<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 31 Jul 2026 20:39:47 +0530</lastBuildDate>
        <atom:link href="https://kannada.asianetnews.com/rss/karnataka-districts" rel="self" type="application/rss+xml"/>
        <item>
            <title><![CDATA[ಕೊಡಗಿನ ಅಭಿವೃದ್ಧಿಗೆ ಸಚಿವ ಸ್ಥಾನ ಅಗತ್ಯ: ಶಾಸಕ ಮಂತರ್ ಗೌಡ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/kodagu-needs-a-minister-post-for-development-says-mla-mantar-gowda-gvd/articleshow-40t0th0</link>
            <guid isPermaLink="true">https://kannada.asianetnews.com/karnataka-districts/kodagu-needs-a-minister-post-for-development-says-mla-mantar-gowda-gvd/articleshow-40t0th0</guid>
            <pubDate>Fri, 31 Jul 2026 20:39:41 +0530</pubDate>
            <description><![CDATA[&lt;p&gt;ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದು, ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kywbdgdb6hef6qw1x94spnez,imgname-jbj-1785510412715.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/p&gt;&lt;p&gt;&lt;strong&gt;ಕೊಡಗು (ಜು.31): &lt;/strong&gt;ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದು, ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ ಆಕಾಂಕ್ಷಿಗಳ ಪಟ್ಟಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಈ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಬೇಡಿಕೆ ಇಟ್ಠಿದ್ದೇವೆ, ಕೊಡುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸವೂ ಇದೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ.&lt;/p&gt;&lt;p&gt;ಕೊಡಗಿನ ಭಾಗಕ್ಕೆ ಸಚಿವ ಸ್ಥಾನ ನೀಡಿಲ್ಲ. ರಂಜನ್ ಅವರು ಕೆಲವೇ ತಿಂಗಳ ಅವಧಿಗೆ ಸಚಿವರಾಗಿದ್ದರು. ಆದು ಬಿಟ್ಟರೆ ಮತ್ತೆ ಸಚಿವ ಸ್ಥಾನ ನೀಡಿಲ್ಲ. ಸಚಿವ ಸ್ಥಾನ ನೀಡದಿದ್ದರೆ ಕೊಡಗಿನ ಅಭಿವೃದ್ಧಿ ಬಗ್ಗೆ ಗಂಭೀರ ಚರ್ಚೆಯಾಗಲ್ಲ. ಈ ದೃಷ್ಟಿಯಿಂದ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ. ನಾನು ಬೇರು ಮಟ್ಟದಿಂದ ಪಕ್ಷದಲ್ಲಿ ಬೆಳೆದು ಬಂದವನು. ಯೂತ್ ಕಾಂಗ್ರೆಸ್, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಬೆಳೆದು ಬಂದವನು. ನಾನು ಪಕ್ಷಕ್ಕೆ ತ್ಯಾಗ ಮಾಡಿದ್ದೇನೆ, ಆ ವಿಚಾರದಲ್ಲಿ ಸಚಿವಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ.&lt;/p&gt;&lt;p&gt;ದೆಹಲಿಗೆ ಹೋಗಿ ಸಚಿವ ಸ್ಥಾನ ಕೇಳಿದ್ದೇನೆ, ಕೇಳುವುದರಲ್ಲಿ ತಪ್ಪಿಲ್ಲ, ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟಿದ್ದು. ಅನುದಾನವನ್ನು ನಾವು ಕೇಳುತ್ತಲೇ ಇರುತ್ತೇವೆ, ಕೇಳಿದ ಕೂಡಲೇ ಎಲ್ಲ ಅನುದಾನ ಕೊಡುವುದಿಲ್ಲ ಅಲ್ಲವೆ.? ಹಾಗೆಯೇ ಸಚಿವ ಸ್ಥಾನದಲ್ಲೂ ಕೂಡ ಕೊಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಜಿಲ್ಲೆಯಲ್ಲಿ ಯಾರಿಗೆ ಕೊಟ್ಟರೂ ಖುಷಿಯೇ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ.&lt;/p&gt;&lt;p&gt;ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸಿಡಬ್ಲ್ಯೂಆರ್ಸಿ ಹೇಳಿರುವುದಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯಿಸಿದ ಶಾಸಕ ಮಂತರ್ ಗೌಡ ಅವರು ಕರ್ನಾಟಕ ಅಥವಾ ತಮಿಳುನಾಡು ಸರ್ಕಾರ ಆಗಿರಬಹುದು, ಎರಡು ಕೂಡ ಸಿಡಬ್ಲ್ಯೂಆರ್ ಸಿ ನಿಯಮಕ್ಕೆ ಒಳಪಟ್ಟಿದ್ದೇವೆ. ಇಬ್ಬರು ಈ ನಿಯಮಗಳನ್ನು ಪಾಲಿಸಬೇಕು ಸರಿ. ಆದರೆ ಬರಗಾಲದಲ್ಲಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹೋಗಲು ಅವಕಾಶವಿದೆ. ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.&lt;/p&gt;&lt;h2&gt;&lt;strong&gt;ಉತ್ತಮ ಮಳೆ&lt;/strong&gt;&lt;/h2&gt;&lt;p&gt;ಅದನ್ನು ನಾವು ಮಾಡಬೇಕಾಗಿದೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಅಭಿಪ್ರಾಯಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಮಡಿಕೇರಿ, ವಿರಾಜಪೇಟೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಹಾರಂಗಿ ಜಲಾಶಯ ತುಂಬಿದೆ. ಒಳಹರಿವು, ಹೊರಹರಿವು ಎರಡನ್ನು ಸರಿದೂಗಿಸಿಕೊಂಡು ನದಿಗೆ ನೀರು ಹರಿಸಲಾಗುತ್ತಿದೆ. ಆದರೆ ಮಡಿಕೇರಿ ಭಾಗದಲ್ಲಿ ಮಳೆ ಜಾಸ್ತಿಯಾಗಿ ಒಂದಿಷ್ಟು ಸಮಸ್ಯೆಯೂ ಆಗುತ್ತಿದೆ.&lt;/p&gt;&lt;p&gt;ತಮಿಳುನಾಡಿಗೆ ನೀರು ಕೊಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಆದರೆ ಅದಕ್ಕೂ ಮೊದಲು ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಬರವಿದೆ. ಇಲ್ಲಿನ ಕೆರೆ ಕಟ್ಟೆಗಳ ತುಂಬಿಸುವ ಕೆಲಸವಾಗಲಿ. ಮೊದಲು ನಾಲೆಗಳ ಮೂಲಕ ನೀರು ಹರಿಸಿ ಕೆರೆಕಟ್ಟೆಗಳ ತುಂಬಿಸಲಿ. ನಂತರ ತಮಿಳುನಾಡಿಗೆ ನೀರು ಬಿಡುವ ವಿಚಾರ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡುವುದನ್ನು ಶಾಸಕ ಮಂತರ್ ಗೌಡ ವಿರೋಧಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kodagu-needs-a-minister-post-for-development-says-mla-mantar-gowda-gvd/articleshow-40t0th0"/>
        </item>
        <item>
            <title><![CDATA[ತೋಟದ ಕೆಲಸ, ಪ್ಲಂಬಿಂಗ್‌ ಕೆಲಸಕ್ಕೆ ಜನ ಸಿಕ್ತಿಲ್ವಾ? ಅದಕ್ಕೂ ಬಂದಿದೆ ಹೊಸ ಅಪ್ಲಿಕೇಶನ್‌ The Mestri]]></title>
            <link>https://kannada.asianetnews.com/karnataka-districts/the-mestri-app-launched-for-local-services-and-labourers-san/articleshow-8o28k73</link>
            <guid isPermaLink="true">https://kannada.asianetnews.com/karnataka-districts/the-mestri-app-launched-for-local-services-and-labourers-san/articleshow-8o28k73</guid>
            <pubDate>Fri, 31 Jul 2026 20:21:34 +0530</pubDate>
            <description><![CDATA[ಬನವಾಸಿ ಸಮೀಪದ ಕೃಷಿಕ ಹಾಗೂ ಐಟಿ ಎಂಜಿನಿಯರ್ ಗೌತಮ್ ಬೆಂಗಳೆ ಅವರು 'ದ ಮೇಸ್ತ್ರಿ' ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್, ಕೌಶಲ್ಯಪೂರಿತ ಕೆಲಸಗಾರರನ್ನು ಮತ್ತು ಸೇವೆ ಬಯಸುವ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kywaexfkmj4scsevx08wcm8v,imgname-the-mestri-app-uttara-kannada-1785509410291.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.31): &lt;/strong&gt;ದಿನನಿತ್ಯದ ನಾನಾ ಕೆಲಸಗಳಿಗೆ ನಂಬಿಕಸ್ಥ ಕೆಲಸಗಾರರು ಸಿಗದೆ ಪರದಾಡುತ್ತಿರುವ ಸಾರ್ವಜನಿಕರಿಗೆ ಹಾಗೂ ತಮ್ಮ ಕೌಶಲ್ಯಕ್ಕೆ ತಕ್ಕ ಕೆಲಸ ಹುಡುಕುತ್ತಿರುವ ಕಾರ್ಮಿಕರಿಗೆ ನೆರವಾಗಲು ಬನವಾಸಿ ಸಮೀಪದ ಕೃಷಿಕ ಹಾಗೂ ಐಟಿ ಎಂಜಿನಿಯರ್ ಗೌತಮ್ ಬೆಂಗಳೆ ಎಂಬುವವರು 'ದ ಮೇಸ್ತ್ರಿ' (The Mestri) ಎಂಬ ನೂತನ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿದ್ದುಕೊಂಡೇ ಅತ್ಯುತ್ತಮ ಮಾದರಿಯ ಐಟಿ ಕಂಪನಿ ನಡೆಸುತ್ತಿರುವ ಗೌತಮ್ ಬೆಂಗಳೆ ಅವರ ಈ ಆವಿಷ್ಕಾರವು, ಸಮಾಜದ ಪ್ರತಿಯೊಬ್ಬರಿಗೂ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಗತ್ಯವಿರುವ ಸೇವೆಗಳನ್ನು ಬೆರಳ ತುದಿಯಲ್ಲೇ ಒದಗಿಸುವ ಉದ್ದೇಶವನ್ನು ಹೊಂದಿದೆ.&lt;/p&gt;&lt;h2&gt;&lt;strong&gt;'ದ ಮೇಸ್ತ್ರಿ' ಆ್ಯಪ್ ಹೇಗೆ ಕೆಲಸ ಮಾಡುತ್ತದೆ?&lt;/strong&gt;&lt;/h2&gt;&lt;p&gt;ಈ ಅಪ್ಲಿಕೇಶನ್&zwnj;ನಲ್ಲಿ ವಿವಿಧ ರಂಗಗಳ ಕೌಶಲ್ಯಪೂರಿತ ಕೆಲಸಗಾರರು ಹಾಗೂ ಸೇವಾ ಪೂರೈಕೆದಾರರು ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು. ಮುಖ್ಯವಾಗಿ ಈ ಅಪ್ಲಿಕೇಶನ್&zwnj; ಮೂಲಕ ಎಲೆಕ್ಟ್ರಿಷಿಯನ್,ಪ್ಲಂಬಿಂಗ್ ಕೆಲಸಗಾರರು, ಪೇಂಟರ್&zwnj;, ಅಡುಗೆ ಕೆಲಸದವರು, ಬಾಡಿಗೆ ವಾಹನ ಮಾಲೀಕರು ಮತ್ತು ಚಾಲಕರು, ಮಣ್ಣು ಹೊಯ್ದುಕೊಡುವವರು, ತೋಟದ ಕೆಲಸ ಹಾಗೂ ಮದ್ದು ಸಿಂಪಡಿಸುವ ಕಾರ್ಮಿಕರು, ಜೆಸಿಬಿ (JCB) ಹಾಗೂ ಇತರ ಯಂತ್ರೋಪಕರಣ ಪೂರೈಕೆದಾರರು ಸೇರಿದಂತೆ ಹಲವು ಕ್ಷೇತ್ರದ ಕೆಲಸಗಾರರು ಇದರಲ್ಲಿ ಸಿಗುತ್ತಾರೆ.&lt;/p&gt;&lt;p&gt;ಸಾಮಾನ್ಯ ಸಾರ್ವಜನಿಕರು ಆ್ಯಪ್ ಡೌನ್&zwnj;ಲೋಡ್ ಮಾಡಿಕೊಂಡು, ತಮ್ಮ ಸ್ಥಳಕ್ಕೆ ಹತ್ತಿರದಲ್ಲಿರುವ ಅಥವಾ ಕೆಲಸದ ದರದ ಆಧಾರದ ಮೇಲೆ ತಮಗೆ ಇಷ್ಟವಾದ ಕೆಲಸಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದು ಕೆಲಸ ಹುಡುಕುವವರಿಗೂ ಮತ್ತು ಕೆಲಸದ ಅವಶ್ಯಕತೆ ಇರುವವರಿಗೂ ಅತ್ಯುತ್ತಮ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.&lt;/p&gt;&lt;h2&gt;&lt;strong&gt;ಉತ್ತರ ಕನ್ನಡದಿಂದ ರಾಜ್ಯಾದ್ಯಂತ ವಿಸ್ತರಣೆ&lt;/strong&gt;&lt;/h2&gt;&lt;p&gt;ಈಗಾಗಲೇ ಈ ಅಪ್ಲಿಕೇಶನ್&zwnj;ನಲ್ಲಿ 2,500ಕ್ಕೂ (ಎರಡೂವರೆ ಸಾವಿರ) ಹೆಚ್ಚು ವಿವಿಧ ಕೌಶಲ್ಯ ಹೊಂದಿರುವ ಕೆಲಸಗಾರರು ನೋಂದಾಯಿಸಿಕೊಂಡಿದ್ದು, ಪ್ರತಿದಿನ ಹೊಸ ನೋಂದಣಿಗಳು ನಡೆಯುತ್ತಿವೆ. ಸದ್ಯಕ್ಕೆ ಪ್ರಾಥಮಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇದನ್ನು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ.&lt;/p&gt;&lt;p&gt;ಪ್ಲೇ ಸ್ಟೋರ್&zwnj;ನಲ್ಲಿ (Google Play Store) &quot;The mestri&quot; ಎಂದು ಟೈಪ್ ಮಾಡಿ ಸರ್ಚ್ ಮಾಡುವ ಮೂಲಕ ಅಥವಾ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಈ ಅಪ್ಲಿಕೇಶನ್ ಉಚಿತವಾಗಿ ಡೌನ್&zwnj;ಲೋಡ್ ಮಾಡಿಕೊಳ್ಳಬಹುದು.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/the-mestri-app-launched-for-local-services-and-labourers-san/articleshow-8o28k73"/>
        </item>
        <item>
            <title><![CDATA[Vinay Kulkarni: ಸಂಪುಟ ವಿಸ್ತರಣೆ ಸಮಯದಲ್ಲೇ ವಿನಯ್‌ಗೆ ಜಾಮೀನು;  ಸೇರ್ತಾರಾ ಡಿಕೆ ಕ್ಯಾಬಿನೆಟ್‌? ಈಗ ಸುಪ್ರೀಂ ನಡೆ ಮೇಲೆ ಎಲ್ಲರ ಚಿತ್ತ!]]></title>
            <link>https://kannada.asianetnews.com/cricket-sports/vinay-bail-cabinet-expansion-dk-cabinet-supreme-court-bmk/articleshow-bftflg2</link>
            <guid isPermaLink="true">https://kannada.asianetnews.com/cricket-sports/vinay-bail-cabinet-expansion-dk-cabinet-supreme-court-bmk/articleshow-bftflg2</guid>
            <pubDate>Fri, 31 Jul 2026 17:03:57 +0530</pubDate>
            <description><![CDATA[ಯೋಗೀಶ ಗೌಡರ್ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್&zwnj;ನಿಂದ ಜಾಮೀನು ಮತ್ತು ಶಿಕ್ಷೆಗೆ ತಡೆ ಸಿಕ್ಕಿದೆ. ಇದರಿಂದಾಗಿ, ಅವರ ಸಚಿವ ಸಂಪುಟ ಸೇರ್ಪಡೆಯ ಚರ್ಚೆಗಳು ಗರಿಗೆದರಿದ್ದು, ಕಾಂಗ್ರೆಸ್ ವಲಯದಲ್ಲಿ ಹೊಸ ಲೆಕ್ಕಾಚಾರಗಳು ಶುರುವಾಗಿವೆ. ಆದರೆ, ಈ ತೀರ್ಪನ್ನು ಸುಪ್ರೀಂ ಕೋರ್ಟ್&zwnj;ನಲ್ಲಿ ಪ್ರಶ್ನಿಸುವ ಸಾಧ್ಯತೆ ಇರುವುದರಿಂದ, ಅವರ ರಾಜಕೀಯ ಭವಿಷ್ಯವು ಸರ್ವೋಚ್ಚ ನ್ಯಾಯಾಲಯದ ಮುಂದಿನ ನಡೆಯನ್ನು ಅವಲಂಬಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvz64w393xf8tbcc9vxpqh7,imgname-vinay-kulkarni-supreme-court-1785497588611.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ರಾಜಕಾರಣದಲ್ಲಿ ಈಗ ಹೈಡ್ರಾಮಾವೊಂದು ಶುರುವಾಗಿದೆ. ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್&zwnj;ನಿಂದ ಸಿಕ್ಕಿರುವ ಬಿಗ್ ರಿಲೀಫ್, ಕೇವಲ ಅವರ ವೈಯಕ್ತಿಕ ಜೀವನಕ್ಕಷ್ಟೇ ಅಲ್ಲದೆ, ಕಾಂಗ್ರೆಸ್ ಅಂಗಳದ ಸಚಿವ ಸಂಪುಟ ವಿಸ್ತರಣೆಯ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡುವಂತಿದೆ. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡರ್ ಕೊಲೆ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್&zwnj;ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವಿನಯ್ ಕುಲಕರ್ಣಿಗೆ, ಇವತ್ತು ಹೈಕೋರ್ಟ್ ಮಂಜೂರು ಮಾಡಿರುವ ಜಾಮೀನು ಮತ್ತು ಶಿಕ್ಷೆಯ ಮೇಲಿನ ತಡೆ (Stay) ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.&lt;/p&gt;&lt;h2&gt;&lt;strong&gt;ಜೈಲಿನಲ್ಲಿದ್ದೇ ಗೆದ್ದಿದ್ದ ನಾಯಕ!&lt;/strong&gt;&lt;/h2&gt;&lt;p&gt;ಉತ್ತರ ಕರ್ನಾಟಕ ಭಾಗದಲ್ಲಿ ವಿನಯ್ ಕುಲಕರ್ಣಿ ಎಂದರೆ ಪ್ರಬಲ ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ. 2023ರ ವಿಧಾನಸಭಾ ಚುನಾವಣೆಯ ವೇಳೆಗೆ ಅವರು ಜೈಲಿನಲ್ಲಿದ್ದರು, ಜೊತೆಗೆ ಅವರಿಗೆ ಧಾರವಾಡ ಜಿಲ್ಲೆಯನ್ನು ಪ್ರವೇಶಿಸದಂತೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಮೈದಾನಕ್ಕೆ ಇಳಿದು ಪ್ರಚಾರ ಮಾಡಲು ಸಾಧ್ಯವಾಗದಿದ್ದರೂ, ಜೈಲಿನಲ್ಲಿದ್ದುಕೊಂಡೇ ಅವರು ಭರ್ಜರಿ ಗೆಲುವು ಸಾಧಿಸಿ ತಮ್ಮ ಜನಪ್ರಿಯತೆ ಮತ್ತು ರಾಜಕೀಯ ಶಕ್ತಿ ಸಾಬೀತುಪಡಿಸಿದ್ದರು. ಆದರೆ ಜನಪ್ರತಿನಿಧಿ ಇಂತ ಕೇಸ್&zwnj;ನಲ್ಲಿ ಭಾಗಿಯಾಗಿದ್ದಾರಾ? ಎಂದು ಜನರ ಬಾಯಿಗೂ ಆಹಾರವಾಗಿದ್ದರು.&amp;nbsp;&lt;/p&gt;&lt;h3&gt;&lt;strong&gt;ನಾನು ಆಕಾಂಕ್ಷಿ!&lt;/strong&gt;&lt;/h3&gt;&lt;p&gt;ಸಂಪುಟ ರಚನೆಯಾದ ದಿನದಿಂದಲೂ &quot;ನಾನು ಸಚಿವ ಸ್ಥಾನದ ಆಕಾಂಕ್ಷಿ&quot; ಎಂದು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡವರು. ಆದರೆ ಕೋರ್ಟ್&zwnj;ನಲ್ಲಿದ್ದ ಶಿಕ್ಷೆಯ ತಲಬುಡವಿಲ್ಲದ ತೂಗುಕತ್ತಿ ಅವರ ಕ್ಯಾಬಿನೆಟ್ ಎಂಟ್ರಿಗೆ ಅಡ್ಡವಾಗಿತ್ತು. ಈಗ ಹೈಕೋರ್ಟ್ ಆದೇಶದ ಬೆನ್ನಲ್ಲೇ, &quot;ಡಿಕೆ ಕ್ಯಾಬಿನೆಟ್&quot; ಅಥವಾ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸ್ಥಾನ ಸಿಗುವುದು ಖಚಿತ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಸಮೀಕರಣವನ್ನು ಸರಿದೂಗಿಸಲು ಹೈಕಮಾಂಡ್&zwnj;ಗೂ ವಿನಯ್ ಕುಲಕರ್ಣಿ ಸೇರ್ಪಡೆ ಅನಿವಾರ್ಯವೆನಿಸಬಹುದು.&lt;/p&gt;&lt;h3&gt;&lt;strong&gt;ಎದುರಾಳಿಗಳು ಸುಪ್ರೀಂಗೆ ಹೋದರೆ ಕಥೆ ಏನು?&lt;/strong&gt;&lt;/h3&gt;&lt;p&gt;ಆದರೆ, ಈ ಖುಷಿ ಮತ್ತು ಸಚಿವ ಸ್ಥಾನದ ಲೆಕ್ಕಾಚಾರಗಳು ಅಂದುಕೊಂಡಷ್ಟು ಸುಲಭವಾಗಿಲ್ಲ. ವಿನಯ್ ಕುಲಕರ್ಣಿ ಪಡೆದಿರುವ ಈ ಮಧ್ಯಂತರ ರಿಲೀಫ್ ಮೇಲ್ಮನವಿ ಹಂತದಲ್ಲಿದೆ. ಪ್ರಕರಣದ ದೂರುದಾರರು (ಯೋಗೀಶ ಗೌಡರ್ ಕುಟುಂಬ) ಅಥವಾ ತನಿಖಾ ಸಂಸ್ಥೆಯಾದ ಸಿಬಿಐ, ಹೈಕೋರ್ಟ್&zwnj; ನೀಡಿದ ಜಾಮೀನು ಮತ್ತು ಶಿಕ್ಷೆಯ ತಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್&zwnj;ಗೆ ಹೋಗುವುದು ಬಹುತೇಕ ಖಚಿತ. ಒಂದು ವೇಳೆ ಸುಪ್ರೀಂ ಕೋರ್ಟ್&zwnj;ನಲ್ಲಿ ಹೈಕೋರ್ಟ್ ನೀಡಿದ ತಡೆಗೆ ಸವಾಲು ಎದುರಾಗಿ, ಅಲ್ಲಿ ಆದೇಶ ರಿವರ್ಸ್ ಆದರೆ ಅಥವಾ ಜಾಮೀನು ರದ್ದಾದರೆ ರಾಜಕೀಯವಾಗಿ ಭಾರಿ ಹಿನ್ನಡೆಯಾಗಲಿದೆ.&lt;/p&gt;&lt;h3&gt;&lt;strong&gt;ಎದುರಾಗುವ ಸವಾಲೇನು?&lt;/strong&gt;&lt;/h3&gt;&lt;p&gt;ಒಂದು ವೇಳೆ ಅವರನ್ನು ಆತುರವಾಗಿ ಸಂಪುಟಕ್ಕೆ ಸೇರಿಸಿಕೊಂಡು, ಆನಂತರ ಸುಪ್ರೀಂ ಕೋರ್ಟ್&zwnj;ನಿಂದ ಹಿನ್ನಡೆಯಾದರೆ ಸರ್ಕಾರಕ್ಕೆ ಭಾರೀ ಮುಜುಗರ ಉಂಟಾಗಲಿದೆ. ಜನಪ್ರತಿನಿಧಿ ಕಾಯ್ದೆಯಡಿ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ ಶಾಸಕತ್ವ ರದ್ದಾಗುತ್ತದೆ. ಹೈಕೋರ್ಟ್ ಶಿಕ್ಷೆಗೆ ತಡೆ ನೀಡಿದೆಯಾದರೂ, ಸುಪ್ರೀಂ ಕೋರ್ಟ್ ಈ ತಡೆಯನ್ನು ತೆರವುಗೊಳಿಸಿದರೆ ಶಾಸಕತ್ವದ ಮೇಲೆಯೂ ಕಪ್ಪುಚುಕ್ಕೆ ಬೀಳುವ ಭೀತಿಯಿದೆ.&lt;/p&gt;&lt;h3&gt;&lt;strong&gt;ಅಂತಿಮ ಘಟ್ಟದ ಕುತೂಹಲ!&lt;/strong&gt;&lt;/h3&gt;&lt;p&gt;ಒಂದೆಡೆ ಸಚಿವ ಸಂಪುಟ ಪುನಾರಚನೆಗೆ ಮುಹೂರ್ತ ಹತ್ತಿರವಾಗುತ್ತಿದ್ದರೆ, ಇನ್ನೊಂದೆಡೆ ವಿನಯ್ ಕುಲಕರ್ಣಿ ಬೆಂಬಲಿಗರಲ್ಲಿ ಸಚಿವ ಪಟ್ಟದ ಉತ್ಸಾಹ ಕಳೆಗಟ್ಟಿದೆ. ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ವಿನಯ್ ಕುಲಕರ್ಣಿ ಅವರಿಗೆ ತಕ್ಷಣವೇ ಮಂತ್ರಿ ಪಟ್ಟ ನೀಡಿ ರಿಸ್ಕ್ ತಗೆದುಕೊಳ್ಳುತ್ತಾರಾ? ಅಥವಾ ಸುಪ್ರೀಂ ಕೋರ್ಟ್&zwnj;ನಲ್ಲಿ ಎದುರಾಳಿಗಳು ಹೂಡುವ ಮುಂದಿನ ಐನ್ ಹೆಜ್ಜೆ ನೋಡಿ 'ವೇಟ್ ಅಂಡ್ ವಾಚ್' ತಂತ್ರ ಅನುಸರಿಸುತ್ತಾರಾ? ಎಂಬುದೇ ಸದ್ಯದ ಯಕ್ಷಪ್ರಶ್ನೆ. ವಿನಯ್ ಕುಲಕರ್ಣಿ ಅವರ ರಾಜಕೀಯ ಭವಿಷ್ಯ ಮತ್ತು ಸಚಿವ ಸ್ಥಾನದ ಕನಸು ಈಗ ಸುಪ್ರೀಂ ಕೋರ್ಟ್ ತೆಗೆದುಕೊಳ್ಳುವ ಮುಂದಿನ ನಡೆಯ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/vinay-bail-cabinet-expansion-dk-cabinet-supreme-court-bmk/articleshow-bftflg2"/>
        </item>
        <item>
            <title><![CDATA[ಯಕ್ಷರಂಗದ ನಗುವಿನ ಚಕ್ರವರ್ತಿ ಶ್ರೀಧರ ಭಟ್ ಕಾಸರಕೋಡ್ ನಿಧನ; ಅಭಿಮಾನಿಗಳು ಕಣ್ಣೀರು]]></title>
            <link>https://kannada.asianetnews.com/karnataka-districts/uttara-kananda-yakshagana-artist-comedy-emperor-shridhar-bhat-kasaragod-passes-away-today-mrq/articleshow-kd35niy</link>
            <guid isPermaLink="true">https://kannada.asianetnews.com/karnataka-districts/uttara-kananda-yakshagana-artist-comedy-emperor-shridhar-bhat-kasaragod-passes-away-today-mrq/articleshow-kd35niy</guid>
            <pubDate>Fri, 31 Jul 2026 18:10:10 +0530</pubDate>
            <description><![CDATA[ಯಕ್ಷಗಾನದ ಹಾಸ್ಯ ಚಕ್ರವರ್ತಿ ಎಂದು ಖ್ಯಾತರಾಗಿದ್ದ ಶ್ರೀಧರ ಭಟ್ ಕಾಸರಕೋಡ್ (52) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೂರುವರೆ ದಶಕಗಳ ಕಾಲ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದ ಇವರು, ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ, ಜಲವಳ್ಳಿ ಮೇಳಗಳಲ್ಲಿ ಹಾಸ್ಯಕಲಾವಿದರಾಗಿ ಜನಪ್ರಿಯರಾಗಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kyw2qmes7cjbc0w0ej8d42vr,imgname-sridhar-bhat-kasaragod-1785501307353.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾರವಾರ:ಯಕ್ಷರಂಗದ ಅಪ್ರತಿಮ ಹಾಸ್ಯ ಚಕ್ರವರ್ತಿ ಎಂದು ಜನಮನ್ನಣೆ ಪಡೆದಿದ್ದ ಯಕ್ಷಗಾನ ಕಲಾವಿದ ಶ್ರೀಧರ ಭಟ್ ಕಾಸರಕೋಡ್ (52) ಅವರು ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಧರ್ ಭಟ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುವಾಗ ಮಾರ್ಗ ಮದ್ಯೆ&zwnj; ನಿಧನ ಹೊಂದಿದ್ದಾರೆ.&lt;/p&gt;&lt;h2&gt;&lt;strong&gt;ಯಕ್ಷರಂಗದಲ್ಲಿ ಮೂರುವರೆ ದಶಕ&lt;/strong&gt;&lt;/h2&gt;&lt;p&gt;ಶ್ರೀಧರ ಭಟ್ ಕಾಸರಕೋಡ್ ಅವರು ಸಹಜ ಹಾಸ್ಯ, ತಾಳ್ಮೆ, ಸಮಯಪ್ರಜ್ಞೆ ಹೊಂದಿದ್ದ ಇವರು, ಪ್ರೇಕ್ಷಕರೊಂದಿಗೆ ಒಡನಾಟ ಹೊಂದಿರುವ ಕಲಾವಿದರಾಗಿದ್ದರು. ಶ್ರೀಧರ್ ಭಟ್ ಅವರು ಜೋಕುಮಾರ ಸ್ವಾಮಿ, ಅಜ್ಜಿಯ ಪಾತ್ರ, ಸೂತ್ರಧಾರಿ ಸೇರಿದಂತೆ ಅನೇಕ ಪಾತ್ರಗಳಿಂದ ಮೂರುವರೆ ದಶಕಗಳ ಕಾಲ ಯಕ್ಷಗಾನ ಪ್ರಿಯರನ್ನು ರಂಜಿಸಿದ್ದಾರೆ.&lt;/p&gt;&lt;p&gt;ಶ್ರೀಧರ ಭಟ್ ಅವರು ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ, ಜಲವಳ್ಳಿ ಮೇಳದಲ್ಲಿ ಹಾಸ್ಯಕಲಾವಿದರಾಗಿದ್ದರು. ಇನ್ನಿತರ ಹವ್ಯಾಸಿ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ವೇಷ ಧರಿಸಿ ಉತ್ತಮ ಕಲಾವಿದರೆನಿಸಿಕೊಂಡಿದ್ದರು. ಮೂಲತಃ ಕಾಸರಕೋಡಿನವರಾಗಿ, ಪ್ರಸುತ್ತ ಸಾಲ್ಕೋಡ್ ಗ್ರಾಮದ ಮುಲ್ಲೆಮಕ್ಕಿಯಲ್ಲಿ ವಾಸವಾಗಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯಕ್ಷಗಾನ ಕಲಾವಿದರ ಬಗ್ಗೆ ನಾಲಿಗೆ ಹರಿಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ; ಆಡಿಯೋ ಆಧರಿಸಿ ಮಹಿಳಾ ಠಾಣೆಯಲ್ಲಿ ಎಫ್&zwnj;ಐಆರ್!&lt;/strong&gt;&lt;/p&gt;&lt;p&gt;ಮೃತರು ಪತ್ನಿ ,ಇರ್ವರು ಪುತ್ರರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರಿಗೆ ಯಕ್ಷಗಾನ ಕಲಾವಿದರಾದ ವಿದ್ಯಾದರ ಜಲವಳ್ಳಿ, ಶಿವಾನಂದ ಹೆಗಡೆ ಕೆರೆಮನೆ, ಶಂಕರ ಹೆಗಡೆ ನಿಲ್ಕೋಡ್, ಕಲಾ ಪೋಷಕರಾದ ಶಿವಾನಂದ ಹೆಗಡೆ ಕಡತೋಕಾ, ರಾಜು ಭಂಡಾರಿ, ನಾಗರಾಜ ಹೆಗಡೆ ಖಾಸ್ಕಂಡ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/uttara-kananda-yakshagana-artist-comedy-emperor-shridhar-bhat-kasaragod-passes-away-today-mrq/articleshow-kd35niy"/>
        </item>
        <item>
            <title><![CDATA[35 ಟಿಎಂಸಿ ನೀರಿದ್ದರೂ ವಿಜಯನಗರ 11ಎ ಕಾಲುವೆಗೆ ನೀರಿಲ್ಲ: ಸರ್ಕಾರದ ವಿರುದ್ಧ ರೆಡ್ಡಿ, ಶ್ರೀರಾಮುಲು ಆಕ್ರೋಶ]]></title>
            <link>https://kannada.asianetnews.com/karnataka-districts/bjp-protests-demanding-water-release-to-vijayanagar-11a-canal-gvd/articleshow-g4tyiqv</link>
            <guid isPermaLink="true">https://kannada.asianetnews.com/karnataka-districts/bjp-protests-demanding-water-release-to-vijayanagar-11a-canal-gvd/articleshow-g4tyiqv</guid>
            <pubDate>Fri, 31 Jul 2026 17:29:39 +0530</pubDate>
            <description><![CDATA[&lt;p&gt;Vijayanagar 11A Canal: ವಿಜಯನಗರ 11 ಎ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದಿಂದ ಅಂಜನಾದ್ರಿಯಿಂದ ಮುನಿರಾಬಾದ್ ನೀರಾವರಿ ಇಲಾಖೆಯವರಿಗೂ ಬೃಹತ್ ಪ್ರತಿಭಟನೆ ನಡೆಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvzjayxyjbbe7zwg4zn5xj9,imgname-vvjv-1785497988061.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.31): &lt;/strong&gt;ವಿಜಯನಗರ 11 ಎ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದಿಂದ ಅಂಜನಾದ್ರಿಯಿಂದ ಮುನಿರಾಬಾದ್ ನೀರಾವರಿ ಇಲಾಖೆಯವರಿಗೂ ಬೃಹತ್ ಪ್ರತಿಭಟನೆ ನಡೆಯಿತು. ಅಂಜನಾದ್ರಿ ಬೆಟ್ಟದ ಕೆಳಗೆ ಜಮಾಯಿಸಿದ್ದ ರೈತರು ಅಂಜನಾದ್ರಿ ಬೆಟ್ಟದ ಕೆಳಗೆ ಇರುವ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು. ಸರಿಯಾದ ಸಮಯಕ್ಕೆ ಕಾಲುವೆಗೆ ನೀರು ಬಿಡದ ಕಾರಣ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಜೊತೆಗೆ ಬಿಜೆಪಿ ಪಕ್ಷಕ್ಕೆ ಜಯ ಘೋಷಿಸಿದರು. ವಿಜಯನಗರ ಕಾಲುವೆಯ ವ್ಯಾಪ್ತಿಗೆ ಬರುವ 15 ಗ್ರಾಮಗಳ ರೈತರು ಭಾಗವಹಿಸಿದ್ದರು.&lt;/p&gt;&lt;p&gt;ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದ ಅವರು ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರೆಯನ್ನು ಮುಖ್ಯಮಂತ್ರಿಗಳು ಅಲಕ್ಷಿಸುತ್ತಿದ್ದಾರೆ. ಸಚಿವ ಸಂಪುಟದ ವಿಸ್ತರಣೆಯಲ್ಲಿ ಕಾಲ ಕಳೆಯುತ್ತಿದ್ದಾರೆಂದು ದೂರಿದರು. ಈ ಹಿಂದೆ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ರೈತರಿಗೆ ನೀರಿನ ತೊಂದರೆಯಾಗದಂತೆ ರೈತರ ಹಿತ ಕಾಡುತ್ತಿದ್ದರು. ಈಗ ಕಾಂಗ್ರೆಸ್ ಸರ್ಕಾರ ರೈತರನ್ನು ಕಡೆಗಣಿಸುತ್ತಿದ್ದಾರೆಂದು ಅಕ್ರೋಶ ವ್ಯಕ್ತಪಡಿಸಿದರು. ಜಲಾಶಯದಲ್ಲಿ 35 ಟಿಎಂಸಿ ನೀರು ಇದೆ,15 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದ್ದರೂ ಸಹ ನೀರು ಬಿಡಲು ಮೀನಾಮೇಷ ಮಾಡುತ್ತಿದೆ ಎಂದು ಅರೋಪಿಸಿದರು. ರೈತರು ಕಣ್ಣೀರು ಹಾಕುತ್ತಿದ್ದಾರೆ. ರೈತರ ಶಾಪ ಸರ್ಕಾರಕ್ಕೆ ತಲುಪುತ್ತದೆ ಎಂದರು.&lt;/p&gt;&lt;h2&gt;&lt;strong&gt;ಸಮಯ ವ್ಯರ್ಥ&lt;/strong&gt;&lt;/h2&gt;&lt;p&gt;ಮಾಜಿ ಸಂಸದ ಬಿ.ಶ್ರೀರಾಮುಲು ಮಾತನಾಡಿ ನಮ್ಮ ನೀರು, ನಮ್ಮ ಹಕ್ಕು ಎನ್ನುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸದೆ ದೆಹಲಿಯಲ್ಲಿ ಮುಖ್ಯಮಂತ್ರಿಗಳು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಇದರಿಂದ ನೀರಾವರಿ ಯೋಜನೆಗಳು ಅಧೋಗತಿಯತ್ತಸಾಗಿವೆ ಎಂದರು.&lt;/p&gt;&lt;p&gt;ಕೂಡಲೆ ವಿಜಯನಗರ ಕಾಲುವೆ 11 ಎ ನೀರು ಬಿಡ ಬೇಕೆಂದು ಒತ್ತಾಯಿಸಿದ ಅವರು ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಕಾಂಗ್ರೆಸ್ ಸರ್ಕಾರ ಇದ್ದ ಕಡೆ ನೀರಾವರಿ ಯೋಜನೆ ಬಗ್ಗೆ ಎಚ್ಚೆತ್ತುಕೊಳ್ಳುತ್ತದೆ. ತಮಿಳುನಾಡಿಗೆ 4.56 ಟಿಎಂಸಿ ನೀರನ್ನು ಕಾವೇರಿಯಿಂದ ಬಿಡುಗಡೆ ಮಾಡಿದ್ದಾರೆ ಎಂದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕುಡಿಯುವ ನೀರಿಗೆ ಕಾಲುವೆಗೆ ಬಿಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ರೈತರ ಕೃಷಿಗಳ ಬಗ್ಗೆ ಕಾಳಜಿ ಇಲ್ಲ ಎಂದರು.&lt;/p&gt;&lt;p&gt;ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ವಿಜಯನಗರ ಕಾಲುವೆ 11 ಎ .ಹಳೆಯದಾದ ಕಾಲುವೆಯಾಗಿದೆ. ಈ ಭಾಗದಲ್ಲಿ ರೈತರು ಭತ್ತ ಬೆಳೆಯುತ್ತಿದ್ದು, ನೀರು ಇಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೂಡಲೆ ಸರ್ಕಾರ ಗಮನಹರಿಸಬೇಕೆಂದರು.&lt;/p&gt;&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದ ಅವರು ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರೆಯನ್ನು ಮುಖ್ಯಮಂತ್ರಿಗಳು ಅಲಕ್ಷಿಸುತ್ತಿದ್ದಾರೆ. ಸಚಿವ ಸಂಪುಟದ ವಿಸ್ತರಣೆಯಲ್ಲಿ ಕಾಲ ಕಳೆಯುತ್ತಿದ್ದಾರೆಂದು ದೂರಿದರು.&lt;strong&gt;-ಜನಾರ್ದನ ರೆಡ್ಡಿ, ಶಾಸಕರು ಗಂಗಾವತಿ&lt;/strong&gt;&lt;/p&gt;&lt;p&gt;ನಮ್ಮ ನೀರು, ನಮ್ಮ ಹಕ್ಕು ಎನ್ನುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸದೆ ದೆಹಲಿಯಲ್ಲಿ ಮುಖ್ಯಮಂತ್ರಿಗಳು ಸಮಯ ವ್ಯರ್ಥ ಮಾಡುತ್ತಿದ್ದರೆ. ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಇದರಿಂದ ನೀರಾವರಿ ಯೋಜನೆಗಳು ಅಧೋಗತಿಯತ್ತಸಾಗಿವೆ ಎಂದರು.&lt;strong&gt;-ಬಿ.ಶ್ರೀರಾಮುಲು, ಮಾಜಿ ಸಂಸದ ಬಳ್ಳಾರಿ&lt;/strong&gt;&lt;/p&gt;&lt;p&gt;ವಿಜಯನಗರ ಕಾಲುವೆ 11 ಎ .ಹಳೆಯದಾದ ಕಾಲುವೆಯಾಗಿದೆ. ಈ ಭಾಗದಲ್ಲಿ ರೈತರು ಭತ್ತ ಬೆಳೆಯುತ್ತಿದ್ದು, ನೀರು ಇಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೂಡಲೆ ಸರ್ಕಾರ ಗಮನಹರಿಸ ಬೇಕು.&lt;strong&gt;-ಪರಣ್ಣ ಮುನವಳ್ಳಿ, ಮಾಜಿ ಶಾಸಕರು&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bjp-protests-demanding-water-release-to-vijayanagar-11a-canal-gvd/articleshow-g4tyiqv"/>
        </item>
        <item>
            <title><![CDATA[ಪ್ರತಾಪ್ ಸಿಂಹಗೆ ಸಕಲೇಶಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಓಪನ್ ಚಾಲೆಂಜ್ ಹಾಕಿದ ಚಾಮರಾಜ ಕ್ಷೇತ್ರದ ಶಾಸಕ!]]></title>
            <link>https://kannada.asianetnews.com/karnataka-districts/political-war-in-mysuru-mla-harish-gowda-challenges-former-mp-pratap-simha-to-contest-from-sakleshpur-gdp/articleshow-v11vlup</link>
            <guid isPermaLink="true">https://kannada.asianetnews.com/karnataka-districts/political-war-in-mysuru-mla-harish-gowda-challenges-former-mp-pratap-simha-to-contest-from-sakleshpur-gdp/articleshow-v11vlup</guid>
            <pubDate>Fri, 31 Jul 2026 17:20:54 +0530</pubDate>
            <description><![CDATA[ಶಾಸಕ ಕೆ.ಹರೀಶ್ ಗೌಡ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಚಾಮುಂಡಿಬೆಟ್ಟದಲ್ಲಿ ಬಹಿರಂಗ ಸವಾಲು ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಕಲೇಶಪುರ ಅಥವಾ ಚಾಮರಾಜ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಆಹ್ವಾನಿಸಿದ್ದು, ವೈಯಕ್ತಿಕ ಟೀಕೆ ಮತ್ತು ಪದಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvzz4rwksmv35q96d38tfzs,imgname-harish-gowda-chamaraja-constituency--1--1785498407708.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ರಾಜಕೀಯ ವಲಯದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೈಸೂರಿನ ಪವಿತ್ರ ಚಾಮುಂಡಿಬೆಟ್ಟದಲ್ಲಿ ನಿಂತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹರೀಶ್ ಗೌಡ, ಪ್ರತಾಪ್ ಸಿಂಹ ಅವರಿಗೆ ನೇರವಾದ ಬಹಿರಂಗ ಸವಾಲು ಹಾಕಿದ್ದು, ಧೈರ್ಯವಿದ್ದರೆ ಮುಂದಿನ ಚುನಾವಣೆಯಲ್ಲಿ ಸಕಲೇಶಪುರ ಅಥವಾ ಚಾಮರಾಜ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ.&lt;/p&gt;&lt;h2&gt;ಸಕಲೇಶಪುರ ಕಣದಲ್ಲಿ ಮುಖಾಮುಖಿಗೆ ಆಹ್ವಾನ&lt;/h2&gt;&lt;p&gt;ಸಕಲೇಶಪುರ ಕ್ಷೇತ್ರವು ಪ್ರತಾಪ್ ಸಿಂಹ ಅವರ ಸ್ವಗ್ರಾಮವಾಗಿದೆ. ಪ್ರಸ್ತುತ ಇದು ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿಯ ಸಿಮೆಂಟ್ ಮಂಜು ಇಲ್ಲಿ ಶಾಸಕರಾಗಿದ್ದಾರೆ. ಆದರೆ ಮುಂಬರುವ ಚುನಾವಣೆಗೆ ಇದು ಸಾಮಾನ್ಯ ಕ್ಷೇತ್ರವಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಮಾತನಾಡಿರುವ ಹರೀಶ್ ಗೌಡ, &quot;ನಾನು ಮುಂದಿನ ಚುನಾವಣೆಯಲ್ಲಿ ಸಕಲೇಶಪುರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ. ನಮ್ಮ ಹೈಕಮಾಂಡ್ ನಾಯಕರಿಗೂ ಅಲ್ಲಿಂದಲೇ ಟಿಕೆಟ್ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ಪ್ರತಾಪ್ ಸಿಂಹ, ನೀನು ಕೂಡ ಅಲ್ಲೇ ಬಂದು ಸ್ಪರ್ಧೆ ಮಾಡು, ಯಾರು ಗೆಲ್ಲುತ್ತಾರೆ ಎಂಬುದು ಅಲ್ಲಿಯೇ ತೀರ್ಮಾನವಾಗಲಿ. ಒಂದು ವೇಳೆ ಅಲ್ಲಿಗೆ ಬರುವುದಿಲ್ಲ ಎಂದಾದರೆ ಚಾಮರಾಜ ಕ್ಷೇತ್ರದಲ್ಲಾದರೂ ಸ್ಪರ್ಧೆ ಮಾಡು, ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ಚಾಲೆಂಜ್ ಮಾಡಿದ್ದಾರೆ..&lt;/p&gt;&lt;h2&gt;ವೈಯಕ್ತಿಕ ಟೀಕೆಗಳಿಗೆ ತಿರುಗೇಟು&lt;/h2&gt;&lt;p&gt;ಚಾಮರಾಜ ಕ್ಷೇತ್ರದ ಮತದಾರರಿಗೆ ಹಾಗೂ ಜನತೆಗೆ ಹರೀಶ್ ಗೌಡ ಯಾರೆಂಬುದು ಸಂಪೂರ್ಣವಾಗಿ ತಿಳಿದಿದೆ. ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕು ಹೊರತು, ವೈಯಕ್ತಿಕ ವಿಚಾರಗಳನ್ನು ಕೆದಕುವುದು ಸರಿಯಲ್ಲ. ನನ್ನ ಹಿನ್ನೆಲೆಯನ್ನು ಬಿಚ್ಚಿಡುತ್ತೇನೆ ಎಂದು ಸವಾಲು ಹಾಕುತ್ತಿರುವ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಏನೋ ನನ್ನ ಹಿನ್ನೆಲೆ ಬಿಚ್ಚಿಡುತ್ತೇನೆ ಅಂತ ಹೇಳ್ತಿದ್ದೀರಲ್ಲ, ಧೈರ್ಯವಿದ್ದರೆ ಬಿಚ್ಚಿಡಿ ನೋಡೋಣ. ತಾನು ಪ್ರತಾಪ್ ಸಿಂಹ ಅವರನ್ನು 'ವಲಸಿಗ' ಎಂದು ಎಲ್ಲಿಯೂ ಹೀಯಾಳಿಸಿಲ್ಲ ಎಂದರು.&lt;/p&gt;&lt;h2&gt;ಮಹನೀಯರ ಹೆಸರು ಬಳಕೆ ಹಾಗೂ ಪದಬಳಕೆ ಬಗ್ಗೆ ಆಕ್ಷೇಪ&lt;/h2&gt;&lt;p&gt;ರಾಷ್ಟ್ರಕವಿ ಕುವೆಂಪು ಹಾಗೂ ಕನ್ನಡದ ದಿಗ್ಗಜ ಸಾಹಿತಿ ಎಸ್.ಎಲ್. ಭೈರಪ್ಪ ಅವರಂತಹ ಮಹನೀಯರ ಹೆಸರನ್ನು ಈ ರಾಜಕೀಯ ವಿವಾದಗಳಿಗೆ ಅನಗತ್ಯವಾಗಿ ಎಳೆದು ತರುವುದು ಸರಿಯಲ್ಲ ಎಂದು ಹರೀಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ತಮ್ಮ ಜೊತೆ ಇರುವವರನ್ನು ಉದ್ದೇಶಿಸಿ ಪ್ರತಾಪ್ ಸಿಂಹ 'ರೇಬಿಸ್ ಬಂದಿರುವ ನಾಯಿಗಳು' ಎಂದು ಹಗುರವಾಗಿ ಮಾತನಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, &quot;ಮಾತನಾಡುವಾಗ ಸ್ವಲ್ಪ ಗಮನಕೊಟ್ಟು ಮಾತನಾಡಿ, ನೀವೊಬ್ಬರು ಜವಾಬ್ದಾರಿಯುತ ಮಾಜಿ ಸಂಸದರು ಎಂಬುದನ್ನು ಮರೆಯಬಾರದು&quot; ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಶಾಸಕ ಹರೀಶ್ ಗೌಡ ನೀಡಿರುವ ಈ ಓಪನ್ ಚಾಲೆಂಜ್ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂಬರುವ ದಿನಗಳಲ್ಲಿ ಈ ನಾಯಕರ ಮಾತಿನ ಸಮರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/political-war-in-mysuru-mla-harish-gowda-challenges-former-mp-pratap-simha-to-contest-from-sakleshpur-gdp/articleshow-v11vlup"/>
        </item>
        <item>
            <title><![CDATA[164 ಎಕರೆ ಭೂಸ್ವಾಧೀನ ಕೈಬಿಟ್ಟ ಕರ್ನಾಟಕ ಗೃಹ ಮಂಡಳಿ, ರೈತರು ನಿರಾಳ]]></title>
            <link>https://kannada.asianetnews.com/gallery/bengaluru-urban/karnataka-housing-board-withdraws-devanahalli-land-acquisition-san-csdpz1l</link>
            <guid isPermaLink="true">https://kannada.asianetnews.com/gallery/bengaluru-urban/karnataka-housing-board-withdraws-devanahalli-land-acquisition-san-csdpz1l</guid>
            <pubDate>Fri, 31 Jul 2026 16:41:54 +0530</pubDate>
            <description><![CDATA[&lt;p&gt;ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದಲ್ಲಿ ಗೃಹ ಯೋಜನೆಗಾಗಿ ಉದ್ದೇಶಿಸಿದ್ದ 164 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕರ್ನಾಟಕ ಗೃಹ ಮಂಡಳಿ (KHB) ಅಧಿಕೃತವಾಗಿ ಹಿಂಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvxgrc0zjykwxqxtcrqbpyw,imgname-khb-devanahalli--1--1785495839104.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದಲ್ಲಿ ಗೃಹ ಯೋಜನೆಗಾಗಿ ಉದ್ದೇಶಿಸಿದ್ದ 164 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕರ್ನಾಟಕ ಗೃಹ ಮಂಡಳಿ (KHB) ಅಧಿಕೃತವಾಗಿ ಹಿಂಪಡೆದಿದೆ.&lt;/p&gt;&lt;img&gt;&lt;p&gt;ಬೆಳೆಯುತ್ತಿರುವ ಕೈಗಾರಿಕಾ ವಲಯಕ್ಕೆ ಅಗತ್ಯವಾದ ಗೃಹ ಯೋಜನೆಗಾಗಿ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ 164 ಎಕರೆಗೂ ಹೆಚ್ಚಿನ ಭೂಮಿಯ ಪ್ರಕ್ರಿಯೆಯನ್ನು ಕರ್ನಾಟಕ ಗೃಹ ಮಂಡಳಿ (KHB) ಅಧಿಕೃತವಾಗಿ ಹಿಂಪಡೆದಿದೆ. ಈ ನಿರ್ಧಾರದಿಂದಾಗಿ ಸ್ಥಳೀಯ ರೈತರು ಹಾಗೂ ಭೂಮಾಲೀಕರಿಗೆ ದೊಡ್ಡ ನಿಟ್ಟುಸಿರು ಬಿಡುವಂತಾಗಿದೆ.&lt;/p&gt;&lt;img&gt;&lt;p&gt;ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಬ್ಲಾಕ್-2 ವ್ಯಾಪ್ತಿಗೆ ಬರುವ 164 ಎಕರೆಗೂ ಹೆಚ್ಚಿನ ಜಮೀನಿನ ಆರಂಭಿಕ ಭೂಸ್ವಾಧೀನ ಅಧಿಸೂಚನೆಯನ್ನು ರದ್ದುಗೊಳಿಸಿ ಕರ್ನಾಟಕ ಗೃಹ ಮಂಡಳಿಯು ಜುಲೈ 22 ರಂದು ಅಧಿಕೃತ ಹೊಸ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಈ ವ್ಯಾಪ್ತಿಯಲ್ಲಿದ್ದ ಭೂಮಿಯ ಮೇಲಿದ್ದ ಸ್ವಾಧೀನದ ನಿರ್ಬಂಧಗಳು ತೆರವುಗೊಂಡಿವೆ.&lt;/p&gt;&lt;img&gt;&lt;p&gt;ಅಭಿವೃದ್ಧಿ ಯೋಜನೆಗಾಗಿ ಕೆಹೆಚ್&zwnj;ಬಿ ಜನವರಿಯಲ್ಲಿ ವಿಶ್ವನಾಥಪುರ, ವಾಜರಹಳ್ಳಿ, ಬೀರಸಂದ್ರ ಹಾಗೂ ಶ್ಯಾನಪ್ಪನಹಳ್ಳಿ ಗ್ರಾಮಗಳ ಒಟ್ಟು 593 ಎಕರೆ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದರ ಜೊತೆಗೆ ಎರಡನೇ ಹಂತಕ್ಕಾಗಿ ಮನಗೊಂಡನಹಳ್ಳಿಯ 179 ಎಕರೆ ಜಮೀನನ್ನು ಕಾಯ್ದಿರಿಸಲಾಗಿತ್ತು. ಆದರೆ, ಈಗ ವಿಶ್ವನಾಥಪುರದ ಬ್ಲಾಕ್-2 ಹಿಂಪಡೆದಿರುವುದರಿಂದ ಮೊದಲ ಹಂತದ ಯೋಜನೆ 429 ಎಕರೆಗೆ ಸೀಮಿತವಾಗಲಿದ್ದು, ಮನಗೊಂಡನಹಳ್ಳಿಯ ಭೂಸ್ವಾಧೀನ ಪ್ರಕ್ರಿಯೆ ಪ್ರತ್ಯೇಕವಾಗಿ ನಡೆಯಲಿದೆ.&lt;/p&gt;&lt;img&gt;&lt;p&gt;ಜುಲೈ 22 ರ ಸರ್ಕಾರಿ ಅಧಿಸೂಚನೆಯಲ್ಲಿ ಸ್ಪಷ್ಟ ಕಾರಣಗಳನ್ನು ಉಲ್ಲೇಖಿಸದಿದ್ದರೂ, ಗುರುತಿಸಲಾಗಿದ್ದ ಭೂಮಿಯ ಬಹುಪಾಲು ಭಾಗವನ್ನು ಈಗಾಗಲೇ ಖಾಸಗಿ ರಿಯಲ್ ಎಸ್ಟೇಟ್ ಡೆವಲಪರ್&zwnj;ಗಳು ಖರೀದಿಸಿ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ (NA) ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ಜೊತೆಗೆ, ಭೂಮಿ ಬಿಟ್ಟುಕೊಡಲು ಸಿದ್ಧರಿಲ್ಲದ ಸ್ಥಳೀಯ ರೈತರ ತೀವ್ರ ವಿರೋಧ ಮತ್ತು ಆಕ್ಷೇಪಣೆಗಳನ್ನು ಮಂಡಳಿಯು ಪುರಸ್ಕರಿಸಿ ಈ ನಿರ್ಧಾರ ತಳೆದಿದೆ.&lt;/p&gt;&lt;img&gt;&lt;p&gt;ದೇವನಹಳ್ಳಿ ವ್ಯಾಪ್ತಿಯಲ್ಲಿ ಆಪಲ್ ಐಫೋನ್ ತಯಾರಿಸುವ ಜಾಗತಿಕ ಸಂಸ್ಥೆ 'ಫಾಕ್ಸ್&zwnj;ಕಾನ್' (Foxconn) ಬೃಹತ್ ಘಟಕವನ್ನು ಸ್ಥಾಪಿಸಿ ಉತ್ಪಾದನೆ ಆರಂಭಿಸಿದ ಬೆನ್ನಲ್ಲೇ ಈ ಪ್ರದೇಶದಲ್ಲಿ ತೀವ್ರ ನಗರೀಕರಣ ಹಾಗೂ ವಸತಿ ಬೇಡಿಕೆ ಸೃಷ್ಟಿಯಾಗಿತ್ತು. ಈ ಕೈಗಾರಿಕಾ ಪ್ರಗತಿಗೆ ಅನುಗುಣವಾಗಿ ನೌಕರರು ಹಾಗೂ ಸಾರ್ವಜನಿಕರಿಗೆ ವಸತಿ ಕಲ್ಪಿಸಲು ಕೆಹೆಚ್&zwnj;ಬಿ ವಿಶ್ವನಾಥಪುರದಲ್ಲಿ ಬ್ಲಾಕ್-1 (245 ಎಕರೆ) ಮತ್ತು ಬ್ಲಾಕ್-2 (164 ಎಕರೆ) ಸೇರಿದಂತೆ ಒಟ್ಟು 409 ಎಕರೆ ಭೂಸ್ವಾಧೀನಕ್ಕೆ ಯೋಜನೆ ರೂಪಿಸಿತ್ತು.&lt;/p&gt;&lt;img&gt;&lt;p&gt;ವಿಶ್ವನಾಥಪುರ ಬ್ಲಾಕ್-2 ರ 164 ಎಕರೆ ಭೂಮಿಯನ್ನು ಯೋಜನೆಯಿಂದ ಹೊರಗಿಟ್ಟಿರುವುದರಿಂದ, ಗೃಹ ಮಂಡಳಿಯು ಇನ್ನು ಮುಂದೆ ಅಧಿಸೂಚನೆಯಲ್ಲಿ ಉಳಿದಿರುವ ಹಾಗೂ ರೈತರಿಂದ ಯಾವುದೇ ಕಾನೂನು ಅಡಚಣೆ ಇಲ್ಲದ ಜಮೀನಿನಲ್ಲಿ ಮಾತ್ರವೇ ತನ್ನ ವಸತಿ ಯೋಜನೆಯನ್ನು ಮುಂದುವರಿಸಲಿದೆ.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-housing-board-withdraws-devanahalli-land-acquisition-san-csdpz1l"/>
        </item>
        <item>
            <title><![CDATA[ಧಾರವಾಡ: ವಿನಯ್ ಕುಲಕರ್ಣಿಗೆ ಜಾಮೀನು, 'ನಾನು ಸುಪ್ರೀಂ ಕೋರ್ಟ್‌ಗೆ ಹೋಗಲ್ಲ' ಎಂದ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ!]]></title>
            <link>https://kannada.asianetnews.com/karnataka-districts/yogesh-gowda-murder-case-deceased-wife-mallamma-refuses-to-move-supreme-court-against-vinay-kulkarni-bail-gdp/articleshow-5gloeag</link>
            <guid isPermaLink="true">https://kannada.asianetnews.com/karnataka-districts/yogesh-gowda-murder-case-deceased-wife-mallamma-refuses-to-move-supreme-court-against-vinay-kulkarni-bail-gdp/articleshow-5gloeag</guid>
            <pubDate>Fri, 31 Jul 2026 15:36:59 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ತೀರ್ಪನ್ನು ಪ್ರಶ್ನಿಸಿ ಮೃತರ ಸಹೋದರ ಸುಪ್ರೀಂ ಕೋರ್ಟ್&zwnj;ಗೆ ಹೋಗಲು ಸಿದ್ಧರಾಗಿದ್ದರೆ, ಪತ್ನಿ ಮಲ್ಲಮ್ಮ ಮಾತ್ರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಾನೂನು ಹೋರಾಟದಿಂದ ಹಿಂದೆ ಸರಿಯುವ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpb2zjc9awx3pq63zmar4x0q,imgname-yogesh-gowda-wife-mallamma-1776341207428.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಜಿಲ್ಲೆಯ ತೀವ್ರ ಕುತೂಹಲ ಕೆರಳಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ, &amp;nbsp;ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್&zwnj;ನಿಂದ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ ಮೃತ ಯೋಗೇಶ್ ಗೌಡ ಅವರ ಸಹೋದರ ಗುರುನಾಥಗೌಡರ್ ಹಾಗೂ ಹೋರಾಟಗಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದರೆ, ಇತ್ತ ಯೋಗೇಶ್ ಗೌಡ ಅವರ ಪತ್ನಿ ಮಲ್ಲಮ್ಮ ಅವರು ಮಾತ್ರ ಅತ್ಯಂತ ಅಚ್ಚರಿಯ ಹಾಗೂ ಭಿನ್ನವಾದ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಸುಪ್ರೀಂ ಕೋರ್ಟ್&zwnj;ಗೆ ಹೋಗುವುದಿಲ್ಲ ಎಂದು ಮಲ್ಲಮ್ಮ ಹೇಳಿಕೆ ನೀಡಿದ್ದಾರೆ.&lt;/p&gt;&lt;h2&gt;ನ್ಯಾಯಾಲಯದ ತೀರ್ಪೇ ಅಂತಿಮ: ನಾವೇನು ಹೇಳಲು ಸಾಧ್ಯ?&lt;/h2&gt;&lt;p&gt;ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಲ್ಲಮ್ಮ, &quot;ಈ ವಿಷಯದಲ್ಲಿ ನಾವೇನು ಹೇಳಲು ಸಾಧ್ಯವಿಲ್ಲ. ಎಲ್ಲವನ್ನೂ ನ್ಯಾಯಾಲಯ ಮತ್ತು ಗೌರವಾನ್ವಿತ ನ್ಯಾಯಾಧೀಶರಿಗೆ ಬಿಟ್ಟಿದ್ದು. ಕೋರ್ಟ್ ಯಾವ ರೀತಿಯ ತೀರ್ಪು ನೀಡುತ್ತದೆ ಎಂಬುದು ಮೊದಲೇ ಯಾರಿಗೂ ಗೊತ್ತಾಗುವುದಿಲ್ಲ. ನ್ಯಾಯಾಲಯದ ತೀರ್ಪೇ ಅಂತಿಮವಾಗುತ್ತದೆ. ಈ ತೀರ್ಪಿನಿಂದ ನಮಗೇನೂ ಹಿನ್ನಡೆಯಾಗಿದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.&lt;/p&gt;&lt;h2&gt;ಮಕ್ಕಳ ಭವಿಷ್ಯಕ್ಕಾಗಿ ಕಾನೂನು ಹೋರಾಟಕ್ಕೆ ಬ್ರೇಕ್!&lt;/h2&gt;&lt;p&gt;ತಮ್ಮ ಮುಂದಿನ ನಡೆಯ ಬಗ್ಗೆ ಮಾತನಾಡುತ್ತಾ, &quot;ನಾನು ಇನ್ಮುಂದೆ ಯಾವುದೇ ರೀತಿಯ ಕಾನೂನು ಹೋರಾಟವನ್ನು ಮುಂದುವರಿಸುವುದಿಲ್ಲ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಾನು ಸರ್ವೋಚ್ಚ ನ್ಯಾಯಾಲಯದ (Supreme Court) ಮೆಟ್ಟಿಲೇರುವುದಿಲ್ಲ. ನನಗೆ ನನ್ನ ಮಕ್ಕಳ ಶಿಕ್ಷಣ, ಅವರ ಉಜ್ವಲ ಭವಿಷ್ಯ ಹಾಗೂ ನನ್ನ ಕ್ಷೇತ್ರದ ಜನರ ಅಭಿವೃದ್ಧಿ ಮುಖ್ಯವಾಗಿದೆ. ಅವರ ಸಲುವಾಗಿ ನಾನು ಈ ಕಾನೂನು ಹೋರಾಟದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಹೋರಾಟ ಕೈಬಿಡುವ ಮುನ್ಸೂಚನೆ ನೀಡಿದರು.&lt;/p&gt;&lt;h2&gt;ಯಾರು ಎಷ್ಟೇ ಕೆಟ್ಟದ್ದು ಮಾಡಿದರೂ ಒಳ್ಳೆಯದನ್ನೇ ಬಯಸುತ್ತೇನೆ&lt;/h2&gt;&lt;p&gt;ನನ್ನ ಜೀವನದಲ್ಲಿ ಯಾರು ಎಷ್ಟೇ ಕೆಟ್ಟದ್ದನ್ನು ಮಾಡಿದ್ದರೂ, ನಾನು ಮಾತ್ರ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ. ದ್ವೇಷ ಸಾಧನೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಇಡೀ ಪ್ರಕರಣದಲ್ಲಿ ಶಾಂತಿಯುತ ನಡೆ ಪ್ರದರ್ಶಿಸಿದರು.&lt;/p&gt;&lt;p&gt;ಒಂದೆಡೆ ಮೃತರ ಸಹೋದರ ಗುರುನಾಥಗೌಡರ್ ಮತ್ತು ಕಾನೂನು ತಜ್ಞರು ಸುಪ್ರೀಂ ಕೋರ್ಟ್&zwnj;ನಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳುತ್ತಿದ್ದರೆ, ಇನ್ನೊಂದೆಡೆ ಸ್ವತಃ ಪತ್ನಿ ಮಲ್ಲಮ್ಮ ಅವರೇ ಹೋರಾಟದಿಂದ ಹಿಂದೆ ಸರಿದಿರುವುದು ಧಾರವಾಡ ರಾಜಕೀಯ ಮತ್ತು ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/yogesh-gowda-murder-case-deceased-wife-mallamma-refuses-to-move-supreme-court-against-vinay-kulkarni-bail-gdp/articleshow-5gloeag"/>
        </item>
        <item>
            <title><![CDATA[ವಯಸ್ಸು ಚಿಕ್ಕದಾದರೂ ಸಾಧನೆ ದೊಡ್ಡದು, ಕಷ್ಟದ ದಿನಗಳಿಂದ ಬಂದ 24 ವರ್ಷದ ಬೆಂಗಳೂರು ಯುವಕ ಈಗ 1.8 ಕೋಟಿ ರೂ. ಮನೆಯೊಡೆಯ]]></title>
            <link>https://kannada.asianetnews.com/viral/bengaluru-gen-z-founder-13-crore-revenue-buys-1-8-crore-flat-this-is-just-beginning-suh/articleshow-rz3zhrx</link>
            <guid isPermaLink="true">https://kannada.asianetnews.com/viral/bengaluru-gen-z-founder-13-crore-revenue-buys-1-8-crore-flat-this-is-just-beginning-suh/articleshow-rz3zhrx</guid>
            <pubDate>Fri, 31 Jul 2026 15:08:56 +0530</pubDate>
            <description><![CDATA[&lt;p&gt;ಬೆಂಗಳೂರಿನ Gen Z ಉದ್ಯಮಿ ಆಕಾಶ್ ನಾರಾಯಣ್ ಅವರು ಕೇವಲ 24ನೇ ವಯಸ್ಸಿಗೆ ಈ ಸಾಧನೆ ಮಾಡಿದ್ದಾರೆ. ಕೋಟಿ ಮೌಲ್ಯದ ಅಪಾರ್ಟ್&zwnj;ಮೆಂಟ್ ಖರೀದಿಸಿರುವ ಯುವ ಉದ್ಯಮಿಯೊಬ್ಬರ ಕಥೆ ಇದೀಗ ಭಾರೀ ಗಮನ ಸೆಳೆಯುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvrm3jqpkrrt12es8csrsk3,imgname-bengaluru-gen-z-founder-13-crore-revenue-buys-1-8-crore-flat-this-is-just-beginning-1785490706007.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸುವುದು ಅನೇಕರ ಕನಸು. ಆದರೆ, 24ನೇ ವಯಸ್ಸಿನಲ್ಲೇ ₹1.8 ಕೋಟಿ ಮೌಲ್ಯದ ಅಪಾರ್ಟ್&zwnj;ಮೆಂಟ್ ಖರೀದಿಸಿರುವ ಯುವ ಉದ್ಯಮಿಯೊಬ್ಬರ ಕಥೆ ಇದೀಗ ಭಾರೀ ಗಮನ ಸೆಳೆಯುತ್ತಿದೆ. ಬೆಂಗಳೂರಿನ Gen Z ಉದ್ಯಮಿ ಆಕಾಶ್ ನಾರಾಯಣ್ ಅವರು ಕೇವಲ 24ನೇ ವಯಸ್ಸಿಗೆ ಈ ಸಾಧನೆ ಮಾಡಿದ್ದಾರೆ. ಇಂದು ಅವರು ವಾರ್ಷಿಕವಾಗಿ ಬರೋಬ್ಬರಿ ₹13 ಕೋಟಿ ಒಟ್ಟು ಆದಾಯ ಗಳಿಸುತ್ತಿರುವ ಅಭಿವೃದ್ಧಿ ಹೊಂದುತ್ತಿರುವ ಕಾನೂನು-ತಂತ್ರಜ್ಞಾನ ಸ್ಟಾರ್ಟ್&zwnj;ಅಪ್ ನಡೆಸುತ್ತಿದ್ದಾರೆ. ಆದರೆ, ಈ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ತಮಗೆ ಮಾತ್ರ ನೀಡದ ಆಕಾಶ್, ತಮ್ಮ ತಾಯಿ, ಮಾರ್ಗದರ್ಶಕರು, ಆರಂಭಿಕ ತಂಡ ಮತ್ತು ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದ್ದಾರೆ.&lt;/p&gt;&lt;h2&gt;24ನೇ ವಯಸ್ಸಿಗೇ ₹1.8 ಕೋಟಿ ಅಪಾರ್ಟ್&zwnj;ಮೆಂಟ್&lt;/h2&gt;&lt;p&gt;ಆಕಾಶ್ ನಾರಾಯಣ್ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ಕಾಸಾಗ್ರಾಂಡ್ ವಿವಾಸಿಟಿಯಲ್ಲಿ ₹1.8 ಕೋಟಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ. ಸದ್ಯ ಈ ವಸತಿ ಯೋಜನೆ ನಿರ್ಮಾಣ ಹಂತದಲ್ಲಿದ್ದು, 2027ರ ಏಪ್ರಿಲ್ ವೇಳೆಗೆ ಫ್ಲ್ಯಾಟ್ ಹಸ್ತಾಂತರವಾಗುವ ನಿರೀಕ್ಷೆಯಿದೆ. ಆಕಾಶ್ ಪಾಲಿಗೆ ಇದು ಕೇವಲ ಐಷಾರಾಮಿ ಮನೆ ಖರೀದಿಯಲ್ಲ. ಜೀವನದಲ್ಲಿ ಹಲವು ವರ್ಷಗಳ ಅನಿಶ್ಚಿತತೆ, ಕಷ್ಟ ಮತ್ತು ಹೋರಾಟದ ಬಳಿಕ ಸಿಕ್ಕಿರುವ ದೊಡ್ಡ ಮೈಲಿಗಲ್ಲು. ಒಂದು ಕಾಲದಲ್ಲಿ ಏನೂ ಸರಿಯಾಗಿ ನಡೆಯದ ಪರಿಸ್ಥಿತಿಯಿಂದ ಇಂದು ಆರ್ಥಿಕ ಸ್ವಾತಂತ್ರ್ಯದ ಹಂತಕ್ಕೆ ತಲುಪಿರುವುದನ್ನು ಅವರು ತಮ್ಮ ಯಶಸ್ಸಿನ ಪ್ರಮುಖ ಭಾಗವಾಗಿ ನೋಡುತ್ತಾರೆ.&lt;/p&gt;&lt;h2&gt;ಇದು ನನ್ನೊಬ್ಬನ ಸಾಧನೆಯಲ್ಲ&lt;/h2&gt;&lt;p&gt;ತಮ್ಮ ಮೊದಲ ಅಪಾರ್ಟ್&zwnj;ಮೆಂಟ್ ಖರೀದಿಸಿದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಕಾಶ್, 24ನೇ ವಯಸ್ಸಿನಲ್ಲಿ ಸ್ವಂತ ಮನೆ ಖರೀದಿಸಿರುವುದು ತಮ್ಮೊಬ್ಬರ ಸಾಧನೆಯಲ್ಲ ಎಂದು ಹೇಳಿದ್ದಾರೆ. ನಾನು 24ನೇ ವಯಸ್ಸಿನಲ್ಲಿ ನನ್ನ ಮೊದಲ ಅಪಾರ್ಟ್&zwnj;ಮೆಂಟ್ ಖರೀದಿಸಿದೆ. ಹಿಂತಿರುಗಿ ನೋಡಿದಾಗ, ಈ ಮೈಲಿಗಲ್ಲು ನನ್ನದು ಮಾತ್ರವಲ್ಲ. ಇದು ನನ್ನ ಕುಟುಂಬ, ನನ್ನ ಮಾರ್ಗದರ್ಶಕರು, ನನ್ನ ತಂಡ ಮತ್ತು ಪ್ರಯಾಣದ ಪ್ರತಿಯೊಂದು ಹಂತದಲ್ಲೂ ನನ್ನನ್ನು ನೆಲದ ಮೇಲೆ ಇರಿಸಿದ ಸ್ನೇಹಿತರಿಗೆ ಸೇರಿದೆ ಎಂದು ಅವರು ಹೇಳಿದ್ದಾರೆ. ಪ್ರತಿ ಪಾಠ, ಪ್ರತಿ ತಡರಾತ್ರಿ ಮತ್ತು ಪ್ರತಿ ತ್ಯಾಗವೂ ನನ್ನನ್ನು ಈ ಕ್ಷಣಕ್ಕೆ ಕರೆತಂದಿದೆ. ನಾನು ಎಲ್ಲಿದ್ದೇನೆ ಎಂಬುದಕ್ಕೆ ಆಳವಾಗಿ ಕೃತಜ್ಞನಾಗಿದ್ದೇನೆ. ನಾವು ಮುಂದೆ ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದರ ಬಗ್ಗೆ ಇನ್ನಷ್ಟು ಉತ್ಸಾಹವಿದೆ. ಇದು ಕೇವಲ ಆರಂಭ&quot; ಎಂದು ಆಕಾಶ್ ಬರೆದಿದ್ದಾರೆ.&lt;/p&gt;&lt;h2&gt;ಕಷ್ಟದ ದಿನಗಳಲ್ಲಿ ತಾಯಿ ನೀಡಿದ ಬೆಂಬಲ&lt;/h2&gt;&lt;p&gt;ಫ್ಲ್ಯಾಟ್&zwnj;ನ ಕೀ ಕೈಗೆ ಸಿಕ್ಕಿದ ಸಂದರ್ಭದಲ್ಲಿ ಮೊದಲಿಗೆ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕು ಎಂದು ಅನಿಸಲಿಲ್ಲ ಎಂದು ಆಕಾಶ್ ಹೇಳಿದ್ದಾರೆ. ಬದಲಾಗಿ, ತಮ್ಮ ಜೀವನದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದ್ದ ಕಷ್ಟದ ವರ್ಷಗಳು ನೆನಪಿಗೆ ಬಂದವು. ಆಗ ಇಂತಹ ಮನೆ ಖರೀದಿಸುವುದು ತಮ್ಮ ಪಾಲಿಗೆ ಅಂತಿಮ ಕನಸಿನಂತಿತ್ತು ಎಂದು ಅವರು ಹೇಳಿದ್ದಾರೆ. ನನ್ನ ತಾಯಿ ಯಾವುದೇ ಖಚಿತತೆ ಇಲ್ಲದ ಸಮಯದಲ್ಲೂ ಪ್ರತಿದಿನ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನನ್ನ ಆರಂಭಿಕ ತಂಡವು ಸಾಬೀತಾಗದ ಉತ್ಪನ್ನ ಮತ್ತು ಅನನುಭವಿ ಸಂಸ್ಥಾಪಕನ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿತು. ಹೀಗಾಗಿ ಈ ಯಶಸ್ಸನ್ನು ಒಬ್ಬಂಟಿಯಾಗಿ ಆಚರಿಸುವುದು ನನಗೆ ಪ್ರಾಮಾಣಿಕವಾಗಿ ಅನಿಸಲಿಲ್ಲ ಎಂದು ಆಕಾಶ್ ಹೇಳಿದ್ದಾರೆ.&lt;/p&gt;&lt;h2&gt;₹13 ಕೋಟಿ ವಾರ್ಷಿಕ ಆದಾಯ ಗಳಿಸುವ ಸ್ಟಾರ್ಟ್&zwnj;ಅಪ್&lt;/h2&gt;&lt;p&gt;ಆಕಾಶ್ ನಾರಾಯಣ್ ಅವರು 2023ರಲ್ಲಿ ತಮ್ಮ ಕಂಪನಿ ಲೀಗಲಿಟ್ (Legalit) ಅನ್ನು ಸ್ಥಾಪಿಸಿದ್ದಾರೆ. ವಕೀಲರಿಗಾಗಿ ಪ್ರಾಕ್ಟೀಸ್ ಮ್ಯಾನೇಜ್&zwnj;ಮೆಂಟ್ ಸಿಸ್ಟಮ್ ಆಗಿ ಈ ಕಂಪನಿಯನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಕಾನೂನು ಕ್ಷೇತ್ರ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ನಿರ್ಮಿಸಿರುವ ಈ ಸ್ಟಾರ್ಟ್&zwnj;ಅಪ್ ಇದೀಗ ವೇಗವಾಗಿ ಬೆಳೆಯುತ್ತಿದೆ. ವರದಿಗಳ ಪ್ರಕಾರ, ಕಂಪನಿ ವಾರ್ಷಿಕವಾಗಿ ಸುಮಾರು ₹13 ಕೋಟಿ ಒಟ್ಟು ಆದಾಯ ಗಳಿಸುತ್ತಿದೆ. ಕೇವಲ ಕೆಲವೇ ವರ್ಷಗಳಲ್ಲಿ ಸ್ಟಾರ್ಟ್&zwnj;ಅಪ್ ಅನ್ನು ಈ ಮಟ್ಟಕ್ಕೆ ಬೆಳೆಸಿರುವ ಆಕಾಶ್, ಇದೀಗ ತಮ್ಮ ಸ್ವಂತ ಮನೆ ಖರೀದಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.&lt;/p&gt;&lt;h2&gt;ಕಾನೂನು ಓದಿದ ಆಕಾಶ್, ಡೇಟಾ ಸೈನ್ಸ್ ಕೂಡ ಕಲಿತರು&lt;/h2&gt;&lt;p&gt;ಆಕಾಶ್ ನಾರಾಯಣ್ ಅವರ LinkedIn ಪ್ರೊಫೈಲ್ ಪ್ರಕಾರ, ಅವರು ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಲಾ&zwnj;ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬಳಿಕ ಮಣಿಪಾಲ್ ಯೂನಿವರ್ಸಿಟಿ ಜೈಪುರದಲ್ಲಿ ಡೇಟಾ ಸೈನ್ಸ್ ಅಧ್ಯಯನ ಮಾಡಿದ್ದಾರೆ. ಕಾನೂನು ಮತ್ತು ಡೇಟಾ ಸೈನ್ಸ್ ಕ್ಷೇತ್ರದ ಜ್ಞಾನವನ್ನು ಒಟ್ಟುಗೂಡಿಸಿ, 2023ರಲ್ಲಿ Legalit ಸಂಸ್ಥೆಯನ್ನು ಆರಂಭಿಸಿದ್ದಾರೆ. ಇಂದು ಅದೇ ಕಂಪನಿ ಅವರ ಯಶಸ್ಸಿನ ಪ್ರಮುಖ ಭಾಗವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/bengaluru-gen-z-founder-13-crore-revenue-buys-1-8-crore-flat-this-is-just-beginning-suh/articleshow-rz3zhrx"/>
        </item>
        <item>
            <title><![CDATA[ಸಿಎಂ ವಿಜಯ್‌ರನ್ನ ಕರೆಸಿ ಪ್ರತಿಭಟನೆ ಮಾಡಿದ್ರೆ ನನಗೆ ಸಮಾಧಾನ ಕಾಣುತ್ತಿಲ್ಲ - ಡಿ.ಕೆ. ಶಿವಕುಮಾರ್]]></title>
            <link>https://kannada.asianetnews.com/politics/i-will-not-find-peace-even-if-cm-vijay-is-called-and-a-protest-is-held-dk-shivakumar-gkn/articleshow-59k2l3p</link>
            <guid isPermaLink="true">https://kannada.asianetnews.com/politics/i-will-not-find-peace-even-if-cm-vijay-is-called-and-a-protest-is-held-dk-shivakumar-gkn/articleshow-59k2l3p</guid>
            <pubDate>Fri, 31 Jul 2026 15:06:53 +0530</pubDate>
            <description><![CDATA[ಕಾವೇರಿ ಜಲ ವಿವಾದ ಮತ್ತು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಬೆಂಗಳೂರು ಭೇಟಿಯನ್ನು ಮುಂದೂಡಲಾಗಿದೆ. ಅತಿಥಿಗಳಿಗೆ ಗೌರವ ನೀಡುವುದು ನಮ್ಮ ಕರ್ತವ್ಯ, ಸೌಹಾರ್ದಯುತ ವಾತಾವರಣ ನಿರ್ಮಾಣವಾದ ನಂತರ ಸಭೆ ನಡೆಸೋಣ ಎಂದು ಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvrgnyhv8cd63aqp5r8xcrt,imgname-calling-cm-and-protesting-wont-bring-me-peace-dk-shivakumar-1785490593745.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕಾವೇರಿ ಜಲ ವಿವಾದ ಮತ್ತು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಆಗಸ್ಟ್&zwnj; 3 ರಂದು ನಿಗದಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಬೆಂಗಳೂರು ಭೇಟಿಯನ್ನು ಮುಂದೂಡಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಕನ್ನಡಪರ ಹೋರಾಟಗಾರರು ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಈ ಭೇಟಿಯನ್ನು ಮುಂದೂಡಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಉದ್ವಿಗ್ನ ವಾತಾವರಣದಲ್ಲಿ ಅವರನ್ನು ನಮ್ಮ ರಾಜ್ಯಕ್ಕೆ ಕರೆಸಿ, ಇಲ್ಲಿ ಪ್ರತಿಭಟನೆಗಳು ನಡೆದರೆ ನನಗೆ ಸಮಾಧಾನ ಕಾಣುತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಅತಿಥಿಗಳನ್ನು ಗೌರವಿಸುವುದು ಕರ್ತವ್ಯ&lt;/strong&gt;&lt;/h2&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ಅವರು ಬೆಂಗಳೂರಿಗೆ ಬರುವ ಕುರಿತು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಸದ್ಯ ಕಾವೇರಿ ನೀರು ಬಿಡುವ ವಿಚಾರವಾಗಿ ಕೆಲವು ಕನ್ನಡಪರ ಸಂಘಟನೆಗಳು ಹಾಗೂ ಬಿಜೆಪಿ ಸ್ನೇಹಿತರು ಹೋರಾಟ ನಡೆಸುತ್ತಿದ್ದಾರೆ. ಹೋರಾಟ ಮಾಡಬೇಡಿ ಎಂದು ನಾನು ಯಾರಿಗೂ ಹೇಳುವುದಿಲ್ಲ. ಆದರೆ, ವಿಜಯ್ ಅವರು ನಮ್ಮ ರಾಜ್ಯಕ್ಕೆ ಬರುತ್ತಿರುವ ಅತಿಥಿ. ನಾವು ಶಾಂತಿಪ್ರಿಯರು. ಬೇರೆ ರಾಜ್ಯದ ಅತಿಥಿಗಳು ಬಂದಾಗ ಇಲ್ಲಿ ಯಾವುದೇ ಗಲಾಟೆ ಆಗಬಾರದು. ಹೀಗಾಗಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗುವವರೆಗೆ ಸಭೆಯನ್ನು ಮುಂದೂಡುವಂತೆ ಅವರಿಗೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಸದ್ಯದ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ&lt;/strong&gt;&lt;/h2&gt;&lt;p&gt;ರಾಜ್ಯದ ಜಲಾಶಯಗಳ ಪರಿಸ್ಥಿತಿಯನ್ನು ವಿವರಿಸಿದ ಸಿಎಂ, ಇಂತಹ ಕಠಿಣ ಸಂದರ್ಭದಲ್ಲಿ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡಲು ನಮಗೆ ಸಾಧ್ಯವೇ ಇಲ್ಲ. ನಾವು ನಮ್ಮ ರಾಜ್ಯದ ಹಿತಾಸಕ್ತಿಗೆ ಏನು ಬೇಕೋ ಅದನ್ನು ಮಾಡಿಕೊಳ್ಳುತ್ತೇವೆ. 100 ವರ್ಷಗಳ ಇತಿಹಾಸದಲ್ಲೇ ಜುಲೈ ತಿಂಗಳಲ್ಲಿ ಅತ್ಯಂತ ಕಡಿಮೆ ಅಂದರೆ ಕೇವಲ 0.6 ಟಿಎಂಸಿ ನೀರನ್ನು ಮಾತ್ರ ನಾವು ಹರಿಸಿದ್ದೇವೆ. ಪ್ರಸ್ತುತ ನಮ್ಮ ಯಾವುದೇ ಡ್ಯಾಂಗಳಿಂದಲೂ ನೀರು ಬಿಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೇಕೆದಾಟು ನಮಗಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ&lt;/strong&gt;&lt;/h2&gt;&lt;p&gt;ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಅವರು ಕೆಲವು ಕ್ಲಾರಿಫಿಕೇಶನ್&zwnj;ಗಳನ್ನು ಕೇಳಿದ್ದಾರೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಾವು ಮಾಡಿಕೊಳ್ಳುತ್ತೇವೆ. ವಾಸ್ತವವಾಗಿ ಮೇಕೆದಾಟು ಯೋಜನೆ ನಮಗಿಂತ ಹೆಚ್ಚಾಗಿ ತಮಿಳುನಾಡಿಗೇ ಹೆಚ್ಚು ಅನುಕೂಲಕರವಾಗಿದೆ. ಉತ್ತಮ ಮತ್ತು ಸೌಹಾರ್ದಯುತ ವಾತಾವರಣದಲ್ಲಿ ಉಭಯ ರಾಜ್ಯಗಳ ಹಿತಕ್ಕಾಗಿ ಸಭೆ ನಡೆಸೋಣ ಎಂದು ನಾನು ವಿಜಯ್ ಅವರಿಗೆ ತಿಳಿಸುತ್ತೇನೆ ಎಂದಿದ್ದಾರೆ. ಆಗಸ್ಟ್ 13 ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್&zwnj;ಗೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ದಯವಿಟ್ಟು ಇಂತಹ ಬಂದ್ ತೀರ್ಮಾನಗಳನ್ನು ಕೈಗೊಳ್ಳಬಾರದು ಎಂದು ಸರ್ಕಾರದ ಪರವಾಗಿ ವಿನಂತಿಸುತ್ತೇನೆ. ನಮ್ಮ ಸರ್ಕಾರ ಸದಾ ರೈತರ ಹಿತಕ್ಕಾಗಿಯೇ ಕೆಲಸ ಮಾಡಿಕೊಂಡು ಬಂದಿದೆ. ನಾವು ಸದಾ ನಿಮ್ಮ ಪರವಾಗಿಯೇ ಇದ್ದೇವೆ. ನಿಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ನಾವೇನೂ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ವಿಷಯದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆಯನ್ನು ಕರೆದಿದ್ದೇನೆ. ವಿರೋಧ ಪಕ್ಷದ ನಾಯಕರು ಸಭೆಗೆ ಬಂದು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಲಿ. ಅವರ ಸಲಹೆಗಳನ್ನು ಪಡೆದುಕೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಕಾವೇರಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದಾದರೆ ಅದು ಅವರಿಗೂ ಹಿತ, ನಮಗೂ ಹಿತ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/i-will-not-find-peace-even-if-cm-vijay-is-called-and-a-protest-is-held-dk-shivakumar-gkn/articleshow-59k2l3p"/>
        </item>
        <item>
            <title><![CDATA[ಮುದ್ದೇಬಿಹಾಳ, ತಾಳಿಕೋಟೆ ಮಾರ್ಗವಾಗಿ ಆಲಮಟ್ಟಿಯಿಂದ ಯಾದಗಿರಿಗೆ ಹೊಸ ರೈಲು ಮಾರ್ಗದ ಕೂಗು]]></title>
            <link>https://kannada.asianetnews.com/karnataka-districts/demand-for-the-start-of-a-new-railway-line-from-alamatti-to-yadgiri-via-muddebihal-and-talikote-mrq/articleshow-kmewry8</link>
            <guid isPermaLink="true">https://kannada.asianetnews.com/karnataka-districts/demand-for-the-start-of-a-new-railway-line-from-alamatti-to-yadgiri-via-muddebihal-and-talikote-mrq/articleshow-kmewry8</guid>
            <pubDate>Fri, 31 Jul 2026 14:47:35 +0530</pubDate>
            <description><![CDATA[ಬ್ರಿಟಿಷರ ಕಾಲದಲ್ಲಿಯೇ ರೂಪಿಸಲಾಗಿದ್ದ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮುದ್ದೇಬಿಹಾಳದಲ್ಲಿ ಹೋರಾಟ ಸಮಿತಿ ಸಭೆ ನಡೆಸಿದೆ. ಸರ್ಕಾರದ ಮೇಲೆ ಒತ್ತಡ ಹೇರಲು ಸಹಿ ಸಂಗ್ರಹ ಹಾಗೂ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvq8zrczaa3ntdr11cc4fv1,imgname-alamatti-yadagiri-1785489293068.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಯೋಜನೆಯನ್ನು ಬ್ರಿಟಿಷರ ಆಡಳಿತಾವಧಿಯಲ್ಲಿಯೇ ರೂಪಿಸಲಾಗಿತ್ತು. ಈ ಮಾರ್ಗದಿಂದಾಗುವ ಪ್ರಯೋಜನಗಳ ಬಗ್ಗೆ ಅಂದಿನ ಆಡಳಿತಗಾರರಿಗೆ ಅರಿವಿದ್ದರೂ, ಇಂದಿನ ಸರ್ಕಾರಕ್ಕೆ ಮಾತ್ರ ಇದರ ಮಹತ್ವದ ಅರಿವು ಮೂಡದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉದಯಸಿಂಗ್ ರಾಯಚೂರ ಹೇಳಿದರು.&lt;/p&gt;&lt;p&gt;ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ನಡೆದ ಆಲಮಟ್ಟಿ-ಯಾದಗಿರಿ ರೈಲ್ವೆ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ರೈಲ್ವೆಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ಹಳೆಯ ಯೋಜನೆಯಾಗಿದ್ದರೂ ಇದುವರೆಗೆ ಅನುಷ್ಠಾನಗೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.&lt;/p&gt;&lt;h2&gt;&lt;strong&gt;ಸರ್ಕಾರ, ಜನರು, ಉದ್ಯಮಿಗಳಿಗೆ ಲಾಭ&lt;/strong&gt;&lt;/h2&gt;&lt;p&gt;ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಕಾರ್ಯರೂಪಕ್ಕೆ ಬಂದರೆ ಈ ಭಾಗದ ಜನರು, ಉದ್ಯಮಿಗಳು ಹಾಗೂ ಸರ್ಕಾರಕ್ಕೂ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ಕೃಷಿ ಉತ್ಪನ್ನಗಳು ಹಾಗೂ ಇತರೆ ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಗಿಸಲು ಗೂಡ್ಸ್&zwnj; ರೈಲು ವ್ಯವಸ್ಥೆ ಸಹಕಾರಿಯಾಗಲಿದೆ. ಜೊತೆಗೆ ಸಾರ್ವಜನಿಕರ ಪ್ರಯಾಣಕ್ಕೂ ಅನುಕೂಲವಾಗಲಿದ್ದು, ವ್ಯಾಪಾರ ವಹಿವಾಟು ಹೆಚ್ಚುವುದರಿಂದ ಸರ್ಕಾರದ ಆದಾಯಕ್ಕೂ ಲಾಭವಾಗಲಿದೆ ಎಂದವರು ಹೇಳಿದರು.&lt;/p&gt;&lt;h3&gt;&lt;strong&gt;ಸಹಿ ಸಂಗ್ರಹ, ಜನಜಾಗೃತಿ ಅಭಿಯಾನಕ್ಕೆ ಚಾಲನೆ&lt;/strong&gt;&lt;/h3&gt;&lt;p&gt;ರೈಲ್ವೆ ಮಾರ್ಗವನ್ನು ಕಾರ್ಯರೂಪಕ್ಕೆ ತರಲು ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಹೋರಾಟ ಸಮಿತಿ ವತಿಯಿಂದ ಸಹಿ ಸಂಗ್ರಹ ಹಾಗೂ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.&lt;/p&gt;&lt;p&gt;ರೈಲ್ವೆ ಮಾರ್ಗದ ವ್ಯಾಪ್ತಿಗೆ ಬರುವ ಪ್ರತಿಯೊಂದು ಗ್ರಾಮದ ಮನೆ-ಮನೆಗೆ ತೆರಳಿ ಯೋಜನೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವುದು, ಸಾರ್ವಜನಿಕರಿಂದ ಸಹಿ ಸಂಗ್ರಹಿಸುವುದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕವೂ ವ್ಯಾಪಕ ಪ್ರಚಾರ ನಡೆಸುವ ಮೂಲಕ ಹೋರಾಟ ಮತ್ತಷ್ಟು ಬಲಪಡಿಸುವುದಾಗಿ ಸಮಿತಿ ಸದಸ್ಯರು ತಿಳಿಸಿದರು.&lt;/p&gt;&lt;p&gt;ಸಭೆಯಲ್ಲಿ ಪಟ್ಟಣದ ಉದ್ಯಮಿ ಸತೀಶ ಓಸ್ವಾಲ್, ಬಸಯ್ಯ ನಂದಿಕೇಶ್ವರಮಠ, ಭೀಮಾಶಂಕರ ಪತ್ತಾರ, ಕಿರಣ ಪಾಟೀಲ ಮಾತನಾಡಿದರು.&lt;/p&gt;&lt;p&gt;ಸಂಗಮೇಶ ಬಿರಾದಾರ, ಬಿ.ಎಸ್. ಮೇಟಿ, ನಾಗಪ್ಪ ವಡ್ಡರ, ಅರವಿಂದ ಲದ್ದಿಮಠ, ವಿಜಯ ಬೆಲ್ಲದ, ರಾಜು ಬಾಗೇವಾಡಿ, ರಾಜು ಬೊಳ್ಳೊಳ್ಳಿ, ಎಂ.ಕೆ. ಒಣರೊಟ್ಟಿ, ಮುತ್ತುಕಡಿ, ಸುನೀಲ ಇಲ್ಲೂರ, ರಾಜುದೇಶ ಪಾಂಡೆ, ಪುನೀತ ಹಿಪ್ಪರಗಿ, ಸಂಗಣ್ಣಕಂಚಾಣಿ, ಎಚ್.ಬಿ. ಕೊಂಗನೂರ, ಬಿ.ಎಸ್. ಅಂಗಡಿ, ಸಿ.ವಿ. ಮುರಾಳ, ಮಂಜು ಸಜ್ಜನ, ಗೋವಿಂದ ಪಾಟೀಲ, ಗುಲಾಬಚಂದ್&zwnj; ಓಸ್ವಾಲ್, ಆರ್.ಎನ್. ಕುಂಟೋಜಿ, ಪರಶುರಾಮ ಹಳ್ಳೂರ, ಚನ್ನಪ್ಪ ಮಂಗ್ಯಾಳ, ಬಿ.ಪಿ. ಮುರಾಳ, ಶಿವಪ್ಪ ಮೇಟಿ, ಅಶೋಕ ರೇವಡಿ ಸೇರಿದಂತೆ ಹೋರಾಟ ಸಮಿತಿ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಲಮಟ್ಟಿ-ಇಳಕಲ್ಲ-ಕುಷ್ಟಗಿ ನೂತನ ರೈಲು ಮಾರ್ಗ ಮಂಜೂರಾತಿಗೆ ಸಚಿವ ವಿ ಸೋಮಣ್ಣ ಭರವಸೆ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಧಾರವಾಡ-ಬೆಳಗಾವಿ ರೈಲು ಮಾರ್ಗ ಭೂಸ್ವಾಧೀನ ಕ್ಷಿಪ್ರಗತಿಯಲ್ಲಿ ಮುಗಿಸಲು, ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/demand-for-the-start-of-a-new-railway-line-from-alamatti-to-yadgiri-via-muddebihal-and-talikote-mrq/articleshow-kmewry8"/>
        </item>
        <item>
            <title><![CDATA[ಕತ್ತಲಲ್ಲಿ ಟಾರ್ಚ್ ಹಿಡಿದು ಆರ್‌. ಆಶೋಕ್‌ ದೇವರ ಎತ್ತುಗಳ ವೀಕ್ಷಣೆ, BJP ಬರ ಅಧ್ಯಯನ]]></title>
            <link>https://kannada.asianetnews.com/karnataka-districts/chitradurga-opposition-leader-r-ashok-watch-devara-ettugalu-with-a-torch-in-the-night-bjp-s-drought-study-mrq/articleshow-b9pxrfo</link>
            <guid isPermaLink="true">https://kannada.asianetnews.com/karnataka-districts/chitradurga-opposition-leader-r-ashok-watch-devara-ettugalu-with-a-torch-in-the-night-bjp-s-drought-study-mrq/articleshow-b9pxrfo</guid>
            <pubDate>Fri, 31 Jul 2026 14:33:07 +0530</pubDate>
            <description><![CDATA[ಬರ ಅಧ್ಯಯನಕ್ಕಾಗಿ ಮೊಳಕಾಲ್ಮೂರಿಗೆ ಆಗಮಿಸಿದ ವಿಪಕ್ಷ ನಾಯಕ ಆರ್. ಅಶೋಕ್, ರಾತ್ರಿ ವೇಳೆ ಟಾರ್ಚ್ ಬೆಳಕಿನಲ್ಲಿ ದೇವರ ಎತ್ತುಗಳನ್ನು ವೀಕ್ಷಿಸಿದರು. ಅವರ ಈ ಕತ್ತಲ ಭೇಟಿಯು, ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ಕಾದಿದ್ದ ಸ್ಥಳೀಯ ರೈತರಲ್ಲಿ ತೀವ್ರ ಬೇಸರವನ್ನುಂಟುಮಾಡಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kyvpa2dwvv6afx487gnacv7t,imgname-r-ashok-1785488279996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ:&lt;/strong&gt; ಬರ ಅಧ್ಯಯನಕ್ಕೆಂದು ತಾಲೂಕಿಗೆ ಆಗಮಿಸಿದ್ದ ವಿರೋಧ ಪಕ್ಷದ ನಾಯಕ ಆ&zwnj;ರ್.ಅಶೋಕ ನೇತೃತ್ವದ ತಂಡ ತಾಲೂಕಿ ನಮುತ್ತಿಗಾರಹಳ್ಳಿ ದೇವರ ಎತ್ತುಗಳ ಸ್ಥಳಕ್ಕೆ ಬುಧವಾರ ರಾತ್ರಿ ಆಗಮಿಸಿ ಕತ್ತಲಲ್ಲಿ ಬ್ಯಾಟರಿ ಹಿಡಿದು ದೇವರ ಎತ್ತುಗಳ ಪರಿಸ್ಥಿತಿ ವೀಕ್ಷಣೆ ಮಾಡಿ ಕೆಲವೇ ಕೆಲವು ನಿಮಿಷಗಳಲ್ಲಿ ನಿರ್ಗಮಿಸಿದ್ದು ರೈತರ ಬೇಸರಕ್ಕೆ ಕಾರಣವಾಯಿತು.&lt;/p&gt;&lt;h2&gt;&lt;strong&gt;ಬ್ಯಾಟರಿ ಹಿಡಿದುಕೊಂಡು ಬರ ವೀಕ್ಷಣೆ&lt;/strong&gt;&lt;/h2&gt;&lt;p&gt;ಸದಾ ಬರಕ್ಕೆ ತುತ್ತಾಗುವ ಶಾಶ್ವತ ಬರಪೀಡಿತ ಪ್ರದೇಶವಾಗಿರುವ ಈ ಭಾಗದಲ್ಲಿ ಈ ವರ್ಷವೂ ಮಳೆ ಬಾರದೆ ಬದುಕು ಸಂಕಷ್ಟವಾಗಿದೆ. ಜಾನುವಾರುಗಳ ಪೋಷಣೆ ಕಷ್ಟವಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಬರುತ್ತಾರೆ. ಅವರ ಬಳಿ ಹೇಳಿಕೊಳ್ಳಬೇಕೆಂದು ಸಾವಿರಾರು ಸಮಸ್ಯೆಗಳನ್ನು ಹರವಿಕೊಂಡು ಕುಳಿತಿದ್ದ ನಮಗೆ ಅವರು ಕತ್ತಲಲ್ಲಿ ಬಂದಿದ್ದು ಬೇಸರವಾಯಿತು. ಬೆಳಕಿನಲ್ಲಿ ಬಂದಿದ್ದರೆ ನಮ್ಮಕಷ್ಟಗಳನ್ನು ತೋಡಿಕೊಳ್ಳುತ್ತಿದ್ದೆವು. ಬಿತ್ತನೆ ಆಗದಿರುವುದನ್ನು, ಬೆಳೆ ಒಣಗುತ್ತಿರುವುದನ್ನು ತೋರಿಸುತ್ತಿದ್ದೆವು. ರಾತ್ರಿ ಬಂದು ಬ್ಯಾಟರಿ ಹಿಡಿದುಕೊಂಡು ಬರ ವೀಕ್ಷಣೆ ಮಾಡಿದರೆ ಅವರಿಗೆ ಸಮಸ್ಯೆ ಅರ್ಥವಾಗುವುದೆಂತು ಎಂದು ಅಲ್ಲಿದ್ದವರಿಂದ ಅಳಲು ಕೇಳಿಬಂತು.&lt;/p&gt;&lt;h3&gt;&lt;strong&gt;ದೇವರ ಎತ್ತುಗಳ ಪೋಷಕರಿಂದ ಮನವಿ&lt;/strong&gt;&lt;/h3&gt;&lt;p&gt;ದೇವರ ಎತ್ತುಗಳ ದೂಡುವ ದೊಡ್ಡಿಗೆ ಬುಧವಾರ ರಾತ್ರಿ ಆಗಮಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರಿಗೆ ಅಲ್ಲಿನ ಕಿಲಾರಿಗಳು (ದೇವರ ಎತ್ತುಗಳ ಪೋಷಕರು) ಮನವಿ ನೀಡಿ, ಮ್ಯಾಸ ನಾಯಕರು ಬುಡಕಟ್ಟು ಹಿನ್ನೆಲೆಯಿಂದ ಬಂದವರು. ಇಂದಿಗೂ ಬುಡಕಟ್ಟು ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ತಲೆ ತಲಾಂತರದಿಂದ ಇಲ್ಲಿನ ದೇವರ ಎತ್ತುಗಳನ್ನು ದೇವರೆಂದು ಪೂಜಿಸಿಕೊಂಡಿದ್ದೇವೆ. ತಾಲೂಕು ಸದಾ ಬರಕ್ಕೆ ತುತ್ತಾಗುತ್ತಿದೆ. ದೇವರ ಎತ್ತುಗಳ ಪೋಷಣೆ ಕಷ್ಟವಾಗುತ್ತಿದೆ. ನಮಗೆ ಪ್ರತ್ಯೇಕ ಗೋಶಾಲೆ ಮತ್ತು ಮೇವು ಬೆಳೆಯಲು ಗೋಮಾಳ ಜಮೀನು ನೀಡಬೇಕು ಎಂದು ಒತ್ತಾಯಿಸಿ ಮನವಿ ನೀಡಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹುಬ್ಬಳ್ಳಿ: 101 ವರ್ಷ ವಯಸ್ಸು, 40 ನಿಮಿಷದ ಸರ್ಜರಿ, ಮರುದಿನ ಡಿಸ್ಚಾರ್ಜ್! ದೇಶದ ಮೊದಲ ಯಶಸ್ವಿ ಕೀಲು ಚಿಕಿತ್ಸೆ!&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ಶಾಸಕ ಬೈರತಿ ಬಸವರಾಜ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಪಿ.ಎಂ. ಮಂಜುನಾಥ್&zwnj;, ಕ್ಷೇತ್ರಾಧ್ಯಕ್ಷ ಕೆ.ಟಿ.ಶ್ರೀರಾಮರೆಡ್ಡಿ, ನೇರ್ಲಹಳ್ಳಿ ಪ್ರಭಾಕರ್, ಪ್ರಭಾಕರ್, ಹರೀಶ್ ಕಡೆತೋಟ ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಚಿತ್ರದುರ್ಗ: 'ದೇವರ ಕೋಣ'ದ ಪ್ರಾಣ ಉಳಿಸಿದ ಯಶಸ್ವಿ ರುಮಿನೊಟಮಿ ಶಸ್ತ್ರಚಿಕಿತ್ಸೆ, ಹೊಟ್ಟೆಯಿಂದ 6 ಬಕೆಟ್ ಕೊಳೆತ ಆಹಾರ ತೆಗೆದ ವೈದ್ಯರು!&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮುತ್ತಿಗಾರಹಳ್ಳಿಯಲ್ಲಿ ಬರ ಪರಿಸ್ಥಿತಿ ಪರಿಶೀಲನೆ ಪ್ರವಾಸದ ಸಂದರ್ಭದಲ್ಲಿ ಇಂದು ಮ್ಯಾಸ ನಾಯಕ (ಮ್ಯಾಸ ಬೇಡ) ಸಮುದಾಯದ ಹಿರಿಯರನ್ನು ಬೇಟಿ ಮಾಡಲಾಯಿತುಮ್ಯಾಸ ನಾಯಕರ ಪಾಲಿಗೆ ದೇವರ ಎತ್ತುಗಳು ಕೇವಲ ಜಾನುವಾರುಗಳಲ್ಲ&hellip; ಅವು ಅವರ ನಂಬಿಕೆ, ಆರಾಧನೆ, ಸಂಸ್ಕೃತಿ ಮತ್ತು ತಲೆತಲಾಂತರಗಳಿಂದ ಬಂದಿರುವ&hellip; pic.twitter.com/jAFuNoj2L8&lt;/p&gt;&lt;p&gt;&mdash; R. Ashoka (@RAshokaBJP) July 29, 2026&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chitradurga-opposition-leader-r-ashok-watch-devara-ettugalu-with-a-torch-in-the-night-bjp-s-drought-study-mrq/articleshow-b9pxrfo"/>
        </item>
        <item>
            <title><![CDATA[ವಿನಯ್ ಕುಲಕರ್ಣಿಗೆ ಹೈಕೋರ್ಟ್ ರಿಲೀಫ್,  ಸುಪ್ರೀಂ ಮೆಟ್ಟಿಲೇರಲು ಹೋರಾಟಗಾರ ಬಸವರಾಜ್ ಕೊರವರ್ ನಿರ್ಧಾರ!]]></title>
            <link>https://kannada.asianetnews.com/karnataka-districts/vinay-kulkarni-gets-high-court-relief-in-yogesh-gowda-murder-case-basavaraj-koravar-statement-gdp/articleshow-i7kdok2</link>
            <guid isPermaLink="true">https://kannada.asianetnews.com/karnataka-districts/vinay-kulkarni-gets-high-court-relief-in-yogesh-gowda-murder-case-basavaraj-koravar-statement-gdp/articleshow-i7kdok2</guid>
            <pubDate>Fri, 31 Jul 2026 13:54:19 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಆದೇಶವನ್ನು ಪ್ರಶ್ನಿಸಿ, ಸಾಕ್ಷಿ ನಾಶದ ಪ್ರಯತ್ನಗಳು ನಡೆಯುತ್ತಿರುವ ಕಾರಣ ಸುಪ್ರೀಂ ಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೋರಾಟಗಾರ ಬಸವರಾಜ್ ಕೊರವರ್ ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvm1myp07zphzeav5nvk8y8,imgname-basavaraj-koravar-vinay-kulkarni-1785485906902.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಜಿಲ್ಲೆಯ ಬಹುಚರ್ಚಿತ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್&zwnj;ನಿಂದ ಜಾಮೀನು ಮಂಜೂರಾಗಿದೆ. ಹೈಕೋರ್ಟ್&zwnj;ನ ಈ ಆದೇಶದ ಬೆನ್ನಲ್ಲೇ ಪ್ರಕರಣದ ಮುಂಚೂಣಿ ಹೋರಾಟಗಾರ ಬಸವರಾಜ್ ಕೊರವರ್ ಅವರು ತಮ್ಮ ಮುಂದಿನ ಕಾನೂನು ಹೋರಾಟದ ಹಾದಿಯನ್ನು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಆದೇಶದ ಪ್ರತಿ ಪರಿಶೀಲಿಸಿ ಮುಂದಿನ ತೀರ್ಮಾನ: ಬಸವರಾಜ್ ಕೊರವರ್&lt;/h2&gt;&lt;p&gt;ನ್ಯಾಯಾಲಯದ ಆದೇಶದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಸವರಾಜ್ ಕೊರವರ್, &quot;ಹೈಕೋರ್ಟ್ ಯಾವ ಆಧಾರದ ಮೇಲೆ ಮತ್ತು ಯಾವ ಪ್ರಮುಖ ಅಂಶಗಳನ್ನು ಪರಿಗಣಿಸಿ ಈ ತಡೆಯಾಜ್ಞೆ ನೀಡಿದೆ ಎಂಬುದು ನಮಗೆ ಇನ್ನು ಪೂರ್ಣವಾಗಿ ತಿಳಿದಿಲ್ಲ. ಆದೇಶದ ಪ್ರತಿಯನ್ನು ನಾವು ಸಂಪೂರ್ಣವಾಗಿ ಪರಿಶೀಲಿಸಲಿದ್ದೇವೆ. ನ್ಯಾಯಾಲಯದ ಮುಂದೆ ಬಲವಾದ ಸಾಕ್ಷ್ಯಗಳನ್ನು ಮಂಡಿಸುವಲ್ಲಿ ನಾವು ಎಲ್ಲಾದರೂ ವಿಫಲವಾಗಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ತದನಂತರ, ಮೃತ ಯೋಗೇಶ್ ಗೌಡ ಅವರ ಸಹೋದರ ಗುರುನಾಥಗೌಡರ್ ಹಾಗೂ ಅವರ ಕುಟುಂಬದ ಪರವಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ತಿಳಿಸಿದರು.&lt;/p&gt;&lt;h2&gt;ಸಾಕ್ಷಿಗಳನ್ನು ಹೈಜಾಕ್ ಮಾಡಿದರೂ ಧೃತಿಗೆಡದ ಸಾಕ್ಷಿಗಳು!&lt;/h2&gt;&lt;p&gt;ಪ್ರಕರಣದ ತನಿಖಾ ಹಂತದ ಸವಾಲುಗಳನ್ನು ಸ್ಮರಿಸಿದ ಅವರು, &quot;ಇದು ಅತ್ಯಂತ ವಿಶೇಷ ಹಾಗೂ ಸೂಕ್ಷ್ಮ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ಸಾಕಷ್ಟು ಸಾಕ್ಷಿಗಳನ್ನು ಹೈಜಾಕ್ ಮಾಡಿರುವ ಆಘಾತಕಾರಿ ಸಾಕ್ಷ್ಯಗಳು ಲಭ್ಯವಿದ್ದವು. ಇಷ್ಟೆಲ್ಲಾ ಬೆದರಿಕೆ ಹಾಗೂ ಒತ್ತಡಗಳ ನಡುವೆಯೂ ಸಾಕ್ಷಿದಾರರು ಸ್ವತಃ ನ್ಯಾಯಾಲಯಕ್ಕೆ ಬಂದು ಧೈರ್ಯದಿಂದ ಸಾಕ್ಷಿ ನುಡಿದಿದ್ದರು. ಈ ಎಲ್ಲಾ ಬಲವಾದ ಸಾಕ್ಷ್ಯಗಳನ್ನು ಹೈಕೋರ್ಟ್ ಗಣನೆಗೆ ತೆಗೆದುಕೊಂಡಿರಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಈಗ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಬೇಸರ ತರಿಸಿದೆ ಎಂದರು.&lt;/p&gt;&lt;h2&gt;ಇಂದಿಗೂ ನಡೆಯುತ್ತಿದೆ ಸಾಕ್ಷಿ ನಾಶದ ಯತ್ನ: ಸುಪ್ರೀಂಗೆ ಮೇಲ್ಮನವಿ&lt;/h2&gt;&lt;p&gt;ಈ ಪ್ರಕರಣದಲ್ಲಿ ಸಾಕ್ಷಿ ನಾಶಪಡಿಸುವ ಮತ್ತು ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ಇಂದಿಗೂ ನಿರಂತರವಾಗಿ ನಡೆಯುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ಇನ್ನು ವಿನಯ್ ಕುಲಕರ್ಣಿ ಅವರ ಧಾರವಾಡ ಜಿಲ್ಲೆ ಪ್ರವೇಶದ ಕುರಿತಾದ ಪ್ರಶ್ನೆ ಸದ್ಯಕ್ಕೆ ಉದ್ಭವಿಸುವುದಿಲ್ಲ. ನ್ಯಾಯಾಲಯದ ಸಂಪೂರ್ಣ ಆದೇಶದ ಪ್ರತಿ ಕೈ ಸೇರಿದ ನಂತರವೇ ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಉತ್ತರ ನೀಡಲಾಗುವುದು ಎಂದು ಬಸವರಾಜ್ ಕೊರವರ್ ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/vinay-kulkarni-gets-high-court-relief-in-yogesh-gowda-murder-case-basavaraj-koravar-statement-gdp/articleshow-i7kdok2"/>
        </item>
        <item>
            <title><![CDATA[ಆಗಸ್ಟ್ 13ಕ್ಕೆ ಕರ್ನಾಟಕ ಬಂದ್, ಕಾವೇರಿ ಅನ್ಯಾಯ ವಿರೋಧಿಸಿ ಕನ್ನಡಪ ಸಂಘಟನೆಗಳಿಂದ ಕರೆ]]></title>
            <link>https://kannada.asianetnews.com/state/karnataka-bandh-on-august-13-kannada-groups-call-for-strike-over-cauvery-water-issue/articleshow-0cvihi1</link>
            <guid isPermaLink="true">https://kannada.asianetnews.com/state/karnataka-bandh-on-august-13-kannada-groups-call-for-strike-over-cauvery-water-issue/articleshow-0cvihi1</guid>
            <pubDate>Fri, 31 Jul 2026 13:29:52 +0530</pubDate>
            <description><![CDATA[&lt;p&gt;ಕಾವೇರಿ ನೀರು ತಮಿಳುನಾಡಿಗೆ ಹರಿಸುವ CWRC ಆದೇಶ ವಿರುದ್ಧ ಹೋರಾಟ ತೀವ್ರಗೊಂಡಿದೆ. ಪ್ರತಿಭಟನೆ ತೀವ್ರಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 13ಕ್ಕೆ ಕರ್ನಾಟಕ ಬಂದ್ ಘೋಷಿಸಲಾಗಿದೆ. ಕನ್ನಡ ಪರ ಸಂಘಟನೆಗಳು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvj7ez26zyp2yare6zy7ay6,imgname-karnataka-bandh-1785484000225.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.31&lt;/strong&gt;) ಕಾವೇರಿ ನದಿ ನೀರು ವಿವಾದ ತೀವ್ರಗೊಳ್ಳುತ್ತಿದೆ. ಕರ್ನಾಟಕ ಬರಗಾಲ ಪರಿಸ್ಥಿತಿ ಎದುರಿಸುತ್ತಿರುವ ಬೆನ್ನಲ್ಲೇ ಕಾವೇರಿ ನೀರು ತಮಿಳುನಾಡಿಗೆ ಹರಿಸುವ CWRC ಆದೇಶ ವಿರುದ್ಧ ಕನ್ನಡ ಪರ ಸಂಘಟನೆಗಳು ಹೋರಾಟ ತೀವ್ರಗೊಳಿಸಿದೆ. ಬಂದ್ ಬೇಕು ಬೇಡ ನಡುವೆ ಸಭೆ ಸೇರಿದ ಕನ್ನಡ ಪರ ಸಂಘಟನೆಗಳು ಆಗಸ್ಟ್ 13ಕ್ಕೆ ಕರ್ನಾಟಕ ಬಂದ್&zwnj;ಗೆ ಕರೆ ಕೊಟ್ಟಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ಸೇರಿದ ಕನ್ನಡ ಪರ ಸಂಘಟನೆಗಳು ಮಹತ್ವದ ನಿರ್ಧಾರ ಘೋಷಿಸಿದೆ.&lt;/p&gt;&lt;h2&gt;ಆಗಸ್ಟ್ 13ಕ್ಕೆ ಕರ್ನಾಟಕ ಬಂದ್, ಬೆಳಗ್ಗೆ 6 ಗಂಟೆಯಿಂದ ಬಂದ್&lt;/h2&gt;&lt;p&gt;ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸೂಕ್ತ ಪರಿಹಾರ ನೀಡಲು ಬಯಸಿರುವ ಕನ್ನಡ ಪರ ಸಂಘಟನೆಗಳು ಆಗಸ್ಟ್ 13ಕ್ಕೆ ಕರ್ನಾಟಕ ಬಂದ್&zwnj;ಗೆ ಕರೆ ಕೊಟ್ಟಿದೆ. ಆಗಸ್ಟ್ 13ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಕರ್ನಾಟಕ ಸಂಪೂರ್ಣ ಸ್ತಬ್ಧವಾಗಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಎಲ್ಲರೂ, ಎಲ್ಲಾ ಸಂಘಟನೆಗಳು ಈ ಬಂದ್&zwnj;ಗೆ ಬೆಂಬಲ ನೀಡಿ. ಇದು ಕರ್ನಾಟಕ ಜನರ ನೀರಿನ ಸಮಸ್ಯೆಗಾಗಿ ನಡೆಯುತ್ತಿರುವ ಹೋರಾಟ ಎಂದು ವಾಟಾಳ್ ನಾಗಾರಾಜ್ ಮನಿ ಮಾಡಿದ್ದಾರೆ. ಎಲ್ಲಾ ರೈತರು ಈ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಂದ್ ಮ&zwnj;ೂಲಕ ಉತ್ತರಿಸಲು ಸಂಘಟನಗಳು ಮುಂದಾಗಿದೆ.&lt;/p&gt;&lt;h2&gt;ಕಾವೇರಿ ಹೋರಾಟಕ್ಕೆ ಆಟೋ ಚಾಲಕ ಸಂಘಟನೆಗಳ ಬೆಂಬಲ&lt;/h2&gt;&lt;p&gt;ಆಗಸ್ಟ್ 13 ಕ್ಕೆ ಕರೆ ನೀಡಿರುವ ಬಂದ್&zwnj;ಗೆ ಆದರ್ಶ್ ಆಟೋ ಡ್ರೈವರ್ಸ್ ಯೂನಿಯನ್ ಬೆಂಬಲ ಸೂಚಿಸಿದೆ. ಆಗಸ್ಟ್ 13ಕ್ಕೆ ಆಟೋ ಸಂಚಾರ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಈ ಮೂಲಕ ಆಗಸ್ಟ್ 13ರಂದು ಸಂಪೂರ್ಣ ಆಟೋ ಸಂಚಾರ ಬಂದ್ ಆಗಲಿದೆ ಎಂದಿದೆ.&lt;/p&gt;&lt;h2&gt;ಸಾರಾ ಗೋವಿಂದು ಹೇಳಿದ್ದೇನು?&lt;/h2&gt;&lt;p&gt;ಪದೇಪದೇ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ತೀರ್ಪಿನ ವಿಚಾರವಾಗಿ ಮೇಲ್ಮನವಿ ಸಲ್ಲಿಸಿದಾಗಲೇ ನಮಗೆ ಗೊತ್ತಾಗಿತ್ತು. ಏನು ಬದಲಾವಣೆ ಆಗೋದಿಲ್ಲ ಎಂದು ತಿಳಿದಿತ್ತು. ಪ್ರತಿಬಾರಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ವಾಸ್ತವ ಪರಿಸ್ಥಿತಿ ಪರೀಶೀಲನೆ ಮಾಡದೇ ಅವೈಜ್ಞಾನಿಕವಾಗಿ ತೀರ್ಪು ನೀಡಿದ್ದಾರೆ. ಈ ರೀತಿ ಎಲ್ಲೀವರೆಗೆ ದಬ್ಬಾಳಿಕೆ ಮಾಡುತ್ತೀರಾ, ನಾವು ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಸಾರಾ ಗೋವಿಂದ್ ಎಚ್ಚರಿಸಿದ್ದಾರೆ.&lt;/p&gt;&lt;h2&gt;ಕರ್ನಾಟಕಕ್ಕೆ ಕುಡಿಯೋಕೆ ನೀಡಿಲ್ಲ&lt;/h2&gt;&lt;p&gt;ವಾಟಾಳ್ ನಾಗರಾಜ್ ಹಾಗೂ ಸಾರಾ ಗೋವಿಂದ್ ನೇತೃತ್ವದಲ್ಲಿ ಸಭೆ ನಡಸಲಾಗಿದೆ. ಈಗಾಗಲೇ ಕಾವೇರಿ ನೀರು ತಮಿಳುನಾಡಿಗೆ ಬಿಡಬೇಕು ಅಂತ ಹೇಳಿದ್ದಾರೆ. ಎರಡು ಬಾರಿ ಆದೇಶ ಬಂದಿದೆ. ಕರ್ನಾಟಕಕ್ಕೆ ಕುಡಿಯೋದಕ್ಕೆ ನೀರಿಲ್ಲ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ ಎಂದು ಕರವೇ ಮುಖಂಡ ಶಿವರಾಮೆಗೌಡ ಪ್ರಶ್ನಿಸಿದ್ದಾರೆ. ಕಾವೇರಿ ಮಂಡಳಿ ನಮ್ಮ ಪಾಲಿಗೆ ಅನ್ಯಾಯ ಮಂಡಳಿಯಾಗಿದೆ ಎಂದಿದ್ದಾರೆ.&lt;/p&gt;&lt;h2&gt;ನಮ್ಮ ಹೋರಾಟ ಮುಂದುವರಿಯುತ್ತೆ&lt;/h2&gt;&lt;p&gt;ಕೇಂದ್ರ ಸರ್ಕಾರ ಹಾಗೂ ಕಾವೇರಿ ಪ್ರಾಧಿಕಾರ ಕನ್ನಡದ ಮಕ್ಕಳಿಗೆ, ಕರ್ನಾಟಕಕ್ಕೆ ಮರಣ ಶಾಸನ ನೀಡಿದ್ದಾರೆ. ಮುಂದಿನ ಪೀಳಿಗೆಗೆ ನೀರನ್ನು ಉಳಿಸಿಕೊಳ್ಳಬೇಕು. ಸಿಎಂ ಅವರು ಬಂಗಾರಪ್ಪ ಅವರ ರೀತಿಯಲ್ಲಿ ಸುಗ್ರೀವಾಜ್ಞೆ ತಂದು ನೀರು ನಿಲ್ಲಿಸಬೇಕು. ನೀರು ನಿಲ್ಲಿಸದೇ ಇದ್ದರೇ ಕರ್ನಾಟಕ ಸಂಪೂರ್ಣ ಸ್ತಬ್ದವಾಗುತ್ತೆ. ಬೇರೆ ಕಡೆಯಿಂದ ನೀರು ತರುವ ಪ್ರಯತ್ನ ಮಾಡಿಲ್ಲ.. ಹೀಗಾಗಿ ಕಾವೇರಿ ನೀರು ಮುಖ್ಯ. ಹೀಗಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಕರವೇ ನಾಯಕ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/karnataka-bandh-on-august-13-kannada-groups-call-for-strike-over-cauvery-water-issue/articleshow-0cvihi1"/>
        </item>
        <item>
            <title><![CDATA[ಧಾರವಾಡ: ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು, ಸುಪ್ರೀಂ ಮೆಟ್ಟಿಲೇರಲು ಯೋಗೇಶ್ ಗೌಡ ಸಹೋದರನ ಚಿಂತನೆ!]]></title>
            <link>https://kannada.asianetnews.com/karnataka-districts/yogesh-gowda-murder-case-vinay-kulkarni-gets-bail-family-gurunath-gowda-to-challenge-verdict-in-supreme-court-gdp/articleshow-kwshkt1</link>
            <guid isPermaLink="true">https://kannada.asianetnews.com/karnataka-districts/yogesh-gowda-murder-case-vinay-kulkarni-gets-bail-family-gurunath-gowda-to-challenge-verdict-in-supreme-court-gdp/articleshow-kwshkt1</guid>
            <pubDate>Fri, 31 Jul 2026 13:12:45 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮೃತರ ಸಹೋದರ ಗುರುನಾಥಗೌಡರ್ ನಿರ್ಧರಿಸಿದ್ದು, ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd0c4911kmv10hee03q82wy,imgname-vinay-kulkarni-1776405582113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್&zwnj; ಜಾಮೀನು ಮಂಜೂರು ಮಾಡಿದೆ. &amp;nbsp; ಈ ಮೂಲ ಅವರ ಜೀವಾವಧಿ ಶಿಕ್ಷೆ ರದ್ದಾಗಿ ಜೈಲಿನಿಂದ ಬಿಡುಗಡೆಯಾಗುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮೃತರ ಸಹೋದರ ಗುರುನಾಥಗೌಡರ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿ, ತಮ್ಮ ಮುಂದಿನ ಕಾನೂನು ಹೋರಾಟದ ಕುರಿತು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ನಮಗೂ ಕಾನೂನು ಇದೆ, ಅವರಿಗೂ ಕಾನೂನು ಇದೆ: ಗುರುನಾಥಗೌಡರ್&lt;/h2&gt;&lt;p&gt;ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ದೊರೆತಿರುವ ಕುರಿತು ಪ್ರತಿಕ್ರಿಯಿಸಿದ ಗುರುನಾಥಗೌಡರ್, &quot;ನಮ್ಮ ವಕೀಲರು ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ವಿಷಯವನ್ನು ನಮಗೆ ಖಚಿತಪಡಿಸಿದ್ದಾರೆ. ಈ ದೇಶದಲ್ಲಿ ನಮಗೂ ಕಾನೂನು ಇದೆ, ಅವರಿಗೂ ಕಾನೂನು ಇದೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿಂದಲೇ ನಾವು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದೆವು, ನಮಗೆ ನ್ಯಾಯವೂ ಸಿಕ್ಕಿತ್ತು. ಈಗ ಅವರು ಹೈಕೋರ್ಟ್ ಮೊರೆ ಹೋಗಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;ಸುಪ್ರೀಂ ಕೋರ್ಟ್&zwnj;ನಲ್ಲಿ ಕಾನೂನು ಸಮರಕ್ಕೆ ಸಿದ್ಧತೆ&lt;/h2&gt;&lt;p&gt;ನ್ಯಾಯಾಲಯ ಯಾವ ಕಾರಣಗಳಿಗಾಗಿ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ನೀಡಿದೆ ಎಂಬುದು ನಮಗೆ ಇನ್ನು ಪೂರ್ಣವಾಗಿ ತಿಳಿದಿಲ್ಲ. ಆದೇಶದ ಪ್ರತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ನಾವು ನಮ್ಮ ಮುಂದಿನ ನಡೆಯನ್ನು ಇಡಲಿದ್ದೇವೆ. ಈ ಕುರಿತು ಹಿರಿಯ ಹೋರಾಟಗಾರ ಬಸವರಾಜ್ ಕೊರವರ ಅವರ ಜೊತೆ ಸುದೀರ್ಘವಾಗಿ ಚರ್ಚಿಸಿ, ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;&lt;h2&gt;ನಿರಂತರವಾಗಿ ಸಾಗಲಿದೆ ನ್ಯಾಯಕ್ಕಾಗಿ ಹೋರಾಟ&lt;/h2&gt;&lt;p&gt;ಹೈಕೋರ್ಟ್ ಆದೇಶದಿಂದ ನಮಗೆ ಯಾವುದೇ ಹಿನ್ನಡೆಯಾಗಿಲ್ಲ. ನಮ್ಮ ಹೋರಾಟದ ಹಾದಿ ನಮಗೆ ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ನಾವು ಧೃತಿಗೆಡುವುದಿಲ್ಲ. ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ದಿವಂಗತ ಸಹೋದರನಿಗೆ ನ್ಯಾಯ ಸಿಗುವವರೆಗೂ ನಮ್ಮ ಕಾನೂನಾತ್ಮಕ ಹೋರಾಟ ನಿರಂತರವಾಗಿ ನಡೆಯುತ್ತದೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದು ಖಚಿತ ಎಂದು ಗುರುನಾಥಗೌಡರ್ ನುಡಿದರು.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/yogesh-gowda-murder-case-vinay-kulkarni-gets-bail-family-gurunath-gowda-to-challenge-verdict-in-supreme-court-gdp/articleshow-kwshkt1"/>
        </item>
        <item>
            <title><![CDATA[ಮೈಸೂರು ಮಹಾರಾಜರಿಗೆ ಸಂತಾನ ಭಾಗ್ಯ ಕರುಣಿಸಿದ್ದ ಆ ಸ್ವಾಮಿಗಳು; ಕರ್ನಾಟಕದಲ್ಲಿ ಅವರ ಆಶ್ರಮ ಎಲ್ಲಿದೆ?]]></title>
            <link>https://kannada.asianetnews.com/karnataka-districts/mysore-maharaja-blessed-with-child-saint-sridhar-swami-ashram-karnataka-suh/articleshow-h0gb5yh</link>
            <guid isPermaLink="true">https://kannada.asianetnews.com/karnataka-districts/mysore-maharaja-blessed-with-child-saint-sridhar-swami-ashram-karnataka-suh/articleshow-h0gb5yh</guid>
            <pubDate>Fri, 31 Jul 2026 13:04:39 +0530</pubDate>
            <description><![CDATA[&lt;p&gt;ಈ ಸ್ಥಳ ಇಂದು ಸಾವಿರಾರು ಭಕ್ತರ ಪಾಲಿಗೆ ಪವಿತ್ರ ಕ್ಷೇತ್ರವಾಗಿದೆ. ಆಶ್ರಮಕ್ಕೆ ಭೇಟಿ ನೀಡುವ ಭಕ್ತರನ್ನು ವಿಶೇಷವಾಗಿ ಸೆಳೆಯುವುದು ಇಲ್ಲಿನ ಪವಿತ್ರ ತೀರ್ಥ ಮತ್ತು ಜಲಧಾರೆ. ಅಂದು ನೀರಿನ ಸೌಲಭ್ಯವೇ ಇಲ್ಲದಿದ್ದ ಈ ಪ್ರದೇಶದಲ್ಲಿ ಭಕ್ತರ ಕಷ್ಟವನ್ನು ನಿವಾರಿಸುವ ಉದ್ದೇಶದಿಂದ ಸ್ವಾಮಿಗಳು ಈ ತೀರ್ಥವನ್ನು ಸೃಷ್ಟಿಸಿದರು ಎಂದು ಭಕ್ತರು ನಂಬುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvhh6rt7t9bewcfzvc4d4tz,imgname-mysore-raja-1785483270938.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಮೀಪದಲ್ಲಿರುವ ವರದಪುರ (ವರದಹಳ್ಳಿ) ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. ಸಮರ್ಥ ರಾಮದಾಸರ ಪರಂಪರೆಯ ಪರಮ ಪೂಜ್ಯ ಶ್ರೀ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಈ ಸ್ಥಳ ಇಂದು ಸಾವಿರಾರು ಭಕ್ತರ ಪಾಲಿಗೆ ಪವಿತ್ರ ಕ್ಷೇತ್ರವಾಗಿದೆ. ಆಶ್ರಮಕ್ಕೆ ಭೇಟಿ ನೀಡುವ ಭಕ್ತರನ್ನು ವಿಶೇಷವಾಗಿ ಸೆಳೆಯುವುದು ಇಲ್ಲಿನ ಪವಿತ್ರ ತೀರ್ಥ ಮತ್ತು ಜಲಧಾರೆ. ಶ್ರೀಧರ ಸ್ವಾಮಿಗಳೇ ಸ್ವತಃ ತಮ್ಮ ಹಸ್ತದಿಂದ ಮಣ್ಣನ್ನು ಬಗೆದು ಈ ಜಲಧಾರೆಯನ್ನು ಉದ್ಭವಗೊಳಿಸಿದರು ಎಂಬ ಐತಿಹ್ಯವಿದೆ. ಅಂದು ನೀರಿನ ಸೌಲಭ್ಯವೇ ಇಲ್ಲದಿದ್ದ ಈ ಪ್ರದೇಶದಲ್ಲಿ ಭಕ್ತರ ಕಷ್ಟವನ್ನು ನಿವಾರಿಸುವ ಉದ್ದೇಶದಿಂದ ಸ್ವಾಮಿಗಳು ಈ ತೀರ್ಥವನ್ನು ಸೃಷ್ಟಿಸಿದರು ಎಂದು ಭಕ್ತರು ನಂಬುತ್ತಾರೆ.&lt;/p&gt;&lt;h2&gt;365 ದಿನವೂ ಹರಿಯುವ ಜಲಧಾರೆ&lt;/h2&gt;&lt;p&gt;ವರದಪುರದ ಈ ಪವಿತ್ರ ತೀರ್ಥವು ವರ್ಷದ 365 ದಿನವೂ ನಿರಂತರವಾಗಿ ಹರಿಯುತ್ತದೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ. ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ತೀರ್ಥಸ್ನಾನ ಮಾಡುತ್ತಾರೆ. ಕೆಲವರು ಈ ಪವಿತ್ರ ನೀರನ್ನು ಲೀಟರ್&zwnj;ಗಟ್ಟಲೆ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ. ಈ ತೀರ್ಥದ ನೀರನ್ನು ಹಲವು ವರ್ಷಗಳ ಕಾಲ ಇಟ್ಟರೂ ಹಾಳಾಗುವುದಿಲ್ಲ ಎಂಬ ನಂಬಿಕೆಯೂ ಭಕ್ತರಲ್ಲಿ ಇದೆ. ಕೆಲವರು 40ರಿಂದ 50 ವರ್ಷಗಳ ಕಾಲ ಸಂಗ್ರಹಿಸಿಟ್ಟರೂ ನೀರು ಶುದ್ಧವಾಗಿಯೇ ಉಳಿದಿದೆ ಎಂದು ಹೇಳುತ್ತಾರೆ.&lt;/p&gt;&lt;h2&gt;ತೀರ್ಥಸ್ನಾನ ಮಾಡಿದರೆ ಕಷ್ಟಗಳು ದೂರವಾಗುತ್ತವೆಯೇ?&lt;/h2&gt;&lt;p&gt;ವರದಪುರದ ತೀರ್ಥಕ್ಕೆ ವಿಶೇಷ ಆಧ್ಯಾತ್ಮಿಕ ಶಕ್ತಿ ಇದೆ ಎಂಬ ನಂಬಿಕೆ ಭಕ್ತರಲ್ಲಿದೆ. ಜೀವನದಲ್ಲಿ ಕಷ್ಟ-ನಷ್ಟಗಳನ್ನು ಎದುರಿಸುತ್ತಿರುವವರು, ಅನಾರೋಗ್ಯ ಅಥವಾ ಮಾನಸಿಕ ಸಂಕಷ್ಟಗಳಿಂದ ಬಳಲುತ್ತಿರುವವರು ನಂಬಿಕೆಯಿಂದ ಇಲ್ಲಿಗೆ ಬಂದು ತೀರ್ಥಸ್ನಾನ ಹಾಗೂ ತೀರ್ಥ ಸೇವನೆ ಮಾಡಿದರೆ ತಮ್ಮ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎಂದು ಅನೇಕ ಭಕ್ತರು ನಂಬುತ್ತಾರೆ. ಆದರೆ ಇವು ಭಕ್ತರ ನಂಬಿಕೆ ಮತ್ತು ಸ್ಥಳೀಯ ಐತಿಹ್ಯಗಳಿಗೆ ಸಂಬಂಧಿಸಿದ ವಿಚಾರಗಳಾಗಿದ್ದು, ವೈದ್ಯಕೀಯ ಸಮಸ್ಯೆಗಳಿಗೆ ವೈದ್ಯರ ಸಲಹೆಯನ್ನು ಪಡೆಯುವುದು ಅಗತ್ಯ.&lt;/p&gt;&lt;h2&gt;ಮೈಸೂರು ಮಹಾರಾಜರ ವಂಶಕ್ಕೂ ಶ್ರೀಧರ ಸ್ವಾಮಿಗಳ ಆಶೀರ್ವಾದ?&lt;/h2&gt;&lt;p&gt;ಶ್ರೀಧರ ಸ್ವಾಮಿಗಳ ಕುರಿತಾಗಿ ಹಲವು ಐತಿಹ್ಯಗಳು ಇಂದಿಗೂ ಪ್ರಚಲಿತದಲ್ಲಿವೆ. ಮೈಸೂರು ಮಹಾರಾಜರ ಪರಂಪರೆಯ ಶ್ರೀಕಂಠದತ್ತ ಒಡೆಯರ್ ಅವರ ಜನನದ ಹಿಂದೆಯೂ ಶ್ರೀಧರ ಸ್ವಾಮಿಗಳ ಅನುಗ್ರಹ ಮತ್ತು ಮಂತ್ರಾಕ್ಷತೆಯ ಆಶೀರ್ವಾದವಿತ್ತು ಎಂಬ ನಂಬಿಕೆ ಭಕ್ತರಲ್ಲಿ ಇದೆ. ಇದೇ ರೀತಿ ಬೆಂಗಳೂರಿನ ವಿಧಾನಸೌಧ ನಿರ್ಮಾಣದ ಸಂದರ್ಭದಲ್ಲಿ ಎದುರಾದ ಕೆಲವು ತೊಂದರೆಗಳ ನಿವಾರಣೆಗೆ ಶ್ರೀಧರ ಸ್ವಾಮಿಗಳು ನೀಡಿದ ಮಂತ್ರಾಕ್ಷತೆಯನ್ನು ವಿಧಾನಸೌಧದ ಪಾಯದಲ್ಲಿ ಹಾಕಲಾಗಿತ್ತು ಎಂಬ ಐತಿಹ್ಯವೂ ಪ್ರಸಿದ್ಧವಾಗಿದೆ.&lt;/p&gt;&lt;h2&gt;ದುಡ್ಡು ಪಡೆದು ಪೂಜೆ ಮಾಡಿಸುವುದಿಲ್ಲ&lt;/h2&gt;&lt;p&gt;ವರದಪುರ ಆಶ್ರಮದ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ವಾಣಿಜ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದಿಲ್ಲ ಎಂಬುದು. ಭಕ್ತರಿಂದ ಹಣ ಕೇಳುವುದಿಲ್ಲ, ಹಣ ಪಡೆದು ವಿಶೇಷ ಪೂಜೆ ಮಾಡಿಸುವುದಿಲ್ಲ ಮತ್ತು ಯಾರ ಪರವಾಗಿಯೂ ಪ್ರಾರ್ಥನೆ ಮಾಡುವುದಿಲ್ಲ ಎಂಬುದು ಆಶ್ರಮದ ಪರಂಪರೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಭಕ್ತರು ತೀರ್ಥಸ್ನಾನ ಮಾಡಿ, ಶ್ರೀಧರ ಸ್ವಾಮಿಗಳ ಸನ್ನಿಧಿಯಲ್ಲಿ ತಾವೇ ಸ್ವತಃ ಪ್ರಾರ್ಥನೆ ಸಲ್ಲಿಸಬಹುದು.&lt;/p&gt;&lt;h2&gt;ಪ್ರತಿದಿನವೂ ಅನ್ನದಾನ, ನೂರಾರು ಗೋವುಗಳ ರಕ್ಷಣೆ&lt;/h2&gt;&lt;p&gt;ವರದಪುರದಲ್ಲಿ ಪ್ರತಿದಿನವೂ ಭಕ್ತರಿಗೆ ಉಚಿತ ಅನ್ನದಾನ ನಡೆಯುತ್ತದೆ. ಯಾವುದೇ ಭೇದಭಾವವಿಲ್ಲದೆ ಇಲ್ಲಿಗೆ ಬರುವ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಇದರ ಜೊತೆಗೆ ಶ್ರೀಧರ ಸ್ವಾಮಿಗಳ ಕಾಲದಿಂದಲೂ ಗೋಸೇವೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಶ್ರಮದ ಗೋಶಾಲೆಯಲ್ಲಿ ನೂರಾರು ಗೋವುಗಳ ರಕ್ಷಣೆ ಮತ್ತು ಪೋಷಣೆ ನಡೆಯುತ್ತಿದೆ.&lt;/p&gt;&lt;h2&gt;ಎಲ್ಲಿದೆ ಈ ಪುಣ್ಯಕ್ಷೇತ್ರ?&lt;/h2&gt;&lt;p&gt;ಶ್ರೀ ಕ್ಷೇತ್ರ ವರದಪುರ (ವರದಹಳ್ಳಿ) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಮೀಪದಲ್ಲಿದೆ. ಸಾಗರ ನಗರದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರಕ್ಕೆ ರಸ್ತೆ ಮಾರ್ಗದ ಮೂಲಕ ತಲುಪಬಹುದು.&lt;/p&gt;&lt;p&gt;ಬೆಂಗಳೂರು ಅಥವಾ ಶಿವಮೊಗ್ಗದ ಕಡೆಯಿಂದ ಬರುವವರು ಮೊದಲು ಸಾಗರ ನಗರ ತಲುಪಿ, ಅಲ್ಲಿಂದ ವರದಪುರಕ್ಕೆ ಖಾಸಗಿ ವಾಹನ ಅಥವಾ ಬಸ್ ಮೂಲಕ ಪ್ರಯಾಣಿಸಬಹುದು.nಆಧ್ಯಾತ್ಮಿಕ ಶಾಂತಿ, ಪವಿತ್ರ ತೀರ್ಥ, ಅನ್ನದಾನ ಮತ್ತು ಶ್ರೀಧರ ಸ್ವಾಮಿಗಳ ಸ್ಮರಣೆಯೊಂದಿಗೆ ಭಕ್ತರನ್ನು ಸೆಳೆಯುತ್ತಿರುವ ವರದಪುರ ಇಂದು ಕರ್ನಾಟಕದ ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಲ್ಲಿ ನಡೆಯುವ ಪವಾಡಗಳು ಮತ್ತು ತೀರ್ಥದ ಮಹತ್ವದ ಕುರಿತ ಹಲವು ನಂಬಿಕೆಗಳು ಭಕ್ತರ ನಡುವೆ ಇಂದಿಗೂ ಜೀವಂತವಾಗಿವೆ.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/karnataka-districts/mysore-maharaja-blessed-with-child-saint-sridhar-swami-ashram-karnataka-suh/articleshow-h0gb5yh"/>
        </item>
        <item>
            <title><![CDATA[ನಷ್ಟದ ಸುಳಿಯಲ್ಲಿ ನಮ್ಮ ಮೆಟ್ರೋ..? ನಿತ್ಯ 11 ಲಕ್ಷ ಪ್ರಯಾಣಿಕರೂ ಓಡಾಡಿದ್ರೂ ಕೋಟಿ ಕೋಟಿ ನಷ್ಟ..?]]></title>
            <link>https://kannada.asianetnews.com/bengaluru-urban/bengalurus-namma-metro-faces-financial-crisis-gkn/articleshow-kfceqk7</link>
            <guid isPermaLink="true">https://kannada.asianetnews.com/bengaluru-urban/bengalurus-namma-metro-faces-financial-crisis-gkn/articleshow-kfceqk7</guid>
            <pubDate>Fri, 31 Jul 2026 12:43:03 +0530</pubDate>
            <description><![CDATA[ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ, ಕಳೆದ ಮೂರು ವರ್ಷಗಳಲ್ಲಿ ನಿಗಮವು ₹1,164 ಕೋಟಿಗೂ ಅಧಿಕ ನಷ್ಟವನ್ನು ಅನುಭವಿಸಿದೆ. ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚ, ಸಾಲದ ಮೇಲಿನ ಬಡ್ಡಿ ಪಾವತಿಗಳಿಂದಾಗಿ ಈ ಆರ್ಥಿಕ ಸಂಕಷ್ಟ ಎದುರಾಗಿದ್ದು, ಇದನ್ನು ಸರಿದೂಗಿಸಲು BMRCL ಪ್ರತಿ ಮೂರು ವರ್ಷಕ್ಕೊಮ್ಮೆ ಶೇ. 12ರಷ್ಟು ದರ ಏರಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky26w4bwf1hkqxp8svswwb1e,imgname-namma-metro-pink-line-1784633233788.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ (Namma Metro) ಪ್ರತಿದಿನ ಲಕ್ಷಾಂತರ ಜನರನ್ನು ನಿರಾಯಾಸವಾಗಿ ತಲುಪಿಸುತ್ತಿದೆ. ಆದರೆ, ಪ್ರತಿಯೊಬ್ಬ ಪ್ರಯಾಣಿಕನಿಗೂ ಅತ್ಯಂತ ಸುರಕ್ಷಿತ ಮತ್ತು ಸುಲಭ ಪ್ರಯಾಣದ ಅನುಭವ ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾತ್ರ ಕಳೆದ ಮೂರು ವರ್ಷಗಳಿಂದ ಭಾರಿ ಆರ್ಥಿಕ ನಷ್ಟದ ಹಳಿಗೆ ಸಿಲುಕಿದೆ. ಮೆಟ್ರೋದಲ್ಲಿ ನಿತ್ಯ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ, ನಿಗಮದ ಆದಾಯದಲ್ಲಿ ಮಾತ್ರ ನಿರೀಕ್ಷಿತ ಮಟ್ಟದ ಚೇತರಿಕೆ ಕಾಣುತ್ತಿಲ್ಲ ಎನ್ನಲಾಗಿದೆ..&lt;/p&gt;&lt;h2&gt;&lt;strong&gt;ಮೂರು ವರ್ಷಗಳಲ್ಲಿ ಕೋಟಿ ಕೋಟಿ ನಷ್ಟ!&lt;/strong&gt;&lt;/h2&gt;&lt;p&gt;ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಿಎಂಆರ್&zwnj;ಸಿಎಲ್ ಬರೋಬ್ಬರಿ 1,164 ಕೋಟಿ ರೂ.ಗಳಿಗೂ ಅಧಿಕ ನಷ್ಟವನ್ನು ಅನುಭವಿಸಿದೆ ಎಂದು ಮೂಲಗಳು ತಿಳಿಸಿವೆ. ನಿಗಮದ ಆದಾಯ ಮತ್ತು ವೆಚ್ಚಗಳ ನಡುವಿನ ಅಜಗಜಾಂತರ ವ್ಯತ್ಯಾಸವೇ ಇದಕ್ಕೆ ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಕಳೆದ ಮೂರು ವರ್ಷಗಳ ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಹೀಗಿದೆ..&lt;/strong&gt;&lt;/h2&gt;&lt;ul&gt; &lt;li&gt;ಕಳೆದ ವರ್ಷ (2024-25): ಒಟ್ಟು 1,190 ಕೋಟಿ ರೂ. ಆದಾಯ ಬಂದಿದ್ದರೆ, ಬರೋಬ್ಬರಿ 1,935 ಕೋಟಿ ರೂ. ಖರ್ಚಾಗಿದೆ. (ಸುಮಾರು 623 ಕೋಟಿ ರೂ. ನಷ್ಟ)&lt;/li&gt; &lt;li&gt;2023-24 ರಲ್ಲಿ: 900 ಕೋಟಿ ರೂ. ಆದಾಯದ ಎದುರು 1,213 ಕೋಟಿ ರೂ. ವೆಚ್ಚವಾಗಿದೆ. (ಸುಮಾರು 350 ಕೋಟಿ ರೂ. ನಷ್ಟ)&lt;/li&gt; &lt;li&gt;2022-23 ರಲ್ಲಿ: 784 ಕೋಟಿ ರೂ. ಆದಾಯ ಬಂದಿದ್ದರೆ, 1,363 ಕೋಟಿ ರೂ. ವೆಚ್ಚವಾಗಿದೆ. (ಸುಮಾರು 641 ಕೋಟಿ ರೂ. ನಷ್ಟ)&lt;/li&gt;&lt;/ul&gt;&lt;h2&gt;&lt;strong&gt;ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ರೂ ನಷ್ಟ ಯಾಕೆ?&lt;/strong&gt;&lt;/h2&gt;&lt;p&gt;ಪ್ರಸ್ತುತ ನಮ್ಮ ಮೆಟ್ರೋದಲ್ಲಿ ನಿತ್ಯ 11 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದಾರೆ. ಆದಾಗ್ಯೂ, ಮಾರುಕಟ್ಟೆಯ ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚ (O&amp;amp;M Cost), ತಾಂತ್ರಿಕ ವೆಚ್ಚಗಳು, ಸಿಬ್ಬಂದಿ ಸಂಬಳ ಹಾಗೂ ಬೃಹತ್ ಸಾಲದ ಮೇಲಿನ ಬಡ್ಡಿ ಪಾವತಿಗಳು ಬಿಎಂಆರ್&zwnj;ಸಿಎಲ್ ಹೆಗಲಿಗೆ ಭಾರವಾಗಿವೆ. ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕಳೆದ ವರ್ಷ ಟಿಕೆಟ್ ದರದಲ್ಲಿ ಗರಿಷ್ಠ ಶೇ. 71 ರಷ್ಟು ಭಾರಿ ಏರಿಕೆ ಮಾಡಲಾಗಿತ್ತು. ಆದರೂ ನಿಗಮವು ನಷ್ಟದ ಸುಳಿಯಿಂದ ಹೊರಬರಲು ಸಾಧ್ಯವಾಗಿಲ್ಲ.&lt;/p&gt;&lt;h2&gt;&lt;strong&gt;12ರಷ್ಟು ದರ ಏರಿಕೆಗೆ BMRCL ಪ್ರಸ್ತಾಪ!&lt;/strong&gt;&lt;/h2&gt;&lt;p&gt;ಮೆಟ್ರೋ ನಿಗಮವನ್ನು ಆರ್ಥಿಕ ಬಿಕ್ಕಟ್ಟಿನಿಂದ ರಕ್ಷಿಸಲು ಬಿಎಂಆರ್&zwnj;ಸಿಎಲ್ ಅಧಿಕಾರಿಗಳು ಈಗ ದರ ಏರಿಕೆಯ ಹೊಸ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದಾರೆ. ಪ್ರತಿ ವರ್ಷ ಶೇ. 5 ರಷ್ಟು ದರ ಏರಿಕೆ ಮಾಡುವ ಬದಲು, ಮೂರು ವರ್ಷಕ್ಕೊಮ್ಮೆ ಶೇ. 12 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲು ಅವಕಾಶ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಒಂದೊಮ್ಮೆ ಕಾಲಕಾಲಕ್ಕೆ ಪ್ರಯಾಣ ದರವನ್ನು ವೈಜ್ಞಾನಿಕವಾಗಿ ಏರಿಕೆ ಮಾಡದಿದ್ದರೆ, ನಿಗಮವು ತೀವ್ರ ಸಾಲದ ಸುಳಿಗೆ ಸಿಲುಕಲಿದೆ ಎಂದು ಅಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ. ನಿತ್ಯ ಸಂಚರಿಸುವ ಸಾಮಾನ್ಯ ಮಧ್ಯಮ ವರ್ಗದ ಪ್ರಯಾಣಿಕರಿಗೆ ದರ ಏರಿಕೆ ಸುದ್ದಿ ಆತಂಕ ಮೂಡಿಸಿದ್ದರೂ, ಮೆಟ್ರೋ ನಿಗಮದ ಸುಸ್ಥಿರ ಕಾರ್ಯಾಚರಣೆಗೆ ದರ ಪರಿಷ್ಕರಣೆ ಅನಿವಾರ್ಯ ಎಂಬ ವಾದವನ್ನು ಅಧಿಕಾರಿಗಳು ಮಂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/bengalurus-namma-metro-faces-financial-crisis-gkn/articleshow-kfceqk7"/>
        </item>
        <item>
            <title><![CDATA[ವಿನಯ್ ಕುಲಕರ್ಣಿ ಗೆ ಬಿಗ್ ರಿಲೀಫ್​, ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ನೀಡಿದ ಹೈಕೋರ್ಟ್]]></title>
            <link>https://kannada.asianetnews.com/karnataka-districts/big-relief-for-vinay-kulkarni-as-high-court-grants-bail-in-yogesh-gowda-murder-case/articleshow-cvnlm4e</link>
            <guid isPermaLink="true">https://kannada.asianetnews.com/karnataka-districts/big-relief-for-vinay-kulkarni-as-high-court-grants-bail-in-yogesh-gowda-murder-case/articleshow-cvnlm4e</guid>
            <pubDate>Fri, 31 Jul 2026 11:02:32 +0530</pubDate>
            <description><![CDATA[&lt;p&gt;ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿಗೆ ಬಿಗ್ ರಿಲಫ್ ಸಿಕ್ಕಿದೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕನಿಗೆ ಸೆಷನ್ ಕೋರ್ಟ್ ಜಾಮೀನು ನೀರಾಕರಿಸಿತ್ತು. ಇದೀಗ ಹೈಕೋರ್ಟ್ ಜಾಮೀನು ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdh942e2d4ymngdazxwe5vk,imgname-vinay-kulkarni-1776423309390.jpeg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಜು.31) ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಸತತ ಕಾನೂನು ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಶಾಸಕ, ಮಾಜಿ ಮಂತ್ರಿ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ವಿಯನ್ ಕುಲಕರ್ಣಿಗೆ ಷರತ್ತುಬದ್ದ ಜಾಮೀನು ನೀಡಿದೆ. 5 ಲಕ್ಷ ರೂಪಾಯಿ ಬಾಂಡ್, ಇಬ್ಬರ ಶ್ಯೂರಿಟಿ ಪಡೆದು ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ಧಾರವಾಡಕ್ಕೆ ಪ್ರವೇಶಕ್ಕೆ ನಿರ್ಭಂಧ ನೀಡಲು ಹೈಕೋರ್ಟ್ ನಿರಾಕರಿಸಿದೆ.&lt;/p&gt;&lt;h2&gt;ಸೆಷನ್ ಕೋರ್ಟ್ ನೀಡಿದ್ದ ಶಿಕ್ಷೆ ಅಮಾನತು ಮಾಡಿದ ಹೈಕೋರ್ಟ್&lt;/h2&gt;&lt;p&gt;ಬಿಜಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸೆಷನ್ ಕೋರ್ಟ್ ವಿನಯ್ ಕುಲಕರ್ಣಿಗೆ ಶಿಕ್ಷೆ ವಿಧಿಸಿತ್ತು. ಜೀವಾವಧಿ ಶಿಕ್ಷಎ ವಿಧಿಸಿದ್ದ ಕಾರಣ ವಿನಯ್ ಕುಲಕರ್ಣಿ 106 ದಿನಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ವಿನಯ್ ಕುಲಕರ್ಣಿ ಸತತವಾಗಿ ಕಾನೂನು ಹೋರಾಟ ಮಾಡಿದ್ದರು. ಇಂದು ವಿನಯ್ ಕುಲಕರ್ಣಿ ರಾಜಕೀಯ ಜೀವನದ ಅತ್ಯಂತ ಪ್ರಮುಖ ದಿನವಾಗಿತ್ತು. ಇಂದು ಹೈಕೋರ್ಟ್ ಸೆಷನ್ ಕೋರ್ಟ್ ಶಿಕ್ಷೆ ಎತ್ತಿಹಿಡಿದರೆ ವಿಯನ್ ಕುಲಕರ್ಣಿ ಶಾಸಕ ಸ್ಥಾನವೂ ರದ್ದಾಗುವು ಭೀತಿಯಲ್ಲಿತ್ತು. ಆದರೆ ಹೈಕೋರ್ಟ್ ಜಾಮೀನು ನೀಡಿದ ಕಾರಣ ಇದೀಗ ವಿನಯ್ ಕುಲಕರ್ಣಿ ಮತ್ತೆ ರಾಜಕೀಯವಾಗಿ ಸಕ್ರೀಯವಾಗಲಿದ್ದಾರೆ.&lt;/p&gt;&lt;p&gt;ಹೈಕೋರ್ಟ್&zwnj;ನಲ್ಲಿ ನ್ಯಾ. ಮೊಹಮ್ಮದ್ ನವಾಜ್ ಮತ್ತು ನ್ಯಾ. ಜಿ. ಬಸವರಾಜ ಅವರ ಪೀಠ ಮಹತ್ವದ ಆದೇಶ ನೀಡಿದೆ. ವಿನಯ್​​ ಕುಲಕರ್ಣಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್​​ ಹಾಜರಾದರೆ, ಸಿಬಿಐ ಪರವಾಗಿ ಸುಪ್ರೀಂ ಕೋರ್ಟ್​​ ಎಎಸ್&zwnj;ಜಿ ಎಸ್.ವಿ.ರಾಜು ವಾದ ಮಂಡಿಸಿದ್ದರು. ಸಿಬಿಐ ವಕೀಲರು ವಿನಯ್​ ಕುಲಕರ್ಣಿಗೆ ಶಿಕ್ಷೆ ಅಮಾನತು ಮಾಡದಂತೆ, ಜಾಮೀನು ನೀಡದಂತೆ ವಾದ ಮಂಡಿಸಿದ್ದರು. ವಿನಯ್​ ಕುಲಕರ್ಣಿ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳು ಕೋರ್ಟ್&zwnj;ನಲ್ಲಿ ಖುಲಾಸೆ ಆಗಿದೆ. ಆದರೆ ಅವುಗಳ ಗಂಭೀರತೆಯನ್ನು ಪರಿಗಣಿಸಬೇಕು ಎಂದು ಸಿಬಿಐ ವಕೀಲರು ವಾದ ಮಂಡಿಸಿದ್ದರು. ವಿನಯ್​ ಕುಲಕರ್ಣಿ ವಿರುದ್ಧ ಸಾಕ್ಷ್ಯ ನಾಶ ಹಾಗೂ ಸಾಕ್ಷಿಗಳ ಮೇಲೆ ಪ್ರಬಾವದ ಆರೋಪಗಳಿವೆ. ಶಾಸಕನಾಗಿರುವ ವಿನಯ್ ಕುಲಕರ್ಣಿ ಪ್ರಭಾವಿ ವ್ಯಕ್ತಿ ಆಗಿದ್ದಾರೆ. ಸಾಕ್ಷಿಗಳ ಮೇಲೆ ಬೆದರಿಕೆ ಆರೋಪವಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದ ಪ್ರಕರಣಗಳನ್ನ ಅರ್ಜಿಯಲ್ಲಿ ಮರೆಮಾಚಲಾಗಿದೆ ಎಂದು ವಾದ ಮಂಡಿಸಲಾಗಿತ್ತು.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/big-relief-for-vinay-kulkarni-as-high-court-grants-bail-in-yogesh-gowda-murder-case/articleshow-cvnlm4e"/>
        </item>
        <item>
            <title><![CDATA[ಧರ್ಮಸ್ಥಳ ಬುರುಡೆ ಪ್ರಕರಣ: ಬಂಗ್ಲೆಗುಡ್ಡೆಯಲ್ಲಿ ಸಿಕ್ಕ 3 ಅಸ್ಥಿಪಂಜದ ಡಿಎನ್‌ಎ ದೃಢ; ನಾಪತ್ತೆಯಾದವರ ಗುರುತು ಪತ್ತೆ!]]></title>
            <link>https://kannada.asianetnews.com/karnataka-districts/dharmasthala-burude-case-dna-test-identifies-3-skeletons-exhumed-by-sit-in-belthangady-gdp/articleshow-9a88osk</link>
            <guid isPermaLink="true">https://kannada.asianetnews.com/karnataka-districts/dharmasthala-burude-case-dna-test-identifies-3-skeletons-exhumed-by-sit-in-belthangady-gdp/articleshow-9a88osk</guid>
            <pubDate>Fri, 31 Jul 2026 10:54:39 +0530</pubDate>
            <description><![CDATA[ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಪತ್ತೆಯಾಗಿದ್ದ ಏಳು ಅಸ್ಥಿಪಂಜರಗಳ ಪೈಕಿ ಮೂರರ ಗುರುತನ್ನು ಡಿಎನ್&zwnj;ಎ ಪರೀಕ್ಷೆಯಿಂದ ಅಧಿಕೃತವಾಗಿ ದೃಢಪಡಿಸಲಾಗಿದೆ. ಹಲವು ವರ್ಷಗಳ ಹಿಂದೆ ಕೊಡಗು, ತುಮಕೂರು ಮತ್ತು ಕೋಲಾರದಿಂದ ನಾಪತ್ತೆಯಾಗಿದ್ದ ವ್ಯಕ್ತಿಗಳಿವು ಎಂದು ಎಸ್&zwnj;ಐಟಿ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಎಸ್&zwnj;ಐಟಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k47xpm9et8fwbkffrj7qypma,imgname-gtgtgt-1756907655470.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳ್ತಂಗಡಿ (ದಕ್ಷಿಣ ಕನ್ನಡ): &lt;/strong&gt;ಇಡೀ ರಾಜ್ಯಾದ್ಯಂತ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಗ್ರಾಮದ ಭೀಕರ 'ಬುರುಡೆ ಪ್ರಕರಣ'ಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ತಿರುವು ಸಿಕ್ಕಿದೆ. ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳು ಯಾರಿಗೆ ಸೇರಿದ್ದು ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ (FSL) ಡಿಎನ್&zwnj;ಎ (DNA) ಪರೀಕ್ಷೆಯಿಂದ ಅಧಿಕೃತವಾಗಿ ದೃಢಪಟ್ಟಿದೆ. ಎಸ್ಐಟಿ (SIT) ಅಧಿಕಾರಿಗಳು ನಡೆಸಿದ ಸುದೀರ್ಘ ತನಿಖೆ ಹಾಗೂ ವೈಜ್ಞಾನಿಕ ವಿಶ್ಲೇಷಣೆಯಿಂದಾಗಿ, ಹಲವು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮೂವರು ವ್ಯಕ್ತಿಗಳ ಗುರುತು ಈಗ ಪತ್ತೆಯಾದಂತಾಗಿದೆ.&lt;/p&gt;&lt;p&gt;ಪ್ರಕರಣದ ಹಿನ್ನೆಲೆ ಮತ್ತು ಎಸ್&zwnj;ಐಟಿ ಶೋಧ ಕಾರ್ಯಾಚರಣೆ ಸೌಜನ್ಯಳ ಮಾವ ವಿಠಲ ಗೌಡ ಅವರು ನೀಡಿದ ಸುಳಿವಿನ ಆಧಾರದ ಮೇಲೆ, ವಿಶೇಷ ತನಿಖಾ ದಳದ (SIT) ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಂಗ್ಲೆಗುಡ್ಡೆ ಎಂಬ ಪ್ರದೇಶದಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಕಳೆದ ಸೆಪ್ಟೆಂಬರ್ 17 ಮತ್ತು 18ರಂದು ನಡೆದ ಈ ಜಂಟಿ ಕಾರ್ಯಾಚರಣೆಯ ವೇಳೆ ಒಟ್ಟು ಏಳು ಅಸ್ಥಿಪಂಜರಗಳು ಪತ್ತೆಯಾಗಿ ಇಡೀ ರಾಜ್ಯ ಬೆಚ್ಚಿಬೀಳುವಂತೆ ಮಾಡಿತ್ತು.&lt;/p&gt;&lt;p&gt;ಅಸ್ಥಿಪಂಜರಗಳು ಸಿಕ್ಕ ಜಾಗದಲ್ಲೇ ಕೆಲವು ಗುರುತಿನ ಚೀಟಿಗಳು (ID Cards) ಸಹ ಲಭ್ಯವಾಗಿದ್ದವು. ಈ ನಿರ್ಣಾಯಕ ಆಧಾರದ ಮೇಲೆ ಎಸ್&zwnj;ಐಟಿ ಅಧಿಕಾರಿಗಳು ನಾಪತ್ತೆಯಾದವರ ಕುಟುಂಬಸ್ಥರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ತದನಂತರ ಬೆಳ್ತಂಗಡಿ ನ್ಯಾಯಾಲಯದ ಅನುಮತಿಯೊಂದಿಗೆ ಆಯಾ ಕುಟುಂಬದ ಸದಸ್ಯರ ರಕ್ತದ ಮಾದರಿಯನ್ನು ಪಡೆದು, ಡಿಎನ್&zwnj;ಎ ಪರೀಕ್ಷೆಗಾಗಿ ಬೆಂಗಳೂರಿನ ಎಫ್&zwnj;ಎಸ್&zwnj;ಎಲ್ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದೀಗ ಬಂದಿರುವ ವೈಜ್ಞಾನಿಕ ವರದಿಯಲ್ಲಿ ಮೂರು ಕುಟುಂಬಗಳ ಡಿಎನ್&zwnj;ಎ, ಪತ್ತೆಯಾದ ಅಸ್ಥಿಪಂಜರಗಳೊಂದಿಗೆ ಶೇ. 100 ರಷ್ಟು ತಾಳೆಯಾಗಿದೆ.&lt;/p&gt;&lt;p&gt;ಗುರುತು ಪತ್ತೆಯಾದ ಆ ಮೂವರು ಯಾರು? ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ, ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನಾಪತ್ತೆಯಾಗಿದ್ದ ಈ ಕೆಳಗಿನ ವ್ಯಕ್ತಿಗಳಿಗೆ ಸೇರಿದ್ದಾಗಿವೆ:&lt;/p&gt;&lt;p&gt;ಯು. ಬಿ. ಅಯ್ಯಪ್ಪ (70 ವರ್ಷ): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ನಿವಾಸಿ.&lt;/p&gt;&lt;p&gt;ಆದಿಶೇಷ ನಾರಾಯಣ (27 ವರ್ಷ): ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ಗ್ರಾಮದ ನಿವಾಸಿ.&lt;/p&gt;&lt;p&gt;ಕೃಷ್ಣಪ್ಪ (85 ವರ್ಷ): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ನಿವಾಸಿ.&lt;/p&gt;&lt;p&gt;ನಾಪತ್ತೆಯಾಗಿದ್ದ ಇತಿಹಾಸವೇನು? ಡಿಎನ್&zwnj;ಎ ಮೂಲಕ ಗುರುತು ಪತ್ತೆಯಾಗಿರುವ ಈ ಮೂವರೂ ವ್ಯಕ್ತಿಗಳು ಹಲವು ವರ್ಷಗಳ ಹಿಂದೆಯೇ ತಮ್ಮ ತಮ್ಮ ಊರುಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರ ಹಿನ್ನೆಲೆ ಹೀಗಿದೆ:&lt;/p&gt;&lt;p&gt;&lt;strong&gt;ಕೊಡಗಿನ ಅಯ್ಯಪ್ಪ:&lt;/strong&gt; ಇವರು 2017ರ ಜೂನ್ 25ರಂದು ಮೈಸೂರಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ತೆರಳಿದ್ದರು. ಆದರೆ ಆಸ್ಪತ್ರೆಗೆ ಹೋದವರು ಮತ್ತೆ ಎಂದಿಗೂ ಮನೆಗೆ ಮರಳಲೇ ಇಲ್ಲ. ಈ ಸಂಬಂಧ ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ (Missing Case) ದಾಖಲಾಗಿತ್ತು.&lt;/p&gt;&lt;p&gt;&lt;strong&gt;ತುಮಕೂರಿನ ಆದಿಶೇಷ ನಾರಾಯಣ: &lt;/strong&gt;ಈತ ಬೆಂಗಳೂರಿನ ಬಾರ್&zwnj; ಒಂದರಲ್ಲಿ ಕೆಲಸ ಮಾಡುತ್ತಿದ್ದ. 2013ರ ಅಕ್ಟೋಬರ್ 2ರಂದು ಮನೆಗೆ ಬಂದಿದ್ದ ಆತ, ತನ್ನ ಮೊಬೈಲ್ ಫೋನನ್ನು ಮನೆಯಲ್ಲೇ ಇಟ್ಟು ಏಕಾಏಕಿ ನಾಪತ್ತೆಯಾಗಿದ್ದ. ಈತ ಈ ಹಿಂದೆಯೂ ಹಲವು ಬಾರಿ ಮನೆಯಿಂದ ಹೇಳದೆ ಕೇಳದೆ ಹೋಗಿ ಮತ್ತೆ ವಾಪಸ್ ಬರುತ್ತಿದ್ದ ಕಾರಣ, ಈ ಬಾರಿಯೂ ಬರುತ್ತಾನೆಂದು ನಂಬಿದ ಕುಟುಂಬಸ್ಥರು ಯಾವುದೇ ಪೊಲೀಸ್ ದೂರನ್ನು ನೀಡಿರಲಿಲ್ಲ.&lt;/p&gt;&lt;p&gt;&lt;strong&gt;ಕೋಲಾರದ ಕೃಷ್ಣಪ್ಪ:&lt;/strong&gt; 85 ವರ್ಷದ ವೃದ್ಧ ಕೃಷ್ಣಪ್ಪ ಅವರು ಕಳೆದ ಅಕ್ಟೋಬರ್ 22ರಂದು ದಿಢೀರನೆ ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದಿದ್ದಾಗ ಕುಟುಂಬದವರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.&lt;/p&gt;&lt;h2&gt;ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ&lt;/h2&gt;&lt;p&gt;ಅವಶೇಷ ಹಸ್ತಾಂತರಕ್ಕೆ ಅವಕಾಶ ವಿಶೇಷ ತನಿಖಾ ದಳದ (SIT) ಅಧಿಕಾರಿಗಳು ಜುಲೈ 15ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು (Final Report) ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಮೂವರ ಡಿಎನ್&zwnj;ಎ ದೃಢಪಟ್ಟಿರುವ ಮಹತ್ವದ ಅಂಶವನ್ನು ಅಧಿಕೃತವಾಗಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ಕಾನೂನು ಪ್ರಕ್ರಿಯೆಗಳ ಪ್ರಕಾರ, ಡಿಎನ್&zwnj;ಎ ವರದಿಯ ಆಧಾರದ ಮೇಲೆ ಗುರುತು ಸಿಕ್ಕಿರುವ ಈ ಮೂರು ಕುಟುಂಬಗಳ ಸದಸ್ಯರು ತಮ್ಮ ಆತ್ಮೀಯರ ಅಸ್ಥಿಪಂಜರ ಅಥವಾ ಚಿತಾಭಸ್ಮವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಕುಟುಂಬಸ್ಥರು ಎಸ್&zwnj;ಐಟಿ ಅಧಿಕಾರಿಗಳಿಗೆ ಅಧಿಕೃತವಾಗಿ ಮನವಿ ಸಲ್ಲಿಸಬೇಕಾಗುತ್ತದೆ. ಇಷ್ಟು ವರ್ಷಗಳ ಕಾಲ ಕತ್ತಲೆಯಲ್ಲಿದ್ದ ಈ ನಿಗೂಢ ಸಾವಿನ ರಹಸ್ಯಗಳು ಈಗ ವಿಜ್ಞಾನದ ಸಹಾಯದಿಂದ ಒಂದೊಂದಾಗಿ ಹೊರಬರುತ್ತಿದ್ದು, ಉಳಿದ ನಾಲ್ಕು ಅಸ್ಥಿಪಂಜರಗಳ ತನಿಖೆಯೂ ಚುರುಕಾಗಿ ಸಾಗುತ್ತಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/dharmasthala-burude-case-dna-test-identifies-3-skeletons-exhumed-by-sit-in-belthangady-gdp/articleshow-9a88osk"/>
        </item>
        <item>
            <title><![CDATA[ಕಮಲಾಕರ್‌ ಭಟ್‌ಗೆ ಮತ್ತೆ ಬಿಗ್‌ ಶಾಕ್..‌ ವಸಂತ್‌ ನಾಯ್ಕ್-ಸುಚಿತ್ರ ಕೇಸ್‌ನಲ್ಲಿ ಬಿಗ್‌ ಅಪ್‌ಡೇಟ್ಸ್‌..!]]></title>
            <link>https://kannada.asianetnews.com/uttara-kannada/another-blow-to-astrologer-kamalakar-bhat-court-denies-bail-in-vasanth-naik-and-suchitra-case-gkn/articleshow-4g0upfx</link>
            <guid isPermaLink="true">https://kannada.asianetnews.com/uttara-kannada/another-blow-to-astrologer-kamalakar-bhat-court-denies-bail-in-vasanth-naik-and-suchitra-case-gkn/articleshow-4g0upfx</guid>
            <pubDate>Fri, 31 Jul 2026 10:24:43 +0530</pubDate>
            <description><![CDATA[&lt;p&gt;ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ನಡೆದಿದ್ದ ವಸಂತ್ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ, ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಜನ ಆರೋಪಿಗಳ ಮಧ್ಯಂತರ ಜಾಮೀನು ಅರ್ಜಿಯನ್ನು ಶಿರಸಿಯ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ವಜಾಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kh44c9g8wrk9xm30ag3bvbbs,imgname-7-1770739082760.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ನಡೆದಿದ್ದ ವಸಂತ್ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ, ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಜನ ಆರೋಪಿಗಳ ಮಧ್ಯಂತರ ಜಾಮೀನು ಅರ್ಜಿಯನ್ನು ಶಿರಸಿಯ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ವಜಾಗೊಳಿಸಿದೆ. ಇದರೊಂದಿಗೆ, ಕಳೆದ ಆರು ತಿಂಗಳಿಂದ ಜೈಲು ಪಾಲಾಗಿರುವ ಆರೋಪಿಗಳಿಗೆ ನ್ಯಾಯಾಲಯದಿಂದ ಯಾವುದೇ ಸಮಾಧಾನ ಸಿಕ್ಕಿಲ್ಲ. ಸದ್ಯ ಕಮಲಾಕರ್ ಭಟ್ ಹಾಗೂ ಇತರೆ ಆರೋಪಿಗಳು ಕಾರವಾರದ ಜೈಲಿನಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಶಿರಸಿ ನ್ಯಾಯಾಲಯದ ಮಹತ್ವದ ಆದೇಶ&lt;/strong&gt;&lt;/h2&gt;&lt;p&gt;ಕಳೆದ ಫೆಬ್ರವರಿ ತಿಂಗಳಲ್ಲಿ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ವಸಂತ್ ನಾಯ್ಕ್ ಅವರ ಭೀಕರ ಹತ್ಯೆ ನಡೆದಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ ಸೇರಿದಂತೆ ಒಟ್ಟು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ ಎಂಟು ಜನರನ್ನು ಪೊಲೀಸರು ಬಂಧಿಸಿದ್ದರು. ಇವರಲ್ಲಿ ಒಬ್ಬರು ತಲೆಮರೆಸಿಕೊಂಡಿದ್ದರೆ, ಮತ್ತೊಬ್ಬರಿಗೆ ಈಗಾಗಲೇ ಬೇಲ್ ಲಭ್ಯವಾಗಿದೆ. ಉಳಿದ ಏಳು ಜನ ಆರೋಪಿಗಳಾದ ಕಮಲಾಕರ್ ಭಟ್, ಸುಚಿತ್ರಾ, ಲೋಕನಾಥ್, ಮೊಹಮ್ಮದ್ ಮೆಹಫೂಜ್, ಮೊಹಮ್ಮದ್ ಫೈಸಲ್, ಇರ್ಫಾನ್ ಹಾಗೂ ಆಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಶಿರಸಿಯ ನ್ಯಾಯಾಲಯವು, ಎಲ್ಲರ ಅರ್ಜಿಯನ್ನು ತಿರಸ್ಕರಿಸಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಕಮಲಾಕರ್ ಭಟ್&zwnj;ಗೆ ಎರಡು ಪ್ರಕರಣಗಳ ಬಿಸಿ!&lt;/strong&gt;&lt;/h2&gt;&lt;p&gt;ಖ್ಯಾತ ಜ್ಯೋತಿಷಿ ಎಂದು ಕರೆಸಿಕೊಳ್ಳುತ್ತಿದ್ದ ಕಮಲಾಕರ್ ಭಟ್ ವಿರುದ್ಧ ಕೇವಲ ಹತ್ಯೆ ಪ್ರಕರಣ ಮಾತ್ರವಲ್ಲದೆ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೋ (POCSO) ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ. ಹೀಗಾಗಿ ಕಮಲಾಕರ್ ಭಟ್ ಸದ್ಯ ಎರಡು ಪ್ರಮುಖ ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಆರೋಪಿಯು ಜಾಮೀನು ಕೋರಿ ಎರಡೂ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಶಿರಸಿ ನ್ಯಾಯಾಲಯವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಯನ್ನು ಕಟ್ಟುನಿಟ್ಟಾಗಿ ವಜಾಗೊಳಿಸಿದ್ದು, ಆರೋಪಿಗಳು ಜೈಲಿನಲ್ಲೇ ಮುಂದುವರಿಯಬೇಕಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/uttara-kannada/another-blow-to-astrologer-kamalakar-bhat-court-denies-bail-in-vasanth-naik-and-suchitra-case-gkn/articleshow-4g0upfx"/>
        </item>
        <item>
            <title><![CDATA[ಕುಡಿಯುವ ನೀರನ್ನ ಅಕ್ರಮವಾಗಿ ಜಮೀನಿಗೆ ಹರಿಸಿಕೊಂಡ ರೈತರು.. ಕೊಪ್ಪಳದಲ್ಲಿ ಅಸಲಿಗೆ ಆಗಿದ್ದೇನು?]]></title>
            <link>https://kannada.asianetnews.com/koppal/farmers-accused-of-illegally-diverting-canal-water-in-dasanala-gangavathi-gkn/articleshow-n2dr5nw</link>
            <guid isPermaLink="true">https://kannada.asianetnews.com/koppal/farmers-accused-of-illegally-diverting-canal-water-in-dasanala-gangavathi-gkn/articleshow-n2dr5nw</guid>
            <pubDate>Fri, 31 Jul 2026 10:10:07 +0530</pubDate>
            <description><![CDATA[&lt;p&gt;ಗಂಗಾವತಿ ತಾಲೂಕಿನ ಬಸಾಪಟ್ಟಣ, ಹಿರೇಬೆಣಕಲ್ ಹಾಗೂ ದಾಸನಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೀರು ಹರಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಡಿಸ್ಟ್ರುಬ್ಯೂಟರ್ (Distributor) 14, 15, 16 ಮತ್ತು 17 ರಲ್ಲಿ ರೈತರು ಮುಖ್ಯ ಕಾಲುವೆಯಿಂದ (Main Canal) ಸಣ್ಣ ಕಾಲುವೆಗಳು ಹಾಗೂ ಉಪ-ಕಾಲುವೆಗಳ ಮೂಲಕ ಜಮೀನುಗಳಿಗೆ ಅಕ್ರಮವಾಗಿ ನೀರನ್ನು ಹರಿಸಿಕೊಳ್ಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyv7aecxcx0djqsyzjjx0te1,imgname-farmers-accused-of-illegally-diverting-canal-water-in-dasanala--gangavathi-1785472563613.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ: &lt;/strong&gt;ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜನರ ಕುಡಿಯುವ ನೀರಿಗಾಗಿ ಮೀಸಲಿಟ್ಟಿದ್ದ ಕಾಲುವೆ ನೀರನ್ನು ಕೆಲವು ರೈತರು ಅಕ್ರಮವಾಗಿ ತಮ್ಮ ಜಮೀನುಗಳಿಗೆ ಹರಿಸಿಕೊಳ್ಳುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶವಿದ್ದಾಗ್ಯೂ, ಗಂಗಾವತಿ ತಾಲೂಕಿನ ದಾಸನಾಳ ಸೇರಿದಂತೆ ಹಲವೆಡೆ ರಾಜಾರೋಷವಾಗಿ ಅಕ್ರಮ ನೀರು ಬಳಕೆ ನಡೆಯುತ್ತಿದೆ. ಆದರೂ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಕುಡಿಯುವ ನೀರಿಗಾಗಿ ಬಿಟ್ಟಿದ್ದ ನೀರು ಕೃಷಿಗೆ ಬಳಕೆ!&lt;/strong&gt;&lt;/h2&gt;&lt;p&gt;ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೊಂದರೆ ನೀಗಿಸಲು ತುಂಗಭದ್ರಾ ಎಡದಂಡೆ ಕಾಲುವೆಗೆ (TLBC) ನೀರು ಹರಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ರೈತರು ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ಅಥವಾ ಜಮೀನುಗಳಿಗೆ ಬಳಸಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಕೆಲವು ರೈತರು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ನಡೆಯುತ್ತಿದೆ ಅಕ್ರಮ?&lt;/strong&gt;&lt;/h2&gt;&lt;p&gt;ಗಂಗಾವತಿ ತಾಲೂಕಿನ ಬಸಾಪಟ್ಟಣ, ಹಿರೇಬೆಣಕಲ್ ಹಾಗೂ ದಾಸನಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೀರು ಹರಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಡಿಸ್ಟ್ರುಬ್ಯೂಟರ್ (Distributor) 14, 15, 16 ಮತ್ತು 17 ರಲ್ಲಿ ರೈತರು ಮುಖ್ಯ ಕಾಲುವೆಯಿಂದ (Main Canal) ಸಣ್ಣ ಕಾಲುವೆಗಳು ಹಾಗೂ ಉಪ-ಕಾಲುವೆಗಳ ಮೂಲಕ ಜಮೀನುಗಳಿಗೆ ಅಕ್ರಮವಾಗಿ ನೀರನ್ನು ಹರಿಸಿಕೊಳ್ಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ಶಾಮೀಲು ಶಂಕೆ?&lt;/strong&gt;&lt;/h2&gt;&lt;p&gt;ಹಲವು ಗ್ರಾಮಗಳಲ್ಲಿ ಬಹಿರಂಗವಾಗಿಯೇ ಅಕ್ರಮವಾಗಿ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದರೂ, ಸಂಬಂಧಪಟ್ಟ ನೀರಾವರಿ ಇಲಾಖೆ ಹಾಗೂ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಅಕ್ರಮ ಕೃತ್ಯಕ್ಕೆ ಅಧಿಕಾರಿಗಳೇ ರೈತರೊಂದಿಗೆ ಶಾಮೀಲಾಗಿದ್ದಾರೆಯೇ ಎಂಬ ದಟ್ಟ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಭೀತಿ ಇದ್ದರೂ, ಜವಾಬ್ದಾರಿಯುತ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮವಾಗಿ ನೀರು ಹರಿಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕುಡಿಯುವ ನೀರನ್ನು ರಕ್ಷಿಸಬೇಕು ಎಂದು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಜನತೆ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/koppal/farmers-accused-of-illegally-diverting-canal-water-in-dasanala-gangavathi-gkn/articleshow-n2dr5nw"/>
        </item>
        <item>
            <title><![CDATA[ಕಾವೇರಿ ನೀರು ಬಿಡುಗಡೆಗೆ ನಿರ್ವಹಣಾ ಪ್ರಾಧಿಕಾರದಿಂದಲೂ ಆದೇಶ ಕಾವೇರಿ ಇಕ್ಕಟ್ಟಿನಲ್ಲಿ ಸರ್ಕಾರ - ಮುಂದೇನು?]]></title>
            <link>https://kannada.asianetnews.com/state/cauvery-water-dispute-cwma-has-now-also-upheld-the-cwrc-s-order-what-next-rav/articleshow-phq9h3x</link>
            <guid isPermaLink="true">https://kannada.asianetnews.com/state/cauvery-water-dispute-cwma-has-now-also-upheld-the-cwrc-s-order-what-next-rav/articleshow-phq9h3x</guid>
            <pubDate>Fri, 31 Jul 2026 08:59:37 +0530</pubDate>
            <description><![CDATA[ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್&zwnj; ನೀರು ಬಿಡಬೇಕೆಂಬ ಸಿಡಬ್ಲ್ಯುಆರ್&zwnj;ಸಿ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ. ಮುಂಗಾರು ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರ, ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyv392f0563gynkzhp05f7za,imgname-----------------------2026-07-31t085507.920-1785468324320.jpg" type="image/jpeg" height="390" width="690"/>
            <content:encoded><![CDATA[&lt;p&gt;--&lt;/p&gt;&lt;p&gt;&lt;strong&gt;ನಿನ್ನೆ ಏನಾಯ್ತು?&lt;/strong&gt;&lt;/p&gt;&lt;ul&gt; &lt;li&gt;15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್&zwnj; ನೀರು ಬಿಡುಗಡೆ ಮಾಡಲು ಜು.28ರಂದು ಸೂಚಿಸಿದ್ದ ಸಿಡಬ್ಲ್ಯುಆರ್&zwnj;ಸಿ&lt;/li&gt; &lt;li&gt;ಇದರ ವಿರುದ್ಧ ಕರ್ನಾಟಕ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ&lt;/li&gt; &lt;li&gt;ಎಲ್&zwnj;ನಿನೋದಿಂದ ಬರಗಾಲವಿದೆ. ಡ್ಯಾಂಗಳಲ್ಲಿ 30 ವರ್ಷಕ್ಕಿಂತ ಕಡಿಮೆ ನೀರಿದೆ ಎಂದು ಕರ್ನಾಟಕದ ವಾದ&lt;/li&gt; &lt;li&gt;ತ.ನಾಡಿಗೆ ಹಿಂಗಾರು ಮಳೆಯ ಅವಕಾಶವಿದೆ. ಈ ಹಿಂದೆ ಅವರಿಗೆ ಸಾಕಷ್ಟು ನೀರು ಬಿಟ್ಟಿದ್ದೇವೆ ಎಂದ ರಾಜ್ಯ&lt;/li&gt; &lt;li&gt;3500 ಕ್ಯುಸೆಕ್&zwnj; ಬಿಡುಗಡೆಗೆ ಆದೇಶಿಸಿದ್ದರೂ ನೀರು ಬಿಳಿಗುಂಡ್ಲು ತಲುಪಲು 7000 ಕ್ಯುಸೆಕ್&zwnj; ಬಿಡಬೇಕು: ಕರ್ನಾಟಕ&lt;/li&gt; &lt;li&gt;ಸಿಡಬ್ಲ್ಯುಆರ್&zwnj;ಸಿ ಆದೇಶಕ್ಕೆ 15 ದಿನ ತಡೆ ನೀಡಲು ಕರ್ನಾಟಕ ಸರ್ಕಾರ ವಾದ. ಹೆಚ್ಚು ನೀರಿಗೆ ಬೇಡಿಕೆ ಇಟ್ಟ ತ.ನಾಡು&lt;/li&gt; &lt;li&gt;ಆದರೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್&zwnj;ಸಿ) ಆದೇಶವನ್ನು ಎತ್ತಿ ಹಿಡಿದ ನಿರ್ವಹಣಾ ಪ್ರಾಧಿಕಾರ&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ನವದೆಹಲಿ/ಬೆಂಗಳೂರು (ಜು.31):&lt;/strong&gt; 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್&zwnj; ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್&zwnj;ಸಿ)ಯ ಆದೇಶದ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿರುವಾಗಲೇ, ಸಿಡಬ್ಲ್ಯುಆರ್&zwnj;ಸಿ ಆದೇಶವನ್ನು ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕೂಡ ಎತ್ತಿ ಹಿಡಿದಿದೆ.&lt;/p&gt;&lt;p&gt;ಮುಂಗಾರು ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜಲಾಶಯಗಳು ಖಾಲಿ ಇದ್ದರೂ 15 ದಿನಗಳಲ್ಲಿ 4 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿಗೆ ಸಂಬಂಧಿಸಿದ ಎರಡು ಸಂಸ್ಥೆಗಳು ಆದೇಶಿಸಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಭಾನುವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷಗಳ ಸಭೆಯನ್ನು ಆಯೋಜಿಸಿದೆ.&lt;/p&gt;&lt;p&gt;ಭಾನುವಾರ ನಡೆಯಲಿರುವ ಸರ್ವ ಪಕ್ಷ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲಿಯವರೆಗೆ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h2&gt;ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಹಿನ್ನಡೆ:&lt;/h2&gt;&lt;p&gt;ತಮಿಳುನಾಡಿಗೆ 15 ದಿನ ನಿತ್ಯ 3500 ಕ್ಯುಸೆಕ್&zwnj; ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್&zwnj;ಸಿ) ಜು.28ರಂದು ಸೂಚಿಸಿತ್ತು. ಇದರ ವಿರುದ್ಧ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ಗೆ ಮೇಲ್ಮನವಿ ಸಲ್ಲಿಸಿತ್ತು. ಒಳಹರಿವಿನ ಸಮಸ್ಯೆಯಿಂದಾಗಿ ತೀವ್ರ ಜಲಸಂಕಷ್ಟವಿದೆ. ಹೀಗಾಗಿ ಇನ್ನೂ 15 ದಿನಗಳ ಕಾಲ ನೀರು ಬಿಡುಗಡೆ ಆದೇಶಕ್ಕೆ ತಡೆಯೊಡ್ಡಬೇಕು ಎಂದು ಮನವಿ ಮಾಡಿತ್ತು. ಆದರೆ, ಗುರುವಾರ ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ಸಿಡಬ್ಲ್ಯುಆರ್&zwnj;ಸಿ ಆದೇಶವನ್ನು ಎತ್ತಿ ಹಿಡಿಯಲಾಗಿದೆ.&lt;/p&gt;&lt;p&gt;ಸೂಪರ್&zwnj; ಎಲ್&zwnj; ನಿನೋ ಪರಿಣಾಮದಿಂದಾಗಿ ಕರ್ನಾಟಕದ ಜಲಾಶಯಗಳಲ್ಲಿ ಶೇ.65.65ರಷ್ಟು ಮಾತ್ರವೇ ನೀರು ಇದೆ. ಇದು 30 ವರ್ಷಗಳ ಸರಾಸರಿಗಿಂತ ಕಡಿಮೆಯಾಗಿದೆ. ತಮಿಳುನಾಡಿಗೆ ಹಿಂಗಾರು ಮಳೆಯಾಗುವ ನಿರೀಕ್ಷೆ ಇದೆ. 3500 ಕ್ಯುಸೆಕ್&zwnj; ಹರಿಸುವಂತೆ ಆದೇಶಿಸಿದ್ದರೂ, ಬಿಳಿಗುಂಡ್ಲುವಿಗೆ ನೀರು ತಲುಪಬೇಕೆಂದರೆ 7000 ಕ್ಯುಸೆಕ್&zwnj; ಬಿಡುಗಡೆ ಮಾಡಬೇಕಾಗುತ್ತದೆ. 2027ರ ಜೂನ್&zwnj;ವರೆಗೂ ಕುಡಿಯುವ ನೀರಿನ ಅವಶ್ಯಕತೆಗೇ 40 ಟಿಎಂಸಿ ಬೇಕಾಗಿದೆ ಎಂದು ಸರ್ಕಾರ ವಾದಿಸಿತು. ಆದರೆ, 3500 ಕ್ಯುಸೆಕ್&zwnj; ಬದಲಿಗೆ ಇನ್ನೂ ಹೆಚ್ಚಿನ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ವಾದ ಮಂಡಿಸಿತು.&lt;/p&gt;&lt;p&gt;ಕರ್ನಾಟಕದ ಪರವಾಗಿ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಗೌರವ್&zwnj; ಗುಪ್ತಾ ಹಾಜರಿದ್ದರು. ಅವರು ಸಭೆಯ ಬಳಿಕ ದೆಹಲಿಯಲ್ಲಿಯೇ ಬೀಡು ಬಿಟ್ಟಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರಿಗೆ ಪ್ರಾಧಿಕಾರದ ನಿರ್ದೇಶನವನ್ನು ತಿಳಿಸಿದರು.&lt;/p&gt;&lt;h3&gt;ಕಾವೇರಿ ನೀರು ವಿವಾದ ಸರ್ವ ಪಕ್ಷ ಸಭೆ:&lt;/h3&gt;&lt;p&gt;ಕಾವೇರಿ ನೀರಿನ ವಿಚಾರವಾಗಿ ಬರುವ ಭಾನುವಾರ (ಆಗಸ್ಟ್ 2)ರಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cauvery-water-dispute-cwma-has-now-also-upheld-the-cwrc-s-order-what-next-rav/articleshow-phq9h3x"/>
        </item>
        <item>
            <title><![CDATA[ಯೋಗೇಶ್ ಗೌಡ ಹತ್ಯೆ ಕೇಸ್: ಜಾಮೀನು ಕೋರಿ ವಿನಯ್‌ ಕುಲಕರ್ಣಿ ಅರ್ಜಿ ಇಂದು ಹೈಕೋರ್ಟ್‌ ತೀರ್ಪು]]></title>
            <link>https://kannada.asianetnews.com/state/yogesh-gowda-murder-case-karnataka-high-court-to-pronounce-verdict-today-on-vinay-kulkarni-bail-sentence-plea-gdp/articleshow-nwpepud</link>
            <guid isPermaLink="true">https://kannada.asianetnews.com/state/yogesh-gowda-murder-case-karnataka-high-court-to-pronounce-verdict-today-on-vinay-kulkarni-bail-sentence-plea-gdp/articleshow-nwpepud</guid>
            <pubDate>Fri, 31 Jul 2026 08:50:59 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ, ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್&zwnj;ಗೆ ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ಈ ಮನವಿಯ ಕುರಿತ ತೀರ್ಪನ್ನು ಹೈಕೋರ್ಟ್ ಶುಕ್ರವಾರ ಪ್ರಕಟಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp7v1w3ssae3zg146z32qbb3,imgname-vinay-kulkarni-and-yogesh-gowda--1--1776232231033.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು&lt;/strong&gt;: ಧಾರವಾಡದ ಬಿಜೆಪಿ&zwnj; ಮುಖಂಡ ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಅಮಾನತ್ತಿನಲ್ಲಿಟ್ಟು, ಜಾಮೀನು ನೀಡಬೇಕೆಂಬ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಧ್ಯಂತರ&zwnj;&zwnj; ಮನವಿ ಕುರಿತ ತೀರ್ಪನ್ನು ಹೈಕೋರ್ಟ್ ಶುಕ್ರವಾರ ಪ್ರಕಟಿಸಲಿದೆ.&lt;/p&gt;&lt;p&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಹೈಕೋರ್ಟ್&zwnj;ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ. ಹಾಗೆಯೇ,&zwnj;&zwnj;&zwnj;&zwnj;&zwnj;&zwnj;&zwnj; ಶಿಕ್ಷೆಯನ್ನು ಅಮಾನತಿನಲ್ಲಿಟ್ಟು&zwnj;&zwnj;&zwnj;&zwnj; ಜಾಮೀನು ಮಂಜೂರು ಮಾಡಬೇಕು&zwnj;&zwnj; ಎಂದು ಮಧ್ಯಂತರ&zwnj;&zwnj; ಮನವಿ ಮಾಡಿದ್ದಾರೆ.&lt;/p&gt;&lt;p&gt;ಈ ಮಧ್ಯಂತರ ಮನವಿ&zwnj; ಕುರಿತು ಕುಲಕರ್ಣಿ ಹಾಗೂ ಸಿಬಿಐ ಪರ ವಕೀಲರ ವಾದ ಆಲಿಸಿ&zwnj; ಜು.9ರಂದು&zwnj; ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ ಅವರ ಪೀಠ ಶುಕ್ರವಾರ ಪ್ರಕಟಿಸಲಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ:&lt;/h2&gt;&lt;p&gt;2016ರಲ್ಲಿ ನಡೆದಿದ್ದ ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ವಿನಯ್ ಕುಲಕರ್ಣಿ ಸೇರಿ ಒಟ್ಟು 17 ಮಂದಿ ಆರೋಪಿಗಳನ್ನು 2026ರ ಏ.15ರಂದು ಅಪರಾಧಿಗಳು ಎಂದು ನಿರ್ಧರಿಸಿ, ಏ.17ರಂದು ವಿನಯ್&zwnj; ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.&amp;nbsp;&lt;/p&gt;&lt;h2&gt;ಮುಂದೇನು?&lt;/h2&gt;&lt;p&gt;ಶಿಕ್ಷೆ ರದ್ದಾದರೆ ಶಾಸಕ ಸ್ಥಾನ ಉಳಿಯುವ ಜೊತೆಗೆ. ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಶಿಕ್ಷೆ ರದ್ದಾಗದಿದ್ದರೆ ಮುಂದಿನ ಹಂತದಲ್ಲಿ ವಿನಯ್ ಕುಲಕರ್ಣಿಯವರು ಮೇಲಿನ ಹಂತದ ನ್ಯಾಯಾಲಯಕ್ಕೆ ಅಂದರೆ, ಸುಪ್ರೀಂ ಕೋರ್ಟ್&zwnj; ಮೊರೆ ಹೋಗುವ ಅವಕಾಶವಿದೆ. ಅಲ್ಲಿಯೂ ಇದೇ ತೀರ್ಪು ಬಂದರೆ ಜೀವಾವಧಿ ಶಿಕ್ಷೆ &amp;nbsp;ಅನುಭವಿಸಲೇಬೇಕು. ಇದರ ಜೊತೆಗೆ ಶಾಸಕ ಸ್ಥಾನ ರದ್ದಾಗಿರುವುದರಿಂದ ವಿನಯ್ ಶಾಸಕರಾಗಿ ಆಯ್ಕೆಯಾದ ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.&lt;/p&gt;&lt;p&gt;ಇತ್ತ ಉಪ ಚುನಾವಣೆ ನಡೆದರೆ ಕಾಂಗ್ರೆಸ್&zwnj;ನಿಂದ ವಿನಯ್ ಕುಲಕರ್ಣಿ ಪತ್ನಿಗೆ ಟಿಕೆಟ್&zwnj; ನೀಡುವ ಸಾಧ್ಯತೆ &amp;nbsp;ಜಾಸ್ತಿ ಇದೆ. ಪತ್ನಿ ನಿರಾಕರಿಸಿದರೆ ಪುತ್ರಿಯರು ಸ್ಪರ್ಧೆ ಮಾಡುವ ಸಾಧ್ಯತೆಯೂ ಇದೆ. ಇತ್ತೀಚೆಗೆ ಉಪ ಚುನಾವಣೆ ಚರ್ಚೆ ವೇಳೆ ಪತ್ನಿಯ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇಂದಿನ ತೀರ್ಪು &amp;nbsp;ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/state/yogesh-gowda-murder-case-karnataka-high-court-to-pronounce-verdict-today-on-vinay-kulkarni-bail-sentence-plea-gdp/articleshow-nwpepud"/>
        </item>
        <item>
            <title><![CDATA[ಕೆಆರ್ ಪೇಟೆ: ಪೌತಿ ಖಾತೆ ಬಗ್ಗೆ ವಿಚಾರಿಸಲು ಬಂದ ರೈತನನ್ನ ಕೂಡಿಹಾಕಿದ ತಹಸೀಲ್ದಾರ್‌!]]></title>
            <link>https://kannada.asianetnews.com/karnataka-districts/kr-pet-tahsildar-arrogance-on-farmer-who-came-to-inquire-about-a-pauti-khata-mandya-rav/articleshow-fk7hnyi</link>
            <guid isPermaLink="true">https://kannada.asianetnews.com/karnataka-districts/kr-pet-tahsildar-arrogance-on-farmer-who-came-to-inquire-about-a-pauti-khata-mandya-rav/articleshow-fk7hnyi</guid>
            <pubDate>Fri, 31 Jul 2026 08:04:11 +0530</pubDate>
            <description><![CDATA[ಕೆ.ಆರ್.ಪೇಟೆ ತಾಲೂಕು ಕಚೇರಿಯಲ್ಲಿ ಪೌತಿ ಖಾತೆ ಬಗ್ಗೆ ವಿಚಾರಿಸಲು ಹೋದ ರೈತನನ್ನು ತಹಸೀಲ್ದಾರ್ ಮತ್ತು ಸಿಬ್ಬಂದಿ ಕೊಠಡಿಯಲ್ಲಿ ಕೂಡಿಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyv060ehcfeypv47sxp3w7zw,imgname-----------------------2026-07-31t075046.069-1785465078225.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೆ.ಆರ್.ಪೇಟೆ(ಮಂಡ್ಯ) (ಜು.31): &lt;/strong&gt;ಪೌತಿ ಖಾತೆ ಕುರಿತು ವಿಚಾರಿಸಲು ಕಂದಾಯ ಇಲಾಖೆ ಕಚೇರಿಗೆ ಹೋದ ರೈತನನ್ನು ತಹಸೀಲ್ದಾರ್ ಅವರು ಕಚೇರಿ ಕಾರಿಡಾರ್&zwnj;ನಿಂದ ಎಳೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಸುಮಾರು 1 ಗಂಟೆ ಬಂಧಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್&zwnj;.ಪೇಟೆ ತಾಲೂಕಿನಲ್ಲಿ ನಡೆದಿದೆ.&lt;/p&gt;&lt;h2&gt;ಕಾರಿಡಾರ್&zwnj;ನಿಂದ ಎಳೆದೊಯ್ದು 1 ಗಂಟೆ ವೃದ್ಧನ ಸೆರೆ&lt;/h2&gt;&lt;p&gt;ತಹಸೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ರೈತನನ್ನು ಕಾರಿಡಾರ್&zwnj;ನಿಂದ ನೂಕಿಕೊಂಡು ಕೊಠಡಿಗೆ ತಳ್ಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಹಸೀಲ್ದಾರ್ ಶ್ರೇಯಸ್ ಮತ್ತು ಕಚೇರಿ ಸಿಬ್ಬಂದಿ ನಡೆಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.&lt;/p&gt;&lt;p&gt;ತಾಲೂಕಿನ ಮಲ್ಕೋನಹಳ್ಳಿಯ ಅಣ್ಣಯ್ಯ ಬಿನ್ ಸಿದ್ದೇಗೌಡ ತಮ್ಮ ಗ್ರಾಮದ ರೈತ ಮಹಿಳೆಯ ಪೌತಿ ಖಾತೆ ಸಂಬಂಧ ಆಗಿರುವ ಬೆಳವಣಿಗೆಗಳ ಬಗ್ಗೆ ವಿಚಾರಿಸಲು ತಾಲೂಕು ಕಚೇರಿಗೆ ಹೋಗಿದ್ದಾಗ ತಹಸೀಲ್ದಾರ್ ಶ್ರೇಯಸ್, ಪೌತಿ ಖಾತೆ ಸಂಬಂಧ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸುವ ಬದಲು ರೈತನನ್ನೇ ತರಾಟೆ ತೆಗೆದುಕೊಂಡಿದ್ದಾರೆ.&lt;/p&gt;&lt;p&gt;&lsquo;ನೀನು ಯಾರಿಗಾದರೂ ದೂರು ಕೊಡು ನನಗೆ ಉತ್ತರಿಸುವುದು ಗೊತ್ತಿಗೆ&rsquo; ಎಂದು ಹೇಳಿ ಸ್ಥಳದಲ್ಲಿದ್ದ ತಮ್ಮ ಅಧೀನ ಸಿಬ್ಬಂದಿ ಆರ್&zwnj;ಆರ್&zwnj;ಟಿಇ ಶಿರಸ್ತೇದಾರ್ ಅಸ್ಲಂ ಭಾಷ ಮತ್ತು ವಿಶ್ವನಾಥ್ ಎನ್ನುವವರ ಜೊತೆಗೂಡಿ ರೈತನನ್ನು ಕಚೇರಿ ಕಾರಿಡಾರ್&zwnj;ನಿಂದ ತಳ್ಳಿಕೊಂಡು ಶಿರಸ್ತೇದಾರ್ ಕೊಠಡಿಯಲ್ಲಿ ಕೂಡಿ ಹಾಕಿದ್ದಲ್ಲದೆ ಪೊಲೀಸರನ್ನು ಕರೆಸುವ ಬೆದರಿಕೆ ಹಾಕಿರುವ ವೀಡಿಯೋ ವೈರಲ್ ಆಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kr-pet-tahsildar-arrogance-on-farmer-who-came-to-inquire-about-a-pauti-khata-mandya-rav/articleshow-fk7hnyi"/>
        </item>
        <item>
            <title><![CDATA[Kumaraswamy's HMT Watch: ಕುಮಾರಸ್ವಾಮಿ ಎಚ್‌ಎಂಟಿ ವಾಚ್‌ನಲ್ಲಿ ತಾಯಿ ಪೋಟೋ!]]></title>
            <link>https://kannada.asianetnews.com/gallery/state/hd-kumaraswamy-wear-watch-featuring-late-mother-chennamma-s-portait-rav-g2gtpre</link>
            <guid isPermaLink="true">https://kannada.asianetnews.com/gallery/state/hd-kumaraswamy-wear-watch-featuring-late-mother-chennamma-s-portait-rav-g2gtpre</guid>
            <pubDate>Fri, 31 Jul 2026 06:54:48 +0530</pubDate>
            <description><![CDATA[&lt;p&gt;Kumaraswamy's HMT Watch: ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿಯವರು ಎಚ್&zwnj;ಎಂಟಿ ವಾಚ್&zwnj;ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kytvejjre4339ajv8t7eyqep,imgname-----------------------2026-07-31t063805.551-1785460116056.jpg" type="image/jpeg" height="390" width="690"/>
            <content:encoded><![CDATA[&lt;p&gt;Kumaraswamy's HMT Watch: ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿಯವರು ಎಚ್&zwnj;ಎಂಟಿ ವಾಚ್&zwnj;ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಿಲಿನ ಸಮೀಪ ಇರುವ ಚನ್ನಮ್ಮನವರ ಸಮಾಧಿ ಸ್ಥಳದಲ್ಲಿ ಗುರುವಾರ ಆಯೋಜಿಸಿದ್ದ ೧೧ನೇ ದಿನದ ಉತ್ತರ ಕ್ರಿಯಾದಿ ಕಾರ್ಯಕ್ಕೆ ಗಣ್ಯರು ಸೇರಿದಂತೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿ, ಚನ್ನಮ್ಮನವರ ಸಮಾಧಿಗೆ ನಮನ ಸಲ್ಲಿಸಿದರು.&lt;/p&gt;&lt;img&gt;&lt;p&gt;ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಅತ್ಮೀಯರ ಸಹಕಾರದಲ್ಲಿ ಕಳೆದ ಎಂಟು ದಿನಗಳಿಂದ ಉತ್ತರ ಕ್ರಿಯಾದಿ ಕಾರ್ಯದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಚನ್ನಮ್ಮನವರ ೧೧ನೇ ದಿನದ ಕಾರ್ಯದಲ್ಲಿ ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದ್ದುದರಿಂದ ಏಕಕಾಲಕ್ಕೆ ಒಂದೂವರೆ ಸಾವಿರ ಜನ ಕುಳಿತು ಭೋಜನ ಸ್ವೀಕರಿಸುವ ವ್ಯವಸ್ಥೆಯ ೧೬ ಜರ್ಮನ್ ಟೆಂಟ್&zwnj;ಗಳು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಜತೆಗೆ ಸುಗಮ ಸಂಚಾರಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿತ್ತು.&lt;/p&gt;&lt;img&gt;&lt;p&gt;ಅಂತ್ಯಕ್ರಿಯೆ ನಡೆದ ದಿನದಿಂದ ಪ್ರತಿನಿತ್ಯ ಬೆಟ್ಟದ ತಪ್ಪಲಿಗೆ ಸಮಾಧಿ ಸ್ಥಳದಲ್ಲಿ ನಡೆಯಲಿರುವ ವಿಷ್ಣು ಸಹಸ್ರನಾಮ ಹಾಗೂ ಪಾರಾಯಣ ಪೂಜಾ ವಿಧಿವಿಧಾನವನ್ನು ನೆರವೇರಿಸುವ ಸಲುವಾಗಿ ಅರ್ಚಕರನ್ನು ನೇಮಿಸಿ, ಪೂಜಾ ಕೈಂಕರ್ಯದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂದಿನಿಂದ ಯಾವುದೇ ಅಡೆಚಣೆಗೆ ಆಸ್ಪದವಾಗದಂತೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು.&lt;/p&gt;&lt;img&gt;&lt;p&gt;ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿಯವರು ಎಚ್&zwnj;ಎಂಟಿ ವಾಚ್&zwnj;ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ. ಕುಮಾರಸ್ವಾಮಿಯವರು ಧರಿಸಿರುವ ವಾಚ್ ನೋಡುಗರ ಗಮನ ಸೆಳೆಯಿತು.&lt;/p&gt;&lt;img&gt;&lt;p&gt;ಈ ಬಗ್ಗೆ ಮಾಧ್ಯಮಗಳಿಗೆ ವಾಚ್&zwnj; ತೋರಿಸಿ ಪ್ರತಿಕ್ರಿಯಿಸಿದ ಅವರು, ನಾನು ವಾಚ್&zwnj;ನಲ್ಲಿ ನಮ್ಮ ತಾಯಿಯ ಫೋಟೊ ಹಾಕಿಸಿಕೊಂಡಿದ್ದು, ಸ್ಯಾಂಪಲ್&zwnj; ಮಾಡಿಸಿದ್ದೇನೆ. ನಮ್ಮ ಕಾರ್ಯಕರ್ತರು ಎಚ್&zwnj;ಎಂಟಿ ವಾಚ್&zwnj; ಬಗ್ಗೆ ಸರಿಯಾಗಿ ಬ್ಯುಸಿನೆಸ್&zwnj; ಮಾಡಿದರೆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯುವ ಸಾಧ್ಯತೆ ಇದೆ ಎಂದರು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/hd-kumaraswamy-wear-watch-featuring-late-mother-chennamma-s-portait-rav-g2gtpre"/>
        </item>
        <item>
            <title><![CDATA[ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ.. ಆದ್ರೂ 10 ಲಕ್ಷ ಮೌಲ್ಯದ ವಜ್ರಾಭರಣ ಮಾಯ! ಸಿಸಿಟಿವಿ ದೃಶ್ಯ ನೋಡಿ ಬೆಚ್ಚಿಬಿದ್ದ ಮಾಲೀಕ]]></title>
            <link>https://kannada.asianetnews.com/gallery/karnataka-districts/rat-steals-jewellery-worth-rs-10-lakh-from-shop-in-tumakuru-karnataka-14s6evs</link>
            <guid isPermaLink="true">https://kannada.asianetnews.com/gallery/karnataka-districts/rat-steals-jewellery-worth-rs-10-lakh-from-shop-in-tumakuru-karnataka-14s6evs</guid>
            <pubDate>Fri, 31 Jul 2026 07:32:57 +0530</pubDate>
            <description><![CDATA[&lt;p&gt;Tumakuru Vishwas jewellery theft case: ಜ್ಯುವೆಲ್ಲರಿಗೆ ಸಾಮಾನ್ಯವಾಗಿ ಕಳ್ಳತನವಾದರೆ ಬಾಗಿಲು ಮುರಿದು ಕಳ್ಳತನ ಮಾಡ್ತಾರೆ, ಅವರ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿರುತ್ತೆ. ಆದ್ರೆ ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಶಾಪ್&zwnj; ಚಿನ್ನಾಭರಣ ಕಳ್ಳತನ ವಿಚಿತ್ರವಾಗಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyty29sxcemc979p4jm45njc,imgname-----------------------2026-07-31t072402.801-1785462859581.jpg" type="image/jpeg" height="390" width="690"/>
            <content:encoded><![CDATA[&lt;p&gt;Tumakuru Vishwas jewellery theft case: ಜ್ಯುವೆಲ್ಲರಿಗೆ ಸಾಮಾನ್ಯವಾಗಿ ಕಳ್ಳತನವಾದರೆ ಬಾಗಿಲು ಮುರಿದು ಕಳ್ಳತನ ಮಾಡ್ತಾರೆ, ಅವರ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿರುತ್ತೆ. ಆದ್ರೆ ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಶಾಪ್&zwnj; ಚಿನ್ನಾಭರಣ ಕಳ್ಳತನ ವಿಚಿತ್ರವಾಗಿದೆ!&lt;/p&gt;&lt;img&gt;&lt;p&gt;ಈ ಘಟನೆ ಸಿನಿಮಾ ಕಥೆಯನ್ನೇ ಮೀರಿಸುವಂತಿದೆ. ತುಮಕೂರಿನ ಪ್ರತಿಷ್ಠಿತ ಜ್ಯುವೆಲ್ಲರಿ ಶಾಪ್ ನಡೆದ ಕೃತ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಶಾಪ್&zwnj;ನಲ್ಲಿ ಚಿನ್ನಾಭರಣ ಮಾಯ. ಬಾಗಿಲು ಮುರಿದಿಲ್ಲ. ಒಳಗೆ ಯಾರೂ ಹೋಗಿಲ್ಲ. ಆದ್ರೂ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳ್ಳತನ ಆಗಿದೆ. ಇಂಥ ಕಳ್ಳತನ ಎಲ್ಲೂ ನಡೆದಿರಲಿಲ್ಲ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಚಿನ್ನಾಭರಣ ಅಂಗಡಿಗಳಿಗೆ ಖದೀಮರು ಕನ್ನಹಾಕಿ ಚಿನ್ನ ದೋಚುತ್ತಾರೆ. ಆದರೆ ಇಲ್ಲಿ ಇಲಿಯೊಂದು ಜ್ಯುವೆಲ್ಲರಿ ಅಂಗಡಿಯಲ್ಲಿದ್ದ 10 ಲಕ್ಷ ರು. ಮೌಲ್ಯದ 50 ಗ್ರಾಂಗೂ ಅಧಿಕ ವಜ್ರ ಹಾಗೂ ಚಿನ್ನಾಭರಣವನ್ನು ಹೊತ್ತೊಯ್ದು ಬಿಲದಲ್ಲಿ ಅಡಗಿಸಿಟ್ಟಿದ್ದ ಅಪರೂಪದ ಘಟನೆ ತುಮಕೂರಿನ ವಿಶ್ವಾಸ ಜ್ಯುವೆಲ್ಲರಿ ಶಾಪ್&zwnj;ನಲ್ಲಿ ವರದಿಯಾಗಿದೆ.&lt;/p&gt;&lt;img&gt;&lt;p&gt;ಅಂಗಡಿ ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ. ಹೀಗಿದ್ದರೂ ಆಭರಣ ಕಳುವಾಗಿರುವ ಬಗ್ಗೆ ಶಾಪ್&zwnj;ನ ಸಿಬ್ಬಂದಿಗೆ ಅಚ್ಚರಿಯಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ನೀಡುವ ಮುನ್ನ ಅಂಗಡಿಯಲ್ಲಿದ್ದ ಸಿಸಿಟೀವಿ ನೋಡಿದಾಗ ಮಾಲೀಕರು ಹಾಗೂ ಸಿಬ್ಬಂದಿ ಬೆರಗಾಗಿದ್ದಾರೆ&lt;/p&gt;&lt;img&gt;&lt;p&gt;ಇಲಿಯೊಂದು ಆಭರಣಗಳನ್ನು ಹೊತ್ತೊಯ್ದುತ್ತಿದ್ದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಸಿಸಿಟೀವಿ ವೀಕ್ಷಿಸಿದ ಬಳಿಕ ಅಂಗಡಿಯ ಸಿಬ್ಬಂದಿ ಇಲಿ ಜಾಡು ಹಿಡಿದು ಹೊರಟಾಗ ಆಭರಣಗಳು ಇಲಿಯ ಬಿಲದಲ್ಲಿ ಪತ್ತೆಯಾಗಿದೆ.&lt;/p&gt;&lt;img&gt;&lt;p&gt;10 ಉಂಗುರ ಹಾಗೂ 3 ಸರವನ್ನು ಇಲಿ ತನ್ನ ಬಿಲದಲ್ಲಿ ಅಡಗಿಸಿಟ್ಟಿತ್ತು. ಕೊನೆಗೂ ಆಭರಣ ಸಿಕ್ಕ ಬಳಿಕ ಜ್ಯುವೆಲ್ಲರಿ ಶಾಪ್ ಮಾಲೀಕ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/rat-steals-jewellery-worth-rs-10-lakh-from-shop-in-tumakuru-karnataka-14s6evs"/>
        </item>
        <item>
            <title><![CDATA[ದಾವಣಗೆರೆ ಟು ಶಿವಮೊಗ್ಗ:  ಝೀರೋ ಟ್ರಾಫಿಕಲ್ಲಿ ಸಾಗಿಸಿದರೂ ಬದುಕದ 3 ತಿಂಗಳ ಹಸೂಗೂಸು!]]></title>
            <link>https://kannada.asianetnews.com/karnataka-districts/davanagere-to-shivamogga-3-monthold-infant-could-not-be-saved-despite-transported-zerotraffic-conditions-rav/articleshow-vaaph9w</link>
            <guid isPermaLink="true">https://kannada.asianetnews.com/karnataka-districts/davanagere-to-shivamogga-3-monthold-infant-could-not-be-saved-despite-transported-zerotraffic-conditions-rav/articleshow-vaaph9w</guid>
            <pubDate>Fri, 31 Jul 2026 06:16:13 +0530</pubDate>
            <description><![CDATA[ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ 3 ತಿಂಗಳ ಕೂಸನ್ನು ದಾವಣಗೆರೆಯಿಂದ ಮಣಿಪಾಲಕ್ಕೆ ಝೀರೋ ಟ್ರಾಫಿಕ್&zwnj;ನಲ್ಲಿ ಸಾಗಿಸುವಾಗ ಆ್ಯಂಬುಲೆನ್ಸ್ ಟೈರ್ ಪಂಕ್ಚರ್ ಆಗಿದೆ. ತಕ್ಷಣ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kytspzgd2zedkb31qk1sj606,imgname-----------------------2026-07-31t060128.830-1785458294285.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾವಣಗೆರೆ (ಜು.31): ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ 3 ತಿಂಗಳ ಕೂಸನ್ನು ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್&zwnj;ನಲ್ಲಿ ಝೀರೋ ಟ್ರಾಫಿಕ್&zwnj;ನಲ್ಲಿ ಸಾಗಿಸುವ ಪ್ರಯತ್ನ ಅರ್ಧದಲ್ಲಿಯೇ ವ್ಯರ್ಥವಾಗಿದೆ. ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಉಡುಪಿಯ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ಗುರುವಾರ ರಾತ್ರಿ ಕಳುಹಿಸಿ ಕೊಡಲಾಯಿತಾದರೂ ಮಗು ಬದುಕುಳಿಯಲಿಲ್ಲ.&lt;/p&gt;&lt;h2&gt;ಆ್ಯಂಬುಲೆನ್ಸ್&zwnj; ಟೈರ್&zwnj; ಪಂಕ್ಚರ್&lt;/h2&gt;&lt;p&gt;ದಾವಣಗೆರೆ ಜಿಲ್ಲೆ ಹರಿಹರದ ಮೂಲದ ಪಲ್ಲವಿ ಅವರನ್ನು ಕೊಪ್ಪಳದ ಹನುಮೇಶ್ವ&zwnj;ರ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಯ 3 ತಿಂಗಳು 26 ದಿನದ ಅನ್ವಿಕಾಳಿಗೆ ವಿಪರೀತ ಜ್ವರ ಬಂದ ಹಿನ್ನೆಲೆಯಲ್ಲಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕು ಪತ್ತೆ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದರು. ಅದಕ್ಕಾಗಿ ಮಗುವನ್ನು ಆ್ಯಂಬುಲೆನ್ಸ್&zwnj;ನಲ್ಲಿ ಝೀರೋ ಟ್ರಾಫಿಕ್&zwnj;ನಲ್ಲಿ ಕಳುಹಿಸಲು ನಿರ್ಧರಿಸಿ ದಾವಣಗೆರೆ, ಶಿವಮೊಗ್ಗ, ಉಡುಪಿ ಪೊಲೀಸರು ಟೊಂಕ ಕಟ್ಟಿ ವ್ಯವಸ್ಥೆ ಕೈಗೊಂಡಿದ್ದರು. ಅದರಂತೆ ವೈದ್ಯರ ತಂಡದೊಂದಿಗೆ ಹೋಗುವಾಗ ದಾವಣಗೆರೆಯ ಹೊನ್ನಾಳಿ ತಾಲೂಕಿನ ಚಿ.ಕಡದಕಟ್ಟೆ ಬಳಿ ಆ್ಯಂಬುಲೆನ್ಸ್&zwnj; ಟೈರ್&zwnj; ಪಂಕ್ಚರ್ ಆಯಿತು. ತಕ್ಷಣವೇ ಜೊತೆಯಲ್ಲಿದ್ದ ಪೊಲೀಸರು ಟಯರ್&zwnj; ಬದಲಿಸಿದರು. ಈ ವೇಳೆ ಮಗುವಿನ ಪಲ್ಸ್ ರೇಟ್ ಕಡಿಮೆ ಆಗುತ್ತಿತ್ತು. ಇದನ್ನು ಗಮನಿಸಿದ ವೈದ್ಯರ ತಂಡ ಅತಿ ತುರ್ತು ಚಿಕ್ಸಿತ್ಸೆಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಯಿತು.&lt;/p&gt;&lt;h3&gt;ವಿಶೇಷ ಆ್ಯಂಬುಲೆನ್ಸ್&zwnj;ನಲ್ಲೇ ಪುನಃ ಮಗುವಿನ ಶವ ಹರಿಹರಕ್ಕೆ&lt;/h3&gt;&lt;p&gt;ಆದರೆ ಸರ್ಜಿ ಆಸ್ಪತ್ರೆಯಲ್ಲಿ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತಾದರೂ ಮಗು ಬದುಕಲೇ ಇಲ್ಲ. ಮಗು ಕಳೆದುಕೊಂಡ ಹೆತ್ತೊಡಲು ಆಕ್ರಂದನ ಮುಗಿಲು ಮುಟ್ಟಿತ್ತು. ಮಗುವ ಪ್ರಾಣ ರಕ್ಷಣೆ ಮಾಡಲು ಹೊರಟಿದ್ದ ವಿಶೇಷ ಆ್ಯಂಬುಲೆನ್ಸ್&zwnj;ನಲ್ಲೇ ಪುನಃ ಮಗುವಿನ ಶವವನ್ನು ಹರಿಹರಕ್ಕೆ ಸಾಗಿಸಲಾಯಿತು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-to-shivamogga-3-monthold-infant-could-not-be-saved-despite-transported-zerotraffic-conditions-rav/articleshow-vaaph9w"/>
        </item>
        <item>
            <title><![CDATA[Just Clean Bengaluru: ಬೆಂಗಳೂರು ಸ್ವಚ್ಚ, ಸುಂದರವಾಗಿಸಲು ನಾಳೆಯಿಂದ ಮತ್ತೊಂದು ಅಭಿಯಾನ! ಕೃಷ್ಣ ಬೈರೇಗೌಡ ಮಹತ್ವದ ಹೇಳಿಕೆ]]></title>
            <link>https://kannada.asianetnews.com/state/freedom-from-waste-campaign-to-begin-on-august-1-says-minister-krishna-byre-gowda-rav/articleshow-d7c4klx</link>
            <guid isPermaLink="true">https://kannada.asianetnews.com/state/freedom-from-waste-campaign-to-begin-on-august-1-says-minister-krishna-byre-gowda-rav/articleshow-d7c4klx</guid>
            <pubDate>Fri, 31 Jul 2026 05:53:35 +0530</pubDate>
            <description><![CDATA[&lt;p&gt;Just Clean Bengaluru&quot; ರಾಜಧಾನಿ ಬೆಂಗಳೂರನ್ನು ಸುಂದರಗೊಳಿಸಲು &lsquo;ತ್ಯಾಜ್ಯದಿಂದ ಸ್ವಾತಂತ್ರ್ಯ&rsquo; ಅಭಿಯಾನ ಆ.1ರಿಂದ ಆರಂಭಿಸಲಿದ್ದು, ಆಗಸ್ಟ್ ಅಂತ್ಯದವರೆಗೂ ನಡೆಯಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01js1evxj2r1nptvdbd5hma9vt,imgname-Krishne-Byre-Gowda-1744879613506.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.31): &lt;/strong&gt;ರಾಜಧಾನಿ ಬೆಂಗಳೂರನ್ನು ಸುಂದರಗೊಳಿಸಲು &lsquo;ತ್ಯಾಜ್ಯದಿಂದ ಸ್ವಾತಂತ್ರ್ಯ&rsquo; ಅಭಿಯಾನ ಆ.1ರಿಂದ ಆರಂಭಿಸಲಿದ್ದು, ಆಗಸ್ಟ್ ಅಂತ್ಯದವರೆಗೂ ನಡೆಯಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.&lt;/p&gt;&lt;p&gt;ಗುರುವಾರ ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಜಸ್ಟ್ ಕ್ಲೀನ್ ಬೆಂಗಳೂರು (ಜೆಸಿಬಿ) ಅಭಿಯಾನಕ್ಕೆ ಮುಖ್ಯಮಂತ್ರಿಗಳೇ ಚಾಲನೆ ನೀಡಲಿದ್ದಾರೆ. ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಘನತ್ಯಾಜ್ಯ, ಕಟ್ಟಡ ಸಾಮಗ್ರಿಗಳನ್ನು ಸುರಿದಿದ್ದಾರೆ. ಇವು ಅನಾರೋಗ್ಯದ ಮೂಲವಾಗಿವೆ. ಈ ತ್ಯಾಜ್ಯ ನಗರದಾದ್ಯಂತ ಸುಮಾರು 1,616 ಸ್ಥಳಗಳಲ್ಲಿದ್ದು, ಸುಮಾರು 22 ಸಾವಿರ ಟನ್ ತ್ಯಾಜ್ಯ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಭಿಯಾನಕ್ಕಾಗಿ 50 ಗಾಡಿಗಳನ್ನು ನಿಯೋಜಿಸಲಾಗಿದೆ ಎಂದರು.&lt;/p&gt;&lt;p&gt;ಖಾಸಗಿಯವರ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ತೆರವು ಮಾಡಲು ಆ.15ರವರೆಗೆ ಮಾಲಿಕರಿಗೆ ಗಡುವು ನೀಡಲಾಗಿದೆ. ತೆರವು ಮಾಡದಿದ್ದರೆ, ಆ.15ರ ನಂತರ ಸರ್ಕಾರವೇ ತೆರವು ಮಾಡುತ್ತದೆ. ತೆರವು ಮಾಡುವ ವೆಚ್ಚವನ್ನು ಮಾಲಿಕರೆ ತೆರಿಗೆ ಹಣದ ಜೊತೆ ಪಾವತಿಸಬೇಕು ಎಂದು ತಿಳಿಸಿದರು.&lt;/p&gt;&lt;p&gt;ಆ.15ರವರೆಗೆ ಮಾಲಿಕರಿಗೆ ಅನುಕೂಲ ಮಾಡಲು ಆಯಾ ಪಾಲಿಕೆಗಳಿಂದ ಖಾಸಗಿಯಾಗಿ ತ್ಯಾಜ್ಯ ತೆರವುಗೊಳಿಸುವವರ ಪಟ್ಟಿಯನ್ನು ನೀಡಲಾಗುತ್ತದೆ. ಅಂತಹ ತಂಡಗಳನ್ನು ಸಂಪರ್ಕಿಸಿ ಅವರಿಂದ ನೀವೇ ತೆರವು ಮಾಡಿಸಿಕೊಂಡರೆ ಉತ್ತಮ ಎಂದರು.&lt;/p&gt;&lt;h2&gt;ಡಂಪಿಂಗ್ ಲಾರಿಗಳ ನೋಂದಣಿ ಕಡ್ಡಾಯ: ಬೈರೇಗೌಡ&lt;/h2&gt;&lt;p&gt;ಖಾಸಗಿಯಾಗಿ ತ್ಯಾಜ್ಯ ಸುರಿಯುವ ಲಾರಿಗಳ ನೋಂದಣಿ ಕಡ್ಡಾಯಗೊಳಿಸಲಾಗುವುದು. ಅಲ್ಲದೆ, ಆ ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗುವುದು ಎಂದರು. ತ್ಯಾಜ್ಯ ತೆರವು ಮಾಡಲು ಮಾರ್ಗಸೂಚಿ ರೂಪಿಸಲಾಗುತ್ತದೆ. ಇದು ಕಸವಲ್ಲ, ಮಣ್ಣು, ಕಲ್ಲು ಮಾತ್ರ, ಕಟ್ಟಡ ನಿರ್ಮಾಣದ ಅಥವಾ ಕೆಡವುವ ಸಂದರ್ಭದಲ್ಲಿ ಬಿದ್ದಿರುವ ತ್ಯಾಜ್ಯ, ಇದು ಅತ್ಯಂತ ಬೃಹತ್ ಪ್ರಮಾಣದ ತೆರವು ಕಾರ್ಯಾಚರಣೆ, 5 ಪಾಲಿಕೆಗೆ ಐದು ಕಡೆ ಜಾಗ ಗುರುತು ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.&lt;/p&gt;&lt;h3&gt;1 ಟನ್&zwnj; ಕಟ್ಟಡ ತ್ಯಾಜ್ಯ ವೀಲೆಗೆ ₹750 ಶುಲ್ಕ&lt;/h3&gt;&lt;p&gt;ಕಟ್ಟಡದ ತ್ಯಾಜ್ಯ ತೆರವಿಗೆ ಕಾರ್ಯಪಡೆ ರಚನೆ ಮಾಡಲಾಗುವುದು. ಇದರಿಂದ ಸಮಸ್ಯೆ ನಿಯಂತ್ರಣಕ್ಕೆ ಬರಲಿದೆ. ಕಸ ಎಂದರೆ ಗಾರ್ಬೇಜ್ ಅಲ್ಲ, ಮಣ್ಣು, ಕಲ್ಲು, ಇವುಗಳ ವಿಲೇಗಾಗಿ ಕೆಲವು ಕಡೆ ಕ್ವಾರಿ ಗುರುತಿಸಲಾಗಿದೆ. ಇಲ್ಲಿಗೆ ತ್ಯಾಜ್ಯ ಸಾಮಗ್ರಿ ತುಂಬಲಾಗುತ್ತದೆ ಎಂದು ಸಚಿವರು ತಿಳಿಸಿದರು. ಇನ್ನು ಮುಂದೆ ನಗರದಲ್ಲಿ ಕಟ್ಟಡ ತ್ಯಾಜ್ಯ ವಿಲೇ ಮಾಡಲು ನಾಲ್ಕು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ. ಸಿ ಅಂಡ್ ಡಿ ವೇಸ್ಟ್ (ಕನ್ ಸ್ಟ್ರಕ್ಷನ್ ಮತ್ತು ಡೆಮಾಲಿಷನ್ ತ್ಯಾಜ್ಯ) ಮೂರು ಕಂಪನಿಗಳು ಈಗ ಸಿದ್ಧ ಇವೆ. ಅವರ ಮೂಲಕವೇ ವಿಲೇ ಮಾಡಬೇಕು. 1 ಟನ್ ವಿಲೇ ಮಾಡಲು ₹760 ಶುಲ್ಕ ವಿಧಿಸಲಾಗುವುದು.ಮನೆಯ ಸಿಎನ್ ಡಿ ವೇಸ್ಟ್ ಇದ್ದರೆ ಈ ಮೂಲಕವೇ ತ್ಯಾಜ್ಯ ತೆರವು ಮಾಡಬೇಕು. ಶೀಘ್ರದಲ್ಲೇ ಅವರ ಸಂಪರ್ಕದ ಸಂಖ್ಯೆಗಳನ್ನು ನೀಡಲಾಗುವುದು.ಈ ರೀತಿಯಾದರೆ ಬೆಂಗಳೂರು ಸುಧಾರಣೆ ಯಾಗುತ್ತೆ ಎಂದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/freedom-from-waste-campaign-to-begin-on-august-1-says-minister-krishna-byre-gowda-rav/articleshow-d7c4klx"/>
        </item>
        <item>
            <title><![CDATA[ಕೊಡಗು ಜಿಲ್ಲೆಯಾದ್ಯಂತ ಮಳೆ: ಹಾರಂಗಿಗೆ 5000 ಕ್ಯುಸೆಕ್ ನೀರು! ರಾಜ್ಯದ ಜಲಾಶಯಗಳಲ್ಲಿ ಇಂದು ಎಷ್ಟು ನೀರಿದೆ?]]></title>
            <link>https://kannada.asianetnews.com/karnataka-districts/kodagu-rains-across-district-5000-cusecs-of-water-inflow-into-harangi-dam-rav/articleshow-bxtp88o</link>
            <guid isPermaLink="true">https://kannada.asianetnews.com/karnataka-districts/kodagu-rains-across-district-5000-cusecs-of-water-inflow-into-harangi-dam-rav/articleshow-bxtp88o</guid>
            <pubDate>Fri, 31 Jul 2026 05:36:49 +0530</pubDate>
            <description><![CDATA[&lt;p&gt;ಕಳೆದ ಹಲವು ದಿನಗಳಿಂದ ಸಾಧಾರಣ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಚುರುಕುಗೊಂಡಿದೆ. ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಸೇರಿ ವಿವಿಧೆಡೆ ಉತ್ತಮ ಮಳೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kytqwmrzzax0az84ar7d0p0b,imgname-----------------------2026-07-31t051234.600-1785456382751.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಡಿಕೇರಿ: ಕಳೆದ ಹಲವು ದಿನಗಳಿಂದ ಸಾಧಾರಣ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಚುರುಕುಗೊಂಡಿದೆ. ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಸೇರಿ ವಿವಿಧೆಡೆ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯ ಹಾರಂಗಿಯ ಒಳಹರಿವು ಏರಿಕೆ ಕಂಡಿದ್ದು, ಸುಮಾರು 5000 ಕ್ಯುಸೆಕ್ ನೀರು ಹರಿದು ಬರುತ್ತಿದೆ.&amp;nbsp;&lt;/p&gt;&lt;h2&gt;ಕಬಿನಿ ಜಲಾಶಯಕ್ಕೆ 8580 ಕ್ಯುಸೆಕ್ ಒಳಹರಿವು&lt;/h2&gt;&lt;p&gt;ಮೈಸೂರು ಜಿಲ್ಲೆ ಎಚ್&zwnj;.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ 8580 ಕ್ಯುಸೆಕ್ ಒಳಹರಿವು ಹೆಚ್ಚಿದೆ. ಮಡಿಕೇರಿಯ ಮಂಗಳಾದೇವಿ ನಗರದ ಖಾಸಗಿ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಭಾರೀ ಗಾಳಿಗೆ ಜಿಲ್ಲಾಸ್ಪತ್ರೆಯ ಆವರಣದಲ್ಲಿದ್ದ ಬೈಕ್&zwnj;ಗಳ ಮೇಲೆ ಮರ ಬಿದ್ದಿದೆ. ಇನ್ನು ಪಶ್ವಿಮ ಘಟ್ಟದಲ್ಲಿ ಉತ್ತುಮ ಮಳೆಯಾಗತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮಾರ್ಕಂಡೇಯ ನದಿಯ ನೀರಿನ ಹರಿವು ಹೆಚ್ಚಳವಾಗಿದೆ. ಇದರಿಂದ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ.&amp;nbsp;&lt;/p&gt;&lt;h3&gt;ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?&lt;/h3&gt;&lt;p&gt;ಕಬಿನಿ 79% 2284 2277&lt;/p&gt;&lt;p&gt;ಹೇಮಾವತಿ 66% 2922 2907&lt;/p&gt;&lt;p&gt;ತುಂಗಭದ್ರಾ 34% 1633 1609&lt;/p&gt;&lt;p&gt;ಸೂಪಾ(ಮೀ.) 37% 564 536&lt;/p&gt;&lt;p&gt;ಕೆಆರ್&zwnj;ಎಸ್ 35% 124.80 92.14&lt;/p&gt;&lt;p&gt;ಘಟಪ್ರಭಾ 64% 2175 2149&lt;/p&gt;&lt;p&gt;ಲಿಂಗನಮಕ್ಕಿ 31% 1819.12 1775&lt;/p&gt;&lt;p&gt;ಭದ್ರಾ 54% 2158 2127&lt;/p&gt;&lt;p&gt;ಹಾರಂಗಿ 95% 2859 2857&lt;/p&gt;&lt;p&gt;ಆಲಮಟ್ಟಿ(ಮೀ.) 95% 519.60 517.92&lt;/p&gt;&lt;p&gt;ನಾರಾಯಣಪುರ(ಮೀ.) 90% 492.25 491.17&lt;/p&gt;&lt;p&gt;ಮಲಪ್ರಭಾ 41% 2079.50 2058.45&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kodagu-rains-across-district-5000-cusecs-of-water-inflow-into-harangi-dam-rav/articleshow-bxtp88o"/>
        </item>
        <item>
            <title><![CDATA[ನೈಸ್‌ ರೋಡ್‌ ಪ್ರಾಜೆಕ್ಟ್‌ ಕರ್ನಾಟಕದ ಅತಿದೊಡ್ಡ ಹಗರಣ, ಸ್ವತಂತ್ರ್ಯ ತನಿಖೆ ಅಗತ್ಯ ಎಂದ ಹೈಕೋರ್ಟ್‌!]]></title>
            <link>https://kannada.asianetnews.com/bengaluru-urban/karnataka-high-court-nice-road-project-scam-forensic-audit-san/articleshow-1r8w2ec</link>
            <guid isPermaLink="true">https://kannada.asianetnews.com/bengaluru-urban/karnataka-high-court-nice-road-project-scam-forensic-audit-san/articleshow-1r8w2ec</guid>
            <pubDate>Thu, 30 Jul 2026 17:14:25 +0530</pubDate>
            <description><![CDATA[&lt;p&gt;ಬೆಂಗಳೂರು-ಮೈಸೂರು ನೈಸ್ ಯೋಜನೆಯು ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದ್ದು, ಇದರಲ್ಲಿ ಸರ್ಕಾರವೇ ಶಾಮೀಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysd9p3yhmabw3rsk7df1bbs,imgname-nice-road-bengaluru-mysuru-1785411721342.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.30):&lt;/strong&gt; ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಅಥವಾ ನೈಸ್ (NICE) ಯೋಜನೆಯು ರಾಜ್ಯದ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಅತ್ಯಂತ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆಯಲ್ಲಿ ನಡೆದಿರುವ ವಂಚನೆ ಮತ್ತು ಅಪರಾಧ ಕೃತ್ಯಗಳ ಕುರಿತು ತಜ್ಞರ ವಿಶೇಷ ತಂಡದಿಂದ ಸ್ವತಂತ್ರ ತನಿಖೆ ಹಾಗೂ ಕಂಪನಿಯ ಖಾತೆಗಳ 'ಫೋರೆನ್ಸಿಕ್ ಆಡಿಟ್' (Forensic Audit) ನಡೆಸುವುದು ಅಗತ್ಯವಾಗಿದೆ ಎಂದು ಕೋರ್ಟ್&zwnj; ಅಭಿಪ್ರಾಯಪಟ್ಟಿದೆ.&lt;/p&gt;&lt;p&gt;ಆದರೆ, ಇಂತಹ ತನಿಖೆ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಹೈಕೋರ್ಟ್, &quot;ಫ್ರೇಮ್&zwnj;ವರ್ಕ್ ಒಪ್ಪಂದದ (FWA) ನಿಯಮಗಳನ್ನು ಉಲ್ಲಂಘಿಸಿ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸುವುದು, ಆಸ್ತಿಗಳನ್ನು ನಗದೀಕರಿಸಿಕೊಳ್ಳುವುದು, ಕೆರೆಗಳನ್ನು ಒಣಗಿಸುವುದು, ನಿಯಮ ಮೀರಿ ಭಾರಿ ಪ್ರಮಾಣದ ಟೋಲ್ ಸಂಗ್ರಹಿಸುವುದು ಹಾಗೂ ಪರಿಹಾರ ನೀಡದೆ ಭಾರಿ ಪ್ರಮಾಣದ ಭೂಮಿಯ ಮೇಲೆ ಹಿಡಿತ ಸಾಧಿಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಲಾಭ ಗಳಿಸಲು ಯೋಜನೆಯ ಪ್ರವರ್ತಕರಿಗೆ (ನಂದಿ ಇನ್&zwnj;ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್&zwnj;ಪ್ರೈಸಸ್ - NICE) ಸ್ವತಃ ರಾಜ್ಯ ಸರ್ಕಾರವೇ ಶಾಮೀಲಾಗಿ ಅವಕಾಶ ಮಾಡಿಕೊಟ್ಟಿದೆ&quot; ಎಂದು ಚಾಟಿ ಬೀಸಿದೆ. &quot;ನೈಸ್ ಯೋಜನೆಯು ರೈತರು ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಬಲಿ ಕೊಟ್ಟು, ಕೇವಲ ತನ್ನ ಪ್ರವರ್ತಕರಿಗೆ ಭಾರೀ ಪ್ರಮಾಣದಲ್ಲಿ ಲಾಭ ಮಾಡಿಕೊಡುವುದನ್ನು ಬಿಟ್ಟು ಬೇರೇನನ್ನೂ ಮಾಡಿಲ್ಲ&quot; ಎಂದು ಪೀಠ ಹೇಳಿದೆ.&lt;/p&gt;&lt;p&gt;ಅಂತಿಮ ಅಧಿಸೂಚನೆ ಹೊರಡಿಸಿ 23 ವರ್ಷಗಳು ಕಳೆದರೂ ಕೆಐಎಡಿಬಿ (KIADB) ಭೂಮಾಲೀಕರಿಗೆ ಪರಿಹಾರ ಧನ (Award) ನಿಗದಿಪಡಿಸದ ಹಿನ್ನೆಲೆಯಲ್ಲಿ ಹಲವಾರು ಎಕರೆ ಭೂಸ್ವಾಧೀನವನ್ನು ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಜುಲೈ 4, 2025 ರ ತೀರ್ಪನ್ನು ಪ್ರಶ್ನಿಸಿ ನೈಸ್ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಟಿ.ಎಂ. ನಡಾಫ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ.&lt;/p&gt;&lt;h2&gt;&lt;strong&gt;&quot;ರೈತರ ಲೂಟಿ ಬಿಟ್ಟರೆ ನೈಸ್&zwnj;ನಲ್ಲಿ 'ನೈಸ್' ಅನಿಸುವಂತದ್ದು ಏನೂ ಇಲ್ಲ&quot;&lt;/strong&gt;&lt;/h2&gt;&lt;p&gt;ಸಂವಿಧಾನದ ವಿಧಿ 300A ಅಡಿಯಲ್ಲಿ ಕಡ್ಡಾಯಗೊಳಿಸಲಾದ ಸೂಕ್ತ ಪರಿಹಾರವನ್ನು ನೀಡದೆ ರೈತರ ಭೂಮಿ ಮತ್ತು ತಲೆತಲಾಂತರಗಳ ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ ಎಂಬುದನ್ನು ಹೊರತುಪಡಿಸಿದರೆ ಈ 'ನೈಸ್' (NICE) ಯೋಜನೆಯಲ್ಲಿ ನೈಸ್&zwnj; ಅನ್ನಿಸುವಂತದ್ದು ಏನೂ ಇಲ್ಲ ಎಂದು ವಿಭಾಗೀಯ ಪೀಠ ಹೇಳಿದೆ.&lt;/p&gt;&lt;p&gt;ಈಗಾಗಲೇ ಸುಪ್ರೀಂ ಕೋರ್ಟ್ ಭೂಸ್ವಾಧೀನವನ್ನು ಎತ್ತಿಹಿಡಿದಿರುವುದರಿಂದ ಭೂಮಾಲೀಕರು ಮತ್ತೆ ಇದನ್ನು ಪ್ರಶ್ನಿಸುವಂತಿಲ್ಲ ಎಂಬ ನೈಸ್ ಸಂಸ್ಥೆಯ ವಾದವನ್ನು ಪೀಠ ತಳ್ಳಿಹಾಕಿದೆ. ಭೂಸ್ವಾಧೀನ ಅಧಿಸೂಚನೆ ಹೊರಡಿಸಿ ಎರಡು ದಶಕಗಳು ಕಳೆದರೂ ಹಾಗೂ ಫ್ರೇಮ್&zwnj;ವರ್ಕ್ ಒಪ್ಪಂದ ಮತ್ತು ಭೂಸ್ವಾಧೀನದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು 15 ವರ್ಷಗಳಿಗಿಂತ ಹೆಚ್ಚು ಕಾಲವಾದರೂ ಪರಿಹಾರ ನೀಡದಿರುವುದನ್ನು ಮಾತ್ರವೇ ಭೂಮಾಲೀಕರು ಇಲ್ಲಿ ಪ್ರಶ್ನಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಇಂತಹ ಸುದೀರ್ಘ ವಿಳಂಬವು ಭೂಸ್ವಾಧೀನ ಪ್ರಕ್ರಿಯೆಯನ್ನು ಅಸಿಂಧುಗೊಳಿಸುತ್ತದೆ ಎಂದು ಹೇಳಿದ ಪೀಠ, ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿಯಿತು.&lt;/p&gt;&lt;p&gt;ಮುಂದುವರಿದು, &quot;ಯೋಜನೆಯನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ರೂಪಿಸಲಾಗಿದ್ದರೂ, ಅದು ಯೋಜನೆಯ ಪ್ರವರ್ತಕರ ಖಾಸಗಿ ಹಿತಾಸಕ್ತಿಗಳನ್ನು ಮಾತ್ರ ಕಾಯ್ದಿದೆ. ಊಹಿಸಲೂ ಸಾಧ್ಯವಾಗದಷ್ಟು ಆಸ್ತಿಪಾಸ್ತಿಗಳನ್ನು ಮಾಡಿಕೊಳ್ಳಲು ಪ್ರವರ್ತಕರಿಗೆ ನೆರವಾಗಿದೆಯೇ ಹೊರತು, ಸಾರ್ವಜನಿಕರಿಗೆ ಯಾವುದೇ ರೀತಿಯ ಒಳಿತನ್ನಾಗಲಿ ಅಥವಾ ಸಾರ್ವಜನಿಕ ಉದ್ದೇಶವನ್ನಾಗಲಿ ಈ ಯೋಜನೆ ಈಡೇರಿಸಿಲ್ಲ&quot; ಎಂದು ಪೀಠ ಖಾರವಾಗಿ ನುಡಿದಿದೆ.&lt;/p&gt;&lt;h2&gt;&lt;strong&gt;ಸರ್ಕಾರ ಯೋಜನೆ ಪರಿಶೀಲನೆ ಅಥವಾ ರದ್ದು ಏಕೆ ಮಾಡುತ್ತಿಲ್ಲ?&lt;/strong&gt;&lt;/h2&gt;&lt;p&gt;ನೈಸ್ ಸಂಸ್ಥೆಯು ಎಸಗಿರುವ ಹಲವಾರು ಉಲ್ಲಂಘನೆಗಳನ್ನು ರಾಜ್ಯ ಸರ್ಕಾರವೇ ನ್ಯಾಯಾಲಯದ ಗಮನಕ್ಕೆ ತಂದಿರುವುದನ್ನು ಉಲ್ಲೇಖಿಸಿದ ಪೀಠ, &quot;ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಎಕ್ಸ್&zwnj;ಪ್ರೆಸ್&zwnj;ವೇ ಪಕ್ಕದಲ್ಲಿ ಉದ್ಯೋಗ ಮತ್ತು ಪ್ರಗತಿಯ ಅವಕಾಶಗಳನ್ನು ಸೃಷ್ಟಿಸಲು ಕರ್ನಾಟಕದ ಎರಡು ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮೈಸೂರು ನಡುವೆ ಸುಮಾರು 111 ಕಿ.ಮೀ ಎಕ್ಸ್&zwnj;ಪ್ರೆಸ್&zwnj;ವೇ ಮತ್ತು 5 ಉಪನಗರಗಳನ್ನು (Townships) ಅಭಿವೃದ್ಧಿಪಡಿಸುವ ತನ್ನ ಮೂಲ ಉದ್ದೇಶದಲ್ಲೇ ನೈಸ್ ಸಂಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಿದ್ದೂ, ರಾಜ್ಯ ಸರ್ಕಾರವು ಈ ಯೋಜನೆಯನ್ನು ಮರುಪರಿಶೀಲಿಸುತ್ತಿಲ್ಲ ಅಥವಾ ರದ್ದುಗೊಳಿಸುತ್ತಿಲ್ಲ ಏಕೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ&quot; ಎಂದು ತೀವ್ರ ಬೇಸರ ವ್ಯಕ್ತಪಡಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/karnataka-high-court-nice-road-project-scam-forensic-audit-san/articleshow-1r8w2ec"/>
        </item>
        <item>
            <title><![CDATA[ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ: CWRC ಆದೇಶ ಎತ್ತಿಹಿಡಿದ CWMA; ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಸೂಚನೆ!]]></title>
            <link>https://kannada.asianetnews.com/state/cwma-upholds-cwrc-order-karnataka-to-release-3500-cusec-cauvery-water-to-tamil-nadu-mandya-protest/articleshow-og6ofo0</link>
            <guid isPermaLink="true">https://kannada.asianetnews.com/state/cwma-upholds-cwrc-order-karnataka-to-release-3500-cusec-cauvery-water-to-tamil-nadu-mandya-protest/articleshow-og6ofo0</guid>
            <pubDate>Thu, 30 Jul 2026 16:21:23 +0530</pubDate>
            <description><![CDATA[ರಾಜ್ಯದಲ್ಲಿ ತೀವ್ರ ಮಳೆ ಕೊರತೆಯ ನಡುವೆಯೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ತಮಿಳುನಾಡಿಗೆ 15 ದಿನಗಳ ಕಾಲ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ಈ ನಿರ್ಧಾರದಿಂದಾಗಿ ಕಾವೇರಿ ಹೋರಾಟದ ಕೇಂದ್ರವಾದ ಮಂಡ್ಯದಲ್ಲಿ ರೈತರು ಮತ್ತು ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kykva5ewd84mp1rr761yd1a2,imgname-karnataka-cauvery-water-cwrc-order-1785225090524.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಮಂಡ್ಯ (ಜು.30): ರಾ&lt;/strong&gt;ಜ್ಯಾದ್ಯಂತ ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಜನಸಾಮಾನ್ಯರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯ ನಡುವೆಯೂ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಕಾವೇರಿ ಆಘಾತ ಎದುರಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿಹಿಡಿದಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್&zwnj;ನಂತೆ ಒಟ್ಟು 4.5 ಟಿಎಂಸಿ ನೀರು ಹರಿಸುವಂತೆ ನಿರ್ದೇಶನ ನೀಡಿದೆ.&lt;/p&gt;&lt;p&gt;ರಾಜ್ಯದಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ CWMA ಮುಂದೆ ಸುದೀರ್ಘ ವಾದ ಮಂಡಿಸಿತ್ತು. ರಾಜ್ಯದ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟು, ಆದೇಶ ಮರುಪರಿಶೀಲಿಸುವಂತೆ ಮನವೊಲಿಸಲು ಯತ್ನಿಸಿತ್ತು. ಆದರೆ, ಕರ್ನಾಟಕದ ಮೇಲ್ಮನವಿಯನ್ನು ತಿರಸ್ಕರಿಸಿರುವ ಪ್ರಾಧಿಕಾರವು, CWRC ಶಿಫಾರಸು ಮಾಡಿದ ಆದೇಶವನ್ನೇ ಖಾಯಂಗೊಳಿಸಿದೆ.&lt;/p&gt;&lt;h2&gt;&lt;strong&gt;ಮಂಡ್ಯದಲ್ಲಿ ಭುಗಿಲೆದ್ದ ರೈತರ ಆಕ್ರೋಶ:&lt;/strong&gt;&lt;/h2&gt;&lt;p&gt;CWMA ನಿರ್ಧಾರ ಹೊರಬೀಳುತ್ತಿದ್ದಂತೆಯೇ ಕಾವೇರಿ ಹೋರಾಟದ ಗಡಿನಾಡು ಮಂಡ್ಯದಲ್ಲಿ ಪ್ರತಿಭಟನೆಯ ಕಿಚ್ಚು ತೀವ್ರಗೊಂಡಿದೆ. ಮಂಡ್ಯದ ಪ್ರಮುಖ ಕೇಂದ್ರವಾದ ಸಂಜಯ್ ವೃತ್ತದಲ್ಲಿ ಜಮಾಯಿಸಿದ ನೂರಾರು ರೈತರು ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ CWMA ವಿರುದ್ಧ ಧಿಕ್ಕಾರದ ಕೂಗು ಕೂಗಿದರು.&lt;/p&gt;&lt;p&gt;ಆಕ್ರೋಶಗೊಂಡ ಪ್ರತಿಭಟನಾಕಾರರು ಹಳೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಿದರು. ರಸ್ತೆ ಮಧ್ಯದಲ್ಲೇ ಕುಳಿತು ಧರಣಿ ನಡೆಸಿದ ರೈತರು, ಟಯರ್&zwnj;ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಬೆಂಕಿ ಹಚ್ಚಲು ತಂದಿದ್ದ ಟಯರ್ ಹಾಗೂ ಪೆಟ್ರೋಲ್ ಕ್ಯಾನ್&zwnj;ಗಳನ್ನು ವಶಪಡಿಸಿಕೊಂಡರು. ಇದರಿಂದಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕಾದಾಟದ ವಾತಾವರಣ ನಿರ್ಮಾಣವಾಗಿ, ತೀವ್ರ ವಾಗ್ವಾದ ನಡೆಯಿತು.&lt;/p&gt;&lt;h2&gt;&lt;strong&gt;ಮುಂದಿನ ನಡೆ ಏನು?&lt;/strong&gt;&lt;/h2&gt;&lt;p&gt;ಕರ್ನಾಟಕದ ಪಾಲಿಗೆ ಕುಡಿಯುವ ನೀರಿಗೇ ಕಂಠಕ ಎದುರಾಗಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ ಎಂಬುದು ರೈತರ ಸ್ಪಷ್ಟ ನಿಲುವಾಗಿದೆ. ಸರ್ಕಾರದ ಮುಂದಿನ ಕಾನೂನು ಹೋರಾಟ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಧಾರದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/cwma-upholds-cwrc-order-karnataka-to-release-3500-cusec-cauvery-water-to-tamil-nadu-mandya-protest/articleshow-og6ofo0"/>
        </item>
        <item>
            <title><![CDATA[ಬರ್ತ್‌ಡೇ, ಪ್ರಿವೆಡ್ಡಿಂಗ್‌ ಶೂಟ್‌ಗೆ ಇನ್ಮುಂದೆ ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌, ದಿನದ ಬಾಡಿಗೆ ಎಷ್ಟು?]]></title>
            <link>https://kannada.asianetnews.com/bengaluru-urban/kstdc-ambaari-double-decker-bus-rental-bengaluru-rates-booking-san/articleshow-klnhguk</link>
            <guid isPermaLink="true">https://kannada.asianetnews.com/bengaluru-urban/kstdc-ambaari-double-decker-bus-rental-bengaluru-rates-booking-san/articleshow-klnhguk</guid>
            <pubDate>Thu, 30 Jul 2026 16:11:06 +0530</pubDate>
            <description><![CDATA[&lt;p&gt;ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಅನ್ನು ಈಗ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭಗಳು, ಕಾರ್ಪೊರೇಟ್ ಈವೆಂಟ್&zwnj;ಗಳು ಮತ್ತು ಪ್ರೀ-ವೆಡ್ಡಿಂಗ್ ಫೋಟೋಶೂಟ್&zwnj;ಗಳಿಗಾಗಿ ಬುಕ್ ಮಾಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kys9nrtnangra6k89cb0hcer,imgname-double-decker-ambaari-bus-1785407923029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.30): &lt;/strong&gt;ಕಲ್ಯಾಣ ಮಂಟಪ ಅಥವಾ ರೆಸಾರ್ಟ್&zwnj;ಗಳಲ್ಲಿ ನಿಮ್ಮನೆಯ ವಿಶೇಷ ಸಮಾರಂಭ ಆಚರಿಸಿ ಬೋರ್&zwnj; ಆಗಿದ್ದಲ್ಲಿ ನಿಮಗಿಲ್ಲಿದೆ ಸಿಹಿ ಸುದ್ದಿ. ಈಗ ನೀವು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಅನ್ನು ಖಾಸಗಿ ಸೆಲಬ್ರೇಷನ್&zwnj; ಹಾಗೂ ಪೋಟೋಶೂಟ್&zwnj;ಗಳಿಗಾಗಿ ಬುಕ್ ಮಾಡಬಹುದು. ಪ್ರೀ-ವೆಡ್ಡಿಂಗ್ ಫೋಟೋಶೂಟ್ ಬಯಸುವ ಜೋಡಿಗಳು ಈ ಓಪನ್-ಟಾಪ್ ಡಬಲ್ ಡೆಕ್ಕರ್ ಬಸ್ ಅನ್ನು ಬಾಡಿಗೆಗೆ ಪಡೆಯಬಹುದಾಗಿದ್ದು, ನಗರದ ಪ್ರಮುಖ 26 ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಲೇ ಸಂಭ್ರಮಾಚರಣೆ ಅಥವಾ ಶೂಟಿಂಗ್ ನಡೆಸಬಹುದಾಗಿದೆ.&lt;/p&gt;&lt;p&gt;ಈ ಬಗ್ಗೆ ವರದಿ ಮಾಡಿರುವ ದಿ ಹಿಂದೂ, 2026ರ ಜನವರಿಯಲ್ಲಿ 'ಅಂಬಾರಿ' ಡಬಲ್ ಡೆಕ್ಕರ್ ಬಸ್&zwnj;ಗಳ ಸೇವೆಯನ್ನು ಪ್ರಾರಂಭಿಸಲಾಯಿತು. ಕೆಎಸ್&zwnj;ಟಿಡಿಸಿ (KSTDC) ನಿರ್ವಹಿಸುವ ಮೂರು ಬಸ್&zwnj;ಗಳು ಇದುವರೆಗೆ ಪ್ರವಾಸಿಗರಿಗೆ ನಗರ ಪರ್ಯಟನೆಯ 'ಹಾಪ್-ಆನ್, ಹಾಪ್-ಆಫ್' (Hop-on, Hop-off) ಸೇವೆಯನ್ನು ನೀಡುತ್ತಿದ್ದವು. ಇವು ರವೀಂದ್ರ ಕಲಾಕ್ಷೇತ್ರ, ಹಡ್ಸನ್ ಸರ್ಕಲ್, ಕಸ್ತೂರ್ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ಕಬ್ಬನ್ ರಸ್ತೆ, ವಿಧಾನ ಸೌಧ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿದಂತೆ ಒಟ್ಟು 26 ಪ್ರಮುಖ ಆಕರ್ಷಣೀಯ ಸ್ಥಳಗಳನ್ನು ಸುತ್ತಿಬರುತ್ತವೆ.&lt;/p&gt;&lt;h2&gt;&lt;strong&gt;20,000 ಪ್ರವಾಸಿಗರ ಬಳಕೆ &ndash; ಹೊಸ ಸೇವೆಗೆ ಚಾಲನೆ&lt;/strong&gt;&lt;/h2&gt;&lt;p&gt;ಕೆಎಸ್&zwnj;ಟಿಡಿಸಿ ಅಧಿಕಾರಿಯೊಬ್ಬರು,ಜನವರಿಯಿಂದ ಇದುವರೆಗೆ ಸುಮಾರು 20,000 ಜನರು ಈ ಹಾಪ್-ಆನ್, ಹಾಪ್-ಆಫ್ ಸೇವೆಯನ್ನು ಬಳಸಿಕೊಂಡಿದ್ದಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ ಹಾಗೂ ವಾರದ ದಿನಗಳಲ್ಲೂ ಉತ್ತಮ ಸ್ಪಂದನೆ ಸಿಗುತ್ತಿದೆ. ತಂಪಾದ ವಾತಾವರಣವಿದ್ದಾಗ ಹೆಚ್ಚಿನವರು ಟಾಪ್&zwnj; ಡೆಕ್&zwnj; ಸೀಟುಗಳನ್ನೇ ಇಷ್ಟಪಡುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು, ಈಗ ಸಾರ್ವಜನಿಕರಿಗೆ ಜನ್ಮದಿನದ ಆಚರಣೆಗಳು, ಕಾರ್ಪೊರೇಟ್ ಈವೆಂಟ್&zwnj;ಗಳು ಹಾಗೂ ಪ್ರೀ-ವೆಡ್ಡಿಂಗ್ ಫೋಟೋಶೂಟ್&zwnj;ಗಳಿಗೆ ಅಂಬಾರಿ ಬಸ್&zwnj;ಗಳನ್ನು ಕಾಯ್ದಿರಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ದಿನದ 5 ಗಂಟೆ ಅವಧಿಯ ಬಾಡಿಗೆ ಎಷ್ಟು?&lt;/strong&gt;&lt;/h2&gt;&lt;p&gt;&lt;strong&gt;ಸಾಮಾನ್ಯ ಪ್ರಯಾಣ ದರ: ಹಾಪ್-ಆನ್, ಹಾಪ್-ಆಫ್ ಸೇವೆಗೆ ಎಲ್ಲಾ ವಯೋಮಾನದವರಿಗೂ ಟಿಕೆಟ್ ದರ ₹ 180 ಆಗಿದೆ.&lt;/strong&gt;&lt;/p&gt;&lt;h2&gt;&lt;strong&gt;ಸಮಾರಂಭಗಳು ಮತ್ತು ಪಾರ್ಟಿಗಳಿಗೆ (5 ಗಂಟೆಗಳ ಅವಧಿ)&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ವಾರಾಂತ್ಯ (Sat-Sun): &lt;/strong&gt;₹ 28,000 + % 5 GST.&lt;/li&gt; &lt;li&gt;&lt;strong&gt;ವಾರದ ದಿನಗಳು (Mon-Fri): &lt;/strong&gt;₹ 26,000 + % 5 GST.&lt;/li&gt; &lt;li&gt;&lt;strong&gt;ನಿಯಮಿತ ಸಮಯ ಮೀರಿದರೆ, ಇಡೀ ದಿನದ ದರ ಅನ್ವಯಿಸುತ್ತದೆ (ವಾರಾಂತ್ಯಕ್ಕೆ ₹ 40,000 ಹಾಗೂ ವಾರದ ದಿನಗಳಿಗೆ ₹ 32,000).&lt;/strong&gt;&lt;/li&gt;&lt;/ul&gt;&lt;h2&gt;&lt;strong&gt;ಫೋಟೋಶೂಟ್&zwnj;ಗಳಿಗೆ (2 ಗಂಟೆಗಳ ಅವಧಿ)&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ವಾರಾಂತ್ಯ (Sat-Sun):&lt;/strong&gt; ₹ 16,000 + % 5 GST.&lt;/li&gt; &lt;li&gt;&lt;strong&gt;ವಾರದ ದಿನಗಳು (Mon-Fri)&lt;/strong&gt;: ₹ 12,000 + % 5 GST.&lt;/li&gt; &lt;li&gt;&lt;strong&gt;2 ಗಂಟೆಗಿಂತ ಹೆಚ್ಚುವರಿ ಸಮಯಕ್ಕೆ ವಾರಾಂತ್ಯದಲ್ಲಿ ಪ್ರತಿ ಗಂಟೆಗೆ ₹ 7,000 ಹಾಗೂ ವಾರದ ದಿನಗಳಲ್ಲಿ ಪ್ರತಿ ಗಂಟೆಗೆ ₹ 6,000 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.&lt;/strong&gt;&lt;/li&gt;&lt;/ul&gt;&lt;p&gt;&quot;ಇದು ಕೇವಲ ಹೆಚ್ಚುವರಿ ಆದಾಯ ಗಳಿಕೆಯಷ್ಟೇ ಅಲ್ಲ, ಬೆಂಗಳೂರಿನಂತಹ ನಗರದಲ್ಲಿ ಪ್ರವಾಸಿಗರಿಗೆ ಮತ್ತು ಜನರಿಗೆ ಆಚರಣೆ ಮಾಡಲು ಹೊಸ ಮತ್ತು ವಿಶಿಷ್ಟ ಆಯ್ಕೆಗಳನ್ನು ಒದಗಿಸುವ ಪ್ರಯತ್ನವಾಗಿದೆ&quot; ಎಂದು ಅಧಿಕಾರಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಹೆಚ್ಚಿನ ಪ್ರಚಾರ ಅಗತ್ಯ - ಸಾರ್ವಜನಿಕರ ಅಭಿಪ್ರಾಯ&lt;/strong&gt;&lt;/h2&gt;&lt;p&gt;ಇದಕ್ಕೆ ಸೂಕ್ತ ಪ್ರಚಾರ ಸಿಗಬೇಕು, ಇದರಿಂದ ಹೆಚ್ಚಿನ ಜೋಡಿಗಳು ಪ್ರೀ-ವೆಡ್ಡಿಂಗ್ ಶೂಟ್&zwnj;ಗೆ ಅಂಬಾರಿ ಬಸ್&zwnj;ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಜೋಡಿಗಳು 3-4 ಸ್ಥಳಗಳನ್ನು ಕಾಯ್ದಿರಿಸುತ್ತಾರೆ, ಆದರೆ ನಗರದ ಎಲ್ಲಾ ಪ್ರಮುಖ ಸ್ಥಳಗಳನ್ನು ಒಳಗೊಳ್ಳುವ ಈ ಅಂಬಾರಿ ಬಸ್ ಪ್ರವಾಸ ಉತ್ತಮ ಟ್ರೆಂಡ್ ಸೃಷ್ಟಿಸಬಹುದು. ಇದು ಸರಿಯಾಗಿ ಅನುಷ್ಠಾನಗೊಂಡರೆ ಭಾರತದಲ್ಲೇ ವಿಶಿಷ್ಟವಾದ ಶೂಟಿಂಗ್ ಅನುಭವವಾಗಲಿದೆ ಎಂದು ಕ್ಯಾಮೆರಾಮೆನ್&zwnj; ಒಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇವೆಂಟ್&zwnj; ಮ್ಯಾನೇಜ್&zwnj;ಮೆಂಟ್&zwnj; ಸಂಸ್ಥೆಯ ಅಧಿಕಾರಿಯೊಬ್ಬರು, &quot;ಕೆಎಸ್&zwnj;ಟಿಡಿಸಿಯು ಈ ಯೋಜನೆಯನ್ನು ಖಾಸಗಿ ಈವೆಂಟ್ ಮ್ಯಾನೇಜ್&zwnj;ಮೆಂಟ್ ಕಂಪನಿಗಳೊಂದಿಗೂ ಮುಕ್ತವಾಗಿ ಹಂಚಿಕೊಳ್ಳಬೇಕು. ಇದರಿಂದ ಜನ್ಮದಿನದ ಪಾರ್ಟಿಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಹಾಗೂ ಪೋಟೋಶೂಟ್&zwnj;ಗಳಿಗೆ ಹೊರಾಂಗಣದಲ್ಲಿ ಮತ್ತಷ್ಟು ಹೊಸ ಆಯ್ಕೆಗಳು ಜನರಿಗೆ ಲಭ್ಯವಾಗುತ್ತವೆ&quot; ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/kstdc-ambaari-double-decker-bus-rental-bengaluru-rates-booking-san/articleshow-klnhguk"/>
        </item>
        <item>
            <title><![CDATA[ಬೆಂಗಳೂರಲ್ಲಿ ಬ್ರಿಟೀಷ್ ಗವರ್ನರ್ ವಾರನ್ ಹೇಸ್ಟಿಂಗ್ ಸಹಿಯುಳ್ಳ 230 ವರ್ಷಗಳ ಹಿಂದಿನ ಚೆಕ್ ಪತ್ತೆ!]]></title>
            <link>https://kannada.asianetnews.com/bengaluru-urban/bengaluru-collector-verifies-1794-230-year-old-cheque-signed-by-warren-hastings-suh/articleshow-3vprnyc</link>
            <guid isPermaLink="true">https://kannada.asianetnews.com/bengaluru-urban/bengaluru-collector-verifies-1794-230-year-old-cheque-signed-by-warren-hastings-suh/articleshow-3vprnyc</guid>
            <pubDate>Thu, 30 Jul 2026 16:10:45 +0530</pubDate>
            <description><![CDATA[&lt;p&gt;ಭಾರತದ ಇತಿಹಾಸದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ಸಹಿ ಮಾಡಿರುವ 1794ರ ಅಪರೂಪದ ಚೆಕ್&zwnj;ವೊಂದು ಬೆಂಗಳೂರಿನಲ್ಲಿ ಇದೀಗ ಭಾರೀ ಕುತೂಹಲ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kys9jz3wq6cv5j38jxgq26en,imgname-bengaluru-collector-verifies-1794-230-year-old-cheque-signed-by-warren-hastings-1785407831164.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಇತಿಹಾಸದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ಸಹಿ ಮಾಡಿರುವ 1794ರ ಅಪರೂಪದ ಚೆಕ್&zwnj;ವೊಂದು ಬೆಂಗಳೂರಿನಲ್ಲಿ ಇದೀಗ ಭಾರೀ ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ಈ ಚೆಕ್ ಹಲವು ವರ್ಷಗಳಿಂದ ಬೆಂಗಳೂರು ಮೂಲದ ಪುರಾತನ ಕಲಾ ಮುದ್ರಣಗಳು, ನಕ್ಷೆಗಳು, ಪುಸ್ತಕಗಳು ಹಾಗೂ ಐತಿಹಾಸಿಕ ಕಲಾಕೃತಿಗಳ ಸಂಗ್ರಾಹಕ ಸುನಿಲ್ ಬಾಬೂ ಅವರ ಸಂಗ್ರಹದಲ್ಲಿತ್ತು. ಆದರೆ ಅದರ ಸತ್ಯಾಸತ್ಯತೆಯನ್ನು ಅವರು ಕೇವಲ ಎರಡು ವಾರಗಳ ಹಿಂದಷ್ಟೇ ದೃಢಪಡಿಸಿದ್ದಾರೆ.&lt;/p&gt;&lt;h2&gt;1794ರ ಮೇ 17ರಂದು ಸಹಿ ಮಾಡಿದ್ದ ಚೆಕ್&lt;/h2&gt;&lt;p&gt;ವಾರೆನ್ ಹೇಸ್ಟಿಂಗ್ಸ್ ಸಹಿ ಹೊಂದಿರುವ ಈ ಚೆಕ್&zwnj;ಗೆ ಮೇ 17, 1794ರ ದಿನಾಂಕವಿದೆ. ಗೊಸ್ಲಿಂಗ್ಸ್ ಬ್ಯಾಂಕ್&zwnj;ನಿಂದ ನೀಡಲಾಗಿರುವ ಈ ಚೆಕ್&zwnj;ನಲ್ಲಿ &pound;30 ಮೊತ್ತವನ್ನು ಪಾವತಿಸುವಂತೆ ನಮೂದಿಸಲಾಗಿದೆ. ಇದರ ಫಲಾನುಭವಿ ಜೋಸುವಾ ಪ್ಯಾಟ್ರಿಕ್ ಎಂಬ ವ್ಯಕ್ತಿಯಾಗಿದ್ದು, ಅವರಿಗೆ ಹೇಸ್ಟಿಂಗ್ಸ್ ನಿಯಮಿತವಾಗಿ ಪಾವತಿಗಳನ್ನು ಮಾಡುತ್ತಿದ್ದರು ಎನ್ನುವುದಕ್ಕೆ ಈಗ ಐತಿಹಾಸಿಕ ದಾಖಲೆಗಳು ಪತ್ತೆಯಾಗಿವೆ. ಜೋಸುವಾ ಪ್ಯಾಟ್ರಿಕ್ ಯಾರು? ಅವರಿಗೆ ಹೇಸ್ಟಿಂಗ್ಸ್ ಯಾವ ಕಾರಣಕ್ಕಾಗಿ ಹಣ ಪಾವತಿಸುತ್ತಿದ್ದರು? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಿಲ್ಲ. ಆದರೆ ಈ ಚೆಕ್ ಒಂದೇ ಬಾರಿ ನಡೆದ ವಹಿವಾಟಿನ ಭಾಗವಾಗಿರಲಿಲ್ಲ ಎಂಬುದು ಇದೀಗ ಪತ್ತೆಯಾದ ದಾಖಲೆಗಳಿಂದ ತಿಳಿದುಬಂದಿದೆ.&lt;/p&gt;&lt;h2&gt;ವರ್ಷಗಳ ಕಾಲ ಸುನಿಲ್ ಅವರ ಸಂಗ್ರಹದಲ್ಲಿದ್ದ ಚೆಕ್&lt;/h2&gt;&lt;p&gt;ಸುನಿಲ್ ಬಾಬೂ ಅವರು ಹಲವು ವರ್ಷಗಳ ಹಿಂದೆ ಆಟೋಗ್ರಾಫ್&zwnj;ಗಳ ಸಂಗ್ರಹದಲ್ಲಿ ಪರಿಣತಿ ಹೊಂದಿದ್ದ ಪ್ರಸಿದ್ಧ ವ್ಯಾಪಾರಿಯೊಬ್ಬರಿಂದ ಈ ಚೆಕ್&zwnj; ಅನ್ನು ಖರೀದಿಸಿದ್ದರು. ಬಳಿಕ ತಮ್ಮ ಇತರ ಸಂಗ್ರಹಗಳೊಂದಿಗೆ ಅದನ್ನು ಸುರಕ್ಷಿತವಾಗಿ ಇಟ್ಟಿದ್ದರು. ಆದರೆ ಚೆಕ್&zwnj;ನ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಹಲವು ವರ್ಷಗಳೇ ಬೇಕಾಯಿತು. ಕೊನೆಗೆ ಎರಡು ವಾರಗಳ ಹಿಂದೆ ಅದರ ಮೂಲವನ್ನು ಪತ್ತೆಹಚ್ಚುವ ಪ್ರಯತ್ನಕ್ಕೆ ಮುಂದಾದರು. ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸಲು ಬಳಸುವ ಆರ್ಕೈವಲ್-ಗ್ರೇಡ್ ಮೈಲಾರ್ ಹಾಳೆಗಳಲ್ಲಿ ಚೆಕ್&zwnj; ಅನ್ನು ಸಂರಕ್ಷಿಸಲಾಗಿತ್ತು. ಇದರಿಂದ ತೇವಾಂಶ ಸೇರಿದಂತೆ ಇತರ ಹಾನಿಕಾರಕ ಅಂಶಗಳಿಂದ ಕಾಗದವನ್ನು ರಕ್ಷಿಸಲಾಗಿತ್ತು.&lt;/p&gt;&lt;h2&gt;230 ವರ್ಷಗಳ ಬಳಿಕ ಮೂಲ ಬ್ಯಾಂಕ್ ದಾಖಲೆಗಳಲ್ಲಿ ಸಿಕ್ಕ ಸುಳಿವು&lt;/h2&gt;&lt;p&gt;ಚೆಕ್&zwnj; ನಿಜವಾಗಿಯೂ ವಾರೆನ್ ಹೇಸ್ಟಿಂಗ್ಸ್ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸುನಿಲ್ ಅವರು ಮೂಲ ಬ್ಯಾಂಕ್ ದಾಖಲೆಗಳನ್ನು ಹುಡುಕಲು ಮುಂದಾದರು. 1794ರಲ್ಲಿ ಚೆಕ್&zwnj; ನೀಡಿದ್ದ ಗೊಸ್ಲಿಂಗ್ಸ್ ಬ್ಯಾಂಕ್ ನಂತರ 1896ರಲ್ಲಿ ಇತರ ಕೆಲವು ಬ್ಯಾಂಕ್&zwnj;ಗಳೊಂದಿಗೆ ವಿಲೀನಗೊಂಡು ಬಾರ್ಕ್ಲೇಸ್ ಆ್ಯಂಡ್ ಕಂಪನಿ ಲಿಮಿಟೆಡ್ ಎಂಬ ಸಂಸ್ಥೆಯ ಭಾಗವಾಯಿತು. ಹೀಗಾಗಿ ಸುನಿಲ್ ಅವರು ಬಾರ್ಕ್ಲೇಸ್&zwnj;ನ ಆರ್ಕೈವ್ಸ್ ವಿಭಾಗವನ್ನು ಸಂಪರ್ಕಿಸಿದರು. ಆರ್ಕೈವ್ಸ್ ತಂಡವು ಹೇಸ್ಟಿಂಗ್ಸ್&zwnj;ಗೆ ಸಂಬಂಧಿಸಿದ ಮೂಲ ಗೊಸ್ಲಿಂಗ್ಸ್ ಮತ್ತು ಶಾರ್ಪ್ ಲೆಡ್ಜರ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು. ಅಲ್ಲಿದ್ದ ದಾಖಲೆಯಲ್ಲಿನ ಸಂಬಂಧಿತ ಪುಟವನ್ನು ಪರಿಶೀಲಿಸಿದಾಗ, ವಾರೆನ್ ಹೇಸ್ಟಿಂಗ್ಸ್ ಅವರು ಜೋಸುವಾ ಪ್ಯಾಟ್ರಿಕ್ ಅವರಿಗೆ ಹಲವು ಬಾರಿ ಪಾವತಿಗಳನ್ನು ಮಾಡಿರುವುದು ಕಂಡುಬಂದಿದೆ. ಇದರಿಂದ ಇಬ್ಬರ ನಡುವೆ ದೀರ್ಘಕಾಲದ ಆರ್ಥಿಕ ವ್ಯವಹಾರ ಅಥವಾ ಸಂಬಂಧವಿದ್ದಿರಬಹುದು ಎಂಬ ನಿರ್ಧಾರಕ್ಕೆ ಬರಬಹುದು ಎಂದು ಸುನಿಲ್ ಹೇಳಿದ್ದಾರೆ.&lt;/p&gt;&lt;h2&gt;ದಾಖಲೆಗಳ ಮೂಲವೇ ಐತಿಹಾಸಿಕ ವಸ್ತುವಿನ ಮೌಲ್ಯ ಹೆಚ್ಚಿಸುತ್ತದೆ&lt;/h2&gt;&lt;p&gt;ಒಂದು ಐತಿಹಾಸಿಕ ವಸ್ತುವಿನ ದಾಖಲಿತ ಮೂಲ ಅಥವಾ Provenance ಅದರ ಸತ್ಯಾಸತ್ಯತೆಯನ್ನು ದೃಢಪಡಿಸುವುದಷ್ಟೇ ಅಲ್ಲದೆ, ಅದರ ಐತಿಹಾಸಿಕ ಹಿನ್ನೆಲೆ ಮತ್ತು ಸಂಗ್ರಹಣಾ ಮೌಲ್ಯವನ್ನೂ ಹೆಚ್ಚಿಸುತ್ತದೆ ಎಂದು ಸುನಿಲ್ ಅಭಿಪ್ರಾಯಪಟ್ಟಿದ್ದಾರೆ. ಅವರ ಸಂಗ್ರಹದಲ್ಲಿರುವ ಐತಿಹಾಸಿಕ ನಕ್ಷೆಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಅವುಗಳ ಮೂಲವನ್ನು ಗುರುತಿಸಲು ವಾಟರ್&zwnj;ಮಾರ್ಕ್&zwnj;ಗಳು ಪ್ರಮುಖ ಸುಳಿವಾಗುತ್ತವೆ. 1790ರಿಂದ 1850ರ ಅವಧಿಯಲ್ಲಿ ಮುದ್ರಿಸಲಾದ ಅನೇಕ ನಕ್ಷೆಗಳಲ್ಲಿ ಜೆ. ವಾಟ್&zwnj;ಮ್ಯಾನ್ (J. Whatman) ಕಾಗದದ ವಾಟರ್&zwnj;ಮಾರ್ಕ್ ಇರುತ್ತಿತ್ತು. ಹೀಗಾಗಿ ಆ ವಾಟರ್&zwnj;ಮಾರ್ಕ್ ಕಂಡುಬಂದರೆ, ನಕ್ಷೆ ಯಾವ ಕಾಲಘಟ್ಟಕ್ಕೆ ಸೇರಿದೆ ಎಂಬುದನ್ನು ಅಂದಾಜಿಸಲು ಸಾಧ್ಯವಾಗುತ್ತದೆ.&lt;/p&gt;&lt;h2&gt;ಸುನಿಲ್ ಅವರ ಅಪರೂಪದ ಸಂಗ್ರಹದಲ್ಲಿ ಟಿಪ್ಪು ಸುಲ್ತಾನ್, ಮೌಂಟ್&zwnj;ಬ್ಯಾಟನ್&zwnj;ಗೆ ಸಂಬಂಧಿಸಿದ ವಸ್ತುಗಳು&lt;/h2&gt;&lt;p&gt;ಐತಿಹಾಸಿಕ ವಸ್ತುಗಳ ಸಂಗ್ರಹದಲ್ಲಿ ಆಸಕ್ತಿ ಹೊಂದಿರುವ ಸುನಿಲ್ ಬಾಬೂ ಅವರ ಬಳಿ ಹಲವು ಅಪರೂಪದ ಕಲಾಕೃತಿಗಳು ಮತ್ತು ದಾಖಲೆಗಳಿವೆ. ಲಾರ್ಡ್ ಮೌಂಟ್&zwnj;ಬ್ಯಾಟನ್ ಅವರಿಗೆ ಸಂಬಂಧಿಸಿದ ಕಲಾಕೃತಿಗಳು, ದಾಖಲೆಗಳು ಹಾಗೂ ಆರ್ಕೈವ್&zwnj;ಗಳ ಜೊತೆಗೆ ಟಿಪ್ಪು ಸುಲ್ತಾನ್ ಸೇರಿದಂತೆ ಐತಿಹಾಸಿಕ ರಾಜಮನೆತನದ ವ್ಯಕ್ತಿಗಳಿಗೆ ಸಂಬಂಧಿಸಿದ ವಸ್ತುಗಳೂ ಅವರ ಸಂಗ್ರಹದಲ್ಲಿವೆ. ಬೆಂಗಳೂರು ಮತ್ತು ಯುನೈಟೆಡ್ ಕಿಂಗ್&zwnj;ಡಮ್ ನಡುವೆ ತಮ್ಮ ಸಮಯವನ್ನು ಹಂಚಿಕೊಳ್ಳುವ ಸುನಿಲ್, ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳಿಗಾಗಿ ಐತಿಹಾಸಿಕ ಕಲಾಕೃತಿಗಳನ್ನು ಸಂಗ್ರಹಿಸಿ ಸಂರಕ್ಷಿಸುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/bengaluru-urban/bengaluru-collector-verifies-1794-230-year-old-cheque-signed-by-warren-hastings-suh/articleshow-3vprnyc"/>
        </item>
        <item>
            <title><![CDATA[ಕಳ್ಳತನವನ್ನೂ ಮಾಡಿದ್ರು, ಟೀ ಮಾಡ್ಕೊಂಡು ಕುಡಿದು ಹೋದ್ರು: ಶಿರಸಿಯಲ್ಲಿ ಕೈಚಳಕ ತೋರಿಸಿದ ಕೂಲ್ ಕಳ್ಳರು]]></title>
            <link>https://kannada.asianetnews.com/gallery/crime/theft-and-tea-break-cool-thieves-steal-and-drink-tea-in-sirsi-suh-gfghhng</link>
            <guid isPermaLink="true">https://kannada.asianetnews.com/gallery/crime/theft-and-tea-break-cool-thieves-steal-and-drink-tea-in-sirsi-suh-gfghhng</guid>
            <pubDate>Thu, 30 Jul 2026 14:41:27 +0530</pubDate>
            <description><![CDATA[&lt;p&gt;Theft and tea break cool thieves steal and drink tea in Sirsi ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿರುವ ಕಳ್ಳತನ ಪ್ರಕರಣವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kys41jx4g2yf8rqzmnyaz5mq,imgname-theft-and-tea-break-cool-thieves-steal-and-drink-tea-in-sirsi-1785402018724.jpg" type="image/jpeg" height="390" width="690"/>
            <content:encoded><![CDATA[&lt;p&gt;Theft and tea break cool thieves steal and drink tea in Sirsi ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿರುವ ಕಳ್ಳತನ ಪ್ರಕರಣವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಕಳ್ಳರು ಮನೆಗೆ ನುಗ್ಗಿ ಚಿನ್ನ, ಹಣ ದೋಚಿಕೊಂಡು ಸದ್ದಿಲ್ಲದೆ ಪರಾರಿಯಾಗುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿರುವ ಕಳ್ಳತನ ಪ್ರಕರಣವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳ್ಳತನಕ್ಕೆ ಬಂದ ಖದೀಮರು ಚಿನ್ನ, ಹಣ ದೋಚಿದ ಬಳಿಕ ಮನೆಯಲ್ಲಿ ಗ್ಯಾಸ್ ಆನ್ ಮಾಡಿ, ಸ್ವತಃ ಟೀ ಮಾಡಿಕೊಂಡು ಕುಡಿದು ಬಳಿಕ ಆರಾಮವಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ!&lt;/p&gt;&lt;img&gt;&lt;p&gt;ಮುಂಡಗೋಡ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಎನ್ನಲಾಗಿದ್ದು, ಕೇವಲ ಹತ್ತು ದಿನಗಳ ಅವಧಿಯಲ್ಲಿ ಮೂರು ಮನೆಗಳನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ. ಪಟ್ಟಣದ ಹಳೂರು ಮಾರಿಕಾಂಬಾ ನಗರದಲ್ಲಿ ರಾತ್ರಿ ವೇಳೆ ಸತತವಾಗಿ ಎರಡು ಮನೆಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಈ ಪೈಕಿ ಒಂದು ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.&lt;/p&gt;&lt;img&gt;&lt;p&gt;ಮಾರಿಕಾಂಬಾ ನಗರದ ನಿವಾಸಿ ಬಾಷಾ ಮರಗಡಿ ಅವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ ಸುಮಾರು 2.5 ಗ್ರಾಂ ಚಿನ್ನ ಹಾಗೂ ₹3,000 ನಗದನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೇ ಸುಮ್ಮನಾಗದ ಖದೀಮರು, ಮನೆಯಲ್ಲಿದ್ದ ಹುಂಡಿಯನ್ನೂ ಒಡೆದು ಅದರಲ್ಲಿದ್ದ ಹಣವನ್ನೂ ದೋಚಿದ್ದಾರೆ. ಇದೇ ವೇಳೆ ಶಂಕರ ಕುರುಬರ ಎಂಬುವವರ ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕೂಡ ವರದಿಯಾಗಿದೆ.&lt;/p&gt;&lt;img&gt;&lt;p&gt;ಈ ಕಳ್ಳತನ ಪ್ರಕರಣದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ವಿಚಾರವೆಂದರೆ ಕಳ್ಳರ ವಿಚಿತ್ರ ವರ್ತನೆ. ಕಳ್ಳತನ ಮಾಡಿದ ಮನೆಯೊಂದರಲ್ಲಿ ಖದೀಮರು ಸ್ವತಃ ಟೀ ಮಾಡಿಕೊಂಡು ಕುಡಿದಿದ್ದಾರೆ ಎನ್ನಲಾಗಿದೆ. ಅಂದರೆ, ಚಿನ್ನ, ಹಣ ದೋಚಿದ ಬಳಿಕ ಅವಸರದಲ್ಲಿ ಓಡಿಹೋಗುವ ಬದಲು ಮನೆಯಲ್ಲೇ ಟೀ ಮಾಡಿಕೊಂಡು ಕುಡಿದು, ಬಳಿಕ ಆರಾಮವಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.&lt;/p&gt;&lt;img&gt;&lt;p&gt;ಪಟ್ಟಣದಲ್ಲಿ ಸರಣಿ ಕಳ್ಳತನದ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಸುಳಿವು ಪತ್ತೆಹಚ್ಚಲು ಶ್ವಾನದಳದ ಮೂಲಕವೂ ಶೋಧ ಕಾರ್ಯ ನಡೆಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಕಳ್ಳತನದ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಜನರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/crime/theft-and-tea-break-cool-thieves-steal-and-drink-tea-in-sirsi-suh-gfghhng"/>
        </item>
        <item>
            <title><![CDATA[ಸಿಂಚನಾ ಹುಲಿಯ ಕೋರೆ ಹಲ್ಲಿಗೆ ರೂಟ್ ಕೆನಾಲ್! ಬನ್ನೇರುಘಟ್ಟದಲ್ಲಿ ಶಸ್ತ್ರಚಿಕಿತ್ಸೆ,]]></title>
            <link>https://kannada.asianetnews.com/gallery/bengaluru-urban/bengaluru-tiger-undergoes-successful-root-canal-surgery-in-bannerghatta-biological-park-mrq-6sxk1d0</link>
            <guid isPermaLink="true">https://kannada.asianetnews.com/gallery/bengaluru-urban/bengaluru-tiger-undergoes-successful-root-canal-surgery-in-bannerghatta-biological-park-mrq-6sxk1d0</guid>
            <pubDate>Thu, 30 Jul 2026 13:14:49 +0530</pubDate>
            <description><![CDATA[&lt;p&gt;ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 'ಸಿಂಚನಾ' ಎಂಬ ಹುಲಿಯ ಹಾನಿಗೊಳಗಾದ ಕೋರೆ ಹಲ್ಲಿಗೆ ಯಶಸ್ವಿ ರೂಟ್ ಕೆನಾಲ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸೋಂಕಿನಿಂದ ಬಳಲುತ್ತಿದ್ದ ಹುಲಿಯು ಇದೀಗ ಚೇತರಿಸಿಕೊಳ್ಳುತ್ತಿದ್ದು, ವೈದ್ಯರ ತಂಡದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyrzagp1w1ngk9qv5nn846sr,imgname-tiger--2--1785397068481.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 'ಸಿಂಚನಾ' ಎಂಬ ಹುಲಿಯ ಹಾನಿಗೊಳಗಾದ ಕೋರೆ ಹಲ್ಲಿಗೆ ಯಶಸ್ವಿ ರೂಟ್ ಕೆನಾಲ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸೋಂಕಿನಿಂದ ಬಳಲುತ್ತಿದ್ದ ಹುಲಿಯು ಇದೀಗ ಚೇತರಿಸಿಕೊಳ್ಳುತ್ತಿದ್ದು, ವೈದ್ಯರ ತಂಡದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಮನುಷ್ಯರು ಹಲ್ಲಿನ ರೂಟ್ ಕೆನಾಲ್ ಮಾಡಿಸಿಕೊಳ್ಳುತ್ತಾರೆ, ಆದರೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯ ಹಲ್ಲಿಗೆ ರೂಟ್ ಕೆನಾಲ್ ಮಾಡಲಾಗಿದೆ. ಉದ್ಯಾನವನದಲ್ಲಿದ್ದ 'ಸಿಂಚನಾ' ಎಂಬ ಹುಲಿ ಕೇಜ್ (ಪಂಜರ) ಕಚ್ಚುತ್ತಿದ್ದರಿಂದ ಅದರ ಕೋರೆ ಹಲ್ಲು ಹಾನಿಗೊಳಗಾಗಿ, ಸೋಂಕಿನಿಂದ ಬಳಲುತ್ತಿತ್ತು.&lt;/p&gt;&lt;img&gt;&lt;p&gt;ಹಲ್ಲಿನ ನೋವು ಹೆಚ್ಚಾಗಿದ್ದರಿಂದ ಹುಲಿ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ, ಇದು ಅದರ ಒಟ್ಟಾರೆ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿತ್ತು.ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ವರ್ಗ ಹಾಗೂ SOS ಪಶುವೈದ್ಯಕೀಯ ತಂಡ ಜಂಟಿಯಾಗಿ ಮೂರು ಗಂಟೆಗೂ ಹೆಚ್ಚು ಕಾಲ ಶ್ರಮಿಸಿ, ಹುಲಿಯ ಹಲ್ಲನ್ನು ತೆಗೆಯದೆಯೇ ಯಶಸ್ವಿಯಾಗಿ ರೂಟ್ ಕ್ಯಾನಲ್ ಮಾಡಿದೆ.&lt;/p&gt;&lt;img&gt;&lt;p&gt;ಶಸ್ತ್ರಚಿಕಿತ್ಸೆ ಬಳಿಕ ಹುಲಿ ಸಿಂಚನಾ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಅದನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದಾರೆ. ಹುಲಿಗೆ ಮರುಜೀವ ನೀಡಿ, ಅದು ದೀರ್ಘಕಾಲ ಆರೋಗ್ಯವಾಗಿರಲು ಕಾರಣವಾದ ವೈದ್ಯರ ತಂಡ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ವರ್ಗದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಹಾಗೂ ಪ್ರಾಣಿಪ್ರಿಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/bengaluru-urban/bengaluru-tiger-undergoes-successful-root-canal-surgery-in-bannerghatta-biological-park-mrq-6sxk1d0"/>
        </item>
        <item>
            <title><![CDATA[ವಿಜಯನಗರ: ದೇವಾಲಯಗಳಲ್ಲಿ ಪ್ರತಿ ತಿಂಗಳು ಹುಂಡಿ ಎಣಿಕೆ ಕಡ್ಡಾಯ, ಚಿನ್ನ ಬೆಳ್ಳಿ  ಕಾಣಿಕೆ ಬಗ್ಗೆ ಡಿಸಿ ಸೂಚನೆ ಏನು?]]></title>
            <link>https://kannada.asianetnews.com/karnataka-districts/monthly-temple-donation-counting-is-mandatory-vijayanagar-dc-kavita-s-mannikeri-instruction-rav/articleshow-dt8rz5m</link>
            <guid isPermaLink="true">https://kannada.asianetnews.com/karnataka-districts/monthly-temple-donation-counting-is-mandatory-vijayanagar-dc-kavita-s-mannikeri-instruction-rav/articleshow-dt8rz5m</guid>
            <pubDate>Thu, 30 Jul 2026 12:56:59 +0530</pubDate>
            <description><![CDATA[ಹೊಸಪೇಟೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಪಾರದರ್ಶಕತೆ ತರಲು ಜಿಲ್ಲಾಧಿಕಾರಿಗಳು ಹೊಸ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಹುಂಡಿ ಎಣಿಕೆಗೆ ಫೇಸ್ ರೆಕಗ್ನಿಷನ್, ಸಿಸಿಟಿವಿ ಕಣ್ಗಾವಲು ಹಾಗೂ ಭಕ್ತರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyryh9b2cf7x2vp367jm7hk8,imgname-----------------------2026-07-30t125336.708-1785396241762.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಜು.30):&lt;/strong&gt; ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ &rsquo;ಎ&rsquo; ಮತ್ತು &rsquo;ಬಿ&rsquo; ದರ್ಜೆಯ ಹಾಗೂ ಪ್ರಮುಖ ದೇವಾಲಯಗಳ ಆಡಳಿತ, ಹುಂಡಿ ಎಣಿಕೆ ಕಾರ್ಯವಿಧಾನ, ಆಸ್ತಿ ರಕ್ಷಣೆ ಹಾಗೂ ಭಕ್ತರ ಸೌಲಭ್ಯಗಳಲ್ಲಿ ಪಾರದರ್ಶಕತೆ ಕಾಪಾಡಲು ಹುಂಡಿ ಎಣಿಕೆಗೆ ಫೇಸ್ ರೆಕಗ್ನಿಷನ್, ಸಿಸಿಟಿವಿ, ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.&lt;/p&gt;&lt;p&gt;ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಬುಧವಾರ ಆಯೋಜಿಸಲಾಗಿದ್ದ ವಿವಿಧ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.&lt;/p&gt;&lt;h2&gt;ಫೇಸ್ ರೆಕಗ್ನಿಷನ್ ಹಾಜರಾತಿ ಕಡ್ಡಾಯ&lt;/h2&gt;&lt;p&gt;ಹುಂಡಿ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಳ್ಳುವ ಕಂದಾಯ, ಪೊಲೀಸ್ ಹಾಗೂ ದೇವಾಲಯದ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಫೇಸ್ ರೆಕಗ್ನಿಷನ್ ಯಂತ್ರದ ಮೂಲಕವೇ ಹಾಜರಾತಿ ನಮೂದಿಸಬೇಕು. ಈ ಯಂತ್ರವನ್ನು ದೇವಾಲಯದ ನಿಧಿಯಿಂದಲೇ ಖರೀದಿಸಲು ಸೂಚಿಸಿದರು.ಎಣಿಕೆ ಕೊಠಡಿಗೆ ಪ್ರವೇಶಿಸುವ ಪ್ರತಿ ಸಿಬ್ಬಂದಿ ತಮ್ಮ ಬಳಿ ಇರುವ ನಗದು ವಿವರವನ್ನು ಪ್ರವೇಶ ವಹಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.&lt;/p&gt;&lt;p&gt;ಜಿಲ್ಲೆಯ ಎ, ಬಿ ಹಾಗೂ ಅಗತ್ಯವಿರುವ &rsquo;ಸಿ&rsquo; ದರ್ಜೆಯ ದೇವಾಲಯಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ತಪ್ಪದೇ ಹುಂಡಿ ಎಣಿಕೆ ನಡೆಸಬೇಕು. ಈ ಎಣಿಕೆ ಪ್ರಕ್ರಿಯೆಯು ಸಹಾಯಕ ಆಯುಕ್ತರು, ಕಂದಾಯ ಇಲಾಖೆ, ಪೊಲೀಸ್, ತಹಶೀಲ್ದಾರ್, ಪಂಚಾಯತ್, ಬ್ಯಾಂಕ್ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳ ಜಂಟಿ ಉಸ್ತುವಾರಿಯಲ್ಲಿ ನಡೆಯಬೇಕು. ಎಣಿಕೆ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳ ನಿಯೋಜಿಸುವಂತಿಲ್ಲ. ಎಣಿಕೆ ಕಾರ್ಯದ ಸಂಪೂರ್ಣ ಪ್ರಕ್ರಿಯೆಯನ್ನು ಕಡ್ಡಾಯವಾಗಿ ವೀಡಿಯೋ ಚಿತ್ರೀಕರಣ ಮಾಡಬೇಕು ಎಂದು ತಿಳಿಸಿದರು.&lt;/p&gt;&lt;h3&gt;ಹುಂಡಿ ಎಣಿಕೆ ವೇಳೆ ದೊರೆತ ಚಿನ್ನ ಬೆಳ್ಳಿ &amp;nbsp;ಏನು ಮಾಡಬೇಕು?&lt;/h3&gt;&lt;p&gt;ಹುಂಡಿ ಎಣಿಕೆ ಸಂದರ್ಭದಲ್ಲಿ ದೊರೆಯುವ ಚಿನ್ನ, ಬೆಳ್ಳಿ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಎಣಿಕೆಯ ದಿನದಂದೇ ಪ್ರಮಾಣೀಕೃತ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸಬೇಕು. ಹಣಕಾಸಿನ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆ ಪೂರ್ಣಗೊಳಿಸಿ ವರದಿಯೊಂದಿಗೆ ಉಪ ಖಜಾನೆಗೆ ಜಮಾ ಮಾಡಬೇಕು ಎಂದರು.&lt;/p&gt;&lt;h3&gt;ಡಿಜಿಟಲ್ ಪಾವತಿ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆ:&lt;/h3&gt;&lt;p&gt;ಜೇಬುಗಳ್ಳತನ ಹಾಗೂ ನಗದು ದುರುಪಯೋಗ ತಡೆಯಲು ಭಕ್ತರಿಗೆ ಡಿಜಿಟಲ್ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ದೇವಾಲಯಗಳಲ್ಲಿ ಅಧಿಕೃತ ಕ್ಯೂಆರ್ ಕೋಡ್ ಅಳವಡಿಸಬೇಕು. ಈ ಕ್ಯೂಆರ್ ಕೋಡ್&zwnj;ಗಳು ಹಾಳಾಗದಂತೆ ಹಾಗೂ ದುರುಪಯೋಗವಾಗದಂತೆ ಕಾಲಕಾಲಕ್ಕೆ ಪರಿಶೀಲಿಸಿ ರಕ್ಷಣೆ ಮಾಡಲು ಸೂಚಿಸಿದರು.&lt;/p&gt;&lt;h3&gt;ಅಗ್ನಿಶಾಮಕ ಉಪಕರಣ ಹಾಗೂ ಸಿಬ್ಬಂದಿಗೆ ತರಬೇತಿ:&lt;/h3&gt;&lt;p&gt;ಎ ಮತ್ತು ಬಿ ದರ್ಜೆಯ ದೇವಾಲಯಗಳ ಹುಂಡಿ ಎಣಿಕೆ ಕೊಠಡಿ ಹಾಗೂ ದೇವಾಲಯದ ಆವರಣದಲ್ಲಿ ಅಗ್ನಿ ಅವಘಡ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಹುಂಡಿ ಎಣಿಕೆ ಸಮಯದಲ್ಲಿ ಅಥವಾ ಸಾಮಾನ್ಯ ದಿನಗಳಲ್ಲಿ ಕಳವು ಪ್ರಕರಣಗಳು ಕಂಡುಬಂದಲ್ಲಿ, ಸಂಬಂಧಪಟ್ಟ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.&lt;/p&gt;&lt;p&gt;ಅಧಿಸೂಚಿತ ದೇವಾಲಯಗಳಿಗೆ ಸೇರಿದ ಜಮೀನು ಹಾಗೂ ಸ್ಥಿರಾಸ್ತಿಗಳ ಸರ್ವೇ ಅಳತೆ ಕಾರ್ಯವನ್ನು ಪೂರ್ಣಗೊಳಿಸಿ, ಎಲ್ಲಾ ಆಸ್ತಿ, ಜಮೀನುಗಳ ಖಾತೆಗಳನ್ನು ಕಡ್ಡಾಯವಾಗಿ ದೇವಸ್ಥಾನದ ಹೆಸರಿಗೆ ಇಂದೀಕರಣ ಮಾಡುವಂತೆ ತಾಕೀತು ಮಾಡಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಷ್ಠಾಧಿಕಾರಿ ಮಂಜುನಾಥ್, ಸಹಾಯಕ ಆಯುಕ್ತ ಪಿ.ವಿವೇಲಕಾನಂದ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಮನೋಹರ್, ಹಿಂದೂ ಧಾರ್ಮಿಕ ಧತ್ತಿ ಇಲಾಖೆ ಸಹಾಯಕ ಆಯುಕ್ತರಾದ ಸವಿತಾ ಸೇರಿದಂತೆ ಮತ್ತಿತರರು ಇದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/monthly-temple-donation-counting-is-mandatory-vijayanagar-dc-kavita-s-mannikeri-instruction-rav/articleshow-dt8rz5m"/>
        </item>
        <item>
            <title><![CDATA[ರಾಯಚೂರು: ಪಂಪ್‌ಸೆಟ್ ಆನ್ ಮಾಡಲು ಹೋಗಿದ್ದ ಯುವಕ ಕರೆಂಟ್ ಶಾಕ್ ಹೊಡೆದು ದಾರುಣ ಸಾವು!]]></title>
            <link>https://kannada.asianetnews.com/karnataka-districts/raichu-young-man-dies-tragically-after-electric-shock-while-switch-on-pumpset/articleshow-iu65f5n</link>
            <guid isPermaLink="true">https://kannada.asianetnews.com/karnataka-districts/raichu-young-man-dies-tragically-after-electric-shock-while-switch-on-pumpset/articleshow-iu65f5n</guid>
            <pubDate>Thu, 30 Jul 2026 12:34:57 +0530</pubDate>
            <description><![CDATA[&lt;p&gt;ಬೋರ್&zwnj;ವೆಲ್ ಪಂಪ್&zwnj;ಸೆಟ್ ಆನ್&zwnj; ಮಾಡಲು ಜಮೀನಿಗೆ ಹೋಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyrxdzps0r7d213ae98hfmhy,imgname-----------------------2026-07-30t123424.731-1785395085017.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಜು.30):&lt;/strong&gt; ಬೋರ್&zwnj;ವೆಲ್ ಪಂಪ್&zwnj;ಸೆಟ್ ಆನ್&zwnj; ಮಾಡಲು ಜಮೀನಿಗೆ ಹೋಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಮೃತ ಯುವಕನನ್ನು ಶಿವಕುಮಾರ್(18) ಎಂದು ಗುರುತಿಸಲಾಗಿದೆ. ಎಂದಿನಂತೆ ಇಂದು ಕೂಡ ಬೆಳಗ್ಗೆಯೇ ಪಂಪ್&zwnj;ಸೆಟ್ ಆನ್&zwnj; ಮಾಡಿಬರಲು ಹೊಲಕ್ಕೆ ತೆರಳಿದ್ದ ಮೃತ ಶಿವಕುಮಾರ್. ಪಂಪ್ ಸೆಟ್ ಆನ್&zwnj; ಮಾಡುವ ವೇಳೆ ತಂತಿ ತಗುಲಿ ವಿದ್ಯುತ್ ಪ್ರವಹಿಸಿದೆ, ಕರೆಂಟ್&zwnj; ಶಾಕ್&zwnj;ನಿಂದ ಸ್ಥಳದಲ್ಲೇ ಕುಸಿದುಬಿದ್ದಿರುವ ಯುವಕ ಕೆಲ ಕ್ಷಣಗಳ ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.&lt;/p&gt;&lt;h2&gt;ಪೊಲೀಸರು ಭೇಟಿ&lt;/h2&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Electric Shock First Aid: ಕರೆಂಟ್ ಶಾಕ್ ಹೊಡೆದಾಗ ತಕ್ಷಣ ಹೀಗೆ ಮಾಡಿ ಜೀವ ಉಳಿಯುತ್ತೆ!&lt;/p&gt;&lt;h3&gt;ಮುಗಿಲು ಮುಟ್ಟಿದ ಕುಟುಂಬಸ್ಥರ ಅಕ್ರಂದನ&lt;/h3&gt;&lt;p&gt;ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿತು. ಎದೆ ಎತ್ತರ ಬೆಳೆದುನಿಂತಿದ್ದ ಮಗ. ಚಿಕ್ಕವಯಸ್ಸಿಗೆ ಮನೆಯ ನೊಗ ಹೊತ್ತು ಹೆತ್ತವರಿಗೆ ಆಸರೆಯಂತಿದ್ದ ಮಗನ ಅಕಾಲಿಕ ಸಾವು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/raichu-young-man-dies-tragically-after-electric-shock-while-switch-on-pumpset/articleshow-iu65f5n"/>
        </item>
        <item>
            <title><![CDATA[ಗೊರಗುಂಟೆಪಾಳ್ಯ ಟ್ರಾಫಿಕ್‌ ನಿಯಂತ್ರಣಕ್ಕೆ ಮಾಸ್ಟರ್‌ ಪ್ಲಾನ್‌: ಮೂರು ಸ್ಥಳಗಳು ಶಿಫ್ಟ್?]]></title>
            <link>https://kannada.asianetnews.com/bengaluru-urban/road-expansion-project-has-been-undertaken-to-relieve-traffic-congestion-at-goraguntepalya-junction-in-bengaluru-mrq/articleshow-5ggpv38</link>
            <guid isPermaLink="true">https://kannada.asianetnews.com/bengaluru-urban/road-expansion-project-has-been-undertaken-to-relieve-traffic-congestion-at-goraguntepalya-junction-in-bengaluru-mrq/articleshow-5ggpv38</guid>
            <pubDate>Thu, 30 Jul 2026 11:48:27 +0530</pubDate>
            <description><![CDATA[&lt;p&gt;ಬೆಂಗಳೂರಿನ ಗೊರಗುಂಟೆಪಾಳ್ಯ ಜಂಕ್ಷನ್&zwnj;ನಲ್ಲಿನ ಟ್ರಾಫಿಕ್ ದಟ್ಟಣೆ ನಿವಾರಿಸಲು, ರಸ್ತೆ ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮೂರು ಸ್ಥಳಾಂತರಗಳ ಸಾಧ್ಯತೆಗಳಿದ್ದು, ಗೋದ್ರೇಜ್ ಪ್ರಾಪರ್ಟೀಸ್ ಮತ್ತು ತಾಜ್ ಹೋಟೆಲ್ ನೀಡಿದ ಭೂಮಿಯನ್ನು ಬಳಸಿ ಹೆಚ್ಚುವರಿ ಲೇನ್&zwnj;ಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyrtrh191p21f223tsbh5xdc,imgname-goraguntepalya-1785392284713.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ರಾಜಧಾನಿಯ ಗೊರಗುಂಟೆಪಾಳ್ಯ ಸಿಗ್ನಲ್&zwnj;ನಲ್ಲಿ ಉಂಟಾಗುವ ಟ್ರಾಫಿಕ್ ನಿವಾರಣೆಗೆ ಬೆಂಗಳೂರು ಪಶ್ಚಿಮ ನಗರ ಕಾರ್ಪೋರೇಷನ್ ಮಹತ್ವದ ಹೆಜ್ಜೆಯನ್ನಿರಿಸಿದೆ. ಆದ್ರೆ ಕಾರ್ಪೋರೇಷನ್&zwnj;ನ ಈ ಕೆಲಸದಿಂದ ಯಾವುದೇ ಟ್ರಾಫಿಕ್ ಪ್ರಮಾಣ ಕಡಿಮೆಯಾಗಲ್ಲ ಎಂಬ ಮಾತುಗಳು ಆರಂಭದಿಂದಲೇ ಕೇಳಿ ಬರುತ್ತಿವೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಎರಡು ಸ್ಥಳಗಳಲ್ಲಿ ರಸ್ತೆ ವಿಸ್ತರಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ರಸ್ತೆ ವಿಸ್ತರಣೆಯು ದೇವಾಲಯ, ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಶೌಚಾಲಯದ ಸ್ಥಳಾಂತರವನ್ನು ಒಳಗೊಂಡಿದೆ&lt;/p&gt;&lt;h2&gt;&lt;strong&gt;ಗೊರಗುಂಟೆಪಾಳ್ಯದಲ್ಲಿ ಮೂರು ಸ್ಥಳಗಳ ಸ್ಥಳಾಂತರ ಸಾಧ್ಯತೆ?&lt;/strong&gt;&lt;/h2&gt;&lt;p&gt;ಈ ಪ್ರಮುಖ ಮೂರು ಸ್ಥಳಗಳ ಸ್ಥಳಾಂತರದಿಂದ ಕೊಂಚಮಟ್ಟಿಗೆ ಟ್ರಾಫಿಕ್ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಮತ್ತೊಂದೆಡೆ ಗೋದ್ರೇಜ್ ಪ್ರಾಪರ್ಟೀಸ್ ಜಂಕ್ಷನ್ ನೀಡಿರುವ ಭೂಮಿಯನ್ನು ಬಳಸಿಕೊಂಡು ರಸ್ತೆ ಅಗಲೀಕರಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನೊಂದು ಬದಿಯಲ್ಲಿ ತಾಜ್ ಹೋಟೆಲ್ ಪುನಾರಭಿವೃದ್ದಿ ಸಮಯದಲ್ಲಿ ಬಿಟ್ಟುಕೊಟ್ಟ ಭೂಮಿಯನ್ನು ಬಳಸಿಕೊಂಡು ಜಾಲಹಳ್ಳಿಯಿಂದ ನಗರದ ಕಡೆ ಬರುವ ಎಡಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.&lt;/p&gt;&lt;p&gt;ಪುನಾರಭಿವೃದ್ದಿ ಸಮಯದಲ್ಲಿ ಭೂಮಾಲೀಕರು ನೀಡಿರುವ ಭೂಮಿಯನ್ನು ಮರಳಿ ಪಡೆಯುವ ಪ್ರಯತ್ನದ ಭಾಗವಾಗಿ ಸದ್ಯ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇದುವರೆಗೂ ಈ ಭೂಮಿಯನ್ನು ಪಾಲಿಕೆ ವಶಕ್ಕೆ ಪಡೆದುಕೊಂಡಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆರಂಭ&lt;/strong&gt;&lt;/h3&gt;&lt;p&gt;ಎಂಇಐ ಜಂಕ್ಷನ್&zwnj;ನಿಂದ ಗೊರಗುಂಟೆಪಾಳ್ಯ ಜಂಕ್ಷನ್ ನಡುವೆ ಹಲವು ಆಸ್ತಿಗಳಿದ್ದು, ಯೋಜನಾ ಅನುಮೋದನೆಯನ್ನು ಪಡೆದುಕೊಳ್ಳುವಾಗ ಭೂಮಿಯನ್ನು ಬಿಟ್ಟುಕೊಡಲಾಗಿತ್ತು. ಆದ್ರೆ ಇಲ್ಲಿಯವರೆಗೆ ಪಾಲಿಕೆ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರಲಿಲ್ಲ. ಇದೀಗ ಅಂತಹ ಭೂಮಿಯನ್ನು ಮರಳಿ ಪಡೆಯಲಾಗುತ್ತಿದೆ. ಹಾಗೆಯೇ ನಾಗಸಂದ್ರ-ಬ್ರೌಂಡ್ ಬ್ಯಾರೇಜ್ ಬಳಿಯಲ್ಲಿರುವ ಭೂಮಿ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಕಾರ್ ಶೋರೂಂ ಮತ್ತು ಆಸ್ಪತ್ರೆಯೊಂದು ಸಹ ಇದೇ ರೀತಿಯಾಗಿ ಭೂಮಿಯನ್ನು ನೀಡಿದೆ ಎಂದು ನಿಗಮದ ಇಂಜಿನೀಯರ್&zwnj; ಒಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಹೆಚ್ಚುವರಿ ಸ್ಥಳವಕಾಶ ಹೆಚ್ಚುವರಿ ಲೇನ್ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಪ್ರಯಾಣಿಕಾರಿಗೆ ನಿಲುಗಡೆ ಸ್ಥಳದ ನಿರ್ಮಾಣವನ್ನು ಮಾಡಬಹುದಾಗಿದೆ. ಪ್ರತ್ಯೇಕ ಬಸ್ ಬೇ ರಚನೆ, ಹೆಚ್ಚು ಟ್ರಾಫಿಕ್ ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಾಣದ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆದಿದೆ. ಆದ್ರೆ ಸಾರ್ವಜನಿಕರು ಸ್ಕೈವಾಕ್ ಬಳಸದಿರೋದು ಹಿನ್ನಡೆಗೆ ಕಾರಣವಾಗಬಹುದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು ಪಂಚರ್ ಮಾಫಿಯಾ: ರಸ್ತೆಯಲ್ಲಿ ಮೊಳೆ ಹಾಕುವಾಗಲೇ ಸಿಕ್ಕಿಬಿದ್ದ ಕಿಡಿಗೇಡಿಗಳು, CCTVಯಲ್ಲಿ ಲಾಕ್!&lt;/strong&gt;&lt;/p&gt;&lt;h3&gt;&lt;strong&gt;ಅಧಿಕಾರಿಗಳ ಹೇಳಿಕೆ ಏನು?&lt;/strong&gt;&lt;/h3&gt;&lt;p&gt;ಗೋದ್ರೇಜ್ ಪ್ರಾಪರ್ಟೀಸ್ ಬಿಟ್ಟುಕೊಟ್ಟ ಜಾಗದಲ್ಲಿ ಹೊಸ ಲೇನ್ ನಿರ್ಮಿಸುವ ಕೆಲಸ ತಕ್ಷಣದಿಂದಲೇ ಆರಂಭವಾಗಲಿದೆ. ಹಾಗೆಯೇ ತಾಜ್ ಹೋಟೆಲ್ ನೀಡಿರುವ ಭೂಮಿಯನ್ನು ಮತ್ತೊಂದು ಲೇನ್&zwnj;ಗೆ ಜೋಡಿಸಲು ಯೋಚನೆ ಮಾಡಲಾಗುತ್ತಿದೆ. ಇದರಿಂದ ಬಸ್ ಸೇರಿದಂತೆ ದೊಡ್ಡವಾಹನಗಳು ತಿರುವಿನಲ್ಲಿ ಸುಲಭವಾಗಿ ಚಲಿಸಬಹುದಾಗಿದೆ ಎಂದು ಬೆಂಗಳೂರು ಪಶ್ಚಿಮ ನಗರದ ಆಯುಕ್ತ ಕೆ.ವಿ.ರಾಜೇಂದ್ರ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;29 ವರ್ಷಗಳ ಬಳಿಕ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಹೈಟೆಕ್ 'ILS' ಸ್ಪರ್ಶ; ವಾಣಿಜ್ಯ ವಿಮಾನ ಹಾರಾಟ ಚರ್ಚೆ ಮತ್ತೆ ಮುನ್ನಲೆಗೆ!&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/bengaluru-urban/road-expansion-project-has-been-undertaken-to-relieve-traffic-congestion-at-goraguntepalya-junction-in-bengaluru-mrq/articleshow-5ggpv38"/>
        </item>
        <item>
            <title><![CDATA[BWSSB water restrictions: ಕುಡಿಯುವ ನೀರಲ್ಲಿ ಬೈಕ್, ಕಾರು ತೊಳೆದರೆ ಬೀಳುತ್ತೆ ₹5000 ದಂಡ! ಜಲಮಂಡಳಿ ಕಠಿಣ ಆದೇಶ!]]></title>
            <link>https://kannada.asianetnews.com/state/water-board-orders-rs-5k-fine-for-washing-vehicles-with-drinking-water-rav/articleshow-5fvzudw</link>
            <guid isPermaLink="true">https://kannada.asianetnews.com/state/water-board-orders-rs-5k-fine-for-washing-vehicles-with-drinking-water-rav/articleshow-5fvzudw</guid>
            <pubDate>Thu, 30 Jul 2026 10:25:30 +0530</pubDate>
            <description><![CDATA[ಮುಂಗಾರು ಕೈಕೊಟ್ಟಿದ್ದರಿಂದ ಬೆಂಗಳೂರಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಜಲಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ವಾಹನ ತೊಳೆಯಲು, ಈಜು ಕೊಳಗಳಿಗೆ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿದವರಿಗೆ 5,000 ರೂ. ದಂಡ ವಿಧಿಸುವುದಾಗಿ ಎಚ್ಚರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrnvwgwg3mhp081zqfspw1f,imgname-----------------------2026-07-30t102215.731-1785387151900.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಜು.30): ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ವಾಹನ ತೊಳೆಯಲು, ಈಜು ಕೊಳಗಳಲ್ಲಿ ಕುಡಿಯುವ ನೀರು ಬಳಸುವುದನ್ನು ಬೆಂಗಳೂರು ಜಲಮಂಡಳಿ ನಿಷೇಧಿಸಿದ್ದು, ಆದೇಶ ಉಲ್ಲಂಘಿಸಿದವರಿಗೆ 5 ಸಾವಿರ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.&lt;/p&gt;&lt;h2&gt;ವಾಟರ್ ಫ್ಲೋ ರೆಸ್ಟ್ರಿಕ್ಟರ್, ಏರೇಟರ್ ಅಳವಡಿಕೆ ಕಡ್ಡಾಯ&lt;/h2&gt;&lt;p&gt;ಮನೆಗಳು, ಅಪಾರ್ಟ್&zwnj;ಮೆಂಟ್&zwnj;ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್&zwnj;ಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲ ಕಟ್ಟಡಗಳಲ್ಲಿ ವಾಟರ್ ಫ್ಲೋ ರೆಸ್ಟ್ರಿಕ್ಟರ್, ಏರೇಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಏರೇಟರ್ ಅಳವಡಿಕೆಯಿಂದ ನೀರಿನ ಬಳಕೆಯನ್ನು ಶೇ.30 ರಿಂದ 50ರವರೆಗೆ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದೆ.&lt;/p&gt;&lt;p&gt;ಇನ್ನು ವಾಹನ ತೊಳೆಯುವುದು, ಉದ್ಯಾನಗಳಿಗೆ ನೀರು ಹಾಯಿಸುವುದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸುವುದು, ಕಟ್ಟಡ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಕಡ್ಡಾಯವಾಗಿ ಸಂಸ್ಕರಿತ ನೀರನ್ನೇ ಬಳಸಬೇಕು ಎಂದು ಡಾ. ಮಂಜುಳ ತಿಳಿಸಿದ್ದಾರೆ.&lt;/p&gt;&lt;h3&gt;ಈಜುಕೊಳಗಳಿಗೆ ಕುಡಿಯುವ ನೀರು ಬಳುವಂತಿಲ್ಲ&lt;/h3&gt;&lt;p&gt;ನಗರದಲ್ಲಿನ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳಲ್ಲಿ ಕುಡಿಯುವ ನೀರು ಬಳಸುವಂತಿಲ್ಲ. ಸಂಸ್ಕರಿತ ನೀರು ಅಥವಾ ಇತರೆ ಪರ್ಯಾಯ ಮೂಲಗಳಿಂದಲೇ ಬಳಸಬೇಕು. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಜಲಮಂಡಳಿ ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ.50 ರವರೆಗೆ ಕಡಿತಗೊಳಿಸಿ 5,000 ರು. ದಂಡ ವಿಧಿಸಲಾಗುತ್ತದೆ. ಉಲ್ಲಂಘನೆ ಮುಂದುವರಿದಲ್ಲಿ ಪ್ರತಿದಿನ 500 ರು.ಹೆಚ್ಚುವರಿ ದಂಡ ವಿಧಿಸುವುದರ ಜೊತೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಮಂಡಳಿ ಎಚ್ಚರಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/water-board-orders-rs-5k-fine-for-washing-vehicles-with-drinking-water-rav/articleshow-5fvzudw"/>
        </item>
        <item>
            <title><![CDATA[KPSC Scam: ಕೆಪಿಎಸ್‌ಸಿ ನೇಮಕಾತಿ ಹಗರಣ: ಸಿಬಿಐಗೆ ವಹಿಸಲು ಹೈಕೋರ್ಟ್‌ ಇಂಗಿತ, ಹೇಳಿದ್ದೇನು?]]></title>
            <link>https://kannada.asianetnews.com/state/karnataka-high-court-on-kpsc-case-to-cbi-shivashankarappa-sahukar-rav/articleshow-goe2vaz</link>
            <guid isPermaLink="true">https://kannada.asianetnews.com/state/karnataka-high-court-on-kpsc-case-to-cbi-shivashankarappa-sahukar-rav/articleshow-goe2vaz</guid>
            <pubDate>Thu, 30 Jul 2026 08:57:28 +0530</pubDate>
            <description><![CDATA[&lt;p&gt;ಬೃಹತ್ ಪ್ರಮಾಣದಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಬಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿದ ಮರುದಿನವೇ, ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ವಹಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktn8g40cfn90np10t5g1zgyr,imgname-----------------------2026-06-09t090917.634-1780977504268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.30): &lt;/strong&gt;ಬೃಹತ್ ಪ್ರಮಾಣದಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಬಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿದ ಮರುದಿನವೇ, ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ವಹಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.&lt;/p&gt;&lt;h2&gt;ಸಿಬಿಐ ತನಿಖೆಗೆ ಏಕೆ ವಹಿಸಬಾರದು, ಸರ್ಕಾರಕ್ಕೆ ವಿವರಣೆ ಕೇಳಿದ ಕೋರ್ಟ್&lt;/h2&gt;&lt;p&gt;ಅಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ವಹಿಸಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ಈವರೆಗೆ ನಡೆಸಿರುವ ಮತ್ತು ಮುಂದೆ ನಡೆಸಲಿರುವ ತನಿಖೆಗೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನು ಆ.7ರಂದು ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.&lt;/p&gt;&lt;p&gt;ಇದೇ ವೇಳೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, ಅರ್ಜಿಯ ಮುಂದಿನ ವಿಚಾರಣೆವರೆಗೆ ಈ ಅರ್ಜಿದಾರ ಅಭ್ಯರ್ಥಿಗಳ ವಿರುದ್ಧದ ಬಲವಂತದ ಕ್ರಮ ಜರುಗಿಸಬಾರದು, ಬಂಧಿಸಬಾರದು ಎಂದು ಸಿಐಡಿ ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ಆ.7ಕ್ಕೆ ಮುಂದೂಡಿತು.&lt;/p&gt;&lt;h3&gt;ಪಶು ವೈದ್ಯಾಧಿಕಾರಿ (ಗ್ರೂಪ್-ಎ) ನೇಮಕಾತಿ ದೊಡ್ಡ ಪ್ರಮಾಣದ ಹಗರಣ&lt;/h3&gt;&lt;p&gt;ಅರ್ಜಿಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಎ) ನೇಮಕಾತಿ ದೊಡ್ಡ ಪ್ರಮಾಣದಲ್ಲಿ ನಡೆದಿರುವ ಅಕ್ರಮದ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಸಿಬಿಐ ತನಿಖೆಗೆ ವಹಿಸಲು ಅರ್ಜಿದಾರರು ಕೋರಿದ್ದಾರೆ. ಹಾಗಾಗಿ ಅರ್ಜಿಯಲ್ಲಿ ಸಿಬಿಐ ಅನ್ನು ಪ್ರತಿವಾದಿ ಮಾಡಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ವಹಿಸಬಾರದು ಎಂಬ ಬಗ್ಗೆ ಆಕ್ಷೇಪಣೆ ಅಥವಾ ವಾದಾಂಶಗಳನ್ನು ಮುಂದಿನ ಶುಕ್ರವಾರದಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.&lt;/p&gt;&lt;p&gt;ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನೇಮಕವಾಗಲು ಸುಳ್ಳು ಜಾತಿ ಹಾಗೂ ಆದಾಯ ಪತ್ರ ನೀಡಿದ ಕೆಪಿಎಸ್&zwnj;ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ಅವರ ಪುತ್ರಿ ಸುಮಾ ಎಸ್.ಸಾಹುಕಾರ ವಿರುದ್ಧ ಮತ್ತು ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಭ್ಯರ್ಥಿಗಳ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು (ಎಫ್ಐಆರ್) ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಚನ್ನರಾಯಪಟ್ಟಣದ ಪಶುವೈದ್ಯ ಮಂಜುನಾಥ್ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ ವಿಧಾನಸೌಧ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಆಯ್ಕೆ ಪಟ್ಟಿಯಲ್ಲಿ ಸ್ಥಾನಪಡೆದಿರುವ ಕೆಲ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಈ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.&lt;/p&gt;&lt;p&gt;ಇದಕ್ಕೂ ಮುನ್ನ ವಿಚಾರಣೆ ವೇಳೆ ಯತ್ನಾಳ ಪರ ವಕೀಲ ವೆಂಕಟೇಶ್ ದಳವಾಯಿ ಹಾಜರಾಗಿ, ಕೆಪಿಎಸ್&zwnj;ಸಿ ಅಧ್ಯಕ್ಷರ ಸಂಬಂಧಿಯೊಬ್ಬರಿಗೆ ಓಎಂಆರ್ ಶೀಟ್&zwnj;ಗಳನ್ನು ತಿರುಚಲು ಅವಕಾಶ ಕಲ್ಪಿಸಲಾಗಿತ್ತು. ಕೆಲ ಅಭ್ಯರ್ಥಿಗಳನ್ನು ಹೊರ ರಾಜ್ಯಕ್ಕೆ ಕರೆದೊಯ್ದು, ಪ್ರಶ್ನೆ ಹಾಗೂ ಉತ್ತರಗಳನ್ನು ನೀಡಿ ತರಬೇತಿ ನೀಡಿ ವಾಪಸ್ ಕರೆತಂದಿದ್ದಾರೆ. ಪಶುವೈದ್ಯಾಧಿಕಾರಿ ಹುದ್ದೆ ನೇಮಕಕ್ಕೆ ₹80 ಲಕ್ಷ ನೀಡಬೇಕು. ಅದರಲ್ಲಿ ₹40 ಲಕ್ಷವನ್ನು ರಾಜ್ಯದಿಂದ ಹೊರಗೆ ಕರೆದುಕೊಂಡು ಹೋಗುವಾಗ ಕೊಡಬೇಕು. ನಂತರ ಅಭ್ಯರ್ಥಿಯ ಮೂಲ ಅಂಕಪಟ್ಟಿ ಸಂಗ್ರಹಿಸುತ್ತಾರೆ ಎಂದು ಅಕ್ರಮ ನಡೆದಿರುವ ವಿಧಾನದ ಕುರಿತು ನ್ಯಾಯಪೀಠಕ್ಕೆ ವಿವರಿಸಿದರು.&lt;/p&gt;&lt;p&gt;ಅದಕ್ಕೆ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಓಎಂಆರ್ ಶೀಟ್ ತಿರುಚಲಾಗಿದೆಯೇ? ಅಭ್ಯರ್ಥಿಗಳನ್ನು ಹೊರ ಕರೆದುಕೊಂಡು ತರಬೇತಿ ನೀಡಲಾಗಿದೆಯೇ? ಹೀಗೆಲ್ಲಾ ಅಕ್ರಮ ನಡೆಸಲಾಗಿದೆಯೇ ಎಂದು ಕೇಳಿದರು.&lt;/p&gt;&lt;p&gt;ದಳವಾಯಿ ಉತ್ತರಿಸಿ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ಸಮಗ್ರ ತನಿಖೆ ಮಾಡಲು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.&lt;/p&gt;&lt;h3&gt;ಸಿಐಡಿ ತನಿಖೆ ಮುಂದುವರಿಯಬಾರದು:&lt;/h3&gt;&lt;p&gt;ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅದು ಸಿಐಡಿಯಲ್ಲಿಯೇ ಮುಗಿದುಹೋಗುತ್ತದೆ. ಏನೂ ಆಗುವುದಿಲ್ಲ . ಪ್ರಕರಣವನ್ನು ಸಿಐಡಿ ತನಿಖೆ ನಡೆಸಬೇಕೇ ಅಥವಾ ಸಿಬಿಐ ತನಿಖೆ ನಡೆಸಬೇಕೇ ಎಂಬ ಬಗ್ಗೆ ನ್ಯಾಯಾಲಯ ನಿರ್ಧರಿಸುವವರೆಗೆ ಪ್ರಕರಣದ ಕುರಿತು ಸಿಐಡಿಯಲ್ಲಿ ತನಿಖೆ ಮುಂದುವರಿಯಬಾರದು. ಈ ಕುರಿತು ನಿರ್ದೇಶಿಸಲಾಗುವುದು ಎಂದು ನುಡಿದರು.&lt;/p&gt;&lt;p&gt;ಅದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಸಿಐಡಿ ತನಿಖೆಯನ್ನು ನ್ಯಾಯಾಲಯವು ತಡೆಹಿಡಿಯುವುದು ಸರಿಯಲ್ಲ. ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ತನಿಖೆ ಮುಂದುವರಿಯಲಿ ಎಂದು ತಿಳಿಸಿದರು.&lt;/p&gt;&lt;p&gt;ಅದಕ್ಕೆ ನ್ಯಾಯಪೀಠ, ನನ್ನ ಆದೇಶ ಸರಿ ಇಲ್ಲವಾದರೆ, ಮೇಲಿನ ಕೋರ್ಟ್&zwnj;ನಲ್ಲಿ ನನ್ನ ಆದೇಶವನ್ನು ಪರೀಕ್ಷೆಗೆ ಒಳಪಡಿಸಬಹುದು. ಒಂದು ವಾರ ಕಾಲಾವಕಾಶ ನೀಡಲಾಗುವುದು. ನೀವು ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸುತ್ತಿರೋ ಸಲ್ಲಿಸಿ. ನಿಮ್ಮ ವಾದ ಆಲಿಸಲಾಗುವುದು. ಆದರೆ, ಪ್ರಕರಣವನ್ನು ಹಾಗೆ ಸುಮ್ಮನೆ ಬಿಡಲಾಗದು ಎಂದು ನುಡಿದರು.&lt;/p&gt;&lt;p&gt;ಅದಕ್ಕೆ ಎಸ್ ಪಿಪಿ ಜಗದೀಶ್ ಅವರು, ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಬದ್ಧ. ನ್ಯಾಯಾಲಯ ತನಿಖೆಯ ಯಾವುದೇ ದಾಖಲೆಗಳನ್ನು ಕೇಳಿದರೂ ಕೊಡಲು ಬದ್ಧರಾಗಿದ್ದೇವೆ. ನ್ಯಾಯಾಲಯವೇ ತನಿಖೆಯನ್ನು ಮೇಲ್ವಿಚಾರಣೆ ನಡೆಸಬಹುದು. ಹಿಂದೆ ಸಿಐಡಿಯು ಉನ್ನತ ಶ್ರೇಣಿಯ ಅಧಿಕಾರಿಗಳು ತನಿಖೆ ನಡೆಸಿದ್ದು, ಯಶಸ್ವಿಯಾಗಿದ್ದಾರೆ. ಸಿಐಡಿ ತನಿಖೆಯ ಮೇಲೆ ಯಾವುದೇ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಬಾರದು ಎಂದು ಬಲವಾಗಿ ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-high-court-on-kpsc-case-to-cbi-shivashankarappa-sahukar-rav/articleshow-goe2vaz"/>
        </item>
        <item>
            <title><![CDATA[Cabinet Expansion: ರಾಯಚೂರು ಸಚಿವ ಸ್ಥಾನಕ್ಕಾಗಿ ಬೋಸರಾಜು-ಹಂಪನಗೌಡ ಬಾದರ್ಲಿ ನಡುವೆ ತೀವ್ರ ಪೈಪೋಟಿ]]></title>
            <link>https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm</link>
            <guid isPermaLink="true">https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm</guid>
            <pubDate>Thu, 30 Jul 2026 08:37:12 +0530</pubDate>
            <description><![CDATA[ಹೊಸ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆದಿದೆ. ಮಾಜಿ ಸಚಿವ ಎನ್&zwnj;.ಎಸ್&zwnj;.ಭೋಸರಾಜು ಮತ್ತು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನಡುವೆ ಸಚಿವ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿದ್ದು, ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrfn460qm689x8n7s9v488b,imgname-chatgpt-image-jul-30--2026--08-33-32-am-1785380638912.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮಕೃಷ್ಣ ದಾಸರಿ&lt;/strong&gt;&lt;/p&gt;&lt;p&gt;&lt;strong&gt;ರಾಯಚೂರು (ಜು.30):&lt;/strong&gt; ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;(CM Dk Shivakuma) ಅವರ ನೇತೃತ್ವದಲ್ಲಿ ರಚನೆಗೊಂಡ ಮೊದಲ ಸಚಿವ ಸಂಪುಟದಲ್ಲಿ ಅವಕಾಶ ಕಳೆದುಕೊಂಡಿದ್ದ ಜಿಲ್ಲೆಗೆ ಎರಡನೇ ಹಂತದಲ್ಲಿಯಾದರೂ ಸ್ಥಾನವನ್ನು ಪಡೆಯಬೇಕು ಎನ್ನುವ ಪಟ್ಟು ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಬಂದಿದ್ದು, ಅದಕ್ಕಾಗಿ ಎಲ್ಲಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ.&lt;/p&gt;&lt;p&gt;ಸಚಿವ ಸಂಪುಟದ ವಿಸ್ತರಣೆ ಕಾರ್ಯ ಕೊನೆಯ ಘಟ್ಟ ತಲುಪಿದ್ದರಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕರು - ಎಂಎಲ್ಸಿಗಳು, ಮುಖಂಡರು ಹೈಕಮಾಂಡ್&zwnj; ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಜಿಲ್ಲೆಯ ಮಾಜಿ ಸಚಿವ ಹಾಗೂ ಎಂಎಲ್ಸಿ ಎನ್&zwnj;.ಎಸ್&zwnj;.ಭೋಸರಾಜು(NS Boseraju) ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ(Hampanagowda badarli) ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿ ಸಾಗಿದ್ದು, ಕೊನೆಗಳಿಗೆಯಲ್ಲಿ ಹೈಕಮಾಂಡ್&zwnj; ಯಾರಿಕೆ ಮಣಿಯಾಗಲಿದೆ ಎನ್ನುವ ಕುತೂಹಲವು ಮೂಡಿದೆ.&lt;/p&gt;&lt;p&gt;ಹಿಂದಿನ ಸಿಎಂ ಸಿದ್ದರಾಮಯ್ಯ ಸಮಯದಲ್ಲಿ ಶಾಸಕರಿಲ್ಲದಿದ್ದರೂ ಭೋಸರಾಜು ಅವರಿಗೆ ಕರೆದು ಸಚಿವ ಸ್ಥಾನದಲ್ಲಿ ಅವಕಾಶ ನೀಡಲಾಗಿತ್ತು ಅದನ್ನು ಮುಂದುವರೆಸಿಕೊಳ್ಳುವ ನಿಟ್ಟಿನಲ್ಲಿ ಭೋಸರಾಜು ಮತ್ತು ಅವರ ಮಗ ರವಿ ಭೋಸರಾಜು ಭಗೀರಥ ಪ್ರಯತ್ನ ನಡೆಸಿದ್ದು, ಸಚಿವ ಸ್ಥಾನ ನೀಡುವುದು ಇಲ್ಲವೇ ವಿಧಾನ ಪರಿಷತ್&zwnj; ಸಭಾಪತಿಯ ಸ್ಥಾನವನ್ನು ಕೊಡುವುದರ ಕುರಿತು ಹೈಕಮಾಂಡ್ ಹಂತಿಮ ತೀರ್ಮಾನಕ್ಕೆ ಬರಬೇಕಾಗಿದೆ.&lt;/p&gt;&lt;p&gt;ಇನ್ನು ಸಿಂಧನೂರಿನಿಂದ ಐದು ಸಲ ಗೆದ್ದು ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಅವರು ಸಚಿವ ಸ್ಥಾನದ ರೇಸ್&zwnj;ನಲ್ಲಿ ಮುಂಚೂಣಿಯಲ್ಲಿದ್ದು, ಸಮುದಾಯ ಹಾಗೂ ಅನುಭವದ ಆಧಾರದ ಮೇಲೆ ಮತ್ತು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಮಾತಿನಂತೆ ಈ ಬಾರಿ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಗಳು ಹೆಚ್ಚಾಗಿವೆ.&lt;/p&gt;&lt;h2&gt;ಬೋಸರಾಜು-ಬಾದರ್ಲಿ ಹೈಕಮಾಂಡ್ ಆಯ್ಕೆ ಯಾರು?&lt;/h2&gt;&lt;p&gt;ಸಚಿವ ಸಂಪುಟದ ವಿಸ್ತರಣೆಯಲ್ಲಿ ಹೈಕಮಾಂಡ್&zwnj; ಸಾಕಷ್ಟು ಎಚ್ಚರಿಕೆಗಳನ್ನು ವಹಿಸಿದ್ದು, ಹಲವಾರು ಮಾನದಂಡಗಳ ಅವಲೋಕನೆಯನ್ನು ಮಾಡಿ ಸಚಿವ ಸ್ಥಾನದಲ್ಲಿ ಅವಕಾಶ ನೀಡಲು ಮುಂದಾಗಿದೆ. ಜಿಲ್ಲಾ ಮತ್ತು ಪ್ರಾದೇಶಿಕ ಪ್ರಾತಿನಿಧ್ಯತೆ, ಸಮುದಾಯದವಾರು ಆದ್ಯತೆ, ಹೊಸ ಹಾಗೂ ಹಳೆ ಮುಖಗಳ ಅನುಪಾತ, ಭವಿಷ್ಯದ ಎಲೆಕ್ಷನ್&zwnj;ಗಳ ಲೆಕ್ಕಾಚಾರ, ನಾಯಕರೊಂದಿಗೆ ಹೊಂದಿರುವ ಪ್ರಭಾವ, ಬಾಂಧವ್ಯಗಳು ಸೇರಿ ಮತ್ತಿತರ ಮಾನದಂಡಗಳನ್ನು ಅವಲೋಕಿಸಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎನ್ನುವ ಅಂಶಗಳ ನಡುವೆ ಭೋಸರಾಜು ಹಾಗೂ ಬಾದರ್ಲಿ ಪರಿಗಣಿಸಿರುವ ಪಕ್ಷವು ಕೊನೆಯ ಕ್ಷಣದಲ್ಲಿ ಯಾವ ತೀರ್ಮಾನಕ್ಕೆ ಬರಲಿದೆ ಎನ್ನುವುದು ಸಸ್ಪೆನ್ಸಾಗಿ ಉಳಿದುಬಿಟ್ಟಿದೆ.&lt;/p&gt;&lt;h3&gt;ಇಲ್ಲಿಯೂ ಬಣಗಳ ಸಂಘರ್ಷ:&lt;/h3&gt;&lt;p&gt;ಭಿನ್ನಾಭಿಪ್ರಾಯ, ಬಣ ಸಂಘರ್ಷ ಹಾಗೂ ಗುಂಪುಗಾರಿಕೆಯಿಂದ ತುಂಬಿ ತುಳುಕುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಭೋಸರಾಜು ಹಾಗೂ ಎ.ವಸಂತಕುಮಾರ ಅವರ ನಡುವೆ ನಡೆಯುತ್ತಲೇ ಇರುವ ಸಂಘರ್ಷವು ದೆಹಲಿಯಲ್ಲಿ ಸಹ ಮುಂದುವರೆದಿದ್ದು, ಸಚಿವ ಸಂಪುಟದ ವಿಸ್ತರಣೆಯಲ್ಲಿಯೂ ಬಣಗಳ ನಡುವೆ ಪೈಪೋಟಿ, ಅವರಿಗೆ ಸಚಿವ ಸ್ಥಾನ ಕೊಟ್ಟರು ಬೇರೆ ಬೇರೆ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ವಹಿಸಿ, ಮುಂದಿನ ಚುನಾವಣೆ ಯಲ್ಲಿ ಟಿಕೆಟ್, ಜಿಲ್ಲೆಯ ಮೇಲೆ ನಮ್ಮ ಹಿಡಿದವಿರಲಿ ಎನ್ನುವ ಅಂಶಗಳ ನಡುವೆ ಹೈಕಮಾಂಡ್&zwnj; ಮುಂದೆ ಗುಂಪು ಸಂಘರ್ಷವೂ ಸಾಗಿದ್ದು, ಎಲ್ಲವನ್ನೂ ಪರಿಶೀಲಿಸಿ ಯಾರಿಗೆ ಯಾವ ಸ್ಥಾನ ದೊರೆಯಲಿದೆಯೇ ಕೆಲಕಾಲ ಕಾದುನೋಡಬೇಕಾಗಿದೆ.&lt;/p&gt;&lt;p&gt;ಸಂಪುಟದಲ್ಲಿ ಜಿಲ್ಲೆಯ ಯಾವುದೇ ಶಾಸಕ, ಎಂಎಲ್ಸಿಗಳನ್ನು ಸೇರಿಸಿಕೊಂಡರೂ ಪರವಾಗಿಲ್ಲ ಆದರೆ ಉಸ್ತುವಾರಿ ಜವಾಬ್ದಾರಿಯನ್ನು ಸಹ ಅವರಿಗೆ ವಹಿಸಬೇಕು ಇಲ್ಲದಿದ್ದರೆ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗುತ್ತದೆ ಎನ್ನುವುದು ಜನಸಾಮಾನ್ಯರ ಒತ್ತಾಸೆಯಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/karnataka-cabinet-expansion-ns-bosaraju-or-hampangowda-badarli-high-command-choose-rav/articleshow-gst8qsm"/>
        </item>
        <item>
            <title><![CDATA[KPSC Scam: ಈ ಎರಡು ಜಿಲ್ಲೆಗಳಲ್ಲಿ 120 ಎಕರೆ ಭೂ ಖರೀದಿ! ಕೆಪಿಎಸ್‌ಸಿ ಸಾಹುಕಾರನ ವಿರುದ್ಧ ಮತ್ತೊಂದ ದೂರು!]]></title>
            <link>https://kannada.asianetnews.com/state/kpsc-scam-another-complaint-lodged-with-the-governor-against-shivashankarappa-sahukara-rav/articleshow-ote1kii</link>
            <guid isPermaLink="true">https://kannada.asianetnews.com/state/kpsc-scam-another-complaint-lodged-with-the-governor-against-shivashankarappa-sahukara-rav/articleshow-ote1kii</guid>
            <pubDate>Thu, 30 Jul 2026 08:05:28 +0530</pubDate>
            <description><![CDATA[ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್&zwnj; ವಿರುದ್ಧ ರಾಜ್ಯಪಾಲರಿಗೆ ಹೊಸ ದೂರು ಸಲ್ಲಿಕೆಯಾಗಿದೆ. ಸಾಹುಕಾರ್ ಕುಟುಂಬವು ಆದಾಯ ಮೀರಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 120 ಎಕರೆ ಭೂಮಿ ಖರೀದಿಸಿದೆ ಎಂದು ಆರೋಪಿಸಿ, ತನಿಖೆಗೆ ಆಗ್ರಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kydw0vwpzvzyxhaj76vh3rsx,imgname-----------------------2026-07-26t052936.216-1785024507798.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಶಿವಶಂಕರಪ್ಪ ಸಾಹುಕಾರ್&zwnj; ಕುಟುಂಬದಿಂದ ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಭೂಮಿ ಖರೀದಿ&lt;/li&gt; &lt;li&gt;ಪತ್ನಿ, ಕುಟುಂಬ ಸದಸ್ಯರ ಹೆಸರಲ್ಲಿ 120 ಎಕರೆ ಕೃಷಿ ಭೂಮಿ ಖರೀದಿ ಬಗ್ಗೆ ಗೌರ್ನರ್&zwnj;ಗೆ ದೂರು&lt;/li&gt; &lt;li&gt;ಇದು ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಸಾಕ್ಷಿ ಎಂದು ದೂರಿನಲ್ಲಿ ಪ್ರಸ್ತಾಪ&lt;/li&gt;&lt;/ul&gt;&lt;p&gt;&amp;nbsp;ಬೆಂಗಳೂರು (ಜು.30): ಕೆಪಿಎಸ್ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಸಾಹುಕಾರ್&zwnj; ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ. ಆದಾಯಕ್ಕಿಂತ ಹೆಚ್ಚಿನ ಮೊತ್ತದ ಸ್ಥಿರಾಸ್ತಿಯನ್ನು ಶಿವಶಂಕರಪ್ಪ ಸಾಹುಕಾರ್ ಕುಟುಂಬ ಖರೀದಿಸಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಮರಿಲಿಂಗಗೌಡ ಮಾಲಿಪಾಟೀಲ್ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.&lt;/p&gt;&lt;p&gt;2023-24ರ ಅವಧಿಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ 120 ಎಕರೆ ಕೃಷಿ ಹಾಗೂ ವಾಣಿಜ್ಯ ಭೂಮಿಯ ಖರೀದಿಯು ಸಾಹುಕಾರ್ ಕುಟುಂಬದಿಂದ ನಡೆದಿದೆ. ಶಿವಶಂಕರಪ್ಪ ಅವರ ಪತ್ನಿ ವಿಜಯಲಕ್ಷ್ಮೀ ಅವರ ಹೆಸರಿನಲ್ಲೂ ಜಮೀನು ಖರೀದಿ ಮಾಡಿರುವ ಸೇಲ್ ಡೀಡ್ ಪತ್ರಗಳನ್ನು ದೂರಿನೊಂದಿಗೆ ಲಗತ್ತಿಸಿ ಮರಿಲಿಂಗಗೌಡ ನೀಡಿದ್ದಾರೆ.&lt;/p&gt;&lt;p&gt;ಶಿವಶಂಕರಪ್ಪ ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಖರೀದಿ ಮೇಲುನೋಟಕ್ಕೆ ಕಂಡು ಬರುತ್ತಿದೆ. ಜೊತೆಗೆ, ಅವರ ಪತ್ನಿ ವಿಜಯಲಕ್ಷ್ಮೀ ಅವರ ಆದಾಯದ ಮೂಲ ಏನು ಎಂಬುದು ಗೊತ್ತಿಲ್ಲ. ಸಾರ್ವಜನಿಕರ ಹಿತ ಕಾಯುವ ಹುದ್ದೆಯಲ್ಲಿದ್ದ ಶಿವಶಂಕರಪ್ಪ ಸಾಹುಕಾರ್&zwnj; ಅವರ ಆಸ್ತಿ ವಿವರಗಳು ಸಾರ್ವಜನಿಕರಿಗೆ ಗೊತ್ತಾಗಲೇಬೇಕು. ಹೀಗಾಗಿ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚಿಸುವಂತೆ ಮರಿಲಿಂಗಗೌಡ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/kpsc-scam-another-complaint-lodged-with-the-governor-against-shivashankarappa-sahukara-rav/articleshow-ote1kii"/>
        </item>
        <item>
            <title><![CDATA[UT Khader: ಅಮೆರಿಕದ ಸಂಸತ್‌ ಇತಿಹಾಸದಲ್ಲಿ ಸಚಿವ ಯು.ಟಿ. ಖಾದರ್‌ ಹೆಸರು ದಾಖಲು]]></title>
            <link>https://kannada.asianetnews.com/state/karnataka-health-minister-u-t-khader-s-name-recorded-in-the-history-of-the-us-parliament-mrq/articleshow-9ephf9q</link>
            <guid isPermaLink="true">https://kannada.asianetnews.com/state/karnataka-health-minister-u-t-khader-s-name-recorded-in-the-history-of-the-us-parliament-mrq/articleshow-9ephf9q</guid>
            <pubDate>Thu, 30 Jul 2026 07:26:56 +0530</pubDate>
            <description><![CDATA[ಕರ್ನಾಟಕದ ಆರೋಗ್ಯ ಸಚಿವ ಯು. ಟಿ. ಖಾದರ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವವನ್ನು ಗುರುತಿಸಿ ಅಮೆರಿಕದ ಸಂಸತ್ ಗೌರವಿಸಿದೆ. ಈ ಗೌರವ 'ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್' ಆಗಿ ಅಧಿಕೃತವಾಗಿ ದಾಖಲಾಗಿದ್ದು, ಅವರಿಗೆ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ನು ಸಹ ಪ್ರದಾನ ಮಾಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrbqn69s8s93tq384wkt2cn,imgname-ut-khader-1785376527561.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ್&zwj;ಯಾಂಕಿಂಗ್&zwnj; ಸದಸ್ಯ, ನಾಯಕ ಜೊನಾಥನ್ ಜಾಕ್ಸನ್ ಅವರು, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಸಾಧನೆಗಳನ್ನು ಗುರುತಿಸಿ ಪ್ರತಿಷ್ಠಿತ &lsquo;ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್&rsquo; ದಾಖಲೆಯನ್ನು ಪ್ರದಾನ ಮಾಡಿದರು.&lt;/p&gt;&lt;h2&gt;&lt;strong&gt;ಪ್ರತಿಷ್ಠಿತ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿ&lt;/strong&gt;&lt;/h2&gt;&lt;p&gt;ಈ ದಾಖಲೆ ಅಮೆರಿಕದ ಸಂಸತ್ತಿನ ಆರ್ಚಿವರ್ಸ್&zwnj;ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಅಮೆರಿಕದ ಸಂಸತ್ತಿನ ಗ್ರಂಥಾಲಯದಲ್ಲಿ ಶಾಶ್ವತವಾಗಿ ಸಂರಕ್ಷಿಸಲ್ಪಡಲಿದೆ. ಜೊತೆಗೆ ಅಮೆರಿಕದ ಕ್ಯಾಪಿಟಲ್ ಹಿಲ್&zwnj;ನ ಸೆಂಟ್ರಲ್ ರೋಟುಂಡಾದಲ್ಲಿ ಪ್ರದಾನಗೊಳ್ಳುವ ಪ್ರತಿಷ್ಠಿತ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ನು ಮಂಗಳವಾರ ವಾಷಿಂಗ್ಟನ್ ಡಿ.ಸಿ.ಯಲ್ಲಿ ಡಾ. ಯು. ಟಿ. ಖಾದರ್ ಫರೀದ್ ಅವರಿಗೆ ಗೌರವಪೂರ್ವಕವಾಗಿ ಪ್ರದಾನಿಸಲಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಸ್ಪತ್ರೆ, ಶಾಲಾ ಆವರಣ ಕ್ಯಾಂಟೀನ್&zwnj;ಗಳಲ್ಲಿ ಜಂಕ್&zwnj; ಫುಡ್&zwnj; ನಿಷೇಧ: ಆರೋಗ್ಯ ಸಚಿವ ಯುಟಿ ಖಾದರ್ ಮತ್ತೊಂದು ಖಡಕ್ ನಿರ್ಧಾರ&lt;/strong&gt;&lt;/p&gt;&lt;p&gt;ಅಮೆರಿಕದ ಸಂಸತ್ತಿನ ಸದಸ್ಯ ಜೊನಾಥನ್ ಜಾಕ್ಸನ್ ಅವರ ಹಿರಿಯ ಸಲಹೆಗಾರ ಡಾ. ವಿಜಯ್ ಜಿ. ಪ್ರಭಾಕರ್ ಹಾಗೂ ಎಎಂಇಸಿ ಯುಎಸ್&zwnj;ಎ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ನವೀನ್&zwnj;ಚಂದ್ರ ಕರ್ಣ ಸಾಕ್ಷಿಯಾದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bike Ambulance: ಟ್ರಾಫಿಕ್ ನಡುವೆ ಜೀವ ರಕ್ಷಕ; ಬೈಕ್ ಆಂಬುಲೆನ್ಸ್&zwnj;ಗೆ ಮರುಜೀವ ನೀಡಿದ ಸರ್ಕಾರ!&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-health-minister-u-t-khader-s-name-recorded-in-the-history-of-the-us-parliament-mrq/articleshow-9ephf9q"/>
        </item>
        <item>
            <title><![CDATA[Harangi Reservoir: ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಕದ್ದು ನೀರು ಬಿಡುಗಡೆ? ಆರ್ ಅಶೋಕ್ ಗಂಭೀರ ಆರೋಪ]]></title>
            <link>https://kannada.asianetnews.com/politics/karnataka-govt-water-released-from-harangi-reservoir-to-tamil-nadu-lop-r-ashoka-serious-allegations/articleshow-c5sgtg6</link>
            <guid isPermaLink="true">https://kannada.asianetnews.com/politics/karnataka-govt-water-released-from-harangi-reservoir-to-tamil-nadu-lop-r-ashoka-serious-allegations/articleshow-c5sgtg6</guid>
            <pubDate>Thu, 30 Jul 2026 07:26:06 +0530</pubDate>
            <description><![CDATA[ವಿಪಕ್ಷ ನಾಯಕ ಆರ್. ಅಶೋಕ ಅವರು, ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಸರ್ಕಾರ ಕದ್ದುಮುಚ್ಚಿ ನೀರು ಬಿಡುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಎಚ್ಚರಿಸಿದ್ದು, ಬಿಜೆಪಿ ಕೆಆರ್&zwnj;ಎಸ್&zwnj; ಡ್ಯಾಂ ಬಳಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrbqj2yzbh5r884zxs25reb,imgname-----------------------2026-07-30t072456.189-1785376524382.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜು.30): &lt;/strong&gt;ಕೊಡಗಿನ ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಕಳೆದ ಒಂದು ತಿಂಗಳಿನಿಂದಲೂ ಕದ್ದು ಮುಚ್ಚಿ ನೀರು ಬಿಡುಗಡೆ ಮಾಡುತ್ತಿದ್ದು, ಬೆಂಗಳೂರಷ್ಟೇ ಅಲ್ಲ, ಮಂಡ್ಯ, ಮೈಸೂರಿಗೂ ಕುಡಿಯುವ ನೀರಿನ ಸಮಸ್ಯೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಬೆಂಗಳೂರು, ಮೈಸೂರು, ಮಂಡ್ಯ ಜನಕ್ಕೆ ಕುಡಿಯೋಕೂ ನೀರು ಇರೋಲ್ಲ&lt;/h2&gt;&lt;p&gt;ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕದ್ದು ಮುಚ್ಚಿ ತಮಿಳುನಾಡಿಗೆ ಹಾರಂಗಿ ಜಲಾಶಯದಿಂದ ನೀರು ಬಿಡುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಬೆಂಗಳೂರಷ್ಟೇ ಅಲ್ಲ, ಮಂಡ್ಯ, ಮೈಸೂರಿಗೂ ಕುಡಿಯುವ ನೀರಿಗೆ ಹಾಹಾಕಾರವಾಗಲಿದೆ ಎಂದು ಎಚ್ಚರಿಸಿದರು.&lt;/p&gt;&lt;h3&gt;ಬಿಜೆಪಿ ಹೋರಾಟಕ್ಕೆ ಸಜ್ಜು&lt;/h3&gt;&lt;p&gt;ಬೆಂಗಳೂರಿನಲ್ಲಿ 1.5 ಕೋಟಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಸರ್ಕಾರ ತಕ್ಷಣವೇ ಮೇಲ್ಮನವಿ ಸಲ್ಲಿಸಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಡೆಸಬೇಕು. ನಾವೂ ಮಂಡ್ಯದಲ್ಲಿ ಹೋರಾಟ ಶುರು ಮಾಡುತ್ತೇವೆ. ಇನ್ನೆರಡು ದಿನಗಳಲ್ಲೇ ಕೆಆರ್&zwnj;ಎಸ್ ಡ್ಯಾಂ ಬಳಿ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.&lt;/p&gt;&lt;p&gt;ನಿಮ್ಮ ವೈಫಲ್ಯದಿಂದಲೇ ಕಾವೇರಿ ನೀರು ಬಿಡುಗಡೆಗೆ ಆದೇಶವಾಗಿದ್ದು, ನಿಮ್ಮ ಲೀಗಲ್ ಟೀಂ ಏನು ಮಾಡುತ್ತಿದೆ?. ಕಾವೇರಿ ನೀರಿಗಾಗಿ ಕಾನೂನು ತಜ್ಞರ ಜೊತೆಗೆ ಸಭೆ ಮಾಡಿ, ಚರ್ಚಿಸಬೇಕಾಗಿತ್ತು ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಮುಖ್ಯಮಂತ್ರಿ &zwj;ಆದವರಿಗೆ ನಮ್ಮ ಜಲಾಶಯ ಮುಖ್ಯವೋ ಅಥವಾ ಕಾಕ್ರೋಚ್ ಪಾರ್ಟಿ ಸಭೆ ಮುಖ್ಯವೋ?. ಇಲ್ಲಿ ರೈತರು ಸಂಕಷ್ಟದಲ್ಲಿದ್ದರೆ ಮುಖ್ಯಮಂತ್ರಿಯವರು ದೆಹಲಿಯಲ್ಲಿನ ಕಾಕ್ರೋಚ್ ಪಾರ್ಟಿ ಪ್ರತಿಭಟನೆಗೆ ಹೋಗಿದ್ದರು ಎಂದು ಟೀಕಿಸಿದರು.&lt;/p&gt;&lt;h3&gt;ವಿಜಯ್&zwnj; ಬರುವುದು ಫೋಟೋಶೂಟ್&zwnj;ಗೆ:&lt;/h3&gt;&lt;p&gt;ತಮಿಳುನಾಡಿನಲ್ಲೂ ಇಂಡಿ ಒಕ್ಕೂಟದ ಸರ್ಕಾರವೇ ಇದೆ. ಯಾವ ಪುರುಷಾರ್ಥಕ್ಕೆ ತಮಿಳುನಾಡು ಮುಖ್ಯಮಂತ್ರಿಯನ್ನು ವಿಧಾನಸೌಧಕ್ಕೆ ಕರೆಸುತ್ತೀದ್ದೀರಿ. ತಮಿಳುನಾಡು ಮುಖ್ಯಮಂತ್ರಿ ಇಲ್ಲಿಗೆ ಬಂದು ಮೇಕೆದಾಟು ಯೋಜನೆಗೆ ವಿರೋಧ ಇದೆ ಎನ್ನುತ್ತಾರೆ. ಇದು ಫೋಟೋಶೂಟ್&zwnj;ಗೆ ಮಾಡುವ ಕಾರ್ಯಕ್ರಮ. ಸುಮ್ಮನೇ ₹10 ಕೋಟಿ ವ್ಯರ್ಥವಾಗುತ್ತದೆ. ಆ ಹಣವನ್ನು ತಕ್ಷಣ&zwj;ವೇ ಬರ ಪರಿಹಾರಕ್ಕೆ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-govt-water-released-from-harangi-reservoir-to-tamil-nadu-lop-r-ashoka-serious-allegations/articleshow-c5sgtg6"/>
        </item>
        <item>
            <title><![CDATA[ಜು.7ಕ್ಕೆ ಅವಧಿ ಮುಗಿದರೂ ಹುದ್ದೆಬಿಡ್ತಿಲ್ಲ ಸಹಕಾರ ಎಂಡಿ! 34 ಹುದ್ದೆಗಳ ಮೇಲೆ ಕಣ್ಣಿಟ್ಟ ಪ್ರಭಾವಿ ಅಧಿಕಾರಿಗಳ ಮಕ್ಕಳು!]]></title>
            <link>https://kannada.asianetnews.com/state/karnataka-state-cooperative-consumer-sales-federation-md-km-asha-rav/articleshow-ufl1agi</link>
            <guid isPermaLink="true">https://kannada.asianetnews.com/state/karnataka-state-cooperative-consumer-sales-federation-md-km-asha-rav/articleshow-ufl1agi</guid>
            <pubDate>Thu, 30 Jul 2026 07:04:17 +0530</pubDate>
            <description><![CDATA[ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಆಶಾ ಅವರ ಅಧಿಕಾರಾವಧಿ ಮುಗಿದರೂ ಹುದ್ದೆ ತೊರೆದಿಲ್ಲ. ಮಹಾಮಂಡಳದಲ್ಲಿ ನಡೆಯುತ್ತಿರುವ 34 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಅಂತಿಮ ಹಂತವೇ ಈ ಜಟಾಪಟಿಗೆ ಕಾರಣವೆಂದು ಶಂಕಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyra9r5kjv9f1behb42rhy5j,imgname-----------------------2026-07-30t065957.099-1785375023282.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಸಹಕಾರ ಮಂಡಳದ ಎಂಡಿಯಾಗಿರುವ ಕೆ.ಎಂ.ಆಶಾ ಅವರ ಕಾರ್ಯಾವಧಿ ಜು.7ಕ್ಕೆ ಮುಕ್ತಾಯ&lt;/li&gt; &lt;li&gt;ಆದರೂ ಹುದ್ದೆ ಬಿಡಲು ನಕಾರ. ಇದಕ್ಕೆ ಶೀಘ್ರ ಇಲಾಖೆಯಲ್ಲಿ ನಡೆವ ನೇಮಕಾತಿ ಕಾರಣ ಶಂಕೆ&lt;/li&gt; &lt;li&gt;34 ಆಯಕಟ್ಟಿನ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಪ್ರಭಾವಿ ಅಧಿಕಾರಿಗಳ ಮಕ್ಕಳು, ಬಂಧುಗಳು&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಜು.30): &lt;/strong&gt;ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದಲ್ಲಿ ಅವಧಿ ಮುಗಿದರೂ ಮಹಾಮಂಡಳದ ದೊಡ್ಡ ಕುರ್ಚಿ ಬಿಡದೆ ಎಳೆದಾಡುತ್ತಿರುವ ಪ್ರಕರಣ ತೆರೆಮರೆಯಲ್ಲೇ ಜಟಾಪಟಿಗೆ ಕಾರಣವಾಗಿದೆ. ಅಂತಿಮ ಹಂತ ತಲುಪಿರುವ 34 ಹುದ್ದೆಗಳ ನೇರ ನೇಮಕಾತಿಯೂ ಈ ಮೌನ ಜಟಾಪಟಿಗೆ ಮೂಲ ಎನ್ನಲಾಗಿದೆ.&lt;/p&gt;&lt;p&gt;ಇನ್ನೂ ವಿಶೇಷ ಎಂದರೆ, ಈ ಹುದ್ದೆಗಳ ನೇಮಕಾತಿ ಬಯಸಿ ಪ್ರಭಾವಿ ಅಧಿಕಾರಿಗಳ ಮಕ್ಕಳು, ಬಂಧುಗಳು ಅಂತಿಮ ಪಟ್ಟಿ ಸೇರಲು ಲಾಬಿ ನಡೆಸಿರುವ ಖಚಿತ ಮಾಹಿತಿ ಇದೆ.&lt;/p&gt;&lt;p&gt;ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾಗಿ ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕರಾದ ಕೆ.ಎಂ. ಆಶಾ ಅವರನ್ನು ನೇಮಿಸಿ 2004ರ ಜುಲೈ 8ರಂದು ಸಹಕಾರ ಇಲಾಖೆ ಆದೇಶ ಹೊರಡಿಸಿತ್ತು. ಅದರ ಪ್ರಕಾರ ಇದೇ ಜುಲೈ 7ರಂದು ಮಹಾಮಂಡಳದ ಎಂಡಿಯಾಗಿ ಕೆ.ಎಂ. ಆಶಾ ಅವರ ಅವಧಿ ಮುಗಿದಿದೆ.&lt;/p&gt;&lt;p&gt;ಅವಧಿ ಮುಗಿದ ಹಿನ್ನಲೆಯಲ್ಲಿ ಕೆ.ಎಂ. ಆಶಾ ಅವರ ಜಾಗಕ್ಕೆ ಸಹಕಾರ ಸಂಘಗಳ ಜಂಟಿ ನಿಬಂಧಕ ಶಶಿಧರ್ ಅವರನ್ನು ಅಧಿಕ ಪ್ರಭಾರದಲ್ಲಿರಿಸಿ ಸಹಕಾರ ಇಲಾಖೆಯು ಜು.13ರಂದು ಕೂಡಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಸರ್ಕಾರ ಆದೇಶ ಹೊರಡಿಸಿದ್ದರೂ ಕೆ.ಎಂ. ಆಶಾ ಅವರು ಶಶಿಧರ್ ಅವರಿಗೆ ಅಧಿಕಾರ ಬಿಟ್ಟುಕೊಡದೆ ತಾವೇ ಮುಂದುವರೆದಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಎಂಡಿಯಾಗಿ ಮರು ನೇಮಕ ಅಥವಾ ಅವಧಿ ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿ ಅಕ್ರಮವಾಗಿ ಹುದ್ದೆಯಲ್ಲಿ ಮುಂದುವರೆದಿದ್ದಾರೆ.&lt;/p&gt;&lt;h2&gt;ಏನದು 34 ನೇಮಕಾತಿ?:&lt;/h2&gt;&lt;p&gt;ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಂಡಳಿಯು ಫಾರ್ಮಸಿಸ್ಟ್, ಪ್ರಥಮ ದರ್ಜೆ ಸಹಾಯಕರು, ವಿಕ್ರಯ ಸಹಾಯಕರು ಸೇರಿದಂತೆ 34 ಹುದ್ದೆಗಳಿಗೆ ಕಳೆದ ಆಗಸ್ಟ್&zwnj;ನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು. ಈ ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳು ಮುಗಿದು ಅಂತಿಮ ಪಟ್ಟಿ ಪ್ರಕಟಿಸುವುದೊಂದೇ ಬಾಕಿ ಉಳಿದಿದೆ. ಕೆ.ಎಂ. ಆಶಾ ಅವರ ಎಂಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿ ಪ್ರಕಟಗೊಂಡಿಲ್ಲ. ಈ ಅಂತಿಮ ಪಟ್ಟಿ ಸೇರಲು ಪ್ರಭಾವಿ ಅಧಿಕಾರಿಗಳ ಮಕ್ಕಳು, ಬಂಧುಗಳ ಲಾಬಿಯಿಂದಾಗಿ ಪಟ್ಟಿ ಪ್ರಕಟ ತಡವಾಗಿದೆ ಎನ್ನಲಾಗಿದೆ. ಎಂಡಿ ಅವಧಿ ವಿಸ್ತರಿಸಿಕೊಂಡು ಅಂತಿಮ ಪಟ್ಟಿ ಪ್ರಕಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳಿವೆ.&lt;/p&gt;&lt;h3&gt;ಕ್ಷಮಿಸಿ ನನಗೆ ಅಧಿಕಾರವಿಲ್ಲ!&lt;/h3&gt;&lt;p&gt;ಪ್ರಭಾರಿಯಾಗಿ ಅಧಿಕಾರ ಸ್ವೀಕರಿಸಬೇಕಾದ ಶಶಿಧರ್ ಅವರನ್ನು &lsquo;ಕನ್ನಡಪ್ರಭ&rsquo; ಸಂಪರ್ಕಿಸಿದಾಗ, ಪ್ರತಿಕ್ರಿಯಿಸಲು ನನಗೆ ಅಧಿಕಾರವಿಲ್ಲ ಕ್ಷಮಿಸಿ ಎಂದು ಫೋನ್ ಕಟ್ ಮಾಡಿದರು. ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿ ಅಕ್ರಮವಾಗಿ ಮುಂದವರೆದಿರುವ ಕೆ.ಎಂ. ಆಶಾ ಅವರನ್ನು &lsquo;ಕನ್ನಡಪ್ರಭ&rsquo;ವು ಸಂಪರ್ಕಿಸಲು ನಡೆಸಿದ ಪ್ರಯತ್ನ ವಿಫಲವಾಯಿತು.&lt;/p&gt;&lt;p&gt;ಈ ಕುರಿತು &lsquo;ಕನ್ನಡಪ್ರಭ&rsquo;ವು ಸಹಕಾರ ಇಲಾಖೆ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣನವರ್ ಅವರನ್ನು ಸಂಪರ್ಕಿಸಿದಾಗ, ಅವಧಿ ಮುಗಿದಿದೆ ಎಂದು ಪ್ರಭಾರಿ ಅಧಿಕಾರಿಯನ್ನು ನಿಯೋಜಿಸಿದ್ದಾರೆ. ಆದರೆ, ಎಂಡಿ ಅವಧಿ ವಿಸ್ತರಣೆಗೆ ಮುಖ್ಯಮಂತ್ರಿಗಳಿಗೆ ಫೈಲ್ ಕಳುಹಿಸಲಾಗಿದೆ. ಇನ್ನೊಂದೆರಡು ದಿನದಲ್ಲಿ ಬರಬಹುದು ಎಂದರು. ಹಾಗೆ ಮುಂದುವರೆಸುವುದಾದರೆ ಶಶಿಧರ್ ಅವರನ್ನು ನಿಯೋಜಿಸಿ ಆದೇಶಿಸುವ ಅಗತ್ಯ ಇರಲಿಲ್ಲ ಅಲ್ಲವೇ? ಅವಧಿ ಮುಗಿದ ಮೇಲೂ ಅವರು ಫೈಲುಗಳಿಗೆ ಸಹಿ ಹಾಕಬಹುದೇ ಎಂಬ ಪ್ರಶ್ನೆಗಳಿಗೆ, &lsquo;ಆರೋಗ್ಯ ಸರಿ ಇಲ್ಲ, ಮನೆಯಲ್ಲಿದ್ದೇನೆ. ತಿಳಿದುಕೊಂಡು ಹೇಳುವೆ&rsquo; ಎಂದರು ಸಂಜಯ್ ಶೆಟ್ಟಣ್ಣನವರ್.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-state-cooperative-consumer-sales-federation-md-km-asha-rav/articleshow-ufl1agi"/>
        </item>
        <item>
            <title><![CDATA[Karnataka Bandh:  ಕಾವೇರಿ ನೀರು ವಿವಾದ; ನಾಳೆ ಹೈವೋಲ್ಟೇಜ್ ಮೀಟಿಂಗ್, ಕನ್ನಡ ಸಂಘಟನೆಗಳಿಂದ ಬಿಗ್ ಅಪ್ಡೇಟ್!]]></title>
            <link>https://kannada.asianetnews.com/state/cauvery-water-dispute-karnataka-and-tamil-nadu-conflict-again-will-karnataka-bandh-tomorrow-rav/articleshow-mzh17zt</link>
            <guid isPermaLink="true">https://kannada.asianetnews.com/state/cauvery-water-dispute-karnataka-and-tamil-nadu-conflict-again-will-karnataka-bandh-tomorrow-rav/articleshow-mzh17zt</guid>
            <pubDate>Thu, 30 Jul 2026 05:38:03 +0530</pubDate>
            <description><![CDATA[ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿವೆ. ರಾಜ್ಯದಲ್ಲಿ ನೀರಿನ ತೀವ್ರ ಕೊರತೆ ಇದ್ದು, ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕ ಬಂದ್&zwnj; ಮಾಡುವುದಾಗಿ ವಾಟಾಳ್ ನಾಗರಾಜ್ ನೇತೃತ್ವದ ಒಕ್ಕೂಟ ಎಚ್ಚರಿಕೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyr4v53j0ryez771np8f2g69,imgname-chatgpt-image-jul-30--2026--05-24-32-am-1785369302130.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಜು.30):&lt;/strong&gt; ಕಾವೇರಿ ನೀರು ವಿವಾ(Cauvery water dispute)ದದ ಕಿಚ್ಚು ಮತ್ತೆ ಮುನ್ನಲೆಗೆ ಬಂದಿದ್ದು. ಕಾವೇರಿ ನೀರು ನಿರ್ವಹಣಾ ಮಂಡಳಿ (CWRC) ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ತೀವ್ರ ಅಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು. ಅಲ್ಲದೆ, ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕ ಬಂದ್ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿವೆ.&lt;/p&gt;&lt;h2&gt;ನಾಳ ವಾಟಾಳ್ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್&lt;/h2&gt;&lt;p&gt;ಪ್ರತಿ ದಿನ 3500 ಕ್ಯುಸೆಕ್&zwnj; ನೀರನ್ನು ತಮಿಳುನಾಡಿಗೆ ಹರಿಸುವ ಕಾವೇರಿ ಜಲಮಂಡಳಿ ಆದೇಶದ ವಿರುದ್ಧ ಕರ್ನಾಟಕ ಬಂದ್&zwnj; ನಡೆಸುವ ಕುರಿತು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್&zwnj; ನಾಗರಾಜ್&zwnj; ಅಧ್ಯಕ್ಷತೆಯಲ್ಲಿ ಜು.31ರಂದು ಬೆಳಗ್ಗೆ 11ಕ್ಕೆ ನಗರದ ವುಡ್&zwnj;ಲ್ಯಾಂಡ್&zwnj; ಹೋಟೆಲ್&zwnj;ನಲ್ಲಿ ಸಭೆ ಕರೆಯಲಾಗಿದೆ. ಈಗಾಗಲೇ ಕನ್ನಡಪರ ಎಲ್ಲ ಸಂಘಟನೆಗಳಿಗೂ ಆಹ್ವಾನ ನೀಡಲಾಗಿದ್ದು, ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ರಾಜ್ಯಾದ್ಯಂತ ಬಂದ್&zwnj; ನಡೆಸಿ ಹೋರಾಟ ನಡೆಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ವಾಟಾಳ್&zwnj; ನಾಗರಾಜ್&zwnj; ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;ನಮಗಿಲ್ಲದ ನೀರು ತಮಿಳು ನಾಡಿಗೇಕೆ: ನಾರಯಣಗೌಡ&lt;/h3&gt;&lt;p&gt;ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಕೆಆರ್&zwnj;ಎಸ್&zwnj;, ಕಬಿನಿ, ಹೇಮಾವತಿ, ಹಾರಂಗಿ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಈ ವೇಳೆ ಕರ್ನಾಟಕದ ಜನರಿಗೆ ಕುಡಿಯಲು ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಸುಮಾರು 4.5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸೂಚಿಸಿರುವುದು ವಾಸ್ತವ ಸ್ಥಿತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಕ್ರಮವಾಗಿದೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಕಿಡಿಕಾರಿದರು.&lt;/p&gt;&lt;p&gt;ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರವೇಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಕ್ಷಣವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಿ, ಕರ್ನಾಟಕದ ನೈಜ ಜಲಸ್ಥಿತಿಯನ್ನು ವೈಜ್ಞಾನಿಕ ಅಂಕಿ-ಅಂಶಗಳೊಂದಿಗೆ ಮಂಡಿಸಬೇಕು. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಸೇರಿದಂತೆ ಲಭ್ಯವಿರುವ ಎಲ್ಲ ಕಾನೂನು ವೇದಿಕೆಗಳಲ್ಲಿ ಹೋರಾಟ ನಡೆಸಿ, ರಾಜ್ಯದ ನೀರಿನ ಹಕ್ಕನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.&lt;/p&gt;&lt;h3&gt;ದೆಹಲಿಯಲ್ಲಿಂದು ಕಾವೇರಿ ನೀರು ಪ್ರಾಧಿಕಾರದ ಸಭೆ&lt;/h3&gt;&lt;p&gt;ಮುಂಗಾರು ಮಳೆ ಕೊರತೆ, ರಾಜ್ಯದಲ್ಲಿನ ತೀವ್ರ ಬರ ಹಾಗೂ ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ಬೆನ್ನಲ್ಲೇ ದೆಹಲಿಯಲ್ಲಿ ಗುರುವಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ. ಮುಂದಿನ 15 ದಿನ ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್&zwnj; ನಂತೆ 4.5 ಟಿಎಂಸಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಯಲಿದೆ.&lt;/p&gt;&lt;p&gt;ದೆಹಲಿಯ ಕಾವೇರಿ ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯಾಹ್ನ 2.30ಕ್ಕೆ ಸಭೆ ನಡೆಯಲಿದ್ದು, ಕರ್ನಾಟಕ ಎಸಿಎಸ್ ಗೌರವಗುಪ್ತಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ತೀವ್ರ ಬರದ ನಡುವೆಯೇ ತಮಿಳುನಾಡಿಗೆ ನೀರು ಹರಿಸಬೇಕೆಂಬ ಸಮಿತಿಯ ಶಿಫಾರಸ್ಸು, ಕಾವೇರಿ ಕೊಳ್ಳದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿರುವುದು ಸರ್ಕಾರದ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ, ಗುರುವಾರ ನಡೆಯಲಿರುವ ಪ್ರಾಧಿಕಾರದ ಸಭೆ ಎಲ್ಲರ ಗಮನ ಸೆಳೆದಿದ್ದು, ಸಮಿತಿಯ ಆದೇಶಕ್ಕೆ ಪ್ರಾಧಿಕಾರ ತಡೆ ನೀಡುತ್ತಾ? ಎಂಬುದು ಕುತೂಹಲ ಮೂಡಿಸಿದೆ.&lt;/p&gt;&lt;p&gt;ಇದೇ ವೇಳೆ, ಕಾವೇರಿ ಜಲಾನಯನ ಪ್ರದೇಶದ ಜಲ-ಹವಾಮಾನ ಪರಿಸ್ಥಿತಿ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜೊತೆಗೆ, 2026-27ರ ಜಲ ವರ್ಷದಲ್ಲಿ ಪುದುಚೇರಿಯ ಯು.ಟಿ.ಯ ಬಿಳಿಗುಂಡ್ಲು ಮತ್ತು ಕಾರೈಕಲ್&zwnj; ಪ್ರದೇಶದಲ್ಲಿ ಕಂಡು ಬಂದ ಸಂಚಿತ ಹರಿವಿನ ಕೊರತೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cauvery-water-dispute-karnataka-and-tamil-nadu-conflict-again-will-karnataka-bandh-tomorrow-rav/articleshow-mzh17zt"/>
        </item>
        <item>
            <title><![CDATA[ಸಚಿವ ಸಂಪುಟ ವಿಸ್ತರಣೆ: 3 ದಿನ ಕಾದರೂ ಸಿಗದ ರಾಹುಲ್‌: ರಾಜ್ಯ ಕಾಂಗ್ರೆಸ್ಸಲ್ಲಿ ಅಸಮಾಧಾನ]]></title>
            <link>https://kannada.asianetnews.com/politics/karnataka-cabinet-expansion-delay-rahul-gandhi-unavailable-even-after-a-three-day-wait-rav/articleshow-7ggzrph</link>
            <guid isPermaLink="true">https://kannada.asianetnews.com/politics/karnataka-cabinet-expansion-delay-rahul-gandhi-unavailable-even-after-a-three-day-wait-rav/articleshow-7ggzrph</guid>
            <pubDate>Thu, 30 Jul 2026 06:34:55 +0530</pubDate>
            <description><![CDATA[&lt;p&gt;ಸಚಿವ ಸಂಪುಟ ವಿಸ್ತರಣೆ ಚರ್ಚೆಗಾಗಿ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಭೇಟಿ ಲಭ್ಯವಾಗಿಲ್ಲ. ಮೂರು ದಿನಗಳಿಂದ ಕಾಯುತ್ತಿದ್ದರೂ ಭೇಟಿಗೆ ಅವಕಾಶ ಸಿಗದ ಕಾರಣ ನಾಯಕರಲ್ಲಿ ಅಸಮಾಧಾನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyr8ffxma3c8ewprca98dsx3,imgname-----------------------2026-07-30t062810.785-1785373114292.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.30): &lt;/strong&gt;ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj;, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್&zwnj; ಅವರು ಮೂರನೇ ಬಾರಿಗೆ ದೆಹಲಿಗೆ ತೆರಳಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರೂ ಕಾಂಗ್ರೆಸ್&zwnj; ನಾಯಕ ರಾಹುಲ್&zwnj; ಗಾಂಧಿ ಅವರು ಭೇಟಿಗೆ ಅವಕಾಶ ನೀಡದಿರುವುದು ರಾಜ್ಯ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;ರಾಜ್ಯ ಕಾಂಗ್ರೆಸ್&zwnj;ನ ಅಗ್ರನಾಯಕರ ಆದಿಯಾಗಿ ಭಾಗಶಃ ಸಚಿವ ಸಂಪುಟವೇ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದೆ. ಜತೆಗೆ, ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಅವಕಾಶಕ್ಕಾಗಿ ಹಾತೊರೆಯುತ್ತಿರುವ 40-45 ಮಂದಿ ಶಾಸಕರೂ ಸಹ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ.&lt;/p&gt;&lt;p&gt;ವರಿಷ್ಠರು ಸಂಪುಟ ವಿಸ್ತರಣೆ ಕುರಿತ ಚರ್ಚೆ ಹೆಸರಿನಲ್ಲಿ ರಾಜ್ಯ ನಾಯಕರನ್ನು ಸೋಮವಾರವೇ ದೆಹಲಿಗೆ ಕರೆಸಿಕೊಂಡಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಅರ್ಧ ಗಂಟೆ ಭೇಟಿಗೂ ರಾಹುಲ್&zwnj; ಗಾಂಧಿ ಅವರು ಲಭ್ಯವಾಗಿಲ್ಲ.&lt;/p&gt;&lt;p&gt;ಡಿ.ಕೆ. ಶಿವಕುಮಾರ್&zwnj; ಅವರು ಪದಗ್ರಹಣ ಮಾಡಿ ಎರಡು ತಿಂಗಳು ಆಗುತ್ತಿದ್ದರೂ ಈವರೆಗೆ ಸಂಪುಟ ವಿಸ್ತರಣೆಯಾಗಿಲ್ಲ. ರಾಜ್ಯದಲ್ಲಿ ತೀವ್ರ ಬರ ಮತ್ತಿತರ ಸಮಸ್ಯೆಗಳಿದ್ದರೂ ಮುಖ್ಯಮಂತ್ರಿ ಆದಿಯಾಗಿ ಸಂಪುಟವನ್ನೇ ದೆಹಲಿಯಲ್ಲಿ ಕಾಯಿಸಲಾಗುತ್ತಿದೆ. ಇದು ರಾಜ್ಯದಲ್ಲಿ ಪ್ರತಿಪಕ್ಷಗಳಿಗೆ ಅಸ್ತ್ರವಾಗಿ ಬದಲಾಗಿದೆ.&lt;/p&gt;&lt;h2&gt;ಮೂರನೇ ಬಾರಿ ಭೇಟಿ:&lt;/h2&gt;&lt;p&gt;ಈ ಹಿಂದೆಯೂ ಎರಡು ಬಾರಿ ಚರ್ಚೆಗೆ ಕರೆದಿದ್ದ ರಾಹುಲ್&zwnj;ಗಾಂಧಿ ಅವರು ಯಾವುದೇ ತೀರ್ಮಾನ ಸೂಚಿಸಿರಲಿಲ್ಲ. ಕಳೆದ ವಾರ ದೆಹಲಿಗೆ ಕರೆಸಿದ್ದಾಗ ಕಾಕ್ರೋಚ್&zwnj; ಜನತಾ ಪಕ್ಷದ ಪ್ರತಿಭಟನೆ ಕಾರಣ ನೀಡಿ ಎರಡು ದಿನಗಳ ಬಳಿಕ ಬರಿಗೈಯಲ್ಲಿ ರಾಜ್ಯ ನಾಯಕರನ್ನು ವಾಪಸು ಕಳುಹಿಸಲಾಗಿತ್ತು.&lt;/p&gt;&lt;p&gt;ಇದೀಗ ಮೂರನೇ ಬಾರಿಗೆ ಕರೆಸಿಕೊಂಡಿದ್ದು, ಮೂರು ದಿನ ಕಳೆದರೂ ರಾಹುಲ್&zwnj;ಗಾಂಧಿ ಅವರು ಚರ್ಚೆಗೆ ಅವಕಾಶ ನೀಡದಿರುವುದು ರಾಜ್ಯ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;ಮುಖ್ಯಮಂತ್ರಿಗಳ ಆದಿಯಾಗಿ ಸರ್ಕಾರವೇ ದೆಹಲಿಯಲ್ಲಿದೆ. ಮೂರು ದಿನಗಳಿಂದ ದೆಹಲಿಯಲ್ಲಿ ಕೂರಿಸಿಕೊಂಡು ಸಮಯ ವ್ಯಯ ಮಾಡಲಾಗುತ್ತಿದೆ. ಈಗಾಗಲೇ ಸಂಪುಟ ವಿಸ್ತರಣೆ ಕುರಿತ ಪಟ್ಟಿ ಅಂತಿಮಗೊಂಡಿದ್ದು, ಗೊಂದಲವಿರುವ 3-4 ಹೆಸರುಗಳ ಬಗ್ಗೆ ಮಾತ್ರ ರಾಹುಲ್&zwnj; ಗಾಂಧಿ ತಮ್ಮ ತೀರ್ಮಾನ ತಿಳಿಸಬೇಕಿದೆ.&lt;/p&gt;&lt;p&gt;ಹೀಗಿದ್ದರೂ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ನಾಯಕರೊಂದಿಗೆ 30 ನಿಮಿಷಗಳ ಕಾಲ ರಾಹುಲ್&zwnj; ಸಭೆ ನಿಗದಿ ಮಾಡಲಾಗುತ್ತಿಲ್ಲ. ಈ ಬಗ್ಗೆ ರಾಹುಲ್&zwnj;ಗಾಂಧಿ ಅವರನ್ನು ಮನವೊಲಿಸಲು ಪ್ರಯತ್ನಿಸುತ್ತಿಲ್ಲ ಎಂಬ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ.&lt;/p&gt;&lt;p&gt;ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಕಾವೇರಿ ಸೇರಿದಂತೆ ಜಲ ಹಂಚಿಕೆ ವಿವಾದ ಶುರುವಾಗಿ ರೈತರು ಹೋರಾಟದ ಹಾದಿ ತುಳಿದಿದ್ದಾರೆ. ಮತ್ತೊಂದೆಡೆ ಜಲಾಶಯದ ನೀರು ನೆಚ್ಚಿಕೊಂಡು ರೈತರಿಗೆ ಬೆಳೆಗಳನ್ನು ಹಾಕದಂತೆ ನಿರ್ದೇಶಿಸಲಾಗಿದೆ. ಹೀಗಿದ್ದರೂ ಕೃಷಿ ಸಚಿವರು, ತೋಟಗಾರಿಕೆ ಸಚಿವರು ಇಲ್ಲ. ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಲಿ, ಉನ್ನತ ಶಿಕ್ಷಣ ಸಚಿವರಾಗಲಿ ಇಲ್ಲ. ಹೆಚ್ಚುವರಿ ಹೊಣೆಗಾರಿಕೆ ಹೊತ್ತಿರುವ ಸಚಿವರನ್ನು ಬಿಟ್ಟರೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲ. ಹೀಗಾಗಿ ಬರ ನಿರ್ವಹಣೆ ಬಗ್ಗೆಯೂ ಗಮನ ಹರಿಸಲು ಆಗುತ್ತಿಲ್ಲ. ಹೀಗಾಗಿ ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸುತ್ತಿದ್ದರೂ, ಕಳೆದ ಎರಡು ತಿಂಗಳಿಂದ ಸಂಪುಟ ವಿಸ್ತರಣೆ ಮಾಡದ ಬಗ್ಗೆ ಸ್ವಪಕ್ಷದಲ್ಲೇ ಅಸಮಾಧಾನ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.==&lt;/p&gt;&lt;h3&gt;ಇಂದಾದ್ರೂ ಸಮಯ ಕೊಡ್ತಾರಾ ರಾಹುಲ್?&lt;/h3&gt;&lt;p&gt;ರಾಜ್ಯ ನಾಯಕರನ್ನು ರಾಹುಲ್&zwnj; ಗಾಂಧಿ ಅವರು ಈವರೆಗೂ ಭೇಟಿ ಆಗದಿದ್ದರೂ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಗುರುವಾರ ರಾಹುಲ್&zwnj;ಗಾಂಧಿ ಅವರು ಪಟ್ಟಿ ಅಂತಿಮಗೊಳಿಸಲಿದ್ದು, ಗುರುವಾರ ಸಂಜೆ ಅಥವಾ ಶುಕ್ರವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಲಿದೆ. ಹೀಗಾಗಿಯೇ ಸಿದ್ಧತೆಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-cabinet-expansion-delay-rahul-gandhi-unavailable-even-after-a-three-day-wait-rav/articleshow-7ggzrph"/>
        </item>
        <item>
            <title><![CDATA[Cauvery water: ಕೆಆರ್‌ಎಸ್‌ನಲ್ಲಿ ಈಗ ಉಳಿದಿರುವುದು ಕೇವಲ 8 ಟಿಎಂಸಿ ನೀರು ಮಾತ್ರ! ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ]]></title>
            <link>https://kannada.asianetnews.com/state/what-current-water-levels-in-the-karnataka-reservoirs-including-krs-today-rav/articleshow-vrdnmpz</link>
            <guid isPermaLink="true">https://kannada.asianetnews.com/state/what-current-water-levels-in-the-karnataka-reservoirs-including-krs-today-rav/articleshow-vrdnmpz</guid>
            <pubDate>Thu, 30 Jul 2026 05:55:30 +0530</pubDate>
            <description><![CDATA[ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದರೆ ಕೆಆರ್&zwnj;ಎಸ್ ಜಲಾಶಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗುವ ಆತಂಕವಿದೆ. ಪ್ರಸ್ತುತ ಕೇವಲ 8 ಟಿಎಂಸಿ ನೀರು ಲಭ್ಯವಿದ್ದು, ಹಾರಂಗಿ ಜಲಾಶಯ ಭರ್ತಿಯಾಗಿದ್ದರೂ ಕೊಡಗಿನಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kycpdqmcphs5vw7bzz1n2evc,imgname-krs-dam-1784985083532.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.30): &lt;/strong&gt;ಒಂದೆಡೆ ಕಾವೇರಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ ನಿತ್ಯ 4 ಟಿಎಂಸಿ ನೀರು ಹರಿಸುವಂತೆ ಸೂಚಿಸಿದೆ. ಆದರೆ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ ಇರುವುದು ಕೇವಲ 8 ಟಿಎಂಸಿ ನೀರು ಮಾತ್ರ. ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸ್ಸಿನಂತೆ ತಮಿಳುನಾಡಿಗೆ 15 ದಿನ ನೀರು ಹರಿಸಿದರೆ 4 ಟಿಎಂಸಿಯಷ್ಟು ನೀರು ಖಾಲಿ ಆಗಲಿದೆ. ಆಗ ಉಳಿಯೋದು ಕೇವಲ 4 ಟಿಎಂಸಿ ನೀರು ಮಾತ್ರ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;ಕಾವೇರಿ ನೀರು ವಿವಾದ:ಕರ್ನಾಟಕ ಬಂದ್&zwnj; ಆಗುತ್ತಾ? ನಾಳೆ ಹೈವೋಲ್ಟೇಜ್ ಮೀಟಿಂಗ್, ಕನ್ನಡ ಸಂಘಟನೆಗಳಿಂದ ಬಿಗ್ ಅಪ್ಡೇಟ್!&lt;/p&gt;&lt;p&gt;ಈ ಆದೇಶ ಪಾಲನೆಯಾಗುವ ಸನ್ನಿವೇಶ ಸೃಷ್ಟಿಯಾದರೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಲ್ಲಿ 91.94 ಅಡಿ ನೀರು ದಾಖಲಾಗಿದೆ. ಜಲಾಶಯಕ್ಕೆ ಕೇವಲ 2842 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 1747 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿರುವ ನೀರಿನಲ್ಲಿ ಬಳಕೆಗೆ ಸಿಗುವುದು ಕೇವಲ 8.747 ಟಿಎಂಸಿ ಅಡಿ ನೀರು ಮಾತ್ರ ಎನ್ನಲಾಗಿದೆ.&lt;/p&gt;&lt;h2&gt;ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?&lt;/h2&gt;&lt;p&gt;ಕಬಿನಿ 75% 2284 2275.79&lt;/p&gt;&lt;p&gt;ಹೇಮಾವತಿ 65% 2922 2906.60&lt;/p&gt;&lt;p&gt;ತುಂಗಭದ್ರಾ 33% 1633 1608.70&lt;/p&gt;&lt;p&gt;ಸೂಪಾ(ಮೀ.) 36% 564 536.10&lt;/p&gt;&lt;p&gt;ಕೆಆರ್&zwnj;ಎಸ್ 35% 124.80 91.94&lt;/p&gt;&lt;p&gt;ಘಟಪ್ರಭಾ 62% 2175 2147.67&lt;/p&gt;&lt;p&gt;ಲಿಂಗನಮಕ್ಕಿ 30% 1819.12 1774.15&lt;/p&gt;&lt;p&gt;ಭದ್ರಾ 53% 2158 2126.41&lt;/p&gt;&lt;p&gt;ಹಾರಂಗಿ 96% 2859 2857.88&lt;/p&gt;&lt;p&gt;ಆಲಮಟ್ಟಿ(ಮೀ.) 96% 519.60 519.29&lt;/p&gt;&lt;p&gt;ನಾರಾಯಣಪುರ(ಮೀ.) 94% 492.25 491.81&lt;/p&gt;&lt;p&gt;ಮಲಪ್ರಭಾ 40% 2079.50 2058.30&lt;/p&gt;&lt;h3&gt;1825 ಕ್ಯೂಸೆಕ್&zwnj; ಹಾರಂಗಿ ಅಣೆಕಟ್ಟೆಯಿಂದ ಬಿಡುಗಡೆ&lt;/h3&gt;&lt;p&gt;ಮಡಿಕೇರಿ: ಕೊಡಗಿನ ಹಾರಂಗಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ 8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 8.1 ಟಿಎಂಸಿ ನೀರು ಸಂಗ್ರಹವಾಗಿದೆ. 2859 ಅಡಿ ಗರಿಷ್ಠ ಮಟ್ಟದ ಹಾರಂಗಿ ಜಲಾಶಯದಲ್ಲಿ ಸದ್ಯ 2858 ಅಡಿ ನೀರು ಸಂಗ್ರಹವಾಗಿದ್ದು, 1825 ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯ ಭರ್ತಿಯಾಗಿದ್ದರೂ ಕೊಡಗಿನಲ್ಲೇ ತೀವ್ರ ಮಳೆ ಕೊರತೆ ಕಂಡು ಬಂದಿದೆ. ಕಳೆದ ವರ್ಷ ಈ ಅವಧಿಗೆ ಜಿಲ್ಲೆಯಲ್ಲಿ 2099 ಮಿಲಿ ಮೀಟರ್ ಮಳೆ ಆಗಿತ್ತು. ಆದರೆ ಈ ವರ್ಷ ಕೇವಲ 871 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ 1150ಕ್ಕೂ ಹೆಚ್ಚು ಮಿಲಿ ಮೀಟರ್ ಮಳೆ ಕೊರತೆಯಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/what-current-water-levels-in-the-karnataka-reservoirs-including-krs-today-rav/articleshow-vrdnmpz"/>
        </item>
    </channel>
</rss>
