<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 23 Aug 2026 11:03:20 +0530</lastBuildDate>
        <atom:link href="https://kannada.asianetnews.com/rss/kodagu" rel="self" type="application/rss+xml"/>
        <item>
            <title><![CDATA[ಕೊಡಗಿನ ಅಭಿವೃದ್ಧಿಗೆ ಸಚಿವ ಸ್ಥಾನ ಅಗತ್ಯ: ಶಾಸಕ ಮಂತರ್ ಗೌಡ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/kodagu-needs-a-minister-post-for-development-says-mla-mantar-gowda-gvd/articleshow-40t0th0</link>
            <guid isPermaLink="true">https://kannada.asianetnews.com/karnataka-districts/kodagu-needs-a-minister-post-for-development-says-mla-mantar-gowda-gvd/articleshow-40t0th0</guid>
            <pubDate>Fri, 31 Jul 2026 20:39:41 +0530</pubDate>
            <description><![CDATA[&lt;p&gt;ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದು, ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kywbdgdb6hef6qw1x94spnez,imgname-jbj-1785510412715.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜು.31): &lt;/strong&gt;ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದು, ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ ಆಕಾಂಕ್ಷಿಗಳ ಪಟ್ಟಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಈ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಬೇಡಿಕೆ ಇಟ್ಠಿದ್ದೇವೆ, ಕೊಡುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸವೂ ಇದೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ.&lt;/p&gt;&lt;p&gt;ಕೊಡಗಿನ ಭಾಗಕ್ಕೆ ಸಚಿವ ಸ್ಥಾನ ನೀಡಿಲ್ಲ. ರಂಜನ್ ಅವರು ಕೆಲವೇ ತಿಂಗಳ ಅವಧಿಗೆ ಸಚಿವರಾಗಿದ್ದರು. ಆದು ಬಿಟ್ಟರೆ ಮತ್ತೆ ಸಚಿವ ಸ್ಥಾನ ನೀಡಿಲ್ಲ. ಸಚಿವ ಸ್ಥಾನ ನೀಡದಿದ್ದರೆ ಕೊಡಗಿನ ಅಭಿವೃದ್ಧಿ ಬಗ್ಗೆ ಗಂಭೀರ ಚರ್ಚೆಯಾಗಲ್ಲ. ಈ ದೃಷ್ಟಿಯಿಂದ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ. ನಾನು ಬೇರು ಮಟ್ಟದಿಂದ ಪಕ್ಷದಲ್ಲಿ ಬೆಳೆದು ಬಂದವನು. ಯೂತ್ ಕಾಂಗ್ರೆಸ್, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಬೆಳೆದು ಬಂದವನು. ನಾನು ಪಕ್ಷಕ್ಕೆ ತ್ಯಾಗ ಮಾಡಿದ್ದೇನೆ, ಆ ವಿಚಾರದಲ್ಲಿ ಸಚಿವಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ.&lt;/p&gt;&lt;p&gt;ದೆಹಲಿಗೆ ಹೋಗಿ ಸಚಿವ ಸ್ಥಾನ ಕೇಳಿದ್ದೇನೆ, ಕೇಳುವುದರಲ್ಲಿ ತಪ್ಪಿಲ್ಲ, ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟಿದ್ದು. ಅನುದಾನವನ್ನು ನಾವು ಕೇಳುತ್ತಲೇ ಇರುತ್ತೇವೆ, ಕೇಳಿದ ಕೂಡಲೇ ಎಲ್ಲ ಅನುದಾನ ಕೊಡುವುದಿಲ್ಲ ಅಲ್ಲವೆ.? ಹಾಗೆಯೇ ಸಚಿವ ಸ್ಥಾನದಲ್ಲೂ ಕೂಡ ಕೊಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಜಿಲ್ಲೆಯಲ್ಲಿ ಯಾರಿಗೆ ಕೊಟ್ಟರೂ ಖುಷಿಯೇ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ.&lt;/p&gt;&lt;p&gt;ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸಿಡಬ್ಲ್ಯೂಆರ್ಸಿ ಹೇಳಿರುವುದಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯಿಸಿದ ಶಾಸಕ ಮಂತರ್ ಗೌಡ ಅವರು ಕರ್ನಾಟಕ ಅಥವಾ ತಮಿಳುನಾಡು ಸರ್ಕಾರ ಆಗಿರಬಹುದು, ಎರಡು ಕೂಡ ಸಿಡಬ್ಲ್ಯೂಆರ್ ಸಿ ನಿಯಮಕ್ಕೆ ಒಳಪಟ್ಟಿದ್ದೇವೆ. ಇಬ್ಬರು ಈ ನಿಯಮಗಳನ್ನು ಪಾಲಿಸಬೇಕು ಸರಿ. ಆದರೆ ಬರಗಾಲದಲ್ಲಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹೋಗಲು ಅವಕಾಶವಿದೆ. ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.&lt;/p&gt;&lt;h2&gt;&lt;strong&gt;ಉತ್ತಮ ಮಳೆ&lt;/strong&gt;&lt;/h2&gt;&lt;p&gt;ಅದನ್ನು ನಾವು ಮಾಡಬೇಕಾಗಿದೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಅಭಿಪ್ರಾಯಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಮಡಿಕೇರಿ, ವಿರಾಜಪೇಟೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಹಾರಂಗಿ ಜಲಾಶಯ ತುಂಬಿದೆ. ಒಳಹರಿವು, ಹೊರಹರಿವು ಎರಡನ್ನು ಸರಿದೂಗಿಸಿಕೊಂಡು ನದಿಗೆ ನೀರು ಹರಿಸಲಾಗುತ್ತಿದೆ. ಆದರೆ ಮಡಿಕೇರಿ ಭಾಗದಲ್ಲಿ ಮಳೆ ಜಾಸ್ತಿಯಾಗಿ ಒಂದಿಷ್ಟು ಸಮಸ್ಯೆಯೂ ಆಗುತ್ತಿದೆ.&lt;/p&gt;&lt;p&gt;ತಮಿಳುನಾಡಿಗೆ ನೀರು ಕೊಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಆದರೆ ಅದಕ್ಕೂ ಮೊದಲು ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಬರವಿದೆ. ಇಲ್ಲಿನ ಕೆರೆ ಕಟ್ಟೆಗಳ ತುಂಬಿಸುವ ಕೆಲಸವಾಗಲಿ. ಮೊದಲು ನಾಲೆಗಳ ಮೂಲಕ ನೀರು ಹರಿಸಿ ಕೆರೆಕಟ್ಟೆಗಳ ತುಂಬಿಸಲಿ. ನಂತರ ತಮಿಳುನಾಡಿಗೆ ನೀರು ಬಿಡುವ ವಿಚಾರ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡುವುದನ್ನು ಶಾಸಕ ಮಂತರ್ ಗೌಡ ವಿರೋಧಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-needs-a-minister-post-for-development-says-mla-mantar-gowda-gvd/articleshow-40t0th0"/>
        </item>
        <item>
            <title><![CDATA[ರಾಜ್ಯದಲ್ಲಿ ಮಳೆ ತೀವ್ರ ಕೊರತೆ ಹಿನ್ನೆಲೆ, ಮಳೆಗಾಗಿ ದೇವರ ಮೊರೆ ಹೋದ ರಾಜ್ಯ ಸರ್ಕಾರ]]></title>
            <link>https://kannada.asianetnews.com/karnataka-districts/cm-dk-shivakumar-instructions-special-prayers-and-rudrabhisheka-to-rain-deity-lord-igguthappa-of-paadi-in-kodagu-sns/articleshow-53g4l06</link>
            <guid isPermaLink="true">https://kannada.asianetnews.com/karnataka-districts/cm-dk-shivakumar-instructions-special-prayers-and-rudrabhisheka-to-rain-deity-lord-igguthappa-of-paadi-in-kodagu-sns/articleshow-53g4l06</guid>
            <pubDate>Sun, 23 Aug 2026 11:03:14 +0530</pubDate>
            <description><![CDATA[ರಾಜ್ಯದಲ್ಲಿನ ಮಳೆಯ ತೀವ್ರ ಕೊರತೆ ಮತ್ತು ತಮಿಳುನಾಡಿಗೆ ನೀರು ಹರಿಸುವ ಒತ್ತಡದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಮಳೆಗಾಗಿ ಕೊಡಗಿನ ಪಾಡಿ ಶ್ರೀ ಇಗ್ಗುತ್ತಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದೆ. ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ನಡೆದ ರುದ್ರಾಭಿಷೇಕದಲ್ಲಿ, ನಾಡಿನಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿ ಸಮೃದ್ಧಿಯಾಗಲೆಂದು ಪ್ರಾರ್ಥಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m0phn8hk0x4c5360ztcykw48,imgname-kodagu-rains-1787463115315.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು:&lt;/strong&gt; ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಇರುವುದು ಒಂದೆಡೆಯಾದರೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಮಿಳನಾಡಿಗೆ ನಿತ್ಯ ನೀರು ಹರಿಸಬೇಕಾಗಿರುವ ಸಂದಿಗ್ಧ ಪರಿಸ್ಥಿತಿ ಮತ್ತೊಂದೆಡೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಳೆಗಾಗಿ ದೇವರ ಮೊರೆ ಹೋಗಿದೆ. ಮಳೆ ದೇವರೆಂದೇ ಖ್ಯಾತಿಯಾಗಿರುವ ಕೊಡಗಿನ ಕುಲದೇವರು ಪಾಡಿ ಈಶ್ವರ ಇಗ್ಗುತಪ್ಪ ದೇವರ ಮೊರೆ ಹೋಗಿದೆ.&lt;/p&gt;&lt;h2&gt;ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ಸರ್ಕಾರದ ಮಹಾಪ್ರಾರ್ಥನೆ!&lt;/h2&gt;&lt;p&gt;ಸಿಎಂ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ ಮಳೆದೇವರು ಪಾಡಿ ಈಶ್ವರ ಇಗ್ಗುತ್ತಪ್ಪ ದೇವರಿಗೆ ಇಂದು ಕೃಷಿ ಸಚಿವ ನರೇಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ ಆರು ಗಂಟೆಗೆ ವಿರಾಜಪೇಟೆ ತಾಲ್ಲೂಕಿನಲ್ಲಿರುವ ಮಲ್ಮ ಬೆಟ್ಟದಲ್ಲಿ ನೆಲೆಸಿರುವ ಪಾಡಿ ಈಶ್ವರ ಇಗ್ಗುತ್ತಪ್ಪ ದೇವಾಲಯಕ್ಕೆ ಆಗಮಿಸಿದ ಕೊಡಗು ಉಸ್ತುವಾರಿ ಸಚಿವರೂ ಆಗಿರುವ ಪಿ.ಎಂ. ನರೇಂದ್ರಸ್ವಾಮಿ ಅವರು ಸಿಎಂ ರಾಜಕೀಯ ಕಾರ್ಯದರ್ಶಿಯೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ಗೌಡರೊಂದಿಗೆ ಆಗಮಿಸಿ ದೇವಾಲಯದ ಪ್ರದಕ್ಷಿಣೆ ಹಾಕಿದರು.&lt;/p&gt;&lt;p&gt;ಬಳಿಕ ಅರ್ಚಕ ಕುಶಾಲ್ ಭಟ್ ಅವರು ರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದರು. ನಾಡಿನಾದ್ಯಂತ ಹೆಚ್ಚಿನ ಮಳೆಯಿಂದ ಜಲಾಶಯಗಳು ಭರ್ತಿಯಾಗಿ, ಅಧಿಕ ಬೆಳೆಯಾಗಿ ಎಲ್ಲರಲ್ಲಿಯೂ ಸಮೃದ್ಧಿ, ಸಂತಸ ತರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ವತಿಯಿಂದ ಹೆಚ್ಚಿನ ಮಳೆಗಾಗಿ ಪುಣ್ಯಕ್ಷೇತ್ರ ಪಾಡಿ ಶ್ರೀ ಈಶ್ವರ ಇಗ್ಗುತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಲಾಗಿದೆ. ತಾಯಿ ಕಾವೇರಿ ಹಾಗೂ ಪಾಡಿ ಶ್ರೀ ಇಗ್ಗುತಪ್ಪ ಪುಣ್ಯಭೂಮಿಯಲ್ಲಿ ಹೆಚ್ಚಿನ ಮಳೆಯಾದಲ್ಲಿ ನಾಡಿನ ಜಲಾಶಯಗಳು ಭರ್ತಿಯಾಗಿ, ಉತ್ತಮ ಬೆಳೆ ಜತೆಗೆ, ಕುಡಿಯಲು ನೀರು ಸಿಗಲಿದೆ. ಹೀಗಾಗಿ ಕಾವೇರಿ ಮತ್ತು ಇಗ್ಗುತಪ್ಪ ನಾಡಿನಲ್ಲಿ ಮುಂದಿನ ದಿನಗಳಲ್ಲಿಯಾದರೂ ಹೆಚ್ಚಿನ ಮಳೆಯಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.&lt;/p&gt;&lt;h2&gt;ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಅಗತ್ಯ&lt;/h2&gt;&lt;p&gt;ನಾಡಿನ ಎಲ್ಲೆಡೆ ಮಳೆ ಸುರಿದು, ಜನ-ಜಾನುವಾರುಗಳಿಗೆ ಕುಡಿಯಲು ನೀರು, ಬೆಳೆ ಮತ್ತು ಮೇವು ದೊರೆಯುವಂತಾಗಿ ಸುಭಿಕ್ಷೆ ತರುವಂತಾಗಲಿ. ಕಾವೇರಿ ನದಿ ಪಾತ್ರದಲ್ಲಿ ಸರಾಸರಿ ಮಳೆ ಆಗುವುದರಿಂದ ಅಂತರಾಜ್ಯ ಜಲ ವಿವಾದಗಳು ಇತ್ಯರ್ಥವಾಗಿ, ಶೇ.90 ರಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.&lt;/p&gt;&lt;p&gt;ಸರ್ಕಾರ ಎಲ್ಲರ ವಿಶ್ವಾಸ ಗಳಿಸಿ, ನಂಬಿಕೆಯಿಂದ ಕಾರ್ಯ ನಿರ್ವಹಿಸುವಲ್ಲಿ ಶುಭ ಹೆಜ್ಜೆ ಇಟ್ಟಿದೆ. ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಅಗತ್ಯ. ಆ ದಿಸೆಯಲ್ಲಿ ದೇವರಲ್ಲಿ ಹೆಚ್ಚಿನ ಮಳೆಗಾಗಿ ಪ್ರಾರ್ಥಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಭಕ್ತ ಜನ ಸಮಿತಿ ಅಧ್ಯಕ್ಷರಾದ ಪರದಂಡ ಸುಮನ್ ಸುಬ್ರಮಣಿ ಅವರು ಮುಂದೆ ನಿಂತು ದೇವರ ವಿವಿಧ ಪೂಜಾ ಕೈಂಕರ್ಯಗಳ ನೆರವೇರಿಸಿದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಇದ್ದರು. &lt;strong&gt;(ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)&amp;nbsp;&lt;/strong&gt;&lt;/p&gt;]]></content:encoded>
            <category>kodagu</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/cm-dk-shivakumar-instructions-special-prayers-and-rudrabhisheka-to-rain-deity-lord-igguthappa-of-paadi-in-kodagu-sns/articleshow-53g4l06"/>
        </item>
        <item>
            <title><![CDATA[ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ: ಕಬಿನಿ ಭರ್ತಿ, ಹಾರಂಗಿ ಜಲಾಶಯದಿಂದ ಭಾರಿ ನೀರು ತಮಿಳುನಾಡಿಗೆ ಬಿಡುಗಡೆ!]]></title>
            <link>https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv</link>
            <guid isPermaLink="true">https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv</guid>
            <pubDate>Sat, 01 Aug 2026 16:43:27 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ, ಕೆಆರ್&zwnj;ಎಸ್ ಮತ್ತು ಹಾರಂಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಇದು ಕಾವೇರಿ ವಿವಾದದ ತೀವ್ರತೆಯನ್ನು ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyyfpfbj9xmgwztj0rh7gphj,imgname-kabini-1785582009713.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಕಿಚ್ಚು ಹೊತ್ತಿಕೊಂಡಿರುವ ಬೆನ್ನಲ್ಲೇ, ವರುಣ ದೇವ ರಾಜ್ಯದ ರೈತರಿಗೆ ಭಾರಿ ಸಿಹಿ ಸುದ್ದಿ ನೀಡಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಮೈಸೂರು ಜಿಲ್ಲೆಯ ಹೆಮ್ಮೆಯ ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ತಮಿಳುನಾಡಿನತ್ತ ಕಾವೇರಿ ನೀರು ಈ ಜಲಾಶಯದಿಂದ ಹರಿಯಲಾರಂಭಿಸಿದೆ. ಇದು ಸದ್ಯದ ಕಾವೇರಿ ವಿವಾದದ ತೀವ್ರತೆಯನ್ನು ಕೊಂಚ ತಣ್ಣಗಾಗಿಸುವ ಮುನ್ಸೂಚನೆ ನೀಡಿದೆ.&lt;/p&gt;&lt;h2&gt;ಭರ್ತಿಯಾದ ಕಬಿನಿ ಜಲಾಶಯ: ನದಿಗೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ&lt;/h2&gt;&lt;p&gt;ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಜಲಾನಯನ ಪ್ರದೇಶ ಹಾಗೂ ಕೇರಳದ ವಯನಾಡು ಭಾಗದಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದಾಗಿ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಪ್ರಸ್ತುತ ಅಣೆಕಟ್ಟೆಗೆ 15,500 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ.&lt;/p&gt;&lt;p&gt;ಒಟ್ಟು 19.52 ಟಿಎಂಸಿ ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಈಗಾಗಲೇ 18 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಜಲಾಶಯದ 4 ಕ್ರಸ್ಟ್ ಗೇಟ್&zwnj;ಗಳ ಮೂಲಕ ಸುಮಾರು 10 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸುತ್ತಿದ್ದಾರೆ. ಈ ನೀರು ಕಪಿಲಾ ನದಿಯ ಮೂಲಕ ತಮಿಳುನಾಡಿನತ್ತ &amp;nbsp;ಹರಿದು ಹೋಗಲಿದೆ. ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಬಿನಿ ಜಲಾಶಯದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ಘೋಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.&lt;/p&gt;&lt;h2&gt;ಮಂಡ್ಯದ ಕೆಆರ್&zwnj;ಎಸ್ ಜಲಾಶಯದಲ್ಲೂ ಒಳಹರಿವು ಭಾರಿ ಏರಿಕೆ&lt;/h2&gt;&lt;p&gt;ಕಾವೇರಿ ಗಲಾಟೆಯ ನಡುವೆಯೇ ಮಂಡ್ಯ ಭಾಗದ ರೈತರಿಗೂ ವರುಣ ಮುನಿಸು ಬಿಟ್ಟು ಹರಸಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ (KRS) ಡ್ಯಾಂಗೆ ಬರುವ ಒಳಹರಿವು 13,522 ಕ್ಯೂಸೆಕ್&zwnj;ಗೆ ಏರಿಕೆಯಾಗಿದೆ.&lt;/p&gt;&lt;p&gt;ಗರಿಷ್ಠ 124.80 ಅಡಿ ಸಾಮರ್ಥ್ಯ ಹೊಂದಿರುವ ಕೆಆರ್&zwnj;ಎಸ್ ಡ್ಯಾಂನ ನೀರಿನ ಮಟ್ಟ ಸದ್ಯ 94.40 ಅಡಿಗೆ ತಲುಪಿದೆ. ಇನ್ನು 49.452 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟಿನಲ್ಲಿ ಪ್ರಸ್ತುತ 18.733 ಟಿಎಂಸಿ ನೀರು ಶೇಖರಣೆಯಾಗಿದೆ. ಸದ್ಯಕ್ಕೆ ಡ್ಯಾಂನಿಂದ ಕೇವಲ 1,565 ಕ್ಯೂಸೆಕ್ ನೀರನ್ನು ಮಾತ್ರ ಹೊರಹರಿಸಲಾಗುತ್ತಿದ್ದು, ಒಳಹರಿವು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಜಿಗಿಯಲಿದೆ.&lt;/p&gt;&lt;h2&gt;ಕೊಡಗಿನ ಹಾರಂಗಿ ಜಲಾಶಯದಲ್ಲೂ ಹೆಚ್ಚಿದ ಜಲವೈಭವ&lt;/h2&gt;&lt;p&gt;ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ಜಲಾಶಯ ಕೂಡ ಭರ್ತಿಯಾಗಿದೆ. ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, &amp;nbsp;ಜಲಾಶಯದ ಮುಂಭಾಗದಲ್ಲಿರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹಾರಂಗಿ ಯಡವನಾಡು ಸೋಮವಾರಪೇಟೆ ಸಂಪರ್ಕ ರಸ್ತೆ ಬಂದ್ ಆಗಿದೆ. &amp;nbsp;ಮೂರು ಅಡಿ ನೀರು ಸೇತುವೆ ಮೇಲೆ ಹರಿಯುತ್ತಿದೆ. ಹಾರಂಗಿ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. &amp;nbsp;ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಾಗಿದ್ದು (8.5 ಟಿಎಂಸಿ ಸಾಮರ್ಥ್ಯ), ಇಂದಿನ ಇತ್ತೀಚಿನ ವರದಿಯ ಪ್ರಕಾರ ನೀರಿನ ಮಟ್ಟ 2857.83 ಅಡಿಗಳಿಗೆ (8.104 ಟಿಎಂಸಿ) ತಲುಪಿದೆ. ಜಲಾಶಯಕ್ಕೆ ಸದ್ಯ 9,896 ಕ್ಯೂಸೆಕ್ ನೀರು ಒಳಹರಿವಾಗಿ ಬರುತ್ತಿದ್ದು, ಅಷ್ಟೇ ವೇಗವಾಗಿ ಅಂದರೆ 10,058 ಕ್ಯೂಸೆಕ್ ನೀರನ್ನು ಹೊರಹರಿವಿನ ಮೂಲಕ ನದಿಗೆ ಹರಿಸಲಾಗುತ್ತಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಹೆಚ್ಚುತ್ತಿರುವ ನೀರಿನ ಸಂಗ್ರಹವು ಕರ್ನಾಟಕದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಕೃತಿಯೇ ಕಾವೇರಿ ಸಂಕಷ್ಟಕ್ಕೆ ಸದ್ಯಕ್ಕೆ ಪರಿಹಾರ ನೀಡುತ್ತಿರುವಂತೆ ಭಾಸವಾಗುತ್ತಿದೆ.&lt;/p&gt;]]></content:encoded>
            <category>kodagu</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv"/>
        </item>
        <item>
            <title><![CDATA[ಕಾವೇರಿ ಕಿಚ್ಚು ಏರಿದ ನಡುವೆ, ನಳನಳಿಸಿದ ಕಬಿನಿ, ಹಾರಂಗಿ ಜಲಾಶಯ!]]></title>
            <link>https://kannada.asianetnews.com/karnataka-districts/kabini-harangi-dam-water-level-rises-cauvery-basin-flood-alert-san/articleshow-5vl1gbv</link>
            <guid isPermaLink="true">https://kannada.asianetnews.com/karnataka-districts/kabini-harangi-dam-water-level-rises-cauvery-basin-flood-alert-san/articleshow-5vl1gbv</guid>
            <pubDate>Sat, 01 Aug 2026 12:14:56 +0530</pubDate>
            <description><![CDATA[&lt;p&gt;ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ ಮತ್ತು ಹಾರಂಗಿ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಇದರಿಂದ ಕಾವೇರಿ ಜಲಾನಯನ ಪ್ರದೇಶದ ರೈತರಲ್ಲಿ ಸಂತಸ ಮೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyy0z7ycqcm85w3fx16jq1vx,imgname-kabini-dam-1785566568396.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು/ಮಡಿಕೇರಿ (ಆ.1): &lt;/strong&gt;ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ಎದ್ದಿದ್ದ &lsquo;ಕಾವೇರಿ ಕಿಚ್ಚು&rsquo; ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿವೆ. ನೆರೆಯ ಕೇರಳದ ವೈನಾಡು ಹಾಗೂ ಕೊಡಗಿನ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಕಬಿನಿ ಹಾಗೂ ಹಾರಂಗಿ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಕೇರಳದ ವೈನಾಡಿನಲ್ಲಿ ಮಳೆರಾಯ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಹರಿಯುವ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಸ್ತುತ ಅಣೆಕಟ್ಟೆಗೆ ಭಾರಿ ಪ್ರಮಾಣದ ನೀರು ತಲುಪುತ್ತಿದ್ದು, ನದಿ ನೀರು ಹಂಚಿಕೆ ಸಂಘರ್ಷದ ನಡುವೆ ಕಾವೇರಿ ಜಲಾನಯನ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.&lt;/p&gt;&lt;h2&gt;&lt;strong&gt;ಕಬಿನಿಯಿಂದ ಕೆಳಭಾಗಕ್ಕೆ ಹರಿಯಲಿದೆ 10 ಸಾವಿರ ಕ್ಯೂಸೆಕ್ ನೀರು!&lt;/strong&gt;&lt;/h2&gt;&lt;p&gt;19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಪ್ರಸ್ತುತ 18 ಟಿಎಂಸಿ ನೀರು ಭರ್ತಿಯಾಗಿದೆ. ಜಲಾಶಯಕ್ಕೆ ಪ್ರಸ್ತುತ 15,500 ಕ್ಯೂಸೆಕ್ ಒಳಹರಿವಿದ್ದು, ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಬಿನಿ ಅಣೆಕಟ್ಟೆಯಿಂದ ನದಿಗೆ 8,000 ದಿಂದ 10,000 ಕ್ಯೂಸೆಕ್ ನೀರನ್ನು ಹೊರಬಿಡಲು ನಿರ್ಧರಿಸಿದ್ದಾರೆ.&lt;/p&gt;&lt;p&gt;ಇತ್ತ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೂ ಹರಿಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಹಾರಂಗಿ ಅಣೆಕಟ್ಟೆಯ ಗರಿಷ್ಠ ಮಟ್ಟ 2,859 ಅಡಿ (8.5 ಟಿಎಂಸಿ) ಇದ್ದು, ಪ್ರಸ್ತುತ ನೀರಿನ ಮಟ್ಟ 2,857.83 ಅಡಿ (8.104 ಟಿಎಂಸಿ) ಗೆ ತಲುಪಿದೆ. ಜಲಾಶಯಕ್ಕೆ 9,896 ಕ್ಯೂಸೆಕ್ ಒಳಹರಿವಿದ್ದು, ಭದ್ರತೆಯ ದೃಷ್ಟಿಯಿಂದ 10,058 ಕ್ಯೂಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ.&lt;/p&gt;&lt;h2&gt;&lt;strong&gt;ಪ್ರವಾಹ ಮುನ್ನೆಚ್ಚರಿಕೆ: ನದಿ ಪಾತ್ರದ ಜನರಿಗೆ ಅಲರ್ಟ್&lt;/strong&gt;&lt;/h2&gt;&lt;p&gt;ಕಬಿನಿ ಮತ್ತು ಹಾರಂಗಿ ಎರಡೂ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಾದರೂ ಹೊರಹರಿವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಪ್ರವಾಹ ಮುನ್ನೆಚ್ಚರಿಕೆ ಪ್ರಕಟಿಸಿದ್ದು, ನದಿ ದಂಡೆಯ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/kabini-harangi-dam-water-level-rises-cauvery-basin-flood-alert-san/articleshow-5vl1gbv"/>
        </item>
        <item>
            <title><![CDATA[ಕೊಡಗಿನಲ್ಲಿ ಮಳೆ ಅಬ್ಬರ: ಕಾವೇರಿ ಅಬ್ಬರಕ್ಕೆ ಭಾಗಮಂಡಲ ಜಲಾವೃತ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ]]></title>
            <link>https://kannada.asianetnews.com/gallery/karnataka-districts/scotland-of-karnataka-kodagu-heavy-rain-kaveri-river-bhagamandala-triveni-sangama-flood-august-2026-6rki1tv</link>
            <guid isPermaLink="true">https://kannada.asianetnews.com/gallery/karnataka-districts/scotland-of-karnataka-kodagu-heavy-rain-kaveri-river-bhagamandala-triveni-sangama-flood-august-2026-6rki1tv</guid>
            <pubDate>Sat, 01 Aug 2026 21:17:33 +0530</pubDate>
            <description><![CDATA[&lt;p&gt;ಕರ್ನಾಟಕದ ಸ್ಕಾಟ್ಲೆಂಡ್ ಖ್ಯಾತೊಯ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಪ್ರವಾಹದ ನೀರು ಭಾಗಂಡೇಶ್ವರ ದೇವಾಲಯದ ಆವರಣಕ್ಕೆ ನುಗ್ಗಿದ್ದು, ಪ್ರಮುಖ ರಸ್ತೆಗಳು ಮುಳುಗಡೆಯಾಗಿವೆ. ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyyzqd0pyywabk4hdzy0jx49,imgname-bhagamandala-triveni-sangama-flood-1785598817302.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಸ್ಕಾಟ್ಲೆಂಡ್ ಖ್ಯಾತೊಯ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಪ್ರವಾಹದ ನೀರು ಭಾಗಂಡೇಶ್ವರ ದೇವಾಲಯದ ಆವರಣಕ್ಕೆ ನುಗ್ಗಿದ್ದು, ಪ್ರಮುಖ ರಸ್ತೆಗಳು ಮುಳುಗಡೆಯಾಗಿವೆ. ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಕೊಡಗು (ಆ.01): ಕರ್ನಾಟಕದ ಸ್ಕಾಟ್ಲೆಂಡ್ ಖ್ಯಾತಿಯ ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ (Heavy Rain) ಇದೀಗ ಪ್ರವಾಹದ (Flood) ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಬ್ರಹ್ಮಗಿರಿ (Brahmagiri) ಹಾಗೂ ತಲಕಾವೇರಿ (Talacauvery) ಬೆಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮವಾಗಿ ಭಾಗಮಂಡಲದ (Bhagamandala) ತ್ರಿವೇಣಿ ಸಂಗಮ (Triveni Sangama) ಸಂಪೂರ್ಣ ಜಲಾವೃತವಾಗಿದೆ.&lt;/p&gt;&lt;img&gt;&lt;p&gt;ಕಾವೇರಿ (Cauvery), ಕನಿಕೆ (Kannike) ಮತ್ತು ಸುಜ್ಯೋತಿ (Sujyothi) ನದಿಗಳ ಸಂಗಮ ಸ್ಥಳವಾಗಿರುವ ತ್ರಿವೇಣಿ ಸಂಗಮದ ಸ್ನಾನಘಟ್ಟ (Bathing Ghat) ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ಅದರ ಸಮೀಪದಲ್ಲಿದ್ದ ಅಂಗಡಿ-ಮುಂಗಟ್ಟುಗಳಿಗೂ ಪ್ರವಾಹದ ನೀರು ನುಗ್ಗಿದೆ. ಇದರಿಂದ ಸ್ಥಳೀಯ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ, ಪ್ರಸಿದ್ಧ ಭಾಗಂಡೇಶ್ವರ ದೇವಾಲಯ (Bhagandeshwara Temple) ಆವರಣಕ್ಕೂ ಪ್ರವಾಹದ ನೀರು ನುಗ್ಗಲಾರಂಭಿಸಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;img&gt;&lt;p&gt;&lt;strong&gt;ರಸ್ತೆಗಳು ಜಲಾವೃತ, ಮೇಲ್ಸೇತುವೆ ಮೂಲಕ ಮಾತ್ರ ಸಂಚಾರ&lt;/strong&gt;&lt;/p&gt;&lt;p&gt;ಭಾಗಮಂಡಲ&ndash;ನಾಪೋಕ್ಲು (Napoklu) ರಸ್ತೆಯ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದು, ಭಾಗಮಂಡಲ&ndash;ಮಡಿಕೇರಿ (Madikeri) ರಸ್ತೆಯ ಕೆಳಭಾಗವೂ ಜಲಾವೃತವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮೇಲ್ಸೇತುವೆ (Flyover) ಮೂಲಕ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;p&gt;ಕೆಳಭಾಗದ ರಸ್ತೆಯಲ್ಲಿ ಯಾರೂ ಸಂಚರಿಸದಂತೆ ಪೊಲೀಸರು (Police) ಸೂಚನಾ ಫಲಕಗಳನ್ನು ಅಳವಡಿಸಿದ್ದು, ಸಾರ್ವಜನಿಕರು ಅನಗತ್ಯವಾಗಿ ಪ್ರವಾಹದ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಆತಂಕ&lt;/strong&gt;&lt;/p&gt;&lt;p&gt;ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಕಾರಣ ಕಾವೇರಿ ನದಿಯ (Cauvery River) ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ನದಿ ಪಾತ್ರದ (River Basin) ಗ್ರಾಮಗಳ ನಿವಾಸಿಗಳಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಹವಾಮಾನ ಇಲಾಖೆ (IMD) ಈಗಾಗಲೇ ಕೊಡಗು ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ. ಮಳೆ ಮತ್ತಷ್ಟು ತೀವ್ರಗೊಂಡರೆ ತಗ್ಗು ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಿ, ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆಯ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/scotland-of-karnataka-kodagu-heavy-rain-kaveri-river-bhagamandala-triveni-sangama-flood-august-2026-6rki1tv"/>
        </item>
        <item>
            <title><![CDATA[Mohammed Nalapad Wedding: ಕೊಡಗಿನಲ್ಲಿ ಮೊಹಮ್ಮದ್ ನಲಪಾಡ್ ಎರಡನೇ ಮದುವೆ; ಕಾಂಗ್ರೆಸ್ ನಾಯಕನ ಪುತ್ರಿ ಜೊತೆ ಅದ್ದೂರಿ ನಿಕಾಹ್‌!]]></title>
            <link>https://kannada.asianetnews.com/karnataka-districts/mohammed-nalapad-s-second-wedding-in-kodagu-when-where-who-s-attending-rav/articleshow-86pbquo</link>
            <guid isPermaLink="true">https://kannada.asianetnews.com/karnataka-districts/mohammed-nalapad-s-second-wedding-in-kodagu-when-where-who-s-attending-rav/articleshow-86pbquo</guid>
            <pubDate>Sat, 15 Aug 2026 05:43:17 +0530</pubDate>
            <description><![CDATA[&lt;p&gt;Mohammed Nalapad s Second Wedding in Kodagu ಯುವ ಕಾಂಗ್ರೆಸ್&zwnj; ಮಾಜಿ ಅಧ್ಯಕ್ಷ ಮೊಹಮ್ಮದ್&zwnj; ನಲಪಾಡ್&zwnj; ಅವರು ಕೊಡಗಿನ ಪ್ರತಿಷ್ಠಿತ ರೆಸಾರ್ಟ್&zwnj;ನಲ್ಲಿ ಎರಡನೇ ವಿವಾಹವಾಗಲಿದ್ದಾರೆ. ಆಗಸ್ಟ್&zwnj; 16ರಿಂದ 20ರವರೆಗೆ ನಡೆಯಲಿದೆ. ಮದುವೆ ದಿನಾಂಕ, ಸ್ಥಳ ಹಾಗೂ ಗಣ್ಯರ ಪಟ್ಟಿ ಇಲ್ಲಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01c6s6h7cajxdbetc7zfbh0,imgname-----------------------2026-08-15t054218.099-1786752754897.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಮಡಿಕೇರಿ (ಆ.15): &lt;/strong&gt;ರಾಜ್ಯ ಯುವ ಕಾಂಗ್ರೆಸ್&zwnj; ಮಾಜಿ ಅಧ್ಯಕ್ಷ ಮೊಹಮ್ಮದ್&zwnj; ನಲಪಾಡ್&zwnj;(Mohammad Nalapad) ಅವರ ಎರಡನೇ ವಿವಾಹ ಕೊಡಗಿನ ಪ್ರತಿಷ್ಠಿತ ರೆಸಾರ್ಟ್&zwnj;ನಲ್ಲಿ ನಡೆಯಲಿದೆ. ಆಗಸ್ಟ್&zwnj; 16ರಿಂದ 20ರವರೆಗೆ ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ.ಜಾನ್&zwnj; ಕುಟುಂಬಸ್ಥರ ಒಡೆತನದ ರೆಸಾರ್ಟ್&zwnj;ನಲ್ಲಿ ಮದುವೆ ನಡೆಯಲಿದೆ.&lt;/p&gt;&lt;h2&gt;ನಲಪಾಡ್ ಮದುವೆಗೆ ಯಾರಾರು ಆಗಮನ?&lt;/h2&gt;&lt;p&gt;16ರಂದು ಮಧ್ಯಾಹ್ನ 12 ಗಂಟೆಗೆ ನಿಕಾಹ್&zwnj; ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;, ಕೇರಳ ಮುಖ್ಯಮಂತ್ರಿ ಸತೀಶನ್&zwnj;, ನಟರಾದ ಸುದೀಪ್&zwnj;, ಯಶ್&zwnj; ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.&lt;/p&gt;&lt;h3&gt;ಮೊಹಮ್ಮದ್ ನಲಪಾಡ್ ಮದುವೆ ಆಗ್ತಿರೋ ವಧು ಯಾರು?&lt;/h3&gt;&lt;p&gt;ಮೊಹಮ್ಮದ್&zwnj; ನಲಪಾಡ್&zwnj;, ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್&zwnj;.ಎ.ಹ್ಯಾರಿಸ್&zwnj; ಅವರ ಪುತ್ರ. ಕೊಡಗು ಜಿಲ್ಲಾ ಕಾಂಗ್ರೆಸ್&zwnj; ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್&zwnj;.ಐ.ಮುನೀರ್&zwnj; ಅಹಮ್ಮದ್&zwnj; ಅವರ ಮೂರನೇ ಪುತ್ರಿ ಮಲಿಹಾ ಫಾತಿಮಾ ಅವರನ್ನು ನಲಪಾಡ್&zwnj; ವಿವಾಹವಾಗಲಿದ್ದಾರೆ.&lt;/p&gt;&lt;p&gt;16ರಂದು ನಡೆಯಲಿರುವ ನಿಕಾಹ್&zwnj; ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳ ಸದಸ್ಯರು ಹಾಗೂ ಕೆಲವೇ ಕೆಲವು ಆಹ್ವಾನಿತ ಗಣ್ಯರು ಭಾಗವಹಿಸಲಿದ್ದಾರೆ. 17ರಂದು ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೂ ಎರಡೂ ಕುಟುಂಬಗಳ ಸದಸ್ಯರು ಹಾಗೂ ಆಹ್ವಾನಿತರಿಗೆ ಮಾತ್ರ ಅವಕಾಶ ಇರಲಿದೆ. ಐದು ದಿನಗಳ ಮದುವೆ ಸಂಭ್ರಮಕ್ಕಾಗಿ ನಲಪಾಡ್&zwnj; ಮತ್ತು ಮಲಿಹಾ ಫಾತಿಮಾ ಅವರ ಕುಟುಂಬಸ್ಥರು ರೆಸಾರ್ಟ್&zwnj;ನಲ್ಲಿ ತಂಗಲಿದ್ದು, ಈ ಅವಧಿಗೆ 104 ಕೊಠಡಿಗಳನ್ನು ಬುಕ್&zwnj; ಮಾಡಲಾಗಿದೆ.&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mohammed-nalapad-s-second-wedding-in-kodagu-when-where-who-s-attending-rav/articleshow-86pbquo"/>
        </item>
        <item>
            <title><![CDATA[ಅಯ್ಯಯ್ಯೋ.. ಕೊಡಗಿನಲ್ಲಿ ಆಘಾತಕಾರಿ ಘಟನೆ: ತಾಯಿಯ ಅಕ್ರಮ ಸಂಬಂಧಕ್ಕೆ ಮಗು ಬಲಿ]]></title>
            <link>https://kannada.asianetnews.com/crime/kodagu-crime-four-year-old-boy-charan-dies-after-assault-in-virajpet-gvd/articleshow-8si36kh</link>
            <guid isPermaLink="true">https://kannada.asianetnews.com/crime/kodagu-crime-four-year-old-boy-charan-dies-after-assault-in-virajpet-gvd/articleshow-8si36kh</guid>
            <pubDate>Fri, 14 Aug 2026 18:21:45 +0530</pubDate>
            <description><![CDATA[&lt;p&gt;ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0057f25jdv3zpakrwkwtgy9,imgname-knk-1786711882820.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.14): &lt;/strong&gt;ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ, ಬಲಿ ಪಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಹೌದು ಆಕೆಯ ಅನಾಚಾರಕ್ಕೆ ಏನೂ ತಪ್ಪು ಮಾಡದ ಆ ಮಗು ದಾರುಣವಾಗಿ ಅಂತ್ಯಕಂಡಿದೆ.&amp;nbsp;ಅಂಗನವಾಡಿಗೆ ಹೋಗಿ ಬರುತ್ತಾ ತನ್ನ ತಾಯಿಯೊಂದಿಗೆ ಆಟಮಾಡಿಕೊಂಡು ಇದ್ದ ನಾಲ್ಕು ವರ್ಷದ ಕಂದ ಇದು. ಹೆಸರು ಚರಣ್ ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಲೈನ್ ಮನೆಯೊಂದರಲ್ಲಿ ತಾಯಿ ಮತ್ತವರ ಸಂಬಂಧಿಕರ ಮನೆಯವರೊಂದಿಗೆ ಇತ್ತು.&lt;/p&gt;&lt;p&gt;ಆದರೆ ಅದೇ ತಾಯಿ ಮತ್ತು ದೊಡ್ಡಪ್ಪ ಪ್ರತಾಪನ ಅನೈತಿಕ ಸಂಬಂಧಕ್ಕೆ ಬಲಿಯಾಗಿ ಈ ಮಗು ಹೀಗೆ ಶಾಶ್ವತವಾಗಿ ಕಣ್ಮುಚ್ಚುವಂತೆ ಆಗಿದೆ. ಹೌದು ಮೂಲತಃ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕದನೂರಿನವಳಾದ ಸುಚಿತ್ರಾ ಐದಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನವನಾದ ಪಂಪನಗೌಡ ಎಂಬುವರನ್ನು ಪ್ರೀತಿ ಮದುವೆ ಆಗಿದ್ದಳು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಹುಟ್ಟಿದ್ದರು. ಅದರಲ್ಲಿ ಕಿರಿಯವನು ಈಗ ಹೀಗೆ ಮಲಗಿರುವ ಬಾಲಕ ಚರಣ್. ಕೂಲಿ ಮಾಡಿದ್ದರೂ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ನಡೆಯುತಿತ್ತು.&lt;/p&gt;&lt;p&gt;ಇದರ ನಡುವೆಯೇ ಈ ಸುಚಿತ್ರಾಗೆ ತನ್ನ ಸೋದರ ಸಂಬಂಧಿ ಅಕ್ಕನ ಗಂಡನೊಂದಿಗೆ ಅನೈತಿಕ ಸಂಬಂಧ ಬೆಳಸಿಕೊಂಡಿದ್ದಳು. ಇದು ಆರಂಭದಲ್ಲಿ ಪಂಪನಗೌಡನಿಗೆ ಗೊತ್ತೇ ಆಗಿರಲಿಲ್ಲ. ಆದರೆ ಅದ್ಯಾವಾಘ ಮಿತಿಮೀರಿ ಹೋಯಿತೊ, ಪಂಪನಗೌಡ ಇವರ ಸಹವಾಸವೇ ಬೇಡ ಎಂದು ದೂರವಾಗುವುದಕ್ಕೆ ಶುರುಮಾಡಿದ್ದ. ಆರು ತಿಂಗಳ ಹಿಂದೆ ಅಜ್ಜಿಯ ಮನೆಗೆ ಹೋಗಿ ಬರುತ್ತೇನೆ ಬೆಂಗಳೂರಿನಿಂದ ಕೊಡಗಿಗೆ ಬಂದಿದ್ದ ಸುಚಿತ್ರಾ ವಿರಾಜಪೇಟೆಯಲ್ಲಿರುವ ತನ್ನ ಸಹೋದರ ಸಂಬಂಧಿ ಅಕ್ಕನ ಮನೆಯಲ್ಲಿಯೇ ಪರ್ಮನೆಂಟ್ ಆಗಿ ಉಳಿದಿದ್ದಳು. ಇದು ಬೇಸರವಾದಾಗ ಸುಚಿತ್ರಾ ಗಂಡ ಪಂಪನಗೌಡ ಬೆಂಗಳೂರು ಬಿಟ್ಟು ರಾಯಚೂರಿಗೆ ಹೋಗಿದ್ದ.&lt;/p&gt;&lt;p&gt;ಇತ್ತ ಎಲ್ಲರೂ ಕೂಲಿ ಕಾರ್ಮಿಕರಾಗಿರುವ ಸುಚಿತ್ರಾ, ಆಕೆಯ ಬಾವ ಪ್ರತಾಪ್ ಹಾಗೂ ಆತನ ಪತ್ನಿ ಸೇರಿದಂತೆ ಮೂವರು ವಿರಾಜಪೇಟೆಯ ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಲೈನ್ ಮನೆಯೊಂದರಲ್ಲಿ ವಾಸವಾಗಿದ್ದರು. ಮದ್ಯಕ್ಕೆ ದಾಸರಾಗಿದ್ದ ಸುಚಿತ್ರಾ ಹಾಗೂ ಪ್ರತಾಪ್ ನಡುವೆ ಇರುವ ಅಕ್ರಮ ಸಂಬಂಧದ ವಿಷಯಕ್ಕೆ ಆಗಿಂದ್ದಾಗೆ ಗಲಾಟೆಯನ್ನು ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಪಾಪಿ ಪ್ರತಾಪ್ ತನ್ನ ಪತ್ನಿಗೆ ನೀನು ಬೇಡ ಹೊರಟು ಹೋಗು, ನನಗೆ ಸುಚಿತ್ರನೇ ಸಾಕು ಎಂದು ಗಲಾಟೆ ಮಾಡುತ್ತಿದ್ದನಂತೆ.&lt;/p&gt;&lt;p&gt;ಇದೇ ವಿಚಾರವಾಗಿ ಗುರುವಾರವೂ ಕೂಡ ಗಲಾಟೆಯಾಗಿದೆ ಎನ್ನಾಗಿದೆ. ಮಾತಿಗೆ ಮಾತು ಬೆಳೆದು ಪಾಪಿ ಪ್ರತಾಪ್ ಸುಚಿತ್ರಾಳ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆಯ ತಲೆಗೆ ಕೊಡಲಿಯಿಂದ ಕೊಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆಕೆ ಸದ್ಯ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಗಲಾಟೆ ವೇಳೆ ಜೊತೆಯಲ್ಲಿಯೇ ಇದ್ದ ನಾಲ್ಕು ವರ್ಷದ ಮಗು ಚರಣ್ಗೆ ಮಗು ಎನ್ನುವುದನ್ನು ನೋಡದೆ ಬಡಿಗೆಯಿಂದ ಯದ್ವಾತದ್ವಾ ಹೊಡೆದಿದ್ದಾನೆ. ತೀವ್ರಪೆಟ್ಟು ತಿಂದ ಬಾಲಕ ನೋವು ತಾಳಲಾರದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.&lt;/p&gt;&lt;p&gt;ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ವಿರಾಜಪೇಟೆ ನಗರ ಠಾಣೆ ಪೊಲೀಸರು ಪಾಪಿ ಪ್ರತಾಪ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ಅಕ್ರಮ ಸಂಬಂಧದ ಜಗಳದಲ್ಲಿ ಏನೂ ಅರಿಯದ ನಾಲ್ಕು ವರ್ಷದ ಕಂದ ಚರಣ್ ದಾರುಣವಾಗಿ, ಬರ್ಭರವಾಗಿ ಹ*ತ್ಯೆಯಾಗಿದೆ. ಚಿಕ್ಕಮಗುವೆಂದು ನೋಡದೆ ಬಡಿಗೆಯಿಂದ ಹೊಡೆದು ಬಾಲಕನನ್ನು ಹ*ತ್ಯೆ ಮಾಡಿ ಹೇಯ ಕೃತ್ಯವೆಸಗಿದ ಪಾಪಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಮಗುವಿನ ತಂದೆ ಪಂಪನಗೌಡ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/kodagu-crime-four-year-old-boy-charan-dies-after-assault-in-virajpet-gvd/articleshow-8si36kh"/>
        </item>
        <item>
            <title><![CDATA[ಕೊಡಗು ಜಿಲ್ಲೆಯಾದ್ಯಂತ ಮಳೆ: ಹಾರಂಗಿಗೆ 5000 ಕ್ಯುಸೆಕ್ ನೀರು! ರಾಜ್ಯದ ಜಲಾಶಯಗಳಲ್ಲಿ ಇಂದು ಎಷ್ಟು ನೀರಿದೆ?]]></title>
            <link>https://kannada.asianetnews.com/karnataka-districts/kodagu-rains-across-district-5000-cusecs-of-water-inflow-into-harangi-dam-rav/articleshow-bxtp88o</link>
            <guid isPermaLink="true">https://kannada.asianetnews.com/karnataka-districts/kodagu-rains-across-district-5000-cusecs-of-water-inflow-into-harangi-dam-rav/articleshow-bxtp88o</guid>
            <pubDate>Fri, 31 Jul 2026 05:36:49 +0530</pubDate>
            <description><![CDATA[&lt;p&gt;ಕಳೆದ ಹಲವು ದಿನಗಳಿಂದ ಸಾಧಾರಣ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಚುರುಕುಗೊಂಡಿದೆ. ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಸೇರಿ ವಿವಿಧೆಡೆ ಉತ್ತಮ ಮಳೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kytqwmrzzax0az84ar7d0p0b,imgname-----------------------2026-07-31t051234.600-1785456382751.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಡಿಕೇರಿ: ಕಳೆದ ಹಲವು ದಿನಗಳಿಂದ ಸಾಧಾರಣ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಚುರುಕುಗೊಂಡಿದೆ. ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಸೇರಿ ವಿವಿಧೆಡೆ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯ ಹಾರಂಗಿಯ ಒಳಹರಿವು ಏರಿಕೆ ಕಂಡಿದ್ದು, ಸುಮಾರು 5000 ಕ್ಯುಸೆಕ್ ನೀರು ಹರಿದು ಬರುತ್ತಿದೆ.&amp;nbsp;&lt;/p&gt;&lt;h2&gt;ಕಬಿನಿ ಜಲಾಶಯಕ್ಕೆ 8580 ಕ್ಯುಸೆಕ್ ಒಳಹರಿವು&lt;/h2&gt;&lt;p&gt;ಮೈಸೂರು ಜಿಲ್ಲೆ ಎಚ್&zwnj;.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ 8580 ಕ್ಯುಸೆಕ್ ಒಳಹರಿವು ಹೆಚ್ಚಿದೆ. ಮಡಿಕೇರಿಯ ಮಂಗಳಾದೇವಿ ನಗರದ ಖಾಸಗಿ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಭಾರೀ ಗಾಳಿಗೆ ಜಿಲ್ಲಾಸ್ಪತ್ರೆಯ ಆವರಣದಲ್ಲಿದ್ದ ಬೈಕ್&zwnj;ಗಳ ಮೇಲೆ ಮರ ಬಿದ್ದಿದೆ. ಇನ್ನು ಪಶ್ವಿಮ ಘಟ್ಟದಲ್ಲಿ ಉತ್ತುಮ ಮಳೆಯಾಗತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮಾರ್ಕಂಡೇಯ ನದಿಯ ನೀರಿನ ಹರಿವು ಹೆಚ್ಚಳವಾಗಿದೆ. ಇದರಿಂದ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ.&amp;nbsp;&lt;/p&gt;&lt;h3&gt;ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?&lt;/h3&gt;&lt;p&gt;ಕಬಿನಿ 79% 2284 2277&lt;/p&gt;&lt;p&gt;ಹೇಮಾವತಿ 66% 2922 2907&lt;/p&gt;&lt;p&gt;ತುಂಗಭದ್ರಾ 34% 1633 1609&lt;/p&gt;&lt;p&gt;ಸೂಪಾ(ಮೀ.) 37% 564 536&lt;/p&gt;&lt;p&gt;ಕೆಆರ್&zwnj;ಎಸ್ 35% 124.80 92.14&lt;/p&gt;&lt;p&gt;ಘಟಪ್ರಭಾ 64% 2175 2149&lt;/p&gt;&lt;p&gt;ಲಿಂಗನಮಕ್ಕಿ 31% 1819.12 1775&lt;/p&gt;&lt;p&gt;ಭದ್ರಾ 54% 2158 2127&lt;/p&gt;&lt;p&gt;ಹಾರಂಗಿ 95% 2859 2857&lt;/p&gt;&lt;p&gt;ಆಲಮಟ್ಟಿ(ಮೀ.) 95% 519.60 517.92&lt;/p&gt;&lt;p&gt;ನಾರಾಯಣಪುರ(ಮೀ.) 90% 492.25 491.17&lt;/p&gt;&lt;p&gt;ಮಲಪ್ರಭಾ 41% 2079.50 2058.45&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kodagu-rains-across-district-5000-cusecs-of-water-inflow-into-harangi-dam-rav/articleshow-bxtp88o"/>
        </item>
        <item>
            <title><![CDATA[ಕೊಡಗಿನಲ್ಲಿ ಭಾರೀ ಮಳೆ, ಕಾವೇರಿಗೆ ಬಂತು ಜೀವಕಳೆ: 100 ಅಡಿ ಭರ್ತಿಯತ್ತ ಕೆಆರ್‌ಎಸ್ ಜಲಾಶಯ!]]></title>
            <link>https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm</link>
            <guid isPermaLink="true">https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm</guid>
            <pubDate>Sun, 02 Aug 2026 22:05:36 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್&zwnj;ಎಸ್ ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಯ ಸಮೀಪ ತಲುಪಿದೆ. ಪ್ರಸ್ತುತ 31,583 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಈ ಬೆಳವಣಿಗೆಯು ಮಂಡ್ಯ ಮತ್ತು ಮೈಸೂರು ಭಾಗದ ರೈತರಲ್ಲಿ ಮುಂಗಾರು ಬೆಳೆಗೆ ನೀರಿನ ಭರವಸೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz1n6y1epybamt47k40a8qf3,imgname-mandya-krs-dam-1785688455214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.02): ಕ&lt;/strong&gt;ನ್ನಡ ನಾಡಿನ ಜೀವನಾಡಿ ಕಾವೇರಿ (Cauvery) ಮತ್ತೊಮ್ಮೆ ಕನ್ನಡಿಗರ ನಿರೀಕ್ಷೆ ಉಳಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Catchment) ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ (Heavy Rain) ಪರಿಣಾಮ ಮಂಡ್ಯ (Mandya) ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆ (KRS Dam) ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ.&lt;/p&gt;&lt;p&gt;ಭಾನುವಾರ ಲಭ್ಯವಾದ ಮಾಹಿತಿಯ ಪ್ರಕಾರ, ಕೆಆರ್&zwnj;ಎಸ್ ಅಣೆಕಟ್ಟೆಯಲ್ಲಿ 98.80 ಅಡಿ ನೀರು ಸಂಗ್ರಹವಾಗಿದ್ದು, ಬೆಳಗಿನ ವೇಳೆಗೆ 100 ಅಡಿ ಗಡಿ ತಲುಪುವ ಸಾಧ್ಯತೆ ಇದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಇನ್ನೂ 26.80 ಅಡಿ ನೀರು ತುಂಬಬೇಕಿದೆ. ಪ್ರಸ್ತುತ ಡ್ಯಾಂಗೆ 31,583 ಕ್ಯೂಸೆಕ್ (Cusecs) ನೀರು ಒಳಹರಿವು ದಾಖಲಾಗುತ್ತಿದೆ. ಇನ್ನೊಂದೆಡೆ 1,819 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಒಳಹರಿವು ಹೆಚ್ಚುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ವೇಗವಾಗಿ ಏರಿಕೆಯಾಗುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;22 ಟಿಎಂಸಿ ನೀರು ಸಂಗ್ರಹ&lt;/strong&gt;&lt;/h2&gt;&lt;p&gt;ಸದ್ಯ ಕೆಆರ್&zwnj;ಎಸ್ ಅಣೆಕಟ್ಟೆಯಲ್ಲಿ 21.885 ಟಿಎಂಸಿ (TMC) ನೀರು ಸಂಗ್ರಹವಾಗಿದೆ. ಡ್ಯಾಂನ ಒಟ್ಟು ಗರಿಷ್ಠ ಸಾಮರ್ಥ್ಯ 49.452 ಟಿಎಂಸಿ ಆಗಿದೆ. ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇದೇ ರೀತಿ ಮುಂದುವರಿದರೆ, ಆಗಸ್ಟ್ ತಿಂಗಳಲ್ಲೇ ಅಣೆಕಟ್ಟೆ ಗಣನೀಯ ಮಟ್ಟಕ್ಕೆ ಭರ್ತಿಯಾಗುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ (Irrigation Department) ಮೂಲಗಳು ಅಂದಾಜಿಸಿವೆ.&lt;/p&gt;&lt;p&gt;ಕೆಆರ್&zwnj;ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಿಂದ ಮಂಡ್ಯ, ಮೈಸೂರು (Mysuru) ಸೇರಿದಂತೆ ಕಾವೇರಿ ನೀರಾವರಿ ಪ್ರದೇಶದ (Cauvery Irrigation Region) ರೈತರಲ್ಲಿ ಸಂತಸ ಮನೆ ಮಾಡಿದೆ. ಮುಂಗಾರು (Monsoon) ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;ಕೆಆರ್&zwnj;ಎಸ್ (KRS Dam) ಇಂದಿನ ಪ್ರಮುಖ ಅಂಕಿಅಂಶಗಳು&lt;/strong&gt;&lt;/h2&gt;&lt;ul&gt; &lt;li&gt;ಗರಿಷ್ಠ ಮಟ್ಟ (Maximum Level): 124.80 ಅಡಿ&lt;/li&gt; &lt;li&gt;ಇಂದಿನ ನೀರಿನ ಮಟ್ಟ (Current Water Level): 98.80 ಅಡಿ&lt;/li&gt; &lt;li&gt;ಒಳಹರಿವು (Inflow): 31,583 ಕ್ಯೂಸೆಕ್&lt;/li&gt; &lt;li&gt;ಹೊರಹರಿವು (Outflow): 1,819 ಕ್ಯೂಸೆಕ್&lt;/li&gt; &lt;li&gt;ಗರಿಷ್ಠ ಸಂಗ್ರಹ ಸಾಮರ್ಥ್ಯ (Maximum Storage): 49.452 ಟಿಎಂಸಿ&lt;/li&gt; &lt;li&gt;ಇಂದಿನ ನೀರಿನ ಸಂಗ್ರಹ (Current Storage): 21.885 ಟಿಎಂಸಿ&lt;/li&gt; &lt;li&gt;ಭರ್ತಿಗೆ ಬಾಕಿ (Balance to Full Reservoir Level): 26.80 ಅಡಿ&lt;/li&gt;&lt;/ul&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-krs-dam-water-level-today-cauvery-inflow-mandya-august-2026/articleshow-dadgrnm"/>
        </item>
        <item>
            <title><![CDATA[ಆಸ್ಟ್ರೇಲಿಯಾದ ಮೌಂಟ್ ಕೊಸ್ಸಿಯಸ್ಕೊ ಶಿಖರವನ್ನೇರಿದ ಕೊಡಗಿನ ಜಮ್ಮಡ ಪ್ರೀತ್ ಅಪ್ಪಯ್ಯ]]></title>
            <link>https://kannada.asianetnews.com/karnataka-districts/jammada-preet-appiah-from-kodagu-has-climbed-mount-kosciusko-in-australia-mrq/articleshow-dkrswgn</link>
            <guid isPermaLink="true">https://kannada.asianetnews.com/karnataka-districts/jammada-preet-appiah-from-kodagu-has-climbed-mount-kosciusko-in-australia-mrq/articleshow-dkrswgn</guid>
            <pubDate>Sun, 16 Aug 2026 07:50:42 +0530</pubDate>
            <description><![CDATA[ಕೊಡಗಿನ ಸಾಹಸಿ ಮಹಿಳೆ ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಆಸ್ಟ್ರೇಲಿಯಾದ ಮೌಂಟ್ ಕೊಸ್ಸಿಯಸ್ಕೊ ಶಿಖರವನ್ನು ಕೊಡವ ಉಡುಪಿನಲ್ಲಿ ಏರಿ ಸಾಧನೆ ಮಾಡಿದ್ದಾರೆ. ಇದೇ ವೇಳೆ, ಕೊಡಗು ಸೈನಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m045ps9e7c229n89wd55yaja,imgname-jammada-preet-appaiah-1786846602542.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ: &lt;/strong&gt;ಕೊಡಗಿನ ಸಾಹಸಿ ಮಹಿಳೆ ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಆಸ್ಟ್ರೇಲಿಯಾದ ಅತಿ ಎತ್ತರದ ಶಿಖರ ಮೌಂಟ್ ಕೊಸ್ಸಿಯಸ್ಕೊವನ್ನು ಯಶಸ್ವಿಯಾಗಿ ಏರಿದ್ದಾರೆ. ಆ.10ರಿಂದ 19ರವರೆಗೆ ನಡೆಯುತ್ತಿರುವ ಈ ಸಾಹಸದಲ್ಲಿ ಅವರು ಸ್ವಾತಂತ್ರ್ಯ ದಿನದಂದು ಹಿಮ ಮತ್ತು ಚಳಿ ಗಾಳಿಯ ನಡುವೆ ಶಿಖರದ ತುತ್ತ ತುದಿಯಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ವಿಶೇಷವೆಂದರೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಈ ಸಾಧನೆ ಮಾಡುವ ಮೂಲಕ ಕೊಡಗಿನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇದು ಅವರ &lsquo;ಸೆವೆನ್ ಸಮಿಟ್ಸ್&rsquo; ಗುರಿಯತ್ತ ಮತ್ತೊಂದು ಹೆಜ್ಜೆಯಾಗಿದೆ. ಈಗಾಗಲೇ ಅವರು ಆಫ್ರಿಕಾದ ಕಿಲಿಮಂಜಾರೋ ಮತ್ತು ಯುರೋಪಿನ ಎಲ್ಬ್ರಸ್ ಶಿಖರಗಳನ್ನು ಏರಿದ್ದಾರೆ.&lt;/p&gt;&lt;h2&gt;&lt;strong&gt;ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನ&lt;/strong&gt;&lt;/h2&gt;&lt;p&gt;ಕುಶಾಲನಗರ ಸಮೀಪದ ಕೊಡಗು ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನ ಅದ್ದೂರಿಯಾಗಿ ನಡೆಸಲಾಯಿತು. ದೇಶದ ಎಂಟು ದಶಕಗಳ ಸ್ವಾತಂತ್ರ್ಯದ ನೆನಪಿನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ನಿವೃತ್ತ ಯೋಧರು ಹಾಗೂ ಗಣ್ಯ ಸಂಸ್ಥಾಪಕರು ಭಾಗವಹಿಸಿದ್ದರು.&lt;/p&gt;&lt;p&gt;ಬೆಂಗಳೂರಿನ ಏರ್ ಫೋರ್ಸ್ ಕೊಡಗು ಅಸೋಸಿಯೇಷನ್&zwnj;ನ ಅಧ್ಯಕ್ಷ ಏರ್ ಮಾರ್ಷಲ್ ಬಾಲ್ತಿಕಲಾಂಡ ಯು. ಚಂಗಪ್ಪ (ನಿವೃತ್ತ), ಪಿವಿ ಎಸ್ ಎಂ, ಎವಿ ಎಸ್ ಎಂ, ವಿಎಸ್ ಎಂ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.&lt;/p&gt;&lt;p&gt;ಮುಖ್ಯ ಅತಿಥಿಗಳು ಶಾಲೆಯಲ್ಲಿನ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ನಂತರ ಜನರಲ್ ತಿಮ್ಮಯ್ಯ ಪರೇಡ್ ಮೈದಾನಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಾದ ಚಂಗಪ್ಪ ಅವರು ದ್ವಜಾರೋಹಣ ನೆರವೇರಿಸಿದರು. ಶಾಲೆಯ ಮೆನನ್, ಕಾರ್ಯಪ್ಪ, ಕಟಾರಿ ಮತ್ತು ಸುಬ್ರತೋ ಎಂಬ ನಾಲ್ಕು ಹೌಸ್&zwnj;ಗಳ ತುಕಡಿಗಳ ಪರಿವೀಕ್ಷಣೆ ನಡೆಸಿದರು.&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/jammada-preet-appiah-from-kodagu-has-climbed-mount-kosciusko-in-australia-mrq/articleshow-dkrswgn"/>
        </item>
        <item>
            <title><![CDATA[ಸಚಿವನಾಗಿ ಮೊದಲ ಭೇಟಿಯಲ್ಲೇ 'ಕೊಡಗಿನ ಮೂಲ ಸಮಸ್ಯೆ' ಪರಿಹಾರಕ್ಕೆ ಕೈಹಾಕಿದ ಪಿ.ಎಂ. ನರೇಂದ್ರಸ್ವಾಮಿ!]]></title>
            <link>https://kannada.asianetnews.com/karnataka-districts/minister-pm-narendra-swamy-inspects-harangi-dam-kodagu-cauvery-river-flood-drought-report-khs/articleshow-fz1mgnd</link>
            <guid isPermaLink="true">https://kannada.asianetnews.com/karnataka-districts/minister-pm-narendra-swamy-inspects-harangi-dam-kodagu-cauvery-river-flood-drought-report-khs/articleshow-fz1mgnd</guid>
            <pubDate>Wed, 05 Aug 2026 22:30:41 +0530</pubDate>
            <description><![CDATA[ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ, ನೀರಿನ ಮಟ್ಟದ ಬಗ್ಗೆ ಮಾಹಿತಿ ಪಡೆದರು. ಆರಂಭದಲ್ಲಿ ಮಳೆ ಕೊರತೆಯಿಂದ ಆತಂಕವಿದ್ದರೂ, ಇತ್ತೀಚಿನ ಉತ್ತಮ ಮಳೆಯಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದ ಅವರು, ಕೊಡಗಿನಲ್ಲಿನ ಅತಿವೃಷ್ಟಿಯ ಸಂಕಷ್ಟಗಳ ಬಗ್ಗೆಯೂ ಗಮನ ಸೆಳೆದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kz9dvrmf0b05hwbx8pw371mt,imgname-minister-pm-narendra-swami-inspects-kodagu-rain-1785949184653.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಆ.05): ರಾ&lt;/strong&gt;ಜ್ಯ ಸರ್ಕಾರದಿಂದ ತುರ್ತಾಗಿ ನೇಮಿಸಲಾದ ಬರ ಹಾಗೂ ನೆರೆ ವೀಕ್ಷಣೆಗೆ ಕೊಡಗು ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಕೊಡಗು ಜಿಲ್ಲೆಯ ಏಕೈಕ ಜಲಾಶಯ ಹಾರಂಗಿಯನ್ನು ವೀಕ್ಷಿಸಿದರು. ನಂತರ ಮಾತನಾಡಿ, ಕಾವೇರಿ ತುಂಬಿದರೆ ಮಂಡ್ಯದಿಂದ ತಮಿಳುನಾಡಿನವರೆಗೂ ಸಮೃದ್ಧಿ. ಆದರೆ, ಕಳೆದ 15 ದಿನಗಳ ಹಿಂದಿನ ಸ್ಥಿತಿ ಆತಂಕಕಾರಿ ಆಗಿದ್ದು, ಇದೀಗ ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನಲ್ಲಿರುವ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಎಷ್ಟು ನೀರಿನ ಸಂಗ್ರಹವಿದೆ, ಎಷ್ಟು ಸಂಗ್ರಹವಾಗಬೇಕಾಗಿತ್ತು. ಎಷ್ಟು ನೀರನ್ನು ಹೊರಗೆ ಹರಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಜಲಾಶಯದಲ್ಲಿಯೇ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.&lt;/p&gt;&lt;p&gt;ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಒಂದು ವಾರದ ಹಿಂದೆ ಮಳೆಯ ಪರಿಸ್ಥಿತಿ ನೋಡಿದರೆ ಆತಂಕ ಪಡುವಂತೆ ಇತ್ತು. ಕರ್ನಾಟಕದ ಅರ್ಧ ಭಾಗಕ್ಕೆ ನೀರುಣಿಸುವ ಕಾವೇರಿ ಮಾತೆ ಒಡಲು ಇದು. ಜನರ ಬಾಯಾರಿಕೆಯಿಂದ ಹಿಡಿದು ಅನ್ನ ಆಹಾರವನ್ನು ಕೊಡುವುದು ಕಾವೇರಿ. ಆದರೆ ಕುಡಿಯುವುದಕ್ಕೂ ನೀರಿಲ್ಲ ಎನ್ನುವ ಸ್ಥಿತಿ ಇತ್ತು. ಆದರೆ ಕಳೆದ ಒಂದು ಹತ್ತು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆಆರ್ ಎಸ್ ಜಲಾಶಯಕ್ಕೆ ಇದುವರೆಗೆ 104 ಅಡಿ ತುಂಬಿದೆ ಅಷ್ಟೇ. ಕೆ ಆರ್ ಎಸ್ ತುಂಬಲು ಇನ್ನು 20 ಅಡಿ ತುಂಬಬೇಕು. ಕಾವೇರಿ ಮಾತೆ ಮುನಿಯದೆ ಇರುವಂತೆ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ತೀವ್ರ ಮಳೆಯಾದರೆ ಕೆಳಗಿನವರಿಗೆ ಸಂಭ್ರಮ, ಕೊಡಗಿನವರಿಗಲ್ಲ&lt;/strong&gt;&lt;/h2&gt;&lt;p&gt;ನಾವು ಸಚಿವರಾದ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾದಂತೆ ನಾನು ಬರ ಮತ್ತು ನೆರೆ ವೀಕ್ಷಣೆಗೆ ಬಂದಿದ್ದೇನೆ. ಆದರೆ ಸದ್ಯ ಕೊಡಗಿನಲ್ಲಿ ಉತ್ತಮ ಮಳೆ ಆಗಿದೆ. ತಡವಾಗಿ ಮಾನ್ಸೂನ್ ಆರಂಭವಾಯಿತು, ಇದರಿಂದ ಒಂದಷ್ಟು ಸಮಸ್ಯೆಯೂ ಆಗಿದೆ. ಇದಕ್ಕಾಗಿಯೇ ಸಿಎಂ ಸೂಚನೆಯಂತೆ ನಾನು ಸಚಿವನಾಗುತ್ತಿದ್ದಂತೆ ಕೊಡಗು ಜಿಲ್ಲೆಗೆ ಬಂದಿದ್ದೇನೆ. ಕಾವೇರಿ ತುಂಬಿದರೆ ಮಂಡ್ಯದಿಂದ ಹಿಡಿದು ತಮಿಳುನಾಡಿನವರೆಗೆ ಸಮೃದ್ಧಿ ಇರುತ್ತದೆ. ತೀವ್ರ ಮಳೆಯಾದರೆ ತಳಭಾಗದಲ್ಲಿ ಇರುವ ಸಂಭ್ರಮ ಕೊಡಗಿನಲ್ಲಿ ಇರುವುದಿಲ್ಲ. ಇಲ್ಲಿ ಆ ಮಳೆಯ ಸಂಕಷ್ಟವನ್ನು ಇಲ್ಲಿನ ಜನರು ಅನುಭವಿಸುತ್ತಾರೆ. ಇಲ್ಲಿಗೆ ಮೂಲಭೂತ ಸೌಕರ್ಯಕ್ಕೆ ತೀವ್ರ ಹಾನಿಯಾಗುತ್ತದೆ. ಇದರ ವರದಿಯನ್ನು ಡಿಸಿಎಂ ಆಗಿರುವ ಕಂದಾಯ ಸಚಿವರಿಗೆ ನೀಡುತ್ತೇನೆ ಎಂದು ಕೊಡಗಿನ ಹಾರಂಗಿಯಲ್ಲಿ ಸಚಿವ ನರೇಂದ್ರ ಸ್ವಾಮಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಮೂಲ ಸಮಸ್ಯೆ ಪರಿಹಾರಕ್ಕೆ ಕೈಹಾಕಿದ ಸಚಿವರು:&lt;/strong&gt;&lt;/h2&gt;&lt;p&gt;ಇನ್ನು ಸಚಿವರಾಗಿ ಕೊಡಗು ಜಿಲ್ಲೆಗೆ ನೆರೆ-ಬರ ವೀಕ್ಷಣೆಗೆ ಆಗಮಿಸಿದ ಮೊದಲ ಭೇಟಿಯಲ್ಲೇ ಸಚಿವ ನರೇಂದ್ರಸ್ವಾಮಿ ಅವರು, ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದರೆ ಗುಡ್ಡ ಕುಸಿತದಂತಹ ಭೀತಿ, ರಸ್ತೆ ಸಂಪರ್ಕಗಳ ಕಡಿತ, ಮನೆ ಕುಸಿತ ಹಾಗೂ ನೆರೆಯಿಂದಾಗುವ ಇತರೆ ಹಾನಿಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಮಳೆಯಿಂದ ಜನರು ಅನುಭವಿಸುವ ಸಮಸ್ಯೆ ಗುರುತಿಸಿ ಪರಿಹಾರ ಕಾರ್ಯ ಕೈಗೊಳ್ಳುವ ಭವರಸೆ ನೀಡಿದ್ದು, ಸ್ಥಳೀಯರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/minister-pm-narendra-swamy-inspects-harangi-dam-kodagu-cauvery-river-flood-drought-report-khs/articleshow-fz1mgnd"/>
        </item>
        <item>
            <title><![CDATA[ಕೊಡಗಿನಲ್ಲಿ ಆನೆ ಹಾವಳಿ ತೀವ್ರ: ವಿರಾಜಪೇಟೆ ಭಾಗದಲ್ಲಿ ಬಂದ್‌ಗೆ ರೈತ-ಕಾರ್ಮಿಕ ಸಂಘಟನೆಗಳ ಕರೆ]]></title>
            <link>https://kannada.asianetnews.com/karnataka-districts/kodagu-elephant-human-conflict-intensifies-bandh-called-in-virajpet-areas-gvd/articleshow-gk15d6l</link>
            <guid isPermaLink="true">https://kannada.asianetnews.com/karnataka-districts/kodagu-elephant-human-conflict-intensifies-bandh-called-in-virajpet-areas-gvd/articleshow-gk15d6l</guid>
            <pubDate>Thu, 20 Aug 2026 18:00:09 +0530</pubDate>
            <description><![CDATA[&lt;p&gt;ಕೊಡಗಿನಲ್ಲಿ ಮಾನವ-ಆನೆ ಸಂಘರ್ಷ ತೀವ್ರಗೊಂಡಿದ್ದು, ಆನೆ ದಾಳಿ ನಿಯಂತ್ರಣಕ್ಕೆ ವೈಜ್ಞಾನಿಕ ಯೋಜನೆ ಆಗ್ರಹಿಸಿ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಸೇರಿದಂತೆ ಹಲವೆಡೆ ಬಂದ್&zwnj;ಗೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fj3p0pp7ky9zyhgsdway7n,imgname-hv-1787228706837.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.20): &lt;/strong&gt;ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಜಿಲ್ಲೆಯಲ್ಲಿ ನಿತ್ಯ ಕಾಡಾನೆಗಳ ದಾಳಿಯಿಂದ ಹಲವರು ಪ್ರಾಣ ಕಳೆದುಕೊಂಡಿದ್ದರೆ, ಇನ್ನು ಕೆಲವರು ಅಂಗಾಂಗ ಊನಕ್ಕೊಳಗಾಗಿದ್ದಾರೆ. ಇದರಿಂದ ರೋಸಿ ಹೋಗಿರುವ ಕಾರ್ಮಿಕ ಸಂಘಟನೆ, ರೈತ ಸಂಘಟನೆಗಳು ವಿರಾಜಪೇಟೆ ಭಾಗದ ಹಲವೆಡೆ ಬಂದ್ ಗೆ ನಿರ್ಧರಿಸಿವೆ. ಆ ಮೂಲಕ ಅರಣ್ಯ ಇಲಾಖೆ, ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿದಿವೆ.&lt;/p&gt;&lt;p&gt;ವಿರಾಜಪೇಟೆ ತಾಲ್ಲೂಕಿನ ಕೆಲವು ಭಾಗದಲ್ಲಿ ಬಂದ್ ಗೆ ಕರೆ ನೀಡಿವೆ. ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ನೆಲ್ಯಹುದಿಕೇರಿ ಹಾಗೂ ಕರಡಿಗೋಡು ಭಾಗದಲ್ಲಿ ಬಂದ್ ಗೆ ನಿರ್ಧರಿಸಿವೆ. ಬಂದ್ ಮಾಡುವ ದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಂದ್ ಗೆ ಕರೆ ನೀಡಿವೆ. ಬಂದ್ ನಡೆಸುವ ಕುರಿತು ತೋಟ ಕಾರ್ಮಿಕರ ಸಂಘಟನೆ ಮತ್ತು ರೈತ ಸಂಘಟನೆಗಳು ಸಿದ್ದಾಪುರದಲ್ಲಿ ಸಭೆ ನಡೆಸಿದ್ದು, ಸಭೆಗೆ ಚೇಂಬರ್ ಆಫ್ ಕಾಮರ್ಸ್, ಆಟೋ ಚಾಲಕರ ಸಂಘಗಳು ಬಂದ್ ಗೆ ಬೆಂಬಲ ಸೂಚಿಸಲು ಚಿಂತನೆ ನಡೆಸಿವೆ.&lt;/p&gt;&lt;p&gt;ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಸುತ್ತಮುತ್ತ ಕಾಡಾನೆಗಳಿಗಿಂತ ತೋಟದಲ್ಲಿರುವ ಆನೆಗಳಿಂದಲೇ ಹೆಚ್ಚಿನ ದಾಳಿ ನಡೆಯುತ್ತಿದೆ ಎನ್ನುವುದು ಸಂಘಟನೆಗಳ ಆಕ್ರೋಶ. ಕಾಡು ಬಿಟ್ಟು ತೋಟಗಳಲ್ಲಿಯೇ 240 ಆನೆಗಳು ಉಳಿದಿವೆ ಎಂದು ಈಗಾಗಲೇ ಅರಣ್ಯ ಇಲಾಖೆಯೇ ಮಾಹಿತಿ ನೀಡಿದೆ. ಹೀಗಾಗಿಯೇ ಕಾರ್ಮಿಕರು, ಜನರ ಮೇಲೆ ಆನೆಗಳು ದಾಳಿ ಮಾಡುತತ್ತಿವೆ. ಈ ಆನೆಗಳ ನಿಯಂತ್ರಣಕ್ಕೆ ವೈಜ್ಞಾನಿಕ ಯೋಜನೆಗೆ ಸಂಘಟನೆಗಳು ಆಗ್ರಹಿಸುತ್ತಿವೆ. ಆನೆಗಳು ತೋಟದಲ್ಲಿ ಕಂಡಾಗ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಆನೆಗಳನ್ನು ಓಡಿಸಲಾಗುತ್ತಿದೆ.&lt;/p&gt;&lt;p&gt;ಹೀಗಾಗಿ ಆನೆಗಳು ಪದೇ ಪದೇ ತೋಟ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿವೆ. ಆನೆಗಳ ಕಾಡಿಗಟ್ಟುವ ನೆಪದಲ್ಲಿ ನೂರಾರು ಕೋಟಿ ಹಣ ಪೋಲು ಮಾಡಲಾಗುತ್ತಿದೆ ಎಂದು ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಕಾಡಾನೆಗಳ ಹಾವಳಿ ತಪ್ಪಿಸಲು ವೈಜ್ಞಾನಿಕ ಯೋಜನೆಗೆ ಆಗ್ರಹಿಸಿದ್ದು, ಆನೆಗಳ ನಿಯಂತ್ರಣಕ್ಕೆ ಸರಿಯಾದ ಯೋಜನೆ ರೂಪಿಸದ ಕೊಡಗು ಸಿಸಿಎಫ್ ಅವರನ್ನು ವರ್ಗಾವಣೆ ಮಾಡಬೇಕು. ಕೂಡಲೇ ಸಚಿವರು, ಶಾಸಕರು, ಸಂಸದರು ಹೋರಾಟಗಾರರೊಂದಿಗೆ ಸಭೆ ನಡೆಸಬೇಕು.&lt;/p&gt;&lt;p&gt;ಸ್ಥಳೀಯರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕು ಎಂಬ ಬೇಡಿಕೆಗಳಿಗೆ ಆಗ್ರಹಿಸಿ ಬಂದ್ ಗೆ ಕರೆ ನೀಡಿವೆ. ಅದಕ್ಕೂ ಸ್ಪಂದಿಸದಿದ್ದಲ್ಲಿ ತೀವ್ರತರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿವೆ. ಸದ್ಯ ಕರಡಿಗೋಡಿನಲ್ಲಿ ಮೊನ್ನೆ ದಾಳಿ ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾದ ಆನೆ ಸೆರೆ ಮಾಡಲಾಗಿದ್ದು, ಇನ್ನೂ ಎರಡು ಆನೆಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ. ನೂರಕ್ಕೂ ಹೆಚ್ಚು ಸಿಬ್ಬಂದಿ, ಆರು ಸಾಕಾನೆಗಳ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-elephant-human-conflict-intensifies-bandh-called-in-virajpet-areas-gvd/articleshow-gk15d6l"/>
        </item>
        <item>
            <title><![CDATA[‘ಪಕ್ಷ ತಾಯಿ ಇದ್ದಂತೆ, ಮೋಸ ಮಾಡಬಾರದು’.. ನಾಗೇಂದ್ರ ಸಚಿವ ಸ್ಥಾನಕ್ಕೆ ನರೇಂದ್ರಸ್ವಾಮಿ ಸಮರ್ಥನೆ]]></title>
            <link>https://kannada.asianetnews.com/karnataka-districts/pm-narendra-swamy-defends-nagendra-appointment-as-karnataka-minister-gvd/articleshow-ifa9quy</link>
            <guid isPermaLink="true">https://kannada.asianetnews.com/karnataka-districts/pm-narendra-swamy-defends-nagendra-appointment-as-karnataka-minister-gvd/articleshow-ifa9quy</guid>
            <pubDate>Thu, 06 Aug 2026 18:15:46 +0530</pubDate>
            <description><![CDATA[&lt;p&gt;Kodagu: ಪಕ್ಷ ತಾಯಿ ಇದ್ದಂತೆ, ಅದಕ್ಕೆ ಯಾವುದೇ ಕಾರಣಕ್ಕೂ ಮೋಸ ಮಾಡದಂತೆ ಪ್ರಾಮಾಣಿಕವಾಗಿ ಇರುವವರನ್ನು ಪಕ್ಷವೇ ಗುರುತ್ತಿಸುತ್ತದೆ. ಹಾಗೆಯೇ ನಾಗೇಂದ್ರ ಅವರನ್ನು ಹೈಕಮಾಂಡ್ ಗುರುತ್ತಿಸಿ ಸಚಿವ ಸ್ಥಾನ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzbhpsxpj99t56thwzejbhgq,imgname-jbj-1786020325302.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.06): &lt;/strong&gt;ಪಕ್ಷ ತಾಯಿ ಇದ್ದಂತೆ, ಅದಕ್ಕೆ ಯಾವುದೇ ಕಾರಣಕ್ಕೂ ಮೋಸ ಮಾಡದಂತೆ ಪ್ರಾಮಾಣಿಕವಾಗಿ ಇರುವವರನ್ನು ಪಕ್ಷವೇ ಗುರುತ್ತಿಸುತ್ತದೆ. ಹಾಗೆಯೇ ನಾಗೇಂದ್ರ ಅವರನ್ನು ಹೈಕಮಾಂಡ್ ಗುರುತ್ತಿಸಿ ಸಚಿವ ಸ್ಥಾನ ನೀಡಿದೆ. ಇದನ್ನು ತಪ್ಪು ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ಹೇಳುವ ಮೂಲಕ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ನಾಗೇಂದ್ರ ಅವರಿಗೆ ಸಚಿವಸ್ಥಾನ ಕೊಟ್ಟಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ನದ್ದು ಸೂಟ್ ಕೇಸ್ ಕ್ಯಾಬಿನೆಟ್ ಎಂದು ಬಿಜೆಪಿ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಲಕಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು ನಾನು ಸಿದ್ಧಾಂತಕ್ಕೆ ಅಂಟಿಕೊಂಡಿರುವವ.&lt;/p&gt;&lt;p&gt;ನಾನು ಎನ್ಎಸ್ಯುಐನಿಂದ ಬಂದವನು. ಮೂರು ಬಾರಿ ಸೋತು, ಮೂರು ಬಾರಿ ಶಾಸಕನಾದವನು. 2023 ರಲ್ಲಿಯೇ ನನಗೆ ಸಚಿವಸ್ಥಾನ ಕೊಡುವುದಕ್ಕೆ ನನ್ನ ಹೆಸರಿತ್ತು. ಆದರೆ ಕಾರಣಾಂತರಗಳಿಂದ ನನ್ನ ಹೆಸರನ್ನು ಬಿಡಲಾಯಿತು. ಆಗ ನಾನು ಸಮಾಧಾನದಿಂದ ಇದ್ದೆ ಅಲ್ವಾ..? ಆದರೆ ಈಗ ಗುರುತಿಸಿ ಸ್ಥಾನಮಾನ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲರೂ ಸಮರ್ಥರೇ ಇದ್ದಾರೆ. ಆದರೆ ಎಲ್ಲರೂ ತಾಳ್ಮೆಯಿಂದ ಕಾಯಬೇಕು ಅಷ್ಟೇ ಎಂದು ಕೊಡಗಿನ ತಲಕಾವೇರಿಯಲ್ಲಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ.&lt;/p&gt;&lt;p&gt;ಸಚಿವ ಸ್ಥಾನ ತಪ್ಪಿರುವುದನ್ನ ಖಂಡಿಸಿ ಹಲವೆಡೆ ಹೋರಾಟ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಒಂದೇ ತಂದೆ, ತಾಯಿಗೆ ಹುಟ್ಟಿದ ಮಕ್ಕಳೇ ಸಿಹಿ ಹಂಚಿದಾಗಲೋ ಅಥವಾ ಏನಾದರೂ ತಿಂಡಿ ಕೊಟ್ಟಾಗಲೋ ಕಿತ್ತಾಡುವುದು, ಮುನಿಸು ಬರುವುದು ಸಹಜ ಅಲ್ಲವೆ. ಅದೇ ರೀತಿ ಸಚಿವ ಸ್ಥಾನ ಸಿಗದಿದ್ದಾಗಲೂ ಆಗಿದೆ ಅಷ್ಟೇ ಎಂದು ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ. ಒಂದೇ ತಂದೆ ತಾಯಿಗೆ ಹುಟ್ಟಿದ ಮಕ್ಕಳೇ ಮನೆಯಲ್ಲಿ ಕಿತ್ತಾಡುತ್ತಾರೆ. ಕಾಂಗ್ರೆಸ್ ಕೂಡ ಒಂದು ಮನೆ ಇದ್ದಂತೆ ಅಸಮಧಾನ ಬರುತ್ತೆ ಹೋಗುತ್ತದೆ. ಸಹಜವಾಗಿ ಎಲ್ಲರೂ ಆಕಾಂಕ್ಷಿಗಳು ಆಗಿದ್ದವರು. ಆದರೆ ಎಲ್ಲರಿಗೂ ಸಚಿವ ಸಿಗಲು ಸಾಧ್ಯವಿಲ್ಲ ಅಲ್ಲವೇ. ಏನೇ ಸಮಸ್ಯೆಗಳಿದ್ದರೂ ಅದೆಲ್ಲವೂ ಇಂದು ಸಂಜೆ ಒಳಗೆ ಬಗೆಹರಿಯುತ್ತದೆ ಎಂದು ಪಿ ಎಂ ನರೇಂದ್ರ ಸ್ವಾಮಿ ಹೇಳಿದ್ದಾರೆ.&lt;/p&gt;&lt;p&gt;ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಯರಿಗೂ ಸಚಿವ ಸ್ಥಾನ ಕೊಡದಿರುವುದಕ್ಕೆ ಇದೊಂದು ಮಹಿಳಾ ವಿರೋಧಿ ಸರ್ಕಾರ ಎಂದು ಬಿಜೆಪಿ ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮಹಿಳೆಯರ ಸ್ಥಾನಮಾನದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ನೀಟ್ ಹೋರಾಟದ ವಿಚಾರದಲ್ಲಿ ಇವರು ಮಾತಾಡಲಿಲ್ಲ.&lt;/p&gt;&lt;p&gt;ದೆಹಲಿಯಲ್ಲಿ ಅಷ್ಟೊಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರು, ಇವರು ಸುಮ್ಮನಿದ್ದರು. ಅಲ್ಲಿ ಅಷ್ಟೊಂದು ಹೆಣ್ಣುಮಕ್ಕಳಿಗೆ ಲಾಠಿ ಚಾರ್ಜ್ ಮಾಡಿ ನಿರ್ಧಯವಾಗಿ ನಡೆದುಕೊಂಡರು. ಲಾಠಿಗೆ ಮೊಳೆ ಹೊಡೆದುಕೊಂಡು ಪ್ರತಿಭಟನಾನಿರತ ಹೆಣ್ಣು ಮಕ್ಕಳಿಗೆ ಹೊಡೆದರು. ಇಂತಹವರಿಂದ ಮಹಿಳಾ ಸ್ಥಾನಮಾನದ ಬಗ್ಗೆ ಪಾಠ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ ಮಹಿಳೆಯರಿಗೆ ಸಂಪುಟದಲ್ಲಿ &amp;amp; ಇತರೆಡೆ ಸ್ಥಾನಮಾನ ಕೊಟ್ಟೇ ಕೊಡುತ್ತದೆ. ಕಾಂಗ್ರೆಸ್ ಈಗಾಗಲೇ ಜಾರಿ ಮಾಡಿರುವ ಎಲ್ಲಾ ಕಾರ್ಯಕ್ರಮಗಳು ಮಹಿಳೆಯರ ಪರವಾಗಿವೆ ಎಂದು ಸಚಿವ ಪಿ ಎಂ ನರೇಂದ್ರಸ್ವಾಮಿ ಹೇಳಿದರು.&lt;/p&gt;&lt;p&gt;ಎಲ್ಲದಕ್ಕೂ ಮುಂಚಿತವಾಗಿ ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ತ್ರಿವೇಣಿ ಸಂಗಮಕ್ಕೆ ಭೇಟಿ ವೀಕ್ಷಿಸಿ ಬಳಿಕ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಂಡ್ಯದವನಾಗಿ ಕಾವೇರಿ ಮಾತೆಗೆ ಮೊದಲು ನಮಿಸುವುದು ನಮ್ಮ ಆದ್ಯ ಕರ್ತವ್ಯ. ಹೀಗಾಗಿ ತಲಕಾವೇರಿಗೆ ಬಂದು ತಾಯಿಗೆ ನಮಿಸಿದ್ದೇನೆ ಎಂದು ಬರ, ನೆರೆ ವೀಕ್ಷಣೆ ಉಸ್ತುವಾರಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಹೇಳಿದರು.&lt;/p&gt;&lt;p&gt;ನಾಡಿನಲ್ಲಿ ಬರ ಬರಬಹುದು ಎಂಬ ಭಯ ಇಡೀ ನಾಡನ್ನು ಕಾಡಿತ್ತು. ನಾಡಿಗೆ ಜೀವಜಲ ಒದಗಿಸುವ ತಾಯಿ ಕಾವೇರಿ ವರ ನೀಡಿದ್ದಾಳೆ. ಕಾವೇರಿ ಕೃಪೆ ತೋರಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಇಂತಹ ತಾಯಿಗೆ ನಮಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಕಾವೇರಿ ರಾಜ್ಯ ಮಾತ್ರವಲ್ಲದೆ, ನೆರೆ ರಾಜ್ಯದ ದಾಹವನ್ನು ತಣಿಸುವ ಮಾತೆ. ಬರ ಅಥವಾ ನೆರೆ ವೀಕ್ಷಿಸಿ ವರದಿ ನೀಡುವಂತೆ ಸಿಎಂ ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದವನು ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇನೆ ಎಂದಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/pm-narendra-swamy-defends-nagendra-appointment-as-karnataka-minister-gvd/articleshow-ifa9quy"/>
        </item>
        <item>
            <title><![CDATA[ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸಮಸ್ಯೆ ಇಲ್ಲ: ಬಿಜೆಪಿ ಆರೋಪಕ್ಕೆ ಸಚಿವ ನರೇಂದ್ರಸ್ವಾಮಿ ತಿರುಗೇಟು]]></title>
            <link>https://kannada.asianetnews.com/karnataka-districts/gutka-ban-row-narendra-swamy-hits-back-at-bjp-over-arecanut-farmers-gvd/articleshow-it2f7z6</link>
            <guid isPermaLink="true">https://kannada.asianetnews.com/karnataka-districts/gutka-ban-row-narendra-swamy-hits-back-at-bjp-over-arecanut-farmers-gvd/articleshow-it2f7z6</guid>
            <pubDate>Sat, 15 Aug 2026 16:39:50 +0530</pubDate>
            <description><![CDATA[&lt;p&gt;RSS Karnataka: ನಮ್ಮ ಗೃಹಮಂತ್ರಿಯವರು ಹೇಳುವುದರಲ್ಲಿ ಅಸಂವಿಧಾನಿಕ ಅಂತ ಏನಿದೆ. ಕಾನೂನು ಬಾಹಿರವಾದ ವಿಚಾರವನ್ನೇನಾದರೂ ಮುಂದಿಟ್ಟಿದ್ದಾರಾ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಪ್ರಶ್ನಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02hskf246mqym616daz4072,imgname-bkb-1786792168930.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.15):&lt;/strong&gt; ರಾಜ್ಯದ ಸರ್ಕಾರಿ ಮೈದಾನ ಮತ್ತು ಜಾಗಗಳಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಪಡೆಯುವ ವಿಧೇಯಕ ಮಂಡನೆ ಮೂಲಕ ಆರ್ ಎಸ್ ಎಸ್ ನಿರ್ಬಂಧಿಸಲು ಸರ್ಕಾರ ಮುಂದಾಗಿದೆ ಎಂಬ ಬಿಜೆಪಿಯವರ ಹೇಳಿಕೆ ವಿಚಾರ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ನಮ್ಮ ಗೃಹಮಂತ್ರಿಯವರು ಹೇಳುವುದರಲ್ಲಿ ಅಸಂವಿಧಾನಿಕ ಅಂತ ಏನಿದೆ. ಕಾನೂನು ಬಾಹಿರವಾದ ವಿಚಾರವನ್ನೇನಾದರೂ ಮುಂದಿಟ್ಟಿದ್ದಾರಾ ಎಂದು ಪ್ರಶ್ನಿಸಿದರು. ದೇಶದಲ್ಲಿ ಈ ಸಂವಿಧಾನವನ್ನು ಒಪ್ಪಿ ಎಲ್ಲರೂ ಬದುಕಬೇಕಾಗುತ್ತದೆ.&lt;/p&gt;&lt;p&gt;ಅದರ ಅಡಿಯಲ್ಲಿ ಸಂಘ ನೋಂದಾಯಿಸಲು ಯಾರಿಗೆ ಯಾವ ಸಮಸ್ಯೆ ಇದೆ ಅಥವಾ ಅಪಮಾನವೇನು ಎಂದು ಸಚಿವ ನರೇಂದ್ರ ಸ್ವಾಮಿ ಪ್ರಶ್ನಿಸಿದರು. ನಾವು ಭಾರತೀಯರು ನಾವೆಲ್ಲರೂ ಒಂದು ಎಂದ ಮೇಲೆ, ಸಂಘಟನೆ ನೋಂದಾಯಿಸಲು ಸಮಸ್ಯೆ ಏನು ಎಂದಿದ್ದಾರೆ. ಯಾರನ್ನು ನಾವು ಭಿನ್ನವಾಗಿ ಕಾಣುತ್ತಿಲ್ಲ, ಆದರೆ ಭಿನ್ನವಾಗಿ ನಡೆಯುತ್ತೇವೆ ಎನ್ನುವ ಅವರ ಮನೋಧರ್ಮ ಬದಲಾಯಿಸಿಕೊಳ್ಳಲಿ. ನೋಂದಾಯಿತ ಸಂಸ್ಥೆಗಳಿಗೆ ಅವಕಾಶವಿದೆ, ನೋಂದಾಯಿಸದೇ ಇರುವ ಸಂಘಟನೆ ಇದನ್ನೇ ಉದಾಹರಣೆಯಾಗಿಟ್ಟುಕೊಂಡು ನಾವು ಯಾವುದೇ ಒಪ್ಪಿಗೆ ಪಡೆಯದೇ ಕಾರ್ಯಕ್ರಮ ಮಾಡುತ್ತೇವೆ ಎಂದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಹೇಗೆ ಎಂದಿದ್ದಾರೆ.&lt;/p&gt;&lt;p&gt;ಕಾರ್ಯಕ್ರಮಗಳ ಮಾಡುವುದಕ್ಕೆ ಅವಕಾಶ ನೀಡಲು ಯಾವುದೇ ಸಂಘಟನೆ ಹೇಗೆ ನಡೆದುಕೊಳ್ಳಬೇಕು. ಒಗ್ಗೂಡುವ, ಸಮೂಹ ಕಾರ್ಯಕ್ರಮ ಮಾಡಬೇಕಾದರೆ ಒಪ್ಪಿಗೆ ಪಡೆಯಬೇಕೋ ಬೇಡವೋ. ಅನುಮತಿ ನೀಡಬೇಕಾದರೆ ಸರ್ಕಾರ ಯಾರ ಹೆಸರಿನಲ್ಲಿ ಕೊಡಬೇಕು. ಒಬ್ಬರೇ ಭಾರತ ಮಾತಾಕಿ ಜೈ ಎನ್ನುವಾಗ ಸಮಸ್ಯೆ ಇಲ್ಲ. ಆದರೆ ಸಮೂಹ ಒಗ್ಗೂಡಿ ಕಾರ್ಯಕ್ರಮ ಮಾಡುವಾಗ ಒಪ್ಪಿಗೆ ಬೇಕಲ್ವಾ. ಹಿಂದೆ ಕೆಲವು ಅನಪೇಕ್ಷಿತ ಘಟನೆ ನಡೆದಿವೆ. ಹೀಗಾಗಿ ಸರಿ ದಾರಿಯಲ್ಲಿ ಬನ್ನಿ ಅಂತ ನಾವು ಕರೆಯುತ್ತಿದ್ದೇವೆ, ಅವರನ್ನು ನಾವು ವಿರೋಧ ಮಾಡುತ್ತಿಲ್ಲ. ನಾವೆಲ್ಲರೂ ಭಾರತೀಯರು ಎಂದ ಮೇಲೆ ದೇಶದ ಕಾನೂನು ಪಾಲಿಸಲು ಅವರಿಗೆ ಸಮಸ್ಯೆ ಏನುನ ಎಂದಿದ್ದಾರೆ.&lt;/p&gt;&lt;p&gt;ಇನ್ನು ಗುಟ್ಕಾ ನಿಷೇಧದಿಂದ ಯಾವುದೇ ಸಮಸ್ಯೆ ಆಗಲ್ಲ ಅಂತ ಅಡಿಕೆ ಬೆಳೆಗಾರರ ಸಂಘವೇ ಸ್ಪಷ್ಟಪಡಿಸಿದೆ, ಬಿಜೆಪಿಯವರಿಗೆ ಅದೇ ಉತ್ತರ ಸಾಕಲ್ವಾ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ತಿರುಗೇಟು ನೀಡಿದ್ದಾರೆ. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸರ್ಕಾರ ಮೋಸ ಮಾಡಲು ಹೊರಟಿದೆ ಎಂದು ಬಿಜೆಪಿ ಆರೋಪಿಸುತ್ತಿರುವ ವಿಚಾರಕ್ಕೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ ವಿಚಾರ, ಕೇಂದ್ರದಿಂದ ಬರುವ ಅನುದಾನಗಳ ಬಗ್ಗೆ ಮಾತನಾಡುವುದಕ್ಕೆ ಆಗಲ್ಲ. ರಾಜ್ಯದಲ್ಲಿ ಹೆಚ್ಚು ಸಂಸದರು ಇರುವುದು ಯಾವ ಪಕ್ಷದಲ್ಲಿ, ಕೇಂದ್ರದಲ್ಲಿ ಆಡಳಿತದಲ್ಲಿ ಇರುವುದು ಯಾವ ಪಕ್ಷ. ರಾಜ್ಯದ ಪಾಲನ್ನು ಕೇಳಿ ಆರ್ಥಿಕ ಮುನ್ನೆಡೆಗೆ ಅವರು ಸಹಕರಿಸುತಿದ್ದಾರೆಯೇ ಎಂದು ಪ್ರಶ್ನಿಸಿದರು.&lt;/p&gt;&lt;p&gt;ಕೇಂದ್ರದಿಂದ ನಮಗೆ ಬರಬೇಕಾಗಿರುವ ಪಾಲೆಷ್ಟು, ನಮಗೆ ಆಗುತ್ತಿರುವ ವಂಚನೆ ಬಗ್ಗೆ ಯಾಕೆ ಬಿಜೆಪಿಯವರು ಮಾತನಾಡಲ್ಲ. ಇಲ್ಲಿ ಇರುವೆ ಹೋಯ್ತು ಎನ್ನುವುದಕ್ಕೆ ಮಾತನಾಡುತ್ತಾರೆ, ಆದರೆ ಅಲ್ಲಿ ಆನೆ ಹೋಯ್ತು ಎನ್ನುವುದಕ್ಕೆ ಯಾಕೆ ಮಾತನಾಡಲ್ಲ. ನಾವು ಕರ್ನಾಟಕದ ಸ್ವಾಭಿಮಾನವನ್ನು ಎತ್ತಿಡಿಯಬೇಕು. ಕ್ಷುಲ್ಲಕ ವಿಚಾರಕ್ಕೆ ಮಾತನಾಡುವುದಲ್ಲ ಎಂದು ಬಿಜೆಪಿ ನಾಯಕರಿಗೆ ಸಚಿವ ನರೇಂದ್ರಸ್ವಾಮಿ ತಿರುಗೇಟು ನೀಡಿದ್ದಾರೆ. ಇವರು ಕನ್ನಡಿಗರಲ್ವಾ ನಮ್ಮ ರಾಜ್ಯದ ಜನತೆಯ ಮತ ಪಡೆದಿಲ್ವಾ ಇವರು. ಸಣ್ಣವಿಚಾರವನ್ನು ಮಾತನಾಡುವ ಇವರು ದೊಡ್ಡ ವಿಚಾರವನ್ನು ಯಾಕೆ ಗೌಣ ಮಾಡುತ್ತಿದ್ದಾರೆ. ಅವರು ಅದಕ್ಕೆ ಉತ್ತರ ಕೊಡಲಿ, ಆ ಮೇಲೆ ನಾನು ಮಾತನಾಡುತ್ತೇನೆ ಎಂದು ಮಡಿಕೇರಿಯಲ್ಲಿ ಸಚಿವ ನರೇಂದ್ರ ಸ್ವಾಮಿ ತಿರುಗೇಟು ನೀಡಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gutka-ban-row-narendra-swamy-hits-back-at-bjp-over-arecanut-farmers-gvd/articleshow-it2f7z6"/>
        </item>
        <item>
            <title><![CDATA[ಬೆಂಗಳೂರು ವಿಮಾನ ನಿಲ್ದಾಣದಿಂದ ದ. ಕೊಡಗಿಗೆ ಫ್ಲೈಬಸ್ ಸೇವೆ; ವೇಳಾಪಟ್ಟಿ ಇಲ್ಲಿದೆ ನೋಡಿ]]></title>
            <link>https://kannada.asianetnews.com/karnataka-districts/ksrtc-flybus-service-from-bengaluru-airport-to-south-kodagu-check-the-schedule-here-mrq/articleshow-p8z3xul</link>
            <guid isPermaLink="true">https://kannada.asianetnews.com/karnataka-districts/ksrtc-flybus-service-from-bengaluru-airport-to-south-kodagu-check-the-schedule-here-mrq/articleshow-p8z3xul</guid>
            <pubDate>Sun, 09 Aug 2026 09:13:54 +0530</pubDate>
            <description><![CDATA[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಆಗಸ್ಟ್ 15 ರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಲ್ಲಿಕೋಟೆಗೆ ಹೊಸ ಫ್ಲೈಬಸ್ ಸೇವೆಯನ್ನು ಆರಂಭಿಸುತ್ತಿದೆ. ಈ ಬಸ್ ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಪೊನ್ನಂಪೇಟೆ, ಮತ್ತು ಕುಟ್ಟ ಮಾರ್ಗವಾಗಿ ಸಂಚರಿಸಲಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj9sn1d394y1kt5ma5ypqhh,imgname-ksrtc-flybus-1786246911021.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪೊನ್ನಂಪೇಟೆ:&lt;/strong&gt; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೂತನವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳದ ಕಲ್ಲಿಕೋಟೆಗೆ ಫ್ಲೈ ಬಸ್ ಸೇವೆ ಆರಂಭಿಸಲಿದ್ದು, ಇದು ದಕ್ಷಿಣ ಕೊಡಗಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಆ. 15ರಿಂದ ಈ ನೂತನ ಬಸ್ ಸೇವೆ ಪ್ರಾರಂಭವಾಗಲಿದೆ.&lt;/p&gt;&lt;h2&gt;&lt;strong&gt;ಬಸ್ ಸಮಯ ಈ ರೀತಿಯಾಗಿದೆ&lt;/strong&gt;&lt;/h2&gt;&lt;p&gt;ರಾತ್ರಿ 10.40 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಈ ಬಸ್ಸು ಮೈಸೂರು, ಹುಣಸೂರು ಮಾರ್ಗವಾಗಿ ಬೆಳಗಿನ ಜಾವ 4:15 ಗಂಟೆಗೆ ಗೋಣಿಕೊಪ್ಪಲು, 4:20 ಗಂಟೆಗೆ ಪೊನ್ನಂಪೇಟೆ ಮತ್ತು 4:50 ಗಂಟೆಗೆ ಕುಟ್ಟ ತಲುಪಲಿದೆ. ನಂತರ ಮಾನಂದವಾಡಿ- ಕಲ್ಪೆಟ್ಟ ಮಾರ್ಗವಾಗಿ ಬೆಳಗ್ಗೆ 7:15 ಗಂಟೆಗೆ ಕಲ್ಲಿಕೋಟೆ ತಲುಪಲಿದೆ.&lt;/p&gt;&lt;p&gt;ಅದೇ ರೀತಿ ರಾತ್ರಿ 7:30 ಗಂಟೆಗೆ ಕಲ್ಲಿಕೋಟೆಯಿಂದ ಹೊರಡುವ ಈ ಬಸ್ಸು, ಕಲ್ಪೆಟ್ಟ-ಮಾನದವಾಡಿ ಮಾರ್ಗವಾಗಿ ರಾತ್ರಿ 10:15 ಗಂಟೆಗೆ ಕುಟ್ಟ ತಲುಪಲಿದೆ. ಅಲ್ಲಿಂದ ರಾತ್ರಿ 10:45ಕ್ಕೆ ಪೊನ್ನಂಪೇಟೆಯಿಂದ, 10:50ಕ್ಕೆ ಗೋಣಿಕೊಪ್ಪದಿಂದ ಹೊರಡುವ ಬಸ್ಸು ಹುಣಸೂರು-ಮೈಸೂರು ಮಾರ್ಗದಲ್ಲಿ ಸಂಚರಿಸಿ ಬೆಳಗಿನ ಜಾವ 4:15 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.&lt;/p&gt;&lt;h3&gt;&lt;strong&gt;ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ&lt;/strong&gt;&lt;/h3&gt;&lt;p&gt;ದಕ್ಷಿಣ ಕೊಡಗಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯ ಒದಗಿಸಲು ಸಾಕಷ್ಟು ಬಾರಿ ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದೀಗ ನೂತನ ಈ ಫ್ಲೈ ಬಸ್ ಸೇವೆಯಿಂದಾಗಿ ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇನ್ನು ದ. ಕೊಡಗಿನ ವಿಮಾನ ಯಾತ್ರಿಗಳು ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಭಾಗಗಳಿಂದ ನೇರವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬಹುದಾಗಿದೆ.&lt;/p&gt;]]></content:encoded>
            <category>kodagu</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ksrtc-flybus-service-from-bengaluru-airport-to-south-kodagu-check-the-schedule-here-mrq/articleshow-p8z3xul"/>
        </item>
        <item>
            <title><![CDATA[ಕೊಡಗಿನಲ್ಲಿ ಮೃತಪಟ್ಟ ತಾಯಿ ಆನೆ ಎಬ್ಬಿಸಲು ಮರಿ ಆನೆ ಪರದಾಟ, ಮೂಕರೋಧನೆಗೆ ಭಾವುಕರಾದ ಜನ]]></title>
            <link>https://kannada.asianetnews.com/karnataka-districts/heart-wrenching-scene-baby-elephant-tries-to-wake-dead-mother-in-kodagu/articleshow-qakw796</link>
            <guid isPermaLink="true">https://kannada.asianetnews.com/karnataka-districts/heart-wrenching-scene-baby-elephant-tries-to-wake-dead-mother-in-kodagu/articleshow-qakw796</guid>
            <pubDate>Sun, 26 Jul 2026 19:23:17 +0530</pubDate>
            <description><![CDATA[&lt;p&gt;ಆಹಾರ ಹುಡುಕುತ್ತ ಗ್ರಾಮದ ತೋಟಗಳಿಗೆ ನುಗ್ಗಿದ ತಾಯಿ ಆನೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದೆ. ಇತ್ತ ತಾಯಿ ಕಳೆದುಕೊಂಡ ಮರಿ ಆನೆಯ ಮೋಕರೋಧನೆ ಹಲವರ ಕಣ್ಣಾಲಿ ತೇವಗೊಳಿಸಿದೆ. &amp;nbsp;ತಾಯಿ ಆನೆಯ ಎಬ್ಬಿಸಲು ಮರಿ ಆನೆ ಇನ್ನಿಲ್ಲದ ಪ್ರಯತ್ನ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyfb6z9hwdte9h4415ctwk33,imgname-baby-elephant-emotional-farewell-to-dead-mother-1785073990959.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಜು.26) &lt;/strong&gt;ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳು ವಾಸಿಸುವ ಪ್ರದೇಶದಳಲ್ಲಿ ಕೊಡಗು ಪ್ರಮುಖವಾಗಿದೆ. ಕೊಡಗಿನ ಕಾಡುಗಳಲ್ಲಿ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಆದರೆ ಕಾಡಿನಲ್ಲಿ ಆಹಾರ ಕೊರತೆಯಿಂದ ಆನೆಗಳು ನಾಡಿನತ್ತ ಬರುವುದು, ತೋಟಗಳಿಗೆ ನುಗ್ಗುವುದು ಇತ್ತೀಚೆಗೆ ಕೊಡಗು ಮಾತ್ರವಲ್ಲ, ಹಾಸನ, ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ನಡೆಯುತ್ತಿದೆ. ಹೀಗಾ ಮರಿ ಜೊತೆ ತಾಯಿ ಆನೆ ಆಹಾರ ಹುಡುಕುತ್ತಾ ಗ್ರಾಮದ ತೋಟಕ್ಕೆ ನುಗ್ಗಿದೆ. ದುರಂತ ಆಂದರೆ ತಾಯಿ ಆನೆ ತೋಟದಲ್ಲೇ ಮೃತಪಟ್ಟಿದೆ. ಇದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟ ತಾಯಿ ಆನೆ ಕಂಡು ಮರಿ ಆನೆ ಕಂಗಾಲಾಗಿದೆ. ತಾಯಿಯನ್ನು ಎಬ್ಬಿಸಲು ಸತತವಾಗಿ ಪ್ರಯತ್ನ ಮಾಡಿದೆ. ಚೀರಾಡಿ ತಾಯಿ ಆನೆಯ ಸುತ್ತು ಬಂದರೂ ತಾಯಿ ಮಾತ್ರ ಏಳಲೇ ಇಲ್ಲ. ಮರಿ ಆನೆಯ ಚೀರಾಟ ಕೇಳಿ ಸ್ಥಳೀಯರು ಧಾವಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮರಿ ಆನೆಯನ್ನು ರಕ್ಷಿಸಲಾಗಿದೆ.&lt;/p&gt;&lt;h2&gt;ಹೆಣ್ಣಾನೆಯ ಮರಣೋತ್ತರ ಪರೀಕ್ಷೆ&lt;/h2&gt;&lt;p&gt;ಕೊಡಗಿನ ವಿರಾಜಪೇಟೆ ತಾಲೂಕಿನ ಆತನಂದಪುರದಲ್ಲಿ ಈ ಘಟನೆ ನಡೆದಿದೆ. ಕಾಫಿ ತೋಟದ ಮಧ್ಯೆ ರಾತ್ರಿ ವೇಳೆ ಹೆಣ್ಣಾನೆ ಮೃತಪಟ್ಟಿದೆ. ಕೌರಿಕಾಡು ಎಸ್ಟೇಟ್&zwnj;ನಲ್ಲಿ ಹೆಣ್ಣಾನೆ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಂಶಯಾಸ್ವದ ರೀತಿಯಲ್ಲಿ ಸತ್ತು ಬಿದ್ದಿರುವ ಹೆಣ್ಣಾನೆಯ ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅನಾರೋಗ್ಯದ ಕಾರಣದಿಂದ ಮೃತಪಟ್ಟಿದೆಯೋ ಅಥವಾ ಗುಂಡು ತಗುಲಿ ಮೃತಪಟ್ಟಿದೆಯೋ ಅನ್ನೋದು ಮರಣೋತ್ತರ ಪರೀಕ್ಷೆ ಬಳಿಕ ಸ್ಪಷ್ಟವಾಗಲಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.&lt;/p&gt;&lt;h2&gt;ಮರಿ ಆನೆ ರಕ್ಷಣೆ&lt;/h2&gt;&lt;p&gt;ಮಧ್ಯರಾತ್ರಿ ತೋಟಕ್ಕೆ ಎಂಟ್ರಿಕೊಟ್ಟ ಹೆಣ್ಣಾನೆ ಕುಸಿದು ಬಿದ್ದು ಮೃತಪಟ್ತಿದೆ. ತಾಯಿ ಆನೆ ಜೊತೆ ಹೆಜ್ಜೆ ಹಾಕುತ್ತಾ ಬಂದಿದ್ದ ಮರಿ ಆನೆಯ ಮೂಕರೋಧನೆ ಹಲವರನ್ನು ಭಾವುಕರನ್ನಾಗಿಸಿದೆ. ತಾಯಿ ಕಳೆದುಕೊಂಡ ಮರಿ ಆನೆಯನ್ನು ಸ್ಥಳೀಯರು ಕಾಫಿ ಗಿಡಕ್ಕೆ ಕಟ್ಟಿ ಹಾಕಿ ರಕ್ಷಣೆ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಮರಿ ಆನೆಯನ್ನು ರಕ್ಷಿಸಿದ್ದಾರೆ.&lt;/p&gt;&lt;p&gt;ಗ್ರಾಮಗಳಿಗೆ, ತೋಟಗಳಿಗೆ ನುಗ್ಗುವ ಕಾಡಾನೆಗಳು ಹಲವು ಬಾರಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆಗಳಿವೆ. ಇನ್ನು ಕೆಸರು ತುಂಬಿದ ಕೆರೆಯಲ್ಲಿ ಸಿಲುಕಿ ಪರದಾಡಿದ ಘಟನೆಗಳೂ ಇವೆ. ಇತ್ತೀಚೆಗೆ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಕನ್ನಂಬಾಡಿಯಲ್ಲಿ ಕೆಸರು ತುಂಬಿದ ಕೆರೆಯಲ್ಲಿ ಸಿಲುಕಿದ ಆನೆ ತೀವ್ರವಾಗಿ ಪರದಾಡಿತ್ತು. ತಕ್ಕ ಸಮಯದಲ್ಲಿ ಅರಣ್ಯಾಧಿಕಾರಿಗಳು ಬರದೆ ಸ್ಥಳೀಯ ಆಕ್ರೋಶಕ್ಕೂ ಕಾರಣವಾಗಿತ್ತು. ಎರಡು ದಿನಗಳಿಂದ ಕೆರೆಯಲ್ಲಿ ಸಿಲುಕಿ ಆನೆ ಪರದಾಡಿತ್ತು. ಆಹಾರ ವಿಲ್ಲದ ಆನೆ ಅಸ್ವಸ್ಥಗೊಂಡ ಘಟನೆಯೂ ನಡೆದಿತ್ತು.&lt;/p&gt;&lt;p&gt;ಕೊಡಗಿನ ಹಲವೆಡೆ ಕಾಡಾನೆಗಳು ದಾಳಿ ಮಾಡಿದ ಹಲವು ಘಟನೆಗಳು ವರದಿಯಾಗಿದೆ. ಇತ್ತೀಚೆಗೆ ಕೊಡಗಿನ ಗಡಿ ಭಾಗ ಆನೆಚೌಕೂರಿನಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ಕಾಡಾನೆ ದಾಳಿ ಮಾಡಿತ್ತು. ಆನೆ ದಾಳಿ ಆಗುತ್ತಿದ್ದಂತೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಕೊಠಡಿಯೊಳಗೆ ಓಡಿ ಹೋಗಿ ಬಾಗಿಲು ಹಾಕಿದ ಘಟನೆ ನಡೆದಿತ್ತು.&lt;/p&gt;&lt;p&gt;&lt;/p&gt;]]></content:encoded>
            <category>kodagu</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/heart-wrenching-scene-baby-elephant-tries-to-wake-dead-mother-in-kodagu/articleshow-qakw796"/>
        </item>
        <item>
            <title><![CDATA[‘ಮೇಕೆದಾಟು ಸರಿಯಾದ ಪರಿಹಾರ’: ಕಾವೇರಿ ವಿವಾದದ ನಡುವೆ ಸಚಿವ ನರೇಂದ್ರಸ್ವಾಮಿ ಹೇಳಿಕೆ]]></title>
            <link>https://kannada.asianetnews.com/karnataka-districts/mekedatu-project-is-the-solution-to-cauvery-crisis-says-minister-narendra-swamy-gvd/articleshow-rzwbgue</link>
            <guid isPermaLink="true">https://kannada.asianetnews.com/karnataka-districts/mekedatu-project-is-the-solution-to-cauvery-crisis-says-minister-narendra-swamy-gvd/articleshow-rzwbgue</guid>
            <pubDate>Sat, 15 Aug 2026 16:27:07 +0530</pubDate>
            <description><![CDATA[&lt;p&gt;ಭಾರತ ಒಂದು ಒಕ್ಕೂಟದ ರಾಷ್ಟ್ರ, ಎಲ್ಲಾ ರಾಜ್ಯಗಳು ಎಲ್ಲ ಪರಿಸ್ಥಿತಿಯನ್ನು ಹಂಚಿಕೊಳ್ಳಬೇಕಾಗಿದೆ. ಈಗ ಸಿಡಬ್ಲ್ಯೂಆರ್ ಸಿ ಮತ್ತು ಸಿಡಬ್ಲ್ಯೂಎಂಎ ನೀಡಿರುವ ಆದೇಶವನ್ನು ನಾವು ಪಾಲಿಸಬೇಕಲ್ವಾ. ಅದರ ನಡುವೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02h2e7vv4qq9wqsewexmgdg,imgname-bj-j-1786791409915.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.15):&lt;/strong&gt; ಭಾರತ ಒಂದು ಒಕ್ಕೂಟದ ರಾಷ್ಟ್ರ, ಎಲ್ಲಾ ರಾಜ್ಯಗಳು ಎಲ್ಲ ಪರಿಸ್ಥಿತಿಯನ್ನು ಹಂಚಿಕೊಳ್ಳಬೇಕಾಗಿದೆ. ಈಗ ಸಿಡಬ್ಲ್ಯೂಆರ್ ಸಿ ಮತ್ತು ಸಿಡಬ್ಲ್ಯೂಎಂಎ ನೀಡಿರುವ ಆದೇಶವನ್ನು ನಾವು ಪಾಲಿಸಬೇಕಲ್ವಾ. ಅದರ ನಡುವೆ ನಾವು ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವೆ, ತಮಿಳುನಾಡು ಕೂಡ ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಸೋಮವಾರ ಅದು ವಿಚಾರಣೆಗೆ ಬರುತ್ತಿದ್ದು, ಈ ಆದೇಶವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದು ಕೃಷಿ ಸಚಿವ ಹಾಗೂ ಕೊಡಗು ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೇಳಿದ್ದಾರೆ.&lt;/p&gt;&lt;p&gt;ಕಾಲುವೆಗಳ ಮೂಲಕ ರೈತರಿಗೆ ನೀರು ಕೊಡದೆ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಪಕ್ಕದ ರಾಜ್ಯದ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ನಾವು ಒಂದು ತೀರ್ಮಾನ ಮಾಡಬೇಕಾಗುತ್ತದೆ. ಸೋಮವಾರ ಬರುವ ತೀರ್ಮಾನದ ಮೇಲೆ ನಾವು ಒಂದು ನಿರ್ಧಾರಕ್ಕೆ ಬರುತ್ತೇವೆ. ಅಲ್ಲಿಯವರೆಗೆ ನಾವು ಈ ಚಳವಳಿ, ವಿರೋಧದ ವಿಚಾರದಲ್ಲಿ ಮಾತನಾಡಲಾಗಲ್ಲ ಎಂದಿದ್ದಾರೆ. ಪಕ್ಕದ ರಾಜ್ಯದ ಮೇಲೆ ಕರುಣೆ ತೋರಿಸುತ್ತಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಇದನ್ನು ತಪ್ಪು ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ, ನಾವು ಸಮವಾಗಿ ಈ ವಿಚಾರ ಹಂಚಿಕೊಳ್ಳಬೇಕಾಗಿದೆ.&lt;/p&gt;&lt;p&gt;ಇದಾದ ಮೇಲೆ ಮೇಕೆದಾಟು ಯೋಜನೆ ಇದೆ, ಮೇಕೆದಾಟು ನಿರ್ಮಾಣಕ್ಕೆ ಇದ್ದ ಎಲ್ಲಾ ಅಡೆತಡೆ ನಿವಾರಣೆ ಆಗಿವೆ. ಈಗ ಅದನ್ನು ಆರಂಭಿಸುವ ಸಂದರ್ಭದಲ್ಲಿ ಕೆಳಗಿನ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ನಿಭಾಯಿಸಬೇಕಾಗಿದೆ. ಕೆಲವು ಸಂದರ್ಭದಲ್ಲಿ 500 ರಿಂದ 600 ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತದೆ. ಈ ಸಂಕಷ್ಟ ಬಗೆಹರಿಸಲು ಮೇಕೆದಾಟು ಸರಿಯಾದ ಪರಿಹಾರ. ನ್ಯಾಯಾಲಯ ಏನು ತೀರ್ಮಾನ ನೀಡುತ್ತದೆ. ಅದನ್ನು ತಾಳ್ಮೆ, ಜಾಣ್ಮೆಯಿಂದ ಇದನ್ನು ಪರಿಹರಿಸಬೇಕಾಗಿದೆ ಎಂದು ಮಡಿಕೇರಿಯಲ್ಲಿ ಕೊಡಗು ಉಸ್ತುವಾರಿ, ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ. ಇನ್ನು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಹಾಗೂ ಉಸ್ತುವಾರಿಯಿಂದ ವಿನಾಯಿತಿ ಕೊಡುವಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಚಿವ ಜಮೀರ್ ಅಹಮ್ಮದ್ ಅವರನ್ನು ಕೃಷಿ ಸಚಿವ ನರೇಂದ್ರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;p&gt;ಆ ರೀತಿ ಹೇಳಿರುವುದಕ್ಕೆ ಸಾಧ್ಯವೇ ಇಲ್ಲ ಎಂದ ನರೇಂದ್ರಸ್ವಾಮಿ, ಸದನದಲ್ಲಿ ನಾನು ಇದ್ದೇ ನನ್ನ ಗಮನಕ್ಕೆ ಅದು ಬಂದಿಲ್ಲ. ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರಬಹುದೇನೋ ಅದರ ಬಗ್ಗೆ ನನಗೆ ಅರಿವಿಲ್ಲ ಎಂದು ಮಡಿಕೇರಿಯಲ್ಲಿ ಸಚಿವ ನರೇಂದ್ರ ಸ್ವಾಮಿ ಹೇಳಿದರು. ಉಸ್ತುವಾರಿ ಜಿಲ್ಲೆ ಹಂಚಿಕೆ ಮಾಡಿದಾಗ ಅವರು ಇರಲಿಲ್ಲ. ಸದನ ಮುಗಿಸಿ ಜಮೀರ್ ಅವರು ಹೋಗಿದ್ದರು. ಅವರಿಗೆ ಜಿಲ್ಲಾ ಉಸ್ತುವಾರಿ ಜಮೀರ್ ಅವರೇ ಕೇಳಿದ್ದರೋ, ಇಲ್ಲ ಸಿಎಂ ಅವರೇ ಕೊಟ್ಟಿದ್ದರೋ ಗೊತ್ತಿಲ್ಲ. ರಾಜ್ಯದಲ್ಲಿ 31 ಜಿಲ್ಲೆಗಳಿವೆ ನಾವು 34 ಜನರು ಇದ್ದೇವೆ. ಇನ್ನೂ ಮೂರು ಜಿಲ್ಲೆಗಳ ಕೊರತೆ ಇರುತ್ತದೆ ಎಂದು ಮಡಿಕೇರಿಯಲ್ಲಿ ಸಚಿವ ನರೇಂದ್ರ ಸ್ವಾಮಿ ಹೇಳಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mekedatu-project-is-the-solution-to-cauvery-crisis-says-minister-narendra-swamy-gvd/articleshow-rzwbgue"/>
        </item>
        <item>
            <title><![CDATA[‘ನಮ್ಮದೇ ಸರ್ಕಾರ ಅಂತ ಕಾನೂನು ದುರ್ಬಳಕೆ ಮಾಡೋಕೆ ಆಗಲ್ಲ’: RSS ವಿವಾದದಲ್ಲಿ ಡಿಕೆಶಿ ಸ್ಪಷ್ಟನೆ]]></title>
            <link>https://kannada.asianetnews.com/karnataka-districts/cm-dk-shivakumar-responds-to-rss-row-everyone-must-follow-the-law-gvd/articleshow-ss8oxly</link>
            <guid isPermaLink="true">https://kannada.asianetnews.com/karnataka-districts/cm-dk-shivakumar-responds-to-rss-row-everyone-must-follow-the-law-gvd/articleshow-ss8oxly</guid>
            <pubDate>Sun, 16 Aug 2026 20:06:54 +0530</pubDate>
            <description><![CDATA[&lt;p&gt;ಆರ್ ಎಸ್ ಎಸ್ ಹಿಂದೆಯೂ ನೋಂದಣಿಯಾಗಿಲ್ಲ ಮುಂದೆಯೂ ನೋಂದಣಿ ಆಗಲ್ಲ ಎಂದಿರುವ ಆರ್ಎಸ್ಎಸ್ ರಾಷ್ಟ್ರೀಯ ನಾಯಕ ಸಂತೋಷ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತಣ್ಣಗೆ ತಿರುಗೇಟು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01ea4f7ctga93wq6xyt2m29,imgname-----------------------2026-08-15t061905.141-1786754961894.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.16): &lt;/strong&gt;ಸರ್ಕಾರಿ ಜಾಗ ಹಾಗೂ ಮೈದಾನಗಳನ್ನು ಬಳಸಿಕೊಳ್ಳಲು ಅನುಮತಿ ಪಡೆಯಬೇಕು ಎಂಬ ವಿಧೇಯ ಮಂಡಿಸಿರುವ ವಿಚಾರದಲ್ಲಿ ಆರ್ ಎಸ್ ಎಸ್ ಹಿಂದೆಯೂ ನೋಂದಣಿಯಾಗಿಲ್ಲ ಮುಂದೆಯೂ ನೋಂದಣಿ ಆಗಲ್ಲ ಎಂದಿರುವ ಆರ್ಎಸ್ಎಸ್ ರಾಷ್ಟ್ರೀಯ ನಾಯಕ ಸಂತೋಷ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತಣ್ಣಗೆ ತಿರುಗೇಟು ನೀಡಿದ್ದಾರೆ. ಯಾರನ್ನೂ ನಾವು ಮನ ನೋಯಿಸುವುದಕ್ಕೆ ಈ ಕಾನೂನು ಮಾಡುತ್ತಿಲ್ಲ. ಕೋರ್ಟ್ ಆದೇಶಗಳನ್ನು ಪಾಲಿಸಿ ಕಾನೂನು ಮಾಡುತ್ತಿದ್ದೇವೆ. ಕೋರ್ಟಿನ ಕಾನೂನಿಗೆ ಗೌರವ ಕೊಡಬೇಕಲ್ವಾ?. ಆದ್ದರಿಂದ ಇದನ್ನು ಎಲ್ಲರೂ ಪಾಲಿಸಲೇಬೇಕು ಎಂದಿದ್ದಾರೆ.&lt;/p&gt;&lt;p&gt;ನಾವು ಫ್ರೀಡಂ ಹಬ್ಬ ಮಾಡಿದೆವು, ಆಗಲೂ ನಾವು ಪರ್ಮಿಷನ್ ತೆಗೆದುಕೊಂಡೇ ಮಾಡಿದ್ದೇವೆ. ಸಚಿವ ಕೃಷ್ಣಭೈರೇಗೌಡರು ಪರ್ಮಿಷನ್ ತೆಗೆದುಕೊಂಡು ಫ್ರೀಡಂ ಹಬ್ಬ ಮಾಡಿದರು. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭ ಹೆಲಿಪ್ಯಾಡ್ನಲ್ಲಿಯೇ ಮಾಧ್ಯಮಗಳೊಂದಿಗೆ ಮಾತನಾಡಿದರು. ನಾವು ಯಾರನ್ನೂ ಗುರಿಯಾಗಿಸಿಕೊಂಡು ಈ ಕಾನೂನು ಮಾಡುತ್ತಿಲ್ಲ. ಹೀಗಾಗಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿದಂತೆ ಯಾವುದೇ ಸಂಘಟನೆ ನೋವು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದರು.&lt;/p&gt;&lt;p&gt;ನಮ್ಮ ಪಕ್ಷದಿಂದ ಭಾರತ್ ಜೋಡೋ ಕಾರ್ಯಕ್ರಮ ಮಾಡಿದೆವು. ಆಗ ರಾಹುಲ್ ಗಾಂಧಿಯವರು, ಖರ್ಗೆ ಸಾಹೇಬರು ಬಂದಿದ್ದರು. ಈ ವೇಳೆ ಫ್ರೀಡಂ ಪಾರ್ಕ್ ನಿಂದ ರ್ಯಾಲಿ ಮಾಡಲು ಅವಕಾಶ ಇರಲಿಲ್ಲ, ಕೋರ್ಟಿನಿಂದ ಅನುಮತಿ ಪಡೆಯಬೇಕಾಗಿತ್ತು. ನಾವು ರಾಹುಲ್ ಗಾಂಧಿಜಿಗೆ ಹಾಗೂ ಖರ್ಗೆಯವರಿಗೆ ಹೇಳಿ ಱಲಿ ಸಾಧ್ಯವಿಲ್ಲ ಎಂದು ಮನಪರಿವರ್ತನೆ ಮಾಡಿದೆವು. ನಮ್ಮದೇ ಸರ್ಕಾರ ಅಂತ ನಾವು ಕಾನೂನು ದುರ್ಬಳಕೆ ಮಾಡಿಕೊಳ್ಳಲು ಆಗಲ್ಲ ಎಂದರು. ಇನ್ನು ಚರಕ ಅಥವಾ ಉಪ್ಪಿನ ಸತ್ಯಾಗ್ರಹದಿಂದಲೇ ಸ್ವಾತಂತ್ರ್ಯ ಬಂದಿಲ್ಲ ಎಂದು ಸಂತೋಷ್ ಅವರು ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್ ಅವರು ಸಂತೋಷ್ ಅವರು ಹಿರಿಯರಿದ್ದಾರೆ, ನಾವು ಅವರ ಮಾತಿಗೂ ಗೌರವ ಕೊಡೋಣ. ಆದರೆ ಮೊದಲಿನಿಂದಲೂ ಇರುವ ಕಾನೂನಿಗೆ ಗೌರವ ಕೊಡೋಣ, ಆ ಮೂಲಕ ನೀವು ಕಾನೂನು ಪಾಲಿಸಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚ್ಯವಾಗಿ ಹೇಳಿದರು.&lt;/p&gt;&lt;p&gt;ಇನ್ನು ಚಾಮರಾಜನಗರದ ಹನೂರು ಅರಣ್ಯ ಪ್ರದೇಶದಲ್ಲಿ ನಡೆದಿರುವ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಕರಣದಲ್ಲಿ ಮೃತಪಟ್ಟವರು ಬೇಟೆಗೆ ಹೋಗಿದ್ದರು ಎನ್ನುವುದು ಬೆಳಿಗ್ಗೆ ನನ್ನ ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಎನ್ಕೌಂಟರ್ ಆಗಿರುವವರು ಬೇಟೆಗಾರರು, ಅವರ ಬಳಿ, ಕೋವಿ ಮಾಂಸ ದೊರೆತ್ತಿವೆ ಎಂದರೆ, ಅತ್ತ ಸಚಿವ ಪುಟ್ಟರಂಗಶೆಟ್ಟಿ ಅವರು ಮಾತ್ರ ಅವರು ದನ ಮೇಯಿಸಲು ಹೋದವರು ಎನ್ನುತ್ತಿದ್ದಾರೆ.&lt;/p&gt;&lt;p&gt;ಸಚಿವರ ನಡುವೆಯೇ ಗೊಂದಲಗಳಿವೆಯಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೇಟೆಗಾರರು ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಎಲ್ಲಾ ವಿಚಾರ ಎಲ್ಲರಿಗೂ ತಿಳಿಸಲು ಆಗಲ್ಲ. ನನಗೂ ಬೆಳಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಅವರ ಬಳಿ ಇದ್ದ ಬಂದೂಕು ಹಾಗೂ ಎರಡು ಚೀಲ ಮಾಂಸ ವಶಪಡಿಸಿಕೊಂಡಿದ್ದಾರೆ. ಒಬ್ಬ ಎಸ್ಕೇಪ್ ಆಗಿದ್ದು, ಮತ್ತಷ್ಟು ಮಾಹಿತಿ ಬರುವುದು ಇದೆ ಎಂದಿದ್ದಾರೆ. ಅರಣ್ಯ ಇಲಾಖೆಯವರ ಮೇಲೆ ಶೂಟ್ ಆಯಿತು ಹೀಗಾಗಿ ಅವರ ರಕ್ಷಣೆ ಅವರೂ ಶೂಟ್ ಮಾಡಿದಾರೆ ಎನ್ನುತ್ತಿದ್ದಾರೆ. ನೋಡೋಣ ಈಗಾಗಲೇ ಜೂಡಿಷಿಯಲ್ ತನಿಖೆ ಮಾಡಲು ಹೇಳಿದ್ದೇನೆ. ಮೃತಪಟ್ಟ ಮೂವರಿಗೂ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ. ಆದರೆ ಯಾವ ರೀತಿಯ ರೀತಿ ಪರಿಹಾರ ಕೊಡೊದು ಅಂತ ಮುಂದೆ ತೀರ್ಮಾನ ಮಾಡಿ ಹೇಳುತ್ತೇವೆ ಎಂದಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-dk-shivakumar-responds-to-rss-row-everyone-must-follow-the-law-gvd/articleshow-ss8oxly"/>
        </item>
        <item>
            <title><![CDATA[‘35 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ’ ಎಂದ ಸಿಎಂ ಡಿಕೆಶಿ: ಕೊಡಗಿನಲ್ಲಿ ಮಹತ್ವದ ಘೋಷಣೆಗಳೇನು?]]></title>
            <link>https://kannada.asianetnews.com/karnataka-districts/cm-dk-shivakumar-in-kodagu-my-35-year-struggle-has-finally-paid-off-gvd/articleshow-tltfg8y</link>
            <guid isPermaLink="true">https://kannada.asianetnews.com/karnataka-districts/cm-dk-shivakumar-in-kodagu-my-35-year-struggle-has-finally-paid-off-gvd/articleshow-tltfg8y</guid>
            <pubDate>Sun, 16 Aug 2026 19:52:28 +0530</pubDate>
            <description><![CDATA[&lt;p&gt;ನನ್ನ 35 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ, ನಾನು ಪ್ರಾರ್ಥನೆ ಸಲ್ಲಿಸಿದ್ದೆ ಫಲ ಸಿಕ್ಕಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್ ತಾವು ಸಿಎಂ ಆಗಿರುವುದಕ್ಕೆ ಮಾರ್ಮಿಕವಾಗಿ ನುಡಿದಿದ್ದಾರೆ. ನಮ್ಮ ನೀರು ನಮ್ಮ ಹಕ್ಕು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05errrg29szxe1sdj2fwmnr,imgname-vvjhv-1786889659152.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.16): &lt;/strong&gt;ನನ್ನ 35 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ, ನಾನು ಪ್ರಾರ್ಥನೆ ಸಲ್ಲಿಸಿದ್ದೆ ಫಲ ಸಿಕ್ಕಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್ ತಾವು ಸಿಎಂ ಆಗಿರುವುದಕ್ಕೆ ಮಾರ್ಮಿಕವಾಗಿ ನುಡಿದಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಹೋರಾಟಕ್ಕೂ ತಲಕಾವೇರಿಗೆ ಭೇಟಿ ನೀಡಿದ್ದೆ. ನನ್ನ ಪ್ರಾರ್ಥನೆಗೆ ನನಗೆ ಫಲಸಿಕ್ಕಿದೆ ಎಂದರು. ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಸಿಎಂ ಅಲ್ಲಿ ವಿವಿಧ ವಿಶೇಷ ಪೂಜೆಗಳ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೆರೆ, ಜಲಾಶಯಗಳು ಇನ್ನೂ ತುಂಬಿಲ್ಲ.&lt;/p&gt;&lt;p&gt;ಹೆಚ್ಚು ಕಡಿಮೆ ಆದರೆ ಡ್ಯಾಂ ನಲ್ಲಿ ಈಗ ಇರುವ ನೀರನ್ನು ಬೇರೆಯವರಿಗೆ ಕೊಡಬೇಕಾಗುತ್ತದೆ. ಅದಕ್ಕೆ ಕಾನೂನನ್ನು ಪಾಲಿಸಬೇಕು ರೈತರ ಹಿತವನ್ನು ಕಾಪಾಡಬೇಕು ಎನ್ನುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ಮೊರೆ ಹೋಗಿದ್ದೇವೆ, ನಾವು ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ್ದೇವೆ. ಅಲ್ಲಿ ನಮ್ಮ ಪರವಾಗಿ ತೀರ್ಪು ಬರುವ ಸಾಧ್ಯತೆ ಇದೆ ಎಂದರು. ಆದರೆ ರಾಜ್ಯಕ್ಕೆ ಇನ್ನು ವರುಣ ಕೃಪೆ ತೋರಬೇಕಾಗಿದೆ. ಅದಕ್ಕಾಗಿ ಇನ್ನಷ್ಟು ಪೂಜೆ ಪ್ರಾರ್ಥನೆ ಸಲ್ಲಿಸಲು ಇಲ್ಲಿನ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.&lt;/p&gt;&lt;p&gt;ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿದ್ದು ಅದರ ಪರಿಣಾಮವಾಗಿ ಜಲಾಶಯಗಳಿಗೆ ಒಂದಿಷ್ಟು ನೀರು ಬಂದಿದೆ. ಆದರೆ ಕೊಡಗಿನಲ್ಲಿ ಸಾಕಷ್ಟು ಹಾನಿಯಾಗಿದೆ. ಇದನ್ನು ಪರಿಶೀಲಿಸಿ ಸೂಕ್ತ ಪರಿಹಾರ ಘೋಷಿಸಲಾಗುವುದು ಎಂದು ಹೇಳಿದ್ದಾರೆ. ಕೊಡಗಿಗೆ ಸಿಎಂ ಆದ ಬಳಿಕ ಮೊದಲ ಬಾರಿಗೆ ಬಂದಿದ್ದೇನೆ. ರಾಜ್ಯದ ಜಲಾಶಯಗಳು ಭರ್ತಿಯಾಗಲಿ ಎಂದು ಕೊಡಗಿನ ದೈವ ಭಗಂಡೇಶ್ವರನಿಗೆ ಪೂಜೆ, ಪ್ರಾಥ೯ನೆ ಸಲ್ಲಿಸಿದ್ದೇನೆ. ಕೊಡಗಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವರದಿ ಸಂಗ್ರಹಿಸಿ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವೆ ಎಂದಿದ್ದಾರೆ. ಈಗಷ್ಟೇ ಮುಖ್ಯಮಂತ್ರಿಯಾಗಿ ಕಣ್ ಬಿಡ್ತಾ ಇದ್ದೇನೆ. ಮುಂದಿನ ದಿನಗಳಲ್ಲಿ ಕೊಡಗಿಗೆ ವಿಶೇಷ ಪ್ಯಾಕೇಜ್ ಬಗ್ಗೆ ಗಮನ ನೀಡುವೆ ಎಂದಿದ್ದಾರೆ.&lt;/p&gt;&lt;p&gt;ಡಿಸೆಂಬರ್ ಒಳಗೆ ಎಲ್ಲಾ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಡಿಕೇರಿಯಲ್ಲಿ ಹೇಳಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಅವರು ಡಿಸೆಂಬರ್ ಒಳಗೆ ಎಲ್ಲಾ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಚುನಾವಣೆ ಮುಗಿಸುತ್ತೇವೆ. ನೀವೆಲ್ಲ ಕಾರ್ಯಕರ್ತರಿಗೆ ಅಧಿಕಾರ ಕೊಡಬೇಕು. ಆ ಮೂಲಕ ಎಲ್ಲ ಕೆಲಸ ಕಾರ್ಯಗಳಿಗೆ ವೇಗ ನೀಡಬೇಕು.&lt;/p&gt;&lt;p&gt;ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಭಾರತ್ ಜೋಡೋ ಯುವ ಘಟಕ ನಿರ್ಮಾಣ ಆಗಲಿದೆ. ಪ್ರತೀ ಪಂಚಾಯಿತಿಗೆ 10 ಲಕ್ಷ ಅನುದಾನ ನೀಡಲಿದ್ದೇವೆ. ಇದು ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಇದೇ ವೇಳೆ ಕೊಡಗು ಉಸ್ತುವಾರಿ ಸಚಿವ ನರೇಂದ್ರಸ್ವಾಮಿ, ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಇದ್ದರು. ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಡಿಕೇರಿಗೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬೃಹತ್ ಹೂವಿನ ಹಾರ ಹಾಕುವ ಜೊತೆಗೆ ಹೂವಿನ ಮಳೆಗರೆಯಲಾಯಿತು.&lt;/p&gt;&lt;p&gt;ನೂರಾರು ಕಾರ್ಯಕರ್ತರು ಚಂಡೆ ವಾದ್ಯ ಗೊಂಬೆ ಕುಣಿತದ ಮೂಲಕ ಮೂಲಕ ಅದ್ದೂರಿ ಸ್ವಾಗತ ನೀಡಿದರು. ಈ ವೇಳೆಯೂ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಈ ವೇಳೆ ಕೊಡಗಿಗೆ ಬೃಹತ್ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು. ಹಿಂದೆ ನಾನು ಕೊಡಗಿಗೆ ಬಂದಿದ್ದೆ, ಎರಡು ಕ್ಷೇತ್ರಗಳಲ್ಲಿ ಇಬ್ಬರು ಗೆದ್ದು ಶಾಸಕರಾದರು. ಜಿಲ್ಲೆಯ ಜನರು ಆಶೀರ್ವದಿಸಿ ಇಬ್ಬರು ಶಾಸಕರಾದರು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ. ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಮುಂದೆಯೂ ಸಿಎಂ ಆಗಿ ಜಿಲ್ಲೆಗೆ ದೊಡ್ಡ ಯೋಜನೆ ಕೊಡುವುದಾಗಿ ಭರವಸೆ ನೀಡಿದರು.&lt;/p&gt;]]></content:encoded>
            <category>kodagu</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-dk-shivakumar-in-kodagu-my-35-year-struggle-has-finally-paid-off-gvd/articleshow-tltfg8y"/>
        </item>
        <item>
            <title><![CDATA[ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್: ಬೆಂಗಳೂರು-ವಿರಾಜಪೇಟೆ-ಕಣ್ಣೂರು ನಡುವೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೇವೆ!]]></title>
            <link>https://kannada.asianetnews.com/state/ksrtc-good-news-bengaluru-to-kannur-non-ac-sleeper-bus-service-timings-ticket-fare-khs/articleshow-yluymkb</link>
            <guid isPermaLink="true">https://kannada.asianetnews.com/state/ksrtc-good-news-bengaluru-to-kannur-non-ac-sleeper-bus-service-timings-ticket-fare-khs/articleshow-yluymkb</guid>
            <pubDate>Tue, 04 Aug 2026 17:03:14 +0530</pubDate>
            <description><![CDATA[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆಗಸ್ಟ್ 07, 2026 ರಿಂದ ಆರಂಭಿಸುತ್ತಿದೆ. ಈ ಬಸ್ ಮೈಸೂರು, ವಿರಾಜಪೇಟೆ ಮಾರ್ಗವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಆರಾಮದಾಯಕ ಪ್ರಯಾಣದ ಅವಕಾಶವನ್ನು ಒದಗಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz68nsmc69ff7hp43pg0f55z,imgname-ksrtc-bengaluru-kannur-1785843082892.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.04): ಕ&lt;/strong&gt;ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ಪ್ರಮುಖ ಅಂತಾರಾಜ್ಯ ಮಾರ್ಗದಲ್ಲಿ ಹೊಸ ಬಸ್ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದ ಕೇರಳದ ಪ್ರಸಿದ್ಧ ನಗರವಾದ ಕಣ್ಣೂರಿಗೆ (Kannur) ಹೊಸ 'ನಾನ್ ಎ.ಸಿ ಸ್ಲೀಪರ್' (Non-AC Sleeper) ಬಸ್ ಕಾರ್ಯಾಚರಣೆಯನ್ನು 2026ರ ಆಗಸ್ಟ್ 07 ರಿಂದ ಆರಂಭಿಸಲು ಸಾರಿಗೆ ನಿಗಮ ನಿರ್ಧರಿಸಿದೆ.&lt;/p&gt;&lt;p&gt;ಕೆಎಸ್&zwnj;ಆರ್&zwnj;ಟಿಸಿಯ ಬೆಂಗಳೂರು ಕೇಂದ್ರ ವಿಭಾಗದ ವತಿಯಿಂದ ಈ ನೂತನ ಸೇವೆಯನ್ನು ಒದಗಿಸಲಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಸುಖಕರ ಹಾಗೂ ಆರಾಮದಾಯಕ ಪ್ರಯಾಣ ಬಯಸುವ ಪ್ರಯಾಣಿಕರಿಗೆ ಇದು ಉತ್ತಮ ಅವಕಾಶವಾಗಿದೆ.&lt;/p&gt;&lt;h2&gt;&lt;strong&gt;ಬಸ್ ಸಂಚರಿಸುವ ಮಾರ್ಗ:&lt;/strong&gt;&lt;/h2&gt;&lt;p&gt;ಈ ನೂತನ ಸ್ಲೀಪರ್ ಬಸ್ ಬೆಂಗಳೂರಿನ ಮಡಿವಾಳದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಮಡಿವಾಳದಿಂದ ಹೊರಟು ಶಾಂತಿನಗರ ಬಸ್ ನಿಲ್ದಾಣ (TTMC), ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಕೆಂಗೇರಿ ಬಸ್ ನಿಲ್ದಾಣಗಳ ಮೂಲಕ ನಗರದ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುನ್ನಡೆಯಲಿದೆ. ತದನಂತರ ಮೈಸೂರು, ಹುಣಸೂರು, ಗೋಣಿಕೊಪ್ಪ, ವಿರಾಜಪೇಟೆ, ಇರಿಟ್ಟಿ ಮತ್ತು ತಲಶ್ಶೇರಿ (ತಲಚೇರಿ) ಮಾರ್ಗವಾಗಿ ಕಣ್ಣೂರು ತಲುಪಲಿದೆ. ಪ್ರಮುಖವಾಗಿ ಕೊಡಗು ಜಿಲ್ಲೆಯ ವಿರಾಜಪೇಟೆ ಹಾಗೂ ಕೇರಳದ ಗಡಿ ಭಾಗಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ, ಉದ್ಯೋಗಿಗಳಿಗೆ ಮತ್ತು ಪ್ರವಾಸಿಗರಿಗೆ ಈ ಬಸ್ ಸೇವೆ ಅತ್ಯಂತ ಅನುಕೂಲಕರವಾಗಲಿದೆ.&lt;/p&gt;&lt;h2&gt;&lt;strong&gt;ವೇಳಾಪಟ್ಟಿ ಮತ್ತು ಟಿಕೆಟ್ ದರದ ವಿವರಗಳು:&lt;/strong&gt;&lt;/h2&gt;&lt;p&gt;ಬೆಂಗಳೂರಿನಿಂದ ಕಣ್ಣೂರಿಗೆ ತೆರಳುವ ಪ್ರತಿಯೊಬ್ಬ ಪ್ರಯಾಣಿಕನಿಗೆ ಪ್ರಯಾಣ ದರವನ್ನು ರೂ. 850/- ಎಂದು ನಿಗದಿಪಡಿಸಲಾಗಿದೆ. ಮಾರ್ಗಮಧ್ಯದ ವಿವಿಧ ನಿಲ್ದಾಣಗಳ ನಿರ್ಗಮನ ಸಮಯ, ತಲುಪುವ ಸ್ಥಳ ಹಾಗೂ ಟಿಕೆಟ್ ದರದ ವಿವರ ಈ ಕೆಳಗಿನಂತಿದೆ:&lt;/p&gt;&lt;ul&gt; &lt;li&gt;&lt;strong&gt;ಮಡಿವಾಳ: &lt;/strong&gt;ರಾತ್ರಿ 8:36ಕ್ಕೆ ಹೊರಟು, ಬೆಳಗಿನ ಜಾವ 03:30ಗೆ ವಿರಾಜಪೇಟೆ ತಲುಪಲಿದೆ. (ಟಿಕೆಟ್ ದರ: ರೂ. 600)&lt;/li&gt; &lt;li&gt;&lt;strong&gt;ಶಾಂತಿನಗರ ಟಿಟಿಎಂಸಿ: &lt;/strong&gt;ರಾತ್ರಿ 9:16ಕ್ಕೆ ಹೊರಟು, ಬೆಳಗಿನ ಜಾವ 04:45ಗೆ ಇರಿಟ್ಟಿ ತಲುಪಲಿದೆ. (ಟಿಕೆಟ್ ದರ: ರೂ. 705)&lt;/li&gt; &lt;li&gt;&lt;strong&gt;ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ:&lt;/strong&gt; ರಾತ್ರಿ 10:00ಕ್ಕೆ ಹೊರಟು, ಬೆಳಗಿನ ಜಾವ 05:45ಗೆ ತಲಸ್ಸೇರಿ ತಲುಪಲಿದೆ. (ಟಿಕೆಟ್ ದರ: ರೂ. 805)&lt;/li&gt; &lt;li&gt;&lt;strong&gt;ಕೆಂಗೇರಿ ಟಿಟಿಎಂಸಿ: &lt;/strong&gt;ರಾತ್ರಿ 10:15ಕ್ಕೆ ಹೊರಟು, ಬೆಳಗಿನ ಜಾವ 06:30 AM ಗೆ ಅಂತಿಮ ನಿಲ್ದಾಣವಾದ ಕಣ್ಣೂರು ತಲುಪಲಿದೆ. (ಟಿಕೆಟ್ ದರ: ರೂ. 850)&lt;/li&gt;&lt;/ul&gt;&lt;p&gt;ಖಾಸಗಿ ಬಸ್&zwnj;ಗಳ ದುಬಾರಿ ಪ್ರಯಾಣ ದರಕ್ಕೆ ಹೋಲಿಸಿದರೆ ಕೆಎಸ್&zwnj;ಆರ್&zwnj;ಟಿಸಿ ಅತ್ಯಂತ ಕೈಗೆಟುಕುವ ದರದಲ್ಲಿ ಸುರಕ್ಷಿತ ಹಾಗೂ ಸುಖಕರ ಪ್ರಯಾಣವನ್ನು ಒದಗಿಸುತ್ತಿದೆ. ಸಾರ್ವಜನಿಕ ಪ್ರಯಾಣಿಕರು ಹಾಗೂ ಪ್ರವಾಸಿಗರು ಕೆಎಸ್&zwnj;ಆರ್&zwnj;ಟಿಸಿಯ ಅಧಿಕೃತ ವೆಬ್&zwnj;ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬೆಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>kodagu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/ksrtc-good-news-bengaluru-to-kannur-non-ac-sleeper-bus-service-timings-ticket-fare-khs/articleshow-yluymkb"/>
        </item>
    </channel>
</rss>
