<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 05 Aug 2026 22:30:46 +0530</lastBuildDate>
        <atom:link href="https://kannada.asianetnews.com/rss/kodagu" rel="self" type="application/rss+xml"/>
        <item>
            <title><![CDATA[ಕೊಡಗಿನ ಕನ್ನಂಬಾಡಿಯಲ್ಲಿ 2 ದಿನಗಳ ಕಾಲ ಕೆರೆಯಲ್ಲಿ ಸಿಲುಕಿದ್ದ ಕಾಡಾನೆ: ಕೊನೆಗೆ ಏನಾಯಿತು?]]></title>
            <link>https://kannada.asianetnews.com/karnataka-districts/karnataka-forest-news-kodagu-wild-elephant-rescue-operation-gvd/articleshow-09szia4</link>
            <guid isPermaLink="true">https://kannada.asianetnews.com/karnataka-districts/karnataka-forest-news-kodagu-wild-elephant-rescue-operation-gvd/articleshow-09szia4</guid>
            <pubDate>Wed, 08 Jul 2026 20:07:38 +0530</pubDate>
            <description><![CDATA[&lt;p&gt;ಗಜರಾಜ ಅಚಾನಕ್ಕಾಗಿ ಕಾಡಿನಿಂದ ನಾಡಿನ ಕಡೆಗೆ ಬಂದಿದ್ದ. ರಾತ್ರಿ ಬಂದವನು ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದ. ಹೀಗೆ ಬಿದ್ದು ಬರೋಬ್ಬರಿ ಎರಡು ದಿನಗಳ ಕಾಲ ನೀರಿನಲ್ಲಿ ಜೀವನ್ಮರಣದ ಮಧ್ಯೆ ಹೋರಾಡಿದ ಕರುಣಾಜನಕ ಕಥೆ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx12g13yghp429expwfq6myk,imgname-chc-1783521346686.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜು.08): &lt;/strong&gt;ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡಿಕೊಂಡಿದ್ದ ಗಜರಾಜ ಅಚಾನಕ್ಕಾಗಿ ಕಾಡಿನಿಂದ ನಾಡಿನ ಕಡೆಗೆ ಬಂದಿದ್ದ. ರಾತ್ರಿ ಬಂದವನು ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದ. ಹೀಗೆ ಬಿದ್ದು ಬರೋಬ್ಬರಿ ಎರಡು ದಿನಗಳ ಕಾಲ ನೀರಿನಲ್ಲಿ ಜೀವನ್ಮರಣದ ಮಧ್ಯೆ ಹೋರಾಡಿದ ಕರುಣಾಜನಕ ಕಥೆ ಇಲ್ಲಿದೆ. ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವನ ಸಂಘರ್ಷ ಮಿತಿ ಮೀರಿದೆ. ಆದರೆ ಯಾವುದೇ ವನ್ಯ ಜೀವಿಗಳು ತೊಂದರೆಗೆ ಸಿಲುಕಿದಾಗ ಅವುಗಳು ಕಂಡು ಕೊಡಗಿನ ಜನರು ಮಮ್ಮಲ ಮರುತ್ತಾರೆ ಎನ್ನುವುದಕ್ಕೆ ಇದೊಂದು ಘಟನೆ ಸಾಕ್ಷಿಯಾಯಿತು.&lt;/p&gt;&lt;p&gt;ಹೌದು ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದಲ್ಲಿರುವ ಕನ್ನಂಬಾಡಿ ಎಂಬ ಗ್ರಾಮದಲ್ಲಿ ಕಾಡಾನೆಯೊಂದು ಗ್ರಾಮದತ್ತ ಬಂದು ಆಕಸ್ಮಿಕವಾಗಿ ಕೆರೆಗೆ ಬಿದ್ದಿತ್ತು. ಹೀಗೆ ಕೆರೆಗೆ ಬಿದ್ದ ಕಾಡಾನೆಗೆ ಮೇಲೆ ಬರಲಾರದೆ ಸಂಕಷ್ಟಕ್ಕೆ ಸಿಲುಕಿ ಜೀವನ್ಮರಣದ ಮಧ್ಯೆ ಪರದಾಡುವಂತೆ ಆಗಿತ್ತು. ಕೆರೆಯಲ್ಲಿ ಸಂಪೂರ್ಣ ಕೆಸರು ತುಂಬಿದ್ದರಿಂದ ಅದರಿಂದ ಮೇಲೆ ಬರಲಾರದಂತೆ ಕಾಡಾನೆ ಒದ್ದಾಡಿತ್ತು. ಇದರಿಂದ ನಿನ್ನೆ ಬೆಳಿಗ್ಗೆ ಕಾಡಾನೆ ಕೆರೆಯಲ್ಲಿ ಇರುವುದನ್ನು ಸ್ಥಳೀಯರು ಗಮನಿಸಿದ್ದರು. ಆರಂಭದಲ್ಲಿ ಕೆರೆಯಲ್ಲಿ ಈಜಾಡುತ್ತಿರಬಹುದು. ತಾನೆ ಮೇಲೆ ಬಂದು ಹೋಗಬಹುದು ಎಂದು ಎಣಿಸಿ ಜನರು ಸುಮ್ಮನಿದ್ದರು.&lt;/p&gt;&lt;p&gt;ಆದರೆ ನಿನ್ನೆ ಮಧ್ಯಾಹ್ನವಾದರೂ ಕಾಡಾನೆ ಮೇಲೆ ಬಾರದಿದ್ದಾಗ ಅದು ಅಪಾಯಕ್ಕೆ ಸಿಲುಕಿದೆ ಎಂದರಿತು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ವಿಪರ್ಯಾಸವೆಂದರೆ ನಿನ್ನೆಯೇ ಮಾಹಿತಿ ನೀಡಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇಂದು ಮಧ್ಯಾಹ್ನವಾದರೂ ಅದನ್ನು ರಕ್ಷಿಸುವುದಕ್ಕೆ ಮುಂದಾಗಲಿಲ್ಲ. ಯಾವುದೇ ಅಧಿಕಾರಿ ಕನಿಷ್ಠ ಅತ್ತ ತಿರುಗಿ ನೋಡಲಿಲ್ಲ. ಇತ್ತ ಆನೆ ಸಮಯವಾದಂತೆಲ್ಲಾ ನಿತ್ರಾಣಗೊಳ್ಳುತ್ತಾ ಹೋಗಿತ್ತು. ಇಷ್ಟೊಂದು ಹೇಳಿದರೂ ಯಾರೂ ಕಾಡಾನೆಯನ್ನು ರಕ್ಷಿಸುವುದಕ್ಕೆ ಬಾರಲಿಲ್ಲವಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.&lt;/p&gt;&lt;p&gt;ಇಂತಹ ಪ್ರಕರಣ ನಡೆಯುತ್ತಲೇ ಇರುತ್ತವೆ. ಕಾಡಿನಲ್ಲಿ ಅವುಗಳಿಗೆ ಸರಿಯಾದ ಆಹಾರ ನೀರು ಸಿಗದಿದ್ದಾಗ ನಾಡಿನತ್ತ ಬರುತ್ತವೆ. ಬಂದು ಹೀಗೆ ಸಮಸ್ಯೆಯಲ್ಲಿ ಸಿಲುಕುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಹತ್ತು ಪ್ರಕರಣಗಳು ನಡೆದಾಗ ಅರಣ್ಯ ಇಲಾಖೆ ಗಮನಕ್ಕೆ ತಂದರೆ ಅವುಗಳಲ್ಲಿ ನಾಲ್ಕೈದು ಪ್ರಕರಣಗಳನ್ನ ಮಾತ್ರ ಪರಿಶೀಲಿಸುತ್ತಾರೆ. ಉಳಿದಂತೆ ಸುಮ್ಮನಾಗುತ್ತಾರೆ ಎಂದು ಪರಿಸರವಾದಿಗಳು, ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ&lt;/strong&gt;&lt;/h2&gt;&lt;p&gt;ಹೀಗೆ ಎರಡು ದಿನಗಳ ಕಾಲ ನೀರಿನಲ್ಲಿಯೇ ಪರದಾಡಿದ ಕಾಡಾನೆ ಕನಿಷ್ಠ ಸೊಂಡಿಲನ್ನು ಮೇಲೆತ್ತಲಾಗದೆ ಪರದಾಡುತಿತ್ತು. ಎಲ್ಲರೂ ಈ ಕಾಡಾನೇ ಬದುಕುವುದಿಲ್ಲ ಎನ್ನುವ ಆತಂಕದಲ್ಲಿಯೇ ಮರುಗುತ್ತಿದ್ದರು. ಅರಣ್ಯ ಬದಿಗಳಲ್ಲಿ ತೋಟ ಹೊಂದಿರುವ ರೈತರು ತಮ್ಮ ತೋಟಗಳಲ್ಲಿ ಕಾಫಿಗಿಡ ನೆಟ್ಟರೆ ಬಂದು ಗಲಾಟೆ ಮಾಡುತ್ತಾರೆ. ಗಿಡಗಳನ್ನು ಕಿತ್ತೆಸೆದು ಪ್ರಕರಣ ದಾಖಲಿಸುತ್ತಾರೆ. ಆದರೆ ಕಾಡಾನೆಯೊಂದು ಕೆರೆಗೆ ಬಿದ್ದು ಎರಡು ದಿನಗಳಾದರೂ ಅದನ್ನು ರಕ್ಷಿಸಲು ಮುಂದಾಗಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಆದರೆ ಇಂದು ಮಧ್ಯಾಹ್ನದವರೆಗೆ ಕೆರೆಯಲ್ಲಿ ಇದ್ದ ಕಾಡಾನೆ ತಾನಾಗಿಯೇ ಕೆರೆ ಬಿಟ್ಟು ಮೇಲೆ ಬಂದಿದೆ. ಈ ಕುರಿತು ದೂರುವಾಣಿ ಮೂಲಕ ಪ್ರತಿಕ್ರಿಯಿಸಿರುವ ಅರಣ್ಯ ಅಧಿಕಾರಿಗಳು ಆನೆಗಳು ಆರೋಗ್ಯದಲ್ಲಿ ಸಮಸ್ಯೆಯಾಗಿ ನಿತ್ರಾಣಗೊಂಡಾಗ ತಮ್ಮ ದೇಹದ ಭಾರವನ್ನು ತಾಳಲಾರದೆ ಕೆರೆಗೆ ಇಳಿದು ರೆಸ್ಟ್ ಮಾಡುತ್ತವೆ. ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದ್ದಂತೆ ಅವುಗಳೇ ಮೇಲೆ ಹೋಗುತ್ತವೆ ಎಂದಿದ್ದಾರೆ. ಕಾಡಾನೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೇಲೆ ಬರಲು ಹೋರಾಡಿ ಆಗಲಾರದೆ ಒದ್ದಾಡಿತೋ, ಇಲ್ಲ ಆರೋಗ್ಯದಲ್ಲಿ ಸಮಸ್ಯೆ ಆಗಿ ಕೆರೆಗೆ ಇಳಿದು ಸುಧಾರಿಸಿಕೊಂಡಿತೋ ಏನೋ. ಏನೆ ಆಗಲಿ ಆನೆ ಮಾತ್ರ ಕೆರೆಯಿಂದ ಮೇಲೆ ಬಂದು ಸುಖಾಂತ್ಯ ಕಂಡಿದ್ದು ಮಾತ್ರ ಎಲ್ಲರಿಗೂ ಸಂತಸ ತಂದಿದೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/karnataka-forest-news-kodagu-wild-elephant-rescue-operation-gvd/articleshow-09szia4"/>
        </item>
        <item>
            <title><![CDATA[ಕೊಡಗಿನಲ್ಲಿ ಕಾಟಿ ಕಳ್ಳಬೇಟೆಗಾರರ ಮೇಲೆ ಅರಣ್ಯ ಇಲಾಖೆ ಫೈರಿಂಗ್: 260 ಕೆಜಿ ಮಾಂಸ ಜಪ್ತಿ]]></title>
            <link>https://kannada.asianetnews.com/karnataka-districts/kodagu-forest-firing-over-gaur-hunting-case-wildlife-smuggling-gvd/articleshow-1npnm83</link>
            <guid isPermaLink="true">https://kannada.asianetnews.com/karnataka-districts/kodagu-forest-firing-over-gaur-hunting-case-wildlife-smuggling-gvd/articleshow-1npnm83</guid>
            <pubDate>Fri, 17 Jul 2026 16:39:58 +0530</pubDate>
            <description><![CDATA[&lt;p&gt;ಅಕ್ರಮವಾಗಿ ಕಾಟಿಕೊಂದನ್ನು ಕೊಂದು ಮಾಂಸವನ್ನಾಗಿಸಿ ಸಾಗಿಸುತ್ತಿದ್ದ ಇಬ್ಬರು ಕಳ್ಳಬೇಟೆಗಾರರ ಮೇಲೆ ಕೊಡಗು ಅರಣ್ಯ ಇಲಾಖೆ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ. ಮಡಿಕೇರಿ ತಾಲ್ಲೂಕಿನ ಕೊಳಕೇರಿ ಗ್ರಾಮದವರಾದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqw91yevvcmj6sn40x50wy0,imgname-nki-1784286578638.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜು.17): &lt;/strong&gt;ಅಕ್ರಮವಾಗಿ ಕಾಟಿಕೊಂದನ್ನು ಕೊಂದು ಮಾಂಸವನ್ನಾಗಿಸಿ ಸಾಗಿಸುತ್ತಿದ್ದ ಇಬ್ಬರು ಕಳ್ಳಬೇಟೆಗಾರರ ಮೇಲೆ ಕೊಡಗು ಅರಣ್ಯ ಇಲಾಖೆ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ. ಮಡಿಕೇರಿ ತಾಲ್ಲೂಕಿನ ಕೊಳಕೇರಿ ಗ್ರಾಮದವರಾದ ಯಾಕೂಬ್ ಮತ್ತು ಸುಬೈರ್ ಎಂಬುವರ ಮೇಲೆ ದಾಳಿ ಮಡಿಕೇರಿ ವಲಯ ಅರಣ್ಯ ಅಧಿಕಾರಿ ಶಿವಕುಮಾರ್ ಮತ್ತು ಸಿಬ್ಬಂದಿ ಕಳ್ಳಬೇಟೆಗಾರರ ಮೇಲೆ ಫೈರಿಂಗ್ ಮಾಡಿದ್ದಾರೆ. ಬಳಿಕ ಜೀಪು ಪರಿಶೀಲಿಸಿದಾಗ ಅದರಲ್ಲಿ 260 ಕೆ.ಜಿ. ಕಾಟಿ ಮಾಂಸ, ಚಾಕು, ಚೂರಿ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ಅಲ್ಲದೆ ಮಾಂಸ ಸಾಗಿಸುತ್ತಿದ್ದ ಜೀಪನ್ನು ವಶಕ್ಕೆ ಪಡೆದಿದ್ದಾರೆ. ಗುರುವಾರ ರಾತ್ರಿ ಒಂಭತ್ತುವರೆ ಗಂಟೆಯ ಸಮಯಕ್ಕೆ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಸಮೀಪದಲ್ಲಿ ಕಾದು ನಿಂತಿದ್ದ ಅರಣ್ಯ ಪೊಲೀಸರು ಆರೋಪಿಗಳ ಜೀಪು ಬರುತ್ತಿದ್ದಂತೆ ತಡೆಯೊಡ್ಡಲು ಹೋಗಿದ್ದಾರೆ. ಆದರೆ ಆರೋಪಿಗಳು ಅರಣ್ಯ ಪೊಲೀಸರ ಮೇಲೆ ಜೀಪು ಚಲಾಯಿಸಲು ಮುಂದಾದರು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದಕ್ಕೂ ಜೀಪು ನಿಲ್ಲಿಸದೇ ಇದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ. ಆರೋಪಿಗಳು ಅಲ್ಲಿಂದಲೂ ತಪ್ಪಿಸಿಕೊಂಡು ಕಾಫಿ ತೋಟದಲ್ಲಿ ಕಣ್ಮರೆಯಾಗಿದ್ದಾರೆ.&lt;/p&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಮಡಿಕೇರಿ ಡಿಎಫ್ಓ ಅಭಿಷೇಕ್ ಅವರು ಪಟ್ಟಿಘಾಟ್ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿ ಕಾಟಿಯನ್ನು ಮಾಂಸವನ್ನಾಗಿಸಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ನಮ್ಮ ಸಿಬ್ಬಂದಿಯ ಮೇಲೆಯೇ ಅವರು ಜೀಪು ಚಲಾಯಿಸಲು ಮುಂದಾದಾಗ ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬೆಳಿಗ್ಗೆ ಆರೋಪಿಗಳಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಪೊಲೀಸರ ಕಡೆಯಿಂದ ಗೊತ್ತಾಯಿತು. ಪರಿಶೀಲಿಸಿದಾಗ ರಾತ್ರಿ ಘಟನೆಯಲ್ಲಿ ತಪ್ಪಿಸಿಕೊಂಡವರು ಇವರೇ ಎನ್ನುವುದು ಸಾಬೀತಾಗಿದೆ.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಸ್ವಲ್ಪ ದಿನಗಳ ಮುಂಚೆಯೂ ಮಡಿಕೇರಿ ಸಮೀಪದಲ್ಲಿ ಕಾಟಿಯೊಂದನ್ನು ಕೊಂದು ಸಾಗಿಸಿರುವುದು ಪತ್ತೆಯಾಗಿತ್ತು. ಆಗಲೂ ಅದರ ಹಿಂದೆ ದೊಡ್ಡದೊಂದು ಗ್ಯಾಂಗ್ ಇರುವುದು ಗೊತ್ತಾಗಿತ್ತು. ಕಾಟಿ ಮಾಂಸಕ್ಕೆ ಕೇರಳ, ದುಬೈ ಮತ್ತು ಹೊರದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಆದ್ದರಿಂದಲೇ ಇಲ್ಲಿ ಅವುಗಳನ್ನು ಕೊಂದು ಮಾಂಸವನ್ನಾಗಿಸಿ ಸಾಗಿಸುತ್ತಿರುವ ಜಾಲ ಇರುವುದು ಗೊತ್ತಾಗಿದೆ. ಸದ್ಯ ಆರೋಪಿಗಳು ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರನ್ನು ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ಅವರ ವಿರುದ್ಧ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರು ಗುಣಮುಖರಾದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.&lt;/p&gt;&lt;p&gt;ಆದರೆ ಆರೋಪಿಗಳನ್ನು ಕೇಳಿದರೆ ನಾವು ಭಾಗಮಂಡಲದಿಂದ ಬೆಟಗೇರಿಗೆ ಹೋಗಲು ಜೀಪಿನಲ್ಲಿ ಬರುತ್ತಿದ್ದೆವು. ಅರಣ್ಯ ಇಲಾಖೆಯವರು ಯಾವುದೇ ಕಾರಣವಿಲ್ಲದೆ ನಮ್ಮ ಮೇಲೆ ಗುಂಡಿನ ದಾಳಿ ಮಾಡಿದರು. ನಾವು ಜೀಪು ನಿಲ್ಲಿಸಿದರೂ ಬಿಡದೆ ಫೈರಿಂಗ್ ಮಾಡಿದ್ದರಿಂದ ನಾವು ಜೀಪಿನಿಂದ ಇಳಿದು ಓಡಬೇಕಾಯಿತು. ಯಾವ ಕಾರಣಕ್ಕೆ ನಮ್ಮ ಮೇಲೆ ದಾಳಿ ಮಾಡಿದರು ಎನ್ನುವುದೇ ಗೊತ್ತಾಗಲಿಲ್ಲ. ಹೀಗಾಗಿಯೇ ನಾವು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಏನೂ ಗೊತ್ತಿಲ್ಲದ ಅಮಾಯಕರತೆ ನಟಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳಿಂದ ಹೇಳಿಕೆ ಪಡೆದುಕೊಂಡಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-forest-firing-over-gaur-hunting-case-wildlife-smuggling-gvd/articleshow-1npnm83"/>
        </item>
        <item>
            <title><![CDATA[ಮಳೆ ಕೊರತೆ ನಡುವೆಯೂ ಒಂದೊಳ್ಳೆ ಸುದ್ದಿ.. ಸಂಪೂರ್ಣ ತುಂಬಿದ ಹಾರಂಗಿ ಜಲಾಶಯ..!]]></title>
            <link>https://kannada.asianetnews.com/kodagu/good-news-even-amidst-rain-shortage-harangi-dam-completely-full-gkn/articleshow-3e2iox1</link>
            <guid isPermaLink="true">https://kannada.asianetnews.com/kodagu/good-news-even-amidst-rain-shortage-harangi-dam-completely-full-gkn/articleshow-3e2iox1</guid>
            <pubDate>Sat, 25 Jul 2026 16:17:14 +0530</pubDate>
            <description><![CDATA[ರಾಜ್ಯದಲ್ಲಿ ಮಳೆ ಕೊರತೆಯಿದ್ದರೂ, ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ ಈ ವರ್ಷ ಮೊದಲ ಬಾರಿಗೆ ಸಂಪೂರ್ಣ ಭರ್ತಿಯಾಗಿದೆ. ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ, ನಾಲ್ಕು ಕ್ರೆಸ್ಟ್ ಗೇಟ್&zwnj;ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದ್ದು, ಇದು ಸಾವಿರಾರು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyce2zby1vbpy4f0qcaqnaba,imgname-harangi-dam-rainfall-1784976342398.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು: &lt;/strong&gt;ಈ ಬಾರಿ ರಾಜ್ಯದ ಹಲವೆಡೆ ಮಳೆಯ ಕೊರತೆ ಇದೆ. ಆದರೆ, ಕೊಡಗು ಜಿಲ್ಲೆಯ ಜನರ ಆರಾಧ್ಯ ದೈವ, ಕಾವೇರಿಯ ಉಪನದಿ ಹಾರಂಗಿ ಮಾತ್ರ ಮಳೆಯ ಕೊರತೆಯ ನಡುವೆಯೂ ಮೈದುಂಬಿ ನಿಂತಿದ್ದಾಳೆ. ರಾಜ್ಯದಲ್ಲಿಯೇ ಈ ವರ್ಷ ಮೊಟ್ಟ ಮೊದಲ ಬಾರಿಗೆ ಭರ್ತಿಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ಹಾರಂಗಿ ಪಾತ್ರವಾಗಿದ್ದು, ಈ ನದಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಸಾವಿರಾರು ರೈತರಲ್ಲಿ ಈಗ ಹೊಸ ಭರವಸೆ ಚಿಗುರೊಡೆದಿದೆ.&lt;/p&gt;&lt;h2&gt;&lt;strong&gt;ಸಂಭ್ರಮದ ಹಾರಂಗಿ: ಅಧಿಕಾರಿಗಳಿಂದ ವಿಶೇಷ ಪೂಜೆ&lt;/strong&gt;&lt;/h2&gt;&lt;p&gt;ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು. ಸದ್ಯ ಜಲಾಶಯವು ತನ್ನ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಸಂಭ್ರಮದ ಸಂದರ್ಭದಲ್ಲಿ ಹಾರಂಗಿ ಜಲಾಶಯದ ಅಧಿಕಾರಿಗಳು ಗಂಗೆಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ನದಿಗೆ ನೀರನ್ನು ಹರಿಸಿದ್ದಾರೆ. ಪ್ರಸ್ತುತ ಜಲಾಶಯಕ್ಕೆ 4500 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.&lt;/p&gt;&lt;h2&gt;&lt;strong&gt;ನಾಲ್ಕು ಕ್ರೆಸ್ಟ್ ಗೇಟ್&zwnj;ಗಳು ಓಪನ್!&lt;/strong&gt;&lt;/h2&gt;&lt;p&gt;ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್&zwnj;ಗಳನ್ನು ತೆರೆಯಲಾಗಿದ್ದು, ಸುಮಾರು 4000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಬಿಳಿ ನೊರೆಯಂತೆ ಹರಿಯುತ್ತಿರುವ ನೀರನ್ನು ನೋಡಲು ಪ್ರವಾಸಿಗರು ಕೂಡ ಆಸಕ್ತಿ ತೋರಿಸುತ್ತಿದ್ದಾರೆ. ಜಲಾಶಯದ ಒಳಹರಿವು ಹೆಚ್ಚಾದಂತೆ ನದಿಗೆ ಬಿಡುವ ನೀರಿನ ಪ್ರಮಾಣವನ್ನು ಕೂಡ ಹೆಚ್ಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೂರು ಬಾರಿ ಸೈರನ್.. ನದಿ ತಟದ ಜನರಿಗೆ ಎಚ್ಚರಿಕೆ!&lt;/strong&gt;&lt;/h2&gt;&lt;p&gt;ನದಿಗೆ ನೀರು ಬಿಡುವ ಮುನ್ನ ಸುರಕ್ಷತಾ ದೃಷ್ಟಿಯಿಂದ ಅಧಿಕಾರಿಗಳು ಮೂರು ಬಾರಿ ಸೈರನ್ ಮೊಳಗಿಸಿದ್ದಾರೆ. ನದಿ ತಟದ ಗ್ರಾಮಗಳ ಜನರಿಗೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ನದಿಗೆ ಇಳಿಯದಂತೆ ಮತ್ತು ಜಾನುವಾರುಗಳನ್ನು ನದಿ ತಟಕ್ಕೆ ಬಿಡದಂತೆ ಅಧಿಕಾರಿಗಳು ಡಂಗುರ ಸಾರಿದ್ದಾರೆ.&lt;/p&gt;&lt;h2&gt;&lt;strong&gt;ರೈತರ ಮುಖದಲ್ಲಿ ಮಂದಹಾಸ&lt;/strong&gt;&lt;/h2&gt;&lt;p&gt;ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ, ಜಲಾಶಯ ಭರ್ತಿಯಾಗಿರುವುದು ರೈತರಲ್ಲಿ ಹರ್ಷ ತಂದಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಈಗ ಅವರಲ್ಲಿ ಮೂಡಿದೆ. ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಈಗ ಬಿತ್ತನೆ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ. ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಈ ಹಾರಂಗಿ ಜಲಾಶಯದ ವೈಭವ ಮತ್ತಷ್ಟು ಮೆರುಗು ನೀಡಿದೆ.&lt;/p&gt;]]></content:encoded>
            <category>kodagu</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/kodagu/good-news-even-amidst-rain-shortage-harangi-dam-completely-full-gkn/articleshow-3e2iox1"/>
        </item>
        <item>
            <title><![CDATA[ಕೊಡಗಿನ ಅಭಿವೃದ್ಧಿಗೆ ಸಚಿವ ಸ್ಥಾನ ಅಗತ್ಯ: ಶಾಸಕ ಮಂತರ್ ಗೌಡ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/kodagu-needs-a-minister-post-for-development-says-mla-mantar-gowda-gvd/articleshow-40t0th0</link>
            <guid isPermaLink="true">https://kannada.asianetnews.com/karnataka-districts/kodagu-needs-a-minister-post-for-development-says-mla-mantar-gowda-gvd/articleshow-40t0th0</guid>
            <pubDate>Fri, 31 Jul 2026 20:39:41 +0530</pubDate>
            <description><![CDATA[&lt;p&gt;ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದು, ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kywbdgdb6hef6qw1x94spnez,imgname-jbj-1785510412715.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜು.31): &lt;/strong&gt;ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದು, ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ ಆಕಾಂಕ್ಷಿಗಳ ಪಟ್ಟಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಈ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಬೇಡಿಕೆ ಇಟ್ಠಿದ್ದೇವೆ, ಕೊಡುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸವೂ ಇದೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ.&lt;/p&gt;&lt;p&gt;ಕೊಡಗಿನ ಭಾಗಕ್ಕೆ ಸಚಿವ ಸ್ಥಾನ ನೀಡಿಲ್ಲ. ರಂಜನ್ ಅವರು ಕೆಲವೇ ತಿಂಗಳ ಅವಧಿಗೆ ಸಚಿವರಾಗಿದ್ದರು. ಆದು ಬಿಟ್ಟರೆ ಮತ್ತೆ ಸಚಿವ ಸ್ಥಾನ ನೀಡಿಲ್ಲ. ಸಚಿವ ಸ್ಥಾನ ನೀಡದಿದ್ದರೆ ಕೊಡಗಿನ ಅಭಿವೃದ್ಧಿ ಬಗ್ಗೆ ಗಂಭೀರ ಚರ್ಚೆಯಾಗಲ್ಲ. ಈ ದೃಷ್ಟಿಯಿಂದ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ. ನಾನು ಬೇರು ಮಟ್ಟದಿಂದ ಪಕ್ಷದಲ್ಲಿ ಬೆಳೆದು ಬಂದವನು. ಯೂತ್ ಕಾಂಗ್ರೆಸ್, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಬೆಳೆದು ಬಂದವನು. ನಾನು ಪಕ್ಷಕ್ಕೆ ತ್ಯಾಗ ಮಾಡಿದ್ದೇನೆ, ಆ ವಿಚಾರದಲ್ಲಿ ಸಚಿವಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ.&lt;/p&gt;&lt;p&gt;ದೆಹಲಿಗೆ ಹೋಗಿ ಸಚಿವ ಸ್ಥಾನ ಕೇಳಿದ್ದೇನೆ, ಕೇಳುವುದರಲ್ಲಿ ತಪ್ಪಿಲ್ಲ, ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟಿದ್ದು. ಅನುದಾನವನ್ನು ನಾವು ಕೇಳುತ್ತಲೇ ಇರುತ್ತೇವೆ, ಕೇಳಿದ ಕೂಡಲೇ ಎಲ್ಲ ಅನುದಾನ ಕೊಡುವುದಿಲ್ಲ ಅಲ್ಲವೆ.? ಹಾಗೆಯೇ ಸಚಿವ ಸ್ಥಾನದಲ್ಲೂ ಕೂಡ ಕೊಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಜಿಲ್ಲೆಯಲ್ಲಿ ಯಾರಿಗೆ ಕೊಟ್ಟರೂ ಖುಷಿಯೇ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ.&lt;/p&gt;&lt;p&gt;ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸಿಡಬ್ಲ್ಯೂಆರ್ಸಿ ಹೇಳಿರುವುದಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯಿಸಿದ ಶಾಸಕ ಮಂತರ್ ಗೌಡ ಅವರು ಕರ್ನಾಟಕ ಅಥವಾ ತಮಿಳುನಾಡು ಸರ್ಕಾರ ಆಗಿರಬಹುದು, ಎರಡು ಕೂಡ ಸಿಡಬ್ಲ್ಯೂಆರ್ ಸಿ ನಿಯಮಕ್ಕೆ ಒಳಪಟ್ಟಿದ್ದೇವೆ. ಇಬ್ಬರು ಈ ನಿಯಮಗಳನ್ನು ಪಾಲಿಸಬೇಕು ಸರಿ. ಆದರೆ ಬರಗಾಲದಲ್ಲಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹೋಗಲು ಅವಕಾಶವಿದೆ. ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.&lt;/p&gt;&lt;h2&gt;&lt;strong&gt;ಉತ್ತಮ ಮಳೆ&lt;/strong&gt;&lt;/h2&gt;&lt;p&gt;ಅದನ್ನು ನಾವು ಮಾಡಬೇಕಾಗಿದೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಅಭಿಪ್ರಾಯಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಮಡಿಕೇರಿ, ವಿರಾಜಪೇಟೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಹಾರಂಗಿ ಜಲಾಶಯ ತುಂಬಿದೆ. ಒಳಹರಿವು, ಹೊರಹರಿವು ಎರಡನ್ನು ಸರಿದೂಗಿಸಿಕೊಂಡು ನದಿಗೆ ನೀರು ಹರಿಸಲಾಗುತ್ತಿದೆ. ಆದರೆ ಮಡಿಕೇರಿ ಭಾಗದಲ್ಲಿ ಮಳೆ ಜಾಸ್ತಿಯಾಗಿ ಒಂದಿಷ್ಟು ಸಮಸ್ಯೆಯೂ ಆಗುತ್ತಿದೆ.&lt;/p&gt;&lt;p&gt;ತಮಿಳುನಾಡಿಗೆ ನೀರು ಕೊಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಆದರೆ ಅದಕ್ಕೂ ಮೊದಲು ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಬರವಿದೆ. ಇಲ್ಲಿನ ಕೆರೆ ಕಟ್ಟೆಗಳ ತುಂಬಿಸುವ ಕೆಲಸವಾಗಲಿ. ಮೊದಲು ನಾಲೆಗಳ ಮೂಲಕ ನೀರು ಹರಿಸಿ ಕೆರೆಕಟ್ಟೆಗಳ ತುಂಬಿಸಲಿ. ನಂತರ ತಮಿಳುನಾಡಿಗೆ ನೀರು ಬಿಡುವ ವಿಚಾರ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡುವುದನ್ನು ಶಾಸಕ ಮಂತರ್ ಗೌಡ ವಿರೋಧಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-needs-a-minister-post-for-development-says-mla-mantar-gowda-gvd/articleshow-40t0th0"/>
        </item>
        <item>
            <title><![CDATA[ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ: ಕಬಿನಿ ಭರ್ತಿ, ಹಾರಂಗಿ ಜಲಾಶಯದಿಂದ ಭಾರಿ ನೀರು ತಮಿಳುನಾಡಿಗೆ ಬಿಡುಗಡೆ!]]></title>
            <link>https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv</link>
            <guid isPermaLink="true">https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv</guid>
            <pubDate>Sat, 01 Aug 2026 16:43:27 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ, ಕೆಆರ್&zwnj;ಎಸ್ ಮತ್ತು ಹಾರಂಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಇದು ಕಾವೇರಿ ವಿವಾದದ ತೀವ್ರತೆಯನ್ನು ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyyfpfbj9xmgwztj0rh7gphj,imgname-kabini-1785582009713.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಕಿಚ್ಚು ಹೊತ್ತಿಕೊಂಡಿರುವ ಬೆನ್ನಲ್ಲೇ, ವರುಣ ದೇವ ರಾಜ್ಯದ ರೈತರಿಗೆ ಭಾರಿ ಸಿಹಿ ಸುದ್ದಿ ನೀಡಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಮೈಸೂರು ಜಿಲ್ಲೆಯ ಹೆಮ್ಮೆಯ ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ತಮಿಳುನಾಡಿನತ್ತ ಕಾವೇರಿ ನೀರು ಈ ಜಲಾಶಯದಿಂದ ಹರಿಯಲಾರಂಭಿಸಿದೆ. ಇದು ಸದ್ಯದ ಕಾವೇರಿ ವಿವಾದದ ತೀವ್ರತೆಯನ್ನು ಕೊಂಚ ತಣ್ಣಗಾಗಿಸುವ ಮುನ್ಸೂಚನೆ ನೀಡಿದೆ.&lt;/p&gt;&lt;h2&gt;ಭರ್ತಿಯಾದ ಕಬಿನಿ ಜಲಾಶಯ: ನದಿಗೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ&lt;/h2&gt;&lt;p&gt;ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಜಲಾನಯನ ಪ್ರದೇಶ ಹಾಗೂ ಕೇರಳದ ವಯನಾಡು ಭಾಗದಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದಾಗಿ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಪ್ರಸ್ತುತ ಅಣೆಕಟ್ಟೆಗೆ 15,500 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ.&lt;/p&gt;&lt;p&gt;ಒಟ್ಟು 19.52 ಟಿಎಂಸಿ ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಈಗಾಗಲೇ 18 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಜಲಾಶಯದ 4 ಕ್ರಸ್ಟ್ ಗೇಟ್&zwnj;ಗಳ ಮೂಲಕ ಸುಮಾರು 10 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸುತ್ತಿದ್ದಾರೆ. ಈ ನೀರು ಕಪಿಲಾ ನದಿಯ ಮೂಲಕ ತಮಿಳುನಾಡಿನತ್ತ &amp;nbsp;ಹರಿದು ಹೋಗಲಿದೆ. ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಬಿನಿ ಜಲಾಶಯದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ಘೋಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.&lt;/p&gt;&lt;h2&gt;ಮಂಡ್ಯದ ಕೆಆರ್&zwnj;ಎಸ್ ಜಲಾಶಯದಲ್ಲೂ ಒಳಹರಿವು ಭಾರಿ ಏರಿಕೆ&lt;/h2&gt;&lt;p&gt;ಕಾವೇರಿ ಗಲಾಟೆಯ ನಡುವೆಯೇ ಮಂಡ್ಯ ಭಾಗದ ರೈತರಿಗೂ ವರುಣ ಮುನಿಸು ಬಿಟ್ಟು ಹರಸಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ (KRS) ಡ್ಯಾಂಗೆ ಬರುವ ಒಳಹರಿವು 13,522 ಕ್ಯೂಸೆಕ್&zwnj;ಗೆ ಏರಿಕೆಯಾಗಿದೆ.&lt;/p&gt;&lt;p&gt;ಗರಿಷ್ಠ 124.80 ಅಡಿ ಸಾಮರ್ಥ್ಯ ಹೊಂದಿರುವ ಕೆಆರ್&zwnj;ಎಸ್ ಡ್ಯಾಂನ ನೀರಿನ ಮಟ್ಟ ಸದ್ಯ 94.40 ಅಡಿಗೆ ತಲುಪಿದೆ. ಇನ್ನು 49.452 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟಿನಲ್ಲಿ ಪ್ರಸ್ತುತ 18.733 ಟಿಎಂಸಿ ನೀರು ಶೇಖರಣೆಯಾಗಿದೆ. ಸದ್ಯಕ್ಕೆ ಡ್ಯಾಂನಿಂದ ಕೇವಲ 1,565 ಕ್ಯೂಸೆಕ್ ನೀರನ್ನು ಮಾತ್ರ ಹೊರಹರಿಸಲಾಗುತ್ತಿದ್ದು, ಒಳಹರಿವು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಜಿಗಿಯಲಿದೆ.&lt;/p&gt;&lt;h2&gt;ಕೊಡಗಿನ ಹಾರಂಗಿ ಜಲಾಶಯದಲ್ಲೂ ಹೆಚ್ಚಿದ ಜಲವೈಭವ&lt;/h2&gt;&lt;p&gt;ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ಜಲಾಶಯ ಕೂಡ ಭರ್ತಿಯಾಗಿದೆ. ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, &amp;nbsp;ಜಲಾಶಯದ ಮುಂಭಾಗದಲ್ಲಿರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹಾರಂಗಿ ಯಡವನಾಡು ಸೋಮವಾರಪೇಟೆ ಸಂಪರ್ಕ ರಸ್ತೆ ಬಂದ್ ಆಗಿದೆ. &amp;nbsp;ಮೂರು ಅಡಿ ನೀರು ಸೇತುವೆ ಮೇಲೆ ಹರಿಯುತ್ತಿದೆ. ಹಾರಂಗಿ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. &amp;nbsp;ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಾಗಿದ್ದು (8.5 ಟಿಎಂಸಿ ಸಾಮರ್ಥ್ಯ), ಇಂದಿನ ಇತ್ತೀಚಿನ ವರದಿಯ ಪ್ರಕಾರ ನೀರಿನ ಮಟ್ಟ 2857.83 ಅಡಿಗಳಿಗೆ (8.104 ಟಿಎಂಸಿ) ತಲುಪಿದೆ. ಜಲಾಶಯಕ್ಕೆ ಸದ್ಯ 9,896 ಕ್ಯೂಸೆಕ್ ನೀರು ಒಳಹರಿವಾಗಿ ಬರುತ್ತಿದ್ದು, ಅಷ್ಟೇ ವೇಗವಾಗಿ ಅಂದರೆ 10,058 ಕ್ಯೂಸೆಕ್ ನೀರನ್ನು ಹೊರಹರಿವಿನ ಮೂಲಕ ನದಿಗೆ ಹರಿಸಲಾಗುತ್ತಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಹೆಚ್ಚುತ್ತಿರುವ ನೀರಿನ ಸಂಗ್ರಹವು ಕರ್ನಾಟಕದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಕೃತಿಯೇ ಕಾವೇರಿ ಸಂಕಷ್ಟಕ್ಕೆ ಸದ್ಯಕ್ಕೆ ಪರಿಹಾರ ನೀಡುತ್ತಿರುವಂತೆ ಭಾಸವಾಗುತ್ತಿದೆ.&lt;/p&gt;]]></content:encoded>
            <category>kodagu</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv"/>
        </item>
        <item>
            <title><![CDATA[ಕಾವೇರಿ ಕಿಚ್ಚು ಏರಿದ ನಡುವೆ, ನಳನಳಿಸಿದ ಕಬಿನಿ, ಹಾರಂಗಿ ಜಲಾಶಯ!]]></title>
            <link>https://kannada.asianetnews.com/karnataka-districts/kabini-harangi-dam-water-level-rises-cauvery-basin-flood-alert-san/articleshow-5vl1gbv</link>
            <guid isPermaLink="true">https://kannada.asianetnews.com/karnataka-districts/kabini-harangi-dam-water-level-rises-cauvery-basin-flood-alert-san/articleshow-5vl1gbv</guid>
            <pubDate>Sat, 01 Aug 2026 12:14:56 +0530</pubDate>
            <description><![CDATA[&lt;p&gt;ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ ಮತ್ತು ಹಾರಂಗಿ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಇದರಿಂದ ಕಾವೇರಿ ಜಲಾನಯನ ಪ್ರದೇಶದ ರೈತರಲ್ಲಿ ಸಂತಸ ಮೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyy0z7ycqcm85w3fx16jq1vx,imgname-kabini-dam-1785566568396.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು/ಮಡಿಕೇರಿ (ಆ.1): &lt;/strong&gt;ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ಎದ್ದಿದ್ದ &lsquo;ಕಾವೇರಿ ಕಿಚ್ಚು&rsquo; ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿವೆ. ನೆರೆಯ ಕೇರಳದ ವೈನಾಡು ಹಾಗೂ ಕೊಡಗಿನ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಕಬಿನಿ ಹಾಗೂ ಹಾರಂಗಿ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಕೇರಳದ ವೈನಾಡಿನಲ್ಲಿ ಮಳೆರಾಯ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಹರಿಯುವ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಸ್ತುತ ಅಣೆಕಟ್ಟೆಗೆ ಭಾರಿ ಪ್ರಮಾಣದ ನೀರು ತಲುಪುತ್ತಿದ್ದು, ನದಿ ನೀರು ಹಂಚಿಕೆ ಸಂಘರ್ಷದ ನಡುವೆ ಕಾವೇರಿ ಜಲಾನಯನ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.&lt;/p&gt;&lt;h2&gt;&lt;strong&gt;ಕಬಿನಿಯಿಂದ ಕೆಳಭಾಗಕ್ಕೆ ಹರಿಯಲಿದೆ 10 ಸಾವಿರ ಕ್ಯೂಸೆಕ್ ನೀರು!&lt;/strong&gt;&lt;/h2&gt;&lt;p&gt;19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಪ್ರಸ್ತುತ 18 ಟಿಎಂಸಿ ನೀರು ಭರ್ತಿಯಾಗಿದೆ. ಜಲಾಶಯಕ್ಕೆ ಪ್ರಸ್ತುತ 15,500 ಕ್ಯೂಸೆಕ್ ಒಳಹರಿವಿದ್ದು, ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಬಿನಿ ಅಣೆಕಟ್ಟೆಯಿಂದ ನದಿಗೆ 8,000 ದಿಂದ 10,000 ಕ್ಯೂಸೆಕ್ ನೀರನ್ನು ಹೊರಬಿಡಲು ನಿರ್ಧರಿಸಿದ್ದಾರೆ.&lt;/p&gt;&lt;p&gt;ಇತ್ತ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೂ ಹರಿಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಹಾರಂಗಿ ಅಣೆಕಟ್ಟೆಯ ಗರಿಷ್ಠ ಮಟ್ಟ 2,859 ಅಡಿ (8.5 ಟಿಎಂಸಿ) ಇದ್ದು, ಪ್ರಸ್ತುತ ನೀರಿನ ಮಟ್ಟ 2,857.83 ಅಡಿ (8.104 ಟಿಎಂಸಿ) ಗೆ ತಲುಪಿದೆ. ಜಲಾಶಯಕ್ಕೆ 9,896 ಕ್ಯೂಸೆಕ್ ಒಳಹರಿವಿದ್ದು, ಭದ್ರತೆಯ ದೃಷ್ಟಿಯಿಂದ 10,058 ಕ್ಯೂಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ.&lt;/p&gt;&lt;h2&gt;&lt;strong&gt;ಪ್ರವಾಹ ಮುನ್ನೆಚ್ಚರಿಕೆ: ನದಿ ಪಾತ್ರದ ಜನರಿಗೆ ಅಲರ್ಟ್&lt;/strong&gt;&lt;/h2&gt;&lt;p&gt;ಕಬಿನಿ ಮತ್ತು ಹಾರಂಗಿ ಎರಡೂ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಾದರೂ ಹೊರಹರಿವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಪ್ರವಾಹ ಮುನ್ನೆಚ್ಚರಿಕೆ ಪ್ರಕಟಿಸಿದ್ದು, ನದಿ ದಂಡೆಯ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/kabini-harangi-dam-water-level-rises-cauvery-basin-flood-alert-san/articleshow-5vl1gbv"/>
        </item>
        <item>
            <title><![CDATA[ಕೊಡಗಿನಲ್ಲಿ ಮಳೆ ಅಬ್ಬರ: ಕಾವೇರಿ ಅಬ್ಬರಕ್ಕೆ ಭಾಗಮಂಡಲ ಜಲಾವೃತ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ]]></title>
            <link>https://kannada.asianetnews.com/gallery/karnataka-districts/scotland-of-karnataka-kodagu-heavy-rain-kaveri-river-bhagamandala-triveni-sangama-flood-august-2026-6rki1tv</link>
            <guid isPermaLink="true">https://kannada.asianetnews.com/gallery/karnataka-districts/scotland-of-karnataka-kodagu-heavy-rain-kaveri-river-bhagamandala-triveni-sangama-flood-august-2026-6rki1tv</guid>
            <pubDate>Sat, 01 Aug 2026 21:17:33 +0530</pubDate>
            <description><![CDATA[&lt;p&gt;ಕರ್ನಾಟಕದ ಸ್ಕಾಟ್ಲೆಂಡ್ ಖ್ಯಾತೊಯ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಪ್ರವಾಹದ ನೀರು ಭಾಗಂಡೇಶ್ವರ ದೇವಾಲಯದ ಆವರಣಕ್ಕೆ ನುಗ್ಗಿದ್ದು, ಪ್ರಮುಖ ರಸ್ತೆಗಳು ಮುಳುಗಡೆಯಾಗಿವೆ. ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyyzqd0pyywabk4hdzy0jx49,imgname-bhagamandala-triveni-sangama-flood-1785598817302.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಸ್ಕಾಟ್ಲೆಂಡ್ ಖ್ಯಾತೊಯ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಪ್ರವಾಹದ ನೀರು ಭಾಗಂಡೇಶ್ವರ ದೇವಾಲಯದ ಆವರಣಕ್ಕೆ ನುಗ್ಗಿದ್ದು, ಪ್ರಮುಖ ರಸ್ತೆಗಳು ಮುಳುಗಡೆಯಾಗಿವೆ. ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಕೊಡಗು (ಆ.01): ಕರ್ನಾಟಕದ ಸ್ಕಾಟ್ಲೆಂಡ್ ಖ್ಯಾತಿಯ ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ (Heavy Rain) ಇದೀಗ ಪ್ರವಾಹದ (Flood) ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಬ್ರಹ್ಮಗಿರಿ (Brahmagiri) ಹಾಗೂ ತಲಕಾವೇರಿ (Talacauvery) ಬೆಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮವಾಗಿ ಭಾಗಮಂಡಲದ (Bhagamandala) ತ್ರಿವೇಣಿ ಸಂಗಮ (Triveni Sangama) ಸಂಪೂರ್ಣ ಜಲಾವೃತವಾಗಿದೆ.&lt;/p&gt;&lt;img&gt;&lt;p&gt;ಕಾವೇರಿ (Cauvery), ಕನಿಕೆ (Kannike) ಮತ್ತು ಸುಜ್ಯೋತಿ (Sujyothi) ನದಿಗಳ ಸಂಗಮ ಸ್ಥಳವಾಗಿರುವ ತ್ರಿವೇಣಿ ಸಂಗಮದ ಸ್ನಾನಘಟ್ಟ (Bathing Ghat) ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ಅದರ ಸಮೀಪದಲ್ಲಿದ್ದ ಅಂಗಡಿ-ಮುಂಗಟ್ಟುಗಳಿಗೂ ಪ್ರವಾಹದ ನೀರು ನುಗ್ಗಿದೆ. ಇದರಿಂದ ಸ್ಥಳೀಯ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ, ಪ್ರಸಿದ್ಧ ಭಾಗಂಡೇಶ್ವರ ದೇವಾಲಯ (Bhagandeshwara Temple) ಆವರಣಕ್ಕೂ ಪ್ರವಾಹದ ನೀರು ನುಗ್ಗಲಾರಂಭಿಸಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;img&gt;&lt;p&gt;&lt;strong&gt;ರಸ್ತೆಗಳು ಜಲಾವೃತ, ಮೇಲ್ಸೇತುವೆ ಮೂಲಕ ಮಾತ್ರ ಸಂಚಾರ&lt;/strong&gt;&lt;/p&gt;&lt;p&gt;ಭಾಗಮಂಡಲ&ndash;ನಾಪೋಕ್ಲು (Napoklu) ರಸ್ತೆಯ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದು, ಭಾಗಮಂಡಲ&ndash;ಮಡಿಕೇರಿ (Madikeri) ರಸ್ತೆಯ ಕೆಳಭಾಗವೂ ಜಲಾವೃತವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮೇಲ್ಸೇತುವೆ (Flyover) ಮೂಲಕ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;p&gt;ಕೆಳಭಾಗದ ರಸ್ತೆಯಲ್ಲಿ ಯಾರೂ ಸಂಚರಿಸದಂತೆ ಪೊಲೀಸರು (Police) ಸೂಚನಾ ಫಲಕಗಳನ್ನು ಅಳವಡಿಸಿದ್ದು, ಸಾರ್ವಜನಿಕರು ಅನಗತ್ಯವಾಗಿ ಪ್ರವಾಹದ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಆತಂಕ&lt;/strong&gt;&lt;/p&gt;&lt;p&gt;ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಕಾರಣ ಕಾವೇರಿ ನದಿಯ (Cauvery River) ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ನದಿ ಪಾತ್ರದ (River Basin) ಗ್ರಾಮಗಳ ನಿವಾಸಿಗಳಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಹವಾಮಾನ ಇಲಾಖೆ (IMD) ಈಗಾಗಲೇ ಕೊಡಗು ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ. ಮಳೆ ಮತ್ತಷ್ಟು ತೀವ್ರಗೊಂಡರೆ ತಗ್ಗು ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಿ, ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆಯ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/scotland-of-karnataka-kodagu-heavy-rain-kaveri-river-bhagamandala-triveni-sangama-flood-august-2026-6rki1tv"/>
        </item>
        <item>
            <title><![CDATA[ಮಲ್ಲಳ್ಳಿ ಜಲಪಾತದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ ಆಂಧ್ರದ ವಿದ್ಯಾರ್ಥಿಗಳು: ಕೊನೆಗೂ ನಡೆದ ರೋಚಕ ರಕ್ಷಣೆ]]></title>
            <link>https://kannada.asianetnews.com/gallery/karnataka-districts/2-andhra-students-rescued-at-mallalli-falls-at-kodagu-gvd-76re0bw</link>
            <guid isPermaLink="true">https://kannada.asianetnews.com/gallery/karnataka-districts/2-andhra-students-rescued-at-mallalli-falls-at-kodagu-gvd-76re0bw</guid>
            <pubDate>Mon, 06 Jul 2026 21:50:54 +0530</pubDate>
            <description><![CDATA[&lt;p&gt;ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದ ಆಂಧ್ರಪ್ರದೇಶದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kww37pe257mfjwrbzmvx91x0,imgname-ko--2--1783354350018.jpeg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದ ಆಂಧ್ರಪ್ರದೇಶದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕೊಡಗು (ಜು.06): &lt;/strong&gt;ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದ ಆಂಧ್ರಪ್ರದೇಶದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜಲಪಾತದ ಬಂಡೆ ಹಿಡಿದು ಜೀವ ಉಳಿಸಿಕೊಳ್ಳಲು ಹೋರಾಡಿದ ವಿದ್ಯಾರ್ಥಿಗಳು ಕೊನೆಗೂ ಸುರಕ್ಷಿತವಾಗಿ ಹೊರಬಂದಿದ್ದಾರೆ.&lt;/p&gt;&lt;img&gt;&lt;p&gt;ರಕ್ಷಿಸಲ್ಪಟ್ಟವರನ್ನು ಆಂಧ್ರಪ್ರದೇಶ ಮೂಲದ ಗಣೇಶ್ ನಾಯಕ್ (21) ಹಾಗೂ ಸಂತೋಷ್ ಕುಮಾರ್ (23) ಎಂದು ಗುರುತಿಸಲಾಗಿದೆ. ಪ್ರವಾಸಕ್ಕಾಗಿ ಸ್ನೇಹಿತರೊಂದಿಗೆ ಕೊಡಗಿಗೆ ಬಂದಿದ್ದ ಇಬ್ಬರೂ, ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂದು ಭಾವಿಸಿ, ಎಚ್ಚರಿಕೆಗಾಗಿ ಅಳವಡಿಸಿದ್ದ ರಕ್ಷಣಾ ಬೇಲಿಯನ್ನು ದಾಟಿ ನೀರಿನೊಳಗೆ ಇಳಿದಿದ್ದರು.&lt;/p&gt;&lt;img&gt;&lt;p&gt;ಆದರೆ ಇದೇ ವೇಳೆ ಜಲಪಾತದ ಮೇಲ್ಭಾಗದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದಿಂದ ಏಕಾಏಕಿ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಡಲಾಗಿತ್ತು. ಕ್ಷಣಾರ್ಧದಲ್ಲೇ ನೀರಿನ ಹರಿವು ಹೆಚ್ಚಾಗಿ, ಇಬ್ಬರು ವಿದ್ಯಾರ್ಥಿಗಳು ಪ್ರಬಲ ಸೆಳೆತದ ನಡುವೆ ಸಿಲುಕಿಕೊಂಡರು. ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಜೀವ ಉಳಿಸಿಕೊಳ್ಳುವ ಏಕೈಕ ಪ್ರಯತ್ನವಾಗಿ ಜಲಪಾತದ ಮಧ್ಯದಲ್ಲಿದ್ದ ಬಂಡೆಯನ್ನು ಹಿಡಿದು ಸುಮಾರು ಒಂದು ಗಂಟೆ ಕಾಲ ಸಹಾಯಕ್ಕಾಗಿ ಕಾಯಬೇಕಾಯಿತು.&lt;/p&gt;&lt;img&gt;&lt;p&gt;ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಗ್ಗ ಸೇರಿದಂತೆ ವಿಶೇಷ ರಕ್ಷಣಾ ಉಪಕರಣಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ, ಅಪಾಯದಲ್ಲಿದ್ದ ಇಬ್ಬರನ್ನೂ ಸುರಕ್ಷಿತವಾಗಿ ಹೊರತಂದರು. ಸ್ಥಳದಲ್ಲಿದ್ದ ಪ್ರವಾಸಿಗರು ಹಾಗೂ ಸ್ಥಳೀಯರು ಕಾರ್ಯಾಚರಣೆಯನ್ನು ವೀಕ್ಷಿಸಿದರು.&lt;/p&gt;&lt;img&gt;&lt;p&gt;ರಕ್ಷಣೆ ಬಳಿಕ ಇಬ್ಬರು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದು ಎಷ್ಟು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆಯಾಗಿದೆ. ಅಧಿಕಾರಿಗಳು ಎಚ್ಚರಿಕೆ ಫಲಕಗಳು ಹಾಗೂ ರಕ್ಷಣಾ ಬೇಲಿಗಳನ್ನು ನಿರ್ಲಕ್ಷಿಸದೆ, ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/karnataka-districts/2-andhra-students-rescued-at-mallalli-falls-at-kodagu-gvd-76re0bw"/>
        </item>
        <item>
            <title><![CDATA[ಕೊಡಗು ಪ್ರವಾಸಿಗರಿಗೆ ಶಾಕಿಂಗ್ ನ್ಯೂಸ್: ಮಡಿಕೇರಿಯ ಪ್ರಸಿದ್ಧ 'ರಾಜಾಸೀಟು' 4 ದಿನ ಬಂದ್! ಕಾರಣ ಇಲ್ಲಿದೆ..]]></title>
            <link>https://kannada.asianetnews.com/kodagu/karnataka-tourist-spot-madikeri-raja-seat-closed-for-tourists-4-days-kodagu-dc-order/articleshow-873o9z0</link>
            <guid isPermaLink="true">https://kannada.asianetnews.com/kodagu/karnataka-tourist-spot-madikeri-raja-seat-closed-for-tourists-4-days-kodagu-dc-order/articleshow-873o9z0</guid>
            <pubDate>Wed, 08 Jul 2026 18:56:32 +0530</pubDate>
            <description><![CDATA[&lt;p&gt;ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಮಡಿಕೇರಿಯ 'ರಾಜಾಸೀಟು' ಸ್ಥಳಕ್ಕೆ 4 ದಿನಗಳ ಕಾಲ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಮಳೆಗಾಲದಲ್ಲಿ ಮಡಿಕೇರಿಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಗೆ ಇದರಿಂದ ಭಾರೀ ಬೇಸರವಾಗಿದ್ದರೂ, ಸುರಕ್ಷತೆ ಕಾರಣದಿಂದ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0yetkbcejtv9qfzkgh97ty,imgname-madikeri-raja-seat-4-days-close-1783517112938.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಜು.08): ಕ&lt;/strong&gt;ರ್ನಾಟಕದ ಸ್ವಿಡ್ಜರ್&zwnj;ಲ್ಯಾಂಡ್ ಎಂದೇ ಖ್ಯಾತವಾಗಿರುವ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಡಿಕೇರಿ ನಗರದ ಕೆಎಸ್&zwnj;ಆರ್&zwnj;ಟಿಸಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ 'ರಾಜಾಸೀಟು' (Raja Seat) ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.&lt;/p&gt;&lt;h2&gt;&lt;strong&gt;ಜುಲೈ 9 ರಿಂದ 12 ರವರೆಗೆ ಬಂದ್&lt;/strong&gt;&lt;/h2&gt;&lt;p&gt;ಮಡಿಕೇರಿ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಜುಲೈ 9 ರಿಂದ ಜುಲೈ 12 ರವರೆಗೆ ರಾಜಾಸೀಟಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜುಲೈ 7 ರಂದು ಕೆಎಸ್&zwnj;ಆರ್&zwnj;ಟಿಸಿ ಬಸ್ ನಿಲ್ದಾಣದ ಬಳಿ ರಸ್ತೆ ಬದಿ ಕುಸಿತ ಉಂಟಾಗಿತ್ತು. ಈ ರಸ್ತೆಯ ದುರಸ್ತಿ ಕಾರ್ಯ ಮತ್ತು ಸುಗಮ ಸಂಚಾರಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ರಾಜಾಸೀಟು ಬಂದ್ ಮಾಡಲು ಕಾರಣವೇನು?&lt;/strong&gt;&lt;/h2&gt;&lt;p&gt;ಬಸ್ ನಿಲ್ದಾಣದ ಬಳಿ ರಸ್ತೆ ಕುಸಿದಿರುವುದರಿಂದ ಕೆಎಸ್&zwnj;ಆರ್&zwnj;ಟಿಸಿ ಮತ್ತು ಖಾಸಗಿ ಬಸ್&zwnj;ಗಳು ಸೇರಿದಂತೆ ಎಲ್ಲಾ ವಾಹನಗಳು ಈಗ ರಾಜಾಸೀಟು ರಸ್ತೆಯ ಮೂಲಕವೇ ಸಂಚರಿಸಬೇಕಾಗಿದೆ. ರಾಜಾಸೀಟು ಪ್ರದೇಶದಲ್ಲಿ ರಸ್ತೆ ಕಿರಿದಾಗಿದ್ದು, ಪ್ರವಾಸಿಗರ ವಾಹನಗಳು ಅಲ್ಲಿ ನಿಲ್ಲುವುದರಿಂದ ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾಗುತ್ತಿದೆ. ಅಲ್ಲದೆ ಈ ಭಾಗದಲ್ಲಿ ಶಾಲೆಗಳಿರುವುದರಿಂದ ಶಾಲಾ ಮಕ್ಕಳ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರವಾಸಿಗರಿಗೆ ಸೂಚನೆ:&lt;/strong&gt;&lt;/h2&gt;&lt;p&gt;ಈಗಾಗಲೇ ಕೊಡಗು ಪ್ರವಾಸ ಹಮ್ಮಿಕೊಂಡಿರುವ ಪ್ರವಾಸಿಗರು ಜುಲೈ 12ರ ವರೆಗೆ ರಾಜಾಸೀಟಿಗೆ ಭೇಟಿ ನೀಡಲು ಸಾಧ್ಯವಿಲ್ಲ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಿಂದ ಈ ನಿರ್ಬಂಧ ಹೇರಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಪ್ರವೇಶದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/kodagu/karnataka-tourist-spot-madikeri-raja-seat-closed-for-tourists-4-days-kodagu-dc-order/articleshow-873o9z0"/>
        </item>
        <item>
            <title><![CDATA[ಒಂದೇ ವೇದಿಕೆಯಲ್ಲಿ ಹಳೆ ವಿದ್ಯಾರ್ಥಿಗಳು, ಶಿಕ್ಷಕರು: ಸೈನಿಕ ಶಾಲೆ ಕೊಡಗಿನಲ್ಲಿ ಸಂಭ್ರಮದ ವಾತಾವರಣ]]></title>
            <link>https://kannada.asianetnews.com/karnataka-districts/sainik-school-kodagu-kodaac-2026-alumni-meet-awards-ceremony-gvd/articleshow-9sm41kx</link>
            <guid isPermaLink="true">https://kannada.asianetnews.com/karnataka-districts/sainik-school-kodagu-kodaac-2026-alumni-meet-awards-ceremony-gvd/articleshow-9sm41kx</guid>
            <pubDate>Mon, 13 Jul 2026 22:42:39 +0530</pubDate>
            <description><![CDATA[&lt;p&gt;Sainik School Karnataka: ಕೂಡಿಗೆಯಲ್ಲಿ &amp;nbsp;ಇರುವ ಸೈನಿಕ ಶಾಲೆ ಕೊಡಗು ತನ್ನ 7ನೇ ಹಳೆ ವಿದ್ಯಾರ್ಥಿಗಳ ಸಮಾವೇಶವಾದ 'ಕೋಡಾಕ್' (KODAAC) ಕಾರ್ಯಕ್ರಮ ಅರ್ಥಪೂರ್ಣವಾಗಿ &amp;nbsp;ನೆರೆವೇರಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxe5t97jsvb4cz35e246grf7,imgname-vj-1783961036018.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜು.13):&lt;/strong&gt; ಕೂಡಿಗೆಯಲ್ಲಿ ಇರುವ ಸೈನಿಕ ಶಾಲೆ ಕೊಡಗು ತನ್ನ 7ನೇ ಹಳೆ ವಿದ್ಯಾರ್ಥಿಗಳ ಸಮಾವೇಶವಾದ 'ಕೋಡಾಕ್' (KODAAC) ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರೆವೇರಿತು. ಶಾಲೆಯ ಮಾಜಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಸ್ತುತ ಶಾಲಾ ಸಿಬ್ಬಂದಿ ವರ್ಗದವರು ಸೌಹಾರ್ದತೆ, ಸಂಪ್ರದಾಯ ಮತ್ತು ಸಾಧನೆಗಳನ್ನು ಹಂಚಿಕೊಳ್ಳಲು ಒಂದೆಡೆ ಸೇರಿದ್ದರು. ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಬ್ಯಾಚ್&zwnj;ಗಳ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.&lt;/p&gt;&lt;p&gt;ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಶ್ರೀಮತಿ ದಿವ್ಯಾ ಸಿಂಗ್ ಮತ್ತು ಕೋಡಾಕ್ ಅಸೋಸಿಯೇಷನ್( ಹಳೇ ವಿದ್ಯಾರ್ಥಿಗಳ ಸಂಘದ) ಅಧ್ಯಕ್ಷರಾದ ಶ್ರೀ ಶಫೀವುಲ್ಲಾ ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವು ಹಳೆ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕೆಡೆಟ್ ನಿಶಾಂತ್ ನಾರಾಯಣ್ ಸ್ವಾಗತ ಕೋರಿದರು ಮತ್ತು 11ನೇ ತರಗತಿಯ ಕೆಡೆಟ್ ಗಿತೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಶ್ರೀ ಶಫೀವುಲ್ಲಾ ಅವರು, ಸಂಸ್ಥೆಯೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ಮತ್ತು ಶಾಲೆಯ ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳ ಸಂಘ ಕೈಗೊಂಡಿರುವ ವಿವಿಧ ಕಾರ್ಯಗಳ ಕುರಿತು ವಿವರಿಸಿದರು.&lt;/p&gt;&lt;p&gt;ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆಡೆಟ್&zwnj;ಗಳು ಸುಮಧುರ ಗೀತಗಾಯನ, ರಾಮಾಯಣದ ಪ್ರಸಂಗಗಳನ್ನು ಬಿಂಬಿಸುವ ಆಕರ್ಷಕ ನೃತ್ಯ ಮತ್ತು ಚಂಡೆ ಮೇಳವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭವೂ ನಡೆಯಿತು. ಕರ್ನಲ್ ಅಮರ್ ಜೀತ್ ಸಿಂಗ್ ಅವರು 2025-26ನೇ ಸಾಲಿನ ಅಕಾಡೆಮಿಕ್ ಸಾಧನಾ ಟ್ರೋಫಿ, ಯುಪಿಎಸ್&zwnj;ಸಿ ಪರೀಕ್ಷೆಯ ಸಾಧನಾ ಟ್ರೋಫಿ ಮತ್ತು ಒಟ್ಟಾರೆ ಶ್ರೇಷ್ಠತೆಗಾಗಿ ಕಠಾರಿ ಹೌಸ್&zwnj;ಗೆ ಕಾಕ್ ಹೌಸ್ ಟ್ರೋಫಿಯನ್ನು ಪ್ರದಾನ ಮಾಡಿದರು. ಕೃತಜ್ಞತೆಯ ಸಂಕೇತವಾಗಿ ಶ್ರೀ ಶಫೀವುಲ್ಲಾ ಅವರು ಪ್ರಾಂಶುಪಾಲರಿಗೆ ಸ್ಮರಣಿಕೆಯನ್ನು ನೀಡಿದರು.&lt;/p&gt;&lt;p&gt;ಅಲ್ಲದೆ, ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ದಕ್ಷಿಣಾಮೂರ್ತಿ ಮತ್ತು ಆಗಸ್ಟ್&zwnj;ನಲ್ಲಿ ನಿವೃತ್ತರಾಗಲಿರುವ ಸಾಮಾನ್ಯ ನೌಕರ ಶ್ರೀ ಮಲ್ಲಿಕಾರ್ಜುನ್ ಅವರ ಸೇವೆಯನ್ನು ಗುರುತಿಸಿ ಹಳೆ ವಿದ್ಯಾರ್ಥಿಗಳ ಸಂಘವು ಸನ್ಮಾನಿಸಿತು. ಪ್ರಾಂಶುಪಾಲರು ಕೋಡಾಕ್&zwnj;ನ ಪದಾಧಿಕಾರಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ತಮ್ಮ ಭಾಷಣದಲ್ಲಿ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಹಳೆ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಸಂಸ್ಥೆಯೊಂದಿಗಿನ ಅವರ ನಿರಂತರ ಸಂಬಂಧವನ್ನು ಶ್ಲಾಘಿಸಿದರು.&lt;/p&gt;&lt;h2&gt;&lt;strong&gt;ಮರುನಾಮಕರಣ ಮಾಡುವ ಪ್ರಸ್ತಾವನೆ&lt;/strong&gt;&lt;/h2&gt;&lt;p&gt;ಮಹಿಳಾ ಹಳೆ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸಲು ಸಂಘದ ಹೆಸರನ್ನು 'ಓಲ್ಡ್ ಬಾಯ್ಸ್ ಅಂಡ್ ಗರ್ಲ್ಸ್ ಅಸೋಸಿಯೇಷನ್' (OBGA) ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಅವರು ಮಂಡಿಸಿದರು. ಸೈನಿಕ ಶಾಲೆ ಕೊಡಗು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸೈನಿಕ ಶಾಲೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ ಅವರು, ಶಾಲೆಯು ಚಾರಿತ್ರ್ಯ ನಿರ್ಮಾಣ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಒತ್ತಿ ಹೇಳಿದರು. ಭಾರತೀಯ ನೌಕಾಪಡೆಯ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್ ಅವರು ಸೆಪ್ಟೆಂಬರ್&zwnj;ನಲ್ಲಿ ಆಡಳಿತಾಧಿಕಾರಿಯಾಗಿ ಸೇರಲಿದ್ದಾರೆ ಎಂಬ ವಿಷಯವನ್ನು ಹಂಚಿಕೊಂಡರು.&lt;/p&gt;&lt;p&gt;ಹಳೆ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಶ್ರೀ ಸುನೀಲ್ ಕರಳೆ, ಶಾಲೆಗೆ ಶ್ರೀ ದಕ್ಷಿಣಾಮೂರ್ತಿ ಮತ್ತು ಶ್ರೀ ಮಲ್ಲಿಕಾರ್ಜುನ್ ನೀಡಿದ ಕೊಡುಗೆಗಳಿಗಾಗಿ ಕೃತಜ್ಞತೆ ಸಲ್ಲಿಸಿದರು. ಆಚರಣೆಯು ಹಳೆ ವಿದ್ಯಾರ್ಥಿಗಳು ಮತ್ತು ಶಾಲಾ ತಂಡಗಳ ನಡುವೆ ನಡೆದ ಸೌಹಾರ್ದ ಫುಟ್&zwnj;ಬಾಲ್ ಮತ್ತು ಹಾಕಿ ಪಂದ್ಯಗಳೊಂದಿಗೆ ಮುಕ್ತಾಯಗೊಂಡಿತು. ಕೆಡೆಟ್ ಚಿನ್ಮಯ ಧನ್ಯವಾದ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕ ಶ್ರೀ ಎನ್. ವಿಬಿನ್ ಕುಮಾರ್, ಬೋಧಕ ಮತ್ತು ಆಡಳಿತ ಸಿಬ್ಬಂದಿ, ಎನ್&zwnj;ಸಿಸಿ ಪಿಐ ಸಿಬ್ಬಂದಿ ಮತ್ತು ಕೆಡೆಟ್&zwnj;ಗಳು ಭಾಗವಹಿಸಿದ್ದರು.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sainik-school-kodagu-kodaac-2026-alumni-meet-awards-ceremony-gvd/articleshow-9sm41kx"/>
        </item>
        <item>
            <title><![CDATA[ಕೊಡಗು ಜಿಲ್ಲೆಯಾದ್ಯಂತ ಮಳೆ: ಹಾರಂಗಿಗೆ 5000 ಕ್ಯುಸೆಕ್ ನೀರು! ರಾಜ್ಯದ ಜಲಾಶಯಗಳಲ್ಲಿ ಇಂದು ಎಷ್ಟು ನೀರಿದೆ?]]></title>
            <link>https://kannada.asianetnews.com/karnataka-districts/kodagu-rains-across-district-5000-cusecs-of-water-inflow-into-harangi-dam-rav/articleshow-bxtp88o</link>
            <guid isPermaLink="true">https://kannada.asianetnews.com/karnataka-districts/kodagu-rains-across-district-5000-cusecs-of-water-inflow-into-harangi-dam-rav/articleshow-bxtp88o</guid>
            <pubDate>Fri, 31 Jul 2026 05:36:49 +0530</pubDate>
            <description><![CDATA[&lt;p&gt;ಕಳೆದ ಹಲವು ದಿನಗಳಿಂದ ಸಾಧಾರಣ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಚುರುಕುಗೊಂಡಿದೆ. ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಸೇರಿ ವಿವಿಧೆಡೆ ಉತ್ತಮ ಮಳೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kytqwmrzzax0az84ar7d0p0b,imgname-----------------------2026-07-31t051234.600-1785456382751.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಡಿಕೇರಿ: ಕಳೆದ ಹಲವು ದಿನಗಳಿಂದ ಸಾಧಾರಣ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಚುರುಕುಗೊಂಡಿದೆ. ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಸೇರಿ ವಿವಿಧೆಡೆ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯ ಹಾರಂಗಿಯ ಒಳಹರಿವು ಏರಿಕೆ ಕಂಡಿದ್ದು, ಸುಮಾರು 5000 ಕ್ಯುಸೆಕ್ ನೀರು ಹರಿದು ಬರುತ್ತಿದೆ.&amp;nbsp;&lt;/p&gt;&lt;h2&gt;ಕಬಿನಿ ಜಲಾಶಯಕ್ಕೆ 8580 ಕ್ಯುಸೆಕ್ ಒಳಹರಿವು&lt;/h2&gt;&lt;p&gt;ಮೈಸೂರು ಜಿಲ್ಲೆ ಎಚ್&zwnj;.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ 8580 ಕ್ಯುಸೆಕ್ ಒಳಹರಿವು ಹೆಚ್ಚಿದೆ. ಮಡಿಕೇರಿಯ ಮಂಗಳಾದೇವಿ ನಗರದ ಖಾಸಗಿ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಭಾರೀ ಗಾಳಿಗೆ ಜಿಲ್ಲಾಸ್ಪತ್ರೆಯ ಆವರಣದಲ್ಲಿದ್ದ ಬೈಕ್&zwnj;ಗಳ ಮೇಲೆ ಮರ ಬಿದ್ದಿದೆ. ಇನ್ನು ಪಶ್ವಿಮ ಘಟ್ಟದಲ್ಲಿ ಉತ್ತುಮ ಮಳೆಯಾಗತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮಾರ್ಕಂಡೇಯ ನದಿಯ ನೀರಿನ ಹರಿವು ಹೆಚ್ಚಳವಾಗಿದೆ. ಇದರಿಂದ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ.&amp;nbsp;&lt;/p&gt;&lt;h3&gt;ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?&lt;/h3&gt;&lt;p&gt;ಕಬಿನಿ 79% 2284 2277&lt;/p&gt;&lt;p&gt;ಹೇಮಾವತಿ 66% 2922 2907&lt;/p&gt;&lt;p&gt;ತುಂಗಭದ್ರಾ 34% 1633 1609&lt;/p&gt;&lt;p&gt;ಸೂಪಾ(ಮೀ.) 37% 564 536&lt;/p&gt;&lt;p&gt;ಕೆಆರ್&zwnj;ಎಸ್ 35% 124.80 92.14&lt;/p&gt;&lt;p&gt;ಘಟಪ್ರಭಾ 64% 2175 2149&lt;/p&gt;&lt;p&gt;ಲಿಂಗನಮಕ್ಕಿ 31% 1819.12 1775&lt;/p&gt;&lt;p&gt;ಭದ್ರಾ 54% 2158 2127&lt;/p&gt;&lt;p&gt;ಹಾರಂಗಿ 95% 2859 2857&lt;/p&gt;&lt;p&gt;ಆಲಮಟ್ಟಿ(ಮೀ.) 95% 519.60 517.92&lt;/p&gt;&lt;p&gt;ನಾರಾಯಣಪುರ(ಮೀ.) 90% 492.25 491.17&lt;/p&gt;&lt;p&gt;ಮಲಪ್ರಭಾ 41% 2079.50 2058.45&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kodagu-rains-across-district-5000-cusecs-of-water-inflow-into-harangi-dam-rav/articleshow-bxtp88o"/>
        </item>
        <item>
            <title><![CDATA[ಕೊಡಗಿನಲ್ಲಿ ಭಾರೀ ಮಳೆ, ಕಾವೇರಿಗೆ ಬಂತು ಜೀವಕಳೆ: 100 ಅಡಿ ಭರ್ತಿಯತ್ತ ಕೆಆರ್‌ಎಸ್ ಜಲಾಶಯ!]]></title>
            <link>https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm</link>
            <guid isPermaLink="true">https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm</guid>
            <pubDate>Sun, 02 Aug 2026 22:05:36 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್&zwnj;ಎಸ್ ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಯ ಸಮೀಪ ತಲುಪಿದೆ. ಪ್ರಸ್ತುತ 31,583 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಈ ಬೆಳವಣಿಗೆಯು ಮಂಡ್ಯ ಮತ್ತು ಮೈಸೂರು ಭಾಗದ ರೈತರಲ್ಲಿ ಮುಂಗಾರು ಬೆಳೆಗೆ ನೀರಿನ ಭರವಸೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz1n6y1epybamt47k40a8qf3,imgname-mandya-krs-dam-1785688455214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.02): ಕ&lt;/strong&gt;ನ್ನಡ ನಾಡಿನ ಜೀವನಾಡಿ ಕಾವೇರಿ (Cauvery) ಮತ್ತೊಮ್ಮೆ ಕನ್ನಡಿಗರ ನಿರೀಕ್ಷೆ ಉಳಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Catchment) ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ (Heavy Rain) ಪರಿಣಾಮ ಮಂಡ್ಯ (Mandya) ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆ (KRS Dam) ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ.&lt;/p&gt;&lt;p&gt;ಭಾನುವಾರ ಲಭ್ಯವಾದ ಮಾಹಿತಿಯ ಪ್ರಕಾರ, ಕೆಆರ್&zwnj;ಎಸ್ ಅಣೆಕಟ್ಟೆಯಲ್ಲಿ 98.80 ಅಡಿ ನೀರು ಸಂಗ್ರಹವಾಗಿದ್ದು, ಬೆಳಗಿನ ವೇಳೆಗೆ 100 ಅಡಿ ಗಡಿ ತಲುಪುವ ಸಾಧ್ಯತೆ ಇದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಇನ್ನೂ 26.80 ಅಡಿ ನೀರು ತುಂಬಬೇಕಿದೆ. ಪ್ರಸ್ತುತ ಡ್ಯಾಂಗೆ 31,583 ಕ್ಯೂಸೆಕ್ (Cusecs) ನೀರು ಒಳಹರಿವು ದಾಖಲಾಗುತ್ತಿದೆ. ಇನ್ನೊಂದೆಡೆ 1,819 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಒಳಹರಿವು ಹೆಚ್ಚುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ವೇಗವಾಗಿ ಏರಿಕೆಯಾಗುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;22 ಟಿಎಂಸಿ ನೀರು ಸಂಗ್ರಹ&lt;/strong&gt;&lt;/h2&gt;&lt;p&gt;ಸದ್ಯ ಕೆಆರ್&zwnj;ಎಸ್ ಅಣೆಕಟ್ಟೆಯಲ್ಲಿ 21.885 ಟಿಎಂಸಿ (TMC) ನೀರು ಸಂಗ್ರಹವಾಗಿದೆ. ಡ್ಯಾಂನ ಒಟ್ಟು ಗರಿಷ್ಠ ಸಾಮರ್ಥ್ಯ 49.452 ಟಿಎಂಸಿ ಆಗಿದೆ. ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇದೇ ರೀತಿ ಮುಂದುವರಿದರೆ, ಆಗಸ್ಟ್ ತಿಂಗಳಲ್ಲೇ ಅಣೆಕಟ್ಟೆ ಗಣನೀಯ ಮಟ್ಟಕ್ಕೆ ಭರ್ತಿಯಾಗುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ (Irrigation Department) ಮೂಲಗಳು ಅಂದಾಜಿಸಿವೆ.&lt;/p&gt;&lt;p&gt;ಕೆಆರ್&zwnj;ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಿಂದ ಮಂಡ್ಯ, ಮೈಸೂರು (Mysuru) ಸೇರಿದಂತೆ ಕಾವೇರಿ ನೀರಾವರಿ ಪ್ರದೇಶದ (Cauvery Irrigation Region) ರೈತರಲ್ಲಿ ಸಂತಸ ಮನೆ ಮಾಡಿದೆ. ಮುಂಗಾರು (Monsoon) ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;ಕೆಆರ್&zwnj;ಎಸ್ (KRS Dam) ಇಂದಿನ ಪ್ರಮುಖ ಅಂಕಿಅಂಶಗಳು&lt;/strong&gt;&lt;/h2&gt;&lt;ul&gt; &lt;li&gt;ಗರಿಷ್ಠ ಮಟ್ಟ (Maximum Level): 124.80 ಅಡಿ&lt;/li&gt; &lt;li&gt;ಇಂದಿನ ನೀರಿನ ಮಟ್ಟ (Current Water Level): 98.80 ಅಡಿ&lt;/li&gt; &lt;li&gt;ಒಳಹರಿವು (Inflow): 31,583 ಕ್ಯೂಸೆಕ್&lt;/li&gt; &lt;li&gt;ಹೊರಹರಿವು (Outflow): 1,819 ಕ್ಯೂಸೆಕ್&lt;/li&gt; &lt;li&gt;ಗರಿಷ್ಠ ಸಂಗ್ರಹ ಸಾಮರ್ಥ್ಯ (Maximum Storage): 49.452 ಟಿಎಂಸಿ&lt;/li&gt; &lt;li&gt;ಇಂದಿನ ನೀರಿನ ಸಂಗ್ರಹ (Current Storage): 21.885 ಟಿಎಂಸಿ&lt;/li&gt; &lt;li&gt;ಭರ್ತಿಗೆ ಬಾಕಿ (Balance to Full Reservoir Level): 26.80 ಅಡಿ&lt;/li&gt;&lt;/ul&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm"/>
        </item>
        <item>
            <title><![CDATA[ಸಚಿವನಾಗಿ ಮೊದಲ ಭೇಟಿಯಲ್ಲೇ 'ಕೊಡಗಿನ ಮೂಲ ಸಮಸ್ಯೆ' ಪರಿಹಾರಕ್ಕೆ ಕೈಹಾಕಿದ ಪಿ.ಎಂ. ನರೇಂದ್ರಸ್ವಾಮಿ!]]></title>
            <link>https://kannada.asianetnews.com/karnataka-districts/minister-pm-narendra-swamy-inspects-harangi-dam-kodagu-cauvery-river-flood-drought-report-khs/articleshow-fz1mgnd</link>
            <guid isPermaLink="true">https://kannada.asianetnews.com/karnataka-districts/minister-pm-narendra-swamy-inspects-harangi-dam-kodagu-cauvery-river-flood-drought-report-khs/articleshow-fz1mgnd</guid>
            <pubDate>Wed, 05 Aug 2026 22:30:41 +0530</pubDate>
            <description><![CDATA[ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ, ನೀರಿನ ಮಟ್ಟದ ಬಗ್ಗೆ ಮಾಹಿತಿ ಪಡೆದರು. ಆರಂಭದಲ್ಲಿ ಮಳೆ ಕೊರತೆಯಿಂದ ಆತಂಕವಿದ್ದರೂ, ಇತ್ತೀಚಿನ ಉತ್ತಮ ಮಳೆಯಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದ ಅವರು, ಕೊಡಗಿನಲ್ಲಿನ ಅತಿವೃಷ್ಟಿಯ ಸಂಕಷ್ಟಗಳ ಬಗ್ಗೆಯೂ ಗಮನ ಸೆಳೆದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kz9dvrmf0b05hwbx8pw371mt,imgname-minister-pm-narendra-swami-inspects-kodagu-rain-1785949184653.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಆ.05): ರಾ&lt;/strong&gt;ಜ್ಯ ಸರ್ಕಾರದಿಂದ ತುರ್ತಾಗಿ ನೇಮಿಸಲಾದ ಬರ ಹಾಗೂ ನೆರೆ ವೀಕ್ಷಣೆಗೆ ಕೊಡಗು ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಕೊಡಗು ಜಿಲ್ಲೆಯ ಏಕೈಕ ಜಲಾಶಯ ಹಾರಂಗಿಯನ್ನು ವೀಕ್ಷಿಸಿದರು. ನಂತರ ಮಾತನಾಡಿ, ಕಾವೇರಿ ತುಂಬಿದರೆ ಮಂಡ್ಯದಿಂದ ತಮಿಳುನಾಡಿನವರೆಗೂ ಸಮೃದ್ಧಿ. ಆದರೆ, ಕಳೆದ 15 ದಿನಗಳ ಹಿಂದಿನ ಸ್ಥಿತಿ ಆತಂಕಕಾರಿ ಆಗಿದ್ದು, ಇದೀಗ ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನಲ್ಲಿರುವ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಎಷ್ಟು ನೀರಿನ ಸಂಗ್ರಹವಿದೆ, ಎಷ್ಟು ಸಂಗ್ರಹವಾಗಬೇಕಾಗಿತ್ತು. ಎಷ್ಟು ನೀರನ್ನು ಹೊರಗೆ ಹರಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಜಲಾಶಯದಲ್ಲಿಯೇ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.&lt;/p&gt;&lt;p&gt;ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಒಂದು ವಾರದ ಹಿಂದೆ ಮಳೆಯ ಪರಿಸ್ಥಿತಿ ನೋಡಿದರೆ ಆತಂಕ ಪಡುವಂತೆ ಇತ್ತು. ಕರ್ನಾಟಕದ ಅರ್ಧ ಭಾಗಕ್ಕೆ ನೀರುಣಿಸುವ ಕಾವೇರಿ ಮಾತೆ ಒಡಲು ಇದು. ಜನರ ಬಾಯಾರಿಕೆಯಿಂದ ಹಿಡಿದು ಅನ್ನ ಆಹಾರವನ್ನು ಕೊಡುವುದು ಕಾವೇರಿ. ಆದರೆ ಕುಡಿಯುವುದಕ್ಕೂ ನೀರಿಲ್ಲ ಎನ್ನುವ ಸ್ಥಿತಿ ಇತ್ತು. ಆದರೆ ಕಳೆದ ಒಂದು ಹತ್ತು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆಆರ್ ಎಸ್ ಜಲಾಶಯಕ್ಕೆ ಇದುವರೆಗೆ 104 ಅಡಿ ತುಂಬಿದೆ ಅಷ್ಟೇ. ಕೆ ಆರ್ ಎಸ್ ತುಂಬಲು ಇನ್ನು 20 ಅಡಿ ತುಂಬಬೇಕು. ಕಾವೇರಿ ಮಾತೆ ಮುನಿಯದೆ ಇರುವಂತೆ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ತೀವ್ರ ಮಳೆಯಾದರೆ ಕೆಳಗಿನವರಿಗೆ ಸಂಭ್ರಮ, ಕೊಡಗಿನವರಿಗಲ್ಲ&lt;/strong&gt;&lt;/h2&gt;&lt;p&gt;ನಾವು ಸಚಿವರಾದ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾದಂತೆ ನಾನು ಬರ ಮತ್ತು ನೆರೆ ವೀಕ್ಷಣೆಗೆ ಬಂದಿದ್ದೇನೆ. ಆದರೆ ಸದ್ಯ ಕೊಡಗಿನಲ್ಲಿ ಉತ್ತಮ ಮಳೆ ಆಗಿದೆ. ತಡವಾಗಿ ಮಾನ್ಸೂನ್ ಆರಂಭವಾಯಿತು, ಇದರಿಂದ ಒಂದಷ್ಟು ಸಮಸ್ಯೆಯೂ ಆಗಿದೆ. ಇದಕ್ಕಾಗಿಯೇ ಸಿಎಂ ಸೂಚನೆಯಂತೆ ನಾನು ಸಚಿವನಾಗುತ್ತಿದ್ದಂತೆ ಕೊಡಗು ಜಿಲ್ಲೆಗೆ ಬಂದಿದ್ದೇನೆ. ಕಾವೇರಿ ತುಂಬಿದರೆ ಮಂಡ್ಯದಿಂದ ಹಿಡಿದು ತಮಿಳುನಾಡಿನವರೆಗೆ ಸಮೃದ್ಧಿ ಇರುತ್ತದೆ. ತೀವ್ರ ಮಳೆಯಾದರೆ ತಳಭಾಗದಲ್ಲಿ ಇರುವ ಸಂಭ್ರಮ ಕೊಡಗಿನಲ್ಲಿ ಇರುವುದಿಲ್ಲ. ಇಲ್ಲಿ ಆ ಮಳೆಯ ಸಂಕಷ್ಟವನ್ನು ಇಲ್ಲಿನ ಜನರು ಅನುಭವಿಸುತ್ತಾರೆ. ಇಲ್ಲಿಗೆ ಮೂಲಭೂತ ಸೌಕರ್ಯಕ್ಕೆ ತೀವ್ರ ಹಾನಿಯಾಗುತ್ತದೆ. ಇದರ ವರದಿಯನ್ನು ಡಿಸಿಎಂ ಆಗಿರುವ ಕಂದಾಯ ಸಚಿವರಿಗೆ ನೀಡುತ್ತೇನೆ ಎಂದು ಕೊಡಗಿನ ಹಾರಂಗಿಯಲ್ಲಿ ಸಚಿವ ನರೇಂದ್ರ ಸ್ವಾಮಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಮೂಲ ಸಮಸ್ಯೆ ಪರಿಹಾರಕ್ಕೆ ಕೈಹಾಕಿದ ಸಚಿವರು:&lt;/strong&gt;&lt;/h2&gt;&lt;p&gt;ಇನ್ನು ಸಚಿವರಾಗಿ ಕೊಡಗು ಜಿಲ್ಲೆಗೆ ನೆರೆ-ಬರ ವೀಕ್ಷಣೆಗೆ ಆಗಮಿಸಿದ ಮೊದಲ ಭೇಟಿಯಲ್ಲೇ ಸಚಿವ ನರೇಂದ್ರಸ್ವಾಮಿ ಅವರು, ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದರೆ ಗುಡ್ಡ ಕುಸಿತದಂತಹ ಭೀತಿ, ರಸ್ತೆ ಸಂಪರ್ಕಗಳ ಕಡಿತ, ಮನೆ ಕುಸಿತ ಹಾಗೂ ನೆರೆಯಿಂದಾಗುವ ಇತರೆ ಹಾನಿಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಮಳೆಯಿಂದ ಜನರು ಅನುಭವಿಸುವ ಸಮಸ್ಯೆ ಗುರುತಿಸಿ ಪರಿಹಾರ ಕಾರ್ಯ ಕೈಗೊಳ್ಳುವ ಭವರಸೆ ನೀಡಿದ್ದು, ಸ್ಥಳೀಯರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/minister-pm-narendra-swamy-inspects-harangi-dam-kodagu-cauvery-river-flood-drought-report-khs/articleshow-fz1mgnd"/>
        </item>
        <item>
            <title><![CDATA[ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಮುಂದಿನ 3 ದಿನಗಳು ನಿರ್ಣಾಯಕ!]]></title>
            <link>https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe</link>
            <guid isPermaLink="true">https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe</guid>
            <pubDate>Wed, 08 Jul 2026 09:16:51 +0530</pubDate>
            <description><![CDATA[ರಾಜ್ಯ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಲ್ಲಿ, ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದೆ. ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಭೂಕುಸಿತದ ಆತಂಕವಿದ್ದು, ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwse2bepv93dvfq097p3dr1g,imgname-rain-alert--5--1783265045974.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ವರುಣನ ಆರ್ಭಟಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅತ್ಯಂತ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (IMD) ತೀವ್ರ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕರಾವಳಿ, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆಯ ತೀವ್ರತೆ ವಿಪರೀತವಾಗಿರಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ 24 ರಿಂದ 48 ಗಂಟೆಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ದಟ್ಟ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿ ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.&lt;/p&gt;&lt;h2&gt;ಕರಾವಳಿ-ಮಲೆನಾಡಿಗೆ 60 ಕಿ.ಮೀ ವೇಗದ ಬಿರುಗಾಳಿ ತಲ್ಲಣ!&lt;/h2&gt;&lt;p&gt;ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬೀಸಲಿರುವ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಸಮುದ್ರ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈಗಾಗಲೇ ಎಚ್ಚರಿಕೆ ರವಾನಿಸಲಾಗಿದೆ. ಮತ್ತೊಂದೆಡೆ ಮಲೆನಾಡು ಮತ್ತು ಘಟ್ಟ ಪ್ರದೇಶಗಳಾದ ಬೆಳಗಾವಿ ಘಟ್ಟ ಪ್ರದೇಶ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;ul&gt; &lt;li&gt;ಜುಲೈ 8 : ಕರಾವಳಿ ಕರ್ನಾಟಕದಾದ್ಯಂತ ಮಳೆಯ ಆರ್ಭಟ ಮುಂದುವರಿಯಲಿದ್ದು, ಭಾರೀ ಮಳೆಯಾಗಲಿದೆ. ಇದರೊಂದಿಗೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲೂ ಮುಂಜಾನೆಯಿಂದಲೇ ವರುಣನ ಅಬ್ಬರ ಜೋರಾಗಿರಲಿದೆ.&lt;/li&gt; &lt;li&gt;ಜುಲೈ 9: ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.&lt;/li&gt; &lt;li&gt;ಜುಲೈ 10: ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರವರೆಗೂ ಯಾವುದೇ ಬಿಡುಗಿಲ್ಲದೆ ನಿರಂತರವಾಗಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.&lt;/li&gt;&lt;/ul&gt;&lt;h2&gt;ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಮಳೆ&lt;/h2&gt;&lt;p&gt;ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣದಿಂದ ಮಧ್ಯಮ ಗಾತ್ರದ ಮಳೆಯಾಗಲಿದೆ. ಆದರೆ, ಈ ಭಾಗಗಳಲ್ಲೂ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಹಳೆಯ ಕಟ್ಟಡಗಳು ಹಾಗೂ ಮರಗಳ ಕೆಳಗೆ ವಾಹನ ನಿಲ್ಲಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.&lt;/p&gt;&lt;h2&gt;ಭೂಕುಸಿತದ (Landslide) ಭೀತಿ, ಘಟ್ಟ ಪ್ರದೇಶಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ&lt;/h2&gt;&lt;p&gt;ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಘಟ್ಟ ರಸ್ತೆಗಳಲ್ಲಿ ಜುಲೈ 11ರವರೆಗೆ ಭೂಕುಸಿತ (Landslide) ಸಂಭವಿಸುವ ತೀವ್ರ ಆತಂಕವಿದೆ. ಹೀಗಾಗಿ, ಸಾರ್ವಜನಿಕರು ತುರ್ತು ಕೆಲಸಗಳಿಲ್ಲದೆ ಘಟ್ಟ ರಸ್ತೆಗಳಲ್ಲಿ ಪ್ರಯಾಣಿಸುವುದನ್ನು ಆರು ದಿನಗಳ ಕಾಲ ಮುಂದೂಡುವುದು ಒಳಿತು. ಸಾರ್ವಜನಿಕರ ಸುರಕ್ಷತೆಗಾಗಿ ಈ ಕೆಳಗಿನ ಪ್ರಮುಖ ಸೂಚನೆಗಳನ್ನು ಅಧಿಕಾರಿಗಳು ಹೊರಡಿಸಿದ್ದಾರೆ.&lt;/p&gt;&lt;p&gt;ನದಿಗಳು ಮತ್ತು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ಅಥವಾ ವೀಕ್ಷಿಸಲು ನದಿ ತೀರಕ್ಕೆ ಹೋಗಬಾರದು.&lt;/p&gt;&lt;p&gt;ಮಳೆ ನೀರು ನುಗ್ಗುವ ಸಾಧ್ಯತೆ ಇರುವ ತಗ್ಗು ಪ್ರದೇಶಗಳ ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.&lt;/p&gt;&lt;p&gt;ಬಿರುಗಾಳಿ ಹಾಗೂ ಸಿಡಿಲು ಸಹಿತ ಮಳೆಯಾಗುತ್ತಿರುವುದರಿಂದ ರೈತರು ತಮ್ಮ ಜಾನುವಾರುಗಳನ್ನು ವಿದ್ಯುತ್ ಕಂಬ ಹಾಗೂ ಮರಗಳ ಕೆಳಗೆ ಕಟ್ಟಬಾರದು.&lt;/p&gt;&lt;p&gt;ರಾಜ್ಯಾದ್ಯಂತ ಎನ್&zwnj;ಡಿಆರ್&zwnj;ಎಫ್ (NDRF) ಹಾಗೂ ಎಸ್&zwnj;ಡಿಆರ್&zwnj;ಎಫ್ (SDRF) ಸಿಬ್ಬಂದಿಗಳು ತರ್ತು ಸಂದರ್ಭಕ್ಕೆ , ಯಾವುದೇ ತುರ್ತು ಪರಿಸ್ಥಿತಿಗೆ ಜಿಲ್ಲಾಡಳಿತಗಳು ಕಂಟ್ರೋಲ್ ರೂಮ್&zwnj;ಗಳನ್ನು ತೆರೆದಿವೆ.&lt;/p&gt;]]></content:encoded>
            <category>kodagu</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe"/>
        </item>
        <item>
            <title><![CDATA[ಕೊಡಗು ಭಾರೀ ಮಳೆ ಕೈಹಿಡಿದ ಕಾವೇರಿ: ಹಾರಂಗಿ ಜಲಾಶಯ ಬಹುತೇಕ ಭರ್ತಿ, ನಾಳೆ ನದಿಗೆ ನೀರು ಬಿಡುಗಡೆ!]]></title>
            <link>https://kannada.asianetnews.com/karnataka-districts/kodagu-harangi-dam-water-level-rises-water-to-be-released-cauvery-tomorrow-kushalnagar/articleshow-otfg3ws</link>
            <guid isPermaLink="true">https://kannada.asianetnews.com/karnataka-districts/kodagu-harangi-dam-water-level-rises-water-to-be-released-cauvery-tomorrow-kushalnagar/articleshow-otfg3ws</guid>
            <pubDate>Fri, 24 Jul 2026 16:14:22 +0530</pubDate>
            <description><![CDATA[ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾರಂಗಿ ಜಲಾಶಯವು ಭರ್ತಿಯಾಗುವ ಹಂತ ತಲುಪಿದೆ. ಹೆಚ್ಚಿದ ಒಳಹರಿವಿನಿಂದಾಗಿ, ನಾಳೆ ಮಧ್ಯಾಹ್ನ ನದಿಗೆ ಸುಮಾರು 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ಕಾವೇರಿ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jy0rz9y0rk7nsqy59cd3mzh5,imgname-harangi-dam-kodagu-1750225364928.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಜು.24): ಕೊ&lt;/strong&gt;ಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶಗಳಲ್ಲಿ (Catchment Areas) ಸುರಿಯುತ್ತಿರುವ ಭಾರೀ ಮಳೆಯಿಂದಾಗಿ (Heavy Rains) ಕುಶಾಲನಗರದಲ್ಲಿರುವ ಪ್ರಸಿದ್ಧ ಹಾರಂಗಿ ಜಲಾಶಯ (Harangi Reservoir) ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಿರುವುದರಿಂದ, ನಾಳೆ ಮಧ್ಯಾಹ್ನ 2 ಗಂಟೆಗೆ ನದಿಗೆ ನೀರು ಬಿಡುಗಡೆ ಮಾಡಲು ಜಲಾಶಯದ ಅಧಿಕಾರಿಗಳು ನಿರ್ಧರಿಸಿದ್ದಾರೆ.&lt;/p&gt;&lt;h2&gt;&lt;strong&gt;ಜಲಾಶಯಕ್ಕೆ ಭಾರೀ ಒಳಹರಿವು (Inflow Rises)&lt;/strong&gt;&lt;/h2&gt;&lt;p&gt;ಕೊಡಗಿನ ಬೆಟ್ಟಗುಡ್ಡಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಪ್ರಸ್ತುತ 4,500 ಕ್ಯೂಸೆಕ್ (Cusecs) ನೀರು ಹರಿದುಬರುತ್ತಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದೆ.&lt;/p&gt;&lt;h3&gt;&lt;strong&gt;ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ (Harangi Dam Water Level Details):&lt;/strong&gt;&lt;/h3&gt;&lt;ul&gt; &lt;li&gt;ಗರಿಷ್ಠ ಮಟ್ಟ (Maximum Level): 2,859 ಅಡಿಗಳು (Feet)&lt;/li&gt; &lt;li&gt;ಇಂದಿನ ನೀರಿನ ಮಟ್ಟ (Present Water Level): 2,856 ಅಡಿಗಳು&lt;/li&gt; &lt;li&gt;ಪ್ರಸ್ತುತ ಒಳಹರಿವು (Inflow): 4,500 ಕ್ಯೂಸೆಕ್&lt;/li&gt; &lt;li&gt;ನದಿಗೆ ಹರಿಸಲಿರುವ ನೀರು (Expected Outflow): ಸುಮಾರು 5,000 ಕ್ಯೂಸೆಕ್&lt;/li&gt;&lt;/ul&gt;&lt;p&gt;ಜಲಾಶಯದಲ್ಲಿ ಈಗಾಗಲೇ 2,856 ಅಡಿ ನೀರು ಸಂಗ್ರಹವಾಗಿದ್ದು, ಗರಿಷ್ಠ ಮಟ್ಟ ತಲುಪಲು ಇನ್ನು ಕೇವಲ 3 ಅಡಿ ಮಾತ್ರ ಬಾಕಿಯಿದೆ. ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ನಾಳೆ ಮಧ್ಯಾಹ್ನದಿಂದಲೇ ಸುಮಾರು 5,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲು ಸಜ್ಜಾಗಿದ್ದಾರೆ. ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಸಲಿರುವ ಹಿನ್ನೆಲೆಯಲ್ಲಿ ಹಾರಂಗಿ ನೀರಾವರಿ ಇಲಾಖೆಯ (Irrigation Department) ಅಧಿಕಾರಿಗಳು ಕಾವೇರಿ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ಸಂದೇಶ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ಸೂಚನೆ:&lt;/strong&gt;&lt;/h2&gt;&lt;p&gt;'ಕಾವೇರಿ ನದಿ ಪಾತ್ರದಲ್ಲಿರುವ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ತಕ್ಷಣವೇ ಜಾಗರೂಕರಾಗಿರಬೇಕು. ನದಿಯತ್ತ ತೆರಳದಂತೆ ಹಾಗೂ ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಿರಬೇಕು. ಹಾರಂಗಿ ಜಲಾಶಯ ಭರ್ತಿಯಾಗುತ್ತಿರುವುದು ಕೊಡಗು ಹಾಗೂ ಮೈಸೂರು ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆಯಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kodagu-harangi-dam-water-level-rises-water-to-be-released-cauvery-tomorrow-kushalnagar/articleshow-otfg3ws"/>
        </item>
        <item>
            <title><![CDATA[ಮಲೆನಾಡಿನಲ್ಲೇ ಮಳೆ ಕೊರತೆ: ಕೊಡಗಿನ ರೈತರ ಆತಂಕ ಹೆಚ್ಚಿಸಿದ ಹವಾಮಾನ ವರದಿ]]></title>
            <link>https://kannada.asianetnews.com/karnataka-districts/kodagu-rainfall-deficit-farmers-sowing-crisis-july-weather-gvd/articleshow-q316rlh</link>
            <guid isPermaLink="true">https://kannada.asianetnews.com/karnataka-districts/kodagu-rainfall-deficit-farmers-sowing-crisis-july-weather-gvd/articleshow-q316rlh</guid>
            <pubDate>Tue, 14 Jul 2026 20:51:34 +0530</pubDate>
            <description><![CDATA[&lt;p&gt;ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಎತ್ತೇಚ್ಚ ಮಳೆ ಸುರಿಯುವುದು ಗೊತ್ತೇ ಇದೆ. ವಾರ್ಷಿಕ 2700 ಮಿಲಿ ಮೀಟರ್ ಮಳೆಯಾಗುವ ಕೊಡಗಿನಲ್ಲಿ ಈ ಬಾರಿ ಇದುವರೆಗೆ ಕೇವಲ 700 ಮಿಲಿ ಮೀಟರ್ ಮಾತ್ರವೇ ಮಳೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxgk12g37zz3n9570m0nznyy,imgname-vjv-1784041998851.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜು.14): &lt;/strong&gt;ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಎತ್ತೇಚ್ಚ ಮಳೆ ಸುರಿಯುವುದು ಗೊತ್ತೇ ಇದೆ. ವಾರ್ಷಿಕ 2700 ಮಿಲಿ ಮೀಟರ್ ಮಳೆಯಾಗುವ ಕೊಡಗಿನಲ್ಲಿ ಈ ಬಾರಿ ಇದುವರೆಗೆ ಕೇವಲ 700 ಮಿಲಿ ಮೀಟರ್ ಮಾತ್ರವೇ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1678.99 ಮಿಲಿ ಮೀಟರ್ ಮಳೆಯಾಗಿತ್ತು. ಈಗ ಕೊರತೆ ಆಗಿರುವ ಮಳೆ ಅಷ್ಟೇ ಅಲ್ಲ ಮುಂದಿನ ಇಪ್ಪತ್ತು ದಿನಗಳ ಕಾಲ ಮಳೆಯ ತೀವ್ರ ಕೊರತೆ ಎದುರಾಗಲಿದೆ ಎಂದು ಕೆಎಸ್ಎಂಡಿಸಿ ಇಲಾಖೆ ಮಾಹಿತಿ ನೀಡಿರುವುದಾಗಿ ಕೊಡಗು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.&lt;/p&gt;&lt;p&gt;ಇದು ಕೊಡಗಿನ ಬೆಳೆಗಾರರು, ರೈತರು ಕಂಗಾಲಾಗುವಂತೆ ಮಾಡಿದೆ.&amp;nbsp; ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ಜೂನ್ ತಿಂಗಳ ಆರಂಭದಿಂದಲೇ ಮಳೆ ಶುರುವಾಗುತಿತ್ತು. ಆದರೆ ಈ ಬಾರಿ ಎಲ್ ನಿನೋ ಪರಿಣಾಮದಿಂದಾಗಿ ಜುಲೈ ತಿಂಗಳಲ್ಲಿ ಮಳೆ ಶುರುವಾಗಿತ್ತು. ತಡವಾಗಿಯಾದರೂ ಹೇಗೋ ಮಳೆ ಶುರುವಾಯಿತಲ್ಲ ಎಂದು ಕೊಡಗಿನ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೀಗ ಜುಲೈ ತಿಂಗಳ ಆರಂಭದ ಒಂದು ವಾರವಷ್ಟೇ ಸುರಿದ ಮಳೆ ಎರಡನೇ ವಾರ ಎನ್ನುವಷ್ಟರಲ್ಲಿ ಸಂಪೂರ್ಣ ಕೈಕೊಟ್ಟಿದೆ.&lt;/p&gt;&lt;p&gt;ಇದರಿಂದ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಸಂಪೂರ್ಣ ಹಿಂದೆ ಉಳಿದಿದೆ. ಜುಲೈ ತಿಂಗಳಲ್ಲಿ ಸಾಮಾನ್ಯವಾಗಿ 860 ಮಿಲಿ ಮೀಟರ್ ವರೆಗೆ ಮಳೆ ಸುರಿಯುತ್ತದೆ. ಆದರೆ ಈ ಬಾರಿ ಕೇವಲ 379 ಮಿಲಿ ಮೀಟರ್ ಮಳೆ ಸುರಿದಿದೆ. ಹೀಗಾಗಿ ಬಿತ್ತನೆ ಕಾರ್ಯವೂ ಬಹುತೇಕ ಆಗಿಲ್ಲ. ಕೊಡಗು ಜಿಲ್ಲೆಯಲ್ಲಿ ಮಳೆಯಾಶ್ರಯಿಸಿ 19 ಸಾವಿರದ 375 ಹೆಕ್ಟೇರ್ ನಷ್ಟು ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ ಈ ಬಾರಿ ಕೇವಲ 1475 ಹೆಕ್ಟೇರ್ ಪ್ರದೇಶದಲ್ಲಿ ಅಷ್ಟೇ ಬಿತ್ತನೆ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಮಳೆ ಆಗುವ ಸಾಧ್ಯತೆ ತೀರಾ ಕಡಿಮೆ&lt;/strong&gt;&lt;/h2&gt;&lt;p&gt;ಜುಲೈ ತಿಂಗಳ ಮೊದಲ ವಾರದಲ್ಲಿ ಸುರಿದ ಮಳೆಯನ್ನು ನಂಬಿ 103 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. ವಿಪರ್ಯಾಸವೆಂದರೆ ಮುಂದಿನ 20 ರಿಂದ 25 ದಿನಗಳ ಅವಧಿಯಲ್ಲಿ ಮಳೆ ಆಗುವ ಸಾಧ್ಯತೆ ತೀರಾ ಕಡಿಮೆ ಇದೆ. ಇದು ಈಗಾಗಲೇ ಬಿತ್ತನೆ ಆಗಿರುವ ಬೆಳೆಗಳೂ ಕೂಡ ಹಾಳಾಗುವ ಸಾಧ್ಯತೆಗಳಿವೆ. ಇದರಿಂದ ಜನರು ಆತಂಕಗೊಳ್ಳುವಂತೆ ಆಗಿದೆ. ಒಟ್ಟಿನಲ್ಲಿ ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲೂ ಇಷ್ಟೊಂದು ಮಳೆಯ ಕೊರತೆ ಎದುರಾಗಿವುದುದು ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.&lt;/p&gt;&lt;p&gt;ಇನ್ನು ಜುಲೈ ತಿಂಗಳ ಮಧ್ಯ ಸಮಯವಾದರೂ ಇನ್ನೂ ಬಿತ್ತನೆ ಮಾಡುವುದಕ್ಕೆ ಆಗಿಲ್ಲ. ಇನ್ನು ಕೆಲವೇ ದಿನಗಳು ಮಳೆ ಬಾರದಿದ್ದರೆ ಕೊಡಗಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜುಲೈ ತಿಂಗಳಾದರೂ ಬಿತ್ತನೆ ಮಾಡದೇ ಇರುವ ವರ್ಷ ಇದಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಜುಲೈ ತಿಂಗಳಲ್ಲಿ ಮಳೆ ಚಳಿ ತಡೆಯಲಾರದೆ ಸ್ವೆಟರ್ ಮತ್ತಿತರೆ ವಸ್ತುಗಳ ಮೊರೆ ಹೋಗುತ್ತಿದ್ದ ಕೊಡಗಿನಲ್ಲಿ ಬಿಸಿಲ ಬೇಗೆಯಿಂದ ಬೆವರಿ ಬಸವಳಿಯುವಂತೆ ಆಗಿದೆ.&amp;nbsp; ಈಗಲೇ ಪರಿಸ್ಥಿತಿ ಈ ರೀತಿ ಆದೆ ಮುಂದಿನ ದಿನಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ ಎನ್ನುತ್ತಿದ್ದಾರೆ ಕೊಡಗಿನ ಜನರು.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-rainfall-deficit-farmers-sowing-crisis-july-weather-gvd/articleshow-q316rlh"/>
        </item>
        <item>
            <title><![CDATA[ಕೊಡಗಿನಲ್ಲಿ ಮೃತಪಟ್ಟ ತಾಯಿ ಆನೆ ಎಬ್ಬಿಸಲು ಮರಿ ಆನೆ ಪರದಾಟ, ಮೂಕರೋಧನೆಗೆ ಭಾವುಕರಾದ ಜನ]]></title>
            <link>https://kannada.asianetnews.com/karnataka-districts/heart-wrenching-scene-baby-elephant-tries-to-wake-dead-mother-in-kodagu/articleshow-qakw796</link>
            <guid isPermaLink="true">https://kannada.asianetnews.com/karnataka-districts/heart-wrenching-scene-baby-elephant-tries-to-wake-dead-mother-in-kodagu/articleshow-qakw796</guid>
            <pubDate>Sun, 26 Jul 2026 19:23:17 +0530</pubDate>
            <description><![CDATA[&lt;p&gt;ಆಹಾರ ಹುಡುಕುತ್ತ ಗ್ರಾಮದ ತೋಟಗಳಿಗೆ ನುಗ್ಗಿದ ತಾಯಿ ಆನೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದೆ. ಇತ್ತ ತಾಯಿ ಕಳೆದುಕೊಂಡ ಮರಿ ಆನೆಯ ಮೋಕರೋಧನೆ ಹಲವರ ಕಣ್ಣಾಲಿ ತೇವಗೊಳಿಸಿದೆ. &amp;nbsp;ತಾಯಿ ಆನೆಯ ಎಬ್ಬಿಸಲು ಮರಿ ಆನೆ ಇನ್ನಿಲ್ಲದ ಪ್ರಯತ್ನ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyfb6z9hwdte9h4415ctwk33,imgname-baby-elephant-emotional-farewell-to-dead-mother-1785073990959.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಜು.26) &lt;/strong&gt;ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳು ವಾಸಿಸುವ ಪ್ರದೇಶದಳಲ್ಲಿ ಕೊಡಗು ಪ್ರಮುಖವಾಗಿದೆ. ಕೊಡಗಿನ ಕಾಡುಗಳಲ್ಲಿ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಆದರೆ ಕಾಡಿನಲ್ಲಿ ಆಹಾರ ಕೊರತೆಯಿಂದ ಆನೆಗಳು ನಾಡಿನತ್ತ ಬರುವುದು, ತೋಟಗಳಿಗೆ ನುಗ್ಗುವುದು ಇತ್ತೀಚೆಗೆ ಕೊಡಗು ಮಾತ್ರವಲ್ಲ, ಹಾಸನ, ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ನಡೆಯುತ್ತಿದೆ. ಹೀಗಾ ಮರಿ ಜೊತೆ ತಾಯಿ ಆನೆ ಆಹಾರ ಹುಡುಕುತ್ತಾ ಗ್ರಾಮದ ತೋಟಕ್ಕೆ ನುಗ್ಗಿದೆ. ದುರಂತ ಆಂದರೆ ತಾಯಿ ಆನೆ ತೋಟದಲ್ಲೇ ಮೃತಪಟ್ಟಿದೆ. ಇದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟ ತಾಯಿ ಆನೆ ಕಂಡು ಮರಿ ಆನೆ ಕಂಗಾಲಾಗಿದೆ. ತಾಯಿಯನ್ನು ಎಬ್ಬಿಸಲು ಸತತವಾಗಿ ಪ್ರಯತ್ನ ಮಾಡಿದೆ. ಚೀರಾಡಿ ತಾಯಿ ಆನೆಯ ಸುತ್ತು ಬಂದರೂ ತಾಯಿ ಮಾತ್ರ ಏಳಲೇ ಇಲ್ಲ. ಮರಿ ಆನೆಯ ಚೀರಾಟ ಕೇಳಿ ಸ್ಥಳೀಯರು ಧಾವಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮರಿ ಆನೆಯನ್ನು ರಕ್ಷಿಸಲಾಗಿದೆ.&lt;/p&gt;&lt;h2&gt;ಹೆಣ್ಣಾನೆಯ ಮರಣೋತ್ತರ ಪರೀಕ್ಷೆ&lt;/h2&gt;&lt;p&gt;ಕೊಡಗಿನ ವಿರಾಜಪೇಟೆ ತಾಲೂಕಿನ ಆತನಂದಪುರದಲ್ಲಿ ಈ ಘಟನೆ ನಡೆದಿದೆ. ಕಾಫಿ ತೋಟದ ಮಧ್ಯೆ ರಾತ್ರಿ ವೇಳೆ ಹೆಣ್ಣಾನೆ ಮೃತಪಟ್ಟಿದೆ. ಕೌರಿಕಾಡು ಎಸ್ಟೇಟ್&zwnj;ನಲ್ಲಿ ಹೆಣ್ಣಾನೆ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಂಶಯಾಸ್ವದ ರೀತಿಯಲ್ಲಿ ಸತ್ತು ಬಿದ್ದಿರುವ ಹೆಣ್ಣಾನೆಯ ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅನಾರೋಗ್ಯದ ಕಾರಣದಿಂದ ಮೃತಪಟ್ಟಿದೆಯೋ ಅಥವಾ ಗುಂಡು ತಗುಲಿ ಮೃತಪಟ್ಟಿದೆಯೋ ಅನ್ನೋದು ಮರಣೋತ್ತರ ಪರೀಕ್ಷೆ ಬಳಿಕ ಸ್ಪಷ್ಟವಾಗಲಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.&lt;/p&gt;&lt;h2&gt;ಮರಿ ಆನೆ ರಕ್ಷಣೆ&lt;/h2&gt;&lt;p&gt;ಮಧ್ಯರಾತ್ರಿ ತೋಟಕ್ಕೆ ಎಂಟ್ರಿಕೊಟ್ಟ ಹೆಣ್ಣಾನೆ ಕುಸಿದು ಬಿದ್ದು ಮೃತಪಟ್ತಿದೆ. ತಾಯಿ ಆನೆ ಜೊತೆ ಹೆಜ್ಜೆ ಹಾಕುತ್ತಾ ಬಂದಿದ್ದ ಮರಿ ಆನೆಯ ಮೂಕರೋಧನೆ ಹಲವರನ್ನು ಭಾವುಕರನ್ನಾಗಿಸಿದೆ. ತಾಯಿ ಕಳೆದುಕೊಂಡ ಮರಿ ಆನೆಯನ್ನು ಸ್ಥಳೀಯರು ಕಾಫಿ ಗಿಡಕ್ಕೆ ಕಟ್ಟಿ ಹಾಕಿ ರಕ್ಷಣೆ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಮರಿ ಆನೆಯನ್ನು ರಕ್ಷಿಸಿದ್ದಾರೆ.&lt;/p&gt;&lt;p&gt;ಗ್ರಾಮಗಳಿಗೆ, ತೋಟಗಳಿಗೆ ನುಗ್ಗುವ ಕಾಡಾನೆಗಳು ಹಲವು ಬಾರಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆಗಳಿವೆ. ಇನ್ನು ಕೆಸರು ತುಂಬಿದ ಕೆರೆಯಲ್ಲಿ ಸಿಲುಕಿ ಪರದಾಡಿದ ಘಟನೆಗಳೂ ಇವೆ. ಇತ್ತೀಚೆಗೆ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಕನ್ನಂಬಾಡಿಯಲ್ಲಿ ಕೆಸರು ತುಂಬಿದ ಕೆರೆಯಲ್ಲಿ ಸಿಲುಕಿದ ಆನೆ ತೀವ್ರವಾಗಿ ಪರದಾಡಿತ್ತು. ತಕ್ಕ ಸಮಯದಲ್ಲಿ ಅರಣ್ಯಾಧಿಕಾರಿಗಳು ಬರದೆ ಸ್ಥಳೀಯ ಆಕ್ರೋಶಕ್ಕೂ ಕಾರಣವಾಗಿತ್ತು. ಎರಡು ದಿನಗಳಿಂದ ಕೆರೆಯಲ್ಲಿ ಸಿಲುಕಿ ಆನೆ ಪರದಾಡಿತ್ತು. ಆಹಾರ ವಿಲ್ಲದ ಆನೆ ಅಸ್ವಸ್ಥಗೊಂಡ ಘಟನೆಯೂ ನಡೆದಿತ್ತು.&lt;/p&gt;&lt;p&gt;ಕೊಡಗಿನ ಹಲವೆಡೆ ಕಾಡಾನೆಗಳು ದಾಳಿ ಮಾಡಿದ ಹಲವು ಘಟನೆಗಳು ವರದಿಯಾಗಿದೆ. ಇತ್ತೀಚೆಗೆ ಕೊಡಗಿನ ಗಡಿ ಭಾಗ ಆನೆಚೌಕೂರಿನಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ಕಾಡಾನೆ ದಾಳಿ ಮಾಡಿತ್ತು. ಆನೆ ದಾಳಿ ಆಗುತ್ತಿದ್ದಂತೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಕೊಠಡಿಯೊಳಗೆ ಓಡಿ ಹೋಗಿ ಬಾಗಿಲು ಹಾಕಿದ ಘಟನೆ ನಡೆದಿತ್ತು.&lt;/p&gt;&lt;p&gt;&lt;/p&gt;]]></content:encoded>
            <category>kodagu</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/heart-wrenching-scene-baby-elephant-tries-to-wake-dead-mother-in-kodagu/articleshow-qakw796"/>
        </item>
        <item>
            <title><![CDATA[ಕೊಡಗು ಶಾಲೆಗಳಿಗೆ ನಾಳೆ ರಜೆ, ಭಾರಿ ಮಳೆಯಿಂದ ಆರೇಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ]]></title>
            <link>https://kannada.asianetnews.com/karnataka-districts/kodagu-schools-declare-holiday-tomorrow-july-8th-amid-heavy-rain-orange-alert/articleshow-qrzt4ua</link>
            <guid isPermaLink="true">https://kannada.asianetnews.com/karnataka-districts/kodagu-schools-declare-holiday-tomorrow-july-8th-amid-heavy-rain-orange-alert/articleshow-qrzt4ua</guid>
            <pubDate>Tue, 07 Jul 2026 19:20:14 +0530</pubDate>
            <description><![CDATA[&lt;p&gt;ಕೊಡಗು ಶಾಲೆಗಳಿಗೆ ನಾಳೆ (ಜು.08) ರಜೆ ಘೋಷಿಸಲಾಗಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಎಚ್ಚರಿಕೆ ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktgqqedqgydnprvbnmr8vpkv,imgname-karnataka-rain-red-alert--3--1780825700791.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಜು.07)&lt;/strong&gt; ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೆಲ ಜಲಾಶಗಳು ಭರ್ತಿಯಾಗುತ್ತಿದೆ. ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇತ್ತ ಪ್ರವಾಹ ಪರಿಸ್ಥಿತಿ, ಭೂಕುಸಿತ ಸೇರಿದಂತೆ ಕೆಲ ಅವಘಢಗಳು ಸಂಭವಿಸಿದೆ. ಕೊಡಗಿನಲ್ಲಿ ಕೆಳೆದೆರಡು ದಿನದಿಂದ ಉತ್ತಮ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಜುಲೈ 9ರ ಬೆಳಗ್ಗೆ 8.30ರ ವರೆಗೆ ಆರೇಂಜ್ ಅಲರ್ಟ್ ಘೋಷಿಸಿದೆ. ಭಾರಿ ಮಳೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಯ ಪ್ರಾಥಮಿಕ, ಪ್ರೌಡಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.&lt;/p&gt;&lt;h2&gt;ಒಂದು ದಿನದ ರಜೆ ಘೋಷಿಸಿದ ಡಿಡಿಪಿಐ&lt;/h2&gt;&lt;p&gt;ಕೊಡಗಿನಲ್ಲಿ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದೆ. ಮಳೆ ಕೊರತೆಯಲ್ಲಿದ್ದ ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ನೀಡುತ್ತಿದ್ದಂತೆ ಡಿಡಿಪಿಐ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಿದೆ. ನಾಳೆ (ಜು.08) ರಜೆ ಘೋಷಿಸಿದ್ದಾರೆ.&lt;/p&gt;&lt;h2&gt;ಕೊಡಗಿನಲ್ಲಿ ಜುಲೈ 8&lt;/h2&gt;&lt;p&gt;ಗುರುವಾರ (ಜುಲೈ 9) ಬೆಳಿಗ್ಗೆ 8.30 ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಇನ್ನೆರೆಡು ದಿನ ಕೊಡಗಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಲಾಗಿದೆ. ಇದೇ ವೇಳೆ ತೀವ್ರ ಮುನ್ನಚ್ಚೆರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ನದಿ ಪಾತ್ರದ ಜನರು, ಗುಡ್ಡ, ಬೆಟ್ಟದ ತಪ್ಪಲಿನಲ್ಲಿರುವ ಜನರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.&lt;/p&gt;&lt;h2&gt;ನದಿ, ಜಲಪಾತ, ಜಲಾಶಯಗಳತ್ತ ತೆರಳದಂತೆ ಸೂಚನೆ&lt;/h2&gt;&lt;p&gt;ಕೊಡಗಿನಲ್ಲಿ ಭಾರಿ ಮಳೆಯಾಗುತಿರುವ ಕಾರಣ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದೆ. ನದಿಗಳು ತುಂಬಿದೆ. ಹೀಗಾಗಿ ನದಿ ಬಳಿ, ಜಲಾಪಾತ ವೀಕ್ಷಣೆ, ಜಲಾಶಗಳತ್ತ ತೆರಳದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಮಲ್ಲಳ್ಳಿ ಜಲಪಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಿಲುಕಿದ್ದರು. ಬಳಿಕ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kodagu</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/kodagu-schools-declare-holiday-tomorrow-july-8th-amid-heavy-rain-orange-alert/articleshow-qrzt4ua"/>
        </item>
        <item>
            <title><![CDATA[ಕೊಡಗಿನಲ್ಲಿ ಮಳೆಯಾಗುತ್ತಿದ್ದಂತೆ ತಮಿಳುನಾಡಿಗೆ ಹೊರಟ ಕಾವೇರಿ; ಮಂಡ್ಯದಲ್ಲಿ ನದಿಗಿಳಿದು ರೈತರ ಪ್ರತಿಭಟನೆ!]]></title>
            <link>https://kannada.asianetnews.com/karnataka-districts/mandya-farmers-protest-by-entering-cauvery-river-against-water-release-to-tamil-nadu/articleshow-tpv9378</link>
            <guid isPermaLink="true">https://kannada.asianetnews.com/karnataka-districts/mandya-farmers-protest-by-entering-cauvery-river-against-water-release-to-tamil-nadu/articleshow-tpv9378</guid>
            <pubDate>Tue, 07 Jul 2026 20:01:03 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಬರಗಾಲದ ನಡುವೆಯೂ ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರನ್ನು ರಹಸ್ಯವಾಗಿ ಹರಿಸುತ್ತಿದೆ ಎಂದು ಆರೋಪಿಸಿ, ಮಂಡ್ಯದ ರೈತರು ಶ್ರೀರಂಗಪಟ್ಟಣದಲ್ಲಿ ನದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyfmchxjdyw6jc67r64c7db,imgname-screenshot-2026-07-07-194927-1783434457660.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.07): ರಾ&lt;/strong&gt;ಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದ್ದರೂ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗುಟ್ಟಾಗಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದೆ ಎಂದು ಆರೋಪಿಸಿ ಮಂಡ್ಯದ ರೈತರು ಆಕ್ರೋಶ ಹೊರಹಾಕಿದ್ದಾರೆ. ಶ್ರೀರಂಗಪಟ್ಟಣದ ಪವಿತ್ರ ಸ್ನಾನಘಟ್ಟದ ಬಳಿ ರೈತ ಸಂಘದ ಕಾರ್ಯಕರ್ತರು ನದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h2&gt;&lt;p&gt;ಕಳೆದ ನಾಲ್ಕೈದು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶವಾದ ಕೊಡಗು ಮತ್ತಿತರ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕೆಆರ್&zwnj;ಎಸ್ ಜಲಾಶಯಕ್ಕೆ ಈ ವರ್ಷದ ಮಳೆಗಾಲದಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿನ ಒಳಹರಿವು ಬಂದಿದೆ. ಇದೀಗ ಕೆಆರ್ ಎಸ್ ಜಲಾಶಯಕ್ಕೆ ಒಳಹರಿವು 5 ಸಾವಿರ ಕ್ಯೂಸೆಕ್ ದಾಟುತ್ತಿದ್ದಂತೆಯೇ, ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಮುಂದಾಗಿದೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಹಬ್ಬಿದೆ. ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಈ ಬಾರಿ ಸರಿಯಾಗಿ ಮಳೆಯಾಗದೆ ಬೆಳೆಗಳು ಒಣಗುತ್ತಿವೆ. ಅದರಲ್ಲೂ ವಿಶೇಷವಾಗಿ ಮಂಡ್ಯದ ಜೀವನಾಡಿ ಎನಿಸಿರುವ ಕಬ್ಬು ನೀರಿಲ್ಲದೆ ಬಾಡಿ ಹೋಗುತ್ತಿದೆ. ಸ್ಥಳೀಯ ರೈತರ ನಾಲೆಗಳಿಗೆ ನೀರು ಬಿಡದ ಸರ್ಕಾರ, ನೆರೆ ರಾಜ್ಯಕ್ಕೆ ನೀರು ಹರಿಸುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.&lt;/p&gt;&lt;h2&gt;&lt;strong&gt;ನದಿಗಿಳಿದು ಪ್ರತಿಭಟನೆ:&lt;/strong&gt;&lt;/h2&gt;&lt;p&gt;ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಸ್ನಾನಘಟ್ಟದ ಬಳಿ ಜಮಾಯಿಸಿದ ರೈತ ಸಂಘದ ನೂರಾರು ಕಾರ್ಯಕರ್ತರು, ಕಾವೇರಿ ನದಿಯ ನೀರಿನಲ್ಲಿ ನಿಂತು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. 'ನಮ್ಮ ಹೊಲಗಳಿಗೆ ನೀರಿಲ್ಲ, ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ನಮ್ಮ ರೈತರ ಹಿತಕ್ಕಿಂತ ತಮಿಳುನಾಡಿನ ಹಿತವೇ ಮುಖ್ಯವಾಯಿತೇ?' ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರಕ್ಕೆ ರೈತರ ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ರೈತರ ಹಿತಾಸಕ್ತಿ ಮುಖ್ಯವಲ್ಲ ಎಂದು ಕಿಡಿಕಾರಿದ ರೈತರು, ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ, ಸ್ಥಳೀಯ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ತಮಿಳುನಾಡಿಗೆ ನೀರು ಹರಿಸುವುದನ್ನು ಮುಂದುವರೆಸಿದರೆ ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mandya-farmers-protest-by-entering-cauvery-river-against-water-release-to-tamil-nadu/articleshow-tpv9378"/>
        </item>
        <item>
            <title><![CDATA[ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್: ಬೆಂಗಳೂರು-ವಿರಾಜಪೇಟೆ-ಕಣ್ಣೂರು ನಡುವೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೇವೆ!]]></title>
            <link>https://kannada.asianetnews.com/state/ksrtc-good-news-bengaluru-to-kannur-non-ac-sleeper-bus-service-timings-ticket-fare-khs/articleshow-yluymkb</link>
            <guid isPermaLink="true">https://kannada.asianetnews.com/state/ksrtc-good-news-bengaluru-to-kannur-non-ac-sleeper-bus-service-timings-ticket-fare-khs/articleshow-yluymkb</guid>
            <pubDate>Tue, 04 Aug 2026 17:03:14 +0530</pubDate>
            <description><![CDATA[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆಗಸ್ಟ್ 07, 2026 ರಿಂದ ಆರಂಭಿಸುತ್ತಿದೆ. ಈ ಬಸ್ ಮೈಸೂರು, ವಿರಾಜಪೇಟೆ ಮಾರ್ಗವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಆರಾಮದಾಯಕ ಪ್ರಯಾಣದ ಅವಕಾಶವನ್ನು ಒದಗಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz68nsmc69ff7hp43pg0f55z,imgname-ksrtc-bengaluru-kannur-1785843082892.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.04): ಕ&lt;/strong&gt;ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ಪ್ರಮುಖ ಅಂತಾರಾಜ್ಯ ಮಾರ್ಗದಲ್ಲಿ ಹೊಸ ಬಸ್ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದ ಕೇರಳದ ಪ್ರಸಿದ್ಧ ನಗರವಾದ ಕಣ್ಣೂರಿಗೆ (Kannur) ಹೊಸ 'ನಾನ್ ಎ.ಸಿ ಸ್ಲೀಪರ್' (Non-AC Sleeper) ಬಸ್ ಕಾರ್ಯಾಚರಣೆಯನ್ನು 2026ರ ಆಗಸ್ಟ್ 07 ರಿಂದ ಆರಂಭಿಸಲು ಸಾರಿಗೆ ನಿಗಮ ನಿರ್ಧರಿಸಿದೆ.&lt;/p&gt;&lt;p&gt;ಕೆಎಸ್&zwnj;ಆರ್&zwnj;ಟಿಸಿಯ ಬೆಂಗಳೂರು ಕೇಂದ್ರ ವಿಭಾಗದ ವತಿಯಿಂದ ಈ ನೂತನ ಸೇವೆಯನ್ನು ಒದಗಿಸಲಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಸುಖಕರ ಹಾಗೂ ಆರಾಮದಾಯಕ ಪ್ರಯಾಣ ಬಯಸುವ ಪ್ರಯಾಣಿಕರಿಗೆ ಇದು ಉತ್ತಮ ಅವಕಾಶವಾಗಿದೆ.&lt;/p&gt;&lt;h2&gt;&lt;strong&gt;ಬಸ್ ಸಂಚರಿಸುವ ಮಾರ್ಗ:&lt;/strong&gt;&lt;/h2&gt;&lt;p&gt;ಈ ನೂತನ ಸ್ಲೀಪರ್ ಬಸ್ ಬೆಂಗಳೂರಿನ ಮಡಿವಾಳದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಮಡಿವಾಳದಿಂದ ಹೊರಟು ಶಾಂತಿನಗರ ಬಸ್ ನಿಲ್ದಾಣ (TTMC), ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಕೆಂಗೇರಿ ಬಸ್ ನಿಲ್ದಾಣಗಳ ಮೂಲಕ ನಗರದ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುನ್ನಡೆಯಲಿದೆ. ತದನಂತರ ಮೈಸೂರು, ಹುಣಸೂರು, ಗೋಣಿಕೊಪ್ಪ, ವಿರಾಜಪೇಟೆ, ಇರಿಟ್ಟಿ ಮತ್ತು ತಲಶ್ಶೇರಿ (ತಲಚೇರಿ) ಮಾರ್ಗವಾಗಿ ಕಣ್ಣೂರು ತಲುಪಲಿದೆ. ಪ್ರಮುಖವಾಗಿ ಕೊಡಗು ಜಿಲ್ಲೆಯ ವಿರಾಜಪೇಟೆ ಹಾಗೂ ಕೇರಳದ ಗಡಿ ಭಾಗಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ, ಉದ್ಯೋಗಿಗಳಿಗೆ ಮತ್ತು ಪ್ರವಾಸಿಗರಿಗೆ ಈ ಬಸ್ ಸೇವೆ ಅತ್ಯಂತ ಅನುಕೂಲಕರವಾಗಲಿದೆ.&lt;/p&gt;&lt;h2&gt;&lt;strong&gt;ವೇಳಾಪಟ್ಟಿ ಮತ್ತು ಟಿಕೆಟ್ ದರದ ವಿವರಗಳು:&lt;/strong&gt;&lt;/h2&gt;&lt;p&gt;ಬೆಂಗಳೂರಿನಿಂದ ಕಣ್ಣೂರಿಗೆ ತೆರಳುವ ಪ್ರತಿಯೊಬ್ಬ ಪ್ರಯಾಣಿಕನಿಗೆ ಪ್ರಯಾಣ ದರವನ್ನು ರೂ. 850/- ಎಂದು ನಿಗದಿಪಡಿಸಲಾಗಿದೆ. ಮಾರ್ಗಮಧ್ಯದ ವಿವಿಧ ನಿಲ್ದಾಣಗಳ ನಿರ್ಗಮನ ಸಮಯ, ತಲುಪುವ ಸ್ಥಳ ಹಾಗೂ ಟಿಕೆಟ್ ದರದ ವಿವರ ಈ ಕೆಳಗಿನಂತಿದೆ:&lt;/p&gt;&lt;ul&gt; &lt;li&gt;&lt;strong&gt;ಮಡಿವಾಳ: &lt;/strong&gt;ರಾತ್ರಿ 8:36ಕ್ಕೆ ಹೊರಟು, ಬೆಳಗಿನ ಜಾವ 03:30ಗೆ ವಿರಾಜಪೇಟೆ ತಲುಪಲಿದೆ. (ಟಿಕೆಟ್ ದರ: ರೂ. 600)&lt;/li&gt; &lt;li&gt;&lt;strong&gt;ಶಾಂತಿನಗರ ಟಿಟಿಎಂಸಿ: &lt;/strong&gt;ರಾತ್ರಿ 9:16ಕ್ಕೆ ಹೊರಟು, ಬೆಳಗಿನ ಜಾವ 04:45ಗೆ ಇರಿಟ್ಟಿ ತಲುಪಲಿದೆ. (ಟಿಕೆಟ್ ದರ: ರೂ. 705)&lt;/li&gt; &lt;li&gt;&lt;strong&gt;ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ:&lt;/strong&gt; ರಾತ್ರಿ 10:00ಕ್ಕೆ ಹೊರಟು, ಬೆಳಗಿನ ಜಾವ 05:45ಗೆ ತಲಸ್ಸೇರಿ ತಲುಪಲಿದೆ. (ಟಿಕೆಟ್ ದರ: ರೂ. 805)&lt;/li&gt; &lt;li&gt;&lt;strong&gt;ಕೆಂಗೇರಿ ಟಿಟಿಎಂಸಿ: &lt;/strong&gt;ರಾತ್ರಿ 10:15ಕ್ಕೆ ಹೊರಟು, ಬೆಳಗಿನ ಜಾವ 06:30 AM ಗೆ ಅಂತಿಮ ನಿಲ್ದಾಣವಾದ ಕಣ್ಣೂರು ತಲುಪಲಿದೆ. (ಟಿಕೆಟ್ ದರ: ರೂ. 850)&lt;/li&gt;&lt;/ul&gt;&lt;p&gt;ಖಾಸಗಿ ಬಸ್&zwnj;ಗಳ ದುಬಾರಿ ಪ್ರಯಾಣ ದರಕ್ಕೆ ಹೋಲಿಸಿದರೆ ಕೆಎಸ್&zwnj;ಆರ್&zwnj;ಟಿಸಿ ಅತ್ಯಂತ ಕೈಗೆಟುಕುವ ದರದಲ್ಲಿ ಸುರಕ್ಷಿತ ಹಾಗೂ ಸುಖಕರ ಪ್ರಯಾಣವನ್ನು ಒದಗಿಸುತ್ತಿದೆ. ಸಾರ್ವಜನಿಕ ಪ್ರಯಾಣಿಕರು ಹಾಗೂ ಪ್ರವಾಸಿಗರು ಕೆಎಸ್&zwnj;ಆರ್&zwnj;ಟಿಸಿಯ ಅಧಿಕೃತ ವೆಬ್&zwnj;ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬೆಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/ksrtc-good-news-bengaluru-to-kannur-non-ac-sleeper-bus-service-timings-ticket-fare-khs/articleshow-yluymkb"/>
        </item>
    </channel>
</rss>
