<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 10 Sep 2026 15:27:29 +0530</lastBuildDate>
        <atom:link href="https://kannada.asianetnews.com/rss/kodagu" rel="self" type="application/rss+xml"/>
        <item>
            <title><![CDATA[ರಾಜ್ಯದಲ್ಲಿ ಮಳೆ ತೀವ್ರ ಕೊರತೆ ಹಿನ್ನೆಲೆ, ಮಳೆಗಾಗಿ ದೇವರ ಮೊರೆ ಹೋದ ರಾಜ್ಯ ಸರ್ಕಾರ]]></title>
            <link>https://kannada.asianetnews.com/karnataka-districts/cm-dk-shivakumar-instructions-special-prayers-and-rudrabhisheka-to-rain-deity-lord-igguthappa-of-paadi-in-kodagu-sns/articleshow-53g4l06</link>
            <guid isPermaLink="true">https://kannada.asianetnews.com/karnataka-districts/cm-dk-shivakumar-instructions-special-prayers-and-rudrabhisheka-to-rain-deity-lord-igguthappa-of-paadi-in-kodagu-sns/articleshow-53g4l06</guid>
            <pubDate>Sun, 23 Aug 2026 11:03:14 +0530</pubDate>
            <description><![CDATA[ರಾಜ್ಯದಲ್ಲಿನ ಮಳೆಯ ತೀವ್ರ ಕೊರತೆ ಮತ್ತು ತಮಿಳುನಾಡಿಗೆ ನೀರು ಹರಿಸುವ ಒತ್ತಡದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಮಳೆಗಾಗಿ ಕೊಡಗಿನ ಪಾಡಿ ಶ್ರೀ ಇಗ್ಗುತ್ತಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದೆ. ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ನಡೆದ ರುದ್ರಾಭಿಷೇಕದಲ್ಲಿ, ನಾಡಿನಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿ ಸಮೃದ್ಧಿಯಾಗಲೆಂದು ಪ್ರಾರ್ಥಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m0phn8hk0x4c5360ztcykw48,imgname-kodagu-rains-1787463115315.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು:&lt;/strong&gt; ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಇರುವುದು ಒಂದೆಡೆಯಾದರೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಮಿಳನಾಡಿಗೆ ನಿತ್ಯ ನೀರು ಹರಿಸಬೇಕಾಗಿರುವ ಸಂದಿಗ್ಧ ಪರಿಸ್ಥಿತಿ ಮತ್ತೊಂದೆಡೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಳೆಗಾಗಿ ದೇವರ ಮೊರೆ ಹೋಗಿದೆ. ಮಳೆ ದೇವರೆಂದೇ ಖ್ಯಾತಿಯಾಗಿರುವ ಕೊಡಗಿನ ಕುಲದೇವರು ಪಾಡಿ ಈಶ್ವರ ಇಗ್ಗುತಪ್ಪ ದೇವರ ಮೊರೆ ಹೋಗಿದೆ.&lt;/p&gt;&lt;h2&gt;ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ಸರ್ಕಾರದ ಮಹಾಪ್ರಾರ್ಥನೆ!&lt;/h2&gt;&lt;p&gt;ಸಿಎಂ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ ಮಳೆದೇವರು ಪಾಡಿ ಈಶ್ವರ ಇಗ್ಗುತ್ತಪ್ಪ ದೇವರಿಗೆ ಇಂದು ಕೃಷಿ ಸಚಿವ ನರೇಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ ಆರು ಗಂಟೆಗೆ ವಿರಾಜಪೇಟೆ ತಾಲ್ಲೂಕಿನಲ್ಲಿರುವ ಮಲ್ಮ ಬೆಟ್ಟದಲ್ಲಿ ನೆಲೆಸಿರುವ ಪಾಡಿ ಈಶ್ವರ ಇಗ್ಗುತ್ತಪ್ಪ ದೇವಾಲಯಕ್ಕೆ ಆಗಮಿಸಿದ ಕೊಡಗು ಉಸ್ತುವಾರಿ ಸಚಿವರೂ ಆಗಿರುವ ಪಿ.ಎಂ. ನರೇಂದ್ರಸ್ವಾಮಿ ಅವರು ಸಿಎಂ ರಾಜಕೀಯ ಕಾರ್ಯದರ್ಶಿಯೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ಗೌಡರೊಂದಿಗೆ ಆಗಮಿಸಿ ದೇವಾಲಯದ ಪ್ರದಕ್ಷಿಣೆ ಹಾಕಿದರು.&lt;/p&gt;&lt;p&gt;ಬಳಿಕ ಅರ್ಚಕ ಕುಶಾಲ್ ಭಟ್ ಅವರು ರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದರು. ನಾಡಿನಾದ್ಯಂತ ಹೆಚ್ಚಿನ ಮಳೆಯಿಂದ ಜಲಾಶಯಗಳು ಭರ್ತಿಯಾಗಿ, ಅಧಿಕ ಬೆಳೆಯಾಗಿ ಎಲ್ಲರಲ್ಲಿಯೂ ಸಮೃದ್ಧಿ, ಸಂತಸ ತರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ವತಿಯಿಂದ ಹೆಚ್ಚಿನ ಮಳೆಗಾಗಿ ಪುಣ್ಯಕ್ಷೇತ್ರ ಪಾಡಿ ಶ್ರೀ ಈಶ್ವರ ಇಗ್ಗುತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಲಾಗಿದೆ. ತಾಯಿ ಕಾವೇರಿ ಹಾಗೂ ಪಾಡಿ ಶ್ರೀ ಇಗ್ಗುತಪ್ಪ ಪುಣ್ಯಭೂಮಿಯಲ್ಲಿ ಹೆಚ್ಚಿನ ಮಳೆಯಾದಲ್ಲಿ ನಾಡಿನ ಜಲಾಶಯಗಳು ಭರ್ತಿಯಾಗಿ, ಉತ್ತಮ ಬೆಳೆ ಜತೆಗೆ, ಕುಡಿಯಲು ನೀರು ಸಿಗಲಿದೆ. ಹೀಗಾಗಿ ಕಾವೇರಿ ಮತ್ತು ಇಗ್ಗುತಪ್ಪ ನಾಡಿನಲ್ಲಿ ಮುಂದಿನ ದಿನಗಳಲ್ಲಿಯಾದರೂ ಹೆಚ್ಚಿನ ಮಳೆಯಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.&lt;/p&gt;&lt;h2&gt;ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಅಗತ್ಯ&lt;/h2&gt;&lt;p&gt;ನಾಡಿನ ಎಲ್ಲೆಡೆ ಮಳೆ ಸುರಿದು, ಜನ-ಜಾನುವಾರುಗಳಿಗೆ ಕುಡಿಯಲು ನೀರು, ಬೆಳೆ ಮತ್ತು ಮೇವು ದೊರೆಯುವಂತಾಗಿ ಸುಭಿಕ್ಷೆ ತರುವಂತಾಗಲಿ. ಕಾವೇರಿ ನದಿ ಪಾತ್ರದಲ್ಲಿ ಸರಾಸರಿ ಮಳೆ ಆಗುವುದರಿಂದ ಅಂತರಾಜ್ಯ ಜಲ ವಿವಾದಗಳು ಇತ್ಯರ್ಥವಾಗಿ, ಶೇ.90 ರಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.&lt;/p&gt;&lt;p&gt;ಸರ್ಕಾರ ಎಲ್ಲರ ವಿಶ್ವಾಸ ಗಳಿಸಿ, ನಂಬಿಕೆಯಿಂದ ಕಾರ್ಯ ನಿರ್ವಹಿಸುವಲ್ಲಿ ಶುಭ ಹೆಜ್ಜೆ ಇಟ್ಟಿದೆ. ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಅಗತ್ಯ. ಆ ದಿಸೆಯಲ್ಲಿ ದೇವರಲ್ಲಿ ಹೆಚ್ಚಿನ ಮಳೆಗಾಗಿ ಪ್ರಾರ್ಥಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಭಕ್ತ ಜನ ಸಮಿತಿ ಅಧ್ಯಕ್ಷರಾದ ಪರದಂಡ ಸುಮನ್ ಸುಬ್ರಮಣಿ ಅವರು ಮುಂದೆ ನಿಂತು ದೇವರ ವಿವಿಧ ಪೂಜಾ ಕೈಂಕರ್ಯಗಳ ನೆರವೇರಿಸಿದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಇದ್ದರು. &lt;strong&gt;(ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)&amp;nbsp;&lt;/strong&gt;&lt;/p&gt;]]></content:encoded>
            <category>kodagu</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/cm-dk-shivakumar-instructions-special-prayers-and-rudrabhisheka-to-rain-deity-lord-igguthappa-of-paadi-in-kodagu-sns/articleshow-53g4l06"/>
        </item>
        <item>
            <title><![CDATA[Teacher's Day Special: ಸರ್ಕಾರಿ ಶಾಲೆಗೆ ಎಐ, ಇಂಟರ್‌ನೆಟ್ ಎಲ್ಲ ಅಳವಡಿಸಿ ಹೈಟೆಕ್ ಸ್ಪರ್ಶ ನೀಡಿದ ಶಿಕ್ಷಕ!]]></title>
            <link>https://kannada.asianetnews.com/education/teachers-day-2026-model-school-developed-by-hk-kumar-headmaster-of-gonikoppa-karnataka-public-school/articleshow-6gs9end</link>
            <guid isPermaLink="true">https://kannada.asianetnews.com/education/teachers-day-2026-model-school-developed-by-hk-kumar-headmaster-of-gonikoppa-karnataka-public-school/articleshow-6gs9end</guid>
            <pubDate>Sat, 05 Sep 2026 07:35:41 +0530</pubDate>
            <description><![CDATA[&lt;p&gt;ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಎಚ್&zwnj;ಕೆ ಕುಮಾರ್, ದಾನಿಗಳ ನೆರವಿನಿಂದ ದುಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆ ಹೈಟೆಕ್ ಶಾಲೆಯಾಗಿ ಪರಿವರ್ತಿಸಿದ್ದಾರೆ. ಶಾಲೆ ಬಿಟ್ಟ ಮಕ್ಕಳು ಮರಳಿ ಶಿಕ್ಷಣದತ್ತ ಮುಖ ಮಾಡಿದ್ದು, ಶಾಲೆಯು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಅಭಿವೃದ್ಧಿಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1qmvb4x1k0pgb074pg1wv16,imgname-teachers-day-special-1788573756573.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಘ್ನೇಶ್ ಎಂ. ಭೂತನಕಾಡು&lt;/strong&gt;&lt;/p&gt;&lt;p&gt;ಮಡಿಕೇರಿ (ಸೆ.5) : ಶಾಲೆ ಸರಿಯಿಲ್ಲ, ಮಕ್ಕಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ ಅಂತಾ ಬಹಳಷ್ಟು ಶಿಕ್ಷಕರ ದೂರು. ಅದ್ಯಾವುದೂ ಇಲ್ಲದೆ ಇದ್ದಾಗಲೂ ಯಾವುದೇ ದೂರು ಹೇಳದೆ ಸಮಚಿತ್ತದಿಂದ ಕಾರ್ಯನಿರ್ವಹಿಸಿದ ಏನೆಂದರೂ ಏನೂ ಇಲ್ಲದ ಒಂದು ಸರ್ಕಾರಿ ಶಾಲೆಯನ್ನ ದಾನಿಗಳ ಸಹಕಾರ ಪಡೆದು ಖಾಸಗಿ ಶಾಲೆಗೆ ಪೈಪೋಟಿ ಕೊಡುವಂತೆ ಹೈಟೆಕ್ ಸ್ಪರ್ಶ ನೀಡಿ ಅಭಿವೃದ್ಧಿ ಮಾಡಿ ತೋರಿಸಿದ್ದಾರೆ. ಆ ಮೂಲಕ ಸರ್ಕಾರಿ ಶಾಲೆಯನ್ನ ಹೀಗೂ ಅಭಿವೃದ್ಧಿಪಡಿಸಹುದು ಎಂಬುದನ್ನ ಶಿಕ್ಷಕ ಎಚ್&zwnj;ಕೆ ಕುಮಾರ್ ತೋರಿಸಿದ್ದಾರೆ.&lt;/p&gt;&lt;h2&gt;ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆಗೆ&lt;/h2&gt;&lt;p&gt;ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕರಾಗಿರುವ ಹೆಚ್&zwnj;ಕೆ ಕುಮಾರ್ ಶಾಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಮಕ್ಕಳ ಶಿಕ್ಷಣದ ಉನ್ನತೀಕರಣಕ್ಕೆ ಶ್ರಮಿಸುತ್ತಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾಯಕದಲ್ಲಿ ತೊಡಗಿದ್ದಾರೆ. ತಾನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯ ಭೌತಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ತನ್ನದೇ ಆದ ಛಾಪು ಮೂಡಿಸಿ ತನ್ನನ್ನು ತಾನು ತೊಡಗಿಸಿಕೊಂಡು ಹಲವಾರು ವರ್ಷಗಳಿಂದ ತಾನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗಳಲ್ಲಿ ಹೊಸ ಬದಲಾವಣೆ ತಂದು ಅಭಿವೃದ್ಧಿಪಡಿಸಿದ್ದಾರೆ.&lt;/p&gt;&lt;h3&gt;ಶಾಲಾ ಕೊಠಡಿಗಳಿಗೆ ಹೈಟೆಕ್ ಸ್ಪರ್ಶ&lt;/h3&gt;&lt;p&gt;ಮಕ್ಕಳಿಗೆ ಖಾಸಗಿ ಶಾಲೆಯಂತೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸುರಕ್ಷಿತ, ಶಿಸ್ತಬದ್ಧ ಹಾಗೂ ಆರೋಗ್ಯಪೂರ್ಣ ವಾತಾವರಣ ಒದಗಿಸುತ್ತಿದ್ದಾರೆ. ಶಾಲಾ ವಾತಾವರಣ, ತರಗತಿ ಕೊಠಡಿಗಳು ಆಕರ್ಷಣೀಯವಾಗಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಮಾಡಿದ್ದಾರೆ. ಶಾಲೆಯಲ್ಲಿ ಸುಂದರ ಪಾರ್ಕ್, ಸ್ಮಾರ್ಟ್ ಕೊಠಡಿಗಳು, ಇಂಟರ್ ನೆಟ್, ಸಿಸಿ, ಕ್ಯಾಮೆರಾ, ಶುದ್ಧ ಕುಡಿಯವ ನೀರು, ಟೈಲ್ಸ್ ಅಳವಡಿಕೆ ಹೀಗೆ ಹಲವು ಕೆಲಸಗಳನ್ನು ಮಾಡಿ ಸರ್ಕಾರಿ ಶಾಲೆಯನ್ನು ಚೆಂದಗಾಣಿಸಿದ್ದಾರೆ.&lt;/p&gt;&lt;h3&gt;ಮಕ್ಕಳ ಓದಿಗೆ ಪೂರಕ ವಾತಾವರಣ&lt;/h3&gt;&lt;p&gt;ಕಳೆದ ಬಾರಿ ನಡೆದ ಶತಮಾನೋತ್ಸವ ಸಂಭ್ರಮವನ್ನು ಅತ್ಯುತ್ತಮವಾಗಿ ಆಯೋಜಿಸುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆಯಲಾಗಿತ್ತು. ಶಾಲೆಯಲ್ಲಿ, ಸಮಸ್ಯೆಯಾಗಿ ಕಾಡುತ್ತಿದ್ದ ಕುಡಿಯುವ ನೀರು, ಶುಚಿತ್ವ, ಕೊಠಡಿಗಳ ನವೀಕರಣ ಸೇರಿದಂತೆ ಹಲವಾರು ಕಾರ್ಯ ಯೋಜನೆಗಳನ್ನ ರೂಪಿಸುವ ಮೂಲಕ ಸರ್ಕಾರಿ ಶಾಲೆಯ ಮಕ್ಕಳ ಓದಿಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಕುಮಾರ್ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ.&lt;/p&gt;&lt;h3&gt;ಬೀದಿಯಲ್ಲಿ ಅಲೆಯುತ್ತಿದ್ದ ಮಕ್ಕಳು ಮತ್ತೆ ಶಾಲೆಗೆ&lt;/h3&gt;&lt;p&gt;ಸೋಮವಾರಪೇಟೆ ತಾಲೂಕಿನ ಹರಗ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1991ರಲ್ಲಿ ವೃತ್ತಿ ಜೀವನ ಆರಂಭಿಸಿದ ಕುಮಾರ್ ಅವರು ಕಾಡು ಬೆಳೆದು ಮುಚ್ಚಿ ಹೋಗಿದ್ದ ಶಾಲೆಯ ಮೈದಾನವನ್ನು ದಾನಿಗಳ ಸಹಕಾರ ಮತ್ತು ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದರು. ಊರಿನ ದಾನಿಗಳ ನೆರವಿನೊಂದಿಗೆ ಶಾಲೆಯ ಗೇಟ್ ನಿರ್ಮಿಸಿ ಶಾಲಾ ಕಟ್ಟಡಕ್ಕೆ ಭದ್ರತೆ ಒದಗಿಸಿಕೊಟ್ಟರು.ಕಿರಂಗದೂರು, ಕೂಡುಮಂಗಳೂರು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸಿದರು. ಕೂಡಿಗೆ ಸರ್ಕಾರಿ ಶಾಲೆಗೆ ಬಂದ ಮೇಲೆ ಶಾಲೆಬಿಟ್ಟು ಬೀದಿಯಲ್ಲಿ ಅಲೆಯುತ್ತಿದ್ದ ಮಕ್ಕಳನ್ನು ಮನ ಒಲಿಸಿ ಮರಳಿ ಶಾಲೆಗೆ ಸೇರಿಸುವಲ್ಲಿ ಸಫಲರಾದರು.&lt;/p&gt;&lt;p&gt;ಗೋಣಿಕೊಪ್ಪಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ 2022ರಲ್ಲಿ ವರ್ಗಾವಣೆಗೊಂಡಾಗ ಶಾಲೆ ತೀರ ದುಸ್ಥಿತಿಗೆ ತಲುಪಿತ್ತು. ಕೇವಲ 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇಲಾಖೆ ಮತ್ತು ಸಾರ್ವಜನಿಕರ ಸಹಬಾಗಿತ್ವದಲ್ಲಿ ಈ ಕಟ್ಟಡಕ್ಕೆ ಹೊಸ ಕಾಯಕಲ್ಪ ಕಲ್ಪಿಸಿದರು. ಇದರ ಫಲವಾಗಿ ಶಾಲೆಯಲ್ಲಿ ಈಗ 350ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Ravi Janekal</dc:creator>
            <atom:link href="https://kannada.asianetnews.com/education/teachers-day-2026-model-school-developed-by-hk-kumar-headmaster-of-gonikoppa-karnataka-public-school/articleshow-6gs9end"/>
        </item>
        <item>
            <title><![CDATA[Mohammed Nalapad Wedding: ಕೊಡಗಿನಲ್ಲಿ ಮೊಹಮ್ಮದ್ ನಲಪಾಡ್ ಎರಡನೇ ಮದುವೆ; ಕಾಂಗ್ರೆಸ್ ನಾಯಕನ ಪುತ್ರಿ ಜೊತೆ ಅದ್ದೂರಿ ನಿಕಾಹ್‌!]]></title>
            <link>https://kannada.asianetnews.com/karnataka-districts/mohammed-nalapad-s-second-wedding-in-kodagu-when-where-who-s-attending-rav/articleshow-86pbquo</link>
            <guid isPermaLink="true">https://kannada.asianetnews.com/karnataka-districts/mohammed-nalapad-s-second-wedding-in-kodagu-when-where-who-s-attending-rav/articleshow-86pbquo</guid>
            <pubDate>Sat, 15 Aug 2026 05:43:17 +0530</pubDate>
            <description><![CDATA[&lt;p&gt;Mohammed Nalapad s Second Wedding in Kodagu ಯುವ ಕಾಂಗ್ರೆಸ್&zwnj; ಮಾಜಿ ಅಧ್ಯಕ್ಷ ಮೊಹಮ್ಮದ್&zwnj; ನಲಪಾಡ್&zwnj; ಅವರು ಕೊಡಗಿನ ಪ್ರತಿಷ್ಠಿತ ರೆಸಾರ್ಟ್&zwnj;ನಲ್ಲಿ ಎರಡನೇ ವಿವಾಹವಾಗಲಿದ್ದಾರೆ. ಆಗಸ್ಟ್&zwnj; 16ರಿಂದ 20ರವರೆಗೆ ನಡೆಯಲಿದೆ. ಮದುವೆ ದಿನಾಂಕ, ಸ್ಥಳ ಹಾಗೂ ಗಣ್ಯರ ಪಟ್ಟಿ ಇಲ್ಲಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01c6s6h7cajxdbetc7zfbh0,imgname-----------------------2026-08-15t054218.099-1786752754897.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಮಡಿಕೇರಿ (ಆ.15): &lt;/strong&gt;ರಾಜ್ಯ ಯುವ ಕಾಂಗ್ರೆಸ್&zwnj; ಮಾಜಿ ಅಧ್ಯಕ್ಷ ಮೊಹಮ್ಮದ್&zwnj; ನಲಪಾಡ್&zwnj;(Mohammad Nalapad) ಅವರ ಎರಡನೇ ವಿವಾಹ ಕೊಡಗಿನ ಪ್ರತಿಷ್ಠಿತ ರೆಸಾರ್ಟ್&zwnj;ನಲ್ಲಿ ನಡೆಯಲಿದೆ. ಆಗಸ್ಟ್&zwnj; 16ರಿಂದ 20ರವರೆಗೆ ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ.ಜಾನ್&zwnj; ಕುಟುಂಬಸ್ಥರ ಒಡೆತನದ ರೆಸಾರ್ಟ್&zwnj;ನಲ್ಲಿ ಮದುವೆ ನಡೆಯಲಿದೆ.&lt;/p&gt;&lt;h2&gt;ನಲಪಾಡ್ ಮದುವೆಗೆ ಯಾರಾರು ಆಗಮನ?&lt;/h2&gt;&lt;p&gt;16ರಂದು ಮಧ್ಯಾಹ್ನ 12 ಗಂಟೆಗೆ ನಿಕಾಹ್&zwnj; ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;, ಕೇರಳ ಮುಖ್ಯಮಂತ್ರಿ ಸತೀಶನ್&zwnj;, ನಟರಾದ ಸುದೀಪ್&zwnj;, ಯಶ್&zwnj; ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.&lt;/p&gt;&lt;h3&gt;ಮೊಹಮ್ಮದ್ ನಲಪಾಡ್ ಮದುವೆ ಆಗ್ತಿರೋ ವಧು ಯಾರು?&lt;/h3&gt;&lt;p&gt;ಮೊಹಮ್ಮದ್&zwnj; ನಲಪಾಡ್&zwnj;, ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್&zwnj;.ಎ.ಹ್ಯಾರಿಸ್&zwnj; ಅವರ ಪುತ್ರ. ಕೊಡಗು ಜಿಲ್ಲಾ ಕಾಂಗ್ರೆಸ್&zwnj; ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್&zwnj;.ಐ.ಮುನೀರ್&zwnj; ಅಹಮ್ಮದ್&zwnj; ಅವರ ಮೂರನೇ ಪುತ್ರಿ ಮಲಿಹಾ ಫಾತಿಮಾ ಅವರನ್ನು ನಲಪಾಡ್&zwnj; ವಿವಾಹವಾಗಲಿದ್ದಾರೆ.&lt;/p&gt;&lt;p&gt;16ರಂದು ನಡೆಯಲಿರುವ ನಿಕಾಹ್&zwnj; ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳ ಸದಸ್ಯರು ಹಾಗೂ ಕೆಲವೇ ಕೆಲವು ಆಹ್ವಾನಿತ ಗಣ್ಯರು ಭಾಗವಹಿಸಲಿದ್ದಾರೆ. 17ರಂದು ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೂ ಎರಡೂ ಕುಟುಂಬಗಳ ಸದಸ್ಯರು ಹಾಗೂ ಆಹ್ವಾನಿತರಿಗೆ ಮಾತ್ರ ಅವಕಾಶ ಇರಲಿದೆ. ಐದು ದಿನಗಳ ಮದುವೆ ಸಂಭ್ರಮಕ್ಕಾಗಿ ನಲಪಾಡ್&zwnj; ಮತ್ತು ಮಲಿಹಾ ಫಾತಿಮಾ ಅವರ ಕುಟುಂಬಸ್ಥರು ರೆಸಾರ್ಟ್&zwnj;ನಲ್ಲಿ ತಂಗಲಿದ್ದು, ಈ ಅವಧಿಗೆ 104 ಕೊಠಡಿಗಳನ್ನು ಬುಕ್&zwnj; ಮಾಡಲಾಗಿದೆ.&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mohammed-nalapad-s-second-wedding-in-kodagu-when-where-who-s-attending-rav/articleshow-86pbquo"/>
        </item>
        <item>
            <title><![CDATA[ಅಯ್ಯಯ್ಯೋ.. ಕೊಡಗಿನಲ್ಲಿ ಆಘಾತಕಾರಿ ಘಟನೆ: ತಾಯಿಯ ಅಕ್ರಮ ಸಂಬಂಧಕ್ಕೆ ಮಗು ಬಲಿ]]></title>
            <link>https://kannada.asianetnews.com/crime/kodagu-crime-four-year-old-boy-charan-dies-after-assault-in-virajpet-gvd/articleshow-8si36kh</link>
            <guid isPermaLink="true">https://kannada.asianetnews.com/crime/kodagu-crime-four-year-old-boy-charan-dies-after-assault-in-virajpet-gvd/articleshow-8si36kh</guid>
            <pubDate>Fri, 14 Aug 2026 18:21:45 +0530</pubDate>
            <description><![CDATA[&lt;p&gt;ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0057f25jdv3zpakrwkwtgy9,imgname-knk-1786711882820.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.14): &lt;/strong&gt;ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ, ಬಲಿ ಪಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಹೌದು ಆಕೆಯ ಅನಾಚಾರಕ್ಕೆ ಏನೂ ತಪ್ಪು ಮಾಡದ ಆ ಮಗು ದಾರುಣವಾಗಿ ಅಂತ್ಯಕಂಡಿದೆ.&amp;nbsp;ಅಂಗನವಾಡಿಗೆ ಹೋಗಿ ಬರುತ್ತಾ ತನ್ನ ತಾಯಿಯೊಂದಿಗೆ ಆಟಮಾಡಿಕೊಂಡು ಇದ್ದ ನಾಲ್ಕು ವರ್ಷದ ಕಂದ ಇದು. ಹೆಸರು ಚರಣ್ ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಲೈನ್ ಮನೆಯೊಂದರಲ್ಲಿ ತಾಯಿ ಮತ್ತವರ ಸಂಬಂಧಿಕರ ಮನೆಯವರೊಂದಿಗೆ ಇತ್ತು.&lt;/p&gt;&lt;p&gt;ಆದರೆ ಅದೇ ತಾಯಿ ಮತ್ತು ದೊಡ್ಡಪ್ಪ ಪ್ರತಾಪನ ಅನೈತಿಕ ಸಂಬಂಧಕ್ಕೆ ಬಲಿಯಾಗಿ ಈ ಮಗು ಹೀಗೆ ಶಾಶ್ವತವಾಗಿ ಕಣ್ಮುಚ್ಚುವಂತೆ ಆಗಿದೆ. ಹೌದು ಮೂಲತಃ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕದನೂರಿನವಳಾದ ಸುಚಿತ್ರಾ ಐದಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನವನಾದ ಪಂಪನಗೌಡ ಎಂಬುವರನ್ನು ಪ್ರೀತಿ ಮದುವೆ ಆಗಿದ್ದಳು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಹುಟ್ಟಿದ್ದರು. ಅದರಲ್ಲಿ ಕಿರಿಯವನು ಈಗ ಹೀಗೆ ಮಲಗಿರುವ ಬಾಲಕ ಚರಣ್. ಕೂಲಿ ಮಾಡಿದ್ದರೂ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ನಡೆಯುತಿತ್ತು.&lt;/p&gt;&lt;p&gt;ಇದರ ನಡುವೆಯೇ ಈ ಸುಚಿತ್ರಾಗೆ ತನ್ನ ಸೋದರ ಸಂಬಂಧಿ ಅಕ್ಕನ ಗಂಡನೊಂದಿಗೆ ಅನೈತಿಕ ಸಂಬಂಧ ಬೆಳಸಿಕೊಂಡಿದ್ದಳು. ಇದು ಆರಂಭದಲ್ಲಿ ಪಂಪನಗೌಡನಿಗೆ ಗೊತ್ತೇ ಆಗಿರಲಿಲ್ಲ. ಆದರೆ ಅದ್ಯಾವಾಘ ಮಿತಿಮೀರಿ ಹೋಯಿತೊ, ಪಂಪನಗೌಡ ಇವರ ಸಹವಾಸವೇ ಬೇಡ ಎಂದು ದೂರವಾಗುವುದಕ್ಕೆ ಶುರುಮಾಡಿದ್ದ. ಆರು ತಿಂಗಳ ಹಿಂದೆ ಅಜ್ಜಿಯ ಮನೆಗೆ ಹೋಗಿ ಬರುತ್ತೇನೆ ಬೆಂಗಳೂರಿನಿಂದ ಕೊಡಗಿಗೆ ಬಂದಿದ್ದ ಸುಚಿತ್ರಾ ವಿರಾಜಪೇಟೆಯಲ್ಲಿರುವ ತನ್ನ ಸಹೋದರ ಸಂಬಂಧಿ ಅಕ್ಕನ ಮನೆಯಲ್ಲಿಯೇ ಪರ್ಮನೆಂಟ್ ಆಗಿ ಉಳಿದಿದ್ದಳು. ಇದು ಬೇಸರವಾದಾಗ ಸುಚಿತ್ರಾ ಗಂಡ ಪಂಪನಗೌಡ ಬೆಂಗಳೂರು ಬಿಟ್ಟು ರಾಯಚೂರಿಗೆ ಹೋಗಿದ್ದ.&lt;/p&gt;&lt;p&gt;ಇತ್ತ ಎಲ್ಲರೂ ಕೂಲಿ ಕಾರ್ಮಿಕರಾಗಿರುವ ಸುಚಿತ್ರಾ, ಆಕೆಯ ಬಾವ ಪ್ರತಾಪ್ ಹಾಗೂ ಆತನ ಪತ್ನಿ ಸೇರಿದಂತೆ ಮೂವರು ವಿರಾಜಪೇಟೆಯ ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಲೈನ್ ಮನೆಯೊಂದರಲ್ಲಿ ವಾಸವಾಗಿದ್ದರು. ಮದ್ಯಕ್ಕೆ ದಾಸರಾಗಿದ್ದ ಸುಚಿತ್ರಾ ಹಾಗೂ ಪ್ರತಾಪ್ ನಡುವೆ ಇರುವ ಅಕ್ರಮ ಸಂಬಂಧದ ವಿಷಯಕ್ಕೆ ಆಗಿಂದ್ದಾಗೆ ಗಲಾಟೆಯನ್ನು ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಪಾಪಿ ಪ್ರತಾಪ್ ತನ್ನ ಪತ್ನಿಗೆ ನೀನು ಬೇಡ ಹೊರಟು ಹೋಗು, ನನಗೆ ಸುಚಿತ್ರನೇ ಸಾಕು ಎಂದು ಗಲಾಟೆ ಮಾಡುತ್ತಿದ್ದನಂತೆ.&lt;/p&gt;&lt;p&gt;ಇದೇ ವಿಚಾರವಾಗಿ ಗುರುವಾರವೂ ಕೂಡ ಗಲಾಟೆಯಾಗಿದೆ ಎನ್ನಾಗಿದೆ. ಮಾತಿಗೆ ಮಾತು ಬೆಳೆದು ಪಾಪಿ ಪ್ರತಾಪ್ ಸುಚಿತ್ರಾಳ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆಯ ತಲೆಗೆ ಕೊಡಲಿಯಿಂದ ಕೊಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆಕೆ ಸದ್ಯ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಗಲಾಟೆ ವೇಳೆ ಜೊತೆಯಲ್ಲಿಯೇ ಇದ್ದ ನಾಲ್ಕು ವರ್ಷದ ಮಗು ಚರಣ್ಗೆ ಮಗು ಎನ್ನುವುದನ್ನು ನೋಡದೆ ಬಡಿಗೆಯಿಂದ ಯದ್ವಾತದ್ವಾ ಹೊಡೆದಿದ್ದಾನೆ. ತೀವ್ರಪೆಟ್ಟು ತಿಂದ ಬಾಲಕ ನೋವು ತಾಳಲಾರದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.&lt;/p&gt;&lt;p&gt;ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ವಿರಾಜಪೇಟೆ ನಗರ ಠಾಣೆ ಪೊಲೀಸರು ಪಾಪಿ ಪ್ರತಾಪ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ಅಕ್ರಮ ಸಂಬಂಧದ ಜಗಳದಲ್ಲಿ ಏನೂ ಅರಿಯದ ನಾಲ್ಕು ವರ್ಷದ ಕಂದ ಚರಣ್ ದಾರುಣವಾಗಿ, ಬರ್ಭರವಾಗಿ ಹ*ತ್ಯೆಯಾಗಿದೆ. ಚಿಕ್ಕಮಗುವೆಂದು ನೋಡದೆ ಬಡಿಗೆಯಿಂದ ಹೊಡೆದು ಬಾಲಕನನ್ನು ಹ*ತ್ಯೆ ಮಾಡಿ ಹೇಯ ಕೃತ್ಯವೆಸಗಿದ ಪಾಪಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಮಗುವಿನ ತಂದೆ ಪಂಪನಗೌಡ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/kodagu-crime-four-year-old-boy-charan-dies-after-assault-in-virajpet-gvd/articleshow-8si36kh"/>
        </item>
        <item>
            <title><![CDATA[ಆಸ್ಟ್ರೇಲಿಯಾದ ಮೌಂಟ್ ಕೊಸ್ಸಿಯಸ್ಕೊ ಶಿಖರವನ್ನೇರಿದ ಕೊಡಗಿನ ಜಮ್ಮಡ ಪ್ರೀತ್ ಅಪ್ಪಯ್ಯ]]></title>
            <link>https://kannada.asianetnews.com/karnataka-districts/jammada-preet-appiah-from-kodagu-has-climbed-mount-kosciusko-in-australia-mrq/articleshow-dkrswgn</link>
            <guid isPermaLink="true">https://kannada.asianetnews.com/karnataka-districts/jammada-preet-appiah-from-kodagu-has-climbed-mount-kosciusko-in-australia-mrq/articleshow-dkrswgn</guid>
            <pubDate>Sun, 16 Aug 2026 07:50:42 +0530</pubDate>
            <description><![CDATA[ಕೊಡಗಿನ ಸಾಹಸಿ ಮಹಿಳೆ ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಆಸ್ಟ್ರೇಲಿಯಾದ ಮೌಂಟ್ ಕೊಸ್ಸಿಯಸ್ಕೊ ಶಿಖರವನ್ನು ಕೊಡವ ಉಡುಪಿನಲ್ಲಿ ಏರಿ ಸಾಧನೆ ಮಾಡಿದ್ದಾರೆ. ಇದೇ ವೇಳೆ, ಕೊಡಗು ಸೈನಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m045ps9e7c229n89wd55yaja,imgname-jammada-preet-appaiah-1786846602542.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ: &lt;/strong&gt;ಕೊಡಗಿನ ಸಾಹಸಿ ಮಹಿಳೆ ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಆಸ್ಟ್ರೇಲಿಯಾದ ಅತಿ ಎತ್ತರದ ಶಿಖರ ಮೌಂಟ್ ಕೊಸ್ಸಿಯಸ್ಕೊವನ್ನು ಯಶಸ್ವಿಯಾಗಿ ಏರಿದ್ದಾರೆ. ಆ.10ರಿಂದ 19ರವರೆಗೆ ನಡೆಯುತ್ತಿರುವ ಈ ಸಾಹಸದಲ್ಲಿ ಅವರು ಸ್ವಾತಂತ್ರ್ಯ ದಿನದಂದು ಹಿಮ ಮತ್ತು ಚಳಿ ಗಾಳಿಯ ನಡುವೆ ಶಿಖರದ ತುತ್ತ ತುದಿಯಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ವಿಶೇಷವೆಂದರೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಈ ಸಾಧನೆ ಮಾಡುವ ಮೂಲಕ ಕೊಡಗಿನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇದು ಅವರ &lsquo;ಸೆವೆನ್ ಸಮಿಟ್ಸ್&rsquo; ಗುರಿಯತ್ತ ಮತ್ತೊಂದು ಹೆಜ್ಜೆಯಾಗಿದೆ. ಈಗಾಗಲೇ ಅವರು ಆಫ್ರಿಕಾದ ಕಿಲಿಮಂಜಾರೋ ಮತ್ತು ಯುರೋಪಿನ ಎಲ್ಬ್ರಸ್ ಶಿಖರಗಳನ್ನು ಏರಿದ್ದಾರೆ.&lt;/p&gt;&lt;h2&gt;&lt;strong&gt;ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನ&lt;/strong&gt;&lt;/h2&gt;&lt;p&gt;ಕುಶಾಲನಗರ ಸಮೀಪದ ಕೊಡಗು ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನ ಅದ್ದೂರಿಯಾಗಿ ನಡೆಸಲಾಯಿತು. ದೇಶದ ಎಂಟು ದಶಕಗಳ ಸ್ವಾತಂತ್ರ್ಯದ ನೆನಪಿನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ನಿವೃತ್ತ ಯೋಧರು ಹಾಗೂ ಗಣ್ಯ ಸಂಸ್ಥಾಪಕರು ಭಾಗವಹಿಸಿದ್ದರು.&lt;/p&gt;&lt;p&gt;ಬೆಂಗಳೂರಿನ ಏರ್ ಫೋರ್ಸ್ ಕೊಡಗು ಅಸೋಸಿಯೇಷನ್&zwnj;ನ ಅಧ್ಯಕ್ಷ ಏರ್ ಮಾರ್ಷಲ್ ಬಾಲ್ತಿಕಲಾಂಡ ಯು. ಚಂಗಪ್ಪ (ನಿವೃತ್ತ), ಪಿವಿ ಎಸ್ ಎಂ, ಎವಿ ಎಸ್ ಎಂ, ವಿಎಸ್ ಎಂ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.&lt;/p&gt;&lt;p&gt;ಮುಖ್ಯ ಅತಿಥಿಗಳು ಶಾಲೆಯಲ್ಲಿನ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ನಂತರ ಜನರಲ್ ತಿಮ್ಮಯ್ಯ ಪರೇಡ್ ಮೈದಾನಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಾದ ಚಂಗಪ್ಪ ಅವರು ದ್ವಜಾರೋಹಣ ನೆರವೇರಿಸಿದರು. ಶಾಲೆಯ ಮೆನನ್, ಕಾರ್ಯಪ್ಪ, ಕಟಾರಿ ಮತ್ತು ಸುಬ್ರತೋ ಎಂಬ ನಾಲ್ಕು ಹೌಸ್&zwnj;ಗಳ ತುಕಡಿಗಳ ಪರಿವೀಕ್ಷಣೆ ನಡೆಸಿದರು.&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/jammada-preet-appiah-from-kodagu-has-climbed-mount-kosciusko-in-australia-mrq/articleshow-dkrswgn"/>
        </item>
        <item>
            <title><![CDATA[ಬೆಂಗಳೂರು 'ಫಿಲ್ಟರ್ ಕಾಫಿ' ಹಿಂದೆ ಇಷ್ಟೊಂದು ದೊಡ್ಡ ಹಿಸ್ಟರಿ ಇದೆಯಾ?! 'ಕಾಫಿ ಪುಡಿ ಸಾಕಮ್ಮ'ನ ಅಪರೂಪದ ಕಥೆ!]]></title>
            <link>https://kannada.asianetnews.com/karnataka-districts/coffee-pudi-sakamma-the-karnataka-woman-who-built-bengaluru-early-coffee-culture/articleshow-dswb8ph</link>
            <guid isPermaLink="true">https://kannada.asianetnews.com/karnataka-districts/coffee-pudi-sakamma-the-karnataka-woman-who-built-bengaluru-early-coffee-culture/articleshow-dswb8ph</guid>
            <pubDate>Mon, 07 Sep 2026 19:48:32 +0530</pubDate>
            <description><![CDATA[&lt;p&gt;&lsquo;ಕಾಫಿ ಪುಡಿ ಸಾಕಮ್ಮ&rsquo; ಎಂದು ಖ್ಯಾತರಾದ ದೊಡ್ಡಮನೆ ಸಾಕಮ್ಮ, ಕರ್ನಾಟಕದ ಆರಂಭಿಕ ಮಹಿಳಾ ಉದ್ಯಮಿಗಳಲ್ಲೊಬ್ಬರು. ಕೊಡಗಿನ ಕಾಫಿ ತೋಟಗಳ ಜವಾಬ್ದಾರಿ ವಹಿಸಿಕೊಂಡ ಅವರು, 1920ರಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಕ್ಯೂರಿಂಗ್ ಮತ್ತು ಪೌಡರಿಂಗ್ ಘಟಕ ಆರಂಭಿಸಿದರು. ಅವರ ಕಾಫಿ ಪುಡಿ ಮನೆಮಾತಾಗಿ, ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ಹೊಸ ಇತಿಹಾಸ ನಿರ್ಮಿಸಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1tvtszfrmethak7v1d42v1n,imgname-coffee-pudi-sakamma-1788681742318.jpg" type="image/jpeg" height="390" width="690"/>
            <content:encoded><![CDATA[&lt;h2&gt;ಕಾಫಿ ಪುಡಿಯಿಂದ ಮನೆಮಾತಾದ ಮಹಿಳೆ&lt;/h2&gt;&lt;p&gt;ಇಂದು ಬೆಂಗಳೂರಿನ ಕಾಫಿ ಸಂಸ್ಕೃತಿ ಎಂದರೆ ಫಿಲ್ಟರ್ ಕಾಫಿಯ ಘಮ, ಹಳೆಯ ಕಾಫಿ ಅಂಗಡಿಗಳು ಮತ್ತು ಹೊಸ ತಲೆಮಾರಿನ ಕಾಫಿ ಸಂಸ್ಕೃತಿ ನೆನಪಾಗುತ್ತದೆ. ಆದರೆ ಈ ಸಂಸ್ಕೃತಿಗೆ ಶತಮಾನಕ್ಕೂ ಹಿಂದೆಯೇ ಬಲವಾದ ಅಡಿಪಾಯ ಹಾಕಿದ ಮಹಿಳೆಯೊಬ್ಬರಿದ್ದರು. ಅವರೇ &lsquo;ಕಾಫಿ ಪುಡಿ ಸಾಕಮ್ಮ&rsquo; ಎಂದು ಜನಪ್ರಿಯರಾದ ದೊಡ್ಡಮನೆ ಸಾಕಮ್ಮ.&lt;/p&gt;&lt;p&gt;1880ರಲ್ಲಿ ತುಮಕೂರು ಜಿಲ್ಲೆಯ ಬಿದರೆ ಗ್ರಾಮದಲ್ಲಿ ಜನಿಸಿದ ಸಾಕಮ್ಮ, ಬಾಲ್ಯದಲ್ಲೇ ಶಿಕ್ಷಣದ ಮಹತ್ವ ಅರಿತಿದ್ದರು. ಆ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣವೇ ಅಪರೂಪವಾಗಿದ್ದರೂ, ಅವರು ಅಂದಿನ ಮೈಸೂರು ಪ್ರಾಂತ್ಯದ ಕೆಲವೇ ವಿದ್ಯಾವಂತ ಬಾಲಕಿಯರಲ್ಲಿ ಒಬ್ಬರಾಗಿದ್ದರು.&lt;/p&gt;&lt;h3&gt;18ನೇ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ವಿಧವೆಯಾದರೂ ಧೈರ್ಯ ಕಳೆದುಕೊಳ್ಳಲಿಲ್ಲ&lt;/h3&gt;&lt;p&gt;ಸುಮಾರು 16ನೇ ವಯಸ್ಸಿನಲ್ಲಿ ಕೊಡಗಿನ ಸೋಮವಾರಪೇಟೆಯ ಕಾಫಿ ಬೆಳೆಗಾರ ದೊಡ್ಡಮನೆ ಚಿಕ್ಕಬಸಪ್ಪ ಶೆಟ್ಟಿ ಅವರನ್ನು ಸಾಕಮ್ಮ ವಿವಾಹವಾದರು. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಪತಿ ನಿಧನರಾದರು. ಕೇವಲ 18ನೇ ವಯಸ್ಸಿನಲ್ಲೇ ವಿಧವೆಯಾದ ಸಾಕಮ್ಮ ಅವರ ಮುಂದೆ ಬೃಹತ್ ಕಾಫಿ ತೋಟಗಳ ನಿರ್ವಹಣೆಯ ಜವಾಬ್ದಾರಿ ಬಂತು.&lt;/p&gt;&lt;p&gt;ಆ ಕಾಲದ ಸಾಮಾಜಿಕ ನಿರ್ಬಂಧಗಳ ನಡುವೆಯೂ ಸಾಕಮ್ಮ ಹಿಂಜರಿಯಲಿಲ್ಲ. ತಮ್ಮ ಶಿಕ್ಷಣ, ನಿರ್ವಹಣಾ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮವನ್ನು ಬಳಸಿಕೊಂಡು ಕಾಫಿ ತೋಟಗಳ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರ ಆಡಳಿತದಲ್ಲಿ ಎಸ್ಟೇಟ್&zwnj;ಗಳು ಮತ್ತೆ ಅಭಿವೃದ್ಧಿಯ ಹಾದಿಗೆ ಬಂದವು.&lt;/p&gt;&lt;p&gt;&lt;strong&gt;1920ರಲ್ಲಿ ಬೆಂಗಳೂರಿನಲ್ಲಿ ಕಾಫಿ ಉದ್ಯಮಕ್ಕೆ ಹೊಸ ತಿರುವು ಬಸವನಗುಡಿಯಿಂದ ಆರಂಭವಾದ ಯಶೋಗಾಥೆ!&lt;/strong&gt;&lt;/p&gt;&lt;p&gt;ಕಾಫಿ ಬೆಳೆಸುವುದಷ್ಟೇ ಸಾಕಾಗುವುದಿಲ್ಲ; ಅದಕ್ಕೆ ಉತ್ತಮ ಮಾರುಕಟ್ಟೆಯೂ ಬೇಕು ಎಂಬುದನ್ನು ಸಾಕಮ್ಮ ಅರಿತುಕೊಂಡಿದ್ದರು. ಹೀಗಾಗಿ 1920ರಲ್ಲಿ ಅವರು ಬೆಂಗಳೂರಿಗೆ ಬಂದು, ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ ಸಮೀಪ ಕಾಫಿ ಕ್ಯೂರಿಂಗ್ ಮತ್ತು ಪೌಡರಿಂಗ್ ಘಟಕ ಆರಂಭಿಸಿದರು.&lt;/p&gt;&lt;p&gt;ಅಂದಿನ ದಿನಗಳಲ್ಲಿ ಕಾಫಿ ಸಂಸ್ಕರಣೆಗೆ ಅಗತ್ಯವಿದ್ದ ಯಂತ್ರೋಪಕರಣಗಳನ್ನು ವಿದೇಶದಿಂದ ತರಿಸಿಕೊಳ್ಳಬೇಕಾಗಿತ್ತು. ಸಾಕಮ್ಮ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಾಫಿ ಬೀಜಗಳನ್ನು ಹುರಿದು, ಪುಡಿ ಮಾಡಿ, ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ರೂಪಿಸಿದರು.&lt;/p&gt;&lt;p&gt;&lt;strong&gt;&lsquo;ಸಾಕಮ್ಮಾಸ್ ಕಾಫಿ ವರ್ಕ್ಸ್&rsquo; ಮನೆಮಾತಾಯಿತು&lt;/strong&gt;&lt;/p&gt;&lt;p&gt;ಸಾಕಮ್ಮ ಅವರ ಕಾಫಿ ಪುಡಿ ರುಚಿ ಮತ್ತು ಗುಣಮಟ್ಟದಿಂದ ಬೆಂಗಳೂರಿನ ಮನೆಮನೆಗೂ ತಲುಪಿತು. ನಗರದ ವಿವಿಧ ಭಾಗಗಳಲ್ಲಿ ಮಾರಾಟ ಕೇಂದ್ರಗಳನ್ನು ಸ್ಥಾಪಿಸಿದ ಅವರು, ಕಾಫಿಯನ್ನು ಸಾಮಾನ್ಯ ಕುಟುಂಬಗಳ ದಿನನಿತ್ಯದ ಬದುಕಿನ ಭಾಗವಾಗಿಸಲು ನೆರವಾದರು.&lt;/p&gt;&lt;p&gt;ಇದರ ಪರಿಣಾಮವಾಗಿ ಅವರಿಗೆ &lsquo;ಕಾಫಿ ಪುಡಿ ಸಾಕಮ್ಮ&rsquo; ಎಂಬ ಹೆಸರು ಬಂದಿತು. ಅವರ ಕಾಫಿ ಪುಡಿಯ ಜನಪ್ರಿಯತೆ ಎಷ್ಟಿತ್ತೆಂದರೆ, ಕನ್ನಡದ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಿ.ವಿ. ಗುಂಡಪ್ಪ ಅವರ ಬರಹಗಳಲ್ಲಿಯೂ ಸಾಕಮ್ಮ ಕಾಫಿಯ ಉಲ್ಲೇಖಗಳು ಕಾಣಿಸಿಕೊಂಡಿದ್ದವು ಎಂದು ವರದಿಗಳು ಹೇಳುತ್ತವೆ.&lt;/p&gt;&lt;p&gt;&lt;strong&gt;ಉದ್ಯಮದ ಜೊತೆಗೆ ಸಮಾಜ ಸೇವೆಯಲ್ಲೂ ಮುಂಚೂಣಿ, ಮಹಿಳೆಯರಿಗೆ ಮಾದರಿಯಾದ ಸಾಕಮ್ಮ&lt;/strong&gt;&lt;/p&gt;&lt;p&gt;ಸಾಕಮ್ಮ ಕೇವಲ ಯಶಸ್ವಿ ಉದ್ಯಮಿಯಾಗಿರಲಿಲ್ಲ. ಸಮಾಜ ಸೇವೆಯಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದ್ದರು. ಮಹಿಳೆಯರ ಕಲ್ಯಾಣ, ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿಗೆ ಅವರು ನೆರವಾದರು. ಬಸವನಗುಡಿಯಲ್ಲಿ ಕುರುಹಿನ ಶೆಟ್ಟಿ ಸಮುದಾಯದ ಹಾಸ್ಟೆಲ್ ಹಾಗೂ ಪ್ರಯಾಣಿಕರಿಗಾಗಿ ಧರ್ಮಶಾಲೆ ನಿರ್ಮಿಸಿದರೆಂದು ದಾಖಲೆಗಳು ಉಲ್ಲೇಖಿಸುತ್ತವೆ.&lt;/p&gt;&lt;p&gt;ಅವರ ಉದ್ಯಮಶೀಲತೆ ಮತ್ತು ಸಮಾಜ ಸೇವೆಯನ್ನು ಗುರುತಿಸಿದ ಮೈಸೂರು ಸಂಸ್ಥಾನದ ದರ್ಬಾರ್, ಅವರಿಗೆ &lsquo;ಲೋಕಸೇವಾ ಪರಾಯಣೆ&rsquo; ಎಂಬ ಗೌರವ ಬಿರುದು ನೀಡಿತು. ಅವರು ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದರು. ಬ್ರಿಟಿಷ್ ಸರ್ಕಾರದಿಂದ &lsquo;ಕೈಸರ್-ಇ-ಹಿಂದ್&rsquo; ಪದಕವೂ ಅವರಿಗೆ ದೊರಕಿತ್ತು.&lt;/p&gt;&lt;p&gt;&lt;strong&gt;ಇಂದಿಗೂ ಉಳಿದಿರುವ ನೆನಪು&lt;/strong&gt;&lt;/p&gt;&lt;p&gt;ಕೊಡಗಿನ ಸೋಮವಾರಪೇಟೆಯಲ್ಲಿರುವ &lsquo;ಸಾಕಮ್ಮ ಬಂಗಲೆ&rsquo; ಮತ್ತು ಬೆಂಗಳೂರಿನ &lsquo;ಸಾಕಮ್ಮ ಗಾರ್ಡನ್&rsquo; ಅವರ ಪರಂಪರೆಯನ್ನು ನೆನಪಿಸುತ್ತವೆ. ಕಾಫಿ ಉದ್ಯಮ, ಮಹಿಳಾ ಸ್ವಾವಲಂಬನೆ ಮತ್ತು ಸಮಾಜ ಸೇವೆ&mdash;ಈ ಮೂರು ಕ್ಷೇತ್ರಗಳಲ್ಲಿ ಸಾಕಮ್ಮ ಬಿಟ್ಟ ಹೆಜ್ಜೆ ಗುರುತುಗಳು ಇಂದಿಗೂ ಪ್ರೇರಣೆಯಾಗಿವೆ.&lt;/p&gt;&lt;p&gt;ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದ ಸಾಕಮ್ಮ, ಕಷ್ಟಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡ ಅಪರೂಪದ ಮಹಿಳೆ. ಕಾಫಿಯ ಘಮದೊಂದಿಗೆ ಕರ್ನಾಟಕದ ಉದ್ಯಮಶೀಲತೆಯ ಇತಿಹಾಸದಲ್ಲೂ ಅವರ ಹೆಸರು ಸದಾ ಉಳಿಯಲಿದೆ.&lt;/p&gt;]]></content:encoded>
            <category>kodagu</category>
            <dc:creator>Chandrashekar GS</dc:creator>
            <atom:link href="https://kannada.asianetnews.com/karnataka-districts/coffee-pudi-sakamma-the-karnataka-woman-who-built-bengaluru-early-coffee-culture/articleshow-dswb8ph"/>
        </item>
        <item>
            <title><![CDATA[ಸಚಿವನಾಗಿ ಮೊದಲ ಭೇಟಿಯಲ್ಲೇ 'ಕೊಡಗಿನ ಮೂಲ ಸಮಸ್ಯೆ' ಪರಿಹಾರಕ್ಕೆ ಕೈಹಾಕಿದ ಪಿ.ಎಂ. ನರೇಂದ್ರಸ್ವಾಮಿ!]]></title>
            <link>https://kannada.asianetnews.com/karnataka-districts/minister-pm-narendra-swamy-inspects-harangi-dam-kodagu-cauvery-river-flood-drought-report-khs/articleshow-fz1mgnd</link>
            <guid isPermaLink="true">https://kannada.asianetnews.com/karnataka-districts/minister-pm-narendra-swamy-inspects-harangi-dam-kodagu-cauvery-river-flood-drought-report-khs/articleshow-fz1mgnd</guid>
            <pubDate>Wed, 05 Aug 2026 22:30:41 +0530</pubDate>
            <description><![CDATA[ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ, ನೀರಿನ ಮಟ್ಟದ ಬಗ್ಗೆ ಮಾಹಿತಿ ಪಡೆದರು. ಆರಂಭದಲ್ಲಿ ಮಳೆ ಕೊರತೆಯಿಂದ ಆತಂಕವಿದ್ದರೂ, ಇತ್ತೀಚಿನ ಉತ್ತಮ ಮಳೆಯಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದ ಅವರು, ಕೊಡಗಿನಲ್ಲಿನ ಅತಿವೃಷ್ಟಿಯ ಸಂಕಷ್ಟಗಳ ಬಗ್ಗೆಯೂ ಗಮನ ಸೆಳೆದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kz9dvrmf0b05hwbx8pw371mt,imgname-minister-pm-narendra-swami-inspects-kodagu-rain-1785949184653.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಆ.05): ರಾ&lt;/strong&gt;ಜ್ಯ ಸರ್ಕಾರದಿಂದ ತುರ್ತಾಗಿ ನೇಮಿಸಲಾದ ಬರ ಹಾಗೂ ನೆರೆ ವೀಕ್ಷಣೆಗೆ ಕೊಡಗು ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಕೊಡಗು ಜಿಲ್ಲೆಯ ಏಕೈಕ ಜಲಾಶಯ ಹಾರಂಗಿಯನ್ನು ವೀಕ್ಷಿಸಿದರು. ನಂತರ ಮಾತನಾಡಿ, ಕಾವೇರಿ ತುಂಬಿದರೆ ಮಂಡ್ಯದಿಂದ ತಮಿಳುನಾಡಿನವರೆಗೂ ಸಮೃದ್ಧಿ. ಆದರೆ, ಕಳೆದ 15 ದಿನಗಳ ಹಿಂದಿನ ಸ್ಥಿತಿ ಆತಂಕಕಾರಿ ಆಗಿದ್ದು, ಇದೀಗ ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನಲ್ಲಿರುವ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಎಷ್ಟು ನೀರಿನ ಸಂಗ್ರಹವಿದೆ, ಎಷ್ಟು ಸಂಗ್ರಹವಾಗಬೇಕಾಗಿತ್ತು. ಎಷ್ಟು ನೀರನ್ನು ಹೊರಗೆ ಹರಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಜಲಾಶಯದಲ್ಲಿಯೇ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.&lt;/p&gt;&lt;p&gt;ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಒಂದು ವಾರದ ಹಿಂದೆ ಮಳೆಯ ಪರಿಸ್ಥಿತಿ ನೋಡಿದರೆ ಆತಂಕ ಪಡುವಂತೆ ಇತ್ತು. ಕರ್ನಾಟಕದ ಅರ್ಧ ಭಾಗಕ್ಕೆ ನೀರುಣಿಸುವ ಕಾವೇರಿ ಮಾತೆ ಒಡಲು ಇದು. ಜನರ ಬಾಯಾರಿಕೆಯಿಂದ ಹಿಡಿದು ಅನ್ನ ಆಹಾರವನ್ನು ಕೊಡುವುದು ಕಾವೇರಿ. ಆದರೆ ಕುಡಿಯುವುದಕ್ಕೂ ನೀರಿಲ್ಲ ಎನ್ನುವ ಸ್ಥಿತಿ ಇತ್ತು. ಆದರೆ ಕಳೆದ ಒಂದು ಹತ್ತು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆಆರ್ ಎಸ್ ಜಲಾಶಯಕ್ಕೆ ಇದುವರೆಗೆ 104 ಅಡಿ ತುಂಬಿದೆ ಅಷ್ಟೇ. ಕೆ ಆರ್ ಎಸ್ ತುಂಬಲು ಇನ್ನು 20 ಅಡಿ ತುಂಬಬೇಕು. ಕಾವೇರಿ ಮಾತೆ ಮುನಿಯದೆ ಇರುವಂತೆ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ತೀವ್ರ ಮಳೆಯಾದರೆ ಕೆಳಗಿನವರಿಗೆ ಸಂಭ್ರಮ, ಕೊಡಗಿನವರಿಗಲ್ಲ&lt;/strong&gt;&lt;/h2&gt;&lt;p&gt;ನಾವು ಸಚಿವರಾದ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾದಂತೆ ನಾನು ಬರ ಮತ್ತು ನೆರೆ ವೀಕ್ಷಣೆಗೆ ಬಂದಿದ್ದೇನೆ. ಆದರೆ ಸದ್ಯ ಕೊಡಗಿನಲ್ಲಿ ಉತ್ತಮ ಮಳೆ ಆಗಿದೆ. ತಡವಾಗಿ ಮಾನ್ಸೂನ್ ಆರಂಭವಾಯಿತು, ಇದರಿಂದ ಒಂದಷ್ಟು ಸಮಸ್ಯೆಯೂ ಆಗಿದೆ. ಇದಕ್ಕಾಗಿಯೇ ಸಿಎಂ ಸೂಚನೆಯಂತೆ ನಾನು ಸಚಿವನಾಗುತ್ತಿದ್ದಂತೆ ಕೊಡಗು ಜಿಲ್ಲೆಗೆ ಬಂದಿದ್ದೇನೆ. ಕಾವೇರಿ ತುಂಬಿದರೆ ಮಂಡ್ಯದಿಂದ ಹಿಡಿದು ತಮಿಳುನಾಡಿನವರೆಗೆ ಸಮೃದ್ಧಿ ಇರುತ್ತದೆ. ತೀವ್ರ ಮಳೆಯಾದರೆ ತಳಭಾಗದಲ್ಲಿ ಇರುವ ಸಂಭ್ರಮ ಕೊಡಗಿನಲ್ಲಿ ಇರುವುದಿಲ್ಲ. ಇಲ್ಲಿ ಆ ಮಳೆಯ ಸಂಕಷ್ಟವನ್ನು ಇಲ್ಲಿನ ಜನರು ಅನುಭವಿಸುತ್ತಾರೆ. ಇಲ್ಲಿಗೆ ಮೂಲಭೂತ ಸೌಕರ್ಯಕ್ಕೆ ತೀವ್ರ ಹಾನಿಯಾಗುತ್ತದೆ. ಇದರ ವರದಿಯನ್ನು ಡಿಸಿಎಂ ಆಗಿರುವ ಕಂದಾಯ ಸಚಿವರಿಗೆ ನೀಡುತ್ತೇನೆ ಎಂದು ಕೊಡಗಿನ ಹಾರಂಗಿಯಲ್ಲಿ ಸಚಿವ ನರೇಂದ್ರ ಸ್ವಾಮಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಮೂಲ ಸಮಸ್ಯೆ ಪರಿಹಾರಕ್ಕೆ ಕೈಹಾಕಿದ ಸಚಿವರು:&lt;/strong&gt;&lt;/h2&gt;&lt;p&gt;ಇನ್ನು ಸಚಿವರಾಗಿ ಕೊಡಗು ಜಿಲ್ಲೆಗೆ ನೆರೆ-ಬರ ವೀಕ್ಷಣೆಗೆ ಆಗಮಿಸಿದ ಮೊದಲ ಭೇಟಿಯಲ್ಲೇ ಸಚಿವ ನರೇಂದ್ರಸ್ವಾಮಿ ಅವರು, ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದರೆ ಗುಡ್ಡ ಕುಸಿತದಂತಹ ಭೀತಿ, ರಸ್ತೆ ಸಂಪರ್ಕಗಳ ಕಡಿತ, ಮನೆ ಕುಸಿತ ಹಾಗೂ ನೆರೆಯಿಂದಾಗುವ ಇತರೆ ಹಾನಿಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಮಳೆಯಿಂದ ಜನರು ಅನುಭವಿಸುವ ಸಮಸ್ಯೆ ಗುರುತಿಸಿ ಪರಿಹಾರ ಕಾರ್ಯ ಕೈಗೊಳ್ಳುವ ಭವರಸೆ ನೀಡಿದ್ದು, ಸ್ಥಳೀಯರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/minister-pm-narendra-swamy-inspects-harangi-dam-kodagu-cauvery-river-flood-drought-report-khs/articleshow-fz1mgnd"/>
        </item>
        <item>
            <title><![CDATA[ಕೊಡಗಿನಲ್ಲಿ ಆನೆ ಹಾವಳಿ ತೀವ್ರ: ವಿರಾಜಪೇಟೆ ಭಾಗದಲ್ಲಿ ಬಂದ್‌ಗೆ ರೈತ-ಕಾರ್ಮಿಕ ಸಂಘಟನೆಗಳ ಕರೆ]]></title>
            <link>https://kannada.asianetnews.com/karnataka-districts/kodagu-elephant-human-conflict-intensifies-bandh-called-in-virajpet-areas-gvd/articleshow-gk15d6l</link>
            <guid isPermaLink="true">https://kannada.asianetnews.com/karnataka-districts/kodagu-elephant-human-conflict-intensifies-bandh-called-in-virajpet-areas-gvd/articleshow-gk15d6l</guid>
            <pubDate>Thu, 20 Aug 2026 18:00:09 +0530</pubDate>
            <description><![CDATA[&lt;p&gt;ಕೊಡಗಿನಲ್ಲಿ ಮಾನವ-ಆನೆ ಸಂಘರ್ಷ ತೀವ್ರಗೊಂಡಿದ್ದು, ಆನೆ ದಾಳಿ ನಿಯಂತ್ರಣಕ್ಕೆ ವೈಜ್ಞಾನಿಕ ಯೋಜನೆ ಆಗ್ರಹಿಸಿ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಸೇರಿದಂತೆ ಹಲವೆಡೆ ಬಂದ್&zwnj;ಗೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fj3p0pp7ky9zyhgsdway7n,imgname-hv-1787228706837.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.20): &lt;/strong&gt;ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಜಿಲ್ಲೆಯಲ್ಲಿ ನಿತ್ಯ ಕಾಡಾನೆಗಳ ದಾಳಿಯಿಂದ ಹಲವರು ಪ್ರಾಣ ಕಳೆದುಕೊಂಡಿದ್ದರೆ, ಇನ್ನು ಕೆಲವರು ಅಂಗಾಂಗ ಊನಕ್ಕೊಳಗಾಗಿದ್ದಾರೆ. ಇದರಿಂದ ರೋಸಿ ಹೋಗಿರುವ ಕಾರ್ಮಿಕ ಸಂಘಟನೆ, ರೈತ ಸಂಘಟನೆಗಳು ವಿರಾಜಪೇಟೆ ಭಾಗದ ಹಲವೆಡೆ ಬಂದ್ ಗೆ ನಿರ್ಧರಿಸಿವೆ. ಆ ಮೂಲಕ ಅರಣ್ಯ ಇಲಾಖೆ, ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿದಿವೆ.&lt;/p&gt;&lt;p&gt;ವಿರಾಜಪೇಟೆ ತಾಲ್ಲೂಕಿನ ಕೆಲವು ಭಾಗದಲ್ಲಿ ಬಂದ್ ಗೆ ಕರೆ ನೀಡಿವೆ. ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ನೆಲ್ಯಹುದಿಕೇರಿ ಹಾಗೂ ಕರಡಿಗೋಡು ಭಾಗದಲ್ಲಿ ಬಂದ್ ಗೆ ನಿರ್ಧರಿಸಿವೆ. ಬಂದ್ ಮಾಡುವ ದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಂದ್ ಗೆ ಕರೆ ನೀಡಿವೆ. ಬಂದ್ ನಡೆಸುವ ಕುರಿತು ತೋಟ ಕಾರ್ಮಿಕರ ಸಂಘಟನೆ ಮತ್ತು ರೈತ ಸಂಘಟನೆಗಳು ಸಿದ್ದಾಪುರದಲ್ಲಿ ಸಭೆ ನಡೆಸಿದ್ದು, ಸಭೆಗೆ ಚೇಂಬರ್ ಆಫ್ ಕಾಮರ್ಸ್, ಆಟೋ ಚಾಲಕರ ಸಂಘಗಳು ಬಂದ್ ಗೆ ಬೆಂಬಲ ಸೂಚಿಸಲು ಚಿಂತನೆ ನಡೆಸಿವೆ.&lt;/p&gt;&lt;p&gt;ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಸುತ್ತಮುತ್ತ ಕಾಡಾನೆಗಳಿಗಿಂತ ತೋಟದಲ್ಲಿರುವ ಆನೆಗಳಿಂದಲೇ ಹೆಚ್ಚಿನ ದಾಳಿ ನಡೆಯುತ್ತಿದೆ ಎನ್ನುವುದು ಸಂಘಟನೆಗಳ ಆಕ್ರೋಶ. ಕಾಡು ಬಿಟ್ಟು ತೋಟಗಳಲ್ಲಿಯೇ 240 ಆನೆಗಳು ಉಳಿದಿವೆ ಎಂದು ಈಗಾಗಲೇ ಅರಣ್ಯ ಇಲಾಖೆಯೇ ಮಾಹಿತಿ ನೀಡಿದೆ. ಹೀಗಾಗಿಯೇ ಕಾರ್ಮಿಕರು, ಜನರ ಮೇಲೆ ಆನೆಗಳು ದಾಳಿ ಮಾಡುತತ್ತಿವೆ. ಈ ಆನೆಗಳ ನಿಯಂತ್ರಣಕ್ಕೆ ವೈಜ್ಞಾನಿಕ ಯೋಜನೆಗೆ ಸಂಘಟನೆಗಳು ಆಗ್ರಹಿಸುತ್ತಿವೆ. ಆನೆಗಳು ತೋಟದಲ್ಲಿ ಕಂಡಾಗ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಆನೆಗಳನ್ನು ಓಡಿಸಲಾಗುತ್ತಿದೆ.&lt;/p&gt;&lt;p&gt;ಹೀಗಾಗಿ ಆನೆಗಳು ಪದೇ ಪದೇ ತೋಟ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿವೆ. ಆನೆಗಳ ಕಾಡಿಗಟ್ಟುವ ನೆಪದಲ್ಲಿ ನೂರಾರು ಕೋಟಿ ಹಣ ಪೋಲು ಮಾಡಲಾಗುತ್ತಿದೆ ಎಂದು ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಕಾಡಾನೆಗಳ ಹಾವಳಿ ತಪ್ಪಿಸಲು ವೈಜ್ಞಾನಿಕ ಯೋಜನೆಗೆ ಆಗ್ರಹಿಸಿದ್ದು, ಆನೆಗಳ ನಿಯಂತ್ರಣಕ್ಕೆ ಸರಿಯಾದ ಯೋಜನೆ ರೂಪಿಸದ ಕೊಡಗು ಸಿಸಿಎಫ್ ಅವರನ್ನು ವರ್ಗಾವಣೆ ಮಾಡಬೇಕು. ಕೂಡಲೇ ಸಚಿವರು, ಶಾಸಕರು, ಸಂಸದರು ಹೋರಾಟಗಾರರೊಂದಿಗೆ ಸಭೆ ನಡೆಸಬೇಕು.&lt;/p&gt;&lt;p&gt;ಸ್ಥಳೀಯರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕು ಎಂಬ ಬೇಡಿಕೆಗಳಿಗೆ ಆಗ್ರಹಿಸಿ ಬಂದ್ ಗೆ ಕರೆ ನೀಡಿವೆ. ಅದಕ್ಕೂ ಸ್ಪಂದಿಸದಿದ್ದಲ್ಲಿ ತೀವ್ರತರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿವೆ. ಸದ್ಯ ಕರಡಿಗೋಡಿನಲ್ಲಿ ಮೊನ್ನೆ ದಾಳಿ ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾದ ಆನೆ ಸೆರೆ ಮಾಡಲಾಗಿದ್ದು, ಇನ್ನೂ ಎರಡು ಆನೆಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ. ನೂರಕ್ಕೂ ಹೆಚ್ಚು ಸಿಬ್ಬಂದಿ, ಆರು ಸಾಕಾನೆಗಳ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-elephant-human-conflict-intensifies-bandh-called-in-virajpet-areas-gvd/articleshow-gk15d6l"/>
        </item>
        <item>
            <title><![CDATA[‘ಪಕ್ಷ ತಾಯಿ ಇದ್ದಂತೆ, ಮೋಸ ಮಾಡಬಾರದು’.. ನಾಗೇಂದ್ರ ಸಚಿವ ಸ್ಥಾನಕ್ಕೆ ನರೇಂದ್ರಸ್ವಾಮಿ ಸಮರ್ಥನೆ]]></title>
            <link>https://kannada.asianetnews.com/karnataka-districts/pm-narendra-swamy-defends-nagendra-appointment-as-karnataka-minister-gvd/articleshow-ifa9quy</link>
            <guid isPermaLink="true">https://kannada.asianetnews.com/karnataka-districts/pm-narendra-swamy-defends-nagendra-appointment-as-karnataka-minister-gvd/articleshow-ifa9quy</guid>
            <pubDate>Thu, 06 Aug 2026 18:15:46 +0530</pubDate>
            <description><![CDATA[&lt;p&gt;Kodagu: ಪಕ್ಷ ತಾಯಿ ಇದ್ದಂತೆ, ಅದಕ್ಕೆ ಯಾವುದೇ ಕಾರಣಕ್ಕೂ ಮೋಸ ಮಾಡದಂತೆ ಪ್ರಾಮಾಣಿಕವಾಗಿ ಇರುವವರನ್ನು ಪಕ್ಷವೇ ಗುರುತ್ತಿಸುತ್ತದೆ. ಹಾಗೆಯೇ ನಾಗೇಂದ್ರ ಅವರನ್ನು ಹೈಕಮಾಂಡ್ ಗುರುತ್ತಿಸಿ ಸಚಿವ ಸ್ಥಾನ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzbhpsxpj99t56thwzejbhgq,imgname-jbj-1786020325302.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.06): &lt;/strong&gt;ಪಕ್ಷ ತಾಯಿ ಇದ್ದಂತೆ, ಅದಕ್ಕೆ ಯಾವುದೇ ಕಾರಣಕ್ಕೂ ಮೋಸ ಮಾಡದಂತೆ ಪ್ರಾಮಾಣಿಕವಾಗಿ ಇರುವವರನ್ನು ಪಕ್ಷವೇ ಗುರುತ್ತಿಸುತ್ತದೆ. ಹಾಗೆಯೇ ನಾಗೇಂದ್ರ ಅವರನ್ನು ಹೈಕಮಾಂಡ್ ಗುರುತ್ತಿಸಿ ಸಚಿವ ಸ್ಥಾನ ನೀಡಿದೆ. ಇದನ್ನು ತಪ್ಪು ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ಹೇಳುವ ಮೂಲಕ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ನಾಗೇಂದ್ರ ಅವರಿಗೆ ಸಚಿವಸ್ಥಾನ ಕೊಟ್ಟಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ನದ್ದು ಸೂಟ್ ಕೇಸ್ ಕ್ಯಾಬಿನೆಟ್ ಎಂದು ಬಿಜೆಪಿ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಲಕಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು ನಾನು ಸಿದ್ಧಾಂತಕ್ಕೆ ಅಂಟಿಕೊಂಡಿರುವವ.&lt;/p&gt;&lt;p&gt;ನಾನು ಎನ್ಎಸ್ಯುಐನಿಂದ ಬಂದವನು. ಮೂರು ಬಾರಿ ಸೋತು, ಮೂರು ಬಾರಿ ಶಾಸಕನಾದವನು. 2023 ರಲ್ಲಿಯೇ ನನಗೆ ಸಚಿವಸ್ಥಾನ ಕೊಡುವುದಕ್ಕೆ ನನ್ನ ಹೆಸರಿತ್ತು. ಆದರೆ ಕಾರಣಾಂತರಗಳಿಂದ ನನ್ನ ಹೆಸರನ್ನು ಬಿಡಲಾಯಿತು. ಆಗ ನಾನು ಸಮಾಧಾನದಿಂದ ಇದ್ದೆ ಅಲ್ವಾ..? ಆದರೆ ಈಗ ಗುರುತಿಸಿ ಸ್ಥಾನಮಾನ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲರೂ ಸಮರ್ಥರೇ ಇದ್ದಾರೆ. ಆದರೆ ಎಲ್ಲರೂ ತಾಳ್ಮೆಯಿಂದ ಕಾಯಬೇಕು ಅಷ್ಟೇ ಎಂದು ಕೊಡಗಿನ ತಲಕಾವೇರಿಯಲ್ಲಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ.&lt;/p&gt;&lt;p&gt;ಸಚಿವ ಸ್ಥಾನ ತಪ್ಪಿರುವುದನ್ನ ಖಂಡಿಸಿ ಹಲವೆಡೆ ಹೋರಾಟ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಒಂದೇ ತಂದೆ, ತಾಯಿಗೆ ಹುಟ್ಟಿದ ಮಕ್ಕಳೇ ಸಿಹಿ ಹಂಚಿದಾಗಲೋ ಅಥವಾ ಏನಾದರೂ ತಿಂಡಿ ಕೊಟ್ಟಾಗಲೋ ಕಿತ್ತಾಡುವುದು, ಮುನಿಸು ಬರುವುದು ಸಹಜ ಅಲ್ಲವೆ. ಅದೇ ರೀತಿ ಸಚಿವ ಸ್ಥಾನ ಸಿಗದಿದ್ದಾಗಲೂ ಆಗಿದೆ ಅಷ್ಟೇ ಎಂದು ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ. ಒಂದೇ ತಂದೆ ತಾಯಿಗೆ ಹುಟ್ಟಿದ ಮಕ್ಕಳೇ ಮನೆಯಲ್ಲಿ ಕಿತ್ತಾಡುತ್ತಾರೆ. ಕಾಂಗ್ರೆಸ್ ಕೂಡ ಒಂದು ಮನೆ ಇದ್ದಂತೆ ಅಸಮಧಾನ ಬರುತ್ತೆ ಹೋಗುತ್ತದೆ. ಸಹಜವಾಗಿ ಎಲ್ಲರೂ ಆಕಾಂಕ್ಷಿಗಳು ಆಗಿದ್ದವರು. ಆದರೆ ಎಲ್ಲರಿಗೂ ಸಚಿವ ಸಿಗಲು ಸಾಧ್ಯವಿಲ್ಲ ಅಲ್ಲವೇ. ಏನೇ ಸಮಸ್ಯೆಗಳಿದ್ದರೂ ಅದೆಲ್ಲವೂ ಇಂದು ಸಂಜೆ ಒಳಗೆ ಬಗೆಹರಿಯುತ್ತದೆ ಎಂದು ಪಿ ಎಂ ನರೇಂದ್ರ ಸ್ವಾಮಿ ಹೇಳಿದ್ದಾರೆ.&lt;/p&gt;&lt;p&gt;ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಯರಿಗೂ ಸಚಿವ ಸ್ಥಾನ ಕೊಡದಿರುವುದಕ್ಕೆ ಇದೊಂದು ಮಹಿಳಾ ವಿರೋಧಿ ಸರ್ಕಾರ ಎಂದು ಬಿಜೆಪಿ ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮಹಿಳೆಯರ ಸ್ಥಾನಮಾನದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ನೀಟ್ ಹೋರಾಟದ ವಿಚಾರದಲ್ಲಿ ಇವರು ಮಾತಾಡಲಿಲ್ಲ.&lt;/p&gt;&lt;p&gt;ದೆಹಲಿಯಲ್ಲಿ ಅಷ್ಟೊಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರು, ಇವರು ಸುಮ್ಮನಿದ್ದರು. ಅಲ್ಲಿ ಅಷ್ಟೊಂದು ಹೆಣ್ಣುಮಕ್ಕಳಿಗೆ ಲಾಠಿ ಚಾರ್ಜ್ ಮಾಡಿ ನಿರ್ಧಯವಾಗಿ ನಡೆದುಕೊಂಡರು. ಲಾಠಿಗೆ ಮೊಳೆ ಹೊಡೆದುಕೊಂಡು ಪ್ರತಿಭಟನಾನಿರತ ಹೆಣ್ಣು ಮಕ್ಕಳಿಗೆ ಹೊಡೆದರು. ಇಂತಹವರಿಂದ ಮಹಿಳಾ ಸ್ಥಾನಮಾನದ ಬಗ್ಗೆ ಪಾಠ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ ಮಹಿಳೆಯರಿಗೆ ಸಂಪುಟದಲ್ಲಿ &amp;amp; ಇತರೆಡೆ ಸ್ಥಾನಮಾನ ಕೊಟ್ಟೇ ಕೊಡುತ್ತದೆ. ಕಾಂಗ್ರೆಸ್ ಈಗಾಗಲೇ ಜಾರಿ ಮಾಡಿರುವ ಎಲ್ಲಾ ಕಾರ್ಯಕ್ರಮಗಳು ಮಹಿಳೆಯರ ಪರವಾಗಿವೆ ಎಂದು ಸಚಿವ ಪಿ ಎಂ ನರೇಂದ್ರಸ್ವಾಮಿ ಹೇಳಿದರು.&lt;/p&gt;&lt;p&gt;ಎಲ್ಲದಕ್ಕೂ ಮುಂಚಿತವಾಗಿ ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ತ್ರಿವೇಣಿ ಸಂಗಮಕ್ಕೆ ಭೇಟಿ ವೀಕ್ಷಿಸಿ ಬಳಿಕ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಂಡ್ಯದವನಾಗಿ ಕಾವೇರಿ ಮಾತೆಗೆ ಮೊದಲು ನಮಿಸುವುದು ನಮ್ಮ ಆದ್ಯ ಕರ್ತವ್ಯ. ಹೀಗಾಗಿ ತಲಕಾವೇರಿಗೆ ಬಂದು ತಾಯಿಗೆ ನಮಿಸಿದ್ದೇನೆ ಎಂದು ಬರ, ನೆರೆ ವೀಕ್ಷಣೆ ಉಸ್ತುವಾರಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಹೇಳಿದರು.&lt;/p&gt;&lt;p&gt;ನಾಡಿನಲ್ಲಿ ಬರ ಬರಬಹುದು ಎಂಬ ಭಯ ಇಡೀ ನಾಡನ್ನು ಕಾಡಿತ್ತು. ನಾಡಿಗೆ ಜೀವಜಲ ಒದಗಿಸುವ ತಾಯಿ ಕಾವೇರಿ ವರ ನೀಡಿದ್ದಾಳೆ. ಕಾವೇರಿ ಕೃಪೆ ತೋರಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಇಂತಹ ತಾಯಿಗೆ ನಮಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಕಾವೇರಿ ರಾಜ್ಯ ಮಾತ್ರವಲ್ಲದೆ, ನೆರೆ ರಾಜ್ಯದ ದಾಹವನ್ನು ತಣಿಸುವ ಮಾತೆ. ಬರ ಅಥವಾ ನೆರೆ ವೀಕ್ಷಿಸಿ ವರದಿ ನೀಡುವಂತೆ ಸಿಎಂ ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದವನು ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇನೆ ಎಂದಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/pm-narendra-swamy-defends-nagendra-appointment-as-karnataka-minister-gvd/articleshow-ifa9quy"/>
        </item>
        <item>
            <title><![CDATA[ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸಮಸ್ಯೆ ಇಲ್ಲ: ಬಿಜೆಪಿ ಆರೋಪಕ್ಕೆ ಸಚಿವ ನರೇಂದ್ರಸ್ವಾಮಿ ತಿರುಗೇಟು]]></title>
            <link>https://kannada.asianetnews.com/karnataka-districts/gutka-ban-row-narendra-swamy-hits-back-at-bjp-over-arecanut-farmers-gvd/articleshow-it2f7z6</link>
            <guid isPermaLink="true">https://kannada.asianetnews.com/karnataka-districts/gutka-ban-row-narendra-swamy-hits-back-at-bjp-over-arecanut-farmers-gvd/articleshow-it2f7z6</guid>
            <pubDate>Sat, 15 Aug 2026 16:39:50 +0530</pubDate>
            <description><![CDATA[&lt;p&gt;RSS Karnataka: ನಮ್ಮ ಗೃಹಮಂತ್ರಿಯವರು ಹೇಳುವುದರಲ್ಲಿ ಅಸಂವಿಧಾನಿಕ ಅಂತ ಏನಿದೆ. ಕಾನೂನು ಬಾಹಿರವಾದ ವಿಚಾರವನ್ನೇನಾದರೂ ಮುಂದಿಟ್ಟಿದ್ದಾರಾ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಪ್ರಶ್ನಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02hskf246mqym616daz4072,imgname-bkb-1786792168930.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.15):&lt;/strong&gt; ರಾಜ್ಯದ ಸರ್ಕಾರಿ ಮೈದಾನ ಮತ್ತು ಜಾಗಗಳಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಪಡೆಯುವ ವಿಧೇಯಕ ಮಂಡನೆ ಮೂಲಕ ಆರ್ ಎಸ್ ಎಸ್ ನಿರ್ಬಂಧಿಸಲು ಸರ್ಕಾರ ಮುಂದಾಗಿದೆ ಎಂಬ ಬಿಜೆಪಿಯವರ ಹೇಳಿಕೆ ವಿಚಾರ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ನಮ್ಮ ಗೃಹಮಂತ್ರಿಯವರು ಹೇಳುವುದರಲ್ಲಿ ಅಸಂವಿಧಾನಿಕ ಅಂತ ಏನಿದೆ. ಕಾನೂನು ಬಾಹಿರವಾದ ವಿಚಾರವನ್ನೇನಾದರೂ ಮುಂದಿಟ್ಟಿದ್ದಾರಾ ಎಂದು ಪ್ರಶ್ನಿಸಿದರು. ದೇಶದಲ್ಲಿ ಈ ಸಂವಿಧಾನವನ್ನು ಒಪ್ಪಿ ಎಲ್ಲರೂ ಬದುಕಬೇಕಾಗುತ್ತದೆ.&lt;/p&gt;&lt;p&gt;ಅದರ ಅಡಿಯಲ್ಲಿ ಸಂಘ ನೋಂದಾಯಿಸಲು ಯಾರಿಗೆ ಯಾವ ಸಮಸ್ಯೆ ಇದೆ ಅಥವಾ ಅಪಮಾನವೇನು ಎಂದು ಸಚಿವ ನರೇಂದ್ರ ಸ್ವಾಮಿ ಪ್ರಶ್ನಿಸಿದರು. ನಾವು ಭಾರತೀಯರು ನಾವೆಲ್ಲರೂ ಒಂದು ಎಂದ ಮೇಲೆ, ಸಂಘಟನೆ ನೋಂದಾಯಿಸಲು ಸಮಸ್ಯೆ ಏನು ಎಂದಿದ್ದಾರೆ. ಯಾರನ್ನು ನಾವು ಭಿನ್ನವಾಗಿ ಕಾಣುತ್ತಿಲ್ಲ, ಆದರೆ ಭಿನ್ನವಾಗಿ ನಡೆಯುತ್ತೇವೆ ಎನ್ನುವ ಅವರ ಮನೋಧರ್ಮ ಬದಲಾಯಿಸಿಕೊಳ್ಳಲಿ. ನೋಂದಾಯಿತ ಸಂಸ್ಥೆಗಳಿಗೆ ಅವಕಾಶವಿದೆ, ನೋಂದಾಯಿಸದೇ ಇರುವ ಸಂಘಟನೆ ಇದನ್ನೇ ಉದಾಹರಣೆಯಾಗಿಟ್ಟುಕೊಂಡು ನಾವು ಯಾವುದೇ ಒಪ್ಪಿಗೆ ಪಡೆಯದೇ ಕಾರ್ಯಕ್ರಮ ಮಾಡುತ್ತೇವೆ ಎಂದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಹೇಗೆ ಎಂದಿದ್ದಾರೆ.&lt;/p&gt;&lt;p&gt;ಕಾರ್ಯಕ್ರಮಗಳ ಮಾಡುವುದಕ್ಕೆ ಅವಕಾಶ ನೀಡಲು ಯಾವುದೇ ಸಂಘಟನೆ ಹೇಗೆ ನಡೆದುಕೊಳ್ಳಬೇಕು. ಒಗ್ಗೂಡುವ, ಸಮೂಹ ಕಾರ್ಯಕ್ರಮ ಮಾಡಬೇಕಾದರೆ ಒಪ್ಪಿಗೆ ಪಡೆಯಬೇಕೋ ಬೇಡವೋ. ಅನುಮತಿ ನೀಡಬೇಕಾದರೆ ಸರ್ಕಾರ ಯಾರ ಹೆಸರಿನಲ್ಲಿ ಕೊಡಬೇಕು. ಒಬ್ಬರೇ ಭಾರತ ಮಾತಾಕಿ ಜೈ ಎನ್ನುವಾಗ ಸಮಸ್ಯೆ ಇಲ್ಲ. ಆದರೆ ಸಮೂಹ ಒಗ್ಗೂಡಿ ಕಾರ್ಯಕ್ರಮ ಮಾಡುವಾಗ ಒಪ್ಪಿಗೆ ಬೇಕಲ್ವಾ. ಹಿಂದೆ ಕೆಲವು ಅನಪೇಕ್ಷಿತ ಘಟನೆ ನಡೆದಿವೆ. ಹೀಗಾಗಿ ಸರಿ ದಾರಿಯಲ್ಲಿ ಬನ್ನಿ ಅಂತ ನಾವು ಕರೆಯುತ್ತಿದ್ದೇವೆ, ಅವರನ್ನು ನಾವು ವಿರೋಧ ಮಾಡುತ್ತಿಲ್ಲ. ನಾವೆಲ್ಲರೂ ಭಾರತೀಯರು ಎಂದ ಮೇಲೆ ದೇಶದ ಕಾನೂನು ಪಾಲಿಸಲು ಅವರಿಗೆ ಸಮಸ್ಯೆ ಏನುನ ಎಂದಿದ್ದಾರೆ.&lt;/p&gt;&lt;p&gt;ಇನ್ನು ಗುಟ್ಕಾ ನಿಷೇಧದಿಂದ ಯಾವುದೇ ಸಮಸ್ಯೆ ಆಗಲ್ಲ ಅಂತ ಅಡಿಕೆ ಬೆಳೆಗಾರರ ಸಂಘವೇ ಸ್ಪಷ್ಟಪಡಿಸಿದೆ, ಬಿಜೆಪಿಯವರಿಗೆ ಅದೇ ಉತ್ತರ ಸಾಕಲ್ವಾ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ತಿರುಗೇಟು ನೀಡಿದ್ದಾರೆ. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸರ್ಕಾರ ಮೋಸ ಮಾಡಲು ಹೊರಟಿದೆ ಎಂದು ಬಿಜೆಪಿ ಆರೋಪಿಸುತ್ತಿರುವ ವಿಚಾರಕ್ಕೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ ವಿಚಾರ, ಕೇಂದ್ರದಿಂದ ಬರುವ ಅನುದಾನಗಳ ಬಗ್ಗೆ ಮಾತನಾಡುವುದಕ್ಕೆ ಆಗಲ್ಲ. ರಾಜ್ಯದಲ್ಲಿ ಹೆಚ್ಚು ಸಂಸದರು ಇರುವುದು ಯಾವ ಪಕ್ಷದಲ್ಲಿ, ಕೇಂದ್ರದಲ್ಲಿ ಆಡಳಿತದಲ್ಲಿ ಇರುವುದು ಯಾವ ಪಕ್ಷ. ರಾಜ್ಯದ ಪಾಲನ್ನು ಕೇಳಿ ಆರ್ಥಿಕ ಮುನ್ನೆಡೆಗೆ ಅವರು ಸಹಕರಿಸುತಿದ್ದಾರೆಯೇ ಎಂದು ಪ್ರಶ್ನಿಸಿದರು.&lt;/p&gt;&lt;p&gt;ಕೇಂದ್ರದಿಂದ ನಮಗೆ ಬರಬೇಕಾಗಿರುವ ಪಾಲೆಷ್ಟು, ನಮಗೆ ಆಗುತ್ತಿರುವ ವಂಚನೆ ಬಗ್ಗೆ ಯಾಕೆ ಬಿಜೆಪಿಯವರು ಮಾತನಾಡಲ್ಲ. ಇಲ್ಲಿ ಇರುವೆ ಹೋಯ್ತು ಎನ್ನುವುದಕ್ಕೆ ಮಾತನಾಡುತ್ತಾರೆ, ಆದರೆ ಅಲ್ಲಿ ಆನೆ ಹೋಯ್ತು ಎನ್ನುವುದಕ್ಕೆ ಯಾಕೆ ಮಾತನಾಡಲ್ಲ. ನಾವು ಕರ್ನಾಟಕದ ಸ್ವಾಭಿಮಾನವನ್ನು ಎತ್ತಿಡಿಯಬೇಕು. ಕ್ಷುಲ್ಲಕ ವಿಚಾರಕ್ಕೆ ಮಾತನಾಡುವುದಲ್ಲ ಎಂದು ಬಿಜೆಪಿ ನಾಯಕರಿಗೆ ಸಚಿವ ನರೇಂದ್ರಸ್ವಾಮಿ ತಿರುಗೇಟು ನೀಡಿದ್ದಾರೆ. ಇವರು ಕನ್ನಡಿಗರಲ್ವಾ ನಮ್ಮ ರಾಜ್ಯದ ಜನತೆಯ ಮತ ಪಡೆದಿಲ್ವಾ ಇವರು. ಸಣ್ಣವಿಚಾರವನ್ನು ಮಾತನಾಡುವ ಇವರು ದೊಡ್ಡ ವಿಚಾರವನ್ನು ಯಾಕೆ ಗೌಣ ಮಾಡುತ್ತಿದ್ದಾರೆ. ಅವರು ಅದಕ್ಕೆ ಉತ್ತರ ಕೊಡಲಿ, ಆ ಮೇಲೆ ನಾನು ಮಾತನಾಡುತ್ತೇನೆ ಎಂದು ಮಡಿಕೇರಿಯಲ್ಲಿ ಸಚಿವ ನರೇಂದ್ರ ಸ್ವಾಮಿ ತಿರುಗೇಟು ನೀಡಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gutka-ban-row-narendra-swamy-hits-back-at-bjp-over-arecanut-farmers-gvd/articleshow-it2f7z6"/>
        </item>
        <item>
            <title><![CDATA[ಕೊಡಗು: ರೈತರ ವಿರೋಧದ ನಡುವೆಯೂ ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ರಹಸ್ಯವಾಗಿ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ!]]></title>
            <link>https://kannada.asianetnews.com/karnataka-districts/cauvery-water-dispute-harangi-dam-releases-water-to-tamil-nadu-amid-farmer-protests-gdp/articleshow-lzakbzg</link>
            <guid isPermaLink="true">https://kannada.asianetnews.com/karnataka-districts/cauvery-water-dispute-harangi-dam-releases-water-to-tamil-nadu-amid-farmer-protests-gdp/articleshow-lzakbzg</guid>
            <pubDate>Thu, 10 Sep 2026 15:27:23 +0530</pubDate>
            <description><![CDATA[ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ಹಿನ್ನೆಲೆಯಲ್ಲಿ, ಕೊಡಗಿನ ಹಾರಂಗಿ ಜಲಾಶಯದಿಂದ ಯಾವುದೇ ಮುನ್ಸೂಚನೆ ಇಲ್ಲದೆ ನೀರು ಬಿಡುಗಡೆ ಮಾಡಲಾಗಿದೆ. ಸರ್ಕಾರದ ಈ ಕ್ರಮವು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krh65h0s7gb99d9qmksjx5w1,imgname-chcjc-1778693358617.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಪ್ರಾಧಿಕಾರ (CWMA) ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿವೆ. ಇದರ ಮಧ್ಯೆ, ಕೊಡಗಿನ ಏಕೈಕ ಜೀವನಾಡಿಯಾದ ಹಾರಂಗಿ ಜಲಾಶಯದಿಂದ ಯಾವುದೇ ಮುನ್ಸೂಚನೆ ನೀಡದೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗಿದೆ ಎಂಬ ಆರೋಪವಿದೆ.&lt;/p&gt;&lt;h2&gt;ಜಲಾಶಯದಿಂದ ನೀರು ಬಿಡುಗಡೆ ವಿವರ&lt;/h2&gt;&lt;p&gt;ಅಧಿಕಾರಿಗಳು ಮಧ್ಯಾಹ್ನ 1 ಗಂಟೆಯಿಂದಲೇ ಹಾರಂಗಿ ಜಲಾಶಯದಿಂದ ಕಾವೇರಿ ನದಿಗೆ ಸುಮಾರು 3 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. ತಮಿಳುನಾಡಿಗೆ ನೀರು ಹರಿಸಬೇಕಾಗಿರುವ ಸರ್ಕಾರದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದ್ದರೂ, ಸ್ಥಳೀಯರಿಗೆ ಮತ್ತು ರೈತರಿಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.&lt;/p&gt;&lt;h2&gt;ರೈತರ ಆಕ್ರೋಶ ಮತ್ತು ಸರ್ಕಾರದ ಧೋರಣೆ&lt;/h2&gt;&lt;p&gt;ಒಂದೆಡೆ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಕಟ್ಟುಪದ್ಧತಿಯಲ್ಲಿ ಮಾತ್ರ ನೀರು ಹರಿಸಲಾಗುವುದು ಎಂದು ಹೇಳುತ್ತಿದೆ. ಅಲ್ಲದೆ, ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ದೀರ್ಘಾವಧಿ ಬೆಳೆಗಳನ್ನು ಬೆಳೆಯದಂತೆ ರೈತರಿಗೆ ಎಚ್ಚರಿಕೆ ನೀಡಿದೆ. ಆದರೆ, ಇತ್ತ ಕಡೆ ಮಾತ್ರ ಯಾವುದೇ ಮುಂಜಾಗರೂಕತೆ ಇಲ್ಲದೆ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಕರ್ನಾಟಕದ ರೈತರಿಗೆ ಎಸಗಿರುವ ದೊಡ್ಡ ಮೋಸ ಎಂದು ಸಾರ್ವಜನಿಕರು ಹಾಗೂ ಕೃಷಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;ಹಾರಂಗಿ ಜಲಾಶಯದ ಪ್ರಸ್ತುತ ನೀರಿನ ಮಟ್ಟ&lt;/h2&gt;&lt;p&gt;ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ: 8.5 ಟಿಎಂಸಿ ಅಡಿ (2859 ಅಡಿ)&lt;/p&gt;&lt;p&gt;ಪ್ರಸ್ತುತ ನೀರಿನ ಮಟ್ಟ: 8.03 ಟಿಎಂಸಿ ಅಡಿ (2857 ಅಡಿ)&lt;/p&gt;&lt;p&gt;ಬಳಕೆಗೆ ಲಭ್ಯವಿರುವ ನೀರು: ನೈಜವಾಗಿ ಕೇವಲ 7.32 ಟಿಎಂಸಿ ಅಡಿ ಮಾತ್ರ ಬಳಕೆಗೆ ಲಭ್ಯವಿದೆ.&lt;/p&gt;&lt;p&gt;ಡೆಡ್ ಸ್ಟೋರೇಜ್: ಜಲಾಶಯದಲ್ಲಿರುವ ನೀರಿನಲ್ಲಿ ಸರಿಸುಮಾರು 1 ಟಿಎಂಸಿ ಅಡಿ ನೀರು ಡೆಡ್ ಸ್ಟೋರೇಜ್ ಆಗಿದೆ.&lt;/p&gt;&lt;h2&gt;ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ&lt;/h2&gt;&lt;p&gt;ಸಾಮಾನ್ಯವಾಗಿ ಅಧಿಕೃತವಾಗಿ ನೀರು ಹರಿಸುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕಾಗುತ್ತದೆ. ಆದರೆ ಈ ಬಾರಿ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ನೀರು ಬಿಡುಗಡೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಶೇಷವೆಂದರೆ, ಈ ಕುರಿತು ಮಾಹಿತಿ ಪಡೆಯಲು ಸ್ಥಳೀಯರು ಮತ್ತು ಮಾಧ್ಯಮದವರು ಅಧಿಕಾರಿಗಳಿಗೆ ಕರೆ ಮಾಡಿದರೂ ಯಾರೂ ಸಹ ಕರೆ ಸ್ವೀಕರಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category>kodagu</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/cauvery-water-dispute-harangi-dam-releases-water-to-tamil-nadu-amid-farmer-protests-gdp/articleshow-lzakbzg"/>
        </item>
        <item>
            <title><![CDATA[Kodagu Landslide: ಕುಂದಚೇರಿ ಬೆಟ್ಟದ ಸದ್ದು: ಕುಸಿತದ ಭೀತಿಯಲ್ಲಿ ಗ್ರಾಮ, ಸ್ಥಳಾಂತರ]]></title>
            <link>https://kannada.asianetnews.com/karnataka-districts/kodagu-small-landslide-occurs-in-kundacheri-village-of-madikeri-taluk-families-displaced-mrq/articleshow-p0zma02</link>
            <guid isPermaLink="true">https://kannada.asianetnews.com/karnataka-districts/kodagu-small-landslide-occurs-in-kundacheri-village-of-madikeri-taluk-families-displaced-mrq/articleshow-p0zma02</guid>
            <pubDate>Thu, 03 Sep 2026 05:59:20 +0530</pubDate>
            <description><![CDATA[ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದಲ್ಲಿ ಬೆಟ್ಟ ಕುಸಿತ ಸಂಭವಿಸಿದ್ದು, ಕೆಳಭಾಗದಲ್ಲಿ ವಾಸಿಸುತ್ತಿರುವ 15 ಕುಟುಂಬಗಳಲ್ಲಿ ಆತಂಕ ಸೃಷ್ಟಿಸಿದೆ. ಮುಂಜಾಗ್ರತಾ ಕ್ರಮವಾಗಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತೀವ್ರ ಅಪಾಯದಲ್ಲಿದ್ದ ಕೆಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1japjv33a15b3k5n7pe8z0c,imgname-kodagu-landslide-1788395342691.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು: &lt;/strong&gt;ಮಡಿಕೇರಿ ತಾಲೂಕು ಕುಂದಚೇರಿ ಗ್ರಾಮದ ವ್ಯಾಪ್ತಿಯಲ್ಲಿ ಬೆಟ್ಟ ಕುಸಿತ ಸಂಭವಿಸಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಬೆಟ್ಟದ ಕೆಳಗೆ ಭಾಗದ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.&lt;/p&gt;&lt;h2&gt;&lt;strong&gt;ಉರುಳಿದ ಮೇಲ್ಭಾಗದಲ್ಲಿ ಮಣ್ಣು ಹಾಗೂ ಸಣ್ಣ ಪ್ರಮಾಣದ ಕಲ್ಲುಗಳು&lt;/strong&gt;&lt;/h2&gt;&lt;p&gt;ಕುಂದಚೇರಿ ಗ್ರಾಮದ ಪೂವಲಮಾನಿ ಎಸ್ಇ ಕಾಲೋನಿಯಲ್ಲಿ ಸುಮಾರು 15 ಕುಟುಂಬಗಳು ವಾಸವಾಗಿದ್ದು ಇದರ ಮೇಲ್ಭಾಗದಲ್ಲಿ ಮಣ್ಣು ಹಾಗೂ ಸಣ್ಣ ಪ್ರಮಾಣದ ಕಲ್ಲುಗಳು ಉರುಳಿವೆ. ಈ ವಿಚಾರ ಬೆಟ್ಟದ ಕೆಳಭಾಗದಲ್ಲಿ ಜನವಸತಿಯ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಾಹಿತಿ ತಿಳಿದ ಗ್ರಾಮ ಪಂಚಾಯಿತಿ, ಕಂದಾಯ, ಅರಣ್ಯ ಹಾಗೂ ಎನ್ ಡಿಆರ್ ಎಫ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಟ್ಟದ ಪ್ರಸ್ತುತ ಸ್ಥಿತಿಯಲ್ಲಿ ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಅಗತ್ಯ ಮುನ್ನೆಚ್ಚರಿಕೆ ಕ್ರಮ&lt;/strong&gt;&lt;/h3&gt;&lt;p&gt;ಈ ವ್ಯಾಪ್ತಿಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಟ್ಟದ ಕೆಳಭಾಗದಲ್ಲಿ ವಾಸವಾಗಿದ್ದ ಕುಟುಂಬಗಳನ್ನು ತಾತ್ಕಾಲಿಕವಾಗಿ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;ಕಂದಾಯ ಪರಿವೀಕ್ಷಕರಾಗಿರುವ ಶಿವಕುಮಾರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹರೀಶ್, ಗ್ರಾಮ ಲೆಕ್ಕಿಗ ಜನಾರ್ದನ, ಎನ್ ಡಿ ಆರ್ ಎಫ್, ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.&lt;/p&gt;&lt;h3&gt;&lt;strong&gt;ತಂತಿ ಬೇಲಿ ನಿರ್ಮಾಣ&lt;/strong&gt;&lt;/h3&gt;&lt;p&gt;ಪೂವಲಮಾನಿ ಎಸ್ಇ ಕಾಲೋನಿ ಮೇಲ್ಭಾಗದ ಬೆಟ್ಟದಲ್ಲಿ ಮಣ್ಣು ಹಾಗೂ ಬಂಡೆಕಲ್ಲು ಕುಸಿದಿರುವುದರಿಂದ ಹೆಚ್ಚಿನ ಅಪಾಯವನ್ನು ತಡೆಗಟ್ಟಲು ತಂತಿ ಬೇಲಿ ನಿರ್ಮಿಸಿ ಬಂಡೆಗಳು ಉರುಳದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ತೀವ್ರ ನಿಗವಹಿಸಲಾಗಿದೆ. ತೀರಾ ಅಪಾಯದಲ್ಲಿರುವ ಎರಡು ಮನೆಯ ಕುಟುಂಬಗಳನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕುಂದಚೇರಿ ಗ್ರಾಮ ಅಭಿವೃದ್ಧಿ ಅಧಿಕಾರಿ ಹರೀಶ್ ಹೇಳುತ್ತಾರೆ.&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kodagu-small-landslide-occurs-in-kundacheri-village-of-madikeri-taluk-families-displaced-mrq/articleshow-p0zma02"/>
        </item>
        <item>
            <title><![CDATA[ಬೆಂಗಳೂರು ವಿಮಾನ ನಿಲ್ದಾಣದಿಂದ ದ. ಕೊಡಗಿಗೆ ಫ್ಲೈಬಸ್ ಸೇವೆ; ವೇಳಾಪಟ್ಟಿ ಇಲ್ಲಿದೆ ನೋಡಿ]]></title>
            <link>https://kannada.asianetnews.com/karnataka-districts/ksrtc-flybus-service-from-bengaluru-airport-to-south-kodagu-check-the-schedule-here-mrq/articleshow-p8z3xul</link>
            <guid isPermaLink="true">https://kannada.asianetnews.com/karnataka-districts/ksrtc-flybus-service-from-bengaluru-airport-to-south-kodagu-check-the-schedule-here-mrq/articleshow-p8z3xul</guid>
            <pubDate>Sun, 09 Aug 2026 09:13:54 +0530</pubDate>
            <description><![CDATA[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಆಗಸ್ಟ್ 15 ರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಲ್ಲಿಕೋಟೆಗೆ ಹೊಸ ಫ್ಲೈಬಸ್ ಸೇವೆಯನ್ನು ಆರಂಭಿಸುತ್ತಿದೆ. ಈ ಬಸ್ ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಪೊನ್ನಂಪೇಟೆ, ಮತ್ತು ಕುಟ್ಟ ಮಾರ್ಗವಾಗಿ ಸಂಚರಿಸಲಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj9sn1d394y1kt5ma5ypqhh,imgname-ksrtc-flybus-1786246911021.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪೊನ್ನಂಪೇಟೆ:&lt;/strong&gt; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೂತನವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳದ ಕಲ್ಲಿಕೋಟೆಗೆ ಫ್ಲೈ ಬಸ್ ಸೇವೆ ಆರಂಭಿಸಲಿದ್ದು, ಇದು ದಕ್ಷಿಣ ಕೊಡಗಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಆ. 15ರಿಂದ ಈ ನೂತನ ಬಸ್ ಸೇವೆ ಪ್ರಾರಂಭವಾಗಲಿದೆ.&lt;/p&gt;&lt;h2&gt;&lt;strong&gt;ಬಸ್ ಸಮಯ ಈ ರೀತಿಯಾಗಿದೆ&lt;/strong&gt;&lt;/h2&gt;&lt;p&gt;ರಾತ್ರಿ 10.40 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಈ ಬಸ್ಸು ಮೈಸೂರು, ಹುಣಸೂರು ಮಾರ್ಗವಾಗಿ ಬೆಳಗಿನ ಜಾವ 4:15 ಗಂಟೆಗೆ ಗೋಣಿಕೊಪ್ಪಲು, 4:20 ಗಂಟೆಗೆ ಪೊನ್ನಂಪೇಟೆ ಮತ್ತು 4:50 ಗಂಟೆಗೆ ಕುಟ್ಟ ತಲುಪಲಿದೆ. ನಂತರ ಮಾನಂದವಾಡಿ- ಕಲ್ಪೆಟ್ಟ ಮಾರ್ಗವಾಗಿ ಬೆಳಗ್ಗೆ 7:15 ಗಂಟೆಗೆ ಕಲ್ಲಿಕೋಟೆ ತಲುಪಲಿದೆ.&lt;/p&gt;&lt;p&gt;ಅದೇ ರೀತಿ ರಾತ್ರಿ 7:30 ಗಂಟೆಗೆ ಕಲ್ಲಿಕೋಟೆಯಿಂದ ಹೊರಡುವ ಈ ಬಸ್ಸು, ಕಲ್ಪೆಟ್ಟ-ಮಾನದವಾಡಿ ಮಾರ್ಗವಾಗಿ ರಾತ್ರಿ 10:15 ಗಂಟೆಗೆ ಕುಟ್ಟ ತಲುಪಲಿದೆ. ಅಲ್ಲಿಂದ ರಾತ್ರಿ 10:45ಕ್ಕೆ ಪೊನ್ನಂಪೇಟೆಯಿಂದ, 10:50ಕ್ಕೆ ಗೋಣಿಕೊಪ್ಪದಿಂದ ಹೊರಡುವ ಬಸ್ಸು ಹುಣಸೂರು-ಮೈಸೂರು ಮಾರ್ಗದಲ್ಲಿ ಸಂಚರಿಸಿ ಬೆಳಗಿನ ಜಾವ 4:15 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.&lt;/p&gt;&lt;h3&gt;&lt;strong&gt;ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ&lt;/strong&gt;&lt;/h3&gt;&lt;p&gt;ದಕ್ಷಿಣ ಕೊಡಗಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯ ಒದಗಿಸಲು ಸಾಕಷ್ಟು ಬಾರಿ ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದೀಗ ನೂತನ ಈ ಫ್ಲೈ ಬಸ್ ಸೇವೆಯಿಂದಾಗಿ ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇನ್ನು ದ. ಕೊಡಗಿನ ವಿಮಾನ ಯಾತ್ರಿಗಳು ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಭಾಗಗಳಿಂದ ನೇರವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬಹುದಾಗಿದೆ.&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ksrtc-flybus-service-from-bengaluru-airport-to-south-kodagu-check-the-schedule-here-mrq/articleshow-p8z3xul"/>
        </item>
        <item>
            <title><![CDATA[‘ಮೇಕೆದಾಟು ಸರಿಯಾದ ಪರಿಹಾರ’: ಕಾವೇರಿ ವಿವಾದದ ನಡುವೆ ಸಚಿವ ನರೇಂದ್ರಸ್ವಾಮಿ ಹೇಳಿಕೆ]]></title>
            <link>https://kannada.asianetnews.com/karnataka-districts/mekedatu-project-is-the-solution-to-cauvery-crisis-says-minister-narendra-swamy-gvd/articleshow-rzwbgue</link>
            <guid isPermaLink="true">https://kannada.asianetnews.com/karnataka-districts/mekedatu-project-is-the-solution-to-cauvery-crisis-says-minister-narendra-swamy-gvd/articleshow-rzwbgue</guid>
            <pubDate>Sat, 15 Aug 2026 16:27:07 +0530</pubDate>
            <description><![CDATA[&lt;p&gt;ಭಾರತ ಒಂದು ಒಕ್ಕೂಟದ ರಾಷ್ಟ್ರ, ಎಲ್ಲಾ ರಾಜ್ಯಗಳು ಎಲ್ಲ ಪರಿಸ್ಥಿತಿಯನ್ನು ಹಂಚಿಕೊಳ್ಳಬೇಕಾಗಿದೆ. ಈಗ ಸಿಡಬ್ಲ್ಯೂಆರ್ ಸಿ ಮತ್ತು ಸಿಡಬ್ಲ್ಯೂಎಂಎ ನೀಡಿರುವ ಆದೇಶವನ್ನು ನಾವು ಪಾಲಿಸಬೇಕಲ್ವಾ. ಅದರ ನಡುವೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02h2e7vv4qq9wqsewexmgdg,imgname-bj-j-1786791409915.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.15):&lt;/strong&gt; ಭಾರತ ಒಂದು ಒಕ್ಕೂಟದ ರಾಷ್ಟ್ರ, ಎಲ್ಲಾ ರಾಜ್ಯಗಳು ಎಲ್ಲ ಪರಿಸ್ಥಿತಿಯನ್ನು ಹಂಚಿಕೊಳ್ಳಬೇಕಾಗಿದೆ. ಈಗ ಸಿಡಬ್ಲ್ಯೂಆರ್ ಸಿ ಮತ್ತು ಸಿಡಬ್ಲ್ಯೂಎಂಎ ನೀಡಿರುವ ಆದೇಶವನ್ನು ನಾವು ಪಾಲಿಸಬೇಕಲ್ವಾ. ಅದರ ನಡುವೆ ನಾವು ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವೆ, ತಮಿಳುನಾಡು ಕೂಡ ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಸೋಮವಾರ ಅದು ವಿಚಾರಣೆಗೆ ಬರುತ್ತಿದ್ದು, ಈ ಆದೇಶವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದು ಕೃಷಿ ಸಚಿವ ಹಾಗೂ ಕೊಡಗು ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೇಳಿದ್ದಾರೆ.&lt;/p&gt;&lt;p&gt;ಕಾಲುವೆಗಳ ಮೂಲಕ ರೈತರಿಗೆ ನೀರು ಕೊಡದೆ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಪಕ್ಕದ ರಾಜ್ಯದ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ನಾವು ಒಂದು ತೀರ್ಮಾನ ಮಾಡಬೇಕಾಗುತ್ತದೆ. ಸೋಮವಾರ ಬರುವ ತೀರ್ಮಾನದ ಮೇಲೆ ನಾವು ಒಂದು ನಿರ್ಧಾರಕ್ಕೆ ಬರುತ್ತೇವೆ. ಅಲ್ಲಿಯವರೆಗೆ ನಾವು ಈ ಚಳವಳಿ, ವಿರೋಧದ ವಿಚಾರದಲ್ಲಿ ಮಾತನಾಡಲಾಗಲ್ಲ ಎಂದಿದ್ದಾರೆ. ಪಕ್ಕದ ರಾಜ್ಯದ ಮೇಲೆ ಕರುಣೆ ತೋರಿಸುತ್ತಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಇದನ್ನು ತಪ್ಪು ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ, ನಾವು ಸಮವಾಗಿ ಈ ವಿಚಾರ ಹಂಚಿಕೊಳ್ಳಬೇಕಾಗಿದೆ.&lt;/p&gt;&lt;p&gt;ಇದಾದ ಮೇಲೆ ಮೇಕೆದಾಟು ಯೋಜನೆ ಇದೆ, ಮೇಕೆದಾಟು ನಿರ್ಮಾಣಕ್ಕೆ ಇದ್ದ ಎಲ್ಲಾ ಅಡೆತಡೆ ನಿವಾರಣೆ ಆಗಿವೆ. ಈಗ ಅದನ್ನು ಆರಂಭಿಸುವ ಸಂದರ್ಭದಲ್ಲಿ ಕೆಳಗಿನ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ನಿಭಾಯಿಸಬೇಕಾಗಿದೆ. ಕೆಲವು ಸಂದರ್ಭದಲ್ಲಿ 500 ರಿಂದ 600 ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತದೆ. ಈ ಸಂಕಷ್ಟ ಬಗೆಹರಿಸಲು ಮೇಕೆದಾಟು ಸರಿಯಾದ ಪರಿಹಾರ. ನ್ಯಾಯಾಲಯ ಏನು ತೀರ್ಮಾನ ನೀಡುತ್ತದೆ. ಅದನ್ನು ತಾಳ್ಮೆ, ಜಾಣ್ಮೆಯಿಂದ ಇದನ್ನು ಪರಿಹರಿಸಬೇಕಾಗಿದೆ ಎಂದು ಮಡಿಕೇರಿಯಲ್ಲಿ ಕೊಡಗು ಉಸ್ತುವಾರಿ, ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ. ಇನ್ನು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಹಾಗೂ ಉಸ್ತುವಾರಿಯಿಂದ ವಿನಾಯಿತಿ ಕೊಡುವಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಚಿವ ಜಮೀರ್ ಅಹಮ್ಮದ್ ಅವರನ್ನು ಕೃಷಿ ಸಚಿವ ನರೇಂದ್ರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;p&gt;ಆ ರೀತಿ ಹೇಳಿರುವುದಕ್ಕೆ ಸಾಧ್ಯವೇ ಇಲ್ಲ ಎಂದ ನರೇಂದ್ರಸ್ವಾಮಿ, ಸದನದಲ್ಲಿ ನಾನು ಇದ್ದೇ ನನ್ನ ಗಮನಕ್ಕೆ ಅದು ಬಂದಿಲ್ಲ. ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರಬಹುದೇನೋ ಅದರ ಬಗ್ಗೆ ನನಗೆ ಅರಿವಿಲ್ಲ ಎಂದು ಮಡಿಕೇರಿಯಲ್ಲಿ ಸಚಿವ ನರೇಂದ್ರ ಸ್ವಾಮಿ ಹೇಳಿದರು. ಉಸ್ತುವಾರಿ ಜಿಲ್ಲೆ ಹಂಚಿಕೆ ಮಾಡಿದಾಗ ಅವರು ಇರಲಿಲ್ಲ. ಸದನ ಮುಗಿಸಿ ಜಮೀರ್ ಅವರು ಹೋಗಿದ್ದರು. ಅವರಿಗೆ ಜಿಲ್ಲಾ ಉಸ್ತುವಾರಿ ಜಮೀರ್ ಅವರೇ ಕೇಳಿದ್ದರೋ, ಇಲ್ಲ ಸಿಎಂ ಅವರೇ ಕೊಟ್ಟಿದ್ದರೋ ಗೊತ್ತಿಲ್ಲ. ರಾಜ್ಯದಲ್ಲಿ 31 ಜಿಲ್ಲೆಗಳಿವೆ ನಾವು 34 ಜನರು ಇದ್ದೇವೆ. ಇನ್ನೂ ಮೂರು ಜಿಲ್ಲೆಗಳ ಕೊರತೆ ಇರುತ್ತದೆ ಎಂದು ಮಡಿಕೇರಿಯಲ್ಲಿ ಸಚಿವ ನರೇಂದ್ರ ಸ್ವಾಮಿ ಹೇಳಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mekedatu-project-is-the-solution-to-cauvery-crisis-says-minister-narendra-swamy-gvd/articleshow-rzwbgue"/>
        </item>
        <item>
            <title><![CDATA[‘ನಮ್ಮದೇ ಸರ್ಕಾರ ಅಂತ ಕಾನೂನು ದುರ್ಬಳಕೆ ಮಾಡೋಕೆ ಆಗಲ್ಲ’: RSS ವಿವಾದದಲ್ಲಿ ಡಿಕೆಶಿ ಸ್ಪಷ್ಟನೆ]]></title>
            <link>https://kannada.asianetnews.com/karnataka-districts/cm-dk-shivakumar-responds-to-rss-row-everyone-must-follow-the-law-gvd/articleshow-ss8oxly</link>
            <guid isPermaLink="true">https://kannada.asianetnews.com/karnataka-districts/cm-dk-shivakumar-responds-to-rss-row-everyone-must-follow-the-law-gvd/articleshow-ss8oxly</guid>
            <pubDate>Sun, 16 Aug 2026 20:06:54 +0530</pubDate>
            <description><![CDATA[&lt;p&gt;ಆರ್ ಎಸ್ ಎಸ್ ಹಿಂದೆಯೂ ನೋಂದಣಿಯಾಗಿಲ್ಲ ಮುಂದೆಯೂ ನೋಂದಣಿ ಆಗಲ್ಲ ಎಂದಿರುವ ಆರ್ಎಸ್ಎಸ್ ರಾಷ್ಟ್ರೀಯ ನಾಯಕ ಸಂತೋಷ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತಣ್ಣಗೆ ತಿರುಗೇಟು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01ea4f7ctga93wq6xyt2m29,imgname-----------------------2026-08-15t061905.141-1786754961894.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.16): &lt;/strong&gt;ಸರ್ಕಾರಿ ಜಾಗ ಹಾಗೂ ಮೈದಾನಗಳನ್ನು ಬಳಸಿಕೊಳ್ಳಲು ಅನುಮತಿ ಪಡೆಯಬೇಕು ಎಂಬ ವಿಧೇಯ ಮಂಡಿಸಿರುವ ವಿಚಾರದಲ್ಲಿ ಆರ್ ಎಸ್ ಎಸ್ ಹಿಂದೆಯೂ ನೋಂದಣಿಯಾಗಿಲ್ಲ ಮುಂದೆಯೂ ನೋಂದಣಿ ಆಗಲ್ಲ ಎಂದಿರುವ ಆರ್ಎಸ್ಎಸ್ ರಾಷ್ಟ್ರೀಯ ನಾಯಕ ಸಂತೋಷ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತಣ್ಣಗೆ ತಿರುಗೇಟು ನೀಡಿದ್ದಾರೆ. ಯಾರನ್ನೂ ನಾವು ಮನ ನೋಯಿಸುವುದಕ್ಕೆ ಈ ಕಾನೂನು ಮಾಡುತ್ತಿಲ್ಲ. ಕೋರ್ಟ್ ಆದೇಶಗಳನ್ನು ಪಾಲಿಸಿ ಕಾನೂನು ಮಾಡುತ್ತಿದ್ದೇವೆ. ಕೋರ್ಟಿನ ಕಾನೂನಿಗೆ ಗೌರವ ಕೊಡಬೇಕಲ್ವಾ?. ಆದ್ದರಿಂದ ಇದನ್ನು ಎಲ್ಲರೂ ಪಾಲಿಸಲೇಬೇಕು ಎಂದಿದ್ದಾರೆ.&lt;/p&gt;&lt;p&gt;ನಾವು ಫ್ರೀಡಂ ಹಬ್ಬ ಮಾಡಿದೆವು, ಆಗಲೂ ನಾವು ಪರ್ಮಿಷನ್ ತೆಗೆದುಕೊಂಡೇ ಮಾಡಿದ್ದೇವೆ. ಸಚಿವ ಕೃಷ್ಣಭೈರೇಗೌಡರು ಪರ್ಮಿಷನ್ ತೆಗೆದುಕೊಂಡು ಫ್ರೀಡಂ ಹಬ್ಬ ಮಾಡಿದರು. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭ ಹೆಲಿಪ್ಯಾಡ್ನಲ್ಲಿಯೇ ಮಾಧ್ಯಮಗಳೊಂದಿಗೆ ಮಾತನಾಡಿದರು. ನಾವು ಯಾರನ್ನೂ ಗುರಿಯಾಗಿಸಿಕೊಂಡು ಈ ಕಾನೂನು ಮಾಡುತ್ತಿಲ್ಲ. ಹೀಗಾಗಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿದಂತೆ ಯಾವುದೇ ಸಂಘಟನೆ ನೋವು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದರು.&lt;/p&gt;&lt;p&gt;ನಮ್ಮ ಪಕ್ಷದಿಂದ ಭಾರತ್ ಜೋಡೋ ಕಾರ್ಯಕ್ರಮ ಮಾಡಿದೆವು. ಆಗ ರಾಹುಲ್ ಗಾಂಧಿಯವರು, ಖರ್ಗೆ ಸಾಹೇಬರು ಬಂದಿದ್ದರು. ಈ ವೇಳೆ ಫ್ರೀಡಂ ಪಾರ್ಕ್ ನಿಂದ ರ್ಯಾಲಿ ಮಾಡಲು ಅವಕಾಶ ಇರಲಿಲ್ಲ, ಕೋರ್ಟಿನಿಂದ ಅನುಮತಿ ಪಡೆಯಬೇಕಾಗಿತ್ತು. ನಾವು ರಾಹುಲ್ ಗಾಂಧಿಜಿಗೆ ಹಾಗೂ ಖರ್ಗೆಯವರಿಗೆ ಹೇಳಿ ಱಲಿ ಸಾಧ್ಯವಿಲ್ಲ ಎಂದು ಮನಪರಿವರ್ತನೆ ಮಾಡಿದೆವು. ನಮ್ಮದೇ ಸರ್ಕಾರ ಅಂತ ನಾವು ಕಾನೂನು ದುರ್ಬಳಕೆ ಮಾಡಿಕೊಳ್ಳಲು ಆಗಲ್ಲ ಎಂದರು. ಇನ್ನು ಚರಕ ಅಥವಾ ಉಪ್ಪಿನ ಸತ್ಯಾಗ್ರಹದಿಂದಲೇ ಸ್ವಾತಂತ್ರ್ಯ ಬಂದಿಲ್ಲ ಎಂದು ಸಂತೋಷ್ ಅವರು ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್ ಅವರು ಸಂತೋಷ್ ಅವರು ಹಿರಿಯರಿದ್ದಾರೆ, ನಾವು ಅವರ ಮಾತಿಗೂ ಗೌರವ ಕೊಡೋಣ. ಆದರೆ ಮೊದಲಿನಿಂದಲೂ ಇರುವ ಕಾನೂನಿಗೆ ಗೌರವ ಕೊಡೋಣ, ಆ ಮೂಲಕ ನೀವು ಕಾನೂನು ಪಾಲಿಸಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚ್ಯವಾಗಿ ಹೇಳಿದರು.&lt;/p&gt;&lt;p&gt;ಇನ್ನು ಚಾಮರಾಜನಗರದ ಹನೂರು ಅರಣ್ಯ ಪ್ರದೇಶದಲ್ಲಿ ನಡೆದಿರುವ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಕರಣದಲ್ಲಿ ಮೃತಪಟ್ಟವರು ಬೇಟೆಗೆ ಹೋಗಿದ್ದರು ಎನ್ನುವುದು ಬೆಳಿಗ್ಗೆ ನನ್ನ ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಎನ್ಕೌಂಟರ್ ಆಗಿರುವವರು ಬೇಟೆಗಾರರು, ಅವರ ಬಳಿ, ಕೋವಿ ಮಾಂಸ ದೊರೆತ್ತಿವೆ ಎಂದರೆ, ಅತ್ತ ಸಚಿವ ಪುಟ್ಟರಂಗಶೆಟ್ಟಿ ಅವರು ಮಾತ್ರ ಅವರು ದನ ಮೇಯಿಸಲು ಹೋದವರು ಎನ್ನುತ್ತಿದ್ದಾರೆ.&lt;/p&gt;&lt;p&gt;ಸಚಿವರ ನಡುವೆಯೇ ಗೊಂದಲಗಳಿವೆಯಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೇಟೆಗಾರರು ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಎಲ್ಲಾ ವಿಚಾರ ಎಲ್ಲರಿಗೂ ತಿಳಿಸಲು ಆಗಲ್ಲ. ನನಗೂ ಬೆಳಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಅವರ ಬಳಿ ಇದ್ದ ಬಂದೂಕು ಹಾಗೂ ಎರಡು ಚೀಲ ಮಾಂಸ ವಶಪಡಿಸಿಕೊಂಡಿದ್ದಾರೆ. ಒಬ್ಬ ಎಸ್ಕೇಪ್ ಆಗಿದ್ದು, ಮತ್ತಷ್ಟು ಮಾಹಿತಿ ಬರುವುದು ಇದೆ ಎಂದಿದ್ದಾರೆ. ಅರಣ್ಯ ಇಲಾಖೆಯವರ ಮೇಲೆ ಶೂಟ್ ಆಯಿತು ಹೀಗಾಗಿ ಅವರ ರಕ್ಷಣೆ ಅವರೂ ಶೂಟ್ ಮಾಡಿದಾರೆ ಎನ್ನುತ್ತಿದ್ದಾರೆ. ನೋಡೋಣ ಈಗಾಗಲೇ ಜೂಡಿಷಿಯಲ್ ತನಿಖೆ ಮಾಡಲು ಹೇಳಿದ್ದೇನೆ. ಮೃತಪಟ್ಟ ಮೂವರಿಗೂ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ. ಆದರೆ ಯಾವ ರೀತಿಯ ರೀತಿ ಪರಿಹಾರ ಕೊಡೊದು ಅಂತ ಮುಂದೆ ತೀರ್ಮಾನ ಮಾಡಿ ಹೇಳುತ್ತೇವೆ ಎಂದಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-dk-shivakumar-responds-to-rss-row-everyone-must-follow-the-law-gvd/articleshow-ss8oxly"/>
        </item>
        <item>
            <title><![CDATA[ಕನ್ನಡಿಗರ ಕುಡಿಯುವ ಕಾವೇರಿ ನೀರು ಕಿತ್ತುಕೊಂಡು, ರೈತರ ಬೆಳೆಗಳಿಗೆ ನೀರು ಹರಿಸುತ್ತಿರುವ ತಮಿಳುನಾಡು ಸರ್ಕಾರ!]]></title>
            <link>https://kannada.asianetnews.com/state/karnataka-cauvery-dispute-tamil-nadu-mettur-dam-water-release-crops-krs-dam-inflow/articleshow-szi0fnn</link>
            <guid isPermaLink="true">https://kannada.asianetnews.com/state/karnataka-cauvery-dispute-tamil-nadu-mettur-dam-water-release-crops-krs-dam-inflow/articleshow-szi0fnn</guid>
            <pubDate>Thu, 27 Aug 2026 10:26:47 +0530</pubDate>
            <description><![CDATA[&lt;p&gt;ತೀವ್ರ ಬರಗಾಲದ ನಡುವೆಯೂ ಕರ್ನಾಟಕದಿಂದ ಪಡೆದ ಕಾವೇರಿ ನೀರನ್ನು ತಮಿಳುನಾಡು ತನ್ನ ರೈತರ ಬೆಳೆಗಳಿಗೆ ಹರಿಸಲು ಮುಂದಾಗಿದೆ. ಕನ್ನಡಿಗರ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದ್ದರೂ, ಮೆಟ್ಟೂರು ಜಲಾಶಯದಿಂದ ನೀರು ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyfmchxjdyw6jc67r64c7db,imgname-screenshot-2026-07-07-194927-1783434457660.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಆ.27): ತೀ&lt;/strong&gt;ವ್ರ ಬರಗಾಲದಿಂದ ತತ್ತರಿಸುತ್ತಿರುವ ಕರ್ನಾಟಕದ ಜನರಿಗೆ ಕುಡಿಯಲು ನೀರಿಲ್ಲವೆಂದರೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸಮಿತಿಯಲ್ಲಿ ತಮಗೆ ನೀರು ಬೇಕೇಬೇಕು ಎಂದು ಪಟ್ಟು ಬಿಡದೆ ನೀರು ಬಿಡುಗಡೆ ಮಾಡಿಸಿಕೊಂಡ ತಮಿಳುನಾಡು ಸರ್ಕಾರ, ಇದೀಗ ತನ್ನ ರೈತರಿಗೆ ಡ್ಯಾಂನಿಂದ ಭರಪೂರ ನೀರು ಹರಿಸಲು ಮುಂದಾಗಿದೆ.&lt;/p&gt;&lt;p&gt;ಹೌದು, ಕನ್ನಡಿಗರ ಕುಡಿಯುವ ನೀರನ್ನು ಕಿತ್ತುಕೊಂಡ ತಮಿಳುನಾಡು ಸರ್ಕಾರ, ಮೆಟ್ಟೂರು ಜಲಾಶಯದಿಂದ ಕಾವೇರಿ ನದಿಪಾತ್ರದ ಜಿಲ್ಲೆಗಳ ರೈತರಿಗೆ ಬೆಳೆಗಳನ್ನು ಬೆಳೆಯುವುದಕ್ಕೆ ನೀರು ಹರಿಸಲು ಮುಂದಾಗಿದೆ. ಇನ್ನು ತಮಿಳುನಾಡು ಕಾವೇರಿ ನದಿಪಾತ್ರದ ಜನರ ಜೀವನಾಡಿ ಎಂದೇ ಪರಿಗಣಿಸಲ್ಪಟ್ಟಿರುವ ಮೆಟ್ಟೂರು ಜಲಾಶಯದಿಂದ ಸೆ.1ರಿಂದ ಮುಂದಿನ 45 ದಿನಗಳ ಅವಧಿಗೆ ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ತಮಿಳುನಾಡು ಸರ್ಕಾರ ಬುಧವಾರ ತಿಳಿಸಿದೆ.&lt;/p&gt;&lt;h2&gt;&lt;strong&gt;ಕಾವೇರಿಯ ತವರಿನ ಮಕ್ಕಳಿಗೆ ಅನ್ಯಾಯ&lt;/strong&gt;&lt;/h2&gt;&lt;p&gt;ಕಾವೇರಿ ನದಿಯ ಉಗಮ ಸ್ಥಾನವಾಗಿರುವ ಕನ್ನಡಿಗರ ತವರು ಕರ್ನಾಟಕ ಸರ್ಕಾರ ಈ ಬಾರಿ ಮಳೆಯ ಕೊರತೆ ಕಾರಣ ರೈತರಿಗೆ ನೀರು ಬಿಡದಿರಲು ನಿರ್ಧರಿಸಿದೆ. ಜೊತೆಗೆ, ಕರ್ನಾಟಕದ ಕಾವೇರಿ ನದಿ ಪಾತ್ರಗಳ ರೈತರಿಗೆ ಭತ್ತ ಹಾಗೂ ಕಬ್ಬು ಬೆಳೆಗಳನ್ನು ಹೊರತುಪಡಿಸಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವಂತೆ ಸೂಚನೆಯನ್ನು ನೀಡಿದೆ. ಇಂತಹ ಹೊತ್ತಿನಲ್ಲೇ ಕರ್ನಾಟಕದಿಂದ ಕಸಿದ ನೀರನ್ನು ತನ್ನ ರೈತರಿಗೆ ಹರಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ.&lt;/p&gt;&lt;h2&gt;&lt;strong&gt;ಜಲಾಶಯದ ತೂಬುಗಳನ್ನು ತೆರೆದು ನೀರು&lt;/strong&gt;&lt;/h2&gt;&lt;p&gt;ಸೇಲಂ ಜಿಲ್ಲೆಯ ಮೆಟ್ಟೂರಿನಲ್ಲಿರುವ ಸ್ಟ್ಯಾನ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕಡಿಮೆಯಿದ್ದ ಕಾರಣ, ವಾಡಿಕೆಯಂತೆ ಜೂ.12ರಂದು ನೀರು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನೀರು ಬಿಡುಗಡೆ ಮಾಡುವಂತೆ ಪ್ರತಿಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು ಒತ್ತಾಯಿಸುತ್ತಿದ್ದವು. ಅದರ ಬೆನ್ನಲ್ಲೇ, ಸಿಎಂ ವಿಜಯ್ ಸೆ.1ರಂದು ಅಧಿಕೃತವಾಗಿ ಜಲಾಶಯದ ತೂಬುಗಳನ್ನು ತೆರೆದು ನೀರು ಬಿಡಲಿದ್ದಾರೆ&rsquo; ಎಂದು ತಮಿಳುನಾಡು ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವ ಎನ್. ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;'ಕರ್ನಾಟಕದ ಜಲಾಶಯಗಳಿಂದ ಅಗತ್ಯ ನೀರು ಹರಿಯದ ಕಾರಣ ಹಾಗೂ ಕನಿಷ್ಠ 10 ಟಿಎಂಸಿ ಡೆಡ್ ಸ್ಟೋರೇಜ್&zwnj; ಕಾಯ್ದುಕೊಳ್ಳುವುದು ಅನಿವಾರ್ಯವಾಗಿದ್ದರಿಂದ, ನದೀಪಾತ್ರದ ಪ್ರದೇಶಕ್ಕೆ ಸತತವಾಗಿ ನೀರಾವರಿ ನೀರು ಪೂರೈಸಲು ಸಾಧ್ಯವಾಗಿರಲಿಲ್ಲ. ಆದರೂ ಅಗತ್ಯ ಕುಡಿಯುವ ನೀರಿನ ಪೂರೈಕೆಯನ್ನು ಕಾಯ್ದುಕೊಂಡಿದ್ದೆವು' ಎಂದು ಕರ್ನಾಟಕದ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಕನ್ನಡಿಗರಿಗೆ ಸಂತಸದ ಸುದ್ದಿ: ಕೆಆರ್&zwnj;ಎಸ್ ಒಳಹರಿವು 13,758 ಕ್ಯುಸೆಕ್&zwnj;ಗೆ ಏರಿಕೆ&lt;/strong&gt;&lt;/h2&gt;&lt;p&gt;ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ 13,758 ಸಾವಿರ ಕ್ಯುಸೆಕ್&zwnj; ನೀರು ಹರಿದು ಬರುತ್ತಿದೆ. ಕಳೆದ ಎರಡು ದಿನಗಳಿಂದ ಕೊಡಗು, ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಒಳಹರಿವು ಹೆಚ್ಚಿದ್ದು, ಜಲಾಶಯದ ನೀರಿನ ಮಟ್ಟ 109.15 (ಗರಿಷ್ಠ 124.80)ಅಡಿಗೆ ಏರಿಕೆಯಾಗಿದೆ. 30.875 ಟಿಎಂಸಿ ನೀರು ಸದ್ಯ ಸಂಗ್ರಹವಾಗಿದೆ. ಡ್ಯಾನಿಂದ 4,513 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದೇ ರೀತಿ ಹೊರ ಹರಿವು ಹೆಚ್ಚಾದರೆ ಅಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲಿದೆ. ಆದರೆ, ಪುನಃ ತಮಿಳುನಾಡು ಸರ್ಕಾರ ಈ ನೀರನ್ನೂ ಕೂಡ ತಮಗೆ ಬೇಕೆಂದು ಬಿಡಿಸಿಕೊಂಡಲ್ಲಿ ಕರ್ನಾಟಕದ ರೈತರು ಪುನಃ ಸಂಕಷ್ಟಕ್ಕೆ ಸಿಲುಕಲಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-cauvery-dispute-tamil-nadu-mettur-dam-water-release-crops-krs-dam-inflow/articleshow-szi0fnn"/>
        </item>
        <item>
            <title><![CDATA[ಕಸ್ತೂರಿ ರಂಗನ್ ವರದಿ ಸಾರಸಗಟು ತಿರಸ್ಕಾರಕ್ಕೆ ಯದುವೀರ್ ಅಸಮಾಧಾನ; ಸರ್ಕಾರದ ವಿರುದ್ಧ ವಾಗ್ದಾಳಿ]]></title>
            <link>https://kannada.asianetnews.com/karnataka-districts/mp-yaduveer-expresses-displeasure-over-the-wholesale-rejection-of-the-kasturirangan-report-gkn/articleshow-tgs6hwz</link>
            <guid isPermaLink="true">https://kannada.asianetnews.com/karnataka-districts/mp-yaduveer-expresses-displeasure-over-the-wholesale-rejection-of-the-kasturirangan-report-gkn/articleshow-tgs6hwz</guid>
            <pubDate>Thu, 27 Aug 2026 22:19:02 +0530</pubDate>
            <description><![CDATA[&lt;p&gt;ಕಸ್ತೂರಿ ರಂಗನ್ ವರದಿಯನ್ನು ಸಾರಸಗಟಾಗಿ ತಿರಸ್ಕರಿಸುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಅಸಮಾಧಾನ ಹೊರ ಹಾಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m121xc3mqjmqa7y2fbxdpkkc,imgname-yaduveer-odeyar-on-kasturirangan-report-1787849257076.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು: &lt;/strong&gt;ಕಸ್ತೂರಿ ರಂಗನ್ ವರದಿಯನ್ನು ಸಾರಸಗಟಾಗಿ ತಿರಸ್ಕರಿಸುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಅಸಮಾಧಾನ ಹೊರ ಹಾಕಿದ್ದಾರೆ.&lt;/p&gt;&lt;p&gt;ಕಸ್ತೂರಿ ರಂಗನ್ ವರದಿ ಜಾರಿಗೆ ಕುರಿತಂತೆ ಕರಡು ಅಧಿಸೂಚನೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸಂಸದ ಯದುವೀರ್ ಒಡೆಯರ್ ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನಾ ಸಭೆಯನ್ನು ನಡೆಸಿದರು. ರೈತ ಸಂಘ, ಕೊಡಗು ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಿಂದ ಅಹವಾಲು ಆಲಿಸಿದರು. ವಿವಿಧ ಸಂಘಟನೆಗಳು ಪ್ರಮುಖರು ಕಸ್ತೂರಿ ರಂಗನ್ ವರದಿ ಜಾರಿಗೆ ನಮ್ಮದೇನು ಯಾವುದೇ ಅಭ್ಯಂತರವಿಲ್ಲ. ಆದರೆ ನಮ್ಮ ಕೃಷಿ ಜಮೀನುಗಳಿಗಾಗಲಿ, ನಮ್ಮ ಕೃಷಿಗಾಗಲಿ ಅಥವಾ ನಮ್ಮ ಪಾರಂಪರಿಕ ಕೆಲಸಗಳಿಗೆ ಯಾವುದೇ ಅಡೆತಡೆಗಳು ಎದುರಾಗಬಾರದು ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.&lt;/p&gt;&lt;h2&gt;&lt;strong&gt;ಏಳು ನಿರ್ಣಯ&lt;/strong&gt;&lt;/h2&gt;&lt;p&gt;ಈ ಸಂದರ್ಭ ವಿವಿಧ ಏಳು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು, ನೀವೆಲ್ಲರೂ ಬಹಳ ಉತ್ತಮ ಮಾರ್ಗದರ್ಶನ ನೀಡಿದ್ದೀರಾ. ಅರಣ್ಯದ ಗಡಿಭಾಗದ ನಿವಾಸಿಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಈ ಸಭೆಯ ಮೂಲಕ ಕೆಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಕಸ್ತೂರಿ ರಂಗನ್ ವರದಿ ಇನ್ನೂ ಜಾರಿಯಾಗಿಲ್ಲ. ಆದರೆ ಈ ವರದಿಯನ್ನು ಜೀವಂತವಾಗಿಡಲು ಕಾಲಕಾಲಕ್ಕೆ ಕರಡು ಅಧಿಸೂಚನೆಗಳು ಬರುತ್ತಿವೆ. ಈ ವೇದಿಕೆ ಮುಕ್ತ ಚರ್ಚೆಗಾಗಿ ರೂಪುಗೊಂಡಿದೆ. ಆದರೆ ರಾಜ್ಯ ಸರ್ಕಾರ ವರದಿಯನ್ನು ತಿರಸ್ಕರಿಸುತ್ತೇವೆ ಅಂತ ಅಷ್ಟೇ ಹೇಳುವುದು ಸರಿಯಲ್ಲ. ಇದರಿಂದ ಯಾರಿಗೂ ಲಾಭವಾಗುವುದಿಲ್ಲ. ಅದಕ್ಕೆ ಬದಲಾಗಿ ವೈಜ್ಞಾನಿಕವಾಗಿ ಚರ್ಚಿಸಿ, ಜನರಿಗೆ ಅದರ ಬಗ್ಗೆ ಅರಿವು ಮೂಡಿಸಿ ಕೇಂದ್ರ ಸರ್ಕಾರಕ್ಕೆ ತನ್ನದೇ ಆದ ವರದಿಯನ್ನು ಕೊಡಬೇಕಾಗಿದೆ. ಇಲ್ಲದಿದ್ದರೆ ಇದು ಸುಮ್ಮನೇ ಜನರ ಕಣ್ಣೊರೆಸುವ ತಂತ್ರಗಾರಿಕೆ ಆಗಲಿದೆ ಎಂದಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಕೇರಳದಲ್ಲಿ ಪರಿಸರ ಸೂಕ್ಷ್ಮ ವಲಯವನ್ನು ಕಡಿಮೆ ಮಾಡಿ, ಬಫರ್ ಝೋನ್ ಅನ್ನು ಶೂನ್ಯಕ್ಕೆ ಇಳಿಸಲು ಕೇಂದ್ರಕ್ಕೆ ಸ್ಪಷ್ಟ ಪ್ರಸ್ತಾವನೆ ಸಲ್ಲಿಸಲಾಗಿದೆ. ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಸರಿಯಲ್ಲ ಎಂದಿದ್ದಾರೆ. ಇದು 7ನೇ ಅಧಿಸೂಚನೆ, ಹೀಗೆಯೇ ಬಿಟ್ಟರೆ 9, 10ನೇ ಅಧಿಸೂಚನೆಗಳೂ ಬರಲಿವೆ. ಈಗ ಈ ಸಭೆಯಲ್ಲಿ ನೀವು ಮಂಡಿಸಿರುವ ಎಲ್ಲಾ ವಿಷಯಗಳು ಮಾಹಿತಿ ಪೂರ್ಣವಾಗಿವೆ. ಕಸ್ತೂರಿ ರಂಗನ್ ವರದಿಯ ಪ್ರಕ್ರಿಯೆಯು ಬಹಳ ವಿಸ್ತಾರವಾದದ್ದು. ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾವು ಸತತವಾಗಿ ಕೆಲಸ ಮಾಡುತ್ತಿದ್ದೇವೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಆದರೆ ಕೆಲವು ರಾಜಕೀಯ ಪಕ್ಷಗಳು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿವೆ. ಅರಣ್ಯ ಇಲಾಖೆಯು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆನೆ-ಮಾನವ ಸಂಘರ್ಷದಂತಹ ಜ್ವಲಂತ ಸಮಸ್ಯೆಯಿರುವಾಗ, 2,000 ಕೋಟಿ ರೂಪಾಯಿ ಹಣ ಲಭ್ಯವಿದ್ದರೂ ರಾಜ್ಯ ಸರ್ಕಾರ ಅದನ್ನು ಸೂಕ್ತವಾಗಿ ವೆಚ್ಚ ಮಾಡುತ್ತಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡಿ ಕೇಂದ್ರದ ಮೇಲೆ ತಪ್ಪು ಹೊರಿಸುವುದನ್ನು ಬಿಡಬೇಕು' ಎಂದು ಹೇಳಿದ್ದಾರೆ. ಸಭೆಯಲ್ಲಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಎಂಎಲ್ಸಿ ಸುಜಾಕುಶಾಲಪ್ಪ ಸೇರಿದಂತೆ ಸಾಕಷ್ಟು ಜನರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳು ನೀಡಿದ್ದಾರೆ.&lt;/p&gt;&lt;p&gt;&lt;strong&gt;( ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್)&lt;/strong&gt;&lt;/p&gt;]]></content:encoded>
            <category>kodagu</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/mp-yaduveer-expresses-displeasure-over-the-wholesale-rejection-of-the-kasturirangan-report-gkn/articleshow-tgs6hwz"/>
        </item>
        <item>
            <title><![CDATA[‘35 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ’ ಎಂದ ಸಿಎಂ ಡಿಕೆಶಿ: ಕೊಡಗಿನಲ್ಲಿ ಮಹತ್ವದ ಘೋಷಣೆಗಳೇನು?]]></title>
            <link>https://kannada.asianetnews.com/karnataka-districts/cm-dk-shivakumar-in-kodagu-my-35-year-struggle-has-finally-paid-off-gvd/articleshow-tltfg8y</link>
            <guid isPermaLink="true">https://kannada.asianetnews.com/karnataka-districts/cm-dk-shivakumar-in-kodagu-my-35-year-struggle-has-finally-paid-off-gvd/articleshow-tltfg8y</guid>
            <pubDate>Sun, 16 Aug 2026 19:52:28 +0530</pubDate>
            <description><![CDATA[&lt;p&gt;ನನ್ನ 35 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ, ನಾನು ಪ್ರಾರ್ಥನೆ ಸಲ್ಲಿಸಿದ್ದೆ ಫಲ ಸಿಕ್ಕಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್ ತಾವು ಸಿಎಂ ಆಗಿರುವುದಕ್ಕೆ ಮಾರ್ಮಿಕವಾಗಿ ನುಡಿದಿದ್ದಾರೆ. ನಮ್ಮ ನೀರು ನಮ್ಮ ಹಕ್ಕು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05errrg29szxe1sdj2fwmnr,imgname-vvjhv-1786889659152.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.16): &lt;/strong&gt;ನನ್ನ 35 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ, ನಾನು ಪ್ರಾರ್ಥನೆ ಸಲ್ಲಿಸಿದ್ದೆ ಫಲ ಸಿಕ್ಕಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್ ತಾವು ಸಿಎಂ ಆಗಿರುವುದಕ್ಕೆ ಮಾರ್ಮಿಕವಾಗಿ ನುಡಿದಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಹೋರಾಟಕ್ಕೂ ತಲಕಾವೇರಿಗೆ ಭೇಟಿ ನೀಡಿದ್ದೆ. ನನ್ನ ಪ್ರಾರ್ಥನೆಗೆ ನನಗೆ ಫಲಸಿಕ್ಕಿದೆ ಎಂದರು. ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಸಿಎಂ ಅಲ್ಲಿ ವಿವಿಧ ವಿಶೇಷ ಪೂಜೆಗಳ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೆರೆ, ಜಲಾಶಯಗಳು ಇನ್ನೂ ತುಂಬಿಲ್ಲ.&lt;/p&gt;&lt;p&gt;ಹೆಚ್ಚು ಕಡಿಮೆ ಆದರೆ ಡ್ಯಾಂ ನಲ್ಲಿ ಈಗ ಇರುವ ನೀರನ್ನು ಬೇರೆಯವರಿಗೆ ಕೊಡಬೇಕಾಗುತ್ತದೆ. ಅದಕ್ಕೆ ಕಾನೂನನ್ನು ಪಾಲಿಸಬೇಕು ರೈತರ ಹಿತವನ್ನು ಕಾಪಾಡಬೇಕು ಎನ್ನುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ಮೊರೆ ಹೋಗಿದ್ದೇವೆ, ನಾವು ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ್ದೇವೆ. ಅಲ್ಲಿ ನಮ್ಮ ಪರವಾಗಿ ತೀರ್ಪು ಬರುವ ಸಾಧ್ಯತೆ ಇದೆ ಎಂದರು. ಆದರೆ ರಾಜ್ಯಕ್ಕೆ ಇನ್ನು ವರುಣ ಕೃಪೆ ತೋರಬೇಕಾಗಿದೆ. ಅದಕ್ಕಾಗಿ ಇನ್ನಷ್ಟು ಪೂಜೆ ಪ್ರಾರ್ಥನೆ ಸಲ್ಲಿಸಲು ಇಲ್ಲಿನ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.&lt;/p&gt;&lt;p&gt;ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿದ್ದು ಅದರ ಪರಿಣಾಮವಾಗಿ ಜಲಾಶಯಗಳಿಗೆ ಒಂದಿಷ್ಟು ನೀರು ಬಂದಿದೆ. ಆದರೆ ಕೊಡಗಿನಲ್ಲಿ ಸಾಕಷ್ಟು ಹಾನಿಯಾಗಿದೆ. ಇದನ್ನು ಪರಿಶೀಲಿಸಿ ಸೂಕ್ತ ಪರಿಹಾರ ಘೋಷಿಸಲಾಗುವುದು ಎಂದು ಹೇಳಿದ್ದಾರೆ. ಕೊಡಗಿಗೆ ಸಿಎಂ ಆದ ಬಳಿಕ ಮೊದಲ ಬಾರಿಗೆ ಬಂದಿದ್ದೇನೆ. ರಾಜ್ಯದ ಜಲಾಶಯಗಳು ಭರ್ತಿಯಾಗಲಿ ಎಂದು ಕೊಡಗಿನ ದೈವ ಭಗಂಡೇಶ್ವರನಿಗೆ ಪೂಜೆ, ಪ್ರಾಥ೯ನೆ ಸಲ್ಲಿಸಿದ್ದೇನೆ. ಕೊಡಗಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವರದಿ ಸಂಗ್ರಹಿಸಿ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವೆ ಎಂದಿದ್ದಾರೆ. ಈಗಷ್ಟೇ ಮುಖ್ಯಮಂತ್ರಿಯಾಗಿ ಕಣ್ ಬಿಡ್ತಾ ಇದ್ದೇನೆ. ಮುಂದಿನ ದಿನಗಳಲ್ಲಿ ಕೊಡಗಿಗೆ ವಿಶೇಷ ಪ್ಯಾಕೇಜ್ ಬಗ್ಗೆ ಗಮನ ನೀಡುವೆ ಎಂದಿದ್ದಾರೆ.&lt;/p&gt;&lt;p&gt;ಡಿಸೆಂಬರ್ ಒಳಗೆ ಎಲ್ಲಾ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಡಿಕೇರಿಯಲ್ಲಿ ಹೇಳಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಅವರು ಡಿಸೆಂಬರ್ ಒಳಗೆ ಎಲ್ಲಾ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಚುನಾವಣೆ ಮುಗಿಸುತ್ತೇವೆ. ನೀವೆಲ್ಲ ಕಾರ್ಯಕರ್ತರಿಗೆ ಅಧಿಕಾರ ಕೊಡಬೇಕು. ಆ ಮೂಲಕ ಎಲ್ಲ ಕೆಲಸ ಕಾರ್ಯಗಳಿಗೆ ವೇಗ ನೀಡಬೇಕು.&lt;/p&gt;&lt;p&gt;ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಭಾರತ್ ಜೋಡೋ ಯುವ ಘಟಕ ನಿರ್ಮಾಣ ಆಗಲಿದೆ. ಪ್ರತೀ ಪಂಚಾಯಿತಿಗೆ 10 ಲಕ್ಷ ಅನುದಾನ ನೀಡಲಿದ್ದೇವೆ. ಇದು ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಇದೇ ವೇಳೆ ಕೊಡಗು ಉಸ್ತುವಾರಿ ಸಚಿವ ನರೇಂದ್ರಸ್ವಾಮಿ, ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಇದ್ದರು. ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಡಿಕೇರಿಗೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬೃಹತ್ ಹೂವಿನ ಹಾರ ಹಾಕುವ ಜೊತೆಗೆ ಹೂವಿನ ಮಳೆಗರೆಯಲಾಯಿತು.&lt;/p&gt;&lt;p&gt;ನೂರಾರು ಕಾರ್ಯಕರ್ತರು ಚಂಡೆ ವಾದ್ಯ ಗೊಂಬೆ ಕುಣಿತದ ಮೂಲಕ ಮೂಲಕ ಅದ್ದೂರಿ ಸ್ವಾಗತ ನೀಡಿದರು. ಈ ವೇಳೆಯೂ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಈ ವೇಳೆ ಕೊಡಗಿಗೆ ಬೃಹತ್ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು. ಹಿಂದೆ ನಾನು ಕೊಡಗಿಗೆ ಬಂದಿದ್ದೆ, ಎರಡು ಕ್ಷೇತ್ರಗಳಲ್ಲಿ ಇಬ್ಬರು ಗೆದ್ದು ಶಾಸಕರಾದರು. ಜಿಲ್ಲೆಯ ಜನರು ಆಶೀರ್ವದಿಸಿ ಇಬ್ಬರು ಶಾಸಕರಾದರು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ. ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಮುಂದೆಯೂ ಸಿಎಂ ಆಗಿ ಜಿಲ್ಲೆಗೆ ದೊಡ್ಡ ಯೋಜನೆ ಕೊಡುವುದಾಗಿ ಭರವಸೆ ನೀಡಿದರು.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-dk-shivakumar-in-kodagu-my-35-year-struggle-has-finally-paid-off-gvd/articleshow-tltfg8y"/>
        </item>
        <item>
            <title><![CDATA[ಕೆರೆಗೆ ಹಾರಿದ 14 ವರ್ಷದ ಮಗಳು, ರಕ್ಷಿಸಲು ಮುಂದಾದ ತಾಯಿಯೂ ದಾರುಣ ಸಾವು]]></title>
            <link>https://kannada.asianetnews.com/karnataka-districts/kodagu-tragedy-mother-drowns-attempting-to-save-daughter-after-dispute-over-coming-home-late-gkn/articleshow-uz2uon5</link>
            <guid isPermaLink="true">https://kannada.asianetnews.com/karnataka-districts/kodagu-tragedy-mother-drowns-attempting-to-save-daughter-after-dispute-over-coming-home-late-gkn/articleshow-uz2uon5</guid>
            <pubDate>Tue, 01 Sep 2026 19:35:59 +0530</pubDate>
            <description><![CDATA[&lt;p&gt;ಕೊಡಗಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ತಾಯಿ-ಮಗಳ ದಾರುಣ ಅಂತ್ಯಕ್ಕೆ ಕಾರಣವಾಗಿದೆ. ಕೆರೆಗೆ ಹಾರಿದ ಮಗಳನ್ನು ಉಳಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1emmbqrxkm40h0e8qw1j70k,imgname-kodagu-1788271537911.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು: &lt;/strong&gt;ಮುದ್ದಿನಿಂದ ಸಾಕಿದ ಮಗಳು ಓದಿ ದೊಡ್ಡವಳಾಗಲಿ ಎಂಬ ಆಸೆಯಿಂದ ಪತಿ ದೂರವಾದರೂ ಕೂಲಿ ಕೆಲಸ ಮಾಡಿ ಮಗಳನ್ನು ಓದಿಸುತ್ತಿದ್ದ ಆ ತಾಯಿಯ ಬದುಕು ದಾರುಣವಾಗಿ ಅಂತ್ಯಗೊಂಡಿದೆ. ಮಗಳು ಮನೆಗೆ ತಡವಾಗಿ ಬಂದಿದ್ದಕ್ಕೆ ತಾಯಿ ಗದರಿಸಿದ್ದೇ ಇಬ್ಬರ ಪ್ರಾಣಕ್ಕೆ ಕಂಟಕವಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ತಲಕಾವೇರಿ ಸಮೀಪದ ಕೆಂಪರಾಜಮೊಟ್ಟೆ ಕಾಲೋನಿಯಲ್ಲಿ ನಡೆದಿದೆ.&lt;/p&gt;&lt;p&gt;ಮೃತರನ್ನು 45 ವರ್ಷದ ಪ್ರೇಮಾ ಹಾಗೂ ಅವರ 14 ವರ್ಷದ ಮಗಳು ಪ್ರಿಯಾಂಕ ಎಂದು ಗುರುತಿಸಲಾಗಿದೆ. ಪ್ರಿಯಾಂಕ ಕರಿಕೆಯಲ್ಲಿರುವ ಆಶ್ರಮ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಶನಿವಾರ ಶಾಲೆಯಿಂದ ಊರಿಗೆ ಬಂದವಳು ಮನೆಗೆ ತಡವಾಗಿ ಬಂದಿದ್ದಳು. ಈ ವಿಚಾರಕ್ಕೆ ತಾಯಿ ಪ್ರೇಮ ಮಗಳನ್ನು ಪ್ರಶ್ನಿಸಿ ಗದರಿಸಿದ್ದರು. ಇದರಿಂದ ಮನನೊಂದ ಪ್ರಿಯಾಂಕ, ಮನೆಯ ಪಕ್ಕದಲ್ಲೇ ಇರುವ ಕೆರೆಗೆ ಹಾರಿ ಆತ್ಮ*ತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಓಡಿದ್ದಾಳೆ.&lt;/p&gt;&lt;h2&gt;&lt;strong&gt;20 ಅಡಿ ಆಳದ ಕೆರೆ&lt;/strong&gt;&lt;/h2&gt;&lt;p&gt;ಮಗಳನ್ನು ತಡೆಯಲು ತಾಯಿ ಪ್ರೇಮ ಕೂಡ ಆಕೆಯ ಹಿಂದೆ ಓಡಿದ್ದಾರೆ. ಆದರೆ ಅವರು ಕೆರೆಯ ಹತ್ತಿರ ತಲುಪುವಷ್ಟರಲ್ಲೇ ಪ್ರಿಯಾಂಕ ಕೆರೆಗೆ ಹಾರಿದ್ದಾಳೆ. ಮಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂದು ಈಜಲು ಬಾರದಿದ್ದರೂ ತಾಯಿ ಪ್ರೇಮ ಕೂಡ ಕೆರೆಗೆ ಹಾರಿದ್ದಾರೆ. ಕೆರೆ ಸುಮಾರು 15 ರಿಂದ 20 ಅಡಿ ಆಳವಿದ್ದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.&lt;/p&gt;&lt;p&gt;ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಆಳದ ಕಾರಣ ಸಾಧ್ಯವಾಗಲಿಲ್ಲ. ಸೋಮವಾರ ಕತ್ತಲೆಯಾದ ಕಾರಣ ಕಾರ್ಯಾಚರಣೆ ವಿಳಂಬವಾಗಿತ್ತು. ಮಂಗಳವಾರ ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಭಾಗಮಂಡಲ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.&lt;/p&gt;&lt;p&gt;ಬಡತನದ ನಡುವೆಯೂ ಮಗಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದ ತಾಯಿ, ಮಗಳೊಂದಿಗೆ ಜೀವ ಬಿಟ್ಟಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಘಟನೆ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.&lt;/p&gt;&lt;p&gt;&lt;strong&gt;(ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)&lt;/strong&gt;&lt;/p&gt;]]></content:encoded>
            <category>kodagu</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/kodagu-tragedy-mother-drowns-attempting-to-save-daughter-after-dispute-over-coming-home-late-gkn/articleshow-uz2uon5"/>
        </item>
        <item>
            <title><![CDATA[ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಕೇಂದ್ರಕ್ಕೆ ನಿರ್ಣಯ ಕಳುಹಿಸಲು ಸಿದ್ಧತೆ; ಅರಣ್ಯ ಸಚಿವ ರಾಮಲಿಂಗಾರೆಡ್ಡಿ]]></title>
            <link>https://kannada.asianetnews.com/karnataka-districts/preparations-underway-to-reject-kasturirangan-report-and-send-resolution-to-the-centre-minister-ramalinga-reddy-sns/articleshow-z1dyl0k</link>
            <guid isPermaLink="true">https://kannada.asianetnews.com/karnataka-districts/preparations-underway-to-reject-kasturirangan-report-and-send-resolution-to-the-centre-minister-ramalinga-reddy-sns/articleshow-z1dyl0k</guid>
            <pubDate>Sat, 29 Aug 2026 07:59:50 +0530</pubDate>
            <description><![CDATA[ಕೊಡಗಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸಭೆ ನಡೆಸಿದರು. ಆನೆ ಕಾರಿಡಾರ್ ಅಭಿವೃದ್ಧಿ, ರೈಲ್ವೆ ಬ್ಯಾರಿಕೇಡ್ ವಿಸ್ತರಣೆ ಹಾಗೂ ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸುವ ಬಗ್ಗೆ ಚರ್ಚಿಸಲಾಯಿತು. ಭೂಮಿ ಸಮಸ್ಯೆಗಳ ಪರಿಹಾರದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m15nj7f487zgtrwrrvdckrj4,imgname-ramalinga-reddy-1787970526692.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು: &lt;/strong&gt;ವಿಧಾನಸಭೆ, ವಿಧಾನ ಪರಿಷತ್ನಲ್ಲಿ ಕೊಡಗಿನ ಶಾಸಕರು ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ಮುಖ್ಯವಾಗಿ ಮಾನವ&ndash;ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸಮಗ್ರ ಕ್ರಮ ಕೈಗೊಳ್ಳಲು ಚರ್ಚೆಸಲಾಗಿತ್ತು. ಹೀಗಾಗಿ ಇಂದು ಸಭೆ ನಡೆಸಿ ಆನೆ&ndash;ಹುಲಿ ಹಾವಳಿ ತಡೆಗೆ ಆನೆ ಕಾರಿಡಾರ್ಗಳ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.&lt;/p&gt;&lt;h2&gt;ಕೊಡಗಿನ ಸಂಘರ್ಷಕ್ಕೆ ಮುಕ್ತಿ? ಸಚಿವರ ಸಭೆಯ ಮಹತ್ವದ ನಿರ್ಧಾರ&lt;/h2&gt;&lt;p&gt;ಕೊಡಗು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿ ಸಲಹೆ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಈಗಿರುವ ಎರಡು ಸಾಲಿನ ರೈಲ್ವೆ ಬ್ಯಾರಿಕೇಡ್ನ್ನು ಮೂರು ಸಾಲಿಗೆ ವಿಸ್ತರಿಸುವ ಸಲಹೆ ಬಂದಿದೆ. ಆನೆ ಕಂದಕಗಳಿಗೆ ಮಣ್ಣು ತುಂಬಿಕೊಂಡಿರುವುದರಿಂದ ಹಳೆಯ ಟ್ರೆಂಚ್ಗಳನ್ನು ದುರಸ್ಥಿ ಮಾಡಲು ಸೂಚನೆ ನೀಡಿದ್ದೇನೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ವನ್ಯಜೀವಿ ಮಾನವ ಸಂಘರ್ಷ ತಪ್ಪಿಸಲು ಸಲಹೆ ಸಂಗ್ರಹಿಸಿದ ಅರಣ್ಯ ಸಚಿವ ರಾಮಲಿಂಗರೆಡ್ಡಿ&lt;/h2&gt;&lt;p&gt;ನಾಗರಹೊಳೆ ಭಾಗದಿಂದ ಹುಲಿಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಹಿಸಲು ಸೂಚಿಸಿದ್ದೇನೆ. ವನ್ಯಜೀವಿ ದಾಳಿಯ ಪರಿಹಾರ ಮೊತ್ತ ಹೆಚ್ಚಿಸುವ ಸಲಹೆ ಸಭೆಯಲ್ಲಿ ಬಂದಿದೆ ಎಂದಿದ್ದಾರೆ. ಅಲ್ಲದೆ ಕಾಡಾನೆಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಕೊಡುತ್ತಿರುವ ಪರಿಹಾರದ ಮೊತ್ತವು ಸರಿಯಾಗಿ ದೊರೆಯುವಂತೆ ಮಾಡಲು ಸಲಹೆ ಇದೆ. ಇದನ್ನು ಕೂಡ ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ.&lt;/p&gt;&lt;h2&gt;ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಕೇಂದ್ರಕ್ಕೆ ನಿರ್ಣಯ ಕಳುಹಿಸಲು ಸಿದ್ಧತೆ&lt;/h2&gt;&lt;p&gt;ಮರ ತೆರವಿಗೆ ಅನುಮತಿ ನೀಡುವಲ್ಲಿ ಅರಣ್ಯ ಇಲಾಖೆ ವಿಳಂಬ ಮಾಡುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಅದನ್ನು ಸರಿಪಡಿಸಲಾಗುವುದು ಎಂದಿದ್ದಾರೆ. ಬಂದ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.&lt;/p&gt;&lt;p&gt;ಅರಣ್ಯ ಹಕ್ಕು ಕಾಯ್ದೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಅರ್ಹರಿಗೆ ಸಮಾನ ಅವಕಾಶ ನೀಡುವ ಕುರಿತು ಚರ್ಚೆ ನಡೆಯಿತು. ಜೊತೆಗೆ ಸೆಕ್ಷನ್ C, D ಜಮೀನು ವಿವಾದಗಳ ಕುರಿತು ಚರ್ಚೆ ನಡೆದಿದೆ. ಅರಣ್ಯ ಹಕ್ಕು ಕಾಯ್ದೆ ಹಾಗೂ ಕಂದಾಯ&ndash;ಅರಣ್ಯ ಭೂಮಿ ಸಮಸ್ಯೆ ಬಗ್ಗೆಯೂ ಚರ್ಚೆಯಾಗಿದೆ. ಹಾರಂಗಿ ಜಲಾಶಯದಿಂದ ಸ್ಥಳಾಂತರಗೊಂಡ ರೈತರ ಭೂಮಿ&ndash;ದಾಖಲೆ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದಿದ್ದಾರೆ. ಈ ವಿಚಾರವನ್ನು ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದಿದ್ದಾರೆ. ಹಾರಂಗಿ, ಹಾತೂರು, ಯಡವನಾಡು ಸೇರಿದಂತೆ ಕಂದಾಯ ಗ್ರಾಮಗಳ ಭೂಮಿ ಸಮಸ್ಯೆಯನ್ನು ಜನರು ಗಮನಕ್ಕೆ ತಂದಿದ್ದಾರೆ. ಅದರ ಬಗ್ಗೆ ಪರಿಶೀಲನೆ ಮಾಡುವುದು ಎಂದಿದ್ದಾರೆ.&lt;/p&gt;&lt;p&gt;ಕಸ್ತೂರಿ ರಂಗನ್ ವರದಿಯನ್ನು ರಾಜ್ಯದಲ್ಲಿ ತಿರಸ್ಕರಿಸುವ ನಿರ್ಣಯವನ್ನು ಮತ್ತೊಮ್ಮೆ ಕೇಂದ್ರಕ್ಕೆ ಕಳುಹಿಸಲು ಸರ್ಕಾರ ನಿರ್ಧರಿಸಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಮುಂದಿನ ಹಂತದಲ್ಲಿ ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಹಾಗೂ ಪಶ್ಚಿಮಘಟ್ಟಗಳ ವ್ಯಾಪ್ತಿಯ ಶಾಸಕರ ಸಭೆಯನ್ನು ಮುಂದಿನ ಹಂತದ ನಡೆಸಲಾಗುವುದು. ಕಂದಾಯ ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಸಮಗ್ರ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಕೊಡಗಿನ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಲಾಗುವುದು ಮಡಿಕೇರಿಯಲ್ಲಿ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಹೇಳಿದರು. ಹಿಂದಿನ ಸರ್ಕಾರದ ನಿರ್ಣಯದಂತೆ ನಮ್ಮ ಸರ್ಕಾರವೂ ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಲಿದೆ ಎಂದಿದ್ದಾರೆ. &lt;strong&gt;(ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)&amp;nbsp;&lt;/strong&gt;&lt;/p&gt;]]></content:encoded>
            <category>kodagu</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/preparations-underway-to-reject-kasturirangan-report-and-send-resolution-to-the-centre-minister-ramalinga-reddy-sns/articleshow-z1dyl0k"/>
        </item>
    </channel>
</rss>
