<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 13 May 2026 23:21:28 +0530</lastBuildDate>
        <atom:link href="https://kannada.asianetnews.com/rss/kodagu" rel="self" type="application/rss+xml"/>
        <item>
            <title><![CDATA[ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರ]]></title>
            <link>https://kannada.asianetnews.com/gallery/state/bus-driver-suffers-heart-attack-while-driving-near-madikeri-condition-critical-395msov</link>
            <guid isPermaLink="true">https://kannada.asianetnews.com/gallery/state/bus-driver-suffers-heart-attack-while-driving-near-madikeri-condition-critical-395msov</guid>
            <pubDate>Fri, 08 May 2026 08:22:08 +0530</pubDate>
            <description><![CDATA[&lt;p&gt;ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರವಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2qhgw23rqf34v2mmcje0wr,imgname-madikeri-accident-1778208260994.png" type="image/jpeg" height="390" width="690"/>
            <content:encoded><![CDATA[&lt;p&gt;ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರವಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.&lt;/p&gt;&lt;img&gt;&lt;p&gt;ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಬಸ್ ಅಪಘಾತಕ್ಕೀಡಾದ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಮಡಿಕೇರಿ ಸಮೀಪದ ತಲುಪುತ್ತಿದ್ದಂತೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಬಸ್ ರಸ್ತೆ ಪಕ್ಕಕ್ಕೆ ಇಳಿದು ವಾಲಿಕೊಂಡು ನಿಂತಿದೆ. ಅದೃಷ್ಠವಶಾತ್ ಅನಾಹುತ ಸಂಭವಿಸಿಲ್ಲ.&lt;/p&gt;&lt;img&gt;&lt;p&gt;ಚಾಲಕನಿಗೆ ತೀವ್ರ ಹೃದಯಘಾತ ಸಂಭವಿಸಿದೆ. ಆದರೆ ಬಸ್ ರಸ್ತೆಯ ಬದಿಗೆ ಇಳಿದ ಚಾಲಕ ಹಲವರ ಪ್ರಾಣ ಕಾಪಾಡಿದ್ದಾನೆ. ಇತ್ತ ಚಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಚಾಲಕನನ್ನು ಮಡಿಕೇರಿ ಬಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;ತನಗೆ ಹೃದಯಘಾತವಾಗುತ್ತಿದ್ದಂತೆ ಬಸ್ ಚಾಲಕನ ಬಸ್ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ. ಅಷ್ಟೊರಳಗೆ ತೀವ್ರವಾಗಿ ಹೃದಯಾಘಾತವಾಗಿದೆ. ಆಧರೂ ಬಸ್ ಚರಂಡಿಯತ್ತ ಇಳಿಸಿದ್ದಾನೆ. ಇದರಿಂದ ಬಸ್ ವಾಲಿಕೊಂಡು ನಿಂತಿದೆ. ಇದರ ಪರಿಣಾಮ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.&lt;/p&gt;&lt;img&gt;&lt;p&gt;ನಿನ್ನೆ (ಮೇ.07) ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಪ್ರಯಾಣಿಕರ ಹೊತ್ತು ಸಾಗಿತ್ತು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪರಿಣಾಮ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಮಡಿಕೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;img&gt;&lt;p&gt;ರಸ್ತೆ ಬದಿಯಲ್ಲಿ ಬಸ್ ವಾಲಿಕೊಂಡು ನಿಂತ ಕಾರಣ ಹೆದ್ದಾರಿಯಲ್ಲಿ ಇತರ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಿಲ್ಲ. ಇತ್ತ ಬಸ್&zwnj;ನಲ್ಲಿದ್ದ ಪ್ರಯಾಣಿಕರು ಕೆಲ ಕಾಲ ಆತಂಕಗೊಂಡಿದ್ದರು. ಪ್ರಯಾಣಿಕರಿಗೆ ಇತರ ವಾಹನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.&lt;/p&gt;]]></content:encoded>
            <category>kodagu</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/bus-driver-suffers-heart-attack-while-driving-near-madikeri-condition-critical-395msov"/>
        </item>
        <item>
            <title><![CDATA[ನನ್ನ ಯಶಸ್ಸಿಗೆ ಕೊಡವ ಹಾಗೂ ಕಾವೇರಮ್ಮೆಯ ಆಶೀರ್ವಾದ ಅಮೂಲ್ಯ: ನಟಿ ಹರ್ಷಿಕಾ ಪೂಣಚ್ಚ]]></title>
            <link>https://kannada.asianetnews.com/karnataka-districts/harshika-poonacha-kodava-hockey-festival-napoklu-gvd/articleshow-3r3mg35</link>
            <guid isPermaLink="true">https://kannada.asianetnews.com/karnataka-districts/harshika-poonacha-kodava-hockey-festival-napoklu-gvd/articleshow-3r3mg35</guid>
            <pubDate>Fri, 01 May 2026 19:44:11 +0530</pubDate>
            <description><![CDATA[&lt;p&gt;ಚಲನಚಿತ್ರರಂಗದಲ್ಲಿ ತನಗೆ ಸಿಕ್ಕ ಎಲ್ಲ ಪ್ರಶಸ್ತಿಗಳಿಗಿಂತ ಜನಾಂಗದವರ ಆಶೀರ್ವಾದ, ತಾಯಿ ಕಾವೇರಮ್ಮೆಯ ಆಶೀರ್ವಾದ ಅಮೂಲ್ಯವಾದದು ಎಂದು ಕೊಡಗು ಮೂಲದ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqhy5a2mxx2g4jzk3w3hxc8h,imgname-jvjv-1777644775508.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಪೋಕ್ಲು (ಮೇ.01): &lt;/strong&gt;ಚಲನಚಿತ್ರರಂಗದಲ್ಲಿ ತನಗೆ ಸಿಕ್ಕ ಎಲ್ಲ ಪ್ರಶಸ್ತಿಗಳಿಗಿಂತ ಜನಾಂಗದವರ ಆಶೀರ್ವಾದ, ತಾಯಿ ಕಾವೇರಮ್ಮೆಯ ಆಶೀರ್ವಾದ ಅಮೂಲ್ಯವಾದದು ಎಂದು ಕೊಡಗು ಮೂಲದ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ ಹೇಳಿದರು. ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಹಿಳೆಯರ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಉದ್ದಾಟಿಸಿ ಮಾತನಾಡಿದರು.&lt;/p&gt;&lt;p&gt;ತಾಯಿ ಕಾವೇರಮ್ಮನಿಗೆ ತನ್ನನ್ನು ಹೋಲಿಸಿದ್ದು ನಿಮ್ಮೆಲ್ಲರ ಆಶೀರ್ವಾದಕ್ಕೆ ತಾನು ಋಣಿ ಎಂದರು. ಕೊಡಗಿನಲ್ಲಿ ಕೈಲು ಮುಹೂರ್ತ, ಕಾವೇರಿ ಸಂಕ್ರಮಣ ಹಾಗೂ ಹುತ್ತರಿ ಹಬ್ಬಗಳನ್ನು ಪ್ರಮುಖ ಹಬ್ಬಗಳನ್ನಾಗಿ ಆಚರಿಸಲಾಗುತ್ತಿದೆ ಇದೀಗ ಕೊಡವ ಹಾಕಿ ಉತ್ಸವ ಕೂಡ ಹಬ್ಬಗಳ ಸಾಲಿಗೆ ಸೇರ್ಪಡೆಗೊಂಡಿದ್ದು ನಾಲ್ಕು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.&lt;/p&gt;&lt;p&gt;ಕೊಡಗಿನಲ್ಲಿ ನಡೆಯುವ ಈ ಹಾಕಿ ಉತ್ಸವ ಯಾವ ರಾಷ್ಟ್ರದಲ್ಲಿಯೂ ಇಲ್ಲ. ಯಾವುದೇ ಜನಾಂಗದಲ್ಲಿಯೂ ಇಲ್ಲ. ಅಂತಹ ವೈಶಿಷ್ಟ್ಯ ಪೂರ್ಣವಾದ ಹಾಕಿ ಉತ್ಸವವನ್ನು ಕೊಡವ ಜನಾಂಗದವರು ಆಯೋಜಿಸುತ್ತಿರುವುದು ಪ್ರಶಂಶನೀಯ ಎಂದರು. ಇಂಡಿಯನ್ ಹಾಕಿ ಕ್ಯಾಂಪರ್ ಕನ್ನಡ ರಾಣಿ ಕರಂಬಯ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.&lt;/p&gt;&lt;p&gt;ಇಂಟರ್ನ್ಯಾಷನಲ್ ಕೀಯರ್ ತೆಕ್ಕಡ ಭವಾನಿ, ಹಾಕಿ ಕರ್ನಾಟಕ ಕಾರ್ಯದರ್ಶಿ, ಮಾಜಿ ಒಲಂಪಿಯನ್ ಅಂಜಪರವಂಡ ಬಿ ಸುಬ್ಬಯ್ಯ, ಅಂತಾರಾಷ್ಟ್ರೀಯ ಹಾಕಿ ಕ್ರೀಡಾಪಟು ಕೂತಂಡ ಪೂನಚ್ಚ, ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಉಳ್ಳಿಯಡ ಪುವಯ್ಯ, ದಾಟಿ ಪುವಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮತ್ತಿತರರಿದ್ದರು.&lt;/p&gt;&lt;h2&gt;&lt;strong&gt;ರೋಚಕ ಫೈನಲ್&lt;/strong&gt;&lt;/h2&gt;&lt;p&gt;ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ರೋಚಕ ಫೈನಲ್ ಪಂದ್ಯ ಜರುಗಿ ಎರಡು ಗೋಲುಗಳ ಸಮ ಬಲವನ್ನು ಹೊಂದಿದ್ದು ಬಳಿಕ ಟೈ ಬ್ರೇಕ್ ರಲ್ಲಿ 1-2 ಗೋಲುಗಳನ್ನು ಗಳಿಸಿ ಕೇಚೆಟ್ಟಿರ ವಿಜಯದ ಮಾಲೆಯನ್ನು ಮುಡಿಗೇರಿಸಿಕೊಂಡಿತು.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/harshika-poonacha-kodava-hockey-festival-napoklu-gvd/articleshow-3r3mg35"/>
        </item>
        <item>
            <title><![CDATA[ಕಾಂಗ್ರೆಸ್‌ ಬೆಂಬಲ ಕೊಡಲಿಲ್ಲ, ಮಹಿಳೆಯರಿಗೆ ಮೀಸಲು ದೊರೆಯಲಿಲ್ಲ: ಸಂಸದ ಯದುವೀರ್ ಒಡೆಯರ್]]></title>
            <link>https://kannada.asianetnews.com/karnataka-districts/women-reservation-bill-congress-opposition-yaduveer-wadiyar-statement-gvd/articleshow-4z7cuxc</link>
            <guid isPermaLink="true">https://kannada.asianetnews.com/karnataka-districts/women-reservation-bill-congress-opposition-yaduveer-wadiyar-statement-gvd/articleshow-4z7cuxc</guid>
            <pubDate>Sun, 26 Apr 2026 18:36:45 +0530</pubDate>
            <description><![CDATA[&lt;p&gt;ಪ್ರಧಾನಿ ಅವರು ಇಂತಹದ್ದೊಂದು ಮಸೂದೆಗಳನ್ನು ಮಂಡಿಸಿದ್ದರು. ಆದರೆ, ಕಾಂಗ್ರೆಸ್&zwnj; ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ದೊರೆಯಲಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2r52cw99q32d0bg3w774p9n,imgname-yaduveer-wadiyar-1755304768393.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ (ಏ.26): &lt;/strong&gt;ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವುದಕ್ಕೆ, ಭಾರತದ ನಾಯಕತ್ವಕ್ಕೆ ಹಾಗೂ ನೀತಿ ನಿರೂಪಣೆಯಲ್ಲಿ ಮಹಿಳೆಯರಿರಬೇಕು ಎಂಬ ಕಾರಣಕ್ಕಾಗಿ ಪ್ರಧಾನಿ ಅವರು ಇಂತಹದ್ದೊಂದು ಮಸೂದೆಗಳನ್ನು ಮಂಡಿಸಿದ್ದರು. ಆದರೆ, ಕಾಂಗ್ರೆಸ್&zwnj; ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ದೊರೆಯಲಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.&lt;/p&gt;&lt;p&gt;ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲಾತಿ ಕೊಡುವುದು ಹಾಗೂ ರಾಜ್ಯವೂ ಸೇರಿದಂತೆ ದೇಶದ ಸಂಸತ್ ಸದಸ್ಯ ಸ್ಥಾನಗಳ ಸಂಖ್ಯೆ ಹೆಚ್ಚಿಸುವ ಸಾಂವಿಧಾನಿಕ ತಿದ್ದುಪಡಿಯಂತಹ ಮಸೂದೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದು ಹಾಗೂ ರಾಜ್ಯದ ಸಂಸತ್ ಸದಸ್ಯ ಸ್ಥಾನ ಹೆಚ್ಚಿಸುವ ಉದ್ದೇಶಗಳು ಈಡೇರಲಿಲ್ಲ. ಆದರೆ, ಕೇಂದ್ರ ಸರ್ಕಾರ ತನ್ನ ಪ್ರಯತ್ನ ಮುಂದುವರಿಸಲಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಬೆಂಬಲ ಕೊಡಲಿಲ್ಲ&lt;/strong&gt;&lt;/h2&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರು ಈ ಮಸೂದೆಗಳು ಜಾರಿಯಾದಲ್ಲಿ ಅದರಲ್ಲಿ ನನ್ನ ಚಿತ್ರ ಬೇಡವೇ ಬೇಡ. ವಿರೋಧ ಪಕ್ಷಗಳ ನಾಯಕರ ಚಿತ್ರಗಳನ್ನೇ ಹಾಕುತ್ತೇವೆ ಎಂದರು. ಮಾತ್ರವಲ್ಲ, ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿದರು. ಆದರೂ, ಕಾಂಗ್ರೆಸ್&zwnj; ಬೆಂಬಲ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸಂಸತ್ ಸದಸ್ಯ ಸ್ಥಾನವೂ ಏರಿಕೆಯಾಗುತ್ತಿತ್ತು.&lt;/p&gt;&lt;p&gt;ಕೊಡಗಿಗೆ ಪ್ರತ್ಯೇಕವಾದ ಸಂಸತ್ ಸದಸ್ಯ ಸ್ಥಾನವೂ ಸಿಗುವ ಸಂಭವ ಸಹ ಇತ್ತು. ಆದರೆ, ಕಾಂಗ್ರೆಸ್ ವಿರೋಧ ಮಾಡಿದ್ದರಿಂದ ಇಂತಹ ಸುವರ್ಣ ಅವಕಾಶಗಳು ವ್ಯರ್ಥವಾದವು ಎಂದು ಹೇಳಿದರು. ಮೈಸೂರು&ndash;ಕುಶಾಲನಗರ ರೈಲು ಸಂರ್ಪಕ ಯೋಜನೆ ರದ್ದಾಗಿಲ್ಲ. ರಾಜ್ಯ ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನೀಡಿದರೆ ರೈಲು ಯೋಜನೆ ಕಾರ್ಯಗತವಾಗುತ್ತದೆ ಎಂದರು. ಮಾಜಿ ಸಚಿವ ಅಪ್ಪಚ್ಚುರಂಜನ್ ಮಾತನಾಡಿ, ವಿರೋಧ ಪಕ್ಷದಲ್ಲಿಯೂ ಮಹಿಳೆಯರಿದ್ದಾರೆ. ಕಾಂಗ್ರೆಸ್&zwnj;ನ ಈ ವರ್ತನೆಯನ್ನು ಎಲ್ಲ ಮಹಿಳೆಯರೂ ಪಕ್ಷಾತೀತವಾಗಿ ಖಂಡಿಸಬೇಕು.&lt;/p&gt;&lt;p&gt;ದೇಶದ ಹಿತಕ್ಕಾಗಿ ವಿರೋಧ ಪಕ್ಷಗಳೆಲ್ಲವೂ ಬೆಂಬಲ ಕೊಡುತ್ತವೆ ಎಂಬ ನಂಬಿಕೆ ಇತ್ತು. ಹಿಂದೆಯೂ ಕೆಲವೊಂದು ಸಂದರ್ಭಗಳಲ್ಲಿ ಬೆಂಬಲ ನೀಡಿದ್ದರು. ಆ ನಂಬಿಕೆಯ ಮೇಲೆ ಮಸೂದೆ ಮಂಡಿಸಲಾಯಿತು. ಆದರೆ, ಆ ನಂಬಿಕೆಯನ್ನು ಕಾಂಗ್ರೆಸ್ ಮತ್ತದರ ಮೈತ್ರಿಕೂಟ ಉಳಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ರೀನಾ ಪ್ರಕಾಶ್ ಮಾತನಾಡಿ ಮಹಿಳಾ ಪರವಾದ ವಿಧೇಯಕಕ್ಕೆ ಬೆಂಬಲ ಕೊಡದ ಮೂಲಕ ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿತು ಎಂದು ಆರೋಪಿಸಿದರು.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/women-reservation-bill-congress-opposition-yaduveer-wadiyar-statement-gvd/articleshow-4z7cuxc"/>
        </item>
        <item>
            <title><![CDATA[ದುಬಾರೆಯಲ್ಲಿ 7.30 ಕೋಟಿ ರೂ. ವೆಚ್ಚದ ತೂಗು ಸೇತುವೆ, ಮಾನವ ವನ್ಯಜೀವಿ ಸಂಘರ್ಷಕ್ಕೆ ಸಿಗುವುದೇ ಮುಕ್ತಿ?]]></title>
            <link>https://kannada.asianetnews.com/karnataka-districts/kushalnagar-dubare-development-rs-7-3-crore-hanging-bridge-announced-focus-on-human-elephant-conflict-gdp/articleshow-6ufxh8u</link>
            <guid isPermaLink="true">https://kannada.asianetnews.com/karnataka-districts/kushalnagar-dubare-development-rs-7-3-crore-hanging-bridge-announced-focus-on-human-elephant-conflict-gdp/articleshow-6ufxh8u</guid>
            <pubDate>Thu, 07 May 2026 18:05:36 +0530</pubDate>
            <description><![CDATA[ಕೊಡಗಿನ ದುಬಾರೆಯಲ್ಲಿ 7.30 ಕೋಟಿ ರೂ. ವೆಚ್ಚದ ತೂಗು ಸೇತುವೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸೇತುವೆಯು 150ಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲ ಕಲ್ಪಿಸಲಿದ್ದು, ಇದೇ ವೇಳೆ ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ವನ್ಯಜೀವಿಗಳ ಸಂತಾನ ನಿಯಂತ್ರಣದಂತಹ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kr16phy59ytgy0ty9je380pq,imgname-dubare-1778157045701.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುಶಾಲನಗರ:&lt;/strong&gt; ಕೊಡಗು ಜಿಲ್ಲೆಯ ಕುಶಾಲನಗರ ವಲಯದ ದುಬಾರೆ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಣೆ, ಮಾನವ-ಆನೆ ಸಂಘರ್ಷ ನಿಯಂತ್ರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಗಳು ನಡೆದಿವೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ದುಬಾರೆ ಕಾವೇರಿ ಹೊಳೆಯಲ್ಲಿ ನಿರ್ಮಿಸಲಾಗುತ್ತಿರುವ ತೂಗು ಸೇತುವೆ ಮತ್ತು ಅಧಿಕಾರಿಗಳ ವಸತಿ ಗೃಹಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.&lt;/p&gt;&lt;p&gt;ವನ್ಯಜೀವಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಳ್ಳುತ್ತಿರುವುದನ್ನು ಉಲ್ಲೇಖಿಸಿದ ಸಚಿವರು, ಜನರ ಜೀವ ಹಾಗೂ ಬೆಳೆ ಹಾನಿ ತಡೆಗಟ್ಟಲು ಆಯ್ದ ಪ್ರದೇಶಗಳಲ್ಲಿ ಆಯ್ದ ವನ್ಯಜೀವಿಗಳ ಸಂತಾನ ನಿಯಂತ್ರಣದ ಬಗ್ಗೆ ತಜ್ಞರ ಸಲಹೆಗಳು ಬಂದಿವೆ ಎಂದು ತಿಳಿಸಿದರು. ಈ ವಿಷಯದ ಕುರಿತು ಸಾರ್ವಜನಿಕ ಮಟ್ಟದಲ್ಲಿ ಹಾಗೂ ತಜ್ಞರ ನಡುವೆ ವ್ಯಾಪಕ ಚರ್ಚೆ ನಡೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.&lt;/p&gt;&lt;p&gt;ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕಾಗಿ ತಜ್ಞರ ಸಮಿತಿ ರಚಿಸಲಾಗಿದ್ದು, ಅವರು ಈಗಾಗಲೇ ವರದಿ ಸಲ್ಲಿಸಿದ್ದಾರೆ. ಕಾಡಿನಂಚಿನ ಗ್ರಾಮಸ್ಥರು ಕೂಡ ತಮ್ಮ ಅನುಭವ ಹಾಗೂ ಸಲಹೆಗಳನ್ನು ಹಂಚಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು. ರೈಲ್ವೆ ಬ್ಯಾರಿಕೇಡ್&zwnj;ಗಳು, ಆನೆ ಕಂದಕಗಳ ನಿರ್ಮಾಣಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ತಿಳಿಸಿದ ಅವರು, ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.&lt;/p&gt;&lt;p&gt;ಅರಣ್ಯವಾಸಿಗಳು ಹಾಗೂ ಕಾಡಿನಂಚಿನ ಜನರು ದೀರ್ಘಕಾಲದಿಂದ ಅರಣ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಇತ್ತೀಚೆಗೆ ಹೆಚ್ಚುತ್ತಿರುವ ಸಂಘರ್ಷದಿಂದ ಜೀವಹಾನಿ ಸಂಭವಿಸುತ್ತಿರುವುದು ದುಃಖಕರವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಸಚಿವರು ಸೂಚಿಸಿದರು.&lt;/p&gt;&lt;h2&gt;7.30 ಕೋಟಿ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣ&lt;/h2&gt;&lt;p&gt;ಪ್ರವಾಸೋದ್ಯಮ ಮತ್ತು ಸ್ಥಳೀಯರ ಸಂಚಾರ ಸುಗಮತೆಗೆ ದುಬಾರೆ ಕಾವೇರಿ ನದಿಗೆ ಸುಮಾರು 7.30 ಕೋಟಿ ರೂಪಾಯಿ ವೆಚ್ಚದಲ್ಲಿ ಗುಣಮಟ್ಟದ ತೂಗು ಸೇತುವೆ ನಿರ್ಮಿಸಲಾಗುತ್ತಿದೆ. ಈ ಯೋಜನೆ ದುಬಾರೆ ಹಾಡಿಯಲ್ಲಿ ವಾಸಿಸುವ 150ಕ್ಕೂ ಹೆಚ್ಚು ಕುಟುಂಬಗಳ ದೀರ್ಘಕಾಲದ ಬೇಡಿಕೆಯಾಗಿದ್ದು, ತುರ್ತು ಸಂದರ್ಭಗಳಲ್ಲಿ ನಗರಕ್ಕೆ ಸಂಪರ್ಕ ಸಾಧಿಸಲು ಬಹಳ ಸಹಾಯಕವಾಗಲಿದೆ ಎಂದು ಸಚಿವರು ಹೇಳಿದರು.&lt;/p&gt;&lt;h2&gt;150 ಕುಟುಂಬಗಳಿಗೆ ಅನುಕೂಲ&lt;/h2&gt;&lt;p&gt;ಈ ಸೇತುವೆ ನಿರ್ಮಾಣದಿಂದ ದುಬಾರೆ ಹಾಡಿಯ ನಿವಾಸಿಗಳು, ಸಾಕಾನೆ ಶಿಬಿರದ ಸಿಬ್ಬಂದಿ ಹಾಗೂ ಪ್ರವಾಸಿಗರಿಗೆ ದೊಡ್ಡ ಮಟ್ಟದ ಅನುಕೂಲ ಸಿಗಲಿದೆ. ಇದುವರೆಗೆ ಮಳೆಗಾಲದಲ್ಲಿ ಹೊಳೆ ದಾಟುವುದು ಕಷ್ಟಕರವಾಗಿದ್ದು, ಕೆಲವು ಸಂದರ್ಭಗಳಲ್ಲಿ ಮೀಸಲು ಅರಣ್ಯದ ಒಳಗಡೆ ಸುಮಾರು 10 ಕಿಮೀ ಸುತ್ತು ಹೊಡೆದು ತೆರಳಬೇಕಾಗುತ್ತಿತ್ತು. ಹೊಸ ಸೇತುವೆಯಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.&lt;/p&gt;&lt;h2&gt;ದುಬಾರೆ ಆನೆ ಶಿಬಿರದ ವೈಭವ&lt;/h2&gt;&lt;p&gt;ದುಬಾರೆ ಆನೆ ಶಿಬಿರಕ್ಕೆ ಶತಮಾನಕ್ಕೂ ಹೆಚ್ಚು ಇತಿಹಾಸವಿದ್ದು, ಇಲ್ಲಿ ಸುಮಾರು 15 ಕುಮ್ಕಿ ಆನೆಗಳಿವೆ. ಇವುಗಳು ಮೈಸೂರು ದಸರಾ ಮಹೋತ್ಸವ ಸೇರಿದಂತೆ ವಿವಿಧ ಸರ್ಕಾರಿ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತವೆ. ಆನೆಗಳಿಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದ್ದು, ವನ್ಯಜೀವಿ ಸಂರಕ್ಷಣೆಯತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಸಚಿವರು ಹೇಳಿದರು.&lt;/p&gt;&lt;h2&gt;ಶಾಸಕರಿಂದ ಬೇಡಿಕೆಗಳ ಪಟ್ಟಿ&lt;/h2&gt;&lt;p&gt;ಈ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಅರಣ್ಯ ಇಲಾಖೆಯ ವಿವಿಧ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದರು. ಮಾನವ-ಆನೆ ಸಂಘರ್ಷದಲ್ಲಿ ಜೀವ ಕಳೆದುಕೊಂಡವರಿಗೆ ನೀಡುವ ಪರಿಹಾರ ಮೊತ್ತವನ್ನು 20 ಲಕ್ಷದಿಂದ 50 ಲಕ್ಷ ರೂಪಾಯಿಗೆ ಹೆಚ್ಚಿಸುವಂತೆ ಅವರು ಆಗ್ರಹಿಸಿದರು. ಜೊತೆಗೆ ಬೆಳೆ ಹಾನಿಗೆ ತಕ್ಷಣ ಪರಿಹಾರ ನೀಡುವುದು ಮತ್ತು ತೋಟದ ಆನೆಗಳನ್ನು ಸ್ಥಳಾಂತರಿಸುವ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.&lt;/p&gt;&lt;h2&gt;ಜನಸಂಪರ್ಕ ಕಾರ್ಯಕ್ರಮ&lt;/h2&gt;&lt;p&gt;ಅರಣ್ಯ ಇಲಾಖೆಯ ಜನಸಂಪರ್ಕ ಕಾರ್ಯಕ್ರಮದಡಿ ಸ್ಥಳೀಯ ಫಲಾನುಭವಿಗಳಿಗೆ ಜೇನು ಸಾಕಾಣಿಕೆ ಪೆಟ್ಟಿಗೆಗಳು ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮೀನಾಕ್ಷಿ ನೇಗಿ, ಕುಮಾರ್ ಪುಷ್ಕರ್, ಅಭಿಷೇಕ್ ಸೇರಿದಂತೆ ಹಲವು ಅಧಿಕಾರಿಗಳು, ಮಠಾಧೀಶರು ಹಾಗೂ ಸ್ಥಳೀಯ ಗಣ್ಯರು ಭಾಗವಹಿಸಿದ್ದರು.&lt;/p&gt;&lt;h2&gt;ಬಾಲ್ಯದ ನೆನಪು ಹಂಚಿಕೊಂಡ ಶಾಸಕ&lt;/h2&gt;&lt;p&gt;ಕಾರ್ಯಕ್ರಮದ ವೇಳೆ ಮಾತನಾಡಿದ ಶಾಸಕ ಮಂತರ್ ಗೌಡ ಅವರು, &ldquo;ಬಾಲ್ಯದಲ್ಲಿ ತಾಯಿಯೊಂದಿಗೆ ದುಬಾರೆ ಶಿಬಿರಕ್ಕೆ ಬಂದಿದ್ದೆ. ಆಗ ನದಿ ದಾಟಲು ದೋಣಿ ಬಳಸುತ್ತಿದ್ದೆವು. ಈಗ ನನ್ನ ಅವಧಿಯಲ್ಲೇ ತೂಗು ಸೇತುವೆ ನಿರ್ಮಾಣವಾಗುತ್ತಿರುವುದು ಸಂತೋಷ ತಂದಿದೆ. ಮುಂದಿನ ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ&rdquo; ಎಂದು ಹೇಳಿದರು.&lt;/p&gt;&lt;p&gt;ಒಟ್ಟಾರೆ, ದುಬಾರೆ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿರುವ ಈ ಯೋಜನೆಗಳು ವನ್ಯಜೀವಿ ಸಂರಕ್ಷಣೆ, ಮಾನವ ಸುರಕ್ಷತೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಮೈಲುಗಲ್ಲಾಗಲಿವೆ.&lt;/p&gt;]]></content:encoded>
            <category>kodagu</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kushalnagar-dubare-development-rs-7-3-crore-hanging-bridge-announced-focus-on-human-elephant-conflict-gdp/articleshow-6ufxh8u"/>
        </item>
        <item>
            <title><![CDATA[ಕೊಡಗಿನಲ್ಲಿ ಭಾರಿ ವಿವಾದ: ಐಪಿಎಲ್ ಕಂಪನಿಯಿಂದ ಗೊಬ್ಬರದಲ್ಲಿ ರೈತರಿಗೆ ದೋಖಾ!]]></title>
            <link>https://kannada.asianetnews.com/karnataka-districts/kodagu-fertilizer-scam-underweight-bags-farmers-complaint-gvd/articleshow-8upewht</link>
            <guid isPermaLink="true">https://kannada.asianetnews.com/karnataka-districts/kodagu-fertilizer-scam-underweight-bags-farmers-complaint-gvd/articleshow-8upewht</guid>
            <pubDate>Thu, 30 Apr 2026 21:47:20 +0530</pubDate>
            <description><![CDATA[&lt;p&gt;ಹವಾಮಾನ ವೈಪರೀತ್ಯಗಳ ನಡುವೆ ರೈತರು ಕೃಷಿ ಮಾಡುವುದೆಂದರೆ ಅತ್ಯಂತ ಸವಾಲಿನ ಕೆಲಸ. ಈ ಸವಾಲುಗಳ ಎದುರಿಸಿ ಬೆಳೆ ಬೆಳೆದರೂ ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಂತೂ ತೀರ ಕಷ್ಟವೇ. ಇಷ್ಟೆಲ್ಲಾ ಸಮಸ್ಯೆಗಳ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqfhw0fw5153bf6s3xsq2ad4,imgname-xhcxh-1777564779004.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಏ.30): &lt;/strong&gt;ಹವಾಮಾನ ವೈಪರೀತ್ಯಗಳ ನಡುವೆ ರೈತರು ಕೃಷಿ ಮಾಡುವುದೆಂದರೆ ಅತ್ಯಂತ ಸವಾಲಿನ ಕೆಲಸ. ಈ ಸವಾಲುಗಳ ಎದುರಿಸಿ ಬೆಳೆ ಬೆಳೆದರೂ ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಂತೂ ತೀರ ಕಷ್ಟವೇ. ಇಷ್ಟೆಲ್ಲಾ ಸಮಸ್ಯೆಗಳ ಎದುರಿಸಿ ಬೆಳೆ ಬೆಳೆಯುವ ರೈತರಿಗೆ ರಸಗೊಬ್ಬರ ಕಂಪೆನಿಗಳಿಂದ ಮೋಸ ಮಾಡುವ ಕೆಲಸ ಆಗಿದೆ. ಹೌದು ಕೊಡಗು ಜಿಲ್ಲೆಗೆ ಏಪ್ರಿಲ್ ತಿಂಗಳಿನಲ್ಲಿ ಇಂಡಿಯನ್ ಪೊಟಾಷ್ ಲಿಮಿಟೆಡ್ ಕಂಪೆನಿಯಿಂದ ಹಲವು ಲೋಡುಗಳ ರಸಗೊಬ್ಬರ ಪೂರೈಕೆಯಾಗಿದೆ.&lt;/p&gt;&lt;p&gt;ಇದರಲ್ಲಿ ಅಪಾರ ಪ್ರಮಾಣದ ಚೀಲಗಳಲ್ಲಿ ನಿಗಧಿತ ಪ್ರಮಾಣಕ್ಕಿಂತ ಕಡಿಮೆ ರಸಗೊಬ್ಬರ ಇರುವುದು ಪತ್ತೆಯಾಗಿದೆ. ಹೌದು 50 ಕೆ.ಜಿ. ರಸಾಗೊಬ್ಬರ ಇರುವ ಚೀಲದಲ್ಲಿ 46 ಕೆ.ಜಿ., 47 ಕೆ.ಜಿ. ಇನ್ನು ಕೆಲವು ಚೀಲಗಳಲ್ಲಿ 48 ಕೆ.ಜಿ. ರಸಾಗೊಬ್ಬರ ಇದೆ. ಪೊನ್ನಂಪೇಟೆ ತಾಲ್ಲೂಕಿನ ಹಾತೂರಿನ ಕೆ. ಮಾಚಯ್ಯ ಅವರು ಅಲ್ಲಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ 50 ಚೀಲ ರಸಗೊಬ್ಬರ ಖರೀದಿಸಿದ್ದರು. ಅನುಮಾನಗೊಂಡು ಕೆಲವು ಚೀಲಗಳನ್ನು ತೂಕ ಮಾಡಿದಾಗ ಹಲವು ಚೀಲಗಳಲ್ಲಿ ಕಡಿಮೆ ರಸಗೊಬ್ಬರ ಇರುವುದು ಗೊತ್ತಾಗಿದೆ.&lt;/p&gt;&lt;p&gt;ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಕೊಡಗು ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಕೆ ಗಣಪತಿ ಅವರು ತಮ್ಮ ಸಹಕಾರ ಸಂಘದಲ್ಲಿದ್ದ ರಸಗೊಬ್ಬರದ ನೂರು ಚೀಲಗಳನ್ನು ತೂಕ ಮಾಡಿದ್ದಾರೆ. ಅದರಲ್ಲಿ 50 ಚೀಲಗಳಲ್ಲಿ ಕಡಿಮೆ ರಸಗೊಬ್ಬರ ಇರುವುದು ಗೊತ್ತಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಗಣಪತಿ ಅವರು ರಸಗೊಬ್ಬರ ಚೀಲಗಳನ್ನು ವಾಪಸ್ ತುಂಬಿಸಿ ಮಡಿಕೇರಿಯಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ತಂದು ತೂಕ ಹಾಕಿಸಿದ್ದಾರೆ. ಆ ಮೂಲಕ ಐಪಿಎಲ್ ಕಂಪೆನಿಯಿಂದ ಕೊಡಗು ಜಿಲ್ಲೆಗೆ ಪೂರೈಕೆಯಾಗಿದ್ದ ಬರೋಬ್ಬರಿ 51 ಟನ್ ರಸಗೊಬ್ಬರವನ್ನು ವಾಪಸ್ ಪಡೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.&lt;/p&gt;&lt;p&gt;ಹೀಗೆ ರೈತರಿಗೆ ರಸಗೊಬ್ಬರದ ತೂಕದಲ್ಲಿ ಮೋಸ ಮಾಡಿರುವ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರೈತ ಮುಖಂಡರು ಆಗ್ರಹಿಸಿದ್ದಾರೆ. ಪ್ರತೀ ಚೀಲದಲ್ಲೂ ಮೂರರಿಂದ ನಾಲ್ಕು ಕೆ.ಜಿ. ಯಷ್ಟು ರಸಗೊಬ್ಬರ ಕಡಿಮೆ ಪೂರೈಕೆ ಮಾಡಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ, ಕೇಂದ್ರ ಕೃಷಿ ಸಚಿವರು ಹಾಗೂ ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.&lt;/p&gt;&lt;p&gt;ಈ ಕುರಿತು ಮಾತನಾಡಿರುವ ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಗಣಪತಿ ಅವರು ಪ್ರತೀ ಚೀಲದಲ್ಲಿ ಮೂರರಿಂದ ನಾಲ್ಕು ಕೆ.ಜಿ ಗೊಬ್ಬರ ಕಡಿಮೆ ಇರುವುದು ನಮ್ಮ ಗಮನಕ್ಕೆ ಬಂದ ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳ ಕಚೇರಿ ತಂದು ಅದನ್ನು ಬಹಿರಂಗ ಪಡಿಸಿದ್ದೇವೆ. ಅವರು ಗೊಬ್ಬರ ಪೂರೈಕೆ ಮಾಡಿದ ಕಂಪೆನಿಗಳಿಗೆ ಏಳು ದಿನಗಳ ಒಳಗಾಗಿ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಕೂಡಲೇ ಕಂಪೆನಿಯವರು ಪೂರೈಕೆಯಾಗಿರುವ ಗೊಬ್ಬರವನ್ನು ವಾಪಸ್ ಪಡೆದು ಬೇರೆ ಗೊಬ್ಬರ ಪೂರೈಸುವುದಾಗಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸರಿಯಾದ ಶಿಕ್ಷೆಯಾಗಬೇಕು&lt;/strong&gt;&lt;/h2&gt;&lt;p&gt;ಆದರೆ ಈಗಾಗಲೇ ಜಿಲ್ಲೆಯಲ್ಲಿ 51 ಟನ್ ಗೊಬ್ಬರ ಪೂರೈಕೆಯಾಗಿದ್ದು, ಸಾಕಷ್ಟು ರೈತರು ಬಳಕೆಯನ್ನು ಮಾಡಿದ್ದಾರೆ. ಜಿಲ್ಲೆಯ ಸಾವಿರಾರು ರೈತರಿಗೆ ಮೋಸವಾಗಿದೆ. ಪ್ರತೀ ಚೀಲದಲ್ಲಿ ನೂರು ಅಥವಾ ಇನ್ನೂರು ಗ್ರಾಂ ಗೊಬ್ಬರ ಕಡಿಮೆ ಬಂದಿದ್ದರೆ ಅದು ಸಾಗಾಟದ ಸಂದರ್ಭ ಆಗಿರುವ ಸಮಸ್ಯೆ ಎಂದುಕೊಳ್ಳಬಹುದಿತ್ತು. ಆದರೆ ಇದು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ ಎನ್ನುವುದು ಗೊತ್ತಾಗುತ್ತಿದೆ. ಇದಕ್ಕೆ ಕಾನೂನಾತ್ಮಕ ಸರಿಯಾದ ಶಿಕ್ಷೆಯಾಗಬೇಕು. ಇದಕ್ಕಾಗಿ ಪ್ರಧಾನಿ, ಕೇಂದ್ರ ಮತ್ತು ರಾಜ್ಯ ಕೃಷಿ ಸಚಿವರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.&lt;/p&gt;&lt;p&gt;ಈ ಕುರಿತು ಮಾತನಾಡಿರುವ ರೈತ ಮುಖಂಡ ಕಿಲನ್ ಗಣಪತಿ ಅವರು ಸಹಕಾರ ಸಂಘಗಳಿಂದ ಮೋಸವಾದರೆ ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗುತ್ತಾರೆ. ಆದರೆ ಕಂಪೆನಿಗಳಿಂದ ಆಗಿರುವ ಮೋಸಕ್ಕೆ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಇಂದು ಸಾವಿರಾರು ರೂಪಾಯಿ ಒಂದು ಚೀಲ ಗೊಬ್ಬರಕ್ಕೆ ಇದೆ. ಹೀಗಿರುವಾಗ ನಾಲ್ಕೈದು ಕೆ.ಜಿ. ಗೊಬ್ಬರ ಕಡಿಮೆ ಆದರೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-fertilizer-scam-underweight-bags-farmers-complaint-gvd/articleshow-8upewht"/>
        </item>
        <item>
            <title><![CDATA[ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ವಿರುದ್ಧ ಸಚಿವ ಎನ್.ಎಸ್.ಬೋಸರಾಜು ವಾಗ್ದಾಳಿ]]></title>
            <link>https://kannada.asianetnews.com/karnataka-districts/ns-boseraju-bjp-operation-kamala-attack-congress-response-gvd/articleshow-941uwn9</link>
            <guid isPermaLink="true">https://kannada.asianetnews.com/karnataka-districts/ns-boseraju-bjp-operation-kamala-attack-congress-response-gvd/articleshow-941uwn9</guid>
            <pubDate>Mon, 04 May 2026 21:45:10 +0530</pubDate>
            <description><![CDATA[&lt;p&gt;ಅಸ್ಸಾಂ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದರೂ ಕಾಂಗ್ರೆಸ್ ಸೋತಿರುವ ವಿಷಯಕ್ಕೆ ಗ್ಯಾರಂಟಿಗಳೇ ಬೇರೆ ಬಿಜೆಪಿಯ ಕುತಂತ್ರಗಳೇ ಬೇರೆ ಎಂದು ಕೊಡಗು ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqsvcpbe3e7dfqrm9954dass,imgname-vcjccvj-1777910307182.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಮೇ.04): &lt;/strong&gt;ಅಸ್ಸಾಂ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದರೂ ಕಾಂಗ್ರೆಸ್ ಸೋತಿರುವ ವಿಷಯಕ್ಕೆ ಗ್ಯಾರಂಟಿಗಳೇ ಬೇರೆ ಬಿಜೆಪಿಯ ಕುತಂತ್ರಗಳೇ ಬೇರೆ ಎಂದು ಕೊಡಗು ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಅಸ್ಸಾಂನಲ್ಲಿ ಬಿಜೆಪಿಗೆ ಅಭ್ಯರ್ಥಿಗಳು ಎಲ್ಲಿಂದ ಬಂದವರು. ಅವರೇನು ಬಿಜೆಪಿ ಆರ್ ಎಸ್ ಎಸ್ ನಿಂದ ಬಂದವರೇನು.? ಅಸ್ಸಾಂನಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಗೆಲುವು ಪಡೆದಿದೆ. ದೇಶದಲ್ಲಿ ಆಪರೇಷನ್ ಕಮಲ ಶುರು ಮಾಡಿದ್ದೇ ಬಿಜೆಪಿ ಎಂದಿದ್ದಾರೆ.&lt;/p&gt;&lt;p&gt;ಪಶ್ಚಿಮ ಬಂಗಾಳಕ್ಕೆ ಮೋದಿ, ಷಾ ಅವರು ಎಷ್ಟು ಬಾರಿ ಹೋದರು. ಆರು ತಿಂಗಳಿಂದ ಬಹುತೇಕ ಅಲ್ಲಿಯೇ ಇದ್ದರು. ಅಲ್ಲಿಯೇ ಇದ್ದು ಷಾ ಕುತಂತ್ರ ಮಾಡಿದರು. ಉತ್ತರ ಪ್ರದೇಶದ ಐಎಎಸ್ ಅಧಿಕಾರಿಗಳನ್ನು ಪಶ್ಚಿಮ ಬಂಗಾಳಕ್ಕೆ ತಂದು ಹಾಕಿದರು. ಆ ಮೂಲಕ ಚುನಾವಣೆ ಗೆಲುವಿಗೆ ಕುತಂತ್ರಗಳನ್ನು ಮಾಡಿದರು. ಜೊತೆಗೆ ಅಲ್ಲಿ ಆಡಳಿತ ವಿರೋಧಿ ಅಲೆ ಇತ್ತು, ಹೀಗಾಗಿ ಬಿಜೆಪಿ ಗೆಲವು ಪಡೆದಿದೆ. ಅವರಿಗೆ ನೀತಿ ನಿಯಮಗಳು ಏನೂ ಇಲ್ಲ, ಒಟ್ಟಿನಲ್ಲಿ ಅವರಿಗೆ ಗೆಲುವು ಪಡೆಯಬೇಕು ಅಷ್ಟೇ ಎಂದು ಸಣ್ಣ ನೀರಾವರಿ ಸಚಿವ ಭೋಸರಾಜ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;p&gt;ಕೇರಳಂದಲ್ಲಿ ಯುಡಿಎಫ್ ಗೆಲುವಿಗೆ ಸಚಿವ ಎನ್.ಎಸ್. ಭೋಸರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲಿ ಗೆಲ್ಲುವ ನಿರೀಕ್ಷೆ ನಮಗಿತ್ತು. ಚುನಾವಣೆಗೂ ಮುನ್ನ ಜನಾಭಿಪ್ರಾಯವನ್ನು ಸಂಗ್ರಹಿಸಿದ್ದೆವು. ಅಲ್ಲಿನ ಮುಖ್ಯಮಂತ್ರಿ ವಿರುದ್ಧವೂ ಜನಾಭಿಪ್ರಾಯವಿತ್ತು. ಆರು ತಿಂಗಳಿಂದ ಎಲ್ಲಾ ಯೋಜನೆ ರೂಪಿಸಿ, ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಕೆಲಸ ಮಾಡಿದ್ದೆವು. ಅದರ ಜೊತೆಗೆ ಆಡಳಿತ ವಿರೋಧಿ ಅಲೆ ಅಲ್ಲಿ ಇತ್ತು. ಈ ಎಲ್ಲಾ ಕಾರಣಗಳನ್ನು ನಾವು ಸಾಕಷ್ಟು ಬಳಸಿಕೊಂಡು ಕೆಲಸ ಮಾಡಿದ್ದೆವು. ಅದರಂತೆ ಅಲ್ಲಿ ನಾವು ಗೆದ್ದಿದ್ದೇವೆ. ನಾನು ಕೂಡ ಎರಡು ಜಿಲ್ಲೆಗಳ ಜವಾಬ್ದಾರಿ ಹೊತ್ತಿದ್ದೆ.&lt;/p&gt;&lt;p&gt;ಅಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರ ಜನಪ್ರಿಯತೆ ಹೆಚ್ಚಿದೆ. ಹೀಗಾಗಿ ನಾವು ಗೆದ್ದಿದ್ದೇವೆ. ಉಳಿದ ರಾಜ್ಯಗಳಲ್ಲಿ ನಾವು ಪಾರ್ಟ್ನರ್ ಅಷ್ಟೇ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಾವು ಅಧಿಕ್ಕಾರಕ್ಕೆ ಬಂದ ಬಳಿಕ ವಿಪಕ್ಷ ನಾಯಕರು, ಬಿಜೆಪಿ ಅಧ್ಯಕ್ಷರು ಏನೆಲ್ಲಾ ಮಾತನಾಡಿದರು. ಅದಕ್ಕೆ ಸರಿಯಾದ ಉತ್ತರವನ್ನು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಜನತೆ ಬಿಜೆಪಿಗೆ ನೀಡಿದ್ದಾರೆ ಎಂದು ಸಚಿವ ಎನ್.ಎಸ್ ಭೋಸರಾಜ್ ತಿರುಗೇಟು ನೀಡಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಬಾಗಲಕೋಟೆ ಕ್ಷೇತ್ರ ನಮಗೆ ಬಹಳ ಮುಖ್ಯವಾಗಿತ್ತು.&lt;/p&gt;&lt;h2&gt;&lt;strong&gt;ಹೆಚ್ಚು ಬಿಜೆಪಿ ಮತಗಳಿದ್ದವು&lt;/strong&gt;&lt;/h2&gt;&lt;p&gt;ಬಾಗಲಕೋಟೆಯಲ್ಲಿ ಮೇಟಿಯವರು ಗೆದ್ದಾಗಿನಿಂದಲೂ ಅನಾರೋಗ್ಯದ ಕಾರಣದಿಂದ ಸರಿಯಾಗಿ ಕ್ಷೇತ್ರದಲ್ಲಿ ಓಡಾಡಲು ಆಗಿರಲಿಲ್ಲ. ಹೀಗಾಗಿ ನಮಗೆ ಆ ಕ್ಷೇತ್ರದಲ್ಲಿ ಕಷ್ಟ ಎನ್ನುವ ಮಾಹಿತಿ ಇತ್ತು. ಆದ್ದರಿಂದಲೇ ಸಿಎಂ, ಡಿಸಿಎಂ ಸೇರಿದಂತೆ ಎಲ್ಲರೂ ಪ್ರಯತ್ನ ಹಾಕಿದರು. ಬಾಗಲಕೋಟೆಯಲ್ಲಿ ಎಲ್ಲಾ ಜಾತಿ ಧರ್ಮಗಳ ಮತದಾರರು ಸಾಕಷ್ಟು ಇದ್ದಾರೆ. ಅವರೆಲ್ಲರನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಕೆಲಸ ಮಾಡಿದೆವು. ಹೆಚ್ಚಿನ ಮತದಾರರಿರುವ ಬಾಗಲಕೋಟೆ ನಗರದಲ್ಲಿ ಹೆಚ್ಚು ಬಿಜೆಪಿ ಮತಗಳಿದ್ದವು. ಗ್ರಾಮಾಂತರದಲ್ಲಿ ನಮ್ಮ ಮತಗಳಿದ್ದವು. ಈ ಎಲ್ಲಾ ಕಾರಣಗಳಿಂದ ಸಾಕಷ್ಟು ಕೆಲಸ ಮಾಡಿದ್ದೆವು.&lt;/p&gt;&lt;p&gt;ಮತದಾರರು ನಮ್ಮ ಪರವಾಗಿ ಆದೇಶ ನೀಡಿದ್ದಾರೆ ಎಂದಿದ್ದಾರೆ. ಇನ್ನು ದಾವಣಗೆರೆ ಕ್ಷೇತ್ರದಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಕೆಲಸ ಮಾಡಿದ್ದರು. ಇದು ಕ್ಷೇತ್ರದ ಜನರಿಗೆ ಗೊತ್ತಿತ್ತು. ಯಾರು ಏನೇ ಹೇಳಿದರು ಹಿರಿಯರಿಗೆ ತೊಂದರೆ ಆದಾಗ ಕುಟುಂಬದವರಿಗೆ ಟಿಕೆಟ್ ಕೊಡುವುದು ಪಕ್ಷದ ನೀತಿ. ಇದರಿಂದಾಗಿ ಅವರ ಮೊಮ್ಮಗನಿಗೆ ಟಿಕೆಟ್ ನೀಡಲಾಯಿತು. ಇದಕ್ಕೆ ಪಕ್ಷದ ಮುಖಂಡರಲ್ಲಿ ಸಾಕಷ್ಟು ಗೊಂದಲಗಳಾದವು. ಇದಕ್ಕೆ ಪಕ್ಷದ ಎಲ್ಲಾ ಸಚಿವರು, ಸಂಸದರು ಕೆಲಸ ಮಾಡಿದರು. ಹೀಗಾಗಿ ಆ ಕ್ಷೇತ್ರದಲ್ಲಿಯೂ ಗೆಲವು ಸಾಧಿಸುತಿದ್ದೇವೆ ಎಂದಿದ್ದಾರೆ. ಮೊದಲಿನಿಂದಲೂ ಆ ಕ್ಷೇತ್ರದಲ್ಲಿ ಜನರು ಪಕ್ಷದ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ ಅವರ ಕುಟುಂಬವೂ ಜನರಿಗೆ ಕೆಲಸ ಮಾಡಿದೆ. ಹೀಗಾಗಿ ಜನರು ಕೈ ಹಿಡಿದಿದ್ದಾರೆ ಎಂದು ಬೋಸರಾಜು ಹೇಳಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ns-boseraju-bjp-operation-kamala-attack-congress-response-gvd/articleshow-941uwn9"/>
        </item>
        <item>
            <title><![CDATA[ದೇಶದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ: ನಳಿನ್ ಕುಮಾರ್ ಕಟೀಲ್]]></title>
            <link>https://kannada.asianetnews.com/karnataka-districts/nalin-kumar-kateel-bjp-development-politics-kushalnagar-gvd/articleshow-apf1boy</link>
            <guid isPermaLink="true">https://kannada.asianetnews.com/karnataka-districts/nalin-kumar-kateel-bjp-development-politics-kushalnagar-gvd/articleshow-apf1boy</guid>
            <pubDate>Wed, 13 May 2026 21:57:14 +0530</pubDate>
            <description><![CDATA[&lt;p&gt;ದೇಶದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ರಾಜ್ಯ ಮಾಜಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಪಕ್ಷಗಳು ಸರ್ಕಾರ ನಡೆಸುವುದು ಮುಖ್ಯವಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hnfjg3664xmp4ksj3knfhs46,imgname-Nalin-Kumar-Katil-1706698476742.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುಶಾಲನಗರ (ಮೇ.13): &lt;/strong&gt;ದೇಶದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ರಾಜ್ಯ ಮಾಜಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಪಕ್ಷಗಳು ಸರ್ಕಾರ ನಡೆಸುವುದು ಮುಖ್ಯವಲ್ಲ, ಸರ್ಕಾರ ನಡೆಸುವ ಸಂದರ್ಭದಲ್ಲಿ ಪಕ್ಷದ ವಿಚಾರಧಾರೆ ದೇಶದ ಅಭಿವೃದ್ಧಿ ಸಿದ್ದಾಂತಗಳು ಮುಖ್ಯ ಎಂದು ಅವರು ಹೇಳಿದರು. ಇಡೀ ವಿಶ್ವದಲ್ಲಿ ಭಾರತ ದೇಶದ ಛಾಪನ್ನು ಮೂಡಿಸಿರುವ ಬಿಜೆಪಿ ಕೇಂದ್ರ ಸರ್ಕಾರ ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದರು.&lt;/p&gt;&lt;p&gt;ವಿಚಾರಧಾರೆ ಸಿದ್ದಾಂತಗಳು ಇಲ್ಲದೆ ದಿಡೀರನೆ ಸರಕಾರವನ್ನು ಸ್ಥಾಪಿಸಿದ್ದ ಆಪ್, ಮತ್ತಿತರ ಪಕ್ಷಗಳ ಇತ್ತೀಚಿನ ಬೆಳವಣಿಗೆಗಳನ್ನು ಕಂಡಾಗ ಇವುಗಳು ಕೇವಲ ಕೆಲವೇ ವರ್ಷಗಳಿಗೆ ಮಾತ್ರ ಸೀಮಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶೂನ್ಯದಿಂದ ಆಕಾಶದತ್ತ ಏರಲು ವಿಚಾರ ಸಿದ್ದಾಂತ ನಿಯಮಗಳಲ್ಲಿ ರಾಜಿ ಸಲ್ಲದು ಎಂದ ನಳಿನ್ ಕುಮಾರ್ ಯಾವುದೇ ಸಂದರ್ಭ ಸರಕಾರಗಳನ್ನು ನಡೆಸುವ ಕಾರ್ಯವೈಖರಿಯಲ್ಲಿ ಬದಲಾವಣೆ ಇರುವುದಿಲ್ಲ ಸುದೀರ್ಘ ಅವಧಿಯಲ್ಲಿ ಅಭ್ಯಾಸ ವರ್ಗ ಪ್ರಶಿಕ್ಷಣ ಶಿಬಿರಗಳ ಮೂಲಕ ಪಕ್ಷದ ಬೆಳವಣಿಗೆ ಸಾಧ್ಯ ಎಂದು ಹೇಳಿದರು. ಯಾವುದೇ ವ್ಯಕ್ತಿಯಿಂದ ಸಾಧನೆ ಅಸಾಧ್ಯ ಎಂದ ನಳಿನ್ ಕುಮಾರ್ ವ್ಯಕ್ತಿಗಿಂತ ಪಕ್ಷ ಶ್ರೇಷ್ಠ ಪಕ್ಷಕ್ಕಿಂತ ದೇಶ ಪ್ರಮುಖವಾಗಿದೆ ಎಂದರು.&lt;/p&gt;&lt;h2&gt;&lt;strong&gt;ದೊಡ್ಡ ಪ್ರಜಾಪ್ರಭುತ್ವ ಪಕ್ಷ&lt;/strong&gt;&lt;/h2&gt;&lt;p&gt;ಪಕ್ಷದ ಕಾರ್ಯಕರ್ತರಲ್ಲಿ ಅಭ್ಯಾಸ ವರ್ಗ ಕಾರ್ಯ ವೈಖರಿ ಜವಾಬ್ದಾರಿ ನೆನಪಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ. ಈ ಮೂಲಕ ತಳಮಟ್ಟದಲ್ಲಿ ಕಾರ್ಯಕರ್ತರ ಜವಾಬ್ದಾರಿಯನ್ನು ತಿಳಿ ಹೇಳುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು. ಭಾರತೀಯ ಜನತಾ ಪಕ್ಷ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಪಕ್ಷವಾಗಿದ್ದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ ಸದಸ್ಯರು ಶಾಸಕರುಗಳನ್ನು ಹಾಗೂ ಮುಖ್ಯಮಂತ್ರಿಗಳನ್ನು ಪಡೆದ ಪಕ್ಷವಾಗಿದೆ ಎಂದರು. ಕಳೆದ ಎರಡು ದಿನಗಳ ಅವಧಿಯಲ್ಲಿ ಶಿಬಿರದಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದು, ವಿಚಾರಗಳ ಬಗ್ಗೆ ಉಪನ್ಯಾಸಗಳು ನಡೆದವು.&lt;/p&gt;&lt;p&gt;ವಿಧಾನಪರಿಷತ್ ಸದಸ್ಯರಾದ ಸಿಟಿ ರವಿ, ರಾಜ್ಯ ಸಹ ಸಂಯೋಜಕರಾದ ಎನ್ ವಿ ಪಣೀಶ್, ವಿಭಾಗ ಪ್ರಭಾರಿ ಗಳಾದ ಬಿ ಬಿ ಭಾರತೀಶ್, ರಾಜ್ಯ ಉಪಾಧ್ಯಕ್ಷರಾದ ಎನ್ ಮಹೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕರಾದ ಡಾ. ವೈ ಭರತ್ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಮಾಜಿ ಸಂಸದ ಪ್ರತಾಪ್ ಸಿಂಹ ಅವರುಗಳು ದೇಶ ಎದುರಿಸುತ್ತಿರುವ ಸವಾಲುಗಳು ಸೇರಿದಂತೆ ವಿವಿಧ ವಿಷಯಗಳನ್ನು ಮಂಡಿಸಿದರು.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/nalin-kumar-kateel-bjp-development-politics-kushalnagar-gvd/articleshow-apf1boy"/>
        </item>
        <item>
            <title><![CDATA[ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿ ಕರೆ ನೀಡಿದ್ದು, ಒಂದು ವರ್ಷ ಪಾಲಿಸಿ: ಸಿ.ಟಿ.ರವಿ]]></title>
            <link>https://kannada.asianetnews.com/karnataka-districts/ct-ravi-supports-pm-modi-fuel-saving-gold-purchase-gvd/articleshow-bm5rani</link>
            <guid isPermaLink="true">https://kannada.asianetnews.com/karnataka-districts/ct-ravi-supports-pm-modi-fuel-saving-gold-purchase-gvd/articleshow-bm5rani</guid>
            <pubDate>Mon, 11 May 2026 19:39:14 +0530</pubDate>
            <description><![CDATA[&lt;p&gt;ಮತ್ತೊಮ್ಮೆ ಮನೆಯಿಂದಲೇ ಕೆಲಸ ಮಾಡಿ ಎಂದು ಪ್ರಧಾನಿ ಮೋದಿ ಹೇಳಿರುವುದು ನಮ್ಮ ದೇಶವನ್ನು ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿಯವರು ಈ ಕರೆ ನೀಡಿದ್ದಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcx4fyk1p4nrct4gxgmzs4x5,imgname-1-1766209354337.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಮೇ.11): &lt;/strong&gt;ಡಿಸೇಲ್ ಮತ್ತು ಪೆಟ್ರೋಲ್ ಕಡಿಮೆ ಬಳಸಿ, ಚಿನ್ನ ಖರೀದಿ ನಿಲ್ಲಿಸಿ ಮತ್ತೊಮ್ಮೆ ಮನೆಯಿಂದಲೇ ಕೆಲಸ ಮಾಡಿ ಎಂದು ಪ್ರಧಾನಿ ಮೋದಿ ಹೇಳಿರುವುದು ನಮ್ಮ ದೇಶವನ್ನು ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿಯವರು ಈ ಕರೆ ನೀಡಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಹಾಗೂ ರಾಜ್ಯ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ಸಮೀಪದ ಖಾಸಗಿ ರೆಸಾರ್ಟ್ ನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಬಿಜೆಪಿ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಅವರು ಮಾತನಾಡಿದರು.&lt;/p&gt;&lt;p&gt;ಇರಾನ್ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಪೆಟ್ರೋಲ್ ಡೀಸೆಲ್ ಖರೀದಿಗೆ ದೊಡ್ಡ ಅಡೆತಡೆ ಬಂದಿದೆ. ಆ ಕಾರಣದಿಂದ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಬಾರಿ ಆಗಿದೆ. ಆ ಹಿನ್ನೆಲೆಯಲ್ಲಿ ಪ್ರಧಾನಿಯವರು ಈ ಕರೆಕೊಟ್ಟಿದ್ದಾರೆ. ಇದು ಸದುದ್ದೇಶದ ಕರೆ. ಯಾವುದರ ಖರೀದಿಗೆ ನಾವು ಹೊರದೇಶಗಳನ್ನು ಅವಲಂಬಿಸಿದ್ದೇವೆಯೋ, ಅದಕ್ಕೆ ಮಿತಿ ಹಾಕಿಕೊಳ್ಳಬೇಕಾಗಿದೆ. ಆ ಮೂಲಕ ನಾವು ಸ್ವಾವಲಂಬನೆ ಕಡೆಗೆ ಹೆಜ್ಜೆ ಹಾಕಬೇಕಾಗಿದೆ. ಆ ನಿಟ್ಟಿನಲ್ಲಿ ಒಂದು ವರ್ಷ ಈ ಕರೆಯನ್ನು ನಾವೆಲ್ಲರೂ ಪಾಲಿಸಬೇಕಾಗಿದೆ.&lt;/p&gt;&lt;p&gt;ಅಷ್ಟರಲ್ಲಿ ಸಮಸ್ಯೆಗಳು ಬಗೆಹರಿಯಬಹುದು. ಆಗ ನಾವು ವಿಪತ್ತಿನಿಂದ ಪಾರಾಗುತ್ತೇವೆ ಎನ್ನುವುದು ಪ್ರಧಾನಿಗಳ ಆಶಯ. ಹಾಗಾಗಿ ನಾವು ಎಲ್ಲರೂ ಅನಗತ್ಯ ಬಳಕೆಯನ್ನು ನಿಲ್ಲಿಸಬೇಕಾಗಿದೆ. ನಾವು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಬೇಕು. ಆ ಮೂಲಕ ನಾವು ರಾಷ್ಟ್ರೀಯ ಕಾರ್ಯಕ್ಕೆ ನಮ್ಮದೇ ಯೋಗ್ದಾನ ಕೊಡಲು ಸಾಧ್ಯವಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ಇನ್ನು ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದ್ದು ಅದು ಅಲುಗಾಡುತ್ತಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು ಅದು ನಿಜನೂ ಹೌದು ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಗೌರವ ತರುವ ವಿಚಾರ ಅಲ್ಲ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಯಾವುದಾದರೂ ಜ್ವಲಂತ ವಿಷಯಗಳು ಬಂದಾಗಲೆಲ್ಲಾ ಸಿಎಂ ಕುರ್ಚಿ ಕಚ್ಚಾಟ ಮುನ್ನಲೆಗೆ ಬಂದು ಬಿಡುತ್ತದೆ. ಆಗ ಜ್ವಲಂತ ವಿಷಯಗಳು ಚರ್ಚೆಯೇ ಆಗಲ್ಲ, ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಮೂರರಲ್ಲಿದೆ, ರೈತರ ಆತ್ಮ*ಹ*ತ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಸರ್ಕಾರಿ ನೌಕರರ ಆತ್ಮ*ಹ*ತ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಇನ್ನು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇದ್ಯಾವುದೂ ರಾಜ್ಯಕ್ಕೆ ಗೌರವ ತರುವ ವಿಚಾರ ಅಲ್ಲ. ಸಮಸ್ಯೆಗಳ ಬಗೆಹರಿಸಬೇಕಾದ ಸರ್ಕಾರ, ತಾನೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಯಾವುದೇ ಗೊಂದಲವೇ ಇಲ್ಲದಂತ ಸಿಎಂ ಹುದ್ದೆ, ಗೊಂದಲಗಳಿಗೆ ಒಳಗಾಗುವಂತಹದ್ದು ಒಳ್ಳೆಯ ಲಕ್ಷಣ ಅಲ್ಲ ಎಂದಿದ್ದಾರೆ.&lt;/p&gt;&lt;p&gt;ನಿಮ್ಮ ಖುರ್ಚಿಯ ಸಮಸ್ಯೆಯನ್ನು ಸಾರ್ವಜನಿಕ ಸಮಸ್ಯೆಯನ್ನಾಗಿ ಮಾಡಿ, ಸಾರ್ವಜನಿಕ ಸಮಸ್ಯೆಗಳನ್ನು ಬದಿಗೆ ತಳ್ಳುವ ಕೆಲಸ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಸಚಿವ ಡಿ ಸುಧಾಕರ್ ನಿಧನಕ್ಕೆ ಅವರ ಕುಟುಂಬಕ್ಕೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಸಾಂತ್ವನ ಹೇಳಿದರು. ಸಚಿವ ಡಿ ಸುಧಾಕರ್ ಅವರ ಸಾವು ಅನಿರೀಕ್ಷಿತ. ಕಳೆದ 25 ದಿನಗಳಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಿ.ಟಿ.ರವಿ ಸಾಂತ್ವನ ಹೇಳಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ct-ravi-supports-pm-modi-fuel-saving-gold-purchase-gvd/articleshow-bm5rani"/>
        </item>
        <item>
            <title><![CDATA[ಮಡಿಕೇರಿ: ಮಾನಸಿಕ ಖಿನ್ನತೆ: ಮನೆಯವರು ಮಲಗಿದ್ದಾಗ ಗುಂಡು ಹಾರಿಸಿಕೊಂಡು ಶಿಕ್ಷಕಿ ಸಾವು]]></title>
            <link>https://kannada.asianetnews.com/state/mental-depression-school-teacher-ends-life-in-kodagu/articleshow-ggbsdgg</link>
            <guid isPermaLink="true">https://kannada.asianetnews.com/state/mental-depression-school-teacher-ends-life-in-kodagu/articleshow-ggbsdgg</guid>
            <pubDate>Sun, 26 Apr 2026 12:55:42 +0530</pubDate>
            <description><![CDATA[&lt;p&gt;ಕೊಡಗಿನ ಚೇರಂಬಾಣೆಯಲ್ಲಿ, ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ 51 ವರ್ಷದ ಶಿಕ್ಷಕಿ ರೋಹಿಣಿ ಎ ಯು ಅವರು ತಮ್ಮ ಮನೆಯಲ್ಲಿದ್ದ ಕೋವಿಯಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq4advscvv2czbexnyr8ea10,imgname-teacher-suicide-1777187876652.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮಾನಸಿಕ ಖಿನ್ನತೆಗೆ ಶಿಕ್ಷಕಿ ಬಲಿ&lt;/strong&gt;&lt;/h2&gt;&lt;p&gt;ಕೊಡಗು: ಮಾನಸಿಕ ಒತ್ತಡದಿಂದ ಖಿನ್ನತೆಗೊಳಗಾದ ಶಿಕ್ಷಕಿಯೊಬ್ಬರು ಕೋವಿಯಿಂದ ಶೂಟ್ ಮಾಡಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಕೊಡಗಿನ ಚೇರಂಬಾಣೆಯಲ್ಲಿ ನಡೆದಿದೆ. ಮೃತ ಶಿಕ್ಷಕಿಯನ್ನು 51 ವರ್ಷದ ರೋಹಿಣಿ ಎ ಯು ಎಂದು ಗುರುತಿಸಲಾಗಿದೆ. ಮಾನಸಿಕ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದ ಶಿಕ್ಷಕಿ ಚೇರಂಬಾಣೆಯಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಮುಂಜಾನೆ 5 ಗಂಟೆ ವೇಳೆಗೆ ಅವರು ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ತಮ್ಮ ಮನೆಯಲ್ಲಿದ್ದ ಕೋವಿಯಿಂದಲೇ ಗುಂಡು ಹಾರಿಸಿಕೊಂಡು ಅವರು ಸಾವಿಗೆ ಶರಣಾಗಿದ್ದಾರೆ. ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಡಗು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮೆಟ್ರೋ ನಿಲ್ದಾಣದಲ್ಲಿ ದುರ್ವಾಸನೆ: ಲಾಕ್ ಆಗಿದ್ದ ಮಹಿಳಾ ಶೌಚಾಲಯದ ಬಾಗಿಲು ಒಡೆದ ಪೊಲೀಸರಿಗೆ ಶಾಕ್&lt;/strong&gt;&lt;/p&gt;]]></content:encoded>
            <category>kodagu</category>
            <dc:creator>Anusha Kb</dc:creator>
            <atom:link href="https://kannada.asianetnews.com/state/mental-depression-school-teacher-ends-life-in-kodagu/articleshow-ggbsdgg"/>
        </item>
        <item>
            <title><![CDATA[ಬಿರು ಬಿಸಿಲಿನ ಬೇಸಿಗೆಯಲ್ಲೂ ಹಾರಂಗಿಯಿಂದ ನೀರು ಬಿಡುಗಡೆ: ಕೊಡಗಿನ ರೈತರಿಂದ ಆಕ್ರೋಶ]]></title>
            <link>https://kannada.asianetnews.com/karnataka-districts/harangi-dam-water-release-kodagu-farmers-protest-summer-water-crisis-gvd/articleshow-i000ggw</link>
            <guid isPermaLink="true">https://kannada.asianetnews.com/karnataka-districts/harangi-dam-water-release-kodagu-farmers-protest-summer-water-crisis-gvd/articleshow-i000ggw</guid>
            <pubDate>Wed, 13 May 2026 23:21:22 +0530</pubDate>
            <description><![CDATA[&lt;p&gt;ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಹಿಂದೆಂದು ಕಂಡು ಕೇಳರಿಯದಂತಹ ಸ್ಥಿತಿಯಲ್ಲಿ ಸುಡು ಬಿಸಿಲು ಹೊಡೆಯುತ್ತಿದೆ. ಈ ಬಿಸಿಲಿನ ತಾಪಕ್ಕೆ ಹಳ್ಳ ಕೊಳ್ಳಗಳು ಬತ್ತಿ ಹೋಗುತ್ತಿವೆ. ಅಷ್ಟೇ ಏಕೆ ಜಲಾಶಯಗಳ ನೀರು ಕೂಡ ಬಹುತೇಕ ತಳ ಸೇರುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krh65h0s7gb99d9qmksjx5w1,imgname-chcjc-1778693358617.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಮೇ.13): &lt;/strong&gt;ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಹಿಂದೆಂದು ಕಂಡು ಕೇಳರಿಯದಂತಹ ಸ್ಥಿತಿಯಲ್ಲಿ ಸುಡು ಬಿಸಿಲು ಹೊಡೆಯುತ್ತಿದೆ. ಈ ಬಿಸಿಲಿನ ತಾಪಕ್ಕೆ ಹಳ್ಳ ಕೊಳ್ಳಗಳು ಬತ್ತಿ ಹೋಗುತ್ತಿವೆ. ಅಷ್ಟೇ ಏಕೆ ಜಲಾಶಯಗಳ ನೀರು ಕೂಡ ಬಹುತೇಕ ತಳ ಸೇರುತ್ತಿದೆ. ಇಷ್ಟೊಂದು ಬಿರುಬಿಸಿಲಿನ ಬೇಸಿಗೆಯಲ್ಲೂ ಕೊಡಗಿನ ಹಾರಂಗಿ ಜಲಾಶಯದಿಂದ ಅಧಿಕಾರಿಗಳು ನದಿಗೆ ನೀರು ಹರಿಸುತ್ತಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ಜನರು, ರೈತ ಮುಖಂಡರು ಆಕ್ರೋಶಗೊಳ್ಳುತ್ತಿದ್ದಾರೆ.&lt;/p&gt;&lt;p&gt;ಕುಶಾಲನಗರ ತಾಲ್ಲೂಕಿನಲ್ಲಿ ಇರುವ ಹಾರಂಗಿ ಜಲಾಶಯದಿಂದ ಕಳೆದ ನಾಲ್ಕು ದಿನಗಳಿಂದ ನದಿಗೆ ನಿತ್ಯ 500 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಇದರಿಂದ ಜಲಾಶಯ ಸಂಪೂರ್ಣ ಖಾಲಿಯಾಗುವ ಆತಂಕ ಎದುರಾಗಿದೆ. ಒಟ್ಟು 2859 ಅಡಿ (8.5 ಟಿಎಂಸಿ) ಸಾಮರ್ಥ್ಯದ ಜಲಾಶಯದಿಂದ ಸದ್ಯ ಜಲಾಶಯದಲ್ಲಿ ಕೇವಲ 2.03 ಟಿಎಂಸಿ ನೀರು ಇದೆ. ಅದರಲ್ಲಿ ಬಳಕೆಗೆ ಸಿಗುವುದೇ ಕೇವಲ 1 ಟಿಎಂಸಿ ನೀರು ಮಾತ್ರ. ಇನ್ನುಳಿದ 1 ಟಿಎಂಸಿ ನೀರು ಡೆಡ್ ಸ್ಟೋರೇಜ್. ಅರ್ಥಾತ್ ಈ ಡೆಡ್ ಸ್ಟೋರೇಜ್ ನೀರು ಬಳಕೆಗೆ ಸಿಗುವುದಿಲ್ಲ.&lt;/p&gt;&lt;p&gt;ಹೀಗಿದ್ದರೂ ಜಲಾಶಯದಿಂದ ನಿತ್ಯ 500 ಕ್ಯೂಸೆಕ್ ನೀರನ್ನು ಅಧಿಕಾರಿಗಳು ನದಿಗೆ ಹರಿಸುತ್ತಿದ್ದಾರೆ. ಇದೇ ರೀತಿ ನೀರು ಹರಿಸಿದರೆ ಜಲಾಶಯ ಸಂಪೂರ್ಣ ಖಾಲಿಯಾಗುವ ಆತಂಕ. ಒಂಂದು ವೇಳೆ ಜಲಾಶಯ ಸಂಪೂರ್ಣ ಖಾಲಿಯಾದರೆ ತಾಲ್ಲೂಕು ಕೇಂದ್ರ ಸೋಮವಾರಪೇಟೆ ಜನರಿಗೆ ಕುಡಿಯುವ ನೀರಿಗೂ ಆಹಾಕಾರ ಎದುರಾಗಲಿದೆ. ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಕೊಡಗಿನಲ್ಲಿ ಮಳೆ ಆರಂಭವಾಗುತ್ತದೆ.&lt;/p&gt;&lt;h2&gt;&lt;strong&gt;ಆಹಾಕಾರ ಎದುರಾಗುವ ಆತಂಕ&lt;/strong&gt;&lt;/h2&gt;&lt;p&gt;ಒಂದು ವೇಳೆ ನಿರೀಕ್ಷೆ ಮತ್ತು ವಾಡಿಕೆಯಂತೆ ಜೂನ್ ಆರಂಭದಿಂದಲೇ ಮಳೆ ಬಾರದಿದ್ದಲ್ಲಿ ಕುಶಾಲನಗರ ಮತ್ತು ಸೋಮವಾರಪೇಟೆ ಭಾಗದ ಜನರಿಗೆ ಕುಡಿಯುವ ನೀರಿಗೂ ಆಹಾಕಾರ ಎದುರಾಗುವ ಆತಂಕ ಮೂಡಿದೆ. ಮತ್ತೊಂದೆಡೆ ಕುಶಾಲನಗರ ತಾಲ್ಲೂಕು ಭಾಗದ ಹತ್ತಾರು ಹಳ್ಳಿಗಳ ಜನ, ಜಾನುವಾರುಗಳಿಗೂ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸಲಿದೆ. ಹೀಗಾಗಿ ಜಲಾಶಯದಿಂದ ನದಿಗೆ ನೀರು ಹರಿಸದಂತೆ ಜನರು, ರೈತ ಮುಖಂಡರು ಆಗ್ರಹಿಸಿದ್ದಾರೆ. ಕೂಡಲೇ ನದಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;ಕೊಡಗಿನ ಭೂಮಿ, ಬೆಳೆಗಳನ್ನು ಹಾಳು ಮಾಡಿಕೊಂಡು ಜಲಾಶಯದಲ್ಲಿ ನೀರು ನಿಲ್ಲಿಸುತ್ತೇವೆ. ಆದರೆ ನಮಗೆ ಜಲಾಶಯದ ನೀರು ಉಪಯೋಗವೇ ಆಗುವುದಿಲ್ಲ. ಕನಿಷ್ಠ ಬೇಸಿಗೆ ಸಂದರ್ಭದಲ್ಲಾದರೂ ಜಲಾಶಯದ ನೀರು ನಮಗೆ ಸಿಗಲಿ ಎಂದರೆ ಹೇಗೆ. ಆದರೆ ಅಧಿಕಾರಿಗಳು ಪಿರಿಯಾಪಟ್ಟಣ, ಹುಣುಸೂರು, ಕೆ.ಆರ್ ನಗರ ಭಾಗದ ಜನರಿಗಾಗಿ ನೀರು ಬಿಟ್ಟಿದ್ದಾರೆ. ಮೈಸೂರು ಜಿಲ್ಲೆಯ ಜನರಿಗಾಗಿ ಇಲ್ಲಿ ನದಿಗೆ ನೀರು ಹರಿಸುತ್ತಿದ್ದಾರೆ. ಇದೇ ನೀರು ನಿಲ್ಲಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/harangi-dam-water-release-kodagu-farmers-protest-summer-water-crisis-gvd/articleshow-i000ggw"/>
        </item>
        <item>
            <title><![CDATA[ಮೇ.15ಕ್ಕೆ ಸಿಎಂ ಬದಲಾವಣೆ? ಚರ್ಚೆಗೆ ಪ್ರತಿಕ್ರಿಯೆ ಬೇಡ: ಶಾಸಕ ಎ.ಎಸ್.ಪೊನ್ನಣ್ಣ]]></title>
            <link>https://kannada.asianetnews.com/karnataka-districts/cm-change-karnataka-may-15-speculation-as-ponnanna-reaction-gvd/articleshow-kzvgpa4</link>
            <guid isPermaLink="true">https://kannada.asianetnews.com/karnataka-districts/cm-change-karnataka-may-15-speculation-as-ponnanna-reaction-gvd/articleshow-kzvgpa4</guid>
            <pubDate>Sat, 02 May 2026 21:25:16 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮೇ.15ಕ್ಕೆ ಮುಖ್ಯಮಂತ್ರಿ ಬದಲಾಗುತ್ತಾರೆ, ಸಚಿವ ಸಂಪುಟ ಬದಲಾಗುತ್ತದೆ ಎಂದು ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸದಂತೆ ಸೂಚನೆಯಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km87hcdq7gdv5w5ebzw3n891,imgname-jj-1774097838519.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ (ಮೇ.02): &lt;/strong&gt;ರಾಜ್ಯದಲ್ಲಿ ಮೇ.15ಕ್ಕೆ ಮುಖ್ಯಮಂತ್ರಿ ಬದಲಾಗುತ್ತಾರೆ, ಸಚಿವ ಸಂಪುಟ ಬದಲಾಗುತ್ತದೆ ಎಂದು ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸದಂತೆ ಸೂಚನೆಯಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹೈಕಮಾಂಡ್, ಎಐಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.&zwnj; ಇದರ ಬಗ್ಗೆ ಯಾರೂ ಮಾತನಾಡಬಾರದು ಎಂದು ಸೂಚಿಸಿದ್ದಾರೆ.&lt;/p&gt;&lt;p&gt;ಹೀಗಾಗಿ ಕಿರಿಯರೇ ಆಗಿರಲಿ, ಯಾರು ಎಷ್ಟು ದೊಡ್ಡವರೇ ಆಗಿರಲಿ. ಅದರ ಬಗ್ಗೆ ಮಾತನಾಡಬಾರದು ಎಂದರು. ಕಾಂಗ್ರೆಸ್ ಪಕ್ಷ ಇದ್ದರೆ ನಾವೆಲ್ಲರೂ ಇರುತ್ತೇವೆ. ಪಕ್ಷ ಅಧಿಕಾರ ಕೊಟ್ಟಿದೆ, ಪಕ್ಷ ಇದ್ದರೆ ನಮಗೆ ಅಧಿಕಾರ. ವೈಯಕ್ತಿಕ ಶಿಸ್ತಿಗಿಂತ ಸಂಸ್ಥೆಯ ಶಿಸ್ತೇ ಮುಖ್ಯ. ಹೀಗಾಗಿ ಎಲ್ಲರೂ ಪಕ್ಷದ ಶಿಸ್ತನ್ನು ಕಾಪಾಡಬೇಕು ಎಂದರು.&lt;/p&gt;&lt;p&gt;ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಆಗಿದೆ. ಇನ್ನುಳಿದ ಎರಡು ವರ್ಷದಲ್ಲಿ ನಮಗೂ ಅಧಿಕಾರ ಕೊಡಿ ಎನ್ನುವ ಕೂಗು ಇರುತ್ತದೆ. ಸಹಜವಾಗಿ ಎಲ್ಲರಿಗೂ ಮಂತ್ರಿಯಾಗಬೇಕು ಅಧಿಕಾರಕ್ಕೆ ಏರಬೇಕು ಎನ್ನುವುದು ಇರುತ್ತದೆ. ಶಾಸಕರಾಗಬೇಕು ಅದಾದ ಮೇಲೆ ಮಂತ್ರಿಯಾಗಬೇಕು ಎನ್ನುವುದು ಇದ್ದೇ ಇರುತ್ತದೆ. ಸಚಿವರಾದರೆ ಸಾಕಷ್ಟು ಕೆಲಸ ಮಾಡಬಹುದು ಎನ್ನುವ ಆಸೆ ಇರುತ್ತದೆ. ಹೀಗಾಗಿ ಸಚಿವ ಸಂಪುಟದಲ್ಲಿ ಸೇರಬೇಕೆಂಬ ಕೂಗು ಇರುತ್ತದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಬೆಲೆ ಏರಿಕೆಗೆ ಆಶ್ಚರ್ಯ ಇಲ್ಲ&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಮಾಡಿರುವುದರಲ್ಲಿ ಆಶ್ಚರ್ಯವೇನು ಇಲ್ಲ ಎಂದು ಶಾಸಕ ಪೊನ್ನಣ್ಣ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನಾಲ್ಕು ರಾಜ್ಯಗಳ ವಿಧಾನ ಸಭಾ ಚುನಾವಣೆ ಮುಗಿಯಲಿ ಎಂದು ಕಾಯುತ್ತಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಸಿಲಿಂಡರ್ ಬೆಲೆ ಜಾಸ್ತಿ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇನ್ನು ಯಾಕೆ ಜಾಸ್ತಿ ಮಾಡಿಲ್ಲ ಅಂತ ಆಶ್ಚರ್ಯವಾಗುತ್ತಿದೆ. ಅವರು ತೆಗೆದುಕೊಂಡಿರುವ ನಿರ್ಧಾರಗಳಿಂದ ದೇಶದಲ್ಲಿ ಆರ್ಥಿಕ ಒತ್ತಡ ಹೆಚ್ಚಳವಾಗಿದೆ ಎಂದಿದ್ದಾರೆ.&lt;/p&gt;&lt;p&gt;ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕಾಗಿತ್ತು. ಆದರೆ ಅವರು ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು. ಚುನಾವಣೆಗೋಸ್ಕರ ಕೆಲವು ನಿರ್ಧಾರಗಳನ್ನು ಹಿಡಿದಿಡುವುದು&zwnj;. ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲದರ ದರ ಹೆಚ್ಚಿಸುತ್ತಾರೆ ಅಂತ ಸಾಮಾನ್ಯ ಜನರು ಹೇಳಿದ್ದರು. ಇನ್ನೊಂದೆರಡು ದಿನಗಳಲ್ಲಿ ಜನರಿಗೆ ಅದು ಕೂಡ ಆಶ್ಚರ್ಯವಾಗುತ್ತದೆ. ಕೇಂದ್ರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ದೇಶಕ್ಕೆ ಮಾರಕ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ ಎಂದರು.&lt;/p&gt;&lt;p&gt;ಕಳೆದ ಕೆಲವು ತಿಂಗಳಿನಿಂದ ಎನ್ ಡಿ ಎ ಸರ್ಕಾರದ ನಡೆಯ ಬಗ್ಗೆ ಸಾಕಷ್ಟು ಟೀಕೆ, ಚರ್ಚೆಗಳು ನಡೆಯುತ್ತಿವೆ. ಯಾವುದೇ ಸರ್ಕಾರದಲ್ಲಿ ನಿರ್ಧಾರಗಳು ತಪ್ಪು ಸರಿಯಾಗಬಹುದು.ತಪ್ಪಾದಾಗ ಅದನ್ನು ತಿದ್ದಿಕೊಳ್ಳುವುದು ಆಗಬೇಕು. ಆದರೆ ಇವರು ತಪ್ಪುಗಳನ್ನು ಮುಚ್ಚಿ ಹಾಕಲು ಇನ್ನಷ್ಟು ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದರು.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-change-karnataka-may-15-speculation-as-ponnanna-reaction-gvd/articleshow-kzvgpa4"/>
        </item>
        <item>
            <title><![CDATA[Kodagu: ಅನಾಥ ಆಶ್ರಮದಲ್ಲಿ ಮದುವೆ ಸಂಭ್ರಮ: ಪೂವಣ್ಣನೊಂದಿಗೆ ಹಸೆಮಣೆ ಏರಿದ ಮೈನಾ]]></title>
            <link>https://kannada.asianetnews.com/karnataka-districts/kodagu-orphanage-wedding-inspiring-story-madikeri-thanal-ashrama-gvd/articleshow-pbgx92y</link>
            <guid isPermaLink="true">https://kannada.asianetnews.com/karnataka-districts/kodagu-orphanage-wedding-inspiring-story-madikeri-thanal-ashrama-gvd/articleshow-pbgx92y</guid>
            <pubDate>Thu, 23 Apr 2026 20:20:02 +0530</pubDate>
            <description><![CDATA[&lt;p&gt;ಅದೊಂದು ಅನಾಥ ಆಶ್ರಮ, ಇಲ್ಲಿಗೆ ಬರುವವರ ಬದುಕಿನಲ್ಲಿ ಎಲ್ಲವೂ ಮುಗಿದು ಅನಾಥರಾಗಿದ್ದೇವೆ ಎನ್ನುವ ಭಾವವೇ ಸಂಪೂರ್ಣ ತುಂಬಿರುತ್ತದೆ. ಅಂತಹ ಆಶ್ರಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpxd359gjxpjynpvtnr1zwmm,imgname-n-n-1776955790640.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಏ.23): &lt;/strong&gt;ಅದೊಂದು ಅನಾಥ ಆಶ್ರಮ, ಇಲ್ಲಿಗೆ ಬರುವವರ ಬದುಕಿನಲ್ಲಿ ಎಲ್ಲವೂ ಮುಗಿದು ಅನಾಥರಾಗಿದ್ದೇವೆ ಎನ್ನುವ ಭಾವವೇ ಸಂಪೂರ್ಣ ತುಂಬಿರುತ್ತದೆ. ಅಂತಹ ಆಶ್ರಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಅನಾಥೆಯಾಗಿದ್ದ ಆಕೆಯ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಆಕೆ ಹಸೆಮಣೆ ಏರಿ ತುಂಬು ಕುಟುಂಬವನ್ನು ಕೂಡಿದ್ದಾಳೆ. ಆ ಸಂಭ್ರಮ ಹೇಗಿತ್ತು ನೀವು ನೋಡಿ. ಇದು ಹೆಸರೆ ಸೂಚಿಸುವಂತೆ ತನಲ್ ಅಂದ್ರೆ ನೆರಳು. ಅಂದರೆ ಬದುಕಿನಲ್ಲಿ ಯಾರು ಇಲ್ಲ ಎನ್ನುವವರಿಗೆ ಆಶ್ರಯ ನೀಡುವ ಆಶ್ರಮ ಇದು.&lt;/p&gt;&lt;p&gt;ಹೌದು ಮಡಿಕೇರಿಯ ಈ ಆಶ್ರಮದಲ್ಲಿ ಗುರುವಾರ ಮದುವೆ ಸಂಭ್ರಮ ಮನೆ ಮಾಡಿತ್ತು. ಹಸಿರು ತಳಿರು ತೋರಣ, ಹೂವುಗಳಿಂದ ಸಿಂಗಾರಗೊಂಡಿತ್ತು. ತೆಂಗಿನ ಗರಿ, ಗೊನೆತೂಗುವ ಬಾಳೆ ಮರಗಳ ನಿಲ್ಲಿಸಿ ಚಪ್ಪರ ಹಾಕಲಾಗಿತ್ತು. ನಿತ್ಯ ಇಲ್ಲಿ ಎಲ್ಲವೂ ಶೂನ್ಯ ಎನ್ನುವಂತಿದ್ದ ಆಶ್ರಮದಲ್ಲಿ ನಗುವೇ ತುಂಬಿತ್ತು. ಔದು ಎಲ್ಲರನ್ನು ಕಳೆದುಕೊಂಡು ಯಾರು ಇಲ್ಲವೆಂದು ತನಲ್ ಆಶ್ರಮ ಸೇರಿ ನಾಲ್ಕು ವರ್ಷಗಳಿಂದ ಇಲ್ಲಿಯೇ ಬದುಕು ದೂಡುತ್ತಿದ್ದ ಮೈನಾನ ಮದುವೆ ಸಂಭ್ರಮ ಮನೆ ಮಾಡಿತ್ತು.&lt;/p&gt;&lt;p&gt;ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನ ಪೂವಣ್ಣ ಅವರೊಂದಿಗೆ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ತನಲ್ ಸಂಸ್ಥೆ ತವರು ಮನೆಯಂತೆ, ಸಂಸ್ಥೆಯ ವ್ಯವಸ್ಥಾಪಕ ಮೊಹಮ್ಮದ್ ಅವರು ವಧು ಮೈನಾ ಅವರ ತಂದೆಯ ಸ್ಥಾನದಲ್ಲಿ ನಿಂತು ಧಾರೆ ಎರೆದರು. ತಾವು ಮುಸಲ್ಮಾನರಾದರೂ ಕೊಡವ ಸಂಪ್ರದಾಯದಂತೆ ಮದುವೆ ಮಾಡಿದ್ದು ವಿಶೇಷವಾಗಿತ್ತು. ಹಿಂದೂ ಮುಸಲ್ಮಾನರು ಎನ್ನುವ ಯಾವ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ನಿಂತು ಮದುವೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿತ್ತು.&lt;/p&gt;&lt;h2&gt;&lt;strong&gt;ಚಪ್ಪರದಲ್ಲಿ ಕೂರಿಸಿ ಮುಹೂರ್ತ&lt;/strong&gt;&lt;/h2&gt;&lt;p&gt;ಕೊಡವ ಸಂಪ್ರದಾಯದಂತೆ ವಿವಾಹ ನಡೆದಿದ್ದರಿಂದ ನಿನ್ನೆಯಿಂದಲೇ ಎಲ್ಲಾ ಶಾಸ್ತ್ರ ಸಂಪ್ರದಾಯಗಳು ನೆರವೇರಿದ್ದವು. ಇಂದು ಬೆಳಿಗ್ಗೆ ತಮ್ಮ ಬಂಧು ಬಾಂಧವರೊಂದಿಗೆ ತಮ್ಮೂರಿನಿಂದ ಮಡಿಕೇರಿಗೆ ಆಗಮಿಸಿದ ಮದುಮಗ ಪೂವಣ್ಣ ಅವರನ್ನು ತನಲ್ ಸಂಸ್ಥೆ ಎಲ್ಲಾ ಪದಾಧಿಕಾರಿಗಳು ಹಾಗೂ ನೆರೆದಿದ್ದ ಜನರು ಗೌರವದಿಂದ ಬರಮಾಡಿಕೊಂಡರು. ಬಳಿಕ ಕೊಡವ ಧಿರಿಸಿನಲ್ಲಿ ಸಿಂಗಾರಗೊಂಡಿದ್ದ ಮೈನಾ ಅವರನ್ನು ತನಲ್ ಸಂಸ್ಥೆಯ ಒಳಗಿನಿಂದ ಕರೆತಂದು ಚಪ್ಪರದಲ್ಲಿ ಕೂರಿಸಿ ಮುಹೂರ್ತ ನೆರವೇರಿಸಿದರು.&lt;/p&gt;&lt;p&gt;ಎಲ್ಲರೂ ಕೊಡವ ಸಂಪ್ರದಾಯದಂತೆ ಅಕ್ಷತೆ ಹಾಕಿ ಉಡುಗೊರೆ ನೀಡಿ ಹರಸಿ, ಹಾರೈಸಿದರು. ಮದುವೆಗೆ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಶುಭ, ರಾಜಕೀಯ ಮುಖಂಡರು, ವರ ಪೂವಣ್ಣ ಅವರ ಬಂದು ಬಳಗ ಎಲ್ಲರೂ ಸಾಕ್ಷಿಯಾದರು. ಕಷ್ಟದ ದಿನಗಳಿಂದ ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟ ನವ ವಧುವರರು ಕೂಡ ಮದುವೆ ಆಗುತ್ತಿರುವುದಕ್ಕೆ ಸಂಭ್ರಮ ಹಂಚಿಕೊಂಡರು. ಇನ್ನು ಎಲ್ಲಾ ಮದುವೆಗಳಂತೆ ಭರ್ಜರಿ ಬೂರಿ ಭೋಜನವಿತ್ತು.&lt;/p&gt;&lt;p&gt;ಗೀರೈಸ್, ಚಿಕನ್ ಮಸಾಲ, ಕಬಾಬ್, ಪರೋಟ ಚಿಕನ್ ಸುಕ್ಕಾ, ಮೊಸರನ್ನ ಪಾಯಸ ಹೀಗೆ ಭರ್ಜರಿ ಊಟವನ್ನೂ ಎಲ್ಲರೂ ಸವಿದರು. ಈ ಸಂದರ್ಭ ಮಾತನಾಡಿದ ವಧುವರರು ಕೂಡ ಖುಷಿಯನ್ನು ವ್ಯಕ್ತಪಡಿಸಿದರು. ಒಟ್ಟಿನಲ್ಲಿ ತನ್ನವರೆನ್ನುವವರು ಯಾರೂ ಇಲ್ಲ, ನನ್ನದೆನ್ನುವುದು ಮನೆಯಿಲ್ಲ ಎಂದು ಆಶ್ರಮದಲ್ಲಿ ಬದುಕುತ್ತಿದ್ದ ಮೈನಾ ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟಿದ್ದು ನವ ಜೋಡಿಯ ಬದುಕು ಖುಷಿಯಾಗಿರಲಿ ಎಂದು ನಾವೂ ಹಾರೈಸೋಣ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-orphanage-wedding-inspiring-story-madikeri-thanal-ashrama-gvd/articleshow-pbgx92y"/>
        </item>
        <item>
            <title><![CDATA[ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಯ ಅತ್ಯಾ*ಚಾರ ಪ್ರಕರಣ: ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ ಇದು]]></title>
            <link>https://kannada.asianetnews.com/state/foreign-woman-assault-case-in-kodagu-home-minister-dr-g-parameshwara-warns-strict-action-against-homestay-violations-gdp/articleshow-ptgca9n</link>
            <guid isPermaLink="true">https://kannada.asianetnews.com/state/foreign-woman-assault-case-in-kodagu-home-minister-dr-g-parameshwara-warns-strict-action-against-homestay-violations-gdp/articleshow-ptgca9n</guid>
            <pubDate>Wed, 22 Apr 2026 12:43:53 +0530</pubDate>
            <description><![CDATA[ಕೊಡಗಿನ ಹೋಂಸ್ಟೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೋಂಸ್ಟೇ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ ಪ್ರತಿಕ್ರಿಯಿಸಿದ್ದು, ಹೋಂಸ್ಟೇಗಳು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpt0jtjxpzkp9hhx0909adc7,imgname-foreign-woman-assault-in-kodagu-1776842009180.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು &lt;/strong&gt;ಜಿಲ್ಲೆಯಲ್ಲಿ ವಿದೇಶಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದ್ದು, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಹಾಗೂ ಸಾರ್ವಜನಿಕ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಹೋಂಸ್ಟೇಗಳಿಗೆ ಈಗಾಗಲೇ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಯಲ್ಲಿದೆ. ಹೋಂಸ್ಟೇಗಳನ್ನು ನಡೆಸುವವರು ನಿಗದಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಲೈಸೆನ್ಸ್ ಹೊಂದಿರುವುದರಿಂದ ಹಿಡಿದು ಸುರಕ್ಷತಾ ಕ್ರಮಗಳವರೆಗೆ ಎಲ್ಲ ನಿಯಮಗಳನ್ನು ಅನುಸರಿಸುವುದು ಕಡ್ಡಾಯ. ಈ ನಿಯಮಗಳನ್ನು ಮೀರಿ ಇಂತಹ ಘಟನೆಗಳು ನಡೆದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.&lt;/p&gt;&lt;p&gt;ಘಟನೆ ತಿಳಿದ ಕೂಡಲೇ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿದೆ . ಇಂತಹ ಘಟನೆಗಳು ರಾಜ್ಯಕ್ಕಾಗಲಿ, ಸಮಾಜಕ್ಕಾಗಲಿ ಒಳ್ಳೆಯ ಸಂದೇಶ ನೀಡುವುದಿಲ್ಲ. ವಿಶೇಷವಾಗಿ ವಿದೇಶದಿಂದ ಬಂದವರ ಮೇಲೆ ಇಂತಹ ಅಪರಾಧಗಳು ನಡೆದರೆ, ದೇಶದ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಪರಮೇಶ್ವರ ಆತಂಕ ವ್ಯಕ್ತಪಡಿಸಿದರು.&lt;/p&gt;&lt;p&gt;ಇಂತಹ ಪ್ರಕರಣಗಳಲ್ಲಿ ಯಾವುದೇ ಸಡಿಲಿಕೆ ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಜೊತೆಗೆ, ಹೋಂಸ್ಟೇ ಮಾಲೀಕರು ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದರು.&lt;/p&gt;&lt;h2&gt;ಘಟನೆ ಹಿನ್ನೆಲೆ&lt;/h2&gt;&lt;p&gt;ಕುಟ್ಟ ಪ್ರದೇಶದಲ್ಲಿರುವ ಖಾಸಗಿ ಹೋಂಸ್ಟೇಯಲ್ಲಿ ಈ ಘಟನೆ ನಡೆದಿದ್ದು, ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆ ಮೇಲೆ ಅತ್ಯಾ*ಚಾರ ನಡೆದಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.&lt;/p&gt;&lt;p&gt;ಘಟನೆ ಏಪ್ರಿಲ್ 19ರಂದು ನಡೆದಿದ್ದು, &lsquo;ದೇವಿ ವಿಲ್ಲಾ&rsquo; ಎಂಬ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಅಲ್ಲಿನ ಸಿಬ್ಬಂದಿ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕುರಿತು ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ವೃಜೇಶ್ ಕುಮಾರ್ ಹಾಗೂ ಹೋಂಸ್ಟೇ ಮಾಲೀಕ ವಿಶಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.&lt;/p&gt;&lt;h2&gt;ಪ್ರಕರಣ ಮುಚ್ಚಿಹಾಕಲು ಪ್ರಯತ್ನ&lt;/h2&gt;&lt;p&gt;ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಘಟನೆಯ ನಂತರ ಅದನ್ನು ಮುಚ್ಚಿಹಾಕಲು ಪ್ರಯತ್ನ ನಡೆದಿರುವ ಸಾಧ್ಯತೆಯೂ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಯು ಜಾರ್ಖಂಡ್ ಮೂಲದವನು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ವಿವರಗಳು ತನಿಖೆಯ ಬಳಿಕ ಸ್ಪಷ್ಟವಾಗಲಿವೆ.&lt;/p&gt;&lt;p&gt;ಒಟ್ಟಾರೆ, ಕೊಡಗಿನಂತಹ ಪ್ರವಾಸಿ ತಾಣದಲ್ಲಿ ನಡೆದ ಈ ಘಟನೆ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರ ಭದ್ರತೆಗಾಗಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದೆ.&lt;/p&gt;]]></content:encoded>
            <category>kodagu</category>
            <dc:creator>Gowthami K</dc:creator>
            <atom:link href="https://kannada.asianetnews.com/state/foreign-woman-assault-case-in-kodagu-home-minister-dr-g-parameshwara-warns-strict-action-against-homestay-violations-gdp/articleshow-ptgca9n"/>
        </item>
        <item>
            <title><![CDATA[ಗ್ರೇಟರ್ ರಾಜಾಸೀಟು ಕಾಮಗಾರಿಯಲ್ಲಿ ಹಣ ದುರುಪಯೋಗ: ಲೋಕಾಯುಕ್ತದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ]]></title>
            <link>https://kannada.asianetnews.com/karnataka-districts/madikeri-greater-raja-seat-corruption-lokayukta-report-gvd/articleshow-qg2zm27</link>
            <guid isPermaLink="true">https://kannada.asianetnews.com/karnataka-districts/madikeri-greater-raja-seat-corruption-lokayukta-report-gvd/articleshow-qg2zm27</guid>
            <pubDate>Thu, 07 May 2026 20:55:17 +0530</pubDate>
            <description><![CDATA[&lt;p&gt;ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಡಿಕೇರಿಯ ರಾಜಾಸೀಟಿಗೆ ಹೊಂದಿಕೊಂಡಂತೆ ಇರುವ ಗ್ರೇಟರ್ ರಾಜಾಸೀಟಿನಲ್ಲಿ ನಡೆದಿರುವ ಅವ್ಯವಹಾರ ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ. ಹೌದು ಮಡಿಕೇರಿಯ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hdz6g0fv3v334y6r6baa16zp,imgname-lokayukta.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಮೇ.07):&lt;/strong&gt; ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಡಿಕೇರಿಯ ರಾಜಾಸೀಟಿಗೆ ಹೊಂದಿಕೊಂಡಂತೆ ಇರುವ ಗ್ರೇಟರ್ ರಾಜಾಸೀಟಿನಲ್ಲಿ ನಡೆದಿರುವ ಅವ್ಯವಹಾರ ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ. ಹೌದು ಮಡಿಕೇರಿಯ ರಾಜಾಸೀಟಿನ ಮತ್ತೊಂದು ಭಾಗವಾಗಿರುವ ಗ್ರೇಟರ್ ರಾಜಾಸೀಟಿನಲ್ಲಿ 4.5 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ನಡೆಸಿದ ಕಾಮಗಾರಿಯಲ್ಲಿ ಹಣ ದುರುಪಯೋಗ ಆಗಿರುವುದನ್ನು ಉಲ್ಲೇಖಿಸಲಾಗಿದೆ. 2019 ರಲ್ಲಿ ಲೋಕೋಪಯೋಗಿ ಇಲಾಖೆ ಮಡಿಕೇರಿ ಉಪವಿಭಾಗ ಕಚೇರಿಯಿಂದ ಕಾಮಗಾರಿ ಮಾಡಲಾಗಿತ್ತು.&lt;/p&gt;&lt;p&gt;ಆದರೆ ಸಾಕಷ್ಟು ಕಾಮಗಾರಿಗಳನ್ನು ಮಾಡದೆ ಅಪೂರ್ಣ ಕಾಮಗಾರಿಯಾಗಿದ್ದರೂ 2023 ಮಾರ್ಚ್ 18 ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಗ್ರೇಟರ್ ಉದ್ಯಾನವನವನ್ನು ಉದ್ಘಾಟಿಸಲಾಗಿತ್ತು. ಬಳಿಕ ಇದರ ವಿರುದ್ಧ ತನ್ನೀರಾ ಮೈನಾ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ತನಿಖೆ ಮಾಡಿದ್ದು ಕಾಮಗಾರಿ ವೇಳೆ ಹಣ ದುರುಪಯೋಗ, ಅಪೂರ್ಣ ಕಾಮಗಾರಿ ಆಗಿರುವುದು ಪತ್ತೆಯಾಗಿದೆ. ಇದೀಗ ಲೋಕಾಯುಕ್ತ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.&lt;/p&gt;&lt;p&gt;ಹೀಗಾಗಿ ಸರ್ಕಾರ ಅವ್ಯವಹಾರ ನಡೆಸಿರುವವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು ವರದಿ ನೀಡುವಂತೆ ಕೇಳಿದೆ. ಲೋಕಾಯುಕ್ತ ಪೊಲೀಸರಿಂದ ವರದಿ ಕೇಳಿದೆ. ತೋಟಗಾರಿಕೆ ಇಲಾಖೆಯ ಜಾಗದಲ್ಲಿ, ಪ್ರವಾಸೋದ್ಯಮ ಇಲಾಖೆ ಅನುದಾನದಿಂದ ಕಾಮಗಾರಿ ಮಾಡಲಾಗಿತ್ತು. ಉದ್ಯಾನವನ ಉದ್ಘಾಟನೆ ಆದ 6 ತಿಂಗಳ ಬಳಿಕ ಉಳಿದ ಕಾಮಗಾರಿಗಳ ಪೂರ್ಣಗೊಳಿಸಿ ಅದನ್ನು ತಮಗೆ ಹಸ್ತಾಂತರಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದಾರೆ.&lt;/p&gt;&lt;p&gt;ಆದರೆ ಇಂದಿಗೂ ಕಾಮಗಾರಿ ಪೂರ್ಣಗೊಳಿಸದೆ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಗೆ ಉದ್ಯಾನವನವನ್ನು ಹಸ್ತಾಂತರಿಸಿಲ್ಲ. ಗ್ರೇಟರ್ ರಾಜಾಸೀಟಿಗೆ ಅಲಂಕಾರಿಕ ವಿದ್ಯುತ್ ಅಳವಡಿಕೆ ಮಾಡಬೇಕಾಗಿತ್ತು, ವಿದೇಶಿ ತಳಿಯ ಗಿಡಗಳ ಬೆಳೆಸಬೇಕಾಗಿತ್ತು, ಅವುಗಳಿಗೆ ಬೇಕಾಗಿದ್ದ ನೀರು ಪೂರೈಕೆಗೆ ಪೈಪ್ ಲೈನ್ ಅವಳಡಿಸಬೇಕಾಗಿತ್ತು. ಅದ್ಯಾವ ಕಾಮಗಾರಿ ಮಾಡದೆ ಉದ್ಯಾನವನ್ನು ಅಧಿಕಾರಿಗಳು ಅಂದಿನ ಸಿಎಂ ಅವರಿಂದ ಉದ್ಘಾಟಿಸಿದ್ದರು.&lt;/p&gt;&lt;h2&gt;&lt;strong&gt;ಸರ್ಕಾರಕ್ಕೆ ವರದಿ&lt;/strong&gt;&lt;/h2&gt;&lt;p&gt;ಹೀಗಾಗಿ ಮಡಿಕೇರಿಯ ತನ್ನೀರ ಮೈನಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ತನಿಖೆಗೆ ಆದೇಶಿಸಿದ್ದ ಇಂದಿನ ಸರ್ಕಾರ, ಲೋಕಾಯುಕ್ತ ಪೊಲೀಸರಿಂದ ಕಾಮಗಾರಿ ಕುರಿತು ತನಿಖೆ ಮಾಡಲಾಗಿತ್ತು. ತನಿಖೆಯಲ್ಲಿ ಕಾಮಗಾರಿ ಕಳಪೆ ಹಾಗೂ ಹಣ ದುರುಪಯೋಗವಾಗಿರುವುದು ಸಾಬೀತಾಗಿದೆ. ಅವ್ಯವಹಾರ ಆಗಿದ್ದು, ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ.&lt;/p&gt;&lt;p&gt;ಹೀಗಾಗಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬ ವರದಿ ಸಲ್ಲಿಸುವಂತೆ ಇಲಾಖೆ ಮುಖ್ಯ ಕಾರ್ಯದರ್ಶಿ ಕೇಳಿದ್ದಾರೆ. ಜೊತೆಗೆ ಅಂದಿನ ಎಂಜಿನಿಯರ್ ವಿರುದ್ಧ ವಿಚಾರಣೆಗೆ ಲೋಕಾಯುಕ್ತಕ್ಕೆ ವಹಿಸಿದೆ. ಈ ಕುರಿತು ಮಾತನಾಡಿರುವ ತನ್ನೀರಾ ಮೈನಾ ಅಂದಿನ ಸಿಎಂ ಅವರಿಗೆ ಸುಳ್ಳು ಮಾಹಿತಿ ನೀಡಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಉದ್ಘಾಟಿಸಿರುವ ಅಂದಿನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಅಂದಿನ ಶಾಸಕರು ಜಿಲ್ಲೆಯ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/madikeri-greater-raja-seat-corruption-lokayukta-report-gvd/articleshow-qg2zm27"/>
        </item>
        <item>
            <title><![CDATA[ವಿಶ್ವದಲ್ಲಿ ಬಿಜೆಪಿಯಷ್ಟು ಮೋಸಗಾರರು ಯಾರಿಲ್ಲ: ಸಚಿವ ಈಶ್ವರ್ ಖಂಡ್ರೆ ಆಕ್ರೋಶ]]></title>
            <link>https://kannada.asianetnews.com/karnataka-districts/eshwar-khandre-election-commission-bjp-criticism-karnataka-gvd/articleshow-sgq1xx4</link>
            <guid isPermaLink="true">https://kannada.asianetnews.com/karnataka-districts/eshwar-khandre-election-commission-bjp-criticism-karnataka-gvd/articleshow-sgq1xx4</guid>
            <pubDate>Wed, 06 May 2026 19:46:56 +0530</pubDate>
            <description><![CDATA[&lt;p&gt;ಚುನಾವಣಾ ಆಯೋಗ ಯಾರ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಅದು ಮಾಧ್ಯಮಗಳಿಗೂ ಗೊತ್ತಿದೆ. ವಿಶ್ವದಲ್ಲಿ ಬಿಜೆಪಿಯಷ್ಟು ಮೋಸಗಾರರು ಯಾರಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqytc07ktrwf9mdfr2rsxj9z,imgname-whatsapp-image-2026-05-06-at-7.27.13-pm-1778077008115.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಮೇ.06): &lt;/strong&gt;ಚುನಾವಣಾ ಆಯೋಗ ಯಾರ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಅದು ಮಾಧ್ಯಮಗಳಿಗೂ ಗೊತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೃಂಗೇರಿ ಕ್ಷೇತ್ರದ ಜೀವರಾಜ್ ಗೆದ್ದಿದ್ದಾರೆಂದು ಚುನಾವಣಾ ಅಧಿಕಾರಿ ಘೋಷಿಸಿದ್ದರೂ ಸ್ಪೀಕರ್ ಅವರು ಪ್ರಮಾಣ ವಚನ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿದ ಬಳಿಕ ಅವರು ಪ್ರತಿಕ್ರಿಯಿಸಿದರು.&lt;/p&gt;&lt;p&gt;ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಮತದಾರರನ್ನು ಮತದಾನದಿಂದ ವಂಚಿತರನ್ನಾಗಿ ಮಾಡಲಾಯಿತು. ತಮ್ಮ ಸ್ವಾರ್ಥಕ್ಕವಾಗಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ ಗೆಲ್ಲಲಾಗಿದೆ. ಚುನಾವಣಾ ಆಯೋಗ ಬಹಿರಂಗವಾಗಿ ಒಂದು ಪಕ್ಷಕ್ಕೆ ಸಮರ್ಥನೆ ಮಾಡುತ್ತಿದೆ. ಇದು ದುರ್ದೈವದ ಸಂಗತಿ, ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ಬಿದ್ದಂತೆ ಆಗಿದೆ. ಈ ಮಾದರಿಯಲ್ಲಿ ಕಾಂಗ್ರೆಸ್ ಯಾವತ್ತು ಮಾಡಲಿಲ್ಲ. ಹೀಗೆ ಮಾಡಿದ್ದರೆ ಎಂದೆಂದಿಗೂ ಕಾಂಗ್ರೆಸ್ ಅಧಿಕಾರದಲ್ಲಿ ಇರುತಿತ್ತು. ಅವರು ಅಧಿಕಾರ ದಾಹಕ್ಕಾಗಿ ಇದೆಲ್ಲಾ ಮಾಡುತ್ತಿದ್ದಾರೆ. ಮತಗಳನ್ನು ತಿದ್ದುಪಡಿ ಮಾಡಲಾಗಿದೆ.&lt;/p&gt;&lt;p&gt;ಅಧಿಕಾರಿಗಳನ್ನು ಉಪಯೋಗ ಮಾಡಿಕೊಳ್ಳಲಾಗಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಮಾರಕ. ಕರ್ನಾಟಕದಲ್ಲೂ ಅಂತಹದ್ದೆ ಆಗಿದೆ. ಅಂದು ಎಣಿಕೆ ಆದಾಗ ಯಾಕೆ ತಡೆಯಲಿಲ್ಲ. ಮತಗಟ್ಟೆಯಲ್ಲಿ ಬಿಜೆಪಿ ಏಜೆಂಟರುಗಳು ಇದ್ದರು. ಅವತ್ತು ಯಾಕೆ ಅದನ್ನು ತಡೆಯಲಿಲ್ಲ. ಬಿಜೆಪಿ ಏಜೆಂಟರ ಸಹಿ ಇದೆಯಲ್ಲ, ಅವರ ಕಣ್ಣೆದುರಿಗೆ ಎಣಿಕೆ ಆಗಿದೆ. ಆದರೂ ಯಾಕೆ ತಡೆಯಲಿಲ್ಲ, ಇಂದು ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಷಡ್ಯಂತ್ರ ಮಾಡಲಾಗಿದೆ. ಇಂದು ಮತ್ತೆ ತಿದ್ದುಪಡಿ ಮಾಡಿ ಈ ರೀತಿ ಫಲಿತಾಂಶ ಬರುವಂತೆ ಮಾಡಿಕೊಂಡು ಖುಕೃತ್ಯ ಮಾಡಲಾಗಿದೆ.&lt;/p&gt;&lt;p&gt;ಇದೆಲ್ಲಾ ಮಾಡುವುದು ಬಿಜೆಪಿ ಹೊರತ್ತು ಕಾಂಗ್ರೆಸ್ ಮಾಡಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ವಿರುದ್ಧ ಕಿಡಿಕಾರಿದ್ದಾರೆ. ಶೃಂಗೇರಿ ಕ್ಷೇತ್ರ ಶಾಸಕರಿಗೆ ಜೀವರಾಜ್ ಅವರಿಗೆ ಸ್ಪೀಕರ್, ಮಾಣವಚನ ಬೋಧಿಸದ ವಿಚಾರಕ್ಕೆ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ರಾಜ್ಯಪಾಲರ ಅಂಗಳಕ್ಕೆ ಹೋಗಬಹುದು ಇಲ್ಲ, ರಾಷ್ಟ್ರಪತಿಯವರ ಬಳಿ ಹೋಗಬಹುದು. ಸುಪ್ರೀಂ ಕೋರ್ಟ್ ಇದೆ ಕಾನೂನು ಹೋರಾಟ ನಡೆಯುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕುಶಾಲನಗರ ತಾಲ್ಲೂಕಿನ ದುಬಾರೆಯಲ್ಲಿ ಹೇಳಿದ್ದಾರೆ.&lt;/p&gt;&lt;p&gt;ಸತ್ಯಕ್ಕೆ ಜಯ ಸಿಗುತ್ತದೆ ಅಂತಿಮವಾಗಿ ಸತ್ಯಮೇವ ಜಯತೆ ಆಗುತ್ತದೆ. ಈಗಲೂ ಅವರೇ ಶಾಸಕರೇ, ಮುಂದೆಯೂ ಅವರೇ ಶಾಸಕರಾಗಲಿದ್ದಾರೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಬಿಟ್ಟಿಭಾಗ್ಯಗಳಿಂದ ತಮಿಳುನಾಡಿನಲ್ಲಿ ಡಿಎಂಕೆಗೆ ಬಂದಿರುವ ಸ್ಥಿತಿ ಕಾಂಗ್ರೆಸ್ ಗೂ ಬರಲಿದೆ ಎಂದಿರುವುದಕ್ಕೆ ಕಿಡಿಕಾರಿದ ಸಚಿವ ಈಶ್ವರ ಖಂಡ್ರೆ ವಿಶ್ವದಲ್ಲಿ ಬಿಜೆಪಿಯಷ್ಟು ಮೋಸಗಾರರು ಯಾರೂ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಭಾಗ್ಯಗಳ ಕೊಟ್ಟಿಲ್ಲವೆ?&lt;/strong&gt;&lt;/h2&gt;&lt;p&gt;ಕೊಡಗಿನ ದುಬಾರೆಯಲ್ಲಿ ಮಾತನಾಡಿದ ಅವರು ನೀವು ಎಲ್ಲಿಯೂ ಭಾಗ್ಯಗಳ ಕೊಟ್ಟಿಲ್ಲವೆ?, ಮಹಾರಾಷ್ಟ್ರದಲ್ಲಿ ಭಾಗ್ಯಗಳ ಕೊಟ್ಟಿಲ್ಲವೆ. ದೆಹಲಿಯಲ್ಲಿ ಭಾಗ್ಯಗಳ ಕೊಟ್ಟಿಲ್ಲವೆ?. ಮತ್ತು ಪ್ರತೀ ವ್ಯಕ್ತಿ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದೀರಿ. ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ರಿ. ಪ್ರತಿಯೊಬ್ಬರಿಗೂ ಮನೆ ಕೊಡುತ್ತೇವೆ ಎಂದಿದ್ರಿ. ಇದುವರೆಗೆ ಯಾವುದನ್ನಾದರೂ ಕೊಟ್ಟಿದ್ದೀರಾ. ನಾವು ಘೋಷಣೆ ಮಾಡಿದ್ದೆಲ್ಲವನ್ನೂ ಈಡೇರಿಸಿದ್ದೇವೆ ಎಂದು ಈಶ್ವರ್ ಖಂಡ್ರೆ ಹೇಳಿದರು.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/eshwar-khandre-election-commission-bjp-criticism-karnataka-gvd/articleshow-sgq1xx4"/>
        </item>
        <item>
            <title><![CDATA[ಕೊಡಗು ಹೋಂ ಸ್ಟೇಯಲ್ಲಿ ಕರಾಳ ಘಟನೆ: ಸಿಬ್ಬಂದಿಯಿಂದಲೇ ವಿದೇಶಿ ಮಹಿಳೆ ಮೇಲೆ ರೇ**ಪ್]]></title>
            <link>https://kannada.asianetnews.com/crime/kodagu-homestay-horror-us-woman-brutally-assaulted-in-coorg-2-arrested/articleshow-t9k8ns1</link>
            <guid isPermaLink="true">https://kannada.asianetnews.com/crime/kodagu-homestay-horror-us-woman-brutally-assaulted-in-coorg-2-arrested/articleshow-t9k8ns1</guid>
            <pubDate>Wed, 22 Apr 2026 12:31:17 +0530</pubDate>
            <description><![CDATA[&lt;p&gt;ಕೊಡಗಿನ ಪ್ರವಾಸಿ ಹೋಂಸ್ಟೇಯೊಂದರಲ್ಲಿ ಅಮೆರಿಕ ಮೂಲದ ವಿದೇಶಿ ಮಹಿಳೆಯ ಮೇಲೆ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿ, ಸಂತ್ರಸ್ತೆಯನ್ನು ಕೂಡಿಹಾಕಿದ ಆರೋಪದ ಮೇಲೆ ಈಗ ಹೋಂಸ್ಟೇ ಮಾಲೀಕ ಮತ್ತು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpszgx5g6cvf30mqgnyhhyzm,imgname-homestay-1776840897712.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಕೊಡಗು ಹೋಂ ಸ್ಟೇನಲ್ಲಿ ಕರಾಳ ಘಟನೆ&lt;/strong&gt;&lt;/h2&gt;&lt;p&gt;ಕೊಡಗು: ಪ್ರವಾಸಿ ತಾಣ ಕೊಡಗಿನ ಹೋಂ ಸ್ಟೇಯೊಂದರಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಅಮೆರಿಕಾ ಮೂಲದ ವಿದೇಶಿ ಮಹಿಳೆಯೊಬ್ಬಳ ಮೇಲೆ ಹೋಂಸ್ಟೇಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಅತ್ಯಾ*ಚಾರವೆಸಗಿ ಆಕೆಯನ್ನು ಕೂಡಿ ಹಾಕಿ ದೌರ್ಜನ್ಯವೆಸಗಿದ್ದಾರೆ. ಅತ್ಯಾಚಾರವೆಸಗಿದ ಸಿಬ್ಬಂದಿ ಜಾರ್ಖಂಡ್ ಮೂಲದವ ಎಂದು ತಿಳಿದು ಬಂದಿದೆ. ಹೋಂ ಸ್ಟೇಯಲ್ಲಿ ವಿದೇಶಿ ಮಹಿಳೆ ಇದ್ದ ಕೊಠಡಿಗೆ ನುಗ್ಗಿದ ಆರೋಪಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹೋಂ ಸ್ಟೇ ಮಾಲೀಕರಿಗೆ ತಿಳಿದಿತ್ತು. ಆದರೂ ಪ್ರಕರಣವನ್ನು ಮುಚ್ಚಿ ಹಾಕಿ ಆರೋಪಿಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.&lt;/p&gt;&lt;h3&gt;&lt;strong&gt;ಮೂರು ದಿನಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ್ದ &amp;nbsp;ಹೋಂ ಸ್ಟೇ ಮಾಲೀಕ&lt;/strong&gt;&lt;/h3&gt;&lt;p&gt;ಹೋಂ ಸ್ಟೇ ಮಾಲೀಕ ಸಂತ್ರಸ್ತ ಮಹಿಳೆಗೆ ಸಹಾಯ ಮಾಡುವ ಬದಲು ಆಕೆಯನ್ನು ಮೂರು ದಿನಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ್ದಾನೆ. ಆಕೆಯ ಬಳಿ ಇದ್ದ ಮೊಬೈಲ್ ಫೋನ್&zwnj; ಅನ್ನು ಕಸಿದು ಕೊಂಡಿದ್ದಾನೆ. ಅಲ್ಲದೇ ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.&lt;/p&gt;&lt;p&gt;ನಂತರ ಅವರು ಮಹಿಳೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆ ನಂತರ ಅಲ್ಲಿಂದ ಮೈಸೂರಿಗೆ ಬಂದಿದ್ದಾಳೆ. ಬಳಿಕ ಆಕೆ ಅಮೆರಿಕಾದ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಮೆರಿಕಾ ರಾಯಭಾರ ಕಚೇರಿಯಿಂದ ಬಂದ ಮಾಹಿತಿಯ ಮೇರೆಗೆ ಕರ್ನಾಟಕ ಪೊಲೀಸರು ಈ ಘಟನೆ ಸಂಬಂಧ ಎಫ್&zwnj;ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಕಸ ಎಸೆದು ಬರ್ತೀನಿ ಅಂತ ಹೇಳಿ ಕಟ್ಟಿಂಗ್ ಶಾಪ್&zwnj;ನವನ ಜೊತೆ ಓಡಿದ ಆಂಟಿ: ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್&lt;/p&gt;&lt;p&gt;ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಹೋಮ್&zwnj; ಸ್ಟೇ ಮಾಲೀಕನನ್ನು ಬಂಧಿಸಲಾಗಿದ್ದು, ಇಬ್ಬರನ್ನು ಮೇ 3ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಕೊಡಗು ಜಿಲ್ಲಾ ಎಸ್&zwnj;ಪಿ ಈ ಘಟನೆ ಹಾಗೂ ಆರೋಪಿಗಳ ಬಂಧನ ಆಗಿರುವ ಬಗ್ಗೆ ಖಚಿತಪಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;1050 ಕೋಟಿ ಮೌಲ್ಯದ ಆಸ್ತಿ ಒಡೆಯನಾದ್ರು ವಿರಾಟ್&zwnj; ಕೊಹ್ಲಿಗೆ ಒಂದು ಪೋಟೋ ಲೈಕ್ ಮಾಡುವ ಸ್ವಾತಂತ್ರ್ಯ ಇಲ್ವಾ?&lt;/strong&gt;&lt;strong&gt;&amp;nbsp;&lt;/strong&gt;ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ಕೊಡಗಿನ ವಿರಾಜಪೇಟೆ ಸಮೀಪದ ಕುಟ್ಟಾ ಬಳಿ ಇರುವ ದೇವಿ ವಿಲ್ಲಾ ಎಂಬ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅಲ್ಲಿ ಸಿಬ್ಬಂದಿಯಾಗಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಆ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವೃಜೇಶ್ ಕುಮಾರ್ ಹಾಗೂ ಹೋಂಸ್ಟೇ ಮಾಲೀಕ ವಿಶಾಲ್ ಎಂಬಾತನನ್ನು ಬಂಧಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;The horrific assault on a foreign woman in Kutta village of Kodagu is deeply shameful and unacceptable. Such incidents strike at the very soul of India&rsquo;s ethos of Atithi Devo Bhava.This is not just a crime against an individual, but a blot on our nation&rsquo;s image and values.I&hellip; pic.twitter.com/s7UnHxDWq7&lt;/p&gt;&lt;p&gt;&mdash; Dr. Ravi C. T  ಡಾ. ರವಿ ಸಿ. ಟಿ (@CTRavi_BJP) April 21, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಹೋಂ ಸ್ಟೇ ಗಳಿಗೆ ಈಗಾಗಲೇ ಎಸ್ಓಪಿ ನೀಡಲಾಗಿದೆ. ಅದರ ಪ್ರಕಾರ ಹೋಂಸ್ಟೇ ಮಾಲೀಕರು ನಡೆದುಕೊಳ್ಳಬೇಕು. ಅವರಿಗೆ ಲೈಸೆನ್ಸ್ ಇದೆಯಾ ಇಲ್ವಾ ಹೋಂಸ್ಟೇ ಮಾಡಬೇಕಾದರೆ ಏನೇನು ಮಾಡಬೇಕು ಎಲ್ಲದರ ಬಗ್ಗೆ ಸುತ್ತೋಲೆ ಇದೆ. ಅದನ್ನ ಮೀರಿ ಇಂಥ ಘಟನೆಗಳಾದಾಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಘಟನೆ ಗೊತ್ತಾಗ್ತಿದ್ದ ಹಾಗೆ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ.&lt;/p&gt;&lt;p&gt;ಕಾನೂನು ಪ್ರಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ಇದು ರಾಜ್ಯಕ್ಕಾಗಲೀ ಸಮಾಜಕ್ಕಾಗಲೀ ಒಳ್ಳೆಯ ಸಂದೇಶ ಕೊಡುವ ಘಟನೆ ಅಲ್ಲ. ಹೊರಗಿನಿಂದ ಬಂದವರ ಮೇಲೆ ಇತರ ಆದಾಗ ಏನು ಸಂದೇಶ ಹೋಗುತ್ತೆ. ನಮ್ಮ ದೇಶದ ಬಗ್ಗೆ ಎಂಥಾ ಸಂದೇಶ ಹೋಗುತ್ತೆ. ಇಂಥ ವಿಚಾರದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಘಟನೆ ಆದಮೇಲೆ ಮುಚ್ಚಿ ಹಾಕುವುದಕ್ಕೆ ಪ್ರಯತ್ನ ಮಾಡಿದ್ದಾರೆ ಅಂತ ಅನ್ಸುತ್ತೆ. ಪೊಲೀಸರಿಗೆ ಗೊತ್ತಾದ ತಕ್ಷಣ ಅವರನ್ನ ಅರೆಸ್ಟ್ ಮಾಡಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಜಾರ್ಖಂಡ್ ಅವನು ಅಂತ ಹೇಳ್ತಿದ್ದಾರೆ ಹೆಚ್ಚಿನ ವಿವರಗಳು ಬರಬೇಕಿದೆ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Anusha Kb</dc:creator>
            <atom:link href="https://kannada.asianetnews.com/crime/kodagu-homestay-horror-us-woman-brutally-assaulted-in-coorg-2-arrested/articleshow-t9k8ns1"/>
        </item>
        <item>
            <title><![CDATA[ಕೊಡಗು ಪ್ರವಾಸಿಗರ ಗಮನಕ್ಕೆ: ಮೇ 6 ರಂದು ವಿಶ್ವಪ್ರಸಿದ್ಧ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವೇಶ ಬಂದ್!]]></title>
            <link>https://kannada.asianetnews.com/gallery/karnataka-districts/kodagu-dubare-elephant-camp-entry-restricted-may-6-tourist-alert-sat-uor4klo</link>
            <guid isPermaLink="true">https://kannada.asianetnews.com/gallery/karnataka-districts/kodagu-dubare-elephant-camp-entry-restricted-may-6-tourist-alert-sat-uor4klo</guid>
            <pubDate>Mon, 04 May 2026 20:44:18 +0530</pubDate>
            <description><![CDATA[ಕೊಡಗಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರಕ್ಕೆ ಮೇ 6 ರಂದು ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಶಿಬಿರದ ಆಂತರಿಕ ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದ್ದು, ಪ್ರವಾಸಿಗರು ತಮ್ಮ ಪ್ರವಾಸದ ಯೋಜನೆಯನ್ನು ಬದಲಿಸಿಕೊಳ್ಳುವಂತೆ ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqsragxyds6mzdbxk2as8hjn,imgname-60483278-1391822824300269-9026255298783870976-n-1777907090366.jpg" type="image/jpeg" height="390" width="690"/>
            <content:encoded><![CDATA[ಕೊಡಗಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರಕ್ಕೆ ಮೇ 6 ರಂದು ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಶಿಬಿರದ ಆಂತರಿಕ ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದ್ದು, ಪ್ರವಾಸಿಗರು ತಮ್ಮ ಪ್ರವಾಸದ ಯೋಜನೆಯನ್ನು ಬದಲಿಸಿಕೊಳ್ಳುವಂತೆ ಸೂಚಿಸಿದೆ.&lt;img&gt;&lt;p&gt;ಕೊಡಗು (ಮೇ 04): ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾದ ಕುಶಾಲನಗರ ತಾಲ್ಲೂಕಿನ ವಿಶ್ವವಿಖ್ಯಾತ 'ದುಬಾರೆ ಸಾಕಾನೆ ಶಿಬಿರ'ಕ್ಕೆ (Dubare Elephant Camp) ಮೇ 6 ರಂದು ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಶಿಬಿರದ ಆಂತರಿಕ ನಿರ್ವಹಣೆ ಮತ್ತು ವಿವಿಧ ಕೆಲಸಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಈ ಮಹತ್ವದ ಆದೇಶ ಹೊರಡಿಸಿದೆ.&lt;/p&gt;&lt;img&gt;&lt;p&gt;ಕುಶಾಲನಗರ ವಲಯ ಅರಣ್ಯಾಧಿಕಾರಿಗಳು ನೀಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, 'ದಿನಾಂಕ 06-05-2026 ರಂದು ದುಬಾರೆ ಸಾಕಾನೆ ಶಿಬಿರದಲ್ಲಿ ನಿರ್ವಹಣೆ ನಿಮಿತ್ತ ಸದರಿ ದಿನದಂದು ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.' ಈ ಆದೇಶವು ಕೇವಲ ಒಂದು ದಿನಕ್ಕೆ ಅನ್ವಯಿಸಲಿದ್ದು, ಮೇ 6 ರಂದು ದುಬಾರೆಗೆ ಭೇಟಿ ನೀಡಲು ಯೋಜಿಸಿದ್ದ ಪ್ರವಾಸಿಗರು ತಮ್ಮ ಪ್ರವಾಸದ ವೇಳಾಪಟ್ಟಿಯನ್ನು ಬದಲಿಸಿಕೊಳ್ಳುವಂತೆ ಇಲಾಖೆ ವಿನಂತಿಸಿದೆ.&lt;/p&gt;&lt;img&gt;&lt;p&gt;ದುಬಾರೆ ಶಿಬಿರದಲ್ಲಿ ಆನೆಗಳ ಆರೈಕೆ, ಶಿಬಿರದ ಸ್ವಚ್ಛತೆ ಅಥವಾ ತಾಂತ್ರಿಕ ನಿರ್ವಹಣಾ ಕಾರ್ಯಗಳು ನಿಯಮಿತವಾಗಿ ನಡೆಯುತ್ತಿರುತ್ತವೆ. ಪ್ರವಾಸಿಗರ ಸುರಕ್ಷತೆ ಮತ್ತು ಶಿಬಿರದ ವ್ಯವಸ್ಥಿತ ಕಾರ್ಯನಿರ್ವಹಣೆಯ ದೃಷ್ಟಿಯಿಂದ ಆಗಾಗ್ಗೆ ಇಂತಹ ತಾತ್ಕಾಲಿಕ ನಿರ್ಬಂಧಗಳನ್ನು ಹೇರಲಾಗುತ್ತದೆ. ಮಂಗಳವಾರದಂದು (ಮೇ 6) ನಡೆಯಲಿರುವ ವಿಶೇಷ ಕೆಲಸಗಳ ಕಾರಣದಿಂದಾಗಿ ಯಾರಿಗೂ ಒಳಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;img&gt;&lt;p&gt;ಕೊಡಗು ಜಿಲ್ಲೆಯು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಆಕರ್ಷಕ ಜಿಲ್ಲೆಯಾಗಿದ್ದು, ಬೇಸಿಗೆ ರಜೆಯ ಈ ಸಂದರ್ಭದಲ್ಲಿ ಸಾವಿರಾರು ಪ್ರವಾಸಿಗರು ದುಬಾರೆಗೆ ಆಗಮಿಸುತ್ತಾರೆ. ಕಾವೇರಿ ನದಿಯ ದಡದಲ್ಲಿರುವ ಈ ಶಿಬಿರದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು, ಆಹಾರ ನೀಡುವುದನ್ನು ವೀಕ್ಷಿಸಲು ಪ್ರವಾಸಿಗರು ಕಾತರರಾಗಿರುತ್ತಾರೆ.&amp;nbsp;&lt;/p&gt;&lt;p&gt;ಆದರೆ ಮೇ 6 ರಂದು ಶಿಬಿರಕ್ಕೆ ಬಂದರೆ ನಿರಾಶೆಯಿಂದ ವಾಪಸ್ ಹೋಗಬೇಕಾದ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ, ಪ್ರವಾಸಕ್ಕೆ ಹೊರಡುವ ಮುನ್ನ ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.&lt;/p&gt;&lt;img&gt;&lt;p&gt;ದುಬಾರೆ ಶಿಬಿರಕ್ಕೆ ಪ್ರವೇಶ ಇಲ್ಲದ ದಿನದಂದು ಪ್ರವಾಸಿಗರು ಕುಶಾಲನಗರದ ಸುತ್ತಮುತ್ತಲಿರುವ ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು:&lt;/p&gt;&lt;p&gt;ಬೈಲಕುಪ್ಪೆಯ ಗೋಲ್ಡನ್ ಟೆಂಪಲ್ (ಟಿಬೆಟಿಯನ್ ಕ್ಯಾಂಪ್).&lt;/p&gt;&lt;p&gt;ಕಾವೇರಿ ನಿಸರ್ಗಧಾಮ.&lt;/p&gt;&lt;p&gt;ಹಾರಂಗಿ ಜಲಾಶಯ.&lt;/p&gt;&lt;p&gt;ಮಡಿಕೇರಿಯ ಅಬ್ಬೆ ಫಾಲ್ಸ್ ಮತ್ತು ರಾಜಾ ಸೀಟ್.&lt;/p&gt;&lt;img&gt;&lt;p&gt;ದೂರದ ಊರುಗಳಿಂದ ಬರುವ ಪ್ರವಾಸಿಗರು ಅರಣ್ಯ ಇಲಾಖೆಯ ಈ ಆದೇಶವನ್ನು ಗಮನಿಸಿ ಸಹಕರಿಸಬೇಕು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿಗಳು ಕೋರಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/kodagu-dubare-elephant-camp-entry-restricted-may-6-tourist-alert-sat-uor4klo"/>
        </item>
        <item>
            <title><![CDATA[ರಸ್ತೆ ದುರಂತದಲ್ಲಿ ಮೃತ ಏಕೈಕ ಪುತ್ರನ ಕಣ್ಣು, ಕಿಡ್ನಿ ದಾನ ಮಾಡಿದ ಕೊಡಗಿನ ಪೋಷಕರು]]></title>
            <link>https://kannada.asianetnews.com/karnataka-districts/kodagu-somavarapet-parents-donate-eyes-kidneys-of-only-son-who-died-in-road-accident-mrq/articleshow-uz17gny</link>
            <guid isPermaLink="true">https://kannada.asianetnews.com/karnataka-districts/kodagu-somavarapet-parents-donate-eyes-kidneys-of-only-son-who-died-in-road-accident-mrq/articleshow-uz17gny</guid>
            <pubDate>Sat, 18 Apr 2026 23:31:33 +0530</pubDate>
            <description><![CDATA[ಸೋಮವಾರಪೇಟೆ ತಾಲೂಕಿನ ಬಾಲಕ ಹನ್ವಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಪುತ್ರನ ಮೆದುಳು ನಿಷ್ಕ್ರಿಯಗೊಂಡ ದುಃಖದ ನಡುವೆಯೂ, ಆತನ ಪೋಷಕರು ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡಿ ಇತರರ ಬಾಳಿಗೆ ಬೆಳಕಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpgvjxprv8tv0pmkmmm5psdw,imgname-kodagu--1776534779608.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು:&lt;/strong&gt; ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರ ತಾಲೂಕಿನ ಬಾಲಕ ರಸ್ತೆ ದುರಂತದಲ್ಲಿ ತೀವ್ರ ಗಾಯಗೊಂಡು ಮೃತಪಟ್ಟಿದ್ದು, ಪುತ್ರನ ಅಗಲುವಿಕೆಯ ದುಃಖದಲ್ಲೂ ಹೆತ್ತವರು ಆತನ ಕಣ್ಣು ಹಾಗೂ ಕಿಡ್ನಿಗಳನ್ನು ದಾನ ಮಾಡಿ ಇನ್ನೆರಡು ಜೀವಗಳನ್ನು ರಕ್ಷಿಸಿದ ಸಾರ್ಥಕತೆ ಹೊಂದಿದ್ದಾರೆ.&lt;/p&gt;&lt;p&gt;ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರ ಗ್ರಾಮದ ಕೃಷಿಕ ರಜಿತ್ ಮತ್ತು ರಮ್ಯಾ ದಂಪತಿಯ ಏಕೈಕ ಪುತ್ರ ಹನ್ವಿಕ್ ಮೃತಪಟ್ಟಿ ಬಾಲಕ.&lt;/p&gt;&lt;h2&gt;&lt;strong&gt;ಹನ್ವಿಕ್&zwnj;ಗೆ ಡಿಕ್ಕಿಯಾಗಿತ್ತು ಕಾರ್&lt;/strong&gt;&lt;/h2&gt;&lt;p&gt;ತಾಲೂಕಿನ ಯಡವನಾಡು ಜಂಕ್ಷನ್&zwnj;ನಲ್ಲಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.&lt;/p&gt;&lt;p&gt;ಮಗನ ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಆಘಾತದ ನಡುವೆ ದಂಪತಿಗಳು ತಮ್ಮ ಮಗನ ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡುವ ಮೂಲಕ ಇತರರ ಜೀವನಕ್ಕೆ ಬೆಳಕು ತಂದಿದ್ದಾರೆ. ಅಂಗಾಂಗ ದಾನ ಮಾಡುವ ಮೂಲಕ ಬಾಲಕ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.&lt;/p&gt;&lt;p&gt;ತಂದೆ, ತಾಯಿ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿರುವುದರಿಂದ ಹನ್ವಿಕ್ ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮದಲ್ಲಿ ತನ್ನ ತಾತ ಹರಗ ತಿಮ್ಮಯ್ಯ ಹಾಗೂ ಅಜ್ಜಿಯೊಂದಿಗೆ ವಾಸವಾಗಿದ್ದ. ಹತ್ತು ದಿನಗಳ ರಜೆಯಲ್ಲಿ ಚಿಕ್ಕಅಳುವಾರ ಗ್ರಾಮದ ತಂದೆ ಮನೆಯಲ್ಲಿ ಉಳಿದುಕೊಂಡಿದ್ದ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಕಣ್ಣುದಾನ ಮಾಡಿ ಮಗನ ಸಾವಿನಲ್ಲೂ ಸಾರ್ಥಕತೆ ಮರೆದ ಪೋಷಕರು&lt;/strong&gt;&lt;/p&gt;&lt;p&gt;ಕಳೆದ ಸೋಮವಾರ ಅಜ್ಜಿಯೊಂದಿಗೆ ಯಡವನಾಡು ಗ್ರಾಮಕ್ಕೆ ಬಸ್ಸಿಗೇರಿ ಯಡವನಾಡಿನ ಬಸ್ ತಂಗುದಾಣದಲ್ಲಿ ಇಳಿದ ನಂತರ ರಸ್ತೆ ದಾಟಲು ಯತ್ನಿಸಿದಾಗ, ಕುಶಾಲನಗರ ಕಡೆಯಿಂದ ವೇಗವಾಗಿ ಬಂದ ಕಾರೊಂದು ಬಾಲಕನಿಗೆ ಡಿಕ್ಕಿಯಾಗಿತ್ತು.&lt;/p&gt;&lt;p&gt;&amp;nbsp;&lt;/p&gt;&lt;p&gt;ಹುಣಸೂರು: ಪುತ್ರನ ಸಾವಿನಲ್ಲೂ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು#OrganDonate #Karnataka #Hunsur #Mysuru https://t.co/LGeX1HOSu6&lt;/p&gt;&lt;p&gt;&mdash; Asianet Suvarna News (@AsianetNewsSN) October 20, 2023&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹನ್ವಿಕ್ ಸಾವು&lt;/strong&gt;&lt;/h3&gt;&lt;p&gt;ಹನ್ವಿಕ್ ತಲೆಗೆ ಗಂಭೀರ ಗಾಯವಾಗಿ ತಕ್ಷಣವೇ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ನಾಲ್ಕು ದಿನಗಳ ಕಾಲ ವೈದ್ಯರು ಶಕ್ತಿಮೀರಿದ ಪ್ರಯತ್ನ ಮಾಡಿದರೂ, ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಹನ್ವಿಕ್ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾನೆ. ಶುಕ್ರವಾರ ಬಾಲಕನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ 10 ತಿಂಗಳ ಮಗುವಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಅಪಘಾತಕ್ಕೆ ಮೃತ 10 ತಿಂಗಳ ಮಗುವಿನ ಅಂಗಾಂಗ ದಾನ, ದೇಶದ ಅತಿಕಿರಿಯ ಅಂಗಾಂಗ ದಾನಿ ಹಿರಿಮೆ!#AlinSherinAbraham #OrganDonation #KeralaNews #IndiaYoungestDonor #Humanity #InspiringStory #HealthNewshttps://t.co/bC3JQ1QWUR&lt;/p&gt;&lt;p&gt;&mdash; Asianet Suvarna News (@AsianetNewsSN) February 13, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kodagu-somavarapet-parents-donate-eyes-kidneys-of-only-son-who-died-in-road-accident-mrq/articleshow-uz17gny"/>
        </item>
        <item>
            <title><![CDATA[ಮಡಿಕೇರಿ ಜೈಲಿನಲ್ಲಿ ನಿವೃತ್ತ ಅಧಿಕಾರಿ ಸಾವು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಕೇರ್ ಟೇಕರ್ ಮಹಿಳೆಯಿಂದಲೇ ಹನಿಟ್ರ್ಯಾಪ್ ಆರೋಪ!]]></title>
            <link>https://kannada.asianetnews.com/state/retired-officer-dies-in-kodagu-jail-family-blames-honeytrap-by-caretaker-woman/articleshow-wmpeg51</link>
            <guid isPermaLink="true">https://kannada.asianetnews.com/state/retired-officer-dies-in-kodagu-jail-family-blames-honeytrap-by-caretaker-woman/articleshow-wmpeg51</guid>
            <pubDate>Wed, 29 Apr 2026 17:04:26 +0530</pubDate>
            <description><![CDATA[&lt;p&gt;ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧಿತರಾಗಿದ್ದ ಕೊಡಗಿನ ವಿಚಾರಣಾಧೀನ ಕೈದಿ ಚಂಗಪ್ಪ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ. ಇದು ಕೇರ್ ಟೇಕರ್ ಮಹಿಳೆಯ ಬ್ಲಾಕ್&zwnj;ಮೇಲ್ ಮತ್ತು ವಕೀಲರೊಬ್ಬರ ಹಣಕಾಸು ವಂಚನೆಯಿಂದ ಮಾನಸಿಕ ಆಘಾತಕ್ಕೊಳಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಆರೋಪಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcfp72mw924wnr2br65d202,imgname-undertrial-prisoner-dies-in-madikeri-jail-1777461828691.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಜೈಲಿನಲ್ಲಿ ಕೈದಿ ಸಾವು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್&lt;/strong&gt;&lt;/h2&gt;&lt;p&gt;ಕೊಡಗು: 20 ದಿನಗಳ ಹಿಂದಷ್ಟೇ ಬಂಧಿಸಲ್ಪಟ್ಟು ಕೊಡಗು ಜಿಲ್ಲಾ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರು ಸಾವನ್ನಪ್ಪಿದ್ದು, ಕುಟುಂಬದವರಿಂದ ಹಲವು ಅರೋಪಗಳು ಕೇಳಿ ಬಂದಿವೆ. ಲೈಂಗಿಕ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಕೈದಿ ಚಂಗಪ್ಪ ಜೈಲು ಪಾಲಾಗಿದ್ದರು. ಆದರೆ ಮೊನ್ನೆ ಸಂಜೆ ಚಂಗಪ್ಪ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿದ್ದು, ಇಂದು ಸಾವನ್ನಪ್ಪಿದ್ದಾರೆ.&lt;/p&gt;&lt;p&gt;ನಿವೃತ್ತ ಕಾರ್ಮಿಕ ಅಧಿಕಾರಿ ಆಗಿದ್ದ ಚೆಂಗಪ್ಪ ವಿರುದ್ಧ ಸುಳ್ಳು ದೂರು ದಾಖಲಾಗಿತ್ತು. ಆದರೆ ಪೊಲೀಸರು ಈ ಬಗ್ಗೆ ಸರಿಯಾಗಿ ವಿಚಾರಣೆ ನಡೆಸದೇ ಚಂಗಪ್ಪ ಅವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಇದರಿಂದಲೇ ಮಾನಸಿಕ ಆಘಾತಗೊಂಡು ಚಂಗಪ್ಪ ಸಾವನ್ನಪ್ಪಿದ್ದಾರೆ ಎಂದು ಅವರ ಸೋದರ ಬೆಳ್ಳಿ ಪ್ರಕಾಶ್ ಆರೋಪಿಸಿದ್ದಾರೆ.&lt;/p&gt;&lt;h3&gt;&lt;strong&gt;ಕೇರ್ ಟೇಕರ್ ಮಹಿಳೆಯೇ ಹನಿಟ್ರ್ಯಾಪ್ ಮಾಡಿದಳೇ?&lt;/strong&gt;&lt;/h3&gt;&lt;p&gt;ಮೃತ ಚೆಂಗಪ್ಪ ಅವರಿಗೆ 68 ವರ್ಷ ವಯಸ್ಸಾಗಿತ್ತು. ಕುಶಾಲನಗರ ಪಟ್ಟಣದ ನಿವಾಸಿಯಾಗಿದ್ದ ಅವರು ಒಂಟಿಯಾಗಿ ವಾಸ ಮಾಡುತ್ತಿದ್ದರು. ಹೀಗಾಗಿ ಕಂಪೆನಿಯೊಂದರ ಮೂಲಕ ಮಹಿಳೆಯೊಬ್ಬಳನ್ನು ಕೇರ್ ಟೇಕರ್ ಆಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಆದರೆ ಅದೇ ಮಹಿಳೆ ಚಂಗಪ್ಪ ಅವರನ್ನು ಟ್ರ್ಯಾಪ್ ಮಾಡಿ ಬ್ಲಾಕ್&zwnj;ಮೇಲ್ ಮಾಡಿದ ಆರೋಪವನ್ನು ಈಗ ಚಂಗಪ್ಪ ಕುಟುಂಬದವರು ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಚೆಂಗಪ್ಪ ವಿರುದ್ಧ ಜಾತಿನಿಂದನೆ ಕೇಸ್ ದಾಖಲಿಸಿದ್ದ ಮಹಿಳೆ&lt;/strong&gt;&lt;/p&gt;&lt;p&gt;ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಜಾತಿನಿಂದನೆ ಆಗಿದೆ ಎಂದು ಈ ಕೇರ್ ಟೇಕರ್ ಮಹಿಳೆ ದೂರು ನೀಡಿದ್ದಳು. ಮಹಿಳೆಯ ದೂರು ಸ್ವೀಕರಿಸಿದ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು, ಚೆಂಗಪ್ಪ ಅವರನ್ನು ವಿಚಾರಣೆಗೆಂದು ಕರೆಸಿ ಬಂಧಿಸಿದ್ದರು. ವಿಚಾರಣೆಗೆಂದು ಹೋದ ಚೆಂಗಪ್ಪ ಮತ್ತೆ ಮನೆಗೆ ಬಂದಿಲ್ಲ, ಅವರನ್ನು ಪೊಲೀಸರು ಜೈಲಿಗೆ ಹಾಕಿದ್ದರು. ಆದರೆ ವಿಚಾರಣೆ ನಡೆಯುವ ಮೊದಲೇ ಚೆಂಗಪ್ಪ ಅವರು ಸಾವನ್ನಪ್ಪಿದ್ದಾರೆ.&lt;/p&gt;&lt;p&gt;ಕೇರ್ ಟೇಕರ್ ಮಹಿಳೆ ಸುಳ್ಳು ದೂರು ನೀಡಿದ್ದಳು, ಆಕೆಯ ಸುಳ್ಳು ದೂರನ್ನು ಪರಿಶೀಲಿಸದೆ ಪೊಲೀಸರು ಚೆಂಗಪ್ಪ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಅದೇ ಯೋಚನೆಯಲ್ಲಿ ನಮ್ಮ ಅಣ್ಣ ಮೃತಪಟ್ಟಿದ್ದಾರೆ ಎಂದು ಸಹೋದರ ಬೆಳ್ಳಿ ಪ್ರಕಾಶ್ ಆರೋಪಿಸಿದ್ದಾರೆ.&lt;/p&gt;&lt;p&gt;&lt;strong&gt;ಒಂಟಿ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪ&lt;/strong&gt;&lt;/p&gt;&lt;p&gt;ಮಹಿಳೆ ಇದೇ ರೀತಿ ಇತರ 8 ಜನರ ಮೇಲೆ ಈ ಹಿಂದೆ ಕೇಸ್ ಮಾಡಿದ್ದಾರೆ. ಈ ಮಹಿಳೆ ಒಂಟಿ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದಳು ಎನ್ನುವುದು ಗೊತ್ತಾಗಿದೆ. ಮತ್ತೊಂದೆಡೆ ಜಾಮೀನು ಕೊಡಿಸುವುದಾಗಿ ವಕೀಲರೊಬ್ಬರು ಚೆಂಗಪ್ಪ ಬಳಿ ಲಕ್ಷಾಂತರ ರೂ. ಹಣ ಪಡೆದು ದುರ್ಬಳಕೆ ಮಾಡಿದ್ದಾರೆ. ನಮ್ಮ ಅಣ್ಣನ ಮೊಬೈಲ್ ಹಾಗೂ ಅಕೌಂಟ್ ಇ ಪಿನ್ ಪಡೆದು ಲಕ್ಷಾಂತರ ರೂಪಾಯಿ ಹಣ ಡ್ರಾ ಮಾಡಿದ್ದಾರೆ. ಬಳಿಕ ಆದರೆ ಜಾಮೀನು ಕೊಡಿಸದೆ ಸುಮ್ಮನಾಗಿದ್ದಾರೆ. ನಮ್ಮ ಅಣ್ಣನ ಬ್ಯಾಂಕ್ ಖಾತೆಯಿಂದ ಹಣ ತೆಗೆದು ಬೈಕ್ ಖರೀದಿಸಿದ್ದಾರೆ. ಹಾಗೂ ತಮ್ಮ ಆಪ್ತರ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದೆಲ್ಲಾ ಗೊತ್ತಾದ ಮೇಲೆ ಬ್ಯಾಂಕಿಗೆ ಹೇಳಿ ಖಾತೆ ಪ್ರೀಜ್ ಮಾಡಿಸಿದ್ದೇವೆ ಎಂದು ಮೃತ ಚಂಗಪ್ಪ ಅವರ ಸೋದರ ಬೆಳ್ಳಿ ಪ್ರಕಾಶ್ ದೂರಿದ್ದಾರೆ. ಕುಟುಂಬದವರ ದೂರಿನಿಂದಾಗಿ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಟ್ರೇಡ್ ಲೈಸೆನ್ಸ್&zwnj; ನೀಡಲು ಲಂಚಕ್ಕೆ ಆಗ್ರಹಿಸಿ 3 ತಿಂಗಳಿಂದ ಸತಾಯಿಸಿದ್ದ SDA:ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾ ಬಲೆಗೆ&lt;/strong&gt;&lt;/p&gt;]]></content:encoded>
            <category>kodagu</category>
            <dc:creator>Anusha Kb</dc:creator>
            <atom:link href="https://kannada.asianetnews.com/state/retired-officer-dies-in-kodagu-jail-family-blames-honeytrap-by-caretaker-woman/articleshow-wmpeg51"/>
        </item>
        <item>
            <title><![CDATA[ಕೊಡಗಿನ ತೋರ ಗ್ರಾಮದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ’: ಎ.ಎಸ್.ಪೊನ್ನಣ್ಣ ಹೇಳೋದೇನು?]]></title>
            <link>https://kannada.asianetnews.com/karnataka-districts/as-ponnanna-kodagu-gowda-samaja-land-allocation-arebhashe-festival-gvd/articleshow-z5307m9</link>
            <guid isPermaLink="true">https://kannada.asianetnews.com/karnataka-districts/as-ponnanna-kodagu-gowda-samaja-land-allocation-arebhashe-festival-gvd/articleshow-z5307m9</guid>
            <pubDate>Wed, 13 May 2026 22:54:20 +0530</pubDate>
            <description><![CDATA[&lt;p&gt;ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ನಿಗದಿ ಮಾಡಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krh5gb7gyqh9xvhz92ermk8c,imgname-vjvj-1778692664560.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಮೇ.13):&lt;/strong&gt; ಮದೆನಾಡು ಬಳಿ ಕೊಡಗು ಗೌಡ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ 6 ಎಕರೆ ಭೂಮಿ ಕಾಯ್ದಿರಿಸಿದೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ನಿಗದಿ ಮಾಡಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಅರೆಭಾಷೆ, ಸಂಸ್ಕೃತಿ ಮತ್ತು ಅಭಿವೃದ್ಧಿ ಸಂಘ ಇವರ ಸಹಕಾರದಲ್ಲಿ ತೋರ ಸಮುದಾಯ ಭವನದ ಆವರಣದಲ್ಲಿ ಬುಧವಾರ ನಡೆದ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.&lt;/p&gt;&lt;p&gt;ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ 6 ಎಕರೆ ಭೂಮಿ ನೀಡಿದ್ದಾರೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ಪ್ರಕಟಿಸಿದ್ದರು. ಅದರಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ನುಡಿದಂತೆ ನಡೆದಿದ್ದು, ಸರ್ಕಾರ ಎಲ್ಲಾ ಸಮಾಜಗಳ ಶ್ರೇಯೋಭಿವೃದ್ಧಿಗೆ ಬದ್ಧವಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು.&lt;/p&gt;&lt;p&gt;ಗಡಿನಾಡ ಉತ್ಸವಗಳು, ಗ್ರಾಮೋತ್ಸವ ಕಾರ್ಯಕ್ರಮಗಳು ಹಳ್ಳಿಗಳಿಗೂ ತಲುಪಿದಾಗ ಅರೆಭಾಷೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ ಮತ್ತಷ್ಟು ಗಟ್ಟಿಗೊಳಿಸಲು ಅನುಕೂಲವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಒಂದೆಡೆ ಸೇರಲು ಕಾರ್ಯಕ್ರಮ ಅನುಕೂಲವಾಗಿದೆ ಎಂದು ಎ.ಎಸ್.ಪೊನ್ನಣ್ಣ ನುಡಿದರು. ಯಾವುದೇ ಒಂದು ಭಾಷೆಗೆ ಗಡಿ ಇಲ್ಲ. ಭಾಷೆಯನ್ನು ಮತ್ತಷ್ಟು ವಿಸ್ತರಿಸಿ ಬೆಳೆಸುವಲ್ಲಿ ಶ್ರಮಿಸಬೇಕು. ಆ ನಿಟ್ಟಿನಲ್ಲಿ ಕುಟುಂಬದಿಂದಲೇ ಭಾಷೆ ಬೆಳವಣಿಗೆಗೆ ಪ್ರಯತ್ನಗಳು ನಡೆಯಬೇಕು. ಭಾಷೆ ಉಳಿದರೆ ಜನಾಂಗ ಉಳಿಯುತ್ತದೆ ಎಂಬುದನ್ನು ಮರೆಯಬಾರದು ಎಂದರು.&lt;/p&gt;&lt;p&gt;ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಟಿ.ಎಂ.ಧರ್ಮಜ ಉತ್ತಪ್ಪ ಅವರು ಮಾತನಾಡಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹಲವು ವಿಭಿನ್ನ ಹಾಗೂ ವಿಶಿಷ್ಟ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದು ಅಕಾಡೆಮಿ ಕಾರ್ಯ ಚಟುವಟಿಕೆಗಳನ್ನು ತಿಳಿಸಲು ಸಹಕಾರಿಯಾಗಿದೆ. ಇದರಿಂದ ಸಾಹಿತ್ಯ ಬೆಳವಣಿಗೆಗೆ ಅನುಕೂಲವಾಗಿದೆ ಎಂದು ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ ಅಕಾಡೆಮಿ ವತಿಯಿಂದ ಸುಳ್ಯ ತಾಲ್ಲೂಕಿನ ಬಂದ್ಯಡ್ಕ, ಮಂಡೆಕೋಲು, ಮಡಿಕೇರಿ ತಾಲ್ಲೂಕಿನ ಚೆಯ್ಯಂಡಾಣಿ, ಸೇರಿದಂತೆ ವಿವಿಧ ಕಡೆಗಳಲ್ಲಿ ಗಡಿನಾಡ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.&lt;/p&gt;&lt;p&gt;ಹಾಗೆಯೇ ವಿವಿಧ ಕಡೆಗಳಲ್ಲಿ ಗ್ರಾಮೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಕಾಡೆಮಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸಲು ಶ್ರಮಿಸಲಾಗಿದೆ ಎಂದರು. ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಜಾನಪದ ಕಲೆಗಳು ಮತ್ತಿತರ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಲಾಗುತ್ತದೆ. ಅರೆಭಾಷೆ ಸಾಂಸ್ಕೃತಿಕ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಹಾಗೆಯೇ ಸಾಹಿತ್ಯ ಚಟುವಟಿಕೆಗಳನ್ನು ಬಲಪಡಿಸುವಲ್ಲಿ ಅರೆಭಾಷೆ ಪುಸ್ತಕಗಳನ್ನು ಪ್ರಕಟಿಸಲಾಗುತ್ತದೆ ಎಂದು ಸದಾನಂದ ಮಾವಜಿ ಅವರು ವಿವರಿಸಿದರು. ಅರೆಭಾಷೆ ಜಾತಿಯನ್ನು ಮೀರಿ ಬೆಳೆದಿದ್ದು, ರಾಜ್ಯ ಭಾಷೆಯಾಗಿದೆ.&lt;/p&gt;&lt;p&gt;2025 ರಲ್ಲಿ ಗಡಿನಾಡ ಉತ್ಸವ ಆರಂಭಿಸಿ ಹಲವು ಸಾಂಸ್ಕೃತಿಕ ಶಿಬಿರ ಏರ್ಪಡಿಸಲಾಗಿದೆ ಎಂದರು. ಅರೆಭಾಷೆಯನ್ನು ಎಲ್ಲೆಡೆ ಫಸರಿಸುವಲ್ಲಿ ಕತೆ, ಕವನ, ಸಣ್ಣ ಕತೆಗಳು, ಬರಹ, ಪ್ರೋತ್ಸಾಹಿಸುವಲ್ಲಿ ತ್ರೈಮಾಸಿಕ &lsquo;ಹಿಂಗಾರ&rsquo;ವನ್ನು ಪ್ರಕಟಿಸಲಾಗುತ್ತಿದ್ದು, ಈ ಅವಕಾಶವನ್ನು ಅರೆಭಾಷಿಕರು ಬಳಸಿಕೊಳ್ಳಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಕೋರಿದರು. ಕೆದಮುಳ್ಳೂರು ಗ್ರಾಮದ ಅರೆಭಾಷೆ ಸಂಸ್ಕೃತಿ ಮತ್ತು ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪೊಕ್ಕುಳಂಡ್ರ ಎಸ್.ದಿನೇಶ್ ಅವರು ಮಾತನಾಡಿ ತೋರ ಗ್ರಾಮದ ಸುತ್ತಮುತ್ತ ಅರೆಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದು, ಅರೆಭಾಷಿಕರ ಭವನ ನಿರ್ಮಾಣಕ್ಕೆ ಜಾಗ ಒದಗಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು.&lt;/p&gt;&lt;h2&gt;&lt;strong&gt;ಪದ್ಧತಿಯು ವಿಶಿಷ್ಟ&lt;/strong&gt;&lt;/h2&gt;&lt;p&gt;ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷರಾದ ಮುಕ್ಕಾಟಿ ವಾಸು ಗಣಪತಿ ಅವರು ಮಾತನಾಡಿ ಅಕಾಡೆಮಿ ಆರಂಭದ ನಂತರ ಅರೆಭಾಷೆ ಬೆಳವಣಿಗೆಗೆ ಹೆಚ್ಚಿನ ಸಹಕಾರ ಆಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಬೇಕು ಎಂದು ಸಲಹೆ ಮಾಡಿದರು. ಮಡಿಕೇರಿ ಕೊಡಗು ಗೌಡ ಸಮಾಜದ ನಿರ್ದೇಶಕರಾದ ತೋಟಂಬೈಲು ಕುಮಾರ ಅವರು ಮಾತನಾಡಿ ಅರೆಭಾಷಿಕರಲ್ಲಿ ಮದುವೆ ಪದ್ಧತಿಯು ವಿಶಿಷ್ಟವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಆದರೆ ಮದುವೆ ಪದ್ಧತಿಯನ್ನು ಹಿಂದಿನಂತೆ ನಡೆಸಿಕೊಂಡು ಹೋಗುವಂತಾಗಬೇಕು ಎಂದು ಸಲಹೆ ಮಾಡಿದರು.&lt;/p&gt;&lt;p&gt;ಕೆದಮುಳ್ಳೂರು ಗ್ರಾಮದ ಜಾನಪದ ವಿಭಾಗದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕುಡಿಯರ ಬಿ.ಅಮ್ಮುಣಿ, ಹಿರಿಯರಾದ ಪೊಕ್ಕುಳಂಡ್ರ ಕೆ.ಪಾಪಯ್ಯ, ತೋಟಂಬೈಲು ರಾಜು(ಪೆಮ್ಮಯ್ಯ) ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ನರಿಯಂದಡ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷರಾದ ಬೊಳಿಯಂಡ್ರ ಹರಿಪ್ರಸಾದ್, ಅಕಾಡೆಮಿ ಸದಸ್ಯರಾದ ಪೂಳಕಂಡ ಸಂದೀಪ್ ಎಂ., ತೇಜಕುಮಾರ್ ಕುಡೆಕಲ್ಲು, ಡಾ.ಎನ್.ಎ.ಜ್ಞಾನೇಶ್, ಲತಾ ಪ್ರಸಾದ್ ಕುದ್ಪಾಜೆ, ಕುದುಪಜೆ ಕೆ.ಪ್ರಕಾಶ್ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಇದ್ದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/as-ponnanna-kodagu-gowda-samaja-land-allocation-arebhashe-festival-gvd/articleshow-z5307m9"/>
        </item>
    </channel>
</rss>
