<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 20 Jun 2026 16:21:26 +0530</lastBuildDate>
        <atom:link href="https://kannada.asianetnews.com/rss/karnataka-districts" rel="self" type="application/rss+xml"/>
        <item>
            <title><![CDATA[ಕರಾವಳಿಯಲ್ಲಿ ಶೇ.54ರಷ್ಟು ಭಾರೀ ಕುಸಿದ ಮುಂಗಾರು, ಮಳೆಗಾಲದಲ್ಲೂ ಮುಂದುವರಿದ ಬೇಸಿಗೆ ಹವೆ, ಬತ್ತಿದ ನೇತ್ರಾವತಿ!]]></title>
            <link>https://kannada.asianetnews.com/gallery/karnataka-districts/costal-karnataka-dakshina-kannada-monsoon-deficit-2026-faces-54-percent-rain-deficit-nethravathi-river-drying-up-gdp-rffbe4k</link>
            <guid isPermaLink="true">https://kannada.asianetnews.com/gallery/karnataka-districts/costal-karnataka-dakshina-kannada-monsoon-deficit-2026-faces-54-percent-rain-deficit-nethravathi-river-drying-up-gdp-rffbe4k</guid>
            <pubDate>Sat, 20 Jun 2026 16:21:21 +0530</pubDate>
            <description><![CDATA[&lt;p&gt;ಈ ವರ್ಷ &amp;nbsp;ಮುಂಗಾರು ದುರ್ಬಲಗೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣದಲ್ಲಿ ಶೇ.54ರಷ್ಟು ಭಾರೀ ಕುಸಿತ ಕಂಡಿದೆ. ಇದರಿಂದಾಗಿ ನದಿಗಳು ಬತ್ತುತ್ತಿದ್ದು, ಡ್ಯಾಂ ಗೇಟ್ ತೆರೆದ ನಂತರ ನೀರಿನ ಸಮಸ್ಯೆ ಉಂಟಾಗಿದೆ ಹಾಗೂ ಭತ್ತದ ಕೃಷಿಕರು ನಾಟಿ ಮಾಡಲು ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvj95x31k7he9ak1bma3vk37,imgname-nethravathi-river--2--1781951296608.jpg" type="image/jpeg" height="390" width="690"/>
            <content:encoded><![CDATA[&lt;p&gt;ಈ ವರ್ಷ &amp;nbsp;ಮುಂಗಾರು ದುರ್ಬಲಗೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣದಲ್ಲಿ ಶೇ.54ರಷ್ಟು ಭಾರೀ ಕುಸಿತ ಕಂಡಿದೆ. ಇದರಿಂದಾಗಿ ನದಿಗಳು ಬತ್ತುತ್ತಿದ್ದು, ಡ್ಯಾಂ ಗೇಟ್ ತೆರೆದ ನಂತರ ನೀರಿನ ಸಮಸ್ಯೆ ಉಂಟಾಗಿದೆ ಹಾಗೂ ಭತ್ತದ ಕೃಷಿಕರು ನಾಟಿ ಮಾಡಲು ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;&lt;img&gt;&lt;p&gt;ವರದಿ: ದಯಾನಂದ ಕಲ್ನಾರ್&zwnj;&lt;/p&gt;&lt;p&gt;ಮಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ದುರ್ಬಲಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಬಾರಿ ಮಳೆ ದೂರವಾಗಿದೆ. ದ.ಕ. ಜಿಲ್ಲೆಯಲ್ಲಿ ಜೂನ್&zwnj; ತಿಂಗಳ ಮಳೆ ಹಂಗಾಮಿನಲ್ಲೂ ಬೇಸಿಗೆ ವಾತಾವರಣ ಕಂಡುಬರುತ್ತಿದೆ. ಒಟ್ಟು ಮಳೆಯಲ್ಲಿ ಕಳೆದ ವರ್ಷ ಶೇ.8ರಷ್ಟು ಹೆಚ್ಚು ಮಳೆಯಾಗಿದ್ದರೆ, ಈ ವರ್ಷ ಒಟ್ಟು ಮಳೆಯಲ್ಲಿ ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ.&lt;/p&gt;&lt;p&gt;ಈ ಬಾರಿಗೆ ಮೇ 29ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿತ್ತಾದರೂ, ಜೂ.4ಕ್ಕೆ ಅಧಿಕೃತವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಬಳಿಕದಲ್ಲಿ ಕರಾವಳಿ ಕರ್ನಾಟದ ಮೂಲಕ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಆದರೆ ಮಳೆಗಾಲ ಆರಂಭದಲ್ಲೇ ಮುಂಗಾರು ದುರ್ಬಲಗೊಂಡಿತ್ತು.&lt;/p&gt;&lt;img&gt;&lt;p&gt;ದ.ಕ. ಜಿಲ್ಲೆಯಲ್ಲಿ 2025ರ ಜೂ.1ರಿಂದ ಜೂ.19ರ ವರೆಗೆ 998.8 ಮಿಲಿ ಮೀಟರ್&zwnj; ಮಳೆಯಾಗಿದ್ದರೆ, 2026ರ ಜೂ.1ರಿಂದ ಜೂ.19ರ ವರೆಗೆ ಕೇವಲ 229.1 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ. ಈ ವರ್ಷ 502 ಮಿ.ಮೀ. ಸಾಮಾನ್ಯ ಮಳೆಯೂ ಆಗಿಲ್ಲ.&lt;/p&gt;&lt;img&gt;&lt;p&gt;2025ರ ಜೂ.1ರಿಂದ 19ರ ವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ 1121.1 ಮಿ.ಮೀ., ಬಂಟ್ವಾಳದಲ್ಲಿ 1034.9 ಮಿ.ಮೀ., ಮಂಗಳೂರಿನಲ್ಲಿ 880.4 ಮಿ.ಮೀ., ಪುತ್ತೂರಿನಲ್ಲಿ 881.2 ಮಿ.ಮೀ., ಸುಳ್ಯದಲ್ಲಿ 869.5 ಮಿ.ಮೀ., ಮೂಡುಬಿದಿರೆಯಲ್ಲಿ 1144.4 ಮಿ.ಮೀ., ಕಡಬದಲ್ಲಿ 981.2 ಮಿ.ಮೀ., ಮೂಲ್ಕಿಯಲ್ಲಿ 930.5 ಮಿ.ಮೀ., ಉಳ್ಳಾಲದಲ್ಲಿ 799.9 ಮಿ.ಮೀ.ಮಳೆಯಾಗಿತ್ತು. ಆದರೆ ಈ ವರ್ಷ ಬೆಳ್ತಂಗಡಿಯಲ್ಲಿ 210.5 ಮಿ.ಮೀ., ಬಂಟ್ವಾಳದಲ್ಲಿ 218 ಮಿ.ಮೀ., ಮಂಗಳೂರಿನಲ್ಲಿ 307.2 ಮಿ.ಮೀ., ಪುತ್ತೂರಿನಲ್ಲಿ 168.9 ಮಿ.ಮೀ., ಸುಳ್ಯದಲ್ಲಿ 203 ಮಿ.ಮೀ., ಮೂಡುಬಿದಿರೆಯಲ್ಲಿ 227.2 ಮಿ.ಮೀ., ಕಡಬದಲ್ಲಿ 264.8 ಮಿ.ಮೀ., ಮೂಲ್ಕಿಯಲ್ಲಿ 288.4 ಮಿ.ಮೀ., ಉಳ್ಳಾಲದಲ್ಲಿ 327.9 ಮಿ.ಮೀ.ಮಾತ್ರವೇ ಮಳೆಯಾಗಿದೆ. ಕಳೆದ ವರ್ಷವೂ ಮಂಗಳೂರು (ಶೇ.-14), ಪುತ್ತೂರು (ಶೇ.-9), ಮುಲ್ಕಿ (ಶೇ.-14), ಉಳ್ಳಾಲ (ಶೇ.-22) ತಾಲೂಕುಗಳಲ್ಲೂ ಸಾಮಾನ್ಯ ಮಳೆಗಿಂತ ಕಡಿಮೆ ಮಳೆಯಾಗಿತ್ತು. ಆದರೆ ಒಟ್ಟು ಮಳೆಯಲ್ಲಿ ಕಳೆದ ವರ್ಷ ಶೇ.8ರಷ್ಟು ಹೆಚ್ಚು ಮಳೆಯಾಗಿದ್ದರೆ, ಈ ವರ್ಷ ಒಟ್ಟು ಮಳೆಯಲ್ಲಿ ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ.&lt;/p&gt;&lt;img&gt;&lt;p&gt;ಜೂನ್&zwnj; ಆರಂಭದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ನದಿಗೆ ನಿರ್ಮಿಸಲಾದ ಡ್ಯಾಂಗಳ ಗೇಟ್&zwnj; ತೆರೆಯಲಾಗಿದೆ. ಅದರಂತೆ ಉಪ್ಪಿನಂಗಡಿ ಸಮೀಪದ ಬಿಳಿಯೂರು ಡ್ಯಾಂ ಗೇಟ್&zwnj; ತೆರವು ಮಾಡಲಾಗಿತ್ತು. ಸಮೃದ್ಧ ನೀರಿನಿಂದ ಕಂಗೊಳಿಸುತ್ತಿದ್ದ ಉಪ್ಪಿನಂಗಡಿಯ ನೇತ್ರಾವತಿ ನದಿ ಡ್ಯಾಂ ಗೇಟ್&zwnj; ತೆರವು ಬಳಿಕ ನೀರಿಲ್ಲದೇ ಬರಿದಾದಂತೆ ಕಾಣುತ್ತಿದೆ.&lt;/p&gt;&lt;p&gt;ಸುಳ್ಯದ ಪಯಸ್ವಿನಿ ನದಿಯ ಡ್ಯಾಂನ ಗೇಟ್&zwnj; ತೆರವು ಮಾಡಲಾಗಿತ್ತು. ಆದರೆ ಮಳೆಯಾಗದೆ ನದಿ ಸಂಪೂರ್ಣ ಬರಿದು ಸ್ಥಿತಿಯಲ್ಲಿ ಇದೀಗ ಕಾಣುತ್ತಿದೆ. ಸುಳ್ಯದಲ್ಲಿ ಡ್ಯಾಂ ಗೇಟ್&zwnj; ತೆರೆದ ಬಳಿಕ ಮಳೆಯಾಗದೇ ನದಿಯಲ್ಲೂ ನೀರಿನ ಮಟ್ಟ ಕುಸಿದು ಕುಡಿಯಲು ನೀರಿನ ಸಮಸ್ಯೆ ಉಂಟಾಗಿತ್ತು. ಬಳಿಕ ನದಿಯ ಹೂಳು ತೆಗೆದು ಜಾಕ್&zwnj;ವೆಲ್&zwnj;ಗೆ ನೀರು ಹರಿಸಲು ವ್ಯವಸ್ಥೆ ಮಾಡಲಾಗಿ ನೀರಿನ ಸಮಸ್ಯೆಗೆ ಪರಿಹಾರ ಕ್ರಮ ವಹಿಸಲಾಗಿತ್ತು.&lt;/p&gt;&lt;p&gt;ಜೂನ್&zwnj; ಆರಂಭದಲ್ಲಿ ಮಳೆಯಾಗಿದ್ದರಿಂದ ಸಣ್ಣ-ಪುಟ್ಟ ತೋಡು, ಹಳ್ಳಗಳಲ್ಲಿ ನೀರಿನ ಒರತೆ ಉಂಟಾಗಿ ನೀರು ಹರಿವು ಆರಂಭಗೊಂಡಿತ್ತು. ಇದೀಗ ಮಳೆಯಿಲ್ಲದೇ ಮತ್ತೆ ತೋಡು, ಹಳ್ಳಗಳು ನೀರಿಲ್ಲದೇ ಬತ್ತುತ್ತಿದೆ.&lt;/p&gt;&lt;img&gt;&lt;p&gt;ಈ ಬಾರಿ ಮಳೆ ಇಲ್ಲದೇ ಗದ್ದೆ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗದ್ದೆ ಬೇಸಾಯ ಕೃಷಿಕರು ನೇಜಿ ಹಾಕಿ ನಾಟಿ ಮಾಡಲು ಮಳೆ ಇಲ್ಲದೇ ಅಡ್ಡಿಯಾಗಿದ್ದು, ಎರಡು, ಮೂರನೇ ಹಂತದ ನೇಜಿ ನಾಟಿಗೆ ಮಳೆ ಕೊರತೆ ಅಡ್ಡಿಯಾಗಲಿದೆ. ಈ ಬಾರಿ ಒಂದೇ ಹಂತದ ನೇಜಿ ಮಾಡಲು ಮಾತ್ರವೇ ಸಾಧ್ಯವಾಗುವ ಪರಿಸ್ಥಿತಿ ಕೃಷಿಕರಲ್ಲಿದೆ.ಮಳೆ ದೂರವಾಗಿರುವುದರಿಂದ ಅಡಕೆ ಕೃಷಿಕರಿಗೆ ಕೊಳರೋಗ ಭೀತಿ ಕೊಂಚ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ತೋಟಕ್ಕೆ ಔಷಧಿ ಸಿಂಪಡಿಸಲು ಅನುಕೂಲಕರವಾಗಿದೆ.&lt;/p&gt;&lt;h2&gt;&lt;strong&gt;ಬತ್ತಿದ ಸ್ಥಿತಿಯಲ್ಲಿ ನೇತ್ರಾವತಿ&lt;/strong&gt;&lt;/h2&gt;&lt;p&gt;2025ರ ಜೂ. 19 ರಂದು ಉಪ್ಪಿನಂಗಡಿಯ ನೇತ್ರಾವತಿ ನದಿ ಮೈತುಂಬಿ ಹರಿಯುತ್ತಿತ್ತು, 2026ರ ಜೂ .19ರಂದು ನದಿ ನೀರಿನ ಹರಿವು ಇಲ್ಲದ ದೃಶ್ಯ ಕಂಡುಬಂದಿದೆ. ಉಪ್ಪಿನಂಗಡಿ ಪ್ರವಾಹ ರಕ್ಷಣಾ ತಂಡದ ಲೀಡರ್ ದಿನೇಶ್ ಬಿ. ಅವರು ಕಳೆದ ವರ್ಷ ಹಾಗೂ ಈ ವರ್ಷದ ನದಿಯ ನೀರಿನ ಮಟ್ಟದ ಸ್ಥಿತಿ ಪೋಟೋಗಳನ್ನು ಒದಗಿಸಿದ್ದಾರೆ.&lt;/p&gt;&lt;p&gt;ಈ ಬಾರಿ ಮುಂಗಾರು ದುರ್ಬಲಗೊಂಡಿರುವುದು ಕಂಡುಬಂದಿದೆ. ಜೂನ್&zwnj; ಕೊನೆವರೆಗೂ ಮಳೆಯಾಗದೇ ಇದ್ದಲ್ಲಿ ಭತ್ತ ಕೃಷಿಕರಿಗೆ ತೊಂದರೆಯಾಗಲಿದೆ. ಈಗ ಭತ್ತ ನರ್ಸರಿ ಪ್ರಕ್ರಿಯೆಯಲ್ಲಿದ್ದು, ಜುಲೈನಲ್ಲಿ ನಾಟಿ ಸಂದರ್ಭದ ಮೊದಲು ಮಳೆ ಆಗದೇ ಇದ್ದಲ್ಲಿ ತೊಂದರೆ ಆಗಲಿದೆ. ಪರ್ಯಾಯ ಕ್ರಮದ ಬಗ್ಗೆಯೂ ಕ್ರಮ ವಹಿಸಲಾಗುವುದು.&lt;/p&gt;&lt;p&gt;-ಹೊನ್ನಪ್ಪ ಗೌಡ, ಜಂಟಿ ನಿರ್ದೇಶಕರು ಕೃಷಿ ಇಲಾಖೆ ಮಂಗಳೂರು&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/costal-karnataka-dakshina-kannada-monsoon-deficit-2026-faces-54-percent-rain-deficit-nethravathi-river-drying-up-gdp-rffbe4k"/>
        </item>
        <item>
            <title><![CDATA[ಮುಂದಿನ 3 ಗಂಟೆಯಲ್ಲಿ ಬೆಂಗ್ಳೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಮಳೆ;  ಮಧ್ಯಾಹ್ನವೇ ಕತ್ತಲಾಯ್ತು]]></title>
            <link>https://kannada.asianetnews.com/gallery/karnataka-districts/karnataka-weather-update-yellow-alert-rain-in-6-districts-including-bengaluru-in-the-next-3-hours-0n30ka0</link>
            <guid isPermaLink="true">https://kannada.asianetnews.com/gallery/karnataka-districts/karnataka-weather-update-yellow-alert-rain-in-6-districts-including-bengaluru-in-the-next-3-hours-0n30ka0</guid>
            <pubDate>Sat, 20 Jun 2026 16:08:57 +0530</pubDate>
            <description><![CDATA[&lt;p&gt;ಹವಾಮಾನ ಇಲಾಖೆಯು ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxqsm9v6h4aejkvme0nba6f,imgname-bengaluru-rains--1--1779114496315.jpg" type="image/jpeg" height="390" width="690"/>
            <content:encoded><![CDATA[&lt;p&gt;ಹವಾಮಾನ ಇಲಾಖೆಯು ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;img&gt;&lt;p&gt;ಮುಂದಿನ ಮೂರು ಗಂಟೆಯಲ್ಲಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಹಾಗಾಗಿ ಸಂಜೆ ಹೊರಗಡೆ ಹೋಗುವ ಪ್ಲಾನ್ ಮಾಡಿಕೊಂಡಿದ್ರೆ ಕ್ಯಾನ್ಸಲ್ ಮಾಡಿಕೊಳ್ಳೋದು ಉತ್ತಮವಾಗಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನ 2ರಿಂದಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿ ಜನತೆಗೆ ಸಂಜೆ 6ರ ಅನುಭವವಾಗುತ್ತಿದೆ.&amp;nbsp;&lt;/p&gt;&lt;p&gt;ಇನ್ನು ಹೆಬ್ಬಾಳ, ಮಲ್ಲೇಶ್ವರಂ, ಆರ್&zwnj;ಟಿ ನಗರ, ಶಿವಾಜಿ ನಗರ, ಮೆಜೆಸ್ಟಿಕ್, ವಿಧಾನಸೌಧ ಸುತ್ತಮುತ್ತ ಕತ್ತಲೆಯ ವಾತಾವರಣ ಉಂಟಾಗಿದ್ದು, ಮೋಡ ನೋಡಿದ ಜನರು ಮನೆ ಸೇರಿಕೊಳ್ಳುವ ಅವಸರದಲ್ಲಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಹೊರವಲಯ ನೆಲಮಂಗಳ, ನಾಗಸಂದ್ರ, ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರ ಭಾಗದಲ್ಲಿ ಜೋರು ಮಳೆ ಆರಂಭವಾಗಿದೆ.&lt;/p&gt;&lt;p&gt;ಮುಂದಿನ ಮೂರು ಗಂಟೆಯಲ್ಲಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಹಾಗಾಗಿ ಸಂಜೆ ಹೊರಗಡೆ ಹೋಗುವ ಪ್ಲಾನ್ ಮಾಡಿಕೊಂಡಿದ್ರೆ ಕ್ಯಾನ್ಸಲ್ ಮಾಡಿಕೊಳ್ಳೋದು ಉತ್ತಮವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/karnataka-weather-update-yellow-alert-rain-in-6-districts-including-bengaluru-in-the-next-3-hours-0n30ka0"/>
        </item>
        <item>
            <title><![CDATA[Rain 2026: ಈ ಬಾರಿಯ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ; 5 ಶತಮಾನಗಳ ಹಿಂದಿನ ಪುಸ್ತಕದಲ್ಲೇ ಇತ್ತು ದಾಖಲೆ!]]></title>
            <link>https://kannada.asianetnews.com/gallery/science/rainfall-2026-less-in-the-parabhava-samvatsara-the-record-was-in-ratta-mata-shastra-book-v499k2w</link>
            <guid isPermaLink="true">https://kannada.asianetnews.com/gallery/science/rainfall-2026-less-in-the-parabhava-samvatsara-the-record-was-in-ratta-mata-shastra-book-v499k2w</guid>
            <pubDate>Sat, 20 Jun 2026 15:26:56 +0530</pubDate>
            <description><![CDATA[&lt;p&gt;Rain Fall Ratta Mata Shastra: ಪರಿಸರ ತಜ್ಞ, ಲೇಖಕ ಶಿವಾನಂದ ಕಳವೆ ಅವರು ಮಳೆ ಬಗ್ಗೆ ವಿಶೇಷ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಮಳೆ ಕಡಿಮೆಯಿದೆ ಎಂದು ತಜ್ಞ ವರದಿಗಳು ಈಗ ಹೇಳುತ್ತಿವೆ. ಆದರೆ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ ಎಂದು ಐದನೇ ಶತಮಾನದ ರಟ್ಟ ಮತ ಶಾಸ್ತ್ರ ದಾಖಲಿಸಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvj6zd81hrzwgbf2f94171t8,imgname-new-project---2026-06-20t151218.207-1781948986625.jpg" type="image/jpeg" height="390" width="690"/>
            <content:encoded><![CDATA[&lt;p&gt;Rain Fall Ratta Mata Shastra: ಪರಿಸರ ತಜ್ಞ, ಲೇಖಕ ಶಿವಾನಂದ ಕಳವೆ ಅವರು ಮಳೆ ಬಗ್ಗೆ ವಿಶೇಷ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಮಳೆ ಕಡಿಮೆಯಿದೆ ಎಂದು ತಜ್ಞ ವರದಿಗಳು ಈಗ ಹೇಳುತ್ತಿವೆ. ಆದರೆ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ ಎಂದು ಐದನೇ ಶತಮಾನದ ರಟ್ಟ ಮತ ಶಾಸ್ತ್ರ ದಾಖಲಿಸಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಾಡು ಫಲ ನೋಡಿ ಮಳೆ, ಕೃಷಿ ಭವಿಷ್ಯ ಹೇಳುವ ಪಾರಂಪರಿಕ ಜ್ಞಾನ ಎಲ್ಲೆಡೆಯೂ ಇದೆ. ನಮ್ಮ ಅನೇಕ ಜನಪದರ ನುಡಿಗಳಲ್ಲಿ ಇದನ್ನು ಇಂದಿಗೂ ಗಮನಿಸಬಹುದು. ಕಾಡು ಕಣಗಲು ಹಣ್ಣು, ಮುತ್ತುಗದ ಫಲ ಮುಂತಾದ ವೃಕ್ಷಗಳನ್ನು ಗಮನಿಸಿ ಮಳೆ ಅಂದಾಜು ಮಾಡುವ ಪದ್ಧತಿ ಇದೆ. ಆದರೆ ಇವುಗಳ ತುಲನಾತ್ಮಕ ಅಧ್ಯಯನ ನಡೆದಿದ್ದು ಕಡಿಮೆ. ಅಲೆಮಾರಿ ಕುರುಬರು ಐದನೇ ಶತಮಾನದಲ್ಲಿ ಇಂಥ ಅನುಭವ ಜ್ಞಾನ ದಾಖಲಿಸಿದ ವಿವರಗಳಿವೆ.&lt;/p&gt;&lt;img&gt;&lt;p&gt;ನಾಗಕುಮಾರ ಮೈಸೂರು ತಲಕಾಡು ಸನಿಹದ ಜಿನ ನಗರ ಎಂಬ ಗ್ರಾಮದ ಒಡೆಯನಾಗಿದ್ದನು. ಇವರ ಮೂಲ ಪುರುಷರಾದ ಕಾಡಮರಸರು ತಲಕಾಡಿನ ಗಂಗ ರಾಜ ಮಾರ ಸಿಂಹನ ದಂಡನಾಯಕರಾಗಿದ್ದರು. ಇವರು ರಾಜನಿಂದ 25ಗ್ರಾಮಗಳನ್ನು ಮಾನ್ಯವಾಗಿ ಪಡೆದಿದ್ದರು. ಇಲ್ಲಿನ ನಾಗ ಕುಮಾರನ ಮಗ ಮಾಚಿಮಯ್ಯ ದೇವ, ಜ್ಯೋತಿಷ್ಯ ಶಾಸ್ತ್ರ ಪಂಡಿತರಾಗಿದ್ದ ಇವರೇ ರಟ್ಟ ಮತ ಶಾಸ್ತ್ರ ಎಂಬ ಗ್ರಂಥವನ್ನು ಐದನೇ ಶತಮಾನದಲ್ಲಿ ಬರೆದರು.&lt;/p&gt;&lt;img&gt;&lt;p&gt;ಮದ್ರಾಸ್ ಸರಕಾರದ ಓರಿಯೆಂಟಲ್ ಲೈಬ್ರರಿಯಲ್ಲಿ 3 ಪ್ರತಿ, ಮೈಸೂರು ಸರ್ಕಾರದ ಲೈಬ್ರರಿಯಲ್ಲಿ ಒಂದು ಹಾಗೂ ಇನ್ನೊಂದು ಪ್ರತಿ ಉತ್ತರ ಪ್ರದೇಶ ಸರ್ಕಾರದ &quot;ಆರಾ ಜೈನ್&quot; ಲೈಬ್ರರಿ ಹೀಗೆ ಐದು ತಾಳೆ ಗರಿ ಗ್ರಂಥ ಪ್ರತಿಗಳು ಉಳಿದಿದ್ದವು. ಇವುಗಳನ್ನು ಓದಿ ಗದಗದ ಬಸವಯ್ಯ ಶಾಸ್ತ್ರಿ ಹಿರೇಮಠ ಕನ್ನಡದಲ್ಲಿ ಗ್ರಂಥ ಬರೆದರು. ಇದರಲ್ಲಿ 60 ಸಂವತ್ಸರಗಳ ಫಲ ವಚನ ರೂಪದಲ್ಲಿ ಇದೆ. ನೆಲ ಮೂಲದ ನಿಸರ್ಗ ಜ್ಞಾನ ದಾಖಲಾತಿಯ ಪ್ರಾಚೀನ ಮಹತ್ವದ ದಾಖಲೆ ಇದಾಗಿದೆ.&lt;/p&gt;&lt;img&gt;&lt;p&gt;ರಟ್ಟ ಮತ ಶಾಸ್ತ್ರ ಗ್ರಂಥದಲ್ಲಿ ವಿವಿಧ ಮರ ಫಲ ಹಾಗೂ ಮಳೆ ಕುರಿತು ವಿವರಗಳಿವೆ. ಪ್ರಸ್ತುತ ನೇರಳೆ ಹಣ್ಣು ಜಾಸ್ತಿಯಾದರೆ ಉದ್ದು, ಎಳ್ಳು ಜಾಸ್ತಿಯಾಗುತ್ತದೆಂದು ಹೇಳಲಾಗಿದೆ. ಆದರೆ ಮಳೆ ಕಡಿಮೆ ಆಗುತ್ತದೆಂದು ಹೇಳಿಲ್ಲ. ಮುತ್ತುಗ ಹೆಚ್ಚು ಫಲ ಬಿಟ್ಟರೆ ಜೋಳ, ಹಾಲೆ ಜಾಸ್ತಿ ಫಲವಾದರೆ ರಾಗಿ, ಭತ್ತ ಹೀಗೆ ವಿವಿಧ ಸಸ್ಯ ವಿವರಗಳಿಗೆ.&lt;/p&gt;]]></content:encoded>
            <category>karnataka-districts</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/science/rainfall-2026-less-in-the-parabhava-samvatsara-the-record-was-in-ratta-mata-shastra-book-v499k2w"/>
        </item>
        <item>
            <title><![CDATA[2028ರ ಮಾರ್ಚ್‌ಗೆ 175 ಕಿಮೀಗೆ ನಮ್ಮ ಮೆಟ್ರೋ ಜಾಲ ವಿಸ್ತರಣೆ, ಆಗಸ್ಟ್ 15ಕ್ಕೆ ಪಿಂಕ್ ಲೈನ್, ನೀಲ ಮಾರ್ಗ ಟ್ರಯಲ್ ರನ್!]]></title>
            <link>https://kannada.asianetnews.com/gallery/karnataka-districts/bengaluru-metro-revolution-network-to-touch-175-km-by-2028-key-deadlines-for-pink-blue-and-phase-3-lines-revealed-gdp-ernot7x</link>
            <guid isPermaLink="true">https://kannada.asianetnews.com/gallery/karnataka-districts/bengaluru-metro-revolution-network-to-touch-175-km-by-2028-key-deadlines-for-pink-blue-and-phase-3-lines-revealed-gdp-ernot7x</guid>
            <pubDate>Sat, 20 Jun 2026 15:25:13 +0530</pubDate>
            <description><![CDATA[&lt;p&gt;ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, 'ನಮ್ಮ ಮೆಟ್ರೋ' ಜಾಲವು ಮಾರ್ಚ್ 2028ರ ವೇಳೆಗೆ 175 ಕಿಲೋಮೀಟರ್&zwnj;ಗೆ ವಿಸ್ತರಣೆಯಾಗಲಿದೆ. ಪ್ರಸ್ತುತ ಪ್ರಗತಿಯಲ್ಲಿರುವ ಪಿಂಕ್ ಮತ್ತು ಬ್ಲೂ ಲೈನ್ ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚಿಸಲಾಗಿದ್ದು, 3ನೇ ಹಂತದ ಯೋಜನೆಗೂ ಕೇಂದ್ರದ ಅನುಮೋದನೆ ನಿರೀಕ್ಷೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvj5t4gb98rvvj065p9wy3gd,imgname-krishna-byre-gowda--2--1781947765259.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, 'ನಮ್ಮ ಮೆಟ್ರೋ' ಜಾಲವು ಮಾರ್ಚ್ 2028ರ ವೇಳೆಗೆ 175 ಕಿಲೋಮೀಟರ್&zwnj;ಗೆ ವಿಸ್ತರಣೆಯಾಗಲಿದೆ. ಪ್ರಸ್ತುತ ಪ್ರಗತಿಯಲ್ಲಿರುವ ಪಿಂಕ್ ಮತ್ತು ಬ್ಲೂ ಲೈನ್ ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚಿಸಲಾಗಿದ್ದು, 3ನೇ ಹಂತದ ಯೋಜನೆಗೂ ಕೇಂದ್ರದ ಅನುಮೋದನೆ ನಿರೀಕ್ಷೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಪ್ರಮುಖ ಪರ್ಯಾಯ ಮಾರ್ಗವಾಗಿರುವ 'ನಮ್ಮ ಮೆಟ್ರೋ' ಜಾಲವು ಮುಂಬರುವ ಮಾರ್ಚ್&zwnj; 2028ರ ವೇಳೆಗೆ ಒಟ್ಟು 175 ಕಿಲೋಮೀಟರ್&zwnj;ಗೆ ವಿಸ್ತರಣೆಯಾಗಲಿದೆ. ಇದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ&lt;/p&gt;&lt;p&gt;ಶುಕ್ರವಾರ ಬಿಎಂಆರ್&zwnj;ಸಿಎಲ್&zwnj; (BMRCL) ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಈ ಮಹತ್ವದ ಮಾಹಿತಿ ನೀಡಿದರು. ಪ್ರಸ್ತುತ ರಾಜಧಾನಿಯಲ್ಲಿ 96 ಕಿ.ಮೀ ಉದ್ದದ ಮೆಟ್ರೋ ಜಾಲ ಕಾರ್ಯಾಚರಣೆಯಲ್ಲಿದ್ದು, ಸದ್ಯ ಪ್ರಗತಿಯಲ್ಲಿರುವ ಪಿಂಕ್&zwnj; ಲೈನ್&zwnj; ಮತ್ತು ಬ್ಲೂ ಲೈನ್&zwnj; ಕಾರಿಡಾರ್&zwnj;ಗಳು ಸಂಪೂರ್ಣವಾಗಿ ಮುಕ್ತಾಯಗೊಂಡರೆ ಈ ಮೈಲಿಗಲ್ಲು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.&lt;/p&gt;&lt;img&gt;&lt;p&gt;ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಉದ್ದದ ಎತ್ತರಿಸಿದ &lsquo;ಗುಲಾಬಿ ಮಾರ್ಗ&rsquo; (Pink Line) ಕಾಮಗಾರಿಯು ಜೂನ್ ತಿಂಗಳಿನಲ್ಲೇ ಮುಕ್ತಾಯಗೊಳ್ಳಬೇಕಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಇದನ್ನು ಮುಂಬರುವ ಆಗಸ್ಟ್ 15ರೊಳಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಿಎಂಆರ್&zwnj;ಸಿಎಲ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.&lt;/p&gt;&lt;p&gt;ಇದೇ ಮಾರ್ಗದ ತಾವರೆಕೆರೆಯಿಂದ ನಾಗವಾರದವರೆಗಿನ 13.5 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ನಿಲ್ದಾಣಗಳ ಸಿವಿಲ್ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಪ್ರಸ್ತುತ ಟ್ರ್ಯಾಕ್ ಅಳವಡಿಕೆ ಮತ್ತು ಸಿಗ್ನಲಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಹಿಂದೆ ಈ ಸುರಂಗ ವಿಭಾಗಕ್ಕೆ ಡಿಸೆಂಬರ್ ಡೆಡ್&zwnj;ಲೈನ್ ನಿಗದಿಪಡಿಸಲಾಗಿತ್ತಾದರೂ, ಸಂಪೂರ್ಣ ಸಿದ್ಧತೆಯೊಂದಿಗೆ ಕಾರ್ಯಾಚರಣೆ ಆರಂಭಿಸಲು 2027ರ ಮಾರ್ಚ್&zwnj;ವರೆಗೆ ಕಾಲಾವಕಾಶ ನೀಡುವಂತೆ ಬಿಎಂಆರ್&zwnj;ಸಿಎಲ್ ಕೋರಿದೆ ಎಂದು ಸಚಿವರು ತಿಳಿಸಿದರು.&lt;/p&gt;&lt;img&gt;&lt;p&gt;ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಕಾಳೇನ ಅಗ್ರಹಾರ-ನಾಗವಾರ ನಡುವಿನ ಒಟ್ಟು 21.25 ಕಿ.ಮೀ ಪಿಂಕ್ ಲೈನ್ ಹಾಗೂ ಕೆ.ಆರ್.ಪುರಂ-ಸಿಲ್ಕ್ ಬೋರ್ಡ್ (19.75 ಕಿ.ಮೀ) ಒಳಗೊಂಡ ನೀಲಿ ಮಾರ್ಗ (Blue Line 2A) ಮತ್ತು ಸಿಲ್ಕ್ ಬೋರ್ಡ್&zwnj;ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 2ಬಿ (2B) ಮಾರ್ಗಗಳ ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ನಗರದಲ್ಲಿ ಮೆಟ್ರೊ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಪ್ರಗತಿ ಸಾಧಿಸದಿದ್ದರೆ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.&lt;/p&gt;&lt;p&gt;&lt;strong&gt;ಟ್ರಯಲ್ ರನ್ ಆರಂಭ: &lt;/strong&gt;ನೀಲಿ ಮಾರ್ಗ 2&lsquo;ಎ&rsquo; (ORR) ವ್ಯಾಪ್ತಿಯಲ್ಲಿ 3 ಪ್ರಮುಖ ನಿಲ್ದಾಣಗಳ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಆದ್ದರಿಂದ, ಇಡೀ ಮಾರ್ಗ ಒಟ್ಟಿಗೆ ಆರಂಭವಾಗುವವರೆಗೆ ಕಾಯದೆ, ಕೆ.ಆರ್.ಪುರದಿಂದ ಮಾರತ್ತಹಳ್ಳಿವರೆಗೆ ಹಾಗೂ ಮಾರತ್ತಹಳ್ಳಿಯಿಂದ ಎಚ್&zwnj;ಎಸ್&zwnj;ಆರ್&zwnj; ಲೇಔಟ್&zwnj;ವರೆಗೆ ಹಂತ-ಹಂತವಾಗಿ ರೈಲುಗಳ ಪ್ರಾಯೋಗಿಕ ಸಂಚಾರ (Trial Run) ನಡೆಸಲು ಸೂಚನೆ ನೀಡಲಾಗಿದೆ.&lt;/p&gt;&lt;p&gt;&lt;strong&gt;ಕೆ.ಆರ್.ಪುರ-ಹೆಬ್ಬಾಳ ಸವಾಲು: &lt;/strong&gt;ಕೆ.ಆರ್.ಪುರದಿಂದ ಹೆಬ್ಬಾಳದವರೆಗಿನ ಮಾರ್ಗದಲ್ಲಿ ಸಿವಿಲ್ ಕಾಮಗಾರಿಗಳನ್ನು ನಡೆಸಲು ಸಾಕಷ್ಟು ಭೌಗೋಳಿಕ ಮತ್ತು ತಾಂತ್ರಿಕ ಸವಾಲುಗಳಿವೆ. ಈ ಕಠಿಣ ಕಾಮಗಾರಿಯನ್ನು 2027ರ ಡಿಸೆಂಬರ್&zwnj;ಗೆ ಸಂಪೂರ್ಣವಾಗಿ ಮುಗಿಸಿಕೊಡುವುದಾಗಿ ಅಧಿಕಾರಿಗಳು ವಾಗ್ದಾನ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಜೆ.ಪಿ ನಗರದಿಂದ ಕೆಂಪಾಪುರ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಅನುಮೋದನೆ ನೀಡುವ ಪ್ರಕ್ರಿಯೆ ಪ್ರಸ್ತುತ ಕೇಂದ್ರ ಸರ್ಕಾರದ ಹಂತದಲ್ಲಿದೆ. ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ನವದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಈ ಯೋಜನೆಗೆ ಶೀಘ್ರ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದಾರೆ.&lt;/p&gt;&lt;p&gt;&quot;ಮೆಟ್ರೋ 3ನೇ ಹಂತದ ಡಬಲ್&zwnj; ಡೆಕ್ಕರ್ (ರಸ್ತೆ ಮತ್ತು ಮೆಟ್ರೋ ಜಂಟಿ ಮೇಲ್ಸೇತುವೆ) ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಬದಲಾಗಿ, ಕೇಂದ್ರದ ಸ್ವಾಯುತ್ತ ಸಂಸ್ಥೆಯಾದ 'ರೈಟ್ಸ್' (RITES) ಮೂಲಕ ಇದರ ತಾಂತ್ರಿಕ ಹಾಗೂ ಆರ್ಥಿಕ ಸಾಧ್ಯತೆಗಳ ಕುರಿತು ವರದಿ ಕೇಳಿದ್ದರು. ಕಳೆದ 4 ತಿಂಗಳಿಂದ ಈ ಅಧ್ಯಯನ ನಡೆಯುತ್ತಿದ್ದು, ಮುಂದಿನ 20 ದಿನಗಳಲ್ಲಿ ಅಂತಿಮ ವರದಿ ಕೈಸೇರಲಿದೆ. ಅದನ್ನು ತಕ್ಷಣವೇ ಕೇಂದ್ರಕ್ಕೆ ಸಲ್ಲಿಸಲಾಗುವುದು.&quot;&lt;/p&gt;&lt;p&gt;&mdash; ಕೃಷ್ಣಬೈರೇಗೌಡ, ಬೆಂಗಳೂರು ನಗರ ಅಭಿವೃದ್ಧಿ ಸಚಿವ&lt;/p&gt;&lt;img&gt;&lt;p&gt;ಅಲ್ಲದೆ, ನಗರದ ಪ್ರಮುಖ ಸಂಚಾರ ಕಾರಿಡಾರ್ ಆದ ಸರ್ಜಾಪುರ - ಹೆಬ್ಬಾಳವನ್ನು ಸಂಪರ್ಕಿಸುವ 3ಎ ಹಂತದ ಯೋಜನೆ ಪ್ರಸ್ತಾಪಕ್ಕೆ ಈಗಾಗಲೇ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರ ವಿಸ್ತೃತ ಯೋಜನಾ ವರದಿಯನ್ನು (DPR) ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಮುಂದಿನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್&zwnj; ಹಾಗೂ ಬಿಎಂಆರ್&zwnj;ಸಿಎಲ್&zwnj; ವ್ಯವಸ್ಥಾಪಕ ನಿರ್ದೇಶಕರಾದ ಡಾ.ಜೆ.ರವಿಶಂಕರ್&zwnj; ಉಪಸ್ಥಿತರಿದ್ದು, ಕಾಮಗಾರಿಗಳ ತಾಂತ್ರಿಕ ವಿವರಗಳನ್ನು ಹಂಚಿಕೊಂಡರು.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bengaluru-metro-revolution-network-to-touch-175-km-by-2028-key-deadlines-for-pink-blue-and-phase-3-lines-revealed-gdp-ernot7x"/>
        </item>
        <item>
            <title><![CDATA[ಪುತ್ತೂರು-ಸುಬ್ರಹ್ಮಣ್ಯ 3 ಹೊಸ ರೈಲ್ವೆ ಓವರ್‌ಬ್ರಿಜ್ ಗೆ ₹18 ಕೋಟಿ, ದ.ಕನ್ನಡ ರಸ್ತೆ ಅಭಿವೃದ್ಧಿಗೆ 57 ಕೋಟಿ ಅನುದಾನ!]]></title>
            <link>https://kannada.asianetnews.com/karnataka-districts/dakshina-kannada-railways-mp-brijesh-chowta-announces-rs18-crore-new-overbridges-and-rs57-crore-for-road-projects-gdp/articleshow-p93z451</link>
            <guid isPermaLink="true">https://kannada.asianetnews.com/karnataka-districts/dakshina-kannada-railways-mp-brijesh-chowta-announces-rs18-crore-new-overbridges-and-rs57-crore-for-road-projects-gdp/articleshow-p93z451</guid>
            <pubDate>Sat, 20 Jun 2026 14:39:55 +0530</pubDate>
            <description><![CDATA[ಪುತ್ತೂರು-ಸುಬ್ರಹ್ಮಣ್ಯ ರೈಲು ಮಾರ್ಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹18 ಕೋಟಿ ಅನುದಾನದಲ್ಲಿ ಮೂರು ಹೊಸ ರೈಲ್ವೇ ಮೇಲ್ಸೇತುವೆಗಳನ್ನು ಮಂಜೂರು ಮಾಡಿದೆ. ಇದರೊಂದಿಗೆ, ಕಬಕ ಪುತ್ತೂರು ನಿಲ್ದಾಣದಲ್ಲಿ ವಿಸ್ತರಿತ ಶೆಲ್ಟರ್ ಮತ್ತು ಸುಬ್ರಹ್ಮಣ್ಯ ನಿಲ್ದಾಣದಲ್ಲಿ 'ಕೋಚ್ ವಾಟರಿಂಗ್' ವ್ಯವಸ್ಥೆ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv7z26y09sqwvy8xay9yk85c,imgname-4-1781605145536.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುತ್ತೂರು: &lt;/strong&gt;ಕರಾವಳಿಯ ಪ್ರಮುಖ ಸಂಪರ್ಕ ಕೊಂಡಿಯಾದ ಪುತ್ತೂರು ಮತ್ತು ಸುಬ್ರಹ್ಮಣ್ಯ ರೈಲು ಮಾರ್ಗದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ ಸಿಕ್ಕಿದೆ. ಈ ವ್ಯಾಪ್ತಿಯಲ್ಲಿ ಹೊಸದಾಗಿ 3 ರೈಲ್ವೇ ಓವರ್&zwnj;ಬ್ರಿಜ್ (ಮೇಲ್ಸೇತುವೆ) ನಿರ್ಮಾಣ ಮಾಡಲು ಬರೋಬ್ಬರಿ 18 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರಕಟಿಸಿದ್ದಾರೆ. ಗುರುವಾರದಂದು ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ವಿಸ್ತರಿತ ಶೆಲ್ಟರ್ ನಿರ್ಮಾಣ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.&lt;/p&gt;&lt;h2&gt;ಎಲ್ಲೆಲ್ಲಿ ನಿರ್ಮಾಣವಾಗಲಿವೆ ಹೊಸ ರೈಲ್ವೇ ಓವರ್&zwnj;ಬ್ರಿಜ್&zwnj;ಗಳು?&lt;/h2&gt;&lt;p&gt;ರೈಲ್ವೆ ಹಳಿ ದಾಟುವಾಗ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಎದುರಾಗುತ್ತಿದ್ದ ತೊಂದರೆಗಳನ್ನು ನಿವಾರಿಸಲು ಈ ಕೆಳಗಿನ ಮೂರು ಪ್ರಮುಖ ಲೆವೆಲ್ ಕ್ರಾಸಿಂಗ್&zwnj;ಗಳಲ್ಲಿ ಹೊಸ ಮೇಲ್ಸೇತುವೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ:&lt;/p&gt;&lt;ul&gt; &lt;li&gt;ಮುಕ್ವೆ ಲೆವೆಲ್ ಕ್ರಾಸಿಂಗ್&lt;/li&gt; &lt;li&gt;ಪುತ್ತೂರು ಕ್ಲಬ್ ಲೆವೆಲ್ ಕ್ರಾಸಿಂಗ್&lt;/li&gt; &lt;li&gt;ಪುತ್ತೂರು ಗೇಟ್ ಲೆವೆಲ್ ಕ್ರಾಸಿಂಗ್&lt;/li&gt;&lt;/ul&gt;&lt;p&gt;ಈ ಮೂರು ಓವರ್&zwnj;ಬ್ರಿಜ್&zwnj;ಗಳ ನಿರ್ಮಾಣದಿಂದ ಈ ಭಾಗದ ಸಂಚಾರ ದಟ್ಟಣೆ ಸಂಪೂರ್ಣ ನಿವಾರಣೆಯಾಗಲಿದ್ದು, ಅಪಘಾತಗಳ ಭಯವಿಲ್ಲದೆ ಸಾರ್ವಜನಿಕರು ನಿರಾಳವಾಗಿ ಸಂಚರಿಸಬಹುದಾಗಿದೆ.&lt;/p&gt;&lt;h2&gt;ಕಬಕ ಪುತ್ತೂರು ಹಾಗೂ ಸುಬ್ರಹ್ಮಣ್ಯ ನಿಲ್ದಾಣಗಳ ಮೇಲ್ದರ್ಜೆ&lt;/h2&gt;&lt;p&gt;ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ₹4.4 ಕೋಟಿ ವೆಚ್ಚದಲ್ಲಿ ವಿಸ್ತರಿತ ಶೆಲ್ಟರ್ ಹಾಗೂ ಸುಸಜ್ಜಿತ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಈ ಹಿಂದೆ ಮೀಟರ್&zwnj;ಗೇಜ್ ಹಳಿಯು ಬ್ರಾಡ್&zwnj;ಗೇಜ್ ಆಗಿ ಬದಲಾದ ನಂತರ ಪುತ್ತೂರು ನಿಲ್ದಾಣದಿಂದ ನಿತ್ಯ ಪ್ರಯಾಣಿಸುವ ನೂರಾರು ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಹೀಗಾಗಿ, ನಿಲ್ದಾಣದಲ್ಲಿ ವಿಸ್ತರಿತ ಶೆಲ್ಟರ್ ನಿರ್ಮಾಣ ಮಾಡುವುದು ಅನಿವಾರ್ಯವಾಗಿತ್ತು.&lt;/p&gt;&lt;p&gt;ಇದಲ್ಲದೆ, ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ರೈಲುಗಳಿಗೆ ನೀರು ತುಂಬಿಸುವ ಆಧುನಿಕ 'ಕೋಚ್ ವಾಟರಿಂಗ್' ವ್ಯವಸ್ಥೆಯನ್ನು ₹5.29 ಕೋಟಿ ವೆಚ್ಚದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಸಂಸದರು ವಿವರಿಸಿದರು. ಈ ಭಾಗದ ರೈಲ್ವೆ ನಿಲ್ದಾಣಗಳ ಒಟ್ಟಾರೆ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಶೀಘ್ರದಲ್ಲೇ ಮೈಸೂರು ರೈಲ್ವೆ ವಿಭಾಗದ ಡಿಆರ್&zwnj;ಎಂ (DRM) ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.&lt;/p&gt;&lt;h2&gt;ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ₹57 ಕೋಟಿ ಕೇಂದ್ರ ನಿಧಿ&lt;/h2&gt;&lt;p&gt;ಇದೇ ಸಂದರ್ಭದಲ್ಲಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಕುರಿತು ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ, &quot;ಕೇಂದ್ರ ರಸ್ತೆ ನಿಧಿಯಿಂದ (Central Road Fund) ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಮುಖ ರಸ್ತೆಗಳ ಬಲವರ್ಧನೆ ಹಾಗೂ ಅಭಿವೃದ್ಧಿಗಾಗಿ ಒಟ್ಟು ₹57 ಕೋಟಿ ಹಣ ಬಿಡುಗಡೆಯಾಗಿದೆ. ಈ ಯೋಜನೆಯಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ಹಾಗೂ ನಗರ ಭಾಗದ ಪ್ರಮುಖ ರಸ್ತೆಗಳು ಸೇರಿವೆ,&quot; ಎಂದರು.&lt;/p&gt;&lt;p&gt;&quot;ನಾವು ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ. ಭಾರತೀಯ ಜನತಾ ಪಾರ್ಟಿ (BJP) ಕೇವಲ ವಿಕಾಸವಾದ ಮತ್ತು ಸರ್ವತೋಮುಖ ಪ್ರಗತಿಯಲ್ಲಿ ಮಾತ್ರ ನಂಬಿಕೆ ಇಟ್ಟುಕೊಂಡಿದೆ. ಅದಕ್ಕೆ ತಕ್ಕಂತೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.&quot;&lt;/p&gt;&lt;p&gt;&mdash; ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು&lt;/p&gt;&lt;h2&gt;ಗಣ್ಯರ ಉಪಸ್ಥಿತಿ ಮತ್ತು ನಿಲ್ದಾಣ ಪರಿಶೀಲನೆ&lt;/h2&gt;&lt;p&gt;ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಪುತ್ತೂರು ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಹಿರಿಯ ಡಿವಿಶನಲ್ ಎಂಜಿನಿಯರ್ ರೋಹನ್ ಡೋಂಗ್ರೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೈಲ್ವೆ ಎಂಜಿನಿಯರ್ ಹರ್ಷವರ್ಧನ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಸಂಸದರು ಅಧಿಕಾರಿಗಳೊಂದಿಗೆ ಕಬಕ ಪುತ್ತೂರು ನಿಲ್ದಾಣದ ಒಳಾಂಗಣ ಹಾಗೂ ರೈಲ್ವೆ ಹಳಿಗಳ ಸುರಕ್ಷತೆಯನ್ನು ಖುದ್ದಾಗಿ ಪರಿಶೀಲಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/dakshina-kannada-railways-mp-brijesh-chowta-announces-rs18-crore-new-overbridges-and-rs57-crore-for-road-projects-gdp/articleshow-p93z451"/>
        </item>
        <item>
            <title><![CDATA[ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಮಣಿಸಲು ಹೆಚ್‌ಡಿಕೆ Gen-Z ಮಾಸ್ಟರ್ ಪ್ಲಾನ್! ಮೈತ್ರಿ ಅಭ್ಯರ್ಥಿ ಕವೀಶ್ ಗೌಡ?]]></title>
            <link>https://kannada.asianetnews.com/karnataka-districts/high-profile-shift-in-mysuru-hd-kumaraswamy-plots-gen-z-strategy-in-chamundeshwari-kavish-gowda-replace-gt-devegowda-gdp/articleshow-lbdsx0s</link>
            <guid isPermaLink="true">https://kannada.asianetnews.com/karnataka-districts/high-profile-shift-in-mysuru-hd-kumaraswamy-plots-gen-z-strategy-in-chamundeshwari-kavish-gowda-replace-gt-devegowda-gdp/articleshow-lbdsx0s</guid>
            <pubDate>Sat, 20 Jun 2026 14:17:19 +0530</pubDate>
            <description><![CDATA[ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ನಡೆಗೆ ಅಸಮಾಧಾನಗೊಂಡಿರುವ ಹೆಚ್.ಡಿ. ಕುಮಾರಸ್ವಾಮಿ, ಅವರಿಗೆ ಸೆಡ್ಡು ಹೊಡೆಯಲು ಹೊಸ ತಂತ್ರ ರೂಪಿಸಿದ್ದಾರೆ. ಜಿಟಿಡಿ ವಿರುದ್ಧ ಯುವ ನಾಯಕ ಕವೀಶ್ ಗೌಡ ಅವರನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ದಳಪತಿಗಳು ತೆರೆಮರೆಯ ಸಿದ್ಧತೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k9prng145w22nbfqvjj5d83w,imgname-hd-kumaraswamy-gt-devegowda-1762774401060.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಸಾಂಸ್ಕೃತಿಕ ನಗರಿ ಮೈಸೂರಿನ ಹೈಪ್ರೊಫೈಲ್ ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಈಗಿನಿಂದಲೇ ರಾಜಕೀಯ ಜಿದ್ದಾಜಿದ್ದಿ ಮತ್ತು ಹೊಸ ತಂತ್ರಗಾರಿಕೆಗಳು ಗರಿಗೆದರಿವೆ. ಜೆಡಿಎಸ್&zwnj;ನಲ್ಲಿ ಭಿನ್ನಮತದ ಮುನ್ಸೂಚನೆ ನೀಡಿರುವ ಹಿರಿಯ ನಾಯಕ ಜಿ.ಟಿ. ದೇವೇಗೌಡ (GTD) ಅವರಿಗೆ ಶಾಕ್ ನೀಡಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಭರ್ಜರಿ 'Gen-Z' (ಯುವ ಪೀಳಿಗೆಯ) ಪ್ಲಾನ್ ರೂಪಿಸಿದ್ದಾರೆ. ಜಿಟಿಡಿ ವಿರುದ್ಧ ಮೈಸೂರು ಭಾಗದ ಪ್ರಬಲ ಒಕ್ಕಲಿಗ ಯುವ ನಾಯಕ, ಕಳೆದ ಚುನಾವಣೆಯ ರನ್ನರ್-ಅಪ್ ಕವೀಶ್ ಗೌಡ ಅವರನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ದಳಪತಿಗಳು ತೆರೆಮರೆಯ ಸ್ಕೆಚ್ ಹಾಕುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;h2&gt;ಜಿಟಿಡಿ ನಡೆಗೆ ಹೆಚ್&zwnj;ಡಿಕೆ ಕೆಂಡ, ಈ ಬಾರಿ ನನ್ನದೇ ಅಂತಿಮ ತೀರ್ಮಾನ!&lt;/h2&gt;&lt;p&gt;ಕಳೆದ ಕೆಲವು ಸಮಯದಿಂದ ಜೆಡಿಎಸ್ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವ ಜಿ.ಟಿ. ದೇವೇಗೌಡರ ನಡೆ ಕುಮಾರಸ್ವಾಮಿ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. &quot;ಜಿಟಿಡಿ ಈಗಾಗಲೇ ಪಕ್ಷದಿಂದ ಎರಡು ಕಾಲುಗಳನ್ನು ಆಚೆ ಇಟ್ಟಿದ್ದಾರೆ&quot; ಎಂದು ಸಿಟ್ಟು ಹೊರಹಾಕಿರುವ ಹೆಚ್&zwnj;ಡಿಕೆ, ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಹಂತದಲ್ಲೇ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.&lt;/p&gt;&lt;p&gt;ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಹೆಚ್.ಡಿ. ದೇವೇಗೌಡರಲ್ಲ, ನನ್ನದೇ ಅಂತಿಮ ತೀರ್ಮಾನ. ಮುಂದಿನ ಚುನಾವಣೆಯಲ್ಲಿ ಹೊಸ ಪೀಳಿಗೆಯ, ಸಕ್ರಿಯವಾಗಿರುವ 'Gen-Z' ಯುವಕರಿಗೆ ಟಿಕೆಟ್ ನೀಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ. ಹೆಚ್&zwnj;ಡಿಕೆ ಅವರ ಈ ಆಕ್ರೋಶಭರಿತ ಹೇಳಿಕೆಯ ಬೆನ್ನಲ್ಲೇ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕವೀಶ್ ಗೌಡ ಅವರ ಹೆಸರು ಅತ್ಯಂತ ಮುನ್ನೆಲೆಗೆ ಬಂದಿದೆ.&lt;/p&gt;&lt;h2&gt;ಯಾರು ಈ ಕವೀಶ್ ಗೌಡ?&lt;/h2&gt;&lt;p&gt;ಕವೀಶ್ ಗೌಡ ಮೈಸೂರಿನ ಪ್ರಭಾವಿ ರಾಜಕೀಯ ಮನೆತನದಿಂದ ಬಂದವರು. ಇವರು ಮೈಸೂರು ಭಾಗದ ಕಾಂಗ್ರೆಸ್&zwnj;ನ ಹಿರಿಯ ಹಾಗೂ ಮಾಜಿ ಶಾಸಕ ವಾಸು ಅವರ ಪುತ್ರ. ಆದರೆ, ತಂದೆಯ ಪಕ್ಷದ ಹಾದಿ ಹಿಡಿಯದ ಕವೀಶ್ ಗೌಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ (BJP) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ತಮ್ಮ ಚೊಚ್ಚಲ ಚುನಾವಣೆಯಲ್ಲೇ ಹಿರಿಯ ನಾಯಕ ಜಿ.ಟಿ. ದೇವೇಗೌಡರ ವಿರುದ್ಧ ಭರ್ಜರಿ ಪೈಪೋಟಿ ನೀಡಿ, 50 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಇಡೀ ಮೈಸೂರು ರಾಜಕೀಯ ವಲಯ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು.&lt;/p&gt;&lt;h2&gt;ದಳಪತಿಗಳ ಗಾಳ: ಜಿಟಿಡಿ ಕಾಂಗ್ರೆಸ್&zwnj;ಗೆ ಹೋದರೆ, ಕವೀಶ್ ಜೆಡಿಎಸ್&zwnj;ಗೆ?&lt;/h2&gt;&lt;p&gt;ಕಳೆದ ಚುನಾವಣೆಯಲ್ಲಿ ಸೋತ ಬಳಿಕವೂ ಕವೀಶ್ ಗೌಡ ಕ್ಷೇತ್ರದಲ್ಲಿ ಧೃತಿಗೆಡದೆ ನಿರಂತರವಾಗಿ ಸಕ್ರಿಯರಾಗಿದ್ದಾರೆ. ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ, ಯುವಕರನ್ನು ಸಂಘಟಿಸುತ್ತಾ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವಿ ನೆಟ್&zwnj;ವರ್ಕ್ ಸೃಷ್ಟಿಸಿಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಜೆಡಿಎಸ್ ನಾಯಕರು ಈಗ ಕವೀಶ್ ಗೌಡಗೆ ನೇರವಾಗಿಯೇ ಗಾಳ ಹಾಕಿದ್ದಾರೆ.&lt;/p&gt;&lt;p&gt;ರಾಜಕೀಯ ವಲಯದ ಲೆಕ್ಕಾಚಾರಗಳ ಪ್ರಕಾರ, ಒಂದು ವೇಳೆ ಜಿ.ಟಿ. ದೇವೇಗೌಡರು ಜೆಡಿಎಸ್ ತೊರೆದು ಅಧಿಕೃತವಾಗಿ ಹಸ್ತ ಪಾಳಯ (ಕಾಂಗ್ರೆಸ್) ಸೇರಿದರೆ, ಕವೀಶ್ ಗೌಡ ಅವರು ಜೆಡಿಎಸ್ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆಗ ಅವರು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಪ್ರಬಲ ಜಂಟಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲಿದ್ದಾರೆ.&lt;/p&gt;&lt;h2&gt;ವರ್ಕ್ ಔಟ್ ಆಗುತ್ತಾ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್?&lt;/h2&gt;&lt;p&gt;ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ವೈಯಕ್ತಿಕ ವರ್ಚಸ್ಸು ಅಪಾರವಾಗಿದೆ. ಅವರನ್ನು ಅವರದ್ದೇ ಕ್ಷೇತ್ರದಲ್ಲಿ ಮಣಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಹೆಚ್&zwnj;ಡಿಕೆ ಈ ಬಾರಿ 'ವಯಸ್ಸು ಮತ್ತು ಯೌವನ'ದ ಕಾರ್ಡ್ ಪ್ಲೇ ಮಾಡಲು ಹೊರಟಿದ್ದಾರೆ. ಹಿರಿಯ ನಾಯಕನ ವಿರುದ್ಧ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ, ಕ್ಲೀನ್ ಇಮೇಜ್ ಹೊಂದಿರುವ ಹಾಗೂ ಒಕ್ಕಲಿಗ ಸಮುದಾಯದ ಯುವ ನಾಯಕನನ್ನು ತಂದು ನಿಲ್ಲಿಸಿದರೆ ಕ್ಷೇತ್ರವನ್ನು ಮತ್ತೆ ಜೆಡಿಎಸ್ ವಶಕ್ಕೆ ಪಡೆಯಬಹುದು ಎಂಬುದು ದಳಪತಿಗಳ ಲೆಕ್ಕಾಚಾರ.&lt;/p&gt;&lt;p&gt;ಕವೀಶ್ ಗೌಡ ಅವರ ಯುವ ಶಕ್ತಿ ಮತ್ತು ಮೈತ್ರಿಕೂಟದ ಸಾಂಪ್ರದಾಯಿಕ ಮತಗಳು ಸೇರಿದರೆ ಜಿಟಿಡಿಗೆ ಪ್ರಬಲ ಪೆಟ್ಟು ನೀಡಬಹುದು ಎಂಬ ಹೈಟೆಕ್ ಪ್ಲಾನ್ ಚಾಮುಂಡೇಶ್ವರಿ ಅಖಾಡವನ್ನು ಈಗಿನಿಂದಲೇ ಕಾವೇರುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಈ ದಳಪತಿಗಳ ರಾಜಕೀಯ ತಂತ್ರಗಾರಿಕೆ ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/high-profile-shift-in-mysuru-hd-kumaraswamy-plots-gen-z-strategy-in-chamundeshwari-kavish-gowda-replace-gt-devegowda-gdp/articleshow-lbdsx0s"/>
        </item>
        <item>
            <title><![CDATA[ಮಂಗಳೂರು to ಬೆಂಗಳೂರು 5 ಗಂಟೆ ಜರ್ನಿ, ಶಿರಾಡಿ ಘಾಟ್ ಸುರಂಗ ಮಾರ್ಗ  ರಸ್ತೆ-ರೈಲು ಜಂಟಿ ಯೋಜನೆಗೆ ಹಿನ್ನಡೆ!]]></title>
            <link>https://kannada.asianetnews.com/gallery/karnataka-districts/bengaluru-to-mangaluru-in-5-hours-shiradi-ghat-joint-tunnel-project-hits-massive-roadblock-as-railways-may-pull-out-gdp-zmpzm6d</link>
            <guid isPermaLink="true">https://kannada.asianetnews.com/gallery/karnataka-districts/bengaluru-to-mangaluru-in-5-hours-shiradi-ghat-joint-tunnel-project-hits-massive-roadblock-as-railways-may-pull-out-gdp-zmpzm6d</guid>
            <pubDate>Sat, 20 Jun 2026 12:27:45 +0530</pubDate>
            <description><![CDATA[&lt;p&gt;ಬೆಂಗಳೂರು-ಮಂಗಳೂರು ಪ್ರಯಾಣದ ಅವಧಿ ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ &amp;nbsp; ಅಡ್ಡಿ ಎದುರಾಗಿದೆ. ರಸ್ತೆ- ರೈಲು ಮಾರ್ಗಗಳ ಸುರಕ್ಷತಾ ಮಾನದಂಡಗಳಲ್ಲಿನ ವ್ಯತ್ಯಾಸದಿಂದಾಗಿ, ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ &amp;nbsp;ಪ್ರತ್ಯೇಕ ಸಮೀಕ್ಷೆ ನಡೆಸಲು ನಿರ್ಧರಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvhwczpdz1xmsrz11qhtnhv6,imgname-shiradi-ghat-tunnel-project-1781937897165.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು-ಮಂಗಳೂರು ಪ್ರಯಾಣದ ಅವಧಿ ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ &amp;nbsp; ಅಡ್ಡಿ ಎದುರಾಗಿದೆ. ರಸ್ತೆ- ರೈಲು ಮಾರ್ಗಗಳ ಸುರಕ್ಷತಾ ಮಾನದಂಡಗಳಲ್ಲಿನ ವ್ಯತ್ಯಾಸದಿಂದಾಗಿ, ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ &amp;nbsp;ಪ್ರತ್ಯೇಕ ಸಮೀಕ್ಷೆ ನಡೆಸಲು ನಿರ್ಧರಿಸಿವೆ.&lt;/p&gt;&lt;img&gt;&lt;p&gt;ಮಂಗಳೂರು: ಬೆಂಗಳೂರು ಮತ್ತು ಕರಾವಳಿಯ ಪ್ರಮುಖ ನಗರವಾದ ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ಕೇವಲ 5 ಗಂಟೆಗಳಿಗೆ ಇಳಿಸುವ ಮಹತ್ವಾಕಾಂಕ್ಷೆಯ &quot;ಶಿರಾಡಿ ಘಾಟ್ ಸುರಂಗ ಮಾರ್ಗ&quot; ಯೋಜನೆಗೆ ಈಗ ದೊಡ್ಡ ತಾಂತ್ರಿಕ ಅಡೆತಡೆ ಎದುರಾಗಿದೆ. ರಸ್ತೆ ಮತ್ತು ರೈಲು ಮಾರ್ಗ ಎರಡನ್ನೂ ಒಂದೇ ಸುರಂಗದಲ್ಲಿ ನಿರ್ಮಿಸುವ ಬೃಹತ್ ಪ್ರಸ್ತಾವನೆಗೆ ಭೌಗೋಳಿಕ ಏರಿಳಿತಗಳು ಸವಾಲಾಗಿ ಪರಿಣಮಿಸಿದ್ದು, ತಾಂತ್ರಿಕ ಕಾರಣಗಳಿಂದಾಗಿ ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ ಹಿಂದೆ ಸರಿಯುವ ಮುನ್ಸೂಚನೆ ನೀಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲು ನಿರ್ಧರಿಸಿವೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾಹಿತಿ ನೀಡಿದ್ದಾರೆ&lt;/p&gt;&lt;img&gt;&lt;p&gt;ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವ್ಯಾಪ್ತಿಯ ಸುಮಾರು 42 ಕಿಲೋಮೀಟರ್ ಉದ್ದದ ಅಪಾಯಕಾರಿ ಹಾಗೂ ತಿರುವುಗಳಿಂದ ಕೂಡಿದ ಮಾರ್ಗವನ್ನು ಸುರಂಗದ ಮೂಲಕ ನೇರವಾಗಿಸಲು ಇತ್ತೀಚೆಗೆ ಜಂಟಿ ಸರ್ವೆ ನಡೆಸಲಾಗಿತ್ತು. ಆದರೆ, ರಸ್ತೆ ಸಾರಿಗೆ ಮತ್ತು ರೈಲ್ವೆ ಇಲಾಖೆಗಳ ಸುರಕ್ಷತಾ ಮಾನದಂಡ ಹಾಗೂ ಇಳಿಜಾರು (Gradient) ನಿಯಮಗಳಲ್ಲಿ ಭಾರಿ ವ್ಯತ್ಯಾಸವಿರುವುದು ಈ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;img&gt;&lt;p&gt;ರಸ್ತೆ ಸಾರಿಗೆ ನಿಯಮ: ಹೆದ್ದಾರಿ ಇಲಾಖೆಯ ಮಾನದಂಡಗಳ ಪ್ರಕಾರ ಸುರಂಗ ರಸ್ತೆಗೆ 1:50 ಗ್ರೇಡಿಯಂಟ್ ಸಾಕಾಗುತ್ತದೆ. ಇದರ ಆಧಾರದ ಮೇಲೆ ಕೇವಲ 38 ಕಿಲೋಮೀಟರ್ ವ್ಯಾಪ್ತಿಯಲ್ಲೇ ಅತ್ಯಂತ ಯಶಸ್ವಿಯಾಗಿ ರಸ್ತೆ ಸುರಂಗವನ್ನು ನಿರ್ಮಿಸಬಹುದಾಗಿದೆ. ರಸ್ತೆ ಜೋಡಣೆಗೆ ಯಾವುದೇ ಪ್ರಮುಖ ತಾಂತ್ರಿಕ ಸಮಸ್ಯೆಗಳಿಲ್ಲ.&lt;/p&gt;&lt;p&gt;ರೈಲ್ವೆ ಇಲಾಖೆ ನಿಯಮ: ರೈಲ್ವೆಯ ಕಟ್ಟುನಿಟ್ಟಿನ ಸುರಕ್ಷತಾ ಮಾನದಂಡಗಳ ಪ್ರಕಾರ ಘಾಟ್ ವಿಭಾಗದಲ್ಲಿ ಭವಿಷ್ಯದ ದೃಷ್ಟಿಯಿಂದ 1:150 ಗ್ರೇಡಿಯಂಟ್ ಕಡ್ಡಾಯವಾಗಿದೆ (ಪ್ರಸ್ತುತ ಇದು 1:50 ರಷ್ಟಿದೆ). ಈ ಅಪೇಕ್ಷಿತ ಇಳಿಜಾರನ್ನು ಸಾಧಿಸಲು ರೈಲ್ವೆ ಇಲಾಖೆಗೆ ಬರೋಬ್ಬರಿ 88 ಕಿಲೋಮೀಟರ್ ಉದ್ದದ ಸುರಂಗ ಮಾರ್ಗದ ಅಗತ್ಯವಿದೆ.&lt;/p&gt;&lt;p&gt;ಒಂದೇ ಯೋಜನೆಯಡಿ 38 ಕಿ.ಮೀ ರಸ್ತೆ ಸುರಂಗ ಮತ್ತು 88 ಕಿ.ಮೀ ರೈಲು ಸುರಂಗವನ್ನು ಪರಸ್ಪರ ಜೋಡಿಸುವುದು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಅಸಾಧ್ಯ ಎಂಬ ತೀರ್ಮಾನಕ್ಕೆ ರೈಲ್ವೆ ಅಧಿಕಾರಿಗಳು ಬಂದಿದ್ದಾರೆ. ಹೀಗಾಗಿ ಎರಡೂ ಇಲಾಖೆಗಳು ಪ್ರತ್ಯೇಕವಾಗಿ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸುತ್ತಿವೆ ಎನ್ನಲಾಗಿದೆ&lt;/p&gt;&lt;img&gt;&lt;p&gt;ಹೆದ್ದಾರಿ ಇಲಾಖೆಗೆ ಯಾವುದೇ ದೊಡ್ಡ ತಾಂತ್ರಿಕ ಅಡೆತಡೆಗಳಿಲ್ಲದ ಕಾರಣ, ರಸ್ತೆ ಸುರಂಗ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ಸಿದ್ಧತೆಗಳು ನಡೆದಿವೆ. ಪ್ರಸ್ತುತ ಜೋಡಣೆ (Alignment) ಕಾರ್ಯಗಳು ನಡೆಯುತ್ತಿದ್ದು, ಏರಿಳಿತದ ಅಂತಿಮ ನಕ್ಷೆ ಸಿದ್ಧವಾದ ತಕ್ಷಣವೇ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.&lt;/p&gt;&lt;p&gt;ಆದರೆ, ರೈಲ್ವೆ ಇಲಾಖೆಯು ಸುರಕ್ಷತೆಯ ವಿಚಾರದಲ್ಲಿ ಕಟ್ಟುನಿಟ್ಟಿನ ನಿಲುವು ಹೊಂದಿರುವುದರಿಂದ ಕರಾವಳಿ ಭಾಗದ ರೈಲು ಸುರಂಗ ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಈ ಕಗ್ಗಂಟನ್ನು ಬಗೆಹರಿಸಲು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳೆ ರೈಲ್ವೆ ಹಾಗೂ ರಸ್ತೆ ಸಾರಿಗೆ ಸಚಿವರನ್ನು ಮತ್ತು ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸುವುದಾಗಿ ಸಂಸದ ಬ್ರಿಜೇಶ್ ಚೌಟ ಭರವಸೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮಂಗಳೂರು ಮತ್ತು ಬೆಂಗಳೂರು ನಡುವೆ ಪ್ರಸ್ತುತ ಕೇವಲ ಒಂದೇ ರೈಲು ಮಾರ್ಗ (Single Line) ಇರುವುದನ್ನು ಸಂಸದರು ಗಮನ ಸೆಳೆದಿದ್ದಾರೆ. &quot;ರೈಲ್ವೆ ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸದೆ, ಕೇವಲ ಹೊಸ ರೈಲುಗಳನ್ನು ಓಡಿಸಬೇಕೆಂಬ ಸಾರ್ವಜನಿಕರ ಬೇಡಿಕೆಗಳು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಘಾಟ್ ವಿಭಾಗದಲ್ಲಿನ ಇಳಿಜಾರು ಸಂಬಂಧಿತ ಸವಾಲುಗಳನ್ನು ಶಾಶ್ವತವಾಗಿ ಪರಿಹರಿಸಬೇಕಾದರೆ ದೀರ್ಘಾವಧಿಯ ಯೋಜನೆಯ ಅಗತ್ಯವಿದೆ,&quot; ಎಂದು ಅವರು ಪ್ರತಿಪಾದಿಸಿದರು.&lt;/p&gt;&lt;p&gt;ಈ ನಿಟ್ಟಿನಲ್ಲಿ ಪ್ರಮುಖವಾಗಿ ಎರಡು ಸುಧಾರಣೆಗಳಾಗಬೇಕಿದೆ ಎಂದು ಒತ್ತಿಹೇಳಿದ್ದಾರೆ. ಅವೆಂದರೆ ರಸ್ತುತ ಇರುವ ಹಾಸನ-ಮಂಗಳೂರು ರೈಲ್ವೆ ನಿಗಮವನ್ನು (HMRDC) ಸಂಪೂರ್ಣವಾಗಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಗಳೂರು ಮತ್ತು ಮಂಗಳೂರು ನಡುವೆ ತುರ್ತಾಗಿ ದ್ವಿಪಥ ರೈಲು ಮಾರ್ಗವನ್ನು (Double Line) ಅಭಿವೃದ್ಧಿಪಡಿಸಬೇಕು.&lt;/p&gt;&lt;img&gt;&lt;p&gt;ಕರಾವಳಿ ಜನತೆಯ ಬಹುದಿನಗಳ ಕನಸಾದ ಬೆಂಗಳೂರು-ಮಂಗಳೂರು ನಡುವಿನ ವಂದೇ ಭಾರತ್ ರೈಲು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಸ್ತುತ ಹಲವು ತಾಂತ್ರಿಕ ಮೌಲ್ಯಮಾಪನಗಳನ್ನು ನಡೆಸುತ್ತಿದ್ದಾರೆ. ಈ ಹೈ-ಸ್ಪೀಡ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗುವ ವಿಶ್ವಾಸವಿದೆ ಎಂದು ಚೌಟ ಆಶಾವಾದ ವ್ಯಕ್ತಪಡಿಸಿದರು. ಒಮ್ಮೆ ವಂದೇ ಭಾರತ್ ರೈಲಿನ ವೇಳಾಪಟ್ಟಿ ಅಂತಿಮಗೊಂಡ ನಂತರ, ಪುತ್ತೂರು ರೈಲು ನಿಲ್ದಾಣದಲ್ಲಿ ಅದಕ್ಕೆ ಕಡ್ಡಾಯ ನಿಲುಗಡೆ (Stoppage) ನೀಡಬೇಕೆಂಬ ಸಾರ್ವಜನಿಕರ ಪ್ರಬಲ ಬೇಡಿಕೆಯನ್ನು ರೈಲ್ವೆ ಮಂಡಳಿಯ ಗಮನಕ್ಕೆ ತರಲಾಗುವುದು ಎಂದರು. ಇದೇ ವೇಳೆ, ಪುತ್ತೂರು ಎಪಿಎಂಸಿ ರೈಲ್ವೆ ಮೇಲ್ಸೇತುವೆ ಬಳಿ ಪ್ರಸ್ತಾವಿತ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಸಂಸದರು ಪತ್ರಕರ್ತರಿಗೆ ತಿಳಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bengaluru-to-mangaluru-in-5-hours-shiradi-ghat-joint-tunnel-project-hits-massive-roadblock-as-railways-may-pull-out-gdp-zmpzm6d"/>
        </item>
        <item>
            <title><![CDATA[NEET-UG Re-Exam 2026: ನಾಳೆ ರಾಜ್ಯಾದ್ಯಂತ ನೀಟ್ ಮರು ಪರೀಕ್ಷೆ, ಈ ನಿಯಮ ಉಲ್ಲಂಘಿಸಿದರೆ ಪ್ರವೇಶವಿಲ್ಲ!]]></title>
            <link>https://kannada.asianetnews.com/education/neet-ug-re-exam-nta-guidelines-in-karnataka-rav/articleshow-xog2v7c</link>
            <guid isPermaLink="true">https://kannada.asianetnews.com/education/neet-ug-re-exam-nta-guidelines-in-karnataka-rav/articleshow-xog2v7c</guid>
            <pubDate>Sat, 20 Jun 2026 11:53:32 +0530</pubDate>
            <description><![CDATA[&lt;p&gt;NEET-ಆG Re-Exam 2026: ನಾಳೆ ಭಾನುವಾರ ಕರ್ನಾಟಕದಲ್ಲಿ ನಡೆಯಲಿರುವ ನೀಟ್ ಮರು ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. &amp;nbsp;ಪರೀಕ್ಷೆಯ ಸಮಯ, ಕಡ್ಡಾಯ ಡ್ರೆಸ್ ಕೋಡ್, ಅನುಮತಿಸಲಾದ ಮತ್ತು ನಿಷೇಧಿತ ವಸ್ತುಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvhtxw65v0h982tsmm7233vd,imgname----------------------25--1781936353477.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.20):&lt;/strong&gt; ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಭಾನುವಾರ ರಾಷ್ಟ್ರಾದ್ಯಂತ ನೀಟ್ ಮರು ಪರೀಕ್ಷೆ ನಡೆಯಲಿದ್ದು, ಕರ್ನಾಟಕದಲ್ಲೂ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ದೇಶದಾದ್ಯಂತ ಈಗಾಗಲೇ 16 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಲ್&zwnj; ಟಿಕೆಟ್&zwnj; ಡೌನ್&zwnj;ಲೋಡ್ ಮಾಡಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ 31 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ.&lt;/p&gt;&lt;h2&gt;ಯಾವಾಗ ನೀಟ್ ಪರೀಕ್ಷೆ ಆರಂಭ?&lt;/h2&gt;&lt;p&gt;ನಾಳೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೆ ಪರೀಕ್ಷೆ ನಡೆಯಲಿದ್ದು, ಈ ಬಾರಿ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ವಿಸ್ತರಿಸಲಾಗಿದೆ. ಒಟ್ಟು 195 ನಿಮಿಷಗಳ ಕಾಲ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳು ಮಧ್ಯಾಹ್ನ 1:30ಕ್ಕೆ ಮುಚ್ಚಲಾಗುತ್ತೆ ವಿದ್ಯಾರ್ಥಿಗಳೇ ಗಮನಿಸಿ, ಒಂದು ವೇಳೆ ನಿಗದಿಪಡಿಸಿದ ಸಮಯಕ್ಕೆ ತಡವಾಗಿ ಬರುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ಇರುವುದಿಲ್ಲ ಎಂದು NTA ಸ್ಪಷ್ಟಪಡಿಸಿದೆ.&lt;/p&gt;&lt;p&gt;&lt;strong&gt;ಕಡ್ಡಾಯ ಡ್ರೆಸ್ ಕೋಡ್ ಕಡ್ಡಾಯ&lt;/strong&gt;&lt;/p&gt;&lt;ul&gt; &lt;li&gt;NTA ಹೊರಡಿಸಿರುವ ಡ್ರೆಸ್&zwnj; ಕೋಡ್&zwnj; ಕಡ್ಡಾಯವಾಗಿದ್ದು, ಇದರ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು ಕೆಳಗಿನಂತಿವೆ.&lt;/li&gt; &lt;li&gt;ನೀರಿನ ಬಾಟಲ್&zwnj; ಅನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅವಕಾಶವಿದೆ.&lt;/li&gt; &lt;li&gt;ಮಳೆಯಿಂದ ಹಾನಿಯಾಗದಂತೆ ಪ್ರವೇಶ ಪತ್ರವನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.&lt;/li&gt; &lt;li&gt;ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ವಸ್ತುಗಳು (ಪೇಟಾ, ಹಿಜಾಬ್&zwnj; ಮುಂತಾದವು) ಧರಿಸಲು ಅವಕಾಶದೆ ಆದರೆ, ತಪಾಸಣೆಗಾಗಿ ಅಭ್ಯರ್ಥಿಗಳು ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಬೇಕು.&lt;/li&gt; &lt;li&gt;ತಿಳಿ ಬಣ್ಣದ ಉಡುಪುಗಳಿದ್ದರೆ ಸೂಕ್ತ. ಅಗತ್ಯವಿದ್ದರೆ ಪೂರ್ಣ ತೋಳಿನ ಅಥವಾ ಉಣ್ಣೆಯ ಉಡುಪು ಧರಿಸಬಹುದು.&lt;/li&gt; &lt;li&gt;ತಪಾಸಣೆಗೆ ಅನುಕೂಲವಾಗುವಂತೆ ಮುಂಚಿತವಾಗಿ ಕೇಂದ್ರಕ್ಕೆ ಬರಬೇಕು.&lt;/li&gt; &lt;li&gt;ಚಪ್ಪಲಿ ಅಥವಾ ಕಡಿಮೆ ಹೀಲಿನ ಪಾದರಕ್ಷೆಗಳು ಧರಿಸುವುದು ಸೂಕ್ತ.&lt;/li&gt; &lt;li&gt;ಹೆಚ್ಚು ಹೀಲಿನ ಪಾದರಕ್ಷೆ ಧರಿಸಿದರೆ ಹೆಚ್ಚುವರಿ ತಪಾಸಣೆ ನಡೆಸಬಹುದು.&lt;/li&gt;&lt;/ul&gt;&lt;p&gt;&lt;strong&gt;ನಿಷೇಧಿತ ವಸ್ತುಗಳು:&lt;/strong&gt;&lt;/p&gt;&lt;ul&gt; &lt;li&gt;ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಬ್ಲೂಟೂತ್ ಸಾಧನಗಳು, ಇಯರ್&zwnj;ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಅಥವಾ ಸಂವಹನ ಸಾಧನಗಳು ನಿಷೇಧಿಸಲಾಗಿದೆ.&lt;/li&gt; &lt;li&gt;ಲೋಹದ ವಸ್ತುಗಳು, ದೊಡ್ಡ ಬೆಲ್ಟ್ ಬಕಲ್&zwnj;ಗಳು, ಭಾರವಾದ ಆಭರಣಗಳು ಮತ್ತು ಇತರ ಲೋಹದ ಅಲಂಕಾರಿಕ ವಸ್ತುಗಳಿಗೆ ಅನುಮತಿ ಇಲ್ಲ.&lt;/li&gt; &lt;li&gt;ಎಲ್ಲಾ ಅಭ್ಯರ್ಥಿಗಳಿಗೂ ಪ್ರವೇಶದ ಮೊದಲು ಕಡ್ಡಾಯ ತಪಾಸಣೆ ಇರುತ್ತದೆ. ಆದ್ದರಿಂದ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ NTA ಸಲಹೆ ನೀಡಿದೆ.&lt;/li&gt;&lt;/ul&gt;&lt;p&gt;ಯಾವುದೇ ಸ್ಪಷ್ಟೀಕರಣ ಅಥವಾ ಸಹಾಯಕ್ಕಾಗಿ &lt;strong&gt;NTA ಸಹಾಯವಾಣಿ ಸಂಖ್ಯೆ&lt;/strong&gt;ಗಳು: 011-40759000 / 011-69227700 ಅನ್ನು ಸಂಪರ್ಕಿಸಬಹುದು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/education/neet-ug-re-exam-nta-guidelines-in-karnataka-rav/articleshow-xog2v7c"/>
        </item>
        <item>
            <title><![CDATA[ಬೆಂಗಳೂರು ನಗರದಲ್ಲಿ ಶವ ಸಂಸ್ಕಾರಕ್ಕೆ ನೋಂದಣಿ, 250 ರು. ಕಡ್ಡಾಯ! ಚಿತಾಗಾರಕ್ಕೆ ಬರುವ ಮುನ್ನ ಯಾವೆಲ್ಲ ದಾಖಲೆ ತರಬೇಕು?]]></title>
            <link>https://kannada.asianetnews.com/state/bengaluru-cremation-registration-now-rs-250-new-rules-rav/articleshow-vkple5g</link>
            <guid isPermaLink="true">https://kannada.asianetnews.com/state/bengaluru-cremation-registration-now-rs-250-new-rules-rav/articleshow-vkple5g</guid>
            <pubDate>Sat, 20 Jun 2026 10:30:24 +0530</pubDate>
            <description><![CDATA[&lt;p&gt;ಬೆಂಗಳೂರು ನಗರದಲ್ಲಿ ಚಿತಾಗಾರ ಶುಲ್ಕ ಹೆಚ್ಚು ವಸೂಲಿಯಾಗುತ್ತಿದ್ದ ಹಿನ್ನೆಲೆ ಜಿಬಿಎ ಹೊಸ ನಿಯಮಗಳನ್ನ ರೂಪಿಸಿದ್ದು ಶವ ಸಂಸ್ಕಾರ ಮಾಡುವವರು ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿ ನೋಂದಣಿ ಮಾಡಬಹುದಾಗಿದೆ. ಶುಲ್ಕ ಎಷ್ಟು? ನಿಯಮಗಳೇನು ವಿವರಗಳಿಗೆ ಪೂರ್ಣವಾಗಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvhpcnvv0vm14py1k2wztxf3,imgname----------------------24--1781931595643.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.20)&lt;/strong&gt;: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ವಿದ್ಯುತ್&zwnj; ಚಿತಾಗಾರಗಳಿದ್ದು, ಸದರಿ ಚಿತಾಗಾರಗಳಲ್ಲಿ ಶವಸಂಸ್ಕಾರ ನಡೆಸುವ ಬಗ್ಗೆ ಪಾಲಿಕೆ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇನ್ನು ಮುಂದೆ ಶವಸಂಸ್ಕಾರ ನಡೆಸುವವರು, ಗ್ರೇಟರ್&zwnj; ಬೆಂಗಳೂರು ಪ್ರಾಧಿಕಾರದ ಅಧಿಕೃತ ಜಾಲತಾಣವಾದ www.bbmp.gov.in ನಲ್ಲಿ ಮಾತ್ರ ನೋಂದಾಯಿಸಿಕೊಳ್ಳಬೇಕು, ಪ್ರತಿ ಶವಸಂಸ್ಕಾರಕ್ಕೆ 250 ರು.ಶುಲ್ಕ ನಿಗದಿಪಡಿಸಲಾಗಿದ್ದು, ಶುಲ್ಕ ಪಾವತಿಸಿ ರಸೀದಿ ಪಡೆಯಬೇಕು. ಚಟ್ಟ, ಮಡಿಕೆ, ಪೂಜಾ ಸಾಮಗ್ರಿ ವ್ಯವಸ್ಥೆಯನ್ನು ಮೃತರ ಕುಟುಂಬದವರು ಮಾಡಿಕೊಳ್ಳಬೇಕು, ಪಾಲಿಕೆಯಿಂದ ಇವುಗಳನ್ನು ಒದಗಿಸುವುದಿಲ್ಲ.&lt;/p&gt;&lt;h2&gt;ಶವಸಂಸ್ಕಾರಕ್ಕೆ ಬರುವವರು ಏನೇನು ದಾಖಲೆ ತರಬೇಕು?&lt;/h2&gt;&lt;p&gt;ಶವಸಂಸ್ಕಾರಕ್ಕೆ ಬರುವ ಸಂದರ್ಭ, ಮನವಿ ಪತ್ರ, ಮರಣದ ವರದಿ ನಮೂನೆ-02, ವೈದ್ಯರ ದೃಢೀಕರಣ ಪತ್ರ ನಮೂನೆ-4A, ಶವಸಂಸ್ಕಾರ ದೃಢೀಕರಣ ಪತ್ರ ಅಥವಾ ಮೃತರ ಪಡಿತರ ಚೀಟಿ ಅಥವಾ ಮೃತರ ಆಧಾರ್ ಗುರುತಿನ ಚೀಟಿ ಅಥವಾ ಮೃತರ ಚುನಾವಣಾ ಗುರುತಿನ ಚೀಟಿಅಥವಾ ಟಿ.ಸಿ ಮತ್ತು ಪಾನ್ ಕಾರ್ಡ್, ಇವು ಯಾವುದೂ ಗುರುತಿನ ಚೀಟಿ ಇಲ್ಲದಿದ್ದಲ್ಲಿ ನೋಟರಿ ಪ್ರಮಾಣಪತ್ರ ನೀಡಬೇಕು ಎಂದು ಹೇಳಲಾಗಿದೆ.&lt;/p&gt;&lt;p&gt;ಗಾಯತ್ರಿನಗರದ ಹರಿಶ್ಚಂದ್ರಘಾಟ್ ವಿದ್ಯುತ್ ಚಿತಾಗಾರ, ಪೀಣ್ಯ ಮೊದಲನೇ ಹಂತ ಪೀಣ್ಯ ವಿದ್ಯುತ್ ಚಿತಾಗಾರ, ಎಸ್&zwnj; ಆರ್&zwnj; ಎಸ್ ಸ್ಟಾಪ್&zwnj;, ಲಗ್ಗೆರೆ, ಮಾಗಡಿ ರಿಂಗ್ ರೋಡ್,ಪ್ರೇಮನಗರ ಸುಮನಹಳ್ಳಿ ವಿದ್ಯುತ್ ಚಿತಾಗಾರ, ಕೆಂಗೇರಿ ಉಪನಗರ, ಕೋಮಘಟ್ಟ ಮುಖ್ಯ ರಸ್ತೆ, ಬಂಡೆಮಠ ಕೆಂಗೇರಿ ವಿದ್ಯುತ್ ಚಿತಾಗಾರ, ಬನಶಂಕರಿಯ ಯಾರಬ್ ನಗರದ ಬನಶಂಕರಿ ವಿದ್ಯುತ್ ಚಿತಾಗಾರಗಳಲ್ಲಿ ಈ ನಿಯಮ ಜಾರಿಯಲ್ಲಿರುತ್ತದೆ. ಹೆಚ್ಚಿನ ಮಾಹಿತಿಗೆ ಇಇ (ವಿದ್ಯುತ್) ನಾಗೇಶ್&zwnj; ಅವರ ಮೊಬೈಲ್ ಸಂಖ್ಯೆ 9480688528 ಸಂಪರ್ಕಿಸಬಹುದು.&lt;/p&gt;&lt;p&gt;ಮಣ್ಣಿನಲ್ಲಿ ಹೂಳುವುದು, ಕಟ್ಟಿಗೆಯಿಂದ ಸುಡಲಾಗುವ ಶವಸಂಸ್ಕಾರ ಪದ್ಧತಿಯಲ್ಲಿ ಯಾವುದೇ ದೂರುಗಳು ಬಂದಿಲ್ಲ. ಆದರೆ, ವಿದ್ಯುತ್ ಚಿತಾಗಾರದಲ್ಲಿ ಚಟ್ಟ, ಮಡಿಕೆ, ಪೂಜಾ ಸಾಮಗ್ರಿಗಳಿಗೆ ಹಾಗೂ ಪಾಲಿಕೆಗೆ ಎಂದು ಹೇಳಿ ಕೆಲ ವ್ಯಕ್ತಿಗಳು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಕಾರಣದಿಂದಾಗಿ ಎಲ್ಲಾ ವಿದ್ಯುತ್ ಚಿತಾಗಾರದ ಎಂಜಿನಿಯರ್&zwnj;ಗಳನ್ನು ಒಳಗೊಂಡು ಸಭೆ ನಡೆಸಿ ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಪಶ್ಚಿಮ ಪಾಲಿಕೆ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಕನ್ನಡಪ್ರಭಕ್ಕೆ ತಿಳಿಸಿದರು.&lt;/p&gt;&lt;p&gt;ಇಲ್ಲಿಯವರೆಗೆ ಖಾಸಗಿ ವ್ಯಕ್ತಿಗಳು ವೆಬ್ ಸೈಟ್&zwnj;ನಲ್ಲಿ ಬುಕ್ ಮಾಡಿ ಅತಿ ಹೆಚ್ಚಿನ ಮೊತ್ತವನ್ನು ಕುಟುಂಬದವರಿಂದ ವಸೂಲು ಮಾಡುತ್ತಿದ್ದರು. ಈ ಕಾರಣದಿಂದಾಗಿ ಪಾಲಿಕೆಯಿಂದ ಕೇವಲ 250 ಶುಲ್ಕ ಹಾಗೂ ಅಧಿಕೃತ ವೆಬ್ ಸೈಟ್&zwnj;ನಲ್ಲಿ ಬುಕ್ ಮಾಡಬೇಕು. ಇದು ನಿಯಮ, ಹಣ ಇರುವವರು ಎಷ್ಟು ಬೇಕಾದರೂ ವೆಚ್ಚ ಮಾಡಿ ಶವಸಂಸ್ಕಾರ ಮಾಡಬಹುದು ಎಂದು ಆಯುಕ್ತರು ತಿಳಿಸಿದರು.&lt;/p&gt;&lt;p&gt;ಒಂದು ವೇಳೆ ಹೂಳುವುದು, ಕಟ್ಟಿಗೆಯಿಂದ ಸುಡುವ ಶವಸಂಸ್ಕಾರ ಪದ್ಧತಿಯಲ್ಲಿ ಈಗ ಸಮಸ್ಯೆಗಳೇನಾದರೂ ಇದ್ದಲ್ಲಿ ಸಾರ್ವಜನಿಕರು ಆಯುಕ್ತರು, ಪಶ್ಚಿಮ ನಗರಪಾಲಿಕೆ ವಿಭಾಗ, 18ನೇ ಕ್ರಾಸ್ ರಸ್ತೆ, ಐಡಿಯಲ್ ಹೋಮ್ಸ್ ಟೌನ್ ಶಿಪ್, ರಾಜ ರಾಜೇಶ್ವರಿ ನಗರ, ಬೆಂಗಳೂರು-560098 ದೂರು ಸಲ್ಲಿಸಬಹುದು.&lt;/p&gt;&lt;h3&gt;ಉತ್ತರ ಪಾಲಿಕೆಯಿಂದಲೂ ಮಾರ್ಗಸೂಚಿ&lt;/h3&gt;&lt;p&gt;ಉತ್ತರ ಪಾಲಿಕೆ ವಿಭಾಗದಲ್ಲಿ ಇರುವ ವಿದ್ಯುತ್ ಚಿತಾಗಾರಗಳಲ್ಲಿ ಸ್ಲಾಟ್ ಗಳನ್ನು ಕಾಯ್ದಿರಿಸುವ ಸಂದರ್ಭ ಗೂಗಲ್&zwnj;ನಲ್ಲಿ ಕಂಡುಬರುವ ನಕಲಿ ಜಾಲತಾಣಗಳನ್ನು ಸಂಪರ್ಕಿಸದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗಳನ್ನು ಸಂಪರ್ಕಿಸಲು ಉತ್ತರ ಪಾಲಿಕೆ ತಿಳಿಸಿದೆ. ಈ ವ್ಯಾಪ್ತಿಯಲ್ಲಿ ಚಿರಶಾಂತಿಧಾಮ ವಿದ್ಯುತ್ ಚಿತಾಗಾರ, ಹೆಬ್ಬಾಳ ಕೆಂಪಾಪುರ, ಮುಕ್ತಿಧಾಮ ವಿದ್ಯುತ್ ಚಿತಾಗಾರ, ಮೇಡಿ ಅಗ್ರಹಾರ,ಇವುಗಳಲ್ಲಿ ಸ್ಲಾಟ್ ಕಾಯ್ದಿರಿಸಲು ಜಿಬಿಎ ವೆಬ್ ಸೈಟ್ ಗಳಾದ https:apps.bbmp.gov.in/crematorium/forms/onlinebookingfrm.aspx, ಹಾಗೂ https:site.bbmp.gov.in/onlinecrematoriumprocessflow.html ಇವುಗಳನ್ನು ಸಂಪರ್ಕಿಸಲು ಪಾಲಿಕೆ ಮನವಿ ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-cremation-registration-now-rs-250-new-rules-rav/articleshow-vkple5g"/>
        </item>
        <item>
            <title><![CDATA[ಕೇರಳದ ವ್ಯಾಪಾರಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್‌, ಪೋಲಿಸಪ್ಪನ ರಾಬರಿ ಇದೇ ಮೊದಲೇನಲ್ಲ!]]></title>
            <link>https://kannada.asianetnews.com/karnataka-districts/shocking-bengaluru-cid-inspector-mahesh-kanakagiri-uses-official-police-jeep-to-extort-rs20-lakh-from-kerala-traders-gdp/articleshow-zm9c3lp</link>
            <guid isPermaLink="true">https://kannada.asianetnews.com/karnataka-districts/shocking-bengaluru-cid-inspector-mahesh-kanakagiri-uses-official-police-jeep-to-extort-rs20-lakh-from-kerala-traders-gdp/articleshow-zm9c3lp</guid>
            <pubDate>Sat, 20 Jun 2026 10:31:02 +0530</pubDate>
            <description><![CDATA[ಹಣದಾಸೆಗೆ ಇಲಾಖೆಯ ಜೀಪಿನಲ್ಲೇ ತೆರಳಿ ಕೇರಳ ಮೂಲದ ವ್ಯಾಪಾರಿಗೆ ಬೆದರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಿದ ಸಿಐಡಿ ಇನ್ಸ್&zwnj;ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಇಬ್ಬರು ಸಹಚರರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಸುಲಿಗೆಯ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvhp1wqt8vm5x6dd8a84qpnc,imgname-bengaluru-cid-inspector-mahesh-kanakagiri-1781931242234.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಹಣದ ದುರಾಸೆಗೆ ಬಿದ್ದು ಕಾನೂನು ರಕ್ಷಕರೇ ಭಕ್ಷಕರಾಗುತ್ತಿರುವ ಆತಂಕಕಾರಿ ಪ್ರವೃತ್ತಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮುಂದುವರಿದಿದೆ. ಇಲಾಖೆಯ ಅಧಿಕೃತ ಜೀಪಿನಲ್ಲೇ ತೆರಳಿ, ಕೇರಳ ಮೂಲದ ವ್ಯಾಪಾರಿಗಳನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಇನ್ಸ್&zwnj;ಪೆಕ್ಟರ್ ಹಾಗೂ ಅವರ ಇಬ್ಬರು ಸಹಚರರನ್ನು ಮಡಿವಾಳ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.&lt;/p&gt;&lt;p&gt;ಸಿಐಡಿ ಇನ್ಸ್&zwnj;ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಆತನಿಗೆ ಬಾತ್ಮಿದಾರರಾಗಿ ಕೆಲಸ ಮಾಡುತ್ತಿದ್ದ ಸ್ನೇಹಿತರಾದ ಕುಪ್ಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಲಿಗೆ ಮಾಡಿದ್ದ ಪೂರ್ತಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.&lt;/p&gt;&lt;h2&gt;ದರೋಡೆಯ ರೋಚಕ ಹಿನ್ನೆಲೆ&lt;/h2&gt;&lt;p&gt;ಕೇರಳ ಮೂಲದ ಜನೀಶ್ ಬಾಬು ಎಂಬುವವರಿಗೆ ಅವರ ಸ್ನೇಹಿತ ನವೀನ್ ಎಂಬುವವರು ಷೇರು ಮಾರುಕಟ್ಟೆ (Trading) ಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರೇಡಿಂಗ್ ವ್ಯವಹಾರದ ಮಾತುಕತೆಗಾಗಿ ಜೂನ್ 15ರಂದು ಜನೀಶ್ ಬಾಬು ಬೆಂಗಳೂರಿಗೆ ಆಗಮಿಸಿದ್ದರು. ಇವರಿಬ್ಬರೂ ಮಡಿವಾಳದ 'ವೈಟ್ ಸ್ಟೋನ್ ಲಾಡ್ಜ್'ನಲ್ಲಿ ತಂಗಿದ್ದರು.&lt;/p&gt;&lt;p&gt;ಜನೀಶ್ ಬಾಬು ಅವರು ಹಣದೊಂದಿಗೆ ಲಾಡ್ಜ್&zwnj;ನಲ್ಲಿ ತಂಗಿರುವ ನಿಖರ ಮಾಹಿತಿಯನ್ನು ಕುಪ್ಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಇನ್ಸ್&zwnj;ಪೆಕ್ಟರ್ ಮಹೇಶ್ ಕನಕಗಿರಿಗೆ ತಲುಪಿಸಿದ್ದರು. ಈ ಮಾಹಿತಿ ಆಧಾರದ ಮೇಲೆ ಜೂನ್ 15ರಂದೇ ಇಲಾಖೆಯ ಜೀಪಿನಲ್ಲಿ ಲಾಡ್ಜ್ ಮೇಲೆ ದಾಳಿ ನಡೆಸಿದ ಇನ್ಸ್&zwnj;ಪೆಕ್ಟರ್ ಮಹೇಶ್ ತಂಡ, ವ್ಯಾಪಾರಿಗಳಿಗೆ &quot;ನೀವು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇದೆ, ತಕ್ಷಣ ನಿಮ್ಮನ್ನು ಬಂಧಿಸುತ್ತೇವೆ&quot; ಎಂದು ತೀವ್ರವಾಗಿ ಬೆದರಿಸಿದ್ದಾರೆ. ಕೇಸ್&zwnj; ದಾಖಲಿಸದೇ ಬಿಡಲು 20 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು.&lt;/p&gt;&lt;h2&gt;ಸಿಸಿಟಿವಿ ಕ್ಯಾಮೆರಾದಲ್ಲಿ ಬಯಲಾದ ಇನ್ಸ್&zwnj;ಪೆಕ್ಟರ್ ಕಳ್ಳಾಟ&lt;/h2&gt;&lt;p&gt;ಸುಲಿಗೆಯಿಂದ ಕಂಗಾಲಾದ ಸಂತ್ರಸ್ತ ಜನೀಶ್ ಬಾಬು ಅವರು ಧೈರ್ಯ ಮಾಡಿ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತಾ ನೇತೃತ್ವದಲ್ಲಿ ವಿಶೇಷ ತಂಡ ತನಿಖೆಗೆ ಇಳಿಯಿತು. ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಸ್ವತಃ ಸಿಐಡಿ ಇನ್ಸ್&zwnj;ಪೆಕ್ಟರ್ ಮಹೇಶ್ ಕನಕಗಿರಿ ಇಲಾಖೆಯ ಜೀಪಿನಲ್ಲೇ ಬಂದು ದರೋಡೆ ನಡೆಸಿರುವುದು ಪತ್ತೆಯಾಗಿದೆ. ಭದ್ರ ಪುರಾವೆಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಡಿಸಿಪಿ ನೇತೃತ್ವದ ತಂಡ, ಶುಕ್ರವಾರದಂದು ಮೂವರೂ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.&lt;/p&gt;&lt;h2&gt;ಬೆಂಗಳೂರಿನಲ್ಲೇ ಇಡೀ ಸರ್ವೀಸ್; ಮುಂಬಡ್ತಿಯ ನಿರೀಕ್ಷೆಯಲ್ಲಿದ್ದ ಮಹೇಶ್!&lt;/h2&gt;&lt;p&gt;ಮಹೇಶ್ ಕನಕಗಿರಿ ಇಲಾಖೆಯಲ್ಲಿ ಸುದೀರ್ಘ ಕಾಲದಿಂದಲೂ ಪ್ರಭಾವಿಯಾಗಿದ್ದು, ತನ್ನ ಸೇವಾವಧಿಯ ಬಹುಪಾಲು ಸಮಯವನ್ನು ಬೆಂಗಳೂರು ನಗರದಲ್ಲೇ ಕಳೆದಿದ್ದಾನೆ. ಆರಂಭದಲ್ಲಿ ಹಲಸೂರು, ರಾಮಮೂರ್ತಿನಗರ ಹಾಗೂ ಕೆ.ಆರ್.ಪುರ ಠಾಣೆಗಳಲ್ಲಿ ಪಿಎಸ್&zwnj;ಐ (PSI) ಆಗಿ ಕಾರ್ಯನಿರ್ವಹಿಸಿದ್ದ. ನಂತರ ಬಡ್ತಿ ಪಡೆದು ಬಂಡೇಪಾಳ್ಯ ಹಾಗೂ ಸಿಸಿಬಿ (CCB) ಸೇರಿದಂತೆ ನಗರದ ಪ್ರಮುಖ ವಿಭಾಗಗಳಲ್ಲಿ ಇನ್ಸ್&zwnj;ಪೆಕ್ಟರ್ (PI) ಆಗಿ ಕೆಲಸ ಮಾಡಿದ್ದ. ಸೇವಾ ಹಿರಿತನದ ಆಧಾರದ ಮೇಲೆ ಶೀಘ್ರದಲ್ಲೇ ಡಿವೈಎಸ್ಪಿ (DySP) ಹುದ್ದೆಗೆ ಮುಂಬಡ್ತಿ ಪಡೆಯುವ ನಿರೀಕ್ಷೆಯಲ್ಲಿದ್ದ ಮಹೇಶ್, ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಓಡಾಟ ನಡೆಸುತ್ತಿದ್ದ ಎನ್ನಲಾಗಿದೆ. ಬಡ್ತಿಯ ಹೊಸ್ತಿಲಲ್ಲೇ ಈತ ಜೈಲು ಪಾಲಾಗಿದ್ದಾನೆ.&lt;/p&gt;&lt;h2&gt;ಹಳೇ ಸುಲಿಗೆ ಕೇಸ್&zwnj;ನಿಂದ ಬಚಾವಾಗಿದ್ದ ಕಿಲಾಡಿ!&lt;/h2&gt;&lt;p&gt;ಮಹೇಶ್ ಕನಕಗಿರಿ ಇಂತಹ ಕೃತ್ಯ ಎಸಗುತ್ತಿರುವುದು ಇದೇ ಮೊದಲೇನಲ್ಲ. ಕೇವಲ 4 ತಿಂಗಳ ಹಿಂದಷ್ಟೇ ಈತ ಬಂಡೇಪಾಳ್ಯ ಠಾಣೆಯ ಇನ್ಸ್&zwnj;ಪೆಕ್ಟರ್ ಆಗಿದ್ದಾಗಲೂ ಸುಲಿಗೆಯ ಆರೋಪ ಕೇಳಿಬಂದಿತ್ತು. ಯಲಹಂಕದ ಇಬ್ಬರು ಉದ್ಯಮಿಗಳನ್ನು ಅಕ್ರಮವಾಗಿ ಠಾಣೆಯಲ್ಲಿ ಕೂಡಿಹಾಕಿ ಹಣ ವಸೂಲಿಗೆ ಯತ್ನಿಸಿದ್ದ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿತ್ತು.&lt;/p&gt;&lt;p&gt;ಆಗ ಆಯುಕ್ತರು ಇಲಾಖಾ ವಿಚಾರಣೆಗೆ ಆದೇಶಿಸಿ, ಮಹೇಶ್&zwnj;ನನ್ನು ಬಂಡೇಪಾಳ್ಯ ಠಾಣೆಯಿಂದ ನಿಯಂತ್ರಣ ಕೊಠಡಿಗೆ (Control Room) ಎತ್ತಂಗಡಿ ಮಾಡಿದ್ದರು. ಆದರೆ, ಶಿಸ್ತು ಕ್ರಮದ ಭೀತಿಯಲ್ಲಿದ್ದ ಮಹೇಶ್, ತನ್ನ ರಾಜಕೀಯ ಹಾಗೂ ಇಲಾಖಾ ಪ್ರಭಾವ ಬಳಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದ. ಸಿಐಡಿಗೆ ಹೋದರೂ ಬುದ್ಧಿ ಕಲಿಯದ ಈತ, ಮತ್ತೆ ದರೋಡೆಗೆ ಇಳಿದು ಈಗ ಸಿಕ್ಕಿಬಿದ್ದಿದ್ದಾನೆ.&lt;/p&gt;&lt;h2&gt;ಇಲಾಖೆಗೆ ಮುಂದುವರಿದ ಕಪ್ಪುಚುಕ್ಕೆ&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಇಲಾಖೆಯ ಘನತೆಗೆ ತೀವ್ರ ಧಕ್ಕೆ ತಂದಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಎಟಿಎಂಗೆ ಹಣ ತುಂಬಿಸುವ ವಾಹನದಿಂದ ₹7 ಕೋಟಿ ದರೋಡೆ ಮಾಡಿದ ಪ್ರಕರಣದಲ್ಲಿ ಗೋವಿಂದಪುರ ಠಾಣೆಯ ಕಾನ್&zwnj;ಸ್ಟೇಬಲ್ ಬಂಧನವಾಗಿತ್ತು.&lt;/p&gt;&lt;p&gt;ಕೆಲ ದಿನಗಳ ಹಿಂದೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಲಂಚ ಸ್ವೀಕರಿಸುವಾಗ ಎಚ್&zwnj;ಎಎಲ್ ಠಾಣೆಯ ಮಹಿಳಾ ಪಿಎಸ್&zwnj;ಐ ಅನಿತಾ ಹಾಗೂ ಇಬ್ಬರು ಸಿಬ್ಬಂದಿ ರಾಜಸ್ಥಾನದಲ್ಲಿ ಸಿಕ್ಕಿಬಿದ್ದಿದ್ದರು. ಈಗ ಸಿಐಡಿ ಇನ್ಸ್&zwnj;ಪೆಕ್ಟರ್ ಮಹೇಶ್ ಕನಕಗಿರಿ ಜೈಲು ಪಾಲಾಗುವ ಮೂಲಕ ಇಲಾಖೆಯ ಕಪ್ಪು ಚುಕ್ಕೆಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/shocking-bengaluru-cid-inspector-mahesh-kanakagiri-uses-official-police-jeep-to-extort-rs20-lakh-from-kerala-traders-gdp/articleshow-zm9c3lp"/>
        </item>
        <item>
            <title><![CDATA[ಏಡ್ಸ್ ರೋಗಿ ಎಂದು ಸುಳ್ಳು ಹೇಳಿ ಹಣ ಸುಲಿಗೆ: ಚಾಲಾಕಿ ಪತ್ನಿ ವಿರುದ್ಧ ಕೇಸ್‌]]></title>
            <link>https://kannada.asianetnews.com/karnataka-districts/bengaluru-businessman-accuses-wife-of-50-lakh-extortion-threat-fir-registered-kvn/articleshow-3kg97ua</link>
            <guid isPermaLink="true">https://kannada.asianetnews.com/karnataka-districts/bengaluru-businessman-accuses-wife-of-50-lakh-extortion-threat-fir-registered-kvn/articleshow-3kg97ua</guid>
            <pubDate>Sat, 20 Jun 2026 10:28:03 +0530</pubDate>
            <description><![CDATA[ಬೆಂಗಳೂರಿನ ಉದ್ಯಮಿಯೊಬ್ಬರು, ತಮ್ಮ ಪತ್ನಿ ತನಗೆ ಏಡ್ಸ್ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಕಾರನ್ನು ಕದ್ದೊಯ್ದಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದು, ಪತ್ನಿ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-1328b379-05e0-448d-b7eb-2cc1609b1f4e,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಪತ್ನಿ ತನ್ನನ್ನು ಏಡ್ಸ್ ರೋಗಿ ಎಂದು ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾಳೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ನೀಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪತ್ನಿಯ ವಿರುದ್ಧ ಮಾರತ್ತಹಳ್ಳಿ ಪೊಲೀಸ್&zwnj; ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ. ಯಮಲೂರು ನಿವಾಸಿ ಹಾಗೂ ಉದ್ಯಮಿ ದೀಪಕ್&zwnj; ಕುಮಾರ್&zwnj; ನೀಡಿದ ದೂರಿನ ಅನ್ವಯ ಸ್ವಾತಿ (37) ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ದೂರಿನ ವಿವರ:&amp;nbsp;&lt;/strong&gt;&lt;/h2&gt;&lt;p&gt;ದೀಪಕ್&zwnj; ಕುಮಾರ್&zwnj; ಅವರು, ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯವಾದ ಸ್ವಾತಿಯನ್ನು 2022ರಲ್ಲಿ ವಿವಾಹವಾಗಿದ್ದರು. ವಿವಾಹದ ವೇಳೆ ತನ್ನ ವಿದ್ಯಾರ್ಹತೆ ಮತ್ತು ಕೆಲಸದ ಬಗ್ಗೆ ಆಕೆ ಸುಳ್ಳು ಹೇಳಿದ್ದಳು. ಈಕೆಗೆ ಈ ಹಿಂದೆ ಇಬ್ಬರು ಪುರುಷರರೊಂದಿಗೆ ಸಂಬಂಧ ಇರುವುದು ತನಗೆ ತಿಳಿಯಿತು. ಇದರಿಂದಾಗಿ ನಮ್ಮ ದಾಂಪತ್ಯದಲ್ಲಿ ಕಲಹ ಉಂಟಾಗಿತ್ತು. ಹೀಗಾಗಿ ಇಬ್ಬರು ಪ್ರತ್ಯೇಕವಾಗಿ ಇರೋಣವೆಂದು ಇ-ಮೇಲ್&zwnj; ಮಾಡಿ ಆಕೆಗೆ ಮನವಿ ಮಾಡಿದ್ದೆ. ಆದರೆ ಆಕೆ ಇದಕ್ಕೆ ಆಕೆ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು. ಹಣ ನೀಡದಿದ್ದರೆ ತನ್ನನ್ನು ಏಡ್ಸ್ ರೋಗಿ ಎಂದು ಬಿಂಬಿಸುವುದಲ್ಲದೆ ವೇಶ್ಯಾವಾಟಿಕೆ ದಂಧೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಸುಳ್ಳು ಆರೋಪಗಳನ್ನು ಹಬ್ಬಿಸಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.&lt;/p&gt;&lt;p&gt;ಅಲ್ಲದೆ, ತಾನು ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪರಿಚಯ ಹೊಂದಿದ್ದೇನೆ ಎಂದು ಆಕೆ ಆಗಾಗ ಹೇಳಿಕೊಳ್ಳುತ್ತಿದ್ದಳು. ನನ್ನನ್ನು ವಿರೋಧಿಸಿದರೆ ನಿನ್ನ ವಿರುದ್ಧ ಏನು ಬೇಕಾದರೂ ಮಾಡಬಲ್ಲೆ ಎಂದು ಬೆದರಿಕೆ ಹಾಕುತ್ತಿದ್ದಳು. ಅಲ್ಲದೇ 2024 ರ ಜನವರಿ 29 ರಂದು ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ, ತನ್ನ ಸಹಚರರ ಜತೆ ಮನೆಗೆ ನುಗ್ಗಿ ಲಾಕರ್&zwnj; ಒಡೆದು 18 ಲಕ್ಷ ನಗದು, ವಿದೇಶಿ ಕರೆನ್ಸಿಗಳು, 320 ಗ್ರಾಂ ಚಿನ್ನಾಭರಣ, 1.5 ಕೆ.ಜಿ ಬೆಳ್ಳಿ ವಸ್ತುಗಳು ಮತ್ತು ನಕಲಿ ಕೀ ಬಳಸಿ ಕಾರನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bengaluru-businessman-accuses-wife-of-50-lakh-extortion-threat-fir-registered-kvn/articleshow-3kg97ua"/>
        </item>
        <item>
            <title><![CDATA[ಬೆಂಗಳೂರಿಗರೇ ಗಮನಿಸಿ, ಇಂದು ನಗರದ ಹಲವೆಡೆ 7 ಗಂಟೆ ಪವರ್ ಕಟ್!; ನಿಮ್ಮ ಏರಿಯಾ ಲಿಸ್ಟಲ್ಲಿದ್ಯಾ ಚೆಕ್ ಮಾಡಿ]]></title>
            <link>https://kannada.asianetnews.com/bengaluru-urban/bengaluru-power-cut-today-june-20-bescom-maintenance-affected-areas-list-san/articleshow-m3mhe65</link>
            <guid isPermaLink="true">https://kannada.asianetnews.com/bengaluru-urban/bengaluru-power-cut-today-june-20-bescom-maintenance-affected-areas-list-san/articleshow-m3mhe65</guid>
            <pubDate>Sat, 20 Jun 2026 09:56:18 +0530</pubDate>
            <description><![CDATA[&lt;p&gt;KPTCL ಮತ್ತು BESCOM ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪವರ್ ಕಟ್ ಇರಲಿದ್ದು, ಮಧ್ಯ, ಪೂರ್ವ, ಈಶಾನ್ಯ ಮತ್ತು ಉತ್ತರ ಬೆಂಗಳೂರಿನ ಪ್ರಮುಖ ಪ್ರದೇಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksgwpqnf4a8ck139d54tb5mr,imgname-power-shutdown-2-1779757178543.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.20): &lt;/strong&gt;ಕರ್ನಾಟಕ ಪ್ರಸರಣ ನಿಗಮ ನಿಯಮಿತ (KPTCL) ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದರಿಂದ ನಗರದ ಹಲವೆಡೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಸತತ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ. 66/11Kv ಅಮರಜ್ಯೋತಿ ಎಂಯುಎಸ್ಎಸ್ (MUSS), 220/66/11kV ಇಪಿಐಪಿ (EPIP) ಎಂಯುಎಸ್ಎಸ್&zwnj;ನ 31.5MVA ಪವರ್ ಟ್ರಾನ್ಸ್&zwnj;ಫಾರ್ಮರ್-1 ಮತ್ತು 2, 66/11kV ಮಾನ್ಯತಾ ಟೆಕ್ ಪಾರ್ಕ್ ಎಂಯುಎಸ್ಎಸ್ ಹಾಗೂ ಸರ್ ಎಂ.ವಿ 220/66/11ಕೆವಿ ಜಿಐಎಸ್ ಇಡಿಸಿ ಸ್ಟೇಷನ್ ವ್ಯಾಪ್ತಿಯಲ್ಲಿ ಈ ತಾಂತ್ರಿಕ ಸುಧಾರಣಾ ಕಾಮಗಾರಿಗಳು ನಡೆಯಲಿವೆ. ನಿರ್ವಹಣಾ ಕಾಮಗಾರಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.&lt;/p&gt;&lt;h2&gt;&lt;strong&gt;ವಿದ್ಯುತ್ ವ್ಯತ್ಯಯವಾಗಲಿರುವ ಪ್ರಮುಖ ಪ್ರದೇಶಗಳ ಪಟ್ಟಿ&lt;/strong&gt;&lt;/h2&gt;&lt;p&gt;&lt;strong&gt;ಮಧ್ಯ ಬೆಂಗಳೂರು ಮತ್ತು ಕಮರ್ಷಿಯಲ್ ಏರಿಯಾ: &lt;/strong&gt;ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಲ್ಯಾವೆಲ್ಲೆ ರಸ್ತೆ, ರೆಸಿಡೆನ್ಸಿ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆ ಕ್ರಾಸ್, ವಿಠ್ಠಲ್ ಮಲ್ಯ ರಸ್ತೆ, ವಾಲ್ಟನ್ ರಸ್ತೆ, ಚರ್ಚ್ ಸ್ಟ್ರೀಟ್, ಕಸ್ತೂರಬಾ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕ್ವೀನ್ಸ್ ವೃತ್ತ, ಹೊಂಡೈ ಆರ್&zwnj;ಎಂಯು (RMU), ಐಟಿಸಿ (ITC) ಹೋಟೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.&lt;/p&gt;&lt;p&gt;&lt;strong&gt;ಐಟಿ ಕಾರಿಡಾರ್ ಮತ್ತು ಟೆಕ್ ಪಾರ್ಕ್&zwnj;ಗಳು: &lt;/strong&gt;ಮಾನ್ಯತಾ ಟೆಕ್ ಪಾರ್ಕ್ ಮತ್ತು ಮಾನ್ಯತಾ ರೆಸಿಡೆನ್ಸಿ, ಇಪಿಐಪಿ ಲೇಔಟ್ ಮತ್ತು ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ, ಸಾಲಾರ್&zwnj;ಪುರಿಯಾ ಟೆಕ್ ಪಾರ್ಕ್, ಬಾಗ್ಮನೆ ನಿಯಾನ್ ಬಿಲ್ಡಿಂಗ್ ಮತ್ತು ಬಾಗ್ಮನೆ ನಿಯಾನ್ ಬ್ಲಾಕ್, ಎಸ್&zwnj;ಜೆಆರ್ ಟೆಕ್ ಪಾರ್ಕ್, ಟಿಸಿಎಸ್ ಸಾಫ್ಟ್&zwnj;ವೇರ್ ಸಂಸ್ಥೆ, ಕಾರ್ಲೆ ಟೌನ್ ಸೆಂಟರ್, ಗೋಪಾಲನ್ ಗ್ಲೋಬಲ್ ಆಕ್ಸೆಸ್ ಮತ್ತು ಗೋಪಾಲನ್ ಎಂಟರ್&zwnj;ಪ್ರೈಸಸ್ ಆವರಣ.&lt;/p&gt;&lt;p&gt;&lt;strong&gt;ಪೂರ್ವ ಮತ್ತು ಈಶಾನ್ಯ ಭಾಗದ ಬಡಾವಣೆಗಳು:&lt;/strong&gt; ದೊಮ್ಮಲೂರು 2ನೇ ಹಂತ, ದೊಮ್ಮಲೂರು ಗ್ರಾಮ, ಕೋಡಿಹಳ್ಳಿ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, ಎಚ್&zwnj;ಎಎಲ್ (HAL) 2ನೇ ಹಂತ, ಇಎಸ್&zwnj;ಐ (ESI) ಆಸ್ಪತ್ರೆ ಪರಿಸರ, ಜೆಆರ್&zwnj;ಆರ್ ಲೇಔಟ್, ಕುಂದಲಹಳ್ಳಿ ಮುಖ್ಯ ರಸ್ತೆ, ಗ್ರಾಫೈಟ್ ವೃತ್ತ, ಚೆನ್ನಮ್ಮ ಲೇಔಟ್, ಆರ್&zwnj;ಜಿ ಹಳ್ಳಿ&ndash;ಸಿದ್ದಾಪುರ ಗೇಟ್.&lt;/p&gt;&lt;p&gt;&lt;strong&gt;ಉತ್ತರ ಬೆಂಗಳೂರು ಮತ್ತು ಅಪಾರ್ಟ್&zwnj;ಮೆಂಟ್&zwnj;ಗಳು&lt;/strong&gt;: ಹೆಬ್ಬಾಳ ಅಪಾರ್ಟ್ಮೆಂಟ್ ಲೇಔಟ್, ವೆಂಕಟೇಗೌಡ ಲೇಔಟ್, ಬಿ.ಟಿ.ಎಸ್. ಲೇಔಟ್, ಗೋದ್ರೇಜ್ ಅಪಾರ್ಟ್ಮೆಂಟ್, ವಿಕಾನಯ ಅಪಾರ್ಟ್ಮೆಂಟ್, ಎಸ್&zwnj;ಎನ್&zwnj;ಎನ್ ಅಪಾರ್ಟ್&zwnj;ಮೆಂಟ್ಸ್, ಜೆಎನ್&zwnj;ಸಿ, ಮಧುವನ ಎಂ 2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್&zwnj;ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಬಿ. ನಾರಾಯಣಪುರ ಕ್ರಾಸ್, ಬಿಡಿಎಸ್ ಲೇಔಟ್, ಅಮರಜ್ಯೋತಿ ಲೇಔಟ್ ಹಾಗೂ ಮರಿಯಣ್ಣಪಾಳ್ಯ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-power-cut-today-june-20-bescom-maintenance-affected-areas-list-san/articleshow-m3mhe65"/>
        </item>
        <item>
            <title><![CDATA[Karnataka HC: ಆರೋಪ ಇರೋದು ಎಸ್‌ಐ ಮೇಲೆ, ಬಂಧಿಸಿದ್ದು ಸಹೋದರನನ್ನ: ಪೊಲೀಸರಿಗೆ ಹೈಕೋರ್ಟ್ ತರಾಟೆ! ಏನಿದು ಪ್ರಕರಣ?]]></title>
            <link>https://kannada.asianetnews.com/state/karnataka-hc-slams-chitradurga-cops-for-brother-of-accused-arrested-in-marriage-fraud-case-rav/articleshow-shmrh2t</link>
            <guid isPermaLink="true">https://kannada.asianetnews.com/state/karnataka-hc-slams-chitradurga-cops-for-brother-of-accused-arrested-in-marriage-fraud-case-rav/articleshow-shmrh2t</guid>
            <pubDate>Sat, 20 Jun 2026 09:50:33 +0530</pubDate>
            <description><![CDATA[&lt;p&gt;ಚಿತ್ರದುರ್ಗ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಕರಣದಲ್ಲಿ ಆರೋಪವಿರುವುದು ಎಸ್&zwnj;ಐ ಮೇಲೆ ಮಾತ್ರ. ಆದರೆ ಇಡೀ ಕುಟುಂಬದವರ ವಿರುದ್ಧ ದೂರು ನೀಡಲಾಗಿದೆ. ಮಹಿಳೆಯ ದೂರು ಆಧರಿಸಿ ಆರೋಪಿಯ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ! ಪ್ರಕರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5xvrhbtf3jycpmrdj3gwwck,imgname-karnataka-high-court-1758717560186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರ (ಜೂ.20):&lt;/strong&gt; ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪ ಎದುರಿಸುತ್ತಿದ್ದ ಪ್ರೊಬೇಷನರಿ ಸಬ್ಇನ್ಸ್&zwnj;ಪೆಕ್ಟರ್&zwnj;ವೊಬ್ಬರ ಸಹೋದರನನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಹೈಕೋರ್ಟ್&zwnj; ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯ ತನಿಖಾಧಿಕಾರಿಗೆ ಖುದ್ದು ಹಾಜರಾಗುವಂತೆ ಕೋರ್ಟ್ ನಿರ್ದೇಶನ ನೀಡಿದೆ.&amp;nbsp;&lt;/p&gt;&lt;h2&gt;ವಿವಾಹಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸುವುದು ಹೇಗೆ?&lt;/h2&gt;&lt;p&gt;ದಾವಣಗೆರೆಯ ಎನ್&zwnj;.ದರ್ಶನ್&zwnj; ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿತು. ವಿನಾಕಾರಣ ಆರೋಪಿ ಸಹೋದರನ ಬಂಧನ ಆಘಾತಕಾರಿ ಎಂದು ಹೇಳಿ, &lsquo;ವಿವಾಹಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸುವುದು ಹೇಗೆ ಎಂದು ಪ್ರಶ್ನಿಸಿತು.&lt;/p&gt;&lt;h3&gt;ಆರೋಪವಿರುವುದು ಎಸ್&zwnj;ಐ ಮೇಲೆ ಬಂಧಿಸಿದ್ದು ಸಹೋದರನನ್ನ!&lt;/h3&gt;&lt;p&gt;ತನಿಖೆಗೆ ಮಧ್ಯಂತರ ತಡೆ ನೀಡಿರುವುದಲ್ಲದೆ, ತಕ್ಷಣವೇ ಬಂಧಿತನ ಬಿಡುಗಡೆ ಮಾಡಬೇಕು. ಅಷ್ಟೇ ಅಲ್ಲ, ಪ್ರಕರಣದಲ್ಲಿ ಸಂಬಂಧವಿಲ್ಲದವರನ್ನು ಬಂಧಿಸಿದ್ದು ಏಕೆ? ಎಂದು ಪ್ರಮಾಣಪತ್ರ ಸಲ್ಲಿಸಲು ತನಿಖಾಧಿಕಾರಿಗೆ ಸೂಚನೆ ನೀಡಿ ನ್ಯಾಯಾಲಯ ವಿಚಾರಣೆಯನ್ನು ಜೂ.25ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಭರತ್&zwnj; ಕುಮಾರ್&zwnj;, &lsquo;ಪ್ರಕರಣದಲ್ಲಿ ಆರೋಪವಿರುವುದು ಎಸ್&zwnj;ಐ ಮೇಲೆ ಮಾತ್ರ. ಆದರೆ ಇಡೀ ಕುಟುಂಬದವರ ವಿರುದ್ಧ ದೂರು ನೀಡಲಾಗಿದೆ. ಮಹಿಳೆಯ ದೂರು ಆಧರಿಸಿ ಆರೋಪಿಯ ಸಹೋದರನನ್ನು ಪೊಲೀಸರು ಬಂಧಿಸಿರುವುದು ಕಾನೂನು ಬಾಹಿರ ಕ್ರಮ. ಕೂಡಲೇ ಆತನ ಬಿಡುಗಡೆಗೆ ಆದೇಶ ನೀಡಬೇಕು ಎಂದು ಕೋರಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-hc-slams-chitradurga-cops-for-brother-of-accused-arrested-in-marriage-fraud-case-rav/articleshow-shmrh2t"/>
        </item>
        <item>
            <title><![CDATA[ಬೆಂಗಳೂರು ನಗರದಲ್ಲಿ ಶವ ಸಂಸ್ಕಾರಕ್ಕೆ ನೋಂದಣಿ, 250 ರು. ಕಡ್ಡಾಯ]]></title>
            <link>https://kannada.asianetnews.com/bengaluru-urban/bengaluru-crematorium-online-booking-bbmp-mandatory-fee-guidelines-san/articleshow-q5u1edv</link>
            <guid isPermaLink="true">https://kannada.asianetnews.com/bengaluru-urban/bengaluru-crematorium-online-booking-bbmp-mandatory-fee-guidelines-san/articleshow-q5u1edv</guid>
            <pubDate>Sat, 20 Jun 2026 09:42:48 +0530</pubDate>
            <description><![CDATA[&lt;p&gt;ಬೆಂಗಳೂರು ಪಶ್ಚಿಮ ಮತ್ತು ಉತ್ತರ ಪಾಲಿಕೆ ವ್ಯಾಪ್ತಿಯ ವಿದ್ಯುತ್ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಇನ್ನು ಮುಂದೆ ಅಧಿಕೃತ ಬಿಬಿಎಂಪಿ ಜಾಲತಾಣದಲ್ಲಿ ₹250 ಶುಲ್ಕ ಪಾವತಿಸಿ ಸ್ಲಾಟ್ ಕಾಯ್ದಿರಿಸಬೇಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvhkdmh63rckb2vjjzgcggpp,imgname-bengaluru-crematorium-1781928481318.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.20): &lt;/strong&gt;ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ವಿದ್ಯುತ್&zwnj; ಚಿತಾಗಾರಗಳಿದ್ದು, ಸದರಿ ಚಿತಾಗಾರಗಳಲ್ಲಿ ಶವಸಂಸ್ಕಾರ ನಡೆಸುವ ಬಗ್ಗೆ ಪಾಲಿಕೆ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇನ್ನು ಮುಂದೆ ಶವಸಂಸ್ಕಾರ ನಡೆಸುವವರು, ಗ್ರೇಟರ್&zwnj; ಬೆಂಗಳೂರು ಪ್ರಾಧಿಕಾರದ ಅಧಿಕೃತ ಜಾಲತಾಣವಾದ www.bbmp.gov.in ನಲ್ಲಿ ಮಾತ್ರ ನೋಂದಾಯಿಸಿಕೊಳ್ಳಬೇಕು, ಪ್ರತಿ ಶವಸಂಸ್ಕಾರಕ್ಕೆ 250 ರು.ಶುಲ್ಕ ನಿಗದಿಪಡಿಸಲಾಗಿದ್ದು, ಶುಲ್ಕ ಪಾವತಿಸಿ ರಸೀದಿ ಪಡೆಯಬೇಕು. ಚಟ್ಟ, ಮಡಿಕೆ, ಪೂಜಾ ಸಾಮಗ್ರಿ ವ್ಯವಸ್ಥೆಯನ್ನು ಮೃತರ ಕುಟುಂಬದವರು ಮಾಡಿಕೊಳ್ಳಬೇಕು, ಪಾಲಿಕೆಯಿಂದ ಇವುಗಳನ್ನು ಒದಗಿಸುವುದಿಲ್ಲ.&lt;/p&gt;&lt;p&gt;ಶವಸಂಸ್ಕಾರಕ್ಕೆ ಬರುವ ಸಂದರ್ಭ, ಮನವಿ ಪತ್ರ, ಮರಣದ ವರದಿ ನಮೂನೆ-02, ವೈದ್ಯರ ದೃಢೀಕರಣ ಪತ್ರ ನಮೂನೆ-4A, ಶವಸಂಸ್ಕಾರ ದೃಢೀಕರಣ ಪತ್ರ ಅಥವಾ ಮೃತರ ಪಡಿತರ ಚೀಟಿ ಅಥವಾ ಮೃತರ ಆಧಾರ್ ಗುರುತಿನ ಚೀಟಿ ಅಥವಾ ಮೃತರ ಚುನಾವಣಾ ಗುರುತಿನ ಚೀಟಿಅಥವಾ ಟಿ.ಸಿ ಮತ್ತು ಪಾನ್ ಕಾರ್ಡ್, ಇವು ಯಾವುದೂ ಗುರುತಿನ ಚೀಟಿ ಇಲ್ಲದಿದ್ದಲ್ಲಿ ನೋಟರಿ ಪ್ರಮಾಣಪತ್ರ ನೀಡಬೇಕು ಎಂದು ಹೇಳಲಾಗಿದೆ.&lt;/p&gt;&lt;p&gt;ಗಾಯತ್ರಿನಗರದ ಹರಿಶ್ಚಂದ್ರಘಾಟ್ ವಿದ್ಯುತ್ ಚಿತಾಗಾರ, ಪೀಣ್ಯ ಮೊದಲನೇ ಹಂತ ಪೀಣ್ಯ ವಿದ್ಯುತ್ ಚಿತಾಗಾರ, ಎಸ್&zwnj; ಆರ್&zwnj; ಎಸ್ ಸ್ಟಾಪ್&zwnj;, ಲಗ್ಗೆರೆ, ಮಾಗಡಿ ರಿಂಗ್ ರೋಡ್,ಪ್ರೇಮನಗರ ಸುಮನಹಳ್ಳಿ ವಿದ್ಯುತ್ ಚಿತಾಗಾರ, ಕೆಂಗೇರಿ ಉಪನಗರ, ಕೋಮಘಟ್ಟ ಮುಖ್ಯ ರಸ್ತೆ, ಬಂಡೆಮಠ ಕೆಂಗೇರಿ ವಿದ್ಯುತ್ ಚಿತಾಗಾರ, ಬನಶಂಕರಿಯ ಯಾರಬ್ ನಗರದ ಬನಶಂಕರಿ ವಿದ್ಯುತ್ ಚಿತಾಗಾರಗಳಲ್ಲಿ ಈ ನಿಯಮ ಜಾರಿಯಲ್ಲಿರುತ್ತದೆ. ಹೆಚ್ಚಿನ ಮಾಹಿತಿಗೆ ಇಇ (ವಿದ್ಯುತ್) ನಾಗೇಶ್&zwnj; ಅವರ ಮೊಬೈಲ್ ಸಂಖ್ಯೆ 9480688528 ಸಂಪರ್ಕಿಸಬಹುದು.&lt;/p&gt;&lt;p&gt;ಮಣ್ಣಿನಲ್ಲಿ ಹೂಳುವುದು, ಕಟ್ಟಿಗೆಯಿಂದ ಸುಡಲಾಗುವ ಶವಸಂಸ್ಕಾರ ಪದ್ಧತಿಯಲ್ಲಿ ಯಾವುದೇ ದೂರುಗಳು ಬಂದಿಲ್ಲ. ಆದರೆ, ವಿದ್ಯುತ್ ಚಿತಾಗಾರದಲ್ಲಿ ಚಟ್ಟ, ಮಡಿಕೆ, ಪೂಜಾ ಸಾಮಗ್ರಿಗಳಿಗೆ ಹಾಗೂ ಪಾಲಿಕೆಗೆ ಎಂದು ಹೇಳಿ ಕೆಲ ವ್ಯಕ್ತಿಗಳು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಕಾರಣದಿಂದಾಗಿ ಎಲ್ಲಾ ವಿದ್ಯುತ್ ಚಿತಾಗಾರದ ಎಂಜಿನಿಯರ್&zwnj;ಗಳನ್ನು ಒಳಗೊಂಡು ಸಭೆ ನಡೆಸಿ ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಪಶ್ಚಿಮ ಪಾಲಿಕೆ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಕನ್ನಡಪ್ರಭಕ್ಕೆ ತಿಳಿಸಿದರು. ಇಲ್ಲಿಯವರೆಗೆ ಖಾಸಗಿ ವ್ಯಕ್ತಿಗಳು ವೆಬ್ ಸೈಟ್&zwnj;ನಲ್ಲಿ ಬುಕ್ ಮಾಡಿ ಅತಿ ಹೆಚ್ಚಿನ ಮೊತ್ತವನ್ನು ಕುಟುಂಬದವರಿಂದ ವಸೂಲು ಮಾಡುತ್ತಿದ್ದರು. ಈ ಕಾರಣದಿಂದಾಗಿ ಪಾಲಿಕೆಯಿಂದ ಕೇವಲ 250 ಶುಲ್ಕ ಹಾಗೂ ಅಧಿಕೃತ ವೆಬ್ ಸೈಟ್&zwnj;ನಲ್ಲಿ ಬುಕ್ ಮಾಡಬೇಕು. ಇದು ನಿಯಮ, ಹಣ ಇರುವವರು ಎಷ್ಟು ಬೇಕಾದರೂ ವೆಚ್ಚ ಮಾಡಿ ಶವಸಂಸ್ಕಾರ ಮಾಡಬಹುದು ಎಂದು ಆಯುಕ್ತರು ತಿಳಿಸಿದರು.&lt;/p&gt;&lt;p&gt;ಒಂದು ವೇಳೆ ಹೂಳುವುದು, ಕಟ್ಟಿಗೆಯಿಂದ ಸುಡುವ ಶವಸಂಸ್ಕಾರ ಪದ್ಧತಿಯಲ್ಲಿ ಈಗ ಸಮಸ್ಯೆಗಳೇನಾದರೂ ಇದ್ದಲ್ಲಿ ಸಾರ್ವಜನಿಕರು ಆಯುಕ್ತರು, ಪಶ್ಚಿಮ ನಗರಪಾಲಿಕೆ ವಿಭಾಗ, 18ನೇ ಕ್ರಾಸ್ ರಸ್ತೆ, ಐಡಿಯಲ್ ಹೋಮ್ಸ್ ಟೌನ್ ಶಿಪ್, ರಾಜ ರಾಜೇಶ್ವರಿ ನಗರ, ಬೆಂಗಳೂರು-560098 ದೂರು ಸಲ್ಲಿಸಬಹುದು.&lt;/p&gt;&lt;h2&gt;&lt;strong&gt;ಉತ್ತರ ಪಾಲಿಕೆಯಿಂದಲೂ ಮಾರ್ಗಸೂಚಿ&lt;/strong&gt;&lt;/h2&gt;&lt;p&gt;ಬೆಂಗಳೂರು: ಉತ್ತರ ಪಾಲಿಕೆ ವಿಭಾಗದಲ್ಲಿ ಇರುವ ವಿದ್ಯುತ್ ಚಿತಾಗಾರಗಳಲ್ಲಿ ಸ್ಲಾಟ್ ಗಳನ್ನು ಕಾಯ್ದಿರಿಸುವ ಸಂದರ್ಭ ಗೂಗಲ್&zwnj;ನಲ್ಲಿ ಕಂಡುಬರುವ ನಕಲಿ ಜಾಲತಾಣಗಳನ್ನು ಸಂಪರ್ಕಿಸದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗಳನ್ನು ಸಂಪರ್ಕಿಸಲು ಉತ್ತರ ಪಾಲಿಕೆ ತಿಳಿಸಿದೆ. ಈ ವ್ಯಾಪ್ತಿಯಲ್ಲಿ ಚಿರಶಾಂತಿಧಾಮ ವಿದ್ಯುತ್ ಚಿತಾಗಾರ, ಹೆಬ್ಬಾಳ ಕೆಂಪಾಪುರ, ಮುಕ್ತಿಧಾಮ ವಿದ್ಯುತ್ ಚಿತಾಗಾರ, ಮೇಡಿ ಅಗ್ರಹಾರ,ಇವುಗಳಲ್ಲಿ ಸ್ಲಾಟ್ ಕಾಯ್ದಿರಿಸಲು ಜಿಬಿಎ ವೆಬ್ ಸೈಟ್ ಗಳಾದ https:apps.bbmp.gov.in/crematorium/forms/onlinebookingfrm.aspx, ಹಾಗೂ https:site.bbmp.gov.in/onlinecrematoriumprocessflow.html ಇವುಗಳನ್ನು ಸಂಪರ್ಕಿಸಲು ಪಾಲಿಕೆ ಮನವಿ ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-crematorium-online-booking-bbmp-mandatory-fee-guidelines-san/articleshow-q5u1edv"/>
        </item>
        <item>
            <title><![CDATA[ಕರ್ನಾಟಕದ ಅಡಕೆಗೆ ಮಹಾರಾಷ್ಟ್ರ ಕಿರಿಕ್; ವರ್ತಕರಿಗೆ ಸಂಕಷ್ಟ..! ಅಡಕೆ ಖರೀದಿಗೆ ದೊಡ್ಡ ಹೊಡೆತ]]></title>
            <link>https://kannada.asianetnews.com/state/35-arecanut-laden-trucks-held-up-in-maharashtra-karnataka-traders-fear-major-supply-disruption-kvn/articleshow-k5eedwi</link>
            <guid isPermaLink="true">https://kannada.asianetnews.com/state/35-arecanut-laden-trucks-held-up-in-maharashtra-karnataka-traders-fear-major-supply-disruption-kvn/articleshow-k5eedwi</guid>
            <pubDate>Sat, 20 Jun 2026 09:03:25 +0530</pubDate>
            <description><![CDATA[ಮಲೆನಾಡಿನಿಂದ ಉತ್ತರ ಭಾರತಕ್ಕೆ ಸಾಗಿಸುತ್ತಿದ್ದ ಸುಮಾರು 35 ಅಡಕೆ ಲಾರಿಗಳನ್ನು ಮಹಾರಾಷ್ಟ್ರದ ಅಧಿಕಾರಿಗಳು ತಪಾಸಣೆ ನೆಪದಲ್ಲಿ ತಡೆಹಿಡಿದಿದ್ದಾರೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಅಡಕೆ ನಿಗದಿತ ಸಮಯಕ್ಕೆ ತಲುಪದೆ ವರ್ತಕರು ನಷ್ಟ ಅನುಭವಿಸುತ್ತಿದ್ದು, ಇದು ವ್ಯವಸ್ಥಿತ ಕಿರುಕುಳ ಎಂದು ಆರೋಪಿಸಿದ್ದಾರೆ. ಈ ಪರಿಸ್ಥಿತಿ ಮುಂದುವರಿದರೆ ಉತ್ತರ ಭಾರತದ ಅಡಕೆ ಖರೀದಿಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01gfshf8x2p72bk1pkgv7exbx3,imgname-areca.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೋಪಾಲ್ ಯಡಗೆರೆ, ಕನ್ನಡಪ್ರಭ ವಾರ್ತೆ&lt;/strong&gt;&lt;/p&gt;&lt;p&gt;ಶಿವಮೊಗ್ಗ: ಮಲೆನಾಡು, ಕರಾವಳಿಯಿಂದ ಉತ್ತರ ಭಾರತದ ಖರೀದಿದಾರರಿಗೆ ಪೂರೈಕೆ ಮಾಡಲು ಕೊಂಡೊಯ್ಯುತ್ತಿದ್ದ ಸುಮಾರು 35 ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್&zwnj;ಡಿಎ) ಇಲಾಖೆಯ ಅಧಿಕಾರಿಗಳು ತಪಾಸಣೆ (ಕಳಪೆ ಗುಣಮಟ್ಟ) ನೆಪದಲ್ಲಿ ತಡೆ ಹಿಡಿದಿದ್ದಾರೆ. ಇದರಿಂದಾಗಿ ಅಡಕೆ ತಲುಪಬೇಕಾದ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪುತ್ತಿಲ್ಲ. ಇದು ವರ್ತಕರ ಚಿಂತೆಗೆ ಕಾರಣವಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೆ ಉತ್ತರ ಭಾರತದಿಂದ ಅಡಕೆ ಖರೀದಿಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.&lt;/p&gt;&lt;p&gt;ಮಹಾರಾಷ್ಟ್ರದ ನಾಗ್ಪುರದ ಕಾಂಪ್ಟಿಯಲ್ಲಿ ತಡೆಹಿಡಿಯಲಾಗಿರುವ ಈ ಲಾರಿಗಳು ಶಿವಮೊಗ್ಗ, ಮಂಗಳೂರು, ಶಿರಸಿ ಭಾಗದಿಂದ ಹೋಗಿರುವಂತಹವು. ಈ ಎಲ್ಲಾ ಲಾರಿಗಳು ಮಹಾರಾಷ್ಟ್ರದ ಮೂಲಕ ಉತ್ತರ ಭಾರತದ ರಾಜ್ಯಗಳಿಗೆ ತೆರಳುತ್ತವೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಹರ್ಯಾಣದ ಕಡೆ ಹೋಗುವ ಅಡಕೆ ತುಂಬಿದ ಲಾರಿಗಳು ಮಹಾರಾಷ್ಟ್ರದ ಮೂಲಕವೇ ತೆರಳುತ್ತವೆ.&lt;/p&gt;&lt;p&gt;ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್&zwnj;ಡಿಎ) ಇಲಾಖೆಯ ಅಧಿಕಾರಿಗಳು ಈ ಲಾರಿಗಳನ್ನು ತಡೆದು ಪರಿಶೀಲನೆ ನಡೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಪರಿಶೀಲನೆ ನೆಪದಲ್ಲಿ ತಿಂಗಳುಗಟ್ಟಲೆ ಲಾರಿಯನ್ನು ಅಲ್ಲಿಯೇ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಅಡಕೆ ತಲುಪಬೇಕಾದ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪುತ್ತಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ಅಡಕೆ ಖರೀದಿ ಪ್ರಕ್ರಿಯೆಯೇ ನಿಲ್ಲುವ ಆತಂಕ ಎದುರಾಗಿದೆ.&lt;/p&gt;&lt;p&gt;ಇಲ್ಲಿ ತಪಾಸಣೆ ನಡೆಸುವ ಅಧಿಕಾರಿಗಳು, ಲಾರಿಯಲ್ಲಿರುವ ಅಡಕೆ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಅದರ ವರದಿ ಬರಲು ಒಂದು ತಿಂಗಳು ಬೇಕು. ಅಲ್ಲಿಯವರೆಗೂ ಲಾರಿಗಳನ್ನು ಅಲ್ಲಿಯೇ ನಿಲ್ಲಿಸಬೇಕಿದೆ. ಇದರಿಂದಾಗಿ ಲಾರಿ ಚಾಲಕರು ರಸ್ತೆಯಲ್ಲೇ ಉಳಿದರೆ, ವ್ಯಾಪಾರಿಗಳು ತೊಡಗಿಸಿರುವ ಕೋಟ್ಯಂತರ ರುಪಾಯಿ ಬಂಡವಾಳಕ್ಕೆ ಸಮಸ್ಯೆ ಎದುರಾಗುತ್ತದೆ. ಒಂದು ಲೋಡ್&zwnj;ಗೆ ಅಂದಾಜು ₹1.40 ಕೋಟಿ ಮೌಲ್ಯ ಇದೆ. ಸದ್ಯ ಇಂತಹ 35 ಅಡಕೆ ಲಾರಿಗಳನ್ನು (ಸುಮಾರು ₹50 ಕೋಟಿ ಮೌಲ್ಯ) ಮಹಾರಾಷ್ಟ್ರದಲ್ಲಿ ತಡೆಹಿಡಿಯಲಾಗಿದೆ.&lt;/p&gt;&lt;h2&gt;&lt;strong&gt;ಇದೊಂದು ವ್ಯವಸ್ಥಿತ ಕಿರುಕುಳ: ವರ್ತಕರ ಆರೋಪ&lt;/strong&gt;&lt;/h2&gt;&lt;p&gt;&lsquo;ಈ ಅಡಕೆಗೆ ಜಿಎಸ್&zwnj;ಟಿ, ಇ-ವೇ ಬಿಲ್ ಸೇರಿ ಎಲ್ಲಾ ಸೂಕ್ತ ದಾಖಲೆಗಳಿದ್ದರೂ, ಕೇವಲ ತೇವಾಂಶ ಹಾಗೂ ಅಡಕೆ ಹಾಳಾಗದಂತೆ ದುವಾ ಬಳಸುತ್ತಾರೆಂಬ ನೆಪ ಒಡ್ಡಿ ಲಾರಿಗಳನ್ನು ತಡೆ ಹಿಡಿಯುತ್ತಿದ್ದಾರೆ. ಇದೊಂದು ವ್ಯವಸ್ಥಿತ ಕಿರುಕುಳ&rsquo; ಎಂಬುದು ಶಿವಮೊಗ್ಗ ಸಹಕಾರಿ ಸಂಘಗಳು ಹಾಗೂ ವರ್ತಕರ ಆರೋಪ.&lt;/p&gt;&lt;p&gt;ನಾವು ಮಹಾರಾಷ್ಟ್ರ ಮೂಲಕ ಉತ್ತರ ಭಾರತದ ರಾಜ್ಯಗಳಿಗೆ ಅಡಕೆಯನ್ನು ಕಳುಹಿಸುತ್ತೇವೆಯೇ ಹೊರತು ಮಹಾರಾಷ್ಟ್ರದಲ್ಲಿ ಅಡಕೆ ಇಳಿಸುವುದಿಲ್ಲ. ನಾವು ಲಾರಿಗಳಲ್ಲಿ ಅಡಕೆಯನ್ನು ಮಾತ್ರ ಕಳಿಸುತ್ತಿರುವುದೇ ಹೊರತು, ಬ್ಯಾನ್ ಆಗಿರುವ ಸ್ವೀಟ್ ಸುಫಾರಿ ಅಥವಾ ಗುಟ್ಕಾವನ್ನು ನಾವು ಸಾಗಿಸುತ್ತಿಲ್ಲ. ಆದರೂ, ಮಹಾರಾಷ್ಟ್ರದ ಅಧಿಕಾರಿಗಳು ತಪಾಸಣೆ ನೆಪದಲ್ಲಿ ತಿಂಗಳುಗಟ್ಟಲೇ ಲಾರಿಗಳನ್ನು ತಡೆ ಹಿಡಿಯುತ್ತಿದ್ದಾರೆ.&lt;/p&gt;&lt;p&gt;ಕೇಳಿದರೆ, ಔರಂಗಾಬಾದ್&zwnj;ನ ಲ್ಯಾಬ್&zwnj;ಗೆ ಸ್ಯಾಂಪಲ್&zwnj;ಗಳನ್ನು ಕಳುಹಿಸುತ್ತೇವೆ. ಅದರ ರಿಪೋರ್ಟ್ ಆಧಾರದ ಮೇಲೆ ಮಾಲಿನ ಗುಣಮಟ್ಟ ನಿರ್ಧರಿಸಲಾಗುವುದು. ಅಡಕೆಯ ಗುಣಮಟ್ಟ ಸರಿ ಇಲ್ಲ ಎಂದರೆ ಅದನ್ನು ಸುಟ್ಟು ಹಾಕುತ್ತೇವೆ, ಇಲ್ಲ ದಂಡ ಹಾಕುತ್ತೇವೆ. ಈಗಾಗಲೇ ಹಲವು ಟ್ರಾನ್ಸ್&zwnj;ಪೋರ್ಟ್&zwnj; ಮಾಲೀಕರ ಮೇಲೆ, ಕಂಪನಿಗಳ ಮೇಲೆ ಮತ್ತು ಪೂರೈಕೆದಾರರ ಮೇಲೆ ಕೇಸು ಹಾಕಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಬೆದರಿಕೆ ಹಾಕುತ್ತಾರೆ ಎಂಬುದು ವರ್ತಕರ ಅಳಲು.&lt;/p&gt;&lt;p&gt;ಈ ರೀತಿಯಾದರೆ ಬೆಳೆಗಾರರು ಹಾಗೂ ವರ್ತಕರ ಕಥೆ ಏನು? ಇದರ ನಷ್ಟವನ್ನು ಯಾರು ತುಂಬಿಕೊಡುತ್ತಾರೆ? ಎಂದು ಆರೋಪಿಸಿರುವ ಶಿವಮೊಗ್ಗ ಸಹಕಾರಿ ಸಂಘಗಳು ಹಾಗೂ ವರ್ತಕರು, ಸಂಸದ ಬಿ.ವೈ.ರಾಘವೇಂದ್ರ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಅಡಕೆ ಬೆಳೆಗಾರರಿಗೆ ಸಂಕಷ್ಟ ತಪ್ಪಿದ್ದಲ್ಲ. ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತಲೇ ಇದೆ. ರೋಗ-ಬಾಧೆಗಳಿಂದ ಹೈರಾಣಾಗಿರುವ ಮಲೆನಾಡಿನ ಅಡಕೆಗೀಗ ಮಹಾರಾಷ್ಟ್ರ ಅಧಿಕಾರಿಗಳ ಈ ಕಿರುಕುಳ ಹೊಸ ಸಂಕಷ್ಟವನ್ನು ತಂದೊಡ್ಡಿದೆ. ಈ ಸಂಕಷ್ಟ ವರ್ತಕರಷ್ಟೇ ಅಲ್ಲ, ಬೆಳೆಗಾರರೂ ಆತಂಕಪಡುವಂತೆ ಮಾಡಿದೆ. ಮಹಾರಾಷ್ಟ್ರದ ಅಧಿಕಾರಿಗಳ ಕೆಲಸದಿಂದ ಅಡಕೆ ಖರೀದಿಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ ಎನ್ನುತ್ತಾರೆ ವರ್ತಕರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/35-arecanut-laden-trucks-held-up-in-maharashtra-karnataka-traders-fear-major-supply-disruption-kvn/articleshow-k5eedwi"/>
        </item>
        <item>
            <title><![CDATA[Bengaluru Balcony Commode: ಬೆಂಗಳೂರಿನ ಮನೆಯ ಬಾಲ್ಕನಿಯಲ್ಲೇ ಕಮೋಡ್‌ ಇಟ್ಟ ಕಿಲಾಡಿ; ಆ ಹುಡುಗಿ ಕಂಗಾಲು!]]></title>
            <link>https://kannada.asianetnews.com/karnataka-districts/a-commode-has-been-placed-in-the-balcony-of-a-house-in-bengaluru/articleshow-1gnusl4</link>
            <guid isPermaLink="true">https://kannada.asianetnews.com/karnataka-districts/a-commode-has-been-placed-in-the-balcony-of-a-house-in-bengaluru/articleshow-1gnusl4</guid>
            <pubDate>Sat, 20 Jun 2026 08:56:47 +0530</pubDate>
            <description><![CDATA[&lt;p&gt;Modern Commode in Bengaluru Home Balcony: ಬೆಂಗಳೂರಿನಲ್ಲಿ ಅಪಾರ್ಟ್&zwnj;ಮೆಂಟ್&zwnj; ಅಥವಾ ಮನೆಯೊಂದರ ಬಾಲ್ಕನಿಯಲ್ಲಿ ಮಾಡರ್ನ್&zwnj; ಕಮೋಡ್&zwnj; ಇಡಲಾಗಿದೆ. ಇದನ್ನು ಇಬ್ಬರು ಹುಡುಗಿಯರು ವಿಡಿಯೋ ಮಾಡಿ ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvhgyj308p9xhmmhatw81nnc,imgname-new-project---2026-06-20t084427.541-1781925890144.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಸಾಕಷ್ಟು ವಿಷಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಬಾಡಿಗೆ ಮನೆ ಸಿಗಲು ಕೂಡ, ಉತ್ತಮ ಜೀವನಶೈಲಿಯನ್ನು ಹೊಂದಲು ಹಣ ಬೇಕೇ ಬೇಕು. ಹೀಗಿರುವಾಗ ಬೆಂಗಳೂರಿನಲ್ಲಿ ಬಾಲ್ಕನಿಯೊಂದರಲ್ಲಿ ಮಾಡರ್ನ್&zwnj; ಕಮೋಡ್&zwnj; ( Modern Commode in Bengaluru Home Balcony ) ಇಡಲಾಗಿದೆ.&lt;/p&gt;&lt;p&gt;ಸೋಶಿಯಲ್&zwnj; ಮೀಡಿಯಾದಲ್ಲಿ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಈ ವಿಡಿಯೋ ಶೇರ್&zwnj; ಆಗಿದೆ. ಶೇರ್ ಆಗಿರುವ ಈ ವಿಡಿಯೋದಲ್ಲಿ, ಮನೆಯ ಹಿಂಭಾಗದ ರಸ್ತೆಗೆ ವಿರುದ್ಧವಾಗಿರುವ ಕಡೆ ಬಾಲ್ಕನಿ ಇಡಲಾಗಿದೆ. ಅಲ್ಲಿ ವೆಸ್ಟರ್ನ್&zwnj; ಕಮೋಡ್&zwnj; ಇಡಲಾಗಿದೆ. ಅಷ್ಟೇ ಅಲ್ಲದೆ ಆ ಬಾಲ್ಕನಿಗೆ ಕಬ್ಬಿಣದ ಮೆಸ್&zwnj; ಹಾಕಲಾಗಿದೆ. ಆದರೆ ಇದೆಲ್ಲ ಪಾರದರ್ಶಕವಾಗಿದೆ.&lt;/p&gt;&lt;h2&gt;ನೀವು ಅಂದುಕೊಂಡಿದ್ದು ತಪ್ಪು&lt;/h2&gt;&lt;p&gt;ಇನ್ನೂ ಕೂಡ ಆ ಮನೆಯಲ್ಲಿ Renovation ಕೆಲಸ ಆಗುತ್ತಿರಬಹುದು. ಹಳೆಯ ಕಮೋಡ್ ಕಿತ್ತಿಟ್ಟಿದ್ದು, ಅದನ್ನು ಬಾಲ್ಕನಿಯಲ್ಲಿ ತಂದಿಟ್ಟಿರಬಹುದು. ಆಗ ಈ ವಿಡಿಯೋ ಮಾಡಿರಬಹುದು, ಮನೆಯ ಒಳಗಿನ ಪೈಪ್&zwnj;ಲೈನ್ ಲಿಂಕ್ ತಪ್ಪಿ ಹೋಗಿರಬಹುದು, ಬಾಲ್ಕನಿಯ ಡ್ರೈನೇಜ್ ಪೈಪ್&zwnj;ಗೆ ಇದನ್ನು ಕನೆಕ್ಟ್ ಮಾಡಿದ್ದರೂ ಮಾಡಿರಬಹುದು, ಯಾರಾದರೂ ಈ ಟಾಯ್ಲೆಟ್&zwnj;ನ್ನು ನಿಜವಾಗಿಯೂ ಬಳಸುತ್ತಾರಾ? ಸುತ್ತಲೂ ಯಾವುದೇ ಗೋಡೆ ಕೂಡ ಇಲ್ಲ. ಸದ್ಯಕ್ಕೆ ಇದನ್ನು ಅಲ್ಲಿಯೇ ಇಟ್ಟಿದ್ದು, ಆಮೇಲೆ ಬೇರೆ ಕಡೆ ಇಡುವ ಪ್ಲ್ಯಾನ್&zwnj; ಕೂಡ ಇರಬಹುದು ಎಂದು ನೀವು ಅಂದುಕೊಂಡಿರಬಹುದು, ಆದರೆ ಇದು ಸತ್ಯ ಅಲ್ಲ.&lt;/p&gt;&lt;h2&gt;ಜನರು ಏನಂದ್ರು?&lt;/h2&gt;&lt;p&gt;ಈ ಟಾಯ್ಲೆಟ್&zwnj; ವರ್ಕ್&zwnj; ಆಗ್ತಿದೆ ಎಂದು ಕೂಡ ಹುಡುಗಿ ಚೆಕ್&zwnj; ಮಾಡಿ ಹೇಳಿದ್ದಾರೆ. ಹೀಗಾಗಿ ಅನೇಕರು ಈ ವಿಡಿಯೋ ನೋಡಿ ಕಾಮೆಂಟ್&zwnj; ಮಾಡಿದ್ದಾರೆ. &amp;nbsp;ಇದು ಪ್ರಕೃತಿಯ ಮಧ್ಯೆ ಪ್ರಕೃತಿ ಕರೆಯನ್ನು ಆಲಿಸಲು ಅತ್ಯಾಧುನಿಕ ಐಡಿಯಾ, ಬೆಂಗಳೂರಿನಲ್ಲಿ ಜಾಗದ ಬೆಲೆ ಎಷ್ಟು ಹೆಚ್ಚಾಗಿದೆ ಅಂದರೆ ಬಾಲ್ಕನಿಯನ್ನೂ ಬಾತ್&zwnj;ರೂಮ್ ಆಗಿ ಬಳಸುತ್ತಿದ್ದಾರೆ ಎಂದೆಲ್ಲ ಕೆಲವರು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಮನೆ ಅಥವಾ ಪಿಜಿ ರೂಮ್&zwnj;ಗಳು ತುಂಬ ಚಿಕ್ಕದಾಗಿರುತ್ತವೆ. ಇದರ ಜೊತೆಗೆ ಅಟ್ಯಾಚ್&zwnj; ಬಾತ್&zwnj;ರೂಮ್&zwnj; ಅನೇಕರಿಗೆ ಬೇಕು. ಜಾಗದ ಸಮಸ್ಯೆಯಿಂದ ಇನ್ನೊಂದು ಟಾಯ್ಲೆಟ್&zwnj; ಇರಲಿ ಎಂದು ಕೂಡ ಹೀಗೆ ಮಾಡಿರಬಹುದು ಎಂದು ಕೆಲವರು ಹೇಳಿದ್ದಾರೆ.&amp;nbsp;&lt;/p&gt;&lt;h2&gt;ಅಸಲಿ ಕಾರಣ ಏನು?&lt;/h2&gt;&lt;p&gt;ವಿದೇಶಗಳಲ್ಲಿ 'ಓಪನ್ ಏರ್ ಬಾತ್&zwnj;ರೂಮ್' ಇರುತ್ತದೆ. ಆದರೆ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಜನರು ಇದ್ದಾರೆ, ಹೀಗಿರುವಾಗ ಈ ರೀತಿ ಮಾಡಿರೋದು ಸರಿ ಅಲ್ಲ ಎಂದು ಕೂಡ ಕೆಲವರು ಹೇಳಿದ್ದಾರೆ. ನಿಜಕ್ಕೂ ಯಾಕೆ ಈ ರೀತಿ ಮಾಡಿದ್ದರು ಎಂದು ಆ ಮನೆಯವರೇ ಹೇಳಬೇಕಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Padmashree Bhat</dc:creator>
            <atom:link href="https://kannada.asianetnews.com/karnataka-districts/a-commode-has-been-placed-in-the-balcony-of-a-house-in-bengaluru/articleshow-1gnusl4"/>
        </item>
        <item>
            <title><![CDATA[Namma Metro: ಮೂರನೇ ಹಂತದ ಯೋಜನೆಗೆ 3,627 ಮರಗಳಿಗೆ ಕೊಡಲಿ ಹಾಕಲು BMRCL ಪ್ರಸ್ತಾವನೆ!]]></title>
            <link>https://kannada.asianetnews.com/state/bmrcl-proposes-to-clear-3627-trees-for-namma-metro-phase-3-project-bengaluru-rav/articleshow-bs30p33</link>
            <guid isPermaLink="true">https://kannada.asianetnews.com/state/bmrcl-proposes-to-clear-3627-trees-for-namma-metro-phase-3-project-bengaluru-rav/articleshow-bs30p33</guid>
            <pubDate>Sat, 20 Jun 2026 08:26:38 +0530</pubDate>
            <description><![CDATA[&lt;p&gt;ನಮ್ಮ ಮೆಟ್ರೋ ಮೂರನೇ ಹಂತದ ಹೊಸಹಳ್ಳಿ-ಕಡಬಗೆರೆ ಮಾರ್ಗ ನಿರ್ಮಾಣಕ್ಕಾಗಿ 3627 ಮರಗಳನ್ನು ತೆರವುಗೊಳಿಸಲು ಬಿಎಂಆರ್&zwnj;ಸಿಎಲ್&zwnj; ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಗಾಗಿ ಹೊಸಹಳ್ಳಿ, ಕಾಮಾಕ್ಷಿಪಾಳ್ಯ, ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮರಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗೆ ಆಹ್ವಾನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvhf4ga52jsn83083nzrmnkh,imgname----------------------23--1781923987780.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.20): &lt;/strong&gt;ನಮ್ಮ ಮೆಟ್ರೋ(Namma Metro) ಮೂರನೇ ಹಂತದ ಹೊಸಹಳ್ಳಿ ನಿಲ್ದಾಣದಿಂದ ಕಡಬಗೆರೆ ನಿಲ್ದಾಣದವರೆಗಿನ ಮಾರ್ಗ ನಿರ್ಮಾಣಕ್ಕಾಗಿ 3627 ಮರಗಳ ತೆರವಿಗೆ ಬಿಎಂಆರ್&zwnj;ಸಿಎಲ್&zwnj;ನಿಂದ ಜಿಬಿಎಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.&lt;/p&gt;&lt;h2&gt;3627 ಮರಗಳ ತೆರವಿಗೆ ಬಿಎಂಆರ್&zwnj;ಸಿಎಲ್ ಪ್ರಸ್ತಾವನೆ&lt;/h2&gt;&lt;p&gt;ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆ ಮೆಟ್ರೋ ನಿಲ್ದಾಣದವರೆಗಿನ 12.50 ಕಿಮೀ ಉದ್ದದ ಎಲಿವೇಟೆಡ್&zwnj; ಮಾರ್ಗ ನಿರ್ಮಾಣಕ್ಕೆ ಬಿಎಂಆರ್&zwnj;ಸಿಎಲ್&zwnj; ಯೋಜನೆ ರೂಪಿಸಿದೆ. ಈ ಮಾರ್ಗದಲ್ಲಿ ಒಟ್ಟು 9 ಎಲಿವೇಟೆಡ್&zwnj; ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿದೆ. ಅದರ ಜತೆಗೆ ವಯಾಡಕ್ಟ್&zwnj;, ಪೋರ್ಟಲ್&zwnj; ಪಿಯರ್ಸ್&zwnj;, ಸರ್ವೀಸ್&zwnj; ರಸ್ತೆ, ಯುಟಿಲಿಟಿ ಡೈವರ್ಷನ್&zwnj; ಹಾಗೂ ರಸ್ತೆ ವಿಸ್ತರಣೆ ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಬರುವ ವಿವಿಧ ಜಾತಿಯ 2426 ಮರಗಳು ಹಾಗೂ 1201 ಅಡಕೆ ಮರಗಳ ತೆರವಿಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.&lt;/p&gt;&lt;h3&gt;ಎಲ್ಲೆಲ್ಲಿ ಮರಗಳ ತೆರವು?&lt;/h3&gt;&lt;p&gt;ಹೊಸಹಳ್ಳಿ, ಕೆಎಚ್&zwnj;ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್&zwnj;, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್&zwnj; ಲೇಔಟ್&zwnj; ಹಾಗೂ ಕಡಬಗೆರೆ ಪ್ರದೇಶಗಳ ಮರಗಳನ್ನು ತೆರವು ಮಾಡಲು ಗುರುತಿಸಲಾಗಿದೆ.&lt;/p&gt;&lt;p&gt;ಬಿಎಂಆರ್&zwnj;ಸಿಎಲ್&zwnj; ಪ್ರಸ್ತಾವನೆಗೆ ಸಂಬಂಧಿಸಿದಂತೆ ಇದೀಗ ಜಿಬಿಎ ಜೂ.17ರಂದು ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿದೆ. ಮುಂದಿನ 10 ದಿನಗಳಲ್ಲಿ ಸಾರ್ವಜನಿಕರು ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅದಾದ ನಂತರ ಮರಗಳ ತೆರವಿಗೆ ಸಂಬಂಧಿಸಿದಂತೆ ಜನರ ಅಭಿಪ್ರಾಯದಂತೆ ಜಿಬಿಎ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bmrcl-proposes-to-clear-3627-trees-for-namma-metro-phase-3-project-bengaluru-rav/articleshow-bs30p33"/>
        </item>
        <item>
            <title><![CDATA[ಕರಾವಳಿ ಟೂರಿಸಂಗೆ ರಿಷಬ್ ಶೆಟ್ಟಿ ರಾಯಭಾರಿ?  ಡಿವೈನ್ ಸ್ಟಾರ್ ಬೆನ್ನುತಟ್ಟಿದ ಡಿಕೆಶಿ, ಫೋಟೋ ವೈರಲ್!]]></title>
            <link>https://kannada.asianetnews.com/gallery/state/actor-rishab-shetty-ambassador-for-coastal-tourism-karnataka-govt-discussion-in-cabinet-today-2npp1ug</link>
            <guid isPermaLink="true">https://kannada.asianetnews.com/gallery/state/actor-rishab-shetty-ambassador-for-coastal-tourism-karnataka-govt-discussion-in-cabinet-today-2npp1ug</guid>
            <pubDate>Sat, 20 Jun 2026 07:14:55 +0530</pubDate>
            <description><![CDATA[&lt;p&gt;ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ನಟ ರಿಷಬ್&zwnj; ಶೆಟ್ಟಿ ಅವರನ್ನು ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, &amp;nbsp;ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ, ಸಿಎಂ ಡಿಕೆ ಶಿವಕುಮಾರ್ ರಿಷಬ್ ಶೆಟ್ಟಿ ಅವರ ಬೆನ್ನು ತಟ್ಟಿರುವ ಫೋಟೋ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvha7ddyhj8ze5mfbdkd2gnx,imgname----------------------21--1781918840254.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ನಟ ರಿಷಬ್&zwnj; ಶೆಟ್ಟಿ ಅವರನ್ನು ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, &amp;nbsp;ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ, ಸಿಎಂ ಡಿಕೆ ಶಿವಕುಮಾರ್ ರಿಷಬ್ ಶೆಟ್ಟಿ ಅವರ ಬೆನ್ನು ತಟ್ಟಿರುವ ಫೋಟೋ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ನಟ ರಿಷಬ್&zwnj; ಶೆಟ್ಟಿ ಅವರನ್ನು ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಶನಿವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ ಎಂದು ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ವಿಧಾನಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರ ಅಧ್ಯಕ್ಷತೆಯಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಸಭೆಯಲ್ಲಿ ಕೂಡ ವಿಚಾರ ಅನೌಪಚಾರಿಕವಾಗಿ ಚರ್ಚೆಯಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲು ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ.&lt;/p&gt;&lt;img&gt;&lt;p&gt;ವಿಶೇಷವಾಗಿ ಶುಕ್ರವಾರ ನಡೆದ ಸಭೆಯಲ್ಲಿ ರಿಷಬ್&zwnj; ಶೆಟ್ಟಿ ಅವರು ಕೂಡ ಹಾಜರಿದ್ದರು. ಮುಖ್ಯಮಂತ್ರಿ ಅವರು ರಿಷಬ್&zwnj; ಶೆಟ್ಟಿ ಅವರನ್ನು ಬೆನ್ನು ತಟ್ಟಿರುವ ಫೋಟೋ ಕೂಡ ಬಹಿರಂಗವಾಗಿದೆ. ಆದರೆ, ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದರೂ ಸಂಪುಟ ಸಭೆಯ ಒಪ್ಪಿಗೆ ಬಳಿಕ ಅಧಿಕೃತವಾಗಿ ಪ್ರಕಟಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;img&gt;&lt;p&gt;ಶುಕ್ರವಾರ ಬೆಂಗಳೂರಿನ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಸಭೆಯಲ್ಲಿ ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜತೆಗೆ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸದ್ಯ ಅನುಮೋದಿಸಿರುವ ೪೫ ಯೋಜನೆಗಳಿಂದ ೪,೫೦೦ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು. ಅತಿ ಉದ್ದದ ಸಮುದ್ರ ತೀರಗಳು ಇರುವ ಪ್ರದೇಶಗಳಲ್ಲಿ ರಾಜ್ಯದ ಕರಾವಳಿಯೂ ಸೇರಿದೆ. ನಮ್ಮ ಪರಿಸರಕ್ಕೆ ಧಕ್ಕೆ ಆಗದಂತೆ ಸಮುದ್ರ ತೀರಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪರಿಗಣಿಸುವಂತೆ ಅವರು ಸೂಚಿಸಿದರು.&lt;/p&gt;&lt;img&gt;&lt;p&gt;ಕರಾವಳಿಯ ಜನಪದ ಕಲೆ, ಸಂಗೀತಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಡಿವೈನ್ ಸ್ಟಾರ್ ರಿಷಬ್&zwnj; ಶೆಟ್ಟಿ ಹೇಳಿದರು.&lt;/p&gt;&lt;p&gt;ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವುದರಿಂದ ಕೇರಳ-ಗೋವಾ-ಕರ್ನಾಟಕದ ಸಿನಿಮಾ ಜಗತ್ತಿಗೆ ಹೆಚ್ಚು ಅನುಕೂಲ. ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ತೊಂದರೆ ಆಗದಂತೆ ನಾನಾ ಅನುಮತಿಗಳನ್ನು ಪಡೆಯಲು ಏಕ ಗವಾಕ್ಷಿ (ಸಿಂಗಲ್&zwnj; ವಿಂಡೋ) ವ್ಯವಸ್ಥೆ ಜಾರಿಗೆ ಸಿಎಂ ಒಲವು ವ್ಯಕ್ತಪಡಿಸಿದರು. ಇದೇ ಸಂದರ್ಭ ಹೆಲಿ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡಲು ಸಿಎಂಗೆ ಉದ್ಯಮಿಗಳು ಮನವಿ ಮಾಡಿದರು.&lt;/p&gt;&lt;p&gt;ಈ ಸಭೆಯಲ್ಲಿ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ ಜೆ ಜಾರ್ಜ್, ಖ್ಯಾತ ನಟ ರಿಷಬ್ ಶೆಟ್ಟಿ, ಶಾಸಕರಾದ ಜಿ. ಟಿ. ದೇವೇಗೌಡ, ಸತೀಶ್ ಸೈಲ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಮತ್ತಿತರರು ಇದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/actor-rishab-shetty-ambassador-for-coastal-tourism-karnataka-govt-discussion-in-cabinet-today-2npp1ug"/>
        </item>
        <item>
            <title><![CDATA['ಈಗಲೇ ಕಾರು ಡೆಲಿವರಿ ಕೊಡಬೇಕು..' ಟೆಸ್ಟ್ ಡ್ರೈವ್ ವೇಳೆ ಸಿಗರೇಟು ಸೇದಬೇಡ ಅಂದಿದ್ದಕ್ಕೆ ಪೊರ್ಶೆ ಕಾರನ್ನೇ ಖರೀದಿಸಿದ್ದ ಶ್ರೀಕಿ!]]></title>
            <link>https://kannada.asianetnews.com/state/how-serial-hacker-sriki-bought-a-porsche-an-interesting-info-revealed-in-sit-investigation-rav/articleshow-6wgf2l1</link>
            <guid isPermaLink="true">https://kannada.asianetnews.com/state/how-serial-hacker-sriki-bought-a-porsche-an-interesting-info-revealed-in-sit-investigation-rav/articleshow-6wgf2l1</guid>
            <pubDate>Sat, 20 Jun 2026 07:51:40 +0530</pubDate>
            <description><![CDATA[&lt;p&gt;ಟೆಸ್ಟ್ ಡ್ರೈವ್ ವೇಳೆ ಪೊರ್ಶೆ ಕಾರಿನಲ್ಲಿ ಸಿಗರೇಟ್ ಸೇದಲು ಸಿಬ್ಬಂದಿ ಆಕ್ಷೇಪಿಸಿದ್ದಕ್ಕೆ, ಹ್ಯಾಕರ್ ಶ್ರೀಕಿ ಬಿಟ್ ಕಾಯಿನ್ ಬಳಸಿ ತಕ್ಷಣವೇ ಆ ಕಾರನ್ನು ಖರೀದಿಸಿದ್ದ ಕಾರಿನಲ್ಲಿ ಕುಳಿತು ಸಿಗರೇಟ್ ಸೇದಿ ಸಿಬ್ಬಂದಿಗೆ ಕಿಚಾಯಿಸಿದ್ದನು. ಈ ಘಟನೆಯು ಬಿಟ್ ಕಾಯಿನ್ ಹಗರಣದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krq9mfq88q9ypgwp6k7h7sdw,imgname-----------------------2026-05-16t075441.455-1778898321128.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಿರೀಶ್ ಮಾದೇನಹಳ್ಳಿ&lt;/strong&gt;&lt;/p&gt;&lt;p&gt;&lt;strong&gt;&amp;nbsp;ಬೆಂಗಳೂರು (ಜೂ.20): &lt;/strong&gt;ಟೆಸ್ಟ್ ಡ್ರೈವ್ ವೇಳೆ ಪೊರ್ಶೆ ಕಾರಿನಲ್ಲಿ ಸಿಗರೆಟ್ ಸೇದಲು ಶೋಂ ರೂಂ ಸಿಬ್ಬಂದಿ ಆಕ್ಷೇಪಿಸಿದ್ದರಿಂದ ರೊಚ್ಚಿಗೆದ್ದು ಆ ಕಾರನ್ನೇ ಬಿಟ್ ಕಾಯಿನ್ ಬಳಸಿ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಶ್ರೀಕಷ್ಣ ಅಲಿಯಾಸ್ ಶ್ರೀಕಿ(Sri Krishna alias Sriki) ಖರೀದಿಸಿದ್ದ ಕುತೂಹಲಕಾರಿ ಅಂಶ ವಿಶೇಷ ತನಿಖಾ ತಂಡದ (SIT) ತನಿಖೆಯಲ್ಲಿ ಪತ್ತೆಯಾಗಿದೆ.&lt;/p&gt;&lt;p&gt;ಬಿಟ್ ಕಾಯಿನ್ ಹಗರಣ(Bitcoin scam) ಸಂಬಂಧ ಶ್ರೀಕಿ ಹಾಗೂ ಆತನ ಸ್ನೇಹಿತರ ವಿರುದ್ಧ ತುಮಕೂರು ನ್ಯಾಯಾಲಯಕ್ಕೆ ಎಸ್&zwnj;ಐಟಿ ಆರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಕಾರು ಖರೀದಿ ಪ್ರಸಂಗವನ್ನು ಎಸ್&zwnj;ಐಟಿ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;ಶೋರೂಂ ಮುಂದೆ ಪೊರ್ಶೆ ಕಾರಲ್ಲಿ ಸಿಗರೇಟ್:&lt;/h2&gt;&lt;p&gt;ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ವೆಬ್&zwnj;ಸೈಟ್&zwnj;ಗಳಿಗೆ ಕನ್ನ ಹಾಕಿ ದೋಚಿದ ಹಣದಲ್ಲಿ ಶ್ರೀಕಿ ಹಾಗೂ ಆತನ ಸ್ನೇಹಿತರು ಮೋಜು ಮಸ್ತಿ ಮಾಡುತ್ತಿದ್ದರು. ಆತನ ಖಯಾಲಿ ಹೇಗಿತ್ತೆಂದರೆ ಒಂದೇ ದಿನ ಲಕ್ಷಾಂತರ ರು. ಮೌಲ್ಯದ ಪೊರ್ಶೆ ಕಾರನ್ನೇ ಖರೀದಿಸು&zwj;ವಷ್ಟರಮಟ್ಟಿಗಿತ್ತು.&lt;/p&gt;&lt;p&gt;ಒಂಬತ್ತು ವರ್ಷಗಳ ಹಿಂದೆ ತನ್ನ ಸ್ನೇಹಿತರ ಜತೆ ಹರಟುವಾಗ ಪೊರ್ಶೆ(Porsche car) ಖರೀದಿಸುವ ಉಮೇದು ಶ್ರೀಕಿಗೆ ಬಂದಿದೆ. ಆ ಕ್ಷಣವೇ ತಡಮಾಡದೆ ಗೆಳೆಯರ ಜತೆ ನಗರದಲ್ಲಿದ್ದ ಶೋ ರೂಂಗೆ ಆತ ಹೋಗಿದ್ದ. ಅಲ್ಲಿದ್ದ ಕಾರನ್ನು ಟೆಸ್ಟ್&zwnj; ಡ್ರೈವ್&zwnj; ಸಲುವಾಗಿ ತೆಗೆದುಕೊಂಡು ಹೋಗಿದ್ದ. ಆ ವೇಳೆ ಕಾರಿನೊಳಗೆ ಸಿಗರೆಟ್ ಸೇದಲು ಶ್ರೀಕಿ ಮುಂದಾಗಿದ್ದಾನೆ. ಇದಕ್ಕೆ ಶೋಂ ಸಿಬ್ಬಂದಿ ಆಕ್ಷೇಪಿಸಿದ್ದಾರೆ. ಇದಕ್ಕೆ ಕೆರಳಿದ ಆತ, ಕೂಡಲೇ ಟೆಸ್ಟ್&zwnj; ಡ್ರೈವ್ ಮೊಟಕುಗೊಳಿಸಿ ಶೋಂ ರೂಮ್&zwnj;ಗೆ ಮರಳಿದ್ದಾನೆ.&lt;/p&gt;&lt;p&gt;ಕಾರಿನಿಂದಿಳಿದು ಸೀದಾ ಶೋ ರೂಂನ ವ್ಯವಸ್ಥಾಪಕ ಬಳಿಗೆ ಹೋಗಿ &lsquo;ಪೊರ್ಶೆ ಬೆಲೆ ಎಷ್ಟು ಹೇಳು. ನಾನು ನಿನ್ನ ಖಾತೆಗೆ ಹಣ ಬಿಸಾಕುತ್ತೇನೆ. ಈಗಲೇ ಕಾರು ಡೆಲಿವರಿ ಕೊಡಬೇಕು&rsquo; ಎಂದು ಅಹಂಕಾರದಿಂದ ಅಬ್ಬರಿಸಿದ್ದಾನೆ. ಆಗ ಟೆಸ್ಟ್ ಡ್ರೈವ್ ವೇಳೆ ಕಾರಿನಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ ಎಂದು ಆತನಿಗೆ ನಯವಾಗಿ ಹೇಳಿ ಸಮಾಧಾನಪಡಿಸಲು ಶೋ ರೂಂ ವ್ಯವಸ್ಥಾಪಕರು ಯತ್ನಿಸಿದ್ದಾರೆ. ಈ ಮಾತಿಗೆ ಕ್ಯಾರೇ ಎನ್ನದೆ ಕಾರು ಖರೀದಿಗೆ ಶ್ರೀಕಿ ಪಟ್ಟು ಹಿಡಿದಿದ್ದಾನೆ. ಅಷ್ಟೇ ಅಲ್ಲ, ತಕ್ಷಣವೇ ಶೋಂ ರೂಂ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಕಾರು ಖರೀದಿಸಿದ್ದಾನೆ. ಇಷ್ಟಕ್ಕೇ ಶ್ರೀಕಿ ಕೋಪ ತಣ್ಣಗಾಗಿಲ್ಲ. ಆ ಶೋ ರೂಂ ಮುಂದೆಯೇ ಪೊರ್ಶೆ ಕಾರನ್ನು ನಿಲ್ಲಿಸಿ ಅದರೊಳಗೆ ಕುಳಿತು ಸಿಗರೆಟ್ ಸೇದಿ ಸಿನಿಮಾ ಶೈಲಿಯಲ್ಲಿ ಸಿಬ್ಬಂದಿಗೆ ಕಿಚಾಯಿಸಿದ್ದಾನೆ ಎಂದು ವಿಶ್ವನೀಯ ಅಧಿಕಾರಿಯೊಬ್ಬರು &lsquo;ಕನ್ನಡಪ್ರಭ&rsquo;ಕ್ಕೆ ತಿಳಿಸಿದ್ದಾರೆ.&lt;/p&gt;&lt;p&gt;ತುಮಕೂರಿನ ಯೂನಿಕಾರ್ನ್&zwnj; ಕಂಪನಿಯಲ್ಲಿ ದೋಚಿದ್ದ 60 ಬಿಟ್&zwnj; ಕಾಯಿನ್&zwnj;ಗಳ ಪೈಕಿ ಕೆಲ ಕಾಯಿನ್&zwnj;ಗಳನ್ನು ಪೊರ್ಶೆ ಕಾರು ಖರೀದಿಗೆ ಶ್ರೀಕಿ ಬಳಸಿದ್ದು ತನಿಖೆ ವೇಳೆ ಪತ್ತೆಯಾಗಿದೆ. ಈ ಸಂಬಂಧ ದಸ್ತಾವೇಜು ಸಿಕ್ಕಿವೆ. ವಿಚಾರಣೆ ವೇಳೆ ಪೊರ್ಶೆ ಕಾರು ಖರೀದಿ ಪ್ರಸಂಗವನ್ನು ಶ್ರೀಕಿ ಬಾಯ್ಬಿಟ್ಟಿದ್ದ ಎಂದು ಮೂಲಗಳು ಹೇಳಿವೆ.&lt;/p&gt;&lt;h3&gt;ನಿವೃತ್ತ ಐಪಿಎಸ್ ಪುತ್ರನ ಬಳಿ ಕಾರು:&lt;/h3&gt;&lt;p&gt;ಪೊರ್ಶೆ ಖರೀದಿಸಿದ ಬಳಿಕ ಶ್ರೀಕಿ ನೋಂದಣಿ ಮಾಡಿಸಿರಲಿಲ್ಲ. ಆ ಕಾರು ತನ್ನ ಗೆಳೆಯ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಪುತ್ರನಿಗೆ ಕೊಟ್ಟಿದ್ದ. ಈ ಹಗರಣದಲ್ಲಿ ಅಧಿಕಾರಿ ಮಗನನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ ಎಂದು ಎಸ್&zwnj;ಐಟಿ ಹೇಳಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/how-serial-hacker-sriki-bought-a-porsche-an-interesting-info-revealed-in-sit-investigation-rav/articleshow-6wgf2l1"/>
        </item>
        <item>
            <title><![CDATA[Cabinet meeting: ಇಂದು ಸಚಿವ ಸಂಪುಟ ಸಭೆಯಲ್ಲಿ ಹೊಸ 2 ಖಾತೆ ಸೇರಿದಂತೆ ಈ ವಿಷಯಗಳ ಮೇಲೆ ಮಹತ್ವದ ಚರ್ಚೆ ಸಾಧ್ಯತೆ!]]></title>
            <link>https://kannada.asianetnews.com/politics/important-discussion-on-new-2-accounts-in-cabinet-meeting-today-rav/articleshow-gndm4du</link>
            <guid isPermaLink="true">https://kannada.asianetnews.com/politics/important-discussion-on-new-2-accounts-in-cabinet-meeting-today-rav/articleshow-gndm4du</guid>
            <pubDate>Sat, 20 Jun 2026 06:09:31 +0530</pubDate>
            <description><![CDATA[&lt;p&gt;ಶನಿವಾರದ ಸಚಿವ ಸಂಪುಟ ಸಭೆಯಲ್ಲಿ 'ಮುಖ್ಯಮಂತ್ರಿಗಳ ಜನಸ್ಪಂದನ' ಮತ್ತು 'ಅನಿವಾಸಿ ಭಾರತೀಯ ವ್ಯವಹಾರ' ಎಂಬ ಎರಡು ಹೊಸ ಇಲಾಖೆಗಳ ರಚನೆ, ವಿಧಾನಪರಿಷತ್&zwnj;ನ ಐದು ಸ್ಥಾನಗಳಿಗೆ ನಾಮನಿರ್ದೇಶನ ಹಾಗೂ ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಕುರಿತು ಮಹತ್ವದ ಚರ್ಚೆ ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvh7f8jyq886vmpx8n506968,imgname----------------------20--1781915951710.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜೂ.20)&lt;/strong&gt;: ರಾಜ್ಯದಲ್ಲಿ ಹೊಸದಾಗಿ &lsquo;ಮುಖ್ಯಮಂತ್ರಿಗಳ ಜನಸ್ಪಂದನ ಮತ್ತು ಜನಹಿತ ಆಡಳಿತ ಇಲಾಖೆ&rsquo; ಹಾಗೂ &lsquo;ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆ&rsquo; ರಚಿಸುವ ಬಗ್ಗೆ ಹಾಗೂ ವಿಧಾನಪರಿಷತ್&zwnj;ನ ಐದು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಕುರಿತು ಶನಿವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ.&lt;/p&gt;&lt;p&gt;ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ಅಧಿಕಾರವಹಿಸಿಕೊಂಡ ಬಳಿಕ ಎರಡು ನೂತನ ಇಲಾಖೆ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದರು.&lt;/p&gt;&lt;p&gt;ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸಚಿವ ಸಂಪುಟ ಸಭೆ ಎದುರು ವಿಷಯ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿ ಅವರು ಪತ್ರ ಬರೆದಿದ್ದು, ಬಹುತೇಕ ಶನಿವಾರದ ಸಂಪುಟ ಸಭೆಗೆ ವಿಷಯ ಮಂಡನೆಯಾಗಲಿದೆ.&lt;/p&gt;&lt;h2&gt;5 ಸ್ಥಾನಗಳಿಗೆ ನಾಮ ನಿರ್ದೇಶನ:&lt;/h2&gt;&lt;p&gt;ಇನ್ನು ಜು.21ಕ್ಕೆ ಅಡಗೂರು ಎಚ್.ವಿಶ್ವನಾಥ್&zwnj;, ಭಾರತಿ ಶೆಟ್ಟಿ, ಶಾಂತರಾಮ್&zwnj; ಬುಡ್ನಸಿದ್ಧಿ, ಡಾ.ತಳವಾರ್&zwnj; ಬಾಬಣ್ಣ ಹಾಗೂ ರಮೇಶ್&zwnj; ಬಾಬು ಅವರ ನಾಮನಿರ್ದೇಶನದ ಅವಧಿ ಮುಕ್ತಾಯವಾಗಲಿದೆ. ಈ ಐದು ಸ್ಥಾನಗಳಿಗೆ ರಾಜ್ಯಪಾಲರ ಮೂಲಕ ನಾಮನಿರ್ದೇಶನಗೊಳ್ಳುವ ಕುರಿತು ಸಹ ಶನಿವಾರದ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಪ್ರಸ್ತುತ ಏಳು ಸದಸ್ಯರಿಗೆ ನಡೆದ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ನಾಮನಿರ್ದೇಶನದ ಸ್ಥಾನಗಳಿಗೆ ಸಂಬಂಧಿಸಿ ಸಿದ್ಧತೆ ನಡೆಸಿದೆ. ಈ ಮೂಲಕ ವಿಧಾನಪರಿಷತ್&zwnj;ನಲ್ಲಿ ಬಲ ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ. ಜತೆಗೆ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆಯೂ ಚರ್ಚೆಯಾಗಲಿದೆ.&lt;/p&gt;&lt;h3&gt;2,200 ತರಗತಿ ಕೊಠಡಿಗಳ ನಿರ್ಮಾಣ:&lt;/h3&gt;&lt;p&gt;ಜತೆಗೆ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 360 ಕೋಟಿ ರು. ವೆಚ್ಚದಲ್ಲಿ 2,200 ತರಗತಿ ಕೊಠಡಿಗಳ ನಿರ್ಮಾಣ ಮಾಡುವ ಬಗ್ಗೆ, ಸಾರಿಗೆ ಇಲಾಖೆಯ ವಿವಿಧ ನಿಗಮಗಳಿಂದ ಬಸ್ಸುಗಳ ಖರೀದಿಸುವ ಬಗ್ಗೆ, ಡಾ.ಬಿ.ಆರ್&zwnj;.ಅಂಬೇಡ್ಕರ್&zwnj; ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕರಿಗೆ 63 ಕೋಟಿ ರು. ವೆಚ್ಚದಲ್ಲಿ ಫಾಸ್ಟ್&zwnj; ಫುಡ್&zwnj; ಟ್ರಕ್&zwnj;, ಟ್ರೈಲರ್&zwnj;, ಮೊಬೈಲ್&zwnj; ಕಿಚನ್&zwnj; ಫುಡ್&zwnj; ಕಿಯೋಸ್ಕ್&zwnj; ಸೌಲಭ್ಯ ಕಲ್ಪಿಸುವ ಬಗ್ಗೆ ಚರ್ಚೆಯಾಗಲಿದೆ.&lt;/p&gt;&lt;p&gt;ಇನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ 3.32 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ, ವಾಣಿಜ್ಯ ಉದ್ದೇಶದ ಏಕನಿವೇಶನ ವಿನ್ಯಾಸ ನಕ್ಷೆ ಮಂಜೂರಿ ಮಾಡಿರುವುದಕ್ಕೆ ನಿಯಮಾನುಸಾರ ಪಾಔತಿಸಬೇಕಾಗಿದ್ದ ಶುಲ್ಕ, ಸೆಸ್&zwnj; ಮತ್ತು ತೆರಿಗೆ ಸೇರಿ ₹45.76 ಲಕ್ಷಗಳಿಗೆ ವಿನಾಯಿತಿ ನೀಡುವ ಬಗ್ಗೆಯೂ ಪ್ರಸ್ತಾಪ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/important-discussion-on-new-2-accounts-in-cabinet-meeting-today-rav/articleshow-gndm4du"/>
        </item>
        <item>
            <title><![CDATA[Cross voting: ಯಾರನ್ನ ಕೇಳಿದ್ರೂ 'ನಾನವನಲ್ಲ ನಾನವನಲ್ಲ' ಅಂತಾರೆ, ಹಾಗಿದ್ರೆ ಅಡ್ಡಮತ ಹಾಕಿದ್ದು ಯಾರು?]]></title>
            <link>https://kannada.asianetnews.com/politics/karnataka-legislative-council-polls-who-cast-the-cross-vote-bjp-jds-rav/articleshow-vsohvv4</link>
            <guid isPermaLink="true">https://kannada.asianetnews.com/politics/karnataka-legislative-council-polls-who-cast-the-cross-vote-bjp-jds-rav/articleshow-vsohvv4</guid>
            <pubDate>Sat, 20 Jun 2026 05:42:23 +0530</pubDate>
            <description><![CDATA[&lt;p&gt;ವಿಧಾನಸಭೆಯಿಂದ ವಿಧಾನಪರಿಷತ್&zwnj;ಗೆ ನಡೆದ ಚುನಾವಣೇಲಿ ಬಿಜೆಪಿ-ಜೆಡಿಎಸ್&zwnj;ನ 11 ಶಾಸಕರು ಅಡ್ಡ ಮತದಾನ ಮಾಡಿದ್ದು, ಯಾರು ಆ ಶಾಸಕರು ಎಂಬುದು ನಿಗೂಢವಾಗಿದೆ. ಹಲವರು ಮಾಡಿಲ್ಲವೆಂದು ಸ್ಪಷ್ಟನೆ ನೀಡುತ್ತಿದ್ದರೆ, ಜೆಡಿಎಸ್&zwnj;ನ ನಾಲ್ವರು ಶಾಸಕರು ಅಡ್ಡಮತ ಚಲಾಯಿಸಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvh57dq1epcvy3vfvydfrn49,imgname----------------------19--1781913597665.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.20): &lt;/strong&gt;ವಿಧಾನಸಭೆಯಿಂದ ವಿಧಾನಪರಿಷತ್&zwnj;ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್&zwnj;ನ 11 ಶಾಸಕರು ಅಡ್ಡ ಮತದಾನ ಮಾಡಿದ ಬೆನ್ನಲ್ಲೇ, ಆ ರೀತಿ ಮಾಡಿದವರು ಯಾರು ಎಂಬ ಬಗ್ಗೆ ಪಕ್ಷಗಳಲ್ಲೇ ಚರ್ಚೆ ನಡೆಯುತ್ತಿದೆ. ಹಲವು ಶಾಸಕರ ಮೇಲೆ ಅನುಮಾನ ವ್ಯಕ್ತವಾಗಿದ್ದು, ಕೆಲವು ಹೆಸರುಗಳ ಬಗ್ಗೆ ಚರ್ಚೆಯಾಗಿವೆ. ಇದರ ಬೆನ್ನಲ್ಲೇ ಹಲವು ಶಾಸಕರು &lsquo;ನಾನವನಲ್ಲ, ನಾನವನಲ್ಲ&rsquo; ಎನ್ನುವ ಮೂಲಕ ಅಡ್ಡಮತದಾನ ಮಾಡಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.&lt;/p&gt;&lt;p&gt;ಬಿಜೆಪಿ ಶಾಸಕರಾದ ಹೂವಿನಹಡಗಲಿಯ ಕೃಷ್ಣ ನಾಯಕ್&zwnj;, ಶಿರಹಟ್ಟಿಯ ಡಾ। ಚಂದ್ರು ಲಮಾಣಿ, ಬೇಲೂರಿನ ಎಚ್&zwnj;.ಕೆ. ಸುರೇಶ್&zwnj;, ಕೆ.ಆರ್.ಪುರದ ಬೈರತಿ ಬಸವರಾಜು ಹಾಗೂ ಹನೂರು ಜೆಡಿಎಸ್&zwnj; ಶಾಸಕ ಮಂಜುನಾಥ್&zwnj; ಅವರು ತಾವು ಅಡ್ಡಮತದಾನ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.&lt;/p&gt;&lt;p&gt;ವಿಧಾನಪರಿಷತ್&zwnj; ಚುನಾವಣೆಯಲ್ಲಿ ರಹಸ್ಯ ಮತದಾನ ಪದ್ಧತಿ ಇದೆ. ಗುರುವಾರ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಆಗಿದೆ. ಆದರೆ ಅದನ್ನು ಮಾಡಿದ್ದು ಯಾರು ಎಂಬುದರ ಪತ್ತೆ ಪಕ್ಷಗಳಿಗೂ ಕಬ್ಬಿಣದ ಕಡಲೆಯಾಗಿದೆ. ಎಲ್ಲ ಶಾಸಕರು ತಾವು ಮಾಡಿಲ್ಲ ಎಂದು ಹೇಳುತ್ತಿರುವುದರಿಂದ ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚುವುದು ಸವಾಲಾಗಿದೆ.&lt;/p&gt;&lt;p&gt;ಈ ನಡುವೆ, ಅಡ್ಡಮತದಾನ ಮಾಡಿದ 11 ಶಾಸಕರ ಪೈಕಿ ಪ್ರತಿಪಕ್ಷಗಳಾದ ಬಿಜೆಪಿಯ ಶಾಸಕರು ಎಷ್ಟು, ಜೆಡಿಎಸ್&zwnj;ನ ಶಾಸಕರು ಎಷ್ಟು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.&lt;/p&gt;&lt;p&gt;ಈ ಬಗ್ಗೆ ಎರಡೂ ಪಕ್ಷಗಳ ನಾಯಕರು ಒಂದೊಂದು ರೀತಿಯ ಅಂಕಿ ಸಂಖ್ಯೆಯನ್ನು ನೀಡುತ್ತಿದ್ದಾರೆಯೇ ಹೊರತು ಇಷ್ಟೇ ಎಂಬ ನಿಖರ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಒಂದಂತೂ ಸತ್ಯ. ತಮ್ಮ ಪಕ್ಷದಿಂದ ಕಡೆಮ ಅಡ್ಡ ಮತದಾನ ನಡೆದಿದೆ ಎಂಬುದನ್ನು ನಿರೂಪಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.&lt;/p&gt;&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗುರುವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದಿಂದ ಮೂರು ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಒಬ್ಬರ ಮತ ಅಸಿಂಧುವಾಗಿದೆ ಎಂದಿದ್ದರು. ಶುಕ್ರವಾರ ಮಾತನಾಡಿದ ಅವರು, ಜೆಡಿಎಸ್&zwnj;ನಿಂದ ಆರೇಳು ಅಡ್ಡ ಮತದಾನ ಆಗಿದೆ. ಬಿಜೆಪಿಯಿಂದ ನಾಲ್ಕೈದು ಅಡ್ಡ ಮತದಾನ ಆಗಿದೆ ಎಂದು ಹೇಳಿದರು.&lt;/p&gt;&lt;p&gt;ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿ ಅವರು, ನಮ್ಮ ಪಕ್ಷದ ನಾಲ್ವರು ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎಂದರು.&lt;/p&gt;&lt;p&gt;&lt;strong&gt;ಜೆಡಿಎಸ್&zwnj;ನ ನಾಲ್ವರು ಶಾಸಕರ ಅಡ್ಡಮತ&lt;/strong&gt;&lt;/p&gt;&lt;p&gt;ಯಾರು ಅಡ್ಡ ಮತದಾನ ಮಾಡಿದ್ದಾರೆಂಬ ಮಾಹಿತಿ ನನಗಿದೆ. ನಾಲ್ವರು ಶಾಸಕರು ಪಕ್ಷಕ್ಕೆ ವಿರುದ್ಧವಾಗಿ ಮತ ಹಾಕಿದ್ದಾರೆ. ಪಕ್ಷ ಬಿಡುವ ಬಗ್ಗೆಯೂ ಅವರು ಚರ್ಚೆ ನಡೆಸಿದ್ದಾರೆ. ಆ ವಿಷಯವೂ ನನಗೆ ಗೊತ್ತಿದೆ. ಜಿ.ಟಿ. ದೇವೇಗೌಡ ಅವರು ಎರಡೂ ಕಾಲನ್ನು ಪಕ್ಷದಿಂದ ಹೊರಗಿಟ್ಟಿದ್ದಾರೆ.&lt;/p&gt;&lt;p&gt;&lt;strong&gt;- ಎಚ್&zwnj;.ಡಿ. ಕುಮಾರಸ್ವಾಮಿ, ಜೆಡಿಎಸ್&zwnj; ರಾಜ್ಯಾಧ್ಯಕ್ಷ&lt;/strong&gt;&lt;/p&gt;&lt;p&gt;&lt;strong&gt;ಜೆಡಿಎಸ್&zwnj; ಶಾಸಕರ ಜತೆ ಎಚ್&zwnj;ಡಿಕೆ ಸಭೆ: ಜಿಟಿಡಿ ಗೈರು ಹಾಜರಿ&lt;/strong&gt;&lt;/p&gt;&lt;p&gt;ಬೆಂಗಳೂರು: ವಿಧಾನಪರಿಷತ್ ಚುನಾವಣೆಯ ಮುಖಭಂಗದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿ ಅವರು ಪಕ್ಷದ ಶಾಸಕರ ಸಭೆ ನಡೆಸಿ ಅಡ್ಡಮತದಾನ ಕುರಿತಂತೆ ಚರ್ಚೆ ನಡೆಸಿದರು. ಜಿ.ಟಿ. ದೇವೇಗೌಡ ಅವರನ್ನು ಹೊರತುಪಡಿಸಿ ಉಳಿದೆಲ್ಲ ಶಾಸಕರು ಹಾಜರಾಗಿದ್ದರು. ಅವರಲ್ಲಿ ಅಡ್ಡಮತದಾನ ಮಾಡಿದವರು ಯಾರೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ.&lt;/p&gt;&lt;p&gt;--&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-legislative-council-polls-who-cast-the-cross-vote-bjp-jds-rav/articleshow-vsohvv4"/>
        </item>
        <item>
            <title><![CDATA[ಏನಾಗ್ತಿದೆ ರಾಜ್ಯದಲ್ಲಿ? ಒಂದಲ್ಲ ಎರಡಲ್ಲ,  5 ಜಿಲ್ಲಾ ಕೋರ್ಟ್‌ಗಳಿಗೆ ಇ-ಮೇಲ್‌ಹುಸಿ ಬಾಂಬ್‌ ಬೆದರಿಕೆ!]]></title>
            <link>https://kannada.asianetnews.com/state/5-district-courts-in-karnataka-receive-fake-email-bomb-threats-concern-rav/articleshow-3sn3vho</link>
            <guid isPermaLink="true">https://kannada.asianetnews.com/state/5-district-courts-in-karnataka-receive-fake-email-bomb-threats-concern-rav/articleshow-3sn3vho</guid>
            <pubDate>Sat, 20 Jun 2026 04:46:45 +0530</pubDate>
            <description><![CDATA[ಬಾಗಲಕೋಟೆ, ದಾವಣಗೆರೆ ಸೇರಿದಂತೆ ರಾಜ್ಯದ ಐದು ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿದೆ. ತಮಿಳುನಾಡಿನ ಘಟನೆಗೆ ಪ್ರತೀಕಾರವೆಂದು ಹೇಳಲಾದ ಈ ಬೆದರಿಕೆಯಿಂದಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿ, ತಪಾಸಣೆ ನಂತರ ಕಲಾಪಗಳು ಪುನಾರಂಭಗೊಂಡವು.]]></description>
            <media:content url="https://static.asianetnews.com/images/w-1280,h-720,format-jpg,imgid-01kn3qs8g6grc5vr6ksd4ha79w,imgname----------------------25--1775020843526.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜೂ.20): &lt;/strong&gt;ಬಾಗಲಕೋಟೆ, ದಾವಣಗೆರೆ, ಧಾರವಾಡ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲಾ ನ್ಯಾಯಾಲಯಗಳಿಗೆ ಶುಕ್ರವಾರ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆಗಳು(Bomb threat) ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೆಲ ಕಾಲ ನ್ಯಾಯಾಲಯಗಳ ಕಲಾಪ ಬಂದ್&zwnj; ಮಾಡಿ, ತಪಾಸಣೆ ನಡೆಸಲಾಯಿತು. ತಪಾಸಣೆ ಬಳಿಕ ಇವು ಹುಸಿ ಕರೆಗಳು ಎಂಬುದು ಸಾಬೀತಾಯಿತು.&lt;/p&gt;&lt;p&gt;ಶುಕ್ರವಾರ ಬೆಳಗ್ಗೆ 7.47ಕ್ಕೆ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ಇ-ಮೇಲ್&zwnj;ಗಳಿಗೆ Kurunanidhi.kundi@underworld dog ಎಂಬ ಹೆಸರಿನ ಐಡಿಯಿಂದ ಇ-ಮೇಲ್&zwnj;ಗಳು ಬಂದಿವೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಸ್ಫೋಟಗೊಳ್ಳಲಿವೆ. ತಮಿಳುನಾಡಿನ ಶಿವಗಂಗೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಅಜಿತ್ ಕುಮಾರನ ಸಾವಿಗೆ ಪ್ರತೀಕಾರ ಎಂದು ಇ-ಮೇಲ್&zwnj;ನಲ್ಲಿ ಉಲ್ಲೇಖಿಸಲಾಗಿದೆ. ಉದಯನಿಧಿ ಎಂಬಾತನ ಉಪಪತ್ನಿ, ಮಗನ ಬಂಧನಕ್ಕೂ ಇ-ಮೇಲ್&zwnj;ನಲ್ಲಿ ಆಗ್ರಹಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ&lt;/strong&gt;: ಕಳೆದ 5 ವರ್ಷಗಳಲ್ಲಿ 468 ಹುಸಿ ಬಾಂಬ್ ಕರೆ, 14 ಆರೋಪಿಗಳ ಬಂಧನ, ಇಬ್ಬರಿಗೆ ಮಾತ್ರವೇ ಶಿಕ್ಷೆ!&lt;/p&gt;&lt;p&gt;ಸುದ್ದಿ ಗೊತ್ತಾದ ಕೂಡಲೇ ನ್ಯಾಯಾಲಯದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಸಿಬ್ಬಂದಿ, ವಕೀಲರು ಹಾಗೂ ಕಕ್ಷಿದಾರರನ್ನು ಆವರಣದಿಂದ ಹೊರಕ್ಕೆ ಕಳುಹಿಸಿ ಬಿಗಿ ಭದ್ರತೆ ಒದಗಿಸಲಾಯಿತು. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಆಗಮಿಸಿ, ನ್ಯಾಯಾಲಯಗಳ ಆವರಣದಲ್ಲಿ ತಪಾಸಣೆ ನಡೆಸಿದರು. ನಂತರ ಇವೆಲ್ಲವೂ ಹುಸಿ ಕರೆ ಎಂದು ಗೊತ್ತಾದ ನಂತರ ಮಧ್ಯಾಹ್ನ 3ರ ನಂತರ ಎಂದಿನಂತೆ ಕಲಾಪಗಳು ಮುಂದುವರಿದವು. ಫೆಬ್ರವರಿಯಲ್ಲೂ ಹೈಕೋರ್ಟ್&zwnj; ಧಾರವಾಡ ಪೀಠ, 9 ಜಿಲ್ಲಾ ಕೋರ್ಟ್&zwnj;ಗಳಿಗೆ ಹುಸಿ ಬಾಂಬ್ ಕರೆಗಳು ಬಂದಿದ್ದವು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/5-district-courts-in-karnataka-receive-fake-email-bomb-threats-concern-rav/articleshow-3sn3vho"/>
        </item>
        <item>
            <title><![CDATA[Chetan Ahimsa: 2028ಕ್ಕೆ ರಾಜಕೀಯ ಅಖಾಡಕ್ಕೆ ನಟ ಚೇತನ್: 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕೆ!]]></title>
            <link>https://kannada.asianetnews.com/karnataka-districts/chetan-ahimsa-new-political-party-karnataka-2028-election-224-seats-gvd/articleshow-w55peu6</link>
            <guid isPermaLink="true">https://kannada.asianetnews.com/karnataka-districts/chetan-ahimsa-new-political-party-karnataka-2028-election-224-seats-gvd/articleshow-w55peu6</guid>
            <pubDate>Sat, 20 Jun 2026 00:28:25 +0530</pubDate>
            <description><![CDATA[&lt;p&gt;Chetan Ahimsa: ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ಸ್ವಂತ ಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತ ಭ್ರಷ್ಟಾಚಾರದಲ್ಲಿ ಮುಳುಗಿ ಸಂವಿಧಾನದ ಆಶಯವನ್ನು ಮರೆತಿವೆ ಎಂದು ಚಿತ್ರ ನಟ ಚೇತನ್ ಅಹಿಂಸಾ ದೂರಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvgg65dy02103w1qc06z12z1,imgname-mm-1781891536318.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾಗವಾಡ (ಜೂ.20):&lt;/strong&gt; ದೇಶದಲ್ಲಿ ಈಗಿರುವ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ಸ್ವಂತ ಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತ ಭ್ರಷ್ಟಾಚಾರದಲ್ಲಿ ಮುಳುಗಿ ಸಂವಿಧಾನದ ಆಶಯವನ್ನು ಮರೆತಿವೆ ಎಂದು ಚಿತ್ರ ನಟ ಚೇತನ್ ಅಹಿಂಸಾ ದೂರಿದರು. ಬೆಳಗಾವಿ ಜಿಲ್ಲೆಯ ಕಾಗವಾಡ ಪ್ರವಾಸಿ ಮಂದಿರದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಆಡಳಿತ ನಡೆಸಿದ ಯಾವುದೇ ರಾಜಕೀಯ ಪಕ್ಷಗಳು ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡದೆ ಬರೀ ಬೆಂಗಳೂರಿಗೆ ಒತ್ತು ನೀಡಿ ಈ ಭಾಗದ ಜನರಿಗೆ, ಯುವಕರಿಗೆ ಅನ್ಯಾಯ ಮಾಡುತ್ತಾ ಬಂದಿವೆ.&lt;/p&gt;&lt;p&gt;ಜನರು ಇದರಿಂದ ರೋಸಿ ಹೋಗಿದ್ದಾರೆ. ಅದಕ್ಕಾಗಿ ರಾಜ್ಯದ ಎಲ್ಲ 224 ಕ್ಷೇತ್ರದಲ್ಲಿ ಓಡಾಡಿ ಸಂವಿಧಾನದ ಆಶಯ ಎತ್ತಿ ಹಿಡಿಯುವ, ದಲಿತ ಸಂಘ ಬಹುಜನ ಸಂಘ, ಕಾರ್ಮಿಕ ಸಂಘ, ಭ್ರಷ್ಟಾಚಾರ ವಿರೋಧಿ ಸಂಘ, ಪರಿಸರವಾದಿ ಸಂಘ, ರೈತ ಸಂಘ, ಮಹಿಳಾ ಸಂಘ ಎಲ್ಲರ ಜೊತೆಗೆ ಕರ್ನಾಟಕದಲ್ಲಿ ಸಮ ಸಮಾಜ ನಿರ್ಮಾಣ ಮಾಡಿ ಬರುವ ಚುನಾವಣೆಯಲ್ಲಿ ಸಂವಿಧಾನದ ಶಕ್ತಿ ಕಟ್ಟಲಾಗುವುದು ಎಂದರು.&lt;/p&gt;&lt;p&gt;ಈಗಿರುವ ನಾಯಕರು ಈ ಭಾಗದ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿಲ್ಲ. ಈಗಿರುವ ಎಂಎಲ್ಎ ಎಂಪಿಗಳು ಯಾರಿಗೂ ದೂರದೃಷ್ಟಿ ಇಲ್ಲ. ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು ಎನ್ನುವುದು ಯಾರ ಮನಸಿನಲ್ಲಿಯೂ ಇದ್ದಂತಿಲ್ಲ. ಎಲ್ಲವನ್ನೂ ವ್ಯಾಪಾರ ದೃಷ್ಟಿಯಿಂದ ನೋಡುತ್ತಿದ್ದಾರೆ. ದೇಶದಲ್ಲಿರುವ ಸುಮಾರು 3 ಸಾವಿರ ರಾಜಕೀಯ ಪಕ್ಷಗಳು ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ.&lt;/p&gt;&lt;h2&gt;&lt;strong&gt;224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕೆ&lt;/strong&gt;&lt;/h2&gt;&lt;p&gt;ಹೀಗಾಗಿ ಅಭಿವ್ಯಕ್ತಿ, ಪ್ರತಿಭಟನೆ ಹಾಗೂ ಮಾಧ್ಯಮ ಸ್ವಾತಂತ್ರ್ಯವನ್ನು ಕಾಪಾಡುವುದು, ಲೋಕಾಯುಕ್ತ ಬಲಪಡಿಸಿ ಲಂಚಮುಕ್ತ ಕರ್ನಾಟಕ ಗುರಿಯೊಂದಿಗೆ ಪಾರದರ್ಶಕ ಆಡಳಿತ ನೀಡುವುದು ಘನ ಉದ್ದೇಶ ನಮ್ಮದಾಗಿದೆ. ಹೀಗಾಗಿ ಮುಂಬರುವ 2028ಕ್ಕೆ ಹೊಸಪಕ್ಷ ಕಟ್ಟಿ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ನಾನು ರಾಜ್ಯದ ಮೂಲೆ, ಮೂಲೆಗಳಿಗೆ ಹೋಗಿ ಯುವಕರ ಸಂಘಟನೆಯನ್ನು ಮಾಡುತ್ತಿದ್ದೇನೆ. ಎಲ್ಲ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chetan-ahimsa-new-political-party-karnataka-2028-election-224-seats-gvd/articleshow-w55peu6"/>
        </item>
        <item>
            <title><![CDATA[Gauribidanur: ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಹ*ತ್ಯೆ: ಕಿವಿ ಸಮೇತ ಓಲೆ ಕಿತ್ತು ಪರಾರಿ]]></title>
            <link>https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8</link>
            <guid isPermaLink="true">https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8</guid>
            <pubDate>Fri, 19 Jun 2026 22:53:02 +0530</pubDate>
            <description><![CDATA[&lt;p&gt;Gauribidanur: ತಾಲೂಕಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ದರೋಡೆ ಹಾಗೂ ಹಲ್ಲೆ ಪ್ರಕರಣವೊಂದು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvgcec2beqe7br6h13c49sj0,imgname-hhkh-1781887610955.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೌರಿಬಿದನೂರು (ಜೂ.19):&lt;/strong&gt; ತಾಲೂಕಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ದರೋಡೆ ಹಾಗೂ ಹಲ್ಲೆ ಪ್ರಕರಣವೊಂದು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಒಂಟಿಯಾಗಿದ್ದ 60 ವರ್ಷದ ಸುಬ್ಬಮ್ಮ ಎಂಬ ವೃದ್ಧೆಯ ಮೇಲೆ ಕಳ್ಳರು ಅಮಾನುಷವಾಗಿ ಹಲ್ಲೆ ನಡೆಸಿ, ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಿವಿಯ ಸಮೇತ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ.&lt;/p&gt;&lt;p&gt;ಸುಬ್ಬಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಕುಟುಂಬದ ಸದಸ್ಯರು ಜಮೀನಿನ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ. ಅವರ ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸುಬ್ಬಮ್ಮಜೋರಾಗಿ ಕೂಗಾಡಲು ಆರಂಭಿಸಿದ್ದು, ಕಳ್ಳರ ಕೃತ್ಯಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆತಂಕಗೊಂಡ ಆರೋಪಿಗಳು ಓಲೆಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಕಳ್ಳರು ಓಲೆಗಳನ್ನು ಕಿತ್ತುಕೊಳ್ಳುವ ವೇಳೆ ವೃದ್ಧೆಯ ಕಿವಿಗಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ರಕ್ತಸ್ರಾವ ಉಂಟಾಗಿದೆ. ಅಲ್ಲದೆ ವೃದ್ಧೆ ನಿರಂತರವಾಗಿ ಕೂಗಾಡುತ್ತಿದ್ದುದನ್ನು ಕಂಡು ಕೋಪಗೊಂಡ ಕಳ್ಳರು, ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಹಲ್ಲೆಯ ಪರಿಣಾಮ ವೃದ್ಧೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆ ನಡೆದ ಸಮಯದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಯಾರೂ ಇಲ್ಲದ ಕಾರಣ ನೆರವು ಸಿಗಲಿಲ್ಲ. ಮಧ್ಯಾಹ್ನ ಸುಮಾರು 3.30 ರ ವೇಳೆಗೆ ಜಮೀನಿನ ಕೆಲಸ ಮುಗಿಸಿ ಮನೆಗೆ ಬಂದ ಸೊಸೆ, ವೃದ್ಧೆ ರಕ್ತಸ್ರಾವದಿಂದ ಒದ್ದಾಡುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಕೂಡಲೇ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರ ನೆರವಿನಿಂದ ಅವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;&lt;p&gt;ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ತಲೆಗೆ ತೀವ್ರ ಪೆಟ್ಟಾಗಿರುವುದು ಹಾಗೂ ಅಧಿಕ ರಕ್ತಸ್ರಾವವಾಗಿರುವುದನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಮುಂದುವರಿದರೂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಸುಬ್ಬಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಗ್ರಾಮಸ್ಥರಲ್ಲಿ ಆತಂಕ&lt;/strong&gt;&lt;/h2&gt;&lt;p&gt;ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸುಬ್ಬಮ್ಮ ಅವರ ದುರ್ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಸವನಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8"/>
        </item>
        <item>
            <title><![CDATA[ಮ್ಯಾಟ್ರಿಮೋನಿ ಸೈಟ್​ನಲ್ಲಿ ಸಿಕ್ಕ 3 ಮದ್ವೆಯ ಸುಂದರಿ: ಬೆಂಗಳೂರು ಉದ್ಯಮಿಯ ವರಿಸಿ HIV ಬೆದರಿಕೆ ಹಾಕಿ ಲೂಟಿ]]></title>
            <link>https://kannada.asianetnews.com/women/extorted-money-threatened-to-spread-hiv-rumour-bengaluru-businessman-files-fir-against-estranged-wife-suc/articleshow-ulv42fg</link>
            <guid isPermaLink="true">https://kannada.asianetnews.com/women/extorted-money-threatened-to-spread-hiv-rumour-bengaluru-businessman-files-fir-against-estranged-wife-suc/articleshow-ulv42fg</guid>
            <pubDate>Fri, 19 Jun 2026 22:27:48 +0530</pubDate>
            <description><![CDATA[ಮ್ಯಾಟ್ರಿಮೋನಿ ವೆಬ್&zwnj;ಸೈಟ್&zwnj;ನಲ್ಲಿ ಪರಿಚಯವಾದ ಮಹಿಳೆಯನ್ನು ಮದುವೆಯಾದ ಬೆಂಗಳೂರಿನ ಉದ್ಯಮಿಯೊಬ್ಬರು, ಆಕೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ಈಗಾಗಲೇ ಮೂರು ಬಾರಿ ವಿವಾಹವಾಗಿದ್ದ ಸತ್ಯ ತಿಳಿದು ಆಘಾತಕ್ಕೊಳಗಾಗಿದ್ದಾರೆ. ಪತ್ನಿ ಮನೆಯಿಂದ 18 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಉದ್ಯಮಿ ಆಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ವಂಚನೆ, ಕಳ್ಳತನ ಮತ್ತು ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvgd0y1np3tvhr5cxq2dvcg8,imgname-crime-1781888219189.jpg" type="image/jpeg" height="390" width="690"/>
            <content:encoded><![CDATA[&lt;p&gt;ಮ್ಯಾಟ್ರಿಮೋನಿ ವೆಬ್​ಸೈಟ್​ನಲ್ಲಿ ಪರಿಚಯವಾಗಿ ಮದುವೆಯ ಆಮಿಷ ಒಡ್ಡಿ ಶ್ರೀಮಂತರನ್ನು ದೋಚುವುದು ಒಂದೆಡೆಯಾದರೆ, ಮದುವೆಯಾಗಿ ಆ ಬಳಿಕ ಗಂಡನಿಗೆ ಇನ್ನಿಲ್ಲದ ಟಾರ್ಚರ್​ ಕೊಡುವ ಘಟನೆಗಳು ಆಗಾಗ್ಗೆ ನಡೆಯುವುದು ಉಂಟು. ಮದುವೆಗಾಗಿ ಹುಡುಕುತ್ತಿರುವ ಪುರುಷರು ಇಂಥ ವೆಬ್​ಸೈಟ್​ಗಳಲ್ಲಿ ಹೆಣ್ಣುಗಳನ್ನು ನೋಡಿ ಮೋಸ ಹೋಗಬೇಡಿ ಎಂಬ ಎಚ್ಚರಿಕೆ ಆಗಾಗ್ಗೆ ಪೊಲೀಸ್ ಇಲಾಖೆಯಿಂದ ಬರುವುದೂ ಉಂಟು. ವಿಚಿತ್ರ ಎಂದರೆ, ಈ ವೆಬ್​ಸೈಟ್​ ನೋಡಿ ಹಳ್ಳಕ್ಕೆ ಬೀಳುವವರ ಪೈಕಿ ಪುರುಷರೇ ಹೆಚ್ಚು ಎನ್ನುವ ವರದಿಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ಅಂಥದ್ದೇ ಒಂದು ಪ್ರಕರಣದಲ್ಲಿ ಬೆಂಗಳೂರಿನ ಉದ್ಯಮಿ ಈಗ ಪತ್ನಿಯಿಂದ ಭಾರಿ ಮೋಸ ಹೋಗಿರುವುದಾಗಿ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಪತ್ನಿ ವಿರುದ್ಧ ದೂರು&lt;/strong&gt;&lt;/h2&gt;&lt;p&gt;ಮಾರತ್ತಹಳ್ಳಿಯ ಉದ್ಯಮಿಯೊಬ್ಬರು ಈಗ ಪತ್ನಿಯ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಮ್ಯಾಟ್ರಿಮೋನಿ ವೆಬ್​ಸೈಟ್​ನಲ್ಲಿ ಸಿಕ್ಕ ಸ್ವಾಮಿ ಎಂಬಾಕೆಯನ್ನು 2022ರ ಫೆಬ್ರವರಿಯಲ್ಲಿ ಮದುವೆಯಾಗಿದ್ದರು ಈ ಉದ್ಯಮಿ. ಅವರಿಗೆ 51 ವರ್ಷ ವಯಸ್ಸು, ಹಾಗೂ ಸ್ವಾತಿಗೆ 37 ವರ್ಷ ವಯಸ್ಸು. ಮದುವೆಯಾಗುತ್ತಿದ್ದಂತೆಯೇ ಹಣದ ಬೇಡಿಕೆ ಇಡುತ್ತಾ ಬಂದಿದ್ದಾಳೆ. ಮೊದಲಿಗೆ 50 ಲಕ್ಷ ಹಣದ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ ಹೆಚ್&zwnj;ಐವಿ/ಏಡ್ಸ್&zwnj; ಇದೆ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಸುಳ್ಳು ಪ್ರಚಾರ ಮಾಡುವುದಾಗಿ ಬೆದರಿಸುತ್ತಿದ್ದಾಳೆ, ತನಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿದ್ದು, ಅವರ ಮೂಲಕವೇ ಈ ಕೇಸ್​​ ಹಾಕುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಉದ್ಯಮಿ ದೂರಿದ್ದಾರೆ.&lt;/p&gt;&lt;p&gt;ಇದಾಗಲೇ ಪತ್ನಿ, ಮನೆಯಿಂದ 18 ಲಕ್ಷ ನಗದು, ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಳೆ. ಕಾರು ಕೂಡ ಡುಪ್ಲಿಕೇಟ್​ ಕೀ ಬಳಸಿ ತೆಗೆದುಕೊಂಡು ಹೋಗಿದ್ದಾಳೆ. ಚೆಕ್&zwnj;ಗೆ ನಕಲಿ ಸಹಿ ಹಾಕಿ ಬ್ಯಾಂಕ್ ಖಾತೆಯಿಂದ 83 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾಳೆ ಎಂದು ಉದ್ಯಮಿ ದೂರಿದ್ದಾರೆ.&lt;/p&gt;&lt;h3&gt;&lt;strong&gt;ಮೂರು ಮದುವೆ&lt;/strong&gt;&lt;/h3&gt;&lt;p&gt;ಇದಾಗಲೇ ಆಕೆಗೆ ಮೂರು ಮದುವೆಯಾಗಿರುವುದು ತಿಳಿದಿದೆ. ಮಗ ಕೂಡ ಇದ್ದಾನೆ. ನನ್ನ ಹಣವನ್ನು ಬಳಸಿಕೊಂಡು ಮಗನ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದಾಳೆ. ಈಗ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದಿರುವ ಉದ್ಯಮಿ, ಸ್ವಾತಿ ಬಿ. ವಿರುದ್ಧ ವಂಚನೆ, ನಂಬಿಕೆ ದ್ರೋಹ, ಕಳವು, ಸುಲಿಗೆ, ಮಾನಹಾನಿ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Suchethana D</dc:creator>
            <atom:link href="https://kannada.asianetnews.com/women/extorted-money-threatened-to-spread-hiv-rumour-bengaluru-businessman-files-fir-against-estranged-wife-suc/articleshow-ulv42fg"/>
        </item>
        <item>
            <title><![CDATA[Nelamangala Python: ಜಕ್ಕಸಂದ್ರ ಜನರ ಜೀವ ಬಾಯಿಗೆ ಬರಿಸಿದ ಹೆಬ್ಬಾವು; ನೀರಗಂಟಿಯಿಂದ ಸಿಕ್ತು ಬಿಗ್ ಟ್ವಿಸ್ಟ್!]]></title>
            <link>https://kannada.asianetnews.com/gallery/viral/bengaluru-giant-python-nelamangala-ai-generated-photo-scares-jakkasandra-residents-prank-waterman-p1lqy4g</link>
            <guid isPermaLink="true">https://kannada.asianetnews.com/gallery/viral/bengaluru-giant-python-nelamangala-ai-generated-photo-scares-jakkasandra-residents-prank-waterman-p1lqy4g</guid>
            <pubDate>Fri, 19 Jun 2026 22:07:58 +0530</pubDate>
            <description><![CDATA[ನೆಲಮಂಗಲದ ಜಕ್ಕಸಂದ್ರದಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ ಎಂದು ವೈರಲ್ ಆದ ಫೋಟೋ, ವಾಸ್ತವದಲ್ಲಿ ಎಐ-ಸೃಷ್ಟಿತ ನಕಲಿ ಚಿತ್ರವೆಂದು ಬಯಲಾಗಿದೆ. ಗ್ರಾಮದ ವಾಟರ್&zwnj;ಮೆನ್&zwnj;ಗೆ ಬುದ್ಧಿ ಕಲಿಸಲು ಅವರ ಸ್ನೇಹಿತರೇ ಈ ತಮಾಷೆ ಮಾಡಿದ್ದು, ಉರಗ ರಕ್ಷಕರ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvgbhbqnvkx6jvd85nhb84s1,imgname-bengaluru-giant-python-nelamangala-1781886660341.jpg" type="image/jpeg" height="390" width="690"/>
            <content:encoded><![CDATA[ನೆಲಮಂಗಲದ ಜಕ್ಕಸಂದ್ರದಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ ಎಂದು ವೈರಲ್ ಆದ ಫೋಟೋ, ವಾಸ್ತವದಲ್ಲಿ ಎಐ-ಸೃಷ್ಟಿತ ನಕಲಿ ಚಿತ್ರವೆಂದು ಬಯಲಾಗಿದೆ. ಗ್ರಾಮದ ವಾಟರ್&zwnj;ಮೆನ್&zwnj;ಗೆ ಬುದ್ಧಿ ಕಲಿಸಲು ಅವರ ಸ್ನೇಹಿತರೇ ಈ ತಮಾಷೆ ಮಾಡಿದ್ದು, ಉರಗ ರಕ್ಷಕರ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ.&lt;img&gt;&lt;p&gt;ಬೆಂಗಳೂರು ಗ್ರಾಮಾಂತರ: ಕಳೆದೆರಡು ದಿನಗಳಿಂದ ನೆಲಮಂಗಲ ತಾಲ್ಲೂಕಿನ ಜಕ್ಕಸಂದ್ರ ಭಾಗದ ಜನರ ನಿದ್ದೆಗೆಡಿಸಿದ್ದ 'ದೈತ್ಯ ಹೆಬ್ಬಾವಿನ' ರಹಸ್ಯ ಕೊನೆಗೂ ಬಯಲಾಗಿದೆ. ಬೃಹತ್ ಗಾತ್ರದ ಹೆಬ್ಬಾವೊಂದು ರಸ್ತೆಯ ಪಕ್ಕದ ಮನೆಯೊಂದರ ಕಾಂಪೌಂಡ್ ಒಳಗಿನ ವರಾಂಡದಲ್ಲಿ ಕಾಣಿಸಿಕೊಂಡಿದೆ ಎಂಬ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿ ಆತಂಕ ಸೃಷ್ಟಿಸಿತ್ತು. ಆದರೆ, ಅಸಲಿಗೆ ಇದು ನಿಜವಾದ ಹಾವಲ್ಲ, ಬದಲಾಗಿ ಗೆಳೆಯರ ಗುಂಪೊಂದು ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ 'ನಕಲಿ' ಫೋಟೋ ಎಂಬುದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಘಟನೆಯ ಹಿನ್ನೆಲೆ:&lt;/p&gt;&lt;p&gt;ಜಕ್ಕಸಂದ್ರ ಗ್ರಾಮದ ನಿವಾಸಿಗಳ ವಾಟ್ಸಾಪ್ ಸ್ಟೇಟಸ್&zwnj;ಗಳಲ್ಲಿ ಬೃಹತ್ ಹೆಬ್ಬಾವಿನ ಫೋಟೋವೊಂದು ಹರಿದಾಡುತ್ತಿತ್ತು. ಫೋಟೋ ನೋಡಿದ ಜನ ಜಕ್ಕಸಂದ್ರದಲ್ಲಿ ಓಡಾಡಲು ಭಯಬಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಖ್ಯಾತ ಉರಗ ರಕ್ಷಕ ಸ್ನೇಕ್ ಅರುಣ್ ಅವರು ಸುಮಾರು 2 ಗಂಟೆಗಳ ಕಾಲ ಇಡೀ ಪರಿಸರದಲ್ಲಿ ಜಾಲಾಡಿದರು. ಆದರೆ ಎಲ್ಲಿಯೂ ಹಾವಿನ ಸುಳಿವು ಸಿಗಲಿಲ್ಲ. ತದನಂತರ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಎಐ ಬಳಸಿ ಸೃಷ್ಟಿಸಿದ ಚಿತ್ರ ಎಂಬುದು ಸಾಬೀತಾಯಿತು.&lt;/p&gt;&lt;img&gt;&lt;p&gt;ವಾಟರ್&zwnj;ಮೆನ್&zwnj;ಗೆ ಬುದ್ಧಿ ಕಲಿಸಲು ಹೋಗಿ ಊರನ್ನೇ ಹೆದರಿಸಿದರು!&lt;/p&gt;&lt;p&gt;ಈ ಕಿಡಿಗೇಡಿತನದ ಹಿಂದೆ ಒಂದು ತಮಾಷೆಯ ಕಾರಣವಿತ್ತು. ಗ್ರಾಮದ ವಾಟರ್&zwnj;ಮೆನ್ ಪ್ರಸಾದ್ ಎಂಬುವವರು ಮನೆಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಬುದ್ಧಿ ಕಲಿಸಲು ಮತ್ತು ಅವರ ಮನೆ ಬಳಿ ಬರದಂತೆ ಹೆದರಿಸಲು ಅವರ ಸ್ನೇಹಿತರೇ ಈ ಪ್ಲಾನ್ ಮಾಡಿದ್ದರು. ಎಐ ಮೂಲಕ ದೈತ್ಯ ಹೆಬ್ಬಾವಿನ ಫೋಟೋ ಸೃಷ್ಟಿಸಿ, ಅದು ಜಕ್ಕಸಂದ್ರದಲ್ಲೇ ಇದೆ ಎಂದು ಹರಿಬಿಟ್ಟಿದ್ದರು.&lt;/p&gt;&lt;img&gt;&lt;p&gt;ಯಾವಾಗ ಇದು ಕೇವಲ ಎಐ ಫೋಟೋ ಮತ್ತು ವಾಟರ್&zwnj;ಮೆನ್ ಕಾಲೆಳೆಯಲು ಮಾಡಿದ ತಂತ್ರ ಎಂದು ಗೊತ್ತಾಯಿತೋ, ಅಲ್ಲಿಯವರೆಗೆ ಭಯದಲ್ಲಿದ್ದ ಗ್ರಾಮಸ್ಥರು ಬಿದ್ದು ಬಿದ್ದು ನಕ್ಕಿದ್ದಾರೆ. ಆದರೆ, ಇಂತಹ ಸುಳ್ಳು ಸುದ್ದಿಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುವುದರಿಂದ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮತ್ತು ಉರಗ ರಕ್ಷಕರು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/viral/bengaluru-giant-python-nelamangala-ai-generated-photo-scares-jakkasandra-residents-prank-waterman-p1lqy4g"/>
        </item>
        <item>
            <title><![CDATA[Indian Railway: ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ 'ಯಶವಂತಪುರ ರೈಲು ಸೇವೆ' ವಿಸ್ತರಿಸಿದ ರೈಲ್ವೆ ಇಲಾಖೆ!]]></title>
            <link>https://kannada.asianetnews.com/gallery/state/indian-railway-bhubaneswar-yesvantpur-weekly-special-train-service-extended-check-dates-and-changes-7ggt8zk</link>
            <guid isPermaLink="true">https://kannada.asianetnews.com/gallery/state/indian-railway-bhubaneswar-yesvantpur-weekly-special-train-service-extended-check-dates-and-changes-7ggt8zk</guid>
            <pubDate>Fri, 19 Jun 2026 21:49:45 +0530</pubDate>
            <description><![CDATA[&lt;p&gt;ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆಯು ಭುವನೇಶ್ವರ-ಯಶವಂತಪುರ ಸಾಪ್ತಾಹಿಕ ವಿಶೇಷ ರೈಲುಗಳ ಸೇವೆಯನ್ನು ಆಗಸ್ಟ್ 2026ರ ಅಂತ್ಯದವರೆಗೆ ವಿಸ್ತರಿಸಿದೆ. ತಾಂತ್ರಿಕ ಕಾರಣಗಳಿಂದ ಆಗಸ್ಟ್ ಕೊನೆಯ ವಾರದಲ್ಲಿ ಈ ರೈಲು ಯಶವಂತಪುರದ ಬದಲು ಯಲಹಂಕ ನಿಲ್ದಾಣದಿಂದ ಕಾರ್ಯನಿರ್ವಹಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvga6nrj2r6hc40gh1whnvq4,imgname-bhubaneswar-yesvantpur-special-train-1781885261586.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆಯು ಭುವನೇಶ್ವರ-ಯಶವಂತಪುರ ಸಾಪ್ತಾಹಿಕ ವಿಶೇಷ ರೈಲುಗಳ ಸೇವೆಯನ್ನು ಆಗಸ್ಟ್ 2026ರ ಅಂತ್ಯದವರೆಗೆ ವಿಸ್ತರಿಸಿದೆ. ತಾಂತ್ರಿಕ ಕಾರಣಗಳಿಂದ ಆಗಸ್ಟ್ ಕೊನೆಯ ವಾರದಲ್ಲಿ ಈ ರೈಲು ಯಶವಂತಪುರದ ಬದಲು ಯಲಹಂಕ ನಿಲ್ದಾಣದಿಂದ ಕಾರ್ಯನಿರ್ವಹಿಸಲಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ನೈರುತ್ಯ ರೈಲ್ವೆಯು ಭುವನೇಶ್ವರ ಮತ್ತು ಬೆಂಗಳೂರಿನ ಯಶವಂತಪುರ ನಿಲ್ದಾಣಗಳ ನಡುವೆ ಸಂಚರಿಸುವ ಸಾಪ್ತಾಹಿಕ ಬೇಸಿಗೆ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಿದೆ. ಈ ಕುರಿತು ಪೂರ್ವ ಕರಾವಳಿ ರೈಲ್ವೆಯು ಪ್ರಕಟಣೆ ಹೊರಡಿಸಿದ್ದು, ಪ್ರವಾಸಿಗರಿಗೆ ಮತ್ತು ನಿಯಮಿತ ಪ್ರಯಾಣಿಕರಿಗೆ ಇದು ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ವಿಸ್ತರಣೆಯ ವಿವರಗಳು:&lt;/p&gt;&lt;p&gt;ರೈಲು ಸಂಖ್ಯೆ 02811 (ಭುವನೇಶ್ವರ-ಯಶವಂತಪುರ ಸಾಪ್ತಾಹಿಕ ವಿಶೇಷ ರೈಲು = Bhubaneswar-Yesvantpur weekly special train) ಪ್ರತಿ ಶನಿವಾರ ಭುವನೇಶ್ವರದಿಂದ ಹೊರಡುತ್ತದೆ. ಈ ಹಿಂದೆ ಈ ರೈಲಿನ ಸೇವೆಯು ಜೂನ್ 27, 2026 ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ ಈಗಿನ ಹೊಸ ಆದೇಶದಂತೆ, ಜುಲೈ 4 ರಿಂದ ಆಗಸ್ಟ್ 29, 2026 ರವರೆಗೆ ಈ ರೈಲಿನ ಸಂಚಾರ ಮುಂದುವರಿಯಲಿದೆ.&lt;/p&gt;&lt;img&gt;&lt;p&gt;ಅದೇ ರೀತಿ, ರೈಲು ಸಂಖ್ಯೆ 02812 (ಯಶವಂತಪುರ-ಭುವನೇಶ್ವರ ಸಾಪ್ತಾಹಿಕ ವಿಶೇಷ ರೈಲು) ಪ್ರತಿ ಸೋಮವಾರ ಯಶವಂತಪುರದಿಂದ ಹೊರಡುತ್ತದೆ. ಈ ಹಿಂದೆ ಜೂನ್ 29 ರವರೆಗೆ ಸಂಚರಿಸಬೇಕಿದ್ದ ಈ ರೈಲು, ಈಗ ಜುಲೈ 6 ರಿಂದ ಆಗಸ್ಟ್ 31, 2026 ರವರೆಗೆ ತನ್ನ ಸೇವೆಯನ್ನು ಮುಂದುವರಿಸಲಿದೆ. ಈ ರೈಲುಗಳ ವೇಳಾಪಟ್ಟಿ, ನಿಲುಗಡೆಗಳು ಮತ್ತು ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;img&gt;&lt;p&gt;&lt;strong&gt;ಗಮನಿಸಬೇಕಾದ ಪ್ರಮುಖ ಬದಲಾವಣೆ:&lt;/strong&gt;&lt;/p&gt;&lt;p&gt;ಕೆಎಸ್ಆರ್ ಬೆಂಗಳೂರು ನಿಲ್ದಾಣದ ಯಾರ್ಡ್&zwnj;ನಲ್ಲಿ ತಾಂತ್ರಿಕ ಕೆಲಸಗಳು (Non-Interlocking work) ನಡೆಯುತ್ತಿರುವುದರಿಂದ, ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಈ ರೈಲುಗಳ ಸಂಚಾರದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ.&lt;/p&gt;&lt;p&gt;ಆಗಸ್ಟ್ 29 ರಂದು ಭುವನೇಶ್ವರದಿಂದ ಹೊರಡುವ ರೈಲು ಸಂಖ್ಯೆ 02811 ಯಶವಂತಪುರದ ಬದಲಿಗೆ ಯಲಹಂಕ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.&lt;/p&gt;&lt;p&gt;ಆಗಸ್ಟ್ 31 ರಂದು ಹೊರಡಬೇಕಿರುವ ರೈಲು ಸಂಖ್ಯೆ 02812 ಯಶವಂತಪುರದ ಬದಲಿಗೆ ಯಲಹಂಕ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.&lt;/p&gt;&lt;img&gt;&lt;p&gt;ಹೀಗಾಗಿ, ಈ ಎರಡು ದಿನಗಳಂದು ಯಶವಂತಪುರ ಮತ್ತು ಯಲಹಂಕ ನಡುವೆ ರೈಲು ಸಂಚಾರವು ಭಾಗಶಃ ರದ್ದಾಗಲಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ಅವರು ತಿಳಿಸಿದ್ದಾರೆ.&lt;/p&gt;&lt;p&gt;ಈ ವಿಸ್ತರಣೆಯಿಂದಾಗಿ ಒಡಿಶಾ ಮತ್ತು ಕರ್ನಾಟಕದ ನಡುವೆ ಪ್ರಯಾಣಿಸುವ ಸಾವಿರಾರು ಜನರಿಗೆ ಸುಲಭವಾಗಿ ಟಿಕೆಟ್ ಲಭ್ಯವಾಗಲಿದ್ದು, ಬೇಸಿಗೆಯ ನಂತರದ ದಟ್ಟಣೆಯನ್ನು ನಿರ್ವಹಿಸಲು ಸಹಕಾರಿಯಾಗಲಿದೆ.&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railway-bhubaneswar-yesvantpur-weekly-special-train-service-extended-check-dates-and-changes-7ggt8zk"/>
        </item>
        <item>
            <title><![CDATA[ಹೊಸಕೋಟೆಯಲ್ಲಿ ಭೀಕರ ಅಪಘಾತ: BMTC ಬಸ್ ಡಿಕ್ಕಿಗೆ ಒಂದೇ ಕುಟುಂಬದ ಮೂವರು ಸಾವು!]]></title>
            <link>https://kannada.asianetnews.com/crime/hoskote-bmtc-bus-accident-three-family-members-killed-sulibele-gvd/articleshow-1tzmlgc</link>
            <guid isPermaLink="true">https://kannada.asianetnews.com/crime/hoskote-bmtc-bus-accident-three-family-members-killed-sulibele-gvd/articleshow-1tzmlgc</guid>
            <pubDate>Fri, 19 Jun 2026 21:06:12 +0530</pubDate>
            <description><![CDATA[&lt;p&gt;Hoskote ತಾಲ್ಲೂಕಿನ ಸೂಲಿಬೆಲೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಬೈಕ್&zwnj;ಗೆ ಡಿಕ್ಕಿ ಹೊಡೆದ ಪರಿಣಾಮ ಅಪ್ಪ, ಅಮ್ಮ ಹಾಗೂ ಮಗಳು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvg8cn1eg0psazdcgs92kpg6,imgname-vvj-1781883360302.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಕೋಟೆ (ಜೂ.19):&lt;/strong&gt; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ದೇವನಹಳ್ಳಿ ತಾಲ್ಲೂಕಿನ ತೆಲ್ಲಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಅಪ್ಪ, ಅಮ್ಮ ಹಾಗೂ ಮಗಳು ಎಂದು ತಿಳಿದುಬಂದಿದೆ.&lt;/p&gt;&lt;p&gt;ಸೂಲಿಬೆಲೆಯಿಂದ ದೇವನಹಳ್ಳಿ ಕಡೆಗೆ ಬೈಕ್&zwnj;ನಲ್ಲಿ ತೆರಳುತ್ತಿದ್ದ ವೇಳೆ, ಸೂಲಿಬೆಲೆ-ಹೊಸಕೋಟೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಬೈಕ್&zwnj;ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಬಸ್ ರಾಂಗ್ ರೂಟ್&zwnj;ನಲ್ಲಿ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಡಿಕ್ಕಿಯ ರಭಸಕ್ಕೆ ಬೈಕ್&zwnj;ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಘಟನೆಯ ಪರಿಣಾಮ ರಸ್ತೆ ಸಂಚಾರದಲ್ಲಿ ಭಾರೀ ಅಸ್ತವ್ಯಸ್ತತೆ ಉಂಟಾಗಿ, ಕೆಲಕಾಲ ಟ್ರಾಫಿಕ್ ಜಾಮ್ ನಿರ್ಮಾಣವಾಗಿತ್ತು. ಸೂಲಿಬೆಲೆ ವ್ಯಾಪ್ತಿಯಲ್ಲಿ ನಡೆದ ಈ ದುರ್ಘಟನೆ ಸ್ಥಳೀಯರಲ್ಲಿ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/hoskote-bmtc-bus-accident-three-family-members-killed-sulibele-gvd/articleshow-1tzmlgc"/>
        </item>
        <item>
            <title><![CDATA[ಎಂಆರ್‌ಜಿ ಗ್ರೂಪ್ ಮಾಲೀಕ, ಮಂಗಳೂರು ಮೂಲದ ಉದ್ಯಮಿ ಪ್ರಕಾಶ್ ಶೆಟ್ಟಿಯಿಂದ ಐಷಾರಾಮಿ ಖಾಸಗಿ ಜೆಟ್ ಖರೀದಿ!]]></title>
            <link>https://kannada.asianetnews.com/gallery/business/mangalaluru-entrepreneur-dr-k-prakash-shetty-adds-embraer-legacy-650jet-to-mrg-group-fleet-expands-global-business-gdp-v4qzmly</link>
            <guid isPermaLink="true">https://kannada.asianetnews.com/gallery/business/mangalaluru-entrepreneur-dr-k-prakash-shetty-adds-embraer-legacy-650jet-to-mrg-group-fleet-expands-global-business-gdp-v4qzmly</guid>
            <pubDate>Fri, 19 Jun 2026 21:02:13 +0530</pubDate>
            <description><![CDATA[&lt;p&gt;ಮಂಗಳೂರು ಮೂಲದ ಉದ್ಯಮಿ ,ಎಂಆರ್&zwnj;ಜಿ ಗ್ರೂಪ್&zwnj;ನ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ &amp;nbsp;'ಎಂಬ್ರೇಯರ್ ಲೆಗಸಿ 650' ಬಿಸಿನೆಸ್ ಜೆಟ್ ಅನ್ನು ಖರೀದಿಸಿದ್ದಾರೆ. ಈ ಅತ್ಯಾಧುನಿಕ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಸ್ವಾಗತಿಸಲಾಯಿತು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvg7ct8sd65grgzkqrjb5yep,imgname-mrg-group-prakash-shetty--5--1781882317081.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು ಮೂಲದ ಉದ್ಯಮಿ ,ಎಂಆರ್&zwnj;ಜಿ ಗ್ರೂಪ್&zwnj;ನ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ &amp;nbsp;'ಎಂಬ್ರೇಯರ್ ಲೆಗಸಿ 650' ಬಿಸಿನೆಸ್ ಜೆಟ್ ಅನ್ನು ಖರೀದಿಸಿದ್ದಾರೆ. ಈ ಅತ್ಯಾಧುನಿಕ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಸ್ವಾಗತಿಸಲಾಯಿತು.&amp;nbsp;&lt;/p&gt;&lt;img&gt;&lt;p&gt;ಮಂಗಳೂರು ಮೂಲದ ಖ್ಯಾತ ಉದ್ಯಮಿ, ಎಂಆರ್&zwnj;ಜಿ ಗ್ರೂಪ್&zwnj;ನ (MRG Group) ಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ತಮ್ಮ ಹೆಮ್ಮೆಯ ಉದ್ಯಮ ಸಾಮ್ರಾಜ್ಯದ ಮುಕುಟಕ್ಕೆ ಮತ್ತೊಂದು ಐಷಾರಾಮಿ ಗರಿಯನ್ನು ನೆಟ್ಟಿದ್ದಾರೆ . ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸುವ ಹಾಗೂ ಸಂಪರ್ಕ ಜಾಲವನ್ನು ಬಲಪಡಿಸುವ ದೂರದೃಷ್ಟಿಯೊಂದಿಗೆ, ಅವರು ಬರೋಬ್ಬರಿ 14 ಆಸನಗಳ ಸಾಮರ್ಥ್ಯದ ಅತ್ಯಾಧುನಿಕ 'ಎಂಬ್ರೇಯರ್ ಲೆಗಸಿ 650' (Embraer Legacy 650) ಬಿಸಿನೆಸ್ ಜೆಟ್ ವಿಮಾನವನ್ನು ಖರೀದಿಸಿ ತಮ್ಮ ಎಂಆರ್&zwnj;ಜಿ ಕುಟುಂಬಕ್ಕೆ ಸೇರ್ಪಡೆಗೊಳಿಸಿದ್ದಾರೆ. ಅಮೆರಿಕದಿಂದ ಅತ್ಯಂತ ವಿಶೇಷವಾಗಿ ಸ್ವಾಧೀನಪಡಿಸಿಕೊಂಡ ಈ ಖಾಸಗಿ ವಿಮಾನವು ಉದ್ಯಮ ರಂಗದಲ್ಲಿ ಅವರ ಯಶಸ್ಸಿನ ಉತ್ತುಂಗಕ್ಕೆ ಮತ್ತೊಂದು ಸಾಕ್ಷಿಯಾಗಿದೆ.&lt;/p&gt;&lt;img&gt;&lt;p&gt;ಅಮೆರಿಕದಿಂದ ಆಗಮಿಸಿದ ಈ ಅತ್ಯಾಧುನಿಕ ವಿಮಾನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (MIA) ಅತ್ಯಂತ ಸಾಂಪ್ರದಾಯಿಕ ಹಾಗೂ ಭವ್ಯ ಆಚರಣೆಗಳೊಂದಿಗೆ ಸ್ವಾಗತಿಸಲಾಯಿತು. ಭಾರತೀಯ ಸಂಸ್ಕೃತಿಯ ಪರಂಪರೆಯಂತೆ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ವಿಮಾನಕ್ಕೆ ವಿಶೇಷ ಪೂಜೆ ಹಾಗೂ ಮಂತ್ರಘೋಷಗಳ ಮೂಲಕ ಆಶೀರ್ವಾದವನ್ನು ಕೋರಲಾಯಿತು. ಆಧ್ಯಾತ್ಮಿಕ ಮತ್ತು ಆಧುನಿಕತೆಯ ಈ ಅಪೂರ್ವ ಸಂಗಮದ ಕ್ಷಣದಲ್ಲಿ ಡಾ. ಪ್ರಕಾಶ್ ಶೆಟ್ಟಿ ಅವರ ಕುಟುಂಬ ಸದಸ್ಯರು, ಆಪ್ತರು, ಸ್ನೇಹಿತರು ಹಾಗೂ ಅನೇಕ ಹಿತೈಷಿಗಳು ಉಪಸ್ಥಿತರಿದ್ದು ಸಂಭ್ರಮಿಸಿದರು.&lt;/p&gt;&lt;img&gt;&lt;p&gt;ದೇಶದ ಮುಂಚೂಣಿ ಹೋಟೆಲ್ ಉದ್ಯಮಿ ಮತ್ತು ಯಶಸ್ವಿ ದಿಕ್ಸೂಚಿಯಾಗಿರುವ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಶೂನ್ಯದಿಂದ ಆರಂಭಿಸಿ ಇಂದು ಎಂಆರ್&zwnj;ಜಿ ಗ್ರೂಪ್ ಅನ್ನು ದೇಶದ ಪ್ರಮುಖ ಉದ್ಯಮ ಸಂಸ್ಥೆಯಾಗಿ ಬೆಳೆಸಿದ್ದಾರೆ. ಕೇವಲ ಕಠಿಣ ಪರಿಶ್ರಮ, ವಿನಯ ಮತ್ತು ಅಪ್ರತಿಮ ದೂರದೃಷ್ಟಿಯ ಬಲದಿಂದ ಆತಿಥ್ಯ (Hospitality), ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯ (Infrastructure) ಕ್ಷೇತ್ರಗಳನ್ನು ಒಳಗೊಂಡ ವೈವಿಧ್ಯಮಯ ಉದ್ಯಮ ಪರಿಸರ ವ್ಯವಸ್ಥೆಯನ್ನು ಅವರು ನಿರ್ಮಿಸಿದ್ದಾರೆ. ದೇಶಾದ್ಯಂತ ಅತ್ಯುನ್ನತ ಗುಣಮಟ್ಟದ ಹೋಟೆಲ್&zwnj;ಗಳು ಮತ್ತು ರೆಸಾರ್ಟ್&zwnj;ಗಳನ್ನು ಸ್ಥಾಪಿಸಿ ಸಹಸ್ರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಕೇವಲ ವ್ಯಾಪಾರ ಕುಶಾಗ್ರಮತಿಯಷ್ಟೇ ಅಲ್ಲದೆ, ತಮ್ಮ ಉದಾರ ಲೋಕೋಪಕಾರಿ ಗುಣ, ದಾನ ಧರ್ಮಗಳು ಹಾಗೂ ಸಮಾಜಮುಖಿ ಚಿಂತನೆಗಳ ಮೂಲಕ ಸಮಾಜದಲ್ಲಿ ಅಪಾರ ಗೌರವ ಮತ್ತು ಮನ್ನಣೆಯನ್ನು ಗಳಿಸಿದ್ದಾರೆ.&lt;/p&gt;&lt;img&gt;&lt;p&gt;ದೀರ್ಘ ದೂರದ ಪ್ರಯಾಣ ಸಾಮರ್ಥ್ಯ (Long-range capabilities) ಮತ್ತು ಅತ್ಯುನ್ನತ ದರ್ಜೆಯ ಪ್ರೀಮಿಯಂ ಸೌಕರ್ಯಗಳಿಗೆ ಜಾಗತಿಕವಾಗಿ ಹೆಸರಾಗಿರುವ ಎಂಬ್ರೇಯರ್ ಲೆಗಸಿ 650 ಬಿಸಿನೆಸ್ ಜೆಟ್, ಎಂಆರ್&zwnj;ಜಿ ಸಮೂಹದ ವ್ಯಾಪಾರ ಚಟುವಟಿಕೆಗಳಿಗೆ ಅಭೂತಪೂರ್ವ ವೇಗವನ್ನು ನೀಡಲಿದೆ. ದೇಶದ ವಿವಿಧ ಮೂಲೆಗಳಲ್ಲಿ ಹರಡಿರುವ ಸಂಸ್ಥೆಯ ಉದ್ಯಮಗಳ ಉಸ್ತುವಾರಿ ಹಾಗೂ ತ್ವರಿತ ನಿರ್ಧಾರಗಳಿಗೆ ಈ ಖಾಸಗಿ ವಿಮಾನವು ಅತ್ಯುತ್ತಮ ಸಂಪರ್ಕ ಸೇತುವೆಯಾಗಲಿದೆ. ಪರಂಪರೆ, ನೈತಿಕ ಮೌಲ್ಯಗಳು ಹಾಗೂ ಆಧುನಿಕ ದೃಷ್ಟಿಕೋನವನ್ನು ಸಮನ್ವಯಗೊಳಿಸಿಕೊಂಡು ಯಶಸ್ಸಿನ ಶಿಖರ ಏರುತ್ತಿರುವ ಡಾ. ಕೆ. ಪ್ರಕಾಶ್ ಶೆಟ್ಟಿ ಅವರ ಸುದೀರ್ಘ ಸಾಧನೆಯ ಪಯಣದಲ್ಲಿ ಈ ಐಷಾರಾಮಿ ವಿಮಾನದ ಸೇರ್ಪಡೆಯು ನಿಜಕ್ಕೂ ಒಂದು ಸ್ಮರಣೀಯ ಹಾಗೂ ಐತಿಹಾಸಿಕ ಅಧ್ಯಾಯವಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಗ್ರೂಪ್ ಗೋಲ್ಡ್&zwnj;ಫಿಂಚ್ ಹೋಟೆಲ್&zwnj;ಗಳು ಮತ್ತು ಮ್ಯಾರಿಯಟ್ ಮತ್ತು ಹಿಲ್ಟನ್&zwnj;ನಂತಹ ಅಂತರರಾಷ್ಟ್ರೀಯ ಫ್ರಾಂಚೈಸಿಗಳು ಉತ್ತಮ ಭೋಜನ ಮತ್ತು ಶಿಕ್ಷಣ ಸೇರಿದಂತೆ ಬಹು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಬೆಂಗಳೂರು, ಮಂಗಳೂರು, ಮುಂಬೈ, ಗೋವಾ ಮತ್ತು ದೆಹಲಿಯಾದ್ಯಂತ ಆಸ್ತಿಗಳನ್ನು ಹೊಂದಿರುವ ಗೋಲ್ಡ್&zwnj;ಫಿಂಚ್ ಬೂಟೀಕ್ ಹೋಟೆಲ್ ಸರಪಳಿಯ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಎಂಆರ್&zwnj;ಜಿ ಗ್ರೂಪ್&zwnj; ಹೊಂದಿದೆ. ಜೊತೆಗೆ ಸನಾ-ಡಿ-ಗೆ (ಕರಾವಳಿ ಪಾಕಪದ್ಧತಿ), ಕಬಾಬ್ ಸ್ಟುಡಿಯೋ ಮತ್ತು ಲೆಗಸಿ ಆಫ್ ಪಂಜಾಬ್&zwnj;ನಂತಹ ಉನ್ನತ ದರ್ಜೆಯ ರೆಸ್ಟೋರೆಂಟ್ ಬ್ರಾಂಡ್&zwnj;ಗಳನ್ನು ಸಹ ಹೊಂದಿದೆ. ಇದರ ಜೊತೆಗೆ ಐಟಿ ಪಾರ್ಕ್&zwnj;ಗಳು, ಐಷಾರಾಮಿ ಅಪಾರ್ಟ್&zwnj;ಮೆಂಟ್&zwnj;, ಉದಾಹರಣೆಗೆ ಆಹಿಕಾ ಮತ್ತು ಪಾರ್ಕ್ ಡ್ರೈವ್ ಭಾರತದಾದ್ಯಂತ ರಿಯಲ್ ಎಸ್ಟೇಟ್ ಉದ್ಯಮ ಹೊಂದಿದೆ. ಈ ಗುಂಪು ಕೃಷಿ-ಉದ್ಯಮ, ಹಣಕಾಸು ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ದೇಶ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/mangalaluru-entrepreneur-dr-k-prakash-shetty-adds-embraer-legacy-650jet-to-mrg-group-fleet-expands-global-business-gdp-v4qzmly"/>
        </item>
        <item>
            <title><![CDATA[Bidadi township: ಬಿಡದಿ ಟೌನ್‌ಶಿಪ್‌ ರೈತರಿಗೆ ಬಂಪರ್ ಪರಿಹಾರ: ಪ್ರತಿ ಎಕರೆಗೆ ₹2.30 ಕೋಟಿ ಚೆಕ್ ವಿತರಣೆ!]]></title>
            <link>https://kannada.asianetnews.com/gallery/karnataka-districts/bengaluru-south-bidadi-township-land-compensation-farmers-2-crore-per-acre-mla-hc-balakrishna-gfbblv8</link>
            <guid isPermaLink="true">https://kannada.asianetnews.com/gallery/karnataka-districts/bengaluru-south-bidadi-township-land-compensation-farmers-2-crore-per-acre-mla-hc-balakrishna-gfbblv8</guid>
            <pubDate>Fri, 19 Jun 2026 20:17:24 +0530</pubDate>
            <description><![CDATA[&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸರ್ಕಾರವು ಪರಿಹಾರ ಚೆಕ್ ವಿತರಣೆ ಆರಂಭಿಸಿದೆ. ಪ್ರತಿ ಎಕರೆಗೆ 2.30 ಕೋಟಿ ರೂ. ಹಾಗೂ ಬೆಳೆಗಳಿಗೆ ಪ್ರತ್ಯೇಕ ಪರಿಹಾರ ನೀಡಲಾಗುತ್ತಿದ್ದು, ಶಾಸಕ ಬಾಲಕೃಷ್ಣ ಅವರು ರೈತರಿಗೆ ಹಣ ಖಾತೆಗೆ ಜಮೆಯಾಗುವ ಭರವಸೆ ನೀಡಿದ್ದಾರೆ. ಈ ಗ್ರಾಮಗಳ ಹಣ ವಿತರಣೆ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvg50n2p48dk3531dkh69v7r,imgname-bidadi-township-land-compensation-1781879821398.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಡದಿ ಟೌನ್&zwnj;ಶಿಪ್ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸರ್ಕಾರವು ಪರಿಹಾರ ಚೆಕ್ ವಿತರಣೆ ಆರಂಭಿಸಿದೆ. ಪ್ರತಿ ಎಕರೆಗೆ 2.30 ಕೋಟಿ ರೂ. ಹಾಗೂ ಬೆಳೆಗಳಿಗೆ ಪ್ರತ್ಯೇಕ ಪರಿಹಾರ ನೀಡಲಾಗುತ್ತಿದ್ದು, ಶಾಸಕ ಬಾಲಕೃಷ್ಣ ಅವರು ರೈತರಿಗೆ ಹಣ ಖಾತೆಗೆ ಜಮೆಯಾಗುವ ಭರವಸೆ ನೀಡಿದ್ದಾರೆ. ಈ ಗ್ರಾಮಗಳ ಹಣ ವಿತರಣೆ ಆಗಿದೆ.&lt;/p&gt;&lt;img&gt;&lt;p&gt;&lt;strong&gt;ರಾಮನಗರ (ಜೂ.19): ರಾ&lt;/strong&gt;ಜ್ಯದ ಬಹುಚರ್ಚಿತ ಬಿಡದಿ ಟೌನ್&zwnj;ಶಿಪ್ (Bidadi Township) ಯೋಜನೆಯ ಜಟಾಪಟಿಗಳ ನಡುವೆಯೇ, ಭೂಮಿ ಕಳೆದುಕೊಳ್ಳುವ ರೈತರಿಗೆ ಭೂ ಪರಿಹಾರದ ಚೆಕ್ ವಿತರಿಸುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBDA) ವತಿಯಿಂದ ಯೋಜನೆಯ ಪಾಲುದಾರರು ಹಾಗೂ ಭೂಮಿ ನೀಡಲು ಸಮ್ಮತಿಸಿರುವ ರೈತರಿಗೆ ಶನಿವಾರ ಸಾಂಕೇತಿಕವಾಗಿ ಪರಿಹಾರದ ಚೆಕ್&zwnj;ಗಳನ್ನು ವಿತರಿಸಲಾಯಿತು. ಒಂದು ಎಕರೆಗೆ 2.30 ಕೋಟಿ ಪರಿಹಾರವನ್ನು ನೀಡಿದೆ.&lt;/p&gt;&lt;img&gt;&lt;p&gt;ರಾಮನಗರದ ಕಂದಾಯ ಭವನದಲ್ಲಿರುವ ಜಿಬಿಡಿಎ (GBDA) ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹಾಗೂ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜು ಅವರು ಫಲಾನುಭವಿ ರೈತರಿಗೆ ಚೆಕ್ ಹಸ್ತಾಂತರಿಸಿದರು. ಮೊದಲ ಹಂತದಲ್ಲಿ ಯೋಜನೆಗೆ ಒಪ್ಪಿಗೆ ನೀಡಿರುವ ಕೆಂಪಯ್ಯನಪಾಳ್ಯ ಗ್ರಾಮದ 7 ಮಂದಿ ಭೂ ಮಾಲೀಕರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಯಿತು.&lt;/p&gt;&lt;img&gt;&lt;p&gt;&lt;strong&gt;ಎಕರೆಗೆ 2.30 ಕೋಟಿ ರೂಪಾಯಿ ಪರಿಹಾರ!&lt;/strong&gt;&lt;/p&gt;&lt;p&gt;ರೈತರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವು ಭಾರಿ ಕುತೂಹಲ ಮೂಡಿಸಿದೆ. ಅಂತಿಮ ಅಧಿಸೂಚನೆಗೆ ಒಳಪಟ್ಟಿರುವ ಗ್ರಾಮಗಳಲ್ಲಿ ಪ್ರತಿ ಎಕರೆ ಜಮೀನಿಗೆ ಬರೋಬ್ಬರಿ 2 ಕೋಟಿ 30 ಲಕ್ಷದ 7 ಸಾವಿರ ರೂಪಾಯಿ ಪರಿಹಾರ ಹಣವನ್ನು ನಿಗದಿಪಡಿಸಲಾಗಿದೆ. ಕೇವಲ ಭೂಮಿಗೆ ಮಾತ್ರವಲ್ಲದೆ, ಜಮೀನಿನಲ್ಲಿ ಬೆಳೆದ ಬೆಳೆಗಳಿಗೂ ಪ್ರತ್ಯೇಕ ಮತ್ತು ವೈಜ್ಞಾನಿಕವಾಗಿ ಹೆಚ್ಚಿನ ಪರಿಹಾರವನ್ನು ನೀಡಲಾಗುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಬೆಳೆಗಳ ಪರಿಹಾರದ ವಿವರ ಇಂತಿದೆ:&lt;/strong&gt;&lt;/p&gt;&lt;ul&gt; &lt;li&gt;ತೆಂಗಿನ ಮರ (ಒಂದಕ್ಕೆ): ₹40,446&lt;/li&gt; &lt;li&gt;ಮಾವಿನ ಗಿಡ (ಒಂದಕ್ಕೆ): ₹62,000&lt;/li&gt; &lt;li&gt;ಅಡಿಕೆ ಮರ (ಒಂದಕ್ಕೆ): ₹7,440&lt;/li&gt; &lt;li&gt;ಬಾಳೆ (ಪ್ರತಿ ಎಕರೆಗೆ): ₹10.86 ಲಕ್ಷ&lt;/li&gt; &lt;li&gt;ರೇಷ್ಮೆ (ಪ್ರತಿ ಎಕರೆಗೆ): ₹14 ಲಕ್ಷ&lt;/li&gt; &lt;li&gt;ಹಲಸು (ಪ್ರತಿ ಎಕರೆಗೆ): ₹42,750&lt;/li&gt; &lt;li&gt;ಹುಣಸೆ (ಪ್ರತಿ ಎಕರೆಗೆ): ₹53,310&amp;nbsp;&amp;nbsp;&lt;/li&gt;&lt;/ul&gt;&lt;p&gt;ವಿಶೇಷವೆಂದರೆ, ಕೇವಲ ಒಂದು ಗುಂಟೆ ಜಮೀನು ಕಳೆದುಕೊಳ್ಳುವ ಸಣ್ಣ ರೈತರಿಗೂ ನ್ಯಾಯ ಒದಗಿಸಲು ಜಿಬಿಡಿಎ ಮುಂದಾಗಿದೆ. ಅಂತಹ ರೈತರಿಗೆ 5 ಲಕ್ಷ ರೂಪಾಯಿಗಳ ಇಡಿಗಂಟು ಪರಿಹಾರ ನೀಡಲು ನಿರ್ಧರಿಸಲಾಗಿದೆ.&lt;/p&gt;&lt;img&gt;&lt;p&gt;ಶಾಸಕ ಬಾಲಕೃಷ್ಣ ಅವರ ಸವಾಲು:&lt;/p&gt;&lt;p&gt;ಚೆಕ್ ವಿತರಿಸಿ ಮಾತನಾಡಿದ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ವಿರೋಧ ಪಕ್ಷಗಳ ಟೀಕೆಗೆ ಕಡಕ್ ಉತ್ತರ ನೀಡಿದ್ದಾರೆ. &quot;ಯೋಜನೆಗೆ ಒಪ್ಪಿಗೆ ನೀಡಿ ನೋಟಿಸ್ ಪಡೆದಿರುವ ರೈತರಿಗೆ ಒಂದು ವಾರದೊಳಗೆ ಅವರ ಖಾತೆಗೆ ಹಣ ಸಂದಾಯವಾಗಲಿದೆ. ಒಂದು ವೇಳೆ ರೈತರಿಗೆ ಹಣ ಕೊಡಿಸಲು ಸಾಧ್ಯವಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ&quot; ಎಂದು ಸವಾಲು ಹಾಕಿದ್ದಾರೆ. ರೈತರಿಗೆ ಯಾವುದೇ ಆತಂಕ ಬೇಡ, ಸರ್ಕಾರ ಅವರ ಬೆನ್ನಿಗಿದೆ ಎಂದು ಅವರು ಭರವಸೆ ನೀಡಿದರು.&lt;/p&gt;&lt;img&gt;&lt;p&gt;&lt;strong&gt;ಯಾವ ಗ್ರಾಮಗಳಿಗೆ ಮೊದಲ ಹಂತದ ಪರಿಹಾರ?&lt;/strong&gt;&lt;/p&gt;&lt;p&gt;ಸದ್ಯ ಟೌನ್&zwnj;ಶಿಪ್ ಯೋಜನೆಯ ಒಟ್ಟು 9 ಗ್ರಾಮಗಳ ಪೈಕಿ ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ವಡೇರಹಳ್ಳಿ ಗ್ರಾಮಗಳ ಒಟ್ಟು 519 ಎಕರೆ ಪ್ರದೇಶಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ನಾಳೆಯಿಂದ ಅಂತಿಮ ಅಧಿಸೂಚನೆಗೆ ಒಳಪಟ್ಟಿರುವ ಈ ಗ್ರಾಮಗಳ ಉಳಿದ ರೈತರಿಗೂ ಹಂತ ಹಂತವಾಗಿ ಪರಿಹಾರ ನೀಡಲು ಜಿಬಿಡಿಎ ಸರ್ವ ಸಿದ್ಧತೆ ಮಾಡಿಕೊಂಡಿದೆ. ಟೌನ್&zwnj;ಶಿಪ್ ವಿರೋಧದ ನಡುವೆಯೂ ರೈತರು ಸ್ವಯಂಪ್ರೇರಿತರಾಗಿ ಭೂಮಿ ನೀಡಲು ಮುಂದೆ ಬರುತ್ತಿರುವುದು ಮತ್ತು ಸರ್ಕಾರ ಆಕರ್ಷಕ ಪರಿಹಾರ ನೀಡುತ್ತಿರುವುದು ಯೋಜನೆಯ ವೇಗವನ್ನು ಹೆಚ್ಚಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/bengaluru-south-bidadi-township-land-compensation-farmers-2-crore-per-acre-mla-hc-balakrishna-gfbblv8"/>
        </item>
        <item>
            <title><![CDATA[Bengaluru: ಲಿಂಗ ತಾರತಮ್ಯದ ಗೋಡೆ ಮುರಿದ ಯುವಕರು: ನರ್ಸಿಂಗ್ ರಂಗಕ್ಕೆ  ಪುರುಷರು, ಐದೇ ವರ್ಷದಲ್ಲಿ 450% ಏರಿಕೆ!]]></title>
            <link>https://kannada.asianetnews.com/state/male-nurses-in-india-rguhs-reports-a-stunning-450-percentage-surge-in-male-nursing-graduates-gdp/articleshow-3vr8ci4</link>
            <guid isPermaLink="true">https://kannada.asianetnews.com/state/male-nurses-in-india-rguhs-reports-a-stunning-450-percentage-surge-in-male-nursing-graduates-gdp/articleshow-3vr8ci4</guid>
            <pubDate>Fri, 19 Jun 2026 20:07:38 +0530</pubDate>
            <description><![CDATA[ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ನರ್ಸಿಂಗ್ ಕ್ಷೇತ್ರದಲ್ಲಿ ಪುರುಷರ ಸಂಖ್ಯೆ ಐದು ವರ್ಷಗಳಲ್ಲಿ ಶೇ. 450ರಷ್ಟು ಹೆಚ್ಚಾಗಿದೆ. ಜಾಗತಿಕ ಬೇಡಿಕೆ, ಉದ್ಯೋಗ ಭದ್ರತೆ, ಆಕರ್ಷಕ ವೇತನ ಮತ್ತು ಸುಲಭ ಪ್ರವೇಶಾವಕಾಶಗಳು ಈ ಐತಿಹಾಸಿಕ ಬದಲಾವಣೆಗೆ ಪ್ರಮುಖ ಕಾರಣಗಳಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jxcb0fx95ms4wpgygemd3hmw,imgname-bstc-staff-nurse-recruitment-2025-1749539635113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (RGUHS) ಇತ್ತೀಚಿನ ಘಟಿಕೋತ್ಸವದ ಅಂಕಿ-ಅಂಶಗಳು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಒಂದು ಅಭೂತಪೂರ್ವ ಮತ್ತು ಐತಿಹಾಸಿಕ ಬದಲಾವಣೆಯನ್ನು ಬಹಿರಂಗಪಡಿಸಿದೆ. ಇದುವರೆಗೆ ಮಹಿಳೆಯರೇ ಪ್ರಧಾನವಾಗಿದ್ದ ನರ್ಸಿಂಗ್ ಕ್ಷೇತ್ರದಲ್ಲಿ ಇದೀಗ ಪುರುಷರ ಹೆಜ್ಜೆಯ ಗುರುತುಗಳು ದಟ್ಟವಾಗುತ್ತಿವೆ. ಪ್ರಸಕ್ತ ಸಾಲಿನಲ್ಲಿ ಬಿಎಸ್ಸಿ ನರ್ಸಿಂಗ್ ಪದವಿ ಪಡೆದ ಒಟ್ಟು 31,057 ವಿದ್ಯಾರ್ಥಿಗಳಲ್ಲಿ 10,000 ಕ್ಕೂ ಹೆಚ್ಚು ಪುರುಷ ವಿದ್ಯಾರ್ಥಿಗಳಿದ್ದು, ಅವರ ಒಟ್ಟು ಪಾಲು ಶೇಕಡಾ 33 ಕ್ಕೆ ಏರಿಕೆಯಾಗಿದೆ. ಕೇವಲ ಐದು ವರ್ಷಗಳ ಹಿಂದೆ ಅಂದರೆ 2021 ರಲ್ಲಿ ನರ್ಸಿಂಗ್ ಮುಗಿಸಿದ ಪುರುಷರ ಸಂಖ್ಯೆ ಕೇವಲ 1,838 ಆಗಿತ್ತು ಎಂಬುದನ್ನು ಗಮನಿಸಿದರೆ, ಈ ಐದು ವರ್ಷಗಳ ಅವಧಿಯಲ್ಲಿ ಪುರುಷ ದಾದಿಯರ ಸಂಖ್ಯೆಯಲ್ಲಿ ಶೇಕಡಾ 450 ರಷ್ಟು ಬೃಹತ್ ಬೆಳವಣಿಗೆಯಾಗಿರುವುದು ಸ್ಪಷ್ಟವಾಗುತ್ತದೆ. 2026 ರ ಸಾಲಿನಲ್ಲಿ ಪದವಿ ಪಡೆದ ಒಟ್ಟು ಆರೋಗ್ಯ ವಿಜ್ಞಾನ ವಿದ್ಯಾರ್ಥಿಗಳಲ್ಲಿ ನರ್ಸಿಂಗ್ ಹೊರತುಪಡಿಸಿ ಕೇವಲ ಎಂಬಿಬಿಎಸ್ ಮತ್ತು ಬಿ ಫಾರ್ಮಾ ಕೋರ್ಸ್&zwnj;ಗಳಲ್ಲಿ ಮಾತ್ರ ಪುರುಷರು ಮುಂಚೂಣಿಯಲ್ಲಿದ್ದಾರೆ.&lt;/p&gt;&lt;h2&gt;ಎಂಬಿಬಿಎಸ್ ಮತ್ತು ಫಾರ್ಮಸಿ ಕೋರ್ಸ್&zwnj;ಗಳ ಲಿಂಗ ಅನುಪಾತದ ಚಿತ್ರಣ&lt;/h2&gt;&lt;p&gt;ವೈದ್ಯಕೀಯ ಶಿಕ್ಷಣದ ವಿವಿಧ ವಿಭಾಗಗಳಲ್ಲಿ ಲಿಂಗ ಆಧಾರಿತ ತಾರತಮ್ಯ ಅಥವಾ ವಿಭಜನೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಸಾಗುತ್ತಿದೆ. ಫಾರ್ಮಸಿ ಅಧ್ಯಯನದಲ್ಲಿ ಲಿಂಗ ವಿಭಜನೆಯ ಅಂತರವು ಕಾಲಕ್ರಮೇಣ ಕಡಿಮೆಯಾಗುತ್ತಿದ್ದರೂ, ಎಂಬಿಬಿಎಸ್ ಕೋರ್ಸ್&zwnj;ನಲ್ಲಿ ಮಾತ್ರ ಹುಡುಗರು ಮತ್ತು ಹುಡುಗಿಯರ ನಡುವಿನ ವ್ಯತ್ಯಾಸವು ಸ್ಥಿರವಾಗಿ ಮುಂದುವರಿದಿದೆ. ಕಳೆದ 2022 ರಿಂದ ಎಂಬಿಬಿಎಸ್&zwnj;ನಲ್ಲಿ ಹುಡುಗರು ಮತ್ತು ಹುಡುಗಿಯರ ನಡುವೆ ಸರಾಸರಿ 465 ವಿದ್ಯಾರ್ಥಿಗಳ ಅಂತರ ಕಾಯ್ದುಕೊಂಡು ಬರಲಾಗಿದೆ. 2022 ರ ವರ್ಷದಲ್ಲಿ ಹುಡುಗರು ಹುಡುಗಿಯರಿಗಿಂತ 581 ರಷ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದರು. ತದನಂತರ 2023 ರಲ್ಲಿ ಈ ಅಂತರವು 198 ಕ್ಕೆ ಇಳಿಕೆ ಕಂಡಿತಾದರೂ, 2025 ರ ಹೊತ್ತಿಗೆ 774 ವಿದ್ಯಾರ್ಥಿಗಳ ಗರಿಷ್ಠ ಅಂತರಕ್ಕೆ ತಲುಪಿತು. ಪ್ರಸಕ್ತ 2026 ರ ಸಾಲಿನಲ್ಲಿ ಆರ್&zwnj;ಜಿಯುಎಚ್&zwnj;ಎಸ್ ವಿಶ್ವವಿದ್ಯಾಲಯದಿಂದ 4,125 ಹುಡುಗರು ಮತ್ತು 3,712 ಹುಡುಗಿಯರು ಎಂಬಿಬಿಎಸ್ ಪದವಿ ಪಡೆದು ಹೊರಬಂದಿದ್ದಾರೆ. ಇನ್ನುಳಿದಂತೆ ಫಾರ್ಮಸಿ ವಿಭಾಗದಲ್ಲಿ 2,991 ಹುಡುಗಿಯರಿಗೆ ಪ್ರತಿಯಾಗಿ 3,720 ಹುಡುಗರು ಪದವಿ ಪಡೆದಿದ್ದರೆ, ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಅಂದರೆ ಬಿಡಿಎಸ್ ಕೋರ್ಸ್&zwnj;ನಲ್ಲಿ ಮಾತ್ರ ಸಂಪೂರ್ಣವಾಗಿ ಹುಡುಗಿಯರೇ ಮೇಲುಗೈ ಸಾಧಿಸಿದ್ದು, ಇಲ್ಲಿ 727 ಹುಡುಗರು ಹಾಗೂ 1,752 ಹುಡುಗಿಯರು ಪದವಿ ಪಡೆದಿದ್ದಾರೆ.&lt;/p&gt;&lt;h2&gt;ಜಾಗತಿಕ ಬೇಡಿಕೆ ಮತ್ತು ಉದ್ಯೋಗ ಭದ್ರತೆಯ ಆಕರ್ಷಣೆ&lt;/h2&gt;&lt;p&gt;ನರ್ಸಿಂಗ್ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಆರೋಗ್ಯ ವಿಜ್ಞಾನ ಕೋರ್ಸ್&zwnj;ಗಳಿಗೆ ಇಂದು ಜಾಗತಿಕ ಮಟ್ಟದಲ್ಲಿ ಅತ್ಯಂತ ಬಲವಾದ ಬೇಡಿಕೆ ಸೃಷ್ಟಿಯಾಗಿದೆ. ಈ ಕುರಿತು ಮಾತನಾಡಿರುವ ಆರ್&zwnj;ಜಿಯುಎಚ್&zwnj;ಎಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಭಗವಾನ್ ಬಿ.ಸಿ ಅವರು, ಪ್ರಸ್ತುತ ದಿನಗಳಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿದ ತಕ್ಷಣವೇ ಉದ್ಯೋಗ ದೊರೆಯುವ ವಾತಾವರಣವಿದೆ ಎಂದು ತಿಳಿಸಿದ್ದಾರೆ. ಜಪಾನ್, ಆಸ್ಟ್ರೇಲಿಯಾ ಹಾಗೂ ಜರ್ಮನಿಯಂತಹ ಪ್ರಮುಖ ಯುರೋಪಿಯನ್ ರಾಷ್ಟ್ರಗಳಲ್ಲಿ ಭಾರತೀಯ ದಾದಿಯರಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಇತರ ಎಲ್ಲಾ ರಂಗಗಳಲ್ಲಿ ಉದ್ಯೋಗ ತೃಪ್ತಿ ಮತ್ತು ಭದ್ರತೆಯ ಕೊರತೆ ಕಾಣಿಸುತ್ತಿದ್ದರೂ, ಆರೋಗ್ಯ ರಕ್ಷಣಾ ಕ್ಷೇತ್ರ ಮಾತ್ರ ಹಿಂದೆಂದಿಗಿಂತಲೂ ವೇಗವಾಗಿ ವಿಸ್ತರಿಸುತ್ತಿದ್ದು, ಯುವಕರಿಗೆ ಭರವಸೆಯ ಉದ್ಯೋಗ ಭದ್ರತೆಯನ್ನು ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;ಪುರುಷ ದಾದಿಯರ ಆದ್ಯತೆ ಮತ್ತು ಆಕರ್ಷಕ ವೇತನದ ಸೌಲಭ್ಯ&lt;/h2&gt;&lt;p&gt;ಇಂದಿನ ಆಧುನಿಕ ಆರೋಗ್ಯ ವ್ಯವಸ್ಥೆಯಲ್ಲಿ ಪುರುಷ ನರ್ಸ್&zwnj;ಗಳ ಅನಿವಾರ್ಯತೆ ಮತ್ತು ಆದ್ಯತೆಗಳು ಹೆಚ್ಚಾಗುತ್ತಿವೆ. ಕರ್ನಾಟಕ ರಾಜ್ಯ ಅಸೋಸಿಯೇಷನ್ ​​ಆಫ್ ಮ್ಯಾನೇಜ್&zwnj;ಮೆಂಟ್ಸ್ ಆಫ್ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಇನ್&zwnj;ಸ್ಟಿಟ್ಯೂಷನ್&zwnj;ಗಳ ಅಧ್ಯಕ್ಷರಾದ ಎಸ್. ಶಿವಕುಮಾರ್ ಅವರ ಪ್ರಕಾರ, ವಿಮಾನ ನಿಲ್ದಾಣಗಳು, ಬೃಹತ್ ಕೈಗಾರಿಕೆಗಳು, ಆಂಬ್ಯುಲೆನ್ಸ್ ಸೇವೆಗಳು ಹಾಗೂ ರಾತ್ರಿ ಪಾಳಿಯ ಕೆಲಸಗಳು ಇರುವಡೆ ಪುರುಷ ದಾದಿಯರನ್ನೇ ಹೆಚ್ಚಾಗಿ ಇಷ್ಟಪಡಲಾಗುತ್ತದೆ. ಇದರೊಂದಿಗೆ ಪ್ರತಿಯೊಂದು ಪ್ರತಿಷ್ಠಿತ ಆಸ್ಪತ್ರೆಯೂ ನಿಯಮಾನುಸಾರ ಲಿಂಗ ಅನುಪಾತವನ್ನು ಕಾಯ್ದುಕೊಳ್ಳಬೇಕಾಗಿರುವುದರಿಂದ ಉದ್ಯೋಗಾವಕಾಶಗಳು ಸುಲಭವಾಗಿ ಸಿಗುತ್ತಿವೆ. ಉತ್ತಮ ಅರ್ಹತೆಯುಳ್ಳ ದಾದಿಯರ ಕೊರತೆ ಇರುವುದರಿಂದ, ಪದವಿ ಮುಗಿಸಿ ನೋಂದಣಿ ಮಾಡಿಕೊಂಡ ತಕ್ಷಣವೇ ವಿದ್ಯಾರ್ಥಿಗಳು ಒಳ್ಳೆಯ ಆಸ್ಪತ್ರೆ ಸೇರಿ ಕೇವಲ ಒಂದು ವರ್ಷದ ಅನುಭವ ಪಡೆದು ನೇರವಾಗಿ ವಿದೇಶಗಳಿಗೆ ಹಾರುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇವರಿಗೆ ಸಿಗುವ ವೇತನ ಮತ್ತು ಸೌಲಭ್ಯಗಳು ಅತ್ಯಂತ ಆಕರ್ಷಕವಾಗಿದ್ದು, ಇತರರು ಅಸೂಯೆ ಪಡುವಂತಿದೆ.&lt;/p&gt;&lt;h2&gt;ಕೇರಳದ ಒಳಹರಿವು ಮತ್ತು ಕಡಿಮೆ ಶೈಕ್ಷಣಿಕ ವೆಚ್ಚದ ಅನುಕೂಲ&lt;/h2&gt;&lt;p&gt;ಸಾಂಪ್ರದಾಯಿಕವಾಗಿ ಕೇರಳ ರಾಜ್ಯದಲ್ಲಿ ಪುರುಷ ದಾದಿಯರ ಸಂಖ್ಯೆ ಮೊದಲಿನಿಂದಲೂ ಹೆಚ್ಚಾಗಿದೆ. ಅಲ್ಲಿನ ಕುಟುಂಬಗಳಲ್ಲಿ ಈಗಾಗಲೇ ಯಾರಾದರೂ ಒಬ್ಬರು ನರ್ಸಿಂಗ್ ವೃತ್ತಿಯಲ್ಲಿದ್ದರೆ, ಆ ವೃತ್ತಿಯ ಗೌರವ ಮತ್ತು ಆರ್ಥಿಕ ಸುಭದ್ರತೆಯ ಅರಿವು ಇಡೀ ಕುಟುಂಬಕ್ಕೆ ಇರುತ್ತದೆ. ಹೀಗಾಗಿ ಪ್ರಸ್ತುತ ದಿನಗಳಲ್ಲಿ ಕೇರಳದಿಂದ ಕರ್ನಾಟಕಕ್ಕೆ ಪುರುಷ ನರ್ಸಿಂಗ್ ವಿದ್ಯಾರ್ಥಿಗಳ ಬಲವಾದ ಒಳಹರಿವು ಕಂಡುಬರುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಸರ್ಕಾರಿ ಕೋಟಾದ ಸೀಟುಗಳ ಶುಲ್ಕವು ಅತ್ಯಂತ ಕಡಿಮೆಯಾಗಿರುವುದರಿಂದ, ಹೊರರಾಜ್ಯಗಳ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಮಧ್ಯಮ ವರ್ಗದ ಯುವಕರು ನರ್ಸಿಂಗ್ ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ.&lt;/p&gt;&lt;h2&gt;ಸುಲಭ ಪ್ರವೇಶ ಹಾಗೂ ದೈಹಿಕ ಸಾಮರ್ಥ್ಯದ ಪ್ರಯೋಜನಗಳು&lt;/h2&gt;&lt;p&gt;ನರ್ಸಿಂಗ್ ಕ್ಷೇತ್ರದ ಈ ಬೆಳವಣಿಗೆಯ ಮತ್ತೊಂದು ಮೌಲ್ಯಯುತ ಆಯಾಮವನ್ನು ಬಂಜಾರ ಅಕಾಡೆಮಿಯ ಸಂಸ್ಥಾಪಕರಾದ ಅಲಿ ಖ್ವಾಜಾ ಅವರು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ, ನರ್ಸಿಂಗ್ ಕೋರ್ಸ್ ಇತರ ವೃತ್ತಿಪರ ಕೋರ್ಸ್&zwnj;ಗಳಂತೆ ತೀವ್ರವಾದ ಪೈಪೋಟಿಯಿಂದ ಕೂಡಿಲ್ಲ ಮತ್ತು ಇಲ್ಲಿ ಪ್ರವೇಶ ಪಡೆಯುವುದು ತುಲನಾತ್ಮಕವಾಗಿ ಸುಲಭವಾಗಿದೆ. ಕಠಿಣವಾದ ನೀಟ್ (NEET) ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣರಾಗಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುವ ಸರಾಸರಿ ವಿದ್ಯಾರ್ಥಿಗಳಿಗೆ ನರ್ಸಿಂಗ್ ಒಂದು ಅತ್ಯುತ್ತಮ ಪರ್ಯಾಯ ಮಾರ್ಗವಾಗಿ ಗೋಚರಿಸುತ್ತಿದೆ. ಇದರ ಜೊತೆಗೆ ವೈದ್ಯಕೀಯ ರಂಗದಲ್ಲಿ ರೋಗಿಗಳನ್ನು ಎತ್ತುವುದು, ವರ್ಗಾಯಿಸುವುದು ಸೇರಿದಂತೆ ಕಠಿಣ ದೈಹಿಕ ಶ್ರಮದ ಅಗತ್ಯವಿರುವ ತುರ್ತು ಸಂದರ್ಭಗಳಲ್ಲಿ ಪುರುಷ ದಾದಿಯರನ್ನು ಹೆಚ್ಚು ಸಮರ್ಥರೆಂದು ಪರಿಗಣಿಸಲಾಗುತ್ತದೆ. ಈ ಎಲ್ಲಾ ಸಕಾರಾತ್ಮಕ ಅಂಶಗಳು ಮತ್ತು ವಿದೇಶಿ ಉದ್ಯೋಗದ ಸುವರ್ಣ ಅವಕಾಶಗಳು ಇಂದಿನ ಯುವ ಪೀಳಿಗೆಯನ್ನು ನರ್ಸಿಂಗ್ ಕ್ಷೇತ್ರದತ್ತ ಮುಖ ಮಾಡುವಂತೆ ಪ್ರೇರೇಪಿಸುತ್ತಿವೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/state/male-nurses-in-india-rguhs-reports-a-stunning-450-percentage-surge-in-male-nursing-graduates-gdp/articleshow-3vr8ci4"/>
        </item>
        <item>
            <title><![CDATA[Gruhalakshmi Scheme Update: ಗೃಹಲಕ್ಷ್ಮಿಗೆ ಹೊಸ ಅರ್ಜಿ ಸಲ್ಲಿಕೆ ಕೈಬಿಟ್ಟ ಸರ್ಕಾರ, ಕೇವಲ ಮರು ಪರಿಶೀಲನೆ!]]></title>
            <link>https://kannada.asianetnews.com/gallery/state/karnataka-gruhalakshmi-scheme-big-update-not-new-application-re-verification-mandatory-voter-id-details-s8sqee4</link>
            <guid isPermaLink="true">https://kannada.asianetnews.com/gallery/state/karnataka-gruhalakshmi-scheme-big-update-not-new-application-re-verification-mandatory-voter-id-details-s8sqee4</guid>
            <pubDate>Fri, 19 Jun 2026 19:30:05 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು 'ಗೃಹಲಕ್ಷ್ಮಿ' (Gruhalakhsmi) ಯೋಜನೆಯಲ್ಲಿನ ಆರ್ಥಿಕ ಸೋರಿಕೆ ತಡೆಯಲು ಮುಂದಾಗಿದೆ. ಹೊಸ ಅರ್ಜಿ ಸಲ್ಲಿಕೆಗೆ ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಅದನ್ನ ಕೈಬಿಟ್ಟು, ಕಡ್ಡಾಯ ದಾಖಲೆಗಳೊಂದಿಗೆ ಕೇವಲ 'ಮರು ಪರಿಶೀಲನೆ' ನಡೆಸಲು ತೀರ್ಮಾನಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktsyph0yspbyqw49w06ew3jt,imgname-----------------------2026-06-11t050817.040-1781135000606.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಸರ್ಕಾರವು 'ಗೃಹಲಕ್ಷ್ಮಿ' (Gruhalakhsmi) ಯೋಜನೆಯಲ್ಲಿನ ಆರ್ಥಿಕ ಸೋರಿಕೆ ತಡೆಯಲು ಮುಂದಾಗಿದೆ. ಹೊಸ ಅರ್ಜಿ ಸಲ್ಲಿಕೆಗೆ ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಅದನ್ನ ಕೈಬಿಟ್ಟು, ಕಡ್ಡಾಯ ದಾಖಲೆಗಳೊಂದಿಗೆ ಕೇವಲ 'ಮರು ಪರಿಶೀಲನೆ' ನಡೆಸಲು ತೀರ್ಮಾನಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು (ಜೂ.19): ಕ&lt;/strong&gt;ರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಈಗ ಮಹತ್ವದ ಬದಲಾವಣೆಯಾಗುತ್ತಿದೆ. ಯೋಜನೆಯಲ್ಲಿ ಆಗುತ್ತಿರುವ ಆರ್ಥಿಕ ಸೋರಿಕೆಯನ್ನು ತಡೆಯಲು ಸರ್ಕಾರ ಈಗ ಪಣ ತೊಟ್ಟಿದ್ದು, ಫಲಾನುಭವಿಗಳ ಪಟ್ಟಿಯನ್ನು ಶುದ್ಧೀಕರಿಸಲು ಮುಂದಾಗಿದೆ. ಆದರೆ, ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೈಬಿಟ್ಟು, ಕೇವಲ 'ಮರು ಪರಿಶೀಲನೆ' (Re-verification) ನಡೆಸಲು ಸರ್ಕಾರ ತೀರ್ಮಾನಿಸಿದೆ.&lt;/p&gt;&lt;img&gt;&lt;p&gt;ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಪತ್ರ ಬರೆದು, ಮಾರ್ಚ್ 2026ರ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಈಗಾಗಲೇ ಮರಣ ಹೊಂದಿರುವ ಸುಮಾರು 1,95,224 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇನ್ನೂ ತಲಾ 2,000 ರೂ.ಗಳಂತೆ ಹಣ ಜಮೆಯಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 39.05 ಕೋಟಿ ರೂ. ಹಾಗೂ ವಾರ್ಷಿಕವಾಗಿ 468.54 ಕೋಟಿ ರೂ.ಗಳಷ್ಟು ಬೃಹತ್ ಮೊತ್ತ ಪೋಲಾಗುತ್ತಿದೆ. ಈ ಆರ್ಥಿಕ ನಷ್ಟವನ್ನು ತಡೆಯಲು ಕೂಡಲೇ ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕಬೇಕಿದೆ ಎಂದು ಹೇಳಿದ್ದರು.&lt;/p&gt;&lt;img&gt;&lt;p&gt;ಇದನ್ನು ಗಂಭೀರವಾಗಿ ಪರಿಗಣಿಸಿ ನೂತನ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಪೋಲಾಗುತ್ತಿರುವ ಹಣವನ್ನು ಉಳಿಸಲು, ಗೃಹಲಕ್ಷ್ಮಿ ಯೋಜನೆಯ ಎಲ್ಲ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಯೋಚಿಸಿತ್ತು. ಅದರಲ್ಲಿ ಅರ್ಹವಲ್ಲ ಎಲ್ಲರನ್ನೂ ಯೋಜನೆಯಿಂದ ಕೈಬಿಡಲು ತೀರ್ಮಾನಿಸಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ, ಈಗಿರುವ ಹೊಸ ಅರ್ಜಿಯನ್ನು ಪಡೆಯದೇ ಮರು ಪರಿಶೀಲನೆ ಅರ್ಜಿಯನ್ನು ಪಡೆಯುವುದಕ್ಕೆ ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮರು ಪರಿಶೀಲನಾ ಅರ್ಜಿಗಳನ್ನು ಪಡೆಯಲು ಅಧಿಕಾರಿಗಳು ಮಾದರಿ ಸಿದ್ಧಪಡಿಸಿದ್ದಾರೆ. ಈ ಬಾರಿ ಫಲಾನುಭವಿಗಳು ಈ ಕೆಳಗಿನ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಲಿದೆ.&lt;/p&gt;&lt;img&gt;&lt;p&gt;ಆಧಾರ್ ಕಾರ್ಡ್&lt;/p&gt;&lt;p&gt;ಮತದಾರರ ಗುರುತಿನ ಚೀಟಿ (Voter ID)&lt;/p&gt;&lt;p&gt;ಪಡಿತರ ಚೀಟಿ (Ration Card)&lt;/p&gt;&lt;p&gt;ಆಧಾರ್ ಜೊತೆಗೆ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ನಕಲಿ ಅಥವಾ ಮೃತ ಫಲಾನುಭವಿಗಳನ್ನು ಸುಲಭವಾಗಿ ಗುರುತಿಸಲು ಸರ್ಕಾರ ಯೋಜಿಸಿದೆ. ಈಗಾಗಲೇ ಸಿದ್ಧಪಡಿಸಲಾದ ಮರುಪರಿಶೀಲನಾ ಅರ್ಜಿಯ ಮಾದರಿಯನ್ನು ಇಂದು ನಡೆದ ಸಭೆಯಲ್ಲಿ ಸಿಎಂ ಹಾಗೂ ಸಚಿವರಿಗೆ ತೋರಿಸಲಾಗಿದ್ದು, ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ರಾಜ್ಯ ಸರ್ಕಾರವು ಈವರೆಗೆ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಒಟ್ಟು 1,38,270.21 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಅವುಗಳ ವಿವರ ಹೀಗಿದೆ:&lt;/p&gt;&lt;p&gt;&lt;strong&gt;ಗೃಹಲಕ್ಷ್ಮಿ: &lt;/strong&gt;1.24 ಕೋಟಿ ಮಹಿಳೆಯರಿಗೆ ಒಟ್ಟು 72,253 ಕೋಟಿ ರೂ. ಸಂದಾಯವಾಗಿದೆ.&lt;/p&gt;&lt;p&gt;&lt;strong&gt;ಗೃಹಜ್ಯೋತಿ:&lt;/strong&gt; 1.64 ಕೋಟಿ ಜನರಿಗೆ 26,115 ಕೋಟಿ ರೂ. ಮೌಲ್ಯದ ಉಚಿತ ವಿದ್ಯುತ್ ನೀಡಲಾಗಿದೆ.&lt;/p&gt;&lt;p&gt;&lt;strong&gt;ಅನ್ನಭಾಗ್ಯ: &lt;/strong&gt;ಈವರೆಗೆ ಒಟ್ಟು 18,897 ಕೋಟಿ ರೂ. ಪಾವತಿಸಲಾಗಿದೆ.&lt;/p&gt;&lt;p&gt;&lt;strong&gt;ಶಕ್ತಿ ಯೋಜನೆ: &lt;/strong&gt;ಮಹಿಳೆಯರ ಉಚಿತ ಪ್ರಯಾಣಕ್ಕಾಗಿ 19,890 ಕೋಟಿ ರೂ. ವೆಚ್ಚವಾಗಿದೆ.&lt;/p&gt;&lt;p&gt;&lt;strong&gt;ಯುವನಿಧಿ: &lt;/strong&gt;ನಿರುದ್ಯೋಗಿಗಳಿಗೆ 1,115 ಕೋಟಿ ರೂ. ಸಂದಾಯವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-gruhalakshmi-scheme-big-update-not-new-application-re-verification-mandatory-voter-id-details-s8sqee4"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಐಎಚ್‌ಸಿಎಲ್ ಮಹತ್ವದ ಹೆಜ್ಜೆ: ಯಶವಂತಪುರದಲ್ಲಿ ಹೈ-ಫೈ ಗೇಟ್‌ವೇ  ಹೋಟೆಲ್ ಸ್ಥಾಪನೆಗೆ ಒಪ್ಪಂದ!]]></title>
            <link>https://kannada.asianetnews.com/business/tata-group-ihcl-expands-in-bengaluru-signs-new-gateway-hotel-in-yeshwanthpura-gdp/articleshow-1axhka6</link>
            <guid isPermaLink="true">https://kannada.asianetnews.com/business/tata-group-ihcl-expands-in-bengaluru-signs-new-gateway-hotel-in-yeshwanthpura-gdp/articleshow-1axhka6</guid>
            <pubDate>Fri, 19 Jun 2026 18:11:23 +0530</pubDate>
            <description><![CDATA[&lt;p&gt;ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ (IHCL), ಬೆಂಗಳೂರಿನ ಯಶವಂತಪುರದಲ್ಲಿ ಹೊಸ 'ಗೇಟ್&zwnj;ವೇ' ಹೋಟೆಲ್ ಆರಂಭಿಸಲು ಆರ್.ಎನ್. ಶೆಟ್ಟಿ ಗ್ರೂಪ್&zwnj;ನ 'ನವೀನ್ ಹೋಟೆಲ್ಸ್' ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಬ್ರೌನ್&zwnj;ಫೀಲ್ಡ್ ಯೋಜನೆಯು 283 ಕೊಠಡಿಗಳು, ರೆಸ್ಟೋರೆಂಟ್&zwnj;ಗಳು, ಮತ್ತು ಬೃಹತ್ ಸಮಾವೇಶ ಸ್ಥಳವನ್ನು ಹೊಂದಿರಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvfy4e1wtkr1g47jj0h1yq26,imgname-ihcl-1781872605244.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದೇಶದ ಅತ್ಯಂತ ಜನಪ್ರಿಯ ಹಾಗೂ ಮಾರುಕಟ್ಟೆ ಬಂಡವಾಳೀಕರಣದ ಆಧಾರದ ಮೇಲೆ ಭಾರತದ ಅತಿ ದೊಡ್ಡ ಆತಿಥ್ಯ (Hospitality) ಸಂಸ್ಥೆಯಾಗಿರುವ 'ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್' (IHCL), ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಉತ್ತರ ಬೆಂಗಳೂರಿನ ಪ್ರಮುಖ ವಾಣಿಜ್ಯ ಹಬ್ ಆಗಿ ಬೆಳೆಯುತ್ತಿರುವ ಯಶವಂತಪುರದಲ್ಲಿ ಹೊಸದಾಗಿ ಗೇಟ್&zwnj;ವೇ (Gateway) ಹೋಟೆಲ್ ಆರಂಭಿಸಲು ಸಂಸ್ಥೆಯು ಅಧಿಕೃತವಾಗಿ ಸಹಿ ಹಾಕಿದೆ.&lt;/p&gt;&lt;p&gt;ಈ ಯೋಜನೆಯನ್ನು ಹಾಲಿ ಇರುವ ಮೂಲಸೌಕರ್ಯವನ್ನು ಬಳಸಿಕೊಂಡು ನವೀಕರಿಸುವ &lsquo;ಬ್ರೌನ್&zwnj;ಫೀಲ್ಡ್ ಆಸ್ತಿ&rsquo; (Brownfield Project) ಮಾದರಿಯಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಸಾರ್ವಜನಿಕರ ಸೇವೆಗೆ ಮುಕ್ತವಾಗುವ ನಿರೀಕ್ಷೆಯಿದೆ.&lt;/p&gt;&lt;h2&gt;ಆರ್.ಎನ್. ಶೆಟ್ಟಿ ಗ್ರೂಪ್&zwnj;ನ &lsquo;ನವೀನ್ ಹೋಟೆಲ್ಸ್&rsquo; ಜೊತೆ ಕೈಜೋಡಿಸಿದ IHCL&lt;/h2&gt;&lt;p&gt;ಈ ಅತ್ಯಾಧುನಿಕ ಹೋಟೆಲ್ ಯೋಜನೆಗಾಗಿ ಐಎಚ್&zwnj;ಸಿಎಲ್ ಸಂಸ್ಥೆಯು ದಕ್ಷಿಣ ಭಾರತದ ಪ್ರತಿಷ್ಠಿತ ಉದ್ಯಮ ಸಮೂಹವಾದ ಆರ್.ಎನ್. ಶೆಟ್ಟಿ (RNS) ಗ್ರೂಪ್&zwnj;ನ ಅಂಗಸಂಸ್ಥೆಯಾದ &lsquo;ನವೀನ್ ಹೋಟೆಲ್ಸ್&rsquo; ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.&lt;/p&gt;&lt;p&gt;ಒಪ್ಪಂದದ ಕುರಿತು ಮಾತನಾಡಿದ ಐಎಚ್&zwnj;ಸಿಎಲ್&zwnj;ನ ರಿಯಲ್ ಎಸ್ಟೇಟ್ ಮತ್ತು ಅಭಿವೃದ್ಧಿ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀಮತಿ ಸುಮಾ ವೆಂಕಟೇಶ್, ಬೆಂಗಳೂರು ಭಾರತದ ಅತ್ಯಂತ ಪ್ರಮುಖ ಆತಿಥ್ಯ ಹಾಗೂ ವಸತಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅದರಲ್ಲೂ ಯಶವಂತಪುರವು ಪ್ರಮುಖ ವಾಣಿಜ್ಯ ಸೂಕ್ಷ್ಮ ಮಾರುಕಟ್ಟೆಯಾಗಿ (Commercial Micro-market) ಹೊರಹೊಮ್ಮಿದೆ. ಇಲ್ಲಿ ಹೊಸದಾಗಿ ಪುನರ್ವಿನ್ಯಾಸಗೊಳಿಸಲಾದ 'ಗೇಟ್&zwnj;ವೇ' ಬ್ರ್ಯಾಂಡ್ ಪರಿಚಯಿಸುತ್ತಿರುವುದು ಉತ್ತರ ಬೆಂಗಳೂರಿನಲ್ಲಿ ನಮ್ಮ ಉಪಸ್ಥಿತಿಯನ್ನು ಇನ್ನಷ್ಟು ಬಲಪಡಿಸಲಿದೆ. ನವೀನ್ ಹೋಟೆಲ್ಸ್&zwnj;ನ ಶ್ರೀ ಸತೀಶ್ ಶೆಟ್ಟಿ ಅವರೊಂದಿಗಿನ ನಮ್ಮ ಸುದೀರ್ಘ ಪಾಲುದಾರಿಕೆಯಲ್ಲಿ ಮೂಡಿಬರುತ್ತಿರುವ ಮೂರನೇ ಹೋಟೆಲ್ ಇದಾಗಿದೆ&quot; ಎಂದು ಹರ್ಷ ವ್ಯಕ್ತಪಡಿಸಿದರು.&lt;/p&gt;&lt;p&gt;ಅದೇ ರೀತಿ, ನವೀನ್ ಹೋಟೆಲ್ಸ್&zwnj;ನ ಅಧ್ಯಕ್ಷರಾದ ಶ್ರೀ ಸತೀಶ್ ಶೆಟ್ಟಿ ಅವರು ಮಾತನಾಡಿ, &quot;ಈ ಗೇಟ್&zwnj;ವೇ ಯೋಜನೆಗಾಗಿ ಐಎಚ್&zwnj;ಸಿಎಲ್&zwnj; ಜೊತೆಗಿನ ನಮ್ಮ ಬಾಂಧವ್ಯವನ್ನು ಮತ್ತಷ್ಟು ಬೆಳೆಸಲು ನಾವು ಸಂತೋಷಪಡುತ್ತೇವೆ. ಈ ಹೋಟೆಲ್ ಯಶವಂತಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಆತಿಥ್ಯ ಭೂದೃಶ್ಯಕ್ಕೆ (Hospitality Landscape) ದೊಡ್ಡ ಕೊಡುಗೆ ನೀಡಲಿದೆ&quot; ಎಂದರು.&lt;/p&gt;&lt;h2&gt;ಯಶವಂತಪುರ ಗೇಟ್&zwnj;ವೇ ಹೋಟೆಲ್&zwnj;ನ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳು&lt;/h2&gt;&lt;p&gt;ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗುತ್ತಿರುವ ಈ ಹೋಟೆಲ್ 283 ಅತ್ಯಾಧುನಿಕ ಸೌಕರ್ಯವುಳ್ಳ ಐಷಾರಾಮಿ ಕೊಠಡಿಗಳನ್ನು ಹೊಂದಿರಲಿದೆ.&lt;/p&gt;&lt;p&gt;&lt;strong&gt;ರೆಸ್ಟೋರೆಂಟ್&zwnj;ಗಳು ಮತ್ತು ಬಾರ್: &lt;/strong&gt;ಗ್ರಾಹಕರಿಗೆ ದಿನದ 24 ಗಂಟೆಯೂ ಊಟದ ಸೌಲಭ್ಯ ಒದಗಿಸುವ 'ಆಲ್-ಡೇ ಡೈನಿಂಗ್' ರೆಸ್ಟೋರೆಂಟ್, ವಿಶೇಷ ಖಾದ್ಯಗಳ ರೆಸ್ಟೋರೆಂಟ್, ವಿಶ್ರಾಂತಿಗಾಗಿ ಬಾರ್ ಹಾಗೂ ಲೌಂಜ್ ಮತ್ತು ಈಜುಕೊಳದ ಬಳಿ 'ಪೂಲ್ ಬಾರ್' ಇರಲಿದೆ.&lt;/p&gt;&lt;p&gt;&lt;strong&gt;ಬೃಹತ್ ಸಮಾವೇಶದ ಸ್ಥಳ (MICE Space): &lt;/strong&gt;ಕಾರ್ಪೊರೇಟ್ ಸಭೆಗಳು, ಸಮಾವೇಶಗಳು ಹಾಗೂ ಅದ್ಧೂರಿ ವಿವಾಹ ಕಾರ್ಯಕ್ರಮಗಳಿಗಾಗಿ ಸುಮಾರು 13,000 ಚದರ ಅಡಿಯ ವಿಶಾಲವಾದ ಜಾಗವನ್ನು ಮೀಸಲಿಡಲಾಗಿದೆ. ಇದರಲ್ಲಿ ಎರಡು ದೊಡ್ಡ ಕಂಬಗಳಿಲ್ಲದ ಔತಣಕೂಟ ಸಭಾಂಗಣಗಳು (Pillarless Banquet Halls) ಮತ್ತು ಬಹು ಸಭೆ ಕೊಠಡಿಗಳು (Meeting Rooms) ಇರಲಿವೆ.&lt;/p&gt;&lt;p&gt;&lt;strong&gt;ಸ್ವಾಸ್ಥ್ಯ ಸೌಲಭ್ಯಗಳು: &lt;/strong&gt;ಅತಿಥಿಗಳ ಆರೋಗ್ಯ ಮತ್ತು ಮನರಂಜನೆಗಾಗಿ ಅತ್ಯಾಧುನಿಕ ಫಿಟ್&zwnj;ನೆಸ್ ಕೇಂದ್ರ (Gym) ಮತ್ತು ವಿಶಾಲವಾದ ಈಜುಕೊಳದ ವ್ಯವಸ್ಥೆ ಇರಲಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ 21ಕ್ಕೇರಲಿದೆ ಐಎಚ್&zwnj;ಸಿಎಲ್ ಹೋಟೆಲ್&zwnj;ಗಳ ಸಂಖ್ಯೆ&lt;/h2&gt;&lt;p&gt;ಐಟಿ ಪರಿಸರ ವ್ಯವಸ್ಥೆ ಮತ್ತು ಉದ್ಯಮಶೀಲತೆಯ ಶಕ್ತಿಯಿಂದ ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಐಎಚ್&zwnj;ಸಿಎಲ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಲೇ ಇದೆ. ಈ ಹೊಸ ಯಶವಂತಪುರ ಹೋಟೆಲ್ ಸೇರ್ಪಡೆಯೊಂದಿಗೆ, ಬೆಂಗಳೂರು ನಗರವೊಂದರಲ್ಲೇ ಐಎಚ್&zwnj;ಸಿಎಲ್&zwnj;ನ ಒಟ್ಟು ಹೋಟೆಲ್&zwnj;ಗಳ ಪೋರ್ಟ್&zwnj;ಫೋಲಿಯೊ ಸಂಖ್ಯೆ 21ಕ್ಕೆ ಏರಿಕೆಯಾಗಲಿದೆ. ಇದರಲ್ಲಿ ಸದ್ಯ ವಿವಿಧ ಹಂತದ ಅಭಿವೃದ್ಧಿಯಲ್ಲಿರುವ 12 ಹೋಟೆಲ್&zwnj;ಗಳು ಸೇರಿವೆ.&lt;/p&gt;&lt;h2&gt;ಇತರ ಹೋಟೆಲ್ ಗಳು&lt;/h2&gt;&lt;h3&gt;ಆರ್.ಎನ್. ಶೆಟ್ಟಿ (RNS) ಗ್ರೂಪ್:&lt;/h3&gt;&lt;p&gt;1961 ರಲ್ಲಿ ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಹಾಗೂ ಲೋಕೋಪಕಾರಿ ಡಾ. ರಾಮ ನಾಗಪ್ಪ ಶೆಟ್ಟಿ (ಆರ್.ಎನ್. ಶೆಟ್ಟಿ) ಅವರಿಂದ ಸ್ಥಾಪಿಸಲ್ಪಟ್ಟ ಈ ಸಮೂಹವು ದೇಶದ ವೈವಿಧ್ಯಮಯ ವ್ಯಾಪಾರ ಸಂಸ್ಥೆಯಾಗಿದೆ. ಬೆಂಗಳೂರನ್ನು ಪ್ರಧಾನ ಕಚೇರಿಯನ್ನಾಗಿ ಹೊಂದಿರುವ ಈ ಗ್ರೂಪ್ ಮೂಲಸೌಕರ್ಯ ನಿರ್ಮಾಣ, ಆತಿಥ್ಯ ಕ್ಷೇತ್ರ, ಆಟೋಮೋಟಿವ್ ಡೀಲರ್&zwnj;ಶಿಪ್&zwnj;ಗಳು, ಉತ್ಪಾದನೆ (ಟೈಲ್ಸ್), ವಿದ್ಯುತ್ ಉತ್ಪಾದನೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಕೊಡುಗೆಗಳಿಗೂ ಈ ಸಮೂಹ ಹೆಸರುವಾಸಿಯಾಗಿದೆ.&lt;/p&gt;&lt;h3&gt;ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ (IHCL):&lt;/h3&gt;&lt;p&gt;ಟಾಟಾ ಸಮೂಹದ (Tata Group) ಸಂಸ್ಥಾಪಕರಾದ ಜಮ್ಸೆಟ್ಜಿ ಟಾಟಾ ಅವರಿಂದ ಸ್ಥಾಪಿಸಲ್ಪಟ್ಟ ಈ ಕಂಪನಿಯು, 1903 ರಲ್ಲಿ ಮುಂಬೈನಲ್ಲಿ (ಅಂದಿನ ಬಾಂಬೆ) ತನ್ನ ಮೊದಲ ಐಕಾನಿಕ್ ಹೋಟೆಲ್ 'ತಾಜ್ ಮಹಲ್ ಪ್ಯಾಲೇಸ್' ಅನ್ನು ಆರಂಭಿಸುವ ಮೂಲಕ ಭಾರತದಲ್ಲಿ ಆತಿಥ್ಯ ರಂಗದ ಕ್ರಾಂತಿಗೆ ಮುನ್ನುಡಿ ಬರೆಯಿತು.&lt;/p&gt;&lt;p&gt;ಪ್ರಸ್ತುತ ಐಎಚ್&zwnj;ಸಿಎಲ್ ಜಾಗತಿಕವಾಗಿ 4 ಖಂಡಗಳು, 15 ದೇಶಗಳು ಹಾಗೂ 300ಕ್ಕೂ ಹೆಚ್ಚು ಸ್ಥಳಗಳಲ್ಲಿ 263 ಹೋಟೆಲ್&zwnj;ಗಳು ಸೇರಿದಂತೆ ಒಟ್ಟು 640 ಹೋಟೆಲ್&zwnj;ಗಳ ಬೃಹತ್ ನೆಟ್&zwnj;ವರ್ಕ್ (ಪೈಪ್&zwnj;ಲೈನ್ ಒಳಗೊಂಡಂತೆ) ಹೊಂದಿದೆ. ಬಿಎಸ್&zwnj;ಇ (BSE) ಮತ್ತು ಎನ್&zwnj;ಎಸ್ಇ (NSE) ಷೇರು ಮಾರುಕಟ್ಟೆಯಲ್ಲಿ ಪಟ್ಟಿಮಾಡಲ್ಪಟ್ಟಿರುವ ಈ ಕಂಪನಿಯ ಬತ್ತಳಿಕೆಯಲ್ಲಿ ಜಗತ್ತಿನ ಬಲಿಷ್ಠ ಹೋಟೆಲ್ ಬ್ರಾಂಡ್ ಎನಿಸಿಕೊಂಡಿರುವ ತಾಜ್ (Taj), ಕ್ಲಾರಿಡ್ಜಸ್ ಕಲೆಕ್ಷನ್, ಸೆಲೆಕ್ಟಿಯನ್ಸ್, ವಿವಾಂಟಾ, ಗೇಟ್&zwnj;ವೇ, ಟ್ರೀ ಆಫ್ ಲೈಫ್ ಮತ್ತು ಜಿಂಜರ್ (Ginger) ನಂತಹ ಪ್ರಸಿದ್ಧ ಬ್ರ್ಯಾಂಡ್&zwnj;ಗಳಿವೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/business/tata-group-ihcl-expands-in-bengaluru-signs-new-gateway-hotel-in-yeshwanthpura-gdp/articleshow-1axhka6"/>
        </item>
        <item>
            <title><![CDATA[ಸಾಕುಪ್ರಾಣಿಗಳಿಗೆ  ರಾಜಾತಿಥ್ಯ: ಪ್ರಾಣಿಗಳ ಆರೈಕೆ, ಮುದ್ದಿಸುವಿಕೆಯಲ್ಲಿ ಬೆಂಗಳೂರಿಗರಿಗೇ ಪ್ರಥಮ ಸ್ಥಾನ!]]></title>
            <link>https://kannada.asianetnews.com/gallery/relationship/india-s-pet-revolution-bengaluru-tops-dog-owners-mumbai-named-cat-capital-gdp-uqh1t4i</link>
            <guid isPermaLink="true">https://kannada.asianetnews.com/gallery/relationship/india-s-pet-revolution-bengaluru-tops-dog-owners-mumbai-named-cat-capital-gdp-uqh1t4i</guid>
            <pubDate>Fri, 19 Jun 2026 17:21:45 +0530</pubDate>
            <description><![CDATA[&lt;p&gt;ಸಾಕುಪ್ರಾಣಿಗಳ ಐಷಾರಾಮಿ ಆರೈಕೆ ಮತ್ತು ಸಂತೋಷಕ್ಕಾಗಿ ಅತಿ ಹೆಚ್ಚು ಖರ್ಚು ಮಾಡುವ ಮೂಲಕ ಬೆಂಗಳೂರು ಭಾರತದ 'ಪೆಟ್ ಕ್ಯಾಪಿಟಲ್' ಆಗಿ ಹೊರಹೊಮ್ಮಿದೆ. ದೇಶಾದ್ಯಂತ ಬೆಕ್ಕಿನ ಆಹಾರದ ಆರ್ಡರ್&zwnj;ಗಳು ಹೆಚ್ಚಿದ್ದರೂ, ಶ್ವಾನ ಪ್ರೇಮಿಗಳ ಸಂಖ್ಯೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpx2mpv5fpbatxy319ghxsj9,imgname-dog-bed-diy-1776944831333.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಕುಪ್ರಾಣಿಗಳ ಐಷಾರಾಮಿ ಆರೈಕೆ ಮತ್ತು ಸಂತೋಷಕ್ಕಾಗಿ ಅತಿ ಹೆಚ್ಚು ಖರ್ಚು ಮಾಡುವ ಮೂಲಕ ಬೆಂಗಳೂರು ಭಾರತದ 'ಪೆಟ್ ಕ್ಯಾಪಿಟಲ್' ಆಗಿ ಹೊರಹೊಮ್ಮಿದೆ. ದೇಶಾದ್ಯಂತ ಬೆಕ್ಕಿನ ಆಹಾರದ ಆರ್ಡರ್&zwnj;ಗಳು ಹೆಚ್ಚಿದ್ದರೂ, ಶ್ವಾನ ಪ್ರೇಮಿಗಳ ಸಂಖ್ಯೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ&amp;nbsp;&lt;/p&gt;&lt;img&gt;&lt;p&gt;ಬೆಂಗಳೂರು: ಭಾರತೀಯ ಸಮಾಜದಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಟ್ರೆಂಡ್ ಈಗ ಸಂಪೂರ್ಣವಾಗಿ ಹೊಸ ಸ್ವರೂಪ ಪಡೆದುಕೊಂಡಿದೆ. ಹಿಂದೆ ಕೇವಲ ಮನೆ ಕಾಯಲು ನಾಯಿಗಳನ್ನು ಅಥವಾ ಇಲಿ ಹಿಡಿಯಲು ಬೆಕ್ಕುಗಳನ್ನು ಸಾಕುತ್ತಿದ್ದ ಕಾಲವಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಪ್ರಾಣಿಗಳನ್ನು ಕೇವಲ ಒಂದು ಹವ್ಯಾಸಕ್ಕಾಗಿ ಸಾಕದೇ, ಅವುಗಳನ್ನು ತಮ್ಮ ಸ್ವಂತ ಮಗುವಿನಂತೆ, ಕುಟುಂಬದ ಅತ್ಯಂತ ಪ್ರೀತಿಯ ಸದಸ್ಯನಂತೆ ನೋಡಿಕೊಳ್ಳುವ ಹೊಸ ಸಂಸ್ಕೃತಿ ದೇಶಾದ್ಯಂತ ಚಿಗುರೊಡೆದಿದೆ. ಈ ಮಹತ್ತರವಾದ 'ಪೆಟ್ ಕ್ರಾಂತಿ'ಗೆ (Pet Revolution) ನಮ್ಮ ಹೆಮ್ಮೆಯ ಸಿಲಿಕಾನ್ ಸಿಟಿ 'ಬೆಂಗಳೂರು' ಈಗ ಅಧಿಕೃತ ರಾಜಧಾನಿಯಾಗಿ ಹೊರಹೊಮ್ಮಿದೆ!&lt;/p&gt;&lt;p&gt;ಪ್ರಮುಖ ಆನ್&zwnj;ಲೈನ್ ಡೆಲಿವರಿ ಪ್ಲಾಟ್&zwnj;ಫಾರ್ಮ್ ಆದ 'ಇನ್&zwnj;ಸ್ಟಾಮಾರ್ಟ್', ಕಳೆದ ಒಂದು ವರ್ಷದ ಅವಧಿಯಲ್ಲಿ (ಜೂನ್ 2025 ರಿಂದ ಜೂನ್ 2026 ರವರೆಗೆ) ದೇಶದ 130ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರು ಆರ್ಡರ್ ಮಾಡಿದ ಪ್ರವೃತ್ತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯು ಭಾರತೀಯರ ಪ್ರಾಣಿ ಪ್ರೇಮದ ಕುರಿತು ಅತ್ಯಂತ ರೋಚಕ ಮತ್ತು ಕುತೂಹಲಕಾರಿ ಅಂಕಿ-ಅಂಶಗಳನ್ನು ಬಿಚ್ಚಿಟ್ಟಿದೆ.&lt;/p&gt;&lt;img&gt;&lt;p&gt;ತಮ್ಮ ಮುದ್ದಿನ ಪ್ರಾಣಿಗಳಿಗೆ ಮನಸಾರೆ ಖರ್ಚು ಮಾಡುವ ವಿಷಯಕ್ಕೆ ಬಂದರೆ ಬೆಂಗಳೂರಿಗರನ್ನು ಸೋಲಿಸುವವರು ಯಾರೂ ಇಲ್ಲ ಎಂಬುದನ್ನು ಈ ವರದಿ ಸಾಬೀತುಪಡಿಸಿದೆ. ಬೆಂಗಳೂರಿನಲ್ಲಿ ಸಾಕುಪ್ರಾಣಿಗಳಿಗಾಗಿ ಗ್ರಾಹಕರು ಮಾಡುವ ಒಟ್ಟು ವೆಚ್ಚದಲ್ಲಿ ಶೇಕಡಾ 66ರಷ್ಟು ಬೃಹತ್ ಪ್ರಮಾಣದ ಹಣ ಕೇವಲ ಅವುಗಳ ಸಂತೋಷ ಮತ್ತು ಐಷಾರಾಮಿ ಜೀವನಕ್ಕಾಗಿ ಬಳಕೆಯಾಗುತ್ತಿದೆ! ಅಂದರೆ ಬರೀ ಹೊಟ್ಟೆ ತುಂಬಿಸುವ ಆಹಾರ ಮಾತ್ರವಲ್ಲದೆ ಅವುಗಳ ಆಟಿಕೆಗಳು, ವಿಶೇಷ ತಿಂಡಿಗಳು (Treats) ಮತ್ತು ಸೌಂದರ್ಯ ವರ್ಧಕ (Grooming) ಉತ್ಪನ್ನಗಳಿಗಾಗಿಯೇ ಬೆಂಗಳೂರಿಗರು ಅತಿ ಹೆಚ್ಚು ಹಣ ವ್ಯಯಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಬೆಂಗಳೂರಿನ ನಂತರದ ಸ್ಥಾನಗಳನ್ನು ಕ್ರಮವಾಗಿ ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ದೆಹಲಿ ನಗರಗಳು ಹಂಚಿಕೊಂಡಿವೆ.&lt;/p&gt;&lt;h2&gt;ತಿಂಡಿ ಪ್ರಿಯ ಪ್ರಾಣಿಗಳಿಗೆ ಗುರುಗ್ರಾಮವೇ ಫೇವರೆಟ್:&lt;/h2&gt;&lt;p&gt;ಸಾಕುಪ್ರಾಣಿಗಳಿಗೆ ವಿಶೇಷ 'ಟ್ರೀಟ್ಸ್' ಅಥವಾ ಸ್ನ್ಯಾಕ್ಸ್ ಆರ್ಡರ್ ಮಾಡುವ ವಿಷಯದಲ್ಲಿ ದಿಲ್ಲಿಯ ಉಪನಗರವಾದ ಗುರುಗ್ರಾಮ (ಗುರ್ಗಾಂವ್) ನಂಬರ್ ಒನ್ ಸ್ಥಾನದಲ್ಲಿದೆ. ಇಲ್ಲಿ ಪ್ರಾಣಿಗಳಿಗಾಗಿ ಬುಕ್ ಆಗುವ ಪ್ರತಿ 100 ಆಹಾರದ ಆರ್ಡರ್&zwnj;ಗಳಲ್ಲಿ 37 ಆರ್ಡರ್&zwnj;ಗಳು ಕೇವಲ ವಿಶೇಷ ತಿಂಡಿಗಳದ್ದೇ ಆಗಿರುತ್ತವೆ.&lt;/p&gt;&lt;img&gt;&lt;p&gt;ಭಾರತದಲ್ಲಿ ನಾಯಿ ಪ್ರಿಯರು ಮತ್ತು ಬೆಕ್ಕು ಪ್ರಿಯರ ನಡುವೆ ಯಾರು ಹೆಚ್ಚು ಎಂಬ ದೊಡ್ಡ ಪೈಪೋಟಿ ಮೊದಲಿನಿಂದಲೂ ಇದೆ. ಆದರೆ ಇನ್&zwnj;ಸ್ಟಾಮಾರ್ಟ್&zwnj;ನ ಇತ್ತೀಚಿನ ಆರ್ಡರ್ ಟ್ರೆಂಡ್ ಪ್ರಕಾರ, ಸದ್ಯಕ್ಕೆ ಬೆಕ್ಕುಗಳು ಮುನ್ನಡೆ ಸಾಧಿಸಿವೆ. ಆನ್&zwnj;ಲೈನ್&zwnj;ನಲ್ಲಿ ಬುಕ್ ಆಗುವ ಸಾಕುಪ್ರಾಣಿಗಳ ಆಹಾರದ ಒಟ್ಟು ಆರ್ಡರ್&zwnj;ಗಳಲ್ಲಿ ಶೇ. 60ರಷ್ಟು ಪಾಲು 'ಬೆಕ್ಕಿನ ಆಹಾರ'ದ್ದೇ (Cat Food) ಆಗಿದೆ.&lt;/p&gt;&lt;p&gt;&lt;strong&gt;ಭಾರತದ ಬೆಕ್ಕುಗಳ ರಾಜಧಾನಿ: &lt;/strong&gt;ದೇಶದಲ್ಲೇ ಅತಿ ಹೆಚ್ಚು ಬೆಕ್ಕುಗಳನ್ನು ಮುದ್ದಿಸುವ ನಗರವಾಗಿ ಮುಂಬೈ ಹೊರಹೊಮ್ಮಿದೆ. ಮುಂಬೈನ ನಂತರದ ಸ್ಥಾನಗಳಲ್ಲಿ ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾ ನಗರಗಳಿವೆ.&lt;/p&gt;&lt;p&gt;&lt;strong&gt;ಕೋಲ್ಕತ್ತಾದಲ್ಲಿ ಬೆಕ್ಕುಗಳ ಸಾಮ್ರಾಜ್ಯ:&lt;/strong&gt; ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದಲ್ಲಂತೂ ಬೆಕ್ಕುಗಳದ್ದೇ ಹವಾ. ಅಲ್ಲಿ ಸಾಕುಪ್ರಾಣಿಗಳ ವಿಭಾಗದಲ್ಲಿ ಬುಕ್ ಆಗುವ ಪ್ರತಿ 10 ಆರ್ಡರ್&zwnj;ಗಳಲ್ಲಿ 8 ಆರ್ಡರ್&zwnj;ಗಳು ಕೇವಲ ಬೆಕ್ಕಿನ ಆಹಾರದ್ದೇ ಆಗಿರುತ್ತವೆ!&lt;/p&gt;&lt;p&gt;&lt;strong&gt;ನಾಯಿ ಪ್ರೇಮಿಗಳ ಸ್ವರ್ಗ ಬೆಂಗಳೂರು:&lt;/strong&gt; ಬೆಕ್ಕುಗಳ ಆರ್ಡರ್ ದೇಶಾದ್ಯಂತ ಹೆಚ್ಚಿದ್ದರೂ, ಅತಿ ಹೆಚ್ಚು 'ಶ್ವಾನ ಪ್ರೇಮಿಗಳನ್ನು' (Dog Lovers) ಹೊಂದಿರುವ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಇಡೀ ದೇಶದಲ್ಲೇ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.&lt;/p&gt;&lt;img&gt;&lt;p&gt;ಇಂದಿನ ದಿನಗಳಲ್ಲಿ ಸಾಕುಪ್ರಾಣಿಗಳ ಜೀವನಶೈಲಿ ಹಾಗೂ ಅವುಗಳ ಊಟ-ತಿಂಡಿಯ ಮೆನು ಹೈ-ಫೈ ಹೋಟೆಲ್&zwnj;ಗಳ ಮಟ್ಟಕ್ಕೆ ಬದಲಾಗಿದೆ. ಇನ್&zwnj;ಸ್ಟಾಮಾರ್ಟ್&zwnj;ನಲ್ಲಿ ಅತಿ ವೇಗವಾಗಿ ಗ್ರಾಹಕರು ಹುಡುಕುತ್ತಿರುವ (Search ಪದ) ಉತ್ಪನ್ನಗಳ ವಿವರ ಹೀಗಿದೆ:&lt;/p&gt;&lt;p&gt;ಡಾಗ್ ಶಾಂಪೂಗೆ ಭಾರಿ ಬೇಡಿಕೆ: ಇನ್&zwnj;ಸ್ಟಾಮಾರ್ಟ್ ಸರ್ಚ್ ಇಂಜಿನ್&zwnj;ನಲ್ಲಿ 'ಡಾಗ್ ಶಾಂಪೂ' ಎಂಬ ಪದದ ಹುಡುಕಾಟದಲ್ಲಿ ಬರೋಬ್ಬರಿ ಶೇಕಡಾ 600ರಷ್ಟು ಭಾರಿ ಏರಿಕೆ ಕಂಡಿದೆ. ಪ್ರಾಣಿಗಳ ಸ್ವಚ್ಛತೆಗೆ ಮಾಲೀಕರು ನೀಡುತ್ತಿರುವ ಆದ್ಯತೆಗೆ ಇದು ಸಾಕ್ಷಿ.&lt;/p&gt;&lt;p&gt;ಪ್ರಾಣಿಗಳಿಗೆ ಐಸ್&zwnj;ಕ್ರೀಮ್: ನಾಯಿಗಳಿಗಾಗಿಯೇ ತಯಾರಿಸಲಾಗುವ ವಿಶೇಷ ಬಿಸ್ಕೆಟ್ ಮತ್ತು ಐಸ್&zwnj;ಕ್ರೀಮ್&zwnj;ಗಳ ಹುಡುಕಾಟದ ಪ್ರಮಾಣವೂ ಶೇ. 245ರಷ್ಟು ಹೆಚ್ಚಾಗಿದೆ.&lt;/p&gt;&lt;p&gt;ಆರೋಗ್ಯಕರ ಡಯಟ್: ಮನುಷ್ಯರಂತೆ ಪ್ರಾಣಿಗಳ ಆರೋಗ್ಯದ ಕಡೆಯೂ ಗಮನ ಹರಿಸಲಾಗುತ್ತಿದ್ದು, ಧಾನ್ಯರಹಿತ (Grain-Free) ಆಹಾರಗಳ ಆರ್ಡರ್ ಸಂಖ್ಯೆ ಶೇ. 152ರಷ್ಟು ವೃದ್ಧಿಸಿದೆ.&lt;/p&gt;&lt;img&gt;&lt;p&gt;ದೆಹಲಿಯ ಪ್ರಾಣಿ ಪ್ರೇಮಿಯೊಬ್ಬರು ತಮ್ಮ ಮುದ್ದಿನ ಸಾಕುಪ್ರಾಣಿಯ ಆರೈಕೆ ಮತ್ತು ಐಷಾರಾಮಿ ಸೌಕರ್ಯಗಳಿಗಾಗಿ ಒಂದೇ ವರ್ಷದಲ್ಲಿ ಬರೋಬ್ಬರಿ 60,957 ರೂಪಾಯಿಗಳನ್ನು ಖರ್ಚು ಮಾಡಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.&lt;/p&gt;&lt;h2&gt;ಪಕ್ಷಿಗಳು ಹಾಗೂ ಮೊಲಗಳಿಗೂ ಬಂತು ಡಿಮ್ಯಾಂಡ್&lt;/h2&gt;&lt;p&gt;ಕೇವಲ ನಾಯಿ ಮತ್ತು ಬೆಕ್ಕುಗಳು ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಜನರು ಮನೆಗಳಲ್ಲಿ ಪಕ್ಷಿ ಮತ್ತು ಮೊಲಗಳನ್ನು ಸಾಕುಲು ಅಪಾರ ಆಸಕ್ತಿ ತೋರಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಆನ್&zwnj;ಲೈನ್&zwnj;ನಲ್ಲಿ ಪಕ್ಷಿಗಳ ಆಹಾರದ ಆರ್ಡರ್&zwnj;ಗಳಲ್ಲಿ ಶೇ. 178 ರಷ್ಟು ಹಾಗೂ ಮೊಲದ ಆಹಾರದ ಆರ್ಡರ್&zwnj;ಗಳಲ್ಲಿ ಶೇ. 130ರಷ್ಟು ಭಾರಿ ಪ್ರಗತಿ ದಾಖಲಾಗಿದೆ.&lt;/p&gt;&lt;img&gt;&lt;p&gt;&amp;nbsp;ಸಾಕುಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುವ ಮತ್ತು ಅವುಗಳಿಗಾಗಿ ಮುಕ್ತವಾಗಿ ಹಣ ಖರ್ಚು ಮಾಡುವ ಈ ಹೊಸ ಟ್ರೆಂಡ್ ಕೇವಲ ಬೆಂಗಳೂರು, ಮುಂಬೈನಂತಹ ಮಹಾನಗರಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ದೇಶದ ಎರಡನೇ ಹಾಗೂ ಮೂರನೇ ಹಂತದ (Tier-2 &amp;amp; Tier-3) ನಗರಗಳಲ್ಲೂ ಈ ಸಂಸ್ಕೃತಿ ಅತ್ಯಂತ ವೇಗವಾಗಿ ಹರಡುತ್ತಿದೆ. ಆಶ್ಚರ್ಯಕರ ಸಂಗತಿಯೆಂದರೆ, ಮೆಟ್ರೋ ನಗರಗಳಿಗಿಂತಲೂ ಈ ಸಣ್ಣ ನಗರಗಳಲ್ಲಿ ಸಾಕುಪ್ರಾಣಿಗಳ ಉತ್ಪನ್ನಗಳ ಮಾರುಕಟ್ಟೆ ಶೇಕಡಾ 96ರಷ್ಟು ಹೆಚ್ಚು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಈ ಪಟ್ಟಿಯಲ್ಲಿ ಗುವಾಹಟಿ, ದಿಬ್ರುಗಢ, ಮೀರತ್, ಮಧುರೈ ಮತ್ತು ಕೊಟ್ಟಾಯಂ ನಗರಗಳು ಮುಂಚೂಣಿಯಲ್ಲಿವೆ.&lt;/p&gt;&lt;p&gt;ಒಟ್ಟಾರೆಯಾಗಿ ಹೇಳುವುದಾದರೆ, ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ಭಾರತೀಯರ ಮನೆಗಳಲ್ಲಿ ಸಾಕುಪ್ರಾಣಿಗಳಿಗೆ ಕೇವಲ ಆಶ್ರಯ ಮಾತ್ರ ಸಿಗುತ್ತಿಲ್ಲ, ಬದಲಾಗಿ ರಾಜಾತಿಥ್ಯ ಸಿಗುತ್ತಿದೆ. ಅವುಗಳ ಸಂತೋಷ ಮತ್ತು ಆರೋಗ್ಯಕ್ಕಾಗಿ ಜನರು ಪ್ರೀತಿಯಿಂದ ಹಣ ವಿನಿಯೋಗಿಸುತ್ತಿರುವುದನ್ನು ಈ ವರದಿ ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/relationship/india-s-pet-revolution-bengaluru-tops-dog-owners-mumbai-named-cat-capital-gdp-uqh1t4i"/>
        </item>
        <item>
            <title><![CDATA[ಮಂಡ್ಯ ಜಿ.ಪಂ ಸಿಇಓ ಕೆ.ಆರ್. ನಂದಿನಿ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು!]]></title>
            <link>https://kannada.asianetnews.com/karnataka-districts/mandya-zilla-panchayat-ceo-kr-nandini-ias-car-accident-escape-news/articleshow-g7zhfw3</link>
            <guid isPermaLink="true">https://kannada.asianetnews.com/karnataka-districts/mandya-zilla-panchayat-ceo-kr-nandini-ias-car-accident-escape-news/articleshow-g7zhfw3</guid>
            <pubDate>Fri, 19 Jun 2026 17:11:32 +0530</pubDate>
            <description><![CDATA[ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ಕೆ.ಆರ್. ನಂದಿನಿ ಅವರು ತಮ್ಮ ಸರ್ಕಾರಿ ನಿವಾಸದ ಮುಂದೆ ನಡೆದ ಭೀಕರ ಕಾರು ಅಪಘಾತದಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ. ಅಪಘಾತದಲ್ಲಿ ಅವರ ಕಾರು ಜಖಂಗೊಂಡರೂ, ಅವರು ಸುರಕ್ಷಿತವಾಗಿ ಪಾರಾಗಿ, ನಂತರ ತಮ್ಮ ಕರ್ತವ್ಯಕ್ಕೆ ಹಾಜರಾದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kvftxyhtgrrc2nby0x30z6wq,imgname-mandya-zp-ceo-kr-nandini-car-accident-1781869247031.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜೂ.19): ಮಂ&lt;/strong&gt;ಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕೆ.ಆರ್. ನಂದಿನಿ ಅವರು ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ಕಾರು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸಿಇಓ ಅವರ ಸರ್ಕಾರಿ ನಿವಾಸದ ಮುಂಭಾಗದಲ್ಲೇ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.&lt;/p&gt;&lt;h2&gt;ಘಟನೆಯ ವಿವರ:&lt;/h2&gt;&lt;p&gt;ಮಂಡ್ಯ ನಗರದಲ್ಲಿರುವ ತಮ್ಮ ಸರ್ಕಾರಿ ನಿವಾಸಕ್ಕೆ ಊಟಕ್ಕೆ ಬಂದಿದ್ದ ಸಿಇಓ ಕೆ.ಆರ್. ನಂದಿನಿ ಅವರು, ಮಧ್ಯಾಹ್ನ ಊಟ ಮುಗಿಸಿ ಪುನಃ ಕಚೇರಿಗೆ ತೆರಳಲು ಸಜ್ಜಾಗಿದ್ದರು. ಅವರು ತಮ್ಮ ಸರ್ಕಾರಿ ಕಾರಿನಲ್ಲಿ ನಿವಾಸದ ಆವರಣದಿಂದ ಹೊರಬಂದು ಕಚೇರಿಯತ್ತ ಮುಖ ಮಾಡಿದ ಸಂದರ್ಭದಲ್ಲಿ, ವೇಗವಾಗಿ ಬಂದ ಮತ್ತೊಂದು ಕಾರು ಸಿಇಓ ಅವರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.&lt;/p&gt;&lt;h2&gt;&lt;strong&gt;ಜಖಂಗೊಂಡ ಕಾರು:&lt;/strong&gt;&lt;/h2&gt;&lt;p&gt;ಅಪಘಾತದ ರಭಸ ಎಷ್ಟಿತ್ತೆಂದರೆ, ಡಿಕ್ಕಿಯಾದ ತಕ್ಷಣವೇ ಸಿಇಓ ಅವರ ಸರ್ಕಾರಿ ಕಾರಿನ ಮುಂಭಾಗದ ಟೈರ್ ಸ್ಫೋಟಗೊಂಡಿದೆ. ಕಾರಿನ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ನಂದಿನಿ ಅವರಿಗೆ ಸಣ್ಣಪುಟ್ಟ ಅಘಾತವಾಗಿದೆ. ಆದರೆ, ಕಾರಿನ ಏರ್&zwnj;ಬ್ಯಾಗ್ ಅಥವಾ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಅವರು ದೊಡ್ಡ ಮಟ್ಟದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣವೇ ನೆರವಿಗೆ ಧಾವಿಸಿದರು.&lt;/p&gt;&lt;h2&gt;&lt;strong&gt;ಕರ್ತವ್ಯದತ್ತ ನಂದಿನಿ:&lt;/strong&gt;&lt;/h2&gt;&lt;p&gt;ಭೀಕರ ಅಪಘಾತದಿಂದ ಸ್ವಲ್ಪ ಕಾಲ ಆಘಾತಕ್ಕೊಳಗಾದ ಸಿಇಓ ಕೆ.ಆರ್. ನಂದಿನಿ ಅವರು, ನಂತರ ಸುಧಾರಿಸಿಕೊಂಡು ಮತ್ತೊಂದು ಕಾರಿನ ವ್ಯವಸ್ಥೆ ಮಾಡಿಕೊಂಡು ಕಚೇರಿ ಕೆಲಸಕ್ಕೆ ತೆರಳಿದ್ದಾರೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಿಇಓ ಕಾರಿಗೆ ಡಿಕ್ಕಿ ಹೊಡೆದ ಕಾರಿನ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mandya-zilla-panchayat-ceo-kr-nandini-ias-car-accident-escape-news/articleshow-g7zhfw3"/>
        </item>
        <item>
            <title><![CDATA[Bengaluru: ರಿಹ್ಯಾಬ್ ಸೆಂಟರ್ ಮಾಲೀಕನ ಭೀಕರ ಕೊಲೆ ಮಾಡಿದ ರೋಗಿಗಳು, ಕಾರು, ಬೈಕ್ ಕದ್ದು ಎಸ್ಕೇಪ್!]]></title>
            <link>https://kannada.asianetnews.com/karnataka-districts/bengaluru-rehab-center-owner-murdered-by-patients-in-chandra-layout-many-missing-gdp/articleshow-7gxlue9</link>
            <guid isPermaLink="true">https://kannada.asianetnews.com/karnataka-districts/bengaluru-rehab-center-owner-murdered-by-patients-in-chandra-layout-many-missing-gdp/articleshow-7gxlue9</guid>
            <pubDate>Fri, 19 Jun 2026 16:41:40 +0530</pubDate>
            <description><![CDATA[ಬೆಂಗಳೂರಿನ ಚಂದ್ರಾಲೇಔಟ್&zwnj;ನಲ್ಲಿರುವ 'ನ್ಯೂ ಲೈಫ್ ರಿಹ್ಯಾಬ್ ಸೆಂಟರ್' ಮಾಲೀಕ ಶಿವಲಿಂಗಯ್ಯ ಅವರನ್ನು, ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮಾಲೀಕರ ನಂಬಿಕೆ ಗಳಿಸಿ ಇನ್&zwnj;ಚಾರ್ಜ್ ಆಗಿದ್ದ ನಿತಿನ್ ಎಂಬಾತನೇ ಈ ಕೃತ್ಯದ ಪ್ರಮುಖ ಆರೋಪಿಯಾಗಿದ್ದು, ತನ್ನ ಗ್ಯಾಂಗ್ ಜೊತೆ ಸೇರಿ ಈ ಭೀಕರ ಹತ್ಯೆಗೈದು ಪರಾರಿಯಾಗಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvfrsa26ff1tcv949s15kbn6,imgname-bengaluru-rehab-center-murder-1781866997829.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿಯ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಕೊಲೆ ನಡೆದಿದೆ. ಚಿಕಿತ್ಸೆ ಪಡೆದು ಗುಣಮುಖರಾಗಲು ಬಂದವರೇ ತಮಗೆ ಆಶ್ರಯ ನೀಡಿದ್ದ ರಿಹ್ಯಾಬ್ ಸೆಂಟರ್ (ಪುನರ್ವಸತಿ ಕೇಂದ್ರ) ಮಾಲೀಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಚಂದ್ರಾಲೇಔಟ್&zwnj;ನಲ್ಲಿರುವ &lsquo;ನ್ಯೂ ಲೈಫ್ ರಿಹ್ಯಾಬ್ ಸೆಂಟರ್&rsquo;ನ ಮಾಲೀಕರಾದ ಶಿವಲಿಂಗಯ್ಯ (60 ವರ್ಷ) ಕೊಲೆಯಾದ ದುರ್ದೈವಿ. ರಿಹ್ಯಾಬ್ ಸೆಂಟರ್&zwnj;ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿತಿನ್, ಕಾರ್ತಿಕ್, ಸೋಹೇಲ್ ಪಾಷಾ ಸೇರಿದಂತೆ ನಾಲ್ಕು ಜನ ಆರೋಪಿಗಳು ಈ ಭೀಕರ ಕೃತ್ಯವೆಸಗಿ ಪರಾರಿಯಾಗಿದ್ದಾರೆ.&lt;/p&gt;&lt;h2&gt;ನಂಬಿಸಿ ಇನ್&zwnj;ಚಾರ್ಜ್ ಆಗಿದ್ದವನೇ ಕೊಲೆ ಮಾಡಿದ&lt;/h2&gt;&lt;p&gt;ವರದಿ ಪ್ರಕಾರ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ನಿತಿನ್ ಕಳೆದ ಒಂದೂವರೆ ವರ್ಷದ ಹಿಂದೆ ಇದೇ ನ್ಯೂ ಲೈಫ್ ರಿಹ್ಯಾಬ್ ಸೆಂಟರ್&zwnj;ಗೆ ರೋಗಿಯಾಗಿ ದಾಖಲಾಗಿದ್ದನು. ಕಾಲಕ್ರಮೇಣ ಮಾಲೀಕ ಶಿವಲಿಂಗಯ್ಯ ಅವರ ನಂಬಿಕೆಯನ್ನು ಗಳಿಸಿಕೊಂಡಿದ್ದ ಈತ, ಕೇಂದ್ರದಲ್ಲಿ ಇನ್&zwnj;ಚಾರ್ಜ್ ಮಾದರಿಯಲ್ಲಿ ಕೆಲಸ ನಿರ್ವಹಿಸುತ್ತಾ ಎಲ್ಲ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದನು. ಆದರೆ, ಇಂದು ಮಧ್ಯಾಹ್ನ 1 ಗಂಟೆಯಿಂದ 1:30ರ ಸುಮಾರಿಗೆ ನಿತಿನ್ ಮತ್ತು ಆತನ ಗ್ಯಾಂಗ್ ಶಿವಲಿಂಗಯ್ಯ ಅವರ ಮೇಲೆ ಏಕಾಏಕಿ ಮುಗಿಬಿದ್ದಿದೆ.&lt;/p&gt;&lt;h2&gt;ರೂಮ್ ಲಾಕ್ ಮಾಡಿ, ರಾಡ್ ಹಾಗೂ ಮಚ್ಚಿನಿಂದ ಭೀಕರ ದಾಳಿ&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ. ಈ ರಿಹ್ಯಾಬ್ ಸೆಂಟರ್ ಒಟ್ಟು ಎರಡು ಫ್ಲೋರ್&zwnj;ಗಳನ್ನು ಹೊಂದಿದ್ದು, ಮೊದಲ ಮಹಡಿಯಲ್ಲಿ ಈ ಕೊಲೆ ನಡೆದಿದೆ. ಆರೋಪಿಗಳು ಎರಡನೇ ಮಹಡಿಯಲ್ಲಿದ್ದ ಇತರ ಕೊಠಡಿಗಳ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ, ಯಾರೂ ರಕ್ಷಣೆಗೆ ಬಾರದಂತೆ ಸಂಚು ರೂಪಿಸಿದ್ದರು. ತದನಂತರ ಮೊದಲ ಮಹಡಿಯಲ್ಲಿ ಶಿವಲಿಂಗಯ್ಯ ಅವರ ಮೇಲೆ ಇನ್-ಚಾರ್ಜ್ ನಿತಿನ್ ಮತ್ತು ಆತನ ಗ್ಯಾಂಗ್ ಕಬ್ಬಿಣದ ರಾಡ್ ಹಾಗೂ ಮಚ್ಚುಗಳಂತಹ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದಾರೆ.&lt;/p&gt;&lt;h2&gt;ಮತ್ತೊಬ್ಬನ ಮೇಲೂ ಹಲ್ಲೆ, ಸಾವು ಬದುಕಿನ ಹೋರಾಟ&lt;/h2&gt;&lt;p&gt;ಶಿವಲಿಂಗಯ್ಯ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ಬಳಿಕ, ಆರೋಪಿಗಳು ಅಲ್ಲಿಯೇ ಇದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪ್ರಸ್ತುತ ಗಂಭೀರವಾಗಿ ಗಾಯಗೊಂಡಿರುವ ಆ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h2&gt;ಮಾಲೀಕನ ಕಾರು, ಬೈಕ್&zwnj;ನಲ್ಲೇ ಎಸ್ಕೇಪ್; ಅಪ್ರಾಪ್ತ ಸೇರಿ 8-9 ಜನ ಮಿಸ್ಸಿಂಗ್!&lt;/h2&gt;&lt;p&gt;ಕೊಲೆ ಕೃತ್ಯ ಎಸಗಿದ ಬಳಿಕ ಆರೋಪಿಗಳು ಮಾಲೀಕ ಶಿವಲಿಂಗಯ್ಯ ಅವರಿಗೆ ಸೇರಿದ ಕಾರು ಮತ್ತು ಬೈಕ್ ಕೀಲಿಗಳನ್ನು ಕಿತ್ತುಕೊಂಡು, ಅದೇ ವಾಹನಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ಬೆನ್ನಲ್ಲೇ ರಿಹ್ಯಾಬ್ ಸೆಂಟರ್&zwnj;ನಿಂದ ಸುಮಾರು 8 ರಿಂದ 9 ಜನ ನಾಪತ್ತೆಯಾಗಿದ್ದಾರೆ ಎಂದು ಡಿಸಿಪಿ ಯತೀಶ್ ತಿಳಿಸಿದ್ದಾರೆ. ಈ ಮಿಸ್ಸಿಂಗ್ ಆದವರ ಪಟ್ಟಿಯಲ್ಲಿ ಒಬ್ಬ ಅಪ್ರಾಪ್ತ ವಯಸ್ಕ ಕೂಡ ಸೇರಿದ್ದಾನೆ ಎನ್ನಲಾಗಿದ್ದು, ಇವರೆಲ್ಲರೂ ಆರೋಪಿಗಳಿಗೆ ಸಹಕರಿಸಿದ್ದಾರಾ ಅಥವಾ ಭಯದಿಂದ ಓಡಿಹೋಗಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;ಸ್ಥಳಕ್ಕೆ ಡಿಸಿಪಿ ಭೇಟಿ, ತನಿಖೆ ತೀವ್ರ&lt;/h2&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಚಂದ್ರಾಲೇಔಟ್ ಪೊಲೀಸರು ಹಾಗೂ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಕೊಲೆಗೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಕೊಲೆಗಡುಕ ರೋಗಿಗಳ ಬಂಧನಕ್ಕಾಗಿ ಪೊಲೀಸರು ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-rehab-center-owner-murdered-by-patients-in-chandra-layout-many-missing-gdp/articleshow-7gxlue9"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಇಡೀ  ಪ್ರಕರಣದಿಂದ ಹಿಂದೆ ಸರಿಯಲು ನಿರ್ಧರಿಸಿದ ದರ್ಶನ್ ಪರ ವಕೀಲ!]]></title>
            <link>https://kannada.asianetnews.com/karnataka-districts/renukaswamy-case-actor-darshan-lawyer-sunil-kumar-planning-to-step-down-gdp/articleshow-2b1g25l</link>
            <guid isPermaLink="true">https://kannada.asianetnews.com/karnataka-districts/renukaswamy-case-actor-darshan-lawyer-sunil-kumar-planning-to-step-down-gdp/articleshow-2b1g25l</guid>
            <pubDate>Fri, 19 Jun 2026 15:46:55 +0530</pubDate>
            <description><![CDATA[ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರ ವಾದಿಸುತ್ತಿದ್ದ ವಕೀಲ ಎಸ್. ಸುನಿಲ್ ಕುಮಾರ್, ಪ್ರಕರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಆರೋಪಿಗಳಿಂದ ಸರಿಯಾದ ಸಹಕಾರ ಸಿಗದ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಲಾಗಿದ್ದು, ಹೈಕೋರ್ಟ್&zwnj;ನಲ್ಲಿ ಈ ವಿಷಯ ತಿಳಿಸಿರುವ ಅವರು, ವಿಚಾರಣಾ ನ್ಯಾಯಾಲಯಕ್ಕೂ ಮಾಹಿತಿ ನೀಡುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktrehs8838r62ad1wf0vrt8b,imgname-2-1781084513544.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ದರ್ಶನ್&zwnj;, ಲಕ್ಷ್ಮಣ್&zwnj; ಮತ್ತು ನಾಗರಾಜ್&zwnj; ಪರ ವಕೀಲ ಎಸ್&zwnj;.ಸುನಿಲ್&zwnj; ಕುಮಾರ್ ಪ್ರಕರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಜೂನ್ 18ರಂದು ಹೈಕೋರ್ಟ್&zwnj;ನಲ್ಲಿ ನಡೆದ ವಿಚಾರಣೆಯಲ್ಲಿ ತಾನು ಈ ಪ್ರಕರಣದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದರು. ಇದೀಗ ಪ್ರಕರಣದ ಟ್ರಯಲ್&zwnj; ಕೋರ್ಟ್&zwnj;ನಿಂದಲೂ ಹಿಂದೆ ಸರಿಯಲು ವಕೀಲ ಸುನಿಲ್​ ನಿರ್ಧಾರ ಮಾಡಿದ್ದಾರೆ. ಸೋಮವಾರ ಟ್ರಯಲ್​ ಕೋರ್ಟ್&zwnj; ಗೆ ತನ್ನ ನಿವೃತ್ತಿ ಬಗ್ಗೆ ತಿಳಿಸುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ ಆರೋಪಿಗಳ ಕಡೆಯಿಂದ ಸರಿಯಾದ ಸಹಕಾರ ಸಿಗದ ಹಿನ್ನಲೆ ನಿವೃತ್ತಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;ನಿನ್ನೆ ಹೈಕೋರ್ಟ್&zwnj;ನಲ್ಲಿ ಆಗಿದ್ದೇನು?&lt;/h2&gt;&lt;p&gt;ಮೃತನ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ತನಗೆ ಅನುಮತಿ ನೀಡಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜೂನ್ 18ರಂದು ಹೈಕೋರ್ಟ್ ನಡೆಸಿತ್ತು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಆರೋಪಿಗಳಾದ ದರ್ಶನ್&zwnj;, ಲಕ್ಷ್ಮಣ್&zwnj; ಮತ್ತು ನಾಗರಾಜ್&zwnj; ಪರ ವಕೀಲ ಎಸ್&zwnj;.ಸುನಿಲ್&zwnj; ಕುಮಾರ್,&zwnj; ಈ ಅರ್ಜಿ ಸಂಬಂಧ ಹಾಜರಾಗಲು ನನಗೆ ದರ್ಶನ್ ಮತ್ತಿತರ ಆರೋಪಿಗಳು ಯಾವುದೇ ಸೂಚನೆ ನೀಡಿಲ್ಲ. ಈ ಪ್ರಕರಣದಲ್ಲಿ ನಾನು ದರ್ಶನ್&zwnj; ಮತ್ತಿತರ ವಕಾಲತ್ತಿನಿಂದ ನಿವೃತ್ತಿ ಪಡೆಯಲು ಬಯಸಿದ್ದೇನೆ&zwnj;. ಹೀಗಾಗಿ,&zwnj; ವಿಚಾರಣೆಯನ್ನು&zwnj; ಮುಂದೂಡಬೇಕು ಎಂದು ಗುರುವಾರ ಹೈಕೋರ್ಟ್ ನಲ್ಲಿ ಕೋರಿದ್ದರು.&lt;/p&gt;&lt;p&gt;ಅದಕ್ಕೆ ಪ್ರತಿಯಾಗಿ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್&zwnj; ಪಿ.ಪ್ರಸನ್ನ ಕುಮಾರ್, &zwnj;ಇವರ ಈ ಹೇಳಿಕೆ ವಿಚಾರಣೆಯನ್ನು ವಿಳಂಬಿಸುವ ಸೂತ್ರ. ಪ್ರಕರಣದ ವಿಚಾರಣೆಯನ್ನು ನಿಗದಿತ ಮಿತಿಯಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್&zwnj; ನಿರ್ದೇಶನವಿದೆ. ಈ ಆದೇಶವನ್ನು ದರ್ಶನ್&zwnj; ಅವರೇ ಸುಪ್ರೀಂ ಕೋರ್ಟ್&zwnj;ಗೆ ಹೋಗಿ ಪಡೆದುಕೊಂಡು ಬಂದಿದ್ದಾರೆ. ಆದರೆ, ವಿಚಾರಣೆಯಲ್ಲಿ ಈಗ ಪ್ರತಿಯೊಂದಕ್ಕೂ ತಕರಾರು ತೆಗೆದು ವಿಳಂಬಗೊಳಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.&lt;/p&gt;&lt;p&gt;ಇದನ್ನು ಅಲ್ಲಗಳೆದ ಸುನಿಲ್&zwnj; ಕುಮಾರ್, ನಮ್ಮ ಕಕ್ಷಿದಾರರಿಗೆ ಜೈಲಿನಲ್ಲಿ ಮನೆ ಊಟ ನೀಡಲು ಮತ್ತು ಸೂಕ್ತವಾದ ಸೌಲಭ್ಯ ಒದಗಿಸಲು ಮತ್ತು ತ್ವರಿತಗತಿಯಲ್ಲಿ ವಿಚಾರಣೆ ನಡೆಯುತ್ತಿಲ್ಲವಾದ ಕಾರಣ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದೆವು. ವಿಚಾರಣೆ ಬೇಗ ಮುಗಿಸಿ ಎಂದು ನಾವು ಸುಪ್ರೀಂ ಕೋರ್ಟ್&zwnj;ಗೆ ವಿಶೇಷ ಮೇಲ್ಮನವಿ ಸಲ್ಲಿಸಿರಲಿಲ್ಲ.&zwnj; ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್&zwnj; ವಿಚಾರಣೆಗೆ ಕಾಲಮಿತಿ ವಿಧಿಸಿ ನಿರ್ದೇಶಿಸಿದೆ ಎಂದು ಸಮಜಾಯಿಷಿ ನೀಡಿದರು. ಅಂತಿಮವಾಗಿ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-actor-darshan-lawyer-sunil-kumar-planning-to-step-down-gdp/articleshow-2b1g25l"/>
        </item>
        <item>
            <title><![CDATA[ನಾಲ್ಕೂವರೆ ವರ್ಷದಿಂದ ಯಾವುದೇ ಕಾರಿಡಾರ್‌ಗೆ ಸಿಗದ ಒಪ್ಪಿಗೆ, ಬೆಂಗಳೂರು ಮೆಟ್ರೋಗೆ ಗ್ರಹಣ]]></title>
            <link>https://kannada.asianetnews.com/bengaluru-urban/bengaluru-namma-metro-phase-3-expansion-delay-orange-line-approval-updates-san/articleshow-x3of36o</link>
            <guid isPermaLink="true">https://kannada.asianetnews.com/bengaluru-urban/bengaluru-namma-metro-phase-3-expansion-delay-orange-line-approval-updates-san/articleshow-x3of36o</guid>
            <pubDate>Fri, 19 Jun 2026 14:51:19 +0530</pubDate>
            <description><![CDATA[&lt;p&gt;ಬೆಂಗಳೂರಿನ 'ನಮ್ಮ ಮೆಟ್ರೋ' ವಿಸ್ತರಣೆ ಯೋಜನೆಗಳು ತೀವ್ರ ವಿಳಂಬ ಎದುರಿಸುತ್ತಿವೆ. ಹಂತ-3 ಮತ್ತು ಹಂತ-3ಎ ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುಮೋದನೆ ಪ್ರಕ್ರಿಯೆಯಲ್ಲಿ ಸಿಲುಕಿದ್ದು, ಡಬಲ್ ಡೆಕ್ಕರ್ ಕಾರಿಡಾರ್&zwnj;ನಂತಹ ಹೊಸ ಪ್ರಸ್ತಾಪಗಳು ವಿಳಂಬಕ್ಕೆ ಮತ್ತಷ್ಟು ಕಾರಣವಾಗಿವೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krr4by1w1aj693nnc9w6kb6v,imgname-purple-line-namma-metro-1778926352444.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.19):&lt;/strong&gt; ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಬೇಕಾದ 'ನಮ್ಮ ಮೆಟ್ರೋ' ವಿಸ್ತರಣೆ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಕಳೆದ ನಾಲ್ಕೂವರೆ ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ನಗರದಲ್ಲಿ ಒಂದೇ ಒಂದು ಹೊಸ ಮೆಟ್ರೋ ಕಾರಿಡಾರ್ ಕೂಡ ನಿರ್ಮಾಣ ಹಂತ ತಲುಪಿಲ್ಲ. ಮೆಟ್ರೋ ಜಾಲದಲ್ಲಿ ಕೊನೆಯದಾಗಿ ಕಾಮಗಾರಿ ಆರಂಭಿಸಿದ್ದು ಕೆ.ಆರ್.ಪುರಂನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ (KIA) ವಿಸ್ತರಿತ ಲೈನ್&zwnj;ಗೆ ಮಾತ್ರ. ಬಿಎಂಆರ್&zwnj;ಸಿಎಲ್ ಇದಕ್ಕೆ ನವೆಂಬರ್ 2021 ರಲ್ಲಿ ಗುತ್ತಿಗೆ ನೀಡಿ, 2022 ರ ಆರಂಭದಲ್ಲಿ ಕೆಲಸ ಶುರು ಮಾಡಿತ್ತು.&lt;/p&gt;&lt;p&gt;ಅದಾದ ನಂತರ, ಇದುವರೆಗೆ ಯಾವುದೇ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ದಿನದಿಂದ ದಿನಕ್ಕೆ ಪ್ರಯಾಣಿಕರ ಬೇಡಿಕೆ ಹೆಚ್ಚುತ್ತಿದ್ದರೂ, ಹೊಸ ಯೋಜನೆಗಳು ನಿರ್ಮಾಣ ಹಂತ ತಲುಪದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಮೆಟ್ರೋದ ಹಂತ-3 (Phase III) ಮತ್ತು ಹಂತ-3ಎ (Phase IIIA) ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮೋದನೆಯ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿವೆ.&lt;/p&gt;&lt;h2&gt;&lt;strong&gt;ಡಬಲ್ ಡೆಕ್ಕರ್ ವಿವಾದದಲ್ಲಿ ಸಿಲುಕಿದ 45 ಕಿ.ಮೀ. 'ಆರೆಂಜ್ ಲೈನ್' (Phase III)&lt;/strong&gt;&lt;/h2&gt;&lt;p&gt;ಹಂತ-3 ರ ಅಡಿಯಲ್ಲಿ ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಒಟ್ಟು 45 ಕಿಲೋಮೀಟರ್ ಉದ್ದದ 'ಆರೆಂಜ್ ಲೈನ್' ಕಾರಿಡಾರ್ ಬರುತ್ತದೆ. ರಾಜ್ಯ ಸರ್ಕಾರವು ಇದಕ್ಕೆ ನವೆಂಬರ್ 2022 ರಲ್ಲೇ ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಿತ್ತು. ಕೇಂದ್ರ ಸರ್ಕಾರವು ಆಗಸ್ಟ್ 2024 ರಲ್ಲಿ 15,611 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಗೆ ಒಪ್ಪಿಗೆಯನ್ನೂ ನೀಡಿತ್ತು.&lt;/p&gt;&lt;p&gt;ಆದರೆ, ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಮೆಟ್ರೋ ಮಾರ್ಗದೊಂದಿಗೆ 37.1 ಕಿಲೋಮೀಟರ್ ಉದ್ದದ 'ಡಬಲ್ ಡೆಕ್ಕರ್' (ಲೆವೆಲ್-1 ರಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಲೆವೆಲ್-2 ರಲ್ಲಿ ಮೆಟ್ರೋ ಮಾರ್ಗ) ಕಾರಿಡಾರ್ ಸೇರಿಸಲು ನಿರ್ಧರಿಸಿದ್ದೇ ಹೊಸ ವಿಳಂಬಕ್ಕೆ ಕಾರಣವಾಯಿತು. ಈ ಫ್ಲೈಓವರ್&zwnj;ನ 9,700 ಕೋಟಿ ರೂ. ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸಬೇಕಿದೆ. ಮೇ 2025 ರಲ್ಲಿ ಬಿಎಂಆರ್&zwnj;ಸಿಎಲ್ ಮಂಡಳಿ ಇದಕ್ಕೆ ಅನುಮೋದನೆ ನೀಡಿತಾದರೂ, ತದನಂತರ ಜನವರಿ 2026 ರಲ್ಲಿ ಈ ಪರಿಷ್ಕೃತ ಯೋಜನೆಯ ಬಗ್ಗೆ ಶೀಘ್ರ ಅಧ್ಯಯನ ನಡೆಸಲು 'ರೈಟ್ಸ್' (RITES) ಸಂಸ್ಥೆಯನ್ನು ನಿಯೋಜಿಸಿತು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ (MoHUA) ಪ್ರಸ್ತಾವನೆ ಸಲ್ಲಿಸುವ ಮುನ್ನ ಈ ಅಧ್ಯಯನ ಅಗತ್ಯವಾಗಿದ್ದು, ಸದ್ಯ ಬಿಎಂಆರ್&zwnj;ಸಿಎಲ್ ಹಸಿರು ನಿಶಾನೆಗಾಗಿ ಕಾಯುತ್ತಿದೆ.&lt;/p&gt;&lt;h2&gt;&lt;strong&gt;ವೆಚ್ಚ ಕಡಿತದ ಸವಾಲಿನಲ್ಲಿ 37 ಕಿ.ಮೀ. ಸರ್ಜಾಪುರ-ಹೆಬ್ಬಾಳ ಲೈನ್ (Phase IIIA)&lt;/strong&gt;&lt;/h2&gt;&lt;p&gt;ಹಂತ-3ಎ ಅಡಿಯಲ್ಲಿ ಬರುವ 37 ಕಿ.ಮೀ ಉದ್ದದ ಸರ್ಜಾಪುರ-ಹೆಬ್ಬಾಳ ಕಾರಿಡಾರ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. 2023 ರಲ್ಲಿ ಪ್ರಸ್ತಾವನೆಗೊಂಡು, ಡಿಸೆಂಬರ್ 2024 ರಲ್ಲಿ ರಾಜ್ಯದ ಒಪ್ಪಿಗೆ ಪಡೆದ ಈ ಮಾರ್ಗವು 14.3 ಕಿ.ಮೀ ಸುರಂಗ ಮಾರ್ಗ ಮತ್ತು 23.52 ಕಿ.ಮೀ ಮೇಲ್ಸೇತುವೆ (Elevated) ಮಾರ್ಗವನ್ನು ಒಳಗೊಂಡಿದೆ. ಆರಂಭದಲ್ಲಿ ಇದರ ವೆಚ್ಚವನ್ನು 28,405 ಕೋಟಿ ರೂ. ಎಂದು ಅಂದಾಜಿಸಿ, ಜನವರಿ 2025 ರಲ್ಲಿ ಕೇಂದ್ರಕ್ಕೆ ಕಳುಹಿಸಲಾಗಿತ್ತು.&lt;/p&gt;&lt;p&gt;ಆದರೆ, ಕೇಂದ್ರ ಸರ್ಕಾರವು ಪರಿಶೀಲನೆ ನಡೆಸುವಾಗ ಸುರಂಗ ಮಾರ್ಗದ ನಿಲ್ದಾಣಗಳ ವಿನ್ಯಾಸವನ್ನು ಬದಲಾಯಿಸಿ ವೆಚ್ಚ ಕಡಿಮೆ ಮಾಡುವಂತೆ ಮತ್ತು ಬಳ್ಳಾರಿ ರಸ್ತೆಯ ವೆಟರಿನರಿ ಕಾಲೇಜು ಬಳಿ ಉದ್ದೇಶಿತ ನಿಲ್ದಾಣವನ್ನು ಕೈಬಿಡುವಂತೆ ಸೂಚಿಸಿತು. ಇದರ ಪ್ರಕಾರ ಸಿದ್ಧಪಡಿಸಲಾದ ಪರಿಷ್ಕೃತ ಯೋಜನಾ ವರದಿ (DPR) ಯಲ್ಲಿ ಯೋಜನೆಯ ವೆಚ್ಚ 25,999 ಕೋಟಿ ರೂ.ಗೆ ಇಳಿಕೆಯಾಗಿದೆ. ಇದರ ಜೊತೆಗೆ, ರಾಜ್ಯದ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಸಮೂಹ ಸಾರಿಗೆಯ ಮೂಲ ಉದ್ದೇಶವನ್ನೇ ದುರ್ಬಲಗೊಳಿಸಬಹುದು ಎಂದು ಹೇಳಿದೆ. ಈ ಪರಿಕಲ್ಪನೆಯ ಸಾಧ್ಯತೆಗಳನ್ನು ಪರಿಶೀಲಿಸಲು ಬಿಎಂಆರ್&zwnj;ಸಿಎಲ್ ಈಗ ಐಐಟಿ ರೂರ್ಕಿ (IIT Roorkee) ಸಂಸ್ಥೆಯನ್ನು ನಿಯೋಜಿಸಿದೆ. ಈಗಾಗಲೇ ಕೆಲವು ಪ್ಯಾಕೇಜ್&zwnj;ಗಳಿಗೆ ಟೆಂಡರ್ ಕರೆಯಲಾಗಿದ್ದರೂ, ಅಂತಿಮ ಅನುಮೋದನೆ ಇನ್ನೂ ಬಾಕಿ ಇದೆ.&lt;/p&gt;&lt;p&gt;ಇತ್ತೀಚೆಗಷ್ಟೇ ನವದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ, ಆರೆಂಜ್ ಲೈನ್&zwnj;ಗೆ ಅನುಮೋದನೆ ಸಿಕ್ಕಿ ಎರಡು ವರ್ಷಗಳಾಗುತ್ತ ಬಂದಿರುವುದರಿಂದ ಯೋಜನೆಗೆ ಶೀಘ್ರ ವೇಗ ನೀಡುವಂತೆ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು ಡಬಲ್ ಡೆಕ್ಕರ್ ಕಾರಿಡಾರ್ ಅತ್ಯಗತ್ಯ ಎಂದು ಒತ್ತಾಯಿಸಿದ್ದಾರೆ.&lt;/p&gt;&lt;h2&gt;&lt;strong&gt;ಅನುಮೋದನೆ ವಿಳಂಬದ ದುಷ್ಪರಿಣಾಮಗಳೇನು?&lt;/strong&gt;&lt;/h2&gt;&lt;p&gt;ಯೋಜನೆಗಳು ವಿಳಂಬವಾಗುವುದರಿಂದ ಮೂರು ದೊಡ್ಡ ಸವಾಲುಗಳು ಎದುರಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ವರ್ಷ ಯೋಜನಾ ವೆಚ್ಚ ಕನಿಷ್ಠ ಶೇ. 5 ರಷ್ಟು ಹೆಚ್ಚಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಮತ್ತಷ್ಟು ಕಠಿಣವಾಗುತ್ತದೆ. ಸಾರ್ವಜನಿಕ ಸಾರಿಗೆ ಮೂಲಸೌಕರ್ಯದ ಲಭ್ಯತೆ ಮತ್ತಷ್ಟು ಮುಂದೂಡಲ್ಪಡುತ್ತದೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಅನುಮೋದನೆಯ ದೀರ್ಘ ಪ್ರಕ್ರಿಯೆ&lt;/strong&gt;&lt;/h2&gt;&lt;p&gt;ಸಮಗ್ರ ಚಲನಶೀಲತೆಯ ಯೋಜನೆ (CMP) ಆಧಾರದ ಮೇಲೆ ಡಿಪಿಆರ್ ಸಿದ್ಧಪಡಿಸಿ ರಾಜ್ಯದ ಒಪ್ಪಿಗೆ ಪಡೆದು ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು (MoHUA) ಇದನ್ನು ತಾಂತ್ರಿಕ ಪರಿಶೀಲನೆಗಾಗಿ 'ಇನ್&zwnj;ಸ್ಟಿಟ್ಯೂಟ್ ಆಫ್ ಅರ್ಬನ್ ಟ್ರಾನ್ಸ್&zwnj;ಪೋರ್ಟ್'ಗೆ ಕಳುಹಿಸುತ್ತದೆ. ಅಲ್ಲಿಂದ ಬಂದ ಪರಿಷ್ಕೃತ ವರದಿಯನ್ನು ರೈಲ್ವೆ, ರಸ್ತೆ ಸಾರಿಗೆ ಸೇರಿದಂತೆ ಒಟ್ಟು 9 ಸಚಿವಾಲಯಗಳು ಮತ್ತು ನೀತಿ ಆಯೋಗಕ್ಕೆ ಕಳುಹಿಸಲಾಗುತ್ತದೆ. ರಾಜ್ಯ ಸರ್ಕಾರವು ಎಲ್ಲಾ ಸ್ಪಷ್ಟೀಕರಣಗಳನ್ನು ನೀಡಿದ ಬಳಿಕ ಸಾರ್ವಜನಿಕ ಹೂಡಿಕೆ ಮಂಡಳಿ (PIB) ಇದನ್ನು ಚರ್ಚಿಸಿ ಕೇಂದ್ರ ಸಚಿವ ಸಂಪುಟಕ್ಕೆ ಶಿಫಾರಸು ಮಾಡುತ್ತದೆ. ಈ ಇಡೀ ಪ್ರಕ್ರಿಯೆಗೆ ಕನಿಷ್ಠ 2 ವರ್ಷ ಬೇಕಾಗುತ್ತದೆ. ಮಧ್ಯದಲ್ಲಿ ವಿನ್ಯಾಸ ಬದಲಾಯಿಸಿದರೆ ವಿಳಂಬ ಇನ್ನೂ ಹೆಚ್ಚಾಗುತ್ತದೆ.&lt;/p&gt;&lt;h2&gt;&lt;strong&gt;ವಾಹನಗಳ ಸಂಖ್ಯೆ ಭಾರಿ ಹೆಚ್ಚಳ; ಮೆಟ್ರೋ ವೇಗ ಮಾತ್ರ ಆಮೆಗತಿ!&lt;/strong&gt;&lt;/h2&gt;&lt;p&gt;ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬೆಂಗಳೂರಿನ ರಸ್ತೆಗಳಿಗೆ ಬರೋಬ್ಬರಿ 22.6 ಲಕ್ಷಕ್ಕೂ ಅಧಿಕ ಹೊಸ ವಾಹನಗಳು ಸೇರ್ಪಡೆಯಾಗಿವೆ. ಆದರೆ, ನಮ್ಮ ಮೆಟ್ರೋ ಆರಂಭವಾಗಿ 15 ವರ್ಷಗಳೇ ಕಳೆಯುತ್ತ ಬಂದಿದ್ದರೂ ನಗರದಲ್ಲಿರುವ ಮೆಟ್ರೋ ಜಾಲ ಕೇವಲ 98 ಕಿಲೋಮೀಟರ್ ಮಾತ್ರ! ಅಂದರೆ, ಮೆಟ್ರೋ ವಿಸ್ತರಣೆಯ ಸರಾಸರಿ ವೇಗ ವರ್ಷಕ್ಕೆ ಕೇವಲ 6.5 ಕಿ.ಮೀ ಮಾತ್ರ ಇದೆ.&lt;/p&gt;&lt;h2&gt;&lt;strong&gt;ಫೇಸ್ 2 ವೆಚ್ಚ ಶೇ. 53 ರಷ್ಟು ದುಬಾರಿ!&lt;/strong&gt;&lt;/h2&gt;&lt;p&gt;ಯೋಜನೆಗಳ ವಿಳಂಬವು ಆರ್ಥಿಕವಾಗಿಯೂ ಭಾರಿ ನಷ್ಟ ಉಂಟುಮಾಡುತ್ತಿದೆ. ಮೆಟ್ರೋ ಹಂತ-2 ರ ಅಡಿಯಲ್ಲಿ 72 ಕಿ.ಮೀ ಮಾರ್ಗಕ್ಕೆ ಆರಂಭದಲ್ಲಿ 26,405 ಕೋಟಿ ರೂ. ನಿಗದಿಪಡಿಸಲಾಗಿತ್ತು ಮತ್ತು 5 ವರ್ಷಗಳಲ್ಲಿ ಮುಗಿಸುವ ಗುರಿ ಇತ್ತು. ಆದರೆ, ನಿರಂತರ ವಿಳಂಬದ ಕಾರಣದಿಂದಾಗಿ ಇದರ ಪರಿಷ್ಕೃತ ವೆಚ್ಚ ಬರೋಬ್ಬರಿ 40,425 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಮೂಲ ಅಂದಾಜಿಗಿಂತ ಶೇ. 53 ರಷ್ಟು ಹೆಚ್ಚಳವಾಗಿದೆ!&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-namma-metro-phase-3-expansion-delay-orange-line-approval-updates-san/articleshow-x3of36o"/>
        </item>
        <item>
            <title><![CDATA[ಬೆಂಗಳೂರಿನ ಕಬಾಬ್, ಶವರ್ಮಾ ಪ್ರಿಯರಿಗೆ ಶಾಕ್! ಕರಾಳ ಸತ್ಯ ಬಯಲು, ಕೋರ್ಟ್ ನಲ್ಲಿ ಕೇಸ್ ದಾಖಲು]]></title>
            <link>https://kannada.asianetnews.com/karnataka-districts/bengaluru-food-safety-department-lab-report-kebab-shawarma-fail-safety-tests-gdp/articleshow-ya369o0</link>
            <guid isPermaLink="true">https://kannada.asianetnews.com/karnataka-districts/bengaluru-food-safety-department-lab-report-kebab-shawarma-fail-safety-tests-gdp/articleshow-ya369o0</guid>
            <pubDate>Fri, 19 Jun 2026 14:06:33 +0530</pubDate>
            <description><![CDATA[ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಹಲವು ಹೋಟೆಲ್&zwnj;ಗಳ ಚಿಕನ್ ಕಬಾಬ್ ಮತ್ತು ಶವರ್ಮಾಗಳು ತಿನ್ನಲು ಅಸುರಕ್ಷಿತ ಎಂದು ವರದಿಯಾಗಿದೆ. ನಿಷೇಧಿತ ಕೃತಕ ಬಣ್ಣಗಳನ್ನು ಬಳಸಿದ ಕಾರಣ 8 ಶವರ್ಮಾ ಹಾಗೂ 2 ಕಬಾಬ್ ಮಾದರಿಗಳು ವಿಫಲವಾಗಿದ್ದು, ಸಂಬಂಧಪಟ್ಟ ಹೋಟೆಲ್&zwnj;ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j155cb6xjy0ga40m5p4v9tta,imgname-vdvdv.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿಯ ಬೀದಿ ಬದಿಯಲ್ಲಿ ಸಿಗುವ ಚಿಕನ್ ಕಬಾಬ್ ಹಾಗೂ ಶವರ್ಮಾ ಪ್ರಿಯರಿಗೆ ಆಹಾರ ಸುರಕ್ಷತಾ ಇಲಾಖೆ ಮತ್ತೊಮ್ಮೆ ಭಾರಿ ಶಾಕ್ ನೀಡಿದೆ. ಇತ್ತೀಚೆಗಷ್ಟೇ ಕಾಟನ್&zwnj; ಕ್ಯಾಂಡಿ, ಗೋಬಿ ಮಂಚೂರಿಯನ್&zwnj;ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿದ್ದ ಸರ್ಕಾರ, ಕಬಾಬ್ ಹಾಗೂ ಶವರ್ಮಾಗಳ ಮೇಲೆಯೂ ತನ್ನ ನಿಗಾ ಇಟ್ಟಿತ್ತು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಸ್ಯಾಂಪಲ್ ಟೆಸ್ಟ್&zwnj;ನ ವರದಿ ಇದೀಗ ಹೊರಬಿದ್ದಿದ್ದು, ಬಿಲ್ಡಪ್ ನೀಡುವ ಹಲವು ಹೋಟೆಲ್&zwnj;ಗಳ ಕಬಾಬ್ ಹಾಗೂ ಶವರ್ಮಾಗಳು ತಿನ್ನಲು ಸಂಪೂರ್ಣ ಅಸುರಕ್ಷಿತ ಎಂದು ವರದಿ ಬಂದಿದೆ.&lt;/p&gt;&lt;h2&gt;19 ಕಬಾಬ್ ಮಾದರಿಗಳ ಪೈಕಿ 2 ಅಸುರಕ್ಷಿತ, ಜೆಎಂಎಫ್&zwnj;ಸಿ ಕೋರ್ಟ್&zwnj;ನಲ್ಲಿ ಕೇಸ್!&lt;/h2&gt;&lt;p&gt;ಬೆಂಗಳೂರಿನ ವಿವಿಧ ಭಾಗಗಳಿಂದ ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿದ್ದ ಒಟ್ಟು 19 ಕಬಾಬ್ ಸ್ಯಾಂಪಲ್&zwnj;ಗಳ ಪೈಕಿ 2 ಸ್ಯಾಂಪಲ್&zwnj;ಗಳು ಅತ್ಯಂತ ಕಳಪೆ ಮತ್ತು ಆರೋಗ್ಯಕ್ಕೆ ಹಾನಿಕಾರಕ ಎಂದು ವರದಿಯಲ್ಲಿ ತಿಳಿದುಬಂದಿದೆ. ಬೆಂಗಳೂರಿನ ಪ್ರಮುಖ ಎರಡು ಹೋಟೆಲ್&zwnj;ಗಳಿಂದ ಪಡೆದ ಕಬಾಬ್ ಮಾದರಿಗಳು ಅಸುರಕ್ಷಿತವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟವಾಡಿದ ಆ ಹೋಟೆಲ್ ಮಾಲೀಕರ ವಿರುದ್ಧ ಅಧಿಕಾರಿಗಳು ಜೆಎಂಎಫ್&zwnj;ಸಿ (JMFC) ನ್ಯಾಯಾಲಯದಲ್ಲಿ ಕಾನೂನು ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.&lt;/p&gt;&lt;h2&gt;ಶವರ್ಮಾದಲ್ಲಿ ಕೃತಕ ಬಣ್ಣದ ಕರಾಳತೆ: 8 ಸ್ಯಾಂಪಲ್&zwnj;ಗಳು ರಿಜೆಕ್ಟ್!&lt;/h2&gt;&lt;p&gt;ಇನ್ನು ಯುವ ಪೀಳಿಗೆ ಮುಗಿಬಿದ್ದು ತಿನ್ನುವ ಶವರ್ಮಾ (Shawarma) ಸ್ಥಿತಿಯಂತೂ ಮತ್ತಷ್ಟು ಆತಂಕಕಾರಿಯಾಗಿದೆ. ಅಧಿಕಾರಿಗಳು ಪರೀಕ್ಷೆಗಾಗಿ ಸಂಗ್ರಹಿಸಿದ್ದ ಒಟ್ಟು 39 ಶವರ್ಮಾ ಸ್ಯಾಂಪಲ್&zwnj;ಗಳ ಪೈಕಿ ಬರೋಬ್ಬರಿ 8 ಸ್ಯಾಂಪಲ್&zwnj;ಗಳು ಸಂಪೂರ್ಣ ಅಸುರಕ್ಷಿತ ಎಂದು ವರದಿಯಾಗಿದೆ. ಈ ಎಂಟು ಶವರ್ಮಾ ಮಾದರಿಗಳಲ್ಲಿ ನಿಷೇಧಿತ ಹಾಗೂ ಆರೋಗ್ಯಕ್ಕೆ ತೀವ್ರ ಹಾನಿ ಉಂಟುಮಾಡುವ ಅಪಾಯಕಾರಿ ಕೃತಕ ಬಣ್ಣಗಳನ್ನು (Artificial Colors) ಯಥೇಚ್ಛವಾಗಿ ಬಳಸಿರುವುದು ಲ್ಯಾಬ್ ರಿಪೋರ್ಟ್&zwnj;ನಲ್ಲಿ ದೃಢಪಟ್ಟಿದೆ.&lt;/p&gt;&lt;h2&gt;ಬೆಂಗಳೂರಿನ ಯಾವ ಭಾಗಗಳಲ್ಲಿ ದಂಧೆ?&lt;/h2&gt;&lt;p&gt;ಆಹಾರ ಇಲಾಖೆಯ ವರದಿಯ ಪ್ರಕಾರ, ಬೆಂಗಳೂರು ನಗರ ಹಾಗೂ ಜಿಬಿಎ (GBA) ಪಶ್ಚಿಮ ವಲಯದ ಭಾಗಗಳಲ್ಲಿ ಸಂಗ್ರಹಿಸಲಾಗಿದ್ದ ಶವರ್ಮಾ ಹಾಗೂ ಕಬಾಬ್ ಸ್ಯಾಂಪಲ್&zwnj;ಗಳಲ್ಲೇ ಅತಿ ಹೆಚ್ಚು ಅಕ್ರಮ ಹಾಗೂ ಅಸುರಕ್ಷಿತ ಅಂಶಗಳು ಪತ್ತೆಯಾಗಿವೆ. ಮಾಂಸ ಹಳಸಿದ್ದರೂ ಅದು ಫ್ರೆಶ್ ಆಗಿ ಕಾಣಲಿ ಎಂಬ ಕಾರಣಕ್ಕೆ ಹಾಗೂ ಗ್ರಾಹಕರನ್ನು ಆಕರ್ಷಿಸಲು ಈ ರೀತಿಯ ವಿಷಕಾರಿ ಬಣ್ಣಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಕಠಿಣ ಕ್ರಮದ ಎಚ್ಚರಿಕೆ ನೀಡಿದ ಇಲಾಖೆ&lt;/h2&gt;&lt;p&gt;ಹೊರಗಡೆ ಸಿಗುವ ಇಂತಹ ಜಂಕ್ ಫುಡ್&zwnj;ಗಳ ಸೇವನೆಯಿಂದ ಕ್ಯಾನ್ಸರ್&zwnj;ನಂತಹ ಭೀಕರ ಕಾಯಿಲೆಗಳು ಮತ್ತು ಲಿವರ್, ಕಿಡ್ನಿ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕೃತಕ ಬಣ್ಣ ಬಳಸಿ ಆಹಾರ ತಯಾರಿಸುವ ಹೋಟೆಲ್, ರೆಸ್ಟೋರೆಂಟ್ ಹಾಗೂ ರಸ್ತೆಬದಿಯ ಅಂಗಡಿಗಳ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಕಬಾಬ್ ಹಾಗೂ ಶವರ್ಮಾ ಪ್ರಿಯರು ಇನ್ಮುಂದೆ ಹೊರಗಡೆ ತಿನ್ನುವಾಗ ಹೋಟೆಲ್&zwnj;ಗಳ ಸ್ವಚ್ಛತೆ ಹಾಗೂ ಗುಣಮಟ್ಟದ ಕಡೆಗೆ ಒಮ್ಮೆ ಗಮನ ಹರಿಸುವುದು ಅತ್ಯಂತ ಅಗತ್ಯವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-food-safety-department-lab-report-kebab-shawarma-fail-safety-tests-gdp/articleshow-ya369o0"/>
        </item>
        <item>
            <title><![CDATA[Bengaluru CID Inspector Robbery : ಎಂಥಾ ಸ್ಥಿತಿಗೆ ಬಂತು ಕರ್ನಾಟಕ, ಬೆಂಗಳೂರಲ್ಲಿ ಕಳ್ಳರಾದ ಪೊಲೀಸ್‌!]]></title>
            <link>https://kannada.asianetnews.com/karnataka-districts/bengaluru-cid-inspector-robbery-absconds-after-looting-20laks-using-police-jeep-gdp/articleshow-b6wwzst</link>
            <guid isPermaLink="true">https://kannada.asianetnews.com/karnataka-districts/bengaluru-cid-inspector-robbery-absconds-after-looting-20laks-using-police-jeep-gdp/articleshow-b6wwzst</guid>
            <pubDate>Fri, 19 Jun 2026 13:28:46 +0530</pubDate>
            <description><![CDATA[ಬೆಂಗಳೂರಿನಲ್ಲಿ ಸಿಐಡಿ ಇನ್ಸ್&zwnj;ಪೆಕ್ಟರ್ ಒಬ್ಬರು ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಕೇರಳದ ಯುವಕರಿಂದ ₹20 ಲಕ್ಷ ದರೋಡೆ ಮಾಡಿದ್ದಾರೆ. ಈ ಕೃತ್ಯಕ್ಕೆ ಅಧಿಕೃತ ಸಿಐಡಿ ಜೀಪ್ ಬಳಸಲಾಗಿದ್ದು, ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿ ಇನ್ಸ್&zwnj;ಪೆಕ್ಟರ್ ತಲೆಮರೆಸಿಕೊಂಡಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmfan70cjk731stm7675shtv,imgname-seemanth-kumar-singh-1774335990795.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಇದು ರಕ್ಷಕರೇ ಭಕ್ಷಕರಾದ ಕಥೆ! ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಘನವೆತ್ತ ಪೊಲೀಸರ ದೊಡ್ಡ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಖುದ್ದೂ ಸಿಐಡಿ (CID) ವಿಭಾಗದ ಪೊಲೀಸ್ ಇನ್ಸ್&zwnj;ಪೆಕ್ಟರ್ ಒಬ್ಬರು ಖಾಸಗಿ ವ್ಯಕ್ತಿಗಳ ಜೊತೆಗೂಡಿ ಕೇರಳ ಮೂಲದ ಯುವಕರಿಂದ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿರುವ ಗಂಭೀರ ಪ್ರಕರಣ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ (CP) ಸಿಮಂತ್ ಕುಮಾರ್ ಅವರು ಅಧಿಕೃತ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಇನ್ಸ್&zwnj;ಪೆಕ್ಟರ್ ಪಾತ್ರ ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಘಟನೆಯ ಹಿನ್ನೆಲೆ:&lt;/h2&gt;&lt;p&gt;ಕೇರಳ ಮೂಲದ ಇಬ್ಬರು ಯುವಕರು ಮನಿ ಟ್ರೇಡಿಂಗ್ (ಹಣದ ವಹಿವಾಟು) ನಡೆಸುವ ಸಲುವಾಗಿ ₹20 ಲಕ್ಷ ನಗದನ್ನು ಇಟ್ಟುಕೊಂಡು ಮಡಿವಾಳದ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಪೇಂದ್ರ ಹಾಗೂ ಕುಮಾರ್ ಎಂಬ ಖಾಸಗಿ ವ್ಯಕ್ತಿಗಳು, ಸಿಐಡಿ ಇನ್ಸ್&zwnj;ಪೆಕ್ಟರ್ ಸೂಚನೆ ಮೇರೆಗೆ ಹೋಟೆಲ್&zwnj; ಒಳಗಡೆ ಹೋಗಿದ್ದರು. ತಾವು ಪೊಲೀಸರು ಎಂದು ಹೇಳಿ ಐಡಿ ಕಾರ್ಡ್ ತೋರಿಸಿ ಯುವಕರಿಗೆ ಧಮ್ಕಿ ಹಾಕಿದ್ದಾರೆ. ನೀವು ಅಕ್ರಮವಾಗಿ ಮನಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಾ ಎಂದು ಬೆದರಿಸಿ, ಇಬ್ಬರನ್ನೂ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ನಂತರ ಅವರಿಂದ 20 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.&lt;/p&gt;&lt;h2&gt;ದರೋಡೆಗೆ ಬಳಕೆಯಾಯ್ತು ಅಸಲಿ ಸಿಐಡಿ ಜೀಪ್!&lt;/h2&gt;&lt;p&gt;ಈ ದರೋಡೆ ಕೃತ್ಯಕ್ಕೆ ಖದೀಮರು ಸರ್ಕಾರದ ಇಲಾಖಾ ವಾಹನವನ್ನು ಬಳಸಿರುವುದೇ ಈ ಪ್ರಕರಣದ ಟ್ವಿಸ್ಟ್. ಇಡೀ ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿಐಡಿ ಇನ್ಸ್&zwnj;ಪೆಕ್ಟರ್&zwnj;ಗೆ ಸೇರಿದ ಅಸಲಿ ಪೊಲೀಸ್ ಜೀಪ್&zwnj;ನಲ್ಲೇ ಬಂದಿದ್ದ ಖಾಸಗಿ ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ. ಹೋಟೆಲ್ ಬಳಿ ಜೀಪ್ ನಿಲ್ಲಿಸಿದ್ದರು. ಈ ವೇಳೆ ಇನ್ಸ್&zwnj;ಪೆಕ್ಟರ್ ಜೀಪಿನ ಒಳಗೇ ಕುಳಿತಿದ್ದು, ಪೊಲೀಸಪ್ಪನ ಆದೇಶದಂತೆ ಉಪೇಂದ್ರ ಮತ್ತು ಕುಮಾರ್ ಮಾತ್ರ ಹೋಟೆಲ್ ರೂಮ್&zwnj;ಗೆ ನುಗ್ಗಿ ಹಣ ದೋಚಿದ್ದರು. ಈ ವೇಳೆ ಹಣ ಕಳೆದುಕೊಂಡ ಕೇರಳದ ಯುವಕರು ಸಮಯಪ್ರಜ್ಞೆ ಬಳಸಿ ಇಡೀ ಘಟನೆಯನ್ನು ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದರು.&lt;/p&gt;&lt;h2&gt;ಟ್ವಿಸ್ಟ್ ಕೊಟ್ಟ ದೂರುದಾರರ ಹಿನ್ನೆಲೆ!&lt;/h2&gt;&lt;p&gt;ಆರಂಭದಲ್ಲಿ ಮನಿ ಟ್ರೇಡಿಂಗ್ ಎಂದು ದೂರು ನೀಡಲಾಗಿದ್ದರೂ, ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತರು ಡ್ರಗ್ ಪೆಡ್ಲರ್&zwnj;ಗಳು (ಮಾದಕವಸ್ತು ಮಾರಾಟಗಾರರು) ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೇರಳದ ಯುವಕರು ತಮ್ಮ ಹೆದರಿಕೆಯಿಂದ ದೂರು ನೀಡಲ್ಲ ಎಂದು ಭಾವಿಸಿ ಇನ್ಸ್&zwnj;ಪೆಕ್ಟರ್ ಈ ದರೋಡೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಸದ್ಯ ದೂರುದಾರರ ಹಿನ್ನೆಲೆಯನ್ನು ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;&lt;h2&gt;ಡಿಸಿಪಿ ಸಜೀತ ತನಿಖೆ ಮತ್ತು ಇನ್ಸ್&zwnj;ಪೆಕ್ಟರ್ ಎಸ್ಕೇಪ್:&lt;/h2&gt;&lt;p&gt;ಹಣ ಕಳೆದುಕೊಂಡ ಯುವಕರು ತಕ್ಷಣವೇ ಮಡಿವಾಳ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪ್ರಕರಣದ ಗಂಬೀರತೆಯನ್ನಯ ಅರಿತ ಆಗ್ನೇಯ ವಿಭಾಗದ ಡಿಸಿಪಿ (DCP) ಮೊಹಮ್ಮದ್ ಸಜೀತ ಅವರ ಮಾರ್ಗದರ್ಶನದಲ್ಲಿ ಮಡಿವಾಳ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದಾರೆ. ತನಿಖೆಯ ವೇಳೆ ಪೊಲೀಸರಿಗೆ ಇನ್ಸ್&zwnj;ಪೆಕ್ಟರ್ ನಂಟು ಇರುವುದು ಪತ್ತೆಯಾಗಿದೆ. ಪೊಲೀಸರು ತಕ್ಷಣವೇ ಕೃತ್ಯಕ್ಕೆ ಬಳಸಿದ್ದ ಖಾಸಗಿ ವ್ಯಕ್ತಿಗಳಲ್ಲಿ ಒಬ್ಬನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಇನ್ಸ್&zwnj;ಪೆಕ್ಟರ್ ಹೆಸರು ಬಾಯಿಬಿಟ್ಟಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಸಿಐಡಿ ಇನ್ಸ್&zwnj;ಪೆಕ್ಟರ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸದ್ಯ ಪರಾರಿಯಾಗಿದ್ದಾನೆ.&lt;/p&gt;&lt;h2&gt;ಕಮಿಷನರ್ ಹೇಳಿಕೆ ಮತ್ತು ರಿಕವರಿ:&lt;/h2&gt;&lt;p&gt;ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ , &quot;ಮಡಿವಾಳ ಠಾಣೆಗೆ ಬಂದ ದೂರಿನ ಅನ್ವಯ ತನಿಖೆ ಕೈಗೊಳ್ಳಲಾಗಿದೆ. ದರೋಡೆಯಾಗಿದ್ದ ಸಂಪೂರ್ಣ ಹಣವನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಸಿಐಡಿ ಇಲಾಖೆಯ ಜೀಪ್ ಅನ್ನು ಸೀಜ್ ಮಾಡಲಾಗಿದೆ. ಇನ್ಸ್&zwnj;ಪೆಕ್ಟರ್ ಪಾತ್ರದ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ವಿಶೇಷ ತಂಡಗಳಿಂದ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಕಾನೂನು ರಕ್ಷಕನೇ ಖದೀಮರ ಜೊತೆ ಸೇರಿ ದರೋಡೆ ನಡೆಸಿರುವ ಈ ಘಟನೆ ಬೆಂಗಳೂರು ಪೊಲೀಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-cid-inspector-robbery-absconds-after-looting-20laks-using-police-jeep-gdp/articleshow-b6wwzst"/>
        </item>
        <item>
            <title><![CDATA[Tumkur ghost story: ತುಮಕೂರು ಹೈವೆಯಲ್ಲಿ ಮಟನ್ ಸಾಂಬಾರ್ ಕೇಳಿದ ಅಪರಿಚಿತ ಧ್ವನಿ, ನೀವು ಎಚ್ಚರ!]]></title>
            <link>https://kannada.asianetnews.com/gallery/karnataka-districts/ghost-asked-for-mutton-sambar-hanumantapura-tumkur-road-story-suh-s115myz</link>
            <guid isPermaLink="true">https://kannada.asianetnews.com/gallery/karnataka-districts/ghost-asked-for-mutton-sambar-hanumantapura-tumkur-road-story-suh-s115myz</guid>
            <pubDate>Fri, 19 Jun 2026 13:25:49 +0530</pubDate>
            <description><![CDATA[&lt;p&gt;Hanumantapura tumkur road story ತುಮಕೂರು ಜಿಲ್ಲೆಯ ಹನುಮಂತಪುರ ಮತ್ತು ಕೊರಟಗೆರೆ ಭಾಗದ ರಸ್ತೆಗಳಲ್ಲಿ ಮಧ್ಯರಾತ್ರಿ ಸಮಯದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬ ಮಾತುಗಳು ವರ್ಷಗಳಿಂದ ಕೇಳಿಬರುತ್ತಿವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvfdkv1gk8apjm814cxv54wy,imgname-hanumantapura-tumkur-road-story-1781855284272.jpeg" type="image/jpeg" height="390" width="690"/>
            <content:encoded><![CDATA[&lt;p&gt;Hanumantapura tumkur road story ತುಮಕೂರು ಜಿಲ್ಲೆಯ ಹನುಮಂತಪುರ ಮತ್ತು ಕೊರಟಗೆರೆ ಭಾಗದ ರಸ್ತೆಗಳಲ್ಲಿ ಮಧ್ಯರಾತ್ರಿ ಸಮಯದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬ ಮಾತುಗಳು ವರ್ಷಗಳಿಂದ ಕೇಳಿಬರುತ್ತಿವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;2010ರ ಅಕ್ಟೋಬರ್ ತಿಂಗಳಲ್ಲಿ, ಪಿತೃಪಕ್ಷ ಮುಗಿಯುವ ದಿನಗಳಲ್ಲಿ ನಡೆದ ಈ ಘಟನೆ ಅಜಯ್ ಜೀವನವನ್ನೇ ಬದಲಾಯಿಸಿತ್ತು. ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ರಾತ್ರಿ 11 ಗಂಟೆ ಸುಮಾರಿಗೆ ಸೈಕಲ್&zwnj;ನಲ್ಲಿ ಮನೆಗೆ ಹೊರಟಿದ್ದ ಅಜಯ್, ತನ್ನ ಜೊತೆ ಯಾರೋ ಮಾತನಾಡುತ್ತಿರುವ ಅನುಭವಕ್ಕೆ ಒಳಗಾಗಿದ್ದ.&lt;/p&gt;&lt;p&gt;ಮೊದಲಿಗೆ &quot;ನಾನು ಬರಲಾ ಅಜ್ಜ?&quot; ಎಂಬ ಧ್ವನಿ ಕೇಳಿಸಿತು. ಸುತ್ತಲೂ ನೋಡಿದರೂ ಯಾರೂ ಕಾಣಿಸಲಿಲ್ಲ. ಸ್ವಲ್ಪ ದೂರ ಹೋಗುತ್ತಿದ್ದಂತೆ ಅದೇ ಧ್ವನಿ ಮತ್ತೆ ಕೇಳಿಸಿತು. ಈ ಬಾರಿ ಅದು ಸಿಟ್ಟಿನಿಂದ ಮಾತನಾಡುವ ಮಹಿಳೆಯ ಧ್ವನಿಯಂತಿತ್ತು.&lt;/p&gt;&lt;img&gt;&lt;p&gt;&quot;ನನ್ನನ್ನೂ ಕರೆದುಕೊಂಡು ಹೋಗು... ಒಬ್ಬನೇ ಹೋಗ್ತಿದೀಯಾ?&quot; ಎಂಬ ಮಾತು ಕೇಳುತ್ತಿದ್ದಂತೆ ಅಜಯ್ ಭಯದಿಂದ ನಡುಗತೊಡಗಿದ. ವಿಚಿತ್ರವೆಂದರೆ, ಅವನ ಕೈಯಲ್ಲಿದ್ದ ಮಟನ್ ಸಾಂಬಾರ್ ಪಾರ್ಸಲ್ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಆ ಧ್ವನಿ,&lt;/p&gt;&lt;p&gt;&quot;ನನಗೂ ಸ್ವಲ್ಪ ಮಟನ್ ಸಾಂಬಾರ್ ಕೊಡ್ತೀಯಾ? ನನಗೂ ಹಸಿವಾಗಿದೆ...&quot; ಎಂದು ಕೇಳಿತಂತೆ.&lt;/p&gt;&lt;img&gt;&lt;p&gt;ಈ ಮಾತು ಕೇಳಿದ ಕ್ಷಣ ಅಜಯ್ ನಿಯಂತ್ರಣ ಕಳೆದುಕೊಂಡು ಸೈಕಲ್&zwnj;ನಿಂದ ಕೆಳಗೆ ಬಿದ್ದ. ಟಿಫಿನ್ ಬಾಕ್ಸ್ ತೆರೆದು ಸಾಂಬಾರ್ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿತ್ತು. ಭಯದಿಂದ ನಡುಗುತ್ತಿದ್ದ ಅಜಯ್ ಸೈಕಲ್ ಎತ್ತಿಕೊಂಡು ಹಿಂದೆ ತಿರುಗಿ ನೋಡದೆ ಮನೆಗೆ ಓಡಿಹೋಗಿದ್ದ.&lt;/p&gt;&lt;img&gt;&lt;p&gt;ಮರುದಿನ ಬೆಳಗ್ಗೆ ಅಜಯ್&zwnj;ಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಔಷಧಿ ತೆಗೆದುಕೊಂಡರೂ ಜ್ವರ ಕಡಿಮೆಯಾಗದ ಕಾರಣ ಕುಟುಂಬದವರು ಹನುಮಂತಪುರದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಿಶೇಷ ಪೂಜೆ ಮಾಡಿಸಿದರು. ದೇವಸ್ಥಾನದ ಅರ್ಚಕರು ರಕ್ಷಣಾ ಯಂತ್ರ ಕಟ್ಟಿದ ಬಳಿಕವೇ ಜ್ವರ ಕಡಿಮೆಯಾಯಿತಂತೆ.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/karnataka-districts/ghost-asked-for-mutton-sambar-hanumantapura-tumkur-road-story-suh-s115myz"/>
        </item>
        <item>
            <title><![CDATA[Chikkamagaluru: ನಡುರಸ್ತೆಯಲ್ಲೇ ತಲ್ವಾರ್‌ನಿಂದ ಕೇಕ್ ಕಟ್! ವೈರಲ್ ವಿಡಿಯೋ ಬೆನ್ನಲ್ಲೇ ಯುವಕನ ವಿರುದ್ಧ FIR]]></title>
            <link>https://kannada.asianetnews.com/gallery/karnataka-districts/chikkamagaluru-youth-book-fir-after-cutting-birthday-cake-with-swaord-on-public-road-video-viral-mm42zq7</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-youth-book-fir-after-cutting-birthday-cake-with-swaord-on-public-road-video-viral-mm42zq7</guid>
            <pubDate>Fri, 19 Jun 2026 13:16:45 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆಯಾ? ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪುಡಿರೌಡಿಗಳು ಪುಂಡರನ್ನ ಹದ್ದುಬಸ್ತಿನಲ್ಲಿಡುತ್ತಾರೆ ಎಂಬ ಭರವಸೆಯಿಂದ ರಾಜ್ಯದ ಜನರು ಕಾದಿರುವಾಗಲೇ ಮತ್ತೊಂದು ಪುಂಡರ ಕೃತ್ಯ ನಡೆದುಹೋಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvfdcgtbdjqf8d20025t30qp,imgname----------------------17--1781855044427.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆಯಾ? ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪುಡಿರೌಡಿಗಳು ಪುಂಡರನ್ನ ಹದ್ದುಬಸ್ತಿನಲ್ಲಿಡುತ್ತಾರೆ ಎಂಬ ಭರವಸೆಯಿಂದ ರಾಜ್ಯದ ಜನರು ಕಾದಿರುವಾಗಲೇ ಮತ್ತೊಂದು ಪುಂಡರ ಕೃತ್ಯ ನಡೆದುಹೋಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಚಿಕ್ಕಮಗಳೂರು ನಗರದ ಹೊರಹೊಲಯದ ವಾಜಪೇಯಿ ಲೇಔಟ್&zwnj;ನಲ್ಲಿ ಯುವಕನೊಬ್ಬ ನಡು ರಸ್ತೆಯಲ್ಲೇ ತಲ್ವಾರ್&zwnj;ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿರುವ ಘಟನೆ ಬೆಳಕಿಗೆ ಬಂದಿದೆ.&amp;nbsp;&lt;/p&gt;&lt;img&gt;&lt;p&gt;ಮಹಮ್ಮದ್ ಸಮೀರ್ ಎಂಬ 20 ವರ್ಷದ ಯುವಕ ಕಾರಿನಿಂದ ರೌಡಿ ಸ್ಟೈಲ್&zwnj;ನಲ್ಲಿ ಕೆಳಗಿಳಿದಿದ್ದಾನೆ. ಕಾರಿನಿಂದ ಇಳಿಯುವಾಗ ಕೈಯಲ್ಲಿ ಸುಮಾರು ಎರಡೂವರೆ ಅಡಿ ಉದ್ದದ ಲಾಂಗ್&zwnj; ಹಿಡಿದಿರುವುದು ವಿಡಿಯೋದಲ್ಲಿದೆ. ಕಾರಿನ ಬಾನೆಟ್ ಮೇಲೆ ಇಟ್ಟಿದ್ದ 5 ಕೆಜಿಗೂ ಹೆಚ್ಚು ತೂಕದ ಬೃಹತ್ ಕೇಕ್ ಕತ್ತರಿಸಿದ್ದಾನೆ.&lt;/p&gt;&lt;img&gt;&lt;p&gt;ಈ ವೇಳೆ ಸುಮಾರು 10ಕ್ಕೂ ಹೆಚ್ಚು ಸ್ನೇಹಿತರು ಜೊತೆಗೆ ಇದ್ದಾರೆ. ನಡುರಾತ್ರಿ ಈ ಹುಟ್ಟುಹಬ್ಬದ ನೆಪದಲ್ಲಿ ಹುಚ್ಚಾಟ ಬೇಕಿತ್ತೆ? ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಬ್ಲಿಕ್ ಸ್ಥಳದಲ್ಲಿ ತಲ್ವಾರ್ ಪ್ರದರ್ಶಿಸುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿದ ಹಾಗೂ ಶಾಂತಿ ಭಂಗ ಮಾಡಿದ ಆರೋಪ ಕೇಳಿಬಂದಿದೆ.&lt;/p&gt;&lt;img&gt;&lt;p&gt;ಪಬ್ಲಿಕ್ ಸ್ಥಳದಲ್ಲಿ ತಲ್ವಾರ್ ಪ್ರದರ್ಶಿಸುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿದ ಹಾಗೂ ಶಾಂತಿ ಭಂಗ ಮಾಡಿದ ಆರೋಪ ಕೇಳಿಬಂದಿದೆ.&lt;/p&gt;&lt;img&gt;&lt;p&gt;ವೈರಲ್ ವಿಡಿಯೋ ಬೆನ್ನಲ್ಲೇ ಪೊಲೀಸರು ದೂರು ದಾಖಲಿಸಿ ತನಿಖೆ ಚುರುಕುಗೊಳಿಸಿದ್ದು, ಸಾರ್ವಜನಿಕ ವಲಯದಲ್ಲಿ ಲಾಂಗ್ ಹಿಡಿದು ತಿರುಗಾಡಿದ ಹಾಗೂ ಹುಟ್ಟುಹಬ್ಬ ಆಚರಣೆ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮಹಮ್ಮದ್ ಸಮೀರ್ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್&zwnj; ದಾಖಲಿಸಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/chikkamagaluru-youth-book-fir-after-cutting-birthday-cake-with-swaord-on-public-road-video-viral-mm42zq7"/>
        </item>
        <item>
            <title><![CDATA[ಬೆಂಗಳೂರು: ದಾರಿಹೋಕನ ಮೊಬೈಲ್ ಕದ್ದವರ ಗಾಡಿ ಮೇಲೆ ಮೂಟೆ ಹಾಕಿದ ಕಾರ್ಮಿಕ, ತಪ್ಪಿಸಿಕೊಳ್ಳಲು ಓಡಿ ಸುಸ್ತಾದ ಕಳ್ಳ ಸಾವು!]]></title>
            <link>https://kannada.asianetnews.com/karnataka-districts/bangalore-mobile-thief-drops-dead-from-heart-attack-while-fleeing-gdp/articleshow-i93cggu</link>
            <guid isPermaLink="true">https://kannada.asianetnews.com/karnataka-districts/bangalore-mobile-thief-drops-dead-from-heart-attack-while-fleeing-gdp/articleshow-i93cggu</guid>
            <pubDate>Fri, 19 Jun 2026 12:20:35 +0530</pubDate>
            <description><![CDATA[ಬೆಂಗಳೂರಿನ ಕಬ್ಬನ್&zwnj;ಪೇಟೆಯಲ್ಲಿ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕಳ್ಳನಿಗೆ ಕಾರ್ಮಿಕನೊಬ್ಬ ಮೂಟೆ ಎಸೆದು ಅಡ್ಡಿಪಡಿಸಿದ್ದಾನೆ. ಇದರಿಂದ ಗಾಬರಿಗೊಂಡು ಓಡುವಾಗ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಳ್ಳ ಜುನೈದ್ ಹೃದಯಾಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವಿಲಕ್ಷಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvfa7a7vwj2hgkpk7s6kdp91,imgname-bengaluru-mobile-snatcher-dies-1781851728123.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿಯಲ್ಲಿ ಮೊಬೈಲ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಕಬ್ಬನ್&zwnj;ಪೇಟೆಯಲ್ಲಿ ನಡೆದ ಮೊಬೈಲ್ ಸ್ನ್ಯಾಚಿಂಗ್ ಪ್ರಕರಣವೊಂದು ಇಡೀ ನಗರ ಬೆಚ್ಚಿಬೀಳುವಂತಹ ಕ್ಲೈಮ್ಯಾಕ್ಸ್&zwnj;ನೊಂದಿಗೆ ಅಂತ್ಯಗೊಂಡಿದೆ. ದಾರಿಯಲ್ಲಿ ನಡೆದು ಬರುತ್ತಿದ್ದವರ ಮೊಬೈಲ್ ಕಸಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ ಕಳ್ಳನೊಬ್ಬ, ಕಾರ್ಮಿಕನೊಬ್ಬನ ಸಮಯಪ್ರಜ್ಞೆಯಿಂದಾಗಿ ಕಂಗಾಲಾಗಿ ಓಡುವಾಗ, ಹೃದಯಾಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ಜೂನ್ 15ರಂದು ಕಬ್ಬನ್&zwnj;ಪೇಟೆಯ 14ನೇ ಕ್ರಾಸ್&zwnj;ನಲ್ಲಿ ನಡೆದ ಈ ಇಡೀ ರೋಮಾಂಚನಕಾರಿ ದೃಶ್ಯ ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತಪಟ್ಟ ಮೊಬೈಲ್ ಕಳ್ಳನನ್ನು ಜುನೈದ್ ಎಂದು ಗುರುತಿಸಲಾಗಿದ್ದು, ಆತನ ಸಹಚರ ಅರ್ಬಾಜ್&zwnj;ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;ಕಾರ್ಮಿಕನ &lsquo;ಮೂಟೆ&rsquo; ತಂತ್ರ!&lt;/h2&gt;&lt;p&gt;ಕಳೆದ ಸೋಮವಾರ (ಜೂನ್ 15) ಕಬ್ಬನ್&zwnj;ಪೇಟೆಯ ರಸ್ತೆಯಲ್ಲಿ ಪಾದಚಾರಿಯೊಬ್ಬರು ಮೊಬೈಲ್&zwnj;ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಜುನೈದ್ ಮತ್ತು ಅರ್ಬಾಜ್ ಎಂಬ ಇಬ್ಬರು ಖದೀಮರು ದ್ವಿಚಕ್ರ ವಾಹನದಲ್ಲಿ (ಸ್ಕೂಟರ್) ಹಿಂಬಾಲಿಸಿಕೊಂಡು ಬಂದಿದ್ದಾರೆ. ಪಾದಚಾರಿಯ ಬಳಿ ಬರುತ್ತಿದ್ದಂತೆ ಕ್ಷಣಮಾತ್ರದಲ್ಲಿ ಅವರ ಕೈಲಿದ್ದ ಮೊಬೈಲ್ ಕಸಿದುಕೊಂಡು ಬೈಕ್ ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾರೆ.&lt;/p&gt;&lt;p&gt;ಈ ವೇಳೆ ಮೊಬೈಲ್ ಕಳೆದುಕೊಂಡ ವ್ಯಕ್ತಿ &quot;ಮೊಬೈಲ್ ಕಳ್ಳರು... ಕಳ್ಳರು...&quot; ಎಂದು ಜೋರಾಗಿ ಕಿರುಚಿಕೊಂಡಿದ್ದಾರೆ. ತಕ್ಷಣವೇ ಅದೇ ರಸ್ತೆಯಲ್ಲಿ ತಲೆಯ ಮೇಲೆ ಭಾರವಾದ ಮೂಟೆಯನ್ನು ಹೊತ್ತು ಸಾಗುತ್ತಿದ್ದ ಕಾರ್ಮಿಕನೊಬ್ಬ ಅಲರ್ಟ್ ಆಗಿದ್ದಾನೆ. ಕಳ್ಳರು ಬೈಕ್&zwnj;ನಲ್ಲಿ ತನ್ನ ಸನಿಹಕ್ಕೆ ಬರುತ್ತಿದ್ದಂತೆ, ಆ ಕಾರ್ಮಿಕ ತನ್ನ ಸಮಯಪ್ರಜ್ಞೆಯನ್ನು ಬಳಸಿ ತಲೆಯ ಮೇಲಿದ್ದ ದೊಡ್ಡ ಮೂಟೆಯನ್ನು ವೇಗವಾಗಿ ಬರುತ್ತಿದ್ದ ಸ್ಕೂಟರ್ ಮೇಲಕ್ಕೆ ಎಸೆದಿದ್ದಾನೆ!&lt;/p&gt;&lt;h2&gt;ಬೈಕ್ ಬಿಟ್ಟು ಓಡಿದ ಖದೀಮರು:&lt;/h2&gt;&lt;p&gt;ಮೂಟೆ ಬಿದ್ದ ರಭಸಕ್ಕೆ ನಿಯಂತ್ರಣ ತಪ್ಪಿದ ಕಳ್ಳರಿಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಸಾರ್ವಜನಿಕರು ಹಾಗೂ ಆ ಕಾರ್ಮಿಕ ತಮ್ಮನ್ನು ಹಿಡಿಯಲು ಧಾವಿಸುತ್ತಿರುವುದನ್ನು ಕಂಡು ಗಾಬರಿಯಾದ ಕಳ್ಳರು, ತಾವು ಕದ್ದಿದ್ದ ಮೊಬೈಲ್ ಹಾಗೂ ತಮ್ಮ ಸ್ಕೂಟರ್ ಅನ್ನು ಘಟನಾ ಸ್ಥಳದಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಕಬ್ಬನ್&zwnj;ಪೇಟೆಯ ಗಲ್ಲಿಗಳಲ್ಲಿ ಓಡಲಾರಂಭಿಸಿದ್ದಾರೆ.&lt;/p&gt;&lt;h2&gt;ಕ್ಷಣ ಮಾತ್ರದಲ್ಲಿ ಕಳ್ಳನ ಸಾವು!&lt;/h2&gt;&lt;p&gt;ಟ್ವಿಸ್ಟ್ ಎಂದರೆ, ಸಾರ್ವಜನಿಕರ ಕೈಯಿಂದ ತಪ್ಪಿಸಿಕೊಂಡು ಸ್ವಲ್ಪ ದೂರ ಓಡಿ ಬಂದ ಕಳ್ಳ ಜುನೈದ್, ತೀವ್ರವಾಗಿ ಆಯಾಸಕ್ಕೊಳಗಾಗಿದ್ದಾನೆ. ಮೊದಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಆತನಿಗೆ ಜೋರಾಗಿ ಓಡಿದ ಕಾರಣ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ . ಕಬ್ಬನ್&zwnj;ಪೇಟೆಯ ರಸ್ತೆಯೊಂದರ ಫುಟ್&zwnj;ಪಾತ್ ಮೇಲೆ ಸುಧಾರಿಸಿಕೊಳ್ಳಲು ಕುಳಿತಿದ್ದಂತೆಯೇ ಜುನೈದ್ ಇದ್ದಕ್ಕಿದ್ದಂತೆ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ತೀವ್ರ ಹೃದಯಾಘಾತ ಸಂಭವಿಸಿದ ಕಾರಣ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.&lt;/p&gt;&lt;h2&gt;ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ:&lt;/h2&gt;&lt;p&gt;ಕಾರ್ಮಿಕ ತನ್ನ ತಲೆಯ ಮೇಲಿದ್ದ ಮೂಟೆಯನ್ನು ಕಳ್ಳರ ಬೈಕ್ ಮೇಲೆ ಎಸೆಯುವ ಮತ್ತು ಕಳ್ಳರು ಕೆಳಗೆ ಬಿದ್ದು ಓಡುವ ಇಡೀ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳತನವನ್ನು ತಡೆದ ಕಾರ್ಮಿಕನ ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.&lt;/p&gt;&lt;p&gt;ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಹಲಸೂರು ಗೇಟ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಜುನೈದ್&zwnj;ನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಮತ್ತೊಬ್ಬ ಆರೋಪಿ ಅರ್ಬಾಜ್&zwnj;ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈ ವಿಲಕ್ಷಣ ಘಟನೆಗೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (UDR) ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bangalore-mobile-thief-drops-dead-from-heart-attack-while-fleeing-gdp/articleshow-i93cggu"/>
        </item>
        <item>
            <title><![CDATA[ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕುಮಟಾದಿಂದಲೇ ಸಿಗಲಿದೆ ನೇರ ರೈಲು: ಜೂನ್ 20 ರಂದು ಕಾಚಿಗುಡ ಎಕ್ಸ್‌ಪ್ರೆಸ್‌ಗೆ ಅದ್ಧೂರಿ ಚಾಲನೆ!]]></title>
            <link>https://kannada.asianetnews.com/gallery/karnataka-districts/kumta-tirupati-kachiguda-train-service-inauguration-konkan-railway-updates-san-vf8t191</link>
            <guid isPermaLink="true">https://kannada.asianetnews.com/gallery/karnataka-districts/kumta-tirupati-kachiguda-train-service-inauguration-konkan-railway-updates-san-vf8t191</guid>
            <pubDate>Fri, 19 Jun 2026 11:29:22 +0530</pubDate>
            <description><![CDATA[&lt;p&gt;ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ ಜೂ. 20 ರಂದು ಉದ್ಘಾಟನೆಗೊಳ್ಳಲಿದೆ. ಈ ಹೊಸ ರೈಲು ವಾರದಲ್ಲಿ ಎರಡು ದಿನ ಸಂಚರಿಸಲಿದ್ದು, ಕುಮಟಾ ರೈಲು ನಿಲ್ದಾಣದ 2ನೇ ಪ್ಲಾಟ್&zwnj;ಫಾರ್ಮ್&zwnj; ಹಾಗೂ ಇತರ ಪ್ರಯಾಣಿಕ ಸೌಲಭ್ಯಗಳೂ ಲೋಕಾರ್ಪಣೆಗೊಳ್ಳಲಿವೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvf6f3wpq4c0t3rm6xcmjp79,imgname-kumta-railway-station-1781847789462.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ ಜೂ. 20 ರಂದು ಉದ್ಘಾಟನೆಗೊಳ್ಳಲಿದೆ. ಈ ಹೊಸ ರೈಲು ವಾರದಲ್ಲಿ ಎರಡು ದಿನ ಸಂಚರಿಸಲಿದ್ದು, ಕುಮಟಾ ರೈಲು ನಿಲ್ದಾಣದ 2ನೇ ಪ್ಲಾಟ್&zwnj;ಫಾರ್ಮ್&zwnj; ಹಾಗೂ ಇತರ ಪ್ರಯಾಣಿಕ ಸೌಲಭ್ಯಗಳೂ ಲೋಕಾರ್ಪಣೆಗೊಳ್ಳಲಿವೆ.&amp;nbsp;&lt;/p&gt;&lt;img&gt;&lt;p&gt;ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ, ಕುಮಟಾದಲ್ಲಿ 2ನೇ ಪ್ಲಾಟ್&zwnj;ಫಾರ್ಮ್&zwnj; ಹಾಗೂ ಗೋಕರ್ಣ, ಭಟ್ಕಳ ಹಾಗೂ ಮುರ್ಡೇಶ್ವರ ನಿಲ್ದಾಣಗಳಲ್ಲಿ ನಿರ್ಮಿಸಿದ ಪ್ರಯಾಣಿಕ ಸೌಲಭ್ಯಗಳ ಉದ್ಘಾಟನೆ ಕಾರ್ಯಕ್ರಮ ಜೂ. 20ರಂದು ಮಧ್ಯಾಹ್ನ 2.30ಕ್ಕೆ ಕುಮಟಾ ಕೊಂಕಣ ರೈಲು ನಿಲ್ದಾಣದಲ್ಲಿ ನಡೆಯಲಿದೆ.&lt;/p&gt;&lt;img&gt;&lt;p&gt;ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ, ಕೊಂಕಣ ರೈಲ್ವೆ ಸಿಎಂಡಿ ಸಂತೋಷಕುಮಾರ ಝಾ ಹಾಗೂ ಇತರ ಅಧಿಕಾರಿಗಳ ಉಪಸ್ಥಿತರಿರುವರು.ಈ ಕಾರ್ಯಕ್ರಮ ಜನತೆಯ ಪಾಲಿಗೆ ಸಂತಸದ ಹಾಗೂ ಐತಿಹಾಸಿಕ ಕ್ಷಣ ಎಂದು ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ಬಣ್ಣಿಸಿದೆ.&lt;/p&gt;&lt;img&gt;&lt;p&gt;ಕುಮಟಾದಿಂದ ತಿರುಪತಿಗೆ ನೇರ ರೈಲು ಸಂಪರ್ಕ ಆಗಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರತಿ ಬುಧವಾರ ಮತ್ತು ಶನಿವಾರ ಕುಮಟಾದಿಂದ ಈ ರೈಲು ಸಂಚರಿಸಲಿದ್ದು, ತಿರುಪತಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಲಿದೆ.&lt;/p&gt;&lt;img&gt;&lt;p&gt;ಈ ಮಹತ್ವದ ಯೋಜನೆಗೆ ಕಾರಣಕರ್ತರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊಂಕಣ ರೈಲ್ವೆ ಸಲಹಾ ಸಮಿತಿಯ ಸದಸ್ಯ ಹಾಗೂ ಶಾಸಕ ದಿನಕರ ಶೆಟ್ಟಿ, ಕೊಂಕಣ ರೈಲ್ವೆ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಹಾಗೂ ಅಧಿಕಾರಿಗಳು ಅಭಿನಂದನೀಯರು. ಕುಮಟಾ ರೈಲು ನಿಲ್ದಾಣದ ಎರಡನೇ ಪ್ಲಾಟ್&zwnj;ಫಾರ್ಮ್ ಉದ್ಘಾಟನೆಯಿಂದ ಕುಮಟಾ ನಿಲ್ದಾಣವು ಟರ್ಮಿನಲ್ ಸೌಲಭ್ಯ ಹೊಂದಿದ ಪ್ರಮುಖ ರೈಲು ನಿಲ್ದಾಣವಾಗಿ ಹೊರಹೊಮ್ಮಲಿದ್ದು, ಜಿಲ್ಲೆಯ ರೈಲು ಸಂಪರ್ಕಕ್ಕೆ ಹೊಸ ಆಯಾಮ ದೊರೆಯಲಿದೆ.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾಚಿಗುಡ ರೈಲು ಹೊಸ ಮೈಲಿಗಲ್ಲಾಗಲಿದೆ ಎಂದು ರೈಲ್ವೆ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ್ ಗಾಂವ್ಕರ್ ಹೇಳಿದರು. ಕಾಚಿಗುಡ-ತಿರುಪತಿ-ಮಂಗಳೂರು ರೈಲನ್ನು ಮುರ್ಡೇಶ್ವರದ ವರೆಗೆ ವಿಸ್ತರಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಯೋಗ ಸ್ಮರಣೀಯ. ಅದಾದ ಬಳಿಕ ಮುರ್ಡೇಶ್ವರ-ತಿರುಪತಿ-ಕಾಚಿಗುಡ ರೈಲನ್ನು ಕುಮಟಾಕ್ಕೆ ವಿಸ್ತರಿಸುವ ಕನಸನ್ನು ಹೊತ್ತು, ಶಾಸಕ ದಿನಕರ ಶೆಟ್ಟಿ ಅವರು ಕೊಂಕಣ ರೈಲ್ವೆ ಅಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿ, ಅದನ್ನು ಕೇಂದ್ರ ರೈಲ್ವೆ ಇಲಾಖೆಗೆ ರವಾನಿಸಿದ್ದರು.&lt;/p&gt;&lt;img&gt;&lt;p&gt;ಈ ಪ್ರಯತ್ನಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಹಕಾರವೂ ದೊರೆತಿದ್ದರ ಫಲವಾಗಿ ಮುರ್ಡೇಶ್ವರ -ತಿರುಪತಿ ರೈಲು ಕುಮಟಾ ವರೆಗೂ ವಿಸ್ತರಣೆಯಾಗಿ ಉದ್ಘಾಟನೆಗೊಳ್ಳುತ್ತಿದೆ. ಈ ರೈಲು ಹೊನ್ನಾವರ ನಿಲ್ದಾಣದಲ್ಲಿಯೂ ನಿಲುಗಡೆ ಹೊಂದಲು ಶಾಸಕ ದಿನಕರ ಶೆಟ್ಟಿ ಬೇಡಿಕೆ ಇಟ್ಟಿದ್ದಾರೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಿರುಪತಿಯಿಂದ ಹೊರಡುವ ಈ ರೈಲು, ಬುಧವಾರ ಮತ್ತು ಶನಿವಾರ ಕುಮಟಾದಿಂದ ತಿರುಪತಿಗೆ ಪ್ರಯಾಣ ಬೆಳೆಸಲಿದೆ. ಕರಾವಳಿ ಕರ್ನಾಟಕದ ರೈಲು ಸಂಪರ್ಕವನ್ನು ಇನ್ನಷ್ಟು ಬಲಪಡಿಸುವ ಈ ಯೋಜನೆ ಭವಿಷ್ಯದಲ್ಲಿ ಇನ್ನಷ್ಟು ರೈಲು ಸೇವೆಗಳ ವಿಸ್ತರಣೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.&lt;/p&gt;&lt;img&gt;&lt;p&gt;ರೈಲು ಸಂಖ್ಯೆ 12789/12790 ಕಾಚಿಗುಡ&ndash;ಮುರ್ಡೇಶ್ವರ&ndash;ಕಾಚಿಗುಡ Bi-Weekly ಎಕ್ಸ್&zwnj;ಪ್ರೆಸ್ ರೈಲು ಸೇವೆ ಕುಮಟಾವರೆಗೆ ವಿಸ್ತರಿಸಲಾಗಿದೆ. ಈ ವಿಸ್ತರಿತ ಸೇವೆ ಜೂನ್ 19 ರಿಂದ ಕಾಚಿಗುಡದಿಂದ ಹಾಗೂ ಜೂನ್ 20 ರಿಂದ ಕುಮಟಾದಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ.&lt;/p&gt;&lt;p&gt;ರೈಲು ಸಂಚಾರದ ಸಂಪೂರ್ಣ ವೇಳಾಪಟ್ಟಿ ಇಂತಿವೆ: ಕಾಚಿಗುಡದಿಂದ ಕುಮಟಾಕ್ಕೆ (ರೈಲು ಸಂಖ್ಯೆ: 12789) ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹೊರಡಲಿದೆ. ಬೆಳಗ್ಗೆ 6:05ಕ್ಕೆ ರೈಲು ಕಾಚಿಗುಡದಿಂದ ಹೊರಡಲಿದೆ. ಮರುದಿನ ಮಧ್ಯಾಹ್ನ 2:40 ಕ್ಕೆ ಕುಮಟಾ ನಿಲ್ದಾಣವನ್ನು ತಲುಪಲಿದೆ. ಈ ರೈಲು ಮುರ್ಡೇಶ್ವರ ನಿಲ್ದಾಣದಿಂದ ಮಧ್ಯಾಹ್ನ 1:48 ಕ್ಕೆ ಹೊರಟು ಕುಮಟಾ ಕಡೆಗೆ ಪ್ರಯಾಣ ಬೆಳೆಸಲಿದೆ.&lt;/p&gt;&lt;p&gt;ಕುಮಟಾದಿಂದ ಕಾಚಿಗುಡಕ್ಕೆ (ತಿರುಗಿ ಬರುವ ರೈಲು ಸಂಖ್ಯೆ: 12790) ಪ್ರತಿ ಬುಧವಾರ ಮತ್ತು ಶನಿವಾರ ಸಂಚರಿಸಲಿದೆ. ಮಧ್ಯಾಹ್ನ 3:25 ಕ್ಕೆ ಕುಮಟಾದಿಂದ ಈ ರೈಲು ಹೊರಡಲಿದೆ. ಮಾರ್ಗದಲ್ಲಿ ಮುರ್ಡೇಶ್ವರ (ಸಂಜೆ 4:04), ಭಟ್ಕಳ (ಸಂಜೆ 4:20), ಮೂಕಾಂಬಿಕಾ ರೋಡ್ ಬೈಂದೂರು (ಸಂಜೆ 4:37), ಕುಂದಾಪುರ (ಸಂಜೆ 5:04), ಬಾರ್ಕೂರು (ಸಂಜೆ 5:20), ಉಡುಪಿ (ಸಂಜೆ 5:37), ಮಂಗಳೂರು ಸೆಂಟ್ರಲ್ (ರಾತ್ರಿ 8:00) ನಿಲ್ದಾಣದಲ್ಲಿ ನಿಲ್ಲಲಿದ್ದು, ಮರುದಿನ ರಾತ್ರಿ 11:40 ಕ್ಕೆ ಕಾಚಿಗುಡ ನಿಲ್ದಾಣವನ್ನು ತಲುಪಲಿದೆ.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/kumta-tirupati-kachiguda-train-service-inauguration-konkan-railway-updates-san-vf8t191"/>
        </item>
        <item>
            <title><![CDATA[ಬೆಂಗಳೂರು ಜಲಮಂಡಳಿಯ ಪ್ಲ್ಯಾಂಟ್ ಗೆ ಬಿದ್ದ ಇಂಜಿನಿಯರ್ ಸೇರಿ ಇಬ್ಬರ ಕಣ್ಮರೆ, ಮೃತದೇಹದ ಹುಡುಕಾಟ!]]></title>
            <link>https://kannada.asianetnews.com/karnataka-districts/varthur-stp-accident-engineer-and-worker-missing-in-40-ft-bwssb-sewage-treatment-plant-tank-gdp/articleshow-gu9h21g</link>
            <guid isPermaLink="true">https://kannada.asianetnews.com/karnataka-districts/varthur-stp-accident-engineer-and-worker-missing-in-40-ft-bwssb-sewage-treatment-plant-tank-gdp/articleshow-gu9h21g</guid>
            <pubDate>Fri, 19 Jun 2026 11:12:18 +0530</pubDate>
            <description><![CDATA[ಬೆಂಗಳೂರಿನ ವರ್ತೂರಿನಲ್ಲಿರುವ ಜಲಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ (STP) ದುರಸ್ತಿ ಕಾರ್ಯದ ವೇಳೆ ಇಂಜಿನಿಯರ್ ಸೇರಿದಂತೆ ಇಬ್ಬರು ಆಯತಪ್ಪಿ ಟ್ಯಾಂಕ್&zwnj;ಗೆ ಬಿದ್ದು ನಾಪತ್ತೆಯಾಗಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಎನ್&zwnj;ಡಿಆರ್&zwnj;ಎಫ್ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf641egtcpz590se5g28f4r,imgname-varthur-stp-accident-1781847426511.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ (STP) ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ಇಂಜಿನಿಯರ್ ಸೇರಿದಂತೆ ಇಬ್ಬರು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ವರ್ತೂರಿನ ಬೆಳಗೆರೆಯಲ್ಲಿ ನಡೆದಿದೆ. ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ 5 ರಿಂದ 6 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದೆ.&lt;/p&gt;&lt;h2&gt;ದುರಂತದ ಹಿನ್ನೆಲೆ:&lt;/h2&gt;&lt;p&gt;ವರ್ತೂರಿನ ಬೆಳಗೆರೆಯಲ್ಲಿರುವ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಮೂರು ಗೇಟ್&zwnj;ಗಳು ತಾಂತ್ರಿಕ ಸಮಸ್ಯೆಯಿಂದಾಗಿ ಕೆಟ್ಟುಹೋಗಿದ್ದವು. ಇದನ್ನು ದುರಸ್ತಿ ಮಾಡುವ ಸಲುವಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಏಣಿ ಹಾಕಿ ಘಟಕದ ಆಳಕ್ಕೆ ಇಳಿದಿದ್ದರು. ಈ ವೇಳೆ ಮೂವರೂ ಆಯತಪ್ಪಿ ನೇರವಾಗಿ ಕೊಳಚೆ ನೀರಿನ ಟ್ಯಾಂಕ್ ಒಳಗೆ ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಇತರ ಕಾರ್ಮಿಕರು ಜಾಗರೂಕರಾಗಿ ಒಬ್ಬನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ ಕಾರ್ತಿಕ್&zwnj;ನನ್ನು ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h2&gt;ಇಬ್ಬರು ದುರ್ದೈವಿಗಳು ನಾಪತ್ತೆ:&lt;/h2&gt;&lt;p&gt;ಟ್ಯಾಂಕ್&zwnj;ಗೆ ಬಿದ್ದು ಕೊಳಚೆ ನೀರಿನಲ್ಲಿ ಕೊಚ್ಚಿಹೋಗಿರುವ ಇಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ತಮಿಳುನಾಡು ಮೂಲದ ಇಂಜಿನಿಯರ್ ಅಗಿಲನ್ ಮೋಹನ್ (30) ಹಾಗೂ ಬಿಹಾರ ಮೂಲದ ಸಿಬ್ಬಂದಿ ಬ್ರಜೇಶ್ ಕುಮಾರ್ (30) ಎಂದು ಗುರುತಿಸಲಾಗಿದೆ. ಬ್ರಜೇಶ್ ಕಳೆದ ಕೆಲವು ವರ್ಷಗಳಿಂದ ಇದೇ ಪ್ಲಾಂಟ್&zwnj;ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.&lt;/p&gt;&lt;h2&gt;ಸುರಕ್ಷತಾ ಕ್ರಮಗಳ ಸಂಪೂರ್ಣ ನಿರ್ಲಕ್ಷ್ಯ:&lt;/h2&gt;&lt;p&gt;ಸುಮಾರು 40 ಅಡಿಗಳಷ್ಟು ಆಳವಿರುವ ಈ ಡ್ರೈನೇಜ್ ಪ್ಲಾಂಟ್&zwnj;ನಲ್ಲಿ ಕೋರಮಂಗಲದಿಂದ ವರ್ತೂರಿನವರೆಗೆ ಹರಿದು ಬರುವ ಕೊಳಚೆ ನೀರು ಸಂಗ್ರಹವಾಗುತ್ತದೆ. ಇಂತಹ ಅಪಾಯಕಾರಿ ಟ್ಯಾಂಕ್&zwnj;ಗಳ ಒಳಗೆ ಆಮ್ಲಜನಕ ಕೊರತೆ ಇರುತ್ತದೆ. ನಿಯಮದ ಪ್ರಕಾರ ಒಳಗೆ ಇಳಿಯುವ ಕಾರ್ಮಿಕರಿಗೆ ಆಕ್ಸಿಜನ್ ಕಿಟ್ ಹಾಗೂ ಗ್ಯಾಸ್ ಮಾಸ್ಕ್ ನೀಡಬೇಕು. ಆದರೆ, ಯಾವುದೇ ಕನಿಷ್ಠ ಸುರಕ್ಷತಾ ಸಾಧನವಾಗಲಿ ಅಥವಾ ಟ್ಯೂಬ್&zwnj;ಗಳನ್ನಾಗಲಿ ನೀಡದೆ ಕಾರ್ಮಿಕರನ್ನು ಇಳಿಸಿರುವುದು ಜಲಮಂಡಳಿ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.&lt;/p&gt;&lt;h2&gt;ಸಾವಿಗೂ ಮುನ್ನ ಮಕ್ಕಳೊಂದಿಗೆ ಮಾತನಾಡಿದ್ದ ಬ್ರಜೇಶ್!&lt;/h2&gt;&lt;p&gt;ಪ್ಲಾಂಟ್&zwnj;ನೊಳಗೆ ಇಳಿಯುವ ಕೆಲವೇ ನಿಮಿಷಗಳ ಮುನ್ನ ಬಿಹಾರ ಮೂಲದ ಬ್ರಜೇಶ್ ಕುಮಾರ್ ತನ್ನ ಮಕ್ಕಳೊಂದಿಗೆ ಮೊಬೈಲ್&zwnj;ನಲ್ಲಿ ಮಾತನಾಡಿದ್ದರು. ಮಾತು ಮುಗಿಸಿ ಮೊಬೈಲನ್ನು ತನ್ನ ಸ್ನೇಹಿತರ ಕೈಗೆ ನೀಡಿ, ಇಂಜಿನಿಯರ್ ಜೊತೆ ಕೆಳಗೆ ಇಳಿದಿದ್ದರು. ಆದರೆ, ಇಳಿದ ಕೆಲವೇ ಕ್ಷಣಗಳಲ್ಲಿ ನೀರು ಪಾಲಾಗಿರುವುದು ದುರಂತದ ಸಂಗತಿ.&lt;/p&gt;&lt;h2&gt;ಮುಂದುವರಿದ ಎನ್&zwnj;ಡಿಆರ್&zwnj;ಎಫ್ ಹಾಗೂ ಅಗ್ನಿಶಾಮಕ ದಳದ ಕಾರ್ಯಾಚರಣೆ:&lt;/h2&gt;&lt;p&gt;ಘಟನೆ ನಡೆದ ತಕ್ಷಣ ವರ್ತೂರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಎನ್&zwnj;ಡಿಆರ್&zwnj;ಎಫ್ (NDRF) ತಂಡ ಕೂಡ ಆಗಮಿಸಿದ್ದು, ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದೆ. ಜಲಮಂಡಳಿ ಸಿಬ್ಬಂದಿ ಈಗಾಗಲೇ ಟ್ಯಾಂಕ್&zwnj;ನಲ್ಲಿದ್ದ ನೀರನ್ನು ಹೊರಹಾಕಿದ್ದಾರೆ. ಆದರೂ ಕೊಳಚೆ ನೀರು ಹರಿದು ಬರುತ್ತಲೇ ಇರುವುದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಕ್ಲೈನ್ ಮೂಲಕ ತ್ಯಾಜ್ಯ ನಿರ್ವಹಣ ಘಟಕದ ಒಳಗೆ 4 ಸಿಬ್ಬಂದಿ ಇಳಿದಿದ್ದಾರೆ. ವಿಷ ಅನಿಲದ ಕಾರಣ ಕೆಲ ಕಾಲ ಇಳಿದಿರಲಿಲ್ಲ.&lt;/p&gt;&lt;p&gt;ಟ್ಯಾಂಕರ್ ಒಳಗಡೆ ಸುಮಾರು 10 ಅಡಿಯಷ್ಟು ಕೊಳಚೆ ನೀರು ಮತ್ತು ಕೆಸರು ಸಂಗ್ರಹವಾಗಿದ್ದು, ಇಲ್ಲಿಂದ ದೊಡ್ಡ ಪೈಪ್ ಮೂಲಕ ನೀರು ಹರಿದು ಫಿಲ್ಟರ್ ಆಗುವ ಪಾಯಿಂಟ್&zwnj;ಗೆ ತಲುಪುತ್ತದೆ. ಈ ಫಿಲ್ಟರ್ ಪಾಯಿಂಟ್&zwnj;ನಲ್ಲಿ ಘನತ್ಯಾಜ್ಯವನ್ನು ಬೇರ್ಪಡಿಸುವ ದೊಡ್ಡ ಚಕ್ರಗಳು (ಬ್ಲೇಡ್&zwnj;ಗಳು) ನಿರಂತರವಾಗಿ ತಿರುಗುತ್ತಿರುತ್ತವೆ. ಒಂದು ವೇಳೆ ಮೃತದೇಹಗಳು ಈ ಚಕ್ರಗಳಿಗೆ ಸಿಲುಕಿದ್ದರೆ ದೇಹ ತುಂಡಾಗುವ ಭೀತಿಯೂ ಎದುರಾಗಿದೆ. ಕಳೆದ ಹಲವು ಗಂಟೆಗಳಿಂದ ನಿರಂತರ ಹುಡುಕಾಟ ನಡೆಸುತ್ತಿದ್ದರೂ ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ. ಕೆಸರಿನಲ್ಲಿ ಮೃತದೇಹಗಳು ಸಿಲುಕಿರುವ ಶಂಕೆ ಇದ್ದು, ಎನ್&zwnj;ಡಿಆರ್&zwnj;ಎಫ್ ಸಿಬ್ಬಂದಿ 40 ಅಡಿ ಆಳಕ್ಕೆ ಇಳಿದು ಸಾಹಸದ ಕಾರ್ಯಾಚರಣೆ ನಡೆಸುತ್ತಿದ್ದಾರೆ.&lt;/p&gt;&lt;h2&gt;ಸ್ಥಳಕ್ಕೆ ಜಲಮಂಡಳಿ ಅಧ್ಯಕ್ಷರ ಭೇಟಿ:&lt;/h2&gt;&lt;p&gt;ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ಜಲಮಂಡಳಿ ಅಧ್ಯಕ್ಷೆ ಮಂಜುಳಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಿದ ಅವರು, ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಸದ್ಯ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/varthur-stp-accident-engineer-and-worker-missing-in-40-ft-bwssb-sewage-treatment-plant-tank-gdp/articleshow-gu9h21g"/>
        </item>
        <item>
            <title><![CDATA[ಬೆಳಗಾವಿ ಪರ ಗೊತ್ತುವಳಿ ನಿರ್ಧಾರದಿಂದ ದೂರುಳಿಯಿತೇ ಪಾಲಿಕೆ? ಹೊಸ ಚರ್ಚೆ ಹುಟ್ಟುಹಾಕಿದ ಮೇಯರ್ ಪತ್ರ !]]></title>
            <link>https://kannada.asianetnews.com/karnataka-districts/belagavi-resolution-row-mayor-s-letter-sparks-fresh-debate-rav/articleshow-1v5b9ih</link>
            <guid isPermaLink="true">https://kannada.asianetnews.com/karnataka-districts/belagavi-resolution-row-mayor-s-letter-sparks-fresh-debate-rav/articleshow-1v5b9ih</guid>
            <pubDate>Fri, 19 Jun 2026 11:05:20 +0530</pubDate>
            <description><![CDATA[ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಪಾಲಿಕೆ ಸಭೆಯಲ್ಲಿ ಅಂಗೀಕರಿಸಲು ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಆದರೆ, ಮೇಯರ್ ಅವರು ಕಾನೂನು ಅಭಿಪ್ರಾಯ ಕೇಳಿ ಸರ್ಕಾರಕ್ಕೆ ಪತ್ರ ಬರೆದಿದ್ದು, ನ್ಯಾಯಾಲಯದ ಪ್ರಕರಣವನ್ನು ಉಲ್ಲೇಖಿಸಿರುವುದು ಹೊಸ ಚರ್ಚೆ ಮತ್ತು ವಿಳಂಬಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf5wjdffm3nzz82etg5wpaf,imgname----------------------15--1781847181743.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀಶೈಲ ಮಠದ&lt;/strong&gt;&lt;/p&gt;&lt;p&gt;&lt;strong&gt;ಬೆಳಗಾವಿ (ಜೂ.19)&lt;/strong&gt;: ಬೆಳಗಾವಿ(Belagavi) ಕರ್ನಾಟಕ(Karnataka)ದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆ ಸಭೆ(Belgavi Municipal Corporation Meeting)ಯಲ್ಲಿ ಅಂಗೀಕರಿಸುವಂತೆ ಕನ್ನಡಪರ ಸಂಘಟನೆಗಳು ಕಳೆದ ಹಲವು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿವೆ. ಪ್ರತಿಭಟನೆಗಳು, ಧರಣಿಗಳು, ಮನವಿಗಳು, ಜಾಗೃತಿ ಸಭೆಗಳು, ಪ್ರಾದೇಶಿಕ ಆಯುಕ್ತರಿಗೆ ಪ್ರತಿದಿನ ಮನವಿ ಸಲ್ಲಿಸುವ ಅಭಿಯಾನ ಸೇರಿದಂತೆ ವಿವಿಧ ರೀತಿಯಲ್ಲಿ ಒತ್ತಡ ಹೇರಿದರೂ ಈವರೆಗೆ ಪಾಲಿಕೆಯಲ್ಲಿ ನಿರ್ಣಯ ಮಂಡನೆಯಾಗಿಲ್ಲ. ಇದೀಗ ಮೇಯರ್ ಪ್ರೀತಿ ಕಾಮಕರ(Mayor Preeti Kamakara) ಅವರ ಪತ್ರ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ.&lt;/p&gt;&lt;p&gt;ಜೂ.12ರಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿಯವರಿಗೆ ಬರೆದ ಪತ್ರದಲ್ಲಿ, ಕನ್ನಡಪರ ಸಂಘಟನೆಗಳು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ವಿಷಯವನ್ನು ಪಾಲಿಕೆ ಸಭೆಯಲ್ಲಿ ಠರಾವಾಗಿ ಮಂಡಿಸುವಂತೆ ಮನವಿ ಮಾಡಿರುವುದಾಗಿ ಮೇಯರ್ ಉಲ್ಲೇಖಿಸಿದ್ದಾರೆ. ಆದರೆ, ಈ ಕುರಿತು ಕಾನೂನು ಅಭಿಪ್ರಾಯ ಪಡೆಯಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇಲ್ಲಿಯೇ ಪ್ರಮುಖ ಪ್ರಶ್ನೆ ಉದ್ಭವಿಸಿದೆ. ಬೆಳಗಾವಿ ಕರ್ನಾಟಕದ ಭಾಗ ಎನ್ನುವುದು ಹೊಸದಾಗಿ ನಿರ್ಧರಿಸಬೇಕಾದ ವಿಚಾರವೇ? ಇದಕ್ಕಾಗಿ ಪ್ರತ್ಯೇಕ ಕಾನೂನು ಅಭಿಪ್ರಾಯ ಪಡೆಯುವ ಅಗತ್ಯವಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.&lt;/p&gt;&lt;p&gt;1956ರ ರಾಜ್ಯಗಳ ಪುನರ್&zwnj;ರಚನೆ ಬಳಿಕ ಬೆಳಗಾವಿ ಜಿಲ್ಲೆ ಕರ್ನಾಟಕದ ಆಡಳಿತ ವ್ಯಾಪ್ತಿಗೆ ಸೇರಿದೆ. ಅಂದಿನಿಂದ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನ್ಯಾಯಾಂಗ, ಮಹಾನಗರ ಪಾಲಿಕೆ, ಶಿಕ್ಷಣ ಸಂಸ್ಥೆಗಳು, ತೆರಿಗೆ ವ್ಯವಸ್ಥೆ, ಚುನಾವಣೆಗಳು ಸೇರಿದಂತೆ ಎಲ್ಲ ಆಡಳಿತಾತ್ಮಕ ಚಟುವಟಿಕೆಗಳು ಕರ್ನಾಟಕ ಸರ್ಕಾರದ ಅಧೀನದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ.&lt;/p&gt;&lt;h2&gt;2ನೇ ರಾಜಧಾನಿಯಾದ ಬೆಳಗಾವಿ&lt;/h2&gt;&lt;p&gt;ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನಗಳು ನಡೆಯುತ್ತಿವೆ. ಸುವರ್ಣ ವಿಧಾನಸೌಧ ನಿರ್ಮಾಣವಾಗಿದೆ. ರಾಜ್ಯದ ಎರಡನೇ ರಾಜಧಾನಿ ಎಂಬ ಸ್ಥಾನಮಾನವೂ ದೊರೆತಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಕರ್ನಾಟಕದ ಭಾಗವೇ ಎಂಬುವುದನ್ನು ಮತ್ತೊಮ್ಮೆ ನಿರ್ಧರಿಸಬೇಕಾದ ಪ್ರಶ್ನೆಯೇ ಇಲ್ಲ ಎಂಬುದು ಕಾನೂನು ತಜ್ಞರು ಹಾಗೂ ಕನ್ನಡಪರ ಸಂಘಟನೆಗಳ ಅಭಿಪ್ರಾಯ.&lt;/p&gt;&lt;p&gt;ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಸುಪ್ರೀಂನಲ್ಲಿ ವಿಚಾರಣೆಯಲ್ಲಿದೆ. ಆದರೆ, ಆ ವಿಚಾರಣೆಯ ಅರ್ಥ ಬೆಳಗಾವಿ ಕರ್ನಾಟಕದ ಆಡಳಿತ ವ್ಯಾಪ್ತಿಯಿಂದ ಹೊರಗಿದೆ ಎಂಬುದಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ ಎಂಬ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳು ತಮ್ಮ ಸಾಂಕೇತಿಕ ಮತ್ತು ಭಾವನಾತ್ಮಕ ನಿಲುವನ್ನು ವ್ಯಕ್ತಪಡಿಸಬಾರದು ಎಂಬ ಯಾವುದೇ ಕಾನೂನು ನಿರ್ಬಂಧ ಇಲ್ಲ ಎಂದು ಕಾನೂನು ತಜ್ಞರು ಹೇಳುತ್ತಾರೆ. ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳು ತಮ್ಮ ಅಭಿಪ್ರಾಯವನ್ನು ಗೊತ್ತುವಳಿಗಳ ಮೂಲಕ ದಾಖಲಿಸುವ ಪದ್ಧತಿ ಇದೆ. ಇಂತಹ ಗೊತ್ತುವಳಿಗಳು ಕಾನೂನುಬದ್ಧ ಗಡಿ ಬದಲಾವಣೆ ಮಾಡುವುದಿಲ್ಲ. ಅವು ಸಂಬಂಧಿತ ಸಂಸ್ಥೆಯ ನಿಲುವಿನ ದಾಖಲೆಯಾಗಿರುತ್ತವೆ.&lt;/p&gt;&lt;h3&gt;ಕಾನೂನು ಅಭಿಪ್ರಾಯದ ಅಗತ್ಯವೇನು?:&lt;/h3&gt;&lt;p&gt;ಕನ್ನಡಪರ ಸಂಘಟನೆಗಳು ಈಗ ಇದೇ ಪ್ರಶ್ನೆಯನ್ನು ಕೇಳುತ್ತಿವೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಮಾತು ಸಂವಿಧಾನ ವಿರೋಧಿಯೂ ಅಲ್ಲ, ಕಾನೂನು ಬಾಹಿರವೂ ಅಲ್ಲ. ಇದು ಈಗಿರುವ ಆಡಳಿತಾತ್ಮಕ ವಾಸ್ತವವನ್ನು ಪುನರುಚ್ಚರಿಸುವ ಹೇಳಿಕೆಯಷ್ಟೇ. ಆದರೆ, ಸರ್ಕಾರಕ್ಕೆ ಪತ್ರ ಬರೆದು ಕಾನೂನು ಅಭಿಪ್ರಾಯ ಕೇಳುವುದು ಹಾಗೂ ನ್ಯಾಯಾಲಯದ ವಿಚಾರಣೆಯನ್ನು ಮುಂದಿಡುವುದು ನೇರ ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದೂಡುವ ಪ್ರಯತ್ನದಂತೆ ಕಾಣುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಿಂದೆ ಗಡಿ, ಭಾಷೆ ಮತ್ತು ಗುಂಪುಗಾರಿಕೆಯ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿದ್ದವು. ಆದರೆ ಈಗ ರಾಜಕೀಯ ಪಕ್ಷಗಳ ಚಿಹ್ನೆ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿದೆ. ಮೇಯರ್ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹನುಮಂತ ಕೊಂಗಾಲಿ ಅವರು ಕನ್ನಡಿಗರಾಗಿರುವುದು ವಿಶೇಷ. ಆದ್ದರಿಂದ ಈ ಅವಧಿಯಲ್ಲೇ ಕನ್ನಡಪರ ಗೊತ್ತುವಳಿಯನ್ನು ಅಂಗೀಕರಿಸಬೇಕು ಎಂಬುದು ಕನ್ನಡಪರ ಸಂಘಟನೆಗಳ ಪ್ರಮುಖ ಒತ್ತಾಯವಾಗಿದೆ.ನಿರಂತರ ಹೋರಾಟ:&lt;/p&gt;&lt;p&gt;ಕಳೆದ ಮಾರ್ಚ್ 26ರಿಂದ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಅಂಗೀಕರಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳು, ಮನವಿಗಳು, ಸಭೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಪ್ರಾದೇಶಿಕ ಆಯುಕ್ತರಿಗೆ ಪ್ರತಿದಿನ ಮನವಿ ಸಲ್ಲಿಸುವ ಅಭಿಯಾನವನ್ನೂ ಆರಂಭಿಸಿವೆ. ಸಂಘಟನೆಗಳ ಅಭಿಪ್ರಾಯದಲ್ಲಿ, ಈ ನಿರ್ಣಯ ಕೇವಲ ರಾಜಕೀಯ ಪ್ರಸ್ತಾವನೆಯಲ್ಲ. ಇದು ಗಡಿನಾಡಿನ ಕನ್ನಡಿಗರ ಭಾವನೆಗೆ ಗೌರವ ಸಲ್ಲಿಸುವ, ಬೆಳಗಾವಿ ಕುರಿತು ಪಾಲಿಕೆಯ ಅಧಿಕೃತ ನಿಲುವನ್ನು ದಾಖಲಿಸುವ ಮತ್ತು ಮುಂದಿನ ಪೀಳಿಗೆಗೆ ಐತಿಹಾಸಿಕ ದಾಖಲೆಯಾಗಿ ಉಳಿಯುವ ಮಹತ್ವದ ನಿರ್ಣಯವಾಗಿದೆ.&lt;/p&gt;&lt;h3&gt;ಎಲ್ಲರ ಚಿತ್ತ ಪಾಲಿಕೆ ಸಭೆಯತ್ತ:&lt;/h3&gt;&lt;p&gt;ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಿರುವ ಸಂದರ್ಭದಲ್ಲಿ, ವಿಧಾನಮಂಡಲ ಅಧಿವೇಶನಗಳಿಗೆ ಆತಿಥ್ಯ ನೀಡುತ್ತಿರುವ ಸಂದರ್ಭದಲ್ಲಿ ಹಾಗೂ ರಾಜ್ಯದ ಆಡಳಿತ ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಮಂಡಿಸಲು ಇನ್ನೂ ಏಕೆ ಹಿಂಜರಿಕೆ ಎಂಬ ಪ್ರಶ್ನೆ ತೀವ್ರವಾಗಿದೆ. ಕಾನೂನು ಅಭಿಪ್ರಾಯ ಮತ್ತು ನ್ಯಾಯಾಲಯದ ನೆಪಗಳು ಮುಂದುವರಿಯುತ್ತವೆಯೇ? ಅಥವಾ ಮಹಾನಗರ ಪಾಲಿಕೆ ತನ್ನ ಸ್ಪಷ್ಟ ನಿಲುವನ್ನು ದಾಖಲಿಸಿ ಐತಿಹಾಸಿಕ ಹೆಜ್ಜೆ ಇಡುತ್ತದೆಯೇ? ಎಂಬ ಕುತೂಹಲ ಈಗ ಗಡಿನಾಡಿನ ಜನರಲ್ಲಿ ಹೆಚ್ಚಾಗಿದೆ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಚರ್ಚೆಯ ವಿಷಯವಲ್ಲ, ಅದು ಐತಿಹಾಸಿಕ ಮತ್ತು ಆಡಳಿತಾತ್ಮಕ ಸತ್ಯ. ಮಹಾನಗರ ಪಾಲಿಕೆ ಈ ಕುರಿತು ಸ್ಪಷ್ಟ ನಿಲುವು ದಾಖಲಿಸಿ ಕನ್ನಡಿಗರ ಭಾವನೆಗೆ ಗೌರವ ಸಲ್ಲಿಸಬೇಕು.&lt;/p&gt;&lt;p&gt;ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ ಬೆಳಗಾವಿ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಈ ಸತ್ಯವನ್ನು ಗೊತ್ತುವಳಿಯ ಮೂಲಕ ಪುನರುಚ್ಚರಿಸುವುದು ಯಾರ ವಿರುದ್ಧದ ಹೋರಾಟವಲ್ಲ. ಕಾನೂನು ನೆಪಗಳ ಹಿಂದೆ ಅಡಗಿಕೊಳ್ಳುವ ಬದಲು ಮಹಾನಗರ ಪಾಲಿಕೆ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು.&lt;/p&gt;&lt;p&gt;ಅಶೋಕ ಚಂದರಗಿ, ಹಿರಿಯ ಕನ್ನಡ ಹೋರಾಟಗಾರ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-resolution-row-mayor-s-letter-sparks-fresh-debate-rav/articleshow-1v5b9ih"/>
        </item>
        <item>
            <title><![CDATA[ಭಟ್ಕಳ: 'ನಿನ್ನ ಬಳಿ ಮಾತಾಡೋದಿದೆ ಬಾ..' ಯುವತಿಗೆ ನಂಬಿಸಿ ಕಾರಿನಲ್ಲಿ  ಕರೆದೊಯ್ದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್!]]></title>
            <link>https://kannada.asianetnews.com/karnataka-districts/shahid-khan-arrested-for-attempting-to-kidnap-a-hindu-girl-in-bhatkal-uttara-kannada-rav/articleshow-ie08e4o</link>
            <guid isPermaLink="true">https://kannada.asianetnews.com/karnataka-districts/shahid-khan-arrested-for-attempting-to-kidnap-a-hindu-girl-in-bhatkal-uttara-kannada-rav/articleshow-ie08e4o</guid>
            <pubDate>Fri, 19 Jun 2026 10:32:17 +0530</pubDate>
            <description><![CDATA[&lt;p&gt;ಭಟ್ಕಳದ ಸೂಪರ್ ಮಾರ್ಕೆಟ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯನ್ನು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆದೊಯ್ದ ಆರೋಪದ ಮೇಲೆ ಸಹೋದ್ಯೋಗಿ ಮುಸ್ಲಿಂ ಯುವಕ ಶಾಹೀದ್ ಖಾನ್&zwnj;ನನ್ನು ಯುವತಿಯ ದೂರಿನ ಆಧಾರದ ಮೇಲೆ ಕ್ರಮ ಕೈಗೊಂಡಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvf3ym7v1vsmdvzsk2jvs93j,imgname----------------------14--1781845151995.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಟ್ಕಳ (ಜೂ.19&lt;/strong&gt;) ಪಟ್ಟಣದ ಸೂಪರ್ ಮಾರ್ಕೆಟೊಂದರಲ್ಲಿ ಕೆಲಸಕ್ಕಿದ್ದ ಹಿಂದೂ ಯುವತಿ(Hindu Girl)ಯನ್ನು ಕಾರಿನಲ್ಲಿ ಕರೆದೊಯ್ದ ಮುಸ್ಲಿಂ ಯುವಕ ಶಾಹೀದ್ ಖಾನ್(Shahid khan) ಎಂಬಾತನನ್ನು ಯುವತಿಯ ದೂರಿನ ಮೇರೆಗೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.&lt;/p&gt;&lt;h2&gt;ಪಟ್ಟಣದ ಸೂಪರ್ ಮಾರ್ಕೆಟೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ&lt;/h2&gt;&lt;p&gt;ಪಟ್ಟಣದ ಸೂಪರ್ ಮಾರ್ಕೆಟೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾರುಕೇರಿ ಭಾಗದ ಹಿಂದೂ ಯುವತಿಯನ್ನು ಅದೇ ಸೂಪರ್ ಮಾರ್ಕೆಟ್&zwnj;ನಲ್ಲಿ ಸೇಲ್ಸ್&zwnj;ಮನ್&zwnj; ಆಗಿರುವ ಕಾರಗದ್ದೆಯ ಶಾಹೀದ್ ಖಾನ್ ಎಂಬಾತ ಬುಧವಾರ ಬೆಳಗ್ಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದ. ಆಗ ಸಾಗರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಅವರನ್ನು ತಡೆದು, ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಪೊಲೀಸರು ಆರೋಪಿ ವಿರುದ್ದ ಪ್ರಕರಣ ದಾಖಲಿಸುವುದನ್ನು ಬಿಟ್ಟು ಯುವತಿಯನ್ನು ರಕ್ಷಿಸಿದ ಹಿಂದೂ ಕಾರ್ಯಕರ್ತರಿಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಬುಧವಾರ ರಾತ್ರಿ ನಗರ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ್ದರು.&lt;/p&gt;&lt;h3&gt;ಶಾಹೀದ್ ಖಾನ್ ವಿರುದ್ದ ದೂರು&lt;/h3&gt;&lt;p&gt;ಈ ಮಧ್ಯೆ, ಹಿಂದೂ ಯುವತಿ ಠಾಣೆಯಲ್ಲಿ ಶಾಹೀದ್ ಖಾನ್ ವಿರುದ್ದ ದೂರು ನೀಡಿದ್ದು, ನಿನ್ನ ಬಳಿ ಮಾತನಾಡುವುದಿದೆ ಎಂದು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಹತ್ತಿಸಿಕೊಂಡು, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/shahid-khan-arrested-for-attempting-to-kidnap-a-hindu-girl-in-bhatkal-uttara-kannada-rav/articleshow-ie08e4o"/>
        </item>
        <item>
            <title><![CDATA[ಬೆಂಗಳೂರು-ಹೊನ್ನಾವರ ರಸ್ತೆಗಾಗಿ 30 ಎಕರೆ ಸ್ವಾಧೀನಕ್ಕೆ ಹೈಕೋರ್ಟ್‌ ಅಸ್ತು]]></title>
            <link>https://kannada.asianetnews.com/karnataka-districts/hc-approves-30-acre-land-acquisition-bengaluru-honnavar-road-development-san/articleshow-io6gdf2</link>
            <guid isPermaLink="true">https://kannada.asianetnews.com/karnataka-districts/hc-approves-30-acre-land-acquisition-bengaluru-honnavar-road-development-san/articleshow-io6gdf2</guid>
            <pubDate>Fri, 19 Jun 2026 10:33:31 +0530</pubDate>
            <description><![CDATA[&lt;p&gt;ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಂಡಿದ್ದ 30 ಎಕರೆ ಭೂಮಿಗೆ ಸಂಬಂಧಿಸಿದಂತೆ 14 ವರ್ಷಗಳ ಹಿಂದೆ ಏಕಸದಸ್ಯ ಪೀಠ ನೀಡಿದ್ದ ರದ್ದತಿ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ಇದೀಗ ವಜಾಗೊಳಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvf3yxy3rqs4051m48twda16,imgname-banglore-honnavar-road-1781845161923.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.19): &lt;/strong&gt;ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗಾಗಿ ಸ್ವಾಧೀನ ಮಾಡಿಕೊಂಡಿದ್ದ 30 ಎಕರೆ ಭೂ ಸ್ವಾಧೀನವನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಸುಮಾರು 14 ವರ್ಷಗಳ ಹಿಂದೆ ನೀಡಿದ್ದ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ಪೀಠ ಇದೀಗ ವಜಾ ಮಾಡಿದೆ. ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮತ್ತು ಶ್ರೀ ಪ್ರಸನ್ನ ಆಂಜನೇಯ ಟ್ರಸ್ಟ್&zwnj; ಸಲ್ಲಿಸಿದ ಮೇಲ್ಮನವಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್&zwnj; ಮತ್ತು ಎಸ್&zwnj;.ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.&lt;/p&gt;&lt;p&gt;ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗೆ 30 ಎಕರೆ ಭೂ ಸ್ವಾಧೀನ ಪ್ರಸ್ತಾವನೆಗೆ 1986ರ ಅ.9 ರಂದು ಅನುಮೋದಿಸಿ ಸರ್ಕಾರ ಆದೇಶ ಹೊರಡಿಸುವ ಮೊದಲು, ಭೂಮಾಲೀಕರು ಮಾರಾಟದ ಒಪ್ಪಂದಗಳನ್ನು ಕಾರ್ಯಗತಗೊಳಿಸಿದ್ದರು. ಸಂಪೂರ್ಣ ಮಾರಾಟದ ಮೊತ್ತ ಪಡೆದಿದ್ದರು. ಭೂಮಿ ಸ್ವಾಧೀನವನ್ನೂ ನೀಡಲಾಗಿತ್ತು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಹೇಳಿದೆ.&lt;/p&gt;&lt;p&gt;ಆದ್ದರಿಂದ ಭೂಮಾಲೀಕರು ಸ್ವಾಧೀನ ಪ್ರಕ್ರಿಯೆಗಳನ್ನು ಪ್ರಶ್ನಿಸದಂತೆ ತಡೆಯಲಾಗಿತ್ತು. ನಂತರ ಅದೂ ಅಂತಿಮ ಅಧಿಸೂಚನೆ ಹೊರಬಿದ್ದ ಸುಮಾರು ಎರಡು ದಶಕಗಳ ನಂತರ ಅದನ್ನು ಪ್ರಶ್ನಿಸಲಾಗಿತ್ತು. ಜಕ್ಕಸಂದ್ರ ಗ್ರಾಮದಲ್ಲಿರುವ ಭೂಮಿಯನ್ನು ಟ್ರಸ್ಟ್&zwnj; ಪರ ಸ್ವಾಧೀನಪಡಿಸಿಕೊಳ್ಳಲಾಯಿತು, ಅದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿತರಣೆಗಾಗಿ 150 ನಿವೇಶನಗಳನ್ನು (30&times;40 ಚದರ ಅಡಿ) ಅಂದಿನ ನೆಲಮಂಗಲ ನಗರ ಪುರಸಭೆಗೆ ಉಚಿತವಾಗಿ ಹಸ್ತಾಂತರಿಸಲು ಒಪ್ಪಿಕೊಂಡಿತ್ತು. ಉಳಿದ ನಿವೇಶನಗಳನ್ನು ಟ್ರಸ್ಟ್&zwnj;ನ ಸದಸ್ಯರ ನಡುವೆ ವಿತರಿಸಬೇಕಾಗಿತ್ತು. ಅಂತಿಮ ಅಧಿಸೂಚನೆಯನ್ನು 1987ರಲ್ಲಿ ಹೊರಡಿಸಲಾಯಿತು ಎಂದು ಪೀಠ ಆದೇಶದಲ್ಲಿ ವಿವರಿಸಿದೆ.&lt;/p&gt;&lt;p&gt;&lt;strong&gt;ಪ್ರಕರಣದ ವಿವರ: &lt;/strong&gt;ಭೂ ಸ್ವಾಧೀನವನ್ನು 2006 ಮತ್ತು 2008ರ ನಡುವೆ&zwnj; ಕೆಲ ಭೂಮಾಲೀಕರು ಸ್ವಾಧೀನವನ್ನು ಪ್ರಶ್ನಿಸಿದರು. 2012ರಲ್ಲಿ, ಏಕಸದಸ್ಯಪೀಠ ಸ್ವಾಧೀನ ರದ್ದುಗೊಳಿಸಿ, ಭೂಮಿ ವಾಪಸ್&zwnj; ನೀಡಲು ಆದೇಶಿಸಿತು. ರಾಜ್ಯ ಸರ್ಕಾರ ಹಾಗೂ ಟ್ರಸ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಯಲ್ಲಿ ಸಂಪೂರ್ಣ ಮೊತ್ತ ಪಾವತಿಸಿದ ಟ್ರಸ್ಟ್&zwnj; ಪರ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ನಿವೇಶನಗಳ ಮಾಲೀಕರು ತಮ್ಮ ಕುಟುಂಬ ಸದಸ್ಯರೊಂದಿಗೆ ವಸತಿಗಳನ್ನು ನಿರ್ಮಿಸುವ ಮೂಲಕ ಭೂಮಿ ಅಭಿವೃದ್ಧಿಪಡಿಸಿ, ಹಲವು ದಶಕಗಳೇ ಕಳೆದಿವೆ. ನಂತರ ಏಕಸದಸ್ಯಪೀಠ ಭೂ ಸ್ವಾಧೀನ ರದ್ದುಗೊಳಿಸಿರುವುದು ಸರಿಯಲ್ಲ ಎಂದು ಹೇಳಲಾಗಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/hc-approves-30-acre-land-acquisition-bengaluru-honnavar-road-development-san/articleshow-io6gdf2"/>
        </item>
        <item>
            <title><![CDATA[ಬೆಂಗಳೂರು-ಮಂಗಳೂರು ವಂದೇ ಭಾರತ್: ಜೂನ್ ಅಂತ್ಯಕ್ಕೆ ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ಪ್ರಾಯೋಗಿಕ ಸಂಚಾರ!]]></title>
            <link>https://kannada.asianetnews.com/gallery/state/indian-railway-update-bengaluru-mangaluru-vande-bharat-express-trail-run-june-subramanya-to-sakleshpur-2bkg4d4</link>
            <guid isPermaLink="true">https://kannada.asianetnews.com/gallery/state/indian-railway-update-bengaluru-mangaluru-vande-bharat-express-trail-run-june-subramanya-to-sakleshpur-2bkg4d4</guid>
            <pubDate>Thu, 18 Jun 2026 22:08:53 +0530</pubDate>
            <description><![CDATA[&lt;p&gt;ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಠಿಣ ಘಾಟಿ ವಿಭಾಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಜೂನ್ ಕೊನೆಯಲ್ಲಿ ನಡೆಯಲಿದೆ. ರೈಲಿಗೆ ವಿಶೇಷ 'ಸ್ವಯಂಚಾಲಿತ ತುರ್ತು ಬ್ರೇಕಿಂಗ್' (AEB) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvds6hpt0kd5zg32mxapfkrc,imgname-sakaleshpura-subrahmanya-road-vande-bharat-1781800322778.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಠಿಣ ಘಾಟಿ ವಿಭಾಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಜೂನ್ ಕೊನೆಯಲ್ಲಿ ನಡೆಯಲಿದೆ. ರೈಲಿಗೆ ವಿಶೇಷ 'ಸ್ವಯಂಚಾಲಿತ ತುರ್ತು ಬ್ರೇಕಿಂಗ್' (AEB) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ.&lt;/p&gt;&lt;img&gt;&lt;p&gt;ಕರ್ನಾಟಕದ ಕರಾವಳಿ ನಗರಗಳು ಮತ್ತು ರಾಜಧಾನಿ ಬೆಂಗಳೂರು ನಡುವೆ ವೇಗದ ರೈಲು ಸಂಚಾರದ ಕನಸು ನನಸಾಗುವತ್ತ ಮತ್ತೊಂದು ಪ್ರಮುಖ ಹೆಜ್ಜೆ ಇರಿಸಲಾಗಿದೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಉದ್ದದ ಕಠಿಣ ಘಾಟಿ ವಿಭಾಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ (Vande Bharat Express) ರೈಲಿನ ಪ್ರಾಯೋಗಿಕ ಸಂಚಾರ ಜೂನ್ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;&lt;strong&gt;ಘಾಟಿ ವಿಭಾಗಕ್ಕೆ ವಿಶೇಷ ಸುರಕ್ಷತಾ ವ್ಯವಸ್ಥೆ:&lt;/strong&gt;&lt;/p&gt;&lt;p&gt;ರೈಲ್ವೆ ಸಚಿವಾಲಯದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO) ಈ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಿದೆ. ಹಾಸನ-ಮಂಗಳೂರು ರೈಲ್ವೆ ಮಾರ್ಗದ ಈ ಘಾಟಿ ವಿಭಾಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ನಿರ್ದೇಶನದಂತೆ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 30 ಕಿ.ಮೀ ಗೆ ಸೀಮಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ವಂದೇ ಭಾರತ್ ರೈಲಿಗೆ ವಿಶೇಷವಾದ 'ಸ್ವಯಂಚಾಲಿತ ತುರ್ತು ಬ್ರೇಕಿಂಗ್' (AEB - Automatic Emergency Braking) ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯವಾಗಿದೆ.&lt;/p&gt;&lt;img&gt;&lt;p&gt;ರೈಲು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಿದರೆ, ಈ AEB ವ್ಯವಸ್ಥೆಯು ತಾನಾಗಿಯೇ ವೇಗವನ್ನು ಕಡಿಮೆ ಮಾಡುತ್ತದೆ. ಈ ತಂತ್ರಜ್ಞಾನವನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ರೈಲಿನ ಬೋಗಿಗಳಿಗೆ ಅಳವಡಿಸಲಾಗುತ್ತಿದ್ದು, ಮುಂದಿನ ವಾರ ರೈಲು ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಾಯೋಗಿಕ ಪರೀಕ್ಷೆಗಳ ವಿವರ:&lt;/strong&gt;&lt;/p&gt;&lt;p&gt;ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯವಸ್ಥಾಪಕ (DRM) ಮುದಿತ್ ಮಿತ್ತಲ್ ಅವರು ಮಾಹಿತಿ ನೀಡಿ, 'ಘಾಟಿ ವಿಭಾಗದಲ್ಲಿ ಈಗಾಗಲೇ ಐಸಿಎಫ್ (ICF) ಮತ್ತು ಎಲ್ಎಚ್&zwnj;ಬಿ (LHB) ಬೋಗಿಗಳ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ. ಈಗ ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆ ಬಾಕಿ ಇದೆ. ಇದಕ್ಕಾಗಿ ಎಇಬಿ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಸಿದ್ಧವಾಗುತ್ತಿದೆ' ಎಂದು ತಿಳಿಸಿದ್ದಾರೆ. ಜೂನ್ ಎರಡನೇ ವಾರದಿಂದ ಆರಂಭವಾದ ಈ ಪರೀಕ್ಷೆಗಳಲ್ಲಿ 5 ದಿನಗಳ ಕಾಲ 5 ಟ್ರಿಪ್&zwnj;ಗಳನ್ನು ನಡೆಸಲಾಗಿದ್ದು, ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು-ಮಂಗಳೂರು ರೈಲು ಸಂಚಾರಕ್ಕೆ ಮುಕ್ತಿ:&lt;/p&gt;&lt;p&gt;ಈ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ, ಆರ್&zwnj;ಡಿಎಸ್&zwnj;ಒ (RDSO) ರೈಲ್ವೆ ಸಚಿವಾಲಯಕ್ಕೆ ಹಸಿರು ನಿಶಾನೆ ತೋರಿಸಿದರೆ, ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಓಡಾಟಕ್ಕೆ ಇದ್ದ ಅತಿದೊಡ್ಡ ತಾಂತ್ರಿಕ ಅಡಚಣೆ ದೂರವಾಗಲಿದೆ. ಇದು ಕರಾವಳಿ ಕರ್ನಾಟಕದ ಜನರಿಗೆ ರಾಜಧಾನಿಗೆ ಹೋಗಲು ಅತ್ಯಂತ ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸಲಿದೆ.&lt;/p&gt;&lt;img&gt;&lt;p&gt;ಈ ಮಾರ್ಗದ ವಿದ್ಯುದೀಕರಣ ಕಾರ್ಯವು ಡಿಸೆಂಬರ್ 2025 ರಲ್ಲಿ ಪೂರ್ಣಗೊಂಡಿತ್ತು. ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆಯವರೆಗಿನ 400 ಕಿ.ಮೀ ರೈಲ್ವೆ ಮಾರ್ಗದ ವಿದ್ಯುದೀಕರಣವನ್ನು ರೈಟ್ಸ್ (RITES) ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸಿದೆ. ಪ್ರಾಯೋಗಿಕ ಸಂಚಾರದ ನಂತರ ಕರಾವಳಿ ಭಾಗಕ್ಕೆ ಶೀಘ್ರದಲ್ಲೇ ವಂದೇ ಭಾರತ್ ಭಾಗ್ಯ ಸಿಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railway-update-bengaluru-mangaluru-vande-bharat-express-trail-run-june-subramanya-to-sakleshpur-2bkg4d4"/>
        </item>
        <item>
            <title><![CDATA[ವಿಧಾನಪರಿಷತ್‌ ಚುನಾವಣೆ: ಕೈಗೆ ಹೆಚ್ಚುವರಿ, ದೋಸ್ತಿಗೆ ಹೆಚ್ಚು 'ವರಿ'!]]></title>
            <link>https://kannada.asianetnews.com/state/karnataka-mlc-election-results-cross-voting-bjp-jds-setback-congress-win-san/articleshow-cnld6nu</link>
            <guid isPermaLink="true">https://kannada.asianetnews.com/state/karnataka-mlc-election-results-cross-voting-bjp-jds-setback-congress-win-san/articleshow-cnld6nu</guid>
            <pubDate>Fri, 19 Jun 2026 08:07:38 +0530</pubDate>
            <description><![CDATA[ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ವಿರೋಧ ಪಕ್ಷಗಳ 11 ಶಾಸಕರ ಅಡ್ಡ ಮತದಾನದಿಂದಾಗಿ ಬಿಜೆಪಿ-ಜೆಡಿಎಸ್&zwnj; ತೀವ್ರ ಮುಖಭಂಗ ಅನುಭವಿಸಿದ್ದು, ಈ ಅಡ್ಡ ಮತಗಳ ಲಾಭದಿಂದ ಕಾಂಗ್ರೆಸ್&zwnj;ನ 5ನೇ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvevjk2x28frb8jsfdv39hcf,imgname-mlc-election-winners-1781836368989.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು (ಜೂ.19): &lt;/strong&gt;ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್&zwnj; ಪಕ್ಷವು ಭರ್ಜರಿ ಗೆಲುವು ಸಾಧಿಸಿದ್ದು, ಅಡ್ಡ ಮತದಾನದ ಪರಿಣಾಮ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್&zwnj; ತೀವ್ರ ಮುಖಭಂಗ ಅನುಭವಿಸಿವೆ. ಈ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್&zwnj; 5, ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್&zwnj;ನ ಏಕೈಕ ಅಭ್ಯರ್ಥಿ ಹೀನಾಯವಾಗಿ ಸೋತಿದ್ದಾರೆ. ಚಲಾವಣೆಯಾದ 222 ಮತಗಳ ಪೈಕಿ 1 ಮತ ಅಸಿಂಧುವಾಗಿದೆ. ಉಳಿದ 221 ಮತಗಳು ಸಿಂಧುವಾಗಿವೆ. ಗಮನಾರ್ಹ ಸಂಗತಿ ಎಂದರೆ, ವಿರೋಧ ಪಕ್ಷಗಳ 11 ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಈ ಅಡ್ಡ ಮತಗಳ ಲಾಭ ಪಡೆದು ಕಾಂಗ್ರೆಸ್&zwnj;ನ 5ನೇ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದಾರೆ.&lt;/p&gt;&lt;p&gt;ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲದ ಪ್ರಕಾರ ಕಾಂಗ್ರೆಸ್&zwnj; 4, ಬಿಜೆಪಿ 2 ಸ್ಥಾನಗಳಲ್ಲಿ ಗೆಲ್ಲುವುದು ಖಚಿತವಾಗಿತ್ತು. ಈ ನಡುವೆ ಕಾಂಗ್ರೆಸ್&zwnj; ಕಣಕ್ಕಿಳಿಸಿದ 5ನೇ ಅಭ್ಯರ್ಥಿಗೆ ಪೈಪೋಟಿ ನೀಡಲು ಜೆಡಿಎಸ್&zwnj; ಅಭ್ಯರ್ಥಿ ಹಾಕಿದ ಪರಿಣಾಮ ಚುನಾವಣಾ ಕಣ ರೋಚಕತೆ ಪಡೆದುಕೊಂಡಿತ್ತು. ಕಾಂಗ್ರೆಸ್&zwnj;-ಜೆಡಿಎಸ್&zwnj; ನಡುವಿನ ಹೋರಾಟದಲ್ಲಿ ಗೆಲ್ಲುವ ಏಳನೇ ಅಭ್ಯರ್ಥಿ ಯಾರು ಎಂಬುದು ಕತೂಹಲಕ್ಕೆ ಕಾರಣವಾಗಿತ್ತು. ಅಚ್ಚರಿಯೆಂದರೆ, ಒಟ್ಟು 8 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್&zwnj;ನ 5ನೇ ಅಭ್ಯರ್ಥಿಯೇ ಅತಿ ಹೆಚ್ಚು ಮತ ಪಡೆದು ಗೆದ್ದು ಬೀಗಿದ್ದಾರೆ.&lt;/p&gt;&lt;p&gt;ಪ್ರತಿ ಅಭ್ಯರ್ಥಿ ಗೆಲುವಿಗೆ 28 ಮತಗಳ ಅಗತ್ಯವಿತ್ತು. ಆಡಳಿತಾರೂಢ ಕಾಂಗ್ರೆಸ್&zwnj; ಪಕ್ಷದ ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ್&zwnj;, ತಿಪ್ಪಣ್ಣಪ್ಪ ಕಮಕನೂರ, ಬಿ.ಎಸ್&zwnj;.ಶಿವಣ್ಣ ತಲಾ 30 ಮತ, ಪಿ.ವಿ.ಮೋಹನ್&zwnj; 29 ಮತ್ತು ವಿನಯ್&zwnj; ಕಾರ್ತಿಕ್&zwnj; ಪ್ರಕಾಶ್&zwnj; 32 ಮತ, ಬಿಜೆಪಿ ಅಭ್ಯರ್ಥಿಗಳಾದ ಆರ್&zwnj;.ರಘು 29 ಹಾಗೂ ಲಿಂಗರಾಜ ಪಾಟೀಲ್&zwnj; 27 ಮತ ಪಡೆದು ಗೆಲುವಿನ ನಗೆ ಬೀರಿದರು. ಜೆಡಿಎಸ್&zwnj; ಅಭ್ಯರ್ಥಿ ಗೋವಿಂದರಾಜು 14 ಮತ ಪಡೆದು ಹೀನಾಯವಾಗಿ ಸೋತರು.&lt;/p&gt;&lt;h2&gt;&lt;strong&gt;ಕೊನೇ ಕ್ಷಣದಲ್ಲಿ 30 ಮತ&lt;/strong&gt;&lt;/h2&gt;&lt;p&gt;ವಿಧಾನಸಭೆಯಲ್ಲಿ 62 ಶಾಸಕರ ಸಂಖ್ಯಾಬಲ ಹೊಂದಿರುವ ಬಿಜೆಪಿಗೆ ತನ್ನ ಇಬ್ಬರು ಅಭ್ಯರ್ಥಿಗಳು ಗೆಲ್ಲಲು 56 ಮತಗಳು ಸಾಕಿತ್ತು. ಆದರೆ, ಅಡ್ಡಮತದಾನದ ಭೀತಿಯಲ್ಲಿ ಕೊನೆಯ ಕ್ಷಣದಲ್ಲಿ ತನ್ನ ತಂತ್ರಗಾರಿಕೆ ಬದಲಿಸಿಕೊಂಡು ತಲಾ 30 ಮತ ಹಾಕಿಸಲು ನಿರ್ಧರಿಸಿತ್ತು. ಅದರಂತೆ ತಲಾ 30 ಶಾಸಕರ ಎರಡು ಗುಂಪು ಮಾಡಿ ಮತ ಚಲಾವಣೆಗೆ ಸೂಚಿಸಿತ್ತು. ಆದರೆ, ಇದರಲ್ಲಿ ಲಿಂಗರಾಜ ಪಾಟೀಲ್&zwnj;ಗೆ 27 ಶಾಸಕರು ಮಾತ್ರ ಮತ ಚಲಾವಣೆಯಾಗಿದ್ದು, ಮೂವರು ಅಡ್ಡಮತದಾನ ಮಾಡಿದ್ದಾರೆ. ರಘು ಕೌಟಿಲ್ಯಗೆ ಹಾಕಲಾಗಿರುವ 30 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದೆ.&lt;/p&gt;&lt;h2&gt;&lt;strong&gt;ಬಿಜೆಪಿಯಿಂದ ಜೆಡಿಎಸ್&zwnj;ಗೆ 4 ಮತಗಳ ಬೆಂಬಲ&lt;/strong&gt;&lt;/h2&gt;&lt;p&gt;ಬಿಜೆಪಿ ನಾಯಕರು ಮೈತ್ರಿ ಪಕ್ಷದ ಜೆಡಿಎಸ್&zwnj; ಅಭ್ಯರ್ಥಿ ಗೋವಿಂದರಾಜುಗೆ ನಾಲ್ಕು ಮತ ಹಾಕಲು ಸೂಚಿಸಿದ್ದರು. ಇದರಲ್ಲಿ ಬಿಜೆಪಿ ಶಾಸಕರಾದ ಚಂದ್ರು ಲಮಾಣಿ, ದುರ್ಯೋಧನ ಐಹೊಳೆ, ಕೃಷ್ಣ ನಾಯಕ್&zwnj; ಮತ್ತು ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್&zwnj; ಅವರಿಗೆ ಜೆಡಿಎಸ್&zwnj; ಅಭ್ಯರ್ಥಿಗೆ ಮತ ಹಾಕಲು ಸೂಚಿಸಿದ್ದರು. ಗೌಪ್ಯ ಮತದಾನವಾಗಿರುವುದರಿಂದ ಈ ನಾಲ್ವರ ಮತಗಳಲ್ಲಿ ಕಾಂಗ್ರೆಸ್&zwnj; ಅಭ್ಯರ್ಥಿಗೆ ಅಡ್ಡಮತದಾನ ಮಾಡಿದವರು ಯಾರು ಎಂಬ ಪ್ರಶ್ನೆ ಮೂಡಿದೆ.&lt;/p&gt;&lt;h2&gt;&lt;strong&gt;ಜೆಡಿಎಸ್&zwnj; ಅಭ್ಯರ್ಥಿಗೆ 18 ಮತ ಪೈಕಿ ಸಿಕ್ಕಿದ್ದು 14!&lt;/strong&gt;&lt;/h2&gt;&lt;p&gt;ಈ ಚುನಾವಣೆಯಲ್ಲಿ ಗೆಲ್ಲುವಷ್ಟು ಮತಗಳು ಇಲ್ಲದಿದ್ದರೂ ಅಭ್ಯರ್ಥಿ ಕಣಕ್ಕಿಳಿಸಿದ್ದ ಜೆಡಿಎಸ್&zwnj; ತೀವ್ರ ಮುಖಭಂಗ ಅನುಭವಿಸಿದೆ. ವಿಧಾನಸಭೆಯಲ್ಲಿ ಜೆಡಿಎಸ್&zwnj; 18 ಶಾಸಕರ ಸಂಖ್ಯಾಬಲವಿದೆ. ಆದರೆ, ಜೆಡಿಎಸ್&zwnj; ಅಭ್ಯರ್ಥಿಗೆ 18 ಮತ ಬದಲು ಕೇವಲ 14 ಮತಗಳು ಮಾತ್ರ ಬಿದ್ದಿವೆ. ಉಳಿದ ನಾಲ್ವರು ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಅಂದರೆ, ಕಾಂಗ್ರೆಸ್&zwnj; ಅಭ್ಯರ್ಥಿಗೆ ಈ ನಾಲ್ಕು ಮತಗಳು ಹೋಗಿವೆ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್&zwnj;ನಿಂದ ಒಟ್ಟು 11 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಹೀಗಾಗಿ ಪಕ್ಷ ದ್ರೋಹ ಬಗೆದವರು ಯಾರು ಎಂಬುದನ್ನು ಇದೀಗ ಎರಡೂ ಪಕ್ಷಗಳ ನಾಯಕರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿದೆ.&lt;/p&gt;&lt;h2&gt;&lt;strong&gt;ಎಲಿಮಿನೇಷನ್&zwnj; ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು!&lt;/strong&gt;&lt;/h2&gt;&lt;p&gt;ಲೆಕ್ಕಾಚಾರಗಳ ಪ್ರಕಾರ ಓರ್ವ ಅಭ್ಯರ್ಥಿ ಗೆಲುವಿಗೆ 27.63 ಮತಗಳು ಬೇಕಿದ್ದವು. ಆದರೆ, ಬಿಜೆಪಿ ಅಭ್ಯರ್ಥಿ ಲಿಂಗರಾಜ ಪಾಟೀಲ್&zwnj; ಅವರು 27 ಮತಗಳನ್ನಷ್ಟೇ ಪಡೆದು ಗೆದ್ದಿದ್ದಾರೆ. ಹೇಗೆಂದರೆ, ಅವರಿಗೆ ಮತ ಹಾಕಲು ಬಿಜೆಪಿ ನಾಯಕರು ಸೂಚಿಸಿದ್ದ 30 ಶಾಸಕರ ಪೈಕಿ 27 ಮಂದಿ ಮಾತ್ರ ಮತ ಹಾಕಿದ್ದಾರೆ. ಉಳಿದ ಮೂವರು ಅಡ್ಡ ಮತದಾನ ಮಾಡಿದ್ದಾರೆ. 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 8 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ಜೆಡಿಎಸ್&zwnj; ಅಭ್ಯರ್ಥಿ ಕೇವಲ 14 ಮತ ಪಡೆದು ಸ್ಪರ್ಧೆಯಿಂದ ಹೊರಬಿದ್ದರು. ಹೀಗಾಗಿ ಎಲಿಮಿನೇಷನ್&zwnj; ಸುತ್ತಿನಲ್ಲಿ 7ನೇ ಅಭ್ಯರ್ಥಿಯಾಗಿ ಲಿಂಗರಾಜ ಪಾಟೀಲ್&zwnj; ಗೆಲುವು ಸಾಧಿಸಿದ್ದಾರೆ.&lt;/p&gt;&lt;h3&gt;&lt;strong&gt;ಗೆದ್ದ ಅಭ್ಯರ್ಥಿಗಳು: &lt;/strong&gt;ಕಾಂಗ್ರೆಸ್&zwnj;ನಿಂದ ಬಿ.ಕೆ.ಹರಿಪ್ರಸಾದ್&zwnj;, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್, ಬಿ.ಎಸ್&zwnj;.ಶಿವಣ್ಣ, ವಿನಯ್&zwnj; ಕಾರ್ತಿಕ್ ಪ್ರಕಾಶ್&zwnj;. ಬಿಜೆಪಿಯಿಂದ ಕೌಟಿಲ್ಯ ರಘು ಮತ್ತು ಲಿಂಗರಾಜ್&zwnj; ಪಾಟೀಲ್&zwnj;.&lt;/h3&gt;&lt;h3&gt;ಯಾವ ಪಕ್ಷಕ್ಕೆ ಎಷ್ಟು ಮತ?&lt;/h3&gt;&lt;ul&gt; &lt;li&gt;135 ಶಾಸಕರ ಸಂಖ್ಯಾಬಲದ ಕಾಂಗ್ರೆಸ್&zwnj;ಗೆ 151 ಮತ&lt;/li&gt; &lt;li&gt;62 ಶಾಸಕರ ಸಂಖ್ಯಾಬಲದ ಬಿಜೆಪಿಗೆ 56 ಮತ&lt;/li&gt; &lt;li&gt;18 ಶಾಸಕರ ಸಂಖ್ಯಾಬಲದ ಜೆಡಿಎಸ್&zwnj;ಗೆ 14 ಮತ&lt;/li&gt;&lt;/ul&gt;&lt;h2&gt;&lt;strong&gt;ಪಕ್ಷ ಸದಸ್ಯ ಬಲ&lt;/strong&gt;&lt;/h2&gt;&lt;ul&gt; &lt;li&gt;ಕಾಂಗ್ರೆಸ್&zwnj; 135&lt;/li&gt; &lt;li&gt;ಬಿಜೆಪಿ 62&lt;/li&gt; &lt;li&gt;ಬಿಜೆಪಿಯಿಂದ ಉಚ್ಚಾಟಿತರು 3&lt;/li&gt; &lt;li&gt;ಜೆಡಿಎಸ್&zwnj; 18&lt;/li&gt; &lt;li&gt;ಕೆಆರ್&zwnj;ಪಿಪಿ 1&lt;/li&gt; &lt;li&gt;ಎಸ್&zwnj;ಕೆಪಿ 1&lt;/li&gt; &lt;li&gt;ಸ್ವತಂತ್ರ 2&lt;/li&gt; &lt;li&gt;ಖಾಲಿ 2&lt;/li&gt;&lt;/ul&gt;&lt;p&gt;&lt;strong&gt;ಒಟ್ಟು 224&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/state/karnataka-mlc-election-results-cross-voting-bjp-jds-setback-congress-win-san/articleshow-cnld6nu"/>
        </item>
        <item>
            <title><![CDATA[ಮೇಲುಕೋಟೆ ದೇಗುಲದಲ್ಲಿ ಕಳ್ಳತನ: ಯೋಗನರಸಿಂಹಸ್ವಾಮಿ ಬೆಟ್ಟದ ಅರ್ಚಕ ಸೇರಿ 6 ಮಂದಿ ಅಮಾನತ್ತು]]></title>
            <link>https://kannada.asianetnews.com/state/melukote-temple-theft-case-fir-filed-against-6-accused-including-priest-rav/articleshow-untd7df</link>
            <guid isPermaLink="true">https://kannada.asianetnews.com/state/melukote-temple-theft-case-fir-filed-against-6-accused-including-priest-rav/articleshow-untd7df</guid>
            <pubDate>Fri, 19 Jun 2026 08:01:24 +0530</pubDate>
            <description><![CDATA[&lt;p&gt;ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟದ ದೇಗುಲದಲ್ಲಿ ಕಳ್ಳತನ ಆರೋಪದ ಮೇಲೆ ಅರ್ಚಕ ಎಸ್. ನಾರಾಯಣಭಟ್ಟ ಸೇರಿದಂತೆ ಆರು ಮಂದಿ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲರನ್ನೂ ಅಮಾನತುಗೊಳಿಸಿ ಆದೇಶ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvev9tv4s5tnpp7vdmvgkc76,imgname----------------------8--1781836082020.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೇಲುಕೋಟೆ (ಜೂ.19):&lt;/strong&gt; ಕಳ್ಳತನ ಆರೋಪದ ಹಿನ್ನೆಲೆಯಲ್ಲಿ ಯೋಗನರಸಿಂಹಸ್ವಾಮಿ ಬೆಟ್ಟ(Yoganarasimhaswamy hill)ದ ಅರ್ಚಕ ಎಸ್.ನಾರಾಯಣಭಟ್ಟ(S Narayana bhat) ಸೇರಿ 6 ಮಂದಿ ವಿರುದ್ಧ ಎಫ್&zwnj;ಐಆರ್(FIR) ದಾಖಲಾಗಿದ್ದ ಹಿನ್ನೆಲೆಯಲ್ಲಿ 6 ಮಂದಿಯನ್ನೂ ಜಿಲ್ಲಾಧಿಕಾರಿಗಳು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.&lt;/p&gt;&lt;h3&gt;ಬದಲಿ ಅರ್ಚಕ ನೇಮಕ&lt;/h3&gt;&lt;p&gt;ಈ ಹಿನ್ನೆಲೆಯಲ್ಲಿ ಅರ್ಚಕರಾಗಿ ರಾಮಾನುಜರ ಸನ್ನಿಧಿಯ ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್ ಜವಾಬ್ದಾರಿ ವಹಿಸಿಕೊಂಡು ಗುರುವಾರ ರಾತ್ರಿಯೇ ದೇಗುಲದಲ್ಲಿ ಪೂಜೆ ಆರಂಭಿಸಿದರು. ಇವರೊಟ್ಟಿಗೆ ಬದಲಿಯಾಗಿ ನಿಯೋಜಿಸಿದ ಇತರ ನೌಕರರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ.&lt;/p&gt;&lt;p&gt;ದೇವಸ್ಥಾನದ ಅರ್ಚಕರಾಗಿದ್ದ ನಾರಾಯಣ ಭಟ್ಟ ಸೇರಿದಂತೆ 6 ಮಂದಿ ವಿರುದ್ಧ ಚೆಲುವನಾರಾಯಣಸ್ವಾಮಿ ದೇಗುಲ(Cheluvanarayanaswamy temple)ದ ಇಒ ಶೀಲಾ ನೀಡಿದ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಆರೋಪದ ಸಂಬಂಧ ಎಫ್&zwnj;ಐಆರ್ ದಾಖಲಾಗಿತ್ತು.&lt;/p&gt;&lt;p&gt;ದೇವಾಲಯದ ವ್ಯವಸ್ಥಾಪನಾ ಸಮಿತಿ ಜೂನ್ 16ರಂದು ತುರ್ತು ಸಭೆ ಸೇರಿ ಅರ್ಚಕ ನಾರಾಯಣಭಟ್ಟ ಪಾರುತ್ತೇಗಾರ್ ಶ್ರೀಧರ, ಅರ್ಚಕ ನಾರಾಯಣಭಟ್ಟ, ಪರಿಚಾರಕ ತಿರುವೇಂಗಡಾಚಾರ್, ಕಾವಲುಗಾರ ಎಂ.ಬಿ ಗಂಗಾಧರ, ಬಸವರಾಜು, ಮಣೇಗಾರ್ ಕಸ್ತೂರಿ ಶ್ರೀನಿವಾಸನ್ ರನ್ನು ಧಾರ್ಮಿಕದತ್ತಿ ಕಾಯ್ದೆ ನಿಯಮಾವಳಿಗಳಂತೆ ಅಮಾನತ್ತುಗೊಳಿಸಿ ತೆರವಾದ ಹುದ್ದೆಗಳಿಗೆ ಬೇರೆ ವ್ಯವಸ್ಥೆಮಾಡಿ ಇಲಾಖೆ ತನಿಖೆ ನಡೆಸಬಹುದೆಂದು ಶಿಪಾರಸ್ಸು ಮಾಡಿತ್ತು.&lt;/p&gt;&lt;p&gt;ಒಂದೇ ದಿನದಲ್ಲಿ ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿ ಕುಮಾರ್ ಅಮಾನತ್ತು ಆದೇಶ ಮಾಡಿದ್ದಾರೆ. ಹೀಗಾಗಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಸಮಕ್ಷಮದಲ್ಲಿ ಯೋಗಾನರಸಿಂಹಸ್ವಾಮಿ ಬೆಟ್ಟದ ಸುಗಮ ಆಡಳಿತ ನಿರ್ವಹಣೆಗಾಗಿ ಪಾರುಪತ್ತೇಗಾರ್ ಶ್ರೀಧರ ಬದಲಿಗೆ ಸ್ಥಾನೀಕ ಶ್ರೀರಾಮನ್, ಪರಿಚಾರಕರ ಬದಲಿಗೆ ಸ್ಥಾನೀಕಂ ಸಂಪತ್ ಕುಮಾರನ್, ಮಣೆಗಾರ ಹುದ್ದೆಗೆ ನರಸಿಂಹನ್ ಕಾಮಲುಗಾರ ಎಂ.ಬಿ.ಗಂಗಾಧರ ಮತ್ತು ಬಸವರಾಜು ಬದಲಿಗೆ ನಾರಾಯಣ ಮತ್ತು ಕಿಶೋರನ್ನು ನೇಮಿಸಿ ಗುರುವಾರ ಸಂಜೆಯೇ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.&lt;/p&gt;&lt;p&gt;ಮೇಲುಕೋಟೆ ಇನ್ಸ್ ಪೆಕ್ಟರ್ ಪೊಲೀಸ್ ಭದ್ರತೆ ನೀಡಿದ್ದರು.&lt;/p&gt;&lt;h3&gt;ಪೊಲೀಸರಿಂದ ವಿಚಾರಣೆ ಆರಂಭ:&lt;/h3&gt;&lt;p&gt;ದೇವಾಲಯದ ಹುಂಡಿಯಲ್ಲಿ ಭಕ್ತರು ಹಾಕಿದ ಚಿನ್ನ, ಬೆಳ್ಳಿ ಸೇರಿದಂತೆ ನಗದು ಕಳ್ಳತನ, ಗರ್ಭಗೃಹ ಹಾಗೂ ಇತರ ಕಡೆಗಳಲ್ಲಿ ರಹಸ್ಯ ಕ್ಯಾಮೆರಾ ನಾಶ, ಡಿವಿಆರ್ ಸುಟ್ಟುಹಾಕಿದ್ದ ಆರೋಪದ ಕುರಿತು ದೇಗುಲದ ಇಒ ಶೀಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.&lt;/p&gt;&lt;p&gt;ಭಕ್ತರು ನೀಡಿರುವ ಒಡವೆ ವಸ್ತ್ರಗಳನ್ನು ದಾಖಲೆಗೆ ತೋರಿಸದೆ ಕದ್ದಿರುವ ಶಂಕೆಯೂ ಇದ್ದು ಪೊಲೀಸು ವಿಚಾರಣೆಯನ್ನು ಸಹ ಆರಂಭಿಸಿದ್ದಾದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/melukote-temple-theft-case-fir-filed-against-6-accused-including-priest-rav/articleshow-untd7df"/>
        </item>
        <item>
            <title><![CDATA[ಡಿಕೆ ಸರ್ಕಾರದಲ್ಲಿ ಮಹತ್ವದ ಬದಲಾವಣೆ: 13 ಮಂದಿ ಐಎಎಸ್‌ ಅಧಿಕಾರಿಗಳ ವರ್ಗ, ಕೆಲವರಿಗೆ ಹೆಚ್ಚುವರಿ ಹೊಣೆ]]></title>
            <link>https://kannada.asianetnews.com/state/karnataka-government-transfers-order-13-ias-officers-rav/articleshow-iqx8u8i</link>
            <guid isPermaLink="true">https://kannada.asianetnews.com/state/karnataka-government-transfers-order-13-ias-officers-rav/articleshow-iqx8u8i</guid>
            <pubDate>Fri, 19 Jun 2026 07:28:15 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಡಿ.ರಂದೀಪ್&zwnj;, ತುಳಸಿ ಮದ್ದಿನೇನಿ ಸೇರಿದಂತೆ ಹದಿಮೂರು ಐಎಎಸ್&zwnj; ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆಯಲ್ಲಿ ಹಲವು ಅಧಿಕಾರಿಗಳಿಗೆ ಹೊಸ ಹುದ್ದೆಗಳನ್ನು ನೀಡಲಾಗಿದ್ದು, ಕೆಲವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kves6nr2827mcq2ytz52g7vb,imgname----------------------7--1781833881346.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಇಸ್ಕಾಂಗ್ಲಾ ಜಮೀರ್&zwnj; ಕರ್ನಾಟಕ ಭವನ ಕಾರ್ಯದರ್ಶಿ&lt;/li&gt; &lt;li&gt;ಮದ್ದಿನೇನಿಗೆ ಉನ್ನತ ಶಿಕ್ಷಣ ಇಲಾಖೆ ಕಾರ್&zwj;ಯದರ್ಶಿ ಹುದ್ದೆ&lt;/li&gt;&lt;/ul&gt;&lt;p&gt;&lt;strong&gt;&amp;nbsp;ಬೆಂಗಳೂರು (ಜೂ.19): &lt;/strong&gt;ಡಿ.ರಂದೀಪ್&zwnj;, ತುಳಸಿ ಮದ್ದಿನೇನಿ ಸೇರಿದಂತೆ ಹದಿಮೂರು ಐಎಎಸ್&zwnj; ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಸರ್ಕಾರ ಆದೇಶಿಸಿದೆ. ಇನ್ನು ಕೆಲ ಐಎಎಸ್&zwnj; ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ, ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಹುದ್ದೆ ನೀಡಿ ಆದೇಶ ಮಾಡಲಾಗಿದೆ.&lt;/p&gt;&lt;h2&gt;ವರ್ಗಾವಣೆಗೊಂಡ ಅಧಿಕಾರಿಗಳು&lt;/h2&gt;&lt;p&gt;ಎಂ. ಇಮ್ಕಾಂಗ್ಲಾ ಜಮೀರ್&zwnj; ಅವರನ್ನು ನವದೆಹಲಿಯ ಕರ್ನಾಟಕ ಭವನದ ಕಾರ್ಯದರ್ಶಿಯಾಗಿ (ಸಮನ್ವಯ) ವರ್ಗಾವಣೆ ಮಾಡಿದ್ದು, ಇದುವರೆಗೆ ಅವರಿದ್ದ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ಹುದ್ದೆಗೆ ಸಮೀರ್&zwnj; ಶುಕ್ಲಾ ಅವರನ್ನು ನಿಯೋಜಿಸಲಾಗಿದೆ. ಅದೇ ರೀತಿ ತುಳಸಿ ಮದ್ದಿನೇನಿ ಅವರನ್ನು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹುದ್ದೆಗೆ, ಡಿ.ರಂದೀಪ್&zwnj; ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್&zwnj; ರಾಜ್&zwnj; ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿ ಜೊತೆಗೆ ಇದೇ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ಪಂಚಾಯತ್&zwnj; ರಾಜ್&zwnj;) ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.&lt;/p&gt;&lt;p&gt;ಕೆ.ಬಿ.ಶಿವಕುಮಾರ್&zwnj; ಅವರನ್ನು ಕೆಎಸ್&zwnj;ಆರ್&zwnj;ಟಿಸಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ, ಡಾ.ಸತೀಶ ಬಿ.ಸಿ.ಅವರನ್ನು ಕೃಷಿ ಇಲಾಖೆ ಆಯುಕ್ತರಾಗಿ, ಜ್ಞಾನೇಂದ್ರ ಕುಮಾರ್&zwnj; ಗಂಗ್ವಾರ್&zwnj; ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಎಂಎಸ್&zwnj;ಎಂಇ ನಿರ್ದೇಶಕರಾಗಿ, ಗಜಾನನ ಬಾಲೆ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿ, ರಘುನಂದನ್&zwnj; ಮೂರ್ತಿ ಅವರನ್ನು ಬಿಎಂಟಿಸಿ ವ್ಯವಸ್ಥಾಪಕ ನಿದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ ರಘುನಂದನ ಮೂರ್ತಿ ಅವರಿಗೆ ಹೆಚ್ಚುವರಿಯಾಗಿ ಖಜಾನೆ ಆಯುಕ್ತ ಹುದ್ದೆ, ಗಜಾನನ ಬಾಲೆ ಅವರಿಗೆ ಬಾಗಲಕೋಟೆ ಜಿಲ್ಲೆಯ ಕೃಷ್ಣ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್&zwnj;ನಿರ್ಮಾಣ ಪ್ರಧಾನ ವ್ಯವಸ್ಥಾಪಕ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.&lt;/p&gt;&lt;p&gt;ಹುದ್ದೆ ನಿರೀಕ್ಷೆಯಲ್ಲಿದ್ದ ಡಾ.ಪ್ರಸಾದ್&zwnj; ಎನ್&zwnj;.ವಿ. ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹುದ್ದೆ, ಅಕ್ರಂ ಪಾಷಾ ಅವರಿಗೆ ರಾಷ್ಟ್ರೀಯ ಆರೋಗ್ಯ ಮಿಷನ್&zwnj; ಮತ್ತು ಆರೋಗ್ಯ ನಿರ್ದೇಶನಾಲಯದ ಮಿಷನ್&zwnj; ಡೈರೆಕ್ಟರ್&zwnj; ಹುದ್ದೆ, ನಿತಿಶ್&zwnj; ಕೆ. ಅವರಿಗೆ ಪೌರಾಡಳಿತ ನಿರ್ದೇಶಕ ಸ್ಥಾನ ನೀಡಲಾಗಿದೆ. ನಿತಿಶ್&zwnj; ಅವರಿಗೆ ಹೆಚ್ಚುವರಿಯಾಗಿ ಜಿಬಿಎ ಶಿಕ್ಷಣ ಮತ್ತು ಆಯೋಗ್ಯ ವಿಭಾಗದ ವಿಶೇಷ ಆಯುಕ್ತ ಹುದ್ದೆ ವಹಿಸಲಾಗಿದೆ. ಬಿಡಿಎ ಆಯುಕ್ತ ಪಿ. ಮಣಿವಣ್ಣನ್&zwnj; ಅವರಿಗೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತ ಹುದ್ದೆ, ಕೆಪಿಟಿಸಿಎಲ್&zwnj; ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್&zwnj; ಪ್ರಸಾತ್&zwnj; ಮನೋಹರ್&zwnj; ಅವರಿಗೆ ಪ್ರವಾಸೋದ್ಯಮ ಇಲಾಖೆ ಆಯುಕ್ತ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-government-transfers-order-13-ias-officers-rav/articleshow-iqx8u8i"/>
        </item>
        <item>
            <title><![CDATA[ಟ್ರಾಫಿಕ್ ಫೈನ್ ಕಟ್ಟಲು ಸುವರ್ಣಾವಕಾಶ!12 ಕಡೆ ವಿಶೇಷ ಕೌಂಟರ್‌ಗಳು ಆರಂಭ; ಎಲ್ಲೆಲ್ಲಿ ತೆರೆಯಲಿವೆ? ಕೊನೆಯ ದಿನಾಂಕ ಯಾವಾಗ?]]></title>
            <link>https://kannada.asianetnews.com/state/bengaluru-traffic-cops-set-traffic-fines-special-counters-opened-at-12-locations-rav/articleshow-3iphf7b</link>
            <guid isPermaLink="true">https://kannada.asianetnews.com/state/bengaluru-traffic-cops-set-traffic-fines-special-counters-opened-at-12-locations-rav/articleshow-3iphf7b</guid>
            <pubDate>Fri, 19 Jun 2026 06:57:13 +0530</pubDate>
            <description><![CDATA[ಬೆಂಗಳೂರಿನಲ್ಲಿ ಹಳೆಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಸರ್ಕಾರವು ಶೇ.50ರಷ್ಟು ರಿಯಾಯಿತಿ ಘೋಷಿಸಿದೆ. ಈ ಅವಕಾಶ ಜೂ.21 ರಿಂದ ಜು.10 ರವರೆಗೆ ಲಭ್ಯವಿದ್ದು, ನಗರದ 12 ಕಡೆ ವಿಶೇಷ ಕೌಂಟರ್&zwnj;ಗಳನ್ನು ತೆರೆಯಲಾಗಿದೆ ಹಾಗೂ ವಿವಿಧ ಆ್ಯಪ್&zwnj;ಗಳ ಮೂಲಕವೂ ದಂಡ ಪಾವತಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kdgh0a1stbezjb7q6w3knjq3,imgname-traffic-fines-1766860007480.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.19):&lt;/strong&gt; ಹಳೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಗೆ ನಗರದ 12 ಕಡೆ ಸಂಚಾರ ಪೊಲೀಸರು ವಿಶೇಷ ಕೌಂಟರ್&zwnj;ಗಳನ್ನು ತೆರೆದಿದ್ದಾರೆ.&lt;/p&gt;&lt;h2&gt;ದಂಡ ಪಾವತಿ ಸುಲಭ&lt;/h2&gt;&lt;p&gt;ದಂಡ ಪಾವತಿಗೆ ವಿವರಗಳನ್ನು ರಾಜ್ಯ ಪೊಲೀಸ್ ಆ್ಯಪ್ (KSP App) ಪಡೆಯಬಹುದು. ಕೆಎಸ್&zwnj;ಪಿ ಆ್ಯಪ್ ಮಾತ್ರವಲ್ಲದೆ ಸಂಚಾರ ವಿಭಾಗದ ಬಿಟಿಪಿ ಅಸ್ತ್ರಂ ಆ್ಯಪ್&zwnj;, ಬೆಂಗಳೂರು ವನ್&zwnj; ಹಾಗೂ ಎಲ್ಲ ಸಂಚಾರ ಪೊಲೀಸ್ ಠಾಣೆಗಳಲ್ಲಿ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ದಂಡ ಪಾವತಿಸಬಹುದು.&lt;/p&gt;&lt;p&gt;ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್&zwnj;ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ50% ರಷ್ಟು ರಿಯಾಯಿತಿಯನ್ನು ಸರ್ಕಾರ ನೀಡಿದೆ. ಈ ಅವಕಾಶ ಜೂ.21 ರಿಂದ ಜು.10 ರವರೆಗೆ ಇರಲಿದೆ.&lt;/p&gt;&lt;h2&gt;ವಿಶೇಷ ಕೌಂಟರ್&zwnj;ಗಳ ವಿವರ:&lt;/h2&gt;&lt;p&gt;1.ಹೆಣ್ಣೂರು ಜಂಕ್ಷನ್, ರಿಂಗ್ ರಸ್ತೆ2.ದೇವಸಂದ್ರ ಜಂಕ್ಷನ್, ಓಲ್ಡ್ ಮದ್ರಾಸ್ ರಸ್ತೆ,3.ಕುಂದಲಹಳ್ಳಿ ಜಂಕ್ಷನ್, ಓಲ್ಡ್ ಏರ್&zwnj;ಪೋರ್ಟ್ ರಸ್ತೆ4.ಮೈಸೂರು ಬ್ಯಾಂಕ್ ಜಂಕ್ಷನ್, ಕೆ.ಜಿ. ರಸ್ತೆ.5.ಸುಮ್ಮನಹಳ್ಳಿ ಜಂಕ್ಷನ್, ಮಾಗಡಿ ರಸ್ತೆ.6.ಮೆಟ್ರೋ (ಬಿ.ಹೆಚ್.ಇ.ಎಲ್.), ಮೈಸೂರು ರಸ್ತೆ.7.ಆ&zwnj;ರ್&zwnj;ಟಿಒ ಕಚೇರಿ ಹತ್ತಿರ, 12ನೇ ಮುಖ್ಯ ರಸ್ತೆ.8.ಜಾಲಹಳ್ಳಿ ಕ್ರಾಸ್ ಜಂಕ್ಷನ್, ತುಮಕೂರು ರಸ್ತೆ.9.ಹೆಬ್ಬಾಳ ಜಂಕ್ಷನ್, ಬಳ್ಳಾರಿ ರಸ್ತೆ.10.ಸಾಗರ ಜಂಕ್ಷನ್, ಕೆ.ಜಿ.ರಸ್ತೆ.11.ಹೊಸೂರು ರಸ್ತೆ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ ರಸ್ತೆ12.ಗೊಟ್ಟಿಗೆರೆ ಜಂಕ್ಷನ್, ಬನ್ನೇರುಘಟ್ಟ ರಸ್ತೆ&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-traffic-cops-set-traffic-fines-special-counters-opened-at-12-locations-rav/articleshow-3iphf7b"/>
        </item>
        <item>
            <title><![CDATA[RBI: ಗೋಕಾಕ ಮಹಾಲಕ್ಷ್ಮಿ ಬ್ಯಾಂಕ್‌ ಲೈಸೆನ್ಸ್‌ ರದ್ದು, ದಿವಾಳಿಗೆ ಕಾರಣವೇನು? ನಿಮ್ಮ ಹಣ ಮರಳಿ ಬರುತ್ತಾ?]]></title>
            <link>https://kannada.asianetnews.com/india-news/rbi-cancels-licence-of-karnataka-based-sri-mahalaxmi-urban-co-operative-credit-bank-rav/articleshow-oxig2gd</link>
            <guid isPermaLink="true">https://kannada.asianetnews.com/india-news/rbi-cancels-licence-of-karnataka-based-sri-mahalaxmi-urban-co-operative-credit-bank-rav/articleshow-oxig2gd</guid>
            <pubDate>Fri, 19 Jun 2026 06:21:40 +0530</pubDate>
            <description><![CDATA[&lt;p&gt;ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಆರ್&zwnj;ಬಿಐ, ಬೆಳಗಾವಿ ಜಿಲ್ಲೆಯ ಗೋಕಾಕ ಮೂಲದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ. ಬ್ಯಾಂಕಿನ ವ್ಯವಹಾರವನ್ನು ನಿಷೇಧಿಸಲಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvends3vm4dnpfjkjqyn17cz,imgname----------------------6--1781829919867.jpg" type="image/jpeg" height="390" width="690"/>
            <content:encoded><![CDATA[&lt;h2&gt;ಠೇವಣಿದಾರರಿಗೆ ಹಣ ಮರಳಿಸಲು ಕ್ರಮ&lt;/h2&gt;&lt;p&gt;ಪಿಟಿಐ ಮುಂಬೈ (ಜೂ.19): ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಕರ್ನಾಟಕ ಬೆಳಗಾವಿ ಜಿಲ್ಲೆ ಗೋಕಾಕ ಮೂಲದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕಿನ(Sri Mahalakshmi Urban Co-operative Credit Bank) ಪರವಾನಗಿಯನ್ನು ರಿಸರ್ವ್ ಬ್ಯಾಂಕ್(RBI) ರದ್ದುಗೊಳಿಸಿದೆ. ಅದರಂತೆ ಗುರುವಾರದಿಂದಲೇ ಠೇವಣಿ ಸ್ವೀಕಾರ ಮತ್ತು ಠೇವಣಿ ಮರುಪಾವತಿ ಸೇರಿದಂತೆ ಎಲ್ಲ ಬ್ಯಾಂಕಿಂಗ್ ವ್ಯವಹಾರವನ್ನು ನಿಷೇಧಿಸಲಾಗಿದೆ.&lt;/p&gt;&lt;h3&gt;ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶ&lt;/h3&gt;&lt;p&gt;ಬ್ಯಾಂಕ್ ವ್ಯವಹಾರ ಅಂತ್ಯಗೊಳಿಸಲು ಮತ್ತು ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶ ಹೊರಡಿಸುವಂತೆ ಕರ್ನಾಟಕದ ಸಹಕಾರ ಸಂಘಗಳ ರಿಜಿಸ್ಟ್ರಾರ್&zwnj;ಗೆ ಕೋರಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್&zwnj;ಬಿಐ) ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.&lt;/p&gt;&lt;p&gt;ದಿವಾಳಿಯ ನಂತರ, ಸುಮಾರು ಶೇ.97.9ರಷ್ಟು ಠೇವಣಿದಾರರು ತಮ್ಮ ಠೇವಣಿಗಳ ಪೂರ್ಣ ಮೊತ್ತವನ್ನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್&zwnj;ನಿಂದ ಪಡೆಯಲಿದ್ದಾರೆ ಎಂದು ಅದು ಹೇಳಿದೆ.&lt;/p&gt;&lt;p&gt;ಬ್ಯಾಂಕ್&zwnj; ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆಗಳನ್ನು ಹೊಂದಿಲ್ಲ ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ರ ಕೆಲವು ನಿಬಂಧನೆಗಳನ್ನು ಅದು ಪಾಲಿಸಲು ಸಾಧ್ಯವಿಲ್ಲ ಎಂದು ಲೈಸೆನ್ಸ್&zwnj; ರದ್ದತಿಗೆ ಆರ್&zwnj;ಬಿಐ ಕಾರಣ ನೀಡಿದೆ.&lt;/p&gt;&lt;p&gt;&lsquo;ಈಗಿನ ಆರ್ಥಿಕ ಸ್ಥಿತಿಯನ್ನು ನೋಡಿದರೆ ಬ್ಯಾಂಕ್ ತನ್ನ ಪ್ರಸ್ತುತ ಠೇವಣಿದಾರರಿಗೆ ಪೂರ್ಣವಾಗಿ ಪಾವತಿಸಲು ಸಾಧ್ಯವಾಗುವುದಿಲ್ಲ. ಬ್ಯಾಂಕಿನ ಮುಂದುವರಿಕೆಯು ಅದರ ಠೇವಣಿದಾರರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ&rsquo; ಎಂದೂ ಅದು ಹೇಳಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/rbi-cancels-licence-of-karnataka-based-sri-mahalaxmi-urban-co-operative-credit-bank-rav/articleshow-oxig2gd"/>
        </item>
        <item>
            <title><![CDATA[20 ವರ್ಷಗಳಿಂದ ಭೂ ಪರಿಹಾರ ನೀಡದ ನೌಕರನಿಗೆ ಚಪ್ಪಲಿ ಏಟು; ರೈತನ ಪರ ನಿಂತ ಲೋಕಾಯುಕ್ತ, ಸುಮೊಟೊ ಕೇಸ್  ದಾಖಲು]]></title>
            <link>https://kannada.asianetnews.com/karnataka-districts/lokayukta-notice-to-five-bagalkot-officials-over-pending-relief-for-land-acquisition-rav/articleshow-stxobld</link>
            <guid isPermaLink="true">https://kannada.asianetnews.com/karnataka-districts/lokayukta-notice-to-five-bagalkot-officials-over-pending-relief-for-land-acquisition-rav/articleshow-stxobld</guid>
            <pubDate>Fri, 19 Jun 2026 06:01:45 +0530</pubDate>
            <description><![CDATA[&lt;p&gt;20 ವರ್ಷಗಳಿಂದ ಭೂ ಪರಿಹಾರ ಸಿಗದ ಕಾರಣ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನೌಕರನಿಗೆ ಚಪ್ಪಲಿ ಏಟು ನೀಡಿದ್ದ ರೈತ ಬಸಪ್ಪ ದೊಡ್ಡಮನಿ ಪರವಾಗಿ ಲೋಕಾಯುಕ್ತರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ. ಮಾಧ್ಯಮ ವರದಿ ಆಧರಿಸಿ ಈ ಕ್ರಮ ಕೈಗೊಂಡಿದ್ದು, ಸಂಬಂಧಿತ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvem6nzbszwtr116k5zc3bym,imgname----------------------5--1781828638699.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಜೂ.19)&lt;/strong&gt;: ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನೌಕರನಿಗೆ ಚಪ್ಪಲಿ ಏಟು ನೀಡಿದ ಪ್ರಕರಣ ಇದೀಗ ರಾಜ್ಯ ಲೋಕಾಯುಕ್ತದ ಗಮನಕ್ಕೆ ಬಂದಿದ್ದು, ಚಪ್ಪಲಿ ಏಟು ನೀಡಿದ ರೈತ ಬಸಪ್ಪ ದೊಡ್ಡಮನಿ ಪರವಾಗಿ ಮಾಧ್ಯಮದ ವರದಿಯಾಧರಿಸಿ ಬೆಂಗಳೂರು ಲೋಕಾಯುಕ್ತರು(Lokayukta) ಸುಮೊಟೊ ಕೇಸ್&zwnj;(Sumoto Case) ದಾಖಲಿಸಿಕೊಂಡಿದ್ದಾರೆ.&lt;/p&gt;&lt;h2&gt;20 ವರ್ಷದಿಂದ ಭೂಪರಿಹಾರ ಸಿಗದೆ ಬೇಸತ್ತಿದ್ದ ರೈತ&lt;/h2&gt;&lt;p&gt;20 ವರ್ಷದಿಂದ ಸ್ವಾಧೀನಕ್ಕೊಳಪಟ್ಟ ಭೂಮಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ 2ರ ನ್ಯಾಯಮೂರ್ತಿ ಬಿ.ವೀರಪ್ಪ(Lokayukta B Veerappa) ಅವರ ಆದೇಶದ ಮೇರೆಗೆ ಸುಮೊಟೊ ಕೇಸ್ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ, ಸಂಬಂಧಿತ ಅಧಿಕಾರಿಗಳಿಗೆ ಜುಲೈ 27ರಂದು ವಿಚಾರಣೆಗೆ ಹಾಜರಾಗಲು ನಿರ್ದೇಶನ ನೀಡಲಾಗಿದೆ.&lt;/p&gt;&lt;h3&gt;ರೈತನ ಪರ ಸುಮೊಟೊ ಕೇಸ್&zwnj; ದಾಖಲಿಸಿದ ಲೋಕಾಯುಕ್ತ&lt;/h3&gt;&lt;p&gt;ಬಸಪ್ಪ ದೊಡ್ಡಮನಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕೇಸ್ ವರ್ಕರ್ ನೀಲಕಂಠ ಅಂಕದ ಅವರಿಗೆ ಚಪ್ಪಲಿ ಏಟು ನೀಡಿದ್ದ. ಈ ಬಗ್ಗೆ ಬಾಗಲಕೋಟೆ ನವನಗರ ಠಾಣೆಯಲ್ಲಿ ನೀಲಕಂಠ ಅವರು ದೂರು ದಾಖಲಿಸಿದ್ದರು. ನಂತರ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದಲೂ ದೂರು ದಾಖಲಾಗಿತ್ತು. ಬಳಿಕ ರೈತ ಬಸಪ್ಪನನ್ನು ಬಂಧಿಸಿ ನವನಗರ ಪೊಲೀಸರು ಬಿಡುಗಡೆ ಮಾಡಿದ್ದರು. ಗುರುವಾರ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳ ವಿರುದ್ಧ, ದಲಿತ ಸಂಘರ್ಷ ಸಮಿತಿ ಭೀಮವಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಬಾಗಲಕೋಟೆ ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಯತ್ನ ನಡೆಸಿದ್ದರು. ಇದರ ಬೆನ್ನಲ್ಲೇ ರೈತನ ಪರ ಸುಮೊಟೊ ಕೇಸ್&zwnj; ದಾಖಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/lokayukta-notice-to-five-bagalkot-officials-over-pending-relief-for-land-acquisition-rav/articleshow-stxobld"/>
        </item>
        <item>
            <title><![CDATA[Interview: ಬಿಜೆಪಿ ರಾಜ್ಯಾಧ್ಯಕ್ಷ ಗೊಂದಲಕ್ಕೆ ಯಾವುದೇ ಕ್ಷಣ ವರಿಷ್ಠರಿಂದ ಪರಿಹಾರ: ರಾಧಾಮೋಹನ]]></title>
            <link>https://kannada.asianetnews.com/politics/karnataka-bjp-president-confusion-radhamohan-das-interview-with-asianet-suvarna-news-rav/articleshow-r6d42a3</link>
            <guid isPermaLink="true">https://kannada.asianetnews.com/politics/karnataka-bjp-president-confusion-radhamohan-das-interview-with-asianet-suvarna-news-rav/articleshow-r6d42a3</guid>
            <pubDate>Fri, 19 Jun 2026 05:26:39 +0530</pubDate>
            <description><![CDATA[&lt;p&gt;ರಾಜ್ಯ ಬಿಜೆಪಿಯಲ್ಲಿನ ನಾಯಕತ್ವದ ಗೊಂದಲ, ನಿರ್ಧಾರ ವಿಳಂಬ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್&zwnj;ವಾಲ್ ಮಾತನಾಡಿದ್ದಾರೆ. ರಾಜ್ಯಾಧ್ಯಕ್ಷರ ಕುರಿತು ಶೀಘ್ರದಲ್ಲೇ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ, ಪಕ್ಷದ ಆಂತರಿಕ ಕಾರ್ಯವೈಖರಿ ಸಮರ್ಥಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvejehj0xahreqyr0z8wxm65,imgname----------------------4--1781826799167.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಖಾಮುಖಿ&lt;/strong&gt;&lt;/p&gt;&lt;p&gt;&lt;strong&gt;ರಾಧಾಮೋಹನ್ ದಾಸ್ ಅಗರ್&zwnj;ವಾಲ್&lt;/strong&gt;&lt;/p&gt;&lt;p&gt;- ರಾಜ್ಯ ಬಿಜೆಪಿ ಉಸ್ತುವಾರಿ&lt;/p&gt;&lt;p&gt;&lt;strong&gt;ವಿಜಯ್ ಮಲಗಿಹಾಳ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಜೂ.19): &lt;/strong&gt;ಕಳೆದ ಲೋಕಸಭಾ ಚುನಾವಣೆ ಬಳಿಕ ಶುರುವಾದ ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ಈ ಕ್ಷಣದವರೆಗೂ ಮುಕ್ತಿ ಸಿಕ್ಕಿಲ್ಲ. ಆಗಾಗ ಅಸಮಾಧಾನ, ಭಿನ್ನಾಭಿಪ್ರಾಯ ಹೊರಬೀಳುತ್ತಲೇ ಇರುತ್ತದೆ. ಪಕ್ಷದ ರಾಜ್ಯ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಡಾ.ರಾಧಾಮೋಹನ್ ದಾಸ್ ಅಗರ್&zwnj;ವಾಲ್ ಅವರು ರಾಜ್ಯಕ್ಕೆ ಭೇಟಿ ನೀಡಿ ಪಕ್ಷದ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಏನೂ ಆಗಿಯೇ ಇಲ್ಲ ಎಂಬಂತೆ ವಾಪಸಾಗುತ್ತಾರೆ. ದೆಹಲಿಯ ವರಿಷ್ಠರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟ ನಿಲುವನ್ನೂ ಪ್ರಕಟಿಸದೆ ಮುಗುಮ್ಮಾಗಿ ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಧಾಮೋಹನ್ ದಾಸ್ ಅಗರ್&zwnj;ವಾಲ್ ಅವರು &lsquo;ಕನ್ನಡಪ್ರಭ&rsquo;ಕ್ಕೆ &lsquo;ಮುಖಾಮುಖಿ&rsquo;ಯಾಗಿದ್ದು ಹೀಗೆ...&lt;/p&gt;&lt;p&gt;*&lt;strong&gt;ಕಳೆದ ಎರಡು ವರ್ಷಗಳಿಂದ ರಾಜ್ಯಾಧ್ಯಕ್ಷ ಸ್ಥಾನ, ನಾಯಕತ್ವದ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮುಂದುವರೆದಿದೆಯಲ್ವಾ?&lt;/strong&gt;&lt;/p&gt;&lt;p&gt;ನಮ್ಮ ಕಾರ್ಯಕರ್ತರು ಕಮಲ ಚಿಹ್ನೆಯ ಕಾರ್ಯಕರ್ತರು. ಅವರು ಯಾವುದೇ ವ್ಯಕ್ತಿ ಅಥವಾ ಹುದ್ದೆಗೆ ಸಂಬಂಧಿಸಿದವರು ಅಲ್ಲ. ಕಾಂಗ್ರೆಸ್&zwnj;ನಲ್ಲಿ ಗೊಂದಲದ ಬೆಟ್ಟವೇ ನಿರ್ಮಾಣವಾಗಿದೆ. ಅದಕ್ಕೆ ಹೋಲಿಸಿದರೆ ಬಿಜೆಪಿಯಲ್ಲಿನ ಗೊಂದಲ ತೀರಾ ಸಣ್ಣ ಪ್ರಮಾಣದ್ದು.&lt;/p&gt;&lt;p&gt;*&lt;strong&gt;ಕಾಂಗ್ರೆಸ್ ಪಕ್ಷದಂತೆ ಬಿಜೆಪಿಯಲ್ಲಿ ಸಂಘಟನೆಗೆ ಸಂಬಂಧಿಸಿ ತ್ವರಿತಗತಿಯ ನಿರ್ಧಾರಗಳನ್ನು ಯಾಕೆ ತೆಗೆದುಕೊಳ್ಳುವುದಿಲ್ಲ?&lt;/strong&gt;&lt;/p&gt;&lt;p&gt;ನಿರ್ಧಾರ ತೆಗೆದುಕೊಳ್ಳುವುದೆಂದರೆ ಯಾರನ್ನಾದರೂ ಗಲ್ಲಿಗೆ ಏರಿಸಬೇಕೇ? ಕಾನೂನಿನಲ್ಲಿ ಗಲ್ಲು ಶಿಕ್ಷೆ ವಿಧಿಸುವುದು ಅಷ್ಟು ಸುಲಭವಿಲ್ಲ. ನಾನು ಹೆಸರು ಹೇಳಲು ಬಯಸುವುದಿಲ್ಲ (ಬಸನಗೌಡ ಪಾಟೀಲ ಯತ್ನಾಳ). ರಾಜ್ಯದ ಒಬ್ಬ ಮುಖಂಡನನ್ನು ಪಕ್ಷದಿಂದ ಉಚ್ಚಾಟಿಸುವ ಮೊದಲು ನಾನು ಅವರೊಂದಿಗೆ ಐದು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಸುಮಾರು 10 ಗಂಟೆಗಳ ಕಾಲ ಚರ್ಚಿಸಿದ್ದೇನೆ. ಇದರ ಮೇಲೆ ನಿಮಗೆ ಅರ್ಥವಾಗಿರಬೇಕು. ನಾವು ಯಾರ ವಿರುದ್ಧವೂ ತರಾತುರಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ನಾವು ಏಕಾಏಕಿ ಕ್ರೂರವಾಗುವುದಕ್ಕೆ ಸಾಧ್ಯವಿಲ್ಲ.&lt;/p&gt;&lt;p&gt;*&lt;strong&gt;ಕೆಲವೊಮ್ಮೆ ನಿರ್ಣಯಗಳು ವಿಳಂಬವಾಗುವುದರಿಂದ ಪಕ್ಷದ ಸಂಘಟನೆ ಅಂತರಿಕವಾಗಿ ಕುಸಿದು ಹೋಗುವುದಿಲ್ಲವೇ?&lt;/strong&gt;&lt;/p&gt;&lt;p&gt;ನಮ್ಮ ಪಕ್ಷ ಆಂತರಿಕವಾಗಿ ಗಟ್ಟಿಯಾಗಿದೆ. ನಿರ್ಣಯಗಳನ್ನು ಕೈಗೊಳ್ಳುವುದು ವಿಳಂಬವಾಗುವುದರಿಂದ ಸಂಘಟನೆ ಕುಸಿಯುವುದಿಲ್ಲ.&lt;/p&gt;&lt;p&gt;*&lt;strong&gt;ಆಪರೇಷನ್ ಯಶಸ್ವಿಯಾಯಿತು, ರೋಗಿ ನಿಧನ ಹೊಂದಿದ ಎಂಬ ಆಡು ಮಾತಿದೆ. ಬಿಜೆಪಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಇದೇ ರೀತಿ ಆಗುತ್ತಿದೆಯಲ್ವಾ?&lt;/strong&gt;&lt;/p&gt;&lt;p&gt;ಇಲ್ಲ. ಇಲ್ಲ... ನಮ್ಮ ಪಕ್ಷದಲ್ಲಿ ಆ ರೀತಿ ಆಗುವುದಿಲ್ಲ. ಆಪರೇಷನ್ ಕೂಡ ಯಶಸ್ವಿಯಾಗುತ್ತದೆ. ಮಗು ಕೂಡ ಆರೋಗ್ಯಕರಾಗಿ ಜನ್ಮ ತಾಳುತ್ತದೆ. ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುತ್ತದೆ.&lt;/p&gt;&lt;p&gt;*&lt;strong&gt;ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ಸುದೀರ್ಘವಾಗಿ ಮುಂದುವರೆದಿದೆ, ಯಾವಾಗ ಬಗೆಹರಿಯಬಹುದು?&lt;/strong&gt;&lt;/p&gt;&lt;p&gt;ಶೀಘ್ರದಲ್ಲೇ ಈ ಎಲ್ಲ ಗೊಂದಲಕ್ಕೆ ತೆರೆ ಬೀಳಲಿದೆ. ಯಾವುದೇ ಕ್ಷಣದಲ್ಲಿ ಹೈಕಮಾಂಡ್&zwnj;ನಿಂದ ನಿರ್ಣಯ ಪ್ರಕಟವಾಗುವ ಸಾಧ್ಯತೆಯಿದೆ. ಹಾಲಿ ಅಧ್ಯಕ್ಷರ ಕಾರ್ಯಕ್ಷಮತೆ ಸೇರಿ ವಿವಿಧ ಅಂಶಗಳನ್ನು ರಾಷ್ಟ್ರೀಯ ನಾಯಕತ್ವ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಯಾವುದೇ ಕ್ಷಣದಲ್ಲಾದರೂ ನೂತನ ಅಧ್ಯಕ್ಷರ ನೇಮಕ ಆಗಬಹುದು.&lt;/p&gt;&lt;p&gt;*&lt;strong&gt;ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸಲಾಗುತ್ತದೆಯೇ ಅಥವಾ ಹೊಸಬರನ್ನು ನೇಮಿಸಲಾಗುತ್ತದೆಯೇ?&lt;/strong&gt;&lt;/p&gt;&lt;p&gt;ರಾಜ್ಯಾಧ್ಯಕ್ಷರ ನೇಮಕ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯ ವಿಷಯ. ರಾಜ್ಯ ರಾಜಕೀಯ ಬೆಳವಣಿಗೆಗಳು ಮತ್ತು ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಕೇಂದ್ರ ನಾಯಕರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆ ಸಮಯ ಈಗ ಸಮೀಪಿಸಿದೆ.&lt;/p&gt;&lt;p&gt;*&lt;strong&gt;ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬದಲಾವಣೆಗಳ ಆಧಾರದ ಮೇಲೆ ಬಿಜೆಪಿಯಲ್ಲೂ ನಾಯಕತ್ವಕ್ಕೆ ಸಂಬಂಧಿಸಿದಂತೆ ಜಾತಿ ಸಮೀಕರಣ ಮಾಡುವ ಉದ್ದೇಶವಿದೆಯೇ?&lt;/strong&gt;&lt;/p&gt;&lt;p&gt;ಬಿಜೆಪಿ ಯಾವತ್ತೂ ಜಾತಿ ಆಧಾರಿತ ರಾಜಕಾರಣ ಮಾಡುವುದಿಲ್ಲ. ನಿರ್ಣಯವನ್ನೂ ಕೈಗೊಳ್ಳುವುದಿಲ್ಲ.&lt;/p&gt;&lt;p&gt;*&lt;strong&gt;ಪಕ್ಷದ ರಾಜ್ಯ ಉಸ್ತುವಾರಿಯಾಗಿ ನಿಮ್ಮ ಕಾರ್ಯನಿರ್ವಹಣೆ ತೃಪ್ತಿ ತಂದಿದೆಯೇ? ಕಾಂಗ್ರೆಸ್ ಉಸ್ತುವಾರಿ ಕಾರ್ಯವೈಖರಿಯೊಂದಿಗೆ ನಿಮ್ಮ ಹೋಲಿಕೆ ಮಾಡಲಾಗುತ್ತಿದೆಯಲ್ವಾ?&lt;/strong&gt;&lt;/p&gt;&lt;p&gt;ಕಾಂಗ್ರೆಸ್&zwnj; ಉಸ್ತುವಾರಿ ಜತೆ ನನ್ನನ್ನು ಹೋಲಿಸಬೇಡಿ. ನಮ್ಮ ಪಕ್ಷದ ಸಂಘಟನಾ ಸ್ವರೂಪಕ್ಕೂ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನಾ ಸ್ವರೂಪಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮದು ವ್ಯಕ್ತಿ ಆಧಾರಿತ ಸಂಘಟನೆ ಅಲ್ಲ. ಸಮನ್ವಯತೆಯೊಂದಿಗೆ ಸಂಘಟನೆ ಮಾಡುವುದು ಬಿಜೆಪಿಯ ವಿಶೇಷತೆ. ನಾವು ಪಕ್ಷದ ಸಂಘಟನೆಗೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಒಂದು ರಾಜ್ಯದ ಉಸ್ತುವಾರಿಯಾದ ಕೂಡಲೇ ಆ ರಾಜ್ಯ ಘಟಕದ ಮಾಲೀಕರಂತೆ ಆಡುವುದಿಲ್ಲ. ನಮ್ಮಲ್ಲಿ ಒಬ್ಬ ವ್ಯಕ್ತಿಯ ನಿರ್ಧಾರ, ನಿರ್ದೇಶನ ನಡೆಯುವುದಿಲ್ಲ. ಸಾಮೂಹಿಕ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುತ್ತೇವೆ. ಪರಿಸ್ಥಿತಿ ನಮ್ಮ ಕೈಮೀರಿ ಹೋಗುತ್ತಿದೆ ಎಂಬುದು ಮನವರಿಕೆಯಾದ ಬಳಿಕ ನಾವು ಕ್ರಮ ಕೈಗೊಳ್ಳುತ್ತೇವೆ. ಅದಕ್ಕೂ ಮೊದಲು ತಮ್ಮ ತಪ್ಪುಗಳನ್ನು ಅರಿತು ಸುಧಾರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡುತ್ತೇವೆ.&lt;/p&gt;&lt;p&gt;*&lt;strong&gt;ನೀವು ಪಕ್ಷದ ರಾಜ್ಯ ಉಸ್ತುವಾರಿಯಾಗಿ ನಿಮ್ಮ ಕೆಲಸ ತೃಪ್ತಿ ತಂದಿದೆಯೇ?&lt;/strong&gt;&lt;/p&gt;&lt;p&gt;ನಾನು ಉಸ್ತುವಾರಿಯಾಗಿ ನೇಮಕಗೊಂಡ ಬ&zwj;ಳಿಕ ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಅಣಿಗೊಳಿಸುವುದೂ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದೇನೆ. ನಾನು ಪ್ರಚಾರಪ್ರಿಯನಲ್ಲ. ನನಗೆ ಕೊಟ್ಟ ಕೆಲಸ ಮಾಡಿಕೊಂಡು ಹೋಗುತ್ತೇನೆ. ಹೀಗಾಗಿ, ಅದು ಹೆಚ್ಚು ಗೊತ್ತಾಗುವುದಿಲ್ಲ. ಕಾಂಗ್ರೆಸ್ಸಿನ ವ್ಯಾಖ್ಯಾನದಿಂದ ಬಿಜೆಪಿಯನ್ನು ನೋಡುವುದು ಬೇಡ. ಕಾಂಗ್ರೆಸ್ ಬೇರೆ, ಬಿಜೆಪಿ ಬೇರೆ.&lt;/p&gt;&lt;p&gt;*&lt;strong&gt;ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿ ರಾಜ್ಯ ರಾಜಕಾರಣವನ್ನು ಹೇಗೆ ನೋಡುತ್ತಿದ್ದೀರಿ?&lt;/strong&gt;&lt;/p&gt;&lt;p&gt;ಕರ್ನಾಟಕದ ಮತದಾರರು ಆಸೆಬುರುಕರಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳ ಆಮಿಷ ಒಡ್ಡಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ, ಮುಂದೆ ಒಂದು ವರ್ಷದಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನೇತೃತ್ವದ ಎನ್&zwnj;ಡಿಎ ಕೂಟ ಅತಿಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ರಾಜ್ಯದ ಮತದಾರರು ಆಸೆಬುರುಕರಲ್ಲ ಎಂಬುದನ್ನು ನಿರೂಪಿಸಿದರು. ಕಳೆದ ಎರಡು-ಮೂರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದಾರೆ. ಸರ್ಕಾರದ ವಿರುದ್ಧ ಜನರಲ್ಲಿ ತೀವ್ರ ಅಸಮಾಧಾನವಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಈ ಜನಾಕ್ರೋಶ ಐತಿಹಾಸಿಕವಾಗಿ ವ್ಯಕ್ತವಾಗಲಿದೆ.&lt;/p&gt;&lt;p&gt;*&lt;strong&gt;ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್&zwnj; ಅವರು ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಸಂಘಟನೆ ದುರ್ಬಲವಾಗಿರುವುದನ್ನು ಪ್ರಸ್ತಾಪಿಸಿ ಅಸಮಾಧಾನ ಹೊರಹಾಕಿದ್ದರಂತೆ?&lt;/strong&gt;&lt;/p&gt;&lt;p&gt;ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಪದಾಧಿಕಾರಿಗಳು ಹಾಗೂ ಮುಖಂಡರ ಸಂಘಟನಾತ್ಮಕ ಜವಾಬ್ದಾರಿ ಬಗ್ಗೆ ಪ್ರಸ್ತಾಪಿಸಿ ಮಾತುಗಳನ್ನು ಆಡಿದ್ದರು. ಕೋರ್ ಕಮಿಟಿ ಸದಸ್ಯರ ಪಾತ್ರ ಏನು ಎಂಬುದನ್ನು ಹೇಳಿದ್ದರು. ಅದು ಅಸಮಾಧಾನ ಅಂತ ಅಲ್ಲ.&lt;/p&gt;&lt;p&gt;*&lt;strong&gt;ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ರಾಜ್ಯ ಬಿಜೆಪಿ ಗಂಭೀರ ಸಿದ್ಧತೆಯಲ್ಲಿ ತೊಡಗಿದೆಯಲ್ಲ?&lt;/strong&gt;&lt;/p&gt;&lt;p&gt;ಹೌದು. ಇದೊಂದು ಪ್ರಮುಖವಾದ ಪ್ರಕ್ರಿಯೆ. ಇದು ಪ್ರಾಮಾಣಿಕವಾಗಿ ನಡೆಯಬೇಕು ಎಂಬುದು ಬಿಜೆಪಿಯ ಸದುದ್ದೇಶ. ಇದರಲ್ಲಿ ರಾಜಕೀಯ ಪಕ್ಷಗಳು ಸಕ್ರಿಯವಾಗಿ ಪಾಲ್ಗೊಳ್ಳದೇ ಇದ್ದಲ್ಲಿ ಸರ್ಕಾರಿ ಅಧಿಕಾರಿಗಳು ಇದನ್ನು ವಿಫಲಗೊಳಿಸುವ ಸಾಧ್ಯತೆಯಿರುತ್ತದೆ. ಕೇವಲ ಮತ ಕೇಳುವುದಷ್ಟೇ ನಮ್ಮ ಕೆಲಸವಲ್ಲ. ಮತದಾನದ ಹಕ್ಕು ಸಿಗುವುದು ಈ ದೇಶದ ಜನರ ಮೂಲಭೂತ ಅಧಿಕಾರ. ಹಿಂದೂ, ಮುಸ್ಲಿಂ ಅಥವಾ ಕ್ರೈಸ್ತ ಯಾವುದೇ ಧರ್ಮ ಇರಲಿ. ಮತದಾನದ ಮೂಲಭೂತ ಅಧಿಕಾರ ದೊರಕಬೇಕು ಎಂಬುದು ಬಿಜೆಪಿಯ ಉದ್ದೇಶ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದೇವೆ.&lt;/p&gt;&lt;p&gt;*&lt;strong&gt;ಈ ಸಮಗ್ರ ಪರಿಷ್ಕರಣೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬ ಆರೋಪವನ್ನು ಕಾಂಗ್ರೆಸ್ ಸತತವಾಗಿ ಮಾಡುತ್ತಿದೆ?&lt;/strong&gt;&lt;/p&gt;&lt;p&gt;ನೋಡಿ, ಈ ಸಮಗ್ರ ಪರಿಷ್ಕರಣೆಯ ಜವಾಬ್ದಾರಿಯನ್ನು ಕೇಂದ್ರ ಚುನಾವಣಾ ಆಯೋಗ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ವಹಿಸುತ್ತದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ರಾಜ್ಯದ ಐಎಎಸ್&zwnj; ಅಧಿಕಾರಿಯಾಗಿದ್ದು, ಅವರನ್ನು ಮುಖ್ಯಮಂತ್ರಿಗಳೇ ನೇಮಕ ಮಾಡಿರುತ್ತಾರೆ. ಇಡೀ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರೆಲ್ಲರೂ ರಾಜ್ಯ ಸರ್ಕಾರದ ಅಧಿಕಾರಿಗಳು, ನೌಕರರೇ ಆಗಿರುತ್ತಾರೆ. ಕರ್ನಾಟಕದಲ್ಲಿ ಈಗ ಇಡೀ ಆಡಳಿತ ಯಂತ್ರವೇ ಕಾಂಗ್ರೆಸ್ ಕೈಯಲ್ಲಿರುವಾಗ ಬಿಜೆಪಿ ಸಮಗ್ರ ಪರಿಷ್ಕರಣೆಯನ್ನು ದುರುಪಯೋಗ ಮಾಡಲು ಹೇಗೆ ಸಾಧ್ಯ ಎಂಬುದನ್ನು ಯೋಚಿಸಬೇಕು.&lt;/p&gt;&lt;p&gt;&lt;strong&gt;*ಈ ಪ್ರಕ್ರಿಯೆಯನ್ನು ಬಳಸಿಕೊಂಡು ಬಿಜೆಪಿಯು ತಮಗೆ ಮತ ಹಾಕದವರನ್ನು ಗುರುತಿಸಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಿಸಬಹುದು ಎಂಬ ಆತಂಕವನ್ನು ಕಾಂಗ್ರೆಸ್ ವ್ಯಕ್ತಪಡಿಸುತ್ತಿದೆಯಲ್ವಾ?&lt;/strong&gt;&lt;/p&gt;&lt;p&gt;ಇಡೀ ಪ್ರಕ್ರಿಯೆಯಲ್ಲಿ ಸರ್ಕಾರಿ ನೌಕರರೇ ಇರುವುದರಿಂದ ಹೆಸರುಗಳನ್ನು ಸೇರಿಸುವ ಅಥವಾ ಕಿತ್ತು ಹಾಕುವ ವ್ಯವಸ್ಥೆ ಕಾಂಗ್ರೆಸ್ ಕೈಯಲ್ಲಿಯೇ ಇದೆ. ಇದರಲ್ಲಿ ಬಿಜೆಪಿ ಹೇಗೆ ಪಾತ್ರ ವಹಿಸಲು ಸಾಧ್ಯ. ಕಳ್ಳನೇ ಪೊಲೀಸರನ್ನು ದೂಷಿಸಿದಂತಾಯಿತು ಇದು.&lt;/p&gt;&lt;p&gt;*&lt;strong&gt;ಮುಸ್ಲಿಂ ಸಮುದಾಯದ ಮತದಾರರನ್ನೇ ಗುರಿಯಾಗಿಸಿ ಅವರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಬಹುದು ಎಂಬ ಅನುಮಾನವೂ ವಿರೋಧಿಗಳಿಂದ ವ್ಯಕ್ತವಾಗುತ್ತಿದೆ?&lt;/strong&gt;&lt;/p&gt;&lt;p&gt;ಅದು ಹೇಗೆ ಮುಸ್ಲಿಂ ಸಮುದಾಯದ ಮತದಾರರನ್ನೇ ಗುರಿಯಾಗಿಸಿ ಮತದಾರರ ಪಟ್ಟಿಯಿಂದ ಕಿತ್ತು ಹಾಕಬಹುದು ಹೇಳಿ. ಹಾಗೆ ಮಾಡಲು ಆಗುವುದಿಲ್ಲ. ಆಯೋಗ ಕೇಳಿದ ಸೂಕ್ತ ದಾಖಲೆಗಳನ್ನು ನೀಡಿದ ಮೇಲೆ ಯಾರನ್ನೇ ಆಗಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಈಗ ಕಾಂಗ್ರೆಸ್ ಪಕ್ಷಕ್ಕೇ ಮುಸ್ಲಿಂ ಸಮುದಾಯದ ಮತಗಳು ಬೇಕಾಗಿರಲಿಕ್ಕಿಲ್ಲ. ಬಿಜೆಪಿಯ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದವರೇ ಮುಸ್ಲಿಂ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.&lt;/p&gt;&lt;p&gt;&lt;strong&gt;*ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದಲ್ಲಿನ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಈ ಅನುಮಾನ, ಆತಂಕಕ್ಕೆ ಕಾರಣವಾಗಿದೆ. ಅಲ್ಲಿ ಅಪಾರ ಸಂಖ್ಯೆಯ ಮತದಾರರನ್ನು ಕೈಬಿಟ್ಟಿರುವುದರ ಹಿಂದೆ ಬಿಜೆಪಿ ಪಾತ್ರವಿದೆ ಎಂಬ ಆರೋಪ ಕೇಳಿಬಂದಿದೆ?&lt;/strong&gt;&lt;/p&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಸಮಗ್ರ ಪರಿಷ್ಕರಣೆ ನಡೆಯುವ ವೇಳೆ ಅಲ್ಲಿ ಬಿಜೆಪಿ ಸರ್ಕಾರವೇನೂ ಇರಲಿಲ್ಲ. ಅಲ್ಲಿ ಇದ್ದದ್ದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಸರ್ಕಾರ. ಪರಿಷ್ಕರಣೆಯಲ್ಲಿ ಭಾಗಿಯಾದ ಅಧಿಕಾರಿಗಳು, ಸಿಬ್ಬಂದಿ ಆ ಸರ್ಕಾರಕ್ಕೆ ಸೇರಿದವರು. ಸುಪ್ರೀಂ ಕೋರ್ಟ್&zwnj; ಕೂಡ ನಿಗಾ ವಹಿಸಿತ್ತು. ಅಲ್ಲಿ ಬಿಜೆಪಿಯ ಪಾತ್ರವೇ ಇಲ್ಲ. ಇದು ಸುಳ್ಳು ಆರೋಪ ಅಷ್ಟೇ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-bjp-president-confusion-radhamohan-das-interview-with-asianet-suvarna-news-rav/articleshow-r6d42a3"/>
        </item>
        <item>
            <title><![CDATA[ಯೋಗೀಶ್ ಗೌಡ ಕೊಲೆ ಪ್ರಕರಣ: ನಕಲಿ ಸಾಕ್ಷ್ಯ ಸೃಷ್ಟಿಸಿ 7 ವರ್ಷ ಜೈಲು ಶಿಕ್ಷೆಗೊಳಗಾದ ಇನ್ಸ್‌ಪೆಕ್ಟರ್ ಟಿಂಗರೀಕರ್‌ಗೆ ಬೇಲ್ ಸಿಗುತ್ತಾ?]]></title>
            <link>https://kannada.asianetnews.com/karnataka-districts/dharwad-yogesh-gowda-murder-case-will-cop-who-create-fake-evidence-get-bail-rav/articleshow-x6gn6vh</link>
            <guid isPermaLink="true">https://kannada.asianetnews.com/karnataka-districts/dharwad-yogesh-gowda-murder-case-will-cop-who-create-fake-evidence-get-bail-rav/articleshow-x6gn6vh</guid>
            <pubDate>Fri, 19 Jun 2026 04:40:06 +0530</pubDate>
            <description><![CDATA[&lt;p&gt;ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನಕಲಿ ಸಾಕ್ಷಿ ಸೃಷ್ಟಿಸಿದ ಆರೋಪದ ಮೇಲೆ ಶಿಕ್ಷೆಗೊಳಗಾಗಿರುವ ಇನ್ಸ್&zwnj;ಪೆಕ್ಟರ್&zwnj; ಚನ್ನಕೇಶವ ಟಿಂಗರೀಕರ್&zwnj; ಜಾಮೀನು ಕೋರಿ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvef8xtkatvap5s7z70kwdfq,imgname----------------------2--1781823469394.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜೂ.19) &lt;/strong&gt;ಧಾರವಾಡದ ಬಿಜೆಪಿ&zwnj; ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಅಪರಾಧ ಸಂಬಂಧ ಏಳು ವರ್ಷ ಜೈಲು ಶಿಕ್ಷೆ ಗೆ ಒಳಗಾಗಿರುವ ಪೊಲೀಸ್ ಇನ್ಸ್&zwnj;ಪೆಕ್ಟರ್&zwnj; ಚನ್ನಕೇಶವ ಟಿಂಗರೀಕರ್&zwnj; ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.&lt;/p&gt;&lt;h2&gt;ತೀರ್ಪು ಕಾಯ್ದಿರಿಸಿದ ಕೋರ್ಟ್&lt;/h2&gt;&lt;p&gt;ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಅಮಾನತ್ತಿನಲ್ಲಿರಿಸಿ ಜಾಮೀನು ಮಂಜೂರು ಮಾಡುವಂತೆ ಕೋರಿ ಚನ್ನಕೇಶವ ಟಿಂಗರೀಕರ್ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ನೇತೃತ್ವದ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿತು.&lt;/p&gt;&lt;h3&gt;ಅರ್ಜಿದಾರರ ಪರ ವಕೀಲರ ವಾದ ಏನು?&lt;/h3&gt;&lt;p&gt;ಅರ್ಜಿದಾರರ ಪರ ಹಿರಿಯ ವಕೀಲ ಪಿ.ಪಿ.ಹೆಗ್ಡೆ ವಾದ ಮಂಡಿಸಿ, ಪಿತೂರಿ ನಡೆಸಿದ ಹಾಗೂ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ಟೆಂಗರೀಕರ್&zwnj; ವಿರುದ್ಧವಿದೆ. ಅದಕ್ಕೆ ಐಪಿಸಿ ಸೆಕ್ಷನ್&zwnj; 201 ಮತ್ತು 218 ಅಡಿ ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ. ಇವು ಜಾಮೀನು ಸಹಿತ ಪ್ರಕರಣಗಳಾಗಿರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.&lt;/p&gt;&lt;h3&gt;ಸಿಬಿಐ ಪರ ವಾದವೇನು?&lt;/h3&gt;&lt;p&gt;ಸಿಬಿಐ ಪರ ಹಾಜರಿದ್ದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು, ಅರ್ಜಿದಾರ ಅಧಿಕಾರಿಯು ಆರೋಪಿಗಳು ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿಲ್ಲ. ಬೇರೆ ಆಯುಧಗಳನ್ನು&zwnj; ವಶಪಡಿಸಿಕೊಂಡಿದ್ದರು.&zwnj; ನಿಜವಾದ ಆರೋಪಿಗಳ ಬದಲಿಗೆ ತಪ್ಪು ಮಾಡದ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಲು ಪ್ರಯತ್ನಿಸಿದ್ದು, ನಿಜವಾದ ಕೆಲ ಆರೋಪಿಗಳ ಹೆಸರು ಹೇಳದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ. ನೈಜ ಸಾಕ್ಷ್ಯಗಳನ್ನು ಮರೆಮಾಚಿ ಬದಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ತಪ್ಪೆಸಗಿದ್ದಾರೆ. ಘಟನೆ ಸಂಬಂಧ ಪ್ರಮುಖ ಆರೋಪಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharwad-yogesh-gowda-murder-case-will-cop-who-create-fake-evidence-get-bail-rav/articleshow-x6gn6vh"/>
        </item>
        <item>
            <title><![CDATA[Heart attack:  ಕಾಲೇಜಲ್ಲಿ ಎರಡು ಬಾರಿ ಕುಸಿದುಬಿದ್ದ ಪಿಯು ವಿದ್ಯಾರ್ಥಿ ಹೃದಯಾಘಾತದಿಂದ ಸಾವು!]]></title>
            <link>https://kannada.asianetnews.com/karnataka-districts/mysore-pu-student-collapses-dies-of-heart-attack-rav/articleshow-3l56hcr</link>
            <guid isPermaLink="true">https://kannada.asianetnews.com/karnataka-districts/mysore-pu-student-collapses-dies-of-heart-attack-rav/articleshow-3l56hcr</guid>
            <pubDate>Fri, 19 Jun 2026 04:10:41 +0530</pubDate>
            <description><![CDATA[&lt;p&gt;ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗೆ ಕಾಲೇಜಿನ ಆವರಣದಲ್ಲೇ ಹೃದಯಾಘಾತ(heart attack) ಸಂಭವಿಸಿ ಎರಡು ಬಾರಿ ಕುಸಿದು ಬಿದ್ದು, ನಂತರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxff01q4yzdjny1p57yr1ya,imgname-right-hand-can-also-hurt-1779105759287.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಮೈಸೂರು (ಜೂ.19)&lt;/strong&gt;: ನಗರದ ಮರಿಮಲ್ಲಪ್ಪ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗೆ ಕಾಲೇಜಿನ ಆವರಣದಲ್ಲೇ ಹೃದಯಾಘಾತ(heart attack) ಸಂಭವಿಸಿ ಎರಡು ಬಾರಿ ಕುಸಿದು ಬಿದ್ದು, ನಂತರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.&lt;/p&gt;&lt;h2&gt;ಕಾಲೇಜಿನಲ್ಲೇ 2 ಬಾರಿ ಕುಸಿದು ಬಿದ್ದ ವಿದ್ಯಾರ್ಥಿ&lt;/h2&gt;&lt;p&gt;ಮೂಲತಃ ಮದ್ದೂರು ತಾಲೂಕು ಯರಗನಹಳ್ಳಿಯ ವೈ.ಕೆ.ಮಾದೇಶ್&zwnj;(YK Madesh) ಮೃತಪಟ್ಟ ವಿದ್ಯಾರ್ಥಿ. ಈತ ಮೈಸೂರಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಕ್ಕನ ಜೊತೆ ಮನೆ ಮಾಡಿಕೊಂಡು ಓದುತ್ತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ತರಗತಿಯಿಂದ ಹೊರಬಂದ ಮಾದೇಶ್&zwnj; 2.05ಕ್ಕೆ ಕಾಲೇಜು ಆವರಣದಲ್ಲಿಯೇ ಕುಸಿದು ಬಿದ್ದರು. ಹಿಂದಿನಿಂದ ಬರುತ್ತಿದ್ದ ವಿದ್ಯಾರ್ಥಿಗಳು ಆತನನ್ನು ಮೇಲೆತ್ತಿದ್ದರು. ಒಂದೆರಡು ಹೆಜ್ಜೆ ಹಾಕಿದ ಮಾದೇಶ್&zwnj; ಮತ್ತೆ ಕುಸಿದು ಬಿದ್ದರು.&lt;/p&gt;&lt;p&gt;&lt;strong&gt;ಚಿಕ್ಕ ವಯಸ್ಸಿನಲ್ಲೇ ಹೃದಯದಲ್ಲಿ ರಂದ್ರ ಪತ್ತೆ&lt;/strong&gt;&lt;/p&gt;&lt;p&gt;ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೋಷಕರಿಗೂ ಸಹ ಕರೆ ಮಾಡಿದ್ದಾರೆ. ವೈದ್ಯರ ಪ್ರಯತ್ನದ ಬಳಿಕವೂ ಮಾದೇಶ್&zwnj; ಬದುಕುಳಿಯಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಹೃದಯದಲ್ಲಿ ರಂದ್ರ ಪತ್ತೆಯಾಗಿತ್ತು. ಅದಕ್ಕೆ ಪೋಷಕರು ಚಿಕಿತ್ಸೆ ಕೊಡಿಸಿದ್ದರು ಎಂದು ತಿಳಿದುಬಂದಿದೆ. ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ವೈ.ಕೆ.ಮಾದೇಶ್&zwnj; ಎಸ್ಸೆಸ್ಸೆಲ್ಸಿ ಪೂರೈಸಿ 609 ಅಂಕಗಳಿಸಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mysore-pu-student-collapses-dies-of-heart-attack-rav/articleshow-3l56hcr"/>
        </item>
        <item>
            <title><![CDATA[Ramanagara: ರೈತರ ಕಣ್ಣೀರಿನ ಶಾಪ ತಟ್ಟದೆ ಬಿಡಲ್ಲ: ಡಿಕೆಶಿ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ]]></title>
            <link>https://kannada.asianetnews.com/karnataka-districts/chalavadi-narayanaswamy-slams-dk-shivakumar-over-bidadi-farmers-land-issue-gvd/articleshow-ctzfshm</link>
            <guid isPermaLink="true">https://kannada.asianetnews.com/karnataka-districts/chalavadi-narayanaswamy-slams-dk-shivakumar-over-bidadi-farmers-land-issue-gvd/articleshow-ctzfshm</guid>
            <pubDate>Thu, 18 Jun 2026 22:57:29 +0530</pubDate>
            <description><![CDATA[&lt;p&gt;Ramanagara ಜಿಲ್ಲೆಯ ಬಿಡದಿ ಭಾಗದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಛಲವಾದಿ ನಾರಾಯಣಸ್ವಾಮಿ, ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೈತರ ಭೂಮಿ ಕಸಿದುಕೊಳ್ಳಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbp38hzpjqfqqa55asc6khkx,imgname-----------------------2025-12-05t072014.775-1764899440630.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಜೂ.18): &lt;/strong&gt;ರೈತನಾದವನಿಗೆ ಮಾತ್ರ ಕೃಷಿಕರ ಕಷ್ಟ ಗೊತ್ತಾಗುತ್ತೆ. ಜಲ್ಲಿ ಕಲ್ಲು, ಬಂಡೆ ಹೊಡೆಯುವರಿಗೆಲ್ಲ ರೈತರ ಕಷ್ಟ ಗೊತ್ತಾಗಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಚಳವಳಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಣ್ಣೀರು ಹಾಕಿದ ರೈತರ ಶಾಪ ತಟ್ಟದೆ ಬಿಡುವುದಿಲ್ಲ.&lt;/p&gt;&lt;p&gt;ನಿಮ್ಮಿಂದ ಆ ಶಾಪ ತಡೆದುಕೊಳ್ಳಲು ಆಗಲ್ಲ. ಆದ್ದರಿಂದ ರೈತರ ಕೃಷಿ ಭೂಮಿಯನ್ನು ಬಿಟ್ಟು ಬಿಡಿ ಎಂದರು. ನಿಜವಾದ ರೖತನ ಮಗ ಈ ರೀತಿ ಕೃಷಿಕರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾರರು. ನೀವು ನಿಜವಾಗಿಯೂ ರೈತನ ಮಗಾನ ಎಂಬ ಅನುಮಾನ ಕಾಡುತ್ತಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಐದು ತುಂಡು ಮಾಡಿದಿರಿ. ಆದರೂ ಜನರು ತಡೆದುಕೊಂಡಿದ್ದಾರೆ. ಈಗಿಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಇಷ್ಟೊಂದು ಹಠ ಏಕೆಂದು ಪ್ರಶ್ನಿಸಿದರು.&lt;/p&gt;&lt;h2&gt;&lt;strong&gt;ಮುಗ್ಧ ರೈತರನ್ನು ಸಂಕಷ್ಟಕ್ಕೆ ದೂಡಬೇಡಿ&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿಗಳು ಕನಕಪುರ ಭಾಗದ ರೈತರ ಭೂಮಿಗೆ ಚಿನ್ನದ ಬೆಲೆ ಬರುತ್ತದೆ ಅಂತ ಹೇಳುತ್ತಾರೆ. ಅಲ್ಲಿ ಭೂಮಿ ಮಾರಬೇಡಿ ಎನ್ನುವ ನೀವು, ಇಲ್ಲೇಕೆ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದೀರಾ. ಬಿಡದಿ ಭಾಗದ ರೈತರು ಭೂಮಿಯಲ್ಲಿ ಚಿನ್ನವನ್ನೇ ಬೆಳೆಯುತ್ತಿದ್ದಾರೆ. ದಯವಿಟ್ಟು ರೈತರನ್ನು ಬಿಟ್ಟುಬಿಡಿ ಎಂದು ಹೇಳಿದರು.&lt;/p&gt;&lt;p&gt;ರಿಯಲ್ ಎಸ್ಟೇಟ್ ಮಾಡಲು ಬೇರೆ ಮಾರ್ಗಗಳಿವೆ. ಅದಕ್ಕಾಗಿ ಮುಗ್ಧ ರೈತರನ್ನು ಸಂಕಷ್ಟಕ್ಕೆ ದೂಡಬೇಡಿ. ಈ ಯೋಜನೆಗೆ ಯಾವುದಾದರು ಒಂದೆರೆಡು ಕೇಸು ಬಿದ್ದರೆ ಎರಡು ಮೂರು ವರ್ಷ ಎಳೆದುಕೊಂಡು ಹೋಗುತ್ತದೆ. ಆ ವೇಳೆಗೆ ಬಿಜೆಪಿ - ಜೆಡಿಎಸ್ ನೇತೃತ್ವದ ಎನ್ ಡಿಎ ಸರ್ಕಾರ ಬಂದಿರುತ್ತದೆ. ಒಂದೂವರೆ ವರ್ಷದಲ್ಲಿ ಟೌನ್ ಶಿಪ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.&lt;/p&gt;&lt;p&gt;ಬಿಡದಿ ಭಾಗದಲ್ಲಿ ಅರ್ಧ ಎಕರೆ ಭೂಮಿ ಪಾಳು ಬಿದ್ದಿಲ್ಲ. ಇಲ್ಲಿರುವ ತೆಂಗು, ಅಡಿಕೆ, ಮಾವು, ಸಪೋಟ, ರೇಷ್ಮೆ, ಹೈನುಗಾರಿಕೆ ನೋಡಿದರೆ ರೖೆತರು ಮೖೆಗಳ್ಳರಲ್ಲ ಎಂಬುದು ಸಾಬೀತಾಗಿದೆ. ನೀರಾವರಿ ಭೂಮಿಯನ್ನು ಏಕೆ ಕಸಿದುಕೊಳ್ಳುತ್ತೀರಾ. ಚಿಕ್ಕಬಳ್ಳಾಪುರ ಆದ ಮೇಲೆ ಬೇಕಾದಷ್ಟು ಬರಡು ಭೂಮಿ ಇದೆ. ಅಲ್ಲಿ ಬೇಕಾದರೆ ನಾನೇ 15 ಸಾವಿರ ಭೂಮಿ ಕೊಡಿಸುತ್ತೇನೆ ಬನ್ನಿ ಎಂದು ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chalavadi-narayanaswamy-slams-dk-shivakumar-over-bidadi-farmers-land-issue-gvd/articleshow-ctzfshm"/>
        </item>
        <item>
            <title><![CDATA[2028ರಲ್ಲಿ ಕರ್ನಾಟಕದಲ್ಲಿ BJP ಅಧಿಕಾರಕ್ಕೆ ಬರಲಿದೆ: ಶಾಸಕ ರಮೇಶ ಜಾರಕಿಹೊಳಿ ಭವಿಷ್ಯ]]></title>
            <link>https://kannada.asianetnews.com/karnataka-districts/ramesh-jarkiholi-predicts-bjp-victory-in-karnataka-assembly-election-2028-gvd/articleshow-fffgbyl</link>
            <guid isPermaLink="true">https://kannada.asianetnews.com/karnataka-districts/ramesh-jarkiholi-predicts-bjp-victory-in-karnataka-assembly-election-2028-gvd/articleshow-fffgbyl</guid>
            <pubDate>Thu, 18 Jun 2026 22:28:39 +0530</pubDate>
            <description><![CDATA[&lt;p&gt;Karnataka Politics: ಗೋಕಾಕ್&zwnj;ನಲ್ಲಿ ನಡೆದ ಎಸ್&zwnj;ಐಆರ್ ವಿಶೇಷ ಸಭೆಯಲ್ಲಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ, 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01katbj3pt54bkc7erj8m8twtw,imgname-ramesh-jarkiholi--3--1763968618202.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೋಕಾಕ (ಜೂ.18): &lt;/strong&gt;ಎಸ್&zwnj;ಐಆರ್&zwnj;ನ್ನು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ವಿರೋಧಿಸಿದವು. ನಮ್ಮ ಬಿಜೆಪಿ ಪಕ್ಷದ ವರಿಷ್ಠರು ಗಂಭೀರವಾಗಿ ತೆಗೆದುಕೊಂಡಿದ್ದರ ಪರಿಣಾಮವಾಗಿ ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿತು. ಅದರಂತೆ ಬರುವ 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಶಾಸಕ ರಮೇಶ ಜಾರಕಿಹೊಳಿ ಭವಿಷ್ಯ ನುಡಿದರು.&lt;/p&gt;&lt;p&gt;ನಗರದ ನಗರಸಭೆ ಸಮುದಾಯ ಭವನದಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಕರೆಯಲಾಗಿದ್ದ ಎಸ್&zwnj;ಐಆರ್ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಎಲ್ಲರೂ ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು. ಬಿಎಲ್&zwnj;ಒ-2 ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಪ್ರತಿಯೊಬ್ಬ ಮತದಾರರ ಮಾಹಿತಿಯನ್ನು ಸಮರ್ಪಕವಾಗಿ ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ಮಾಡಿಸಬೇಕು ಎಂದರು.&lt;/p&gt;&lt;h2&gt;&lt;strong&gt;ಗೊಂದಲ ಉಂಟಾಗುವ ಸಾಧ್ಯತೆ&lt;/strong&gt;&lt;/h2&gt;&lt;p&gt;ಪ್ರತಿ ಬೂತ್&zwnj;ಮಟ್ಟದಲ್ಲಿ ನೇಮಕ ಗೊಂಡಿರುವ ಬಿಎಲ್&zwnj;ಎ-2 ಕಾರ್ಯಕರ್ತರು ಒಂದೇ ಹೆಸರಿನ ಅನೇಕ ವ್ಯಕ್ತಿಗಳು ಒಂದೇ ಗ್ರಾಮ ಅಥವಾ ಪ್ರದೇಶದಲ್ಲಿ ವಾಸಿಸುವ ಸಂದರ್ಭಗಳಲ್ಲಿ ಹೆಸರು, ತಂದೆಯ ಹೆಸರು, ವಿಳಾಸ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಸರಿಯಾಗಿ ದಾಖಲಿಸದಿದ್ದರೇ ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆಗಳಿದ್ದು, ಪ್ರತಿಯೊಬ್ಬ ಅರ್ಹ ಮತದಾರನ ಹೆಸರು ಮತದಾರರ ಪಟ್ಟಿಯಲ್ಲಿ ಸಮರ್ಪಕವಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕು ಎಂದು ತಿಳಿಸಿದರು.&lt;/p&gt;&lt;p&gt;ವಿಭಾಗ ಪ್ರಭಾರಿ ಸಂಜಯ ಪಾಟೀಲ, ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಶಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಬಿಎಲ್&zwnj;ಒ-1 ಮಾಣಿಕ ಹಿರಟ್ಟಿ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ರಾಜಶ್ರೀ ಒಡೆಯರ್, ಜಿಲ್ಲಾ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಆನಂದ್ ಅತ್ತುಗೋಳ, ಬಿಜೆಪಿ ಮುಖಂಡ ಪ್ರಮೋದ ಜೋಶಿ, ಡಾ.ಕೆ.ವಿ.ಪಾಟೀಲ, ಸುರೇಶ ಪಾಟೀಲ, ಸುರೇಶ ಪತ್ತಾರ ಸೇರಿದಂತೆ ಹಲವಾರು ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.&lt;/p&gt;&lt;p&gt;ಪ್ರಜಾಪ್ರಭುತ್ವದಲ್ಲಿ ಮತದಾನವು ಪ್ರತಿಯೊಬ್ಬ ಭಾರತೀಯ ನಾಗರಿಕನ ಅಮೂಲ್ಯ ಹಕ್ಕಾಗಿದೆ. ಯಾವುದೇ ಕಾರಣಕ್ಕೂ ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ಎಲ್ಲರೂ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು.-ರಮೇಶ ಜಾರಕಿಹೊಳಿ, ಶಾಸಕರು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ramesh-jarkiholi-predicts-bjp-victory-in-karnataka-assembly-election-2028-gvd/articleshow-fffgbyl"/>
        </item>
        <item>
            <title><![CDATA[Snake Rescue: ಕೈಯಲ್ಲೇ ಹಾವು ಹಿಡಿದು ರಕ್ಷಿಸಿದ ನಟ ಜಗ್ಗೇಶ್: ನವರಸ ನಾಯಕನ ವಿಡಿಯೋ ವೈರಲ್!]]></title>
            <link>https://kannada.asianetnews.com/gallery/sandalwood/actor-jaggesh-rescues-snake-in-tumakuru-farm-viral-video-gvd-u5stguk</link>
            <guid isPermaLink="true">https://kannada.asianetnews.com/gallery/sandalwood/actor-jaggesh-rescues-snake-in-tumakuru-farm-viral-video-gvd-u5stguk</guid>
            <pubDate>Thu, 18 Jun 2026 20:38:52 +0530</pubDate>
            <description><![CDATA[&lt;p&gt;Actor Jaggesh: ತಮ್ಮ ತೋಟದಲ್ಲಿ ನೀರಿನ ತೊಟ್ಟಿಗೆ ಬಿದ್ದಿದ್ದ ಹಾವನ್ನು ನಟ ಜಗ್ಗೇಶ್ ರಕ್ಷಿಸಿದ್ದಾರೆ. ಈ ವಿಡಿಯೋವನ್ನು ಅವರು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdkwr1mnn3bv66e6vra16dh,imgname-k-1781794758708.png" type="image/jpeg" height="390" width="690"/>
            <content:encoded><![CDATA[&lt;p&gt;Actor Jaggesh: ತಮ್ಮ ತೋಟದಲ್ಲಿ ನೀರಿನ ತೊಟ್ಟಿಗೆ ಬಿದ್ದಿದ್ದ ಹಾವನ್ನು ನಟ ಜಗ್ಗೇಶ್ ರಕ್ಷಿಸಿದ್ದಾರೆ. ಈ ವಿಡಿಯೋವನ್ನು ಅವರು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;&lt;strong&gt;ತುಮಕೂರು (ಜೂ.18): &lt;/strong&gt;ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿರುವ ತಮ್ಮ ತೋಟದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಹಾವೊಂದನ್ನು ನಟ ಜಗ್ಗೇಶ್ ರಕ್ಷಿಸಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೋವನ್ನು ಅವರು ತಮ್ಮ ಇನ್&zwnj;ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ತೋಟದಲ್ಲಿರುವ ನೀರಿನ ತೊಟ್ಟಿಗೆ ಬಿದ್ದಿದ್ದ ಹಾವು ಹೊರಬರಲಾಗದೆ ಪರದಾಡುತ್ತಿತ್ತು. ಇದನ್ನು ಗಮನಿಸಿದ ಜಗ್ಗೇಶ್ ಸ್ವತಃ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿ, ಬಳಿಕ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಘಟನೆಯ ಬಗ್ಗೆ ಪೋಸ್ಟ್ ಮಾಡಿರುವ ಜಗ್ಗೇಶ್, &quot;ಕಾಕತಾಳೀಯ ಎಂಬಂತೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬಗ್ಗೆ ಮಾತನಾಡುತ್ತ ಕುಳಿತಿದ್ದ ವೇಳೆ ಈ ಹಾವು ಕಾಣಿಸಿತು. ನಂಬಿದವರ ಬಳಿ ದೇವರ ವಾಸ ಇರುತ್ತದೆ ಎನ್ನುವ ಭಾವನೆ ಮೂಡಿತು&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹಾವನ್ನು ರಕ್ಷಿಸಿ ಜೀವ ಉಳಿಸಿದ ಜಗ್ಗೇಶ್ ಅವರ ಮಾನವೀಯ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/actor-jaggesh-rescues-snake-in-tumakuru-farm-viral-video-gvd-u5stguk"/>
        </item>
        <item>
            <title><![CDATA[Mandya Police: ಮಂಡ್ಯದಲ್ಲಿ ಕೊಲೆ ಆರೋಪಿ ಸೀಜರ್ ಸಿದ್ದನ ಕಾಲಿಗೆ ಗುಂಡೇಟು ಹೊಡೆದ ಪೊಲೀಸರು!]]></title>
            <link>https://kannada.asianetnews.com/karnataka-districts/mandya-malavalli-police-firing-at-murder-accused-seizure-siddu/articleshow-xhuc7z4</link>
            <guid isPermaLink="true">https://kannada.asianetnews.com/karnataka-districts/mandya-malavalli-police-firing-at-murder-accused-seizure-siddu/articleshow-xhuc7z4</guid>
            <pubDate>Thu, 18 Jun 2026 19:48:34 +0530</pubDate>
            <description><![CDATA[&lt;p&gt;ಮಳವಳ್ಳಿಯ ಮಹೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿದ್ದರಾಜು ಅಲಿಯಾಸ್ 'ಸೀಜರ್ ಸಿದ್ದು' ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳ ಮಹಜರು ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdhgpdc9p3exaea93hwkmpz,imgname-mandya-malavalli-police-firing-1781792266667.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜೂ.18): ಮಂ&lt;/strong&gt;ಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿಯ ಮಹೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿದ್ದರಾಜು ಅಲಿಯಾಸ್ 'ಸೀಜರ್ ಸಿದ್ದು' ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಇಂದು ಬೆಳಿಗ್ಗೆ ಸ್ಥಳ ಮಹಜರು ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಕಳೆದ ಕೆಲವು ದಿನಗಳ ಹಿಂದೆ ಮಳವಳ್ಳಿಯ ಭೀಮನಹಳ್ಳಿಯಲ್ಲಿ ಮೆಸೇಜ್ ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಶ್ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಾಹನಗಳ ಸೀಜಿಂಗ್ ಕೆಲಸ ಮಾಡುತ್ತಿದ್ದ ಸಿದ್ದರಾಜು ಪ್ರಮುಖ ಆರೋಪಿಯಾಗಿದ್ದನು. ಇಂದು ಬೆಳಿಗ್ಗೆ ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಬಳಿ ಪೊಲೀಸರು ಆರೋಪಿಯನ್ನು ಸ್ಥಳ ಮಹಜರು ನಡೆಸಲು ಕರೆತಂದಿದ್ದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಆರೋಪಿ ಸಿದ್ದರಾಜು ಪೊಲೀಸ್ ಸಿಬ್ಬಂದಿಯ ಮೇಲೆ ಹಠಾತ್ ಹಲ್ಲೆ ನಡೆಸಿ ಅಲ್ಲಿಂದ ಎಸ್ಕೇಪ್ ಆಗಲು ಸಿದ್ಧತೆ ನಡೆಸಿದ್ದನು. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಆರೋಪಿಯನ್ನು ಹಿಡಿಯಲು ಕಿರುಗಾವಲು ಸಿಪಿಐ ಶ್ರೀಧರ್ ಸಮ್ಮುಖದಲ್ಲಿ ಪಿಎಸ್ಐ ರವಿಕುಮಾರ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಸಿದ್ದರಾಜುನನ್ನು ತಕ್ಷಣವೇ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h2&gt;&lt;strong&gt;ಎಸ್ಪಿ ಭೇಟಿ:&lt;/strong&gt;&lt;/h2&gt;&lt;p&gt;ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ವಿ.ಜೆ. ಶೋಭಾರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, 'ಆರೋಪಿ ಸ್ಥಳ ಮಹಜರು ವೇಳೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹೀಗಾಗಿ ಅನಿವಾರ್ಯವಾಗಿ ಗುಂಡು ಹಾರಿಸಿ ಬಂಧಿಸಲಾಗಿದೆ. ಗಾಯಗೊಂಡ ಸಿಬ್ಬಂದಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಮಹೇಶ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಫೈರಿಂಗ್ ಘಟನೆಯಿಂದ ಮಳವಳ್ಳಿ ಭಾಗದಲ್ಲಿ ಸಂಚಲನ ಮೂಡಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mandya-malavalli-police-firing-at-murder-accused-seizure-siddu/articleshow-xhuc7z4"/>
        </item>
        <item>
            <title><![CDATA[ಮಂಡ್ಯ: ಮಳವಳ್ಳಿ ಶಾಲೆ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಶಂಕೆ, 67 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!]]></title>
            <link>https://kannada.asianetnews.com/karnataka-districts/mandya-malavalli-school-mid-day-meal-scare-students-hospitalized-after-suspected-lizard-tail-found-in-food-gdp/articleshow-rvmb0q6</link>
            <guid isPermaLink="true">https://kannada.asianetnews.com/karnataka-districts/mandya-malavalli-school-mid-day-meal-scare-students-hospitalized-after-suspected-lizard-tail-found-in-food-gdp/articleshow-rvmb0q6</guid>
            <pubDate>Thu, 18 Jun 2026 19:41:31 +0530</pubDate>
            <description><![CDATA[ಮಳವಳ್ಳಿ ತಾಲೂಕಿನ ರಾವಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ಶಂಕೆಯಿಂದ ಆತಂಕ ಸೃಷ್ಟಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಊಟ ಸೇವಿಸಿದ್ದ 67 ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಪ್ರಕಾರ ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvdgvrs3aj8cdb7r08mw8c7j,imgname-mandya-mid-day-meal-1781791580960.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ&lt;/strong&gt;: ಜಿಲ್ಲೆಯ ಮಳವಳ್ಳಿ ತಾಲೂಕಿನ ರಾವಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆತಂಕಕಾರಿ ಘಟನೆಯೊಂದು ಸಂಭವಿಸಿದೆ. ಶಾಲೆಯಲ್ಲಿ ಇಂದು ಮಧ್ಯಾಹ್ನ ವಿತರಿಸಲಾದ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಊಟ ಸೇವಿಸಿದ್ದ ಒಟ್ಟು 67 ವಿದ್ಯಾರ್ಥಿಗಳನ್ನು ತಕ್ಷಣವೇ ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.&lt;/p&gt;&lt;h2&gt;ತಟ್ಟೆಯಲ್ಲಿ ಪತ್ತೆಯಾದ ಹಲ್ಲಿಯ ಬಾಲದಂತಹ ವಸ್ತು!&lt;/h2&gt;&lt;p&gt;ಇಂದು ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಎಂದಿನಂತೆ ಶಾಲೆಯ ಮಕ್ಕಳಿಗೆ ಬಿಸಿಯೂಟವನ್ನು ಬಡಿಸಲಾಗಿತ್ತು. ಈ ವೇಳೆ ಊಟ ಮಾಡುತ್ತಿದ್ದ ಓರ್ವ ವಿದ್ಯಾರ್ಥಿಯ ತಟ್ಟೆಯಲ್ಲಿ ಹಲ್ಲಿಯ ಬಾಲವನ್ನು ಹೋಲುವ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದೆ. ಇದನ್ನು ಕಂಡು ಆತಂಕಗೊಂಡ ವಿದ್ಯಾರ್ಥಿ ತಕ್ಷಣವೇ ಶಿಕ್ಷಕರ ಗಮನಕ್ಕೆ ತಂದಿದ್ದಾನೆ. ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಶಾಲೆಯ ಶಿಕ್ಷಕರು, ಅಡುಗೆ ಸಿಬ್ಬಂದಿ ಹಾಗೂ ಇಡೀ ಶಾಲೆಯ ವಿದ್ಯಾರ್ಥಿಗಳು ತೀವ್ರ ಭಯ ಮತ್ತು ಕಳವಳಕ್ಕೆ ಒಳಗಾಗಿದ್ದಾರೆ.&lt;/p&gt;&lt;h2&gt;ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದೌಡಾಯಿಸಿದ ಶಿಕ್ಷಕರು&lt;/h2&gt;&lt;p&gt;ವಿಷಯ ತಿಳಿಯುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ಅಷ್ಟರೊಳಗಾಗಲೇ ಬಿಸಿಯೂಟ ಸೇವಿಸಿದ್ದ ಶಾಲೆಯ ಎಲ್ಲಾ 67 ಮಕ್ಕಳನ್ನು ತಕ್ಷಣವೇ ವಾಹನಗಳ ವ್ಯವಸ್ಥೆ ಮಾಡಿ ಮಳವಳ್ಳಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕರ ತಂಡವು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಎಲ್ಲಾ ಮಕ್ಕಳನ್ನು ಪ್ರತ್ಯೇಕ ವಾರ್ಡ್&zwnj;ಗಳಲ್ಲಿ ದಾಖಲಿಸಿಕೊಂಡು ತಪಾಸಣಾ ಕಾರ್ಯವನ್ನು ಆರಂಭಿಸಿದ್ದಾರೆ.&lt;/p&gt;&lt;h2&gt;ಮಕ್ಕಳ ಆರೋಗ್ಯ ಸ್ಥಿರ: ಅಡುಗೆ ತಯಾರಕರೂ ಸುರಕ್ಷಿತ&lt;/h2&gt;&lt;p&gt;ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಾವುದೇ ಮಗುವಿನ ಆರೋಗ್ಯದಲ್ಲೂ ಏರುಪೇರಾಗಿಲ್ಲ ಮತ್ತು ಯಾರಲ್ಲೂ ವಿಷಾಹಾರ ಸೇವನೆಯ (Food Poisoning) ಲಕ್ಷಣಗಳು ಕಂಡುಬಂದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ವಿಶೇಷವೆಂದರೆ, ನಿಯಮದ ಪ್ರಕಾರ ಮಕ್ಕಳಿಗೆ ಊಟ ಬಡಿಸುವ ಮುನ್ನ ಶಾಲೆಯ ಅಡುಗೆ ತಯಾರಕರು ಆಹಾರವನ್ನು ಸೇವಿಸಿ ಪರೀಕ್ಷಿಸಿದ್ದರು. ಅವರಿಗೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಎದುರಾಗಿಲ್ಲ. ಸದ್ಯಕ್ಕೆ ಮಕ್ಕಳಿಗೆ ಯಾವುದೇ ಅಸ್ವಸ್ಥತೆಯ ಲಕ್ಷಣಗಳು ಇಲ್ಲದಿದ್ದರೂ, ಪೋಷಕರು ಮತ್ತು ಶಿಕ್ಷಕರ ಆತಂಕ ನಿವಾರಿಸುವ ಸಲುವಾಗಿ ಹಾಗೂ ಮುಂಜಾಗ್ರತಾ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಮಕ್ಕಳನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡು ವೈದ್ಯರು ನಿರಂತರ ನಿಗಾ ವಹಿಸಿದ್ದಾರೆ.&lt;/p&gt;&lt;p&gt;ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಪೋಷಕರು ಆಸ್ಪತ್ರೆಯ ಬಳಿ ಜಮಾಯಿಸಿದ್ದು, ಮಕ್ಕಳ ಆರೋಗ್ಯ ಸ್ಥಿರವಾಗಿರುವ ಕಾರಣ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಶಾಲಾ ಬಿಸಿಯೂಟದ ನೈರ್ಮಲ್ಯದ ಕುರಿತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mandya-malavalli-school-mid-day-meal-scare-students-hospitalized-after-suspected-lizard-tail-found-in-food-gdp/articleshow-rvmb0q6"/>
        </item>
        <item>
            <title><![CDATA[ಚಿತ್ರದುರ್ಗ: ಕತ್ತಿಗೆ ಗ್ರ್ಯಾನೈಟ್ ಕಲ್ಲು ಬಿದ್ದು CUDA ಮಾಜಿ ಅಧ್ಯಕ್ಷರ ಪುತ್ರ ಸಾವು, ಕುಟುಂಬದಿಂದ ಮಗನ ಕಣ್ಣುದಾನ]]></title>
            <link>https://kannada.asianetnews.com/karnataka-districts/chitradurga-urban-development-authority-former-chairman-thippeswamy-son-dies-in-granite-warehouse-mishap-gdp/articleshow-543epiq</link>
            <guid isPermaLink="true">https://kannada.asianetnews.com/karnataka-districts/chitradurga-urban-development-authority-former-chairman-thippeswamy-son-dies-in-granite-warehouse-mishap-gdp/articleshow-543epiq</guid>
            <pubDate>Thu, 18 Jun 2026 19:16:35 +0530</pubDate>
            <description><![CDATA[ಚಿತ್ರದುರ್ಗದ ಮಾರ್ಬಲ್ಸ್ ಗೋದಾಮಿನಲ್ಲಿ ಗ್ರ್ಯಾನೈಟ್ ಬಿಲ್ಲೆ ಕುತ್ತಿಗೆ ಮೇಲೆ ಬಿದ್ದು ರಾಣಾ ಪ್ರತಾಪ್ ಸಿಂಹ ಎಂಬ ಯುವಕ ದುರಂತ ಸಾವಿಗೀಡಾಗಿದ್ದಾನೆ. ಈ ದುಃಖದ ನಡುವೆಯೂ, ಮೃತನ ಕುಟುಂಬವು ಆತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvdevgwcwgcyyz8echjjk5ne,imgname-chitradurga-warehouse-accident-1781789475724.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ: &lt;/strong&gt;ಕೋಟೆನಾಡು ಚಿತ್ರದುರ್ಗ ನಗರದ ಹೊರವಲಯದ ಹೊಳಲ್ಕೆರೆ ರಸ್ತೆಯಲ್ಲಿರುವ ಮಾರ್ಬಲ್ಸ್ ಗೋದಾಮಿನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಲಾರಿಯಿಂದ ಗ್ರ್ಯಾನೈಟ್&zwnj;ಗಳನ್ನು ಗೋದಾಮಿಗೆ ಶಿಫ್ಟ್ ಮಾಡುವ ವೇಳೆ ಭಾರಿ ಗಾತ್ರದ ಗ್ರ್ಯಾನೈಟ್ ಬಿಲ್ಲೆಯೊಂದು ಆಕಸ್ಮಿಕವಾಗಿ ಕುತ್ತಿಗೆಯ ಮೇಲೆ ಬಿದ್ದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.&lt;/p&gt;&lt;p&gt;ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಚುಡಾ) ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ ಅವರ ಪುತ್ರ ರಾಣಾ ಪ್ರತಾಪ್ ಸಿಂಹ (30) ಮೃತಪಟ್ಟ ದುರ್ದೈವಿ ಯುವಕ. ಈ ಹಠಾತ್ ದುರಂತವು ಮೃತರ ಕುಟುಂಬಸ್ಥರು ಹಾಗೂ ಸ್ನೇಹಿತರ ವಲಯದಲ್ಲಿ ಭಾರೀ ಆಘಾತ ಮೂಡಿಸಿದೆ.&lt;/p&gt;&lt;h2&gt;ದುರಂತ ಸಂಭವಿಸಿದ್ದು ಹೇಗೆ?&lt;/h2&gt;&lt;p&gt;ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ 'ದೇವಿ ಮಾರ್ಬಲ್ಸ್ ಮತ್ತು ಗ್ರ್ಯಾನೈಟ್ಸ್' ಗೋದಾಮಿನಲ್ಲಿ ಈ ದುರ್ಘಟನೆ ನಡೆದಿದೆ. ಗೋದಾಮಿಗೆ ಹೊಸದಾಗಿ ಬಂದಿದ್ದ ಗ್ರ್ಯಾನೈಟ್ ಲೋಡ್ ಅನ್ನು ಕಾರ್ಮಿಕರು ಅನ್ಲೋಡ್ ಮಾಡಿ ಒಳಗೆ ಜೋಡಿಸಿ ಇಡುತ್ತಿದ್ದರು. ಈ ವೇಳೆ ರಾಣಾ ಪ್ರತಾಪ್ ಸಿಂಹ ಅವರು ಗೋದಾಮಿನ ಒಳಗಿನ ಗೋಡೆಯೊಂದರ ಪಕ್ಕದಲ್ಲಿ ನಿಂತು ಗಮನಿಸುತ್ತಿದ್ದರು ಎನ್ನಲಾಗಿದೆ. ದುರದೃಷ್ಟವಶಾತ್, ಗ್ರ್ಯಾನೈಟ್ ಬಿಲ್ಲೆಗಳನ್ನು ಸ್ಥಳಾಂತರಿಸುವಾಗ ನಿಯಂತ್ರಣ ತಪ್ಪಿ ಭಾರಿ ತೂಕದ ಗ್ರ್ಯಾನೈಟ್ ಕಲ್ಲು ನೇರವಾಗಿ ಗೋಡೆ ಬಳಿ ನಿಂತಿದ್ದ ಪ್ರತಾಪ್ ಅವರ ಕುತ್ತಿಗೆಯ ಭಾಗಕ್ಕೆ ಬಿದ್ದಿದೆ. ಕಲ್ಲಿನ ಭೀಕರ ಹೊಡೆತ ಹಾಗೂ ತೂಕಕ್ಕೆ ಕುತ್ತಿಗೆಯ ಭಾಗ ತೀವ್ರವಾಗಿ ಜಜ್ಜಲ್ಪಟ್ಟು, ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;h2&gt;ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ&lt;/h2&gt;&lt;p&gt;ಆದರ್ಶ ಯುವಕನಾಗಿದ್ದ ಪ್ರತಾಪ್ ಅವರ ಹಠಾತ್ ಸಾವು ತಂದೆ ತಿಪ್ಪೇಸ್ವಾಮಿ ಹಾಗೂ ಇಡೀ ಕುಟುಂಬವನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸಿದೆ. ಮಗನನ್ನು ಕಳೆದುಕೊಂಡು ಕಣ್ಣೀರುಡುತ್ತಿದ್ದ ಸಂದರ್ಭದಲ್ಲೂ ಕುಟುಂಬಸ್ಥರು ಅತ್ಯಂತ ಶ್ಲಾಘನೀಯ ಹಾಗೂ ಸಾರ್ಥಕ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ನಮ್ಮ ಮಗ ಇನ್ನಿಲ್ಲವಾದರೂ ಅವನ ಕಣ್ಣುಗಳು ಮತ್ತೊಬ್ಬರಿಗೆ ಬೆಳಕಾಗಲಿ ಎಂಬ ಉದಾತ್ತ ಚಿಂತನೆಯಿಂದ ಮೃತ ರಾಣಾ ಪ್ರತಾಪ್ ಸಿಂಹ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.&lt;/p&gt;&lt;h2&gt;ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು&lt;/h2&gt;&lt;p&gt;ಘಟನೆ ಸಂಭವಿಸುತ್ತಿದ್ದಂತೆ ವಿಷಯ ತಿಳಿದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗೋದಾಮಿನಲ್ಲಿ ಸುರಕ್ಷತಾ ಕ್ರಮಗಳ ಲೋಪದೋಷಗಳಿದ್ದವೇ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chitradurga-urban-development-authority-former-chairman-thippeswamy-son-dies-in-granite-warehouse-mishap-gdp/articleshow-543epiq"/>
        </item>
        <item>
            <title><![CDATA[ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದಲ್ಲಿ ಉದ್ಯೋಗ ಅವಕಾಶ, ಪರೀಕ್ಷೆಯಿಲ್ಲದೆ ನೇರ ಸಂದರ್ಶನ!]]></title>
            <link>https://kannada.asianetnews.com/jobs/csir-national-aerospace-laboratories-recruitment-2026-walk-in-interview-for-48-project-posts-in-bangalore-no-exam-gdp/articleshow-f22d6gq</link>
            <guid isPermaLink="true">https://kannada.asianetnews.com/jobs/csir-national-aerospace-laboratories-recruitment-2026-walk-in-interview-for-48-project-posts-in-bangalore-no-exam-gdp/articleshow-f22d6gq</guid>
            <pubDate>Thu, 18 Jun 2026 18:24:08 +0530</pubDate>
            <description><![CDATA[ಬೆಂಗಳೂರಿನ ಸಿಎಸ್ಐಆರ್ - ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳು (NAL) 48 ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ, ಕೇವಲ ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಜೂನ್ 29, 2026 ರಂದು ಸಂದರ್ಶನಕ್ಕೆ ಹಾಜರಾಗಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01k8raf1rfjy3ztg7cbsymzwx2,imgname-skyroot-aerospace--4--1761752876815.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿರುವ ಕೇಂದ್ರ ಸರ್ಕಾರದ ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಾದ 'ಸಿಎಸ್ಐಆರ್ - ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳು' (CSIR-National Aerospace Laboratories) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತಾಂತ್ರಿಕ ಕ್ಷೇತ್ರ ಹಾಗೂ ಸಂಶೋಧನಾ ವಲಯದಲ್ಲಿ ಉದ್ಯೋಗದ ಹುಡುಕಾಟದಲ್ಲಿರುವ ಯುವಜನತೆಗೆ ಇದು ಸುವರ್ಣಾವಕಾಶವಾಗಿದೆ. ಈ ನೇಮಕಾತಿಯ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ ನೇರ ಸಂದರ್ಶನದ (Walk-in Interview) ಮೂಲಕ ಅರ್ಹರನ್ನು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.&lt;/p&gt;&lt;h2&gt;ಖಾಲಿ ಇರುವ ಹುದ್ದೆಗಳು ಮತ್ತು ವೇತನದ ವಿವರ&lt;/h2&gt;&lt;p&gt;ಪ್ರಸ್ತುತ ಬಿಡುಗಡೆಯಾಗಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳಲ್ಲಿ ಒಟ್ಟು 48 ಹುದ್ದೆಗಳು ಖಾಲಿ ಇವೆ. ಇವುಗಳನ್ನು ತಾತ್ಕಾಲಿಕ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನ ಕೋಡಿಹಳ್ಳಿಯಲ್ಲಿರುವ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ.&lt;/p&gt;&lt;p&gt;ಹುದ್ದೆಗಳ ಹೆಸರು: ಪ್ರಾಜೆಕ್ಟ್ ಅಸೋಸಿಯೇಟ್ (Project Associate) ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್ (Project Assistant)&lt;/p&gt;&lt;p&gt;ಒಟ್ಟು ಹುದ್ದೆಗಳ ಸಂಖ್ಯೆ: 48&lt;/p&gt;&lt;p&gt;ಮಾಸಿಕ ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ಅರ್ಹತೆಗೆ ಅನುಗುಣವಾಗಿ ಪ್ರತಿ ತಿಂಗಳು 20,000 ರೂಪಾಯಿಗಳಿಂದ ಹಿಡಿದು 35,000 ರೂಪಾಯಿಗಳವರೆಗೆ ಗೌರವ ಧನ (ವೇತನ) ನೀಡಲಾಗುತ್ತದೆ.&lt;/p&gt;&lt;h2&gt;ನಿಗದಿತ ವಿದ್ಯಾರ್ಹತೆ ಮತ್ತು ವಯಸ್ಸಿನ ಮಿತಿ&lt;/h2&gt;&lt;p&gt;ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ತಾಂತ್ರಿಕ ಮಂಡಳಿಯಿಂದ ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಡಿಪ್ಲೊಮಾ (Diploma), ಸ್ನಾತಕೋತ್ತರ ಪದವಿ (Post Graduation), ಬಿ.ಇ (BE) ಅಥವಾ ಬಿ.ಟೆಕ್ (B.Tech) ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳಾಗಿದ್ದು, ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.&lt;/p&gt;&lt;h2&gt;ಯಾವುದೇ ಅರ್ಜಿ ಶುಲ್ಕವಿಲ್ಲ&lt;/h2&gt;&lt;p&gt;ಈ ನೇಮಕಾತಿ ಪ್ರಕ್ರಿಯೆಯ ಮತ್ತೊಂದು ಪ್ರಮುಖ ಸೌಲಭ್ಯವೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿಲ್ಲ. ಸಾಮಾನ್ಯ, ಒಬಿಸಿ, ಎಸ್&zwnj;ಸಿ, ಎಸ್&zwnj;ಟಿ ಹಾಗೂ ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಅರ್ಹ ಅಭ್ಯರ್ಥಿಗಳು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ ಮತ್ತು ಸಂದರ್ಶನಕ್ಕೆ ಹಾಜರಾಗುವ ವಿಧಾನ&lt;/h2&gt;&lt;p&gt;ಅಭ್ಯರ್ಥಿಗಳನ್ನು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಕೇವಲ 'ವಾಕ್-ಇನ್ ಸಂದರ್ಶನ'ದ ಮೂಲಕ ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಸಂದರ್ಶನಕ್ಕೆ ಹಾಜರಾಗುವ ಮುನ್ನ ಈ ಕೆಳಗಿನ ಹಂತಗಳನ್ನು ಕಡ್ಡಾಯವಾಗಿ ಅನುಸರಿಸಬೇಕು:&lt;/p&gt;&lt;p&gt;ಮೊದಲು ಎನ್&zwnj;ಎಎಲ್ (NAL) ಸಂಸ್ಥೆಯ ಅಧಿಕೃತ ವೆಬ್&zwnj;ಸೈಟ್ ಆದ nal.res.in ಗೆ ಭೇಟಿ ನೀಡಬೇಕು. ಅಲ್ಲಿ ನೀಡಿರುವ &lsquo;Careers&rsquo; (ಉದ್ಯೋಗಾವಕಾಶ) ವಿಭಾಗಕ್ಕೆ ತೆರಳಿ, ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಅಸಿಸ್ಟೆಂಟ್ ಹುದ್ದೆಗಳ ಅಧಿಕೃತ ಅಧಿಸೂಚನೆಯನ್ನು (Notification) ಡೌನ್&zwnj;ಲೋಡ್ ಮಾಡಿಕೊಂಡು, ವಿದ್ಯಾರ್ಹತೆಯ ನಿಯಮಗಳನ್ನು ಸ್ಪಷ್ಟವಾಗಿ ಓದಿಕೊಳ್ಳಬೇಕು. ಅಧಿಸೂಚನೆಯೊಂದಿಗೆ ನೀಡಿರುವ ನಿಗದಿತ ಅರ್ಜಿ ನಮೂನೆಯನ್ನು (Application Form) ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಬೇಕು. ನಂತರ ನಿಮ್ಮ ಎಲ್ಲಾ ಅಗತ್ಯ ಮೂಲ ದಾಖಲಾತಿಗಳು (Original Documents), ಅವುಗಳ ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿಗಳು ಮತ್ತು ಇತ್ತೀಚಿನ ಪಾಸ್&zwnj;ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ನಿಗದಿಪಡಿಸಿದ ದಿನದಂದು ನೇರವಾಗಿ ಸಂದರ್ಶನದ ಸ್ಥಳಕ್ಕೆ ತಲುಪಬೇಕು.&lt;/p&gt;&lt;h2&gt;ಸಂದರ್ಶನ ನಡೆಯುವ ಸ್ಥಳ ಮತ್ತು ಪ್ರಮುಖ ದಿನಾಂಕಗಳು&lt;/h2&gt;&lt;p&gt;ಈ ನೇಮಕಾತಿಗೆ ಸಂಬಂಧಿಸಿದಂತೆ ಜೂನ್ 16, 2026 ರಿಂದಲೇ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಸಂದರ್ಶನದ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ:&lt;/p&gt;&lt;p&gt;ಸಂದರ್ಶನ ನಡೆಯುವ ದಿನಾಂಕ: ಜೂನ್ 29, 2026&lt;/p&gt;&lt;h2&gt;ಸಂದರ್ಶನ ನಡೆಯುವ ವಿಳಾಸ:&lt;/h2&gt;&lt;p&gt;CSIR-NAL (RAB ಮೀಟಿಂಗ್ ಕಾಂಪ್ಲೆಕ್ಸ್),&lt;/p&gt;&lt;p&gt;ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್,&lt;/p&gt;&lt;p&gt;ಎಸ್&zwnj;ಬಿಐ (SBI) ಬ್ಯಾಂಕ್ ಪಕ್ಕದಲ್ಲಿರುವ ಎನ್&zwnj;ಎಎಲ್ ಶಾಖೆ,&lt;/p&gt;&lt;p&gt;ಕೋಡಿಹಳ್ಳಿ, ಬೆಂಗಳೂರು &ndash; 560017&lt;/p&gt;&lt;p&gt;ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದಂದು ಸರಿಯಾದ ಸಮಯಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನ ಕೇಂದ್ರಕ್ಕೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಬಹುದು.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/csir-national-aerospace-laboratories-recruitment-2026-walk-in-interview-for-48-project-posts-in-bangalore-no-exam-gdp/articleshow-f22d6gq"/>
        </item>
        <item>
            <title><![CDATA[ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ 8000 ಕಿ.ಮೀ ದೂರ ಪ್ರಯಾಣಿಸಿ ಬೆಂಗಳೂರಿಗೆ ಬಂದ ವ್ಯಕ್ತಿ!]]></title>
            <link>https://kannada.asianetnews.com/health-life/medical-tourism-success-story-uk-resident-travels-8000-km-to-bengaluru-for-advanced-affordable-dental-surgery-gdp/articleshow-wa04dlo</link>
            <guid isPermaLink="true">https://kannada.asianetnews.com/health-life/medical-tourism-success-story-uk-resident-travels-8000-km-to-bengaluru-for-advanced-affordable-dental-surgery-gdp/articleshow-wa04dlo</guid>
            <pubDate>Thu, 18 Jun 2026 17:58:53 +0530</pubDate>
            <description><![CDATA[ಗಂಭೀರ ಹಲ್ಲಿನ ಸಿಸ್ಟ್ ಸಮಸ್ಯೆಯಿಂದ ಬಳಲುತ್ತಿದ್ದ ಲಂಡನ್ ನಿವಾಸಿ ಜಾನ್ ಮಿಲ್ಲರ್, 8000 ಕಿ.ಮೀ. ಪ್ರಯಾಣಿಸಿ ಬೆಂಗಳೂರಿನಲ್ಲಿ ಯಶಸ್ವಿ ಚಿಕಿತ್ಸೆ ಪಡೆದರು. ಹ್ಯಾಪಿಯೆಸ್ಟ್ ಪರ್ಲ್ಸ್ ಡೆಂಟಲ್ ಕ್ಲಿನಿಕ್&zwnj;ನಲ್ಲಿ ನಡೆದ ಸಂಕೀರ್ಣ ಶಸ್ತ್ರಚಿಕಿತ್ಸೆಯು, ಬೆಂಗಳೂರನ್ನು ಜಾಗತಿಕ ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಿ ಮತ್ತೊಮ್ಮೆ ಸಾಬೀತುಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvdb624atzm69jgh80xa4e74,imgname-bengaluru-medical-tourism-success-story-1781785626760.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಭಾರತದ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ನಗರವು ಕೇವಲ ಐಟಿ-ಬಿಟಿ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಮಾತ್ರವಲ್ಲದೆ, ಜಾಗತಿಕ ಮಟ್ಟದ ಅತ್ಯುತ್ತಮ ಮತ್ತು ಸುಧಾರಿತ ವೈದ್ಯಕೀಯ ಸೇವೆಗಳಿಗೂ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಅತ್ಯಂತ ತಾಜಾ ಮತ್ತು ಪ್ರಮುಖ ಉದಾಹರಣೆ ಇಲ್ಲಿದೆ. ಹಲ್ಲಿನ ಗಂಭೀರ ಹಾಗೂ ಸಂಕೀರ್ಣ ಸಮಸ್ಯೆಯಿಂದ ಬಳಲುತ್ತಿದ್ದ ಲಂಡನ್ ನಿವಾಸಿ, 42 ವರ್ಷದ ಜಾನ್ ಮಿಲ್ಲರ್ ಎಂಬುವವರು ಬರೋಬ್ಬರಿ 8,000 ಕಿಲೋಮೀಟರ್ ದೂರ ಪ್ರಯಾಣಿಸಿ ಬೆಂಗಳೂರಿಗೆ ಆಗಮಿಸಿ ಯಶಸ್ವಿ ಚಿಕಿತ್ಸೆ ಪಡೆದುಕೊಂಡು ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯಗಳು ಅತ್ಯಂತ ಕೈಗೆಟುಕುವ ದರದಲ್ಲಿ ಲಭ್ಯವಿರುವುದೇ ಬೆಂಗಳೂರು ನಗರವು ಜಾಗತಿಕ ವೈದ್ಯಕೀಯ ಪ್ರವಾಸೋದ್ಯಮದ (Medical Tourism) ಪ್ರಮುಖ ಹಬ್ ಆಗಿ ಹೊರಹೊಮ್ಮಲು ಕಾರಣ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;&lt;h2&gt;ಗಂಭೀರ ಆರೋಗ್ಯ ಸವಾಲು ಮತ್ತು ಬೆಂಗಳೂರಿನತ್ತ ಜಾನ್ ಮಿಲ್ಲರ್ ಗಮನ&lt;/h2&gt;&lt;p&gt;ಲಂಡನ್&zwnj;ನಲ್ಲಿದ್ದ ಜಾನ್ ಮಿಲ್ಲರ್ ಅವರು ಕಳೆದ ಕೆಲವು ಸಮಯದಿಂದ ತಮ್ಮ ಮುಂಭಾಗದ ಮೇಲಿನ ಹಲ್ಲುಗಳ ಒಳಭಾಗದಲ್ಲಿ ತೀವ್ರವಾಗಿ ಹರಡಿದ್ದ 'ಸಿಸ್ಟ್' (Cyst - ದ್ರವ ತುಂಬಿದ ಗಡ್ಡೆ) ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಈ ಗಂಭೀರ ಸೋಂಕಿನ ಪ್ರಭಾವದಿಂದಾಗಿ ಅವರ ದವಡೆಯ ಮೂಳೆಗಳು ಅತ್ಯಂತ ದುರ್ಬಲಗೊಂಡಿದ್ದವು. ಇದರಿಂದಾಗಿ ಅವರಿಗೆ ದಿನನಿತ್ಯದ ಆಹಾರವನ್ನು ಸೇವಿಸಲು, ಸಾಮಾನ್ಯ ಮಾತುಕತೆ ನಡೆಸಲು ಹಾಗೂ ಮುಕ್ತವಾಗಿ ನಗಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತಮ್ಮ ಈ ದೀರ್ಘಕಾಲದ ಸಮಸ್ಯೆಗೆ ಅತ್ಯಾಧುನಿಕ, ನಂಬಿಕಸ್ಥ ಹಾಗೂ ಆರ್ಥಿಕವಾಗಿ ಹೊರೆಯಾಗದ ಸುಧಾರಿತ ಚಿಕಿತ್ಸೆಗಾಗಿ ಅವರು ಜಾಗತಿಕ ಮಟ್ಟದಲ್ಲಿ ಹುಡುಕಾಟ ನಡೆಸಿದಾಗ, ಬೆಂಗಳೂರಿನ 'ಹ್ಯಾಪಿಯೆಸ್ಟ್ ಪರ್ಲ್ಸ್ ಡೆಂಟಲ್ ಕ್ಲಿನಿಕ್' (Happiest Pearls Dental Clinic) ಬಗ್ಗೆ ಸಕಾರಾತ್ಮಕ ಮಾಹಿತಿ ಲಭ್ಯವಾಯಿತು. ಸಂಕೀರ್ಣವಾದ ಹಲ್ಲಿನ ರೋಗಗಳನ್ನು ಅತ್ಯಂತ ಯಶಸ್ವಿಯಾಗಿ ಗುಣಪಡಿಸುವಲ್ಲಿ ಈ ಕ್ಲಿನಿಕ್ ಹೊಂದಿರುವ ಜನಪ್ರಿಯತೆ ಹಾಗೂ ರೋಗಿಗಳ ಯಶಸ್ಸಿನ ಪ್ರಮಾಣವನ್ನು ಕಂಡು ಅವರು ಬೆಂಗಳೂರಿಗೆ ಬರಲು ದೃಢ ನಿರ್ಧಾರ ಮಾಡಿದರು.&lt;/p&gt;&lt;h2&gt;6 ವಾರಗಳ ಕಾಲ ನಡೆದ ಅತ್ಯಾಧುನಿಕ ಹಾಗೂ ಹಂತ-ಹಂತದ ಚಿಕಿತ್ಸಾ ಪ್ರಕ್ರಿಯೆ&lt;/h2&gt;&lt;p&gt;ಬೆಂಗಳೂರಿಗೆ ಆಗಮಿಸಿದ ಜಾನ್ ಮಿಲ್ಲರ್ ಅವರಿಗೆ ಕ್ಲಿನಿಕ್&zwnj;ನ ಉಪನಿರ್ದೇಶಕರಾದ ಡಾ. ಸ್ಯಾಮ್ಯುಯೆಲ್ ಶಾಡ್ರಾಕ್ ಸುರೇಂದರ್ ಅವರ ನೇತೃತ್ವದ ನುರಿತ ತಜ್ಞ ವೈದ್ಯರ ತಂಡವು ತಪಾಸಣೆ ನಡೆಸಿ ಚಿಕಿತ್ಸೆ ಆರಂಭಿಸಿತು. ಸುಮಾರು ಒಂದೂವರೆ ತಿಂಗಳು (6 ವಾರಗಳು) ನಡೆದ ಈ ಚಿಕಿತ್ಸಾ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ಹಂತ-ಹಂತವಾಗಿ ಯಶಸ್ವಿಗೊಳಿಸಲಾಯಿತು. ಮೊದಲ ಹಂತದಲ್ಲಿ ಹಲ್ಲುಗಳ ಬೇರಿನ ಸುತ್ತ ಆವರಿಸಿದ್ದ ಸಿಸ್ಟ್ ಅನ್ನು ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಎರಡನೇ ಹಂತದಲ್ಲಿ, ಸಿಸ್ಟ್&zwnj;ನಿಂದಾಗಿ ಸಂಪೂರ್ಣವಾಗಿ ಹಾನಿಗೊಳಗಾಗಿದ್ದ ದವಡೆಯ ಮೂಳೆಯ ಭಾಗವನ್ನು ಪುನರ್ ನಿರ್ಮಿಸಲು ಮತ್ತು ಬಲಪಡಿಸಲು ಪ್ರಾಣಿಗಳ (Bovine) ಮೂಳೆಯ ಅಂಶವನ್ನು ಬಳಸಿ ಅತ್ಯಾಧುನಿಕ 'ಬೋನ್ ಗ್ರಾಫ್ಟಿಂಗ್' (Bone grafting) ಪ್ರಕ್ರಿಯೆಯನ್ನು ಕೈಗೊಳ್ಳಲಾಯಿತು. ತದನಂತರ ಭವಿಷ್ಯದಲ್ಲಿ ಯಾವುದೇ ರೀತಿಯ ಸೋಂಕು ಮರುಕಳಿಸದಂತೆ ತಡೆಯಲು 'ರೂಟ್ ಕೆನಾಲ್' ಚಿಕಿತ್ಸೆ ನೀಡಲಾಯಿತು. ಅಂತಿಮವಾಗಿ, ಹಲ್ಲುಗಳು ನೈಸರ್ಗಿಕವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ರೋಗಿಯ ದವಡೆಗೆ ಸಂಪೂರ್ಣವಾಗಿ ಹೊಂದುವ ಕಸ್ಟಮೈಸ್ ಮಾಡಿದ 'ಜಿರ್ಕೋನಿಯಾ ಕ್ರೌನ್&zwnj;'ಗಳನ್ನು (Zirconia crowns) ಅಳವಡಿಸಲಾಯಿತು.&lt;/p&gt;&lt;h2&gt;ಸವಾಲನ್ನು ಯಶಸ್ವಿಯಾಗಿ ಎದುರಿಸಿದ ವೈದ್ಯಕೀಯ ತಂಡ&lt;/h2&gt;&lt;p&gt;ಈ ಸಂಕೀರ್ಣ ಶಸ್ತ್ರಚಿಕಿತ್ಸೆಯ ಯಶಸ್ಸಿನ ಕುರಿತು ಮಾತನಾಡಿದ ಪ್ರಮುಖ ವೈದ್ಯರಾದ ಡಾ. ಸ್ಯಾಮ್ಯುಯೆಲ್ ಅವರು, &quot;ಜಾನ್ ಮಿಲ್ಲರ್ ಅವರ ಪ್ರಕರಣವು ವೈದ್ಯಕೀಯವಾಗಿ ಅತ್ಯಂತ ಸವಾಲಿನದ್ದಾಗಿತ್ತು. ಕೇವಲ ಹಲ್ಲಿನ ಸಿಸ್ಟ್ ಅನ್ನು ತೆಗೆದುಹಾಕುವುದು ಮಾತ್ರವಲ್ಲದೆ, ಸಂಪೂರ್ಣವಾಗಿ ಸವದುಹೋಗಿದ್ದ ದವಡೆಯ ಮೂಳೆಯನ್ನು ಮರುನಿರ್ಮಾಣ ಮಾಡುವುದು ಮತ್ತು ಬಾಯಿಯ ಸಹಜ ಚಲನೆಯನ್ನು ಮರಳಿ ತರುವುದು ನಮ್ಮ ಮುಂದಿದ್ದ ದೊಡ್ಡ ಜವಾಬ್ದಾರಿಯಾಗಿತ್ತು. ರೋಗಿಯು ಪ್ರಸ್ತುತ ಸಂಪೂರ್ಣವಾಗಿ ಗುಣಮುಖರಾಗಿ, ಹೊಸ ಆತ್ಮವಿಶ್ವಾಸದೊಂದಿಗೆ ತಮ್ಮ ದೈನಂದಿನ ಜೀವನಕ್ಕೆ ಮರಳಿರುವುದು ನಮ್ಮ ಇಡೀ ತಂಡಕ್ಕೆ ಅತ್ಯಂತ ಹೆಮ್ಮೆ ಮತ್ತು ಸಂತಸ ತಂದಿದೆ,&quot; ಎಂದು ತಿಳಿಸಿದರು.&lt;/p&gt;&lt;h2&gt;ಬೆಂಗಳೂರಿನ ವೈದ್ಯಕೀಯ ಸೇವೆಗೆ ರೋಗಿ ಜಾನ್ ಮಿಲ್ಲರ್ ಪ್ರಶಂಸೆ&lt;/h2&gt;&lt;p&gt;ಚಿಕಿತ್ಸೆಯ ನಂತರ ಅತ್ಯಂತ ಹರ್ಷಚಿತ್ತರಾಗಿ ತಮ್ಮ ಅನುಭವ ಹಂಚಿಕೊಂಡ ರೋಗಿ ಜಾನ್ ಮಿಲ್ಲರ್, &quot;ಕೇವಲ ದಂತ ಚಿಕಿತ್ಸೆಗಾಗಿ ಲಂಡನ್&zwnj;ನಿಂದ ಭಾರತದ ಬೆಂಗಳೂರಿಗೆ ಬರುವುದು ಮೊದಲಿಗೆ ನನಗೆ ಅತ್ಯಂತ ದೊಡ್ಡ ನಿರ್ಧಾರವಾಗಿತ್ತು. ಆದರೆ ನನ್ನ ಚಿಕಿತ್ಸೆ ಮುಗಿದ ನಂತರ ಅದು ನಾನು ತೆಗೆದುಕೊಂಡ ಅತ್ಯಂತ ಸರಿಯಾದ ನಿರ್ಧಾರ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಹ್ಯಾಪಿಯೆಸ್ಟ್ ಪರ್ಲ್ಸ್ ಕ್ಲಿನಿಕ್&zwnj;ನಲ್ಲಿ ನನಗೆ ಸಿಕ್ಕ ಅತ್ಯುನ್ನತ ವೈದ್ಯಕೀಯ ಕಾಳಜಿ, ಪ್ರೀತಿ ಮತ್ತು ಬೆಂಬಲ ನಿಜಕ್ಕೂ ಅಸಾಧಾರಣವಾದದ್ದು. ಚಿಕಿತ್ಸೆ ನೀಡಿದ ಡಾ. ಸ್ಯಾಮ್ಯುಯೆಲ್, ಹಲ್ಲುಗಳ ಸ್ವಚ್ಛತೆ ಮತ್ತು ಸೌಂದರ್ಯವನ್ನು ಮರುಸ್ಥಾಪಿಸಿದ ಡಾ. ಸಾರಾ ಐಸಾಕ್ ಮತ್ತು ಇಡೀ ನರ್ಸಿಂಗ್ ತಂಡಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ. ಪ್ರಸ್ತುತ ನಾನು ಯಾವುದೇ ನೋವಿಲ್ಲದೆ ಆರಾಮವಾಗಿ ಮಾತನಾಡಬಲ್ಲೆ, ಊಟ ಮಾಡಬಲ್ಲೆ ಮತ್ತು ಆತ್ಮವಿಶ್ವಾಸದಿಂದ ನಗಬಲ್ಲೆ,&quot; ಎಂದು ಭಾವುಕರಾಗಿ ನುಡಿದರು.&lt;/p&gt;&lt;h2&gt;ಆರೋಗ್ಯ ರಂಗದಲ್ಲಿ 'ಹ್ಯಾಪಿಯೆಸ್ಟ್ ಹೆಲ್ತ್' ಸಂಸ್ಥೆಯ ವಿನೂತನ ಹೆಜ್ಜೆ&lt;/h2&gt;&lt;p&gt;ಭಾರತದ ಪ್ರಮುಖ ಐಟಿ ಉದ್ಯಮಿ ಅಶೋಕ್ ಸೂಟಾ ಅವರು ಸ್ಥಾಪಿಸಿರುವ 'ಹ್ಯಾಪಿಯೆಸ್ಟ್ ಹೆಲ್ತ್' (Happiest Health) ಸಂಸ್ಥೆಯು ಸದ್ಯ ಆರೋಗ್ಯ ರಂಗದಲ್ಲಿ ವಿನೂತನ ಮಾದರಿಯ ವಿಶ್ವದರ್ಜೆಯ ಸೇವೆಗಳನ್ನು ನೀಡುತ್ತಾ ಮುನ್ನಡೆಯುತ್ತಿದೆ. ಪ್ರಸ್ತುತ ಅತ್ಯಾಧುನಿಕ ದಂತ ಚಿಕಿತ್ಸೆ, ಸಾಂಪ್ರದಾಯಿಕ ಆಯುರ್ವೇದ ಮತ್ತು ಸುಧಾರಿತ ಫಿಸಿಯೋಥೆರಪಿ ಸೇರಿದಂತೆ ಹಲವು ಪ್ರಮುಖ ವಿಭಾಗಗಳಲ್ಲಿ ಯಶಸ್ವಿಯಾಗಿ ಸೇವೆ ಒದಗಿಸುತ್ತಿರುವ ಈ ಸಂಸ್ಥೆಯು, ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗಲು ನರರೋಗ (Neurology), ಹೃದ್ರೋಗ (Cardiology), ಸ್ತ್ರೀರೋಗ (Gynecology) ಮತ್ತು ಮಕ್ಕಳ ಕಾಯಿಲೆ (Pediatrics) ಸೇರಿದಂತೆ ಇನ್ನು ಹಲವಾರು ಮಲ್ಟಿ-ಸ್ಪೆಷಾಲಿಟಿ ಚಿಕಿತ್ಸಾ ವಿಭಾಗಗಳನ್ನು ಶೀಘ್ರದಲ್ಲೇ ಆರಂಭಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/health-life/medical-tourism-success-story-uk-resident-travels-8000-km-to-bengaluru-for-advanced-affordable-dental-surgery-gdp/articleshow-wa04dlo"/>
        </item>
    </channel>
</rss>
