<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 24 Aug 2026 09:39:19 +0530</lastBuildDate>
        <atom:link href="https://kannada.asianetnews.com/rss/karnataka-districts" rel="self" type="application/rss+xml"/>
        <item>
            <title><![CDATA[ಹುಬ್ಬಳ್ಳಿ- ಪುಣೆ- ಪಿಂಪ್ರಿ ನಡುವೆ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ: ಡಿಸ್ಕೌಂಟ್ ಲಭ್ಯ]]></title>
            <link>https://kannada.asianetnews.com/karnataka-districts/daily-nwkrtc-raja-ratha-ac-sleeper-bus-service-starts-between-hubballi-pune-and-pimpri-mrq/articleshow-1eg7rk7</link>
            <guid isPermaLink="true">https://kannada.asianetnews.com/karnataka-districts/daily-nwkrtc-raja-ratha-ac-sleeper-bus-service-starts-between-hubballi-pune-and-pimpri-mrq/articleshow-1eg7rk7</guid>
            <pubDate>Mon, 24 Aug 2026 09:39:13 +0530</pubDate>
            <description><![CDATA[ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿ, ಪುಣೆ ಮತ್ತು ಪಿಂಪ್ರಿ ನಡುವೆ ಪ್ರತಿದಿನ 'ರಾಜರಥ' ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ನೂತನ ಬಸ್ ಸೇವೆಯು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಗುರಿ ಹೊಂದಿದ್ದು, ವೇಳಾಪಟ್ಟಿ, ದರ ಮತ್ತು ಮುಂಗಡ ಬುಕ್ಕಿಂಗ್ ವಿವರಗಳನ್ನು ಒದಗಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rz3b4k9c56tdhe8502fprc,imgname-nwkrtc-raja-ratha-1787544317075.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ -ಪುಣೆ- ಪಿಂಪ್ರಿ ನಡುವೆ ಪ್ರತಿದಿನ ನೂತನ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.&lt;/p&gt;&lt;p&gt;ಈ ಕುರಿತು ಪ್ರಕಟಣೆ ನೀಡಿ, ಉಭಯ ರಾಜ್ಯಗಳ ನಡುವೆ ಪ್ರಯಾಣ ಮಾಡುವವರಿಗೆ ಅನುಕೂಲವಾಗುವಂತೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಈ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಬಸ್ ವೇಳಾ ಪಟ್ಟಿ&lt;/strong&gt;&lt;/h2&gt;&lt;p&gt;ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರತಿದಿನ ರಾತ್ರಿ 9.30ಕ್ಕೆ ಹೊರಡುತ್ತದೆ. ಹೊಸೂರು ಬಸ್ ನಿಲ್ದಾಣದಿಂದ 9.40ಕ್ಕೆ, ನವನಗರ 9.55, ಎಸ್.ಡಿ.ಎಂ. ಆಸ್ಪತ್ರೆ 10.05, ಧಾರವಾಡ ಹೊಸ ಬಸ್ ನಿಲ್ದಾಣದಿಂದ 10.15ಕ್ಕೆ ಹಾಗೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 11.35ಕ್ಕೆ ಹೊರಡುತ್ತದೆ. ಕೊಲ್ಹಾಪುರಕ್ಕೆ ರಾತ್ರಿ1.35ಕ್ಕೆ, ಪುಣೆ ಸ್ವಾರಗೇಟ್ ಬಸ್ ನಿಲ್ದಾಣಕ್ಕೆ ಬೆಳಗ್ಗೆ 6ಕ್ಕೆ ಹಾಗೂ ಪಿಂಪ್ರಿಗೆ 6.30ಕ್ಕೆ ತಲುಪುತ್ತದೆ.&lt;/p&gt;&lt;p&gt;ಪಿಂಪ್ರಿ ಬಸ್ ನಿಲ್ದಾಣದಿಂದ ರಾತ್ರಿ 9.30ಕ್ಕೆ ಹಾಗೂ ಪುಣೆ ಸ್ವಾರಗೇಟ್ ಬಸ್ ನಿಲ್ದಾಣದಿಂದ 10.15ಕ್ಕೆ ಹೊರಡುತ್ತದೆ. ಬೆಳಗಾವಿಗೆ ಮರುದಿನ ಬೆಳಗ್ಗೆ 4.15, ಧಾರವಾಡಕ್ಕೆ 5.40 ಹಾಗೂ ಹುಬ್ಬಳ್ಳಿಗೆ 6.30ಕ್ಕೆ ಆಗಮಿಸುತ್ತದೆ.&lt;/p&gt;&lt;p&gt;ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ ಹುಬ್ಬಳ್ಳಿಯಿಂದ ಪುಣೆಗೆ ₹1202 ಹಾಗೂ ಪಿಂಪ್ರಿಗೆ ₹1252 ನಿಗದಿಪಡಿಸಲಾಗಿದೆ.&lt;/p&gt;&lt;h3&gt;&lt;strong&gt;ಮುಂಗಡ ಬುಕ್ಕಿಂಗ್, ರಿಯಾಯಿತಿ&lt;/strong&gt;&lt;/h3&gt;&lt;p&gt;ಸಾರ್ವಜನಿಕರು www.ksrtc.in ವೆಬ್ ಸೈಟ್, KSRTC Mobile App, ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ಇತರ ಪ್ರಮುಖ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಒಂದೇ ಟಿಕೆಟ್&zwnj;ನಲ್ಲಿ 4 ಅಥವಾ ಹೆಚ್ಚು ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣದರದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಖರೀದಿಸಿದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತದಡಿ-ಅಘನಾಶಿನಿ ಬಾರ್ಜ್&zwnj;ನ ಪ್ರಯಾಣದ ದರ ಪಟ್ಟಿ ಅಳವಡಿಸಲು ಸಿದ್ಧತೆ; ಪ್ರಯಾಣಿಕರಲ್ಲಿ ಗೊಂದಲ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/daily-nwkrtc-raja-ratha-ac-sleeper-bus-service-starts-between-hubballi-pune-and-pimpri-mrq/articleshow-1eg7rk7"/>
        </item>
        <item>
            <title><![CDATA[ತದಡಿ-ಅಘನಾಶಿನಿ ಬಾರ್ಜ್‌ನ ಪ್ರಯಾಣದ ದರ ಪಟ್ಟಿ ಅಳವಡಿಸಲು ಸಿದ್ಧತೆ; ಪ್ರಯಾಣಿಕರಲ್ಲಿ ಗೊಂದಲ]]></title>
            <link>https://kannada.asianetnews.com/karnataka-districts/uttara-kananda-gokarna-preparations-to-implement-fare-schedule-for-tadadi-aghanashini-barge-journey-mrq/articleshow-ygah42d</link>
            <guid isPermaLink="true">https://kannada.asianetnews.com/karnataka-districts/uttara-kananda-gokarna-preparations-to-implement-fare-schedule-for-tadadi-aghanashini-barge-journey-mrq/articleshow-ygah42d</guid>
            <pubDate>Mon, 24 Aug 2026 08:46:33 +0530</pubDate>
            <description><![CDATA[ತದಡಿ-ಅಘನಾಶಿನಿ ನಡುವಿನ ಬಾರ್ಜ್ ಸೇವೆಗೆ ಕೊನೆಗೂ ದರಪಟ್ಟಿ ಅಳವಡಿಸಲಾಗುತ್ತಿದ್ದು, ಇಲಾಖೆ ನಿಗದಿತ ದರಕ್ಕಿಂತ ಹೆಚ್ಚಳ ಮಾಡಲಾಗಿದೆ. ಈ ಹೊಸ ದರಪಟ್ಟಿಯು ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ದರ ತಾರತಮ್ಯದ ಅನುಮಾನ ಮೂಡಿಸಿ, ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rw6xxy8hccs9ktge32wnft,imgname-aghanashini-tadadi-port-1787541288894.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೋಕರ್ಣ:&lt;/strong&gt; ತದಡಿ-ಅಘನಾಶಿನಿ ನಡುವೆ ಸಂಚರಿಸುವ ಬಾರ್ಜ್&zwnj;ನ ಪ್ರಯಾಣದ ದರ ಪಟ್ಟಿಯನ್ನು ಅಂತೂ ಅಳವಡಿಸಲು ಸಿದ್ಧತೆ ನಡೆದಿದೆ. ಗೋಕರ್ಣದಿಂದ ಕುಮಟಾಕ್ಕೆ ತೆರಳುವ ನಿತ್ಯ ಪ್ರಯಾಣಿಕರು, ಹಾಗೂ ಅಘನಾಶಿನಿ, ಬಾಡ ಕಡೆ ತೆರಳುವ ಪ್ರವಾಸಿಗರು ಈ ಬಾರ್ಜ ಅವಲಂಬಿಸಿದ್ದಾರೆ.&lt;/p&gt;&lt;p&gt;ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಿಂದ ಎರಡು ವರ್ಷದ ಹಿಂದೆ ಟೆಂಡರ್ ಮೂಲಕ ಬಾರ್ಜ ನಡೆಸಲು ಖಾಸಗಿಯರಿಗೆ ನೀಡಲಾಗಿತ್ತು. ಆದರೆ ಇಲಾಖೆಯ ನಿಯಮದಂತೆ ಪ್ರಯಾಣದರ ಆಕರಿಸದೆ ದುಪ್ಪಟ್ಟು ಹಣ ಪಡೆಯಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿ, ದರಪಟ್ಟಿ ಹಾಕುವಂತೆ ಆಗ್ರಹಿಸಿದ್ದರು. ಈ ಕುರಿತು ನಿರಂತರ ಪತ್ರಿಕೆ ವರದಿ ಪ್ರಕಟಿಸಿ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿವರಿಸಿತ್ತು. ಇದರ ಪರಿಣಾಮ ಬಾರ್ಜ್&zwnj; ನಡೆಸುವವರು ದರ ಪಟ್ಟಿಯನ್ನು ಹಾಕಿದ್ದಾರೆ.&lt;/p&gt;&lt;h2&gt;&lt;strong&gt;ದರ ಹೆಚ್ಚಳದ ನಾಮಫಲಕ&lt;/strong&gt;&lt;/h2&gt;&lt;p&gt;ಇಲಾಖೆ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ತೋರಿಸಲಾಗಿದೆ. ಪ್ರಸ್ತುತ ಡಿಸೇಲ್ ದರ ಏರಿಕೆ, ಕೆಲಸಗಾರರ ಸಂಬಳ, ನಿರ್ವಹಣೆ ಕಾರಣದಿಂದ ದರ ಹೆಚ್ಚಿಸಲಾಗಿದೆ ಎಂದು ನಾಮಫಲಕದಲ್ಲಿ ತಿಳಿಸಲಾಗಿದೆ. ಆದರೆ ಇದಕ್ಕೆ ಇಲಾಖೆ ಅನುಮತಿ ಇದೆಯೇ ಎಂಬುದು ತಿಳಿಯದಾಗಿದೆ.&lt;/p&gt;&lt;p&gt;ಇನ್ನು ಈ ದರ ಪಟ್ಟಿಯಲ್ಲಿ ಸ್ಥಳೀಯರಿಗೆ ಎಂದು ದರ ನಮೂದಿಸಲಾದೆ. ಇದರಿಂದ ಪ್ರವಾಸಿಗರಿಗೆ ಹಾಗೂ ಹೊರಗಿನವರಿಗೆ ಇದಕ್ಕೂ ಹೆಚ್ಚು ಹಣ ಪಡೆಯುತ್ತಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಕನ್ನಡದಲ್ಲಿ ಮಾತ್ರ ದರಪಟ್ಟಿ ಹಾಕಿದ್ದು, ಉಳಿದ ಭಾಷೆಯಲ್ಲೂ ನಮೂದು ಮಾಡಬೇಕಿದೆ.&lt;/p&gt;&lt;h3&gt;&lt;strong&gt;ದರ ಎಷ್ಟು?&lt;/strong&gt;&lt;/h3&gt;&lt;p&gt;ಈ ಮೊದಲು ಜನರಿಗೆ ₹5, ದ್ವಿಚಕ್ರವಾಹನಕ್ಕೆ ₹10 ಇಲಾಖೆಯಿಂದ ನಿಗದಿ ಮಾಡಲಾಗಿತ್ತು. ಆದರೂ ಹೆಚ್ಚು ಹಣ ಪಡೆಯುತ್ತಿದ್ದರು. ಹೊಸ ದರಪಟ್ಟಿಯಲ್ಲಿ ಸ್ಥಳೀಯ ಪ್ರಯಾಣಿಕರಿಗೆ 20, ಸ್ಥಳೀಯ ದ್ವಿಚಕ್ರವಾಹನ್ನಕ್ಕೆ 20 ಎಂದು ನಮೂದಿಸಿದ್ದಾರೆ. ಆದರೆ ಪ್ರವಾಸಿಗರಿಗೆ ಎಷ್ಟು ಹಣ ಎಂದು ಎಲ್ಲಿಯೂ ನಮೂದಿಸಿಲ್ಲ, ಹಿಂದೆ ₹50 ಪಡೆಯುತ್ತಿದ್ದು, ಪ್ರಸ್ತುತ ಎಷ್ಟು ತೆಗೆದುಕೊಳ್ಳುತ್ತಾರೆ ಎಂಬುದು ತಿಳಿಯದಾಗಿದ್ದು, ಪ್ರವಾಸಿಗರು ಎಂದರೆ ಎಲ್ಲರಂತೆ ಪ್ರಯಾಣಿಕರೇ ಆಗಿದ್ದು, ಎಲ್ಲರಿಗೂ ಒಂದೇ ದರ ನಿಗದಿಪಡಿಸುವಂತೆ ಇಲಾಖೆ ಕ್ರಮವಹಿಸಬೇಕಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳನ್ನ ಸಂಪರ್ಕಿಸಲು ಪತ್ರಿಕೆ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kananda-gokarna-preparations-to-implement-fare-schedule-for-tadadi-aghanashini-barge-journey-mrq/articleshow-ygah42d"/>
        </item>
        <item>
            <title><![CDATA[ಸರ್ಕಾರಿ ಕೆಪಿಎಸ್‌ ಶಾಲೆಗಳಿಗೆ ಸ್ವಂತ ಬಸ್‌ ಸೌಲಭ್ಯ: ಶಿಕ್ಷಣ ಸಚಿವ ಮಧು ಬಂಗಾರಪ್ಪ]]></title>
            <link>https://kannada.asianetnews.com/karnataka-districts/government-kps-schools-to-get-their-own-bus-facility-education-minister-madhu-bangarappa-announces-mrq/articleshow-b2sylu5</link>
            <guid isPermaLink="true">https://kannada.asianetnews.com/karnataka-districts/government-kps-schools-to-get-their-own-bus-facility-education-minister-madhu-bangarappa-announces-mrq/articleshow-b2sylu5</guid>
            <pubDate>Mon, 24 Aug 2026 08:37:37 +0530</pubDate>
            <description><![CDATA[ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಕೆಪಿಎಸ್&zwnj; ಶಾಲೆಗಳಿಗೆ ಸ್ವಂತ ಬಸ್&zwnj; ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿದ್ದಾರೆ. ಆನವಟ್ಟಿಯಲ್ಲಿ 50 ಲಕ್ಷ ರೂ. ವೆಚ್ಚದ ರಂಗಮಂದಿರಕ್ಕೆ ಭೂಮಿಪೂಜೆ ನೆರವೇರಿಸಿದ ಅವರು, ಭಾರತ್&zwnj; ಜೋಡೊ ಯುವ ಸಂಘವನ್ನು ಉದ್ಘಾಟಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0rvrbbqhej50fy71ae12t6p,imgname-madhu-bangarappa-1787540811127.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ&lt;/strong&gt;: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಕೆಪಿಎಸ್&zwnj; ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕರೆತಂದು, ಶಾಲೆ ಮುಗಿದ ಬಳಿಕ ಮನೆಗೆ ಬಿಟ್ಟುಬರಲು ಸರ್ಕಾರದಿಂದಲೇ ಸ್ವಂತ ಬಸ್&zwnj; ಸೌಲಭ್ಯ ಕಲ್ಪಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.&lt;/p&gt;&lt;p&gt;ಭಾನುವಾರ ಆನವಟ್ಟಿ ಕೆಪಿಎಸ್&zwnj; ಶಾಲೆಯಲ್ಲಿ 50 ಲಕ್ಷ ರು. ಅನುದಾನದಲ್ಲಿ ರಂಗಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ಭಾರತ್&zwnj; ಜೋಡೊ ಯುವ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ಶಾಲೆ-ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸದ್ಯಕ್ಕೆ ಕೆಎಸ್&zwnj;ಆರ್&zwnj;ಟಿಸಿ ಬಸ್&zwnj; ಸೌಲಭ್ಯ ಕಲ್ಪಿಸಲಾಗುವುದು ಎಂದರು.&lt;/p&gt;&lt;h2&gt;&lt;strong&gt;ಜಿಲ್ಲೆಗೆ ಹೊಸದಾಗಿ 24 ಕೆಪಿಎಸ್&zwnj; ಶಾಲೆ&lt;/strong&gt;&lt;/h2&gt;&lt;p&gt;ಸುಮಾರು ನಾಲ್ಕು ಸಾವಿರ ಕೋಟಿ ವೆಚ್ಚದಲ್ಲಿ ಹೊಸದಾಗಿ ಒಂದು ಸಾವಿರ ಕೆಪಿಎಸ್&zwnj; ಶಾಲೆಗಳನ್ನು ರಾಜ್ಯದಲ್ಲಿ ತೆರೆಯಲು ಉದ್ದೇಶಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಹೊಸದಾಗಿ 24 ಕೆಪಿಎಸ್&zwnj; ಶಾಲೆಗಳನ್ನು ಮಂಜೂರು ಮಾಡಲಾಗುವುದು ಎಂದರು.&lt;/p&gt;&lt;p&gt;ಹಿಂದೆ ಇದ್ದ ರಂಗಮಂದಿರವನ್ನು ಅನುದಾನ ನೀಡದೆ ನೆಲಸಮ ಮಾಡಲಾಗಿತ್ತು. ಯಾವ ಕಾರಣಕ್ಕಾಗಿ ಅದನ್ನು ನೆಲಸಮಗೊಳಿಸಲಾಯಿತು ಎಂಬುದರ ಕುರಿತು ನಾನು ಚರ್ಚಿಸುವುದಿಲ್ಲ. ಆದರೆ, ಆ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತು 50 ಲಕ್ಷ ರು. ಅನುದಾನ ನೀಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.&lt;/p&gt;&lt;h3&gt;&lt;strong&gt;ಭಾರತ್&zwnj; ಜೋಡೊ ಯುವ ಸಂಘ&lt;/strong&gt;&lt;/h3&gt;&lt;p&gt;ಕ್ರೀಡೆ, ನಾಟಕ, ಸಾಂಸ್ಕೃತಿಕ ಚಟುವಟಿಕೆ, ಸಾಮಾಜಿಕ ಸೇವೆ ಹಾಗೂ ಯುವಜನರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಭಾರತ್&zwnj; ಜೋಡೊ ಯುವ ಸಂಘವನ್ನು ರಚಿಸಲಾಗಿದೆ. 16 ರಿಂದ 35 ವರ್ಷ ಒಳಗಿನ ಯುವಕ-ಯುವತಿಯರು ಸಂಘದ ಸದಸ್ಯರಾಲು ಅರ್ಹರು. ಸಂಘದ ಉದ್ದೇಶಗಳನ್ನು ಯುವಕ-ಯುವತಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಎನ್&zwnj;ಸಿಸಿ ಘಟಕಕ್ಕೆ ಅನುದಾನಕ್ಕೆ ಮನವಿ: ಎನ್&zwnj;ಸಿಸಿ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಅನುದಾನ ಸಕಾಲದಲ್ಲಿ ಬಿಡುಗಡೆಯಾಗಿಲ್ಲ. ಅನುದಾನವನ್ನು ಆದಷ್ಟು ಬೇಗ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಬೇಕು ಎಂದು ಎನ್&zwnj;ಸಿಸಿ ವಿದ್ಯಾರ್ಥಿಗಳು ಸಚಿವರಲ್ಲಿ ಮನವಿ ಮಾಡಿದರು.&lt;/p&gt;&lt;p&gt;ಸಮಾರಂಭದಲ್ಲಿ ಉಪಪ್ರಾಂಶುಪಾಲ ಎಂ. ಮಹಾದೇವಪ್ಪ, ಸಿಡಿಸಿ ಉಪಾಧ್ಯಕ್ಷ ನಾಗರಾಜ ಶುಂಠಿ, ಸದಸ್ಯ ಎಂ. ಸುರೇಶ್&zwnj; ಕುಬಟೂರು, ಕಾಂಗ್ರೆಸ್&zwnj; ಆನವಟ್ಟಿ ಬ್ಲಾಕ್&zwnj; ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಡಿಸಿಸಿ ಬ್ಯಾಂಕ್&zwnj; ನಿರ್ದೇಶಕ ಕೆ.ಪಿ. ರುದ್ರಗೌಡ, ಶಿವಲಿಂಗೇಗೌಡ, ಮುಖಂಡರಾದ ಮಧುಕೇಶ್ವರ ಪಾಟೀಲ್&zwnj;, ಸಿದ್ದಲಿಂಗೇಶ್&zwnj;, ಸುರೇಶ್&zwnj; ಹಾವಣ್ಣನವರ್&zwnj;, ಸಂಜಿವ ನೇರಲಗಿ, ಚಾಂದ್&zwnj; ಸಾಬ್&zwnj;, ಹಬಿಬುಲ್ಲಾ ಹವಾಲ್ದಾರ್&zwnj;, ಪರಮೇಶ್&zwnj; ನೆಗವಾಡಿ, ಅರುಣ ಸಮನವಳ್ಳಿ ಉಪಸ್ಥಿತರಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/government-kps-schools-to-get-their-own-bus-facility-education-minister-madhu-bangarappa-announces-mrq/articleshow-b2sylu5"/>
        </item>
        <item>
            <title><![CDATA[ಭೂತ ಬಿಡಿಸುವ ನೆಪದಲ್ಲಿ ಯುವತಿಗೆ ಕ್ರೂರ ಹಿಂಸೆ: ಕೋಳಿ ರಕ್ತ ಕುಡಿಯುವಂತೆ ಬೆದರಿಕೆ!]]></title>
            <link>https://kannada.asianetnews.com/karnataka-districts/chikkamagaluru-horror-girl-tortured-in-exorcism-ritual-case-registered-in-koppa-gdp/articleshow-967akga</link>
            <guid isPermaLink="true">https://kannada.asianetnews.com/karnataka-districts/chikkamagaluru-horror-girl-tortured-in-exorcism-ritual-case-registered-in-koppa-gdp/articleshow-967akga</guid>
            <pubDate>Mon, 24 Aug 2026 08:31:13 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಭೂತ ಬಿಡಿಸುವ ನೆಪದಲ್ಲಿ ಯುವತಿಗೆ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ದೈವಾರಾಧನೆ ಹೆಸರಿನಲ್ಲಿ ಕೋಳಿ ರಕ್ತ ಕುಡಿಯಲು ಒತ್ತಾಯಿಸಿ ಹಿಂಸಿಸಿದ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಆದರೆ, ಇದು ತನ್ನ ವಿರುದ್ಧದ ಪಿತೂರಿ ಎಂದು ಆರೋಪಿ ಪಾತ್ರಿ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqc21p7dsn5kvndff0eycgd6,imgname-bungalow-horror-story-1777447524589.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪ (ಚಿಕ್ಕಮಗಳೂರು): &lt;/strong&gt;ಭೂತ, ಪ್ರೇತ ಬಿಡಿಸುವ ನೆಪದಲ್ಲಿ ಯುವತಿಗೆ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ಸತೀಶ್ ಪಾತ್ರಿ ಎಂಬುವರು ನಿರ್ಮಿಸಿರುವ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ದೈವಾರಾಧನೆ ಹಾಗೂ ವಶೀಕರಣದ ಹೆಸರಿನಲ್ಲಿ ಯುವತಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.&lt;/p&gt;&lt;p&gt;ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಲಾಗಿದೆ, ರಕ್ತಾಹಾರ ಸ್ವೀಕರಿಸದಿದ್ದರೆ, ಬಾಯಿಯಲ್ಲಿ ಕರ್ಪೂರ ಇಡುವ ಬೆದರಿಕೆ ಹಾಕಲಾಗಿದೆ. ಜೊತೆಗೆ ಇನ್ನಿತರ ಹಿಂಸೆಯನ್ನು ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಈ ಸಂಬಂಧ ಕರಾವಳಿ ಹಾಗೂ ಮಲೆನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಎನ್&zwnj;ಆರ್&zwnj; ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ಹಳೆಯ ವಿಡಿಯೋ-ಪಾತ್ರಿ:&lt;/h2&gt;&lt;p&gt;ವಿಡಿಯೋ ವೈರಲ್ ಆದ ಬೆನ್ನಲ್ಲೇ ಸತೀಶ್&zwnj; ಪಾತ್ರಿ ಪ್ರತಿಕ್ರಿಯಿಸಿದ್ದು, ನಾನು ದರ್ಶನ ಮಾಡಿ ಒಂದೂವರೆ ವರ್ಷಗಳು ಕಳೆದಿವೆ. ಈ ವಿಡಿಯೋ 3 ವರ್ಷಗಳ ಹಳೆಯದ್ದಾಗಿದ್ದು, ದೇಗುಲದ ಹಳೆಯ ಧರ್ಮದರ್ಶಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chikkamagaluru-horror-girl-tortured-in-exorcism-ritual-case-registered-in-koppa-gdp/articleshow-967akga"/>
        </item>
        <item>
            <title><![CDATA[ಸರಿಗಮಪ ವಿನ್ನರ್ ಶಿವಾನಿ ಈಗ ಸಾಂಸ್ಕೃತಿಕ ರಾಯಭಾರಿ: 8 ಪ್ರತಿಷ್ಠಿತ ಪ್ರಶಸ್ತಿಗಳ ಒಡತಿ]]></title>
            <link>https://kannada.asianetnews.com/karnataka-districts/zee-kannada-sa-re-ga-ma-pa-winner-shivani-is-now-cultural-ambassador-winner-of-8-prestigious-awards-mrq/articleshow-b3uiocc</link>
            <guid isPermaLink="true">https://kannada.asianetnews.com/karnataka-districts/zee-kannada-sa-re-ga-ma-pa-winner-shivani-is-now-cultural-ambassador-winner-of-8-prestigious-awards-mrq/articleshow-b3uiocc</guid>
            <pubDate>Mon, 24 Aug 2026 07:24:39 +0530</pubDate>
            <description><![CDATA[ಮುಂಬೈನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನಡೆಸಿದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಬೀದರ್&zwnj;ನ ಗಾಯಕಿ ಶಿವಾನಿ ಶಿವದಾಸಸ್ವಾಮಿ ದೇಶಕ್ಕೆ ಪ್ರಥಮ ರ&zwj;್ಯಾಂಕ್&zwnj; ಗಳಿಸಿದ್ದಾರೆ. ಈ ಸಾಧನೆಗಾಗಿ ಅವರು ಒಟ್ಟು 8 ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ತಮ್ಮ ಈ ಯಶಸ್ಸಿಗೆ ಗುರುಗಳು, ಕುಟುಂಬ ಮತ್ತು ಬೀದರ್ ಜನತೆಯ ಪ್ರೋತ್ಸಾಹವೇ ಕಾರಣವೆಂದು ಸಂತಸ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rqjhsb48hqz92dk9ebycrf,imgname-shivani-1787536426795.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&zwnj;: &lt;/strong&gt;ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ, ಮುಂಬೈ ವತಿಯಿಂದ ನವೆಂಬರ್&zwnj;- ಡಿಸೆಂಬರ್&zwnj; 2024ರಲ್ಲಿ ನಡೆದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ&zwj;್ಯಾಂಕ್&zwnj; ಗಳಿಸುವುದರ ಜೊತೆಗೆ ಗಾಯನ ವಿಷಯದಲ್ಲಿಯೂ ಅತ್ಯುನ್ನತ ಅಂಕಗಳನ್ನು ಪಡೆದಿರುವ ಖ್ಯಾತ ಗಾಯಕಿ ಶಿವಾನಿ ಶಿವದಾಸಸ್ವಾಮಿ ಒಟ್ಟು 8 ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಾನಿ ಶಿವದಾಸ ಸ್ವಾಮಿ, ಈ ಸಾಧನೆ ತನ್ನ ಜೀವನದ ಮಹತ್ವದ ಮೈಲಿಗಲ್ಲಾಗಿದ್ದು, ದೇಶದಾದ್ಯಂತ ತನ್ನ ಪ್ರತಿಭೆಯನ್ನು ಗುರುತಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಎಂಟು ಪ್ರಶಸ್ತಿಗಳನ್ನು ಪ್ರದಾನ&lt;/strong&gt;&lt;/h2&gt;&lt;p&gt;ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ದೀಕ್ಷಾಂತ ಸಮಾರಂಭವು ಆಗಸ್ಟ್&zwnj; 22ರಂದು ನವಿಮುಂಬೈನ ವಾಶಿಯ ವಿಷ್ಣುದಾಸ ಭಾವೆ ನಾಟ್ಯಗೃಹದಲ್ಲಿ ನಡೆದಿದ್ದು, ಸಮಾರಂಭದಲ್ಲಿ ತನಗೆ ಪ್ರೀತಮ್&zwnj; ಕೌರ್&zwnj; ಸೌದಿ ಪ್ರಶಸ್ತಿ, ದಿ. ಪಂ. ದಿ.ವಿ.ಪಾಲುಸ್ಕರ್&zwnj; ಪ್ರಶಸ್ತಿ, ಸೌ.ನಳಿನಿ ಪ್ರತಾಪ್ ಕಾನವಿಂದೆ ಪ್ರಶಸ್ತಿ, ಪ್ರಾ. ವಾಸುದೇವ ಚಿಂತಾಮಣಿ ವಾಘಮಾರೆ ಪ್ರಶಸ್ತಿ, ಹರಿಓಂ ಟ್ರಸ್ಟ್&zwnj; (ಗಾಯನ) ಪ್ರಥಮ ಪ್ರಶಸ್ತಿ,, ಶ್ರೀ ಹರಿಶ್ಚಂದ್ರ ಬಾಳಕೃಷ್ಣ ಪೋತದಾರ್&zwnj; ಪ್ರಶಸ್ತಿ,, ಪಂ. ನಾ.ಕೃ. ಕ-ಹಾಡೆ ಸ್ಮೃತಿ ಪ್ರಶಸ್ತಿ ಹಾಗೂ ದಿ.ಸೌ.ಪ್ರಾಜಕ್ತಾ ಪುರುಷೋತ್ತಮ ಕುಲಕರ್ಣಿ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.&lt;/p&gt;&lt;p&gt;ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮುಂಬೈ ವತಿಯಿಂದ ನವೆಂಬರ್&zwnj;&ndash;ಡಿಸೆಂಬರ್&zwnj; ಅವಧಿಯಲ್ಲಿ ನಡೆಸಿದ ಸಂಗೀತ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿಯೇ ಪ್ರಥಮ ರ&zwj;್ಯಾಂಕ್&zwnj; ಪಡೆದಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಈ ಸಾಧನೆ ನನ್ನೊಬ್ಬಳದ್ದಲ್ಲ. ನನ್ನನ್ನು ಪ್ರೋತ್ಸಾಹಿಸಿದ ಗುರುಗಳು, ತಂದೆ ತಾಯಿ, ಕುಟುಂಬಸ್ಥರು ಹಾಗೂ ಬೀದರ್&zwnj; ಜನರ ಸಹಕಾರವೇ ಇದಕ್ಕೆ ಕಾರಣ ಎಂದು ಶಿವಾನಿ ಹೇಳಿದರು.&lt;/p&gt;&lt;h3&gt;&lt;strong&gt;ಶಿವಾನಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು: ರಾಮಕೃಷ್ಣನ್&zwnj; ಸಾಳೆ:&lt;/strong&gt;&lt;/h3&gt;&lt;p&gt;ಶಿವಾನಿ ಅವರ ಅಪರೂಪದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಅಗತ್ಯ ಸರ್ಕಾರಿ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ವಿಶ್ವ ಹಿಂದು ಪರಿಷತ್&zwnj;ನ ರಾಮಕೃಷ್ಣನ್&zwnj; ಸಾಳೆ ಒತ್ತಾಯಿಸಿದರು. ಇಂತಹ ಪ್ರತಿಭೆಗಳನ್ನು ಬೆಳೆಸುವ ಮೂಲಕ ಬೀದರ್&zwnj; ಜಿಲ್ಲೆ ಹಾಗೂ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಬಹುದು. ಶಿವಾನಿ ಅವರು ಇದೀಗ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದು, ಅವರಿಗೆ ಸರ್ಕಾರದ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.&lt;/p&gt;&lt;h3&gt;&lt;strong&gt;ರಾಷ್ಟ್ರಮಟ್ಟದಲ್ಲಿ ಶಿವಾನಿ ಹೆಸರು ಶಿಫಾರಸ್ಸು ಮಾಡಲಿ - ಪವಾರ್ :&lt;/strong&gt;&lt;/h3&gt;&lt;p&gt;ರಾಜ್ಯ ಸರ್ಕಾರವು ಶಿವಾನಿ ಅವರ ಸಾಧನೆಯನ್ನು ಪರಿಗಣಿಸಿ ಅವರ ಹೆಸರನ್ನು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಹಾಗೂ ಗೌರವಗಳಿಗೆ ಶಿಫಾರಸು ಮಾಡಬೇಕು ಎಂದು ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ ಡಾ. ರಾಜೇಂದ್ರ ಸಿಂಗ್&zwnj; ಪವಾರ್&zwnj; ಆಗ್ರಹಿಸಿದರು.&lt;/p&gt;&lt;p&gt;ಸಂಗೀತ ಕ್ಷೇತ್ರದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಶಿಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರ ಹಾಗೂ ಸಮಾಜವು ಶಿವಾನಿ ಅವರ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಕನ್ನಡಾಂಬೆಯ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಉದಯ ಪಾಟೀಲ್&zwnj;, ಶಿವಾನಿಯ ತಾಯಿ ಕವಿತಾ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.&lt;/p&gt;&lt;p&gt;--&lt;/p&gt;&lt;p&gt;ಮಗಳಿಗೆ ನಾವು ಜನ್ಮ ನೀಡಿರಬಹುದು ಆದರೆ ಆಕೆಯ ಪ್ರತಿಭೆಯನ್ನು ಬೆಳೆಸುತ್ತಿರುವುದು, ಪ್ರೋತ್ಸಾಹಿಸುತ್ತಿರುವುದು ಹಾಗೂ ಬೆಂಬಲಿಸುತ್ತಿರುವುದು ಇಡೀ ಸಮಾಜ. ಜನರು ನೀಡುತ್ತಿರುವ ಪ್ರೀತಿ ಮತ್ತು ಸಹಕಾರದಿಂದಲೇ ಶಿವಾನಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಮುಂದೆಯೂ ಎಲ್ಲರೂ ಸಹಕರಿಸಿ, ಪ್ರೋತ್ಸಾಹಿಸಿ ಎಂದು ಶಿವಾನಿ ತಂದೆ ಶಿವದಾಸ ಸ್ವಾಮಿ ಹೇಳುತ್ತಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/zee-kannada-sa-re-ga-ma-pa-winner-shivani-is-now-cultural-ambassador-winner-of-8-prestigious-awards-mrq/articleshow-b3uiocc"/>
        </item>
        <item>
            <title><![CDATA[ಬೆಲೆ ಕುಸಿತ: ಟೊಮ್ಯಾಟೋ 1 ರೂ, ಕೊತ್ತಂಬರಿ 3 ರೂ, ಲೋಡ್‌ ತಂದು ರಸ್ತೆಗೆ ಎಸೆದ ರೈತ!]]></title>
            <link>https://kannada.asianetnews.com/karnataka-districts/karnataka-tomato-and-coriander-price-crash-farmers-dump-crops-amid-severe-losses-gdp/articleshow-n15b15y</link>
            <guid isPermaLink="true">https://kannada.asianetnews.com/karnataka-districts/karnataka-tomato-and-coriander-price-crash-farmers-dump-crops-amid-severe-losses-gdp/articleshow-n15b15y</guid>
            <pubDate>Mon, 24 Aug 2026 07:15:51 +0530</pubDate>
            <description><![CDATA[ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿದಿದ್ದರಿಂದ ಬೆಳಗಾವಿಯಲ್ಲಿ ರೈತರು ಬೆಳೆಯನ್ನು ರಸ್ತೆಗೆ ಎಸೆದರೆ, ದಾವಣಗೆರೆಯಲ್ಲಿ ಟೊಮ್ಯಾಟೋಗೆ ಕೆಜಿಗೆ ಕೇವಲ 1 ರೂ. ಸಿಕ್ಕಿದ್ದರಿಂದ ಕಟಾವು ಮಾಡದೆ ಗಿಡದಲ್ಲೇ ಬಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rphwne24j3veesfw9h2c98,imgname-kottabmari-1787535356589.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿ/ ದಾವಣಗೆರೆ: ಹಾಕಿದ ಬಂಡವಾಳವೂ ಬಾರದೆ ರೈತರು ತಾವು ಬೆಳೆದ ಕೊತ್ತಂಬರಿ ಸೊಪ್ಪು ಮತ್ತು ಟೊಮ್ಯಾಟೋ ಬೆಳೆಯನ್ನು ರಸ್ತೆ ಬಿಸಾಡಿದ ಘಟನೆಯು ಭಾನುವಾರ ನಡೆದಿದೆ.&lt;/p&gt;&lt;p&gt;ಬೆಳಗಾವಿಯ ರಾಯಭಾಗದಲ್ಲಿ 2 ದಿನಗಳ ಹಿಂದೆ ಕಟ್ಟಿಗೆ 10ರಿಂದ 15 ರು.ವರೆಗೆ ಮಾರಾಟವಾಗುತ್ತಿದ್ದ ಕೊತ್ತಂಬರಿ ಸೊಪ್ಪಿಗೆ ಶನಿವಾರ ಸಂಜೆ 10 ರು.ಗೆ ಮೂರು ಕಟ್ಟುಗಳು ಮಾರಾಟವಾಗುತ್ತಿದ್ದವು. ಆದರೆ ಭಾನುವಾರ 3ರಿಂದ 5 ರು.ಗೆ ಕುಸಿತವಾಗಿದೆ. ಪರಿಣಾಮ ಖರ್ಚು ಮಾಡಿದ್ದ ಮೊತ್ತವೂ ಬಾರದ ಹಿನ್ನೆಲೆ ಅಸಮಾಧಾನದಿಂದ ರೈತರು, ಸೊಪ್ಪನ್ನು ರಸ್ತೆ ಬಿಸಾಡಿದ್ದಾರೆ.&lt;/p&gt;&lt;h2&gt;ಟೊಮ್ಯಾಟೋ ಕೇಜಿಗೆ ₹1:&lt;/h2&gt;&lt;p&gt;ಮತ್ತೊಂದೆಡೆ ದಾವಣಗೆರೆಯಲ್ಲಿ ಟೊಮ್ಯಾಟೋ ಬೆಲೆ ದಿಢೀರ್&zwnj; ಕುಸಿತವು ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. ಕೇಜಿಗೆ ಕೇವಲ 1 ರು.ಗೆ ಕುಸಿತದಿಂದಾಗಿ 80 ಸಾವಿರ ರು.ನಿಂದ 1 ಲಕ್ಷ ರು.ವರೆಗೆ ಬಂಡವಾಳ ಹೂಡಿದ್ದ ಕಿಂಚಿತ್ತೂ ಮೊತ್ತ ದೊರೆಯದ ಕಾರಣ ಕಟಾವು ಮಾಡದೆ ಗಿಡಗಳಲ್ಲಿಯೇ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ಕೈಗೆ ಬಂದಿದ್ದ ಟೊಮ್ಯಾಟೋ ಫಸಲು ಮಣ್ಣುಪಾಲಾಗುತ್ತಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ತಾಲೂಕುಗಳಲ್ಲಿ ರೈತರಿಗೆ ದಿಕ್ಕು ತೋಚದಂತಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-tomato-and-coriander-price-crash-farmers-dump-crops-amid-severe-losses-gdp/articleshow-n15b15y"/>
        </item>
        <item>
            <title><![CDATA[2000-2002ನೇ ಸಾಲಿನ ಕನ್ನಡ ಎಂ.ಎ. ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ: ಕುವೆಂಪು ವಿಶ್ವವಿದ್ಯಾಲಯ]]></title>
            <link>https://kannada.asianetnews.com/karnataka-districts/shivamogga-kuvempu-university-kannada-ma-students-get-together-friends-meet-after-25-years-mrq/articleshow-17h598h</link>
            <guid isPermaLink="true">https://kannada.asianetnews.com/karnataka-districts/shivamogga-kuvempu-university-kannada-ma-students-get-together-friends-meet-after-25-years-mrq/articleshow-17h598h</guid>
            <pubDate>Mon, 24 Aug 2026 07:11:22 +0530</pubDate>
            <description><![CDATA[ಕುವೆಂಪು ವಿಶ್ವವಿದ್ಯಾಲಯದ 2000-2002ನೇ ಸಾಲಿನ ಕನ್ನಡ ಎಂ.ಎ ವಿದ್ಯಾರ್ಥಿಗಳು 25 ವರ್ಷಗಳ ನಂತರ ಮತ್ತೆ ಒಂದಾದರು. 'ಗುರು ನಮನ ಮತ್ತು ಸ್ನೇಹ ಸಂಭ್ರಮ' ಕಾರ್ಯಕ್ರಮವನ್ನು ಆಯೋಜಿಸಿ, ತಮ್ಮ ಗುರುಗಳಿಗೆ ಗೌರವ ಸಲ್ಲಿಸಿ, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0rpv53bffnkqb80ecg2v3mb,imgname-shivamogga-1787535660139.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ:&lt;/strong&gt; 25 ವರ್ಷಗಳ ಹಿಂದೆ ಕುವೆಂಪು ವಿವಿಯ ಕನ್ನಡ ಭಾರತಿಯ ತರಗತಿಯಲ್ಲಿ ಒಟ್ಟಿಗೆ ಕುಳಿತು ಅಕ್ಷರ ಕಲಿತ ಸಹಪಾಠಿಗಳೆಲ್ಲ ಮತ್ತೆ ಕುವೆಂಪು ವಿವಿಯ ಹಿರೇಮಠ್ ಸಭಾಂಗಣದಲ್ಲಿ ಭಾನುವಾರ ಒಂದಾದರು.&lt;/p&gt;&lt;p&gt;2000-2002ನೇ ಸಾಲಿನ ಕನ್ನಡ ಎಂ.ಎ ವಿದ್ಯಾರ್ಥಿಗಳ ಮುಖದಲ್ಲಿ ವಯಸ್ಸು ಏರಿದ್ದರೂ, ಮನಸ್ಸಿನಲ್ಲಿ ಮಾತ್ರ ಅದೇ ಹಳೆಯ ಕಾಲೇಜು ದಿನಗಳ ಮುಗ್ಧತೆ, ಸ್ನೇಹದ ಬೆಚ್ಚನೆ ನೆನಪು. ಪರಸ್ಪರ ಅಪ್ಪಿಕೊಂಡು, ಹಳೆಯ ಹೆಸರುಗಳಿಂದ ಕರೆದು ಸಂಭ್ರಮಿಸಿದ ಆ ಕ್ಷಣ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿತು.&lt;/p&gt;&lt;h2&gt;&lt;strong&gt;&lsquo;ಗುರು ನಮನ ಮತ್ತು ಸ್ನೇಹ ಸಂಭ್ರಮ-2026&rsquo;&lt;/strong&gt;&lt;/h2&gt;&lt;p&gt;ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ಅವರ ಬದುಕಿನ ಭಾಗವಾದ ಪತ್ನಿ, ಮಕ್ಕಳನ್ನೂ ಕರೆತಂದು ಗುರುಗಳ ಪಾದಕ್ಕೆ ನಮಸ್ಕರಿಸಿದ್ದು, ಈ ಕಾರ್ಯಕ್ರಮದ ದೊಡ್ಡ ವಿಶೇಷವಾಗಿತ್ತು. &lsquo;ಸ್ನೇಹ ಸಂಕ್ರಾಂತಿ ಬಳಗ&rsquo;ದ ಹೆಸರಲ್ಲಿ ಆಯೋಜಿಸಿದ್ದ &lsquo;ಗುರು ನಮನ ಮತ್ತು ಸ್ನೇಹ ಸಂಭ್ರಮ-2026&rsquo; ಕಾರ್ಯಕ್ರಮದಲ್ಲಿ ಸುಮಾರು 25ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತ ಭಾಗವಹಿಸಿ ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಮತ್ತೆ ಜಗತ್ತಿಗೆ ಸಾರಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ತಮಗೆ ವಿದ್ಯೆ ಕಲಿಸಿದ ನಿವೃತ್ತ ಹಾಗೂ ಹಾಲಿ ಪ್ರಾಧ್ಯಾಪಕರನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಅತ್ಯಂತ ಭಕ್ತಿ-ಗೌರವದಿಂದ ಸನ್ಮಾನಿಸಲಾಯಿತು.&lt;/p&gt;&lt;p&gt;ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಕುವೆಂಪು ವಿವಿ ಪ್ರಭಾರ ಕುಲಪತಿ ಡಾ.ಚಂದ್ರಶೇಖರ್, ಗುರುವಂದನೆ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಕೇವಲ ಕಾರ್ಯಕ್ರಮ ಅಲ್ಲ, ಇದೊಂದು ತಲೆಮಾರಿನ ಸಂಸ್ಕೃತಿ. ಈ ಬ್ಯಾಚಿನಲ್ಲಿ ಓದಿದ ವಿದ್ಯಾರ್ಥಿಗಳು ಪೊಲೀಸ್ ಅಧಿಕಾರಿಗಳಾಗಿದ್ದಾರೆ, ಪ್ರಾಧ್ಯಾಪಕರಾಗಿದ್ದಾರೆ, ದೊಡ್ಡ ಹುದ್ದೆಗಳಲ್ಲಿದ್ದರೂ ಸರಳವಾಗಿ ವಿನಯವಾಗಿ ಗುರುನಮನ ಸಲ್ಲಿಸುತ್ತಿದ್ದಾರೆ. ಇದೊಂದು ಅಪರೂಪದ ಭಾವುಕ ಕ್ಷಣ. ವಿದ್ಯಾರ್ಥಿಗಳು ಎಂದರೆ ಹೀಗಿರಬೇಕು ಎಂದರು.&lt;/p&gt;&lt;h3&gt;&lt;strong&gt;ಅರ್ಥಪೂರ್ಣ ಕಾರ್ಯಕ್ರಮ&lt;/strong&gt;&lt;/h3&gt;&lt;p&gt;ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಕಂಠ ಕೂಡಿಗೆ ಅವರು, ವಿಶ್ವವಿದ್ಯಾನಿಲಯಗಳೇ ದಾರಿ ತಪ್ಪುತ್ತಿರುವ ಈ ಹೊತ್ತಲ್ಲಿ, ಹಿರಿಯ ವಿದ್ಯಾರ್ಥಿಗಳು ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮ ನಡೆಸುತ್ತಿರುವುದು ಸ್ವಾಗತಾರ್ಹ. ಇಂದು ಕನ್ನಡ ಭಾರತಿ ಸೊರಗುತ್ತಿದೆ, ಅದು ಮತ್ತಷ್ಟು ಗಟ್ಟಿಗೊಳ್ಳಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಅಧ್ಯಕ್ಷತೆ ವಹಿಸಿದ್ದ ಕನ್ನಡ ಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಸಿದ್ದೇಶ್ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಕನ್ನಡ ಭಾರತಿ ಸೊರಗಿಲ್ಲ, ಅಲ್ಲಿಂದ ಅರಿವಿನ ವಿಸ್ತಾರದ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.&lt;/p&gt;&lt;p&gt;ಪ್ರೊ. ಪ್ರಶಾಂತ್ ನಾಯಕ್ ಮಾತನಾಡಿ, ಆಸ್ತಿಗಾಗಿ ಹೆತ್ತವರನ್ನೇ ಕೊಲ್ಲುವ ಕಾಲವಿದು, ಪ್ರೀತಿಯೇ ಮಾಯವಾಗುತ್ತಿರುವಾಗ, ಹಿರಿಯ ವಿದ್ಯಾರ್ಥಿಗಳು ನಮ್ಮನ್ನು ಗೌರವಿಸಿದ್ದು, ನಮ್ಮ ಕೆಲಸವನ್ನೇ ಗೌರವಿಸಿದಷ್ಟು ಖುಷಿಯಾಗಿದೆ ಎಂದರು.&lt;/p&gt;&lt;p&gt;ಇದೇ ವೇಳೆ ವಿಶ್ರಾಂತ ಪ್ರಾಧ್ಯಾಪಕರಾದ ಕುಮಾರ್ ಚಲ್ಯ, ಡಾ. ಬಸವರಾಜ ನೆಲ್ಲಿಸರ, ಡಾ. ಕೇಶವ ಮೂರ್ತಿ, ಡಾ.ಸಣ್ಣರಾಮ ಸೇರಿದಂತೆ ಹಲವು ಗುರುಗಳು ಮಾತನಾಡಿದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಸ್ನೇಹ ಬಳಗದ ಪ್ರೀತಿ, ನಿರಂಜನ, ಲತೀಫ್, ಪ್ರಕಾಶ್ ಮರ್ಗನಳ್ಳಿ,ನಾದ, ತಿಪ್ಪೇಸ್ವಾಮಿ, ನಾಗೇಶ್, ಸೇರಿದಂತೆ ಹಲವು ಹಿರಿಯ ವಿದ್ಯಾರ್ಥಿಗಳು ಹೊತ್ತಿದ್ದರು.&lt;/p&gt;&lt;p&gt;ಪ್ರಕಾಶ್ ಮರ್ಗನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುನೀತಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು, ಎಚ್. ಆರ್. ತಿಪ್ಪೇಸ್ವಾಮಿ ವಂದಿಸಿದರು.&lt;/p&gt;&lt;p&gt;------&lt;/p&gt;&lt;p&gt;ಶಂಕರಘಟ್ಟದ ಕುವೆಂಪು ವಿವಿಯ ಹಿರೇಮಠ್ ಸಭಾಂಗಣದಲ್ಲಿ ಭಾನುವಾರ ಸ್ನೇಹ ಸಂಕ್ರಾಂತಿ ಬಳಗದ ವತಿಯಿಂದ ಆಯೋಜಿಸಿದ್ದ &lsquo;ಗುರು ನಮನ ಮತ್ತು ಸ್ನೇಹ ಸಂಭ್ರಮ-2026&rsquo; ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಹಾಲಿ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/shivamogga-kuvempu-university-kannada-ma-students-get-together-friends-meet-after-25-years-mrq/articleshow-17h598h"/>
        </item>
        <item>
            <title><![CDATA[ಹಿಂದು ಧರ್ಮೀಯ ನಿಧನಕ್ಕೆ ಮಸೀದಿಯಲ್ಲಿ ಈದ್‌ ನಿಲ್ಲಿಸಿ ಗೌರವ; ಕಾರ್ಯಕ್ರಮ ಮುಂದೂಡಿಕೆ]]></title>
            <link>https://kannada.asianetnews.com/karnataka-districts/dakshina-kannada-uppinangady-eid-prayers-held-at-mosque-to-pay-respect-to-hindu-death-mrq/articleshow-slh9hnd</link>
            <guid isPermaLink="true">https://kannada.asianetnews.com/karnataka-districts/dakshina-kannada-uppinangady-eid-prayers-held-at-mosque-to-pay-respect-to-hindu-death-mrq/articleshow-slh9hnd</guid>
            <pubDate>Mon, 24 Aug 2026 06:40:14 +0530</pubDate>
            <description><![CDATA[ದಕ್ಷಿಣ ಕನ್ನಡ ಜಿಲ್ಲೆಯ ಕೊಯಿಲ ಗ್ರಾಮದಲ್ಲಿ, ಹಿಂದು ಧರ್ಮೀಯ ಗುರುಪ್ರಸಾದ್ ಅವರ ನಿಧನಕ್ಕೆ ಗೌರವ ಸೂಚಕವಾಗಿ ಕುದುಲೂರು ಮಸೀದಿಯು ಈದ್ ಮಿಲಾದ್ ಕಾರ್ಯಕ್ರಮವನ್ನು ಮುಂದೂಡಿದೆ. ಗುರುಪ್ರಸಾದ್ ಅವರ ಮನೆಯ ಸಮೀಪದಲ್ಲೇ ಇದ್ದ ಮಸೀದಿಯ ಆಡಳಿತ ಮಂಡಳಿಯು, ಸೂತಕದ ಸಮಯದಲ್ಲಿ ಸಂಭ್ರಮಾಚರಣೆ ಸೂಕ್ತವಲ್ಲವೆಂದು ಈ ಸೌಹಾರ್ದಯುತ ನಿರ್ಧಾರ ಕೈಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rn16f5mqqtsd6nxqk22t5t,imgname-mosque-1787533760997.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಪ್ಪಿನಂಗಡಿ&lt;/strong&gt;: ಹಿಂದು ಧರ್ಮದ ವ್ಯಕ್ತಿಯೋರ್ವರು ನಿಧನರಾದ ಕಾರಣಕ್ಕೆ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮವನ್ನು ಮುಂದೂಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ನಡೆದಿದೆ. ಕುದುಲೂರು ನಿವಾಸಿ, ಆಟೋರಿಕ್ಷಾ ಚಾಲಕ ಗುರುಪ್ರಸಾದ್ (35) ಹೃದಯಾಘಾತದಿಂದ ಶನಿವಾರ ನಿಧನರಾದರು.&lt;/p&gt;&lt;p&gt;ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ, ಬಾಡಿಗೆ ವಾಹನ ಹೊಂದಿದ್ದ ಇವರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೃ ತ ಗುರುಪ್ರಸಾದ್ ಮನೆ ಬಳಿ ಇರುವ ಕುದುಲೂರು ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬದ ಪೂರ್ವಭಾವಿಯಾಗಿ ಮಕ್ಕಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗುರುಪ್ರಸಾದ್ ನಿಧನದ ಸೂತಕದ ವಾತಾವರಣದಲ್ಲಿ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ತೀರ್ಮಾನಿಸಿದ ಮಸೀದಿಯ ಆಡಳಿತ ಮಂಡಳಿ, ಕಾರ್ಯಕ್ರಮವನ್ನು ಮುಂದೂಡಿ ಗುರುಪ್ರಸಾದ್ ಕುಟುಂಬದ ದುಃಖದಲ್ಲಿ ಭಾಗಿಯಾಯಿತು.&lt;/p&gt;&lt;h2&gt;&lt;strong&gt;ಶಾಂತಿಯುತ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಸಹಕಾರ: ಜಾನ್ಸನ್ ಡಿಸೋಜ&lt;/strong&gt;&lt;/h2&gt;&lt;p&gt;ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ, ಅಶಾಂತಿ ಸೃಷ್ಟಿಯಾಗದಂತೆ, ಜಾತಿ-ಮತ ಭೇದವಿಲ್ಲದೆ ಈದ್ ಮಿಲಾದ್ ಹಬ್ಬದ ಆಚರಣೆ ನಡೆಸ ಬೇಕಿದ್ದು, ಶಾಂತಿಯುತ ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಪುತ್ತೂರು ನಗರ ಪೊಲೀಸ್ ಇನ್&zwnj;ಸ್ಪೆಕ್ಟರ್&zwnj; ಜಾನ್ಸನ್ ಡಿಸೋಜ ಹೇಳಿದರು.ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಗಳ ಅಧ್ಯಕ್ಷರು- ಪದಾಧಿಕಾರಿಗಳೊಂದಿಗೆ ಶಾಂತಿಸಭೆ ನಡೆಸಿದರು.&lt;/p&gt;&lt;p&gt;ನಗರ ಠಾಣಾ ವ್ಯಾಪ್ತಿಯ 33 ಮಸೀದಿಗಳಲ್ಲಿ ಹಬ್ಬದ ಆಚರಣೆಯ ಭಾಗವಾಗಿ ನಡೆಯುವ ಮೆರವಣಿಗೆ, ರ್ಯಾಲಿಯ ವಿವರಗಳನ್ನು ಪಡೆದುಕೊಂಡರು. ನಿಮ್ಮ ಮೆರವಣಿಗೆಗಳು ಯಾವ ರೀತಿ ಇರುತ್ತದೆ ಎಂಬುದರ ವಿವರ ನೀಡಿ, ಕಾನೂನು ಚೌಕಟಿನಲ್ಲಿ ಅನುಮತಿ ನೀಡಿ ಬಂದೋಬಸ್ತ್ ಒದಗಿಸುತ್ತೇವೆ. ಎಲ್ಲಿಯೂ ಕೂಡ ಬೈಕ್ ರ್ಯಾಲಿಗೆ ಅವಕಾಶ ಇರುವುದಿಲ್ಲ, ಬೈಕಿಗೆ ಅವಕಾಶ ನೀಡಿದರೆ ಯುವಕರು ತಮ್ಮ ಚೇಷ್ಠೆಯ ಮೂಲಕ ಒಂದಷ್ಟು ಗೊಂದಲ ಸೃಷ್ಟಿಸುತ್ತಾರೆ. ಹೀಗಾಗಿ ಕೇವಲ ಕಾಲ್ನಡಿಗೆಯ ಜಾಥಾಗಳಿಗೆ ಮಾತ್ರ ಅವಕಾಶವಿರುತ್ತದೆ. ಅದರ ಸೀಮಿತ ಸಂಖ್ಯೆಯ ವಾಹನಗಳಿಗೆ ಅವಕಾಶ ಇರುತ್ತದೆ ಎಂದರು.&lt;/p&gt;&lt;p&gt;&lt;strong&gt;ಅಪ್ರಾಪ್ತರಿಗೆ ವಾಹನ ನೀಡಬೇಡಿ: &lt;/strong&gt;ಮೆರವಣಿಗೆಯ ಸಂದರ್ಭದಲ್ಲಿ ಮಕ್ಕಳು ಮನೆಯವರು, ಸಂಘಟಕರಿಗೆ ತಿಳಿಯದ ರೀತಿಯಲ್ಲಿ ಯಾವುದೇ ಸಂಚಾರ ನಿಯಮಗಳನ್ನು ಪಾಲಿಸದೆ ಬೈಕಿನಲ್ಲಿ ಬರುವ ಘಟನೆಗಳು ನಡೆಯುತ್ತದೆ. ಹೀಗಾಗಿ ಅದಕ್ಕೆ ಯಾವುದೇ ರೀತಿಯ ಅವಕಾಶ ನೀಡಬಾರದು, ಜತೆಗೆ ಕಾರು, ಇತರ ವಾಹನಗಳನ್ನೂ ಮಕ್ಕಳಿಗೆ ನೀಡಬಾರದು ಎಂದು ನಗರ ಠಾಣಾ ಪಿಎಸ್&zwnj;ಐ ಸೇಸಮ್ಮ ತಿಳಿಸಿದರು.&lt;/p&gt;&lt;p&gt;&lt;strong&gt;ಕಬಕ ದಿಂದ ಮಂಜಲ್ಪಡ್ಪು ತನಕ ಮೆರವಣಿಗೆ: &lt;/strong&gt;ಕಬಕದಿಂದ ಮಂಜಲ್ಪಡ್ಪು ತನಕ ನಡೆಯುವ ಅಲಂಕೃತ ವಾಹನಗಳ ಮೆರವಣಿಗೆ, ಪೇರಮಜಲು- ಸತ್ತಿಕಲ್ಲು ಭಾಗದ ಮೆರವಣಿಗೆಯ ಕುರಿತು ಆಯಾ ಭಾಗದ ಮುಖಂಡರು ಸಭೆಗೆ ವಿವರ ನೀಡಿದರು. ಜತೆಗೆ ಪ್ರತಿ ಮಸೀದಿಗಳಲ್ಲಿ ನಡೆಯುವ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಪಿಎಸ್&zwnj;ಐ ಸುಹಾಸ್ ಆರ್. ಉಪಸ್ಥಿತರಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-uppinangady-eid-prayers-held-at-mosque-to-pay-respect-to-hindu-death-mrq/articleshow-slh9hnd"/>
        </item>
        <item>
            <title><![CDATA[Karnataka Politics: ಡೆಲ್ಲಿಯಲ್ಲಿ ರಾಹುಲ್ 'ಫೈಟ್'; ಬೆಂಗಳೂರಲ್ಲಿ ಡಿಕೆಶಿ 'ಊಟ್-ಬೈಟ್'! ಅದಾನಿ ಭೇಟಿಗೆ ಬಿಜೆಪಿ ಛಾಟಿ!]]></title>
            <link>https://kannada.asianetnews.com/karnataka-districts/dk-shivakumar-adani-meeting-bengaluru-amid-delhi-protest-bjp-questions-karnataka-politics-viral-news/articleshow-ukpap1n</link>
            <guid isPermaLink="true">https://kannada.asianetnews.com/karnataka-districts/dk-shivakumar-adani-meeting-bengaluru-amid-delhi-protest-bjp-questions-karnataka-politics-viral-news/articleshow-ukpap1n</guid>
            <pubDate>Sun, 23 Aug 2026 22:52:56 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಉದ್ಯಮಿ ಗೌತಮ್ ಅದಾನಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ನಡೆದ ಗೌಪ್ಯ ಸಭೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಸುರಂಗ ರಸ್ತೆ ಯೋಜನೆಯ ಟೆಂಡರ್ ಪ್ರಕ್ರಿಯೆಯ ನಿರ್ಣಾಯಕ ಹಂತದಲ್ಲಿ ಈ ಭೇಟಿ ನಡೆದಿದ್ದು, ಇದು ಕಾಂಗ್ರೆಸ್&zwnj;ನ ದ್ವಂದ್ವ ನೀತಿ ಎಂದು ಬಿಜೆಪಿ ತೀವ್ರವಾಗಿ ಟೀಕಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qtaj4nep3d7mm1qz1vyqbt,imgname-dk-shivakumar-1787505756309.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿ ಪ್ರಮುಖ ಕೈಗಾರಿಕೋದ್ಯಮಿ ಗೌತಮ್ ಅದಾನಿ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಡೆದ ಒಂದು ಗಂಟೆಯ ಗೌಪ್ಯ ಸಭೆ, ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಸೈದ್ಧಾಂತಿಕ ಸಮರಕ್ಕೆ ಈ ಭೇಟಿ ಮತ್ತೊಮ್ಮೆ ಬೆಂಕಿಗೆ ತುಪ್ಪ ಸುರಿದಂತಾಗಿದೆ. ನಾಯಕರ ನಡುವೆ ಸಾರ್ವಜನಿಕವಾಗಿ ವಾಗ್ದಾಳಿಗಳು ಶುರುವಾಗಿವೆ.&lt;/p&gt;&lt;h2&gt;&lt;strong&gt;ಆರ್ಟ್ ಆಫ್ ಲಿವಿಂಗ್&zwnj;ನಿಂದ ನೇರ ಶಿವಕುಮಾರ್ ಮನೆಗೆ!&lt;/strong&gt;&lt;/h2&gt;&lt;p&gt;ಅದಾನಿ ಗ್ರೂಪ್&zwnj;ನ ಅಧ್ಯಕ್ಷ ಗೌತಮ್ ಅದಾನಿ ಅವರು ಬೆಂಗಳೂರಿನ 'ಆರ್ಟ್ ಆಫ್ ಲಿವಿಂಗ್' ಆಶ್ರಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಆದರೆ, ಕಾರ್ಯಕ್ರಮ ಮುಗಿದ ತಕ್ಷಣ ಅವರು ನೇರವಾಗಿ ಸದಾಶಿವನಗರದಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಖಾಸಗಿ ನಿವಾಸಕ್ಕೆ ತೆರಳಿ ಸಭೆ ನಡೆಸಿದರು. ಈ ಭೇಟಿಯ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಡಿಕೆಶಿ ಆಪ್ತ ವಲಯ ಹಾಗೂ ಮುಖ್ಯಮಂತ್ರಿ ಕಚೇರಿ &quot;ಇದು ಕೇವಲ ಸೌಜನ್ಯದ ಭೇಟಿ, ಇದರಲ್ಲಿ ಯಾವುದೇ ರಾಜಕೀಯ ಅಥವಾ ವಾಣಿಜ್ಯ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಲು ಯತ್ನಿಸಿದವು. ಆದರೆ, ಈ ಭೇಟಿ ನಡೆದ 'ಸಮಯ'ವೇ ಈಗ ಹತ್ತಾರು ಅನುಮಾನಗಳಿಗೆ ಹಾದಿಮಾಡಿಕೊಟ್ಟಿದೆ.&lt;/p&gt;&lt;h3&gt;&lt;strong&gt;ಸುರಂಗ ರಸ್ತೆ ಯೋಜನೆ ಮತ್ತು ಡೀಲ್ ಊಹಾಪೋಹ!&lt;/strong&gt;&lt;/h3&gt;&lt;p&gt;ಬೆಂಗಳೂರು ನಗರದ ಸಂಚಾರ ದಟ್ಟಣೆ ಶಮನಕ್ಕಾಗಿ ಪ್ರಸ್ತಾಪಿಸಲಾಗಿರುವ, ಹೆಬ್ಬಾಳದಿಂದ ಸಿಲ್ಕ್ ಬೋರ್ಡ್&zwnj;ವರೆಗಿನ ಕೋಟ್ಯಂತರ ರೂಪಾಯಿ ಮೌಲ್ಯದ 'ಮೆಗಾ ಸುರಂಗ ರಸ್ತೆ ಯೋಜನೆ'ಯ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಎಂಟರ್&zwnj;ಪ್ರೈಸಸ್ ಸಂಸ್ಥೆಯು ಅತ್ಯಂತ ಕಡಿಮೆ ಮೊತ್ತ ನಮೂದಿಸಿದ (L1) ಬಿಡ್ಡರ್ ಆಗಿ ಹೊರಹೊಮ್ಮಿದೆ. ಟೆಂಡರ್ ಪ್ರಕ್ರಿಯೆಗೆ ಇನ್ನು ಅಧಿಕೃತ ಮುದ್ರೆ ಬಿದ್ದಿಲ್ಲ. ಇಂತಹ ನಿರ್ಣಾಯಕ ಘಟ್ಟದಲ್ಲೇ ಈ ಭೇಟಿ ನಡೆದಿರುವುದರಿಂದ, &quot;ಇದು ಸೌಜನ್ಯದ ಸಭೆಯಲ್ಲ, ಟೆಂಡರ್ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಯೋಜನೆಯನ್ನು ತಮ್ಮದಾಗಿಸಿಕೊಳ್ಳಲು ನಡೆದ ಒಳ ಒಪ್ಪಂದ&quot; ಎಂದು ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸುತ್ತಿವೆ.&lt;/p&gt;&lt;h3&gt;&lt;strong&gt;ಕಾಂಗ್ರೆಸ್&zwnj;ನ ದ್ವಂದ್ವ ನೀತಿಗೆ ಬಿಜೆಪಿ ಛಾಟಿ!&lt;/strong&gt;&lt;/h3&gt;&lt;p&gt;ಭೇಟಿಯ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್&zwnj;ನ ನಡವಳಿಕೆಯನ್ನು ತೀವ್ರವಾಗಿ ತೊಳಗೆದಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ದಿನವೂ ಅದಾನಿ ಗ್ರೂಪ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಾ ಪ್ರತಿಭಟನೆ ನಡೆಸುತ್ತಾರೆ. ಆದರೆ, ಕರ್ನಾಟಕದಲ್ಲಿ ಅವರದ್ದೇ ಕಾಂಗ್ರೆಸ್ ಸರ್ಕಾರ ಅದಾನಿಗೆ 'ರೆಡ್ ಕಾರ್ಪೆಟ್' ಸ್ವಾಗತ ಕೋರುತ್ತಿದೆ. ಶಿವಕುಮಾರ್ ಅವರಿಗೆ ಅದಾನಿ ಜೊತೆ ಚಹಾ ಕುಡಿಯಲು ರಾಹುಲ್ ಗಾಂಧಿ ಅನುಮತಿ ನೀಡಿದ್ದಾರೆಯೇ? ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲದೆ, ಸುರಂಗ ರಸ್ತೆಗೆ ಕಡಿಯಲಾಗುವ ಗಿಡ-ಮರಗಳನ್ನು ತಬ್ಬಿಕೊಳ್ಳಲು ರಾಹುಲ್ ಗಾಂಧಿ ಶೀಘ್ರವೇ ಬೆಂಗಳೂರಿಗೆ ಬರಲಿ ಎಂದೂ ಕಾಲೆಳೆದಿದ್ದಾರೆ.&lt;/p&gt;&lt;h3&gt;&lt;strong&gt;ನ್ಯಾಯಾಲಯದ ಮೆಟ್ಟಿಲೇರಿದ ಯೋಜನೆ!&lt;/strong&gt;&lt;/h3&gt;&lt;p&gt;ಮತ್ತೊಂದೆಡೆ, ಸುರಂಗ ರಸ್ತೆ ಯೋಜನೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ತೀವ್ರವಾಗಿ ವಿರೋಧಿಸಿದ್ದು, ಈಗಾಗಲೇ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಯೋಜನೆಯ ವೈಜ್ಞಾನಿಕತೆ ಮತ್ತು ಪಾರದರ್ಶಕತೆಯನ್ನು ಪ್ರಶ್ನಿಸಲಾಗುತ್ತಿದೆ. ಒಟ್ಟಿನಲ್ಲಿ, ದೆಹಲಿಯಲ್ಲಿ ಅದಾನಿ ವಿರುದ್ಧ 'ಫೈಟ್' ಮಾಡುತ್ತಾ, ಬೆಂಗಳೂರಿನಲ್ಲಿ 'ಬೈಟ್' (ಸಭೆ) ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಈ ನಡೆ, ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಈ ಚಹಾ ಚರ್ಚೆಯು ರಾಜ್ಯ ರಾಜಕಾರಣದಲ್ಲಿ ಇನ್ನಷ್ಟು ದೊಡ್ಡ ಬಿರುಗಾಳಿ ಎಬ್ಬಿಸುವುದು ಖಚಿತ ಎಂಬಂತಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/dk-shivakumar-adani-meeting-bengaluru-amid-delhi-protest-bjp-questions-karnataka-politics-viral-news/articleshow-ukpap1n"/>
        </item>
        <item>
            <title><![CDATA[Koppal: ಚಿರತೆ ಆತಂಕದ ಬೆನ್ನಲ್ಲೇ ಗಂಗಾವತಿಯಲ್ಲಿ ಹುಲಿ ಪ್ರತ್ಯಕ್ಷ: ಅರಣ್ಯ ಇಲಾಖೆ ಹೈ ಅಲರ್ಟ್!]]></title>
            <link>https://kannada.asianetnews.com/karnataka-districts/tiger-spotted-in-gangavathi-forest-cctv-footage-triggers-alert-gvd/articleshow-095g6xy</link>
            <guid isPermaLink="true">https://kannada.asianetnews.com/karnataka-districts/tiger-spotted-in-gangavathi-forest-cctv-footage-triggers-alert-gvd/articleshow-095g6xy</guid>
            <pubDate>Sun, 23 Aug 2026 22:34:52 +0530</pubDate>
            <description><![CDATA[&lt;p&gt;Gangavathi: ತೆಂಬಾ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಯವರು ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿರುವುದು ಇದೀಗ ದೃಢಪಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qrh00w1m7454q4xa4ns0p6,imgname-j-1787503869980.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಆ.23): &lt;/strong&gt;ತಾಲೂಕಿನ ಸಮೀಪದ ತೆಂಬಾ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಯವರು ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿರುವುದು ಇದೀಗ ದೃಢಪಟ್ಟಿದೆ.&lt;/p&gt;&lt;p&gt;ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಬ್ಬಲಗುಡ್ಡ, ಹೇಮಗುಡ್ಡ, ಚಿಕ್ಕಬೆಣಕಲ್, ಹಿರೇಬೆಣಕಲ್, ಸಾಣಾಪುರ ಸೇರಿದಂತೆ ಸುತ್ತಮುತ್ತಲಿನ ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.&lt;/p&gt;&lt;p&gt;ಅರಣ್ಯ ಇಲಾಖೆ ಸಿಬ್ಬಂದಿ ವಾಹನಗಳ ಮೂಲಕ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಧ್ವನಿವರ್ಧಕದ ಮೂಲಕ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅಗತ್ಯವಿಲ್ಲದೆ ಅರಣ್ಯ ಪ್ರದೇಶಕ್ಕೆ ತೆರಳದಂತೆ ಹಾಗೂ ರಾತ್ರಿ ವೇಳೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.&lt;/p&gt;&lt;p&gt;&lt;strong&gt;ಗಂಗಾವತಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಹುಲಿ ಪತ್ತೆ?&lt;/strong&gt;&lt;/p&gt;&lt;p&gt;ಗಂಗಾವತಿ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಗೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದರಿಂದ ಸ್ಥಳೀಯರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಹುಲಿಯ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು, ಅದನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.&lt;/p&gt;&lt;p&gt;ಈ ಹಿಂದೆ ದುರ್ಗಾಬೆಟ್ಟ ಹಾಗೂ ವಿರೂಪಾಪುರಗಡ್ಡೆ ಭಾಗಗಳಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದವು. ಚಿರತೆ ದಾಳಿಯಿಂದ ಇಬ್ಬರು ಮೃತಪಟ್ಟ ಘಟನೆಗಳೂ ನಡೆದಿದ್ದವು. ಇದೀಗ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಣ್ಯ ಇಲಾಖೆ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಿದೆ.&lt;/p&gt;&lt;p&gt;&lt;strong&gt;ಜನರು ಎಚ್ಚರಿಕೆಯಿಂದ ಇರುವಂತೆ ಎಚ್.ಆರ್. ಶ್ರೀನಾಥ ಮನವಿ&lt;/strong&gt;&lt;/p&gt;&lt;p&gt;ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚಿನ ಜಾಗರೂಕತೆ ವಹಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಗಂಗಾವತಿ ತಾಲೂಕಿನಲ್ಲಿ ಈ ಹಿಂದೆಯೂ ಚಿರತೆಗಳು ಜನರ ಮೇಲೆ ದಾಳಿ ನಡೆಸಿದ ಘಟನೆಗಳು ನಡೆದಿವೆ. ಹೀಗಾಗಿ ಹುಲಿ ಕಾಣಿಸಿಕೊಂಡಿರುವ ಸಂದರ್ಭದಲ್ಲಿ ಮತ್ತೊಂದು ಅಹಿತಕರ ಘಟನೆ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಹುಲಿಯ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು, ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.&lt;/p&gt;&lt;p&gt;&lt;strong&gt;ನಾಳೆ ಅರಣ್ಯ ಇಲಾಖೆ ಕಾರ್ಯಾಚರಣೆ&lt;/strong&gt;&lt;/p&gt;&lt;p&gt;ಗಂಗಾವತಿ ತಾಲೂಕಿನ ಆನೆಗೊಂದಿ ಅರಣ್ಯ ಪ್ರದೇಶದ ಸರ್ವೆ ನಂ.1ರಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಹುಲಿಯ ಚಲನವಲನದ ಮೇಲೆ ನಿಗಾ ಇರಿಸಿರುವ ಅಧಿಕಾರಿಗಳು, ಆಗಸ್ಟ್ 24ರಂದು ಹುಲಿ ಸೆರೆ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ ಅವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ಸೂಚನೆ ನೀಡಿದ್ದು, ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಸೂಚನೆ&lt;/strong&gt;&lt;/p&gt;&lt;p&gt;ಹುಲಿ ಸೆರೆ ಕಾರ್ಯಾಚರಣೆ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಪ್ರದೇಶದತ್ತ ತೆರಳದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲದೆ, ದನಕರುಗಳನ್ನು ಅರಣ್ಯ ಪ್ರದೇಶಕ್ಕೆ ಮೇಯಲು ಬಿಡದಂತೆ ಎಚ್ಚರಿಕೆ ನೀಡಲಾಗಿದೆ. ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ ಜನರು ಗುಂಪು ಸೇರುವುದು ಅಥವಾ ಅರಣ್ಯ ಪ್ರದೇಶಕ್ಕೆ ತೆರಳುವುದರಿಂದ ಅಪಾಯ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.&lt;/p&gt;&lt;p&gt;&lt;strong&gt;ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಕ್ರಮ&lt;/strong&gt;&lt;/p&gt;&lt;p&gt;ಹುಲಿ ಸೆರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಮಾನವ-ವನ್ಯಜೀವಿ ಸಂಘರ್ಷಕ್ಕೆ ಅವಕಾಶವಾಗದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಸ್&zwnj;ಪಿ ರಾಮ್ ಎಲ್. ಅರಸಿದ್ದಿ ಸೂಚಿಸಿದ್ದಾರೆ. ಸದ್ಯ ಆನೆಗೊಂದಿ ಅರಣ್ಯ ಪ್ರದೇಶದಲ್ಲಿ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಆ.24ರ ಕಾರ್ಯಾಚರಣೆಯತ್ತ ಸ್ಥಳೀಯರ ಗಮನ ನೆಟ್ಟಿದೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/tiger-spotted-in-gangavathi-forest-cctv-footage-triggers-alert-gvd/articleshow-095g6xy"/>
        </item>
        <item>
            <title><![CDATA[ನಾಳೆ ದಾವಣಗೆರೆ ಬಂದ್.. ತುರ್ತು ಸೇವೆ ಬಿಟ್ಟ ಎಲ್ಲಾ ಬಂದ್ ಬಂದ್! ಕಾರಣ ಏನು..?]]></title>
            <link>https://kannada.asianetnews.com/davanagere/bhartiya-raitha-okkuta-has-called-for-a-davanagere-bandh-tomorrow-gkn/articleshow-516wil3</link>
            <guid isPermaLink="true">https://kannada.asianetnews.com/davanagere/bhartiya-raitha-okkuta-has-called-for-a-davanagere-bandh-tomorrow-gkn/articleshow-516wil3</guid>
            <pubDate>Sun, 23 Aug 2026 22:22:09 +0530</pubDate>
            <description><![CDATA[&lt;p&gt;ಭದ್ರಾ ನಾಲೆಗಳಿಗೆ ನೀರು ಬಿಡಲು ಆಗ್ರಹಿಸಿ ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ದಾವಣಗೆರೆ ನಗರ ಬಂದ್&zwnj;ಗೆ ಭಾರತೀಯ ರೈತ ಒಕ್ಕೂಟ ಕರೆ ನೀಡಿದೆ. ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದ್ದು, ಖಾಸಗಿ ಬಸ್, ಆಟೋ ಮತ್ತು ವರ್ತಕರ ಸಂಘ ಬೆಂಬಲ ಸೂಚಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qrhy31jg64e1905hgbnxa4,imgname-davanagere-bandh--1--1787503900769.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ಭದ್ರಾ ಜಲಾಶಯದಿಂದ ನಾಲೆಗಳಿಗೆ ತಕ್ಷಣವೇ ನೀರು ಬಿಡಬೇಕೆಂದು ಆಗ್ರಹಿಸಿ 'ಭಾರತೀಯ ರೈತ ಒಕ್ಕೂಟ' ನಾಳೆ (ಸೋಮವಾರ) ದಾವಣಗೆರೆ ನಗರ ಬಂದ್&zwnj;ಗೆ ಕರೆ ನೀಡಿದೆ. ರೈತರ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾಗಿರುವ ಈ ಬಂದ್&zwnj;ಗೆ ಜಿಲ್ಲೆಯ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.&lt;/p&gt;&lt;h2&gt;&lt;strong&gt;ಬಂದ್ ಸಮಯ ಮತ್ತು ಪ್ರತಿಭಟನೆ&lt;/strong&gt;&lt;/h2&gt;&lt;p&gt;ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರ ಬಂದ್&zwnj;ಗೆ ಕರೆ ನೀಡಲಾಗಿದೆ. ಬೆಳಗ್ಗೆ 7 ಗಂಟೆಗೆ ದಾವಣಗೆರೆಯ ಪ್ರಮುಖ ಕೇಂದ್ರವಾದ ಜಯದೇವ ವೃತ್ತದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಆರ್. ಲಿಂಗರಾಜ್ ಮಾತನಾಡಿ, ಬಂದ್&zwnj;ಗೆ ಸಹಕರಿಸುವಂತೆ ವರ್ತಕರು ಮತ್ತು ಉದ್ಯಮಿಗಳಿಗೆ ಮನವಿ ಮಾಡಿದ್ದೇವೆ. ದಲ್ಲಾಳಿಗಳ ಸಂಘ, ಖಾಸಗಿ ಬಸ್ ಮಾಲೀಕರು ಹಾಗೂ ಆಟೋ ಚಾಲಕರ ಸಂಘ ಈಗಾಗಲೇ ನಮಗೆ ಬೆಂಬಲ ಘೋಷಿಸಿವೆ. ಶಾಂತಿಯುತವಾಗಿ ಬಂದ್ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಾವುವು ಲಭ್ಯವಿರುತ್ತವೆ?&lt;/strong&gt;&lt;/h2&gt;&lt;p&gt;ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್&zwnj;ಗಳು. ಹಾಲು ಮಾರಾಟ ಕೇಂದ್ರಗಳು ತೆರೆದಿರಲಿವೆ. ನಗರದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಭದ್ರಾ ಡ್ಯಾಂನಲ್ಲಿ 175 ಅಡಿ ನೀರಿದೆ. ಹಿಂದೆ 150 ಅಡಿ ಇದ್ದಾಗಲೇ ನಾಲೆಗಳಿಗೆ ನೀರು ಬಿಟ್ಟ ಇತಿಹಾಸವಿದೆ. ಆದರೆ ಸರ್ಕಾರ ಈಗ ಅಡಿಕೆ, ತೆಂಗು ಬೆಳೆಗಾರರು ಮತ್ತು ಭತ್ತ ಬೆಳೆಗಾರರ ನಡುವೆ ಗೊಂದಲ ಸೃಷ್ಟಿಸಿ ಎರಡು ಗುಂಪು ಮಾಡುತ್ತಿದೆ ಎಂದು ಆರೋಪಿಸಿದರು.&lt;/p&gt;&lt;h2&gt;&lt;strong&gt;ರೈತರ ಸಂಕಷ್ಟವೇನು?&lt;/strong&gt;&lt;/h2&gt;&lt;p&gt;ಈಗಾಗಲೇ ಜಿಲ್ಲೆಯ ಶೇ. 30ರಷ್ಟು ರೈತರು ಭತ್ತದ ನಾಟಿ ಮಾಡಿದ್ದಾರೆ. ಸಾವಿರಾರು ರೈತರು ಸಸಿ ಮಡಿಗಳನ್ನು ಮಾಡಿ ನಾಟಿಗೆ ಸಿದ್ಧರಾಗಿದ್ದಾರೆ. ನೀರು ಬಿಡದಿದ್ದರೆ ಈ ಸಸಿಗಳು ಒಣಗಿ ಹೋಗುವ ಭೀತಿ ಇದೆ. ಪ್ರಸ್ತುತ ಡ್ಯಾಂಗೆ 4000 ಕ್ಯೂಸೆಕ್ ಒಳಹರಿವು ಇದೆ. ನಮಗೆ ಬೇಕಿರುವುದು ಕೇವಲ 3000 ಕ್ಯೂಸೆಕ್ ನೀರು ಮಾತ್ರ. ಆದರೂ ಸರ್ಕಾರ ವಿಳಂಬ ಮಾಡುತ್ತಿದೆ. ಸಿಎಂ ಜೊತೆ ಮಾತನಾಡುತ್ತೇವೆ ಎಂದು ಅಧಿಕಾರಿಗಳು ಹೇಳಿ ಕಳಿಸಿದ್ದಾರೆಯೇ ಹೊರತು ಇದುವರೆಗೆ ಯಾವುದೇ ತೀರ್ಮಾನ ಮಾಡಿಲ್ಲ. ಹದಿನೈದು ದಿನಗಳಿಂದ ನಾವು ಮನವಿ ಮಾಡುತ್ತಿದ್ದೇವೆ, ನಿನ್ನೆ ರಾಷ್ಟ್ರೀಯ ಹೆದ್ದಾರಿ ತಡೆದರೂ ಸರ್ಕಾರ ಕಣ್ಣು ಬಿಡುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಬಂದ್&zwnj;ಗೆ ಕರೆ ನೀಡಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ. ದಾವಣಗೆರೆಯ ನಾಗರಿಕರು ರೈತರ ಈ ನ್ಯಾಯಯುತ ಹೋರಾಟಕ್ಕೆ ಸಹಕರಿಸಬೇಕು ಎಂದು ಭಾರತೀಯ ರೈತ ಒಕ್ಕೂಟ ಮನವಿ ಮಾಡಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/davanagere/bhartiya-raitha-okkuta-has-called-for-a-davanagere-bandh-tomorrow-gkn/articleshow-516wil3"/>
        </item>
        <item>
            <title><![CDATA[ಕೊಪ್ಪಳಕ್ಕೆ ಬಿಗ್ ನ್ಯೂಸ್! 2 ವರ್ಷದಲ್ಲಿ ಆರೋಗ್ಯ ಸೇವೆ ವಿಸ್ತರಣೆ: ಸದ್ಗುರು ಮಧುಸೂದನ ಸಾಯಿ ಘೋಷಣೆ]]></title>
            <link>https://kannada.asianetnews.com/karnataka-districts/madhusudana-sai-announces-healthcare-expansion-in-koppal-and-north-karnataka-gvd/articleshow-rzqfgu5</link>
            <guid isPermaLink="true">https://kannada.asianetnews.com/karnataka-districts/madhusudana-sai-announces-healthcare-expansion-in-koppal-and-north-karnataka-gvd/articleshow-rzqfgu5</guid>
            <pubDate>Sun, 23 Aug 2026 22:05:10 +0530</pubDate>
            <description><![CDATA[&lt;p&gt;Madhusudana Sai: ಜಿಲ್ಲೆಯ ಹಲವು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣ ಸೇರಿದಂತೆ ಹಲವು ವಿಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರು ವೈದ್ಯರಾಗಿ ಸೇವೆ ಸಲ್ಲಿಸಲು ಸಿದ್ಧರಿರುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qpsr7w6aht904z2ekg190c,imgname-whatsapp-image-2026-08-23-at-9.45.48-pm-1787502059772.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಆ.23): &lt;/strong&gt;ಇದೇ ಜಿಲ್ಲೆಯ ಹಲವು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣ ಸೇರಿದಂತೆ ಹಲವು ವಿಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರು ವೈದ್ಯರಾಗಿ ಸೇವೆ ಸಲ್ಲಿಸಲು ಸಿದ್ಧರಿರುತ್ತಾರೆ. ಆ ಬಳಿಕ ಕೊಪ್ಪಳ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ವಿಸ್ತರಿಸುವ ಉದ್ದೇಶವಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.&lt;/p&gt;&lt;p&gt;ನಗರದಲ್ಲಿ ಭಾನುವಾರ (ಆಗಸ್ಟ್ 23) ನಡೆದ &quot;ದಿವ್ಯ ಸಂಜೆ&quot; ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದ ಮತ್ತು ವಾಗ್ಮಿ ಗಂಗಾವತಿ ಪ್ರಾಣೇಶ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸದ್ಗುರು, ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದುಕೊಂಡಿದ್ದೇವೆ. ಅನ್ನ ದಾಸೋಹ, ಅಕ್ಷರ ದಾಸೋಹ ಮತ್ತು ಆರೋಗ್ಯ ದಾಸೋಹದ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಪೋಷಕರಿಬ್ಬರೂ ಉದ್ಯೋಗಸ್ಥರಾಗಿರುವುದರಿಂದ ಮಕ್ಕಳ ಬೆಳವಣಿಗೆ ಗಮನಿಸಲು ಸಾಕಷ್ಟು ಸಮಯ ದೊರೆಯುತ್ತಿಲ್ಲ. ಮತ್ತೊಂದೆಡೆ ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವವೂ ವ್ಯಾಪಕವಾಗುತ್ತಿದೆ. ಮಕ್ಕಳು ದಾರಿ ತಪ್ಪುತ್ತಿರುವುದು ಭವಿಷ್ಯದ ಸಮಾಜಕ್ಕೆ ಗಂಭೀರ ಅಪಾಯವಾಗಿದೆ ಎಂದು ಎಚ್ಚರಿಸಿದರು.&lt;img&gt;&lt;/p&gt;&lt;p&gt;ವಿದೇಶಗಳ ಮಕ್ಕಳಲ್ಲಿ ಕಂಡುಬರುವ ಹಿಂಸಾಚಾರ, ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ, ಶಸ್ತ್ರಾಸ್ತ್ರಗಳ ದುರುಪಯೋಗದಂತಹ ಸಮಸ್ಯೆಗಳು ಭಾರತದಲ್ಲಿಯೂ ಕಾಣಿಸಿಕೊಳ್ಳುವ ಆತಂಕವಿದೆ. ಇಂತಹ ಸಮಸ್ಯೆಗಳಿಗೆ ಮೌಲ್ಯಾಧಾರಿತ ಶಿಕ್ಷಣವೇ ಶಾಶ್ವತ ಪರಿಹಾರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ನಮ್ಮ ದೇಶವು ನಿಜವಾದ ಅರ್ಥದಲ್ಲಿ 'ವಿಕಸಿತ ಭಾರತ' ಆಗಬೇಕಾದರೆ ನಮ್ಮ ಹಳ್ಳಿಗಳು ಮೊದಲು ಅಭಿವೃದ್ಧಿಯಾಗಬೇಕು. ಗ್ರಾಮೀಣ ಜನರಿಗೆ ಅಗತ್ಯ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು. ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬಡತನ ಮತ್ತು ಮೂಲಸೌಲಭ್ಯಗಳ ಕೊರತೆಯನ್ನು ಗಮನಿಸಿದ್ದೇವೆ. ಕೊಪ್ಪಳದಲ್ಲಿ ಗುರುಕುಲದ ಮೂಲಕ ಶಿಕ್ಷಣ ಸೇವೆಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.&lt;/p&gt;&lt;p&gt;ಶಾಸಕ ರಾಘವೇಂದ್ರ ಹಿಟ್ನಾಳ್, ಕೈಗಾರಿಕೋದ್ಯಮಿ ಶ್ರೀನಿವಾಸ ಗುಪ್ತ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಕರಡಿ ಸಂಗಣ್ಣ, ಶಾರದಾ ಶಿಕ್ಷಣ ಸಂಸ್ಥೆಗಳ ಸ್ಥಾಪಕ ವಿ.ಆರ್.ಪಾಟೀಲ್, ಗಂಗಾವತಿ ಕ್ಷೇತ್ರದ ಮಾಜಿ ಶಾಸಕರಾದ ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ಶರಣಪ್ಪ, ಉದ್ಯಮಿ ಗುರುರಾಜ್ ಹಾಲಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.&lt;/p&gt;&lt;p&gt;ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ವೇದಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆಸಕ್ತಿಯಿಂದ ಪಾಲ್ಗೊಂಡ ನೂರಾರು ನಾಗರಿಕರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ &quot;ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್&quot; ನಿರ್ವಹಿಸುತ್ತಿರುವ ಸೇವಾ ಚಟುವಟಿಕೆಗಳ ಅಗಾಧತೆಯ ಪರಿಚಯ ಮಾಡಿಕೊಂಡರು. ಸಂಸ್ಥೆಯ ಕಾರ್ಯಚಟುವಟಿಕೆಗಳ ವಿಡಿಯೊ ಪ್ರದರ್ಶಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಶಾಂತಗೌಡ ಬಿರಾದಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ &quot;ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ&quot; ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ಸ್ವರಮೇಳ (ಸಾಯಿ ಸಿಂಫನಿ ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.&lt;img&gt;&lt;/p&gt;&lt;p&gt;&lt;strong&gt;ಡಾ. ಎಚ್&zwnj;.ಡಿ. ಪಾಟೀಲ ಅವರಿಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ&lt;/strong&gt;&lt;/p&gt;&lt;p&gt;ಕಾರ್ಯಕ್ರಮದಲ್ಲಿ ಕೆಪಿಎಸ್&zwnj;ಸಿ ಮಾಜಿ ಸದಸ್ಯರೂ ಆದ ಸಮಾಜ ಸೇವಕ ಡಾ. ಎಚ್&zwnj;.ಡಿ. ಪಾಟೀಲ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಕರ್ನಾಟಕ ಪರಿವರ್ತಕ ಪ್ರಶಸ್ತಿ' ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಚ್.ಡಿ.ಪಾಟೀಲ್, ಕಲ್ಯಾಣ ಕರ್ನಾಟಕವು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ತಮ್ಮ ವೈದ್ಯಕೀಯ ಕ್ಷೇತ್ರದ ಸೌಲಭ್ಯಗಳು ಈ ಭಾಗಕ್ಕೂ ವಿಸ್ತರಿಸಬೇಕು. 'ಕೃಷಿ ಋಷಿ' ಮೂಲಕ ನಮ್ಮ ಜಿಲ್ಲೆಯ ರೈತರನ್ನೂ ಗೌರವಿಸಿ ಎಂದು ಮನವಿ ಮಾಡಿದರು.&lt;/p&gt;&lt;p&gt;&lt;strong&gt;ಸೇವೆಗೆ ಮಿಗಿಲಾದ ಧರ್ಮವಿಲ್ಲ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ&lt;/strong&gt;&lt;/p&gt;&lt;p&gt;ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ತಮ್ಮ ಅನುಪಸ್ಥಿತಿಯಲ್ಲಿ ಸಂದೇಶವನ್ನು ಕಳುಹಿಸಿದ್ದರು. &quot;ಸೇವೆಗೆ ಮಿಗಿಲಾದ ಧರ್ಮವಿಲ್ಲ, ನಿಸ್ವಾರ್ಥ ಮನಸ್ಸಿಗಿಂತ ದೊಡ್ಡ ಸಂಪತ್ತಿಲ್ಲ. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸೇವಾಯಜ್ಞ ಶ್ಲಾಘನೀಯ. ಈ ಸಮಾಜಮುಖಿ ಸತ್ಕಾರ್ಯವು ಇನ್ನಷ್ಟು ಜನರಿಗೆ ತಲುಪಬೇಕು. ಇದು ನಿರಂತರವಾಗಿ ಹೀಗೆಯೇ ಮುಂದುವರಿಯಲಿ&quot; ಎಂದು ಆಶಯ ವ್ಯಕ್ತಪಡಿಸಿದ್ದರು.&lt;/p&gt;&lt;p&gt;ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ, &quot;ಪ್ರತಿ ಜೀವಿಯಲ್ಲೂ ತನ್ನನ್ನು ಕಾಣುವ ಏಕತ್ವದ ಅನುಭವವೇ ನಿಜವಾದ ಜ್ಞಾನ. ಭಕ್ತನು ಕರುಣೆ ಮತ್ತು ಪ್ರೀತಿಯನ್ನು ಜಗತ್ತಿನ ಜೀವಿಗಳ ಮೇಲೆ ಸುರಿಸಿ ಸಂತೋಷ ನೀಡುವುದೇ ಶ್ರೇಷ್ಠ ಪೂಜೆ. ಸುಖ, ಭೋಗ ಮತ್ತು ಕೀರ್ತಿಗಳಲ್ಲಿ ನಿಜವಾದ ಸಂತೋಷವಿಲ್ಲ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳ ಸಮಗ್ರ ಬೆಳವಣಿಗೆಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಮಾರ್ಗದರ್ಶನ ನೀಡುತ್ತಿದ್ದಾರೆ&quot; ಎಂದು ಹೇಳಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ತನ್ನ ಬದುಕಿನ ಕಥನ ಹಂಚಿಕೊಂಡ ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಗುರುಕುಲದ 7ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್, &quot;ನನ್ನ ಪೋಷಕರು ಆರ್ಥಿಕ ಸಂಕಷ್ಟದಲ್ಲಿದ್ದರು. ನನಗೆ ಸರಿಯಾದ ಶಿಕ್ಷಣ ಸಿಗುವಂತೆ ಮಾಡುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಆದರೆ ಗುರುಕುಲಕ್ಕೆ ಸೇರಿದ ಬಳಿಕ ಶಿಕ್ಷಣ, ಊಟ, ವಸತಿ ಹಾಗೂ ಕ್ರೀಡೆ ಸೇರಿದಂತೆ ಎಲ್ಲ ಸೌಲಭ್ಯಗಳು ಉಚಿತವಾಗಿ ದೊರೆಯುತ್ತಿವೆ. ಅಕ್ಕನಿಗೆ ನರ್ಸಿಂಗ್ ಓದಲು ಅವಕಾಶ ಮಾಡಿಕೊಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಂದೆಗೆ ಉಚಿತ ಚಿಕಿತ್ಸೆ ಸಿಕ್ಕಿದೆ. ಭವಿಷ್ಯದಲ್ಲಿ ದೊಡ್ಡ ವಿಜ್ಞಾನಿಯಾಗಿ ಸಾಕಷ್ಟು ಹಣ ಮಾಡಬೇಕು ಎನ್ನುವ ಆಸೆ ಈ ಮೊದಲು ಇತ್ತು. ವಿಜ್ಞಾನಿಯಾಗಬೇಕು ಎನ್ನುವ ಆಸೆ ಈಗಲೂ ಇದೆ. ಆದರೆ ಹಣ ಮಾಡಬೇಕೆನ್ನುವ ಆಸೆ ಹೋಗಿದೆ. ದೇಶಸೇವೆ ಮಾಡುವ ಆಸೆ ಮೊಳೆತಿದೆ&quot; ಎಂದು ವಿವರಿಸಿದರು.&lt;img&gt;&lt;/p&gt;&lt;h2&gt;&lt;strong&gt;ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಪರಿಚಯ&lt;/strong&gt;&lt;/h2&gt;&lt;p&gt;ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಮಾಜಮುಖಿ ಸೇವೆ ಮತ್ತು ಸಂಸ್ಕಾರವನ್ನು ವಿದ್ಯಾರ್ಥಿಗಳ ಬದುಕಿನ ಭಾಗವಾಗಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಗುರುಕುಲ ಕಾರ್ಯನಿರ್ವಹಿಸುತ್ತಿದೆ. ಜೂನ್ 5, 2018ರಂದು ಸ್ಥಾಪನೆಯಾದ ಈ ಬಾಲಕರ ಕ್ಯಾಂಪಸ್, ಶಿಕ್ಷಣ ಮತ್ತು ಸೇವೆಯ ಸಮನ್ವಯದ ಕೇಂದ್ರವಾಗಿ ಬೆಳೆದಿದೆ. 50 ಎಕರೆ ಶುಷ್ಕ ಭೂಮಿಯಲ್ಲಿ ಆರಂಭವಾದ ಕ್ಯಾಂಪಸ್ ಇಂದು ಹಸಿರು ಪರಿಸರದ ಸುಂದರ ಆವರಣವಾಗಿ ರೂಪುಗೊಂಡಿದೆ.&lt;/p&gt;&lt;p&gt;ಈ ವರೆಗೆ 237 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದು, ಪ್ರಸ್ತುತ 58 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಶೇ 60ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯವರು, ಶೇ 93ರಷ್ಟು ವಿದ್ಯಾರ್ಥಿಗಳು ಬಿಪಿಎಲ್ ಕುಟುಂಬಗಳಿಗೆ ಸೇರಿದವರು. ಶಿಕ್ಷಣದ ಜೊತೆಗೆ ವೇದ, ಭಜನೆ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಮೂಲಕ ಸಂಸ್ಕಾರಯುತ ಹಾಗೂ ಸಮಾಜಮುಖಿ ನಾಗರಿಕರನ್ನು ರೂಪಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಶೀಘ್ರದಲ್ಲೇ ಆರೋಗ್ಯ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶವನ್ನೂ ಸಂಸ್ಥೆಯು ಹೊಂದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/madhusudana-sai-announces-healthcare-expansion-in-koppal-and-north-karnataka-gvd/articleshow-rzqfgu5"/>
        </item>
        <item>
            <title><![CDATA[ಮಂಡ್ಯ: ಸತ್ತ ಭಿಕ್ಷುಕಿ ಗುಡಿಸಲಿನಲ್ಲಿ ಹಣದ ಮೂಟೆಗಳ ರಾಶಿ, ಮನೆಯವರು ಎಣಿಸಲಾಗದೇ ಮಸೀದಿಗೆ ತಂದರು!]]></title>
            <link>https://kannada.asianetnews.com/gallery/viral/mandya-elderly-beggar-woman-noor-death-8-lakh-rupees-cash-found-guttalu-ucitygt</link>
            <guid isPermaLink="true">https://kannada.asianetnews.com/gallery/viral/mandya-elderly-beggar-woman-noor-death-8-lakh-rupees-cash-found-guttalu-ucitygt</guid>
            <pubDate>Sun, 23 Aug 2026 19:36:07 +0530</pubDate>
            <description><![CDATA[&lt;p&gt;ಮಂಡ್ಯದಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿನ ನಂತರ ಮನೆಯನ್ನು ಪರಿಶೀಲಿಸಿದಾಗ, ಭಿಕ್ಷೆಯಿಂದ ಸಂಗ್ರಹಿಸಿದ್ದ ಲಕ್ಷ ಲಕ್ಷ ಕಂತೆ-ಕಂತೆ ನಗದು ಹಣ ಪತ್ತೆಯಾಗಿದೆ. ಈ ಹಣವನ್ನು ಸಂಬಂಧಿಕರು ಹಂಚಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qecpe03n37v960a8bx47r8,imgname-mandya-begger-lady-amount-1787493243328.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯದಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿನ ನಂತರ ಮನೆಯನ್ನು ಪರಿಶೀಲಿಸಿದಾಗ, ಭಿಕ್ಷೆಯಿಂದ ಸಂಗ್ರಹಿಸಿದ್ದ ಲಕ್ಷ ಲಕ್ಷ ಕಂತೆ-ಕಂತೆ ನಗದು ಹಣ ಪತ್ತೆಯಾಗಿದೆ. ಈ ಹಣವನ್ನು ಸಂಬಂಧಿಕರು ಹಂಚಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಮಂಡ್ಯ (ಆ.23): ಸಿ&lt;/strong&gt;ಕ್ಕರೆ ಊಟ, ಇಲ್ಲದಿದ್ದರೆ ಉಪವಾಸ... ಊರೂರು ಅಲೆದು ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಬಳಿಕ ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಹಣ ಪತ್ತೆಯಾಗಿರುವ ಅಚ್ಚರಿಯ ಘಟನೆ ಮಂಡ್ಯ ನಗರದಲ್ಲಿ ಬೆಳಕಿಗೆ ಬಂದಿದೆ. ಬದುಕಿದ್ದಾಗ ಕಣ್ಣೆತ್ತಿಯೂ ನೋಡದ ಸಂಬಂಧಿಕರು, ಸಾವಿನ ನಂತರ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಹಂಚಿಕೊಂಡಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿಯಾಗಿದ್ದ ನೂರ್ (ಹೆಸರು) ಎಂಬ ವೃದ್ಧೆ, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಸರೆ ಇಲ್ಲದೆ ಹಲವು ವರ್ಷಗಳಿಂದ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ (ಗುರುವಾರ) ತಮ್ಮ ಪುಟ್ಟ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ವೃದ್ಧೆ ಮೃತಪಟ್ಟ ಸುದ್ದಿ ತಿಳಿದ ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.&lt;/p&gt;&lt;img&gt;&lt;p&gt;ಅಂತ್ಯಸಂಸ್ಕಾರ ಮುಗಿದ ನಂತರ ಸಂಬಂಧಿಕರು ಹಾಗೂ ಸ್ಥಳೀಯ ಮುಖಂಡರು ವೃದ್ಧೆ ವಾಸವಿದ್ದ ಮನೆಯನ್ನು ಪರಿಶೀಲಿಸಲು ತೆರಳಿದ್ದಾರೆ. ಈ ವೇಳೆ ಮನೆಯ ಒಳಗಿದ್ದ ಮೂಟೆಗಳು, ಪೆಟ್ಟಿಗೆಗಳನ್ನು ತೆರೆದು ನೋಡಿದಾಗ ಎಲ್ಲರಿಗೂ ಶಾಕ್ ಕಾದಿತ್ತು. ಮನೆಯ ಮೂಲೆ ಮೂಲೆಗಳಲ್ಲಿ ಕಂತೆ ಕಂತೆ ನೋಟುಗಳು ಹಾಗೂ ನಾಣ್ಯಗಳ ಮೂಟೆಗಳು ಪತ್ತೆಯಾಗಿದ್ದವು. ಹಲವು ವರ್ಷಗಳಿಂದ ತನಗೆ ಭಿಕ್ಷೆಯಲ್ಲಿ ಬಂದ ಹಣವನ್ನು ಆ ವೃದ್ಧೆ ಖರ್ಚು ಮಾಡದೆ ಹಾಗೆಯೇ ಕೂಡಿಟ್ಟಿದ್ದರು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಕುಳಿತು ನಾಣ್ಯಗಳು ಮತ್ತು ನೋಟುಗಳನ್ನು ಎಣಿಕೆ ಮಾಡಲು ಆರಂಭಿಸಿದ್ದು, ಎಣಿಕೆಯ ನಂತರ ಒಟ್ಟು ಮೊತ್ತ ₹8 ಲಕ್ಷಕ್ಕೂ ಅಧಿಕ ಇರುವುದು ದೃಢಪಟ್ಟಿದೆ. ಬಳಿಕ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಮಾತುಕತೆ ನಡೆಸಿ, ಆ ಹಣವನ್ನು ವೃದ್ಧೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. 'ವೃದ್ಧೆ ಬದುಕಿದ್ದಾಗ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಬೀದಿ ಬೀದಿ ಅಲೆದಾಗ ಯಾವೊಬ್ಬ ಸಂಬಂಧಿಯೂ ಸಹಾಯಕ್ಕೆ ಬರಲಿಲ್ಲ. ಆದರೆ ಆಕೆ ಸತ್ತ ಮೇಲೆ ಆಕೆಯ ಭಿಕ್ಷಾಟನೆಯ ಕಷ್ಟದ ಹಣವನ್ನು ಮುಲಾಜಿಲ್ಲದೆ ಹಂಚಿಕೊಂಡಿದ್ದಾರೆ' ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆ ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/viral/mandya-elderly-beggar-woman-noor-death-8-lakh-rupees-cash-found-guttalu-ucitygt"/>
        </item>
        <item>
            <title><![CDATA[ಕೆಪಿಎಸ್‌ಸಿ ಹಗರಣ: ಇಡಿ ಅಧಿಕಾರಿಗಳು ಬರ್ತಿದ್ದಂತೆ ಮನೆಗೆ ಬೀಗ ಹಾಕಿ IAS ಜ್ಞಾನೇಂದ್ರ ಕುಮಾರ್ ಪರಾರಿ!]]></title>
            <link>https://kannada.asianetnews.com/gallery/state/kpsc-veterinary-exam-scam-ed-raid-ias-officer-gyanendra-kumar-home-jayamahal-bengaluru-igfucl2</link>
            <guid isPermaLink="true">https://kannada.asianetnews.com/gallery/state/kpsc-veterinary-exam-scam-ed-raid-ias-officer-gyanendra-kumar-home-jayamahal-bengaluru-igfucl2</guid>
            <pubDate>Sun, 23 Aug 2026 17:21:02 +0530</pubDate>
            <description><![CDATA[&lt;p&gt;ಕೆಪಿಎಸ್&zwnj;ಸಿ ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಅಧಿಕಾರಿಗಳು ಬರುವಷ್ಟರಲ್ಲಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನು. ಆದರೆ, ದಾಳಿಗೆ ಬಂದ ಇಡಿ ಅಧಿಕಾರಿಗಳು ಪಟ್ಟು ಬಿಡದೇ ಮಾಡಿದ್ದೇನು ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0q6g86q7p181q3694mf2hbp,imgname-ias-gyanendra-kumar--1--1787484971223.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಪಿಎಸ್&zwnj;ಸಿ ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಅಧಿಕಾರಿಗಳು ಬರುವಷ್ಟರಲ್ಲಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನು. ಆದರೆ, ದಾಳಿಗೆ ಬಂದ ಇಡಿ ಅಧಿಕಾರಿಗಳು ಪಟ್ಟು ಬಿಡದೇ ಮಾಡಿದ್ದೇನು ನೋಡಿ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: ರಾ&lt;/strong&gt;ಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್&zwnj;ಸಿ (KPSC) ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಬೆಂಗಳೂರಿನ ಜಯಮಹಲ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಇಡಿ ದಾಳಿ ನಡೆಸಿದ್ದು, ಅಪಾರ್ಟ್&zwnj;ಮೆಂಟ್ ಆವರಣದಲ್ಲಿ ಗಂಟೆಗಳ ಕಾಲ ಭಾರೀ ಹೈಡ್ರಾಮಾ ನಡೆದಿದೆ.&lt;/p&gt;&lt;img&gt;&lt;p&gt;&lt;strong&gt;ತನಿಖೆ ಆರಂಭವಾಗ್ತಿದ್ದಂತೆ ಐಎಎಸ್ ಅಧಿಕಾರಿ ಪರಾರಿ!&lt;/strong&gt;&lt;/p&gt;&lt;p&gt;ಕೆಪಿಎಸ್&zwnj;ಸಿ ಪಶು ವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆಯನ್ನು ಇಡಿ ಅಧಿಕಾರಿಗಳು ಕೈಗೆತ್ತಿಕೊಳ್ಳುತ್ತಿದ್ದಂತೆಯೇ, ಎಚ್ಚೆತ್ತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಜಯಮಹಲ್&zwnj;ನಲ್ಲಿರುವ ಖಾಸಗಿ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಜ್ಞಾನೇಂದ್ರ ಕುಮಾರ್ ಅವರ ಫ್ಲ್ಯಾಟ್&zwnj;ಗೆ ಶುಕ್ರವಾರ ಮುಂಜಾನೆ 3 ಇನ್ನೋವಾ (Innova) ಕಾರುಗಳಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಯೋಧರೊಂದಿಗೆ ಇಡಿ ಅಧಿಕಾರಿಗಳ ತಂಡ ಆಗಮಿಸಿತು.&lt;/p&gt;&lt;img&gt;&lt;p&gt;ಅಧಿಕಾರಿಗಳು ಬರುತ್ತಿದ್ದಂತೆ ಅಪಾರ್ಟ್&zwnj;ಮೆಂಟ್&zwnj;ನ ಸೆಕ್ಯೂರಿಟಿ ಗಾರ್ಡ್ ಮುಖ್ಯ ಗೇಟ್&zwnj;ಗೆ ಬೀಗ ಹಾಕಿದನು. 'ಯಾರನ್ನೂ ಒಳಗೆ ಬಿಡಲು ನನಗೆ ಅನುಮತಿ ಇಲ್ಲ' ಎಂದು ಅಧಿಕಾರಿಗಳನ್ನು ತಡೆದನು. ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಸೆಕ್ಯೂರಿಟಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ, ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಳಿಕ ಗೇಟ್ ಓಪನ್ ಮಾಡಲಾಯಿತು. ಬಳಿಕ ಮುಂಜಾಗ್ರತಾ ಕ್ರಮವಾಗಿ ಅಪಾರ್ಟ್&zwnj;ಮೆಂಟ್ ಮುಂಭಾಗ ಬ್ಯಾರಿಕೇಡ್ ಹಾಕಿ ಸಿಆರ್&zwnj;ಪಿಎಫ್ ಭದ್ರತೆ ಒದಗಿಸಲಾಯಿತು.&lt;/p&gt;&lt;img&gt;&lt;p&gt;&lt;strong&gt;ಸಾಕ್ಷಿಗೆ (Witness) ನಿರಾಕರಿಸಿದ ಎದುರು ಮನೆಯವರು!&lt;/strong&gt;&lt;/p&gt;&lt;ul&gt; &lt;li&gt;ಅಧಿಕಾರಿಯ ಮನೆ ಲಾಕ್ ಆಗಿದ್ದರಿಂದ ಬಾಗಿಲು ಮುರಿಯಲು ಸ್ಥಳೀಯ ಸಾಕ್ಷಿಗಳ (Panchas) ಅಗತ್ಯವಿತ್ತು.&lt;/li&gt; &lt;li&gt;ಇಡಿ ಅಧಿಕಾರಿಗಳು ನಿಯಮಾವಳಿ ಪ್ರಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (Chief Secretary) ಹಾಗೂ ಪೊಲೀಸ್ ಇಲಾಖೆಗೆ ಲಿಖಿತ ಮಾಹಿತಿ ರವಾನಿಸಿದರು.&lt;/li&gt; &lt;li&gt;ಬಳಿಕ ಜ್ಞಾನೇಂದ್ರ ಕುಮಾರ್ ಅವರ ಎದುರು ಮನೆಯ ವ್ಯಕ್ತಿಯ ಬಳಿ ಬಾಗಿಲು ತೆಗೆಯುವಾಗ &lsquo;ಸಾಕ್ಷಿ&rsquo;ಯಾಗುವಂತೆ ಅಧಿಕಾರಿಗಳು ಮನವಿ ಮಾಡಿದರು. ಆದರೆ ಆ ವ್ಯಕ್ತಿ ತಾನು ಸಾಕ್ಷಿಯಾಗಲು ಸಾಧ್ಯವಿಲ್ಲ ಎಂದು ನೇರವಾಗಿ ನಿರಾಕರಿಸಿದರು.&lt;/li&gt; &lt;li&gt;ನಂತರ ಮತ್ತೊಂದು ಮನೆಯವರ ಜೊತೆ ಮಾತನಾಡಿದಾಗ, ಪಕ್ಕದ ಮನೆಯ ಓರ್ವ ವ್ಯಕ್ತಿ ಅಧಿಕೃತ ಸಾಕ್ಷಿಯಾಗಲು ಒಪ್ಪಿಕೊಂಡರು.&lt;/li&gt;&lt;/ul&gt;&lt;img&gt;&lt;p&gt;&lt;strong&gt;ವೈಯಾಲಿಕಾವಲ್&zwnj;ನಿಂದ ಕೀ ಮೇಕರ್ ಕರೆಸಿದ ಇಡಿ: ಬಾಗಿಲು ಓಪನ್&lt;/strong&gt;&lt;/p&gt;&lt;p&gt;ಬೀಗ ಒಡೆಯುವ ಬದಲು ಹೊಸ ಕೀ ತಯಾರಿಸಲು ನಿರ್ಧರಿಸಿದ ಅಧಿಕಾರಿಗಳು, ಸಮೀಪದ ವೈಯಾಲಿಕಾವಲ್&zwnj;ನಿಂದ ನುರಿತ &lsquo;ಕೀ ಮೇಕರ್&rsquo; (Key Maker) ಒಬ್ಬರನ್ನು ಸ್ಥಳಕ್ಕೆ ಕರೆಸಿದರು. ಕೀ ಮೇಕರ್ ಮೂಲಕ ಬಾಗಿಲಿನ ಲಾಕ್ ಓಪನ್ ಮಾಡಿಸಿ, ಸಾಕ್ಷಿಗಳ ಸಮ್ಮುಖದಲ್ಲಿ ಅಧಿಕಾರಿಗಳ ತಂಡ ಫ್ಲ್ಯಾಟ್&zwnj;ನೊಳಗೆ ಪ್ರವೇಶಿಸಿತು.&lt;/p&gt;&lt;img&gt;&lt;p&gt;ಸ್ಕ್ಯಾನರ್, ಪ್ರಿಂಟರ್ ಹಿಡಿದು ಒಳನುಗ್ಗಿದ ಅಧಿಕಾರಿಗಳು!&lt;/p&gt;&lt;p&gt;ಫ್ಲ್ಯಾಟ್ ಒಳಗೆ ಪ್ರವೇಶಿಸಿದ ಬೆನ್ನಲ್ಲೇ ಅಧಿಕಾರಿಗಳು ತಮ್ಮೊಂದಿಗೆ ಪ್ರಿಂಟರ್ ಹಾಗೂ ಸ್ಕ್ಯಾನರ್&zwnj;ಗಳನ್ನು ಒಳಗೆ ಕೊಂಡೊಯ್ದಿದ್ದಾರೆ. ಮನೆಯ ಪ್ರತಿಯೊಂದು ಕೊಠಡಿ, ಕಪಾಟುಗಳನ್ನು ಜಾಲಾಡಲಾಗುತ್ತಿದ್ದು, ಪಶು ವೈದ್ಯಕೀಯ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ ಕಡತಗಳು, ಅಕ್ರಮ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಭರದಿಂದ ಸಾಗಿದೆ. ನಾಪತ್ತೆಯಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಪತ್ತೆಗೂ ಶೋಧ ತೀವ್ರಗೊಂಡಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/kpsc-veterinary-exam-scam-ed-raid-ias-officer-gyanendra-kumar-home-jayamahal-bengaluru-igfucl2"/>
        </item>
        <item>
            <title><![CDATA[Bengaluru: 'ಕರೆದಾಗ ಎಲ್ಲಾ ರೂಮಿಗೆ ಬರ್ಬೇಕು', ಕ್ಲಾಸ್‌ಮೆಟ್ ಕಿರುಕುಳಕ್ಕೆ ನೊಂದು ಕೆರೆಗೆ ಹಾರಿದ ಯುವತಿ]]></title>
            <link>https://kannada.asianetnews.com/karnataka-districts/fed-up-with-a-friend-s-harassment-22-years-young-women-jumps-in-to-hsr-layout-aagara-lake-sns/articleshow-735q55n</link>
            <guid isPermaLink="true">https://kannada.asianetnews.com/karnataka-districts/fed-up-with-a-friend-s-harassment-22-years-young-women-jumps-in-to-hsr-layout-aagara-lake-sns/articleshow-735q55n</guid>
            <pubDate>Sun, 23 Aug 2026 15:50:25 +0530</pubDate>
            <description><![CDATA[ಬೆಂಗಳೂರಿನ ಎಚ್&zwnj;ಎಸ್&zwnj;ಆರ್ ಲೇಔಟ್&zwnj;ನಲ್ಲಿ ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು 22 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾವಿಗೂ ಮುನ್ನ ಬರೆದ ಡೆತ್&zwnj;ನೋಟ್&zwnj;ನಲ್ಲಿ, ಕಾಲೇಜು ಸಹಪಾಠಿ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0q2407bw5acnyf6bbg4ve89,imgname-bengaluru-girl-1787480375530.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎಚ್&zwnj;ಎಸ್&zwnj;ಆರ್ ಲೇಔಟ್&zwnj;ನಲ್ಲಿ ನಡೆದಿದೆ. ಮೃತ ಯುವತಿಯನ್ನು 22 ವರ್ಷದ ವಾಣಿ ಎಂದು ಗುರುತಿಸಲಾಗಿದೆ. ಮೃತ ಯುವತಿ ಕೆಲಸ ಹುಡುಕಿಕೊಂಡು ಒಂದು ವರ್ಷದ ಹಿಂದೆ ಬೆಂಗಳೂರಿಗೆ ಆಗಮಿಸಿದ್ದಳು, ಇಲ್ಲಿಯೇ ಚಿನ್ನದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.&lt;/p&gt;&lt;h2&gt;ಪ್ರೇಮಿ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ&lt;/h2&gt;&lt;p&gt;ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಬೆಳಮಕ್ಕಿ ಮೂಲದ ವಾಣಿ, ನಿನ್ನೆ ಎಚ್ಎಸ್ಆರ್ ಲೇಔಟ್ ನಲ್ಲಿರುವ ಆಗರ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಯುವತಿಗೆ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಅಭಿಷೇಕ್ ಎಂಬಾತನ ಕಿರುಕುಳದಿಂದಲೇ ಯುವತಿ ಸಾವಿಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.&lt;/p&gt;&lt;h2&gt;'ಸಾರಿ ಪಪ್ಪಾ' ಎಂದವಳ ಸಾವಿನ ಹಿಂದಿನ ರಹಸ್ಯವೇನು?&lt;/h2&gt;&lt;p&gt;ಕಾಲೇಜ್ ದಿನಗಳಲ್ಲಿ ಒಟ್ಟಿಗೆ ಓದುತ್ತಿದ್ದ ಅಭಿಷೇಕ್ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಯುವತಿ ಸಾವಿಗೂ ಮುನ್ನ ಡೆತ್&zwnj;ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಯುವಕ, ವಾಟ್ಸಾಪ್&zwnj;ನಲ್ಲಿ ವಿಡಿಯೋ, ಫೋಟೋಸ್ ಕಳುಹಿಸಿ ಬ್ಲಾಕ್ಮೇಲ್ ಮಾಡುತ್ತಿದ್ದನಂತೆ. ಕರೆದಾಗ ಎಲ್ಲಾ ರೂಮಿಗೆ ಬರಬೇಕು ಎಂದು ಮೆಸೇಜ್ ಮಾಡುತ್ತಿದ್ದನಂತೆ. ಅಲ್ಲದೇ ಕಳೆದ ಒಂದು ವರ್ಷದಿಂದ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನಂತೆ. ಇದರಿಂದ ನೊಂದ ಯುವತಿ, ಸಾರಿ ಪಪ್ಪ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಎಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.&lt;/p&gt;&lt;h2&gt;ಡೆತ್&zwnj; ನೋಟ್&zwnj;ನಲ್ಲಿ ಏನಿದೆ?&lt;/h2&gt;&lt;p&gt;ವಾಣಿ ಬರೆದಿದ್ದಾಳೆ ಎನ್ನುವ ಡೆತ್&zwnj;ನೋಟ್&zwnj;ನಲ್ಲಿ, 'ನನ್ನ ಸಾವಿಗೆ ಆಳೂರು ಸ್ವಾಮಿ ಮಗ ಅಭಿಷೇಕ್ ಎ.ಎಸ್ ಕಾರಣ. ನನಗೆ ವಿಡಿಯೋ, ಫೋಟೋ ಸೆಂಡ್ ಮಾಡಿ ಕಾಲ್ ಮೆಸೇಜ್ ಮಾಡಿ ಹಿಂಸೆ ಮಾಡುತ್ತಾ ಇರುತ್ತಾನೆ. ಆದರೆ ಈ ವಿಷಯ ಬೇರೆ, ಅವರ ಜೊತೆ ಹೇಳಿಕೊಳ್ಳಲು ಆಗದೆ ಒಬ್ಬಳೇ ತುಂಬಾ ಹಿಂಸೆ ಅನುಭವಿಸಿರುತ್ತೇನೆ ನನಗೆ. ನನ್ನ ಫ್ಯಾಮಿಲಿ ಎಂದರೆ ಜೀವ, ಅವರ ಮರ್ಯಾದೆ ಹೋಗಬಾರದು ಅಂತ ಈ ನಿರ್ಧಾರ ಮಾಡುತ್ತೇನೆ. ನನ್ನ ಸಾವಿಗೆ ಅಭಿಷೇಕ್ ಎ.ಎಸ್. ಕಾರಣ. ಬ್ಯಾಕೋಡು ಹಾರಿಗೆ ಹತ್ತಿರ ಇರುವ ಆಳೂರು ಅವರ ಅಪ್ಪನ ಹೆಸರು ಸ್ವಾಮಿ ನನ್ನ ಜೊತೆಗೆ ಕಾಲೇಜಿನಲ್ಲಿ ಒಟ್ಟಿಗೆ ಓದಿರುವುದು. ನನ್ನ ಸಾವಿಗೆ ಅಭಿಷೇಕ್ ಕಾರಣ, ಅವನಿಗೆ ಶಿಕ್ಷೆ ಆಗಬೇಕು ಇದೇ ನನ್ನ ಕೊನೆ ಆಸೆ. ಫೋಟೋ-ವಿಡಿಯೋ ಇಟ್ಟುಕೊಂಡು ನನಗೆ ಕಾಲ್ ಮೆಸೇಜ್ ಮಾಡಿ ಯಾವಾಗಲೂ ತುಂಬಾ ಭಯಪಡಿಸುತ್ತಾನೆ. ನನಗೆ ರೂಮ್ಗೆ ಬಾ, ಇಲ್ಲ ಅಂದರೆ ನಿಮ್ಮ ಮನೆ ಮರ್ಯಾದೆ ಹಾಳು ಮಾಡ್ತೀನಿ ಎಂದು ಹೇಳುತ್ತಾನೆ. ಸಾರಿ ಪಪ್ಪಾ, ನನ್ನಿಂದ ನಿನ್ನ ಮರ್ಯಾದೆ ಹೋಗಬಾರದು. ನನ್ನ ನೆನಪು ಮಾಡಿಕೊಳ್ಳಬೇಡಿ. ನೀವು ಎಲ್ಲರೂ ಚೆನ್ನಾಗಿ ಇರಿ. ಅಷ್ಟೇ. ಮನೆಯಲ್ಲಿ ಎಲ್ಲರನ್ನೂ ಚೆನ್ನಾಗಿ ನೋಡಿಕೋ. ಯಾವತ್ತೂ ನನ್ನ ಮಗಳು ಇತರ ಮಾಡಿಕೊಂಡಳು ಅಂತ ಬೇಜಾರು ಆಗಬೇಡ. ಅಕ್ಕನ ಚೆನ್ನಾಗಿ ನೋಡಿಕೋ. ಅಜ್ಜ ಅಜ್ಜಿ ಅಮ್ಮ ಎಲ್ಲರಲ್ಲೂ ಚೆನ್ನಾಗಿ ನೋಡಿಕೋ. ನನ್ನಿಂದ ನನ್ನ ಫ್ರೆಂಡ್ಸ್&zwnj;ಗೆ ಬೇಜಾರು ಆಗಿದ್ದರೆ ಸಾರಿ. ನನ್ನ ಪರಿಸ್ಥಿತಿಯನ್ನ ಹೇಳಲಾಗದೆ ನಾನು ಸತ್ತು ಹೋಗಬೇಕು ಎಂದು ನಿರ್ಧಾರ ಮಾಡಿದ್ದೀನಿ. ನಾನು ಸತ್ತ ಮೇಲೆ ಅಭಿಷೇಕ್ ಸುಳ್ಳು ಹೇಳಿ ನಾಟಕ ಮಾಡುತ್ತಾನೆ. ಆದರೆ ಅವನಿಗೆ ಶಿಕ್ಷೆ ಆಗಬೇಕು ಹಾಗೆ ಮಾಡಿ. ಒಂದು ವರ್ಷದಿಂದ ಹಿಂಸೆ ಮಾಡುತ್ತಾ ಇದ್ದಾನೆ. ಆದರೆ ಇಷ್ಟು ದಿನ ನಾನು ಧೈರ್ಯವಾಗಿ ಇದ್ದೆ. ಆದರೆ ಅವನು ಇವಾಗ ನನಗೆ ತುಂಬಾ ಹಿಂಸೆ ಮಾಡುತ್ತಾ ಇದ್ದಾನೆ. ಅವನ ಬಗ್ಗೆ ನಿಮ್ಮ ಜೊತೆ ಹೇಳೋಕೆ ಆಗದೆ ಈ ನಿರ್ಧಾರ ಮಾಡಿದೆ. ಆಳೂರು ಸ್ವಾಮಿ ಮಗ ಅಭಿಷೇಕ್&zwnj;ಗೆ ಶಿಕ್ಷೆ ಆಗಬೇಕು ಅವನಿಗೆ ಶಿಕ್ಷೆ ಕೊಡಿಸಿ ನನ್ನ ಸಾವಿಗೆ ಅವನೇ ಕಾರಣ ಅಪ್ಪಾಜಿ. ಬೇಜಾರು ಆಗಬೇಡಿ. ಜೊತೆಗೆ ಇರದ ಜೀವ ಯಾವತ್ತೂ ಜೀವಂತ' ಎಂದು ಬರೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/fed-up-with-a-friend-s-harassment-22-years-young-women-jumps-in-to-hsr-layout-aagara-lake-sns/articleshow-735q55n"/>
        </item>
        <item>
            <title><![CDATA[ಗಿಡ್ಡ, ದಪ್ಪ, ಕಪ್ಪು ಶರ್ಟ್; ಕಾಫಿ ಬಿಲ್‌ನಲ್ಲಿ ಬಾಡಿ ಶೇಮಿಂಗ್ ನೋಡಿ ಬೆಂಗಳೂರು ಯುವಕ ಶಾಕ್, ಕೆಫೆಯಿಂದ ಕ್ಷಮೆ]]></title>
            <link>https://kannada.asianetnews.com/bengaluru-urban/little-fat-black-shirt-bengaluru-customer-finds-shocking-body-shaming-remark-on-subko-coffee-bill-suh/articleshow-28i89tm</link>
            <guid isPermaLink="true">https://kannada.asianetnews.com/bengaluru-urban/little-fat-black-shirt-bengaluru-customer-finds-shocking-body-shaming-remark-on-subko-coffee-bill-suh/articleshow-28i89tm</guid>
            <pubDate>Sun, 23 Aug 2026 15:20:23 +0530</pubDate>
            <description><![CDATA[&lt;p&gt;ಬೆಂಗಳೂರಿನ ಕೆಫೆಯೊಂದರಲ್ಲಿ ಗ್ರಾಹಕರ ಹೆಸರಿನ ಬದಲು &lsquo;ಗಿಡ್ಡ, ದಪ್ಪ, ಕಪ್ಪು ಶರ್ಟ್&rsquo; ಎಂದು ಬಿಲ್&zwnj;ನಲ್ಲಿ ನಮೂದಿಸಿದ ಆರೋಪಕ್ಕೆ ಬಾಡಿ ಶೇಮಿಂಗ್&zwnj; ವಿವಾದ ಸೃಷ್ಟಿಯಾಗಿದ್ದು, ಸಬ್ಕೊ ಕಾಫಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0q0djtpbyh841j2hzy6frrg,imgname-little-fat-black-shirt-bengaluru-customer-finds-shocking-body-shaming-remark-on-subko-coffee-bill-1787478592342.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಕೋರಮಂಗಲದಲ್ಲಿರುವ ಸಬ್ಕೊ ದಿ ಕ್ರಾಫ್ಟರಿ ಕಾಫಿ ಔಟ್&zwnj;ಲೆಟ್&zwnj;ನಲ್ಲಿ ಗ್ರಾಹಕರೊಬ್ಬರಿಗೆ ಎದುರಾದ ಅನುಭವ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗ್ರಾಹಕರ ಹೆಸರಿನ ಬದಲು ಅವರ ದೇಹದ ಆಕಾರ ಮತ್ತು ಧರಿಸಿದ್ದ ಬಟ್ಟೆಯನ್ನು ಆಧರಿಸಿ &ldquo;Little Fat Black Shirt&rdquo; ಎಂದು ಬಿಲ್&zwnj;ನಲ್ಲಿ ನಮೂದಿಸಿರುವ ಆರೋಪ ಕೇಳಿಬಂದಿದೆ. ಈ ಘಟನೆಯ ಬಗ್ಗೆ ಗ್ರಾಹಕರು ರೆಡ್ಡಿಟ್&zwnj;ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಬ್ಕೊ ಕಾಫಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಹೆಸರಿನ ಬದಲು ದೇಹದ ಆಧಾರದ ಗುರುತು&lt;/h2&gt;&lt;p&gt;ಗ್ರಾಹಕರ ಪ್ರಕಾರ, ಅವರು ಕೋರಮಂಗಲದ ಸಬ್ಕೊ ದಿ ಕ್ರಾಫ್ಟರಿಗೆ ತೆರಳಿ ಆಹಾರ ಆರ್ಡರ್ ಮಾಡಿ ಬಿಲ್ ಪಾವತಿಸಿದ್ದರು. ನಂತರ ರಶೀದಿಯನ್ನು ಪರಿಶೀಲಿಸಿದಾಗ, &lsquo;Customer Details&rsquo; ವಿಭಾಗದಲ್ಲಿ ತಮ್ಮ ಹೆಸರಿನ ಬದಲು Little Fat Black Shirt ಎಂದು ನಮೂದಿಸಿರುವುದನ್ನು ಗಮನಿಸಿದ್ದಾರೆ. ಸಬ್ಕೊ ನನ್ನ ಹೆಸರನ್ನು ಬಳಸಲಿಲ್ಲ. ನನ್ನನ್ನು ವಿವರಿಸಲು ನನ್ನ ದೇಹವನ್ನು ಬಳಸಿದರು ಎಂಬ ಅರ್ಥದಲ್ಲಿ ಅವರು ತಮ್ಮ ಪೋಸ್ಟ್&zwnj;ಗೆ ಶೀರ್ಷಿಕೆ ನೀಡಿದ್ದಾರೆ. ಅವರು, ನನ್ನ ಹೆಸರಲ್ಲ. 12ನೇ ಟೇಬಲ್&zwnj;ನಲ್ಲಿರುವ ವ್ಯಕ್ತಿ ಎಂದೂ ಅಲ್ಲ. ಸರಳ ಆರ್ಡರ್ ಸಂಖ್ಯೆಯೂ ಅಲ್ಲ. ಬದಲಾಗಿ ನನ್ನ ದೇಹವನ್ನು ಆಧರಿಸಿ ಗುರುತಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಇದು ಕೇವಲ ಹಾಸ್ಯವಲ್ಲ. ಯಾರೋ ಒಬ್ಬರು ಗ್ರಾಹಕರನ್ನು ನೋಡಿ, ಅವರನ್ನು &lsquo;ದಪ್ಪ&rsquo; ಎಂದು ಗುರುತಿಸಿ ಆ ಪದವನ್ನು ವ್ಯವಸ್ಥೆಯಲ್ಲಿ ದಾಖಲಿಸಬೇಕಾಗಿತ್ತು ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಇದು ತಮಾಷೆಯಲ್ಲ&lt;/h2&gt;&lt;p&gt;ಘಟನೆಯ ಕುರಿತು ಪ್ರತಿಕ್ರಿಯಿಸಿದ ಗ್ರಾಹಕರು, ಬಾಡಿ ಶೇಮಿಂಗ್ ಅನ್ನು ಪುರುಷ ಅಥವಾ ಮಹಿಳೆ ಎಂಬ ಆಧಾರದ ಮೇಲೆ ವಿಭಿನ್ನವಾಗಿ ನೋಡಬಾರದು ಎಂದು ಹೇಳಿದ್ದಾರೆ. ಮಹಿಳೆಯೊಬ್ಬರ ದೇಹವನ್ನು ಇದೇ ರೀತಿ ರಶೀದಿಯಲ್ಲಿ ವಿವರಿಸಿದ್ದರೆ ಅದನ್ನು ಯಾರೂ ಸುಲಭವಾಗಿ &ldquo;ತಮಾಷೆ&rdquo; ಎಂದು ಪರಿಗಣಿಸುತ್ತಿರಲಿಲ್ಲ. ಅದೇ ರೀತಿ ಪುರುಷನಾಗಿದ್ದರೂ ದೇಹದ ಆಧಾರದ ಮೇಲೆ ಅವಮಾನಿಸುವುದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ. ನಂತರ ನೀಡಿದ ಕಾಮೆಂಟ್&zwnj;ನಲ್ಲಿ ತಮ್ಮ ನೋಟದ ಬಗ್ಗೆಯೂ ಸ್ಪಷ್ಟನೆ ನೀಡಿದ ಅವರು, ತಾವು 6 ಅಡಿ ಎತ್ತರವಿದ್ದು ದೊಡ್ಡ ದೇಹ ಹೊಂದಿದ್ದರೂ ತಾವು ದಪ್ಪರಾಗಿಲ್ಲ ಎಂದು ಹೇಳಿದ್ದಾರೆ. ಮೊದಲ ಬಾರಿ ಆ ಪದಗಳನ್ನು ಗಮನಿಸಿದಾಗ ಇದೊಂದು ತಮಾಷೆಯೇ ಎಂದು ಪ್ರಶ್ನಿಸಿದ್ದಾಗಿ, ಆದರೆ ಅದೇ ಬಿಲ್&zwnj;ನೊಂದಿಗೆ ಮತ್ತೆ ಸಿಬ್ಬಂದಿ ಬಂದಾಗ ತಮಗೆ ಆಘಾತ ಮತ್ತು ಕೋಪ ಉಂಟಾಯಿತು ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಸಬ್ಕೊ ಕಾಫಿಯಿಂದ ಸಾರ್ವಜನಿಕ ಕ್ಷಮೆಯಾಚನೆ&lt;/h2&gt;&lt;p&gt;ರೆಡ್ಡಿಟ್&zwnj;ನಲ್ಲಿ ಪೋಸ್ಟ್ ವೈರಲ್ ಆದ ಬಳಿಕ ವಿಷಯ ಸಬ್ಕೊ ಕಾಫಿಯ ಗಮನಕ್ಕೂ ಬಂದಿದೆ. ಸಂಸ್ಥೆ ತನ್ನ ಅಧಿಕೃತ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಿ ಕ್ಷಮೆಯಾಚಿಸಿದೆ. ಗ್ರಾಹಕರ ಹೆಸರಿನ ಬದಲು ಅವರ ದೇಹದ ಆಕಾರವನ್ನು ಆಧರಿಸಿ ಗುರುತಿಸಿರುವುದು ತಪ್ಪು ಎಂದು ಸಂಸ್ಥೆ ಸ್ಪಷ್ಟವಾಗಿ ಒಪ್ಪಿಕೊಂಡಿದೆ. ಕೊಬ್ಬನ್ನು ಅವಮಾನಿಸುವುದು ತಪ್ಪು. ಪ್ರತಿಯೊಂದು ರೂಪದಲ್ಲೂ, ಪ್ರತಿಯೊಂದು ಸಂದರ್ಭದಲ್ಲೂ ತಪ್ಪು. ಯಾವುದೇ ವಿನಾಯಿತಿ ಇಲ್ಲ. ಇದು ಕ್ರೂರವಾಗಿತ್ತು ಮತ್ತು ನಮ್ಮ ಸಂಸ್ಥೆಯಲ್ಲೇ ಇದು ನಡೆದಿದೆ&rdquo; ಎಂಬ ಅರ್ಥದಲ್ಲಿ ಸಬ್ಕೊ ಹೇಳಿಕೆ ನೀಡಿದೆ. ವಿಷಯ ವೈರಲ್ ಆದ ಕಾರಣಕ್ಕೆ ಮಾತ್ರ ಕ್ಷಮೆಯಾಚಿಸುತ್ತಿಲ್ಲ. ಘಟನೆ ಸಂಸ್ಥೆಯನ್ನೇ ಕಾಡಿರುವುದರಿಂದ ಮತ್ತು ಇದರಿಂದ ತಮ್ಮ ತಂಡದ ಕಾರ್ಯವೈಖರಿ ಕುರಿತು ಗಂಭೀರವಾಗಿ ಯೋಚಿಸುವಂತಾಗಿದೆ ಎಂದು ಸಂಸ್ಥೆ ಹೇಳಿದೆ.&lt;/p&gt;&lt;h2&gt;ಉದ್ಯೋಗಿ ಉದ್ದೇಶಪೂರ್ವಕವಾಗಿ ನಮೂದಿಸಿದ್ದಾರೆ&lt;/h2&gt;&lt;p&gt;ಸಬ್ಕೊ ಪ್ರಕಾರ, ಬಿಲ್&zwnj;ನಲ್ಲಿ ಆ ವಿವರಣೆಯನ್ನು ಉದ್ಯೋಗಿಯೊಬ್ಬರು ಉದ್ದೇಶಪೂರ್ವಕವಾಗಿ ದಾಖಲಿಸಿದ್ದಾರೆ. ಸಂಸ್ಥೆ ಇದನ್ನು ಯಾವುದೇ ರೀತಿಯಲ್ಲೂ ಸ್ವೀಕಾರಾರ್ಹವೆಂದು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ. ಗ್ರಾಹಕರನ್ನು ಸಂಪರ್ಕಿಸಿ ವೈಯಕ್ತಿಕವಾಗಿ ಕ್ಷಮೆಯಾಚಿಸಲು ಪ್ರಯತ್ನಿಸಿರುವುದಾಗಿ ಕೆಫೆ ಹೇಳಿದೆ. ಘಟನೆಯಲ್ಲಿ ಭಾಗಿಯಾಗಿರುವ ಉದ್ಯೋಗಿಯ ವಿರುದ್ಧ &ldquo;ಸಾಧ್ಯವಾದಷ್ಟು ಬಲವಾದ ಶಿಸ್ತು ಕ್ರಮ&rdquo; ತೆಗೆದುಕೊಂಡಿರುವುದಾಗಿಯೂ ಸಂಸ್ಥೆ ತಿಳಿಸಿದೆ. ಇದರ ಜೊತೆಗೆ, ಕೌಂಟರ್&zwnj;ನಲ್ಲಿ ಗ್ರಾಹಕರ ಮಾಹಿತಿಯನ್ನು ದಾಖಲಿಸುವ ವಿಧಾನದಲ್ಲೂ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಸಬ್ಕೊ ಹೇಳಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ಗ್ರಾಹಕರೊಂದಿಗೆ ಗೌರವಯುತವಾಗಿ ಸಂವಹನ ನಡೆಸುವ ಮಹತ್ವವನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ತರಬೇತಿ ಮತ್ತು ಸಿಬ್ಬಂದಿ ಸೇರ್ಪಡೆ ಪ್ರಕ್ರಿಯೆಯಲ್ಲೂ ಈ ವಿಷಯವನ್ನು ಪರಿಹರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/bengaluru-urban/little-fat-black-shirt-bengaluru-customer-finds-shocking-body-shaming-remark-on-subko-coffee-bill-suh/articleshow-28i89tm"/>
        </item>
        <item>
            <title><![CDATA[ಬೆಂಗಳೂರಿಗರಿಗೆ ಬಿಗ್ ಗುಡ್ ನ್ಯೂಸ್; ಶೀಘ್ರವೇ ಪಿಂಕ್ ಲೈನ್ ಮೆಟ್ರೋ ಮಾರ್ಗ ಜನರ ಸೇವೆಗೆ ಸಿದ್ಧ, ಎಲ್ಲಿಂದ? ಎಲ್ಲಿಗೆ?]]></title>
            <link>https://kannada.asianetnews.com/karnataka-districts/big-good-news-for-bengaluru-residents-pink-line-metro-route-will-soon-be-ready-for-public-service-sns/articleshow-lf6s98b</link>
            <guid isPermaLink="true">https://kannada.asianetnews.com/karnataka-districts/big-good-news-for-bengaluru-residents-pink-line-metro-route-will-soon-be-ready-for-public-service-sns/articleshow-lf6s98b</guid>
            <pubDate>Sun, 23 Aug 2026 13:41:49 +0530</pubDate>
            <description><![CDATA[2027ರ ಮಾರ್ಚ್ ವೇಳೆಗೆ ನಮ್ಮ ಮೆಟ್ರೋ ಪಿಂಕ್ ಲೈನ್ ಸಂಪೂರ್ಣವಾಗಿ ಸಿದ್ಧಗೊಳ್ಳಲಿದ್ದು, ಸಚಿವ ಕೃಷ್ಣ ಭೈರೇಗೌಡರು ಸುರಂಗ ಮಾರ್ಗದ ಕಾಮಗಾರಿ ಪರಿಶೀಲಿಸಿದ್ದಾರೆ. ತಾವರೆಕೆರೆಯಿಂದ ಕಾಲೇನ ಅಗ್ರಹಾರವರೆಗಿನ ಎಲಿವೇಟೆಟೆಡ್ ಮಾರ್ಗವು ಆಗಸ್ಟ್ ಅಥವಾ ಸೆಪ್ಟೆಂಬರ್&zwnj;ನಲ್ಲಿ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಈ ಮಾರ್ಗವು ಬೆಂಗಳೂರಿನ ಹೃದಯ ಭಾಗವನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ptmwq7qpmwbqtr77fp6n5p,imgname-namma-metro-pink-line-1787472540391.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;2027 ಮಾರ್ಚ್&zwnj; ವೇಳೆಗೆ ಮೆಟ್ರೋ ಪಿಂಕ್ ಲೈನ್ ಮಾರ್ಗ ಉದ್ಘಾಟನೆಗೆ ಸಿದ್ಧಗೊಂಡು, ಜನರ ಸೇವೆಗೆ ಲಭ್ಯವಾಗಲಿದೆ. ಎಂಜಿ ರೋಡ್&zwnj;ನಿಂದ ಶಿವಾಜಿ ನಗರಕ್ಕೆ ತೆರಳುವ ಸುರಂಗ ಮಾರ್ಗದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಸಚಿವ ರಿಜ್ವಾನ್ ಅರ್ಷದ್, ಸಂಸದ ಪಿಸಿ ಮೋಹನ್ ಸಾಥ್ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.&lt;/p&gt;&lt;h2&gt;ನಮ್ಮ ಮೆಟ್ರೋ ಪಿಂಕ್ ಲೈನ್: ಸುರಂಗದೊಳಗೆ ಸಚಿವರ ಹೆಜ್ಜೆ&lt;/h2&gt;&lt;p&gt;ಎಂಜಿ ರೋಡ್ ನಿಂದ ಶಿವಾಜಿನಗರ ಮೆಟ್ರೋ ಸ್ಟೇಷನ್ ವರೆಗೆ ನಡೆದುಕೊಂಡು ಬಂದ ಸಚಿವರು, ಮೆಟ್ರೋ ಕಾಮಗಾರಿ ವೀಕ್ಷಣೆ ಮಾಡಿದರು. ಆ ಬಳಿಕ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಒಟ್ಟು 21 ಕಿಲೋ ಮೀಟರ್ ಉದ್ದದ ಪಿಂಕ್ ಲೈನ್ ಮಾರ್ಗ ಇದಾಗಿದೆ. ಇದರಲ್ಲಿ ಎರಡು ಪೋರ್ಷನ್ ಇದೆ, ಎಲಿವೇಟೆಡ್ ಮತ್ತು ಅಂಡರ್ ಗ್ರೌಂಡ್. ತಾವರೆಕೆರೆಯಿಂದ ಕಾಲೇನ ಅಗ್ರಹಾರ ವರೆಗಿನ ಎಲಿವೇಟೆಡ್ ಮಾರ್ಗ ಸಿದ್ದ ಆಗಿದೆ, ಅದು 7.5 ಕಿಲೋ ಮೀಟರ್. ರೈಲ್ವೆ ಅವರಿಂದ ಅಂತಿಮ ಪ್ರಮಾಣಪತ್ರ ಬರಬೇಕು, ಇನ್ನೊಂದು ವಾರ-ಹತ್ತು ದಿನದಲ್ಲಿ ಬರಬಹುದು. ಅದು ಬಂದು ಬಿಟ್ಟರೆ ಎಲಿವೇಟೆಡ್ ಮಾರ್ಗದ ಎಲ್ಲಾ ಕೆಲಸಗಳು ಪೂರ್ತಿ ಆಗುತ್ತವೆ. ಆಗಸ್ಟ್ ಅಥವ ಸೆಪ್ಟೆಂಬರ್ ತಿಂಗಳಲ್ಲಿ ಉದ್ಘಾಟನೆ ಮಾಡುವ ಹಂತಕ್ಕೆ ಬಂದಿದೆ ಎಂದು ಹೇಳಿದರು.&lt;/p&gt;&lt;h2&gt;7.5 ಕಿಲೋ ಮೀಟರ್ ಎಲಿವೇಟೆಡ್ ಮಾರ್ಗ ಸಿದ್ಧ!&lt;/h2&gt;&lt;p&gt;ಆದರೆ, ಅಂಡರ್ ಗ್ರೌಂಡ್ ಪೋರ್ಷನ್ ನಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇವೆ. ಇದು ಮುಂದಿನ ವರ್ಷ ಮಾರ್ಚ್ ವೇಳೆಗೆ ಆಗಬೇಕು ಅಂತ ಡೆಡ್ ಲೈನ್ ಇದೆ. ಜಯದೇವ ಹತ್ತಿರ ಎಂಜಿನ್ ಇಳಿಸಿ ಟ್ರಯಲ್ ರನ್ ಆರಂಭ ಮಾಡಿ ಅಂತ ಸೂಚನೆ ಕೊಟ್ಟಿದ್ದೇನೆ. ಸೆಪ್ಟೆಂಬರ್ ನಲ್ಲಿ ಪಿಂಕ್ ಲೈನ್ ಮಾರ್ಗದ ಎಲಿವೇಟೆಡ್ ಮಾರ್ಗ ಉದ್ಘಾಟನೆಗೆ ಸಿದ್ದ ಇದೆ. ಸಿಎಂ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಸಮಯ ನಿಗದಿ ಮಾಡಬೇಕಿದೆ. ಅಂಡರ್ ಗ್ರೌಂಡ್ ಪೋರ್ಷನ್ ಮಾರ್ಚ್ ವರೆಗೂ ಕಾಮಗಾರಿ ನಡೆಯುತ್ತೆ. ಅಂಡರ್ ಗ್ರೌಂಡ್ ಪೋರ್ಷನ್ ಮುಗಿದಿಲ್ಲ ಅಂತ ಎಲಿವೇಟೆಡ್ ನಿಲ್ಲಿಸೋಕೆ ಆಗಲ್ಲ. ಬನ್ನೇರುಘಟ್ಟ ರಸ್ತೆಯಿಂದ ಜಯದೇವ, MG ರಸ್ತೆ ಮೂಲಕ ನಾಗವಾರಕ್ಕೆ ಸಂಪರ್ಕ ಕಲ್ಪಿಸುತ್ತೆ. ಬೆಂಗಳೂರಿನ ಹೃದಯ ಭಾಗದ ಮೂಲಕ ಪಿಂಕ್ ಲೈನ್ ಹಾದು ಹೋಗುತ್ತೆ, ಇದೇ ಲೈನ್ ಮುಂದೆ ಏರ್ಪೋರ್ಟ್ ಮಾರ್ಗಕ್ಕೂ ಕನೆಕ್ಟ್ ಆಗುತ್ತೆ ಎಂದು ಹೇಳಿದರು.&lt;/p&gt;&lt;h2&gt;ಮೆಟ್ರೋ ಅಧಿಕಾರಿಗಳಿಗೆ ಧನ್ಯವಾದ!&lt;/h2&gt;&lt;p&gt;ಉಳಿದಂತೆ ನಾಗವಾರದಲ್ಲಿ ಟ್ರೈನ್ ಚೇಂಜ್ ಮಾಡಿದರೆ ಹೆಬ್ಬಾಳ ಮೂಲಕ ಏರ್ಪೋರ್ಟ್ ತಲುಪಬಹುದು. ಹೀಗಾಗಿ ಸಂಪೂರ್ಣವಾಗಿ ಈ ಮಾರ್ಗ ಉದ್ಘಾಟನೆ ಆಗಬೇಕು ಅನ್ನೋದು ನಮ್ಮ ಇಚ್ಚೆ. ಒಟ್ಟು 12 ಸಾವಿರ ಕೋಟಿ ರೂಪಾಯಿ ಈ ಯೋಜನೆಗೆ ಖರ್ಚು ಆಗ್ತಾ ಇದೆ. ಎಲ್ಲಾ ತನ್ನ ಪಾಲಿನ ಹಣವನ್ನು ನಮ್ಮ ಸರ್ಕಾರ ಒದಗಿಸಿ ಕೊಟ್ಟಿದೆ. ನಿಗದಿತ ಕಾಲಮಿತಿಯಲ್ಲಿ ಯೋಜನೆ ಆಗದೆ, ವಿಳಂಬ ಆಯ್ತು. ಕೋವಿಡ್ ಬಂತು, 1.5 ವರ್ಷಗಳ ಕಾಲ ವಿಳಂಬ ಆಯ್ತು. ಆದರೂ ಬಳಿಕ ಮತ್ತೆ ವಿಳಂಬ ಆಗದೆ ಒಂದು ಪೋರ್ಷನ್ ಸೆಪ್ಟೆಂಬರ್ ಗೆ ಸಿದ್ಧವಾಗಿದೆ. ಕೆಲವು ಸವಾಲುಗಳ ನಡುವೆಯೂ ನಮ್ಮ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಮೆಟ್ರೋ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಜನರಿಗೆ ಇದನ್ನು ಸಮರ್ಪಣೆ ಮಾಡಿದಾಗ ಮಾತ್ರ ಕೆಲಸ ಸಾರ್ಥಕ ಆಗುತ್ತೆ ಅಂತ ತಿಳಿಸಿದರು.&lt;/p&gt;&lt;p&gt;From MG Road to Shivajinagar - walked through the Pink Line tunnel with Minister Shri Rizwan Arshad to inspect progress on Bengaluru&rsquo;s next big leap in connectivity.#BengaluruMetro#MetroConnectivity pic.twitter.com/pqRBHBpp2t&lt;/p&gt;&lt;p&gt;&mdash; Krishna Byre Gowda (@krishnabgowda) August 22, 2026&lt;/p&gt;&lt;p&gt;&lt;/p&gt;&lt;h2&gt;ವಿಮಾನ ನಿಲ್ದಾಣ ಮಾರ್ಗ ಆರಂಭ ಯಾವಾಗ?&lt;/h2&gt;&lt;p&gt;ಏರ್ಪೋರ್ಟ್ ಮಾರ್ಗದ ಬಗ್ಗೆ ಸಚಿವರು ಪ್ರತಿಕ್ರಿಯೆ ನೀಡಿ, ಏರ್ಪೋರ್ಟ್ ಲೈನ್ ಅಂದರೆ ಅದು 2A ಮತ್ತು 2B ಆಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೃಷ್ಣರಾಜಪುರಕ್ಕೆ ಬಂದು ನಾಗವಾರ-ಹೆಬ್ಬಾಳ ಮೂಲಕ ಏರ್ಪೋರ್ಟ್ ಹೋಗುತ್ತದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆಆರ್&zwnj;ಪುರಕ್ಕೆ ಕೆಲಸ ಅಡ್ವಾನ್ಸ್ ಸ್ಟೇಜ್ ನಲ್ಲಿ ಇದೆ. ಕೆಆರ್ ಪುರದಿಂದ ಇಬ್ಬಲೂರು ಸ್ಟೇಷನ್ ಗೆ ಅಕ್ಟೋಬರ್ ನಲ್ಲಿ ಟ್ರಯಲ್ ಮಾಡಲು ಹೇಳಿದ್ದೇನೆ. ಇಬ್ಬಲೂರಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಡಿಸೆಂಬರ್ ಅಥವಾ ಜನವರಿಯಲ್ಲಿ ಟ್ರಯಲ್ ರನ್ ಮಾಡಲು ಹೇಳಿದ್ದೇನೆ. ಕೆಆರ್ ಪುರದಿಂದ ನಾಗವಾರ ಮುಂದಿನ ವರ್ಷದ ಮಧ್ಯದ ವೇಳೆಗೆ ಎಲ್ಲಾ ಸಿದ್ಧ ಆಗುತ್ತೆ ಎಂದರು.&lt;/p&gt;&lt;h2&gt;ಮಾರ್ಚ್&zwnj;, 2028ರ ವೇಳೆಗೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ&lt;/h2&gt;&lt;p&gt;ನಾಗವಾರದಿಂದ ಹೆಬ್ಬಾಳ ವರೆಗೆ ಸ್ವಲ್ಪ ಸಮಸ್ಯೆಗಳಿದೆ. ಔಟರ್ ರಿಂಗ್ ರಸ್ತೆ ಇರುವುದರಿಂದ ಹಲವು ಸವಾಲುಗಳು ಇವೆ. ಅಲ್ಲಿ ಎಲಿವೇಟೆಡ್ ನಲ್ಲೇ ಎರಡು ಸೆಪೆರೆಟ್ ಟ್ರ್ಯಾಕ್ ಬರ್ತಾ ಇದೆ. ಭವಿಷ್ಯದಲ್ಲಿ ಅಂದರೆ 5 ವರ್ಷ ಆದ ಮೇಲೆ ಅಲ್ಲಿ ಆರೆಂಜ್ ಲೈನ್ ಬರುತ್ತೆ. ಅದಕ್ಕೂ ಕೂಡ ಈಗಲೇ ಟ್ರ್ಯಾಕ್ ಆಗಬೇಕಾಗುತ್ತೆ, ಮತ್ತೆ ಮತ್ತೆ ಕಾಮಗಾರಿ ಮಾಡೋಕೆ ಆಗಲ್ಲ. ಕೆಂಪಾಪುರದಿಂದ ಹೆಬ್ಬಾಳ ವರೆಗೆ ಒಟ್ಟು ನಾಲ್ಕು ಟ್ರ್ಯಾಕ್ ಬರುತ್ತೆ. ಎಲ್ಲ ಮಾರ್ಗಗಳು ಇಲ್ಲಿ ಮರ್ಜ್ ಆಗುತ್ತೆ, ಸ್ಪ್ಲಿಟ್ ಆಗುತ್ತೆ, ಇಂಟರ್ ಚೇಂಜ್ ಕೂಡ ಮಾಡಿಕೊಳ್ಳಬಹುದು. ಇವೆಲ್ಲ ಸವಾಲು ಇರುವುದರಿಂದ ಕೆಂಪಾಪುರ ದಿಂದ ಹೆಬ್ಬಾಳ ವಿಳಂಬ ಆಗುತ್ತೆ. ಹೆಬ್ಬಾಳದಿಂದ ಏರ್ಪೋರ್ಟ್ ವರೆಗಿನ ಲೈನ್ ಮುಂದಿನ ವರ್ಷ ಸೆಪ್ಟೆಂಬರ್ ಅಕ್ಟೋಬರ್ ವೇಳೆಗೆ ಕಾರ್ಯಾಚರಣೆ ಆಗಬಹುದು. 2027 ಡಿಸೆಂಬರ್ ಅಥವಾ 2028 ಮಾರ್ಚ್ ವೇಳೆಗೆ ಈ ಎಲ್ಲಾ ಮಾರ್ಗಗಳು ಪೂರ್ತಿ ಆಗುತ್ತೆ ಎಂಬ ಭರವಸೆ ನೀಡಿದರು.&lt;/p&gt;&lt;h2&gt;ಅತ್ತಿಬೆಲೆವರೆಗೂ ಮೆಟ್ರೋ ಆಗುತ್ತಾ?&lt;/h2&gt;&lt;p&gt;ಯಲ್ಲೋ ಲೈನ್ ವಿಸ್ತರಣೆ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವರು, ಬೊಮ್ಮಸಂದ್ರ ದಿಂದ ಅತ್ತಿಬೆಲೆಗೆ ವಿಸ್ತರಣೆ ವಿಚಾರವಾಗಿ ಯಾವುದೋ ರಾಜ್ಯದವರು ಹೇಳಿದರೆ ಅದಕ್ಕೆ ನಾವು ಉತ್ತರ ಕೊಡಲ್ಲ. ಅವರು ಹೇಳಿದ್ದಕ್ಕೆ ಅವರೇ ಪ್ರತಿಕ್ರಿಯೆ ಕೊಡಬೇಕು, ನಾನು ಹೇಳಿದ್ದಕ್ಕೆ ಎಲ್ಲಾ ಅವರು ಉತ್ತರ ಕೊಡುತ್ತಾರಾ? ಸದ್ಯಕ್ಕೆ ಅಧ್ಯಯನಕ್ಕೆ ಕೆಲವು ಪೋರ್ಷನ್ ಕೊಟ್ಟಿದ್ದೇವೆ. ಫಿಸೆಬಲಿಟಿ ಬರುತ್ತೆ ಅನ್ನೋದನ್ನ ಸರ್ವೇ ಮಾಡುತ್ತಿದ್ದೇವೆ. ಸರ್ವೇ ರಿಪೋರ್ಟ್ ಬಂದ ಮೇಲೆ ನಾನು ಮಾತಾಡುತ್ತೇನೆ. ಮೆಟ್ರೋ ಅಲ್ಲಿಗೆ ಬೇಕು, ಇಲ್ಲಿಗೆ ಬೇಕು ನಮಗೂ ಬೇಕು ಅಂತ ಸಿಎಂ ಅವರ ಮೇಲೆ ತುಂಬಾ ಒತ್ತಡಗಳು ಇವೆ. ಯಾರು ಯಾವ ಊರು ಅಂತ ಹೆಸರು ಹೇಳಲ್ಲ. ಅವರವರ ಹಕ್ಕು ಅವರು ಕೇಳುತ್ತಿದ್ದಾರೆ, ಅದು ತಪ್ಪು ಅಂತ ಹೇಳಲ್ಲ. ಆದರೆ ಎಲ್ಲದಕ್ಕೂ ಮೆಟ್ರೋ ಒಂದೇ ಪರಿಹಾರ ಅಲ್ಲ. ಮೆಟ್ರೋ ಜೊತೆಗೆ ಸಬ್ ಅರ್ಬನ್, RRTS ರೈಲು ಸಂಪರ್ಕ ಕೂಡ ಆಗಬೇಕು. ಮೆಟ್ರೋಗೂ ಕೂಡ ಸಾಧಕ ಬಾಧಕ, ಖರ್ಚು ವೆಚ್ಚ ಇರುತ್ತೆ ಎಂದು ವಿವರಿಸಿದರು.&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/big-good-news-for-bengaluru-residents-pink-line-metro-route-will-soon-be-ready-for-public-service-sns/articleshow-lf6s98b"/>
        </item>
        <item>
            <title><![CDATA[ಸವದತ್ತಿ ರೈತನ ಖೋವಾ ಸಾಮ್ರಾಜ್ಯ; 600 ltr ಹಾಲು,  ₹240ಯಂತೆ 150 kg ಖೋವಾ ಮಾರಾಟ]]></title>
            <link>https://kannada.asianetnews.com/gallery/karnataka-districts/farmer-from-savadatti-taluk-in-belagavi-has-started-khoa-making-business-using-dairy-farming-in-his-karimani-village-mrq-z0l0zx5</link>
            <guid isPermaLink="true">https://kannada.asianetnews.com/gallery/karnataka-districts/farmer-from-savadatti-taluk-in-belagavi-has-started-khoa-making-business-using-dairy-farming-in-his-karimani-village-mrq-z0l0zx5</guid>
            <pubDate>Sun, 23 Aug 2026 12:42:47 +0530</pubDate>
            <description><![CDATA[&lt;p&gt;ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್ ಎಂಬ ರೈತ, ತಮ್ಮ ಗ್ರಾಮದಲ್ಲಿಯೇ ಹೈನುಗಾರಿಕೆಯನ್ನು ಬಳಸಿ ಖೋವಾ ತಯಾರಿಸುವ ಉದ್ಯಮವನ್ನು ಆರಂಭಿಸಿದ್ದಾರೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದ ಈ ಉದ್ಯಮವು ಇಂದು ಉತ್ತರ ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ppw89chv7xrqzf5wtb62ne,imgname-dairy-farmimg-with-khoa--2--1787468587308.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್ ಎಂಬ ರೈತ, ತಮ್ಮ ಗ್ರಾಮದಲ್ಲಿಯೇ ಹೈನುಗಾರಿಕೆಯನ್ನು ಬಳಸಿ ಖೋವಾ ತಯಾರಿಸುವ ಉದ್ಯಮವನ್ನು ಆರಂಭಿಸಿದ್ದಾರೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದ ಈ ಉದ್ಯಮವು ಇಂದು ಉತ್ತರ ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ.&lt;/p&gt;&lt;img&gt;&lt;p&gt;ಉದ್ಯಮಿಯಾಗಲು ತುಂಬಾನೇ ಕಷ್ಟಪಡಬೇಕು ಎಂಬ ಮಾತನ್ನು ಸುಳ್ಳು ಮಾಡಿದವರು ನಮ್ಮ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್. ಇವರು ತಮ್ಮೂರಿನಲ್ಲಿಯೇ ಆರಂಭಿಸಿದ ಉದ್ಯಮ ಇಂದು ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯಗೊಂಡಿದೆ. ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್ ಅವರು ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದವರು.&lt;/p&gt;&lt;img&gt;&lt;p&gt;ಕಾರಿಮನಿ ರೈತರು ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆಯನ್ನು ಉಪಕಸಬುನ್ನಾಗಿ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿಯ ಹೈನುಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಮಲ್ಲಿಕಾರ್ಜುನ್ ಅವರು ತಾವೇ ಹಾಲು ಸಂಗ್ರಹಣೆ ಮಾಡಿಕೊಳ್ಳಲು ಆರಂಭಿಸಿದರು. ಈ ಹಾಲಿನಿಂದ ತಮ್ಮ ಜಮೀನಿನಲ್ಲಿ ಸೌದೆ ಒಲೆ ಮಾಡಿಕೊಂಡು ಖೋವಾ (Khoa) ತಯಾರಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಂಡು ಖೋವಾ ತಯಾರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಯುಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್, ಆರಂಭದ ದಿನಗಳಲ್ಲಿ ಖೋವಾ ತಯಾರಿಸಿ ಧಾರವಾಡಕ್ಕೆ ಕಳುಹಿಸಲಾಗುತ್ತಿತ್ತು. ಇದೀಗ ನಾವೇ ಶುದ್ದ ಖೋವಾ ಮತ್ತು ಅದರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತೇವೆ. ಜನರೇ ನಮ್ಮ ಉತ್ಪನ್ನದ ಪ್ರಚಾರ ಮಾಡಿದ್ದರಿಂದ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಮಲ್ಲಿಕಾರ್ಜುನ್ ಅವರ ಡೈರಿಯಲ್ಲಿ ದಿನಕ್ಕೆ ಅಂದಾಜು 600 ಲೀಟರ್&zwnj;ನಷ್ಟು ಹಾಲು ಸಂಗ್ರಹವಾಗುತ್ತದೆ. ಈ 600 ಲೀಟರ್ ಹಾಲಿನಿಂದ 150 ಕೆಜಿಯಷ್ಟು ಸಿದ್ದವಾಗುತ್ತದೆ. 1 ಕೆಜಿ ಖೋವಾ ಬೆಲೆ 240 ರೂಪಾಯಿ ಆಗಿದೆ. ಗ್ರಾಹಕರಿದ್ದ ಸ್ಥಳಕ್ಕೆ ಖೋವಾ ರವಾನಿಸಲು ಹೆಚ್ಚುವರಿಯಾಗಿ ಸಾರಿಗೆ ವೆಚ್ಚ ಸೇರಿಸಲಾಗುತ್ತದೆ. ಖೋವಾ ಜೊತೆ ಮಿಲ್ಕ್ ಕೇಕ್, ಪೇಡಾ, ಕಲಾಕಂದ್ ಮತ್ತು ಲಾಡುಗಳನ್ನು ಸಹ ತಯಾರಿಸಲಾಗುತ್ತದೆ.&lt;/p&gt;&lt;img&gt;&lt;p&gt;ತಮ್ಮ 5 ಎಕರೆ ಕೃಷಿಭೂಮಿಯಲ್ಲಿ ಉದ್ಯಮ ಕಟ್ಟಿಕೊಂಡಿರುವ ಮಲ್ಲಿಕಾರ್ಜುನ್ ಅವರು ಕಬ್ಬು, ಮೆಕ್ಕೆಜೋಳ ಸಹ ಬೆಳೆಯುತ್ತಾರೆ. ಮೂವರು ಕಾರ್ಮಿಕರು ಇವರ ಬಳಿ ಕೆಲಸ ಮಾಡುತ್ತಿದ್ದು, ಮಲ್ಲಿಕಾರ್ಜುನ್ ವಗ್ಗರ್ ಅವರ ಡೈರಿಯಿಂದಾಗಿ ಕಾರಿಮನಿ ಗ್ರಾಮದಲ್ಲಿ ಬಹುತೇಕ ರೈತರೆಲ್ಲರೂ ಹೈನುಗಾರಿಕೆ ಆರಂಭಿಸಿದ್ದಾರೆ. ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ಗದಗ, ಇಳಕಲ್, ಜಮಖಂಡಿ ಸೇರಿದಂತೆ ಸುತ್ತಲಿನ ನಗರಗಳಿಗೆಲ್ಲಾ ಇಲ್ಲಿಯ ಖೋವಾ ರವಾನೆಯಾಗುತ್ತದೆ.&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/farmer-from-savadatti-taluk-in-belagavi-has-started-khoa-making-business-using-dairy-farming-in-his-karimani-village-mrq-z0l0zx5"/>
        </item>
        <item>
            <title><![CDATA[ಬೆಂಗಳೂರು ಸುರಂಗ ರಸ್ತೆ: ₹22,000 ಕೋಟಿ ಟೆಂಡರ್ ಗೊಂದಲದ ನಡುವೆ ಅದಾನಿ-ಡಿಕೆಶಿ ಮೀಟಿಂಗ್!]]></title>
            <link>https://kannada.asianetnews.com/gallery/bengaluru-urban/bengaluru-tunnel-road-adani-group-22000-crore-tender-cm-dk-shivakumar-meeting-ig2oa0a</link>
            <guid isPermaLink="true">https://kannada.asianetnews.com/gallery/bengaluru-urban/bengaluru-tunnel-road-adani-group-22000-crore-tender-cm-dk-shivakumar-meeting-ig2oa0a</guid>
            <pubDate>Sun, 23 Aug 2026 12:28:35 +0530</pubDate>
            <description><![CDATA[&lt;p&gt;ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ಅದಾನಿ ಎಂಟರ್&zwnj;ಪ್ರೈಸಸ್ ಅತಿ ಕಡಿಮೆ ಮೊತ್ತದ ₹22,000 ಕೋಟಿ ಬಿಡ್ ಸಲ್ಲಿಸಿದೆ. ಸರ್ಕಾರದ ಅಂದಾಜು ವೆಚ್ಚಕ್ಕಿಂತ ಬಿಡ್ ಮೊತ್ತವು ₹4,569 ಕೋಟಿ ಅಧಿಕವಾಗಿರುವುದರಿಂದ ಟೆಂಡರ್ ಅಂತಿಮಗೊಂಡಿಲ್ಲ. ಈ ನಡುವೆಯೇ ಗೌತಮ್ ಅದಾನಿ ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0pnnjrpegqq0m731snqst5d,imgname-goutam-adani-meet-cm-dk-shivakumar--2--1787467320086.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ಅದಾನಿ ಎಂಟರ್&zwnj;ಪ್ರೈಸಸ್ ಅತಿ ಕಡಿಮೆ ಮೊತ್ತದ ₹22,000 ಕೋಟಿ ಬಿಡ್ ಸಲ್ಲಿಸಿದೆ. ಸರ್ಕಾರದ ಅಂದಾಜು ವೆಚ್ಚಕ್ಕಿಂತ ಬಿಡ್ ಮೊತ್ತವು ₹4,569 ಕೋಟಿ ಅಧಿಕವಾಗಿರುವುದರಿಂದ ಟೆಂಡರ್ ಅಂತಿಮಗೊಂಡಿಲ್ಲ. ಈ ನಡುವೆಯೇ ಗೌತಮ್ ಅದಾನಿ ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷೆಯ 'ಬೆಂಗಳೂರು ಸುರಂಗ ರಸ್ತೆ' (Bengaluru Tunnel Road Project) ಯೋಜನೆ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಬೃಹತ್ ಯೋಜನೆಗೆ ಖ್ಯಾತ ಉದ್ಯಮಿ ಗೌತಮ್ ಅದಾನಿ ನೇತೃತ್ವದ 'ಅದಾನಿ ಎಂಟರ್&zwnj;ಪ್ರೈಸಸ್' (Adani Enterprises) ಅತ್ಯಂತ ಕಡಿಮೆ ಮೊತ್ತದ ಬಿಡ್ ಸಲ್ಲಿಸಿ ಮುಂಚೂಣಿಯಲ್ಲಿದೆ.&lt;/p&gt;&lt;p&gt;ಆದರೆ, ಸರ್ಕಾರದ ಅಂದಾಜು ವೆಚ್ಚಕ್ಕಿಂತ ಬಿಡ್ ಮೊತ್ತ ಹೆಚ್ಚಿರುವ ಕಾರಣ ಟೆಂಡರ್ ಅಂತಿಮಗೊಳಿಸುವುದು ತಡವಾಗುತ್ತಿದ್ದು, ಈ ನಡುವೆ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ತೀವ್ರ ರಾಜಕೀಯ ಹಾಗೂ ವಾಣಿಜ್ಯ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP Model) ಅಡಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ಈ ಯೋಜನೆಗೆ ಅದಾನಿ ಗ್ರೂಪ್ ಸುಮಾರು ₹22,267 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿದೆ. ತಾಂತ್ರಿಕವಾಗಿ ಅದಾನಿ ಸಂಸ್ಥೆ ಅತ್ಯಂತ ಕಡಿಮೆ ಮೊತ್ತ ನಮೂದಿಸಿದ (L1) ಗುತ್ತಿಗೆದಾರ ಸಂಸ್ಥೆಯಾಗಿ ಹೊರಹೊಮ್ಮಿದೆ.&lt;/p&gt;&lt;p&gt;ಆದರೆ, ರಾಜ್ಯ ಸರ್ಕಾರ ಮತ್ತು ಯೋಜನೆಯ ಉಸ್ತುವಾರಿ ಹೊತ್ತಿರುವ 'ಬಿ-ಸ್ಮೈಲ್' (B-SMILE) ಸಂಸ್ಥೆಯ ಮೂಲ ಅಂದಾಜು ವೆಚ್ಚ ಸುಮಾರು ₹17,698 ಕೋಟಿ ರೂಪಾಯಿಗಳಷ್ಟಿತ್ತು. ಸರ್ಕಾರದ ನಿರೀಕ್ಷೆಗಿಂತ ಅದಾನಿ ಗ್ರೂಪ್ ಕೋಟ್ ಮಾಡಿರುವ ಮೊತ್ತವು ಸುಮಾರು ₹4,569 ಕೋಟಿ ಅಧಿಕವಾಗಿದೆ. ಹೀಗಾಗಿ ಅಧಿಕೃತವಾಗಿ ಗುತ್ತಿಗೆಯನ್ನು ಇನ್ನೂ ಅದಾನಿ ಸಂಸ್ಥೆಗೆ ಹಸ್ತಾಂತರಿಸಲಾಗಿಲ್ಲ.&lt;/p&gt;&lt;img&gt;&lt;p&gt;ಟೆಂಡರ್ ವೆಚ್ಚದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿರುವುದರಿಂದ, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಬಿ-ಸ್ಮೈಲ್ ಸಂಸ್ಥೆಯು ಫೈಲ್ ಅನ್ನು ರಾಜ್ಯ ಸಚಿವ ಸಂಪುಟದ (Karnataka Cabinet) ಅಂಗಳಕ್ಕೆ ತಳ್ಳಿದೆ.&lt;/p&gt;&lt;p&gt;&lt;strong&gt;ಪ್ರಸ್ತುತ ಸರ್ಕಾರದ ಮುಂದಿರುವ 3 ಪ್ರಮುಖ ಆಯ್ಕೆಗಳು:&lt;/strong&gt;&lt;/p&gt;&lt;p&gt;&lt;strong&gt;ದರ ಇಳಿಕೆಗೆ ಮಾತುಕತೆ:&lt;/strong&gt; ಬಿಡ್ ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡುವಂತೆ ಅದಾನಿ ಗ್ರೂಪ್ ಜೊತೆ ಸಂಧಾನ/ಮಾತುಕತೆ ನಡೆಸುವುದು.&lt;/p&gt;&lt;p&gt;&lt;strong&gt;ವೆಚ್ಚ ಪರಿಷ್ಕರಣೆ: ಪ್ರ&lt;/strong&gt;ಸ್ತುತ ಮಾರುಕಟ್ಟೆ ದರಗಳು ಮತ್ತು ತಾಂತ್ರಿಕ ಸವಾಲುಗಳನ್ನು ಪರಿಗಣಿಸಿ, ಸರ್ಕಾರದ ಮೂಲ ಅಂದಾಜು ವೆಚ್ಚವನ್ನೇ ಹೆಚ್ಚಿಸಿ ಅನುಮೋದನೆ ನೀಡುವುದು.&lt;/p&gt;&lt;p&gt;&lt;strong&gt;ರೀ-ಟೆಂಡರ್: &lt;/strong&gt;ಪ್ರಸ್ತುತ ಟೆಂಡರ್ ರದ್ದುಗೊಳಿಸಿ, ಹೊಸ ಷರತ್ತುಗಳೊಂದಿಗೆ ಮರು-ಟೆಂಡರ್ (Re-tender) ಕರೆಯುವುದು.&lt;/p&gt;&lt;img&gt;&lt;p&gt;ಒಂದೆಡೆ ಸರ್ಕಾರದ ಹಂತದಲ್ಲಿ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿದ್ದರೂ, ಅದಾನಿ ಎಂಟರ್&zwnj;ಪ್ರೈಸಸ್ ಸಂಸ್ಥೆಯು ಪ್ರಸ್ತಾವಿತ ಸುರಂಗ ರಸ್ತೆ ಮಾರ್ಗದಲ್ಲಿ ಈಗಾಗಲೇ ಪ್ರಾಥಮಿಕ ಕಾಮಗಾರಿಗಳನ್ನು ಆರಂಭಿಸಿದೆ. ಯೋಜನೆಯ ತಾಂತ್ರಿಕ ಸಾಧ್ಯತೆಗಳನ್ನು ಪರಿಶೀಲಿಸಲು ಸಂಸ್ಥೆಯು ಮಣ್ಣಿನ ಪರೀಕ್ಷೆ (Soil Test) ಮತ್ತು ಜಿಯೋಟೆಕ್ನಿಕಲ್ ಸರ್ವೆಗಳನ್ನು (Geotechnical Survey) ಚುರುಕುಗೊಳಿಸಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು ಅಭಿವೃದ್ಧಿಯ ಕನಸಿನ ಯೋಜನೆಯಾಗಿರುವ ಸುರಂಗ ರಸ್ತೆಯ ಟೆಂಡರ್ ವೆಚ್ಚದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಖುದ್ದು ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯೋಜನೆಯ ವೆಚ್ಚ ಕಡಿತ, ಜಾರಿ ವಿಧಾನ ಅಥವಾ ನಿಯಮಾವಳಿಗಳ ಸಡಿಲಿಕೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಈ ಸುರಂಗ ಮಾರ್ಗ ಯೋಜನೆಗೆ ಬೆಂಗಳೂರಿನ ಐತಿಹಾಸಿಕ ಲಾಲ್&zwnj;ಬಾಗ್ ಉದ್ಯಾನದ ಒಂದು ಭಾಗವನ್ನು ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳಿಂದ ಈ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರು ಈ ಯೋಜನೆಯನ್ನು ವಿರೋಧ ಮಾಡಿ, ಹಲವು ಬಾರಿ ಸರ್ಕಾರಕ್ಕೆ ಮನವಿಯನ್ನೂ ಮಾಡಿದ್ದಾರೆ.&lt;/p&gt;&lt;p&gt;ಇದೆಲ್ಲದರ ನಡುವೆಯೂ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಈ ಟೆಂಡರ್&zwnj;ಗೆ ಅನುಮೋದನೆ ನೀಡಲಿದೆಯೇ ಅಥವಾ ಮರು-ಟೆಂಡರ್ ಕರೆಯಲಿದೆಯೇ ಎಂಬುದರ ಮೇಲೆ ಈ ಯೋಜನೆಯ ಭವಿಷ್ಯ ನಿಂತಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/bengaluru-urban/bengaluru-tunnel-road-adani-group-22000-crore-tender-cm-dk-shivakumar-meeting-ig2oa0a"/>
        </item>
        <item>
            <title><![CDATA[ವಂದೇ ಮಾತರಂ ವಿವಾದ: ಕೊಪ್ಪಳದಲ್ಲಿ ಬಿಜೆಪಿ ಆರ್‌ಎಸ್‌ಎಸ್ ವಿರುದ್ಧ ಸಚಿವ ತಂಗಡಗಿ ವಾಗ್ದಾಳಿ!]]></title>
            <link>https://kannada.asianetnews.com/politics/vande-mataram-row-minister-shivaraj-tangadagi-slams-bjp-rss-at-kanakagiri-koppal-rav/articleshow-9fc0a9o</link>
            <guid isPermaLink="true">https://kannada.asianetnews.com/politics/vande-mataram-row-minister-shivaraj-tangadagi-slams-bjp-rss-at-kanakagiri-koppal-rav/articleshow-9fc0a9o</guid>
            <pubDate>Sun, 23 Aug 2026 12:23:21 +0530</pubDate>
            <description><![CDATA[&lt;p&gt;ವಂದೇ ಮಾತರಂ ಹಾಡದವರನ್ನು ದೇಶ ಬಿಟ್ಟು ಹೋಗಿ ಎನ್ನುವ ಬಿಜೆಪಿಗೆ, ನೋಂದಣಿ ಮಾಡಿಸದ ಆರ್&zwnj;ಎಸ್&zwnj;ಎಸ್&zwnj; ಪಾಕಿಸ್ತಾನಕ್ಕೆ ಹೋಗಬೇಕೇ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ. ಸಚಿವ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಬಿಜೆಪಿಗೆ ತಿರುಗೇಟು, ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk654cwwr3f7bnp3jba2kcst,imgname----------------------94--1772954465180.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಆ.23):&lt;/strong&gt; 'ವಂದೇ ಮಾತರಂ'ಹಾಡದವರು ದೇಶ ಬಿಟ್ಟು ಹೋಗಿ ಎಂದು ಬಿಜೆಪಿಯವರು ಹೇಳ್ತಿದ್ದಾರೆ. ಹಾಗಾದ್ರೆ ರಾಷ್ಟ್ರಗೀತೆ ಹಾಡಲಾರದವರು, ರಾಷ್ಟ್ರ ಧ್ವಜ ಹಾರಿಸದವರು, ರಿಜಿಸ್ಟ್ರೇಶನ್ ಮಾಡಿಸಲಾಗದವರು ಪಾಕಿಸ್ತಾನಕ್ಕೆ ಹೋಗಬೇಕಾ? ಎಂದು ಆರೆಸ್ಸೆಸ್ ಬಿಜೆಪಿ ವಿರುದ್ಧ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಇಂದು ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ದೇಶದಲ್ಲಿ ಇಂಥ ವ್ಯವಸ್ಥೆ ಇದೆ ನೋಡಿ, ಪ್ರತಿಯೊಂದು ಸಂಸ್ಥೆ ಕಾನೂನು ಪ್ರಕಾರ ರಿಜಿಸ್ಟ್ರೇಶನ್ ಮಾಡಿಸಬೇಕು. ಆದರೆ ಇವರು ರಿಜಿಸ್ಟ್ರೇಶನ್ ಮಾಡಿಸೊಲ್ಲ ಎಂದು ಈ ದೇಶಭಕ್ತರು ವಾದ ಮಾಡ್ತಾರಲ್ಲ ಇವರು ಎಲ್ಲಿಗೆ ಹೋಗಬೇಕು? ಬೆಂಗಳೂರಲ್ಲಿ ಒಂದು ನಾಯಿ ಸಾಕಲು ರಜಿಸ್ಟ್ರೇಶನ್ ಮಾಡಿಸಬೇಕು. ಹೀಗಿರುವಾಗ ನೂರು ವರ್ಷ ಪೂರೈಸಿದ ಸಂಸ್ಥೆಯೊಂದು ಇನ್ನುವರೆಗೆ ರಿಜಿಸ್ಟ್ರೇಶನ್ ಆಗಿಲ್ಲ, ಮುಂದೆನೂ ಮಾಡಿಸಲ್ಲ ಅಂತಾರೆ ಅಂದ್ರೆ ಏನರ್ಥ? ಎಂದು ಪ್ರಶ್ನಿಸಿದರು.&lt;/p&gt;&lt;h2&gt;ಕಾಂಗ್ರೆಸ್ 1937 ರಿಂದ ವಂದೇ ಮಾತರಂ ಹಾಡುತ್ತಿದೆ&lt;/h2&gt;&lt;p&gt;1937 ರಿಂದಲೇ ನಾವು ವಂದೇ ಮಾತರಂ ಹಾಡುತ್ತಿದ್ದೇವೆ. ನಾವು ಅಂದಿನಿಂದ ಇಂದಿನವರೆಗೂ ವಂದೇ ಮಾತರಂನ ಎರಡು ಚರಣಗಳನ್ನ ಹಾಡುತ್ತಾ ಬಂದಿದ್ದೇವೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಎರಡು ಚರಣ ಹಾಡುತ್ತೇವೆ. ಸರ್ಕಾರದ ಕಾರ್ಯಕ್ರಮ ಇದ್ದಾಗ ಸಂಪೂರ್ಣ ಹಾಡ್ತೀವಿ. ಈಗ ವಂದೇ ಮಾತರಂ ಹಾಡುವ ಬಗ್ಗೆ ಕಾನೂನು ಮಾಡುವ ಬಿಜೆಪಿಯವರು&lt;/p&gt;&lt;p&gt;1937 ರಲ್ಲಿ ಇದ್ರಾ? ನಮ್ಮ ರೀತಿ ಇವರು(ಆರ್&zwnj;ಎಸ್&zwnj;ಎಸ್&zwnj;) ಯಾಕೆ ರಿಜಿಸ್ಟ್ರೇಶನ್ ಮಾಡಿಸ್ತೀವಿ ಅಂತಾ ಒಪ್ಪಿಕೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದರು.&lt;/p&gt;&lt;p&gt;ಇನ್ನು ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತಂಗಡಗಿ, ಬಿಜೆಪಿಯವರಿಗೆ ಮಾತಾಡೋಕೆ ಯಾವ ವಿಷಯ ಸಿಗ್ತಿಲ್ಲ. ಹೀಗಾಗಿ ನಾಗೇಂದ್ರ ವಿಚಾರ ಇಟ್ಕೊಂಡು ರಾಜಕೀಯ ಮಾಡ್ತಿದ್ದಾರೆ. ಹಾಗೆ ನೋಡಿದ್ರೆ ಕೇಂದ್ರದ 23 ಮಂತ್ರಿಗಳ ಮೇಲೆ ಕೇಸ್ ಇವೆ. ಶುದ್ಧ ಹಸ್ತದ 56 ಇಂಚಿನ ಮೋದಿ ಸಂಪುಟದಲ್ಲಿನ 23 ಜನರ ಮೇಲೆ ಕೇಸ್ ಇವೆ. ಇಂಥವರು ನಾಗೇಂದ್ರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ನಾಗೇಂದ್ರ ಆರೋಪಿ ಅಷ್ಟೇ, ಅಪರಾಧಿ ಅಲ್ಲ ಎಂದು ಸಮರ್ಥಿಸಿಕೊಂಡರು. ನಾವು ಎಲ್ಲೇ ಹೋದ್ರೂ ಉತ್ತರ ಕೊಡ್ತೇವೆ. ಇದು ಪ್ರಜಾಪ್ರಭುತ್ವ. ಆದರೆ ಈ ದೇಶದ ಪ್ರಧಾನಿ ಯಾಕೆ ಉತ್ತರ ಕೊಡುತ್ತಿಲ್ಲ ಎಂದು ಪ್ರತಿಭಟನಕಾರರ ಮೇಲೆ ಪೆಲ್ಲೆಟ್ ಗನ್ ಪ್ರಕರಣ ಸಂಬಂಧ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/vande-mataram-row-minister-shivaraj-tangadagi-slams-bjp-rss-at-kanakagiri-koppal-rav/articleshow-9fc0a9o"/>
        </item>
        <item>
            <title><![CDATA[ರಾಜ್ಯದಲ್ಲಿ ಮಳೆ ತೀವ್ರ ಕೊರತೆ ಹಿನ್ನೆಲೆ, ಮಳೆಗಾಗಿ ದೇವರ ಮೊರೆ ಹೋದ ರಾಜ್ಯ ಸರ್ಕಾರ]]></title>
            <link>https://kannada.asianetnews.com/karnataka-districts/cm-dk-shivakumar-instructions-special-prayers-and-rudrabhisheka-to-rain-deity-lord-igguthappa-of-paadi-in-kodagu-sns/articleshow-53g4l06</link>
            <guid isPermaLink="true">https://kannada.asianetnews.com/karnataka-districts/cm-dk-shivakumar-instructions-special-prayers-and-rudrabhisheka-to-rain-deity-lord-igguthappa-of-paadi-in-kodagu-sns/articleshow-53g4l06</guid>
            <pubDate>Sun, 23 Aug 2026 11:03:14 +0530</pubDate>
            <description><![CDATA[ರಾಜ್ಯದಲ್ಲಿನ ಮಳೆಯ ತೀವ್ರ ಕೊರತೆ ಮತ್ತು ತಮಿಳುನಾಡಿಗೆ ನೀರು ಹರಿಸುವ ಒತ್ತಡದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಮಳೆಗಾಗಿ ಕೊಡಗಿನ ಪಾಡಿ ಶ್ರೀ ಇಗ್ಗುತ್ತಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದೆ. ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ನಡೆದ ರುದ್ರಾಭಿಷೇಕದಲ್ಲಿ, ನಾಡಿನಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿ ಸಮೃದ್ಧಿಯಾಗಲೆಂದು ಪ್ರಾರ್ಥಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m0phn8hk0x4c5360ztcykw48,imgname-kodagu-rains-1787463115315.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು:&lt;/strong&gt; ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಇರುವುದು ಒಂದೆಡೆಯಾದರೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಮಿಳನಾಡಿಗೆ ನಿತ್ಯ ನೀರು ಹರಿಸಬೇಕಾಗಿರುವ ಸಂದಿಗ್ಧ ಪರಿಸ್ಥಿತಿ ಮತ್ತೊಂದೆಡೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಳೆಗಾಗಿ ದೇವರ ಮೊರೆ ಹೋಗಿದೆ. ಮಳೆ ದೇವರೆಂದೇ ಖ್ಯಾತಿಯಾಗಿರುವ ಕೊಡಗಿನ ಕುಲದೇವರು ಪಾಡಿ ಈಶ್ವರ ಇಗ್ಗುತಪ್ಪ ದೇವರ ಮೊರೆ ಹೋಗಿದೆ.&lt;/p&gt;&lt;h2&gt;ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ಸರ್ಕಾರದ ಮಹಾಪ್ರಾರ್ಥನೆ!&lt;/h2&gt;&lt;p&gt;ಸಿಎಂ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ ಮಳೆದೇವರು ಪಾಡಿ ಈಶ್ವರ ಇಗ್ಗುತ್ತಪ್ಪ ದೇವರಿಗೆ ಇಂದು ಕೃಷಿ ಸಚಿವ ನರೇಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ ಆರು ಗಂಟೆಗೆ ವಿರಾಜಪೇಟೆ ತಾಲ್ಲೂಕಿನಲ್ಲಿರುವ ಮಲ್ಮ ಬೆಟ್ಟದಲ್ಲಿ ನೆಲೆಸಿರುವ ಪಾಡಿ ಈಶ್ವರ ಇಗ್ಗುತ್ತಪ್ಪ ದೇವಾಲಯಕ್ಕೆ ಆಗಮಿಸಿದ ಕೊಡಗು ಉಸ್ತುವಾರಿ ಸಚಿವರೂ ಆಗಿರುವ ಪಿ.ಎಂ. ನರೇಂದ್ರಸ್ವಾಮಿ ಅವರು ಸಿಎಂ ರಾಜಕೀಯ ಕಾರ್ಯದರ್ಶಿಯೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ಗೌಡರೊಂದಿಗೆ ಆಗಮಿಸಿ ದೇವಾಲಯದ ಪ್ರದಕ್ಷಿಣೆ ಹಾಕಿದರು.&lt;/p&gt;&lt;p&gt;ಬಳಿಕ ಅರ್ಚಕ ಕುಶಾಲ್ ಭಟ್ ಅವರು ರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದರು. ನಾಡಿನಾದ್ಯಂತ ಹೆಚ್ಚಿನ ಮಳೆಯಿಂದ ಜಲಾಶಯಗಳು ಭರ್ತಿಯಾಗಿ, ಅಧಿಕ ಬೆಳೆಯಾಗಿ ಎಲ್ಲರಲ್ಲಿಯೂ ಸಮೃದ್ಧಿ, ಸಂತಸ ತರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ವತಿಯಿಂದ ಹೆಚ್ಚಿನ ಮಳೆಗಾಗಿ ಪುಣ್ಯಕ್ಷೇತ್ರ ಪಾಡಿ ಶ್ರೀ ಈಶ್ವರ ಇಗ್ಗುತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಲಾಗಿದೆ. ತಾಯಿ ಕಾವೇರಿ ಹಾಗೂ ಪಾಡಿ ಶ್ರೀ ಇಗ್ಗುತಪ್ಪ ಪುಣ್ಯಭೂಮಿಯಲ್ಲಿ ಹೆಚ್ಚಿನ ಮಳೆಯಾದಲ್ಲಿ ನಾಡಿನ ಜಲಾಶಯಗಳು ಭರ್ತಿಯಾಗಿ, ಉತ್ತಮ ಬೆಳೆ ಜತೆಗೆ, ಕುಡಿಯಲು ನೀರು ಸಿಗಲಿದೆ. ಹೀಗಾಗಿ ಕಾವೇರಿ ಮತ್ತು ಇಗ್ಗುತಪ್ಪ ನಾಡಿನಲ್ಲಿ ಮುಂದಿನ ದಿನಗಳಲ್ಲಿಯಾದರೂ ಹೆಚ್ಚಿನ ಮಳೆಯಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.&lt;/p&gt;&lt;h2&gt;ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಅಗತ್ಯ&lt;/h2&gt;&lt;p&gt;ನಾಡಿನ ಎಲ್ಲೆಡೆ ಮಳೆ ಸುರಿದು, ಜನ-ಜಾನುವಾರುಗಳಿಗೆ ಕುಡಿಯಲು ನೀರು, ಬೆಳೆ ಮತ್ತು ಮೇವು ದೊರೆಯುವಂತಾಗಿ ಸುಭಿಕ್ಷೆ ತರುವಂತಾಗಲಿ. ಕಾವೇರಿ ನದಿ ಪಾತ್ರದಲ್ಲಿ ಸರಾಸರಿ ಮಳೆ ಆಗುವುದರಿಂದ ಅಂತರಾಜ್ಯ ಜಲ ವಿವಾದಗಳು ಇತ್ಯರ್ಥವಾಗಿ, ಶೇ.90 ರಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.&lt;/p&gt;&lt;p&gt;ಸರ್ಕಾರ ಎಲ್ಲರ ವಿಶ್ವಾಸ ಗಳಿಸಿ, ನಂಬಿಕೆಯಿಂದ ಕಾರ್ಯ ನಿರ್ವಹಿಸುವಲ್ಲಿ ಶುಭ ಹೆಜ್ಜೆ ಇಟ್ಟಿದೆ. ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಅಗತ್ಯ. ಆ ದಿಸೆಯಲ್ಲಿ ದೇವರಲ್ಲಿ ಹೆಚ್ಚಿನ ಮಳೆಗಾಗಿ ಪ್ರಾರ್ಥಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಭಕ್ತ ಜನ ಸಮಿತಿ ಅಧ್ಯಕ್ಷರಾದ ಪರದಂಡ ಸುಮನ್ ಸುಬ್ರಮಣಿ ಅವರು ಮುಂದೆ ನಿಂತು ದೇವರ ವಿವಿಧ ಪೂಜಾ ಕೈಂಕರ್ಯಗಳ ನೆರವೇರಿಸಿದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಇದ್ದರು. &lt;strong&gt;(ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)&amp;nbsp;&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/cm-dk-shivakumar-instructions-special-prayers-and-rudrabhisheka-to-rain-deity-lord-igguthappa-of-paadi-in-kodagu-sns/articleshow-53g4l06"/>
        </item>
        <item>
            <title><![CDATA[ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಮತ್ತೆ ಜೋರು ಮಳೆ ಸುರಿಯುವ ನಿರೀಕ್ಷೆ!]]></title>
            <link>https://kannada.asianetnews.com/gallery/karnataka-districts/karnataka-weather-update-low-pressure-area-in-the-bay-of-bengal-heavy-rain-expected-again-sns-b6lasi1</link>
            <guid isPermaLink="true">https://kannada.asianetnews.com/gallery/karnataka-districts/karnataka-weather-update-low-pressure-area-in-the-bay-of-bengal-heavy-rain-expected-again-sns-b6lasi1</guid>
            <pubDate>Sun, 23 Aug 2026 10:30:34 +0530</pubDate>
            <description><![CDATA[&lt;p&gt;Karnataka Weather Update: ಬಂಗಾಳ ಕೊಲ್ಲಿಯಲ್ಲಿ ಸಮುದ್ರ ನೀರು ಬೀಸಿಯಾಗುತ್ತಿದೆ. ಇದರಿಂದ ಪದೇ ಪದೇ ವಾಯುಭಾರ ಕುಸಿತ ಕಂಡು ಬರುತ್ತಿದೆ. ಸದ್ಯ ಮತ್ತೊಂದು ವಾಯುಭಾರ ಕುಸಿತ ನಿರ್ಮಾಣವಾಗಿದೆ. ಆದರೆ ಇದಕ್ಕೆ ಒಂದು ಸಮಸ್ಯೆ ಇದೆ. ಈ ನಡುವೆ ಕರ್ನಾಟಕದ ಹವಾಮಾನ ವರದಿ ಹೇಗಿದೆ ತಿಳಿದುಕೊಳ್ಳಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0pfbkzx5razevcfqwxjnpkq,imgname-rains-1787460702205.jpg" type="image/jpeg" height="390" width="690"/>
            <content:encoded><![CDATA[&lt;p&gt;Karnataka Weather Update: ಬಂಗಾಳ ಕೊಲ್ಲಿಯಲ್ಲಿ ಸಮುದ್ರ ನೀರು ಬೀಸಿಯಾಗುತ್ತಿದೆ. ಇದರಿಂದ ಪದೇ ಪದೇ ವಾಯುಭಾರ ಕುಸಿತ ಕಂಡು ಬರುತ್ತಿದೆ. ಸದ್ಯ ಮತ್ತೊಂದು ವಾಯುಭಾರ ಕುಸಿತ ನಿರ್ಮಾಣವಾಗಿದೆ. ಆದರೆ ಇದಕ್ಕೆ ಒಂದು ಸಮಸ್ಯೆ ಇದೆ. ಈ ನಡುವೆ ಕರ್ನಾಟಕದ ಹವಾಮಾನ ವರದಿ ಹೇಗಿದೆ ತಿಳಿದುಕೊಳ್ಳಿ.&lt;/p&gt;&lt;img&gt;&lt;p&gt;ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಆದರೆ ಇದರ ಪರಿಣಾಮ ದಕ್ಷಿಣ ಭಾರತದ ಮೇಲೆ ಕಡಿಮೆ ಇದೆ. ಏಕೆಂದರೆ ಬಹಳ ದೂರ ಇರುವ ಭುವನೇಶ್ವರ್, ಕೋಲ್ಕತ್ತಾ, ಬಾಂಗ್ಲಾದೇಶ ಸಮುದ್ರ ತೀರದ ಬಳಿ ನಿರ್ಮಾಣವಾಗಿದೆ. ಅಷ್ಟ ಅಲ್ಲದೇ, ಅಲ್ಲಿಯೇ ರೌಂಡ್ ಆಗುತ್ತಿದೆ. 24ರಂದು ಕೋಲ್ಕತ್ತಾ ಬಳಿ ಸಮುದ್ರ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಇದರ ಪ್ರಭಾವ ದಕ್ಷಿಣ ಭಾರತದ ಮೇಲೆ ಕಡಿಮೆ ಇದೆ. ಸದ್ಯ ವಾಯುಭಾರ ಕುಸಿತದಿಂದ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದು ವಾಯುಭಾರ ಕುಸಿತಕ್ಕೆ ಕಾರಣವಾಗಬಹುದು. ಇದು ಈಗಾಗಲೇ ಅರ್ಧದಷ್ಟು ಸಾಗರದ ಮೇಲೆಯೂ ಮತ್ತು ಅರ್ಧದಷ್ಟು ಭೂಮಿಯ ಮೇಲ್ಮೈ ಮೇಲೆಯೂ ವ್ಯಾಪಿಸಿದೆ. ಇದರ ಪರಿಣಾಮವಾಗಿ, ಸಮುದ್ರ ಮಟ್ಟದಿಂದ 5.8 ಕಿಲೋಮೀಟರ್ ಎತ್ತರದಲ್ಲಿ ಮೋಡಗಳು ಕಂಡುಬರುತ್ತವೆ.&lt;/p&gt;&lt;img&gt;&lt;p&gt;ಭಾರತೀಯ ಹವಾಮಾನ ಇಲಾಖೆಯು ಗಮನಾರ್ಹ ಮಳೆಯಾಗುವ ಮುನ್ಸೂಚನೆ ನೀಡಿದೆ. ಆಗಸ್ಟ್ 23 ಮತ್ತು 27ರ ನಡುವೆ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಹಾಗೂ ಇತರೆಡೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಆಗಸ್ಟ್ 23ರಂದು ಕರಾವಳಿ ಮತ್ತು ಮಲೆನಾಡು (ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು) ಕೆಲವು ಕಡೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಅನೇಕ ಸ್ಥಳಗಳಲ್ಲಿ ಹಗುರ-ಮಧ್ಯಮ ಮಳೆಯಾಗುವ ಮುನ್ಸೂಚನೆ ಇದೆ.&lt;/p&gt;&lt;img&gt;&lt;p&gt;ಉಳಿದಂತೆ ಆಗಸ್ಟ್ 24ರಂದು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನಲ್ಲಿ ಹಗುರ-ಮಧ್ಯಮ ಮಳೆಯಾಗುವ ನಿರೀಕ್ಷೆ ಇದೆ. ಆಗಸ್ಟ್ 25ರಂದು ಕರಾವಳಿಯಲ್ಲಿ ಹೆಚ್ಚು ಕಡೆ ಹಗುರ ಮಳೆಯಾಗುವ ನಿರೀಕ್ಷೆ ಇದೆ. ಒಳನಾಡಿನಲ್ಲಿ ಕೆಲವು ಸ್ಥಳಗಳಲ್ಲಿ ಮಾತ್ರ ಮಳೆಯಾಗುತ್ತದೆ. ಆಗಸ್ಟ್ 26-27 ರಂದು ಕರಾವಳಿ ಭಾಗದಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಲಿದೆ. ಉಳಿದಂತೆ ಒಳನಾಡಿನ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದ್ದು, ಆ ಬಳಿಕ ಮಳೆಯ ಚಟುವಟಿಕೆಗಳು ಕಡಿಮೆಯಾಗಲಿದೆ.&lt;/p&gt;&lt;img&gt;&lt;p&gt;ಬಂಗಾಳ ಕೊಲ್ಲಿಯ ಮೇಲೆ ವಾಯುಭಾರ ಕುಸಿತದಿಂದ ಚಂಡಮಾರುತದಂತಹ ವಾಯು ಪರಿಚಲನೆಯ ಪರಿಸ್ಥಿತಿಗಳು ಉಂಟಾಗಿವೆ. ಗಂಟೆಗೆ 60 ಕಿ.ಮೀ ವರೆಗಿನ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಸಮುದ್ರ ಮಟ್ಟದಿಂದ 4.5 ಕಿ.ಮೀ. ಎತ್ತರದವರೆಗೆ ಮೋಡಗಳು ಆವರಿಸಿಕೊಂಡಿವೆ. ಈ ಪರಿಸ್ಥಿತಿಯು ಮಳೆಗೆ ಪೂರಕವಾಗಿದ್ದರೂ, ಮಳೆಯು ಹೆಚ್ಚಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕಡೆಗೆ ಕೇಂದ್ರೀಕೃತವಾಗಿದೆ. ನಮಗೆ ಕೇವಲ ಸಾಧಾರಣ ಮಳೆ ಮಾತ್ರ ಲಭ್ಯವಾಗುತ್ತಿದೆ.&lt;/p&gt;&lt;img&gt;&lt;p&gt;ಅರೇಬಿಯನ್ ಸಮುದ್ರದ ಮೇಲೆ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಮಾಲ್ಡೀವ್ಸ್ ಸಮೀಪ ಚಂಡಮಾರುತದ ಪರಿಚಲನೆ ಉಂಟಾಗುವ ಸಾಧ್ಯತೆಯಿದ್ದು, ಇದರಿಂದ ಆ ಪ್ರದೇಶದಲ್ಲಿ ಮೋಡಗಳು ದಟ್ಟವಾಗಿ ಆವರಿಸಲಿವೆ. ಬಂಗಾಳ ಕೊಲ್ಲಿಯಲ್ಲಿನ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ, ಮೀನುಗಾರರಿಗೆ ಆಗಸ್ಟ್ 26 ರವರೆಗೆ ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಪೆಸಿಫಿಕ್ ಮಹಾಸಾಗರದಲ್ಲಿ ಪರಿಸ್ಥಿತಿ ತೀವ್ರವಾಗಿದೆ. ಗಂಟೆಗೆ 130 ಕಿ.ಮೀ ವೇಗದಲ್ಲಿ ಗಾಳಿ ಬೀಸುವುದರೊಂದಿಗೆ 'ಲಾಲಾ' ಚಂಡಮಾರುತವು ಪ್ರಬಲವಾಗಿಯೇ ಮುಂದುವರಿದಿದೆ. 'ಸೌಡೆಲ್' ಚಂಡಮಾರುತವು ಮತ್ತಷ್ಟು ತೀವ್ರಗೊಂಡಿದ್ದು, ಇದರ ಸುತ್ತಲೂ ಗಂಟೆಗೆ 230 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದನ್ನು ಅತ್ಯಂತ ಪ್ರಬಲ ಚಂಡಮಾರುತವೆಂದು ವರ್ಗೀಕರಿಸಲಾಗಿದ್ದು, ಇದು ಚೀನಾದತ್ತ ಚಲಿಸುತ್ತಿದೆ. ಇದು ಮುಂದಿನ ಗುರುವಾರದ ನಂತರ ಚೀನಾದ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ. ಎರಡು ಹೊಸ ಚಂಡಮಾರುತಗಳು ರೂಪುಗೊಂಡಿವೆ. ಅವುಗಳಲ್ಲಿ ಒಂದು 'ಮೋಕ್' ಆಗಿದ್ದು, ಇದರ ಗಾಳಿಯ ವೇಗ ಗಂಟೆಗೆ 95 ಕಿ.ಮೀ. ಇದೆ. ಇನ್ನೊಂದು '18W' ಎಂಬ ಸಂಕೇತನಾಮವನ್ನು ಹೊಂದಿದ್ದು, ಇದರ ಗಾಳಿಯ ವೇಗ ಗಂಟೆಗೆ 65 ಕಿ.ಮೀ. ಇದೆ. ಈ ನಾಲ್ಕೂ ಚಂಡಮಾರುತಗಳು ಪೆಸಿಫಿಕ್ ಮಹಾಸಾಗರದಲ್ಲಿವೆ.&lt;/p&gt;&lt;img&gt;&lt;p&gt;ಎಲ್&zwnj; ನಿನೋ ಪ್ರಭಾವ ಇಲ್ಲದಿದ್ದರೆ ಕರ್ನಾಟಕದಲ್ಲಿ ಪ್ರವಾಹದ ಸ್ಥಿತಿ ಈ ವೇಳೆ ನಿರ್ಮಾಣವಾಗುತ್ತಿತ್ತು. ಊರಿಗೆ ಊರೇ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ಆದರೆ ಎಲ್&zwnj; ನಿನೋದಿಂದ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಒಡಿಶಾ ಮೇಲೆ ಉಂಟಾಗಿರುವ ಚಂಡಮಾರುತದ ಪರಿಚಲನೆಯ ಮೇಲೆ ನಾವು ಏನಾದರೂ ಭರವಸೆ ಇಡಬಹುದು. ಇದರಿಂದ ಮಳೆಯಾದರೆ, ರೈತರಿಗೆ ಒಳ್ಳೆಯದಾಗುತ್ತದೆ.&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/karnataka-districts/karnataka-weather-update-low-pressure-area-in-the-bay-of-bengal-heavy-rain-expected-again-sns-b6lasi1"/>
        </item>
        <item>
            <title><![CDATA[ಮಂಡ್ಯದಲ್ಲಿ ಬೆಲ್ಲ ಕ್ವಿಂಟಾಲ್‌ಗೆ ₹6740ಗೆ ಹರಾಜು: ಐತಿಹಾಸಿಕ ದಾಖಲೆ, ದರ ಏರಿಕೆಗೆ ಕಾರಣ ಏನು?]]></title>
            <link>https://kannada.asianetnews.com/karnataka-districts/jaggery-auctioned-at-rs-6740-per-quintal-in-mandya-historic-record-what-is-the-reason-for-the-price-hike-mrq/articleshow-ztozuq9</link>
            <guid isPermaLink="true">https://kannada.asianetnews.com/karnataka-districts/jaggery-auctioned-at-rs-6740-per-quintal-in-mandya-historic-record-what-is-the-reason-for-the-price-hike-mrq/articleshow-ztozuq9</guid>
            <pubDate>Sun, 23 Aug 2026 08:43:38 +0530</pubDate>
            <description><![CDATA[&lt;p&gt;ಮಂಡ್ಯದಲ್ಲಿ ಬೆಲ್ಲದ ಬೆಲೆ ಕ್ವಿಂಟಾಲ್&zwnj;ಗೆ ₹6740 ತಲುಪಿ ಐತಿಹಾಸಿಕ ದಾಖಲೆ ಬರೆದಿದೆ. ಕಬ್ಬಿನ ಪೂರೈಕೆ ಕೊರತೆ, ಕೂಲಿಯಾಳುಗಳ ಅಭಾವ, ಮತ್ತು ಸಕ್ಕರೆ ಬೆಲೆ ಏರಿಕೆಯಂತಹ ಕಾರಣಗಳಿಂದ ಉತ್ಪಾದನೆ ಕುಸಿದಿದ್ದು, ಇದು ಬೆಲ್ಲದ ದರದಲ್ಲಿ ಏರಿಕೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0m2a8m6jh6s1mrv88hvk9n2,imgname-----------------------2026-08-22t115456.071-1787379917446.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ ಮಂಜುನಾಥ&lt;/strong&gt;&lt;/p&gt;&lt;p&gt;&lt;strong&gt;ಮಂಡ್ಯ: &lt;/strong&gt;ಕಬ್ಬಿನ ಪೂರೈಕೆ ಕೊರತೆ, ಕೂಲಿಯಾಳುಗಳ ಅಭಾವ, ಸಕ್ಕರೆ ಬೆಲೆ ಏರಿಕೆಯಿಂದಾಗಿ ಬೆಲ್ಲದ ಉತ್ಪಾದನೆ ಕುಸಿತ ಕಂಡಿದ್ದು ಪರಿಣಾಮ ಕ್ವಿಂಟಾಲ್&zwnj; ಬೆಲ್ಲದ ದರ ₹6500- 6740 ರು.ಗೆ ಏರಿಕೆಯಾಗಿದೆ. ಈ ಮೂಲಕ ಹಿಂದೆಂದೂ ಕಾಣದಷ್ಟು ಐತಿಹಾಸಿಕ ದಾಖಲೆ ಬೆಲೆಯನ್ನು ಕಂಡಿದೆ.&lt;/p&gt;&lt;p&gt;ಪ್ರತಿ ಕ್ವಿಂಟಾಲ್ ಬೆಲ್ಲದ ಬೆಲೆ ಸಾಮಾನ್ಯವಾಗಿ ₹4,500 ರಿಂದ ₹4700 ರವರೆಗೆ ಇರುತ್ತಿತ್ತು. ಆದರೆ, ಮಂಡ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಬೆಲ್ಲದ ಬೆಲೆ ₹6500 ರಿಂದ ₹6740ಕ್ಕೆ ಏರಿಕೆಯಾಗಿದೆ. ಕುರಿಕಾಲಚ್ಚು ಬೆಲ್ಲ ಪ್ರತಿ ಕ್ವಿಂಟಾಲ್&zwnj;ಗೆ ₹5500 ನಿಂದ ₹6000 ವರೆಗೆ ಇದ್ದರೆ, ಅಚ್ಚು ಬೆಲ್ಲ ಕ್ವಿಂಟಾಲ್&zwnj;ಗೆ ₹5300 ನಿಂದ ₹5800 ವರೆಗೆ ಮಾರಾಟವಾಗುತ್ತಿದೆ. ಮೊದಲು ಮಂಡ್ಯ ಬೆಲ್ಲದ ಮಾರುಕಟ್ಟೆಯಿಂದ ನಿತ್ಯ 10 ರಿಂದ 12 ಲಾರಿಗಳಲ್ಲಿ ಬೆಲ್ಲ ಹೊರ ರಾಜ್ಯಗಳಿಗೆ ಸಾಗಣೆಯಾಗುತ್ತಿತ್ತು. ಆದರೆ, ಈಗ ಅರ್ಧದಷ್ಟು ಬೆಲ್ಲವೂ ಸಾಗಣೆಯಾಗದಿರುವುದರಿಂದ ಬೆಲ್ಲದ ಬೆಲೆ ದುಬಾರಿಯಾಗುವುದಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಕಬ್ಬಿನ ಪೂರೈಕೆ ಕೊರತೆ&lt;/strong&gt;&lt;/h2&gt;&lt;p&gt;ಕೂಲಿಯಾಳುಗಳ ಕೊರತೆ ಪರಿಣಾಮ ಜಿಲ್ಲೆಯಲ್ಲಿರುವ ಆಲೆಮನೆಗಳಿಗೆ ಕಬ್ಬಿನ ಪೂರೈಕೆ ಕೊರತೆ ಎದುರಾಗಿದೆ. ಸ್ಥಳೀಯವಾಗಿ ಕಬ್ಬು ಕಡಿಯುವುದಕ್ಕೆ ಜನರಿಲ್ಲ. ಉತ್ತರ ಕರ್ನಾಟಕ ಅಥವಾ ಹೊರರಾಜ್ಯಗಳಿಂದ ಕೂಲಿಯಾಳುಗಳನ್ನು ಕರೆ ತರಬೇಕಿದೆ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಆಲೆಮನೆಗಳಿಗೆ ಪೂರೈಕೆಯಾಗದಿರುವುದು ಬೆಲ್ಲ ಉತ್ಪಾದನೆ ಕುಸಿತಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.&lt;/p&gt;&lt;p&gt;ಇದರ ಜತೆಗೆ ಆಲೆಮನೆಗಳಿಗೆ ಬೆಲ್ಲ ತಯಾರು ಮಾಡುವ ಕೂಲಿಯಾಳುಗಳು ಸಿಗುತ್ತಿಲ್ಲ. ಬಿಹಾರದಿಂದ ಕೆಲಸಕ್ಕೆ ಬರುತ್ತಿದ್ದರು. ಈಗ ಅವರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನಲಾಗಿದೆ. ಇದರಿಂದ ಹಲವು ಆಲೆಮನೆಗಳು ಸ್ಥಗಿತಗೊಂಡಿವೆ ಎನ್ನಲಾಗುತ್ತಿದೆ.&lt;/p&gt;&lt;h3&gt;&lt;strong&gt;ಸಕ್ಕರೆ ಬೆಲೆ ಹೆಚ್ಚಳ&lt;/strong&gt;&lt;/h3&gt;&lt;p&gt;ಸಕ್ಕರೆ ಬೆಲೆ ಹೆಚ್ಚಳವಾಗಿರುವುದು ಕೂಡ ಬೆಲ್ಲ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಹಿಂದೆ ಸಕ್ಕರೆ ಬೆಲೆ ಪ್ರತಿ ಕೆಜಿಗೆ ₹40 ರಿಂದ ₹42ರ ವರೆಗೆ ಇತ್ತು. ಈಗ ₹68 ರಿಂದ ₹72ರ ವರೆಗೆ ಏರಿಕೆಯಾಗಿದೆ. ಸಕ್ಕರೆ ಹಾಕಿ ಬೆಲ್ಲ ತಯಾರಿಸುವವರ ಸಂಖ್ಯೆ ಹೆಚ್ಚಾಗಿದ್ದು, ಸಕ್ಕರೆ ಬೆಲೆ ಹೆಚ್ಚಾದ ಕೂಡಲೇ ಸಕ್ಕರೆ ಹಾಕಿ ಬೆಲ್ಲ ತಯಾರಿಸುವವರ ಸಂಖ್ಯೆಯೂ ಕಡಿಮೆಯಾಯಿತು. ಇದರಿಂದ ಬೆಲ್ಲದ ಉತ್ಪಾದನೆ ಇಳಿಮುಖವಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಕ್ಕರೆ ನಾಡಲ್ಲಿ ಬೆಲ್ಲ 'ಬಂಗಾರ': ಮಂಡ್ಯ ಮಾರುಕಟ್ಟೆ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಬೆಲ್ಲದ ದರ!&lt;/strong&gt;&lt;/p&gt;&lt;p&gt;ಕೇಂದ್ರದ ಇ20 ಪೆಟ್ರೋಲ್&zwnj; ಪರಿಣಾಮ ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಒತ್ತು ಕೊಡದೆ ಎಥೆನಾಲ್ ಉತ್ಪಾದನೆಗೆ ಆದ್ಯತೆ ನೀಡಲಾರಂಭಿಸಿವೆ. ಇದರ ಪರಿಣಾಮ ಸಕ್ಕರೆ ಉತ್ಪಾದನೆ ಕುಸಿತಗೊಂಡು ಬೇಡಿಕೆ ಹೆಚ್ಚಿರುವುದರಿಂದ ಸಕ್ಕರೆ ಬೆಲೆಯಲ್ಲೂ ₹20 ರಿಂದ ₹30 ಹೆಚ್ಚಳವಾಗಲು ಕಾರಣವಾಗಿದೆ.&lt;/p&gt;&lt;p&gt;ಇದನ್ನೂ ಓದಿ:&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/jaggery-auctioned-at-rs-6740-per-quintal-in-mandya-historic-record-what-is-the-reason-for-the-price-hike-mrq/articleshow-ztozuq9"/>
        </item>
        <item>
            <title><![CDATA['ಬೆಂಗಳೂರಿಗೆ 'ಗಾರ್ಡನ್ ಸಿಟಿ' ಹೆಸರು ಸುಮ್ನೆ ಬಂದಿಲ್ಲ..' ಪಾರ್ಕ್‌ನ 5% ಜಾಗ ಇತರೆ ಉದ್ದೇಶಗಳಿಗೆ ಬಳಕೆಗೆ ಸಂಸದ ಗರಂ]]></title>
            <link>https://kannada.asianetnews.com/state/parks-are-not-real-estate-assets-tejasvi-surya-opposes-karnatakk-cabinet-5-percents-land-diversion-move-rav/articleshow-83g3yxi</link>
            <guid isPermaLink="true">https://kannada.asianetnews.com/state/parks-are-not-real-estate-assets-tejasvi-surya-opposes-karnatakk-cabinet-5-percents-land-diversion-move-rav/articleshow-83g3yxi</guid>
            <pubDate>Sun, 23 Aug 2026 08:29:52 +0530</pubDate>
            <description><![CDATA[&lt;p&gt;ರಾಜ್ಯದ ಸಾರ್ವಜನಿಕ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸುವ ಸರ್ಕಾರದ ತೀರ್ಮಾನವನ್ನು ಸಂಸದ ತೇಜಸ್ವಿ ಸೂರ್ಯ ವಿರೋಧಿಸಿದ್ದಾರೆ. ಈ ಕಳವಳಕಾರಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kynqd6g872fwv3y3s6rpt73c,imgname-----------------------2026-07-29t065107.994-1785288104456.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.23) &lt;/strong&gt;: ರಾಜ್ಯದ ಸಾರ್ವಜನಿಕ ಉದ್ಯಾನಗಳ ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸುವ ಸರ್ಕಾರದ ತೀರ್ಮಾನ ಅತ್ಯಂತ ಕಳವಳಕಾರಿಯಾಗಿದೆ. ಇದನ್ನು ಮರು ಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರಿಗೆ ಸಂಸದ ತೇಜಸ್ವಿ ಸೂರ್ಯ ಶನಿವಾರ ಪತ್ರ ಬರೆದು ಆಗ್ರಹಿಸಿದ್ದಾರೆ.&lt;/p&gt;&lt;p&gt;ರಾಜ್ಯದ ಸಾರ್ವಜನಿಕ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಇತರ ಉದ್ದೇಶಗಳಿಗೆ ಬಳಸುವ ರಾಜ್ಯ ಸರ್ಕಾರದ ತೀರ್ಮಾನವು ಅತ್ಯಂತ ಕಳವಳಕಾರಿಯಾಗಿದೆ. ಇಂತಹ ನಿರ್ಧಾರ ಕೈಗೊಳ್ಳಲು ನಿಮ್ಮ ಆತ್ಮಸಾಕ್ಷಿಯಾದರೂ ಹೇಗೆ ಒಪ್ಪುತ್ತದೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಿ ಎಂದು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಬೆಂಗಳೂರು ಇಂದು ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆ ಹೊಂದಿರುವುದು ಕೇವಲ ಹೆಸರಿನಿಂದಲ್ಲ. ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ ಈ ನಗರವನ್ನು ರೂಪಿಸಿದ್ದರು. ಹಲವು ತಲೆಮಾರುಗಳ ಜನಪ್ರತಿನಿಧಿಗಳು, ಪರಿಸರ ಪ್ರೇಮಿಗಳು ಹಾಗೂ ನಾಗರಿಕರು ಮರ-ಗಿಡಗಳು ಮತ್ತು ಹಸಿರು ಪ್ರದೇಶಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಅವರ ಪರಿಶ್ರಮದಿಂದ ರೂಪುಗೊಂಡ ಈ ಹಸಿರು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h2&gt;ಪಾರ್ಕ್&zwnj;ಗಳು ಖಾಸಗಿ ಆಸ್ತಿಯಲ್ಲ:&lt;/h2&gt;&lt;p&gt;ಸಾರ್ವಜನಿಕ ಪಾರ್ಕ್&zwnj;ಗಳು ಯಾರೊಬ್ಬರ ಖಾಸಗಿ ಅಸ್ತಿಯಲ್ಲ. ಅವು ಕೇವಲ ಜಾಗಗಳಲ್ಲ. ಅವು ಜೀವವೈವಿಧ್ಯದ ಆಸರೆ ತಾಣಗಳು, ನಾಗರಿಕರ ಉಸಿರು, ಹಿರಿಯರ ಆರೋಗ್ಯ, ಮಕ್ಕಳ ನಗು ಹಾಗೂ ಸಾಮಾನ್ಯ ಜನರ ನೆಮ್ಮದಿಯ ತಾಣಗಳು. ಈ ಸಂದರ್ಭದಲ್ಲಿ ಸಾರ್ವಜನಿಕ ಉದ್ಯಾನವನಗಳ ಜಾಗವನ್ನು ಇತರ ಉದ್ದೇಶಗಳಿಗೆ ಬಳಸುವ ಯಾವುದೇ ಕ್ರಮವು ತೀವ್ರ ಕಳವಳಕಾರಿ. ಉದ್ಯಾನವನಗಳು ಕೇವಲ ಖಾಲಿ ಜಾಗವಲ್ಲ, ಅವು ಪ್ರತಿಯೊಂದು ಊರಿನ ಉಸಿರು, ಪರಿಸರ ಸಮತೋಲನ ಮತ್ತು ಸಾರ್ವಜನಿಕರ ಆರೋಗ್ಯದ ಅವಿಭಾಜ್ಯ ಅಂಗಗಳು ಎಂದು ತಿಳಿಸಿದ್ದಾರೆ.&lt;/p&gt;&lt;h3&gt;ಇತರೆ ಹಸಿರು ಪ್ರದೇಶದ ಮೇಲೆ ಒತ್ತಡ:&lt;/h3&gt;&lt;p&gt;ಈಗಾಗಲೇ ಅತಿಯಾದ ಕಾಂಕ್ರೀಟೀಕರಣ, ವಾಯುಮಾಲಿನ್ಯ, ನಗರ ಉಷ್ಣತೆ ಹಾಗೂ ಮಳೆನೀರು ನಿರ್ವಹಣೆಯ ಸಮಸ್ಯೆಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳು ಸಂಕಷ್ಟ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಉಳಿದಿರುವ ಹಸಿರು ಪ್ರದೇಶಗಳನ್ನೂ ಬೇರೆ ಉದ್ದೇಶಗಳಿಗೆ ಬಳಸುವುದು ಆತಂಕಕಾರಿ ನಿರ್ಧಾರವಾಗಲಿದೆ. ಇಂದು ಒಂದು ಉದ್ಯಾನವನದ ಜಾಗವನ್ನು ಬೇರೆ ಉದ್ದೇಶಕ್ಕೆ ಬಿಟ್ಟುಕೊಟ್ಟರೆ, ನಾಳೆ ಪ್ರತಿಯೊಂದು ಹಸಿರು ಪ್ರದೇಶದ ಮೇಲೂ ಇದೇ ರೀತಿಯ ಒತ್ತಡ ನಿರ್ಮಾಣವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;ಪರ್ಯಾಯ ಸರ್ಕಾರಿ ಜಾಗ ಗುರುತಿಸಿ:&lt;/h3&gt;&lt;p&gt;ಒಂದು ಬಾರಿ ಹಸಿರು ಪ್ರದೇಶ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ಇಂತಹ ಸಂದರ್ಭದಲ್ಲಿ ಉಳಿದಿರುವ ಹಸಿರು ಪ್ರದೇಶಗಳನ್ನು ಬೇರೆ ಉದ್ದೇಶಗಳಿಗೆ ಬಲಿಕೊಡುವುದು ಅತ್ಯಂತ ಅವೈಜ್ಞಾನಿಕ ಮತ್ತು ದೂರದೃಷ್ಟಿಯಿಲ್ಲದ ನಿರ್ಧಾರವಾಗಲಿದೆ. ಬೆಂಗಳೂರಿಗೆ ಅಭಿವೃದ್ಧಿ ಅಗತ್ಯ. ಆದರೆ ಬೆಂಗಳೂರಿನ ಹಸಿರನ್ನು ನಾಶಮಾಡುವ ಅಭಿವೃದ್ಧಿ ನಮಗೆ ಬೇಡ. ಯಾವುದೇ ಯೋಜನೆಗೆ ಜಾಗದ ಅಗತ್ಯವಿದ್ದರೆ ಪರ್ಯಾಯ ಸರ್ಕಾರಿ ಜಾಗಗಳನ್ನು ಗುರುತಿಸಿ, ಪರಿಸರಕ್ಕೆ ಕನಿಷ್ಠ ಹಾನಿಯಾಗುವ ಮಾರ್ಗವನ್ನು ಸರ್ಕಾರ ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಆತ್ಮಸಾಕ್ಷಿ ರಹಿತ ನಿರ್ಧಾರ ಮರುಪರಿಶೀಲಿಸಿ:&lt;/strong&gt;&lt;/p&gt;&lt;p&gt;ಕೆಂಪೇಗೌಡರು ಕಟ್ಟಿದ ನಮ್ಮ ಬೆಂಗಳೂರು, ತಲೆಮಾರುಗಳು ಉಳಿಸಿ, ಬೆಳೆಸಿದ ಬೆಂಗಳೂರು. ಮುಂದಿನ ಪೀಳಿಗೆಗೂ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ನೂರಾರು ವರ್ಷಗಳಿಂದ ಕಾಯ್ದುಕೊಂಡು ಬಂದಿರುವ ಈ ಹಸಿರು ಪರಂಪರೆ, ಕೇವಲ ರಿಯಲ್ ಎಸ್ಟೇಟ್ ಕಾರಣಗಳಿಗಾಗಿ ಒತ್ತೆ ಇರಿಸುವ ಕ್ರಮವು ಆತ್ಮಸಾಕ್ಷಿ ರಹಿತ ನಿರ್ಧಾರವಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದ್ದು, ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/parks-are-not-real-estate-assets-tejasvi-surya-opposes-karnatakk-cabinet-5-percents-land-diversion-move-rav/articleshow-83g3yxi"/>
        </item>
        <item>
            <title><![CDATA[Greater Coucal:ಹಿಚ್ಕಡದಲ್ಲಿ ಅಪರೂಪದ ಅತಿಥಿ;  ಹಸಿರು ಪರಿಸರಕ್ಕೆ ಮನಸೋತ ಕೃಷ್ಣ ಪಕ್ಷಿ]]></title>
            <link>https://kannada.asianetnews.com/karnataka-districts/a-rare-crow-pheasant-or-greater-coucal-has-laid-six-eggs-in-a-garden-in-hichkada-village-of-ankola-taluk-mrq/articleshow-550di1i</link>
            <guid isPermaLink="true">https://kannada.asianetnews.com/karnataka-districts/a-rare-crow-pheasant-or-greater-coucal-has-laid-six-eggs-in-a-garden-in-hichkada-village-of-ankola-taluk-mrq/articleshow-550di1i</guid>
            <pubDate>Sun, 23 Aug 2026 08:05:07 +0530</pubDate>
            <description><![CDATA[ಅಂಕೋಲಾ ತಾಲೂಕಿನ ಹಿಚ್ಕಡ ಗ್ರಾಮದ ತೋಟವೊಂದರಲ್ಲಿ, ಅಪರೂಪದ ಕೃಷ್ಣ ಪಕ್ಷಿ (ಕೆಂಬುತಾ) ಆರು ಮೊಟ್ಟೆಗಳನ್ನಿಟ್ಟಿದೆ. ಈ ನೈಸರ್ಗಿಕ ವಿದ್ಯಮಾನವು ಆ ಪ್ರದೇಶದ ಸಮೃದ್ಧ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದ್ದು, ತೋಟದ ಮಾಲೀಕರು ಪಕ್ಷಿಯ ಗೂಡನ್ನು ರಕ್ಷಿಸುತ್ತಿರುವುದು ಮನುಷ್ಯ-ಪ್ರಕೃತಿ ಬಾಂಧವ್ಯವನ್ನು ಸಾರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0p78czvfb5kp9w7gc46eqbd,imgname-ankola-1787452208123.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಘು ಕಾಕರಮಠ&lt;/strong&gt;&lt;/p&gt;&lt;p&gt;&lt;strong&gt;ಕಾರವಾರ:&lt;/strong&gt; ಪ್ರಕೃತಿಯ ಮಡಿಲಿನಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನವೂ ತನ್ನದೇ ಆದ ವಿಶೇಷತೆ ಹೊಂದಿರುತ್ತದೆ. ಅಂತಹ ಅಪರೂಪದ ನೈಸರ್ಗಿಕ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗಿ ತಾಲೂಕಿನ ಹಿಚ್ಕಡ ಗ್ರಾಮದ ತೋಟದ ಪರಿಸರದಲ್ಲಿ ಬಲು ಅಪರೂಪದ ಕೃಷ್ಣ ಪಕ್ಷಿ (ಕೆಂಬುತಾ) ಯೊಂದು ಮೊಟ್ಟೆ ಇಟ್ಟಿರುವುದು ಪಕ್ಷಿಪ್ರೇಮಿಗಳು ಹಾಗೂ ಪ್ರಕೃತಿ ಆಸಕ್ತರ ಗಮನ ಸೆಳೆದಿದೆ.&lt;/p&gt;&lt;p&gt;ಹಿಚ್ಕಡದ ಗುರು ನಾಯ್ಕ ಅವರ ತೋಟದಲ್ಲಿ ಕೃಷ್ಣ ಪಕ್ಷಿ 6 ಮೊಟ್ಟೆ ಇಟ್ಟಿರುವುದು ಇಲ್ಲಿನ ಪರಿಸರದ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದೆ.&lt;/p&gt;&lt;h2&gt;&lt;strong&gt;ಮೊಟ್ಟೆಯ ಸುತ್ತಲೂ ಎಚ್ಚರಿಕೆಯ ಕಾವಲು:&lt;/strong&gt;&lt;/h2&gt;&lt;p&gt;ಮೊಟ್ಟೆ ಇಟ್ಟಿರುವ ಪ್ರದೇಶದಲ್ಲಿ ಪಕ್ಷಿಯ ಚಲನವಲನ ಗಮನಿಸಿದ ಗುರು ನಾಯಕ ಅದರ ನೈಸರ್ಗಿಕ ಜೀವನ ಕ್ರಮಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಪಕ್ಷಿಯ ಗೂಡು ಅಥವಾ ಮೊಟ್ಟೆಯನ್ನು ಮುಟ್ಟದೆ, ಹತ್ತಿರ ಹೋಗಿ ಗದ್ದಲ ಮಾಡದೆ ದೂರದಿಂದಲೇ ವೀಕ್ಷಿಸುವ ಮೂಲಕ ಪಕ್ಷಿಯ ರಕ್ಷಣೆಗೆ ಸಹಕರಿಸುತ್ತಿದ್ದಾರೆ.&lt;/p&gt;&lt;p&gt;ಕಪ್ಪು ಬಣ್ಣದ ಆಕರ್ಷಕ ಮೈಬಣ್ಣ ಹಾಗೂ ವಿಶಿಷ್ಟ ಚಲನವಲನದಿಂದ ಗಮನ ಸೆಳೆಯುವ ಕೃಷ್ಣ ಪಕ್ಷಿ, ಸಾಮಾನ್ಯವಾಗಿ ತನ್ನ ವಾಸಸ್ಥಳವನ್ನು ಆಯ್ಕೆ ಮಾಡುವಾಗ ಸುರಕ್ಷಿತ ಹಾಗೂ ಅನುಕೂಲಕರ ಪರಿಸರಕ್ಕೆ ಆದ್ಯತೆ ನೀಡುತ್ತದೆ. ಗ್ರಾಮದ ಹಸಿರು ಪರಿಸರ, ಮರಗಿಡಗಳು ಹಾಗೂ ನೈಸರ್ಗಿಕ ವಾತಾವರಣ ಪಕ್ಷಿಗಳಿಗೆ ಅನುಕೂಲಕರವಾಗಿರುವುದರಿಂದ ಕೃಷ್ಣ ಪಕ್ಷಿಯು ಇಲ್ಲಿ ಸಂತಾನೋತ್ಪತ್ತಿಗೆ ಸ್ಥಳ ಆಯ್ಕೆ ಮಾಡಿಕೊಂಡಿರಬಹುದು ಎಂದು ಪ್ರಕೃತಿ ಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷಿಯು ಮೊಟ್ಟೆ ಇಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ಕುತೂಹಲವೂ ಹೆಚ್ಚಾಗಿದೆ.&lt;/p&gt;&lt;p&gt;ಪಕ್ಷಿಗಳು ತಮ್ಮ ಮೊಟ್ಟೆ ಹಾಗೂ ಮರಿಗಳನ್ನು ರಕ್ಷಿಸಲು ಅತ್ಯಂತ ಎಚ್ಚರಿಕೆಯಿಂದಿರುತ್ತವೆ. ಮಾನವನ ಅತಿಯಾದ ಓಡಾಟ, ಗದ್ದಲ ಅಥವಾ ಗೂಡಿನ ಬಳಿ ಕುತೂಹಲದಿಂದ ತೆರಳುವುದು ಪಕ್ಷಿಗೆ ಒತ್ತಡ ಉಂಟುಮಾಡಬಹುದು. ಹೀಗಾಗಿ ಹಿಚ್ಕಡದಲ್ಲಿ ಕಂಡುಬಂದಿರುವ ಈ ಅಪರೂಪದ ನೈಸರ್ಗಿಕ ವಿದ್ಯಮಾನವನ್ನು ಸಂರಕ್ಷಣೆಯ ದೃಷ್ಟಿಯಿಂದ ನೋಡಬೇಕಾಗಿದೆ.&lt;/p&gt;&lt;h3&gt;&lt;strong&gt;ಜೀವವೈವಿಧ್ಯದ ಸೂಚಕ:&lt;/strong&gt;&lt;/h3&gt;&lt;p&gt;ಒಂದು ಗ್ರಾಮದಲ್ಲಿ ವಿವಿಧ ಜಾತಿಯ ಪಕ್ಷಿಗಳು ಕಾಣಿಸಿಕೊಳ್ಳುವುದು ಅಲ್ಲಿನ ನೈಸರ್ಗಿಕ ಪರಿಸರ ವ್ಯವಸ್ಥೆ ಇನ್ನೂ ಜೀವಂತವಾಗಿರುವುದರ ಸೂಚಕವಾಗಿದೆ. ಕೃಷಿ ಭೂಮಿ, ತೋಟಗಳು, ಮರಗಿಡಗಳು ಹಾಗೂ ಜಲಮೂಲಗಳನ್ನು ಸಂರಕ್ಷಿಸುವುದರಿಂದ ಪಕ್ಷಿಗಳಿಗೆ ಸುರಕ್ಷಿತ ವಾಸಸ್ಥಾನ ಒದಗುತ್ತದೆ.&lt;/p&gt;&lt;p&gt;ಹಿಚ್ಕಡದ ಈ ಪುಟ್ಟ ಪಕ್ಷಿಗೂಡು, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ. ಹಿಚ್ಕಡದಲ್ಲಿ ಕೃಷ್ಣ ಪಕ್ಷಿ ಮೊಟ್ಟೆ ಇಟ್ಟಿರುವುದು ಗ್ರಾಮಸ್ಥರ ಪಾಲಿಗೆ ಕೇವಲ ಕುತೂಹಲದ ಸಂಗತಿಯಲ್ಲ. ನಮ್ಮ ಸುತ್ತಲಿನ ಪ್ರಕೃತಿಯನ್ನೂ ನಾವು ಕಾಪಾಡಬೇಕು ಎಂಬ ಸಂದೇಶ ಸಾರುವ ಅಪರೂಪದ ಘಟನೆಯಾಗಿದೆ.&lt;/p&gt;&lt;p&gt;ಕೃಷ್ಣ ಪಕ್ಷಿಯನ್ನು ಸ್ಥಳೀಯ ವಾಡಿಕೆ ಭಾಷೆಯಲ್ಲಿ ಕೆಂಬುತಾ, ರತ್ನ ಪಕ್ಷಿ ಎಂತಲು ಕರೆಯಲಾಗುತ್ತದೆ. ಇದನ್ನು ಹಿಂದಿನ ಕಾಲದಲ್ಲಿ ಶಕುನ ಪಕ್ಷಿ ಅಂತಲು ಕರೆಯಲಾಗುತ್ತಿತ್ತು. ಮಾಂತ್ರಿಕತೆಯಲ್ಲಿ ಈ ಪಕ್ಷಿಯನ್ನು ಬಳಸಲಾಗುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಈ ಪಕ್ಷಿ ದಾರಿಯಲ್ಲಿ ಹೋಗುವಾಗ ಎದುರಾದರೆ ಶುಭ ಸೂಚನೆ ಎಂದು ಹೇಳಲಾಗುತ್ತಿರುವುದರಿಂದ ಇದನ್ನು ಶಕುನದ ಪಕ್ಷಿ ಎಂತಲೂ ಕರೆಯಲಾಗುತ್ತದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/a-rare-crow-pheasant-or-greater-coucal-has-laid-six-eggs-in-a-garden-in-hichkada-village-of-ankola-taluk-mrq/articleshow-550di1i"/>
        </item>
        <item>
            <title><![CDATA[ಕಸ ಗುಡಿಸಲು ಫಾರ್ಚೂನರ್ ಕಾರಲ್ಲಿ ಬರ್ತಾನೆ ಪೌರ ಕಾರ್ಮಿಕ! ಆಳಾಗಿ ದುಡಿದು ಅರಸನಂತೆ ಮೆರೆತಿರೋ ಈ ಸೇಸಪ್ಪಣ್ಣ ಯಾರು?]]></title>
            <link>https://kannada.asianetnews.com/karnataka-districts/who-is-this-sesappanna-from-bantwal-a-civil-servant-who-comes-in-a-fortuner-car-rav/articleshow-g4qgyrk</link>
            <guid isPermaLink="true">https://kannada.asianetnews.com/karnataka-districts/who-is-this-sesappanna-from-bantwal-a-civil-servant-who-comes-in-a-fortuner-car-rav/articleshow-g4qgyrk</guid>
            <pubDate>Sun, 23 Aug 2026 05:48:45 +0530</pubDate>
            <description><![CDATA[&lt;p&gt;ಬಂಟ್ವಾಳದ ಪೌರ ಕಾರ್ಮಿಕರಾದ ಸೇಸಪ್ಪಣ್ಣ, ಪ್ರತಿದಿನ ತಮ್ಮ 35 ಲಕ್ಷ ಮೌಲ್ಯದ ಫಾರ್ಚೂನರ್&zwnj; ಕಾರಿನಲ್ಲಿ ಕೆಲಸಕ್ಕೆ ಬರುತ್ತಾರೆ. ₹50 ದಿನಗೂಲಿಯಿಂದ ಜೀವನ ಆರಂಭಿಸಿ, ಕುಡಿತದ ಚಟದಿಂದ ಹೊರಬಂದು, ಕಠಿಣ ಪರಿಶ್ರಮ, ಹೈನುಗಾರಿಕೆ ಮತ್ತು ಪ್ರಾಮಾಣಿಕ ದುಡಿಮೆಯಿಂದ ಈ ಹಂತಕ್ಕೆ ತಲುಪಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0nzp109yzkep82sx7g64c7d,imgname-----------------------2026-08-23t054006.920-1787444265992.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೌನೇಶ ವಿಶ್ವಕರ್ಮ&lt;/strong&gt;&lt;/p&gt;&lt;p&gt;&lt;strong&gt;ಬಂಟ್ವಾಳ (ಆ.23):&lt;/strong&gt;&lt;/p&gt;&lt;p&gt;ಇವರೊಬ್ಬ ಪೌರ ಕಾರ್ಮಿಕ. ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೂ ರಸ್ತೆ ಬದಿ ಕಸ ಗುಡಿಸುತ್ತಾರೆ. ಅದರಲ್ಲೇನು ವಿಶೇಷ ಅಂತೀರಾ? ಈ ಪೌರ ಕಾರ್ಮಿಕ ಕಸ ಗುಡಿಸುವ ಸ್ಥಳಕ್ಕೆ ಬರುವುದು ತನ್ನದೇ ಐಷಾರಾಮಿ ಫಾರ್ಚೂನರ್&zwnj; ಕಾರಿನಲ್ಲಿ!&lt;/p&gt;&lt;p&gt;ನಂಬಲು ಆಗುತ್ತಿಲ್ಲ ಎಂದಾದರೆ, ನೀವು ಬಂಟ್ವಾಳದ ಬಿ.ಸಿ. ರೋಡ್&zwnj;ಗೆ ಬಂದರೆ ಕಣ್ಣಾರೆ ನೋಡಬಹುದು.&lt;/p&gt;&lt;p&gt;ಬಂಟ್ವಾಳದ ಸೇಸಪಣ್ಣ ಎಂಬ ಪೌರ ಕಾರ್ಮಿಕ ಪ್ರತಿನಿತ್ಯ ಕೆಲಸದ ಸ್ಥಳಕ್ಕೆ ತಮ್ಮದೇ ಫಾರ್ಚೂನರ್&zwnj; ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ಬರುತ್ತಾರೆ. ಒಂದು ಜಾಗದಲ್ಲಿ ಅದನ್ನು ನಿಲ್ಲಿಸಿ ಬೆಳಗ್ಗೆ 5ಕ್ಕೇ ಪೊರಕೆ ಹಿಡಿದು ತಮ್ಮ ಕೆಲಸ ಆರಂಭಿಸುತ್ತಾರೆ. 50 ರು. ದಿನಗೂಲಿಯಿಂದ ಆರಂಭವಾದ ಅವರ ಬದುಕು ಈಗ 35 ಲಕ್ಷ ರು. ಮೌಲ್ಯದ ಕಾರಿನಲ್ಲಿ ಓಡಾಡುವ ಹಂತಕ್ಕೆ ಬಂದಿದೆ. ಸ್ವಂತ ಮನೆಯನ್ನೂ ಹೊಂದಿದ್ದಾರೆ.&lt;/p&gt;&lt;h2&gt;ಹೇಗೆ ಈ ಬದಲಾವಣೆ?:&lt;/h2&gt;&lt;p&gt;1996ರಲ್ಲಿ ಕೇವಲ ₹50 ದಿನಗೂಲಿಗೆ ಪೌರಕಾರ್ಮಿಕರಾಗಿ ಕೆಲಸ ಕೆಲಸ ಆರಂಭಿಸಿದ ಸೇಸಪ್ಪಣ್ಣ, ದಿನ ಕಳೆದಂತೆ ಕಾಯಂ ನೌಕರರಾದರು. 3ನೇ ತರಗತಿಯ ವಿದ್ಯಾಭ್ಯಾಸ ಹೊಂದಿದ್ದರೂ, ಬದುಕಿನ ಪಾಠಗಳನ್ನು ಅವರು ಅನುಭವದಿಂದ ಕಲಿತರು. ಜೀವನದ ಒಂದು ಹಂತದಲ್ಲಿ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು. ಆದರೆ ಅದನ್ನು ತಮ್ಮ ಬದುಕಿನ ಅಂತಿಮ ಅಧ್ಯಾಯವಾಗಲು ಅವರು ಬಿಡಲಿಲ್ಲ.&lt;/p&gt;&lt;p&gt;2005ರ ಬಳಿಕ ಬದುಕನ್ನು ಬದಲಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರು. ಆಗ ಎಸ್&zwnj;ಐ ಆಗಿದ್ದ ಬೆಳ್ಳಿಯಪ್ಪ ಅವರ ಮಾತು ಅವರಿಗೆ ಪ್ರೇರಣೆಯಾಯಿತು. ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿ, ದುಡಿಮೆಯ ದಾರಿಯಲ್ಲಿ ಹೊಸ ಬದುಕು ಆರಂಭಿಸಿದರು. ಅಲ್ಲಿಂದ ಸೇಸಪ್ಪಣ್ಣ ಜೀವನದ ದಿಕ್ಕೇ ಬದಲಾಯಿತು. ದುಡಿಮೆ ಜತೆಗೆ ಕಾರು ಖರೀದಿಸುವ ಕ್ರೇಜ್ ಶುರುವಾಯಿತು. ಒಂದೊಂದು ಕಾರಿನಿಂದ ಬಡ್ತಿ ಪಡೆದು ಈಗ ಫಾರ್ಚೂನರ್&zwnj; ಮಟ್ಟಕ್ಕೆ ಬೆಳೆದಿದ್ದಾರೆ.&lt;/p&gt;&lt;h3&gt;5 ಗಂಟೆಗೆ ಸರಿಯಾಗಿ ಕೆಲಸಕ್ಕೆ ಹಾಜರ್&zwnj;:&lt;/h3&gt;&lt;p&gt;ಪ್ರತಿದಿನ ಬೆಳಗ್ಗೆ 5 ಗಂಟೆಗೆ ಬಂಟ್ವಾಳದ ಬಿ.ಸಿ. ರೋಡಿಗೆ ಆಗಮಿಸುವ ಸೇಸಪ್ಪಣ್ಣ ಅವರು, ಮಧ್ಯಾಹ್ನ 12 ಗಂಟೆಯವರೆಗೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಾರೆ. ರಸ್ತೆ ಗುಡಿಸುವುದರಿಂದ ಹಿಡಿದು ತಮಗೆ ವಹಿಸಿದ ವಿವಿಧ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ನಿರ್ವಹಿಸುತ್ತಾರೆ. ಅಗತ್ಯವಿದ್ದಾಗ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಕೆಲಸ ಯಾವುದು ಎನ್ನುವುದಕ್ಕಿಂತ, ಅದನ್ನು ಎಷ್ಟು ಪ್ರಾಮಾಣಿಕವಾಗಿ ಮಾಡುತ್ತೇವೆ ಎನ್ನುವುದೇ ಮುಖ್ಯ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸುತ್ತಿದ್ದಾರೆ.&lt;/p&gt;&lt;p&gt;ಸೇಸಪ್ಪಣ್ಣ ಅವರು ಪೌರ ಕಾರ್ಮಿಕ ಕೆಲಸ ಮಗಿಸಿ, ಮಧ್ಯಾಹ್ನದ ಬಳಿಕ ಹೈನುಗಾರಿಕೆ ಹಾಗೂ ಕೂಲಿ ಕೆಲಸಕ್ಕೂ ತೆರಳುತ್ತಾರೆ. ಹೈನುಗಾರಿಕೆಯಿಂದ ಮಾಸಿಕ 39 ಸಾವಿರ ರು.ನಷ್ಟು ಮೊತ್ತ ಅವರ ಕೈಗೆ ಸಿಗುತ್ತದೆ. ಪೌರಕಾರ್ಮಿಕ ವೃತ್ತಿಯಿಂದ ಸಿಗುವ ಸಂಬಳ ಹಾಗೂ ಹೈನುಗಾರಿಕೆಯ ವರಮಾನ ಮತ್ತು ಕೂಲಿ ಕೆಲಸದಿಂದ ಈ ಹಂತಕ್ಕೆ ಬಂದಿದ್ದಾರೆ.&lt;/p&gt;&lt;h3&gt;ತಂದೆ ಅಂತ್ಯ ಸಂಸ್ಕಾರಕ್ಕೂ ಹಣ ಇರಲಿಲ್ಲ:&lt;/h3&gt;&lt;p&gt;ಸೇಸಪ್ಪಣ್ಣ ಬದುಕಿನಲ್ಲಿ ಮರೆಯಲಾಗದ ನೋವುಗಳೂ ಇವೆ. ತಂದೆ ನಿಧನರಾದಾಗ ಅಂತ್ಯಸಂಸ್ಕಾರ ನಡೆಸಲು ಕೈಯಲ್ಲಿ ಹಣವಿರಲಿಲ್ಲ. ನೆರವಿಗೆ ಜನರೂ ಇರಲಿಲ್ಲ. ಕೊನೆಗೆ ತಂದೆಯ ಮೃತದೇಹವನ್ನು ತಾವೇ ಹೊತ್ತು ನೇತ್ರಾವತಿ ನದಿ ತೀರಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಅವರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.&lt;/p&gt;&lt;h3&gt;ಪೌರ ಕಾರ್ಮಿಕ ಎಂಬ ಹೆಮ್ಮೆ ಇರಲಿ:&lt;/h3&gt;&lt;p&gt;ಸೇಸಪ್ಪಣ್ಣನ ಕಥೆಯಲ್ಲಿ ವಿಶೇಷವಾಗಿ ಗಮನಿಸಬೇಕಾದದ್ದು ಅವರ ವೃತ್ತಿಯ ಬಗ್ಗೆ ಇರುವ ಗೌರವ. ಫಾರ್ಚೂನರ್&zwnj;ನಲ್ಲಿ ಕೆಲಸಕ್ಕೆ ಬಂದರೂ ಕೈಯಲ್ಲಿ ಪೊರಕೆ ಹಿಡಿಯಲು ಅವರು ಹಿಂಜರಿಯುವುದಿಲ್ಲ. ಇದೇ ಅವರ ಬದುಕಿನ ದೊಡ್ಡ ಸಂದೇಶ.&lt;/p&gt;&lt;h3&gt;ಇವರಿಗಿದೆ ಹೆಚ್ಚು ಕಾರಿನ ಕ್ರೇಜ್&zwnj;:&lt;/h3&gt;&lt;p&gt;ಆರಂಭದಲ್ಲಿ ಸಣ್ಣ ಕಾರೊಂದನ್ನು ಖರೀದಿಸಿದ್ದ ಅವರು, ಬಳಿಕ ಆಲ್ಟೋ, ನಂತರ ಸ್ಕಾರ್ಪಿಯೋ ಕಾರನ್ನು ಹೊಂದಿದ್ದರು. ಪ್ರತಿಬಾರಿಯೂ ತಮ್ಮಲ್ಲಿದ್ದ ಹಳೆಯ ಕಾರನ್ನು ಬದಲಾಯಿಸಿ, ಅಗತ್ಯವಿದ್ದಷ್ಟು ಸಾಲ, ಲೋನ್ ಪಡೆದು ಹೊಸ ಕಾರನ್ನು ಖರೀದಿಸುತ್ತಾ ಬಂದಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ತಮ್ಮಲ್ಲಿದ್ದ ಆಲ್ಟೋ ಮತ್ತು ಸ್ಕಾರ್ಪಿಯೋ 2 ಕಾರುಗಳನ್ನು ನೀಡಿ, ಅದರ ಜತೆಗೆ ಸಾಲ ಪಡೆದು ಫಾರ್ಚೂನರ್ ಕಾರನ್ನು ಖರೀದಿಸಿದ್ದಾರೆ.&lt;/p&gt;&lt;p&gt;&lt;strong&gt;ಗೌರವದ ಬದುಕು ಕಾಣುವ ಹಂಬಲ&lt;/strong&gt;&lt;/p&gt;&lt;p&gt;ಬದುಕಿನಲ್ಲಿ ನಾನಾ ಕಷ್ಟಗಳನ್ನು ಎದುರಿಸಿದ್ದೇನೆ. ನನ್ನ ವೃತ್ತಿಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ. ಜೊತೆಗೆ ನಾನು ಎಲ್ಲರ ಹಾಗೆ ಗೌರವಯುತವಾದ ಬದುಕು ಕಾಣುವ ಹಂಬಲದೊಂದಿಗೆ ಬೆಳೆಯುತ್ತಿದ್ದೇನೆ, ನನ್ನ ಮಕ್ಕಳನ್ನು ಬೆಳೆಸಿದ್ದೇನೆ.&lt;/p&gt;&lt;p&gt;&lt;strong&gt;ಸೇಸಪ್ಪಣ್ಣ, ಪೌರಕಾರ್ಮಿಕ&amp;nbsp;&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/who-is-this-sesappanna-from-bantwal-a-civil-servant-who-comes-in-a-fortuner-car-rav/articleshow-g4qgyrk"/>
        </item>
        <item>
            <title><![CDATA[ಖ್ಯಾತಿ, ಚಪ್ಪಾಳೆಗೆ ಕಲಾವಿದ ಬದುಕಬಾರದು ಟಿ.ಎನ್.ಸೀತಾರಾಮ  ಮಾತು]]></title>
            <link>https://kannada.asianetnews.com/bengaluru-urban/tn-seetharam-speech-on-art-in-book-brahma-literature-festival-bengaluru-rav/articleshow-3kmkmko</link>
            <guid isPermaLink="true">https://kannada.asianetnews.com/bengaluru-urban/tn-seetharam-speech-on-art-in-book-brahma-literature-festival-bengaluru-rav/articleshow-3kmkmko</guid>
            <pubDate>Sun, 23 Aug 2026 07:48:49 +0530</pubDate>
            <description><![CDATA[&lt;p&gt;ಬುಕ್&zwnj; ಬ್ರಹ್ಮ ಲಿಟರೇಚರ್&zwnj; ಫೆಸ್ಟಿವಲ್&zwnj;ನಲ್ಲಿ ಮಾತನಾಡಿದ ನಿರ್ದೇಶಕ ಟಿ.ಎನ್.ಸೀತಾರಾಮ, ಕಲಾವಿದರು ಕೇವಲ ಚಪ್ಪಾಳೆ, ಖ್ಯಾತಿ ಮತ್ತು ಹಣಕ್ಕಾಗಿ ಕಲೆಯನ್ನು ಸೃಷ್ಟಿಸಬಾರದು ಎಂದು ಅಭಿಪ್ರಾಯಪಟ್ಟರು. ಕಲಾವಿದನ ಆಂತರಿಕ ಸಂಘರ್ಷ ಮತ್ತು ಕಲೆಯೊಂದಿಗಿನ ಪ್ರಾಮಾಣಿಕತೆಯೇ ಮುಖ್ಯವೇ ಹೊರತು, ಕ್ಷಣಿಕ ಮೆಚ್ಚುಗೆಯಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0p649psckkwmatrdz4qjrnn,imgname-----------------------2026-08-23t073733.994-1787451025113.jpg" type="image/jpeg" height="390" width="690"/>
            <content:encoded><![CDATA[&lt;p&gt;ಬುಕ್&zwnj; ಬ್ರಹ್ಮ ಲಿಟ್&zwnj; ಫೆಸ್ಟ್&zwnj;ನಲ್ಲಿ ನಿರ್ದೇಶಕ ಅಭಿಮತ&lt;/p&gt;&lt;p&gt;&lt;strong&gt;ಬೆಂಗಳೂರು (ಆ.23): &lt;/strong&gt;&lsquo;ಕಲಾವಿದನಿಗೆ ಜನರ ಮೆಚ್ಚುಗೆ, ಚಪ್ಪಾಳೆ, ಖ್ಯಾತಿ ಹಾಗೂ ಹಣ ಸಿಗುವುದು ಸಂತೋಷದ ಸಂಗತಿಯೇ ಆದರೂ, ಅವುಗಳಿಗಾಗಿ ಮಾತ್ರ ಕಲೆಯನ್ನು ಮಾಡಬಾರದು&rsquo; ಎಂದು ನಿರ್ದೇಶಕ ಹಾಗೂ ರಂಗಕರ್ಮಿ ಟಿ.ಎನ್.ಸೀತಾರಾಮ ಅಭಿಪ್ರಾಯಪಟ್ಟರು.&lt;/p&gt;&lt;p&gt;ಬುಕ್&zwnj; ಬ್ರಹ್ಮ ಸಂಸ್ಥೆ ಆಯೋಜಿಸಿರುವ ಬುಕ್&zwnj; ಬ್ರಹ್ಮ ಲಿಟರೇಚರ್&zwnj; ಫೆಸ್ಟಿವಲ್&zwnj;ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. &lsquo;ಲೈಮ್&zwnj;ಲೈಟ್&zwnj;ಗೆ ಬರುವುದು ಖುಷಿ ಕೊಡುತ್ತದೆ. ಸದಾ ಚಪ್ಪಾಳೆ ಬೀಳಬೇಕು ಎಂಬ ಆಸೆ ಸಹಜ. ಆದರೆ, ಕೆಲವೊಮ್ಮೆ ನಮ್ಮೊಳಗಿನ ಕೀಳರಿಮೆ ಅಥವಾ &lsquo;ನಾನು ಏನನ್ನೂ ಸಾಧಿಸಿಲ್ಲ&rsquo; ಎಂಬ ಭಾವನೆಯಿಂದಲೂ ಖ್ಯಾತಿಯ ಬೆನ್ನತ್ತುವ ಮನೋಭಾವ ಬರುತ್ತದೆ. ಹಣ, ಹೆಸರು, ಚಪ್ಪಾಳೆ, ಸ್ಥಾನಮಾನಗಳು ಆ ಕೊರತೆಯನ್ನು ತುಂಬುವ ಪ್ರಯತ್ನವಾಗಬಹುದು&rsquo; ಎಂದು ಹೇಳಿದರು.&lt;/p&gt;&lt;p&gt;&lsquo;ಕಲಾವಿದನಾಗಿ ಮುಂದೆ ಬಂದ ನಂತರವೂ &lsquo;ನಾನು ಇಲ್ಲಿಗೆ ಏಕೆ ಬಂದೆ?&rsquo; ಎಂಬ ಪ್ರಶ್ನೆ ಕಾಡುವ ಸಂದರ್ಭಗಳು ಇರುತ್ತವೆ. ಅಂತಹ ಒಳಗಿನ ಸಂಘರ್ಷವೇ ಕಲಾವಿದನನ್ನು ಮತ್ತಷ್ಟು ಆಳವಾಗಿ ಯೋಚಿಸುವಂತೆ ಮಾಡುತ್ತದೆ&rsquo; ಎಂದರು. ತಮ್ಮ ಪಾತ್ರಗಳು ಹಾಗೂ ಕಥೆಗಳಲ್ಲಿ ಸಾಮಾನ್ಯ ಬದುಕಿನ ಅನುಭವಗಳನ್ನು ತರುವ ಕುರಿತು ಮಾತನಾಡಿದ ಅವರು, &lsquo;ನನ್ನ ಮನೆಯಲ್ಲಾಗಲಿ, ಬಾಲ್ಯದಲ್ಲಾಗಲಿ ಯಾರನ್ನೂ ಬೈಯುವ ಅಭ್ಯಾಸ ಇರಲಿಲ್ಲ. ಮದುವೆಯಾದ ನಂತರವೂ ಬೈಯುವ ಸ್ವಭಾವ ಇರಲಿಲ್ಲ. ಆದರೆ ಪಾತ್ರಕ್ಕೆ ಬೇಕಾದಾಗ ನನ್ನಂಥವನೂ ಬೈಯುವಂತೆ, ಸಾಮಾನ್ಯ ಮನುಷ್ಯನಂತೆ ಕಾಣಿಸಬೇಕು. ಅದನ್ನು ಕನ್ನಡದಲ್ಲಿ ಯಾವ ರೀತಿ ಹೇಳಿದರೆ ಸಹಜವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪುತ್ತದೆ ಎಂಬುದನ್ನು ಸಾಕಷ್ಟು ಅಭ್ಯಾಸ ಮಾಡಿದ್ದೇನೆ&rsquo; ಎಂದು ಹೇಳಿದರು.&lt;/p&gt;&lt;p&gt;&lsquo;ನನ್ನ ಬರವಣಿಗೆ ಮತ್ತು ಪಾತ್ರಗಳ ಮುಖ್ಯ ಬಲವೇ ಅವುಗಳ ಸಹಜತೆ. ಬದುಕಿನಲ್ಲಿ ಕಂಡುಬರುವ ಭಾಷೆ, ಭಾವನೆ ಮತ್ತು ಸಂಘರ್ಷಗಳನ್ನು ಕೃತಕವಾಗಿಸದೆ ಪರದೆಯ ಮೇಲೆ ತರುವುದೇ ನನ್ನ ಉದ್ದೇಶ&rsquo; ಎಂದು ವಿವರಿಸಿದರು. ರಂಗಭೂಮಿಯಿಂದ ದೂರದರ್ಶನ ಹಾಗೂ ಧಾರಾವಾಹಿಗಳತ್ತ ಬಂದ ತಮ್ಮ ಪಯಣವನ್ನು ನೆನಪಿಸಿಕೊಂಡ ಸೀತಾರಾಮ್&zwnj;, ರಂಗಭೂಮಿಯ ಅನುಭವವೇ ತಮ್ಮ ದೃಷ್ಟಿಕೋನ ಹಾಗೂ ಕಥೆ ಹೇಳುವ ಶೈಲಿಗೆ ದೊಡ್ಡ ಬಲವಾಗಿದೆ ಎಂದು ಹೇಳಿದರು. ಕಲಾವಿದನಿಗೆ ಸಿಗುವ ಖ್ಯಾತಿಗಿಂತಲೂ ಆತ ತನ್ನ ಕಲೆಯೊಂದಿಗೆ ಹೊಂದಿರುವ ಪ್ರಾಮಾಣಿಕತೆ ಮುಖ್ಯ. ಚಪ್ಪಾಳೆ ಕ್ಷಣಿಕವಾಗಿರಬಹುದು, ಆದರೆ ಕಲೆಯೊಂದಿಗಿನ ಪ್ರಾಮಾಣಿಕತೆ ದೀರ್ಘಕಾಲ ಉಳಿಯುತ್ತದೆ ಎಂಬುದು ಅವರ ಮಾತಿನ ಸಾರವಾಗಿತ್ತು.&lt;/p&gt;&lt;p&gt;\Bಫೋಟೊ ಸಿಟಿ ಫೋಲ್ಟರ್&zwnj; ಟಿಎನ್&zwnj;ಎಸ್..))))) \B&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/tn-seetharam-speech-on-art-in-book-brahma-literature-festival-bengaluru-rav/articleshow-3kmkmko"/>
        </item>
        <item>
            <title><![CDATA[Bengaluru fake medicine racket: ನಕಲಿ ಔಷಧ ದಂಧೆ  ಕಿಂಗ್‌ಪಿನ್‌ ಪ್ರಶಾಂತ್‌ ಅಜರ್‌ಬೈಜಾನಲ್ಲಿ ವಶಕ್ಕೆ]]></title>
            <link>https://kannada.asianetnews.com/state/bengaluru-fake-medicine-racket-kingpin-prashanth-detained-in-azerbaijan-rav/articleshow-wctx45q</link>
            <guid isPermaLink="true">https://kannada.asianetnews.com/state/bengaluru-fake-medicine-racket-kingpin-prashanth-detained-in-azerbaijan-rav/articleshow-wctx45q</guid>
            <pubDate>Sun, 23 Aug 2026 07:30:42 +0530</pubDate>
            <description><![CDATA[ಕರ್ನಾಟಕದ ನಕಲಿ ಔಷಧ ಮಾರಾಟ ಜಾಲಕ್ಕೆ ವಿದೇಶಿ ನಂಟು ಪತ್ತೆಯಾಗಿದೆ. ದಂಧೆಯ ಪ್ರಮುಖ ಆರೋಪಿ ಪ್ರಶಾಂತ್, ಅಜರ್&zwnj;ಬೈಜಾನ್&zwnj;ನಿಂದ ಕಡಿಮೆ ಬೆಲೆಯ ಔಷಧ ಸಾಗಿಸಲು ಯತ್ನಿಸುವಾಗ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ವಶಕ್ಕೆ ಪಡೆಯಲು ಎಸ್&zwnj;ಐಟಿ ಈಗ ಇಂಟರ್&zwnj;ಪೋಲ್&zwnj; ನೆರವು ಕೋರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0p599hpx3nsq3eheqray5aj,imgname-----------------------2026-08-23t072503.672-1787450140214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಿರೀಶ್ ಮಾದೇನಹಳ್ಳಿ&amp;nbsp;&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಆ.23): &lt;/strong&gt;ಕರುನಾಡಿಗೆ ವಿಷವುಣಿಸುತ್ತಿದ್ದ, ರಾಷ್ಟ್ರವನ್ನೇ ಬೆಚ್ಚಿಬೀಳಿಸಿರುವ ನಕಲಿ ಔಷಧ ಮಾರಾಟ ಜಾಲಕ್ಕೆ ವಿದೇಶದ ನಂಟು ಬಯಲಾಗಿದ್ದು, ಈಗ ಕಡಿಮೆ ಬೆಲೆಗೆ ಕೋಟ್ಯಂತರ ಮೌಲ್ಯದ ಔಷಧ ಸಾಗಣೆಗೆ ಯತ್ನಿಸುತ್ತಿದ್ದಾಗ ವಿದೇಶದಲ್ಲಿ ದಂಧೆಯ ಪ್ರಮುಖ ಆರೋಪಿ ಸೇರಿ ಮೂವರು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ನಕಲಿ ಮಾರಾಟ ದಂಧೆ ನಾಯಕ ಎನ್ನಲಾದ ನಾಗರಬಾವಿಯ ಪ್ರಶಾಂತ್&zwnj; ಹಾಗೂ ಆತನ ಇಬ್ಬರು ಸಹಚರರೇ ಸಿಕ್ಕಿಬಿದ್ದವರು. ಅಜರ್&zwnj;ಬೈಜಾನ್ ರಾಷ್ಟ್ರದಿಂದ ಕಡಿಮೆ ದರದ ಔಷಧವನ್ನು ಕರ್ನಾಟಕಕ್ಕೆ ತರುವಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಪಾಸಣೆ ವೇಳೆ ಈ ತಂಡ ಸಿಕ್ಕಿಬಿದ್ದಿದೆ ಎಂದು ಮೂಲಗಳು &lsquo;ಕನ್ನಡಪ್ರಭ&rsquo;ಕ್ಕೆ ತಿಳಿಸಿವೆ.&lt;/p&gt;&lt;p&gt;ಪೊಲೀಸರ ವಿಚಾರಣೆ ವೇಳೆ ಪ್ರಶಾಂತ್ ಪತ್ನಿ ಈ ಹೇಳಿಕೆ ನೀಡಿದ್ದಾರೆ. ಈ ಮಾಹಿತಿ ಆಧಾರದಲ್ಲಿ ಇಂಟರ್&zwnj;ಪೋಲ್&zwnj; ನೆರವು ಪಡೆದು ಆರೋಪಿಯನ್ನು ವಶಕ್ಕೆ ಪಡೆಯಲು ವಿಶೇಷ ತನಿಖಾ ತಂಡ (ಎಸ್&zwnj;ಐಟಿ) ಮುಂದಾಗಿದೆ ಎನ್ನಲಾಗಿದೆ.&lt;/p&gt;&lt;p&gt;ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ.ತಾಂಡ್ಯಾದ ಫಾರ್ಮ್ ಹೌಸ್&zwnj;ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಔಷಧಗಳ ಪ್ಯಾಕಿಂಗ್ ಘಟಕ ಮೇಲೆ ತಾವರೆಕೆರೆ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಘಟಕದ ಒಡೆತನ ನಾಗರಬಾವಿಯಲ್ಲಿರುವ ಪ್ರಶಾಂತ್ ಅವರಿಗೆ ಸೇರಿದ್ದು ಎಂಬುದು ಪತ್ತೆಯಾಗಿತ್ತು. ಆದರೆ ಈ ಕಾರ್ಯಾಚರಣೆ ಮುನ್ನವೇ, ಅಂದರೆ ಆ.8ರಂದೇ ಔಷಧ ಖರೀದಿ ಸಂಬಂಧ ಆತ ಅಜರ್&zwnj;ಬೈಜಾನ್&zwnj; ದೇಶಕ್ಕೆ ತೆರಳಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.&lt;/p&gt;&lt;h2&gt;ವಿದೇಶ ನಂಟು ಹೇಗೆ?:&lt;/h2&gt;&lt;p&gt;ಹಲವು ವರ್ಷಗಳಿಂದ ಔಷಧ ಮಾರಾಟ ವ್ಯವಹಾರದಲ್ಲಿ ತೊಡಗಿರುವ ಪ್ರಶಾಂತ್&zwnj;ಗೆ ದೇಶ-ವಿದೇಶದ ಕಂಪನಿಗಳ ಜತೆ ಸಂಪರ್ಕವಿತ್ತು. ಚೆನ್ನೈ, ಹರ್ಯಾಣ ಹಾಗೂ ಚಂಡೀಗಢ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿರುವ ಔಷಧ ತಯಾರಿಕಾ ಕಂಪನಿಗಳಿಂದಲೂ ಕಡಿಮೆ ಬೆಲೆಗೆ ಔಷಧಗಳನ್ನು ಪ್ರಶಾಂತ್ ಖರೀದಿಸಿದ್ದಾನೆ. ಅದೇ ರೀತಿ ಅಗ್ಗದ ಬೆಲೆಗೆ ವಿದೇಶಿ ಔಷಧವನ್ನೂ ರಾಜ್ಯಕ್ಕೆ ತಂದು ನಾಲ್ಕು ಪಟ್ಟು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.&lt;/p&gt;&lt;p&gt;ಹೀಗೆ ದೇಶ-ವಿದೇಶಗಳಿಂದ ಬರುತ್ತಿದ್ದ ಔಷಧವನ್ನು ತಾವರೆಕೆರೆ ಸಮೀಪದ ಸಿ.ಕೆ.ತಾಂಡ್ಯಾದ ಫಾರ್ಮ್ ಹೌಸ್&zwnj;ನಲ್ಲಿ ಸಂಗ್ರಹಿಸುತ್ತಿದ್ದ. ಅಲ್ಲಿ ಆ ಔಷಧಗಳಿಗೆ ದುಬಾರಿ ದರ ತೋರಿಸುವ ಲೇಬಲ್ ಅಂಟಿಸಿ ಹಾಗೂ ಕೆಲ ನಕಲಿ ಔಷಧಗಳಿಗೆ ಪ್ರತಿಷ್ಠಿತ ಕಂಪನಿಗಳ ಲೇಬರ್ ಅಂಟಿಸಿ ಔಷಧ ಮಾರಾಟಗಾರರ ಮೂಲಕ ಜನರಿಗೆ ಬಿಕರಿ ಮಾಡುತ್ತಿದ್ದ ಎಂದು ಗೊತ್ತಾಗಿದೆ.&lt;/p&gt;&lt;h3&gt;ಕ್ಯಾನ್ಸರ್ ಔಷಧ ಖರೀದಿ?:&lt;/h3&gt;&lt;p&gt;ಅಜರ್&zwnj;ಬೈಜಾನ್&zwnj;ನಲ್ಲಿ ಕಡಿಮೆ ಬೆಲೆಗೆ ಕ್ಯಾನ್ಸರ್ ಔಷಧ ದೊರೆಯುತ್ತದೆ. ಹಾಗಾಗಿ ಹಲವು ವರ್ಷಗಳಿಂದ ಆ ದೇಶದ ಔಷಧ ಕಂಪನಿಗಳ ಜತೆ ಪ್ರಶಾಂತ್ ವ್ಯವಹಾರ ನಡೆಸುತ್ತಿದ್ದು, ಕಳೆದ ವಾರ ಕ್ಯಾನ್ಸರ್ ಔಷಧ ಖರೀದಿ ಸಲುವಾಗಿಯೇ ಆ ದೇಶಕ್ಕೆ ತೆರಳಿದ್ದ. ಅದೇ ಹೊತ್ತಿಗೆ ತಾವರೆಕೆರೆಯಲ್ಲಿದ್ದ ಆತನ ನಕಲಿ ಔಷಧ ಅಡ್ಡೆ ಮೇಲೆ ಪೊಲೀಸರ ದಾಳಿ ನಡೆದಿತ್ತು. ಆ ದೇಶದಲ್ಲಿ ತನ್ನ ಇಬ್ಬರು ಸಹಚರರ ಮೂಲಕ ಕೋಟ್ಯಂತರ ರು. ಮೌಲ್ಯದ ಔಷಧ ಖರೀದಿಸಿ ಭಾರತಕ್ಕೆ ಸಾಗಿಸಲು ಯೋಜಿಸಿದ್ದ. ಆದರೆ ವಿಮಾನ ನಿಲ್ದಾಣದಲ್ಲಿ ದೊಡ್ಡ ಪ್ರಮಾಣದ ಔಷಧ ಸಾಗಣೆ ಬಗ್ಗೆ ಸಂಶಯಗೊಂಡು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆಗ ತಾವು ಪ್ರಶಾಂತ್ ಸೂಚನೆ ಮೇರೆಗೆ ಔಷಧ ತಂದಿದ್ದಾಗಿ ಕಸ್ಟಮ್ಸ್ ಅಧಿಕಾರಿಗಳ ಮುಂದೆ ಸಹಚರರು ಬಾಯ್ಬಿಟ್ಟಿದ್ದಾರೆ. ಕೂಡಲೇ ಪ್ರಶಾಂತ್&zwnj;ನನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವಿಚಾರ ಬಗ್ಗೆ ಪೊಲೀಸರ ಮುಂದೆ ಪ್ರಶಾಂತ್ ಪತ್ನಿಯೇ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.&lt;/p&gt;&lt;p&gt;ತಲೆಮರೆಸಿಕೊಳ್ಳುವ ಮುನ್ನ ಬಲೆಗೆ&lt;/p&gt;&lt;p&gt;ಕಸ್ಟಮ್ಸ್ ಬಲೆಗೆ ಬೀಳುವ ಮುನ್ನವೇ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿರುವ ತನ್ನ ಔಷಧ ಮಾರಾಟ ಘಟಕದ ಮೇಲೆ ಪೊಲೀಸರ ದಾಳಿ ಸಂಗತಿ ಪ್ರಶಾಂತ್&zwnj;ಗೆ ತಿಳಿದಿತ್ತು. ಹೀಗಾಗಿ ಅಜರ್&zwnj;ಬೈಜಾನ್&zwnj;ನಲ್ಲೇ ತಲೆಮರೆಸಿಕೊಳ್ಳಲು ಆತ ಯೋಜಿಸಿದ್ದ. ಆದರೆ ಅಷ್ಟರಲ್ಲಿ ಔಷಧ ಸಾಗಿಸುವಾಗ ಆತನ ಸ್ನೇಹಿತರು ಕಸ್ಟಮ್ಸ್ ಬಲೆಗೆ ಬಿದ್ದಿದ್ದು ಪ್ರಶಾಂತ್&zwnj;ಗೆ ಸಂಕಷ್ಟ ತಂದಿದೆ ಎಂದು ತಿಳಿದು ಬಂದಿದೆ.&lt;/p&gt;&lt;h3&gt;ಪ್ರಶಾಂತ್ ಬಗ್ಗೆ ಮಾಹಿತಿ ಕೋರಿದ ಎಸ್ಐಟಿ&lt;/h3&gt;&lt;p&gt;ಅಜರ್&zwnj;ಬೈಜಾನ್&zwnj; ದೇಶದಲ್ಲಿ ಪ್ರಶಾಂತ್&zwnj;ನನ್ನು ಕಸ್ಟಮ್ಸ್ ವಶಕ್ಕೆ ಪಡೆದಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಇಂಟರ್&zwnj;ಪೋಲ್&zwnj; ಮೂಲಕವೂ ಮಾಹಿತಿ ಕೋರಲಾಗುತ್ತದೆ ಎಂದು ಎಸ್&zwnj;ಐಟಿ ಮೂಲಗಳು ತಿಳಿಸಿವೆ.&lt;/p&gt;&lt;h3&gt;ವಿದೇಶಕ್ಕೆ ಹಾರುವ ಮುನ್ನ ಲಾಕ್&lt;/h3&gt;&lt;p&gt;ಪೊಲೀಸರ ದಾಳಿ ಸಂಗತಿ ತಿಳಿದ ಕೂಡಲೇ ತನ್ನ ವ್ಯವಹಾರಿಕ ಪಾಲುದಾರ ವೆಂಕಟೇಶ್&zwnj;ಗೂ ಅಜರ್&zwnj;ಬೈಜಾನ್ ರಾಷ್ಟ್ರಕ್ಕೆ ಬರುವಂತೆ ತಿಳಿಸಿ ಪ್ರಶಾಂತ್ ಟಿಕೆಟ್ ಬುಕ್ ಮಾಡಿದ್ದ. ಅಷ್ಟರಲ್ಲಿ ಮಾಹಿತಿ ಪಡೆದು ಹೆಬ್ಬಾಳ ಬಳಿ ವೆಂಕಟೇಶ್&zwnj;ನನ್ನು ಬಂಧಿಸಲಾಯಿತು. ಸ್ಪಲ್ಪ ತಡವಾಗಿದ್ದರೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಆತ ಪರಾರಿಯಾಗಿರುತ್ತಿದ್ದ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-fake-medicine-racket-kingpin-prashanth-detained-in-azerbaijan-rav/articleshow-wctx45q"/>
        </item>
        <item>
            <title><![CDATA[KPSC ಮೇಲೆ ಇಡಿ ದಾಳಿ ಬೆನ್ನಲ್ಲೇ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ‘ನಾ’ ಪತ್ತೆ ಹೈಡ್ರಾಮ! ಗೃಹ ಸಚಿವ ಖರ್ಗೆ ಹೇಳಿದ್ದೇನು?]]></title>
            <link>https://kannada.asianetnews.com/state/high-drama-over-the-ias-officer-gnanendra-missing-after-ed-raid-on-kpsc-rav/articleshow-783mwp8</link>
            <guid isPermaLink="true">https://kannada.asianetnews.com/state/high-drama-over-the-ias-officer-gnanendra-missing-after-ed-raid-on-kpsc-rav/articleshow-783mwp8</guid>
            <pubDate>Sun, 23 Aug 2026 07:04:17 +0530</pubDate>
            <description><![CDATA[&lt;p&gt;ಕೆಪಿಎಸ್&zwnj;ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ದಾಳಿಯ ನಂತರ ಐಎಎಸ್&zwnj; ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ, ಅವರು ರಜೆ ಮೇಲಿದ್ದು,, ಸುರಕ್ಷಿತವಾಗಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0p3nk3b0a8ahtr2et52xt68,imgname-----------------------2026-08-23t065201.910-1787448446059.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಆ.23): ಕೆಪಿಎಸ್&zwnj;ಸಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಐಎಎಸ್&zwnj; ಅಧಿಕಾರಿ ಜ್ಞಾನೇಂದ್ರ ಕುಮಾರ್&zwnj; ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ ಜ್ಞಾನೇಂದ್ರ ಕುಮಾರ್&zwnj; ಸಂಪರ್ಕಕ್ಕೆ ಸಿಕ್ಕಿದ್ದು, ಸುರಕ್ಷಿತವಾಗಿದ್ದಾರೆ ಅವರು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್&zwnj;ಸಿ) ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ಸಂಬಂಧ ಇ.ಡಿ. ದಾಳಿ ಬೆನ್ನಲ್ಲೇ ಸೂಕ್ಷ್ಮ ಹಾಗೂ ಸಣ್ಣ ಉದ್ಯಮ (ಎಂಎಸ್&zwnj;ಎಂಇ) ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಕುಮಾರ್&zwnj; ನಾಪತ್ತೆಯಾಗಿದ್ದಾರೆ ಎನ್ನಲಾದ ವಿಚಾರ ಶನಿವಾರ ಇಡೀ ದಿನ ಹೈಡ್ರಾಮಕ್ಕೆ ಕಾರಣವಾಯಿತು.&lt;/p&gt;&lt;h2&gt;ಪರೀಕ್ಷಾ ನಿಯಂತ್ರಕರಾಗಿದ್ದರು:&lt;/h2&gt;&lt;p&gt;ಪಶುವೈದ್ಯಾಧಿಕಾರಿ ಪರೀಕ್ಷೆ ನಡೆದ ವೇಳೆ ಜ್ಞಾನೇಂದ್ರ ಕುಮಾರ್&zwnj; ಕೆಪಿಎಸ್&zwnj;ಸಿ ಪರೀಕ್ಷಾ ನಿಯಂತ್ರಕರಾಗಿದ್ದರು. ಹೀಗಾಗಿ ಇ.ಡಿ ಮತ್ತು ಸಿಐಡಿ ಅಧಿಕಾರಿಗಳು ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದರಿಂದಾಗಿ ಜ್ಞಾನೇಂದ್ರ ಕುಮಾರ್&zwnj; ಮೂರು ದಿನಗಳ ಹಿಂದೆಯೇ ಮೊಬೈಲ್&zwnj; ಸ್ವಿಚ್ಡ್&zwnj; ಆಫ್&zwnj; ಮಾಡಿಕೊಂಡು ರಾಜ್ಯ ತೊರೆದಿದ್ದಾರೆ ಎಂಬ ವದಂತಿ ಹರಿದಾಡತೊಡಗಿತ್ತು.&lt;/p&gt;&lt;p&gt;ಈ ಮಧ್ಯೆ ಶನಿವಾರ ರಾತ್ರಿ ವೇಳೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಜ್ಞಾನೇಂದ್ರ ಕುಮಾ&zwnj;ರ್ ಮಾತನಾಡಿದ್ದಾರೆ. ಕುಟುಂಬದಲ್ಲಿ ಎದುರಾದ ತುರ್ತು ಪರಿಸ್ಥಿತಿಯಿಂದಾಗಿ ರಜೆ ಪಡೆದು ತರಾತುರಿಯಲ್ಲಿ ಸ್ವಂತ ಊರಿಗೆ ಪ್ರಯಾಣ ಬೆಳೆಸಿದ್ದಾಗಿ ಹೇಳಿಕೊಂಡಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ ಎಂದೂ ತಿಳಿಸಿರುವುದಾಗಿ ಖರ್ಗೆ ಪೋಸ್ಟ್&zwnj;ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ನಾಪತ್ತೆ ಆಗಿರುವ ವದಂತಿಗೆ ತೆರೆ ಎಳೆದರು.&lt;/p&gt;&lt;h3&gt;ಐಎಎಸ್&zwnj; ಅಧಿಕಾರಿ ನಾಪತ್ತೆಯಾಗಿಲ್ಲ: ಪ್ರಿಯಾಂಕ್ ಖರ್ಗೆ&lt;/h3&gt;&lt;p&gt;&lsquo;ಐಎಎಸ್&zwnj; ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಆಗಿಲ್ಲ. ಅವರ ತಂದೆಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ನೋಡಲು ಊರಿಗೆ ಹೋಗಿದ್ದಾರೆ. ಈ ಬಗ್ಗೆ ತಮ್ಮ ಮೇಲಧಿಕಾರಿಗೆ ಮಾಹಿತಿ ನೀಡಿದ್ದಾರೆ&rsquo; ಎಂದು ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಪಶುವೈದ್ಯಧಾರಿ ಪರೀಕ್ಷೆ ಅಕ್ರಮ ಸಂಬಂಧ ಕೆಪಿಎಸ್&zwnj;ಸಿ ಕಚೇರಿ ಸೇರಿ ಹಲವು ಕಡೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪರೀಕ್ಷೆ ಕಂಟ್ರೋಲರ್&zwnj; ಆಗಿ ಕೆಲಸ ಮಾಡಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.&lt;/p&gt;&lt;p&gt;ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ, &lsquo;ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿಲ್ಲ. ಅವರ ತಂದೆಗೆ ಹೃದಯ ಕಾಯಿಲೆ ವಿಚಾರ ತಿಳಿದು ತುರ್ತಾಗಿ ಉತ್ತರ ಪ್ರದೇಶಕ್ಕೆ ಹೋಗಿದ್ದಾರೆ. ಹೋಗುವಾಗ ಮೇಲ್ ಮೂಲಕ ತಮ್ಮ ಮೇಲಧಿಕಾರಿಗೆ ತಿಳಿಸಿದ್ದಾರೆ. ಆದರೆ ಶುಕ್ರವಾರ ಹಬ್ಬ ಇದ್ದ ಕಾರಣ ಅವರು ನೋಡಿಕೊಂಡಿಲ್ಲ. ಇನ್ನು ಎರಡು ದಿನದಲ್ಲಿ ಅವರು ಬೆಂಗಳೂರಿಗೆ ವಾಪಸ್&zwnj; ಬರಲಿದ್ದಾರೆ. ಯಾವುದೇ ಐಟಿ, ಇ.ಡಿ ಭಯದಿಂದ ಅವರು ನಾಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/high-drama-over-the-ias-officer-gnanendra-missing-after-ed-raid-on-kpsc-rav/articleshow-783mwp8"/>
        </item>
        <item>
            <title><![CDATA[ಹನೂರು: ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾಯ್ತು, ಈಗ ಕಾಡಿನ ಸೌರ ಬೇಲಿ ಕಿತ್ತೆಸೆದ ದುಷ್ಕರ್ಮಿಗಳು; ಕಾಡು ಪ್ರಾಣಿಗಳು ಹಳ್ಳಿಗೆ ನುಗ್ಗುವ ಆತಂಕ]]></title>
            <link>https://kannada.asianetnews.com/karnataka-districts/chamarajanagar-encounter-case-miscreants-uproot-solar-fence-in-hanur-forest-fear-of-wild-animals-attack-rav/articleshow-58mq5pa</link>
            <guid isPermaLink="true">https://kannada.asianetnews.com/karnataka-districts/chamarajanagar-encounter-case-miscreants-uproot-solar-fence-in-hanur-forest-fear-of-wild-animals-attack-rav/articleshow-58mq5pa</guid>
            <pubDate>Sun, 23 Aug 2026 06:14:34 +0530</pubDate>
            <description><![CDATA[&lt;p&gt;ಹನೂರಿನಲ್ಲಿ ನಡೆದ ಎನ್&zwnj;ಕೌಂಟರ್&zwnj; ಪ್ರಕರಣದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದ್ದು, ತೋಮಿಯಾರ್&zwnj; ಪಾಳ್ಯ ಬಳಿ ಅರಣ್ಯ ಇಲಾಖೆಯ ಸೋಲಾರ್ ತಂತಿ ಬೇಲಿ ಮತ್ತು ಗೇಟ್&zwnj;ಗಳನ್ನು ಧ್ವಂಸಗೊಳಿಸಿದ್ದಾರೆ. ವನ್ಯಮೃಗಗಳನ್ನು ನಾಡಿಗೆ ಬರುವಂತೆ ಮಾಡಿ, ಸ್ಥಳಕ್ಕೆ ಆಗಮಿಸುವ ಅರಣ್ಯ ಸಿಬ್ಬಂದಿ ಮೇಲೆ ದಾಳಿಗೆ ಸಂಚು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0p0vqrs0b99pmep5wt72b1z,imgname-----------------------2026-08-23t060801.824-1787445501721.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹನೂರು (ಆ.23)&lt;/strong&gt;: ತಾಲೂಕಿನ ಹೊಳೆಮುರಿದಟ್ಟಿಯಲ್ಲಿ ಆ.15ರಂದು ನಡೆದ ಎನ್&zwnj;ಕೌಂಟರ್&zwnj; ಪ್ರಕರಣದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ. ಶೂಟೌಟ್&zwnj; ಮಾರನೆಯ ದಿನ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಕಿಡಿಗೇಡಿಗಳು, ತಮ್ಮ ಕೃತ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.&lt;/p&gt;&lt;p&gt;ಶುಕ್ರವಾರ ಹನೂರು ತಾಲೂಕಿನ ತೋಮಿಯಾರ್&zwnj; ಪಾಳ್ಯ, ಕಾರಯ್ಯನಬೆಟ್ಟ ಮತ್ತು ಬೇಟೆಗಾರನ ಗುಡ್ಡ ಬಳಿ ಅರಣ್ಯ ಇಲಾಖೆ ನಿರ್ಮಿಸಿದ್ದ ಸೋಲಾರ್&zwnj; ತಂತಿ ಬೇಲಿ, ಕಂಬಗಳು, ಗೇಟ್&zwnj;ಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಿರುವ ಘಟನೆ ನಡೆದಿದೆ. ಇದರ ಪರಿಣಾಮವಾಗಿ ಕಾಡು ಪ್ರಾಣಿಗಳ ನಾಡು ಪ್ರವೇಶದ ಆತಂಕ ಹೆಚ್ಚಾಗಿದೆ. ಈ ಮೂಲಕ ಗ್ರಾಮಗಳಿಗೆ ಬರುವ ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸುವ ಭಾರಿ ಹುನ್ನಾರ ಇದಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ತೋಮಿಯಾರ್&zwnj; ಪಾಳ್ಯ ಡಿ-ಲೈನ್&zwnj;ನಲ್ಲಿ ಅಳವಡಿಸಿದ್ದ ಸೋಲಾರ್&zwnj; ಫೆನ್ಸಿಂಗ್&zwnj; ವ್ಯವಸ್ಥೆ, ಸ್ವಿಚ್&zwnj; ಬೋರ್ಡ್&zwnj;, ಗೇಟ್&zwnj;, ತಂತಿ ಬೇಲಿಗಳು, ಕಂಬಗಳನ್ನು ಮುರಿದು ಹಾಕಲಾಗಿದೆ. ಇದರಿಂದಾಗಿ ಕಾಡು ಮತ್ತು ನಾಡಿನ ನಡುವಿನ ರಕ್ಷಣಾ ಗೋಡೆ ಕಳಚಿ ಬಿದ್ದಂತಾಗಿದೆ.&lt;/p&gt;&lt;h2&gt;ದುಷ್ಕರ್ಮಿಗಳು ಹನೂರು ಸೌರ ಬೇಲಿ ನಾಶ ಮಾಡಿದ್ದು ಏಕೆ?:&lt;/h2&gt;&lt;p&gt;ಶೂಟೌಟ್&zwnj; ಬಳಿಕ ನಡೆದ ಪ್ರತಿಭಟನೆಗಳಿಂದಾಗಿ ತೋಮಿಯಾರ್&zwnj; ಪಾಳ್ಯ, ಶಾಗ್ಯ ವಲಯದಲ್ಲಿನ ಅರಣ್ಯ ಕಚೇರಿಗೆ ಅರಣ್ಯ ಸಿಬ್ಬಂದಿ ಹೋಗಲು ಹಿಂಜರಿಯುತ್ತಿದ್ದಾರೆ. ಇದನ್ನೇ ಲಾಭ ಮಾಡಿಕೊಂಡಿರುವ ಕಿಡಿಗೇಡಿಗಳು ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಹೋಗಿ, ದುಷ್ಕೃತ್ಯ ಎಸಗಿದ್ದಾರೆ. ಇದು ಕೇವಲ ಆಸ್ತಿ ನಾಶವಷ್ಟೇ ಅಲ್ಲ ಎಂದು ಹೆಸರೇಳಲು ಇಚ್ಛಿಸದ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡುವ ಸಂಚು?&lt;/h3&gt;&lt;p&gt;ಶೂಟೌಟ್&zwnj; ಘಟನೆ ಬಳಿಕ ಹನೂರಿನಲ್ಲಿ ಎಲ್ಲ ಸ್ಥಿತಿಯು ಬೂದಿ ಮುಚ್ಚಿದ ಕೆಂಡದಂತಾಗಿದೆ. ಈ ನಡುವೆ ಈ ಭಾಗದಲ್ಲಿ ಸರಿಯಾಗಿ ಮಳೆಯಾಗದೆ, ಕಾಡಿನಲ್ಲಿ ಪ್ರಾಣಿಗಳ ಆಹಾರ ಮತ್ತು ನೀರಿಗೆ ಕೊರತೆಯಿದೆ. ಇದನ್ನೇ ಉಪಯೋಗಿಸಿಕೊಂಡಿರುವ ದುಷ್ಕರ್ಮಿಗಳು, ವನ್ಯಮೃಗಗಳು ನಾಡಿನತ್ತ ಬರುವಂತೆ ಮಾಡಲು ರಕ್ಷಣಾ ಗೋಡೆಗಳನ್ನು ಹಾಳುಗೆಡವಿದ್ದಾರೆ. ಪರಿಣಾಮ ಕಾಡಾನೆ ಸೇರಿದಂತೆ ವನ್ಯಮೃಗಗಳು ಗ್ರಾಮಗಳತ್ತ ಬಂದಾಗ ಅನಿವಾರ್ಯವಾಗಿ ಸಿಬ್ಬಂದಿ ಸ್ಥಳಕ್ಕೆ ಬರುವ ಪರಿಸ್ಥಿತಿ ಉದ್ಭವಿಸುತ್ತದೆ. ಹೀಗೆ ಬಂದ ಸಿಬ್ಬಂದಿ ಮೇಲೆ ದಾಳಿ ಮಾಡುವ ದೊಡ್ಡ ಸಂಚು ಇದರಲ್ಲಿ ಅಡಗಿರುವ ಶಂಕೆಯಿದೆ ಎಂದು ಹೆಸರೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.&lt;/p&gt;&lt;p&gt;ತೋಮಿಯಾರ್&zwnj;ಪಾಳ್ಯದ ಫೆನ್ಸಿಂಗ್&zwnj; ನಾಶವು ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಹೊಸ ತಲೆನೋವಾಗಿ ಪರಿಣಮಿಸಿದ್ದು, ಜನರನ್ನು ಹತೋಟಿಗೆ ತೆಗೆದುಕೊಳ್ಳುವ ಜೊತೆಗೆ ಪ್ರಾಣಿಗಳ ಚಲನವಲನಗಳ ಮೇಲೂ ಹದ್ದಿನ ಕಣ್ಣಿರಿಸಬೇಕಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-encounter-case-miscreants-uproot-solar-fence-in-hanur-forest-fear-of-wild-animals-attack-rav/articleshow-58mq5pa"/>
        </item>
        <item>
            <title><![CDATA[ಪಾಕಿಸ್ತಾನ್ ಗ್ಯಾಂಗ್‌ಸ್ಟರ್‌ಗಳ ಜೊತೆ ನಂಟು: ದೊಡ್ಡಬಳ್ಳಾಪುರದ ಎಸಿ ರಿಪೇರಿ ಮಾಡುತ್ತಿದ್ದವ ಅರೆಸ್ಟ್]]></title>
            <link>https://kannada.asianetnews.com/state/karnatak-man-arrested-in-contact-pakistan-gangsters-via-instagram-links-doddaballapur-rav/articleshow-fmt3uyp</link>
            <guid isPermaLink="true">https://kannada.asianetnews.com/state/karnatak-man-arrested-in-contact-pakistan-gangsters-via-instagram-links-doddaballapur-rav/articleshow-fmt3uyp</guid>
            <pubDate>Sun, 23 Aug 2026 05:28:23 +0530</pubDate>
            <description><![CDATA[&lt;p&gt;ಪಾಕಿಸ್ತಾನ ಮೂಲದ ಗ್ಯಾಂಗ್&zwnj;ಸ್ಟರ್&zwnj;ಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರದ ಸೈಯದ್ ಅಬೂಬಕರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನದ ಶಾಜದ್ ಬುಟ್ಟಿ ನೆಟ್&zwnj;ವರ್ಕ್ ಜೊತೆ ಇನ್&zwnj;ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿದ್ದ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0nxx3dsrvxpwgm2j6s6xk4c,imgname-----------------------2026-08-23t051626.671-1787442400697.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್&lt;/li&gt; &lt;li&gt;ದೊಡ್ಡಬಳ್ಳಾಪುರದಲ್ಲಿ ಎಸಿ ಮೆಕ್ಯಾನಿಕ್&zwnj;. ಬೆಂಗಳೂರಿನ ಮಸೀದಿಯೊಂದರಲ್ಲಿ ಬೋಧಕನಾಗಿ ಕೆಲಸ&lt;/li&gt; &lt;li&gt;2 ವರ್ಷದಿಂದ ಪಾಕ್&zwnj; ಗ್ಯಾಂಗ್&zwnj;ಸ್ಟರ್&zwnj; ಬುಟ್ಟಿ ನೆಟ್&zwnj;ವರ್ಕ್&zwnj; ಜತೆ ಇನ್&zwnj;ಸ್ಟಾಗ್ರಾಂ ಮೂಲಕ ಸಂಪರ್ಕ&lt;/li&gt; &lt;li&gt;ಕೇರಳ, ದೆಹಲಿಗೆ ಹೋಗಿ ತರಬೇತಿ ಪಡೆದುಕೊಂಡು ಬಂದಿರುವ ಶಂಕೆ ಹಿನ್ನೆಲೆಯಲ್ಲಿ ಬಂಧನ&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ದೊಡ್ಡಬಳ್ಳಾಪುರ (ಆ.23) &lt;/strong&gt;ಪಾಕಿಸ್ತಾನ ಮೂಲದ ಗ್ಯಾಂಗ್&zwnj;ಸ್ಟರ್&zwnj;ಗಳ ಜೊತೆ ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.&lt;/p&gt;&lt;p&gt;ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ. ಕೌಂಟ&zwnj;ರ್ ಇಂಟಲಿಜೆನ್ಸ್ ಸೆಲ್ ಹಾಗೂ ಕೇಂದ್ರ ಗುಪ್ತಚರ ದಳ ಅಧಿಕಾರಿಗಳಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸೈಯದ್ ಅಬೂಬಕರ್&zwnj;ನನ್ನು ಬಂಧಿಸಿದ್ದಾರೆ.&lt;/p&gt;&lt;h2&gt;ಎರಡು ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್&zwnj;ಸ್ಟರ್&zwnj;ಗಳ ಜೊತೆ ಲಿಂಕ್&lt;/h2&gt;&lt;p&gt;ಪೊಲೀಸರ ಪ್ರಕಾರ, ಸೈಯದ್ ಅಬೂಬಕ&zwnj;ರ್ ಕಳೆದ 2 ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್&zwnj;ಸ್ಟರ್&zwnj;ಗಳ ಜೊತೆ ಇನ್&zwnj;ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಪಾಕಿಸ್ತಾನದ ಶಾಜದ್ ಬುಟ್ಟಿ ನೆಟ್&zwnj;ವರ್ಕ್ ಗ್ಯಾಂಗ್&zwnj;ಗೆ ಸಂಬಂಧಿಸಿದೆ ಎನ್ನಲಾದ ಇನ್&zwnj;ಸ್ಟಾಗ್ರಾಂ ಖಾತೆಯೊಂದರ ಮೂಲಕ ಆತ ಸಂಪರ್ಕ ಹೊಂದಿದ್ದ. ಗಣ್ಯ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಚಟುವಟಿಕೆಗಳಲ್ಲಿ ಈ ಪಾಕಿಸ್ತಾನಿ ಗ್ಯಾಂಗ್ ತೊಡಗಿಸಿಕೊಂಡಿದೆ ಎನ್ನಲಾಗಿದೆ.&lt;/p&gt;&lt;h2&gt;ದೊಡ್ಡಬಳ್ಳಾಪುರದಲ್ಲಿ ಎಸಿ ರಿಪೇರಿ ಮಾಡುತ್ತಿದ್ದ ಶಂಕಿತ&lt;/h2&gt;&lt;p&gt;&lsquo;Hammadmemon33320&rsquo; ಇನ್&zwnj;ಸ್ಟಾಗ್ರಾಂ ಖಾತೆಯ ಮೂಲಕ ಆರೋಪಿ ಸಂಪರ್ಕದಲ್ಲಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ತನ್ನ ಆಧಾರ್ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆಗಳ ವಿವರಗಳನ್ನು ನೀಡಿ ಆ ಖಾತೆಗೆ ಲಾಗಿನ್ ಆಗಿದ್ದ. ಈ ಮೂಲಕ ಪಾಕಿಸ್ತಾನದಲ್ಲಿರುವ ಗ್ಯಾಂಗ್ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಆರೋಪ ಕೇಳಿಬಂದಿದೆ. ಸೈಯದ್ ಅಬೂಬಕರ್ ದೊಡ್ಡಬಳ್ಳಾಪುರದಲ್ಲಿ ಎಸಿ ರಿಪೇರಿ ಕೆಲಸ ಮಾಡಿಕೊಂಡಿದ್ದ. ಇದರ ಜೊತೆಗೆ ಬೆಂಗಳೂರಿನ ಮಸೀದಿಯೊಂದರಲ್ಲಿ ಪಾಠ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h3&gt;ದೆಹಲಿ ಕೇರಳಕ್ಕೆ ತೆರಳಿ ಉಗ್ರ ತರಬೇತಿ&lt;/h3&gt;&lt;p&gt;ಗ್ಯಾಂಗ್ ಸದಸ್ಯರ ಸೂಚನೆಯಂತೆ ಆತ ಕೇರಳ ಹಾಗೂ ದೆಹಲಿಗೆ ತೆರಳಿ ತರಬೇತಿಯನ್ನೂ ಪಡೆದುಕೊಂಡು ಬಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ಚಟುವಟಿಕೆಗಳು ಹಾಗೂ ಪಾಕಿಸ್ತಾನಿ ಗ್ಯಾಂಗ್&zwnj;ನೊಂದಿಗಿನ ಸಂಪರ್ಕದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಬಿಎನ್&zwnj;ಎಸ್ ಸೆಕ್ಷನ್ 113(3) ಹಾಗೂ 197(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;ಪ್ರಕರಣದ ಹಿಂದೆ ಮತ್ತಷ್ಟು ವ್ಯಕ್ತಿಗಳ ಸಂಪರ್ಕವಿದೆಯೇ, ಆರೋಪಿ ಯಾವ ರೀತಿಯ ತರಬೇತಿ ಪಡೆದಿದ್ದ ಹಾಗೂ ಪಾಕಿಸ್ತಾನಿ ಗ್ಯಾಂಗ್&zwnj;ನೊಂದಿಗೆ ಆತನ ಸಂಪರ್ಕದ ಉದ್ದೇಶವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnatak-man-arrested-in-contact-pakistan-gangsters-via-instagram-links-doddaballapur-rav/articleshow-fmt3uyp"/>
        </item>
        <item>
            <title><![CDATA[ದೇಶದಲ್ಲಿ ಅತೀ ಹೆಚ್ಚು ಸಕ್ಕರೆ ತಯಾರಿಸುವ ರಾಜ್ಯ ಯಾವುದು? ಕರ್ನಾಟಕಕ್ಕೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/gallery/india-news/which-state-is-the-largest-sugar-producer-in-india-what-is-karnatakas-position-gkn-7mxxw3z</link>
            <guid isPermaLink="true">https://kannada.asianetnews.com/gallery/india-news/which-state-is-the-largest-sugar-producer-in-india-what-is-karnatakas-position-gkn-7mxxw3z</guid>
            <pubDate>Sat, 22 Aug 2026 23:39:55 +0530</pubDate>
            <description><![CDATA[&lt;p&gt;ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ ಸುಮಾರು ₹17 ರಷ್ಟು ಏರಿಕೆಯಾಗಿದ್ದು, ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಹಾಗೂ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hbkv92pys4673jbmh3xfzp,imgname-sugar-1787289005325.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ ಸುಮಾರು ₹17 ರಷ್ಟು ಏರಿಕೆಯಾಗಿದ್ದು, ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಹಾಗೂ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: &lt;/strong&gt;ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ ಕೇವಲ ಒಂದು ತಿಂಗಳ ಅವಧಿಯಲ್ಲಿ ಸಕ್ಕರೆಯ ಚಿಲ್ಲರೆ ದರ ಪ್ರತಿ ಕೆಜಿಗೆ ಸುಮಾರು ₹48.18 ರಿಂದ ಬರೋಬ್ಬರಿ ₹65 ಕ್ಕೆ ತಲುಪಿದೆ. ಅಂದರೆ ಪ್ರತಿ ಕೆಜಿಗೆ ಸರಿಸುಮಾರು ₹17 ರಷ್ಟು ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯ ನಡುವೆ ದೇಶದಲ್ಲಿ ಸಕ್ಕರೆ ಉತ್ಪಾದನೆ ಮತ್ತು ಅದರ ಮಾರುಕಟ್ಟೆಯ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.&lt;/p&gt;&lt;p&gt;ಜವಳಿ (ಟೆಕ್ಸ್&zwnj;ಟೈಲ್ಸ್) ಉದ್ಯಮದ ನಂತರ ಸಕ್ಕರೆ ಉದ್ಯಮವು ದೇಶದ ಎರಡನೇ ಅತಿ ದೊಡ್ಡ ಕೃಷಿ ಆಧಾರಿತ ಉದ್ಯಮವಾಗಿದೆ. ಇದು ಲಕ್ಷಾಂತರ ರೈತರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ. ಪ್ರಸ್ತುತ 2025-26ರ ಸಕ್ಕರೆ ಹಂಗಾಮಿನಲ್ಲಿ ಭಾರತದ ಒಟ್ಟು ಸಕ್ಕರೆ ಉತ್ಪಾದನೆಯು ಸುಮಾರು 30.6 ಮಿಲಿಯನ್ ಮೆಟ್ರಿಕ್ ಟನ್&zwnj;ಗಳಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯಗಳು ಯಾವುವು? ಮತ್ತು ಈ ಪಟ್ಟಿಯಲ್ಲಿ ನಮ್ಮ ಕರ್ನಾಟಕದ ಸ್ಥಾನ ಎಷ್ಟು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.&lt;/p&gt;&lt;img&gt;&lt;p&gt;ಸದ್ಯ ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಪ್ರಸ್ತುತ ಹಂಗಾಮಿನಲ್ಲಿ ರಾಜ್ಯದಲ್ಲಿ 200ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಮಹಾರಾಷ್ಟ್ರದ ಉಷ್ಣವಲಯದ ಮತ್ತು ಸಮುದ್ರ ಹವಾಮಾನವು ಕಬ್ಬು ಬೇಗನೆ ಒಣಗದಂತೆ ಉತ್ತಮವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲಿಷ್ಠ ಮಾದರಿಯು ರೈತರಿಗೆ ನೇರ ಪ್ರಯೋಜನ ನೀಡುತ್ತದೆ. ರಾಜ್ಯದಲ್ಲಿ ವಾರ್ಷಿಕ ಸುಮಾರು 9.92 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದ್ದು, ಪುಣೆ, ಸತಾರಾ, ಸೋಲಾಪುರ, ಅಹಮದ್&zwnj;ನಗರ ಮತ್ತು ಕೊಲ್ಹಾಪುರ ಪ್ರಮುಖ ಸಕ್ಕರೆ ಉತ್ಪಾದನಾ ಕೇಂದ್ರಗಳಾಗಿವೆ.&lt;/p&gt;&lt;img&gt;&lt;p&gt;ಉತ್ತರ ಪ್ರದೇಶವನ್ನು ಸಾಮಾನ್ಯವಾಗಿ &lsquo;ಭಾರತದ ಸಕ್ಕರೆ ಬಟ್ಟಲು&rsquo; (Sugar Bowl of India) ಎಂದು ಕರೆಯಲಾಗುತ್ತದೆ. ಕಬ್ಬು ಬೆಳೆಯುವ ಅತ್ಯಂತ ದೊಡ್ಡ ವಿಸ್ತೀರ್ಣವನ್ನು ಹೊಂದಿರುವ ಹೆಗ್ಗಳಿಕೆ ಈ ರಾಜ್ಯದ್ದಾಗಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೂ, ಕಬ್ಬು ಬೆಳೆಯುವ ಒಟ್ಟು ವಿಸ್ತೀರ್ಣದಲ್ಲಿ ಉತ್ತರ ಪ್ರದೇಶವೇ ಮುಂಚೂಣಿಯಲ್ಲಿದೆ. ಇಲ್ಲಿ ವಾರ್ಷಿಕ ಸುಮಾರು 8.92 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ಇಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳ ಪಾತ್ರ ದೊಡ್ಡದಾಗಿದೆ. ಮುಜಾಫರ್&zwnj;ನಗರ, ಮೀರತ್, ಬಿಜ್ನೋರ್, ಸಹರಾನ್&zwnj;ಪುರ ಮತ್ತು ಗೋರಖ್&zwnj;ಪುರ ಪ್ರಮುಖ ಉತ್ಪಾದನಾ ಕೇಂದ್ರಗಳಾಗಿವೆ.&lt;/p&gt;&lt;img&gt;&lt;p&gt;ಕರ್ನಾಟಕ (ತೃತೀಯ ಸ್ಥಾನ)&lt;/p&gt;&lt;img&gt;&lt;p&gt;ಗುಜರಾತ್ ನಾಲ್ಕನೇ ಸ್ಥಾನದಲ್ಲಿದ್ದು, ಇಲ್ಲಿ ವಾರ್ಷಿಕ ಸುಮಾರು 1.1 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ಇಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲಿಷ್ಠ ಜಾಲ ಮತ್ತು ಸುಧಾರಿತ ಬೇಸಾಯ ಪದ್ಧತಿಗೆ ಈ ರಾಜ್ಯ ಹೆಸರುವಾಸಿಯಾಗಿದೆ. ದಕ್ಷಿಣ ಗುಜರಾತ್&zwnj;ನ ಮೈದಾನ ಮತ್ತು ಕರಾವಳಿ ಪ್ರದೇಶಗಳಲ್ಲಿ ಕಬ್ಬನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.&lt;/p&gt;&lt;img&gt;&lt;p&gt;ಟಾಪ್ 5 ಪಟ್ಟಿಯಲ್ಲಿ ತಮಿಳುನಾಡು ಕೊನೆಯ ಸ್ಥಾನದಲ್ಲಿದೆ. ಇಲ್ಲಿ ವಾರ್ಷಿಕ ಸುಮಾರು 0.9 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ತಮಿಳುನಾಡಿನ ಬಿಸಿ ಹವಾಮಾನದಿಂದಾಗಿ ಇಲ್ಲಿ ದೀರ್ಘಕಾಲದವರೆಗೆ ಕಬ್ಬು ಕಟಾವು ಮತ್ತು ಅರೆಯುವಿಕೆ ಕಾರ್ಯ ನಡೆಯುತ್ತದೆ. ಇಲ್ಲಿನ ರೈತರು ನೀರಿನ ಸದ್ಬಳಕೆಗಾಗಿ ಹನಿ ನೀರಾವರಿ (Drip Irrigation) ಯಂತಹ ಆಧುನಿಕ ಕೃಷಿ ಪದ್ಧತಿಗಳನ್ನು ಹೆಚ್ಚಾಗಿ ಬಳಸುತ್ತಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/india-news/which-state-is-the-largest-sugar-producer-in-india-what-is-karnatakas-position-gkn-7mxxw3z"/>
        </item>
        <item>
            <title><![CDATA[ಆಕಾಶಪ್ಪಾ, ಟೈಂ ಇದ್ರೆ ನಮ್ಮೂರಿಗೆ ಬಂದು ಹೋಗ್ತೀಯೇನಪ್ಪಾ..: ಕುಡಿವ ನೀರಿಗಾಗಿ ಮಹಿಳೆಯರ ಆರ್ತನಾದ!]]></title>
            <link>https://kannada.asianetnews.com/karnataka-districts/drinking-water-crisis-returns-to-chitradurgas-kolahalu-village-gvd/articleshow-2pnvh67</link>
            <guid isPermaLink="true">https://kannada.asianetnews.com/karnataka-districts/drinking-water-crisis-returns-to-chitradurgas-kolahalu-village-gvd/articleshow-2pnvh67</guid>
            <pubDate>Sat, 22 Aug 2026 18:16:57 +0530</pubDate>
            <description><![CDATA[&lt;p&gt;Kolahalu Village: ರೊಚ್ಚಿಗೆದ್ದ ಜನರ ಮನ ತಣಿಸಲು ಎರಡು ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಕುಡಿವ ನೀರಿನ ಅಭಾವದಿಂದ ಗ್ರಾಮ ಬಾಧಿತಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mr2pn6ns8qzpfx47a8vcv0,imgname-chc-1787402738341.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಆ.22): &lt;/strong&gt;ಹೊಳಲ್ಕೆರೆ ತಾಲೂಕಿನ ಗಡಿಗ್ರಾಮ ಕೊಳಹಾಳು ಗ್ರಾಮದಲ್ಲಿ ಮತ್ತೆ ಕುಡಿವ ನೀರಿನ ಹಾಹಾಕಾರ ಶುರುವಾಗಿದೆ. ಹಿಂದೊಮ್ಮೆ ಕುಡಿವ ನೀರಿನ ಅಭಾವದಿಂದ ಬೇಸತ್ತಿದ್ದ ಜನತೆ ಪಿಡಿಓ ಹಾಗೂ ತಾಪಂ ಇಓಗೆ ಕೊಠಡಿಯಲ್ಲಿ ಕೂಡಿ ದಿಗ್ಬಂಧನ ಹಾಕಿದ್ದರು.&lt;/p&gt;&lt;p&gt;ರೊಚ್ಚಿಗೆದ್ದ ಜನರ ಮನ ತಣಿಸಲು ಎರಡು ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಕುಡಿವ ನೀರಿನ ಅಭಾವದಿಂದ ಗ್ರಾಮ ಬಾಧಿತಗೊಂಡಿದೆ. ಮಳೆ ಬಾರದ ಕಾರಣ ಕೊಳವೆ ಬಾವಿಯಲ್ಲಿ ಅಂತರ್ಜಲ ಪಾತಾಳಕ್ಕಿಳಿದು ಒಂದು ವಾರದಿಂದ ಕೊಳವೆ ಬಾವಿಗಳು ಸ್ತಬ್ದವಾಗಿವೆ. ಮಹಿಳೆಯರು, ಮಕ್ಕಳು, ವೃದ್ಧರು ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ.&lt;/p&gt;&lt;p&gt;ಹಾಲಿ ಇರುವ ಗ್ರಾಮದ ಒಂದು ಕೊಳಾಯಿ ಮುಂಭಾಗ ನೂರಾರು ಕೊಡಗಳು ಸರತಿಗಾಗಿ ಕಾದಿದ್ದು ದಿನವಿಡೀ ಕಾಲ ನೂಕಿದರೂ ಎರಡು ಬಿಂದಿಗೆ ನೀರು ದೊರೆಯದಂತಾಗಿದೆ. ಜಮೀನುಗಳಿಂದ ಹೇಗೋ ನೀರು ತರೋಣವೆಂದು ಜನತೆ ಭಾವಿಸದರೂ ಅದೂ ಸಾಧ್ಯವಾಗಂತಾಗಿದೆ. ನೀರಿಲ್ಲದೆ ಅಡಿಕೆ ತೋಟಗಳು ಒಣಗುತ್ತಿದ್ದು ಯಾರೊಬ್ಬರೂ ಒಂದು ಕೊಡ ನೀರು ಕೊಡುತ್ತಿಲ್ಲ. ದೂರದ ಗೋಪಾಲಪುರಕ್ಕೆ ಹೋಗಿ ನೀರು ತರಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಕುಡಿಯಲೂ ನೀರು ಸಿಗದಂತಹ ಪರಿಸ್ಥಿತಿ&lt;/strong&gt;&lt;/h2&gt;&lt;p&gt;ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ಗಡಿ ಗ್ರಾಮವಾಗಿರುವ ಕೊಳಹಾಳು ಒಂದು ರೀತಿಯಲ್ಲಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೂ ಒಳಗಾಗಿದೆ. ಅನತಿ ದೂರದಲ್ಲಿ ವಾಣಿವಿಲಾಸ ಸಾಗರ ಜಲಾಶಯವಿದ್ದರೂ ಕುಡಿವ ನೀರಿಗೆ ಗ್ರಾಮಸ್ಥರು ತತ್ವಾರ ಪಡುತ್ತಿರುವುದು ನಿಂತಿಲ್ಲ. ನೀರಿಲ್ಲದ ಕಾರಣಕ್ಕೆ ಶಾಲೆಯಲ್ಲಿ ಬಿಸಿಯೂಟ ಬಂದ್ ಆಗಿದೆ. ಮಕ್ಕಳಿಗೆ ಕುಡಿಯಲೂ ನೀರು ಸಿಗದಂತಹ ಪರಿಸ್ಥಿತಿ ಇದೆ. ಹಲವು ತಿಂಗಳಿಂದ ಶಾಲಾ ಮಕ್ಕಳಿಗೆ ನೀರೇ ಸಿಕ್ಕಿಲ್ಲವೆನ್ನುತ್ತಾರೆ ಗ್ರಾಮಸ್ಥರು.&lt;/p&gt;&lt;p&gt;ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಸಚಿವರಾಗುತ್ತಿದ್ದಂತೆ ಅಧಿಕಾರಿಗಳ ಸಭೆ ಕರೆದು ಬರವನ್ನು ಸಮರ್ಥವಾಗಿ ನಿಭಾಯಿಸಬೇಕು. ಯಾವ ಹಳ್ಳಿಗಳೂ ಕುಡಿವ ನೀರಿನ ಬಾಧೆಯಿಂದ ನರಳುವಂತಾಗಬಾರದೆಂದು ಬಿಗಿ ನಿರ್ದೇಶನ ನೀಡಿದ್ದರು. ಆದರೆ ಕೊಳಹಾಳು ಗ್ರಾಮಕ್ಕೆ ಈ ನಿರ್ದೇಶನ ಅನ್ವಯ ವಾದಂತೆ ಕಾಣಿಸುತ್ತಿಲ್ಲ.&lt;/p&gt;&lt;p&gt;ಜಿಪಂ ಸಿಇಓ ಡಾ.ಆಕಾಶ್ ಗೆ ಕುಡಿವ ನೀರಿನ ಅಭಾವದ ಇಂತಹದ್ದೊಂದು ಗ್ರಾಮ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಲ್ಲಿ ಇದೆ ಎಂಬ ಬಗ್ಗೆ ಅಷ್ಟಾಗಿ ಮಾಹಿತಿ ಇದ್ದಂತಿಲ್ಲ. ಕೊಳಹಾಳು ಗ್ರಾಮದ ಜನರನ್ನು ಊರು ಬಿಡಿಸುವ ಪ್ಲಾನ್ ಏನಾದರೂ ಅಧಿಕಾರಿಗಳು ಹಾಕಿಕೊಂಡಿದ್ದಾರಾ ಎಂಬ ಶಂಕೆಗಳು ಗ್ರಾಮಸ್ಥರಲ್ಲಿ ಮೂಡಿವೆ. ಡಾ. ಆಕಾಶ್, ನಮ್ಮೂರಿಗೆ ಬಂದು ನೋಡಲು ಟೈಂ ಇದೆಯಾ ಎಂದು ಖಾಲಿ ಕೊಡಗಳ ಒಳಗಿನಿಂದ ಆರ್ತನಾದ ತೇಲಿ ಬರುತ್ತಿದೆ.&lt;/p&gt;&lt;p&gt;ಅಧಿಕಾರಿಗಳು ಬೆಳಿಗ್ಗೆ ಎದ್ದು ಸ್ನಾನ ಮಾಡಿ, ತಿಂಡಿ ತಿಂದು ನೀಟಾಗಿ ಮನೆ ಬಿಟ್ಟು ಆಫೀಸ್&zwnj;ಗೆ ಬರುತ್ತಾರೆ. ನಮಗೆ ಸ್ನಾನವೂ ಇಲ್ಲ, ನೀರು ಇಲ್ಲವೆನ್ನುವಂತಾಗಿದೆ. ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಏನು, ಎತ್ತ ಅಂತ ವಿಚಾರಿಸಿಲ್ಲ. ದನಕರು, ಮಕ್ಕಳಿಗೆ ನೀರಿಲ್ಲ. ಓದೋ ಹುಡುಗರ ಸಮಸ್ಯೆ ಹೇಳುವಂತಿಲ್ಲ. ನಮಗೆ ಒಬ್ಬೊಬ್ಬರೇ ಹೆಣ್ಣುಮಕ್ಕಳು ಇದ್ದಾರೆ. ಸನಿಹದ ಗೋಪಾಲಪುರಕ್ಕೆ ಹೋಗಿ ತರಬೇಕು. ಅದು ಕಷ್ಟದ ಕೆಲಸ.-ಗಿರಿಜಮ್ಮ, ಕೊಳಹಾಳು ಗ್ರಾಮದ ಮಹಿಳೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/drinking-water-crisis-returns-to-chitradurgas-kolahalu-village-gvd/articleshow-2pnvh67"/>
        </item>
        <item>
            <title><![CDATA[ಆಗಸ್ಟ್ 23, 24ರಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪೂಜಾ ಸೇವೆಯಲ್ಲಿ ಕೆಲ ಬದಲಾವಣೆ]]></title>
            <link>https://kannada.asianetnews.com/karnataka-districts/kukke-subrahmanya-temple-suspends-major-sevas-on-august-23-and-24-due-to-ekadashi-gdp/articleshow-ci9rfib</link>
            <guid isPermaLink="true">https://kannada.asianetnews.com/karnataka-districts/kukke-subrahmanya-temple-suspends-major-sevas-on-august-23-and-24-due-to-ekadashi-gdp/articleshow-ci9rfib</guid>
            <pubDate>Sat, 22 Aug 2026 10:41:43 +0530</pubDate>
            <description><![CDATA[ಪುರಾಣ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಮತ್ತು 24 ರಂದು ಏಕಾದಶಿ ಪ್ರಯುಕ್ತ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಮತ್ತು ನಾಗಪ್ರತಿಷ್ಠೆ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಆದರೆ, ಭಕ್ತರು ಶ್ರೀ ದೇವರ ದರ್ಶನ ಪಡೆಯಬಹುದು ಮತ್ತು ಇತರೆ ನಿತ್ಯ ಪೂಜೆಗಳು ಎಂದಿನಂತೆ ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01js19eqb1jdrqe1qdvn5t4gp1,imgname-kukke.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸುಬ್ರಹ್ಮಣ್ಯ&lt;/strong&gt;: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಸರ್ಪಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಮತ್ತು 24ರಂದು ಕೆಲವು ಪ್ರಮುಖ ಧಾರ್ಮಿಕ ಸೇವೆಗಳು ನಡೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;h2&gt;ಸೇವೆಗಳು ರದ್ದಾಗಲು ಕಾರಣವೇನು?&lt;/h2&gt;&lt;p&gt;ಆಗಸ್ಟ್ 23ರಂದು ಏಕಾದಶಿ ಹಾಗೂ ಆಗಸ್ಟ್ 24ರಂದು ಅತಿರಿಕ್ತ ಏಕಾದಶಿ ಇರುವುದರಿಂದ, ಈ ವಿಶೇಷ ಧಾರ್ಮಿಕ ದಿನಗಳ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ನಡೆಯುವ ಪ್ರಮುಖ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಈ ಮೂರು ಪ್ರಮುಖ ಸೇವೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.&lt;/p&gt;&lt;p&gt;ದೇವರ ದರ್ಶನ ಮತ್ತು ನಿತ್ಯ ಪೂಜೆಗಳು ಎಂದಿನಂತೆದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ಮಂಗಳಾರತಿ, ಅರ್ಚನೆ, ಮಹಾಪೂಜೆ ಸೇರಿದಂತೆ ಇತರ ನಿತ್ಯ ಪೂಜೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳು ಎಂದಿನಂತೆ ನೆರವೇರಲಿವೆ.ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು, ನಿಗದಿತ ನಿತ್ಯ ಪೂಜೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದು ದೇವಸ್ಥಾನದ ಪ್ರಕಟಣೆ ಸ್ಪಷ್ಟಪಡಿಸಿದೆ. ಆದ್ದರಿಂದ ಭಕ್ತಾದಿಗಳು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರಕ್ಕೆ ಆಗಮಿಸಬೇಕಾಗಿ ವಿನಂತಿಸಲಾಗಿದೆ.&lt;/p&gt;&lt;h2&gt;ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ನಕಲಿ ವೀಡಿಯೋ: ಪೊಲೀಸ್ ದೂರು&lt;/h2&gt;&lt;p&gt;ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರನ್ನು ವಂಚಿಸಲು ಯತ್ನಿಸುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದೆ.&lt;/p&gt;&lt;p&gt;ನಾಗರ ಪಂಚಮಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ₹750 ಮುಂಗಡ ಹಣ ಪಾವತಿಸಿದರೆ ದೇವಸ್ಥಾನದ ಸೇವೆಗಳನ್ನು ನೆರವೇರಿಸಿ ಪ್ರಸಾದವನ್ನು ಕಳುಹಿಸಿಕೊಡಲಾಗುವುದು ಎಂಬ ಸಂದೇಶವನ್ನು ವಿಡಿಯೋದಲ್ಲಿ ನೀಡಲಾಗಿದೆ. ಇದರಿಂದ ಭಕ್ತರು ಮೋಸ ಹೋಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.&lt;/p&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.&lt;/p&gt;&lt;p&gt;ದೇವಸ್ಥಾನದ ಅಧಿಕೃತ ಸೇವೆಗಳು ಹಾಗೂ ಪ್ರಸಾದಕ್ಕೆ ಸಂಬಂಧಿಸಿದ ಹಣ ಪಾವತಿ ಮಾಡುವ ಮುನ್ನ ಭಕ್ತರು ಯಾವುದೇ ಅಪರಿಚಿತ ವ್ಯಕ್ತಿಗಳ ಸಾಮಾಜಿಕ ಜಾಲತಾಣದ ಲಿಂಕ್, ಮೊಬೈಲ್ ಸಂಖ್ಯೆ ಅಥವಾ ಖಾತೆಗೆ ಹಣ ವರ್ಗಾಯಿಸದೆ, ದೇವಸ್ಥಾನದ ಅಧಿಕೃತ ಮೂಲಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kukke-subrahmanya-temple-suspends-major-sevas-on-august-23-and-24-due-to-ekadashi-gdp/articleshow-ci9rfib"/>
        </item>
        <item>
            <title><![CDATA[ಒಂದೆಡೆ 4 ಲಕ್ಷದ ಚಿನ್ನ ಕಳೆದುಕೊಂಡ ಆತಂಕ, ಮತ್ತೊಂದೆಡೆ ಶಿಕ್ಷಕನ ಪ್ರಾಮಾಣಿಕತೆ: ಕೊನೆಗೆ ಸಿಕ್ಕಿತು ಸಂತಸದ ಸುದ್ದಿ]]></title>
            <link>https://kannada.asianetnews.com/karnataka-districts/challakere-teacher-wins-praise-for-returning-4-lakh-gold-jewellery-gvd/articleshow-axsb2av</link>
            <guid isPermaLink="true">https://kannada.asianetnews.com/karnataka-districts/challakere-teacher-wins-praise-for-returning-4-lakh-gold-jewellery-gvd/articleshow-axsb2av</guid>
            <pubDate>Sat, 22 Aug 2026 17:45:48 +0530</pubDate>
            <description><![CDATA[&lt;p&gt;ತಿರುಮಲ ಬಂಗಾರದ ಅಂಗಡಿ ಮಾಲೀಕರಾದ ಸುಮಾ ವೆಂಕಟೇಶ್ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಆಭರಣ ಕೊಡಲು ಪರ್ಸ್ ನಲ್ಲಿ ಇಟ್ಟುಕೊಂಡು ಸ್ಕೂಟಿಯಲ್ಲಿ ಹೊರಟಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mpbg4x10e81j38mzeqv4zp,imgname-bvjvb-1787400929437.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಳ್ಳಕೆರೆ (ಆ.22): &lt;/strong&gt;ಚಳ್ಳಕೆರೆಯಲ್ಲಿ ಬಂಗಾರದ ಅಂಗಡಿ ಮಾಲೀಕರೊಬ್ಬರು ಗುರುವಾರ ಸಂಜೆ ಅಂಗಡಿ ಮುಚ್ಚಿಕೊಂಡು ಮನೆಗೆ ಬರುವಾಗ ತನ್ನ ಪರ್ಸ್ ನಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದ ಸುಮಾರು ನಾಲ್ಕು ಲಕ್ಷದ ಆಭರಣ ಹಾಗೂ ಇನ್ನಿತರೆ ವಸ್ತುಗಳನ್ನು ಕಳೆದು ಕೊಂಡಿದ್ದರು. ದಾರಿಯಲ್ಲಿ ಆಭರಣಗಳ ಪರ್ಸ್ ಶಿಕ್ಷಕ ವಿಶ್ವನಾಥ್ ಎಂಬುವರಿಗೆ ಸಿಕ್ಕಿದ್ದು, ಸಿಕ್ಕ ಆಭರಣವನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ.&lt;/p&gt;&lt;p&gt;ನಗರದ ತಿರುಮಲ ಬಂಗಾರದ ಅಂಗಡಿ ಮಾಲೀಕರಾದ ಸುಮಾ ವೆಂಕಟೇಶ್ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಆಭರಣ ಕೊಡಲು ಪರ್ಸ್ ನಲ್ಲಿ ಇಟ್ಟುಕೊಂಡು ಸ್ಕೂಟಿಯಲ್ಲಿ ಹೊರಟಿದ್ದರು. ರಸ್ತೆ ಉಬ್ಬಿನಲ್ಲಿ ಪರ್ಸ್ ಕಳೆದು ಹೋಗಿದೆ. ತಕ್ಷಣವೇ ಗಾಬರಿಯಾದ ಸುಮಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಭರಣ ಕಳೆದುಕೊಂಡು ಬಂದಿದ್ದ ಮಹಿಳೆಯನ್ನು ಸಮಾಧಾನ ಪಡಿಸಿದ ಸಿಪಿಐ ಕುಮಾರ್, ಪರ್ಸ್ ನಲ್ಲಿ ಏನೇನು ಇತ್ತು ಎಂಬ ವಿವರ ಪಡೆದು ಮೊಬೈಲ್ ಪರ್ಸ್ ನಲ್ಲೇ ಇದೆ ಎಂಬ ಮಾಹಿತಿ ಪಡೆದು ಲೋಕೇಷನ್ ಹಾಕಿದ್ದಾರೆ.&lt;/p&gt;&lt;p&gt;ಪರ್ಸ್ ನಲ್ಲೆ ಇದ್ದ ಮೊಬೈಲ್ ಲೋಕೇಷನ್ ತೋರಿದ ಕಡೆ ಸುಮಾರು ಹತ್ತು ಜನ ಪೊಲೀಸರು ಸುತ್ತುವರಿದು ಹುಡುಕಾಡ ತೊಡಗಿದ್ದಾರೆ. ಪೊಲೀಸರನ್ನು ಕಂಡ ಶಿಕ್ಷಕ ಸ್ಥಳದಲ್ಲೇ ಇದ್ದರು. ಶಿಕ್ಷಕ ವಿಶ್ವನಾಥ್ ಯಾವುದೋ ಪರ್ಸ್ ಸಿಕ್ಕಿದೆ ಎಂದು ತೋರಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಪರ್ಸ್ ನಲ್ಲಿದ್ದ ಆಭರಣ ಪರಿಶೀಲಿಸಿದಾಗ ಎಲ್ಲಾ ಆಭರಣ ವಸ್ತುಗಳು ಹಾಗೇಯೇ ಇರುವುದನ್ನು ಕಂಡು ಸುಮಾ ಅವರಿಗೆ ಹೋದ ಜೀವ ಬಂದಂತಾಗಿದೆ. ಇದೆಲ್ಲವೂ ಅರ್ಧ ಗಂಟೆಯ ಒಳಗೆ ನಡೆದ ಘಟನಾವಳಿಯಾಗಿದೆ ಎಂದು ವೃತ್ತ ನಿರೀಕ್ಷಕ ಕೆ. ಕುಮಾರ್ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಕನ ಆದರ್ಶಕ್ಕೆ ಮೆಚ್ಚುಗೆ&lt;/strong&gt;&lt;/h2&gt;&lt;p&gt;ವರಮಹಾಲಕ್ಷ್ಮಿ ದಿನವೇ ಕಳೆದುಕೊಂಡಿದ್ದ ಆಭರಣ ಸಿಕ್ಕ ಖುಷಿಯಲ್ಲಿ ಮಹಿಳೆ ಇದ್ದರೆ, ಲಕ್ಷಾಂತರ ಬೆಲೆ ಬಾಳುವ ಆಭರಣ ಸಿಕ್ಕಿದ್ದನ್ನ ವಾಪಸ್ ನೀಡುವ ಮೂಲಕ ಮಾನವೀಯತೆ ಮೆರೆದ ಶಿಕ್ಷಕ ವಿಶ್ವನಾಥ್ ಅವರ ಆದರ್ಶ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಆಭರಣವನ್ನು ಹುಡುಕಲು ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಯಾಚರಣೆಗೆ ಇಳಿದ ಸಿಪಿಐ ಕುಮಾರ್ ಮತ್ತವರ ಪೋಲೀಸರ ತಂಡದ ಕಾರ್ಯ ಸಾರ್ವಜನಿಕ ಮೆಚ್ಚುಗೆಗೆ ಕಾರಣವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/challakere-teacher-wins-praise-for-returning-4-lakh-gold-jewellery-gvd/articleshow-axsb2av"/>
        </item>
        <item>
            <title><![CDATA[ದಕ್ಷಿಣದ  ಜೀವಗಂಗೆ ದಾಹದಲ್ಲಿ ಅನ್ನದಾತ; ಖಾಲಿಯಾದ ಕಾವೇರಿ ಒಡಲು,  ನೀರು ಬಿಡದಿದ್ದರೆ ಸಂಕಷ್ಟ ಫಿಕ್ಸ್‌!]]></title>
            <link>https://kannada.asianetnews.com/karnataka-districts/cauvery-water-crisis-karnataka-farmers-cauvery-basin-drought-paddy-crop-loss-water-shortage-cauvery-water-dispute-bmk/articleshow-3ta6nhl</link>
            <guid isPermaLink="true">https://kannada.asianetnews.com/karnataka-districts/cauvery-water-crisis-karnataka-farmers-cauvery-basin-drought-paddy-crop-loss-water-shortage-cauvery-water-dispute-bmk/articleshow-3ta6nhl</guid>
            <pubDate>Sat, 22 Aug 2026 17:40:20 +0530</pubDate>
            <description><![CDATA[ಕಾವೇರಿ ನದಿ ನೀರಿಲ್ಲದೆ ಬತ್ತಿ ಹೋಗುತ್ತಿದ್ದು, ಜಲಾಶಯಗಳು ಖಾಲಿಯಾಗಿವೆ. ಇದರಿಂದಾಗಿ, ಕಾವೇರಿ ಕೊಳ್ಳದ ರೈತರು ಬೆಳೆ ನಷ್ಟದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಸುಳಿಯಲ್ಲಿ ಬಳಲುತ್ತಿದ್ದಾರೆ. ರಾಜಕೀಯ ಹೋರಾಟಗಳ ನಡುವೆ ಅನ್ನದಾತನ ಬದುಕು ಅತಂತ್ರವಾಗಿದ್ದು, ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0mp1shdp4bc6hqvnn2aqw4k,imgname-cauvery-crisis-1787400611372.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾವೇರಿ ಎಂಬುದು ಕೇವಲ ನದಿಯಲ್ಲ, ದಕ್ಷಿಣ ಭಾರತದ ಕೋಟ್ಯಂತರ ಜೀವಗಳ ಹಸಿವು ನೀಗಿಸುವ ಜಲದೇವತೆ, ಅನ್ನದಾತನ ಪಾಲಿನ ಸಾಕ್ಷಾತ್ ಜೀವಗಂಗೆ. ಆದರೆ ಇಂದು ಅದೇ ಜೀವಗಂಗೆಯ ಒಡಲು ಬತ್ತಿಹೋಗುತ್ತಿದೆ. ಮಳೆರಾಯ ಕೈಕೊಟ್ಟಿದ್ದಾನೆ, ಜಲಾಶಯಗಳು ಖಾಲಿಯಾಗುತ್ತಿವೆ. ಇತ್ತ ನದಿಯ ನೀರಿಗಾಗಿ ರಾಜ್ಯಗಳ ನಡುವೆ ಹಗ್ಗಜಗ್ಗಾಟ ತೀವ್ರಗೊಳ್ಳುತ್ತಿದ್ದರೆ, ಅತ್ತ ನದಿಯನ್ನೇ ನಂಬಿ ಬದುಕುತ್ತಿರುವ ಕಾವೇರಿ ಕೊಳ್ಳದ ರೈತನ ಕಣ್ಣುಗಳಲ್ಲಿ ಕಣ್ಣೀರು ಒಣಗದಂತಾಗಿದೆ. ಪ್ರತಿ ವರ್ಷ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಇಂದು ನೀರಿಲ್ಲದೆ ಬಿರುಕು ಬಿಡುತ್ತಿವೆ. ಕಾವೇರಿಯ ಉಭಯ ದಂಡೆಗಳಲ್ಲೂ ಇಂದು ಕೇಳಿಸುತ್ತಿರುವುದು ಕೇವಲ ಅನ್ನದಾತನ ಆಕ್ರಂದನ ಮತ್ತು ಅಸಹಾಯಕತೆ ಮಾತ್ರ.&lt;/p&gt;&lt;h2&gt;&lt;strong&gt;ಅನಿಶ್ಚಿತತೆಯಲ್ಲಿ ಅನ್ನದಾತ!&lt;/strong&gt;&lt;/h2&gt;&lt;p&gt;ರೈತನ ಬದುಕು ಸದಾ ಅನಿಶ್ಚಿತತೆಯ ಮೇಲೆ ನಿಂತಿರುತ್ತದೆ. ಈ ವರ್ಷವೂ ಮುಂಗಾರು ಮಳೆ ಕೈಕೊಟ್ಟರೂ, 'ಜೀವಗಂಗೆ' ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆಯಿಂದ ರೈತ ಸಾಲಸೋಲ ಮಾಡಿ ಗದ್ದೆಗೆ ಇಳಿದಿದ್ದ. ಹಗಲಿರುಳು ಕಷ್ಟಪಟ್ಟು ಭೂಮಿ ಹದಮಾಡಿ, ಭತ್ತದ ಸಸಿಗಳನ್ನು ನೆಟ್ಟು ಹಸಿರು ಕನಸು ಕಂಡಿದ್ದ. ಆದರೆ ಕಾವೇರಿ ಕೊಳ್ಳದಲ್ಲಿ ಒಂದು ಎಕರೆ ಭತ್ತದ ಕೃಷಿ ಮಾಡುವುದು ಇಂದು ಸಾಮಾನ್ಯ ಮಾತಲ್ಲ.&lt;/p&gt;&lt;h3&gt;&lt;strong&gt;ದೊಡ್ಡ ವೆಚ್ಚದ ಹೊರೆ!&lt;/strong&gt;&lt;/h3&gt;&lt;p&gt;ಆರಂಭಿಕ ಹಂತದಲ್ಲೇ ರೈತನಿಗೆ ದೊಡ್ಡ ವೆಚ್ಚದ ಹೊರೆ ಬೀಳುತ್ತದೆ. ಕೆಲ ವರದಿಗಳ ಅಂಕಿ-ಅಂಶಗಳ ಪ್ರಕಾರ, ಎರಡೂವರೆ ಎಕರೆ ಜಮೀನಿನ ನಾಟಿಗೆ ರೈತರು ಈಗಾಗಲೇ ₹8,000 ಹಣವನ್ನು ಖರ್ಚು ಮಾಡಿದ್ದಾರೆ. ಇದನ್ನು ಸರಾಸರಿ ಲೆಕ್ಕ ಹಾಕಿದರೆ, ಪ್ರತಿ 1 ಎಕರೆ ಜಮೀನಿಗೆ ಕೇವಲ ಆರಂಭಿಕ ನರ್ಸರಿ ಸಿದ್ಧತೆ ಮತ್ತು ಸಸಿ ನಾಟಿಗೇ ಕನಿಷ್ಠ ₹3,200 ವೆಚ್ಚವಾಗುತ್ತದೆ. ಬಡ ರೈತನಿಗೆ ಆ ಮೂರು ಸಾವಿರ ರೂಪಾಯಿ ಕೇವಲ ಹಣವಲ್ಲ, ಅದು ಅವನ ರಕ್ತ, ಬೆವರು ಮತ್ತು ಇಡೀ ವರ್ಷದ ಬದುಕಿನ ಬಂಡವಾಳ.&lt;/p&gt;&lt;h3&gt;&lt;strong&gt;ತೆಲೆಕೆಳಗಾದ ಪರಿಸ್ಥಿತಿ!&lt;/strong&gt;&lt;/h3&gt;&lt;p&gt;ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತಲೆಕೆಳಗಾಗಿದೆ. ಜಲಾಶಯಗಳಿಂದ ಸರಿಯಾಗಿ ನೀರು ಬಿಡದ ಕಾರಣ, ನಾಟಿ ಮಾಡಿದ ಸಸಿಗಳು ಕಣ್ಣಮುಂದೆಯೇ ಒಣಗಿ ಕಪ್ಪಾಗುತ್ತಿವೆ. ಇನ್ನು ಕೇವಲ ಹತ್ತು ದಿನಗಳ ಒಳಗೆ ಗದ್ದೆಗಳಿಗೆ ನೀರು ಹರಿಯದಿದ್ದರೆ, ರೈತ ತಾನು ಕೇವಲ ಈ ಆರಂಭಿಕ ಬಂಡವಾಳವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಮುಂದೆ ಉಳುಮೆ, ಗೊಬ್ಬರ, ಕಳೆ ಕೀಳುವಿಕೆ ಸೇರಿದಂತೆ ಒಂದು ಎಕರೆಗೆ ತಗುಲುವ ಒಟ್ಟು ₹15,000 ದಿಂದ ₹20,000 ವರೆಗಿನ ಕೃಷಿ ಹೂಡಿಕೆಯ ಕನಸೆಲ್ಲಾ ಕಮರಿ ಹೋಗುತ್ತದೆ.&lt;/p&gt;&lt;h3&gt;&lt;strong&gt;ಬರಬೇಕಾದ ಆದಾಯವೂ ಮಣ್ಣುಪಾಲು!&lt;/strong&gt;&lt;/h3&gt;&lt;p&gt;ಬೆಳೆ ಕೈಗೆ ಬರದಿದ್ದರೆ ಮುಂದೆ ಬರಬೇಕಾದ ತಲಾ ಎಕರೆಗೆ ಸುಮಾರು ₹40,000 ದಷ್ಟು ನಿವ್ವಳ ಆದಾಯವೂ ಮಣ್ಣುಪಾಲಾಗಿ, ಇಡೀ ವರ್ಷದ ಬೆಳೆಯನ್ನೇ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ. ಕಾವೇರಿ ಕೊಳ್ಳದ ಹಳ್ಳಿಗಳಲ್ಲಿ ಇಂದು ಹೋದ ಕಡೆಯಲ್ಲೆಲ್ಲಾ ಇದೇ ಆತಂಕ ಮನೆಮಾಡಿದೆ. ಸಾಲದ ಸುಳಿಗೆ ಸಿಲುಕಿರುವ ಅನ್ನದಾತನಿಗೆ ಮುಂದೆ ಭವಿಷ್ಯವೇ ಕಾಣದಂತಾಗಿದೆ. ಖಾಸಗಿ ಲೇವಾದೇವಿದಾರರಿಂದ ಮತ್ತು ಸಹಕಾರ ಬ್ಯಾಂಕುಗಳಿಂದ ತಂದ ಸಾಲ ಹೇಗೆ ತೀರಿಸಲಿ? ಮುಂದಿನ ದಿನಗಳಲ್ಲಿ ಕುಟುಂಬವನ್ನು ಹೇಗೆ ಸಾಕಲಿ? ಎಂಬ ಪ್ರಶ್ನೆ ಪ್ರತಿ ರೈತನನ್ನೂ ಭೀತಿಯಿಂದ ಕಾಡುತ್ತಿದೆ.&lt;/p&gt;&lt;h3&gt;&lt;strong&gt;ಕುಡಿಯುವ ನೀರಿನ ಅಭಾವ!&lt;/strong&gt;&lt;/h3&gt;&lt;p&gt;ಇತ್ತ ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಕೋಟ್ಯಂತರ ಜನರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ. ಕಾವೇರಿ ನೀರು ಕುಡಿಯುವ ಜನರಿಗೆ ಆಸರೆಯಾಗಬೇಕೋ ಅಥವಾ ಬೆಳೆ ಒಣಗುತ್ತಿರುವ ರೈತನಿಗೆ ಜೀವ ನೀಡಬೇಕೋ ಎಂಬ ಧರ್ಮಸಂಕಟ ಸೃಷ್ಟಿಯಾಗಿದೆ. ಕಾವೇರಿ ವಿವಾದದ ರಾಜಕೀಯ ಹೋರಾಟಗಳು, ಕೋರ್ಟು-ಕಚೇರಿಗಳ ಆದೇಶಗಳು ವರ್ಷಗಳಿಂದ ನಡೆಯುತ್ತಲೇ ಇವೆ. ಆದರೆ ಈ ಎಲ್ಲಾ ಹೋರಾಟಗಳ ನಡುವೆ ನಲುಗಿ ಹೋಗುತ್ತಿರುವುದು ಮಾತ್ರ ಕಾವೇರಿ ಮಡಿಲ ಅನ್ನದಾತ. ನೀರಿಗಾಗಿ ಕಾಯುತ್ತಾ ಒಣಗುತ್ತಿರುವ ಗದ್ದೆಯ ಬದಿಯಲ್ಲಿ ನಿಂತು ಆಕಾಶದ ಕಡೆಗೆ ಮುಖಮಾಡಿ ಕಣ್ಣೀರಿಡುತ್ತಿರುವ ರೈತನಿಗೆ ಸಾಂತ್ವನ ಹೇಳುವವರೇ ಇಲ್ಲದಂತಾಗಿದೆ. ಕಾವೇರಿ ಕೊಳ್ಳದ ಈ ಜಲಕ್ಷಾಮ ಕೇವಲ ಬೆಳೆಯ ನಾಶವಲ್ಲ, ಅದು ದೇಶಕ್ಕೆ ಅನ್ನ ನೀಡುವ ಜಗತ್ತಿನ ಅತ್ಯಂತ ದೊಡ್ಡ ಶ್ರಮಿಕನ ಬದುಕಿನ ನಾಶ.&lt;/p&gt;&lt;h3&gt;&lt;strong&gt;ಅನ್ನದಾತನನ್ನು ನೋಡಿ!&lt;/strong&gt;&lt;/h3&gt;&lt;p&gt;ಚುನಾವಣೆ ಬಂದಾಗ ಕಾವೇರಿ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಾಡುವ ನಮ್ಮ ನಾಯಕರು, ಸಂಕಷ್ಟದ ಸಮಯದಲ್ಲಿ ರೈತ ತಲೆಮೇಲೆ ಕೈಹೊತ್ತು ಕುಳಿತಾಗ ಎಲ್ಲಿ ಮಾಯವಾಗುತ್ತಾರೆ? ಎಸಿ ರೂಮಿನಲ್ಲಿ ಕುಳಿತು ಹೇಳಿಕೆ ನೀಡುವುದನ್ನು ಬಿಟ್ಟು, ನಾಲೆಯ ಕೊನೆಯ ಭಾಗದವರೆಗೂ ನೀರು ತಲುಪಿಸುವ ಶಾಶ್ವತ ಯೋಜನೆಗಳನ್ನು ಜಾರಿಗೆ ತರಬೇಕು. ಇನ್ನಾದರೂ ರಾಜಕಾರಣಿಗಳು ಹಠಮಾರಿ ರಾಜಕೀಯ ಬಿಟ್ಟು, ಕಣ್ಮುಂದೆಯೇ ಒಣಗುತ್ತಿರುವ ಬೆಳೆಗಳನ್ನು ಮತ್ತು ಸಾಲದ ಸುಳಿಗೆ ಸಿಲುಕುತ್ತಿರುವ ಅನ್ನದಾತನನ್ನು ಉಳಿಸಬೇಕಿದೆ. ರೈತನಿಗೆ ನಿಮ್ಮ ಭರವಸೆಗಳಿಗಿಂತ ಗದ್ದೆಗೆ ಹರಿಯುವ ಜೀವಜಲ ಮುಖ್ಯ. ಇಲ್ಲದಿದ್ದರೆ, ದೇಶಕ್ಕೆ ಅನ್ನ ನೀಡುವ ರೈತನೇ ಇಲ್ಲದಂತಾಗಿ ಕಾವೇರಿ ಮಡಿಲು ಕೇವಲ ಕಣ್ಣೀರಿನ ಕೊಳ್ಳವಾಗುವುದು ಫಿಕ್ಸ್.&lt;/p&gt;]]></content:encoded>
            <category>karnataka-districts</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/cauvery-water-crisis-karnataka-farmers-cauvery-basin-drought-paddy-crop-loss-water-shortage-cauvery-water-dispute-bmk/articleshow-3ta6nhl"/>
        </item>
        <item>
            <title><![CDATA[ಬೆಂಗಳೂರು ಐಐಎಂಬಿ ಹೊಸ ಹೆಜ್ಜೆ: ಶಿಕ್ಷಣ ಲೋಕದಲ್ಲಿ ಟಾಟಾ ಸಂಸ್ಥೆ ಜೊತೆಗೆ ಮೈತ್ರಿ, ಜಿಗಣಿ ಹೊಸ ಕಾಲೇಜು!]]></title>
            <link>https://kannada.asianetnews.com/education/iim-bangalore-partners-with-tata-trusts-for-undergraduate-school-new-jigani-anekal-campus-gdp/articleshow-u8fkypr</link>
            <guid isPermaLink="true">https://kannada.asianetnews.com/education/iim-bangalore-partners-with-tata-trusts-for-undergraduate-school-new-jigani-anekal-campus-gdp/articleshow-u8fkypr</guid>
            <pubDate>Sat, 22 Aug 2026 17:34:49 +0530</pubDate>
            <description><![CDATA[&lt;p&gt;ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು (IIMB) ತನ್ನ ಪದವಿಪೂರ್ವ ಶಿಕ್ಷಣ ಕ್ಷೇತ್ರಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ್ದು, ಮೊದಲ ಬ್ಯಾಚ್&zwnj;ಗೆ ಅಭೂತಪೂರ್ವ ಬೇಡಿಕೆ ವ್ಯಕ್ತವಾಗಿದೆ. ಈ ಯಶಸ್ಸಿನ ಬೆನ್ನಲ್ಲೇ, ಟಾಟಾ ಟ್ರಸ್ಟ್ಸ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಈ ನೂತನ ಶಾಲೆಯನ್ನು 'ಐಐಎಂ ಬೆಂಗಳೂರು - ದೋರಾಬ್ಜಿ ಟಾಟಾ ಸ್ಕೂಲ್ ಆಫ್ ಅಂಡರ್&zwnj;ಗ್ರಾಜುಯೇಟ್ ಸ್ಟಡೀಸ್' ಎಂದು ಹೆಸರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mnnhv775aftgsq9f7ag2km,imgname-iim-bangalore-partners-with-tata-trusts--1--1787400210279.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು (IIM) ತನ್ನ ಪದವಿಪೂರ್ವ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಯಶಸ್ವಿ ಹಾಗೂ ಐತಿಹಾಸಿಕವಾಗಿ ಪಾದಾರ್ಪಣೆ ಮಾಡಿದೆ. ಸಂಸ್ಥೆಯು ಹೊಸದಾಗಿ ಪರಿಚಯಿಸಿರುವ 80 ಸೀಟುಗಳ ಉದ್ಘಾಟನಾ ಬ್ಯಾಚ್&zwnj;ಗೆ ದೇಶಾದ್ಯಂತ ಬರೋಬ್ಬರಿ 12,000 ಅರ್ಜಿಗಳು ಹರಿದುಬಂದಿದ್ದು, ಅತ್ಯಂತ ಸ್ಪರ್ಧಾತ್ಮಕ ಪ್ರವೇಶ ಪ್ರಕ್ರಿಯೆಯ ಮೂಲಕ ಅಸಾಧಾರಣ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಐಐಎಂ ಬೆಂಗಳೂರಿನ ಪೂರ್ಣ ಸಮಯದ ಪದವಿಪೂರ್ವ ಶಿಕ್ಷಣಕ್ಕೆ ಬಲವಾದ ಆರಂಭ ದೊರೆತಿದ್ದು, ಈ ವಸತಿ ಶೈಕ್ಷಣಿಕ ಕಾರ್ಯಕ್ರಮಗಳು ಆಗಸ್ಟ್ 31, 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿವೆ.&lt;/p&gt;&lt;p&gt;ಈ ಗಮನಾರ್ಹ ಯಶಸ್ಸಿನ ಬೆನ್ನಲ್ಲೇ, ಐಐಎಂ ಬೆಂಗಳೂರು ಮತ್ತು ಟಾಟಾ ಟ್ರಸ್ಟ್ಸ್ (ಸರ್ ದೋರಾಬ್ಜಿ ಟಾಟಾ ಟ್ರಸ್ಟ್) ನಡುವೆ ಮಹತ್ವದ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಬಿದ್ದಿದೆ. ಈ ಒಪ್ಪಂದದ ಮೂಲಕ ನೂತನ ಪದವಿಪೂರ್ವ ಶಾಲೆಯ ಅಭಿವೃದ್ಧಿಗೆ ಟಾಟಾ ಟ್ರಸ್ಟ್ಸ್ ನೀಡಲಿರುವ ಮಹತ್ವದ ಸಹಾಯದ ಕೊಡುಗೆಯನ್ನು ಅಧಿಕೃತಗೊಳಿಸಲಾಗಿದ್ದು, ಈ ಸಂಸ್ಥೆಯನ್ನು &lsquo;ಐಐಎಂ ಬೆಂಗಳೂರು - ದೋರಾಬ್ಜಿ ಟಾಟಾ ಸ್ಕೂಲ್ ಆಫ್ ಅಂಡರ್&zwnj;ಗ್ರಾಜುಯೇಟ್ ಸ್ಟಡೀಸ್&rsquo; ಎಂದು ಹೆಸರಿಸಲಾಗುತ್ತಿದೆ.&lt;/p&gt;&lt;h2&gt;ಶೈಕ್ಷಣಿಕ ಮೂಲಸೌಕರ್ಯಕ್ಕೆ ಟಾಟಾ ಟ್ರಸ್ಟ್ಸ್ ಬೆಂಬಲ&lt;/h2&gt;&lt;p&gt;ಆಗಸ್ಟ್ 21, 2026 ರಂದು ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಟಾಟಾ ಟ್ರಸ್ಟ್ಸ್ ಅಧ್ಯಕ್ಷರಾದ ಶ್ರೀ ನೋಯೆಲ್ ಟಾಟಾ ಹಾಗೂ ಐಐಎಂ ಬೆಂಗಳೂರು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಅವರು ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಟಾಟಾ ಟ್ರಸ್ಟ್ಸ್ ಸಿಇಒ ಶ್ರೀ ಸಿದ್ಧಾರ್ಥ್ ಶರ್ಮಾ ಮತ್ತು ಐಐಎಂಬಿ ಉಸ್ತುವಾರಿ ನಿರ್ದೇಶಕರಾದ ಪ್ರೊ. ಯು. ದಿನೇಶ್ ಕುಮಾರ್ ಉಪಸ್ಥಿತರಿದ್ದರು. ಈ ಒಪ್ಪಂದದ ಪ್ರಕಾರ, ಟಾಟಾ ಟ್ರಸ್ಟ್ಸ್ ಸಂಸ್ಥೆಯು ಪದವಿಪೂರ್ವ ಶಾಲೆಗೆ ಜಾಗತಿಕ ಮಟ್ಟದ ಶೈಕ್ಷಣಿಕ ಮೂಲಸೌಕರ್ಯ ನಿರ್ಮಾಣಕ್ಕೆ ಬೆಂಬಲ ನೀಡಲಿದ್ದು, ಸಂಸ್ಥೆಯ ಕಾರ್ಯತಂತ್ರ, ನೀತಿ ನಿರೂಪಣೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಯಲ್ಲಿಯೂ ಸಕ್ರಿಯವಾಗಿ ಕೊಡುಗೆ ನೀಡಲಿದೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ಶ್ರೀ ನೋಯೆಲ್ ಟಾಟಾ ಅವರು, ಟಾಟಾ ಟ್ರಸ್ಟ್ಸ್ ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತದ ಪ್ರಮುಖ ಸಂಸ್ಥೆಗಳನ್ನು ಹುಟ್ಟುಹಾಕಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಸೇವೆ ಸಲ್ಲಿಸುತ್ತಿದೆ ಎಂದು ಸ್ಮರಿಸಿದರು. ಭಾರತದ ಮುಂದಿನ ಹಂತದ ಬೆಳವಣಿಗೆಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ಅಗತ್ಯವಿದ್ದು, ಐಐಎಂ ಬೆಂಗಳೂರಿನೊಂದಿಗಿನ ಈ ಪಾಲುದಾರಿಕೆಯು ಪದವಿಪೂರ್ವ ಶಿಕ್ಷಣಕ್ಕೆ ಹೊಸ ಮಾನದಂಡಗಳನ್ನು ಹೊಂದಿಸುವ ಜತೆಗೆ ದೇಶಕ್ಕೆ ದೀರ್ಘಕಾಲೀನ ಕೊಡುಗೆ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;ಟ್ರಸ್ಟ್&zwnj;ನ ಈ ಉದಾರ ಬೆಂಬಲಕ್ಕೆ ಆಳವಾದ ಕೃತಜ್ಞತೆ ವ್ಯಕ್ತಪಡಿಸಿದ ಐಐಎಂಬಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ದೇವಿ ಶೆಟ್ಟಿ ಅವರು, ಐಐಎಂ ಬೆಂಗಳೂರು ಸಾರ್ವಜನಿಕ ಸಂಸ್ಥೆಯಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಅವಕಾಶಗಳನ್ನು ಸೃಷ್ಟಿಸಿದ ಇತಿಹಾಸವನ್ನು ಹೊಂದಿದೆ ಎಂದು ಹೇಳಿದರು. ಸಮಗ್ರತೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಹೆಸರಾದ ಟಾಟಾ ಟ್ರಸ್ಟ್ಸ್ ಜೊತೆಗಿನ ಒಪ್ಪಂದವು, ಹೊಸ ಪೀಳಿಗೆಯ ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ಶಿಕ್ಷಣವನ್ನು ತಲುಪಿಸುವ ಸಂಸ್ಥೆಯ ಮಹತ್ವಾಕಾಂಕ್ಷೆಯ ಮಾದರಿಗೆ ಬಲವಾದ ಅಡಿಪಾಯ ಹಾಕಿದೆ ಎಂದು ಅವರು ಬಣ್ಣಿಸಿದರು.&lt;/p&gt;&lt;h2&gt;ಜಿಗಣಿ-ಅನೇಕಲ್&zwnj;ನಲ್ಲಿ ನೂತನ ಸುಸ್ಥಿರ ಕ್ಯಾಂಪಸ್&lt;/h2&gt;&lt;p&gt;ಜಿಗಣಿ-ಅನೇಕಲ್ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ನೂತನ ಸುಸ್ಥಿರ ಕ್ಯಾಂಪಸ್, ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂಬಿಯ ಮುಖ್ಯ ಕ್ಯಾಂಪಸ್&zwnj;ನಿಂದ ಸುಮಾರು 23 ಕಿಲೋಮೀಟರ್ ದೂರದಲ್ಲಿದೆ. ಅತ್ಯಾಧುನಿಕ ಶೈಕ್ಷಣಿಕ ಸೌಲಭ್ಯಗಳು, ಆಧುನಿಕ ವಿದ್ಯಾರ್ಥಿ ಜೀವನ ವ್ಯವಸ್ಥೆ ಮತ್ತು ಪರಿಸರ ಸ್ನೇಹಿ ವಿನ್ಯಾಸವನ್ನು ಒಳಗೊಂಡಿರುವ ಈ ಕ್ಯಾಂಪಸ್, ಅಂತರಶಿಸ್ತೀಯ ಕಲಿಕೆ ಮತ್ತು ನಾವೀನ್ಯತೆಯನ್ನು ಬೆಳೆಸುವ ವಸತಿ ವಾತಾವರಣವನ್ನು ಒದಗಿಸಲಿದೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡುವ ಉದ್ದೇಶದಿಂದ ಈ ಕ್ಯಾಂಪಸ್ ಅನ್ನು ವಿಶೇಷ ಚೇತನರಿಗೆ ಸುಲಭವಾಗಿ ಪ್ರವೇಶಿಸಬಹುದಾದ ವಿನ್ಯಾಸದೊಂದಿಗೆ ರೂಪಿಸಲಾಗುತ್ತಿದೆ.&lt;/p&gt;&lt;p&gt;ಈ ನೂತನ ಶಾಲೆಯು ಆರಂಭದಲ್ಲಿ ಎರಡು ನಾಲ್ಕು ವರ್ಷಗಳ ಪೂರ್ಣ ಸಮಯದ ವಸತಿ ಪದವಿ ಕಾರ್ಯಕ್ರಮಗಳನ್ನು ನೀಡಲಿದೆ. ಅವುಗಳೆಂದರೆ, ಅರ್ಥಶಾಸ್ತ್ರ ಮೈನರ್ ಹೊಂದಿರುವ 'ದತ್ತಾಂಶ ವಿಜ್ಞಾನದಲ್ಲಿ ಬಿಎಸ್ಸಿ (ಆನರ್ಸ್)' ಮತ್ತು ದತ್ತಾಂಶ ವಿಜ್ಞಾನ ಮೈನರ್ ಹೊಂದಿರುವ 'ಅರ್ಥಶಾಸ್ತ್ರದಲ್ಲಿ ಬಿಎಸ್ಸಿ (ಆನರ್ಸ್)'. ಪ್ರಸ್ತುತ ಆಯ್ಕೆಯಾಗಿರುವ 80 ವಿದ್ಯಾರ್ಥಿಗಳ ಪೈಕಿ ಪ್ರತಿ ಕಾರ್ಯಕ್ರಮಕ್ಕೆ ತಲಾ 40 ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲಾಗಿದೆ.&lt;/p&gt;&lt;p&gt;ತಂತ್ರಜ್ಞಾನ, ದತ್ತಾಂಶ ಹಾಗೂ ಕೃತಕ ಬುದ್ಧಿಮತ್ತೆಯ (AI) ವೇಗದ ಬೆಳವಣಿಗೆಯಿಂದ ರೂಪಿತವಾಗುತ್ತಿರುವ ಇಂದಿನ ಜಗತ್ತಿಗೆ ಯುವಜನರನ್ನು ಸಿದ್ಧಪಡಿಸುವುದು ಅತ್ಯಂತ ಅಗತ್ಯ ಎಂದು ಟಾಟಾ ಟ್ರಸ್ಟ್ಸ್ ಸಿಇಒ ಶ್ರೀ ಸಿದ್ಧಾರ್ಥ್ ಶರ್ಮಾ ತಿಳಿಸಿದರು. ಇಂದಿನ ಯುಗದಲ್ಲಿ ಕೇವಲ ಒಂದು ವಿಷಯದ ವಿಶೇಷ ಜ್ಞಾನ ಸಾಕಾಗುವುದಿಲ್ಲ; ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಯೋಚಿಸುವ, ಹೊಸ ಪ್ರಶ್ನೆಗಳನ್ನು ಕೇಳುವ ಮತ್ತು ಕಲಿತದ್ದನ್ನು ನೈಜ ಜಗತ್ತಿನ ಸವಾಲುಗಳಿಗೆ ಅನ್ವಯಿಸುವ ಸಾಮರ್ಥ್ಯವಿರಬೇಕು ಎಂದು ಅವರು ಪ್ರತಿಪಾದಿಸಿದರು.&lt;/p&gt;&lt;p&gt;ಐಐಎಂಬಿ ಪ್ರಭಾರಿ ನಿರ್ದೇಶಕ ಪ್ರೊ. ದಿನೇಶ್ ಕುಮಾರ್ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆಯು ಉದ್ಯಮ, ಸರ್ಕಾರ ಹಾಗೂ ಸಮಾಜದ ಸ್ವರೂಪವನ್ನೇ ಮರುರೂಪಿಸುತ್ತಿರುವ ಈ ಸಮಯದಲ್ಲಿ ಪದವಿಪೂರ್ವ ಶಾಲೆಯನ್ನು ಆರಂಭಿಸುತ್ತಿರುವುದು ಅತ್ಯಂತ ಪ್ರಸ್ತುತವಾಗಿದೆ ಎಂದು ಹೇಳಿದರು. ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸಂಶೋಧನಾ ಸಾಮರ್ಥ್ಯದ ಮೂಲಕ ವಿದ್ಯಾರ್ಥಿಗಳು AI-ಚಾಲಿತ ಪ್ರಪಂಚದ ಸಂಕೀರ್ಣ ಸವಾಲುಗಳನ್ನು ಎದುರಿಸಲು ಸೂಕ್ತ ಪರಿಸರ ವ್ಯವಸ್ಥೆಯನ್ನು ಐಐಎಂಬಿ ನಿರ್ಮಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.&lt;/p&gt;&lt;p&gt;ಈ ಕೊಡುಗೆಯಿಂದಾಗಿ ಐಐಎಂ ಬೆಂಗಳೂರು ಸಂಸ್ಥೆಯು ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಅಲ್ಗಾರಿದಮಿಕ್ ವಿನ್ಯಾಸ, ಭಾರತೀಯ ಜ್ಞಾನ ವ್ಯವಸ್ಥೆಗಳು ಮತ್ತು ಅನ್ವಯಿಕ ವ್ಯವಹಾರ ಕಲಿಕೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನಾ ಕ್ಲಸ್ಟರ್&zwnj;ಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ. ಇದು ಜಾಗತಿಕ ಮಟ್ಟದ ಅಂತರಶಿಸ್ತೀಯ ಅಧ್ಯಾಪಕರ ಬಳಗವನ್ನು ನಿರ್ಮಿಸಲು ಮತ್ತು ಸಂಸ್ಥೆಯ ದೀರ್ಘಕಾಲೀನ ಶೈಕ್ಷಣಿಕ ಉದ್ದೇಶಗಳನ್ನು ಮುನ್ನಡೆಸಲು ಪ್ರಮುಖ ಮೈಲಿಗಲ್ಲಾಗಲಿದೆ.&lt;/p&gt;&lt;p&gt;1892 ರಲ್ಲಿ ಸ್ಥಾಪನೆಗೊಂಡ ಟಾಟಾ ಟ್ರಸ್ಟ್ಸ್ ಸಂಸ್ಥೆಯು ಸಂಸ್ಥಾಪಕ ಜಮ್ಸೆಟ್ಜಿ ಟಾಟಾ ಅವರ ಮಾರ್ಗದರ್ಶನದಲ್ಲಿ ಭಾರತ ಹಾಗೂ ಏಷ್ಯಾದ ಅತ್ಯಂತ ಪ್ರಮುಖ ಲೋಕೋಪಕಾರಿ ಸಂಸ್ಥೆಯಾಗಿ ಬೆಳೆದಿದೆ. ಇನ್ನೊಂದೆಡೆ, EQUIS ಮಾನ್ಯತೆ ಪಡೆದ ಐಐಎಂ ಬೆಂಗಳೂರು ತನ್ನ 50 ವರ್ಷಗಳ ಸುದೀರ್ಘ ಪಯಣದಲ್ಲಿ 150ಕ್ಕೂ ಹೆಚ್ಚು ಹಿರಿಯ ಅಧ್ಯಾಪಕರು ಮತ್ತು 25,000ಕ್ಕೂ ಹೆಚ್ಚು ಜಾಗತಿಕ ಹಳೆಯ ವಿದ್ಯಾರ್ಥಿಗಳ ಬಲದೊಂದಿಗೆ ಭಾರತದ ಶ್ರೇಷ್ಠ ನಿರ್ವಹಣಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ಈ ಎರಡೂ ಮಹಾನ್ ಸಂಸ್ಥೆಗಳು ಕೈಜೋಡಿಸಿರುವುದು ಭಾರತದ ಪದವಿಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/education/iim-bangalore-partners-with-tata-trusts-for-undergraduate-school-new-jigani-anekal-campus-gdp/articleshow-u8fkypr"/>
        </item>
        <item>
            <title><![CDATA[ಮಹಾಪ್ರಭು ಮೋದಿ ಸ್ವಶಕ್ತಿ ಮೇಲೆ ನಿಂತಿಲ್ಲ, ಪವನ್-ನಿತೀಶ್ ಆಸರೆ ಬೇಕು -ಪ್ರಕಾಶ್ ರಾಜ್ ಮತ್ತೆ ತೀವ್ರ ವಾಗ್ದಾಳಿ]]></title>
            <link>https://kannada.asianetnews.com/kalaburagi/modi-is-not-standing-on-his-own-strength-he-needs-pawan-kalyan-and-nitish-kumars-support-prakash-raj-slams-pm-gkn/articleshow-sebqn0s</link>
            <guid isPermaLink="true">https://kannada.asianetnews.com/kalaburagi/modi-is-not-standing-on-his-own-strength-he-needs-pawan-kalyan-and-nitish-kumars-support-prakash-raj-slams-pm-gkn/articleshow-sebqn0s</guid>
            <pubDate>Sat, 22 Aug 2026 17:01:18 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ ನಡೆದ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. &quot;ಮಹಾಪ್ರಭು ಮೋದಿ ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ, ಅವರು ಪವನ್ ಕಲ್ಯಾಣ್ ಮತ್ತು ನಿತೀಶ್ ಕುಮಾರ್ ಅವರ ಆಸರೆಯ ಮೇಲೆ ನಿಂತಿದ್ದಾರೆ&quot; ಎಂದು ಲೇವಡಿ ಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyy0gpar3c4g68rwzjxyztxk,imgname-prakash-raj-1785566091608.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ಮಹಾಪ್ರಭು ನರೇಂದ್ರ ಮೋದಿ ಅವರು ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ. ಅವರು ತಮ್ಮ ಅಕ್ಕಪಕ್ಕದಲ್ಲಿ ಇರುವ ಪವನ್ ಕಲ್ಯಾಣ್ ಮತ್ತು ನಿತೀಶ್ ಕುಮಾರ್ ಅವರ ಹೆಗಲ ಮೇಲೆ ನಿಂತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಲೇವಡಿ ಮಾಡಿದ್ದಾರೆ.&lt;/p&gt;&lt;p&gt;ಕಲಬುರಗಿಯಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶವನ್ನು ವಿಕಸಿತ ಭಾರತ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು, ಇವರು ಭಾರತವನ್ನು ಅವನತಿಯತ್ತ ಕೊಂಡೊಯ್ದಿದ್ದಾರೆ. ಮಹಾಪ್ರಭು ಮೋದಿ ಅವರು ಒಬ್ಬ ರಾಜನಂತೆ ಬದುಕುತ್ತಿದ್ದಾರೆ. ಅವರ ಬಟ್ಟೆಗಳು, ವೈಭವದ ಮೆರವಣಿಗೆಗಳು ಅವರಿಗೆ ಬೇಕಾ? ಒಬ್ಬ ದೇಶದ ಪ್ರಧಾನಿಯನ್ನು ಸಾಮಾನ್ಯ ಜನ ಮುಟ್ಟದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅವರು ರಾಮ ಮಂದಿರ ವ್ಯಾಪ್ತಿಯ ಕ್ಷೇತ್ರದಲ್ಲೇ ಸೋಲು ಕಂಡಿದ್ದಾರೆ. ಎಂಪಿ, ಎಂಎಲ್&zwnj;ಎಗಳನ್ನು ಖರೀದಿ ಮಾಡಲು ರಾಮ ಮಂದಿರದ ದುಡ್ಡನ್ನು ಕದಿಯಲಾಗಿದೆ ಎಂದು ಪ್ರಕಾಶ್ ರಾಜ್ ಗಂಭೀರವಾಗಿ ಆರೋಪಿಸಿದರು.&lt;/p&gt;&lt;h2&gt;&lt;strong&gt;ಕರಾವಳಿ ಮಂದಿ ನನ್ನಂತೆ ಆದರೆ ಇವರ ಕಥೆ ಏನು?&lt;/strong&gt;&lt;/h2&gt;&lt;p&gt;ತಮ್ಮನ್ನು ಕರಾವಳಿ ಭಾಗಕ್ಕೆ ಕಳುಹಿಸಬೇಕು ಎನ್ನುವ ವಿರೋಧಿಗಳ ಹೇಳಿಕೆಗೆ ಟಾಂಗ್ ನೀಡಿದ ಅವರು, ಪ್ರಕಾಶ್ ರಾಜ್&zwnj;ನನ್ನು ಕರಾವಳಿಗೆ ಹಾಕಿ ಎಂದು ಕೆಲವರು ಹೇಳುತ್ತಿದ್ದಾರೆ. ಒಂದು ವೇಳೆ ಆ ಕರಾವಳಿಯ ಜನ ಅಲ್ಲಿನ ಸಮುದ್ರದ ಮೀನು ತಿಂದು ನನ್ನಂತೆಯೇ ಯೋಚಿಸಿ, ಪ್ರಶ್ನೆ ಮಾಡಲು ಆರಂಭಿಸಿದರೆ ಇವರ ಪರಿಸ್ಥಿತಿ ಏನಾಗಬಹುದು? ಎಂದು ಪ್ರಶ್ನಿಸಿದರು. ಅಲ್ಲದೆ ಪ್ರತಿದಿನ ಸುಳ್ಳು ಹೇಳುವವರನ್ನು ಮತ್ತು ಅಪಶಬ್ದಗಳನ್ನು ಬಳಸುವವರನ್ನು ಮೊದಲು ಶುದ್ಧೀಕರಿಸಬೇಕಾಗಿದೆ ಎಂದರು.&lt;/p&gt;&lt;p&gt;ಇವರಿಗೆ ಮಲ್ಲಿಕಾರ್ಜುನ ಖರ್ಗೆ ಅಂದರೆ ಆಗಿಬರುವುದಿಲ್ಲ. ಅದರರ್ಥ ಇವರಿಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಆಗಿಬರುವುದಿಲ್ಲ ಎಂದೇ ಅರ್ಥ. ಸಂವಿಧಾನ ಎನ್ನುವುದು ಬ್ರಿಟಿಷರು ಬಂದ ಮೇಲೆ ರಚನೆಯಾಗಿದ್ದು. ಇವರು ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಕಾಂಟ್ರಾಕ್ಟ್ ಪಡೆದುಕೊಂಡವರಂತೆ ಆಡುತ್ತಿದ್ದಾರೆ. ಹಿಂದೆ ಡಿಮಾನಿಟೈಸೇಶನ್ ಮಾಡಿ ದೇಶದ ಜನರ ದುಡ್ಡನ್ನು ಜನರೇ ತೆಗೆದುಕೊಳ್ಳದಂತೆ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಒಂದು ಕೋಟಿ ಮತಗಳನ್ನು ಡಿಲೀಟ್ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸೋಲಿನ ಭಯದಿಂದ ದೇಶದಲ್ಲಿ ತನಿಖಾ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಕಿಡಿಕಾರಿದರು.&lt;/p&gt;&lt;p&gt;ವೇದಿಕೆಯಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧೈರ್ಯ ತುಂಬಿದ ಪ್ರಕಾಶ್ ರಾಜ್ ಖರ್ಗೆಯವರೇ, ನೀವು ಸದನದಲ್ಲಿ ಹೀಗೆಯೇ ಗುಡುಗುತ್ತಿರಿ, ನಾವೆಲ್ಲರೂ ನಿಮ್ಮ ಜೊತೆಗಿರುತ್ತೇವೆ. ಮೋದಿ ಅಧಿಕಾರದಿಂದ ಕೆಳಗಿಳಿಯುತ್ತಾರೆ, ದೇಶದ ಜನರೇ ಅವರನ್ನು ಇಳಿಸುತ್ತಾರೆ. ಆ ಬಳಿಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿದ ದಾರಿದೀಪದಂತೆ ನಡೆಯುವ ಮುಂದಿನ ಪ್ರಧಾನಿಯನ್ನು ನಾವೆಲ್ಲರೂ ಸೇರಿ ಆರಿಸೋಣ ಎಂದು ಕರೆ ನೀಡಿದರು. ಕರ್ನಾಟಕದಲ್ಲಿ ಪ್ರಜೆಗಳೇ ಆರಿಸಿದ ಸರ್ಕಾರವಿದ್ದು, ರಾಜ್ಯದಲ್ಲಿ ಯಾವೊಬ್ಬ ನಾಗರಿಕನೂ ತನ್ನ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/kalaburagi/modi-is-not-standing-on-his-own-strength-he-needs-pawan-kalyan-and-nitish-kumars-support-prakash-raj-slams-pm-gkn/articleshow-sebqn0s"/>
        </item>
        <item>
            <title><![CDATA[ಮಾವನ ಸಾವಿನ ಸುದ್ದಿ ಕೇಳಿಯೂ ಹೋಗಲಿಲ್ಲ - ವೈಯಕ್ತಿಕ ದುಃಖ ಬದಿಗಿಟ್ಟು ಕರ್ತವ್ಯದಲ್ಲಿ ಭಾಗಿಯಾದ ಕಮಿಷನರ್]]></title>
            <link>https://kannada.asianetnews.com/dharwad/duty-first-hubballi-commissioner-shashikumar-stays-on-bandobast-duty-after-hearing-of-father-in-laws-death-gkn/articleshow-4akrvuz</link>
            <guid isPermaLink="true">https://kannada.asianetnews.com/dharwad/duty-first-hubballi-commissioner-shashikumar-stays-on-bandobast-duty-after-hearing-of-father-in-laws-death-gkn/articleshow-4akrvuz</guid>
            <pubDate>Sat, 22 Aug 2026 16:35:17 +0530</pubDate>
            <description><![CDATA[&lt;p&gt;ಖಾಕಿ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂಬುದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ, ವೈಯಕ್ತಿಕ ದುಃಖವನ್ನು ಬದಿಗಿಟ್ಟು ಸಾರ್ವಜನಿಕ ಶಾಂತಿ ಕಾಪಾಡಲು ಅವರು ರಸ್ತೆಗೆ ಇಳಿದಿರುವ ಘಟನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mj9s03x68v5xxhqb697g15,imgname-n-shashikumar-1787396678659.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ಖಾಕಿ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂಬುದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ, ವೈಯಕ್ತಿಕ ದುಃಖವನ್ನು ಬದಿಗಿಟ್ಟು ಸಾರ್ವಜನಿಕ ಶಾಂತಿ ಕಾಪಾಡಲು ಅವರು ರಸ್ತೆಗೆ ಇಳಿದಿರುವ ಘಟನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;h2&gt;&lt;strong&gt;ನಡೆದದ್ದೇನು?&lt;/strong&gt;&lt;/h2&gt;&lt;p&gt;ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಮಾವ ವಿರನಾಗಪ್ಪ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಯಾವುದೇ ವ್ಯಕ್ತಿಯಾದರೂ ಆಸ್ಪತ್ರೆಗೆ ಓಡುವುದು ಸಹಜ. ಆದರೆ ಶಶಿಕುಮಾರ್ ಅವರು ಮಾಡಿದ್ದೇ ಬೇರೆ.&lt;/p&gt;&lt;p&gt;ಇಂದು ಹಳೆ ಹುಬ್ಬಳ್ಳಿಯ ಭವಾನಿ ಶಂಕರ ದೇವಸ್ಥಾನದ ವಿಚಾರವಾಗಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದವು. ನಗರದ ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂಬ ಕಾರಣಕ್ಕೆ ಕಮಿಷನರ್ ಶಶಿಕುಮಾರ್ ಅವರು ಸ್ವತಃ ಸ್ಥಳದಲ್ಲಿ ಹಾಜರಿದ್ದು ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು. ಮಾವನ ಸಾವಿನ ಸುದ್ದಿ ಕಿವಿಗೆ ಬಿದ್ದರೂ, ಪ್ರತಿಭಟನೆ ಮುಕ್ತಾಯವಾಗಿ ಪರಿಸ್ಥಿತಿ ಹತೋಟಿಗೆ ಬರುವವರೆಗೂ ಅವರು ಆಸ್ಪತ್ರೆಗೆ ತೆರಳದೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.&lt;/p&gt;&lt;h2&gt;&lt;strong&gt;ಅನಾರೋಗ್ಯದ ನಡುವೆಯೂ ಸೇವೆ&lt;/strong&gt;&lt;/h2&gt;&lt;p&gt;ಕೇವಲ ಕುಟುಂಬದ ದುಃಖ ಮಾತ್ರವಲ್ಲ, ಕಳೆದ ಎರಡು ದಿನಗಳಿಂದ ಶಶಿಕುಮಾರ್ ಅವರ ಆರೋಗ್ಯವೂ ಅಷ್ಟಕಷ್ಟೇ ಇತ್ತು. ಕೈಗೆ ಸಿರಿಂಜ್ (IV Drip) ಹಾಕಿಸಿಕೊಂಡಿದ್ದ ಸ್ಥಿತಿಯಲ್ಲೇ ಅವರು ಕಚೇರಿ ಕೆಲಸ ಹಾಗೂ ಬಂದೋಬಸ್ತ್ ಕೆಲಸಗಳಲ್ಲಿ ಭಾಗಿಯಾಗಿದ್ದರು. ಇಂದು ವೈಯಕ್ತಿಕ ನಷ್ಟದ ನಡುವೆಯೂ ಅವರು ತೋರಿದ 'ಕರ್ತವ್ಯ ಪ್ರಜ್ಞೆ' ಪೊಲೀಸ್ ಇಲಾಖೆಯ ಹೆಮ್ಮೆಯನ್ನು ಹೆಚ್ಚಿಸಿದೆ.&lt;/p&gt;&lt;h2&gt;&lt;strong&gt;ಯಾರು ಈ ಎನ್. ಶಶಿಕುಮಾರ್?&lt;/strong&gt;&lt;/h2&gt;&lt;p&gt;ಎನ್. ಶಶಿಕುಮಾರ್ ಅವರು ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರು. 2007ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಇವರು ಮೂಲತಹ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯವರು. ಬಿಎಸ್ಸಿ (ಕೃಷಿ) ಪದವೀಧರರು. ಮಂಗಳೂರು ಪೊಲೀಸ್ ಕಮಿಷನರ್ ಆಗಿ, ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿ, ಹಾವೇರಿ ಹಾಗೂ ಚಿಕ್ಕಮಗಳೂರು ಎಸ್ಪಿಯಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ಜುಲೈ 2024 ರಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಾರ್ವಜನಿಕರೊಂದಿಗೆ ಸೌಮ್ಯವಾಗಿ ವರ್ತಿಸುವ, ಆದರೆ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಶಶಿಕುಮಾರ್ ಅವರು ಇಂದು ತೋರಿದ ಈ ಕರ್ತವ್ಯ ನಿಷ್ಠೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಕುಟುಂಬಕ್ಕಿಂತ ಕರ್ತವ್ಯವೇ ದೊಡ್ಡದು ಎಂದು ತೋರಿಸಿಕೊಟ್ಟ ಈ ಅಧಿಕಾರಿಗೆ ಸಾರ್ವಜನಿಕರು ಹ್ಯಾಟ್ಸ್&zwnj; ಆಫ್ ಹೇಳುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/dharwad/duty-first-hubballi-commissioner-shashikumar-stays-on-bandobast-duty-after-hearing-of-father-in-laws-death-gkn/articleshow-4akrvuz"/>
        </item>
        <item>
            <title><![CDATA[2 ವರ್ಷದಲ್ಲಿ 500 ಕರ್ನಾಟಕ ಪಬ್ಲಿಕ್ ಸ್ಕೂಲ್ ಲೋಕಾರ್ಪಣೆ: ಸಚಿವ ಮಧು ಬಂಗಾರಪ್ಪ]]></title>
            <link>https://kannada.asianetnews.com/karnataka-districts/500-karnataka-public-schools-to-be-inaugurated-in-two-years-says-minister-madhu-bangarappa-sns/articleshow-txcl1l0</link>
            <guid isPermaLink="true">https://kannada.asianetnews.com/karnataka-districts/500-karnataka-public-schools-to-be-inaugurated-in-two-years-says-minister-madhu-bangarappa-sns/articleshow-txcl1l0</guid>
            <pubDate>Sat, 22 Aug 2026 14:47:34 +0530</pubDate>
            <description><![CDATA[ರಾಜ್ಯದಲ್ಲಿ ಎಲ್&zwnj;.ಕೆ.ಜಿ ಯಿಂದ 12ನೇ ತರಗತಿಯವರೆಗೆ ಒಂದೇ ಪ್ರಾಂಗಣದಲ್ಲಿ ದ್ವಿಭಾಷಾ ಶಿಕ್ಷಣ ನೀಡುವ 1000 ಕರ್ನಾಟಕ ಪಬ್ಲಿಕ್ ಸ್ಕೂಲ್&zwnj;ಗಳನ್ನು ಆರಂಭಿಸಲು ಸರ್ಕಾರ ಯೋಜಿಸಿದೆ. ಸಚಿವ ಮಧು ಬಂಗಾರಪ್ಪ ಅವರ ಪ್ರಕಾರ, ಈ ಅತ್ಯಾಧುನಿಕ ಶಾಲೆಗಳನ್ನು ಹಂತಹಂತವಾಗಿ ನಿರ್ಮಿಸಲಾಗುವುದು ಮತ್ತು 15,000 ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jd6vbwbj497jtf9z0rqx0z0g,imgname-madhu-bangarappa.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ: &lt;/strong&gt;ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದೇ ಪ್ರಾಂಗಣದಲ್ಲಿ ಎಲ್&zwnj;.ಕೆ.ಜಿ ಯಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲೂ ಗುಣಾತ್ಮಕ ಶಿಕ್ಷಣ ನೀಡುವ, ಸ್ಮಾರ್ಟ್ ತರಗತಿ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ 1000 ಸುಸಜ್ಜಿತ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ (Karnataka Public School) ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಹಂತಹಂತವಾಗಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಹೇಳಿದರು.&lt;/p&gt;&lt;h2&gt;ದ್ವಿಭಾಷಾ ಶಿಕ್ಷಣದ ಕರ್ನಾಟಕ ಪಬ್ಲಿಕ್ ಸ್ಕೂಲ್&lt;/h2&gt;&lt;p&gt;ಸಿ.ಎಸ್.ಆರ್. ನಿಧಿಯಡಿಯಲ್ಲಿ ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆಯ ಸೈನ್ಸ್&zwnj;ಮೈದಾನದಲ್ಲಿ ಎಜಾಕ್ಸ್&zwnj; ಕರ್ನಾಟಕ ಪಬ್ಲಿಕ್&zwnj; ಸ್ಕೂಲ್&zwnj; ನಿರ್ಮಿಸಲು ಉದ್ದೇಶಿಸಿರುವ ನೂತನ ಶಾಲಾ ಕಟ್ಟಡದ ಶಂಕುಸ್ತಾಪನೆ ನೆರವೇರಿಸಿ ಮಾತನಾಡಿದರು. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 500 ಕೆ.ಪಿ.ಎಸ್. ಶಾಲೆಗಳನ್ನು ನಿರ್ಮಿಸಿ ಲೋಕಾರ್ಪಣೆ ಗೊಳಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ 1000 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಲ್ಲದೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿಧಿಯಿಂದ ಉರ್ದು ಸೇರಿದಂತೆ ದ್ವಿಭಾಷಾ ಶಿಕ್ಷಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ 750 ಕೋಟಿ ರಾಜ್ಯ ಸರ್ಕಾರದ ಪೂರಕ ನಿಧಿ ಮತ್ತು ಏಷಿಯನ್&zwnj; ಡೆವಲೆಪ್&zwnj;ಮೆಂಟ್&zwnj; ಬ್ಯಾಂಕಿನ ಆರ್ಥಿಕ ನೆರವು ಸೇರಿದಂತೆ 1,750 ಕೋಟಿ ವೆಚ್ಚದಲ್ಲಿ ಮುಂದಿನ 4 ವರ್ಷಗಳ ಅವಧಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ತಾವು ಓದಿದ ಶಾಲೆಗೆ 10 ಲಕ್ಷ ರೂಪಾಯಿ ನೆರವು&lt;/h2&gt;&lt;p&gt;ಸೇವೆಯೇ ಮುಖ್ಯ &ldquo;ನಮ್ಮ ಶಾಲೆ, ನಮ್ಮ ಜವಾಬ್ದಾರಿ&rdquo; ಎಂಬ ಯೋಜನೆಯಡಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪೂಜ್ಯ ತಂದೆಯವರಾಗಿದ್ದ ದಿ.ಎಸ್.ಬಂಗಾರಪ್ಪನವರ ಹೆಸರಿನಲ್ಲಿ 10 ಲಕ್ಷ ರೂಪಾಯಿಗಳನ್ನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಓದಿದ ಶಾಲೆಗೆ 10 ಲಕ್ಷ ರೂಪಾಯಿಗಳನ್ನು ಶಾಲಾಭಿವೃದ್ಧಿಗೆ ದೇಣಿಗೆಯಾಗಿ ನೀಡಿದರು.&lt;/p&gt;&lt;h2&gt;ಒಂದು ವರ್ಷದ ಒಳಗೆ ಕಟ್ಟಡ ನಿರ್ಮಾಣ&lt;/h2&gt;&lt;p&gt;ರಾಜ್ಯದಾದ್ಯಂತ ಲಕ್ಷಾಂತರ ಜನರು ತಮ್ಮ ಕೊಡುಗೈ ದಾನ ನೀಡಿ ಶಾಲಾಭಿವೃದ್ಧಿಗೆ ಸಹಕರಿಸಿದ್ದಾರೆ. ಪ್ರಸ್ತುತ ಸೈನ್ಸ್&zwnj; ಶಾಲಾ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಎಜಾಕ್ಸ್&zwnj; ಕರ್ನಾಟಕ ಪಬ್ಲಿಕ್ ಸ್ಕೂಲ್&zwnj; ಕಟ್ಟಡ ನಿರ್ಮಾಣಕ್ಕೆ ಎಜಾಕ್ಸ್&zwnj; ಸಂಸ್ಥೆಯ ಮುಖ್ಯಸ್ಥ ಕೆ.ವಿಜಯ್&zwnj; ಮತ್ತು ಶ್ರೀಮತಿ ಕಲ್ಯಾಣಿ ವಿಜಯ್&zwnj; ತಮ್ಮ ಟ್ರಸ್ಟ್&zwnj; ವತಿಯಿಂದ 13.05 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ಒಂದು ವರ್ಷದ ಅವಧಿಯೊಳಗಾಗಿ ನಿರ್ಮಿಸಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.&lt;/p&gt;&lt;h2&gt;15 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ&lt;/h2&gt;&lt;p&gt;ಕೆ.ಪಿ.ಎಸ್. ಶಾಲೆಗಳಲ್ಲಿ ಮಕ್ಕಳಿಗೆ ದ್ವಿಭಾಷಾ ಕಲಿಕೆ, ಎಲ್ಲಾ ಪಠ್ಯ ವಿಷಯಗಳ ಶಿಕ್ಷಕರು, ದೈಹಿಕ ಶಿಕ್ಷಣ, ಸಂಗೀತ, ಗಣಕಯಂತ್ರ ಸೇರಿದಂತೆ ಎಲ್ಲಾ ಶಿಕ್ಷಕರ ಸೇವೆ ದೊರೆಯಲಿದೆ. ಶಿಕ್ಷಣ ಇಲಾಖೆಯಲ್ಲಿ ಇನ್ನೂ 75,000 ಶಿಕ್ಷಕರ ಅಗತ್ಯವಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದರು ಸಚಿವ ಮಧು ಬಂಗಾರಪ್ಪ ವಿವರಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/500-karnataka-public-schools-to-be-inaugurated-in-two-years-says-minister-madhu-bangarappa-sns/articleshow-txcl1l0"/>
        </item>
        <item>
            <title><![CDATA[ಪೆಲ್ಲೆಟ್ ಗನ್ ಪ್ರಕರಣ; ಎಫ್‌ಐಆರ್‌ಗಾಗಿ ರಾಹುಲ್ ಗಾಂಧಿ 8 ಗಂಟೆ ಧರಣಿ: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ]]></title>
            <link>https://kannada.asianetnews.com/politics/priyank-kharge-slams-centre-over-lop-rahul-gandhi-sit-in-8-hour-just-to-get-fir-filed-in-pellet-gun-case-rav/articleshow-sh1m77v</link>
            <guid isPermaLink="true">https://kannada.asianetnews.com/politics/priyank-kharge-slams-centre-over-lop-rahul-gandhi-sit-in-8-hour-just-to-get-fir-filed-in-pellet-gun-case-rav/articleshow-sh1m77v</guid>
            <pubDate>Sat, 22 Aug 2026 12:41:03 +0530</pubDate>
            <description><![CDATA[&lt;p&gt;ಪ್ರತಿಭಟನಾಕಾರರ ಮೇಲೆ ಪೆಲ್ಲೆT ಗನ್ ಬಳಸಿದ ಪ್ರಕರಣದಲ್ಲಿ ಎಫ್&zwnj;ಐಆರ್ ದಾಖಲಿಸಲು ರಾಹುಲ್ ಗಾಂಧಿ ಧರಣಿ ನಡೆಸಬೇಕಾದ ಸ್ಥಿತಿ ಖಂಡಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಂದೇ ಮಾತರಂ ವಿವಾದವನ್ನು ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ಬಣ್ಣಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0m4vtnm2z2bzyqnk1pga40a,imgname-----------------------2026-08-22t121449.082-1787382590132.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.22) &lt;/strong&gt;ಪ್ರತಿಭಟನಾಕಾರರ ಮೇಲೆ ಪೆಲ್ಲೆಟ್ ಗನ್ ಬಳಸಿದ ಪ್ರಕರಣದಲ್ಲಿ ಎಫ್&zwnj;ಐಆರ್ ದಾಖಲಿಸಲು ಆಗ್ರಹಿಸಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ದೆಹಲಿ ಪೊಲೀಸ್&zwnj; ಠಾಣೆ ಮುಂದೆ ಎಂಟು ಗಂಟೆಗಳಿಂದ ಧರಣಿ ನಡೆಸಿದ ಘಟನೆ ಸಂಬಂಧ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;h2&gt;ಎಫ್ಐಆರ್ ದಾಖಲಿಸಲು ಧರಣಿ ಕೂಡಬೇಕಾಯ್ತು, ದುರಂತ:&lt;/h2&gt;&lt;p&gt;ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಪೊಲೀಸ್ ಠಾಣೆ ಮುಂದೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಧರಣಿ ನಡೆಸಬೇಕಾಗಿ ಬಂದಿದ್ದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h3&gt;ಪೆಲ್ಲೆಟ್ ಗನ್ ಯಾರು ಹಾರಿಸಿದ್ರು?&lt;/h3&gt;&lt;p&gt;ಪ್ರತಿಭಟನಕಾರರ ಮೇಲೆ ಪೆಲ್ಲೆಟ್ ಗನ್ ಯಾರು ಹಾರಿಸಿದ್ರು? ಯಾರು ಆದೇಶ ಮಾಡಿದ್ರು ಅನ್ನೊದು ಎಲ್ಲರಿಗೂ ಗೊತ್ತಿದ್ದರೂ. ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್&zwnj;ಐಆರ್ ದಾಖಲಿಸಲು ವಿಪಕ್ಷ ನಾಯಕರೇ ಎಂಟು ಗಂಟೆ ಪೊಲೀಸ್ ಠಾಣೆ ಮುಂದೆ ಕಾಯಬೇಕಾಗಿ ಬಂದಿದ್ದು ನಿಜಕ್ಕೂ ದುರ್ದೈವ. ದೆಹಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯರಿಗೆ ನ್ಯಾಯ ಸಿಗುತ್ತದೆಯೇ? ಸಾಮಾನ್ಯ ವ್ಯಕ್ತಿಗಳಿಗೆ ನ್ಯಾಯ ಸಿಗುವುದಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಒಂದು ದೂರು ದಾಖಲಿಸಲು ರಾಹುಲ್ ಗಾಂಧಿ ಮಧ್ಯಪ್ರವೇಶಿಸಬೇಕಾದರೆ ಪೆಲ್ಲೆಟ್&zwnj; ಗನ್&zwnj;ಗಳ ದಾಳಿಗೆ ತುತ್ತಾದ ಸಾಮಾನ್ಯ ನಾಗರಿಕರ ಪಾಡು ಏನಾಗಿರಬೇಡ ಎಂದು ಪ್ರಶ್ನಿಸಿದರು.&lt;/p&gt;&lt;p&gt;ಅಮಿತ್ ಶಾ, ಮೋದಿಜೀಗೆ ಉತ್ತರಿಸುವ ಧೈರ್ಯವೇ ಇಲ್ಲ&lt;/p&gt;&lt;p&gt;ಬಿಜೆಪಿಯವರಿಗೆ ಸ್ವಲ್ಪವಾದರೂ ನಾಚಿಕೆ, ಮಾನ-ಮರ್ಯಾದೆ ಇದ್ದಿದ್ರೆ ಈ ಘಟನೆ ಬಗ್ಗೆ ತಕ್ಷಣವೇ ಸ್ವತಂತ್ರ ತನಿಖೆಗೆ ಆದೇಶಿಸುತ್ತಿದ್ದರು. ಆದರೆ ಅವರೇ ತಪ್ಪಿತಸ್ಥರಾಗಿರುವುದರಿಂದ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅಧ್ಯಕ್ಷ ಅಮಿತ್ ಶಾ ಮತ್ತು ಮೋದಿಜೀ ಎಷ್ಟು ಹೆದರಿಕೊಂಡಿದ್ದಾರೆಂದರೆ ಈ ವಿಚಾರವಾಗಿ ಸಂಸತ್ತಿಗೆ ಬಂದು ಉತ್ತರಿಸುವ ಧೈರ್ಯವೂ ಅವರಿಗಿಲ್ಲ. ಇನ್ನು ಎಫ್&zwnj;ಐಆರ್ ದಾಖಲಿಸುವುದು ದೂರದ ಮಾತು ಬಿಡಿ ಎಂದರು.&lt;/p&gt;&lt;p&gt;&lt;strong&gt;ಘಟನೆ ಹಿನ್ನೆಲೆ&lt;/strong&gt;&lt;/p&gt;&lt;p&gt;ಲೋಚಬ್ ಎಂಬ ಸಂತ್ರಸ್ತ ನೀಡಿದ ದೂರಿನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಹುಲ್ ಗಾಂಧಿ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ ನಂತರ, ದೆಹಲಿ ಪೊಲೀಸರು ಶುಕ್ರವಾರ ಸಂಜೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 118 ಮತ್ತು 125 ರ ಅಡಿಯಲ್ಲಿ ಅಂತಿಮವಾಗಿ ಎಫ್&zwnj;ಐಆರ್ ದಾಖಲಿಸಿಕೊಂಡರು. ಜುಲೈ 20 ರಂದು ಕನ್ನಾಟ್ ಪ್ಲೇಸ್&zwnj;ನಲ್ಲಿ ನಡೆದ ಪೆಲ್ಲೆಟ್ ಗನ್ ಫೈರಿಂಗ್&zwnj;ನಲ್ಲಿ ತನಗೆ ಗಾಯಗಳಾಗಿದ್ದರೂ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಸಂತ್ರಸ್ತ ಆರೋಪಿಸಿದ್ದರು. ಏಮ್ಸ್&zwnj;ನಲ್ಲಿ (AIIMS) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ತಮ್ಮ ದೃಷ್ಟಿ ಇನ್ನೂ ಸರಿಯಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;'ವಂದೇ ಮಾತರಂ'ದಾರಿ ತಪ್ಪಿಸುವ ತಂತ್ರ&lt;/strong&gt;&lt;/p&gt;&lt;p&gt;ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಖರ್ಗೆ, ವಂದೇ ಮಾತರಂ ಕುರಿತ ವಿವಾದವು ದೇಶದ ಆರ್ಥಿಕ ಸಮಸ್ಯೆಗಳು, ನಿರುದ್ಯೋಗ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದಂತಹ ಗಂಭೀರ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರೂಪಿಸಿರುವ ಒಂದು ತಂತ್ರ ಎಂದು ಬಣ್ಣಿಸಿದರು.&lt;/p&gt;&lt;p&gt;ಜಂತರ್ ಮಂತರ್ ಪ್ರತಿಭಟನೆ, ಆರ್&zwnj;ಎಸ್&zwnj;ಎಸ್&zwnj;ನ ತಪ್ಪುಗಳು, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ವಂದೇ ಮಾತರಂ ಅನ್ನು ಬಳಸಲಾಗುತ್ತಿದೆ. ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ಎಷ್ಟಿದೆ? 98 ರೂಪಾಯಿ. ಅಮೆರಿಕದಿಂದ ನಾವು 500 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಬೇಕಾದ ವ್ಯಾಪಾರ ಒಪ್ಪಂದದಿಂದಲೂ ಗಮನ ಬೇರೆಡೆ ಸೆಳೆಯಲು ಈ ತಂತ್ರ ಹೂಡಿದ್ದಾರೆ.&lt;/p&gt;&lt;p&gt;ವಂದೇ ಮಾತರಂನಿಂದ ಗಮನ ಬೇರೆಡೆ ಸೆಳೆಯಲು ಒಂದು ಎಫ್&zwnj;ಐಆರ್ ಸಾಕೇ? ವಂದೇ ಮಾತರಂ ಬಗ್ಗೆ ನಮಗೆ ಹೇಳಲು ಇವರು ಯಾರು? ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಿಜೆಪಿ ಮತ್ತು ಆರ್&zwnj;ಎಸ್&zwnj;ಎಸ್ ಎಲ್ಲಿದ್ದವು? 1937ರಲ್ಲಿ ಪಂಡಿತ್ ನೆಹರೂ, ನೇತಾಜಿ ಬೋಸ್, ರವೀಂದ್ರನಾಥ ಟ್ಯಾಗೋರ್, ಸರ್ದಾರ್ ಪಟೇಲ್ ಅವರು ಈ ಬಗ್ಗೆ ಚರ್ಚಿಸಿದ್ದರು. ಸಂವಿಧಾನ ರಚನಾ ಸಭೆಯಲ್ಲೂ ಚರ್ಚೆಯಾಗಿತ್ತು. ಹಾಗಾದರೆ ಅವರೆಲ್ಲರೂ ದೇಶದ್ರೋಹಿಗಳೇ? ಎಂದು ಖರ್ಗೆ ಪ್ರಶ್ನಿಸಿದರು.&lt;/p&gt;&lt;p&gt;&lt;strong&gt;ಬಿಜೆಪಿ ಹೈಕಮಾಂಡ್&zwnj;ಗೆ ಖರ್ಗೆ ಸವಾಲು!&lt;/strong&gt;&lt;/p&gt;&lt;p&gt;ಬಿಜೆಪಿಯವರು ನಿಜವಾಗಿಯೂ ದೇಶಭಕ್ತರಾಗಿದ್ದರೆ, ಅಮಿತ್ ಶಾ ಮತ್ತು ಪ್ರಧಾನಿ ಮೋದಿ ನಾಗ್ಪುರಕ್ಕೆ ಹೋಗಿ ಆರ್&zwnj;ಎಸ್&zwnj;ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ 'ನಮಸ್ತೆ ಸದಾ ವತ್ಸಲೇ' (ಆರ್&zwnj;ಎಸ್&zwnj;ಎಸ್ ಗೀತೆ) ಹಾಡುವುದನ್ನು ಬಿಟ್ಟು, ಎಲ್ಲಾ ಆರ್&zwnj;ಎಸ್&zwnj;ಎಸ್ ಶಾಖೆಗಳಲ್ಲಿ ತ್ರಿವರ್ಣ ಧ್ವಜದ ಮುಂದೆ ಕೈಮುಗಿದು ವಂದೇ ಮಾತರಂ ಹಾಡಲಿ. ನಾನು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಇಡೀ ಬಿಜೆಪಿ ಸಂಪುಟಕ್ಕೆ ಸವಾಲು ಹಾಕುತ್ತೇನೆ. ಅವರು ಟೆಲಿಪ್ರಾಂಪ್ಟರ್ ಇಲ್ಲದೆ ನಮ್ಮ ರಾಷ್ಟ್ರಗೀತೆಯ ಕೊನೆಯ ಎರಡು ಚರಣಗಳನ್ನು ಸೇರಿಸಿ ಪೂರ್ಣವಾಗಿ ಹಾಡಲಿ. ಹಾಗೇನಾದರೂ ಅವರು ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ' ಎಂದರು.&lt;/p&gt;&lt;p&gt;&lt;strong&gt;ಸಿಬಿಐ ತನಿಖೆ, ಕರ್ನಾಟಕ ಬಿಜೆಪಿ ಕುರಿತು ಖರ್ಗೆ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಕರ್ನಾಟಕದ ಮಾಜಿ ಸಚಿವ ಬಿ. ನಾಗೇಂದ್ರ ಅವರ ವಿಚಾರಣೆಗೆ ಅನುಮತಿ ಕೋರಿ ಸಿಬಿಐ ಪತ್ರ ಬರೆದಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ಮನವಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಸಿಬಿಐ ಯಾವ ಆಧಾರದ ಮೇಲೆ ಅನುಮತಿ ಕೇಳಿದೆ ಎಂದು ನಮಗೆ ತಿಳಿದಿಲ್ಲ. ಅವರು ಮೊದಲು ರಾಜ್ಯ ಸರ್ಕಾರವನ್ನು ಸಂಪರ್ಕಿಸಬೇಕು. ವಿಚಾರಣೆಗೆ ಅನುಮತಿ ಕೋರಿ ನಮಗೆ ಯಾವುದೇ ಪತ್ರ ಬಂದಿಲ್ಲ. ಈ ಹಿಂದೆ ಅವರು ತನಿಖೆಗಾಗಿ ಸಿಬ್ಬಂದಿಯನ್ನು ಕೋರಿ ಪತ್ರ ಬರೆದಿದ್ದರು ಅಷ್ಟೇ ಎಂದು ಹೇಳಿದರು.&lt;/p&gt;&lt;p&gt;ಕರ್ನಾಟಕದಲ್ಲಿ ಬಿಜೆಪಿ ಯೋಜಿಸಿರುವ ಪಾದಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಮತ್ತು ನಾಯಕತ್ವದ ಜಗಳವನ್ನು ಮರೆಮಾಚಲು ವಿರೋಧ ಪಕ್ಷವು ಈ ಪಾದಯಾತ್ರೆಯನ್ನು ಬಳಸಿಕೊಳ್ಳುತ್ತಿದೆ. ಅಲ್ಲದೆ, ರಾಜ್ಯ ವಿಧಾನಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳಿಂದ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;&lt;strong&gt;ಕಾಣೆಯಾದ ಐಎಎಸ್ ಅಧಿಕಾರಿ&lt;/strong&gt;&lt;/p&gt;&lt;p&gt;ಕಾಣೆಯಾಗಿರುವ ಐಎಎಸ್ ಅಧಿಕಾರಿಯ ಕುರಿತ ವರದಿಗಳ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ ಖರ್ಗೆ, 'ಅವರ ಕುಟುಂಬದಿಂದ ಯಾವುದೇ ದೂರು ಬಂದಿಲ್ಲ. ಅವರು ಕೊನೆಯ ಬಾರಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರ ಇರುವಿಕೆ ಸದ್ಯಕ್ಕೆ ತಿಳಿದುಬಂದಿಲ್ಲ, ಶೋಧ ಕಾರ್ಯ ನಡೆಯುತ್ತಿದೆ'&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/priyank-kharge-slams-centre-over-lop-rahul-gandhi-sit-in-8-hour-just-to-get-fir-filed-in-pellet-gun-case-rav/articleshow-sh1m77v"/>
        </item>
        <item>
            <title><![CDATA[ಅಂದು ಮನೆಗಾಗಿ 1 ಹಸು ಖರೀದಿ,  ಇಂದು 100 ಎಮ್ಮೆಗಳ ಒಡತಿ ಕಲಬುರಗಿ ಮಹಿಳೆ; Dairy Farming]]></title>
            <link>https://kannada.asianetnews.com/gallery/business/kalaburagi-jyoti-avinash-uplavkar-of-started-dairy-farming-with-one-cow-is-now-raising-100-haryana-breed-buffaloes-mrq-qt859fe</link>
            <guid isPermaLink="true">https://kannada.asianetnews.com/gallery/business/kalaburagi-jyoti-avinash-uplavkar-of-started-dairy-farming-with-one-cow-is-now-raising-100-haryana-breed-buffaloes-mrq-qt859fe</guid>
            <pubDate>Sat, 22 Aug 2026 12:31:30 +0530</pubDate>
            <description><![CDATA[ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಒಂದು ಹಸುವಿನಿಂದ ಹೈನುಗಾರಿಕೆ ಆರಂಭಿಸಿ, ಇದೀಗ 100 ಹರಿಯಾಣ ತಳಿಯ ಎಮ್ಮೆಗಳ ಒಡತಿಯಾಗಿದ್ದಾರೆ. ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಇವರ ಡೈರಿ ಫಾರ್ಮ್, 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿ ಯಶಸ್ವಿ ಉದ್ಯಮವಾಗಿ ಬೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0m3vbgqn13w3byjm0sqn06k,imgname-dairy-farming--3--1787381526039.jpg" type="image/jpeg" height="390" width="690"/>
            <content:encoded><![CDATA[ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಒಂದು ಹಸುವಿನಿಂದ ಹೈನುಗಾರಿಕೆ ಆರಂಭಿಸಿ, ಇದೀಗ 100 ಹರಿಯಾಣ ತಳಿಯ ಎಮ್ಮೆಗಳ ಒಡತಿಯಾಗಿದ್ದಾರೆ. ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಇವರ ಡೈರಿ ಫಾರ್ಮ್, 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿ ಯಶಸ್ವಿ ಉದ್ಯಮವಾಗಿ ಬೆಳೆದಿದೆ.&lt;img&gt;&lt;p&gt;9 To 5 ಜಾಬ್&zwnj; ಮಾಡಲು ಬೇಸರಗೊಳ್ಳುತ್ತಿರುವ ಯುವ ಸಮುದಾಯ ಸ್ವಂತ ಉದ್ಯಮದತ್ತ ಮುಖ ಮಾಡುತ್ತಿದ್ದಾರೆ. ಇಂದು ನಾವು ನಿಮಗೆ ಒಂದು ಹಸುವಿನಿಂದ ಆರಂಭಿಸಿ 100 ಎಮ್ಮೆಗಳ ಒಡತಿಯಾಗಿರುವ ಕಲಬುರಗಿ ಮಹಿಳೆ ಬಗ್ಗೆ ಹೇಳುತ್ತಿದ್ದೇವೆ. ಹೈನುಗಾರಿಕೆಯಲ್ಲಿ ಯಶಸ್ವಿಯಾಗಿರುವ ಇವರು ಇಂದು 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಹಾಗೆಯೇ ಇವರ ಡೈರಿಯಿಂದ ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ.&lt;/p&gt;&lt;img&gt;&lt;p&gt;ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಹೈನುಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿ ತಾಲೂಕಿನ ಸೈಯ್ಯದ್ ಚಿಂಕೊಳ್ಳಿ ಗ್ರಾಮದ ವ್ಯಾಪ್ತಿಯ 20 ಎಕರೆ ಜಮೀನಿನಲ್ಲಿ ಕೃಷಿ ಜೊತೆ ಹೈನುಗಾರಿಕೆಯನ್ನು ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಮನೆ ಬಳಕೆಗೆ ಹಾಲು ಬೇಕೆಂದು ಒಂದು ಹಸು ಖರೀದಿಸಿದ್ದರು. ನಂತರ ಒಂದಾದ ನಂತರ ಒಂದರಂತೆ ಎಮ್ಮೆಗಳನ್ನು ಸಾಕಾಣಿಕೆ ಮಾಡಲು ಆರಂಭಿಸಿದ್ದರು. ಇದೀಗ ಇವರ ಡೈರಿಯಲ್ಲಿ ಹರಿಯಾಣ ತಳಿಯ 100 ಎಮ್ಮೆಗಳಿವೆ. ಈ ಎಮ್ಮೆಗಳ ಆರೈಕೆಗಾಗಿ ಬಿಹಾರ ಮತ್ತು ಹರಿಯಾಣ ಭಾಗದ 15ಕ್ಕೂ ಹೆಚ್ಚು ಕಾರ್ಮಿಕರನ್ನು ಸಹ ನೇಮಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;20ರಲ್ಲಿ 10 ಎಕರೆ ಭೂಮಿಯಲ್ಲಿ ಜಾನುವಾರಗಳಿಗೆ ಬೇಕಾದ ಮೇವು ಬೆಳೆಯುತ್ತಾರೆ. ಬೇಸಿಗೆಯಲ್ಲಿ ಹುಲ್ಲು ಕಡಿಮೆಯಾಗುವ ಕಾರಣ ಜೋಳ ಮತ್ತು ತೊಗರಿ ಬೆಳೆಯ ಮೇವು ಸಂಗ್ರಹ ಮಾಡಿಕೊಳ್ಳುತ್ತಾರೆ. ಇಲ್ಲಿಯ ಕಾರ್ಮಿಕರು ಜಾನುವಾರಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸುವ ಮೂಲಕ ಜಾನುವಾರಗಳ ಆರೋಗ್ಯ ಕಾಪಾಡಿಕೊಳ್ಳಲಾಗುತ್ತೆ ಎಂದು ಜ್ಯೋತಿ ಅವಿನಾಶ್ ಹೇಳುತ್ತಾರೆ.&lt;/p&gt;&lt;img&gt;&lt;p&gt;ಜ್ಯೋತಿ ಅವಿನಾಶ್ ಅವರ ಒಡೆತನದ ಡೈರಿಯಿಂದ ದಿನಕ್ಕೆ ಅಂದಾಜು 500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಕಾರ್ಮಿಕರ ಮೂಲಕ ಈ ಹಾಲು ಸುಮಾರು 250 ರಿಂದ 300 ಮನೆಗಳಿಗೆ ತಲುಪಿಸಲಾಗುತ್ತದೆ. ಹೆಚ್ಚುವರಿ ಹಾಲನ್ನು ಹೋಟೆಲ್&zwnj;ಗಳಿಗೆ ಮಾರಾಟ ಮಾಡಲಾಗುತ್ತದೆ. ಸಗಣಿಯಿಂದಲೂ ಉತ್ತಮ ಆದಾಯ ಬರುತ್ತದೆ. ಸುತ್ತಲಿನ ಭಾಗದಲ್ಲಿ ನಮ್ಮ ಡೈರಿಯ ಗೊಬ್ಬರಕ್ಕೆ ಉತ್ತಮ ಬೇಡಿಕೆ ಇದೆ ಎಂದು ಹೇಳುತ್ತಾರೆ ಜ್ಯೋತಿ ಅವಿನಾಶ್.&lt;/p&gt;&lt;img&gt;&lt;p&gt;ಈ ಡೈರಿಯಿಂದಲೇ ಗೋಬರ್ ಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ. ಡೈರಿಯಲ್ಲಿ ಕೆಲಸ ಮಾಡುವ ಐದು ಕುಟುಂಬಗಳು ಮತ್ತು ಕಾರ್ಮಿಕರು ಈ ಗೋಬರ್ ಗ್ಯಾಸ್ ಬಳಸಿಯೇ ಅಡುಗೆ ತಯಾರಿಸಿಕೊಳ್ಳುತ್ತಾರೆ. ನಾವೇ ಎಲ್ಲಾ ಕೆಲಸ ಮಾಡಬೇಕು ಅಂತೇನಿಲ್ಲ. ಕಾರ್ಮಿಕರ ಸಹಾಯದಿಂದ ಈ ಕೆಲಸ ಮಾಡಿಕೊಳ್ಳಬಹುದು. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ನೀಡಬೇಕು ಅನ್ನೋದು ನಮ್ಮ ಉದ್ದೇಶ. ಗ್ರಾಹಕರಿಗೆ ವಿತರಿಸುವ ಹಾಲಿಗೆ ನೀರು ಸಹ ಸೇರಿಸಲ್ಲ. 100 ಎಮ್ಮೆಗಳನ್ನು ಸಾಕಬೇಕು ಅನ್ನೋದು ನಮ್ಮ ಆಸೆಯಾಗಿತ್ತು. ಈಗ ಅದು ನನಸು ಆಗಿದೆ ಎಂದು ಜ್ಯೋತಿ ಅವಿನಾಶ್ ಸಂತೋಷ ಹಂಚಿಕೊಂಡರು.&lt;/p&gt;&lt;p&gt;&lt;strong&gt;Rangu Kasturi - Farming in Kannada &lt;/strong&gt;ಯುಟ್ಯೂಬ್ ವಾಹಿನಿಯಲ್ಲಿ ಜ್ಯೋತಿ ಅವಿನಾಶ್ ಅವರು ಡೈರಿ ಫಾರ್ಮಿಂಗ್ ವಿಡಿಯೋ ನೋಡಬಹುದು.&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/kalaburagi-jyoti-avinash-uplavkar-of-started-dairy-farming-with-one-cow-is-now-raising-100-haryana-breed-buffaloes-mrq-qt859fe"/>
        </item>
        <item>
            <title><![CDATA[ಬೈಕ್ ರೈಡ್ ಆಸೆ ತೋರಿಸಿದ ಯುವಕನ ಕೈ ಕಚ್ಚಿದ ಮುಸಿಯ, ಸೋಶಿಯಲ್ ಮೀಡಿಯಾ ರೀಲ್ಸ್ ಕ್ರೇಜ್ ತಂದಿಟ್ಟ ದುರಂತ!]]></title>
            <link>https://kannada.asianetnews.com/karnataka-districts/shivamogga-youth-attacked-by-monkey-while-filming-instagram-reel-gdp/articleshow-17zqpdn</link>
            <guid isPermaLink="true">https://kannada.asianetnews.com/karnataka-districts/shivamogga-youth-attacked-by-monkey-while-filming-instagram-reel-gdp/articleshow-17zqpdn</guid>
            <pubDate>Sat, 22 Aug 2026 11:59:37 +0530</pubDate>
            <description><![CDATA[ಶಿವಮೊಗ್ಗದಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡುವ ಹುಚ್ಚಿನಿಂದ ಯುವಕನೊಬ್ಬ ಮಂಗನೊಂದಿಗೆ ವೀಡಿಯೋ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಹೆದರಿದ ಮಂಗವು ಆತನ ಕೈಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿದ್ದು, ವನ್ಯಜೀವಿಗಳೊಂದಿಗೆ ಸಾಹಸ ಮಾಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಎಚ್ಚರಿಕೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0m2h1rzn1n70rw3ht7znss9,imgname-shivamogga-1787380139804.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹುಚ್ಚಿನಿಂದ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಶಿವಮೊಗ್ಗ ನಗರದ ಕಾಶಿಪುರ ಬಡಾವಣೆಯಲ್ಲಿ ನಡೆದಿದೆ.&lt;/p&gt;&lt;h2&gt;ಬೈಕ್ ಮೇಲೆ ಕುಳಿತಿದ್ದ ಮುಸಿಯ!&lt;/h2&gt;&lt;p&gt;ಕಾಶಿಪುರ ಬಡಾವಣೆಯ ಹುಚ್ಚರಾಯ ಕಾಲೋನಿಯ ನಿವಾಸಿ ಕುಮಾರ ನಾಯ್ಕ್ ಎಂಬ ಯುವಕನೇ ಈ ಅಚಾತುರ್ಯಕ್ಕೆ ಒಳಗಾದವನು. ಕುಮಾರ ನಾಯ್ಕ್ ತನ್ನ ಬೈಕ್ ಬಳಿ ಹೋದಾಗ, ಅಲ್ಲಿ ಮುಸಿಯ (ಒಂದು ಜಾತಿಯ ಕೋತಿ) ಆರಾಮವಾಗಿ ಬೈಕ್ ಮೇಲೆ ಬಂದು ಕುಳಿತಿತ್ತು. ಇದನ್ನು ಕಂಡ ಯುವಕನಿಗೆ ತಕ್ಷಣವೇ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡುವ ಹುಚ್ಚು ತಲೆಗೇರಿದೆ. ಮಂಗನೊಂದಿಗೆ ಬೈಕ್&zwnj;ನಲ್ಲಿ ರೌಂಡ್ಸ್ ಹೊಡೆಯುತ್ತಾ ವೀಡಿಯೋ ಚಿತ್ರೀಕರಿಸಲು ಪ್ಲಾನ್ ಮಾಡಿದ್ದಾನೆ.&lt;/p&gt;&lt;h2&gt;ಕ್ಷಣಾರ್ಧದಲ್ಲಿ ಬದಲಾಯ್ತು ದೃಶ್ಯ: ಯುವಕನ ಕೈಗೆ ಮಂಗನ ಭೀಕರ ದಾಳಿ!&lt;/h2&gt;&lt;p&gt;ಮಂಗನನ್ನು ಜೊತೆಯಲ್ಲಿಟ್ಟುಕೊಂಡು ಬೈಕ್ ಸ್ಟಾರ್ಟ್ ಮಾಡಲು ಯುವಕ ಹತ್ತಿರ ಹೋಗಿ ಬೈಕ್ ಕೀ (Key) ಆನ್ ಮಾಡಲು ಮುಂದಾಗಿದ್ದಾನೆ. ಆದರೆ, ಆ ಕ್ಷಣದಲ್ಲೇ ಅನಿರೀಕ್ಷಿತವಾಗಿ ಘಟನೆಯೊಂದು ನಡೆದುಹೋಗಿದೆ. ಯುವಕ ಹತ್ತಿರ ಬಂದು ಕುಳಿತಿದ್ದಕ್ಕೆ ಹೆದರಿದ ಮುಸಿಯ, ಹಠಾತ್ತಾಗಿ ಯುವಕನ ಕೈಗೆ ಬಾಯಿ ಹಾಕಿ ಕಡಿದು ಭೀಕರವಾಗಿ ದಾಳಿ ನಡೆಸಿದೆ.&lt;/p&gt;&lt;h2&gt;ಕೈ ಮಾಂಸವೇ ಕಟ್!&lt;/h2&gt;&lt;p&gt;ಯುವಕ ತಕ್ಷಣವೇ ತನ್ನ ಕೈಯನ್ನು ಮಂಗನ ಬಾಯಿಂದ ಬಿಡಿಸಿಕೊಳ್ಳಲು ಸಕಲ ಪ್ರಯತ್ನ ನಡೆಸಿದ್ದಾನೆ. ಆದರೆ, ಆತ ಕೈ ಬಿಡಿಸಿಕೊಳ್ಳುವಷ್ಟರಲ್ಲೇ ಮಂಗ ಕಡಿದ ರಭಸಕ್ಕೆ ಯುವಕನ ಕೈ ಮಾಂಸವೇ ತುಂಡಾಗಿ ಹೊರಬಂದಿತ್ತು! ಕೈಯಿಂದ ರಕ್ತ ಹರಿಯಲು ಪ್ರಾರಂಭಿಸಿದಾಗಷ್ಟೇ ಯುವಕನಿಗೆ ತಾನು ಮಾಡಿದ ಯಡವಟ್ಟಿನ ಗಂಭೀರತೆ ಮತ್ತು ಮಂಗನ ದಾಳಿಯ ಭಯಾನಕತೆ ಅರಿವಿಗೆ ಬಂದಿದೆ.&lt;/p&gt;&lt;p&gt;ದಾಳಿ ನಡೆಸಿದ ತಕ್ಷಣವೇ ಆ ಮಂಗ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದೆ. ತೀವ್ರ ರಕ್ತಸ್ರಾವ ಹಾಗೂ ತೀವ್ರ ಗಾಯದಿಂದ ಬಳಲುತ್ತಿದ್ದ ಕುಮಾರ ನಾಯ್ಕ್&zwnj;ನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ.&lt;/p&gt;&lt;p&gt;ಸೋಶಿಯಲ್ ಮೀಡಿಯಾ ಲೈಕ್ಸ್ ಮತ್ತು ವೀವ್ಸ್&zwnj;ಗಾಗಿ ವನ್ಯಜೀವಿಗಳು ಹಾಗೂ ಪ್ರಾಣಿಗಳ ಹತ್ತಿರ ಹೋಗಿ ಸಾಹಸ ಮಾಡಲು ಹೊರಟರೆ ಜೀವಕ್ಕೇ ಕಂಟಕ ಎದುರಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/shivamogga-youth-attacked-by-monkey-while-filming-instagram-reel-gdp/articleshow-17zqpdn"/>
        </item>
        <item>
            <title><![CDATA[ಚಿಕ್ಕಮಗಳೂರಲ್ಲಿ ಲೋಕಾಯುಕ್ತ ಖೆಡ್ಡಾ; ಲಕ್ಷ ಲಕ್ಷ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಸರ್ವೆ ಅಧಿಕಾರಿಗಳು]]></title>
            <link>https://kannada.asianetnews.com/karnataka-districts/chikkamagaluru-survey-officials-caught-in-lokayukta-trap-while-accepting-huge-bribes-sns/articleshow-epffm8s</link>
            <guid isPermaLink="true">https://kannada.asianetnews.com/karnataka-districts/chikkamagaluru-survey-officials-caught-in-lokayukta-trap-while-accepting-huge-bribes-sns/articleshow-epffm8s</guid>
            <pubDate>Sat, 22 Aug 2026 11:49:49 +0530</pubDate>
            <description><![CDATA[ಚಿಕ್ಕಮಗಳೂರಿನಲ್ಲಿ ಕೃಷಿ ಜಮೀನು ಸರ್ವೆಗೆ ಲಕ್ಷಗಟ್ಟಲೆ ಲಂಚ ಕೇಳಿದ ಇಬ್ಬರು ಸರ್ವೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮತ್ತೊಂದೆಡೆ, ರಸ್ತೆ ಗುಂಡಿಗಳನ್ನು ವಿರೋಧಿಸಿ ಬಿಜೆಪಿ ನಾಯಕರು ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0m1prasqmm9rgmhvgp7bmmh,imgname-chikkamagaluru-lokayukta--1787379278169.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಲಕ್ಷ ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಇಬ್ಬರು ಸರ್ವೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸರ್ವೆಯರ್ ದೊರೆರಾಜ್, ರಂಗನಾಥ್ ಅಧಿಕಾರಿಗಳಾಗಿದ್ದಾರೆ.&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ಬಂಧಿತ ಅಧಿಕಾರಿಗಲು ಕೃಷಿ ಜಮೀನಿನ ಸರ್ವೆ ಮಾಡಿ&zwnj; ಸ್ಕೆಚ್ ತಯಾರಿಸಲು 10 ಲಕ್ಷ&zwnj; ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಂತೆ. ಚಿಕ್ಕಮಗಳೂರು ನಗರದ ಹೊರವಲಯದ ಇಂದಾವರ ಗ್ರಾಮದ ಧರಣೇಶ್ ಅವರ ಕೃಷಿ ಜಮೀನು ಸರ್ವೆಗಾಗಿ 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರ, ಇದರಿಂದ ನೊಂದು ರೈತ ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಿದ್ದರಂತೆ.&lt;/p&gt;&lt;p&gt;ಇದರಂತೆ ಮುಂಗಡವಾಗಿ ಎರಡು ಲಕ್ಷ ರೂಪಾಯಿ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಧಿಕಾರಿಗಳು ತಮ್ಮ&zwnj; ಖಾಸಗಿ &zwnj;ಕಚೇರಿಯಲ್ಲಿ&zwnj; ಎರಡು ಲಕ್ಷ ಪಡೆಯುವಾಗ ಬಲೆಗೆ ಬಿದ್ದಿದ್ದು, ಚಿಕ್ಕಮಗಳೂರು ಲೋಕಾಯುಕ್ತ ಡಿ ವೈ ಎಸ್ ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಘಟನೆ ಸಂಬಂಧ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;h2&gt;ರಸ್ತೆಯಲ್ಲಿನ ಗುಂಡಿಗಳ ವಿರುದ್ಧ ಬೀದಿಗಿಳಿದ ಬಿಜೆಪಿ&lt;/h2&gt;&lt;p&gt;ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ಬಿಜೆಪಿ ನಾಯಕರು, ಆಲ್ದೂರು ಟು ಚಿಕ್ಕಮಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ರಸ್ತೆಯಲ್ಲಿನ ಗುಂಡಿಗೆ ಬಾಳೆಗಿಡ ನೆಟ್ಟು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಚಿಕ್ಕಮಗಳೂರು-ಆಲ್ದೂರು-ಬಾಳೆಹೊನ್ನೂರು-ಶೃಂಗೇರಿ ಮಾರ್ಗದಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿ ಬಿದ್ದಿರುವ ಕಾರಣ, ರಸ್ತೆ ದುರಸ್ಥಿ ಮಾಡುವಂತೆ 18 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ. ಶೃಂಗೇರಿ ಶಾಸಕ ರಾಜೇಗೌಡ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಳೆಗಾಲದಲ್ಲಿ ಬೇಸಿಗೆ ಬರಲಿ ಅಂತಾರೆ, ಬೇಸಿಗೆಯಲ್ಲಿ ಕೆಲಸ ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/chikkamagaluru-survey-officials-caught-in-lokayukta-trap-while-accepting-huge-bribes-sns/articleshow-epffm8s"/>
        </item>
        <item>
            <title><![CDATA[Bengaluru South: 54 ಕೋಟಿ ವೆಚ್ಚ, 6 ಎಕರೆ ಜಾಗದಲ್ಲಿ 888 ಮನೆಗಳ ನಿರ್ಮಾಣಕ್ಕೆ ಮೂಹರ್ತ]]></title>
            <link>https://kannada.asianetnews.com/karnataka-districts/bengaluru-south-construction-of-888-houses-on-6-acres-of-land-at-a-cost-of-rs-54-crores-launched-mrq/articleshow-x83dhkl</link>
            <guid isPermaLink="true">https://kannada.asianetnews.com/karnataka-districts/bengaluru-south-construction-of-888-houses-on-6-acres-of-land-at-a-cost-of-rs-54-crores-launched-mrq/articleshow-x83dhkl</guid>
            <pubDate>Sat, 22 Aug 2026 11:21:20 +0530</pubDate>
            <description><![CDATA[&lt;p&gt;5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 888 ಮನೆಗಳ ನಿರ್ಮಾಣಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಜಮೀನು ವಿವಾದಗಳಿಂದ ಸ್ಥಗಿತಗೊಂಡಿದ್ದ ಈ ಯೋಜನೆಯು, ಶಾಸಕ ಇಕ್ಬಾಲ್ ಹುಸೇನ್ ಅವರ ಪ್ರಯತ್ನದಿಂದಾಗಿ ಶಿಡ್ಲುಕಲ್ಲು ಗ್ರಾಮದಲ್ಲಿ ₹54 ಕೋಟಿ ವೆಚ್ಚದಲ್ಲಿ ಕಾರ್ಯಗತಗೊಳ್ಳಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0m07p2d0fsbpv7mxwq9skag,imgname-bengaluru-south-1787377735757.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಂ.ಅಫ್ರೋಜ್ ಖಾನ್&lt;/strong&gt;&lt;/p&gt;&lt;p&gt;&lt;strong&gt;ರಾಮನಗರ: ಕ&lt;/strong&gt;ಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ 888 ಮನೆಗಳನ್ನು ನಿರ್ಮಿಸುವ ಕಾರ್ಯಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.&lt;/p&gt;&lt;p&gt;ರಾಮನಗರ ಟೌನಿನಲ್ಲಿರುವ ಸೂರು ಮತ್ತು ನಿವೇಶನ ಇಲ್ಲದ ಕೊಳಚೆ ಪ್ರದೇಶದ ನಿವಾಸಿಗಳು, ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಸೂರು ಕಲ್ಪಿಸುವ ಈ ವಸತಿ ಯೋಜನೆ ಜಮೀನಿನ ವಿವಾದದಿಂದಾಗಿ ಕಾರ್ಯಗತಗೊಂಡಿರಲಿಲ್ಲ.&lt;/p&gt;&lt;p&gt;ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ರವರು ಸಂಸದರಾಗಿದ್ದ ಅವಧಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರೊಂದಿಗೆ ಜಮೀನಿನ ವಿವಾದ ಬಗೆಹರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆನಂತರ ಇಕ್ಬಾಲ್ ಹುಸೇನ್ ಅವರೇ ವಿಶೇಷ ಕಾಳಜಿ ವಹಿಸಿ ಜಮೀನನ್ನು ಗುರುತಿಸುವ ಜೊತೆಗೆ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಹಂತಕ್ಕೆ ತಂದಿದ್ದಾರೆ.&lt;/p&gt;&lt;h2&gt;&lt;strong&gt;6 ಎಕರೆಯಲ್ಲಿ 888 ಮನೆಗಳ ನಿರ್ಮಾಣ&amp;nbsp;&lt;/strong&gt;&lt;/h2&gt;&lt;p&gt;ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಶಿಡ್ಲುಕಲ್ಲು ಗ್ರಾಮದ ಸರ್ವೇ ನಂಬರ್ 29ರಲ್ಲಿನ 6 ಎಕರೆ 38 ಗುಂಟೆ ಜಮೀನಿನಲ್ಲಿ ಸುಮಾರು ₹54 ಕೋಟಿ ವೆಚ್ಚದಲ್ಲಿ 888 ಮನೆಗಳು ನಿರ್ಮಾಣಗೊಳ್ಳಲಿವೆ. ಒಂದು ಬ್ಲಾಕಿನಲ್ಲಿ ಜಿ + 4 ವಿನ್ಯಾಸದಲ್ಲಿ 37 ಮನೆಗಳಂತೆ ಒಟ್ಟು 24 ಬ್ಲಾಕ್ ಗಳಲ್ಲಿ 888 ಮನೆಗಳು ನಿರ್ಮಾಣವಾಗಲಿವೆ.&lt;/p&gt;&lt;p&gt;ಇದರಲ್ಲಿ ಮನೆಗಳ ನಿರ್ಮಾಣಕ್ಕೆ ₹49 ಕೋಟಿ 32 ಲಕ್ಷ, ಮೂಲ ಸೌಕರ್ಯ ಕಲ್ಪಿಸಲು ₹1 ಕೋಟಿ 11 ಲಕ್ಷ ವೆಚ್ಚವಾಗಲಿದೆ. ಪ್ರತಿಯೊಂದು ಮನೆ 27.22 ಚದರ ವಿಸ್ತೀರ್ಣ ಇರಲಿದ್ದು, ಒಂದು ಮನೆ ₹5 ಲಕ್ಷ 55 ಸಾವಿರ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.&lt;/p&gt;&lt;p&gt;ನಗರದ ವಿವಿಧ ಕೊಳಚೆ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಯೋಜನೆ ಅಡಿಯಲ್ಲಿ 888 ಮನೆಗಳನ್ನು ನಿರ್ಮಿಸಲು 2018-19ನೇ ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್) ವತಿಯಿಂದ ಮಂಜೂರಾಗಿತ್ತು. ಈ ವರ್ಷದ ಸೆಪ್ಟೆಂಬರ್ ತಿಂಗಳೊಳಗೆ ಮನೆಗಳ ನಿರ್ಮಾಣ ಪ್ರಾರಂಭವಾಗದಿದ್ದರೆ ಎಲ್ಲ ಮನೆಗಳು ರದ್ದುಗೊಳ್ಳುತ್ತಿದ್ದವು.&lt;/p&gt;&lt;p&gt;ಹೀಗಾಗಿ ಆ.22ರಂದು ಶಾಸಕ ಇಕ್ಬಾಲ್ ಹುಸೇನ್ ರವರ ಅಧ್ಯಕ್ಷತೆಯಲ್ಲಿ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಮತ್ತು ವಸತಿ ಸಚಿವ ಜಮೀರ್ ಅಹಮದ್ ರವರು ಮನೆಗಳ ನಿರ್ಮಾಣ ಕಾರ್ಯಕ್ಕೆ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಕೊತ್ತಿಪುರ - ದೊಡ್ಡಮಣ್ಣುಗುಡ್ಡೆಯಲ್ಲಿ ವಿವಾದ :&lt;/strong&gt;&lt;/p&gt;&lt;p&gt;ಈ ಮೊದಲು 2021ರ ಡಿಸೆಂಬರ್ 20ರಂದು ಸ್ಲಂ ಬೋರ್ಡಿಗೆ ಸೇರಿದ ಕೊತ್ತಿಪುರ ಸರ್ವೇ ನಂ.96 ಮತ್ತು 97ರಲ್ಲಿ 7 ಎಕರೆ 35 ಗುಂಟೆ ಜಮೀನಿನಲ್ಲಿ ವಸತಿ ಯೋಜನೆ ಪ್ರಾರಂಭಿಸಲು ಹೋದಾಗ ಮೂಲ ಮಾಲೀಕರು ಅಡ್ಡಿ ಪಡಿಸಿದ್ದರು. ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಯಥಾಸ್ಥಿತಿ ಕಾಪಾಡಲು ಆದೇಶಿಸಿತು. ವ್ಯಾಜ್ಯ ಇತ್ಯರ್ಥವಾಗದ ಕಾರಣ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಲಿಲ್ಲ.&lt;/p&gt;&lt;p&gt;2006ರಲ್ಲಿ ಸ್ಲಂ ಬೋರ್ಡಿಗೆ ಮಂಜೂರಾಗಿದ್ದ ದೊಡ್ಡಮಣ್ಣುಗುಡ್ಡೆ ಸರ್ವೇ ನಂ.1ರ 30 ಎಕರೆ 30 ಗುಂಟೆ ಜಮೀನನ್ನು ಮನೆಗಳ ನಿರ್ಮಾಣಕ್ಕಾಗಿ ಗುತ್ತಿಗೆದಾರರಿಗೆ 2022ರ ನವೆಂಬರ್ 15ರಂದು ಸ್ಥಳ ಹಸ್ತಾಂತರಿಸಾಗಿತ್ತು. ಆ ಪ್ರದೇಶದಲ್ಲಿ ಕಾಮಗಾರಿ ಪ್ರಾರಂಭಿಸಲು ಹೋದಾಗ ಅರಣ್ಯ ಇಲಾಖೆಯವರು ಸದರಿ ಜಮೀನು ತಮ್ಮ ಇಲಾಖೆಗೆ ಸೇರಿದೆ ಎಂದು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು.&lt;/p&gt;&lt;p&gt;ಕೊನೆಗೆ ಸ್ಲಂ ಬೋರ್ಡ್ ಬದಲಿ ಜಾಗ ನೀಡುವಂತೆ ರಾಮನಗರ ತಹಸೀಲ್ದಾರ್ ಗೆ ಪತ್ರ ಬರೆದಿತ್ತು. ಆನಂತರ ಜಿಲ್ಲಾಧಿಕಾರಿಗಳು ಶಿಡ್ಲುಕಲ್ಲು ಗ್ರಾಮದ ಸರ್ವೇ ನಂ.29ರಲ್ಲಿನ 6 ಎಕರೆ 38 ಗುಂಟೆ ಜಮೀನನ್ನು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಗೆ ಕೊಳಚೆ ಪ್ರದೇಶದ ವಿವಿಧ ನಿವಾಸಿಗಳನ್ನು ಸ್ಥಳಾಂತರ ಮಾಡುವ ಉದ್ದೇಶಕ್ಕಾಗಿ ಮಂಜೂರು ಮಾಡಿ ಹಸ್ತಾಂತರ ಮಾಡಿದೆ. ಇದೀಗ ಆ ಜಾಗದಲ್ಲಿಯೇ 888 ಮನೆಗಳು ನಿರ್ಮಾಣಗೊಳ್ಳಲಿವೆ.&lt;/p&gt;&lt;p&gt;&lt;strong&gt;ಅನುದಾನದ ವಿವರ&lt;/strong&gt;&lt;/p&gt;&lt;p&gt;ಅನುದಾನದ ಪಾಲು, ಎಸ್ಸಿ - ಎಸ್ಟಿ, ಇತರೆ ವರ್ಗ&lt;/p&gt;&lt;p&gt;ಭಾರತ ಸರ್ಕಾರ, 1.50 ಲಕ್ಷ, 1.50 ಲಕ್ಷ&lt;/p&gt;&lt;p&gt;ಕರ್ನಾಟಕ ಸರ್ಕಾರ, 2 ಲಕ್ಷ, 1.20 ಲಕ್ಷ&lt;/p&gt;&lt;p&gt;ಫಲಾನುಭವಿ ಪಾಲು, 1 ಲಕ್ಷ, 1 ಲಕ್ಷ&lt;/p&gt;&lt;p&gt;ಕ.ಸರ್ಕಾರದ ವಿಶೇಷ ಅನುದಾನ, 1.55 ಲಕ್ಷ, 1.85 ಲಕ್ಷ&lt;/p&gt;&lt;p&gt;ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಸೂರು ಕಲ್ಪಿಸಲು ಡಿ.ಕೆ.ಸುರೇಶ್ ರವರು ಸಂಸದರಾಗಿದ್ದಾಗ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ ರಾಮನಗರಕ್ಕೆ 888 ಮನೆಗಳನ್ನು ಮಂಜೂರು ಮಾಡಿಸಿದ್ದರು. ಇದರ ಅನುಷ್ಠಾನಕ್ಕೆ ಜಮೀನಿನ ಸಮಸ್ಯೆ ಅಡ್ಡಿಯಾಗಿತ್ತು. ಎಲ್ಲ ಅಡೆತಡೆಗಳು ನಿವಾರಣೆಯಾಗಿ ಶಿಡ್ಲುಕಲ್ಲು ಗ್ರಾಮದ 6 ಎಕರೆಯಲ್ಲಿ ಮನೆಗಳು ನಿರ್ಮಾಣಗೊಳ್ಳಲಿವೆ ಎಂದು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಹೇಳುತ್ತಾರೆ.&lt;/p&gt;&lt;p&gt;ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ 888 ಮನೆಗಳನ್ನು ನಿರ್ಮಿಸಲು 2018-19ನೇ ಸಾಲಿನಲ್ಲಿ ಸ್ಲಂ ಬೋರ್ಡಿನಿಂದ ಮಂಜೂರಾಗಿತ್ತು. ಕೊತ್ತಿಪುರ ಮತ್ತು ದೊಡ್ಡಮಣ್ಣುಗುಡ್ಡೆಯಲ್ಲಿ ಜಮೀನಿನ ಸಮಸ್ಯೆಯಿಂದ ಕಾರ್ಯಗತಗೊಳ್ಳಲಿಲ್ಲ. ಈಗ ಶಿಡ್ಲುಕಲ್ಲು ಗ್ರಾಮದಲ್ಲಿ 1 ಬ್ಲಾಕಿನಲ್ಲಿ ಜಿ + 4 ವಿನ್ಯಾಸದಲ್ಲಿ 37 ಮನೆಗಳಂತೆ ಒಟ್ಟು 24 ಬ್ಲಾಕ್ ಗಳಲ್ಲಿ 888 ಮನೆಗಳು ನಿರ್ಮಾಣವಾಗಲಿವೆ ಎಂದು ಸ್ಲಂ ಬೋರ್ಡ್ ಎಇಇ ಚೇತನ್ ಕುಮಾರ ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bengaluru-south-construction-of-888-houses-on-6-acres-of-land-at-a-cost-of-rs-54-crores-launched-mrq/articleshow-x83dhkl"/>
        </item>
        <item>
            <title><![CDATA[ತಂದೆ ಇಲ್ಲದ ಮನೆಗೆ ಆಧಾರವಾಗಿದ್ದ ಯುವಕನ ಭೀಕರ ಅಂತ್ಯ; ಕೊಡಗಿನಲ್ಲಿ ಮಿತಿ ಮೀರಿದ ಬಾಡಿಗೆ ಬೈಕ್‌ಗಳ ಹಾವಳಿ]]></title>
            <link>https://kannada.asianetnews.com/karnataka-districts/lorry-runs-over-car-driver-standing-by-the-roadside-in-kodagu-sns/articleshow-n5hv6um</link>
            <guid isPermaLink="true">https://kannada.asianetnews.com/karnataka-districts/lorry-runs-over-car-driver-standing-by-the-roadside-in-kodagu-sns/articleshow-n5hv6um</guid>
            <pubDate>Sat, 22 Aug 2026 11:16:21 +0530</pubDate>
            <description><![CDATA[ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮುಂಜಾನೆ ಬಾಡಿಗೆಗಾಗಿ ಕಾಯುತ್ತಿದ್ದ 26 ವರ್ಷದ ಕಾರು ಚಾಲಕನ ಮೇಲೆ ಗ್ಯಾಸ್ ಲಾರಿ ಹರಿದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಇತ್ತೀಚೆಗಷ್ಟೇ ಸಾಲ ಮಾಡಿ ಕಾರು ಖರೀದಿಸಿದ್ದ ಈತ, ಕುಟುಂಬಕ್ಕೆ ಏಕೈಕ ಆಧಾರವಾಗಿದ್ದನು.]]></description>
            <media:content url="https://static.asianetnews.com/images/w-1280,h-720,format-jpg,imgid-01m0kzswr306ygxhvs2n2vdwak,imgname-kodagu-sahil-1787377283843.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು: &lt;/strong&gt;ಹೊಟ್ಟೆಪಾಡಿಗಾಗಿ ಮುಂಜಾನೆ ಐದು ಗಂಟೆಗೆ ಕಾರಿನ ಬಾಡಿಗೆಗಾಗಿ ಬಂದಿದ್ದ ಕಾರು ಚಾಲಕ ಲಾರಿ ಅಪಘಾತದಲ್ಲಿ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಗಣಪತಿ ಬೀದಿಯ ನಿವಾಸಿ ನಜೀರ್ ಮತ್ತು ಶಾಹಿನ್ ಅವರ ಏಕೈಕ ಪುತ್ರ 26 ವರ್ಷದ ಶಾಹಿಲ್ ದುರಂತ ಅಂತ್ಯ ಕಂಡ ಯುವಕ.&lt;/p&gt;&lt;h2&gt;ತಲೆ ಮೇಲೆ ಹರಿದ ಲಾರಿ&lt;/h2&gt;&lt;p&gt;ತಂದೆ ಇಲ್ಲದೆ ಇಡೀ ಮನೆಗೆ ಈತನೇ ಆಶ್ರಯವಾಗಿದ್ದ ಇತ್ತೀಚೆಗೆ ಸಾಲ ಮಾಡಿ ಕಾರು ಕೊಂಡಿದ್ದ. ಅದರ ಸಾಲ ತೀರಿಸುವುದಕ್ಕಾಗಿಯೇ ಶಾಹಿಲ್ ಮುಂಜಾನೆ ನಾಲ್ಕುವರೆಗೆ ಪ್ರವಾಸಿಗರನ್ನು ಪಿಕಪ್ ಮಾಡಲು ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಮೈಸೂರು ರಸ್ತೆಯಲ್ಲಿ ಇರುವ ಬಸ್ ನಿಲ್ದಾಣದ ಬಳಿ ನಿಂತಿದ್ದ. ಈ ವೇಳೆ ಮಂಗಳೂರು ಕಡೆಯಿಂದ ಬಂದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಯುವಕನ ಮೇಲೆ ಹರಿದಿದೆ. ತಲೆ ಮೇಲೆ ಲಾರಿ ಹರಿದಿದ್ದರಿಂದ ಯುವಕ ಶಾಹಿಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.&lt;/p&gt;&lt;p&gt;ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಸೂರಜ್, ವೃತ್ತ ನಿರೀಕ್ಷಕ ಚಂದ್ರಶೇಖರ್ ಸ್ಥಳಕ್ಕೆ ಆಗಮಿಸಿ ಕೂಡಲೇ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.&lt;/p&gt;&lt;h2&gt;ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದೆ&lt;/h2&gt;&lt;p&gt;ಈ ಕುರಿತು ಮಾತನಾಡಿರುವ ಶಾಹಿಲ್ ನ ಅತ್ತೆ ಆಶಾ, ತಂದೆ ಇಲ್ಲದಿದ್ದರಿಂದ ನಾನೇ ಆತನಿಗೊಂದು ಮದುವೆ ಮಾಡುವುದಕ್ಕಾಗಿ ಹೆಣ್ಣು ಹುಡುಕುತ್ತಿದ್ದೆ. ಇನ್ನೇನು ಕೆಲವು ತಿಂಗಳಲ್ಲಿ ವಿವಾಹಿತನಾಗಿ ಸುಖ ಸಂಸಾರ ನಡೆಸುವವನಿದ್ದ. ಸಾಲ ಮಾಡಿ ಕಾರು ಕೊಂಡಿದ್ದ ಆತ ಅದನ್ನು ತೀರಿಸುವುದಕ್ಕಾಗಿ ಪ್ರವಾಸಿಗರನ್ನು ಪಿಕಪ್ ಮಾಡಲು ನಿತ್ಯ ಮುಂಜಾನೆಯೇ ಬರುತ್ತಿದ್ದ. ಇಂದು ಇಂತಹ ದುರ್ಗತಿ ಬಂದಿದೆ ಎಂದು ಕಣ್ಣೀರಿಟ್ಟಿದ್ದಾರೆ.&lt;/p&gt;&lt;h2&gt;ಮಿತಿ ಮೀರಿದ ಬಾಡಿಗೆ ಬೈಕ್&zwnj;ಗಳ ಹಾವಳಿ&lt;/h2&gt;&lt;p&gt;ವಾಹನ ಮಾಲೀಕರ ಸಂಘದಲ್ಲೂ ಇದ್ದ ಶಾಹಿಲ್ ಒಳ್ಳೆಯ ಹುಡುಗನಾಗಿದ್ದ ದುಡಿಯಬೇಕೆಂಬ ಹಂಬಲದಿಂದ ಮುಂಜಾನೆಯೇ ಬಾಡಿಗೆಗಾಗಿ ಬರುತ್ತಿದ್ದ. ಇತ್ತೀಚೆಗೆ ಬಾಡಿಗೆ ಬೈಕುಗಳ ಹಾವಳಿ ಮಿತಿ ಮೀರಿದ್ದು, ನಾಲ್ಕು ಗಂಟೆಗೆ ಅವುಗಳು ಅಂಗಡಿಗಳು ತೆರೆಯುತ್ತವೆ. ಇದನ್ನು ಓವರ್ ಕಂ ಮಾಡಿ ಬಾಡಿಗೆ ಮಾಡಲೇಬೇಕಾದ ಅನಿವಾಯರ್ತೆ ಇರುವುದರಿಂದ ಕೆಲವರು ನಾಲ್ಕು ಗಂಟೆಗೆ ಬಾಡಿಗೆ ಮಾಡಲು ಬರುತ್ತಾರೆ. ಹೀಗೆ ಬಾಡಿಗೆಗೆ ಬಂದಿರುವಾಗಲೇ ಇಂತಹ ದುರ್ಘಟನೆ ನಡೆದಿದೆ. ಬಾಡಿಗೆ ಬೈಕುಗಳ ಹಾವಳಿಗೆ ಬ್ರೇಕ್ ಹಾಕಿದರೆ ಇಂತಹ ಪರಿಸ್ಥಿತಿ ಕಾರು ಚಾಲಕರು, ಮಾಲೀಕರಿಗೆ ಬರುವುದಿಲ್ಲ. ಮೃತ ಶಾಹಿಲ್ ನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕಾಗಿದೆ ಎಂದು ಕಾರು ಮಾಲೀಕರು, ಚಾಲಕರ ಸಂಘದ ಮುಖಂಡ ಸಂತೋಷ್ ಕಾರ್ಯಪ್ಪ ಆಗ್ರಹಿಸಿದ್ದಾರೆ. &lt;strong&gt;(ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)&amp;nbsp;&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/lorry-runs-over-car-driver-standing-by-the-roadside-in-kodagu-sns/articleshow-n5hv6um"/>
        </item>
        <item>
            <title><![CDATA[ಕಟ್ಟಡ, ನಿವೇಶನ ಕಡತಕ್ಕಾಗಿ ಕಾರ್ಕಳ ತಾಲೂಕಿನ ಜನರ 140 ಕಿ.ಮೀ. ಅಲೆದಾಟ;  ಕೊನೆ ಯಾವಾಗ?]]></title>
            <link>https://kannada.asianetnews.com/karnataka-districts/people-of-karkala-taluk-are-forced-to-go-to-kapu-for-building-construction-and-site-development-files-mrq/articleshow-kqrf3tk</link>
            <guid isPermaLink="true">https://kannada.asianetnews.com/karnataka-districts/people-of-karkala-taluk-are-forced-to-go-to-kapu-for-building-construction-and-site-development-files-mrq/articleshow-kqrf3tk</guid>
            <pubDate>Sat, 22 Aug 2026 10:40:29 +0530</pubDate>
            <description><![CDATA[ಕಾರ್ಕಳ ತಾಲೂಕಿನ ಜನರು ಕಟ್ಟಡ ನಿರ್ಮಾಣ ಮತ್ತು ನಿವೇಶನ ಅಭಿವೃದ್ಧಿ ಕಡತಗಳಿಗಾಗಿ ದೂರದ ಕಾಪು ಯೋಜನಾ ಪ್ರಾಧಿಕಾರಕ್ಕೆ ಅಲೆದಾಡಬೇಕಾಗಿದೆ. ಒಂದೇ ಪ್ರಾಧಿಕಾರ ಮತ್ತು ಒಬ್ಬರೇ ಇಂಜಿನಿಯರ್ ಇರುವುದರಿಂದ ಕಡತ ವಿಲೇವಾರಿಯಲ್ಲಿ ವಿಳಂಬವಾಗುತ್ತಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0j359v2k0rjwxbmzkk78xjy,imgname-kapu-1787313694562.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಂ ಅಜೆಕಾರು&lt;/strong&gt;&lt;/p&gt;&lt;p&gt;&lt;strong&gt;ಉಡುಪಿ:&lt;/strong&gt; ಕಾರ್ಕಳ ತಾಲೂಕಿನ ಗ್ರಾಮಗಳ ಜನರು ಕಟ್ಟಡ ನಿರ್ಮಾಣ ಹಾಗೂ ನಿವೇಶನ ಅಭಿವೃದ್ಧಿಗೆ ಸಂಬಂಧಿಸಿದ ಕಡತಗಳಿಗಾಗಿ ಕಾಪು ಯೋಜನಾ ಪ್ರಾಧಿಕಾರದ ಕಚೇರಿಗೆ ಪದೇಪದೇ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ಪ್ರಯಾಣದ ಜತೆಗೆ ಕಡತ ವಿಲೇವಾರಿಯಲ್ಲೂ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ತೀವ್ರವಾಗಿ ಹೈರಾಣಾಗಿದ್ದಾರೆ.&lt;/p&gt;&lt;h2&gt;&lt;strong&gt;ಕಡತಕ್ಕಾಗಿ 140 ಕಿ.ಮೀ ಪ್ರಯಾಣ!&lt;/strong&gt;&lt;/h2&gt;&lt;p&gt;ಕಾರ್ಕಳ ಹಾಗೂ ಕಾಪು ತಾಲೂಕುಗಳಿಗೆ ಒಂದೇ ಯೋಜನಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಈದು, ಬೋಳೆಟ್ಟು ಸೇರಿದಂತೆ ಹಲವು ದೂರದ ಗ್ರಾಮಗಳ ಜನರು ಯೋಜನಾ ಪ್ರಾಧಿಕಾರದ ಅನುಮತಿ ಹಾಗೂ ದಾಖಲೆಗಳಿಗಾಗಿ ಕಾಪುವಿಗೆ ತೆರಳಬೇಕಾಗಿದೆ. ಕೆಲವು ಪ್ರದೇಶಗಳಿಂದ ಕಾಪುವಿಗೆ ಸುಮಾರು 140 ಕಿ.ಮೀ.ವರೆಗೆ ಪ್ರಯಾಣಿಸಬೇಕಾಗುತ್ತದೆ .&lt;/p&gt;&lt;p&gt;ಒಂದು ಕಡತದ ವಿಚಾರವಾಗಿ ಒಂದಕ್ಕಿಂತ ಹೆಚ್ಚು ಬಾರಿ ಕಚೇರಿಗೆ ತೆರಳಬೇಕಾದರೆ ಸಾರ್ವಜನಿಕರ ಸಂಕಷ್ಟ ಇನ್ನಷ್ಟು ಹೆಚ್ಚುತ್ತಿದೆ. ಇದರಿಂದ ಪ್ರಯಾಣ ವೆಚ್ಚದ ಜತೆಗೆ ಒಂದು ದಿನದ ಕೆಲಸವೂ ನಷ್ಟವಾಗುತ್ತಿದೆ. ಕಡತದಲ್ಲಿ ಸಣ್ಣಪುಟ್ಟ ತಿದ್ದುಪಡಿ ಅಥವಾ ಹೆಚ್ಚುವರಿ ದಾಖಲೆ ಬೇಕಾದರೂ ಮತ್ತೆ ಕಾಪುವಿನತ್ತ ಪ್ರಯಾಣಿಸಬೇಕಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ದೂರದ ಪ್ರಯಾಣ ಅನಿವಾರ್ಯ&lt;/strong&gt;&lt;/h3&gt;&lt;p&gt;ಕಾರ್ಕಳ ತಾಲೂಕಿನಲ್ಲಿ 39 ಕಂದಾಯ ಗ್ರಾಮಗಳು, 27 ಗ್ರಾಮ ಪಂಚಾಯಿತಿಗಳು, ಒಂದು ಪುರಸಭೆ ಹಾಗೂ ಅಜೆಕಾರು ಮತ್ತು ಕಾರ್ಕಳ ಎಂಬ ಎರಡು ಹೋಬಳಿಗಳಿವೆ. ಕಾಪು ತಾಲೂಕಿನಲ್ಲಿ 30 ಕಂದಾಯ ಗ್ರಾಮಗಳು, 16 ಗ್ರಾಮ ಪಂಚಾಯಿತಿಗಳು ಹಾಗೂ ಒಂದು ಹೋಬಳಿ ಇದೆ. ಇಷ್ಟು ವಿಶಾಲ ವ್ಯಾಪ್ತಿಯ ಪ್ರದೇಶಗಳ ಯೋಜನಾ ಸಂಬಂಧಿತ ಕೆಲಸಗಳು ಒಂದೇ ವ್ಯವಸ್ಥೆಯಡಿ ನಡೆಯುತ್ತಿರುವುದರಿಂದ ಕಾರ್ಕಳ ಭಾಗದ ಜನರಿಗೆ ಸೇವೆ ಪಡೆಯಲು ದೂರದ ಪ್ರಯಾಣ ಅನಿವಾರ್ಯವಾಗಿದೆ.&lt;/p&gt;&lt;p&gt;ಈ ಹಿಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ದೊರೆಯುತ್ತಿದ್ದ ಕಟ್ಟಡ ಪರವಾನಿಗೆ ಸೇರಿದಂತೆ ಹಲವು ಅಧಿಕಾರಗಳು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬಂದ ಬಳಿಕ ಸಮಸ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸಿಂಗಲ್ ಲೇಔಟ್ ಅನುಮೋದನೆ, ಭೂ ಪರಿವರ್ತನೆ ನಂತರದ 9/11 ದಾಖಲೆ ಸೇರಿದಂತೆ ಹಲವು ಪ್ರಕ್ರಿಯೆಗಳಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದೆ. ಭೂ ಪರಿವರ್ತನೆ ಪೂರ್ಣಗೊಂಡ ಬಳಿಕವೂ 9/11 ದಾಖಲೆ ಪಡೆಯಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾದ ಸಂದರ್ಭಗಳಿವೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;h3&gt;&lt;strong&gt;ಎರಡು ತಾಲೂಕಿನ ಹೊಣೆ:&lt;/strong&gt;&lt;/h3&gt;&lt;p&gt;ಕಾಪು ಹಾಗೂ ಕಾರ್ಕಳ ಎರಡೂ ತಾಲೂಕುಗಳ ಯೋಜನಾ ಸಂಬಂಧಿತ ಕೆಲಸಗಳಿಗೆ ಒಬ್ಬರೇ ಇಂಜಿನಿಯರ್ ಕಾರ್ಯನಿರ್ವಹಿಸುತ್ತಿರುವುದು ಕೂಡ ಕಡತ ವಿಲೇವಾರಿ ವಿಳಂಬಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗೆ ಅವರಿಗೆ ಎಸ್&zwnj;ಐಆರ್&zwnj; ಕರ್ತವ್ಯವನ್ನೂ ನೀಡಿರುವುದರಿಂದ ಯೋಜನಾ ಪ್ರಾಧಿಕಾರದ ಕೆಲಸಗಳಿಗೆ ಸಮರ್ಪಕ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನವಿದೆ. ಕಾರ್ಕಳಕ್ಕೆ ವಾರದಲ್ಲಿ ಮೀಸಲಾದ ದಿನದಲ್ಲಿ ಇತರ ಕರ್ತವ್ಯಗಳ ಒತ್ತಡ ದಿಂದ ಅಧಿಕಾರಿಗಳನ್ನು ಭೇಟಿಯಾಗಲು ಸಾಧ್ಯವಾಗದ ಪರಿಸ್ಥಿತಿ ಇದೆ.&lt;/p&gt;&lt;h3&gt;&lt;strong&gt;ಅಲೆದಾಟಕ್ಕೆ ಕೊನೆ ಯಾವಾಗ?&lt;/strong&gt;&lt;/h3&gt;&lt;p&gt;ಸಾರ್ವಜನಿಕರ ಸಮಸ್ಯೆಯನ್ನು ಪರಿಗಣಿಸಿ ಕಾರ್ಕಳ ಭಾಗದ ಅರ್ಜಿಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕು, ಅಗತ್ಯವಿದ್ದಲ್ಲಿ ಹೆಚ್ಚುವರಿ ಇಂಜಿನಿಯರ್&zwnj;ರನ್ನು ನೇಮಿಸುವುದು ಹಾಗೂ ಕಾರ್ಕಳಕ್ಕೆ ಮೀಸಲಾದ ದಿನದಂದು ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.&lt;/p&gt;&lt;p&gt;ಕಾಪು ಪ್ರಾದಿಕಾರದ ಇಂಜಿನಿಯರ್ ಗೆ ಎಸ್ ಐ ಅರ್ ಡ್ಯೂಟಿ ನೀಡಲಾಗಿಲ್ಲ. ಕಾರ್ಯವ್ಯಾಪ್ತಿಯು ಹೆಚ್ಚಾಗಿದೆ.ಕಡತ ವಿಲೆವಾರಿಯಲ್ಲಿ ವಿಳಂಬವಾದರೆ ದೂರು ಬಂದರೆ ಕ್ರಮ&zwnj;ಕೈಗೊಳ್ಳಲಾಗುವುದು ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಹೇಳುತ್ತಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/people-of-karkala-taluk-are-forced-to-go-to-kapu-for-building-construction-and-site-development-files-mrq/articleshow-kqrf3tk"/>
        </item>
        <item>
            <title><![CDATA[ಚೆಂದದ ಊರು, ಆದ್ರೆ ಮೊಬೈಲ್ ನೆಟ್‌ವರ್ಕ್ ಇಲ್ಲ; ಕಾಲ್ ಮಾಡ್ಲು 1.5 km ದೂರ ಬರ್ಬೇಕು]]></title>
            <link>https://kannada.asianetnews.com/karnataka-districts/life-in-byadane-village-has-been-disrupted-for-the-past-20-years-without-mobile-network/articleshow-ybwk7q4</link>
            <guid isPermaLink="true">https://kannada.asianetnews.com/karnataka-districts/life-in-byadane-village-has-been-disrupted-for-the-past-20-years-without-mobile-network/articleshow-ybwk7q4</guid>
            <pubDate>Sat, 22 Aug 2026 10:37:10 +0530</pubDate>
            <description><![CDATA[&lt;p&gt;ಬ್ಯಾದನೆ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಮೊಬೈಲ್ ನೆಟ್&zwnj;ವರ್ಕ್ ಇಲ್ಲದೆ ಜನಜೀವನ ಅಸ್ತವ್ಯಸ್ತವಾಗಿದೆ. ತುರ್ತು ಸೇವೆ, ವಿದ್ಯಾರ್ಥಿಗಳ ಶಿಕ್ಷಣ ಮತ್ತು ದೈನಂದಿನ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಮೊಬೈಲ್ ಟವರ್ ಸ್ಥಾಪನೆಗೆ ಆಗ್ರಹಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0j4zj3nyp1dnevjmmyewk20,imgname-byadane-1787315603573.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಸಕಲೇಶಪುರ ತಾಲೂಕಿನ ಗಡಿಭಾಗದಲ್ಲಿರುವ ಬ್ಯಾದನೆ ಗ್ರಾಮದಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಮೊಬೈಲ್ ನೆಟ್&zwnj;ವರ್ಕ್&zwnj; ಸಂಪರ್ಕ ಸಮರ್ಪಕವಾಗಿ ಲಭ್ಯವಾಗದೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.&lt;/p&gt;&lt;p&gt;ಸುಮಾರು 150 ಕುಟುಂಬಗಳಿದ್ದು, 600ಕ್ಕೂ ಹೆಚ್ಚು ಜನರು ವಾಸಿಸುತ್ತಿರುವ ಗ್ರಾಮದಲ್ಲಿ ಇಂದಿಗೂ ಸಮರ್ಪಕ ಮೊಬೈಲ್ ಸಂಪರ್ಕ ವ್ಯವಸ್ಥೆ ಇಲ್ಲದಂತಾಗಿದೆ. ಗ್ರಾಮದಲ್ಲಿ ಮೊಬೈಲ್ ನೆಟ್&zwnj;ವರ್ಕ್ ಸಂಪರ್ಕದ ಕೊರತೆಯಿಂದಾಗಿ ದಿನನಿತ್ಯದ ಹಲವು ಕೆಲಸಗಳಿಗೆ ಗ್ರಾಮಸ್ಥರು ಪರದಾಡುವಂತಾಗಿದೆ. ಯಾರಿಗಾದರೂ ದೂರವಾಣಿ ಕರೆ ಮಾಡಬೇಕಾದರೆ ಅಥವಾ ಮೊಬೈಲ್ ಮೂಲಕ ಅಗತ್ಯ ಮಾಹಿತಿ ಪಡೆಯಬೇಕಾದರೆ ಗ್ರಾಮದಿಂದ ಸುಮಾರು ಒಂದರಿಂದ ಎರಡು ಕಿ. ಮೀ. ದೂರ ತೆರಳಿದ ನಂತರವಷ್ಟೇ ನೆಟ್&zwnj;ವರ್ಕ್ ಲಭ್ಯವಾಗುತ್ತದೆ. ಇದರಿಂದ ವಯೋವೃದ್ಧರು, ಮಹಿಳೆಯರು ಹಾಗೂ ಇತರ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಗ್ರಾಮದಿಂದ ದೂರ ಹೋದ್ರೆ ಮಾತ್ರ ಸಿಗುವ ನೆಟ್&zwnj;ವರ್ಕ್&amp;nbsp;&lt;/strong&gt;&lt;/h2&gt;&lt;p&gt;ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ನೆಟ್&zwnj;ವರ್ಕ್ ಸಮಸ್ಯೆ ಹೇಳತೀರದು. ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದಾಗ, ಅಪಘಾತ ಸಂಭವಿಸಿದಾಗ ಅಥವಾ ಇತರ ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣ ಆಂಬ್ಯುಲೆನ್ಸ್, ಆಸ್ಪತ್ರೆ, ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗದೆ ಸಮಸ್ಯೆ ಎದುರಾಗುತ್ತಿದೆ. ತುರ್ತು ಸಹಾಯಕ್ಕಾಗಿ ದೂರವಾಣಿ ಕರೆ ಮಾಡಬೇಕಾದ ಸಂದರ್ಭದಲ್ಲೂ ನೆಟ್&zwnj;ವರ್ಕ್ ಇರುವ ಪ್ರದೇಶಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.&lt;/p&gt;&lt;p&gt;ಇತ್ತೀಚಿನ ವರ್ಷಗಳಲ್ಲಿ ಬ್ಯಾದನೆ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳವೂ ಹೆಚ್ಚಾಗಿದೆ. ಕಾಡಾನೆಗಳು ಗ್ರಾಮಗಳತ್ತ ಬಂದ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಹಾಗೂ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡುವುದು ಅಗತ್ಯವಾಗಿರುತ್ತದೆ. ಆದರೆ ಮೊಬೈಲ್ ನೆಟ್&zwnj;ವರ್ಕ್ ಇಲ್ಲದಿರುವುದರಿಂದ ಇಂತಹ ಸಂದರ್ಭದಲ್ಲಿ ತಕ್ಷಣ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದೆ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ವಿದ್ಯಾರ್ಥಿಗಳಿಗೂ ತೊಂದರೆ&lt;/strong&gt;&lt;/h3&gt;&lt;p&gt;ಮೊಬೈಲ್ ನೆಟ್&zwnj;ವರ್ಕ್ ಕೊರತೆಯಿಂದ ಗ್ರಾಮದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೊಂದರೆಯಾಗಿದೆ. ಕಾಲೇಜು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆನ್&zwnj;ಲೈನ್ ತರಗತಿಗಳು, ಪರೀಕ್ಷಾ ವೇಳಾಪಟ್ಟಿ, ಶೈಕ್ಷಣಿಕ ಸೂಚನೆಗಳು, ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಆನ್&zwnj;ಲೈನ್ ಸೇವೆಗಳನ್ನು ಬಳಸಲು ನೆಟ್&zwnj;ವರ್ಕ್ ಇರುವ ಪ್ರದೇಶಗಳಿಗೆ ತೆರಳಬೇಕಾಗಿದೆ. ಗ್ರಾಮದಲ್ಲಿಯೇ ಮೊಬೈಲ್ ಸಂಪರ್ಕ ಲಭ್ಯವಿದ್ದರೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಗ್ರಾಮಸ್ಥರ ದೈನಂದಿನ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ನೆಟ್&zwnj;ವರ್ಕ್ ಕೇವಲ ದೂರವಾಣಿ ಕರೆಗಳಿಗಷ್ಟೇ ಸೀಮಿತವಾಗಿಲ್ಲ. ಬ್ಯಾಂಕಿಂಗ್, ಆನ್&zwnj;ಲೈನ್ ಪಾವತಿ, ಸರ್ಕಾರಿ ಸೇವೆಗಳು, ಆರೋಗ್ಯ ಸೇವೆಗಳು, ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಇಂಟರ್&zwnj;ನೆಟ್ ಅಗತ್ಯವಾಗಿದೆ. ಆದರೆ ಗ್ರಾಮದಲ್ಲಿ ನೆಟ್&zwnj;ವರ್ಕ್ ಸಮಸ್ಯೆಯಿಂದಾಗಿ ಈ ಎಲ್ಲ ಸೇವೆಗಳನ್ನು ಪಡೆಯಲು ಗ್ರಾಮಸ್ಥರು ಪರದಾಡುವಂತಾಗಿದೆ.&lt;/p&gt;&lt;h3&gt;&lt;strong&gt;ಸಿಕ್ಕಿಲ್ಲ ಶಾಶ್ವತ ಪರಿಹಾರ&lt;/strong&gt;&lt;/h3&gt;&lt;p&gt;ಕಳೆದ ಎರಡು ದಶಕಗಳಿಂದ ಸಮಸ್ಯೆ ಮುಂದುವರಿದಿದ್ದರೂ ಇದುವರೆಗೆ ಶಾಶ್ವತ ಪರಿಹಾರ ದೊರಕಿಲ್ಲ. ಹೀಗಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮೊಬೈಲ್ ಸೇವಾಸಂಸ್ಥೆಗಳು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಗ್ರಾಮದಲ್ಲಿ ಮೊಬೈಲ್ ಟವರ್&zwnj; ಸ್ಥಾಪಿಸುವುದು ಅಥವಾ ಪರ್ಯಾಯ ತಾಂತ್ರಿಕ ವ್ಯವಸ್ಥೆ ಕಲ್ಪಿಸುವ ಮೂಲಕ ಸಮರ್ಪಕ ಮೊಬೈಲ್ ಹಾಗೂ ಇಂಟರ್&zwnj;ನೆಟ್ ಸಂಪರ್ಕ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Vande Bharat Express: ಸಕಲೇಶಪುರದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ ಬೆನ್ನಲ್ಲೇ ಸಿಕ್ಕಿತು ಮತ್ತೊಂದು ಗುಡ್&zwnj;ನ್ಯೂಸ್&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/life-in-byadane-village-has-been-disrupted-for-the-past-20-years-without-mobile-network/articleshow-ybwk7q4"/>
        </item>
        <item>
            <title><![CDATA[ಸಕ್ಕರೆ ನಾಡಲ್ಲಿ ಬೆಲ್ಲ 'ಬಂಗಾರ': ಮಂಡ್ಯ ಮಾರುಕಟ್ಟೆ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಬೆಲ್ಲದ ದರ!]]></title>
            <link>https://kannada.asianetnews.com/karnataka-districts/mandya-jaggery-price-hike-drought-all-time-high-rate-san/articleshow-0gcgdgl</link>
            <guid isPermaLink="true">https://kannada.asianetnews.com/karnataka-districts/mandya-jaggery-price-hike-drought-all-time-high-rate-san/articleshow-0gcgdgl</guid>
            <pubDate>Sat, 22 Aug 2026 10:36:09 +0530</pubDate>
            <description><![CDATA[ಮಂಡ್ಯದಲ್ಲಿ ತೀವ್ರ ಬರಗಾಲದಿಂದಾಗಿ ಕಬ್ಬಿನ ಇಳುವರಿ ಕುಸಿದಿದ್ದು, ಬೆಲ್ಲದ ಉತ್ಪಾದನೆಗೆ ಹೊಡೆತ ಬಿದ್ದಿದೆ. ಈ ಕಾರಣದಿಂದ ಮಾರುಕಟ್ಟೆಯಲ್ಲಿ ಬೆಲ್ಲದ ಕೊರತೆ ಉಂಟಾಗಿ, ಅದರ ದರವು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0kxps32jpbsz8spra07qy4k,imgname-mandya-bella-price-hike-1787375084642.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಆ.22): &lt;/strong&gt;ಸಕ್ಕರೆ ನಾಡು ಮಂಡ್ಯದಲ್ಲಿ ಭೀಕರ ಬರಗಾಲದ ಕರಿಛಾಯೆ ಆವರಿಸಿದ್ದು, ಬೆಲ್ಲ ಹಾಗೂ ಸಕ್ಕರೆ ದರ ಗಗನಕ್ಕೇರಿದೆ. ಕಳೆದ ಆರು ತಿಂಗಳಿಂದ ಸೂಕ್ತ ಮಳೆಯಾಗದೆ ಹಾಗೂ ಕಾವೇರಿ ನೀರಿನ ಪೂರೈಕೆ ಸಿಗದೆ ಕಬ್ಬಿನ ಗದ್ದೆಗಳು ಸಂಪೂರ್ಣ ಒಣಗಿ ನಿಂತಿವೆ. ಪರಿಣಾಮವಾಗಿ, ಕಬ್ಬಿನ ಇಳುವರಿ ಅರ್ಧದಷ್ಟು ಕುಸಿದಿದ್ದು, ಬೆಲ್ಲ ಉತ್ಪಾದಿಸುವ ಗಾಣಗಳಿಗೆ ಅಗತ್ಯ ಕಬ್ಬು ಸಿಗದೆ ಮಾರುಕಟ್ಟೆಯಲ್ಲಿ ಬೆಲ್ಲದ ಕೊರತೆ ತೀವ್ರವಾಗಿದೆ. ಇದರಿಂದಾಗಿ ಮಂಡ್ಯ ಬೆಲ್ಲದ ಮಾರುಕಟ್ಟೆಯ ಇತಿಹಾಸದಲ್ಲೇ ಎಂದೂ ಕಾಣದ ರೀತಿಯಲ್ಲಿ ಬೆಲ್ಲದ ದರ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಹರಾಜಾಗುತ್ತಿದೆ.&lt;/p&gt;&lt;h2&gt;&lt;strong&gt;ಎರಡೇ ದಿನದಲ್ಲಿ ಕ್ವಿಂಟಾಲ್&zwnj;ಗೆ 2,000 ರೂ. ಏರಿಕೆ&lt;/strong&gt;&lt;/h2&gt;&lt;p&gt;ಮಂಡ್ಯ ಮಾರುಕಟ್ಟೆಯಲ್ಲಿ ಈ ಹಿಂದೆ ಪ್ರತಿ ಕ್ವಿಂಟಾಲ್ ಬೆಲ್ಲದ ದರ 4,500 ರೂಪಾಯಿ ಇತ್ತು. ಆದರೆ, ಕೇವಲ ಕಳೆದ ಎರಡ್ಮೂರು ದಿನಗಳಲ್ಲಿ ದಿಢೀರನೇ 2,000 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ ಕ್ವಿಂಟಾಲ್&zwnj; ಬೆಲ್ಲ 6,500 ರಿಂದ 7,000 ರೂಪಾಯಿವರೆಗೆ ಭಾರಿ ಬೆಲೆಗೆ ಹರಾಜಾಗುತ್ತಿದೆ. ಸಾಮಾನ್ಯವಾಗಿ ಈ ಋತುವಿನಲ್ಲಿ ಬೆಲ್ಲದ ದರ ಇಳಿಕೆಯಾಗಬೇಕಿತ್ತು. ಆದರೆ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ದರ ಏರಿಕೆಯಾಗಿರುವುದು ಮಂಡ್ಯ ಮಾರುಕಟ್ಟೆಯ ಇತಿಹಾಸದಲ್ಲೇ ಇದೇ ಮೊದಲು ಎಂದು ಸ್ಥಳೀಯ ವ್ಯಾಪಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಅರ್ಧದಷ್ಟು ಕುಸಿದ ಬೆಲ್ಲದ ಪೂರೈಕೆ&lt;/strong&gt;&lt;/h2&gt;&lt;p&gt;ನೀರಿಲ್ಲದೆ ಕಬ್ಬಿನ ಇಳುವರಿ ಅರ್ಧಕ್ಕಿಂತ ಕಡಿಮೆ ಬಂದಿರುವುದರಿಂದ ಬೆಲ್ಲ ಉತ್ಪಾದನೆಯ ಮೇಲೆಯೂ ನೇರ ಪರಿಣಾಮ ಬೀರಿದೆ. ಪ್ರತಿದಿನ ಮಂಡ್ಯ ಮಾರುಕಟ್ಟೆಯಿಂದ ಸುಮಾರು 10 ರಿಂದ 12 ಲಾರಿಯಷ್ಟು ಬೆಲ್ಲ ವಿಲೇವಾರಿಯಾಗುತ್ತಿತ್ತು. ಪ್ರಸ್ತುತ ಬೆಲ್ಲದ ಪೂರೈಕೆ ಶೇ. 50 ರಷ್ಟು ಕಡಿಮೆಯಾಗಿದ್ದು, ಮಾರುಕಟ್ಟೆಗೆ ಬರುವ ಬೆಲ್ಲದ ಪ್ರಮಾಣ ತೀವ್ರ ಕುಸಿತ ಕಂಡಿದೆ. ನೀರಿನ ಅಭಾವ, ಗಾಣಗಳಿಗೆ ಕಬ್ಬಿನ ಅಭಾವ ಮತ್ತು ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವುದು ಮಂಡ್ಯ ಬೆಲ್ಲದ ದರ ದಾಖಲೆ ಮಟ್ಟಕ್ಕೆ ತಲುಪಲು ಮುಖ್ಯ ಕಾರಣವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/mandya-jaggery-price-hike-drought-all-time-high-rate-san/articleshow-0gcgdgl"/>
        </item>
        <item>
            <title><![CDATA[37 ವರ್ಷದ ಹಿಂದೆ ಕೊಟ್ಟ ಮಾತಿನಂತೆ ಸಂಸ್ಕೃತಮಯವಾದ ಕುಟುಂಬ;  ಮಾತಿಗೆ ಬದ್ಧರಾದ  ವಸಂತ ಮಾಧವ]]></title>
            <link>https://kannada.asianetnews.com/karnataka-districts/bantwal-kalladka-vasantha-madhav-savitri-have-made-sanskrit-language-of-conversation-in-their-home-for-past-37-years-mrq/articleshow-1d0mfuh</link>
            <guid isPermaLink="true">https://kannada.asianetnews.com/karnataka-districts/bantwal-kalladka-vasantha-madhav-savitri-have-made-sanskrit-language-of-conversation-in-their-home-for-past-37-years-mrq/articleshow-1d0mfuh</guid>
            <pubDate>Sat, 22 Aug 2026 10:28:12 +0530</pubDate>
            <description><![CDATA[ಕಲ್ಲಡ್ಕ ಸಮೀಪದ ಮುಲಾರಿನಲ್ಲಿ ವಸಂತ ಮಾಧವ ಮತ್ತು ಸಾವಿತ್ರಿ ದಂಪತಿ ಕಳೆದ 37 ವರ್ಷಗಳಿಂದ ತಮ್ಮ ಮನೆಯಲ್ಲಿ ಸಂಸ್ಕೃತವನ್ನೇ ಸಂಭಾಷಣೆಯ ಭಾಷೆಯನ್ನಾಗಿಸಿಕೊಂಡಿದ್ದಾರೆ. ವಿವಾಹದ ಸಂದರ್ಭದಲ್ಲಿ ಸಾವಿತ್ರಿಯವರು ಇಟ್ಟ ಬೇಡಿಕೆಯಂತೆ ಆರಂಭವಾದ ಈ ಸಂಸ್ಕೃತಮಯ ಜೀವನ, ಇದೀಗ ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗೂ ಮುಂದುವರಿದು, ಅವರ ಮನೆಯನ್ನು ಒಂದು ಆದರ್ಶ 'ಸಂಸ್ಕೃತ ಗೃಹಂ' ಆಗಿ ರೂಪಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0j2mdq8mye45kx4f615rm83,imgname-sanskrit-1787313141480.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೌನೇಶ ವಿಶ್ವಕರ್ಮ&lt;/strong&gt;&lt;/p&gt;&lt;p&gt;&lt;strong&gt;ಬಂಟ್ವಾಳ: &lt;/strong&gt;ಮನೆಯೊಳಗೆ ಕಾಲಿಟ್ಟರೆ ಕೇಳಿಸುವುದು ಸಂಸ್ಕೃತದ ಮಾತು. ಬೆಳಗಿನ ಶುಭಾಶಯದಿಂದ ಹಿಡಿದು ಊಟದ ಸಮಯದ ಮಾತುಕತೆ, ಮಕ್ಕಳೊಂದಿಗೆ ಸಂಭಾಷಣೆ, ಮನೆಯ ನಿತ್ಯದ ವಿಚಾರಗಳು ಎಲ್ಲವೂ ಸಂಸ್ಕೃತದಲ್ಲೇ. ಕಳೆದ ಸುಮಾರು 37 ವರ್ಷಗಳಿಂದ ಸಂಸ್ಕೃತವನ್ನೇ ತಮ್ಮ ಮನೆಯ ಸಂಭಾಷಣೆಯ ಭಾಷೆಯನ್ನಾಗಿ ಮಾಡಿಕೊಂಡಿರುವ ಅಪರೂಪದ ಕುಟುಂಬವೊಂದು ಕಲ್ಲಡ್ಕ ಸಮೀಪದ ಮುಲಾರು ದ್ವಾರಕಾ ನಗರ ಎಂಬಲ್ಲಿದೆ.&lt;/p&gt;&lt;p&gt;ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಹಾಗೂ ಅವರ ಪತ್ನಿ ಸಾವಿತ್ರಿ ಅವರ ಮನೆಯೇ ಈ ವಿಶಿಷ್ಟ ಸಂಸ್ಕೃತ ಗೃಹಂನ ಶಕ್ತಿಗಳು.&lt;/p&gt;&lt;h2&gt;&lt;strong&gt;ಸಂಸ್ಕೃತಮಯ ಬದುಕು&lt;/strong&gt;&lt;/h2&gt;&lt;p&gt;ಇವರ ಸಂಸ್ಕೃತಮಯ ಬದುಕಿನ ಹಿಂದೆ ಒಂದು ವಿಶೇಷವಾದ ಕಥೆಯಿದೆ. ಕುಮಟಾ ನಿವಾಸಿಯಾಗಿರುವ ಸಾವಿತ್ರಿ ಕುಂದಾಪುರದ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಕೃತ ಭಾರತಿ ಸೇವಾದ್ರತಿಯಾಗಿ ಸಂಸ್ಕೃತ ಸೇವೆಯಲ್ಲಿ ತೊಡಗಿಸಿಕೊಂಡವರು. ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಾ, ನಿರಂತರವಾಗಿ ಸಂಸ್ಕೃತದಲ್ಲಿ ಮಾತನಾಡುತ್ತಿದ್ದ ಅವರಿಗೆ, ತಮ್ಮ ವೈವಾಹಿಕ ಜೀವನವೂ ಸಂಸ್ಕೃತದ ವಾತಾವರಣದಲ್ಲಿರಬೇಕು ಎಂಬ ಬಯಕೆಯಿತ್ತು.&lt;/p&gt;&lt;h3&gt;&lt;strong&gt;ಅಪರೂಪದ ಬೇಡಿಕೆಗೆ ಒಪ್ಪಿದ್ರು ವಸಂತ ಮಾಧವ&lt;/strong&gt;&lt;/h3&gt;&lt;p&gt;ವಸಂತ ಮಾಧವ ವಧು ಪರೀಕ್ಷೆಗೆಂದು ನೋಡಲು ಬಂದ ಸಂದರ್ಭದಲ್ಲಿ ಸಾವಿತ್ರಿ ತಮ್ಮ ಮುಂದೆ ಒಂದು ಬೇಡಿಕೆ ಇಟ್ಟಿದ್ದರು. ಮನೆ ಸಂಸ್ಕೃತ ಗೃಹವಾಗಬೇಕು. ಮನೆಯಲ್ಲಿ ಸಂಸ್ಕೃತವನ್ನೇ ಮಾತನಾಡಬೇಕು. ಎಂಬುದು ಆ ಬೇಡಿಕೆ. ಸಾವಿತ್ರಿಯವರ ಈ ಅಪರೂಪದ ಬೇಡಿಕೆಗೆ ವಸಂತ ಮಾಧವರು ಒಪ್ಪಿಗೆ ಸೂಚಿಸಿದರು. ಆದರೆ ಅದಕ್ಕಾಗಿ ಅವರೂ ಸಂಸ್ಕೃತ ಕಲಿಯಬೇಕಿತ್ತು.&lt;/p&gt;&lt;p&gt;ಆಗ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗಣಿತ ಮತ್ತು ವಿಜ್ಞಾನ ಅಧ್ಯಾಪಕರಾಗಿದ್ದ ವಸಂತ ಮಾಧವ ಅವರು ಸಂಸ್ಕೃತ ಅಧ್ಯಯನಕ್ಕೆ ಮುಂದಾದರು. ಸಂಸ್ಕೃತ ಸಂಭಾಷಣಾ ಶಿಬಿರಗಳಲ್ಲಿ ಭಾಗವಹಿಸಿ, ಭಾಷೆಯನ್ನು ಕಲಿತು, ಪತ್ನಿಯೊಂದಿಗೆ ನಿರಂತರವಾಗಿ ಸಂಸ್ಕೃತದಲ್ಲಿ ಮಾತನಾಡುವ ಅಭ್ಯಾಸ ಬೆಳೆಸಿಕೊಂಡರು. ಹೀಗೆ ವಿವಾಹದ ಸಂದರ್ಭದ ಒಂದು ಬೇಡಿಕೆ, ಮುಂದೆ ಇಡೀ ಕುಟುಂಬದ ಜೀವನಶೈಲಿಯನ್ನೇ ಬದಲಿಸಿತು.&lt;/p&gt;&lt;p&gt;ಪ್ರತೀ ಮಾತುಕತೆಯೂ ಸಂಸ್ಕೃತದಲ್ಲೇ ಸುಪ್ರಭಾತಮ್! ಕಥಮಸ್ತಿ ಭವತೀ? ಎಂದು ವಸಂತ ಮಾಧವರು ಕೇಳಿದರೆ, ಸುಪ್ರಭಾತಮ್. ಅಹಂ ಕುಶಲಾ ಅಸ್ಮಿ. ಭವಾನ್ ಕಥಮಸ್ತಿ? ಎಂಬ ಉತ್ತರ ಸಾವಿತ್ರಿಯವರಿಂದ ಬರುತ್ತದೆ. ಊಟದ ಸಂದರ್ಭದಲ್ಲೂ ಸಂಸ್ಕೃತದ ಮಾತುಗಳೇ. ಭೋಜನಂ ಸಿದ್ಧಮಸ್ತಿ ವಾ?, &ldquo;ಆಮ್, ಭೋಜನಂ ಸಿದ್ಧಮಸ್ತಿ. ಆಗಚ್ಛತು, ಭೋಜನಂ ಕುರ್ಮಃ. ಅಂದರೆ, &ldquo;ಊಟ ಸಿದ್ಧವಾಗಿದೆಯೇ?, &ldquo;ಹೌದು, ಊಟ ಸಿದ್ಧವಾಗಿದೆ. ಬನ್ನಿ, ಊಟ ಮಾಡೋಣ&rdquo; ಎಂಬ ಸಾಮಾನ್ಯ ಸಂಭಾಷಣೆಯೂ ಸಂಸ್ಕೃತದಲ್ಲೇ. ಉಳಿದಂತೆ ಆಗಚ್ಛಂತು (ಬನ್ನಿ), ಉಪವಿಶಂತು (ಕುಳಿತುಕೊಳ್ಳಿ), ಜಲಮ್ ಇಚ್ಛತಿ ವಾ? (ನೀರು ಬೇಕಾ?), ಜಲಮ್ ಇಚ್ಛಾಮಿ (ನೀರು ಬೇಕು), ಅಂತಃ ಆಗಚ್ಛಂತು ( ಒಳಗೆ ಬನ್ನಿ ) , ಗತ್ವಾ ಆಗಚ್ಛಂತು (ಹೋಗಿ ಬನ್ನಿ), ಭೋಜನಂ ಕೃತವಂತಃ ವಾ? (ಊಟ ಆಯಿತಾ?), ಏನು ಮಾಡುತ್ತಿದ್ದೀರಿ? (ಕಿಂ ಕರೋತಿ ಭವಾನ್?) ಮೊದಲಾದ ಸಂಭಾಷಣೆಯ ಸಾಲುಗಳು ಇಲ್ಲಿ ಕೇಳುತ್ತಲೇ ಇರುತ್ತದೆ.&lt;/p&gt;&lt;h3&gt;&lt;strong&gt;ಸಂಸ್ಕೃತದಲ್ಲೇ ಮಾತು ಆರಂಭಿಸಿದ ಮಗ&lt;/strong&gt;&lt;/h3&gt;&lt;p&gt;ಈ ದಂಪತಿಯ ಪ್ರಥಮ ಪುತ್ರ ಶಿವಕುಮಾರ ಬಾಲ್ಯದಲ್ಲಿ ಮಾತು ಆರಂಭಿಸಿದ್ದೇ, ಸಂಸ್ಕೃತದಲ್ಲಿ. ಇದಕ್ಕಾಗಿ ಇಡೀ ಮನೆಯ ವಾತಾವರಣವನ್ನೂ ಸಂಸ್ಕೃತಮಯವನ್ನಾಗಿಸಿದ್ದರು. ಪರಿಣಾಮವಾಗಿ ಮಕ್ಕಳು ಕೂಡ ಸಂಸ್ಕೃತದಲ್ಲಿ ಮಾತನಾಡುವುದನ್ನು ಸಹಜವಾಗಿ ಕಲಿತರು. ಮಗ ಶಿವಕುಮಾರ ಹಾಗೂ ಮಗಳು ಚೈತ್ರಾ ಭಾಮತಿ ಸಂಸ್ಕೃತ ಸಂಭಾಷಣೆಯ ಪರಂಪರೆಯಲ್ಲಿ ಬೆಳೆದು ದೊಡ್ಡವರಾದವರು. ಮಗಳು ಚೈತ್ರಾ ವಿವಾಹವಾಗಿ ಹೋದ ಗುರುರಂಜನ್&zwnj; ಮನೆಯಲ್ಲೂ ಸಂಸ್ಕೃತದ ವಾತಾವರಣ ಮುಂದುವರಿದಿದೆ. ಇತ್ತ ಮಗ, ಸೊಸೆ ನಾಗಶ್ರೀ ಹಾಗೂ ಇದೀಗ ಮೊಮ್ಮಗಳೂ ಶ್ರೀಹೃದ್ಯಾ ಕೂಡಾ ಸಂಸ್ಕೃತ ಕಲಿಯುತ್ತಾ ಬೆಳೆಯುತ್ತಿದ್ದಾರೆ.&lt;/p&gt;&lt;p&gt;ಮನೆಯ ಇಬ್ಬರು ಮಕ್ಕಳು ಚಿಕ್ಕವರಿದ್ದಾಗ ಸಂಸ್ಕೃತದಲ್ಲಿಯೇ ಜಗಳವಾಡುತ್ತಿದ್ದರು ಎಂಬುದು ಮತ್ತೊಂದು ವಿಶೇಷ&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bantwal-kalladka-vasantha-madhav-savitri-have-made-sanskrit-language-of-conversation-in-their-home-for-past-37-years-mrq/articleshow-1d0mfuh"/>
        </item>
        <item>
            <title><![CDATA[ಈದ್ ಮಿಲಾದ್ ವೇಳೆ DJಗೆ ಅವಕಾಶವಿಲ್ಲ, ಸಾಂಪ್ರದಾಯಿಕ ವಾದ್ಯ ಬಳಸಿ: PSI ವಿಜಯ ಕೃಷ್ಣ]]></title>
            <link>https://kannada.asianetnews.com/karnataka-districts/vijayanagara-district-peace-meeting-on-the-occasion-of-eid-milad-at-araseekere-police-station-of-harpanahalli-taluk-mrq/articleshow-d74s5dp</link>
            <guid isPermaLink="true">https://kannada.asianetnews.com/karnataka-districts/vijayanagara-district-peace-meeting-on-the-occasion-of-eid-milad-at-araseekere-police-station-of-harpanahalli-taluk-mrq/articleshow-d74s5dp</guid>
            <pubDate>Sat, 22 Aug 2026 10:22:14 +0530</pubDate>
            <description><![CDATA[&lt;p&gt;ಪೊಲೀಸ್&zwnj; ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಪಿಎಸ್&zwnj;ಐ ವಿಜಯ ಕೃಷ್ಣ ಅವರು ಡಿಜೆಗೆ ಅವಕಾಶವಿಲ್ಲದೆ, ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಸೂಚಿಸಿದರು. ಸಭೆಯಲ್ಲಿ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0j45nzey49jz1k23s4bqknw,imgname-arasikere-eid-milad-1787314755566.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ:&lt;/strong&gt; ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್&zwnj; ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು. ಪಿಎಸ್&zwnj;ಐ ವಿಜಯ ಕೃಷ್ಣ ಮಾತನಾಡಿ, ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು. ಡಿಜೆಗೆ ಅವಕಾಶ ಇರುವುದಿಲ್ಲ. ಸಾಂಪ್ರದಾಯಿಕ ವಾದ್ಯಗಳನ್ನು ಬಳಸಬೇಕು ಎಂದು ತಿಳಿಸಿದರು.&lt;/p&gt;&lt;p&gt;ಅರಸೀಕೆರೆ ಪೊಲೀಸ್ ಠಾಣೆ ಜನಸ್ನೇಹಿ ಪೊಲೀಸ್ ಠಾಣೆಯಾಗಿದೆ. ಈದ್ ಮಿಲಾದ್ ಹಬ್ಬವನ್ನು ಎಲ್ಲ ಗ್ರಾಮಸ್ಥರು ಯಾವುದೇ ಅ ಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿ ಎಂದು ಹೇಳಿದರು. ಅರಸೀಕೆರೆ ಜಾಮಿಯಾ ಮಸೀದಿ ಅಧ್ಯಕ್ಷ ಹಬೀಬ್ ಸಾಬ್, ಕಾರ್ಯದರ್ಶಿ ಖಾಜ ಸಾಹೇಬ್, ಸಲಾಂ ಸಾಹೇಬ್, ಕೆ. ಮಹಾಂತೇಶ್, ಅಬ್ದುಲ್ ಸಾಹೇಬ್, ರಹಮತುಲ್ಲಾ ಸಾಹೇಬ್, ಫಯಾಜ್, ರಫೀಕ್ ಸಾಹೇಬ್, ಪೊಲೀಸ್ ಇಲಾಖೆಯ ಸಿಬ್ಬಂದಿ ಎಎಸ್&zwnj;ಐ ರೇಣುಕಮ್ಮ, ಮತ್ತಿಹಳ್ಳಿ ಕೊಟ್ರೇಶ್, ರವಿನಾಯ್ಕ್ ಹಾಗೂ ಉಚ್ಚಂಗಿದುರ್ಗ, ಅರಸೀಕೆರೆ, ಮಾದಿಹಳ್ಳಿ, ಹನುಮನಹಳ್ಳಿ ಗ್ರಾಮದ ಮುಸ್ಲಿಂ ಹಾಗೂ ಇತರ ಸಮಾಜದ ಮುಖಂಡರು ಶಾಂತಿಸಭೆಯಲ್ಲಿ ಪಾಲ್ಗೊಂಡಿದ್ದರು.&lt;/p&gt;&lt;h2&gt;&lt;strong&gt;ಹುಬ್ಬಳ್ಳಿ-ಧಾರವಾಡ: ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬೇಡ&lt;/strong&gt;&lt;/h2&gt;&lt;p&gt;ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಆ. 26ರಂದು ನಡೆಯುವ ಈದ್&zwnj; ಮಿಲಾದ್&zwnj; ಹಬ್ಬದ ಅಂಗವಾಗಿ ನಡೆಯುವ ಸಾಮೂಹಿಕ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆ ನಿಷೇಧಿಸಬೇಕೆಂದು ಹು-ಧಾ ಅಂಜುಮನ್ ಸಂಸ್ಥೆಗಳ ವತಿಯಿಂದ ಮಂಗಳವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.&lt;/p&gt;&lt;p&gt;ಈದ್ ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಜು. 31ರಂದು ಸಭೆ ನಡೆಸಿ ಇಂತಹ ನಿರ್ಣಯ ಕೈಗೊಳ್ಳಲಾಗಿದೆ. ಮೆರವಣಿಗೆಯಲ್ಲಿ ಡಿಜೆ ಹಚ್ಚುವುದರಿಂದ ರೋಗಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಸೌಂಡ್&zwnj; ಸಿಸ್ಟಮ್&zwnj; ಬಳಕೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.ಈ ವೇಳೆ ಅಂಜುಮನ್-ಏ-ಇಸ್ಲಾಂ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಉಪಾಧ್ಯಕ್ಷ ಬಾಷಾಸಾಬ್ ಅತ್ತಾರ, ಗೌರವ ಕಾರ್ಯದರ್ಶಿ ಬಶೀರ್ ಅಹ್ಮದ್ ಹಳ್ಳೂರ, ಸಹ ಕಾರ್ಯದರ್ಶಿ ರಫೀಕ್ ಬಂಕಾಪುರ, ಶಿಕ್ಷಣ ಮಂಡಳಿ ಸದಸ್ಯರಾದ ಇಲಿಯಾಸ್ ಮನಿಯಾರ್, ನವೀದ್ ಮುಲ್ಲಾ, ಬಶೀರ್ ಗುಡಮಾಲ್, ವಸೀಂ ಮೊಮಿನ್, ಪಾಲಿಕೆ ಸದಸ್ಯರಾದ ಇಕ್ಬಾಲ್ ನವಲೂರ, ಸಾದಿಕ್ ಯಕ್ಕುಂಡಿ, ಮುದಸ್ಸರ್ ಖೋಜೆ, ಧಾರವಾಡ ಅಂಜುಮನ್ ಸಂಸ್ಥೆಯ ಬಶೀರ್ ಅಹ್ಮದ್ ಜಾಗಿರದಾರ, ಯಾಸೀನ್ ಹಾವೇರಪೇಟ, ರಫೀಕ್ ಶಿರಹಟ್ಟಿ, ಖೈರುದ್ದೀನ್ ಶೇಖ್, ಶಮಶುದ್ಧೀನ್ ಗಿಡದೂರ ಸೇರಿ ಹಲವರಿದ್ದರು.&lt;/p&gt;&lt;h3&gt;&lt;strong&gt;ಪಾವಗಡದಲ್ಲಿ ಈದ್&zwnj; ಮಿಲಾದ್&lt;/strong&gt;&lt;/h3&gt;&lt;p&gt;ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಮಿಲಾದ್-ಉನ್-ನಬಿ ಹಬ್ಬವನ್ನು ಈ ವರ್ಷವೂ ಸಂಭ್ರಮ, ಶಿಸ್ತು ಮತ್ತು ಸೌಹಾರ್ದತೆಯಿಂದ ಆಚರಿಸಲು ಪಾವಗಡ ಜಾಮಿಯಾ ಮಸೀದಿ ಕಮಿಟಿ ಹಾಗೂ ನೌಜವಾನ್ ಕಮೀಟಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದರು.&lt;/p&gt;&lt;p&gt;ಭಾನುವಾರ ಜಾಮಿಯಾ ಮಸೀದಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಎಂ.ಎ.ಜಿ. ಮಹಮ್ಮದ್ ಇಮ್ರಾನ್, ಆಗಸ್ಟ್ 26 ರಂದು ಬೆಳಿಗ್ಗೆ 9.30ಕ್ಕೆ ಜಾಮಿಯಾ ಮಸೀದಿಯಲ್ಲಿ ಎಲ್ಲರೂ ಸೇರಲಿದ್ದು, ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆ ಪೆನುಕೊಂಡ ಊರು ಬಾಗಿಲು, ರೊಪ್ಪ ಗ್ರಾಮದ ಮೂಲಕ ಸಾಗಿ, ಶನಿಮಹಾತ್ಮ ಸರ್ಕಲ್ ಹಾಗೂ ಸಿರಾ ರಸ್ತೆ ಮಾರ್ಗವಾಗಿ ಸಾಗಲಿದೆ. ಆ.15ರಿಂದ ಪ್ರವಾದಿ ಮಹಮ್ಮದ್ ಪೈಗಂಬರ್ಅ ವರ ಜೀವನ ಚರಿತ್ರ ಪ್ರವಚನ ಅರಂಭವಾಗಲಿದ್ದು ಜಾಮಿಯಾ ಮಸೀದಿಯಲ್ಲಿ 12 ದಿನಗಳು ನಡೆಯಲಿದ್ದು , ಆ. 27 ಸಂಜೆ 7 ಗಂಟೆಗೆ ಸಮಾರೋಪ ನಡೆಯಲಿದೆ. ಪ್ರವಾದಿ ಪೈಗಂಬರ್ ಅವರು ಬೋಧಿಸಿದ ಪ್ರೀತಿ, ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮುದಾಯದ ಮುಖಂಡರು ಕರೆ ನೀಡಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagara-district-peace-meeting-on-the-occasion-of-eid-milad-at-araseekere-police-station-of-harpanahalli-taluk-mrq/articleshow-d74s5dp"/>
        </item>
        <item>
            <title><![CDATA[ಶಿವಮೊಗ್ಗ ಜಿಲ್ಲೆಗೆ ಒಲಿದ ರಾಷ್ಟ್ರೀಯ ಹೆಮ್ಮೆ: ಹೊಸನಗರದ ಸರ್ಕಾರಿ ಶಾಲಾ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ]]></title>
            <link>https://kannada.asianetnews.com/karnataka-districts/national-teachers-award-2026-ratnakumari-shivamogga-selected-san/articleshow-u7xdrvt</link>
            <guid isPermaLink="true">https://kannada.asianetnews.com/karnataka-districts/national-teachers-award-2026-ratnakumari-shivamogga-selected-san/articleshow-u7xdrvt</guid>
            <pubDate>Sat, 22 Aug 2026 10:07:07 +0530</pubDate>
            <description><![CDATA[&lt;p&gt;ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರು 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2026'ಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0kvqn5ks49zv60e9te8dnrz,imgname-teacher-ratnakumari-1787373016243.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ / ನವದೆಹಲಿ (ಆ.22): &lt;/strong&gt;ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2026' (National Teachers Award-2026) ಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದ ದೇಶದ ಒಟ್ಟು 48 ಅತ್ಯುತ್ತಮ ಶಿಕ್ಷಕರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರೂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.&lt;/p&gt;&lt;p&gt;ಗ್ರಾಮೀಣ ಭಾಗದ ಶಾಲೆಯಲ್ಲಿ ಮೂಲಸೌಕರ್ಯ ವೃದ್ಧಿ ಹಾಗೂ ಮಕ್ಕಳಲ್ಲಿ ಅಕ್ಷರ ದೀವಿಗೆ ಬೆಳಗುವ ಮೂಲಕ ಮಾದರಿ ಶೈಕ್ಷಣಿಕ ಸೇವೆ ನೀಡಿದ ರತ್ನಕುಮಾರಿ ಅವರ ಈ ಸಾಧನೆ ಇಡೀ ರಾಜ್ಯ ಹಾಗೂ ಶಿಕ್ಷಕ ಸಮುದಾಯವೇ ಹೆಮ್ಮೆ ಪಡುವಂತೆ ಮಾಡಿದೆ.&lt;/p&gt;&lt;h2&gt;&lt;strong&gt;ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ&lt;/strong&gt;&lt;/h2&gt;&lt;p&gt;ಸೆಪ್ಟೆಂಬರ್ 5ರ 'ಶಿಕ್ಷಕರ ದಿನಾಚರಣೆ'ಯಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗುವ ಅದ್ಧೂರಿ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ'ಯನ್ನು ರತ್ನಕುಮಾರಿ ಅವರಿಗೆ ಪ್ರದಾನ ಮಾಡಿ ಗೌರವಿಸಲಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿನಂದನೆ&lt;/strong&gt;&lt;/h2&gt;&lt;p&gt;ಶಿವಮೊಗ್ಗ ಜಿಲ್ಲೆಯ ಹೊಸನಗರದ ಈ ಗ್ರಾಮೀಣ ಶಿಕ್ಷಕಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. &quot;ನಮ್ಮ ಇಲಾಖೆ, ರಾಜ್ಯ ಹಾಗೂ ಶಿವಮೊಗ್ಗ ಜಿಲ್ಲೆ ಹೆಮ್ಮೆ ಪಡುವಂತೆ ಮಾಡಿದ ಶ್ರೀಮತಿ ರತ್ನಕುಮಾರಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ನೀವು ಸಲ್ಲಿಸುತ್ತಿರುವ ಸೇವೆ ಇಡೀ ರಾಜ್ಯದ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದೆ. ನಿಮ್ಮ ಈ ಪವಿತ್ರವಾದ ಶೈಕ್ಷಣಿಕ ಕಾಯಕ ಹೀಗೆಯೇ ಮುಂದುವರಿಯಲಿ,&quot; ಎಂದು ಸಚಿವರು ಶುಭ ಹಾರೈಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/national-teachers-award-2026-ratnakumari-shivamogga-selected-san/articleshow-u7xdrvt"/>
        </item>
        <item>
            <title><![CDATA[ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರ ಆರಂಭ, ಕಬಕ ಪುತ್ತೂರು ನಿಲುಗಡೆಗೆ ಡಿಜಿಟಲ್ ಸಮರ]]></title>
            <link>https://kannada.asianetnews.com/karnataka-districts/demand-for-kabaka-puttur-stoppage-on-bengaluru-mangaluru-vande-bharat-express-triggers-online-campaign-gdp/articleshow-y3mq854</link>
            <guid isPermaLink="true">https://kannada.asianetnews.com/karnataka-districts/demand-for-kabaka-puttur-stoppage-on-bengaluru-mangaluru-vande-bharat-express-triggers-online-campaign-gdp/articleshow-y3mq854</guid>
            <pubDate>Sat, 22 Aug 2026 09:56:44 +0530</pubDate>
            <description><![CDATA[ಬೆಂಗಳೂರು-ಮಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿಗೆ ಕಬಕ-ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಒತ್ತಾಯಿಸಿ ರೈಲು ಬಳಕೆದಾರರ ಸಮಿತಿಗಳು ಆನ್&zwnj;ಲೈನ್ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿವೆ. ಪ್ರಸ್ತಾವಿತ ತಾತ್ಕಾಲಿಕ ನಿಲುಗಡೆ ಪಟ್ಟಿಯಲ್ಲಿ ಪುತ್ತೂರನ್ನು ಸೇರಿಸದಿರುವುದು ಈ ಅಭಿಯಾನಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0kvadr3w9r9dqew21heaanv,imgname-kabaka-puttur-1787372582659.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: ವಂದೇ ಭಾರತ್ ರೇಕ್ (ರೈಲು ಬೋಗಿಗಳು) ಮಂಗಳೂರಿಗೆ ಯಶಸ್ವಿಯಾಗಿ ತಲುಪಿದ ನಂತರ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್&zwnj;ಪ್ರೆಸ್ ಶೀಘ್ರದಲ್ಲೇ ಸಂಚಾರ ಆರಂಭಿಸುವ ನಿರೀಕ್ಷೆಯಿದೆ. ಆದರೆ ಪ್ರಸ್ತುತ ಪ್ರಸ್ತಾಪಿಸಲಾದ ನಿಲುಗಡೆ ತಾತ್ಕಾಲಿಕ ಪಟ್ಟಿಯಲ್ಲಿ ಕಬಕ- ಪುತ್ತೂರು ರೈಲು ನಿಲ್ದಾಣವನ್ನು ಸೇರಿಸಲಾಗಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಜಾಲತಾಣದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಶುಕ್ರವಾರ ಮಧ್ಯಾಹ್ನ 1.30 ರಿಂದ ಆರಂಭಿಸಿ ಆ. 24ರ ರಾತ್ರಿ 12 ಗಂಟೆ ವರೆಗೆ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ.&lt;/p&gt;&lt;p&gt;&lsquo;ಪುತ್ತೂರು, ಸುಳ್ಯ, ಉಪ್ಪಿನಂಗಡಿ, ವಿಟ್ಲ, ಬೆಳ್ಳಾರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ನಿತ್ಯ ರೈಲು ಪ್ರಯಾಣಿಕರ ಹಿತದೃಷ್ಟಿಯಿಂದ ಕಬಕ- ಪುತ್ತೂರಿನಲ್ಲಿ ಪ್ರಸ್ತಾವಿತ ವಂದೇ ಭಾರತ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿಗೆ ನಿಲುಗಡೆ ನೀಡಬೇಕು ಎಂದು ಒತ್ತಾಯಿಸಿ ನಾವು ಸಹಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ&rsquo; ಎಂದು https://www.change.org/KabakaPutturVandeBharat ಹ್ಯಾಷ್&zwnj;ಟ್ಯಾಗ್&zwnj; ಮೂಲಕ ವಿನಂತಿಸಲಾಗಿದೆ.&lt;/p&gt;&lt;h2&gt;ಅರಸೀಕೆರೆಯಲ್ಲಿ ವಂದೇ ಭಾರತ್ ನಿಲುಗಡೆಗೆ ಆಗ್ರಹ&lt;/h2&gt;&lt;p&gt;ಅರಸೀಕೆರೆ: ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರಕ್ಕೆ ರೈಲ್ವೆ ಸಂಪರ್ಕದ ಮತ್ತಷ್ಟು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಂದೇ ಭಾರತ್ ರೈಲಿಗೆ ನಗರದ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಹಾಗೂ ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರುದ್ರಾಕ್ಷ ಫೌಂಡೇಶನ್ ಆಶ್ರಯದ ಸಮರ್ಪಣಾ ಮತ್ತು ಸಂಕಲ್ಪ ಸಂಸ್ಥೆಗಳ ಪದಾಧಿಕಾರಿಗಳು ರೈಲು ನಿಲ್ದಾಣದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.&lt;/p&gt;&lt;p&gt;ರುದ್ರಾಕ್ಷ ಫೌಂಡೇಶನ್ ಅಧ್ಯಕ್ಷ ಜಯಪ್ರಕಾಶ್ ಗುರೂಜಿ ಮಾತನಾಡಿ, ಅರಸೀಕೆರೆಯಿಂದ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ವಿವಿಧೆಡೆಗೆ ಪ್ರಯಾಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಂದೇ ಭಾರತ್ ರೈಲಿಗೆ ಇಲ್ಲಿ ನಿಲುಗಡೆ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ಹೇಳಿದರು.&lt;/p&gt;&lt;p&gt;ನಿಲುಗಡೆ ಕಲ್ಪಿಸುವ ಕುರಿತು ರೈಲ್ವೆ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ನಿಲುಗಡೆ ದೊರೆತಲ್ಲಿ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವಿವಿಧ ಕಾರ್ಯಗಳಿಗಾಗಿ ರಾಜ್ಯದ ಬೇರೆ ಬೇರೆ ನಗರಗಳಿಗೆ ತೆರಳುವ ಪ್ರಯಾಣಿಕರಿಗೆ ಸಮಯ ಉಳಿತಾಯವಾಗಲಿದೆ ಎಂದು ಮನವಿ ಮಾಡಿದರು.&lt;/p&gt;&lt;p&gt;ನಗರದ ರೈಲು ನಿಲ್ದಾಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲಕ್ಕೆ ಆದ್ಯತೆ ನೀಡಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಈ ಕುರಿತು ರೈಲ್ವೆ ಸ್ಟೇಷನ್ ಮ್ಯಾನೇಜರ್ ಮೂಲಕ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಸಮರ್ಪಣಾ ಸಂಸ್ಥೆ ಅಧ್ಯಕ್ಷೆ ವನಜಾಕ್ಷಿ ವಿಜಯಕುಮಾರ್, ಸಂಕಲ್ಪ ಸಂಸ್ಥೆ ಸಂಚಾಲಕಿ ಸರೋಜಮ್ಮ, ಶಾಂತಮ್ಮ ರಾಮಚಂದ್ರು, ರಾಜಣ್ಣ ಪುಟ್ಟಸ್ವಾಮಿ, ಆಶಾ, ಶಾಂತಮ್ಮ, ಮೀನಾಕ್ಷಮ್ಮ ಸೇರಿದಂತೆ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/demand-for-kabaka-puttur-stoppage-on-bengaluru-mangaluru-vande-bharat-express-triggers-online-campaign-gdp/articleshow-y3mq854"/>
        </item>
    </channel>
</rss>
