಿತ್ತು. ಬಳಿಕ ಪ್ರೀತಿಸಿ ವಿವಾಹವಾದರು. ನಂತರ ದಂಪತಿ ಇರಾನ್&zwnj;ನ ಬೋಜ್&zwnj;ನೂರ್&zwnj; ಪ್ರದೇಶದಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಸಿವಿಲ್ ಎಂಜಿನಿಯರ್ ಆಗಿದ್ದು, ಮತ್ತೊಬ್ಬರು ಆರ್ಕಿಟೆಕ್ಟ್ (ವಾಸ್ತುಶಿಲ್ಪಿ) ಆಗಿದ್ದಾರೆ. ಈ ಕುಟುಂಬವು ಇರಾನಿನಲ್ಲಿ ದಾಳಿಂಬೆ, ಗ್ರೇಪ್, ಆಪಲ್, ಬ್ಲೂಬೆರಿ, ಬಾದಾಮಿ, ಏಪ್ರಿಕೋಟ್, ಖರ್ಜೂರ, ಪಿಸ್ತಾ ಸೇರಿದಂತೆ ಹಲವು ವಿದೇಶಿ ಹಣ್ಣುಗಳ ಫಾರ್ಮ್&zwnj;ಗಳನ್ನ ಹೊಂದಿದ್ದು, ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.&lt;/p&gt;&lt;p&gt;ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ದಂಪತಿ ಮಾರ್ಚ್&zwnj;ನಲ್ಲಿ ಇರಾನ್&zwnj;ಗೆ ವಾಪಸಾಗುತ್ತಿದ್ದರು. ಈ ಬಾರಿಯೂ ಡಿಸೆಂಬರ್&zwnj;ನಲ್ಲಿ ಕೊಡಗಿಗೆ ಬಂದಿದ್ದು, ಮಾ.16ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್&zwnj;ನ ಬೋಜ್&zwnj;ನೂರ್&zwnj;ಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಮೆರಿಕ&ndash;ಇರಾನ್ ಯುದ್ಧದ ಪರಿಣಾಮವಾಗಿ ವಿಮಾನ ರದ್ದಾಯಿತು. ನಂತರ ಏ. 15ರಂದು ಮತ್ತೊಮ್ಮೆ ಪ್ರಯಾಣ ಬುಕ್ ಮಾಡಿದ್ದರು. ಆ ವಿಮಾನವೂ ರದ್ದಾಯಿತು.&lt;/p&gt;&lt;p&gt;ದಂಪತಿಯ ಪಾಸ್&zwnj;ಪೋರ್ಟ್&zwnj; ಅವಧಿ ಮುಂದಿನ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಯುದ್ಧ ಇನ್ನಷ್ಟು ಮುಂದುವರಿದರೆ, ಕೊಡಗಿನಲ್ಲೇ ಇನ್ನಷ್ಟು ದಿನ ಉಳಿಯಬೇಕಾಗುತ್ತದೆ. ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್&zwnj;ನಲ್ಲಿ ಇಂಟರ್ನೆಟ್&zwnj; ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ. ಇದರಿಂದಾಗಿ ತಮ್ಮ ಮಕ್ಕಳನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಯುದ್ಧ ಪರಿಸ್ಥಿತಿಯಿಂದಾಗಿ ಬದುಕು ಅತಂತ್ರವಾದಂತಾಗಿದೆ. ಈ ಯುದ್ದ ಅದಷ್ಟು ಬೇಗ ಮುಗಿಯಲ್ಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/iran-india-love-story-flight-canceled-due-to-middle-east-war-iranian-couple-stranded-in-kodagu-rav/articleshow-tycmbon"/>
        </item>
        <item>
            <title><![CDATA[ರಸ್ತೆ ದುರಂತದಲ್ಲಿ ಮೃತ ಏಕೈಕ ಪುತ್ರನ ಕಣ್ಣು, ಕಿಡ್ನಿ ದಾನ ಮಾಡಿದ ಕೊಡಗಿನ ಪೋಷಕರು]]></title>
            <link>https://kannada.asianetnews.com/karnataka-districts/kodagu-somavarapet-parents-donate-eyes-kidneys-of-only-son-who-died-in-road-accident-mrq/articleshow-uz17gny</link>
            <guid isPermaLink="true">https://kannada.asianetnews.com/karnataka-districts/kodagu-somavarapet-parents-donate-eyes-kidneys-of-only-son-who-died-in-road-accident-mrq/articleshow-uz17gny</guid>
            <pubDate>Sat, 18 Apr 2026 23:31:33 +0530</pubDate>
            <description><![CDATA[ಸೋಮವಾರಪೇಟೆ ತಾಲೂಕಿನ ಬಾಲಕ ಹನ್ವಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಪುತ್ರನ ಮೆದುಳು ನಿಷ್ಕ್ರಿಯಗೊಂಡ ದುಃಖದ ನಡುವೆಯೂ, ಆತನ ಪೋಷಕರು ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡಿ ಇತರರ ಬಾಳಿಗೆ ಬೆಳಕಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpgvjxprv8tv0pmkmmm5psdw,imgname-kodagu--1776534779608.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು:&lt;/strong&gt; ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರ ತಾಲೂಕಿನ ಬಾಲಕ ರಸ್ತೆ ದುರಂತದಲ್ಲಿ ತೀವ್ರ ಗಾಯಗೊಂಡು ಮೃತಪಟ್ಟಿದ್ದು, ಪುತ್ರನ ಅಗಲುವಿಕೆಯ ದುಃಖದಲ್ಲೂ ಹೆತ್ತವರು ಆತನ ಕಣ್ಣು ಹಾಗೂ ಕಿಡ್ನಿಗಳನ್ನು ದಾನ ಮಾಡಿ ಇನ್ನೆರಡು ಜೀವಗಳನ್ನು ರಕ್ಷಿಸಿದ ಸಾರ್ಥಕತೆ ಹೊಂದಿದ್ದಾರೆ.&lt;/p&gt;&lt;p&gt;ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರ ಗ್ರಾಮದ ಕೃಷಿಕ ರಜಿತ್ ಮತ್ತು ರಮ್ಯಾ ದಂಪತಿಯ ಏಕೈಕ ಪುತ್ರ ಹನ್ವಿಕ್ ಮೃತಪಟ್ಟಿ ಬಾಲಕ.&lt;/p&gt;&lt;h2&gt;&lt;strong&gt;ಹನ್ವಿಕ್&zwnj;ಗೆ ಡಿಕ್ಕಿಯಾಗಿತ್ತು ಕಾರ್&lt;/strong&gt;&lt;/h2&gt;&lt;p&gt;ತಾಲೂಕಿನ ಯಡವನಾಡು ಜಂಕ್ಷನ್&zwnj;ನಲ್ಲಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.&lt;/p&gt;&lt;p&gt;ಮಗನ ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಆಘಾತದ ನಡುವೆ ದಂಪತಿಗಳು ತಮ್ಮ ಮಗನ ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡುವ ಮೂಲಕ ಇತರರ ಜೀವನಕ್ಕೆ ಬೆಳಕು ತಂದಿದ್ದಾರೆ. ಅಂಗಾಂಗ ದಾನ ಮಾಡುವ ಮೂಲಕ ಬಾಲಕ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.&lt;/p&gt;&lt;p&gt;ತಂದೆ, ತಾಯಿ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿರುವುದರಿಂದ ಹನ್ವಿಕ್ ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮದಲ್ಲಿ ತನ್ನ ತಾತ ಹರಗ ತಿಮ್ಮಯ್ಯ ಹಾಗೂ ಅಜ್ಜಿಯೊಂದಿಗೆ ವಾಸವಾಗಿದ್ದ. ಹತ್ತು ದಿನಗಳ ರಜೆಯಲ್ಲಿ ಚಿಕ್ಕಅಳುವಾರ ಗ್ರಾಮದ ತಂದೆ ಮನೆಯಲ್ಲಿ ಉಳಿದುಕೊಂಡಿದ್ದ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಕಣ್ಣುದಾನ ಮಾಡಿ ಮಗನ ಸಾವಿನಲ್ಲೂ ಸಾರ್ಥಕತೆ ಮರೆದ ಪೋಷಕರು&lt;/strong&gt;&lt;/p&gt;&lt;p&gt;ಕಳೆದ ಸೋಮವಾರ ಅಜ್ಜಿಯೊಂದಿಗೆ ಯಡವನಾಡು ಗ್ರಾಮಕ್ಕೆ ಬಸ್ಸಿಗೇರಿ ಯಡವನಾಡಿನ ಬಸ್ ತಂಗುದಾಣದಲ್ಲಿ ಇಳಿದ ನಂತರ ರಸ್ತೆ ದಾಟಲು ಯತ್ನಿಸಿದಾಗ, ಕುಶಾಲನಗರ ಕಡೆಯಿಂದ ವೇಗವಾಗಿ ಬಂದ ಕಾರೊಂದು ಬಾಲಕನಿಗೆ ಡಿಕ್ಕಿಯಾಗಿತ್ತು.&lt;/p&gt;&lt;p&gt;&amp;nbsp;&lt;/p&gt;&lt;p&gt;ಹುಣಸೂರು: ಪುತ್ರನ ಸಾವಿನಲ್ಲೂ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು#OrganDonate #Karnataka #Hunsur #Mysuru https://t.co/LGeX1HOSu6&lt;/p&gt;&lt;p&gt;&mdash; Asianet Suvarna News (@AsianetNewsSN) October 20, 2023&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹನ್ವಿಕ್ ಸಾವು&lt;/strong&gt;&lt;/h3&gt;&lt;p&gt;ಹನ್ವಿಕ್ ತಲೆಗೆ ಗಂಭೀರ ಗಾಯವಾಗಿ ತಕ್ಷಣವೇ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ನಾಲ್ಕು ದಿನಗಳ ಕಾಲ ವೈದ್ಯರು ಶಕ್ತಿಮೀರಿದ ಪ್ರಯತ್ನ ಮಾಡಿದರೂ, ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಹನ್ವಿಕ್ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾನೆ. ಶುಕ್ರವಾರ ಬಾಲಕನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ 10 ತಿಂಗಳ ಮಗುವಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಅಪಘಾತಕ್ಕೆ ಮೃತ 10 ತಿಂಗಳ ಮಗುವಿನ ಅಂಗಾಂಗ ದಾನ, ದೇಶದ ಅತಿಕಿರಿಯ ಅಂಗಾಂಗ ದಾನಿ ಹಿರಿಮೆ!#AlinSherinAbraham #OrganDonation #KeralaNews #IndiaYoungestDonor #Humanity #InspiringStory #HealthNewshttps://t.co/bC3JQ1QWUR&lt;/p&gt;&lt;p&gt;&mdash; Asianet Suvarna News (@AsianetNewsSN) February 13, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kodagu-somavarapet-parents-donate-eyes-kidneys-of-only-son-who-died-in-road-accident-mrq/articleshow-uz17gny"/>
        </item>
        <item>
            <title><![CDATA[ಅನ್ಯಧರ್ಮಿಯರಿಂದ ತುಳುನಾಡು ದೈವಕ್ಕೆ ಅಪಮಾನ; ಮದುಮಗ ಅಬ್ದುಲ್‌ಗೆ ಕೊರಗಜ್ಜನ ವೇಷ ತೊಡಿಸಿ ಎಳೆದೊಯ್ದು ಅಪಹಾಸ್ಯ]]></title>
            <link>https://kannada.asianetnews.com/gallery/karnataka-districts/tulunadu-daiva-insult-by-muslim-youths-at-kodagu-deovotees-outraged-rav-wp2nwix</link>
            <guid isPermaLink="true">https://kannada.asianetnews.com/gallery/karnataka-districts/tulunadu-daiva-insult-by-muslim-youths-at-kodagu-deovotees-outraged-rav-wp2nwix</guid>
            <pubDate>Tue, 31 Mar 2026 12:19:09 +0530</pubDate>
            <description><![CDATA[&lt;p&gt;ಕೊಡಗಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ತುಳುನಾಡಿನ ಪವಿತ್ರ ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn1a0zymjy5t4w5b5kpztgy4,imgname----------------------13--1774939307988.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಡಗಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ತುಳುನಾಡಿನ ಪವಿತ್ರ ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮದುಮಗ ಮತ್ತು ಆತನ ಬೆಂಬಲಿಗರು ದೈವಕ್ಕೆ ಅವಮಾನ ಮಾಡಿದ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಎಮ್ಮೆಮಾಡು ಗ್ರಾಮದಲ್ಲಿ ಗ್ರಾಮದ ಯುವಕರು ಎರಡು ದಿನಗಳ ಹಿಂದೆ ಮದುಮಗನೊಬ್ಬನಿಗೆ ದೈವದ ವೇಷ ತೊಡಿಸಿ ಉಳಿದವರು ದೇವರನ್ನು ಹೀಯಾಳಿಸಿ ಮೆರವಣಿಗೆ ನಡೆಸಿರುವ ಫೋಟೋ ವೈರಲ್&zwnj; ಆಗಿದೆ.&lt;/p&gt;&lt;img&gt;&lt;p&gt;ಪೂರ್ವಜರ ನಂಬಿಕೆ ಹಾಗೂ ಸಂಸ್ಕೃತಿ, ಧರ್ಮವನ್ನು ಅಪಹಾಸ್ಯ ಅವಮಾನ ಮಾಡಿದ್ದಾರೆಂದು ಆರೋಪ ಕೇಳಿಬಂದಿದ್ದು, ದೈವ ವೇಷದಲ್ಲಿ ಕೆಟ್ಟದಾಗಿ ವರ್ತಿಸಿ ಅವಮಾನ ಮಾಡಿದ ಹಿನ್ನೆಲೆ ಕಿಡಿಗೇಡಿಗಳ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಿಂದೂ ಪರ ಸಂಘಟನೆ ಪ್ರಮುಖರು ದೂರು ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ಎಮ್ಮೆಮಾಡು ಗ್ರಾಮದ ಯುವಕರಾದ ಅಬ್ದುಲ್ ರಾಶಿದ್, ಹನೀಫ್, ಲತೀಫ್, ಮೊಹಮ್ಮದ್ ಪೈಸಲ್ ,ಶಕೀರ್ ಹಾಗೂ ಬಶೀರ್ ಎಂಬುವರ ವಿರುದ್ಧ ದೂರು ದಾಖಲಾಗಿದೆ.&lt;/p&gt;&lt;p&gt;ಶನಿವಾರ ರಾತ್ರಿ ಕೊರಗಜ್ಜ ದೈವದ ರೀತಿ ವೇಷ ಧರಿಸಿ ಎಳೆದೊಯ್ದು ಅವಮಾನ ಮಾಡಿರುವ ಯುವಕರು. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಿಂದೂಗಳು, ಕೊರಗಜ್ಜನ ಭಕ್ತರ ಆಕ್ರೋಶಕ್ಕೆ ಗುರಿಯಾಗಿದೆ. ಇತ್ತ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೈವಾರಾಧಕರ ಸಂಘ ಮಡಿಕೇರಿ ಡಿವೈಎಸ್&zwnj;ಪಿಗೂ ದೂರು ಸಲ್ಲಿಸಿದೆ&lt;/p&gt;&lt;img&gt;&lt;p&gt;ನಮ್ಮ ದೈವಗಳಿಗೆ ಪದೇ ಪದೇ ಅಪಮಾನ ಮಾಡಲಾಗುತ್ತಿದೆ. ಅಪಮಾನವಾದಾಗ ನಾವು ದೂರು ಕೊಡುತ್ತೇವೆ ಬಳಿಕ ಕಿಡಿಗೇಡಿಗಳ ಆ ಕ್ಷಣಕ್ಕೆ ಕ್ಷಮೆ ಕೇಳುತ್ತಾರೆ. ನಂತರ ಇದೇ ರೀತಿ ಅಪಮಾನ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಕೊನೆ ಎಂದು. ಇನ್ನೊಮ್ಮೆ ಕೃತ್ಯವೆಸಗದ ಹಾಗೆ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು. ಮುಂದೆ ಈ ರೀತಿ ಕೃತ್ಯ ನಡೆದರೆ ತೀವ್ರ ಹೋರಾಟ ನಡೆಸಬೇಕಾಗುತ್ತೆ ಎಂದು ಎಚ್ಚರಿಸಿದರು.&lt;/p&gt;]]></content:encoded>
            <category>kodagu</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/tulunadu-daiva-insult-by-muslim-youths-at-kodagu-deovotees-outraged-rav-wp2nwix"/>
        </item>
        <item>
            <title><![CDATA[ಕೊಡಗು: ತಡಿಯಂಡಮೋಳ್ ಬೆಟ್ಟದ ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ 'ಕೇರಳದ ಟೆಕ್ಕಿ ಶರಣ್ಯ 3 ದಿನದ ಬಳಿಕ ಪತ್ತೆ'!]]></title>
            <link>https://kannada.asianetnews.com/gallery/state/kodagu-tadiandamol-hills-missing-kerala-techie-saranya-found-safe-after-three-days-sat-xidst9t</link>
            <guid isPermaLink="true">https://kannada.asianetnews.com/gallery/state/kodagu-tadiandamol-hills-missing-kerala-techie-saranya-found-safe-after-three-days-sat-xidst9t</guid>
            <pubDate>Sun, 05 Apr 2026 18:56:08 +0530</pubDate>
            <description><![CDATA[ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ, ಮೂರು ದಿನಗಳ ಬೃಹತ್ ಶೋಧ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಅರಣ್ಯ ಇಲಾಖೆ, ಪೊಲೀಸರು, ನಕ್ಸಲ್ ನಿಗ್ರಹ ಪಡೆ ಮತ್ತು ಸ್ಥಳೀಯರ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knewdcy3zngwr70r4p9npy93,imgname-kodagu-forest-missing-kerala-sharanya-found-1775394796483.jpg" type="image/jpeg" height="390" width="690"/>
            <content:encoded><![CDATA[ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ, ಮೂರು ದಿನಗಳ ಬೃಹತ್ ಶೋಧ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಅರಣ್ಯ ಇಲಾಖೆ, ಪೊಲೀಸರು, ನಕ್ಸಲ್ ನಿಗ್ರಹ ಪಡೆ ಮತ್ತು ಸ್ಥಳೀಯರ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ.&lt;img&gt;&lt;p&gt;&lt;strong&gt;ಕೊಡಗು (ಏ.05): ಕೊ&lt;/strong&gt;ಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರವಾದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ಕಳೆದ ಮೂರು ದಿನಗಳಿಂದ ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ (36) ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ಕೊಡಗು ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಸ್ಥಳೀಯರು ನಡೆಸುತ್ತಿದ್ದ ಬೃಹತ್ ಶೋಧ ಕಾರ್ಯಾಚರಣೆ ಸುಖಾಂತ್ಯ ಕಂಡಿದೆ.&lt;/p&gt;&lt;img&gt;&lt;p&gt;ಕೇರಳದ ಕೊಚ್ಚಿಯ ನಾದನಾಪುರ ಗ್ರಾಮದ ನಿವಾಸಿ, ಗೋಪಿ ಮತ್ತು ಶೈಲಜಾ ದಂಪತಿಯ ಪುತ್ರಿ ಶರಣ್ಯ ಕಳೆದ 15 ವರ್ಷಗಳಿಂದ ದೇಶದ ವಿವಿಧೆಡೆ ಚಾರಣ (Trekking) ಮಾಡಿದ ಅನುಭವ ಹೊಂದಿದ್ದಾರೆ. ಏಪ್ರಿಲ್ 2 ರಂದು ಅವರು ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಒಬ್ಬರೇ ಚಾರಣಕ್ಕೆ ತೆರಳಿದ್ದರು. ಚಾರಣ ಮುಗಿಸಿ ವಾಪಸ್ ಬರುವಾಗ ದಾರಿ ತಪ್ಪಿ ದಟ್ಟಾರಣ್ಯದೊಳಗೆ ಸಿಲುಕಿಕೊಂಡಿದ್ದರು.&lt;/p&gt;&lt;img&gt;&lt;p&gt;ದಾರಿ ತಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ಅವರು ತಾವು ತಂಗಿದ್ದ ಹೋಂಸ್ಟೇ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ, ದುರದೃಷ್ಟವಶಾತ್ ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಅವರ ನಿಖರವಾದ ಲೊಕೇಶನ್ ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು.&lt;/p&gt;&lt;img&gt;&lt;p&gt;ಶರಣ್ಯ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಶರಣ್ಯ ಪತ್ತೆಗಾಗಿ ಹೆಚ್ಚುವರಿ ತಂಡಗಳನ್ನು ನಿಯೋಜಿಸಲು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಲು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಸಚಿವರ ಸೂಚನೆಯ ಬೆನ್ನಲ್ಲೇ ಶೋಧ ಕಾರ್ಯ ತೀವ್ರಗೊಂಡಿತ್ತು.&lt;/p&gt;&lt;img&gt;&lt;p&gt;ಶರಣ್ಯ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ಸಾರ್ವಜನಿಕರ ತಂಡಗಳು ಹಗಲಿರುಳು ಶ್ರಮಿಸಿದವು. ಕಾಡಿನೊಳಗೆ ನಕ್ಸಲ್ ನಿಗ್ರಹ ಪಡೆ (ANF) ಕೂಡ ಕಾರ್ಯಾಚರಣೆಗೆ ಇಳಿದಿತ್ತು. ದಟ್ಟವಾದ ಕಾಡಿನಲ್ಲಿ ಮನುಷ್ಯರು ತಲುಪಲು ಸಾಧ್ಯವಾಗದ ಜಾಗಗಳಲ್ಲಿ ಹುಡುಕಾಟ ನಡೆಸಲು ಡ್ರೋಣ್ (Drones), ಥರ್ಮಲ್ ಡ್ರೋಣ್ (Thermal Drones) ಮತ್ತು ಶ್ವಾನ ದಳವನ್ನು (Dog Squad) ಬಳಸಿಕೊಳ್ಳಲಾಗಿತ್ತು.&lt;/p&gt;&lt;img&gt;&lt;p&gt;ಇಂದು ಬೆಳಗ್ಗೆ ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರ ತಂಡವು ಬೆಟ್ಟದ ತಪ್ಪಲಿನ ದಟ್ಟಾರಣ್ಯದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಶರಣ್ಯ ಪತ್ತೆಯಾಗಿದ್ದಾರೆ. ದಾರಿ ತಪ್ಪಿ ಮೂರು ದಿನಗಳ ಕಾಲ ಕಾಡಿನಲ್ಲೇ ಕಳೆದಿದ್ದರೂ, ಅವರು ಧೈರ್ಯ ಕಳೆದುಕೊಂಡಿರಲಿಲ್ಲ. ಸದ್ಯ ಶರಣ್ಯ ಅವರು ಆರೋಗ್ಯವಾಗಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.&lt;/p&gt;&lt;img&gt;&lt;p&gt;ಶರಣ್ಯ ಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚಾರಣದ ಅನುಭವವಿದ್ದ ಕಾರಣ ಅವರು ಕಾಡಿನ ವಿಷಮ ಪರಿಸ್ಥಿತಿಯಲ್ಲಿ ಮೂರು ದಿನಗಳ ಕಾಲ ಬದುಕುಳಿಯಲು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ. ಕೊಡಗು ಜಿಲ್ಲಾಡಳಿತವು ಚಾರಣಿಗರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮತ್ತೊಮ್ಮೆ ಮನವಿ ಮಾಡಿದೆ.&lt;/p&gt;&lt;img&gt;&lt;p&gt;ಇನ್ನು ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿರುವ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶರಣ್ಯ ಅವರ ಕುಟುಂಬ ಸದಸ್ಯರು ಭೇಟಿ ಮಾಡಿದ್ದರು. ಹೇಗಾದರೂ ಮಾಡಿ ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದರು. ಇನ್ನು ನೆರೆ ರಾಜ್ಯದ ಜನರು ಬಂದು ಡಿಕೆಶಿ ಅವರನ್ನು ಮನವಿ ಮಾಡಿದ ಬೆನ್ನಲ್ಲಿಯೇ ಅರಣ್ಯ ಸಚಿವರಿಗೆ ಮಾಹಿತಿ ನೀಡಿ, ಶರಣ್ಯ ಹುಡುಕಾಟಕ್ಕೆ ಹೆಚ್ಚು ಒತ್ತಡ ಹಾಕಿದ್ದರು. ಇದರ ಬೆನ್ನಲ್ಲೇ ಶರಣ್ಯ ಸಿಕ್ಕಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/kodagu-tadiandamol-hills-missing-kerala-techie-saranya-found-safe-after-three-days-sat-xidst9t"/>
        </item>
        <item>
            <title><![CDATA[ಸಚಿವ ಸಂಪುಟ ಪುನರ್ ರಚಿಸಿ ಹೊಸಬರಿಗೆ ಅವಕಾಶ ಕೇಳುವುದು ತಪ್ಪಲ್ಲ: ಶಾಸಕ ಎ.ಎಸ್. ಪೊನ್ನಣ್ಣ]]></title>
            <link>https://kannada.asianetnews.com/politics/as-ponnanna-cabinet-reshuffle-karnataka-demand-kodagu-statement-gvd/articleshow-ydb1d6f</link>
            <guid isPermaLink="true">https://kannada.asianetnews.com/politics/as-ponnanna-cabinet-reshuffle-karnataka-demand-kodagu-statement-gvd/articleshow-ydb1d6f</guid>
            <pubDate>Sun, 12 Apr 2026 20:21:58 +0530</pubDate>
            <description><![CDATA[&lt;p&gt;ಸಂಪುಟ ಪುನರ್ ರಚನೆ ಆಗಬೇಕೆಂದು ಹಿರಿಯ ಶಾಸಕರು ಕೇಳಿದ್ದಾರೆ. ಅದು ತಪ್ಪೂ ಅಲ್ಲ, ಬಂಡಾಯ ಅಥವಾ ಪಕ್ಷ ವಿರೋಧಿ ಅಂತನೂ ಅಲ್ಲ. ಅವರ ಬೇಡಿಕೆಗೆ ನನ್ನ ಸಹಮತವೂ ಇದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km87hcdq7gdv5w5ebzw3n891,imgname-jj-1774097838519.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಏ.12): &lt;/strong&gt;ಸಂಪುಟ ಪುನರ್ ರಚನೆ ಆಗಬೇಕೆಂದು ಹಿರಿಯ ಶಾಸಕರು ಕೇಳಿದ್ದಾರೆ. ಅದು ತಪ್ಪೂ ಅಲ್ಲ, ಬಂಡಾಯ ಅಥವಾ ಪಕ್ಷ ವಿರೋಧಿ ಅಂತನೂ ಅಲ್ಲ. ಅವರ ಬೇಡಿಕೆಗೆ ನನ್ನ ಸಹಮತವೂ ಇದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಸರ್ಕಾರ ಬಂದು ಮೂರು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ. ಈ ಹಿಂದೆ ಹಲವು ಶಾಸಕರು ಸಚಿವ ಸ್ಥಾನಕ್ಕೆ ಆಗ್ರಹಿಸಿ ಪತ್ರ ಬರೆದಿದ್ದರು.&lt;/p&gt;&lt;p&gt;ಅದಕ್ಕೆ ನಾನು ಕೂಡ ಸಹಿ ಹಾಕಿದ್ದೆ. ಈಗ ಅಧಿವೇಶನ ನಡೆಯುವಾಗಲೂ ಸಿಎಂ ಅವರನ್ನು ಹಿರಿಯ ಶಾಸಕರು ಭೇಟಿಯಾಗಿದ್ದರು. ಅವರಿಗೂ ಸಹ ಮನವಿ ಮಾಡಿದ್ದರು, ನಾವು ಹೈಕಮಾಂಡ್ ಬಳಿಗೆ ಹೋಗುತ್ತೇವೆ ಅಂದಿದ್ರು. ಆದರೆ ಹೋಗಿದ್ದಾರೋ, ಇಲ್ಲವೋ ಎನ್ನುವುದು ಗೊತ್ತಿಲ್ಲ. ಪುನರ್ ರಚನೆ ಆಗಬೇಕು, ನಮಗೂ ಮಂತ್ರಿ ಸ್ಥಾನ ಸಿಗಬೇಕು ಎನ್ನುವುದು ಎಲ್ಲಾ ಸರ್ಕಾರದಲ್ಲೂ ಇರುತ್ತದೆ. ನಮ್ಮಲ್ಲಿ ಡೆಮೊಕ್ರಾಟಿಕ್ ಆಗಿ ನಡೆದುಕೊಳ್ಳುತ್ತೇವೆ. ಕೇಳುವುದು ತಪ್ಪು ಅಂತನೂ ಹೇಳುವುದಕ್ಕೆ ಆಗಲ್ಲ.&lt;/p&gt;&lt;p&gt;ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಕೇಳಿದ್ದರು. ಸಂಪುಟ ಪುನರ್ ರಚನೆ ಹೈಕಮಾಂಡ್ ಮತ್ತು ಸಿಎಂ, ಡಿಸಿಎಂ ಅವರಿಗೆ ಬಿಟ್ಟಂತಹ ವಿಚಾರ. ಪುನರ್ ರಚನೆ ಆದರೆ ನಮ್ಮ ಜಿಲ್ಲೆಗೂ ಸಚಿವ ಸ್ಥಾನ ನೀಡಬೇಕು ಎಂದು ಕೇಳುತ್ತೇನೆ. ಕೊಡಬೇಕು ಅಥವಾ ಬಿಡಬೇಕು ಎನ್ನುವುದು ಹೈಕಮಾಂಡಿಗೆ ಬಿಟ್ಟ ವಿಚಾರ. ಸರ್ಕಾರ ಪುನರ್ ರಚನೆ ಆಗಬೇಕು ಎನ್ನುವುದು ಸಾಮಾನ್ಯ. ಕೆಲವರನ್ನು ಕೈಬಿಟ್ಟು ಕೆಲವರಿಗೆ ಅವಕಾಶ ನೀಡಲು ಪುನರ್ ರಚನೆ ಆಗಬೇಕಾಗುತ್ತದೆ. ಕೆಲವು ಜಿಲ್ಲೆಗಳು, ಕೆಲವು ವರ್ಗಗಳಿಗೆ ಸಚಿವ ಸ್ಥಾನ ಕೊಟ್ಟಿಲ್ಲ.&lt;/p&gt;&lt;p&gt;ಸಾಮಾಜಿಕ ನ್ಯಾಯ ಸರಿಪಡಿಸಲು ಪುನರ್ ರಚನೆ ಮಾಡಬೇಕಾಗುತ್ತದೆ. ಇದೆಲ್ಲವನ್ನೂ ಯೋಚಿಸಿ ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನೆ ಆಗಬಹುದು. ನನಗೂ ಆ ನಿರೀಕ್ಷೆ ಇದೆ ಎಂದು ಶಾಸಕ ಎ ಎಸ್ ಪೊನ್ನಣ್ಣ ಹೇಳಿದ್ದಾರೆ. ಇನ್ನು ಉಪಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮುಸ್ಲಿಂ ಮುಖಂಡರು ಕೆಲಸ ಮಾಡಿದ್ದರೆ ಹೈಕಮಾಂಡ್ ಅಂತಹವರ ವಿರುದ್ಧ ಕ್ರಮ ಕೈಗೊಳಲಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಪಕ್ಷದ ವರಿಷ್ಠರೇ ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಸುರ್ಜೇವಾಲ ಅವರೆಲ್ಲಾ ವೀಕ್ಷಕರಾಗಿ ಇದ್ದು ಕೆಲಸ ಮಾಡಿದ್ದಾರೆ. ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದರೆ ಅದು ವೀಕ್ಷಕರ ಗಮನಕ್ಕೆ ಹೋಗಿರುತ್ತದೆ. ಈಗ ಪಕ್ಷದಿಂದ ಖಂಡಿತ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಈಗಾಗಲೇ ಹೈಕಮಾಂಡಿಗೆ ವರದಿ ನೀಡಿದ್ದಾರೆ ಎನ್ನಲಾಗುತ್ತಿದೆ. ಪಕ್ಷ ತೆಗೆದುಕೊಳ್ಳುವ ಶಿಸ್ತು ಕ್ರಮಕ್ಕೆ ನಾವೆಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಯುದ್ಧ ಯಾರಿಗೂ ಒಳ್ಳೆಯದಲ್ಲ&lt;/strong&gt;&lt;/h2&gt;&lt;p&gt;ಇನ್ನು ಅಮೆರಿಕ, ಇರಾನ್ ನಡುವಿನ ಸಂಧಾನ ಸಭೆ ವಿಫಲವಾಗಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಸಂಧಾನ ಮಾತುಕತೆ ವಿಫಲ ಆಗಿರುವುದು ಇಡೀ ವಿಶ್ವಕ್ಕೆ ಅತ್ಯಂತ ಆಘಾತಕಾರಿ ಬೆಳವಣಿಗೆ. ಯುದ್ಧ ಯಾರಿಗೂ ಒಳ್ಳೆಯದಲ್ಲ, ಈಗಾಗಲೇ ಒಂದು ಮತ್ತು ಎರಡನೇ ಮಹಾಯುದ್ಧಗಳು ನಡೆದಿವೆ. ಅದರಿಂದ ಜಗತ್ತಿಗೆ, ಮಾನವ ಕುಲಕ್ಕೆ ಅಪಾರ ನಷ್ಟ ಆಗಿದ್ದು, ಯುದ್ಧ ಯಾವುದಕ್ಕೂ ಪರಿಹಾರ ಅಲ್ಲ. ಯುದ್ಧ ನಿಲ್ಲಬೇಕು ಎನ್ನುವುದು ನಮ್ಮ ಆಶಯ. ಕೆಲವು ದೇಶಗಳು ಹೆಚ್ಚು ಪ್ರಭಾವ ಬೀರಬೇಕು, ಆರ್ಥಿಕ ಸ್ಥಿತಿ ಮೇಲೆ ನಮ್ಮ ಹಿಡಿತ ಇರಬೇಕು ಅಂತ ತಪ್ಪು ತೀರ್ಮಾನಗಳನ್ನು ಮಾಡುತ್ತವೆ.&lt;/p&gt;&lt;p&gt;ಇಸ್ರೇಲ್ ಮತ್ತು ಅಮೆರಿಕ ಮಾಡಿರುವುದನ್ನು ಯಾರು ಒಪ್ಪುವಂತಹದ್ದಲ್ಲ. ವಿದೇಶಾಂಗ ನೀತಿ ರೂಪಿಸಿದಾಗ ಯಾವುದೇ ಅತಿಕ್ರಮಣಗಳನ್ನು ಒಪ್ಪಲು ಸಾಧ್ಯವಿಲ್ಲ. 1947 ನೇ ಇಸವಿಯಲ್ಲಿ ಭಾರತ ಧೂಳಿನಿಂದ ಕೂಡಿದ್ದ ದೇಶವಾಗಿತ್ತು, ಆಗ ಎತ್ತಿಗಾಡಿಗಳು ಓಡುತ್ತಿದ್ದವು. 1952 ರಲ್ಲಿ ನೆಹರು ಚುನಾವಣೆಯಲ್ಲಿ ಗೆದ್ದರು. ನಂತರ ರಷ್ಯಾ ಹಾಗೂ ಅಮೆರಿಕ ಜೊತೆಗೆ ಹೋಗಲ್ಲ ಅಂತ ನಾನ್ ಅಲೈನ್ಮೆಂಟ್ ಮಾಡಿದರು. ಆ ಆಲೋಚನೆಯನ್ನು ಈ ಸರ್ಕಾರ ಕೂಡ ಮುಂದುವರಿಸುವುದು ದೇಶಕ್ಕೆ ಶೋಭೆ ತರುತ್ತದೆ ಎಂದು ಪೊನ್ನಣ್ಣ ಮಡಿಕೇರಿಯಲ್ಲಿ ಹೇಳಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/as-ponnanna-cabinet-reshuffle-karnataka-demand-kodagu-statement-gvd/articleshow-ydb1d6f"/>
        </item>
        <item>
            <title><![CDATA[Kodagu: ಮಡಿಕೇರಿಯ ಕಾಫಿ ತೋಟದಲ್ಲಿ ಅನಾಥವಾದ ಹೆಣ್ಣು ಶಿಶು ಪತ್ತೆ!]]></title>
            <link>https://kannada.asianetnews.com/karnataka-districts/kodagu-abandoned-baby-girl-found-in-a-coffee-plantation-in-madikeri-rav/articleshow-znxup09</link>
            <guid isPermaLink="true">https://kannada.asianetnews.com/karnataka-districts/kodagu-abandoned-baby-girl-found-in-a-coffee-plantation-in-madikeri-rav/articleshow-znxup09</guid>
            <pubDate>Sun, 12 Apr 2026 11:09:11 +0530</pubDate>
            <description><![CDATA[&lt;p&gt;ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾಫಿ ತೋಟವೊಂದರಲ್ಲಿ ಅಡಕೆ ಹಾಳೆಯಲ್ಲಿ ಸುತ್ತಿಟ್ಟಿದ್ದ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ರಕ್ಷಿಸಿ, ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp02hrjzkt0bdjk5egxqtw37,imgname-----------------------2026-04-12t105608.790-1775971656287.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ (ಏ.12):&lt;/strong&gt; ಹೆತ್ತವರೇ ಮಗುವನ್ನು ಅನಾಥವಾಗಿ ಕಾಫಿ ತೋಟದಲ್ಲಿ ಬಿಟ್ಟು ಹೋಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿಯಲ್ಲಿ ನಡೆದಿದೆ. ಕಾಫಿ ತೋಟವೊಂದರಲ್ಲಿ ಅಡಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಅದನ್ನು ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು!&lt;/strong&gt;&lt;/p&gt;&lt;p&gt;ಬೇತ್ರಿ ಗ್ರಾಮದ ಹೆಮ್ಮಾಡು ವ್ಯಾಪ್ತಿಯ ಕಾಫಿ ತೋಟದಲ್ಲಿ ಶಿಶು ಅಳುವುದನ್ನು ಕೇಳಿದ ಸ್ಥಳೀಯರು ಹೋಗಿ ನೋಡಿದಾಗ, ಅಡಕೆ ಹಾಳೆಯಲ್ಲಿದ್ದ ಮಗು ಜಾರಿತ್ತು. ಬಟ್ಟೆಯಿಲ್ಲದೆ, ಶೀತದಿಂದ ನಡುಗುತ್ತಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;&amp;nbsp;ಸ್ಥಳಕ್ಕೆ ಧಾವಿಸಿದ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಗುವು ಸ್ವಲ್ಪ ಅಸ್ವಸ್ಥಗೊಂಡಿದ್ದರಿಂದ ತಕ್ಷಣವೇ ಮಡಿಕೇರಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿದ್ದು, ಶಿಶುವು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ. ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಪೋಷಕರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kodagu-abandoned-baby-girl-found-in-a-coffee-plantation-in-madikeri-rav/articleshow-znxup09"/>
        </item>
    </channel>
</rss>
