<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 19 Apr 2026 11:28:31 +0530</lastBuildDate>
        <atom:link href="https://kannada.asianetnews.com/rss/karnataka-districts" rel="self" type="application/rss+xml"/>
        <item>
            <title><![CDATA[ಕಾರ್‌, ಸರ್ಕಾರಿ ಬಸ್, ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿ: ರಸ್ತೆಯಲ್ಲಿ ಹೆಣಗಳು ಚೆಲ್ಲಾಪಿಲ್ಲಿ]]></title>
            <link>https://kannada.asianetnews.com/gallery/karnataka-districts/vijayanagar-hosapete-horrific-tragedy-near-hospet-fatal-series-of-accidents-four-dead-25-injured-mrq-sqb69id</link>
            <guid isPermaLink="true">https://kannada.asianetnews.com/gallery/karnataka-districts/vijayanagar-hosapete-horrific-tragedy-near-hospet-fatal-series-of-accidents-four-dead-25-injured-mrq-sqb69id</guid>
            <pubDate>Sun, 19 Apr 2026 11:28:28 +0530</pubDate>
            <description><![CDATA[&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ಕಾರ್, ಸರ್ಕಾರಿ ಬಸ್ ಹಾಗೂ ಮೂರು ಬೈಕ್&zwnj;ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpj4q99trssgpp6beahxp58p,imgname-hosapete-accident--2--1776577914170.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ಕಾರ್, ಸರ್ಕಾರಿ ಬಸ್ ಹಾಗೂ ಮೂರು ಬೈಕ್&zwnj;ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಲಾರಿಯೊಂದು ಕಾರ್, ಸರ್ಕಾರಿ ಬಸ್ ಮತ್ತು ಮೂರು ಬೈಕ್&zwnj;ಗಳಿಗೆ ಡಿಕ್ಕಿ ಹೊಡೆದಿದೆ.&lt;/p&gt;&lt;img&gt;&lt;p&gt;ಬೆಳ್ಳುಳ್ಳಿ ತುಂಬಿಕೊಂಡು ಹರಿಯಾಣದಿಂದ ಬಂದ ಲಾರಿಯೊಂದು ನಿಯಂತ್ರಣ ತಪ್ಪಿ ಮೊದಲಿಗೆ ಕಾರ್&zwnj;ಗೆ ಡಿಕ್ಕಿ ಹೊಡೆದಿದೆ. ನಂತ್ರ ಸರ್ಕಾರಿ ಬಸ್ ಹಾಗೂ ಮೂರು ಬೈಕ್&zwnj;ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಲಾರಿ ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಅಪಘಾತದ ತೀವ್ರತೆ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಹೊಸಪೇಟೆಯಿಂದ ಚಿತ್ರದುರ್ಗದತ್ತ ತೆರಳುತ್ತಿದ್ದ ಸರ್ಕಾರಿ ಬಸ್&zwnj;ಗೆ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್&zwnj;ನಲ್ಲಿದ್ದ ಸುಮಾರು 25 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;img&gt;&lt;p&gt;ಈ ಅಪಘಾತ ಸಂಭವಿಸಿದ ಸ್ಥಳದಲ್ಲಿ ಹೆದ್ದಾರಿ ದುರಸ್ತಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದೇ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದೇ ಕಾರಣದಿಂದ ಅಪಘಾತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Mysuru: ಅವನನ್ನ ಕೊಂದು ಬಿಡು, ಇಬ್ಬರು ಚೆನ್ನಾಗಿರೋಣ; ಗಂಡನ ಉಸಿರು ನಿಲ್ಲಿಸಿ ಜೈಲು ಸೇರಿದ ಪತ್ನಿ&lt;/strong&gt;&lt;/p&gt;&lt;img&gt;&lt;p&gt;ಅಪಘಾತದ ಪರಿಣಾಮವಾಗಿ ಹೆದ್ದಾರಿಯಲ್ಲಿ ಎರಡೂ ಬದಿಗಳಲ್ಲಿ ಸುಮಾರು ಮೂರು ಕಿಲೋ ಮೀಟರ್&zwnj;ವರೆಗೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.&lt;/p&gt;&lt;p&gt;ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಟ್ರಾಫಿಕ್ ತಿಳಿಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru: 50 ಮಹಿಳೆಯರೊಂದಿಗೆ ದೈಹಿಕ ಸಂಪರ್ಕ? ಉದ್ಯಮಿ ಕೃಪಲಾನಿ ಕರಾಳ ಮುಖ ಬಯಲು!&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/vijayanagar-hosapete-horrific-tragedy-near-hospet-fatal-series-of-accidents-four-dead-25-injured-mrq-sqb69id"/>
        </item>
        <item>
            <title><![CDATA[Mysuru: ಅವನನ್ನ ಕೊಂದು ಬಿಡು, ಇಬ್ಬರು  ಚೆನ್ನಾಗಿರೋಣ; ಗಂಡನ ಉಸಿರು ನಿಲ್ಲಿಸಿ ಜೈಲು ಸೇರಿದ ಪತ್ನಿ]]></title>
            <link>https://kannada.asianetnews.com/gallery/karnataka-districts/wife-and-lover-kill-husband-who-obstructed-their-illicit-affair-saraguru-mysuru-mrq-tmmihqg</link>
            <guid isPermaLink="true">https://kannada.asianetnews.com/gallery/karnataka-districts/wife-and-lover-kill-husband-who-obstructed-their-illicit-affair-saraguru-mysuru-mrq-tmmihqg</guid>
            <pubDate>Sun, 19 Apr 2026 11:09:18 +0530</pubDate>
            <description><![CDATA[ಮೈಸೂರಿನ ಸರಗೂರು ತಾಲೂಕಿನಲ್ಲಿ ನಡೆದ ಜವರಪ್ಪ ಕೊಲೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದಾರೆ. ಪತ್ನಿ ಅಮೃತಾ ತನ್ನ ಪ್ರಿಯಕರ ಸಿದ್ದೇಶ್ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಹತ್ಯೆಗೈದಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpj3hj7kfz2rwgzekeczx1g1,imgname-mysuru-murder--2--1776576678131.jpg" type="image/jpeg" height="390" width="690"/>
            <content:encoded><![CDATA[ಮೈಸೂರಿನ ಸರಗೂರು ತಾಲೂಕಿನಲ್ಲಿ ನಡೆದ ಜವರಪ್ಪ ಕೊಲೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದಾರೆ. ಪತ್ನಿ ಅಮೃತಾ ತನ್ನ ಪ್ರಿಯಕರ ಸಿದ್ದೇಶ್ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಹತ್ಯೆಗೈದಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.&lt;img&gt;&lt;p&gt;ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನು ಕೊ*ಲೆಗೈದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ಈ ಕೊ*ಲೆ ನಡೆದಿತ್ತು.&lt;/p&gt;&lt;img&gt;&lt;p&gt;ಕುರ್ಣೇಗಾಲದ ನಿವಾಸಿ ಜವರಪ್ಪ ಕೊಲೆಯಾಗಿದ ದುರ್ದೈವಿ. ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32), ಜವರಪ್ಪನ ಪತ್ನಿ ಅಮೃತಾ(26) ಬಂಧಿತ ಆರೋಪಿಗಳು. ಕುರ್ಣೇಗಾಲ ಗ್ರಾಮದ ಹೊರವಲಯದಲ್ಲಿ ಅನುಮಾನಾಸ್ಪದವವಾಗಿ ಜವರಪ್ಪ ಶವ ಪತ್ತೆಯಾಗಿತ್ತು.&lt;/p&gt;&lt;p&gt;&amp;nbsp;ಈ ಸಂಬಂಧ ಅನುಮಾನ ವ್ಯಕ್ತಪಡಿಸಿ ಜವರಪ್ಪ ಅವರ ಸೋದರ ರವಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದರು.&lt;/p&gt;&lt;img&gt;&lt;p&gt;ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ ಎಂಬಾತನೊಂದಿಗೆ ಅಮೃತಾ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರು ಮಕ್ಕಳಿದ್ರೂ ಸಿದ್ದೇಶ್ ಜೊತೆ ಅಮೃತಾ ವಿವಾಹೇತರ ಸಂಬಂಧದಲ್ಲಿದ್ದಳು. ಆದ್ರೆ ಇವರಿಬ್ಬರ ಸಂಬಂಧಕ್ಕೆ ಗಂಡ ಜವರಪ್ಪ ಅಡ್ಡಿಯಾಗಿದ್ದನು. ಇತ್ತೀಚೆಗೆ ಅಮೃತಾ ಮತ್ತು ಜವರಪ್ಪ ನಡುವೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ನಡೆಯುತ್ತಿತ್ತು.&lt;/p&gt;&lt;img&gt;&lt;p&gt;12 ದಿನಗಳ ಹಿಂದೆ ಹಬ್ಬಕ್ಕಾಗಿ ಮಕ್ಕಳೊಂದಿಗೆ ಅಮೃತಾ ತವರು ಸೇರಿದ್ದಳು. ಏಪ್ರಿಲ್ 16ರಂದು ಪತ್ನಿಯ ಊರಿಗೆ ಹೋಗುತ್ತಿರುವ ವಿಷಯವನ್ನು ಸೋದರ ರವಿ ಮುಂದೆ ಜವರಪ್ಪ ಹೇಳಿಕೊಂಡಿದ್ದರು. ಪತ್ನಿ ಊರಿಗೆ ಹೋಗಿದ್ದ ಜವರಪ್ಪ ಅಂದು ಗ್ರಾಮಕ್ಕೆ ಹಿಂದಿರುಗಿ ಬಂದಿರಲಿಲ್ಲ. ಮರುದಿನ ಬೆಳಗ್ಗೆ ಸುಮಾರು 6.30ರ ವೇಳೆಗೆ ಜವರಪ್ಪ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೇಳಿದ್ದೆಲ್ಲವನ್ನೂ ಕೊಡ್ತಿದ್ದ 57ರ ಸರ್ಕಾರಿ ಶಾಲಾ ಶಿಕ್ಷಕಿಯ 27ರ ಹರೆಯದ ಪ್ರೇಮಿ: ಏಕಾಏಕಿ ಸುಟ್ಟು ಹಾಕಿದ್ದೇಕೆ?&lt;/strong&gt;&lt;/p&gt;&lt;img&gt;&lt;p&gt;ಯಾರೋ ಕೊ*ಲೆ ಮಾಡಿದ್ದಾರೆಂದು ಎಂದು ಅನುಮಾನಿಸಿ ರವಿ ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಸರಗೂರು ಠಾಣೆಯ ಪೊಲೀಸರು ತನಿಖೆಗೆ ಮೂರು ತಂಡಗಳನ್ನು ರಚನೆ ಮಾಡಿದ್ದರು. ಈ ವೇಳೆ ಜವರಪ್ಪ ಕೊ*ಲೆಗೆ ಪತ್ನಿಯ ಅಕ್ರಮ ಸಂಬಂಧವೇ ಕಾರಣ ಎಂದು ಗೊತ್ತಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅಮೃತಾಳ ಕುಮ್ಮಕ್ಕಿನಿಂದಲೇ ಸಿದ್ದೇಶ್ ಕೊಲೆ ಮಾಡಿರೋದು ತನಿಖೆಯಲ್ಲಿ ತಿಳಿದು ಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪೊಲೀಸರಿಗೆ ದಾರಿ ತೋರಿದ ಹೆಂಡದ ಬಾಟಲ್​! ಕಗ್ಗಂಟಾಗಿದ್ದ ಕೊ*ಲೆ ಕೇಸ್ ಸಾಲ್ವ್​​: ಸಿಕ್ಕಿಬಿದ್ದ ಪತ್ನಿ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/wife-and-lover-kill-husband-who-obstructed-their-illicit-affair-saraguru-mysuru-mrq-tmmihqg"/>
        </item>
        <item>
            <title><![CDATA[Bengaluru: 50 ಮಹಿಳೆಯರೊಂದಿಗೆ ದೈಹಿಕ ಸಂಪರ್ಕ? ಉದ್ಯಮಿ ಕೃಪಲಾನಿ ಕರಾಳ ಮುಖ ಬಯಲು!]]></title>
            <link>https://kannada.asianetnews.com/gallery/bengaluru-urban/kripalani-accused-of-cheating-and-blackmailing-around-50-women-on-the-pretext-of-love-and-marriage-mrq-ce6gh4z</link>
            <guid isPermaLink="true">https://kannada.asianetnews.com/gallery/bengaluru-urban/kripalani-accused-of-cheating-and-blackmailing-around-50-women-on-the-pretext-of-love-and-marriage-mrq-ce6gh4z</guid>
            <pubDate>Sun, 19 Apr 2026 10:28:55 +0530</pubDate>
            <description><![CDATA[&lt;p&gt;ಕೃಪಲಾನಿ, ಪ್ರೀತಿ ಮತ್ತು ಮದುವೆಯ ನೆಪದಲ್ಲಿ ಸುಮಾರು 50 ಮಹಿಳೆಯರಿಗೆ ವಂಚಿಸಿ, ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು, ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಬೆದರಿಸುತ್ತಿದ್ದ ಈತನ ಕೃತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpj18xs1xy8n5p425j9df49d,imgname-kurupalani-case--3--1776574297889.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೃಪಲಾನಿ, ಪ್ರೀತಿ ಮತ್ತು ಮದುವೆಯ ನೆಪದಲ್ಲಿ ಸುಮಾರು 50 ಮಹಿಳೆಯರಿಗೆ ವಂಚಿಸಿ, ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು, ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಬೆದರಿಸುತ್ತಿದ್ದ ಈತನ ಕೃತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಇಂದಿರಾ ನಗರ ನಿವಾಸಿಯಾಗಿರುವ 36 ವರ್ಷದ ಕೃಪಲಾನಿಯ ಅಸಲಿ ಮುಖ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. 45 ವರ್ಷದ ಮಹಿಳಾ ಅಧಿಕಾರಿಗೆ ವಂಚನೆ, ಅತ್ಯಾ*ಚಾರ ಪ್ರಕರಣದಲ್ಲಿ ಕೃಪಲಾನಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪೊಲೀಸರ ತನಿಖೆಯಲ್ಲಿ ಸುಮಾರು 50 ಮಹಿಳೆಯರಿಗೆ ಇದೇ ರೀತಿಯಲ್ಲಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.&lt;/p&gt;&lt;img&gt;&lt;p&gt;ಉದ್ಯಮಿ ಕೃಪಲಾನಿ ಪ್ರೀತಿ ಮತ್ತು ಮದವೆ ಹೆಸರಿನಲ್ಲಿ ಮಹಿಳೆಯರನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸುತ್ತಿದ್ದನು ಎಂಬುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಕೃಪಲಾನಿ ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದನು. ಪರಿಚಯ ಮಾಡಿಕೊಂಡ ಅಧಿಕಾರಿಗಳಿಗೆ ಲಂಚ್, ಡಿನ್ನರ್ ಪಾರ್ಟಿಗೆ ಆಹ್ವಾನಿಸಿ ಸಲುಗೆ ಬೆಳೆಸಿಕೊಳ್ಳುತ್ತಿದ್ದನು.&lt;/p&gt;&lt;img&gt;&lt;p&gt;ಸಲುಗೆ ಬೆಳೆಯುತ್ತಿದ್ದಂತೆ ಪ್ರೀತಿ ಹೆಸರಿನ ಸುಳ್ಳು ಬಲೆಯನ್ನು ಬೀಸುತ್ತಿದ್ದನು. ನಂತರ ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಮೊಬೈಲ್&zwnj;ನಲ್ಲಿ ಸೆರೆ ಹಿಡಿದುಕೊಂಡು ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದನು ಎಂದು ವರದಿಯಾಗಿದೆ. ಪುಲಕೇಶಿ ನಗರ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದು, ಮತ್ತಷ್ಟು ಸ್ಪೋಟಕ ವಿಷಯಗಳು ಬಯಲಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಉದ್ಯಮಿ ಎಂ.ಕೃಪಲಾನಿ ನನ್ನ ಮೇಲೆ ಅತ್ಯಾ*ಚಾರ ಎಸಗಿ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು 45 ವರ್ಷದ ಮಹಿಳಾ ಅಧಿಕಾರಿ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದಿರಾನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರಿಂದ ಪ್ರಕರಣ ಇಂದಿರಾನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಈ ನಡುವೆ ಪ್ರಕರಣದ ತನಿಖೆಯನ್ನು ಪುಲಕೇಶಿ ನಗರ ಠಾಣೆಗೆ ಹಿರಿಯ ಅಧಿಕಾರಿಗಳು ತನಿಖೆಗೆ ವರ್ಗಾಯಿಸಿದ್ದರು. ಆರೋಪಿ ಕೃಪಲಾನಿಯು ವಿದೇಶಗಳಿಂದ ಎಲೆಕ್ಟ್ರಾನಿಕ್&zwnj; ವಸ್ತುಗಳನ್ನು ಆಮದು ಹಾಗೂ ರಫ್ತು ಮಾಡುವ ವ್ಯವಹಾರ ನಡೆಸುತ್ತಿದ್ದನು ಎಂದು ತಿಳಿದು ಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಹಿಳಾ ಕಸ್ಟಮ್ಸ್ ಅಧಿಕಾರಿ ಮೇಲೆ ಅತ್ಯಾ*ಚಾರ: ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್&zwnj;ಮೇಲ್ : ಉದ್ಯಮಿ ಅಂದರ್&lt;/strong&gt;&lt;/p&gt;&lt;img&gt;&lt;p&gt;ಈ ಹಿಂದೆ ಮಗ ಕಾಣೆಯಾಗಿದ್ದಾನೆ ಎಂದು ಕೃಪಲಾನಿ ತಾಯಿ ಹೇಬಿಯಸ್ ಕಾರ್ಪಸ್ ಹಾಕಿದ್ದರು. ಕೃಪಲಾನಿ ಉದ್ದೇಶ ಪೂರ್ವಕವಾಗಿ ಹೊಟೇಲ್ ನಲ್ಲಿ ಅಡಗಿರೋದು ಪತ್ತೆ ಆಗಿತ್ತು. ಈ ವೇಳೆ ಕೋರ್ಟ್ ಕೃಪಲಾನಿಗೆ ಎರಡು ಲಕ್ಷ ದಂಡ ವಿಧಿಸಿತ್ತು. ದಶಕದ ಹಿಂದೆ ಕುಡಿದು ಮಹಿಳಾ ಅಧಿಕಾರಿಗಳ ಜೊತೆ ಅಸಭ್ಯ ವರ್ತನೆ ಮಾಡಿರುವ ಆರೋಪವೂ ಈತನ ವಿರುದ್ಧ ಕೇಳಿ ಬಂದಿದೆ. ಕೃಪಲಾನಿಯಿಂದ ದೌರ್ಜನ್ಯಕ್ಕೊಳಗಾದವರು ದೂರು ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು ಉದ್ಯಮಿ ಲೇಪಾಕ್ಷಿಯಲ್ಲಿ ಕೊಲೆ: ಹೊಸ ಕಾರು ಕೊಡಿಸುವುದಾಗಿ 'ಅಕ್ಕನ ಗಂಡನನ್ನ ಪರಲೋಕ ಸೇರಿಸಿದ ಭಾಮೈದ'!&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/bengaluru-urban/kripalani-accused-of-cheating-and-blackmailing-around-50-women-on-the-pretext-of-love-and-marriage-mrq-ce6gh4z"/>
        </item>
        <item>
            <title><![CDATA['ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ]]></title>
            <link>https://kannada.asianetnews.com/education/alvas-education-revolution-in-costal-karnataka-founder-mohan-alvas-next-goal-videoshow-h0mcuo7</link>
            <guid isPermaLink="true">https://kannada.asianetnews.com/education/alvas-education-revolution-in-costal-karnataka-founder-mohan-alvas-next-goal-videoshow-h0mcuo7</guid>
            <pubDate>Sun, 19 Apr 2026 09:40:00 +0530</pubDate>
            <description><![CDATA[&lt;p&gt;ಡಾ. ಎಂ. ಮೋಹನ್ ಆಳ್ವರಿಂದ ಸ್ಥಾಪಿತವಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ರಾಂತಿಯನ್ನುಂಟುಮಾಡಿದೆ. 'ನುಡಿಸಿರಿ' ಮತ್ತು 'ವಿರಾಸತ್' ನಂತಹ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿರುವ ಈ ಸಂಸ್ಥೆಯ &amp;nbsp;ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ&lt;/p&gt;]]></description>
            <media:content url="https://geo.dailymotion.com/player/x1tbu.html?video=xa5x5h6" medium="video" height="768" width="1024"/>
            <content:encoded><![CDATA[&lt;p&gt;ಕರಾವಳಿ ಭಾಗದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಹೆಸರಾಗಿರುವ ಸಂಸ್ಥೆ ಮೋಹನ್ ಆಳ್ವಾ ಅವರ ಆಳ್ವಾಸ್ ಶಿಕ್ಷಣ ಸಂಸ್ಥೆ. ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಮಹತ್ವ ನೀಡುತ್ತಿರುವ ಸಂಸ್ಥೆಯೂ &amp;nbsp;ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಮುಂತಾದ ಕಾರ್ಯಕ್ರಮಗಳ ಮೂಲಕ ದೇಶದೆಲ್ಲೆಡೆ ಪ್ರಸಿದ್ಧಿ ಪಡೆದಿರುವುದು ಗೊತ್ತೇ ಇದೆ. ಈಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಆಳ್ವಾಸ್ ಸಂಸ್ಥೆ ಪ್ರಖ್ಯಾತಿ ಪಡೆದಿದೆ. &amp;nbsp;ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದು, ಈ ಶಿಕ್ಷಣ ಸಂಸ್ಥೆ ಅತ್ಯಾಧುನಿಕ ಸೌಲಭ್ಯ.. ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆಯನ್ನು ಹೊಂದಿದೆ. ಕಲೆ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್, ವೈದ್ಯಕೀಯ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, &amp;nbsp;ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಕರುನಾಡಿನ ಹೆಮ್ಮೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಡಾ. ಎಂ. ಮೋಹನ್ ಆಳ್ವಾರ ಮುಂದಿನ ಗುರಿ ಏನು? ಈ ವೀಡಿಯೋ ನೋಡಿ..&lt;/p&gt;]]></content:encoded>
            <category>karnataka-districts</category>
            <dc:creator>Anusha Kb</dc:creator>
            <atom:link href="https://kannada.asianetnews.com/education/alvas-education-revolution-in-costal-karnataka-founder-mohan-alvas-next-goal-videoshow-h0mcuo7"/>
        </item>
        <item>
            <title><![CDATA[ದಾವಣಗೆರೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಕ್ಕೆ ಸಲೀಂ, ರಿಜ್ವಾನ್ ಕಾರಣ: ಅಲ್ಪಸಂಖ್ಯಾತ ಮುಖಂಡರ ಆಕ್ರೋಶ]]></title>
            <link>https://kannada.asianetnews.com/politics/saleem-ahemd-and-rizwan-are-responsible-for-the-davangere-congress-controversy-says-jagruthi-vedike-rav/articleshow-t8yq5sf</link>
            <guid isPermaLink="true">https://kannada.asianetnews.com/politics/saleem-ahemd-and-rizwan-are-responsible-for-the-davangere-congress-controversy-says-jagruthi-vedike-rav/articleshow-t8yq5sf</guid>
            <pubDate>Sun, 19 Apr 2026 09:31:30 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಗೊಂದಲಕ್ಕೆ ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅರ್ಷದ್ ಅವರೇ ಕಾರಣ ಎಂದು ಆರೋಪಿಸಿರುವ ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು, ಪಕ್ಷಕ್ಕಾಗಿ ದುಡಿದ ಕೆ. ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹಮ್ಮದ್ ವಿರುದ್ಧದ ಕ್ರಮವನ್ನು ಖಂಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb0wxfrjag39ja474wh2e5f,imgname-davanagere-muslim-leaders-meeting-1776339023351.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ದಾವಣಗೆರೆ (ಏ.19) &lt;/strong&gt;ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆ ಗೊಂದಲಗಳಿಗೆ ಸಲೀಂ ಅಹ್ಮದ್&zwnj;, ರಿಜ್ವಾನ್ ಅರ್ಷದ್&zwnj; ಅವರೇ ಮುಖ್ಯ ಕಾರಣರಾಗಿದ್ದಾರೆ. ಪಕ್ಷಕ್ಕಾಗಿ ದುಡಿದ ಎಂಎಲ್&zwnj;ಸಿ ಕೆ.ಅಬ್ದುಲ್ ಜಬ್ಬಾರ್&zwnj;, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ನಸೀರ್ ಅಹಮ್ಮದ್ ವಿರುದ್ಧದ ಕ್ರಮವನ್ನು ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ನೇತೃತ್ವದಲ್ಲಿ ವಿವಿಧ ಮಸೀದಿಗಳ ಅಧ್ಯಕ್ಷರು, ಮುಸ್ಲಿಂ ಮುಖಂಡರು, ಕ್ರೈಸ್ತ ಮುಖಂಡರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಅಬ್ದುಲ್ ಘನಿ ತಾಹೀರ್&zwnj;, ರಾಜ್ಯದಲ್ಲಿ 135ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಲ್ಲಿ ಅಬ್ದುಲ್ ಜಬ್ಬಾರ್, ಜಮೀರ್ ಅಹ್ಮದ್, ನಸೀರ್ ಅಹ್ಮದ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. 8 ವರ್ಷದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಜಬ್ಬಾರ್ ರಾಜ್ಯಾದ್ಯಂತ ಸುತ್ತಾಡಿ ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಕಡೆ ಸೆಳೆಯವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಬ್ಬಾರ್, ನಸೀರ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡೆಗೆ ರಾಜ್ಯವ್ಯಾಪಿ ಮುಸ್ಲಿಂ ಸಮುದಾಯ ದುಃಖದಲ್ಲಿದೆ. ಉಲ್ಮಾ (ಮುಸ್ಲಿಂ ಧರ್ಮಗುರು)ಗಳು ಕಾಂಗ್ರೆಸ್ಸಿನ ಕ್ರಮವನ್ನು ಖಂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಬಹುತೇಕ ಎಲ್ಲ ಮಸೀದಿಗಳ ಅಧ್ಯಕ್ಷರು, ಕ್ರೈಸ್ತ ಮುಖಂಡರು ಒಂದಾಗಿ ಕಾಂಗ್ರೆಸ್ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.&lt;/p&gt;&lt;p&gt;ಎಐಸಿಸಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಈಗ ಇಲ್ಲಿ ಪಕ್ಷಪಾತಿ ಧೋರಣೆ ತೋರಿಸುತ್ತಿದ್ದಾರೆ. ಚಿಕ್ಕಮಗಳೂರಿನಿಂದ ಬೀದರ್&zwnj;ವರೆಗೂ ಜಬ್ಬಾರ್ ಹೆಸರನ್ನು ಅಲ್ಪಸಂಖ್ಯಾತರು ಹೇಳುತ್ತಾರೆ. ಆದರೆ, ನಮ್ಮ ಜಿಲ್ಲೆಯ ಕಾಂಗ್ರೆಸ್ಸಿನ ನಾಯಕರು ಎನಿಸಿಕೊಂಡವರು ನೆರೆ ಜಿಲ್ಲೆಗಳಿರಲಿ, ಪಕ್ಷದ ಕ್ಷೇತ್ರಕ್ಕೂ ಹೋಗುವುದಿಲ್ಲ ಎಂಬುದು ಸುರ್ಜೇವಾಲಾ ಅವರಿಗೆ ಅರಿವಿಲ್ಲವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಂಜೀಂ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ವೈ.ಎಂ.ಫಕೃದ್ದೀನ್ ಮಾತನಾಡಿ, ಈ ಹಿಂದೆ ಶಾಮನೂರು ಶಿವಶಂಕರಪ್ಪ ಸ್ಪರ್ಧೆಗೆ ಇದೇ ರೀತಿ ಆದಾಗ 40 ಸಾವಿರ ಮತಗಳಿಂದ ಶಾಮನೂರುಗೆ ಗೆಲ್ಲಿಸಿದ್ದೆವು. &zwj;&zwj; ಆಗ ಸಮಸ್ಯೆ ಪರಿಹರಿಸಿದ್ದು ಇದೇ ಮಲ್ಲಿಕಾರ್ಜುನ ಅವರೇ ಹೊರತು ಸಲೀಂ, ರಿಜ್ವಾನ್ ಅಲ್ಲ. ಹೀಗೆ ಹೊರಗಿನಿಂದ ಬಂದವರೇ ಇಲ್ಲಿ ಸಮಸ್ಯೆ ಮಾಡಿ ಹೋಗಿದ್ದಾರೆ. ಇಲ್ಲಿನ ಹಿರಿಯರು ಪಕ್ಷದ ಬೆನ್ನಿಗೆ ಚೂರಿ ಹಾಕಿದರು ಅಂತಿದ್ದಾರೆ. ಈ ಇಬ್ಬರು ಯಾವೊಬ್ಬ ಉಲ್ಮಾಗಳನ್ನು ಭೇಟಿ ಮಾಡಲಿಲ್ಲ ಎಂದು ತಿಳಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/saleem-ahemd-and-rizwan-are-responsible-for-the-davangere-congress-controversy-says-jagruthi-vedike-rav/articleshow-t8yq5sf"/>
        </item>
        <item>
            <title><![CDATA[ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ]]></title>
            <link>https://kannada.asianetnews.com/state/vinay-kulkarnis-daughter-wrote-an-emotional-letter-in-support-of-her-father/articleshow-y5srers</link>
            <guid isPermaLink="true">https://kannada.asianetnews.com/state/vinay-kulkarnis-daughter-wrote-an-emotional-letter-in-support-of-her-father/articleshow-y5srers</guid>
            <pubDate>Sun, 19 Apr 2026 09:22:09 +0530</pubDate>
            <description><![CDATA[&lt;p&gt;ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾದ ನಂತರ, ಅವರ ಪುತ್ರಿ ದೀಪಾಲಿ ಕುಲಕರ್ಣಿ ಇನ್ಸ್ಟಾಗ್ರಾಮ್&zwnj;ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kphxfcv600phw76644gafmw5,imgname-vinay-kulkarni-daughter-1776570315621.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಅಪ್ಪನ ಪರ ವಿನಯ್&zwnj; ಕುಲಕರ್ಣಿ ಪುತ್ರಿ ಭಾವನಾತ್ಮಕ ಬರಹ:&lt;/strong&gt;&lt;/h2&gt;&lt;p&gt;ಧಾರವಾಡ: ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಶಾಸಕ ವಿನಯ್ ಕುಲಕರ್ಣಿ ಅವರ ಪರ ಪುತ್ರಿ ದೀಪಾಲಿ ವಿ. ಕುಲಕರ್ಣಿ ಭಾವನಾತ್ಮಕ ಬರಹವೊಂದನ್ನು ಬರೆದುಕೊಂಡು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ತಂದೆಯ ಜೊತೆಗೆ ಇರುವ ಬಾಲ್ಯದ ಹಳೆಯ ಫೋಟೋಗಳನ್ನು ಹಂಚಿಕೊಂಡಿರುವ ದೀಪಾಲಿ ತಂದೆಯ ಪರವಾಗಿ ಉದ್ದನೇಯ ಬರಹ ಬರೆದಿದ್ದಾರೆ. ಅವರ ಜೊತೆಗೆ ತಾವು ಸದಾ ಇರುತ್ತೇವೆ ಹಾಗೂ ಅವರ ವಿರುದ್ಧದ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದೇವೆ. ಜೊತೆಯಾಗಿ ನಾವು ಈ ಸಂಕಷ್ಟವನ್ನು ದಾಟಿ ಮುಂದೆ ಸಾಗುತ್ತೇವೆ. ಎಲ್ಲದರಂತೆ ಈ ಕಷ್ಟವೂ ಕಳೆದು ಹೋಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ವಿನಯ್ ಕುಲಕರ್ಣಿ ಅವರ ಕಿರಿಯ ಪುತ್ರಿ ದೀಪಾಲಿ ವಿ. ಕುಲಕರ್ಣಿ ಅವರು ಬರೆದಿರುವ ಪೋಸ್ಟ್ ಹೀಗಿದೆ ನೋಡಿ...&lt;/strong&gt;&lt;/p&gt;&lt;p&gt;&quot;ಉತ್ತರ ಕರ್ನಾಟಕದಾದ್ಯಂತ, ವಿದ್ಯಾರ್ಥಿ ನಾಯಕರಿಂದ ರಾಜ್ಯ ನಾಯಕರಾಗುವವರೆಗೆ ಅವರ ಪಯಣವನ್ನು ಜನರು ಸಾಕ್ಷಿಯಾಗಿ ನೋಡಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿ, ಸಾವಿರಾರು ಪಶುಗಳೊಂದಿಗಿನ ದೊಡ್ಡ ಡೈರಿ ಕಾರ್ಯಾಚರಣೆಯನ್ನು ನಿರ್ಮಿಸಿ ನಿರ್ವಹಿಸಿದವರು, ಯುವ ರೈತರಿಗೆ ಪ್ರೇರಣೆಯಾದವರು. ಅವರು ಯಾವಾಗಲೂ ಎಲ್ಲ ವಯಸ್ಸಿನ ಜನರೊಂದಿಗೆ ಸರಳವಾಗಿ ಬೆರೆತವರು, ಗೌರವದಿಂದ ವರ್ತಿಸಿದವರು ಮತ್ತು ಸಹಾಯಕ್ಕೆ ಸದಾ ಸಿದ್ಧರಾಗಿದ್ದವರು.&lt;/p&gt;&lt;p&gt;ಜನರಿಗಾಗಿ ಬದುಕಿದ ನಾಯಕನಾಗಿ, ಅವರು ತಮ್ಮ ಜೀವನವನ್ನೇ ಸಾರ್ವಜನಿಕ ಸೇವೆಗೆ ಅರ್ಪಿಸಿದ್ದಾರೆ. ಅನೇಕ ಕುಟುಂಬಗಳಿಗೆ ಅವರು ಕೇವಲ ನಾಯಕನಲ್ಲ, ತಮ್ಮವರಲ್ಲೊಬ್ಬರು. ನಾವು ಅವರನ್ನು ಯಾವಾಗಲೂ ಅವರ ಕೆಲಸಗಳಿಂದಲೇ ಗುರುತಿಸಿದ್ದೇವೆ. ಅವರು ಎಂದೆಂದಿಗೂ ನಮ್ಮ ನಾಯಕ, ನಮ್ಮ ಮಾರ್ಗದರ್ಶಕ ಮತ್ತು ನಮ್ಮ ಅತಿ ದೊಡ್ಡ ಹೆಮ್ಮೆ.&lt;/p&gt;&lt;p&gt;ನಾವು ದೃಢವಾಗಿದ್ದೇವೆ. ಅವರ ನೈತಿಕತೆ ಮತ್ತು ಸತ್ಯದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಈ ವಿಷಯಕ್ಕೆ ಸಾರ್ವಜನಿಕ ಗಮನ ಮತ್ತು ವಿಭಿನ್ನ ಅಭಿಪ್ರಾಯಗಳು ಸಾಕಷ್ಟು ಬಂದಿವೆ ಎಂಬುದನ್ನೂ ನಾವು ಅರಿತಿದ್ದೇವೆ. ನ್ಯಾಯಾಂಗ ಪ್ರಕ್ರಿಯೆಗೆ ನಾವು ಗೌರವ ನೀಡುತ್ತೇವೆ ಮತ್ತು ಮೇಲ್ಮನವಿ ನ್ಯಾಯಾಲಯಗಳತ್ತ ಪೂರ್ಣ ನಂಬಿಕೆಯಿಂದ ಮುಂದುವರಿಯುತ್ತಿದ್ದೇವೆ.&lt;/p&gt;&lt;p&gt;ನಮಗೆ ದೊರೆತಿರುವ ಪ್ರೀತಿ, ಪ್ರಾರ್ಥನೆಗಳು ಮತ್ತು ಬೆಂಬಲಕ್ಕಾಗಿ ನಾವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ಒಟ್ಟಾಗಿ, ನಾವು ಬಲವಾಗಿ ನಿಲ್ಲುತ್ತೇವೆ. ನಾವು ಇದನ್ನೂ ದಾಟುತ್ತೇವೆ. ಇದು ಕೂಡ ಸಾಗಿಹೋಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ&quot;.&lt;/p&gt;&lt;h3&gt;&lt;strong&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ 16 ಜನರಿಗೆ ಜೀವಾವಧಿ ಶಿಕ್ಷೆ&lt;/strong&gt;&lt;/h3&gt;&lt;p&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿಯೂ ಸೇರಿದಂತೆ 16 ಜನರಿಗೆ ಜನಪ್ರತಿನಿಧಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಸುಮಾರು 10 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಈ ತೀರ್ಪು ಹೊರಬಿದ್ದಿದ್ದು, ಪ್ರತಿಯೊಬ್ಬ ಆರೋಪಿಗೂ ₹1 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಇದೇ ಪ್ರಕರಣದಲ್ಲಿ ಪೊಲೀಸ್ ಇನ್ಸ್&zwnj;ಪೆಕ್ಟರ್&zwnj;ಗೆ 7 ವರ್ಷಗಳ ಜೈಲು ಶಿಕ್ಷೆಯಾಗಿದೆ. ಈ ಮೊತ್ತವನ್ನು ಯೋಗೇಶ್ ಗೌಡ ಅವರ ಮಕ್ಕಳಿಗೆ ಹಾಗೂ ಅವರ ಸಹೋದರ ಗುರುನಾಥ್ ಗೌಡ ಅವರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೊಲೀಸ್ ಇನ್ಸ್&zwnj;ಪೆಕ್ಟರ್ ಚನ್ನಕೇಶವ ಟಿಂಗರೀಕರ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;2024ರ ಟಾಪರ್ ಈಗ ಎಸಿಬಿ ಬಲೆಗೆ: 60 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಎಸ್&zwnj;ಡಿಎಂ ಕಾಜಲ್ ಮೀನಾ!&lt;/p&gt;&lt;p&gt;ಜೀವಾವಧಿ ಶಿಕ್ಷೆಗೆ ಒಳಗಾಗಿರುವ 16 ಅಪರಾಧಿಗಳು ಮತ್ತು 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ A19 ಅಪರಾಧಿಗೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಲೇರುವ ಅವಕಾಶವಿದ್ದು, ಅದಾಗಲೇ ಅಪರಾಧಿಗಳ ವಕೀಲರು ಈ ಬಗ್ಗೆ ಮುಂದಿನ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ವಿನಯ್ ಕುಲಕರ್ಣಿ , ವಿಕ್ರಂ ಬಳ್ಳಾರಿ, ಕೀರ್ತಿ ಕುಮಾರ್, ಸಂದೀಪ್, ವಿನಾಯಕ, ಮಹಾಬಲೇಶ್ವರ, ಸಂತೋಷ್, ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಅಹ್ಮದ್, ಶಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ್ ಇಂಡಿ ಮತ್ತು ವಿಕಾಸ್ ಕಲಬುರಗಿ ಶಿಕ್ಷೆಗೊಳಗಾದ ಇತರ ದೋಷಿಗಳಾಗಿದ್ದಾರೆ.&lt;/p&gt;&lt;p&gt;&lt;strong&gt;ಏನಿದು ಪ್ರಕರಣ?:&lt;/strong&gt;&lt;/p&gt;&lt;p&gt;ಧಾರವಾಡದ ಜಿ.ಪಂ. ಮಾಜಿ ಸದಸ್ಯ ಯೋಗೇಶ್&zwnj; ಗೌಡ ಅವರನ್ನು 2016ರ ಜೂ.15ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣವನ್ನು 2019ರಲ್ಲಿ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ಬೆಳಕಿಗೆ ಬಂದಿತ್ತು. ಇದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಸಿಬಿಐ ಅಧಿಕಾರಿಗಳು 2020ರ ನ.5ರಂದು ವಿನಯ್&zwnj; ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್&zwnj; ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Anusha Kb</dc:creator>
            <atom:link href="https://kannada.asianetnews.com/state/vinay-kulkarnis-daughter-wrote-an-emotional-letter-in-support-of-her-father/articleshow-y5srers"/>
        </item>
        <item>
            <title><![CDATA[ನ್ಯಾಯಾಂಗದಲ್ಲಿ ಎಐ ಬಳಕೆಗೆ ಸಿಎಂ ಕಳವಳ,  ನ್ಯಾಯಾಂಗ ಸಮ್ಮೇಳನದಲ್ಲಿ ಸಿದ್ದೆರಾಮಯ್ಯ ಹೇಳಿದ್ದೇನು?]]></title>
            <link>https://kannada.asianetnews.com/state/there-are-concerns-over-the-use-of-ai-in-the-judiciary-sys-cm-siddaramaiah-rav/articleshow-35tng6s</link>
            <guid isPermaLink="true">https://kannada.asianetnews.com/state/there-are-concerns-over-the-use-of-ai-in-the-judiciary-sys-cm-siddaramaiah-rav/articleshow-35tng6s</guid>
            <pubDate>Sun, 19 Apr 2026 08:54:55 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ, ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದ ಪ್ರಕರಣಗಳ ತ್ವರಿತ ಇತ್ಯರ್ಥದ ಸಾಧ್ಯತೆಗಳ ಜೊತೆಗೆ ಅಲ್ಗಾರಿದಮಿಕ್ ಪಕ್ಷಪಾತದಂತಹ ಆಳವಾದ ಕಳವಳಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kphvrx0h1wbh6bfeq2095e38,imgname-----------------------2026-04-19t084508.650-1776568529937.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.19): &lt;/strong&gt;ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದ ತ್ವರಿತ ಕಾನೂನು ಸಂಶೋಧನೆ, ಸುಧಾರಿತ ನಿರ್ವಹಣೆ ಮೂಲಕ ಬಾಕಿಯಿರುವ ಪ್ರಕರಣಗಳ ಇತ್ಯರ್ಥದ ಸಾಧ್ಯತೆಯೂ ಇದೆ. ಜೊತೆಗೆ ಆಳವಾದ ಕಳವಳವೂ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.&lt;/p&gt;&lt;p&gt;ಶನಿವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆಯ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ &lsquo;ಕೃತಕ ಬುದ್ಧಿಮತ್ತೆ ಯುಗದಲ್ಲಿ ನ್ಯಾಯಾಂಗವನ್ನು ಮರು ರೂಪಿಸುವುದು&rsquo; ಎಂಬ ವಿಷಯದ ಕುರಿತು ನಡೆದ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು.&lt;/p&gt;&lt;p&gt;ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಆತಂಕ ಇದೆ. ಅಲ್ಗಾರಿದಮಿಕ್ ಪಕ್ಷಪಾತವು ಕಾನೂನಿನ ಮುಂದೆ ಸಮಾನತೆಯ ಖಾತರಿ ಹಾಳು ಮಾಡಬಹುದು. ಅಪಾರದರ್ಶಕ ವ್ಯವಸ್ಥೆಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯ ತಾರ್ಕಿಕ ನಿರ್ಧಾರಗಳ ಸಿದ್ಧಾಂತ ದುರ್ಬಲಗೊಳಿಸುವ ಆತಂಕ ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.&lt;/p&gt;&lt;p&gt;ನ್ಯಾಯಾಧೀಶರೂ ಸಜ್ಜಾಗಬೇಕು:&lt;/p&gt;&lt;p&gt;ನ್ಯಾಯಾಧೀಶರ ಅಧಿಕಾರವನ್ನು ಎಂದಿಗೂ ಅಲ್ಗಾರಿದಂ ಅಧಿಕಾರವು ಮರೆಮಾಡಬಾರದು. ಸಾಂವಿಧಾನಿಕ ನೈತಿಕತೆ ನೈಸರ್ಗಿಕ ಭಾವನೆಯಲ್ಲ, ಅದನ್ನು ಬೆಳೆಸಿಕೊಳ್ಳಬೇಕು. ಸಾಂವಿಧಾನಿಕ ಮೌಲ್ಯಗಳು ತಾಂತ್ರಿಕ ಅಳವಡಿಕೆಗೆ ಮಾರ್ಗದರ್ಶನ ನೀಡುತ್ತವೆಯೇ ಹೊರತು ಅದೇ ಪರ್ಯಾಯವಲ್ಲ ಎಂಬುದನ್ನು ಮನಗಾಣಬೇಕು. ಭವಿಷ್ಯದ ನ್ಯಾಯಾಧೀಶರು ಕಾನೂನು ಕುಶಾಗ್ರಮತಿಗಳು ಮಾತ್ರವಲ್ಲದೆ, ತಾಂತ್ರಿಕ ವ್ಯವಸ್ಥೆಗಳ ಸ್ಪಷ್ಟ ತಿಳಿವಳಿಕೆಯೊಂದಿಗೆ ಸಜ್ಜಾಗಬೇಕಿರುವ ತೀವ್ರ ಅವಶ್ಯಕತೆ ಇದೆ ಎಂದು ಹೇಳಿದರು.&lt;/p&gt;&lt;p&gt;ಕೃತಕ ಬುದ್ಧಿಮತ್ತೆಯ ಸಾಕ್ಷಿ, ಪುರಾವೆಗಳು ನಮ್ಮ ಕಾನೂನು ವ್ಯವಸ್ಥೆಗೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಡೀಪ್&zwnj;ಫೇಕ್&zwnj;ಗಳು, ಸಂಶ್ಲೇಷಿತ ಡೇಟಾ, ಪುರಾವೆಗಳ ದೃಢೀಕರಣ ಸವಾಲಾಗಿ ಪರಿಣಮಿಸಿದೆ. ಡಿಜಿಟಲ್ ಯುಗದಲ್ಲಿ ವಿಶ್ವಾಸಾರ್ಹ ಪುರಾವೆಗಳು ಯಾವುವು ಎಂಬುದನ್ನು ನಿರ್ಧರಿಸಲು ನ್ಯಾಯಾಲಯಗಳ ಅಗತ್ಯ ಹೆಚ್ಚುತ್ತಿದೆ ಎಂದು ತಿಳಿಸಿದರು.&lt;/p&gt;&lt;p&gt;ನ್ಯಾಯ ನಿರ್ಣಯ ಪ್ರಕ್ರಿಯೆ ಹೊರಗಿಡಬೇಕು:&lt;/p&gt;&lt;p&gt;ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಕೃತಕ ಬುದ್ಧಿಮತ್ತೆ ಸೇರಿ ಯಾವುದೇ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ನ್ಯಾಯಾಂಗ ವ್ಯವಸ್ಥೆಯೂ ಹೊರತಾಗಿರಲು ಸಾಧ್ಯವಿಲ್ಲ. ಆದರೆ, ಈ ತಾಂತ್ರಿಕತೆಗಳು ನ್ಯಾಯ ನಿರ್ಣಯ ಪ್ರಕ್ರಿಯೆಯನ್ನು ಯಾಂತ್ರಿಕವಾಗಿಸಲು ಆಸ್ಪದ ನೀಡಬಾರದು ಎಂದು ಸಲಹೆ ನೀಡಿದರು.&lt;/p&gt;&lt;p&gt;ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯು ಅನುಕೂಲಗಳೊಂದಿಗೆ ಗಂಭೀರ ಸವಾಲುಗಳನ್ನು ಕೂಡ ಒಡ್ಡಿದೆ. ಎಐ ತಾಂತ್ರಿಕತೆಯಿಂದಾಗಿ ನಕಲಿ ಸೈಟೇಷನ್ ಗಳು (ಉಲ್ಲೇಖಿತ ಪ್ರಕರಣಗಳು) ಕೂಡ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ, ಎಐ ಮೂಲಕ ಲಭ್ಯವಾಗುವ ಮಾಹಿತಿ ದೃಢೀಕರಿಸಿಕೊಳ್ಳಬೇಕಾದ ಜವಾಬ್ದಾರಿ ಹೆಚ್ಚಿದೆ ಎಂದರು.&lt;/p&gt;&lt;p&gt;- ಫೋಟೋ-&lt;/p&gt;&lt;p&gt;ಕರ್ನಾಟಕ ನ್ಯಾಯಾಂಗ ಅಧಿಕಾರಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮ್ಮೇಳನವನ್ನು ಸುಪ್ರೀಂಕೋರ್ಟ್&zwnj; ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್&zwnj; ಉದ್ಘಾಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಅರವಿಂದ ಕುಮಾರ್&zwnj;, ವಿಭುಬಖ್ರು, ಸಂಘದ ಅಧ್ಯಕ್ಷೆ ನಾಗಶ್ರೀ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್&zwnj; ಉಪಸ್ಥಿತರಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/there-are-concerns-over-the-use-of-ai-in-the-judiciary-sys-cm-siddaramaiah-rav/articleshow-35tng6s"/>
        </item>
        <item>
            <title><![CDATA[Karnataka Lokayukta 40th anniversary: ಕರ್ನಾಟಕ ಲೋಕಾಯುಕ್ತ ದೇಶಕ್ಕೆ ಮಾದರಿ; ಸಿಜೆಐ ಮೆಚ್ಚುಗೆ]]></title>
            <link>https://kannada.asianetnews.com/state/karnataka-lokayukta-is-a-model-for-the-country-says-cji-rav/articleshow-7mg4b14</link>
            <guid isPermaLink="true">https://kannada.asianetnews.com/state/karnataka-lokayukta-is-a-model-for-the-country-says-cji-rav/articleshow-7mg4b14</guid>
            <pubDate>Sun, 19 Apr 2026 08:40:10 +0530</pubDate>
            <description><![CDATA[&lt;p&gt;ಕರ್ನಾಟಕ ಲೋಕಾಯುಕ್ತ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸಂಸ್ಥೆಯನ್ನು ದೇಶಕ್ಕೆ ಮಾದರಿ ಎಂದು ಶ್ಲಾಘಿಸಿದರು. ಭ್ರಷ್ಟಾಚಾರ ಮುಕ್ತ ಆಡಳಿತದಲ್ಲಿ ಸಂಸ್ಥೆಯ ಪಾತ್ರವನ್ನು ಕೊಂಡಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kphv36ahkhb3m430yvdzcmt0,imgname-----------------------2026-04-19t083152.267-1776567818577.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.19) &lt;/strong&gt;ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಜನಸಾಮಾನ್ಯರ ಹಕ್ಕುಗಳ ರಕ್ಷಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ದೇಶಕ್ಕೆ ಮಾದರಿಯಾಗಿದೆ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್&zwnj; ಬಣ್ಣಿಸಿದರು.&lt;/p&gt;&lt;p&gt;ವಿಧಾನಸೌಧದ ಬ್ಯಾಂಕ್ವೆಟ್&zwnj; ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ &lsquo;ಲೋಕಾಯುಕ್ತ ಸಂಸ್ಥೆಗೆ 40ರ ಸಂಭ್ರಮ&rsquo; ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲೋಕಾಯುಕ್ತ ಸಂಸ್ಥೆ ಕಳೆದ 40 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನಾಗರಿಕರ ಆಶಾಕಿರಣವಾಗಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಲೋಕಾಯುಕ್ತದಂಥ ಸಂಸ್ಥೆಗಳ ಪಾತ್ರ ದೊಡ್ಡದಿದೆ. ಈ ಸಂಸ್ಥೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ತಳಮಟ್ಟದ ಜನರಿಗೂ ನ್ಯಾಯ ಸಿಗುತ್ತಿದೆ ಎಂದು ಶ್ಲಾಘಿಸಿದರು.&lt;/p&gt;&lt;p&gt;ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಲೋಕಾಯುಕ್ತ ಸಂಸ್ಥೆ ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಮತ್ತಷ್ಟು ಬಲಗೊಳ್ಳಬೇಕಿದೆ. ತನಿಖಾ ಪ್ರಕ್ರಿಯೆಗಳಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವುದು ನ್ಯಾಯದಾನದ ದೃಷ್ಟಿಯಿಂದ ಅತ್ಯಗತ್ಯ ಎಂದು ಸಲಹೆ ನೀಡಿದರು.&lt;/p&gt;&lt;h2&gt;ಸಮಾಜದ ಹೊಣೆಗಾರಿಕೆ:&lt;/h2&gt;&lt;p&gt;ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಲೋಕಾಯುಕ್ತ ಸಂಸ್ಥೆ ಅತ್ಯಂತ ಪ್ರಬಲವಾದ ಮತ್ತು ಸ್ವಾಯತ್ತವಾದ ಇತಿಹಾಸ ಹೊಂದಿದೆ. ಇದನ್ನು ಕಾಪಾಡಿಕೊಂಡು ಹೋಗುವುದು ಸರ್ಕಾರದ ಜವಾಬ್ದಾರಿ ಜೊತೆಗೆ ಸಮಾಜದ ಹೊಣೆಗಾರಿಕೆಯೂ ಆಗಿದೆ ಎಂದು ಹೇಳಿದರು.&lt;/p&gt;&lt;p&gt;ಭ್ರಷ್ಟಾಚಾರ ಎಂಬ ಪಿಡುಗನ್ನು ಬೇರುಸಹಿತ ಕಿತ್ತೆಸೆಯಲು ಕೇವಲ ಶಿಕ್ಷೆಯೊಂದೇ ಸಾಲದು, ನೈತಿಕ ಮೌಲ್ಯಗಳ ಜಾಗೃತಿಯೂ ಆಗಬೇಕು. ಲೋಕಾಯುಕ್ತ ಸಂಸ್ಥೆ ಕೇವಲ ದಂಡಿಸುವ ಸಂಸ್ಥೆಯಾಗದೆ, ಜನರಲ್ಲಿ ಜಾಗೃತಿ ಮೂಡಿಸುವ ವೇದಿಕೆಯೂ ಆಗಲಿ ಸಂಸ್ಥೆಯ ಕಾರ್ಯಗಳಿಗೆ ಶುಭ ಹಾರೈಸಿದರು.&lt;/p&gt;&lt;p&gt;ಲೋಕಾಯಕ್ತ ಸಂಸ್ಥೆಯಿಂದ ಹೊರತರುವ ಮ್ಯಾಗಝಿನ್&zwnj; ಬಿಡುಗಡೆಗೊಳಿಸಲಾಯಿತು. ಆನ್&zwnj;ಲೈನ್&zwnj; ಮುಖಾಂತರ ಜನಪ್ರತಿನಿಧಿಗಳು ಆಸ್ತಿ ಘೋಷಣೆಗೆ ರೂಪಿಸಿರುವ ಹೊಸ ವ್ಯವಸ್ಥೆಗೆ ಇದೇ ವೇಳೆ ಚಾಲನೆ ನೀಡಲಾಯಿತು. ಕೆಲ ಮಾಜಿ ಲೋಕಾಯುಕ್ತರು, ಮಾಜಿ ಉಪ ಲೋಕಾಯುಕ್ತರನ್ನು ಸನ್ಮಾನಿಸಲಾಯಿತು.&lt;/p&gt;&lt;p&gt;ಸುಪ್ರೀಂ ಕೋರ್ಟ್&zwnj; ನ್ಯಾಯಮೂರ್ತಿ ಅರವಿಂದ ಕುಮಾರ್, ಉಪ ಲೋಕಾಯುಕ್ತರಾದ ಬಿ.ವೀರಪ್ಪ, ಕೆ.ಎನ್&zwnj;.ಫಣೀಂದ್ರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.&lt;/p&gt;&lt;p&gt;ಭ್ರಷ್ಟಾಚಾರ ಕೇವಲ ಹಣದ ವ್ಯವಹಾರವಲ್ಲ, ಸಾರ್ವಜನಿಕ ಕೆಲಸಗಳನ್ನು ವಿಳಂಬ ಮಾಡುವುದು ಕೂಡ ಒಂದು ರೀತಿಯ ಭ್ರಷ್ಟಾಚಾರವೇ ಆಗಿದೆ&lt;/p&gt;&lt;p&gt;&lt;strong&gt;- ಬಿ.ಎಸ್&zwnj;.ಪಾಟೀಲ್&zwnj;, ಲೋಕಾಯುಕ್ತ ನ್ಯಾಯಮೂರ್ತಿ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-lokayukta-is-a-model-for-the-country-says-cji-rav/articleshow-7mg4b14"/>
        </item>
        <item>
            <title><![CDATA[ಆಭರಣ ಖರೀದಿಸುವವಳಂತೆ ನಟಿಸಿ ಎರಡು ಚಿನ್ನದ ಉಂಗುರ ಕದ್ದ ಎಂಬಿಎ ಪದವೀಧರೆ!]]></title>
            <link>https://kannada.asianetnews.com/crime/bengaluru-mba-graduate-woman-poses-as-a-customer-to-steal-two-gold-rings-rav/articleshow-95xtx7t</link>
            <guid isPermaLink="true">https://kannada.asianetnews.com/crime/bengaluru-mba-graduate-woman-poses-as-a-customer-to-steal-two-gold-rings-rav/articleshow-95xtx7t</guid>
            <pubDate>Sun, 19 Apr 2026 08:01:56 +0530</pubDate>
            <description><![CDATA[&lt;p&gt;MBA graduate caught stealing ಖರೀದಿ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ತೆರಳಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಉಂಗುರ ಕಳವು &amp;nbsp;ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಎಂಬಿಎ ಪದವೀಧರೆಯಾದ ಆರೋಪಿಯಿಂದ ಸುಮಾರು 1 ಲಕ್ಷ ಮೌಲ್ಯದ ಉಂಗುರವನ್ನು ಜಪ್ತಿ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kphrwqa9rec928av12hh1mc0,imgname-----------------------2026-04-19t075437.131-1776565509449.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಏ.19): &lt;/strong&gt;ಖರೀದಿ ಸೋಗಿನಲ್ಲಿ ಚಿನ್ನಾಭರಣ ಮಳಿಗೆಯ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಉಂಗುರ ಕಳವು ಮಾಡಿದ್ದ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಎಲೆಕ್ಟ್ರಾನಿಕ್ ಸಿಟಿ ಸಮೀಪದ ನಿವಾಸಿ &lt;strong&gt;ಆಕಾಂಕ್ಷ ನಾರಾಯಣ್&zwnj;&lt;/strong&gt; (24) ಬಂಧಿತಳಾಗಿದ್ದು, ಆರೋಪಿಯಿಂದ 1 ಲಕ್ಷ ರು. ಮೌಲ್ಯದ ಉಂಗುರ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜೀವಾ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಚಿನ್ನ ಖರೀದಿ ಸೋಗಿನಲ್ಲಿ ತೆರಳಿ ಆರೋಪಿ ಈ ಕೃತ್ಯ ಎಸಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಅಂಡಮಾನ್&zwnj;-ನಿಕೋಬಾರ್&zwnj; ಮೂಲದ ಆಕಾಂಕ್ಷ ಎಂಬಿಎ ಸ್ನಾತಕೋತ್ತರ ಪದವೀಧರಳಾಗಿದ್ದು, ಎಲೆಕ್ಟ್ರಾನಿಕ್&zwnj; ಸಿಟಿ ಎರಡನೇ ಹಂತದ ಬಳಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾಳೆ. ನೀಲಾಂದ್ರಿ ರಸ್ತೆಯ ಪಿಜಿಯಲ್ಲಿ ನೆಲೆಸಿದ್ದಳು. ಅಂಡಮಾನ್&zwnj;ನಲ್ಲಿ ಆಕೆಯ ತಂದೆ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಆರ್ಥಿಕವಾಗಿ ಈಕೆಯ ಕುಟುಂಬ ಉತ್ತಮ ಸ್ಥಿತಿಯದೆ..&lt;/p&gt;&lt;p&gt;ಮಾ.22ರಂದು ಜೀವಾ ಜ್ಯುವೆಲರ್ಸ್&zwnj;ಗೆ ಗ್ರಾಹಕಿ ಸೋಗಿನಲ್ಲಿ ತೆರಳಿದ್ದ ಆಕಾಂಕ್ಷ, ಕೆಲ ಹೊತ್ತು ಆಭರಣ ಖರೀದಿಸುವಂತೆ ನಟಿಸಿದ್ದಳು. ಬಳಿಕ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಎರಡು ಉಂಗುರಗಳನ್ನು ಕದ್ದು ಆಕೆ ಪರಾರಿಯಾಗಿದ್ದಳು. ಮಳಿಗೆಯಲ್ಲಿ ಸಂಜೆ ಉಂಗುರ ನಾಪತ್ತೆ ಬಗ್ಗೆ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆಕಾಂಕ್ಷ ಕೈಚಳಕ ಬೆಳಕಿಗೆ ಬಂದಿದೆ.&lt;/p&gt;&lt;p&gt;ಈ ಬಗ್ಗೆ ಆಭರಣ ಮಳಿಗೆ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/bengaluru-mba-graduate-woman-poses-as-a-customer-to-steal-two-gold-rings-rav/articleshow-95xtx7t"/>
        </item>
        <item>
            <title><![CDATA[ಗುತ್ತಿಗೆದಾರರ ಹೋರಾಟಕ್ಕೆ ಮಣಿದ ಸರ್ಕಾರ! ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ₹300 ಕೋಟಿ ಬಿಡುಗಡೆ]]></title>
            <link>https://kannada.asianetnews.com/state/karnataka-government-rs-300-crore-released-for-payment-of-pending-bills-for-small-contractors-rav/articleshow-uxiamb9</link>
            <guid isPermaLink="true">https://kannada.asianetnews.com/state/karnataka-government-rs-300-crore-released-for-payment-of-pending-bills-for-small-contractors-rav/articleshow-uxiamb9</guid>
            <pubDate>Sun, 19 Apr 2026 06:32:00 +0530</pubDate>
            <description><![CDATA[ಗುತ್ತಿಗೆದಾರರ ಪ್ರತಿಭಟನೆಯ ನಂತರ, ರಾಜ್ಯ ಸರ್ಕಾರವು ಸಣ್ಣ ಮತ್ತು ಮಧ್ಯಮ ಕಾಮಗಾರಿಗಳ ಬಾಕಿ ಬಿಲ್ ಪಾವತಿಗಾಗಿ 300 ಕೋಟಿ ರು. ಬಿಡುಗಡೆ ಮಾಡಿದೆ. ಹಂತಹಂತವಾಗಿ ಹಣ ಬಿಡುಗಡೆ ಮಾಡುವ ಭರವಸೆಯಂತೆ ಈ ಕ್ರಮ ಕೈಗೊಂಡಿದ್ದು, ಮುಖ್ಯಮಂತ್ರಿಗಳೊಂದಿಗಿನ ಸಭೆ ಇನ್ನೂ ಬಾಕಿ ಇದೆ ಎಂದು ಗುತ್ತಿಗೆದಾರರ ಸಂಘ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jynqqb01yce3fqm1s5av16p9,imgname-----------------------2025-06-26t143417.509-1750928698369.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಬೆಂಗಳೂರು (ಏ.19): &lt;/strong&gt;ಗುತ್ತಿಗೆದಾರರ ಹೋರಾಟದ ನಂತರದಿಂದ ಬಾಕಿ ಬಿಲ್&zwnj; ಪಾವತಿಗೆ ಮುಂದಾಗುತ್ತಿರುವ ರಾಜ್ಯ ಸರ್ಕಾರ, ಮಾರ್ಚ್&zwnj;ನಲ್ಲಿ 2 ಸಾವಿರ ಕೋಟಿ ರು. ಪಾವತಿ ನಂತರ ಇದೀಗ ಸಣ್ಣ ಕಾಮಗಾರಿಗಳ ಬಾಕಿ ಬಿಲ್&zwnj; ಪಾವತಿಗೆ 300 ಕೋಟಿ ರು. ಬಿಡುಗಡೆ ಮಾಡಿದೆ.&lt;/p&gt;&lt;p&gt;ಬಾಕಿ ಬಿಲ್&zwnj; ಪಾವತಿಸುವಂತೆ ಆಗ್ರಹಿಸಿ ಕಳೆದ ತಿಂಗಳು ರಾಜ್ಯ ಗುತ್ತಿಗೆದಾರರ ಸಂಘದಿಂದ ಭಾರೀ ಪ್ರತಿಭಟನೆ ನಡೆಸಲಾಗಿತ್ತು. ಅದಾದ ನಂತರ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ಹಂತಹಂತವಾಗಿ ಬಾಕಿ ಬಿಲ್&zwnj; ಪಾವತಿಸುವುದಾಗಿ ತಿಳಿಸಿದ್ದರು. ಅದರಂತೆ ಮಾರ್ಚ್&zwnj; ತಿಂಗಳಲ್ಲಿ 2 ಸಾವಿರ ಕೋಟಿ ರು. ಅನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ರಸ್ತೆ ಗುಂಡಿ ದುರಸ್ತಿ, ಕಟ್ಟಡಗಳು, ಸೇತುವೆ ದುರಸ್ತಿ ಸೇರಿ ಮತ್ತಿತರ ಸಣ್ಣ ಮತ್ತು ಮಧ್ಯಮ ಕಾಮಗಾರಿಗಳ ಬಾಕಿ ಬಿಲ್&zwnj; ಪಾವತಿಗಾಗಿ ಲೋಕೋಪಯೋಗಿ ಇಲಾಖೆಯಿಂದ 300 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಅದರಲ್ಲಿ, ಅಂದಾಜು 4 ಸಾವಿರ ಗುತ್ತಿಗೆದಾರರಿಗೆ 10 ಲಕ್ಷ ರು.ಗಿಂತ ಕಡಿಮೆ ಮೊತ್ತದ ಬಾಕಿ ಬಿಲ್&zwnj;ಗಳನ್ನು ಪಾವತಿಸಲಾಗುತ್ತದೆ.&lt;/p&gt;&lt;h2&gt;ಸಿಎಂ ಜತೆ ಸಭೆ ಭರವಸೆ ಈಡೇರಿಲ್ಲ:&lt;/h2&gt;&lt;p&gt;ಲೋಕೋಪಯೋಗಿ ಇಲಾಖೆ ಹಣ ಬಿಡುಗಡೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್&zwnj;. ಮಂಜುನಾಥ್&zwnj;, ಈ ಹಿಂದೆ ನಡೆಸಿದ ಪ್ರತಿಭಟನೆಯಿಂದಾಗಿ ಬಾಕಿ ಬಿಲ್&zwnj; ಪಾವತಿಗೆ ಸರ್ಕಾರ 2 ಸಾವಿರ ಕೋಟಿ ರು. ಬಿಡುಗಡೆ ಮಾಡಿತ್ತು. ಇದೀಗ 300 ಕೋಟಿ ರು. ಬಿಡುಗಡೆ ಮಾಡಿ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಬಾಕಿ ಬಿಲ್&zwnj; ಪಾವತಿಸಲು ಸೂಚಿಸಲಾಗಿದೆ. ಸರ್ಕಾರ ಕೊಟ್ಟ ಮಾತಿನಂತೆ ಹಂತಹಂತವಾಗಿ ಹಣ ಬಿಡುಗಡೆ ಮಾಡುತ್ತಿದೆ. ಇನ್ನು, ಹಿಂದೆ ಪ್ರತಿಭಟನೆ ನಡೆಸಿದಾಗ ಮುಖ್ಯಮಂತ್ರಿ ಅವರೊಂದಿಗೆ ನಮ್ಮನ್ನೂ ಕರೆಸಿ ಸಭೆ ಮಾಡಿಸುವುದಾಗಿ ಭರವಸೆ ನೀಡಲಾಗಿತ್ತು. ಈವರೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಿಲ್ಲ. ಶೀಘ್ರ ಮುಖ್ಯಮಂತ್ರಿ ಅವರು ನಮ್ಮನ್ನು ಕರೆದು ಸಭೆ ಮಾಡಿ ಸಮಸ್ಯೆ ಆಲಿಸಬೇಕು ಹಾಗೂ ಅದಕ್ಕೆ ಪರಿಹಾರ ನೀಡಬೇಕು ಎಂದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-government-rs-300-crore-released-for-payment-of-pending-bills-for-small-contractors-rav/articleshow-uxiamb9"/>
        </item>
        <item>
            <title><![CDATA[African cheetahs: ಬನ್ನೇರುಘಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳು ಎಂಟ್ರಿ, ಯಾವಾಗ ನೋಡಬಹುದು? ನಾಲ್ಕು ದಿನ ಕ್ವಾರಂಟೈನ್‌ನಲ್ಲಿಡೋದ್ಯಾಕೆ ಗೊತ್ತಾ?]]></title>
            <link>https://kannada.asianetnews.com/state/four-african-cheetahs-arrive-at-bannerghatta-bengaluru-do-you-know-why-they-are-kept-in-quarantine-for-few-days-rav/articleshow-4s46b8x</link>
            <guid isPermaLink="true">https://kannada.asianetnews.com/state/four-african-cheetahs-arrive-at-bannerghatta-bengaluru-do-you-know-why-they-are-kept-in-quarantine-for-few-days-rav/articleshow-4s46b8x</guid>
            <pubDate>Sun, 19 Apr 2026 05:52:00 +0530</pubDate>
            <description><![CDATA[ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳನ್ನು ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯಕ್ಕೆ ತರಲಾಗಿದೆ. ಕ್ವಾರಂಟೈನ್&zwnj; ಅವಧಿ ಮುಗಿದ ನಂತರ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ. ಈ ಮೂಲಕ ಬನ್ನೇರುಘಟ್ಟ ಮೃಗಾಲಯವು ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಚೀತಾಗಳಿಗೆ ಆಶ್ರಯ ನೀಡಿದಂತಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kphhh0a5p787xqcsanb4davr,imgname-----------------------2026-04-19t053537.537-1776557785413.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.19): &lt;/strong&gt;ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ಕರೆತರಲಾಗುತ್ತಿರುವ ನಾಲ್ಕು ಚೀತಾಗಳು ಶುಕ್ರವಾರ ಮಧ್ಯರಾತ್ರಿ 1 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಕ್ಕೆ ಆಗಮಿಸಿದ್ದು, ಅರಣ್ಯ ಸಚಿವ ಈಶ್ವರ್&zwnj; ಖಂಡ್ರೆ ಅವುಗಳನ್ನು ಸ್ವೀಕರಿಸಿ ಬನ್ನೇರಘಟ್ಟ ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದರು.&lt;/p&gt;&lt;p&gt;ತನ್ಮೂಲಕ ಬನ್ನೇರುಘಟ್ಟ ಮೃಗಾಲಯ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚೀತಾಗಳಿಗೆ ಆಶ್ರಯ ನೀಡುತ್ತಿದೆ. ವನ್ಯಜೀವಿ (ರಕ್ಷಣೆ) ಕಾಯ್ದೆ ಅಡಿ ನಿಯಂತ್ರಕ ಅನುಮತಿ ಮತ್ತು ಪ್ರಾಣಿ ಕ್ವಾರಂಟೈನ್&zwnj; ಅಧಿಕಾರಿಗಳ ಅನುಮೋದನೆ ನಂತರ ನಾಲ್ಕು ಆಫ್ರಿಕನ್&zwnj; ಚೀತಾಗಳನ್ನು ಅರಣ್ಯ ಇಲಾಖೆ ತರಿಸಿಕೊಂಡಿದೆ. ಅವುಗಳನ್ನು ಬನ್ನೇರುಘಟ್ಟ ಮೃಗಾಲಯದಲ್ಲಿರಿಸಿ ಚೀತಾ ಪ್ರಭೇದವನ್ನು ಜನರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.&lt;/p&gt;&lt;h2&gt;ಕೆಲದಿನ ಕ್ವಾರಂಟೈನ್&zwnj;ನಲ್ಲಿಡಲು ವ್ಯವಸ್ಥೆ:&lt;/h2&gt;&lt;p&gt;ಚೀತಾಗಳು ದಕ್ಷಿಣ ಆಫ್ರಿಕಾದಿಂದ ಬಂದಿರುವ ಕಾರಣದಿಂದಾಗಿ ಅವುಗಳ ಆರೋಗ್ಯ ತಪಾಸಣೆ ನಡೆಸಿ ಬನ್ನೇರುಘಟ್ಟದ ಮೃಗಾಲಯದಲ್ಲಿ ಕ್ವಾರಂಟೈನ್&zwnj;ನಲ್ಲಿ ಇಡಲಾಗುತ್ತದೆ. ಈ ವೇಳೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮತ್ತು ನಿಗದಿತ ಆಹಾರ ನೀಡಲಾಗುತ್ತದೆ. ಕ್ವಾರಂಟೈನ್&zwnj; ಅವಧಿ ಮುಗಿದ ನಂತರ ಚೀತಾಗಳ ಆರೋಗ್ಯ ಆಧರಿಸಿ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ. ಚೀತಾಗಳ ಆಗಮನದ ಕುರಿತು ಪ್ರತಿಕ್ರಿಯಿಸಿರುವ ಈಶ್ವರ್&zwnj; ಖಂಡ್ರೆ, ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಚೀತಾಗಳು ಇಲ್ಲಿನ ವಾತಾವರಣ, ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಕ್ವಾರಂಟೈನ್&zwnj;ಗೆ ಸೂಚಿಸಲಾಗಿದೆ. ಆರೋಗ್ಯ ಸಮಸ್ಯೆ ಎದುರಾಗದಂತೆ ಸೂಕ್ತ ನಿಗಾವಹಿಸುವಂತೆ ನಿರ್ದೇಶಿಸಲಾಗಿದೆ.&lt;/p&gt;&lt;h3&gt;ಕರ್ನಾಟಕದಲ್ಲಿದ್ದವು ಚೀತಾಗಳು:&lt;/h3&gt;&lt;p&gt;ಒಂದು ಕಾಲದಲ್ಲಿ ಕರ್ನಾಟಕದ ಕಾಡಿನಲ್ಲೇ ಸಿವಂಗಿ ಎಂದು ಕರೆಸಿಕೊಳ್ಳುವ ಚೀತಾಗಳಿದ್ದವು. ಹಿಂದೆ ಸಿವಂಗಿ ಎಂದು ಕರೆಯಲ್ಪಡುತ್ತಿದ್ದ ಚೀತಾಗಳು (ಏಷ್ಯಾಟಿಕ್ ಚೀತಾ) ಕರ್ನಾಟಕದ ಅರಣ್ಯ ಪ್ರದೇಶದಲ್ಲೇ ಕಾಣಿಸಿಕೊಳ್ಳುತ್ತಿದ್ದವು. ಆದರೆ, ಬೇಟೆ, ಆವಾಸ ಸ್ಥಾನಗಳ ಅವನತಿಯಿಂದಾಗಿ ಅವು ಕಣ್ಮರೆಯಾದವು. ಸಿವಂಗಿಗಳಲ್ಲಿ ಎರಡು ಪ್ರಬೇಧಗಳಿದ್ದು, ಭಾರತದಲ್ಲಿದ್ದ ಸಿವಂಗಿಯನ್ನು ಏಷ್ಯಾಟಿಕ್ ಚೀತಾಗಳೆಂದು ಹಾಗೂ ಆಫ್ರಿಕಾದಲ್ಲಿ ಆಫ್ರಿಕನ್ ಚೀತಾ ಎಂದು ಗುರುತಿಸಲಾಗುತ್ತಿದೆ.&lt;/p&gt;&lt;p&gt;ಅವುಗಳನ್ನು ಈಗ ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ತರಿಸಲಾಗಿದೆ. ಇಲ್ಲಿಗೆ ತರಲಾಗಿರುವ ಚೀತಾಗಳ ಸುರಕ್ಷತೆಗೆ ಆದ್ಯ ಗಮನ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/four-african-cheetahs-arrive-at-bannerghatta-bengaluru-do-you-know-why-they-are-kept-in-quarantine-for-few-days-rav/articleshow-4s46b8x"/>
        </item>
        <item>
            <title><![CDATA[Anjanadri Hill: 90ರ ಅಜ್ಜಿಯ ಹೊತ್ತು ಅಂಜನಾದ್ರಿ 575 ಮೆಟ್ಟಿಲು ಹತ್ತಿದ ಮೊಮ್ಮಗ! ಹನುಮನ ಜನ್ಮಸ್ಥಳದ ದರ್ಶನ  ಹಡೆದವ್ವ]]></title>
            <link>https://kannada.asianetnews.com/karnataka-districts/grandson-climbs-575-steps-of-anjanadri-carrying-90-year-old-grandmother-koppal-rav/articleshow-fytefwy</link>
            <guid isPermaLink="true">https://kannada.asianetnews.com/karnataka-districts/grandson-climbs-575-steps-of-anjanadri-carrying-90-year-old-grandmother-koppal-rav/articleshow-fytefwy</guid>
            <pubDate>Sun, 19 Apr 2026 04:55:50 +0530</pubDate>
            <description><![CDATA[ವಿಜಯನಗರದ ಯುವಕನೊಬ್ಬ ತನ್ನ 90 ವರ್ಷದ ಅಜ್ಜಿಯ ಆಸೆಯನ್ನು ಪೂರೈಸಲು, ಆಕೆಯನ್ನು ಹೊತ್ತುಕೊಂಡು ಗಂಗಾವತಿಯ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು ಏರಿದ್ದಾನೆ. ಮೊಮ್ಮಗನ ಈ ಕಾರ್ಯದಿಂದ ಅಜ್ಜಿಯ ಹನುಮ ಜನ್ಮಸ್ಥಳ ದರ್ಶನದ ಕನಸು ನನಸಾಗಿದ್ದು, ಈ ಘಟನೆ ಎಲ್ಲರ ಮನಗೆದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kphdrt9a6y06bhprmm76fyzc,imgname-----------------------2026-04-19t044024.776-1776553847082.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಏ.19): &lt;/strong&gt;90 ವರ್ಷದ ಅಜ್ಜಿಯನ್ನು ಹೊತ್ತುಕೊಂಡು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯ 575 ಮೆಟ್ಟಿಲುಗಳನ್ನು ಏರುವ ಮೂಲಕ ಹನುಮನ ಜನ್ಮಸ್ಥಳ ದರ್ಶನ ಪಡೆಯಬೇಕೆಂಬ ಅಜ್ಜಿಯ ಕನಸನ್ನು ಮೊಮ್ಮಗ ನನಸು ಮಾಡಿದ್ದಾನೆ.&lt;/p&gt;&lt;p&gt;ವಿಜಯನಗರ ಜಿಲ್ಲೆಯ ಅಜೇಯ ಎಂಬ ಯುವಕ ಶುಕ್ರವಾರ ಸಂಜೆ ಬಿಸಿಲಿನ ಧಗೆಯಲ್ಲಿ ಅಜ್ಜಿಯನ್ನು ಹೊತ್ತುಕೊಂಡು ಮೆಟ್ಟಿಲಿನ ಮಧ್ಯದಲ್ಲಿರುವ ಗಿಡ-ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಾ ಅಜ್ಜಿಗೆ ಬಾಯಾರಿಕೆ ಆದಾಗ ನೀರು ಕುಡಿಸುತ್ತಾ ಮೆಟ್ಟಿಲು ಏರಿ ಆಂಜನೇಯಸ್ವಾಮಿಯ ದರ್ಶನ ಮಾಡಿಸಿದ್ದಾನೆ. ದೇವರ ದರ್ಶನ ಪಡೆದ ಬಳಿಕ &lsquo;ನಾನು ಪಾವನಳಾದೆ&rsquo; ಎಂದು ಅಜ್ಜಿ ಧನ್ಯತೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಮೈಸೂರು: ಚಿರತೆಯಿಂದ ಅತ್ತೆಯನ್ನ ರಕ್ಷಿಸಿದ ಸೊಸೆಗೆ ಕಿತ್ತೂರು ಚೆನ್ನಮ್ಮ ಸಾಹಸ ಪ್ರಶಸ್ತಿ?&lt;/p&gt;&lt;p&gt;ವಿವಿಧ ರಾಜ್ಯಗಳಿಂದ ಬಹಳಷ್ಟು ವೃದ್ಧರು ಆಗಮಿಸುತ್ತಾರೆ. ಆದರೆ, ಮೆಟ್ಟಿಲು ಹತ್ತಲು ಆಗದೆ ದೂರದಿಂದ ಕೈಮುಗಿದು ಭಕ್ತಿ ಸಮರ್ಪಿಸುತ್ತಾರೆ. ಹಾಗಾಗಿ ಸರ್ಕಾರ ಕೂಡಲೇ ಬೆಟ್ಟಕ್ಕೆ ರೋಪ್&zwnj;ವೇ ನಿರ್ಮಿಸಲಿ ಎಂದು ಭಕ್ತರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; &lt;/strong&gt;ಬಿಸಿಲು ಹೆಚ್ಚಾದ ಹಿನ್ನೆಲೆ ಅಂಜನಾದ್ರಿ ಬೆಟ್ಟಕ್ಕೆ ಬೆ.11ರಿಂದ ಸಂಜೆ 4ರ ವರೆಗೂ ಪ್ರವೇಶ ನಿರ್ಬಂಧ&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/grandson-climbs-575-steps-of-anjanadri-carrying-90-year-old-grandmother-koppal-rav/articleshow-fytefwy"/>
        </item>
        <item>
            <title><![CDATA[ಮೈಸೂರು: ಚಿರತೆಯಿಂದ ಅತ್ತೆಯನ್ನ ರಕ್ಷಿಸಿದ ಸೊಸೆಗೆ ಕಿತ್ತೂರು ಚೆನ್ನಮ್ಮ ಸಾಹಸ ಪ್ರಶಸ್ತಿ?]]></title>
            <link>https://kannada.asianetnews.com/karnataka-districts/mysuru-kittur-chennamma-bravery-award-for-daughter-in-law-who-saved-mother-in-law-from-a-leopard-rav/articleshow-e5fqkbv</link>
            <guid isPermaLink="true">https://kannada.asianetnews.com/karnataka-districts/mysuru-kittur-chennamma-bravery-award-for-daughter-in-law-who-saved-mother-in-law-from-a-leopard-rav/articleshow-e5fqkbv</guid>
            <pubDate>Sun, 19 Apr 2026 04:33:20 +0530</pubDate>
            <description><![CDATA[&lt;p&gt;ಮೈಸೂರಿನ ಸಿದ್ಧಾರ್ಥನಗರದಲ್ಲಿ ಮಂಚದಡಿ ಚಿರತೆ ಅಡಗಿದ್ದಾಗ, ಸೊಸೆ ಸುಜಾತಾ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನ ರಕ್ಷಿಸಿದ ಈ ಸಾಹಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್&zwnj; ಮೆಚ್ಚುಗೆ ವ್ಯಕ್ತಪಡಿಸಿ, ಸುಜಾತಾ ಅವರ ಹೆಸರನ್ನು ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿಗೆ ಪರಿಗಣಿಸಲು ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kphd3e579thmsdpsv3s0p16q,imgname-----------------------2026-04-19t042316.308-1776553146535.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.19)&lt;/strong&gt;: ನಗರದ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಮಂಚದಡಿ ಚಿರತೆ ಅಡಗಿದ್ದ ವೇಳೆ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆ ತಂದ ಸೊಸೆ ಸುಜಾತಾ ಅವರ ಸಾಹಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್&zwnj; ಪ್ರಶಂಸೆ ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;&lt;p&gt;ಈ ಘಟನೆ ಆಕಸ್ಮಿಕವಾದರೂ, ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ. ಮಂಚದಡಿ ಚಿರತೆ ಅಡಗಿರುವುದು ತಿಳಿಯುತ್ತಿದ್ದಂತೆಯೇ, ಪ್ರಾಣದ ಹಂಗು ತೊರೆದು ಕೊಠಡಿಗೆ ನುಗ್ಗಿ, ವಯಸ್ಸಾದ ಅತ್ತೆಯನ್ನು ಅಪ್ಪಿಕೊಂಡು ಸುರಕ್ಷಿತವಾಗಿ ಹೊರಗೆ ಕರೆತಂದ ಸುಜಾತಾ ಅವರ ಸಾಹಸ ನಿಜಕ್ಕೂ ರೋಮಾಂಚನಕಾರಿ ಎಂದು ಅವರು ಬಣ್ಣಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt; ಮೈಸೂರು: ಮನೆಗೆ ನುಗ್ಗಿದ ಚಿರತೆ ಎರಡು ಗಂಟೆ ಕಾಲ ಅಜ್ಜಿ ಮಲಗಿದ್ದ ಮಂಚದ ಕೆಳಗೆ ವಿಶ್ರಾಂತಿ!&lt;/p&gt;&lt;p&gt;ಅತ್ತೆ- ಸೊಸೆಯ ಸಂಬಂಧದ ಬಗ್ಗೆ ಸಮಾಜದಲ್ಲಿರುವ ಹಳೆಯ ಕಲ್ಪನೆಗಳನ್ನು ಅಳಿಸಿ, ಸುಜಾತಾ ಅವರು ಇಂದು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಸುಜಾತಾ ಅವರ ಈ ಅಸಾಧಾರಣ ಶೌರ್ಯ, ಸಾಹಸವನ್ನು ಗೌರವಿಸಲು ಮುಂದಿನ ವರ್ಷದ ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸಲು ನಮ್ಮ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mysuru-kittur-chennamma-bravery-award-for-daughter-in-law-who-saved-mother-in-law-from-a-leopard-rav/articleshow-e5fqkbv"/>
        </item>
        <item>
            <title><![CDATA[ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ  ಬಿಜೆಪಿ ಗೆಲುವು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ವಿಶ್ವಾಸ]]></title>
            <link>https://kannada.asianetnews.com/karnataka-districts/bs-yediyurappa-bypoll-win-prediction-bjp-davanagere-bagalkot-gvd/articleshow-uyfa6vv</link>
            <guid isPermaLink="true">https://kannada.asianetnews.com/karnataka-districts/bs-yediyurappa-bypoll-win-prediction-bjp-davanagere-bagalkot-gvd/articleshow-uyfa6vv</guid>
            <pubDate>Sat, 18 Apr 2026 23:51:08 +0530</pubDate>
            <description><![CDATA[&lt;p&gt;ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಅಂತರದಿಂದ ಜಯಭೇರಿ ಬಾರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h9s9wyc1sprab7qnfr1rddhk,imgname-bs.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಏ.18): &lt;/strong&gt;ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಅಂತರದಿಂದ ಜಯಭೇರಿ ಬಾರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನ ಮಾಜಿ ಸಚಿವ ಸಿ.ಟಿ.ರವಿ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯ ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ. ಅದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.&lt;/p&gt;&lt;p&gt;ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಹಿಳಾ ಮೀಸಲಾತಿಯನ್ನು ವಿರೋಧಿಸುವುದು ಸಮಾನತೆ ವಿರೋಧಿಗಳು ಎಂದರು. ಮಹಿಳಾ ಮೀಸಲಾತಿ ಬಗ್ಗೆ ಬಹಳ ವರ್ಷಗಳಿಂದ ಮಾತನಾಡಿಕೊಂಡು ಬರುತ್ತಿದ್ದೇವೆ. ಇನ್ನು ಚರ್ಚೆ ಆಗಬೇಕು ಅಂದರೆ ಅದು ಸ್ಪಷ್ಟವಾಗಿ ವಿಳಂಬ ಮಾಡುವ ನೀತಿಯಾಗಿದೆ. ಮಹಿಳಾ ಮೀಸಲಾತಿ ಜಾರಿ ರಾಜಕೀಯ ಲಾಭಕ್ಕಾಗಿ ಅನ್ನೋದು ತಪ್ಪು. ಒಳ್ಳೆಯ ನೀತಿ ಯಾವಾಗ ಬಂದರೂ ಒಳ್ಳೆಯದಾಗಿದೆ.&lt;/p&gt;&lt;p&gt;ಬಸವಣ್ಣನವರು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಅವಕಾಶ ಬಗ್ಗೆ ಹೇಳಿದ್ದಾರೆ. ಅವರ ಕಾಲದಲ್ಲಿ ಹೆಣ್ಣು-ಗಂಡು ಭೇದವಿಲ್ಲದೆ ಸಮಾನ ಹಕ್ಕಿಗಾಗಿ ಹೋರಾಡಿದ್ದರು. ಮಹಿಳಾ ಮೀಸಲಾತಿ ವಿರೋಧಿಸುವುದು ಸಮಾನತೆ ತತ್ವಕ್ಕೆ ವಿರೋಧವಾಗಿದೆ. ವಿರೋಧ ಪಕ್ಷದ ಈ ನೀತಿ ಖಂಡಿಸುತ್ತೇನೆ ಎಂದು ಹೇಳಿದರು.&lt;/p&gt;&lt;p&gt;ಬಸವಣ್ಣನವರ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಇತ್ತು. ಅಕ್ಕಮಹಾದೇವಿಯಂತಹವರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಅದೇ ತತ್ವ ಈಗ ಮುಂದುವರಿಯಬೇಕೆಂದರೆ, ಮಹಿಳೆಯರಿಗೆ ರಾಜಕೀಯ ಪ್ರವೇಶ ಅವಕಾಶ ಕೊಡೋದು ಅನಿವಾರ್ಯ ಎಂದು ಪ್ರತಿಪಾದಿಸಿದರು.&lt;/p&gt;&lt;h2&gt;&lt;strong&gt;ವಿದ್ಯುತ್ ದರ ಏರಿಕೆಗೆ ಬಿಎಸ್&zwnj;ವೈ ಆಕ್ರೋಶ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ವಿದ್ಯುತ್&zwnj; ದರ ಏರಿಕೆ ಮಾಡಿರುವುದು ಸರಿಯಲ್ಲ. ಸರಿಯಾಗಿ ಆಡಳಿತ ಮತ್ತು ಹಣಕಾಸಿ ವ್ಯವಹಾರ ಸರಿಯಾಗಿ ನಿಬಾಹಿಸುವುದಕ್ಕೆ ಸಾಧ್ಯವಾಗದೇ ದರ ಏರಿಕೆ ಮಾಡಲಾಗುತ್ತಿದೆ. ಜನ ಸಾಮಾನ್ಯರು ನೆಮ್ಮದಿ ಯಿಂದ ಗೌರವದಿಂದ ಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕು. ತಕ್ಷಣ ವಿದ್ಯುತ್&zwnj; ದರ ಏರಿಕೆ ಹಿಂಪಡೆಯಬೇಕು ಎಂದು ಬಿಎಸ್&zwnj; ಯಡಿಯೂರಪ್ಪ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bs-yediyurappa-bypoll-win-prediction-bjp-davanagere-bagalkot-gvd/articleshow-uyfa6vv"/>
        </item>
        <item>
            <title><![CDATA[ರಸ್ತೆ ದುರಂತದಲ್ಲಿ ಮೃತ ಏಕೈಕ ಪುತ್ರನ ಕಣ್ಣು, ಕಿಡ್ನಿ ದಾನ ಮಾಡಿದ ಕೊಡಗಿನ ಪೋಷಕರು]]></title>
            <link>https://kannada.asianetnews.com/karnataka-districts/kodagu-somavarapet-parents-donate-eyes-kidneys-of-only-son-who-died-in-road-accident-mrq/articleshow-uz17gny</link>
            <guid isPermaLink="true">https://kannada.asianetnews.com/karnataka-districts/kodagu-somavarapet-parents-donate-eyes-kidneys-of-only-son-who-died-in-road-accident-mrq/articleshow-uz17gny</guid>
            <pubDate>Sat, 18 Apr 2026 23:31:33 +0530</pubDate>
            <description><![CDATA[ಸೋಮವಾರಪೇಟೆ ತಾಲೂಕಿನ ಬಾಲಕ ಹನ್ವಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಪುತ್ರನ ಮೆದುಳು ನಿಷ್ಕ್ರಿಯಗೊಂಡ ದುಃಖದ ನಡುವೆಯೂ, ಆತನ ಪೋಷಕರು ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡಿ ಇತರರ ಬಾಳಿಗೆ ಬೆಳಕಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpgvjxprv8tv0pmkmmm5psdw,imgname-kodagu--1776534779608.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು:&lt;/strong&gt; ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರ ತಾಲೂಕಿನ ಬಾಲಕ ರಸ್ತೆ ದುರಂತದಲ್ಲಿ ತೀವ್ರ ಗಾಯಗೊಂಡು ಮೃತಪಟ್ಟಿದ್ದು, ಪುತ್ರನ ಅಗಲುವಿಕೆಯ ದುಃಖದಲ್ಲೂ ಹೆತ್ತವರು ಆತನ ಕಣ್ಣು ಹಾಗೂ ಕಿಡ್ನಿಗಳನ್ನು ದಾನ ಮಾಡಿ ಇನ್ನೆರಡು ಜೀವಗಳನ್ನು ರಕ್ಷಿಸಿದ ಸಾರ್ಥಕತೆ ಹೊಂದಿದ್ದಾರೆ.&lt;/p&gt;&lt;p&gt;ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರ ಗ್ರಾಮದ ಕೃಷಿಕ ರಜಿತ್ ಮತ್ತು ರಮ್ಯಾ ದಂಪತಿಯ ಏಕೈಕ ಪುತ್ರ ಹನ್ವಿಕ್ ಮೃತಪಟ್ಟಿ ಬಾಲಕ.&lt;/p&gt;&lt;h2&gt;&lt;strong&gt;ಹನ್ವಿಕ್&zwnj;ಗೆ ಡಿಕ್ಕಿಯಾಗಿತ್ತು ಕಾರ್&lt;/strong&gt;&lt;/h2&gt;&lt;p&gt;ತಾಲೂಕಿನ ಯಡವನಾಡು ಜಂಕ್ಷನ್&zwnj;ನಲ್ಲಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.&lt;/p&gt;&lt;p&gt;ಮಗನ ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಆಘಾತದ ನಡುವೆ ದಂಪತಿಗಳು ತಮ್ಮ ಮಗನ ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡುವ ಮೂಲಕ ಇತರರ ಜೀವನಕ್ಕೆ ಬೆಳಕು ತಂದಿದ್ದಾರೆ. ಅಂಗಾಂಗ ದಾನ ಮಾಡುವ ಮೂಲಕ ಬಾಲಕ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.&lt;/p&gt;&lt;p&gt;ತಂದೆ, ತಾಯಿ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿರುವುದರಿಂದ ಹನ್ವಿಕ್ ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮದಲ್ಲಿ ತನ್ನ ತಾತ ಹರಗ ತಿಮ್ಮಯ್ಯ ಹಾಗೂ ಅಜ್ಜಿಯೊಂದಿಗೆ ವಾಸವಾಗಿದ್ದ. ಹತ್ತು ದಿನಗಳ ರಜೆಯಲ್ಲಿ ಚಿಕ್ಕಅಳುವಾರ ಗ್ರಾಮದ ತಂದೆ ಮನೆಯಲ್ಲಿ ಉಳಿದುಕೊಂಡಿದ್ದ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಕಣ್ಣುದಾನ ಮಾಡಿ ಮಗನ ಸಾವಿನಲ್ಲೂ ಸಾರ್ಥಕತೆ ಮರೆದ ಪೋಷಕರು&lt;/strong&gt;&lt;/p&gt;&lt;p&gt;ಕಳೆದ ಸೋಮವಾರ ಅಜ್ಜಿಯೊಂದಿಗೆ ಯಡವನಾಡು ಗ್ರಾಮಕ್ಕೆ ಬಸ್ಸಿಗೇರಿ ಯಡವನಾಡಿನ ಬಸ್ ತಂಗುದಾಣದಲ್ಲಿ ಇಳಿದ ನಂತರ ರಸ್ತೆ ದಾಟಲು ಯತ್ನಿಸಿದಾಗ, ಕುಶಾಲನಗರ ಕಡೆಯಿಂದ ವೇಗವಾಗಿ ಬಂದ ಕಾರೊಂದು ಬಾಲಕನಿಗೆ ಡಿಕ್ಕಿಯಾಗಿತ್ತು.&lt;/p&gt;&lt;p&gt;&amp;nbsp;&lt;/p&gt;&lt;p&gt;ಹುಣಸೂರು: ಪುತ್ರನ ಸಾವಿನಲ್ಲೂ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು#OrganDonate #Karnataka #Hunsur #Mysuru https://t.co/LGeX1HOSu6&lt;/p&gt;&lt;p&gt;&mdash; Asianet Suvarna News (@AsianetNewsSN) October 20, 2023&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹನ್ವಿಕ್ ಸಾವು&lt;/strong&gt;&lt;/h3&gt;&lt;p&gt;ಹನ್ವಿಕ್ ತಲೆಗೆ ಗಂಭೀರ ಗಾಯವಾಗಿ ತಕ್ಷಣವೇ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ನಾಲ್ಕು ದಿನಗಳ ಕಾಲ ವೈದ್ಯರು ಶಕ್ತಿಮೀರಿದ ಪ್ರಯತ್ನ ಮಾಡಿದರೂ, ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಹನ್ವಿಕ್ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾನೆ. ಶುಕ್ರವಾರ ಬಾಲಕನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ 10 ತಿಂಗಳ ಮಗುವಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಅಪಘಾತಕ್ಕೆ ಮೃತ 10 ತಿಂಗಳ ಮಗುವಿನ ಅಂಗಾಂಗ ದಾನ, ದೇಶದ ಅತಿಕಿರಿಯ ಅಂಗಾಂಗ ದಾನಿ ಹಿರಿಮೆ!#AlinSherinAbraham #OrganDonation #KeralaNews #IndiaYoungestDonor #Humanity #InspiringStory #HealthNewshttps://t.co/bC3JQ1QWUR&lt;/p&gt;&lt;p&gt;&mdash; Asianet Suvarna News (@AsianetNewsSN) February 13, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kodagu-somavarapet-parents-donate-eyes-kidneys-of-only-son-who-died-in-road-accident-mrq/articleshow-uz17gny"/>
        </item>
        <item>
            <title><![CDATA[Dharwad: ಶೀಘ್ರದಲ್ಲಿಯೇ ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಬೆಂಗಳೂರಿಗೆ ಸ್ಥಳಾಂತರ?]]></title>
            <link>https://kannada.asianetnews.com/karnataka-districts/dharwad-all-india-radio-regional-center-to-be-shifted-to-bengaluru-soon-mrq/articleshow-ep9rzyy</link>
            <guid isPermaLink="true">https://kannada.asianetnews.com/karnataka-districts/dharwad-all-india-radio-regional-center-to-be-shifted-to-bengaluru-soon-mrq/articleshow-ep9rzyy</guid>
            <pubDate>Sat, 18 Apr 2026 23:12:56 +0530</pubDate>
            <description><![CDATA[ಪ್ರಸಾರ ಭಾರತಿಯು ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರದ ಸುದ್ದಿ ಪ್ರಸಾರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದೆ. 1981ರಲ್ಲಿ ಆರಂಭವಾದ ಈ ಕೇಂದ್ರದ ಸ್ಥಳಾಂತರಕ್ಕೆ ಉತ್ತರ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpgv01zecp657t5vjvacz1cd,imgname-akashavani-dharwad-1776534161390.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಇಲ್ಲಿನ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ದೆಹಲಿಯಲ್ಲಿನ ಪ್ರಸಾರ ಭಾರತಿ ಸಕ್ಷಮ ಪ್ರಾಧಿಕಾರವೂ ಈ ನಿರ್ಧಾರ ಕೈಗೊಂಡಿದ್ದು, 2026ರ ಮೇ 15ರಿಂದ ಸ್ಥಳಾಂತರವಾಗಲಿದೆ ಎಂದು ತಿಳಿಸಿದೆ. ಇದು ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.&lt;/p&gt;&lt;p&gt;ಧಾರವಾಡ ಕೇಂದ್ರದಲ್ಲಿನ ಕೆಲಸದ ಹೊರೆ ಹೆಚ್ಚಾಗುತ್ತಿರುವುದರಿಂದ ಇಲ್ಲಿನ ನ್ಯೂಸ್&zwnj; ಬುಲೆಟೆನ್&zwnj;ನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಸಕ್ಷಮ ಪ್ರಾಧಿಕಾರವೂ ತಿಳಿಸಿದೆ. ಈ ಮೂಲಕ ಈ ಕೇಂದ್ರಕ್ಕೆ ಮೊಳೆ ಹೊಡೆಯುವ ಸಿದ್ಧತೆ ಮಾಡಿಕೊಂಡಂತಾಗಿದೆ. 2026ರ ಮೇ 15ರಿಂದಲೇ ಸ್ಥಳಾಂತರವಾಗಲಿದ್ದು, ಬೇಕಾದ ತಯಾರಿ ಮಾಡಿಕೊಳ್ಳಬೇಕು ಎಂದು ಧಾರವಾಡ ಪ್ರಾದೇಶಿಕ ಕೇಂದ್ರಕ್ಕೆ ಸೂಚಿಸಲಾಗಿದೆ. ತಾತ್ಕಾಲಿಕವಾಗಿ ಅಷ್ಟೇ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದೆಯಾದರೂ ಒಮ್ಮೆ ಸ್ಥಳಾಂತರವಾದರೆ ಮತ್ತೆ ಪುನಾರಂಭಗೊಳ್ಳುತ್ತದೆ ಎಂಬ ಗ್ಯಾರಂಟಿ ಏನು ಎಂಬುದು ಆಕಾಶವಾಣಿ ಪ್ರಿಯರ ಪ್ರಶ್ನೆ.&lt;/p&gt;&lt;h2&gt;&lt;strong&gt;ಯಾವಾಗ ಪ್ರಾರಂಭ?&lt;/strong&gt;&lt;/h2&gt;&lt;p&gt;1981ರಲ್ಲಿ ಪ್ರಾರಂಭವಾಗಿದ್ದ ಧಾರವಾಡ ಆಕಾಶವಾಣಿ ಕೇಂದ್ರವೂ (ಪ್ರಸಾರ ಭಾರತಿಯ ಪ್ರಾದೇಶಿಕ ಕೇಂದ್ರ) ಅಲ್ಲಿಂದ ಜನ-ಮನ ಗೆದ್ದಿರುವ ಕೇಂದ್ರವಾಗಿದೆ. 1981ರಲ್ಲಿ ತನ್ನ ಮೊದಲು ನ್ಯೂಸ್&zwnj; ಬ್ಯುಲೆಟೆನ್&zwnj; ಪ್ರಸಾರ ಮಾಡಿತ್ತು. ಕೇಂದ್ರ ಆರಂಭವಾದಾಗಿನಿಂದಲೂ ನ್ಯೂಸ್&zwnj; ಬುಲಿಟೆನ್&zwnj; 10 ನಿಮಿಷ ಅವಧಿ ಹೊಂದಿತ್ತು. ಪ್ರತಿ ದಿನ ಬೆಳಿಗ್ಗೆ 7.05ಕ್ಕೆ ಪ್ರಸಾರವಾಗುತ್ತಿದೆ. ಬೆಳಗಿನ ಸುದ್ದಿಗಳಿಗೆ ಈಗಲೂ ಹೆಚ್ಚಿನ ಕೇಳುಗರು ಇದ್ದಾರೆ ಎಂಬುದು ಆಡಿಯನ್ಸ್&zwnj; ರಿಸರ್ಚ್&zwnj; ಯುನಿಟ್&zwnj; ನಡೆಸಿದ ಸಮೀಕ್ಷೆ ತಿಳಿಸುತ್ತದೆ. ಪ್ರತಿ ಸೋಮವಾರ ಸಂಜೆ 6.30ರಿಂದ 5 ನಿಮಿಷ ಜಿಲ್ಲಾ ಸುದ್ದಿ ಪತ್ರ ಪ್ರಸಾರ ಮಾಡುತ್ತದೆ. ಧಾರವಾಡ, ಬೆಳಗಾವಿ, ಕೊಪ್ಪಳ, ಉತ್ತರ ಕನ್ನಡ, ಹಾವೇರಿ, ರಾಯಚೂರು, ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಬಳ್ಳಾರಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಬುಲಿಟೆನ್&zwnj; ಮಾಡಲಾಗುತ್ತಿದೆ. ಆಯಾ ಜಿಲ್ಲೆಗಳ ಅರೆಕಾಲಿಕ ವರದಿಗಾರರು ವರದಿ ತಯಾರಿಸಿ ಮೇಲ್&zwnj; ಮಾಡುತ್ತಾರೆ.&lt;/p&gt;&lt;p&gt;6 ನಿಮಿಷಗಳ (ಈ ಹಿಂದೆ 20 ನಿಮಿಷ ಇತ್ತು) ವ್ಯೂಸ್ ರೀಲ್ ಸಮಾಚಾರ ದರ್ಶನವು ಸಾಪ್ತಾಹಿಕ ಸುದ್ದಿ ನಿಯತಕಾಲಿಕೆಯಂತೆ ಪ್ರಸಾರ ವಾಗುತ್ತದೆ. ಈ ಕಾರ್ಯಕ್ರಮವನ್ನು ಧಾರವಾಡದ ಆಕಾಶವಾಣಿಯಿಂದ ಪ್ರತಿ ಶನಿವಾರ ಸಂಜೆ 6.20ಕ್ಕೆ ಪ್ರಸಾರ ಮಾಡುತ್ತದೆ. ಧಾರವಾಡದ ಕೇಂದ್ರವು ಪ್ರತಿದಿನ ಬೆಳಗ್ಗೆ 8.30, 9.30, 10.30, ಮತ್ತು ರಾತ್ರಿ 8.30ಕ್ಕೆ 2.50 ನಿಮಿಷ ಐದು ಎಫ್&zwnj;ಎಂ ಬುಲೆಟಿನ್ ಕೂಡ ಪ್ರಸಾರವಾಗುತ್ತವೆ. ನಿತ್ಯದ ಸ್ಥಳೀಯ ಸುದ್ದಿ ಮತ್ತು ಘಟನೆ ಒಳಗೊಂಡಿರುತ್ತವೆ. ಜತೆಗೆ ರಾಜ್ಯ/ರಾಷ್ಟ್ರ ಮಟ್ಟದ ಪ್ರಮುಖ ಘಟನಾವಳಿಗಳು ಇದರಲ್ಲಿ ಅಡಕವಾಗಿರುತ್ತಿದ್ದವು. ಆದರೆ, ಇದೀಗ ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವೂ ಸ್ಥಳಾಂತರವಾಗುತ್ತಿದೆ. ಇವೆಲ್ಲವೂ ಇನ್ಮುಂದೆ ಬೆಂಗಳೂರು ಕೇಂದ್ರದಿಂದಲೇ ಪ್ರಸಾರವಾಗಲಿವೆ ಎಂದು ತಿಳಿಸಲಾಗುತ್ತಿದೆ. ಆದರೆ ಸ್ಥಳಾಂತರಗೊಂಡ ಬಳಿಕ ಈ ಬುಲೆಟೆನ್&zwnj;ಗಳಿಗೆ ಎಷ್ಟು ಪ್ರಾಮುಖ್ಯತೆ ದೊರೆಯುತ್ತದೆ ಎಂಬುದು ಪ್ರಶ್ನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಸು/ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಾಗ ರೈತರಿಗೆ ಆರ್ಥಿಕ ಭದ್ರತೆ ನೀಡುವ ಯೋಜನೆಗೆ ಚಾಲನೆ&lt;/strong&gt;&lt;/p&gt;&lt;h3&gt;&lt;strong&gt;ಆಕಾಶವಾಣಿ ಕೇಂದ್ರದ ಪ್ರಿಯರಲ್ಲಿ ಬೇಸರ&lt;/strong&gt;&lt;/h3&gt;&lt;p&gt;ಧಾರವಾಡ ಆಕಾಶವಾಣಿ ಕೇಂದ್ರಕ್ಕೆ ತನ್ನದೇ ಆದ ಛಾಪು, ಜನ ಬೆಂಬಲ ಇತ್ತು. ಇದೀಗ ಅದೇ ಇಲ್ಲಿಂದ ಸ್ಥಳಾಂತರವಾಗುತ್ತಿರುವುದು ಆಕಾಶವಾಣಿ ಕೇಂದ್ರದ ಪ್ರಿಯರಲ್ಲಿ ಬೇಸರವನ್ನುಂಟು ಮಾಡಿದೆ. ಯಾವುದೇ ಕಾರಣಕ್ಕೂ ಇಲ್ಲಿಂದ ನ್ಯೂಸ್&zwnj; ಬುಲೆಟಿನ್&zwnj; ಹೆಸರಲ್ಲಿ ಸ್ಥಳಾಂತರ ಮಾಡುತ್ತಿರುವುದನ್ನು ಕೈ ಬಿಡಬೇಕು. ವರ್ಕ್&zwnj; ಲೋಡ್&zwnj; ಜಾಸ್ತಿಯಾದರೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹ ಕೇಳಿ ಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮೂಗಿನೊಳಗೆ ಸಿಲುಕಿದ ಯುವತಿ ಮೂಗುತಿ; ಅಗ್ನಿಶಾಮಕದಳದ ಸಿಬ್ಬಂದಿಯಿಂದ ಯಶಸ್ವಿ ಆಪರೇಷನ್!&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharwad-all-india-radio-regional-center-to-be-shifted-to-bengaluru-soon-mrq/articleshow-ep9rzyy"/>
        </item>
        <item>
            <title><![CDATA[ಹಸು/ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಾಗ ರೈತರಿಗೆ ಆರ್ಥಿಕ ಭದ್ರತೆ ನೀಡುವ ಯೋಜನೆಗೆ ಚಾಲನೆ]]></title>
            <link>https://kannada.asianetnews.com/karnataka-districts/rasu-insurance-scheme-launched-to-provide-financial-security-to-farmers-in-case-of-accidental-death-cow-or-buffalo-mrq/articleshow-thcix0z</link>
            <guid isPermaLink="true">https://kannada.asianetnews.com/karnataka-districts/rasu-insurance-scheme-launched-to-provide-financial-security-to-farmers-in-case-of-accidental-death-cow-or-buffalo-mrq/articleshow-thcix0z</guid>
            <pubDate>Sat, 18 Apr 2026 22:46:21 +0530</pubDate>
            <description><![CDATA[ಹಾವೇರಿಯಲ್ಲಿ ಹೈನುಗಾರರ ಹಿತದೃಷ್ಟಿಯಿಂದ &lsquo;ರಾಸು ವಿಮೆ&rsquo; ಯೋಜನೆಗೆ ಚಾಲನೆ ನೀಡಲಾಗಿದೆ. ಹಸು ಅಥವಾ ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಾಗ ರೈತರಿಗೆ ಆರ್ಥಿಕ ಭದ್ರತೆ ನೀಡಿ, ಹೈನುಗಾರಿಕೆಯನ್ನು ಮುಂದುವರಿಸಲು ಈ ಯೋಜನೆ ಸಹಕಾರಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpgsd04vm8vqd6f1ctzq1yyw,imgname-haveri-1776532488346.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ:&lt;/strong&gt; ಹಸು ಅಥವಾ ಎಮ್ಮೆ ಆಕಸ್ಮಿಕವಾಗಿ ಮರಣ ಹೊಂದಿದಾಗ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಂದರ್ಭಗಳಲ್ಲಿ &lsquo;ರಾಸು ವಿಮೆ&rsquo; ಈ ಯೋಜನೆ ಬಲವಾದ ಆರ್ಥಿಕ ಭದ್ರತೆಯಾಗಿ ನೆರವಾಗಲಿದೆ ಎಂದು ಹಾವೇಮುಲ್ ನಿರ್ದೇಶಕ ಪ್ರಕಾಶ ಬನ್ನಿ ಹಟ್ಟಿ ಹೇಳಿದರು.&lt;/p&gt;&lt;p&gt;ತಾಲೂಕಿನ ಮುತ್ತೂರು ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಹೈನುಗಾರರ ಹಿತದೃಷ್ಟಿಯಿಂದ &lsquo;ರಾಸು ವಿಮೆ&rsquo; ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹೈನುಗಾರಿಕೆ ಗ್ರಾಮೀಣ ರೈತರ ಬದುಕಿನ ಪ್ರಮುಖ ಆಧಾರವಾಗಿದ್ದು, ರಾಸುಗಳ ನಷ್ಟದಿಂದ ಅನೇಕ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.&amp;nbsp;&lt;/p&gt;&lt;h2&gt;&lt;strong&gt;ರೈತರಿಗೆ ರಕ್ಷಾ ಕವಚ &amp;nbsp;ಈ ರಾಸು ವಿಮೆ&lt;/strong&gt;&lt;/h2&gt;&lt;p&gt;ಇಂತಹ ಸಂದರ್ಭದಲ್ಲಿ &lsquo;ರಾಸು ವಿಮೆ&rsquo; ಯೋಜನೆ ರೈತರಿಗೆ ರಕ್ಷಾ ಕವಚವಾಗಿ ಕೆಲಸ ಮಾಡಲಿದ್ದು, ನಷ್ಟಕ್ಕೆ ಪರಿಹಾರ ದೊರೆಯುವುದರ ಜೊತೆಗೆ ಮತ್ತೆ ಹೊಸ ರಾಸು ಖರೀದಿಸಿ ಹೈನುಗಾರಿಕೆಯನ್ನು ಮುಂದುವರಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.&lt;/p&gt;&lt;p&gt;ಇದೇ ಸಂದರ್ಭದಲ್ಲಿ ಮರಣ ಹೊಂದಿದ ಸದಸ್ಯರ ಕುಟುಂಬಗಳಿಗೆ ಕಲ್ಯಾಣ ನಿಧಿಯ ಚೆಕ್&zwnj;ಗಳನ್ನು ವಿತರಿಸಲಾಯಿತು. ಜೊತೆಗೆ ಹೈನುಗಾರರಿಗೆ ರಾಸು ವಿಮೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾಗೇಂದ್ರಪ್ಪ ಜಿಗಳಿಕೊಪ್ಪ, ಆಡಳಿತ ಮಂಡಳಿಯ ಸದಸ್ಯರು, ಒಕ್ಕೂಟದ ಅಧಿಕಾರಿಗಳಾದ ಡಾ. ಶರಣಪ್ಪ, ವಿಸ್ತರಣಾ ಅಧಿಕಾರಿಗಳಾದ ಅಜಯ ಕುಮಾರ್ ರಿತ್ತಿ ಹಾಗೂ ವ್ಯಾಪಾರಸ್ಥ ರಮೇಶ ಮೋಟೆಬೆನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಲವಿಸರ್ಜನೆಗೆ ತೆರಳಿದಾಗ ಅತಿ ಆಯಾಸದಿಂದ 10 ವರ್ಷದ ಸ್ಮರಣ ಶಕ್ತಿ ಕಳೆದುಕೊಂಡ ಮ&lt;/strong&gt;&lt;strong&gt;ಹಿಳೆ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನಾರಿಶಕ್ತಿ ವಂದನಾ ಮಸೂದೆಗೆ ಸೋಲು: ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/rasu-insurance-scheme-launched-to-provide-financial-security-to-farmers-in-case-of-accidental-death-cow-or-buffalo-mrq/articleshow-thcix0z"/>
        </item>
        <item>
            <title><![CDATA[ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ: ವಿಪಕ್ಷ ನಾಯಕ ಆರ್.ಅಶೋಕ್ ಟೀಕೆ]]></title>
            <link>https://kannada.asianetnews.com/karnataka-districts/r-ashok-supports-women-reservation-bill-modi-nda-history-gvd/articleshow-eio9kbg</link>
            <guid isPermaLink="true">https://kannada.asianetnews.com/karnataka-districts/r-ashok-supports-women-reservation-bill-modi-nda-history-gvd/articleshow-eio9kbg</guid>
            <pubDate>Sat, 18 Apr 2026 21:49:03 +0530</pubDate>
            <description><![CDATA[&lt;p&gt;ಪ್ರಧಾನಿ ಮೋದಿ ನೇತೃತ್ವದ ಎನ್&zwnj;ಡಿಎ ಸರ್ಕಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಹಿಳೆಯರಿಗೆ ಇದರಿಂದ ರಾಜಕೀಯ ಪ್ರಾತಿನಿಧ್ಯ ಸಿಕ್ಕಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp4xerh5y19pdx33ap2rabfz,imgname-----------------------2026-04-14t080426.123-1776134087205.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಏ.18): &lt;/strong&gt;ಮಹಿಳಾ ಮೀಸಲು ಮಸೂದೆಯನ್ನು ಜಾರಿಗೆ ತರುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್&zwnj;ಡಿಎ ಸರ್ಕಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಹಿಳೆಯರಿಗೆ ಇದರಿಂದ ರಾಜಕೀಯ ಪ್ರಾತಿನಿಧ್ಯ ಸಿಕ್ಕಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಮಹಿಳಾ ಮೀಸಲು ಮಸೂದೆ ಜಾರಿಗೆ ಹಿಂದಿನ ಸರ್ಕಾರಗಳು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಯಾವ ರೀತಿಯಲ್ಲಿ ಜಾರಿಗೊಳಿಸಬೇಕೆಂಬ ವಿಚಾರದಲ್ಲಿ ಗೊಂದಲದಲ್ಲಿದ್ದವು. ಆದರೆ, ಎನ್&zwnj;ಡಿಎ ಸರ್ಕಾರ ಮಹಿಳೆಯರನ್ನು ರಾಜಕೀಯವಾಗಿ ಸಬಲೀಕರಣಗೊಳಿಸುವ ದೂರದೃಷ್ಟಿಯನ್ನಿಟ್ಟುಕೊಂಡು ಗೊಂದಲಗಳಿಗೆ ಅವಕಾಶವಾಗದ ರೀತಿಯಲ್ಲಿ ಜಾರಿಗೊಳಿಸಿ ಹೊಸ ಚರಿತ್ರೆಯನ್ನು ಸೃಷ್ಟಿಸಿರುವುದಾಗಿ ಹೇಳಿದರು.&lt;/p&gt;&lt;p&gt;ದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಎಲ್ಲರಿಗೂ ಸಮಾನತೆ ಸಿಗಬೇಕು. ಮಹಿಳೆಯರಿಗೂ ರಾಜಕೀಯ ಶಕ್ತಿ ತುಂಬಬೇಕೆಂಬ ಕಾರಣದಿಂದ ಮಸೂದಯೆನ್ನು ಜಾರಿಗೊಳಿಸಲಾಗಿದೆ. ಇದಕ್ಕೆ ಮಹಿಳೆಯರೆಲ್ಲರೂ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್&zwnj;ನವರು ಮಾತ್ರ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲದ ಕಿತಾಪತಿ ಮಾಡುತ್ತಿದ್ದಾರೆ. ಧರ್ಮಾಧಾರಿತವಾಗಿಯೂ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಟೀಕಿಸಿದರು.&lt;/p&gt;&lt;p&gt;&lt;strong&gt;ದಕ್ಷಿಣ ರಾಜ್ಯಗಳಿಗೆ ಅನ್ಯಾಯವಿಲ್ಲ: &lt;/strong&gt;ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಿಂದ ದಕ್ಷಿಣದ ಯಾವುದೇ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್&zwnj;ಗೆ ಬುದ್ದಿ ಇಲ್ಲ. ಕೇಂದ್ರ ಸರ್ಕಾರ ಬಿಲ್&zwnj;ನಲ್ಲಿ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಹಿಂದೆ ಕಾಂಗ್ರೆಸ್ ಕೂಡ ಇದನ್ನೇ ಮಾಡಿದ್ದು. ತಮಿಳುನಾಡಿನಲ್ಲಿ 39 ಕ್ಷೇತ್ರಗಳಿರುವುದನ್ನು 59ಕ್ಕೆ ಏರಿಸಲಾಗುತ್ತಿದೆ. ಇವರಿಗೇನು ಕಷ್ಟ? ಮೋದಿಯವರು ಮೂರನೇ ಬಾರಿ ಗೆದ್ದಿದ್ದಾರೆ. ನಾಲ್ಕನೇ ಬಾರಿಯೂ ಗೆದ್ದರೆ ನಾವೆಲ್ಲ ಟೆಂಟ್ ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ಅವರಿಗೆ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;&lt;strong&gt;ಸಿಬಿಐನಿಂದ ಸತ್ಯ ಬಹಿರಂಗ: &lt;/strong&gt;ರಾಜಕಾರಣಿಯ ಮಾತು ಕೇಳಿ ಕೊಲೆ ಮಾಡಿದರೆ ಏನಾಗುತ್ತದೆ ಎಂಬುದು ವಿನಯ್ ಕುಲಕರ್ಣಿ ಪ್ರಕರಣ ಉದಾಹರಣೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್&zwnj;ಗೆ ಶಿಕ್ಷೆಯಾಗಿದೆ. ಯಾರು ಕೊಲೆಯಲ್ಲಿ ಭಾಗಿಯಾಗಿದ್ದರೋ ಅವರೇ ಸತ್ಯ ಹೇಳಿದ್ದಾರೆ. ಕಾಂಗ್ರೆಸ್ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿದ್ದರು. ಸಿಬಿಐಗೆ ಕೊಟ್ಟ ಮೇಲೆ ಸತ್ಯ ಬಹಿರಂಗ ಆಗಿದೆ. ರಾಜಕೀಯ ಕೊಲೆಗೆ ತಿಲಾಂಜಲಿ ಹಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರವನ್ನು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಇದರಲ್ಲಿ ನಮ್ಮ ಹಸ್ತಕ್ಷೇಪ ಏನೂ ಇರುವುದಿಲ್ಲ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ರಾಜ್ಯದಲ್ಲಿ ಸತ್ತಂತಿರುವ ಕಾಂಗ್ರೆಸ್ ಸರ್ಕಾರ&lt;/strong&gt;&lt;/h2&gt;&lt;p&gt;ಕರ್ನಾಟಕ ಸರ್ಕಾರ ಸತ್ತು ಹೋಗಿದೆ. ಶಾಸಕರು ದೆಹಲಿಗೆ ಹೋಗುತ್ತಿದ್ದಾರೆ. ಒಂದೆಡೆ ಡಿ.ಕೆ.ಶಿವಕುಮಾರ್ ಸಿಎಂ ಆಗಲು ಹೊರಟಿದ್ದಾರೆ. ಆದರೆ ಸಿದ್ದರಾಮಯ್ಯ ಸೀಟ್ ಬಿಡುತ್ತಿಲ್ಲ. ಇದೀಗ ಅವರವರ ಮಕ್ಕಳು ಅಪ್ಪಂದಿರೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಸಿದ್ದರಾಮಯ್ಯ ಅವರು ರಾಜ್ಯವನ್ನು ಸಾಲದ ಕೂಪಕ್ಕೆ ಕೊಂಡೊಯ್ಯುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಲ್ಲಿ ಒಂದು ಕ್ಯಾಬಿನೆಟ್ ಇದೆ ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;ದಾವಣಗೆರೆ ಉಪ ಚುನಾವಣೆ ಬಳಿಕ ಮುಸ್ಲಿಂ ನಾಯಕರು ಟಾರ್ಗೆಟ್ ಆಗಿದ್ದಾರೆ. ಜಮೀರ್ ಅಹಮದ್ ಟಾರ್ಗೆಟ್ ಆಗುತ್ತಿದ್ದಾರೆ. ಸದ್ಯ ಕಾಂಗ್ರೆಸ್&zwnj;ನಲ್ಲಿ ಗೊಂದಲ ಇರುವುದಂತೂ ಸತ್ಯ. ಯಾರು ಮುಖ್ಯಮಂತ್ರಿ ಅನ್ನೋದು ಜನರ ಪ್ರಶ್ನೆಯೂ ಆಗಿದೆ ಎಂದು ಛೇಡಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/r-ashok-supports-women-reservation-bill-modi-nda-history-gvd/articleshow-eio9kbg"/>
        </item>
        <item>
            <title><![CDATA[ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತುರ್ತುಗತಿ, ಪ್ರಕ್ರಿಯೆ ಪಾರದರ್ಶಕವಾಗಿಲ್ಲ: ಸಂಸದೆ ಡಾ.ಪ್ರಭಾ]]></title>
            <link>https://kannada.asianetnews.com/karnataka-districts/prabha-mallikarjun-women-reservation-bill-criticism-lok-sabha-gvd/articleshow-fte5cb1</link>
            <guid isPermaLink="true">https://kannada.asianetnews.com/karnataka-districts/prabha-mallikarjun-women-reservation-bill-criticism-lok-sabha-gvd/articleshow-fte5cb1</guid>
            <pubDate>Sat, 18 Apr 2026 21:19:19 +0530</pubDate>
            <description><![CDATA[&lt;p&gt;ಮಹಿಳಾ ಮೀಸಲಾತಿ ಮಸೂದೆಯನ್ನು ತುರ್ತುಗತಿಯಲ್ಲಿ, ಸಮಗ್ರ ಚರ್ಚೆ ಮತ್ತು ಸಲಹೆಗಳಿಲ್ಲದೇ ಮುಂದುವರಿಸಲಾಗುತ್ತಿರುವ ಕ್ರಮ ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9w6z5160aem7gm6r1vmpash,imgname-----------------------2025-11-12t193149.597-1762957169702.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.18):&lt;/strong&gt; ಮಹಿಳಾ ಮೀಸಲಾತಿ ಮಸೂದೆಯನ್ನು ತುರ್ತುಗತಿಯಲ್ಲಿ, ಸಮಗ್ರ ಚರ್ಚೆ ಮತ್ತು ಸಲಹೆಗಳಿಲ್ಲದೇ ಮುಂದುವರಿಸಲಾಗುತ್ತಿರುವ ಕ್ರಮ ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ನವದೆಹಲಿಯ ಸಂಸತ್ತಿನಲ್ಲಿ ನಡೆಯುತ್ತಿರುವ ಮೂರು ಮಸೂದೆಗಳ ಮಂಡನೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು &ldquo;ಮೂರು ಮಸೂದೆಗಳನ್ನು ಮೂರು ದಿನಗಳಲ್ಲಿ ತರಲಾಗಿದೆ. ಯಾವುದೇ ಮುಕ್ತ ಶಾಸನಾತ್ಮಕ ಸಲಹೆ ಇಲ್ಲ, ಎಲ್ಲಾ ಪಕ್ಷಗಳೊಂದಿಗೆ ಚರ್ಚೆ ನಡೆದಿಲ್ಲ. ಚರ್ಚೆಗೆ ಕೆಲವೇ ದಿನಗಳ ಮೊದಲು ಪಠ್ಯ ಹಂಚಲಾಗಿದೆ. ಇದು ಸೂಕ್ಷ್ಮ ಆಡಳಿತವಲ್ಲ, ರಾಷ್ಟ್ರೀಯ ಒಪ್ಪಿಗೆಯನ್ನು ಅಗತ್ಯವಿರುವ ವಿಷಯದಲ್ಲಿ ತುರ್ತು ನಿರ್ಧಾರ ಮಾಡುವ ಕ್ರಮವಾಗಿದೆ&rdquo; ಎಂದು ಹೇಳಿದರು.&lt;/p&gt;&lt;p&gt;ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, &ldquo;ಮಸೂದೆ ಕುರಿತು ವಿವರಿಸುವ ಮೊದಲು ಎಲ್ಲಾ ಪಕ್ಷಗಳ ಅಭಿಪ್ರಾಯವನ್ನು ಏಕೆ ಕೇಳಲಿಲ್ಲ?&rdquo; ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವದಲ್ಲಿ ಸಂವಾದ ಮತ್ತು ಸಹಕಾರ ದೇಶದ ಸಮೃದ್ಧಿಗೆ ಅವಶ್ಯಕ ಎಂದು ಅವರು ಹೇಳಿದರು.&lt;/p&gt;&lt;p&gt;ಮಹಿಳಾ ಮೀಸಲಾತಿ ಕುರಿತು ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದ ಅವರು, &ldquo;ರಾಜೀವ್ ಗಾಂಧಿ ಅವರ ಕಾಲದಲ್ಲೇ 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಗ್ರಾಮೀಣ ಮಟ್ಟದಲ್ಲಿ ಮಹಿಳಾ ಪ್ರತಿನಿಧಿತ್ವವನ್ನು ವಿಸ್ತರಿಸಲಾಗಿದೆ. ನಮ್ಮ ಬದ್ಧತೆ ಯಾವತ್ತೂ ಷರತ್ತುಬದ್ಧವಾಗಿರಲಿಲ್ಲ&rdquo; ಎಂದರು.&lt;/p&gt;&lt;h2&gt;&lt;strong&gt;ಮರು ವಿನ್ಯಾಸಗೊಳಿಸುವುದು ಸೂಕ್ತವಲ್ಲ&lt;/strong&gt;&lt;/h2&gt;&lt;p&gt;ಪ್ರಸ್ತುತ ಮಸೂದೆ ಕುರಿತು ಅವರು ಗಂಭೀರ ಆಕ್ಷೇಪ ವ್ಯಕ್ತಪಡಿಸಿ, &ldquo;ನಾರಿ ಶಕ್ತಿ&rdquo; ಎಂಬ ಹೆಸರಿನಲ್ಲಿ &ldquo;ನಾರಿ ಪ್ರತೀಕ್ಷಾ&rdquo; ಸೃಷ್ಟಿಯಾಗುವ ಅಪಾಯವಿದೆ. ಜನಗಣತಿ ನವೀಕರಣವಿಲ್ಲದೆ, ವಲಸೆ ಕುರಿತ ಸ್ಪಷ್ಟ ಮಾಹಿತಿಯಿಲ್ಲದೆ, ಮುಂದಿನ ದಶಕಗಳ ರಾಜಕೀಯ ಪ್ರತಿನಿಧಿತ್ವವನ್ನು ಮರು ವಿನ್ಯಾಸಗೊಳಿಸುವುದು ಸೂಕ್ತವಲ್ಲ&rdquo; ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ಕರ್ನಾಟಕದ ಪರವಾಗಿ ಮಾತನಾಡಿದ ಅವರು, &ldquo;ಕರ್ನಾಟಕವು ದೇಶದ ಜಿಡಿಪಿಗೆ ಸುಮಾರು 9% ಕೊಡುಗೆ ನೀಡುತ್ತದೆ. ಶಿಕ್ಷಣ, ಆರೋಗ್ಯ ಹಾಗೂ ಜನಸಂಖ್ಯಾ ನಿಯಂತ್ರಣದಲ್ಲಿ ಪ್ರಗತಿ ಸಾಧಿಸಿರುವ ರಾಜ್ಯಕ್ಕೆ ಕಡಿಮೆ ಪ್ರತಿನಿಧಿತ್ವ ನೀಡುವುದು ನ್ಯಾಯವೇ?&rdquo; ಎಂದು ಪ್ರಶ್ನಿಸಿದರು. ಮಸೂದೆದಲ್ಲಿ ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ನೀಡದಿರುವುದನ್ನು ಅವರು ಟೀಕಿಸಿ, &ldquo;ಇದು ಸಂಪೂರ್ಣ ಪ್ರತಿನಿಧಿತ್ವವಲ್ಲ, ಆಯ್ದ ಪ್ರತಿನಿಧಿತ್ವ ಮಾತ್ರ&rdquo; ಎಂದರು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/prabha-mallikarjun-women-reservation-bill-criticism-lok-sabha-gvd/articleshow-fte5cb1"/>
        </item>
        <item>
            <title><![CDATA[ಏಷ್ಯಾದಲ್ಲೇ ಬೆಂಗಳೂರಿಗೆ ಟಾಪ್ ಸ್ಥಾನ! ಸಿಲಿಕಾನ್ ಸಿಟಿ ನಂತ್ರದ ಸ್ಥಾನದಲ್ಲಿ ಮುಂಬೈ,  ಚೆನ್ನೈ]]></title>
            <link>https://kannada.asianetnews.com/gallery/business/silicon-city-bengaluru-leads-asia-in-office-rent-hike-mumbai-and-delhi-follow-mrq-hq8r2rb</link>
            <guid isPermaLink="true">https://kannada.asianetnews.com/gallery/business/silicon-city-bengaluru-leads-asia-in-office-rent-hike-mumbai-and-delhi-follow-mrq-hq8r2rb</guid>
            <pubDate>Sat, 18 Apr 2026 21:09:19 +0530</pubDate>
            <description><![CDATA[ಮುಂಬೈನಲ್ಲಿ ದಾಖಲೆಯ 56 ಲಕ್ಷ ಚದರ ಅಡಿ ಕಚೇರಿ ಸ್ಥಳ ಗುತ್ತಿಗೆಗೆ ನೀಡಲಾಗಿದ್ದು, ಬಾಡಿಗೆಯಲ್ಲಿ 7.5% ಬೆಳವಣಿಗೆ ಕಂಡಿದೆ. 16.2% ಸ್ಥಳಗಳು ಖಾಲಿ ಇರುವುದರಿಂದ, ಸದ್ಯದ ವಾರ್ಷಿಕ ಪ್ರತಿ ಚದರ ಅಡಿಗೆ ರೂ. 4,025 ಇರುವ ಬಾಡಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpgkmt5gmmp3d86at8f4grhm,imgname-bengaluru-it-hub-1776526452912.jpg" type="image/jpeg" height="390" width="690"/>
            <content:encoded><![CDATA[ಮುಂಬೈನಲ್ಲಿ ದಾಖಲೆಯ 56 ಲಕ್ಷ ಚದರ ಅಡಿ ಕಚೇರಿ ಸ್ಥಳ ಗುತ್ತಿಗೆಗೆ ನೀಡಲಾಗಿದ್ದು, ಬಾಡಿಗೆಯಲ್ಲಿ 7.5% ಬೆಳವಣಿಗೆ ಕಂಡಿದೆ. 16.2% ಸ್ಥಳಗಳು ಖಾಲಿ ಇರುವುದರಿಂದ, ಸದ್ಯದ ವಾರ್ಷಿಕ ಪ್ರತಿ ಚದರ ಅಡಿಗೆ ರೂ. 4,025 ಇರುವ ಬಾಡಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.&lt;img&gt;ಭಾರತದ ಇತರ ಪ್ರಮುಖ ನಗರಗಳಲ್ಲೂ ಬಾಡಿಗೆ ಬೆಳವಣಿಗೆ ಸ್ಥಿರವಾಗಿದೆ. ಇದೇ ತ್ರೈಮಾಸಿಕದಲ್ಲಿ, ಮುಂಬೈನಲ್ಲಿ 7.5% ಮತ್ತು ದೆಹಲಿ-NCRನಲ್ಲಿ 8.2% ಬಾಡಿಗೆ ಬೆಳವಣಿಗೆ ದಾಖಲಾಗಿದೆ. ಏಷ್ಯಾ-ಪೆಸಿಫಿಕ್ ವಲಯದ 24 ಪ್ರಮುಖ ನಗರಗಳ ಪೈಕಿ 18 ನಗರಗಳಲ್ಲಿ ಬಾಡಿಗೆ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇದ್ದರೂ, ಒಟ್ಟಾರೆಯಾಗಿ ಪ್ರಾದೇಶಿಕ ಬಾಡಿಗೆ 0.8% ರಷ್ಟು ಹೆಚ್ಚಾಗಿದೆ.&lt;img&gt;&lt;p&gt;ಈ ಬೆಳವಣಿಗೆಗೆ ಭಾರತ ಮತ್ತು ಆಸ್ಟ್ರೇಲಿಯಾ ಪ್ರಮುಖ ಕಾರಣವೆಂದು ವರದಿ ಹೇಳುತ್ತದೆ. ಏಷ್ಯಾ-ಪೆಸಿಫಿಕ್ ವಲಯದಲ್ಲಿ ಹಾಂಗ್ ಕಾಂಗ್ SARನಲ್ಲಿ ಕಚೇರಿ ಬಾಡಿಗೆ ಅತಿ ದುಬಾರಿಯಾಗಿದೆ.&lt;/p&gt;&lt;p&gt;&amp;nbsp;ಅಲ್ಲಿ ಪ್ರತಿ ಚದರ ಅಡಿಗೆ ವಾರ್ಷಿಕ USD 158.96 ವೆಚ್ಚವಾಗುತ್ತದೆ. ಭಾರತದಲ್ಲಿ, ದೆಹಲಿ-NCR ಅತಿ ದುಬಾರಿ ಮಾರುಕಟ್ಟೆಯಾಗಿದ್ದು, ಪ್ರತಿ ಚದರ ಅಡಿಗೆ ವಾರ್ಷಿಕ USD 72.33 ಬಾಡಿಗೆ ಇದೆ (ಏಷ್ಯಾದಲ್ಲಿ 6ನೇ ಸ್ಥಾನ). ನಂತರದ ಸ್ಥಾನದಲ್ಲಿ ಮುಂಬೈ (USD 68.51, 8ನೇ ಸ್ಥಾನ) ಮತ್ತು ಬೆಂಗಳೂರು (USD 36.84, 19ನೇ ಸ್ಥಾನ) ಇವೆ.&amp;nbsp;&lt;/p&gt;&lt;p&gt;ಈ ಮೂರು ನಗರಗಳಲ್ಲಿ ಈ ತ್ರೈಮಾಸಿಕದಲ್ಲಿ ಒಟ್ಟು 1.88 ಕೋಟಿ ಚದರ ಅಡಿ ಕಚೇರಿ ಸ್ಥಳವನ್ನು ಬಾಡಿಗೆಗೆ ನೀಡಲಾಗಿದೆ. ಮುಂಬೈ ಒಂದೇ ತ್ರೈಮಾಸಿಕದಲ್ಲಿ 56 ಲಕ್ಷ ಚದರ ಅಡಿ ಸ್ಥಳವನ್ನು ಬಾಡಿಗೆಗೆ ನೀಡಿ ಹೊಸ ದಾಖಲೆ ಬರೆದಿದೆ. ಆದರೆ, ಹೊಸ ಕಟ್ಟಡಗಳ ನಿರ್ಮಾಣ ಅಷ್ಟಾಗಿ ನಡೆಯುತ್ತಿಲ್ಲ. ಕೇವಲ 85 ಲಕ್ಷ ಚದರ ಅಡಿ ಹೊಸ ಕಚೇರಿ ಸ್ಥಳಗಳು ಮಾತ್ರ ನಿರ್ಮಾಣವಾಗಿವೆ.&lt;/p&gt;&lt;img&gt;&lt;p&gt;ಬಾಡಿಗೆಗೆ ಸ್ಥಳ ಹುಡುಕುವವರು ಹೆಚ್ಚಾಗಿ ಪ್ರೈಮ್ ಆಫೀಸ್ ಕಟ್ಟಡಗಳನ್ನೇ ಇಷ್ಟಪಡುತ್ತಾರೆ. GCC (ಗ್ಲೋಬಲ್ ಕಂಪನಿಗಳ ಕೇಂದ್ರಗಳು) ವಿಸ್ತರಣೆ ಮತ್ತು ಫ್ಲೆಕ್ಸಿಬಲ್ ವರ್ಕಿಂಗ್ ಸ್ಪೇಸ್&zwnj;ಗಳ ಆಗಮನ ಈ ಟ್ರೆಂಡ್&zwnj; ಅನ್ನು ಮತ್ತಷ್ಟು ಹೆಚ್ಚಿಸಿದೆ.&amp;nbsp;&lt;/p&gt;&lt;p&gt;ಬೆಂಗಳೂರು, ಏಷ್ಯಾದಲ್ಲೇ ಅತಿಹೆಚ್ಚು ಅಂದರೆ 14% ಬಾಡಿಗೆ ಬೆಳವಣಿಗೆಯನ್ನು ಕಂಡಿದೆ. GCC ಕಂಪನಿಗಳು ಬಾಡಿಗೆಗೆ ಪಡೆದ ಸ್ಥಳಗಳಲ್ಲಿ 41% ಬೆಂಗಳೂರಿನಲ್ಲೇ ಇವೆ. ಇಲ್ಲಿ ಕೇವಲ 11.8% ಸ್ಥಳಗಳು ಮಾತ್ರ ಖಾಲಿ ಇರುವುದರಿಂದ, ಬಾಡಿಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Delimitation impact: ದಕ್ಷಿಣ ಭಾರತದ ರಾಜಕೀಯ ಪ್ರಾತಿನಿಧ್ಯ ಕುಗ್ಗಿಸುವ ಷಡ್ಯಂತ್ರ&lt;/strong&gt;&lt;/p&gt;&lt;img&gt;&lt;p&gt;ಮುಂಬೈನಲ್ಲಿ ದಾಖಲೆಯ 56 ಲಕ್ಷ ಚದರ ಅಡಿ ಸ್ಥಳ ಬಾಡಿಗೆಗೆ ಹೋಗಿದ್ದು, 7.5% ಬಾಡಿಗೆ ಬೆಳವಣಿಗೆ ಕಂಡಿದೆ. ಅಲ್ಲಿ 16.2% ಸ್ಥಳಗಳು ಖಾಲಿ ಇರುವುದರಿಂದ, ವಾರ್ಷಿಕ ಪ್ರತಿ ಚದರ ಅಡಿಗೆ ರೂ. 4,025 ಇರುವ ಬಾಡಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ದೆಹಲಿ-NCRನಲ್ಲಿ ಬಾಡಿಗೆ ಬೆಳವಣಿಗೆ 8.2% ರಷ್ಟು ಸ್ಥಿರವಾಗಿದೆ.&amp;nbsp;&lt;/p&gt;&lt;p&gt;ಅಲ್ಲಿ 14.2% ಸ್ಥಳಗಳು ಖಾಲಿ ಇರುವುದರಿಂದ, ಪ್ರತಿ ಚದರ ಅಡಿಗೆ ವಾರ್ಷಿಕ ರೂ. 4,428 ಬಾಡಿಗೆ ಸ್ಥಿರವಾಗಿರಲಿದೆ. ಈ ವರದಿಯು 'ಪ್ರೈಮ್' ಅಥವಾ 'ಎ-ಗ್ರೇಡ್' ಕಚೇರಿ ಸ್ಥಳಗಳನ್ನು ಮಾತ್ರ ಪರಿಗಣಿಸುತ್ತದೆ. ಚೆನ್ನೈನಲ್ಲಿ ಕಚೇರಿ ಬಾಡಿಗೆ ಮತ್ತು ವಹಿವಾಟು ಮೌಲ್ಯ ಸ್ವಲ್ಪ ಕಡಿಮೆ ಇರುವುದರಿಂದ, ಅದು ಏಷ್ಯಾದ ಅಗ್ರ 24 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭೂ ದಾಖಲೆ ಸ್ಕ್ಯಾನಿಂಗ್ ವಿಳಂಬ: ತಹಸೀಲ್ದಾರ್&zwnj;ಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/silicon-city-bengaluru-leads-asia-in-office-rent-hike-mumbai-and-delhi-follow-mrq-hq8r2rb"/>
        </item>
        <item>
            <title><![CDATA[ಭೂ ದಾಖಲೆ ಸ್ಕ್ಯಾನಿಂಗ್ ವಿಳಂಬ: ತಹಸೀಲ್ದಾರ್‌ಗಳಿಗೆ  ಸಚಿವ ಕೃಷ್ಣ ಬೈರೇಗೌಡ ತರಾಟೆ]]></title>
            <link>https://kannada.asianetnews.com/karnataka-districts/krishna-byre-gowda-warning-tahsildars-revenue-department-delay-gvd/articleshow-7favria</link>
            <guid isPermaLink="true">https://kannada.asianetnews.com/karnataka-districts/krishna-byre-gowda-warning-tahsildars-revenue-department-delay-gvd/articleshow-7favria</guid>
            <pubDate>Sat, 18 Apr 2026 20:26:58 +0530</pubDate>
            <description><![CDATA[&lt;p&gt;ಭೂ ಸುರಕ್ಷಾ, ಪೌತಿ ಖಾತೆ, ಪೋಡಿ ದುರಸ್ತಿ, ಕಂದಾಯ ಗ್ರಾಮ ಅಭಿಯಾನ ಸೇರಿ ಮತ್ತಿತರ ಕಾರ್ಯಗಳಲ್ಲಿ ವಿಳಂಬ ಧೋರಣೆ ತೋರಿದ ತಹಸೀಲ್ದಾರ್&zwnj;ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01js1evxj2r1nptvdbd5hma9vt,imgname-Krishne-Byre-Gowda-1744879613506.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18): &lt;/strong&gt;ಕಂದಾಯ ಇಲಾಖೆ ಅಡಿಯಲ್ಲಿನ ಭೂ ಸುರಕ್ಷಾ, ಪೌತಿ ಖಾತೆ, ಪೋಡಿ ದುರಸ್ತಿ, ಕಂದಾಯ ಗ್ರಾಮ ಅಭಿಯಾನ ಸೇರಿ ಮತ್ತಿತರ ಕಾರ್ಯಗಳಲ್ಲಿ ವಿಳಂಬ ಧೋರಣೆ ತೋರಿದ ತಹಸೀಲ್ದಾರ್&zwnj;ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಕೃಷ್ಣ ಅವರು ವೀಡಿಯೋ ಕಾನ್ಫರೆನ್ಸ್&zwnj; ಮೂಲಕ ತಹಸೀಲ್ದಾರ್&zwnj;ಗಳೊಂದಿಗೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಇಲಾಖೆ ನಿಗದಿಪಡಿಸಿದ ಗುರಿ ತಲುಪುವಲ್ಲಿ ವಿಫಲರಾದ ತಹಸೀಲ್ದಾರ್&zwnj;ಗಳ ವಿರುದ್ಧ ಕಿಡಿ ಕಾರಿದ ಸಚಿವರು, ಉತ್ತಮ ಸಾಧನೆ ತೋರಿದ ತಹಶೀಲ್ದಾರ್&zwnj;ಗಳನ್ನು ಶ್ಲಾಘಿಸಿದರು.&lt;/p&gt;&lt;h2&gt;&lt;strong&gt;8 ಸಾವಿರ ಪುಟಗಳಷ್ಟೇ ಸ್ಕ್ಯಾನ್&zwnj;&lt;/strong&gt;&lt;/h2&gt;&lt;p&gt;ಮೊದಲಿಗೆ ಭೂ ಸುರಕ್ಷಾ ಯೋಜನೆ ಕುರಿತು ಪರಿಶೀಲಿಸಿದ ಕೃಷ್ಣ ಬೈರೇಗೌಡ, ದಿನಕ್ಕೆ ಭೂ ದಾಖಲೆಗಳ 12 ಸಾವಿರ ಪುಟ ಸ್ಕ್ಯಾನ್&zwnj; ಮಾಡಬೇಕೆಂಬ ಗುರಿಯಿದ್ದರೂ ಕೆಲ ತಾಲೂಕುಗಳಲ್ಲಿ ಸರಾಸರಿ 8 ಸಾವಿರ ದಾಖಲೆಗಳ ಪುಟಗಳನ್ನು ಮಾತ್ರ ಸ್ಕ್ಯಾನ್&zwnj; ಮಾಡಲಾಗುತ್ತಿದೆ ಎಂಬುದನ್ನು ತಿಳಿದು ಅಸಮಾಧಾನ ವ್ಯಕ್ತಪಡಿಸಿದರು. ಸ್ಕ್ಯಾನ್&zwnj; ಮಾಡಲು ಪ್ರತಿ ತಾಲೂಕಿಗೆ ತಲಾ 8 ಮಂದಿ ಡೇಟಾ ಆಪರೇಟರ್&zwnj;ಗಳನ್ನು ನೀಡಿದ್ದರೂ ಪ್ರಗತಿ ಕುಂಠಿತವಾಗಿದೆ. ಚಿಕ್ಕಮಗಳೂರು, ಕೊಡಗು, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಕೆಲಸ ಪೂರ್ಣವಾಗಿದೆ.&lt;/p&gt;&lt;p&gt;ಬೆಂಗಳೂರು ನಗರ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ, ಮೈಸೂರಿನ ತಾಲೂಕುಗಳಲ್ಲಿ ಇನ್ನೂ ನಿಗದಿತ ಗುರಿ ತಲುಪಿಲ್ಲ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಹಾಗೆಯೇ, ಬೆಳ್ತಂಗಡಿ, ಮೂಡಬಿದರೆ, ಪುತ್ತೂರು ಸೇರಿ 60 ತಾಲೂಕುಗಳಲ್ಲಿ ದಿನಕ್ಕೆ 20 ಸಾವಿರ ಪುಟ ಸ್ಕ್ಯಾನ್ ಮಾಡುತ್ತಿರುವುದು ಶ್ಲಾಘನೀಯ. ಅಲ್ಲದೆ ಹೊನ್ನಾವರದಲ್ಲಿ ದಿನಕ್ಕೆ 40 ಸಾವಿರ ಪುಟ ಸ್ಕ್ಯಾನ್&zwnj; ಮಾಡಲಾಗುತ್ತಿದೆ. ಇದು ಉತ್ತಮ ಕಾರ್ಯ ಎಂದರು.&lt;/p&gt;&lt;p&gt;ತಹಸೀಲ್ದಾರ್&zwnj; ನ್ಯಾಯಾಲಯಗಳಲ್ಲಿನ ಪ್ರಕರಣ ವಿಳೇವಾರಿ ಉತ್ತಮವಾಗಿದೆ. ಹಳೇ ಪ್ರಕರಣಗಳ ಬಹುತೇಕ ವಿಲೇವಾರಿಯಾಗಿದೆ. ಕೆಲ ತಾಲೂಕುಗಳಲ್ಲಷ್ಟೇ 90 ದಿನಕ್ಕೆ ಮೀರಿದ ಪ್ರಕರಣಗಳು ಬಾಕಿಯಿದ್ದು, ಅದನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೌತಿ ಖಾತೆ ಆಂದೋಲನ ಮುಕ್ತಾಯವಾಗಿದೆ. ಉಳ್ಳಾಲದಲ್ಲಿ 18 ಮತ್ತು ಮಂಗಳೂರಿನಲ್ಲಿ 357 ಆಸ್ತಿಗಳ ಪೌತಿಯಷ್ಟೇ ಬಾಕಿಯಿದೆ. ಉಳಿದಂತೆ ಜಿಲ್ಲೆಯು ಪೌತಿ ಮುಕ್ತವಾದಂತಾಗಿದೆ. ಅದಕ್ಕಾಗಿ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೂ ಅಭಿನಂದನೆಗಳು ಎಂದು ಹೇಳಿದರು.&lt;/p&gt;&lt;p&gt;ಪೋಡಿ ದುರಸ್ತಿಯಲ್ಲಿ ಹಿಂದೆ ಬಿದ್ದವರನ್ನೂ ಕೃಷ್ಣ ಬೈರೇಗೌಡ ತರಾಟೆಗೆ ತೆಗೆದುಕೊಂಡರು. 1 ರಿಂದ 10 ಮಂಜೂರಿದಾರರಷ್ಟೇ ಇರುವ ಎಲ್ಲ ಸರ್ವೆ ನಂಬರ್&zwnj;ಗಳ 1ರಿಂದ 5 ಕೆಲಸವನ್ನು ಮುಂದಿನ ಒಂದು ವಾರದಲ್ಲಿ ಪೂರ್ಣಗೊಳಿಸಬೇಕು. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಇಂಡೀಕರಣ ಶೂನ್ಯವಾಗಿದ್ದು, ಪ್ರಗತಿಯೇ ಇಲ್ಲ. ಡಿಡಿಎಲ್&zwnj;ಆರ್&zwnj; ಹಾಗೂ ಎಡಿಎಲ್&zwnj;ಆರ್&zwnj;ಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/krishna-byre-gowda-warning-tahsildars-revenue-department-delay-gvd/articleshow-7favria"/>
        </item>
        <item>
            <title><![CDATA[ದಾವಣಗೆರೆ ಕ್ಷೇತ್ರದ ಜನಪ್ರಿಯ ಕಾಂಗ್ರೆಸ್ ನಾಯಕ ಸೈಯದ್ ಸೈಫುಲ್ಲಾ ಸಾಬ್ ನಿಧನ]]></title>
            <link>https://kannada.asianetnews.com/karnataka-districts/popular-congress-leader-from-davanagere-constituency-syed-saifullah-saab-passes-away-mrq/articleshow-i9g6ev5</link>
            <guid isPermaLink="true">https://kannada.asianetnews.com/karnataka-districts/popular-congress-leader-from-davanagere-constituency-syed-saifullah-saab-passes-away-mrq/articleshow-i9g6ev5</guid>
            <pubDate>Sat, 18 Apr 2026 19:40:55 +0530</pubDate>
            <description><![CDATA[&lt;p&gt;ದಾವಣಗೆರೆಯ ಹಿರಿಯ ಕಾಂಗ್ರೆಸ್ ನಾಯಕ, ಶಿಕ್ಷಣ ತಜ್ಞ ಹಾಗೂ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರಾದ ಸೈಯದ್ ಸೈಫುಲ್ಲಾ ಸಾಬ್ (79) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpgeny39ckge1xwpyaw16z67,imgname-saiyad-death-1776521246825.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ&lt;/strong&gt;: ದಾವಣಗೆರೆಯ ಕಾಂಗ್ರೆಸ್ ನಾಯಕ ಸೈಯದ್ ಕೆರೆಕಟ್ಟೆ ಸೈಫುಲ್ಲ ಸಾಬ್ ನಿಧನರಾಗಿದ್ದಾರೆ. 79 ವರ್ಷದ ಸೈಯದ್ ಸೈಫುಲ್ಲ ಸಾಬ್ ಈ ಬಾರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಬ್ದುಲ್ ಜಬ್ಬಾರ್ ಜೊತೆಗೆ ಸೈಯದ್ ಸೈಫುಲ್ಲಾ ಅವರ ಹೆಸರು ಸಹ ಬಲವಾಗಿ ಕೇಳಿ ಬಂದಿತ್ತು. ಹಿಂದೆ ತಮ್ಮ ಹೆಸರಿಗೆ ಕಾಂಗ್ರೆಸ್ ಬಿ ಫಾರಂ ಬಂದಿದ್ದರೂ ಅದನ್ನು ತಿದ್ದಿದ ಕಾರಣಕ್ಕೆ ಸ್ಪರ್ಧೆಯಿಂದ ಸೈಯದ್ ಸೈಫುಲ್ಲಾ ವಂಚಿತರಾಗಿದ್ರು ಎಂಬ ಮಾತುಗಳು ಕೇಳಿಬಂದಿತ್ತು.&lt;/p&gt;&lt;p&gt;79 ವರ್ಷದ ಸೈಯದ್ ಸೈಫುಲ್ಲ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಿಕಾರಿಯಾಗದೇ ಸೈಯದ್ ಸೈಫುಲ್ಲಾ ನಿಧನರಾಗಿದ್ದಾರೆ. ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರಾಗಿಯೂ ಸೈಫುಲ್ಲಾ ಸೇವೆ ಸಲ್ಲಿಸಿದ್ದರು.&lt;/p&gt;&lt;h2&gt;&lt;strong&gt;ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ನಾಯಕ&lt;/strong&gt;&lt;/h2&gt;&lt;p&gt;ಸೈಯದ್ ಸೈಫುಲ್ಲ ಅವರು ಮಿಲ್ಲತ್ ವಿದ್ಯಾಸಂಸ್ಥೆಗಳ ಸ್ಥಾಪಕರಾಗಿದ್ದು, ಶಿಕ್ಷಣ ಸುಧಾಕರಾಗಿಯೂ ಗುರುತಿಸಿಕೊಂಡಿದ್ದರು. ಕಳೆದ 45 ವರ್ಷಗಳಿಂದ ಶಿಕ್ಷಣ, ರಾಜಕೀಯ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೈಯದ್ ಸೈಫುಲ್ಲಾ ಸಕ್ರಿಯರಾಗಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Davanagere By-Election 2026: ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯವಲ್ಲ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡ!&lt;/strong&gt;&lt;/p&gt;&lt;p&gt;ಸೈಯದ್ ಸೈಫುಲ್ಲಾ ಅವರ ಪತ್ನಿ, ಐವರು ಹೆಣ್ಣು ಮಕ್ಕಳು, ಪುತ್ರ ಸೈಯದ್ ಖಾಲಿದ್ ಅಹ್ಮದ್ ಮತ್ತು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸೈಯದ್ ಸೈಫುಲ್ಲಾ ನಿವಾಸದತ್ತ ಜನರು ಆಗಮಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಾಂಗ್ರೆಸ್&zwnj; ವಿರುದ್ಧ ಮುಸ್ಲಿಂ ಸಂಘಟನೆಗಳ ಆಕ್ರೋಶ, ಜಂಟಿ ಹೇಳಿಕೆಯಲ್ಲಿ 'ಕೈ'ಗೆ ಎಚ್ಚರಿಕೆ, ಮುಂದಿನ ನಡೆ ಏನು?&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/popular-congress-leader-from-davanagere-constituency-syed-saifullah-saab-passes-away-mrq/articleshow-i9g6ev5"/>
        </item>
        <item>
            <title><![CDATA[ಮಹಿಳೆಯರ ಮೇಲೆ ಕಾಳಜಿ ಇದ್ದರೆ ಮಹಿಳಾ ಮೀಸಲಾತಿ ಜಾರಿ ಮಾಡಿ: ಸೌಮ್ಯ  ರೆಡ್ಡಿ ಆಗ್ರಹ]]></title>
            <link>https://kannada.asianetnews.com/karnataka-districts/sowmya-reddy-women-reservation-demand-33-percent-lok-sabha-gvd/articleshow-i96st5g</link>
            <guid isPermaLink="true">https://kannada.asianetnews.com/karnataka-districts/sowmya-reddy-women-reservation-demand-33-percent-lok-sabha-gvd/articleshow-i96st5g</guid>
            <pubDate>Sat, 18 Apr 2026 18:42:38 +0530</pubDate>
            <description><![CDATA[&lt;p&gt;ಮಹಿಳೆಯರ ಮೇಲೆ ನಿಮಗೆ ಕಾಳಜಿ ಇದ್ದರೆ 543 ಲೋಕಸಭೆ ಸ್ಥಾನಗಳಿಗೆ ಕೂಡಲೇ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿ ಮಾಡಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಆಗ್ರಹ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn8byrbhbteca5fjmmrn4xxn,imgname-sowmya-reddy-1775176212849.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18): &lt;/strong&gt;ಮಹಿಳಾ ಮೀಸಲಾತಿ ವಿಧೇಯಕ ಜಾರಿ ಮಾಡದೆ ಬಿಜೆಪಿ ಸರ್ಕಾರ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ಮಹಿಳೆಯರ ಮೇಲೆ ನಿಮಗೆ ಕಾಳಜಿ ಇದ್ದರೆ 543 ಲೋಕಸಭೆ ಸ್ಥಾನಗಳಿಗೆ ಕೂಡಲೇ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿ ಮಾಡಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಆಗ್ರಹ ಮಾಡಿದ್ದಾರೆ. ಮಹಿಳಾ ಮೀಸಲಾತಿ ವಿಳಂಬ ಹಾಗೂ ಕ್ಷೇತ್ರ ಪುನರ್&zwnj;ವಿಂಗಡಣೆ ಹೆಸರಿನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆರೋಪಿಸಿ ಕೆಪಿಸಿಸಿ ಎದುರು ಅವರು ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ಈ ವೇಳೆ ಮಾತನಾಡಿದ ಅವರು, 30 ತಿಂಗಳ ಹಿಂದೆ ಲೋಕಸಭೆ ಚುನಾವಣೆಗೆ ಆರು ತಿಂಗಳು ಇರುವಾಗ ಕೇಂದ್ರ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ಪಡೆದರು. ಅದನ್ನು ತಕ್ಷಣದಿಂದ ಜಾರಿಗೆ ಮಾಡದೆ ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಿಡಿ ಕಾರಿದರು. ಈಗ ರಾಜಕೀಯ ಸ್ವಾರ್ಥಕ್ಕಾಗಿ ಕ್ಷೇತ್ರ ಪುನರ್&zwnj;ವಿಂಗಡಣೆ ಜತೆಗೆ ಮಹಿಳಾ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಬಂದಿದ್ದೀರಿ. ಕಳೆದ ಮೂರು ವರ್ಷ ಏನು ನಿದ್ದೆ ಮಾಡುತ್ತಿದ್ದರೇ? ನಿಮಗೆ ಕಾಳಜಿ ಇದ್ದರೆ ಕೂಡಲೇ 543 ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ಜಾರಿ ಮಾಡಿ ಶೇ.33 ರಷ್ಟು ಮೀಸಲಾತಿ ಒದಗಿಸಿ ಎಂದು ಆಗ್ರಹ ಮಾಡಿದರು.&lt;/p&gt;&lt;h2&gt;&lt;strong&gt;ಕ್ಷೇತ್ರ ಪುನರ್&zwnj;ವಿಂಗಡಣೆ ಜತೆ ಸೇರಿಸಬೇಡಿ&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರ ಮಹಿಳೆಯರಿಗೆ ನೀಡಬೇಕಾದ ಸ್ಥಾನಮಾನ ಈ ವೇಳೆಗೆ ನೀಡಬೇಕಾಗಿತ್ತು. ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಚುನಾವಣೆಗಾಗಿ ಕೇವಲ ಮಾತಿನಲ್ಲಿ ಮಹಿಳಾ ಶಕ್ತಿ ಎಂದು ಹೇಳುತ್ತಿದ್ದಾರೆ ಎಂದು ಸೌಮ್ಯ ರೆಡ್ಡಿ ದೂರಿದರು.&lt;/p&gt;&lt;p&gt;ಕ್ಷೇತ್ರ ಪುನರ್&zwnj;ವಿಂಗಡಣೆ ಮಾಡಿದರೆ ಕರ್ನಾಟಕ ಹಾಗೂ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ಮೋಸ ಆಗಲಿದೆ. ನಮ್ಮ ಕ್ಷೇತ್ರಗಳ ಸಂಖ್ಯೆ ಕುಸಿದು ಪ್ರಾತಿನಿಧ್ಯ ಕಡಿಮೆಯಾಗಲಿದೆ. ಹೀಗಾಗಿ ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್&zwnj;ವಿಂಗಡಣೆ ಜತೆ ಸೇರಿಸಬೇಡಿ. ಬದಲಿಗೆ ಕೂಡಲೇ 543 ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ಜಾರಿ ಮಾಡಿ ಎಂದು ಆಗ್ರಹಿಸಿದರು. ಇದೇ ವೇಳೆ ಮಹಿಳಾ ಕಾರ್ಯಕರ್ತರ ಜತೆಗೆ ಭಿತ್ತಿಪತ್ರ ಹಿಡಿದು ಕರ್ನಾಟಕ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sowmya-reddy-women-reservation-demand-33-percent-lok-sabha-gvd/articleshow-i96st5g"/>
        </item>
        <item>
            <title><![CDATA[ಪಶ್ಚಿಮ ಘಟ್ಟಗಳು ಭವಿಷ್ಯದ ಪೀಳಿಗೆಯ ಜೀವನಾಡಿ: ಸಚಿವ ಈಶ್ವರ್ ಖಂಡ್ರೆ]]></title>
            <link>https://kannada.asianetnews.com/karnataka-districts/eshwar-khandre-western-ghats-conservation-csr-summit-bengaluru-gvd/articleshow-24sug1z</link>
            <guid isPermaLink="true">https://kannada.asianetnews.com/karnataka-districts/eshwar-khandre-western-ghats-conservation-csr-summit-bengaluru-gvd/articleshow-24sug1z</guid>
            <pubDate>Sat, 18 Apr 2026 18:25:05 +0530</pubDate>
            <description><![CDATA[&lt;p&gt;ಪಶ್ಚಿಮ ಘಟ್ಟಗಳನ್ನು ಉದ್ದಿಮೆದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು. ಈ ಸಮೃದ್ಧ ಕಾನನವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ghb15jyjv43m3gjt9zrgpmch,imgname-kpcc.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18): &lt;/strong&gt;ಪಶ್ಚಿಮ ಘಟ್ಟಗಳನ್ನು ಉದ್ದಿಮೆದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು. ಈ ಸಮೃದ್ಧ ಕಾನನವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು. ವಿಕಾಸಸೌಧದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್.ಕೆ.ಸಿಸಿಐ) ಆಯೋಜಿಸಿದ್ದ &lsquo;ಜಾಗತಿಕ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಶೃಂಗಸಭೆ 2026&rsquo; ಪೂರ್ವಭಾವಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.&lt;/p&gt;&lt;p&gt;ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಳದಲ್ಲಿ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪಾತ್ರ ಹಿರಿದಾಗಿದೆ. ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ. ಈ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ, ಹವಾಮಾನ ಚೇತರಿಕೆ ಮತ್ತು ಸಮಗ್ರ ಪ್ರಗತಿಯ ಕಾರ್ಯತಂತ್ರಕ್ಕೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯೇ ಚಾಲಕ ಶಕ್ತಿಯಾಗಿದೆ ಎಂದರು.&lt;/p&gt;&lt;h2&gt;&lt;strong&gt;50 ಕೋಟಿ ವೆಚ್ಚದಲ್ಲಿ ಜೈವಿಕ ಉದ್ಯಾನ&lt;/strong&gt;&lt;/h2&gt;&lt;p&gt;ಬೆಂಗಳೂರಿನಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಬಳಿಕ ಶತಮಾನದ ತರುವಾಯ 153 ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದಕ್ಕಾಗಿ 50 ಕೋಟಿ ರು. ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.&lt;/p&gt;&lt;p&gt;ಎಫ್&zwnj;ಕೆಸಿಸಿಐ ಸಿಎಸ್ಆರ್ ಮತ್ತು ಸುಸ್ಥಿರತೆ ಸಮಿತಿ ಅಧ್ಯಕ್ಷ ಕೆ. ಕೀರ್ತನ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಫ್&zwnj;ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಪೂರ್ಣಕಲಾ &ndash; ದಿ ಆರ್ಟ್ ವಿಲೇಜ್ ಸಂಸ್ಥಾಪಕ ನವ್ ಕಿಶ್ಲೇ, ಎಫ್&zwnj;ಕೆಸಿಸಿಐ ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್ ಸೇರಿ ಮತ್ತಿತರರು ಇದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/eshwar-khandre-western-ghats-conservation-csr-summit-bengaluru-gvd/articleshow-24sug1z"/>
        </item>
        <item>
            <title><![CDATA[ಕಾನೂನು ಸುವ್ಯವಸ್ಥೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲು: ಗೃಹ ಸಚಿವ ಪರಮೇಶ್ವರ್]]></title>
            <link>https://kannada.asianetnews.com/karnataka-districts/karnataka-police-top-ranking-law-order-dr-g-parameshwar-belagavi-gvd/articleshow-cfiqivq</link>
            <guid isPermaLink="true">https://kannada.asianetnews.com/karnataka-districts/karnataka-police-top-ranking-law-order-dr-g-parameshwar-belagavi-gvd/articleshow-cfiqivq</guid>
            <pubDate>Sat, 18 Apr 2026 18:11:41 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಪೊಲೀಸ್ ವಸತಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4xhfwvwx123bnzfr5ztfa93,imgname-----------------------2025-09-12t045335.769-1757633049467.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಏ.18): &lt;/strong&gt;ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದ ಸಿಟಿ ಲೇನ್ ಪೊಲೀಸ್ ಕ್ವಾರ್ಟರ್ಸ್ ಆವರಣದಲ್ಲಿ ಪೊಲೀಸ್ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತಿ-ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರ ಕುಟುಂಬಗಳಿಗೆ ಸುರಕ್ಷಿತ ಹಾಗೂ ಸುಸಜ್ಜಿತ ವಸತಿ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದರು.&lt;/p&gt;&lt;p&gt;ಬೆಳಗಾವಿ ಜಿಲ್ಲೆಯ ಗೋಕಾಕ, ಕಿತ್ತೂರು, ಕುಲಗೋಡ, ಸಂಕೇಶ್ವರ, ಚಿಕ್ಕೋಡಿ ಸೇರಿದಂತೆ ವಿವಿಧೆಡೆ ₹67.79 ಕೋಟಿ ವೆಚ್ಚದಲ್ಲಿ ಪೊಲೀಸ್ ಕಟ್ಟಡಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯುತ್ತಿವೆ. ಶಹಾಪುರದಲ್ಲಿ ₹3.92 ಕೋಟಿ ವೆಚ್ಚದಲ್ಲಿ ವಸತಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಪ್ರತಿ ಮನೆಗೆ ₹38 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಕಳೆದ ವರ್ಷ ₹2000 ಕೋಟಿ ಹಾಗೂ ಈ ವರ್ಷ ₹350 ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ಹೇಳಿದರು.&lt;/p&gt;&lt;p&gt;ಕಾನೂನು ರಕ್ಷಣೆ ಮಾಡುವ ದೃಷ್ಟಿಯಿಂದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಪೊಲೀಸ್ ಇಲಾಖೆಗೆ ಸೌಕರ್ಯ ಒದಗಿಸಲು ಸರ್ಕಾರ ಸ್ಪಂದಿಸಿದೆ. ಪೊಲೀಸ್ ಸಿಬ್ಬಂದಿಗೆ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಜನಸೇವೆಗೆ ತಕ್ಷಣ ಸ್ಪಂದಿಸಬೇಕು ಎಂದು ಕರೆ ನೀಡಿದರು. ದುಶ್ಚಟಗಳಿಂದ ಯುವ ಸಮುದಾಯವನ್ನು ರಕ್ಷಿಸಲು ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತು ಸೇವನೆ ಕುರಿತು ಪೊಲೀಸ್ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ತಂತ್ರಜ್ಞಾನ ಬಳಕೆಯಿಂದ ಅಂತಹ ಪ್ರಕರಣಗಳನ್ನು ಪತ್ತೆಮಾಡಿ ವಂಚಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.&lt;/p&gt;&lt;h2&gt;&lt;strong&gt;ಅಕ್ಕ ಕೆಫೆ ನಿರ್ಮಾಣ&lt;/strong&gt;&lt;/h2&gt;&lt;p&gt;ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್(ರಾಜು) ಸೇಠ್ ಮಾತನಾಡಿ, ಪೊಲೀಸ್ ಸಿಬ್ಬಂದಿ ನಿರಂತರ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹಬ್ಬಗಳು ಬಂದರೆ ರಜೆ ಸಿಗುವುದಿಲ್ಲ. ಸಮಾಜದ ರಕ್ಷಣೆಗೆ ಬಿಡುವಿಲ್ಲದೆ ಶ್ರಮಿಸುತ್ತಾರೆ. ಅವರ ಕುಟುಂಬಗಳ ಅನುಕೂಲಕ್ಕಾಗಿ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು. ಪ್ರಾಸ್ತಾವಿಕವಾಗಿ ನಗರ ಪೊಲೀಸ್ ಆಯುಕ್ತ ಭೊರಸೆ ಭೂಷಣ್ ಗುಲಾಬರಾವ್ ಮಾತನಾಡಿ, ಪೊಲೀಸ್ ಸಿಬ್ಬಂದಿಗಳ ಅನುಕೂಲಕ್ಕಾಗಿ ಮತ್ತು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬರುವವರಿಗೆ ಜಿಪಂನಿಂದ ಸಿಟಿ ಲೇನ್&zwnj;ನಲ್ಲಿ ಅಕ್ಕ ಕೆಫೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.&lt;/p&gt;&lt;p&gt;ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆ.ಎಂ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರ, ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ಚೇತನ್ ಸಿಂಗ್ ರಾಠೋಡ್&zwnj;, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಪಂ ಸಿಇಒ ರಾಹುಲ್ ಶಿಂಧೆ, ಡಿಸಿಪಿ ನಾರಾಯಣ ಭರಮನಿ ಸೇರಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.&lt;/p&gt;&lt;p&gt;ರಾಜ್ಯದಲ್ಲಿ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ಕಾಪಾಡುತ್ತಿದೆ. ಇತರೆ ರಾಜ್ಯಗಳಿಂದ ಬಂಡವಾಳ ಹೂಡಿಕೆದಾರರು ಬರುತ್ತಾರೆ. ಇದರಿಂದ ರಾಜ್ಯಕ್ಕೆ ಆದಾಯ ಮತ್ತು ಉದ್ಯೋಗವಕಾಶಗಳು ದೊರೆಯುತ್ತಿವೆ. ನಮ್ಮ ಸರ್ಕಾರ ಬಂದ ನಂತರ ಕೋಮು ಗಲಭೆಗಳಿಗೆ ಕಡಿವಾಣ ಹಾಕಿದ್ದು, ರಾಜ್ಯದಲ್ಲಿ ಕೋಮುಗಲಭೆ ನಡೆದಿಲ್ಲ. ನಡೆಯಲೂ ಬಿಡುವುದಿಲ್ಲ. ಯುವಕರಿಗೆ ಮಾದಕ ವಸ್ತುಗಳ ಹಂಚಿಕೆ ಹಾಗೂ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಕಂಡು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು.- ಜಿ.ಪರಮೇಶ್ವರ್, ಗೃಹ ಸಚಿವ&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/karnataka-police-top-ranking-law-order-dr-g-parameshwar-belagavi-gvd/articleshow-cfiqivq"/>
        </item>
        <item>
            <title><![CDATA[ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮತ್ತೆ  ನೇಪಥ್ಯಕ್ಕೆ, ಕನಸು ಹಳಿ ತಪ್ಪಿತೇ?]]></title>
            <link>https://kannada.asianetnews.com/karnataka-districts/kudachi-bagalkot-railway-line-project-faces-delays-again-only-41-km-completed-in-over-a-decade-gdp/articleshow-rni4k5p</link>
            <guid isPermaLink="true">https://kannada.asianetnews.com/karnataka-districts/kudachi-bagalkot-railway-line-project-faces-delays-again-only-41-km-completed-in-over-a-decade-gdp/articleshow-rni4k5p</guid>
            <pubDate>Sat, 18 Apr 2026 17:58:50 +0530</pubDate>
            <description><![CDATA[ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು, ನೇಪಥ್ಯಕ್ಕೆ ಸರಿಯುವ ಆತಂಕ ಎದುರಾಗಿದೆ. ಕೇಂದ್ರ ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಹಾಗೂ ಜನಬೆಂಬಲದ ಕೊರತೆಯ ನಡುವೆಯೂ, ಹೋರಾಟ ಸಮಿತಿಯು ಕಾಮಗಾರಿ ಪೂರ್ಣಗೊಳ್ಳುವವರೆಗೂ ನಿರಂತರ ಹೋರಾಟ ನಡೆಸಲು ಸಜ್ಜಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ctz40sep364mvzdbvagrrvx1,imgname-Bilaspur-Manali-Leh-Railway-Line-7.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಾನಂದ ಮಹಾಬಲಶೆಟ್ಟಿ&lt;/p&gt;&lt;p&gt;&lt;strong&gt;ರಬಕವಿ-ಬನಹಟ್ಟಿ: &lt;/strong&gt;ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗ (೧೪೨ ಕಿ.ಮೀ) ಕಾಮಗಾರಿ ೨೦೦೮ರಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರತಿಧ್ವನಿಸಿದ್ದರ ಪರಿಣಾಮ ೨೦೧೦ರಲ್ಲಿ ಪುನಃ ಕಾರ್ಯಾರಂಭಗೊಂಡ ಯೋಜನೆ ಆಮೆಗತಿಯಲ್ಲಿಯೇ ಮುನ್ನಡೆದು ಇದೀಗ ಮತ್ತೇ ನೇಪಥ್ಯಕ್ಕೆ ಸರಿಯುವಂತಾಗಿದೆ.&lt;/p&gt;&lt;p&gt;2012ರಲ್ಲಿ ಶುರುವಾದ ರೈಲು ಮಾರ್ಗ ಕಾರ್ಯ 142 ಕಿಮೀ ಪೈಕಿ ಈವರೆಗೆ ಕೇವಲ 41 ಕಿಮೀನಷ್ಟು ಕಾಮಗಾರಿ ನಡೆದಿದೆ. ಇನ್ನುಳಿದ 101 ಕಿಮೀನಷ್ಟು ಕಾರ್ಯದಲ್ಲಿ ಲೋಕಾಪುರದಿಂದ ಯಾದವಾಡವರೆಗೆ 22 ಕಿಮೀನಷ್ಟು ಕಾಮಗಾರಿ ಪ್ರಗತಿಯಲ್ಲಿದ್ದರೆ ಯಾದವಾಡದಿಂದ ಜಮಖಂಡಿವರೆಗಿನ 28 ಕಿ.ಮೀ.ನಷ್ಟು ಕಾರ್ಯ ಇನ್ನೂ ನಡೆದಿಲ್ಲ. ಕಳೆದ ತಿಂಗಳಷ್ಟೇ ಹೋರಾಟ ಸಮಿತಿಯಿಂದ ಕುಡಚಿಯಲ್ಲಿ ಸತ್ಯಾಗ್ರಹ ನಡೆಸಿದ್ದರ ಫಲವಾಗಿ ಕುಡಚಿಯಿಂದ-ಜಮಖಂಡಿವರೆಗಿನ ೫೧ ಕಿ.ಮೀ. ಕೆಲಸ ಪ್ರಾರಂಭಿಸುವುದಾಗಿ ಜನಪ್ರತಿನಿಧಿಗಳ ಆಶ್ವಾಸನೆಯಿಂದ ಸತ್ಯಾಗ್ರಹ ಕೈ ಬಿಡಲಾಗಿತ್ತು. ಆದರೆ ಆ ಕಾರ್ಯವೂ ಮಂದಗತಿಯಲ್ಲಿಯೇ ಸಾಗುತ್ತಿದೆ.&lt;/p&gt;&lt;h2&gt;₹೬.೫ ಕೋಟಿ ವೆಚ್ಚದಲ್ಲಿ ಟೆಂಡರ್&lt;/h2&gt;&lt;p&gt;೨ ವರ್ಷಗಳ ಹಿಂದೆಯೇ ಕುಡಚಿ-ಜಮಖಂಡಿವರೆಗಿನ ಭೂಸ್ವಾಧೀನ ಪ್ರದೇಶದ ಸ್ವಚ್ಛತೆ ಹಾಗೂ ಜಾಗ ಗುರುತು ಬಗ್ಗೆ ₹೬.೫ ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದ್ದರೂ ಗುತ್ತಿಗೆದಾರ ಮಾತ್ರ ಇನ್ನೂ ಕಾರ್ಯ ನಡೆಸಿಲ್ಲ.&lt;/p&gt;&lt;p&gt;ರಾಜ್ಯ ಸರ್ಕಾರದಿಂದ ನಡೆಯಬೇಕಿದ್ದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕೇಂದ್ರ ರೈಲ್ವೆ ಇಲಾಖೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿಯೋಜನೆ ಮಾಡದಿರುವುದೇ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗಿದೆ.&lt;/p&gt;&lt;h2&gt;ಸಮಿತಿ ಸುಸ್ತು, ಜನಬೆಂಬಲದ ಕೊರತೆ:&amp;nbsp;&lt;/h2&gt;&lt;p&gt;ರೈಲ್ವೆ ಹೋರಾಟ ಸಮಿತಿ ಕಳೆದೆರಡು ದಶಕಗಳಿಂದ ಹೋರಾಟ ನಡೆಸುತ್ತ ಇದೀಗ ಸುಸ್ತಿನ ಹಾದಿ ತುಳಿಯುತ್ತಿದೆ. ಆಯಾ ತಾಲೂಕಾಧ್ಯಕ್ಷರ ನೇತೃತ್ವದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಬಲ ಸೂಚಿಸಿದ ಕಾರಣ ಇಂದು ರೈಲು ಮಾರ್ಗ ಚುರುಕು ಪಡೆದುಕೊಂಡಿತ್ತು. ಕಳೆದೆರಡು ವರ್ಷಗಳಿಂದ ಹೋರಾಟದ ಬಿಸಿ ಕಡಿಮೆಯಾಗಿದ್ದಲ್ಲದೆ ಹೋರಾಟಗಾರರಿಗೆ ಜನತೆಯ ಬೆಂಬಲ ಕಡಿಮೆಯಾಗಿರುವುದು ಕಾಮಗಾರಿ ಹಿನ್ನೆಡೆಗೆ ಕಾರಣ ಎನ್ನಲಾಗುತ್ತಿದೆ.&lt;/p&gt;&lt;p&gt;ವಿನೂತನ ಹೋರಾಟಕ್ಕೆ ಅಣಿ : ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಪತ್ರಿಕೆಯೊಂದಿಗೆ ಮಾತನಾಡಿ, ಈಗಾಗಲೇ ಎಲ್ಲ ರೀತಿಯಲ್ಲಿ ಹೋರಾಟ ನಡೆಸಲಾಗಿದೆ. ಮತ್ತೊಂದು ಬಾರಿ ವಿನೂತನ ಶೈಲಿಯಲ್ಲಿ ಹೋರಾಟ ನಡೆಸುವ ಮೂಲಕ ಈ ಬಾರಿ ಕುಡಚಿ-ಬಾಗಲಕೋಟೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಹೋರಾಟ ನಿರಂತರವೆಂದು ತಿಳಿಸಿದರು.&lt;/p&gt;&lt;p&gt;ಹೋರಾಟ ಸಮಿತಿಗೆ ನಾಗರಿಕರ ಬೆಂಬಲ ಕಡಿಮೆಯಾಗುತ್ತಿರುವುದು ಬೇಸರ ತಂದಿದೆ. ಆದರೂ ರೈಲು ಮಾರ್ಗ ಶೀಘ್ರ ಮುಕ್ತಾಯಗೊಳ್ಳಬೇಕು. ಅಲ್ಲಿಯವರೆಗೂ ಹೋರಾಟ ಸಮಿತಿ ಹೋರಾಟದ ಕಾವು ಇರಲಿದೆ.&lt;/p&gt;&lt;p&gt;-ಕುತ್ಬುದ್ದೀನ್ ಖಾಜಿ, ಅಧ್ಯಕ್ಷರು, ರೈಲು ಹೋರಾಟ ಸಮಿತಿ ಬಾಗಲಕೋಟೆ&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kudachi-bagalkot-railway-line-project-faces-delays-again-only-41-km-completed-in-over-a-decade-gdp/articleshow-rni4k5p"/>
        </item>
        <item>
            <title><![CDATA[ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್; ಇತ್ತ ಮುಂಡಗೋಡ-ಪಣಜಿ ಬಸ್ ಸೇವೆ ಆರಂಭ]]></title>
            <link>https://kannada.asianetnews.com/travel/mangaluru-to-mantralaya-ksrtc-pallakki-non-ac-sleeper-mundagoda-to-panaji-bus-bus-launched-mrq/articleshow-2f01uzs</link>
            <guid isPermaLink="true">https://kannada.asianetnews.com/travel/mangaluru-to-mantralaya-ksrtc-pallakki-non-ac-sleeper-mundagoda-to-panaji-bus-bus-launched-mrq/articleshow-2f01uzs</guid>
            <pubDate>Sat, 18 Apr 2026 17:34:59 +0530</pubDate>
            <description><![CDATA[&lt;p&gt;KSRTC Pallakki AC Bus Mangaluru To Mantralaya ಭಕ್ತರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು-ಮಂತ್ರಾಲಯ ಮಾರ್ಗದ ನಡುವೆ ನೂತನ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಕಾರ್ಯಾಚರಣೆ ಆರಂಭವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpg76b2pcy7gyy7rahjwtct0,imgname-ksrtc-pallakki-ac-bus-1776513395798.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು - ಮಂತ್ರಾಲಯ ಮಾರ್ಗದ ನಡುವೆ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಮೇಲ್ದರ್ಜೆಗೇರಿಸಿ ನೂತನ ಪಲ್ಲಕ್ಕಿ ನಾನ್ ಎ.ಸಿ. ಸ್ಲೀಪರ್ ಸಾರಿಗೆಗೆ ಶುಕ್ರವಾರ ಮಂಗಳೂರು ಕೆ.ಎಸ್&zwnj;.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.&lt;/p&gt;&lt;p&gt;ಶಾಸಕ ವೇದವ್ಯಾಸ ಕಾಮತ್ ನೂತನ ಸಾರಿಗೆ ಬಸ್&zwnj;ಗೆ ಚಾಲನೆ ನೀಡಿದರು. ಕೆಎಸ್&zwnj;ಆರ್&zwnj;ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಸಂಚಾರ ನಿಯಂತ್ರಣಾಧಿಕಾರಿ ಕಮಲ್ ಕುಮಾರ್ ಮತ್ತಿತರರು ಇದ್ದರು.&lt;/p&gt;&lt;p&gt;&lt;/p&gt;&lt;h2&gt;&lt;strong&gt;ಮುಂಡಗೋಡ-ಪಣಜಿ ಬಸ್&zwnj;&lt;/strong&gt;&lt;/h2&gt;&lt;p&gt;ಮುಂಡಗೋಡ ಘಟಕದಿಂದ ಗೋವಾ ರಾಜಧಾನಿ ಪಣಜಿಗೆ ನೂತನ ಬಸ್ ಸೇವೆ ಆರಂಭಿಸಲಾಗಿದೆ. ಮುಂಡಗೋಡ-ಪಣಜಿ ಬಸ್&zwnj;ಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ ಚಾಲನೆ ನೀಡಿದರು. ಈ ಸಂದರ್ಭ ಗ್ಯಾರಂಟಿ ಯೋಜನೆಯ ಸದಸ್ಯ ಧರ್ಮರಾಜ ನಡಿಗೇರ, ಡಿಪೋ ಮ್ಯಾನೇಜರ್ ಕುರ್ತಕೋಟಿ, ಚಾಲಕರು, ನಿರ್ವಾಹಕರು, ಸಾರ್ವಜನಿಕರು ಉಪಸ್ಥಿತರಿದ್ದರು.&lt;/p&gt;&lt;p&gt;ಈ ನೂತನ ಬಸ್ ಬೆಳಗ್ಗೆ 8.15ಕ್ಕೆ ಮುಂಡಗೋಡನಿಂದ ಹೊರಟು ಬಂಕಾಪುರ, ಹಾನಗಲ್, ಶಿರಸಿ, ಅಂಕೋಲಾ, ಕಾರವಾರ ಮಾರ್ಗವಾಗಿ ಪಣಜಿ ತಲುಪಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; NWKRTC: ಹುಬ್ಬಳ್ಳಿ-ಗದಗ ನಡುವೆ ತಡೆ ರಹಿತ ರಾಜಹಂಸ ಬಸ್ ಸಂಚಾರ; ವೇಳಾ ಪಟ್ಟಿ ಹೀಗಿದೆ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಾವೇರಿ ಪ್ರಯಾಣಿಕರಿಗೆ ಸಿಹಿಸುದ್ದಿ: ಬೆಂಗಳೂರು, ಪಣಜಿ, ಹುಬ್ಬಳಿಗೆ ಹೊಸ ಬಸ್ ಸಂಚಾರ ಆರಂ&lt;/strong&gt;&lt;strong&gt;ಭ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/travel/mangaluru-to-mantralaya-ksrtc-pallakki-non-ac-sleeper-mundagoda-to-panaji-bus-bus-launched-mrq/articleshow-2f01uzs"/>
        </item>
        <item>
            <title><![CDATA[ಪತಿ ಶವಕ್ಕಾಗಿ ಮಹಿಳೆಯರ ಕಿತ್ತಾಟ; ಅನಾಥವಾಯ್ತು ಇಬ್ಬರು ಹೆಂಡ್ತಿಯರ ಮುದ್ದಿನ ಗಂಡನ ಹೆಣ]]></title>
            <link>https://kannada.asianetnews.com/gallery/relationship/two-wives-kamalamma-pratibha-fight-over-husband-hanumanth-dead-body-a-two-day-big-drama-in-police-station-shivamogga-mrq-aw2hhf1</link>
            <guid isPermaLink="true">https://kannada.asianetnews.com/gallery/relationship/two-wives-kamalamma-pratibha-fight-over-husband-hanumanth-dead-body-a-two-day-big-drama-in-police-station-shivamogga-mrq-aw2hhf1</guid>
            <pubDate>Sat, 18 Apr 2026 17:20:52 +0530</pubDate>
            <description><![CDATA[ಶಿವಮೊಗ್ಗದಲ್ಲಿ, ಹನುಮಂತಪ್ಪ ಎಂಬವರ ಮರಣದ ನಂತರ ಅವರ ಶವಕ್ಕಾಗಿ ಇಬ್ಬರು ಪತ್ನಿಯರ ನಡುವೆ ಗಲಾಟೆ ನಡೆದಿದೆ. ಈ ಜಗಳ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಕೊನೆಗೆ ಪೊಲೀಸರು ಮತ್ತು ಗ್ರಾಮಸ್ಥರ ಸಂಧಾನದ ಮೂಲಕ ಅಂತ್ಯಸಂಸ್ಕಾರವನ್ನು ಮೃತರ ಹುಟ್ಟೂರಿನಲ್ಲಿ ನಡೆಸಲು ಒಪ್ಪಿಗೆಯಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kpg6akdw43g6cey8x54cnpv4,imgname-shivamogga-husband-wife-death--3--1776512486844.jpg" type="image/jpeg" height="390" width="690"/>
            <content:encoded><![CDATA[ಶಿವಮೊಗ್ಗದಲ್ಲಿ, ಹನುಮಂತಪ್ಪ ಎಂಬವರ ಮರಣದ ನಂತರ ಅವರ ಶವಕ್ಕಾಗಿ ಇಬ್ಬರು ಪತ್ನಿಯರ ನಡುವೆ ಗಲಾಟೆ ನಡೆದಿದೆ. ಈ ಜಗಳ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಕೊನೆಗೆ ಪೊಲೀಸರು ಮತ್ತು ಗ್ರಾಮಸ್ಥರ ಸಂಧಾನದ ಮೂಲಕ ಅಂತ್ಯಸಂಸ್ಕಾರವನ್ನು ಮೃತರ ಹುಟ್ಟೂರಿನಲ್ಲಿ ನಡೆಸಲು ಒಪ್ಪಿಗೆಯಾಯಿತು.&lt;img&gt;&lt;p&gt;ಶಿವಮೊಗ್ಗ ಜಿಲ್ಲೆಯಲ್ಲಿ ಮಾನವೀಯ ಸಂಬಂಧಗಳ ನಡುವಿನ ವಿಚಿತ್ರ ಮತ್ತು ಸಂಕಟದ ಘಟನೆಯೊಂದು ನಡೆದಿದೆ. ಮೆಡಿಕಲ್ ರಿಪ್ರೆಸೆಂಟಿಟಿವ್ ಆಗಿ ಕೆಲಸ ಮಾಡುತ್ತಿದ್ದ 52 ವರ್ಷದ ಹನುಮಂತಪ್ಪ ಎಂಬವರು ಅನಾರೋಗ್ಯದಿಂದ ನಿಧನರಾದ ಬೆನ್ನಲ್ಲೇ, ಅವರ ಶವಕ್ಕಾಗಿ ಇಬ್ಬರು ಪತ್ನಿಯರ ನಡುವೆ ಗಲಾಟೆ ನಡೆದಿದೆ.&lt;/p&gt;&lt;img&gt;&lt;p&gt;ಮೃತ ಹನುಮಂತಪ್ಪ ಅವರಿಗೆ ಕಮಲಮ್ಮ ಎಂಬ ಮೊದಲ ಪತ್ನಿಯಾಗಿದ್ದು, ಪ್ರತಿಭಾ ಎಂಬ ಎರಡನೇ ಪತ್ನಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬ್ರೈನ್ ಸ್ಟ್ರೋಕ್ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಹನುಮಂತಪ್ಪ , ಎರಡನೇ ಪತ್ನಿ ಪ್ರತಿಭಾ ಅವರೊಂದಿಗೆ ವಾಸವಿದ್ದರು.&lt;/p&gt;&lt;img&gt;&lt;p&gt;ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ ನಂತರ, ಶವಕ್ಕಾಗಿ ಇಬ್ಬರು ಪತ್ನಿಯರ ನಡುವೆ ಜಗಳ ಆರಂಭವಾಯಿತು. &quot;ನಾನೇ ಕಾನೂನುಬದ್ಧ ಪತ್ನಿ, ಶವ ನನ್ನ ವಶಕ್ಕೆ ಬೇಕು&quot; ಎಂದು ಕಮಲಮ್ಮ ಪಟ್ಟು ಹಿಡಿದರೆ, ಅಂತಿಮ ದಿನಗಳಲ್ಲಿ ಹನುಮಂತಪ್ಪ ತಮ್ಮೊಂದಿಗಿದ್ದರು ಎಂದು ಪ್ರತಿಭಾ ವಾದಿಸಿದ್ದರು.&lt;/p&gt;&lt;img&gt;&lt;p&gt;ಈ ಕಿತ್ತಾಟ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಗ್ರಾಮಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ದೊಡ್ಡ ಮಟ್ಟದ ವಾಗ್ವಾದಗಳೇ ನಡೆದವು. ಶವಸಂಸ್ಕಾರ ಎಲ್ಲಿ ನಡೆಯಬೇಕು ಎಂಬ ಬಗ್ಗೆಯೂ ಗೊಂದಲ ಏರ್ಪಟ್ಟಿತ್ತು. ಒಬ್ಬರಿಗೆ ಪುರಲೆ ಗ್ರಾಮದಲ್ಲಿ ಅಂತ್ಯಸಂಸ್ಕಾರವಾಗಬೇಕೆಂಬ ಆಸೆ ಇತ್ತು, ಇನ್ನೊಬ್ಬರಿಗೆ ರೋಟರಿ ಚಿತಾಗಾರದಲ್ಲಿ ಸಂಸ್ಕಾರ ಮಾಡುವ ಇಚ್ಛೆ ಇತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Shivamogga: ನಾನ್&zwnj;ವೆಜ್ ತಿನ್ನೋವಾಗ ಗಂಟಲಿನಲ್ಲಿ ಮೂಳೆ ಸಿಲುಕಿ ಪ್ರಾಣಬಿಟ್ಟ 21 ವರ್ಷದ ಯುವಕ&lt;/strong&gt;&lt;/p&gt;&lt;img&gt;&lt;p&gt;ಪೊಲೀಸರು ಮತ್ತು ಗ್ರಾಮಸ್ಥರ ಸುದೀರ್ಘ ಸಂಧಾನದ ನಂತರ, ಕೊನೆಗೂ ಇಬ್ಬರು ಪತ್ನಿಯರು ಒಮ್ಮತಕ್ಕೆ ಬಂದರು. ಇಬ್ಬರೂ ಪತ್ನಿಯರು ಮೃತದೇಹಕ್ಕೆ ಪೂಜೆ ಸಲ್ಲಿಸಿದ ನಂತರ, ಹನುಮಂತಪ್ಪ ಅವರ ಹುಟ್ಟೂರಾದ ಬೇಡರ ಹೊಸಹಳ್ಳಿ ಗ್ರಾಮದಲ್ಲಿಯೇ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಯಿತು. ಈ ಮೂಲಕ ಎರಡು ದಿನಗಳಿಂದ ಶವಾಗಾರದಲ್ಲಿ ಅನಾಥವಾಗಿದ್ದ ಶವಕ್ಕೆ ಮುಕ್ತಿ ಸಿಕ್ಕಂತಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಂಡ ಸತ್ತ ಮೇಲೆ ಮಹಿಳೆಯರು ಹೂ ಮುಡಿಬಾರದಾ? ಏನಿದು ಆಚರಣೆ? ಈ ನಂಬಿಕೆ ಎಷ್ಟು ಸರಿ?&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/relationship/two-wives-kamalamma-pratibha-fight-over-husband-hanumanth-dead-body-a-two-day-big-drama-in-police-station-shivamogga-mrq-aw2hhf1"/>
        </item>
        <item>
            <title><![CDATA[ಕೇರಳ ಬಾಲಕಿ ಆತ್ಮ*ಹತ್ಯೆ ಹಿನ್ನೆಲೆ: ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್, ಕಠಿಣ ಪೊಲೀಸ್ ಬಂದೋಬಸ್ತ್!]]></title>
            <link>https://kannada.asianetnews.com/karnataka-districts/chikkamagaluru-tourist-alert-police-high-alert-safety-measures-gvd/articleshow-gmqfwrv</link>
            <guid isPermaLink="true">https://kannada.asianetnews.com/karnataka-districts/chikkamagaluru-tourist-alert-police-high-alert-safety-measures-gvd/articleshow-gmqfwrv</guid>
            <pubDate>Sat, 18 Apr 2026 17:20:06 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇರಳ ಮೂಲದ ಬಾಲಕಿಯ ಅಸಹಜ ಸಾವಿನ ಘಟನೆ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯಲ್ಲಿ ವಿಶೇಷವಾಗಿ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpg6t96qygv4c90wxqzmbkf9,imgname-bkbk-1776513000663.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಏ.18): &lt;/strong&gt;ಜಿಲ್ಲೆಯಲ್ಲಿ ಕೇರಳ ಮೂಲದ ಬಾಲಕಿಯ ಅಸಹಜ ಸಾವಿನ ಘಟನೆ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯಲ್ಲಿ ವಿಶೇಷವಾಗಿ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.&lt;/p&gt;&lt;p&gt;&lt;strong&gt;ಪ್ರವಾಸಿತಾಣದಲ್ಲಿ ಪೊಲೀಸರ ನಿಗಾ: &lt;/strong&gt;ಬೇಸಿಗೆ ರಜೆ , ವೀಕೆಂಡ್ ಹಿನ್ನೆಲೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಮಾಣಿಕ್ಯಾಧಾರ ಪ್ರದೇಶಗಳಲ್ಲಿ ಭಾರೀ ಜನಸಾಗರ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಭದ್ರತಾ ಕ್ರಮಗಳನ್ನು ಬಲಪಡಿಸಲಾಗಿದೆ. ಚಂದ್ರದ್ರೋಣ ಪರ್ವತಶ್ರೇಣಿ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಪ್ರದೇಶಗಳಲ್ಲಿ ವಿಶೇಷ ನಿಗಾವಹಿಸಲಾಗಿದೆ. ಕಂದಕಗಳು, ಜಲಪಾತಗಳು ಮತ್ತು ಎತ್ತರದ ಪರ್ವತ ಪ್ರದೇಶಗಳಲ್ಲಿ ಪ್ರವಾಸಿಗರು ನಿರ್ಲಕ್ಷ್ಯ ತೋರಬಾರದು ಎಂಬ ಉದ್ದೇಶದಿಂದ ಪೊಲೀಸರ ತಂಡಗಳು ಹದ್ದಿನ ಕಣ್ಣಿನ ನಿಗಾವಹಿಸುತ್ತಿವೆ.&lt;/p&gt;&lt;h2&gt;&lt;strong&gt;ಪಿಎಸ್ ಐ ನೇತೃತ್ವದಲ್ಲಿ ಭದ್ರತೆ&lt;/strong&gt;&lt;/h2&gt;&lt;p&gt;ದತ್ತಪೀಠ&ndash;ಮಾಣಿಕ್ಯಾಧಾರ ತಪ್ಪಲು ಪ್ರದೇಶದಲ್ಲಿ ಪಿ.ಎಸ್.ಐ. ನೇತೃತ್ವದಲ್ಲಿ ನಾಲ್ವರು ಪೊಲೀಸರನ್ನು ಶಾಶ್ವತವಾಗಿ ನಿಯೋಜಿಸಲಾಗಿದೆ. ಜೊತೆಗೆ ಚಿಕ್ಕಮಗಳೂರು ವಿಭಾಗದ 15 ಪೊಲೀಸ್ ಠಾಣೆಗಳ ಪಿ.ಎಸ್.ಐ.ಗಳು ಪರ್ಯಾಯವಾಗಿ ಪ್ರತಿದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಠಾಣೆಯಿಂದ ಕೆಲ ಸಿಬ್ಬಂದಿಯನ್ನು ವಾರಪೂರ್ತಿ ಅಲ್ಲಿಯೇ ಮೊಕ್ಕಾಂ ಹಾಕುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ 24 ಗಂಟೆಗಳ ಭದ್ರತೆ ಒದಗಿಸಲಾಗುತ್ತಿದೆ.&lt;/p&gt;&lt;p&gt;ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿರಂತರ ಗಸ್ತು ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವ ಪ್ರವಾಸಿಗರಿಗೆ ಸ್ಥಳದಲ್ಲೇ ಎಚ್ಚರಿಕೆ ನೀಡಲಾಗುತ್ತಿದೆ. ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು, ಅತಿರೇಕದ ಸಾಹಸ ಚಟುವಟಿಕೆಗಳಲ್ಲಿ ತೊಡಗುವುದು ಮುಂತಾದ ವರ್ತನೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.ಸಾರ್ವಜನಿಕರು ಹಾಗೂ ಪ್ರವಾಸಿಗರು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಿ, ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chikkamagaluru-tourist-alert-police-high-alert-safety-measures-gvd/articleshow-gmqfwrv"/>
        </item>
        <item>
            <title><![CDATA[ವಿಶ್ವಮಾನವ ಎಕ್ಸ್ ಪ್ರೆಸ್ ಗೆ ಎಲ್ಎಚ್ ಬಿ ಬೋಗಿಗಳ ಅಳವಡಿಕೆ, ಪ್ರಯಾಣಿಕರ ಹೊಸ ಪಯಣದ ರಹಸ್ಯ!]]></title>
            <link>https://kannada.asianetnews.com/karnataka-districts/indian-railways-mysuru-belagavi-vishwamanava-express-upgraded-with-modern-lhb-coaches-from-april-26-gdp/articleshow-hk8bisv</link>
            <guid isPermaLink="true">https://kannada.asianetnews.com/karnataka-districts/indian-railways-mysuru-belagavi-vishwamanava-express-upgraded-with-modern-lhb-coaches-from-april-26-gdp/articleshow-hk8bisv</guid>
            <pubDate>Sat, 18 Apr 2026 17:18:38 +0530</pubDate>
            <description><![CDATA[ಮೈಸೂರು-ಬೆಳಗಾವಿ ವಿಶ್ವಮಾನವ ಸೂಪರ್ ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲಿನ ಹಳೆಯ ಐಸಿಎಫ್ ಬೋಗಿಗಳನ್ನು ಆಧುನಿಕ, ಹೆಚ್ಚು ಸುರಕ್ಷಿತವಾದ ಎಲ್ಎಚ್&zwnj;ಬಿ ಬೋಗಿಗಳಾಗಿ ಬದಲಾಯಿಸಲಾಗುತ್ತಿದೆ. ಏಪ್ರಿಲ್ 26 ರಿಂದ ಜಾರಿಗೆ ಬರುವ ಈ ಹೊಸ ವ್ಯವಸ್ಥೆಯು 20 ಬೋಗಿಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುಧಾರಿತ ಪ್ರಯಾಣದ ಅನುಭವವನ್ನು ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kg1azs2nd8c37cnyeb1p0x7y,imgname-indian-railways--3--1769571607637.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ದಕ್ಷಿಣ ಪಶ್ಚಿಮ ರೈಲ್ವೆ ವತಿಯಿಂದ ಮೈಸೂರು&ndash;ಬೆಳಗಾವಿ&ndash;ಮೈಸೂರು ವಿಶ್ವಮಾನವ ಸೂಪರ್ ಫಾಸ್ಟ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ 20676/20675) ರೈಲಿನಲ್ಲಿ ಮಹತ್ವದ ಪರಿಷ್ಕರಣೆ ಕೈಗೊಳ್ಳಲಾಗಿದೆ. ಪ್ರಸ್ತುತ ಬಳಸಲಾಗುತ್ತಿದ್ದ ಹಳೆಯ ಐಸಿಎಫ್ (ICF) ಬೋಗಿಗಳನ್ನು ಹಂತ ಹಂತವಾಗಿ ಆಧುನಿಕ ಎಲ್ಎಚ್&zwnj;ಬಿ (LHB) ಬೋಗಿಗಳಾಗಿ ಬದಲಾಯಿಸುವ ಕಾರ್ಯ ಪ್ರಾರಂಭವಾಗಿದ್ದು, ಈ ಹೊಸ ವ್ಯವಸ್ಥೆ ಮೈಸೂರಿನಿಂದ ಏಪ್ರಿಲ್ 26ರಿಂದ ಹಾಗೂ ಬೆಳಗಾವಿಯಿಂದ ಏಪ್ರಿಲ್ 27ರಿಂದ ಜಾರಿಗೆ ಬರಲಿದೆ.&lt;/p&gt;&lt;h2&gt;21 ಬೋಗಿಗಳನ್ನು ಹೊಂದಿದ್ದ ಈ ರೈಲು&lt;/h2&gt;&lt;p&gt;ಇದುವರೆಗೆ 21 ಬೋಗಿಗಳನ್ನು ಹೊಂದಿದ್ದ ಈ ರೈಲು, ಇನ್ನು ಮುಂದೆ ಒಟ್ಟು 20 ಎಲ್ಎಚ್&zwnj;ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಹೊಸ ವ್ಯವಸ್ಥೆಯಡಿ ರೈಲಿನಲ್ಲಿ 1 ಎಸಿ ಚೇರ್ ಕಾರ್, 12 ಸಾಮಾನ್ಯ ದರ್ಜೆಯ ಬೋಗಿಗಳು, 5 ದ್ವಿತೀಯ ದರ್ಜೆ ಸಿಟಿಂಗ್ ಚೇರ್ ಕಾರ್ ಬೋಗಿಗಳು, 1 ಜನರೇಟರ್ ಕಾರ್ ಹಾಗೂ ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಹೊಂದಿರುವ 1 ಬ್ರೇಕ್ ವ್ಯಾನ್ ಒಳಗೊಂಡಿರಲಿದೆ.&lt;/p&gt;&lt;p&gt;ಎಲ್ಎಚ್&zwnj;ಬಿ ಬೋಗಿಗಳು ಐಸಿಎಫ್ ಬೋಗಿಗಳಿಗಿಂತ ಹೆಚ್ಚಿನ ಸುರಕ್ಷತೆ ಮತ್ತು ಆಧುನಿಕ ತಂತ್ರಜ್ಞಾನ ಹೊಂದಿದ್ದು, ವೇಗ ಮತ್ತು ಸ್ಥಿರತೆಯಲ್ಲಿ ಉತ್ತಮ ಅನುಭವವನ್ನು ನೀಡುತ್ತವೆ. ವಿಶೇಷವಾಗಿ ಅಪಘಾತಗಳ ಸಂದರ್ಭಗಳಲ್ಲಿ ಹಾನಿ ಕಡಿಮೆ ಆಗುವಂತೆ ವಿನ್ಯಾಸಗೊಳಿಸಿರುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ. ಜೊತೆಗೆ ಪ್ರಯಾಣಿಕರಿಗೆ ಆರಾಮದಾಯಕ ಆಸನ ವ್ಯವಸ್ಥೆ, ಸುಧಾರಿತ ಬ್ರೇಕಿಂಗ್ ಸಿಸ್ಟಂ ಹಾಗೂ ಶಬ್ದ ಮತ್ತು ಕಂಪನ ಕಡಿಮೆ ಇರುವ ಪ್ರಯಾಣ ಅನುಭವವನ್ನು ಈ ಬೋಗಿಗಳು ಒದಗಿಸುತ್ತವೆ.&lt;/p&gt;&lt;h2&gt;ಮೈಸೂರು ಮತ್ತು ಬೆಳಗಾವಿ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ&lt;/h2&gt;&lt;p&gt;ಈ ಬದಲಾವಣೆಯಿಂದ ಮೈಸೂರು ಮತ್ತು ಬೆಳಗಾವಿ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ, ಸುಲಭ ಮತ್ತು ಆರಾಮದಾಯಕ ಪ್ರಯಾಣ ಸಾಧ್ಯವಾಗಲಿದ್ದು, ದಕ್ಷಿಣ ಪಶ್ಚಿಮ ರೈಲ್ವೆಯು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಕೈಗೊಂಡಿರುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿ ಇದು ಪರಿಗಣಿಸಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/indian-railways-mysuru-belagavi-vishwamanava-express-upgraded-with-modern-lhb-coaches-from-april-26-gdp/articleshow-hk8bisv"/>
        </item>
        <item>
            <title><![CDATA[ಬೆಂಗಳೂರು: ಲಿವಿಂಗ್ ಇನ್‌ ಟುಗೆದರ್‌, ಮೋಜಿನ ಜೀವನ, ಬೀಗ ಹಾಕಿದ ಮನೆಯೇ ಟಾರ್ಗೆಟ್‌ ಮಂಡ್ಯ ರ್‍ಯಾಪಿಡೋ ಚಾಲಕನ ಕಳ್ಳತನ!]]></title>
            <link>https://kannada.asianetnews.com/karnataka-districts/bengaluru-rapido-driver-arrested-for-daytime-burglaries-targeting-locked-homes-gdp/articleshow-ge2l5ph</link>
            <guid isPermaLink="true">https://kannada.asianetnews.com/karnataka-districts/bengaluru-rapido-driver-arrested-for-daytime-burglaries-targeting-locked-homes-gdp/articleshow-ge2l5ph</guid>
            <pubDate>Sat, 18 Apr 2026 16:51:30 +0530</pubDate>
            <description><![CDATA[ಬೆಂಗಳೂರಿನಲ್ಲಿ ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ರ್&zwj;ಯಾಪಿಡೋ ಚಾಲಕ ನಾಗರಾಜ್&zwnj;ನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ಪ್ರೇಯಸಿಯೊಂದಿಗಿನ ಮೋಜಿನ ಜೀವನಕ್ಕಾಗಿ ಈ ಕೃತ್ಯ ಎಸಗುತ್ತಿದ್ದು, ಆತನಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01g92a9zw2r95j8wpt4ad9pfts,imgname-new-thumbnail-2022-new.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದಲ್ಲಿ ಹಗಲು ಹೊತ್ತಿನಲ್ಲೇ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ರ್&zwj;ಯಾಪಿಡೋ ಕ್ಯಾಬ್ ಚಾಲಕನನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ರಾಮಮೂರ್ತಿ ನಗರದ ನಿವಾಸಿ ನಾಗರಾಜ್ ಎಂದು ಗುರುತಿಸಲಾಗಿದ್ದು, ಆತನಿಂದ ಸುಮಾರು 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಒಂದು ಬೈಕ್ ಸೇರಿದಂತೆ ಒಟ್ಟು 35 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;p&gt;ಕೆಲ ದಿನಗಳ ಹಿಂದೆ ಜಯನಗರದ ಟಿ ಬ್ಲಾಕ್ ಪ್ರದೇಶದಲ್ಲಿ ನಡೆದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್&zwnj;ಪೆಕ್ಟರ್ ವಿಶ್ವನಾಥ್ ನೇತೃತ್ವದ ಪೊಲೀಸ್ ತಂಡ ತಾಂತ್ರಿಕ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ.&lt;/p&gt;&lt;h2&gt;ಮಂಡ್ಯ ಮೂಲದವನಿಗೆ ಕ್ರಿಮಿನಲ್ ಹಿನ್ನೆಲೆ&lt;/h2&gt;&lt;p&gt;ಮಂಡ್ಯ ಜಿಲ್ಲೆಯ ಹೊಸಹಳ್ಳಿ ಗ್ರಾಮದ ಮೂಲದ ನಾಗರಾಜ್&zwnj;ಗೆ ಕ್ರಿಮಿನಲ್ ಹಿನ್ನೆಲೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ರ್&zwj;ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆತ, ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಕಳ್ಳತನದ ದಾರಿಗೆ ತಿರುಗಿದ್ದಾನೆ. ರಾಮಮೂರ್ತಿ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ.&lt;/p&gt;&lt;p&gt;ನಾಗರಾಜ್&zwnj; ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡುವುದರಲ್ಲಿ ಪರಿಣತನಾಗಿದ್ದನು. ಮನೆಯವರು ಹೊರಗೆ ತೆರಳುವ ವೇಳೆ ಗೇಟ್ ಮತ್ತು ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಕೊಂಡಿರುವ ಮನೆಗಳನ್ನು ಗುರುತಿಸಿ, ಅವುಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಈ ರೀತಿಯಾಗಿ ಮನೆಗಳಲ್ಲಿ ಯಾರೂ ಇಲ್ಲದ ಸಮಯವನ್ನು ಸದುಪಯೋಗಪಡಿಸಿಕೊಂಡು ಆತನಿಂದ ಹಲವಾರು ಕೃತ್ಯಗಳು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.&lt;/p&gt;&lt;p&gt;ಕಳೆದ ತಿಂಗಳು ಜಯನಗರದ 4ನೇ ಹಂತದಲ್ಲಿ ವಾಸವಾಗಿರುವ ಕುಟುಂಬವೊಂದು ಮನೆ ಬಾಗಿಲಿಗೆ ಚೀಲ ಹಾಕಿ, ಗೇಟ್ ಲಾಕ್ ಮಾಡಿಕೊಂಡು ದಿನಸಿ ಖರೀದಿಗೆ ತೆರಳಿತ್ತು. ಈ ವೇಳೆ ಮನೆಯೊಳಗೆ ನುಗ್ಗಿದ ನಾಗರಾಜ್ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ನಂತರ ಮನೆಮಂದಿ ಮರಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;ಲಿವಿಂಗ್ ಇನ್&zwnj; ಟುಗೆದರ್&zwnj;, ಮೋಜಿನ ಜೀವನಕ್ಕೆ ಕಳ್ಳತನ!&lt;/h2&gt;&lt;p&gt;ಇನ್ನು ವೈಯಕ್ತಿಕ ಜೀವನದಲ್ಲಿ, ನಾಗರಾಜ್ ತನ್ನ ಪ್ರೇಯಸಿಯೊಂದಿಗೆ ಸಹಜೀವನ (ಲಿವಿಂಗ್ ಇನ್&zwnj; ಟುಗೆದರ್&zwnj;) ನಡೆಸುತ್ತಿದ್ದನು. ಕಳ್ಳತನದ ಮೂಲಕ ಗಳಿಸಿದ ಹಣವನ್ನು ವೈಭವಯುತ ಜೀವನಕ್ಕೆ ಹಾಗೂ ಮೋಜು-ಮಸ್ತಿಗೆ ಬಳಸುತ್ತಿದ್ದನೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ನಗರದಲ್ಲಿ ಹೆಚ್ಚುತ್ತಿರುವ ಮನೆಕಳ್ಳತನ ಪ್ರಕರಣಗಳ ನಡುವೆಯೇ ತಿಲಕನಗರ ಪೊಲೀಸರ ಈ ಕಾರ್ಯಾಚರಣೆ ಪ್ರಮುಖವಾಗಿದ್ದು, ಆರೋಪಿಯನ್ನು ಬಂಧಿಸುವ ಮೂಲಕ ಇನ್ನಷ್ಟು ಕೃತ್ಯಗಳನ್ನು ತಡೆಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-rapido-driver-arrested-for-daytime-burglaries-targeting-locked-homes-gdp/articleshow-ge2l5ph"/>
        </item>
        <item>
            <title><![CDATA[Shivamogga: ನಾನ್‌ವೆಜ್ ತಿನ್ನೋವಾಗ ಗಂಟಲಿನಲ್ಲಿ ಮೂಳೆ ಸಿಲುಕಿ ಪ್ರಾಣಬಿಟ್ಟ 21 ವರ್ಷದ ಯುವಕ]]></title>
            <link>https://kannada.asianetnews.com/gallery/karnataka-districts/shivamogga-21-year-old-sachin-dies-after-chicken-bone-gets-stuck-in-throat-while-eating-non-veg-mrq-5hpdnad</link>
            <guid isPermaLink="true">https://kannada.asianetnews.com/gallery/karnataka-districts/shivamogga-21-year-old-sachin-dies-after-chicken-bone-gets-stuck-in-throat-while-eating-non-veg-mrq-5hpdnad</guid>
            <pubDate>Sat, 18 Apr 2026 16:30:33 +0530</pubDate>
            <description><![CDATA[ಶಿವಮೊಗ್ಗ ಜಿಲ್ಲೆಯ ಚೆನ್ನಹಳ್ಳಿ ಗ್ರಾಮದಲ್ಲಿ, ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ 21 ವರ್ಷದ ಸಚಿನ್ ಎಂಬ ಯುವಕ ಮೃತಪಟ್ಟಿದ್ದಾನೆ. ನಾನ್&zwnj;ವೆಜ್ ತಿನ್ನುವಾಗ ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpg3mrx4nsfg5sn1m7jr9he4,imgname-shivamogga-death-1776509674404.jpg" type="image/jpeg" height="390" width="690"/>
            <content:encoded><![CDATA[ಶಿವಮೊಗ್ಗ ಜಿಲ್ಲೆಯ ಚೆನ್ನಹಳ್ಳಿ ಗ್ರಾಮದಲ್ಲಿ, ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ 21 ವರ್ಷದ ಸಚಿನ್ ಎಂಬ ಯುವಕ ಮೃತಪಟ್ಟಿದ್ದಾನೆ. ನಾನ್&zwnj;ವೆಜ್ ತಿನ್ನುವಾಗ ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;img&gt;&lt;p&gt;21 ವರ್ಷದ ಯುವಕ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಸಮೀಪದ ಚೆನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಸಚಿನ್ ಎಂದು ಗುರುತಿಸಲಾಗಿದೆ. ನಾನ್&zwnj;ವೆಜ್ ತಿನ್ನುವಾಗ ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿ ಯುವಕನ ಜೀವ ಹೋಗಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಏಪ್ರಿಲ್ 17ರಂದು ಚೆನ್ನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ರಾತ್ರಿ ಬರ್ತ್ ಡೇ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಗ್ರಾಮಸ್ಥರೊಂದಿಗೆ ಸಚಿನ್ ಸಹ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದನು. ಪಾರ್ಟಿಯಲ್ಲಿ ಮಾಂಸದಡುಗೆಯನ್ನು ಸಿದ್ಧಪಡಿಸಲಾಗಿತ್ತು.&lt;/p&gt;&lt;img&gt;&lt;p&gt;ರಾತ್ರಿ ಪಾರ್ಟಿ ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು. ಆದ್ರೆ ಸಚಿನ್ ಮಾತ್ರ ನಿರ್ಮಾಣ ಹಂತದ ಕಟ್ಟದಲ್ಲಿಯೇ ಇದ್ದನು ಎಂದು ಹೇಳಲಾಗುತ್ತಿದೆ. ಶುಕ್ರವಾರ ಬೆಳಗ್ಗೆ ಅಂದ್ರೆ ಏಪ್ರಿಲ್ 18ರಂದು ಕಟ್ಟಡ ಕಾರ್ಮಿಕರು ಆಗಮಿಸಿದಾಗ ಸಚಿನ್ ಶವ ಪತ್ತೆಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನಾನು ರಾಜಾ ಮಾನ್ಸಿಂಗ್! ಅಕ್ಬರನ ನಿಷ್ಠಾವಂತ ಸೈನಿಕ, ಶೀಲಾ ದೇವಿಯ ರಹಸ್ಯ ಗೊತ್ತು.. ಪುನರ್ಜನ್ಮದ ಕಥೆ ಹೇಳಿದ ಬಾಲಕ!&lt;/strong&gt;&lt;/p&gt;&lt;img&gt;&lt;p&gt;ಕೂಡಲೇ ಕಟ್ಟಡ ಕಾರ್ಮಿಕರು ಸಚಿನ್ ಕುಟುಂಬಸ್ಥರಿಗೂ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಶಿಫ್ಟ್ ಮಾಡಿದ್ದಾರೆ. ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿ ಮೃತಪಟ್ಟಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ &amp;nbsp;ಓದಿ: &lt;/strong&gt;&lt;strong&gt;ದೇಶವನ್ನುದ್ದೇಶಿ ಪ್ರಧಾನಿ ಮೋದಿ ಮಾತು ; ಈ ಬಾರಿ ಸಮಯ ರಾತ್ರಿ 8 ಗಂಟೆ ಅಲ್ಲ, 8.30 ಯಾಕೆ?&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/shivamogga-21-year-old-sachin-dies-after-chicken-bone-gets-stuck-in-throat-while-eating-non-veg-mrq-5hpdnad"/>
        </item>
        <item>
            <title><![CDATA[ಬಿಸಿಲಿಗೆ ಇಬ್ಬರು ಭಕ್ತರ ಸಾವು ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಅಂಜನಾದ್ರಿ ಬೆಟ್ಟಕ್ಕೆ ಪ್ರವೇಶಕ್ಕಿಲ್ಲ ಅವಕಾಶ!]]></title>
            <link>https://kannada.asianetnews.com/karnataka-districts/koppal-heatwave-entry-restricted-to-anjanadri-hill-after-two-devotee-deaths-gdp/articleshow-xqam4ir</link>
            <guid isPermaLink="true">https://kannada.asianetnews.com/karnataka-districts/koppal-heatwave-entry-restricted-to-anjanadri-hill-after-two-devotee-deaths-gdp/articleshow-xqam4ir</guid>
            <pubDate>Sat, 18 Apr 2026 16:07:49 +0530</pubDate>
            <description><![CDATA[ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚುತ್ತಿರುವ ಉರಿಬಿಸಿಲಿನಿಂದಾಗಿ ಜಿಲ್ಲಾಡಳಿತವು ಮಧ್ಯಾಹ್ನ 11 ರಿಂದ ಸಂಜೆ 4 ರವರೆಗೆ ಭಕ್ತರ ಪ್ರವೇಶವನ್ನು ನಿಷೇಧಿಸಿದೆ. ಇತ್ತೀಚೆಗೆ ಇಬ್ಬರು ಭಕ್ತರು ಬಿಸಿಲಿನ ತಾಪದಿಂದ ಮೃತಪಟ್ಟ ಹಿನ್ನೆಲೆಯಲ್ಲಿ, ಆರೋಗ್ಯದ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jwyr5a91xy3br1bgq9pr2431,imgname-----------------------2025-06-05t060340.974-1749083662625.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ: &lt;/strong&gt;ಉರಿಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಮಧ್ಯಾಹ್ನದ ವೇಳೆ ಬೆಟ್ಟ ಏರುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ಗಮನಿಸಿ, ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.&lt;/p&gt;&lt;h2&gt;575 ಮೆಟ್ಟಿಲುಗಳನ್ನು ಏರಿ ದರ್ಶನ&lt;/h2&gt;&lt;p&gt;ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭಕ್ತರು ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ವಿಶೇಷವಾಗಿ ವಾರಾಂತ್ಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಉರಿಬಿಸಿಲಿನ ನಡುವೆಯೂ 575 ಮೆಟ್ಟಿಲುಗಳನ್ನು ಏರಿ ದರ್ಶನ ಪಡೆಯುವುದು ಅನೇಕ ಮಂದಿಗೆ ಸವಾಲಾಗುತ್ತಿದೆ.&lt;/p&gt;&lt;h2&gt;ಇಬ್ಬರ ಸಾವು&lt;/h2&gt;&lt;p&gt;ಕಳೆದ 2&ndash;3 ತಿಂಗಳ ಅವಧಿಯಲ್ಲಿ, ಬೆಟ್ಟ ಏರಿ ದರ್ಶನ ಪಡೆದ ಬಳಿಕ ಉಸಿರಾಟದ ತೊಂದರೆ ಮತ್ತು ಬಿಸಿಲಿನ ತಾಪದಿಂದ ಇಬ್ಬರು ಭಕ್ತರು ಮೃತಪಟ್ಟಿದ್ದಾರೆ. ಮಾರ್ಚ್ ತಿಂಗಳಲ್ಲಿ ಗುಜರಾತ್ ಮೂಲದ ಭಕ್ತನೊಬ್ಬ ಮೆಟ್ಟಿಲು ಏರುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದರೆ, ಏಪ್ರಿಲ್ 1ರಂದು ಮಧ್ಯಾಹ್ನ ವೇಳೆಯಲ್ಲಿ ದಾವಣಗೆರೆ ಮೂಲದ ಮತ್ತೊಬ್ಬ ಭಕ್ತ ಗರ್ಭಗುಡಿಯಲ್ಲಿ ದರ್ಶನ ಪಡೆದ ಬಳಿಕ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ದುರ್ಘಟನೆಗಳು ಜಿಲ್ಲಾಡಳಿತವನ್ನು ಎಚ್ಚರಿಕೆಗೆ ತಂದಿವೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ದರ್ಶನ ಸಮಯದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಅದರಂತೆ, ಭಕ್ತರಿಗೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಬೆಟ್ಟ ಏರಲು ಸಂಪೂರ್ಣ ನಿರ್ಬಂಧ ಹೇರಲಾಗಿದೆ.&lt;/p&gt;&lt;h2&gt;ಬಿಸಿಲಿನ ತಾಪದಿಂದ ನಿರ್ಜಲೀಕರಣ, ಉಸಿರಾಟದ ತೊಂದರೆ&lt;/h2&gt;&lt;p&gt;ಬಿಸಿಲಿನ ತಾಪದಿಂದ ನಿರ್ಜಲೀಕರಣ, ಉಸಿರಾಟದ ತೊಂದರೆ, ದೌರ್ಬಲ್ಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಕ್ತರ ಆರೋಗ್ಯ ರಕ್ಷಣೆ ಮುಖ್ಯ ಉದ್ದೇಶವಾಗಿದ್ದು, ಯಾವುದೇ ಅಪಾಯವನ್ನು ತಪ್ಪಿಸುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.&lt;/p&gt;&lt;p&gt;ಜಿಲ್ಲಾಡಳಿತದ ಈ ನಿರ್ಧಾರವನ್ನು ಭಕ್ತರು ಸ್ವಾಗತಿಸಿದ್ದು, ಬೆಟ್ಟದ ಮೇಲ್ಭಾಗದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲು ಹಾಗೂ ತುರ್ತು ಚಿಕಿತ್ಸೆ ಸೌಲಭ್ಯಗಳನ್ನು ಒದಗಿಸಲು ಮನವಿ ಮಾಡಿದ್ದಾರೆ. ಹೆಚ್ಚುತ್ತಿರುವ ಬಿಸಿಲಿನ ತಾಪಮಾನವನ್ನು ಮನಗಂಡು, ಭಕ್ತರು ಕೂಡ ಸುರಕ್ಷತಾ ಸೂಚನೆಗಳನ್ನು ಪಾಲಿಸಿ, ನಿರ್ದಿಷ್ಟ ಸಮಯದಲ್ಲಿ ಮಾತ್ರ ದರ್ಶನಕ್ಕೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;&lt;p&gt;ಒಟ್ಟಾರೆ, ಅಂಜನಾದ್ರಿ ಬೆಟ್ಟದಲ್ಲಿ ಭಕ್ತರ ಸುರಕ್ಷತೆಯನ್ನು ಕಾಪಾಡಲು ಕೈಗೊಂಡಿರುವ ಈ ಕ್ರಮಗಳು ತಾತ್ಕಾಲಿಕವಾದರೂ ಅಗತ್ಯವಾಗಿದ್ದು, ಬಿಸಿಲಿನ ತೀವ್ರತೆ ಕಡಿಮೆಯಾಗುವವರೆಗೆ ಮುಂದುವರಿಯುವ ಸಾಧ್ಯತೆ ಇದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/koppal-heatwave-entry-restricted-to-anjanadri-hill-after-two-devotee-deaths-gdp/articleshow-xqam4ir"/>
        </item>
        <item>
            <title><![CDATA[Exclusive Interview: ಜೀವನದ ದಿಕ್ಕೇ ಬದಲಿಸಿ 'ಮಿಸ್​ ಯೂನಿವರ್ಸ್​ ಕರ್ನಾಟಕ' ಪಟ್ಟ ಕೊಟ್ಟ ಆ ಗಾಯ]]></title>
            <link>https://kannada.asianetnews.com/gallery/fashion/miss-universe-karnataka-2026-lekana-hegde-exclusive-interview-in-asianet-suvarna-suc-d4onm6p</link>
            <guid isPermaLink="true">https://kannada.asianetnews.com/gallery/fashion/miss-universe-karnataka-2026-lekana-hegde-exclusive-interview-in-asianet-suvarna-suc-d4onm6p</guid>
            <pubDate>Sat, 18 Apr 2026 14:28:27 +0530</pubDate>
            <description><![CDATA[ಬೆಂಗಳೂರಿನಲ್ಲಿ ನಡೆದ ಮಿಸ್​ ಯೂನಿವರ್ಸ್​ ಕರ್ನಾಟಕ 2026ರ ಸೌಂದರ್ಯ ಸ್ಪರ್ಧೆಯಲ್ಲಿ ಲೇಖನಾ ಹೆಗ್ಡೆ ವಿಜೇತರಾಗಿದ್ದಾರೆ. ಬಾಸ್ಕೆಟ್​ ಬಾಲ್​ ಆಟಗಾರ್ತಿಯಾಗುವ ಕನಸು ಕಂಡಿದ್ದ ಲೇಖನಾ, ಗಾಯದ ಕಾರಣದಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದು ಇದೀಗ ಮಿಸ್​ ಯೂನಿವರ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpfwr1t0wnt5rcevfymh4qnv,imgname-lekana-hegde-05-1776502441792.jpg" type="image/jpeg" height="390" width="690"/>
            <content:encoded><![CDATA[ಬೆಂಗಳೂರಿನಲ್ಲಿ ನಡೆದ ಮಿಸ್​ ಯೂನಿವರ್ಸ್​ ಕರ್ನಾಟಕ 2026ರ ಸೌಂದರ್ಯ ಸ್ಪರ್ಧೆಯಲ್ಲಿ ಲೇಖನಾ ಹೆಗ್ಡೆ ವಿಜೇತರಾಗಿದ್ದಾರೆ. ಬಾಸ್ಕೆಟ್​ ಬಾಲ್​ ಆಟಗಾರ್ತಿಯಾಗುವ ಕನಸು ಕಂಡಿದ್ದ ಲೇಖನಾ, ಗಾಯದ ಕಾರಣದಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದು ಇದೀಗ ಮಿಸ್​ ಯೂನಿವರ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.&lt;img&gt;&lt;p&gt;ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಮಿಸ್​ ಯೂನಿವರ್ಸ್​ ಕರ್ನಾಟಕ 2026ರ ಸೌಂದರ್ಯ ಸ್ಪರ್ಧೆಯಲ್ಲಿ ಲೇಖನಾ ಹೆಗ್ಡೆ ಗೆಲುವು ಸಾಧಿಸಿದ್ದಾರೆ. Miss universe Karnataka 2026 ಕಿರೀಟವನ್ನು ಬಾಚಿಗೊಂಡಿದ್ದಾರೆ. 38 ಬ್ಯೂಟಿಗಳು ಇದರಲ್ಲಿ ಭಾಗವಹಿಸಿದ್ದರು. ಕೊನೆಗೆ ಲೇಖನಾ ಗೆಲುವು ಸಾಧಿಸಿದ್ದು, ಮೊದಲ ರನ್ನರ್&zwnj; ಅಪ್&zwnj; ಸ್ಫೂರ್ತಿ ಶೆಟ್ಟಿ, ಜಾಗೃತಿ ಚೋಪ್ರಾ ಎರಡನೇ ರನ್ನರ್&zwnj; ಅಪ್&zwnj; ಸ್ಥಾನವನ್ನು ಪಡೆದರು. ಮಿಸ್&zwnj; ಟೀನ್&zwnj; ಟೈಟಲ್&zwnj;ಗಾಗಿಯೂ ಸ್ಪರ್ಧೆ ನಡೆಸಲಾಯಿತು. ಸಮೀಕ್ಷಾ ಮಿಸ್&zwnj; ಟೀನ್&zwnj; ಆಗಿ ಆಯ್ಕೆಗೊಂಡು ಕಿರೀಟ ಮುಡಿಗೇರಿಸಿಕೊಂಡರೆ, ವರ್ಷಾ ಹಾಗೂ ಆಯುಷ್ಮಾ ಶಾಂಭವಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದರು.&lt;/p&gt;&lt;img&gt;&lt;p&gt;ಈ ಕುರಿತು ಲೇಖನಾ ಅವರು ಏಷ್ಯಾನೆಟ್​ ಸುವರ್ಣದ ಜೊತೆ ಮಾತನಾಡಿದ್ದಾರೆ. ಲೇಖನಾ ಹೆಗ್ಡೆ ಅವರು ಮಾಡೆಲ್ ಮತ್ತು ಅಥ್ಲೀಟ್ ಆಗಿ ಗುರುತಿಸಿಕೊಂಡವರು. ಲಂಡನ್​ನಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಅಷ್ಟಕ್ಕೂ ತಮಗೆ ಮಾಡೆಲಿಂಗ್​ ಕ್ಷೇತ್ರಕ್ಕೆ ಬರುವ ಆಸೆ ಇರಲಿಲ್ಲ. ಆದರೆ, ಬಾಸ್ಕೆಟ್​ ಬಾಲ್​ನಲ್ಲಿ ದೇಶವನ್ನು ಪ್ರತಿನಿಧಿಸುವ ಆಸೆ ಇತ್ತು. ಆದರೆ ಆಗಿದ್ದೇ ಬೇರೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಲೇಖನಾ.&lt;/p&gt;&lt;img&gt;&lt;p&gt;ಆಗುವುದೆಲ್ಲಾ ಒಳ್ಳೆಯದ್ದೇ ಎನ್ನುವ ಮಾತು ಕೆಲವೊಮ್ಮೆ ಕೆಲವರ ಲೈಫ್​ನಲ್ಲಿ ನಿಜವಾಗಿ ಬಿಡುತ್ತದೆ. ಅಂಥವರಲ್ಲಿ ಒಬ್ಬರು ಲೇಖನಾ. ಬಾಸ್ಕೆಟ್​ ಬಾಲ್​ ಪ್ಲೇಯರ್​ ಆಗಿ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಆಸೆ ಪಟ್ಟಿದ್ದ ಲೇಖನಾ ಅವರಿಗೆ ಬಿದ್ದು ಗಾಯವಾಗಿತ್ತಂತೆ. ಅದಕ್ಕಾಗಿಯೇ ಅವರು ಅಲ್ಲಿ ಕ್ವಾಲಿಫೈ ಆಗಿರಲಿಲ್ಲ. ಹಾಗೆಂದು ಲೇಖನಾ ಕುಗ್ಗಲಿಲ್ಲ. ದೇಶವನ್ನು ಪ್ರತಿನಿಧದಿಸುವ ತಮ್ಮ ಆಸೆಯನ್ನಂತೂ ಈಡೇರಿಸಿಕೊಳ್ಳಲೇಬೇಕು ಎನ್ನುವ ಪಣ ತೊಟ್ಟಾಗಲೇ ಕಂಡದ್ದು ಮಾಡೆಲಿಂಗ್​ ಕ್ಷೇತ್ರ.&lt;/p&gt;&lt;img&gt;&lt;p&gt;ಮಾಡೆಲಿಂಗ್​ ಆಯ್ದುಕೊಂಡ ಲೇಖನಾ, ಬ್ಯೂಟಿ ಸ್ಪರ್ಧೆ ಗೆದ್ದಿರುವ ಲಾರಾ ದತ್ತಾ, ಪ್ರಿಯಾಂಕಾ ಚೋಪ್ರಾ ಅವರ ವಿಡಿಯೋಗಳನ್ನೆಲ್ಲಾ ನೋಡಿ, ಛಲ ಬೆಳೆಸಿಕೊಂಡರಂತೆ, ಮಾತನಾಡುವ ಸ್ಟೈಲ್​ ಕಲಿತರಂತೆ. ಅದನ್ನೆಲ್ಲಾ ಕಲಿತು ಮಾಡೆಲಿಂಗ್​ ಟ್ರೈನಿಂಗ್​ ಪಡೆದು ಅದೃಷ್ಟ ಪರೀಕ್ಷೆಗೆ ಮಿಸ್​ ಯೂನಿವರ್ಸ್​ ಕರ್ನಾಟಕ ಪ್ರತಿನಿಧಿಸಿ, ಕಿರೀಟ ಮುಡಿಲಿಗೇರಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಮಿಸ್​ ಯೂನಿವರ್ಸ್​ನಲ್ಲಿ ಭಾರತವನ್ನು ಇವರು ಪ್ರತಿನಿಧಿಸಲಿದ್ದಾರೆ. ಜೊತೆಗೆ ಕ್ರೀಡೆಯ ಕನಸನ್ನೂ ನನಸು ಮಾಡಿಕೊಳ್ಳಲಿದ್ದೇನೆ ಎನ್ನುತ್ತಾರೆ ಲೇಖನಾ. ಸದ್ಯ ಸಿನಿಮಾಗಳಿಂದಲೂ ಆಫರ್ ಬರುತ್ತಿವೆ, ಆದರೆ ಸದ್ಯ ನನ್ನ ಗಮನ ಮಿಸ್​ ಯೂನಿವರ್ಸ್​ ಕಡೆಗೆ ಎಂದಿದ್ದಾರೆ. ಅಪ್ಪು ಎಂದ್ರೆ ನನಗೆ ತುಂಬಾ ಇಷ್ಟ. ಅವರ ಜೊತೆ ನಟನೆ ಮಾಡುವ ಆಸೆ ಇತ್ತು. ಆದರೆ ಅದು ಸಾಧ್ಯವಾಗುವುದಿಲ್ಲ. ಆದರೆ ಈಚೆಗೆ ಯಶ್​ ಅವರ ಟೀಸರ್​ ನೋಡಿದ ಮೇಲೆ ಅವರ ಜೊತೆ ನಟಿಸುವ ಆಸೆ ಇದೆ. 100 ಪರ್ಸೆಂಟ್​ ಆ ಆಸೆ ಈಡೇರುವ ಭರವಸೆ ಇದೆ ಎನ್ನುತ್ತಾರೆ ಲೇಖನಾ.&lt;/p&gt;&lt;img&gt;&lt;p&gt;ಅಂದಹಾಗೆ ಈ ಬ್ಯೂಟಿ ಸ್ಪರ್ಧೆಯಲ್ಲಿ, ಫ್ಯಾಷನ್&zwnj; ಕ್ಷೇತ್ರದ ದಿಗ್ಗಜರಾದ ನಿಕಿಲ್&zwnj; ಆನಂದ್&zwnj;, ಅಮ್ಜದ್&zwnj; ಖಾನ್&zwnj;, ಮಹಮ್ಮದ್&zwnj; ಸೈಜಲ್&zwnj;, ಮಿಸ್&zwnj; ಯೂನಿವರ್ಸ್ ಇಂಡಿಯಾ 2025 ಮಣಿಕಾ ವಿಶ್ವಕರ್ಮಾ ಹಾಗೂ ಕಳೆದ ಬಾರಿ ಗೆಲುವು ಸಾಧಿಸಿದ್ದ ಮಿಸ್&zwnj; ಯೂನಿವರ್ಸ್ ಕರ್ನಾಟಕ ವಂಶಿ ಉದಯ್&zwnj; ಜ್ಯೂರಿ ಟೀಮ್&zwnj;ನಲ್ಲಿದ್ದರು. ಶೋ ಡೈರೆಕ್ಟರ್&zwnj; ಶ್ರೀಕಾಂತ್&zwnj; ಶೆಟ್ಟರ್&zwnj; ಬ್ಯೂಟಿ ಪೇಜೆಂಟ್&zwnj;ನ ಉಸ್ತುವಾರಿ ವಹಿಸಿದ್ದರು.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Asianet Suvarna News (@asianetsuvarnanews)&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/fashion/miss-universe-karnataka-2026-lekana-hegde-exclusive-interview-in-asianet-suvarna-suc-d4onm6p"/>
        </item>
        <item>
            <title><![CDATA[ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಫ್ರಿಕಾದ 4  ಚೀತಾಗಳ ಆಗಮನ, 30 ದಿನ ಸೂಕ್ಷ್ಮ ನಿಗಾ]]></title>
            <link>https://kannada.asianetnews.com/state/bengaluru-welcomes-4-cheetahs-from-south-africa-quarantine-at-bannerghatta-biological-park-begins-gdp/articleshow-y7i1vrw</link>
            <guid isPermaLink="true">https://kannada.asianetnews.com/state/bengaluru-welcomes-4-cheetahs-from-south-africa-quarantine-at-bannerghatta-biological-park-begins-gdp/articleshow-y7i1vrw</guid>
            <pubDate>Sat, 18 Apr 2026 15:11:20 +0530</pubDate>
            <description><![CDATA[ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ. ಈ ವನ್ಯಜೀವಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು 30 ದಿನಗಳ ಕಾಲ ವಿಶೇಷ ಕ್ವಾರಂಟೈನ್&zwnj;ನಲ್ಲಿ ಇರಿಸಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpfz49ff3hhgt3x4vym3tvm7,imgname-bannerghatta-biological-park-1776504940015.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯರಾತ್ರಿ ಅಪರೂಪದ ಅತಿಥಿಗಳಾಗಿ ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳು ಆಗಮಿಸಿವೆ. ಈ ವನ್ಯಜೀವಿಗಳನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ವಾಗತಿಸಿದ್ದು, ರಾಜ್ಯದ ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಈ ಘಟನೆ ಪರಿಗಣಿಸಲಾಗಿದೆ.&lt;/p&gt;&lt;p&gt;ಈ ನಾಲ್ಕು ಚೀತಾಗಳನ್ನು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸುರಕ್ಷಿತವಾಗಿ ಕರೆದೊಯ್ಯಲಾಗುತ್ತಿದೆ. ದಕ್ಷಿಣ ಆಫ್ರಿಕಾದಿಂದ ಬಂದಿರುವುದರಿಂದ, ಇಲ್ಲಿ ಇರುವ ಹವಾಮಾನ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವವರೆಗೆ ವಿಶೇಷ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಚೀತಾಗಳ ಆರೋಗ್ಯದ ಮೇಲೆ ಯಾವುದೇ ಹಾನಿ ಉಂಟಾಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ.&lt;/p&gt;&lt;h2&gt;30 ದಿನಗಳ ಕಾಲ ಪ್ರತ್ಯೇಕವಾಗಿ ಇಟ್ಟು ನಿಗಾ&lt;/h2&gt;&lt;p&gt;ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶುವೈದ್ಯರು ಸೂಚಿಸಿರುವಂತೆ, ಮುಂದಿನ 30 ದಿನಗಳ ಕಾಲ ಚೀತಾಗಳನ್ನು ಪ್ರತ್ಯೇಕವಾಗಿ ಇಟ್ಟು ನಿಗಾವಹಿಸಲಾಗುತ್ತದೆ. ಈ ಅವಧಿಯಲ್ಲಿ ಅವುಗಳಿಗೆ ನಿಗದಿತ ಆಹಾರವನ್ನು ಮಾತ್ರ ನೀಡಲಾಗುತ್ತದೆ. ಜೊತೆಗೆ ವಿದೇಶಿ ವನ್ಯಜೀವಿಗಳಲ್ಲಿ ಯಾವುದೇ ಸೋಂಕು ಅಥವಾ ಆರೋಗ್ಯ ಸಮಸ್ಯೆಗಳಿರುವುದೇ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ.&lt;/p&gt;&lt;h2&gt;ಹೊಸ ಆಕರ್ಷಣೆ&lt;/h2&gt;&lt;p&gt;ವಿಶೇಷವಾಗಿ ಹವಾಮಾನ ಬದಲಾವಣೆಯಿಂದ ಪ್ರಾಣಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸೂಕ್ತ ಆರೈಕೆ ಕ್ರಮಗಳನ್ನು ಕೈಗೊಳ್ಳಲು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಚೀತಾಗಳ ಸುರಕ್ಷಿತ ಸಾಗಣೆ, ಆರೋಗ್ಯ ನಿರ್ವಹಣೆ ಮತ್ತು ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆ ಬಗ್ಗೆ ಎಲ್ಲಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.&lt;/p&gt;&lt;p&gt;ಒಟ್ಟಾರೆ, ದಕ್ಷಿಣ ಆಫ್ರಿಕಾದಿಂದ ಬಂದಿರುವ ಈ ನಾಲ್ಕು ಚೀತಾಗಳ ಆಗಮನವು ಬನ್ನೇರುಘಟ್ಟ ಮೃಗಾಲಯಕ್ಕೆ ಹೊಸ ಆಕರ್ಷಣೆಯಾಗಿದ್ದು, ವನ್ಯಜೀವಿ ಸಂರಕ್ಷಣೆಯತ್ತ ರಾಜ್ಯ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮುಂದಿನ ದಿನಗಳಲ್ಲಿ ಈ ಚೀತಾಗಳು ಹೊಸ ವಾತಾವರಣಕ್ಕೆ ಹೊಂದಿಕೊಂಡು ಸಾರ್ವಜನಿಕರಿಗೆ ಆಕರ್ಷಕವಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/state/bengaluru-welcomes-4-cheetahs-from-south-africa-quarantine-at-bannerghatta-biological-park-begins-gdp/articleshow-y7i1vrw"/>
        </item>
        <item>
            <title><![CDATA[Suvarna News Impact: ದಯಾಮರಣ ಕೇಳಿದ್ದ ವೃದ್ಧೆಯ ಅಳಲಿಗೆ ಕರಗಿದ ಸಿಎಂ; ಮೆದಗಾಣೆ ಹಳ್ಳಿಗೆ ಬಂತು ಕರೆಂಟ್!]]></title>
            <link>https://kannada.asianetnews.com/karnataka-districts/suvarna-news-impact-cm-siddaramaiah-electricity-medagane-village-kempamma-san/articleshow-7952g9d</link>
            <guid isPermaLink="true">https://kannada.asianetnews.com/karnataka-districts/suvarna-news-impact-cm-siddaramaiah-electricity-medagane-village-kempamma-san/articleshow-7952g9d</guid>
            <pubDate>Sat, 18 Apr 2026 14:25:37 +0530</pubDate>
            <description><![CDATA[&lt;p&gt;ಹನೂರು ತಾಲೂಕಿನ ಮೆದಗಾಣೆ ಗ್ರಾಮದ ವೃದ್ಧೆ ಕೆಂಪಮ್ಮ ಅವರು ವಿದ್ಯುತ್&zwnj;ಗಾಗಿ ಬರೆದ ದಯಾಮರಣ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಸುವರ್ಣ ನ್ಯೂಸ್ ವರದಿಯ ಫಲವಾಗಿ, ದಶಕಗಳಿಂದ ಕತ್ತಲೆಯಲ್ಲಿದ್ದ ಗ್ರಾಮಕ್ಕೆ ಸಮರೋಪಾದಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfwtvw5s385r3jcqynxtnja,imgname-chamarajanagara-hanur1-1776502534021.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಏ.18): &lt;/strong&gt;ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ವಿದ್ಯುತ್ ಕಾಣದ ಹನೂರು ತಾಲೂಕಿನ ಮೆದಗಾಣೆ ಗ್ರಾಮದ ವೃದ್ಧೆಯೊಬ್ಬರ ಅಳಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಸ್ಪಂದಿಸಿದ್ದಾರೆ. 'ನಮಗೆ ವಿದ್ಯುತ್ ಕೊಡಿ ಇಲ್ಲವೇ ದಯಾಮರಣ ನೀಡಿ' ಎಂದು ಕೆಂಪಮ್ಮ ಎಂಬುವವರು ಬರೆದಿದ್ದ ಪತ್ರದ ಕುರಿತು ಸುವರ್ಣ ನ್ಯೂಸ್ ಬಿತ್ತರಿಸಿದ ವಿಶೇಷ ವರದಿಗೆ ಮಣಿದ ಸಿಎಂ ಕಚೇರಿ, ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ.&lt;/p&gt;&lt;h2&gt;&lt;strong&gt;ವರದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಸ್ಪಂದನೆ!&lt;/strong&gt;&lt;/h2&gt;&lt;p&gt;ಮೆದಗಾಣೆ ಹಾಡಿಯ ಕೆಂಪಮ್ಮ (60) ಅವರು ಮೂರು ತಲೆಮಾರುಗಳಿಂದ ಮೂಲಸೌಕರ್ಯವಿಲ್ಲದೆ ಅನುಭವಿಸುತ್ತಿದ್ದ ಪಡಿಪಾಟಲನ್ನು ಸುವರ್ಣ ನ್ಯೂಸ್ ವಿಸ್ತೃತವಾಗಿ ಬಿತ್ತರಿಸಿತ್ತು. ಅಧಿಕಾರಿಗಳ ವಿಳಂಬ ಧೋರಣೆ ಹಾಗೂ ದೃಷ್ಟಿಮಾಂದ್ಯತೆಯಿಂದಾಗಿ ವೃದ್ಧೆ ಅನುಭವಿಸುತ್ತಿದ್ದ ನರಕಯಾತನೆಯ ದೃಶ್ಯಗಳು ರಾಜ್ಯದ ಗಮನ ಸೆಳೆದಿದ್ದವು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಕ್ಷಣವೇ ಜಿಲ್ಲಾಧಿಕಾರಿಗಳು ಹಾಗೂ ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.&lt;/p&gt;&lt;h2&gt;&lt;strong&gt;ಕತ್ತಲು ಸರಿಸಿ ಬಂದ ಭಾಗ್ಯಜ್ಯೋತಿ&lt;/strong&gt;&lt;/h2&gt;&lt;p&gt;ಸಿಎಂ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಮತ್ತು ಇಂಧನ ಇಲಾಖೆ ಅಧಿಕಾರಿಗಳು ಅಡೆತಡೆಗಳನ್ನು ನಿವಾರಿಸಿ, ಮೆದಗಾಣೆ ಗ್ರಾಮಕ್ಕೆ ವಿದ್ಯುತ್ ಲೈನ್&zwnj;ಗಳನ್ನು ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 79 ವರ್ಷಗಳಿಂದ ಸೀಮೆಎಣ್ಣೆ ಬುಡ್ಡಿ ದೀಪದ ಕೆಳಗೆ ಜೀವನ ಸಾಗಿಸುತ್ತಿದ್ದ ಆದಿವಾಸಿ ಕುಟುಂಬಗಳ ಮನೆಯಲ್ಲಿ ಇಂದು ಮೊದಲ ಬಾರಿಗೆ ವಿದ್ಯುತ್ ಬಲ್ಬ್&zwnj;ಗಳು ಬೆಳಗಿವೆ. ಕೆಂಪಮ್ಮ ಅವರ ಮೊಮ್ಮಕ್ಕಳು ಇನ್ನು ಮುಂದೆ ಕತ್ತಲಲ್ಲಿ ಓದುವ ಅನಿವಾರ್ಯತೆ ತಪ್ಪಿದೆ.&lt;/p&gt;&lt;p&gt;&quot;ನನ್ನ ಮೊಮ್ಮಕ್ಕಳ ಭವಿಷ್ಯಕ್ಕಾಗಿ ನಾನು ದಯಾಮರಣ ಕೇಳಿದ್ದೆ. ಆದರೆ ಸುವರ್ಣ ನ್ಯೂಸ್ ನನ್ನ ಧ್ವನಿಯಾಗಿ ಸಿಎಂಗೆ ತಲುಪಿಸಿತು. ನಮ್ಮ ಹಳ್ಳಿಗೆ ವಿದ್ಯುತ್ ಬಂದಿರುವುದು ನಮಗೆ ಮರುಜನ್ಮ ಸಿಕ್ಕಂತಾಗಿದೆ,&quot; ಎಂದು ವೃದ್ಧೆ ಕೆಂಪಮ್ಮ ಭಾವುಕರಾಗಿ ನುಡಿದಿದ್ದಾರೆ. ಆರು ದಿನಗಳ ಉಪವಾಸ ಸತ್ಯಾಗ್ರಹಕ್ಕೂ ಬಗ್ಗದ ಜಿಲ್ಲಾಡಳಿತ, ಸಿಎಂ ಕಚೇರಿಯ ಕಟ್ಟುನಿಟ್ಟಿನ ಆದೇಶಕ್ಕೆ ಬೆದರಿ ರಾತ್ರೋರಾತ್ರಿ ಕೆಲಸ ಪೂರೈಸಿರುವುದು ವಿಶೇಷ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/suvarna-news-impact-cm-siddaramaiah-electricity-medagane-village-kempamma-san/articleshow-7952g9d"/>
        </item>
        <item>
            <title><![CDATA[ಕಾಂಗ್ರೆಸ್‌ ವಿರುದ್ಧ ಮುಸ್ಲಿಂ ಸಂಘಟನೆಗಳ ಆಕ್ರೋಶ, ಜಂಟಿ ಹೇಳಿಕೆಯಲ್ಲಿ 'ಕೈ'ಗೆ ಎಚ್ಚರಿಕೆ, ಮುಂದಿನ ನಡೆ ಏನು?]]></title>
            <link>https://kannada.asianetnews.com/politics/muslim-organizations-express-anger-against-congress-joint-statement-released-bengaluru/articleshow-m3flrgy</link>
            <guid isPermaLink="true">https://kannada.asianetnews.com/politics/muslim-organizations-express-anger-against-congress-joint-statement-released-bengaluru/articleshow-m3flrgy</guid>
            <pubDate>Sat, 18 Apr 2026 14:24:10 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬೆಂಬಲಿಸಿದ ಮುಸ್ಲಿಂ ಸಮುದಾಯಕ್ಕೆ ಇದೀಗ ರಾಜಕೀಯ ಪ್ರಾತಿನಿಧ್ಯ ನೀಡದೆ ಅವಮಾನಿಸಲಾಗುತ್ತಿದೆ ಎಂದು ರಾಜ್ಯದ ವಿವಿಧ ಮುಸ್ಲಿಂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ತಾರತಮ್ಯ ನೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ರಾಜಕೀಯ ಹಿನ್ನಡೆಯಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzhdmkgbd5a6zgrtse7mevx,imgname-----------------------2026-04-12t055752.365-1775953695344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18)&lt;/strong&gt; ಕರ್ನಾಟಕದ ಮುಸ್ಲಿಂ ಸಮುದಾಯ ಮತ್ತು ಅದರ ನಾಯಕರನ್ನು ಕಾಂಗ್ರೆಸ್ ಪಕ್ಷವು ನಡೆಸಿಕೊಳ್ಳುತ್ತಿರುವ ರೀತಿಯನ್ನು ರಾಜ್ಯದ ವಿವಿಧ ಮುಸ್ಲಿಂ ಸಂಘಟನೆಗಳು, ಒಕ್ಕೂಟಗಳು ಮತ್ತು ಪ್ರಮುಖ ಪ್ರತಿನಿಧಿಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರಮುಖ ಮುಖಂಡರು ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.&lt;/p&gt;&lt;p&gt;ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಒಗ್ಗಟ್ಟಿನ ಬೆಂಬಲವೇ ಪ್ರಮುಖ ಕಾರಣ. ಆದರೆ ಅಧಿಕಾರಕ್ಕೆ ಬಂದ ಮೇಲೆ ಸಮುದಾಯಕ್ಕೆ ರಾಜಕೀಯ ನೇಮಕಾತಿ ಹಾಗೂ ಅಧಿಕಾರಶಾಹಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದೆ ಅವಮಾನಿಸಲಾಗುತ್ತಿದೆ ಎಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ.&lt;/p&gt;&lt;h2&gt;ಪ್ರಕಟಣೆಯಲ್ಲಿ ತಿಳಿಸಿದ್ದೇನು?&lt;/h2&gt;&lt;p&gt;ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಬರಲು ಇಲ್ಲಿನ ಮುಸ್ಲಿಮರು ಅದಕ್ಕೆ ನೀಡಿರುವ ಒಗ್ಗಟ್ಟಿನ ಬೆಂಬಲ ಪ್ರಮುಖ ಕಾರಣ. ಆದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ಸರಕಾರ ಮುಸ್ಲಿಮರನ್ನು ಘನತೆಯೊಂದಿಗೆ ನಡೆಸಿಕೊಳ್ಳುತ್ತಿಲ್ಲ ಎಂಬುದು ಅದರ ಇತ್ತೀಚಿನ ನಡೆಗಳಿಂದ ಸ್ಪಷ್ಟವಾಗಿದೆ. ತನ್ನನ್ನು ಬೆಂಬಲಿಸಿ ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಕೊಡುಗೆ ನೀಡಿರುವ ಮುಸ್ಲಿಮ್ ಸಮುದಾಯಕ್ಕೆ ರಾಜಕೀಯ ನೇಮಕಾತಿಗಳಲ್ಲಿ ಹಾಗೂ ಅಧಿಕಾರ ಶಾಹಿಯ ಪ್ರಮುಖ ಹುದ್ದೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ನೀಡದ ಕಾಂಗ್ರೆಸ್ ಈಗ ಮುಸ್ಲಿಮ್ ಸಮುದಾಯವನ್ನು ಮತ್ತೆ ಮತ್ತೆ ಅವಮಾನಿಸುತ್ತಿದೆ ಎಂಬ ನೋವಿನ ಭಾವನೆ ಸಮುದಾಯದಲ್ಲಿ ತೀವ್ರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.&lt;/p&gt;&lt;h3&gt;ದಾವಣಗೆರೆ ಬೆಳವಣಿಗೆಯಿಂದ ಅಸಮಾಧಾನ:*&lt;/h3&gt;&lt;p&gt;ದಾವಣಗೆರೆ ಉಪ ಚುನಾವಣೆ ಹಾಗೂ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಒಂದು ಸ್ಪಷ್ಟ ಸಂದೇಶ ನೀಡಿದಂತಿದೆ. ಅದೇನೆಂದರೆ, 'ವು ನಮಗೆ ಒಂದು ವೋಟ್ ಬ್ಯಾಂಕ್ ಮಾತ್ರ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕುವುದು ಮಾತ್ರ ನಿಮ್ಮ ಕೆಲಸ. ಕ್ಷದಲ್ಲಿ ಹುದ್ದೆ, ಸ್ಥಾನಮಾನ, ಪ್ರಾತಿನಿಧ್ಯ, ಅವಕಾಶ ನಾವು ನೀಡುವ ಭಿಕ್ಷೆ. ಒಂದೊಮ್ಮೆ ನಿಮ್ಮ ಹಕ್ಕು ಅಥವಾ ನಿಮಗಾದ ಅನ್ಯಾಯದ ಕುರಿತು ಪ್ರಶ್ನೆ ಕೇಳಿದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂಬುದು ಈ ಪಕ್ಷಪಾತಿ ಧೋರಣೆಯನ್ನು ಕರ್ನಾಟಕದ ಮುಸ್ಲಿಮ್ ಸಮುದಾಯ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಎಚ್ಚರಿಸಿದೆ.&lt;/p&gt;&lt;h3&gt;ಶಿಸ್ತುಕ್ರಮದ ನೆಪದಲ್ಲಿ ತಾರತಮ್ಯ&lt;/h3&gt;&lt;p&gt;ಮುಸ್ಲಿಮ್ ಸಮುದಾಯದ ಕೆಲ ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆಯ ಕಟಕಟೆಯಲ್ಲಿ ನಿಲ್ಲಿಸಿ, ಶಿಸ್ತಿನ ಪಾಠ ಹೇಳುತ್ತಿರುವ ಕಾಂಗ್ರೆಸ್ ಪಕ್ಷ, ಈ ಹಿಂದೆ ಇದೇ ರೀತಿಯ ಸಂದರ್ಭಗಳಲ್ಲಿ ಪಕ್ಷದಿಂದ ತಗೆದುಕೊಳ್ಳಲಾದ ಶಿಸ್ತು ಕ್ರಮಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದಲ್ಲಿ , ಪಕ್ಷದ ಶಿಸ್ತು ನಿಯಮಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಅನ್ವಯವಾಗುತ್ತಿವೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸುತ್ತದೆ. ಇದು ಕೇವಲ ಕೆಲವು ವ್ಯಕ್ತಿಗಳ ವಿಚಾರವಲ್ಲ. ಇಡೀ ಮುಸ್ಲಿಮ್ ಸಮುದಾಯದ ಘನತೆಯ ವಿಷಯವಾಗಿದೆ. ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಕೇವಲ ರಾಜಕೀಯ ನಿರ್ಧಾರವೆಂದು ಸಮರ್ಥಿಸಲು ಸಾಧ್ಯವಿಲ್ಲ ಎಂದಿರುವ ಸಂಘಟನೆಗಳು.&lt;/p&gt;&lt;p&gt;&lt;strong&gt;ಸ್ವಾರ್ಥಿ ಮುಸ್ಲಿಂ ನಾಯಕರಿಗೂ ಎಚ್ಚರಿಕೆ&lt;/strong&gt;&lt;/p&gt;&lt;p&gt;ಮುಸ್ಲಿಮರು ಪ್ರಾತಿನಿಧ್ಯ ಕೇಳಿದ್ದೇ ತಪ್ಪು ಎಂಬಂತೆ ಕಾಂಗ್ರೆಸ್ ನಲ್ಲಿ ಬಿಂಬಿಸಲಾಗುತ್ತಿದೆ. ನ್ಯಾಯಯುತವಾಗಿ ನೀಡಲೇಬೇಕಿದ್ದ ಟಿಕೆಟ್ ನೀಡದೆ ಪಕ್ಷದ ಪರವಾಗಿ ಪ್ರಚಾರ ಮಾಡಲು ಹೇಳಿ, ನಂತರ ಕ್ಷುಲ್ಲಕ ಕಾರಣಗಳನ್ನು ನೀಡಿ ಶಿಸ್ತು ಕ್ರಮ ಕೈಗೊಳ್ಳುವುದು ನ್ಯಾಯಸಮ್ಮತವಲ್ಲ. 'ನೀವು ನಾವು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು' ಎಂಬ ಕಾಂಗ್ರೆಸ್ ಪಕ್ಷದ ಈ ಧೋರಣೆ ತೀವ್ರ ಖಂಡನೀಯವಾಗಿದೆ. ಸಾಲದ್ದಕ್ಕೆ ಪಕ್ಷದಲ್ಲಿರುವ ಸಮುದಾಯದ ನಾಯಕರನ್ನೇ ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮಾಡುತ್ತಿದ್ದಾರೆ ಎಂಬ ಅನುಮಾನವೂ ಸಮುದಾಯವನ್ನು ಕಾಡುತ್ತಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಕೆಲವು ಮುಖಂಡರೂ ತಮ್ಮ ಸಮುದಾಯದ ಜೊತೆಗಿನ ಪಕ್ಷದ ತಾರತಮ್ಯ ನೀತಿಯನ್ನು ವಿರೋಧಿಸದೆ, ಸಮುದಾಯದ ಪರವಾಗಿ ಪಕ್ಷದ ವೇದಿಕೆಯಲ್ಲಿ ಧ್ವನಿ ಎತ್ತಿದ ನಾಯಕರ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲದೆ ತಮ್ಮ ಸ್ವಾರ್ಥ ಸಾಧನೆಗೆ ಮುಂದಾಗುವಂತಹ ನಡೆ ಅನುಸರಿಸಿರುವುದು ಖಂಡಿಸುತ್ತೇವೆ ಎಂದಿರುವ ಸಂಘಟನೆಗಳು.&lt;/p&gt;&lt;p&gt;ಕೆಲವು ಸಮುದಾಯಗಳ ನಾಯಕರು ಎಷ್ಟು ದೊಡ್ಡ ಪ್ರಮಾದ ಮಾಡಿದರೂ ಯಾವುದೇ ಕ್ರಮವಿಲ್ಲ, ನೇರವಾಗಿ ಪಕ್ಷ ವಿರೋಧಿ ಹೇಳಿಕೆ ಕೊಟ್ಟರೂ ಅವರಿಗೆ ಶಿಸ್ತು ಕ್ರಮದ ಬದಲಿಗೆ ಬಹುಮಾನ, ಇನ್ನಷ್ಟು ಗೌರವ, ಆದರೆ ಒಂದು ನಿರ್ದಿಷ್ಟ ಸಮುದಾಯದ ನಾಯಕರು ಪಕ್ಷದ ಫರ್ಮಾನು ಪಾಲಿಸುವಲ್ಲಿ ಒಂದಿಷ್ಟು ಹೆಚ್ಚು ಕಡಿಮೆಯಾದರೂ ಅವರ ತಲೆದಂಡ - ಇದು ನ್ಯಾಯವಲ್ಲ, ಇದು ಸ್ವೀಕಾರಾರ್ಹವಲ್ಲ. ಈ ರೀತಿಯ ತಾರತಮ್ಯದ ನಡೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾನಿಕಾರಿಯಾಗಲಿದೆ.&amp;nbsp;&lt;/p&gt;&lt;p&gt;ಇದೇ ಧೋರಣೆ ಮುಂದುವರಿದರೆ ಮುಂದಾಗುವ ತೀವ್ರ ರಾಜಕೀಯ ಹಿನ್ನಡೆಗೆ ಪಕ್ಷದ ಈ ರೀತಿಯ ನಿರ್ಧಾರಗಳೇ ಕಾರಣವಾಗಬಹುದು. ರಾಜ್ಯದಲ್ಲಿ ಸಂವಿಧಾನದ ಮೌಲ್ಯಗಳ ಪ್ರಕಾರ ನಡೆಯುವ ಜಾತ್ಯತೀತ ಸರಕಾರ ಬರಬೇಕು, ಜನರನ್ನು ವಿಭಜಿಸುವ ಕೋಮುವಾದಿಗಳಿಗೆ ಅಧಿಕಾರ ಸಿಗಬಾರದು ಎಂಬ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಮುಸ್ಲಿಮರು ಒಗ್ಗಟ್ಟಾಗಿ ಬೆಂಬಲಿಸಿ ಮತ ನೀಡಿದ್ದಾರೆ. ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಹಾಗು ಅವುಗಳನ್ನು ಬಲಪಡಿಸಲು ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಆದರೆ ಅದನ್ನೇ ಮುಸ್ಲಿಮರ ದೌರ್ಬಲ್ಯ, ಅವರಿಗೆ ಬೇರೆ ಆಯ್ಕೆಗಳೇ ಇಲ್ಲ ಎಂದು ಕಾಂಗ್ರೆಸ್ ತಿಳಿದುಕೊಂಡರೆ ಅದು ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ರಾಜಕೀಯವಾಗಿ ಬಹಳ ದುಬಾರಿಯಾಗಲಿದೆ ಎಂದು ಎಚ್ಚರಿಕೆ ನೀಡಿವೆ.&lt;/p&gt;&lt;p&gt;ರಾಜಕೀಯ ಲೆಕ್ಕಾಚಾರದ ಹೆಸರಿನಲ್ಲಿ ಒಂದು ಸಮುದಾಯ ಮತ್ತು ಅದರ ನಾಯಕರನ್ನು ಈ ರೀತಿ ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮುಂದೆ ಇಂತಹ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳದಂತೆ ಹಾಗೂ ಈಗಿನ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾವು ಆಗ್ರಹಿಸುತ್ತೇವೆ.&lt;/p&gt;&lt;p&gt;&lt;strong&gt;ಪ್ರಮುಖ ಸಹಿದಾರರು&lt;/strong&gt;:&lt;/p&gt;&lt;p&gt;ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ, ಅಧ್ಯಕ್ಷರು, ಮುಸ್ಲಿಮ್ ಮುತ್ತಹಿದಾ ಕೌನ್ಸಿಲ್, ವಿಜಯಪುರ.&lt;/p&gt;&lt;p&gt;ಅಬ್ದುಲ್ ಖದೀರ್ ಸಾಹೇಬ್, ಅಧ್ಯಕ್ಷರು, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳು, ಬೀದರ್.&lt;/p&gt;&lt;p&gt;ಮೌಲಾನಾ ಶಬ್ಬೀರ್ ಅಹ್ಮದ್ ನದ್ವಿ, ಅಧ್ಯಕ್ಷರು, ವೆಲ್ಫೇರ್ ಆಫ್ ಹ್ಯುಮಾನಿಟಿ ಫೌಂಡೇಶನ್, ಬೆಂಗಳೂರು.&lt;/p&gt;&lt;p&gt;ಕೆ ಎಸ್ ಮೊಹಮ್ಮದ್ ಮಸೂದ್, ಅಧ್ಯಕ್ಷರು, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ, ಮಾಜಿ ಅಧ್ಯಕ್ಷರು, ರಾಜ್ಯ ಅಲ್ಪಸಂಖ್ಯಾತ ಆಯೋಗ, ಮಾಜಿ ಮುಖ್ಯ ಸಚೇತಕರು, ವಿಧಾನ ಪರಿಷತ್.&lt;/p&gt;&lt;p&gt;ಹಾಜಿ ಮೊಹಮ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿ, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ.&lt;/p&gt;&lt;p&gt;ಮುಹಮ್ಮದ್ ಮೌಲಾ, ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ.&lt;/p&gt;&lt;p&gt;ಯಾಸೀನ್ ಮಲ್ಪೆ, ನಿಕಟಪೂರ್ವ ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ.&lt;/p&gt;&lt;p&gt;ಮೌಲಾನಾ ಅಬ್ದುರ್ರಕೀಬ್ ನದ್ವಿ, ಪ್ರಧಾನ ಕಾರ್ಯದರ್ಶಿ, ಮಜ್ಲಿಸ್ ಎ ಇಸ್ಲಾಹ್ ವ ತಂಝೀಮ್, ಭಟ್ಕಳ.&lt;/p&gt;&lt;p&gt;ಅಶ್ರಫ್ ಅಲಿ ಬಶೀರ್, ಸಂಚಾಲಕರು, ಮುಸ್ಲಿಮ್ ವಾಯ್ಸ್ ಆಫ್ ಕರ್ನಾಟಕ. ಹುಬ್ಬಳ್ಳಿ.&lt;/p&gt;&lt;p&gt;ಡಾ. ಅಬ್ದುಲ್ ಕರೀಂ, ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ. ಹುಬ್ಬಳ್ಳಿ.&lt;/p&gt;&lt;p&gt;ಕೆ. ಅಶ್ರಫ್ ಅಧ್ಯಕ್ಷರು, ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ..&lt;/p&gt;&lt;p&gt;ಮುಹಮ್ಮದ್ ಹನೀಫ್, ಕಾರ್ಯದರ್ಶಿ, ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.&lt;/p&gt;&lt;p&gt;ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ.&lt;/p&gt;&lt;p&gt;ಮುಖಂಡರು, ಸುನ್ನಿ ಯುವಜನ ಸಂಘ ಕರ್ನಾಟಕ.&lt;/p&gt;&lt;p&gt;ಹಾಜಿ ಅಬೂಬಕರ್ ನೇಜಾರ್.ಜಿಲ್ಲಾಧ್ಯಕ್ಷರು,ಸುನ್ನಿ ಸಂಯುಕ್ತ ಜಮಾತ್,ಉಡುಪಿ ಜಿಲ್ಲೆ.&lt;/p&gt;&lt;p&gt;ಮೊಹಮ್ಮದ್ ರಫೀಕ್ಜಿ ಜಿಲ್ಲಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾತ್ಉ &amp;nbsp;ಡುಪಿ ಜಿಲ್ಲೆ&lt;/p&gt;&lt;p&gt;ರಫಿವುದ್ದೀನ್ ಕುದ್ರೋಳಿ, ಅಧ್ಯಕ್ಷರು, ಯುನಿವೆಫ್ ಮಂಗಳೂರು.&lt;/p&gt;&lt;p&gt;ಕಾಸಿಮ್ ಶುಐಬುರ್ರಹ್ಮಾನ್ ಖುರೇಷಿ, ಅಧ್ಯಕ್ಷರು, ಅಖಿಲ ಭಾರತ ಜಮೀಯತುಲ್ ಖುರೇಷಿ, ಕರ್ನಾಟಕ.&lt;/p&gt;&lt;p&gt;ಅಫ್ಝಲ ಮಹ್ಮೂದ್, ಕಾರ್ಯದರ್ಶಿ, ಕರ್ನಾಟಕ ಮುಸ್ಲಿಮ್ ಪೊಲಿಟಿಕಲ್ ಫೋರಮ್. ಗುಲ್ಬರ್ಗ.&lt;/p&gt;&lt;p&gt;ಜಬ್ಬಾರ್ ಕಲಬುರ್ಗಿ, ಅಧ್ಯಕ್ಷರು, ಕರ್ನಾಟಕ ಮುಸ್ಲಿಂ ಯುನಿಟಿ. ಬಾಗಲಕೋಟೆ.&lt;/p&gt;&lt;p&gt;ನಿಸಾರ್ ಅಹಮದ್, ರಾಜ್ಯ ಸಂಯೋಜಕರು, ಎದ್ದೇಳು ಕರ್ನಾಟಕ. ಮಂಗಳೂರು.&lt;/p&gt;&lt;p&gt;ನಕ್ವಾ ಯಾಹ್ಯ ಮಲ್ಪೆ ಅಧ್ಯಕ್ಷರು, ನಮ್ಮ ನಾಡ ಒಕ್ಕೂಟ, ಉಡುಪಿ ಜಿಲ್ಲೆ.&lt;/p&gt;&lt;p&gt;ಅಫ್ಸರ್, ಅಧ್ಯಕ್ಷರು, ಕರ್ನಾಟಕ ಸೌಹಾರ್ದ ಒಕ್ಕೂಟ. ರಿ. ಮಂಡ್ಯ.&lt;/p&gt;&lt;p&gt;ಅಡ್ವೋಕೇಟ್ ಅಬ್ದುಲ್ ಜಬ್ಬಾರ್ ಗೋಲ, ಉಪಾಧ್ಯಕ್ಷರು, ಜೋಯ್ಂಟ್ ಆಕ್ಷನ್ ಕಮಿಟಿ, ಗುಲ್ಬರ್ಗ..&lt;/p&gt;&lt;p&gt;ಅಡ್ವೋಕೇಟ್ ಅನ್ ಷಾದ್ ಪಾಳ್ಯ, ರಾಜ್ಯ ಸಮಿತಿ ಸದಸ್ಯರು, ಅಖಿಲ ಭಾರತ ವಕೀಲರ ಒಕ್ಕೂಟ, ಕರ್ನಾಟಕ. ಹಾಗೂ ಮುಖಂಡರು ಹಾಸನ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ.&lt;/p&gt;&lt;p&gt;ಹಾಜಿ ಸುಲೇಮಾನ್ ಸಾಹೇಬ್ ಅಧ್ಯಕ್ಷರು. ತೀರ್ಥಹಳ್ಳಿ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟ.&lt;/p&gt;&lt;p&gt;ಮುಜಾಹಿದ್ ಪಾಷ, ಅಲ್ ಜಮಾತುಲ್ ಖುರೈಷ್ ಟ್ರಸ್ಟ್, ಬಸವಕಲ್ಯಾಣ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/muslim-organizations-express-anger-against-congress-joint-statement-released-bengaluru/articleshow-m3flrgy"/>
        </item>
        <item>
            <title><![CDATA[ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಅಭಾವದ ಆತಂಕ, ಬರಿದಾಗುತ್ತಿದೆ ಜೀವಜಲ!]]></title>
            <link>https://kannada.asianetnews.com/karnataka-districts/mandya-water-crisis-krs-dam-water-level-drops-to-99-feet-raises-alarm-over-drinking-water-shortage-gdp/articleshow-taz5zxg</link>
            <guid isPermaLink="true">https://kannada.asianetnews.com/karnataka-districts/mandya-water-crisis-krs-dam-water-level-drops-to-99-feet-raises-alarm-over-drinking-water-shortage-gdp/articleshow-taz5zxg</guid>
            <pubDate>Sat, 18 Apr 2026 14:08:01 +0530</pubDate>
            <description><![CDATA[ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 99 ಅಡಿಗೆ ಕುಸಿದಿದ್ದು, ಮಂಡ್ಯ ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಆತಂಕ ಎದುರಾಗಿದೆ. ಒಳಹರಿವು ತೀವ್ರವಾಗಿ ಕಡಿಮೆಯಾಗಿದ್ದು, ಮುಂಗಾರು ಮಳೆ ವಿಳಂಬವಾದರೆ ಕಾವೇರಿ ಕಣಿವೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jz3rcr9dcn4rmye4wb1c47wc,imgname-krs-dam-1751399162156.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &lt;/strong&gt;ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 99 ಅಡಿಗೆ ಇಳಿದಿದ್ದು, ಕುಡಿಯುವ ನೀರು ಹಾಗೂ ಕೃಷಿಗೆ ಸಂಬಂಧಿಸಿ ಈಗ ನೀರಿನ ಅಭಾವ ಎದುರಾಗುವ ಭೀತಿ ಎದುರಾಗಿದೆ.&lt;/p&gt;&lt;p&gt;ಕೆಆರ್ ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಪ್ರಸ್ತುತ ಅದು ಗಂಭೀರವಾಗಿ ಕುಸಿದಿರುವುದು ಗಮನಾರ್ಹವಾಗಿದೆ. ಜಲಾಶಯದಲ್ಲಿ ಒಟ್ಟು 22 ಟಿಎಂಸಿ ನೀರು ಶೇಖರಣೆ ಇದ್ದರೂ, ಅದರಲ್ಲಿ 7 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯವಿರುವ ನೀರು ಕೇವಲ 15 ಟಿಎಂಸಿ ಮಾತ್ರವಾಗಿದೆ. ಈ ಪರಿಸ್ಥಿತಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಅಗತ್ಯವಾಗಿದ್ದು, ಕೃಷಿ ಕಾರ್ಯಗಳಿಗೆ ನಿಯಂತ್ರಿತವಾಗಿ ನೀರು ಒದಗಿಸುವುದು ಅನಿವಾರ್ಯವಾಗಿದೆ. ಜೊತೆಗೆ ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.&lt;/p&gt;&lt;h2&gt;ಒಳ ಹರಿವು ಕೇವಲ 66 ಕ್ಯೂಸೆಕ್ ಇದ್ದು, ಹೊರ ಹರಿವು 4388 ಕ್ಯೂಸೆಕ್&lt;/h2&gt;&lt;p&gt;ಇದೀಗ ಜಲಾಶಯಕ್ಕೆ ಒಳ ಹರಿವು ಕೇವಲ 66 ಕ್ಯೂಸೆಕ್ ಇದ್ದು, ಹೊರ ಹರಿವು 4388 ಕ್ಯೂಸೆಕ್ ಆಗಿದೆ. ಒಳ ಹರಿವು ಕಡಿಮೆಯಾಗಿದ್ದು, ಹೊರ ಹರಿವು ಹೆಚ್ಚು ಇರುವುದರಿಂದ ನೀರಿನ ಮಟ್ಟ ನಿರಂತರವಾಗಿ ಇಳಿಕೆಯಾಗುತ್ತಿದೆ. ಮುಂಗಾರು ಮಳೆ ತಡವಾದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಜೂನ್ ಮೊದಲ ವಾರದೊಳಗೆ ಸಮರ್ಪಕ ಮಳೆಯಾಗದಿದ್ದರೆ, ಮಂಡ್ಯ ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ಭೀತಿ ವ್ಯಕ್ತವಾಗಿದೆ.&lt;/p&gt;&lt;h2&gt;ಕಬಿನಿಯಲ್ಲೂ ಇಳಿಕೆ&lt;/h2&gt;&lt;p&gt;ಇನ್ನು ಕಬಿನಿ ಜಲಾಶಯದ ಸ್ಥಿತಿಯೂ ಸಹ ಗಮನಾರ್ಹವಾಗಿದೆ. ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 2260.81 ಅಡಿ (7.63 ಟಿಎಂಸಿ) ಇದ್ದು, ಒಳ ಹರಿವು 112 ಕ್ಯೂಸೆಕ್ ಮತ್ತು ಹೊರ ಹರಿವು 1200 ಕ್ಯೂಸೆಕ್ ಆಗಿದೆ. ಇದರ ಗರಿಷ್ಠ ಮಟ್ಟ 2284 ಅಡಿ ಆಗಿದ್ದು, ಇಲ್ಲಿಯೂ ನೀರಿನ ಮಟ್ಟ ಸಮರ್ಪಕವಾಗಿಲ್ಲ&lt;/p&gt;&lt;p&gt;ಒಟ್ಟಾರೆ, ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳ ನೀರಿನ ಮಟ್ಟ ಕುಸಿತದಿಂದಾಗಿ ಕಾವೇರಿ ನೀರನ್ನು ಅವಲಂಬಿಸಿರುವ ಮಂಡ್ಯ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನೀರಿನ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಮುಂಗಾರು ಮಳೆಯ ಮೇಲೆಯೇ ಈಗ ಜನರ ನಿರೀಕ್ಷೆ ನೆಟ್ಟಿದೆ. ಮಳೆ ವಿಳಂಬವಾದರೆ, ಕೃಷಿ ಚಟುವಟಿಕೆಗಳಿಗೆ ಹೊಡೆತ ಬೀಳುವ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mandya-water-crisis-krs-dam-water-level-drops-to-99-feet-raises-alarm-over-drinking-water-shortage-gdp/articleshow-taz5zxg"/>
        </item>
        <item>
            <title><![CDATA['ನನ್ನ ಬಟ್ಟೆ ನಾನೇ ಬಿಚ್ಚಿಕೊಂಡು ಕೇಸ್ ಹಾಕ್ತೀನಿ': ವಾಸ್ತು ತಜ್ಞನನ್ನೇ ಬೆದರಿಸಿ ಕಿಡ್ನಾಪ್ ಮಾಡಲು ಯತ್ನಿಸಿತೇ ಲತಾ ಗ್ಯಾಂಗ್?]]></title>
            <link>https://kannada.asianetnews.com/bengaluru-urban/vijayanagar-vastu-center-harassment-allegation-honey-trap-extortion-case-san/articleshow-6fr5ch9</link>
            <guid isPermaLink="true">https://kannada.asianetnews.com/bengaluru-urban/vijayanagar-vastu-center-harassment-allegation-honey-trap-extortion-case-san/articleshow-6fr5ch9</guid>
            <pubDate>Sat, 18 Apr 2026 13:20:36 +0530</pubDate>
            <description><![CDATA[&lt;p&gt;ಬೆಂಗಳೂರಿನ ವಾಸ್ತು ತಜ್ಞ ಶಾಂತಕುಮಾರ್ ವಿರುದ್ಧ ಗರ್ಭಿಣಿಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಶಾಂತಕುಮಾರ್ ಅವರು ಆ ಮಹಿಳೆ 'ವಸೂಲಿ ಗ್ಯಾಂಗ್'ನ ಭಾಗವಾಗಿದ್ದು, ಹಣಕ್ಕಾಗಿ ಬ್ಲ್ಯಾಕ್&zwnj;ಮೇಲ್ ಮಾಡಿ, ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfrmhd6zrrq92tqrnf5hqtt,imgname-bengaluru-vastu-1776498132390.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18): &lt;/strong&gt;ರಾಜಧಾನಿಯ ವಿಜಯನಗರದಲ್ಲಿರುವ 'ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್' ಎಂಬ ವಾಸ್ತು ಕೇಂದ್ರ ಈಗ ಪರಸ್ಪರ ದೂರು-ಪ್ರತಿದೂರುಗಳ ಸಮರಕ್ಕೆ ಸಾಕ್ಷಿಯಾಗಿದೆ. ಗರ್ಭಿಣಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರೆ, ಎದುರು ಪಕ್ಷದವರು ಆಕೆ 'ವಸೂಲಿ ಗ್ಯಾಂಗ್' ಸದಸ್ಯೆ ಎಂದು ಎಫ್&zwnj;ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆ ಎನ್ನಲಾದ ಲತಾ ಎಂಬುವವರು ತಮ್ಮ ಮನೆಯ ವಾಸ್ತು ಕೇಳಲು ಈ ತಿಂಗಳ 4ನೇ ತಾರೀಖಿನಂದು ಶಾಂತಕುಮಾರ್ ಎಂಬುವವರ ಕಚೇರಿಗೆ ಹೋಗಿದ್ದರು. ಈ ವೇಳೆ ಶಾಂತಕುಮಾರ್ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ವಾಸ್ತು ಹೇಳುವ ನೆಪದಲ್ಲಿ ಶಾಂತಕುಮಾರ್ ಅವರು ಗರ್ಭಿಣಿ ಲತಾ ಅವರ ಹೊಟ್ಟೆ ಹಾಗೂ ಎದೆಯ ಭಾಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅಲ್ಲಿನ ಸಿಬ್ಬಂದಿ ಹಾಗೂ ಶಾಂತಕುಮಾರ್ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಾಸ್ತು ಸಲಹೆಗಾಗಿ ಶಾಂತಕುಮಾರ್ ಈಗಾಗಲೇ 15 ಸಾವಿರ ರೂಪಾಯಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಲತಾ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಇವರದ್ದು ವಸೂಲಿ ಗ್ಯಾಂಗ್&zwnj; ಎಂದ ವಾಸ್ತುತಜ್ಞ ಶಾಂತರಾಜು&lt;/strong&gt;&lt;/h2&gt;&lt;p&gt;ಈ ಬೆನ್ನಲ್ಲೇ ವಾಸ್ತು ಕೇಂದ್ರದ ಮಾಲೀಕ ಶಾಂತರಾಜು ಅವರು ಲತಾ ಹಾಗೂ ಆಕೆಯ ಗ್ಯಾಂಗ್ ವಿರುದ್ಧ ಪ್ರತಿಯಾಗಿ ದೂರು ನೀಡಿದ್ದು, ಇದು ದೊಡ್ಡ ಮಟ್ಟದ ವಸೂಲಿ ಜಾಲ ಎಂದು ಆರೋಪಿಸಿದ್ದಾರೆ. ಲತಾ, ಜಮಾಲ್ ಮತ್ತು ಅಮೃತ ಲಿಂಗಂ ಎಂಬ ಮೂವರು ಕಚೇರಿಗೆ ಬಂದು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ನಾವು ಒಪ್ಪದಿದ್ದಾಗ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಶಾಂತರಾಜು ಅವರ ಪತ್ನಿ ಶೋಭಾ ರಾಣಿ ಬಿಡಿಸಲು ಬಂದಾಗ ಅವರ ಮೇಲೆಯೂ ಜಮಾಲ್ ಮತ್ತು ಅಮೃತಲಿಂಗಂ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.&lt;/p&gt;&lt;p&gt;ಲತಾ ಎಂಬಾಕೆ ತಾನು 'ದಲಿತ್ ವಾಯ್ಸ್' ಸಂಘಟನೆಯವಳು ಹಾಗೂ ಪೊಲೀಸ್ ಎಂದು ಬೆದರಿಸಿದ್ದರೆ, ಅಮೃತಲಿಂಗಂ ತಾನು ಪ್ರೆಸ್ ಮತ್ತು ಮೀಡಿಯಾದವನೆಂದು ಹೇಳಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಇಲ್ಲದಿದ್ದರೆ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಮೊಬೈಲ್ ಲೂಟಿ ಹಾಗೂ ಕಿಡ್ನಾಪ್ ಯತ್ನ&lt;/strong&gt;&lt;/h2&gt;&lt;p&gt;ಶಾಂತರಾಜು ಅವರ ಬಳಿಯಿದ್ದ ಸುಮಾರು 1 ಲಕ್ಷ ರೂ. ಬೆಲೆಯ ಸ್ಯಾಮ್&zwnj;ಸಂಗ್ S-23 ಅಲ್ಟ್ರಾ ಮೊಬೈಲ್ ಫೋನನ್ನು ಈ ಗ್ಯಾಂಗ್ ಕಿತ್ತುಕೊಂಡಿದೆ. ಅಲ್ಲದೆ, ಶಾಂತರಾಜು ಮತ್ತು ಅವರ ಪತ್ನಿಯನ್ನು ಬಲವಂತವಾಗಿ ಆಟೋದಲ್ಲಿ ಕುಳ್ಳಿರಿಸಿಕೊಂಡು ಜಯನಗರದ ಕಡೆಗೆ ಅಪಹರಿಸಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;&quot;ಬಟ್ಟೆ ಬಿಚ್ಚಿಕೊಂಡು ದೂರು ನೀಡುವೆ&quot;:&lt;/strong&gt;&lt;/h2&gt;&lt;p&gt;ಆಟೋದಲ್ಲಿ ಕರೆದೊಯ್ಯುವಾಗ ಲತಾ ಎಂಬಾಕೆ, &quot;ನನ್ನ ಬಟ್ಟೆಯನ್ನು ನಾನೇ ಬಿಚ್ಚಿಕೊಂಡು, ನೀನೇ ನನ್ನ ಮೇಲೆ ದೌರ್ಜನ್ಯ ಮಾಡಿದೆ ಎಂದು ದೂರು ನೀಡಿ ನಿನ್ನ ಮಾನ ಕಳೆಯುತ್ತೇನೆ&quot; ಎಂದು ಬೆದರಿಕೆ ಹಾಕಿದ್ದಾಳೆ ಎಂದು ಶಾಂತರಾಜು ದೂರಿನಲ್ಲಿ ತಿಳಿಸಿದ್ದಾರೆ. ದಾರಿಯುದ್ದಕ್ಕೂ ಹಲ್ಲೆ ನಡೆಸುತ್ತಿದ್ದಾಗ ಕಿರುಚಿಕೊಂಡ ಶಾಂತರಾಜು, ಆಟೋ ನಿಲ್ಲಿಸಿದ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರ ಮೊರೆ ಹೋಗಿದ್ದಾರೆ.&lt;/p&gt;&lt;p&gt;ಒಂದೆಡೆ ಲೈಂಗಿಕ ದೌರ್ಜನ್ಯದ ಆರೋಪ, ಇನ್ನೊಂದೆಡೆ ಹಣಕ್ಕಾಗಿ ಬ್ಲ್ಯಾಕ್&zwnj;ಮೇಲ್ ಮತ್ತು ಕಿಡ್ನಾಪ್ ಆರೋಪ. ಇಬ್ಬರ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸರು ಪರಸ್ಪರ ಎಫ್&zwnj;ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಲತಾ ನಿಜಕ್ಕೂ ಸಂತ್ರಸ್ತೆಯೇ ಅಥವಾ ವಸೂಲಿ ಗ್ಯಾಂಗ್&zwnj;ನ ಭಾಗವೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/vijayanagar-vastu-center-harassment-allegation-honey-trap-extortion-case-san/articleshow-6fr5ch9"/>
        </item>
        <item>
            <title><![CDATA[ಅಕ್ಷಯ ತೃತೀಯದಂದು ಮುಸ್ಲಿಂರ ಅಂಗಡಿಯಲ್ಲಿ ಚಿನ್ನ ಖರೀದಿಸಬೇಡಿ: ಹಿಂದೂಗಳಿಗೆ ಮುತಾಲಿಕ್ ಕರೆ, ಲವ್ ಜಿಹಾದ್, ಪೊಲೀಸರ ವಿರುದ್ಧ ಕಿಡಿ]]></title>
            <link>https://kannada.asianetnews.com/karnataka-districts/dont-buy-gold-from-muslim-shops-on-akshaya-tritiya-muthalik-calls-on-hindus-at-koppal/articleshow-r412pz5</link>
            <guid isPermaLink="true">https://kannada.asianetnews.com/karnataka-districts/dont-buy-gold-from-muslim-shops-on-akshaya-tritiya-muthalik-calls-on-hindus-at-koppal/articleshow-r412pz5</guid>
            <pubDate>Sat, 18 Apr 2026 13:09:19 +0530</pubDate>
            <description><![CDATA[&lt;p&gt;ಕೊಪ್ಪಳದಲ್ಲಿ ಮಾತನಾಡಿದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಬಂಗಾರ ಖರೀದಿಸುವಂತೆ ಕರೆ. ಅಳವಂಡಿ ಲವ್ ಜಿಹಾದ್ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ ಅವರು, ಟಿಸಿಎಸ್ ಮತಾಂತರ ಪ್ರಕರಣದ ಬಗ್ಗೆ ಎನ್&zwnj;ಐಎ ತನಿಖೆಗೆ ಆಗ್ರಹ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfr1x80bamq2xg8gw01vm0d,imgname-----------------------2026-04-18t130113.055-1776497521920.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳ (ಏ.18) ಅಕ್ಷಯ ತೃತೀಯದಂದು ಮುಸ್ಲಿಂ ಸಮುದಾಯದ ಅಂಗಡಿಗಳಲ್ಲಿ ಬಂಗಾರ ಖರೀದಿಸಬಾರದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಿಂದೂಗಳಿಗೆ ಕರೆ ನೀಡಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಬಂಗಾರ ಖರೀದಿಸುವ ಶಾಸ್ತ್ರ ಪವಿತ್ರವಾದದ್ದು. ಮೂರ್ತಿ ಭಂಜಕರ ಬಳಿ ವ್ಯವಹಾರ ಬೇಡ, ಧರ್ಮಕ್ಕಾಗಿ ಹಲಾಲ್ ಮುಕ್ತ ವ್ಯವಹಾರ ನಡೆಸಿ, ಹಿಂದೂ ಜ್ಯುವೆಲ್ಲರಿ ಶಾಪ್&zwnj;ಗಳಲ್ಲಿ ಬಂಗಾರ ಖರೀದಿಸುವಂಎ ಕರೆ ನೀಡಿದರು.&lt;/p&gt;&lt;h2&gt;ಐಟಿ ಸೆಕ್ಟರ್&zwnj; TCS ನಲ್ಲೇ ಮತಾಂತರ ಆಘಾತಕಾರಿ&lt;/h2&gt;&lt;p&gt;ನಾಸಿಕ್&zwnj;ನ ಟಿಸಿಎಸ್ (TCS) ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಮತಾಂತರ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ ಮುತಾಲಿಕ್, ಇದು ಅತ್ಯಂತ ಗಂಭೀರ ವಿಚಾರ. ದೇಶದ ಇಡೀ ಐಟಿ ಸೆಕ್ಟರ್ ಅನ್ನು ಎನ್&zwnj;ಐಎ (NIA) ಮೂಲಕ ಸಮೀಕ್ಷೆ ನಡೆಸಬೇಕು. ನಿದಾ ಖಾನ್ ಎಂಬಾಕೆ ಹಲವರೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಯಿದ್ದು, ತನಿಖೆ ಚುರುಕುಗೊಳ್ಳಬೇಕು ಎಂದು ಆಗ್ರಹಿಸಿದರು.&lt;/p&gt;&lt;h3&gt;ಅಳವಂಡಿ ಪ್ರಕರಣ: ಪೊಲೀಸರಿಗೆ ಹೆಣ್ಮಕ್ಕಳಿದ್ದಾರೋ ಇಲ್ವೋ?&lt;/h3&gt;&lt;p&gt;ಕೊಪ್ಪಳದ ಅಳವಂಡಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣದ ಬಗ್ಗೆ ಮಾತನಾಡುತ್ತಾ ಪೊಲೀಸರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಅಳವಂಡಿಯಲ್ಲಿ ನಡೆದಿರುವುದು ಐದನೆಯ ಪ್ರಕರಣವಾಗಿದೆ. ಮುಸ್ತಾಫ್ ಗಾಂಜಾ, ಡ್ರಗ್. ಮಟ್ಕಾ ಕಿಂಗ್ ಪಿನ್, ಅವನ ಮೊಬೈಲ್&zwnj;ನಲ್ಲಿ ನಾಲ್ಕು ಸಾವಿರ ಅಶ್ಲೀಲ ವಿಡಿಯೋ, ಆರು ಸಾವಿರ ಫೋಟೊಗಳಿವೆ. ಅವುಗಳನ್ನು ಸ್ವಲ್ಪ ಸಮಯದಲ್ಲೇ ಡಿಲಿಟ್ ಮಾಡಿದ್ದಾನೆ. ಮುಸ್ತಾಫ್ ಅಕ್ರಮಗಳ ಕಿಂಗ್&zwnj;ಪಿನ್ ಆಗಿದ್ದರೂ ಪೊಲೀಸರು ಏಕೆ ಬಂಧಿಸಿಲ್ಲ? ನೀವು ಸೆಗಣಿ ತಿನ್ನುತ್ತಿದ್ದೀರಾ? ಎಂದು ಪ್ರಶ್ನಿಸಿದ ಮುತಾಲಿಕ್, ಅಳವಂಡಿ ಕಾಂಗ್ರೆಸ್ ಮುಖಂಡರು ಮುಸ್ಲಿಂ ಓಲೈಕೆಯಲ್ಲಿ ತೊಡಗಿದ್ದು, ಈ ಕೇಸ್&zwnj;ನ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಆದರೆ ಈ ಪೊಲೀಸರು ಖಾಕಿ ತೊಟ್ಟು ಕರ್ತವ್ಯ ಪಾಲನೆ ಮಾಡದೇ ಭ್ರಷ್ಟಾಚಾರಕ್ಕೆ ಬಲಿಯಾಗಿದ್ದಾರೆ' ಎಂದು ಗಂಭೀರ ಆರೋಪ ಮಾಡಿದರು.&lt;/p&gt;&lt;h3&gt;ವಾಲ್ಮೀಕಿ ಸಮಾಜದ ಯುವತಿ ಮೇಲೆ ಮತಾಂತರದ ಪ್ರಭಾವ&lt;/h3&gt;&lt;p&gt;ವಾಲ್ಮೀಕಿ ಸಮಾಜದ ಯುವತಿ ಮುಸ್ತಾಫ್ ಮನೆಯಲ್ಲಿದ್ದು, ಆಕೆಗೆ ಈಗಾಗಲೇ ಹಿಜಾಬ್, ಬುರ್ಕಾ ಹಾಗೂ ನಮಾಜ್ ಕಲಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಂ ಕ್ರಿಮಿನಲ್&zwnj;ಗಳಿಗೆ ರೇಪಿಸ್ಟ್ ಕೊಲೆಗಾರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಕೋರ್ಟ್&zwnj;ಗಳು ಇಂತಹ ಪ್ರಕರಣಗಳಲ್ಲಿ ವಿಳಂಬ ಮಾಡದೆ ತಕ್ಷಣ ತೀರ್ಪು ನೀಡಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಭಜರಂಗ ದಳ ಜಿಲ್ಲಾಧ್ಯಕ್ಷ ಅರುಣ ಹೂಗಾರ ಹಾಗೂ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀಧರ ಕಲಬುರಗಿ ಉಪಸ್ಥಿತರಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/dont-buy-gold-from-muslim-shops-on-akshaya-tritiya-muthalik-calls-on-hindus-at-koppal/articleshow-r412pz5"/>
        </item>
        <item>
            <title><![CDATA[ಈ ಸಾವಿಗೆ ಯಾರು ಹೊಣೆ? ಬಯಲಾಟ ನೋಡುವ ವೇಳೆ ಕುಸಿದು ಬಿದ್ದ ಬೋರ್ಡ್‌, ಬದುಕಿ ಬಾಳಬೇಕಾದ ಇಬ್ಬರು ಮಕ್ಕಳ ಸಾವು!]]></title>
            <link>https://kannada.asianetnews.com/karnataka-districts/raichur-bayalata-tragedy-cement-board-collapse-kills-two-children-manvi-san/articleshow-e6l3lr8</link>
            <guid isPermaLink="true">https://kannada.asianetnews.com/karnataka-districts/raichur-bayalata-tragedy-cement-board-collapse-kills-two-children-manvi-san/articleshow-e6l3lr8</guid>
            <pubDate>Sat, 18 Apr 2026 13:08:02 +0530</pubDate>
            <description><![CDATA[ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೈಲ್ ಮರ್ಚಡ್ ಗ್ರಾಮದಲ್ಲಿ ನಡೆದ ಬಯಲಾಟ ಕಾರ್ಯಕ್ರಮದಲ್ಲಿ ಸಮುದಾಯ ಭವನದ ಸಿಮೆಂಟ್ ನಾಮಫಲಕ ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ-ಮಗಳ ಕಾಲುಗಳು ತುಂಡಾಗುವುದು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpfqctqka6vzptpdnjvyjr95,imgname-raichur-accident-1776496831218.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಏ.18): &lt;/strong&gt;ಜಿಲ್ಲೆಯ ಮಾನ್ವಿ ತಾಲೂಕಿನ ಬೈಲ್ ಮರ್ಚಡ್ ಗ್ರಾಮದಲ್ಲಿ ರಾತ್ರಿ ನಡೆದ ಬಯಲಾಟ ಕಾರ್ಯಕ್ರಮವು ರಕ್ತಸಿಕ್ತವಾಗಿ ಅಂತ್ಯಗೊಂಡಿದೆ. ಬಯಲಾಟ ನೋಡಲು ಬಂದಿದ್ದವರ ಮೇಲೆ ಸಮುದಾಯ ಭವನದ ಬೃಹತ್ ಸಿಮೆಂಟ್ ನಾಮಫಲಕ ಕುಸಿದು ಬಿದ್ದ ಪರಿಣಾಮ, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ.&lt;/p&gt;&lt;p&gt;ದುರ್ಘಟನೆಯಲ್ಲಿ 8 ವರ್ಷದ ಬಾಲಕ ವಿಶ್ವನಾಥ್ ಹಾಗೂ ಕೇವಲ ಒಂದೂವರೆ ವರ್ಷದ ಹಸುಗೂಸು ಸನ್ವಿತಾ ಸಿಮೆಂಟ್ ಬೋರ್ಡ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಪ್ರಾಣ ಚೆಲ್ಲಿದ್ದಾರೆ. ಇಡೀ ಗ್ರಾಮವೇ ಸಂಭ್ರಮದಿಂದ ಬಯಲಾಟ ವೀಕ್ಷಿಸುತ್ತಿದ್ದಾಗ ಕ್ಷಣಾರ್ಧದಲ್ಲಿ ಈ ಸಾವು ಸಂಭವಿಸಿದ್ದು, ಹಬ್ಬದ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ.&lt;/p&gt;&lt;h2&gt;&lt;strong&gt;ತಾಯಿ-ಮಗಳ ಕಾಲುಗಳು ಕಟ್!&lt;/strong&gt;&lt;/h2&gt;&lt;p&gt;ನಾಮಫಲಕ ಕುಸಿದ ತೀವ್ರತೆಗೆ ಕೆಳಗೆ ಕುಳಿತಿದ್ದವರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಬಸಮ್ಮ (28) ಎಂಬುವವರ ಒಂದು ಕಾಲು ಕತ್ತರಿಸಲ್ಪಟ್ಟಿದ್ದರೆ, ಅವರ ಮಗಳಾದ ಲಕ್ಷ್ಮಿ (17) ಎಂಬಾಕೆಯ ಎರಡೂ ಕಾಲುಗಳು ತುಂಡಾಗಿವೆ. ಗಂಭೀರವಾಗಿ ಗಾಯಗೊಂಡಿರುವ ವಿಶಾಲಮ್ಮ (20) ಮತ್ತು ಯಲ್ಲಮ್ಮ (4) ಸೇರಿದಂತೆ ನಾಲ್ವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h2&gt;&lt;strong&gt;ದುರಂತ ಸಂಭವಿಸಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಗ್ರಾಮದ ಸಮುದಾಯ ಭವನದ ಆವರಣದಲ್ಲಿ ನಿನ್ನೆ ರಾತ್ರಿ ಬಯಲಾಟ ನಡೆಯುತ್ತಿತ್ತು. ಗ್ರಾಮಸ್ಥರೆಲ್ಲರೂ ಸಮುದಾಯ ಭವನದ ಮುಂಭಾಗದಲ್ಲಿ ಕುಳಿತು ಆಟ ವೀಕ್ಷಿಸುತ್ತಿದ್ದರು. ಈ ವೇಳೆ ಕಟ್ಟಡದ ಮೇಲ್ಭಾಗದಲ್ಲಿದ್ದ ಭಾರಿ ತೂಕದ ಸಿಮೆಂಟ್&zwnj;ನ ನಾಮಫಲಕ (ಬೋರ್ಡ್) ಇದ್ದಕ್ಕಿದ್ದಂತೆ ಕುಸಿದು ಕೆಳಗೆ ಕುಳಿತಿದ್ದವರ ಮೇಲೆ ಬಿದ್ದಿದೆ. ಕಟ್ಟಡದ ಕಳಪೆ ಕಾಮಗಾರಿಯೇ ಈ ದುರ್ಘಟನೆಗೆ ಕಾರಣ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.&lt;/p&gt;&lt;p&gt;ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿಷಾದ ವ್ಯಕ್ತಪಡಿಸಿದ ಶಾಸಕ&lt;/strong&gt;&lt;/h2&gt;&lt;p&gt;ದುರಂತದ ವಿಷಯ ತಿಳಿಯುತ್ತಿದ್ದಂತೆಯೇ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಕೂಡಲೇ ಓಪೆಕ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಮಾನ್ವಿ ತಾಲೂಕು ಆಸ್ಪತ್ರೆಗೆ ತೆರಳಿ ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಶಾಸಕರು, &quot;ಗ್ರಾಮಸ್ಥರೆಲ್ಲರೂ ಕುಳಿತು ಬಯಲಾಟ ನೋಡುತ್ತಿದ್ದಾಗ ಏಕಾಏಕಿ ನಾಮಫಲಕ ಬಿದ್ದು ಇಬ್ಬರು ಮಕ್ಕಳ ಸಾವು ಸಂಭವಿಸಿರುವುದು ಅತ್ಯಂತ ನೋವಿನ ಸಂಗತಿ. ಗ್ರಾಮದ ಇತಿಹಾಸದಲ್ಲಿ ಇಂತಹ ಘಟನೆ ಎಂದೂ ಸಂಭವಿಸಿರಲಿಲ್ಲ, ಇದು ಆಕಸ್ಮಿಕವಾಗಿ ನಡೆದ ದುರ್ಘಟನೆಯಾಗಿದೆ. ಮೃತರ ಕುಟುಂಬಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ&quot; ಎಂದು ವಿಷಾದ ವ್ಯಕ್ತಪಡಿಸಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/raichur-bayalata-tragedy-cement-board-collapse-kills-two-children-manvi-san/articleshow-e6l3lr8"/>
        </item>
        <item>
            <title><![CDATA[Women Reservation bill ಮಹಿಳಾ ಮೀಸಲಾತಿ ವಿರೋಧಿಸೋರು ಸಮಾನತೆಯ ವೈರಿಗಳು: ಯಡಿಯೂರಪ್ಪ]]></title>
            <link>https://kannada.asianetnews.com/politics/bs-yadiyurappa-responce-about-women-reservation-bill-and-slams-congress-at-chikkamagaluru/articleshow-6yky3wd</link>
            <guid isPermaLink="true">https://kannada.asianetnews.com/politics/bs-yadiyurappa-responce-about-women-reservation-bill-and-slams-congress-at-chikkamagaluru/articleshow-6yky3wd</guid>
            <pubDate>Sat, 18 Apr 2026 12:08:54 +0530</pubDate>
            <description><![CDATA[&lt;p&gt;ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ಐತಿಹಾಸಿಕ ಎಂದು ಬಣ್ಣಿಸಿದ ಅವರು, ಇದನ್ನು ವಿರೋಧಿಸುವ ವಿಪಕ್ಷಗಳ ನಿಲುವನ್ನು ತೀವ್ರವಾಗಿ ಖಂಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfmhysk5rk6y32s502rjnhm,imgname-----------------------2026-04-18t111509.582-1776493853491.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಏ.18):&lt;/strong&gt; ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಅಂತರದಿಂದ ಜಯಭೇರಿ ಬಾರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;h2&gt;ಸಮಾನತೆಯ ವಿರುದ್ಧ ನಿಲ್ಲಬೇಡಿ&lt;/h2&gt;&lt;p&gt;ಮಹಿಳಾ ಮೀಸಲಾತಿಯನ್ನು ವಿರೋಧಿಸುವುದು ಸಮಾನತೆ ವಿರೋಧಿಗಳು. ಮಹಿಳಾ ಮೀಸಲಾತಿ ಬಗ್ಗೆ ಬಹಳ ವರ್ಷಗಳಿಂದ ಮಾತನಾಡಿಕೊಂಡು ಬರ್ತಿದ್ವಿ. ಇನ್ನು ಚರ್ಚೆ ಆಗಬೇಕು ಅಂದರೆ ಅದರ ವಿಳಂಬ ನೀತಿ ಸ್ಪಷ್ಟ ಆಗುತ್ತೆ. ಮಹಿಳಾ ಮೀಸಲಾತಿ ಜಾರಿ ಮಾಡ್ತಿರೋದು ರಾಜಕೀಯ ಲಾಭಕ್ಕಾಗಿ ಅನ್ನೋದು ತಪ್ಪು. ಒಳ್ಳೆಯ ನೀತಿ ಯಾವಾಗ ಬಂದರೂ ಒಳ್ಳೆಯದೆ ಬಸವಣ್ಣನವರು ಅಂದೇ ಹೆಣ್ಣು-ಗಂಡು ಭೇದವಿಲ್ಲದೆ ಸಮಾನ ಹಕ್ಕಿಗಾಗಿ ಹೋರಾಡಿದ್ದರು. ಅಕ್ಕಮಹಾದೇವಿಯಂತಹವರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಅದೇ ತತ್ವ ಮುಂದುವರಿಯಬೇಕೆಂದ್ರೆ ರಾಜಕೀಯದಲ್ಲಿ ಮಹಿಳೆಯರಿಗೆ ರಾಜಕೀಯ ಪ್ರವೇಶ, ಅವಕಾಶ ಕೊಡೋದು ಅನಿವಾರ್ಯ ಎಂದು ಪ್ರತಿಪಾದಿಸಿದರು. ಪ್ರತಿಯೊಂದಕ್ಕೂ ವಿರೋಧ ಮಾಡುವುದು ಸರಿಯಲ್ಲ ಎಂದು ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿದರು.&lt;/p&gt;&lt;h3&gt;ಮೋದಿ ನಿರ್ಧಾರಕ್ಕೆ ಬೆಂಬಲಿಸಿ&lt;/h3&gt;&lt;p&gt;ಮಹಿಳಾ ಮೀಸಲಾತಿ ಜಾರಿಗೊಳಿಸಿರುವ ಪ್ರಧಾನಿ ಮೋದಿಯವರ ನಿರ್ಧಾರ ಐತಿಹಾಸಿಕವಾದುದು. ಇದು ರಾಜಕೀಯ ಲಾಭಕ್ಕಾಗಿ ಎಂಬ ಟೀಕೆಗಳು ತಪ್ಪು. ಇದನ್ನು ವಿಳಂಬ ಮಾಡುವ ನೀತಿ ಸರಿಯಲ್ಲ. ಒಳ್ಳೆಯ ಕೆಲಸ ಯಾವಾಗ ನಡೆದರೂ ಸ್ವಾಗತಾರ್ಹ. ಆದ್ದರಿಂದ ಪಕ್ಷಾತೀತವಾಗಿ ಎಲ್ಲರೂ ಮೋದಿಯವರ ಈ ನಿರ್ಧಾರಕ್ಕೆ ಬೆಂಬಲ ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/bs-yadiyurappa-responce-about-women-reservation-bill-and-slams-congress-at-chikkamagaluru/articleshow-6yky3wd"/>
        </item>
        <item>
            <title><![CDATA[ಬ್ಯಾರಕ್‌ನಲ್ಲಿ ಕಣ್ಣೀರು, ನಿದ್ದೆಯಿಲ್ಲದ ರಾತ್ರಿ: ದರ್ಶನ್‌ಗೆ ಜೈಲಲ್ಲಿ ಜೊತೆಯಾದ ಕೊಲೆಗಾರ ಶಾಸಕ ವಿನಯ್‌ ಕುಲಕರ್ಣಿ]]></title>
            <link>https://kannada.asianetnews.com/bengaluru-urban/vinay-kulkarni-jail-life-ctp-number-darshan-barrack-yogesh-gowda-case-san/articleshow-lqudkux</link>
            <guid isPermaLink="true">https://kannada.asianetnews.com/bengaluru-urban/vinay-kulkarni-jail-life-ctp-number-darshan-barrack-yogesh-gowda-case-san/articleshow-lqudkux</guid>
            <pubDate>Sat, 18 Apr 2026 11:04:54 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ವಿನಯ್ ಕುಲಕರ್ಣಿ ಜೈಲಿನಲ್ಲಿ ಮೊದಲ ರಾತ್ರಿಯನ್ನು ಕಣ್ಣೀರಲ್ಲಿ ಕಳೆದಿದ್ದಾರೆ. ಊಟ-ನಿದ್ದೆ ಇಲ್ಲದೆ, ರಾಜಕೀಯ ಭವಿಷ್ಯ ಮತ್ತು ಕುಟುಂಬದ ಚಿಂತೆಯಲ್ಲಿ ಮುಳುಗಿದ್ದ ಅವರು, ಇದೀಗ 'ಅಪರಾಧಿ'ಯಾಗಿ ಜೈಲು ವಾಸ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpfh6e10tgeprjqcs9x47snc,imgname-darshan-and-vinay-kulkarni-1776490330144.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18): &lt;/strong&gt;ಧಾರವಾಡದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶಾಸಕ ವಿನಯ್ ಕುಲಕರ್ಣಿ ಅವರ ಜೈಲು ವಾಸದ ಮೊದಲ ರಾತ್ರಿ ಅತ್ಯಂತ ಕಷ್ಟಕರವಾಗಿತ್ತು. ರಾಜಕೀಯವಾಗಿ ಉತ್ತುಂಗದಲ್ಲಿದ್ದ ಶಾಸಕ ಈಗ ಜೈಲಿನ ಕತ್ತಲ ಕೋಣೆಯಲ್ಲಿ ಸಾಮಾನ್ಯ ಕೈದಿಯಂತೆ ಕಾಲ ಕಳೆಯುವಂತಾಗಿದೆ.&lt;/p&gt;&lt;p&gt;ನೆನ್ನೆ ಜೈಲಿಗೆ ಬಂದ ವಿನಯ್ ಕುಲಕರ್ಣಿಗೆ ಜೈಲಾಧಿಕಾರಿಗಳು ತಾತ್ಕಾಲಿಕವಾಗಿ UTP ನಂಬರ್ - 3674 (ವಿಚಾರಣಾಧೀನ ಕೈದಿ) ನೀಡಿದ್ದರು. ಆದರೆ, ಇಂದು ಬೆಳಿಗ್ಗೆ 11 ಗಂಟೆಯ ವೇಳೆಗೆ ಕಾನೂನು ಪ್ರಕ್ರಿಯೆಗಳ ನಂತರ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ ಅಪರಾಧಿಗಳಿಗೆ CTP (ಸಜಾ ಬಂಧಿ ಖೈದಿ) ನಂಬರ್ ಅಧಿಕೃತವಾಗಿ ನೀಡಲಾಗುತ್ತಿದೆ. ಈ ಮೂಲಕ ಶಾಸಕ ಎಂಬ ಹಣೆಪಟ್ಟಿ ಕಳಚಿ 'ಅಪರಾಧಿ' ಎಂಬ ಮುದ್ರೆ ಜೈಲಿನ ದಾಖಲೆಗಳಲ್ಲಿ ಭದ್ರವಾಗಿದೆ.&lt;/p&gt;&lt;h2&gt;&lt;strong&gt;ಕ್ವಾರಂಟೈನ್ ಸೆಲ್&zwnj;ನಲ್ಲಿ 17 ಮಂದಿ ವಾಸ್ತವ್ಯ&lt;/strong&gt;&lt;/h2&gt;&lt;p&gt;ವಿನಯ್ ಕುಲಕರ್ಣಿ ಮತ್ತು ಈ ಪ್ರಕರಣದ ಇತರ 17 ಅಪರಾಧಿಗಳನ್ನು ಸದ್ಯಕ್ಕೆ ಡಿ ಬ್ಯಾರಕ್&zwnj;ನ ಕ್ವಾರಂಟೈನ್ ಸೆಲ್&zwnj;ನಲ್ಲಿ ಇರಿಸಲಾಗಿದೆ. ನಿಯಮದ ಪ್ರಕಾರ ಮುಂದಿನ 10 ದಿನಗಳ ಕಾಲ ಇವರೆಲ್ಲರೂ ಇದೇ ಸೆಲ್&zwnj;ನಲ್ಲಿ ಇರಲಿದ್ದು, ಆ ಬಳಿಕ ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ. ವಿಶೇಷವೆಂದರೆ, ನಟ ದರ್ಶನ್ ಇರುವ ಬ್ಯಾರಕ್ ಮಾರ್ಗವಾಗಿಯೇ ಸ್ವಲ್ಪ ದೂರದಲ್ಲಿ ಕುಲಕರ್ಣಿ ಅವರ ವಾಸ್ತವ್ಯದ ಬ್ಯಾರಕ್ ಇದೆ.&lt;/p&gt;&lt;h2&gt;&lt;strong&gt;ನಿದ್ದೆಯಿಲ್ಲದ ರಾತ್ರಿ, ಕಣ್ಣೀರಲ್ಲಿ ಮುಳುಗಿದ ಶಾಸಕ&lt;/strong&gt;&lt;/h2&gt;&lt;p&gt;ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ವಿನಯ್ ಕುಲಕರ್ಣಿ ನೆನ್ನೆ ಇಡೀ ರಾತ್ರಿ ಚಿಂತೆಗೀಡಾಗಿದ್ದರು ಎಂದು ತಿಳಿದುಬಂದಿದೆ. ನೆನ್ನೆ ರಾತ್ರಿ ಜೈಲಿನಲ್ಲಿ ಚಪಾತಿ ನೀಡಲಾಗಿತ್ತು. ಆದರೆ, ಕುಲಕರ್ಣಿ ಸರಿಯಾಗಿ ಊಟ ಮಾಡದೆ ಬೇಸರದಲ್ಲಿದ್ದರು. ಬ್ಯಾರಕ್&zwnj;ನ ಒಳಗೆ ವಿನಯ್ ಕುಲಕರ್ಣಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದ್ದು, ರಾಜಕೀಯ ಭವಿಷ್ಯ ಹಾಗೂ ಕುಟುಂಬದ ವಿಚಾರವಾಗಿ ತೀವ್ರ ಆತಂಕದಲ್ಲಿದ್ದಾರೆ. ರಾತ್ರಿಯೆಲ್ಲಾ ಮೌನವಾಗಿದ್ದ ಶಾಸಕರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಿದ್ದೆಗೆ ಜಾರಿದ್ದರು. ಮತ್ತೆ ಬೆಳಿಗ್ಗೆ ಬೇಗ ಎಚ್ಚರಗೊಂಡು ಸಹ ಕೈದಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಕುಟುಂಬ ನೆನೆದು ಕಣ್ಣೀರಿಟ್ಟ ಇತರೆ ಅಪರಾಧಿಗಳು&lt;/strong&gt;&lt;/h2&gt;&lt;p&gt;ವಿನಯ್ ಕುಲಕರ್ಣಿ ಮಾತ್ರವಲ್ಲದೆ, ಪ್ರಕರಣದ ಇತರೆ ಅಪರಾಧಿಗಳು ಕೂಡ ತಮ್ಮ ಕುಟುಂಬದ ಸದಸ್ಯರನ್ನು ನೆನೆದು ಜೈಲಿನಲ್ಲಿ ಕಣ್ಣೀರು ಹಾಕಿದ್ದಾರೆ. ಇಷ್ಟು ವರ್ಷಗಳ ಕಾಲ ಹೊರಗಿದ್ದ ಇವರು, ಏಕಾಏಕಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವುದು ಇಡೀ ತಂಡವನ್ನು ಹತಾಶೆಗೆ ದೂಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/vinay-kulkarni-jail-life-ctp-number-darshan-barrack-yogesh-gowda-case-san/articleshow-lqudkux"/>
        </item>
        <item>
            <title><![CDATA[ಬಿಸಿಲು ಹೆಚ್ಚಾದ ಹಿನ್ನೆಲೆ ಅಂಜನಾದ್ರಿ ಬೆಟ್ಟಕ್ಕೆ ಬೆ.11ರಿಂದ ಸಂಜೆ 4ರ ವರೆಗೂ ಪ್ರವೇಶ ನಿರ್ಬಂಧ]]></title>
            <link>https://kannada.asianetnews.com/karnataka-districts/anjanadri-hill-entry-restricted-from-11-am-to-4-pm-due-heat-stroke-rav/articleshow-asmllu0</link>
            <guid isPermaLink="true">https://kannada.asianetnews.com/karnataka-districts/anjanadri-hill-entry-restricted-from-11-am-to-4-pm-due-heat-stroke-rav/articleshow-asmllu0</guid>
            <pubDate>Sat, 18 Apr 2026 10:12:42 +0530</pubDate>
            <description><![CDATA[ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಇತ್ತೀಚೆಗೆ ಇಬ್ಬರು ಭಕ್ತರ ಸಾವಿನ ಹಿನ್ನೆಲೆಯಲ್ಲಿ ದರ್ಶನದ ಸಮಯವನ್ನು ಬದಲಾಯಿಸಲಾಗಿದೆ. ಜಿಲ್ಲಾಡಳಿತದ ಆದೇಶದಂತೆ, ಇನ್ನು ಮುಂದೆ ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಭಕ್ತರಿಗೆ ಬೆಟ್ಟ ಹತ್ತಲು ನಿರ್ಬಂಧ ಹೇರಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpfdqp7gwd0z3cxr1g1jgxsm,imgname-----------------------2026-04-18t100114.769-1776486701296.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಏ.18):&lt;/strong&gt; ತಾಪಮಾನ ಹೆಚ್ಚಿದ್ದು, ಅಂಜನಾದ್ರಿ ಬೆಟ್ಟವನ್ನು ಮಧ್ಯಾಹ್ನ ಉರಿಬಿಸಿಲಿನಲ್ಲಿ ಏರುವುದರಿಂದ ಕೆಲವರ ಆರೋಗ್ಯ ಏರುಪೇರಾಗುತ್ತಿದೆ. ಹೀಗಾಗಿ, ಅಂಜನಾದ್ರಿ ಬೆಟ್ಟ ಏರಲು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ನಿರ್ಬಂಧ ಹೇರಲಾಗಿದೆ.&amp;nbsp;&lt;/p&gt;&lt;p&gt;ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನ ಸಮಯ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಆದೇಶ ಹೊರಡಿಸಿದ್ದಾರೆ.&amp;nbsp;&lt;/p&gt;&lt;p&gt;ದೇವರ ದರ್ಶನಕ್ಕೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಮತ್ತು ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಳೆದ 2 ತಿಂಗಳ ಅವಧಿಯಲ್ಲಿ ಇಬ್ಬರು ಭಕ್ತರು ದೇವಸ್ಥಾನದ ಮೆಟ್ಟಿಲುಗಳನ್ನು ಏರಿ ಮೇಲೆ ಹೋದ ನಂತರ ಉಸಿರಾಡಲು ತೊಂದರೆಯಾಗಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಮಾರ್ಚ್&zwnj;ನಲ್ಲಿ ಗುಜರಾತ್ ಮೂಲದ ಭಕ್ತರೊಬ್ಬರು ಮೆಟ್ಟಿಲು ಏರುವಾಗ ಎದೆಯ ನೋವು ಕಾಣಿಸಿಕೊಂಡು ಮೃತಪಟ್ಟಿದ್ದರು. ಏ.1ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಂಜನೇಯ ದೇವಸ್ಥಾನದ ಗರ್ಭಗುಡಿಯಲ್ಲಿ ಕುಳಿತು ದರ್ಶನ ಪಡೆದ ಬಳಿಕ ದಾವಣಗೆರೆ ಮೂಲದ ಭಕ್ತನೊಬ್ಬ ಬಿಸಿಲಿನ ತಾಪದಿಂದ ಕುಸಿದು ಬಿದ್ದು ಮೃತಪಟ್ಟಿದ್ದ.&lt;/p&gt;&lt;p&gt;&lt;strong&gt;ಇಂದಿನ ತಾಪಮಾನ :.&lt;/strong&gt;&lt;/p&gt;&lt;p&gt;ನಗರ ಗರಿಷ್ಠ(ಡಿಗ್ರಿ.ಸೆಂ.) ಕನಿಷ್ಠ(ಡಿಗ್ರಿ.ಸೆಂ.)&lt;/p&gt;&lt;ul&gt; &lt;li&gt;ಕಲಬುರಗಿ 43.2 28.6&lt;/li&gt; &lt;li&gt;ಬೀದರ್&zwnj; 41.0 24.8&lt;/li&gt; &lt;li&gt;ರಾಯಚೂರು 40.4 27.0&lt;/li&gt; &lt;li&gt;ವಿಜಯಪುರ 40.0 24.0&lt;/li&gt; &lt;li&gt;ಗದಗ 38.4 23.0&lt;/li&gt; &lt;li&gt;ಧಾರವಾಡ 37.5 20.0&lt;/li&gt; &lt;li&gt;ಬಾಗಲಕೋಟೆ 37.5 24.7&lt;/li&gt; &lt;li&gt;ಮೈಸೂರು 37.0 21.2&lt;/li&gt; &lt;li&gt;ಶಿವಮೊಗ್ಗ 37.0 22.8&lt;/li&gt; &lt;li&gt;ದಾವಣಗೆರೆ 37.0 22.5&lt;/li&gt; &lt;li&gt;Apr 18, 2026, 12:10:18 AM&lt;/li&gt;&lt;/ul&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/anjanadri-hill-entry-restricted-from-11-am-to-4-pm-due-heat-stroke-rav/articleshow-asmllu0"/>
        </item>
        <item>
            <title><![CDATA[Davanagere By-Election 2026: ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯವಲ್ಲ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡ!]]></title>
            <link>https://kannada.asianetnews.com/state/if-zameer-resign-congress-wont-win-even-20-seats-muslim-leader-warns-of-forming-a-new-party-rav/articleshow-g2gxmnq</link>
            <guid isPermaLink="true">https://kannada.asianetnews.com/state/if-zameer-resign-congress-wont-win-even-20-seats-muslim-leader-warns-of-forming-a-new-party-rav/articleshow-g2gxmnq</guid>
            <pubDate>Sat, 18 Apr 2026 09:14:06 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ತಲೆದಂಡವಾದರೆ, ಮುಸ್ಲಿಂ ಸಮುದಾಯ ಕಾಂಗ್ರೆಸ್&zwnj;ನಿಂದ ದೂರ ಸರಿದು ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟಲಿದೆ ಎಂದು ವಿಶ್ವ ಮುಸ್ಲಿಂ ಪರಿಷತ್ ರಾಜ್ಯಾಧ್ಯಕ್ಷ ಸುಭಾನ್ ಖಾನ್ ಎಚ್ಚರಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfatd0ymgc3x29zh49jndvx,imgname-----------------------2026-04-18t091021.800-1776483644446.jpg" type="image/jpeg" height="390" width="690"/>
            <content:encoded><![CDATA[&lt;p&gt;- ಮುಸ್ಲಿಂ ಸಮುದಾಯ ಕಾಂಗ್ರೆಸ್ಸಿಂದ ದೂರಾಗಿ, ಹೊಸ ಪಕ್ಷ ಕಟ್ಟಲಿದೆ: ಸುಭಾನ್ ಖಾನ್&lt;/p&gt;&lt;p&gt;-&lt;strong&gt;ದಾವಣಗೆರೆ (ಏ.18): &lt;/strong&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಬೆಳವಣಿಗೆ ಆಧಾರದಲ್ಲಿ ಸಚಿವ ಜಮೀರ್ ಅಹಮ್ಮದ್ ತಲೆದಂಡವಾದರೆ ವಿಧಾನಸಭೆ ಚುನಾವಣೆ-2028ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ 20-30 ಕ್ಷೇತ್ರಗಳನ್ನು ಗೆಲ್ಲುವುದೂ ಕಷ್ಟವಾದೀತು. ಮುಸ್ಲಿಂ ಸಮುದಾಯವೇ ಕಾಂಗ್ರೆಸ್ಸಿನಿಂದ ದೂರವಾಗುತ್ತದೆ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುಭಾನ್ ಖಾನ್ ಎಚ್ಚರಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆ.ಅಬ್ದುಲ್ ಜಬ್ಬಾರ್&zwnj;, ದಕ್ಷಿಣ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹಮ್ಮದ್&zwnj;ಗೆ ತಲೆದಂಡ ಮಾಡಿದ ಕಾಂಗ್ರೆಸ್&zwnj; ಪಾಠ ಕಲಿಯದಿದ್ದರೆ, ಮುಸ್ಲಿಂ ಸಮುದಾಯ ಪಾಠ ಕಲಿಸುವ ಕೆಲಸ ಮಾಡುತ್ತದೆ ಎಂದರು.&lt;/p&gt;&lt;p&gt;ಮುಸ್ಲಿಂ ನಾಯಕರಿಗೆ ತೊಂದರೆ ನೀಡಿದರೆ ಕಾಂಗ್ರೆಸ್ಸಿಂದ ದೂರ ಸರಿದು, ಪ್ರಾದೇಶಿಕ ಪಕ್ಷ ಹುಟ್ಟು ಹಾಕುತ್ತೇವೆ. ಮುಸ್ಲಿಂ ಸೇರಿದಂತೆ ಅಹಿಂದ ವರ್ಗ ಸೇರಿದಂತೆ ಎಲ್ಲ ಜಾತಿ, ಸಮುದಾಯ ಒಳಗೊಂಡಂತೆ ಕಾಂಗ್ರೆಸ್&zwnj;- ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು, ಜೆಡಿಎಸ್&zwnj;ನಂತಹ ಪ್ರಾದೇಶಿಕ ಪಕ್ಷಕ್ಕೆ ಪರ್ಯಾಯ ಶಕ್ತಿಯ ಉದಯವಾಗಲಿದೆ. ವಿಶ್ವ ಮುಸ್ಲಿಂ ಪರಿಷತ್ ರಾಜಕೀಯ ಪಕ್ಷವಾಗಿ ಮಾಡುತ್ತೇವೆ. ಜಮೀರ್ ಅಹ್ಮದ್&zwnj; ಅವರನ್ನೇ ಕರೆಸಿ ಲಕ್ಷಾಂತರ ಜನರ ಸೇರಿಸಿ, ಸಮಾವೇಶ ಮಾಡುತ್ತೇವೆ. ಜಮೀರ್&zwnj; ಅವರನ್ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಡುತ್ತೇವೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಕಾಂಗ್ರೆಸ್&zwnj;ನಲ್ಲಿ ಜಮೀರ್ ಅಹಮ್ಮದ್ ತಲೆದಂಡವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದೆ. ಕೆ.ಅಬ್ದುಲ್ ಜಬ್ಬಾರ್&zwnj; ಅವರಿಗೆ ಏನಾದರೂ ತೊಂದರೆಯಾದರೆ ಕಾಂಗ್ರೆಸ್ ದಾವಣಗೆರೆ ನಗರ, ಜಿಲ್ಲೆಯಲ್ಲಷ್ಟೇ ಅಲ್ಲ, ಎಲ್ಲ ಕಡೆ ಸರ್ವನಾಶವಾಗುತ್ತದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ವಿರುದ್ಧ ಅಬ್ದುಲ್ ಜಬ್ಬಾರ್ ಪಕ್ಷವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ತೆಗೆದು ಹಾಕಿದ್ದು ಖಂಡನೀಯ ಎಂದು ಅವರು ತಿಳಿಸಿದರು.&lt;/p&gt;&lt;p&gt;ನಸೀರ್ ಅಹಮ್ಮದ್&zwnj; ಅವರಿಂದ ಬಲವಂತದಿಂದ ರಾಜೀನಾಮೆ ಪಡೆಯಲಾಗಿದೆ. ಇದೀಗ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮ್ಮದ್ ತಲೆದಂಡ ಮಾಡಿದರೆ ಕರ್ನಾಟಕ, ತೆಲಂಗಾಣದಲ್ಲಿ ಇರುವಂತಹ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಲಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ, ರಾಜಕೀಯವಾಗಿ ಮುಗಿಸಲು ಹೊರಟರೆ ಅದೇ ಕಾಂಗ್ರೆಸ್ ಕೈಕಟ್ಟಿಕೊಂಡು ಕೂಡುವ ಸ್ಥಿತಿ ತಂದುಕೊಳ್ಳುತ್ತದೆ. ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಸೋಲನುಭವಿಸಲಿದೆ ಎಂದು ಸುಭಾನ್ ಖಾನ್ ಹೇಳಿದರು.&lt;/p&gt;&lt;p&gt;ಈ ಸಂದರ್ಭ ಪರಿಷತ್&zwnj; ಮುಖಂಡರಾದ ಪರ್ವೇಜ್, ಮಂಜುನಾಥ, ಅಲ್ಲಾಭಕ್ಷಿ ಇದ್ದರು&lt;/p&gt;&lt;p&gt;&lt;strong&gt;*ಸಾದಿಕ್ ನಾಮಪತ್ರ ಹಾಕಿಸಿದ್ದೇ ನಾನು: ಸುಭಾನ್&lt;/strong&gt;&lt;/p&gt;&lt;p&gt;- ಇದರಲ್ಲಿ ಜಮೀರ್&zwnj;, ಜಬ್ಬಾರ್, ನಸೀರ್&zwnj;ರ ಯಾವುದೇ ಪಾತ್ರವೂ ಇಲ್ಲ: ಸ್ಪಷ್ಟನೆ&lt;/p&gt;&lt;p&gt;ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನನ್ನ 40 ವರ್ಷದ ಸ್ನೇಹಿತ ಸಾದಿಕ್ ಪೈಲ್ವಾನ್ ನಾಮಪತ್ರ ತುಂಬಿ, ಹಾಕಿಸಿದ್ದೇ ನಾನು. ಸಾದಿಕ್&zwnj;ಗೆ ನಾಮಪತ್ರ ಸಲ್ಲಿಸಲು ಕೆ.ಅಬ್ದುಲ್ ಜಬ್ಬಾರ್, ನಸೀರ್ ಅಹಮ್ಮದ್, ಜಮೀರ್ ಅಹಮ್ಮದ್ ಯಾರೂ ಹೇಳಿಲ್ಲ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುಭಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಫಲಿತಾಂಶ ಇನ್ನೂ ಬಂದೇ ಇಲ್ಲ. ಆದರೂ, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರನ್ನು ಗುರಿಯಾಗಿಸಿಕೊಂಡು, ಕ್ರಮ ಕೈಗೊಳ್ಳಲಾಗುತ್ತಿದೆ. ಸಚಿವ ಎಸ್&zwnj;.ಎಸ್&zwnj;. ಮಲ್ಲಿಕಾರ್ಜುನ ಅವರ ಶಿಫಾರಸಿನಿಂದ ಹೀಗೆ ಕಾಂಗ್ರೆಸ್ ವರಿಷ್ಠರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.&lt;/p&gt;&lt;p&gt;ನನ್ನ ಗೆಳೆಯ ಸಾದಿಕ್ ಪೈಲ್ವಾನ್ ಕಾಂಗ್ರೆಸ್ಸಿನಲ್ಲಿ ದುಡಿದರೂ ತನ್ನನ್ನು ಗುರುತಿಸಲಿಲ್ಲವೆಂದು ಬೇಸರ ತೋಡಿಕೊಂಡಿದ್ದ. ನಾನೂ ಉಪ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಸಾದಿಕ್&zwnj;ಗೂ ನಾಮಪತ್ರ ಸಲ್ಲಿಸಲು ಹೇಳಿ, ನಾನೇ ನಾಮಪತ್ರ ತುಂಬಿ, ನನ್ನದೇ ಹಣದಲ್ಲಿ ಠೇವಣಿ ಕಟ್ಟಿದ್ದೆ. ಆದರೆ, ಸೆಡ್ಡು ಹೊಡೆದಿದ್ದ ಆತ ಇದ್ದಕ್ಕಿದ್ದಂತೆ ಯು ಟರ್ನ್ ಆಗುತ್ತಾನೆಂದು ನಾನಂತೂ ಅಂದುಕೊಂಡಿರಲಿಲ್ಲ ಎಂದು ಅವರು ತಿಳಿಸಿದರು.&lt;/p&gt;&lt;p&gt;ಚುನಾವಣಾ ಕಣದಲ್ಲಿ ಉಳಿಯುವುದು, ಬಿಡುವುದು ಅವನ ಇಷ್ಟ. ಸಾದಿಕ್&zwnj; ಪೈಲ್ವಾನ್&zwnj;ಗೆ ನಾಮಪತ್ರ ಸಲ್ಲಿಸಲು, ಹಿಂದಕ್ಕೆ ಪಡೆಯದಂತೆ ಹೇಳಿದ್ದು ನಾನೇ ಹೊರತು ಅಬ್ದುಲ್ ಜಬ್ಬಾರ್&zwnj;, ಜಮೀರ್ ಅಹಮ್ಮದ್, ನಸೀರ್ ಅಹಮ್ಮದ್ ಆಗಲಿ ಅಲ್ಲ. ಉಪ ಚುನಾವಣೆಗೆ ಇಡೀ ಕ್ಯಾಬಿನೆಟ್&zwnj; ದಾವಣಗೆರೆಗೆ ಬಂದು, ಠಿಕಾಣಿ ಹೂಡಿತ್ತು. ಇಲ್ಲಿಯೇ ಇದ್ದವರು ಒಂದು ಸಲ ಅಬ್ದುಲ್&zwnj; ಜಬ್ಬಾರ್ ಮನೆಗೆ ಭೇಟಿ ನೀಡಬೇಕಿತ್ತು. ಜಬ್ಬಾರ್ ಅಲ್ಪಸಂಖ್ಯಾತರ ನಾಯಕ. ಸಾದಿಕ್ ಮನೆ ಕೂಗಳತೆ ದೂರದಲ್ಲಿದ್ದರೂ ಸಾದಿಕ್&zwnj; ಮನೆಯಲ್ಲಿ ಊಟ ಮಾಡಿದ ಸಿಎಂ ಸಿದ್ದರಾಮಯ್ಯ, ಜಬ್ಬಾರ್ ಮನೆಗೆ ಹೋಗಲಿಲ್ಲ ಎಂದು ಅವರು ದೂರಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/if-zameer-resign-congress-wont-win-even-20-seats-muslim-leader-warns-of-forming-a-new-party-rav/articleshow-g2gxmnq"/>
        </item>
        <item>
            <title><![CDATA[ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತಗಳ ಮರು ಎಣಿಕೆ: 'ಸತ್ಯಕ್ಕೆ ಜಯ ಸಿಗಲಿದೆ' ಎಂದ ಶಾಸಕ ಟಿ.ಡಿ. ರಾಜೇಗೌಡ!]]></title>
            <link>https://kannada.asianetnews.com/politics/sringeri-assembly-election-postal-vote-recount-td-rajegowda-asianet-suvrana-news-sat/articleshow-g7s8t71</link>
            <guid isPermaLink="true">https://kannada.asianetnews.com/politics/sringeri-assembly-election-postal-vote-recount-td-rajegowda-asianet-suvrana-news-sat/articleshow-g7s8t71</guid>
            <pubDate>Sat, 18 Apr 2026 08:56:00 +0530</pubDate>
            <description><![CDATA[2023ರ ಶೃಂಗೇರಿ ವಿಧಾನಸಭಾ ಚುನಾವಣೆಯ ಫಲಿತಾಂಶವು ಹೈಕೋರ್ಟ್ ಆದೇಶದಿಂದ ಹೊಸ ತಿರುವು ಪಡೆದಿದೆ. ಅಂಚೆ ಮತಗಳ ಎಣಿಕೆಯಲ್ಲಿನ ಅವ್ಯವಹಾರದ ಆರೋಪದ ಮೇಲೆ, ತಿರಸ್ಕೃತ 279 ಮತಗಳ ಮರು ಪರಿಶೀಲನೆಗೆ ನ್ಯಾಯಾಲಯ ಸೂಚಿಸಿದ್ದು, ಇದು ಕ್ಷೇತ್ರದ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpf9z36fjmjnv8skaqfb1qhv,imgname-sringeri-mal-td-rajegowda-1776482749646.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು: ರಾ&lt;/strong&gt;ಜ್ಯ ರಾಜಕೀಯದಲ್ಲಿ ಅತೀವ ಕುತೂಹಲ ಮೂಡಿಸಿದ್ದ 2023ರ ವಿಧಾನಸಭಾ ಚುನಾವಣೆಯ ಶೃಂಗೇರಿ ಕ್ಷೇತ್ರದ ಫಲಿತಾಂಶ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಅಂಚೆ ಮತಗಳ ಎಣಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತಾಗಿ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ವಿವಾದಿತ ಅಂಚೆ ಮತಗಳ ಮರು ಪರಿಶೀಲನೆಗೆ ಸೂಚನೆ ನೀಡಿದೆ. ಈ ಬೆಳವಣಿಗೆಯ ಬಳಿಕ ಕ್ಷೇತ್ರದಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಎಲ್ಲರ ಚಿತ್ತ ನ್ಯಾಯಾಲಯದ ಆದೇಶ ಮತ್ತು ಮುಂದಿನ ಬೆಳವಣಿಗೆಯತ್ತ ನೆಟ್ಟಿದೆ.&lt;/p&gt;&lt;h2&gt;&lt;strong&gt;ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ.ಡಿ. ರಾಜೇಗೌಡರು, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಡಿ.ಎನ್. ಜೀವರಾಜ್ ಅವರ ವಿರುದ್ಧ ಕೇವಲ 201 ಮತಗಳ ಅಂತರದಿಂದ ರೋಚಕ ಜಯ ಸಾಧಿಸಿದ್ದರು. ಆದರೆ ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣಾ ಸಂದರ್ಭದಲ್ಲಿ ನಡೆದ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಅವರು ದೂರು ನೀಡಿದ್ದರು. ಒಟ್ಟು 2811 ಅಂಚೆ ಮತಗಳಲ್ಲಿ ಸುಮಾರು 279 ಅಂಚೆ ಮತಗಳನ್ನು ತಿರಸ್ಕರಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಹೈಕೋರ್ಟ್ ಈ 279 ಅಂಚೆ ಮತಗಳ ಮರು ಪರಿಶೀಲನೆಗೆ ಆದೇಶಿಸಿದ್ದು, ಒಂದು ವೇಳೆ ಇದರಲ್ಲಿ ವ್ಯತ್ಯಾಸಗಳು ಕಂಡುಬಂದಲ್ಲಿ ಸಂಪೂರ್ಣ ಅಂಚೆ ಮತಗಳ ಮರು ಎಣಿಕೆ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.&lt;/p&gt;&lt;h2&gt;&lt;strong&gt;ಆಡಳಿತದ ಸಿದ್ಧತೆ:&lt;/strong&gt;&lt;/h2&gt;&lt;p&gt;ಹೈಕೋರ್ಟ್ ಆದೇಶದಂತೆ ಮುಂದಿನ ಎರಡು ವಾರಗಳ ಒಳಗಾಗಿ ಮರು ಎಣಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದು, ಸ್ಟೇ ಕೋರಿ ಅರ್ಜಿ ಸಲ್ಲಿಸಲು ಏಪ್ರಿಲ್ 20 ರವರೆಗೆ ಗಡುವು ನೀಡಲಾಗಿದೆ. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ರಿಟರ್ನಿಂಗ್ ಅಧಿಕಾರಿ (RO) ನೇಮಕ ಮಾಡುವಂತೆ ಕೋರಿಕೊಂಡಿದೆ. ಮುಂದಿನ 4 ದಿನಗಳ ಒಳಗಾಗಿ ಚುನಾವಣಾಧಿಕಾರಿ ನೇಮಕವಾಗುವ ಸಾಧ್ಯತೆಯಿದ್ದು, ಬಳಿಕ ಮರು ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.&lt;/p&gt;&lt;h3&gt;&lt;strong&gt;ಶಾಸಕ ಟಿ.ಡಿ. ರಾಜೇಗೌಡರ ಪ್ರತಿಕ್ರಿಯೆ:&lt;/strong&gt;&lt;/h3&gt;&lt;p&gt;ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಟಿ.ಡಿ. ರಾಜೇಗೌಡರು, &quot;ಸತ್ಯಕ್ಕೆ ಯಾವಾಗಲೂ ಜಯ ಸಿಗಲಿದೆ&quot; ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಲಭ್ಯವಾಗಿದ್ದರೂ, ಆದೇಶದ ಪೂರ್ಣ ಪ್ರತಿಯನ್ನು ತಮ್ಮ ವಕೀಲರೊಂದಿಗೆ ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ಮುಂದಿನ ಕಾನೂನಾತ್ಮಕ ಹೆಜ್ಜೆ ಇಡುವುದಾಗಿ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಚುನಾವಣಾ ಸಂದರ್ಭದಲ್ಲಿ ಎಲ್ಲಾ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಅತ್ಯಂತ ಪಾರದರ್ಶಕವಾಗಿ ಮತ ಎಣಿಕೆ ನಡೆದಿದೆ ಎಂಬುದನ್ನು ಈ ವೇಳೆ ನೆನಪಿಸಿಕೊಂಡಿರುವ ಅವರು, ಅರ್ಜಿದಾರರು ಕೇವಲ ಮತ ಎಣಿಕೆಯ ಬಗ್ಗೆ ಮಾತ್ರ ನ್ಯಾಯಾಲಯದ ಮೊರೆ ಹೋಗಿದ್ದರೆ ಅಂದೇ ಸಹಕಾರ ನೀಡುತ್ತಿದ್ದೆವು ಎಂದು ತಿಳಿಸಿದ್ದಾರೆ. ತಮ್ಮ ಮೇಲೆ ಹೊರಿಸಲಾಗಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲೇ ಉತ್ತರ ಸಿಗಲಿದೆ ಎಂದಿರುವ ರಾಜೇಗೌಡರು, ಹಿಂದೆಯೂ ತಾವು ಸೋತಾಗ ಜನರ ಅಭಿವೃದ್ಧಿಗೆ ಅಡ್ಡಿಪಡಿಸದೆ ಕೆಲಸ ಮಾಡಿದ್ದೇವೆ, ಹೀಗಾಗಿ ನ್ಯಾಯಾಲಯದ ಯಾವುದೇ ತೀರ್ಪನ್ನು ಗೌರವಿಸಿ ಸ್ವೀಕರಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ ಶೃಂಗೇರಿ ಕ್ಷೇತ್ರದ ಈ ಅಂಚೆ ಮತಗಳ ಮರು ಪರಿಶೀಲನೆ ಮುಂಬರುವ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/sringeri-assembly-election-postal-vote-recount-td-rajegowda-asianet-suvrana-news-sat/articleshow-g7s8t71"/>
        </item>
        <item>
            <title><![CDATA[women reservation bill defeat: ಕಾಂಗ್ರೆಸ್ಸಿಂದ ಇಡೀ ವಿಶ್ವದ ಮಹಿಳಾ ಕುಲಕ್ಕೆ ಅಪಮಾನ -ವಿಜಯೇಂದ್ರ]]></title>
            <link>https://kannada.asianetnews.com/politics/women-reservation-bill-2026-congress-has-insulted-the-entire-womankind-of-the-world-rav/articleshow-c38wxpm</link>
            <guid isPermaLink="true">https://kannada.asianetnews.com/politics/women-reservation-bill-2026-congress-has-insulted-the-entire-womankind-of-the-world-rav/articleshow-c38wxpm</guid>
            <pubDate>Sat, 18 Apr 2026 08:54:19 +0530</pubDate>
            <description><![CDATA[&lt;p&gt;ನಾರಿ ಶಕ್ತಿ ವಂದನಾ ಮಸೂದೆಗೆ ಉಂಟಾದ ಸೋಲು ಪ್ರಜಾಪ್ರಭುತ್ವದ ಕರಾಳ ದಿನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮಹಿಳಾ ಕುಲಕ್ಕೆ ಅಪಮಾನ ಮಾಡಿವೆ ಎಂದು ಆರೋಪಿಸಿದ ಅವರು, ಭವಿಷ್ಯದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಲಿದೆ ಎಂದರು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp9ykxdwsjyjkpe7q0j8j897,imgname-----------------------2026-04-16t070051.621-1776303076796.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18) &lt;/strong&gt;ನಾರಿ&zwnj; ಶಕ್ತಿ&zwnj; ವಂದನಾ ಮಸೂದೆಗೆ ಸೋಲುಂಟಾಗಿರುವುದು ಭಾರತದ ಪ್ರಜಾ ಪ್ರಭುತ್ವದ ವ್ಯವಸ್ಥೆಯ ಕರಾಳ&zwnj; ದಿನವಾಗಿದೆ. ಇಂದಿನ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಕೇವಲ&zwnj; ಭಾರತೀಯ ನಾರಿ&zwnj;ಕುಲಕ್ಕಷ್ಟೇ ಅಲ್ಲ&zwnj;, ಇಡೀ ವಿಶ್ವದ ಮಹಿಳಾ ಕುಲವನ್ನು&zwnj; ಅಪಮಾನಿಸಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.&amp;nbsp;&lt;/p&gt;&lt;p&gt;ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ನೈಜ ಉದ್ದೇಶವನ್ನು ಸ್ವಾತಂತ್ರ್ಯಾನಂತರದಿಂದಲೂ ಮೆಟ್ಟಿ ನಿಲ್ಲುವುದು, ಸರ್ವಾಧಿಕಾರ ಮೆರೆಯುವುದು&zwnj;, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ. ಲಕ್ಷಾಂತರ ಜನರ ತ್ಯಾಗ-ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅದನ್ನು ಸ್ವೇಚ್ಛಾಚಾರದಿಂದ ಕಾಂಗ್ರೆಸ್ ಬಳಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.&lt;/p&gt;&lt;h2&gt;ನಾರಿ ಶಕ್ತಿ ವಂದನಾ ಮಸೂದೆಗೆ ಸೋಲಿಗೆ ಕಿಡಿ&lt;/h2&gt;&lt;p&gt;ಪ್ರಧಾನಿ ಮೋದಿ ಅವರ ನೇತೃತ್ವದ ಎನ್&zwnj;ಡಿಎ ಸರ್ಕಾರವು ಸ್ವಾತಂತ್ರ್ಯದ ನೈಜತೆ ಹಾಗೂ ಸಂವಿಧಾನದ ಶಕ್ತಿಯನ್ನು ನಾರಿ ಕುಲಕ್ಕೆ ಸಮರ್ಪಿಸಬೇಕೆಂಬ ಮಹತ್ವಾಕಾಂಕ್ಷೆಯ ಮಸೂದೆಗೆ ಹಿನ್ನೆಡೆಯುಂಟಾಗಿರುವುದು ಕೇವಲ ತಾತ್ಕಾಲಿಕವಷ್ಟೇ. ಇಡೀ ದೇಶದ ಮಹಿಳಾ&zwnj;ಶಕ್ತಿ ಇಂಡೀ ಒಕ್ಕೂಟಕ್ಕೆ ಭವಿಷ್ಯತ್ತಿನಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.&amp;nbsp;&lt;/p&gt;&lt;p&gt;ಅತೀ ಶೀಘ್ರದಲ್ಲಿ ಲಿಂಗ ಸಮಾನತೆ, ಪ್ರಜಾ ಪ್ರಭುತ್ವದ ಸುಂದರತೆ ಅರಳಲಿದೆ, ಸಂವಿಧಾನದ ಶಕ್ತಿ&zwnj; ಮೆರೆಯಲಿದೆ, ಮಹಿಳಾ ಮೀಸಲಾತಿ ವಿಜೃಂಬಿಸಲಿದೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/women-reservation-bill-2026-congress-has-insulted-the-entire-womankind-of-the-world-rav/articleshow-c38wxpm"/>
        </item>
        <item>
            <title><![CDATA[ವಿದ್ಯುತ್ ದರ ಮತ್ತೆ ಹೆಚ್ಚಳ: ಬೆಸ್ಕಾಂ ಪ್ರತಿ ಯುನಿಟ್‌ಗೆ 56 ಪೈಸೆ, ಸೆಸ್ಕ್‌ನಿಂದ 15 ಪೈಸೆ ಏರಿಕೆ]]></title>
            <link>https://kannada.asianetnews.com/state/electricity-prices-up-again-bescom-hikes-rates-by-56-paise-cesc-by-15-paise-per-unit-rav/articleshow-v2o1c7r</link>
            <guid isPermaLink="true">https://kannada.asianetnews.com/state/electricity-prices-up-again-bescom-hikes-rates-by-56-paise-cesc-by-15-paise-per-unit-rav/articleshow-v2o1c7r</guid>
            <pubDate>Sat, 18 Apr 2026 07:47:30 +0530</pubDate>
            <description><![CDATA[&lt;p&gt;2026-27ನೇ ಸಾಲಿನಲ್ಲಿ ಆದಾಯ ಕೊರತೆ ಸರಿದೂಗಿಸಲು ಬೆಸ್ಕಾಂ ಮತ್ತು ಸೆಸ್ಕ್ ಗ್ರಾಹಕರಿಗೆ ವಿದ್ಯುತ್ ದರ ಕ್ರಮವಾಗಿ 56 ಮತ್ತು 15 ಪೈಸೆ ಹೆಚ್ಚಳವಾಗಲಿದೆ. ಇದೇ ವೇಳೆ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಹುಕ್ಕೇರಿ ಎಸ್ಕಾಂ ಗ್ರಾಹಕರಿಗೆ ಹೆಚ್ಚುವರಿ ಆದಾಯದ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250630195736,imgname-image-ed6d0269-e198-4dd5-b9e4-d07bbd0eb8bf.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.19)&lt;/strong&gt;: ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್&zwnj; ಸರಬರಾಜು ನಿಗಮಗಳಿಗೆ (ಸೆಸ್ಕ್-ಮೈಸೂರು) 2024-25ನೇ ಸಾಲಿನಲ್ಲಿ ಉಂಟಾಗಿರುವ ಆದಾಯ ಕೊರತೆ ತುಂಬಿಕೊಳ್ಳಲು 2026-27ನೇ ಸಾಲಿನಲ್ಲಿ ಬೆಸ್ಕಾಂ ಗ್ರಾಹಕರಿಂದ ಪ್ರತಿ ಯುನಿಟ್&zwnj;ಗೆ 56 ಪೈಸೆ ಹಾಗೂ ಸೆಸ್ಕ್&zwnj; ಗ್ರಾಹಕರಿಂದ ಪ್ರತಿ ಯುನಿಟ್&zwnj;ಗೆ 15 ಪೈಸೆಯಂತೆ ಹೆಚ್ಚುವರಿಯಾಗಿ ಸಂಗ್ರಹಿಸಲು ಕೆಇಆರ್&zwnj;ಸಿ ಆದೇಶ ಮಾಡಿದೆ.&lt;/p&gt;&lt;p&gt;ಇದೇ ವೇಳೆ 2024-25ರಲ್ಲಿ ನಿರ್ವಹಣಾ ವೆಚ್ಚಕ್ಕಿಂತ ಹೆಚ್ಚು ಆದಾಯ ಸಂಗ್ರಹ ಮಾಡಿರುವ ಹೆಸ್ಕಾಂ (ಹುಬ್ಬಳ್ಳಿ) ತನ್ನ ಗ್ರಾಹಕರಿಗೆ 2026-27ನೇ ಸಾಲಿನಲ್ಲಿ ಪ್ರತಿ ತಿಂಗಳು ಪ್ರತಿ ಯುನಿಟ್&zwnj;ಗೆ 10 ಪೈಸೆಯಂತೆ ಮರುಪಾವತಿ ಮಾಡಬೇಕು.&lt;/p&gt;&lt;p&gt;ಜತೆಗೆ ಜೆಸ್ಕಾಂ (ಕಲಬುರಗಿ) ಗ್ರಾಹಕರಿಗೆ 10 ಪೈಸೆ, ಮಂಗಳೂರಿನ ಮೆಸ್ಕಾಂ ಗ್ರಾಹಕರಿಗೆ 9 ಪೈಸೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್&zwnj; ಸರಬರಾಜು ಸಹಕಾರ ಸೊಸೈಟಿಯ (ಎಚ್&zwnj;ಆರ್&zwnj;ಇಸಿಎಸ್) ಗ್ರಾಹಕರಿಗೆ ಪ್ರತಿ ಯುನಿಟ್&zwnj;ಗೆ ಬರೋಬ್ಬರಿ 155 ಪೈಸೆಯಷ್ಟು ಹಣವನ್ನು ಮರು ಪಾವತಿ ಮಾಡಬೇಕು ಎಂದು ಆದೇಶ ಮಾಡಿದೆ.&lt;/p&gt;&lt;p&gt;ತನ್ಮೂಲಕ 2026-27ನೇ ಸಾಲಿಗೆ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್&zwnj;ಗೆ 56 ಪೈಸೆ ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್&zwnj; ಸರರಬಾಜು ಕಂಪೆನಿ ಗ್ರಾಹಕರಿಗೆ 15 ಪೈಸೆ ಹೊರೆ ಬಿದ್ದಿದೆ. ಆದರೆ ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಹುಕ್ಕೇರಿ ಎಸ್ಕಾಂಗಳ ಗ್ರಾಹಕರಿಗೆ ವಿದ್ಯುತ್ ದರ ಕಡಿಮೆಯಾಗಲಿದೆ.&lt;/p&gt;&lt;p&gt;ಈ ಆದೇಶ 2026 ಮೇ 1 ರಿಂದ 2027ರ ಏಪ್ರಿಲ್&zwnj; 31ರವರೆಗೆ ಬಳಕೆಯಾಗುವ ವಿದ್ಯುತ್&zwnj; ಬಿಲ್&zwnj;ಗೆ ಅನ್ವಯವಾಗಲಿದೆ.&lt;/p&gt;&lt;h2&gt;ಮರು ಪಾವತಿ ಹೇಗೆ?:&lt;/h2&gt;&lt;p&gt;ಎಸ್ಕಾಂಗಳಿಂದ ಮರುಪಾವತಿ ಪಡೆಯಲು ಅರ್ಹರಾಗಿರುವ 2024-25ನೇ ಸಾಲಿನಲ್ಲಿ ಬಳಕೆ ಮಾಡಿರುವ ವಿದ್ಯುತ್&zwnj; ಪ್ರಮಾಣದ ಆಧಾರದ ಮೇಲೆ 2026-27ನೇ ಸಾಲಿನಲ್ಲಿ ಮರುಪಾವತಿ ಪಡೆಯುತ್ತಾರೆ. ಉದಾ: 2024-25ನೇ ಸಾಲಿನಲ್ಲಿ ಮೆಸ್ಕಾಂನ ಗ್ರಾಹಕನೊಬ್ಬ ಪ್ರತಿ ತಿಂಗಳು ಸರಾಸರಿ 100 ಯುನಿಟ್&zwnj; ವಿದ್ಯುತ್&zwnj; ಬಳಕೆ ಮಾಡುತ್ತಿರುತ್ತಾರೆ. ಕೆಇಆರ್&zwnj;ಸಿ ಮೆಸ್ಕಾಂ ಗ್ರಾಹಕರಿಗೆ 9 ಪೈಸೆ ವಾಪಸು ಮಾಡುವಂತೆ ಆದೇಶಿಸಿದೆ. ಹೀಗಾಗಿ 2026-27ನೇ ಸಾಲಿನಲ್ಲಿ ಆ ಗ್ರಾಹಕ ಪ್ರತಿ ತಿಂಗಳು ಬಳಕೆ ಮಾಡುವ 100 ಯುನಿಟ್&zwnj;ಗಳಿಗೆ ಪ್ರತಿ ಯುನಿಟ್&zwnj;ಗೆ ತಲಾ 9 ಪೈಸೆಯಂತೆ ಹಣ ಮರು ಪಾವತಿ ಆಗಲಿದೆ.&lt;/p&gt;&lt;p&gt;ಇದನ್ನು ವಿದ್ಯುತ್&zwnj; ಬಿಲ್&zwnj;ನಲ್ಲಿ &lsquo;ಎಫ್&zwnj;ವೈ25 ಟ್ರೂ ಅಪ್&zwnj; ಚಾರ್ಜಸ್&zwnj;&rsquo; ಹೆಸರಿನಲ್ಲಿ ಪ್ರತ್ಯೇಕವಾಗಿ ನಮೂದಿಸಿ ಲೆಕ್ಕಾಚಾರ ಮಾಡಲಾಗುತ್ತದೆ.&lt;/p&gt;&lt;h3&gt;ಬೆಸ್ಕಾಂಗೆ ಭಾರಿ ನಷ್ಟ:&lt;/h3&gt;&lt;p&gt;2024-25ನೇ ಸಾಲಿನಲ್ಲಿ ಕೆಇಆರ್&zwnj;ಸಿಯು ಬೆಸ್ಕಾಂಗೆ 32,019 ಕೋಟಿ ರು. ನಿರ್ವಹಣಾ ವೆಚ್ಚ ತಗಲುವ ಆಧಾರದ ಮೇಲೆ ದರ ಪರಿಷ್ಕರಣೆ ಮಾಡಿತ್ತು. ಆದರೆ, 2024-25ನೇ ಸಾಲಿನಲ್ಲಿ ಬೆಸ್ಕಾಂಗೆ 34,087 ಕೋಟಿ ರು. ವೆಚ್ಚ ಉಂಟಾಗಿ 2024 ಕೋಟಿ ರು. ಆದಾಯ ಕೊರತೆ ಉಂಟಾಗಿತ್ತು.&lt;/p&gt;&lt;p&gt;ಈ ಕೊರತೆಯನ್ನು ತುಂಬಿಕೊಡುವಂತೆ 2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿ (ಎಪಿಆರ್&zwnj;) ಆಧಾರದ ಮೇಲೆ ಬೆಸ್ಕಾಂ ಕೆಇಆರ್&zwnj;ಸಿ ಮೊರೆ ಹೋಗಿತ್ತು. ಇದೀಗ ಕೆಇಆರ್&zwnj;ಸಿಯು ಪ್ರತಿ ಯುನಿಟ್&zwnj;ಗೆ 56 ಪೈಸೆಯಂತೆ ಹೆಚ್ಚುವರಿಯಾಗಿ ಸಂಗ್ರಹಿಸಿ ನಷ್ಟ ತುಂಬಿಕೊಳ್ಳುವಂತೆ ಆದೇಶ ನೀಡಿದೆ. ಉಳಿದಂತೆ ಚಾಮುಂಡೇಶ್ವರಿ ವಿದ್ಯುತ್&zwnj; ಸರಬರಾಜು ನಿಗಮಕ್ಕೆ 121.71 ಕೋಟಿ ರು. ಆದಾಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರತಿ ಯುನಿಟ್&zwnj;ಗೆ 15 ಪೈಸೆ ಹೆಚ್ಚಳ ಮಾಡಲಾಗಿದೆ.&lt;/p&gt;&lt;p&gt;ಆದರೆ, ಮಂಗಳೂರಿನ ಮೆಸ್ಕಾಂ 276.48 ಕೋಟಿ ರು. ಉಳಿತಾಯ ದಾಖಲಿಸಿರುವುದರಿಂದ ಪ್ರತಿ ಯುನಿಟ್&zwnj;ಗೆ 9 ಪೈಸೆ ಮರುಪಾವತಿಗೆ ಸೂಚಿಸಲಾಗಿದೆ. ಹೆಸ್ಕಾಂ 133.46 ಕೋಟಿ ರು. ಉಳಿತಾಯ ದಾಖಲಿಸಿರುವುದರಿಂದ 10 ಪೈಸೆ, ಜೆಸ್ಕಾಂ 90.40 ಕೋಟಿ ರು. ಉಳಿತಾಯ ದಾಖಲಿಸಿರುವುದಕ್ಕೆ 10 ಪೈಸೆ ಮರುಪಾವತಿಗೆ ಆದೇಶಿಸಲಾಗಿದೆ. ಎಚ್ಆರ್&zwnj;ಇಸಿಎಸ್&zwnj; (ಹುಕ್ಕೇರಿ) 381 ಮಿಲಿಯನ್&zwnj; ಯುನಿಟ್&zwnj; ವಿದ್ಯುತ್ ಪೂರೈಕೆ ಮಾಡಿದ್ದು, 267.35 ಕೋಟಿ ರು. ಖರ್ಚು ಮಾಡಿದೆ. ಇದಕ್ಕಿಂತ ಹೆಚ್ಚು ಆದಾಯ ಗಳಿಸಿರುವ ಹಿನ್ನೆಲೆಯಲ್ಲಿ ಪ್ರತಿ ಯುನಿಟ್&zwnj;ಗೆ 155 ಪೈಸೆಯಂತೆ ಮರುಪಾವತಿ ಮಾಡಲು ಆದೇಶಿಸಲಾಗಿದೆ.&lt;/p&gt;&lt;p&gt;&lt;strong&gt;ಎಸ್ಕಾಂಗಳು - ದರ ಬದಲಾವಣೆ (ಪ್ರತಿ ಯುನಿಟ್&zwnj;ಗೆ)&lt;/strong&gt;&lt;/p&gt;&lt;p&gt;ಬೆಸ್ಕಾಂ - 56 ಪೈಸೆ ಹೆಚ್ಚಳ&lt;/p&gt;&lt;p&gt;ಮೈಸೂರು ಸೆಸ್ಕ್- 15 ಪೈಸೆ ಹೆಚ್ಚಳ&lt;/p&gt;&lt;p&gt;ಮೆಸ್ಕಾಂ - 9 ಪೈಸೆ ಇಳಿಕೆ&lt;/p&gt;&lt;p&gt;ಹೆಸ್ಕಾಂ- 10 ಪೈಸೆ ಇಳಿಕೆ&lt;/p&gt;&lt;p&gt;ಜೆಸ್ಕಾಂ- 10 ಪೈಸೆ ಇಳಿಕೆ&lt;/p&gt;&lt;p&gt;ಹುಕ್ಕೇರಿಯ ಎಚ್&zwnj;ಆರ್&zwnj;ಇಸಿಎಸ್&zwnj;- 155 ಪೈಸೆ ಇಳಿಕೆ&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/electricity-prices-up-again-bescom-hikes-rates-by-56-paise-cesc-by-15-paise-per-unit-rav/articleshow-v2o1c7r"/>
        </item>
        <item>
            <title><![CDATA[ತಮಿಳುನಾಡು, ಬಿಹಾರ ಬಳಿಕ ಇದೀಗ ರಾಜ್ಯಕ್ಕೆ ಕಾಲಿಟ್ಟ ಹಕ್ಕಿಜ್ವರ, 7444 ಕೋಳಿ ನಾಶ!]]></title>
            <link>https://kannada.asianetnews.com/state/after-tamil-nadu-and-bihar-bird-flu-enters-the-state-7-444-chickens-culled-rav/articleshow-gzu6syz</link>
            <guid isPermaLink="true">https://kannada.asianetnews.com/state/after-tamil-nadu-and-bihar-bird-flu-enters-the-state-7-444-chickens-culled-rav/articleshow-gzu6syz</guid>
            <pubDate>Sat, 18 Apr 2026 07:25:40 +0530</pubDate>
            <description><![CDATA[ಬೆಂಗಳೂರಿನ ಹೆಸರಘಟ್ಟದ ಸರ್ಕಾರಿ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ (ಹಕ್ಕಿ ಜ್ವರ) ಪತ್ತೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ, 7,444 ಕೋಳಿಗಳನ್ನು ನಾಶಪಡಿಸಲಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಕಣ್ಗಾವಲು ಇರಿಸಲಾಗಿದೆ. ಇದು ಈ ವರ್ಷ ರಾಜ್ಯದಲ್ಲಿ ವರದಿಯಾದ ಮೊದಲ ಹಕ್ಕಿ ಜ್ವರ ಪ್ರಕರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpf4jhp5qe0qm5rw4539kg98,imgname-----------------------2026-04-18t072110.210-1776477095621.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18) &lt;/strong&gt;ತಮಿಳುನಾಡು, ಬಿಹಾರ ಬಳಿಕ ಇದೀಗ ಕರ್ನಾಟಕದಲ್ಲೂ ಹಕ್ಕಿ ಜ್ವರದ ಆತಂಕ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಹೆರಸಘಟ್ಟದ ಪೌಲ್ಟ್ರಿ ಫಾರಂನಲ್ಲಿ ಕೋಳಿಗಳಿಗೆ H5 N1 ವೈರಸ್ (ಹಕ್ಕಿ ಜ್ವರ) ಬಾಧೆ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 7,444 ಕೋಳಿಗಳ ನಾಶ ಮಾಡಲಾಗಿದೆ. ಇದು ರಾಜ್ಯದಲ್ಲಿ ಈ ವರ್ಷ ಪತ್ತೆಯಾಗಿರುವ ಮೊದಲ ಹಕ್ಕಿಜ್ವರ ಪ್ರಕರಣವಾಗಿದೆ.&lt;/p&gt;&lt;p&gt;ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪೌಲ್ಟ್ರಿ ಫಾರಂನ ಕೋಳಿಗಳಲ್ಲಿ ಮೊದಲ ತಪಾಸಣೆಯಲ್ಲೇ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಆದ್ದರಿಂದ ಅಲ್ಲಿದ್ದ 7,444 ಕೋಳಿಗಳನ್ನು ಗುಂಡಿ ತೆಗೆದು ಹೂಳಲಾಗಿದೆ. ಅಷ್ಟೇ ಅಲ್ಲ, 10 ಕೋಳಿ ಸಾಕಾಣೆಗಾರರನ್ನು ಕ್ವಾರಂಟೈನ್ ಮಾಡಲಾಗಿದೆ. ಬಿಸಿಲಿನ ತಾಪದಿಂದಾಗಿ ಬೇಸಿಗೆಯಲ್ಲಿ ಹಕ್ಕಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಹಕ್ಕಿಗಳಿಂದ ಕೋಳಿಗಳಿಗೂ ಜ್ವರ ಹಬ್ಬಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.&lt;/p&gt;&lt;p&gt;ಏ.14 ರಂದು ಹೆಸರಘಟ್ಟದ ಮುತ್ಕೂರು ಗ್ರಾಮದಲ್ಲಿ ಕೋಳಿಗಳಿಗೆ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಬಳಿಕ ಕ್ಷಿಪ್ರ ಕಾರ್ಯಪಡೆ ತಂಡ, ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. 7,444 ಕೋಳಿ, 14,788 ಮೊಟ್ಟೆ, 2250 ಕೆಜಿ ಪೌಲ್ಟ್ರಿ ಆಹಾರ, ಕೋಳಿ ತ್ಯಾಜ್ಯವನ್ನು ಏ.15 ರಂದು ಪಶು ಸಂಗೋಪನಾ ಇಲಾಖೆಯು ನಿಯಮಾನುಸಾರ ವಿಲೇವಾರಿ ಮಾಡಿತ್ತು.&lt;/p&gt;&lt;h2&gt;ಅಗತ್ಯ ಮುನ್ನೆಚ್ಚರಿಕೆ:&lt;/h2&gt;&lt;p&gt;ಈ ಬಗ್ಗೆ &lsquo;ಕನ್ನಡ ಪ್ರಭ&rsquo;ದೊಂದಿಗೆ ಮಾತನಾಡಿದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ನಿರ್ದೇಶಕ ಡಾ.ಪಿ.ಶ್ರೀನಿವಾಸ್&zwnj;, &lsquo;ಹೆಸರಘಟ್ಟದ ಪೌಲ್ಟ್ರಿ ಫಾರಂನಲ್ಲಿ ಹಕ್ಕಿಜ್ವರ ಖಚಿತವಾಗಿದ್ದು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. 7,444 ಕೋಳಿ ಮತ್ತು ಕೋಳಿ ತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ&rsquo; ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;&lsquo;ಬಾಧಿತ ಪೌಲ್ಟ್ರಿ ಫಾರಂ ಬಯಲು ಪ್ರದೇಶದಲ್ಲಿದ್ದು ಒಂದು ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ಹಳ್ಳಿಗಳಿಲ್ಲ. ಆದ್ದರಿಂದ ಹಳ್ಳಿಗಳು ಅಥವಾ ಪೌಲ್ಟ್ರಿ ಫಾರಂಗಳಿಗೆ ತೆರಳಿ ಕೋಳಿಗಳನ್ನು ನಾಶ ಮಾಡುವ ಅಗತ್ಯವಿಲ್ಲ. 1 ರಿಂದ 10 ಕಿ.ಮೀ. ವ್ಯಾಪ್ತಿಯೊಳಗೆ ಕಣ್ಗಾವಲು ಪ್ರದೇಶ ಎಂದು ಗುರುತಿಸಲಿದ್ದು 15 ದಿನಗಳಿಗೊಮ್ಮೆ ರ್&zwj;ಯಾಂಡಮ್&zwnj; ಆಗಿ ಪರೀಕ್ಷೆ ನಡೆಸಲಾಗುವುದು&rsquo; ಎಂದು ಮಾಹಿತಿ ನೀಡಿದರು.&lt;/p&gt;&lt;p&gt;&lsquo;ಎಲ್ಲೆಲ್ಲಿ ನಾಟಿ ಕೋಳಿಗಳು, ಫಾರಂ ಕೋಳಿಗಳು, ಎಲ್ಲೆಲ್ಲಿ ಖಾಸಗಿ ಫಾರಂಗಳಿವೆಯೋ ಅಲ್ಲಿಗೆ ತೆರಳಿ ಸ್ಯಾಂಪಲ್&zwnj; ಸಂಗ್ರಹಿಸಲಾಗುವುದು. ಅದನ್ನು 15 ದಿನಗಳಿಗೊಮ್ಮೆ ಸತತವಾಗಿ ಎರಡು ತಿಂಗಳು ಭೂಪಾಲ್&zwnj;ನಲ್ಲಿರುವ ಲ್ಯಾಬ್&zwnj;ಗೆ ಪರೀಕ್ಷೆ ನಡೆಸಲು ಕಳುಹಿಸುತ್ತೇವೆ. ನೆಗೆಟಿವ್&zwnj; ಬಂದರೆ ನೆಗೆಟಿವ್&zwnj; ಎಂದು ಘೋಷಣೆ ಮಾಡುತ್ತೇವೆ&rsquo; ಎಂದು ತಿಳಿಸಿದರು.&lt;/p&gt;&lt;h3&gt;54 ಚಿಕನ್&zwnj; ಸೆಂಟರ್&zwnj;, 36 ಹಳ್ಳಿ ಗುರುತು:&lt;/h3&gt;&lt;p&gt;ಬಾಧಿತ ಪ್ರದೇಶದ ಸುತ್ತಮುತ್ತ 54 ಚಿಕನ್&zwnj; ಸೆಂಟರ್&zwnj;, 36 ಹಳ್ಳಿಗಳನ್ನು ಗುರುತಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಪಂಗಳ ಪಿಡಿಓಗಳಿಗೆ ಸೂಚಿಸಲಾಗಿದೆ. ಹೆಸರಘಟ್ಟದಲ್ಲಿ ಕೆರೆ ಇರುವುದರಿಂದ ಹಕ್ಕಿಗಳ ಮೂಲಕ ಜ್ವರ ಬಂದಿದೆ. ಇಲಾಖೆ ಸಚಿವರು. ಆಯುಕ್ತರು, ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಸದ್ಯ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/after-tamil-nadu-and-bihar-bird-flu-enters-the-state-7-444-chickens-culled-rav/articleshow-gzu6syz"/>
        </item>
        <item>
            <title><![CDATA[ನಸುಕಿನಲ್ಲಿ ಪಿಜಿಗಳಿಗೆ ಕನ್ನಾಹಾಕುತ್ತಿದ್ದ ಖದೀಮ ಅರೆಸ್ಟ್; 5 ಲ್ಯಾಪ್‌ಟಾಪ್, ಮೊಬೈಲ್, 3 ಬೈಕ್ ಜಪ್ತಿ]]></title>
            <link>https://kannada.asianetnews.com/crime/early-morning-theft-in-bengaluru-pgs-arrested-miscreant-at-benaluru-rav/articleshow-pxd1bb8</link>
            <guid isPermaLink="true">https://kannada.asianetnews.com/crime/early-morning-theft-in-bengaluru-pgs-arrested-miscreant-at-benaluru-rav/articleshow-pxd1bb8</guid>
            <pubDate>Sat, 18 Apr 2026 07:02:14 +0530</pubDate>
            <description><![CDATA[&lt;p&gt;ಬೆಂಗಳೂರಿನ ಪಿಜಿಗಳನ್ನು ಗುರಿಯಾಗಿಸಿಕೊಂಡು ಮೊಬೈಲ್, ಲ್ಯಾಪ್&zwnj;ಟಾಪ್ ಮತ್ತು ಬೈಕ್&zwnj;ಗಳನ್ನು ಕದಿಯುತ್ತಿದ್ದ ತಮಿಳುನಾಡು ಮೂಲದ ಶಕ್ತಿವೇಲು ಎಂಬಾತನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpf2v7s3zt6fysc12bgkvm06,imgname-----------------------2026-04-18t065047.488-1776475283235.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18):&lt;/strong&gt; ಪಿಜಿಗಳಲ್ಲಿ ಗುರಿಯಾಗಿಸಿ ಮೊಬೈಲ್ ಹಾಗೂ ಬೈಕ್ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ತಮಿಳುನಾಡು ಮೂಲದ ಶಕ್ತಿವೇಲು ಬಂಧಿತನಾಗಿದ್ದು, ಆರೋಪಿಯಿಂದ ತಲಾ 5 ಲ್ಯಾಪ್&zwnj;ಟಾಪ್&zwnj;, ಮೊಬೈಲ್&zwnj; ಹಾಗೂ 3 ಬೈಕ್&zwnj;ಗಳು ಸೇರಿ 6 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.&lt;/p&gt;&lt;p&gt;ಕೆಲ ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಪಿಜಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ಮೊಬೈಲ್ ಕಳ್ಳತನವಾಗಿತ್ತು. ಈ ಬಗ್ಗೆ ದಾಖಲಾದ ದೂರಿನ್ವಯ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;&lt;strong&gt;ಮುಂಜಾನೆ ಕಾರ್ಯಾಚರಣೆ:&lt;/strong&gt; ಸುಲಭವಾಗಿ ಹಣ ಸಂಪಾದನೆಗೆ ಪಿಜಿಗಳಲ್ಲಿ ಶಕ್ತಿವೇಲು ಕಳ್ಳತನಕ್ಕಿಳಿದಿದ್ದ. ಐಟಿ-ಬಿಟಿ ಉದ್ಯೋಗಿಗಳ ಬಾಹುಳ್ಯವಿರುವ ವೈಟ್&zwnj;ಫೀಲ್ಡ್&zwnj; ಹಾಗೂ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ಪಿಜಿಗಳೇ ಆತನ ಟಾರ್ಗೆಟ್ ಆಗಿದ್ದವು. ನಸುಕಿನಲ್ಲಿ ಕೆಲಸ ಮುಗಿಸಿ ಬಂದು ಕೋಣೆ ಬಾಗಿಲು ಹಾಕದೆ ಐಟಿ ಉದ್ಯೋಗಿಗಳು ಮಲಗುತ್ತಿದ್ದರು. ಆ ವೇಳೆ ಅವರಿಂದ ಮೊಬೈಲ್, ಲ್ಯಾಪ್&zwnj;ಟಾಪ್ ಮಾತ್ರವಲ್ಲದೆ ಬೈಕ್ ಕೀ ಪಡೆದು ಬೈಕ್ ಅನ್ನು ಕಳವು ಮಾಡುತ್ತಿದ್ದ. ಇದಕ್ಕಾಗಿ ತನ್ನೂರು ತಮಿಳುನಾಡಿನಿಂದ ನಸುಕಿನಲ್ಲಿ ಬಂದು ಕೃತ್ಯ ಎಸಗಿ ಶಕ್ತಿವೇಲು ಮರಳುತ್ತಿದ್ದ. ಅಂತೆಯೇ ಇತ್ತೀಚೆಗೆ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಪಿಜಿಯಲ್ಲಿ ಆತ ಕೈ ಚಳಕ ತೋರಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/early-morning-theft-in-bengaluru-pgs-arrested-miscreant-at-benaluru-rav/articleshow-pxd1bb8"/>
        </item>
        <item>
            <title><![CDATA[ರಾಜಧಾನಿಯಲ್ಲೀಗ ಹೀಟ್‌ ಸ್ಟ್ರೋಕ್‌ ಆತಂಕ; ಬಿಸಿಲಿನ ತಾಪದಿಂದ ತಿಂಗಳೊಳಗೆ 10 ಮಂದಿ ಅಸ್ವಸ್ಥ!]]></title>
            <link>https://kannada.asianetnews.com/state/bengaluru-heatwave-alert-10-heat-stroke-cases-reported-in-a-month-amid-rising-temperatures-rav/articleshow-huhnwp1</link>
            <guid isPermaLink="true">https://kannada.asianetnews.com/state/bengaluru-heatwave-alert-10-heat-stroke-cases-reported-in-a-month-amid-rising-temperatures-rav/articleshow-huhnwp1</guid>
            <pubDate>Sat, 18 Apr 2026 06:40:10 +0530</pubDate>
            <description><![CDATA[&lt;p&gt;Bengaluru Heatwave Alert ಉದ್ಯಾನ ನಗರಿ ಬೆಂಗಳೂರು ತೀವ್ರ ಬಿಸಿಲಿನ ತಾಪಕ್ಕೆ ತುತ್ತಾಗಿದ್ದು, ಹೀಟ್&zwnj; ಸ್ಟ್ರೋಕ್&zwnj; ಶಂಕೆಯಿಂದ 10 ಮಂದಿ ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆ ಪಾಲಿಕೆಯ ಆರೋಗ್ಯ ಇಲಾಖೆಯು ಕಟ್ಟೆಚ್ಚರ ವಹಿಸಿದ್ದು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpf26af9kjdwhg6jt18a90d7,imgname-----------------------2026-04-18t062636.452-1776474597865.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಮಾಶಂಕರ ಕಾರ್ಯ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಏ.18): &lt;/strong&gt;ಉದ್ಯಾನ ನಗರಿ, ಹವಾನಿಯಂತ್ರಿತ ನಗರ ಎಂಬ ಖ್ಯಾತಿವೆತ್ತ ಬೆಂದಕಾಳೂರು ಅಕ್ಷರಶಃ ಬಿಸಿಲಿನ ತಾಪಕ್ಕೆ ಬೇಯುತ್ತಿದ್ದು, ಹೀಟ್&zwnj; ಸ್ಟ್ರೋಕ್&zwnj;ಗೆ ತುತ್ತಾಗಿ ನಗರದ 10 ಮಂದಿ ನಾಗರೀಕರು ಅಸ್ವಸ್ಥರಾಗಿದ್ದಾರೆ ಎಂದು ಪಾಲಿಕೆಯ ಆರೋಗ್ಯ ಇಲಾಖೆ ಖಚಿತಪಡಿಸಿದೆ.&lt;/p&gt;&lt;p&gt;ಮಾರ್ಚ್ 1ರಿಂದ ಏಪ್ರಿಲ್ 16ರವರೆಗೆ ಬಿಸಿಲಿನಿಂದಾಗಿ ನಗರದಲ್ಲಿ 10 ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರಿಗೆ ಪಾಲಿಕೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಸಂತೈಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟು ಮಂದಿ ಅಸ್ವಸ್ಥರಾಗಿದ್ದು, ಇವುಗಳನ್ನು ಶಂಕಿತ ಹೀಟ್ ಸ್ಟ್ರೋಕ್ ಪ್ರಕರಣಗಳೆಂದು ಪರಿಗಣಿಸಲಾಗಿದೆ.&lt;/p&gt;&lt;p&gt;ಈ ಸಂಬಂಧ ಪಾಲಿಕೆ ತೀವ್ರ ಕಟ್ಟೆಚ್ಚರ ವಹಿಸಿದೆ. ಪಾಲಿಕೆಯ ಆರೋಗ್ಯ ಅಧಿಕಾರಿಗಳು ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳುವ ವಿಧಾನಗಳ ಕುರಿತು ನಗರ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವಂತೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚಿಸಿದ್ದಾರೆ.&lt;/p&gt;&lt;p&gt;ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪಾಲಿಕೆ ವ್ಯಾಪ್ತಿಯ 369 ವಾರ್ಡ್ ಗಳ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ನಿರೀಕ್ಷಣಾಧಿಕಾರಿಗಳು ಬಿಸಿಲಿನ ಸಮಯದಲ್ಲಿ ಆರೋಗ್ಯ ಕೇಂದ್ರಗಳಲ್ಲಿಯೇ ಇದ್ದು ಬಿಸಿಲಿನ ತಾಪದಿಂದ ಬಳಲಿ ಬರುವ ಜನರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸಿರಾಜ್ ಮದನಿ ಕನ್ನಡಪ್ರಭಕ್ಕೆ ತಿಳಿಸಿದರು.&lt;/p&gt;&lt;p&gt;ಈ ಪ್ರಕರಣಗಳಲ್ಲಿ ಜನರು ಅವರ ದೇಹದಲ್ಲಿ ನೀರಿನ ಅಂಶ ಕಡಿಮೆ ಇದ್ದು ದೇಹ ಡಿಹೈಡ್ರೇಟ್ ಆಗಿರುವುದು ಕಂಡು ಬಂದಿದೆ. ಕೆಲವರು ಬಿಸಿಲಿನ ಸಮಯದಲ್ಲಿ ನಿಲುಗಡೆ ಮಾಡಿರುವ ವಾಹನಗಳಲ್ಲಿ ಕುಳಿತುಕೊಂಡು ಬಿಸಿಲಿನ ತಾಪಕ್ಕೆ ಸಿಲುಕಿರುವುದು ಕಂಡು ಬಂದಿದೆ. ತಲೆಸುತ್ತು, ಸುಸ್ತಾಗುವುದು, ಕಣ್ಣು ಮಂಜಾಗುವುದು ಕಂಡು ಬಂದಲ್ಲಿ ಕೂಡಲೆ ಹತ್ತಿರದ ಪಾಲಿಕೆಯ ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪಡೆಯಬಹುದು ಎಂದು ಅಧಿಕಾರಿ ತಿಳಿಸಿದರು.&lt;/p&gt;&lt;p&gt;ಜಾಗೃತಿ ಭಿತ್ತಿಪತ್ರ: ಇಂತಹ ಸಮಯದಲ್ಲಿ ಎಳನೀರು, ಮಜ್ಜಿಗೆ ಸೇವಿಸುವುದು, ತಂಪಾದ ಪಾನೀಯ ಸೇವಿಸುವುದು ಉತ್ತಮ. ಈ ಸಂದೇಶಗಳಿರುವ ಭಿತ್ತಿ ಪತ್ರಗಳನ್ನು 143 ಪ್ರಾಥಮಿಕ ಆರೋಗ್ಯ ಕೇಂದ್ರ, 242 ನಮ್ಮ ಕ್ಲಿನಿಕ್ ಗಳಲ್ಲಿ ಬಿತ್ತರಿಸಲಾಗಿದೆ.&lt;/p&gt;&lt;h2&gt;ಹೀಟ್ ಸ್ಟ್ರೋಕ್&zwnj;ನಿಂದ ಪಾರಾಗೋದು ಹೇಗೆ?&lt;/h2&gt;&lt;p&gt;ನಗರದಲ್ಲಿ ಬಿಸಿಲು ಹೆಚ್ಚಾದ ಸಮಯದಲ್ಲಿ ನೀರು ಹೆಚ್ಚು ಸೇವಿಸಬೇಕು, ಎಳನೀರು, ಮಜ್ಜಿಗೆ ಸೇವಿಸುವುದು, ತಂಪಾದ ಪಾನೀಯ ಸೇವಿಸುವುದು ಉತ್ತಮ, ಜಿಮ್ ಗಳಲ್ಲಿ ಹೆಚ್ಚು ವ್ಯಾಯಾಮ ಮಾಡುವುದು ಸೂಕ್ತವಲ್ಲ. ಹೆಚ್ಚು ಕಾಟನ್ ಬಟ್ಟೆಗಳನ್ನು ಧರಿಸುವುದು ಉತ್ತಮ. ಬಿಸಿಲಿನಲ್ಲಿ ನಿಲುಗಡೆ ಮಾಡಿರುವ ವಾಹನಗಳ ಮೇಲೆ ಗಂಟೆಗಟ್ಟಲೆ ಕುಳಿತುಕೊಳ್ಳುವುದು ಹೀಟ್ ಸ್ಟ್ರೋಕ್ ಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-heatwave-alert-10-heat-stroke-cases-reported-in-a-month-amid-rising-temperatures-rav/articleshow-huhnwp1"/>
        </item>
        <item>
            <title><![CDATA[ಯೋಗೇಶ್ ಗೌಡ ಕೊಲೆ ಪ್ರಕರಣ: ಜನಪ್ರತಿನಿಧಿ ಕೋರ್ಟ್ ತೀರ್ಪು, ವಿನಯ್ ಕುಲಕರ್ಣಿಗೆ ಜೀವಾವಧಿ ಎನ್ನುತ್ತಿದ್ದಂತೆ ಗಳಗಳನೆ ಅತ್ತ ಶಾಸಕ]]></title>
            <link>https://kannada.asianetnews.com/state/karnataka-congress-mla-vinay-kulkarni-gets-life-imprisonment-in-yogesh-gowda-murder-case-rav/articleshow-g9ohrzf</link>
            <guid isPermaLink="true">https://kannada.asianetnews.com/state/karnataka-congress-mla-vinay-kulkarni-gets-life-imprisonment-in-yogesh-gowda-murder-case-rav/articleshow-g9ohrzf</guid>
            <pubDate>Sat, 18 Apr 2026 05:35:31 +0530</pubDate>
            <description><![CDATA[&lt;p&gt;ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್&zwnj; ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ಓರ್ವ ಅಪರಾಧಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8mhxkyn1ggn98rsk20f2vw,imgname-vinay-kulkarni-convicted-1776258971261.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18):&lt;/strong&gt; ಹತ್ತು ವರ್ಷಗಳ ಹಿಂದೆ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 17 ಮಂದಿ ಅಪರಾಧಿಗಳಿಗೆ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್&zwnj; ಹಾಲಿ ಶಾಸಕ ವಿನಯ್&zwnj; ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ಒಬ್ಬ ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.&lt;/p&gt;&lt;p&gt;ಪ್ರಕರಣದ 21 ಮಂದಿ ಆರೋಪಿಗಳ ಪೈಕಿ 17 ಮಂದಿಯನ್ನು ದೋಷಿ ಎಂದು ತೀರ್ಮಾನಿಸಿ ಏ.15ರಂದು ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್&zwnj;, ಶುಕ್ರವಾರ ತೆರೆದ ನ್ಯಾಯಾಲಯದಲ್ಲಿ 17 ಮಂದಿ ಅಪರಾಧಿಗಳಿಗೂ ಶಿಕ್ಷೆ ಪ್ರಮಾಣ ಪ್ರಕಟಿಸಿದರು.&lt;/p&gt;&lt;p&gt;ಶಿಕ್ಷೆ ಪ್ರಮಾಣ ಪ್ರಕಟವಾಗುವ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಹಾಗೂ ಪೊಲೀಸರು ಶುಕ್ರವಾರ ಬೆಳಗ್ಗೆ ಬಿಗಿ ಭದ್ರತೆಯಲ್ಲಿ 17 ಮಂದಿ ಅಪರಾಧಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆತಂದಿದ್ದರು. ಸಂಜೆ ಸುಮಾರು 4.10ಕ್ಕೆ ನ್ಯಾಯಾಧೀಶ ಸಂತೋಷ್&zwnj; ಗಜಾನನ ಭಟ್&zwnj; ನ್ಯಾಯಾಲಯದ ಕೊಠಡಿ ಪ್ರವೇಶಿಸಿದರು. ಬಳಿಕ 17 ಮಂದಿ ಅಪರಾಧಿಗಳ ಹೆಸರು ಕೂಗಿದರು. ಈ ವೇಳೆ ವಿನಯ್&zwnj; ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳು ನ್ಯಾಯಾಧೀಶರಿಗೆ ಕೈ ಮುಗಿದು ನಿಂತರು. ಈ ವೇಳೆ ನ್ಯಾಯಾಧೀಶರು ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಜೀವಾವಧಿ ಶಿಕ್ಷೆ ಎಂದು ಹೇಳುತ್ತಿದಂತೆ ವಿನಯ್&zwnj; ಕುಲಕರ್ಣಿ ಸೇರಿ ಎಲ್ಲ ಆರೋಪಿಗಳು ಕಣ್ಣೀರಿಟ್ಟರು.&lt;/p&gt;&lt;p&gt;ನ್ಯಾಯಾಲಯದ ತೀರ್ಪಿನ ಬಳಿಕ ಅಪರಾಧಿಗಳನ್ನು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.&lt;/p&gt;&lt;h2&gt;ಯಾವುದಕ್ಕೆ ಎಷ್ಟು ಶಿಕ್ಷೆ?:&lt;/h2&gt;&lt;p&gt;ಭಾರತೀಯ ದಂಡ&zwnj; ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಜತೆಗೆ 120ಬಿ (ಪಿತೂರಿ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗಾಗಿ ವಿಕ್ರಮ್ ಬಳ್ಳಾರಿ (ಎ2), ಕೀರ್ತಿಕುಮಾರ್ ಬಸವರಾಜ ಕುರಹಟ್ಟಿ (ಎ3), ಸಂದೀಪ್ ಸವದತ್ತಿ (ಎ4), ವಿನಾಯಕ ಕಟಗಿ (ಎ5), ಮಹಾಬಲೇಶ್ವರ ಹೊಂಗಲ್ ಅಲಿಯಾಸ್ ಮುದುಕ (ಎ6), ಸಂತೋಷ್ ಸವದತ್ತಿ (ಎ7), ಎಂ. ದಿನೇಶ್ (ಎ8), ಅಶ್ವತ್ (ಎ9), ಸುನೀಲ್ (ಎ10), ನಜೀರ್ ಅಹಮದ್ (ಎ11), ಶಹನವಾಜ್ (ಎ12), ನೂತನ್ (ಎ13), ಹರ್ಷಿತ್ (ಎ14), ವಿನಯ ಕುಲಕರ್ಣಿ (ಎ15), ಚಂದ್ರಶೇಖರ್ ಇಂಡಿ (ಎ16) ಹಾಗೂ ವಿಕಾಸ್ ಕಲ್ಬುರ್ಗಿಗೆ (ಎ18) ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರು. ದಂಡ ವಿಧಿಸಿದೆ.&lt;/p&gt;&lt;p&gt;ಅಂತೆಯೇ ಐಪಿಸಿ ಸೆಕ್ಷನ್ 143 (ಅಕ್ರಮ ಕೂಟ) ಜತೆಗೆ 120ಬಿ (ಪಿತೂರಿ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಕ್ಕಾಗಿ 2 ರಿಂದ 14 ಹಾಗೂ 18ನೇ ಆರೋಪಿಗಳಿಗೆ ತಲಾ 2 ಸಾವಿರ ರು. ದಂಡದೊಂದಿಗೆ 6 ತಿಂಗಳ ಅವಧಿಗೆ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಐಪಿಸಿ ಸೆಕ್ಷನ್ 147 (ಗಲಭೆ) ಜತೆಗೆ 120ಬಿ ಅಡಿಯ ಅಪರಾಧಕ್ಕಾಗಿ ಆರೋಪಿ ಸಂಖ್ಯೆ 2 ರಿಂದ 14 ಹಾಗೂ 18ನೇ ಆರೋಪಿಗೆ ತಲಾ 2 ಸಾವಿರ ರು. ದಂಡದೊಂದಿಗೆ 1 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.&lt;/p&gt;&lt;p&gt;ಐಪಿಸಿ ಸೆಕ್ಷನ್ 148 (ಮಾರಕಾಸ್ತ್ರ ಹಿಡಿದು ಗಲಭೆ) ಜತೆಗೆ 120ಬಿ ಅಡಿಯಲ್ಲಿನ ಅಪರಾಧ ಕೃತ್ಯಕ್ಕಾಗಿ 2 ರಿಂದ 14 ಮತ್ತು 18ನೇ ಆರೋಪಿಗಳಿಗೆ 1 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 2 ಸಾವಿರ ರು. ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 120ಬಿ (ಪಿತೂರಿ) ಅಡಿಯಲ್ಲಿನ ಅಪರಾಧಕ್ಕಾಗಿ 2 ರಿಂದ 16 ಹಾಗೂ 18ನೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರು. ದಂಡ ವಿಧಿಸಲಾಗಿದೆ.&lt;/p&gt;&lt;p&gt;ಚನ್ನಕೇಶವ ಟಿಂಗರೀಕರ್&zwnj;ಗೆ (ಎ19) ಐಪಿಸಿ ಸೆಕ್ಷನ್ 218 (ಸರ್ಕಾರಿ ಅಧಿಕಾರಿಯು ವ್ಯಕ್ತಿಯನ್ನು ಶಿಕ್ಷೆಯಿಂದ ಅಥವಾ ಆಸ್ತಿ ಮುಟ್ಟುಗೋಲಿನಿಂದ ರಕ್ಷಿಸಲು ಸುಳ್ಳು ದಾಖಲೆ ಸೃಷ್ಟಿ) ಅಡಿ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರು. ದಂಡ, ಐಪಿಸಿ ಸೆಕ್ಷನ್ 201 (ಸಾಕ್ಷ್ಯಗಳ ಕಣ್ಮರೆಗೆ ಕಾರಣ ಅಥವಾ ಅಪರಾಧಿ ರಕ್ಷಿಸಲು ಸುಳ್ಳು ಮಾಹಿತಿ ನೀಡುವುದು) ಜತೆಗೆ 120ಬಿ ಅಡಿಯಲ್ಲಿನ ಅಪರಾಧಕ್ಕಾಗಿ, 2 ರಿಂದ 16, 18 ಮತ್ತು 19ನೇ ಆರೋಪಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರು. ದಂಡ ವಿಧಿಸಿದೆ.&lt;/p&gt;&lt;p&gt;ಐಪಿಸಿ ಸೆಕ್ಷನ್ 218 ಜತೆಗೆ 120ಬಿ ಅಡಿಯಲ್ಲಿನ ಅಪರಾಧಕ್ಕಾಗಿ ಎ19 ಚೆನ್ನಕೇಶವ ಟಿಂಗರೀಕರ್&zwnj;ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರು. ದಂಡ ವಿಧಿಸಲಾಗಿದೆ. ಮೇಲಿನ ಎಲ್ಲ ಪ್ರಕರಣಗಳಲ್ಲೂ ಅಪರಾಧಿಗಳು ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;ಯೋಗೇಶ್&zwnj; ಗೌಡ ಮಕ್ಕಳಿಗೆ 16 ಲಕ್ಷ ರು. ಪರಿಹಾರ:&lt;/h3&gt;&lt;p&gt;ಅಪರಾಧಿಗಳು ದಂಡ ಪಾವತಿಸಲು ವಿಫಲವಾಗಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಿದರೂ ದಂಡ ಪಾವತಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧಿಗಳಿಗೆ ವಿಧಿಸಲಾಗಿರುವ ಎಲ್ಲ ಶಿಕ್ಷೆಗಳೂ ಏಕಕಾಲದಲ್ಲಿ ಜಾರಿಯಾಗಲಿವೆ. ವಿಚಾರಣಾಧೀನ ಕೈದಿಗಳಾಗಿ ಅನುಭವಿಸಿದ ಬಂಧನದ ಅವಧಿ ಜೈಲು ಶಿಕ್ಷೆಯಿಂದ ಕಡಿತಗೊಳ್ಳಲಿದೆ. ದಂಡದ ಒಟ್ಟು ಮೊತ್ತದಿಂದ ಮೃತ ಯೋಗೇಶ್ ಗೌಡ ಮತ್ತು ಗುರುನಾಥ ಗೌಡ ಅವರ ಮಕ್ಕಳಿಗೆ 16 ಲಕ್ಷ ರು. ಪರಿಹಾರ ನೀಡಬೇಕು. ಉಳಿದ ದಂಡದ ಮೊತ್ತವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;&lt;strong&gt;ಏನಿದು ಪ್ರಕರಣ?:&lt;/strong&gt;&lt;/p&gt;&lt;p&gt;ಧಾರವಾಡದ ಜಿ.ಪಂ. ಮಾಜಿ ಸದಸ್ಯ ಯೋಗೇಶ್&zwnj; ಗೌಡ ಅವರನ್ನು 2016ರ ಜೂ.15ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣವನ್ನು 2019ರಲ್ಲಿ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ಬೆಳಕಿಗೆ ಬಂದಿತ್ತು. ಇದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಸಿಬಿಐ ಅಧಿಕಾರಿಗಳು 2020ರ ನ.5ರಂದು ವಿನಯ್&zwnj; ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್&zwnj; ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು.&lt;/p&gt;&lt;p&gt;&lt;strong&gt;ಖುಲಾಸೆ ಗೊಂಡವರು ಯಾರು?&lt;/strong&gt;&lt;/p&gt;&lt;p&gt;ಪ್ರಕರಣದ 20ನೇ ಆರೋಪಿ ವಾಸುದೇವ ರಾಮ ನಿಲೇಕಣಿ, 21 ಆರೋಪಿ ಸೋಮಶೇಖರ್ ಬಸಪ್ಪ ನ್ಯಾಮನಗೌಡ, ಮಾಫಿ ಸಾಕ್ಷಿಯಾಗಿದ್ದ 1ನೇ ಆರೋಪಿ ಬಸವರಾಜ ಮುತ್ತಗಿ, 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ್.&lt;/p&gt;&lt;p&gt;&lt;strong&gt;17ನೇ ಆರೋಪಿ ವಿರುದ್ಧ ಕ್ರಮಕ್ಕೆ ಅವಕಾಶ&lt;/strong&gt;&lt;/p&gt;&lt;p&gt;ಈ ಪ್ರಕರಣದಲ್ಲಿ ಮೊದಲಿಗೆ ಮಾಫಿ ಸಾಕ್ಷಿಯಾಗಿ ನಂತರ ವಿಚಾರಣಾ ನ್ಯಾಯಾಲಯದ ಎದುರು ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ಪ್ರಕರಣದ 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ್&zwnj; ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.&lt;/p&gt;&lt;p&gt;&lt;strong&gt;ಸುಳ್ಳು ಸಾಕ್ಷ್ಯ ಪ್ರಕರಣ ದಾಖಲಿಸಲು ನಿರ್ದೇಶನ&lt;/strong&gt;&lt;/p&gt;&lt;p&gt;ವಿಚಾರಣಾ ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷ್ಯ ನೀಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳಾದ ಶಿವಾನಂದ ಚಲವಾದಿ, ಬಾಬು ಕಟಗಿ, ಶಂಕರಗೌಡ ಬಸನಗೌಡ ಪಾಟೀಲ್ ಹಾಗೂ ಇತರ ಸ್ವತಂತ್ರ ಸಾಕ್ಷಿಗಳಾದ ದತ್ತಾತ್ರೇಯ ಗುಡಗಂಟಿ, ಆನಂದ ಈರಪ್ಪ ಉದ್ದಣ್ಣವರ್&zwnj;, ವಿನಾಯಕ ಬಿಂಜಿಯವರ್&zwnj;, ಮೋಹನ್&zwnj; ಈಚರಪ್ಪ ಮಲ್ಮುತ್ತಲ್, ವಿವೇಕಾನಂದ ದಳವಾಯಿ, ನಟರಾಜ್&zwnj; ಸರದೇಸಾಯಿ ಮತ್ತು ವಿಜಯ್&zwnj; ಕುಲಕರ್ಣಿ ವಿರುದ್ಧ ಸುಳ್ಳು ಸಾಕ್ಷ್ಯದ ಪ್ರಕರಣವನ್ನು ದಾಖಲಿಸಲು ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್&zwnj;ಗೆ ನ್ಯಾಯಾಲಯ ನಿರ್ದೇಶಿಸಿದೆ.&lt;/p&gt;&lt;p&gt;&lt;strong&gt;ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಕುಲಕರ್ಣಿ&lt;/strong&gt;&lt;/p&gt;&lt;p&gt;ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್&zwnj; ಅವರು ತೆರೆದ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸುವಾಗ ಕಟಕಟೆ ಎದುರು 17 ಮಂದಿ ಅಪರಾಧಿಗಳು ತಲೆ ಬಗ್ಗಿಸಿ ಮೌನವಾಗಿ ನಿಂತಿದ್ದರು. ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳುತ್ತಿದ್ದಂತೆ ಅಪರಾಧಿ ವಿನಯ್&zwnj; ಕುಲಕರ್ಣಿ ಭಾವೋದ್ವೇಗಕ್ಕೆ ಒಳಗಾಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಉಳಿದ 16 ಮಂದಿ ಆರೋಪಿಗಳು ಭಾವುಕರಾಗಿ ಕಣ್ಣೀರು ಸುರಿಸಿದರು.&lt;/p&gt;&lt;p&gt;&lt;strong&gt;ಹೈಕೋರ್ಟ್&zwnj;ನಲ್ಲಿ ಮೇಲ್ಮನವಿಗೆ ಅವಕಾಶ&lt;/strong&gt;&lt;/p&gt;&lt;p&gt;ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್&zwnj; ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ. ಈ ಪ್ರಕರಣದಲ್ಲಿ ಅಪರಾಧಿ ವಿನಯ್&zwnj; ಕುಲಕರ್ಣಿ ಜನಪ್ರತಿನಿಧಿ ಆಗಿರುವುದರಿಂದ ಜನಪ್ರತಿನಿಧಿಗಳ ಹೈಕೋರ್ಟ್&zwnj; ವಿಭಾಗೀಯ ಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಲಿದೆ.&lt;/p&gt;&lt;p&gt;&lt;strong&gt;ಶಿಕ್ಷೆ ಅಮಾನತು, ಬೇಲ್&zwnj; ಹೈಕೋರ್ಟ್&zwnj; ವಿವೇಚನೆಗೆ:&lt;/strong&gt;&lt;/p&gt;&lt;p&gt;ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಈ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ತಮಗೆ ಜಾಮೀನು ನೀಡುವಂತೆ ಅಪರಾಧಿಗಳು ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಬಹುದು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಸಿಬಿಐಗೂ ಅವಕಾಶವಿದೆ. ಅಂತಿಮವಾಗಿ ಶಿಕ್ಷೆ ಅಮಾನತುಗೊಳಿಸುವ ಮತ್ತು ಜಾಮೀನು ಮಂಜೂರು ಮಾಡುವುದು ಹೈಕೋರ್ಟ್&zwnj; ವಿವೇಚನೆಗೆ ಒಳಪಟ್ಟಿರುತ್ತದೆ.&lt;/p&gt;&lt;p&gt;&lt;strong&gt;ಬೇರೆ ಬಟ್ಟೆ ಧರಿಸಲು ಅವಕಾಶಕ್ಕೆ ಮನವಿ&lt;/strong&gt;&lt;/p&gt;&lt;p&gt;ನ್ಯಾಯಾಧೀಶ ಸಂತೋಷ್&zwnj; ಗಜಾನನ ಭಟ್&zwnj; ಅವರು ಶಿಕ್ಷೆ ಪ್ರಮಾಣ ಪ್ರಕಟಿಸಿದ ಬಳಿಕ ಅಪರಾಧಿ ವಿನಯ್&zwnj; ಕುಲಕರ್ಣಿ ಪರ ವಕೀಲರು, ಅಪರಾಧಿಗಳು ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿದ್ದಾರೆ. ಹೀಗಾಗಿ ಬೇರೆ ಬಟ್ಟೆ ಧರಿಸಲು ಅವಕಾಶ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಜೈಲು ಮ್ಯಾನುವೆಲ್&zwnj;ನಲ್ಲಿ ಇರುವ ಅವಕಾಶದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.&lt;/p&gt;&lt;p&gt;&lt;strong&gt;ಇತ್ತೀಚಿನ 2ನೇ ಮಹತ್ವದ ತೀರ್ಪು:&lt;/strong&gt;&lt;/p&gt;&lt;p&gt;ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್&zwnj; ಗಜಾನನ ಭಟ್&zwnj; ಅವರು ಇತ್ತೀಚೆಗೆ ನೀಡಿದ ಎರಡನೇ ಮಹತ್ವದ ತೀರ್ಪು ಇದಾಗಿದೆ. ಅತ್ಯಾ೧ಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್&zwnj; ರೇವಣ್ಣ ಅವರಿಗೆ ಜೀವಿತಾವಧಿ ಜೈಲು ಶಿಕ್ಷೆ ನೀಡಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಹಾಲಿ ಶಾಸಕ ವಿನಯ್&zwnj; ಕುಲಕರ್ಣಿ ಸೇರಿ 16 ಮದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಸನ್ನಡತೆ ಮೇಲೆ ಬಿಡುಗಡೆಗೆ ಅವಕಾಶ:&lt;/strong&gt;&lt;/p&gt;&lt;p&gt;ಘೋರ ಅಪರಾಧ ಪ್ರಕರಣಗಳಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ ಜೀವ ಇರುವವರೆಗೂ ಜೈಲು ಶಿಕ್ಷೆ ಅನುಭವಿಸಬೇಕು. ಇದರಲ್ಲಿ ಅಪರಾಧಿಗೆ ಶಿಕ್ಷೆ ಕಡಿಮೆ ಮಾಡುವ ಅಥವಾ ಕ್ಷಮಾಧಾನಕ್ಕೆ ಅವಕಾಶವೇ ಇಲ್ಲ. ಆದರೆ, ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ 14 ವರ್ಷಗಳ ಶಿಕ್ಷೆ ಅನುಭವಿಸಿದ ಬಳಿಕ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಅವಕಾಶವಿದೆ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 16 ಮಂದಿ ಅಪರಾಧಿಗಳೂ ಸನ್ನಡತೆ ವ್ಯಾಪ್ತಿಗೆ ಬರುತ್ತಾರೆ.&lt;/p&gt;&lt;p&gt;&lt;strong&gt;ಶಾಸಕ ಸ್ಥಾನದಿಂದ ಅನರ್ಹತೆ ನಿಶ್ಚಿತ:&lt;/strong&gt;&lt;/p&gt;&lt;p&gt;ಯಾವುದೇ ಶಾಸಕ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ತಕ್ಷಣ ಆತನ ಶಾಸಕನ ಸ್ಥಾನ ರದ್ದಾಗುತ್ತದೆ. ಇದೀಗ ಕಾಂಗ್ರೆಸ್&zwnj; ಶಾಸಕ ವಿನಯ್&zwnj; ಕುಲಕರ್ಣಿ ಜೀವಾಧಿಗೆ ಶಿಕ್ಷೆಗೆ ಗುರಿಯಾಗಿರುವುದರಿಂದ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ. ನ್ಯಾಯಾಲಯದ ತೀರ್ಪು ಪ್ರತಿ ವಿಧಾನಸಭಾ ಸ್ಪೀಕರ್&zwnj;ಗೆ ತಲುಪಿದ ತಕ್ಷಣ ಸ್ಪೀಕರ್&zwnj; ಅವರು ಶಾಸಕ ಸ್ಥಾನ ಅನರ್ಹ ಸಂಬಂಧ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;&lt;strong&gt;ವಿನಯ್ ಕುಲಕರ್ಣಿ ಮುಂದಿನ ಆಯ್ಕೆಗಳೇನು?&lt;/strong&gt;&lt;/p&gt;&lt;p&gt;ವಿನಯ್&zwnj; ಕುಲಕರ್ಣಿ ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಕೋರಬಹುದು ಅಥವಾ ದೋಷಿ ಎಂಬ ತೀರ್ಪಿಗೆ ತಡೆಯಾಜ್ಞೆ ಕೋರಬಹುದು. ಒಂದು ವೇಳೆ ಹೈಕೋರ್ಟ್&zwnj; ತಡೆಯಾಜ್ಞೆ ನೀಡಿದರೆ ಶಾಸಕ ಸ್ಥಾನ ಉಳಿಯಲಿದೆ. ಇಲ್ಲವಾದರೆ, ಜೈಲುವಾಸದ ಜೊತೆಗೆ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಮುಂದೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಕಾನೂನಿನಲ್ಲಿ ಅವಕಾಶವಿದೆ.&lt;/p&gt;&lt;p&gt;&lt;strong&gt;ಮುಂದೇನು?&lt;/strong&gt;&lt;/p&gt;&lt;ul&gt; &lt;li&gt;ಶಿಕ್ಷೆ ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಬಹುದು&lt;/li&gt; &lt;li&gt;ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಜಾಮೀನು ನೀಡುವಂತೆ ಕೋರಬಹುದು&lt;/li&gt; &lt;li&gt;ಪ್ರಕರಣದ ತನಿಖಾಧಿಕಾರಿಗಳೂ ಇದಕ್ಕೆ ಆಕ್ಷೇಪಣೆಯನ್ನು ಸಲ್ಲಿಸಬಹುದು&lt;/li&gt; &lt;li&gt;ಶಿಕ್ಷೆ ಅಮಾನತು, ಜಾಮೀನು ಮಂಜೂರು ಹೈಕೋರ್ಟ್&zwnj; ವಿವೇಚನೆಗೆ&lt;/li&gt; &lt;li&gt;ಶಿಕ್ಷೆಗೆ ಹೈಕೋರ್ಟ್&zwnj; ತಡೆಯಾಜ್ಞೆ ನೀಡಿದರೆ ವಿನಯ್&zwnj; ಶಾಸಕತ್ವ ಸುರಕ್ಷಿತ&lt;/li&gt;&lt;/ul&gt;&lt;p&gt;&lt;strong&gt;ಶಾಸಕ ಸ್ಥಾನದಿಂದ ಶೀಘ್ರವೇ ಅನರ್ಹ&lt;/strong&gt;&lt;/p&gt;&lt;p&gt;ಯಾವುದೇ ಶಾಸಕ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ತಕ್ಷಣ ಆತನ ಶಾಸಕನ ಸ್ಥಾನ ರದ್ದಾಗುತ್ತದೆ. ನ್ಯಾಯಾಲಯದ ತೀರ್ಪು ಪ್ರತಿ ವಿಧಾನಸಭಾ ಸ್ಪೀಕರ್&zwnj;ಗೆ ತಲುಪಿದ ತಕ್ಷಣ ಸ್ಪೀಕರ್&zwnj; ಅವರು ವಿನಯ್&zwnj; ಕುಲಕರ್ಣಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-congress-mla-vinay-kulkarni-gets-life-imprisonment-in-yogesh-gowda-murder-case-rav/articleshow-g9ohrzf"/>
        </item>
        <item>
            <title><![CDATA[ಮೈಸೂರು: ಮನೆಗೆ ನುಗ್ಗಿದ ಚಿರತೆ ಎರಡು ಗಂಟೆ ಕಾಲ ಅಜ್ಜಿ ಮಲಗಿದ್ದ ಮಂಚದ ಕೆಳಗೆ ವಿಶ್ರಾಂತಿ!]]></title>
            <link>https://kannada.asianetnews.com/karnataka-districts/a-leopard-that-entered-a-house-in-mysuru-took-a-rest-under-the-couch-rav/articleshow-3ktgpl2</link>
            <guid isPermaLink="true">https://kannada.asianetnews.com/karnataka-districts/a-leopard-that-entered-a-house-in-mysuru-took-a-rest-under-the-couch-rav/articleshow-3ktgpl2</guid>
            <pubDate>Sat, 18 Apr 2026 05:08:54 +0530</pubDate>
            <description><![CDATA[&lt;p&gt;Leopard enters house in Mysuru ಮೈಸೂರಿನ ಸಿದ್ದಾರ್ಥನಗರದ ಮನೆಯೊಂದಕ್ಕೆ ನುಗ್ಗಿದ ಚಿರತೆಯು, ವೃದ್ಧೆಯೊಬ್ಬರು ಮಲಗಿದ್ದ ಮಂಚದ ಕೆಳಗೆ ಎರಡು ಗಂಟೆಗಳ ಕಾಲ ಅವಿತುಕೊಂಡಿತ್ತು. ಯಾರಿಗೂ ಯಾವುದೇ ಹಾನಿ ಮಾಡದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpewbk6y4z8vbagr3bg4r1bc,imgname-----------------------2026-04-18t045226.605-1776468479197.jpg" type="image/jpeg" height="390" width="690"/>
            <content:encoded><![CDATA[&lt;p&gt;- 2 ಗಂಟೆ ಮನೆಯೊಳಗೇ ಇದ್ದರೂ ಮಂಚದ ಮೇಲೆ ಮಲಗಿದ್ದ ವೃದ್ಧೆಗೆ ಏನೂ ಮಾಡದ ಚಿರತೆ&lt;/p&gt;&lt;p&gt;ಮೈಸೂರು (ಏ.18): ಯಾವುದೇ ಸದ್ದು ಗದ್ದಲ ಇಲ್ಲದೇ ಮನೆಗೆ ನುಗ್ಗಿ, ಮಂಚದ ಕೆಳಗೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಲಗಿದ್ದ 4 ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ, ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜಿಯೊಬ್ಬರು ಮಲಗಿದ್ದ ಮಂಚದ ಕೆಳಗೆ ಚಿರತೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುಮ್ಮನೆ ಮಲಗಿತ್ತು. ಅಜ್ಜಿಯ ಆರೈಕೆಗಾಗಿ ಮತ್ತಿಬ್ಬರು ಕೋಣೆಗೆ ಬಂದು ಹೋದರೂ, ಯಾರಿಗೂ ಏನೂ ಮಾಡಿಲ್ಲ.&lt;/p&gt;&lt;p&gt;ಮೈಸೂರಿನ ಸಿದ್ದಾರ್ಥನಗರದ ವಿನಯಮಾರ್ಗದಲ್ಲಿರುವ ನಗರಪಾಲಿಕೆ ನಿವೃತ್ತ ಎಂಜಿನಿಯರ್ ಸುರೇಶ್ ಎಂಬುವರ ಮನೆಗೆ ಚಿರತೆ ನುಗ್ಗಿತ್ತು. ಬೆಳಗ್ಗೆ 9.30ರ ವೇಳೆಗೆ ಸದ್ದಿಲ್ಲದೆ ಮನೆ ಪ್ರವೇಶಿಸಿದ ಚಿರತೆ, ಗಾಬರಿಯಿಂದ ಮಂಚದ ಕೆಳಗೆ ಅವಿತುಕೊಂಡಿದೆ.&lt;/p&gt;&lt;p&gt;11.30ರ ಸುಮಾರಿಗೆ ಮನೆ ಕೆಲಸದಾಕೆ ಕಸ ಗುಡಿಸಲು ರೂಮಿಗೆ ಬಂದಿದ್ದು, ಕಸ ಗುಡಿಸುತ್ತಿದ್ದಾಗ ಚಿರತೆ ಇರುವುದು ಗೊತ್ತಾಗಿ ಹೌಹಾರಿದ್ದಾರೆ. ಆಗ ತಕ್ಷಣ ಮಂಚದ ಮೇಲೆ ಮಲಗಿದ್ದ ಶೈಲಜಾರನ್ನು ತಬ್ಬಿ ಎತ್ತಿಕೊಂಡು ಹೊರಗೆ ಕರೆ ತರಲಾಗಿದೆ. ಬಳಿಕ ರೂಂನ ಬಾಗಿಲು ಹಾಕಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ, ಅರವಳಿಕೆ ಚುಚ್ಚುಮದ್ದು ನೀಡಿ, ಚಿರತೆಯನ್ನು ಸೆರೆ ಹಿಡಿದು ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರು.&lt;/p&gt;&lt;p&gt;ಸುರೇಶ್ ಅವರ ತಾಯಿ ಶೈಲಜಾ, ವಯೋಸಹಜ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿದ್ದು, ಎಂದಿನಂತೆ ಬೆಳಗ್ಗೆ ಉಪಾಹಾರ ಸೇವಿಸಿ ರೂಮಿನಲ್ಲಿ ಮಂಚದ ಮೇಲೆ ಮಲಗಿದ್ದರು. ಚಿರತೆ ರೂಮಿನಲ್ಲಿರುವಾಗಲೇ ಸುರೇಶ್&zwnj; ಅವರ ಪತ್ನಿ ಸುಜಾತ ಅವರು ರೂಮಿಗೆ ಬಂದು ಅತ್ತೆಯನ್ನು 2- 3 ಬಾರಿ ಮಾತಾಡಿಸಿ ಹೋಗಿದ್ದಾರೆ. ಆದರೂ ಚಿರತೆಯ ಇರುವಿಕೆ ಗೊತ್ತಾಗಿಲ್ಲ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/a-leopard-that-entered-a-house-in-mysuru-took-a-rest-under-the-couch-rav/articleshow-3ktgpl2"/>
        </item>
        <item>
            <title><![CDATA[Vachanananda Swamiji child abuse case: ವಚನ ಶ್ರೀ ವಿರುದ್ಧ 3 ಮಕ್ಕಳಿಂದ ಮಕ್ಕಳ ಕಲ್ಯಾಣ ಸಮಿತಿಗೆ ದೂರು]]></title>
            <link>https://kannada.asianetnews.com/karnataka-districts/3-children-file-complaint-with-child-welfare-committee-against-vachana-sri-rav/articleshow-m03u0gt</link>
            <guid isPermaLink="true">https://kannada.asianetnews.com/karnataka-districts/3-children-file-complaint-with-child-welfare-committee-against-vachana-sri-rav/articleshow-m03u0gt</guid>
            <pubDate>Sat, 18 Apr 2026 04:49:37 +0530</pubDate>
            <description><![CDATA[ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ವಿರುದ್ಧ ಮೂವರು ಮಕ್ಕಳು ದೌರ್ಜನ್ಯದ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳ ಕೌನ್ಸೆಲಿಂಗ್ ಹಾಗೂ ಮಠದ ಸ್ಥಳ ಪರಿಶೀಲನೆ ನಡೆಸಿ, ಸ್ವಾಮೀಜಿಯ ಹೇಳಿಕೆ ದಾಖಲಿಸಿಕೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k17t6mv26k84fvbs47qkz0q9,imgname-cewfe-1753682760546.png" type="image/jpeg" height="390" width="690"/>
            <content:encoded><![CDATA[&lt;h2&gt;ದೂರುದಾರ ಮಕ್ಕಳ ಕೌನ್ಸೆಲಿಂಗ್, ಸ್ಥಳ ಪರಿಶೀಲನೆ&lt;/h2&gt;&lt;p&gt;&lt;strong&gt;ದಾವಣಗೆರೆ (ಏ.18): &lt;/strong&gt;ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ದಾವಣಗೆರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮೂವರು ಮಕ್ಕಳು ದೂರು ದಾಖಲಿಸಿ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;ನಗರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ದೂರು ನೀಡಿದ 3 ಮಕ್ಕಳನ್ನು ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸಿದ್ದಾರೆ. ಇನ್ನೂ ಮೂರು ಬಾರಿ ಮಕ್ಕಳ ಕೌನ್ಸೆಲಿಂಗ್ ನಡೆಸುವ ಸಾಧ್ಯತೆ ಇದ್ದು, ಈ ವೇಳೆ ಮಕ್ಕಳು ದೃಢವಾಗಿ ಹೇಳಿಕೆ ನೀಡಿದರೆ ವಚನಾನಂದ ಶ್ರೀಗೆ ಸಂಕಷ್ಟ ಹೆಚ್ಚಾಗಲಿದೆ ಎನ್ನಲಾಗಿದೆ. ಮಠದಲ್ಲಿದ್ದ ಮಕ್ಕಳ ಮೇಲೆ ಸ್ವಾಮೀಜಿ ಹಲ್ಲೆಗೈದು, ದೌರ್ಜನ್ಯ ನಡೆಸುತ್ತಾರೆಂದು ಮಕ್ಕಳು ಹಾಗೂ ಪೋಷಕರು ಆರೋಪಿಸಿ ನೀಡಿದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅಲ್ಲದೇ, ಕೆಲ ದೃಶ್ಯಗಳನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಯುವ ಘಟಕ ಪದಾಧಿಕಾರಿಗಳು ಬಿಡುಗಡೆ ಮಾಡಿದ್ದರು.&lt;/p&gt;&lt;p&gt;ಮಕ್ಕಳ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಜುಳಾ ನೇತೃತ್ವದ ತಂಡ ಹರಿಹರ ತಾಲೂಕಿನ ಹನಗವಾಡಿ ಸಮೀಪದ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.&lt;/p&gt;&lt;p&gt;, ದೂರುದಾರ ಮೂವರೂ ಮಕ್ಕಳು ಮಠದಲ್ಲಿ ಮಲಗುವ ಜಾಗ, ಓದುತ್ತಿದ್ದ ಸ್ಥಳ, ಕೊಠಡಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ನಂತರ ಸಮಿತಿಯ ಸದಸ್ಯರು, ವಚನಾನಂದ ಸ್ವಾಮೀಜಿಯನ್ನು ದೂರಿನಲ್ಲಿರುವ ಆರೋಪದ ಕುರಿತು ಸುಮಾರು ಹೊತ್ತು ವಿಚಾರಣೆ ಮಾಡಿದ್ದಾರೆ.&lt;/p&gt;&lt;h2&gt;ವರದಿ ಬಳಿಕ ಪೊಲೀಸ್ ವಿಚಾರಣೆ&lt;/h2&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷೆ ಮಂಜುಳಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿದೆ ಮೂವರು ಮಕ್ಕಳು ಲಿಖಿತ ದೂರು ನೀಡಿದ್ದರು. ಮಕ್ಕಳ ಕೌನ್ಸೆಲಿಂಗ್ ನಡೆಯುತ್ತಿದ್ದು, ವಚನಾನಂದ ಸ್ವಾಮೀಜಿ ಹೇಳಿಕೆ ದಾಖಲಿಸಿದ್ದೇವೆ. ಕೌನ್ಸೆಲಿಂಗ್ ವರದಿ ಬಂದ ನಂತರ ಪೊಲೀಸರಿಗೆ ಅದನ್ನು ನೀಡುತ್ತೇವೆ. ನಂತರ ಪೊಲೀಸರು ವಿಚಾರಣೆ ಕೈಗೊಳ್ಳುತ್ತಾರೆ ಎಂದರು.&lt;/p&gt;&lt;p&gt;ಹರಿಹರದ ಪಂಚಮಸಾಲಿ ಪೀಠದ ಬಾಲಕರ ಹಾಸ್ಟೆಲ್&zwnj;ನಲ್ಲಿ ರಿಜಿಸ್ಟರ್ ಇಲ್ಲದಿರುವುದು ಗೊತ್ತಾಗಿದ್ದು, ಈ ಬಗ್ಗೆ ವಚನಾನಂದ ಸ್ವಾಮೀಜಿಗೆ ಕೇಳಿದರೆ, ಅದನ್ನೆಲ್ಲಾ ಧರ್ಮದರ್ಶಿಗಳು ನೋಡಿಕೊಳ್ಳುತ್ತಿದ್ದರು ಎಂದಿದ್ದಾರೆ ಎಂದು ವಿವರಿಸಿದರು.&lt;/p&gt;&lt;h3&gt;ಸೂಕ್ತ ಸಮಯದಲ್ಲಿ ಉತ್ತರಿಸುವೆ: ಶ್ರೀಗಳು&lt;/h3&gt;&lt;p&gt;ಮೂವರು ಮಕ್ಕಳು ನೀಡಿದ ದೂರಿನ ಸಂಬಂಧ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಇದು ಕಾನೂನು ವ್ಯಾಪ್ತಿಗೆ ಬರಲಿದ್ದು, ಸೂಕ್ಷ್ಮ ವಿಷಯವಾಗಿದೆ. ಈ ಬಗ್ಗೆ ನಾವು ಹೇಳಿಕೆ ಕೊಡುವುದಕ್ಕೆ ಆಗುವುದಿಲ್ಲ. ಈ ಕುರಿತು ಸೂಕ್ತ ಸಮಯ, ಸಂದರ್ಭದಲ್ಲಿ ಉತ್ತರ ನೀಡುತ್ತೇವೆ. ನಾವು ದೇವರಲ್ಲ, ದೇವರ ದಾರಿಯಲ್ಲಿ ನಡೆಯುವ ಸಾಧಕರು ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ಮಠ ಖಾಲಿ ಮಾಡಲು ಗಡುವು ನೀಡಿದ ಕುರಿತು ಪ್ರತಿಕ್ರಿಯಿಸಿ, ಬಾರದು ಬಪ್ಪದು, ಬಪ್ಪದು ತಪ್ಪದು. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.&lt;/p&gt;&lt;p&gt;ಕೂಡಲಸಂಗಮ ಪಂಚಮಸಾಲಿ ಪೀಠದ ಉಚ್ಚಾಟಿತ ಜಯಮೃತ್ಯುಂಜಯ ಸ್ವಾಮೀಜಿಯನ್ನು ಹರಿಹರ ಪೀಠಕ್ಕೆ ತರುವ ಬಗ್ಗೆ ಪ್ರತಿಕ್ರಿಯಿಸಿ, ನಾವೆಲ್ಲಾ ಒಂದೇ ಸ್ವಾಮೀಜಿಗಳು. ನಮ್ಮಲ್ಲಿ ಭೇದಭಾವವಿಲ್ಲ. ನಮ್ಮದು 8 ವರ್ಷ, ಅವರದ್ದು 18 ವರ್ಷ ಸೇವೆ. ಅವರಿಗೆ ಅವರದ್ದೇ ಆದ ವ್ಯಕ್ತಿತ್ವವಿದೆ ಎಂದು ಹೇಳಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/3-children-file-complaint-with-child-welfare-committee-against-vachana-sri-rav/articleshow-m03u0gt"/>
        </item>
        <item>
            <title><![CDATA[ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ರಾಜ್ಯದಲ್ಲಿ ಕೋಮುಗಲಭೆ ನಡೆದೇ ಇಲ್ಲ, ಕರ್ನಾಟಕ ಪೊಲೀಸ್ ದೇಶದಲ್ಲೇ ನಂ.1 : ಪರಂ]]></title>
            <link>https://kannada.asianetnews.com/state/no-communal-riot-in-the-karnataka-since-the-congress-government-came-to-power-says-home-minister-parameshwara-rav/articleshow-ixvxeg6</link>
            <guid isPermaLink="true">https://kannada.asianetnews.com/state/no-communal-riot-in-the-karnataka-since-the-congress-government-came-to-power-says-home-minister-parameshwara-rav/articleshow-ixvxeg6</guid>
            <pubDate>Sat, 18 Apr 2026 04:36:22 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ. ಕೋಮು ಗಲಭೆಗಳಿಗೆ ಕಡಿವಾಣ, ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ, ಪೊಲೀಸ್ ಸಿಬ್ಬಂದಿಗೆ ವಸತಿ ಸೌಕರ್ಯ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jmh4yabe87z7w1zf5np6m6r3,imgname-param-5.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಳಗಾವಿ (ಏ.18): &lt;/strong&gt;ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ಕಾಪಾಡುತ್ತಿದೆ. ಇತರೆ ರಾಜ್ಯಗಳಿಂದ ಬಂಡವಾಳ ಹೂಡಿಕೆದಾರರು ಬರುತ್ತಿದ್ದು, ರಾಜ್ಯಕ್ಕೆ ಆದಾಯ ಮತ್ತು ಉದ್ಯೋಗವಕಾಶಗಳು ದೊರೆಯುತ್ತಿವೆ. ನಮ್ಮ ಸರ್ಕಾರ ಬಂದ ನಂತರ ಕೋಮು ಗಲಭೆಗಳಿಗೆ ಕಡಿವಾಣ ಹಾಕಿದ್ದು, ರಾಜ್ಯದಲ್ಲಿ ಕೋಮುಗಲಭೆ ನಡೆದಿಲ್ಲ. ನಡೆಯಲೂ ಬಿಡುವುದಿಲ್ಲ. ಯುವಕರಿಗೆ ಮಾದಕ ವಸ್ತುಗಳ ಹಂಚಿಕೆ ಹಾಗೂ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಕಂಡು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.&lt;/p&gt;&lt;p&gt;ಕಾನೂನು ರಕ್ಷಣೆ ಮಾಡುವ ದೃಷ್ಟಿಯಿಂದ ಪೊಲೀಸ್&zwnj; ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಪೊಲೀಸ್ ಇಲಾಖೆಗೆ ಸೌಕರ್ಯ ಒದಗಿಸಲು ಸರ್ಕಾರ ಸ್ಪಂದಿಸಿದ್ದು, ಪೊಲೀಸ್ ಸಿಬ್ಬಂದಿಗೆ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಜನಸೇವೆಗೆ ತಕ್ಷಣ ಸ್ಪಂದಿಸಬೇಕು ಎಂದು ಕರೆ ನೀಡಿದರು.&lt;/p&gt;&lt;h2&gt;ಕಾಲೇಜುಗಳಲ್ಲಿ ಡ್ರಗ್ಸ್ ಜಾಗೃತಿ&lt;/h2&gt;&lt;p&gt;ದುಶ್ಚಟಗಳಿಂದ ಯುವ ಸಮುದಾಯವನ್ನು ರಕ್ಷಿಸಲು ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತು ಸೇವನೆ ಕುರಿತು ಪೊಲೀಸ್ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಂತ್ರಜ್ಞಾನದಿಂದ ಅಂಥ ಪ್ರಕರಣ ಪತ್ತೆಮಾಡಿ ವಂಚಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು.&lt;/p&gt;&lt;h3&gt;ಪ್ರತಿಮನೆಗೆ ₹38 ಲಕ್ಷ ವೆಚ್ಚ:&lt;/h3&gt;&lt;p&gt;ಶಾಂತಿ-ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರ ಕುಟುಂಬಗಳಿಗೆ ಸುರಕ್ಷಿತ ಹಾಗೂ ಸುಸಜ್ಜಿತ ವಸತಿ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಬೆಳಗಾವಿ ಜಿಲ್ಲೆಯ ವಿವಿಧೆಡೆ ₹67.79 ಕೋಟಿ ವೆಚ್ಚದಲ್ಲಿ, ಶಹಾಪುರದಲ್ಲಿ ₹3.92 ಕೋಟಿ ವೆಚ್ಚದಲ್ಲಿ ವಸತಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಪ್ರತಿಮನೆಗೆ ₹38 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಕಳೆದ ವರ್ಷ ₹2000 ಕೋಟಿ ಹಾಗೂ ಈ ವರ್ಷ ₹350 ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ಹೇಳಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/no-communal-riot-in-the-karnataka-since-the-congress-government-came-to-power-says-home-minister-parameshwara-rav/articleshow-ixvxeg6"/>
        </item>
        <item>
            <title><![CDATA[ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲು ಸಿಎಂ ಸಿದ್ದರಾಮಯ್ಯಗೆ ಭಯ: ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪ]]></title>
            <link>https://kannada.asianetnews.com/karnataka-districts/sa-ra-mahesh-slams-siddaramaiah-local-body-elections-gvd/articleshow-e1wxahm</link>
            <guid isPermaLink="true">https://kannada.asianetnews.com/karnataka-districts/sa-ra-mahesh-slams-siddaramaiah-local-body-elections-gvd/articleshow-e1wxahm</guid>
            <pubDate>Sat, 18 Apr 2026 00:25:17 +0530</pubDate>
            <description><![CDATA[&lt;p&gt;ಯತೀಂದ್ರ ಮಾತ್ರ ಅಧಿಕಾರದಲ್ಲಿ ಇರಬೇಕಾ? ದಯಮಾಡಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ ಚುನಾವಣೆ ಮಾಡಿ ಸ್ವಾಮಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆಗ್ರಹಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx23zkyrhj97744pd9qdhcmx,imgname-----------------------2025-06-06t132816.715-1749196722135.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.18): &lt;/strong&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಮತ್ತು ನಿಮ್ಮ ಮಗ ಯತೀಂದ್ರ ಮಾತ್ರ ಅಧಿಕಾರದಲ್ಲಿ ಇರಬೇಕಾ? ದಯಮಾಡಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ ಚುನಾವಣೆ ಮಾಡಿ ಸ್ವಾಮಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆಗ್ರಹಿಸಿದರು. ಐದು ವರ್ಷವೂ ನಮ್ಮ ತಂದೆಯೇ ಸಿಎಂ ಎಂದು ಯತೀಂದ್ರ ಹೇಳಿದ್ದಾರೆ. ಅದು ಅವರ ಪಕ್ಷದ ವಿಚಾರ. ನೀವು ಎಷ್ಟು ವರ್ಷವಾದರೂ ಅಧಿಕಾರದಲ್ಲಿರಿ. ನಿಮ್ಮ ಅಧಿಕಾರದ ಅವಧಿಯಲ್ಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಾಲಿಕೆ, ಗ್ರಾಮ ಪಂಚಾಯಿತಿ ಚುನಾವಣೆ ಮಾಡಿ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.&lt;/p&gt;&lt;p&gt;ಸಮಾಜವಾದಿ ಎಂದು ಹೇಳಿಕೊಳ್ಳುವ ನೀವು, ನಿಮ್ಮ ಮಗನೇ ಅಧಿಕಾರದಲ್ಲಿದ್ದರೆ ಹೇಗೆ? ಪಕ್ಷಕ್ಕಾಗಿ ದುಡಿದಿರುವ ಇತರರಿಗೂ ಅಧಿಕಾರ ಕೊಡಿ. ಯಾವುದೇ ಪಕ್ಷದ ಕಾರ್ಯಕರ್ತನಾಗಿರಲಿ ಅವರು ಜಿಪಂ, ತಾಪಂ, ನಗರ ಪಾಲಿಕೆ ಸದಸ್ಯನಾಗಲು ಚುನಾವಣೆ ನಡೆಸಬೇಕು. ನಮಗೆ ಅಧಿಕಾರಿ ಸಿಗುವುದಿಲ್ಲ ಎಂಬ ಭಯದಿಂದ ಚುನಾವಣೆ ಮಾಡದೇ ಇದ್ದರೆ ಅದು ಪ್ರಜಾಪ್ರಭುತ್ವದ ಕಗ್ಗೊಲೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಎಂಬ ಬದ್ಧತೆ ಇದ್ದರೆ ಕೂಡಲೇ ಚುನಾವಣೆ ಮಾಡಿ ಎಂದು ಅವರು ಆಗ್ರಹಿಸಿದರು.&lt;/p&gt;&lt;p&gt;ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಈಗ ಚುನಾವಣೆ ನಡೆಸಿದರೆ ಎನ್ ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುತ್ತದೆ ಎಂಬ ಭಯ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಇದೇ ಕಾರಣದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸ್ಥಳೀಯ ಸಂಸ್ಥೆ ಚುನಾವಣೆಗೆ ಮೈತ್ರಿ ಮುಂದುವರೆಯುವುದರ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಜೊತೆ ಚರ್ಚೆ ಆಗಿದೆ. ಮೈಸೂರು ಜಿಲ್ಲೆಯಲ್ಲಿ ಎರಡು ಪಕ್ಷಗಳು ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು.&lt;/p&gt;&lt;h2&gt;&lt;strong&gt;ಜೆಡಿಎಸ್ ಪಕ್ಷವೇ ಕುಟುಂಬ&lt;/strong&gt;&lt;/h2&gt;&lt;p&gt;ನಮ್ಮದು ಕುಟುಂಬ ರಾಜಕಾರಣವಲ್ಲ ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾ.ರಾ. ಮಹೇಶ್ ಅವರು, ಆಶ್ರಯ ಸಮಿತಿ ಸದಸ್ಯ ಯಾರು? ಎಂಎಲ್ಸಿ ಯಾರು? ಬಿಡಿಎ ಸದಸ್ಯನಾಗಲು ಮೈಸೂರಿನ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಸಿ, ಬೆಂಗಳೂರಿನಲ್ಲಿ ಸೇರಿಸಿದ್ದು ಯಾಕೆ? ನಿಮ್ಮ ಯಾರೂ ನಿಷ್ಠಾವಂತ ಕಾರ್ಯಕರ್ತ ಇರಲಿಲ್ಲವೇ? ಇದರಲ್ಲಿ ಯಾರದು ಕುಟುಂಬ ರಾಜಕಾರಣ ಎಂದು ಪ್ರಶ್ನಿಸಿದರು. ನಮ್ಮದು ಸಣ್ಣ ಪಕ್ಷ. ನಿಮ್ಮಂತೆ ರಾಷ್ಟ್ರೀಯ ಪಕ್ಷವಲ್ಲ. ನಮಗೆ ಪಕ್ಷವೇ ಕುಟುಂಬ. ಕುಮಾರಸ್ವಾಮಿ ಅವರು ಎಲ್ಲವನ್ನೂ ಬಿಟ್ಟು ಎಲ್ಲಿದ್ದವರನ್ನೋ ಕರೆದುಕೊಂಡು ಬಂದು ಅಧಿಕಾರ ಕೊಡುತ್ತಾರೆ. ಅವರು ಕೈಕೊಟ್ಟು ಹೋಗುತ್ತಾರೆ. ಅದಕ್ಕೆ ಅವರಿಂದ ಬೈಸಿಕೊಳ್ಳುವ ಬದಲು ಕುಟುಂಬದವರಿಗೆ ಕೊಡುತ್ತೇವೆ ಎಂದು ಅವರು ಹೇಳಿದರು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sa-ra-mahesh-slams-siddaramaiah-local-body-elections-gvd/articleshow-e1wxahm"/>
        </item>
        <item>
            <title><![CDATA[ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!]]></title>
            <link>https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze</link>
            <guid isPermaLink="true">https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze</guid>
            <pubDate>Fri, 17 Apr 2026 23:07:15 +0530</pubDate>
            <description><![CDATA[ವಿಜಯಪುರ ಜಿಲ್ಲೆಯ ಕುಖ್ಯಾತ ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ನಡುರಸ್ತೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ 6 ಸುತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.]]></description>
            <media:content url="https://geo.dailymotion.com/player/x1tbu.html?video=xa5ptqk" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.17): &lt;/strong&gt;ಭೀಮಾತೀರದ ಕುಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಬಂದೂಕಿನ ನಳಿಕೆಗಳು ಮತ್ತೆ ಬೆಂಕಿ ಉಗುಳಿವೆ! ಹೌದು, ಶಾಂತಿ ನೆಲೆಸಿತು ಎನ್ನುವಷ್ಟರಲ್ಲೇ ಗುಂಡಿನ ಸದ್ದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.&amp;nbsp;&lt;/p&gt;&lt;h3&gt;&lt;strong&gt;ವಿಜಯಪುರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಗ್ರಾಮ ಪಂಚಾಯತ್ ಸದಸ್ಯನ ಭೀಕರ ಹತ್ಯೆ&lt;/strong&gt;&lt;/h3&gt;&lt;p&gt;ಕೆಲವೇ ದಿನಗಳ ಹಿಂದೆ ಜ್ಯುವೆಲರಿ ಶಾಪ್ ಮತ್ತು ಬ್ಯಾಂಕ್ ಲೂಟಿ ಮಾಡಿದ್ದ ಗ್ಯಾಂಗ್&zwnj;ಗಳ ಆರ್ಭಟ ತಣ್ಣಗಾಗುವ ಮೊದಲೇ, ಈಗ ನಡುರಸ್ತೆಯಲ್ಲೇ ನೆತ್ತರು ಹರಿದಿದೆ. ಥೇಟ್ ಯುಪಿ, ಬಿಹಾರ್ ಮಾದರಿಯಲ್ಲಿ 6 ರೌಂಡ್ ಫೈರಿಂಗ್ ನಡೆಸಿ ಮಾಜಿ ಗ್ರಾ.ಪಂ ಸದಸ್ಯನನ್ನ ಹತ್ಯೆ ಮಾಡಲಾಗಿದೆ.&amp;nbsp;ಈ ಭೀಕರ ಹತ್ಯಾಕಾಂಡ ಕಂಡ ಜನ ಮೌನಕ್ಕೆ ಶರಣಾಗಿದ್ದಾರೆ. ಹಾಗಾದ್ರೆ, ಭೀಮಾತೀರದಲ್ಲಿ ಮತ್ತೆ ಶತ್ರು ಸಂಹಾರಕ್ಕೆ ಸ್ಕೆಚ್ ಹಾಕಿದ್ದು ಯಾರು? ಯಾರ ಬಂದೂಕಿನಿಂದ ಸಿಡಿದ ಬುಲೆಟ್&zwnj;ಗಳು ರಾಜು ಎದೆಯನ್ನು ಸೀಳಿದವು?&amp;nbsp;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze"/>
        </item>
        <item>
            <title><![CDATA[ನಾವು ಕ್ಷೇತ್ರವನ್ನು ಅಧಿಕಾರಕ್ಕಾಗಿ ಸೀಮಿತಗೊಳಿಸಿಲ್ಲ: ಎಚ್‌ಡಿಕೆ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ವಾಗ್ದಾಳಿ]]></title>
            <link>https://kannada.asianetnews.com/karnataka-districts/ramanagara-politics-mla-iqbal-hussain-attack-hd-kumaraswamy-gvd/articleshow-yi5p8ga</link>
            <guid isPermaLink="true">https://kannada.asianetnews.com/karnataka-districts/ramanagara-politics-mla-iqbal-hussain-attack-hd-kumaraswamy-gvd/articleshow-yi5p8ga</guid>
            <pubDate>Fri, 17 Apr 2026 22:24:06 +0530</pubDate>
            <description><![CDATA[&lt;p&gt;ಕ್ಷೇತ್ರದಲ್ಲಿ ಇಷ್ಟೊಂದು ಸಮಸ್ಯೆಗಳು ಜೀವಂತವಾಗಿದ್ದು, ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kb1b7gntn3ptxydm7pr35s6y,imgname-vv-1764203152057.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಏ.17):&lt;/strong&gt; ಕಳೆದ 25- 30 ವರ್ಷಗಳಿಂದ ಶಾಸಕರಾಗಿದ್ದವರು ರಾಮನಗರ ಕ್ಷೇತ್ರದ ಬಗ್ಗೆ ಎಂದೂ ಗಮನ ಹರಿಸಲಿಲ್ಲ. ಕೇವಲ ಅಧಿಕಾರ ದಕ್ಕಿಸಿಕೊಳ್ಳಲು ಕ್ಷೇತ್ರವನ್ನು ಸೀಮಿತ ಮಾಡಿಕೊಂಡಿದ್ದರು. ಈ ಕಾರಣದಿಂದಾಗಿಯೇ ಕ್ಷೇತ್ರದಲ್ಲಿ ಇಷ್ಟೊಂದು ಸಮಸ್ಯೆಗಳು ಜೀವಂತವಾಗಿದ್ದು, ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ತಾಲೂಕಿನ ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಾಗಲಿ ಅಥವಾ ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರಾಗಲಿ, ಅವರಂತೆ ರಾಜಕಾರಣ ಮಾಡಲು ಬಂದಿಲ್ಲ. ನಮಗೆ ಅಧಿಕಾರಕ್ಕಿಂತ ಅಭಿವೃದ್ಧಿ ಮುಖ್ಯ ಎಂದರು. ನಾವು ಬೆಳಗಾದರೆ ಸ್ಥಳೀಯ ಜನರೊಂದಿಗೆ ಬೆರೆತು ಜೀವನ ನಡೆಸುತ್ತೇವೆ. ಅವರಂತೆ ನಾವು ಕ್ಷೇತ್ರವನ್ನು ಅಧಿಕಾರಕ್ಕಾಗಿ ಸೀಮಿತ ಮಾಡಿಕೊಂಡಿಲ್ಲ.&lt;/p&gt;&lt;p&gt;ಡಿ.ಕೆ.ಶಿವಕುಮಾರ್ ರವರ ಮಾತನ್ನು ನಂಬಿ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಕೊಟ್ಟ ಮಾತಿನಂತೆ ಮನೆ ಮಗನಾಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು. ಬೇಸಿಗೆ ಆರಂಭವಾಗಿದ್ದು, ಅನೇಕ ಭಾಗಗಳಲ್ಲಿ ಬೋರ್ ವೆಲ್ ಗಳು ಮತ್ತು ಕೆರೆಗಳು ಬತ್ತಿಹೋಗುತ್ತಿವೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ. ಅರ್ಕಾವತಿ ನದಿ ಭಾಗದಲ್ಲಿ ನೀರಿನಲ್ಲಿ ಫ್ಲೋರಿಡ್ ಅಂಶ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಹಕ್ಕು ಪತ್ರ ವಿತರಿಸುವ ಕೆಲಸ&lt;/strong&gt;&lt;/h2&gt;&lt;p&gt;ಅರಣ್ಯ ದಂಚಿನ ಪ್ರದೇಶಗಳಲ್ಲಿ ಅನುಭವದಲ್ಲಿರುವ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡಲು ಅರಣ್ಯ ಇಲಾಖೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರುಗಳು ಬಂದಿವೆ. ಅವುಗಳನ್ನು ಉಪ ಗ್ರಾಮವನ್ನಾಗಿ ಪರಿವರ್ತಿಸಿ ಹಕ್ಕು ಪತ್ರ ವಿತರಿಸುವ ಕೆಲಸ ಮಾಡುತ್ತಿದ್ದೇವೆ. ನಗರ ಮತ್ತು ಗ್ರಾಮಗಳ ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.&lt;/p&gt;&lt;p&gt;ಗ್ಯಾರಂಟಿ ಸಮಿತಿ ಯೋಜನೆಗಳ&zwnj; ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಎಚ್.ರಾಜು, ಮಾಜಿ ಅಧ್ಯಕ್ಷ ಜಯರಾಮಯ್ಯ, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಎ.ಬಿ.ಚೇತನ್ ಕುಮಾರ್, ತಾಪಂ&zwnj; ಮಾಜಿ ಸದಸ್ಯ ಸಿದ್ದೇಗೌಡ, ಮುಖಂಡರಾದ ವಾಸು ಪುಟ್ಟಮಾಸ್ತಿಗೌಡ, ಚೇತನ್, ಮಲ್ಲೇಗೌಡ, ಅಪ್ಪಾಜಿ ಮತ್ತಿತರರು ಹಾಜರಿದ್ದರು&zwnj;.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ramanagara-politics-mla-iqbal-hussain-attack-hd-kumaraswamy-gvd/articleshow-yi5p8ga"/>
        </item>
        <item>
            <title><![CDATA[ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ ಗೀತಾಮಣಿ & ಯುಟ್ಯೂಬರ್: ₹1.2 ಲಕ್ಷ ಹಣ ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಅರೆಸ್ಟ್!]]></title>
            <link>https://kannada.asianetnews.com/karnataka-districts/bengaluru-rural-nelamangala-lokayukta-trap-pdo-geethamani-youtuber-gangadhar-arrested-for-bribery-sat/articleshow-vi3uc05</link>
            <guid isPermaLink="true">https://kannada.asianetnews.com/karnataka-districts/bengaluru-rural-nelamangala-lokayukta-trap-pdo-geethamani-youtuber-gangadhar-arrested-for-bribery-sat/articleshow-vi3uc05</guid>
            <pubDate>Fri, 17 Apr 2026 21:07:56 +0530</pubDate>
            <description><![CDATA[&lt;p&gt;ನೆಲಮಂಗಲದಲ್ಲಿ ಖಾತಾ ಬದಲಾವಣೆಗಾಗಿ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಅಧಿಕಾರಿಯೊಬ್ಬರು, ಹಣ ಪಡೆಯಲು ಯುಟ್ಯೂಬರ್&zwnj;ನನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿದ್ದರು. ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ಯುಟ್ಯೂಬರ್ ಹಾಗೂ ಪಿಡಿಒ ಇಬ್ಬರನ್ನೂ ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe1d39aafen6ygtegw7gegy,imgname-kalalughatta-gram-panchayat-1776440216874.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಸ&lt;/strong&gt;ರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕಾದ ಅಧಿಕಾರಿಯೊಬ್ಬರು ಲಂಚಕ್ಕಾಗಿ ಖಾಸಗಿ ಯುಟ್ಯೂಬರ್&zwnj;ನನ್ನು ಮಧ್ಯವರ್ತಿಯನ್ನಾಗಿ ಬಳಸಿಕೊಂಡಿದ್ದ ರೋಚಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖಾತಾ ಬದಲಾವಣೆಗೆ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಮತ್ತು ಅವರಿಗೆ ಸಾಥ್ ನೀಡಿದ್ದ ಯುಟ್ಯೂಬರ್ ಈಗ ಲೋಕಾಯುಕ್ತ ಅಧಿಕಾರಿಗಳ ಅತಿಥಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್&zwnj;ನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಗೀತಾಮಣಿ ಮತ್ತು ನೆಲಮಂಗಲದ ಸ್ಥಳೀಯ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದ ಗಂಗಾಧರ್ ಬಂಧಿತ ಆರೋಪಿಗಳು. ಹೆಗ್ಗೇನಹಳ್ಳಿಯ ನಿವಾಸಿ ಫೈಜುಲ್ಲಾಸಾಬ್ ಎಂಬುವವರು ತಮ್ಮ ಜಮೀನಿನ ಖಾತಾ ಬದಲಾವಣೆಗಾಗಿ ಗ್ರಾಮ ಪಂಚಾಯತ್&zwnj;ಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಪಿಡಿಒ ಗೀತಾಮಣಿ ಅವರು ಬರೋಬ್ಬರಿ 1.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಯುಟ್ಯೂಬರ್ ಮೂಲಕ ಡೀಲ್!&lt;/strong&gt;&lt;/h2&gt;&lt;p&gt;ಲಂಚದ ಹಣವನ್ನು ನೇರವಾಗಿ ಪಡೆಯಲು ಹಿಂಜರಿದ ಪಿಡಿಒ ಗೀತಾಮಣಿ, ಒಂದು ಉಪಾಯ ಹೂಡಿದ್ದರು. ತನಗೆ ಬರಬೇಕಾದ ಹಣವನ್ನು ಸ್ಥಳೀಯವಾಗಿ ಯುಟ್ಯೂಬ್ ವಾಹಿನಿ ನಡೆಸುತ್ತಿದ್ದ ಗಂಗಾಧರ್ ಎಂಬುವವನಿಗೆ ನೀಡುವಂತೆ ಫೈಜುಲ್ಲಾಸಾಬ್&zwnj;ಗೆ ಸೂಚಿಸಿದ್ದರು. ಈ ಮೂಲಕ ತಾವು ಸುರಕ್ಷಿತವಾಗಿರಬಹುದು ಎಂಬುದು ಪಿಡಿಒ ಅವರ ಆಲೋಚನೆಯಾಗಿತ್ತು. ಆದರೆ, ಭ್ರಷ್ಟ ಅಧಿಕಾರಿಗೆ ಪಾಠ ಕಲಿಸಲು ನಿರ್ಧರಿಸಿದ ಫೈಜುಲ್ಲಾಸಾಬ್ ಕೂಡಲೇ ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದರು.&lt;/p&gt;&lt;h2&gt;&lt;strong&gt;ಲೋಕಾಯುಕ್ತ ದಾಳಿ ಮತ್ತು ಬಂಧನ:&lt;/strong&gt;&lt;/h2&gt;&lt;p&gt;ಲೋಕಾಯುಕ್ತ ಅಧಿಕಾರಿಗಳು ಹಾಕಿದ ಪ್ಲಾನ್&zwnj;ನಂತೆ, ಫೈಜುಲ್ಲಾಸಾಬ್ ಅವರು ಲಂಚದ ಮೊತ್ತದಲ್ಲಿ ಮೊದಲ ಕಂತಾಗಿ 1.2 ಲಕ್ಷ ರೂಪಾಯಿ ಹಣವನ್ನು ಗಂಗಾಧರ್ ಬಳಿ ನೀಡಲು ಹೋದರು. ನೆಲಮಂಗಲದ ಬಳಿ ಗಂಗಾಧರ್ ಲಂಚದ ಹಣವನ್ನು ಕೈಗೆ ಪಡೆಯುತ್ತಿದ್ದಂತೆಯೇ ಹಠಾತ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಗಂಗಾಧರ್ ನೀಡಿದ ಮಾಹಿತಿಯ ಆಧಾರದ ಮೇಲೆ ಪಿಡಿಒ ಗೀತಾಮಣಿ ಅವರನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ದಾಳಿಯ ವೇಳೆ ಲಂಚದ 1.2 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಕಾರ್ಯಾಚರಣೆಯು ಭ್ರಷ್ಟಾಚಾರಕ್ಕೆ ಸಾಥ್ ನೀಡುವವರಿಗೆ ಮತ್ತು ಮಧ್ಯವರ್ತಿಗಳಾಗಿ ಕೆಲಸ ಮಾಡುವವರಿಗೆ ದೊಡ್ಡ ಎಚ್ಚರಿಕೆಯಾಗಿದೆ. ಕೇವಲ ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲದೆ, ಅವರ ಪರವಾಗಿ ಲಂಚ ಸಂಗ್ರಹಿಸುವ ಖಾಸಗಿ ವ್ಯಕ್ತಿಗಳೂ ಕೂಡ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ಪ್ರಕರಣದಿಂದ ಸಾಬೀತಾಗಿದೆ. ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಲೋಕಾಯುಕ್ತ ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-rural-nelamangala-lokayukta-trap-pdo-geethamani-youtuber-gangadhar-arrested-for-bribery-sat/articleshow-vi3uc05"/>
        </item>
        <item>
            <title><![CDATA[ಮೈಸೂರಲ್ಲಿ ಮನೆಯೊಳಗೆ ನುಗ್ಗಿದ ಚಿರತೆಯೊಂದಿಗೆ 2 ಗಂಟೆ ಕಳೆದ 90ರ ಅಜ್ಜಿ; ಸಾವಿನ ಮನೆ ಕದ ತಟ್ಟಿಬಂದ ತಾಯಿ-ಮಗಳು!]]></title>
            <link>https://kannada.asianetnews.com/gallery/karnataka-districts/mysuru-leopard-operation-successful-siddhartha-layout-brave-family-90-year-old-grandmother-safe-sat-ntgcrll</link>
            <guid isPermaLink="true">https://kannada.asianetnews.com/gallery/karnataka-districts/mysuru-leopard-operation-successful-siddhartha-layout-brave-family-90-year-old-grandmother-safe-sat-ntgcrll</guid>
            <pubDate>Fri, 17 Apr 2026 20:48:48 +0530</pubDate>
            <description><![CDATA[&lt;p&gt;ಮೈಸೂರಿನ ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಚಿರತೆಯೊಂದು, ಸುಮಾರು ಎರಡೂವರೆ ಗಂಟೆಗಳ ಕಾಲ 90 ವರ್ಷದ ವೃದ್ಧೆಯ ಮಂಚದ ಕೆಳಗೆ ಅವಿತುಕೊಂಡಿತ್ತು. ಅಚ್ಚರಿಯೆಂದರೆ, ಯಾರಿಗೂ ಯಾವುದೇ ಹಾನಿ ಮಾಡದ ಈ ಚಿರತೆಯನ್ನು ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆಹಿಡಿದು, ಎಲ್ಲರನ್ನೂ ಅಪಾಯದಿಂದ ಪಾರುಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe07z1mcywc93rqycd4ysr4,imgname-mysuru-leapard-enter-in-house-1776439000116.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರಿನ ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಚಿರತೆಯೊಂದು, ಸುಮಾರು ಎರಡೂವರೆ ಗಂಟೆಗಳ ಕಾಲ 90 ವರ್ಷದ ವೃದ್ಧೆಯ ಮಂಚದ ಕೆಳಗೆ ಅವಿತುಕೊಂಡಿತ್ತು. ಅಚ್ಚರಿಯೆಂದರೆ, ಯಾರಿಗೂ ಯಾವುದೇ ಹಾನಿ ಮಾಡದ ಈ ಚಿರತೆಯನ್ನು ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆಹಿಡಿದು, ಎಲ್ಲರನ್ನೂ ಅಪಾಯದಿಂದ ಪಾರುಮಾಡಿದೆ.&lt;/p&gt;&lt;img&gt;&lt;p&gt;ಮೈಸೂರು (ಏ.17): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಉಸಿರು ಬಿಗಿಹಿಡಿಯುವಂತಹ ಘಟನೆಯೊಂದು ನಡೆದಿದೆ. ಸಿದ್ದಾರ್ಥ ಬಡಾವಣೆಯ ಸುರೇಶ್ ಎಂಬುವವರ ಮನೆಯೊಳಗೆ ನುಗ್ಗಿದ್ದ ಚಿರತೆ, ಸುಮಾರು ಎರಡೂವರೆ ಗಂಟೆಗಳ ಕಾಲ ಅಕ್ಷರಶಃ ಮನೆಯವರ ಜೊತೆಯಲ್ಲೇ ಕಾಲ ಕಳೆದಿದೆ! ಅಚ್ಚರಿಯೆಂದರೆ, ಈ ಎರಡೂವರೆ ಗಂಟೆಗಳ ಕಾಲ ಚಿರತೆ ಮನುಷ್ಯರ ಜೊತೆಗಿದ್ದರೂ ಯಾರಿಗೂ ಕಿಂಚಿತ್ತೂ ತೊಂದರೆ ನೀಡದೆ ಶಾಂತವಾಗಿ ಮಲಗಿದ್ದು ಈಗ ಪವಾಡದಂತೆ ಭಾಸವಾಗುತ್ತಿದೆ. ಇನ್ನು ಸಾವಿನ ಮನೆ ಕದ ತಟ್ಟಿಬಂದಂತಾಗಿದೆ.&lt;/p&gt;&lt;img&gt;&lt;p&gt;ಈ ಘಟನೆಯ ಅತ್ಯಂತ ರೋಚಕ ಮತ್ತು ಭಯಾನಕ ಕ್ಷಣವೆಂದರೆ ಅದು ಮನೆಯ ವೃದ್ಧೆ ಶೈಲಜಾ ಅವರ ಕೊಠಡಿಯಲ್ಲಿದ್ದ ದೃಶ್ಯ. 90 ವರ್ಷದ ವಯಸ್ಸಾದ ವೃದ್ಧೆ ಶೈಲಜಾ ಅವರು ಹಾಸಿಗೆ ಹಿಡಿದಿದ್ದು, ಅವರಿಗೆ ನಡೆದಾಡಲು ಸಾಧ್ಯವಿಲ್ಲ. ಚಿರತೆ ಮನೆಯೊಳಗೆ ನುಗ್ಗಿದಾಗ ನೇರವಾಗಿ ಈ ಅಜ್ಜಿಯ ರೂಮಿಗೆ ಹೋಗಿ ಮಂಚದ ಕೆಳಗೆ ಮಲಗಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಅಜ್ಜಿ ಮಂಚದ ಮೇಲೆ ಮಲಗಿದ್ದರೆ, ಮಂಚದ ಕೆಳಗೆ ಕ್ರೂರ ಮೃಗ ಚಿರತೆ ಮೌನವಾಗಿ ಕುಳಿತಿತ್ತು.&lt;/p&gt;&lt;img&gt;&lt;p&gt;ಮನೆ ಮಾಲೀಕ ಸುರೇಶ್ ಅವರ ಪತ್ನಿ ಸುಜಾತ ಮತ್ತು ಕೆಲಸದ ಮಹಿಳೆ ಅದೇ ಕೊಠಡಿಗೆ ಬಂದು ಅಜ್ಜಿಗೆ ಔಷಧಿ ಹಚ್ಚಿದ್ದಾರೆ, ಆರೈಕೆ ಮಾಡಿದ್ದಾರೆ. ಆದರೆ ಅಚ್ಚರಿಯೆಂದರೆ ಅವರಿಬ್ಬರಿಗೂ ಮಂಚದ ಕೆಳಗೆ ಚಿರತೆ ಇರುವುದು ಗೊತ್ತೇ ಆಗಿಲ್ಲ! ಅಷ್ಟರಮಟ್ಟಿಗೆ ಆ ಚಿರತೆ ಅಂದು ಸೌಮ್ಯವಾಗಿ ವರ್ತಿಸಿತ್ತು. ಬಳಿಕ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮಂಚದ ಕೆಳಗೆ ನೋಡಿದಾಗ ಬೆಳ್ಳಂಬೆಳ್ಳಗೆ ಚಿರತೆ ಕಂಡಿದೆ. ತಕ್ಷಣವೇ ಅವರೆಲ್ಲರೂ ಭಯದಿಂದ ನಡುಗಿದರೂ, ಧೈರ್ಯ ತಂದುಕೊಂಡು ಅಜ್ಜಿಯನ್ನು ಹೊರಕ್ಕೆ ಎತ್ತಿಕೊಂಡು ಬಂದು ರೂಮಿನ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;&lsquo;ಬೆಳಗ್ಗೆ ನಮ್ಮ ರಸ್ತೆಯಲ್ಲಿ ಚಿರತೆ ಓಡಾಡುತ್ತಿದೆ ಎಂದು ಅರಣ್ಯ ಇಲಾಖೆಯವರು ಎಚ್ಚರಿಕೆ ನೀಡಿದ್ದರು. ನಾವು ಮನೆ ಬಾಗಿಲು ಹಾಕಿಕೊಂಡೇ ಇದ್ದೆವು. ಆದರೆ ಕೇವಲ 5 ರಿಂದ 10 ನಿಮಿಷ ಮಾತ್ರ ಮೇನ್ ಡೋರ್ ತೆರೆದಿದ್ದೆವು. ಆ ಸಮಯದಲ್ಲಿ ಅದು ಯಾರಿಗೂ ಕಾಣದಂತೆ ನುಗ್ಗಿ ರೂಮಿನ ಒಳಗೆ ಕುಳಿತಿದೆ. ದೇವರ ದಯೆಯಿಂದ ನಮ್ಮ ಪ್ರಾಣ ಉಳಿದಿದೆ&rsquo; ಎಂದು ಸುಜಾತ ಆತಂಕದಿಂದಲೇ ಹೇಳಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಿರತೆ ಕಾರ್ಯಪಡೆ (Leopard Task Force), ಎಸಿಎಫ್ ರವೀಂದ್ರ ಮತ್ತು ಮೃಗಾಲಯದ ಪಶುವೈದ್ಯಾಧಿಕಾರಿ ಡಾ. ಶಶಿಕುಮಾರ್ ಅವರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿದರು. ಚಿರತೆಗೆ ಎರಡು ಬಾರಿ ಅರವಳಿಕೆ ಮದ್ದು ನೀಡುವ ಮೂಲಕ ಅದನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು. ಸುಮಾರು ಎರಡೂವರೆ ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಸದ್ಯ ಅದನ್ನು ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.&lt;/p&gt;&lt;img&gt;&lt;p&gt;ಈ ಇಡೀ ಘಟನೆಯು ಮೈಸೂರು ಜನತೆಯಲ್ಲಿ ಒಂದು ಕಡೆ ಆತಂಕ ಮೂಡಿಸಿದ್ದರೆ, ಮತ್ತೊಂದು ಕಡೆ 90 ವರ್ಷದ ವೃದ್ಧೆಯ ಪ್ರಾಣ ಉಳಿದಿದ್ದನ್ನು ಕಂಡು ಜನ &lsquo;ದೈವಬಲ&rsquo; ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಅಜ್ಜಿ ಮತ್ತು ಮಗಳು ಸಾವಿನ ಮನೆಯ ಕದ ತಟ್ಟಿ ವಾಪಸ್ ಜೀವಂತವಾಗಿ ಬಮದಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/mysuru-leopard-operation-successful-siddhartha-layout-brave-family-90-year-old-grandmother-safe-sat-ntgcrll"/>
        </item>
        <item>
            <title><![CDATA[ನಮ್ಮ ತಂದೆಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ: ಯತೀಂದ್ರ ಸಿದ್ದರಾಮಯ್ಯ]]></title>
            <link>https://kannada.asianetnews.com/karnataka-districts/mlc-yathindra-siddaramaiah-mass-marriage-belagavi-event-gvd/articleshow-ugcfufx</link>
            <guid isPermaLink="true">https://kannada.asianetnews.com/karnataka-districts/mlc-yathindra-siddaramaiah-mass-marriage-belagavi-event-gvd/articleshow-ugcfufx</guid>
            <pubDate>Fri, 17 Apr 2026 20:00:00 +0530</pubDate>
            <description><![CDATA[&lt;p&gt;ನಮ್ಮ ತಂದೆಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ ಹಾಗೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿ ಎಂಬುದು ನಮ್ಮ ಆಶಯ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ja824npvrbvrs5a29fx9bzj1,imgname-1---2024-10-15t175314.946.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೈಲಹೊಂಗಲ (ಏ.17): &lt;/strong&gt;ನಮ್ಮ ತಂದೆಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ, ಮಳೆ-ಬೆಳೆ ಸಮೃದ್ಧಿಯಾಗಿ ರೈತರ ಬದುಕು ಉನ್ನತಿಗೇರಲಿ ಹಾಗೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿ ಎಂಬುದು ನಮ್ಮ ಆಶಯ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಸಿದ್ದ ಸುಕ್ಷೇತ್ರ ನಯಾನಗರ ಗ್ರಾಮದ ಸುಖದೇವಾನಂದ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.&lt;/p&gt;&lt;p&gt;ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಠ-ಮಾನ್ಯಗಳ ಪಾತ್ರ ಅಪಾರವಾಗಿದೆ. ಸಮಾಜದಲ್ಲಿ ಏಕತೆ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಧರ್ಮಪೀಠಗಳು ಮಹತ್ವದ ಪಾತ್ರ ವಹಿಸುತ್ತಿವೆ. ಸುಖದೇವಾನಂದ ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಹಲವು ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಿಂದ ಮಠಾಧೀಶರು, ಸಾಧು-ಸಂತರನ್ನು ಆಹ್ವಾನಿಸಿ ಧರ್ಮಸಭೆಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಮತ್ತು ಸತ್ಸಂಸ್ಕಾರಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.&lt;/p&gt;&lt;p&gt;ಸಾಮಾಜಿಕ ಕಳಕಳಿ ಇಟ್ಟು ಸಾಮೂಹಿಕ ವಿವಾಹ ಆಯೋಜಿಸಿರುವುದು ಅತ್ಯಂತ ಮಹತ್ವದ ಕೆಲಸ. ಇಂತಹ ಕಾರ್ಯಕ್ರಮಗಳಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಭಾರ ಕಡಿಮೆಯಾಗುತ್ತದೆ. ಜೊತೆಗೆ ಸರಳ ವಿವಾಹದ ಸಂದೇಶ ಸಮಾಜಕ್ಕೆ ತಲುಪುತ್ತದೆ. ಅತಿರೇಕದ ಖರ್ಚುಗಳನ್ನು ತೊರೆದು ಸೌಹಾರ್ದತೆಯ ಬದುಕು ನಡೆಸುವ ಅಗತ್ಯವನ್ನು ಇಂತಹ ಕಾರ್ಯಕ್ರಮಗಳು ಒತ್ತಿ ಹೇಳುತ್ತವೆ ಎಂದು ಅಭಿಪ್ರಾಯಪಟ್ಟರು.&lt;/p&gt;&lt;h2&gt;&lt;strong&gt;ಸಂತೋಷ ತಂದಿದೆ&lt;/strong&gt;&lt;/h2&gt;&lt;p&gt;ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಉದ್ಘಾಟನೆ ನೆರವೇರಿಸುವ ಅವಕಾಶ ದೊರೆತಿರುವುದು ಸಂತೋಷ ತಂದಿದೆ. ಮಠದ ಸೇವಾ ಕಾರ್ಯಗಳು ಇನ್ನಷ್ಟು ವಿಸ್ತರಿಸಿ ಸಮಾಜಕ್ಕೆ ಹೆಚ್ಚಿನ ಸೇವೆ ನೀಡಲಿ ಎಂದು ಹಾರೈಸಿದರು. ಸುಖದೇವಾನಂದ ಪುಣ್ಯಾಶ್ರಮದ ಗುರು ಅಭಿನವ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸಮಾನತೆ ಮತ್ತು ಸರಳತೆಯನ್ನು ಉತ್ತೇಜಿಸಲು ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗುತ್ತಿದೆ.&lt;/p&gt;&lt;p&gt;ಧರ್ಮ, ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಠಗಳು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಉತ್ತಮ ಸಂಸ್ಕಾರಗಳನ್ನು ಬೆಳೆಸಲು ನಿರಂತರ ಪ್ರಯತ್ನಿಸುತ್ತಿವೆ ಎಂದು ಹೇಳಿದರು, ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ-ಪುನಸ್ಕಾರಗಳು ಹಾಗೂ ಸಾಮೂಹಿಕ ವಿವಾಹಗಳು ಭಕ್ತಿಭಾವದಿಂದ ನೆರವೇರಿದವು. ಕಾರ್ಯಕ್ರಮದಲ್ಲಿ ಒಟ್ಟು 20 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mlc-yathindra-siddaramaiah-mass-marriage-belagavi-event-gvd/articleshow-ugcfufx"/>
        </item>
        <item>
            <title><![CDATA[ವಿನಯ್ ಕುಲಕರ್ಣಿ ಶಿಕ್ಷೆ ಹಿಂದಿದೆ ಬಿಜೆಪಿ 'ಒಳಸಂಚು': ನನಗೂ ಹೀಗೆಯೇ ಕಿರುಕುಳ ಕೊಟ್ಟಿದ್ದರು! ಡಿಕೆಶಿ ಸ್ಫೋಟಕ ಹೇಳಿಕೆ]]></title>
            <link>https://kannada.asianetnews.com/state/dk-shivakumar-reaction-on-vinay-kulkarni-life-imprisonment-bjp-conspiracy-allegation-sat/articleshow-x0trr11</link>
            <guid isPermaLink="true">https://kannada.asianetnews.com/state/dk-shivakumar-reaction-on-vinay-kulkarni-life-imprisonment-bjp-conspiracy-allegation-sat/articleshow-x0trr11</guid>
            <pubDate>Fri, 17 Apr 2026 18:32:04 +0530</pubDate>
            <description><![CDATA[&lt;p&gt;ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ವಿಧಿಸಲಾದ ಜೀವಾವಧಿ ಶಿಕ್ಷೆಯು ಬಿಜೆಪಿಯ ರಾಜಕೀಯ ಪಿತೂರಿಯಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕುಲಕರ್ಣಿಯವರ ರಾಜಕೀಯ ಬೆಳವಣಿಗೆಯನ್ನು ಸಹಿಸದೆ ಅವರನ್ನು ಸಿಲುಕಿಸಲಾಗಿದೆ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdr9z7v0em636q8kj0wtycz,imgname-dk-shivakumar-about-vinay-kulkarni-in-jail-1776430677243.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.17): ಧಾ&lt;/strong&gt;ರವಾಡದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯ ಬಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ವಿನಯ್ ಕುಲಕರ್ಣಿ ವಿರುದ್ಧದ ಈ ತೀರ್ಪಿನ ಹಿಂದೆ ರಾಜಕೀಯ ಪಿತೂರಿ ಇದೆ' ಎಂದು ನೇರವಾಗಿ ಬಿಜೆಪಿಯತ್ತ ಬೆರಳು ತೋರಿಸಿದ್ದಾರೆ.&lt;/p&gt;&lt;h3&gt;&lt;strong&gt;ಇದು ಬಿಜೆಪಿಯ ರಾಜಕೀಯ ಒಳಸಂಚು:&lt;/strong&gt;&lt;/h3&gt;&lt;p&gt;'ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಆದರೆ ಈ ಇಡೀ ಪ್ರಕರಣದ ತನಿಖೆ ನಡೆದ ಹಾದಿಯಲ್ಲಿ ದೊಡ್ಡ ಒಳಸಂಚು ಅಡಗಿದೆ. ಬಿ-ರಿಪೋರ್ಟ್ ಸಲ್ಲಿಕೆಯಾಗುವ ಹಂತದಲ್ಲಿದ್ದ ಪ್ರಕರಣವನ್ನು ಮತ್ತೆ ಕೆದಕಿ ಅವರನ್ನು ಸಿಲುಕಿಸಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ವಿನಯ್ ಕುಲಕರ್ಣಿ ಅವರು ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದರು. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿ ಅವರ ಬೆಳವಣಿಗೆಯನ್ನು ಸಹಿಸದ ಬಿಜೆಪಿ ನಾಯಕರು, ಅವರನ್ನು ರಾಜಕೀಯವಾಗಿ ಮುಗಿಸಲು ಈ ಸಂಚು ರೂಪಿಸಿದ್ದಾರೆ' ಎಂದು ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದರು.&lt;/p&gt;&lt;h2&gt;&lt;strong&gt;ನನಗೂ ಕಿರುಕುಳ ನೀಡಿದ್ದರು:&lt;/strong&gt;&lt;/h2&gt;&lt;p&gt;ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಡಿಕೆಶಿ, 'ನನಗೂ ಇದೇ ರೀತಿ ಕಿರುಕುಳ ನೀಡಲಾಗಿತ್ತು. ನಾನು ಜೈಲಿಗೆ ಹೋಗಿ ಬಂದೆ, ಆದರೆ ಅಂತಿಮವಾಗಿ ಸುಪ್ರೀಂಕೋರ್ಟ್&zwnj;ನಲ್ಲಿ ನನಗೆ ನ್ಯಾಯ ಸಿಕ್ಕಿತು. ವಿನಯ್ ಕುಲಕರ್ಣಿ ಅವರ ಕುಟುಂಬದ ಜೊತೆ ನಾನು ಮಾತನಾಡಿದ್ದೇನೆ. ಅವರು ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನನಗಿದೆ. ಕಾನೂನಿನಲ್ಲಿ ಇನ್ನು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ, ಅವರನ್ನು ನಂಬಿದ ದೇವರು ಕೈಬಿಡುವುದಿಲ್ಲ' ಎಂದು ಧೈರ್ಯ ತುಂಬಿದರು.&lt;/p&gt;&lt;h2&gt;&lt;strong&gt;ಸಚಿವ ಸ್ಥಾನ ಮತ್ತು ಜಮೀರ್ ರಾಜೀನಾಮೆ:&lt;/strong&gt;&lt;/h2&gt;&lt;p&gt;ರಾಜ್ಯ ಕಾಂಗ್ರೆಸ್&zwnj;ನಲ್ಲಿ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರು ಒತ್ತಡ ಹೇರುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ಅದೆಲ್ಲವೂ ಹಿರಿಯ ಶಾಸಕರಿಗೆ ಬಿಟ್ಟಿದ್ದು. ನಮ್ಮಲ್ಲಿ ಸಿದ್ದರಾಮಯ್ಯ ತಂಡ ಅಥವಾ ಡಿ.ಕೆ. ಶಿವಕುಮಾರ್ ತಂಡ ಎಂಬ ಭೇದವಿಲ್ಲ. ದೆಹಲಿಗೆ ಬರುವ ವಿಚಾರದ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರಿಸುತ್ತಾರೆ' ಎಂದರು. ಇನ್ನು ಸಚಿವ ಜಮೀರ್ ಅಹ್ಮದ್ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗಳೆದ ಡಿಕೆಶಿ, 'ಈ ಬಗ್ಗೆ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಪತ್ರಿಕೆಗಳಲ್ಲಿ ಬಂದ ಸುದ್ದಿ ಬಗ್ಗೆ ನನಗೆ ಗೊತ್ತಿಲ್ಲ' ಎಂದು ಸ್ಪಷ್ಟಪಡಿಸಿದರು.&lt;/p&gt;&lt;h3&gt;&lt;strong&gt;ಮುಸ್ಲಿಂ ನಾಯಕರು ಟಾರ್ಗೆಟ್ ಆಗಿಲ್ಲ:&lt;/strong&gt;&lt;/h3&gt;&lt;p&gt;ಅಲ್ಪಸಂಖ್ಯಾತ ನಾಯಕರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, 'ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ನೀಡಿದಷ್ಟು ಬೆಂಬಲವನ್ನು ಬೇರೆ ಯಾರೂ ನೀಡಿಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರವು ಕೇವಲ ಅಲ್ಪಸಂಖ್ಯಾತರ ಸೀಟು ಅಲ್ಲ, ಅಲ್ಲಿ ಶಾಮನೂರು ಶಿವಶಂಕರಪ್ಪ ಅವರು ದಶಕಗಳಿಂದ ಕ್ಷೇತ್ರವನ್ನು ಉಳಿಸಿಕೊಂಡು ಬಂದಿದ್ದಾರೆ. ಟಿಕೆಟ್ ಹಂಚಿಕೆ ಕೆಲವು ವರದಿಗಳ ಆಧಾರದ ಮೇಲೆ ನಡೆದಿದೆ. ಯಾರನ್ನೂ ನಾವು ಟಾರ್ಗೆಟ್ ಮಾಡುತ್ತಿಲ್ಲ' ಎಂದು ಸಮರ್ಥಿಸಿಕೊಂಡರು.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/dk-shivakumar-reaction-on-vinay-kulkarni-life-imprisonment-bjp-conspiracy-allegation-sat/articleshow-x0trr11"/>
        </item>
        <item>
            <title><![CDATA[ವಿನಯ್‌ ಕುಲಕರ್ಣಿಗೆ ಜೀವಾವಧಿ: ಮಾಜಿ ಸಿಎಂ ಬಿಎಸ್‌ವೈ ಪ್ರತಿಕ್ರಿಯೆ, ಜೈಕಾರ ಹಾಕಿ ಸಂಭ್ರಮಿಸಿದ ಕಾರ್ಯಕರ್ತರು]]></title>
            <link>https://kannada.asianetnews.com/state/bs-yediyurappa-reacts-to-vinay-kulkarni-life-sentence-emotional-statement-in-chikkamagaluru-gdp/articleshow-15e2arw</link>
            <guid isPermaLink="true">https://kannada.asianetnews.com/state/bs-yediyurappa-reacts-to-vinay-kulkarni-life-sentence-emotional-statement-in-chikkamagaluru-gdp/articleshow-15e2arw</guid>
            <pubDate>Fri, 17 Apr 2026 18:19:23 +0530</pubDate>
            <description><![CDATA[ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾದ ಹಿನ್ನೆಲೆಯಲ್ಲಿ, ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಹಿಂದೆ ತಾನು ಹೇಳಿದ್ದೇ ಇಂದು ಸತ್ಯವಾಗಿದೆ ಎಂದಿದ್ದಾರೆ. 2019ರಲ್ಲಿ ತಾವೇ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿತ್ತು ಎಂದು ಅವರು ಸ್ಮರಿಸಿಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpdqh461n7b0sf06fd06jsxx,imgname-bs-yediyurappa-1776429863104.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಏ.17): &lt;/strong&gt;ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ, ಚಿಕ್ಕಮಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಆಜಾದ್ ಪಾರ್ಕ್ ವೃತ್ತದಲ್ಲಿ ಮಾತನಾಡಿದ ಅವರು, ಈ ಘಟನೆ ಬಗ್ಗೆ ಏನು ಹೇಳಬೇಕು ಎನ್ನುವುದು ನನಗೆ ತೋಚುತ್ತಿಲ್ಲ. ಆ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ. ಈ ರೀತಿಯ ಘಟನೆ ನಡೆಯಬಾರದಿತ್ತು, ಆದರೆ ನಡೆದಿದ್ದು ದುಃಖಕರ. ಅಪರಾಧ ನಡೆದ ಸಂದರ್ಭದಲ್ಲಿ ನಾನು ಹೇಳಬೇಕಿದ್ದನ್ನು ಆಗಲೇ ಹೇಳಿದ್ದೆ. ಇಂದು ನಾನು ಹೇಳಿದ್ದೇ ಸತ್ಯ ಎಂಬಂತೆ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟರು.&lt;/p&gt;&lt;h2&gt;ಬಿಎಸ್&zwnj;ವೈಗೆ &amp;nbsp;ಜೈಕಾರ ಹಾಕಲು ಕಾರಣ&lt;/h2&gt;&lt;p&gt;2016ರಲ್ಲಿ ಯೋಗೇಶ್ ಗೌಡ ಕೊಲೆ ನಡೆದಾಗ ಇಂದಿನ ಸಿಎಂ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಸಿಬಿಐಗೆ ನೀಡಬೇಕೆಂದು ಯೋಗೇಶ್ ಗೌಡ ಕುಟುಂಬ ಒತ್ತಾಯಿಸಿದ್ರು. ಆದರೆ ಆಗ ಕೇಸ್ ಬಗ್ಗೆ ಯಾವ ಬೆಳವಣಿಗೆಯೂ ನಡೆಯಲಿಲ್ಲ. ಆದರೆ ಮೈತ್ರಿ ಸರ್ಕಾರ ಇದ್ದಾಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಈ ಕೇಸ್ ಅನ್ನು 2019ರಲ್ಲಿ ಸಿಬಿಐಗೆ ವಹಿಸಿದರು. ಅಲ್ಲಿಂದ ಈ ಪ್ರಕರಣಕ್ಕೆ ಟರ್ನಿಂಗ್ ಪಾಯಿಂಟ್ ಸಿಕ್ಕಿತು.&lt;/p&gt;&lt;h2&gt;ಘೋಷಣೆ ವೇಳೆ ಗೊಂದಲ&lt;/h2&gt;&lt;p&gt;ಇದಕ್ಕೂ ಮೊದಲು ಚಿಕ್ಕಮಗಳೂರಿಗೆ ಆಗಮಿಸಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ವಾಗತಿಸುವ ವೇಳೆ ಒಂದು ವಿಚಿತ್ರ ಘಟನೆ ಗಮನಸೆಳೆಯಿತು. ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುವ ವೇಳೆ ಗೊಂದಲ ಉಂಟಾಗಿ, ಕೆಲವರು ತಪ್ಪಾಗಿ ಯಡಿಯೂರಪ್ಪ ವಿರುದ್ಧವೇ ಘೋಷಣೆ ಕೂಗಲು ಮುಂದಾದರು. ವಿನಯ್ ಕುಲಕರ್ಣಿಯನ್ನು ಜೈಲಿಗೆ ಕಳುಹಿಸಿದ ಯಡಿಯೂರಪ್ಪನವರಿಗೆ ಜೈ ಎಂದು ಘೋಷಣೆ ಕೂಗುವ ವೇಳೆ, ಕೆಲವರು ತಪ್ಪಾಗಿ ವಿರೋಧದ ಘೋಷಣೆ ಕೂಗಿದಂತಾಗಿದೆ. ನಂತರ ತಕ್ಷಣವೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಕಾರ್ಯಕರ್ತರು ತಮ್ಮ ಘೋಷಣೆಯನ್ನು ನಿಲ್ಲಿಸಿದರು. ಈ ಘಟನೆ ಸ್ಥಳದಲ್ಲಿದ್ದವರ ಗಮನಸೆಳೆಯಿತು.&lt;/p&gt;&lt;h2&gt;ಚಿಕ್ಕಮಗಳೂರಿನಲ್ಲಿ ಬಿ.ಎಸ್.ವೈ. ವಾಸ್ತವ್ಯ&lt;/h2&gt;&lt;p&gt;ಬಿ.ಎಸ್. ಯಡಿಯೂರಪ್ಪ ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ನಾಳೆ ಲಿಂಗಾಯಿತ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೈತ್ರಾದೇವಿ-ಯಡಿಯೂರಪ್ಪ ವೀರಶೈವ ಲಿಂಗಾಯಿತ ಸಮುದಾಯ ಭವನವು ಸುಮಾರು ₹10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ನಗರದ ಎಐಟಿ ಕಾಲೇಜು ಹಿಂಭಾಗದಲ್ಲಿ ಈ ಭವನ ನಿರ್ಮಾಣವಾಗಿದೆ. ಕಾರ್ಯಕ್ರಮದ ಬಳಿಕ ಅವರು ನಾಳೆ ಮಧ್ಯಾಹ್ನ ಬೆಂಗಳೂರಿಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/state/bs-yediyurappa-reacts-to-vinay-kulkarni-life-sentence-emotional-statement-in-chikkamagaluru-gdp/articleshow-15e2arw"/>
        </item>
        <item>
            <title><![CDATA[ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸತ್ತ ಮರಿಯ ಅಸ್ಥಿಪಂಜರ ಹೊತ್ತು ಸಾಗಿದ ತಾಯಿ ಕೋತಿ, ವಿಡಿಯೋ ವೈರಲ್!]]></title>
            <link>https://kannada.asianetnews.com/bengaluru-urban/mother-monkey-carries-dead-infant-skeleton-at-namma-metro-bengaluru-viral-video-san/articleshow-prhgtpy</link>
            <guid isPermaLink="true">https://kannada.asianetnews.com/bengaluru-urban/mother-monkey-carries-dead-infant-skeleton-at-namma-metro-bengaluru-viral-video-san/articleshow-prhgtpy</guid>
            <pubDate>Fri, 17 Apr 2026 18:19:08 +0530</pubDate>
            <description><![CDATA[ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣದಲ್ಲಿ ತಾಯಿ ಕೋತಿಯೊಂದು ತನ್ನ ಮೃತ ಮರಿಯ ಅಸ್ಥಿಪಂಜರವನ್ನು ಹೊತ್ತು ತಿರುಗುತ್ತಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂದಿದೆ. ಈ ಘಟನೆಯು ಪ್ರಾಣಿಗಳಲ್ಲಿನ ತಾಯಿಯ ಮಮತೆ ಮತ್ತು ಶೋಕದ ಆಳವನ್ನು ತೋರಿಸಿದ್ದು, ಪ್ರಯಾಣಿಕರನ್ನು ಮತ್ತು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbd912ftkxxtpben9wr1zbx,imgname-mother-monkey-carries-baby-skeleton-at-bengaluru-metro-station-1776352003151.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17):&lt;/strong&gt; ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣವೊಂದರಲ್ಲಿ ಕಂಡುಬಂದ ಅತ್ಯಂತ ಹೃದಯವಿದ್ರಾವಕ ದೃಶ್ಯವೊಂದು ಪ್ರಯಾಣಿಕರ ಹಾಗೂ ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಮೃತಪಟ್ಟ ತನ್ನ ಮರಿಯ ಅಸ್ಥಿಪಂಜರವನ್ನು ಹೊತ್ತು ತಿರುಗುತ್ತಿರುವ ತಾಯಿ ಕೋತಿಯ ವಿಡಿಯೋ ಸೋಶಿಯಲ್&zwnj; ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರಾಣಿ ಸಂಕುಲದಲ್ಲಿರುವ ಮಮತೆ ಮತ್ತು ಶೋಕದ ಆಳಕ್ಕೆ ಕನ್ನಡಿ ಹಿಡಿದಿದೆ.&lt;/p&gt;&lt;p&gt;ನಮ್ಮ ಮೆಟ್ರೋ ಮಾದಾವರ ನಿಲ್ದಾಣದ ಆವರಣದಲ್ಲಿ ಮೃತಪಟ್ಟ ಮರಿಯ ಅವಶೇಷಗಳನ್ನು ತಾಯಿ ಕೋತಿಯು ಎದೆಯ ಮೇಲೆ ಹೊತ್ತು ತಿರುಗುತ್ತಿರುವುದನ್ನು ಕಂಡು ಪ್ರಯಾಣಿಕರು ಸ್ತಬ್ದರಾಗಿದ್ದಾರೆ. ಮರಿ ಸತ್ತು ಬರಿ ಅಸ್ಥಿಪಂಜರವಾಗಿದ್ದರೂ, ಆ ಮರಿಯನ್ನು ಅಗಲಲು ಒಪ್ಪದ ತಾಯಿ ಮಮತೆ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಸಾವು ಮತ್ತು ಬದುಕಿನ ಆಚೆಗೂ ಇರುವ ತಾಯಿಯ ಬೇಷರತ್ ಪ್ರೀತಿಗೆ ಈ ದೃಶ್ಯ ಸಾಕ್ಷಿಯಾಗಿದೆ.&lt;/p&gt;&lt;p&gt;ಮಗು ಸತ್ತಿದ್ದರೂ ಅದನ್ನು ಬಿಟ್ಟು ಹೋಗಲು ತಾಯಿ ಕೋತಿ ನಿರಾಕರಿಸುತ್ತಿರುವುದು, ಸಾವು ಸಂಭವಿಸಿದ ಮೇಲೆಯೂ ಅದರ ಬಗೆಗಿನ ಅತೀವ ಬಾಂಧವ್ಯ ಮತ್ತು ಅಗಲಿಕೆಯ ನೋವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಸ್ಥಿತಿಯನ್ನು ತೋರಿಸುತ್ತಿದೆ. ಮಾನವರಂತೆಯೇ ಪ್ರಾಣಿಗಳೂ ಕೂಡ ಆಳವಾದ ಭಾವನಾತ್ಮಕ ಸಂಬಂಧಗಳನ್ನು ಹೊಂದಿರುತ್ತವೆ ಮತ್ತು ಶೋಕವನ್ನು ಅನುಭವಿಸುತ್ತವೆ ಎಂಬುದಕ್ಕೆ ಈ ಅಪರೂಪದ ಘಟನೆ ಸಾಕ್ಷಿ ಒದಗಿಸಿದೆ.&lt;/p&gt;&lt;h2&gt;&lt;strong&gt;ಶೋಕ ವ್ಯಕ್ತಪಡಿಸಿದ ಪ್ರಯಾಣಿಕರು&lt;/strong&gt;&lt;/h2&gt;&lt;p&gt;ಈ ದೃಶ್ಯಕ್ಕೆ ಸಾಕ್ಷಿಯಾದ ಮೆಟ್ರೋ ಪ್ರಯಾಣಿಕರು ಮೌನಕ್ಕೆ ಶರಣಾಗಿದ್ದಾರೆ. ಅನೇಕರು ಈ ನೋವಿನ ದೃಶ್ಯವನ್ನು ಕಂಡು ದುಃಖ ವ್ಯಕ್ತಪಡಿಸಿದ್ದು, ನಿಲ್ದಾಣದ ಆವರಣದಲ್ಲಿ ಕೆಲಕಾಲ ವಿಷಾದದ ವಾತಾವರಣ ನಿರ್ಮಾಣವಾಗಿತ್ತು. ತಾಯಿಯ ಮಮತೆಯ ಈ ಹಸಿ ಮತ್ತು ನೋವಿನ ಪ್ರದರ್ಶನವನ್ನು ಜನರು ನಂಬಲಾಗದ ಕಣ್ಣುಗಳಿಂದ ನೋಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾವಿರಾರು ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ಒಬ್ಬ ಯೂಸರ್&zwnj; &quot;ತಾಯಿಯ ಪ್ರೀತಿಯನ್ನು ಯಾವುದೂ ಬೇರ್ಪಡಿಸಲು ಸಾಧ್ಯವಿಲ್ಲ&quot; ಎಂದು ಬರೆದಿದ್ದಾರೆ. ತಾಯ್ತನದ ಸಾರ್ವತ್ರಿಕ ಸ್ವರೂಪ ಮತ್ತು ಪ್ರಾಣಿಗಳ ಭಾವನಾತ್ಮಕ ಬದುಕಿನ ಬಗ್ಗೆ ಈ ವಿಡಿಯೋ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;p&gt;A mother&rsquo;s love never ends.This heartbreaking scene from a Namma metro station in Bengaluru shows a monkey mother walking while carrying the skeletal remains of her baby, refusing to leave it behind. She is not just holding it in one place she continues to move with it, as if&hellip; pic.twitter.com/GuLhdQz1ke&lt;/p&gt;&lt;p&gt;&mdash; Karnataka Portfolio (@karnatakaportf) April 15, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/mother-monkey-carries-dead-infant-skeleton-at-namma-metro-bengaluru-viral-video-san/articleshow-prhgtpy"/>
        </item>
        <item>
            <title><![CDATA[ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಪಲ್ಟಿ: ರಸ್ತೆಗೆ ಬಿದ್ದ ಟನ್‌ಗಟ್ಟಲೇ ಅಕ್ಕಿ]]></title>
            <link>https://kannada.asianetnews.com/gallery/state/lorry-carrying-illegal-ration-rice-overturns-tons-of-rice-fall-onto-the-road-xhaxfaf</link>
            <guid isPermaLink="true">https://kannada.asianetnews.com/gallery/state/lorry-carrying-illegal-ration-rice-overturns-tons-of-rice-fall-onto-the-road-xhaxfaf</guid>
            <pubDate>Fri, 17 Apr 2026 17:42:32 +0530</pubDate>
            <description><![CDATA[&lt;p&gt;ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಬೀದರ್&zwnj;ನ ಝರಣಿ ನರಸಿಂಹ ದೇವಸ್ಥಾನದ ಬಳಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಚಾಲಕ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdn7wjmvgmmraeh9tq69550,imgname-ration-lorry-overturn--4--1776427463252.jpg" type="image/jpeg" height="390" width="690"/>
            <content:encoded><![CDATA[&lt;p&gt;ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಬೀದರ್&zwnj;ನ ಝರಣಿ ನರಸಿಂಹ ದೇವಸ್ಥಾನದ ಬಳಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಚಾಲಕ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.&lt;/p&gt;&lt;img&gt;&lt;p&gt;ಬೀದರ್: ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಈ ಲಾರಿ ಹೋಗುತ್ತಿತ್ತು.&lt;/p&gt;&lt;img&gt;&lt;p&gt;ಬೀದರ್ ನಗರದ ಝರಣಿ ನರಸಿಂಹ ದೇವಸ್ಥಾನದ ಬಳಿ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿ ನೂರು ಟನ್&zwnj;ಗೂ ಅಧಿಕ&zwnj; ಪಡಿತರ ಅಕ್ಕಿ ಇರೋ ಬಗ್ಗೆ ಮಾಹಿತಿ ಇದೆ.&lt;/p&gt;&lt;img&gt;&lt;p&gt;ಕಾರು ಹಾಗೂ ಟಾಟಾ ಮ್ಯಾಜಿಕ್&zwnj;ಗೆ ಡಿಕ್ಕಿ ಹೊಡೆದ ಬಳಿಕ ಲಾರಿ ಪಲ್ಟಿಯಾಗಿದೆ. ಅಕ್ಕಿ ತುಂಬಿದ ಈ ಟ್ರಕ್ ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ಬೀದರ್&zwnj;ನ ರಿಂಗ್ ರೋಡ್&zwnj; ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕಾರಿನಲ್ಲಿದ್ದ 6 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.&lt;/p&gt;&lt;img&gt;&lt;p&gt;ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ನಭಾಗ್ಯದ ಅಕ್ಕಿಯನ್ನ ಅಕ್ರಮವಾಗಿ ಸಾಗಿಸುತ್ತಿದ್ದಿರಬಹುದು ಎಂಬ ಶಂಕೆ ಮೂಡಿದ್ದು, ಅಪಘಾತದ ನಂತರ ಲಾರಿ ಮಗುಚಿ ಬಿದ್ದಿದ್ದರಿಂದ ರಸ್ತೆ ತುಂಬಾ ಅಕ್ಕಿ ಚೆಲ್ಲಿದೆ.&lt;/p&gt;]]></content:encoded>
            <category>karnataka-districts</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/lorry-carrying-illegal-ration-rice-overturns-tons-of-rice-fall-onto-the-road-xhaxfaf"/>
        </item>
        <item>
            <title><![CDATA[ಯೋಗೇಶ್ ಗೌಡ ಕೊಂದ 16 ಮಂದಿಗೆ ಜೀವಾವಧಿ, ವಿನಯ್ ಕುಲಕರ್ಣಿ ಮುಂದಿನ ಆಯ್ಕೆಗಳೇನು? ಜೀವಾವಧಿ ಶಿಕ್ಷೆ ಎಂದರೇನು?]]></title>
            <link>https://kannada.asianetnews.com/state/what-is-mean-by-life-sentence-vinay-kulkarni-and-others-gets-life-sentence-in-dharwad-yogesh-gowda-murder-case-gdp/articleshow-gsupd69</link>
            <guid isPermaLink="true">https://kannada.asianetnews.com/state/what-is-mean-by-life-sentence-vinay-kulkarni-and-others-gets-life-sentence-in-dharwad-yogesh-gowda-murder-case-gdp/articleshow-gsupd69</guid>
            <pubDate>Fri, 17 Apr 2026 17:30:11 +0530</pubDate>
            <description><![CDATA[ಧಾರವಾಡದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 16 ಆರೋಪಿಗಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಸುಮಾರು 10 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಈ ತೀರ್ಪು ಹೊರಬಿದ್ದಿದ್ದು, ಪ್ರತಿಯೊಬ್ಬ ಆರೋಪಿಗೂ ₹1 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಇದೇ ಪ್ರಕರಣದಲ್ಲಿ ಪೊಲೀಸ್ ಇನ್ಸ್&zwnj;ಪೆಕ್ಟರ್&zwnj;ಗೆ 7 ವರ್ಷಗಳ ಜೈಲು ಶಿಕ್ಷೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd0c4911kmv10hee03q82wy,imgname-vinay-kulkarni-1776405582113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದೆ. ಜೊತೆಗೆ ಪ್ರತಿಯೊಬ್ಬ ಆರೋಪಿಗೂ ₹1 ಲಕ್ಷದಂತೆ ಒಟ್ಟು ₹16 ಲಕ್ಷ ದಂಡ ವಿಧಿಸಲಾಗಿದ್ದು, ಈ ಮೊತ್ತವನ್ನು ಯೋಗೇಶ್ ಗೌಡ ಅವರ ಮಕ್ಕಳಿಗೆ ಹಾಗೂ ಅವರ ಸಹೋದರ ಗುರುನಾಥ್ ಗೌಡ ಅವರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೊಲೀಸ್ ಇನ್ಸ್&zwnj;ಪೆಕ್ಟರ್ ಚನ್ನಕೇಶವ ಟಿಂಗರೀಕರ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಲಾಗಿದೆ.&lt;/p&gt;&lt;h2&gt;ಜೀವಾವಧಿ ಶಿಕ್ಷೆ ಎಂದರೆ ಏನು?&lt;/h2&gt;&lt;p&gt;ಜೀವಾವಧಿ ಶಿಕ್ಷೆ ಎಂದರೆ ಅಪರಾಧಿಯು ತನ್ನ ನೈಸರ್ಗಿಕ ಜೀವಿತಾವಧಿಯ ಅಂತ್ಯದವರೆಗೆ ಜೈಲಿನಲ್ಲಿ ಇರಬೇಕಾದ ಶಿಕ್ಷೆಯಾಗಿದೆ. ಇದು ಕೇವಲ 14 ಅಥವಾ 20 ವರ್ಷಗಳ ಶಿಕ್ಷೆಯಲ್ಲ. ವ್ಯಕ್ತಿ ಜೀವಿಸುವವರೆಗೂ ಜೈಲಿನಲ್ಲೇ ಇರಬೇಕಾಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ, ಸರ್ಕಾರ ಸನ್ನಡತೆ ಆಧಾರವಾಗಿ ಶಿಕ್ಷೆಯನ್ನು ಕಡಿಮೆ ಮಾಡಬಹುದು ಅಥವಾ ಪೆರೋಲ್ ನೀಡಬಹುದು. ಆದರೆ ಇದು ಕಡ್ಡಾಯವಲ್ಲ. ಸಾಮಾನ್ಯವಾಗಿ ಕೊಲೆ, ಭಯೋತ್ಪಾದನೆ, ಲೈಂಗಿಕ ದೌರ್ಜನ್ಯ ಹಾಗೂ ರಾಷ್ಟ್ರದ್ರೋಹದಂತಹ ಗಂಭೀರ ಅಪರಾಧಗಳಿಗೆ ಈ ಶಿಕ್ಷೆ ವಿಧಿಸಲಾಗುತ್ತದೆ.&lt;/p&gt;&lt;h2&gt;ಅಪರಾಧಿಗಳ ಮುಂದಿರುವ ಆಯ್ಕೆಗಳೇನು?&lt;/h2&gt;&lt;p&gt;ಜೀವಾವಧಿ ಶಿಕ್ಷೆಗೆ ಒಳಗಾಗಿರುವ 16 ಅಪರಾಧಿಗಳು ಮತ್ತು 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ A19 ಅಪರಾಧಿಗೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಲೇರುವ ಅವಕಾಶವಿದ್ದು, ಅದಾಗಲೇ ಅಪರಾಧಿಗಳ ವಕೀಲರು ಈ ಬಗ್ಗೆ ಮುಂದಿನ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;ದೀರ್ಘಕಾಲದ ವಿಚಾರಣೆಗೆ ತೆರೆ&lt;/h2&gt;&lt;p&gt;2016ರ ಜೂನ್&zwnj;ನಲ್ಲಿ ನಡೆದ ಈ ಹತ್ಯೆ ಪ್ರಕರಣವು ಸುಮಾರು 10 ವರ್ಷಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಟ್ಟಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, 17 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ಜತೆಗೆ ಸಿಬಿಐ ಅಧಿಕಾರಿಗಳ ತನಿಖೆಯನ್ನು ಅಭಿನಂದಿಸಿದರು.&lt;/p&gt;&lt;h2&gt;ಶಿಕ್ಷೆಗೆ ಗುರಿಯಾದ ಪ್ರಮುಖ ಆರೋಪಿಗಳು&lt;/h2&gt;&lt;p&gt;ವಿನಯ್ ಕುಲಕರ್ಣಿ (A15) ಸೇರಿದಂತೆ ವಿಕ್ರಂ ಬಳ್ಳಾರಿ, ಕೀರ್ತಿ ಕುಮಾರ್, ಸಂದೀಪ್, ವಿನಾಯಕ, ಮಹಾಬಲೇಶ್ವರ, ಸಂತೋಷ್, ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಅಹ್ಮದ್, ಶಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ್ ಇಂಡಿ ಮತ್ತು ವಿಕಾಸ್ ಕಲಬುರಗಿ ಸೇರಿದಂತೆ ಒಟ್ಟು 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. A19 ಅಪರಾಧಿಗೆ 7 ವರ್ಷ ಜೈಲು ಶಿಕ್ಷೆಯಾಗಿದೆ. A1 ಬಸವರಾಜ್ ಮುತ್ತಗಿ ಮತ್ತು A17 ಶಿವಾನಂದ್ ಶ್ರೀಶೈಲ ಬಿರಾದರ್ ಅವರನ್ನು ಮಾಫಿ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ.&lt;/p&gt;&lt;h2&gt;ಯಾವ ಸೆಕ್ಷನ್ ಅಡಿಯಲ್ಲಿ ಶಿಕ್ಷೆ?&lt;/h2&gt;&lt;p&gt;ನ್ಯಾಯಾಲಯವು ಆರೋಪಿಗಳಿಗೆ ವಿವಿಧ ಭಾರತೀಯ ದಂಡ ಸಂಹಿತೆ (IPC) ವಿಧಿಗಳಡಿ ಶಿಕ್ಷೆ ವಿಧಿಸಿದೆ:&lt;/p&gt;&lt;p&gt;ಕಲಂ 302 (ಕೊಲೆ): ಜೀವಾವಧಿ ಶಿಕ್ಷೆ&lt;/p&gt;&lt;p&gt;ಕಲಂ 120(B) (ಅಪರಾಧಿಕ ಸಂಚು): ಜೀವಾವಧಿ ಶಿಕ್ಷೆ&lt;/p&gt;&lt;p&gt;ಕಲಂ 201 (ಸಾಕ್ಷ್ಯ ನಾಶ): 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ&lt;/p&gt;&lt;p&gt;ಕಲಂ 143, 147, 148, 149 (ಅಕ್ರಮ ಕೂಟ, ಗಲಭೆ, ಆಯುಧಗಳಿಂದ ದಾಳಿ): 3 ವರ್ಷಗಳವರೆಗೆ ಶಿಕ್ಷೆ&lt;/p&gt;&lt;p&gt;ಚನ್ನಕೇಶವ ಟಿಂಗರೀಕರ್ (A19) ವಿರುದ್ಧ ಕಲಂ 218 ಅಡಿಯಲ್ಲಿ, ತಪ್ಪು ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಸಹಾಯ ಮಾಡಿದ ಆರೋಪ ಸಾಬೀತಾಗಿ ಶಿಕ್ಷೆ ವಿಧಿಸಲಾಗಿದೆ.&lt;/p&gt;&lt;h2&gt;ಯಾವ ಸೆಕ್ಷನ್&zwnj; ಯಾರ ಮೇಲೆ?&lt;/h2&gt;&lt;p&gt;ಪ್ರಕರಣದ 2 ರಿಂದ 16 ಮತ್ತು 18ನೇ ಆರೋಪಿಗಳು ಭಾರತೀಯ ದಂಡ ಸಂಹಿತೆ 302 (ಕೊಲೆ) ಆರೋಪದಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿ ಶಿಕ್ಷೆಗೊಳಗಾಗಿದ್ದಾರೆ. (ಯಾರೆಲ್ಲ A2 - ವಿಕ್ರಂ ಬಳ್ಳಾರಿ, A3 - ಕೀರ್ತಿ ಕುಮಾರ್​, A4 - ಸಂದೀಪ್​, A5 - ವಿನಾಯಕ್, ​​A6 - ಮಹಾಬಲೇಶ್ವರ, A7 - ಸಂತೋಷ್, A8 - ದಿನೇಶ್​​, A9 - ಅಶ್ವಥ್​​, A10 - ಸುನೀಲ್​​ ಕೆ.ಎಸ್​, A11 - ನಜರ್ ಅಹಮದ್​, A12 - ಶಹನವಾಜ್​​, A13 - ನೂತನ್, ​​A14 - ಹರ್ಷಿತ್, ​​A15 - ವಿನಯ್ ಕುಲಕರ್ಣಿ, A16 - ಚಂದ್ರಶೇಖರ್​ ಇಂಡಿ ಮತ್ತು ​A18 - ವಿಕಾಸ್​​ ಕಲಬುರ್ಗಿ )&lt;/p&gt;&lt;p&gt;ಹಾಗೆಯೇ 2 ರಿಂದ 16 ಮತ್ತು 18 ಹಾಗೂ 19ನೇ ಆರೋಪಿಗಳು 120 (ಬಿ) (ಅಪರಾಧಿಕ ಒಳ ಸಂಚು) ರೂಪಿಸಿದ್ದಾರೆ ಮತ್ತು ಮತ್ತು 201 (ಸಾಕ್ಷ್ಯ ನಾಶ ಪಡಿಸಿದ್ದಾರೆ. (ಯಾರೆಲ್ಲ A2 - ವಿಕ್ರಂ ಬಳ್ಳಾರಿ, A3 - ಕೀರ್ತಿ ಕುಮಾರ್​, A4 - ಸಂದೀಪ್​, A5 - ವಿನಾಯಕ್, ​​A6 - ಮಹಾಬಲೇಶ್ವರ, A7 - ಸಂತೋಷ್, A8 - ದಿನೇಶ್​​, A9 - ಅಶ್ವಥ್​​, A10 - ಸುನೀಲ್​​ ಕೆ.ಎಸ್​, A11 - ನಜರ್ ಅಹಮದ್​, A12 - ಶಹನವಾಜ್​​, A13 - ನೂತನ್, ​​A14 - ಹರ್ಷಿತ್, ​​A15 - ವಿನಯ್ ಕುಲಕರ್ಣಿ, A16 - ಚಂದ್ರಶೇಖರ್​ ಇಂಡಿ ಮತ್ತು ​A18 - ವಿಕಾಸ್​​ ಕಲಬುರ್ಗಿ ಮತ್ತು A19 - ಚೆನ್ನಕೇಶವ ಟಿಂಗರಿಕರ್).&lt;/p&gt;&lt;p&gt;ಇನ್ನು ಆರೋಪಿ 2 ರಿಂದ 14 ಮತ್ತು 18ನೇ ಆರೋಪಿಗಳು 143, 149 (ಅಕ್ರಮ ಕೂಟ), 147 (ಗಲಭೆ), 148 (ಆಯುಧಗಳಿಂದ ಕೃತ್ಯ) ಎಸಗಿದ್ದಾರೆ. ( ಯಾರೆಲ್ಲ A2 - ವಿಕ್ರಂ ಬಳ್ಳಾರಿ, A3 - ಕೀರ್ತಿ ಕುಮಾರ್​, A4 - ಸಂದೀಪ್​, A5 - ವಿನಾಯಕ್, ​​A6 - ಮಹಾಬಲೇಶ್ವರ, A7 - ಸಂತೋಷ್, A8 - ದಿನೇಶ್​​, A9 - ಅಶ್ವಥ್​​, A10 - ಸುನೀಲ್​​ ಕೆ.ಎಸ್​, A11 - ನಜರ್ ಅಹಮದ್​, A12 - ಶಹನವಾಜ್​​, A13 - ನೂತನ್, ​​A14 - ಹರ್ಷಿತ್ ಮತ್ತು ​A18 - ವಿಕಾಸ್​​ ಕಲಬುರ್ಗಿ)&lt;/p&gt;&lt;p&gt;19ನೇ ಆರೋಪಿ 218 ಅಡಿಯಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದು ತಪ್ಪುದಾಖಲೆಗಳನ್ನು ಸೃಷ್ಟಿಸಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ. (ಯಾರು A19 - ಚೆನ್ನಕೇಶವ ಟಿಂಗರಿಕರ್)&lt;/p&gt;&lt;h2&gt;ರಾಜಕೀಯ ಹಾಗೂ ಕಾನೂನು ಮಹತ್ವ&lt;/h2&gt;&lt;p&gt;ಯೋಗೇಶ್ ಗೌಡ ಹತ್ಯೆ ಪ್ರಕರಣದ ಈ ತೀರ್ಪು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ದೀರ್ಘಕಾಲದ ವಿಚಾರಣೆಯ ನಂತರ ಹೊರಬಿದ್ದ ಈ ತೀರ್ಪು, ರಾಜಕೀಯ ಪ್ರಭಾವದ ಪ್ರಕರಣಗಳಲ್ಲಿಯೂ ನ್ಯಾಯ ಸಿಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ. &amp;nbsp;ಈ ಪ್ರಕರಣದ ತೀರ್ಪು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಕಾದು ನೋಡಬೇಕಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/state/what-is-mean-by-life-sentence-vinay-kulkarni-and-others-gets-life-sentence-in-dharwad-yogesh-gowda-murder-case-gdp/articleshow-gsupd69"/>
        </item>
        <item>
            <title><![CDATA[Breaking: ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ಶಾಸಕ ಸ್ಥಾನದಿಂದ ಅನರ್ಹತೆ ಸಾಧ್ಯತೆ, ನಾಳೆ ಅಧಿಸೂಚನೆ ಪ್ರಕಟ?]]></title>
            <link>https://kannada.asianetnews.com/karnataka-districts/vinay-kulkarni-life-imprisonment-disqualification-dharwad-mla-seat-karnataka-san/articleshow-d5ppg01</link>
            <guid isPermaLink="true">https://kannada.asianetnews.com/karnataka-districts/vinay-kulkarni-life-imprisonment-disqualification-dharwad-mla-seat-karnataka-san/articleshow-d5ppg01</guid>
            <pubDate>Fri, 17 Apr 2026 16:35:45 +0530</pubDate>
            <description><![CDATA[&lt;p&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ, ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯಲ್ಲಿದ್ದಾರೆ. ನ್ಯಾಯಾಲಯದ ತೀರ್ಪಿನ ಪ್ರತಿ ಕೈಸೇರಿದ ತಕ್ಷಣ ಸ್ಪೀಕರ್ ಕಚೇರಿಯು ಅನರ್ಹತೆಯ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdh942e2d4ymngdazxwe5vk,imgname-vinay-kulkarni-1776423309390.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿ ನ್ಯಾಯಾಲ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಅವರ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ಕುತ್ತು ಬಂದಿದ್ದು, ಸದ್ಯದಲ್ಲೇ ಅನರ್ಹತೆಯ ಭೀತಿ ಎದುರಾಗಿದೆ.&lt;/p&gt;&lt;p&gt;ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸುವ ಪ್ರಕ್ರಿಯೆಗೆ ವಿಧಾನಸಭೆ ಸ್ಪೀಕರ್ ಕಚೇರಿ ಸಿದ್ಧತೆ ನಡೆಸುತ್ತಿದೆ. ನ್ಯಾಯಾಲಯದ ಅಧಿಕೃತ ತೀರ್ಪಿನ ಪ್ರತಿ (Order Copy) ಕೈ ಸೇರಿದ ಕೂಡಲೇ ಅನರ್ಹತೆಯ ಆದೇಶವನ್ನು ಪ್ರಕಟಿಸಲು ಸ್ಪೀಕರ್ ಕಚೇರಿ ನಿರ್ಧರಿಸಿದೆ. ಕಾನೂನು ತಜ್ಞರ ಸಲಹೆಯ ಮೇರೆಗೆ ಈ ಅಧಿಸೂಚನೆ ಹೊರಬೀಳಲಿದೆ.&lt;/p&gt;&lt;h2&gt;&lt;strong&gt;ನಾಳೆ ಅಧಿಕೃತ ಅಧಿಸೂಚನೆ ಸಾಧ್ಯತೆ&lt;/strong&gt;&lt;/h2&gt;&lt;p&gt;ವಿಧಾನಸಭಾ ಸ್ಪೀಕರ್ ಕಚೇರಿಯ ಮೂಲಗಳ ಪ್ರಕಾರ, ನಾಳೆಯೊಳಗೆ (ಶನಿವಾರ) ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ, ಯಾವುದೇ ಚುನಾಯಿತ ಪ್ರತಿನಿಧಿಗೆ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆಯಾದರೆ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ಅನರ್ಹರಾಗುತ್ತಾರೆ. ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆಯಾಗಿರುವುದರಿಂದ ಅವರು ಶಾಸಕ ಸ್ಥಾನವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆಯಿಂದ ಧಾರವಾಡ ರಾಜಕಾರಣದಲ್ಲಿ ಭಾರಿ ಬದಲಾವಣೆಗಳಾಗುವ ಮುನ್ಸೂಚನೆ ಸಿಕ್ಕಿದ್ದು, ಒಂದು ವೇಳೆ ಅನರ್ಹತೆ ಪ್ರಕಟವಾದರೆ ಆ ಕ್ಷೇತ್ರದಲ್ಲಿ ಉಪಚುನಾವಣೆಯ ಅನಿವಾರ್ಯತೆ ಎದುರಾಗಲಿದೆ.&lt;/p&gt;&lt;h2&gt;&lt;strong&gt;89,333 ಮತ ಗಳಿಸಿದ್ದ ವಿನಯ್&zwnj; ಕುಲಕರ್ಣಿ&lt;/strong&gt;&lt;/h2&gt;&lt;p&gt;2023ರ ವಿಧಾನಸಭೆ ಚುನಾವಣೆ ವೇಳೆ ವಿನಯ್&zwnj; ಕುಲಕರ್ಣಿಗೆ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಹೋಗಲು ಕೂಡ ಕೋರ್ಟ್&zwnj; ಅವಕಾಶ ನೀಡಿರಲಿಲ್ಲ. ಈ ವೇಳೆ ವಿನಯ್&zwnj; ಕುಲಕರ್ಣಿಯ ಹೆಂಡ್ತಿ ಹಾಗೂ ಮಕ್ಕಳು ಪ್ರಚಾರ ನಡೆಸಿ ಗೆಲುವು ತಂದುಕೊಟ್ಟಿದ್ದರು. ವಿನಯ್&zwnj; ಕುಲಕರ್ಣಿ 89,333 ಮತಗಳಿಸಿದ್ದರೆ, 2ನೇ ಸ್ಥಾನ ಪಡೆದಿದ್ದ ಬಿಜೆಪಿಯ ಅಮೃತ್&zwnj; ಅಯ್ಯಪ್ಪ ದೇಸಾಯಿ 71, 296 ಮತ ಸಂಪಾದನೆ ಮಾಡಿದ್ದರು. ಬರೋಬ್ಬರಿ 18,037 ಮತಗಳ ಅಂತರದಿಂದ ವಿನಯ್&zwnj; ಕುಲಕರ್ಣಿ ಗೆದ್ದಿದ್ದರು. ಅದಕ್ಕೂ ಮುನ್ನ 2013ರ ಚುನಾವಣೆಯಲ್ಲೂ ಈತ ಶಾಸಕನಾಗಿದ್ದ. ಆಗ 18,320 ಮತಗಳಿಂದ 2ನೇ ಸ್ಥಾನ ಪಡೆದಿದ್ದ ಆಗ ಜೆಡಿಎಸ್&zwnj;ನಲ್ಲಿದ್ದ ಅಮೃತ್&zwnj; ಅಯ್ಯಪ್ಪ ದೇಸಾಯಿಯನ್ನು ಸೋಲಿಸಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/vinay-kulkarni-life-imprisonment-disqualification-dharwad-mla-seat-karnataka-san/articleshow-d5ppg01"/>
        </item>
        <item>
            <title><![CDATA[Breaking: ಯೋಗೇಶ್ ಗೌಡ ಹತ್ಯೆ ಪ್ರಕರಣ: ಕೊಲೆಗಾರ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ]]></title>
            <link>https://kannada.asianetnews.com/state/life-imprisonment-for-mla-vinay-kulkarni-in-yogesh-gowda-murder-case-gdp/articleshow-8gmbe6n</link>
            <guid isPermaLink="true">https://kannada.asianetnews.com/state/life-imprisonment-for-mla-vinay-kulkarni-in-yogesh-gowda-murder-case-gdp/articleshow-8gmbe6n</guid>
            <pubDate>Fri, 17 Apr 2026 16:19:20 +0530</pubDate>
            <description><![CDATA[ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಈ ಹತ್ಯೆಗೆ ಸಂಬಂಧಿಸಿದಂತೆ ಕುಲಕರ್ಣಿ ಸೇರಿದಂತೆ ಒಟ್ಟು 17 ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdgr23jay4as83c4regv6f2,imgname-whatsapp-image-2026-04-17-at-4.12.18-pm-1776422750322.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ, ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿಗೆ ಸೇರಿ 16 ಮಂದಿ &amp;nbsp;ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. &amp;nbsp;ಟಿಂಗರೀಕರ್&zwnj; ಒಬ್ಬರಿಗೆ ಜೀವಾವಧಿ ಸಿಗದೆ 7 ವರ್ಷಗಳ ಜೈಲು ಮತ್ತು 30000 ದಂಡ ಪ್ರಕಟಿಸಲಾಗಿದೆ. &amp;nbsp;ಇದರ ಜೊತೆಗೆ ಉಳಿದ ಅಪರಾಧಿಗಳಿಗೂ ಶಿಕ್ಷೆಯನ್ನು ಪ್ರಕಟ ಮಾಡಿದೆ. 16ಲಕ್ಷ ರೂ. ದಂಡದ ಮೊತ್ತ ವಿಧಿಸಲಾಗಿದ್ದು ಈ ಪರಿಹಾರವನ್ನು ಯೋಗೇಶ್ ಗೌಡ ಮಕ್ಕಳಿಗೆ ಹಾಗೂ ಸಹೋದರ ಗುರುನಾಥ್ ಗೌಡ ಗೆ ನೀಡಲು ಸೂಚನೆ ನೀಡಲಾಗಿದೆ. &amp;nbsp;&lt;/p&gt;&lt;p&gt;ವಿನಯ್ ಕುಲಕರ್ಣಿ, ಪೊಲೀಸ್&zwnj; ಇನ್ಸ್&zwnj;ಪೆಕ್ಟರ್&zwnj; ಆಗಿದ್ದ ಚನ್ನಕೇಶವ ಟಿಂಗರೀಕರ್&zwnj; ಸೇರಿದಂತೆ 17 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಪ್ರಿಲ್ 15ರಂದು ದೋಷಿಗಳೆಂದು ಘೋಷಿಸಿ ಮಹತ್ವದ ತೀರ್ಪು ನೀಡಿತ್ತು. ಗುರುವಾರವಾಕ್ಕೆ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿದ ನ್ಯಾಯಾಲವು ಸಿಬಿಐ ಮತ್ತು ಆರೋಪಿಗಳ ಪರ ವಕೀಲರ ವಾದ ಪ್ರತಿವಾದವನ್ನು ಆಲಿಸಿತು. ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು. ಬಳಿಕ ಇಂದಿಗೆ ಅಂದರೆ ಏಪ್ರಿಲ್ 17ಕ್ಕೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಪ್ರಕರಣದ 15ನೇ ಅಪರಾಧಿಯಾಗಿರುವ ಪ್ರಭಾವಿ ರಾಜಕಾರಣಿ ವಿನಯ್ ಕುಲಕರ್ಣಿ ಹತ್ಯೆಯ ಹಿಂದೆ ನಡೆದ ಒಳಸಂಚಿನಲ್ಲಿ ಭಾಗಿಯಾದ ಹಿನ್ನೆಲೆ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಉಳಿದ ಆರೋಪಿಗಳಿಗೂ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.&lt;/p&gt;&lt;p&gt;2016ರ ಜೂನ್&zwnj;ನಲ್ಲಿ ನಡೆದ ಕೊಲೆಗೆ ಸಂಬಂಧಿಸಿ ಯೋಗೇಶ್&zwnj; ಗೌಡ ಕೊಲೆ ಪ್ರಕರಣ ಸಂಬಂಧ ಸುಮಾರು 8 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಸಂಜೆ ಅಂತಿಮ ತೀರ್ಪು ಪ್ರಕಟಿಸಿ ಅಪರಾಧಿಗಳೆಂದು ಘೋಷಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್&zwnj; ಗಜಾನನ ಭಟ್&zwnj; ಅವರು, 15ನೇ ಆರೋಪಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ವಿಕ್ರಮ್&zwnj; ಬಳ&zwj;್ಳಾರಿ, ಕೀರ್ತಿ ಕುಮಾರ್&zwnj; ಬಸವರಾಜ್&zwnj; ಕುರಹಟ್ಟಿ, ಸಂದೀಪ್&zwnj; ಸವದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹೊಂಗಲ್&zwnj;, ಸಂತೋಷ್&zwnj; ಸವದತ್ತಿ, ದಿನೇಶ್&zwnj;, ಅಶ್ವತ್ಥ್, ಸುನೀಲ್&zwnj;, ನಜೀರ್ ಅಹ್ಮದ್&zwnj;, ಶಹನವಾಜ್&zwnj;, ನೂತನ್&zwnj;, ಹರ್ಷಿತ್&zwnj;, ಚಂದ್ರಶೇಖರ್&zwnj; ಇಂಡಿ, ವಿಕಾಸ್&zwnj; ಕಲಬುರಗಿ, ಪೊಲೀಸ್&zwnj; ಇನ್ಸ್&zwnj;ಪೆಕ್ಟರ್&zwnj; ಚನ್ನಕೇಶವ ಬಿ.ಟಿಂಗರಿಕರ್&zwnj; ಒಟ್ಟು 17 ಮಂದಿಗೆ ಶಿಕ್ಷೆ ಪ್ರಕಟಿಸಿದ್ದಾರೆ.&lt;/p&gt;&lt;h2&gt;17 ಅಪರಾಧಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು&lt;/h2&gt;&lt;p&gt;ಏಪ್ರಿಲ್ 15ರಂದು ನ್ಯಾಯಾಧೀಶರ ಸೂಚನೆಯ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋದರು. ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಹಿನ್ನೆಲೆಯಲ್ಲಿ 17 ಅಪರಾಧಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆದರೆ ವಾದ ಪ್ರತಿವಾದ ಮಾತ್ರ ನಡೆದಿತ್ತು. ಹೀಗಾಗಿ ಇಂದು ಮತ್ತೆ ಎಲ್ಲಾ ಆರೋಪಿಗಳನ್ನು ಕೋರ್ಟ್&zwnj;ಗೆ ಕರೆತಂದಿದ್ದರು.&lt;/p&gt;&lt;p&gt;ಈ ಪ್ರಕರಣದಲ್ಲಿ ಮೊದಲನೇ ಆರೋಪಿ ಬಸವರಾಜ್&zwnj; ಮುತ್ತಗಿ ಮತ್ತು 17ನೇ ಆರೋಪಿ ಶಿವಾನಂದ್&zwnj; ಅವರನ್ನು ಮಾಫಿ ಸಾಕ್ಷಿಯನ್ನಾಗಿಸಲಾಗಿದೆ. ಜತೆಗೆ 20ನೇ ಆರೋಪಿ ವಾಸುದೇವ್&zwnj; ರಾಮ ನೀಲೆಕಣಿ ಮತ್ತು 21ನೇ ಆರೋಪಿ ಸೋಮಶೇಖರ್&zwnj; ಬಸಪ್ಪ ನ್ಯಾಮಗೌಡ ಅವರನ್ನು ನಿರ್ದೋಷಿಗಳೆಂದು ಕೋರ್ಟ್ ಹೇಳಿದೆ.&lt;/p&gt;&lt;h2&gt;ಯಾವ ಸೆಕ್ಷನ್&zwnj; ಯಾರ ಮೇಲೆ?&lt;/h2&gt;&lt;p&gt;ಪ್ರಕರಣದ 2 ರಿಂದ 16 ಮತ್ತು 18ನೇ ಆರೋಪಿಗಳು ಭಾರತೀಯ ದಂಡ ಸಂಹಿತೆ 302 (ಕೊಲೆ) ಆರೋಪದಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿ ಶಿಕ್ಷೆಗೊಳಗಾಗಿದ್ದಾರೆ. ಹಾಗೆಯೇ 2 ರಿಂದ 16 ಮತ್ತು 18 ಹಾಗೂ 19ನೇ ಆರೋಪಿಗಳು 120 (ಬಿ) (ಅಪರಾಧಿಕ ಒಳ ಸಂಚು) ರೂಪಿಸಿದ್ದಾರೆ ಮತ್ತು 201 (ಸಾಕ್ಷ್ಯ ನಾಶ ಪಡಿಸಿದ್ದಾರೆ). ಇನ್ನು ಆರೋಪಿ 2 ರಿಂದ 14 ಮತ್ತು 18ನೇ ಆರೋಪಿಗಳು 143, 149 (ಅಕ್ರಮ ಕೂಟ), 147 (ಗಲಭೆ), 148 (ಆಯುಧಗಳಿಂದ ಕೃತ್ಯ) ಎಸಗಿದ್ದಾರೆ. 19ನೇ ಆರೋಪಿ 218 ಅಡಿಯಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದು ತಪ್ಪುದಾಖಲೆಗಳನ್ನು ಸೃಷ್ಟಿಸಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/state/life-imprisonment-for-mla-vinay-kulkarni-in-yogesh-gowda-murder-case-gdp/articleshow-8gmbe6n"/>
        </item>
        <item>
            <title><![CDATA[ಮಂಡ್ಯ: ಸ್ಟ್ಯಾಲಿನ್ ಗೆ ಬುದ್ದಿ ಇಲ್ಲ ಬುದ್ದಿ ಕಡಿಮೆ, ಆರ್. ಅಶೋಕ್ ಮಾತಿನ ಸಮರ]]></title>
            <link>https://kannada.asianetnews.com/karnataka-districts/karnataka-opposition-leader-r-ashoka-slams-congress-praises-modi-over-women-reservation-bill-gdp/articleshow-ir07b8s</link>
            <guid isPermaLink="true">https://kannada.asianetnews.com/karnataka-districts/karnataka-opposition-leader-r-ashoka-slams-congress-praises-modi-over-women-reservation-bill-gdp/articleshow-ir07b8s</guid>
            <pubDate>Fri, 17 Apr 2026 16:06:48 +0530</pubDate>
            <description><![CDATA[ಮಂಡ್ಯದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಮಹಿಳಾ ಮೀಸಲಾತಿ ಬಿಲ್ ಕುರಿತು ಕೇಂದ್ರವನ್ನು ಶ್ಲಾಘಿಸಿದರು. ಇದೇ ವೇಳೆ, ಕ್ಷೇತ್ರ ಮರುವಿಂಗಡಣೆ, ಹಿಂದಿ ಪರೀಕ್ಷೆ ವಿವಾದ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಅವರು ಟೀಕಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpdfnjbr95edhpdps6a4dekb,imgname-r-ashoka-1776421620088.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ : &lt;/strong&gt;ಮಂಡ್ಯದಲ್ಲಿ ನಡೆದ ಕಾರ್ಯಕ್ರಮದ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಲವು ರಾಜಕೀಯ ಹಾಗೂ ಸಮಕಾಲೀನ ವಿಚಾರಗಳ ಕುರಿತು ತೀಕ್ಷ್ಣ ಹೇಳಿಕೆಗಳನ್ನು ನೀಡಿದ್ದಾರೆ. ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಬಿಲ್&zwnj;ನಿಂದ ಹಿಡಿದು ರಾಜ್ಯ ರಾಜಕೀಯದ ಬೆಳವಣಿಗೆಗಳವರೆಗೆ ಹಲವು ವಿಷಯಗಳನ್ನು ಅವರು ಪ್ರಸ್ತಾಪಿಸಿದರು.&lt;/p&gt;&lt;h2&gt;ಮಹಿಳಾ ಮೀಸಲಾತಿ ಬಿಲ್&zwnj;ಗೆ ಅಭಿನಂದನೆ&lt;/h2&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿರುವುದನ್ನು ಆರ್. ಅಶೋಕ್ ಸ್ವಾಗತಿಸಿದರು. ಬಹಳ ವರ್ಷಗಳಿಂದ ಹಲವರು ಪ್ರಯತ್ನಿಸಿದರೂ ಸಾಧ್ಯವಾಗದ ಕೆಲಸವನ್ನು ಮೋದಿ ಅವರು ಸಾಧಿಸಿದ್ದಾರೆ. ಇದು ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ದೇಶದ ಮಹಿಳೆಯರಿಗೆ ಸಮಾನತೆ ಒದಗಿಸುವ ಮಹತ್ವದ ಕ್ರಮ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ಮಹಿಳೆಯರು ಕೂಡ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;ಕಾಂಗ್ರೆಸ್ ವಿರುದ್ಧ ಟೀಕೆ&lt;/h2&gt;&lt;p&gt;ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಶೋಕ್, ಕಾಂಗ್ರೆಸ್ ಧರ್ಮ ಆಧಾರಿತ ರಾಜಕೀಯ ಮಾಡುತ್ತಿದೆ. ಮಹಿಳಾ ಮೀಸಲಾತಿ ವಿಚಾರದಲ್ಲೂ ಅನಗತ್ಯ ವಿವಾದ ಸೃಷ್ಟಿಸುತ್ತಿದೆ. ಇದು ಇತಿಹಾಸ ನಿರ್ಮಾಣದ ಕ್ಷಣವಾಗಿದ್ದು, ಅದನ್ನು ರಾಜಕೀಯವಾಗಿ ತಿರುಗಿಸುವುದು ಸರಿಯಲ್ಲ ಎಂದು ಹೇಳಿದರು.&lt;/p&gt;&lt;h2&gt;ಕ್ಷೇತ್ರ ಮರುವಿಂಗಡಣೆ ವಿವಾದ&lt;/h2&gt;&lt;p&gt;ತಮಿಳುನಾಡಿನಲ್ಲಿ ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಿಲ್&zwnj;ನಲ್ಲಿ ಜನಸಂಖ್ಯೆ ಆಧಾರದ ಯಾವುದೇ ಅಂಶವಿಲ್ಲ. ಹಿಂದೆಯೇ ಕಾಂಗ್ರೆಸ್ ಈ ರೀತಿಯ ಕ್ರಮಗಳನ್ನು ಕೈಗೊಂಡಿತ್ತು. ಈಗ ತಮಿಳುನಾಡಿನ ಕ್ಷೇತ್ರಗಳು ಹೆಚ್ಚಾಗುತ್ತಿರುವುದರಲ್ಲಿ ಏನು ಸಮಸ್ಯೆ? ಎಂದು ಪ್ರಶ್ನಿಸಿದರು. ತಮಿಳುನಾಡು ಸಿಎಂ ಸ್ಟಾಲಿನ್&zwnj;ಗೆ ಬುದ್ಧಿ ಕಡಿಮೆ ಇದೆ. ಇದೇ ರೀತಿ ಕಾಂಗ್ರೆಸ್&zwnj; ನಾಯಕರು ಕೂಡ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಿಂದೆ ಲೋಕಸಭೆ ಕ್ಷೇತ್ರ ಎಷ್ಟಿರಬೇಕೆಂದು ಕಾಂಗ್ರೆಸ್&zwnj; ನಾಯಕರೇ ತೀರ್ಮಾನ ಮಾಡಿದ್ದರು. ಜನಸಂಖ್ಯೆ ಆಧಾರಿತವಾಗಿಯೇ ಕ್ಷೇತ್ರ ಮರುವಿಂಗಡಣೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳು 42 ಆಗುತ್ತಿವೆ. ಇಲ್ಲಿ ಕ್ಷೇತ್ರಗಳು ಕಡಿಮೆಯಾಗುವುದಿಲ್ಲ. ಕೇರಳದಲ್ಲಿ 20 ಕ್ಷೇತ್ರಗಳಿಂದ 30 ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59 ಕ್ಕೆ ಏರಿಕೆಯಾಗಲಿದೆ. ಆದರೂ ವಿರೋಧ ಮಾಡುತ್ತಿದ್ದಾರೆ. ಇದನ್ನು ಜಾರಿ ಮಾಡಿದರೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಎಲ್ಲರೂ ಟೆಂಟ್&zwnj; ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ವಿರೋಧ ಪಕ್ಷಗಳ ನಾಯಕರಲ್ಲಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯ ಆಗುತ್ತಿಲ್ಲ. ಯಾವುದೇ ರಾಜ್ಯಗಳಲ್ಲಿ ಸ್ಥಾನಗಳು ಕಡಿಮೆಯಾಗುತ್ತಿಲ್ಲ. ವಿರೋಧ ಪಕ್ಷಗಳ ನಾಯಕರಿಗೆ ಅಭಿವೃದ್ಧಿ ಬೇಕಿಲ್ಲ. ಕಾಂಗ್ರೆಸ್&zwnj;ನ ವಂಶಾಡಳಿತಕ್ಕೆ ಪೂರಕವಾಗಿ ಎಲ್ಲರೂ ಮಾತಾಡುತ್ತಿದ್ದಾರೆ ಎಂದರು.&lt;/p&gt;&lt;h2&gt;ಯೋಗೇಶ್ ಗೌಡ ಹತ್ಯೆ ಪ್ರಕರಣ&lt;/h2&gt;&lt;p&gt;ಯೋಗೇಶ್ ಗೌಡ ಹತ್ಯೆ ಪ್ರಕರಣದ ತೀರ್ಪಿನ ಕುರಿತು ಮಾತನಾಡಿದ ಅವರು, ಈ ಪ್ರಕರಣವು ರಾಜಕೀಯ ಕೊಲೆಗಳಿಗೆ ಒಂದು ಪಾಠವಾಗಿದೆ. ಯಾರಾದರೂ ರಾಜಕಾರಣಿಯ ಮಾತು ಕೇಳಿ ಅಪರಾಧದಲ್ಲಿ ಭಾಗಿಯಾದರೆ ಅದರ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ. ಕಾಂಗ್ರೆಸ್ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿತ್ತು, ಆದರೆ ಸಿಬಿಐ ತನಿಖೆಯಿಂದ ಸತ್ಯ ಬಹಿರಂಗವಾಗಿದೆ ಎಂದು ಹೇಳಿದರು.&lt;/p&gt;&lt;h2&gt;ದೇವೇಗೌಡರ ರಾಜ್ಯಸಭೆ ವಿಚಾರ&lt;/h2&gt;&lt;p&gt;ಹೆಚ್&zwnj;.ಡಿ. ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರ ಕುರಿತು ಮಾತನಾಡಿದ ಅವರು, ಇದು ರಾಷ್ಟ್ರೀಯ ಮಟ್ಟದ ನಾಯಕರು ತೀರ್ಮಾನಿಸುವ ವಿಷಯ ಎಂದು ತಿಳಿಸಿದರು.&lt;/p&gt;&lt;h2&gt;ಹಿಂದಿ ಪರೀಕ್ಷೆ, ಗ್ರೇಸ್ ಮಾರ್ಕ್ಸ್ ವಿವಾದ&lt;/h2&gt;&lt;p&gt;ಹಿಂದಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್ ಆದೇಶವನ್ನು ಪಾಲಿಸಬೇಕು. ವಿದ್ಯಾರ್ಥಿಗಳ ವಿಚಾರದಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.&lt;/p&gt;&lt;h2&gt;ಕನ್ನಡಕ್ಕೆ ಆದ್ಯತೆ&lt;/h2&gt;&lt;p&gt;ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಾವುದೇ ನಿರ್ಧಾರ ಕೈಗೊಳ್ಳಬೇಕು. 365 ದಿನ ಓದಿದ ಮಕ್ಕಳಿಗೆ ಅನ್ಯಾಯವಾಗಬಾರದು ಎಂದು ಹೇಳಿದರು. ಉರ್ದು ಶಾಲೆಗಳಲ್ಲಿ ಕನ್ನಡದ ಸ್ಥಿತಿ ಕುರಿತೂ ಪ್ರಶ್ನೆ ಎತ್ತಿದ ಅವರು, ಈ ವಿಷಯದಲ್ಲಿ ಸಮಗ್ರ ಚರ್ಚೆ ಅಗತ್ಯವಿದೆ ಎಂದರು. ರಾಜ್ಯದ ಮಕ್ಕಳು ಹಿಂದಿ ಓದುವ ಮೊದಲೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಪರೀಕ್ಷೆಯ ಸಮಯದಲ್ಲಿ ತುಘಲಕ್&zwnj; ದರ್ಬಾರ್&zwnj; ಮಾಡುವ ಅಗತ್ಯವಿರಲಿಲ್ಲ. ನಾನು ಕೂಡ ಕನ್ನಡದ ಹೋರಾಟಗಾರನಾಗಿದ್ದು, ಗೋಕಾಕ್&zwnj; ಚಳವಳಿಯಲ್ಲಿ ಭಾಗವಹಿಸಿ ಪೊಲೀಸರ ಲಾಠಿ ಏಟಿನಿಂದ ಕಾಲಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದೆ. ಹೊಸೂರಿನಲ್ಲಿ ಹೆಚ್ಚಿನವರು ಕನ್ನಡ ಮಾತಾಡುತ್ತಾರೆ. ಕಾಸರಗೋಡಿನಲ್ಲೂ ಕನ್ನಡಿಗರು ಹೆಚ್ಚಿದ್ದಾರೆ. ಅಲ್ಲಿ ಕನ್ನಡ ಇಲ್ಲವೆಂದರೆ ಸಮಸ್ಯೆಯಾಗುತ್ತದೆ. ಉರ್ದು ಶಾಲೆಗಳಲ್ಲಿ ಮೊದಲಿಗೆ ಉರ್ದು, ಎರಡನೇ ಭಾಷೆಯಾಗಿ ಇಂಗ್ಲಿಷ್&zwnj; ಓದುತ್ತಾರೆ. ಕೊನೆಯ ಭಾಷೆಯಾಗಿ ಕನ್ನಡ ಓದುತ್ತಾರೆ. ತ್ರಿಭಾಷಾ ಸೂತ್ರ ಇಲ್ಲವೆಂದರೆ ಅಲ್ಲಿ ಕನ್ನಡವೂ ಇರುವುದಿಲ್ಲ. ವಿದ್ಯಾರ್ಥಿಗಳ ವಿಚಾರ ಬಂದಾಗ ಸದನ ಸಮಿತಿ ರಚಿಸಿ ಚರ್ಚೆ ಮಾಡಬೇಕಿತ್ತು ಎಂದರು&lt;/p&gt;&lt;h2&gt;ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ&lt;/h2&gt;&lt;p&gt;ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ ಅಶೋಕ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗೊಂದಲದಲ್ಲಿದೆ. ಮುಖ್ಯಮಂತ್ರಿಯ ಸ್ಥಾನಕ್ಕಾಗಿ ಒಳಪೈಪೋಟಿ ನಡೆಯುತ್ತಿದೆ. ಶಾಸಕರು ದೆಹಲಿಗೆ ತೆರಳುತ್ತಿರುವುದು ಇದಕ್ಕೆ ಸಾಕ್ಷಿ ಎಂದರು. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಲಾಗುತ್ತಿದೆ. ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದರು. ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿರುವುದಕ್ಕೆ ಮುಸ್ಲಿಮ್&zwnj; ಮುಖಂಡರು ಕಾಂಗ್ರೆಸ್&zwnj; ವಿರುದ್ಧ ಮಾತಾಡುತ್ತಿದ್ದಾರೆ. ಸಚಿವ ಜಮೀರ್&zwnj; ಅಹ್ಮದ್&zwnj; ಅವರನ್ನೂ ಟಾರ್ಗೆಟ್&zwnj; ಮಾಡಲಾಗುತ್ತಿದೆ. ಇಡೀ ಪಕ್ಷ ಹಾಗೂ ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ. ಇಂದೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್&zwnj;ಡಿಎ ಸರ್ಕಾರ ಬರಲಿದೆ. ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಕ್ಕೆ ನಮಗೇನೂ ಸಮಸ್ಯೆಯಾಗಿಲ್ಲ, ಬಿಜೆಪಿ ಬೆಂಬಲಿಸುತ್ತೇವೆ ಎಂದು ಮುಸ್ಲಿಮರು ಹೇಳಿದ್ದಾರೆ. ಅವರ ಈ ನಡೆಯನ್ನು ಸ್ವಾಗತಿಸುತ್ತೇನೆ ಎಂದರು.&lt;/p&gt;&lt;h2&gt;ಮುಂದಿನ ಚುನಾವಣೆ ಕುರಿತು ಭವಿಷ್ಯ&lt;/h2&gt;&lt;p&gt;ಮುಂದಿನ ಚುನಾವಣೆಯ ಕುರಿತು ಮಾತನಾಡಿದ ಅವರು, 2028ರಲ್ಲ, ಇಂದೇ ಚುನಾವಣೆ ನಡೆದರೂ ನಮ್ಮ ಎನ್&zwnj;ಡಿಎ ಮೈತ್ರಿ ಶೇ.100 ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಒಟ್ಟಾರೆ ಮಂಡ್ಯದಲ್ಲಿ ಆರ್. ಅಶೋಕ್ ನೀಡಿದ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-opposition-leader-r-ashoka-slams-congress-praises-modi-over-women-reservation-bill-gdp/articleshow-ir07b8s"/>
        </item>
        <item>
            <title><![CDATA[ಮೈಸೂರಿನ ಮನೆಯೊಳಗೆ ನುಗ್ಗಿದ ಚಿರತೆ: ವೃದ್ಧ ಅಮ್ಮನ ಹೊರಗೆಳೆದು, ಕೋಣೆಯೊಳಗೆ ಕೂಡಿಹಾಕಿದ ಮಗಳು!]]></title>
            <link>https://kannada.asianetnews.com/karnataka-districts/leopard-enters-house-siddhartha-layout-mysuru-woman-rescues-mother-courageous-act-sat/articleshow-gqqlpy7</link>
            <guid isPermaLink="true">https://kannada.asianetnews.com/karnataka-districts/leopard-enters-house-siddhartha-layout-mysuru-woman-rescues-mother-courageous-act-sat/articleshow-gqqlpy7</guid>
            <pubDate>Fri, 17 Apr 2026 15:58:36 +0530</pubDate>
            <description><![CDATA[&lt;p&gt;ಮೈಸೂರಿನ ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ಚಿರತೆ ನುಗ್ಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮನೆಯಲ್ಲಿದ್ದ ಸುಜಾತಾ ಎಂಬ ಮಹಿಳೆ ಸಮಯಪ್ರಜ್ಞೆ ಮೆರೆದು, ಚಿರತೆ ಇದ್ದ ಕೊಠಡಿಯಿಂದ ತನ್ನ ತಾಯಿಯನ್ನು ರಕ್ಷಿಸಿ ಬಾಗಿಲು ಹಾಕಿದ್ದಾರೆ. &amp;nbsp;ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdfjbk0zgac8djj8aqzb9fv,imgname-leopard-trapped-in-mysuru-house-1776421514848.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಏ.17): ಸಾಂ&lt;/strong&gt;ಸ್ಕೃತಿಕ ನಗರಿ ಮೈಸೂರಿನಲ್ಲಿ ಚಿರತೆಗಳ ಆತಂಕ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಾಡಿನ ಅಂಚಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ನೇರವಾಗಿ ಜನರ ಮನೆಗೇ ನುಗ್ಗುತ್ತಿವೆ. ಇಂದು ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ಇಂತಹದ್ದೇ ಒಂದು ಮೈ ನಡುಗಿಸುವ ಘಟನೆ ನಡೆದಿದೆ. ಮನೆಯ ಕೊಠಡಿಯೊಳಗೆ ನುಗ್ಗಿದ ಚಿರತೆಯನ್ನು ಕಂಡು ಬೆಚ್ಚಿಬಿದ್ದ ಕುಟುಂಬವೊಂದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಸಿದ್ದಾರ್ಥ ಬಡಾವಣೆಯ ನಿವಾಸಿ ಸುರೇಶ್ ಎಂಬುವವರ ಮನೆಗೆ ಇಂದು ಬೆಳ್ಳಂಬೆಳಿಗ್ಗೆ ಚಿರತೆಯೊಂದು ನುಗ್ಗಿದೆ. ಮನೆಯ ಮುಂಭಾಗದ ಬಾಗಿಲು ತೆರೆದಿದ್ದನ್ನು ಕಂಡ ಚಿರತೆ, ಯಾರಿಗೂ ತಿಳಿಯದಂತೆ ನೇರವಾಗಿ ಒಳಗಿನ ಕೊಠಡಿಯೊಂದಕ್ಕೆ ನುಗ್ಗಿದೆ. ಈ ಸಮಯದಲ್ಲಿ ಮನೆಯಲ್ಲಿ ಸುರೇಶ್ ಅವರ ಪತ್ನಿ ಸುಜಾತ ಮತ್ತು ಅವರ ತಾಯಿ ಶೈಲಜಾ ಮಾತ್ರ ಇದ್ದರು.&lt;/p&gt;&lt;h2&gt;&lt;strong&gt;ಅಮ್ಮನನ್ನು ರಕ್ಷಿಸಿದ ಮಗಳ ಸಮಯಪ್ರಜ್ಞೆ:&lt;/strong&gt;&lt;/h2&gt;&lt;p&gt;ಚಿರತೆ ನೇರವಾಗಿ ಅಜ್ಜಿ ಶೈಲಜಾ ಅವರು ಇದ್ದ ಕೊಠಡಿಯೊಳಗೆ ನುಗ್ಗಿದೆ. ಕಣ್ಣೆದುರೇ ಕಾಡುಪ್ರಾಣಿಯನ್ನು ಕಂಡ ಶೈಲಜಾ ಆಘಾತಕ್ಕೊಳಗಾಗಿದ್ದಾರೆ. ಆದರೆ, ತಕ್ಷಣವೇ ಕಾರ್ಯಪ್ರವೃತ್ತರಾದ ಸುರೇಶ್ ಅವರ ಪತ್ನಿ ಸುಜಾತ, ಪ್ರಾಣದ ಹಂಗು ತೊರೆದು ಅದ್ಭುತ ಧೈರ್ಯ ತೋರಿದ್ದಾರೆ. ಚಿರತೆ ದಾಳಿ ಮಾಡುವ ಮೊದಲೇ ತನ್ನ ತಾಯಿಯನ್ನು ಚಾಣಾಕ್ಷತನದಿಂದ ಕೊಠಡಿಯಿಂದ ಹೊರಕ್ಕೆ ಎಳೆದು ತಂದು, ಹೊರಗಿನಿಂದ ಕೊಠಡಿಯ ಬಾಗಿಲನ್ನು ಲಾಕ್ ಮಾಡಿದ್ದಾರೆ. ಸುಜಾತ ಅವರ ಈ ಸಮಯಪ್ರಜ್ಞೆ ಮತ್ತು ಅಪ್ರತಿಮ ಧೈರ್ಯದಿಂದಾಗಿ ಇಂದು ಒಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ.&lt;/p&gt;&lt;h3&gt;&lt;strong&gt;ಅರಣ್ಯ ಇಲಾಖೆ ಕಾರ್ಯಾಚರಣೆ:&lt;/strong&gt;&lt;/h3&gt;&lt;p&gt;ಮನೆಯೊಳಗೆ ಚಿರತೆ ಇರುವುದನ್ನು ಖಚಿತಪಡಿಸಿಕೊಂಡ ಕುಟುಂಬಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಚಿರತೆಯು ಸದ್ಯ ಮನೆಯ ಒಂದು ಕೊಠಡಿಯಲ್ಲೇ ಬಂಧಿಯಾಗಿದ್ದು, ಅದನ್ನು ಅರಿವಳಿಕೆ ಮದ್ದು ನೀಡಿ ಸೆರೆಹಿಡಿಯಲು ಅಥವಾ ಬಲೆ ಬಳಸಿ ಹಿಡಿಯಲು ಸಿದ್ಧತೆ ನಡೆಸಲಾಗಿದೆ.&lt;/p&gt;&lt;h3&gt;&lt;strong&gt;ಬಡಾವಣೆಯಲ್ಲಿ ಆತಂಕ:&lt;/strong&gt;&lt;/h3&gt;&lt;p&gt;ನಗರದ ಮಧ್ಯಭಾಗದಲ್ಲಿರುವ ಸಿದ್ದಾರ್ಥ ಬಡಾವಣೆಯೊಳಗೆ ಚಿರತೆ ಬಂದಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಸುದ್ದಿ ಹರಡುತ್ತಿದ್ದಂತೆ ನೂರಾರು ಜನರು ಸುರೇಶ್ ಅವರ ಮನೆಯ ಬಳಿ ಜಮಾಯಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮೈಸೂರು ನಗರದ ಸುತ್ತಮುತ್ತಲಿನ ಬೆಟ್ಟ ಮತ್ತು ಪೊದೆಗಳಿಂದ ಚಿರತೆಗಳು ನಗರಕ್ಕೆ ಲಗ್ಗೆ ಇಡುತ್ತಿರುವುದು ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಮ್ಮನನ್ನು ರಕ್ಷಿಸಿದ ಸುಜಾತ ಅವರ ಸಾಹಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅರಣ್ಯ ಇಲಾಖೆಯ ಕಾರ್ಯಾಚರಣೆ ಮುಂದುವರಿದಿದ್ದು, ಚಿರತೆ ಸುರಕ್ಷಿತವಾಗಿ ಸೆರೆಯಾಗುವವರೆಗೂ ಬಡಾವಣೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/leopard-enters-house-siddhartha-layout-mysuru-woman-rescues-mother-courageous-act-sat/articleshow-gqqlpy7"/>
        </item>
        <item>
            <title><![CDATA[ಅಂಕೋಲಾ ಹೆದ್ದಾರಿಯಲ್ಲಿ ಎಥನಾಲ್ ದ್ರಾವಣ ತುಂಬಿದ ಟ್ಯಾಂಕರ್ ಸ್ಟೋಟ, ಅಗ್ನಿ ಜ್ವಾಲೆಗೆ ತುಮಕೂರು ಮೂಲದ ಚಾಲಕ ಗಂಭೀರ]]></title>
            <link>https://kannada.asianetnews.com/karnataka-districts/uttara-kannada-news-ethanol-tanker-explodes-on-nh-66-near-ankola-driver-injured-traffic-disrupted-gdp/articleshow-5kztsb3</link>
            <guid isPermaLink="true">https://kannada.asianetnews.com/karnataka-districts/uttara-kannada-news-ethanol-tanker-explodes-on-nh-66-near-ankola-driver-injured-traffic-disrupted-gdp/articleshow-5kztsb3</guid>
            <pubDate>Fri, 17 Apr 2026 15:00:53 +0530</pubDate>
            <description><![CDATA[ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ಎಥನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdc98zz796fweqdsekfad8y,imgname-ankola-ethanol-tanker-explosion-1776418071551.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಂಕೋಲಾ: &lt;/strong&gt;ಎಥನಾಲ್ ದ್ರಾವಣ ತುಂಬಿಕೊಂಡು ಬೆಳಗಾವಿಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಸ್ಫೋಟಗೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕಂಚಿನಬಾಗಿಲ ಬಳಿ ಗುರುವಾರ ನಡೆದಿದೆ. ಸ್ಫೋಟದ ತೀವ್ರತೆಗೆ ಟ್ಯಾಂಕರ್&zwnj;ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನಿಗೂ ಬೆಂಕಿ ತಗುಲಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಟ್ಯಾಂಕರ್ ಚಾಲಕ ಮುರುಗೇಶ ಚಿಕಿತ್ಸೆ ಪಡೆಯುತ್ತಿದ್ದು, ತುಮಕೂರಿನ ಚಿಕ್ಕನಾಯಕನಹಳ್ಳಿಯವರೆಂದು ತಿಳಿದುಬಂದಿದೆ.&lt;/p&gt;&lt;h2&gt;ಮರ-ಗಿಡಗಳಿಗೂ ವ್ಯಾಪಿಸಿದ ಬೆಂಕಿ&lt;/h2&gt;&lt;p&gt;ಟ್ಯಾಂಕರ್ ಸ್ಫೋಟಗೊಂಡ ತಕ್ಷಣ ಸುತ್ತಲಿನ ಮರ-ಗಿಡಗಳಿಗೂ ಬೆಂಕಿ ವ್ಯಾಪಿಸಿದ್ದು, ಪರಿಸ್ಥಿತಿ ಗಂಭೀರಗೊಂಡಿತ್ತು. ಬಳಿಕ ಅಂಕೋಲಾ ಹಾಗೂ ಕಾರವಾರದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಐಎನ್&zwnj;ಎಸ್ ವಜ್ರಕೋಶದ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ವೇಳೆ ರಸ್ತೆ ಸಂಪೂರ್ಣ ಸ್ಥಗಿತವಾಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ಥಗೊಂಡಿತು. ಘಟನೆಯ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ&ndash;ಯಲ್ಲಾಪುರ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಹೆದ್ದಾರಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಘಟನಾ ಸ್ಥಳಕ್ಕೆ ಅಂಕೋಲಾ ತಹಸೀಲ್ದಾರ್ ನೋರೊನಾ ಹಾಗೂ ಡಿವೈಎಸ್ಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/uttara-kannada-news-ethanol-tanker-explodes-on-nh-66-near-ankola-driver-injured-traffic-disrupted-gdp/articleshow-5kztsb3"/>
        </item>
        <item>
            <title><![CDATA[ಯಕ್ಷಗಾನ ಕಲಾವಿದರ ಬಗ್ಗೆ ನಾಲಿಗೆ ಹರಿಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ; ಆಡಿಯೋ ಆಧರಿಸಿ ಮಹಿಳಾ ಠಾಣೆಯಲ್ಲಿ ಎಫ್‌ಐಆರ್!]]></title>
            <link>https://kannada.asianetnews.com/karnataka-districts/mahesh-shetty-thimarodi-fir-puttur-womens-police-station-yakshagana-artist-mother-abuse-sat/articleshow-2id4r1i</link>
            <guid isPermaLink="true">https://kannada.asianetnews.com/karnataka-districts/mahesh-shetty-thimarodi-fir-puttur-womens-police-station-yakshagana-artist-mother-abuse-sat/articleshow-2id4r1i</guid>
            <pubDate>Fri, 17 Apr 2026 14:30:01 +0530</pubDate>
            <description><![CDATA[&lt;p&gt;ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಯಕ್ಷಗಾನ ಕಲಾವಿದರೊಬ್ಬರ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ. ವೈರಲ್ ಆದ ಆಡಿಯೋ ಸಂಭಾಷಣೆಯನ್ನು ಆಧರಿಸಿ 73 ವರ್ಷದ ವೃದ್ಧೆ ದೂರು ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k38987d1fzx0myr0f5chrfx6,imgname-vdvbfd-1755846024609.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ (ಏ.17): ಸಾ&lt;/strong&gt;ಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾದಂತಿದೆ. ಯಕ್ಷಗಾನ ಕಲಾವಿದರೊಬ್ಬರ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಈಗ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲೂ ತಿಮರೋಡಿ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ. ಈ ಬೆಳವಣಿಗೆಯಿಂದಾಗಿ ತಿಮರೋಡಿ ಅವರಿಗೆ ಮತ್ತೊಂದು ಸುತ್ತಿನ ಸಂಕಷ್ಟ ಎದುರಾಗಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಬಂಟ್ವಾಳ ನಿವಾಸಿ, 73 ವರ್ಷದ ವೃದ್ಧೆ ಲೀಲಾವತಿ ಎಂಬುವವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಲೀಲಾವತಿ ಅವರು ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಅವರ ತಾಯಿ. ಇತ್ತೀಚೆಗೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಮತ್ತೊಬ್ಬ ಯಕ್ಷಗಾನ ಕಲಾವಿದ ಪ್ರಜ್ವಲ್ ಎಂಬುವವರಿಗೆ ಕರೆ ಮಾಡಿ ಮಾತನಾಡಿದ್ದರು ಎನ್ನಲಾದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಸಂಭಾಷಣೆಯ ವೇಳೆ ತಿಮರೋಡಿ ಅವರು ದಿನೇಶ್ ಶೆಟ್ಟಿಗಾರ್ ಹಾಗೂ ಅವರ ತಾಯಿ ಲೀಲಾವತಿ ಅವರ ಬಗ್ಗೆ ಅತ್ಯಂತ ಕೆಟ್ಟದಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ತೇಜೋವಧೆ ಮಾಡಿದ್ದಾರೆ ಎಂಬುದು ದೂರಿನ ಮುಖ್ಯ ಅಂಶವಾಗಿದೆ.&lt;/p&gt;&lt;h2&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್:&lt;/strong&gt;&lt;/h2&gt;&lt;p&gt;ತಿಮರೋಡಿ ಅವರು ಪ್ರಜ್ವಲ್ ಅವರೊಂದಿಗೆ ಮಾತನಾಡುತ್ತಾ ಕಲಾವಿದರ ಕುಟುಂಬದ ವಿರುದ್ಧ ಹರಿಹಾಯ್ದಿದ್ದರು. ಈ ಫೋನ್ ಕರೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಯಕ್ಷಗಾನ ಅಭಿಮಾನಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಒಬ್ಬ ಹಿರಿಯ ಮಹಿಳೆಯ ಬಗ್ಗೆ ಈ ರೀತಿ ಅವಮಾನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಲೀಲಾವತಿ ಅವರು ಪುತ್ತೂರು ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾರೆ.&lt;/p&gt;&lt;h3&gt;&lt;strong&gt;ದಾಖಲಾದ ಸೆಕ್ಷನ್&zwnj;ಗಳು ಯಾವುವು?&lt;/strong&gt;&lt;/h3&gt;&lt;p&gt;ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿಮರೋಡಿ ವಿರುದ್ಧ ಬಿಎನ್ಎಸ್ ಸೆಕ್ಷನ್ 196(1) (ಧರ್ಮ, ಜಾತಿ, ಜನ್ಮಸ್ಥಳದ ಆಧಾರದ ಮೇಲೆ ದ್ವೇಷ ಪ್ರಚೋದನೆ), 352 (ಶಾಂತಿ ಭಂಗ ತರುವ ಉದ್ದೇಶದ ಅವಮಾನ), 351(2) (ಅಪರಾಧಿಕ ಬೆದರಿಕೆ) ಹಾಗೂ ಸೆಕ್ಷನ್ 79 (ಮಹಿಳೆಯ ಘನತೆಗೆ ಧಕ್ಕೆ ತರುವ ಪದಗಳ ಬಳಕೆ ಅಥವಾ ಸನ್ನೆ) ಅಡಿಯಲ್ಲಿ ಎಫ್&zwnj;ಐಆರ್ ದಾಖಲಿಸಲಾಗಿದೆ.&lt;/p&gt;&lt;h3&gt;&lt;strong&gt;ಸರಣಿ ಎಫ್&zwnj;ಐಆರ್ ದಾಖಲು:&lt;/strong&gt;&lt;/h3&gt;&lt;p&gt;ಕೇವಲ ಮಹಿಳಾ ಠಾಣೆ ಮಾತ್ರವಲ್ಲದೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಇದೇ ವಿಚಾರವಾಗಿ ಮತ್ತೊಂದು ಪ್ರಕರಣ ದಾಖಲಾಗಿದೆ. ಯಕ್ಷಗಾನ ಕಲಾವಿದ ಸುಂದರ್ ರೈ ಮಂದಾರ ಅವರು ನೀಡಿದ ದೂರಿನ ಅನ್ವಯ ಅಲ್ಲಿಯೂ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mahesh-shetty-thimarodi-fir-puttur-womens-police-station-yakshagana-artist-mother-abuse-sat/articleshow-2id4r1i"/>
        </item>
        <item>
            <title><![CDATA[ಯಾದಗಿರಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ, ರಾಯಚೂರು ಪಟ್ಟಣದ ಪಂಚಾಯತ್ ಸದಸ್ಯನ ಇಡೀ ಕುಟುಂಬ ನಾಶ!]]></title>
            <link>https://kannada.asianetnews.com/karnataka-districts/yadagiri-bus-car-collision-raichuru-family-returning-from-temple-visit-burnt-alive-on-the-spot-gdp/articleshow-7k94qpd</link>
            <guid isPermaLink="true">https://kannada.asianetnews.com/karnataka-districts/yadagiri-bus-car-collision-raichuru-family-returning-from-temple-visit-burnt-alive-on-the-spot-gdp/articleshow-7k94qpd</guid>
            <pubDate>Fri, 17 Apr 2026 13:36:19 +0530</pubDate>
            <description><![CDATA[ಯಾದಗಿರಿ ಜಿಲ್ಲೆಯ ಸುರಪುರ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ತಿಂಥಣಿ ಮೌನೇಶ್ವರ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ರಾಯಚೂರು ಜಿಲ್ಲೆಯ ಸಿರವಾರದ ಕುಟುಂಬ ಈ ದುರಂತಕ್ಕೆ ಬಲಿಯಾಗಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd7knr6ry08qs6jy7peng04,imgname-yadagiri-accident-1776413169412.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ/ರಾಯಚೂರು : &lt;/strong&gt;ನಿನ್ನೆ ಅಂದರೆ ಎಪ್ರಿಲ್ 16ರಂದು ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆಂದು ಹೊರಟ್ಟಿದ್ದ ಚಿಕ್ಕಮಗಳೂರು ಮತ್ತು ಹಾಸನದ 8 ಮಂದಿ ಕುಟುಂಬದವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಕಹಿ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ದುರಂತ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಈ ದುರಂತವು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಅಪಘಾತ ಅದೆಷ್ಟು ಭಯಾನಕವಾಗಿತ್ತು ಎಂದರೆ ಘಟನಾ ಸ್ಥಳದಲ್ಲಿ ಹೊತ್ತಿ ಉರಿದ ತಲೆಬುರುಡೆಗಳು ಕಾಣಿಸಿತು.&lt;/p&gt;&lt;h2&gt;ಬೆಳಗ್ಗೆ ನಡೆದ ಭೀಕರ ಅಪಘಾತ&lt;/h2&gt;&lt;p&gt;ಇಂದು ಬೆಳಗ್ಗೆ ಸುಮಾರು 9:45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಕಲಬುರಗಿಯಿಂದ ರಾಯಚೂರು ಜಿಲ್ಲೆಯ ಸಿರವಾರ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಭೀಕರ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ.&lt;/p&gt;&lt;h2&gt;ಒಂದೇ ಕುಟುಂಬದ 6 ಮಂದಿ ಸಜೀವ ದಹನ&lt;/h2&gt;&lt;p&gt;ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿಯಲ್ಲಿ ಆರು ಮಂದಿ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಮೃತರು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣನಾಯಕ ಕುಟುಂಬಸ್ಥರು ಎಂದು ಗುರುತಿಸಲಾಗಿದೆ. ಮೃತರಲ್ಲಿ ಕೃಷ್ಣನಾಯಕ (52), ಪತ್ನಿ ಅನಂತಕಲಾ (45), ಅಳಿಯ ಶರಣಪ್ಪ (36), ಮಗಳು ನಿಸರ್ಗ (30), ಶಶಿಕಲಾ (30) ಹಾಗೂ ಮಗು ಸಿದ್ಧಾರ್ಥ (3) ಸೇರಿದ್ದಾರೆ.&lt;/p&gt;&lt;h2&gt;ಇಬ್ಬರಿಗೆ ಗಂಭೀರ ಗಾಯ&lt;/h2&gt;&lt;p&gt;ಕಾರಿನಲ್ಲಿ ಇದ್ದ ಅದ್ವಿಕಾ (5) ಮತ್ತು ಶ್ರೀನಿಧಿ (ಒಂದೂವರೆ ವರ್ಷದ ಮಗು) ಗಂಭೀರವಾಗಿ ಗಾಯಗೊಂಡಿದ್ದು, ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಿದೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ&lt;/p&gt;&lt;h2&gt;ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ದುರಂತ&lt;/h2&gt;&lt;p&gt;ಈ ಕುಟುಂಬ ಅಮಾವಾಸ್ಯೆ ನಿಮಿತ್ತ ತಿಂಥಣಿ ಮೌನೇಶ್ವರ/ವೇಣುಗೋಪಾಲ ಸ್ವಾಮಿ ದರ್ಶನ ಮುಗಿಸಿಕೊಂಡು ಸಿರವಾರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂತೋಷದ ಪ್ರಯಾಣ ಕ್ಷಣಾರ್ಧದಲ್ಲಿ ದುರಂತ ಅಂತ್ಯ ಕಂಡಿದೆ. ಅಪಘಾತದಲ್ಲಿ ಬಸ್&zwnj;ಗೂ ಬೆಂಕಿ ತಗುಲಿದರೂ, ಅದರಲ್ಲಿದ್ದ ಸುಮಾರು 33 ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;ಭೀಕರ ದೃಶ್ಯ &ndash; ಕಾರು ಭಸ್ಮ&lt;/h2&gt;&lt;p&gt;ಅಪಘಾತದ ತೀವ್ರತೆಗೆ ಕಾರಿನ ಬಾಗಿಲುಗಳು ಲಾಕ್ ಆಗಿ ಒಳಗಿದ್ದವರು ಹೊರಬರಲು ಸಾಧ್ಯವಾಗಿಲ್ಲ. ಬೆಂಕಿ ವೇಗವಾಗಿ ವ್ಯಾಪಿಸಿ ಕಾರು ಸಂಪೂರ್ಣ ಕರಕಲಾಗಿದ್ದು, ಸುಟ್ಟ ಅವಶೇಷಗಳ ನಡುವೆ ತಲೆಬುರುಡೆಗಳು ಪತ್ತೆಯಾಗಿದ್ದು ಆ ದೃಶ್ಯಗಳು ಮನಕಲುಕುವಂತಿತ್ತು. ಘಟನೆಯ ಮಾಹಿತಿ ತಿಳಿದು ಸುರಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬಳಿಕ ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಮಾಡಲಾಯ್ತು.&lt;/p&gt;&lt;h2&gt;ತನಿಖೆ ಆರಂಭ&lt;/h2&gt;&lt;p&gt;ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಆರಂಭಿಸಿದ್ದಾರೆ. ಅತಿವೇಗ, ನಿರ್ಲಕ್ಷ್ಯ ಚಾಲನೆ ಅಥವಾ ತಾಂತ್ರಿಕ ದೋಷವೇ ಕಾರಣವೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ಈ ದುರಂತದಿಂದ ರಾಜ್ಯದಲ್ಲಿ ರಸ್ತೆ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ. ಇತ್ತೀಚಿನ ಸರಣಿ ಅಪಘಾತದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/yadagiri-bus-car-collision-raichuru-family-returning-from-temple-visit-burnt-alive-on-the-spot-gdp/articleshow-7k94qpd"/>
        </item>
        <item>
            <title><![CDATA[ಈ ಆಲದ ಮರ ಕಡಿಯಲೆತ್ನಿಸಿದಾಗಲೆಲ್ಲಾ ನಡೆಯುತ್ತೆ ದುರಂತ: ಈ ಸ್ಮಶಾನದ ಗಾಳಿ ನಿಮ್ಮ ಉಸಿರು ಕಟ್ಟಿಸುತ್ತೆ: ಬೆಂಗಳೂರಿನ ಭಯಾನಕ ಸ್ಥಳಗಳಿವು]]></title>
            <link>https://kannada.asianetnews.com/gallery/bengaluru-urban/top-4-haunted-spots-in-bengaluru-you-should-avoid-visiting-alone-suh-pvhi2dg</link>
            <guid isPermaLink="true">https://kannada.asianetnews.com/gallery/bengaluru-urban/top-4-haunted-spots-in-bengaluru-you-should-avoid-visiting-alone-suh-pvhi2dg</guid>
            <pubDate>Fri, 17 Apr 2026 13:19:18 +0530</pubDate>
            <description><![CDATA[&lt;p&gt;Haunted Spots in Bengaluru ಬೆಂಗಳೂರಿನಲ್ಲಿರುವ ಹಾಂಟೆಡ್&zwnj; ಪ್ಲೇಸ್&zwnj;ಗಳ ಬಗ್ಗೆ ಕೇಳಿದ್ದೀರಾ? ಬೆಂಗಳೂರಲ್ಲಿ ದೆವ್ವಕ್ಕೂ ಜಾಗ ಇದ್ಯಾ? ಬೆಂಗಳೂರಿನ ಮೋಸ್ಟ್&zwnj; ಹಾಂಟೆಡ್&zwnj; ಜಾಗಗಳು ಇವು. ಗುಂಡಿಗೆ ಗಟ್ಟಿ ಇದ್ದವರು ಮುಂದೆ ಓದಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd6afpg4gy335pfzb7cx3ph,imgname-haunted-places-in-bangalore-1776411819728.jpeg" type="image/jpeg" height="390" width="690"/>
            <content:encoded><![CDATA[&lt;p&gt;Haunted Spots in Bengaluru ಬೆಂಗಳೂರಿನಲ್ಲಿರುವ ಹಾಂಟೆಡ್&zwnj; ಪ್ಲೇಸ್&zwnj;ಗಳ ಬಗ್ಗೆ ಕೇಳಿದ್ದೀರಾ? ಬೆಂಗಳೂರಲ್ಲಿ ದೆವ್ವಕ್ಕೂ ಜಾಗ ಇದ್ಯಾ? ಬೆಂಗಳೂರಿನ ಮೋಸ್ಟ್&zwnj; ಹಾಂಟೆಡ್&zwnj; ಜಾಗಗಳು ಇವು. ಗುಂಡಿಗೆ ಗಟ್ಟಿ ಇದ್ದವರು ಮುಂದೆ ಓದಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬೆಂಗಳೂರಿನಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ತಿಪ್ಪೂರಿನ ದೂರದ ಪ್ರದೇಶದಲ್ಲಿ, ಒಂದು ದೊಡ್ಡ ಆಲದ ಮರವಿದೆ, ಇದನ್ನು ದೆವ್ವಗಳು ವಾಸಿಸುವ ಸ್ಥಳವೆಂದು ಪರಿಗಣಿಸಲಾಗಿದೆ. ಈ ಮರದೊಳಗೆ ದೆವ್ವಗಳು ವಾಸಿಸುತ್ತವೆ. ಅದನ್ನು ಕಡಿಯಲು ನಿರ್ಧರಿಸಿದಾಗಲೆಲ್ಲಾ ಕೆಲವು ದುರಂತ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ದಂತಕಥೆಯ ಪ್ರಕಾರ, ಅನೇಕ ಆತ್ಮಗಳು ಇನ್ನೂ ಇಲ್ಲಿ ವಾಸಿಸುತ್ತವೆ ಮತ್ತು ರಾತ್ರಿಯಲ್ಲಿ ಅವುಗಳ ಧ್ವನಿಯನ್ನು ಕೇಳಬಹುದು ಎನ್ನುತ್ತಾರೆ.&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿ ಮಾತ್ರವಲ್ಲದೆ ಭಾರತದ ಅನೇಕ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳು ತಮ್ಮ ದೆವ್ವದ ಕಥೆಗಳಿಗೆ ಹೆಸರುವಾಸಿಯಾಗಿವೆ. ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ 4 ತನ್ನ ದೆವ್ವದ ಕಥೆಗೆ ಹೆಸರುವಾಸಿಯಾಗಿದೆ. ರಾತ್ರಿಯಲ್ಲಿ, ಬಿಳಿ ಬಟ್ಟೆಯಲ್ಲಿ ಸುತ್ತಿಕೊಂಡ ಆತ್ಮಗಳು ಜನರನ್ನು ಲಿಫ್ಟ್ ಕೇಳುತ್ತವೆ ಎಂದು ಜನರು ಹೇಳುತ್ತಾರೆ. ಈ ದೆವ್ವಗಳು ತಮ್ಮತಮ್ಮಲ್ಲೇ ಜಗಳವಾಡುವುದನ್ನು ಸಹ ನೋಡಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ದೆವ್ವ ಇದೆ ಎಂದು ಹೇಳಲಾಗುತ್ತದೆ . ದಂತಕಥೆಯ ಪ್ರಕಾರ, ಒಂದು ಪ್ರಾಚೀನ ಮನೆಯಲ್ಲಿ ದೆವ್ವ ಇದೆ ಎಂದು ನಂಬಲಾಗಿದೆ. ಈ ಮನೆಯಲ್ಲಿ ಮಾಲೀಕನನ್ನು ಕೊಲೆ ಮಾಡಲಾಗಿದೆ, ಮತ್ತು ಅವನ ಆತ್ಮವು ಇನ್ನೂ ಆ ಸ್ಥಳದಲ್ಲಿ ಕಾಡುತ್ತಿದೆ ಮತ್ತು ಮನೆಯಿಂದ ವಿಚಿತ್ರ ಶಬ್ದಗಳು ಕೇಳಿಬರುತ್ತಿವೆ. ಈ ಮನೆಯನ್ನು ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿ ಹಲವಾರು ಸ್ಮಶಾನಗಳಿವೆ, ಅದರಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಕಲ್ಪಳ್ಳಿ ಸ್ಮಶಾನ. ಈ ಸ್ಥಳವು ಅನೇಕ ಭಯಾನಕ ಕಥೆಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳದ ಸುತ್ತಲಿನ ಗಾಳಿಯು ಉಸಿರುಗಟ್ಟಿಸುವಂತೆ ಮಾಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಸಂಜೆಯ ನಂತರ ಈ ಸ್ಥಳದ ಬಳಿ ಒಂಟಿಯಾಗಿ ಹೋಗಲು ಯಾರು ಧೈರ್ಯ ಮಾಡುವುದುಲ್ಲ. ಇದು ದಶಕಗಳಷ್ಟು ಹಳೆಯದಾಗಿದ್ದು, ಬ್ರಿಟಿಷರ ಕಾಲದಿಂದಲೂ ಬಳಕೆಯಲ್ಲಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/bengaluru-urban/top-4-haunted-spots-in-bengaluru-you-should-avoid-visiting-alone-suh-pvhi2dg"/>
        </item>
        <item>
            <title><![CDATA[ದೇಶದಲ್ಲೇ ಮೊದಲು! ಪ್ರತಿಷ್ಠಿತ ISO 50001:2018 ಪ್ರಮಾಣಪತ್ರ ಮುಡಿಗೇರಿಸಿಕೊಂಡ ಬೆಂಗಳೂರು ಜಲಮಂಡಳಿ!]]></title>
            <link>https://kannada.asianetnews.com/state/bengaluru-bwssb-first-water-board-india-to-get-iso-50001-2018-certification-dk-shivakumar-sat/articleshow-26u4mop</link>
            <guid isPermaLink="true">https://kannada.asianetnews.com/state/bengaluru-bwssb-first-water-board-india-to-get-iso-50001-2018-certification-dk-shivakumar-sat/articleshow-26u4mop</guid>
            <pubDate>Fri, 17 Apr 2026 13:19:02 +0530</pubDate>
            <description><![CDATA[&lt;p&gt;ಬೆಂಗಳೂರು ಜಲಮಂಡಳಿಯು (BWSSB) ಇಂಧನ ನಿರ್ವಹಣಾ ವ್ಯವಸ್ಥೆಯಲ್ಲಿನ ಅತ್ಯುತ್ತಮ ಸಾಧನೆಗಾಗಿ ISO 50001:2018 ಪ್ರಮಾಣಪತ್ರವನ್ನು ಪಡೆದಿದೆ. ಈ ಮೂಲಕ, ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ದೇಶದ ಮೊದಲ ಜಲಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd6k63nm609bpnbf8mfbntv,imgname-bwssb-dk-shivakumar-1776412104821.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿಯಾಗಿರುವ ಬೆಂಗಳೂರು ಜಲಮಂಡಳಿ (BWSSB) ಈಗ ಇತಿಹಾಸ ನಿರ್ಮಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಇಂಧನ ನಿರ್ವಹಣಾ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಜಲಮಂಡಳಿ, ಇದೀಗ ISO 50001:2018 ಪ್ರಮಾಣಪತ್ರವನ್ನು ಪಡೆದ ದೇಶದ ಪ್ರಥಮ ಜಲಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಬೆಂಗಳೂರಿನ ನೀರಿನ ಸರಬರಾಜು ವ್ಯವಸ್ಥೆ ಕೇವಲ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದ ಮಾನದಂಡಗಳನ್ನು ಹೊಂದಿದೆ ಎಂಬುದು ಸಾಬೀತಾಗಿದೆ.&lt;/p&gt;&lt;h2&gt;&lt;strong&gt;ಏನಿದು ISO 50001:2018 ಸಾಧನೆ?&lt;/strong&gt;&lt;/h2&gt;&lt;p&gt;ಬ್ಯೂರೋ ವೆರಿಟಾಸ್ (Bureau Veritas) ನೀಡಿರುವ ಈ ಪ್ರತಿಷ್ಠಿತ ಪ್ರಮಾಣಪತ್ರವು ಜಲಮಂಡಳಿಯ ಅತ್ಯುತ್ತಮ ಇಂಧನ ನಿರ್ವಹಣಾ ವ್ಯವಸ್ಥೆಯನ್ನು (Energy Management Systems) ಗುರುತಿಸಿ ನೀಡಲಾಗಿದೆ. ಮುಖ್ಯವಾಗಿ ಕಾವೇರಿ ನೀರನ್ನು ನಗರಕ್ಕೆ ಪಂಪ್ ಮಾಡುವ ಪ್ರಮುಖ ಕೇಂದ್ರಗಳಾದ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿ ಪಂಪಿಂಗ್ ಸ್ಟೇಷನ್&zwnj;ಗಳಲ್ಲಿ ಇಂಧನವನ್ನು ಅತ್ಯಂತ ದಕ್ಷತೆಯಿಂದ ಬಳಸಲಾಗುತ್ತಿದೆ ಎಂಬುದಕ್ಕೆ ಈ ಪ್ರಮಾಣಪತ್ರ ಸಾಕ್ಷಿಯಾಗಿದೆ. ಬೃಹತ್ ಪ್ರಮಾಣದ ನೀರನ್ನು ಸರಬರಾಜು ಮಾಡುವಾಗ ಇಂಧನ ಉಳಿತಾಯ ಮತ್ತು ದಕ್ಷತೆ ಕಾಪಾಡುವುದು ಸವಾಲಿನ ಕೆಲಸ, ಅದನ್ನು BWSSB ಅಚ್ಚುಕಟ್ಟಾಗಿ ನಿಭಾಯಿಸಿದೆ.&lt;/p&gt;&lt;h3&gt;&lt;strong&gt;ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಮಾಣಪತ್ರ ಹಸ್ತಾಂತರ:&lt;/strong&gt;&lt;/h3&gt;&lt;p&gt;ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್&zwnj; ಪ್ರಸಾತ್&zwnj; ಮನೋಹರ್&zwnj; ಅವರ ನೇತೃತ್ವದಲ್ಲಿ ಜಲಮಂಡಳಿಯ ಹಿರಿಯ ಅಧಿಕಾರಿಗಳ ತಂಡವು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಈ ಅಂತಾರಾಷ್ಟ್ರೀಯ ಪ್ರಮಾಣಪತ್ರವನ್ನು ಹಸ್ತಾಂತರಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, 'ಇದು ಕೇವಲ ಜಲಮಂಡಳಿಯ ಸಾಧನೆಯಲ್ಲ, ಇದು ಬ್ರ್ಯಾಂಡ್ ಬೆಂಗಳೂರು (Brand Bengaluru) ಪರಿಕಲ್ಪನೆಯ ಗೆಲುವು. ಸುಸ್ಥಿರ ಜಲ ಮೂಲಸೌಕರ್ಯ ನಿರ್ಮಿಸುವ ನಮ್ಮ ಸರ್ಕಾರದ ಬದ್ಧತೆಗೆ ಇದು ಪ್ರತಿಫಲ' ಎಂದು ಶ್ಲಾಘಿಸಿದರು.&lt;/p&gt;&lt;h2&gt;&lt;strong&gt;ತಂತ್ರಜ್ಞಾನ ಮತ್ತು ದಕ್ಷತೆಗೆ ಆದ್ಯತೆ:&lt;/strong&gt;&lt;/h2&gt;&lt;p&gt;ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, 'ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ತಲುಪಿಸುವುದು ನಮ್ಮ ಗುರಿ. ಇದಕ್ಕಾಗಿ ನಾವು ತಂತ್ರಜ್ಞಾನವನ್ನು ನಿರಂತರವಾಗಿ ಮೇಲ್ದರ್ಜೆಗೇರಿಸುತ್ತಿದ್ದೇವೆ. ಈ ಮೈಲಿಗಲ್ಲು ಸಾಧಿಸುವಲ್ಲಿ ಮುಖ್ಯ ಅಭಿಯಂತರರಾದ ಡಾ. ರಾಜೀವ್ ಮತ್ತು ಶ್ರೀ ರಾಜಶೇಖರ್ ಅವರ ಶ್ರಮ ಅಪಾರವಾಗಿದೆ' ಎಂದರು. ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಸಹ ಜಲಮಂಡಳಿಯ ಈ ರೂಪಾಂತರವನ್ನು ಕೊಂಡಾಡಿದ್ದಾರೆ.&lt;/p&gt;&lt;h2&gt;&lt;strong&gt;ಸತತ ಎರಡನೇ ರಾಷ್ಟ್ರೀಯ ಮೈಲಿಗಲ್ಲು:&lt;/strong&gt;&lt;/h2&gt;&lt;p&gt;ಗಮನಾರ್ಹ ವಿಷಯವೆಂದರೆ, BWSSB ಕಳೆದ ವರ್ಷವಷ್ಟೇ ಭಾರತೀಯ ಮಾನದಂಡಗಳ ಬ್ಯೂರೋ (BIS) ಪ್ರಮಾಣಪತ್ರ ಪಡೆದ ದೇಶದ ಮೊದಲ ಜಲಮಂಡಳಿಯಾಗಿ ಹೊರಹೊಮ್ಮಿತ್ತು. ಈಗ ISO 50001:2018 ಸೇರ್ಪಡೆಯೊಂದಿಗೆ, ಜಲಮಂಡಳಿಯು ಇಂಧನ ದಕ್ಷತೆ ಮತ್ತು ಗುಣಮಟ್ಟದ ಸೇವೆಯಲ್ಲಿ ದ್ವಿಪದಕ ಗೆದ್ದಂತಾಗಿದೆ. ಇದು ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಹವಾಮಾನ-ಸ್ಥಿತಿಸ್ಥಾಪಕ (Climate-resilient) ಹಾಗೂ ಸುಸ್ಥಿರ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.&lt;/p&gt;&lt;p&gt;ಬೆಂಗಳೂರು ಜಲಮಂಡಳಿಯ ಈ ಸಾಧನೆಯು ದೇಶದ ಇತರ ರಾಜ್ಯಗಳ ಜಲಮಂಡಳಿಗಳಿಗೆ ಮಾದರಿಯಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-bwssb-first-water-board-india-to-get-iso-50001-2018-certification-dk-shivakumar-sat/articleshow-26u4mop"/>
        </item>
        <item>
            <title><![CDATA[ಹಿಂಡಲಗಾ ಜೈಲಿನ ಮೇಲೆ ದಾಳಿ, ಸಿಗರೆಟ್, ಜೀಮ್ ಡೆಂಬಲ್ಸ್ ಪತ್ತೆ! ಜೈಲು ಸಿಬ್ಬಂದಿ ಚಳಿಬಿಡಿಸಿದ ಡಿಜಿಪಿ ಅಲೋಕ ಕುಮಾರ]]></title>
            <link>https://kannada.asianetnews.com/karnataka-districts/karnataka-dgp-alok-kumar-conducts-sudden-inspection-at-belagavi-hindalga-jail-gdp/articleshow-iutvvmk</link>
            <guid isPermaLink="true">https://kannada.asianetnews.com/karnataka-districts/karnataka-dgp-alok-kumar-conducts-sudden-inspection-at-belagavi-hindalga-jail-gdp/articleshow-iutvvmk</guid>
            <pubDate>Fri, 17 Apr 2026 12:36:23 +0530</pubDate>
            <description><![CDATA[ಬಂದಿಖಾನೆ ಡಿಜಿಪಿ ಅಲೋಕ ಕುಮಾರ್ ಅವರು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಎರಡು ಶ್ವಾನಗಳ ಸಹಾಯದಿಂದ ನಡೆದ ಈ ಶೋಧದಲ್ಲಿ ಸಿಗರೇಟ್ ಪ್ಯಾಕೆಟ್ ಹಾಗೂ ಡಂಬೆಲ್ಸ್ ಪತ್ತೆಯಾಗಿದ್ದು, ನಿರ್ಲಕ್ಷ್ಯ ತೋರಿದ ಜೈಲು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd40k7aghaft77ytz7qcy93,imgname-hindalga-jail-1776409398506.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಜಿಲ್ಲೆಯ ಹಿಂಡಲಗಾ ಗ್ರಾಮದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಬಂದಿಖಾನೆ ಡಿಜಿಪಿ ಅಲೋಕ ಕುಮಾರ್ ಅವರು ದಿಢೀರ್ ದಾಳಿ ನಡೆಸಿದ್ದಾರೆ. ಈ ದಾಳಿಯು ಬೆಳಗಾವಿ ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಜೈಲು ವ್ಯವಸ್ಥೆಯ ಮೇಲಿನ ಕಟ್ಟುನಿಟ್ಟಿನ ಕ್ರಮಗಳ ಸೂಚನೆ ನೀಡಿದೆ.&lt;/p&gt;&lt;h2&gt;ಎರಡು ಶ್ವಾನಗಳ ಸಹಾಯದಿಂದ ನಡೆಸಲಾದ ವಿಶೇಷ ಶೋಧ&lt;/h2&gt;&lt;p&gt;ಡಿಜಿಪಿ ಅಲೋಕ ಕುಮಾರ್ ಅವರ ನೇತೃತ್ವದಲ್ಲಿ ಒಟ್ಟು 52 ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ಬೆಳಗಾವಿ ನಗರ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಎರಡು ಶ್ವಾನಗಳ ಸಹಾಯದಿಂದ ನಡೆಸಲಾದ ಈ ವಿಶೇಷ ಶೋಧ ಕಾರ್ಯಾಚರಣೆ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ನಡೆಯಿತು. ಈ ವೇಳೆ ಜೈಲಿನ ವಿವಿಧ ವಿಭಾಗಗಳು ಹಾಗೂ ಕೈದಿಗಳ ಸೆಲ್&zwnj;ಗಳನ್ನು ಸವಿಸ್ತಾರವಾಗಿ ಪರಿಶೀಲಿಸಲಾಯಿತು.&lt;/p&gt;&lt;h2&gt;ಏನೆಲ್ಲ ಸಿಕ್ಕಿದೆ?&lt;/h2&gt;&lt;p&gt;ಶೋಧ ಕಾರ್ಯಾಚರಣೆಯ ವೇಳೆ ಒಂದು ಸಿಗರೆಟ್ ಪ್ಯಾಕೇಟ್ ಮತ್ತು ಜಿಮ್&zwnj;ನಲ್ಲಿ ಬಳಸುವ ಡಂಬೆಲ್ಸ್ ಪತ್ತೆಯಾಗಿವೆ. ಜೈಲಿನೊಳಗೆ ಇಂತಹ ವಸ್ತುಗಳ ಇರುವಿಕೆ ಗಂಭೀರ ವಿಚಾರವಾಗಿದ್ದು, ಭದ್ರತಾ ಲೋಪಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿಯ ನಿರ್ಲಕ್ಷ್ಯವನ್ನು ಗಮನಿಸಿದ ಡಿಜಿಪಿ ಅಲೋಕ ಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ, ಮರಳುವ ವೇಳೆ ಜೈಲಾಧಿಕಾರಿಗಳಿಗೆ ಚಿಕ್ಕ ಶಿಕ್ಷೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರೆಂದು ತಿಳಿದುಬಂದಿದೆ.&lt;/p&gt;&lt;p&gt;ಜೈಲಿನೊಳಗೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಹಾಗೂ ಭದ್ರತೆಯನ್ನು ಬಲಪಡಿಸಲು ಈ ದಾಳಿ ಕೈಗೊಳ್ಳಲಾಗಿದೆ. ಈ ಕ್ರಮದಿಂದ ಜೈಲು ವ್ಯವಸ್ಥೆಯಲ್ಲಿ ಮತ್ತಷ್ಟು ಶಿಸ್ತು ಮತ್ತು ಕಟ್ಟುನಿಟ್ಟು ಜಾರಿಗೆ ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-dgp-alok-kumar-conducts-sudden-inspection-at-belagavi-hindalga-jail-gdp/articleshow-iutvvmk"/>
        </item>
        <item>
            <title><![CDATA[ಯಾದಗಿರಿ ಬಳಿ ಬಸ್ ಮತ್ತು ಕಾರು ನಡುವೆ  ಭಯಾನಕ ಅಪಘಾತ: ಕಾರಲ್ಲಿದ್ದ 6 ಮಂದಿ ಸುಟ್ಟು ಭಸ್ಮ!]]></title>
            <link>https://kannada.asianetnews.com/karnataka-districts/horrific-bus-car-collision-in-yadagiri-shantapura-cross-many-burnt-alive-gdp/articleshow-21hf9na</link>
            <guid isPermaLink="true">https://kannada.asianetnews.com/karnataka-districts/horrific-bus-car-collision-in-yadagiri-shantapura-cross-many-burnt-alive-gdp/articleshow-21hf9na</guid>
            <pubDate>Fri, 17 Apr 2026 12:03:57 +0530</pubDate>
            <description><![CDATA[ಯಾದಗಿರಿ ಜಿಲ್ಲೆಯ ಸುರಪುರ ಬಳಿ ಕಾರು ಮತ್ತು ಖಾಸಗಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್&zwnj;ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd28gy82ct386kxm2tnn8g5,imgname-yadagiri-accident-news-1776407561160.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಭಯಾನಕ ಅಪಘಾತದಲ್ಲಿ ಕನಿಷ್ಠ 6 ಮಂದಿ ಸಜೀವ ದಹನಗೊಂಡಿರುವ ದಾರುಣ ಘಟನೆ ನಡೆದಿದೆ. ಕಾರು ಮತ್ತು ಖಾಸಗಿ ಬಸ್ ನಡುವಿನ ಮುಖಾಮುಖಿ ಡಿಕ್ಕಿಯಿಂದ ಈ ದುರಂತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಬೆಂಕಿಗಾಹುತಿಯಾಗಿವೆ. ಅಪಘಾತದ ಭೀಕರತೆ ಎಷ್ಟಿದೆ ಎಂದರೆ ಮೃತರ ತಲೆಬುರುಡೆಗಳು ಕಾರಿನಲ್ಲಿ ಕಾಣಿಸಿದೆ.&lt;/p&gt;&lt;h2&gt;ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್&lt;/h2&gt;&lt;p&gt;ಪ್ರಾಥಮಿಕ ಮಾಹಿತಿ ಪ್ರಕಾರ, ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಏಸಿ ಬಸ್ ಮತ್ತು ಯಾದಗಿರಿಯಿಂದ ರಾಯಚೂರಿನ ಲಿಂಗಸೂಗೂರು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ಬೆಂಕಿಯಲ್ಲಿ ಸಿಲುಕಿಕೊಂಡು ಸಜೀವ ದಹನಗೊಂಡಿದ್ದಾರೆ. ಕಾರು ಸಂಪೂರ್ಣವಾಗಿ ಕರಕಲಾಗಿದ್ದು, ಅದರಲ್ಲಿದ್ದ 6 ಮಂದಿ ಸ್ಥಳದಲ್ಲೇ &amp;nbsp;ಭಸ್ಮವಾಗಿದ್ದಾರೆ. ಬಸ್&zwnj;ನಲ್ಲಿ ಸುಮಾರು 40 ಜನ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;h2&gt;ಬಸ್&zwnj;ಗೂ ವ್ಯಾಪಿಸಿದ ಬೆಂಕಿ&lt;/h2&gt;&lt;p&gt;ಅಪಘಾತದ ಹೊಡೆತಕ್ಕೆ ಬಸ್&zwnj;ಗೂ ಬೆಂಕಿ ತಗುಲಿದ್ದು, ಕೆಲ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸ್ಥಳೀಯರು ಹಾಗೂ ತಕ್ಷಣ ಆಗಮಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಲು ಮುಂದಾದರು. ಆದರೆ ಕಾರು ಅಪ್ಪಚ್ಚಿಯಾಗಿ &amp;nbsp;ಡೋರ್ ಓಪನ್ &amp;nbsp;ಆಗಲೇ ಇಲ್ಲ. ನೋಡ ನೋಡುತ್ತಿದ್ದಂತೆಯೇ ಬೆಂಕಿ ಹರಡಿತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಬೆಂಕಿ ನಂದಿಸಿದ ನಂತರ ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಆರಂಭಿಸಲಾಗಿದೆ.&lt;/p&gt;&lt;p&gt;ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಸುರಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮೃತರ ಗುರುತು ಪತ್ತೆ ಹಾಗೂ ಅಪಘಾತದ ನಿಖರ ಕಾರಣವನ್ನು ತಿಳಿಯುವ ಕಾರ್ಯ ಮುಂದುವರೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಈ ದುರಂತದಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದಲ್ಲಿ ಮತ್ತೆ ಖಾಸಗಿ ಬಸ್ ಅಪಘಾತದ ಭೀತಿ ಮೂಡಿಸಿದೆ. ರಸ್ತೆ ಸುರಕ್ಷತೆ ಕುರಿತು ಪ್ರಶ್ನೆಗಳು ಮತ್ತೆ ಉದ್ಭವಿಸಿವೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/horrific-bus-car-collision-in-yadagiri-shantapura-cross-many-burnt-alive-gdp/articleshow-21hf9na"/>
        </item>
        <item>
            <title><![CDATA[ಕ್ಷೇತ್ರ ವಿಂಗಡಣೆ: ಕನ್ನಡಿಗರ ಪಾಲೇ ಕಡಿಮೆ ಆಗುತ್ತೆ, ಅದನ್ನೇಕೆ ಹೇಳ್ತಿಲ್ಲ?: ಕರವೇ  ನಾರಾಯಣಗೌಡ]]></title>
            <link>https://kannada.asianetnews.com/state/delimitation-kannadigas-share-will-decrease-why-isnt-that-being-mentioned-krv-narayana-gowda-rav/articleshow-adgyynd</link>
            <guid isPermaLink="true">https://kannada.asianetnews.com/state/delimitation-kannadigas-share-will-decrease-why-isnt-that-being-mentioned-krv-narayana-gowda-rav/articleshow-adgyynd</guid>
            <pubDate>Fri, 17 Apr 2026 11:41:05 +0530</pubDate>
            <description><![CDATA[&lt;p&gt;ಕ್ಷೇತ್ರ ಪುನರ್ ವಿಂಗಡಣೆ ಜನಸಂಖ್ಯೆ ನಿಯಂತ್ರಿಸಿದ ಕರ್ನಾಟಕದಂತಹ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ &amp;nbsp;ಕುಗ್ಗಿಸುವ ಅಪಾಯ ಒಡ್ಡಿದೆ. ಇದು ದಕ್ಷಿಣದ ರಾಜ್ಯಗಳು ತಮ್ಮ ಯಶಸ್ವಿ ಜನಸಂಖ್ಯಾ ನೀತಿಗಾಗಿ ಶಿಕ್ಷೆ ಅನುಭವಿಸಿದಂತೆ ಆಗಲಿದ್ದು, ತೆರಿಗೆ ಹಂಚಿಕೆಯಲ್ಲಿ ಅನ್ಯಾಯವನ್ನು ಮತ್ತಷ್ಟು ಹೆಚ್ಚಿಸಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hb75xgzk2ys1w3bg12wkztne,imgname-nray.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟಿ.ಎ.ನಾರಾಯಣಗೌಡ&lt;/strong&gt;&lt;/p&gt;&lt;p&gt;ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ&lt;/p&gt;&lt;p&gt;ನಾವು ಕನ್ನಡಿಗರು ಅದೇನು ಪಾಪ ಮಾಡಿದ್ದೇವೋ ಎಂಬುದು ಅರ್ಥವಾಗುತ್ತಿಲ್ಲ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ನಾವು ಹೋರಾಡಿದೆವು. ಆ ಬಂಧನದಿಂದ ಬಿಡುಗಡೆಯಾದಾಗ ಅತ್ಯಂತ ಸಂತೋಷದಿಂದ ಭಾರತ ಒಕ್ಕೂಟವನ್ನು ಸೇರಿಕೊಂಡೆವು. ರಾಷ್ಟ್ರೀಯ ಮನೋಭಾವವನ್ನು ಬೆಳೆಸಿಕೊಂಡೆವು. ಭಾರತ ಸರ್ಕಾರದ ಕೆಲವು ನಿಲುವುಗಳು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ನಾವು ಇದೇ ರಾಷ್ಟ್ರೀಯ ಮನೋಭಾವದಿಂದ ಶಿರಬಾಗಿ ಪಾಲಿಸಿದೆವು. ಆದರೆ ನಮಗೆ ಸಿಕ್ಕಿದ್ದೇನು? ಅನ್ಯಾಯಗಳ ಮೇಲೆ ಅನ್ಯಾಯ, ಮಾಡದ ತಪ್ಪಿಗಾಗಿ ಶಿಕ್ಷೆಗಳು.&lt;/p&gt;&lt;p&gt;ಈಗ ಕ್ಷೇತ್ರ ಪುನರ್ ವಿಂಗಡಣೆಯ ತೂಗುಗತ್ತಿ ನಮ್ಮ ಮೇಲೆ ತೂಗುತ್ತಿದೆ. ಈ ಕತ್ತಿ ನೇರವಾಗಿ ನಮ್ಮ ಅಸ್ಮಿತೆಯನ್ನೇ ಸೀಳಿ ಹಾಕಲಿದೆ. ನಮ್ಮ ಧ್ವನಿಯನ್ನು ಕ್ಷೀಣವಾಗುವಂತೆ ಮಾಡಲಿದೆ. ನಮ್ಮ ಸಂಕಟಗಳನ್ನು ಹೆಚ್ಚಿಸುತ್ತಾ ಹೋಗಲಿದೆ. ನಮ್ಮ ಪಾಲಿನ ಹಕ್ಕನ್ನು ನಗಣ್ಯಗೊಳಿಸಲಿದೆ. ನಮ್ಮನ್ನು ಈ ದೇಶದ ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಲಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಇನ್ನಷ್ಟು ಅಮಾನವೀಯ ಶಾಸನಗಳನ್ನು ರೂಪಿಸಲು ಅವಕಾಶವನ್ನು ಕೊಡಲಿದೆ.&lt;/p&gt;&lt;h2&gt;ನಾವು ಏಕೆ ಸಹಿಸಿಕೊಳ್ಳಬೇಕು?&lt;/h2&gt;&lt;p&gt;ಕೊನೆಯ ಬಾರಿ 1971ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಲಾಯಿತು. ಅದರ ನಂತರ 1976ರಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಸೀಟುಗಳ ಸಂಖ್ಯೆಯನ್ನು ಸ್ಥಗಿತಗೊಳಿಸಲಾಯಿತು (ಫ್ರೀಜ್). ಈಗ 2026ರ ಜನಗಣತಿ ನಂತರ ಈ ಫ್ರೀಜ್ ತೆಗೆದುಹಾಕಿ ಹೊಸದಾಗಿ ವಿಂಗಡಣೆ ಮಾಡುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಈಗ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದೆ. ಇಲ್ಲಿ ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಶನ್ ಮಸೂದೆಗಳನ್ನು ಚರ್ಚಿಸಲಾಗುತ್ತಿದೆ. ಸರ್ಕಾರ ಲೋಕಸಭಾ ಸದಸ್ಯ ಸ್ಥಾನಗಳನ್ನು 543ರಿಂದ ಸುಮಾರು 850ಕ್ಕೆ ಏರಿಸುವ ಪ್ರಸ್ತಾವವನ್ನು ಮಂಡಿಸಿದೆ.&lt;/p&gt;&lt;p&gt;ಮೊಟ್ಟ ಮೊದಲನೆಯದಾಗಿ ಈ ಕ್ಷೇತ್ರ ಪುನರ್ ವಿಂಗಡಣೆ ಜಾರಿಗೆ ಬಂದರೆ ನಮ್ಮ ರಾಜ್ಯದ ಲೋಕಸಭಾ ಸದಸ್ಯರ ಸಂಖ್ಯೆ ಅಲ್ಪಪ್ರಮಾಣದಲ್ಲಿ ಹೆಚ್ಚಬಹುದು. ಆದರೆ ಇತರ ಉತ್ತರ ರಾಜ್ಯಗಳ ಹೋಲಿಕೆಯಲ್ಲಿ ನಮ್ಮ ಪ್ರಾತಿನಿಧ್ಯದ ಪ್ರಮಾಣ ಗಂಭೀರ ಸ್ವರೂಪದಲ್ಲಿ ಕಡಿಮೆಯಾಗಲಿದೆ. ಇದನ್ನು ನಮ್ಮ ಕೆಲವು ಅರೆಬೆಂದ ರಾಜಕಾರಣಿಗಳು, ಹೈಕಮಾಂಡ್ ಗುಲಾಮಗಿರಿಯ ರೋಗದಿಂದ ಬಳಲುತ್ತಿರುವ ನಾಯಕರು ತಪ್ಪುತಪ್ಪಾಗಿ ವ್ಯಾಖ್ಯಾನ ಮಾಡುತ್ತಾರೆ. ಕರ್ನಾಟಕದ ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚುತ್ತದೆಯಲ್ಲ, ಏನು ಸಮಸ್ಯೆ ಎಂದು ಪ್ರಶ್ನಿಸುತ್ತಾರೆ. ಆದರೆ ನಮ್ಮ ಪಾಲು (ರಿಲೇಟಿವ್ ಶೇರ್) ಕುಗ್ಗುತ್ತದೆ ಎಂಬುದನ್ನು ಅವರು ಮರೆಮಾಚುತ್ತಾರೆ.&lt;/p&gt;&lt;h3&gt;ದಕ್ಷಿಣಕ್ಕೆ &lsquo;ಶಿಕ್ಷೆ&rsquo; ತಪ್ಪಿಸಿದ್ದ ಇಂದಿರಾ&lt;/h3&gt;&lt;p&gt;ಕ್ಷೇತ್ರ ವಿಂಗಡಣೆಗೆ ಸಂಬಂಧಿಸಿದಂತೆ ಚರ್ಚೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಬಹಳ ಮುಖ್ಯವಾಗಿ ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರುಗಳ ಕಾಲಘಟ್ಟದಲ್ಲಿ ಆದ ತೀರ್ಮಾನಗಳನ್ನು ನಾವು ಗಮನಿಸಬೇಕು. ತುರ್ತುಪರಿಸ್ಥಿತಿ ಸಮಯದಲ್ಲಿ ಇಂದಿರಾ ಗಾಂಧಿ ಅವರ ಸರ್ಕಾರ 42ನೇ ಸಂವಿಧಾನ ತಿದ್ದುಪಡಿ ತಂದು ಲೋಕಸಭಾ ಮತ್ತು ರಾಜ್ಯ ವಿಧಾನಸಭೆಗಳ ಸೀಟುಗಳನ್ನು 1971ರ ಜನಗಣತಿ ಆಧಾರದಲ್ಲಿ ಸ್ಥಗಿತ(ಫ್ರೀಜ್)ಗೊಳಿಸಿತು. ಇದು 2001ರ ಜನಗಣತಿಯವರೆಗೆ ಮುಂದುವರಿಯುವಂತೆ ಮಾಡಲಾಯಿತು.&lt;/p&gt;&lt;p&gt;ಹೀಗೆ ಫ್ರೀಜ್ ಮಾಡುವುದರ ಹಿಂದಿನ ಉದ್ದೇಶ ಸ್ಪಷ್ಟವಾಗಿತ್ತು. ಜನಸಂಖ್ಯಾ ನಿಯಂತ್ರಣ (ಫ್ಯಾಮಿಲಿ ಪ್ಲಾನಿಂಗ್) ಕಾರ್ಯಕ್ರಮಗಳನ್ನು ರಾಜ್ಯಗಳು ಯಶಸ್ವಿಯಾಗಿ ಅನುಸರಿಸುವಂತೆ ಪ್ರೋತ್ಸಾಹಿಸುವುದಾಗಿತ್ತು. ದಕ್ಷಿಣ ಭಾರತದ ರಾಜ್ಯಗಳು ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಚೆನ್ನಾಗಿ ಅನುಸರಿಸಿ ಜನಸಂಖ್ಯೆ ನಿಯಂತ್ರಿಸಿದ್ದವು. ಅವುಗಳ ಲೋಕಸಭಾ ಸದಸ್ಯ ಸ್ಥಾನಗಳು ಕಡಿಮೆಯಾಗುವುದು ಅನ್ಯಾಯ ಎಂದು ಭಾವಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಉತ್ತರ ಭಾರತದಲ್ಲಿ ಅಲ್ಪ ಪ್ರಮಾಣದಲ್ಲಿ ಜನಸಂಖ್ಯಾ ನಿಯಂತ್ರಣ ಕಡಿಮೆಯಾಗಿದ್ದರೂ, ದಕ್ಷಿಣದ ಯಶಸ್ಸನ್ನು ಶಿಕ್ಷಿಸಬಾರದು ಎಂಬುದು ಗುರಿಯಾಗಿತ್ತು.&lt;/p&gt;&lt;p&gt;&lt;strong&gt;ವಾಜಪೇಯಿ ವಿವೇಕಯುತ ನಡೆ&lt;/strong&gt;&lt;/p&gt;&lt;p&gt;2001ರಲ್ಲಿ ಫ್ರೀಜ್ ಅವಧಿ ಮುಗಿಯುವ ಸಮಯ ಬಂದಾಗ, ವಾಜಪೇಯಿ ಅವರ ಎನ್&zwnj;ಡಿಎ ಸರ್ಕಾರ 84ನೇ ಸಂವಿಧಾನ ತಿದ್ದುಪಡಿ ತಂದು ಈ ಸ್ಥಗಿತವನ್ನು 2026ರ ನಂತರದ ಮೊದಲ ಜನಗಣತಿಯವರೆಗೆ ವಿಸ್ತರಿಸಿತು. ಅಂದು ಕಾನೂನು ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಬಹಳ ಸ್ಪಷ್ಟವಾಗಿ ಹೀಗೆ ಹೇಳಿದ್ದರು: &ldquo;ಕೆಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ಅನುಸರಿಸಿವೆ, ಕೆಲವು ಅನುಸರಿಸಿಲ್ಲ. ರಾಷ್ಟ್ರೀಯ ಜನಸಂಖ್ಯಾ ನೀತಿ 2026ರಲ್ಲಿ ಜನಸಂಖ್ಯೆ ಸ್ಥಿರೀಕರಣವನ್ನು ಗುರಿಯಾಗಿಟ್ಟುಕೊಂಡಿದೆ. ಆದ್ದರಿಂದ ಮತ್ತೆ 25 ವರ್ಷಗಳ ಕಾಲ ಫ್ರೀಜ್ ಮುಂದುವರಿಸುತ್ತೇವೆ.ʼʼ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರವೂ ಅತ್ಯಂತ ವಿವೇಕಯುತವಾಗಿ ನಡೆದುಕೊಂಡು ದಕ್ಷಿಣದ ರಾಜ್ಯಗಳಿಗೆ ಆಗಬಹುದಾಗಿದ್ದ ಅನ್ಯಾಯವನ್ನು ತಪ್ಪಿಸಿತ್ತು. ಈ ಎರಡು ಐತಿಹಾಸಿಕ ನಿರ್ಧಾರಗಳು ದಕ್ಷಿಣ ಭಾರತದ ಜನರು ಮತ್ತು ನಾಯಕರು ಮಾಡಿದ ತ್ಯಾಗವನ್ನು ಗೌರವಿಸುವಂತಿದ್ದವು.&lt;/p&gt;&lt;p&gt;ದಕ್ಷಿಣ ಭಾರತದ ರಾಜ್ಯಗಳು (ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ) ದಶಕಗಳಿಂದ ಜನಸಂಖ್ಯಾ ನಿಯಂತ್ರಣದಲ್ಲಿ ಯಶಸ್ಸು ಕಂಡಿವೆ. ಟೋಟಲ್ ಫರ್ಟಿಲಿಟಿ ರೇಟ್ (TFR &ndash; ಪ್ರತಿ ಮಹಿಳೆಗೆ ಸರಾಸರಿ ಮಕ್ಕಳ ಸಂಖ್ಯೆ):&lt;/p&gt;&lt;p&gt;&lt;strong&gt;- ಕೇರಳ ಮತ್ತು ತಮಿಳುನಾಡು: 1.8&lt;/strong&gt;&lt;/p&gt;&lt;p&gt;- ಆಂಧ್ರ, ತೆಲಂಗಾಣ, ಕರ್ನಾಟಕ: 1.7ರ ಸುಮಾರು&lt;/p&gt;&lt;p&gt;ಇದು ರಾಷ್ಟ್ರೀಯ ಸರಾಸರಿ 2.0ಕ್ಕಿಂತ ಕಡಿಮೆ.&lt;/p&gt;&lt;p&gt;ಉತ್ತರ ಭಾರತದಲ್ಲಿ: ಬಿಹಾರ 3.0+, ಉತ್ತರ ಪ್ರದೇಶ 2.7! ಇದು ಏನನ್ನು ಹೇಳುತ್ತಿದೆ ಎಂದರೆ ಉತ್ತರದ ಜನಸಂಖ್ಯೆ ಬೆಳೆಯುತ್ತಿದೆ, ದಕ್ಷಿಣ ಭಾರತದಲ್ಲಿ ಸ್ಥಿರವಾಗುತ್ತಿದೆ ಅಥವಾ ಕುಸಿಯುತ್ತಿದೆ. ಜಾಗತಿಕ ಸರಾಸರಿಯ ಮಾನದಂಡವಾದ 2.1 ಸರಾಸರಿಗಿಂತ ಕರ್ನಾಟಕದ (ಕನ್ನಡಿಗರ) ಜನಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿದ್ದು 1.7 ತಲುಪಿದೆ. ಇದೇ ಸಂದರ್ಭದಲ್ಲಿ ಉತ್ತರದ ರಾಜ್ಯಗಳಲ್ಲಿ ಅದು ಅಪಾಯಕಾರಿ ಮಟ್ಟದಲ್ಲಿಯೇ ಇದೆ.&lt;/p&gt;&lt;p&gt;ಕ್ಷೇತ್ರ ಪುನರ್ ವಿಂಗಡಣೆಯ ನಂತರ ಲೋಕಸಭಾ ಸ್ಥಾನಗಳು 543ರಲ್ಲೇ ಉಳಿದರೆ: ದಕ್ಷಿಣ ರಾಜ್ಯಗಳು ಒಟ್ಟು 24-27 ಸೀಟುಗಳನ್ನು ಕಳೆದುಕೊಳ್ಳಬಹುದು (ತಮಿಳುನಾಡು -9, ಕೇರಳ -6, ಕರ್ನಾಟಕ -3, ಆಂಧ್ರ -4, ತೆಲಂಗಾಣ -2). ಒಂದು ವೇಳೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಏರಿಸಿದರೆ ಉತ್ತರ ಪ್ರದೇಶ 80ರಿಂದ 120+, ಬಿಹಾರ 40ರಿಂದ 60+ಕ್ಕೆ ಏರಬಹುದು. ದಕ್ಷಿಣದ ಸ್ಥಾನಗಳ ಪಾಲು 24%ರಿಂದ 19%ಕ್ಕೆ ಕುಸಿಯುತ್ತದೆ. ಕರ್ನಾಟಕಕ್ಕೆ ಕೆಲವು ಹೆಚ್ಚಿನ ಸ್ಥಾನಗಳು ಸಿಗಬಹುದು. ಆದರೆ ಲೋಕಸಭೆಯಲ್ಲಿ ಪ್ರಾತಿನಿಧ್ಯದ ಪ್ರಮಾಣ ದೊಡ್ಡಮಟ್ಟದಲ್ಲಿ ಕುಸಿಯುತ್ತದೆ. ಇದು ದಕ್ಷಿಣದ ಇತರ ರಾಜ್ಯಗಳಿಗೂ ಅನ್ವಯಿಸುತ್ತದೆ.&lt;/p&gt;&lt;p&gt;&lt;strong&gt;ಇದು ಯಾವ ಸೀಮೆಯ ನ್ಯಾಯ?&lt;/strong&gt;&lt;/p&gt;&lt;p&gt;ದಕ್ಷಿಣವು ದೇಶದ ಜಿಡಿಪಿಗೆ 30-35% ಕೊಡುಗೆ ನೀಡುತ್ತದೆ. ಅತಿ ಹೆಚ್ಚು ತೆರಿಗೆಯನ್ನು ನೀಡುತ್ತದೆ. ಈಗ ಕರ್ನಾಟಕದ ಉದಾಹರಣೆಯನ್ನು ತೆಗೆದುಕೊಳ್ಳೋಣ. ಕರ್ನಾಟಕ ಭಾರತ ಸರ್ಕಾರಕ್ಕೆ ನೀಡುವ ಎಲ್ಲ ಬಗೆಯ ತೆರಿಗೆಗಳು (Direct Tax, GST, Customs, Excise, Cess, Surcharge ಎಲ್ಲವೂ ಸೇರಿ) ಮತ್ತು ಕೇಂದ್ರದಿಂದ ಹಿಂತಿರುಗುವ ಹಣದ ಅನುಪಾತವನ್ನು ಸರಾಸರಿಯಾಗಿ ಹೇಳುವುದಾದರೆ ಕರ್ನಾಟಕ ಪ್ರತಿ ವರ್ಷ ಕೇಂದ್ರಕ್ಕೆ ಸುಮಾರು ₹4.3 ಲಕ್ಷ ಕೋಟಿ ರುಪಾಯಿ (₹4,30,000 ಕೋಟಿ) ತೆರಿಗೆಯ ರೂಪದಲ್ಲಿ ಕೊಡುತ್ತದೆ. ಕೇಂದ್ರದಿಂದ ಕರ್ನಾಟಕಕ್ಕೆ ಹಿಂತಿರುಗುವುದು (Tax Devolution + Grants) ಸುಮಾರು ₹50,000 ಕೋಟಿ ರುಪಾಯಿ ಮಾತ್ರ (ಕೆಲವು ವರ್ಷಗಳಲ್ಲಿ ₹45,000 ರಿಂದ ₹79,000 ಕೋಟಿವರೆಗೆ ಇದೆ). ಸರಾಸರಿ ಅನುಪಾತ ನೋಡುವುದಾದರೆ ಭಾರತ ಸರ್ಕಾರಕ್ಕೆ ನಾವು ₹100 ಕೊಟ್ಟರೆ ಕರ್ನಾಟಕಕ್ಕೆ ಹಿಂದಿರುಗುವುದು ₹12 ರಿಂದ ₹15 ಮಾತ್ರ.&lt;/p&gt;&lt;p&gt;ಇದೇ ಸಂದರ್ಭದಲ್ಲಿ ಕೇಂದ್ರದಿಂದ ತೆರಿಗೆ ಹಂಚಿಕೆ (Tax Devolution)ಯಲ್ಲಿ ಉತ್ತರ ಪ್ರದೇಶ ರಾಜ್ಯವು ಸುಮಾರು 15.8% ಪಾಲು ಪಡೆಯುತ್ತದೆ. ಸರಾಸರಿ ಅನುಪಾತ ನೋಡುವುದಾದರೆ ಭಾರತ ಸರ್ಕಾರಕ್ಕೆ ಉತ್ತರ ಪ್ರದೇಶ ರಾಜ್ಯವು ತೆರಿಗೆ ರೂಪದಲ್ಲಿ ₹100 ಕೊಟ್ಟರೆ ಸುಮಾರು ₹170 ರಿಂದ ₹200 ಅವರಿಗೆ ವಾಪಸ್&zwnj; ಬರುತ್ತದೆ. ಬಿಹಾರ ರಾಜ್ಯದ ಕತೆಯೂ ಹೀಗೇ ಇದೆ. ಬಿಹಾರ ರಾಜ್ಯವು ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಸುಮಾರು 9.9% ರಿಂದ 10% ಪಾಲು ಪಡೆಯುತ್ತದೆ. ಸರಾಸರಿ ಅನುಪಾತ ನೋಡುವುದಾದರೆ ಪ್ರತಿ ₹100 ತೆರಿಗೆ ಕೊಟ್ಟರೆ ಸುಮಾರು ₹300 ರಿಂದ ₹700 ಬಿಹಾರಕ್ಕೆ ಹಿಂದಿರುಗುತ್ತದೆ!&lt;/p&gt;&lt;p&gt;ಇದನ್ನು ನಾವು ಯಾವ ಸೀಮೆಯ ನ್ಯಾಯ ಎಂದು ಕರೆಯಬೇಕು? ಜನಸಂಖ್ಯಾ ನಿಯಂತ್ರಣ ಮಾಡಿಕೊಂಡ ನಾವು ಶಿಕ್ಷೆ ಅನುಭವಿಸಬೇಕು, ನಿಯಂತ್ರಣ ಮಾಡಿಕೊಳ್ಳದ ರಾಜ್ಯಗಳು ಬಂಪರ್&zwnj; ಕೊಡುಗೆಗಳನ್ನು ಪಡೆಯಬೇಕು!&lt;/p&gt;&lt;p&gt;ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ದಕ್ಷಿಣ ಭಾರತದ ಶಾಂತಿಯನ್ನು ಕದಡಬೇಡಿ, ಇಲ್ಲಿ ಕ್ಷೋಭೆಯನ್ನು ಹೊತ್ತಿಸಬೇಡಿ ಎಂದು ಎಚ್ಚರಿಸಿದ್ದಾರೆ. ಎಲ್ಲ ದಕ್ಷಿಣ ರಾಜ್ಯಗಳೊಂದಿಗೆ ಜಂಟಿ ಕ್ರಿಯಾ ಸಮಿತಿ (ಜೆಎಸಿ) ರಚಿಸಿ ಪ್ರತಿಭಟನೆ ಮಾಡುವುದಾಗಿ ಹೇಳುತ್ತಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಡಿಲಿಮಿಟೇಶನ್ ಎಂಬುದು ದಕ್ಷಿಣ ಭಾರತದ ಮೇಲೆ ಡಾಮೋಕ್ಲೀಸ್ ಕತ್ತಿಯಂತೆ ಹೇರಲಾಗುತ್ತಿದೆ. ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಅನುಸರಿಸಿದ್ದಕ್ಕೆ ನಮಗೆ ಶಿಕ್ಷೆ ಸಿಗುತ್ತಿದೆ ಎಂದು ಹೇಳುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ: ಇದು ನರೇಂದ್ರ ಮೋದಿ ಸರ್ಕಾರ ದಕ್ಷಿಣ ರಾಜ್ಯಗಳ ವಿರುದ್ಧ ನಡೆಸುತ್ತಿರುವ ಸಂಚು. ಜನಸಂಖ್ಯೆ ನಿಯಂತ್ರಿಸಿದ್ದಕ್ಕೆ ನಾವು ಪಡೆದುಕೊಳ್ಳುತ್ತಿರುವ ಶಿಕ್ಷೆ ಎಂದು ಹೇಳುತ್ತಿದ್ದಾರೆ.&lt;/p&gt;&lt;p&gt;ಆದರೆ ಪ್ರಧಾನಿ ಮೋದಿ ಅವರು, ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಮೋಸದ ಮಾತು. ಸೀಟು ಕಳೆದುಕೊಳ್ಳುತ್ತೇವೆ ಎಂಬ ಆತಂಕ ನಮಗಿಲ್ಲ, ನಮಗಿರುವ ಆತಂಕ ನಮ್ಮ ಸ್ಥಾನಗಳ ಪ್ರಮಾಣ ಕುಸಿಯುತ್ತದೆ ಎಂಬುದು. ಅದು ಮೋದಿಯವರಿಗೆ ಗೊತ್ತಿಲ್ಲದ ವಿಷಯವೇನಲ್ಲ.&lt;/p&gt;&lt;p&gt;&lt;strong&gt;ಉತ್ತರ- ದಕ್ಷಿಣ ವಿಭಜನೆ ಇನ್ನಷ್ಟು ಆಳ&lt;/strong&gt;&lt;/p&gt;&lt;p&gt;ಕ್ಷೇತ್ರ ಪುನರ್ ವಿಂಗಡಣೆ ಜಾರಿಯಾದರೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಊಹಿಸಲು ಕಷ್ಟವೇನೂ ಆಗದು. ನಿಸ್ಸಂಶಯವಾಗಿ ಲೋಕಸಭೆಯಲ್ಲಿ ದಕ್ಷಿಣದ ಧ್ವನಿ ಕ್ಷೀಣವಾಗುತ್ತದೆ. ದೇಶದ ಭವಿಷ್ಯವನ್ನು ರೂಪಿಸುವ ಕಾನೂನು, ಬಜೆಟ್, ಯೋಜನೆಗಳು ಉತ್ತರದ ಪ್ರಭಾವಕ್ಕೆ ಒಳಗಾಗುತ್ತವೆ. ಉತ್ತರದ ರಾಜ್ಯಗಳು ಈಗಾಗಲೇ ಸಿಂಹಪಾಲನ್ನು ಪಡೆಯುತ್ತಿವೆ. ಅದು ದುಪ್ಪಟ್ಟಾಗುತ್ತದೆ. ದಕ್ಷಿಣದ ಕೃಷಿ, ಉದ್ಯಮ, ನೀರಾವರಿ, ತಂತ್ರಜ್ಞಾನ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಎಲ್ಲ ಯೋಜನೆಗಳು ನಿರ್ಲಕ್ಷಕ್ಕೆ ಒಳಗಾಗುತ್ತವೆ.&lt;/p&gt;&lt;p&gt;ಕ್ಷೇತ್ರ ಪುನರ್ ವಿಂಗಡಣೆ ಜಾರಿಯಾದರೆ ಪ್ರಾದೇಶಿಕ ಅಸಮಾನತೆ ಇನ್ನಷ್ಟು ಹೆಚ್ಚುತ್ತದೆ. ದಕ್ಷಿಣವು ಹೆಚ್ಚು ತೆರಿಗೆ ಕೊಡುತ್ತದೆ, ಆದರೆ ಪ್ರಾತಿನಿಧ್ಯ ಕಡಿಮೆಯಾದರೆ ಕೇಂದ್ರ ನೆರವು ಇನ್ನಷ್ಟು ಕಡಿಮೆಯಾಗುತ್ತದೆ. ಇದು ಆರ್ಥಿಕ ಅಸಮತೋಲನಕ್ಕೆ ಕಾರಣವಾಗುತ್ತದೆ.&lt;/p&gt;&lt;p&gt;ಮತ್ತೊಂದು ಬಹಳ ಮುಖ್ಯವಾದ ಅಂಶವೆಂದರೆ ಭಾರತದ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ. ಎಲ್ಲ ರಾಜ್ಯಗಳಿಗೆ ಸಮಾನ ಗೌರವ ಬೇಕು ಎಂಬ ನೀತಿ ಮೂಲೆಗೆ ಸೇರುತ್ತದೆ. ಅಷ್ಟೇ ಅಲ್ಲ ಉತ್ತರ-ದಕ್ಷಿಣ ವಿಭಜನೆಯನ್ನು ಇನ್ನಷ್ಟು ಆಳವಾಗಿಸುತ್ತದೆ.&lt;/p&gt;&lt;p&gt;ನಾವು ಅತ್ಯಂತ ಗಂಭೀರವಾಗಿ ಚಿಂತಿಸಬೇಕಾದ ಮತ್ತೊಂದು ಆಯಾಮವೂ ಇದೆ. ಇದು ದೇಶದ ಏಕತೆಗೆ ಧಕ್ಕೆ ತರುತ್ತದೆ. ದಕ್ಷಿಣದ ಜನರು ಈ ಅನ್ಯಾಯಗಳ ವಿರುದ್ಧ ಸಿಡಿದು ನಿಂತರೆ ಅದು ದೇಶದ ಒಗ್ಗಟ್ಟಿಗೆ ಮಾರಕವಾಗಲಿದೆ.&lt;/p&gt;&lt;p&gt;&lt;strong&gt;ಇದಕ್ಕೆಲ್ಲಾ ಪರಿಹಾರ ಏನು?&lt;/strong&gt;&lt;/p&gt;&lt;p&gt;ಹಾಗಿದ್ದರೆ ಇದಕ್ಕೆ ಪರಿಹಾರವೇನು ಎಂದು ಹಲವರು ಪ್ರಶ್ನಿಸಬಹುದು. ಜನಸಂಖ್ಯಾ ನಿಯಂತ್ರಣದಲ್ಲಿ ಎಲ್ಲ ಭಾಗದಲ್ಲೂ ಸ್ಥಿರತೆಯನ್ನು ಕಾಪಾಡಿಕೊಳ್ಳುವವರೆಗೆ ಕ್ಷೇತ್ರ ಪುನರ್ ವಿಂಗಡಣೆಯನ್ನು ಮುಂದೂಡಬೇಕಾಗುತ್ತದೆ. ಉತ್ತರದ ರಾಜ್ಯಗಳಿಗೆ ಇನ್ನೂ ಎಪ್ಪತ್ತೈದು ವರ್ಷಗಳ ಕಾಲಾವಧಿಯನ್ನು ನೀಡಿ, 2100ರವರೆಗೆ ಈಗಿನ ಲೋಕಸಭಾ ಸದಸ್ಯ ಸ್ಥಾನಗಳನ್ನು ಫ್ರೀಜ್ ಮಾಡುವುದು ಉತ್ತಮ. ಅದನ್ನು ಹೊರತಾಗಿ ಇನ್ಯಾವ ಪರಿಹಾರವೂ ಇಲ್ಲ ಎಂಬುದು ಸ್ಪಷ್ಟ. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆಯನ್ನು ಯಾಕೆ ಅನುಭವಿಸಬೇಕು?&lt;/p&gt;&lt;p&gt;ದಕ್ಷಿಣ ಭಾರತವು ಈಗಾಗಲೇ ದೇಶದ ಹಿತಕ್ಕಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿವೆ. ನಮ್ಮ ತೆರಿಗೆ ಹಣವು ಉತ್ತರದ ರಾಜ್ಯಗಳಿಗೆ ಹಂಚಿಕೆಯಾದರೂ ದೇಶದ ಒಗ್ಗಟ್ಟಿಗೆ ಧಕ್ಕೆಯಾಗಬಾರದೆಂದು ನಾವು ಹಲ್ಲು ಕಚ್ಚಿ ಸಹಿಸಿಕೊಂಡಿದ್ದೇವೆ. ನಾವು ದೇಶದ ಪ್ರಗತಿಗೆ ಯಾವತ್ತಿಗೂ ಮುಂಚೂಣಿಯಲ್ಲಿ ನಿಂತಿದ್ದೇವೆ. ಜಿಡಿಪಿಯನ್ನು ಹೆಚ್ಚಿಸಿದ್ದೇವೆ, ತಲಾದಾಯವನ್ನು ಹೆಚ್ಚಿಸಿದ್ದೇವೆ. ಜನಸಂಖ್ಯಾ ನಿಯಂತ್ರಣ ಆಗಬೇಕು ಎಂದು ಭಾರತ ಸರ್ಕಾರ ಹೇಳಿದಾಗಿನಿಂದ ಅದನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಜನಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದೇವೆ. ಇಷ್ಟಾದ ಮೇಲೂ ನಾವು ಇನ್ನೇನು ತ್ಯಾಗ ಮಾಡಬೇಕು?&lt;/p&gt;&lt;p&gt;ಉತ್ತರದ ರಾಜ್ಯಗಳ ಜನಸಂಖ್ಯಾ ಸ್ಫೋಟದಿಂದಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅಲ್ಲಿಂದ ಮಹಾವಲಸೆ ಅಬಾಧಿತವಾಗಿ ನಡೆಯುತ್ತಿದೆ. ಈ ವಲಸೆ ಇದೇ ಪ್ರಮಾಣದಲ್ಲಿ ನಡೆದರೆ ಮುಂದಿನ ಐವತ್ತು ವರ್ಷಗಳಲ್ಲಿ ಕನಿಷ್ಠ ಇಪ್ಪತ್ತು ಕೋಟಿ ಉತ್ತರ ಭಾರತೀಯರನ್ನು ದಕ್ಷಿಣ ಭಾರತಕ್ಕೆ ಕಳುಹಿಸುವ ಸಾಧ್ಯತೆ ಇದೆ. ಈ ಮಹಾವಲಸೆಯು ಈಗಾಗಲೇ ನಮ್ಮ ಅಸ್ಮಿತೆಯನ್ನು ನಾಶಮಾಡುತ್ತಿದೆ. ಇದು ಇನ್ನಷ್ಟು ತೀವ್ರವಾಗುತ್ತ ಹೋಗಲಿದೆ. ಇದರ ನಡುವೆ ಕ್ಷೇತ್ರ ಪುನರ್ ವಿಂಗಡಣೆಯ ಹೆಸರಿನಲ್ಲಿ ಭಾರತ ಸರ್ಕಾರ ನಮ್ಮ ಕುತ್ತಿಗೆಯ ಮೇಲೆ ಕಾಲಿಟ್ಟಿದೆ. ಈಗ ನಾವೇನು ಮಾಡಬೇಕು? ಯಾರ ಮೊರೆ ಹೋಗಬೇಕು?&lt;/p&gt;&lt;p&gt;ನಿಜ, ಭಾರತ ಮಾತೆಯನ್ನು ನಾವು ತಾಯಿ ಎಂದು ಆರಾಧಿಸಿದೆವು. ಆದರೆ ತಾಯ ಮೊಲೆ ಹಾಲು ನಂಜಾಗಿ ಹೋದರೆ ಏನು ಮಾಡುವುದು?&lt;/p&gt;&lt;p&gt;ಆದರೆ ಜನಸಾಮಾನ್ಯರ ಸಿಟ್ಟು ರಟ್ಟೆಗೆ ಬಂದರೆ ಅದನ್ನು ತಡೆಹಿಡಿಯುವವರು ಯಾರು? ದಕ್ಷಿಣ ಭಾರತ ಒಂದೇ ಬಾರಿಗೆ ಸಿಡಿದೆದ್ದು ನಿಂತರೆ ಅದರ ಹೊಡೆತವನ್ನು ನರೇಂದ್ರ ಮೋದಿಯವರ ಸರ್ಕಾರ ತಡೆದುಕೊಳ್ಳುವುದೇ? ಅಥವಾ ನಮ್ಮ ಮೇಲೂ ಮಿಲಿಟರಿಯನ್ನು ಬಿಟ್ಟು ನಮ್ಮ ಧ್ವನಿಯನ್ನು ಹತ್ತಿಕ್ಕುವುದೇ?&lt;/p&gt;&lt;p&gt;ಸನ್ನಿವೇಶ ನಿಜಕ್ಕೂ ಗಂಭೀರವಾಗಿದೆ. ನಮ್ಮನ್ನು ಆಳುವ ಜನರಿಗೆ ಆ ದೇವರು ಸದ್ಬುದ್ಧಿಯನ್ನು ಕೊಡಲಿ. ಇಂದಿರಾಗಾಂಧಿ, ವಾಜಪೇಯಿ ಅವರು ತೋರಿದ ವಿವೇಕವನ್ನು ನರೇಂದ್ರ ಮೋದಿಯವರೂ ತೋರುವಂತಾಗಲಿ ಎಂದು ಆಶಿಸುತ್ತೇನೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/delimitation-kannadigas-share-will-decrease-why-isnt-that-being-mentioned-krv-narayana-gowda-rav/articleshow-adgyynd"/>
        </item>
    </channel>
</rss>
