<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Jul 2026 17:32:57 +0530</lastBuildDate>
        <atom:link href="https://kannada.asianetnews.com/rss/kitchen" rel="self" type="application/rss+xml"/>
        <item>
            <title><![CDATA['ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ' ಎಂಬ ಸೋಷಿಯಲ್ ಮೀಡಿಯಾ ಪಾಠ ಎಷ್ಟು ಸರಿ? ತಜ್ಞರು ಹೇಳೋದೇನು?]]></title>
            <link>https://kannada.asianetnews.com/health-life/is-the-social-media-trend-of-drinking-liters-of-water-every-morning-actually-healthy-and-what-experts-think/articleshow-0mmrmpl</link>
            <guid isPermaLink="true">https://kannada.asianetnews.com/health-life/is-the-social-media-trend-of-drinking-liters-of-water-every-morning-actually-healthy-and-what-experts-think/articleshow-0mmrmpl</guid>
            <pubDate>Fri, 17 Jul 2026 14:23:20 +0530</pubDate>
            <description><![CDATA[&lt;p&gt;ಸೋಶಿಯಲ್ ಮೀಡಿಯಾದಲ್ಲಿ ಕೆಲವರು &quot;ಬೆಳಗ್ಗೆ ನೀರು ಕುಡಿದರೆ ಕ್ಯಾನ್ಸರ್ ವಾಸಿಯಾಗುತ್ತದೆ, ಒಂದೇ ವಾರದಲ್ಲಿ 10 ಕೆಜಿ ತೂಕ ಇಳಿಯುತ್ತದೆ&quot; ಅಂತ ಏನೇನೋ ಹೇಳ್ತಾರೆ. ಆದರೆ, ಅದರಲ್ಲಿ ಸತ್ಯ ಎಷ್ಟು? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kh9659241e6zvnz9k891hh5y,imgname-drinking-water-1770908722244.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯೋದು ಮ್ಯಾಜಿಕ್ ಡ್ರಿಂಕಾ ಅಥವಾ ಬರಿ ಸೋಶಿಯಲ್ ಮೀಡಿಯಾ ಟ್ರೆಂಡಾ? ಇಲ್ಲಿದೆ ಫುಲ್ ಡಿಟೇಲ್ಸ್!&lt;/strong&gt;&lt;/p&gt;&lt;p&gt;Water Drinking Tips: ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಫೋನ್ ಚಾರ್ಜ್ ಮಾಡ್ತೀವೋ ಇಲ್ಲವೋ ಗೊತ್ತಿಲ್ಲ, ಆದರೆ ನಮ್ಮ ಬಾಡಿಯನ್ನು ಮಾತ್ರ 'ಹೈಡ್ರೇಟ್' ಮಾಡಲೇಬೇಕು ಅನ್ನೋ ಕ್ರೇಜ್ ಎಲ್ಲೆಡೆ ಶುರುವಾಗಿದೆ. ಇನ್ಸ್ಟಾಗ್ರಾಮ್ ರೀಲ್ಸ್ ಇರಲಿ, ವಾಟ್ಸಾಪ್ ಯುನಿವರ್ಸಿಟಿ ಇರಲಿ, &quot;ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ನಿಮ್ಮ ಆಯಸ್ಸು ನೂರು ವರ್ಷ&quot; ಅನ್ನೋ ಮಾತುಗಳು ಗಾಳಿಗಿಂತ ವೇಗವಾಗಿ ಹರಡುತ್ತಿವೆ. ಆದರೆ, ನಿಜಕ್ಕೂ ಈ 'ಜಲ ಚಿಕಿತ್ಸೆ' ನಮ್ಮ ದೇಹಕ್ಕೆ ಮಾಡುವ ಮ್ಯಾಜಿಕ್ ಏನು? ಅಥವಾ ಇದು ಕೇವಲ ಗಾಳಿ ಸುದ್ದಿಯೇ? ಈ ಬಗ್ಗೆ ವೈದ್ಯರು ಹೇಳೋ ಸೀಕ್ರೆಟ್ ಇಲ್ಲಿದೆ ನೋಡಿ!&lt;/p&gt;&lt;p&gt;ದೇಹವೆಂಬ ಇಂಜಿನ್ ಗೆ 'ವಾಟರ್ ಸರ್ವಿಸ್'!&lt;/p&gt;&lt;p&gt;ನೋಡಿ, ನಾವು ರಾತ್ರಿ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡ್ತೀವಿ. ಆ ಸಮಯದಲ್ಲಿ ನಮ್ಮ ದೇಹಕ್ಕೆ ಒಂದು ಹನಿ ನೀರು ಕೂಡ ಸಿಗೋದಿಲ್ಲ. ಅಂದ್ರೆ, ಬೆಳಗ್ಗೆ ಏಳುವಾಗ ನಮ್ಮ ಬಾಡಿ ಒಂದು ರೀತಿ 'ಡ್ರೈ' ಆಗಿರುತ್ತೆ. ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ನೀರು ಕುಡಿಯೋದು ಅಂದ್ರೆ, ಆರಿ ಹೋಗಿರೋ ಗಿಡಕ್ಕೆ ನೀರು ಸುರಿದಂತೆ! ಇದು ನಿಮ್ಮ ದೇಹಕ್ಕೆ ತಕ್ಷಣ ಚೈತನ್ಯ ಕೊಡುತ್ತೆ ಮತ್ತು ರಾತ್ರಿಯಿಡೀ ಮಲಗಿದ್ದ ನಿಮ್ಮ ಅಂಗಾಂಗಗಳಿಗೆ &quot;ಹೇ ಎದ್ದೇಳಿ, ಕೆಲಸ ಶುರು ಮಾಡೋಣ&quot; ಅಂತ ಅಲಾರಾಂ ಹೊಡೆದಂತೆ ಕೆಲಸ ಮಾಡುತ್ತೆ.&lt;/p&gt;&lt;h2&gt;ಜೀರ್ಣಕ್ರಿಯೆಗೆ ನೀರೇ ಬಾಸ್!&lt;/h2&gt;&lt;p&gt;ಹಲವರು ಬೆಳಗ್ಗೆ ಬಾತ್&zwnj;ರೂಮ್&zwnj;ನಲ್ಲಿ ಗಂಟೆಗಟ್ಟಲೆ ಕಷ್ಟಪಡೋದನ್ನ ನಾವು ನೋಡ್ತೀವಿ. ಅಂತಹವರಿಗೆ ಈ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯೋ ಅಭ್ಯಾಸ ಒಂದು ರೀತಿ 'ಲಬ್ರಿಕೆಂಟ್' ಇದ್ದಂತೆ. ಇದು ಕರುಳಿನ ಚಲನೆಯನ್ನು ಸುಗಮಗೊಳಿಸಿ, ಮಲಬದ್ಧತೆ ಅನ್ನೋ ವಿಲನ್&zwnj;ನನ್ನು ಕಿತ್ತೊಗೆಯಲು ಸಹಾಯ ಮಾಡುತ್ತೆ. ನಿಮ್ಮ ಹೊಟ್ಟೆ ಕ್ಲೀನ್ ಆಗಿದ್ರೆ, ಇಡೀ ದಿನ ನಿಮ್ಮ ಮೂಡ್ ಕೂಡ ಫ್ರೆಶ್ ಆಗಿರುತ್ತೆ ಅಲ್ವಾ?&lt;/p&gt;&lt;p&gt;ವೈರಲ್ ಸುಳ್ಳುಗಳಿಗೆ ಬೀಳಬೇಡಿ!&lt;/p&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ಕೆಲವರು &quot;ಬೆಳಗ್ಗೆ ನೀರು ಕುಡಿದರೆ ಕ್ಯಾನ್ಸರ್ ವಾಸಿಯಾಗುತ್ತದೆ, ಒಂದೇ ವಾರದಲ್ಲಿ 10 ಕೆಜಿ ತೂಕ ಇಳಿಯುತ್ತದೆ&quot; ಅಂತ ಏನೇನೋ ಹೇಳ್ತಾರೆ. ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಎಷ್ಟು ನಿಜವೋ, ಅದು ಎಲ್ಲಾ ರೋಗಗಳಿಗೂ 'ರಾಮಬಾಣ' ಅಲ್ಲ ಅನ್ನೋದು ಕೂಡ ಅಷ್ಟೇ ಸತ್ಯ. ಇದು ಕೇವಲ ಆರೋಗ್ಯಕರ ಜೀವನಶೈಲಿಯ ಒಂದು ಭಾಗವಷ್ಟೇ ಹೊರತು, ಇದೊಂದೇ ಮ್ಯಾಜಿಕ್ ಮಾಡೋದಿಲ್ಲ ಅಂತ ವೈದ್ಯರು ಎಚ್ಚರಿಸುತ್ತಾರೆ.&lt;/p&gt;&lt;h3&gt;ಯಾರಿಗೆ ಡೇಂಜರ್?&lt;/h3&gt;&lt;p&gt;ಎಲ್ಲರೂ ಲೋಟಗಟ್ಟಲೆ ನೀರು ಕುಡಿಯಬಾರದು! ಮುಖ್ಯವಾಗಿ ಕಿಡ್ನಿ ಸಮಸ್ಯೆ ಇರೋರು ಅಥವಾ ಹಾರ್ಟ್ ಪ್ರಾಬ್ಲಮ್ ಇರೋರು ವೈದ್ಯರನ್ನ ಕೇಳದೆ ನೀರು ಕುಡಿಯೋ ಸಾಹಸ ಮಾಡಬೇಡಿ. ಯಾಕಂದ್ರೆ, ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಜಾಸ್ತಿಯಾದ್ರೆ ಆರೋಗ್ಯಕ್ಕೆ ಅದು ಪೂರಕ ಆಗುವ ಬದಲು ಮಾರಕ ಆಗಬಹುದು!&lt;/p&gt;&lt;p&gt;ದಿನಚರಿ ಹೇಗಿರಲಿ?&lt;/p&gt;&lt;p&gt;ಬೆಳಗ್ಗೆ ಎದ್ದ ತಕ್ಷಣ 1 ಅಥವಾ 2 ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಅದಾದ ಮೇಲೆ ಒಂದು 20 ನಿಮಿಷ ವಾಕಿಂಗ್ ಅಥವಾ ವ್ಯಾಯಾಮ ಮಾಡಿ. ಆಮೇಲೆ ಒಂದು ಪೌಷ್ಟಿಕವಾದ ತಿಂಡಿ ತಿಂದ್ರೆ, ನೀವು ಆ ದಿನದ 'ಸೂಪರ್ ಸ್ಟಾರ್'!&lt;/p&gt;&lt;p&gt;ಒಟ್ಟಿನಲ್ಲಿ, ನೀರು ಕುಡಿಯೋದು ಒಳ್ಳೆಯ ಅಭ್ಯಾಸವೇ. ಆದರೆ ಅದನ್ನು 'ಫ್ಯಾಷನ್' ಅಥವಾ 'ಮ್ಯಾಜಿಕ್' ಅಂತ ಅಂದುಕೊಳ್ಳದೆ, ದೇಹದ ಅವಶ್ಯಕತೆ ಅಂತ ಭಾವಿಸಿ ಪಾಲಿಸೋದು ಜಾಣತನ. ಪ್ರತಿಯೊಬ್ಬರ ದೇಹವೂ ವಿಭಿನ್ನ. ಆದ್ದರಿಂದ ದೇಹದ ಅಗತ್ಯಕ್ಕೆ ತಕ್ಕಂತೆ ಬಾಯಾರಿಕೆ ಆದಾಗ ನೀರು ಕುಡಿಯುವುದು ಒಳ್ಳೆಯದು. ಸುಖಾಸುಮ್ಮನೇ ಲೀಟರ್ ಗಟ್ಟಲೇ ನೀರು ಕುಡಿಯುವುದು ಮುರ್ಖತನ ಎನ್ನಬಹುದು.&lt;/p&gt;&lt;p&gt;&lt;strong&gt;(ಸೂಚನೆ: ಯಾವುದೇ ಸೋಷಿಯಲ್ ಮೀಡಿಯಾ ಟಿಪ್ಸ್ ಅನುಸರಿಸುವ ಮೊದಲು ನೀವು ನಿಮ್ಮ ಕುಟುಂಬದ ವೈದ್ಯರ ಸಲಹೆ ಪಡೆಯವುದು ಉತ್ತಮ)&lt;/strong&gt;&lt;/p&gt;]]></content:encoded>
            <category>kitchen</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/is-the-social-media-trend-of-drinking-liters-of-water-every-morning-actually-healthy-and-what-experts-think/articleshow-0mmrmpl"/>
        </item>
        <item>
            <title><![CDATA[Evil Eye Removal: ದೃಷ್ಟಿ ತೆಗೆಯಲು ಮೆಣಸು, ಉಪ್ಪು ಸುಡೋದು ಯಾಕೆ? ಇದರ ಹಿಂದಿದೆ ಬಲವಾದ ಕಾರಣ!]]></title>
            <link>https://kannada.asianetnews.com/astrology/how-to-remove-the-nazar-evil-eye-using-salt-and-pepper/articleshow-3rm92ys</link>
            <guid isPermaLink="true">https://kannada.asianetnews.com/astrology/how-to-remove-the-nazar-evil-eye-using-salt-and-pepper/articleshow-3rm92ys</guid>
            <pubDate>Thu, 16 Jul 2026 15:08:11 +0530</pubDate>
            <description><![CDATA[&lt;p&gt;Drishti Dosha Removal: ದೃಷ್ಟಿ ತೆಗೆಯಲು ಉಪ್ಪು ಮತ್ತು ಮೆಣಸಿನಕಾಯಿ ಬಳಸುವ ಪದ್ಧತಿ ಕೇವಲ ಮೂಢನಂಬಿಕೆಯಲ್ಲ ಎಂದು ಹಲವರು ನಂಬುತ್ತಾರೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಯ ಹಿಂದೆ ಅಚ್ಚರಿಯ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxn4hvc2kq32a4sp2qdzfkgc,imgname-new-project--38--1784194592129.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಬ್ಬ ವ್ಯಕ್ತಿಗೆ ಇದ್ದಕ್ಕಿದ್ದಂತೆ ಆಯಾಸ, ಮನಸ್ಸಿಗೆ ಅಶಾಂತಿ, ಮನೆಯಲ್ಲಿ ನಿರಂತರ ಸಮಸ್ಯೆಗಳು ಅಥವಾ ಯಾವುದೇ ಕೆಲಸದಲ್ಲಿ ಅಡೆತಡೆಗಳು ಎದುರಾದಾಗ, ಅದಕ್ಕೆ 'ದೃಷ್ಟಿ ತಾಗಿದೆ' ಎಂದು ಹಲವರು ನಂಬುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ, ದೃಷ್ಟಿ ದೋಷ ನಿವಾರಿಸಲು ಉಪ್ಪು ಮತ್ತು ಮೆಣಸಿನಕಾಯಿ ಬಳಸುವ ಪದ್ಧತಿ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಆದರೆ, ಈ ಆಚರಣೆಯ ಹಿಂದಿನ ಆಧ್ಯಾತ್ಮಿಕ ಕಾರಣಗಳೇನು? ಯಾಕೆ ನಿರ್ದಿಷ್ಟವಾಗಿ ಉಪ್ಪು ಮತ್ತು ಮೆಣಸಿನಕಾಯಿಯನ್ನೇ ಬಳಸುತ್ತಾರೆ? ಹೆಚ್ಚಿನ ಜನರಿಗೆ ತಿಳಿಯದ ಕೆಲವು ಕುತೂಹಲಕಾರಿ ಸಂಗತಿಗಳನ್ನು ನೋಡೋಣ. ಪ್ರಾಚೀನ ಹಿಂದೂ ಸಂಪ್ರದಾಯಗಳಲ್ಲಿ, ಉಪ್ಪು ಕೇವಲ ಅಡುಗೆಯ ವಸ್ತುವಲ್ಲ. ಅದು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಿ ಹೀರಿಕೊಳ್ಳುವ ಗುಣ ಹೊಂದಿದೆ ಎಂದು ಪರಿಗಣಿಸಲಾಗಿದೆ.&lt;/p&gt;&lt;h2&gt;ಆಧ್ಯಾತ್ಮಿಕ ಗ್ರಂಥ ಹೇಳೋದೇನು?&lt;/h2&gt;&lt;p&gt;ಉಪ್ಪು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ.&lt;/p&gt;&lt;p&gt;ಇದು ಮಾನಸಿಕ ಒತ್ತಡ ಮತ್ತು ಕೆಟ್ಟ ಕಂಪನಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹಲವರು ಭಾವಿಸುತ್ತಾರೆ. &bull; ವಾಸ್ತು ಮತ್ತು ಪರಿಹಾರ ಕ್ರಮಗಳಲ್ಲಿ ಉಪ್ಪಿಗೆ ಪ್ರಮುಖ ಸ್ಥಾನವಿದೆ.&lt;/p&gt;&lt;p&gt;ಕೆಲವರು ಮನೆಯ ಮೂಲೆಗಳಲ್ಲಿ ಉಪ್ಪನ್ನು ಇಟ್ಟು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಈ ಕಾರಣಕ್ಕಾಗಿಯೇ, ದೃಷ್ಟಿ ತೆಗೆಯುವಾಗ ಕೈಯಲ್ಲಿ ಉಪ್ಪನ್ನು ಹಿಡಿದು ಸುತ್ತುವ ಪದ್ಧತಿ ಹುಟ್ಟಿಕೊಂಡಿತು ಎನ್ನಲಾಗುತ್ತದೆ.&lt;/p&gt;&lt;p&gt;ಹಸಿರು ಅಥವಾ ಒಣ ಕೆಂಪು ಮೆಣಸಿನಕಾಯಿಯನ್ನು ಅನೇಕ ಸಂಸ್ಕೃತಿಗಳಲ್ಲಿ ದುಷ್ಟ ಶಕ್ತಿಗಳನ್ನು ಓಡಿಸುವ ಸಂಕೇತವಾಗಿ ನೋಡಲಾಗುತ್ತದೆ. ಪ್ರಾಚೀನ ನಂಬಿಕೆಗಳ ಪ್ರಕಾರ ಮೆಣಸಿನಕಾಯಿಯ ಖಾರದ ಗುಣವು ನಕಾರಾತ್ಮಕ ಶಕ್ತಿಗಳನ್ನು ನಾಶಪಡಿಸುತ್ತದೆ.&lt;/p&gt;&lt;p&gt;ದೇಹದ ಸುತ್ತಲಿನ ಕೆಟ್ಟ ಕಂಪನಗಳನ್ನು ಹೊರಹಾಕುವ ಶಕ್ತಿ ಅದಕ್ಕಿದೆ ಎಂದು ನಂಬಲಾಗಿದೆ. &bull; ಕೆಲವರು ಏಳು ಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪನ್ನು ವ್ಯಕ್ತಿಯ ತಲೆಯ ಸುತ್ತಲೂ ನಿವಾಳಿಸಿ ಬೆಂಕಿಗೆ ಹಾಕುತ್ತಾರೆ. ಈ ಆಚರಣೆಯನ್ನು ಇಂದಿಗೂ ಭಾರತದ ಅನೇಕ ರಾಜ್ಯಗಳಲ್ಲಿ ಅನುಸರಿಸಲಾಗುತ್ತದೆ.&lt;/p&gt;&lt;h2&gt;ದೃಷ್ಟಿ ತೆಗೆಯುವ ಪದ್ಧತಿ ಹೇಗೆ ಹುಟ್ಟಿಕೊಂಡಿತು?&lt;/h2&gt;&lt;p&gt;ಮನುಷ್ಯರು ಬದುಕಲು ಪ್ರಾರಂಭಿಸಿದಾಗಿನಿಂದಲೂ 'ಕಣ್ಣು ದೃಷ್ಟಿ'ಯ ಬಗ್ಗೆ ನಂಬಿಕೆ ಪ್ರಪಂಚದ ಹಲವು ಭಾಗಗಳಲ್ಲಿ ಅಸ್ತಿತ್ವದಲ್ಲಿದೆ. ಪ್ರಾಚೀನ ಕಾಲದಲ್ಲಿ, ಹೆಚ್ಚು ಸಂಪತ್ತು ಹೊಂದಿದವರು, ಹೊಸದಾಗಿ ಮದುವೆಯಾದ ದಂಪತಿ, ನವಜಾತ ಶಿಶುಗಳು, ಹೊಸ ಮನೆ ಅಥವಾ ವಾಹನ ಖರೀದಿಸಿದವರಿಗೆ ಇತರರ ಅಸೂಯೆಯ ದೃಷ್ಟಿ ತಾಗಿ ತೊಂದರೆಯಾಗುತ್ತದೆ ಎಂದು ನಂಬಲಾಗಿತ್ತು. ಇದೇ ಕಾರಣಕ್ಕೆ ದೃಷ್ಟಿ ತೆಗೆಯುವ ಅನೇಕ ಆಚರಣೆಗಳು ಹುಟ್ಟಿಕೊಂಡವು&lt;/p&gt;&lt;p&gt;ಅನೇಕ ಅಂಗಡಿಗಳು ಮತ್ತು ಮನೆಗಳ ಬಾಗಿಲಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಕಟ್ಟಿರುವುದನ್ನು ನಾವು ನೋಡಿರುತ್ತೇವೆ. ದುಷ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ. ವ್ಯಾಪಾರದಲ್ಲಿ ಪ್ರಗತಿ ಸಿಗುತ್ತದೆ ಎಂದು ನಂಬಲಾಗಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಇದು ಹಲವು ಶತಮಾನಗಳಿಂದ ಜನರ ನಂಬಿಕೆಯಾಗಿ ಉಳಿದಿದೆ.&lt;/p&gt;&lt;h2&gt;ದೃಷ್ಟಿ ತೆಗೆಯುವಾಗ ಅದನ್ನು ಏಕೆ ಸುಡುತ್ತಾರೆ?&lt;/h2&gt;&lt;p&gt;ಉಪ್ಪು ಮತ್ತು ಮೆಣಸಿನಕಾಯಿಯನ್ನು ವ್ಯಕ್ತಿಯ ಸುತ್ತ ನಿವಾಳಿಸಿ ಬೆಂಕಿಗೆ ಹಾಕುವುದು ಒಂದು ಸಾಮಾನ್ಯ ಪದ್ಧತಿಯಾಗಿದೆ. ದೇಹದಲ್ಲಿರುವ ನಕಾರಾತ್ಮಕ ಶಕ್ತಿಯು ಬೆಂಕಿಯಿಂದ ನಾಶವಾಗುತ್ತದೆ ಎಂದು ನಂಬಲಾಗಿದೆ. ಬೆಂಕಿಯನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅನೇಕ ವೈದಿಕ ಆಚರಣೆಗಳಲ್ಲಿ ಅಗ್ನಿಗೆ ಪ್ರಮುಖ ಸ್ಥಾನ ನೀಡಲಾಗಿದೆ.&lt;/p&gt;&lt;p&gt;ಉಪ್ಪು ಮತ್ತು ಮೆಣಸಿನಕಾಯಿಯಿಂದ ದೃಷ್ಟಿ ತೆಗೆಯುವುದಕ್ಕೆ ನೇರವಾದ ವೈಜ್ಞಾನಿಕ ಪುರಾವೆಗಳು ಇನ್ನೂ ಸಾಬೀತಾಗಿಲ್ಲ. ಆದಾಗ್ಯೂ, ಮನಸ್ಸಿನ ಶಾಂತಿ ಮತ್ತು ನಂಬಿಕೆಯು ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಮನೋವೈಜ್ಞಾನಿಕ ಅಧ್ಯಯನಗಳು ಹೇಳುತ್ತವೆ. ಕೆಲವೊಮ್ಮೆ, ಇಂತಹ ಸಾಂಪ್ರದಾಯಿಕ ಆಚರಣೆಗಳು ಜನರಿಗೆ ಮಾನಸಿಕ ನೆಮ್ಮದಿ ಮತ್ತು ಸಕಾರಾತ್ಮಕ ಆಲೋಚನೆಗಳನ್ನು ನೀಡಬಹುದು.&lt;/p&gt;&lt;h2&gt;ತಲೆಮಾರುಗಳನ್ನು ದಾಟಿ ಮುಂದುವರಿದ ನಂಬಿಕೆ&lt;/h2&gt;&lt;p&gt;ದೃಷ್ಟಿ ತೆಗೆಯಲು ಉಪ್ಪು ಮತ್ತು ಮೆಣಸಿನಕಾಯಿ ಬಳಸುವ ಪದ್ಧತಿಯನ್ನು ಕೆಲವರು ಕೇವಲ ಮೂಢನಂಬಿಕೆ ಎಂದು ಪರಿಗಣಿಸಿದರೂ, ಅನೇಕ ಕುಟುಂಬಗಳಲ್ಲಿ ಇಂದಿಗೂ ಇದನ್ನು ಸಂಪ್ರದಾಯದ ಭಾಗವಾಗಿಯೇ ನೋಡಲಾಗುತ್ತದೆ. ವೈಜ್ಞಾನಿಕ ಪುರಾವೆಗಳು ಕಡಿಮೆ ಇದ್ದರೂ, ನಂಬಿಕೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳ ಮಿಶ್ರಣವಾಗಿ ಈ ಪದ್ಧತಿಯು ಶತಮಾನಗಳಿಂದ ಜನರ ಜೀವನದಲ್ಲಿ ಉಳಿದುಕೊಂಡಿದೆ. ವಿಶೇಷವಾಗಿ, 'ಕೆಟ್ಟದ್ದನ್ನು ತೆಗೆದುಹಾಕಿ ಒಳ್ಳೆಯದನ್ನು ಸ್ವಾಗತಿಸಬೇಕು' ಎಂಬ ಮನಸ್ಥಿತಿಯೇ ಈ ಆಚರಣೆಯ ಮೂಲ ಆಶಯವಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>kitchen</category>
            <dc:creator>Padmashree Bhat</dc:creator>
            <atom:link href="https://kannada.asianetnews.com/astrology/how-to-remove-the-nazar-evil-eye-using-salt-and-pepper/articleshow-3rm92ys"/>
        </item>
        <item>
            <title><![CDATA[ಕೊತ್ತಂಬರಿ ಸೊಪ್ಪು ಕಪ್ಪಾಗಲ್ಲ, ಕೊಳೆಯಲ್ಲ.. ವಾರಗಟ್ಟಲೆ ಫ್ರೆಶ್ ಆಗಿಡಲು ಅಲ್ಯೂಮಿನಿಯಂ ಫಾಯಿಲ್ ಬಳಸಿ]]></title>
            <link>https://kannada.asianetnews.com/gallery/life/5-simple-kitchen-hacks-to-keep-coriander-leaves-fresh-and-green-for-weeks-4za214x</link>
            <guid isPermaLink="true">https://kannada.asianetnews.com/gallery/life/5-simple-kitchen-hacks-to-keep-coriander-leaves-fresh-and-green-for-weeks-4za214x</guid>
            <pubDate>Thu, 16 Jul 2026 14:37:39 +0530</pubDate>
            <description><![CDATA[&lt;p&gt;How to store coriander leaves in Kannada: ಅಡುಗೆಯ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪು ತಂದ ಎರಡೇ ದಿನಕ್ಕೆ ಬಾಡಿ ಹೋಗುತ್ತದೆಯೇ? ಇನ್ಮುಂದೆ ಆ ಚಿಂತೆ ಬೇಡ! ಫ್ರೆಶ್ ಆಗಿಡಲು ಸಹಾಯ ಮಾಡುವ ಸರಳ ಕಿಚನ್ ಹ್ಯಾಕ್ಸ್ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxn2kp82tg6mkaxds5h1cr2r,imgname-thumbnail---2026-07-16t143204.019-1784192555266.jpg" type="image/jpeg" height="390" width="690"/>
            <content:encoded><![CDATA[&lt;p&gt;How to store coriander leaves in Kannada: ಅಡುಗೆಯ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪು ತಂದ ಎರಡೇ ದಿನಕ್ಕೆ ಬಾಡಿ ಹೋಗುತ್ತದೆಯೇ? ಇನ್ಮುಂದೆ ಆ ಚಿಂತೆ ಬೇಡ! ಫ್ರೆಶ್ ಆಗಿಡಲು ಸಹಾಯ ಮಾಡುವ ಸರಳ ಕಿಚನ್ ಹ್ಯಾಕ್ಸ್ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;&lt;strong&gt;5 ಸುಲಭ ಹ್ಯಾಕ್ಸ್&zwnj;&lt;/strong&gt;ಅಡುಗೆಯ ರುಚಿ ಮತ್ತು ಸುವಾಸನೆ ಹೆಚ್ಚಿಸಲು ಕೊತ್ತಂಬರಿ ಸೊಪ್ಪು ಅತ್ಯಗತ್ಯ. ಆದರೆ ಮಾರುಕಟ್ಟೆಯಿಂದ ತಂದ ಎರಡೇ ದಿನಕ್ಕೆ ಅದು ಕಪ್ಪಾಗುವುದು ಅಥವಾ ಕೊಳೆತು ಹೋಗುವುದು ಗೃಹಿಣಿಯರಿಗೆ ದೊಡ್ಡ ತಲೆನೋವು. ಹಾಗಾದರೆ ಕೊತ್ತಂಬರಿ ಸೊಪ್ಪನ್ನು ವಾರಗಳ ಕಾಲ ಫ್ರೆಶ್ ಆಗಿಡುವುದು ಹೇಗೆ? &amp;nbsp;ಕಿಚನ್ ಎಕ್ಸ್&zwnj;ಪರ್ಟ್ಸ್ ಸೂಚಿಸಿರುವ ಈ 5 ಸುಲಭ ಹ್ಯಾಕ್ಸ್&zwnj;ಗಳು ಇಲ್ಲಿವೆ.&lt;/p&gt;&lt;img&gt;&lt;p&gt;&lt;strong&gt;ಕೊತ್ತಂಬರಿ ಸೊಪ್ಪನ್ನು ಸ್ಟೋರ್ ಮಾಡಲು ಅನುಸರಿಸಬೇಕಾದ ಹಂತಗಳು&lt;/strong&gt;&lt;strong&gt;1. ಮೊದಲ ಹಂತ: ಸ್ವಚ್ಛಗೊಳಿಸುವಿಕೆ (Cleaning is Key)&lt;/strong&gt;ಮಾರುಕಟ್ಟೆಯಿಂದ ಸೊಪ್ಪನ್ನು ತಂದ ತಕ್ಷಣ ಹಾಗೆಯೇ ಫ್ರಿಡ್ಜ್&zwnj;ನಲ್ಲಿ ಇಡಬೇಡಿ. ಮೊದಲು ಅದರ ಕಟ್ಟು ಬಿಡಿಸಿ, ಅದರಲ್ಲಿರುವ ಹಳದಿ ಬಣ್ಣದ ಎಲೆಗಳು ಅಥವಾ ಕೊಳೆತ ಎಲೆಗಳನ್ನು ಆರಿಸಿ ತೆಗೆಯಿರಿ. ಒಂದು ಕೊಳೆತ ಎಲೆ ಇದ್ದರೂ ಅದು ಇಡೀ ಕಟ್ಟನ್ನು ಹಾಳು ಮಾಡುತ್ತದೆ. ನಂತರ ಅದರ ಬೇರುಗಳನ್ನು ಕತ್ತರಿಸಿ ತೆಗೆಯಿರಿ, ಏಕೆಂದರೆ ಬೇರುಗಳಲ್ಲಿ ಮಣ್ಣು ಮತ್ತು ಬ್ಯಾಕ್ಟೀರಿಯಾಗಳು ಇರುವ ಸಾಧ್ಯತೆ ಇರುತ್ತದೆ.&lt;/p&gt;&lt;img&gt;&lt;p&gt;&lt;strong&gt;2. ಟಿಶ್ಯೂ ಪೇಪರ್ ಮತ್ತು ಏರ್ ಟೈಟ್ ಬಾಕ್ಸ್ (Tissue Paper Hack)&lt;/strong&gt;ಸೊಪ್ಪನ್ನು ಚೆನ್ನಾಗಿ ತೊಳೆದು, ಒಂದು ಕಾಟನ್ ಬಟ್ಟೆಯ ಮೇಲೆ ಹರಡಿ ನೀರು ಪೂರ್ತಿ ಆರಲು ಬಿಡಿ (ಸೊಪ್ಪಿನಲ್ಲಿ ತೇವಾಂಶ ಇರಬಾರದು). ನಂತರ ಒಂದು ಪ್ಲಾಸ್ಟಿಕ್ ಬಾಕ್ಸ್&zwnj;ನ ತಳದಲ್ಲಿ ಟಿಶ್ಯೂ ಪೇಪರ್ ಹಾಸಿ, ಅದರ ಮೇಲೆ ಸೊಪ್ಪನ್ನು ಇಡಿ. ಮೇಲೆ ಮತ್ತೊಂದು ಟಿಶ್ಯೂ ಪೇಪರ್&zwnj;ನಿಂದ ಮುಚ್ಚಿ ಬಾಕ್ಸ್ ಕ್ಲೋಸ್ ಮಾಡಿ. ಈ ಟಿಶ್ಯೂ ಪೇಪರ್ ಹೆಚ್ಚುವರಿ ತೇವಾಂಶವನ್ನು ಹೀರಿಕೊಂಡು ಸೊಪ್ಪು ಕೊಳೆಯದಂತೆ ನೋಡಿಕೊಳ್ಳುತ್ತದೆ.&lt;/p&gt;&lt;img&gt;&lt;p&gt;&lt;strong&gt;3. ಹೂದಾನಿಯಂತೆ ನೀರಿನ ಲೋಟದಲ್ಲಿಡಿ (Glass of Water Method)&lt;/strong&gt;ಸೊಪ್ಪನ್ನು ತೊಳೆಯದೆ ದೀರ್ಘಕಾಲ ಇಡಲು ಇದು ಅತ್ಯುತ್ತಮ ವಿಧಾನ. ಒಂದು ಗಾಜಿನ ಲೋಟ ಅಥವಾ ಜಾರಿನಲ್ಲಿ ಸ್ವಲ್ಪ ನೀರು ತುಂಬಿಸಿ, ಕೊತ್ತಂಬರಿ ಸೊಪ್ಪಿನ ಕಾಂಡದ ಭಾಗ ಅಡಿಯಲ್ಲಿ ಇರುವಂತೆ (ಫ್ಲವರ್ ವಾಸ್&zwnj;ನಲ್ಲಿ ಹೂವು ಇಡುವಂತೆ) ಇಡಿ. ಮೇಲ್ಭಾಗವನ್ನು ಒಂದು ಪ್ಲಾಸ್ಟಿಕ್ ಕವರ್&zwnj;ನಿಂದ ಸಡಿಲವಾಗಿ ಮುಚ್ಚಿ ಫ್ರಿಡ್ಜ್&zwnj;ನಲ್ಲಿಡಿ. ಪ್ರತಿ ಎರಡು ದಿನಕ್ಕೊಮ್ಮೆ ನೀರು ಬದಲಿಸುತ್ತಿದ್ದರೆ ಸೊಪ್ಪು 10-15 ದಿನ ಫ್ರೆಶ್ ಆಗಿರುತ್ತದೆ.&lt;/p&gt;&lt;img&gt;&lt;p&gt;&lt;strong&gt;4. ಜಿಪ್ ಲಾಕ್ ಬ್ಯಾಗ್ ಮತ್ತು ಕಾಟನ್ ಬಟ್ಟೆ (Ziplock Bag Hack)&lt;/strong&gt;ನಿಮ್ಮ ಫ್ರಿಡ್ಜ್&zwnj;ನಲ್ಲಿ ಜಾಗ ಕಡಿಮೆ ಇದ್ದರೆ ಈ ವಿಧಾನ ಬಳಸಿ. ಸ್ವಚ್ಛಗೊಳಿಸಿದ ಮತ್ತು ಪೂರ್ತಿ ಒಣಗಿದ ಸೊಪ್ಪನ್ನು ಒಂದು ತೆಳುವಾದ ಹತ್ತಿ ಬಟ್ಟೆಯಲ್ಲಿ ಸುತ್ತಿ. ನಂತರ ಅದನ್ನು ಜಿಪ್ ಲಾಕ್ ಬ್ಯಾಗ್ ಒಳಗೆ ಇಟ್ಟು ಫ್ರಿಡ್ಜ್&zwnj;ನಲ್ಲಿಡಿ. ಕಾಟನ್ ಬಟ್ಟೆಯು ಗಾಳಿಯಾಡಲು ಬಿಡುವುದರಿಂದ ಸೊಪ್ಪು ಬಾಡುವುದಿಲ್ಲ.&lt;/p&gt;&lt;img&gt;&lt;p&gt;&lt;strong&gt;5. ಅಲ್ಯೂಮಿನಿಯಂ ಫಾಯಿಲ್ ಬಳಕೆ (Aluminum Foil Magic)&lt;/strong&gt;ಸೊಪ್ಪಿನ ನೈಸರ್ಗಿಕ ತೇವಾಂಶ ಹಾಗೆಯೇ ಇರಬೇಕೆಂದರೆ, ಅದನ್ನು ಸ್ವಚ್ಛಗೊಳಿಸಿ ಒಣಗಿಸಿದ ನಂತರ ಅಲ್ಯೂಮಿನಿಯಂ ಫಾಯಿಲ್&zwnj;ನಲ್ಲಿ ಹಾಕಿ ಸುತ್ತಿಡಿ. ಫಾಯಿಲ್ ಗಾಳಿಯನ್ನು ಸಂಪೂರ್ಣವಾಗಿ ತಡೆಯುವುದರಿಂದ ಎಲೆಗಳು ಕಪ್ಪಾಗುವುದಿಲ್ಲ ಮತ್ತು ಸುವಾಸನೆ ಕೂಡ ಹಾಗೆಯೇ ಉಳಿಯುತ್ತದೆ.&lt;/p&gt;]]></content:encoded>
            <category>kitchen</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/5-simple-kitchen-hacks-to-keep-coriander-leaves-fresh-and-green-for-weeks-4za214x"/>
        </item>
        <item>
            <title><![CDATA[ಇಷ್ಟು ದಿನ ಅಡುಗೆ ಮಾಡಿದ್ರು ಗೊತ್ತಿಲ್ಲದ ಸತ್ಯ ಇದು ! ಉಪ್ಪು ತರಕಾರಿ ನಂಟೇನು ?]]></title>
            <link>https://kannada.asianetnews.com/kitchen/why-do-vegetables-release-water-the-second-you-salt/articleshow-50f0d33</link>
            <guid isPermaLink="true">https://kannada.asianetnews.com/kitchen/why-do-vegetables-release-water-the-second-you-salt/articleshow-50f0d33</guid>
            <pubDate>Tue, 14 Jul 2026 19:08:45 +0530</pubDate>
            <description><![CDATA[&lt;p&gt;ಕಿಚನ್ ನಲ್ಲಿ ಪ್ರತಿ ದಿನ ನಾನಾ ಬಗೆಯ ಅಡುಗೆ ಮಾಡ್ತಿರ್ತೇವೆ. ಆದ್ರೆ ಎಷ್ಟೋ ವಿಷ್ಯ ನಮಗೆ ತಿಳಿದಿರೋದೇ ಇಲ್ಲ. ಎಣ್ಣೆ ಹಾಕಿ ತರಕಾರಿ ಫ್ರೈ ಮಾಡೋವಾಗ ಬರದ ನೀರು ಉಪ್ಪು ಹಾಕ್ತಿದ್ದಂತೆ ಏಕೆ ಬರುತ್ತೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxgdh28b9nj11y4v3vb5mxrc,imgname-cooking-tips-1784036231435.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋ ಮಾತಿದೆ. ಉಪ್ಪು ಹೆಚ್ಚಾದ್ರೂ ಕಷ್ಟ, ಕಡಿಮೆ ಆದ್ರೂ ಕಷ್ಟ. ರುಚಿಗೆ ತಕ್ಕಷ್ಟು ಉಪ್ಪನ್ನು ಪ್ರತಿಯೊಂದು ಪದಾರ್ಥಕ್ಕೂ ಹಾಕ್ಲೇಬೇಕು. ನಾವು ಯಾವುದೇ ಪಲ್ಯ ಮಾಡ್ತಿರಲಿ, ತರಕಾರಿ ಸ್ವಲ್ಪ ಫ್ರೈ ಆಗ್ತಿದ್ದಂತೆ ಅದಕ್ಕೆ ಉಪ್ಪು ಹಾಕ್ತೇವೆ. ಉಪ್ಪು ಹಾಕ್ತಿದ್ದಂತೆ ತರಕಾರಿ ನೀರು ಬಿಡಲು ಶುರು ಮಾಡುತ್ತೆ. ಪ್ರತಿ ದಿನ ಇದನ್ನು ನೋಡ್ತಿದ್ರೂ ಏಕೆ ಎನ್ನುವ ಪ್ರಶ್ನೆ ನಿಮಗೆ ಬಂದೇ ಇಲ್ಲ ಅಲ್ವಾ?&lt;/p&gt;&lt;h2&gt;ಉಪ್ಪು ಹಾಕ್ತಿದ್ದಂತೆ ತರಕಾರಿ ನೀರು ಬಿಡಲು ಕಾರಣ&amp;nbsp;&lt;/h2&gt;&lt;p&gt;ಇದೇನೂ ಮ್ಯಾಜಿಕ್ ಅಲ್ಲ. ಆಸ್ಮೋಸಿಸ್ ಎಂಬ ವಿಜ್ಞಾನದ ಅತ್ಯಂತ ಸರಳ ಮತ್ತು ಆಸಕ್ತಿದಾಯಕ ತತ್ವವು ಕಾರ್ಯನಿರ್ವಹಿಸುತ್ತದೆ. ಪ್ರತಿಯೊಂದು ತರಕಾರಿ ಬಹಳಷ್ಟು ನೀರು ಮತ್ತು ನೈಸರ್ಗಿಕ ರಸಗಳನ್ನು ಹೊಂದಿರುತ್ತದೆ. ತರಕಾರಿ ಮೇಲೆ ಉಪ್ಪನ್ನು ಹಾಕಿದಾಗ ತರಕಾರಿ ಹೊರಗೆ ಉಪ್ಪಿನ ಪ್ರಮಾಣ ಹೆಚ್ಚಾಗುತ್ತದೆ.&lt;/p&gt;&lt;p&gt;ಪಾಲಕ್ ಸೊಪ್ಪು 10 ದಿನದವರೆಗೆ ಹಾಳಾಗಲ್ಲ, ಎಲೆ ಹಳದಿಯಾಗಲ್ಲ.. ತಂದ ತಕ್ಷಣ ಈ ಟ್ರಿಕ್ ಬಳಸಿ&lt;/p&gt;&lt;p&gt;&amp;nbsp;ಪ್ರಕೃತಿಯು ಎಲ್ಲವನ್ನೂ ಸಮತೋಲನಗೊಳಿಸಲು ಪ್ರಯತ್ನಿಸುವ ನಿಯಮವನ್ನು ಹೊಂದಿದೆ. ಆದ್ದರಿಂದ, ಹೊರಗೆ ಇರುವ ಬಲವಾದ ಉಪ್ಪನ್ನು ಕರಗಿಸಿ ಹಗುರಗೊಳಿಸಲು, ತರಕಾರಿಯೊಳಗಿನ ನೀರು ತನ್ನ ಸ್ಥಳವನ್ನು ಬಿಟ್ಟು ಹೊರಬರಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯನ್ನು ಆಸ್ಮೋಸಿಸ್ ಎಂದು ಕರೆಯಲಾಗುತ್ತದೆ.&lt;/p&gt;&lt;p&gt;ಬ್ಯಾಚುಲರ್ಸ್ ಸ್ಪೆಷಲ್.. ಮ್ಯಾರಿನೇಟ್ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿದ್ರೆ&lt;/p&gt;&lt;h3&gt;ಹೀಗೆ ಮಾಡಿ&amp;nbsp;&lt;/h3&gt;&lt;p&gt;ನೀವು ಈರುಳ್ಳಿ ಅಥವಾ ಟೊಮೆಟೊಗಳಿಗೆ ಉಪ್ಪು ಸೇರಿಸಿದಾಗ ನೀರು ಆವಿಯಾಗುತ್ತದೆ. ತರಕಾರಿ ಬೇಗ ಕರಗುತ್ತದೆ. ನಿಮ್ಮ ಅಡುಗೆ ಬೇಗ ಸಿದ್ಧವಾಗುತ್ತದೆ. ಅದೇ ಹಾಗಲಕಾಯಿಗೆ ಉಪ್ಪು ಹಾಕುವುದರಿಂದ ತರಕಾರಿಯಿಂದ ಕಹಿ ನೀರು ಹೊರಗೆ ಬರುತ್ತದೆ. ಮೂಲಂಗಿ ಅಥವಾ ಎಲೆಕೋಸು ಪರಾಠಗಳನ್ನು ತಯಾರಿಸುವಾಗ, ಅದಕ್ಕೆ ಉಪ್ಪು ಹಾಕಿದ್ರೆ ರಸ ಬಿಡುತ್ತದೆ. ಇದ್ರಿಂದ ಪರಾಠ ರುಚಿ ಹಾಳಾಗುತ್ತದೆ. ನೀವು ಮೊದಲೇ ಉಪ್ಪು ಹಾಕಿ ರಸ ತೆಗೆದರೆ ಪರಾಠ ತಯಾರಿಸುವುದು ಸುಲಭ.&lt;/p&gt;]]></content:encoded>
            <category>kitchen</category>
            <dc:creator>Roopa Hegde</dc:creator>
            <atom:link href="https://kannada.asianetnews.com/kitchen/why-do-vegetables-release-water-the-second-you-salt/articleshow-50f0d33"/>
        </item>
        <item>
            <title><![CDATA[ಮಾಡಿಟ್ಟ ಚಪಾತಿ ಗಟ್ಟಿಯಾದ್ರೆ, ಪುನಃ ಸಾಫ್ಟ್​ ಮಾಡೋದು ತುಂಬಾ ಸುಲಭ: ಈ ಟಿಪ್ಸ್​ ಫಾಲೋ ಮಾಡಿ]]></title>
            <link>https://kannada.asianetnews.com/gallery/life/if-chapati-become-hard-after-few-hours-its-very-easy-to-make-it-soft-follow-these-tips-suc-7v3ocqg</link>
            <guid isPermaLink="true">https://kannada.asianetnews.com/gallery/life/if-chapati-become-hard-after-few-hours-its-very-easy-to-make-it-soft-follow-these-tips-suc-7v3ocqg</guid>
            <pubDate>Fri, 17 Jul 2026 17:32:52 +0530</pubDate>
            <description><![CDATA[ಕೆಲಸದ ಒತ್ತಡದಲ್ಲಿ ಮೊದಲೇ ಮಾಡಿಟ್ಟ ಅಥವಾ ಉಳಿದುಹೋದ ಚಪಾತಿಗಳು ಗಟ್ಟಿಯಾಗುವುದು ಸಾಮಾನ್ಯ. ಆದರೆ, ಈ ಗಟ್ಟಿಯಾದ ಚಪಾತಿಗಳನ್ನು ಎಸೆಯುವ ಬದಲು, ಹಿರಿಯರು ಹೇಳಿಕೊಟ್ಟ ಸುಲಭ ಉಪಾಯ ಬಳಸಿ ಮತ್ತೆ ಬಿಸಿಬಿಸಿ ಮೃದುವಾದ ಚಪಾತಿಯಂತೆ ಮಾಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kxqz4h6wp9451cx0hg1jkb16,imgname-chapati-tips-1784289576156.jpg" type="image/jpeg" height="390" width="690"/>
            <content:encoded><![CDATA[ಕೆಲಸದ ಒತ್ತಡದಲ್ಲಿ ಮೊದಲೇ ಮಾಡಿಟ್ಟ ಅಥವಾ ಉಳಿದುಹೋದ ಚಪಾತಿಗಳು ಗಟ್ಟಿಯಾಗುವುದು ಸಾಮಾನ್ಯ. ಆದರೆ, ಈ ಗಟ್ಟಿಯಾದ ಚಪಾತಿಗಳನ್ನು ಎಸೆಯುವ ಬದಲು, ಹಿರಿಯರು ಹೇಳಿಕೊಟ್ಟ ಸುಲಭ ಉಪಾಯ ಬಳಸಿ ಮತ್ತೆ ಬಿಸಿಬಿಸಿ ಮೃದುವಾದ ಚಪಾತಿಯಂತೆ ಮಾಡಬಹುದು.&lt;img&gt;&lt;p&gt;ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಉಂಟು ಎನ್ನುವಂತೆ, ಅಡುಗೆ ಮನೆಯಲ್ಲಿನ ಹಲವಾರು ಸಮಸ್ಯೆಗಳಿಗೆ ವಿವಿಧ ರೀತಿಯ ಪರಿಹಾರಗಳು ಇದ್ದೇ ಇವೆ. ಅಡುಗೆ ಮಾಡುವಾಗ ಆಗುವ ಎಡವಟ್ಟುಗಳನ್ನು ಸರಿಪಡಿಸಲು ಹಿರಿಯರು ಹೇಳಿಕೊಟ್ಟಿರುವ ಟಿಪ್ಸ್​ಗಳು ನಿಜಕ್ಕೂ ಅಡುಗೆ ಮನೆಯಲ್ಲಿ ಉಪಯೋಗ ಆಗುತ್ತವೆ.&lt;/p&gt;&lt;img&gt;&lt;p&gt;ಇದೀಗ ಅಂಥದ್ದೇ ಒಂದು ಟಿಪ್ಸ್​ ಚಪಾತಿಯದ್ದು. ಸಾಮಾನ್ಯವಾಗಿ ಚಪಾತಿ ಬಿಸಿಬಿಸಿ ತಿಂದರೇನೇ ರುಚಿ ಹೆಚ್ಚು. ಹಾಗೆಂದು ಕೆಲಸಕ್ಕೆ ಹೋಗುವ ಮಹಿಳೆಯರು ಅಥವಾ ಮನೆಯಲ್ಲಿ ಬೇರೆ ಕೆಲಸ ಇರುವ ಗೃಹಿಣಿಯರು ಚಪಾತಿ ಮಾಡುವಾಗ ಎಲ್ಲರೂ ಬರಲಿ ಎಂದು ಕಾಯುತ್ತಾ ಕುಳಿತುಕೊಳ್ಳುವುದು ಕಷ್ಟ. ಆದ್ದರಿಂದ ಮೊದಲೇ ಒಂದಿಷ್ಟು ಚಪಾತಿ ಮಾಡಿಡಲೇಬೇಕಾಗುತ್ತದೆ. ಇನ್ನು ಕೆಲವೊಮ್ಮೆ ಮಾಡಿದ ಚಪಾತಿ ಹೆಚ್ಚಾಗಿ ಅದನ್ನು ಹಾಗೆಯೇ ಇಡುವ ಸಂದರ್ಭವೂ ಬರಹುದು.&lt;/p&gt;&lt;img&gt;&lt;p&gt;ಆ ಸಮಯದಲ್ಲಿ ಸ್ವಲ್ಪ ಗಂಟೆ ಬಿಟ್ಟು ನೋಡಿದರೆ ಚಪಾತಿ ಗಟ್ಟಿಯಾಗಿರುತ್ತದೆ. ಆಗ ಅದನ್ನು ಬಿಸಿ ಮಾಡಲು ಹೋದರೆ ಮತ್ತಷ್ಟು ಗಟ್ಟಿಯಾಗುತ್ತದೆ. ಆಗ ಅದನ್ನು ಎಸೆಯುವ ಪರಿಸ್ಥಿತಿ ಬರಬಹುದು, ಇಲ್ಲವೇ ವೇಸ್ಟ್​ ಆಗಬಾರದು ಎಂದು ಮಹಿಳೆಯರೇ ಕಷ್ಟಪಟ್ಟು ತಿನ್ನುವುದೂ ಹಲವು ಮನೆಗಳಲ್ಲಿ ನಡೆದೇ ಇರುತ್ತದೆ.&lt;/p&gt;&lt;img&gt;&lt;p&gt;ಆದ್ದರಿಂದ ಈ ಸಮಸ್ಯೆಗೆ ಸುಲಭದ ಉಪಾಯವೊಂದಿದೆ. ಅದು ಗಟ್ಟಿಯಾದ ಚಪಾತಿಯನ್ನು ಮೃದು ಮಾಡುವ ಉಪಾಯವದು. ಇದು ತುಂಬಾ ಸುಲಭವೂ, ಪರಿಣಾಮಕಾರಿಯೂ ಆಗಿದೆ.&lt;/p&gt;&lt;img&gt;&lt;p&gt;ಮೊದಲ ಹಾಗೂ ತುಂಬಾ ಪರಿಣಾಮಕಾರಿಯಾಗಿರುವ ಟಿಪ್ಸ್​ ಎಂದರೆ, ಗಟ್ಟಿಯಾಗಿರುವ ಹಳೆಯ ಚಪಾತಿಯ ಮೇಲೆ ಸ್ವಲ್ಪ ನೀರು ಹಚ್ಚಿ, ಬಿಸಿ ತವಾ ಮೇಲೆ ಎರಡೂ ಕಡೆ ತುಪ್ಪ ಅಥವಾ ಎಣ್ಣೆ ಹಾಕಿ ಮೃದುವಾಗಿ ಬಿಸಿ ಮಾಡಿಕೊಳ್ಳಬೇಕು. ಆಗ ಚಪಾತಿ ಗಟ್ಟಿಯಾಗಿದ್ದರೂ ಮೃದುವಾಗಿಬಿಡುತ್ತದೆ.&lt;/p&gt;&lt;img&gt;&lt;p&gt;ಸಣ್ಣ ಉರಿಯಲ್ಲಿ ಎರಡೂ ಬದಿಗಳನ್ನು ಸ್ವಲ್ಪ ಹೊತ್ತು ಬಿಸಿ ಮಾಡಬೇಕು. ಹೀಗೆ ಮಾಡುವುದರಿಂದ ಚಪಾತಿಗೆ ಹಬೆಯ ತೇವಾಂಶ ಸಿಕ್ಕು ಮತ್ತೆ ಮೃದುವಾಗುತ್ತದೆ.&lt;/p&gt;]]></content:encoded>
            <category>kitchen</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/if-chapati-become-hard-after-few-hours-its-very-easy-to-make-it-soft-follow-these-tips-suc-7v3ocqg"/>
        </item>
        <item>
            <title><![CDATA[Air Cooler: ಕೂಲರ್​ ಇದ್ರೂ ಕೋಣೆ ತಂಪಾಗಲ್ವಾ? ಗಾಳಿ ಸರಿ ಆಡಲ್ವಾ? ಕೇವಲ 300 ರೂ.ನಲ್ಲಿದೆ ಸೂಪರ್​ ಪರಿಹಾರ]]></title>
            <link>https://kannada.asianetnews.com/gallery/life/increase-cooling-and-reduce-humidity-of-your-air-cooler-during-rainy-season-for-just-500rs-suc-8bmn8r9</link>
            <guid isPermaLink="true">https://kannada.asianetnews.com/gallery/life/increase-cooling-and-reduce-humidity-of-your-air-cooler-during-rainy-season-for-just-500rs-suc-8bmn8r9</guid>
            <pubDate>Wed, 15 Jul 2026 15:53:39 +0530</pubDate>
            <description><![CDATA[&lt;p&gt;ಮಳೆಗಾಲದಲ್ಲಿ, ಗಾಳಿಯಲ್ಲಿನ ಅಧಿಕ ತೇವಾಂಶದಿಂದಾಗಿ ಏರ್ ಕೂಲರ್&zwnj;ಗಳು ಪರಿಣಾಮಕಾರಿಯಾಗಿ ತಂಪಾಗುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು, ಸುಮಾರು 300 ರೂಪಾಯಿಗಳ ಸಣ್ಣ ಎಕ್ಸಾಸ್ಟ್ ಫ್ಯಾನ್ ಬಳಸಿ ಕೋಣೆಯಿಂದ ತೇವಾಂಶವುಳ್ಳ ಗಾಳಿಯನ್ನು ಹೊರಹಾಕುವ ಮೂಲಕ ಗಾಳಿಯ ಹರಿವನ್ನು ಸುಧಾರಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjmthq667ra22hpf4h051bb,imgname-air-cooler-1784110991078.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಳೆಗಾಲದಲ್ಲಿ, ಗಾಳಿಯಲ್ಲಿನ ಅಧಿಕ ತೇವಾಂಶದಿಂದಾಗಿ ಏರ್ ಕೂಲರ್&zwnj;ಗಳು ಪರಿಣಾಮಕಾರಿಯಾಗಿ ತಂಪಾಗುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು, ಸುಮಾರು 300 ರೂಪಾಯಿಗಳ ಸಣ್ಣ ಎಕ್ಸಾಸ್ಟ್ ಫ್ಯಾನ್ ಬಳಸಿ ಕೋಣೆಯಿಂದ ತೇವಾಂಶವುಳ್ಳ ಗಾಳಿಯನ್ನು ಹೊರಹಾಕುವ ಮೂಲಕ ಗಾಳಿಯ ಹರಿವನ್ನು ಸುಧಾರಿಸಬಹುದು.&lt;/p&gt;&lt;img&gt;&lt;p&gt;ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಅನೇಕರು ಸಾಮಾನ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಅದು ಕೂಲರ್ ಚಾಲನೆಯಲ್ಲಿದ್ದರೂ, ಕೋಣೆ ತಂಪಾಗಿರುವುದಿಲ್ಲ ಮತ್ತು ಗಾಳಿಯು ಮೊದಲಿಗಿಂತ ಹೆಚ್ಚು ಜಿಗುಟಾಗಿರುತ್ತದೆ. ಮಳೆಗಾಲದಲ್ಲಿ ಕೂಲರ್​ ಏಕೆ ಎಂದುಕೊಳ್ಳಬಹುದು. ಆದರೆ ಅದಷ್ಟೋ ಸಮಯದಲ್ಲಿ ಮಳೆಗಾಲದಲ್ಲಿಯೂ ಬೇರೆ ಬೇರೆ ಕಾರಣಕ್ಕೆ ಕೂಲರ್​ ಅವಶ್ಯಕತೆ ಇರುತ್ತದೆ. ಆದರೆ ಒಮ್ಮೆ ಮಳೆಗಾಲ ಶುರುವಾಯ್ತು ಎಂದರೆ, ಕೂಲರ್​ ಸಮಸ್ಯೆ ಸಾಮಾನ್ಯವಾಗಿ ಬಂದೇ ಬರುತ್ತದೆ.&lt;/p&gt;&lt;img&gt;&lt;p&gt;ಆ ಸಮಯದಲ್ಲಿ, ಹೆಚ್ಚಿನ ಜನರು ಕೂಲರ್ ಸರಿಯಾಗಿಲ್ಲ ಅಥವಾ ಹೊಸದನ್ನು ಖರೀದಿಸಬೇಕು ಎಂದು ಭಾವಿಸುತ್ತಾರೆ. ಆದರೆ ಸತ್ಯವೆಂದರೆ, ಕೂಲರ್ ಯಾವಾಗಲೂ ಸಮಸ್ಯೆಯಲ್ಲ. ಕೆಲವೊಮ್ಮೆ, ಗಾಳಿಯು ಕೋಣೆಯ ಒಳಗೆ ಮತ್ತು ಹೊರಗೆ ಸರಿಯಾಗಿ ಹರಿಯದ ಕಾರಣ ಇದು ಸಂಭವಿಸುತ್ತದೆ. ಸುಮಾರು 300 ರೂಪಾಯಿಗಳಷ್ಟು ವೆಚ್ಚವಾಗುವ ಸರಳ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ನೀವು ನಿಮ್ಮ ಕೂಲರ್&zwnj;ನ ಕೂಲಿಂಗ್ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು.&lt;/p&gt;&lt;img&gt;&lt;p&gt;ಏರ್ ಕೂಲರ್&zwnj;ಗಳು ನೀರಿನಿಂದ ನೆನೆಸಿದ ಕೂಲಿಂಗ್ ಪ್ಯಾಡ್&zwnj;ಗಳನ್ನು ಬಳಸಿ ಗಾಳಿಯನ್ನು ತಂಪಾಗಿಸುತ್ತವೆ. ಬೇಸಿಗೆಯಲ್ಲಿ, ಒಣ ಹೊರಗಿನ ಗಾಳಿಯು ಸುಲಭವಾಗಿ ತಣ್ಣಗಾಗುತ್ತದೆ, ಆದರೆ ಮಳೆಗಾಲದಲ್ಲಿ, ಗಾಳಿಯು ಈಗಾಗಲೇ ಸಾಕಷ್ಟು ತೇವಾಂಶವನ್ನು ಹೊಂದಿರುತ್ತದೆ. ಪರಿಣಾಮವಾಗಿ, ಕೂಲರ್ ಹೊರಸೂಸುವ ತೇವಾಂಶವುಳ್ಳ ಗಾಳಿಯು ಕೋಣೆಯಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಗಾಳಿಯು ಹೊರಬರಲು ಯಾವುದೇ ಮಾರ್ಗವಿಲ್ಲದಿದ್ದರೆ, ಆರ್ದ್ರತೆ ಹೆಚ್ಚಾಗುತ್ತದೆ. ಇದಕ್ಕಾಗಿಯೇ ತಂಪಾದ ಗಾಳಿಯು ಜಿಗುಟಾಗಿರುತ್ತದೆ.&lt;/p&gt;&lt;img&gt;&lt;p&gt;ನೀವು ದುಬಾರಿ ಡಿಹ್ಯೂಮಿಡಿಫೈಯರ್ ಖರೀದಿಸಲು ಬಯಸದಿದ್ದರೆ, ಸುಮಾರು 300 ರೂ.ಗಳ ಸಣ್ಣ ಎಕ್ಸಾಸ್ಟ್ ಫ್ಯಾನ್ ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ಇದು ಕೋಣೆಯಿಂದ ಬಿಸಿ ಮತ್ತು ತೇವಾಂಶವುಳ್ಳ ಗಾಳಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಕೋಣೆಯಲ್ಲಿ ಗಾಳಿಯ ಹರಿವನ್ನು ಸುಧಾರಿಸುತ್ತದೆ, ಕೂಲರ್&zwnj;ನ ತಂಪಾದ ಗಾಳಿಯು ಹೆಚ್ಚು ಪರಿಣಾಮಕಾರಿಯಾಗಿದೆ.&lt;/p&gt;&lt;img&gt;&lt;ul&gt; &lt;li&gt;ಕೂಲರ್ ಅನ್ನು ಕಿಟಕಿ ಅಥವಾ ಬಾಗಿಲಿನ ಬಳಿ ಇರಿಸಿ ಇದರಿಂದ ಅದು ಹೊರಗಿನಿಂದ ತಾಜಾ ಗಾಳಿಯನ್ನು ಸೆಳೆಯುತ್ತದೆ.&lt;/li&gt;&lt;/ul&gt;&lt;p&gt;ಕೂಲರ್&zwnj;ನಿಂದ ದೂರದಲ್ಲಿರುವ ಕೋಣೆಯ ಪ್ರದೇಶವನ್ನು ಗುರುತಿಸಿ.&lt;/p&gt;&lt;ul&gt; &lt;li&gt;ಸಣ್ಣ ಕಿಟಕಿ ಅಥವಾ ಸ್ಕೈಲೈಟ್ ಇದ್ದರೆ, ಎಕ್ಸಾಸ್ಟ್ ಫ್ಯಾನ್ ಅನ್ನು ಅಲ್ಲಿ ಇರಿಸಿ.&lt;/li&gt; &lt;li&gt;ಕೋಣೆಯಿಂದ ಬೆಚ್ಚಗಿನ ಮತ್ತು ತೇವಾಂಶವುಳ್ಳ ಗಾಳಿಯನ್ನು ಹೊರಹಾಕಲು ಎಕ್ಸಾಸ್ಟ್ ಫ್ಯಾನ್ ಹೊರಮುಖವಾಗಿ ಮುಖ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.&lt;/li&gt; &lt;li&gt;ಕೂಲರ್ ಮತ್ತು ಎಕ್ಸಾಸ್ಟ್ ಫ್ಯಾನ್ ಅನ್ನು ಏಕಕಾಲದಲ್ಲಿ ಚಲಾಯಿಸಿ. ಇದು ಕೋಣೆಯಲ್ಲಿ ಉತ್ತಮ ಗಾಳಿಯ ಹರಿವನ್ನು ಸೃಷ್ಟಿಸುತ್ತದೆ.&lt;/li&gt;&lt;/ul&gt;&lt;p&gt;ಈ ಸರಳ ವಿಧಾನವು ಕೋಣೆಯಲ್ಲಿ ಆರ್ದ್ರತೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂಲರ್&zwnj;ನ ತಂಪಾದ ಗಾಳಿಯು ಮೊದಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಭಾವಿಸುವಂತೆ ಮಾಡುತ್ತದೆ.&lt;/p&gt;]]></content:encoded>
            <category>kitchen</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/increase-cooling-and-reduce-humidity-of-your-air-cooler-during-rainy-season-for-just-500rs-suc-8bmn8r9"/>
        </item>
        <item>
            <title><![CDATA[ಚಪಾತಿ, ದೋಸೆ, ಇಡ್ಲಿಗೆ ಮಾತ್ರವಲ್ಲ.. ಬಿಸಿ ಬಿಸಿ ಅನ್ನಕ್ಕೂ ಒಳ್ಳೆಯ ಕಾಂಬಿನೇಶನ್ ಉದ್ದಿನಬೇಳೆ ಚಟ್ನಿ]]></title>
            <link>https://kannada.asianetnews.com/food/how-to-make-spicy-urad-dal-chutney-recipe-kannada/articleshow-buis35d</link>
            <guid isPermaLink="true">https://kannada.asianetnews.com/food/how-to-make-spicy-urad-dal-chutney-recipe-kannada/articleshow-buis35d</guid>
            <pubDate>Wed, 15 Jul 2026 16:52:07 +0530</pubDate>
            <description><![CDATA[&lt;p&gt;&lt;strong&gt;Healthy breakfast side dish urad dal: &lt;/strong&gt;ಉದ್ದಿನಬೇಳೆಯನ್ನು ಕೇವಲ ದೋಸೆ, ಇಡ್ಲಿಗೆ ಮಾತ್ರ ಬಳಸಲ್ಲ.. ಇದರಿಂದ ಬಿಸಿಬಿಸಿ ಅನ್ನಕ್ಕೆ ಹಳ್ಳಿಯ ಶೈಲಿಯ ರುಚಿಕರವಾದ ಚಟ್ನಿ ಕೂಡ ಮಾಡಬಹುದು! ಪ್ರೋಟೀನ್ ಮತ್ತು ಫೈಬರ್&zwnj;ನಿಂದ ಕೂಡಿದ ಈ ಉದ್ದಿನಬೇಳೆ ಚಟ್ನಿ ಮಾಡುವುದು ಬಹಳ ಸುಲಭ. ಮಾಡುವುದು ಹೇಗೆಂದು ವಿಡಿಯೋ ಸಮೇತ ಮಾಹಿತಿ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjr57t3d4rqbjjzxzpzme1k,imgname-thumbnail---2026-07-15t164247.324-1784114487107.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನೀವು &lt;/strong&gt;ಎಂದಾದರೂ ಉದ್ದಿನಬೇಳೆಯ ಚಟ್ನಿಯನ್ನು ಟ್ರೈ ಮಾಡಿದ್ದೀರಾ? ಟೊಮೆಟೊ, ಗೋಂಗೂರ ಅಥವಾ ಈರುಳ್ಳಿ ಚಟ್ನಿಗಿಂತ ಇದು ವಿಭಿನ್ನ ರುಚಿ ನೀಡುವುದಲ್ಲದೆ ಆರೋಗ್ಯಕ್ಕೂ ಅತ್ಯಂತ ಪ್ರಯೋಜನಕಾರಿಯಾಗಿದೆ.&lt;/p&gt;&lt;h2&gt;&lt;strong&gt;ಉದ್ದಿನಬೇಳೆಯ ಆರೋಗ್ಯ ಗುಣಗಳು&lt;/strong&gt;&lt;/h2&gt;&lt;p&gt;ಉದ್ದಿನಬೇಳೆಯಲ್ಲಿ ಪ್ರೋಟೀನ್, ನಾರಿನಂಶ (Fiber), ವಿಟಮಿನ್ ಮತ್ತು ಮಿನರಲ್ಸ್ ಸಮೃದ್ಧವಾಗಿವೆ. ಇದು ಸ್ನಾಯುಗಳ ಬೆಳವಣಿಗೆಗೆ, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲಬದ್ಧತೆ ನಿವಾರಣೆಗೆ ಸಹಕಾರಿ. ಇದರಲ್ಲಿರುವ ಕಬ್ಬಿಣದಂಶವು ರಕ್ತಹೀನತೆಯನ್ನು ತಡೆಯುತ್ತದೆ ಹಾಗೂ ಮೂಳೆ ಮತ್ತು ಹಲ್ಲುಗಳನ್ನು ಸದೃಢಗೊಳಿಸುತ್ತದೆ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ಮಧುಮೇಹಿಗಳಿಗೆ ಇದು ಅತ್ಯುತ್ತಮ ಆಹಾರ. ಸಿಪ್ಪೆಯುಳ್ಳ ಉದ್ದಿನಬೇಳೆಯನ್ನು ಬಳಸಿದರೆ ಹೆಚ್ಚಿನ ಫೈಬರ್ ಮತ್ತು ಪೋಷಕಾಂಶಗಳು ದೊರೆಯುತ್ತವೆ.&lt;/p&gt;&lt;h2&gt;&lt;strong&gt;ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;ಎಣ್ಣೆ - 2 ಟೇಬಲ್ ಸ್ಪೂನ್ಒಣಮೆಣಸಿನಕಾಯಿ - 40 (ಖಾರಕ್ಕೆ ತಕ್ಕಂತೆ)ಉದ್ದಿನಬೇಳೆ - 300 ಗ್ರಾಂಧನಿಯಾ - 4 ಟೀಸ್ಪೂನ್ಜೀರಿಗೆ - 2 ಟೀಸ್ಪೂನ್ಬೆಳ್ಳುಳ್ಳಿ - 20 ಎಸಳುಕರಿಬೇವು - ಸ್ವಲ್ಪಹುಣಸೆಹಣ್ಣು - ನಿಂಬೆಹಣ್ಣಿನ ಗಾತ್ರದಷ್ಟುಉಪ್ಪು - ರುಚಿಗೆ ತಕ್ಕಷ್ಟುಈರುಳ್ಳಿ - ಅರ್ಧ ಕಪ್ (ಸಣ್ಣಗೆ ಹೆಚ್ಚಿದ್ದು)&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;*ಮೊದಲು ಹುಣಸೆಹಣ್ಣನ್ನು ಸ್ವಲ್ಪ ನೀರಿನಲ್ಲಿ ನೆನೆಸಿಡಿ.*ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಣಮೆಣಸಿನಕಾಯಿಯನ್ನು ಹುರಿದು ತೆಗೆದಿಡಿ.*ಅದೇ ಬಾಣಲೆಯಲ್ಲಿ ಉದ್ದಿನಬೇಳೆ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಧನಿಯಾ ಮತ್ತು ಜೀರಿಗೆ ಸೇರಿಸಿ.*ಕೊನೆಯಲ್ಲಿ ಬೆಳ್ಳುಳ್ಳಿ ಎಸಳು ಮತ್ತು ಕರಿಬೇವು ಸೇರಿಸಿ ಘಮ ಬರುವವರೆಗೆ ಹುರಿದು ತಣ್ಣಗಾಗಲು ಬಿಡಿ.*ಸಾಂಪ್ರದಾಯಿಕ ಕಲ್ಲಿನಲ್ಲಿ ಅಥವಾ ಮಿಕ್ಸಿಯಲ್ಲಿ ಮೊದಲು ಒಣಮೆಣಸಿನಕಾಯಿಯನ್ನು ಅರೆಯಿರಿ.*ನಂತರ ಹುರಿದ ಉದ್ದಿನಬೇಳೆ ಮಿಶ್ರಣ ಮತ್ತು ಉಪ್ಪು ಸೇರಿಸಿ ರುಬ್ಬಿ.*ಆ ನಂತರ ಸ್ವಲ್ಪ ನೀರು ಮತ್ತು ನೆನೆಸಿದ ಹುಣಸೆಹಣ್ಣಿನ ರಸ ಸೇರಿಸಿ ಮತ್ತೊಮ್ಮೆ ಹದವಾಗಿ ರುಬ್ಬಿಕೊಳ್ಳಿ.*ಕೊನೆಯಲ್ಲಿ ಹಸಿ ಈರುಳ್ಳಿ ಸೇರಿಸಿ ಲಘುವಾಗಿ ಜಜ್ಜಿದರೆ ರುಚಿಕರವಾದ ಚಟ್ನಿ ಸಿದ್ಧ. ಇಷ್ಟವಿದ್ದರೆ ಸಾಸಿವೆ-ಕರಿಬೇವಿನ ಒಗ್ಗರಣೆ ನೀಡಬಹುದು.&lt;/p&gt;&lt;p&gt;ಈ ಉದ್ದಿನಬೇಳೆ ಚಟ್ನಿ ಬಿಸಿ ಬಿಸಿ ಅನ್ನ ಮತ್ತು ತುಪ್ಪದ ಜೊತೆಗೆ ಅದ್ಭುತವಾಗಿ ರುಚಿಸುತ್ತದೆ. ಚಪಾತಿ, ದೋಸೆ ಅಥವಾ ಇಡ್ಲಿಗೂ ಇದು ಉತ್ತಮ ಕಾಂಬಿನೇಷನ್. ಸಸ್ಯಾಹಾರಿಗಳಿಗೆ ಪ್ರೋಟೀನ್ ಪಡೆಯಲು ಇದು ಅತ್ಯುತ್ತಮ ಆಯ್ಕೆಯಾಗಿದೆ.&lt;/p&gt;&lt;h2&gt;&lt;strong&gt;ಇದೆಲ್ಲಾ ಗಮನದಲ್ಲಿರಲಿ&lt;/strong&gt;&lt;/h2&gt;&lt;p&gt;&lt;strong&gt;ಸಣ್ಣ ಉರಿಯಲ್ಲಿ ಹುರಿಯಿರಿ: &lt;/strong&gt;ಉದ್ದಿನಬೇಳೆಯನ್ನು ಹುರಿಯುವಾಗ ಉರಿ ಅತಿ ಸಣ್ಣದಾಗಿರಲಿ. ಅದು ಸಮವಾಗಿ ಕೆಂಪಗಾಗಬೇಕು ಮತ್ತು ಅದರಿಂದ ಹಸಿ ವಾಸನೆ ಹೋಗಿ ಒಳ್ಳೆಯ ಘಮ ಬರಬೇಕು. ಅತಿಯಾಗಿ ಬೆಂದು ಕಪ್ಪಾದರೆ ಚಟ್ನಿ ಕಹಿಯಾಗುತ್ತದೆ.&lt;/p&gt;&lt;p&gt;&lt;strong&gt;ತರಿತರಿಯಾಗಿರಲಿ (Coarse Texture): &lt;/strong&gt;ಈ ಚಟ್ನಿಯನ್ನು ತುಂಬಾ ನುಣ್ಣಗೆ ಪೇಸ್ಟ್&zwnj;ನಂತೆ ರುಬ್ಬಬೇಡಿ. ಸ್ವಲ್ಪ ತರಿತರಿಯಾಗಿದ್ದರೆ (ಬೇಳೆ ಸಣ್ಣಗೆ ಹಲ್ಲಿಗೆ ಸಿಗುವಂತಿದ್ದರೆ) ಬಿಸಿ ಅನ್ನದ ಜೊತೆ ತಿನ್ನಲು ಅತಿ ಹೆಚ್ಚು ರುಚಿ ನೀಡುತ್ತದೆ.&lt;/p&gt;&lt;p&gt;&lt;strong&gt;ನೀರಿನ ಹದ: &lt;/strong&gt;ಅನ್ನಕ್ಕೆ ಬೇಕಿದ್ದರೆ ಚಟ್ನಿ ಸ್ವಲ್ಪ ಗಟ್ಟಿಯಾಗಿರಲಿ. ಇಡ್ಲಿ ಅಥವಾ ದೋಸೆಗೆ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಬಹುದು. ಚಟ್ನಿ ಗಟ್ಟಿಯಾಗಿದ್ದರೆ 2 ದಿನಗಳ ಕಾಲ ಕೆಡದೆ ಇರುತ್ತದೆ.&lt;/p&gt;&lt;p&gt;ಈ ಟಿಪ್ಸ್&zwnj;ಗಳನ್ನು ಪಾಲಿಸಿದರೆ ನಿಮ್ಮ ಉದ್ದಿನಬೇಳೆ ಚಟ್ನಿ ಮನೆಯಲ್ಲಿ ಎಲ್ಲರ ಮೆಚ್ಚಿನ ಖಾದ್ಯವಾಗುವುದರಲ್ಲಿ ಸಂಶಯವಿಲ್ಲ!&lt;/p&gt;&lt;h3&gt;&lt;strong&gt;ಇಲ್ಲಿದೆ ನೋಡಿ ವಿಡಿಯೋ&amp;nbsp;&lt;/strong&gt;&lt;/h3&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Anusha Chenna (@anushachennaa)&lt;/p&gt;]]></content:encoded>
            <category>kitchen</category>
            <dc:creator>Ashwini HR</dc:creator>
            <atom:link href="https://kannada.asianetnews.com/food/how-to-make-spicy-urad-dal-chutney-recipe-kannada/articleshow-buis35d"/>
        </item>
        <item>
            <title><![CDATA[ಬ್ಯಾಚುಲರ್ಸ್ ಸ್ಪೆಷಲ್.. ಮ್ಯಾರಿನೇಟ್ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿದ್ರೆ ಮುಗಿತು ರೆಡ್ ಚಿಕನ್ ಗ್ರೇವಿ ರೆಡಿ]]></title>
            <link>https://kannada.asianetnews.com/food/bachelor-friendly-chicken-recipes-kannada/articleshow-bzwvsm6</link>
            <guid isPermaLink="true">https://kannada.asianetnews.com/food/bachelor-friendly-chicken-recipes-kannada/articleshow-bzwvsm6</guid>
            <pubDate>Tue, 14 Jul 2026 16:31:19 +0530</pubDate>
            <description><![CDATA[&lt;p&gt;&lt;strong&gt;Kannada non-veg recipes: &lt;/strong&gt;ಹೈದರಾಬಾದಿ ಶಾಹಿ ರೆಡ್ ಚಿಕನ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಈಗ ನೀವು ಇದನ್ನ ಮನೆಯಲ್ಲೇ ಅತ್ಯಂತ ಸಿಂಪಲ್ಲಾಗಿ ಮಾಡಬಹುದು. ಬ್ಯಾಚುಲರ್ಸ್ ಕೂಡ ಸುಲಭವಾಗಿ ತಯಾರಿಸಬಹುದಾದ ಈ ಮಸಾಲೆಯುಕ್ತ ಚಿಕನ್ ರೆಸಿಪಿ ಸೀಕ್ರೆಟ್ ಟಿಪ್ಸ್ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxg4es6pz75ynyy76vwxg9pv,imgname-thumbnail---2026-07-14t162032.351-1784026719446.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿ&lt;/strong&gt;ಕನ್ ಪ್ರಿಯರಿಗೆ ಸ್ಪೈಸಿ ಮಸಾಲವೆಂದರೆ ಪಂಚಪ್ರಾಣ. ಅದರಲ್ಲೂ ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿ ಸಿಗುವ ಮಸಾಲೆಯುಕ್ತ ಶಾಹಿ ರೆಡ್ ಚಿಕನ್ ಅಂದ್ರೆ ಎಲ್ಲರಿಗೂ ಇಷ್ಟ. ಪ್ರೋಟೀನ್ ಮತ್ತು ಪೌಷ್ಟಿಕಾಂಶ ಭರಿತವಾಗಿರುವ ಈ ಸ್ಪೆಷಲ್ ಚಿಕನ್ ಅನ್ನು ಹೋಟೆಲ್ ರುಚಿಯಲ್ಲೇ ಮನೆಯಲ್ಲಿ ಮಾಡುವ ವಿಧಾನ ಇಲ್ಲಿದೆ.&lt;/p&gt;&lt;h2&gt;&lt;strong&gt;ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;ಚಿಕನ್ - ಅರ್ಧ ಕೆಜಿಕಾಶ್ಮೀರಿ ಒಣಮೆಣಸಿನಕಾಯಿ - 10ಗೋಡಂಬಿ - 15ಮೊಸರು - ಅರ್ಧ ಕಪ್ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್ಈರುಳ್ಳಿ - 4 (ಕರಿದದ್ದು)ಟೊಮೆಟೊ - 1ಧನಿಯಾ ಪುಡಿ, ಗರಂ ಮಸಾಲ, ಜೀರಿಗೆ ಪುಡಿ - ತಲಾ ಅರ್ಧ ಟೀಸ್ಪೂನ್ಉಪ್ಪು - ರುಚಿಗೆ ತಕ್ಕಷ್ಟುಕೊತ್ತಂಬರಿ ಸೊಪ್ಪು ಮತ್ತು ಎಣ್ಣೆ - ಅಗತ್ಯವಿರುವಷ್ಟು&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;*ಮೊದಲು ಈರುಳ್ಳಿಯನ್ನು ಉದ್ದಕ್ಕೆ ಹೆಚ್ಚಿ ಎಣ್ಣೆಯಲ್ಲಿ ಕೆಂಪಾಗುವವರೆಗೆ (Brown Onion) ಕರಿದು ಪಕ್ಕಕ್ಕೆ ಇಟ್ಟುಕೊಳ್ಳಿ.*ಮಿಕ್ಸಿ ಜಾರ್&zwnj;ಗೆ ಕಾಶ್ಮೀರಿ ಒಣಮೆಣಸಿನಕಾಯಿ, ಗೋಡಂಬಿ, ಕರಿದ ಈರುಳ್ಳಿ, ಟೊಮೆಟೊ ತುಂಡುಗಳು, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಎಲ್ಲಾ ಮಸಾಲ ಪುಡಿಗಳನ್ನು ಹಾಕಿ ನುಣ್ಣಗೆ ಪೇಸ್ಟ್ ಮಾಡಿ.*ಈಗ ಒಂದು ಬೌಲ್&zwnj;ನಲ್ಲಿ ತೊಳೆದ ಚಿಕನ್ ತೆಗೆದುಕೊಂಡು, ನುಣ್ಣಗೆ ಪೇಸ್ಟ್ ಮಾಡಿದ ಮಸಾಲ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ಎಣ್ಣೆ ಸೇರಿಸಿ ಚೆನ್ನಾಗಿ ಬೆರೆಸಿ. ಇದನ್ನು ಸುಮಾರು ಒಂದು ಗಂಟೆ ಕಾಲ ನೆನೆಯಲು ಬಿಡಿ. ಇದರಿಂದ ಮಸಾಲೆ ಚಿಕನ್ ತುಂಡುಗಳ ಒಳಗೆ ಚೆನ್ನಾಗಿ ಇಳಿಯುತ್ತದೆ.*ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಮ್ಯಾರಿನೇಟ್ ಮಾಡಿದ ಚಿಕನ್ ಮಿಶ್ರಣವನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಹಸಿ ವಾಸನೆ ಹೋದ ನಂತರ ಸ್ವಲ್ಪ ನೀರು ಸೇರಿಸಿ.&lt;strong&gt;ಅಂತಿಮ ಹಂತ: &lt;/strong&gt;ಚಿಕನ್ ಮೃದುವಾಗಿ ಬೆಂದು, ಎಣ್ಣೆಯು ಮಸಾಲೆಯ ಮೇಲೆ ತೇಲುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಇಳಿಸುವ ಮುನ್ನ ಸ್ವಲ್ಪ ಕಸೂರಿ ಮೇತಿ ಸೇರಿಸಿದರೆ ರುಚಿ ಇನ್ನೂ ಹೆಚ್ಚುತ್ತದೆ.&lt;/p&gt;&lt;p&gt;ಬಿಸಿಬಿಸಿ ಅನ್ನ ಅಥವಾ ಚಪಾತಿ ಜೊತೆಗೆ ಈ ಶಾಹಿ ರೆಡ್ ಚಿಕನ್ ಅದ್ಭುತವಾಗಿ ಹೊಂದಿಕೊಳ್ಳುತ್ತದೆ. ಆದ್ದರಿಂದ ಅತಿಥಿಗಳು ಬಂದಾಗ ರೊಟೀನ್ ಚಿಕನ್ ಬಿಟ್ಟು ಈ ಹೈದರಾಬಾದಿ ಸ್ಪೆಷಲ್ ಟ್ರೈ ಮಾಡಿ ನೋಡಿ!&lt;/p&gt;&lt;h3&gt;&lt;strong&gt;ಇದು ನೆನಪಿನಲ್ಲಿರಲಿ..&lt;/strong&gt;&lt;/h3&gt;&lt;p&gt;&lt;strong&gt;ನೈಸರ್ಗಿಕ ಕೆಂಪು ಬಣ್ಣಕ್ಕಾಗಿ: &lt;/strong&gt;ಶಾಹಿ ರೆಡ್ ಚಿಕನ್ ಹೆಸರೇ ಹೇಳುವಂತೆ ಕೆಂಪು ಬಣ್ಣದಲ್ಲಿರಬೇಕು. ಇದಕ್ಕಾಗಿ ಕೃತಕ ಫುಡ್ ಕಲರ್ ಬಳಸುವ ಬದಲು ಕಾಶ್ಮೀರಿ ಒಣಮೆಣಸಿನಕಾಯಿಗಳನ್ನು ಬಿಸಿ ನೀರಿನಲ್ಲಿ 15 ನಿಮಿಷ ನೆನೆಸಿ ನಂತರ ರುಬ್ಬಿಕೊಳ್ಳಿ. ಇದು ಗ್ರೇವಿಗೆ ಗಾಢ ಕೆಂಪು ಬಣ್ಣ ನೀಡುತ್ತದೆ ಮತ್ತು ಅತಿಯಾದ ಖಾರವಿರುವುದಿಲ್ಲ.&lt;/p&gt;&lt;p&gt;&lt;strong&gt;ಮ್ಯಾರಿನೇಷನ್ ಸಮಯ: &lt;/strong&gt;ಚಿಕನ್ ಕನಿಷ್ಠ 1 ಗಂಟೆಯಾದರೂ ಮ್ಯಾರಿನೇಟ್ ಆಗಲಿ. ನಿಮ್ಮ ಬಳಿ ಸಮಯವಿದ್ದರೆ 3-4 ಗಂಟೆ ಅಥವಾ ಇಡೀ ರಾತ್ರಿ ಫ್ರಿಡ್ಜ್&zwnj;ನಲ್ಲಿ ಇಡಬಹುದು. ಇದರಿಂದ ಮಸಾಲೆ ಚಿಕನ್&zwnj;ನ ಒಳಗಿನವರೆಗೆ ಇಳಿದು, ತುಂಡುಗಳು ತುಂಬಾ ಜ್ಯೂಸಿಯಾಗಿ ಬರುತ್ತವೆ.&lt;/p&gt;&lt;p&gt;&lt;strong&gt;ಈರುಳ್ಳಿ ಕರಿಯುವಾಗ ಎಚ್ಚರ: &lt;/strong&gt;ಕರಿದ ಈರುಳ್ಳಿ (Biryani Onions) ಈ ಖಾದ್ಯಕ್ಕೆ ಮುಖ್ಯ ರುಚಿ ನೀಡುತ್ತದೆ. ಆದರೆ ಈರುಳ್ಳಿ ಅತಿಯಾಗಿ ಬೆಂದು ಕಪ್ಪಾದರೆ ಇಡೀ ಗ್ರೇವಿ ಕಹಿಯಾಗುತ್ತದೆ. ಆದ್ದರಿಂದ ಈರುಳ್ಳಿ ಚಿನ್ನದ ಬಣ್ಣಕ್ಕೆ ಬಂದ ತಕ್ಷಣ ಎಣ್ಣೆಯಿಂದ ತೆಗೆಯಿರಿ.&lt;/p&gt;&lt;p&gt;&lt;strong&gt;ಮೊಸರಿನ ಬಳಕೆ: &lt;/strong&gt;ಮಸಾಲೆಗೆ ಮೊಸರು ಸೇರಿಸುವ ಮೊದಲು, ಮೊಸರನ್ನು ಗಂಟಿಲ್ಲದಂತೆ ಚೆನ್ನಾಗಿ ಬೆರೆಸಿಕೊಳ್ಳಿ (Whisk). ಅಡುಗೆ ಮಾಡುವಾಗ ಉರಿಯನ್ನು ಸಣ್ಣದಾಗಿ ಇಟ್ಟು ಮೊಸರು ಸೇರಿಸಿದರೆ ಗ್ರೇವಿ ಒಡೆಯುವುದಿಲ್ಲ.&lt;/p&gt;&lt;p&gt;&lt;strong&gt;ಇಲ್ಲಿದೆ ನೋಡಿ ವಿಡಿಯೋ &amp;nbsp;&lt;/strong&gt;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Ashokgowtham R (@abs_kitchenn)&lt;/p&gt;]]></content:encoded>
            <category>kitchen</category>
            <dc:creator>Ashwini HR</dc:creator>
            <atom:link href="https://kannada.asianetnews.com/food/bachelor-friendly-chicken-recipes-kannada/articleshow-bzwvsm6"/>
        </item>
        <item>
            <title><![CDATA[ಕೇವಲ ₹100 ಬಜೆಟ್‌ನಲ್ಲಿ ನಿಮ್ಮ ಮನೆಯ ಬಾಲ್ಕನಿ ಸುಂದರಗೊಳಿಸಿ! ಇಲ್ಲಿವೆ ಸಿಂಪಲ್ ಮತ್ತು ಕ್ರಿಯೇಟಿವ್ ಐಡಿಯಾಗಳು]]></title>
            <link>https://kannada.asianetnews.com/gallery/kitchen/balcony-decoration-ideas-under-100-rupees-budget-friendly-tips-c6crl7i</link>
            <guid isPermaLink="true">https://kannada.asianetnews.com/gallery/kitchen/balcony-decoration-ideas-under-100-rupees-budget-friendly-tips-c6crl7i</guid>
            <pubDate>Thu, 16 Jul 2026 21:47:45 +0530</pubDate>
            <description><![CDATA[&lt;p&gt;&lt;strong&gt;Balcony Decor Ideas: &lt;/strong&gt;ಕೇವಲ ₹100 ರೂಪಾಯಿ ಬಜೆಟ್&zwnj;ನಲ್ಲಿ ನಿಮ್ಮ ಬಾಲ್ಕನಿಗೆ ಸ್ಟೈಲಿಶ್ ಮತ್ತು ಕೂಲ್ ಲುಕ್ ನೀಡಿ. ಗಿಡದ ಕುಂಡಗಳು, ಫೇರಿ ಲೈಟ್ಸ್, DIY ಪ್ಲಾಂಟರ್, ಕೃತಕ ಹುಲ್ಲು ಮತ್ತು ಸೀಟ್ ಮ್ಯಾಟ್ ಬಳಸಿ ಬಾಲ್ಕನಿ ಅಲಂಕರಿಸುವ 5 ಸುಲಭ ಹಾಗೂ ಬಜೆಟ್ ಸ್ನೇಹಿ ಐಡಿಯಾಗಳನ್ನು ಇಲ್ಲಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxnvfxs3sj5be17mw443ybrd,imgname-balcony-decoration-ideas-1784218646306.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Balcony Decor Ideas: &lt;/strong&gt;ಕೇವಲ ₹100 ರೂಪಾಯಿ ಬಜೆಟ್&zwnj;ನಲ್ಲಿ ನಿಮ್ಮ ಬಾಲ್ಕನಿಗೆ ಸ್ಟೈಲಿಶ್ ಮತ್ತು ಕೂಲ್ ಲುಕ್ ನೀಡಿ. ಗಿಡದ ಕುಂಡಗಳು, ಫೇರಿ ಲೈಟ್ಸ್, DIY ಪ್ಲಾಂಟರ್, ಕೃತಕ ಹುಲ್ಲು ಮತ್ತು ಸೀಟ್ ಮ್ಯಾಟ್ ಬಳಸಿ ಬಾಲ್ಕನಿ ಅಲಂಕರಿಸುವ 5 ಸುಲಭ ಹಾಗೂ ಬಜೆಟ್ ಸ್ನೇಹಿ ಐಡಿಯಾಗಳನ್ನು ಇಲ್ಲಿ ತಿಳಿಯಿರಿ.&lt;/p&gt;&lt;img&gt;&lt;p&gt;ನಿಮ್ಮ ಬಾಲ್ಕನಿಯನ್ನು ಕಡಿಮೆ ಖರ್ಚಿನಲ್ಲಿ ಸುಂದರವಾಗಿ ಕಾಣುವಂತೆ ಮಾಡಲು, ನೀವು ಬಣ್ಣಬಣ್ಣದ ಹೂವಿನ ಗಿಡಗಳಿಂದ ಆರಂಭಿಸಬಹುದು. ಸುಲಭವಾಗಿ ಬೆಳೆಸಬಹುದಾದ ಮತ್ತು ವರ್ಣರಂಜಿತ ಹೂವುಗಳನ್ನು ಬಿಡುವ ಅನೇಕ ಗಿಡಗಳು ನಿಮಗೆ ಸಿಗುತ್ತವೆ. ಚೆಂಡು ಹೂವು, ಜೀನಿಯಾ (Zinnia), ಪೋರ್ಟುಲಾಕಾ ಮುಂತಾದ ಗಿಡಗಳ ಬೀಜಗಳು ಕಡಿಮೆ ಬೆಲೆಗೆ ಲಭ್ಯ. ಈ ಬಣ್ಣದ ಹೂವುಗಳು ನಿಮ್ಮ ಬಾಲ್ಕನಿಯನ್ನು ಸುಂದರವಾಗಿಸುತ್ತವೆ ಮತ್ತು ₹100ರ ಒಳಗೆ ನಿಮ್ಮ ಬಾಲ್ಕನಿ ಸಿದ್ಧವಾಗುತ್ತದೆ.&lt;/p&gt;&lt;img&gt;&lt;p&gt;ಕಡಿಮೆ ಬೆಲೆಯಲ್ಲಿ ಬಾಲ್ಕನಿಯನ್ನು ಅಲಂಕರಿಸಲು ನೀವು ಕೃತಕ ಹುಲ್ಲನ್ನು ಬಳಸಬಹುದು. ಈ ಆರ್ಟಿಫಿಶಿಯಲ್ ಗ್ರಾಸ್ ಅನ್ನು ನೀವು ಬಾಲ್ಕನಿಯ ಗೋಡೆಗೆ ಅಥವಾ ನೆಲದ ಮೇಲೆ ಹಾಕಬಹುದು. ಇದು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ ಮತ್ತು ಕಡಿಮೆ ಬೆಲೆಗೆ ಸಿಗುತ್ತದೆ. ಒಂದು ವೇಳೆ ನೀವು ಗೋಡೆಯ ಮೇಲೆ ಹುಲ್ಲು ಹಾಕುತ್ತಿದ್ದರೆ, ಅದರ ಜೊತೆಗೆ ಕನ್ನಡಿ ಅಥವಾ ಹ್ಯಾಂಗಿಂಗ್ ಡೆಕೋರೇಷನ್ ವಸ್ತುಗಳನ್ನು ಬಳಸಿ.&lt;/p&gt;&lt;img&gt;&lt;p&gt;₹100ರ ಒಳಗೆ ನಿಮ್ಮ ಬಾಲ್ಕನಿಗೆ ವಿಶಿಷ್ಟ ವಿನ್ಯಾಸ ನೀಡಬೇಕಿದ್ದರೆ, ನೀವು ಅಗ್ಗದ ಆಯ್ಕೆಯಾಗಿ ಅಕ್ರಿಲಿಕ್ ಬಣ್ಣಗಳನ್ನು ಆರಿಸಿಕೊಳ್ಳಬಹುದು. ₹100ರ ಒಳಗೆ ನಿಮಗೆ ಒಂದು ಅಥವಾ ಎರಡು ಬಣ್ಣಗಳು ಸುಲಭವಾಗಿ ಸಿಗುತ್ತವೆ. ಇದರಿಂದ ನೀವು ಪ್ಲಾಸ್ಟಿಕ್ ಕುಂಡಗಳಿಗೆ ಇಷ್ಟದ ಬಣ್ಣ ಹಚ್ಚಬಹುದು. ಬಣ್ಣಬಣ್ಣದ ಕುಂಡಗಳು ಬಾಲ್ಕನಿಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತವೆ ಮತ್ತು ಬಜೆಟ್&zwnj;ನಲ್ಲೂ ಸಿಗುತ್ತವೆ. ಬೇಕಿದ್ದರೆ, ನೀವು ಪ್ಲಾಸ್ಟಿಕ್ ಬಾಟಲಿ ಅಥವಾ ಕಂಟೇನರ್&zwnj;ಗಳಿಂದ ಮನೆಯಲ್ಲೇ ಸುಂದರವಾದ ಪ್ಲಾಂಟರ್&zwnj;ಗಳನ್ನು ತಯಾರಿಸಬಹುದು.&lt;/p&gt;&lt;img&gt;&lt;p&gt;ಚಿಕ್ಕ ಬಾಲ್ಕನಿಯನ್ನು ಕಡಿಮೆ ಬಜೆಟ್&zwnj;ನಲ್ಲಿ ಸುಂದರವಾಗಿ ಕಾಣುವಂತೆ ಮಾಡಲು, ನೀವು ಫೇರಿ ಲೈಟ್ಸ್ ಖರೀದಿಸಬಹುದು. ಈ ಫೇರಿ ಲೈಟ್ಸ್&zwnj;ಗಳನ್ನು ಬಾಲ್ಕನಿಯ ಗ್ರಿಲ್&zwnj;ಗೆ ಅಥವಾ ಹ್ಯಾಂಗಿಂಗ್ ಗಿಡಗಳ ಬಳಿ ಅಲಂಕರಿಸಬಹುದು. ಇವು ನೋಡಲು ತುಂಬಾ ಸುಂದರವಾಗಿ ಕಾಣುತ್ತವೆ. ನಿಮ್ಮ ಬಾಲ್ಕನಿ ದೊಡ್ಡದಾಗಿದ್ದರೆ, ನೀವು ದೊಡ್ಡ ಗಾತ್ರದ ಲೈಟ್ ಖರೀದಿಸಬೇಕಾಗುತ್ತದೆ, ಅದಕ್ಕೆ 100 ರಿಂದ ₹200 ಹೆಚ್ಚು ಖರ್ಚಾಗಬಹುದು. ಚಿಕ್ಕ ಬಾಲ್ಕನಿಯನ್ನು ನೀವು ಸುಲಭವಾಗಿ ಆರ್ಟಿಫಿಶಿಯಲ್ ಮನಿ ಪ್ಲಾಂಟ್ ವೈನ್ ಲೈಟ್ ಅಥವಾ ಎಲ್&zwnj;ಇಡಿ ಲೈಟ್&zwnj;ನಿಂದ ಅಲಂಕರಿಸಬಹುದು.&lt;/p&gt;&lt;img&gt;&lt;p&gt;ಬಾಲ್ಕನಿಯನ್ನು ಸುಂದರವಾಗಿ ಕಾಣುವಂತೆ ಮಾಡಲು ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ, ಗಿಡಗಳಿಗೂ ಸುಂದರ ಲುಕ್ ನೀಡಬಹುದು. ಇದಕ್ಕಾಗಿ ನೀವು ಹ್ಯಾಂಗಿಂಗ್ ಪ್ಲಾಂಟರ್&zwnj;ಗಳನ್ನು ಬಳಸಿ. ಹ್ಯಾಂಗಿಂಗ್ ಪ್ಲಾಂಟರ್&zwnj;ಗಳು ಕಡಿಮೆ ಬೆಲೆಗೆ ಸಿಗುತ್ತವೆ ಮತ್ತು ಇವು ವಿಶಿಷ್ಟ ನೋಟವನ್ನು ನೀಡುತ್ತವೆ. ದುಬಾರಿ ಪ್ಲಾಂಟರ್&zwnj;ಗಳನ್ನು ಖರೀದಿಸಲು ಹಣವಿಲ್ಲದಿದ್ದರೆ, ನೀವು ತೆಂಗಿನ ಚಿಪ್ಪಿನಿಂದ ಹಿಡಿದು ಟಿನ್ ಡಬ್ಬಗಳವರೆಗೆ ಬಳಸಿ ಹ್ಯಾಂಗಿಂಗ್ ಪ್ಲಾಂಟರ್&zwnj;ಗಳನ್ನು ತಯಾರಿಸಬಹುದು. ಮನೆಯಲ್ಲಿ ಹ್ಯಾಂಗಿಂಗ್ ಪ್ಲಾಂಟರ್ ಮಾಡಲು ₹100 ಕ್ಕಿಂತ ಹೆಚ್ಚು ಖರ್ಚಾಗುವುದಿಲ್ಲ.&lt;/p&gt;]]></content:encoded>
            <category>kitchen</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/kitchen/balcony-decoration-ideas-under-100-rupees-budget-friendly-tips-c6crl7i"/>
        </item>
        <item>
            <title><![CDATA[ಹಾವುಗಳು ಯಾವುದಕ್ಕೆ ಹೆಚ್ಚು ಭಯ ಪಡುತ್ತೆ? ಈ ವಿಷ್ಯ ತಿಳಿದ್ರೆ ಮಳೆಗಾಲದಲ್ಲಿ ನೀವು ಸೇಫ್]]></title>
            <link>https://kannada.asianetnews.com/kitchen/know-the-facts-about-snakes-biggest-fear/articleshow-f0qf6fn</link>
            <guid isPermaLink="true">https://kannada.asianetnews.com/kitchen/know-the-facts-about-snakes-biggest-fear/articleshow-f0qf6fn</guid>
            <pubDate>Thu, 16 Jul 2026 16:27:33 +0530</pubDate>
            <description><![CDATA[&lt;p&gt;Snakes Fear: ಮಳೆಗಾಲದಲ್ಲಿ ಹಾವುಗಳು, ಚೇಳುಗಳು, ಜೇಡಗಳು ಅಥವಾ ಸಹಸ್ರಪದಿಗಳ ಅಪಾಯ ಹೆಚ್ಚಾಗುತ್ತದೆ. ಇವುಗಳಲ್ಲಿ ಹಾವುಗಳು ಅತ್ಯಂತ ಅಪಾಯಕಾರಿ, ಹಾವು ಕಚ್ಚಿ ಸಾಯುವ ಅಪಾಯವೂ ಇದೆ. ಹಾವುಗಳು ಹೆಚ್ಚಾಗಿ ಯಾವುದಕ್ಕೆ ಭಯ ಪಡುತ್ತವೆ ಎನ್ನುವುದನ್ನು ತಿಳಿದರೆ, ಹಾವುಗಳಿಂದ ಸುಲಭವಾಗಿ ರಕ್ಷಣೆ ಪಡೆಯಬಹುದು.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3r2zhw5fs29v24rt4x5x0t,imgname-snake-behavior--6--1783611096636.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮಳೆಗಾಲದಲ್ಲಿ ಹೆಚ್ಚಾಗುವ ಹಾವುಗಳ ಸಮಸ್ಯೆ&lt;/strong&gt;&lt;/h2&gt;&lt;p&gt;ಮಳೆ ಹೆಚ್ಚಾಗುತ್ತಿದ್ದಂತೆ, ಮನೆಯೊಳಗೆ ಹಾವು, ಕಾರಲ್ಲಿ, ಬೈಕಲ್ಲಿ ಹಾವು ಕಾಣಿಸಿಕೊಳ್ಳುವುದು ಮತ್ತು ಹಾವು ಕಚ್ಚಿ ಸತ್ತ ಸುದ್ದಿಗಳು ಸಹ ಹೆಚ್ಚಾಗಿ ಕೇಳೋದಕ್ಕೆ ಶುರುವಾಗುತ್ತದೆ. ಜನರು ಸಾಮಾನ್ಯವಾಗಿ ಹಾವುಗಳು ಕಾಡು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ ಎಂದು ಭಾವಿಸುತ್ತಾರೆ, ಆದರೆ ಇದು ನಿಜವಲ್ಲ. ಪ್ರವಾಹ, ಬಿಲಗಳಲ್ಲಿನ ತೇವಾಂಶ ಮತ್ತು ಆಹಾರದ ಹುಡುಕಾಟಕ್ಕಾಗಿ, ಹಾವುಗಳು ಎಲ್ಲಾ ಕಡೆಯೂ ಚಲಿಸಲು ಪ್ರಾರಂಭಿಸುತ್ತವೆ. ಅವು ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ವಿವಿಧ ಸ್ಥಳಗಳಲ್ಲಿ ತಮ್ಮ ಮನೆಗಳನ್ನು ನಿರ್ಮಿಸುತ್ತವೆ. ಹಾಗಾಗಿ ಮನೆಯೊಳಗೆ ನೀವು ಎಚ್ಚರಿಕೆಯಿಂದ ಇರುವುದು ಮುಖ್ಯ. ಅದಕ್ಕಾಗಿ ನೀವು ಹಾವುಗಳು ಯಾವುದಕ್ಕೆ ಹೆದರುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಹಾವುಗಳು ಯಾವುದೇ ನಿರ್ದಿಷ್ಟ ಸಸ್ಯ ಅಥವಾ ಮನೆಮದ್ದಿಗೆ ಹೆದರುವುದಿಲ್ಲ. ಹಾಗಿದ್ರೆ ಯಾವುದಕ್ಕೆ ಹಾವು ಹೆದರುತ್ತೆ ನೋಡೋಣ.&lt;/p&gt;&lt;h3&gt;&lt;strong&gt;ಹಾವುಗಳು ಯಾವುದಕ್ಕೆ ಹೆದರುತ್ತವೆ?&lt;/strong&gt;&lt;/h3&gt;&lt;p&gt;&lt;strong&gt;ಬಲವಾದ ಕಂಪನಗಳು ಮತ್ತು ಚಲನೆಯನ್ನು ಹೊಂದಿರುವ ವಸ್ತುಗಳು : &lt;/strong&gt;ಹಾವುಗಳು ನೆಲದ ಕಂಪನಗಳನ್ನು ಚೆನ್ನಾಗಿ ಗ್ರಹಿಸಬಲ್ಲವು. ಜೋರಾದ ಹೆಜ್ಜೆಗಳನ್ನು ಅಥವಾ ಹತ್ತಿರದ ಚಲನೆಯನ್ನು ಗ್ರಹಿಸಿದಾಗ, ಅವು ಓಡಿಹೋಗುತ್ತವೆ.&lt;/p&gt;&lt;p&gt;&lt;strong&gt;ಹಾವುಗಳು ಸಹ ಮನುಷ್ಯರನ್ನು ಕಂಡರೆ ಹೆದರುತ್ತವೆ: &lt;/strong&gt;ಹಾವುಗಳು ಮನುಷ್ಯರ ಮೇಲೆ ದಾಳಿ ಸುಮ್ಮನೆ ಮಾಡುವುದಿಲ್ಲ ಏಕೆಂದರೆ ಹಾವುಗಳು ಕೂಡ ಮನುಷ್ಯರಿಗೆ ಹೆದರುತ್ತವೆ. ಅವು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಭಾವಿಸಿದಾಗ ಅಥವಾ ತಮಗೆ ನೋವಾದಾಗ ಮಾತ್ರ ಅವು ಕಚ್ಚುತ್ತವೆ.&lt;/p&gt;&lt;p&gt;&lt;strong&gt;ಬೆಳಕಿನಿಂದ ದೂರ ಹೋಗುವುದು : &lt;/strong&gt;ಹಠಾತ್ ಆಗಿ ಬೆಳಕು ಬಂದಾಗ ಹಾವುಗಳು ಹೆದರುತ್ತವೆ. ಇದರ ಹಿಂದಿನ ವಿಜ್ಞಾನವೆಂದರೆ ಅವುಗಳ ಕಣ್ಣುಗಳು ರಾತ್ರಿಯಲ್ಲಿ ನೋಡುವಂತೆ ವಿನ್ಯಾಸಗೊಳಿಸಲಾಗಿದೆ, ಆದ್ದರಿಂದ ಪ್ರಕಾಶಮಾನವಾದ ಬೆಳಕು ಅವುಗಳ ಕಣ್ಣುಗಳಿಗೆ ನೋವುಂಟು ಮಾಡುತ್ತದೆ.&lt;/p&gt;&lt;h3&gt;&lt;strong&gt;ಹಾವುಗಳು ವಾಸನೆಗಳಿಂದ ಓಡಿಹೋಗುತ್ತವೆಯೇ?&lt;/strong&gt;&lt;/h3&gt;&lt;p&gt;ಅನೇಕ ಪ್ರಾಣಿಗಳು ಮತ್ತು ಕೀಟಗಳು ಕೆಲವು ಗಾಢವಾದ ವಾಸನೆಗೆ ಓಡಿ ಹೋಗುತ್ತವೆ. ಆದ್ದರಿಂದ, ಜನರು ಫಿನಾಯಿಲ್, ಸೀಮೆಎಣ್ಣೆ, ಬೆಳ್ಳುಳ್ಳಿ, ಈರುಳ್ಳಿ, ಕರ್ಪೂರ ಅಥವಾ ಸಸ್ಯಗಳನ್ನು ಬಳಸುತ್ತಾರೆ. ಆದರೆ, ಇವು ಹಾವುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.&lt;/p&gt;&lt;h3&gt;&lt;strong&gt;ಮಳೆಗಾಲದಲ್ಲಿ ಹಾವುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?&lt;/strong&gt;&lt;/h3&gt;&lt;p&gt;&lt;strong&gt;ಸ್ವಚ್ಛತೆಗೆ ಗಮನ ಕೊಡಿ : &lt;/strong&gt;ಮಳೆಗಾಲದಲ್ಲಿ ಮನೆಗಳು ಹೆಚ್ಚಾಗಿ ಕೊಳಕಾಗುತ್ತವೆ, ಇದು ಕೀಟಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದು. ಆದ್ದರಿಂದ, ನಿಯಮಿತವಾಗಿ ಸ್ವಚ್ಛಗೊಳಿಸುವ ಬಗ್ಗೆ ಗಮನ ಕೊಡಿ. ಆ ಮೂಲಕ ಹಾವುಗಳನ್ನು ಮನೆಯಿಂದ ದೂರವಿಡಿ.&lt;/p&gt;&lt;p&gt;&lt;strong&gt;ಇಲಿಗಳನ್ನು ನಿಯಂತ್ರಿಸಿ : &lt;/strong&gt;ಇದು ವಿಚಿತ್ರವೆನಿಸಬಹುದು, ಆದರೆ ಹಾವುಗಳು ಇಲಿಗಳನ್ನು ಇಷ್ಟಪಡುತ್ತವೆ. ಇಲಿಗಳ ಭೇಟೆಗಾಗಿ ಹಾವು ಮನೆಗೆ ಬಂದು ಸೇರಬಹುದು. ಹಾಗಾಗಿ ಮೊದಲಿಗೆ ಮನೆಯಿಂದ ಇಲಿಗಳನ್ನು ಓಡಿಸಿ.&lt;/p&gt;]]></content:encoded>
            <category>kitchen</category>
            <dc:creator>Pavna Das</dc:creator>
            <atom:link href="https://kannada.asianetnews.com/kitchen/know-the-facts-about-snakes-biggest-fear/articleshow-f0qf6fn"/>
        </item>
        <item>
            <title><![CDATA[ತುಂಬಾ ಸಿಂಪಲ್, ವಾರವಿಡೀ ಇರುತ್ತೆ.. ತಿಂಡಿಗೆ ಸೈಡ್ ಡಿಶ್‌ ರುಚಿ ರುಚಿಯಾದ ಟೊಮೆಟೊ ತೊಕ್ಕು]]></title>
            <link>https://kannada.asianetnews.com/food/quick-and-tasty-tomato-thokku-recipe-perfect-side-dish-for-idli-and-dosa/articleshow-gicgz65</link>
            <guid isPermaLink="true">https://kannada.asianetnews.com/food/quick-and-tasty-tomato-thokku-recipe-perfect-side-dish-for-idli-and-dosa/articleshow-gicgz65</guid>
            <pubDate>Fri, 17 Jul 2026 11:08:23 +0530</pubDate>
            <description><![CDATA[&lt;p&gt;&lt;strong&gt;Tomato Thokku recipe in Kannada: &lt;/strong&gt;ಬೆಳಗಿನ ಉಪಹಾರಕ್ಕೆ ಪ್ರತಿದಿನ ಶೇಂಗಾ ಅಥವಾ ತೆಂಗಿನಕಾಯಿ ಚಟ್ನಿ ತಿಂದು ಬೋರ್ ಆಗಿದ್ದರೆ, ಈ ರುಚಿಕರ 'ಟೊಮೆಟೊ ತೊಕ್ಕು' ಟ್ರೈ ಮಾಡಿ. ಇಡ್ಲಿ, ದೋಸೆ ಮಾತ್ರವಲ್ಲದೆ ಬಿಸಿ ಅನ್ನಕ್ಕೂ ಅಮೃತದಂತೆ ರುಚಿ ನೀಡುವ ಈ ತೊಕ್ಕನ್ನು ಒಮ್ಮೆ ತಯಾರಿಸಿ ಇಟ್ಟರೆ ವಾರವಿಡೀ ಬಳಸಬಹುದು. ಬೆಳಗಿನ ವೇಳೆಗೆ ಸಮಯ ಉಳಿಸುವ ಈ ಸ್ಪೆಷಲ್ ರೆಸಿಪಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq97bcy184x35swn89jbq9h,imgname-thumbnail---2026-07-17t110140.935-1784266599838.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರ&lt;/strong&gt;ತಿದಿನ ಶೇಂಗಾ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿ ತಿಂದು ಬೋರ್ ಆಗಿದೆಯೇ? ಇಡ್ಲಿ-ದೋಸೆಗೆ ಸೈಡ್ ಡಿಶ್ ಏನು ಮಾಡಬೇಕೆಂದು ತಿಳಿಯುತ್ತಿಲ್ಲವೇ? ಹಾಗಾದರೆ ಇನ್ಮುಂದೆ ಚಿಂತಿಸಬೇಡಿ. ಮನೆಯಲ್ಲಿ ಟೊಮೆಟೊಗಳು ಹೆಚ್ಚಿದ್ದರೆ ಅವುಗಳಿಂದ ನಾಲಿಗೆಯಲ್ಲಿ ನೀರೂರಿಸುವ 'ಟೊಮೆಟೊ ತೊಕ್ಕು' ತಯಾರಿಸಿಕೊಳ್ಳಿ. ಈ ತೊಕ್ಕು ಕೇವಲ ಇಡ್ಲಿ, ದೋಸೆಗೆ ಮಾತ್ರವಲ್ಲದೆ, ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತಿಂದರೆ ಅಮೃತದಂತಿರುತ್ತದೆ. ಇದನ್ನು ಒಂದು ಬಾರಿ ಮಾಡಿಟ್ಟರೆ, ಒಂದು ವಾರದವರೆಗೆ ಫ್ರಿಡ್ಜ್&zwnj;ನಲ್ಲಿಟ್ಟು ಬಳಸಬಹುದು. ಬೆಳಗಿನ ವೇಳೆ ಅವಸರದಲ್ಲಿ ಇರುವವರಿಗೆ ಸಮಯ ಉಳಿಸಲು ಇದು ಬೆಸ್ಟ್ ರೆಸಿಪಿ.&lt;/p&gt;&lt;h2&gt;&lt;strong&gt;ಟೊಮೆಟೊ ತೊಕ್ಕು ತಯಾರಿಸಲು ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;ಎಳ್ಳೆಣ್ಣೆ (ಅಥವಾ ಆಲಿವ್ ಆಯಿಲ್): 3 ಟೇಬಲ್ ಚಮಚ (ಎಳ್ಳೆಣ್ಣೆ ಬಳಸಿದರೆ ರುಚಿ ಮತ್ತು ಬಾಳಿಕೆ ಹೆಚ್ಚು)ಸಾಸಿವೆ: 1/2 ಟೀಸ್ಪೂನ್ಉದ್ದಿನ ಬೇಳೆ: 1 ಟೀಸ್ಪೂನ್ಈರುಳ್ಳಿ: 250 ಗ್ರಾಂ (ಸಣ್ಣಗೆ ಹೆಚ್ಚಿದ್ದು)ಕರಿಬೇವು: 1 ಕಟ್ಟುಬೆಳ್ಳುಳ್ಳಿ: 25 ಎಸಳು (ಸಣ್ಣಗೆ ಹೆಚ್ಚಿದ್ದು)ಟೊಮೆಟೊ: ಅರ್ಧ ಕೆಜಿ (ಸಣ್ಣಗೆ ಹೆಚ್ಚಿದ್ದು)ಖಾರದ ಪುಡಿ: 3 ರಿಂದ 4 ಟೇಬಲ್ ಚಮಚ (ನಿಮ್ಮ ಖಾರಕ್ಕೆ ತಕ್ಕಂತೆ)ಗರಂ ಮಸಾಲಾ: 1/2 ಟೀಸ್ಪೂನ್ಉಪ್ಪು: ರುಚಿಗೆ ತಕ್ಕಷ್ಟುಕೊನೆಯಲ್ಲಿ ಒಗ್ಗರಣೆಗೆ: 1 ಟೇಬಲ್ ಚಮಚ ಎಣ್ಣೆ ಮತ್ತು 2 ಕಟ್ಟು ಕರಿಬೇವು&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;*ಮೊದಲು ಸ್ಟೌವ್ ಹಚ್ಚಿ ದಪ್ಪ ತಳದ ಬಾಂಡ್ಲಿ ಅಥವಾ ಕಡಾಯಿ ಇಟ್ಟುಕೊಳ್ಳಿ. ಅದಕ್ಕೆ ಎಳ್ಳೆಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಸಾಸಿವೆ, ಉದ್ದಿನ ಬೇಳೆ ಹಾಕಿ ಕೆಂಪಾಗುವವರೆಗೆ ಹುರಿಯಿರಿ.&lt;/p&gt;&lt;p&gt;*ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ. ಉರಿಯನ್ನು ಮೀಡಿಯಂ ಫ್ಲೇಮ್&zwnj;ನಲ್ಲಿಟ್ಟು, ಈರುಳ್ಳಿ ಹಸಿ ವಾಸನೆ ಹೋಗಿ ಮೆತ್ತಗಾಗುವವರೆಗೆ ಹುರಿಯಿರಿ. ಈಗ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.&lt;/p&gt;&lt;p&gt;*ಈರುಳ್ಳಿ ಮತ್ತು ಬೆಳ್ಳುಳ್ಳಿ ಚೆನ್ನಾಗಿ ಬೆಂದ ನಂತರ, ಕತ್ತರಿಸಿದ ಟೊಮೆಟೊ ಪೀಸ್&zwnj; ಸೇರಿಸಿ ಚೆನ್ನಾಗಿ ಕೈಯಾಡಿಸಿ. ಸ್ವಲ್ಪ ಸಮಯದ ನಂತರ ಟೊಮೆಟೊದಿಂದ ನೈಸರ್ಗಿಕವಾಗಿ ನೀರು ಹೊರಬರುತ್ತದೆ. ಆ ಸಮಯದಲ್ಲಿ ಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಸುಮಾರು 5 ನಿಮಿಷ ಬೇಯಿಸಿ.&lt;/p&gt;&lt;p&gt;*ನಂತರ ಮುಚ್ಚಳ ತೆಗೆದು ಅಡಿ ಹಿಡಿಯದಂತೆ ಒಮ್ಮೆ ಕಲಕಿ. ಮತ್ತೆ ಮುಚ್ಚಳ ಮುಚ್ಚಿ ಉರಿಯನ್ನು ಪೂರ್ತಿ ಕಡಿಮೆ ಮಾಡಿ (Low Flame) 10 ನಿಮಿಷ ಬೇಯಿಸಿ. ಮಧ್ಯಮಧ್ಯದಲ್ಲಿ ಕಲಕುತ್ತಿರಿ.&lt;/p&gt;&lt;p&gt;*ಹತ್ತು ನಿಮಿಷದ ನಂತರ ಟೊಮೆಟೊ ಪೂರ್ತಿ ಮೆತ್ತಗಾಗಿ, ಗೊಜ್ಜಿನಿಂದ ಎಣ್ಣೆ ಸೈಡ್&zwnj;ಗಳಲ್ಲಿ ಬಿಟ್ಟುಕೊಳ್ಳಲು ಶುರುವಾಗುತ್ತದೆ. ಇದು ತೊಕ್ಕು ಸರಿಯಾಗಿ ಬೆಂದಿದೆ ಎಂಬುದಕ್ಕೆ ಸಂಕೇತ.&lt;/p&gt;&lt;p&gt;*ಈಗ ಅರ್ಧ ಟೀಸ್ಪೂನ್ ಗರಂ ಮಸಾಲಾ ಸಿಂಪಡಿಸಿ ಚೆನ್ನಾಗಿ ಕಲಕಿ, ಮತ್ತೆ 2-3 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಸ್ಟೌವ್ ಆಫ್ ಮಾಡಿ.&lt;/p&gt;&lt;p&gt;*ಇದಕ್ಕೆ ಮತ್ತಷ್ಟು ರುಚಿ ನೀಡಲು, ಒಂದು ಸಣ್ಣ ಪ್ಯಾನ್&zwnj;ನಲ್ಲಿ ಒಂದು ಚಮಚ ಎಣ್ಣೆ ಕಾಯಿಸಿ, ಅದಕ್ಕೆ ಕರಿಬೇವು ಹಾಕಿ ಗರಿಗರಿಯಾಗುವಂತೆ ಹುರಿದು, ಆ ಒಗ್ಗರಣೆಯನ್ನು ಸಿದ್ಧವಾದ ಟೊಮೆಟೊ ತೊಕ್ಕಿಗೆ ಸೇರಿಸಿ.&lt;/p&gt;&lt;p&gt;ಅಷ್ಟೇ! ಘಮಘಮಿಸುವ ರುಚಿಕರವಾದ ಟೊಮೆಟೊ ತೊಕ್ಕು ರೆಡಿ. ಇದು ಪೂರ್ತಿ ತಣ್ಣಗಾದ ನಂತರ ಗಾಳಿಯಾಡದ ಗಾಜಿನ ಸೀಸೆಯಲ್ಲಿ (Airtight glass jar) ತುಂಬಿಟ್ಟರೆ ವಾರವಿಡೀ ಬಳಸಬಹುದು.&lt;/p&gt;]]></content:encoded>
            <category>kitchen</category>
            <dc:creator>Ashwini HR</dc:creator>
            <atom:link href="https://kannada.asianetnews.com/food/quick-and-tasty-tomato-thokku-recipe-perfect-side-dish-for-idli-and-dosa/articleshow-gicgz65"/>
        </item>
        <item>
            <title><![CDATA[ಪಾನ್‌ಗೆ ಹಿಟ್ಟು ಸುರಿದ್ರೆ ರೆಡಿ ಆಗುತ್ತೆ ಆಂಧ್ರದ ಪ್ರಸಿದ್ಧ ದಿಬ್ಬ ರೊಟ್ಟಿ; ಇದರ ಗ್ಲಾಸ್ ವಿಧಾನವೇ ಅತ್ಯಂತ ಭಿನ್ನ!]]></title>
            <link>https://kannada.asianetnews.com/food/andhra-special-dibba-rotti-recipe-with-glass-method-san/articleshow-h28oflw</link>
            <guid isPermaLink="true">https://kannada.asianetnews.com/food/andhra-special-dibba-rotti-recipe-with-glass-method-san/articleshow-h28oflw</guid>
            <pubDate>Thu, 16 Jul 2026 19:46:36 +0530</pubDate>
            <description><![CDATA[ಆಂಧ್ರದ ಜನಪ್ರಿಯ ತಿಂಡಿ 'ದಿಬ್ಬ ರೊಟ್ಟಿ'ಯನ್ನು ಇಡ್ಲಿ ಅಥವಾ ದೋಸೆ ಹಿಟ್ಟಿನಿಂದಲೇ ತಯಾರಿಸಲಾಗುತ್ತದೆ. ದಪ್ಪ ತಳದ ಪಾನ್&zwnj;ನಲ್ಲಿ ಹಿಟ್ಟಿನ ಮಧ್ಯೆ ನೀರಿನ ಲೋಟ ಇಟ್ಟು ಬೇಯಿಸುವ ವಿಶಿಷ್ಟ ವಿಧಾನದಿಂದ ಇದು ಹೊರಗೆ ಗರಿಗರಿಯಾಗಿ ಮತ್ತು ಒಳಗೆ ಸ್ಪಂಜಿನಂತೆ ಮೃದುವಾಗಿರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxnme74p81hfch5jghgrcec0,imgname-dibba-roti-andhra-pradesh-1784211250326.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.16):&lt;/strong&gt; ದಕ್ಷಿಣ ಭಾರತೀಯ ಖಾದ್ಯ ಪ್ರಿಯರಿಗೆ 'ದಿಬ್ಬ ರೊಟ್ಟಿ' ಅತ್ಯಂತ ಅಪರೂಪದ ಹಾಗೂ ರುಚಿಕರವಾದ ತಿಂಡಿ. ಇದು ನಾವಿಲ್ಲಿ ಸವಿಯುವ ಸಾಮಾನ್ಯ ಪರೋಟ ಅಥವಾ ದೋಸೆಯಂತಲ್ಲ; ಬದಲಿಗೆ ಹೊರಭಾಗದಲ್ಲಿ ಅತ್ಯಂತ ಗರಿಗರಿಯಾಗಿ (Super Crispy) ಮತ್ತು ಒಳಗಡೆ ಅಷ್ಟೇ ಮೃದುವಾಗಿ, ಸ್ಪಂಜಿನಂತೆ (Fluffy) ಇರುತ್ತದೆ. ಇದರ ಅತ್ಯಂತ ಆಕರ್ಷಕ ವಿಷಯವೆಂದರೆ, ಈ ರೊಟ್ಟಿಯನ್ನು ತಯಾರಿಸಲು ಗೋಧಿ ಅಥವಾ ಮೈದಾ ಹಿಟ್ಟನ್ನು ನಾದಬೇಕಾದ ಅಗತ್ಯವೇ ಇಲ್ಲ! ನೀವು ಪ್ರತಿದಿನ ಅದೇ ನೀರಸ ಇಡ್ಲಿ, ದೋಸೆ ತಿಂದು ಬೇಸತ್ತಿದ್ದರೆ ಮತ್ತು ಏನಾದರೂ ಹೊಸದನ್ನು ಪ್ರಯತ್ನಿಸಲು ಬಯಸಿದರೆ, ಆಂಧ್ರಪ್ರದೇಶದ ಅತ್ಯಂತ ಜನಪ್ರಿಯ 'ದಿಬ್ಬ ರೊಟ್ಟಿ' ಬೆಸ್ಟ್&zwnj; ಆಪ್ಶನ್&zwnj;. ಈ ರೊಟ್ಟಿಯನ್ನು ಸಾಮಾನ್ಯ ಇಡ್ಲಿ ಅಥವಾ ದೋಸೆ ಹಿಟ್ಟಿನಿಂದಲೇ ತಯಾರಿಸಲಾಗುತ್ತದೆ. ಆದರೆ, ಇದನ್ನು ಬೇಯಿಸುವ ವಿಶಿಷ್ಟ ಹಾಗೂ ಕುತೂಹಲಕಾರಿ ವಿಧಾನವೇ ಇದನ್ನು ಉಳಿದೆಲ್ಲಾ ತಿಂಡಿಗಳಿಗಿಂತ ಭಿನ್ನವಾಗಿಸುತ್ತದೆ.&lt;/p&gt;&lt;p&gt;ದಪ್ಪ ತಳದ ಪಾನ್&zwnj;ಗೆ ಹೆಚ್ಚಿನ ಪ್ರಮಾಣದಲ್ಲಿ ಇಡ್ಲಿ ಹಿಟ್ಟನ್ನು ಸುರಿದು, ಅದರ ಮಧ್ಯದಲ್ಲಿ ನೀರು ತುಂಬಿದ ಸಣ್ಣ ಲೋಟವನ್ನು ಇಟ್ಟು ಸಣ್ಣ ಉರಿಯಲ್ಲಿ ಬೇಯಿಸಲಾಗುತ್ತದೆ. ಇದರ ಪರಿಣಾಮವೇನು ಗೊತ್ತೇ? ಈ ರೊಟ್ಟಿಯ ಹೊರಪದರವು ಚಿನ್ನದ ಬಣ್ಣಕ್ಕೆ ತಿರುಗಿ ಕ್ರಿಸ್ಪಿ ಆಗುತ್ತದೆ, ಆದರೆ ಒಳಗಿನ ಭಾಗವು ಸಂಪೂರ್ಣವಾಗಿ ಜಾಲರಿ ರೂಪದಲ್ಲಿ ಮೃದುವಾಗಿ ಅರಳುತ್ತದೆ. ಈ ಸಾಂಪ್ರದಾಯಿಕ ದಕ್ಷಿಣ ಭಾರತದ ಸ್ಪೆಷಲ್ ರೊಟ್ಟಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.&lt;/p&gt;&lt;h2&gt;&lt;strong&gt;ಮೊದಲು ತಿಳಿಯಿರಿ: 'ದಿಬ್ಬ ರೊಟ್ಟಿ' ಯಾಕೆ ಇಷ್ಟು ವಿಶೇಷ?&lt;/strong&gt;&lt;/h2&gt;&lt;p&gt;ದಿಬ್ಬ ರೊಟ್ಟಿಯು ತನ್ನ ವಿಶಿಷ್ಟ ವಿನ್ಯಾಸ ಮತ್ತು ಸಾಂಪ್ರದಾಯಿಕ ತಯಾರಿಕಾ ಶೈಲಿಯಿಂದಾಗಿ ಹೆಚ್ಚು ಜನಪ್ರಿಯವಾಗಿದೆ. ಇದು ಪೂರ್ಣ ಪ್ರಮಾಣದಲ್ಲಿ ದೋಸೆಯೂ ಅಲ್ಲ ಅಥವಾ ಉತ್ತಪ್ಪಂ ಕೂಡ ಅಲ್ಲ. ಇದನ್ನು ಬೇಯಿಸುವಾಗ ಹಿಟ್ಟಿನ ಮಧ್ಯದಲ್ಲಿ ನೀರು ತುಂಬಿದ ಗ್ಲಾಸ್ ಅನ್ನು ಇಡಲಾಗುತ್ತದೆ. ಇದು ರೊಟ್ಟಿಯ ಒಳಗಿನ ಭಾಗವು ಚೆನ್ನಾಗಿ ಬೇಯಲು ಮತ್ತು ರೊಟ್ಟಿಗೆ ಒಂದು ಸುಂದರವಾದ ಡೋನಟ್ ಮಾದರಿಯ ಆಕಾರ (Ring Shape) ನೀಡಲು ಸಹಾಯ ಮಾಡುತ್ತದೆ. ಹಿಟ್ಟು ನಾದದೆ ಕೇವಲ ದೋಸೆ ಹಿಟ್ಟಿನಿಂದಲೇ ಮಾಡುವ ರೊಟ್ಟಿ ಇದಾಗಿದೆ.&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;ul&gt; &lt;li&gt;ಇಡ್ಲಿ ಅಥವಾ ದೋಸೆ ಹಿಟ್ಟು (ಗಟ್ಟಿಯಾಗಿರಬೇಕು) &ndash; 2 ಕಪ್&lt;/li&gt; &lt;li&gt;ಎಣ್ಣೆ &ndash; 3 ರಿಂದ 4 ದೊಡ್ಡ ಚಮಚ&lt;/li&gt; &lt;li&gt;ಜೀರಿಗೆ &ndash; 1 ಸಣ್ಣ ಚಮಚ&lt;/li&gt; &lt;li&gt;ನೀರು &ndash; ಅಗತ್ಯವಿರುವಷ್ಟು&lt;/li&gt;&lt;/ul&gt;&lt;h2&gt;&lt;strong&gt;ದಿಬ್ಬ ರೊಟ್ಟಿ ತಯಾರಿಸುವ ಹಂತ-ಹಂತದ ರೆಸಿಪಿ&lt;/strong&gt;&lt;/h2&gt;&lt;ul&gt; &lt;li&gt;ಮೊದಲಿಗೆ ಇಡ್ಲಿ ಅಥವಾ ದೋಸೆಯ ದಪ್ಪನೆಯ ಹಿಟ್ಟನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ (ಹಿಟ್ಟಿನಲ್ಲಿ ಮೊದಲೇ ಉಪ್ಪನ್ನು ಬೆರೆಸಿರಬೇಕು).&lt;/li&gt; &lt;li&gt;ಈಗ ಗ್ಯಾಸ್ ಒಲೆಯ ಮೇಲೆ ಒಂದು ಆಳವಾದ ಮತ್ತು ದಪ್ಪ ತಳವಿರುವ ಕಡಾಯಿ ಅಥವಾ ಪ್ಯಾನ್ ಇಟ್ಟು, ಅದಕ್ಕೆ 2-3 ದೊಡ್ಡ ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ.&lt;/li&gt; &lt;li&gt;ಎಣ್ಣೆ ಕಾದ ನಂತರ ಉರಿಯನ್ನು ಸಣ್ಣದಾಗಿಸಿ (Low Flame), ಕಡಾಯಿಯ ಮಧ್ಯಭಾಗಕ್ಕೆ ದಪ್ಪಗೆ ಇಡ್ಲಿ ಹಿಟ್ಟನ್ನು ಸುರಿಯಿರಿ. ನೆನಪಿಡಿ, ಈ ಹಿಟ್ಟನ್ನು ದೋಸೆಯಂತೆ ಹರಡಬಾರದು, ದಪ್ಪಗೇ ಇರಬೇಕು.&lt;/li&gt; &lt;li&gt;ಹಿಟ್ಟನ್ನು ಸುರಿದ ತಕ್ಷಣ, ಒಂದು ಸಣ್ಣ ಹಿತ್ತಾಳೆ ಅಥವಾ ಸ್ಟೀಲ್ ಗ್ಲಾಸ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀರು ತುಂಬಿಸಿಕೊಳ್ಳಿ.&lt;/li&gt; &lt;li&gt;ಈ ನೀರು ತುಂಬಿದ ಗ್ಲಾಸ್ ಅನ್ನು ಕಡಾಯಿಯಲ್ಲಿರುವ ಹಿಟ್ಟಿನ ಸರಿಯಾಗಿ ಮಧ್ಯಭಾಗದಲ್ಲಿ ನೇರವಾಗಿ ನಿಲ್ಲಿಸಿ ಇಡಿ. ಇದರಿಂದ ರೊಟ್ಟಿಯ ಮಧ್ಯದಲ್ಲಿ ರಂಧ್ರ (Hole) ಉಂಟಾಗುತ್ತದೆ ಹಾಗೂ ರೊಟ್ಟಿಯು ಒಳಭಾಗದಿಂದಲೂ ಚೆನ್ನಾಗಿ ಬೇಯುತ್ತದೆ.&lt;/li&gt; &lt;li&gt;ಈಗ ಹಿಟ್ಟಿನ ಮೇಲ್ಭಾಗದಲ್ಲಿ ಸುತ್ತಲೂ ಸ್ವಲ್ಪ ಜೀರಿಗೆಯನ್ನು ಉದುರಿಸಿ. ಇದರಿಂದ ರೊಟ್ಟಿಯ ರುಚಿ ಮತ್ತು ಪರಿಮಳ ಇನ್ನಷ್ಟು ಹೆಚ್ಚುತ್ತದೆ.&lt;/li&gt; &lt;li&gt;ನಂತರ ಕಡಾಯಿಗೆ ಒಂದು ಮುಚ್ಚಳವನ್ನು ಮುಚ್ಚಿ, ಸಣ್ಣ ಉರಿಯಲ್ಲಿ 8 ರಿಂದ 10 ನಿಮಿಷಗಳ ಕಾಲ ಬೇಯಲು ಬಿಡಿ. ಇದರಿಂದ ರೊಟ್ಟಿಯ ಕೆಳಭಾಗವು ಚಿನ್ನದ ಬಣ್ಣಕ್ಕೆ ತಿರುಗಿ ಗರಿಗರಿಯಾಗುತ್ತದೆ.&lt;/li&gt; &lt;li&gt;ರೊಟ್ಟಿಯ ಮೇಲ್ಭಾಗವು ಸ್ವಲ್ಪ ಒಣಗಿದಂತೆ ಹಾಗೂ ಉಬ್ಬಿದಂತೆ ಕಂಡಾಗ, ಇಕ್ಕಳದ ಸಹಾಯದಿಂದ ಅತ್ಯಂತ ಜಾಗರೂಕತೆಯಿಂದ ಮಧ್ಯದಲ್ಲಿದ್ದ ನೀರಿನ ಗ್ಲಾಸ್ ಅನ್ನು ಹೊರಗೆ ತೆಗೆಯಿರಿ.&lt;/li&gt; &lt;li&gt;ಈಗ ರೊಟ್ಟಿಯನ್ನು ಜಾಗರೂಕತೆಯಿಂದ ಮಗುಚಿ ಹಾಕಿ (ತಿರುಗಿಸಿ), ಇನ್ನೊಂದು ಬದಿಯೂ ಲಘು ಚಿನ್ನದ ಬಣ್ಣಕ್ಕೆ ಬರುವವರೆಗೆ 2 ರಿಂದ 3 ನಿಮಿಷಗಳ ಕಾಲ ಬೇಯಿಸಿ.&lt;/li&gt; &lt;li&gt;ಎರಡು ಬದಿಗಳಲ್ಲಿ ಚೆನ್ನಾಗಿ ಬೆಂದ ನಂತರ, ಬಿಸಿಬಿಸಿಯಾದ ದಿಬ್ಬ ರೊಟ್ಟಿಯನ್ನು ಕಡಾಯಿಯಿಂದ ಹೊರತೆಗೆಯಿರಿ. ಈಗ ನಿಮ್ಮ ಮುಂದಿರುವ ಗರಿಗರಿಯಾದ ಆಂಧ್ರ ಶೈಲಿಯ ದಿಬ್ಬ ರೊಟ್ಟಿಯನ್ನು ಕಾಯಿ ಚಟ್ನಿ ಅಥವಾ ಶುಂಠಿ ಚಟ್ನಿಯೊಂದಿಗೆ ಸವಿಯಲು ನೀಡಿ.&lt;/li&gt;&lt;/ul&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Aishwarya sonvane (@myflavourfuljourney)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>kitchen</category>
            <dc:creator>Santosh Naik</dc:creator>
            <atom:link href="https://kannada.asianetnews.com/food/andhra-special-dibba-rotti-recipe-with-glass-method-san/articleshow-h28oflw"/>
        </item>
        <item>
            <title><![CDATA[ರುಬ್ಬುವಾಗ ಇದೊಂದು ಹಾಕಿದ್ರೆ ಸಾಕು, ರೆಸ್ಟೋರೆಂಟ್ ನಂತೆ ಹಸಿರಾಗಿರುತ್ತೆ ನೀವು ಮಾಡೋ ಚಟ್ನಿ]]></title>
            <link>https://kannada.asianetnews.com/gallery/food/what-should-i-do-to-make-coriander-chutney-turn-green-in-restaurant-style-ilgwcgo</link>
            <guid isPermaLink="true">https://kannada.asianetnews.com/gallery/food/what-should-i-do-to-make-coriander-chutney-turn-green-in-restaurant-style-ilgwcgo</guid>
            <pubDate>Thu, 16 Jul 2026 18:28:07 +0530</pubDate>
            <description><![CDATA[&lt;p&gt;ಸಮೋಸಾ, ಪಕೋಡಾ ಎಲ್ಲದಕ್ಕೂ ಹಸಿರು ಚಟ್ನಿ ಇದ್ರೆ ರುಚಿ. ಮನೆಯಲ್ಲಿ ತಯಾರಿಸಿದ ಚಟ್ನಿ, ಹೊಟೇಲ್ ನಷ್ಟು ಹಸಿರಾಗಿ ಬರೋದಿಲ್ಲ. ಮನೆಯಲ್ಲಿ ಮಾಡಿದ ಚಟ್ನಿ ಬೇಗ ಕಪ್ಪಾಗುತ್ತೆ. ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ನೀವೂ ಮನೆಯಲ್ಲಿ ರುಚಿಯಾದ ಹಾಗೂ ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಹಸಿರಾದ ಚಟ್ನಿ ತಯಾರಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxnfy2552fzrkhbpxn926fdz,imgname-green-chutney-recipe-1784206526629.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಮೋಸಾ, ಪಕೋಡಾ ಎಲ್ಲದಕ್ಕೂ ಹಸಿರು ಚಟ್ನಿ ಇದ್ರೆ ರುಚಿ. ಮನೆಯಲ್ಲಿ ತಯಾರಿಸಿದ ಚಟ್ನಿ, ಹೊಟೇಲ್ ನಷ್ಟು ಹಸಿರಾಗಿ ಬರೋದಿಲ್ಲ. ಮನೆಯಲ್ಲಿ ಮಾಡಿದ ಚಟ್ನಿ ಬೇಗ ಕಪ್ಪಾಗುತ್ತೆ. ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ನೀವೂ ಮನೆಯಲ್ಲಿ ರುಚಿಯಾದ ಹಾಗೂ ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಹಸಿರಾದ ಚಟ್ನಿ ತಯಾರಿಸಬಹುದು.&lt;/p&gt;&lt;img&gt;&lt;p&gt;1 ಕಪ್ ತಾಜಾ ಕೊತ್ತಂಬರಿ ಸೊಪ್ಪು, 1/2 ಕಪ್ ಪುದೀನ ಎಲೆಗಳು, 2 ಹಸಿರು ಮೆಣಸಿನಕಾಯಿ, 4-5 ಬೆಳ್ಳುಳ್ಳಿ ಎಸಳು, 1 ಸಣ್ಣ ಶುಂಠಿ, 1 ಚಮಚ ನಿಂಬೆ ರಸ, 1/2 ಟೀಚಮಚ ಹುರಿದ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, 2-3 ಐಸ್ ಕ್ಯೂಬ್ಗಳು, 1-2 ಟೇಬಲ್ಸ್ಪೂನ್ ನೀರು.&lt;/p&gt;&lt;img&gt;&lt;p&gt;ನೀವು ಚಟ್ನಿಗೆ ಬಳಸುವ ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪು ತಾಜಾ ಆಗಿರಬೇಕು. ಹಳದಿ ಬಣ್ಣಕ್ಕೆ ತಿರುಗಿದ ಇಲ್ಲವೆ ಒಣಗಿದ ಸೊಪ್ಪನ್ನು ಬಳಸಬೇಡಿ. ಇದ್ರಿಂದ ಚಟ್ನಿ ಕಪ್ಪಾಗುತ್ತದೆ. ಎಲೆಗಳನ್ನು ಚೆನ್ನಾಗಿ ತೊಳೆದು ಹೆಚ್ಚುವರಿ ನೀರನ್ನು ತೆಗೆಯಲು ಮರೆಯಬೇಡಿ.&lt;/p&gt;&lt;img&gt;&lt;p&gt;ರೆಸ್ಟೋರೆಂಟ್ ಶೈಲಿಯ ಹಸಿರು ಚಟ್ನಿಯ ದೊಡ್ಡ ರಹಸ್ಯವೆಂದರೆ ಐಸ್ ಕ್ಯೂಬ್ಗಳು. ಚಟ್ನಿಯನ್ನು ರುಬ್ಬುವಾಗ ಮಿಕ್ಸರ್ಗೆ 2-3 ಐಸ್ ಕ್ಯೂಬ್ಗಳನ್ನು ಸೇರಿಸಿ. ಇದು ಮಿಕ್ಸರ್ನ ಶಾಖವನ್ನು ಕಡಿಮೆ ಮಾಡುತ್ತದೆ ಮತ್ತು ಎಲೆಗಳ ನೈಸರ್ಗಿಕ ಹಸಿರು ಬಣ್ಣವನ್ನು ಸಂರಕ್ಷಿಸುತ್ತದೆ.&lt;/p&gt;&lt;img&gt;&lt;p&gt;ಕೊತ್ತಂಬರಿ, ಪುದೀನ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಹುರಿದ ಜೀರಿಗೆ ಮತ್ತು ಉಪ್ಪನ್ನು ಮಿಕ್ಸರ್ ಜಾರ್ನಲ್ಲಿ ಹಾಕಿ. ಈಗ ನಿಂಬೆ ರಸ ಮತ್ತು ಐಸ್ ಕ್ಯೂಬ್ಗಳನ್ನು ಸೇರಿಸಿ. ಅಗತ್ಯವಿರುವಂತೆ ಸ್ವಲ್ಪ ತಣ್ಣೀರು ಸೇರಿಸಿ ಮತ್ತು ನುಣ್ಣಗೆ ರುಬ್ಬಿಕೊಳ್ಳಿ. ಒಂದೇ ಬಾರಿ ಹೆಚ್ಚು ನೀರು ಹಾಕದೆ ನಿಧಾನವಾಗಿ ಅಗತ್ಯವಿರುಷ್ಟೇ ನೀರನ್ನು ಹಾಕಿ&lt;/p&gt;&lt;img&gt;&lt;p&gt;ನಿಂಬೆ ರಸವು ರುಚಿಯನ್ನು ಹೆಚ್ಚಿಸುವುದಲ್ಲದೆ, ಚಟ್ನಿಯ ಹಸಿರು ಬಣ್ಣವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚಟ್ನಿಗೆ ಸ್ವಲ್ಪ ಖಾರದ ರುಚಿ ನೀಡುತ್ತದೆ.&lt;/p&gt;&lt;img&gt;&lt;p&gt;ಚಟ್ನಿಯನ್ನು ರುಬ್ಬುವಾಗ ಯಾವುದೇ ಕಾರಣಕ್ಕೂ ಬಿಸಿನೀರನ್ನು ಬಳಸಬೇಡಿ. ದೀರ್ಘಕಾಲದವರೆಗೆ ಮಿಕ್ಸರ್ ಅನ್ನು ನಿರಂತರವಾಗಿ ಚಲಾಯಿಸಬೇಡಿ. ಹೆಚ್ಚು ನೀರು ಸೇರಿಸುವುದನ್ನು ತಪ್ಪಿಸಿ.&lt;/p&gt;]]></content:encoded>
            <category>kitchen</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/food/what-should-i-do-to-make-coriander-chutney-turn-green-in-restaurant-style-ilgwcgo"/>
        </item>
        <item>
            <title><![CDATA[ಪಾಲಕ್ ಸೊಪ್ಪು 10 ದಿನದವರೆಗೆ ಹಾಳಾಗಲ್ಲ, ಎಲೆ ಹಳದಿಯಾಗಲ್ಲ.. ತಂದ ತಕ್ಷಣ ಈ  ಟ್ರಿಕ್ ಬಳಸಿ]]></title>
            <link>https://kannada.asianetnews.com/gallery/kitchen/how-to-store-spinach-in-fridge-for-long-time-lm4ztxz</link>
            <guid isPermaLink="true">https://kannada.asianetnews.com/gallery/kitchen/how-to-store-spinach-in-fridge-for-long-time-lm4ztxz</guid>
            <pubDate>Tue, 14 Jul 2026 13:14:29 +0530</pubDate>
            <description><![CDATA[&lt;p&gt;Keep palak fresh for 10 days: ಪಾಲಕ್ ಸೊಪ್ಪು ಫ್ರಿಡ್ಜ್&zwnj;ನಲ್ಲಿಟ್ಟ ಎರಡೇ ದಿನಕ್ಕೆ ಕೊಳೆತು ಹೋಗುತ್ತಿದೆಯೇ? ಅಡುಗೆ ಮಾಡುವ ಮೊದಲೇ ಹಳದಿಯಾಗುತ್ತಿದೆಯೇ? 10 ದಿನಗಳವರೆಗೆ ಮಾರುಕಟ್ಟೆಯಿಂದ ತಂದಂತೆಯೇ ತಾಜಾವಾಗಿ ಮತ್ತು ಹಸಿರಾಗಿಡಲು ಇಲ್ಲಿದೆ ಅದ್ಭುತ ಟಿಪ್ಸ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knk974z36w8n1j9ne2zscqt4,imgname-palak-keerai-1775542440931.png" type="image/jpeg" height="390" width="690"/>
            <content:encoded><![CDATA[&lt;p&gt;Keep palak fresh for 10 days: ಪಾಲಕ್ ಸೊಪ್ಪು ಫ್ರಿಡ್ಜ್&zwnj;ನಲ್ಲಿಟ್ಟ ಎರಡೇ ದಿನಕ್ಕೆ ಕೊಳೆತು ಹೋಗುತ್ತಿದೆಯೇ? ಅಡುಗೆ ಮಾಡುವ ಮೊದಲೇ ಹಳದಿಯಾಗುತ್ತಿದೆಯೇ? 10 ದಿನಗಳವರೆಗೆ ಮಾರುಕಟ್ಟೆಯಿಂದ ತಂದಂತೆಯೇ ತಾಜಾವಾಗಿ ಮತ್ತು ಹಸಿರಾಗಿಡಲು ಇಲ್ಲಿದೆ ಅದ್ಭುತ ಟಿಪ್ಸ್.&lt;/p&gt;&lt;img&gt;&lt;p&gt;&lt;strong&gt;ಸ್ಮಾರ್ಟ್ ಕಿಚನ್ ಟ್ರಿಕ್ಸ್&lt;/strong&gt;ಪಾಲಕ್ ಸೊಪ್ಪು ಕಬ್ಬಿಣದಂಶ, ಫೈಬರ್ ಮತ್ತು ವಿಟಮಿನ್ ಎ, ಸಿ ಸಮೃದ್ಧವಾಗಿರುವ ಆರೋಗ್ಯಕರ ಸೊಪ್ಪು. ಆದರೆ ಇದನ್ನು ಸರಿಯಾದ ಕ್ರಮದಲ್ಲಿ ಸಂಗ್ರಹಿಸದಿದ್ದರೆ (Store) ಬೇಗನೆ ಬಾಡಿಹೋಗುತ್ತದೆ ಅಥವಾ ಹಳದಿಯಾಗಿ ಕೊಳೆತು ಹೋಗುತ್ತದೆ. ಪಾಲಕ್ ಸೊಪ್ಪನ್ನು 7-10 ದಿನಗಳವರೆಗೆ ತಾಜಾವಾಗಿಡಲು ಇಲ್ಲಿವೆ ಕೆಲವು ಸ್ಮಾರ್ಟ್ ಕಿಚನ್ ಟ್ರಿಕ್ಸ್.&lt;/p&gt;&lt;img&gt;&lt;p&gt;&lt;strong&gt;1. ಖರೀದಿಸುವಾಗ ಎಚ್ಚರ ಇರಲಿ&lt;/strong&gt;ಪಾಲಕ್ ದೀರ್ಘಕಾಲ ಬಾಳಿಕೆ ಬರಬೇಕೆಂದರೆ ಖರೀದಿಸುವಾಗಲೇ ಅದು ತಾಜಾ ಆಗಿರಬೇಕು. ಗಾಢ ಹಸಿರು ಬಣ್ಣದ, ಕಲೆಗಳಿಲ್ಲದ ಎಲೆಗಳನ್ನು ಆರಿಸಿಕೊಳ್ಳಿ. ಎಲೆಗಳು ಮೊದಲೇ ಹಳದಿಯಾಗಿದ್ದರೆ ಅಥವಾ ಅತಿಯಾಗಿ ಒದ್ದೆಯಾಗಿದ್ದರೆ ಅವುಗಳನ್ನು ತರಬೇಡಿ.&lt;/p&gt;&lt;img&gt;&lt;p&gt;&lt;strong&gt;2. ತೊಳೆಯುವ ತಪ್ಪು ಮಾಡಬೇಡಿ&lt;/strong&gt;ಬಹಳಷ್ಟು ಜನರು ಸೊಪ್ಪನ್ನು ತಂದ ತಕ್ಷಣ ತೊಳೆದು ಫ್ರಿಡ್ಜ್&zwnj;ನಲ್ಲಿಡುತ್ತಾರೆ. ಇದು ದೊಡ್ಡ ತಪ್ಪು. ಎಲೆಗಳ ಮೇಲೆ ತೇವಾಂಶವಿದ್ದರೆ ಅದು ಶೀಘ್ರವಾಗಿ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗಿ ಸೊಪ್ಪು ಕೊಳೆಯುತ್ತದೆ. ಆದ್ದರಿಂದ ಸೊಪ್ಪನ್ನು ತೊಳೆಯದೆಯೇ ಸ್ಟೋರ್ ಮಾಡಿ ಮತ್ತು ಅಡುಗೆ ಮಾಡುವ ಮುನ್ನವಷ್ಟೇ ಚೆನ್ನಾಗಿ ತೊಳೆಯಿರಿ.&lt;/p&gt;&lt;img&gt;&lt;p&gt;&lt;strong&gt;3. ಪೇಪರ್ ಟವಲ್ ಅಥವಾ ಕಾಟನ್ ಬಟ್ಟೆಯ ಬಳಕೆ&lt;/strong&gt;ಪಾಲಕ್ ಸೊಪ್ಪನ್ನು ದೀರ್ಘಕಾಲ ಫ್ರೆಶ್ ಆಗಿಡಲು ಇದನ್ನು ಪೇಪರ್ ಟವಲ್ ಅಥವಾ ಒಣ ಕಾಟನ್ ಬಟ್ಟೆಯಲ್ಲಿ ಹಗುರವಾಗಿ ಸುತ್ತಿಡಿ. ಇದು ಸೊಪ್ಪಿನಲ್ಲಿರುವ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ನಂತರ ಇದನ್ನು ಏರ್-ಟೈಟ್ ಡಬ್ಬಿಯಲ್ಲಿ ಅಥವಾ ಜಿಪ್-ಲಾಕ್ ಬ್ಯಾಗ್&zwnj;ನಲ್ಲಿ ಇರಿಸಿ ಫ್ರಿಡ್ಜ್&zwnj;ನ ವೆಜಿಟೇಬಲ್ ಡ್ರಾಯರ್&zwnj;ನಲ್ಲಿ ಇಡಿ.&lt;/p&gt;&lt;img&gt;&lt;p&gt;&lt;strong&gt;4. ಹಾಳಾದ ಎಲೆಗಳನ್ನು ಮೊದಲೇ ಬೇರ್ಪಡಿಸಿ&lt;/strong&gt;ಸಂಗ್ರಹಿಸುವ ಮೊದಲು ಪಾಲಕ್ ಕಟ್ಟಿನಲ್ಲಿರುವ ಕೊಳೆತ ಅಥವಾ ಹಳದಿಯಾದ ಎಲೆಗಳನ್ನು ಆರಿಸಿ ಬಿಸಾಡಿ. ಒಂದು ಹಾಳಾದ ಎಲೆಯು ಇಡೀ ಕಟ್ಟನ್ನು ಬೇಗನೆ ಹಾಳುಮಾಡಬಹುದು.&lt;/p&gt;&lt;img&gt;&lt;p&gt;&lt;strong&gt;5. ಹಣ್ಣುಗಳಿಂದ ದೂರವಿಡಿ&lt;/strong&gt;ಪಾಲಕ್ ಸೊಪ್ಪನ್ನು ಸೇಬು, ಬಾಳೆಹಣ್ಣು ಅಥವಾ ಪಿಯರ್ಸ್&zwnj; ಹಣ್ಣುಗಳ ಹತ್ತಿರ ಇಡಬೇಡಿ. ಈ ಹಣ್ಣುಗಳಿಂದ ಬಿಡುಗಡೆಯಾಗುವ 'ಎಥಿಲೀನ್' ಅನಿಲವು ಹಸಿರು ಎಲೆಗಳು ಬೇಗನೆ ಬಾಡಿಹೋಗುವಂತೆ ಮಾಡುತ್ತದೆ.&lt;/p&gt;]]></content:encoded>
            <category>kitchen</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/how-to-store-spinach-in-fridge-for-long-time-lm4ztxz"/>
        </item>
        <item>
            <title><![CDATA[ಈ ಲಕ್ಷಣಗಳು ಕಂಡರೆ ತಕ್ಷಣ ನಿಮ್ಮ ಗ್ಯಾಸ್ ಪೈಪ್ ಬದಲಿಸಿ!]]></title>
            <link>https://kannada.asianetnews.com/gallery/kitchen/key-signs-your-lpg-gas-hose-needs-immediate-replacement-suh-ob1sylp</link>
            <guid isPermaLink="true">https://kannada.asianetnews.com/gallery/kitchen/key-signs-your-lpg-gas-hose-needs-immediate-replacement-suh-ob1sylp</guid>
            <pubDate>Thu, 16 Jul 2026 13:08:12 +0530</pubDate>
            <description><![CDATA[&lt;p&gt;ಮನೆಯಲ್ಲಿ ಎಲ್&zwnj;ಪಿಜಿ ಗ್ಯಾಸ್ ಬಳಸುವ ಪ್ರತಿಯೊಬ್ಬರೂ ಹೋಸ್ ಪೈಪ್&zwnj;ನ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ಪೈಪ್ ಹಾಳಾದರೆ ಏನಾಗಬಹುದು, ಎಷ್ಟು ವರ್ಷಗಳಿಗೊಮ್ಮೆ ಬದಲಾಯಿಸಬೇಕು ಮತ್ತು ಅದನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬುದನ್ನು ಇಲ್ಲಿ ವಿವರವಾಗಿ ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmjbdq64y8xt9r087c5613zg,imgname-gas-connection-1774437457091.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆಯಲ್ಲಿ ಎಲ್&zwnj;ಪಿಜಿ ಗ್ಯಾಸ್ ಬಳಸುವ ಪ್ರತಿಯೊಬ್ಬರೂ ಹೋಸ್ ಪೈಪ್&zwnj;ನ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ಪೈಪ್ ಹಾಳಾದರೆ ಏನಾಗಬಹುದು, ಎಷ್ಟು ವರ್ಷಗಳಿಗೊಮ್ಮೆ ಬದಲಾಯಿಸಬೇಕು ಮತ್ತು ಅದನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬುದನ್ನು ಇಲ್ಲಿ ವಿವರವಾಗಿ ನೋಡೋಣ.&lt;/p&gt;&lt;img&gt;&lt;p&gt;ಅಡುಗೆ ಅನಿಲ ಸಿಲಿಂಡರ್ ಮತ್ತು ಸ್ಟವ್ ಅನ್ನು ಸಂಪರ್ಕಿಸುವ ಅತಿ ಮುಖ್ಯ ಸಾಧನವೇ ಈ ಹೋಸ್ ಪೈಪ್. ಇದನ್ನು ರಬ್ಬರ್ ಅಥವಾ ರಬ್ಬರ್ ಮಿಶ್ರಿತ ವಸ್ತುಗಳಿಂದ ತಯಾರಿಸಲಾಗುತ್ತದೆ. ಇದು ಗ್ಯಾಸ್ ಅನ್ನು ಸ್ಟವ್&zwnj;ಗೆ ಸುರಕ್ಷಿತವಾಗಿ ಸಾಗಿಸುವ ಕೆಲಸ ಮಾಡುತ್ತದೆ. ಅಡುಗೆಮನೆಯಲ್ಲಿ ನಮ್ಮ ಸುರಕ್ಷತೆಗೆ ಇದರ ಸರಿಯಾದ ಕಾರ್ಯನಿರ್ವಹಣೆಯೇ ಆಧಾರ. ಇದರಲ್ಲಿ ಸಣ್ಣ ಬಿರುಕು ಅಥವಾ ಹಾನಿ ಉಂಟಾದರೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಆದ್ದರಿಂದ, ಪ್ರತಿಯೊಬ್ಬರೂ ಈ ಹೋಸ್ ಪೈಪ್&zwnj;ನ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದು ಅತ್ಯಗತ್ಯ.&lt;/p&gt;&lt;img&gt;&lt;p&gt;ಹೆಚ್ಚಿನ ಹೋಸ್ ಪೈಪ್ ತಯಾರಕರು ಮತ್ತು ತೈಲ ಕಂಪನಿಗಳು ಮೂರರಿಂದ ಐದು ವರ್ಷಗಳಿಗೊಮ್ಮೆ ಹೋಸ್ ಪೈಪ್ ಅನ್ನು ಕಡ್ಡಾಯವಾಗಿ ಬದಲಾಯಿಸಬೇಕೆಂದು ಶಿಫಾರಸು ಮಾಡುತ್ತವೆ. ಸಾಮಾನ್ಯವಾಗಿ, ಹೋಸ್ ಪೈಪ್ ಮೇಲೆ ಅದರ ಉತ್ಪಾದನಾ ದಿನಾಂಕ ಮತ್ತು ಮುಕ್ತಾಯ ದಿನಾಂಕವನ್ನು ಮುದ್ರಿಸಲಾಗಿರುತ್ತದೆ. ಈ ದಿನಾಂಕಗಳನ್ನು ಪರಿಶೀಲಿಸಿ, ಅವಧಿ ಮುಗಿಯುವ ಮೊದಲೇ ಪೈಪ್ ಬದಲಾಯಿಸಬೇಕು. ಕಾಲಾನಂತರದಲ್ಲಿ ರಬ್ಬರ್ ತನ್ನ ಹಿಗ್ಗುವ ಗುಣವನ್ನು ಕಳೆದುಕೊಂಡು, ಗಟ್ಟಿಯಾಗಿ ಬಿರುಕು ಬಿಡಬಹುದು. ಹಾಗಾಗಿ ಈ ಕಾಲಮಿತಿ ಬಹಳ ಮುಖ್ಯ. ನಿಮ್ಮ ಕುಟುಂಬದ ಸುರಕ್ಷತೆಗೆ ಇದು ಮೊದಲ ಹೆಜ್ಜೆ.&lt;/p&gt;&lt;img&gt;&lt;p&gt;ಪ್ರತಿ ತಿಂಗಳು ತಪ್ಪದೇ ಹೋಸ್ ಪೈಪ್ ಅನ್ನು ಪರೀಕ್ಷಿಸುವುದು ಬಹಳ ಮುಖ್ಯ. ಪೈಪ್&zwnj;ನ ಹೊರಭಾಗದಲ್ಲಿ ಕಾಣುವ ಬಿರುಕುಗಳು, ಕಡಿತಗಳು, ಹಾನಿಗೊಳಗಾದ ಭಾಗಗಳು ಅಥವಾ ಬಣ್ಣ ಬದಲಾವಣೆಯಂತಹ ಲಕ್ಷಣಗಳನ್ನು ಗಮನಿಸಬೇಕು. ಪೈಪ್ ಊದಿಕೊಂಡಿದ್ದರೆ ಅಥವಾ ಒಂದು ಕಡೆ ತೆಳುವಾಗಿದ್ದರೆ ಅದು ಹಾನಿಗೊಳಗಾಗಿದೆ ಎಂಬುದರ ಸಂಕೇತ. ಕೆಲವೊಮ್ಮೆ ಇಲಿಗಳು ಕಡಿದು ಪೈಪ್ ಹಾಳಾಗುವ ಸಾಧ್ಯತೆಯೂ ಇರುತ್ತದೆ. ಈ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಪೈಪ್ ಬದಲಾಯಿಸಬೇಕು.&lt;/p&gt;&lt;img&gt;&lt;p&gt;ಪ್ರತಿ ತಿಂಗಳು ತಪ್ಪದೇ ಹೋಸ್ ಪೈಪ್ ಅನ್ನು ಪರೀಕ್ಷಿಸುವುದು ಬಹಳ ಮುಖ್ಯ. ಪೈಪ್&zwnj;ನ ಹೊರಭಾಗದಲ್ಲಿ ಕಾಣುವ ಬಿರುಕುಗಳು, ಕಡಿತಗಳು, ಹಾನಿಗೊಳಗಾದ ಭಾಗಗಳು ಅಥವಾ ಬಣ್ಣ ಬದಲಾವಣೆಯಂತಹ ಲಕ್ಷಣಗಳನ್ನು ಗಮನಿಸಬೇಕು. ಪೈಪ್ ಊದಿಕೊಂಡಿದ್ದರೆ ಅಥವಾ ಒಂದು ಕಡೆ ತೆಳುವಾಗಿದ್ದರೆ ಅದು ಹಾನಿಗೊಳಗಾಗಿದೆ ಎಂಬುದರ ಸಂಕೇತ. ಕೆಲವೊಮ್ಮೆ ಇಲಿಗಳು ಕಡಿದು ಪೈಪ್ ಹಾಳಾಗುವ ಸಾಧ್ಯತೆಯೂ ಇರುತ್ತದೆ. ಈ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಪೈಪ್ ಬದಲಾಯಿಸಬೇಕು.&lt;/p&gt;&lt;img&gt;&lt;p&gt;ಅವಧಿ ಮೀರಿದ ಅಥವಾ ಹಾನಿಗೊಳಗಾದ ಪೈಪ್ ಬಳಸುವುದು ದೊಡ್ಡ ಅಪಾಯವನ್ನು ತಂದೊಡ್ಡಬಹುದು. ಇದರಿಂದ ಗ್ಯಾಸ್ ಸೋರಿಕೆಯಾಗಿ, ಸಣ್ಣ ಕಿಡಿಯೂ ಸಹ ದೊಡ್ಡ ಅಗ್ನಿ ಅವಘಡಕ್ಕೆ ಕಾರಣವಾಗಬಹುದು. 2022ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ, ಅಡುಗೆಮನೆಯ ಅಪಘಾತಗಳು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿವೆ, ಅದರಲ್ಲಿ ಗ್ಯಾಸ್ ಸೋರಿಕೆ ಪ್ರಮುಖ ಕಾರಣವಾಗಿದೆ. ಇದರಿಂದ ಪ್ರಾಣಹಾನಿ ಮತ್ತು ದೊಡ್ಡ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗುತ್ತದೆ. ಈ ಅಪಘಾತಗಳು ಕೆಲವೇ ಸೆಕೆಂಡುಗಳಲ್ಲಿ ಸಂಭವಿಸುವುದರಿಂದ, ತಡೆಗಟ್ಟುವ ಕ್ರಮಗಳು ಅತ್ಯಗತ್ಯ.&lt;/p&gt;&lt;img&gt;&lt;p&gt;ಹೊಸ ಹೋಸ್ ಪೈಪ್ ಖರೀದಿಸುವಾಗ, ಭಾರತೀಯ ಗುಣಮಟ್ಟ ಸಂಸ್ಥೆಯ (ISI) ಪ್ರಮಾಣೀಕರಣ ಪಡೆದ ಉತ್ತಮ ಗುಣಮಟ್ಟದ ಪೈಪ್&zwnj;ಗಳನ್ನೇ ಖರೀದಿಸಿ. ಪೈಪ್ ಅನ್ನು ಯಾವಾಗಲೂ ನೇರವಾಗಿರುವಂತೆ ನೋಡಿಕೊಳ್ಳಿ, ಅದನ್ನು ಸುರುಳಿ ಸುತ್ತಿಡಬೇಡಿ. ಸ್ಟವ್&zwnj;ಗೆ ಸರಿಯಾಗಿ ಸಂಪರ್ಕಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ವೃತ್ತಿಪರರಿಂದಲೇ ಸಿಲಿಂಡರ್ ಅಳವಡಿಸಿ ಮತ್ತು ಹೋಸ್ ಪೈಪ್ ಬದಲಾಯಿಸಿ. ಇಲಿಗಳು ಕಡಿಯದಂತೆ ಪೈಪ್ ಅನ್ನು ರಕ್ಷಿಸುವುದು ಮತ್ತು ಅತಿಯಾದ ಶಾಖವಿರುವ ಸ್ಥಳಗಳಿಂದ ದೂರವಿಡುವುದು ಅವಶ್ಯಕ. ಸಣ್ಣ ಸೋರಿಕೆ ಕಂಡುಬಂದರೂ, ತಕ್ಷಣ ಗ್ಯಾಸ್ ಕಂಪನಿಯನ್ನು ಸಂಪರ್ಕಿಸಿ.&lt;/p&gt;]]></content:encoded>
            <category>kitchen</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/kitchen/key-signs-your-lpg-gas-hose-needs-immediate-replacement-suh-ob1sylp"/>
        </item>
        <item>
            <title><![CDATA[ಮಳೆ ಬಿದ್ದ ತಕ್ಷಣ ಲೈಟ್ ಸುತ್ತ ಮುತ್ತಿಗೆ ಹಾಕೋ ಕೀಟವನ್ನು ಹೀಗೆ ನಿಮಿಷದಲ್ಲಿ ಓಡಿಸಿ]]></title>
            <link>https://kannada.asianetnews.com/kitchen/try-these-home-remedies-to-get-rid-from-monsoon-insects/articleshow-oprcrgz</link>
            <guid isPermaLink="true">https://kannada.asianetnews.com/kitchen/try-these-home-remedies-to-get-rid-from-monsoon-insects/articleshow-oprcrgz</guid>
            <pubDate>Thu, 16 Jul 2026 17:00:54 +0530</pubDate>
            <description><![CDATA[&lt;p&gt;ಮಳೆ ಬಂದ ತಕ್ಷಣ ಮನೆಯೊಳಗೆ ಇರುವ ಲೈಟ್ ಸುತ್ತಲೂ ಸೇರುವ ಕೀಟವನ್ನು ನೀವು ನೋಡಿರಬಹುದು. ಇದರಿಂದ ಮನೆಯೊಳಗೆ ಪೂರ್ತಿ ಗಲೀಜಾಗುತ್ತದೆ. ಅಷ್ಟೇ ಅಲ್ಲ ಆ ಕೀಟದ ರೆಕ್ಕೆಗಳು ಎಲ್ಲೆಡೆ ಹರಡಿ, ಊಟ ತಿಂಡಿಗೂ ಬೀಳುತ್ತೆ. ನಿಮಿಷದಲ್ಲಿ ಈ ಕೀಟಗಳ ನಿವಾರಣೆ ಮಾಡೋದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxnb2nscq6ej6kb1015yccxm,imgname-monsoon-insects-1784201434918.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮಳೆಗಾಲದಲ್ಲಿ ಲೈಟ್ ಸುತ್ತಲೂ ಸುತ್ತುವ ಕೀಟಗಳು&lt;/strong&gt;&lt;/h2&gt;&lt;p&gt;ಮಳೆಗಾಲದಲ್ಲಿ, ಕೀಟಗಳು ಹೆಚ್ಚಾಗಿ ಮನೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವು ತೆವಳುತ್ತಿದ್ದರೆ, ಇನ್ನು ಕೆಲವು ಹಾರುತ್ತಿರುತ್ತವೆ. ಅವುಗಳಲ್ಲಿ ಕೆಲವು ಬೆಳಕಿನ ಸುತ್ತ ಸುತ್ತಿತ್ತಿರುತ್ತವೆ. ಈ ಕೀಟಗಳು ಬೆಳಕಿಗೆ ಆಕರ್ಷಿತವಾಗಿ ಮನೆಯ ಸುತ್ತಲೂ ಸುಳಿದಾಡಲು ಪ್ರಾರಂಭಿಸುತ್ತವೆ. ಲೈಟ್ ಆನ್ ಮಾಡಿದ್ರೆ ಸಾಕು ಕೀಟಗಳು ಒಂದೇ ಸಲಕ್ಕೆ ಮುತ್ತಿಗೆ ಹಾಕುತ್ತವೆ. ಈ ಕೀಟಗಳು ಹೆಚ್ಚಾಗಿ ಆಹಾರಕ್ಕೆ ಬಿದ್ದು, ಕೋಣೆಗಳೆಲ್ಲಾ ಅದರ ರೆಕ್ಕೆ ಹರಡಿಕೊಂಡು, ಸಮಸ್ಯೆಯನ್ನುಂಟು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ಸುಲಭವಾಗಿ ನಿವಾರಣೆ ಮಾಡಲು ಇಲ್ಲಿದೆ ಟ್ರಿಕ್ಸ್.&lt;/p&gt;&lt;h3&gt;&lt;strong&gt;ನೀರಿನಿಂದ ತುಂಬಿದ ಬಕೆಟ್ ಇಡಿ&lt;/strong&gt;&lt;/h3&gt;&lt;p&gt;ನಿಮ್ಮ ಮನೆಯ ಎಲ್ಲಾ ಲೈಟ್ ಆಫ್ ಮಾಡಿ, ಒಂದೇ ಒಂದು ದೀಪವನ್ನು ಆನ್ ಮಾಡಿ. ಉದಾಹರಣೆಗೆ, ನೀವು ಬಾಲ್ಕನಿಯಲ್ಲಿ ದೀಪವನ್ನು ಆನ್ ಮಾಡಿ. ಕೀಟಗಳು ಎಲ್ಲಾ ಕಡೆಯಿಂದ ಬಂದು ಅಲ್ಲಿ ಸೇರುತ್ತವೆ. ಆ ಲೈಟ್ ಕೆಳಗೆ ನೀರಿನಿಂದ ತುಂಬಿದ ಬಕೆಟ್ ಅಥವಾ ಟಬ್ ಇರಿಸಿ ಮತ್ತು ನೀರಿಗೆ ಸ್ವಲ್ಪ ಲಿಕ್ವಿಡ್ ಸೋಪ್ ಅಥವಾ ಡಿಟರ್ಜೆಂಟ್ ಸೇರಿಸಿ. ಕೀಟಗಳು ನೀರಿನಲ್ಲಿ ಬೆಳಕಿನ ಪ್ರತಿಬಿಂಬ ಕಂಡು ನೀರಿನಲ್ಲಿ ಬೀಳುತ್ತವೆ, ಸೋಪ್ ಕೀಟವನ್ನು ನೀರಿನಿಂದ ಹೊರ ಹೋಗದಂತೆ ತಡೆಯುತ್ತದೆ.&lt;/p&gt;&lt;p&gt;&lt;strong&gt;ದೀಪಗಳ ಬಣ್ಣವನ್ನು ಬದಲಾಯಿಸಿ&lt;/strong&gt;&lt;/p&gt;&lt;p&gt;ಮಳೆ ಕೀಟಗಳು ಹೆಚ್ಚಾಗಿ ಬಿಳಿ ಅಥವಾ ನೀಲಿ ಬೆಳಕಿಗೆ ಆಕರ್ಷಿತವಾಗುತ್ತವೆ. ಆದ್ದರಿಂದ, ನಿಮ್ಮ ಮನೆಯಲ್ಲಿನ ದೀಪಗಳ ಬಣ್ಣವನ್ನು ಬದಲಾಯಿಸಿ. ನೀವು ಹಳದಿ ಅಥವಾ ಕಿತ್ತಳೆ ದೀಪಗಳನ್ನು ಬಳಸಬಹುದು.&lt;/p&gt;&lt;p&gt;&lt;strong&gt;ಬೇವು ಮತ್ತು ಕರ್ಪೂರ ಸ್ಪ್ರೇ&lt;/strong&gt;&lt;/p&gt;&lt;p&gt;ಕೀಟಗಳನ್ನು ಓಡಿಸಲು, ನೀವು ಬೇವು ಮತ್ತು ಕರ್ಪೂರದಿಂದ ಮಾಡಿದ ಸ್ಪ್ರೇ ತಯಾರಿಸಬಹುದು. ನೀರಿಗೆ ಬೇವಿನ ಎಣ್ಣೆ ಅಥವಾ ಪುಡಿಮಾಡಿದ ಕರ್ಪೂರವನ್ನು ಸೇರಿಸಿ. ಈ ನೀರನ್ನು ಬಾಗಿಲು, ಕಿಟಕಿಗಳು ಮತ್ತು ದೀಪಗಳ ಸುತ್ತಲೂ ಸಿಂಪಡಿಸಿ. ಬೇವು ಮತ್ತು ಕರ್ಪೂರದ ವಾಸನೆಯು ಕೀಟಗಳನ್ನು ದೂರ ಓಡುವಂತೆ ಮಾಡುತ್ತದೆ.&lt;/p&gt;&lt;p&gt;&lt;strong&gt;ಲೈಟ್ ಆಫ್ ಮಾಡಿ&lt;/strong&gt;&lt;/p&gt;&lt;p&gt;ಸಂಜೆಯ ವೇಳೆ ಕೀಟಗಳು ಮನೆಯೊಳಗೆ ಬಂದರೆ ಸಾಧ್ಯವಾದಷ್ಟು ದೀಪಗಳನ್ನು ಆಫ್ ಮಾಡಿ. ದೀಪಗಳನ್ನು ಆಫ್ ಮಾಡುವುದರಿಂದ ಮನೆಯೊಳಗಿನ ಕೀಟಗಳು ಹೊರಗಿನ ಬೆಳಕನ್ನು ಅರಸಿ ಓಡಿಹೋಗುತ್ತವೆ.&lt;/p&gt;&lt;p&gt;&lt;strong&gt;ನಿಮ್ಮ ಮನೆಯೊಳಗೆ ತೇವಾಂಶ ಹೆಚ್ಚಾಗಲು ಬಿಡಬೇಡಿ&lt;/strong&gt;&lt;/p&gt;&lt;p&gt;ವಿಶೇಷವಾಗಿ ಮರದ ಮೇಲೆ ತೇವಾಂಶವಿದ್ದರೆ ಈ ಕೀಟಗಳು ಮನೆಯತ್ತ ಆಕರ್ಷಿತವಾಗುತ್ತವೆ. ಆದ್ದರಿಂದ, ಮನೆಯನ್ನು ತೇವಾಂಶದಿಂದ ರಕ್ಷಿಸುವುದರಿಂದ ಮಳೆಹುಳುಗಳನ್ನು ದೂರವಿಡಲು ಸಹಾಯ ಮಾಡುತ್ತದೆ.&lt;/p&gt;]]></content:encoded>
            <category>kitchen</category>
            <dc:creator>Pavna Das</dc:creator>
            <atom:link href="https://kannada.asianetnews.com/kitchen/try-these-home-remedies-to-get-rid-from-monsoon-insects/articleshow-oprcrgz"/>
        </item>
        <item>
            <title><![CDATA[ಫ್ರಿಡ್ಜ್‌ನಲ್ಲಿ ಯಾವ ತರಕಾರಿ ಎಲ್ಲಿಡಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್]]></title>
            <link>https://kannada.asianetnews.com/webstories/kitchen/kannada-kitchen-tips-how-to-store-vegetables-fruits-in-fridge-for-maximum-freshness-mrq-qm5a8it</link>
            <guid isPermaLink="true">https://kannada.asianetnews.com/webstories/kitchen/kannada-kitchen-tips-how-to-store-vegetables-fruits-in-fridge-for-maximum-freshness-mrq-qm5a8it</guid>
            <pubDate>Thu, 16 Jul 2026 15:46:00 +0530</pubDate>
            <description><![CDATA[ಆಹಾರ ಪದಾರ್ಥಗಳು, ತರಕಾರಿಗಳು ಹೆಚ್ಚು ದಿನ ತಾಜಾ ಆಗಿರಲಿ ಅಂತ ಫ್ರಿಡ್ಜ್ ಬಳಸುತ್ತೇವೆ. ಕೆಲವರು ಮಸಾಲೆ ಪದಾರ್ಥಗಳನ್ನೂ ಇಡುತ್ತಾರೆ. ಆದರೆ ಫ್ರಿಡ್ಜ್&zwnj;ನಲ್ಲಿ ಯಾವ ತರಕಾರಿಯನ್ನು ಎಲ್ಲಿಟ್ಟರೆ ಹೆಚ್ಚು ದಿನ ಬಾಳಿಕೆ ಬರುತ್ತೆ ಅನ್ನೋದನ್ನು ತಿಳಿದುಕೊಳ್ಳೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01jj9382hqff8fbaqx0qe3ay0x,imgname-veg-1737619671606.png" type="image/jpeg" height="390" width="690"/>
            <category>kitchen</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/kitchen/kannada-kitchen-tips-how-to-store-vegetables-fruits-in-fridge-for-maximum-freshness-mrq-qm5a8it"/>
        </item>
        <item>
            <title><![CDATA[ಹೀಗೆ ಮಾಡಿದ್ರೆ ನಿಮ್ಮ ಮನೆಯೊಳಗೆ ಸೊಳ್ಳೆ ಸುಳಿಯಲ್ಲ- ಮಳೆಗಾಲದ ಆಪ್ತಮಿತ್ರ ಈ ಸೂಪರ್​ ಟಿಪ್ಸ್​]]></title>
            <link>https://kannada.asianetnews.com/life/what-smell-do-mosquitoes-hate-the-most-do-they-run-away-if-you-burn-camphor-suc/articleshow-smf7mb6</link>
            <guid isPermaLink="true">https://kannada.asianetnews.com/life/what-smell-do-mosquitoes-hate-the-most-do-they-run-away-if-you-burn-camphor-suc/articleshow-smf7mb6</guid>
            <pubDate>Tue, 14 Jul 2026 16:58:47 +0530</pubDate>
            <description><![CDATA[ಮಳೆಗಾಲದಲ್ಲಿ ಹೆಚ್ಚಾಗುವ ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳ ಅಪಾಯವೂ ಹೆಚ್ಚುತ್ತದೆ. ಸಿಟ್ರೊನೆಲ್ಲಾ, ಬೇವು, ಕರ್ಪೂರದಂತಹ ನೈಸರ್ಗಿಕ ಪರಿಹಾರಗಳು ಸೊಳ್ಳೆಗಳನ್ನು ತಾತ್ಕಾಲಿಕವಾಗಿ ದೂರವಿಡಲು ಸಹಾಯ ಮಾಡುತ್ತವೆ. ಆದರೆ, ತೀವ್ರ ಸಮಸ್ಯೆಯಿದ್ದಲ್ಲಿ, ವೈದ್ಯರು ಶಿಫಾರಸು ಮಾಡಿದ ಸುರಕ್ಷಿತ ನಿವಾರಕಗಳನ್ನು ಬಳಸುವುದು ಉತ್ತಮ.]]></description>
            <media:content url="https://static.asianetnews.com/images/w-1280,h-720,format-jpg,imgid-01kxg5zjw7jz7wkw390163b20c,imgname-mosquito-1784028318599.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಳೆಗಾಲ ಆರಂಭವಾಗುತ್ತಿದ್ದಂತೆ ಸೊಳ್ಳೆಗಳ ಸಮಸ್ಯೆ ತೀವ್ರವಾಗಿ ಹೆಚ್ಚಾಗುತ್ತದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ಮನೆಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತವೆ ಮತ್ತು ಅವುಗಳ ಕಡಿತವು ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್&zwnj;ಗುನ್ಯಾದಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವ ವಾಸನೆಗಳು ಸೊಳ್ಳೆಗಳನ್ನು ಹೆಚ್ಚು ಹಿಮ್ಮೆಟ್ಟಿಸುತ್ತವೆ, ಕರ್ಪೂರವನ್ನು ಸುಡುವುದರಿಂದ ನಿಜವಾಗಿಯೂ ಪರಿಹಾರ ಸಿಗುತ್ತದೆಯೇ ಮತ್ತು ಯಾವ ಸರಳ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ಜನರು ತಿಳಿದುಕೊಳ್ಳಲು ಬಯಸುತ್ತಾರೆ. ಅದೃಷ್ಟವಶಾತ್, ಕೆಲವು ನೈಸರ್ಗಿಕ ಪರಿಹಾರಗಳು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡಬಹುದು, ಆದರೂ ಅವುಗಳ ಪರಿಣಾಮಕಾರಿತ್ವವು ಎಲ್ಲೆಡೆ ಮತ್ತು ಪ್ರತಿಯೊಂದು ಪರಿಸ್ಥಿತಿಯಲ್ಲಿ ಸ್ಥಿರವಾಗಿಲ್ಲ.&lt;/p&gt;&lt;h2&gt;&lt;strong&gt;ಸೊಳ್ಳೆಗಳು ಯಾವ ವಾಸನೆಯನ್ನು ದ್ವೇಷಿಸುತ್ತವೆ&lt;/strong&gt;&lt;/h2&gt;&lt;p&gt;ತಜ್ಞರ ಪ್ರಕಾರ, ಸೊಳ್ಳೆಗಳು ಸಿಟ್ರೊನೆಲ್ಲಾ, ನಿಂಬೆ ನೀಲಗಿರಿ, ಬೇವು, ಲ್ಯಾವೆಂಡರ್ ಮತ್ತು ನಿಂಬೆಹಣ್ಣಿನಂತಹ ಬಲವಾದ ಪರಿಮಳಗಳನ್ನು ಇಷ್ಟಪಡುವುದಿಲ್ಲ. ಈ ಸಸ್ಯಗಳು ಮತ್ತು ಅವುಗಳ ಎಣ್ಣೆಗಳ ಪರಿಮಳವು ಸೊಳ್ಳೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆದಾಗ್ಯೂ, ನೈಸರ್ಗಿಕ ಎಣ್ಣೆಗಳ ಪರಿಣಾಮಕಾರಿತ್ವವು ಸಾಮಾನ್ಯವಾಗಿ ಅಲ್ಪಕಾಲಿಕವಾಗಿರುತ್ತದೆ ಮತ್ತು ಅಗತ್ಯವಿದ್ದರೆ ಅವುಗಳನ್ನು ಮತ್ತೆ ಅನ್ವಯಿಸಬೇಕಾಗಬಹುದು.&lt;/p&gt;&lt;h3&gt;&lt;strong&gt;ಕರ್ಪೂರವನ್ನು ಸುಡುವುದು ಸೊಳ್ಳೆಗಳನ್ನು ಹಿಮ್ಮೆಟ್ಟಿಸುತ್ತದೆಯೇ?&lt;/strong&gt;&lt;/h3&gt;&lt;p&gt;ಅನೇಕ ಮನೆಗಳು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಕರ್ಪೂರವನ್ನು ಬಳಸುತ್ತವೆ. ಕರ್ಪೂರದ ಬಲವಾದ ಪರಿಮಳ ಮತ್ತು ಹೊಗೆ ತಾತ್ಕಾಲಿಕವಾಗಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಬಹುದು. ಆದಾಗ್ಯೂ, ಈ ವಿಧಾನವನ್ನು ಸಂಪೂರ್ಣವಾಗಿ ವೈಜ್ಞಾನಿಕ ಮತ್ತು ದೀರ್ಘಕಾಲೀನವೆಂದು ಪರಿಗಣಿಸಲಾಗುವುದಿಲ್ಲ. ಕರ್ಪೂರವನ್ನು ಸುಟ್ಟರೆ, ಹೊಗೆಯಿಂದ ಉಂಟಾಗುವ ಯಾವುದೇ ಕಿರಿಕಿರಿಯುಂಟುಮಾಡುವ ಪರಿಣಾಮಗಳನ್ನು ತಪ್ಪಿಸಲು ಕೋಣೆಯಲ್ಲಿ ಸರಿಯಾದ ವಾತಾಯನವನ್ನು ಖಚಿತಪಡಿಸಿಕೊಳ್ಳಿ. ಪಚ್ಚ ಕರ್ಪೂರವನ್ನು ಹಚ್ಚಿದರೆ ಇದರ ಹೊಗೆಯು ಔಷಧಯುಕ್ತವೂ, ಇದು ಸುವಾಸನೆಯುಕ್ತವೂ ಹಾಗೂ ಸೊಳ್ಳೆ ನಿವಾರಕವೂ ಆಗಿದೆ. ಆದ್ದರಿಂದ ಪಚ್ಚ ಕರ್ಪೂರ &amp;nbsp;ರೆಮಿಡಿ ಎಲ್ಲಕ್ಕಿಂತಲೂ ಉತ್ತಮವಾಗಿದೆ.&lt;/p&gt;&lt;p&gt;ಮನೆಯ ಸುತ್ತಲೂ ನೀರು ಸಂಗ್ರಹವಾಗಲು ಬಿಡಬೇಡಿ, ಏಕೆಂದರೆ ಇಲ್ಲಿ ಸೊಳ್ಳೆಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತವೆ. ಕಿಟಕಿಗಳು ಮತ್ತು ಬಾಗಿಲುಗಳ ಮೇಲೆ ಪರದೆಗಳನ್ನು ಅಳವಡಿಸಿ ಮತ್ತು ರಾತ್ರಿಯಲ್ಲಿ ಸೊಳ್ಳೆ ಪರದೆಗಳನ್ನು ಬಳಸಿ. ಅನೇಕ ಜನರು ಬೇವಿನ ಎಣ್ಣೆ ಮತ್ತು ತೆಂಗಿನ ಎಣ್ಣೆಯ ಮಿಶ್ರಣವನ್ನು ಸಹ ಬಳಸುತ್ತಾರೆ. ಕೋಣೆಯಲ್ಲಿ ನಿಂಬೆ ಹುಲ್ಲು ಅಥವಾ ಸಿಟ್ರೊನೆಲ್ಲಾ ಎಣ್ಣೆಯನ್ನು ಹೊಂದಿರುವ ಡಿಫ್ಯೂಸರ್ ಅನ್ನು ಸಹ ಬಳಸಬಹುದು. ಸೊಳ್ಳೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಮನೆಮದ್ದುಗಳನ್ನು ಮಾತ್ರ ಅವಲಂಬಿಸುವ ಬದಲು ವೈದ್ಯರು ಮತ್ತು ಆರೋಗ್ಯ ಸಂಸ್ಥೆಗಳು ಶಿಫಾರಸು ಮಾಡಿದ ಸುರಕ್ಷಿತ ನಿವಾರಕವನ್ನು ಬಳಸುವುದು ಉತ್ತಮ.&lt;/p&gt;]]></content:encoded>
            <category>kitchen</category>
            <dc:creator>Suchethana D</dc:creator>
            <atom:link href="https://kannada.asianetnews.com/life/what-smell-do-mosquitoes-hate-the-most-do-they-run-away-if-you-burn-camphor-suc/articleshow-smf7mb6"/>
        </item>
        <item>
            <title><![CDATA[ಮನೇಲಿ ಟೊಮೆಟೊ ಗಿಡ ಬೆಳೆಸಿದರೂ ಹಣ್ಣು ಬಿಡ್ತಿಲ್ವಾ? ಚಿಂತೆ ಬಿಡಿ, ಹೀಗೆ ಮಾಡಿ]]></title>
            <link>https://kannada.asianetnews.com/webstories/kitchen/simple-tips-for-growing-tomatoes-at-home-tsw5ftk</link>
            <guid isPermaLink="true">https://kannada.asianetnews.com/webstories/kitchen/simple-tips-for-growing-tomatoes-at-home-tsw5ftk</guid>
            <pubDate>Thu, 16 Jul 2026 23:27:15 +0530</pubDate>
            <description><![CDATA[&lt;p&gt;ಮನೆಯ ಕೈತೋಟದಲ್ಲಿ ಅಥವಾ ಗ್ರೋ ಬ್ಯಾಗ್&zwnj;ಗಳಲ್ಲಿ ಟೊಮೆಟೊ ಗಿಡ ಬೆಳೆಸಿದ್ದರೂ ಸರಿಯಾಗಿ ಫಸಲು ಸಿಗುತ್ತಿಲ್ವಾ? ಹಾಗಿದ್ರೆ ಈ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshvpfgpvtpj1641wxapv06q,imgname-new-project---2026-05-26t152815.016-1779789676054.jpg" type="image/jpeg" height="390" width="690"/>
            <category>kitchen</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/kitchen/simple-tips-for-growing-tomatoes-at-home-tsw5ftk"/>
        </item>
        <item>
            <title><![CDATA[Knife Sharpening: ಚಾಕು ಮೊಂಡಾಗಿದ್ಯಾ? ನ್ಯೂಸ್ ಪೇಪರ್ ಟ್ರಿಕ್ಸ್ ಬಳಸಿ ಚೂರಿ ಹೀಗೆ ಶಾರ್ಪ್ ಮಾಡಿ]]></title>
            <link>https://kannada.asianetnews.com/kitchen/simple-newspaper-hacks-to-make-kitchen-knife-sharp/articleshow-z66255y</link>
            <guid isPermaLink="true">https://kannada.asianetnews.com/kitchen/simple-newspaper-hacks-to-make-kitchen-knife-sharp/articleshow-z66255y</guid>
            <pubDate>Fri, 17 Jul 2026 13:23:01 +0530</pubDate>
            <description><![CDATA[&lt;p&gt;Kitchen Tips: ಅಡುಗೆ ಮನೆಯಲ್ಲಿ ಅಗತ್ಯವಾಗಿ ಬೇಕಾಗುವ ಕತ್ತರಿಯನ್ನು ಮತ್ತೆ ಶಾರ್ಪ್ ಮಾಡಲು ನೀವು ಹೊರಗಡೆ ಹೋಗಬೇಕಾಗಿಲ್ಲ. ಬದಲಾಗಿ ಮನೆಯಲ್ಲಿ ನ್ಯೂಸ್ ಪೇಪರ್ ಇದ್ದರೆ, ಅದನ್ನು ಬಳಸಿ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಚಾಕು ಶಾರ್ಪ್ ಮಾಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqgzxynvjg9n6xfy8y9wyk1,imgname-kitchen-tips-1784274745298.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ನ್ಯೂಸ್ ಪೇಪರ್ ಬಳಸಿ ಚಾಕು ಶಾರ್ಪ್ ಮಾಡೋದು ಹೇಗೆ?&lt;/strong&gt;&lt;/h2&gt;&lt;p&gt;ಅಡುಗೆಮನೆಯಲ್ಲಿ ಬಳಸುವ ಚಾಕು ಕೆಲವು ಸಮಯ ಕಳೆದ ಬಳಿಕ ಅದರ ಶಾರ್ಪ್ ನೆಸ್ ಕಳೆದುಕೊಂಡು ಉಪಯೋಗಕ್ಕೆ ಬರದಂತೆ ಮೊಂಡು ಆಗೋದು ಸಾಮಾನ್ಯ. ಇದರಿಂದ ತರಕಾರಿ, ಹಣ್ಣು ಅಥವಾ ಇತರ ವಸ್ತುಗಳನ್ನು ಕತ್ತರಿಸಲು ಹೆಚ್ಚು ಶ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹಾಗಂತ ಚಾಕುವನ್ನು ಶಾರ್ಪ್ ಮಾಡಲು ದುಬಾರಿ ಶಾರ್ಪನರ್ ಖರೀದಿಸುವ ಅಗತ್ಯವಿಲ್ಲ. ಅಥವಾ ಹೊರಗಡೆ ತೆಗೆದುಕೊಂಡು ಹೋಗುವ ಅಗತ್ಯವೂ ಇಲ್ಲ. ಮನೆಯಲ್ಲಿರುವ ಹಳೆಯ ಸುದ್ದಿಪತ್ರಿಕೆ (ನ್ಯೂಸ್ ಪೇಪರ್) ಬಳಸಿ ಚಾಕನ್ನು ಶಾರ್ಪ್ ಮಾಡಬಹುದು. ಅದು ಹೇಗೆ ಇಲ್ಲಿದೆ ಸಿಂಪಲ್ ಟ್ರಿಕ್ಸ್.&lt;/p&gt;&lt;h3&gt;&lt;strong&gt;ನ್ಯೂಸ್ ಪೇಪರ್ ನಿಂದ ಚಾಕುವನ್ನು ಹರಿತಗೊಳಿಸಬಹುದೇ?&lt;/strong&gt;&lt;/h3&gt;&lt;p&gt;ವೃತ್ತಪತ್ರಿಕೆಯ ಶಾಯಿ ಮತ್ತು ಸೂಕ್ಷ್ಮವಾದ ವಿನ್ಯಾಸವು ಎಬ್ರೆಸಿವ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚಾಕುವಿನ ಅಂಚನ್ನು ಶಾರ್ಪ್ ಮಾಡಲು ಸಹಾಯ ಮಾಡುತ್ತದೆ.&lt;/p&gt;&lt;p&gt;&lt;strong&gt;ನ್ಯೂಸ್ ಪೇಪರ್ ಬಳಸಿ ಚಾಕು ಶಾರ್ಪ್ ಮಾಡೋದು ಹೇಗೆ?&lt;/strong&gt;&lt;/p&gt;&lt;ul&gt; &lt;li&gt;ಸುದ್ದಿಪತ್ರಿಕೆಯನ್ನು 4&ndash;5 ಬಾರಿ ಮಡಚಿ&lt;/li&gt; &lt;li&gt;ಅದನ್ನು ಸಮತಟ್ಟಾದ ಮೇಜಿನ ಮೇಲೆ ಇಡಿ.&lt;/li&gt; &lt;li&gt;ಚಾಕುವನ್ನು ಸುಮಾರು 15&ndash;20 ಡಿಗ್ರಿ ಕೋನದಲ್ಲಿ ಹಿಡಿಯಿರಿ.&lt;/li&gt; &lt;li&gt;ಚಾಕಿನ ಹಿಂಭಾಗದಿಂದ ಮುಂಭಾಗದ ತುದಿವರೆಗೆ ನಿಧಾನವಾಗಿ ಪತ್ರಿಕೆಯ ಮೇಲೆ ಒರೆಸಿ.&lt;/li&gt; &lt;li&gt;ಒಂದು ಬದಿಯಲ್ಲಿ 10&ndash;15 ಬಾರಿ ಮಾಡಿದ ನಂತರ ಮತ್ತೊಂದು ಬದಿಯಲ್ಲೂ ಅದೇ ರೀತಿ ಮಾಡಿ.&lt;/li&gt; &lt;li&gt;ಕೊನೆಯಲ್ಲಿ ಸ್ವಚ್ಛವಾದ ಬಟ್ಟೆಯಿಂದ ಚಾಕುವನ್ನು ಒರೆಸಿ.&lt;/li&gt; &lt;li&gt;ಈಗ ನಿಮ್ಮ ಚಾಕ್ ಮೊದಲಿಗಿಂತಲೂ ಶಾರ್ಪ್ ಆಗಿರೋದನ್ನು ನೀವು ನೋಡಬಹುದು.&lt;/li&gt;&lt;/ul&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಚಾಕು ಶಾರ್ಪ್ ಮಾಡುವಾಗ ಗಮನಿಸಬೇಕಾದ ಸಂಗತಿಗಳು&lt;/strong&gt;&lt;/p&gt;&lt;ul&gt; &lt;li&gt;ಹೆಚ್ಚು ಒತ್ತಡ ಕೊಡಬೇಡಿ&lt;/li&gt; &lt;li&gt;ನಿರಂತರವಾಗಿ ಒಂದೇ ಆಂಗಲ್ ಕಾಯ್ದುಕೊಳ್ಳಿ.&lt;/li&gt; &lt;li&gt;ಚಾಕು ತುಂಬಾ ಮಂದವಾಗಿದ್ದರೆ ಈ ಪ್ರಕ್ರಿಯೆಯನ್ನು ಎರಡು ಅಥವಾ ಮೂರು ಬಾರಿ ಪುನರಾವರ್ತಿಸಬಹುದು.&lt;/li&gt; &lt;li&gt;ಸುರಕ್ಷತೆಯ ದೃಷ್ಟಿಯಿಂದ ಚಾಕುವಿನ ಚಲನೆ ಬೆರಳುಗಳಿಂದ ದೂರವಾಗಿರಲಿ.&lt;/li&gt;&lt;/ul&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಕೊನೆಯದಾಗಿ ಒಂದು ಮಾತು ನೆನಪಿರಲಿ&lt;/strong&gt;&lt;/p&gt;&lt;p&gt;ನ್ಯೂಸ್ ಪೇಪರ್ ಬಳಸಿ ಚಾಕು ಶಾರ್ಪ್ ಮಾಡುವುದು ಕಡಿಮೆ ವೆಚ್ಚದ ಮತ್ತು ಸುಲಭವಾದ ಟ್ರಿಕ್ಸ್ ಆಗಿದೆ. ನೀವು ಪ್ರತಿದಿನ ಸಣ್ಣ ಪುಟ್ಟ ತರಕಾರಿ, ಹಣ್ಣುಗಳನ್ನು ಕತ್ತರಿಸುವ ಚಾಕುವನ್ನು ಶಾರ್ಪ್ ಆಗಿರಿಸಲು ಇದನ್ನು ಟ್ರೈ ಮಾಡಬಹುದು. ಆದರೆ, ದೊಡ್ಡ ವಸ್ತುಗಳನ್ನು ಕತ್ತರಿಸಲು ಈ ಟ್ರಿಕ್ಸ್ ವರ್ಕ್ ಆಗುವುದಿಲ್ಲ.&lt;/p&gt;]]></content:encoded>
            <category>kitchen</category>
            <dc:creator>Pavna Das</dc:creator>
            <atom:link href="https://kannada.asianetnews.com/kitchen/simple-newspaper-hacks-to-make-kitchen-knife-sharp/articleshow-z66255y"/>
        </item>
    </channel>
</rss>
