<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 13 Sep 2026 23:09:38 +0530</lastBuildDate>
        <atom:link href="https://kannada.asianetnews.com/rss/karnataka-districts" rel="self" type="application/rss+xml"/>
        <item>
            <title><![CDATA[ಬಿಸಿಎಂ ಹಾಸ್ಟೆಲ್‌ಗೆ ಸಿಎಂ ದಿಢೀರ್ ಭೇಟಿ; ವಿದ್ಯಾರ್ಥಿಗಳ ಜೊತೆ ಮುದ್ದೆ ಸವಿದು ಕೊಟ್ಟ ಮಾತು ಏನು ಗೊತ್ತಾ?]]></title>
            <link>https://kannada.asianetnews.com/bengaluru-urban/cm-dk-shivakumar-makes-surprise-visit-to-bcm-hostel-gkn/articleshow-ueatgah</link>
            <guid isPermaLink="true">https://kannada.asianetnews.com/bengaluru-urban/cm-dk-shivakumar-makes-surprise-visit-to-bcm-hostel-gkn/articleshow-ueatgah</guid>
            <pubDate>Sun, 13 Sep 2026 23:09:33 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇವತ್ತು ದಿಢೀರ್ ಅಂತಾ ಬಿಸಿಎಂ ಹಾಸ್ಟೆಲ್&zwnj; ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳ ಜೊತೆ ಮುಕ್ತವಾಗಿ ಮಾತನ್ನಾಡಿ, ನಮ್ಮ ನಾಡಿನ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಬದ್ಧ ಎಂಬ ಭರವಸೆಯನ್ನ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2dxkstaxj29hvahhfhj0ma4,imgname-dk-shivakumar-1789321144135.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನಕಪುರ: &lt;/strong&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ತವರು ಕ್ಷೇತ್ರ ಕನಕಪುರಕ್ಕೆ ಇಂದು ಸಂಜೆ ಆಗಮಿಸಿದ್ದಾರೆ. ನಾಳೆ ಗಣೇಶ ಹಬ್ಬ ಹಾಗೂ ಕುಟುಂಬದ ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇನ್ನು ಸಿಎಂ ಅವರು ತಮ್ಮ ಪ್ರಯಾಣದ ಅವಧಿಯಲ್ಲೂ ಒಂದಷ್ಟು ಕರ್ತವ್ಯಗಳನ್ನ ನಿಭಾಯಿಸುತ್ತ ಸಾಗಿದರು.&lt;/p&gt;&lt;h2&gt;&lt;strong&gt;ಬಿಸಿಎಂ ಹಾಸ್ಟೆಲ್&zwnj;ಗೆ ದಿಢೀರ್ ಭೇಟಿ&lt;/strong&gt;&lt;/h2&gt;&lt;p&gt;ಬೆಂಗಳೂರಿನಿಂದ ಕನಕಪುರಕ್ಕೆ ಆಗಮಿಸುವ ಮಾರ್ಗಮಧ್ಯೆ ಸಿಗುವ ಬಿಸಿಎಂ ಹಾಸ್ಟೆಲ್ ಒಂದಕ್ಕೆ ದಿಢೀರ್ ಭೇಟಿ ನೀಡಿದರು. ಹಾಸ್ಟೆಲ್&zwnj;ಗೆ ಭೇಟಿ ನೀಡಿದ ಅವರು ಅಲ್ಲಿರುವ ವ್ಯವಸ್ಥೆಗಳನ್ನು ಅವಲೋಕಿಸಿದರು. ಖುದ್ದು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.&lt;/p&gt;&lt;p&gt;ನಂತರ ಹಾಸ್ಟೆಲ್&zwnj; ಆಹಾರ ವ್ಯವಸ್ಥೆಯನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳ ಜೊತೆಯಲ್ಲೇ ಕೂತು ಊಟ ಮಾಡಿದರು. ಹಾಸ್ಟೆಲ್&zwnj;ನಲ್ಲಿ ಮಾಡಲಾಗಿದ್ದ ಬಿಸಿಬಿಸಿ ಮುದ್ದೆ ಸವಿದು ಕನಕಪುರದತ್ತ ಸಾಗಿದರು. ಇನ್ನು ಹಾಸ್ಟೆಲ್ ಭೇಟಿ ವೇಳೆ ಶಿವಕುಮಾರ್ ಅವರಿಗೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಎಸ್ಪಿ ರೋಹನ್ ಜಗದೀಶ್ ಸಾಥ್ ನೀಡಿದರು.&lt;/p&gt;&lt;p&gt;ಕನಕಪುರಕ್ಕೆ ಭೇಟಿ ನೀಡಿರುವ ಶಿವಕುಮಾರ್, ಇವತ್ತು ತಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಕಾರ್ಯಕ್ರಮಗಳನ್ನ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಯಶವಂತಪುರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿಯೂ ಅಲ್ಲಿನ ಕಾರ್ಮಿಕರ ಜೊತೆ ಶಿವಕುಮಾರ್ ಮುಕ್ತವಾಗಿ ಮಾತನ್ನಾದ್ದರು.&lt;/p&gt;&lt;p&gt;ನಂತರ ಅಲ್ಲಿನ ಕ್ಯಾಂಟೀನ್&zwnj;ನಲ್ಲಿ ಕೂತು ಎಲ್ಲರೊಂದಿಗೂ ಟಿಫನ್ ಸವಿದಿದ್ದರು. ಡಿಕೆಶಿ ಅವರ ಎಪಿಎಂಸಿ ಭೇಟಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಇದೀಗ ಹಾಸ್ಟೆಲ್&zwnj;ಗೆ ದಿಢೀರ್ ಭೇಟಿ ನೀಡಿರೋದು ರಾಜ್ಯದ ಮೂಲೆ ಮೂಲೆಯಲ್ಲಿರುವ ಬಿಸಿಎಂ ಹಾಸ್ಟೆಲ್&zwnj;ಗಳ ವಿದ್ಯಾರ್ಥಿಗಳಿಗೆ ಆಶಾಭಾವ ಮೂಡಿದೆ ಎಂದೇ ಹೇಳಬಹುದು. ಜೊತೆಗೆ ಬಿಸಿಎಂ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಯಾಕೆಂದರೆ.. ರಾಜ್ಯದಲ್ಲಿ ಬಿಸಿಎಂ ಹಾಸ್ಟೆಲ್&zwnj;ಗಳ ವ್ಯವಸ್ಥೆ ಇಂದಿಗೂ ಅವ್ಯವಸ್ಥೆಯಾಗಿಯೇ ಉಳಿದಿದೆ.&lt;/p&gt;&lt;h2&gt;&lt;strong&gt;ನಮ್ಮ ನಾಡಿನ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಬದ್ಧ&lt;/strong&gt;&lt;/h2&gt;&lt;p&gt;ಭೇಟಿ ಬಳಿಕ ಟ್ವೀಟ್ ಮಾಡಿರುವ ಅವರು, ನಮ್ಮ ನಾಡಿನ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಬದ್ಧ ಎಂದು ಭರವಸೆ ನೀಡಿದ್ದಾರೆ. ಇಂದು ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ, ಸ್ವತಃ ಊಟ ಮಾಡುವ ಮೂಲಕ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದೆ. ಊಟದ ಗುಣಮಟ್ಟದಿಂದ ಹಿಡಿದು ವಸತಿ ವ್ಯವಸ್ಥೆ, ಮೂಲಭೂತ ಸೌಕರ್ಯಗಳು, ಉಚಿತ ಬಸ್ ಪಾಸ್ ಹಾಗೂ ಸ್ಕಾಲರ್&zwnj;ಶಿಪ್&zwnj; ಸೇರಿದಂತೆ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಅವರಿಂದಲೇ ಮಾಹಿತಿ ಪಡೆದುಕೊಳ್ಳಲಾಯಿತು.&lt;/p&gt;&lt;p&gt;ಕಲಬುರಗಿ, ರಾಯಚೂರು, ಹಾವೇರಿ, ಬೀದರ್, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಆಗಮಿಸಿ ವಿದ್ಯಾಭ್ಯಾಸ ಮಾಡುತ್ತಿರುವ ನಮ್ಮ ಮಕ್ಕಳು, ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಅವರ ಬದುಕಿನಲ್ಲಿ ಯಾವುದೇ ಕೊರತೆ ಅಡ್ಡಿಯಾಗಬಾರದು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ.&lt;/p&gt;&lt;p&gt;ವಿದ್ಯಾರ್ಥಿ ನಿಲಯದಲ್ಲಿನ ಕೆಲವು ಕುಂದು-ಕೊರತೆಗಳ ಕುರಿತು ಸಿಬ್ಬಂದಿ ವರ್ಗದವರು ನನ್ನ ಗಮನಕ್ಕೆ ತಂದಿದ್ದು, ಈ ಕುರಿತು ಡೆಪ್ಯೂಟಿ ಕಮಿಷನರ್&zwnj; ಹಾಗೂ ಸಿಇಓಗೆ ಹೇಳಿ ಮತ್ತೊಮ್ಮೆ ಪರಿಶೀಲನೆ ನಡೆಸಿ, ಅಗತ್ಯ ನೆರವು ಹಾಗೂ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದೇನೆ. ನಮ್ಮ ನಾಡಿನ ಪ್ರತಿಯೊಬ್ಬ ಮಗುವಿನ ಕನಸಿಗೂ ರೆಕ್ಕೆ ನೀಡುವುದು, ಅವರಿಗೆ ಉತ್ತಮ ಶಿಕ್ಷಣ ಹಾಗೂ ಉತ್ತಮ ಭವಿಷ್ಯ ರೂಪಿಸುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಬದ್ಧವಾಗಿದೆ ಎಂದು ಶಿವಕುಮಾರ್ ಭರವಸೆ ನೀಡಿದ್ದಾರೆ.&lt;/p&gt;&lt;p&gt;ವಿದ್ಯಾರ್ಥಿ ನಿಲಯದಲ್ಲಿನ ಕೆಲವು ಕುಂದು-ಕೊರತೆಗಳ ಕುರಿತು ಸಿಬ್ಬಂದಿ ವರ್ಗದವರು ನನ್ನ ಗಮನಕ್ಕೆ ತಂದಿದ್ದು, ಈ ಕುರಿತು ಡೆಪ್ಯೂಟಿ ಕಮಿಷನರ್&zwnj; ಹಾಗೂ ಸಿಇಓಗೆ ಹೇಳಿ ಮತ್ತೊಮ್ಮೆ ಪರಿಶೀಲನೆ ನಡೆಸಿ, ಅಗತ್ಯ ನೆರವು ಹಾಗೂ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದೇನೆ.ನಮ್ಮ ನಾಡಿನ ಪ್ರತಿಯೊಬ್ಬ ಮಗುವಿನ ಕನಸಿಗೂ ರೆಕ್ಕೆ ನೀಡುವುದು,&hellip; pic.twitter.com/4fhHwAnQvm&lt;/p&gt;&lt;p&gt;&mdash; DK Shivakumar (@DKShivakumar) September 13, 2026&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/cm-dk-shivakumar-makes-surprise-visit-to-bcm-hostel-gkn/articleshow-ueatgah"/>
        </item>
        <item>
            <title><![CDATA[Mysuru: ಗಣೇಶನ ಗಲಾಟೆಯಲ್ಲಿ ಟ್ರೆಂಡ್‌ ಆದ ಪೊಲೀಸ್‌; ಹಳೇ ಹೋರಾಟ ನೆನಪಿಸಿ ಹೊಸ ಟ್ವಿಸ್ಟ್ ಕೊಟ್ಟ ಮಾಜಿ ಸಂಸದ ಪ್ರತಾಪ್ ಸಿಂಹ!]]></title>
            <link>https://kannada.asianetnews.com/karnataka-districts/t-narasipura-ganeshotsava-police-inspector-dhananjaya-pratap-simha-bjp-protest-dss-bmk/articleshow-vadtnws</link>
            <guid isPermaLink="true">https://kannada.asianetnews.com/karnataka-districts/t-narasipura-ganeshotsava-police-inspector-dhananjaya-pratap-simha-bjp-protest-dss-bmk/articleshow-vadtnws</guid>
            <pubDate>Sun, 13 Sep 2026 20:20:52 +0530</pubDate>
            <description><![CDATA[&lt;p&gt;ಟಿ. ನರಸೀಪುರದಲ್ಲಿ ಗಣೇಶೋತ್ಸವದ ವೇಳೆ ಆರಂಭವಾದ ಪೊಲೀಸ್ ಇನ್ಸ್&zwnj;ಪೆಕ್ಟರ್ ಧನಂಜಯ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇನ್ಸ್&zwnj;ಪೆಕ್ಟರ್ ಅಮಾನತಿಗೆ ಪಟ್ಟು ಹಿಡಿದು ಸಿಂಹ ಧರಣಿ ನಡೆಸಿದರೆ, ಇತ್ತ ಸಿಂಹ ಅವರೇ ಹಳೆಯ ದಲಿತ ದೌರ್ಜನ್ಯ ಪ್ರಕರಣವನ್ನು ಉಲ್ಲೇಖಿಸಿ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2dkxrjnbc02shzemmex5r7w,imgname-pratap-simha-1789310984789.jpg" type="image/jpeg" height="390" width="690"/>
            <content:encoded><![CDATA[&lt;p&gt;ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆ ಮತ್ತು ಧಮ್ಕಿ ವಿಚಾರವಾಗಿ ಆರಂಭವಾದ ಖಾಕಿ ಹಾಗೂ ಖಾದಿ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಈಗ ಡಿಜಿಟಲ್ ಮೈದಾನದಲ್ಲೂ ದೊಡ್ಡ ಮಟ್ಟದ ಸಮರಕ್ಕೆ ಕಾರಣವಾಗಿದೆ. ಗಣೇಶನ ವಿಸರ್ಜನೆ ಮೆರವಣಿಗೆಯ ಹಾದಿ ಹಾಗೂ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಇನ್ಸ್&zwnj;ಪೆಕ್ಟರ್ ಧನಂಜಯ ವಿರುದ್ಧ ಬಿಜೆಪಿ ನಾಯಕರು ಕಠಿಣ ಹೋರಾಟ ರೂಪಿಸಿದ್ದಾರೆ. ಆದರೆ, ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಂಸದನ ಪೋಸ್ಟ್&zwnj; ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ.&lt;/p&gt;&lt;h2&gt;&lt;strong&gt;ಇಸ್ಪೀಟ್ ದಂಧೆ ಹಾಗೂ ಧಮ್ಕಿ ಆರೋಪ!&lt;/strong&gt;&lt;/h2&gt;&lt;p&gt;ಟಿ. ನರಸೀಪುರ ಪೊಲೀಸ್ ಇನ್ಸ್&zwnj;ಪೆಕ್ಟರ್ ಧನಂಜಯ ವಿರುದ್ಧ ಬಿಜೆಪಿ ನಾಯಕರು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ಇನ್ಸ್&zwnj;ಪೆಕ್ಟರ್ ಕ್ಷೇತ್ರದಲ್ಲಿ ಅಕ್ರಮ ಇಸ್ಪೀಟ್ (ಜೂಜು) ದಂಧೆಯ ಕಿಂಗ್&zwnj;ಪಿನ್ ಆಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಗಣೇಶೋತ್ಸವದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಧಮ್ಕಿ ಹಾಕಿದ್ದಾರೆ ಎಂಬುದು ಅವರ ಪ್ರಮುಖ ಆರೋಪ. ಈ ಹಿನ್ನೆಲೆಯಲ್ಲಿ ಇನ್ಸ್&zwnj;ಪೆಕ್ಟರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು (Suspension) ಎಂದು ಪಟ್ಟು ಹಿಡಿದು, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳೀಯ ಮುಖಂಡರು ಅಹೋರಾತ್ರಿ ಧರಣಿ ಆರಂಭಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ಸಂಧಾನ ಮಾತುಕತೆಯೂ ವಿಫಲವಾಗಿ ಹೋರಾಟ ತೀವ್ರಗೊಂಡಿತ್ತು.&lt;/p&gt;&lt;h3&gt;&lt;strong&gt;ಹಳೆಯ ದಸಂಸ ಹೋರಾಟ ನೆನಪಿಸಿದ ಪ್ರತಾಪ್ ಸಿಂಹ!&lt;/strong&gt;&lt;/h3&gt;&lt;p&gt;ತಮ್ಮ ಪ್ರತಿಭಟನೆ ಮತ್ತು ಆರೋಪಗಳ ವಿರುದ್ಧ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಯಾಗುತ್ತಿದ್ದಂತೆ, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಡಿಜಿಟಲ್ ವೇದಿಕೆಯಲ್ಲೇ ತಿರುಗೇಟು ನೀಡಿದ್ದಾರೆ. ಈ ಹಿಂದೆ ಇದೇ ಟಿ. ನರಸೀಪುರ ಠಾಣೆಯಲ್ಲಿ ದಲಿತ ಯುವಕರ ಮೇಲೆ ನಡೆದಿತ್ತು ಎನ್ನಲಾದ ಪೊಲೀಸ್ ದೌರ್ಜನ್ಯದ ವರದಿಗಳನ್ನು ಹಾಗೂ ದಲಿತ ಸಂಘರ್ಷ ಸಮಿತಿ (DSS) ಮಾಡಿದ್ದ ಹೋರಾಟದ ಪತ್ರಿಕಾ ತುಣುಕುಗಳನ್ನು ಪ್ರತಾಪ್ ಸಿಂಹ ತಮ್ಮ ಎಕ್ಸ್&zwnj; ಪೋಸ್ಟ್&zwnj;ನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h3&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ 'ಖಾಕಿ'!&lt;/strong&gt;&lt;/h3&gt;&lt;p&gt;ಬೀದಿ ಹೋರಾಟ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅಂತರ್ಜಾಲದಲ್ಲಿ 'ವಿಸ್ಟ್ಯಾಂಡ್ ವಿಥ್ ಧನಂಜಯ್' ಎಂಬ ಅಭಿಯಾನ ಜೋರಾಗಿ ಹರಿದಾಡಲು ಶುರುವಾಯಿತು. ಅನೇಕ ನೆಟ್ಟಿಗರು ಹಾಗೂ ಬೆಂಬಲಿಗರು ಪೊಲೀಸ್ ಇಲಾಖೆಯ ಕರ್ತವ್ಯದ ಪರವಾಗಿ ಹಾಗೂ ಇನ್ಸ್&zwnj;ಪೆಕ್ಟರ್ ಬೆಂಬಲಕ್ಕೆ ನಿಂತು ಪೋಸ್ಟ್&zwnj;ಗಳನ್ನು ಹಾಕಿದರು. ಗಣೇಶನ ಗಲಾಟೆಯ ನಡುವೆಯೇ ಸೋಷಿಯಲ್ ಮೀಡಿಯಾದಲ್ಲಿ ಪೊಲೀಸ್ ಅಧಿಕಾರಿ ದಿಢೀರ್ ಟ್ರೆಂಡ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.&lt;/p&gt;&lt;h3&gt;&lt;strong&gt;ತೀವ್ರ ಜಿದ್ದಾದ್ದಿಗೆ ಮುಂದಾದ ಕೇಸ್!&lt;/strong&gt;&lt;/h3&gt;&lt;p&gt;DSS ಸ್ನೇಹಿತರೇ, ಪ್ರತಾಪ್ ಸಿಂಹನ ವಿರುದ್ಧ ಘೋಷಣೆ ಕೂಗುವ ಅಥವಾ ವಿರೋಧಿಸುವ ಮೊದಲು, ಇದೇ ಇನ್ಸ್&zwnj;ಪೆಕ್ಟರ್ ಹಾಗೂ ಸಿಬ್ಬಂದಿ ನಡೆಸಿದ್ದ ದೌರ್ಜನ್ಯದ ವಿರುದ್ಧ ನೀವೇ ಮಾಡಿದ್ದ ಹೋರಾಟವನ್ನು ಒಮ್ಮೆ ನೆನಪು ಮಾಡಿಕೊಳ್ಳಿ&quot; ಎಂದು ಕರೆ ನೀಡಿದ್ದಾರೆ. ಆ ಮೂಲಕ, ಇನ್ಸ್&zwnj;ಪೆಕ್ಟರ್ ಮೇಲಿರುವ ಆರೋಪಗಳು ಕೇವಲ ಇಂದಿನ ರಾಜಕೀಯ ಅಥವಾ ಗಣೇಶೋತ್ಸವದ ವಿವಾದಕ್ಕೆ ಸೀಮಿತವಲ್ಲ, ಈ ಹಿಂದೆಯೂ ಸಾರ್ವಜನಿಕರ ಮೇಲೆ ಅಮಾನವೀಯ ಹಲ್ಲೆ ನಡೆದಿದೆ ಎಂಬುದನ್ನು ದಲಿತ ಸಂಘಟನೆಗಳಿಗೆ ನೆನಪಿಸುವ ಯತ್ನ ಮಾಡಿದ್ದಾರೆ. ಗಣೇಶನ ಗಲಾಟೆಯಿಂದ ಶುರುವಾದ ವಿವಾದವು ಇಸ್ಪೀಟ್ ದಂಧೆಯ ಆರೋಪ, ಸಸ್ಪೆಂಡ್&zwnj;ಗೆ ಬಿಗಿಪಟ್ಟು, ಸೋಶಿಯಲ್ ಮೀಡಿಯಾ ಟ್ರೆಂಡಿಂಗ್ ಹಾಗೂ ಹಳೆಯ ದಲಿತ ದೌರ್ಜನ್ಯದ ವರದಿಗಳ ಮರುಪ್ರಸಾರದ ಮೂಲಕ ಈಗ ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/t-narasipura-ganeshotsava-police-inspector-dhananjaya-pratap-simha-bjp-protest-dss-bmk/articleshow-vadtnws"/>
        </item>
        <item>
            <title><![CDATA[ಯಾರೋ ಇವೆಲ್ಲ, ಬಾರ್ ಮುಂದೆಯೇ ಕೂತು ಗುಂಡು ತುಂಡು ಪಾರ್ಟಿ, ರೊಚ್ಚಿಗೆದ್ದ ಜನ]]></title>
            <link>https://kannada.asianetnews.com/bengaluru-urban/an-incident-where-hundreds-of-people-held-a-drinking-party-right-in-front-of-a-bar-near-marasur-gate-in-anekal-gkn/articleshow-xmtgt51</link>
            <guid isPermaLink="true">https://kannada.asianetnews.com/bengaluru-urban/an-incident-where-hundreds-of-people-held-a-drinking-party-right-in-front-of-a-bar-near-marasur-gate-in-anekal-gkn/articleshow-xmtgt51</guid>
            <pubDate>Sun, 13 Sep 2026 19:49:08 +0530</pubDate>
            <description><![CDATA[&lt;p&gt;ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತ ಬಾರ್ ಮುಂಭಾಗವೇ ಕೂತು ಎಣ್ಣೆ ಪಾರ್ಟಿ ಮಾಡಿದ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಮರಸೂರು ಗೇಟ್ ಬಳಿ ನಡೆದಿದೆ. ಹಬ್ಬದ ನೆಪದಲ್ಲಿ ಬಾರ್ ಮುಂದೆ ಕೂತು ಮೋಜು ಮಸ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2dj4zkj67fp0h3jz3vk8nh3,imgname-anekal-drinking-party-1789309124210.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆನೇಕಲ್ : &lt;/strong&gt;ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತ ಬಾರ್ ಮುಂಭಾಗವೇ ಕೂತು ಎಣ್ಣೆ ಪಾರ್ಟಿ ಮಾಡಿದ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಮರಸೂರು ಗೇಟ್ ಬಳಿ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ವಿಚಿತ್ರ ಪ್ರಕರಣ?&lt;/strong&gt;&lt;/h2&gt;&lt;p&gt;ಅಂದಹಾಗೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನೂರಾರು ಮಂದಿ ರಸ್ತೆ ಬದಿಯ ಬಾರ್ ಮುಂಭಾಗದಲ್ಲಿ ಕೂತು ಎಣ್ಣೆ ಪಾರ್ಟಿ ಮಾಡಿ ಮಕ್ಕಳಿಗೆ, ಹೆಣ್ಮಕ್ಕಳಿಗೆ, ರಸ್ತೆಯಲ್ಲಿ ಓಡಾಡುವ ನೂರಾರು ದಾರಿಹೋಕರಿಗೆ ಇವರು ತೊಂದರೆಯನ್ನ ನೀಡಿದ ಆರೋಪ ಕೇಳಿಬಂದಿದೆ .&lt;/p&gt;&lt;h2&gt;&lt;strong&gt;ಯಾರೋ ಇವೆಲ್ಲ?&lt;/strong&gt;&lt;/h2&gt;&lt;p&gt;ಬಾರ್ ಮುಂದೆಯೇ ಕೂತು ಎಣ್ಣೆ ಜೊತೆ ಶೇಂಗಾ, ಸೈಡ್ಸ್ ಸವಿಯುತ್ತ ಅಮಲನ್ನು ಏರಿಸಿಕೊಂಡವರು ನಮ್ಮ ಕರ್ನಾಟಕದ ಮಂದಿ ಅಲ್ಲ. ಬದಲಾಗಿ ದೂರದ ಬಿಹಾರ, ಜಾರ್ಖಂಡ್, ಅಸ್ಸಾಂ ಹಾಗೂ ಮಣಿಪುರದ ಜನರು. ಯಾಕೆ ಅವರು ಹೀಗೆ ಮಾಡಿದರು ಅಂತಾ ನೋಡೋದಾದ್ರೆ ಅವರಿಗೆ ಹಬ್ಬ.&lt;/p&gt;&lt;h2&gt;&lt;strong&gt;ಕರ್ಮಯೋಗ ಹಬ್ಬ&lt;/strong&gt;&lt;/h2&gt;&lt;p&gt;ಮರಸೂರು ಗೇಟ್ ಬಳಿ ಇರುವ ಬಾರ್ ಮುಂದೆ ಕೂತು ಮೋಜು ಮಸ್ತಿ ಮಾಡಿದವರೆಲ್ಲ ಬಿಹಾರ, ಜಾರ್ಖಂಡ್, ಅಸ್ಸಾಂ ಹಾಗೂ ಮಣಿಪುರ ಮೂಲದವರು. ಆ ಭಾಗದಲ್ಲಿ ಕರ್ಮಯೋಗ ಹಬ್ಬ ಎಂಬ ಹಬ್ಬವನ್ನು ಆಚರಿಸುತ್ತಾರೆ. ಹಬ್ಬ ಹಿನ್ನೆಲೆಯಲ್ಲಿ ಕುಡಿದು ಮಜಾ ಮಾಡುವ ಸಲುವಾಗಿ ದೊಡ್ಡ ಎಣ್ಣೆ ಪಾರ್ಟಿ ಮಾಡಿ ಅವಾಂತರ ಸೃಷ್ಟಿಸಿದ್ದಾರೆ.&lt;/p&gt;&lt;p&gt;ಮನೆಯಲ್ಲಿ ಪೂಜೆ ಮಾಡಿ ಬಾರ್&zwj;&zwnj;ಗೆ ಬಂದು ಎಣ್ಣೆ ತೆಗೆದುಕೊಂಡು ಪಾರ್ಟಿ ಮಾಡಿದ್ದಾರೆ. ಇನ್ನು ಈ ಪರಭಾಷಿಕರ ಮೋಜು ಮಸ್ತಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಮೋಜು ಮಸ್ತಿ ಮಾಡೋದು ಸರಿಯಲ್ಲ. ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕೂತು ಹೀಗೆ ಮಾಡಿದರೆ ಹೇಗೆ? ರಸ್ತೆಯಲ್ಲಿ ಓಡಾಡಲು ಹೆಣ್ಮಕ್ಕಳು, ಮಕ್ಕಳು ಮುಜುಗರ ಅನುಭವಿಸುತ್ತಿದ್ದಾರೆ. ಪಾರ್ಟಿ ವೇಳೆ ಬರುವ ಕೆಲವು ಡೈಲಾಗ್&zwnj;ಗಳು ಸಾರ್ವಜನಕರಿಗೆ ಕೇಳಿಸಿಕೊಳ್ಳಲು ಆಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.&lt;/p&gt;&lt;h2&gt;&lt;strong&gt;ಕಣ್ಮುಚ್ಚಿ ಕೂತ ಅಧಿಕಾರಿಗಳು&lt;/strong&gt;&lt;/h2&gt;&lt;p&gt;ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಏನೂ ನಡೆದೇ ಇಲ್ಲ ಎನ್ನುವಂತೆ ಕೂತಿರೋದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳಾಗಲಿ, ಪೊಲೀಸ್ ಇಲಾಖೆಯವವರು ಯಾರೇ ಆಗಲಿ ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಾರ್ ಮುಂದೆಯೇ ಕಂಠಪೂರ್ತಿ ಕುಡಿದ ತೇಲಾಡಿದರೂ ಬಾರ್ ಸಿಬ್ಬಂದಿಯೂ ಸುಮ್ಮನೆ ಕೂತಿರೋದು ಕೂಡ ಪ್ರಶ್ನೆಯಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ವೈರಲ್ ಆಯ್ತು ಫೋಟೋ, ವಿಡಿಯೋಗಳು&lt;/strong&gt;&lt;/h2&gt;&lt;p&gt;ಈ ಮೋಜು ಮಸ್ತಿಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿವೆ. ವಿಡಿಯೋ ನೋಡಿದ ಜನರು ಇದೆಂಥ ಕಾಲ ಬಂತು ಮಾರಾಯ್ರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/an-incident-where-hundreds-of-people-held-a-drinking-party-right-in-front-of-a-bar-near-marasur-gate-in-anekal-gkn/articleshow-xmtgt51"/>
        </item>
        <item>
            <title><![CDATA[ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಗಿದ್ದೇ ತಪ್ಪಾಯ್ತು, ಚಿನ್ನ ಕದ್ದಳೆಂದ ಆರೋಪ ಬಡಪಾಯಿ ನೀಲವ್ವಗೆ ಪೊಲೀಸರಿಂದ ಕರೆಂಟ್ ಶಾಕ್!]]></title>
            <link>https://kannada.asianetnews.com/karnataka-districts/woman-allegedly-tortured-with-electric-shock-over-gold-theft-case-in-varamahalakshim-festival-rav/articleshow-abd62o0</link>
            <guid isPermaLink="true">https://kannada.asianetnews.com/karnataka-districts/woman-allegedly-tortured-with-electric-shock-over-gold-theft-case-in-varamahalakshim-festival-rav/articleshow-abd62o0</guid>
            <pubDate>Sun, 13 Sep 2026 17:53:55 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯಲ್ಲಿ, ವರಮಹಾಲಕ್ಷ್ಮಿ ಹಬ್ಬದಂದು ದೇವರ ಚಿನ್ನ ಕದ್ದ ಆರೋಪದ ಮೇಲೆ ನೀಲವ್ವ ಎಂಬ ಬಡ ಮಹಿಳೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಂಕಾಪುರ ಪೊಲೀಸರು ಕರೆಂಟ್ ಶಾಕ್ ನೀಡಿ ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ, ತೀವ್ರ ಅಸ್ವಸ್ಥಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2dba4fc1me684b11h9meg1s,imgname-electric-shock-1789301953004.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ (ಸೆ.13): ದೇವರ ಮೇಲಿನ ಚಿನ್ನ ಕದ್ದರೆಂಬ ಆರೋಪದ ಮೇಲೆ ಬಡ ಮಹಿಳೆಗೆ ಬಂಕಾಪುರ ಪೊಲೀಸರು ಕರೆಂಟ್ ಶಾಕ್ ಟಾರ್ಚರ್ ನೀಡಿದ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಡ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಕರೆಂಟ್ ಶಾಕ್ ಟಾರ್ಚರ್&zwnj;ಗೆ ನೀಲವ್ವ ಎಂಬ ಮಹಿಳೆ ತೀವ್ರ ಅಸ್ವಸ್ಥಗೊಂಡು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;p&gt;ವರಮಹಾಲಕ್ಷ್ಮಿ ಹಬ್ಬಕ್ಕೆ ಪಕ್ಕದ ಮನೆಗೆ ಹೋಗಿದ್ದೇ ತಪ್ಪಾಯ್ತು!&lt;/p&gt;&lt;h2&gt;ದೇವರ ಮೇಲಿನ ಚಿನ್ನ ಕಳವು&lt;/h2&gt;&lt;p&gt;ಕಳೆದ ವರಮಹಾಲಕ್ಷ್ಮಿ ಹಬ್ಬದ ದಿನ ಪಕ್ಕದ ಮನೆಯಲ್ಲಿ ಪೂಜೆ ಕಾರ್ಯಕ್ರಮ ಇತ್ತು. ಅಕ್ಕಪಕ್ಕದ ಮನೆಯವರು ಎಂದಮೇಲೆ ಪೂಜೆ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು ಸಾಮಾನ್ಯ. ಅದೇ ರೀತಿ ನಾಗರಾಜ್ ಸುಂಕದ ಎಂಬುವವರ ಮನೇಲಿ ವರಮಹಾಲಕ್ಷ್ಮಿ ಪೂಜೆ ಬರುವಂತೆ ಕರೆದಿದ್ದರಂತೆ. ಹೀಗಾಗಿ ನೀಲಮ್ಮ ಹಬ್ಬದ ದಿನ ಅವರ ಮನೆಗೆ ಹೋಗಿದ್ದಾರೆ. ನೀಲಮ್ಮ ಅಷ್ಟೇ ಅಲ್ಲದೆ ಆಕೆಯೊಂದಿಗೆ ನೆರೆ ಮನೆಯ ಸುಮಾರು 11 ಜನ ಮಹಿಳೆಯರು ಉಡಿ ತುಂಬಿಸಿಕೊಳ್ಳಲು ಹೋಗಿದ್ರು. ಆದ್ರೆ ಈಗ ಹೋಗಿದ್ದೇ ತಪ್ಪಾಯ್ತು ಅನ್ನಿಸುವಂತಿದೆ ನೀಲಮ್ಮ ಪರಿಸ್ಥಿತಿ.&lt;/p&gt;&lt;h3&gt;ವಿಚಾರಣೆ ನೆಪದಲ್ಲಿ ಕರೆಂಟ್ ಶಾಕ್!&lt;/h3&gt;&lt;p&gt;ನಾಗರಾಜ ಸುಂಕದ ಕುಟುಂಬಸ್ಥರು ನೆರೆಮನೆಯವರು ಸೇರಿ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ಭಾಗಿಯಾಗಿದ್ರು. ಇಷ್ಟು ಜನರ ನಡುವೆ ದೇವರ ಮೇಲಿನ ಚಿನ್ನದ ಅಭರಣ ಕಳ್ಳತನವಾಗಿದೆ. ಯಾರು ಕದ್ದರೆಂದು ತಿಳಿದಿಲ್ಲ. ಆದರೆ ಈ ಬಗ್ಗೆ ನಾಗರಾಜ್ ಸುಂಕದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬಂಕಾಪುರ ಪೊಲೀಸರಿಗೆ ಮನೆಗೆ ಬಂದಿದ್ದವರ ಹೆಸರು ಮನೆ ವಿಳಾಸ ಎಲ್ಲ ಮಾಹಿತಿ ನೀಡಿದ್ದಾರೆ. ಅದರಂತೆ ನೀಲವ್ವ ಹೋಗಿದ್ದರಿಂದ ಪೊಲೀಸರು ಅನುಮಾನಗೊಂಡು ಆಕೆಯನ್ನ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ಕರೆಂಟ್ ಶಾಕ್ ಕೊಟ್ತಿದ್ದಾರೆ. ಕರೆಂಟು ಶಾಕ್ ನಾನು ಕದ್ದಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ಹಿಂಸೆ ನೀಡಿದ್ದಾರೆಂದು ಬಂಕಾಪುರ ಪೊಲೀಸರ ವಿರುದ್ಧ ನೀಲವ್ವ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.&lt;/p&gt;&lt;h3&gt;ಕರೆಂಟ್ ಶಾಕ್&zwnj;ನಿಂದ ನೀಲವ್ವ ಅಸ್ವಸ್ಥ&lt;/h3&gt;&lt;p&gt;ಪಕ್ಕದ ಮನೆಯವರು ಕರೆದ್ರು ಅಂತಾ ವರಮಹಾಲಕ್ಹ್ಮಿ ಹಬ್ಬಕ್ಕೆ ಹೊಗಿ 'ಕಳ್ಳಿ' ಅನ್ನಿಸಿಕೊಳ್ಳಬೇಕಾಗಿದ್ದು ಒಂದು ಕಡೆ, ಚಿನ್ನ ಕಳ್ಳತನ ಮಾಡದಿದ್ರೂ ಅನುಮಾನಗೊಂಡ ಪೊಲೀಸರು ಬಡಪಾಯಿ ಮಹಿಳೆಗೆ ಕರೆಂಟ್ ಶಾಕ್ ನೀಡಿದ್ದರಿಂದ ಆಘಾತಕ್ಕೊಳಗಾಗಿದ್ದಾರೆ. ಸದ್ಯ ತೀವ್ರ ಅಸ್ವಸ್ಥಗೊಂಡಿರುವ ನೀಲವ್ವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ನಾನು ಚಿನ್ನ ಕದ್ದಿಲ್ಲ ಸ್ವಾಮಿ. ನಾವು ಬಡವರು, ಹಣ ಎಲ್ಲಿಂದ ತರಬೇಕು..? ಅಂತಾ ನೋವಿನಿಂದ ನೀಲ್ಲವ್ವ ಕಣ್ಣೀರು ಹಾಕುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/woman-allegedly-tortured-with-electric-shock-over-gold-theft-case-in-varamahalakshim-festival-rav/articleshow-abd62o0"/>
        </item>
        <item>
            <title><![CDATA[Bengaluru: ನದಿ ಸ್ವಚ್ಛಗೊಳಿಸಿ ಖ್ಯಾತಿ ಪಡೆದಿದ್ದ ಬಿಟ್ಟು ತಬಾಹಿಗೆ ಶಾಕ್! ಬೆಂಗಳೂರಿನ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನದಲ್ಲಿ ಏನಾಯ್ತು?]]></title>
            <link>https://kannada.asianetnews.com/karnataka-districts/bittu-tabahi-in-bengaluru-for-clean-up-turahalli-campaign-sns/articleshow-ihh1s52</link>
            <guid isPermaLink="true">https://kannada.asianetnews.com/karnataka-districts/bittu-tabahi-in-bengaluru-for-clean-up-turahalli-campaign-sns/articleshow-ihh1s52</guid>
            <pubDate>Sun, 13 Sep 2026 17:41:19 +0530</pubDate>
            <description><![CDATA[ಏಕಾಂಗಿಯಾಗಿ ನದಿ ಸ್ವಚ್ಛಗೊಳಿಸಿ ಖ್ಯಾತರಾದ ಪರಿಸರ ಕಾರ್ಯಕರ್ತ ಬಿಟ್ಟು ತಬಾಹಿ, ಬೆಂಗಳೂರಿನ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನದಲ್ಲಿ ಭಾಗವಹಿಸಿದ್ದರು. ಈ ವೇಳೆ, ಪ್ಲಾಸ್ಟಿಕ್ ತ್ಯಾಜ್ಯದ ಜೊತೆಗೆ ವೈದ್ಯಕೀಯ ತ್ಯಾಜ್ಯ ಮತ್ತು ಪ್ರಾಣಿಯ ಮೃತದೇಹವನ್ನು ಕಂಡು ಅವರು ತೀವ್ರ ಆಘಾತ ಮತ್ತು ಬೇಸರ ವ್ಯಕ್ತಪಡಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m1tqtwch48t8bgrqerz2zwjk,imgname-bittu-tabahi-aka-surendra-singh-1788677550480.jpg" type="image/jpeg" height="390" width="690"/>
            <content:encoded><![CDATA[&lt;p&gt;ಏಕಾಂಕಿಯಾಗಿ ನದಿಯನ್ನು ಸ್ವಚ್ಛಗೊಳಿಸಿ ವಿಶ್ವಖ್ಯಾತಿ ಪಡೆದುಕೊಂಡಿದ್ದ ಮಧ್ಯಪ್ರದೇಶ ಮೂಲದ ಪರಿಸತ ಕಾರ್ಯಕರ್ತ ಬಿಟ್ಟು ತಬಾಹಿ ಎಂದೇ ಖ್ಯಾತಿ ಪಡೆದಿರುವ ಸುರೇಂದ್ರ ಸಿಂಗ್ ಚೌಧರಿ, ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿನ ಕ್ಲೀನ್ ಅಪ್ ತುರಹಳ್ಳಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದ, ಬಿಟ್ಟು ತಬಾಹಿಗೆ ಬಿಗ್ ಶಾಕ್ ಎದುರಾಗಿತ್ತು. ಅಸಲಿಗೆ ಏನಾಯ್ತು ಅಂತ ನೋಡುವುದಾದರೆ..&lt;/p&gt;&lt;p&gt;ಮಧ್ಯಪ್ರದೇಶದ ಬಳಿಕ ಮುಂದಿನ ಸ್ವಚ್ಛತಾ ಅಭಿಯಾನಕ್ಕೆ ಯಾವ ರಾಜ್ಯಕ್ಕೆ ಮೊದಲು ಭೇಟಿ ನೀಡಬೇಕು ಎಂದು ಬಿಟ್ಟು ತಬಾಹಿ ಕೆಲ ದಿನಗಳ ಹಿಂದೆ ತಮ್ಮ ಫಾಲೋವಾರ್ಸ್ಗೆ ಕೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಿಟ್ಟು, ಬೆಂಗಳೂರಿಗೆ ಆಗಮಿಸಿ ಬನಶಂಕರಿ 6ನೇ ಹಂತದ ತುರಹಳ್ಳಿ ಅರಣ್ಯ ಹೊರವಲಯದಲ್ಲಿ ನಡೆದ ಅಭಿಯಾನದಲ್ಲಿ ಭಾಗಿಯಾಗಿದ್ದರು.&lt;/p&gt;&lt;h2&gt;ತುರಹಳ್ಳಿ ಅರಣ್ಯದಲ್ಲಿ ಬಿಟ್ಟು ತಬಾಹಿಗೆ ಕಾದಿದ್ದೇನು?&lt;/h2&gt;&lt;p&gt;ಪ್ರಸಿದ್ಧ ಪರಿಸರವಾಗಿ ಎಎನ್ ಯಲ್ಲಪ್ಪ ರೆಡ್ಡಿ ಮತ್ತು ಇಂಡಿಯಾ ಪ್ಲಾಗ್ ರನ್ ರಾಮಕೃಷ್ಣ ಗಣೇಶನ್ ಅವರೊಂದಿಗೆ ಇಂಡಸ್ ಹರ್ಬ್ಸ್ ಸಹಯೋಗದೊಂದಿಗೆ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನ ನಡೆಸಲಾಗಿತ್ತು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನೆರವಿನೊಂದಿಗೆ ನಡೆದ ಈ ಅಭಿಯಾನದಲ್ಲಿ ದಿ ಇಂಡಿಯನ್ ಗ್ಯಾರೇಜ್ ಕಂಪನಿ ಇದನ್ನು ಆಯೋಜಿಸಿತ್ತು.&lt;/p&gt;&lt;p&gt;ಅಭಿಯಾನದಲ್ಲಿ ಭಾಗಿಯಾಗಿದ್ದ ಬಿಟ್ಟು ತಬಾಹಿ, ಮೀಸಲು ಅರಣ್ಯದಲ್ಲಿ ಕಂಡ ವಸ್ತುಗಳನ್ನು ಕಂಡು ಶಾಕ್&zwnj;ಗೆ ಒಳಗಾಗಿದ್ದರಂತೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಟ್ಟು, ಮೀಸಲು ಅರಣ್ಯ ಪ್ರದೇಶದಲ್ಲಿ ಕ್ವಿಂಟಾಲ್ ಗಟ್ಟಲೆ ಕೋಳಿ ತ್ಯಾಜ್ಯ, ಮನೆಯ ತ್ಯಾಜ್ಯ, ಡಫಲ್ ಚೀಲದಲ್ಲಿ ತುಂಬಿದ್ದ ನಾಯಿ ಮೃತದೇಹ, ಮೆಡಿಕಲ್ ವೇಸ್ಟ್, ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಕಂಡು ನಾನು ದಿಗ್ಭ್ರಮೆಗೊಂಡೆ. ನೀವು ಎಲ್ಲಿಯೇ ಹೋದರು ನಮಗೆ ನಾಗರಿಕ ಪ್ರಜ್ಞೆ ಇಲ್ಲ. ಸಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು ಎಂಬ ಕನಿಷ್ಠ ಆದ್ಯತೆ ಇಲ್ಲ. ಅಭಿಯಾನದಲ್ಲಿ ಮೊದಲು ಭಾಗಿಯಾಗಿದ್ದ ಸಂದರ್ಭದಲ್ಲಿ ಕೇವಲ ಪ್ಲಾಸ್ಟಿಕ್ ತ್ಯಾಜ್ಯ ಇರಬಹುದು ಎಂದುಕೊಂಡಿದ್ದೆ, ಆದರೆ ಆ ಪ್ಲಾಸ್ಟಿಕ್ ರಾಶಿಗಳ ನಡುವೆ ಮೃತದೇಹ ಹಾಗೂ ವೈದ್ಯಕೀಯ ತ್ಯಾಜ್ಯಗಳು ಕಂಡು ಶಾಕ್ ಎಂದು ಹೇಳಿದ್ದಾರೆ.&lt;/p&gt;&lt;p&gt;ಇನ್ನು, ಕ್ಲೀನ್ ಅಪ್ ತುರಹಳ್ಳಿ ಅಭಿಯಾನದ ಭಾಗವಾಗಿ ಬೆಳಗ್ಗೆ 08 ಗಂಟೆಗೆ ಆರಂಭವಾದ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು ಎರಡು ಟನ್ಗೂ ಹೆಚ್ಚು ತ್ಯಾಜ್ಯ ತೆರವು ಮಾಡಲಾಗಿದೆ. ಸಂಜೆ ನಾಲ್ಕು ಗಂಟೆ ವರೆಗೂ ಈ ಕಾರ್ಯ ನಡೆಸಲಾಗಿದೆ. 21 ವರ್ಷದ ವಿದ್ಯಾರ್ಥಿ ಬಿಟ್ಟು, ಮಧ್ಯಪ್ರದೇಶದ ರಾಜ್&zwnj;ಗಢ ಜಿಲ್ಲೆಯ ಬಿಯೋರಾದಲ್ಲಿ ಅಜ್ನರ್ ನದಿಯನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಏಕಾಂಗಿಯಾಗಿ ಮಾಡಿದ್ದರು. ಇದರ ಪ್ರಯತ್ನ ಇಡೀ ವಿಶ್ವದ ಗಮನ ಸೆಳೆಯಿತು. ಇದಕ್ಕಾಗಿ ತಮ್ಮ ಸ್ವತಃ ದುಡಿಕೆಯ 30 ಸಾವಿರ ರೂಪಾಯಿ ಹಣವನ್ನು ಖರ್ಚು ಮಾಡಿದ್ದರು. ನದಿಯಲ್ಲಿ ಈಜಲು ಕೂಡ ಬಾರದ ಬಿಟ್ಟು, ಸುಮಾರು ಮೂರು ಪ್ರಮುಖ ಘಾಟ್ ಗಳನ್ನು ಸ್ವಚ್ಛಗೊಳಿಸಿ ಇತರರಿಗೆ ಮಾದರಿಯಾಗಿದ್ದರು.&lt;/p&gt;&lt;p&gt;ಕ್ಲೀನ್ ಅಪ್ ತುರಹಳ್ಳಿ ಅಭಿಯಾನದ ಸಂದರ್ಭದಲ್ಲಿ ಸ್ವಯಂ ಸೇವಕರಿಗೆ ವಿವಿಧ ಸಸಿಗಳನ್ನು ವಿತರಣೆ ಮಾಡಿದ ಬಿಟ್ಟು, ಬೆಂಗಳೂರು ಭಾರತದ ತಂತ್ರಜ್ಞಾನದ ರಾಜಧಾನಿಯಾಗಿದೆ. ಇಲ್ಲಿನ ಹಸಿರು ಸ್ಥಳಗಳು ಕಸ ಮುಕ್ತವಾಗಿರುತ್ತದೆ ಎಂಬ ಭಾವನೆ ನನಗೆ ಇತ್ತು. ಆದರೆ ಇಲ್ಲಿ ರಸ್ತೆ ಉದ್ದಕ್ಕೂ ತ್ಯಾಜ್ಯವನ್ನು ಸುರಿಯಲಾಗಿದೆ. ನಮ್ಮ ಕೈಗಳಿಂದ ಅಷ್ಟು ತ್ಯಾಜ್ಯ ತೆರವು ಮಾಡಲು ಆಗಲಿಲ್ಲ. ಮರಗಳು ಮತ್ತು ಕಾಡುಗಳಿಗೆ ಮಾತ್ರ ವೈ ಪೈ ಸಾಮರ್ಥ್ಯ ಹೋಂದಿದ್ದರೆ, ಜನರು ಆಗ ಪರಿಸರವನ್ನು ಇಷ್ಟು ನಿರ್ಲಕ್ಷ್ಯ ಮಾಡುತ್ತಿರಲಿಲ್ಲವೇನೋ ಎಂದು ಬೇಸರ ಹೊರ ಹಾಕಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/bittu-tabahi-in-bengaluru-for-clean-up-turahalli-campaign-sns/articleshow-ihh1s52"/>
        </item>
        <item>
            <title><![CDATA[ಈ ಜಿಲ್ಲೆಯ ಗಣೇಶ ವಿಗ್ರಹಗಳಿಗೆ ಆಂಧ್ರ, ತೆಲಂಗಾಣದಲ್ಲೂ ಭರ್ಜರಿ ಬೇಡಿಕೆ: ಇಲ್ಲಿದೆ ಕಾರಣ!]]></title>
            <link>https://kannada.asianetnews.com/karnataka-districts/koppal-gangavathi-ganesh-chaturthi-ganesha-idols-draw-demand-from-andhra-pradesh-and-telangana-gvd/articleshow-emy078i</link>
            <guid isPermaLink="true">https://kannada.asianetnews.com/karnataka-districts/koppal-gangavathi-ganesh-chaturthi-ganesha-idols-draw-demand-from-andhra-pradesh-and-telangana-gvd/articleshow-emy078i</guid>
            <pubDate>Sun, 13 Sep 2026 17:14:20 +0530</pubDate>
            <description><![CDATA[&lt;p&gt;ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಗಂಗಾವತಿ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶ ವಿಗ್ರಹಗಳು, ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಗ್ರಹ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d99pp5t5gzgcrk35njhjb8,imgname-nkn-1789299841733.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಸೆ.13): &lt;/strong&gt;ಗೌರಿ-ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಗಂಗಾವತಿ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶ ವಿಗ್ರಹಗಳು, ಹೂವು-ಹಣ್ಣುಗಳು ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದು, ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರ ಚಟುವಟಿಕೆಗಳು ಗರಿಗೆದರಿವೆ. ಇದರ ಬೆನ್ನಲ್ಲೇ ಗಣೇಶ ವಿಗ್ರಹಗಳು ಸೇರಿದಂತೆ ವಿವಿಧ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ.&lt;/p&gt;&lt;p&gt;&lt;strong&gt;ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರು&lt;/strong&gt;&lt;/p&gt;&lt;p&gt;ಗಣೇಶ ವಿಗ್ರಹಗಳ ಮಾರಾಟಕ್ಕಾಗಿ ಕಿನ್ನಾಳ, ಭಾಗ್ಯನಗರ, ಕನಕಗಿರಿ ಹಾಗೂ ಹೊಸಪೇಟೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಕಲಾವಿದರು ಗಂಗಾವತಿಗೆ ಆಗಮಿಸಿದ್ದಾರೆ. ಸ್ಥಳೀಯ ಕಲಾವಿದರು ಕೂಡ ವಿವಿಧ ವಿನ್ಯಾಸ ಮತ್ತು ಗಾತ್ರದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದ್ದಾರೆ.&lt;/p&gt;&lt;p&gt;ನಗರದ ಗಾಂಧಿ ವೃತ್ತ, ಬಸವಣ್ಣ ವೃತ್ತ ಹಾಗೂ ಗುಂಡಮ್ಮ ಕ್ಯಾಂಪ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಗಣೇಶ ವಿಗ್ರಹಗಳ ಮಾರಾಟ ನಡೆಯುತ್ತಿದೆ. ಗಾತ್ರ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ಗಣೇಶ ಮೂರ್ತಿಗಳಿಗೆ ಬೆಲೆ ನಿಗದಿಯಾಗಿದ್ದು, ಸುಮಾರು ₹300ರಿಂದ ₹3 ಸಾವಿರದವರೆಗೆ ವಿಗ್ರಹಗಳು ಮಾರಾಟವಾಗುತ್ತಿವೆ. ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ವ್ಯಾಪಾರಿಗಳೊಂದಿಗೆ ಬೆಲೆ ಚೌಕಾಸಿ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.&lt;/p&gt;&lt;p&gt;&lt;strong&gt;ಆಂಧ್ರ, ತೆಲಂಗಾಣದಿಂದಲೂ ಗಣೇಶ ಮೂರ್ತಿಗಳಿಗೆ ಬೇಡಿಕೆ&lt;/strong&gt;&lt;/p&gt;&lt;p&gt;ಗಂಗಾವತಿ ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು ಪ್ರತಿಷ್ಠಾಪಿಸುವ ಬೃಹತ್ ಗಣೇಶ ಮೂರ್ತಿಗಳಿಗೆ ಈ ಬಾರಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಬೇಡಿಕೆ ಬಂದಿದೆ. ದೊಡ್ಡ ಗಾತ್ರದ ಗಣೇಶ ವಿಗ್ರಹಗಳನ್ನು ಮುಂಗಡವಾಗಿ ಬುಕ್ ಮಾಡಲಾಗಿದ್ದು, ಕೆಲವರು ಹಬ್ಬಕ್ಕೂ ಮುನ್ನವೇ ₹20 ಸಾವಿರದಿಂದ ₹50 ಸಾವಿರದವರೆಗೆ ಮುಂಗಡ ಹಣ ನೀಡಿದ್ದಾರೆ. ಕೆಲವು ಸಂಘ-ಸಂಸ್ಥೆಗಳು ಕನಿಷ್ಠ ₹1 ಲಕ್ಷದಿಂದ ₹2 ಲಕ್ಷದವರೆಗೆ ಬೆಲೆಬಾಳುವ ಗಣೇಶ ವಿಗ್ರಹಗಳನ್ನು ಖರೀದಿಸಿರುವುದು ವಿಶೇಷ. ಹೀಗಾಗಿ ದೊಡ್ಡ ಗಣೇಶ ಮೂರ್ತಿಗಳ ತಯಾರಿ ಮತ್ತು ಮಾರಾಟಕ್ಕೂ ಉತ್ತಮ ಬೇಡಿಕೆ ಕಂಡುಬಂದಿದೆ.&lt;/p&gt;&lt;p&gt;&lt;strong&gt;ಹೂವು, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಏರಿಕೆ&lt;/strong&gt;&lt;/p&gt;&lt;p&gt;ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ಬಾಳೆಕಂಬ ಸೇರಿದಂತೆ ಪೂಜೆಗೆ ಅಗತ್ಯವಿರುವ ವಸ್ತುಗಳ ಮಾರಾಟವೂ ಜೋರಾಗಿದೆ. ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಕೂಡ ಏರಿಕೆಯಾಗಿದೆ. ಗಂಗಾವತಿ ನಗರದಲ್ಲಿ ವರ್ಷವಿಡೀ ಹೂವು, ಹಣ್ಣು ಹಾಗೂ ಬಾಳೆಕಂಬಗಳ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಇದೀಗ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಿರುವುದರಿಂದ ಗ್ರಾಹಕರು ಹೆಚ್ಚಿನ ಬೆಲೆ ನೀಡಿ ಅಗತ್ಯ ವಸ್ತುಗಳನ್ನು ಖರೀದಿಸುವಂತಾಗಿದೆ.&lt;/p&gt;&lt;p&gt;&lt;strong&gt;ಹಬ್ಬದ ಖರೀದಿಯಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್&lt;/strong&gt;&lt;/p&gt;&lt;p&gt;ಗಣೇಶ ಹಬ್ಬದ ಖರೀದಿಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸುತ್ತಿರುವುದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಗಾಂಧಿ ವೃತ್ತ, ಬಸವಣ್ಣ ವೃತ್ತ ಹಾಗೂ ನಗರೇಶ್ವರ ದೇವಸ್ಥಾನದ ಮುಂಭಾಗ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ರಸ್ತೆ ಕಿರಿದಾಗಿರುವುದರಿಂದ ಹಬ್ಬದ ಖರೀದಿಗೆ ಆಗಮಿಸುವ ಜನರು ಮತ್ತು ವಾಹನಗಳ ಸಂಖ್ಯೆ ಹೆಚ್ಚಾದಾಗ ಸಂಚಾರ ಅಸ್ತವ್ಯಸ್ತವಾಗುತ್ತಿದೆ.&lt;/p&gt;&lt;p&gt;ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಗಂಗಾವತಿ ನಗರದಲ್ಲಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಒಂದೆಡೆ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಜನರನ್ನು ಆಕರ್ಷಿಸುತ್ತಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆ ಹಾಗೂ ಸಂಚಾರ ದಟ್ಟಣೆ ಸಾರ್ವಜನಿಕರಿಗೆ ಕೊಂಚ ತಲೆನೋವಾಗಿ ಪರಿಣಮಿಸಿದೆ.&lt;/p&gt;&lt;p&gt;ಕಳೆದ ಮೂರು ತಿಂಗಳಿನಿಂದ ಗಣೇಶ ವಿಗ್ರಹಗಳನ್ನು ತಯಾರು ಮಾಡುತ್ತಿದ್ದೇವೆ. ಈಗ ಬಣ್ಣದ ಬೆಲೆ ಹೆಚ್ಚಾಗಿದ್ದರಿಂದ ಮಾಡಿದ ಕೆಲಸಕ್ಕೆ ಕೂಲಿ ಸಿಗದಂತಾಗಿದೆ. ಮನೆಯ ಕುಟಂಬದವರು ಸೇರಿ ಗಣೇಶನ ವಿಗ್ರಹ ತಯಾರಿಸಿದ್ದೇವೆ. ನಾಲ್ಕು ರುಪಾಯಿ ಉಳಿಯುವಗೋಸ್ಕರ ಮತ್ತು ವಂಶ ಪಾರಂಪರಿಕವಾಗಿ ಕೈ ಕಸಬು ಬಿಡಬಾರದೆಂಬ ಕಾರಣಕ್ಕೆ ಗಣೇಶ ವಿಗ್ರಹಗಳನ್ನು ತಯಾರಿಸುವುದಕ್ಕೆ ಕಾರಣವಾಗಿದೆ.-ಪ್ರಕಾಶ, ಗಂಗಾವತಿ ಚಿತ್ರಗಾರ&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-gangavathi-ganesh-chaturthi-ganesha-idols-draw-demand-from-andhra-pradesh-and-telangana-gvd/articleshow-emy078i"/>
        </item>
        <item>
            <title><![CDATA[Mysuru: ಯಾವ ಬೀದಿಯೂ ನಿಷೇಧಿತವಲ್ಲ, ಯಾವನ್ ಏನ್ ಮಾಡ್ಕೊಳ್ತಾನೋ ನೋಡ್ತೀವಿ; ಖಾಕಿ ವರ್ಸಸ್ ಖಾದಿ ಸಮರಕ್ಕೆ ಸಿ.ಟಿ. ರವಿ ಎಂಟ್ರಿ!]]></title>
            <link>https://kannada.asianetnews.com/karnataka-districts/ct-ravi-t-narasipura-khaki-vs-khadi-police-bjp-clash-inspector-dhananjaya-overnight-protest-ct-ravi-bmk/articleshow-y0uk3r2</link>
            <guid isPermaLink="true">https://kannada.asianetnews.com/karnataka-districts/ct-ravi-t-narasipura-khaki-vs-khadi-police-bjp-clash-inspector-dhananjaya-overnight-protest-ct-ravi-bmk/articleshow-y0uk3r2</guid>
            <pubDate>Sun, 13 Sep 2026 17:06:13 +0530</pubDate>
            <description><![CDATA[ಟಿ. ನರಸೀಪುರದಲ್ಲಿ ಹಿಂದೂ ಕಾರ್ಯಕರ್ತರಿಗೆ ಇನ್ಸ್&zwnj;ಪೆಕ್ಟರ್ ಧನಂಜಯ್ ಧಮ್ಕಿ ಹಾಕಿದ್ದಾರೆನ್ನಲಾದ ಪ್ರಕರಣಕ್ಕೆ ಬಿಜೆಪಿ ನಾಯಕ ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಯು ಖಾಕಿ ಧರಿಸಿ ಗೂಂಡಾಗಿರಿ ಮಾಡುತ್ತಿದ್ದು, ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರದ ಮೌನವು 'ನಕಲಿ ಜಾತ್ಯತೀತತೆ'ಯನ್ನು ಸಾಬೀತುಪಡಿಸಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2d8srz34fe3n9n86swa877b,imgname-ct-ravi-1789299319779.jpg" type="image/jpeg" height="390" width="690"/>
            <content:encoded><![CDATA[&lt;p&gt;ಟಿ. ನರಸೀಪುರ ಇನ್ಸ್&zwnj;ಪೆಕ್ಟರ್ ಧನಂಜಯ್ ಅವರು ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಹಾಕಿದ್ದಾರೆನ್ನಲಾದ ಪ್ರಕರಣ ಇದೀಗ ರಾಜ್ಯಾದ್ಯಂತ ಭಾರೀ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಸಿ.ಟಿ. ರವಿ, ಪೊಲೀಸ್ ಅಧಿಕಾರಿಯ ವರ್ತನೆ ಹಾಗೂ ಸರ್ಕಾರದ ಮೌನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇನ್ಸ್&zwnj;ಪೆಕ್ಟರ್ ಧನಂಜಯ್ ಅವರ ಮಾತು ಮತ್ತು ನಡವಳಿಕೆ ಸಂಪೂರ್ಣವಾಗಿ ಅಹಂಕಾರದಿಂದ ಕೂಡಿದ್ದು, ಅವರು ಖಾಕಿ ಸಮವಸ್ತ್ರ ತೊಟ್ಟು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ರೋಷಾವೇಷದಿಂದ ಕಿಡಿಕಾರಿದ್ದಾರೆ.&lt;/p&gt;&lt;h2&gt;&lt;strong&gt;ಸಂವಿಧಾನ ಬಾಹಿರ ನಿಲುವು ಮತ್ತು ಮೆರವಣಿಗೆ ಹಕ್ಕು!&lt;/strong&gt;&lt;/h2&gt;&lt;p&gt;ಪ್ರಕರಣದ ಹಿನ್ನೆಲೆಯನ್ನು ಉಲ್ಲೇಖಿಸಿ ಮಾತನಾಡಿದ ಸಿ.ಟಿ. ರವಿ, &quot;ಈ ಭಾರತ ದೇಶದಲ್ಲಿ ಯಾವುದೇ ಬೀದಿಯೂ ನಿಷೇಧಿತ ಬೀದಿಯಲ್ಲ. ಸಾರ್ವಜನಿಕ ರಸ್ತೆಯಲ್ಲಿ ಮಸೀದಿ ಇದೆ ಎಂಬ ಒಂದೇ ಕಾರಣಕ್ಕೆ ಮೆರವಣಿಗೆ ಹೋಗಬಾರದು ಎಂದು ತಡೆಯುವುದು ಅಥವಾ ಆ ರೀತಿ ಆದೇಶಿಸುವುದು ನಿಮ್ಮ ಭಯವನ್ನು ತೋರಿಸುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಶೋಭಾಯಾತ್ರೆ ಅಥವಾ ಮೆರವಣಿಗೆಗೆ ತಡೆ ಒಡ್ಡುವುದೇ ಸಂಪೂರ್ಣವಾಗಿ ಸಂವಿಧಾನ ಬಾಹಿರ&quot; ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇನ್ಸ್&zwnj;ಪೆಕ್ಟರ್&zwnj; ದೊಡ್ಡ ದೊಡ್ಡ ಮಾತುಗಳನ್ನಾಡಿ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ, ಆದರೆ ಇಂತಹ ಧಮ್ಕಿಗಳಿಗೆ ಬಿಜೆಪಿ ಅಥವಾ ಹಿಂದೂ ಕಾರ್ಯಕರ್ತರು ಹೆದರುವುದಿಲ್ಲ. ಈ ರೀತಿ ಬೆದರಿಕೆ ಹಾಕುವ ಅಧಿಕಾರಿಗಳನ್ನು ಕಾನೂನಾತ್ಮಕವಾಗಿ ಹಾಗೂ ಸಾಂಘಿಕವಾಗಿ ಹೇಗೆ ಎದುರಿಸಬೇಕು ಎಂಬುದು ನಮಗೂ ಚೆನ್ನಾಗಿ ಗೊತ್ತಿದೆ ಎಂದು ಎಚ್ಚರಿಸಿದರು.&lt;/p&gt;&lt;h3&gt;&lt;strong&gt;ಖರ್ಗೆ ವಿರುದ್ಧ 'ನಕಲಿ ಜಾತ್ಯತೀತತೆ' ಚಾಟಿ!&lt;/strong&gt;&lt;/h3&gt;&lt;p&gt;ಇದೇ ವೇಳೆ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ಇನ್ಸ್&zwnj;ಪೆಕ್ಟರ್ ಧನಂಜಯ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು (Suspension) ಮಾಡಬೇಕು ಎಂದು ಆಗ್ರಹಪೂರ್ವಕವಾಗಿ ಮನವಿ ಮಾಡಿದರು. &quot;ಒಂದು ವೇಳೆ ಈ ಅಧಿಕಾರಿಯನ್ನು ಅಮಾನತು ಮಾಡದಿದ್ದರೆ, ಸರ್ಕಾರ ಮತ್ತು ಸಚಿವರು ಸಂಪೂರ್ಣವಾಗಿ ಪಕ್ಷಪಾತಿಗಳು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತದೆ. ಇದೇ ರೀತಿಯ ಧಮ್ಕಿಯನ್ನು ಏನಾದರೂ ಅನ್ಯಕೋಮಿನವರಿಗೆ ಅಥವಾ ಅಲ್ಪಸಂಖ್ಯಾತರಿಗೆ ಹಾಕಿದ್ದರೆ, ರಾಜ್ಯದ ಕಾಂಗ್ರೆಸ್ ನಾಯಕರು ಏನೇನೋ ಆಗಿದೆ ಎಂಬಂತೆ ಬಾಯಿ ಬಡ್ಕೊಳ್ಳುತ್ತಿದ್ದರು&quot; ಎಂದು ನೇರವಾಗಿ ವಾಗ್ದಾಳಿ ನಡೆಸಿದರು. ಮುಂದುವರಿದು, ಈ ವಿಚಾರದಲ್ಲಿ ಸರ್ಕಾರದ ಮೌನವನ್ನು ಪ್ರಶ್ನಿಸಿದ ಅವರು, &quot;ನಿಮ್ಮ ಈ ಮೌನವೇ ನಿಮ್ಮ ನಕಲಿ ಜಾತ್ಯಾತೀತತೆಯ ವಿರುದ್ಧ ಇರುವ ದೊಡ್ಡ ಅಸ್ತ್ರ. ಈ ಘಟನೆಯಿಂದ ನಿಮ್ಮ ಜಾತ್ಯತೀತತೆ ಸಂಪೂರ್ಣವಾಗಿ ಸತ್ತು ಹೋಗಿದೆ ಎಂಬುದು ಸಾಬೀತಾಗಿದೆ&quot; ಎಂದು ಕುಟುಕಿದರು.&lt;/p&gt;&lt;h3&gt;&lt;strong&gt;ಕಾರ್ಯಕರ್ತರಿಗೆ ಬೆಂಬಲದ ಅಭಯ!&lt;/strong&gt;&lt;/h3&gt;&lt;p&gt;ಟಿ. ನರಸೀಪುರದ ಸ್ಥಳೀಯ ಜನತೆ ಮತ್ತು ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಸಿ.ಟಿ. ರವಿ, &quot;ಸ್ಥಳೀಯ ಸಾರ್ವಜನಿಕರು ಮತ್ತು ನಮ್ಮ ಕಾರ್ಯಕರ್ತರು ಅಪೇಕ್ಷೆ ಪಟ್ಟರೆ, ನಾವೇ ಖುದ್ದಾಗಿ ಟಿ. ನರಸೀಪುರಕ್ಕೆ ಬಂದು ನಿಲ್ಲುತ್ತೇವೆ. ಯಾವ ಅಧಿಕಾರಿ ಏನು ಮಾಡಿಕೊಳ್ಳುತ್ತಾನೋ, ನಾವೂ ನೋಡ್ತೀವಿ&quot; ಎಂದು ಸವಾಲು ಎಸೆದಿದ್ದಾರೆ. ಖಾಕಿ ಅಧಿಕಾರಿಯೋರ್ವನ ಅಹಂಕಾರದ ಮಾತುಗಳು ಹಾಗೂ ಅದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರ ಈ ಕಠಿಣ ಎಚ್ಚರಿಕೆಗಳು ಮೈಸೂರು ಮತ್ತು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ. ಸರ್ಕಾರವು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರ ಮೇಲೆ ಎಲ್ಲರ ಕಣ್ಣ ನೆಟ್ಟಿದೆ.&lt;/p&gt;]]></content:encoded>
            <category>karnataka-districts</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/ct-ravi-t-narasipura-khaki-vs-khadi-police-bjp-clash-inspector-dhananjaya-overnight-protest-ct-ravi-bmk/articleshow-y0uk3r2"/>
        </item>
        <item>
            <title><![CDATA[R Ashok: ಡಿಕೆಶಿ ನೀನು ಹಿಂದೂ ಹೌದೋ ಅಲ್ವೋ? ಈಗ ಬಂದು ತೋರಿಸು.. ಸಿಎಂಗೆ ಆರ್ ಅಶೋಕ್ ಹಾಕಿದ ಸವಾಲೇನು?]]></title>
            <link>https://kannada.asianetnews.com/politics/r-ashok-slams-congress-government-over-t-narasipur-inspector-dhananjay-s-controversy-stats-rav/articleshow-rbeawgg</link>
            <guid isPermaLink="true">https://kannada.asianetnews.com/politics/r-ashok-slams-congress-government-over-t-narasipur-inspector-dhananjay-s-controversy-stats-rav/articleshow-rbeawgg</guid>
            <pubDate>Sun, 13 Sep 2026 17:00:39 +0530</pubDate>
            <description><![CDATA[&lt;p&gt;T Narasipur: ಟಿ.ನರಸೀಪುರದ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾವು ಪಾಕಿಸ್ತಾನದಲ್ಲಿದ್ದೀವಾ ಎಂದು ಪ್ರಶ್ನಿಸಿದ ಅವರು, ಗಣೇಶ ಮೆರವಣಿಗೆಗೆ ನಿರ್ಬಂಧ ಖಂಡಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d800z44ng1z3gt3yf9p68s,imgname-r-ashok-on-t-narasipur-ganeshotsav-protest-1789298476004.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು (ಸೆ.13): ನಾವು ಭಾರತದಲ್ಲಿದ್ದೀವಾ? ಪಾಕಿಸ್ತಾನದಲ್ಲಿದ್ದೀವಾ ಅನ್ನೋ ಪ್ರಶ್ನೆ ನಮ್ಮಲ್ಲಿ ಕಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್&zwnj; ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;h2&gt;ಈ ಸರ್ಕಾರ ಇರೋದು ಒಂದು ವರ್ಷ&lt;/h2&gt;&lt;p&gt;ಗಣೇಶಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಟಿ.ನರಸೀಪುರ ಪೊಲೀಸ್ ಇನ್ಸ್&zwnj;ಪೆಕ್ಟರ್ ಧಮ್ಕಿ ಹಾಕಿದ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆರ್ ಅಶೋಕ್ ಅವರು, ಇನ್ಸ್&zwnj;ಪೆಕ್ಟರ್ ಗ್ರಹಚಾರ ಬಿಡಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಕಾಂಗ್ರೆಸ್ ಪಾರ್ಟಿ ಅನುಮತಿ ನೆಪದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವವರಿಗೆ ಕಿರುಕುಳ ಕೊಡುತ್ತಿದೆ. ಈ ಸರ್ಕಾರ ಬಹಳ ವರ್ಷ ಇರೊಲ್ಲ, ಇನ್ನೊಂದು ವರ್ಷ ಮಾತ್ರ ಇರೋದು.&lt;/p&gt;&lt;h3&gt;ನಾನೇ ಬಂದಿದ್ದೇನೆ ಬಾ ನಿನ್ನ ದರ್ಪ ತೋರಿಸು&lt;/h3&gt;&lt;p&gt;ಪೊಲೀಸರು ದುರಹಂಕಾರಿಗಳಲ್ಲ, ಆದರೆ ಈ ರೀತಿ(ಇನ್ಸ್&zwnj;ಪೆಕ್ಟರ್ ಧನಂಜಯ್) ಒಬ್ಬಿಬ್ರು ಇಲಾಖೆಯಲ್ಲಿ ಇರ್ತಾರೆ. ಮುಸ್ಲಿಂ ಧಾರ್ಮಿಕ ಕಾರ್ಯಕ್ಕೆ ಮೆರವಣಿಗೆ ಹೋಗ್ತಾರೆ. ಯಾವುದೇ ಹಿಂದೂಗಳು ಕಲ್ಲು ತೂರಾಟ ಮಾಡಲ್ಲ. ಆದರೆ ಅವರ ಮಸೀದಿಯಿಂದ ಕಲ್ಲು ತೂರಾಟ ಆಗುತ್ತೆ. ಮೊದಲು ಅವರನ್ನ ಕರೆಸಿ ಆವಾಜ್ ಹಾಕಬೇಕಿತ್ತು? ಮದ್ದೂರಿನಲ್ಲಿ ಹೀಗೆ ಮಾಡಿದ್ದಕ್ಕೆ ನಿಮಗೆ ಮುದ್ದೆ ತಿನ್ನಿಸಿದ್ದೇವೆ. ಒಂದು ವರ್ಷವಾದ ಮೇಲೆ ವರ್ಗಾವಣಗೆ ಎಲ್ಲಿಗೆ ಹೋಗ್ತಿರಾ? ಇಲ್ಲಿಗೇ ಬರಬೇಕು ಹುಷಾರ್. ನಮ್ಮ ಹತ್ತು ಜನ ಕಾರ್ಯಕರ್ತರು ಹೋದರು ಅಂತ ದರ್ಪ ತೋರಿಸ್ತೀರಾ? ಈಗ ನಾನೇ ಬಂದಿದ್ದೇನೆ ಬಾ ನಿನ್ನ ದರ್ಪ ತೋರಿಸು ಇನ್ಸ್ಪೆಕ್ಟರ್ ಧನಂಜಯ ವಿರುದ್ಧ ಆರ್ ಅಶೋಕ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.&lt;/p&gt;&lt;h3&gt;ಡಿಕೆ ಶಿವಕುಮಾರ್ ನೀನು ಹಿಂದೂ ಹೌದೋ ಅಲ್ವೋ?&lt;/h3&gt;&lt;p&gt;ಮುಖ್ಯಮಂತ್ರಿ ಡಿಕೆ ಶಿವಕುಮಾರ ಬಾಯಲ್ಲಿ ಮಂತ್ರ, ಬೆಳಗ್ಗೆ ನಾಲ್ಕು ಗಂಟೆಯಿಂದ 12 ಗಂಟೆ ಗಂಗಾ ನದಿಯಲ್ಲಿ ಮುಳುಗಿದ ಮಾತ್ರಕ್ಕೆ ಹಿಂದೂವಾಗಲ್ಲ ಡಿಕೆ ಶಿವಕುಮಾರ ಅವರೇ, ಈಗ ತೋರಿಸಿ ನಿಮ್ಮ ನಿಜವಾದ ಹಿಂದೂತ್ವವನ್ನ. ಒಬ್ಬ ಇನ್ಸ್&zwnj;ಪೆಕ್ಟರ್ ಹಿಂದೂಗಳಿಗೆ ಗಣೇಶ ಹಬ್ಬದ ವಿಚಾರವಾಗಿ ಅವಾಜ್ ಹಾಕ್ತಾನೆ. ಇಲ್ಲಿ ಬಂದು ತೋರಿಸುವ ನಿನ್ನ ಹಿಂದೂತ್ವ. ಹಿಂದೂಗಳಿಗೆ ಧಮ್ಕಿ ಹಾಕಿರುವ ಇನ್ಸ್&zwnj;ಪೆಕ್ಟರ್&zwnj; ಅಮಾನತು ಮಾಡಬೇಕು. ನೀನು ಹಿಂದೂನಾ ಅಲ್ವಾ? ಅಂತ ಈಗ ತೋರಿಸು. ನಿನಗೆ ಕೇವಲ ವೋಟಿಗಾಗಿ ಹಿಂದೂಗಳು ಬೇಕಾ? ಬ್ರದರ್ಸ್ ಬೇಕಾ? ಚುನಾವಣೆ ಬಂದಾಗ ಹಿಂದೂಗಳು ಬೇಕು. ಗೆಲ್ಲೋದಕ್ಕೆ ಪೂಜೆ ಪ್ರಾರ್ಥನೆಗಳಿಗೆ ಗಂಗಾ ನದಿಯಲ್ಲಿ ಮುಳುಗಿದ್ರೆ ಸಾಲದು. ಈಗ ನೀವು ನಿಜವಾಗಲೂ ಹಿಂದೂ ಹೌದೋ ಅಲ್ವೋ ತೋರಿಸುವ ಎಂದು ಸವಾಲೆಸೆದರು.&lt;/p&gt;&lt;p&gt;ಆ ರಸ್ತೆಯಲ್ಲಿ ಹೋಗಬಾರದು, ಈ ರಸ್ತೆಯಲ್ಲಿ ಹೋಗಬಾರದು ಅನ್ನೋಕೆ ಇವರು ಯಾರು? ರಸ್ತೆ ಯಾರದ್ದು? ನಮ್ಮಪ್ಪಂದು ಅಲ್ಲ, ಡಿಕೆಶಿವಕುಮಾರ ಅವರಪ್ಪಂದೂ ಅಲ್ಲ. ರಸ್ತೆಗಳು ಸಾರ್ವಜನಿಕ ಸ್ಥಳ. ಯಾರು ಬೇಕಾದರೂ ಹೋಗಬಹುದು. ಗಣಪತಿ ಮೆರವಣಿಗೆ ವೇಳೆ ಇಂತಿಂಥ ರಸ್ತೆಯಲ್ಲಿ ಹೋಗಬಾರದು ಅನ್ನೋದು ಇವರು ಯಾರು? ಕಲ್ಲು ತೂರಾಟ ನಡೆಸ್ತಾರೆ ಅಂದ್ರೆ ತಪ್ಪು ಎಲ್ಲಿದೆ? ಯಾರ ಮೇಲೆ ಕ್ರಮ ಆಗಬೇಕು? ಹಿಂದೂಗಳಿಗೆ ಅವಾಜ್ ಹಾಕೋಕೆ ಬರುತ್ತೆ, ಕಲ್ಲು ತೂರಾಟ ನಡೆಸುವವರ ಮೇಲೆ ಈ ದರ್ಪ ತೋರಿಸು. ರಸ್ತೆಗಳು ಸಾರ್ವಜನಿಕ ಆಸ್ತಿ. ನಾವು ಬಿಡುವ ಪ್ರಶ್ನೆಯೇ ಇಲ್ಲ. ಮಸೀದಿ ಮುಂದೆ ಪಟಾಕಿ ಹೊಡೆಯಬೇಡ ಅಂತಾ ಹೇಳ್ತೀರಾ ರಸ್ತೆ ಏನು ನಿಮ್ಮಪ್ಪಂದಾ? ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/r-ashok-slams-congress-government-over-t-narasipur-inspector-dhananjay-s-controversy-stats-rav/articleshow-rbeawgg"/>
        </item>
        <item>
            <title><![CDATA[Bagalakote: ಮಾಳಿಂಗರಾಯನ ಪವಾಡ, ಹಿಂದಿನ ದಾಖಲೆಗಳು ಉಡೀಸ್‌! ಲಕ್ಷ ಲಕ್ಷಕ್ಕೆ ಸೇಲ್ ಆಯ್ತು ಪವಿತ್ರ ತೆಂಗಿನಕಾಯಿ!]]></title>
            <link>https://kannada.asianetnews.com/gallery/karnataka-districts/previous-records-shattered-coconut-from-malingaraya-shrine-sold-for-rs-800001-bagalkot-sns-x22i42o</link>
            <guid isPermaLink="true">https://kannada.asianetnews.com/gallery/karnataka-districts/previous-records-shattered-coconut-from-malingaraya-shrine-sold-for-rs-800001-bagalkot-sns-x22i42o</guid>
            <pubDate>Sun, 13 Sep 2026 16:52:24 +0530</pubDate>
            <description><![CDATA[&lt;p&gt;ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವದಲ್ಲಿ, ಗದ್ದುಗೆ ಮೇಲಿಟ್ಟು ಪೂಜಿಸಲಾದ ಪವಿತ್ರ ತೆಂಗಿನಕಾಯಿಯು ಹರಾಜಿನಲ್ಲಿ ದಾಖಲೆಯ 8 ಲಕ್ಷದ 1 ರೂಪಾಯಿಗೆ ಮಾರಾಟವಾಗಿದೆ. ಈ ಮೊತ್ತವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d74xngnaq0g1qk3ztcd7db,imgname-bagalkot-malingaraya-1789297587888.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವದಲ್ಲಿ, ಗದ್ದುಗೆ ಮೇಲಿಟ್ಟು ಪೂಜಿಸಲಾದ ಪವಿತ್ರ ತೆಂಗಿನಕಾಯಿಯು ಹರಾಜಿನಲ್ಲಿ ದಾಖಲೆಯ 8 ಲಕ್ಷದ 1 ರೂಪಾಯಿಗೆ ಮಾರಾಟವಾಗಿದೆ. ಈ ಮೊತ್ತವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.&lt;/p&gt;&lt;img&gt;&lt;p&gt;ಬಾಗಲಕೋಟೆ: ಮಾಳಿಂಗರಾಯ ದೇವರ ಗದ್ದುಗೆ ಮೇಲಿನ ಪವಿತ್ರಾ ತೆಂಗಿನಕಾಯಿ ಪ್ರತಿ ವರ್ಷದಂತೆ ಈ ವರ್ಷವೂ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಭಕ್ತ ಸಮೂಹದ ಮಧ್ಯೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 8 ಲಕ್ಷದ 1 ರೂಪಾಯಿ(8,00,001)ಗೆ ತೆಂಗಿನಕಾಯಿ ಹರಾಜಾಗಿದೆ. ಇದರೊಂದಿಗೆ ಈ ಹಿಂದಿನ ದಾಖಲೆಗಳನ್ನು ಬ್ರೇಕ್ ಮಾಡಿದೆ.&lt;/p&gt;&lt;img&gt;&lt;p&gt;ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಸಲಾಗಿದೆ. ದೇವರ ಜಾತ್ರಾ ಮಹೋತ್ಸವ ವೇಳೆ ಗದ್ದುಗೆ ಮೇಲಿಟ್ಟು ಪೂಜೆ ಮಾಡಿದ್ದ ತೆಂಗಿನಕಾಯಿಯನ್ನು ಶ್ರಾವಣ ಮಾಸದ ಕೊನೆಯಲ್ಲಿ ತೆಂಗಿನಕಾಯಿ ಹರಾಜು ಮಾಡಲಾಗುತ್ತದೆ.&lt;/p&gt;&lt;img&gt;&lt;p&gt;ಈ ವರ್ಷ ಜಾತ್ರೆಗೆ ಆಗಮಿಸಿದ್ದ ಅಪಾರ ಭಕ್ತ ಸಮೂಹದ ಮಧ್ಯೆ ನಡೆದ ದೇವರ ತೆಂಗಿನಕಾಯಿ ಹರಾಜು ಮಾಡಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ದಾಖಲೆ ಮೊತ್ತದ ಹರಾಜಿಗೆ ಭಕ್ತರು ಸಾಕ್ಷಿಯಾದರು.&lt;/p&gt;&lt;img&gt;&lt;p&gt;ಹರಾಜಿನಲ್ಲಿ ಜಮಖಂಡಿ ತಾಲೂಕಿನ ಸನಾಳ ಗ್ರಾಮದ ಲಕ್ಷ್ಮಣ ಸಿದ್ದಪ್ಪ ಕುರಣಿ ಅವರು 8 ಲಕ್ಷ 1 ರೂಪಾಯಿಗೆ ಪಡೆದುಕೊಂಡು ಆಶೀರ್ವಾದ ಪಡೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಶ್ರಾವಣ ಮಾಸದ ವೇಳೆ ನಿರಂತರ ಒಂದು ತಿಂಗಳ ಕಾಲ ದೇವರ ಗದ್ದುಗೆ ಮೇಲಿಟ್ಟು ಪೂಜಿಸಲ್ಪಟ್ಟಿದ್ದ ತೆಂಗಿನಕಾಯಿ ನಂತರ ಮಾಳಿಂಗರಾಯ ಜಾತ್ರಾ ಮಹೋತ್ಸವ ವೇಳೆ ಸವಾಲ್ ಮೂಲಕ ಹರಾಜಿನಲ್ಲಿ ಭಕ್ತರಿಗೆ ಸಲ್ಲಿಸಲ್ಪಡುತ್ತದೆ.&lt;/p&gt;&lt;img&gt;&lt;p&gt;ಈ ಹಿಂದೆಯೂ ದಾಖಲೆ ಮೊತ್ತಕ್ಕೆ ಹರಾಜ್ ಆಗಿದ್ದ ತೆಂಗಿನಕಾಯಿ, 2019ರಲ್ಲಿ 6,50,001 ಆಗಿದ್ದರೆ, 2025ರಲ್ಲಿ 5,70,000ಕ್ಕೆ ಹರಾಜ ಆಗಿತ್ತು. ಈ ಬಾರಿ 8,00,001ರೂ. ದಾಖಲೆ ಮೊತ್ತಕ್ಕೆ ಹರಾಜು ಆಗುವ ಮೂಲಕ ದಾಖಲೆ ನಿರ್ಮಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/karnataka-districts/previous-records-shattered-coconut-from-malingaraya-shrine-sold-for-rs-800001-bagalkot-sns-x22i42o"/>
        </item>
        <item>
            <title><![CDATA[ಜಾರಕಿಹೊಳಿ ಮೇಲಿನ ED ದಾಳಿಗೆ ಸಿದ್ದರಾಮಯ್ಯನವರ ಶಾಪವೇ ಕಾರಣ - ಯತ್ನಾಳ್ ಹೀಗ್ಯಾಕೆ ಹೇಳಿದರು?]]></title>
            <link>https://kannada.asianetnews.com/karnataka-districts/siddaramaiahs-curse-is-the-reason-for-the-ed-raid-on-jarkiholi-basanagouda-patil-yatnal-gkn/articleshow-62rbpg2</link>
            <guid isPermaLink="true">https://kannada.asianetnews.com/karnataka-districts/siddaramaiahs-curse-is-the-reason-for-the-ed-raid-on-jarkiholi-basanagouda-patil-yatnal-gkn/articleshow-62rbpg2</guid>
            <pubDate>Sun, 13 Sep 2026 16:32:26 +0530</pubDate>
            <description><![CDATA[&lt;p&gt;ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಸತೀಶ್ ಜಾರಕಿಹೊಳಿ ಮೇಲೆ ನಡೆದ ಜಾರಿ ನಿರ್ದೇಶನಾಲಯದ ದಾಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ. ಅವರು ಏನು ಹೇಳಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ. ಓದಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d6xbarzbddx9krpdtq5841,imgname-basnagowda-patil-yatnal-1789297339736.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಸಚಿವ ಸತೀಶ ಜಾರಕಿಹೊಳಿ ಮೇಲಿನ ಇಡಿ ದಾಳಿಯ ಹಿಂದೆ ಕಾಂಗ್ರೆಸನವರ ಕೈವಾಡ ಇದೆ ಎಂಬ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿ.. ಜಾರಕಿಹೊಳಿ ಮೇಲಿನ ಇಡಿ ದಾಳಿಗೆ ಸಿದ್ದರಾಮಯ್ಯನವರ ಶಾಪವೇ ಕಾರಣ. ಸಿದ್ದರಾಮಯ್ಯ ಕೆಳಗಿಳಿಸಿದರೆ ಏನು ಅಭ್ಯಂತರ ಇಲ್ಲವೆಂದು 36 ಶಾಸಕರ ಸಹಿ ಮಾಡಿ ಕೊಟ್ಟವರೇ ಸತೀಶ ಜಾರಕಿಹೊಳಿ ಎಂದು ಲೇವಡಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಕೆಎನ್ ರಾಜಣ್ಣ ಕತೆ ಏನಾಯ್ತು?&lt;/strong&gt;&lt;/h2&gt;&lt;p&gt;ಎಂ.ಬಿ.ಪಾಟೀಲ್ , ಜಮೀರ್ ಅಹ್ಮದ್ ಖಾನ್, ಜಾರಕಿಹೊಳಿ ಇವರೆಲ್ಲಾ ಹೇಳಿದ್ರು. ಇದನ್ನೆಲ್ಲಾ ಕಾಂಗ್ರೆಸ್&zwnj;ನವರೇ ಮಾಡಿಸಿದ್ದು ಅಂತಾ. ಬಿಜೆಪಿಯಲ್ಲಿ ಇಂತಹದನ್ನ ಮಾಡುವವರು ಯಾರೂ ಇಲ್ಲ, ಯಾರಿದ್ದಾರೆ ಹೇಳಿ ನೋಡೋಣ? ಸತೀಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್&zwnj;ನಲ್ಲೇ ದ್ವೇಷ ಇದೆ. ವಾಲ್ಮೀಕಿ ಜನಾಂಗದಲ್ಲಿ ಒಬ್ಬ ಒಳ್ಳೆಯ ಲೀಡರ್ ರೆಡಿ ಆಗ್ತಿದ್ದಾನೆ ಅಂತೆ ಹೀಗೆ ಮಾಡಿದ್ದಾರೆ.&lt;/p&gt;&lt;p&gt;ಅಂದು ಕಾಂಗ್ರೆಸ್&zwnj;ನ ಕೆಎನ್ ರಾಜಣ್ಣ ಸಹಕಾರ ಸಚಿವರಾಗಿದ್ದರು. ಅವರು ಸ್ಟೇಟ್ ಫಾರ್ವರ್ಡ್ ಆಗಿ ಮಾತನಾಡಿದರು. ಬೆನ್ನಲ್ಲೇ ಅವರ ಪರಿಸ್ಥಿತಿ ಏನಾಯಿತು? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಏನು ಮಾತನಾಡದಿದ್ದರೂ ಅವರನ್ನು ಅಪಮಾನಿಸಿದರು ಎಂದು ಹೇಳಿಕೊಟ್ಟರು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ಇದ್ದರೂ ಅಪಮಾನವನ್ನು ಅಪಮಾನ ಅಂತ ಹೇಳಲೇಬೇಕು. ನಾನು ಸಹ ತಪ್ಪನ್ನ ತಪ್ಪು ಅಂತ ಹೇಳಿದ್ದೇನೆ. ನನ್ನನ್ನು ಹೊರ ಹಾಕಿದ್ದಾರೆ. ಹಾಕಲಿ ಬಿಡಿ, ಏನಾಗುತ್ತೆ ನೋಡೋಣ ಎಂದು ವಿಜಯೇಂದ್ರಗೆ ಟಾಂಗ್ ನೀಡಿದರು.&lt;/p&gt;&lt;p&gt;ಈ ಹಿಂದೆ ಹೆಚ್&zwnj;ಡಿ ಕುಮಾರಸ್ವಾಮಿ ಇದ್ದಾಗ 10 ಕಾರ್ಪೊರೇಷನ್&zwnj;ಗೆ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಯಡಿಯೂರಪ್ಪ ಬಂದಮೇಲೆ ಅದೆಲ್ಲ ಹಣವನ್ನು ಮರಳಿ ಪಡೆದು ಶಿವಮೊಗ್ಗಕ್ಕೆ ಹಾಕಿದರು. ಒಬ್ಬ ಎಂಎಲ್ಎ ಆಗಿ ನಾನು ಇದನ್ನು ಪ್ರಶ್ನೆ ಮಾಡಬಾರದಾ? ನಾನು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದೆ. ನಾಳೆಯಿಂದ ನಾಳೆ ಹಣವನ್ನ ಮರಳಿ ಹಾಕಬೇಕು, ಇಲ್ಲದಿದ್ದರೆ ನಿಮ್ಮ ಸ್ಥಾನದಿಂದ ಕೆಳಗಿಳಿಸ್ತಿವಿ ಎಂದು ಹೇಳಿದ್ದೆ.&lt;/p&gt;&lt;p&gt;ಆಗ ಅವರು ಏನು ಮಾಡ್ಕೋತಿಯ ನೋಡೋಣ ಅಂದಿದ್ದರು. ನೋಡಿದಿರಲ್ಲ ಹೇಗೆ ಕೆಳಗಿಳಿಸಿದ್ವಿ ಎಂದು. ಕೊನೆವರೆಗೂ ನಾನು ಯಡಿಯೂರಪ್ಪ ಮನೆಗೆ ಹೋಗಲೇ ಇಲ್ಲ. ನಂತರ ಬಸವರಾಜ್ ಬೊಮ್ಮಾಯಿ ಬಂದು ಫೋನ್ ಮಾಡಿದ ಮೇಲೆ ನಾನು ಹೋಗಿದ್ದು. ಇಡೀ ಬಿಜಾಪುರವೇ ದೇಶದಲ್ಲಿ ಅತ್ಯಂತ ಸ್ವಚ್ಛವಾಗಿರುವ ನಾಲ್ಕನೇ ನಗರ. ಸಿಸಿ ರೋಡ್, ಡ್ರೈನೇಜ್ ಎಲ್ಲವನ್ನ ಮಾಡಿಸಿ 99% ಧೂಳನ್ನು ಕಡಿಮೆ ಮಾಡಿದ್ದೇವೆ. ನಾನೊಬ್ಬನೇ ಮಂತ್ರಿಯಾಗಿದ್ದರೆ ಏನಾಗುತ್ತಿತ್ತು? ಯಡಿಯೂರಪ್ಪ ಬರಿ ಅದನ್ನೇ ಮಾತ್ರ ಹೇಳ್ತಾ ಇದ್ರು. ವಿಜಯಪುರ ನಗರಕ್ಕೆ ಒಟ್ಟು 3,000 ಕೋಟಿ ಅನುದಾನ ತಂದಿದ್ದೇನೆ. ಹೀಗಾಗಿ ಅಭಿವೃದ್ಧಿಯಾಗಿದೆ ಎಂದು ಯತ್ನಾಳ ಹೇಳಿಕೊಂಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/siddaramaiahs-curse-is-the-reason-for-the-ed-raid-on-jarkiholi-basanagouda-patil-yatnal-gkn/articleshow-62rbpg2"/>
        </item>
        <item>
            <title><![CDATA[Tumakuru: ಪಾವಗಡ, ಶಂಕಿತ ನಕ್ಸಲ್ ಗಾಗಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ; ಡ್ರೋಣ್ ಮೂಲಕ ಶೋಧ]]></title>
            <link>https://kannada.asianetnews.com/karnataka-districts/tumakuru-pavagadh-massive-combing-operation-for-suspected-naxal-search-using-drone-sns/articleshow-nlmsvfr</link>
            <guid isPermaLink="true">https://kannada.asianetnews.com/karnataka-districts/tumakuru-pavagadh-massive-combing-operation-for-suspected-naxal-search-using-drone-sns/articleshow-nlmsvfr</guid>
            <pubDate>Sun, 13 Sep 2026 15:52:31 +0530</pubDate>
            <description><![CDATA[ಪಾವಗಡ ತಾಲ್ಲೂಕಿನ ಕನಿಕಲಬಂಡೆ ಬೆಟ್ಟಗಳಲ್ಲಿ ನಕ್ಸಲ್ ಶಂಕಿತ ಉಪ್ಪಾರ ವೆಂಕಟೇಶ್ ಪತ್ತೆಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. 120ಕ್ಕೂ ಹೆಚ್ಚು ಸಿಬ್ಬಂದಿಯ ವಿಶೇಷ ತಂಡಗಳು ಡ್ರೋಣ್ ಕ್ಯಾಮೆರಾ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಶೋಧ ನಡೆಸುತ್ತಿದ್ದು, ಕಾರ್ಯಾಚರಣೆ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2d4f08pmm1nxkxby4z4mdpz,imgname-tumakuru-police--1789294772502.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಪಾವಗಡ, ತಾಲ್ಲೂಕಿನ ಕನಿಕಲಬಂಡೆ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ನಕ್ಸಲ್ ಶಂಕಿತ ಉಪ್ಪಾರ ವೆಂಕಟೇಶ್ ಪತ್ತೆಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.&lt;/p&gt;&lt;h2&gt;ಪಾವಗಡದಲ್ಲಿ ನಕ್ಸಲ್ ಶಂಕೆ: ಬೆಟ್ಟಗಳಲ್ಲಿ ಪೊಲೀಸರ ಮಹಾ ಶೋಧ&lt;/h2&gt;&lt;p&gt;ತುಮಕೂರು ಹೆಚ್ಚುವರಿ ಎಸ್&zwnj;ಪಿ ಗೋಪಾಲ್ ಮತ್ತು ಮಧುಗಿರಿ ಡಿವೈಎಸ್&zwnj;ಪಿ ಮಂಜುನಾಥ್ ನೇತೃತ್ವದಲ್ಲಿ 120ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ 5 ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. 10 ಪೊಲೀಸ್ ಜೀಪ್, ವ್ಯಾನ್ ಹಾಗೂ ಒಂದು ಖಾಸಗಿ ಬಸ್&zwnj;ನಲ್ಲಿ ತೆರಳಿದ ಪೊಲೀಸರು, ಎಕೆ-47 ಸೇರಿದಂತೆ ಇತರೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು ಕಾರ್ಯಾಚರಣೆ ನಡೆಸಿದ್ದಾರೆ.&lt;/p&gt;&lt;p&gt;ತಾಲೂಕಿನ ಪಳವಳ್ಳಿ ಕಡಪಲಕೆರೆ, ವೀರಮ್ಮನಹಳ್ಳಿ, ಗಂಗಾಸಾಗರ, ಅಚ್ಚಮ್ಮನಹಳ್ಳಿ, ಈರಮ್ಮನಹಳ್ಳಿ ಹಾಗೂ ಕನಿಕಲಬಂಡೆ ಸುತ್ತಮುತ್ತಲಿನ ಸುಮಾರು 12 ಕಿ.ಮೀ ವ್ಯಾಪ್ತಿಯ ಬೆಟ್ಟಗುಡ್ಡಗಳಲ್ಲಿ ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ಸತತ 5 ಗಂಟೆಗಳ ಕಾಲ ಕೂಂಬಿಂಗ್ ನಡೆಸಿ ಶೋಧ ನಡೆಸಲಾಯಿತು.&lt;/p&gt;&lt;p&gt;ಬಳಿಕ ವಿಶೇಷ ಪಡೆಯ 120 ಮಂದಿ ತಂಡದೊಂದಿಗೆ ಡ್ರೋಣ್ ಕ್ಯಾಮೆರಾ ಮೂಲಕವೂ ಸರ್ಚ್ ಕಾರ್ಯಾಚರಣೆ ಮುಂದುವರಿಸಲಾಗಿದೆ. 5-6 ಭಾರಿ ವಾಹನಗಳಲ್ಲಿ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೂ ಶಂಕಿತ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ. ನಿರಂತರ ಕಾರ್ಯಾಚರಣೆಗಾಗಿ ವಿಶೇಷ ತಂಡ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/tumakuru-pavagadh-massive-combing-operation-for-suspected-naxal-search-using-drone-sns/articleshow-nlmsvfr"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಪ್ರಮುಖ ಸಂಚಾರ ಮಾರ್ಗ ಬದಲಾವಣೆ, ಸಾದಹಳ್ಳಿ ಅಂಡರ್‌ಪಾಸ್ ಕಾಮಗಾರಿ ಆರಂಭ]]></title>
            <link>https://kannada.asianetnews.com/bengaluru-urban/major-traffic-route-change-in-bengaluru-as-sadahalli-underpass-work-starts/articleshow-z8vsxsd</link>
            <guid isPermaLink="true">https://kannada.asianetnews.com/bengaluru-urban/major-traffic-route-change-in-bengaluru-as-sadahalli-underpass-work-starts/articleshow-z8vsxsd</guid>
            <pubDate>Sun, 13 Sep 2026 15:02:42 +0530</pubDate>
            <description><![CDATA[&lt;p&gt;ಬೆಂಗಳೂರಿನ ಪ್ರಮುಖ ರಸ್ತೆಯಲ್ಲೇ ಅಂಡರ್ ಪಾಸ್ ಕಾಮಗಾರಿ ಆರಂಭಗೊಂಡಿದೆ. ಪರಿಣಾಮ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಸದ್ಯ 2 ದಿನ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಇಲ್ಲ. ಆದರೆ ಮಂಗಳವಾರದಿಂದ ಬೆಂಗಳೂರು ಜನರು ಹೈರಾಣಾಗಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m08cryw2ws3me3yhnyt5f06m,imgname-bengaluru-traffic-1786988231554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13) &lt;/strong&gt;ಗಣೇಶ ಹಬ್ಬ ಹಿನ್ನೆಲೆಯಲ್ಲಿ ಸದ್ಯ ಬೆಂಗಳೂರಿನಲ್ಲಿರುವ ಬಹುತೇಕರು ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರು ಖಾಲಿ ಖಾಲಿ ಕಾಣಿಸುತ್ತಿದೆ. ಸದ್ಯ ಟ್ರಾಫಿಕ್ ಸಮಸ್ಯೆ ಇಲ್ಲದೆ ಪ್ರಯಾಣ ಮಾಡಬಹುದು. ಆದರೆ ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಅಂಡರ್ ಪಾಸ್ ಕಾಮಾಗಾರಿ ಆರಂಭಿಸಲಾಗಿದೆ. ಹೀಗಾಗಿ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ಸದ್ಯ ರಜಾ ದಿನ ಕಾರಣ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಮಂಗಳವಾರದಿಂದ ಈ ಅಂಡರ್ ಪಾಸ್ ಕಾಮಗಾರಿ ಜನರನ್ನು ಹೈರಾಣು ಮಾಡಲಿದೆ. ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಾದಹಳ್ಳಿ ಅಂಡರ್&zwnj;ಪಾಸ್ ಕಾಮಗಾರಿ ಆರಂಭಿಸಲಾಗಿದೆ. ಹೀಗಾಗಿ ಈ ಭಾಗದಲ್ಲಿನ ಸಂಚಾರದ ದಿಕ್ಕಿನ ಕೆಲ ಬದಲಾವಣೆ ಮಾಡಲಾಗಿದೆ.&lt;/p&gt;&lt;h2&gt;ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ&lt;/h2&gt;&lt;p&gt;ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಬರವು ಟೋಲ್ ಸಮೀಪದಲ್ಲಿ ಸಾದಹಳ್ಳಿ ಅಂಡರ್ ಪಾಸ್ ಕಾಮಗಾರಿ ಆರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು ಅಂಡರ್ ಪಾಸ್ ಕಾಮಗಾರಿಗಾಗಿ ದೊಡ್ಡ ಯಂತ್ರೋಪಕರಣಗಳ ಮೂಲಕ ಕಾಮಗಾರಿ ಆರಂಭಿಸಿದೆ. ಹೀಗಾಗಿ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.&lt;/p&gt;&lt;p&gt;ಕಳೆದ ಕೆಲ ವರ್ಷಗಳಿಂದ ಸಾದಹಳ್ಳಿ ಅಂಡರ್ ಪಾಸ್ ಕಾಮಾಗಾರಿ ಕುರಿತು ಕೆಲಸ ಆರಂಭಗೊಂಡಿತ್ತು. ಆದರೆ ಹಲವು ಕಾರಣಗಳಿಂದ ಕಾಮಾಗಾರಿ ವಿಳಂಬವಾಗಿ ಸಾಗಿತ್ತು. ಹೀಗಾಗಿ ಈ ಭಾಗದಲ್ಲಿ ಸಂಚರಿಸುವ ಸ್ಛಳೀಯರು ಸೇರಿದಂತೆ ಇತರರಿಗೆ ತೀವ್ರ ಸಮಸ್ಯೆಯಾಗಿ ಪರಿಣಿಮಿಸಿತ್ತು. ಇದೀಗ ಕಾಮಾಗಾರಿ ಮತ್ತೆ ಆರಂಭಗೊಂಡಿದ್ದು, ವೇಗ ಪಡೆದುಕೊಂಡಿದೆ. ಹೀಗಾಗಿ ಸ್ಛಳೀಯರ ಕೆಲ ದಿನಗಳಲ್ಲೇ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ ಅನ್ನೋ ವಿಶ್ವಾಸದಲ್ಲಿದ್ದಾರೆ.&lt;/p&gt;&lt;h2&gt;ಸಂಚಾರ ದಿಕ್ಕು ಬದಲಾವಣೆ, ಟ್ರಾಫಿಕ್ ಸಮಸ್ಯೆ&lt;/h2&gt;&lt;p&gt;ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದೇವನಹಳ್ಳಿ ಕಡೆ ಪ್ರಯಾಣಿಸುವ ಜನರು ಈ ಅಂಡರ್ ಪಾಸ್ ಕಾಮಾಗಾರಿಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಅಂಡರ್ ಪಾಸ್ ಕಾಮಾಗಾರಿಗಿಂತ ಕೆಲ ಮೀಟರ್ ಮೊದಲು ತಡೆ ಗೋಡೆಗಳನ್ನು ಹಾಕಲಾಗಿದೆ. ಸೂಚನಾ ಫಲಕಗಳನ್ನು ಹಾಕಲಾಗಿದೆ. ಹೀಗಾಗಿ ಚಾಲಕರು ಈ ಸೂಚನೆ ಪಾಲಿಸಿ ಸಾಗಬೇಕಿದೆ. ಸಂಚಾರ ದಿಕ್ಕು ಬದಲಿಸಿದ ಕಾರಣ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆಗಳು ಹೆಚ್ಚಿದೆ. ಸಂಚಾರ ದಟ್ಟಣೆ, ಟ್ರಾಫಿಕ್ ಸಮಸ್ಯೆ ತಗ್ಗಿಸಲು NHAI ಹಲವು ಕಡೆಗಳಲ್ಲಿ ಮಾರ್ಗ ಬದಲಾವಣೆ ಸೂಚನಾ ಫಲಕ ಅಳವಡಿಸಿದ್ದಾರೆ.&lt;/p&gt;&lt;p&gt;ಸಾದಹಳ್ಳಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಕೂಗಳತೆ ದೂರದಲ್ಲಿ ಹೊಸ ಮಾಲ್ ಆರಂಭಗೊಳ್ಳುತ್ತಿದೆ. ಈಗಾಗಲೇ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಮಾಲ್ ಆರಂಭಗೊಳ್ಳಲಿದೆ. ಇದರಿಂದ ಈ ಭಾಗದಲ್ಲಿ ಮತ್ತಷ್ಟು ಟ್ರಾಫಿಕ್ ಜಾಮ್ ಹೆಚ್ಚಾಗಲಿದೆ. ಇದೀಗ NHAI ಅಧಿಕಾರಿಗಳು ಕಾಮಗಾರಿ ಕುರಿತು ಸೂಚನೆ ನೀಡಿದ್ದಾರೆ. ಇದೇ ವೇಳೆ ಈ ಭಾಗದಲ್ಲಿ ಸಂಚರಿಸುವ ಮಂದಿ ಹೆಚ್ಚುವರಿ ಸಮಯ ಮೀಸಲಿಡಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-urban/major-traffic-route-change-in-bengaluru-as-sadahalli-underpass-work-starts/articleshow-z8vsxsd"/>
        </item>
        <item>
            <title><![CDATA[Bengaluru first train: ಬೆಂಗಳೂರು ಮೊದಲ ರೈಲು ಕಂಡಿದ್ದು ಯಾವಾಗ ಗೊತ್ತಾ? ಈ ರೈಲು ಎಲ್ಲಿಂದ ಎಲ್ಲಿಗೆ ಓಡಿತ್ತು?]]></title>
            <link>https://kannada.asianetnews.com/bengaluru-urban/in-1864-bengaluru-heard-its-first-train-whistle-suh/articleshow-ngpo3wz</link>
            <guid isPermaLink="true">https://kannada.asianetnews.com/bengaluru-urban/in-1864-bengaluru-heard-its-first-train-whistle-suh/articleshow-ngpo3wz</guid>
            <pubDate>Sun, 13 Sep 2026 14:47:40 +0530</pubDate>
            <description><![CDATA[&lt;p&gt;ಇಂದು ಮೆಟ್ರೋ, ವಂದೇ ಭಾರತ್, ವೇಗದ ರೈಲು ಸೇರಿದಂತೆ ಆಧುನಿಕ ಸಾರಿಗೆ ವ್ಯವಸ್ಥೆಗಳಿಂದ ಗುರುತಿಸಿಕೊಂಡಿರುವ ಬೆಂಗಳೂರು, ಬೆಂಗಳೂರಿನ ಕ್ಯಾಂಟೋನ್ಮೆಂಟ್&zwnj;ನಿಂದ ತಮಿಳುನಾಡಿನ ಜೋಲಾರ್&zwnj;ಪೇಟೆವರೆಗೆ ಮೊದಲ ಪ್ರಯಾಣಿಕ ರೈಲು ಸಂಚಾರ ಆರಂಭವಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d0rdn8yymrn1d4smf78z6e,imgname-in-1864-bengaluru-heard-its-first-train-whistle-1789290886823.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದು ಮೆಟ್ರೋ, ವಂದೇ ಭಾರತ್, ವೇಗದ ರೈಲು ಸೇರಿದಂತೆ ಆಧುನಿಕ ಸಾರಿಗೆ ವ್ಯವಸ್ಥೆಗಳಿಂದ ಗುರುತಿಸಿಕೊಂಡಿರುವ ಬೆಂಗಳೂರು, ರೈಲು ಸಂಪರ್ಕ ಹೊಂದಿದ್ದು ಬರೋಬ್ಬರಿ 162 ವರ್ಷಗಳ ಹಿಂದೆಯೇ.&lt;/p&gt;&lt;h2&gt;ಆಗಸ್ಟ್ 1, 1864ರಂದು ಮೊದಲ ರೈಲು ಸಂಚಾರ&lt;/h2&gt;&lt;p&gt;1864ರ ಆಗಸ್ಟ್ 1ರಂದು ಬೆಂಗಳೂರಿನ ಕ್ಯಾಂಟೋನ್ಮೆಂಟ್ ರೈಲು ನಿಲ್ದಾಣದಿಂದ ಜೋಲಾರ್&zwnj;ಪೇಟೆ ಕಡೆಗೆ ಮೊದಲ ಪ್ರಯಾಣಿಕ ರೈಲು ಹೊರಟಿತ್ತು. ಈ ರೈಲನ್ನು ಜನಪ್ರಿಯವಾಗಿ &lsquo;Bangalore Mail&rsquo; ಎಂದು ಕರೆಯಲಾಗುತ್ತಿತ್ತು. ಬ್ರಿಟಿಷ್ ಭಾರತದ ಅವಧಿಯಲ್ಲಿ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದ್ದ Madras Railway Company ಈ ಸೇವೆಯನ್ನು ನಿರ್ವಹಿಸುತ್ತಿತ್ತು. ಆ ಸಮಯದಲ್ಲಿ ಬೆಂಗಳೂರಿನ ಕ್ಯಾಂಟೋನ್ಮೆಂಟ್ ಪ್ರದೇಶವನ್ನು Civil and Military Station ಎಂದು ಕರೆಯಲಾಗುತ್ತಿತ್ತು. 1862ರ ವೇಳೆಗೆ ಕ್ಯಾಂಟೋನ್ಮೆಂಟ್ ರೈಲು ನಿಲ್ದಾಣ ನಿರ್ಮಾಣಗೊಂಡಿತ್ತು. ಆರಂಭದಲ್ಲಿ ಈ ರೈಲು ಸಂಪರ್ಕಕ್ಕೆ ಸೇನಾ ಅಗತ್ಯಗಳೂ ಪ್ರಮುಖ ಕಾರಣವಾಗಿದ್ದವು.&lt;/p&gt;&lt;h2&gt;149 ಕಿ.ಮೀ ಮಾರ್ಗ ಏಕೆ ಪ್ರಮುಖವಾಗಿತ್ತು?&lt;/h2&gt;&lt;p&gt;ಕ್ಯಾಂಟೋನ್ಮೆಂಟ್&zwnj;ನಿಂದ ಜೋಲಾರ್&zwnj;ಪೇಟೆವರೆಗೆ ನಿರ್ಮಿಸಲಾದ ಈ ರೈಲು ಮಾರ್ಗ ಬೆಂಗಳೂರಿಗೆ ಹೊರಜಗತ್ತಿನೊಂದಿಗೆ ನೇರ ರೈಲು ಸಂಪರ್ಕ ಕಲ್ಪಿಸಿತು. ಜೋಲಾರ್&zwnj;ಪೇಟೆಯಿಂದ ಮುಂದೆ ಮದ್ರಾಸ್ ಸೇರಿದಂತೆ ಬ್ರಿಟಿಷ್ ಭಾರತದ ಇತರ ರೈಲು ಮಾರ್ಗಗಳಿಗೆ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿತ್ತು. ಇದರಿಂದ ಪ್ರಯಾಣಿಕರು ಮಾತ್ರವಲ್ಲದೆ ಸೇನಾ ಸಿಬ್ಬಂದಿ ಮತ್ತು ಸರಕುಗಳ ಸಂಚಾರವೂ ಸುಲಭವಾಯಿತು. ರೈಲು ಮಾರ್ಗವು ಬೆಂಗಳೂರಿನ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೂ ಕ್ರಮೇಣ ಪರಿಣಾಮ ಬೀರಿತು.&lt;/p&gt;&lt;h2&gt;ರೈಲು ಸಂಚಾರದ ಹಿಂದೆ ಸೇನಾ ಉದ್ದೇಶವೂ ಇತ್ತು&lt;/h2&gt;&lt;p&gt;ಆ ಕಾಲದಲ್ಲಿ ಬೆಂಗಳೂರಿನ ಕ್ಯಾಂಟೋನ್ಮೆಂಟ್ ಪ್ರಮುಖ ಬ್ರಿಟಿಷ್ ಸೇನಾ ಕೇಂದ್ರವಾಗಿತ್ತು. ಹೀಗಾಗಿ ರೈಲು ಮಾರ್ಗವು ಬೆಂಗಳೂರನ್ನು ಮದ್ರಾಸ್&zwnj;ನೊಂದಿಗೆ ಸಂಪರ್ಕಿಸುವುದರ ಜೊತೆಗೆ ಸೇನಾ ಸಿಬ್ಬಂದಿಯ ಸಂಚಾರಕ್ಕೂ ಅನುಕೂಲವಾಗಿತ್ತು. ಈ ರೈಲು ಸೇವೆಯಲ್ಲಿ ಕ್ಯಾಂಟೋನ್ಮೆಂಟ್&zwnj;ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅನೇಕ ತಮಿಳು ಭಾಷಿಕ ಸೈನಿಕರು ಪ್ರಯಾಣಿಸುತ್ತಿದ್ದರು ಎಂಬ ಉಲ್ಲೇಖವೂ ವರದಿಯಲ್ಲಿದೆ. ರೈಲು ಸಂಪರ್ಕ ಹೆಚ್ಚಾದಂತೆ ಬೆಂಗಳೂರಿಗೆ ಜನರ ಆಗಮನವೂ ಹೆಚ್ಚಾಯಿತು.&lt;/p&gt;&lt;h2&gt;ಇಂದಿನಂತೆ ವೇಗದ ರೈಲಲ್ಲ&lt;/h2&gt;&lt;p&gt;ಇಂದು ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಗಂಟೆಗಳಲ್ಲಿ ಪ್ರಯಾಣಿಸುವುದು ಸಾಮಾನ್ಯ. ಆದರೆ 1864ರ ಕಾಲದ ರೈಲು ಪ್ರಯಾಣ ಹಾಗಿರಲಿಲ್ಲ. ಉಗಿ ಇಂಜಿನ್&zwnj;ಗಳಿಂದ ಚಲಿಸುತ್ತಿದ್ದ ರೈಲು ಕೆಲವು ಭಾಗಗಳಲ್ಲಿ ಗಂಟೆಗೆ ಸುಮಾರು 12 ಮೈಲುಗಳಷ್ಟು ವೇಗದಲ್ಲಿ ಸಾಗುತ್ತಿತ್ತು. ಜೋಲಾರ್&zwnj;ಪೇಟೆಯಿಂದ ಬೆಂಗಳೂರಿಗೆ ತಲುಪಲು ಹಲವು ಗಂಟೆಗಳು ಬೇಕಾಗುತ್ತಿತ್ತು. ಕೆಲವು ಐತಿಹಾಸಿಕ ದಾಖಲೆಗಳ ಪ್ರಕಾರ, ನಿಲ್ದಾಣಗಳಲ್ಲಿ ನಿಲುಗಡೆ ಸೇರಿದಂತೆ ಪ್ರಯಾಣವು ಸುಮಾರು 10 ಗಂಟೆಗಳವರೆಗೆ ಸಾಗುತ್ತಿತ್ತು. ಉಗಿ ಇಂಜಿನ್&zwnj;ನಿಂದ ಹೊರಬರುತ್ತಿದ್ದ ಹೊಗೆಯ ಪರಿಣಾಮ ಪ್ರಯಾಣಿಕರು ರೈಲು ಇಳಿಯುವಷ್ಟರಲ್ಲಿ ಬೂದಿಯಿಂದ ಆವೃತರಾಗುತ್ತಿದ್ದ ಸಂದರ್ಭಗಳೂ ಇದ್ದವು.&lt;/p&gt;&lt;h2&gt;ಆಗ ಮೊಬೈಲ್, ಫೋನ್ ಯಾವುದೂ ಇರಲಿಲ್ಲ&lt;/h2&gt;&lt;p&gt;ಇಂದಿನ ಮೊಬೈಲ್ ಫೋನ್, ಇಂಟರ್&zwnj;ನೆಟ್, ವೈರ್&zwnj;ಲೆಸ್ ಸಂವಹನ ಯಾವುದೂ ಇಲ್ಲದ ಕಾಲ ಅದು. ರೈಲು ನಿಲ್ದಾಣಗಳ ನಡುವೆ ಸಂಪರ್ಕ ಸಾಧಿಸಲು Magneto Phone ಬಳಸಲಾಗುತ್ತಿತ್ತು. ಈ ಫೋನ್&zwnj;ಗಳಲ್ಲಿ ಇಂದಿನಂತೆ ಡಯಲ್ ಅಥವಾ ನಂಬರ್ ಪ್ಯಾಡ್ ಇರಲಿಲ್ಲ. ಒಂದು ತುದಿಯಲ್ಲಿದ್ದ ವ್ಯಕ್ತಿ ಫೋನ್&zwnj;ನ ಹ್ಯಾಂಡಲ್ ತಿರುಗಿಸಿದರೆ, ಮತ್ತೊಂದು ತುದಿಯಲ್ಲಿದ್ದ ಉಪಕರಣ ರಿಂಗ್ ಆಗುತ್ತಿತ್ತು. ರೈಲು ಸಂಚಾರವನ್ನು ಸಮನ್ವಯಗೊಳಿಸುವಲ್ಲಿ ಈ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತಿತ್ತು.&lt;/p&gt;&lt;h2&gt;ಕೆಂಪು, ಹಳದಿ, ನೀಲಿ ದೀಪಗಳೇ ಸಿಗ್ನಲ್&lt;/h2&gt;&lt;p&gt;ಇಂದಿನ ಆಧುನಿಕ ಸಿಗ್ನಲಿಂಗ್ ವ್ಯವಸ್ಥೆಗೆ ಹೋಲಿಸಿದರೆ ಆಗಿನ ರೈಲ್ವೆ ವ್ಯವಸ್ಥೆ ಸಂಪೂರ್ಣ ಭಿನ್ನವಾಗಿತ್ತು. ಬಣ್ಣದ ದೀಪಗಳ ಮೂಲಕ ರೈಲು ಸಿಬ್ಬಂದಿಗೆ ಸೂಚನೆ ನೀಡಲಾಗುತ್ತಿತ್ತು. ಕೆಂಪು ಬಣ್ಣವು ನಿಲ್ಲಿಸುವುದು ಅಥವಾ ತುರ್ತು ಪರಿಸ್ಥಿತಿಯನ್ನು ಸೂಚಿಸಿದರೆ, ಹಳದಿ ಬಣ್ಣವು ಮುಂದುವರಿಯಲು ಸೂಚಿಸುತ್ತಿತ್ತು. ನೀಲಿ ಬಣ್ಣವು ಮಾರ್ಗ ಅಥವಾ ಕಾರ್ಯಾಚರಣೆ ಇನ್ನೂ ಸಿದ್ಧವಾಗಿಲ್ಲ ಎಂಬುದನ್ನು ಸೂಚಿಸುತ್ತಿತ್ತು ಎಂದು ಐತಿಹಾಸಿಕ ದಾಖಲೆಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.&lt;/p&gt;&lt;h2&gt;18 ವರ್ಷಗಳ ಬಳಿಕ ಬೆಂಗಳೂರಿನ ಮತ್ತೊಂದು ಭಾಗಕ್ಕೂ ರೈಲು&lt;/h2&gt;&lt;p&gt;1864ರಿಂದ ಸುಮಾರು 18 ವರ್ಷಗಳ ಕಾಲ ಕ್ಯಾಂಟೋನ್ಮೆಂಟ್ ಬೆಂಗಳೂರಿನ ಪ್ರಮುಖ ರೈಲು ಪ್ರವೇಶದ್ವಾರವಾಗಿತ್ತು. ನಂತರ 1882ರಲ್ಲಿ ರೈಲು ಸಂಪರ್ಕ ಬೆಂಗಳೂರು ಸಿಟಿ ನಿಲ್ದಾಣದವರೆಗೆ ವಿಸ್ತರಿಸಲಾಯಿತು. ಮುಂದೆ ಬೆಂಗಳೂರು-ಮೈಸೂರು, ಬೆಂಗಳೂರು-ತುಮಕೂರು ಸೇರಿದಂತೆ ಹಲವು ಮಾರ್ಗಗಳು ಅಭಿವೃದ್ಧಿಯಾದವು. 1881ರಲ್ಲಿ ಬೆಂಗಳೂರು-ಚನ್ನಪಟ್ಟಣ ಸೇವೆ ಆರಂಭವಾಗಿದ್ದು, 1882ರಲ್ಲಿ ಬೆಂಗಳೂರು-ಮೈಸೂರು ರೈಲು ಮಾರ್ಗವೂ ಪೂರ್ಣಗೊಂಡಿತು. ಹೀಗೆ 1864ರಲ್ಲಿ ಕೇವಲ 149 ಕಿ.ಮೀ ಉದ್ದದ ರೈಲು ಸಂಪರ್ಕದಿಂದ ಆರಂಭವಾದ ಬೆಂಗಳೂರಿನ ರೈಲು ಪಯಣ, ಮುಂದೆ ದಕ್ಷಿಣ ಭಾರತದ ಹಲವು ನಗರಗಳನ್ನು ಸಂಪರ್ಕಿಸುವ ದೊಡ್ಡ ರೈಲು ಜಾಲವಾಗಿ ಬೆಳೆದಿದೆ. ಇಂದು ಕೋಟ್ಯಂತರ ಜನರ ಸಂಚಾರಕ್ಕೆ ಆಧಾರವಾಗಿರುವ ಬೆಂಗಳೂರಿನ ರೈಲು ಇತಿಹಾಸದ ಮೊದಲ ಪುಟ ಇದೇ 1864ರಲ್ಲಿ ಬರೆಯಲ್ಪಟ್ಟಿತ್ತು.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/bengaluru-urban/in-1864-bengaluru-heard-its-first-train-whistle-suh/articleshow-ngpo3wz"/>
        </item>
        <item>
            <title><![CDATA[ಗಣೇಶೋತ್ಸವ ವೇಳೆ ಕಲ್ಲು ತೂರಾಟ ಪ್ರಕರಣ: ಒಂದು ವರ್ಷದ ಬಳಿಕ ಬಿಜೆಪಿ ಮುಖಂಡರಿಗೆ ಪೊಲೀಸರು ನೋಟಿಸ್!]]></title>
            <link>https://kannada.asianetnews.com/politics/maddur-ganeshotsav-stone-pelting-case-police-issue-summons-to-bjp-leaders-after-a-year-rav/articleshow-alp8ac4</link>
            <guid isPermaLink="true">https://kannada.asianetnews.com/politics/maddur-ganeshotsav-stone-pelting-case-police-issue-summons-to-bjp-leaders-after-a-year-rav/articleshow-alp8ac4</guid>
            <pubDate>Sun, 13 Sep 2026 14:08:10 +0530</pubDate>
            <description><![CDATA[&lt;p&gt;Maddur Ganeshotsav ಮದ್ದೂರಿನಲ್ಲಿ ಕಳೆದ ವರ್ಷದ ಗಣೇಶೋತ್ಸವದ ಕಲ್ಲು ತೂರಾಟ ಖಂಡಿಸಿ ಪ್ರತಿಭಟಿಸಿದ್ದ ಬಿಜೆಪಿ ಮುಖಂಡರಿಗೆ ಸರ್ಕಾರ ಒಂದು ವರ್ಷದ ಬಳಿಕ ನೋಟಿಸ್ ನೀಡಿದೆ. ಇದು ಹಿಂದೂಗಳನ್ನು ಕುಗ್ಗಿಸುವ ಪ್ರಯತ್ನವಾಗಿ ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cxtvsy317gymw88wsernka,imgname-mandya-1789287821118.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯ (ಸೆ.13): ಕಳೆದ ವರ್ಷ ಮದ್ದೂರು ಗಣೇಶೋತ್ಸವದ ವೇಳೆ ಕಲ್ಲು ತೂರಾಟ ನಡೆಸಿದ್ದ ಕಿಡಿಗೇಡಿಗಳ ವಿರುದ್ಧ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು. ಇದೀಗ ಒಂದು ವರ್ಷದ ಬಳಿಕ ಪ್ರತಿಭಟನೆ ನಡೆಸಿದ್ದ ಬಿಜೆಪಿ ಮುಖಂಡರಿಗೆ, ಹಿಂದೂಪರ ಸಂಘಟನೆಗಳಿಗೆ ಸರ್ಕಾರ ನೋಟಿಸ್ ನೀಡಿ ಅಚ್ಚರಿ ಮೂಡಿಸಿದೆ.&lt;/p&gt;&lt;h2&gt;ಮದ್ದೂರು ಬಿಜೆಪಿ ಮುಖಂಡ ಆಕ್ರೋಶ&lt;/h2&gt;&lt;p&gt;ಕಳೆದ ವರ್ಷ ಗಣೇಶೋತ್ಸವ ವೇಳೆ ಕಲ್ಲು ತೂರಿದ್ದು ಯಾರು? ಕಲ್ಲು ತೂರಿದ ಕಿಡಿಗೇಡಿಗಳನ್ನು ಬಿಟ್ಟು ಕಿಡಿಗಳ ಬಂಧನಕ್ಕೆ ಪ್ರತಿಭಟನೆ ನಡೆಸಿದ ನಮಗೇ ಸಮನ್ಸ್ ನೀಡ್ತೀರಾ? ಪೊಲೀಸರ ನಡೆಗೆ ಮದ್ದೂರಿನ ಬಿಜೆಪಿ ಮುಖಂಡ ಎಸ್&zwnj;ಪಿ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h3&gt;ಈ ಸರ್ಕಾರದಿಂದ ಹಿಂದೂಗಳ ಕುಗ್ಗಿಸುವ ಪ್ರಯತ್ನ&lt;/h3&gt;&lt;p&gt;ಕಳೆದ ವರ್ಷ ಮೆರವಣಿಗೆ ವೇಳೆ ಕಲ್ಲು ತೂರಿದ್ದ ಕಿಡಿಗೇಡಿಗಳು. ಇದರ ವಿರುದ್ಧ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಇದೀಗ ಕಲ್ಲು ತೂರಿದ ಕಿಡಿಗೇಡಿಗಳ ಜೊತೆಗೆ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ 23 ಬಿಜೆಪಿ ಮುಖಂಡರಿಗೂ ಸಮನ್ಸ್ ಜಾರಿ ಮಾಡಿದೆ. ಸಮನ್ಸ್ ಕೊಟ್ಟು ಹಿಂದೂಗಳನ್ನು ಕುಗ್ಗಿಸುವ ಪ್ರಯತ್ನ ಮಾಡ್ತಿದ್ದಾರೆ. ಹಿಂದೂಗಳ ಹಬ್ಬ ಆಚರಣೆಗೆ ಕಾಂಗ್ರೆಸ್ ಸರ್ಕಾರ ಅಡ್ಡಿ ಮಾಡ್ತಿದೆ. ಕಳೆದ ವರ್ಷ ನಡೆದ ಗಲಾಟೆ ಸಂಬಂಧ ಒಂದು ವರ್ಷದ ಬಳಿಕ ಇದೀಗ ಗಣೇಶೋತ್ಸವದವೇಳೆ ಸಮನ್ಸ್ ಜಾರಿ ಮಾಡಿದ್ದಾರೆ. ಗಣಪತಿ ಪ್ರತಿಷ್ಠಾಪನೆಗೆ ಕಠಿಣ ಷರತ್ತು ಹೇರಿದ್ದಾರೆ. ಅನುಮತಿ ನೀಡಲು ಯುವಕರನ್ನು ಉದ್ದೇಶಪೂರ್ವಕವಾಗಿ ಅಲೆದಾಡಿಸುತ್ತಿದ್ದಾರೆ. ಮಸೀದಿ ಮುಂದೆ ಗಣಪತಿ ಮೆರವಣಿಗೆ ಹೋಗದಂತೆ ಪೋಲೀಸರಿಂದಲೇ ನಿರ್ಬಂಧವಿದೆ. ವೋಟ್&zwnj;ಬ್ಯಾಂಕ್&zwnj;ಗಾಗಿ ಈ ಸರ್ಕಾರದಿಂದ ಒಂದೇ ಕೋಮಿನ ಓಲೈಕೆ ನಡೆಯುತ್ತಿದೆ ಎಂದು ಆರೋಪಿಸಿದರು.&lt;/p&gt;&lt;h3&gt;ಪೊಲೀಸ್ ಪವರ್ ಹಿಂದೂಗಳ ಮುಂದೆ ಮಾತ್ರವಾ?&lt;/h3&gt;&lt;p&gt;ಅದೇ ಮುಸ್ಲಿಮರು ಹಬ್ಬ ಆಚರಿಸುವಾಗ ಯಾವುದ ನಿರ್ಬಂಧಗಳಿರೋದಿಲ್ಲ. ಗಣೇಶೋತ್ಸವ ಮೆರವಣಿಗೆಗೆ ಕೊಡೋ ಎಚ್ಚರಿಕೆ ಡೈಲಾಗ್&zwnj;ಗಳು ಅವರ ಹಬ್ಬದಲ್ಲಿ ಪೊಲೀಸರು ಕೊಡೋ ಧೈರ್ಯ ಮಾಡೋಲ್ಲ. ಅವರು ಮಂದಿರಗಳ ಮುಂದೆ ಮೆರವಣಿಗೆ ಹೋಗ್ತಾರೆ, ನಾವು ಮಸೀದಿ ಹೋಗ್ತೇವೆ. ಅವರ ಏನೇ ಹಬ್ಬ ಮೆರವಣಿಗೆಗಳಾದರೂ, ನಮ್ಮ ದೇವಾಲಯಗಳ ಮುಂದೆ ಸಾಗಿದ್ರೂ ಯಾವುದೇ ಕಲ್ಲು ತೂರಾಟ, ಗಲಾಟೆ ನಡೆಯಲ್ಲ. ಆದ್ರೆ ಹಿಂದೂಗಳ ಹಬ್ಬ ಆಚರಿಸುವಾಗ ಮಸೀದಿ ಮುಂದೆ ಹೋಗದಂತೆ ಪೊಲೀಸರೇ ನಿರ್ಬಂಧ ಹೇರುತ್ತಾರೆ. ಇದ್ಯಾಕೆ ಹಿಂಗೆ? ಯಾಕೆ ಕಲ್ಲು ತೂರಾಡೋದು? ಅವರಿಗೆ ಎಚ್ಚರಿಕೆ ಕೊಟ್ಟು ಕಲ್ಲು ತೂರುವ ಕಿಡಿಗೇಡಿಗಳಿಗೆ ಒಂದು ಭಯ ಹುಟ್ಟಿಸಬೇಕಲ್ಲ? ಕಲ್ಲು ತೂರದಂತೆ ಬಂದೋಬಸ್ತ್ ಮಾಡಬಹುದಲ್ಲ? ಅದುಬಿಟ್ಟ ಹಿಂದೂಗಳಿಗೆ ಷರತ್ತು ಹಾಕುವ ಕೆಲಸ ಮಾಡ್ತಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/maddur-ganeshotsav-stone-pelting-case-police-issue-summons-to-bjp-leaders-after-a-year-rav/articleshow-alp8ac4"/>
        </item>
        <item>
            <title><![CDATA[ಟಿ ನರಸೀಪುರದಲ್ಲಿ ಬಿಗುವಿನ ವಾತಾವರಣ; ಪ್ರತಾಪ್ ಬೆಂಬಲಕ್ಕೆ ಜಮಾಯಿಸಿದ ನೂರಾರು ಕಾರ್ಯಕರ್ತರು!]]></title>
            <link>https://kannada.asianetnews.com/politics/bjp-pratap-simha-and-r-ashok-criticizes-karnataka-govt-over-ganeshotsav-t-narasipur-rav/articleshow-127k8x5</link>
            <guid isPermaLink="true">https://kannada.asianetnews.com/politics/bjp-pratap-simha-and-r-ashok-criticizes-karnataka-govt-over-ganeshotsav-t-narasipur-rav/articleshow-127k8x5</guid>
            <pubDate>Sun, 13 Sep 2026 13:16:10 +0530</pubDate>
            <description><![CDATA[&lt;p&gt;ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್&zwnj;ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cv0q5f1y5psezy13djvkca,imgname-pratap-simha-on-t-narasipur-ganeshotsav-1789284867247.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು (ಸೆ.13): ಒಂದು ಕಡೆ ವಿಶ್ವವಿಖ್ಯಾತ ದಸರಾ ಹಬ್ಬ ಸಮೀಪಿಸಿರುವ ಹೊತ್ತಲ್ಲೇ ಇತ್ತ ಮೈಸೂರು ಜಿಲ್ಲೆ ಟಿ.ನರಸೀಪುರದ ಗಣೇಶೋತ್ಸವ ಮೆರವಣಿಗೆ ವಿಚಾರ ಇದೀಗ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.&lt;/p&gt;&lt;p&gt;ಲಿಂಕ್ ರಸ್ತೆಯಲ್ಲಿ, ಮಸೀದಿ ಮುಂಭಾಗ ಮೆರವಣಿಗೆ ಹೋಗಬಾರದು, ಪಟಾಕಿ ಸಿಡಿಸಬಾರದು ಎಂದು ಇನ್&zwnj;ಸ್ಪೆಕ್ಟರ್ ಧನಂಜಯ ನೀಡಿದ್ದ ಎಚ್ಚರಿಕೆ ವಿಡಿಯೋ ವೈರಲ್ ಆಗಿದೆ. ಅಧಿಕಾರಿ ಧಮ್ಕಿ ಬೆನ್ನಲ್ಲೇ ಬಿಜೆಪಿ ನಾಯಕರು ಸಿಡಿದಿದ್ದು, ಪ್ರತಿಪಕ್ಷ ನಾಯಕ ಆರ್ ಅಶೋಕ್, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h2&gt;ಇನ್ಸಪೆಕ್ಟರ್ ಹೇಳಿಕೆ ಬಳಿಕ ಬಿಗುವಿನ ವಾತಾವರಣ&lt;/h2&gt;&lt;p&gt;ಗಣೇಶ ಮೆರವರಣಿಗೆ ಬಗ್ಗೆ ಇನ್ಸ್&zwnj;ಪೆಕ್ಟರ್ ಧನಂಜಯ ಹೇಳಿಕೆ ಬಳಿಕ ಟಿ ನರಸೀಪುರದಲ್ಲಿ ಬಿಗುವಿನ ವಾತಾರವಣ ನಿರ್ಮಾಣವಾಗಿದೆ. ಇಂದು ಪೊಲೀಸ್ ಠಾಣೆಗೆ ಆಗಮಿಸಿರುವ ಬಿಜೆಪಿ ನಾಯಕರು. ಆರ್ ಅಶೋಕ್, ಪ್ರತಾಪ್ ಸಿಂಹ ಬೆಂಬಲಕ್ಕೆ ಆಗಮಿಸಿದ ನೂರಾರು ಕಾರ್ಯಕರ್ತರು.&lt;/p&gt;&lt;h3&gt;ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘಟನೆ ಪ್ರತಿಭಟನೆ&lt;/h3&gt;&lt;p&gt;ಇನ್ನೊಂದೆಡೆ ಪ್ರತಾಪ್ ಸಿಂಹ ಠಾಣೆಗೆ ನುಗ್ಗುವ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಗಳು ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಾಪ್&zwnj; ಸಿಂಹರನ್ನ ಬಂಧಿಸುವಂತೆ ಒತ್ತಾಯಿಸಿದ ಪ್ರತಿಭಟನೆ ನಡೆಸುತ್ತಿರುವ ದಲಿತ ಸಂಘಟನೆಗಳು, ಇತ್ತ ಪ್ರತಾಪ್ ಬೆಂಬಲವಾಗಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ ಟಿ ನರಸೀಪುರ ಪೊಲೀಸ್ ಠಾಣೆ ಮುಂಭಾಗ ಇಂದು ಭಾರೀ ಹೈಡ್ರಾಮ ಸೃಷ್ಟಿಯಾಗಿದೆ. ಒಂದೆಡೆ ಡಿಎಸ್&zwnj;ಎಸ್&zwnj; ಲೀಡರ್ಸ್ ಪ್ರತಾಪ್ ಸಿಂಹ ವಿರುದ್ಧ ದಿಕ್ಕಾರ ಕೂಗುತ್ತಿದ್ದರೆ, ಮತ್ತೊಂದೆಡೆ 'ಹಿಂದೂ ಹುಲಿ, ಪ್ರತಾಪ್ ಸಿಂಹಗೆ ಜೈ ಎಂದು ಪ್ರತಾಪ್ ಸಿಂಹ ಬೆಂಬಲಿಗರಿಂದಲೂ ಘೋಷಣೆ ಕೂಗುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/bjp-pratap-simha-and-r-ashok-criticizes-karnataka-govt-over-ganeshotsav-t-narasipur-rav/articleshow-127k8x5"/>
        </item>
        <item>
            <title><![CDATA[ಕೆಪಿಎಸ್‌ಸಿ ಹಗರಣ: ಸಚಿವ ಪ್ರಿಯಾಂಕ್ ಖರ್ಗೆ ಕನಸಲ್ಲಿ ಬರೀ ಪರಪ್ಪನ ಅಗ್ರಹಾರ ಬರ್ತಿದೆ; ಪ್ರತಾಪ್ ಸಿಂಹ]]></title>
            <link>https://kannada.asianetnews.com/politics/pratap-simha-lashes-out-at-priyank-kharge-kpsc-scam-ganeshotsav-fir-sat/articleshow-dt8rh68</link>
            <guid isPermaLink="true">https://kannada.asianetnews.com/politics/pratap-simha-lashes-out-at-priyank-kharge-kpsc-scam-ganeshotsav-fir-sat/articleshow-dt8rh68</guid>
            <pubDate>Sun, 13 Sep 2026 13:04:03 +0530</pubDate>
            <description><![CDATA[ಕೆಪಿಎಸ್&zwnj;ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಜೈಲು ಸೇರಲಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ತಮ್ಮ ಮೇಲಿನ ಎಫ್&zwnj;ಐಆರ್&zwnj;ಗಳಿಗೆ ಹೆದರುವುದಿಲ್ಲ ಎಂದಿರುವ ಅವರು, ಟಿ. ನರಸೀಪುರದಲ್ಲಿ ಗಣೇಶೋತ್ಸವಕ್ಕೆ ಅಡ್ಡಿಪಡಿಸುತ್ತಿರುವ ಪೊಲೀಸ್ ಇನ್&zwnj;ಸ್ಪೆಕ್ಟರ್ ವಿರುದ್ಧ ಆರ್. ಅಶೋಕ್ ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ctpzxdjkg5jx0d1wr83465,imgname-priyank-kharge-vs-pratap-simha-1789284548524.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಸೆ.13):'ಕೆ&lt;/strong&gt;ಪಿಎಸ್&zwnj;ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಪರಪ್ಪನ ಅಗ್ರಹಾರ ಜೈಲು ಸೇರುವ ಸ್ಥಿತಿಯಲ್ಲಿದ್ದಾರೆ. ಕೇಂದ್ರ ಸಚಿವ ಎಚ್&zwnj;.ಡಿ. ಕುಮಾರಸ್ವಾಮಿ ಅವರು ಈ ಅಕ್ರಮದ ಬಗ್ಗೆ ಮಾತನಾಡಿದಾಗಿನಿಂದ ಖರ್ಗೆ ಅವರಿಗೆ ಕನಸಿನಲ್ಲೂ ಪರಪ್ಪನ ಅಗ್ರಹಾರವೇ ಕಾಣುತ್ತಿದೆ' ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.&lt;/p&gt;&lt;p&gt;ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವ ಕೆಪಿಎಸ್&zwnj;ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನೇರ ವಾಗ್ದಾಳಿ ನಡೆಸಿ ಆಕ್ರೋಶ ಹೊರಹಾಕಿದರು.&lt;/p&gt;&lt;h2&gt;&lt;strong&gt;21 ಕೇಸ್&zwnj;ಗಳಿವೆ, ಇನ್ನೊಂದು ಹಾಕಿ; ಗಣೇಶೋತ್ಸವಕ್ಕಾಗಿ ಜೈಲಿಗೂ ರೆಡಿ!&lt;/strong&gt;&lt;/h2&gt;&lt;p&gt;ತಮ್ಮ ಮೇಲಿನ ಎಫ್&zwnj;ಐಆರ್ ಹಾಗೂ ಜೈಲು ಬೆದರಿಕೆಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, 'ನನ್ನ ಮೇಲೆ ಈಗಾಗಲೇ 21 ಎಫ್&zwnj;ಐಆರ್&zwnj;ಗಳು (FIR) ಇವೆ. ಬೇಕಿದ್ದರೆ ಇನ್ನೊಂದು ಎಫ್&zwnj;ಐಆರ್ ದಾಖಲಿಸಲಿ, ನಾನು ಯಾವುದಕ್ಕೂ ಹೆದರುವ ವ್ಯಕ್ತಿಯಲ್ಲ. ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಕ್ಕಾಗಿ ನನ್ನನ್ನು ಜೈಲಿಗೆ ಕಳುಹಿಸಿದರೆ ನನಗೇನೂ ಬೇಸರವಿಲ್ಲ, ಅದಕ್ಕೆ ನಾನು ಸಿದ್ಧನಿದ್ದೇನೆ. ನನ್ನನ್ನು ಹೆದರಿಸುವ ಪ್ರಯತ್ನ ಯಾರಿಂದಲೂ ನಡೆಯಲ್ಲ' ಎಂದು ಗುಡುಗಿದರು.&lt;/p&gt;&lt;h2&gt;&lt;strong&gt;ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಖರ್ಗೆ ಮಾತು!&lt;/strong&gt;&lt;/h2&gt;&lt;p&gt;ಕಾಂಗ್ರೆಸ್ ಸರ್ಕಾರದ ಹಿಂದಿನ ನಡೆಗಳನ್ನು ಪ್ರಸ್ತಾಪಿಸಿದ ಅವರು, 'ಪ್ರಿಯಾಂಕ್ ಖರ್ಗೆ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ. ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದ ಗಲಭೆಕೋರರನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದು ಇದೇ ಕಾಂಗ್ರೆಸ್ಸಿಗರು. ಕಾಂಗ್ರೆಸ್&zwnj;ನ ಇತಿಹಾಸ ನನಗೆ ಚೆನ್ನಾಗಿ ಗೊತ್ತಿದೆ. ಖರ್ಗೆ ಅವರಲ್ಲಿ ಅಭದ್ರತೆ ಮತ್ತು ಪುಕ್ಕಲುತನ ಹೆಚ್ಚಾಗಿದೆ. ಆ ಕಾರಣಕ್ಕಾಗಿಯೇ ಅವರು ಎಲ್ಲರ ಬಗ್ಗೆಯೂ ಏಕವಚನದಲ್ಲಿ ಮಾತನಾಡುತ್ತಾರೆ' ಎಂದು ಕಿಡಿಕಾರಿದರು.&lt;/p&gt;&lt;h2&gt;&lt;strong&gt;ಟಿ. ನರಸೀಪುರ ಇನ್&zwnj;ಸ್ಪೆಕ್ಟರ್ ದರ್ಪಕ್ಕೆ ತಕ್ಕ ಪಾಠ: ಆರ್&zwnj; ಅಶೋಕ್ ಭೇಟಿ&lt;/strong&gt;&lt;/h2&gt;&lt;p&gt;ಇದೇ ವೇಳೆ ಟಿ. ನರಸೀಪುರ ಪೊಲೀಸ್ ಠಾಣೆ ಮುಂಭಾಗ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಅವರು, 'ಸ್ಥಳೀಯ ಪೊಲೀಸ್ ಇನ್&zwnj;ಸ್ಪೆಕ್ಟರ್ ಧನಂಜಯ ಅವರು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಿಂದು ಯುವಕರ ಮೇಲೆ ದರ್ಪ ತೋರಿ, ಧಮ್ಕಿ ಹಾಕುತ್ತಿದ್ದಾರೆ. ಸ್ಥಳೀಯ ಜನರಲ್ಲಿ ಸುಳ್ಳು ಕೇಸ್ ಹಾಕುವ ಭೀತಿ ಹುಟ್ಟಿಸಿದ್ದಾರೆ. ಇಂತಹ ಅಧಿಕಾರಿಯ ದರ್ಪವನ್ನು ಮುರಿಯಲು ಹಾಗೂ ಅವರನ್ನು ತರಾಟೆಗೆ ತೆಗೆದುಕೊಳ್ಳಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸ್ವತಃ ಟಿ. ನರಸೀಪುರಕ್ಕೆ ಆಗಮಿಸುತ್ತಿದ್ದಾರೆ' ಎಂದು ಮಾಹಿತಿ ನೀಡಿದರು.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/pratap-simha-lashes-out-at-priyank-kharge-kpsc-scam-ganeshotsav-fir-sat/articleshow-dt8rh68"/>
        </item>
        <item>
            <title><![CDATA[Mandya: ಹಾಲಿನ ವ್ಯಾನ್-ಟಾಟಾ ಏಸ್ ಭೀಕರ ಡಿಕ್ಕಿ: ಹರಕೆ ತೀರಿಸಲು ಹೊರಟಿದ್ದವರು ಆಸ್ಪತ್ರೆಗೆ! ಸಾವು-ನೋವುಗಳೆಷ್ಟು?]]></title>
            <link>https://kannada.asianetnews.com/gallery/karnataka-districts/ten-people-were-injured-in-a-collision-between-a-milk-van-and-a-tata-ace-near-nagamangala-mandya-rav-401dogd</link>
            <guid isPermaLink="true">https://kannada.asianetnews.com/gallery/karnataka-districts/ten-people-were-injured-in-a-collision-between-a-milk-van-and-a-tata-ace-near-nagamangala-mandya-rav-401dogd</guid>
            <pubDate>Sun, 13 Sep 2026 12:25:52 +0530</pubDate>
            <description><![CDATA[&lt;p&gt;ದೇವಸ್ಥಾನಕ್ಕೆ ಹರಕೆ ಮಾಡಲು ಹೊರಟ್ಟಿದ್ದ ವೇಳ ಹಾಲಿನ ವ್ಯಾನ್ ಡಿಕ್ಕಿ ಸಂಭವಿಸಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಮಂಗಲ ಬಳಿ ನಡೆದಿದೆ. ಘಟನೆಗೆ ಕಾರಣವೇನು? ತಿಳಿಯಿರಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cr7zm99vbxbf276c5q43j2,imgname-mandya-nagamangala-tata-ace-accident-1789281959561.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇವಸ್ಥಾನಕ್ಕೆ ಹರಕೆ ಮಾಡಲು ಹೊರಟ್ಟಿದ್ದ ವೇಳ ಹಾಲಿನ ವ್ಯಾನ್ ಡಿಕ್ಕಿ ಸಂಭವಿಸಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಮಂಗಲ ಬಳಿ ನಡೆದಿದೆ. ಘಟನೆಗೆ ಕಾರಣವೇನು? ತಿಳಿಯಿರಿ&lt;/p&gt;&lt;img&gt;&lt;p&gt;ಮಂಡ್ಯ (ಸೆ.13): ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕ್ಯಾತನಹಳ್ಳಿ ಗೇಟ್ ಬಳಿ ಹಾಲಿನ ವ್ಯಾನ್ ಹಾಗೂ ಟಾಟಾ ಏಸ್ ನಡುವೆ ಭೀಕರ ಮುಖಾಮುಖಿ ಡಿಕ್ಕಿಯಾಗಿ 10ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆದ ಬಗ್ಗೆ ವರದಿಯಾಗಿಲ್ಲ. ಆದರೆ ಇಬ್ಬರು ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದೆ.&lt;/p&gt;&lt;img&gt;&lt;p&gt;ಶ್ರವಣಬೆಳಗೋಳ-ನಾಗಮಂಗಲ ರಸ್ತೆಯ ಗಡಿ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳು ಚನ್ನರಾಯಪಟ್ಟಣದ ಶ್ರೀನಿವಾಸಪುರದ ನಿವಾಸಿಗಳಾಗಿದ್ದಾರೆ. ನಾಗಮಂಗಲ ಬಳಿಯ ಮುಳ್ಳುಕಟ್ಟಮ್ಮ ದೇವಸ್ಥಾನಕ್ಕೆ ಪರ(ಹರಕೆ) ಮಾಡಲು ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.&lt;/p&gt;&lt;img&gt;&lt;p&gt;ಟಾಟಾ ಏಸ್&zwnj;ನಲ್ಲಿ ಹೊರಟಿದ್ದ ವೇಳೆ ಎದುರುಗಡೆಯಿಂದ ಬಂದ ಹಾಲಿನ ವ್ಯಾನ್ ಈ ವೇಳೆ ನಿಯಂತ್ರಣ ಕಳೆದುಕೊಂಡು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ರಸ್ತೆ ಮೇಲೆ ಚೆಲ್ಲಪಿಲ್ಲಿ ಬಿದ್ದ ಜನರು. ತಕ್ಷಣ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/ten-people-were-injured-in-a-collision-between-a-milk-van-and-a-tata-ace-near-nagamangala-mandya-rav-401dogd"/>
        </item>
        <item>
            <title><![CDATA[ಬೆಂಗಳೂರಿನ ಸರ್ಕಾರಿ ಶಾಲೆ ಸಮಯ ಬದಲಾವಣೆ ಸಾಧ್ಯತೆ: ಸಚಿವರಿಗೆ ಶಿಕ್ಷಕರ ಮನವಿ ಸಲ್ಲಿಕೆ]]></title>
            <link>https://kannada.asianetnews.com/bengaluru-urban/possible-change-in-timings-for-bengaluru-government-schools-due-to-traffic-teachers-submit-request-to-minister-mrq/articleshow-plygla0</link>
            <guid isPermaLink="true">https://kannada.asianetnews.com/bengaluru-urban/possible-change-in-timings-for-bengaluru-government-schools-due-to-traffic-teachers-submit-request-to-minister-mrq/articleshow-plygla0</guid>
            <pubDate>Sun, 13 Sep 2026 11:41:12 +0530</pubDate>
            <description><![CDATA[&lt;p&gt;ಬೆಂಗಳೂರಿನ ಸರ್ಕಾರಿ ಶಾಲಾ ಸಮಯವನ್ನು ಬದಲಾಯಿಸುವಂತೆ ಶಿಕ್ಷಕರು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ. ಪ್ರಸ್ತುತ 10.30 ರಿಂದ 4.30 ರವರೆಗೆ ಸರ್ಕಾರ ಶಾಲೆಗಳು ಕಾರ್ಯನಿರ್ವಹಿಸುತ್ತವೆ. ಈ ಸಮಯ ಬದಲಾವಣೆಗೆ ಶಿಕ್ಷಕರು ಮನವಿ ಮಾಡಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cnx3gk1bgs4bxq30c18z3z,imgname-bengaluru-school-1789279505939.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯ ಸರ್ಕಾರ ಬೆಂಗಳೂರಿನ ಸರ್ಕಾರಿ ಶಾಲೆಗಳ ಸಮಯ (ವೇಳಾಪಟ್ಟಿ) ಪರಿಷ್ಕರಿಸುವ ಸಾಧ್ಯತೆಗಳಿವೆ. ಶಾಲೆಗಳ ಆರಂಭ ಮತ್ತು ಮುಕ್ತಾಯದ ಸಮಯವನ್ನು ಪರಿಷ್ಕರಣೆ ಮಾಡುವಂತೆ ಶಿಕ್ಷಣ ಸಚಿವರ ಮಧು ಬಂಗಾರಪ್ಪ ಅವರಿಗೆ ಶಿಕ್ಷಕರು ಮನವಿ ಮಾಡಿಕೊಂಡಿದ್ದರು. ಮನವಿ ಸ್ಪೀಕರಿಸಿರುವ ಶಿಕ್ಷಣ ಸಚಿವರು, ಈ ವಿಷಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸೋದಾಗಿ ಭರವಸೆಯನ್ನು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಕರ ಮನವಿ ಏನು?&lt;/strong&gt;&lt;/h2&gt;&lt;p&gt;ಬೆಂಗಳೂರಿನ ಟ್ರಾಫಿಕ್&zwnj;ನಿಂದ ಶಾಲೆಗೆ ನಿಗಧಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಶಾಲೆಯ ಸಮಯದಲ್ಲಿ ಬದಲಾವಣೆಯಾದ್ರೆ ಸೂಕ್ತ ಎಂದು ಸರ್ಕಾರಿ ಶಾಲೆ ಶಿಕ್ಷಕರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳು ಬೆಳಗ್ಗೆ 10.30ಕ್ಕೆ ಆರಂಭವಾಗಿ ಸಂಜೆ 4.30ಕ್ಕೆ ಕೊನೆಯಾಗುತ್ತವೆ. ಆದ್ರೆ ಖಾಸಗಿ ಶಾಲೆಗಳು ಬೆಳಗ್ಗೆ 8.45 ರಿಂದ ಮಧ್ಯಾಹ್ನ 3.45ರವರೆಗೆ ಕಾರ್ಯನಿರ್ವಹಿಸುತ್ತವೆ.&lt;/p&gt;&lt;p&gt;ಸರ್ಕಾರಿ ಶಾಲೆಗಳು 10.30ಕ್ಕೆ ಆರಂಭವಾಗುವ ಕಾರಣ ಎಲ್ಲಾ ದಿನಗಳಲ್ಲಿಯೂ ಬೆಂಗಳೂರಿನ ಟ್ರಾಫಿಕ್ ಎದುರಿಸಬೇಕಾಗುತ್ತದೆ. ಕೆಲ ಶಿಕ್ಷಕರಂತೂ ಬೆಳಗ್ಗೆ ಮತ್ತು ಸಜೆ ಸೇರಿ ದಿನಕ್ಕೆ ಎರಡೂವರೆಯಿಂದ ಮೂರು ಗಂಟೆಯಷ್ಟು ಸಮಯವನ್ನು ಟ್ರಾಫಿಕ್&zwnj;ನಲ್ಲಿ ಕಳೆಯುವಂತಾಗಿದೆ. ಟ್ರಾಫಿಕ್&zwnj;ನಿಂದ ಬೆಳಗ್ಗೆ ಕನಿಷ್ಠ ಒಂದೂವರೆ ಗಂಟೆ ಮುಂಚೆಯೇ ಮನೆಯಿಂದ ಹೊರಡಬೇಕಾಗುತ್ತದೆ ಎಂದು ಶಿಕ್ಷಕರೊಬ್ಬರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಈಗಿನ ವೇಳಾಪಟ್ಟಿ ತರಗತಿಗಳ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಶಿಕ್ಷಕರು ಹೇಳುತ್ತಾರೆ. ಮಕ್ಕಳಿಗೆ ಹಾಲು, ಮೊಟ್ಟೆ ಮತ್ತು ಬಿಸಿಯೂಟ ವಿತರಣೆ ಮಾಡಲು ಕನಿಷ್ಠ 1 ಗಂಟೆ ಬೇಕಾಗುತ್ತದೆ. ಬೆಂಗಳೂರಿನ ಶಾಲೆಗಳಿಗೆ ಬೆಳಗ್ಗೆ 8.30 ರಿಂದ ಮಧ್ಯಾಹ್ನ3.30 ಸೂಕ್ತ ಸಮಯವಾಗಿದೆ. ಟ್ರಾಫಿಕ್ ಹೆಚ್ಚಾಗುವ ಮುನ್ನವೇ ಮಕ್ಕಳು ಸಹ ಮನೆ ಸೇರಿಕೊಳ್ಳುತ್ತಾರೆ ಎಂದು ಮತ್ತೋರ್ವ ಶಿಕ್ಷಕರು ಹೇಳುತ್ತಾರೆ.&lt;/p&gt;&lt;h3&gt;&lt;strong&gt;ಖಾಸಗಿ ಶಾಲೆಗಳ ಸಿಬ್ಬಂದಿಗೂ ಪ್ರಶಸ್ತಿ&lt;/strong&gt;&lt;/h3&gt;&lt;p&gt;ಈ ನಡುವೆ ಖಾಸಗಿ ಶಾಲೆಗಳ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಪ್ರಶಸ್ತಿಗೆ ಪರಿಗಣಿಸಬೇಕು ಎಂಬ ಬೇಡಿಕೆ ಇದೆ. ಈ ಸಂಬಂಧ ಸರ್ಕಾರಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಈ ಕುರಿತು ಶೀಘ್ರದಲ್ಲಿಯೇ ತೀರ್ಮಾನ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರಿನ ಈ ರಸ್ತೆಯಲ್ಲಿ ಓಡಾಡೋಕೆ ಆಗ್ತಾನೇ ಇಲ್ಲ ಸ್ವಾಮಿ! ದುರಸ್ತಿ ಮಾಡುವಂತೆ ಪಿಎಂ ಮೋದಿಗೆ ಪತ್ರ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/bengaluru-urban/possible-change-in-timings-for-bengaluru-government-schools-due-to-traffic-teachers-submit-request-to-minister-mrq/articleshow-plygla0"/>
        </item>
        <item>
            <title><![CDATA[ಕಾರು ಮಾಲೀಕರೇ ಎಚ್ಚರ: ಟ್ರಾಫಿಕ್ ಪೊಲೀಸರಿಂದ ನಿಮಗೂ ಬರಬಹುದು ಹೆಲ್ಮೆಟ್ ನೋಟಿಸ್!]]></title>
            <link>https://kannada.asianetnews.com/karnataka-districts/traffic-ai-camera-fines-car-owner-for-not-wearing-a-helmet-by-belagavi-traffic-police-rav/articleshow-tqmwg65</link>
            <guid isPermaLink="true">https://kannada.asianetnews.com/karnataka-districts/traffic-ai-camera-fines-car-owner-for-not-wearing-a-helmet-by-belagavi-traffic-police-rav/articleshow-tqmwg65</guid>
            <pubDate>Sun, 13 Sep 2026 11:33:46 +0530</pubDate>
            <description><![CDATA[ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ, ಕಾರು ಚಾಲಕನೊಬ್ಬನಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿದ ವಿಚಿತ್ರ ಘಟನೆ ನಡೆದಿದೆ. ಎಐ ಕ್ಯಾಮೆರಾದಿಂದಾದ ಈ ಎಡವಟ್ಟಿನಿಂದಾಗಿ, ಸಂಚಾರ ಪೊಲೀಸರು ಪರಿಶೀಲಿಸದೆ 500 ರೂಪಾಯಿ ದಂಡದ ನೋಟಿಸ್ ಅನ್ನು ವಾಟ್ಸಪ್&zwnj;ಗೆ ಕಳುಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cn8ktrr3jbcmz2rknvrxem,imgname-belagavi-traffic-ai-cam-mistakes-1789278834520.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕೋಡಿ (ಸೆ.13):&lt;/strong&gt; ಬೈಕ್ ಓಡಿಸುವಾಗ ಅಷ್ಟೇ ಅಲ್ಲ, ಇನ್ಮುಂದೆ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸಿ! ಇಲ್ಲದಿದ್ರೆ ನಿಮ್ಮ ವಾಟ್ಸಪ್&zwnj;ಗೆ ಬರುತ್ತೆ ಹೆಲ್ಮೆಟ್ ಹಾಕದ್ದಕ್ಕೆ ದಂಡ! ಕಾರಿನಲ್ಲಿ ಹೆಲ್ಮೆಟ್&zwnj; ಹಾಕಿಲ್ಲವೆಂದು ಕಾರು ಮಾಲೀಕರಿಗೆ ದಂಡ ವಿಧಿಸಿದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.&lt;/p&gt;&lt;h2&gt;ಅಥಣಿ ಟ್ರಾಫಿಕ್ ಪೊಲೀಸರ ಎಐ ಎಡವಟ್ಟು!&lt;/h2&gt;&lt;p&gt;ಅಥಣಿ ಪಟ್ಟಣದ ಕಾರು ಮಾಲೀಕ ಸುಭಾಷ್ ಬೋಜನೆ ಎಂಬುವವರ ವಾಟ್ಸಪ್ ಸಂಖ್ಯೆಗೆ ಹೆಲ್ಮೆಟ್ ಧರಿಸದೆ ಕಾರು ಓಡಿಸಿದ್ದಕ್ಕೆ ನೋಟಿಸ್ ಬಂದಿದೆ. ನೋಟಿಸ್ ಕಂಡು ಕಾರು ಮಾಲೀಕ ಶಾಕ್ ಆಗಿದ್ದಾರೆ. ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸಬೇಕಾ? ಬೆಳಗಾವಿ ಜಿಲ್ಲಾ ಸಂಚಾರ ಪೊಲೀಸರ ಈ ಹೊಸ ನಿಯಮ ಜಾರಿಗೆ ತಂದಿರೋದು ನಮಗೆ ಗೊತ್ತಿಲ್ಲ ಎಂದು ತಬ್ಬಿಬ್ಬು ಆಗಿದ್ದಾರೆ.&lt;/p&gt;&lt;h2&gt;ಆಗಿದ್ದೇನು?&lt;/h2&gt;&lt;p&gt;ಕಾರ್ ಮಾಲೀಕರು ಇತ್ತೀಚೆಗೆ ಕಾರಿನಲ್ಲಿ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದಾರೆ. ಪಟ್ಟಣದ ಅಂಬೇಡ್ಕರ್ ಸರ್ಕಲ್&zwnj;ನಲ್ಲಿ ಹೋಗುವಾಗ ಟ್ರಾಫಿಕ್ನಲ್ಲಿ ಕಾರು ಗಮನಿಸಿದ ಎಐ ಕ್ಯಾಮೆರಾ ಕಾರಿನಲ್ಲಿರುವ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು ನೋಟಿಸ್ ಕಳಿಸಿದೆ! ಇದನ್ನ ಪರಿಶೀಲಿಸದ ಸಂಚಾರ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದಾರೆ. ವಾಟ್ಸಪ್ ನೋಟಿಸ್ ಕಂಡು ಕಾರು ಮಾಲೀಕ ಸುಭಾಷ್ ಶಾಕ್ ಆಗಿದ್ದಾರೆ. ಕಾರಿನಲ್ಲಿ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿರೋದು ಇಡೀ ದೇಶದಲ್ಲಿ ಇದೇ ಮೊದಲು ಇರಬೇಕು. ಹೊಸ ನಿಯಮವೇನಾದರೂ ಜಾರಿಗೆ ತಂದ್ರಾ ಬೆಳಗಾವಿ ಸಂಚಾರಿ ಪೊಲೀಸರು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಹೆಲ್ಮೆಟ್ ಹಾಕಿಕೊಂಡು ಕಾರು ಓಡಿಸಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಎಐನಿಂದ ಹೇಗೆಲ್ಲ ಎಡವಟ್ಟುಗಳಾಗುತ್ತೆ ಅಂತಾ ಬಯಲು ಮಾಡಿದ್ದಾರೆ.&lt;/p&gt;&lt;p&gt;ಸದ್ಯ ಈ ಘಟನೆ ಸಂಬಂಧ ಕಾರ್ ಮಾಲೀಕ ಸುಭಾಷ್ ಭೋಜನೆ ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/traffic-ai-camera-fines-car-owner-for-not-wearing-a-helmet-by-belagavi-traffic-police-rav/articleshow-tqmwg65"/>
        </item>
        <item>
            <title><![CDATA[Kalaburagi: ಮಗನ ಜೊತೆ ಚಿಕ್ಕಮ್ಮನ ಲವ್; ಅಕ್ಕನ ಮಗನ ಜೊತೆ ಅಕ್ರಮ ಸಂಬಂಧಕ್ಕೆ ಇಬ್ಬರು ಬಲಿ!]]></title>
            <link>https://kannada.asianetnews.com/karnataka-districts/aunt-falls-in-love-with-nephew-illicit-affair-with-sister-s-son-in-kalaburagi-sns/articleshow-74qb8cq</link>
            <guid isPermaLink="true">https://kannada.asianetnews.com/karnataka-districts/aunt-falls-in-love-with-nephew-illicit-affair-with-sister-s-son-in-kalaburagi-sns/articleshow-74qb8cq</guid>
            <pubDate>Sun, 13 Sep 2026 10:50:35 +0530</pubDate>
            <description><![CDATA[ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಬೆಟ್ಟದಲ್ಲಿ ಚಿಕ್ಕಮ್ಮ ಮತ್ತು ಅಕ್ಕನ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತೆಯಾಗಿದ್ದ ಮಹಿಳೆ, ಅವಿವಾಹಿತ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಇಬ್ಬರೂ ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ck5ztk8an95qn65kfh7vqz,imgname-basavaraj-and-sharanamma--1789276651347.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ: ಸಂಬಂಧದಲ್ಲಿ ಅವರಿಬ್ಬರು ಚಿಕ್ಕಮ್ಮ- ಮಗ. ಆದರೆ ಈ ಹುಚ್ಚಖೋಡಿ ಪ್ರೀತಿ ಈ ಇಬ್ಬರನ್ನು ಅಕ್ಷರಶಃ ಕುರುಡರನ್ನಾಗಿಸಿದೆ. ಆತನೆನೋ ಅವಾಹಿತ. 23 ರ ಹರೆಯದ ಯುವಕ&zwnj;. ಇನ್ನು ಆಕೆಗೆ ಗಂಡ ಇದ್ದಾನೆ. ಮುದ್ದಾದ ಮಗು ಇದೆ&zwnj;. ಆದರೂ ಈಕೆ ತನ್ನ ಅಕ್ಕಳ ಮಗನ ಜೊತೆಗೆ ಪ್ರೀತಿಯ ಸಂಬಂಧ ಬೆಳೆಸಿದ್ದಳು. ಈ ಕುರುಡು ಪ್ರೀತಿ ಈ ಇಬ್ಬರನ್ನ ಬಲಿ ತೆಗೆದುಕೊಂಡಿದೆ. ಈ ಕುಡಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.&lt;/p&gt;&lt;h2&gt;ಸಂಕನೂರು ಬೆಟ್ಟದಲ್ಲಿ ವಿಚಿತ್ರ ಪ್ರೇಮದ ಕರಾಳ ಅಂತ್ಯ!&lt;/h2&gt;&lt;p&gt;ಇದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದಲ್ಲಿರುವ ಬೆಟ್ಟ ಪ್ರದೇಶ. ಇಲ್ಲಿನ ದಟ್ಟವಾದ ಗಿಡಗಂಟಿಗಳ ನಡುವೆ ಒಂದು ಗಂಡು ಇನ್ನೊಂದು ಹೆಣ್ಣಿನ ಮೃತದೇಹ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;ಇಬ್ಬರೂ ಒಂದೇ ಮರಕ್ಕೆ, ಒಂದೇ ಬಟ್ಟೆಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದು ನಾಲ್ಕು ದಿನಗಳೇ ಕಳೆದು ಹೋಗಿವೆ. ಕುರಿ ಕಾಯುವ ಹುಡುಗರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರವೇ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಬಂದು ಪರಿಶೀಲಿಸುವ ಹೊತ್ತಿಗೆ ಶವ ಕೊಳೆತು ದುರ್ವಾಸನೆ ಬೀರಲು ಆರಂಭಿಸಿದ್ವು. ಶವದ ಫೋಟೋಗಳನ್ನು ಕಳಿಸಿ ವಿಚಾರಿಸಿದಾಗ,ಮೃತರನ್ನು ಯಾದಗಿರಿ ಜಿಲ್ಲೆಯ ಬಾಚವಾರ ಗ್ರಾಮದ 23 ವರ್ಷದ ಬಸವರಾಜ್ ಹಾಗೂ ಚಿತ್ತಾಪುರ ಪಟ್ಟಣದ ಬಸವನಗರ ನಿವಾಸಿ 32 ವರ್ಷದ ಶರಣಮ್ಮ ಭೀಮನಹಳ್ಳಿ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;ಆತನೇನೋ ಅವಿವಾಹಿತ, ಆಕೆಗೆ ಗಂಡ-ಮುದ್ದಾದ ಮಗುವಿದೆ&lt;/h2&gt;&lt;p&gt;ಹೀಗೆ ನೇಣಿಗೆ ಕೊರಲೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಇವರಿಬ್ಬರೂ ಸಂಬಂಧಿಕರು. ಈ ಬಸವರಾಜ್ ಅವಿವಾಹಿತನಾದರೆ, ಶರಣಮ್ಮಳಿಗೆ 12 ವರ್ಷಗಳ ಹಿಂದೆಯೇ ಮದುವೆಯಾಗಿದೆ. ಸಭ್ಯ ಗಂಡ, ಮುದ್ದಾದ ಹೆಣ್ಣು ಮಗು ಮನೆಯಲ್ಲಿದ್ದರೂ ಈ ಶರಣಮ್ಮ, ತನ್ನ ಸಂಬಂಧಿಕ ಬಸವರಾಜನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅಷ್ಟಕ್ಕೂ ಬಸವರಾಜ್, ಈ ಶರಣಮ್ಮಳಿಗೆ ಏನಾಗಬೇಕು ಎನ್ನುವುದು ಗೊತ್ತಾದ್ರೆ ಶಾಕ್ ಆಗ್ತೀರಾ. ಶರಣಮ್ಮಳ ಸಹೋದರಿಯ ಮಗನೆ ಈ ಬಸವರಾಜ್. ಅಂದ್ರೆ ಬಸವರಾಜನ ಪಾಲಿಗೆ ಈಕೆ ಚಿಕ್ಕಮ್ಮ. ತಾಯಿ ಮಗನ ಪವಿತ್ರ ಸಂಬಂಧ ಹೊಂದಿರುವ ಇವರು, ಮಾಡಿದ್ದು ಮಾತ್ರ ಇಡೀ ಸಮಾಜವೇ ತಲೆತಗ್ಗಿಸುವ ಕೆಲಸ.&lt;/p&gt;&lt;h2&gt;ಅಕ್ಕನ ಮಗನ ಜೊತೆ ಅಕ್ರಮ ಸಂಬಂಧ!&lt;/h2&gt;&lt;p&gt;ಹೊತ್ತಲದ ಹೊತ್ತಲ್ಲಿ ಸಹ ವಿಡಿಯೋ ಕಾಲ್ ಮಾಡಿ ಗಂಟೆಗಟ್ಟಲೆ ಮಾತನಾಡುವುದು, ಆಗಾಗ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೊರಡುವುದು ಸೇರಿದಂತೆ ಇವರ ಸರಸಸಲ್ಲಪ ನಡದೇ ಇತ್ತು. ಈ ವಿಚಾರ ಸ್ವತಃ ಆಕೆಯ ಗಂಡನಿಗೂ ಗೊತ್ತಾದ ನಂತರ ಬೈದು ಬುದ್ಧಿ ಹೇಳಿದ್ದ. ಸಮಾಜ ಮತ್ತು ಸ್ವಾಭಿಮಾನಕ್ಕೆ ಹೆದರಿ, ಮತ್ತು ಮಗಳ ಭವಿಷ್ಯ ಹಾಳಾಗಬಾರದು ಎನ್ನುವ ಕಾರಣಕ್ಕೆ ಹಾಗೂ ಮುಂದಾದರೂ ತಪ್ಪು ತಿದ್ದಿಕೊಳ್ಳಬಹುದು ಎನ್ನುವ ನಿರೀಕ್ಷೆಯಿಂದ ಈಕೆಯ ಗಂಡ ಈಕೆಗೆ ಮತ್ತೆ ಮತ್ತೆ ಅವಕಾಶ ಕೊಡುತ್ತಲೇ ಇದ್ದ. ಅದಾಗಿವೆ ಕಳೆದ ನಾಲ್ಕು ದಿನಗಳ ಹಿಂದೆ, ಮನೆ ಬಿಟ್ಟು ಬಸವರಾಜನ ಜೊತೆ ಬೈಕ್ ಹತ್ತಿ ಹೊರಟವಳು, ಸದ್ಯ ಆತನೊಂದಿಗೆ ಹೆಣವಾಗಿ ಪತ್ತೆಯಾಗಿದ್ದಾಳೆ.&lt;/p&gt;&lt;h2&gt;ಚಿಕ್ಕಮ್ಮ-ಮಗ ಎನ್ನುವ ಪವಿತ್ರ ಸಂಬಂಧವನ್ನೇ ಸಾಯಿಸಿದವರು, ಶವವಾಗಿದ್ದರೂ ಏಕೆ?&lt;/h2&gt;&lt;p&gt;ಇವರು ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಒಂದೂವರೆ ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ಮಾತ್ರ ಹೋಗಬಹುದಾಗಿದೆ. ಆ ಸ್ಥಳದಿಂದ ಕೊಳತ ಶವಗಳನ್ನ ಆಸ್ಪತ್ರೆಗೆ ಸಾಗಿಸಲು ಪೊಲೀಸರು ಪಟ್ಟ ಕಷ್ಟ ಅತಿಷ್ಟಲ್ಲ. ಸದ್ಯ ಚಿತ್ತಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.&lt;/p&gt;&lt;p&gt;ಸಂಕನೂರು ಬೆಟ್ಟದಲ್ಲಿ ನಡೆದ ಈ ಘಟನೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಅಕ್ರಮ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆಯೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯಿಂದಷ್ಟೇ ನಿಜವಾದ ಕಾರಣ ಹೊರಬರಬೇಕಿದೆ. &lt;strong&gt;(ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ)&amp;nbsp;&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/aunt-falls-in-love-with-nephew-illicit-affair-with-sister-s-son-in-kalaburagi-sns/articleshow-74qb8cq"/>
        </item>
        <item>
            <title><![CDATA[ಬಸ್ ಓಡಿಸುತ್ತಿದ್ದ ಬಾಳೇಶ್‌ಗೆ ಹೃದಯಾಘಾತ; ತಾನು ಓಡಿಸಿದ ಬಸ್‌ನಲ್ಲೇ ಅಂತಿಮಯಾತ್ರೆ ಮಾಡಿಸಿದ ಸಾರಿಗೆ ಇಲಾಖೆ]]></title>
            <link>https://kannada.asianetnews.com/gallery/karnataka-districts/dharwad-driver-balesh-theli-dies-after-heart-attack-transport-department-arranges-his-final-journey-in-bus-rav-2cfce63</link>
            <guid isPermaLink="true">https://kannada.asianetnews.com/gallery/karnataka-districts/dharwad-driver-balesh-theli-dies-after-heart-attack-transport-department-arranges-his-final-journey-in-bus-rav-2cfce63</guid>
            <pubDate>Sun, 13 Sep 2026 10:28:56 +0530</pubDate>
            <description><![CDATA[&lt;p&gt;ಪ್ರಯಾಣಿಕರನ್ನ ಸುರಕ್ಷಿತವಾಗಿ ಮನೆ ತಲುಪಿಸುತ್ತಿದ್ದ ಸಾರಿಗೆ ಬಸ್ ಚಾಲಕ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಾನು ಚಲಾಯಿಸುತ್ತಿದ್ದ ಬಸ್&zwnj;ನಲ್ಲಿ ಶವವಾಗಿ ಮನೆ ತಲುಪಿದ ದೃಶ್ಯ ನೋಡುವವರ ಕಣ್ಣಾಲಿಗಳು ತುಂಬಿ ಬಂದವು. ಧಾರವಾಡ ಸಾರಿಗೆ ಸಿಬ್ಬಂದಿ ಏನು ಮಾಡಿದ್ರು ನೋಡಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2chqsynhea8m3pg3h76ckx8,imgname-dharwad-bus-drivers-heart-attack-case-1789275138005.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಯಾಣಿಕರನ್ನ ಸುರಕ್ಷಿತವಾಗಿ ಮನೆ ತಲುಪಿಸುತ್ತಿದ್ದ ಸಾರಿಗೆ ಬಸ್ ಚಾಲಕ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಾನು ಚಲಾಯಿಸುತ್ತಿದ್ದ ಬಸ್&zwnj;ನಲ್ಲಿ ಶವವಾಗಿ ಮನೆ ತಲುಪಿದ ದೃಶ್ಯ ನೋಡುವವರ ಕಣ್ಣಾಲಿಗಳು ತುಂಬಿ ಬಂದವು. ಧಾರವಾಡ ಸಾರಿಗೆ ಸಿಬ್ಬಂದಿ ಏನು ಮಾಡಿದ್ರು ನೋಡಿ&lt;/p&gt;&lt;img&gt;&lt;p&gt;ಧಾರವಾಡ ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ದಿಢೀರ್ ಹೃದಯಾಘಾತದಿಂದ ಸಾರಿಗೆ ಬಸ್ ಚಾಲಕ ಬಾಳೇಶ್ ತೇಲಿ(38) ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಚಾಲಕ ಸಾವನ್ನಪ್ಪಿದ ಬಳಿಕ ಮೃತದೇಹವನ್ನು ಹುಟ್ಟೂರಿಗೆ ಅಂಬುಲೆನ್ಸ್ ಬದಲು ಸಾರಿಗೆ ಬಸ್&zwnj;ನಲ್ಲೇ ರವಾನಿಸಿದೆ.&lt;/p&gt;&lt;img&gt;&lt;p&gt;ಮೃತ ಬಾಳೇಶ್ ತೇಲಿ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ನಿವಾಸಿಯಾಗಿದ್ದಾರೆ. ಹಲವು ವರ್ಷಗಳಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಕಲಘಟಗಿ ಡಿಪೋದಲ್ಲಿ ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಆದರೆ ಚಿಕ್ಕ ವಯಸ್ಸಿಗೆ ಹಠಾತ್ ಸಂಭವಿಸಿದ ಹೃದಯಾಘಾತದಿಂದ ಮೃತರಾಗಿದ್ದಾರೆ.&lt;/p&gt;&lt;img&gt;&lt;p&gt;ಸಾರಿಗೆ ಇಲಾಖೆ ಸಿಬ್ಬಂದಿ ಚಾಲಕನ ಅಕಾಲಿಕ ಮರಣಕ್ಕೆ ಮರುಗಿದ್ದಾರೆ. ಮೃತದೇಹ ಆಂಬುಲೆನ್ಸ್ ಬದಲು ತಾನು ಚಾಲನೆ ಮಾಡುತ್ತಿದ್ದ ಬಸ್&zwnj;ನಲ್ಲೇ ಅಂತಿಮ ಯಾತ್ರೆ ನಡೆಸಲು ವ್ಯವಸ್ಥೆ ಮಾಡಿದರು. ಅದರಂತೆ ಧಾರವಾಡದಿಂದ ಹುಟ್ಟೂರಿಗೆ ಸಾರಿಗೆ ಇಲಾಖೆ ಬಸ್&zwnj;ನಲ್ಲೇ ಬಾಳೇಶ್ ತೇಲಿ ಮೃತದೇಹ ತಂದು ಸಾರಿಗೆ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.&lt;/p&gt;&lt;img&gt;&lt;p&gt;ಅಂತಿಮಯಾತ್ರೆ ವೇಳೆ ಬಾಳೇಶ್ ತೇಲಿ ಮೃತದೇಹ ಸಾರಿಗೆ ಬಸ್&zwnj;ನಲ್ಲಿಡುತ್ತಿದ್ದಂತೆ ಮಗನ ಶವ ಕಂಡು ಗೋಗರೆದು ಅತ್ತ ತಾಯಿ. ಪ್ರತಿದಿನ ಮಗ ಹುಮ್ಮಸಿನಿಂದ ಕೆಲಸಕ್ಕೆ ಹೋಗುತ್ತಿದ್ದ. ತಾನೇ ಓಡಿಸುತ್ತಿದ್ದ ಬಸ್&zwnj;ನಲ್ಲಿ ತಣ್ಣಗೆ ಮಲಗಿಬಿಟ್ಟ, ನಮ್ಮನ್ನೆಲ್ಲ ಬಿಟ್ಟುಹೋದ ಅಂತಾ ಒಂದೇ ಸಮನೆ ಮಗನ ಸಾವು ಅರಗಿಸಿಕೊಳ್ಳಲಾಗದೆ ಕಣ್ಣೀರಾಕಿದ ತಾಯಿ. ಈ ದೃಶ್ಯದಿಂದ ನೆರೆದವರ ಕಣ್ಣಗಳೂ ತೇವಗೊಂಡವು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/dharwad-driver-balesh-theli-dies-after-heart-attack-transport-department-arranges-his-final-journey-in-bus-rav-2cfce63"/>
        </item>
        <item>
            <title><![CDATA[ಬೆಂಗಳೂರಿನ ಈ ರಸ್ತೆಯಲ್ಲಿ ಓಡಾಡೋಕೆ ಆಗ್ತಾನೇ ಇಲ್ಲ ಸ್ವಾಮಿ...! ದುರಸ್ತಿ ಮಾಡುವಂತೆ ಪಿಎಂ ಮೋದಿಗೆ ಪತ್ರ]]></title>
            <link>https://kannada.asianetnews.com/bengaluru-urban/peenya-road-pathetic-condition-bengalurian-writes-letter-prime-minister-modi-sat/articleshow-6gde3i8</link>
            <guid isPermaLink="true">https://kannada.asianetnews.com/bengaluru-urban/peenya-road-pathetic-condition-bengalurian-writes-letter-prime-minister-modi-sat/articleshow-6gde3i8</guid>
            <pubDate>Sun, 13 Sep 2026 10:10:46 +0530</pubDate>
            <description><![CDATA[ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆ ದುಸ್ಥಿತಿಯಿಂದ ಬೇಸತ್ತ ನಾಗರಿಕರೊಬ್ಬರು, ಸ್ಥಳೀಯ ಆಡಳಿತದ ನಿರ್ಲಕ್ಷ್ಯದ ವಿರುದ್ಧ ನೇರವಾಗಿ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಟಿವಿಎಸ್ ಕ್ರಾಸ್&zwnj;ನಿಂದ ಹೊರವರ್ತುಲ ರಸ್ತೆಗೆ ಸಂಪರ್ಕಿಸುವ ಈ ಮಾರ್ಗದ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cgq7tagmf58716b4h73wt9,imgname-bengaluru-peenya-road-1789274070858.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): 'ಆ&lt;/strong&gt;ಗ್ತಿಲ್ಲ ಸ್ವಾಮಿ.. ಆಗ್ತಿಲ್ಲ.. ಈ ರಸ್ತೆಯಲ್ಲಿ ದಿನವೂ ಓಡಾಡೋಕೆ ಆಗ್ತಾನೇ ಇಲ್ಲ!' &ndash; ಇದು ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಕೈಗಾರಿಕಾ ಪ್ರದೇಶ ಪೀಣ್ಯದ ರಸ್ತೆಗಳಲ್ಲಿ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರ ಆಕ್ರೋಶದ ನುಡಿ. ವರ್ಷಾನುಗಟ್ಟಲೆ ದೂರು ನೀಡಿದರೂ ಸ್ಥಳೀಯ ಆಡಳಿತವಾಗಲಿ, ರಾಜ್ಯ ಸರ್ಕಾರವಾಗಲಿ ಎಚ್ಚೆತ್ತುಕೊಳ್ಳದ ಕಾರಣ ಬೇಸತ್ತ ಬೆಂಗಳೂರಿನ ನಿವಾಸಿಯೊಬ್ಬರು ಇದೀಗ ನೇರವಾಗಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕದ ತಟ್ಟಿದ್ದಾರೆ.&lt;/p&gt;&lt;p&gt;ಪೀಣ್ಯದ ಟಿವಿಎಸ್ ಕ್ರಾಸ್&zwnj;ನಿಂದ ಹೊರವರ್ತುಲ ರಸ್ತೆ (Outer Ring Road) ಸಂಪರ್ಕಿಸುವ ರಸ್ತೆಯ ದುಃಸ್ಥಿತಿ ಸರಿಪಡಿಸುವಂತೆ ಕೋರಿ ಬೆಂಗಳೂರಿನ ಜಾಗೃತ ನಾಗರಿಕ ದೀಪಕ್ ಎನ್ ಎಂಬುವವರು ಪ್ರಧಾನಿ ಕಾರ್ಯಾಲಯಕ್ಕೆ (PMO) ತುರ್ತು ಮಧ್ಯಪ್ರವೇಶ ಕೋರಿ ಅಧಿಕೃತ ಪತ್ರ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಏಷ್ಯಾದ ಅತಿದೊಡ್ಡ ಕೈಗಾರಿಕಾ ಹಬ್&zwnj;ನಲ್ಲೇ ಈ ದುಸ್ಥಿತಿ!&lt;/strong&gt;&lt;/h2&gt;&lt;p&gt;ಪ್ರಧಾನಿ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ವಾಸ್ತವ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ದೀಪಕ್, 'ಏಷ್ಯಾದ ಅತಿದೊಡ್ಡ ಸಣ್ಣ ಕೈಗಾರಿಕೆಗಳ ತಾಣವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಈ ರಸ್ತೆಯೇ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಆದರೆ, ಟಿವಿಎಸ್ ಕ್ರಾಸ್&zwnj;ನಿಂದ ಹೊರವರ್ತುಲ ರಸ್ತೆಯವರೆಗಿನ ಮಾರ್ಗ ಸಂಪೂರ್ಣವಾಗಿ ಕಿತ್ತುಹೋಗಿದ್ದು, ಕಸ, ಧೂಳು ಮತ್ತು ಅಪಾಯಕಾರಿ ಗುಂಡಿಗಳಿಂದ ತುಂಬಿ ತುಳುಕುತ್ತಿದೆ. ನಿತ್ಯ ಸಾವಿರಾರು ಉದ್ಯೋಗಿಗಳು, ಸಾರ್ವಜನಿಕರು ಮತ್ತು ವ್ಯಾಪಾರ-ಕೈಗಾರಿಕಾ ವಾಹನಗಳು ಈ ಅಪಾಯಕಾರಿ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ' ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;'ಜನಸ್ಪಂದನ'ಕ್ಕೂ ಕ್ಯಾರೆ ಅನ್ನದ ಅಧಿಕಾರಿಗಳು!&lt;/strong&gt;&lt;/h2&gt;&lt;p&gt;ರಸ್ತೆ ದುರಸ್ತಿಗಾಗಿ ಸ್ಥಳೀಯ ಆಡಳಿತ, ಇ-ಮೇಲ್ ಮತ್ತು ರಾಜ್ಯ ಸರ್ಕಾರದ ಅಧಿಕೃತ &lsquo;ಜನಸ್ಪಂದನ&rsquo; ವೇದಿಕೆ ಮೂಲಕ ಹತ್ತಾರು ಬಾರಿ ದೂರು ನೀಡಿದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಒಮ್ಮೆ ಕಾಟಾಚಾರಕ್ಕೆ ಬಂದು ತೇಪೆ (ಪ್ಯಾಚ್ ವರ್ಕ್) ಹಾಕಲಾಯಿತಾದರೂ, ಒಂದೇ ಮಳೆಗೆ ಆ ಡಾಂಬರೆಲ್ಲ ಕೊಚ್ಚಿಹೋಗಿ ರಸ್ತೆ ಮತ್ತಷ್ಟು ಅಧ್ವಾನವಾಗಿದೆ. ಸದ್ಯ ನಡೆಯುತ್ತಿರುವ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದ್ದು, ಜನ ಸಾಮಾನ್ಯರು ದಿನನಿತ್ಯ ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ ಎಂದು ಪತ್ರದಲ್ಲಿ ಅಸಹಾಯಕತೆ ವ್ಯಕ್ತಪಡಿಸಲಾಗಿದೆ.&lt;/p&gt;&lt;h2&gt;&lt;strong&gt;ಪ್ರಧಾನಿ ಮಧ್ಯಪ್ರವೇಶಕ್ಕೆ ಅಂಗಲಾಚಿದ ನಾಗರಿಕ:&lt;/strong&gt;&lt;/h2&gt;&lt;p&gt;'ನಾವು ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದೇವೆ. ಪ್ರಧಾನಿ ಕಾರ್ಯಾಲಯವು ಈ ಕೂಡಲೇ ಮಧ್ಯಪ್ರವೇಶಿಸಿ, ಈ ರಸ್ತೆಯ ಎರಡೂ ಬದಿಯ ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು' ಎಂದು ದೀಪಕ್ ಅವರು ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಸ್ಥಳೀಯ ಕಾರ್ಪೊರೇಟರ್, ಶಾಸಕರು ಹಾಗೂ ಪಾಲಿಕೆ ಅಧಿಕಾರಿಗಳು ಕೇಳಬೇಕಾದ ಸಮಸ್ಯೆಗೆ ಪ್ರಧಾನಿ ಕಚೇರಿಗೆ ಪತ್ರ ಬರೆಯುವ ದುಸ್ಥಿತಿ ಬಂದಿರುವುದು ಬೆಂಗಳೂರಿನ ನಾಗರಿಕ ಮೂಲಸೌಕರ್ಯದ ನೈಜ ಚಿತ್ರಣಕ್ಕೆ ಕನ್ನಡಿ ಹಿಡಿದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/peenya-road-pathetic-condition-bengalurian-writes-letter-prime-minister-modi-sat/articleshow-6gde3i8"/>
        </item>
        <item>
            <title><![CDATA[Ganesh Chaturthi 2026:  ಗಣಪತಿ ಹಬ್ಬಕ್ಕೆ ಹೂ, ಹಣ್ಣು ತರಕಾರಿ ದುಬಾರಿ!  ಇಂದಿನ ಬೆಲೆಗಳ ಪಟ್ಟಿ ಇಲ್ಲಿದೆ ನೋಡಿ]]></title>
            <link>https://kannada.asianetnews.com/state/fruits-flowers-and-vegetables-price-hike-in-market-ahead-of-ganesh-chaturthi-festival-rav/articleshow-kke42wv</link>
            <guid isPermaLink="true">https://kannada.asianetnews.com/state/fruits-flowers-and-vegetables-price-hike-in-market-ahead-of-ganesh-chaturthi-festival-rav/articleshow-kke42wv</guid>
            <pubDate>Sun, 13 Sep 2026 09:23:39 +0530</pubDate>
            <description><![CDATA[ಗಣೇಶ ಹಬ್ಬದ ಹೊಸ್ತಿಲಲ್ಲಿ, ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಪೂಜೆಗೆ ಅಗತ್ಯವಿರುವ ವಸ್ತುಗಳ ದರ ದುಪ್ಪಟ್ಟಾಗಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈ ಲೇಖನದಲ್ಲಿ ಬೆಂಗಳೂರಿನ ಮಾರುಕಟ್ಟೆಯಲ್ಲಿನ ಇಂದಿನ ಸಂಪೂರ್ಣ ದರಪಟ್ಟಿಯನ್ನು ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cdw694f4beq030xy3qa3zp,imgname-ganesh-chaturthi-market-price-hike-1789271087396.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13):&lt;/strong&gt; ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲೆಡೆ ಗಣಪತಿಪೂರ್ತಿಯನ್ನ ಭರ್ಜರಿಯಾಗಿ ಸ್ಥಾಪಿಸುತ್ತಿದ್ದಂತೆ ಇತ್ತ ಮಾರ್ಕೆಟ್&zwnj;ನಲ್ಲಿ ಹೂವು, ಹಣ್ಣು ತರಕಾರಿ ಬೆಲೆಗಳು ಗಗನಕ್ಕೇರಿವೆ. ಹಬ್ಬದ ಪೂಜೆಗೆ ಅಗತ್ಯವಿರುವ ಹಣ್ಣುಗಳು, ಹೂಗಳ ದರದಲ್ಲಂತೂ ಭಾರೀ ಏರಿಕೆಯಾಗಿದೆ. ಬೆಲೆ ಏರಿಕೆಯಾದರೂ ಜನ ಖರೀದಿಸಲು ಮುಗಿಬಿದ್ದಿದ್ದಿದ್ದಾರೆ.&lt;/p&gt;&lt;h2&gt;ಹಬ್ಬಕ್ಕೆ ಶಾಕ್ ಕೊಟ್ಟ ದರ ಏರಿಕೆ&lt;/h2&gt;&lt;p&gt;ಹೂವು ಹಣ್ಣುಗಳಲ್ಲದೆ ದಿನಸಿ ಸಾಮಾನು, ಹಬ್ಬದ ಸಾಮಗ್ರಿ ಕೂಡ ಬೆಲೆ ಏರಿಕೆಯಾಗಿದೆ. ಹಬ್ಬದ ಸಂಭ್ರಮದಲ್ಲಿ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳಲ್ಲಿ ಇದ್ದ ಹೂವಿನ ತೋರಣಗಳಿಗೆ ಇಂದು ಡಬಲ್ ಬೆಲೆ ಏರಿಕೆಯಾಗಿದೆ. ಯಾವ್ಯಾವ ಹೂಗಳು ಬೆಲೆ ಎಷ್ಟಿದೆ ಅಂತಾ ಇಂದಿನ ದರದಂತೆ ಇಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ. ನೀವು ಹೂವು ಖರೀದಿಸುವ ಮುನ್ನ ಈ ಪಟ್ಟಿಯನ್ನು ಒಮ್ಮೆ ನೋಡಿ.&lt;/p&gt;&lt;p&gt;&lt;strong&gt;ಹೂಗಳ ಬೆಲೆ ಎಷ್ಟು&lt;/strong&gt;&lt;/p&gt;&lt;ul&gt; &lt;li&gt;ಸೇವಂತಿಗೆ 1kg : ₹350&lt;/li&gt; &lt;li&gt;ತಾವರೆ ಹೂವು (ಜೋಡಿ) : ₹50&lt;/li&gt; &lt;li&gt;ಗುಲಾಬಿ (ಬಟನ್) : 1kg ಗೆ 350&lt;/li&gt; &lt;li&gt;ಮಿಕ್ಸ್ ಹೂವು : 1kg : ₹300 - ₹400&lt;/li&gt; &lt;li&gt;ಕನಕಾಂಬರ (ಮೊಳ) : ₹50 : ₹2000 (1kg)&lt;/li&gt; &lt;li&gt;ಮಲ್ಲಿಗೆ (ಮೊಳ) : ₹50 : ₹1000 (1kg)&lt;/li&gt; &lt;li&gt;ತುಳಸಿ ತೋರಣ (ಮೊಳ) : ₹60&lt;/li&gt; &lt;li&gt;ಮಾವಿನ ಎಲೆ (ಕಟ್ಟು) : ₹10 - ₹30&lt;/li&gt; &lt;li&gt;ಬಾಳೆ ದಿಂಡು (ಜೋಡಿ) : ₹50 - ₹80&lt;/li&gt;&lt;/ul&gt;&lt;h2&gt;ಇಂದಿನ ಹಣ್ಣುಗಳ ದರ(KG) ಹೇಗಿದೆ?&lt;/h2&gt;&lt;ul&gt; &lt;li&gt;ಸೇಬು: ₹200 ರಿಂದ ₹300(1kg)&lt;/li&gt; &lt;li&gt;ದಾಳಿಂಬೆ: ₹100 ರಿಂದ ₹250(1kg)&lt;/li&gt; &lt;li&gt;ಸಪೋಟ: ₹150 ರಿಂದ ₹200(1kg)&lt;/li&gt; &lt;li&gt;ದ್ರಾಕ್ಷಿ: ₹120 ರಿಂದ ₹150 (1kg)&lt;/li&gt; &lt;li&gt;ಮೂಸಂಬಿ ಹಾಗೂ ಕಿತ್ತಳೆ: ₹80 ರಿಂದ ₹100(1kg)&lt;/li&gt; &lt;li&gt;ಬಾಳೆ ಹಣ್ಣು- 80 ರಿಂದ 150(1kg)&lt;/li&gt;&lt;/ul&gt;&lt;h3&gt;ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಎಷ್ಟು?&lt;/h3&gt;&lt;ul&gt; &lt;li&gt;ಈರುಳ್ಳಿ: ₹60 ರಿಂದ ₹70(1KG)&lt;/li&gt; &lt;li&gt;ಹನಿಮೆಣಸಿನಕಾಯಿ : 40 ರಿಂದ 60(1KG)&lt;/li&gt; &lt;li&gt;ಬೀಟ್&zwnj;ರೂಟ್: ₹50 ರಿಂದ ₹60(1KG)&lt;/li&gt; &lt;li&gt;ಬೆಳ್ಳುಳ್ಳಿ: ₹200 ರಿಂದ ₹250&lt;/li&gt; &lt;li&gt;ನಿಂಬೆಹಣ್ಣು : (ಒಂದಕ್ಕೆ) ₹8 ರಿಂದ ₹15&lt;/li&gt; &lt;li&gt;ನುಗ್ಗೆಕಾಯಿ : (ಒಂದಕ್ಕೆ)₹10 ರಿಂದ ₹15&lt;/li&gt; &lt;li&gt;ಕ್ಯಾಪ್ಸಿಕಂ ₹50-₹70&lt;/li&gt; &lt;li&gt;ಬಟಾಣಿ: ₹ 140 ರಿಂದ 160&lt;/li&gt;&lt;/ul&gt;&lt;h3&gt;ಇಂದಿನ ದಿನಸಿ ಸಾಮಗ್ರಿ ಬೆಲೆ ಎಷ್ಟು?&lt;/h3&gt;&lt;ul&gt; &lt;li&gt;ಬೆಲ್ಲ : ₹50 ರಿಂದ ₹55&lt;/li&gt; &lt;li&gt;ತೊಗರಿಬೇಳೆ : ₹160 ರಿಂದ ₹170&lt;/li&gt; &lt;li&gt;ಹುರಿಗಡಲೆ :₹150 ರಿಂದ ₹180&lt;/li&gt; &lt;li&gt;ಕಡಲೆಬೀಜ : ₹100 ರಿಂದ ₹140&lt;/li&gt; &lt;li&gt;ಸಕ್ಕರೆ : ₹60 ರಿಂದ ₹80&lt;/li&gt; &lt;li&gt;ಚಿರೋಟಿ ರವೆ : ₹90 ರಿಂದ ₹100&lt;/li&gt; &lt;li&gt;ಮೈದಾ ಹಿಟ್ಟು : ₹45 ರಿಂದ ₹50&lt;/li&gt; &lt;li&gt;ಕಡಲೆಕಾಳು : ₹90 ರಿಂದ ₹100&lt;/li&gt; &lt;li&gt;ಅಡುಗೆ ಎಣ್ಣೆ : ₹190 ರಿಂದ ₹210 (ಆಯಾ ಬ್ರ್ಯಾಂಡ್ಗಳು ಮೇಲೆ ದರ ಬದಲಾಗುತ್ತದೆ.&lt;/li&gt;&lt;/ul&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/fruits-flowers-and-vegetables-price-hike-in-market-ahead-of-ganesh-chaturthi-festival-rav/articleshow-kke42wv"/>
        </item>
        <item>
            <title><![CDATA[ಹಾವು ಕಚ್ಚಿದಾಗ ಸೈಕಲ್ ತುಳಿದು ಆಸ್ಪತ್ರೆಗೆ ಹೋದ! 'ಇಂಥ ತಪ್ಪು ಜೀವಕ್ಕೆ ಕುತ್ತು' ಎಂದ ಉರಗ ತಜ್ಞ ಗೌರಿ ಕಾಳಿಂಗ]]></title>
            <link>https://kannada.asianetnews.com/gallery/karnataka-districts/snakebite-first-aid-why-exertion-is-fatal-gowri-kalinga-slams-karnataka-policy-sat-5dsughp</link>
            <guid isPermaLink="true">https://kannada.asianetnews.com/gallery/karnataka-districts/snakebite-first-aid-why-exertion-is-fatal-gowri-kalinga-slams-karnataka-policy-sat-5dsughp</guid>
            <pubDate>Sun, 13 Sep 2026 09:22:46 +0530</pubDate>
            <description><![CDATA[&lt;p&gt;ಅತ್ಯಂತ ವಿಷಕಾರಿ ಹಾವು ಕಚ್ಚಿದ ವ್ಯಕ್ತಿಯೊಬ್ಬರು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ಈ ಬಗ್ಗೆ ಉರಗ ತಜ್ಞ ಗೌರಿ ಕಾಳಿಂಗ ಅವರು ಹಾವು ಕಡಿತದ ನಂತರ ಮಾಡಬಾರದ ತಪ್ಪುಗಳ ಬಗ್ಗೆ ಎಚ್ಚರಿಸಿದ್ದು, ಸರಿಯಾದ ಪ್ರಥಮ ಚಿಕಿತ್ಸೆ ಮತ್ತು ಕ್ರಮಗಳ ಬಗ್ಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cdq33b6bxmkb9tbrz4kpz3,imgname-indian-common-krait-snake-1789270920299.jpg" type="image/jpeg" height="390" width="690"/>
            <content:encoded><![CDATA[&lt;p&gt;ಅತ್ಯಂತ ವಿಷಕಾರಿ ಹಾವು ಕಚ್ಚಿದ ವ್ಯಕ್ತಿಯೊಬ್ಬರು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ಈ ಬಗ್ಗೆ ಉರಗ ತಜ್ಞ ಗೌರಿ ಕಾಳಿಂಗ ಅವರು ಹಾವು ಕಡಿತದ ನಂತರ ಮಾಡಬಾರದ ತಪ್ಪುಗಳ ಬಗ್ಗೆ ಎಚ್ಚರಿಸಿದ್ದು, ಸರಿಯಾದ ಪ್ರಥಮ ಚಿಕಿತ್ಸೆ ಮತ್ತು ಕ್ರಮಗಳ ಬಗ್ಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು/ಭುವನೇಶ್ವರ (ಸೆ.13): &lt;/strong&gt;ಹಾವು ಕಚ್ಚಿದರೆ ಮನುಷ್ಯ ಗಾಬರಿಯಾಗುವುದು ಸಹಜ. ಆದರೆ ಒಡಿಶಾದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ತನಗೆ ಕಚ್ಚಿದ ಹಾವನ್ನೇ ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿಟ್ಟುಕೊಂಡು, ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ಹೋಗಿರುವ ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಿದರೂ ಅವರ ಪರಿಸ್ಥಿತಿ ಈಗ ಗಂಭೀರವಾಗಿದೆ! ಇದಕ್ಕೆ ಕಾರಣವೇನು? ಹಾವು ಕಚ್ಚಿದಾಗ ಜನಸಾಮಾನ್ಯರು ಮಾಡುವ ಇಂತಹ ಪ್ರಮಾದಗಳೇನು ಎಂಬುದರ ಕುರಿತು ಖ್ಯಾತ ಉರಗ ತಜ್ಞ ಗೌರಿ ಕಾಳಿಂಗ ಮಹತ್ವದ ಎಚ್ಚರಿಕೆ ಹಾಗೂ ಸಲಹೆಗಳನ್ನು ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಏನಿದು ಘಟನೆ?&lt;/strong&gt;&lt;/p&gt;&lt;p&gt;ಒಡಿಶಾದ ಮಯೂರ್&zwnj;ಭಂಜ್ ಜಿಲ್ಲೆಯ ಏತ ನೀರಾವರಿ ಯೋಜನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 37 ವರ್ಷದ ವ್ಯಕ್ತಿಗೆ ವಿಷಕಾರಿ ಹಾವೊಂದು ಕಚ್ಚಿದೆ. ತಕ್ಷಣ ಆತ ಹಾವನ್ನು ಹುಡುಕಿ ಸಾಯಿಸಿ, ವೈದ್ಯರಿಗೆ ತೋರಿಸಲೆಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.&lt;/p&gt;&lt;img&gt;&lt;p&gt;&lt;strong&gt;ಸೈಕಲ್ ತುಳಿದಿದ್ದೇ ದೊಡ್ಡ ಪ್ರಮಾದವಾಗಿದ್ದು ಏಕೆ?&lt;/strong&gt;&lt;/p&gt;&lt;p&gt;ಈ ಘಟನೆಯನ್ನು ವಿಶ್ಲೇಷಿಸಿರುವ ಉರಗ ತಜ್ಞ ಗೌರಿ ಕಾಳಿಂಗ, 'ವ್ಯಕ್ತಿ ಆದಷ್ಟು ಬೇಗ ಆಸ್ಪತ್ರೆ ತಲುಪಲು ಯತ್ನಿಸಿದ್ದು ಒಳ್ಳೆಯದೇ. ಆದರೆ, ಆತ ಸೈಕಲ್ ತುಳಿದುಕೊಂಡು ಹೋದದ್ದು ಆತನ ಜೀವಕ್ಕೇ ಕಂಟಕ ತಂದಿಟ್ಟಿದೆ. ಸೈಕಲ್ ತುಳಿಯುವಾಗ ಅಥವಾ ವೇಗವಾಗಿ ಓಡಿದಾಗ ನಮ್ಮ ಹೃದಯ ಬಡಿತ ಹಾಗೂ ರಕ್ತಪರಿಚಲನೆ ತೀವ್ರವಾಗಿ ಹೆಚ್ಚಾಗುತ್ತದೆ. ಇದರಿಂದಾಗಿ ಹಾವಿನ ವಿಷವು ಅತಿ ವೇಗವಾಗಿ ಇಡೀ ದೇಹಕ್ಕೆ ಮತ್ತು ಪ್ರಮುಖ ಅಂಗಾಂಗಗಳಿಗೆ ಆವರಿಸುತ್ತದೆ. ಪರಿಣಾಮವಾಗಿ ಆ ವ್ಯಕ್ತಿ ಈಗ ಅತ್ಯಂತ ಗಂಭೀರ (ಕ್ರಿಟಿಕಲ್) ಸ್ಥಿತಿಗೆ ತಲುಪಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಹಾವು ಕಚ್ಚಿದಾಗ ಏನು ಮಾಡಬೇಕು?:&lt;/strong&gt;&lt;/p&gt;&lt;p&gt;ಹಾವು ಕಚ್ಚಿದ ತಕ್ಷಣ ಗಾಬರಿಯಾಗಬಾರದು. ಯಾವುದೇ ಕಾರಣಕ್ಕೂ ಓಡುವುದು, ಸೈಕಲ್ ತುಳಿಯುವುದು ಅಥವಾ ಅತಿಯಾದ ದೈಹಿಕ ಶ್ರಮ ಮಾಡಬಾರದು. ಕಡಿತಕ್ಕೊಳಗಾದ ಅಂಗವನ್ನು ಅಲುಗಾಡಿಸದೆ ಶಾಂತರಾಗಿರಬೇಕು. ಬೈಕ್, ಆಟೋ ಅಥವಾ ಕಾರಿನಂತಹ ವಾಹನದಲ್ಲಿ ಕುಳಿತು ಆದಷ್ಟು ಬೇಗ ಆಸ್ಪತ್ರೆಗೆ ದಾಖಲಾಗಿ ಆ್ಯಂಟಿ-ವೆನಮ್ (Anti-venom) ಚಿಕಿತ್ಸೆ ಪಡೆಯಬೇಕು.&lt;/p&gt;&lt;img&gt;&lt;p&gt;&lt;strong&gt;ಸ್ವಯಂಘೋಷಿತ ಪರಿಸರವಾದಿಗಳು &amp;amp; ಸರ್ಕಾರದ ನೀತಿಯ ವಿರುದ್ಧ ಆಕ್ರೋಶ!&lt;/strong&gt;&lt;/p&gt;&lt;p&gt;ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಇತ್ತೀಚಿನ ಹಾವು ಸಂರಕ್ಷಣಾ ಆದೇಶದ ವಿರುದ್ಧವೂ ಗೌರಿ ಕಾಳಿಂಗ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 'ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅನುಭವಿ ಸ್ವತಂತ್ರ ಹಾವು ಸಂರಕ್ಷಕರು ಹಾವುಗಳನ್ನು ಹಿಡಿಯುವುದನ್ನು ನಿಲ್ಲಿಸಿದ್ದಾರೆ. ಕೇವಲ ಅರಣ್ಯ ಇಲಾಖೆಯ ಸಿಬ್ಬಂದಿ ಮಾತ್ರ ಹಾವು ಹಿಡಿಯಬೇಕೆಂಬ ನಿಯಮ ಜಾರಿಗೆ ಬಂದಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ನೆರವು ಸಿಗದೆ ಹಾವು ಕಡಿತದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ' ಎಂದಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕೀಬೋರ್ಡ್ ವಾರಿಯರ್ಸ್&zwnj;ಗೆ ತರಾಟೆ:&lt;/strong&gt;&lt;/p&gt;&lt;p&gt;'ಹಾವಿನ ಬಗ್ಗೆ ಕನಿಷ್ಠ ಜ್ಞಾನವಿಲ್ಲದ, ಜೀವನದಲ್ಲಿ ಒಂದೇ ಒಂದು ಹಾವನ್ನೂ ರಕ್ಷಿಸದ, ಕೇವಲ ಮೊಬೈಲ್ ಮತ್ತು ಕಂಪ್ಯೂಟರ್ ಮುಂದೆ ಕುಳಿತು ಪರಿಸರ ರಕ್ಷಣೆ ಮಾತನಾಡುವ ಬೆಂಗಳೂರಿನಂತಹ ನಗರಗಳ 'ಸ್ವಯಂಘೋಷಿತ ಪರಿಸರವಾದಿಗಳು' ಇದಕ್ಕೆ ಪ್ರಮುಖ ಕಾರಣ. ಇವರು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿ, ಸರ್ಕಾರದ ಮೇಲೆ ಅನಗತ್ಯ ಒತ್ತಡ ತಂದು ನೈಜ ಉರಗ ರಕ್ಷಕರ ಕೈಕಟ್ಟಿ ಹಾಕಿದ್ದಾರೆ' ಎಂದು ಕಿಡಿಕಾರಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕೇರಳ, ತಮಿಳುನಾಡು ಮಾದರಿ ಅಗತ್ಯ:&lt;/strong&gt;&lt;/p&gt;&lt;p&gt;'ಪಕ್ಕದ ಕೇರಳ ಮತ್ತು ತಮಿಳುನಾಡು ಸರ್ಕಾರಗಳನ್ನು ನೋಡಿ ಕಲಿಯಬೇಕಿದೆ. ಅಲ್ಲಿ ಸರ್ಕಾರವೇ ವಾಲಂಟಿಯರ್&zwnj;ಗಳನ್ನು (ಸ್ವಯಂಸೇವಕರು) ಒಗ್ಗೂಡಿಸಿಕೊಂಡು &lsquo;ಸರ್ಪ&rsquo; (SARPA) ದಂತಹ ಮೊಬೈಲ್ ಆ್ಯಪ್ ರೂಪಿಸಿದೆ. ಆ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡಲಾಗುತ್ತಿದೆ. ನಮ್ಮಲ್ಲೂ ಇಂತಹ ಪ್ರಾಯೋಗಿಕ ವ್ಯವಸ್ಥೆ ಬರಬೇಕಿದೆ. ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ, ಎಚ್ಚರದಿಂದಿರಿ, ಆಸ್ಪತ್ರೆಗೆ ಬೇಗ ದಾಖಲಾಗಿ ಜೀವ ಉಳಿಸಿಕೊಳ್ಳಿ' ಎಂದು ಗೌರಿ ಕಾಳಿಂಗ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/snakebite-first-aid-why-exertion-is-fatal-gowri-kalinga-slams-karnataka-policy-sat-5dsughp"/>
        </item>
        <item>
            <title><![CDATA[ಮಳೆಗೆ ತಂದ ಛತ್ರಿ ಬಿಸಿಲಿಗೆ ಆಯ್ತು; ಅಂಕೋಲಾದಲ್ಲಿ ತಾಪಮಾನ  34 ಡಿಗ್ರಿ ಸೆಲ್ಸಿಯಸ್‌]]></title>
            <link>https://kannada.asianetnews.com/karnataka-districts/uttara-kannada-el-nino-effect-maximum-temperature-in-ankola-rises-to-34-degree-celsius-even-before-the-monsoon-ends-mrq/articleshow-m57s59q</link>
            <guid isPermaLink="true">https://kannada.asianetnews.com/karnataka-districts/uttara-kannada-el-nino-effect-maximum-temperature-in-ankola-rises-to-34-degree-celsius-even-before-the-monsoon-ends-mrq/articleshow-m57s59q</guid>
            <pubDate>Sun, 13 Sep 2026 08:50:35 +0530</pubDate>
            <description><![CDATA[&lt;p&gt;ಮಳೆಗಾಲದ ಮಧ್ಯದಲ್ಲೇ ಅಂಕೋಲಾದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ತಾಪಮಾನ 34 ಡಿಗ್ರಿ ಸೆಲ್ಸಿಯಸ್&zwnj;ಗೆ ತಲುಪಿದೆ. ವಾಡಿಕೆಗಿಂತ ಶೇ. 42ರಷ್ಟು ಮಳೆ ಕೊರತೆಯಾಗಿದ್ದು, ಜನರು ಮಳೆಗೆ ತಂದ ಛತ್ರಿಯನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಳಸುವಂತಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cc2h7x99feq3ja2n5a9j44,imgname-ankola-summer-1789269198077.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಘು ಕಾಕರಮಠ&lt;/strong&gt;&lt;/p&gt;&lt;p&gt;&lt;strong&gt;ಅಂಕೋಲಾ: &lt;/strong&gt;ಮಳೆಗಾಲ ಇನ್ನೂ ಮುಗಿದಿಲ್ಲ, ಆದರೆ ತಾಲೂಕಿನಲ್ಲಿ ಈಗಾಗಲೇ ಸುಡುಬಿಸಿಲಿನ ಝಳ ಹೆಚ್ಚಾಗಿದೆ. ಜನರು ಬಿಸಿಲಿನ ತಾಪಕ್ಕೆ ಕಂಗೆಡುವಂತಾಗಿದೆ. ಸೆಪ್ಟೆಂಬರನಲ್ಲೇ ಇಂತಹ ವಾತಾವರಣ ಇದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬ ಆತಂಕ ಮೂಡಿದೆ.&lt;/p&gt;&lt;p&gt;ಕಳೆದ ವರ್ಷದ ಸೆಪ್ಟೆಂಬರ್&zwnj;ನಲ್ಲಿ ಸಾಮಾನ್ಯ ಗರಿಷ್ಠ ತಾಪಮಾನ ಸುಮಾರು 29 ಡಿಗ್ರಿ ಸೆಲ್ಸಿಯಸ್&zwnj;ನಷ್ಟಿತ್ತು. ಆದರೆ ಈ ವರ್ಷ ಇದೇ ಅವಧಿಯಲ್ಲಿ ತಾಪಮಾನ ಸುಮಾರು 5 ಡಿಗ್ರಿಯಷ್ಟು ಏರಿಕೆಯಾಗಿ 34ಕ್ಕೆ ತಲುಪಿದೆ. ಭಾರತೀಯ ಹವಾಮಾನ ಇಲಾಖೆ ದಾಖಲೆಯ ಪ್ರಕಾರ, ಸೆಪ್ಟೆಂಬರ್ 1ರಿಂದ 12ರ ವರೆಗೆ ಸರಾಸರಿ ಗರಿಷ್ಠ ತಾಪಮಾನ 32.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರ ನಡುವೆ ಮಳೆಯ ಪ್ರಮಾಣವೂ ವಾಡಿಕೆಗಿಂತ ಶೇ. 42ರಷ್ಟು ಕುಸಿದಿದೆ. ಮಳೆ ಸುರಿಯಬೇಕಾದ ದಿನಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಜನರಲ್ಲಿ ಬೆವರು ಹರಿಸುವಂತಾಗಿದೆ.&lt;/p&gt;&lt;h2&gt;&lt;strong&gt;ಮಳೆ ಬದಲಿಗೆ ಬಿಸಿಲಿನ ತಾಪ:&lt;/strong&gt;&lt;/h2&gt;&lt;p&gt;ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ತಾಪಮಾನ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಳೆ, ಮೋಡ ಮತ್ತು ತಂಪಾದ ವಾತಾವರಣದಿಂದ ಜನತೆ ಬಿಸಿಲಿನ ತಾಪದಿಂದ ಸ್ವಲ್ಪ ನಿರಾಳರಾಗಿರುತ್ತಾರೆ. ಈ ಬಾರಿ ಮಾತ್ರ ಮಳೆಗಾಲದ ಸಂದರ್ಭದಲ್ಲೇ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಅಸಹನೆಗೆ ಕಾರಣವಾಗಿದೆ.&lt;/p&gt;&lt;p&gt;ಸುದೀರ್ಘವಾಗಿ ಮಳೆ ಕೈಕೊಟ್ಟು ಒಣಹವೆ ಮುಂದುವರಿದಿರುವುದರಿಂದ ಜನರು ಕಂಗೆಡುವಂತಾಗಿದೆ. ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕಾಣಿಸಿಕೊಳ್ಳುವಂತಹ ಬಿಸಿಲಿನ ವಾತಾವರಣವೇ ಸೆಪ್ಟೆಂಬರ್&zwnj;ನಲ್ಲೇ ಕಾಣಿಸಿಕೊಳ್ಳುತ್ತಿರುವುದು ಹವಾಮಾನ ಬದಲಾವಣೆಯ ಕುರಿತು ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಮಳೆಗಾಲದಲ್ಲೇ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ಇದೆ.:&lt;/p&gt;&lt;h3&gt;&lt;strong&gt;ಮಳೆಗೆ ತಂದ ಕೊಡೆ ಬಿಸಿಲಿಗೇ ಬಂತು!&lt;/strong&gt;&lt;/h3&gt;&lt;p&gt;ಮಳೆಗಾಲ ಎಂದಾಕ್ಷಣ ಯಾವ ಕ್ಷಣದಲ್ಲಿ ಮಳೆ ಸುರಿಯಬಹುದು ಎಂಬ ಕಾರಣಕ್ಕೆ ಜನರು ಮನೆಯಿಂದ ಹೊರಡುವಾಗ ಕೊಡೆ ಹಿಡಿದುಕೊಂಡು ಬರುತ್ತಾರೆ. ಆದರೆ ಈ ಬಾರಿ ಅಂಕೋಲಾದಲ್ಲಿ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಅಲ್ಲ, ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಛತ್ರಿ ಬಳಸುತ್ತಿದ್ದಾರೆ.&lt;/p&gt;&lt;p&gt;ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿರುವುದರಿಂದ, ಸಹಜವಾಗಿ ಉಷ್ಣತೆಯು ಹೆಚ್ಚಿದೆ. ವಾತಾವರಣದಲ್ಲಿ ತೇವಾಂಶದ ಪ್ರಮಾಣ, ಗಾಳಿಯ ದಿಕ್ಕು ಹಾಗೂ ವಾಯುಭಾರದಲ್ಲಾಗುವ ಬದಲಾವಣೆಗಳಿಂದ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿರಬಹುದು. ಇದರ ಪರಿಣಾಮ ಉಷ್ಣಾಂಶ ಹೆಚ್ಚಲು ಕಾರಣವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಹವಾಮಾನ ಅಧಕಾರಿ ಅವಿನಾಶ್ ಹೇಳಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kannada-el-nino-effect-maximum-temperature-in-ankola-rises-to-34-degree-celsius-even-before-the-monsoon-ends-mrq/articleshow-m57s59q"/>
        </item>
        <item>
            <title><![CDATA[Agumbe Ghat: ಕರಾವಳಿ–ಮಲೆನಾಡು, ಉತ್ತರ ಕರ್ನಾಟಕದ ನಡುವಿನ ಸಂಪರ್ಕ ಮತ್ತಷ್ಟು ಸುಗಮ]]></title>
            <link>https://kannada.asianetnews.com/karnataka-districts/central-government-releases-rs-18-crore-grant-for-the-development-of-the-agumbe-ghat-road-mrq/articleshow-0kkdh3y</link>
            <guid isPermaLink="true">https://kannada.asianetnews.com/karnataka-districts/central-government-releases-rs-18-crore-grant-for-the-development-of-the-agumbe-ghat-road-mrq/articleshow-0kkdh3y</guid>
            <pubDate>Sun, 13 Sep 2026 08:36:02 +0530</pubDate>
            <description><![CDATA[&lt;p&gt;Agumbe Ghat: ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ₹18 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khmxh5a1jyhv3zt6ctn09asj,imgname-agumbe-1771302327617.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರ್ಕಳ: &lt;/strong&gt;ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಆಗುಂಬೆ ಘಾಟ್ ರಸ್ತೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ₹18 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.&lt;/p&gt;&lt;p&gt;ಆಗುಂಬೆ ಘಾಟ್&zwnj;ನಿಂದ ಹೆಬ್ರಿ ಪೇಟೆಯವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರಮುಖ ತಿರುವುಗಳಲ್ಲಿ ಅಗತ್ಯ ಕಾಮಗಾರಿಗಳ ಜೊತೆಗೆ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಲು ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಅನುದಾನ ಬಿಡುಗಡೆ ಮಾಹಿತಿ ನೀಡಿದ ಸುನಿಲ್ ಕುಮಾರ್&lt;/strong&gt;&lt;/h2&gt;&lt;p&gt;ಆಗುಂಬೆ ಘಾಟ್ ರಸ್ತೆಯ ಅಭಿವೃದ್ಧಿ ಹಾಗೂ ಅಪಾಯಕಾರಿ ತಿರುವುಗಳಲ್ಲಿ ವಾಹನಗಳ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಹಿಂದೆ ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಕ ₹18 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.&lt;/p&gt;&lt;p&gt;ಅನುದಾನ ಬಿಡುಗಡೆಗೆ ವಿಶೇಷ ಮುತುವರ್ಜಿ ವಹಿಸಿದ ಕೇಂದ್ರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಂಪರ್ಕ ಮತ್ತಷ್ಟು ಸುಗಮ&lt;/strong&gt;&lt;/h3&gt;&lt;p&gt;ರಸ್ತೆ ಅಭಿವೃದ್ಧಿಯಿಂದ ಆಗುಂಬೆ ಘಾಟ್ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಹೆಚ್ಚಿನ ಸುರಕ್ಷತೆ ದೊರೆಯಲಿದ್ದು, ಕರಾವಳಿ&ndash;ಮಲೆನಾಡು ಹಾಗೂ ಉತ್ತರ ಕರ್ನಾಟಕದ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/central-government-releases-rs-18-crore-grant-for-the-development-of-the-agumbe-ghat-road-mrq/articleshow-0kkdh3y"/>
        </item>
        <item>
            <title><![CDATA[SSLC ಟಾಪರ್ಸ್‌ಗಳಿಗೆ ಉಚಿತ ದೆಹಲಿ ಪ್ರವಾಸದ ಭಾಗ್ಯ; ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಗ್ಯಾರಂಟಿ!]]></title>
            <link>https://kannada.asianetnews.com/karnataka-districts/davanagere-mp-prabha-mallikarjun-promise-free-delhi-tour-for-sslc-toppers-sat/articleshow-e2xxr9k</link>
            <guid isPermaLink="true">https://kannada.asianetnews.com/karnataka-districts/davanagere-mp-prabha-mallikarjun-promise-free-delhi-tour-for-sslc-toppers-sat/articleshow-e2xxr9k</guid>
            <pubDate>Sun, 13 Sep 2026 07:58:02 +0530</pubDate>
            <description><![CDATA[ದಾವಣಗೆರೆ ಲೋಕಸಭಾ ಕ್ಷೇತ್ರದ ಎಸ್ಸೆಸ್ಸೆಲ್ಸಿ ಟಾಪರ್ ವಿದ್ಯಾರ್ಥಿಗಳನ್ನು ಉಚಿತವಾಗಿ ದೆಹಲಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಘೋಷಿಸಿದ್ದಾರೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಈ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳಿಗೆ ಸಂಸತ್ ಭವನ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ನೋಡುವ ಅವಕಾಶ ಸಿಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c995qvya46atbcmdwng385,imgname-davanagere-sslc-toppers-delhi-tour-1789266269944.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ/ದಾವಣಗೆರೆ (ಸೆ.13): ವಿ&lt;/strong&gt;ಜಯನಗರ ಜಿಲ್ಲೆಯ ಹರಪನಹಳ್ಳಿ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟಾಪರ್ ವಿದ್ಯಾರ್ಥಿಗಳನ್ನು ಮುಂದಿನ ತಿಂಗಳು ಉಚಿತವಾಗಿ ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದ್ದಾರೆ.&lt;/p&gt;&lt;p&gt;ಪಟ್ಟಣದ ತರಳಬಾಳು ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು, ದಾವಣಗೆರೆ ಲೋಕಸಭಾ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಿಹಿಸುದ್ದಿ ನೀಡಿದ್ದಾರೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ದೇಶದ ಆಡಳಿತ ಕೇಂದ್ರದ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳು:&lt;/strong&gt;&lt;/h2&gt;&lt;p&gt;ಶಿಕ್ಷಕರ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, 'ಯುವ ಪೀಳಿಗೆಯನ್ನು ಸರಿಯಾದ ಹಾದಿಯಲ್ಲಿ ನಡೆಸಿ ದೇಶದ ಭವಿಷ್ಯ ರೂಪಿಸುವ ಅದ್ಭುತ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಶಿಕ್ಷಕರು ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ಬೋಧಿಸುವವರಲ್ಲ, ಬದಲಿಗೆ ಮಕ್ಕಳಲ್ಲಿ ಸಂಸ್ಕಾರ, ನೈತಿಕ ಮೌಲ್ಯ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯನ್ನು ಬಿತ್ತುವ ನೈಜ ಶಿಲ್ಪಿಗಳು' ಎಂದು ಬಣ್ಣಿಸಿದರು.&lt;/p&gt;&lt;p&gt;ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ಇಂತಹ ಪ್ರೋತ್ಸಾಹಕ ಕ್ರಮಗಳು ಅತ್ಯಗತ್ಯವಾಗಿದ್ದು, ದೆಹಲಿ ಪ್ರವಾಸದ ವೇಳೆ ವಿದ್ಯಾರ್ಥಿಗಳಿಗೆ ಸಂಸತ್ ಭವನ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮದಲ್ಲಿ ತಾಲೂಕಿನ ಗಣ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ನೂರಾರು ಶಿಕ್ಷಕರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/davanagere-mp-prabha-mallikarjun-promise-free-delhi-tour-for-sslc-toppers-sat/articleshow-e2xxr9k"/>
        </item>
        <item>
            <title><![CDATA[ಜರ್ಮನಿಯ ಗಣೇಶನಿಗೆ ಪುತ್ತೂರಿನಲ್ಲಿ ತಯಾರಾಯ್ತು ರಜತ ಕಿರೀಟ; ಏನಿದರ ವಿಶೇಷತೆ?]]></title>
            <link>https://kannada.asianetnews.com/karnataka-districts/dakshina-kannada-silver-crown-crafted-in-puttur-for-germany-s-ganesha-what-makes-it-special-mrq/articleshow-d3anzko</link>
            <guid isPermaLink="true">https://kannada.asianetnews.com/karnataka-districts/dakshina-kannada-silver-crown-crafted-in-puttur-for-germany-s-ganesha-what-makes-it-special-mrq/articleshow-d3anzko</guid>
            <pubDate>Sun, 13 Sep 2026 07:55:24 +0530</pubDate>
            <description><![CDATA[ಜರ್ಮನಿಯ ಬರ್ಲಿನ್&zwnj;ನಲ್ಲಿರುವ ಶ್ರೀ ಗಣೇಶ ಹಿಂದೂ ದೇವಸ್ಥಾನದ ಗಣಪತಿ ವಿಗ್ರಹಕ್ಕಾಗಿ ಪುತ್ತೂರಿನ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;ನಲ್ಲಿ ವಿಶೇಷ ರಜತ ಕಿರೀಟವನ್ನು ತಯಾರಿಸಲಾಗಿದೆ. ಶ್ಯಾಮಲಾ ನಾಯಕ್ ಪುಣಚ ಕುಟುಂಬದವರ ಸೇವೆಯಾಗಿ, ಆರು ತಿಂಗಳ ಪರಿಶ್ರಮದಿಂದ ಸಿದ್ಧವಾದ ಈ ಕಿರೀಟವು ಪುತ್ತೂರಿನ ಕರಕುಶಲ ಪರಂಪರೆ ಮತ್ತು ಭಕ್ತಿಯ ಪ್ರತೀಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c93gnr4y901ba4j8gmsbp8,imgname-puttur-1789266084528.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ಜರ್ಮನಿಯ ಬರ್ಲಿನ್&zwnj;ನಲ್ಲಿರುವ ಶ್ರೀ ಗಣೇಶ ಹಿಂದೂ ಟೆಂಪಲ್&zwnj;ನ ಗಣೇಶನ ಮೂರ್ತಿಗೆ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;ನಲ್ಲಿ ರಜತ ಕಿರೀಟ ತಯಾರಿಸಲಾಗಿದೆ.&lt;/p&gt;&lt;p&gt;ಶ್ಯಾಮಲಾ ನಾಯಕ್ ಪುಣಚ ಹಾಗೂ ಕುಟುಂಬದವರ ಸೇವಾರ್ಥವಾಗಿ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;ನ ಕರಕುಶಲ ಕರ್ಮಿಗಳು ವಿಶೇಷ ವಿನ್ಯಾಸದ ಈ ಬೆಳ್ಳಿ ಕಿರೀಟವನ್ನು ತಯಾರಿಸಿದ್ದಾರೆ.&lt;/p&gt;&lt;p&gt;ಸಿದ್ಧ ವಿನ್ಯಾಸವನ್ನು ಕೈಬಿಟ್ಟು, ಭಕ್ತರ ಭಕ್ತಿ-ಆರಾಧನೆಗೆ ಅನುಗುಣವಾಗಿ ಕಿರೀಟಕ್ಕೆ ರೂಪ ನೀಡಲಾಗಿದೆ. ಆರು ತಿಂಗಳ ಪರಿಶ್ರಮದ ಫಲವೇ ಈ ರಜತ ಕಿರೀಟ. ಬೆಳ್ಳಿಯ ಕರಕುಶಲತೆ, ಸೂಕ್ಷ್ಮ ಅಲಂಕಾರಿಕ ವಿವರಗಳು ಹಾಗೂ ಅಂತಿಮ ರೂಪದವರೆಗೆ ಪ್ರತಿಯೊಂದು ಹಂತದಲ್ಲೂ ತಾಳ್ಮೆ ನಿಖರತೆ ಮತ್ತು ಅನುಭವ ಮೇಳೈಸಿದೆ.&lt;/p&gt;&lt;p&gt;ಹೀಗಾಗಿ ಇದು ಕೇವಲ ಬೆಳ್ಳಿ ಕಿರೀಟವಲ್ಲ. ಪುತ್ತೂರಿನ ಕರಕುಶಲ ಪರಂಪರೆ, ಭಕ್ತಿಭಾವ, ವೈಯಕ್ತಿಕ ಕಲ್ಪನೆ ಮತ್ತು ಮೂರು ತಲೆಮಾರುಗಳಿಂದ ಬೆಳೆದು ಬಂದ ಗ್ರಾಹಕರ ವಿಶ್ವಾಸ ಇವೆಲ್ಲವೂ ಒಂದೇ ಕಲಾಕೃತಿಯಲ್ಲಿ ಒಂದಾಗಿರುವ ಪ್ರತೀಕ.&lt;/p&gt;&lt;h2&gt;&lt;strong&gt;ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;&lt;/strong&gt;&lt;/h2&gt;&lt;p&gt;2027ರಲ್ಲಿ ಶತಮಾನೋತ್ಸವ ಆಚರಿಸಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj; ಪುತ್ತೂರಿನ ಚಿನ್ನ ಮತ್ತು ಬೆಳ್ಳಿ ಆಭರಣಗಳ ವ್ಯಾಪಾರ ಹಾಗೂ ಕರಕುಶಲ ಪರಂಪರೆಯೊಂದಿಗೆ ಬೆಳೆದುಬಂದಿದೆ. ಡಿ. ಶಿವ ಭಟ್ ಅವರ ನಂತರ ಸಂಸ್ಥೆಯ ಜವಾಬ್ದಾರಿಯನ್ನು ಅವರ ಪುತ್ರ ಗೋವಿಂದ ಭಟ್ ವಹಿಸಿಕೊಂಡರು. ಮೂಲ ಮೌಲ್ಯವಾದ ಗ್ರಾಹಕರ ವಿಶ್ವಾಸ ನಿರಂತರವಾಗಿ ಮುಂದುವರಿಯಿತು. ಇಂದು ಮೂರನೇ ತಲೆಮಾರಿನ ಈಶ್ವರ ಮುರಳಿ ಅವರ ನೇತೃತ್ವದಲ್ಲಿ ಸಂಸ್ಥೆ ಹೊಸ ಕಾಲದ ಅಗತ್ಯಗಳು ಮತ್ತು ಗ್ರಾಹಕರ ಬದಲಾಗುತ್ತಿರುವ ನಿರೀಕ್ಷೆಗಳಿಗೆ ಹೊಂದಿಕೊಳ್ಳುತ್ತಾ ಪರಂಪರೆಯನ್ನು ಜೀವಂತವಾಗಿದೆ.&lt;/p&gt;&lt;p&gt;ಜರ್ಮನಿಯ ಬರ್ಲಿನ್&zwnj;ನ ಶ್ರೀ ಗಣೇಶ ಹಿಂದೂ ಟೆಂಪಲ್&zwnj;ಗಾಗಿ ಶ್ಯಾಮಲಾ ನಾಯಕ್ ಪುಣಚ ಮತ್ತು ಕುಟುಂಬ ನೀಡಿದ ಗಣಪತಿ ಕಿರೀಟದ ಆರ್ಡರ್ ವೈಯಕ್ತಿಕ ಕಲ್ಪನೆ ಮತ್ತು ಭಕ್ತಿಯ ಫಲ. ಗಣಪತಿ ಆರಾಧನೆಯೊಂದಿಗೆ ಬೆಸೆದುಕೊಂಡಿರುವ ಭಕ್ತಿಭಾವವನ್ನು ಗಮನದಲ್ಲಿಟ್ಟುಕೊಂಡು ಕಿರೀಟದ ವಿನ್ಯಾಸ, ಅಲಂಕಾರಿಕ ವಿವರಗಳು ಮತ್ತು ಬೆಳ್ಳಿಯ ಕರಕುಶಲತೆಯನ್ನು ಸಮನ್ವಯಗೊಳಿಸಲಾಗಿದೆ. ಕಣ್ಣಿಗೆ ಕಾಣುವ ಅಂತಿಮ ಕಲಾಕೃತಿಯ ಹಿಂದೆ ಹಲವು ಹಂತಗಳ ಪರಿಶ್ರಮ, ತಾಳ್ಮೆ ಮತ್ತು ನಿಖರತೆ ಅಡಗಿದೆ. ಇಂದು ಆಭರಣಗಳ ವಿನ್ಯಾಸ ಬದಲಾಗಿದೆ, ಗ್ರಾಹಕರ ಅಭಿರುಚಿ ಬದಲಾಗಿದೆ, ತಂತ್ರಜ್ಞಾನ ಬದಲಾಗಿದೆ. ಆದರೆ ಗ್ರಾಹಕರ ಮಾತನ್ನು ಆಲಿಸಿ, ಅವರ ಭಾವನೆ ಮತ್ತು ಅಗತ್ಯಕ್ಕೆ ತಕ್ಕಂತೆ ಆಭರಣವನ್ನು ರೂಪಿಸುವ ಮೂಲ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.&lt;/p&gt;&lt;p&gt;। ಈಶ್ವರ ಮುರಳಿ, ಮಾಲಕರು, ಡಿ. ಶಿವ ಭಟ್ ಜ್ಯುವೆಲ್ಲರ್ಸ್, ಪುತ್ತೂರು&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-silver-crown-crafted-in-puttur-for-germany-s-ganesha-what-makes-it-special-mrq/articleshow-d3anzko"/>
        </item>
        <item>
            <title><![CDATA[Belagavi: 756 ಎಕ್ರೆಯ ಪ್ರದೇಶದಲ್ಲಿ ಪಾಲಿಕೆಗೆ ಕಂಟೋನ್ಮೆಂಟ್‌ ಕೊಡೋದೆಷ್ಟು ಜಾಗ?]]></title>
            <link>https://kannada.asianetnews.com/karnataka-districts/belagavi-how-much-land-is-the-cantonment-board-handing-over-to-the-city-corporation-out-of-the-756-acre-area-mrq/articleshow-i3zgiyp</link>
            <guid isPermaLink="true">https://kannada.asianetnews.com/karnataka-districts/belagavi-how-much-land-is-the-cantonment-board-handing-over-to-the-city-corporation-out-of-the-756-acre-area-mrq/articleshow-i3zgiyp</guid>
            <pubDate>Sun, 13 Sep 2026 07:47:35 +0530</pubDate>
            <description><![CDATA[ಬೆಳಗಾವಿ ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಚರ್ಚೆಯಲ್ಲಿದೆ. 756 ಎಕರೆ ಪೂರ್ಣ ಪ್ರದೇಶದ ಬದಲು 112 ಎಕರೆ ಮಾತ್ರ ಹಸ್ತಾಂತರಿಸುವ ಪ್ರಸ್ತಾಪದಿಂದ ಗೊಂದಲ ಉಂಟಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಬೇಕಾಗಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m2c8t73v0wcwe7we7526afq7,imgname-belagavi-cantonment-1789265779835.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀಶೈಲ ಮಠದ&lt;/strong&gt;&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ನಗರದ ಹೃದಯಭಾಗದಲ್ಲಿದ್ದು, ಇತಿಹಾಸ, ಹಸಿರು ಪರಿಸರ, ಶಿಕ್ಷಣ ಹಾಗೂ ಸೇನಾ ಪರಂಪರೆಯನ್ನು ತನ್ನೊಳಗೆ ಕಟ್ಟಿಕೊಂಡಿರುವ ಬೆಳಗಾವಿ ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶ ಮಹಾನಗರ ಪಾಲಿಕೆಯ ತೆಕ್ಕೆಗೆ ಯಾವಾಗ ಬರಲಿದೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. 756 ಎಕರೆ ನಾಗರಿಕ ಪ್ರದೇಶದ ಹಸ್ತಾಂತರಕ್ಕೆ 70 ಪುಟಗಳ ಸಮಗ್ರ ವರದಿ ಸಿದ್ಧವಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯದ ನೀತಿಯೂ ಇದೆ. ರಾಜ್ಯ ಸರ್ಕಾರದ ಹಂತದಲ್ಲೂ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಆದರೂ ಅಂತಿಮ ಹಸ್ತಾಂತರಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ.&lt;/p&gt;&lt;h2&gt;&lt;strong&gt;ಕಡತದ ಪಯಣ ಇನ್ನೂ ಮುಗಿದಿಲ್ಲ&lt;/strong&gt;&lt;/h2&gt;&lt;p&gt;ಕಂಟೋನ್ಮೆಂಟ್ ವ್ಯಾಪ್ತಿಯ ನಾಗರಿಕ ವಸಾಹತುಗಳನ್ನು ಆಯಾ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳಿಗೆ ಹಸ್ತಾಂತರಿಸುವ ಕೇಂದ್ರ ರಕ್ಷಣಾ ಸಚಿವಾಲಯದ ನೀತಿಯಡಿ ಬೆಳಗಾವಿಯ 756 ಎಕರೆ ನಾಗರಿಕ ಪ್ರದೇಶದ ಕುರಿತು ವರದಿ ಸಿದ್ಧಪಡಿಸಲಾಗಿದೆ. ಆದರೆ ವರದಿ ಸಿದ್ಧವಾಗುವುದೇ ಹಸ್ತಾಂತರವಲ್ಲ. ಭೂ ಮಾಲೀಕತ್ವದ ಹಕ್ಕುಗಳು, ಸ್ವತ್ತುಗಳ ವರ್ಗಾವಣೆ, ಬಾಕಿ ಇರುವ ಹೊಣೆಗಾರಿಕೆಗಳು, ಸಿಬ್ಬಂದಿ, ರಸ್ತೆ, ನೀರು, ಒಳಚರಂಡಿ ಹಾಗೂ ಇತರೆ ನಾಗರಿಕ ಮೂಲಸೌಕರ್ಯಗಳ ಜವಾಬ್ದಾರಿ ಸೇರಿದಂತೆ ಹಲವು ವಿಷಯಗಳು ಇನ್ನೂ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ. ಸದ್ಯ ಪ್ರಸ್ತಾವನೆ ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಪರಿಗಣನೆಯಲ್ಲಿದೆ. ರಾಜ್ಯಮಟ್ಟದ ಪರಿಶೀಲನೆ ಬಳಿಕ ಸಚಿವ ಸಂಪುಟ ಹಾಗೂ ರಕ್ಷಣಾ ಸಚಿವಾಲಯದೊಂದಿಗೆ ಚರ್ಚಿಸಿ ಮುಂದಿನ ಹಂತಕ್ಕೆ ಕಳುಹಿಸಬೇಕಿದೆ.&lt;/p&gt;&lt;p&gt;ಹಸ್ತಾಂತರದ ಪ್ರಸ್ತಾವನೆಯಲ್ಲಿ 112 ಎಕರೆ ಅಂಶ ಇದೀಗ ಪ್ರಮುಖ ಚರ್ಚೆಯ ವಿಷಯವಾಗಿದೆ. ಕಂಟೋನ್ಮೆಂಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ 112 ಎಕರೆ ನಾಗರಿಕ ಪ್ರದೇಶವನ್ನು ಮಾತ್ರ ಹಸ್ತಾಂತರಿಸಲು ಪ್ರಸ್ತಾಪಿಸಿದ್ದಾರೆ. ಆದರೆ 756 ಎಕರೆ ನಾಗರಿಕ ಪ್ರದೇಶದ ಕುರಿತು ಸಮಗ್ರ ವರದಿ ಸಿದ್ಧವಾಗಿರುವಾಗ 112 ಎಕರೆ ಮಾತ್ರ ಏಕೆ ಎಂಬ ಪ್ರಶ್ನೆ ಎದುರಾಗಿದೆ. ಹಾಗಾದರೆ ಉಳಿದ ಪ್ರದೇಶದ ಸ್ಥಿತಿ ಏನು? ನಾಗರಿಕ ಪ್ರದೇಶದ ಗಡಿ ಯಾವ ಆಧಾರದ ಮೇಲೆ ನಿಗದಿಯಾಗಲಿದೆ? ಅಂತಿಮವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಎಷ್ಟು ಪ್ರದೇಶ ಬರಲಿದೆ? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.&lt;/p&gt;&lt;p&gt;ಕೇಂದ್ರ ರಕ್ಷಣಾ ಸಚಿವಾಲಯದ ಹೊಸ ಮಾರ್ಗಸೂಚಿಗಳು ಮಾತ್ರ ಈ ಪ್ರಕ್ರಿಯೆಗೆ ಹೊಸ ತಿರುವು ನೀಡಿವೆ. ಕಂಟೋನ್ಮೆಂಟ್ ಮಿತಿಯೊಳಗಿನ ನಾಗರಿಕ ವಸಾಹತುಗಳನ್ನು ಸ್ಥಳೀಯ ಪುರಸಭೆ ಸಂಸ್ಥೆಗಳಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಿರುವುದರಿಂದ, ಅಂತಿಮವಾಗಿ ಗುರುತಿಸಲಾದ ಸಂಪೂರ್ಣ ನಾಗರಿಕ ಪ್ರದೇಶವೇ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ ಎಂಬ ನಿರೀಕ್ಷೆ ಮೂಡಿದೆ. ಆದರೆ ಕೇಂದ್ರದ ಮಾರ್ಗಸೂಚಿ ಇದ್ದರೂ, ರಾಜ್ಯ ಸಚಿವ ಸಂಪುಟದ ಅನುಮೋದನೆ ಹಾಗೂ ಕೇಂದ್ರದ ಅಂತಿಮ ಒಪ್ಪಿಗೆ ಇಲ್ಲದೆ ಹಸ್ತಾಂತರ ಸಾಧ್ಯವಿಲ್ಲ.&lt;/p&gt;&lt;p&gt;ಪಾಲಿಕೆಗೆ ಸೇರಿದರೆ ಏನು ಬದಲಾಗಲಿದೆ?:ನಾಗರಿಕ ಪ್ರದೇಶ ಮಹಾನಗರ ಪಾಲಿಕೆಗೆ ಸೇರಿದರೆ ಅಲ್ಲಿನ ನಿವಾಸಿಗಳ ದೈನಂದಿನ ಬದುಕಿನಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ. ನೀರು ಪೂರೈಕೆ, ರಸ್ತೆ ನಿರ್ವಹಣೆ, ಒಳಚರಂಡಿ, ಕಸ ವಿಲೇವಾರಿ, ಬೀದಿ ದೀಪ, ಕಟ್ಟಡ ಪರವಾನಗಿ ಸೇರಿದಂತೆ ಹಲವು ಮೂಲಸೌಲಭ್ಯಗಳು ಪಾಲಿಕೆಯ ವ್ಯಾಪ್ತಿಗೆ ಬರಬಹುದು. ತೆರಿಗೆ ವ್ಯವಸ್ಥೆಯಲ್ಲೂ ಬದಲಾವಣೆ ಸಂಭವಿಸುವ ಸಾಧ್ಯತೆಯಿದೆ. ಕಂಟೋನ್ಮೆಂಟ್&zwnj;ನ ಆಸ್ತಿಗಳು ಯಾರ ಪಾಲಾಗಲಿವೆ? ಸಿಬ್ಬಂದಿಯ ಗತಿ ಏನು? ರಸ್ತೆ, ಚರಂಡಿ ಹಾಗೂ ಇತರೆ ಮೂಲಸೌಕರ್ಯಗಳ ನಿರ್ವಹಣೆ ಯಾರ ಹೊಣೆ? ಬಾಕಿ ಇರುವ ಆರ್ಥಿಕ ಹೊಣೆಗಾರಿಕೆಗಳನ್ನು ಯಾರು ವಹಿಸಿಕೊಳ್ಳಲಿದ್ದಾರೆ? ಎಂಬುದಕ್ಕೆ ಹಸ್ತಾಂತರಕ್ಕೂ ಮುನ್ನ ಸ್ಪಷ್ಟ ಉತ್ತರ ಬೇಕಿದೆ.&lt;/p&gt;&lt;h3&gt;&lt;strong&gt;ಎರಡ್ಮೂರು ತಿಂಗಳು ಬೇಕು&lt;/strong&gt;&lt;/h3&gt;&lt;p&gt;ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶದ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎರಡರಿಂದ ಮೂರು ತಿಂಗಳು ಬೇಕಾಗಬಹುದು. ಅಂತಿಮವಾಗಿ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಆದರೆ ಕಡತದ ಹಂತಗಳು ಇನ್ನೂ ಹಲವು ಇರುವುದರಿಂದ ಎರಡು&ndash;ಮೂರು ತಿಂಗಳ ನಂತರವೇ ನಿಜವಾದ ಹಸ್ತಾಂತರ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ಕಂಟೋನ್ಮೆಂಟ್&zwnj; ಇತಿಹಾಸ&lt;/strong&gt;&lt;/h3&gt;&lt;p&gt;ಬೆಳಗಾವಿ ಕಂಟೋನ್ಮೆಂಟ್&zwnj;ಗೆ ಎರಡು ಶತಮಾನಗಳ ಇತಿಹಾಸವಿದೆ. 1832ರಲ್ಲಿ ಸ್ಥಾಪನೆಯಾದ ಕಂಟೋನ್ಮೆಂಟ್, ಮುಖ್ಯ ಕಂಟೋನ್ಮೆಂಟ್ ಮತ್ತು ಕೋಟೆ ವಲಯ ಎಂಬ ಎರಡು ಭಾಗಗಳನ್ನು ಒಳಗೊಂಡಿದೆ. ಕಂಟೋನ್ಮೆಂಟ್ ಎಂದರೆ ಕೇವಲ ಸೇನಾ ನೆಲೆ ಎಂಬ ಕಲ್ಪನೆಗೆ ಮೀರಿದ ಹಲವು ಆಯಾಮಗಳು ಇಲ್ಲಿವೆ. ವಿಶಾಲವಾದ ಹಸಿರು ಪ್ರದೇಶ, ಮರಗಳ ಸಾಲು, ಅಚ್ಚುಕಟ್ಟಾದ ರಸ್ತೆಗಳು ಹಾಗೂ ವಾಯುವಿಹಾರಕ್ಕೆ ಸೂಕ್ತವಾದ ವಾತಾವರಣದಿಂದ ಇದು ಬೆಳಗಾವಿಯ ಹಸಿರು ಶ್ವಾಸಕೋಶದಂತಿದೆ. ಬೆಳಗಿನ ಜಾವ ವಾಯುವಿಹಾರಕ್ಕೆ ಬರುವ ಜನರಿಗೆ ಇದು ನೆಚ್ಚಿನ ತಾಣ. ಅಲ್ಲದೇ, ಇದು ರಾಜ್ಯದ ಏಕೈಕ ಕಂಟೋನ್ಮೆಂಟ್&zwnj; ಎಂಬ ಹೆಗ್ಗಳಿಕೆಯೂ ಇದೆ.&lt;/p&gt;&lt;p&gt;ಮರಾಠಾ ಲಘು ಪದಾತಿದಳದ ರೆಜಿಮೆಂಟಲ್ ಕೇಂದ್ರ, ಕಿರಿಯ ನಾಯಕರ ತರಬೇತಿ ವಿಭಾಗ ಸೇರಿದಂತೆ ಹಲವು ಪ್ರಮುಖ ಸೇನಾ ಸ್ಥಾಪನೆಗಳು ಕಂಟೋನ್ಮೆಂಟ್&zwnj;ನಲ್ಲಿವೆ. ಹೀಗಾಗಿ ಸೇನಾ ನೆಲೆ, ನಾಗರಿಕ ವಸಾಹತು, ಶಿಕ್ಷಣ ಕೇಂದ್ರ, ಐತಿಹಾಸಿಕ ತಾಣ ಹಾಗೂ ಹಸಿರು ಪ್ರದೇಶಗಳ ಅಪರೂಪದ ಸಂಗಮವೇ ಬೆಳಗಾವಿ ಕಂಟೋನ್ಮೆಂಟ್. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶದ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿವೆ.&lt;/p&gt;&lt;p&gt;ದಂಡುಮಂಡಳಿ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ. 112 ಎಕರೆ ಪ್ರದೇಶವನ್ನು ಹೊರತುಪಡಿಸುವ ಪ್ರಸ್ತಾವ ಮಾತ್ರ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. 756 ಎಕರೆ ಹಸ್ತಾಂತರದ ಪ್ರಸ್ತಾವನೆಗೆ ಡಿಒ ಹಾಗೂ ಸ್ಥಳೀಯ ಮಿಲಿಟರಿ ಪ್ರಾಧಿಕಾರದಿಂದ ಆಕ್ಷೇಪವಿದೆ. ಅಂತಿಮ ತೀರ್ಮಾನ ಕೇಂದ್ರ ರಕ್ಷಣಾ ಸಚಿವಾಲಯದ್ದಾಗಿದೆ. ಅಲ್ಲಿಯವರೆಗೆ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ಆತಂಕಪಡುವ ಅಗತ್ಯವಿಲ್ಲ.&lt;/p&gt;&lt;p&gt;&lt;strong&gt;ಮಂಚಲವಾರ ಸುದಾಮ ಹರಿವಿಜಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬೆಳಗಾವಿ ದಂಡುಮಂಡಳಿ&lt;/strong&gt;&lt;/p&gt;&lt;p&gt;ದಂಡುಮಂಡಳಿಯ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಇನ್ನೂ ಅಂತಿಮ ಹಂತ ತಲುಪಿಲ್ಲ. 756 ಎಕರೆ ಪ್ರದೇಶದ ಕುರಿತು ಪ್ರಸ್ತಾವ ಪರಿಶೀಲನೆಯಲ್ಲಿದೆ. ರಾಜ್ಯ ಸಚಿವ ಸಂಪುಟದ ಅನುಮೋದನೆ ಹಾಗೂ ಕೇಂದ್ರ ರಕ್ಷಣಾ ಸಚಿವಾಲಯದ ಅಂತಿಮ ಒಪ್ಪಿಗೆಯ ಬಳಿಕವೇ ಹಸ್ತಾಂತರ ಪ್ರಕ್ರಿಯೆ ಆರಂಭವಾಗಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎರಡರಿಂದ ಮೂರು ತಿಂಗಳು ಬೇಕಾಗಬಹುದು. ಅಂತಿಮವಾಗಿ ನಾಗರಿಕ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರವಾಗುವ ವಿಶ್ವಾಸವಿದೆ.&lt;/p&gt;&lt;p&gt;&lt;strong&gt;- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ, ಬೆಳಗಾವಿ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-how-much-land-is-the-cantonment-board-handing-over-to-the-city-corporation-out-of-the-756-acre-area-mrq/articleshow-i3zgiyp"/>
        </item>
        <item>
            <title><![CDATA[BTM ಲೇಔಟ್‌ ವ್ಯಾಪ್ತಿಯ 3 ನಿಲ್ದಾಣಗಳ ಹೆಸರು ಬದಲಿಸಿ: BMRCLಗೆ ರಾಮಲಿಂಗಾರೆಡ್ಡಿ ಪತ್ರ]]></title>
            <link>https://kannada.asianetnews.com/gallery/bengaluru-urban/rename-3-stations-under-btm-layout-assembly-constituency-minister-ramalingareddy-s-letter-to-bmrcl-mrq-dcwm44k</link>
            <guid isPermaLink="true">https://kannada.asianetnews.com/gallery/bengaluru-urban/rename-3-stations-under-btm-layout-assembly-constituency-minister-ramalingareddy-s-letter-to-bmrcl-mrq-dcwm44k</guid>
            <pubDate>Sun, 13 Sep 2026 07:35:41 +0530</pubDate>
            <description><![CDATA[&lt;p&gt;ರಾಮಲಿಂಗಾರೆಡ್ಡಿ ಅವರು BTM ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 3 ಮೆಟ್ರೋ ನಿಲ್ದಾಣಗಳ ಮರುನಾಮಕರಣಕ್ಕೆ ಬಿಎಂಆರ್&zwnj;ಸಿಎಲ್&zwnj;ಗೆ ಪತ್ರ ಬರೆದಿದ್ದಾರೆ. ಈ ಹೆಸರುಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಸ್ಥಳೀಯ, ಭೌಗೋಳಿಕ ಮಹತ್ವವನ್ನು ಪರಿಗಣಿಸಿ ಹೆಸರುಗಳನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2c7sy27aerb5cmpqa1h359n,imgname-ramalinga-reddy-metro-name--4--1789264721991.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಮಲಿಂಗಾರೆಡ್ಡಿ ಅವರು BTM ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 3 ಮೆಟ್ರೋ ನಿಲ್ದಾಣಗಳ ಮರುನಾಮಕರಣಕ್ಕೆ ಬಿಎಂಆರ್&zwnj;ಸಿಎಲ್&zwnj;ಗೆ ಪತ್ರ ಬರೆದಿದ್ದಾರೆ. ಈ ಹೆಸರುಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಸ್ಥಳೀಯ, ಭೌಗೋಳಿಕ ಮಹತ್ವವನ್ನು ಪರಿಗಣಿಸಿ ಹೆಸರುಗಳನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ.&lt;/p&gt;&lt;img&gt;&lt;p&gt;ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಟ್ರೋ ರೈಲು ನಿಲ್ದಾಣಗಳಿಗೆ ಭೌಗೋಳಿಕ ಮಹತ್ವ ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಪರಿಗಣಿಸಿ ನಾಮಕರಣ ಮಾಡುವಂತೆ ಬಿಎಂಆರ್&zwnj;ಸಿಎಲ್&zwnj; ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ.&lt;/p&gt;&lt;img&gt;&lt;p&gt;ಪ್ರಸ್ತುತ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆಲ ಮೆಟ್ರೋ ನಿಲ್ದಾಣಗಳ ಹೆಸರುಗಳು ನಿಲ್ದಾಣ ಇರುವ ನಿಖರ ಸ್ಥಳ ಅಥವಾ ಆ ಪ್ರದೇಶದ ಜನರಿಗೆ ಹೆಚ್ಚು ಪರಿಚಿತವಾಗಿರುವ ಸ್ಥಳೀಯ ಹೆಸರನ್ನು ಪ್ರತಿಬಿಂಬಿಸುವುದಿಲ್ಲ. ಇದರಿಂದ ಜನರಿಗೆ ನಿಲ್ದಾಣಗಳ ಸ್ಥಳ ಗುರುತಿಸುವಲ್ಲಿ ಗೊಂದಲ ಉಂಟಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಕಾರಣದಿಂದ ನಿಲ್ದಾಣಗಳ ಹೆಸರು ಅಂತಿಮಗೊಳಿಸುವ ಸಂದರ್ಭದಲ್ಲಿ ನಿಲ್ದಾಣ ಇರುವ ಸ್ಥಳೀಯ ಪ್ರದೇಶದ ಪ್ರಚಲಿತ ಹೆಸರು, ಸ್ಥಳೀಯವಾಗಿ ಸಾರ್ವಜನಿಕರು ಹೆಚ್ಚು ಪರಿಚಿತವಾಗಿರುವ ಹೆಸರು, ಪ್ರದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹಾಗೂ ಪ್ರಯಾಣಿಕರು ಸುಲಭವಾಗಿ ಗುರುತಿಸಲು ಅನುಕೂಲವಾಗುವ ಹೆಸರನ್ನಿಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಜೆಪಿ ನಗರ 4ನೇ ಹಂತ ಮೆಟ್ರೋ ನಿಲ್ದಾಣವನ್ನು ಎನ್&zwnj;ಎಸ್&zwnj; ಪಾಳ್ಯ ಮೆಟ್ರೋ ನಿಲ್ದಾಣ, ತಾವರೆಕೆರೆ ಮೆಟ್ರೋ ನಿಲ್ದಾಣವನ್ನು ಎಸ್&zwnj;ಜಿ ಪಾಳ್ಯ ಮೆಟ್ರೋ ನಿಲ್ದಾಣ ಹಾಗೂ ಡೈರಿ ವೃತ್ತ ಮೆಟ್ರೋ ನಿಲ್ದಾಣವನ್ನು ಲಕ್ಕಸಂದ್ರ ಮೆಟ್ರೋ ನಿಲ್ದಾಣ ಎಂದು ಬದಲಿಸುವುದು ಸೂಕ್ತ. ಈ ನಿಲ್ದಾಣಗಳ ಮರುನಾಮಕರಣ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/bengaluru-urban/rename-3-stations-under-btm-layout-assembly-constituency-minister-ramalingareddy-s-letter-to-bmrcl-mrq-dcwm44k"/>
        </item>
        <item>
            <title><![CDATA[₹30,000 ಗೃಹಿಣಿಯ ಮಾಸಿಕ ಆದಾಯ; ಮಹಿಳೆ ಕುಟುಂಬಕ್ಕೆ ₹59.69 ಲಕ್ಷ ಪರಿಹಾರ ಕೊಡಿ - ಹೈಕೋರ್ಟ್]]></title>
            <link>https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk</link>
            <guid isPermaLink="true">https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk</guid>
            <pubDate>Sun, 13 Sep 2026 07:18:12 +0530</pubDate>
            <description><![CDATA[&lt;p&gt;ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯೊಬ್ಬರ ಮಾಸಿಕ ಕಾಲ್ಪನಿಕ ಆದಾಯವನ್ನು ₹30,000 ಎಂದು ಪರಿಗಣಿಸಿರುವ ಹೈಕೋರ್ಟ್, ವಿಮಾ ಕಂಪನಿಗೆ ₹59.69 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ನ್ಯಾಯಾಧಿಕರಣ ನೀಡಿದ್ದ ₹11.18 ಲಕ್ಷ ಪರಿಹಾರವನ್ನು ರದ್ದುಗೊಳಿಸಿ, ಗೃಹಿಣಿಯರ ಶ್ರಮ ಮತ್ತು ಕೊಡುಗೆಯನ್ನು ಕನಿಷ್ಠ ಆದಾಯದಲ್ಲಿ ಅಳೆಯಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2c6y2zc6g00saxgcr9sjfeh,imgname-karnataka-high-court--2--1789263809513.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): ಮ&lt;/strong&gt;ನೆ ಕೆಲಸ ನಿರ್ವಹಿಸುವ ಗೃಹಿಣಿಯರ ನಿಸ್ವಾರ್ಥ ಶ್ರಮ ಮತ್ತು ಕುಟುಂಬಕ್ಕೆ ಅವರು ನೀಡುವ ಕೊಡುಗೆಯನ್ನು ಕೇವಲ ಕನಿಷ್ಠ ವೇತನದ ಅಡಿಯಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ 37 ವರ್ಷದ ಗೃಹಿಣಿಯೊಬ್ಬರ ಮಾಸಿಕ ಕಾಲ್ಪನಿಕ ಆದಾಯವನ್ನು ಬರೋಬ್ಬರಿ ₹30,000 ಎಂದು ಪರಿಗಣಿಸಿರುವ ನ್ಯಾಯಾಲಯ, ಮೃತರ ಕುಟುಂಬಕ್ಕೆ ₹59.69 ಲಕ್ಷ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.&lt;/p&gt;&lt;p&gt;ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ (MACT) ನೀಡಿದ್ದ ₹11.18 ಲಕ್ಷ ಪರಿಹಾರ ಆದೇಶವನ್ನು ರದ್ದುಪಡಿಸುವಂತೆ ಕೋರಿ ವಿಮಾ ಕಂಪನಿ ಮತ್ತು ಪರಿಹಾರದ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.&lt;/p&gt;&lt;h2&gt;&lt;strong&gt;ಪರಿಹಾರ ಮೊತ್ತ ₹11.18 ಲಕ್ಷದಿಂದ ₹59.69 ಲಕ್ಷಕ್ಕೆ ಏರಿಕೆ:&lt;/strong&gt;&lt;/h2&gt;&lt;p&gt;ನ್ಯಾಯಾಧಿಕರಣ ಈ ಹಿಂದೆ ನಿಗದಿಪಡಿಸಿದ್ದ ₹11.18 ಲಕ್ಷ ಪರಿಹಾರವನ್ನು ರದ್ದುಗೊಳಿಸಿದ ಹೈಕೋರ್ಟ್, ಮೃತರ ಮಗನಿಗೆ ಪರಿಷ್ಕೃತ ಮೊತ್ತವಾದ ಒಟ್ಟು ₹59,69,000 (ಶೇ.9ರಷ್ಟು ವಾರ್ಷಿಕ ಬಡ್ಡಿ ಸಹಿತ) ಪಾವತಿಸಲು ನ್ಯಾಷನಲ್ ಇನ್ಶೂರೆನ್ಸ್ ಕಂಪನಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗೃಹಿಣಿಯರ ಶ್ರಮವನ್ನು ಗುರುತಿಸುವ ವೇಳೆ ಸುಪ್ರೀಂ ಕೋರ್ಟ್&zwnj;ನ &lsquo;ಶಿಶು ಪಾಲ್ ವಿರುದ್ಧ ಸುರ್ಜೀತ್&rsquo; ಪ್ರಕರಣದ ಐತಿಹಾಸಿಕ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಗೃಹಿಣಿಯೊಬ್ಬರು ಕುಟುಂಬಕ್ಕೆ ನೀಡುವ ಸೇವೆ ಅಮೂಲ್ಯವಾದುದು. ಹೀಗಾಗಿ ಅವರ ಮಾಸಿಕ ಕಾಲ್ಪನಿಕ ಆದಾಯವನ್ನು ₹30 ಸಾವಿರ ಎಂದು ನಿಗದಿಪಡಿಸಿ, ಅದಕ್ಕೆ ಭವಿಷ್ಯದ ಗಳಿಕೆಯ ಶೇ.40 ಭಾಗವನ್ನು ಸೇರಿಸಿ ನ್ಯಾಯಾಲಯ ಈ ಬೃಹತ್ ಪರಿಹಾರ ಮೊತ್ತವನ್ನು ಅಂತಿಮಗೊಳಿಸಿದೆ.&lt;/p&gt;&lt;h2&gt;&lt;strong&gt;ವಿಮಾ ಕಂಪನಿಯ ವಾದ ತಳ್ಳಿಹಾಕಿದ ಪೀಠ:&lt;/strong&gt;&lt;/h2&gt;&lt;p&gt;'ದ್ವಿಚಕ್ರ ವಾಹನಕ್ಕೆ ಹಸು ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿದೆ. ಕ್ರಿಮಿನಲ್ ನ್ಯಾಯಾಲಯದಲ್ಲಿ ಬೈಕ್ ಸವಾರ ಖುಲಾಸೆಗೊಂಡಿರುವುದರಿಂದ ಈ ಅಪಘಾತಕ್ಕೆ ವಿಮಾ ಕಂಪನಿ ಹೊಣೆಯಾಗುವುದಿಲ್ಲ' ಎಂದು ವಿಮಾ ಸಂಸ್ಥೆಯ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ಹೈಕೋರ್ಟ್, ವಿಮಾ ಕಂಪನಿಯು ಪರಿಹಾರ ಪಾವತಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.&lt;/p&gt;&lt;p&gt;ಪ್ರಕರಣದ ಹಿನ್ನೆಲೆ:&lt;/p&gt;&lt;p&gt;2011ರ ಅಕ್ಟೋಬರ್&zwnj;ನಲ್ಲಿ ಪುಟ್ಟತಾಯಮ್ಮ (37) ಅವರು ತಮ್ಮ ಪತಿ ಮಾಯಣ್ಣ ಗೌಡ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಾಮನಗರ ಜಿಲ್ಲೆಯ ಬಿಡದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ 45 ದಿನಗಳ ಕಾಲ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.&lt;/p&gt;&lt;p&gt;ಇದರ ವಿರುದ್ಧ ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ಕೋರಿ ಮೃತರ ಸಂಬಂಧಿಕರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣದ ಮೆಟ್ಟಿಲೇರಿದ್ದರು. ನ್ಯಾಯಾಧಿಕರಣವು ₹11.18 ಲಕ್ಷ ಪರಿಹಾರ ನೀಡಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ವಿಮಾ ಕಂಪನಿ ಹಾಗೂ ಮೃತರ ಕುಟುಂಬಸ್ಥರು ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಗೃಹಿಣಿಯ ಗೌರವ ಮತ್ತು ಸ್ಥಾನಮಾನವನ್ನು ಎತ್ತಿಹಿಡಿದು ಪರಿಹಾರವನ್ನು ಬರೋಬ್ಬರಿ ₹59.69 ಲಕ್ಷಕ್ಕೆ ಹೆಚ್ಚಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk"/>
        </item>
        <item>
            <title><![CDATA[₹1 ಕೋಟಿ ಲಾಭ ಗಳಿಸಿದ ಸುಬ್ರಮಣ್ಯೇಶ್ವರ ಸಹಕಾರ ಬ್ಯಾಂಕ್‌: ಲಾಭದ ಹಿಂದಿನ ರಹಸ್ಯ ಸಭೆಯಲ್ಲೇ ರಿವೀಲ್!]]></title>
            <link>https://kannada.asianetnews.com/bengaluru-urban/subrahmanyeshwara-cooperative-bank-subco-profit-women-loan-discount-dividend-sat/articleshow-pvdn1sx</link>
            <guid isPermaLink="true">https://kannada.asianetnews.com/bengaluru-urban/subrahmanyeshwara-cooperative-bank-subco-profit-women-loan-discount-dividend-sat/articleshow-pvdn1sx</guid>
            <pubDate>Sun, 13 Sep 2026 07:02:27 +0530</pubDate>
            <description><![CDATA[&lt;p&gt;ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.10 ಕೋಟಿ ನಿವ್ವಳ ಲಾಭ ಗಳಿಸಿದ್ದು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಘೋಷಿಸಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು 'ಎಸ್.ಎಸ್.ಸಿ.ಬಿ.ಎಲ್- ಎಂ-ಪಾಸ್&zwnj;ಬುಕ್ ಆ್ಯಪ್' ಅನ್ನು ಸಹ ಪರಿಚಯಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2c60q8z9wbkx6swc7g8kwvk,imgname-subco-bank-1789262847263.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): ಸು&lt;/strong&gt;ಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಪ್ರಸಕ್ತ ಸಾಲಿನಲ್ಲಿ 1.10 ಕೋಟಿ ರು.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರಿ ರತ್ನ ಡಿ.ಆರ್.ವಿಜಯ ಸಾರಥಿ ಘೋಷಿಸಿದರು.&lt;/p&gt;&lt;p&gt;ಸೌತ್ ಎಂಡ್ ಸರ್ಕಲ್&zwnj;ನ ಚಾಮರಾಜ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕ್&zwnj;ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಬ್ಯಾಂಕ್&zwnj;ನ ಮಹಿಳಾ ಖಾತೆದಾರರು ಸಾಲ ಪಡೆದಾಗ ಸಾಮಾನ್ಯ ಬಡ್ಡಿದರಕ್ಕಿಂತ ಶೇ.1ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಮಹಿಳೆಯರಿಗೆ ವಿಶೇಷ ಬಡ್ಡಿದರ ರಿಯಾಯಿತಿ ನೀಡುವ ಮೂಲಕ ಅವರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಉದ್ದೇಶ ಎಂದು ತಿಳಿಸಿದರು.&lt;/p&gt;&lt;p&gt;ಬ್ಯಾಂಕ್ ಪ್ರಸ್ತುತ 33,755 ಸದಸ್ಯರನ್ನು ಹೊಂದಿದ್ದು, ಕಳೆದ 7 ವರ್ಷಗಳಿಂದ ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ಘೋಷಿಸಲಾಗುತ್ತಿದೆ. ಆರ್&zwnj;ಬಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿ ಮುನ್ನಡೆಯುತ್ತಿದೆ. ಪ್ರಸಕ್ತ ಸಾಲಿನ ಅಂತ್ಯಕ್ಕೆ ಒಟ್ಟು ಎನ್&zwnj;ಪಿಎ ಶೇ10.22, ನಿವ್ವಳ ಎನ್&zwnj;ಪಿಎ ಶೇ2.03 ಹಾಗೂ ಸಿಆರ್&zwnj;ಎಆರ್ ಶೇ.17.90ರಷ್ಟಿದೆ ಎಂದು ವಿಜಯ ಸಾರಥಿ ವಿವರಿಸಿದರು.&lt;/p&gt;&lt;h2&gt;&lt;strong&gt;ಡಿಜಿಟಲ್ ಪಾವತಿಗೆ ಹೆಚ್ಚಿನ ಸೌಲಭ್ಯ:&amp;nbsp;&lt;/strong&gt;&lt;/h2&gt;&lt;p&gt;ಸದಸ್ಯರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಒದಗಿಸಲು ಬ್ಯಾಂಕ್ ಫೋನ್&zwnj;ಪೇ, ಗೂಗಲ್&zwnj;ಪೇ ಹಾಗೂ ಮರ್ಚೆಂಟ್ ಪೇಮೆಂಟ್ ಸ್ಕ್ಯಾನರ್ ಸೌಲಭ್ಯ ಕಲ್ಪಿಸುತ್ತಿದೆ. ಈ ಮೂಲಕ ಗ್ರಾಹಕರು ಹಣ ವರ್ಗಾವಣೆ ಹಾಗೂ ವಿವಿಧ ಪಾವತಿಗಳನ್ನು ಸುಲಭವಾಗಿ ಡಿಜಿಟಲ್ ಮಾಧ್ಯಮದ ಮೂಲಕ ಪಾವತಿಸಬಹುದು. ಜೊತೆಗೆ ಖಾತೆ ವ್ಯವಹಾರಗಳ ಮಾಹಿತಿಯನ್ನು ಸುಲಭವಾಗಿ ಪಡೆಯಲು &lsquo;ಎಸ್.ಎಸ್.ಸಿ.ಬಿ.ಎಲ್- ಎಂ-ಪಾಸ್&zwnj;ಬುಕ್ ಆ್ಯಪ್&rsquo; ಪರಿಚಯಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕರು ಹಾಗೂ ಉಪಾಧ್ಯಕ್ಷ ಡಾ. ಕೆ.ಎಂ. ರಂಗಧಾಮಶೆಟ್ಟಿ, ಪ್ರಭಾರ ಪ್ರಧಾನ ವ್ಯವಸ್ಥಾಪಕ ಹರೀಶ್ ಬಿ.ಜೆ., ಪೂರ್ಣಾವಧಿ ಸಲಹೆಗಾರ ಬಿ.ಆರ್. ನಾಗರಾಜ್, ಬ್ಯಾಂಕಿನ ಪದಾಧಿಕಾರಿಗಳು ಇದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/subrahmanyeshwara-cooperative-bank-subco-profit-women-loan-discount-dividend-sat/articleshow-pvdn1sx"/>
        </item>
        <item>
            <title><![CDATA[ಗಣಪತಿ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆ ದಾಖಲು]]></title>
            <link>https://kannada.asianetnews.com/karnataka-districts/mandya-congress-mla-ganiga-ravikumar-injured-at-ganapati-event-hospitalised/articleshow-6dzpcz3</link>
            <guid isPermaLink="true">https://kannada.asianetnews.com/karnataka-districts/mandya-congress-mla-ganiga-ravikumar-injured-at-ganapati-event-hospitalised/articleshow-6dzpcz3</guid>
            <pubDate>Sat, 12 Sep 2026 22:55:32 +0530</pubDate>
            <description><![CDATA[&lt;p&gt;ಗಣಪತಿ ಮೂರ್ತಿ ರಿವೀಲ್ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯವಾಗಿದೆ. ತಕ್ಷಣವೇ ಶಾಸಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕರು ಗಾಯಗೊಂಡಿದ್ದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2badzrxeb55jj7qhv06814a,imgname-mandya-mla-ganiga-ravikumar-suffers-injury-1789233921821.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಸೆ.12) &lt;/strong&gt;ರಾಜ್ಯದಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಡ್ಯದಲ್ಲಿ ಗಣಪತಿ ಹಬ್ಬ ಆಚರಣೆ ಜೋರಾಗಿದೆ. ಬೃಹತ್ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಮೂರ್ತಿಯನ್ನು ಅನಾವರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ರವಿಕುಮಾರ್ ತಲೆಗೆ ಗಾಯವಾಗಿದೆ. ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಸ್ಕ್ರೀನ್&zwnj;ನ ಕೊಂಡಿ ಬಿದ್ದು ರವಿಕುಮಾರ್ ಗಾಯಗೊಂಡಿದ್ದಾರೆ. ತಕ್ಷಣ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ತಲೆಗೆ ಬಿದ್ದ ಸ್ಕ್ರೀನ್ ಕೊಂಡಿ&lt;/h2&gt;&lt;p&gt;ಮಂಡ್ಯದ ಮರಿಗೌಡ ಬಡಾವಣೆಯಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ. ಈ ಬಾರಿಯೂ ಬೃಹತ್ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಣೇಶನ ಪ್ರತಿಷ್ಠಾಪನೆಗೂ ಮೊದಲು ಮೂರ್ತಿಯನ್ನು ಅನಾವರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರು ಗಾಯಗೊಂಡಿದ್ದಾರೆ. ಸ್ಕ್ರೀನ್&zwnj;ನ ಕೊಂಡಿ ಶಾಸಕರ ತಲೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ.ಅದ್ಧೂರಿ ಕಾರ್ಯಕ್ರಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;p&gt;ಗಾಯಗೊಂಡ ಶಾಸಕ ಗಣಿಗ ರವಿಕುಮಾರ್ ಅವರನ್ನು ತಕ್ಷಣವೇ ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಾಸಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪಂದನ ಆಸ್ಪತ್ರೆಯತ್ತ ಶಾಸಕ ಗಣಿಗ ರವಿಕುಮಾರ್ ಬೆಂಬಲಿಗರು ದೌಡಾಯಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/mandya-congress-mla-ganiga-ravikumar-injured-at-ganapati-event-hospitalised/articleshow-6dzpcz3"/>
        </item>
        <item>
            <title><![CDATA[ಮಡಿಯಾಲದಲ್ಲಿ ಶೀಘ್ರದಲ್ಲೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉನ್ನತ ಶಿಕ್ಷಣ ಕೇಂದ್ರ ಕಾರ್ಯಾರಂಭ]]></title>
            <link>https://kannada.asianetnews.com/karnataka-districts/artificial-intelligence-higher-education-centre-to-begin-operations-soon-in-madiyala/articleshow-3nw4hf0</link>
            <guid isPermaLink="true">https://kannada.asianetnews.com/karnataka-districts/artificial-intelligence-higher-education-centre-to-begin-operations-soon-in-madiyala/articleshow-3nw4hf0</guid>
            <pubDate>Sat, 12 Sep 2026 21:45:13 +0530</pubDate>
            <description><![CDATA[&lt;p&gt;ಕೃತಕ ಬುದ್ಧಿಮತ್ತೆ ಉನ್ನತ ಶಿಕ್ಷಣ ಕೇಂದ್ರ ಶೀಘ್ರದಲ್ಲೇ ಮಡಿಯಾಲದಲ್ಲಿ ಕಾರ್ಯಾರಂಭಗೊಳ್ಳಲಿದೆ. ಜೂನ್ 2027ರಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ನಡೆಯಲಿದೆ. ಈ ಕುರಿತು ಸದ್ಗುರು ಮಧುಸೂದನ ಸಾಯಿ ಮಹತ್ವದ ಘೋಷಣೆ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2b6da3e0hpxw8vrtye305td,imgname-madiayala-ai-higher-education-centre-1789229705325.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಸೆ.12&lt;/strong&gt;) ಲೋಕಸೇವಾ ವೃಂದದ ಸಂಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ಟರ ಹುಟ್ಟೂರಾದ ಮಡಿಯಾಲ ಗ್ರಾಮದಲ್ಲಿ ಇದೇ ನವೆಂಬರ್&zwnj;ನಲ್ಲಿ ಕೃತಕ ಬುದ್ಧಿಮತ್ತೆ ಉನ್ನತ ಶಿಕ್ಷಣ ಕೇಂದ್ರ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್&zwnj; - ಎಐ) ಕಾರ್ಯಾರಂಭ ಮಾಡಲಿದೆ. ಜೂನ್ 2027 ರಿಂದ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇರಲಿದೆ ಎಂದು &quot;ಒನ್&zwnj; ವರ್ಲ್ಡ್&zwnj; ಒನ್ ಫ್ಯಾಮಿಲಿ ಮಿಷನ್&quot; ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಘೋಷಿಸಿದರು.&lt;/p&gt;&lt;h2&gt;ಮಶಿನ್ ಲರ್ನಿಂಗ್, ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು&lt;/h2&gt;&lt;p&gt;ನಗರದಲ್ಲಿ ಶನಿವಾರ (ಸೆ 12) ನಡೆದ &quot;ದಿವ್ಯ ಸಂಜೆ&quot; ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಉಲ್ಲಾಸ್ ಕಾಮತ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಲೋಕಸೇವಾ ವೃಂದದ ಮೂಲಕ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ಕೊಡಲು ಪ್ರಯತ್ನಿಸಿದ ಮಡಿಯಾಲ ನಾರಾಯಣ ಭಟ್ಟರ ಜನ್ಮಶತಮಾನೋತ್ಸವ ವರ್ಷದಲ್ಲಿ ಅವರ ಸ್ಮರಣಾರ್ಥ ಬಂಟ್ವಾಳ ತಾಲೂಕಿನ ಅವರ ಹುಟ್ಟೂರಿನಲ್ಲಿ ಈ ಮಹತ್ವದ ಉಪಕ್ರಮ ಆರಂಭಿಸಲಾಗಿದೆ ಎಂದು ವಿವರಿಸಿದರು. ಮಂಗಳೂರು ನಗರದಲ್ಲಿ ಎಲ್ಲ ಬಗೆಯ ಶಿಕ್ಷಣ ಕೋರ್ಸ್&zwnj;ಗಳೂ ಲಭ್ಯವಿವೆ. ಇದಕ್ಕೆ ಮತ್ತಷ್ಟು ಮೆರಗು ನೀಡಬೇಕು ಎಂದು ಯೋಚಿಸಿ ಇಲ್ಲಿ ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ಕೊಡುವ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಕೇಂದ್ರ ಆರಂಭಿಸುತ್ತಿದ್ದೇವೆ ಎಂದರು&lt;/p&gt;&lt;p&gt;ಮಡಿಯಾಲ ಗ್ರಾಮದಲ್ಲಿ ನಾವು ಸ್ಥಾಪಿಸುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಕಂಟ್ಯೂಟರ್ ಸೈನ್ಸ್&zwnj; ಅಧ್ಯಯನ ಕೇಂದ್ರಗಳು ಸಹ ಭಾರತದ ಸನಾತನ ಜ್ಞಾನ ಪರಂಪರೆಯ ಭಾಗವೇ ಆಗುತ್ತವೆ. ಅಧ್ಯಾತ್ಮವನ್ನು ತನ್ನ ಕಾರ್ಯಚಟುವಟಿಕೆಗಳ ತಳಹದಿಯಾಗಿ ಹೊಂದಿರುವ ಸಂಸ್ಥೆಯೊಂದು ಇಂಥ ಕೇಂದ್ರಗಳನ್ನು ಆರಂಭಿಸುತ್ತಿರುವುದು ಹಲವು ದೃಷ್ಟಿಗಳಿಂದ ಮಹತ್ವದ ವಿಚಾರ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.&lt;/p&gt;&lt;h2&gt;ತಾಯಿ ಸರಸ್ವತಿ ಜ್ಞಾನದಲ್ಲಿ ಭೇದ ಮಾಡುವುದಿಲ್ಲ&lt;/h2&gt;&lt;p&gt;ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎಐ) ಅಥವಾ ಯಾವುದೇ ಅತ್ಯಾಧುನಿಕ ತಂತ್ರಜ್ಞಾನವು ಸನಾತನ ಧರ್ಮಕ್ಕೆ ಹೊರತಾದುದು ಅಲ್ಲ. ಅಧ್ಯಾತ್ಮದಲ್ಲಿ ಮಹತ್ವದ ಸಾಧನೆ ಮಾಡಿ ಎತ್ತರಕ್ಕೆ ಏರಿದ್ದ ನಮ್ಮ ಋಷಿಗಳು ಏಕಕಾಲಕ್ಕೆ ವಿಜ್ಞಾನಿಗಳೂ ಆಗಿದ್ದರು. ತಾಯಿ ಸರಸ್ವತಿ ಜ್ಞಾನದಲ್ಲಿ ಭೇದ ಮಾಡುವುದಿಲ್ಲ ಎಂದು ವಿವರಿಸಿದರು.&lt;/p&gt;&lt;p&gt;ಸನಾತನ ಧರ್ಮವು ಪುರಾತನ ಮೌಲ್ಯವಷ್ಟೇ ಅಲ್ಲ; ನಿತ್ಯ ನೂತನವೂ ಆಗಿದೆ. ಸನಾತನ ಧರ್ಮವು ಎಲ್ಲವನ್ನೂ ಒಪ್ಪಿಕೊಳ್ಳುತ್ತದೆ. ನಾನೂ ಸಹ ವಿಶ್ವದಾದ್ಯಂತ ಏನಾಗುತ್ತಿದೆ ಅಂತ ತಿಳಿದುಕೊಳ್ಳುತ್ತೇನೆ. ಮುಂದೇನು ಬರಬಹುದು? ನಾನು ಹೇಗೆ ಸ್ಪಂದಿಸಬಹುದು ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಅತ್ಯಾಧುನಿಕ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗಬಾರದು ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ಮಂಗಳೂರಿಗೆ ಬರಲು ಏಕಿಷ್ಟು ತಡವಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನವರಿಗೆ ಕೊಡಲು ನನ್ನ ಬಳಿ ಏನಿದೆ ಎಂದು ಕೇಳಿಕೊಳ್ಳುತ್ತಿದ್ದೆ. ಈಗ ಮಡಿಯಾಲದಲ್ಲಿ ಪೂಜ್ಯ ಮಡಿಯಾಲ ನಾರಾಯಣ ಭಟ್ಟರ ಸ್ಮರಣಾರ್ಥ ಉನ್ನತ ಶಿಕ್ಷಣ ಆರಂಭವಾಗುತ್ತಿದೆ. ಈ ಕೊಡುಗೆ ಕೊಡುವ ಅವಕಾಶದೊಂದಿಗೆ ಮಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದರು. ಸಿಎಸ್&zwnj;ಆರ್&zwnj; ಫಂಡ್&zwnj;ಗಳ ಸಮರ್ಪಕ ಬಳಕೆ ಆಗಬೇಕು ಎಂದು ಅಭಿಪ್ರಾಯಪಟ್ಟ ಅವರು, ಸರ್ಕಾರಕ್ಕೆ ತೆರಿಗೆಯ ಮೇಲೆ, ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭದ ಮೇಲೆ ಹಕ್ಕು ಇರುವಂತೆ ಸೇವಾ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳಿಗೆ ಸಿಎಸ್&zwnj;ಆರ್&zwnj; ನಿಧಿಯ ಮೇಲೆ ಹಕ್ಕು ಇರಬೇಕು. ಈ ಹಕ್ಕನ್ನು ಯಾರೂ ನಿರಾಕರಿಸಬಾರದು ಎಂದು ಕಿವಿಮಾತು ಹೇಳಿದರು.&lt;/p&gt;&lt;h2&gt;ಮಂಗಳೂರಿನಲ್ಲಿ ಶೀಘ್ರ ಉಚಿತ ಆಸ್ಪತ್ರೆ ಆರಂಭ&lt;/h2&gt;&lt;p&gt;ಮಂಗಳೂರು ನಗರದಲ್ಲಿ ಶೀಘ್ರ 50 ಹಾಸಿಗೆ ಸಾಮರ್ಥ್ಯದ ಉಚಿತ ಆಸ್ಪತ್ರೆಯನ್ನು ಆರಂಭಿಸಲಾಗುವುದು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಇಂಥ ಆಸ್ಪತ್ರೆಗಳನ್ನು ಆರಂಭಿಸಲಾಗುವುದು. ಆಸ್ಪತ್ರೆಯ ರೂಪುರೇಷೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ವಿವರ ನೀಡಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು. ಪ್ರಸ್ತುತ ಕರ್ನಾಟಕದಲ್ಲಿ 15 ಜಿಲ್ಲೆಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಿವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗುವುದು. ಸಾಯಿಶ್ಯೂರ್&zwnj; ಮೂಲಕ ಪ್ರಸ್ತುತ ಒಂದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳ ಐದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.&lt;/p&gt;&lt;h2&gt;ಮೋಹನ್ ಆಳ್ವಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ&lt;/h2&gt;&lt;p&gt;ಮೂಡುಬಿದರೆಯ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ ಎಂ.ಮೋಹನ್ ಆಳ್ವ ಅವರಿಗೆ &quot;ಒನ್&zwnj; ವರ್ಲ್ಡ್&zwnj; ಒನ್ ಫ್ಯಾಮಿಲಿ ಮಿಷನ್&quot; ವತಿಯಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕರ್ನಾಟಕ ಪರಿವರ್ತಕ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಡಾ ಎಂ.ಮೋಹನ್ ಆಳ್ವ, ಮುಂದಿನ ಆಳ್ವಾಸ್&zwnj; ವಿರಾಸತ್ ಜನವರಿ 7 ರಿಂದ 10 ರವರೆಗೆ ನಡೆಯಲಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರನ್ನು ಮುಂದಿನ ವಿರಾಸತ್ ಉದ್ಘಾಟನೆಗೆ ಆಹ್ವಾನಿಸುತ್ತಿದ್ದೇನೆ ಎಂದು ಆಮಂತ್ರಿಸಿದರು.&lt;/p&gt;&lt;p&gt;ಮುದ್ದೇನಹಳ್ಳಿಗೆ ನಾನು ಸ್ವತಃ ಭೇಟಿ ನೀಡಿ ಅಲ್ಲಿ ನಡೆದಿರುವ ಕೆಲಸಗಳನ್ನು ಗಮನಿಸಿದ್ದೇನೆ. ಅದೊಂದು ಪವಾಡದಂತೆ ಭಾಸವಾಗುತ್ತದೆ. ಅಲ್ಲಿರುವಂಥ ಗೋಶಾಲೆ ಬೇರೆಲ್ಲಿಯೂ ಇಲ್ಲ. ಅಲ್ಲಿನ ಸಾಯಿಶ್ಯೂರ್ ಕಾರ್ಖಾನೆ ಕೋಟ್ಯಂತರ ಮಕ್ಕಳಿಗೆ ಮುಂಜಾನೆ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಅಲ್ಲಿನ ಆಸ್ಪತ್ರೆಯ ಸಿಬ್ಬಂದಿ ಪ್ರೇಮಪೂರ್ವಕ ಕಾಳಜಿಯ ವೈಖರಿ ಎಲ್ಲದಕ್ಕೂ ನಾನು ಸಾಕ್ಷಿಯಾಗಿದ್ದೇನೆ ಎಂದು ಭಾವುಕರಾಗಿ ವಿವರಿಸಿದರು.&lt;/p&gt;&lt;p&gt;ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಮೋಹನ್ ಆಳ್ವ, ಆರ್&zwnj;ಎಸ್&zwnj;ಎಸ್&zwnj; ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಭಟ್, ಕ್ಯಾಂಪ್ಕೋ ಅಧ್ಯಕ್ಷ ಸತೀಶ್&zwnj; ಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.&lt;/p&gt;&lt;p&gt;ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವೈದಿಕ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಿಂದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಎಂಬಿಬಿಎಸ್ ವಿದ್ಯಾರ್ಥಿನಿ ಗೌತಮಿ ಪೈ ತಮ್ಮ ಅನುಭವ ಹಂಚಿಕೊಂಡರು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷರಾದ ಡಾ ಬಿ.ಎನ್.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಗೌಡ ಬಿರಾದಾರ್ ನಿರೂಪಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/artificial-intelligence-higher-education-centre-to-begin-operations-soon-in-madiyala/articleshow-3nw4hf0"/>
        </item>
        <item>
            <title><![CDATA[Belagavi: ಕಾರ್ ಓಡಿಸಿದ ವ್ಯಕ್ತಿಗೆ ಹೆಲ್ಮೆಟ್ ಫೈನ್! ಪೊಲೀಸರ ಯಡವಟ್ಟಿಗೆ ಹೆಲ್ಮೆಟ್ ಧರಿಸಿ ಪ್ರತಿಭಟಿಸಿದ ಮಾಲೀಕ!]]></title>
            <link>https://kannada.asianetnews.com/karnataka-districts/athani-ai-camera-blunder-car-owner-gets-helmet-fine-rs-500-belagavi-traffic-police-viral-video-bmk/articleshow-ll3b041</link>
            <guid isPermaLink="true">https://kannada.asianetnews.com/karnataka-districts/athani-ai-camera-blunder-car-owner-gets-helmet-fine-rs-500-belagavi-traffic-police-viral-video-bmk/articleshow-ll3b041</guid>
            <pubDate>Sat, 12 Sep 2026 20:37:41 +0530</pubDate>
            <description><![CDATA[ಬೆಳಗಾವಿಯ ಅಥಣಿಯಲ್ಲಿ, ಎಐ ಕ್ಯಾಮೆರಾದ ತಾಂತ್ರಿಕ ದೋಷದಿಂದಾಗಿ ಕಾರು ಚಾಲಕನಿಗೆ 'ಹೆಲ್ಮೆಟ್ ಇಲ್ಲ' ಎಂದು ದಂಡ ವಿಧಿಸಲಾಗಿದೆ. ಈ ವಿಚಿತ್ರ ದಂಡವನ್ನು ವಿರೋಧಿಸಿ, ಮಾಲೀಕರು ಕಾರಿನೊಳಗೆ ಹೆಲ್ಮೆಟ್ ಧರಿಸಿ ಚಾಲನೆ ಮಾಡಿ ಪ್ರತಿಭಟಿಸಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b2fgtjft4x5ff76fp98nqv,imgname-belagavi-ai-camara-1789225583442.jpg" type="image/jpeg" height="390" width="690"/>
            <content:encoded><![CDATA[&lt;p&gt;ತಂತ್ರಜ್ಞಾನ ಬೆಳೆದಂತೆ ಕೆಲಸಗಳು ಸುಲಭವಾಗುತ್ತವೆ ಎಂಬ ನಂಬಿಕೆಯಿದೆ. ಆದರೆ ಅದೇ ತಂತ್ರಜ್ಞಾನ ಸರಿಯಾಗಿ ಕೆಲಸ ಮಾಡದಿದ್ದರೆ ಎಂಥಾ ಅವಾಂತರ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಟ್ರಾಫಿಕ್ ನಿಯಮ ಉಲ್ಲಂಘಿಸುವವರನ್ನು ಹಿಡಿಯಲು ಪೊಲೀಸರು ಅಳವಡಿಸಿರುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಕ್ಯಾಮೆರಾವೊಂದು ಭಾರಿ ಎಡವಟ್ಟು ಮಾಡಿದ್ದು, ಕಾರ್ ಮಾಲೀಕನಿಗೆ &quot;ನೋ ಹೆಲ್ಮೆಟ್&quot; ದಂಡ ವಿಧಿಸಿ ಶಾಕ್ ನೀಡಿದೆ!&lt;/p&gt;&lt;h2&gt;&lt;strong&gt;ಅಷ್ಟಕ್ಕೂ ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿಯಾದ ಸುಭಾಷ್ ಬೋಜನೆ ಎಂಬುವವರು ತಮ್ಮ ಕಾರಿನಲ್ಲಿ ಪಟ್ಟಣದ ಪ್ರಮುಖ ವೃತ್ತವಾದ ಅಂಬೇಡ್ಕರ್ ಸರ್ಕಲ್ ಮೂಲಕ ಪ್ರಯಾಣಿಸುತ್ತಿದ್ದರು. ಕಾರು ಚಾಲನೆ ಮಾಡುವಾಗ ಅವರು ಸೀಟ್ ಬೆಲ್ಟ್ ಸೇರಿದಂತೆ ಅಗತ್ಯ ನಿಯಮಗಳನ್ನು ಪಾಲಿಸುತ್ತಿದ್ದರೂ, ಅಲ್ಲಿ ಅಳವಡಿಸಲಾಗಿದ್ದ ಎಐ ಸಂಚಾರ ಕ್ಯಾಮೆರಾ ಕಾರನ್ನು ಗುರುತಿಸಿ ನಿಯಮ ಉಲ್ಲಂಘನೆಯಾಗಿದೆ ಎಂದು ದಾಖಲಿಸಿಕೊಂಡಿದೆ.&lt;/p&gt;&lt;h3&gt;&lt;strong&gt;ಬಂತು 500 ರೂ., ದಂಡ!&lt;/strong&gt;&lt;/h3&gt;&lt;p&gt;ಸ್ವಲ್ಪ ಸಮಯದ ನಂತರ ಸುಭಾಷ್ ಅವರ ವಾಟ್ಸಾಪ್&zwnj;ಗೆ ಬೆಳಗಾವಿ ಜಿಲ್ಲಾ ಸಂಚಾರ ಪೊಲೀಸರಿಂದ ಸಂದೇಶವೊಂದು ಬಂದಿದೆ. ಅದನ್ನು ತೆರೆದು ನೋಡಿದಾಗ ಸುಭಾಷ್ ಸಂಪೂರ್ಣವಾಗಿ ತಬ್ಬಿಬ್ಬಾಗಿದ್ದಾರೆ. ಏಕೆಂದರೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರಿಗೆ &quot;ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕಾಗಿ&quot; 500 ರೂಪಾಯಿ ದಂಡ ವಿಧಿಸಲಾಗಿತ್ತು!&lt;/p&gt;&lt;h3&gt;&lt;strong&gt;ಕಾರ್ ಮಾಲೀಕನ ವಿಭಿನ್ನ ಪ್ರತಿಭಟನೆ!&lt;/strong&gt;&lt;/h3&gt;&lt;p&gt;ಕಾರಿಗೆ ಹೆಲ್ಮೆಟ್ ದಂಡ ಬಿದ್ದಿದ್ದನ್ನು ನೋಡಿ ಮೊದಲಿಗೆ ದಿಗ್ಭ್ರಮೆಗೊಂಡ ಸುಭಾಷ್, ನಂತರ ಈ ಎಐ ತಂತ್ರಜ್ಞಾನದ ಅವಾಂತರವನ್ನು ಸಾರ್ವಜನಿಕರಿಗೆ ತೋರಿಸಲು ವಿಭಿನ್ನ ಹಾದಿ ತುಳಿದರು. ಸ್ವತಃ ತಾವೇ ತಲೆಗೆ ಹೆಲ್ಮೆಟ್ ಧರಿಸಿಕೊಂಡು, ಕಾರಿನಲ್ಲಿ ಕುಳಿತು ಚಾಲನೆ ಮಾಡುತ್ತಾ ವಿಡಿಯೋ ಒಂದನ್ನು ಚಿತ್ರೀಕರಿಸಿದ್ದಾರೆ. ಟ್ರಾಫಿಕ್ ಪೊಲೀಸರ ಎಐ ಕ್ಯಾಮೆರಾ ಪ್ರಕಾರ ನಾವು ಕಾರು ಓಡಿಸಬೇಕಾದರೂ ಹೆಲ್ಮೆಟ್ ಧರಿಸಬೇಕು ಅನಿಸುತ್ತೆ! ಹೀಗಾಗಿ ಫೈನ್&zwnj;ನಿಂದ ತಪ್ಪಿಸಿಕೊಳ್ಳಲು ನಾನು ಕಾರಿನಲ್ಲೇ ಹೆಲ್ಮೆಟ್ ಹಾಕಿಕೊಂಡು ಓಡಾಡುತ್ತಿದ್ದೇನೆ&quot; ಎಂದು ಅವರು ವಿಡಿಯೋದಲ್ಲಿ ಹಾಸ್ಯಸ್ಪಂದನವಾಗಿ ಪೊಲೀಸರ ಎಡವಟ್ಟನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!&lt;/strong&gt;&lt;/h3&gt;&lt;p&gt;ಸುಭಾಷ್ ಬೋಜನೆ ಅವರು ಕಾರಿನೊಳಗೆ ಹೆಲ್ಮೆಟ್ ಧರಿಸಿ ಚಾಲನೆ ಮಾಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಟ್ರಾಫಿಕ್ ಪೊಲೀಸರು ಮತ್ತು ಎಐ ಕ್ಯಾಮೆರಾದ ತಾಂತ್ರಿಕ ಲೋಪದೋಷವನ್ನು ಕಂಡು ತೀವ್ರವಾಗಿ ಕಾಲೆಳೆಯುತ್ತಿದ್ದಾರೆ. &quot;ಮುಂದಿನ ದಿನಗಳಲ್ಲಿ ಸೈಕಲ್&zwnj;ಗೂ ಹೆಲ್ಮೆಟ್ ಫೈನ್ ಹಾಕ್ತಾರೇನೋ!&quot; ಎಂದು ನೆಟ್ಟಿಗರು ತಮಾಷೆಯ ಕಮೆಂಟ್&zwnj;ಗಳನ್ನು ಮಾಡುತ್ತಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯು ಸಂಚಾರ ವಿಭಾಗದ ಎಐ ವ್ಯವಸ್ಥೆಯಲ್ಲಿರುವ ತಾಂತ್ರಿಕ ದೋಷಗಳನ್ನು ಎತ್ತಿ ತೋರಿಸಿದೆ. ತಂತ್ರಜ್ಞಾನದ ಆಧಾರದ ಮೇಲೆ ದಂಡ ವಿಧಿಸುವಾಗ ಪೊಲೀಸರು ಒಮ್ಮೆ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/athani-ai-camera-blunder-car-owner-gets-helmet-fine-rs-500-belagavi-traffic-police-viral-video-bmk/articleshow-ll3b041"/>
        </item>
        <item>
            <title><![CDATA['ಇಡಿ ದಾಳಿ ಸುಮ್ಮನೆ ನಡೆಯಲ್ಲ': ಸತೀಶ್ ಜಾರಕಿಹೊಳಿ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ?]]></title>
            <link>https://kannada.asianetnews.com/karnataka-districts/koppal-gangavathi-mla-janardhana-reddy-reacts-to-ed-raid-on-minister-satish-jarkiholi-gvd/articleshow-y14qyyn</link>
            <guid isPermaLink="true">https://kannada.asianetnews.com/karnataka-districts/koppal-gangavathi-mla-janardhana-reddy-reacts-to-ed-raid-on-minister-satish-jarkiholi-gvd/articleshow-y14qyyn</guid>
            <pubDate>Sat, 12 Sep 2026 18:27:16 +0530</pubDate>
            <description><![CDATA[&lt;p&gt;ಗಂಗಾವತಿಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲಿನ ಇಡಿ ದಾಳಿ ಸಮಂಜಸವಾಗಿದ್ದು, ಅದು ರಾಜಕೀಯ ಪ್ರೇರಿತವಲ್ಲ ಎಂದು ಹೇಳಿದ್ದಾರೆ. ಸೂಕ್ತ ದಾಖಲೆಗಳು ಮತ್ತು ಆಧಾರಗಳಿದ್ದರೆ ಮಾತ್ರ ಇಡಿ ದಾಳಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2atx547qqhtcsv6p8jgt2nc,imgname-bkb-1789217641607.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಸೆ.12): &lt;/strong&gt;ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿ ಸಮಂಜಸವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ನಗರಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಯಾವುದೇ ಕಾರಣವಿಲ್ಲದೆ ದಾಳಿ ನಡೆಸುವುದಿಲ್ಲ. ಸೂಕ್ತ ದಾಖಲೆಗಳು ಹಾಗೂ ಆಧಾರಗಳಿದ್ದರೆ ಮಾತ್ರ ದಾಳಿ ನಡೆಸಲಾಗುತ್ತದೆ.&lt;/p&gt;&lt;p&gt;ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು. ಹೀಗಾಗಿ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಆಧಾರಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟರು.&lt;/p&gt;&lt;p&gt;&lt;strong&gt;&lsquo;ನಮ್ಮ ಮೇಲಿನ ದಾಳಿಯೂ ರಾಜಕೀಯ ಪ್ರೇರಿತ ಎಂದರ್ಥ&rsquo;&lt;/strong&gt;&lt;/p&gt;&lt;p&gt;ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಹೇಳುವುದಾದರೆ, ಈ ಹಿಂದೆ ತಮ್ಮ ಮೇಲಾದ ಇಡಿ ದಾಳಿಯೂ ರಾಜಕೀಯ ಪ್ರೇರಿತ ಎಂದು ಒಪ್ಪಿಕೊಂಡಂತಾಗುತ್ತದೆ ಎಂದು ಜನಾರ್ದನ ರೆಡ್ಡಿ ವ್ಯಂಗ್ಯವಾಡಿದರು.&lt;/p&gt;&lt;p&gt;ಇಡಿ ದಾಳಿ ನಡೆದಿದೆ ಎಂದರೆ ಅಕ್ರಮ ಅಥವಾ ಅವ್ಯವಹಾರದ ಕುರಿತು ತನಿಖೆಯ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ಇನ್ನೂ ನಾಲ್ಕೈದು ಸಚಿವರ ಮೇಲೆ ಇಡಿ ದಾಳಿ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. ಹಾಗಾದರೆ ಆ ಸಚಿವರ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ ಎಂಬುದನ್ನು ಮುಖ್ಯಮಂತ್ರಿಯವರೇ ಒಪ್ಪಿಕೊಂಡಂತಾಗುತ್ತದೆ ಎಂದು ಟೀಕಿಸಿದರು.&lt;/p&gt;&lt;p&gt;&lt;strong&gt;&lsquo;ಒಂದು ಕೋಟಿ ಪಡೆದು ಡಿವೈಎಸ್ಪಿ ಪೋಸ್ಟಿಂಗ್&rsquo; ಆರೋಪ&lt;/strong&gt;&lt;/p&gt;&lt;p&gt;ಪೊಲೀಸ್ ಅಧಿಕಾರಿಗಳ ಪೋಸ್ಟಿಂಗ್&zwnj;ನಲ್ಲಿ ಸಚಿವ ಶಿವರಾಜ ತಂಗಡಗಿ ಅವರು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂಬ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಆರೋಪದ ಬಗ್ಗೆಯೂ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದರು. ತಮ್ಮದೇ ಪಕ್ಷದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಒಂದು ಕೋಟಿ ರೂಪಾಯಿ ಪಡೆದು ಡಿವೈಎಸ್ಪಿ ಹುದ್ದೆಗೆ ಪೋಸ್ಟಿಂಗ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;p&gt;ಇಂತಹ ಆರೋಪವನ್ನು ಲಘುವಾಗಿ ಪರಿಗಣಿಸಬಾರದು ಎಂದು ಅವರು ಹೇಳಿದರು. ಆರೋಪ ಗಂಭೀರವಾಗಿರುವುದರಿಂದ ಸಚಿವ ಶಿವರಾಜ ತಂಗಡಗಿ ಅವರು ಪ್ರಕರಣವನ್ನು ಲೋಕಾಯುಕ್ತ ಅಥವಾ ಸಿಬಿಐ ತನಿಖೆಗೆ ವಹಿಸಬೇಕಿತ್ತು. ಆದರೆ ತನಿಖೆಗೆ ಒಪ್ಪಿಸುವ ಬದಲು &lsquo;ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ&rsquo; ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಜನಾರ್ದನ ರೆಡ್ಡಿ ಟೀಕಿಸಿದರು.&lt;/p&gt;&lt;h2&gt;&lt;strong&gt;&lsquo;ಆರೋಪ ಸತ್ಯವೋ, ಸುಳ್ಳೋ ತನಿಖೆಯಿಂದ ಬಹಿರಂಗವಾಗಲಿ&rsquo;&lt;/strong&gt;&lt;/h2&gt;&lt;p&gt;ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯವೋ ಅಥವಾ ಸುಳ್ಳೋ ಎಂಬುದು ತನಿಖೆಯಿಂದಲೇ ಬಹಿರಂಗವಾಗಬೇಕು ಎಂದು ಜನಾರ್ದನ ರೆಡ್ಡಿ ಹೇಳಿದರು. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ತಾವೇ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಅವರು ತಿಳಿಸಿದರು. ಆರೋಪಗಳಿಗೆ ಸೂಕ್ತ ತನಿಖೆ ನಡೆದರೆ ವಾಸ್ತವಾಂಶ ಏನೆಂಬುದು ಹೊರಬರಲಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-gangavathi-mla-janardhana-reddy-reacts-to-ed-raid-on-minister-satish-jarkiholi-gvd/articleshow-y14qyyn"/>
        </item>
        <item>
            <title><![CDATA[ED Raid: ಪ್ರಧಾನಿ ಮೋದಿ ಹೇಳಿದ್ದನ್ನೇ ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ; ಸಚಿವ ಪ್ರಿಯಾಂಕ್ ಖರ್ಗೆ ಅಚ್ಚರಿ ಹೇಳಿಕೆ!]]></title>
            <link>https://kannada.asianetnews.com/karnataka-districts/satish-jarkiholi-is-doing-exactly-what-pm-modi-said-says-minister-priyank-kharge-sns/articleshow-9pgkdci</link>
            <guid isPermaLink="true">https://kannada.asianetnews.com/karnataka-districts/satish-jarkiholi-is-doing-exactly-what-pm-modi-said-says-minister-priyank-kharge-sns/articleshow-9pgkdci</guid>
            <pubDate>Sat, 12 Sep 2026 17:09:41 +0530</pubDate>
            <description><![CDATA[ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದು, ವಿದೇಶಿ ಹೂಡಿಕೆ ಕಾನೂನುಬಾಹಿರವಲ್ಲ ಎಂದು ಹೇಳಿದ್ದಾರೆ. ಇತ್ತ, ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು 770 ಕೋಟಿ ಹೂಡಿಕೆ ಆರೋಪವನ್ನು ನಿರಾಕರಿಸಿದ್ದು, ವಶಪಡಿಸಿಕೊಂಡ ಹಣಕ್ಕೆ ಲೆಕ್ಕವಿದೆ ಮತ್ತು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw6mf3epsrp7x7r6vrwgfcpr,imgname-priyank-kharge-rss-case-1782634221014.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಜಾರಿ ನಿರ್ದೇಶಾಲಯ (ಇಡಿ) ದಾಳಿಯ ಕುರಿತಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಇಡಿ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ? ಇನ್ನು ಮುಂದಿನ ತನಿಖೆ ನಡೆಯಬೇಕು ಅಂತ ಹೇಳಿದ್ದಾರೆ. ಇದು ಆರೋಪ ಅಂತ ಇದೆ. ಅಲ್ಲಿ ಸಾಕ್ಷಿ ಸಿಕ್ಕಿದೆ ಅಂತಾರೆ, ಏನು ಸಾಕ್ಷಿ ಸಿಕ್ಕಿದೆ ಅಂತ ಹೇಳಿಲ್ಲ. ಪ್ರೆಸ್ ನೋಟ್ ನೂರು ನೋಡಿ ಇದ್ದೀವಿ ಅಲ್ವಾ? ಹೊಸದಾ ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h2&gt;ಇಡಿ 196 ಕಡೆ ದಾಳಿ ಮಾಡಿದರೆ, ಎರಡು ಕೇಸ್&zwnj;ನಲ್ಲಿ ಮಾತ್ರ ಶಿಕ್ಷೆ!&lt;/h2&gt;&lt;p&gt;ಇಡಿ ದಾಳಿಯ ಬಗ್ಗೆ ಮೊನ್ನೆ ನಾನು ಅಂಕಿ ಅಂಶ ಕೊಟ್ಟೆ, ಇಲ್ಲಿವರೆಗೂ 196 ಕಡೆ ದಾಳಿ ಆಗಿದೆ ಎರಡು ಕೇಸ್ ಮಾತ್ರ ಶಿಕ್ಷೆ ಆಗಿದೆ. ಎಲ್ಲಾ 196 ದಾಳಿಗಳಿಗೂ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ. ಶಿಕ್ಷೆ ಪ್ರಮಾಣ ಯಾಕೆ ಇಷ್ಟು ಕಮ್ಮಿ ಇದೆ. ಸತೀಶ್ ಜಾರಕಿಹೊಳಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಎಲ್ಲ ಸಾಬೀತು ಮಾಡಬಹುದು. ನಾವು ಎಲ್ಲಿ ಹೊಡಿಕೆ ಮಾಡಿಲ್ಲ, ಹೊಡಿಕೆ ಮಾಡಬೇಕು ಅಂತ ಇದ್ದೀವಿ ಅಂತ ಹೇಳಿದ್ದಾರೆ. ಅದರಲ್ಲಿ ತಪ್ಪು ಏನಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.&lt;/p&gt;&lt;h2&gt;ಹೂಡಿಕೆ ಮಾಡೋದು ತಪ್ಪಾ!&lt;/h2&gt;&lt;p&gt;ಪ್ರಧಾನಿ ಮೋದಿ ಅವರು ಭಾರತೀಯ ಹೋಗಿ ಹೊರಗಡೆ ಬಂಡವಾಳ ಹಾಕಬೇಕು, ಇಲ್ಲಿ ಹೊಡಿಕೆ ಮಾಡಬೇಕು ಅಂತ ಮೋದಿ ಹೇಳ್ತಾರೆ. ಸತೀಶ್ ಜಾರಕಿಹೊಳಿ ಅವರು ಅದನ್ನೇ ಮಾಡ್ತಾ ಇರೋದು ಅಲ್ವಾ? ಹೂಡಿಕೆ ಮಾಡಿದರೆ ಅದು ಕಾನೂನು ಬಾಹಿರನಾ? ಕಾಂಗೋದಲ್ಲಿ ಇರಬಹುದು, ಕೆನಡಾದಲ್ಲಿ ಇರಬಹುದು. ಹೂಡಿಕೆ ಮಾಡೋದು ತಪ್ಪಾ! ಅದನ್ನ ಎಲ್ಲೂ ಹೇಳಿಲ್ಲ ಅಲ್ವಾ? ಇವರೇ ಮಾಡಬೇಕು ಅಂತ ಹೇಳಿದ್ದಾರೆ. ಅವರು ಹೂಡಿಕೆ ಮಾಡಿದ್ದಾರೆ ಅಂತ ಹೇಳಿದ್ದಾರೆ, ಇಡಿ ಅವರು ಕಥೆ ಕಟ್ಟುತ್ತಾರೆ. ಇಲ್ಲಿ ಲಂಚ ತೆಗೆದುಕೊಂಡು ಹೂಡಿಕೆ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ದಾಖಲೆ ಸಮೇತ ಕೊಡ್ತೀನಿ ನಾನು, ಹೂಡಿಕೆ ಮಾಡೋಕೆ ರೆಡಿಯಾಗ್ತಾ ಇದ್ದೆ ಅಂತ ಹೇಳಿದ್ದಾರೆ ಎಂದು ವಿವರಿಸಿದರು.&lt;/p&gt;&lt;h2&gt;ರಾಜಕಾರಣ ಬೇರೆ ಕುಟುಂಬದ ವಿಷಯದಲ್ಲಿ ನಾವೆಲ್ಲ ಒಂದೇ&lt;/h2&gt;&lt;p&gt;ಸತೀಶ್ ಜಾರಕಿಹೊಳಿ ಮನೆಯ ಮೇಲೆ ಇಡಿ ದಾಳಿ ನಡೆಸಿದ ಬಳಿಕ ಸಹೋದರನ ಮನೆಗೆ ಭೇಟಿ ನೀಡಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಮನೆಗೆ ನಾನು ಬಿಜೆಪಿ ಶಾಸಕನಾಗಿ ಭೇಟಿ ನೀಡಿಲ್ಲ. ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. 770 ಕೋಟಿ ರೂಪಾಯಿ ಹೂಡಿಕೆ ಮಾಡಿರುವ ವಿಚಾರ ಸತ್ಯಕ್ಕೆ ದೂರ. ವಿದೇಶದಲ್ಲಿ ಸಚಿವ ಸತೀಶ ಅವರ ಹೂಡಿಕೆ ಇಲ್ಲ, ಸಣ್ಣ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲಾಗಿದೆ. ಜನರು ಸುಳ್ಳು ಸುದ್ದಿ ಹಬ್ಬಿಸಿ ರಾಜಕಾರಣದಲ್ಲಿ ನಮ್ಮ ಕುಟುಂಬದ ಹೆಸರು ಕೆಡಿಸಬೇಡಿ. ಗೋಕಾಕ್ ನಿವಾಸದಲ್ಲಿ ಒಟ್ಟು 1 ಕೋಟಿ 73 ಲಕ್ಷ ಹಣ ಸೀಜ್ ಮಾಡಲಾಗಿದೆ. 2 ಟ್ರಂಕ್ ತಂದಿದ್ದರೂ ಅದರಲ್ಲಿ ಒಂದೇ ಟ್ರಂಕಿನಲ್ಲಿ ಹಣ ಸೀಜ್ ಮಾಡಿ ಒಯಲಾಗಿದೆ. ಬೇರೆ ಕಡೆ ಹಣ ಸೀಜ್ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಹಣಕ್ಕೆ ಲೆಕ್ಕ ಕೊಟ್ಟು ಹಣ ಬಿಡುಗಡೆ ಮಾಡಿಸುವ ಕಾರ್ಯ ಆಗುತ್ತದೆ. ದಾಳಿ ವಿರುದ್ಧ ಕಾನೂನು ಹೋರಾಟವನ್ನ ಸತೀಶ ಜಾರಕಿಹೊಳಿ ಮಾಡುತ್ತಾರೆ ಸ್ಪಷ್ಟಪಡಿಸಿದರು.&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/satish-jarkiholi-is-doing-exactly-what-pm-modi-said-says-minister-priyank-kharge-sns/articleshow-9pgkdci"/>
        </item>
        <item>
            <title><![CDATA[ಬೆಂಗಳೂರು ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ]]></title>
            <link>https://kannada.asianetnews.com/bengaluru-urban/bengaluru-traffic-alert-ganesh-festival-rush-causes-jam-from-palace-road-to-hebbal/articleshow-scccakn</link>
            <guid isPermaLink="true">https://kannada.asianetnews.com/bengaluru-urban/bengaluru-traffic-alert-ganesh-festival-rush-causes-jam-from-palace-road-to-hebbal/articleshow-scccakn</guid>
            <pubDate>Sat, 12 Sep 2026 16:57:09 +0530</pubDate>
            <description><![CDATA[&lt;p&gt;ಬೆಂಗಳೂರು ಏರ್&zwnj;ಪೋರ್ಟ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಗಣೇಶ ಹಬ್ಬ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳು ಸಂಚಾರ ದಟ್ಟಣೆಯಿಂದ ತುಂಬಿದೆ. ಪರಿಣಾಮ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2anxhha7r76fj89wzgcy20p,imgname-ganesh-festival-traffic-disrupts-bengaluru-1789212411434.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಸೆ.12) ಗಣೇಶ ಹಬ್ಬ ಹಿನ್ನಲೆಯಲ್ಲಿ ನಗರದ ಹಲೆವೆಡೆ ನಿನ್ನೆ ರಾತ್ರಿಯಿಂದಲೇ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಇದೀಗ ಬೆಂಗಳೂರಿನ ಏರ್&zwnj;ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್&zwnj; ಸೃಷ್ಟಿಯಾಗಿದೆ. ಪ್ಯಾಲೇಸ್ ರಸ್ತೆಯಿಂದ ಹಿಡಿದು ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣ, ಆಂಧ್ರ ಪ್ರದೇಶ ಸೇರಿದಂತೆ ಪ್ರಮುಖ ರಸ್ತೆಗಳ ಲಿಂಕ್ ಆಗಿರುವ ಕಾರಣ ಹಬ್ಬದ ಹಿನ್ನಲೆಯಲ್ಲಿ ಊರಿಗೆ ತೆರಳುವ ಜನ ಹೆಚ್ಚಿದ್ದಾರೆ. ಹೀಗಾಗಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.&lt;/p&gt;&lt;h2&gt;ಕಳೆದ ಕೆಲ ಗಂಟೆಯಿಂದ ಸಿಲುಕಿದ ವಾಹನ ಸವಾರರು&lt;/h2&gt;&lt;p&gt;ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೆ ವಾಹನ ಸಂಚಾರ ಬಂದ್ ಆಗಿದೆ. ಅಷ್ಟರ ಮಟ್ಟಿಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ವಾಹನ ಸವಾರರು ಕಳೆದ ಕೆಲ ಗಂಟೆಯಿಂದ ಏರ್&zwnj;ಪೋರ್ಟ್ ರಸ್ತೆಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗಿನ ಸರಿಸುಮಾರು 4 ಕಿಲೋಮೀಟರ್ ದೂರ ಕ್ರಮಿಸಲು ಗಂಟೆ ಗಟ್ಟಲೆ ಹಿಡಿಯುತ್ತಿದೆ. ಭಾರಿ ಸಂಖ್ಯೆಯಲ್ಲಿ ವಾಹನಗಳು ಏರ್&zwnj;ಪೋರ್ಟ್ ರಸ್ತೆಯಲ್ಲಿ ಸಾಗುತ್ತಿದೆ. ವಿಮಾನ ನಿಲ್ದಾಣ ತಲುಪುದು ಹರಸಾಹಸವಾಗಿದೆ.&lt;/p&gt;&lt;h2&gt;ಇಂದು ರಾತ್ರಿ ಮೆಜೆಸ್ಟಿಕ್ ಸುತ್ತ ಮುತ್ತ ಟ್ರಾಫಿಕ್&lt;/h2&gt;&lt;p&gt;ಶುಕ್ರವಾರ ಸಂಜೆಯಿಂದ ಮೆಜೆಸ್ಟಿಕ್ ಸುತ್ತ ಮುತ್ತ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಎರಡನೇ ಶನಿವಾರ, ಭಾನುವಾರ, ಸೋಮವಾರ ಗಣೇಶ ಹಬ್ಬದ ಪ್ರಯುಕ್ತ ರಜೆ. ಹೀಗಾಗಿ ಬೆಂಗಳೂರಿನ ಬಹುತೇಕ ಮಂದಿ ಶುಕ್ರವಾರವೇ ಊರಿಗೆ ತೆರಳಿದ್ದಾರೆ. ಹೀಗಾಗಿ ಶುಕ್ರವಾರ ಮೆಜೆಸ್ಟಿಕ್ ಸುತ್ತ ಮುತ್ತ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಇಂದು ರಾತ್ರಿಯೂ ಟ್ರಾಫಿಕ್ ಜಾಮ್ ಸೃಷ್ಟಿಯಾಗಲಿದೆ.&lt;/p&gt;&lt;p&gt;ಮೂರು ದಿನ ರಜೆ ಹಿನ್ನೆಲೆ ತಮ್ಮ ತಮ್ಮ ಊರುಗಳಿಗೆ ಜನರು ಹೊರಟಿದ್ದಾರೆ. ಮೆಜೆಸ್ಟಿಕ್ ಸುತ್ತಮುತ್ತ ನಾಲ್ಕೈದು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಖಾಸಗಿ ಬಸ್, ಕೆಎಸ್ ಆರ್ ಟಿ ಸಿ ಬಸ್ ಎಲ್ಲವೂ ಪ್ರಯಾಣಿಕರಿಂದ ಭರ್ತಿಯಾಗಿತ್ತು. ಇದರ ನಡುವೆ ಕೆಲ ಆ್ಯಂಬುಲೆನ್ಸ್ ಸಿಲುಕಿ ಪರದಾಡಿದೆ.&lt;/p&gt;]]></content:encoded>
            <category>karnataka-districts</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-urban/bengaluru-traffic-alert-ganesh-festival-rush-causes-jam-from-palace-road-to-hebbal/articleshow-scccakn"/>
        </item>
        <item>
            <title><![CDATA[ಮುಂಗಾರು ವಿದಾಯ ಹೇಳ್ತಿದೆ .. ಮಾನ್ಸೂನ್‌ ಹಿಂತಿರುಗುವ ಪ್ರಕ್ರಿಯೆ ಹೇಗೆ ನಡೆಯುತ್ತೆ?]]></title>
            <link>https://kannada.asianetnews.com/bengaluru-urban/the-monsoon-is-bidding-farewell-how-does-the-monsoon-withdrawal-process-take-place-gkn/articleshow-krwpmre</link>
            <guid isPermaLink="true">https://kannada.asianetnews.com/bengaluru-urban/the-monsoon-is-bidding-farewell-how-does-the-monsoon-withdrawal-process-take-place-gkn/articleshow-krwpmre</guid>
            <pubDate>Sat, 12 Sep 2026 16:50:47 +0530</pubDate>
            <description><![CDATA[&lt;p&gt;ಮುಂಗಾರು ದುರ್ಬಲಗೊಂಡಿದೆ. ರಾಜ್ಯದಲ್ಲಿ ಮಳೆಯ ಕೊರತೆ ಶುರುವಾಗಿದೆ. ಈ ನಡುವೆ ಮಾನ್ಸೂನ್&zwnj; ಹಿಮ್ಮೆಟ್ಟುವಿಕೆ ಪ್ರಕ್ರಿಯೆ ಶುರುವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2angecfc9p4cx98my1z1245,imgname-monsoon-1789211982223.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಈ ವರ್ಷ ದೇಶದಲ್ಲಿ ಅಂದುಕೊಂಡಷ್ಟು ಮಳೆಯೇ ಆಗಿಲ್ಲ. ಇದರಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಅನ್ನದಾತರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಮಾನ್ಸೂನ್&zwnj; ಹಿಮ್ಮೆಟ್ಟುವ ಪ್ರಕ್ರಿಯೆ ಶುರುವಾಗಿದೆ.. ಕರ್ನಾಟಕದಲ್ಲೂ ಮುಂಗಾರು ದುರ್ಬಲಗೊಂಡಿದ್ದು, ಹವಾಮಾನ ಇಲಾಖೆ ಮಳೆಯ ಬಗ್ಗೆ ಭವಿಷ್ಯ ನುಡಿದಿದೆ.&lt;/p&gt;&lt;p&gt;ಹೌದು, ಸೆಪ್ಟೆಂಬರ್&zwnj; ಅಂತ್ಯದ ಒಳಗಾಗಿ ಮಾನ್ಸೂನ್&zwnj; ಸಂಪೂರ್ಣವಾಗಿ ನಿರ್ಗಮನವಾಗಲಿದೆ. ಮಾನ್ಸೂನ್&zwnj; ಹಿಮ್ಮೆಟ್ಟುವ ವೇಳೆ ಅನೇಕ ರಾಜ್ಯಗಳ ಮೇಲೆ ಸಹಜವಾಗಿಯೇ ಪರಿಣಾಮ ಬೀಳಲಿದೆ. ಗಾಳಿಯ ದಿಕ್ಕು ಬದಲಾಗುತ್ತದೆ. ತೇವಾಂಶವುಳ್ಳ ಗಾಳಿಯು ಒಂದು ನಿರ್ದಿಷ್ಟ ಪ್ರದೇಶದ ಕಡೆಗೆ ಹಿಂತಿರುಗುತ್ತದೆ. ಇದರಿಂದ ಭಾರೀ ಮಳೆಯಾದರೂ ಅಚ್ಚರಿ ಇಲ್ಲ. ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಮಳೆ ಬೀಳಲಿದೆ. ವಿಶೇಷ ಅಂದ್ರೆ ಈ ಬಾರಿಯ ಮಾನ್ಸೂನ್&zwnj; ಆರ್ಭಟದಿಂದ ಆಗಮಿಸಿತ್ತು. ಆದರೆ ಹೋಗುವಾಗ ಶಾಂತ ಮತ್ತು ನಿಧಾನವಾಗಿ ಹೋಗಲಿದೆ. ಇನ್ನು, ಈ ಮಾನ್ಸುನ್&zwnj; ಹಿಮ್ಮೆಟ್ಟುವ ಪ್ರಕ್ರಿಯೆಯು ಅಕ್ಟೋಬರ್&zwnj; ಮತ್ತು ನವೆಂಬರ್&zwnj;ನಲ್ಲಿ ಉತ್ತಮ ಮಳೆಗೆ ಅವಕಾಶ ಮಾಡಿಕೊಡಲಿದೆ.&lt;/p&gt;&lt;h2&gt;&lt;strong&gt;ಯಾವಾಗಿಂದ?&lt;/strong&gt;&lt;/h2&gt;&lt;p&gt;ಯಾವಾಗಲೂ ದೇಶದ ವಾಯುವ್ಯ ತುದಿಯಲ್ಲಿ ಮಾನ್ಸೂನ್ ನಿರ್ಗಮನ ಪ್ರಾರಂಭವಾಗುತ್ತದೆ. ಪಶ್ಚಿಮ ರಾಜಸ್ಥಾನ ಮತ್ತು ಕಚ್&zwnj;ನಿಂದ ಶುರುವಾಗುತ್ತದೆ. ಹವಾಮಾನ ಇಲಾಖೆಯ ನಿಯಮಗಳ ಪ್ರಕಾರ.. ಸೆಪ್ಟೆಂಬರ್ 1 ರ ಮೊದಲು ದೇಶದ ಯಾವುದೇ ಭಾಗದಿಂದ ಮಾನ್ಸೂನ್ ಹಿಂತೆಗೆತ ಪ್ರಾರಂಭಿಸುವುದಿಲ್ಲ. ಒಂದು ಪ್ರದೇಶದಲ್ಲಿ ಸತತ ಐದು ದಿನಗಳವರೆಗೆ ಮಳೆಯಾಗದಿದ್ದರೆ.. ಗಾಳಿಯ ಒತ್ತಡ ಬದಲಾದರೆ ಮತ್ತು ಆರ್ದ್ರತೆಯ ಮಟ್ಟ ಕಡಿಮೆಯಾಗಲು ಪ್ರಾರಂಭಿಸಿದರೆ.. ಹವಾಮಾನ ಇಲಾಖೆಯು ಆ ಪ್ರದೇಶದಿಂದ ಮಾನ್ಸೂನ್ ಹಿಂತೆಗೆತ ಎಂದು ಪರಿಗಣಿಸುತ್ತದೆ.&lt;/p&gt;&lt;p&gt;ರಾಜಸ್ಥಾನ ಮತ್ತು ಕಚ್&zwnj;ನಿಂದ ನಿರ್ಗಮಿಸಿದ ನಂತರ ಮಾನ್ಸೂನ್ ಕ್ರಮೇಣ ಪಂಜಾಬ್, ಹರಿಯಾಣ, ದೆಹಲಿ ಮತ್ತು ಗುಜರಾತ್&zwnj;ನ ಉಳಿದ ಭಾಗಗಳಿಂದ ಹಿಮ್ಮೆಟ್ಟುತ್ತದೆ. ನಂತರ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಗೆ ಚಲಿಸುತ್ತದೆ. ಅದು ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಿಂದ ತನ್ನ ಹಿಮ್ಮೆಟ್ಟುವಿಕೆಯನ್ನ ಪ್ರಾರಂಭಿಸುತ್ತದೆ.&lt;/p&gt;&lt;p&gt;ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಿಂದ ಕೊನೆಯದಾಗಿ ಹೊರಡುತ್ತದೆ. ಇದರರ್ಥ ಅದು ಬಂದ ಮಾರ್ಗಕ್ಕೆ ವಿರುದ್ಧವಾದ ಮಾರ್ಗವನ್ನು ಅನುಸರಿಸಿ ದೇಶವನ್ನು ಬಿಡುತ್ತದೆ. ಮಾನ್ಸೂನ್ ಇಡೀ ದೇಶದಿಂದ ಸಂಪೂರ್ಣವಾಗಿ ಹಿಂದೆ ಸರಿಯಲು ಸಾಮಾನ್ಯವಾಗಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ..&lt;/p&gt;&lt;h2&gt;&lt;strong&gt;ರಾಜ್ಯದ ಇವತ್ತಿನ ಮಳೆ ಪರಿಸ್ಥಿತಿ ಹೇಗಿದೆ?&lt;/strong&gt;&lt;/h2&gt;&lt;p&gt;ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣ ದುರ್ಬಲಗೊಂಡಿದೆ. ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರವಾಗಿ ಮಳೆ ಬೀಳುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಸೆಪ್ಟೆಂಬರ್&zwnj; 13 ರಂದು ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯಲ್ಲೂ ಮಳೆ ಬೀಳುವ ಸೂಚನೆ ನೀಡಲಾಗಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿ ಮೈಸೂರು, ಚಾಮರಾಜನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಒಂದೆರಡು ಭಾಗಗಳಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/the-monsoon-is-bidding-farewell-how-does-the-monsoon-withdrawal-process-take-place-gkn/articleshow-krwpmre"/>
        </item>
        <item>
            <title><![CDATA['ನಿಮ್ಮ ಪೌರುಷ ಇಲ್ಲಿ ತೋರಿಸಿ', ಗಣೇಶ ಮೆರವಣಿಗೆ ಮಸೀದಿ ಮುಂದೆ ಹೋಗಬಾರ್ದು ಎಂದ ಇನ್ಸ್‌ಪೆಕ್ಟರ್‌ಗೆ ಪ್ರತಾಪ್ ಸಿಂಹ ಕಿಡಿ]]></title>
            <link>https://kannada.asianetnews.com/karnataka-districts/prathap-simha-lashes-out-at-inspector-who-said-ganesha-procession-should-not-pass-in-front-of-mosque-sns/articleshow-ci1hlqd</link>
            <guid isPermaLink="true">https://kannada.asianetnews.com/karnataka-districts/prathap-simha-lashes-out-at-inspector-who-said-ganesha-procession-should-not-pass-in-front-of-mosque-sns/articleshow-ci1hlqd</guid>
            <pubDate>Sat, 12 Sep 2026 16:46:31 +0530</pubDate>
            <description><![CDATA[ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಯು ಮಸೀದಿ ಮುಂಭಾಗ ಸಾಗಬಾರದು ಮತ್ತು ಪಟಾಕಿ ಸಿಡಿಸಬಾರದು ಎಂದು ಪೊಲೀಸ್ ಇನ್&zwnj;ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸಿರುವ ಸಂಸದ ಯದುವೀರ್ ಒಡೆಯರ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2am6d0608jzj0a9y2vnqfr6,imgname-pratap-simha-1789210604550.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಜಿಲ್ಲೆ ಟಿ.ನರಸೀಪುರದ ಗಣೇಶೋತ್ಸವ ಮೆರವಣಿಗೆ ವಿಚಾರ ಇದೀಗ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಲಿಂಕ್ ರಸ್ತೆಯಲ್ಲಿ, ಮಸೀದಿ ಮುಂಭಾಗ ಮೆರವಣಿಗೆ ಹೋಗಬಾರದು ಹಾಗೂ ಪಟಾಕಿ ಸಿಡಿಸಬಾರದು ಎಂದು ಇನ್&zwnj;ಸ್ಪೆಕ್ಟರ್ ಧನಂಜಯ ನೀಡಿದ್ದ ಎಚ್ಚರಿಕೆ ವಿಡಿಯೋ ವೈರಲ್ ಆಗಿದೆ. ಅಧಿಕಾರಿ ಧಮ್ಕಿ ಬೆನ್ನಲ್ಲೇ ಬಿಜೆಪಿ ನಾಯಕರು ಸಿಡಿದಿದ್ದು, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h2&gt;ಟಿ.ನರಸೀಪುರ ಗಣೇಶೋತ್ಸವ&lt;/h2&gt;&lt;p&gt;ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಇನ್&zwnj;ಸ್ಪೆಕ್ಟರ್ ಧನಂಜಯ ಆಡಿದ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ನಾವು ಸೂಚಿಸಿದ ಮಾರ್ಗದಲ್ಲೇ ಮೆರವಣಿಗೆ ಸಾಗಬೇಕು. ಮಸೀದಿ ಮುಂಭಾಗ ಪಟಾಕಿ ಹೊಡೆದರೆ ಗ್ರಹಚಾರ ಬಿಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಸಾರ್ವಜನಿಕ ಸಭೆಯಲ್ಲಿ ಅಧಿಕಾರಿ ಈ ರೀತಿ ಏಕವಚನ ಹಾಗೂ ಹದ್ದುಮೀರಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಪೊಲೀಸ್ ಅಧಿಕಾರಿಯ ನಡೆಯನ್ನು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಸರ್ಕಾರ ಹಿಂದೂ ವಿರೋಧಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಹಿಂದೂಗಳ ಹಬ್ಬಗಳಿಗೆ ನಿರಂತರವಾಗಿ ಕಠಿಣ ಷರತ್ತುಗಳನ್ನು ಹೇರುತ್ತಿದೆ. ದೇವಸ್ಥಾನ ಅಥವಾ ಮಸೀದಿ ಇದೆ ಎಂದು ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ನಿರ್ಬಂಧಿಸುವುದು ತಪ್ಪು. ಸರ್ಕಾರವೇ ಸಾರ್ವಜನಿಕರಲ್ಲಿ ಭೇದಭಾವ ಹುಟ್ಟುಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.&lt;/p&gt;&lt;h2&gt;ಅಧಿಕಾರಿಯ ಎಚ್ಚರಿಕೆಯಿಂದ ರಾಜಕೀಯ ಕಿಡಿ&lt;/h2&gt;&lt;p&gt;ಇನ್ನೊಂದೆಡೆ ಮಾಜಿ ಸಂಸದ ಪ್ರತಾಪ್ ಸಿಂಹ ಇನ್&zwnj;ಸ್ಪೆಕ್ಟರ್ ಧನಂಜಯ ವಿರುದ್ಧ ಬೆಂಕಿ ಉಗುಳಿದ್ದಾರೆ. ಬ್ರಿಟಿಷರ ಕಾಲದ ದರ್ಪವನ್ನು ಪೊಲೀಸರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲಿ. ಯುವಕರಿಗೆ ಧಮ್ಕಿ ಹಾಕಲು ನೀವ್ಯಾರು? ಇನ್ನೊಮ್ಮೆ ಈ ರೀತಿ ಮಾತನಾಡಿದರೆ ನಾನೇ ನೇರವಾಗಿ ಠಾಣೆಗೆ ನುಗ್ಗುತ್ತೇನೆ. ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಕೂಗುವ ಕೂಗಿಗೆ ಇಲ್ಲದ ನಿಯಮ, ಹಿಂದೂಗಳ ಹಬ್ಬಕ್ಕೆ ಮಾತ್ರ ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ.&lt;/p&gt;&lt;p&gt;ಮತ್ತೊಂದೆಡೆ ಸ್ಥಳೀಯ ಬಿಜೆಪಿ ಮುಖಂಡ ಅರ್ಜುನ್ ರಮೇಶ್ ಕೂಡ ಆಡಳಿತ ವರ್ಗದ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಟಿ.ನರಸೀಪುರದ ಇತಿಹಾಸದಲ್ಲೇ ಕೋಮು ಗಲಭೆಯಾಗಿಲ್ಲ. ಲಿಂಕ್ ರಸ್ತೆಯನ್ನು ಬೇಕೆಂದೇ ಮಸೀದಿ ರಸ್ತೆ ಎಂದು ಬಿಂಬಿಸಿ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಹಿಟ್ಲರ್ ನೀತಿಯನ್ನು ಜನರ ಮೇಲೆ ಹೇರಲು ಮುಂದಾದರೆ. ಲಿಂಕ್ ರಸ್ತೆಯಲ್ಲೇ ಸಾಮೂಹಿಕ ಗಣೇಶ ವಿಸರ್ಜನೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;​ಒಟ್ಟಾರೆ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿ ಬಳಸಿದ ಭಾಷೆ ಹಬ್ಬಕ್ಕೂ ಮುನ್ನವೇ ತಾಲೂಕಿನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದು, ಪರಿಸ್ಥಿತಿ ಸೂಕ್ಷ್ಮ ಹಂತಕ್ಕೆ ತಲುಪಿದೆ.&lt;strong&gt; (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)&amp;nbsp;&lt;/strong&gt;&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/prathap-simha-lashes-out-at-inspector-who-said-ganesha-procession-should-not-pass-in-front-of-mosque-sns/articleshow-ci1hlqd"/>
        </item>
        <item>
            <title><![CDATA[Bengaluru ಪರಪ್ಪನ ಅಗ್ರಹಾರದಲ್ಲಿ ಭಾರೀ ಸ್ಕ್ಯಾಮ್: ಸುಪ್ರೀಂ ಆದೇಶವೇ ನಕಲಿ, ಬಿಡುಗಡೆಯಾಗಿದ್ದ ಅಪರಾಧಿ ಮತ್ತೆ ಲಾಕ್!]]></title>
            <link>https://kannada.asianetnews.com/bengaluru-urban/bengaluru-fake-court-order-forged-document-life-convict-illegal-release-parappana-agrahara-jail-prison-staff-arrest-bmk/articleshow-rrbrggm</link>
            <guid isPermaLink="true">https://kannada.asianetnews.com/bengaluru-urban/bengaluru-fake-court-order-forged-document-life-convict-illegal-release-parappana-agrahara-jail-prison-staff-arrest-bmk/articleshow-rrbrggm</guid>
            <pubDate>Sat, 12 Sep 2026 16:27:22 +0530</pubDate>
            <description><![CDATA[&lt;p&gt;ಸುಪ್ರೀಂ ಕೋರ್ಟ್&zwnj;ನ ನಕಲಿ ಆದೇಶವನ್ನು ಸೃಷ್ಟಿಸಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪಾಯಕಾರಿ ಕೈದಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಅಕ್ರಮವಾಗಿ ಬಿಡುಗಡೆಗೊಳಿಸಿದ ಬೃಹತ್ ಜಾಲವೊಂದು ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲಿನ ಪ್ರಥಮ ದರ್ಜೆ ಸಹಾಯಕ ಮತ್ತು ಬಿಡುಗಡೆಯಾಗಿದ್ದ ಕೈದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0w4ca6ctjah6wx6nwyqbcds,imgname-supreme-court-tmc-rebel-mps-abhishek-banerjee-disqualification-petition-om-birla-notice-1787650517196.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು; ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್&zwnj; ಹೆಸರಲ್ಲೇ ನಕಲಿ ಆದೇಶ ಪ್ರತಿಯನ್ನು ಸೃಷ್ಟಿಸಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪಾಯಕಾರಿ ಅಪರಾಧಿಯೊಬ್ಬನನ್ನು ಜೈಲಿನಿಂದ ಅಕ್ರಮವಾಗಿ ಬಿಡುಗಡೆಗೊಳಿಸಿದ್ದ ಅತಿ ದೊಡ್ಡ ಅಕ್ರಮ ಜಾಲವೊಂದು ಬೆಂಗಳೂರಿನಲ್ಲಿ ಬಯಲಿಗೆ ಬಂದಿದೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನೇ ಫೋರ್ಜರಿ ಮಾಡಿ 2018ರಲ್ಲಿ ಕೈದಿಯನ್ನು ಬಿಡುಗಡೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಕೇಂದ್ರ ಕಾರಾಗೃಹದ (ಪರಪ್ಪನ ಅಗ್ರಹಾರ) ಪ್ರಸ್ತುತ ಪ್ರಥಮ ದರ್ಜೆ ಸಹಾಯಕ (ಎಫ್&zwnj;ಡಿಎ) ಹಾಗೂ ಬಿಡುಗಡೆಯಾಗಿದ್ದ ಜೀವಾವಧಿ ಕೈದಿ ಸೇರಿದಂತೆ ಇಬ್ಬರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಂಧಿತ ಸಿಬ್ಬಂದಿ ಯಾರು?&lt;/strong&gt;&lt;/h2&gt;&lt;p&gt;ಬಂಧಿತ ಆರೋಪಿಗಳನ್ನು ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಶಂಕರ್ ಎ. ಹಾಗೂ ಅಪರಾಧ ಎಸಗಿದ ಸಮಯದಲ್ಲಿ ಜೈಲಿನ ಅಪರಾಧಿ ವಿಭಾಗದಲ್ಲಿ ಎರಡನೇ ದರ್ಜೆ ಸಹಾಯಕನಾಗಿ (ಎಸ್&zwnj;ಡಿಎ) ಕಾರ್ಯನಿರ್ವಹಿಸುತ್ತಿದ್ದ, ಪ್ರಸ್ತುತ ಎಫ್&zwnj;ಡಿಎ ಆಗಿರುವ ಶ್ರೀಕಾಂತ್ ಎಸ್. ಎಂದು ಗುರುತಿಸಲಾಗಿದೆ.&lt;/p&gt;&lt;h3&gt;&lt;strong&gt;ಪ್ರಕರಣದ ಹಿನ್ನೆಲೆ ಮತ್ತು ಸುಪ್ರೀಂ ಕೋರ್ಟ್ ಮೇಲ್ಮನವಿ!&lt;/strong&gt;&lt;/h3&gt;&lt;p&gt;ಬೆಂಗಳೂರಿನ ಮೂಲ ನ್ಯಾಯಾಲಯವೊಂದು 2004ರ ಜುಲೈ 12ರಂದು ಅಪಹರಣ ಪ್ರಕರಣದಲ್ಲಿ ಶಂಕರ್ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿ ಆದೇಶಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಶಂಕರ್ ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದನು. ಆದರೆ, ಅಪರಾಧದ ತೀವ್ರತೆಯನ್ನು ಪರಿಗಣಿಸಿದ್ದ ಉಭಯ ನ್ಯಾಯಾಲಯಗಳು ಆತನ ಮೇಲ್ಮನವಿಗಳನ್ನು ವಜಾಗೊಳಿಸಿ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನೇ ಎತ್ತಿಹಿಡಿದಿದ್ದವು.&lt;/p&gt;&lt;h3&gt;&lt;strong&gt;ನಕಲಿ ದಾಖಲೆ ಸೃಷ್ಟಿ ಮತ್ತು ರಿಲೀಸ್ ಹೈಡ್ರಾಮಾ!&lt;/strong&gt;&lt;/h3&gt;&lt;p&gt;ತನ್ನ ಎಲ್ಲಾ ಕಾನೂನು ಹೋರಾಟಗಳು ವಿಫಲಗೊಂಡಾಗ, ಜೈಲು ಸಿಬ್ಬಂದಿ ಶ್ರೀಕಾಂತ್ ಜೊತೆಗೂಡಿದ ಕೈದಿ ಶಂಕರ್ ಭಾರಿ ಸಂಚು ರೂಪಿಸಿದ್ದ. ಶ್ರೀಕಾಂತ್ ತನ್ನ ಅಧಿಕಾರ ಹಾಗೂ ಜೈಲಿನ ಕೆಲಸದ ಪ್ರಭಾವ ಬಳಸಿ ಸುಪ್ರೀಂ ಕೋರ್ಟ್&zwnj;ನ ಕ್ರಿಮಿನಲ್ ಮೇಲ್ಮನವಿ ಆದೇಶದ ಪ್ರತಿಯನ್ನೇ ನಕಲಿಯಾಗಿ ಸೃಷ್ಟಿಸಿದ್ದನು. 2018ರ ನವೆಂಬರ್ 2ರಂದು ಸುಪ್ರೀಂ ಕೋರ್ಟ್ ಶಂಕರ್&zwnj;ನನ್ನು ಶಿಕ್ಷೆಯಿಂದ ಬಿಡುಗಡೆ ಮಾಡಲು ನಿರ್ದೇಶಿಸಿದೆ ಎಂದು ಬಿಂಬಿಸುವ ಹುಸಿ ದಾಖಲೆಯನ್ನು ತಯಾರಿಸಲಾಗಿತ್ತು. ಈ ನಕಲಿ ದಾಖಲೆಯನ್ನು ನಿಜವೆಂದು ನಂಬಿದ ಜೈಲಿನ ಮೇಲಾಧಿಕಾರಿಗಳು 2018ರ ನವೆಂಬರ್ 13ರಂದು ಶಂಕರ್&zwnj;ನನ್ನು ಕಾರಾಗೃಹದಿಂದ ಅಧಿಕೃತವಾಗಿ ಬಿಡುಗಡೆ ಮಾಡಿದ್ದರು.&lt;/p&gt;&lt;h3&gt;&lt;strong&gt;ಬೆಳಕಿಗೆ ಬಂದ ಭಾರಿ ವಂಚನೆ; ಜೈಲು ಪಾಲು!&lt;/strong&gt;&lt;/h3&gt;&lt;p&gt;ವರ್ಷಗಳ ಕಾಲ ರಹಸ್ಯವಾಗಿದ್ದ ಈ ಭಾರಿ ಅಕ್ರಮ ಮತ್ತು ವಂಚನೆಯ ಜಾಲವು ಇತ್ತೀಚೆಗೆ ಕಾರಾಗೃಹದ ಆಡಳಿತ ಮಂಡಳಿಯ ಮರುಪರಿಶೀಲನೆ ವೇಳೆ ಅನುಮಾನಕ್ಕೆ ಕಾರಣವಾಗಿತ್ತು. ತನಿಖೆ ನಡೆಸಿದಾಗ ಸುಪ್ರೀಂ ಕೋರ್ಟ್ ಅಂತಹ ಯಾವುದೇ ಬಿಡುಗಡೆ ಆದೇಶ ನೀಡಿರಲಿಲ್ಲ ಎಂಬ ಕಹಿ ಸತ್ಯ ಹೊರಬಿದ್ದಿದೆ. ಈ ಸಂಬಂಧ ಬೆಂಗಳೂರು ಕೇಂದ್ರ ಕಾರಾಗೃಹದ ಪ್ರಭಾರಿ ಸೂಪರಿಂಟೆಂಡೆಂಟ್ ಅವರು 2026ರ ಮೇ 20ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು.&lt;/p&gt;&lt;h3&gt;&lt;strong&gt;ಪ್ರಕರಣ ದಾಖಲಿಸಿಕೊಂಡ ಪೊಲೀಸರು!&lt;/strong&gt;&lt;/h3&gt;&lt;p&gt;ಪ್ರಕರಣ ದಾಖಲಿಸಿಕೊಂಡ ಪೊಲೀಸರು ತೀವ್ರ ತನಿಖೆ ನಡೆಸಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜುಲೈ 9, 2026ರಂದು ಕೈದಿ ಶಂಕರ್&zwnj;ನನ್ನು ಪೊಲೀಸ್ ಕಸ್ಟಡಿಗೆ ಪಡೆದು 12 ದಿನಗಳ ಕಾಲ ವಿಚಾರಣೆ ನಡೆಸಿದ ನಂತರ, ಜುಲೈ 21 ರಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಂದೆಡೆ, ಈ ನಕಲಿ ಜಾಲದ ರೂವಾರಿ ಜೈಲು ಸಿಬ್ಬಂದಿ ಶ್ರೀಕಾಂತ್&zwnj;ನನ್ನು ಜುಲೈ 17 ರಂದು ವಶಕ್ಕೆ ಪಡೆದ ಪೊಲೀಸರು 10 ದಿನಗಳ ಕಸ್ಟಡಿ ವಿಚಾರಣೆ ಮುಗಿಸಿ, ಜುಲೈ 27 ರಂದು ನ್ಯಾಯಾಂಗ ಬಂಧನಕ್ಕೆ ರವಾನಿಸಿದ್ದಾರೆ. ಕಾರಾಗೃಹದ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಂಡು ಸುಪ್ರೀಂ ಕೋರ್ಟ್ ಹೆಸರಲ್ಲೇ ಫೋರ್ಜರಿ ನಡೆಸಿದ ಈ ಘಟನೆ ಈಗ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/bengaluru-urban/bengaluru-fake-court-order-forged-document-life-convict-illegal-release-parappana-agrahara-jail-prison-staff-arrest-bmk/articleshow-rrbrggm"/>
        </item>
        <item>
            <title><![CDATA[ಬೆಂಗಳೂರು: ಬಾಲಕಾರ್ಮಿಕರ ವಿರುದ್ಧ ಖಾಕಿ ಅಟ್ಯಾಕ್: ಸಿಸಿಬಿ ಪೊಲೀಸರ ಬಿಗ್ ಆಪರೇಷನ್, 100ಕ್ಕೂ ಹೆಚ್ಚು ಮಕ್ಕಳ ರಕ್ಷಣೆ!]]></title>
            <link>https://kannada.asianetnews.com/bengaluru-urban/bengaluru-child-labour-crackdown-ccb-and-police-rescue-many-childrens-after-cm-dk-shivakumar-instruction-gdp/articleshow-u1xvqq4</link>
            <guid isPermaLink="true">https://kannada.asianetnews.com/bengaluru-urban/bengaluru-child-labour-crackdown-ccb-and-police-rescue-many-childrens-after-cm-dk-shivakumar-instruction-gdp/articleshow-u1xvqq4</guid>
            <pubDate>Sat, 12 Sep 2026 16:00:46 +0530</pubDate>
            <description><![CDATA[ಬೆಂಗಳೂರು ನಗರ ಪೊಲೀಸರು ಮತ್ತು ಸಿಸಿಬಿ ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸಿ, ನಗರದಾದ್ಯಂತ ನೂರಾರು ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಹಲವು ಬಾಲಕಾರ್ಮಿಕರನ್ನು ರಕ್ಷಿಸಲಾಗಿದ್ದು, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01cyeefczwm29qec5trp30xm5v,imgname-Child-labour-video.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿ ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿಯು ಇಂದಿಗೂ ಜೀವಂತವಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಹಾಗೂ ಸಿಸಿಬಿ (CCB), ನಗರದಾದ್ಯಂತ ಬೃಹತ್ ಜಂಟಿ ಕಾರ್ಯಾಚರಣೆ ನಡೆಸಿ ನೂರಾರು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಮಹತ್ವದ ಕಾರ್ಯಾಚರಣೆಯಲ್ಲಿ ಹಲವಾರು ಬಾಲಕಾರ್ಮಿಕರನ್ನು ರಕ್ಷಿಸಲಾಗಿದ್ದು, ಮಕ್ಕಳನ್ನು ಕಾನೂನುಬಾಹಿರವಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.&lt;/p&gt;&lt;h2&gt;ಸಚಿವ ಸಂಪುಟದ ನಾಯಕರ ಸೂಚನೆ ಮತ್ತು ಪೊಲೀಸ್ ಕಾರ್ಯಾಚರಣೆ&lt;/h2&gt;&lt;p&gt;ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಪಿಎಂಸಿ (APMC) ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳೀಯ ಮಹಿಳಾ ಕೂಲಿ ಕಾರ್ಮಿಕರು ಸಣ್ಣ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಬಳಸಿಕೊಳ್ಳುತ್ತಿರುವ ಕುರಿತು ದೂರು ನೀಡಿದ್ದರು. ಈ ಸಮಸ್ಯೆಯ ಗಂಭೀರತೆಯನ್ನು ಅರಿತ ಸಿಎಂ, ನಗರದಾದ್ಯಂತ ತಕ್ಷಣವೇ ಪರಿಶೀಲನೆ ನಡೆಸಿ ಬಾಲಕಾರ್ಮಿಕ ಪದ್ಧತಿಗೆ ತಡೆ ನೀಡುವಂತೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಕ್ರಿಯಗೊಂಡ ಬೆಂಗಳೂರು ಪೊಲೀಸರು ಬೃಹತ್ ಕಾರ್ಯಾಚರಣೆಗೆ ಇಳಿದರು.&lt;/p&gt;&lt;h2&gt;ವಿವಿಧ ವಿಭಾಗಗಳಲ್ಲಿ ನಡೆದ ತಪಾಸಣೆ ಹಲವರ ರಕ್ಷಣೆ&lt;/h2&gt;&lt;p&gt;ಪೂರ್ವ ಮತ್ತು ಈಶಾನ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಪೊಲೀಸರು ಒಟ್ಟು 917 ಸ್ಥಳಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಿದರು. ಗ್ಯಾರೇಜ್, ಮಾರ್ಕೆಟ್, ರಿಪೇರಿ ಶಾಪ್, ಹೋಟೆಲ್, ಮಾರುಕಟ್ಟೆ, ಬಾರ್ ಮತ್ತು ರೆಸ್ಟೋರೆಂಟ್&zwnj;ಗಳ ಮೇಲೆ ದಾಳಿ ನಡೆಸಿ ಒಟ್ಟು 71 ಮಕ್ಕಳನ್ನು ರಕ್ಷಿಸಲಾಗಿದೆ. ಇದರಲ್ಲಿ ಈಶಾನ್ಯ (North-East) ವಿಭಾಗ ಒಂದರಲ್ಲೇ 295 ಕ್ಕೂ ಹೆಚ್ಚು ಸ್ಥಳಗಳನ್ನು ತಪಾಸಣೆಗೊಳಪಡಿಸಿ, 43 ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸಲಾಗಿದೆ.&lt;/p&gt;&lt;h2&gt;ಸಿಸಿಬಿ (CCB) ಯಿಂದ ವ್ಯಾಪಕ ದಾಳಿ:&lt;/h2&gt;&lt;p&gt;ಸಿಸಿಬಿಯ ವಿವಿಧ ಕಡೆಗಳಲ್ಲಿ ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ನಗರದಾದ್ಯಂತ ವಿಶೇಷ ಮಿಂಚಿನ ಕಾರ್ಯಾಚರಣೆ ನಡೆಸಿದವು. ಒಟ್ಟು 67 ಪೊಲೀಸ್ ಠಾಣಾ ವ್ಯಾಪ್ತಿಯ 417 ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಿದ ಸಿಸಿಬಿ ಅಧಿಕಾರಿಗಳು, 43 ಮಕ್ಕಳನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹಸ್ತಾಂತರಿಸಲಾಗಿದೆ.&lt;/p&gt;&lt;h2&gt;ಉತ್ತರ ವಿಭಾಗದ ಪರಿಶೀಲನೆ:&lt;/h2&gt;&lt;p&gt;ಉತ್ತರ ವಿಭಾಗದಲ್ಲೂ 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಪೆಟ್ರೋಲ್ ಬಂಕ್, ಗ್ಯಾರೇಜ್ ಹಾಗೂ ಹೋಟೆಲ್&zwnj;ಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕರನ್ನು ಪತ್ತೆಹಚ್ಚಲಾಗಿದೆ.&lt;/p&gt;&lt;h2&gt;ಮಾಲೀಕರು ಮತ್ತು ಪೋಷಕರ ವಿರುದ್ಧ ಕಾನೂನು ಕ್ರಮ:&lt;/h2&gt;&lt;p&gt;ಈ ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿರುವ ಉತ್ತರ ವಿಭಾಗದ ಡಿಸಿಪಿ ನ್ಯಾಮಗೌಡ ಅವರು, ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮಾಲೀಕರನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಲಾಗುತ್ತಿದೆ. ಮಾಲೀಕರ ಜೊತೆಗೆ ಮಕ್ಕಳ ಪೋಷಕರನ್ನೂ ಕರೆಸಿ ವಿಚಾರಣೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;p&gt;ರಕ್ಷಿಸಲ್ಪಟ್ಟ ಪ್ರತಿಯೊಬ್ಬ ಮಗುವಿನ ವಯಸ್ಸಿನ ಪರಿಶೀಲನೆ ನಡೆಸಲಾಗುತ್ತಿದ್ದು, ವಯಸ್ಸು ದೃಢಪಟ್ಟ ತಕ್ಷಣವೇ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಹೆಚ್ಚುವರಿ ಎಫ್&zwnj;ಐಆರ್ ದಾಖಲಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/bengaluru-urban/bengaluru-child-labour-crackdown-ccb-and-police-rescue-many-childrens-after-cm-dk-shivakumar-instruction-gdp/articleshow-u1xvqq4"/>
        </item>
        <item>
            <title><![CDATA[1980s AI photo trend: 1980ರ ಟ್ರೆಂಡ್‌, ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟ ಕರ್ನಾಟಕ ಪೊಲೀಸ್!]]></title>
            <link>https://kannada.asianetnews.com/karnataka-districts/1980s-ai-photo-trend-karnataka-police-issue-warning-to-the-public-sns/articleshow-ggpggy7</link>
            <guid isPermaLink="true">https://kannada.asianetnews.com/karnataka-districts/1980s-ai-photo-trend-karnataka-police-issue-warning-to-the-public-sns/articleshow-ggpggy7</guid>
            <pubDate>Sat, 12 Sep 2026 15:16:33 +0530</pubDate>
            <description><![CDATA[ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ 1980ರ ದಶಕದ ಫೋಟೋ ಎಡಿಟಿಂಗ್ ಟ್ರೆಂಡ್ ಅನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಕಲಿ ಆ್ಯಪ್&zwnj;ಗಳ ಮೂಲಕ ವೈಯಕ್ತಿಕ ಮಾಹಿತಿ, ಫೋಟೋಗಳನ್ನು ಕದ್ದು, ಡೀಪ್&zwnj;ಫೇಕ್ ತಂತ್ರಜ್ಞಾನ ಬಳಸಿ ಬ್ಲಾಕ್&zwnj;ಮೇಲ್ ಮಾಡುವ ಅಪಾಯದ ಬಗ್ಗೆ ಕರ್ನಾಟಕ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ag3bsa6gwt2xkdjb0dfxy9,imgname-1980s-trend-1789206310697.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಾಮಾಜಿಕ ಜಾಲತಾಣದಲ್ಲಿ ಹಳೆಯ ನೆನಪುಗಳನ್ನು ರೂಪಿಸಿಕೊಳ್ಳುವಂತಹ 1980 ಟ್ರೆಂಡ್ ಲುಕ್ ಫೋಟೋ ಎಡಿಟಿಂಗ್ ಕ್ರೇಜ್ ಈಗ ಸೈಬರ್ ಆರೋಪಿಗಳಿಗೆ ವರವಾಗಿ ಮಾರ್ಪಾಡಾಗಿದೆ. ತಮ್ಮ ಇತ್ತೀಚಿನ ಫೋಟೋಗಳನ್ನು ಹಳೆಯ ಕಾಲದ ರೆಟ್ರೋ ಶೈಲಿಯ, 80ರ ದಶಕದ ಬ್ಲಾಕ್ ಅಂಡ್ ವೈಟ್ ಅಥವಾ ನೆಪಿಯಾ ಟೋನ್&zwnj;ಗೆ ಬದಲಾವಣೆ ಮಾಡಿಕೊಳ್ಳಲು ಯುವ ಜನತೆ ಸೇರಿದಂತೆ ಹಲವು ಜನರು ಮುಂದಾಗುತ್ತಿದ್ದಾರೆ.&lt;/p&gt;&lt;h2&gt;1980ರ ಟ್ರೆಂಡ್: ನಿಮ್ಮ ಫೋಟೋಗೆ ಕಾದಿದೆಯೇ ಸೈಬರ್ ಕಂಟಕ?&lt;/h2&gt;&lt;p&gt;ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು ಥರ್ಡ್ ಪಾರ್ಟಿ ಮೊಬೈಲ್ ಆಪ್, ಎಐ ಟೂಲ್ಸ್ ಹೆಸರಿನಲ್ಲಿ ನಕಲಿ ಎಪಿಕೆ ಲಿಂಕ್&zwnj;ಗಳನ್ನು ಪರಿಚಯ ಮಾಡಿಸುತ್ತಿದ್ದಾರೆ. ಆ ಮೂಲಕ ಮೊಬೈಲ್&zwnj;ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಫ್ರೀಯಾಗಿ ಎಐ ಇಮೇಜ್ ಮಾಡಿಕೊಡುತ್ತೇವೆ ಅಂತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಾ, ಲಿಂಕ್&zwnj;ಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಆ ಮೂಲಕ ಸೆಂಬರ್ ವಂಚನೆ ಬಲೆಗೆ ಕೆಡವುತ್ತಿದ್ದಾರೆ.&lt;/p&gt;&lt;p&gt;ಇದರೊಂದಿಗೆ ಕರ್ನಾಟಕ ರಾಜ್ಯ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. 1980ರ ಟ್ರೆಂಡ್ ಹಿಂದೆ ಬಿದ್ದು ಆನ್ಲೈನ್ ಗೆ ಫೋಟೋ ಅಪ್ಲೋಡ್ ಮುನ್ನ ಎಚ್ಚರವಾಗಿರಿ, ಟ್ರೆಂಡ್ ಗೋಸ್ಕರ ಅಪರಿಚಿತ ಆ್ಯಪ್ ಗಳಿಗೆ ಫೋಟೋ ಅಪ್&zwnj;ಲೋಡ್ ಮಾಡುವ ಮುನ್ನ ಎಚ್ಚರ ವಹಿಸಿ. ಮೊಬೈಲ್ ಗ್ಯಾಲರಿ ಅನುಮತಿಯನ್ನ ಪಡೆದುಕೊಂಡು ವೈಯುಕ್ತಿಕ ಮಾಹಿತಿ ಮತ್ತು ದಾಖಲೆ ಕದಿಯುವ ಸಾಧ್ಯತೆಗಳು ಇದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಬಳಕೆದಾರರು ತಮಗೆ ಅರಿವೇ ಇಲ್ಲದಂತೆ ನೀಡುತ್ತಿರುವ ಕೆಲವು ಅನುಮತಿಗಳು ನೆಟ್ ಬ್ಯಾಂಕಿಂಗ್ ಅಪ್ಗಳ ನಿಯಂತ್ರಣಕ್ಕೆ ಸೈಬರ್ ಖದೀಮರಿಗೆ ಅನುಕೂಲವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಬಳಕೆದಾರರು ಅಪ್&zwnj;ಲೋಡ್ ಮಾಡಿದ ವೈಯುಕ್ತಿಕ ಫೋಟೋಗಳನ್ನು ಡೀಪ್ ಫೇಕ್ ಮಾಡಿ ತಂತ್ರಜ್ಞಾನದೊಂದಿಗೆ ಬದಲಾವಣೆ ಮಾಡಿ, ಅವರ ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕುವ ಸಾಧ್ಯತೆಗಳು ಇದೆ.&lt;/p&gt;&lt;p&gt;ಇಂತಹ ಯಾವುದೇ ಅನುಮಾಸ್ಪದ ಲಿಂಕ್&zwnj;ಗಳು ಕಂಡು ಬಂದರೆ ಅಥವಾ ಯಾವುದೇ ಸಮಸ್ಯೆ, ವಂಚನೆಗಳು ಆದರೆ ಕೂಡಲೇ ಸೈಬರ್ ಹೆಲ್ಪ್ ಲೈನ್ ಸಂಖ್ಯೆ 1930ಗೆ ಕರೆ ಮಾಡಲು ಮನವಿ ಕರ್ನಾಟಕ ಪೊಲೀಸರು ಮನವಿ ಮಾಡಿದ್ದಾರೆ. ಅನಗತ್ಯ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅನಧಿಕೃತ ಅಪ್&zwnj;ಗಳನ್ನು ಮೊಬೈಲ್&zwnj;ನಲ್ಲಿ ಇನ್&zwnj;ಸ್ಟಾಲ್ ಮಾಡಬೇಡಿ. ಆ ಮೂಲಕ ನೀವೇ ಸೈಬರ್ ಕಳ್ಳರಿಗೆ ಸುಲಭ ದಾರಿ ಮಾಡಿಕೊಡಬೇಡಿ. ಟ್ರೆಂಡ್ ಗಿಂತ ಸುರಕ್ಷತೆ ಮುಖ್ಯ- ಎಚ್ಚರಿಕೆ ವಹಿಸಿ ಸುರಕ್ಷಿತವಾಗಿರಿ ಎಂಬ ಸಂದೇಶವನ್ನು ನೀಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/1980s-ai-photo-trend-karnataka-police-issue-warning-to-the-public-sns/articleshow-ggpggy7"/>
        </item>
        <item>
            <title><![CDATA[ದುಡ್ಡು ದುಡ್ಡು,  ದೇಶದ ಟಾಪ್‌ 5 ಶ್ರೀಮಂತ ನಗರಗಳಲ್ಲಿ ನಮ್ಮ ಬೆಂಗಳೂರಿಗೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/bengaluru-urban/what-rank-does-bengaluru-hold-among-the-country-is-top-5-wealthiest-cities-and-india-richest-citygkn/articleshow-io2dse5</link>
            <guid isPermaLink="true">https://kannada.asianetnews.com/bengaluru-urban/what-rank-does-bengaluru-hold-among-the-country-is-top-5-wealthiest-cities-and-india-richest-citygkn/articleshow-io2dse5</guid>
            <pubDate>Sat, 12 Sep 2026 14:16:49 +0530</pubDate>
            <description><![CDATA[&lt;p&gt;ದೇಶದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸಿಟಿ ಯಾವುದು? ನಿಮಗೆ ಗೊತ್ತಾ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ ಎಂದು? ಈ ಕುರಿತ ಕಂಪ್ಲೀಟ್&zwnj; ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2acr3d2y9jxt153jtcqae6a,imgname-richest-city-in-india-1789202795937.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತ ಕೂಡ ಒಂದು. ಅದಕ್ಕೆ ನಮ್ಮ ಮಹಾನಗರಗಳು ಪ್ರಮುಖ ಪಾತ್ರವಹಿಸುತ್ತವೆ. ಬೆಂಗಳೂರು, ಹೈದರಾಬಾದ್&zwnj;, ಮುಂಬೈ, ದೆಹಲಿ, ಅಹ್ಮದಾಬಾದ್&zwnj; ಸೇರಿದಂತೆ ಪ್ರಮುಖ ನಗರಗಳು ದೇಶದ ಬೆಳವಣಿಗೆಗೆ ಅಮೂಲ್ಯ ಕೊಡುಗೆಗಳನ್ನ ನೀಡುತ್ತಿವೆ. ನಿಮಗೆ ದೇಶದ ಯಾವ ನಗರವು ಆದಾಯ ಮತ್ತು ಸಂಪತ್ತಿನ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಗೊತ್ತಾ? ಇತ್ತೀಚೆಗೆ ಜಿಡಿಪಿ ದತ್ತಾಂಶದ ಮಾಹಿತಿ ಪ್ರಕಾರ ದೇಶದ ಮಹಾನಗರಗಳ ಕೊಡುಗೆ ಇಲ್ಲಿದೆ.&lt;/p&gt;&lt;h2&gt;&lt;strong&gt;ಮುಂಬೈ ಕೊಡುಗೆ ಏನು?&lt;/strong&gt;&lt;/h2&gt;&lt;p&gt;ಅತ್ಯಂತ ಶ್ರೀಮಂತ ಮತ್ತು ಆದಾಯದ ದೃಷ್ಟಿಯಿಂದ ಮುಂಬೈ ಮೊದಲ ಸ್ಥಾನದಲ್ಲಿದೆ. ಹಣಕಾಸು ವರ್ಷದ ಅಂಕಿ-ಅಂಶಗಳ ಪ್ರಕಾರ.. ಮುಂಬೈನ GDP ಸುಮಾರು $310 ಬಿಲಿಯನ್ ಅಂದರೆ ಸರಿಸುಮಾರು ₹25 ಲಕ್ಷ ಕೋಟಿ. ಅತಿದೊಡ್ಡ ಷೇರು ವಿನಿಮಯ ಕೇಂದ್ರ ಇರೋದು ಇದೇ ಮುಂಬೈನಲ್ಲಿ. ಈ ಎಲ್ಲಾ ಕಾರಣಗಳಿಂದ ಮುಂಬೈ ನಗರವನ್ನು ಭಾರತದ ಆರ್ಥಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಬಾಲಿವುಡ್, ಬಂದರುಗಳಲ್ಲಿ ನಡೆಯುವ ದಾಖಲೆಯ ವ್ಯವಹಾರಗಳು ಆದಾಯಕ್ಕೆ ಪ್ರಮುಖ ಕೊಡುಗೆಗಳನ್ನ ನೀಡುತ್ತವೆ.&lt;/p&gt;&lt;h2&gt;&lt;strong&gt;ದೆಹಲಿ NCR&lt;/strong&gt;&lt;/h2&gt;&lt;p&gt;ಇನ್ನು, ಎರಡನೇ ಪಟ್ಟಿಯಲ್ಲಿ ದೇಶದ ರಾಜಧಾನಿ ದೆಹಲಿ ಮತ್ತು ಅದರ NCR ಪ್ರದೇಶಗಳು ಬರುತ್ತವೆ. ದೆಹಲಿ-NCR ಸುಮಾರು 293.6 ಬಿಲಿಯನ್ ಡಾಲರ್ ಜಿಡಿಪಿ ಹೊಂದಿದೆ. ದೆಹಲಿ ದೇಶದ ರಾಜಕೀಯ ಕೇಂದ್ರ ಮಾತ್ರವಲ್ಲದೇ, ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದೆ. ಅಲ್ಲೇ ಸಮೀಪವಿರುವ ಗುರುಗ್ರಾಮ್ ವಿಶ್ವದ ಕೆಲವು ದೊಡ್ಡ ಕಾರ್ಪೊರೇಟ್ ಕಂಪನಿಗಳ ಕಚೇರಿ ಹೊಂದಿದೆ. ಆದರೆ ನೋಯ್ಡಾ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿದೆ.&lt;/p&gt;&lt;h2&gt;&lt;strong&gt;ಕೋಲ್ಕತ್ತಾ&lt;/strong&gt;&lt;/h2&gt;&lt;p&gt;ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ದೇಶದ ಶ್ರೀಮಂತ ನಗರಗಳಲ್ಲಿ ಮೂರನೇ ಸ್ಥಾವನ್ನು ಪಡೆದುಕೊಂಡಿದೆ. ಕೋಲ್ಕತ್ತಾದ ಒಟ್ಟು GDP ಸುಮಾರು $150 ಬಿಲಿಯನ್ ಎಂದು ಹೇಳಲಾಗಿದೆ. ಕೋಲ್ಕತ್ತಾವನ್ನು ಈಶಾನ್ಯ ಭಾರತದ ಅತಿದೊಡ್ಡ ವಾಣಿಜ್ಯ ಕೇಂದ್ರ ಎಂದು ಹೇಳುತ್ತಾರೆ. ಸೆಣಬಿನ ಉದ್ಯಮ, ಚಹಾ ವ್ಯಾಪಾರ, ಬಂದರುಗಳು, ಬ್ಯಾಂಕಿಂಗ್ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಿಂದಾಗಿ ಬಲವಾದ ಆರ್ಥಿಕ ಶಕ್ತಿ ಕೇಂದ್ರವಾಗಿ ಇಂದಿಗೂ ಉಳಿದುಕೊಂಡಿದೆ.&lt;/p&gt;&lt;h2&gt;&lt;strong&gt;ಬೆಂಗಳೂರು&lt;/strong&gt;&lt;/h2&gt;&lt;p&gt;ಕನ್ನಡಿಗರ ರಾಜಧಾನಿ ಬೆಂಗಳೂರು ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬೆಂಗಳೂರು ಸುಮಾರು 110 ಬಿಲಿಯನ್ ಡಾಲರ್&zwnj; ಜಿಡಿಪಿ ಹೊಂದಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಮತ್ತು ಸ್ಟಾರ್ಟ್ಅಪ್ ರಾಜಧಾನಿ ಅಂತಲೂ ಕರೆಯಲಾಗುತ್ತದೆ. ವಿಶ್ವದ ದೈತ್ಯ ಐಟಿ ಮತ್ತು ಸಾಫ್ಟ್&zwnj;ವೇರ್ ಕಂಪನಿಗಳು, ಏರೋಸ್ಪೇಸ್ ಉದ್ಯಮ ಮತ್ತು ಬಯೋಟೆಕ್ ಸಂಸ್ಥೆಗಳು ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತವೆ. ಬೆಂಗಳೂರು ಹೆಚ್ಚು ಟೆಕ್ ಪ್ರೊಫೆಷನಲಿಸ್ಟ್&zwnj; ಮತ್ತು ಹೊಸ ಮಿಲಿಯನೇರ್&zwnj;ಗಳನ್ನ ಹುಟ್ಟು ಹಾಕುತ್ತದೆ.&lt;/p&gt;&lt;h2&gt;&lt;strong&gt;ಚೆನ್ನೈ&lt;/strong&gt;&lt;/h2&gt;&lt;p&gt;ದಕ್ಷಿಣ ಭಾರತದ ಪ್ರಮುಖ ಮಹಾನಗರ ಚೆನ್ನೈ. ಈ ಪಟ್ಟಿಯಲ್ಲಿ ಅದು 5ನೇ ಸ್ಥಾನವನ್ನು ಪಡೆದುಕೊಂಡಿದೆ. ಅಂದಾಜು $90 ರಿಂದ $100 ಬಿಲಿಯನ್ ಜಿಡಿಪಿಯೊಂದಿಗೆ, ಚೆನ್ನೈ ದೇಶದ ಅತಿದೊಡ್ಡ ಆಟೋಮೊಬೈಲ್ ಉದ್ಯಮಕ್ಕೆ ನೆಲೆಯಾಗಿದೆ. ಚೆನ್ನೈ ಬಂದರಿನ ಮೂಲಕ ಜಾಗತಿಕ ವ್ಯಾಪಾರ ಮತ್ತು ವೇಗವಾಗಿ ಬೆಳೆಯುತ್ತಿರುವ ಜವಳಿ ಮತ್ತು ಜವಳಿ ಕ್ಷೇತ್ರಗಳು ದೇಶಕ್ಕೆ ಪ್ರಮುಖ ಕೊಡುಗೆಗಳನ್ನು ನೀಡುತ್ತಿವೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/what-rank-does-bengaluru-hold-among-the-country-is-top-5-wealthiest-cities-and-india-richest-citygkn/articleshow-io2dse5"/>
        </item>
        <item>
            <title><![CDATA[ಮಸೀದಿ ಮುಂದೆ ಪಟಾಕಿ ಹೊಡೆದ್ರೆ, ಮೆರವಣಿಗೆ ಮಾಡಿದ್ರೆ,  ಗ್ರಹಚಾರ ಬಿಡಿಸ್ತೀನಿ!: ಟಿ.ನರಸೀಪುರ ಇನ್ಸ್‌ಪೆಕ್ಟರ್]]></title>
            <link>https://kannada.asianetnews.com/mysore/mysuru-t-narsipur-ganesh-procession-row-police-warning-sparks-controversy-mp-yaduveer-slams-govt-gdp/articleshow-gdlk67b</link>
            <guid isPermaLink="true">https://kannada.asianetnews.com/mysore/mysuru-t-narsipur-ganesh-procession-row-police-warning-sparks-controversy-mp-yaduveer-slams-govt-gdp/articleshow-gdlk67b</guid>
            <pubDate>Sat, 12 Sep 2026 13:03:32 +0530</pubDate>
            <description><![CDATA[ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಯನ್ನು ಮಸೀದಿ ಮುಂದೆ ನಡೆಸದಂತೆ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ನಿರ್ಬಂಧಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸದ ಯದುವೀರ್ ಒಡೆಯರ್ ಅವರು ಸರ್ಕಾರದ ನೀತಿಯನ್ನು ಖಂಡಿಸಿ, ಇದು ಹಿಂದೂ ಹಬ್ಬಗಳ ಆಚರಣೆಯ ಹಕ್ಕನ್ನು ಕಸಿದುಕೊಳ್ಳುವ ಯತ್ನ ಎಂದು ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a823ctdpqgg6c6qnjmkm1w,imgname-t-narsipur-ganesh-procession-row-1789197880730.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು &lt;/strong&gt;ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆಯ ನಿಯಮಗಳಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮಸೀದಿ ಮುಂದೆ ಮೆರವಣಿಗೆ ಮಾಡುವಂತಿಲ್ಲ ಮತ್ತು ಪಠಾಕಿ ಹೊಡೆಯುವಂತಿಲ್ಲ ಎಂದು ತಾಕೀತು ಮಾಡಿದ್ದು, ಗಲ್ಲಿಯ ಬೀದಿಗೊಂದೊಂದು ಗಣೇಶನನ್ನು ಕೂರಿಸುವಾಗ ಮಸೀದಿ ಮುಂದೆತೇ ಹೋಗಬೇಕಾದ ಅನಿವಾರ್ಯತೆ ಇದೆ. ಗಣೇಶನನ್ನು ವಿಸರ್ಜನೆಗೆ ಆಕಾಶ ಮಾರ್ಗದಲ್ಲಿ ತೆಗೆದುಕೊಂಡು ಹೋಗಬೇಕೆ ಎಂದು ಸಾರ್ವಜನಿಕರಿ ಕಿಡಿಕಾರಿದ್ದಾರೆ. ಪ್ರಕರಣ ಸಂಬಂಧ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯೆ ನೀಡಿ ಕಿಡಿಕಾರಿದ್ದಾರೆ.&lt;/p&gt;&lt;h2&gt;ಇನ್ಸ್ಪೆಕ್ಟರ್ ಧನಂಜಯ ನೀಡಿದ ಎಚ್ಚರಿಕೆ&lt;/h2&gt;&lt;p&gt;ಟಿ. ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆ ಮತ್ತು ಮೂರ್ತಿ ವಿಸರ್ಜನೆಗೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ, ಇನ್ಸ್ಪೆಕ್ಟರ್ ಧನಂಜಯ ಅವರು ಆಯೋಜಕರು ಹಾಗೂ ಯುವಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.&lt;/p&gt;&lt;p&gt;ಗಣೇಶ ಮೆರವಣಿಗೆಯನ್ನು ಪೊಲೀಸರು ನಿಗದಿಪಡಿಸಿದ ಮಾರ್ಗದಲ್ಲೇ ನಡೆಸಬೇಕು. ಟಿ. ನರಸೀಪುರ ಲಿಂಕ್ ರಸ್ತೆಯಲ್ಲಿ ಮೆರವಣಿಗೆ ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ. ಮಸೀದಿಗಳ ಮುಂಭಾಗದಲ್ಲಿ ಮೆರವಣಿಗೆ ನಡೆಸುವುದಾಗಲಿ ಅಥವಾ ಪಟಾಕಿ ಸಿಡಿಸುವುದಾಗಲಿ ಮಾಡಬಾರದು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಎಚ್ಚರಿಸಿದ್ದಾರೆ. ಒಂದು ವೇಳೆ ಅನುಮತಿ ಇಲ್ಲದೆ ಮೆರವಣಿಗೆ ಮಾಡಿದ್ದು ನನ್ನ ಗಮನಕ್ಕೆ ಬಂದ್ರೆ ಹೇಳಲ್ಲ ಮಾಡಿ ತೋರಿಸ್ತೀನಿ ಎಂದು ಹಿಂದೂ ಯುವಕರನ್ನು ಗುಂಪು ಸೇರಿಸಿಕೊಂಡು ಪೊಲೀಸಪ್ಪ ವಾರ್ನಿಂಗ್ ಕೊಟ್ಟಿದ್ದು, ಈ ಬಾರಿ ಮಸೀದಿ ಮುಂದೆ ಪಟಾಕಿ ಹೊಡೆದ್ರೆ ಗ್ರಹಚಾರ ಬಿಡಿಸ್ತೇನೆ. ಅಲ್ಲಿ ನಾವು ಭದ್ರತೆ ಹಾಕಿರ್ತಿವಿ. ನೀವು ಮೆರವಣಿಗೆ ಮಾಡುವ ರೂಟ್ ಕೊಟ್ಟು ಗಣಪತಿ ಕೂರಿಸಬೇಕು ಎಂಬ ಎಚ್ಚರಿಕೆ ನೀಡಿದ್ದು, ಈ ಶಾಂತಿ ಸಭೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;h2&gt;ಸರ್ಕಾರದ ವಿರುದ್ಧ ಸಂಸದ ಯದುವೀರ್ ಒಡೆಯರ್ ವಾಗ್ದಾಳಿ&lt;/h2&gt;&lt;p&gt;ಟಿ. ನರಸೀಪುರದಲ್ಲಿ ಪೊಲೀಸ್ ಇಲಾಖೆ ವಿಧಿಸಿರುವ ಷರತ್ತುಗಳನ್ನು ಖಂಡಿಸಿರುವ ಮೈಸೂರು ಸಂಸದ ಯದುವೀರ್ ಒಡೆಯರ್, ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಹಿಂದೂ ಹಬ್ಬಗಳ ಆಚರಣೆಗೆ ಮತ್ತು ಮೆರವಣಿಗೆಗಳಿಗೆ ಪ್ರತಿ ಬಾರಿಯೂ ಕಠಿಣ ಷರತ್ತುಗಳನ್ನು ವಿಧಿಸುವುದು ಈ ಸರ್ಕಾರದ ಅಭ್ಯಾಸವಾಗಿದೆ. ಕಳೆದ ಮೂರು ವರ್ಷಗಳಿಂದಲೂ ಇದೇ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.&lt;/p&gt;&lt;p&gt;ಮಸೀದಿ ಅಥವಾ ದೇವಸ್ಥಾನಗಳಿರುವ ರಸ್ತೆಗಳಲ್ಲಿ ಮೆರವಣಿಗೆ ಹೋಗಬಾರದು ಎಂದು ತಡೆಯುವುದು ಸೂಕ್ತವಲ್ಲ. ಸಾರ್ವಜನಿಕರಿಗೆ ಸೇರಿದ ಎಲ್ಲಾ ರಸ್ತೆಗಳಲ್ಲೂ ಮೆರವಣಿಗೆ ನಡೆಸುವ ಹಕ್ಕು ಪ್ರಜೆಗಳಿಗಿದೆ. ಇಂತಹ ನಿರ್ಬಂಧಗಳು ಸಮಾಜದಲ್ಲಿ ಅನಗತ್ಯ ವಿಭಜನೆಯ ಭಾವನೆಯನ್ನು ಬಿತ್ತುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಚಾಮುಂಡಿ ಬೆಟ್ಟದ ವಿಚಾರದಲ್ಲೂ ಸರ್ಕಾರ ಇಂತಹದೇ ನಿಲುವು ತಳೆದಿತ್ತು. ಧಾರ್ಮಿಕ ಚೌಕಟ್ಟಿನ ಆಚರಣೆಗಳಿಗೆ ಜಾತ್ಯತೀತತೆಯ ನೆಪದಲ್ಲಿ ಅಡೆತಡೆ ಉಂಟುಮಾಡಲಾಗುತ್ತಿದೆ ಎಂದು ಸಂಸದರು ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಈ ಘಟನೆಯು ಸ್ಥಳೀಯವಾಗಿ ಹಾಗೂ ರಾಜಕೀಯ ವಲಯದಲ್ಲಿ ಗಣೇಶೋತ್ಸವ ಮೆರವಣಿಗೆಯ ಮಾರ್ಗ ಸೂಕ್ಷ್ಮತೆ ಮತ್ತು ಸಾರ್ವಜನಿಕ ಆಚರಣೆಗಳ ಹಕ್ಕುಗಳ ಕುರಿತು ಪ್ರಮುಖ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/mysore/mysuru-t-narsipur-ganesh-procession-row-police-warning-sparks-controversy-mp-yaduveer-slams-govt-gdp/articleshow-gdlk67b"/>
        </item>
        <item>
            <title><![CDATA[Yettinahole Water Project: 11 ವರ್ಷ ಬಳಿಕ ಎತ್ತಿನಹೊಳೆ ಯೋಜನೆಗೆ ಟ್ರಯಲ್ ರನ್! ಅಕ್ಟೋಬರ್‌ನಲ್ಲಿ ತುಮಕೂರಿಗೆ ನೀರು]]></title>
            <link>https://kannada.asianetnews.com/karnataka-districts/yettinahole-water-project-trial-run-after-11-years-water-to-reach-tumakuru-in-october-sns/articleshow-5mlubhq</link>
            <guid isPermaLink="true">https://kannada.asianetnews.com/karnataka-districts/yettinahole-water-project-trial-run-after-11-years-water-to-reach-tumakuru-in-october-sns/articleshow-5mlubhq</guid>
            <pubDate>Sat, 12 Sep 2026 13:03:27 +0530</pubDate>
            <description><![CDATA[ಸುಮಾರು 11 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಯಲುಸೀಮೆಯ ಎತ್ತಿನಹೊಳೆ ಯೋಜನೆ ಅಂತಿಮವಾಗಿ ಪರೀಕ್ಷಾರ್ಥ ಸಂಚಾರ ಹಂತಕ್ಕೆ ತಲುಪಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ತುಮಕೂರಿಗೆ ನೀರು ಹರಿಸಿ ಟ್ರಯಲ್ ರನ್ ನಡೆಸಲು ಸಿದ್ಧತೆ ನಡೆದಿದ್ದು, ಇದು ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಯೋಜನೆಯಿಂದಾಗಿ ಈಗಾಗಲೇ ಚಿಕ್ಕಮಗಳೂರಿನ ಹಲವು ಕೆರೆಗಳು ತುಂಬಿ, ರೈತರಲ್ಲಿ ಆಶಾಭಾವನೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a873ma5sjmmx9mk2xq4sjf,imgname-yettinahole-water-project-1789198044810.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬಯಲುಸೀಮೆಯ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಕೊನೆಗೂ ಪರೀಕ್ಷಾ ಹಂತ ತಲುಪಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ ಟ್ರಯಲ್ ರನ್ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಸುಮಾರು 11 ವರ್ಷಗಳಿಂದ ನಡೆಯುತ್ತಿರುವ ಯೋಜನೆಯ ಕಾಮಗಾರಿಯ ಬಳಿಕ, ಒಂದು ತಿಂಗಳ ಕಾಲ ನಾಲೆಗೆ ನೀರು ಹರಿಸಿ ನೀರಿನ ಸರಾಗ ಹರಿವನ್ನು ಇಂಜಿನಿಯರ್&zwnj;ಗಳು ಪರೀಕ್ಷಿಸಲಿದ್ದಾರೆ.&lt;/p&gt;&lt;h2&gt;ಎತ್ತಿನಹೊಳೆ ಯೋಜನೆ: 11 ವರ್ಷಗಳ ಕಾಯುವಿಕೆಗೆ ಕೊನೆ?&lt;/h2&gt;&lt;p&gt;ಈ ಬಗ್ಗೆ ಸುದ್ದಿಗೋಷ್ಠಿ ಮಾಹಿತಿ ನೀಡಿರುವ ಸಚಿವ ಜಿ ಪರಮೇಶ್ವರ್ ಅವರು, ಎತ್ತಿನಹೊಳೆ ಯೋಜನೆಯನ್ನು 2026 ಅಥವಾ 2027ರ ಆರಂಭದ ವೇಳೆಗೆ ಮುಕ್ತಾಯ ಮಾಡುವ ಗುರಿಯನ್ನು ಹೊಂದಿದ್ದೇವು. ಆದರೆ ಕೇಂದ್ರ ಸರ್ಕಾರ ಹಾಸನ ಜಿಲ್ಲೆಯಲ್ಲಿ ಸುಮಾರು 500 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡಬೇಕಿತ್ತು. ನಾವು ಬಹಳ ಬಾರಿ ಒತ್ತಡ ಹಾಕಿದ ಬಳಿಕ ಅರಣ್ಯ ಪ್ರದೇಶವನ್ನು ಕ್ಲೀಯರ್ ಮಾಡಿ ಕೊಟ್ಟಿದ್ದರು. ಈಗ ಆ 500 ಮೀಟರ್ ಪ್ರದೇಶದಲ್ಲಿ ಆಗಬೇಕಿದ್ದ ಕೆಲಸ ಸಂಪೂರ್ಣಗೊಂಡಿದೆ ಎಂದು ತಿಳಿಸಿದರು.&lt;/p&gt;&lt;h2&gt;ಅಕ್ಟೋಬರ್&zwnj;ನಲ್ಲಿ ತುಮಕೂರಿಗೆ ಎತ್ತಿನಹೊಳೆ ನೀರು&lt;/h2&gt;&lt;p&gt;ಹಾಸನದಲ್ಲಿ ಕಾಮಗಾರಿ ಪೂರ್ಣಗೊಂಡ ಬಳಿಕ ಅರಸೀಕೆರೆಗೆ ನೀರು ಬರುತ್ತದೆ. ಅಲ್ಲಿಂದ ನೀರು ತುಮಕೂರಿಗೆ ಬರಬೇಕು. ಆದರೆ ತುಮಕೂರಿನಲ್ಲಿ ಅಲ್ಲಲ್ಲಿ ಕೆಲವು ಅಡಚಣೆಗಳು ಇತ್ತು. ಆದರೆ ಈಗ ಆ ಎಲ್ಲಾ ಕೆಲಸಗಳು ಪೂರ್ಣಗೊಂಡಿದೆ. ಈ ವರ್ಷದ ಅಕ್ಟೋಬರ್&zwnj;ನಲ್ಲಿ ಅಂದರೆ ಮುಂದಿನ ತಿಂಗಳ ಕೊನೆಯ ಒಳಗೆ ತುಮಕೂರಿಗೆ ನೀರು ಹರಿಸಲಾಗುತ್ತದೆ. ಇದು ಕೇವಲ ಟ್ರಯಲ್ ರನ್ ಆಗಿದ್ದು, ಶೇಖರಣೆ ಮಾಡಿರುವ ನೀರಿನ್ನು ಮಾತ್ರ ಇಲ್ಲಿಗೆ ಹರಿಸಿ ಪರೀಕ್ಷೆ ನಡೆಸಲಾಗುತ್ತದೆ. ಏಕೆಂದರೆ ನಮಗೆ ಅಕ್ಟೋಬರ್&zwnj;ನಲ್ಲಿ ಮಳೆ ಬರುವುದಿಲ್ಲ. ಶೇಖರಣೆ ಮಾಡಿದ ನೀರನ್ನು ಮಾತ್ರ ಟ್ರಯಲ್ ರನ್&zwnj;ಗಾಗಿ ಹರಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಎತ್ತಿಕಹೊಳೆ ಯೋಜನೆ ಆರಂಭವಾಗಿ 11 ವರ್ಷಗಳು ಕಳೆದ ಬಳಿಕ ಯೋಜನೆ ಪ್ರಯೋಗಾತ್ಮಕ ನೀರಿನ ಹರಿವು ಮಾಡುವ ಹಂತಕ್ಕೆ ಬಂದಿದೆ. ಟ್ರಯಲ್&zwnj; ರನ್ ವೇಳೆ ಎಂಜಿನಯರ್ ಗಳು ನೀರಿನ ಸರಾಗ ಹರಿವಿನ ಬಗ್ಗೆ ಪರೀಕ್ಷೆಯನ್ನು ನಡೆಸಲಿದ್ದಾರೆ. ಇದರೊಂದಿಗೆ ತುಮಕೂರಿಗೆ ಎತ್ತಿನಹೊಳೆ ನೀರು ಹರಿಯುವುದು ಬಹುತೇಕ ಖಚಿತವಾಗಿದೆ.&lt;/p&gt;&lt;h2&gt;ಕೆರೆಗೆ ಬಾಗಿನ ಅರ್ಪಿಸಿದ ಶಾಸಕ&lt;/h2&gt;&lt;p&gt;ಹಿಂದಿನ ಸಿಎಂ ಸಿದ್ದರಾಮಯ್ಯ ಅವರು 2014ರಲ್ಲಿ ಮಾರ್ಚ್&zwnj;ನಲ್ಲಿ ಯೋಜನೆಗೆ ಚಾಲನೆಯನ್ನು ನೀಡಿದ್ದರು. ಇನ್ನು, ಎತ್ತಿನಹೊಳೆ ಯೋಜನೆಯ ನೀರಿನಿಂದ ಚಿಕ್ಕಮಗಳೂರು ತಾಲೂಕಿನ ಲಕ್ಯಾದ ಬೆಳವಾಡಿ ಕೆರೆ ತುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಶಾಸಕ ತಿಮ್ಮಪ್ಪಯ ಅವರು ಗುರುವಾರ ಕೆರೆಗೆ ಬಾಗಿನ ಅರ್ಪಿಸಿದ್ದರು. ಈ ವೇಳೆ ಮಾತನಾಡಿದ್ದ ಶಾಸಕರು, ಎತ್ತಿನಹೊಳೆ ಯೋಜನೆಗೆ ಸರ್ಕಾರ ಆದ್ಯತೆ ನೀಡಿದ ಪರಿಣಾಮ ಈಗ ಹಳೇಬೀಡು, ಬೆಳವಾಡಿ, ಮಾಚೇನಹಳ್ಳಿ, ಕುರುಬರಹಳ್ಳಿ, ದೇವನೂರು ಸೇರಿದಂತೆ ಹಲವು ಕೆರೆಗಳು ತುಂಬಿದೆ. ಇದರಿಂದ ಈ ಭಾಗದ ಹಲವು ವರ್ಷಗಳ ನೀರಿನ ಸಮಸ್ಯೆ ದೂರವಾಗಿದೆ. ರೈತರ ಜೀವನದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದು ಹೇಳಿದ್ದರು.&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/yettinahole-water-project-trial-run-after-11-years-water-to-reach-tumakuru-in-october-sns/articleshow-5mlubhq"/>
        </item>
        <item>
            <title><![CDATA[ಕೆಪಿಎಸ್‌ಸಿ ಮತ್ತೊಂದು ಹಗರಣ ಬಯಲಿಗೆ: ಶಿವಶಂಕರಪ್ಪ ಸಾಹುಕಾರ್, ಜ್ಞಾನೇಂದ್ರಕುಮಾರ್‌ಗೆ ಮತ್ತೊಂದು ಸಂಕಷ್ಟ!]]></title>
            <link>https://kannada.asianetnews.com/karnataka-districts/kpsc-recruitment-scam-allegations-candidates-demand-probe-into-saad-exam-results-shivashankarappa-sahukar-case-gdp/articleshow-se9agil</link>
            <guid isPermaLink="true">https://kannada.asianetnews.com/karnataka-districts/kpsc-recruitment-scam-allegations-candidates-demand-probe-into-saad-exam-results-shivashankarappa-sahukar-case-gdp/articleshow-se9agil</guid>
            <pubDate>Sat, 12 Sep 2026 12:18:04 +0530</pubDate>
            <description><![CDATA[ಕರ್ನಾಟಕ ಲೋಕಸೇವಾ ಆಯೋಗದ (KPSC) ಸಹಾಯಕ ನಿಯಂತ್ರಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಫಲಿತಾಂಶ ವಿಳಂಬ, ಅಪೂರ್ಣ ಅಂಕಗಳ ವಿವರ ಮತ್ತು ಶಂಕಾಸ್ಪದ ರ&zwj;್ಯಾಂಕಿಂಗ್ ಸರಣಿಯ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ. ಇದೇ ವೇಳೆ, ಮತ್ತೊಂದು ಕೆಪಿಎಸ್&zwnj;ಸಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx6f30f9v04b846swtjxw1vh,imgname-kpsc-chairman-shivashankarappa-sahukar-1783702323689.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನಡೆದ ಕರ್ನಾಟಕ ರಾಜ್ಯ ಲೆಕ್ಕ ಮತ್ತು ಪರಿಶೋಧನಾ ಇಲಾಖೆಯ ಸಹಾಯಕ ನಿಯಂತ್ರಕರ (AC) ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಜ್ಞಾನೇಂದ್ರಕುಮಾರ್ ಅವರ ಅವಧಿಯಲ್ಲಿ ನಡೆದ ಈ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯನ್ನು ಬೆಳಗಾವಿ ಮೂಲದ ಪರೀಕ್ಷಾರ್ಥಿ ಚೇತನ ಚೋಪಡೆ ಸೇರಿದಂತೆ ಹಲವು ಅಭ್ಯರ್ಥಿಗಳು ಪ್ರಶ್ನಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.&lt;/p&gt;&lt;h2&gt;ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಲೋಪಗಳ ಆರೋಪ&lt;/h2&gt;&lt;p&gt;2025ರ ಏಪ್ರಿಲ್&zwnj;ನಲ್ಲಿ ಎಸಿ-ಎಸ್&zwnj;ಎಎಡಿ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಆದರೆ, ಸುಮಾರು 17 ತಿಂಗಳುಗಳ ಕಾಲ ಫಲಿತಾಂಶವನ್ನು ವಿಳಂಬಗೊಳಿಸಿ, ಇತ್ತೀಚೆಗೆ ಸೆಪ್ಟೆಂಬರ್ 3ರಂದು 1:3 ಪ್ರಮಾಣದ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಹಲವು ಅಕ್ರಮಗಳ ವಾಸನೆ ಹೊಡೆಯುತ್ತಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.&lt;/p&gt;&lt;p&gt;&lt;strong&gt;ಅಂಕ ಹಾಗೂ ಕಟ್-ಆಫ್ ವಿವರ ಅಪೂರ್ಣ: &lt;/strong&gt;ಪ್ರಿಲಿಮ್ಸ್ ಪರೀಕ್ಷೆಯ ಕಟ್-ಆಫ್ ಅಂಕಗಳು ಮತ್ತು ವರ್ಗವಾರು ವಿವರಗಳನ್ನು ಪ್ರಕಟಿಸಿಲ್ಲ. ಜೊತೆಗೆ ಆಯ್ಕೆಯಾಗದ ಅಭ್ಯರ್ಥಿಗಳ ಅಂಕಗಳು ಮತ್ತು ವರ್ಗವಾರು ಮಾಹಿತಿಗಳನ್ನು ಬಹಿರಂಗಪಡಿಸದೆ, ಕೇವಲ ಆಯ್ಕೆಯಾದವರ ವಿವರಗಳನ್ನು ಮಾತ್ರ ಪ್ರಕಟಿಸಲಾಗಿದೆ.&lt;/p&gt;&lt;p&gt;&lt;strong&gt;ಶಂಕಾಸ್ಪದ ಪತ್ರಿಕಾ ಪ್ರಕಟಣೆ&lt;/strong&gt;: ಮೌಲ್ಯಮಾಪನ ಮುಗಿದು ಎರಡು ತಿಂಗಳು ಕಳೆದ ನಂತರ, ಅಂದರೆ ಸೆಪ್ಟೆಂಬರ್ 9ರಂದು &quot;ಅಭ್ಯರ್ಥಿಯೊಬ್ಬರು ನಿಯಮ ಉಲ್ಲಂಘಿಸಿದ್ದಾರೆ&quot; ಎಂದು ಕೆಪಿಎಸ್&zwnj;ಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.&lt;/p&gt;&lt;p&gt;&lt;strong&gt;ರ&zwj;್ಯಾಂಕಿಂಗ್ ಸರಣಿಯಲ್ಲಿ ವ್ಯತ್ಯಾಸ:&lt;/strong&gt; ಆಯ್ಕೆಯಾದವರ ಪಟ್ಟಿಯಲ್ಲಿ 40ಕ್ಕೂ ಹೆಚ್ಚು ಅಭ್ಯರ್ಥಿಗಳ ರ&zwj;್ಯಾಂಕ್ ಸೀರಿಯಲ್ ನಂಬರ್ ಸರಣಿ ಒಂದೇ ರೀತಿಯಲ್ಲಿರುವುದು ದೊಡ್ಡ ಮಟ್ಟದ ಅಕ್ರಮದ ಶಂಕೆಗೆ ಕಾರಣವಾಗಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಮೀಸಲಾತಿ ನಿಯಮಗಳ ಪಾಲನೆ ಹಾಗೂ ಫಲಿತಾಂಶ ವಿಳಂಬದ ಕುರಿತು ಸ್ವತಂತ್ರ ತನಿಖೆಯಾಗಬೇಕು ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಈ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಅಭ್ಯರ್ಥಿ ಚೇತನ್ ಚೋಪಡೆ ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಇನ್ನೊಂದೆಡೆ ಕೆಪಿಎಸ್&zwnj;ಸಿ ಹಗರಣ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಿ ಸುದೀರ್ಘ ವಿಚಾರಣೆ&lt;/h2&gt;&lt;p&gt;ಇದೇ ವೇಳೆ, ಕೆಪಿಎಸ್&zwnj;ಸಿ ನೇಮಕಾತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಜ್ಞಾನೇಂದ್ರಕುಮಾರ್ ಮತ್ತು ಬಸವರಾಜ್ ಕನ್ನಾಳೆ ಅವರನ್ನು ನ್ಯಾಯಾಲಯದ ಅನುಮತಿ ಪಡೆದು ಇಡಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.&lt;/p&gt;&lt;p&gt;ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸತತ 6 ಗಂಟೆಗಳ ಕಾಲ ನಡೆದಿರುವ ಈ ವಿಚಾರಣೆಯಲ್ಲಿ, ನೇಮಕಾತಿ ಅಕ್ರಮದಲ್ಲಿ ನಡೆದಿದೆಯನ್ನಲಾದ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಮುಖ ದಾಖಲೆ ಹಾಗೂ ಮಾಹಿತಿಗಳನ್ನು ಕಲೆಹಾಕಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇಂದೂ ಕೂಡ ಇಡಿ ಅಧಿಕಾರಿಗಳು ಜೈಲಿಗೆ ತೆರಳಿ ಆರೋಪಿಗಳ ವಿಚಾರಣೆ ನಡೆಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kpsc-recruitment-scam-allegations-candidates-demand-probe-into-saad-exam-results-shivashankarappa-sahukar-case-gdp/articleshow-se9agil"/>
        </item>
        <item>
            <title><![CDATA[BJPಗೆ ಬಿಗ್ ಶಾಕ್! ಮಾಜಿ ಶಾಸಕ ನರೇಂದ್ರ ಬಾಬು ರಾಜೀನಾಮೆ, 10 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ವಾಪಸ್]]></title>
            <link>https://kannada.asianetnews.com/politics/big-shock-for-karnataka-bjp-former-mla-narendrababu-resigns-and-returns-to-congress-sns/articleshow-fffug4v</link>
            <guid isPermaLink="true">https://kannada.asianetnews.com/politics/big-shock-for-karnataka-bjp-former-mla-narendrababu-resigns-and-returns-to-congress-sns/articleshow-fffug4v</guid>
            <pubDate>Sat, 12 Sep 2026 11:56:27 +0530</pubDate>
            <description><![CDATA[ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಅಲ್ಪಸಂಖ್ಯಾತರು, ಒಬಿಸಿಗಳಿಗೆ ನೆಲೆಯಿಲ್ಲ ಮತ್ತು ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿರುವ ಅವರು, ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a4mkgbtd29dc3hybgbw8qk,imgname-narendrababu-1789194292747.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಭಾನುವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ತಂದೆ ಮಕ್ಕಳ ಪಕ್ಷವಾಗಿದೆ. ಅಲ್ಪಸಂಖ್ಯಾತರು, ಒಬಿಸಿಗಳಿಗೆ ನೆಲ ಇಲ್ಲದ ಕಾರಣ ನಾನು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಸೆ.13 ರಂದು ಸಿಎಂ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು.&lt;/p&gt;&lt;h2&gt;ಮಾಜಿ ಶಾಸಕ ನರೇಂದ್ರ ಬಾಬು ರಾಜೀನಾಮೆ, ಕಾಂಗ್ರೆಸ್&zwnj;ಗೆ ವಾಪಸ್&lt;/h2&gt;&lt;p&gt;ಮಹಾನಗರ ಪಾಲಿಕೆ ಸದಸ್ಯನಾಗಿ 3 ಬಾರಿ ಮತ್ತು 2 ಬಾರಿ ಶಾಸಕನಾಗಿ ಕಳೆದ 40 ವರ್ಷಗಳಿಂದ ಸಾರ್ವಜನಿಕರ ಬೆಂಬಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಕಳೆದ 10 ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ನನ್ನನ್ನು ಸಮರ್ಪಿಸಿಕೊಂಡೆ. ಆದರೆ ರಾಜಾಜಿನಗರ ಮತ್ತು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಕಾರ್ಯಕರ್ತರನ್ನು ನನ್ನಿಂದ ದೂರಮಾಡಿದರು. ನನ್ನ ವಿರುದ್ಧ ಪಿತೂರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.&lt;/p&gt;&lt;p&gt;ರಾಜಾಜಿನಗರ ಕ್ಷೇತ್ರದ ಶಾಸಕ ಎಸ್.ಸುರೇಶ್ ಕುಮಾರ್, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಪರ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ನನ್ನನ್ನು ನಿರ್ಲಕ್ಷಿಸಿದರು. ಗೋಪಾಲಯ್ಯ ಸೇರಿದಂತೆ 17 ಮಂದಿ ಶಾಸಕರು ಬಿಜೆಪಿ ಸೇರಿದಾಗ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಉಪ ಚುನಾವಣೆಯಲ್ಲಿ ನೀವು ಸಹಕಾರ ನೀಡಬೇಕೆಂದು ಆಗಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಂಘಟನಾ ಪ್ರಧಾನಕಾರ್ಯದರ್ಶಿ ಬಿ.ಎಲ್.ಸಂತೋಷ್ ನನ್ನನ್ನು ಮನವೊಲಿಸಿದರು. ಪಕ್ಷಕ್ಕಾಗಿ ತ್ಯಾಗ ಮಾಡಿದ ನಂತರ ಜವಾಬ್ದಾರಿ ನೀಡುವ ವಿಚಾರದಲ್ಲಿ ಬಿಜೆಪಿ ನಾಯಕರು ಜಾಣ ಕುರುಡು ವಹಿಸಿದರು. ಕೆಲಸ ಮಾಡುವವರಿಗೆ ಬಿಜೆಪಿ ಪಕ್ಷದಲ್ಲಿ ಬೆಲೆಯಿಲ್ಲ ಎಂದು ಕಿಡಿಕಾರಿದರು.&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/big-shock-for-karnataka-bjp-former-mla-narendrababu-resigns-and-returns-to-congress-sns/articleshow-fffug4v"/>
        </item>
        <item>
            <title><![CDATA[Bengaluru: ಸಾಯುವ ರೋಗಿಗಳನ್ನೇ ಬಂಡವಾಳ ಮಾಡಿಕೊಂಡ ಖದೀರರು: ಎಸ್‌ಐಟಿಯಿಂದ ಕೃಪಾ ಹೆಲ್ತ್ ಕೇರ್ ಕಿಂಗ್‌ಪಿನ್ ಬಂಧನ!]]></title>
            <link>https://kannada.asianetnews.com/bengaluru-urban/bengaluru-fake-medicine-racket-sit-uncovers-multi-crore-scam-exploiting-terminally-ill-patients-gdp/articleshow-95c6gur</link>
            <guid isPermaLink="true">https://kannada.asianetnews.com/bengaluru-urban/bengaluru-fake-medicine-racket-sit-uncovers-multi-crore-scam-exploiting-terminally-ill-patients-gdp/articleshow-95c6gur</guid>
            <pubDate>Sat, 12 Sep 2026 11:03:49 +0530</pubDate>
            <description><![CDATA[ಬೆಂಗಳೂರಿನ ತಾವರೆಕೆರೆಯಲ್ಲಿ ಬೆಳಕಿಗೆ ಬಂದ 'ಕೃಪಾ ಹೆಲ್ತ್ ಕೇರ್' ಸಂಸ್ಥೆಯ ನಕಲಿ ಔಷಧಿ ಜಾಲದ ತನಿಖೆಯನ್ನು ಎಸ್&zwnj;ಐಟಿ ಚುರುಕುಗೊಳಿಸಿದೆ. ಸಂಸ್ಥೆಯ ಮಾಲೀಕ ವೀರೇಶ್, ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳನ್ನು ಗುರಿಯಾಗಿಸಿ ನಕಲಿ ಕ್ಯಾನ್ಸರ್ ಹಾಗೂ ಜೀವ ರಕ್ಷಕ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ. ಪ್ರಸ್ತುತ ಮುಖ್ಯ ಆರೋಪಿ ವೀರೇಶ್&zwnj;ನನ್ನು ಬಂಧಿಸಿ, ಜಾಲದ ಹಿಂದಿರುವ ಇತರರ ಪತ್ತೆಗಾಗಿ ತನಿಖೆ ಮುಂದುವರೆಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0p599hpx3nsq3eheqray5aj,imgname-----------------------2026-08-23t072503.672-1787450140214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಂಗಳೂರಿನ ತಾವರೆಕೆರೆಯಲ್ಲಿ ಬೆಳಕಿಗೆ ಬಂದಿದ್ದ ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡಕ್ಕೆ (SIT) ದಂಧೆಯ ಭೀಕರ ಮುಖಗಳು ಲಭ್ಯವಾಗಿವೆ. 'ಕೃಪಾ ಹೆಲ್ತ್ ಕೇರ್' ಸಂಸ್ಥೆಯ ಮಾಲೀಕ ವೀರೇಶ್ ನೇತೃತ್ವದಲ್ಲಿ ನಡೆದಿದ್ದ ಈ ಅಕ್ರಮ ಜಾಲವು ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು ನಡೆಸಿರುವುದು ಎಸ್&zwnj;ಐಟಿ ತನಿಖೆಯಿಂದ ಬಹಿರಂಗಗೊಂಡಿದೆ.&lt;/p&gt;&lt;h2&gt;ಆಪ್ತನ ಐಡಿಯಾದಿಂದ ಕೋಟಿಗಳ ಸಾಮ್ರಾಜ್ಯ&lt;/h2&gt;&lt;p&gt;ಆರಂಭದಲ್ಲಿ ಸಣ್ಣ ಪ್ರಮಾಣದ ರಿಟೇಲ್ ವ್ಯಾಪಾರ ಮಾಡಿಕೊಂಡಿದ್ದ ವೀರೇಶ್, ತನ್ನ ಆಪ್ತ ಪ್ರಶಾಂತ್ ನೀಡಿದ ಕುತಂತ್ರದ ಸಲಹೆಯಿಂದಾಗಿ ನಕಲಿ ಔಷಧಿಯ ದಂಧೆಗೆ ಕಾಲಿಟ್ಟಿದ್ದ. ಪ್ರತಿಷ್ಠಿತ ಔಷಧ ಕಂಪನಿಗಳ ಲೇಬಲ್ ಬಳಸಿ ನಕಲಿ ಮಾತ್ರೆ ಹಾಗೂ ಇಂಜೆಕ್ಷನ್ ಮಾರಾಟ ಮಾಡಿದರೆ ಕೋಟಿ ಕೋಟಿ ಹಣ ಗಳಿಸಬಹುದೆಂದು ಪ್ರಶಾಂತ್ ನೀಡಿದ ಕಲ್ಪನೆಗೆ ವೀರೇಶ್ ಸಮ್ಮತಿಸಿದ್ದ. ನಾನು ಬಂಡವಾಳ ಹೂಡಿಕೆ ಮಾಡುತ್ತೇನೆ, ನೀನು ಮೆಡಿಸಿನ್ ಸಿದ್ಧಪಡಿಸು ಎಂದು ವೀರೇಶ್ ನೀಡಿದ ಅಭಯದಂತೆ ಪ್ರಶಾಂತ್ ಸಂಪೂರ್ಣ ಕಾರ್ಯಾಚರಣೆಯ ಹೊಣೆ ಹೊತ್ತಿದ್ದ.&lt;/p&gt;&lt;h2&gt;ಸಾಯುವ ರೋಗಿಗಳ ಆಸರೆಯನ್ನೇ ಬಂಡವಾಳ ಮಾಡಿಕೊಂಡ ಖದೀರರು&lt;/h2&gt;&lt;p&gt;ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಅಥವಾ ಕೊನೆ ಕ್ಷಣದಲ್ಲಿ ಬದುಕಿನ ಹೋರಾಟ ನಡೆಸುತ್ತಿರುವ ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಸಿಕ್ಕರೆ ಯಾರೂ ಪ್ರಶ್ನಿಸುವುದಿಲ್ಲ ಎಂಬ ಕ್ರೂರ ಮಾನಸಿಕತೆಯನ್ನು ಈ ವಂಚಕರು ಬಂಡವಾಳ ಮಾಡಿಕೊಂಡಿದ್ದರು. ಇದೇ ತಂತ್ರವನ್ನು ಬಳಸಿ ತಮ್ಮ ಅಕ್ರಮ ಜಾಲವನ್ನು ರಾಜ್ಯ ಹಾಗೂ ಹೊರರಾಜ್ಯಗಳಿಗೂ ವಿಸ್ತರಿಸಿದ್ದರು.&lt;/p&gt;&lt;p&gt;2021ರಲ್ಲಿ 'ಕೃಪಾ ಹೆಲ್ತ್ ಕೇರ್' ಹೆಸರಿನಲ್ಲಿ ಕಂಪನಿ ನೋಂದಾಯಿಸಿದ ವೀರೇಶ್, ಮುಖ್ಯ ಸೂತ್ರಧಾರ ಪ್ರಶಾಂತ್ ಸೇರಿದಂತೆ ವಿವಿಧ ಡೀಲರ್&zwnj;ಗಳಿಂದ ನಕಲಿ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದ. ಮುಂಬೈ, ಗುಜರಾತ್ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಿಂದಲೂ ಮೆಡಿಸಿನ್ ತರಿಸಿ, ಮಿನರ್ವಾ ಸರ್ಕಲ್ ಬಳಿ ಇದ್ದ ತನ್ನ ಗೋದಾಮಿನಲ್ಲಿ ಸಂಗ್ರಹಿಸಿಡುತ್ತಿದ್ದ.&lt;/p&gt;&lt;h2&gt;ಮೆಡಿಕಲ್ ರೆಪ್&zwnj;ಗಳಿಗೆ ಬಂಪರ್ ಕಮಿಷನ್: ಆಸ್ಪತ್ರೆಗಳಿಗೆ ಸರಬರಾಜು&lt;/h2&gt;&lt;p&gt;ಈ ನಕಲಿ ಔಷಧಿಗಳನ್ನು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮಾರಾಟ ಮಾಡಲು ವೀರೇಶ್ 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್&zwnj;ಗಳನ್ನು (MR) ಬಳಸಿಕೊಳ್ಳುತ್ತಿದ್ದ. ಅವರಿಗೆ ಭಾರಿ ಪ್ರಮಾಣದ ಕಮಿಷನ್ ಆಮಿಷ ಒಡ್ಡಿ, ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ಆಸ್ಪತ್ರೆಗಳು ಹಾಗೂ ಪ್ರಮುಖ ಮೆಡಿಕಲ್ ಶಾಪ್&zwnj;ಗಳಿಗೆ ನಕಲಿ ಔಷಧಿ ಸರಬರಾಜು ಮಾಡುತ್ತಿದ್ದ. ಈ ಜಾಲವು ಪ್ರಮುಖವಾಗಿ ಕ್ಯಾನ್ಸರ್, ಥೈರಾಯ್ಡ್, ವಿಟಮಿನ್ ಮಾತ್ರೆಗಳು ಹಾಗೂ ಜೀವ ರಕ್ಷಕ ಇಂಜೆಕ್ಷನ್&zwnj;ಗಳನ್ನು ಪೂರೈಸುತ್ತಿತ್ತು.&lt;/p&gt;&lt;h2&gt;SIT ವಶದಲ್ಲಿ ಆರೋಪಿ ವೀರೇಶ್&lt;/h2&gt;&lt;p&gt;ಪ್ರಕರಣದ ಬೆನ್ನಟ್ಟಿದ ಸಿಐಡಿ ಎಸ್&zwnj;ಐಟಿ ಅಧಿಕಾರಿಗಳು ಕೃಪಾ ಹೆಲ್ತ್ ಕೇರ್ ಮಾಲೀಕ ವೀರೇಶ್&zwnj;ನನ್ನು ಬಂಧಿಸಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ಔಷಧಿಗಳು ಹಾಗೂ ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಜಾಲದಲ್ಲಿದ್ದ ಇತರ ಕಿಂಗ್&zwnj;ಪಿನ್&zwnj;ಗಳ ಪತ್ತೆಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/bengaluru-urban/bengaluru-fake-medicine-racket-sit-uncovers-multi-crore-scam-exploiting-terminally-ill-patients-gdp/articleshow-95c6gur"/>
        </item>
        <item>
            <title><![CDATA[ಸಚಿವ ಜಾರಕಿಹೊಳೆ ಮನೆ ಮೇಲೆ ಇಡಿ ದಾಳಿಗೆ ವಿಜಯ್ ಮಲ್ಯ ಕೆಂಡಾಮಂಡಲ, ತನ್ನಿಷ್ಟದ ದೇಗುಲ ನೆನೆದು ಬೇಸರ!]]></title>
            <link>https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq</link>
            <guid isPermaLink="true">https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq</guid>
            <pubDate>Sat, 12 Sep 2026 10:19:36 +0530</pubDate>
            <description><![CDATA[ಸಚಿವ ಸತೀಶ್ ಜಾರಕಿಹೊಳೆ ಆಪ್ತರ ಮೇಲಿನ ಇಡಿ ದಾಳಿಯನ್ನು ಉದ್ಯಮಿ ವಿಜಯ್ ಮಲ್ಯ 'ಎಕ್ಸ್'ನಲ್ಲಿ ಖಂಡಿಸಿದ್ದಾರೆ. ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಎಂದಿರುವ ಅವರು, ಇದು ಸಾರ್ವಜನಿಕ ಚಾರಿತ್ರ್ಯ ವಧೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29ywc4316j1cpx6kr99k0xm,imgname-satish-jarkiholi-vijay-mallya-1789188255874.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ಮನೆಗಳ ಮೇಲಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದೇಶದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಅವರು, ಯಾವುದೇ ಸೂಕ್ತ ಚಾರ್ಜ್&zwnj;ಶೀಟ್ ಸಲ್ಲಿಸದೆ ಹಾಗೂ ನ್ಯಾಯಯುತ ವಿಚಾರಣೆ ನಡೆಸದೆ, ಕೇವಲ ಸಾರ್ವಜನಿಕವಾಗಿ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವುದರಲ್ಲಿ ಇಡಿ ಹೆಮ್ಮೆ ಪಟ್ಟುಕೊಳ್ಳುತ್ತಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಇಂತಹ ಜಾರಿ ಸಂಸ್ಥೆಗಳ ನಡವಳಿಕೆಯನ್ನು ಕಾಣಲು ಸಾಧ್ಯವಿಲ್ಲ. ನಾಗರಿಕರು ಈ ಬಗ್ಗೆ ಯೋಚಿಸಬೇಕು ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ತಮ್ಮ ಮೇಲಿನ ಆರೋಪಗಳು ಹಾಗೂ ಸಾರ್ವಜನಿಕ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಮಲ್ಯ, ನನ್ನನ್ನು ಪ್ರೀತಿಸಿ, ದ್ವೇಷಿಸಿ, ನಿಂದಿಸಿ ಅಥವಾ ನಿರ್ಲಕ್ಷಿಸಿ ಆದರೆ ನಾನು ಎಂದಿಗೂ ಬದಲಾಗುವುದಿಲ್ಲ. ದೇವರು ನನಗೆ ಸಾಟಿಯಿಲ್ಲದ ಧೈರ್ಯ ಮತ್ತು ಶಕ್ತಿಯನ್ನು ನೀಡಿದ್ದಾನೆ. ಕೊನೆಯಲ್ಲಿ ಸತ್ಯವೇ ಜಯಗಳಿಸಲಿದೆ ಎಂಬ ನಂಬಿಕೆ ನನಗಿದೆ. ಭಾರತದಲ್ಲಿರುವ ನಾನು ಪೂಜಿಸುವ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಲಾಗದಿರುವುದು ನನಗೆ ಅತ್ಯಂತ ಬೇಸರ ತಂದಿದೆ. ನಾನು ದೇವಾಲಯ ಭೇಟಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದಾಗ್ಯೂ, ನನ್ನ ಧಾರ್ಮಿಕ ಚೌಕಟ್ಟು ಮತ್ತು ನಿಷ್ಠೆಯನ್ನು ನಾನು ಸದಾ ಕಾಪಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ಸಾಲ ತೀರಿದರೂ ಮಲ್ಯ ಮೇಲಿನ ಕೇಸ್ ರದ್ದಾಗಲ್ಲ&lt;/h2&gt;&lt;p&gt;ಬ್ಯಾಂಕ್&zwnj;ಗಳಿಗೆ ವಂಚಿಸಿ ದೇಶ ತೊರೆದಿರುವ ಉದ್ಯಮಿ ವಿಜಯ ಮಲ್ಯ ಅವರ 14,131.6 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್&zwnj;ಬಿಐ) ನೇತೃತ್ವದ ಕನ್ಸೋರ್ಟಿಯಂಗೆ ಹಸ್ತಾಂತರಿಸಲಾಗಿದ್ದರೂ, ಅವರ ವಿರುದ್ಧದ ಹಣ ಅಕ್ರಮ ವರ್ಗಾವಣೆ (ಮನಿ ಲ್ಯಾಂಡರಿಂಗ್) ಪ್ರಕರಣಗಳು ರದ್ದಾಗುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಸ್ಪಷ್ಟಪಡಿಸಿದೆ.&lt;/p&gt;&lt;p&gt;&quot;ನನ್ನ 14,000 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡು ಬ್ಯಾಂಕ್&zwnj;ಗಳ ಸಾಲ ತೀರಿಸಲಾಗಿದೆ. ಆದ್ದರಿಂದ ನನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಅಂತ್ಯಗೊಳಿಸಬೇಕು,&quot; ಎಂದು ಕೋರಿ ವಿಜಯ ಮಲ್ಯ ಅವರು ಬಾಂಬೆ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದರು.&lt;/p&gt;&lt;p&gt;ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್&zwnj;ಗೆ ಅಫಿಡವಿಟ್ ಸಲ್ಲಿಸಿರುವ ಇ.ಡಿ., &quot;ಮಲ್ಯ ಅವರು ಕಾನೂನು ಪ್ರಕ್ರಿಯೆಯಿಂದ ಹಾಗೂ ತನಿಖೆಯಿಂದ ಸತತವಾಗಿ ನುಣಚಿಕೊಳ್ಳುತ್ತಿದ್ದಾರೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ತಕ್ಷಣವೇ ಅವರ ಮೇಲಿನ ಅಪರಾಧ ಹೊಣೆಗಾರಿಕೆ ಇಲ್ಲವಾಗುವುದಿಲ್ಲ. ಹೀಗಾಗಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಸಾಧ್ಯವಿಲ್ಲ,&quot; ಎಂದು ತಿಳಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq"/>
        </item>
        <item>
            <title><![CDATA[Mysuru: ಜೈಲಿನಲ್ಲಿ ಒಂದು ಸಮುದಾಯದ ಖೈದಿಗಳ ಬಳಿ ಮಾತ್ರ ಮೊಬೈಲ್, ಪ್ರತಿಭಟನೆ; ಅಲೋಕ್ ಕುಮಾರ್ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/protest-over-mobile-phones-found-only-with-inmates-from-one-community-in-the-jail-what-did-alok-kumar-say-sns/articleshow-opd5xug</link>
            <guid isPermaLink="true">https://kannada.asianetnews.com/karnataka-districts/protest-over-mobile-phones-found-only-with-inmates-from-one-community-in-the-jail-what-did-alok-kumar-say-sns/articleshow-opd5xug</guid>
            <pubDate>Sat, 12 Sep 2026 10:02:11 +0530</pubDate>
            <description><![CDATA[ಖೈದಿಗಳ ಅಕ್ರಮ ಮೊಬೈಲ್ ಬಳಕೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ, ಡಿಜಿಪಿ ಅಲೋಕ್ ಕುಮಾರ್ ಮೈಸೂರು ಕೇಂದ್ರ ಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿದರು. ಪರಿಶೀಲನೆ ವೇಳೆ ಕೆಲವು ಲೋಪಗಳನ್ನು ಒಪ್ಪಿಕೊಂಡ ಅವರು, ತಪ್ಪಿತಸ್ಥ ಖೈದಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29y3dzykw7ebbv3ejt1n73j,imgname-alok-kumar--1789187438590.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಕೇಂದ್ರ ಕಾರಾಗೃಹದಕ್ಕೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ದಾಳಿ ನಡೆಸಿದ್ದಾರೆ. ಖುದ್ದು ಪ್ರತಿಯೊಂದು ಬ್ಯಾರಕ್&zwnj;ಗಳನ್ನು ಜಾಲಾಡಿದ ಡಿಜಿಪಿ, ಅಕ್ರಮ ನಡೆಸುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಖೈದಿಗಳ ಅಕ್ರಮ ಮೊಬೈಲ್ ಬಳಕೆ ಹಾಗೂ ಅಧಿಕಾರಿಗಳು ನಿರ್ದಿಷ್ಟ ಸಮುದಾಯದ ಖೈದಿಗಳಿಗೆ ಸಾಥ್ ನೀಡುತ್ತಾರೆಂಬ ಆರೋಪ ಕೇಳಿಬಂದ ಬೆನ್ನಲ್ಲೇ ದಾಳಿ ನಡೆದಿದ್ದು, ಕೆಲವು ಲೋಪಗಳ ಬಗ್ಗೆ ಡಿಜಿಪಿ ಒಪ್ಪಿಕೊಂಡಿದ್ದಾರೆ.&lt;/p&gt;&lt;h2&gt;ಮೈಸೂರು ಜೈಲಿನೊಳಗೆ ಡಿಜಿಪಿ, ಬಯಲಾಯ್ತು ಖೈದಿಗಳ ಅಸಲಿ ಆಟ!&lt;/h2&gt;&lt;p&gt;ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಇಂದಹ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಯಿತು. ಕಳೆದ ರಾತ್ರಿ ಜೈಲಿನಲ್ಲಿ ಒಂದು ಸಮುದಾಯದ ಖೈದಿಗಳ ಬಳಿ ಮಾತ್ರ ಮೊಬೈಲ್ ಇರುವುದಕ್ಕೆ ಅಧಿಕಾರಿಗಳು ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ ಎಂದು ಆರೋಪಿಸಿ ಇತರೆ ಖೈದಿಗಳು ಪ್ರತಿಭಟನೆ ನಡೆಸಿದ್ದರು ಎಂಬ ಮಾಹಿತಿ ಹೊರ ಬಿದ್ದಿತ್ತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬ್ಯಾರಕ್&zwnj;ಗಳನ್ನು ಖುದ್ದು ಪರಿಶೀಲನೆ ನಡೆಸಿದರು.&lt;/p&gt;&lt;p&gt;ಪರಿಶೀಲನೆ ಬಳಿಕ ಮಾತನಾಡಿದ ಅಲೋಕ್ ಕುಮಾರ್, ಜೈಲಿನ ಕೆಲವೆಡೆ ಮೊಬೈಲ್ ನೆಟ್&zwnj;ವರ್ಕ್ ಸಿಗುತ್ತಿರುವುದು ನಿಜವಾಗಿದ್ದು, ತುರ್ತಾಗಿ ಜಾಮರ್ ಅಳವಡಿಸುವ ಅಗತ್ಯವಿದೆ ಎಂದರು. ಖೈದಿಗಳು ಹಾಗೂ ಸಿಬ್ಬಂದಿ ಇಬ್ಬರಿಂದಲೂ ಮಾಹಿತಿ ಪಡೆದಿದ್ದು, ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಮೊಬೈಲ್ ಇಟ್ಟುಕೊಳ್ಳುವುದು ಎಷ್ಟು ತಪ್ಪೋ, ಅದಕ್ಕೆ ನೆರವಾಗುವ ಅಧಿಕಾರಿಗಳೂ ಅಷ್ಟೇ ಅಪರಾಧಿಗಳು ಎಂದ ಅವರು, ಇಬ್ಬರ ಮೇಲೂ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.&lt;/p&gt;&lt;p&gt;ಇದೇ ವೇಳೆ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಡಿಜಿಪಿ, ಪ್ರಕರಣ ಸದ್ಯ ತನಿಖಾ ಹಂತದಲ್ಲಿದೆ. ಜೊತೆಗೆ ಜೈಲಿನೊಳಗೆ ಮೊಬೈಲ್ ಹೇಗೆ ನುಸುಳುತ್ತದೆ ಎಂಬ ಕರಾಳ ಸತ್ಯವನ್ನೂ ಬಿಚ್ಚಿಟ್ಟರು. ಕಳೆದ 8 ತಿಂಗಳಲ್ಲಿ ಪರಪ್ಪನ ಅಗ್ರಹಾರ ಜೈಲೊಂದರಲ್ಲೇ ಬರೋಬ್ಬರಿ 300 ಮೊಬೈಲ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಐದಾರು ಫೋನ್&zwnj;ಗಳಿರುವ ಶಂಕೆ ಇದೆ. ಪ್ರತಿದಿನ 200ಕ್ಕೂ ಹೆಚ್ಚು ಮಂದಿ ಜೈಲಿಗೆ ಬರುತ್ತಿದ್ದು, ಕೆಲವರು ಸಿಮ್ ಕಾರ್ಡ್ ನುಂಗಿ, ದೇಹದೊಳಗೆ ಮೊಬೈಲ್ ಬಚ್ಚಿಟ್ಟುಕೊಂಡು ಬರುತ್ತಿದ್ದಾರೆ. ಇಂತಹ ಸೂಕ್ಷ್ಮ ತಪಾಸಣೆ ಸವಾಲಾಗಿದ್ದರೂ ಅಕ್ರಮಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಿರಂತರವಾಗಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಒಟ್ಟಾರೆ ಮೈಸೂರು ಜೈಲಿನಲ್ಲೂ ಖೈದಿಗಳ ವಿಲಾಸಿ ಜೀವನ ನಡೆಯುತ್ತಿದೆ ಎಂಬ ಆರೋಪವನ್ನು ಡಿಜಿಪಿ ರೇಡ್ ಮತ್ತಷ್ಟು ಗಟ್ಟಿ ಮಾಡಿರುವುದಂತು ಸ್ಪಷ್ಟ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/protest-over-mobile-phones-found-only-with-inmates-from-one-community-in-the-jail-what-did-alok-kumar-say-sns/articleshow-opd5xug"/>
        </item>
        <item>
            <title><![CDATA[Belthangady: 105ರ ತಾಯಿ-85ರ ಮಗಳ ಅಪರೂಪದ ಭೇಟಿ: ದುರ್ಗಮ ರಸ್ತೆಯಲ್ಲಿ ಪುತ್ರಿಯ ಪಯಣ]]></title>
            <link>https://kannada.asianetnews.com/karnataka-districts/dakshina-kannada-belthangady-105-year-old-mother-seetamma-and-85-year-old-daughter-sushila-met-after-20-years-mrq/articleshow-ugk6tt4</link>
            <guid isPermaLink="true">https://kannada.asianetnews.com/karnataka-districts/dakshina-kannada-belthangady-105-year-old-mother-seetamma-and-85-year-old-daughter-sushila-met-after-20-years-mrq/articleshow-ugk6tt4</guid>
            <pubDate>Sat, 12 Sep 2026 09:06:37 +0530</pubDate>
            <description><![CDATA[ಬೆಳ್ತಂಗಡಿಯ ಮಲವಂತಿಕೆ ಗ್ರಾಮದಲ್ಲಿ, 105 ವರ್ಷದ ತಾಯಿ ಸೀತಮ್ಮ ಮತ್ತು 85 ವರ್ಷದ ಮಗಳು ಸುಶೀಲಾ ಅವರು 20 ವರ್ಷಗಳ ನಂತರ ಭೇಟಿಯಾದರು. ದುರ್ಗಮ ದಾರಿಯ ಕಾರಣದಿಂದಾಗಿ ದೂರವಾಗಿದ್ದ ಇವರನ್ನು, ಮೊಮ್ಮಕ್ಕಳು ಕಷ್ಟಪಟ್ಟು ಒಂದಾಗಿಸಿ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m29ty91dnrsx5fdd3w9c97k0,imgname-belthangady-1789184123949.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ತಾಯಿಗೆ 105 ವರ್ಷ, ಆಕೆಯ ಮಗಳಿಗೆ 85 ವರ್ಷ. ಇಬ್ಬರದ್ದೂ ಇಳಿ ವಯಸ್ಸು. ಮಗಳಿಗೆ ತಾಯಿಯನ್ನು ನೋಡಬೇಕೆಂಬ ಆಸೆಯಿದ್ದರೂ ವಯಸ್ಸು, ದುರ್ಗಮ ದಾರಿಯ ಕಾರಣದಿಂದ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ ಮೊಮ್ಮಕ್ಕಳು ತಾಯಿ ಮಗಳ ಆಸೆಯನ್ನು ಪೂರೈಸಿದ್ದಾರೆ. ಇಂತಹ ಅದ್ಭುತ ಕ್ಷಣ ಕಾಣಸಿಕ್ಕಿದ್ದು, ಬೆಳ್ತಂಗಡಿ ತಾಲೂಕಿನ ಮಲವಂತಿಕೆ ಗ್ರಾಮದ ಮಕ್ಕಿ ಎಂಬಲ್ಲಿ&lt;/p&gt;&lt;p&gt;ಮಕ್ಕಿಯಲ್ಲಿ ಮಕ್ಕಳ ಜೊತೆ ವಾಸ ಇರುವ 105 ವರ್ಷದ ಸೀತಮ್ಮ ಅವರಿಗೆ 11 ಮಂದಿ ಮಕ್ಕಳು. ಅವರಲ್ಲಿ ಮೊದಲನೆಯವರು ಸುಶೀಲಾ. ಅವರಿಗೀಗ 85 ವಯಸ್ಸು. ಸೀತಮ್ಮ ಅವರ ಮನೆಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಜೀಪಿನಲ್ಲಿ ದುರ್ಗಮ ಕಾಡಿನಲ್ಲಿ ಸಾಗಿ ಬಳಿಕ ಒಂದೂವರೆ ಕಿಲೋ ಮೀಟರ್ ಬೆಟ್ಟ ಇಳಿದು, ಹೊಳೆ ದಾಟಿ ಸಾಗಬೇಕು. ಸುಶೀಲಾ ಅವರು ಮಕ್ಕಳ ಜೊತೆ ಮಿತ್ತಬಾಗಿಲು ಗ್ರಾಮದ ಫಗರೆ ಎಂಬಲ್ಲಿ ವಾಸವಾಗಿದ್ದಾರೆ. ದೂರ ದೂರ ಇರುವ ತಾಯಿ&ndash;ಮಗಳು ಒಂದಾಗಿ ಸುಮಾರು 20 ವರ್ಷ ಸಂದಿತ್ತು. ಹಿಂದಿನ ನೆನಪು ಮಾತ್ರ ಮನಸ್ಸಲ್ಲಿ ಉಳಿದಿತ್ತು.&lt;/p&gt;&lt;h2&gt;&lt;strong&gt;ಅಜ್ಜಿ ಆಸೆ ಪೂರೈಸಲು ಮುಂದಾದ ಮೊಮ್ಮಕಳು&lt;/strong&gt;&lt;/h2&gt;&lt;p&gt;ಮುತ್ತಜ್ಜಿ ಸೀತಮ್ಮ ಅವರಿಗೆ ವಯಸ್ಸಿನ ಕಾರಣ ಮಗಳ ಬಳಿ ಬರಲು ಸಾಧ್ಯರಲಿಲ್ಲ. ಮಗಳು ಸುಶೀಲಾ ಅವರಿಗೆ ಅನಾರೋಗ್ಯದ ಕಾರಣದಿಂದ ತಾಯಿ ಬಳಿ ಹೋಗಲು ಸಾಧ್ಯವಾಗದೆ ಹಲವು ವರ್ಷವಾಗಿತ್ತು. ಆದರೆ ಮೊಮ್ಮಕ್ಕಳು ಅಜ್ಜಿ ಆಸೆ ಪೂರೈಸಲು ಸುಶೀಲಾ ಅವರನ್ನು ಕರೆದುಕೊಂಡು ದಟ್ಟ ಕಾಡಿನ ಕಚ್ಛಾ ರಸ್ತೆಯ ಮೂಲಕ ಜೀಪಿನಲ್ಲಿ ಪ್ರಯಾಣಿಸಿದ್ದಾರೆ. ಜೀಪಿನಲ್ಲಿ ಅಜ್ಜಿಯನ್ನು ಕರೆದುಕೊಂಡು ಸಾಗಿದರೂ ಮುತ್ತಜ್ಜಿ ಮನೆಯವರೆಗೂ ವಾಹನ ಸಾಗಲು ಸಾಧ್ಯವಿಲ್ಲ. ಹೀಗಾಗಿ ಅಜ್ಜಿಯನ್ನು ಕಾಡುದಾರಿಯಲ್ಲಿ ನಿಧಾನವಾಗಿ ನಡೆಸಿಕೊಂಡು ಮನೆ ತಲುಪಿದ್ದಾರೆ.&lt;/p&gt;&lt;p&gt;&lt;strong&gt;ರಸ್ತೆಯಿಲ್ಲದ ಮನೆಯಲ್ಲಿದ್ದ ಮುತ್ತಜ್ಜಿ&lt;/strong&gt;&lt;/p&gt;&lt;p&gt;ಅಜ್ಜಿಯನ್ನು ಕರೆದುಕೊಂಡು ಮುತ್ತಜ್ಜಿ ಮನೆಗೆ ತೆರಳಬೇಕು ಎನ್ನುವುದು ಮೊಮ್ಮಕ್ಕಳಾದ ನಮ್ಮ ಆಸೆಯಾಗಿತ್ತು. ಆದರೆ ಅಜ್ಜಿಗೆ ವಯಸ್ಸಾದ ಕಾರಣ, ಮುತ್ತಜ್ಜಿ ಮನೆಗೆ ಸರಿಯಾದ ರಸ್ತೆ ಇಲ್ಲದ ಕಾರಣ ಅದು ಸಾಧ್ಯವಾಗುತ್ತಿರಲಿಲ್ಲ. ಇದೀಗ ಅದು ಸಾಧ್ಯವಾಗಿದೆ ಎಂದು ಮೊಮ್ಮಗ ಕೇಶವ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯುವಕರಿಗೂ ಕಷ್ಟವಾಗಿದ್ದ 40 ಅಡಿ ಜಾರುಕಂಬ ಸರಸರನೆ ಏರಿದ 7ನೇ ತರಗತಿಯ ಬಾತೀಶ್&zwnj;: ಹೇಗೆ ಅಂತೀರಾ?&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-belthangady-105-year-old-mother-seetamma-and-85-year-old-daughter-sushila-met-after-20-years-mrq/articleshow-ugk6tt4"/>
        </item>
        <item>
            <title><![CDATA[ಅ.1ರಿಂದ ಮಂಗಳೂರು ರೈಲ್ವೆ ಪ್ರದೇಶ ಬದಲಾವಣೆ; ಪಾಲಕ್ಕಾಡ್-ಮೈಸೂರು ಸಭೆಯಲ್ಲೇನಾಯ್ತು?]]></title>
            <link>https://kannada.asianetnews.com/karnataka-districts/mangaluru-railway-zone-reorganization-from-oct-1-coordination-meeting-between-palakkad-and-mysuru-divisions-mrq/articleshow-l7msrmv</link>
            <guid isPermaLink="true">https://kannada.asianetnews.com/karnataka-districts/mangaluru-railway-zone-reorganization-from-oct-1-coordination-meeting-between-palakkad-and-mysuru-divisions-mrq/articleshow-l7msrmv</guid>
            <pubDate>Sat, 12 Sep 2026 08:45:02 +0530</pubDate>
            <description><![CDATA[ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಕುರಿತು ಎರಡೂ ವಿಭಾಗಗಳ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಅಕ್ಟೋಬರ್ 1 ರಿಂದ ಈ ಬದಲಾವಣೆ ಜಾರಿಯಾಗಲಿದ್ದು, ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಸುಗಮ ವರ್ಗಾವಣೆಗೆ ಸಿದ್ಧತೆ ನಡೆಸಲಾಗಿದೆ. ಸಿಬ್ಬಂದಿಗೆ ತಮ್ಮ ಆಯ್ಕೆಯ ವಿಭಾಗದಲ್ಲಿ ಮುಂದುವರಿಯುವ ಅವಕಾಶ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29sk74pjxfjy7wqmr9ktd22,imgname-palakkad-mysuru-1789182712982.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಹಿನ್ನೆಲೆಯಲ್ಲಿ ಎರಡೂ ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್&zwnj;ಎಂ) ಹಾಗೂ ಹಿರಿಯ ಅಧಿಕಾರಿಗಳ ಸಮನ್ವಯ ಸಭೆ ಶುಕ್ರವಾರ ಮಂಗಳೂರಿನಲ್ಲಿ ನಡೆಯಿತು.&lt;/p&gt;&lt;p&gt;ಮಂಗಳೂರು ವ್ಯಾಪ್ತಿಯ ಆಡಳಿತಾತ್ಮಕ ಬದಲಾವಣೆಗೆ ಅಗತ್ಯವಿರುವ ಸಿದ್ಧತೆಗಳು ಹಾಗೂ ಸುಗಮ ವರ್ಗಾವಣೆಯ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಸಭೆ ಸೌಹಾರ್ದಯುತ ಹಾಗೂ ರಚನಾತ್ಮಕ ವಾತಾವರಣದಲ್ಲಿ ನಡೆದಿದ್ದು, ವ್ಯಾಪ್ತಿ ಬದಲಾವಣೆಯಿಂದ ರೈಲು ಸಂಚಾರ ಮತ್ತು ಪ್ರಯಾಣಿಕರ ಸೇವೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಎರಡೂ ವಿಭಾಗಗಳು ಒಮ್ಮತ ವ್ಯಕ್ತಪಡಿಸಿದವು.&lt;/p&gt;&lt;h2&gt;&lt;strong&gt;ರೈಲು ಸೇವೆಗಳು ಹಾಗೂ ಕಾರ್ಯಾಚರಣೆ&lt;/strong&gt;&lt;/h2&gt;&lt;p&gt;ಅಕ್ಟೋಬರ್&zwnj; 1 ರಿಂದ ಹೊಸ ರೈಲ್ವೆ ವ್ಯಾಪ್ತಿ ಜಾರಿಗೆ ಬರಲಿದ್ದು, ಅಂದಿನಿಂದಲೂ ರೈಲು ಸೇವೆಗಳು ಹಾಗೂ ಕಾರ್ಯಾಚರಣೆಗಳು ಸಹಜವಾಗಿ ಮುಂದುವರಿಯುವಂತೆ ಅಗತ್ಯ ಸಿದ್ಧತೆಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಲು ನಿರ್ಧರಿಸಲಾಯಿತು.&lt;/p&gt;&lt;p&gt;ಕಾರ್ಯಾಚರಣೆಯ ಸಮನ್ವಯ, ಆಸ್ತಿಗಳು, ದಾಖಲೆಗಳು, ನಿಯಂತ್ರಣ ವ್ಯವಸ್ಥೆ, ಸಿಬ್ಬಂದಿ ಸೇರಿದಂತೆ ವ್ಯಾಪ್ತಿ ಬದಲಾವಣೆಯಿಂದ ಎದುರಾಗುವ ವಿವಿಧ ಆಡಳಿತಾತ್ಮಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿಗಳು ಚರ್ಚಿಸಿದರು.&lt;/p&gt;&lt;h3&gt;&lt;strong&gt;ಸಿಬ್ಬಂದಿಗೆ ಆಯ್ಕೆ ಅವಕಾಶ:&lt;/strong&gt;&lt;/h3&gt;&lt;p&gt;ಮಂಗಳೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲೇ ಮುಂದುವರಿಯಲು ಅಥವಾ ನೈಋತ್ಯ ರೈಲ್ವೆಗೆ ಸೇರ್ಪಡೆಯಾಗಲು ನಿಯಮಾನುಸಾರ ಆಯ್ಕೆ ನೀಡಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು. ರೈಲ್ವೆ ಮಂಡಳಿ ನಿರ್ದೇಶನದಂತೆ ಗಜೆಟೆಡ್ ಅಲ್ಲದ ಸಿಬ್ಬಂದಿಯನ್ನು &lsquo;ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ&rsquo; ವರ್ಗಾಯಿಸುವ ವ್ಯವಸ್ಥೆ ಇದ್ದರೂ, ದಕ್ಷಿಣ ರೈಲ್ವೆಯಲ್ಲಿ ಮುಂದುವರಿಯುವ ಅಥವಾ ನೈಋತ್ಯ ರೈಲ್ವೆಗೆ ಸೇರುವ ಆಯ್ಕೆಯನ್ನು ಸಿಬ್ಬಂದಿಗೆ ನೀಡಲಾಗುತ್ತದೆ. ಇತರ ವರ್ಗಗಳ ಸಿಬ್ಬಂದಿಗೆ ಅನ್ವಯವಾಗುವ ನಿಯಮಾನುಸಾರ ಪ್ರಕ್ರಿಯೆ ಮುಂದುವರಿಯಲಿದೆ.&lt;/p&gt;&lt;p&gt;ಪಾಲಕ್ಕಾಡ್ ಹಾಗೂ ಮೈಸೂರು ವಿಭಾಗಗಳ ನಡುವಿನ ನಿರಂತರ ಸಮನ್ವಯದ ಮೂಲಕ ವ್ಯಾಪ್ತಿ ಬದಲಾವಣೆಯನ್ನು ಸುಗಮವಾಗಿ ಪೂರ್ಣಗೊಳಿಸುವ ವಿಶ್ವಾಸವನ್ನು ಎರಡೂ ವಿಭಾಗಗಳ ಅಧಿಕಾರಿಗಳು ವ್ಯಕ್ತಪಡಿಸಿದರು. ಪ್ರಯಾಣಿಕರ ಸೇವೆ ಹಾಗೂ ರೈಲು ಕಾರ್ಯಾಚರಣೆಯ ನಿರಂತರತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಯಿತು.&lt;/p&gt;&lt;p&gt;ರೈಲ್ವೆ ಮಂಡಳಿಯ ಅಧಿಸೂಚನೆಯಂತೆ 2026ರ ಅಕ್ಟೋಬರ್ 1ರಿಂದ ಮಂಗಳೂರು ರೈಲ್ವೆ ವ್ಯಾಪ್ತಿಯ ಬದಲಾವಣೆ ಅಧಿಕೃತವಾಗಿ ಜಾರಿಗೆ ಬರಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದಾವಣಗೆರೆ ಹೊರವಲಯದ 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧಾರ: ಎಲ್ಲಿ?&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mangaluru-railway-zone-reorganization-from-oct-1-coordination-meeting-between-palakkad-and-mysuru-divisions-mrq/articleshow-l7msrmv"/>
        </item>
        <item>
            <title><![CDATA[ದಾವಣಗೆರೆ ಹೊರವಲಯದ 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧಾರ: ಎಲ್ಲಿ?]]></title>
            <link>https://kannada.asianetnews.com/karnataka-districts/davanagere-a-new-layout-on-a-200-acre-area-on-karur-outskirts-minister-s-s-mallikarjun-mrq/articleshow-yvu1nrb</link>
            <guid isPermaLink="true">https://kannada.asianetnews.com/karnataka-districts/davanagere-a-new-layout-on-a-200-acre-area-on-karur-outskirts-minister-s-s-mallikarjun-mrq/articleshow-yvu1nrb</guid>
            <pubDate>Sat, 12 Sep 2026 07:58:06 +0530</pubDate>
            <description><![CDATA[&lt;p&gt;ದಾವಣಗೆರೆ ಹೊರವಲಯದ ಕರೂರಿನಲ್ಲಿ 200 ಎಕರೆ ಪ್ರದೇಶದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಆದ್ಯತೆ ನೀಡಿ ಹೊಸ ಲೇಔಟ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m29f6q567r9c48n33gkcndk0,imgname-davanagere--1789171817638.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ದಾವಣಗೆರೆ ಹೊರ ವಲಯದ ಕರೂರು ಪ್ರದೇಶದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.&lt;/p&gt;&lt;p&gt;ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯ ನಂತರ ಸಭೆಯ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿ, ಕರೂರು ಪ್ರದೇಶದಲ್ಲಿ ಸುಮಾರು 200 ಎಕರೆ ಜಾಗವನ್ನು ಗುರುತಿಸಿದ್ದು, ಅಲ್ಲಿ ಹೊಸ ಲೇಔಟ್&zwnj; ನಿರ್ಮಿಸಲಾಗುವುದು ಎಂದರು.&lt;/p&gt;&lt;p&gt;ಬಡವರು, ಮಧ್ಯಮ ವರ್ಗದವರಿಗೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ಕರೂರು ಪ್ರದೇಶದ ಲೇಔಟ್ ಅಭಿವೃದ್ಧಿಪಡಿಸಲಾಗುವುದು. ಪ್ರಾಧಿಕಾರದಿಂದ ದಾವಣಗೆರೆ-ಹರಿಹರದಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅವರು ತಿಳಿಸಿದರು.&lt;/p&gt;&lt;p&gt;ಇದಕ್ಕೂ ಮುನ್ನ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ನಡೆದ ದೂಡಾ ಸಭೆಯಲ್ಲಿ ದಾವಣಗೆರೆ-ಹರಿಹರ ನಗರಗಳ ಸಮಗ್ರ ಅಭಿವೃದ್ಧಿ, ಮೂಲ ಸೌಕರ್ಯಗಳ ಸುಧಾರಣೆ ಹಾಗೂ ಸಾರ್ವಜನಿಕರ ಅಗತ್ಯತೆಗಳಿಗೆ ಅನುಗುಣವಾಗಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆಯಾಯಿತು.&lt;/p&gt;&lt;p&gt;ಜಿಲ್ಲಾ ಕೇಂದ್ರದ ವಿವಿಧ ಭಾಗಗಳ ಅಗತ್ಯತೆಗಳನ್ನು ಗುರುತಿಸಿ, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವುದು, ಕೈಗೊಂಡಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವದಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳಿಂದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಶಾಸಕ ಸಮರ್ಥ ಶಾಮನೂರು ಮಾಹಿತಿ ಪಡೆದರು.&lt;/p&gt;&lt;p&gt;ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ಮೂಲಕ ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಭಿವೃದ್ಧಿ ಕಾಮಗಾರಿಗಳ ಅನುಷ್ಟಾನದಲ್ಲಿ ಯಾವುದೇ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಂಡು, ಕಾಮಗಾರಿಗಳ ಗುಣಮಟ್ಟದ ಮೇಲೂ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.&lt;/p&gt;&lt;p&gt;ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಎಚ್.ಟಿ.ಶೇಖರ, ದೂಡಾ ಆಯುಕ್ತರಾದ ರೇಣುಕಾ, ಪಾಲಿಕೆ ಆಯುಕ್ತ ಡಾ.ಮಹಾಂತೇಶ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿದ್ದರು.&lt;/p&gt;&lt;h2&gt;&lt;strong&gt;ಮತ್ತೆ ಶಾಸಕ ಹರೀಶ್&zwnj; ವಿರುದ್ಧ ಹರಿಹಾಯ್ದ ಸಚಿವ ಎಸ್ಸೆಸ್ಸೆಂ&lt;/strong&gt;&lt;/h2&gt;&lt;p&gt;ದಾವಣಗೆರೆ: ಅವನಿಗೆ ಕೆಲಸ ಇಲ್ಲ ಅಂದ್ರೆ, ನನಗೆ ಕೆಲಸ ಇಲ್ಲವಾ? ಫಸ್ಟ್ ಆಫ್ ಆಲ್ ರೈತರನ್ನು ದಿಕ್ಕು ತಪ್ಪಿಸದೇ, ಕರೆಕ್ಟ್ ಆಗಿ ಏನಿದೆ ಅಂತಾ ವಾಸ್ತವವನ್ನು ಹೇಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪರೋಕ್ಷವಾಗಿ ಹರಿಹರ ಶಾಸಕ ಬಿ.ಪಿ.ಹರೀಶ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.&lt;/p&gt;&lt;p&gt;ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಏನು ಪ್ರತಿಭಟನೆ ಮಾಡುತ್ತಾರೆ? ಕರೆಕ್ಟ್ ಆಗಿ ಏನಿದೆ ವಾಸ್ತವ ವಿಚಾರ ರೈತರಿಗೆ ತಿಳಿಸುವ ಕೆಲಸ ಮಾಡಲಿ ಎಂದರು.&lt;/p&gt;&lt;p&gt;ಭದ್ರಾ ಡ್ಯಾಂನ ಎಡ ಮತ್ತು ಬಲ ದಂಡೆ ಅಚ್ಚುಕಟ್ಟು ರೈತರು ಕುಳಿತು ಮಾತನಾಡಿಯೆಂದು ಭದ್ರಾ ಕಾಡಾ ಸಮಿತಿ ಸಭೆಯಲ್ಲಿ ಹೇಳಿದ್ದೇನೆ. ಆ ಸಭೆಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ನೀರಾವರಿ ತಜ್ಞ ಪ್ರೊ.ಸಿ.ನರಸಿಂಹಪ್ಪ ಸೇರಿದಂತೆ ಎಲ್ಲಾ ಶಾಸಕರೂ ಭಾಗವಹಿಸಿದ್ದು, ಅಂದಿನ ಸಭೆಯಲ್ಲಿ ಏನೂ ಮಾತನಾಡಲಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು. ಎಲ್ಲಾ ಕುಂದು ಕೊರತೆ ಪ್ರಾಕ್ಟಿಕಲ್ ಆಗಿ ಸಾಲ್ವ್ ಮಾಡಿ ಹೋಗಬೇಕು. ಅದನ್ನು ಬಿಟ್ಟು ಮಂತ್ರಿಯನ್ನು ಕೇಳಿ ಅಂತಾ ಹೇಳುವುದು ಶಾಸಕನ ಕೆಲಸವಲ್ಲ. ಎಲ್ಲರೂ ಸೇರಿ, ಜೊತೆಗೆ ಕುಳಿತು ಮಾತನಾಡಿ, ಕೆಲಸ ಮಾಡಬೇಕು. ಎಲ್ಲರಿಗೂ ಬಾಯಿ ಇದೆ. ನಾಲಿಗೆ ಇದೆಯಲ್ಲ. ಆದರೆ, ನಾಲಿಗೆಗೆ ಎಲುಬು ಇಲ್ಲ ಎಂದು ಅವರು ಹರಿಹಾಯ್ದರು.&lt;/p&gt;&lt;p&gt;ಗಣೇಶ ಹಬ್ಬದಲ್ಲಿ ಡಿಜೆ ಅನುಮತಿ ನೀಡುವ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದಾರೆ. ಡಿಜೆ ಬಗ್ಗೆ ಪೊಲೀಸ್ ಇಲಾಖೆಯವರೇ ಒಂದು ಹೇಳುತ್ತಾರೆ. ಜಿಲ್ಲಾಡಳಿತವೇ ಒಂದು ರೀತಿ ಹೇಳುತ್ತಿದೆ. ನಾಳೆ ಅಥವಾ ನಾಡಿದ್ದು ಈ ಬಗ್ಗೆ ಸಭೆ ಮಾಡಿ, ಕೂಲಂಕುಷವಾಗಿ ಪರಿಶೀಲಿಸುತ್ತೇವೆ ಎಂದು ಎಸ್ಸೆಸ್ ಮಲ್ಲಿಕಾರ್ಜುನ ತಿಳಿಸಿದರು.&lt;/p&gt;&lt;p&gt;ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮುಖಂಡರಾದ ಬೂದಾಳ್ ಬಾಬು, ಎ.ಬಿ.ರಹೀಂ ಸಾಬ್&zwnj;, ಎ.ನಾಗರಾಜ ಇತರರು ಇದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-a-new-layout-on-a-200-acre-area-on-karur-outskirts-minister-s-s-mallikarjun-mrq/articleshow-yvu1nrb"/>
        </item>
        <item>
            <title><![CDATA[ದೇವನಹಳ್ಳಿ ಬಳಿಯ ಕೃಷ್ಣದೇವರಾಯ ಶಿಕ್ಷಣ ಟ್ರಸ್ಟ್‌ನ 31 ಎಕ್ರೆ ವಶಕ್ಕೆ ಪಡೆಯಿರಿ: ಹೈಕೋರ್ಟ್]]></title>
            <link>https://kannada.asianetnews.com/bengaluru-rural/bengaluru-take-possession-of-the-31-acres-belonging-to-krishnadevaraya-education-trust-near-devanahalli-high-court-mrq/articleshow-rp7e056</link>
            <guid isPermaLink="true">https://kannada.asianetnews.com/bengaluru-rural/bengaluru-take-possession-of-the-31-acres-belonging-to-krishnadevaraya-education-trust-near-devanahalli-high-court-mrq/articleshow-rp7e056</guid>
            <pubDate>Sat, 12 Sep 2026 07:54:57 +0530</pubDate>
            <description><![CDATA[ದೇವನಹಳ್ಳಿ ಬಳಿಯ ನೆಲ್ಲುಕುಂಟೆ ಗ್ರಾಮದಲ್ಲಿರುವ ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್ ಸುಪರ್ದಿಯಲ್ಲಿದ್ದ 31 ಎಕರೆ 36 ಗುಂಟೆ 'ಬಿ' ಖರಾಬು ಜಮೀನನ್ನು ವಶಕ್ಕೆ ಪಡೆಯುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ಈ ಸರ್ಕಾರಿ ಜಮೀನಿನ ಮೇಲೆ ಟ್ರಸ್ಟ್&zwnj;ಗೆ ಯಾವುದೇ ಮಾಲೀಕತ್ವದ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಭೂಮಿಯನ್ನು ಮರುಸರ್ವೇ ಮಾಡಿ ರಕ್ಷಿಸಲು ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29ps8yew4pxvhdkfkb1cngx,imgname-bengaluru--2--1789179765710.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದೇವನಹಳ್ಳಿಯ ಸಮೀಪದ ನೆಲ್ಲುಕುಂಟೆ ಗ್ರಾಮದಲ್ಲಿ &lsquo;ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್&rsquo; ಸುಪರ್ದಿಯಲ್ಲಿರುವ ಬಹುಕೋಟಿ ಮೌಲ್ಯದ 31 ಎಕರೆ 36 ಗುಂಟೆ ಬಿ ಖರಾಬು ಜಮೀನನ್ನು ವಶಕ್ಕೆ ಪಡೆಯಬೇಕೆಂದು ಸರ್ಕಾರಕ್ಕೆ ಹೈಕೋರ್ಟ್&zwnj; ನಿರ್ದೇಶಿಸಿದೆ.&lt;/p&gt;&lt;p&gt;ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್&zwnj;.ಶಾಂತಿಭೂಷಣ್&zwnj; ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.&lt;/p&gt;&lt;p&gt;ನೆಲ್ಲುಕುಂಟೆ ಗ್ರಾಮದ ಸರ್ವೇ ನಂ 45ರಲ್ಲಿ 133 ಎಕರೆ ಮತ್ತು 33 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ಖರೀದಿಸಿರುವುದಾಗಿ ಶ್ರೀಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್&zwnj; ಕ್ಲೇಮು ಮಾಡುತ್ತಿದೆ. ಆದರೆ, ಸರ್ಕಾರಿ ವಕೀಲರು ಸರ್ವೇ ನಂ. 45ಕ್ಕೆ ಸಂಬಂಧಿಸಿದ ಆರ್&zwnj;ಟಿಸಿ ಪ್ರಕಾರ ಈ ಸರ್ವೇ ನಂಬರ್&zwnj;ನಲ್ಲಿ ಒಟ್ಟು 133 ಎಕರೆ 33 ಗುಂಟೆ ಇದೆ. ಅದರಲ್ಲಿ 31 ಎಕರೆ 36 ಗುಂಟೆಗಳಷ್ಟು ಭೂಮಿಯನ್ನು ನಿರ್ದಿಷ್ಟವಾಗಿ &lsquo;ಬಿ&rsquo; ಖರಾಬ್ ಎಂದು ವರ್ಗೀಕರಿಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದ್ದರಿಂದ, ಮಾರಾಟ ಪತ್ರಗಳಲ್ಲಿ ನಮೂದಿಸಲಾದ ಸಂಪೂರ್ಣ ಜಮೀನನ್ನು ಮಾರಾಟಗಾರರು ಹಸ್ತಾಂತರಿಸಲು ಅರ್ಹವಾದ ಖಾಸಗಿ ಭೂಮಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಈ ಕಂದಾಯ ದಾಖಲೆಯಿಂದ ಸ್ಪಷ್ಟವಾಗುತ್ತದೆ ಎಂದು ಪೀಠ ಹೇಳಿದೆ.&lt;/p&gt;&lt;h2&gt;&lt;strong&gt;ನ್ಯಾಯಾಲಯದ ಆದೇಶದಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ಅಲ್ಲದೆ, ಯಾವುದೇ ದೃಷ್ಟಿಕೋನದಿಂದ ನೋಡಿದರೂ ಟ್ರಸ್ಟ್&zwnj;ಗೆ ಭೂಮಿ ಮಾರಾಟ ಮಾಡಿರುವ ಖಾಸಗಿ ವ್ಯಕ್ತಿಗಳಿಗೆ ಕೇವಲ 101 ಎಕರೆ 37 ಗುಂಟೆಗಳಷ್ಟು ಭೂಮಿಯ ಮೇಲೆ ಮಾತ್ರ ಮಾಲೀಕತ್ವ ಮತ್ತು ಹಕ್ಕು ಇತ್ತು. 31 ಎಕರೆ 36 ಗುಂಟೆಗಳ &lsquo;ಬಿ&rsquo; ಖರಾಬ್ ಭೂಮಿಯ ಮೇಲೆ ಅವರಿಗೆ ಯಾವುದೇ ಹಕ್ಕು, ಮಾಲೀಕತ್ವ ಇರಲಿಲ್ಲ. ಕೇವಲ ಮಾರಾಟ ಪತ್ರದಲ್ಲಿ ಭೂಮಿಯ ವಿಸ್ತೀರ್ಣವನ್ನು 133 ಎಕರೆ 33 ಗುಂಟೆ ಎಂದು ನಮೂದಿಸಿದ ಮಾತ್ರಕ್ಕೆ ಟ್ರಸ್ಟ್&zwnj; ಈ 31 ಎಕರೆ 36 ಗುಂಟೆಗಳ ಬಿ ಖರಾಬ್ ಭೂಮಿಯ ಮಾಲೀಕರಾಗುವುದಿಲ್ಲ. ಟ್ರಸ್ಟ್&zwnj; ತಮಗೆ ಭೂಮಿ ಮಾರಾಟ ಮಾಡಿದವರ ಪರವಾಗಿ ನಿಗದಿಯಾಗಿದ್ದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಭೂಮಿಯನ್ನು ಕೋರುತ್ತಿದ್ದಾರೆ ಎಂಬ ಅಂಶವನ್ನು ಏಕ ಸದಸ್ಯ ಪೀಠ ಕಡೆಗಣಿಸಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.&lt;/p&gt;&lt;p&gt;ಸರ್ಕಾರವು ಸರ್ವೇ ನಂಬರ್&zwnj;ನಲ್ಲಿ 45ರಲ್ಲಿ ಒಟ್ಟು ಭೂಮಿಯನ್ನು ಸರ್ವೇ ನಡೆಸುವ ಕುರಿತಂತೆ ಟ್ರಸ್ಟ್&zwnj;ಗೆ ಹೊಸ ನೋಟಿಸ್ ಜಾರಿ ಮಾಡಬೇಕು. ಎಲ್ಲ ಪಕ್ಷಗಾರರಿಗೆ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸುವಂತೆ ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಬೇಕು. ಸರ್ವೇ ನಡೆಸಿ 101 ಎಕರೆ ಮತ್ತು 37 ಗುಂಟೆಗಳ ವಿಸ್ತೀರ್ಣವನ್ನು ಗುರುತಿಸಬೇಕು. &lsquo;ಬಿ&rsquo; ಖರಾಬ್ ಸರ್ಕಾರಿ ಜಮೀನು ಎಂದು ಗುರುತಿಸಿದ ನಂತರ, ಅಧಿಕಾರಿಗಳು ಅದರ ವರ್ಗೀಕರಣವನ್ನು ಕಂದಾಯ ದಾಖಲೆಗಳಲ್ಲಿ ಸೂಕ್ತ ರೀತಿಯಲ್ಲಿ ನಮೂದಿಸಿ ಜಮೀನನ್ನು ರಕ್ಷಿಸಬೇಕು ಎಂದು ಪೀಠ ಹೇಳಿದೆ.&lt;/p&gt;&lt;h3&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h3&gt;&lt;p&gt;ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಾಲ ಹೋಬಳಿಯ ನೆಲ್ಲುಕುಂಟೆ ಗ್ರಾಮದ ಸರ್ವೇ ನಂಬರ್ 45ರ ಸಮೀಕ್ಷೆ ನಡೆಸಲು ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ 2023ರ ಏ.17ರಂದು ಹೊರಡಿಸಿದ್ದ ನೋಟಿಸ್&zwnj;ಗಳನ್ನು ಪ್ರಶ್ನಿಸಿ, &lsquo;ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್&rsquo; ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿತ್ತು. ಆ ನೋಟಿಸ್&zwnj;ಗಳನ್ನು ಏಕ ಸದಸ್ಯ ಪೀಠ ರದ್ದುಪಡಿಸಿತ್ತು. ಅಲ್ಲದೆ, ಪ್ರಕರಣ ಸಂಬಂಧ ಟ್ರಸ್ಟ್&zwnj;, ಸಕ್ಷಮ ಪ್ರಾಧಿಕಾರಕ್ಕೆ ಆಕ್ಷೇಪಣೆ ಸಲ್ಲಿಸಬೇಕು. ಅಂತಹ ಆಕ್ಷೇಪಣೆ ಸಲ್ಲಿಕೆಯಾದರೆ ಸಕ್ಷಮ ಪ್ರಾಧಿಕಾರವು ಆಕ್ಷೇಪಣೆ ಪರಿಗಣಿಸಿ, ಟ್ರಸ್ಟ್&zwnj; ವಾದ ಆಲಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯಲಹಂಕ ವಿಶೇಷ ತಹಶೀಲ್ದಾರ್, ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮತ್ತು ಭೂ ಮಾಪಕ (ಸರ್ವೇಯರ್) ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-rural/bengaluru-take-possession-of-the-31-acres-belonging-to-krishnadevaraya-education-trust-near-devanahalli-high-court-mrq/articleshow-rp7e056"/>
        </item>
        <item>
            <title><![CDATA[Bengaluru 16980 ಕೋಟಿ ವೆಚ್ಚದ ಸುರಂಗ ಮಾರ್ಗ, 9 ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ]]></title>
            <link>https://kannada.asianetnews.com/bengaluru-urban/bengaluru-approval-granted-for-the-construction-of-a-tunnel-road-and-9-flyovers-at-a-cost-of-rs-16980-crore-mrq/articleshow-mgt9hbr</link>
            <guid isPermaLink="true">https://kannada.asianetnews.com/bengaluru-urban/bengaluru-approval-granted-for-the-construction-of-a-tunnel-road-and-9-flyovers-at-a-cost-of-rs-16980-crore-mrq/articleshow-mgt9hbr</guid>
            <pubDate>Sat, 12 Sep 2026 07:39:42 +0530</pubDate>
            <description><![CDATA[ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಸಿಲ್ಕ್&zwnj;ಬೋರ್ಡ್&zwnj;ನಿಂದ ಹೆಬ್ಬಾಳದವರೆಗೆ ₹16,980 ಕೋಟಿ ವೆಚ್ಚದ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ಇದರೊಂದಿಗೆ 11 ಎಲಿವೇಟೆಡ್ ಕಾರಿಡಾರ್&zwnj;ಗಳು ಮತ್ತು ಪ್ರವಾಹ ನಿಯಂತ್ರಣಕ್ಕಾಗಿ ರಾಜಕಾಲುವೆ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29gte13vnxw0tsam3cywbmj,imgname-hebbal-to-silk-board-1789173512227.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದ ಸಂಚಾರ ಸಮಸ್ಯೆ ಪರಿಹಾರಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 16,980 ಕೋಟಿ ರು.ವೆಚ್ಚದ ಮೊದಲ ಹಂತದ ಸುರಂಗ ಮಾರ್ಗ ನಿರ್ಮಾಣ ಪ್ರಕ್ರಿಯೆಗೆ ಅನುಮತಿ ದೊರೆತಿದ್ದು, ಶೀಘ್ರ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್&zwnj; ರಾವ್ ತಿಳಿಸಿದ್ದಾರೆ.&lt;/p&gt;&lt;p&gt;ಮುಖ್ಯಮಂತ್ರಿಗಳ ಸೂಚನೆಯಂತೆ ಯೋಜನೆಯ ಮೊದಲ ಹಂತದ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಈ ಸುರಂಗ ಮಾರ್ಗವು ಸಿಲ್ಕ್&zwnj;ಬೋರ್ಡ್&zwnj; ಜಂಕ್ಷನ್&zwnj;ನಿಂದ ಹೆಬ್ಬಾಳದ ವರೆಗೆ 16.75 ಕಿ.ಮೀ ಸಂಪರ್ಕ ಕಲ್ಪಿಸುತ್ತದೆ. ಇನ್ನು 2 ಅಥವಾ 3 ದಿನಗಳಲ್ಲಿ ಯೋಜನಾ ವರದಿ ಕುರಿತು ಮುಖ್ಯಮಂತ್ರಿಗಳ ಜೊತೆ ಅಂತಿಮ ಚರ್ಚೆ ನಡೆಸುವುದಾಗಿ ತಿಳಿಸಿದರು.&lt;/p&gt;&lt;p&gt;ಇದಲ್ಲದೆ, ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ 23 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು 23,500 ಕೋಟಿ ರು.ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು, ಈಗಾಗಲೇ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಎರಡನೇ ಹಂತದಲ್ಲಿ ಪೂರ್ವ ಹಾಗೂ ಪಶ್ಚಿಮ 23 ಕಿ.ಮೀ. ಉದ್ದದ ಸುರಂಗಮಾರ್ಗ ಸಂಬಂಧ ಯೋಜನಾ ವರದಿ ಸಿದ್ಧತೆ ಹಂತದಲ್ಲಿದೆ. ಇದಲ್ಲದೆ, ಸಿಲ್ಕ್ ಬೋರ್ಡ್ ಜಂಕ್ಷನ್&zwnj;ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗಿನ ಹೊರವರ್ತುಲ ರಸ್ತೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಹಾಗೂ ದೀರ್ಘಬಾಳಿಕೆ ರಸ್ತೆಯಾಗಿ ಅಭಿವೃದ್ಧಿಪಡಿಸಲು 450 ಕೋಟಿ ರು.ಅನುದಾನ ಒದಗಿಸಲಾಗಿದೆ ಎಂದರು.&lt;/p&gt;&lt;h2&gt;&lt;strong&gt;9 ಮೇಲ್ಸೇತುವೆ ನಿರ್ಮಾಣ&lt;/strong&gt;&lt;/h2&gt;&lt;p&gt;ನಗರದ ಸಾರಿಗೆ ವ್ಯವಸ್ಥೆ ಉತ್ತಮ ದರ್ಜೆಗೆ ಪರಿವರ್ತಿಸಲು ಒಟ್ಟು 120 ಕಿ.ಮೀ. ಉದ್ದದ 13 ಎತ್ತರಿಸಿದ ಮೇಲ್ಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ 13,262.70 ಕೋಟಿ ರು.ಅಂದಾಜು ವೆಚ್ಚದಲ್ಲಿ ಒಟ್ಟು 75.60 ಕಿ.ಮೀ. ಉದ್ದದ 11 ಎಲಿವೇಟೆಡ್ ಕಾರಿಡಾರ್&zwnj;ಗಳಿಗೆ ಟೆಂಡರ್ ಪ್ರಗತಿಯಲ್ಲಿದ್ದು, ಈಗಾಗಲೇ 9 ಎಲಿವೇಟೆಡ್ ಕಾರಿಡಾರ್&zwnj;ಗಳ, ಒಟ್ಟು 29.10 ಕಿಮೀ ಉದ್ದದ ಕಾಮಗಾರಿಗಳಿಗೆ ಟೆಂಡರ್ ಅಂತಿಮ ಹಂತದಲ್ಲಿವೆ ಎಂದರು. ಎಲಿವೇಟೆಡ್ ಕಾರಿಡಾರ್&zwnj;ಗೆ ಭೂ ಸ್ವಾಧೀನ ಕಾರ್ಯವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದ್ದು, 11 ಎಲಿವೇಟೆಡ್ ಕಾರಿಡಾರ್ ಗಳಿಗೆ ಸಂಬಂಧ ಭೂ-ಸ್ವಾಧೀನಕ್ಕೆ ಒಳಪಡುವ ಸ್ವತ್ತುಗಳ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ ಎಂದರು.&lt;/p&gt;&lt;h3&gt;&lt;strong&gt;ಪ್ರವಾಹ ನಿಯಂತ್ರಣ, ರಾಜಕಾಲುವೆ ಅಭಿವೃದ್ಧಿ&lt;/strong&gt;&lt;/h3&gt;&lt;p&gt;ಬೆಂಗಳೂರು ಪೂರ್ವ ಹಾಗೂ ಉತ್ತರ ನಗರ ಪಾಲಿಕೆಗಳ ವ್ಯಾಪ್ತಿಯ ಎಚ್&zwnj;ಬಿಆರ್ ಲೇಔಟ್, ಸಾಯಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ, ಗೆದ್ದಲಹಳ್ಳಿ ರೈಲ್ವೆ ಸೇತುವೆ ಬಳಿ ಅಸ್ತಿತ್ವದಲ್ಲಿದ್ದ ಕಿರಿದಾದ ವೆಂಟ್&zwnj;ಗೆ ಹೆಚ್ಚುವರಿಯಾಗಿ 2 ಹೊಸ ವೆಂಟ್&zwnj;ಗಳನ್ನು 16 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿ, ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ನಗರದಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಹಾಗೂ ಅನಾಹುತ ತಡೆಯಲು ಮತ್ತು ಬೃಹತ್ ರಾಜಕಾಲುವೆಗಳಿಗೆ ಶಾಶ್ವತ ರಕ್ಷಣಾತ್ಮಕ ಮೂಲಸೌಕರ್ಯ ಒದಗಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ 2,000 ಕೋಟಿ ರು.ವೆಚ್ಚದಲ್ಲಿ 173 ಹೊಸ ರಾಜಕಾಲುವೆಗಳ ನಿರ್ಮಾಣ ಹಾಗೂ 80 ರಾಜಕಾಲುವೆಗಳ ಉನ್ನತೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಗಳಲ್ಲಿ ಈಗಾಗಲೇ ಶೇ.15ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಆಯುಕ್ತರು ತಿಳಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-approval-granted-for-the-construction-of-a-tunnel-road-and-9-flyovers-at-a-cost-of-rs-16980-crore-mrq/articleshow-mgt9hbr"/>
        </item>
        <item>
            <title><![CDATA[ಹುಬ್ಬಳ್ಳಿ-ಧಾರವಾಡ ನಗರದಲ್ಲಿ 5 ದಿನ ಮದ್ಯ ಮಾರಾಟ, ಸಾಗಾಟಕ್ಕೆ ನಿಷೇಧ; ಯಾವ್ಯಾವ ದಿನ?]]></title>
            <link>https://kannada.asianetnews.com/karnataka-districts/ganesha-festival-ban-on-liquor-sale-and-transport-in-hubballi-dharwad-city-for-5-days-mrq/articleshow-osh65rs</link>
            <guid isPermaLink="true">https://kannada.asianetnews.com/karnataka-districts/ganesha-festival-ban-on-liquor-sale-and-transport-in-hubballi-dharwad-city-for-5-days-mrq/articleshow-osh65rs</guid>
            <pubDate>Sat, 12 Sep 2026 07:36:31 +0530</pubDate>
            <description><![CDATA[ಗಣೇಶೋತ್ಸವದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಪೊಲೀಸ್ ಆಯುಕ್ತರು 5 ಹಂತಗಳಲ್ಲಿ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ, ರಾಣಿ ಚೆನ್ನಮ್ಮ ಮೈದಾನದಲ್ಲಿ ಸೆ. 14ರಿಂದ ಮೂರು ದಿನಗಳ ಕಾಲ ಸಾಂಸ್ಕೃತಿಕ ವೈಭವದೊಂದಿಗೆ ಗಣೇಶೋತ್ಸವ ಆಚರಿಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr65x5jgmac7xtedc2cekj3d,imgname-alcohol--9--1778323985999.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 5 ಹಂತಗಳಲ್ಲಿ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯ ಸೇವನೆಯನ್ನು ನಿಷೇಧಿಸಿ ಹು-ಧಾ ನಗರ ಪೊಲೀಸ್&zwnj; ಆಯುಕ್ತ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಭೂಷಣ್ ಬೊರಸೆ ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಗಣೇಶ ಹಬ್ಬದ ಆಚರಣೆ ಸೆ.14ರಿಂದ 25ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾನೂನು ಮತ್ತು ಸುವ್ಯವಸ್ಥೆ ಹಿನ್ನೆಲೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಯಾವಾಗ ಮದ್ಯ ನಿಷೇಧ?&lt;/strong&gt;&lt;/h2&gt;&lt;p&gt;ಸೆ.13ರ ರಾತ್ರಿ 11.59 ರಿಂದ ಸೆ.15ರ ಬೆಳಗ್ಗೆ 6ರ ವರೆಗೆ, ಸೆ.17ರ ರಾತ್ರಿ 11.59ರಿಂದ ಸೆ. 19ರ ಬೆಳಗ್ಗೆ 6ರ ವರೆಗೆ, ಸೆ.19ರ ರಾತ್ರಿ 11.59ರಿಂದ ಸೆ.21ರ ಬೆಳಗ್ಗೆ 6ರ ವರೆಗೆ, ಸೆ. 21ರ ರಾತ್ರಿ 11.59ರಿಂದ ಸೆ.23ರ ಬೆಳಗ್ಗೆ 6ರ ವರೆಗೆ, ಸೆ.24ರ ರಾತ್ರಿ 11.59ರಿಂದ ಸೆ. 26ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ, ಸಾಗಾಟ ಹಾಗೂ ಸೇವನೆ ನಿಷೇಧಿಸಲಾಗಿದೆ.&lt;/p&gt;&lt;h3&gt;&lt;strong&gt;ರಾಣಿ ಚೆನ್ನಮ್ಮ ಮೈದಾನದಲ್ಲಿ ಸೆ. 14ರಿಂದ ಗಣೇಶೋತ್ಸವ&lt;/strong&gt;&lt;/h3&gt;&lt;p&gt;ರಾಣಿ ಚೆನ್ನಮ್ಮ ಮೈದಾನ ಗಣೇಶೋತ್ಸವ ಮಂಡಳಿ ವತಿಯಿಂದ ಸೆ. 14ರಿಂದ 16ರ ವರೆಗೆ ಮೂರು ದಿನಗಳ ಕಾಲ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಗಣೇಶೋತ್ಸವ ಆಚರಿಸಲಾಗುವುದು ಎಂದು ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜಯ ಬಡಸ್ಕರ ತಿಳಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ, ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಪ್ರತಿಬಿಂಬಿಸುವ ಮಾದರಿ ಉತ್ಸವವನ್ನಾಗಿ ರೂಪಿಸುವುದು ಮಂಡಳಿಯ ಆಶಯವಾಗಿದೆ ಎಂದರು.&lt;/p&gt;&lt;p&gt;ಕಳೆದ ವರ್ಷ ಗಣೇಶೋತ್ಸವ ಹಾಗೂ ವಿಸರ್ಜನಾ ಮೆರವಣಿಗೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 300ಕ್ಕೂ ಅಧಿಕ ಕಲಾವಿದರು ವಿವಿಧ ಸಾಂಸ್ಕೃತಿಕ ಮೇಳಗಳಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮೆರುಗು ತಂದಿದ್ದರು. ಡಿಜೆ ಬಳಸದೆ ಇದ್ದರೂ ಜನರ ಉತ್ಸಾಹ ಮತ್ತು ಸಂಭ್ರಮಕ್ಕೆ ಯಾವುದೇ ಕೊರತೆಯಾಗಿರಲಿಲ್ಲ ಎಂದು ಹೇಳಿದರು.&lt;/p&gt;&lt;p&gt;ಈ ಬಾರಿ ಸೆ. 14ರಂದು ಬೆಳಗ್ಗೆ 9 ಗಂಟೆಗೆ ಮೂರುಸಾವಿರ ಮಠದ ಆವರಣದಿಂದ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ಆರಂಭವಾಗಲಿದ್ದು, ರಾಣಿ ಚೆನ್ನಮ್ಮ ಮೈದಾನಕ್ಕೆ ಮೂರ್ತಿಯನ್ನು ಕರೆತಂದು ಮಧ್ಯಾಹ್ನ 12 ಗಂಟೆಗೆ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗುವುದು. ಸೆ. 14 ಮತ್ತು 15ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ ನಿರಂತರ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿದೆ ಎಂದರು.&lt;/p&gt;&lt;p&gt;ಸೆ. 16ರಂದು ಮಧ್ಯಾಹ್ನ 12 ಗಂಟೆಗೆ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಸಾರ್ವಜನಿಕ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ ಜಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಮೆರವಣಿಗೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಮೇಳಗಳು ಪ್ರಮುಖ ಆಕರ್ಷಣೆಯಾಗಲಿವೆ. ಸಂಜೆ 5ರ ವೇಳೆಗೆ ಹೊಸೂರಿನ ಬಾವಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ ಎಂದರು.&lt;/p&gt;&lt;p&gt;ಹು-ಧಾ ಮಹಾನಗರ ಪಾಲಿಕೆಯಿಂದ ಉತ್ಸವಕ್ಕೆ ಅನುಮತಿ ದೊರೆತಿದ್ದು, ಉತ್ಸವದ ಯಶಸ್ವಿ ಆಯೋಜನೆಗೆ ಸ್ವಾಗತ ಸಮಿತಿ ಹಾಗೂ ಉತ್ಸವ ಸಮಿತಿ ರಚಿಸಲಾಗಿದೆ. ಮಹಾದೇವ ಕರಮರಿ, ನಂದಕುಮಾರ ಹಾಗೂ ಡಾ. ವಿ.ಎಸ್.ವಿ. ಪ್ರಸಾದ್ ಮಹಾಪೋಷಕರಾಗಿದ್ದು, 41 ಸದಸ್ಯರ ಉತ್ಸವ ಸಮಿತಿಗೆ ಉದ್ಯಮಿ ಗೌತಮ ಬಾಫಣಾ ಅಧ್ಯಕ್ಷರಾಗಿದ್ದಾರೆ ಎಂದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಹಾದೇವ ಕರಮರಿ, ಗೌತಮ ಬಾಫಣಾ, ರವಿ ದಂಡಿನ, ರಮೇಶ ಕದಂ ಸೇರಿ ಹಲವರಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ganesha-festival-ban-on-liquor-sale-and-transport-in-hubballi-dharwad-city-for-5-days-mrq/articleshow-osh65rs"/>
        </item>
        <item>
            <title><![CDATA[Belagavi: 53 ವರ್ಷಗಳ ಬಳಿಕ ನಡೆಯಲಿದೆ ಉತ್ಸವ; ಗಣೇಶೋತ್ಸವ ಸಂಭ್ರಮಕ್ಕೆ ಬೆಳಗಾವಿ ಸಜ್ಜು]]></title>
            <link>https://kannada.asianetnews.com/karnataka-districts/even-before-ganesha-chaturthi-belagavi-city-is-immersed-in-festive-fervour-mrq/articleshow-a8trsrd</link>
            <guid isPermaLink="true">https://kannada.asianetnews.com/karnataka-districts/even-before-ganesha-chaturthi-belagavi-city-is-immersed-in-festive-fervour-mrq/articleshow-a8trsrd</guid>
            <pubDate>Sat, 12 Sep 2026 06:18:44 +0530</pubDate>
            <description><![CDATA[&lt;p&gt;ಗಣೇಶ ಚತುರ್ಥಿಗೆ ಮುನ್ನವೇ ಬೆಳಗಾವಿ ನಗರವು ಹಬ್ಬದ ಸಂಭ್ರಮದಲ್ಲಿ ಮುಳುಗಿದೆ. ಸಾರ್ವಜನಿಕ ಮಂಟಪಗಳಲ್ಲಿ ಬೃಹತ್ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಮಾರುಕಟ್ಟೆಗಳಲ್ಲಿ ಭರ್ಜರಿ ಖರೀದಿ ಹಾಗೂ ಮನೆಮನೆಗಳಲ್ಲಿ ಗಣಪನ ಸ್ವಾಗತಕ್ಕೆ ಸಿದ್ಧತೆಗಳು ಜೋರಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m29hc6vy587k213yk295yfgn,imgname-belagavi-1789174094718.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀಶೈಲ ಮಠದ&lt;/strong&gt;&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ನಗರವೆಲ್ಲ ಗಣಪನೇ ಗಣಪ. ಬೀದಿಗಿಳಿದರೆ ಕಿವಿಗೆ ಬೀಳುವುದು ಡೊಳ್ಳು, ತಾಷಾ, ಗಣೇಶನ ಘೋಷಣೆ. ಮಾರುಕಟ್ಟೆಗೆ ಕಾಲಿಟ್ಟರೆ ಕಣ್ಣಿಗೆ ಬೀಳುವುದು ಬಣ್ಣಬಣ್ಣದ ಗಣೇಶ ಮೂರ್ತಿಗಳು. ಅಂಗಡಿಗಳ ಮುಂದೆ ಅಲಂಕಾರಿಕ ಸಾಮಗ್ರಿಗಳ ರಾಶಿ. ಕೈಚೀಲ ಹಿಡಿದು ಹಬ್ಬದ ಖರೀದಿಗೆ ಬಂದ ಮಹಿಳೆಯರು. ತಮಗಿಷ್ಟವಾದ ಗಣಪನನ್ನು ಮನೆಗೆ ಕೊಂಡೊಯ್ಯಬೇಕೆಂದು ಹಠ ಹಿಡಿದ ಮಕ್ಕಳು. ಮಂಟಪಗಳ ಮುಂದೆ ಬೃಹತ್ ಗಣೇಶ ಮೂರ್ತಿಗಳ ಅಂತಿಮ ಸಿದ್ಧತೆಯಲ್ಲಿ ತೊಡಗಿರುವ ಕಲಾವಿದರು.&lt;/p&gt;&lt;p&gt;ಗಣೇಶ ಚತುರ್ಥಿಗೆ ಇನ್ನೂ ಮೂರು ದಿನ ಬಾಕಿ ಇರುವಂತೆಯೇ ಬೆಳಗಾವಿ ನಗರ ಸಂಪೂರ್ಣ ಹಬ್ಬದ ಗುಂಗಿನಲ್ಲಿ ಮುಳುಗಿದೆ. ವಿಘ್ನವಿನಾಶಕನನ್ನು ಮನೆಗೆ ಬರಮಾಡಿಕೊಳ್ಳಲು ಮನೆಮನೆಗಳಲ್ಲಿ ಸಿದ್ಧತೆ ಚುರುಕುಗೊಂಡಿದ್ದರೆ, ಸಾರ್ವಜನಿಕ ಗಣೇಶ ಮಂಡಳಿಗಳು ಈಗಾಗಲೇ ಬೃಹತ್ ಮೂರ್ತಿಗಳನ್ನು ಮಂಟಪಗಳಿಗೆ ತಂದು ಪ್ರತಿಷ್ಠಾಪನೆಯ ಸಿದ್ಧತೆಯಲ್ಲಿ ತೊಡಗಿವೆ. ಹೀಗಾಗಿ ಗಣೇಶ ಚತುರ್ಥಿ ಆರಂಭಕ್ಕೂ ಮುನ್ನವೇ ನಗರದಲ್ಲಿ ಹಬ್ಬದ ವಾತಾವರಣ ಗರಿಗೆದರಿದೆ.&lt;/p&gt;&lt;h2&gt;&lt;strong&gt;ಗಣಪನಿಗಾಗಿಯೇ ಮಾರುಕಟ್ಟೆ&lt;/strong&gt;&lt;/h2&gt;&lt;p&gt;ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಖಡೇಬಜಾರ್&zwnj;, ಶನಿವಾರಕೂಟ, ಕಾಕತಿವೇಸ್&zwnj;, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಬಾಪಟ ಗಲ್ಲಿ, ಕೋನ್ವಾಳ ಗಲ್ಲಿ ಸೇರಿದಂತೆ ಮತ್ತಿತರ ಪ್ರದೇಶಗಳು ಇದೀಗ ಗಣೇಶೋತ್ಸವದ ಮಾರುಕಟ್ಟೆಗಳಾಗಿ ಮಾರ್ಪಟ್ಟಿವೆ. ವಿವಿಧ ಗಾತ್ರ, ಆಕಾರ ಮತ್ತು ವಿನ್ಯಾಸದ ಗಣೇಶ ಮೂರ್ತಿಗಳು ಗ್ರಾಹಕರನ್ನು ಸೆಳೆಯುತ್ತಿವೆ. ಪುಟ್ಟ ಗಣಪನಿಂದ ಹಿಡಿದು ಬೃಹದಾಕಾರದ ಮೂರ್ತಿಗಳವರೆಗೆ ಸಾಲಾಗಿ ನಿಂತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.&lt;/p&gt;&lt;p&gt;ಮನೆಯ ಗಣಪನನ್ನು ಆಯ್ಕೆ ಮಾಡಿಕೊಳ್ಳಲು ಕುಟುಂಬಗಳು ಮೂರ್ತಿಗಳ ಮುಂದೆ ನಿಂತು ಚರ್ಚಿಸುತ್ತಿದ್ದರೆ, ಮಕ್ಕಳ ಕಣ್ಣು ಮಾತ್ರ ಬಣ್ಣಬಣ್ಣದ ಮೂರ್ತಿಗಳ ಮೇಲೆಯೇ. ಯಾವ ಗಣಪ ಸುಂದರ, ಯಾವ ಗಣಪ ಮನೆಗೆ ಸೂಕ್ತ ಎಂಬ ಚರ್ಚೆ ನಡೆಯುತ್ತಿದ್ದರೆ, ವ್ಯಾಪಾರಿಗಳು ಗ್ರಾಹಕರ ಆಯ್ಕೆಗೆ ತಕ್ಕಂತೆ ಮೂರ್ತಿಗಳನ್ನು ತೋರಿಸುತ್ತಿದ್ದಾರೆ.&lt;/p&gt;&lt;p&gt;ಗಣೇಶ ಮಂಟಪಗಳ ಅಲಂಕಾರಕ್ಕೆ ಬೇಕಾಗುವ ಹೂವಿನ ಮಾಲೆಗಳು, ಕೃತಕ ಹೂವುಗಳು, ತೋರಣಗಳು, ಬಣ್ಣಬಣ್ಣದ ಪರದೆಗಳು, ಅಲಂಕಾರಿಕ ವಸ್ತುಗಳು ಹಾಗೂ ವಿದ್ಯುತ್ ದೀಪಗಳಿಗೆ ಭರ್ಜರಿ ಬೇಡಿಕೆ ಬಂದಿದೆ. ಸರಣಿ ದೀಪ, ಎಲ್&zwnj;ಇಡಿ ದೀಪ ಸೇರಿದಂತೆ ಹೊಸ ವಿನ್ಯಾಸದ ಬೆಳಕಿನ ಅಲಂಕಾರಿಕ ಸಾಮಗ್ರಿಗಳ ಖರೀದಿ ಹೆಚ್ಚಾಗಿದೆ. ಪೂಜಾ ಸಾಮಗ್ರಿ, ಹೂವು, ಹಣ್ಣು, ತೆಂಗಿನಕಾಯಿ, ಬಾಳೆಹಣ್ಣು, ಗಂಧ, ಕುಂಕುಮ, ಅರಿಶಿನ, ಅಗರಬತ್ತಿ, ಕರ್ಪೂರ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯೂ ಚುರುಕಾಗಿದೆ. ಹಬ್ಬದ ದಿನಗಳು ಸಮೀಪಿಸುತ್ತಿದ್ದಂತೆ ಈ ವಹಿವಾಟು ಇನ್ನಷ್ಟು ಹೆಚ್ಚುವ ನಿರೀಕ್ಷೆಯನ್ನು ವ್ಯಾಪಾರಿಗಳು ಹೊಂದಿದ್ದಾರೆ.&lt;/p&gt;&lt;p&gt;ಹಬ್ಬದ ಖರೀದಿಯ ಮತ್ತೊಂದು ಭಾಗ ಬಟ್ಟೆ ಅಂಗಡಿಗಳಲ್ಲಿದೆ. ಮಕ್ಕಳಿಗೆ ಹೊಸ ಉಡುಪು, ಮಹಿಳೆಯರಿಗೆ ಸೀರೆ, ಪುರುಷರಿಗೆ ಶರ್ಟ್, ಪ್ಯಾಂಟ್, ಕುರ್ತಾಗಳ ಖರೀದಿ ನಡೆಯುತ್ತಿದೆ. ಮನೆಗಳಲ್ಲಿ ನೈವೇದ್ಯ ಮತ್ತು ಪ್ರಸಾದ ತಯಾರಿಸಲು ಬೇಕಾದ ಪದಾರ್ಥಗಳು ಹಾಗೂ ಸಿಹಿ ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.&lt;/p&gt;&lt;h3&gt;&lt;strong&gt;ಬೆಳಗಾವಿಯ ರಾಜಾನ ಅದ್ಧೂರಿ ಆಗಮನ&lt;/strong&gt;&lt;/h3&gt;&lt;p&gt;ಗಣೇಶೋತ್ಸವದ ಸಂಭ್ರಮಕ್ಕೆ ಈಗಾಗಲೇ ಮುನ್ನುಡಿ ಬರೆದಿರುವ ಬೆಳಗಾವಿ, 10 ದಿನ ಮೊದಲೇ ಮತ್ತೊಂದು ಅದ್ಧೂರಿ ಕ್ಷಣಕ್ಕೆ ಸಾಕ್ಷಿಯಾಯಿತು. ಚವ್ಹಾಟ ಗಲ್ಲಿಯ ಬೆಳಗಾವಿಯ ರಾಜಾ ಎಂಬ ಖ್ಯಾತಿ ಹೊಂದಿದ ಗಣೇಶ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ನಗರಕ್ಕೆ ಬರಮಾಡಿಕೊಳ್ಳಲಾಯಿತು. ಹೀಗೆ ನಾನಾ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಬೃಹತ್&zwnj; ಗಾತ್ರದ ಗಣೇಶ ಮೂರ್ತಿಗಳನ್ನು ವಿರಾಜಮಾನಗೊಂಡಿವೆ. ಡೊಳ್ಳು, ಡೋಲ್-ತಾಷಾ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಾದ್ಯಮೇಳಗಳ ನಿನಾದದ ನಡುವೆ ಟ್ರಾಲಿಯಲ್ಲಿ ಆಗಮಿಸಿದ ಬೃಹದಾಕಾರದ ಗಣೇಶ ಮೂರ್ತಿ ಭಕ್ತರ ಗಮನ ಸೆಳೆಯಿತು. ಜೈ ಗಣೇಶ ಘೋಷಣೆಗಳು ಮುಗಿಲು ಮುಟ್ಟಿದವು. ಯುವಕರು ಕುಣಿದು ಕುಪ್ಪಳಿಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಯ ಸಂಭ್ರಮವನ್ನು ಹೆಚ್ಚಿಸಿದರು.&lt;/p&gt;&lt;p&gt;ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಆಗಮಿಸಿದ ಬೆಳಗಾವಿಯ ರಾಜಾನನ್ನು ಸ್ವಾಗತಿಸಲು ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.&lt;/p&gt;&lt;p&gt;&lt;strong&gt;53 ವರ್ಷಗಳ ಪರಂಪರೆ&lt;/strong&gt;&lt;/p&gt;&lt;p&gt;ಬೆಳಗಾವಿಯ ಗಣೇಶೋತ್ಸವ ಎಂದರೆ ಕೇವಲ ಹಬ್ಬವಲ್ಲ. ಅದು ನಗರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾರ್ವಜನಿಕ ಬದುಕಿನೊಂದಿಗೆ ಬೆಸೆದುಕೊಂಡಿರುವ ಪರಂಪರೆ. 53 ವರ್ಷಗಳ ಬಳಿಕ ಈ ಬಾರಿ 12 ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿರುವುದು ವಿಶೇಷ.&lt;/p&gt;&lt;p&gt;ನಗರದ ವಿವಿಧ ಭಾಗಗಳಲ್ಲಿ 400ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹಲವು ಮಂಡಳಿಗಳು ಗಣೇಶ ಚತುರ್ಥಿಗೆ ಒಂದು ವಾರ ಮುಂಚೆಯೇ ಮೂರ್ತಿಗಳನ್ನು ಮಂಟಪಗಳಿಗೆ ತಂದು ಅಲಂಕಾರ ಕಾರ್ಯ ಆರಂಭಿಸಿವೆ. ಕೆಲ ಮಂಟಪಗಳಲ್ಲಿ ಧಾರ್ಮಿಕ ವಾತಾವರಣಕ್ಕೆ ಒತ್ತು ನೀಡಲಾಗಿದ್ದರೆ, ಇನ್ನು ಕೆಲವೆಡೆ ಕಲಾತ್ಮಕ ಅಲಂಕಾರ, ಸಾಮಾಜಿಕ ಸಂದೇಶ ಹಾಗೂ ವಿವಿಧ ವಿಷಯಾಧಾರಿತ ವಿನ್ಯಾಸಗಳಿಗೆ ಆದ್ಯತೆ ನೀಡಲಾಗುತ್ತಿದೆ.&lt;/p&gt;&lt;p&gt;12 ದಿನಗಳ ಕಾಲ ಬೆಳಗಾವಿಯತ್ತ ಭಕ್ತರ ಹರಿವು ಹೆಚ್ಚಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಜನರು ಗಣೇಶ ಮೂರ್ತಿಗಳ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ. ವಿಸರ್ಜನಾ ಮೆರವಣಿಗೆ ವೇಳೆ ಲಕ್ಷಾಂತರ ಜನರು ಭಾಗವಹಿಸುವುದು ಬೆಳಗಾವಿಯ ಗಣೇಶೋತ್ಸವದ ವೈಭವಕ್ಕೆ ಸಾಕ್ಷಿಯಾಗಲಿದೆ.&lt;/p&gt;&lt;p&gt;ಮುಂಬೈ, ಪುಣೆ ಹೊರತುಪಡಿಸಿದರೆ ದೇಶದಲ್ಲೇ ಅತ್ಯಂತ ಅದ್ಧೂರಿಯಾಗಿ ಸಾರ್ವಜನಿಕ ಗಣೇಶೋತ್ಸವ ನಡೆಯುವ ನಗರಗಳಲ್ಲಿ ಬೆಳಗಾವಿಗೂ ಪ್ರಮುಖ ಸ್ಥಾನವಿದೆ. ಕರ್ನಾಟಕದಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪರಂಪರೆಗೆ ಬೆಳಗಾವಿಯೇ ಮುನ್ನುಡಿ ಬರೆದಿದೆ ಎಂಬ ಹೆಗ್ಗಳಿಕೆಯೂ ನಗರದ ಗಣೇಶೋತ್ಸವಕ್ಕಿದೆ.&lt;/p&gt;&lt;p&gt;&lt;strong&gt;ಮನೆಮನೆಗೂ ಗಣಪನ ಸ್ವಾಗತ&lt;/strong&gt;&lt;/p&gt;&lt;p&gt;ಸಾರ್ವಜನಿಕ ಮಂಟಪಗಳ ಸಿದ್ಧತೆ ಒಂದು ಕಡೆಯಾದರೆ, ಮನೆಮನೆಗಳಲ್ಲಿಯೂ ಗಣಪನ ಸ್ವಾಗತಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಮನೆ ಸ್ವಚ್ಛತೆ, ಮಂಟಪ ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಕುಟುಂಬ ಸದಸ್ಯರು ತೊಡಗಿದ್ದಾರೆ.&lt;/p&gt;&lt;p&gt;ಕೆಲವರು ಸರಳ ಮಂಟಪಕ್ಕೆ ಆದ್ಯತೆ ನೀಡಿದರೆ, ಮತ್ತೆ ಕೆಲವರು ಕಲಾತ್ಮಕ ವಿನ್ಯಾಸದ ಮಂಟಪ ನಿರ್ಮಿಸಿ ಗಣಪನಿಗೆ ವಿಶೇಷ ಅಲಂಕಾರ ಮಾಡಲು ಸಜ್ಜಾಗಿದ್ದಾರೆ. ಮನೆಯ ಹಿರಿಯರಿಂದ ಮಕ್ಕಳವರೆಗೆ ಎಲ್ಲರೂ ಸಿದ್ಧತೆಯಲ್ಲಿ ಭಾಗಿಯಾಗಿರುವುದು ಹಬ್ಬದ ಕೌಟುಂಬಿಕ ಸಂಭ್ರಮವನ್ನು ಹೆಚ್ಚಿಸಿದೆ.&lt;/p&gt;&lt;p&gt;ಗಣೇಶೋತ್ಸವದ ಸಂಭ್ರಮಕ್ಕೆ ಪರಿಸರ ಕಾಳಜಿಯ ಸ್ಪರ್ಶವೂ ಅಗತ್ಯ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಶಬ್ದ ಮಾಲಿನ್ಯ ನಿಯಂತ್ರಣ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆ ಆಗಿದೆ. ಭಕ್ತಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗದಂತೆ, ಸಂಭ್ರಮದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶೋತ್ಸವ ಆಚರಿಸುವುದು ನಗರದ ಪರಂಪರೆಗೆ ಮತ್ತಷ್ಟು ಗೌರವ ತಂದುಕೊಡಲಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/even-before-ganesha-chaturthi-belagavi-city-is-immersed-in-festive-fervour-mrq/articleshow-a8trsrd"/>
        </item>
        <item>
            <title><![CDATA[Holiday: ಸಾಲು ಸಾಲು ರಜೆ: ಊರಿನತ್ತ ಹೊರಟ ಬೆಂಗಳೂರಿನ ಜನರು, ಖಾಸಗಿ ಬಸ್‌ಗಳ ಸುಲಿಗೆ]]></title>
            <link>https://kannada.asianetnews.com/bengaluru-urban/gauri-ganesha-festival-increase-in-the-number-of-people-travelling-from-bengaluru-to-their-hometowns-mrq/articleshow-luge7il</link>
            <guid isPermaLink="true">https://kannada.asianetnews.com/bengaluru-urban/gauri-ganesha-festival-increase-in-the-number-of-people-travelling-from-bengaluru-to-their-hometowns-mrq/articleshow-luge7il</guid>
            <pubDate>Sat, 12 Sep 2026 05:49:44 +0530</pubDate>
            <description><![CDATA[&lt;p&gt;ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಇದ್ದ ಕಾರಣ, ಬೆಂಗಳೂರಿನಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಉಂಟಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೆಚ್ಚುವರಿ ಬಸ್&zwnj;ಗಳನ್ನು ಓಡಿಸಿದರೂ, ಖಾಸಗಿ ಬಸ್&zwnj;ಗಳು ದುಪ್ಪಟ್ಟು ದರ ವಸೂಲಿ ಮಾಡಿ ಪ್ರಯಾಣಿಕರಿಗೆ ಹೊರೆಯಾದವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m29fq1f6a33x75qjvptcd40x,imgname-bengaluru-1789172352485.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿ ಕೆಎಸ್ಸಾರ್ಟಿಸಿ ಬಸ್&zwnj; ನಿಲ್ದಾಣಗಳು ಜನದಟ್ಟಣೆಯಿಂದ ಕೂಡಿತ್ತು.&lt;/p&gt;&lt;p&gt;ಸೆ.12 ಎರಡನೇ ಶನಿವಾರ ಸರ್ಕಾರಿ ರಜೆ, ಸೆ.13 ಭಾನುವಾರ. ಹಾಗೆಯೇ, ಸೆ.14ರಂದು ಗೌರಿ-ಗಣೇಶ ಹಬ್ಬ ಇರುವ ಕಾರಣ 3 ದಿನ ರಜೆ ಸಿಗುತ್ತಿದೆ. ಹೀಗೆ ಸಾಲಾಗಿ ರಜೆಯಿರುವ ಕಾರಣ ಊರು ಬಿಡುತ್ತಿರುವವರ ಸಂರ್ಖಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಶುಕ್ರವಾರ ಸಂಜೆ 5 ಗಂಟೆಯಿಂದಲೇ ಜನರು ಕೆಎಸ್ಸಾರ್ಟಿಸಿಯ ಮೆಜೆಸ್ಟಿಕ್&zwnj; ಬಸ್&zwnj; ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್&zwnj; ಬಸ್&zwnj; ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣಗಳತ್ತ ಬಂದರು. ಅದರಿಂದ ಬಸ್&zwnj; ನಿಲ್ದಾಣಗಳಲ್ಲಿ ಜನದಟ್ಟಣೆಯಿಂದ ತುಂಬಿತ್ತು.&lt;/p&gt;&lt;h2&gt;&lt;strong&gt;2400 ಹೆಚ್ಚುವರಿ ಬಸ್&zwnj;ಗಳ ಕಾರ್ಯಾಚರಣೆ&lt;/strong&gt;&lt;/h2&gt;&lt;p&gt;ಪ್ರಯಾಣಿಕರ ಒತ್ತಡ ನಿವಾರಿಸಲು ಕೆಎಸ್ಸಾರ್ಟಿಸಿ 2400 ಹೆಚ್ಚುವರಿ ಬಸ್&zwnj;ಗಳ ಕಾರ್ಯಾಚರಣೆ ಮಾಡಿತ್ತು. ಜತೆಗೆ ಬಿಎಂಟಿಸಿ ಸಹ ವಿವಿಧ ನಗರಗಳಿಗೆ ಸೇವೆ ಒದಗಿಸಿದೆ.&lt;/p&gt;&lt;p&gt;ಸಂಜೆಯಿಂದಲೇ ನಗರದ ವಿವಿಧೆಡೆಗಳಿಂದ ಬಸ್&zwnj; ನಿಲ್ದಾಣಗಳತ್ತ ಬರುವ ಜನರ ಸಂಖ್ಯೆ ಹೆಚ್ಚಿತ್ತು. ಬಸ್&zwnj; ನಿಲ್ದಾಣ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿ ದಟ್ಟಣೆ ಜಾಸ್ತಿಯಾಗಿತ್ತು. ಬಸ್&zwnj; ನಿಲ್ದಾಣಗಳಲ್ಲಿ ಗೊಂದಲ ವಾತಾವರಣ ಇದ್ದ ಕಾರಣ ಮುಂಗಡ ಟಿಕೆಟ್&zwnj; ಕಾಯ್ದಿರಿಸಿದ್ದವರು ತಮ್ಮ ಬಸ್&zwnj;ಗಳನ್ನು ಹುಡುಕಲು ಹರಸಾಹಸ ಪಟ್ಟರು.&lt;/p&gt;&lt;p&gt;ನಗರದ ವಿವಿಧೆಡೆಗಳಿಂದ ಪ್ರಯಾಣಿಕರು ಹೆಚ್ಚಾಗಿ ಖಾಸಗಿ ವಾಹನಗಳ ಮೂಲಕ ಬಸ್&zwnj; ನಿಲ್ದಾಣಗಳತ್ತ ಬಂದ ಪರಿಣಾಮ ಮೆಜೆಸ್ಟಿಕ್&zwnj;, ಮಲ್ಲೇಶ್ವರ, ಯಶವಂತಪುರ, ಶಾಂತಿನಗರ, ಮೈಸೂರು ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಇತ್ತು. ತಡರಾತ್ರಿವರೆಗೆ ಬಸ್&zwnj;ಗಳು ನಗರದಿಂದ ಹೊರಗೆ ಹೊರಟಿದ್ದರಿಂದ ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಸೇರಿದಂತೆ ಬೆಂಗಳೂರಿನಿಂದ ಹೊರಗೆ ಹೋಗುವ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ ಕಷ್ಟಕರವಾಗಿತ್ತು.&lt;/p&gt;&lt;h3&gt;&lt;strong&gt;ಸಾರಿಗೆ ಅಧಿಕಾರಿಗಳ ತಪಾಸಣೆ&lt;/strong&gt;&lt;/h3&gt;&lt;p&gt;ಖಾಸಗಿ ಬಸ್&zwnj;ಗಳ ಸುಲಿಗೆ ತಡೆಯಲು ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದಲೇ ಪ್ರಮುಖ ಬಸ್&zwnj; ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದರು. ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಟಿಕೆಟ್&zwnj; ದರ ವಸೂಲಿ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದ ಬಸ್&zwnj; ಮಾಲೀಕರಿಗೆ ಎಚ್ಚರಿಕೆ ನೀಡಿ, ದಂಡ ವಿಧಿಸಲಾಯಿತು. ಅಷ್ಟಾದರೂ ಬಸ್&zwnj; ಮಾಲೀಕರು ರಾತ್ರಿ ವೇಳೆಗೆ ಹೆಚ್ಚುವರಿ ದರ ವಸೂಲಿಯನ್ನು ಬಿಟ್ಟಿರಲಿಲ್ಲ.&lt;/p&gt;&lt;h3&gt;&lt;strong&gt;ಖಾಸಗಿ ಬಸ್&zwnj;ಗಳ ಸುಲಿಗೆ&lt;/strong&gt;&lt;/h3&gt;&lt;p&gt;ಕೆಎಸ್ಸಾರ್ಟಿಸಿ ಬಸ್&zwnj;ಗಳನ್ನು ಹೊರತುಪಡಿಸಿ ಖಾಸಗಿ ಬಸ್&zwnj;ಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಸಾರಿಗೆ ಇಲಾಖೆ ಎಚ್ಚರಿಕೆ ನಡುವೆಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ಖಾಸಗಿ ಬಸ್&zwnj;ಗಳ ಸುಲಿಗೆ ಜೋರಾಗಿತ್ತು. ಬೆಂಗಳೂರಿನಿಂದ ವಿವಿಧ ಕಡೆ ಹೊರಡುವ ಖಾಸಗಿ ಬಸ್&zwnj;ಗಳ ಪ್ರಯಾಣ ದರವನ್ನು ದುಪ್ಪಟ್ಟು ಹೆಚ್ಚಿಸಲಾಗಿತ್ತು. ಕೆಎಸ್ಸಾರ್ಟಿಸಿ ಬಸ್&zwnj; ಸಿಗದವರು ಖಾಸಗಿ ಬಸ್&zwnj;ಗಳತ್ತ ಮುಖ ಮಾಡಿದರು. ಆದರೆ, ಬಸ್ ಪ್ರಯಾಣ ದರವನ್ನು ಕೇಳಿ ಅಘಾತಕ್ಕೊಳಗಾದರು. ಪ್ರಮುಖವಾಗಿ ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ದಾವಣಗೆರೆ ಕಡೆಗೆ ಹೋಗುವ ಬಸ್&zwnj;ಗಳ ದರ ಮಾಮೂಲಿಗಿಂತ ದುಪ್ಪಟ್ಟು ಹೆಚ್ಚಿತ್ತು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/gauri-ganesha-festival-increase-in-the-number-of-people-travelling-from-bengaluru-to-their-hometowns-mrq/articleshow-luge7il"/>
        </item>
        <item>
            <title><![CDATA[15 ವರ್ಷಗಳಲ್ಲಿ 96 ಕಿ.ಮೀ ಬೆಳೆದ ನಮ್ಮ 'ದುಬಾರಿ' ಮೆಟ್ರೋ, ನಿರೀಕ್ಷಿತ ಮಟ್ಟಕ್ಕೆ ಮುಟ್ಟದ ಪ್ರಯಾಣಿಕರ ಸಂಖ್ಯೆ]]></title>
            <link>https://kannada.asianetnews.com/bengaluru-urban/bengaluru-namma-metro-low-ridership-feeder-bus-dult-bmrcb-plan-san/articleshow-6o6obrw</link>
            <guid isPermaLink="true">https://kannada.asianetnews.com/bengaluru-urban/bengaluru-namma-metro-low-ridership-feeder-bus-dult-bmrcb-plan-san/articleshow-6o6obrw</guid>
            <pubDate>Fri, 11 Sep 2026 23:13:57 +0530</pubDate>
            <description><![CDATA[&lt;p&gt;ಬೆಂಗಳೂರಿನ 'ನಮ್ಮ ಮೆಟ್ರೋ' 96 ಕಿ.ಮೀ.ಗೆ ವಿಸ್ತರಿಸಿದರೂ, ನಿರೀಕ್ಷಿತ 30 ಲಕ್ಷದ ಬದಲು ಕೇವಲ 10 ಲಕ್ಷ ದೈನಂದಿನ ಪ್ರಯಾಣಿಕರನ್ನು ಹೊಂದಿದೆ. ಈ ಹಿನ್ನಡೆಗೆ 'ಫಸ್ಟ್ ಅಂಡ್ ಲಾಸ್ಟ್ ಮೈಲ್ ಕನೆಕ್ಟಿವಿಟಿ' ಕೊರತೆಯೇ ಪ್ರಮುಖ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvhf4ga52jsn83083nzrmnkh,imgname----------------------23--1781923987780.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): &lt;/strong&gt;ಉದ್ಯಾನನಗರಿ ಬೆಂಗಳೂರಿನ ಪ್ರಮುಖ ಸಾರಿಗೆ ಸಂಪರ್ಕ ಕೊಂಡಿಯಾಗಿರುವ 'ನಮ್ಮ ಮೆಟ್ರೋ' ಆರಂಭವಾಗಿ 15 ವರ್ಷಗಳು ಕಳೆದಿವೆ. ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಕೇವಲ 7 ಕಿಲೋಮೀಟರ್&zwnj;ನ ಸಣ್ಣ ಮಾರ್ಗದಿಂದ ಪ್ರಾರಂಭವಾದ ಮೆಟ್ರೋ, ಇಂದು 3 ಕಾರಿಡಾರ್&zwnj;ಗಳು, 83 ನಿಲ್ದಾಣಗಳೊಂದಿಗೆ 96 ಕಿಲೋಮೀಟರ್&zwnj;ಗಳ ಬೃಹತ್ ಜಾಲವಾಗಿ ಬೆಳೆದು ನಿಂತಿದೆ. ಆದರೆ, ಮಾರ್ಗ ವಿಸ್ತರಣೆಯಾದಷ್ಟು ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ (Ridership) ಹೆಚ್ಚದಿರುವುದು ಸರ್ಕಾರ ಹಾಗೂ ಮೆಟ್ರೋ ಆಡಳಿತ ಮಂಡಳಿಗೆ ಭಾರಿ ಕಳವಳ ತಂದೊಡ್ಡಿದೆ.&lt;/p&gt;&lt;p&gt;ವಿಸ್ತರಿತ ಕಾರಿಡಾರ್&zwnj;ಗಳ ಯೋಜನಾ ವರದಿಗಳ (DPR) ಪ್ರಕಾರ ಈ ವೇಳೆಗೆ ಪ್ರತಿದಿನ ಕನಿಷ್ಠ 30 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಬೇಕಿತ್ತು. ಆದರೆ, ಪ್ರಸ್ತುತ ದಿನಕ್ಕೆ ಸರಾಸರಿ 10 ಲಕ್ಷ ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಜಿಬಿಎ ಸಭೆಯಲ್ಲಿ ಗಂಭೀರ ಚರ್ಚೆ&lt;/strong&gt;&lt;/h2&gt;&lt;p&gt;ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ (Traffic Congestion) ದಿನದಿಂದ ದಿನಕ್ಕೆ ಭೀಕರವಾಗುತ್ತಿದ್ದರೂ, ಮೆಟ್ರೋ ನಿರೀಕ್ಷಿತ ಪ್ರಯಾಣಿಕರನ್ನು ತಲುಪಲು ಸಾಧ್ಯವಾಗದಿರುವ ವಿಚಾರವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ 'ಗ್ರೇಟರ್ ಬೆಂಗಳೂರು ಅಥಾರಿಟಿ' (GBA) ಸಭೆಯಲ್ಲಿ ಗಂಭೀರ ಚರ್ಚೆಗೆ ಬಂದಿದೆ. ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಕರು ಸುಲಭವಾಗಿ ತಲುಪಲು ಸೂಕ್ತವಾದ 'ಫಸ್ಟ್ ಅಂಡ್ ಲಾಸ್ಟ್ ಮೈಲ್ ಕನೆಕ್ಟಿವಿಟಿ' (ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕ) ಇಲ್ಲದಿರುವುದೇ ಈ ಹಿನ್ನಡೆಗೆ ಮುಖ್ಯ ಕಾರಣ ಎಂದು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.&lt;/p&gt;&lt;p&gt;ಈ ಸಮಸ್ಯೆಗೆ ತಕ್ಷಣದ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸೂಚಿಸಿದ್ದು, ನಗರ ಭೂಸಾರಿಗೆ ನಿರ್ದೇಶನಾಲಯ (Dult) ಸಮಗ್ರ ಚಲನಶೀಲ ಯೋಜನೆಯನ್ನು (CMP - Comprehensive Mobility Plan) ಸಿದ್ಧಪಡಿಸುತ್ತಿದೆ. ಇದಕ್ಕಾಗಿ ಆರ್ಕಾಡಿಸ್-ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮಾಡೆಲ್ ಟ್ರಾನ್ಸಿಟ್ ಸಿಸ್ಟಮ್ಸ್ ಲಿಮಿಟೆಡ್ (Arcadis-DIMTS) ಸಂಸ್ಥೆಯನ್ನು ಜಿಎಸ್&zwnj;ಟಿ ಹೊರತುಪಡಿಸಿ ₹4.2 ಕೋಟಿ ವೆಚ್ಚದಲ್ಲಿ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಸಂಸ್ಥೆಯು ಈಗಾಗಲೇ ಆರಂಭಿಕ ವರದಿಯನ್ನು ಸಲ್ಲಿಸಿದ್ದು, ಸಾರಿಗೆ ಸಮೀಕ್ಷೆಗಳು ನಡೆಯುತ್ತಿವೆ.&lt;/p&gt;&lt;p&gt;ಹಿಂದೆ 2020 ರಲ್ಲಿ ಸಿದ್ಧಪಡಿಸಲಾಗಿದ್ದ ಸಿಎಂಪಿಯು 2035 ರ ವೇಳೆಗೆ ಸಾರ್ವಜನಿಕ ಸಾರಿಗೆಯ ಪಾಲನ್ನು ಶೇ. 40 ರಿಂದ ಶೇ. 70 ಕ್ಕೆ ಹೆಚ್ಚಿಸುವ ಗುರಿ ಹೊಂದಿತ್ತು. 2022 ರಲ್ಲಿ ಸರ್ಕಾರವು 'ಟ್ರಾನ್ಸಿಟ್-ಓರಿಯೆಂಟೆಡ್ ಡೆವಲಪ್&zwnj;ಮೆಂಟ್' (TOD) ನೀತಿಯನ್ನು ತಂದಿತ್ತಾದರೂ, ಈ ನೀತಿಗಳು ಯೋಜನೆಗೆ ತಕ್ಕಂತೆ ಫಲಿತಾಂಶ ನೀಡಿಲ್ಲ.&lt;/p&gt;&lt;h2&gt;&lt;strong&gt;₹30.2 ಕೋಟಿ ವೆಚ್ಚದಲ್ಲಿ 19 ನಿಲ್ದಾಣಗಳ ಸುಧಾರಣೆ&lt;/strong&gt;&lt;/h2&gt;&lt;p&gt;ಡಲ್ಟ್ ಸಂಸ್ಥೆಯು ಪಾದಚಾರಿ ಮಾರ್ಗ, ಸೈಕ್ಲಿಂಗ್, ಶೇರ್ಡ್ ಮೊಬಿಲಿಟಿ ಹಾಗೂ ಬಸ್ ಬೇ (Bus Bays) ನಿರ್ಮಾಣದ ಮೂಲಕ ಮೆಟ್ರೋ ಸಂಪರ್ಕವನ್ನು ಸುಧಾರಿಸಲು ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ಹಸಿರು (11) ಮತ್ತು ನೇರಳೆ (8) ಮಾರ್ಗದ 19 ಮೆಟ್ರೋ ನಿಲ್ದಾಣಗಳಲ್ಲಿ ₹30.2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾಪ ಸಿದ್ಧವಾಗಿದೆ. ಜೊತೆಗೆ ಜಿಐಎಸ್ (GIS) ಆಧಾರಿತ ಅಧ್ಯಯನದ ಮೂಲಕ ಬಿಎಂಟಿಸಿಗೆ ನೂತನ ಫೀಡರ್ ಮಾರ್ಗಗಳನ್ನು ಪರಿಚಯಿಸಲು ಶಿಫಾರಸು ಮಾಡಲಾಗುತ್ತಿದೆ.&lt;/p&gt;&lt;p&gt;ಸೆಪ್ಟೆಂಬರ್ 3 ರಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ನಡೆದ ಜಿಬಿಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಬೆಂಗಳೂರಿನ ಕಿರಿದಾದ ರಸ್ತೆಗಳಲ್ಲಿ ದೊಡ್ಡ ಬಸ್&zwnj;ಗಳನ್ನು ಫೀಡರ್ ಸೇವೆಯಾಗಿ ಓಡಿಸಲು ಇರುವ ಕಷ್ಟಗಳ ಬಗ್ಗೆ ಚರ್ಚಿಸಲಾಯಿತು. ಹೀಗಾಗಿ ಕೇವಲ 6 ಮೀಟರ್ ಅಥವಾ ಅದಕ್ಕಿಂತ ಕಡಿಮೆ ಉದ್ದದ ಮಿನಿ ಬಸ್&zwnj;ಗಳನ್ನು ಮೆಟ್ರೋ ಫೀಡರ್ ಸೇವೆಗೆ ಕಡ್ಡಾಯವಾಗಿ ಖರೀದಿಸುವಂತೆ ಬಿಎಂಟಿಸಿಗೆ ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;₹125 ಕೋಟಿ ವೆಚ್ಚದಲ್ಲಿ 500 ಮಿನಿ ಬಸ್&zwnj;ಗಳ ಕೊಡುಗೆ&lt;/strong&gt;&lt;/h2&gt;&lt;p&gt;ಮತ್ತೊಂದೆಡೆ, ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆಯಾಗಿ ಬಳಸಲು 500 ಮಿನಿ ಬಸ್&zwnj;ಗಳನ್ನು ಖರೀದಿಸಿ ಕಾರ್ಯಾಚರಣೆಗೊಳಿಸಲು ಬಿಎಂಟಿಸಿಗೆ ₹125 ಕೋಟಿ ಅನುದಾನ ನೀಡುವುದಾಗಿ ಬಿಎಂಆರ್&zwnj;ಸಿಎಲ್ (BMRCL) ಜಿಬಿಎ ಸಭೆಯಲ್ಲಿ ಪ್ರಸ್ತಾಪಿಸಿದೆ.&lt;/p&gt;&lt;p&gt;ಬಿಎಂಟಿಸಿ ಮತ್ತು ಬಿಎಂಆರ್&zwnj;ಸಿಎಲ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪರಿಣಾಮವಾಗಿ, ಬಿಎಂಟಿಸಿ ಬಸ್ ತಂಗುದಾಣಗಳನ್ನು ಮೆಟ್ರೋ ನಿಲ್ದಾಣಗಳ ಸಮೀಪಕ್ಕೆ (ಸರಾಸರಿ 100 ಮೀಟರ್ ಅಂತರಕ್ಕೆ) ಸ್ಥಳಾಂತರಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ 83 ಮೆಟ್ರೋ ನಿಲ್ದಾಣಗಳಿಗೆ ಸಾಮಾನ್ಯ ಬಿಎಂಟಿಸಿ ಬಸ್ ಸೌಲಭ್ಯವಿದೆ. ಆದರೆ, ಬೇಡಿಕೆಗೆ ಅನುಗುಣವಾಗಿ 54 ನಿಲ್ದಾಣಗಳಲ್ಲಿ 255 ಮೀಸಲು ಫೀಡರ್ ಬಸ್&zwnj;ಗಳು ಪ್ರತಿದಿನ 1.5 ಲಕ್ಷ ಪ್ರಯಾಣಿಕರನ್ನು ತಲುಪಿಸುತ್ತಿವೆ. ಇನ್ನುಳಿದ 29 ಮೆಟ್ರೋ ನಿಲ್ದಾಣಗಳಿಗೆ ಯಾವುದೇ ವಿಶೇಷ ಫೀಡರ್ ಬಸ್ ಸೌಲಭ್ಯವಿಲ್ಲ.&lt;/p&gt;&lt;p&gt;ಪ್ರಯಾಣಿಕರ ಕೊರತೆಯನ್ನು ನೀಗಿಸಲು ಆಗಸ್ಟ್ 21 ರಂದು ಬಿಎಂಆರ್&zwnj;ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೊದಲ ಹಂತದಲ್ಲಿ 10 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ವಿವರವಾದ ಅಧ್ಯಯನಕ್ಕೆ ಆಯ್ಕೆ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಸೆಪ್ಟೆಂಬರ್ ಅಂತ್ಯಕ್ಕೆ ಪಿಂಕ್ ಲೈನ್ ಉದ್ಘಾಟನೆ: ಪ್ರಯಾಣಿಕರ ಹಳೆಯ ಆತಂಕ!&lt;/strong&gt;&lt;/h2&gt;&lt;p&gt;ಬಿಎಂಆರ್&zwnj;ಸಿಎಲ್ ಸಂಸ್ಥೆಯು ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್ ಉದ್ದದ 'ಪಿಂಕ್ ಲೈನ್'ನ (Pink Line) ಎಲಿವೇಟೆಡ್ ಮಾರ್ಗವನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಯೋಜಿಸುತ್ತಿದೆ.&lt;/p&gt;&lt;p&gt;ಆದರೆ, ಹಿಂದೆ ಉದ್ಘಾಟನೆಯಾದ ಹಲವು ಮೆಟ್ರೋ ಮಾರ್ಗಗಳಂತೆ ಇಲ್ಲೂ ಸಹ ನಿಲ್ದಾಣ ತಲುಪುವುದು ಪ್ರಯಾಣಿಕರಿಗೆ ಕಬ್ಬಿಣದ ಕಡಲೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಏಕೆಂದರೆ, ಪ್ರಮುಖ ಸ್ಥಳಗಳಲ್ಲಿ ಕಾಲುದಾರಿಗಳ (Footpaths) ಕೊರತೆ, ಪಾದಚಾರಿ ಮೂಲಸೌಕರ್ಯಗಳ ಕೊರತೆ, ಕಾಲುದಾರಿಗಳ ಮೇಲೆ ತ್ಯಾಜ್ಯ ವಿಲೇವಾರಿ, ಹಾಳಾದ ರಸ್ತೆಗಳು ಹಾಗೂ ಮೆಟ್ರೋ ನಿಲ್ದಾಣಗಳ ಬಳಿ ಸೂಕ್ತ ಬಸ್ ತಂಗುದಾಣಗಳಿಲ್ಲದಿರುವುದು ಪ್ರಯಾಣಿಕರ ನಿದ್ದೆಗೆಡಿಸಿದೆ. ಮಾರ್ಗ ಉದ್ಘಾಟಿಸುವ ಮುನ್ನವೇ ನಿಲ್ದಾಣಗಳ ಪ್ರವೇಶಾವಕಾಶ ಮತ್ತು ಮೂಲಸೌಕರ್ಯಗಳನ್ನು ಸರಿಪಡಿಸುವಂತೆ ಸ್ಥಳೀಯ ನಿವಾಸಿಗಳು ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-namma-metro-low-ridership-feeder-bus-dult-bmrcb-plan-san/articleshow-6o6obrw"/>
        </item>
    </channel>
</rss>
