<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 10 Jul 2026 20:34:02 +0530</lastBuildDate>
        <atom:link href="https://kannada.asianetnews.com/rss/karnataka-districts" rel="self" type="application/rss+xml"/>
        <item>
            <title><![CDATA[ವರ್ಷಗಳಿಂದ ಪುತ್ತೂರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಆರೋಪಿ 41 ಅರೆಸ್ಟ್‌ ವಾರಂಟ್‌ಗಳ ಬಳಿಕ ಬಂಧನ!]]></title>
            <link>https://kannada.asianetnews.com/dakshina-kannada/puttur-police-arrest-kerala-robber-nelson-41-warrants-bns-case-san/articleshow-v7io7cr</link>
            <guid isPermaLink="true">https://kannada.asianetnews.com/dakshina-kannada/puttur-police-arrest-kerala-robber-nelson-41-warrants-bns-case-san/articleshow-v7io7cr</guid>
            <pubDate>Fri, 10 Jul 2026 20:33:57 +0530</pubDate>
            <description><![CDATA[&lt;p&gt;ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, 41 ಬಂಧನ ವಾರೆಂಟ್&zwnj;ಗಳನ್ನು ಹೊಂದಿದ್ದ ಕೇರಳ ಮೂಲದ ಕುಖ್ಯಾತ ಆರೋಪಿ ನೆಲ್ಸನ್ ಸಿ.ವಿ.ಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx68tg9sdsmh3gzbqdt3ghxd,imgname-puttur-police-station-1783695753529.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಜು.10)&lt;/strong&gt;: ಬರೋಬ್ಬರಿ 41 ಬಂಧನ ವಾರೆಂಟ್&zwnj;ಗಳು ಜಾರಿಯಾಗಿದ್ದರೂ ಹಲವು ವರ್ಷಗಳಿಂದ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಕೇರಳ ಮೂಲದ 38 ವರ್ಷದ ಕುಖ್ಯಾತ ಆರೋಪಿಯನ್ನು ಪುತ್ತೂರು ನಗರಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿಯಾದ ನೆಲ್ಸನ್ ಸಿ.ವಿ. ಬಂಧಿತ ಆರೋಪಿಯಾಗಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, 2017ರ ಡಿಸೆಂಬರ್ 22 ರಂದು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ಮೂವರು ಅಪರಿಚಿತ ದರೋಡೆಕೋರರು, ಮನೆಯಲ್ಲಿದ್ದವರಿಗೆ ಪಿಸ್ತೂಲ್ ಹಾಗೂ ಚಾಕು ತೋರಿಸಿ ಜೀವಬೆದರಿಕೆ ಒಡ್ಡಿದ್ದರು. ಬಳಿಕ ಮನೆಯಿಂದ ಸುಮಾರು 2.9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 60,000 ರೂ. ನಗದನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.&lt;/p&gt;&lt;h2&gt;&lt;strong&gt;41 ವಾರೆಂಟ್ ಜಾರಿ&lt;/strong&gt;&lt;/h2&gt;&lt;p&gt;ಈ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ ಆರೋಪಿ ನೆಲ್ಸನ್, ಬಳಿಕ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದ. ಆದರೆ, 2021ರ ಆಗಸ್ಟ್ 27 ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆತ ನಿರಂತರವಾಗಿ ತಲೆಮರೆಸಿಕೊಂಡಿದ್ದ. ಕೋರ್ಟ್ ಆದೇಶವನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ನ್ಯಾಯಾಲಯವು ಬರೋಬ್ಬರಿ 41 ಪ್ರತ್ಯೇಕ ಬಂಧನ ವಾರೆಂಟ್&zwnj;ಗಳನ್ನು (Arrest Warrants) ಜಾರಿಗೊಳಿಸಿತ್ತು.&lt;/p&gt;&lt;h2&gt;&lt;strong&gt;ಕೇರಳದಲ್ಲಿ ನಡೆದ ಖೆಡ್ಡಾ ಆಪರೇಷನ್&lt;/strong&gt;&lt;/h2&gt;&lt;p&gt;ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಪುತ್ತೂರು ಪೊಲೀಸರು ವಿಶೇಷ ಕಾರ್ಯಾಚರಣೆ ತಂಡವನ್ನು ರಚಿಸಿದ್ದರು. ಹೆಡ್ ಕಾನ್&zwnj;ಸ್ಟೆಬಲ್ ಸಂತೋಷ್ ಎ., ಪೊಲೀಸ್ ಕಾನ್&zwnj;ಸ್ಟೆಬಲ್&zwnj;ಗಳಾದ ವಿನಾಯಕ ಮತ್ತು ಶಿವರಾಜ್ ಅವರನ್ನೊಳಗೊಂಡ ಪೊಲೀಸ್ ತಂಡವು ಆರೋಪಿಯ ಸುಳಿವು ಬೆನ್ನಟ್ಟಿ ಕೇರಳದ ತ್ರಿಶೂರ್ ಜಿಲ್ಲೆಯ ಮಿಯೂರ್&zwnj;ಗೆ ತೆರಳಿತ್ತು. ಅಲ್ಲಿ ಅಡಗಿದ್ದ ನೆಲ್ಸನ್&zwnj;ನನ್ನು ಬುಧವಾರದಂದು ಯಶಸ್ವಿಯಾಗಿ ವಶಕ್ಕೆ ಪಡೆದ ಪೊಲೀಸರು, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯು ಈ ಹಿಂದೆ ನ್ಯಾಯಾಲಯ ವಿಧಿಸಿದ್ದ ಜಾಮೀನು ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ವಿಚಾರಣೆಗೆ ಹಾಜರಾಗದೆ ವಂಚಿಸಿರುವುದರಿಂದ, ಆತನ ವಿರುದ್ಧ ಈಗ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 269 ರ ಅಡಿಯಲ್ಲಿ ಮತ್ತೊಂದು ಹೊಸ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/dakshina-kannada/puttur-police-arrest-kerala-robber-nelson-41-warrants-bns-case-san/articleshow-v7io7cr"/>
        </item>
        <item>
            <title><![CDATA[ಸರ್ವರ್ ಸಮಸ್ಯೆ, ಒಟಿಪಿ ವಿಳಂಬ: ಕಾಗದರಹಿತ ನೋಂದಣಿ ವ್ಯವಸ್ಥೆಗೆ ಸಾರ್ವಜನಿಕರ ಅಸಮಾಧಾನ]]></title>
            <link>https://kannada.asianetnews.com/karnataka-districts/chamarajanagar-paperless-registration-system-kaveri-2-0-problem-gvd/articleshow-oks6fn3</link>
            <guid isPermaLink="true">https://kannada.asianetnews.com/karnataka-districts/chamarajanagar-paperless-registration-system-kaveri-2-0-problem-gvd/articleshow-oks6fn3</guid>
            <pubDate>Fri, 10 Jul 2026 19:46:07 +0530</pubDate>
            <description><![CDATA[&lt;p&gt;Paperless Registration: ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx663tnhc7y7py0kd6fm3rns,imgname-ch-1783692913329.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಜು.10): &lt;/strong&gt;ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಪಾರದರ್ಶಕ ಮತ್ತು ಸಮಯ ಉಳಿತಾಯದ ಉದ್ದೇಶದಿಂದ ತಂದ ಈ ಯೋಜನೆ ಈಗ ತಾಂತ್ರಿಕ ದೋಷಗಳ ಗೂಡಾಗಿದೆ. ಸಾರ್ವಜನಿಕರು ಕೆಲಸ ಕಾರ್ಯ ಬಿಟ್ಟು ಕಚೇರಿಗಳ ಮುಂದೆ ದಿನಗಟ್ಟಲೆ ಕಾಯುವಂತಾಗಿದೆ. ಈ ಕುರಿತು ಒಂದು ವರದಿ ನೋಡಿ.&lt;/p&gt;&lt;p&gt;ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಜಾರಿಗೊಳಿಸಲಾಗಿರುವ ಆಧಾರ್ ಆಧಾರಿತ ಇ-ಸೈನ್ ಮತ್ತು ಡಿಜಿಟಲ್ ಸಹಿಯ ಕಾಗದರಹಿತ ನೋಂದಣಿ ವ್ಯವಸ್ಥೆ ಸಾರ್ವಜನಿಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಆಸ್ತಿ ಮಾರಾಟ-ಖರೀದಿ ನೋಂದಣಿ, ಸೇಲ್ ಡೀಡ್, ಮಾರ್ಟ್ಗೇಜ್ ಸೇರಿದಂತೆ ಪ್ರಮುಖ ನೊಂದಣಿ ಪ್ರಕ್ರಿಯೆಗಳಿಗೆ ಕಾವೇರಿ 2.0 ಪೋರ್ಟಲ್ ಬಳಸಲಾಗುತ್ತಿದ್ದು, ಇದು ಪದೇ ಪದೇ ಕೈಕೊಡುತ್ತಿದೆ. ಈ ಮೊದಲು ಕೇವಲ ಒಂದು ಗಂಟೆಯಲ್ಲಿ ಮುಗಿಯುತ್ತಿದ್ದ ನೋಂದಣಿ ಕಾರ್ಯಕ್ಕೆ ಈಗ ಮೂರ್ನಾಲ್ಕು ಗಂಟೆಗಳು, ಕೆಲವೊಮ್ಮೆ ಮೂರ್ನಾಲ್ಕು ದಿನಗಳ ಕಾಲ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಮುಖ್ಯವಾಗಿ ನೋಂದಣಿ ಶುಲ್ಕ ಪಾವತಿಸಲು ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಲು ಸಕಾಲಕ್ಕೆ ಒಟಿಪಿ (OTP) ಬರುವುದೇ ಇಲ್ಲ. ಇದರ ಜೊತೆಗೆ ಸರ್ವರ್ ಡೌನ್ ಸಮಸ್ಯೆ ಸಾಮಾನ್ಯವಾಗಿದೆ. ಇನ್ನು ವಯಸ್ಸಾದವರ ಪಾಡಂತು ಹೇಳತೀರದಾಗಿದೆ. ನೊಂದಣಿ ಪ್ರಕ್ರಯೆಗೆ ಮೂರು ಬಾರಿ ತಂಬ್ (Thumb) ನೀಡಬೇಕಾದ ನಿಯಮವಿದ್ದು, ಬಯೋಮೆಟ್ರಿಕ್ ಸರಿಯಾಗಿ ಮ್ಯಾಚ್ ಆಗದೆ ವೃದ್ಧರು ಇಡೀ ದಿನ ಕಚೇರಿಯಲ್ಲೇ ಕೂರುವಂತಾಗಿದೆ. ಸರ್ಕಾರ ಪರಿಸರಸ್ನೇಹಿ ಅಂತ ಹೇಳಿ ಈ ಕಾಗದರಹಿತ ವ್ಯವಸ್ಥೆ ತಂದಿದ್ದೇನೋ ಸರಿ.&lt;/p&gt;&lt;p&gt;ಆದರೆ ತಾಂತ್ರಿಕವಾಗಿ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕಾವೇರಿ 2.0 ಸರ್ವರ್ ಯಾವಾಗಲೂ ಡೌನ್ ಇರುತ್ತೆ, ಒಟಿಪಿ ಬರೋದೇ ಇಲ್ಲ. ದಿನವಿಡೀ ಖರೀದಿದಾರರು, ಮಾರಾಟಗಾರರು ಕೆಲಸ ಬಿಟ್ಟು ಇಲ್ಲೇ ಕಾಯ್ಬೇಕು. ಕಾಗದ ಇದ್ದಾಗಲೇ ಕೆಲಸ ಬೇಗ ಆಗ್ತಿತ್ತು ಎನ್ನುತ್ತಾರೆ. ಇಷ್ಟೆಲ್ಲಾ ತಾಂತ್ರಿಕ ಅಡಚಣೆಗಳಾಗಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದರೂ, ನೋಂದಣಿ ಅಧಿಕಾರಿಗಳ ಸಮರ್ಥನೆ ಮಾತ್ರ ಬೇರೆಯದೇ ಆಗಿದೆ. ಈ ಹೊಸ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.&lt;/p&gt;&lt;h2&gt;&lt;strong&gt;ಯಾವುದೇ ವ್ಯತ್ಯಾಸವಾಗಿಲ್ಲ&lt;/strong&gt;&lt;/h2&gt;&lt;p&gt;ಈ ಹಿಂದಿನ ನೋಂದಣಿ ಅಂಕಿಅಂಶಗಳಿಗೂ ಮತ್ತು ಇಂದಿನ ಅಂಕಿಅಂಶಗಳಿಗೂ ಯಾವುದೇ ವ್ಯತ್ಯಾಸವಾಗಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ, ಪರಿಸರಸ್ನೇಹಿ ಹಾಗು ಪಾರದರ್ಶಕತೆಯ ಹೆಸರಿನಲ್ಲಿ ತಂದ ತಂತ್ರಜ್ಞಾನ ಸರಿಯಾದ ಸಿದ್ಧತೆ ಇಲ್ಲದ ಕಾರಣ ಜನರಿಗೆ ಪಜೀತಿಯಾಗಿ ಪರಿಣಮಿಸಿದೆ. ಅಧಿಕಾರಿಗಳು ಕೇವಲ ಅಂಕಿಅಂಶಗಳ ಸಮರ್ಥನೆ ಮಾಡಿಕೊಳ್ಳುವುದನ್ನು ತಾಂತ್ರಿಕ ತೊಂದರೆಗಳ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕಿದೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-paperless-registration-system-kaveri-2-0-problem-gvd/articleshow-oks6fn3"/>
        </item>
        <item>
            <title><![CDATA[ಮೈಸೂರು ದಸರಾ-2026 ಸಂಭ್ರಮಕ್ಕೆ ದಿನಾಂಕ ಫಿಕ್ಸ್: ಅಕ್ಟೋಬರ್ 11ಕ್ಕೆ ಉದ್ಘಾಟನೆ, 21ಕ್ಕೆ ಜಂಬೂ ಸವಾರಿ!]]></title>
            <link>https://kannada.asianetnews.com/state/mysuru-dasara-2026-schedule-dates-inauguration-jamboo-savari-kambala-highlights/articleshow-d8g8byy</link>
            <guid isPermaLink="true">https://kannada.asianetnews.com/state/mysuru-dasara-2026-schedule-dates-inauguration-jamboo-savari-kambala-highlights/articleshow-d8g8byy</guid>
            <pubDate>Fri, 10 Jul 2026 16:34:23 +0530</pubDate>
            <description><![CDATA[ನಾಡಹಬ್ಬ ಮೈಸೂರು ದಸರಾ 2026 ಮಹೋತ್ಸವವು ಅಕ್ಟೋಬರ್ 11 ರಿಂದ 21ರವರೆಗೆ ನಡೆಯಲಿದ್ದು, ಜುಲೈ 26ರಿಂದ ಗಜಪಯಣ ಆರಂಭವಾಗಲಿದೆ. ಈ ಬಾರಿಯ ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆ 'ಕಂಬಳ'ವನ್ನು ಆಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx5v62gadz60re2bzbeg6gg9,imgname-mysuru-dasara-2026-1783681452554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಮೈಸೂರು (ಜು.10): ನಾ&lt;/strong&gt;ಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ರಾಜ್ಯ ಸರ್ಕಾರ ಕಾರ್ಯಕ್ರಮಗಳ ಅಧಿಕೃತ ದಿನಾಂಕಗಳನ್ನು ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ದಿನಾಂಕಗಳ ವಿವರ:&lt;/strong&gt;&lt;/h2&gt;&lt;ul&gt; &lt;li&gt;ಈ ವರ್ಷದ ದಸರಾ ಮಹೋತ್ಸವವು ಅಕ್ಟೋಬರ್ 11 ರಿಂದ ಅಕ್ಟೋಬರ್ 21 ರವರೆಗೆ ಜರುಗಲಿದೆ.&lt;/li&gt; &lt;li&gt;ಅಕ್ಟೋಬರ್ 11: ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಉದ್ಘಾಟಕರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.&lt;/li&gt; &lt;li&gt;ಅಕ್ಟೋಬರ್ 18: ಮಹಾ ನವಮಿ / ದುರ್ಗಾಷ್ಟಮಿ ಪೂಜೆಗಳು ನಡೆಯಲಿವೆ.&lt;/li&gt; &lt;li&gt;ಅಕ್ಟೋಬರ್ 19: ಆಯುಧ ಪೂಜೆ ಸಂಭ್ರಮ.&lt;/li&gt; &lt;li&gt;ಅಕ್ಟೋಬರ್ 21: ದಸರಾದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಅಥವಾ ಜಂಬೂ ಸವಾರಿ ನಡೆಯಲಿದೆ. ಅಂದು ಮಧ್ಯಾಹ್ನ 4:10ಕ್ಕೆ ಶುಭ 'ಮೀನಾ ಲಗ್ನ'ದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ನಂತರ ಚಿನ್ನದ ಅಂಬಾರಿಯಲ್ಲಿ ವಿರಾಜಮಾನನಾಗಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಾಗುವುದು.&lt;/li&gt;&lt;/ul&gt;&lt;h2&gt;&lt;strong&gt;ಜುಲೈ 26ರಿಂದಲೇ ಗಜಪಯಣ ಆರಂಭ:&lt;/strong&gt;&lt;/h2&gt;&lt;p&gt;ದಸರಾ ಆನೆಗಳ ಆಗಮನ ಅಥವಾ 'ಗಜಪಯಣ'ಕ್ಕೆ ಜುಲೈ 26 ರಂದು ಚಾಲನೆ ನೀಡಲು ನಿರ್ಧರಿಸಲಾಗಿದೆ. ಕಾಡಿನಿಂದ ನಾಡಿಗೆ ಬರುವ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರುವ ಮೂಲಕ ದಸರಾ ಚಟುವಟಿಕೆಗಳು ಅಧಿಕೃತವಾಗಿ ಮೈಸೂರಿನಲ್ಲಿ ಕಳೆಗಟ್ಟಲಿವೆ.&lt;/p&gt;&lt;h2&gt;&lt;strong&gt;ಮೈಸೂರು ದಸರಾದಲ್ಲಿ ಮೊದಲ ಬಾರಿಗೆ 'ಕಂಬಳ':&lt;/strong&gt;&lt;/h2&gt;&lt;p&gt;ಈ ಬಾರಿಯ ದಸರಾ ಮಹೋತ್ಸವಕ್ಕೆ ಕರಾವಳಿಯ ಸೊಗಡು ಸೇರ್ಪಡೆಯಾಗಲಿದೆ. ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಾನಪದ ಕ್ರೀಡೆಯಾದ 'ಕಂಬಳ'ವನ್ನು ಆಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ. ಇದು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಹೊಸ ಅನುಭವ ನೀಡಲಿದೆ.&lt;/p&gt;&lt;h2&gt;&lt;strong&gt;ಉನ್ನತ ಮಟ್ಟದ ಸಭೆ:&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮೈಸೂರು ಭಾಗದ ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ದಸರಾ ಸಂದರ್ಭದಲ್ಲಿ ನಗರದ ಭದ್ರತೆ, ಸ್ವಚ್ಛತೆ, ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ಈ ಬಾರಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.&lt;/p&gt;&lt;p&gt;ವಿದ್ಯುತ್ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಫಲಪುಷ್ಪ ಪ್ರದರ್ಶನ ಸೇರಿದಂತೆ ದಸರಾದ ಎಲ್ಲಾ ಅಂಗಗಳು ಈ ಬಾರಿ ಸಾರ್ವಜನಿಕರನ್ನು ಸಮ್ಮೋಹಗೊಳಿಸಲಿವೆ. ವಿಶ್ವದ ವಿವಿಧ ಮೂಲೆಗಳಿಂದ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಸಕಲ ವ್ಯವಸ್ಥೆ ಮಾಡಲು ಸರ್ಕಾರ ಬದ್ಧವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/mysuru-dasara-2026-schedule-dates-inauguration-jamboo-savari-kambala-highlights/articleshow-d8g8byy"/>
        </item>
        <item>
            <title><![CDATA[ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI]]></title>
            <link>https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd</link>
            <guid isPermaLink="true">https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd</guid>
            <pubDate>Fri, 10 Jul 2026 19:25:34 +0530</pubDate>
            <description><![CDATA[&lt;p&gt;ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx64pz5xwr12fyahv2jpms8d,imgname-sardine-fish-cmfri-warning--2--1783691443389.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ.&amp;nbsp;&lt;/p&gt;&lt;img&gt;&lt;p&gt;ಮೀನು ಪ್ರಿಯರ ಸಾರ್ವಕಾಲಿಕ ನೆಚ್ಚಿನ ಹಾಗೂ ಅಗ್ಗದ ದರದ ಮೀನು ಎನಿಸಿಕೊಂಡಿರುವ ಭೂತಾಯಿ (ಕೆಲವು ಕಡೆ ಮತ್ತಿ, ಬೈಗೆ ಎಂದೂ ಹೇಳುತ್ತಾರೆ) ಲಭ್ಯತೆ ಮುಂದಿನ ವರ್ಷ ಗಣನೀಯವಾಗಿ ಕುಸಿಯಲಿದೆ ಎಂಬ ಆತಂಕಕಾರಿ ಮುನ್ಸೂಚನೆಯನ್ನು ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆ (CMFRI) ನೀಡಿದೆ. ಸಮುದ್ರದಲ್ಲಿ ಬಿಸಿಹವೆಗೆ ಕಾರಣವಾಗುವ ಜಾಗತಿಕ ಹವಾಮಾನ ವಿದ್ಯಮಾನವಾದ 'ಎಲ್ ನಿನೊ' (El Nino) ಪ್ರಭಾವದಿಂದಾಗಿ ಕಡಲಿನಲ್ಲಿ ಮೀನುಗಳ ಲಭ್ಯತೆ ತಗ್ಗಲಿದ್ದು, ದೇಶಾದ್ಯಂತ ಕಡಲ ಮತ್ಸ್ಯೋದ್ಯಮದ ಮೇಲೆ ಇದು ಭಾರಿ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಸಂಸ್ಥೆ ಎಚ್ಚರಿಸಿದೆ.&lt;/p&gt;&lt;img&gt;&lt;p&gt;ಮುಂದಿನ ದಿನಗಳು ಮತ್ಸ್ಯಪ್ರಿಯರಿಗೆ ಅಷ್ಟೊಂದು ಆಶಾದಾಯಕವಾಗಿ ಇರುವುದಿಲ್ಲ. ಪ್ರಸ್ತುತ ವರ್ಷದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ತೀವ್ರಗೊಳ್ಳಲಿರುವ 'ಎಲ್ ನಿನೊ' ವಿದ್ಯಮಾನದ ನೇರ ಪ್ರಭಾವವು ಮುಂದಿನ ವರ್ಷದ (2027) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಪ್ರಕಟವಾಗಲಿದೆ ಎಂದು ಸಿಎಂಎಫ್&zwnj;ಆರ್&zwnj;ಐ ಮುನ್ಸೂಚನೆ ನೀಡಿದೆ. ಹವಾಮಾನ ತಜ್ಞರು ಊಹಿಸಿದಂತೆ ಈ ಜಾಗತಿಕ ತಾಪಮಾನ ವೈಪರೀತ್ಯ ಸಂಭವಿಸಿದರೆ, ಮಾರುಕಟ್ಟೆಯಲ್ಲಿ ಭೂತಾಯಿ ಮೀನಿನ ಲಭ್ಯತೆ ತೀವ್ರವಾಗಿ ಕುಸಿಯಲಿದ್ದು, ಅದರ ಬೆಲೆ ಸಾಮಾನ್ಯ ಜನರಿಗೆ ಸಿಗದಂತೆ ಗಗನಕ್ಕೇರಲಿದೆ.&lt;/p&gt;&lt;img&gt;&lt;p&gt;ಕಡಲಿನಲ್ಲಿ ಉಂಟಾಗುವ ಉಷ್ಣ ತರಂಗಗಳು ಮತ್ತು ಹಠಾತ್ ತಾಪಮಾನ ವೈಪರೀತ್ಯಗಳು ಸಮುದ್ರದ ಮೇಲ್ಮೈ ಭಾಗದಲ್ಲಿ ವಾಸಿಸುವ ಭೂತಾಯಿ ಸೇರಿದಂತೆ ಇತರ ಸಣ್ಣ ಪ್ರಭೇದದ ಮೀನುಗಳ ಪಾಲಿಗೆ ವಿಷಕಾರಿಯಾಗಿದೆ. ಇದರ ಜೊತೆಗೆ ನಿರಂತರವಾಗಿ ಸಮುದ್ರದ ನೀರು ಕಾಯುವುದರಿಂದ ಸಮುದ್ರದೊಳಗಿನ ಜೀವವೈವಿಧ್ಯದ ಆಧಾರವಾಗಿರುವ ಹವಳದ ದಿಬ್ಬಗಳು (Coral Reefs) ನಾಶವಾಗಲಿವೆ. ಇದು ಹವಳದ ದಿಬ್ಬಗಳನ್ನೇ ಆಶ್ರಯಿಸಿ ಬದುಕುವ 'ಶಂಕರ' (Red Snapper) ರೀತಿಯ ಮೌಲ್ಯಯುತ ಮೀನುಗಳ ನೈಸರ್ಗಿಕ ಸಂತಾನೋತ್ಪತ್ತಿ ಮತ್ತು ಲಭ್ಯತೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಸಿಎಂಎಫ್&zwnj;ಆರ್&zwnj;ಐ ಅಧ್ಯಯನ ವರದಿ ತಿಳಿಸಿದೆ.&lt;/p&gt;&lt;img&gt;&lt;p&gt;ಎಲ್ ನಿನೊ ಭೀತಿಯ ಹಿನ್ನೆಲೆಯಲ್ಲಿ ಮೀನುಗಾರರು ಹಾಗೂ ಕರಾವಳಿ ಭಾಗದ ಮತ್ಸ್ಯ ಕೃತಕ ಕೃಷಿಕರಿಗೆ (Fish Farmers) ಈ ವರ್ಷವೇ ಸಿಎಂಎಫ್&zwnj;ಆರ್&zwnj;ಐ ವಿಶೇಷ ಜಾಗೃತಿ ಮಾರ್ಗಸೂಚಿಯನ್ನು ಹೊರಡಿಸಲಿದೆ. ಹವಾಮಾನ ವೈಪರೀತ್ಯದ ಈ ಅವಧಿಯಲ್ಲಿ ಕಡಲು ಹಾಗೂ ಕರಾವಳಿ ಜಲಮೂಲಗಳ ರಕ್ಷಣೆ ಮತ್ತು ನಿರ್ವಹಣೆಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.&lt;/p&gt;&lt;img&gt;&lt;p&gt;ತೀವ್ರವಾದ ಬೇಸಿಗೆಯ ಬಿಸಿಲು ಹಾಗೂ ನೀರಿನಲ್ಲಿ ಲವಣಾಂಶ (Salinity) ಹೆಚ್ಚಾದ ಬೆನ್ನಲ್ಲೇ ಹಠಾತ್ ಮಳೆ ಸುರಿದರೆ ಕರಾವಳಿ ಮತ್ತು ಹಿನ್ನೀರು ಪ್ರದೇಶಗಳಲ್ಲಿನ ನೀರಿನ ಲವಣಾಂಶದ ಮಟ್ಟವು ದಿಢೀರನೆ ಏರುಪೇರಾಗುತ್ತದೆ. ಈ ರಾಸಾಯನಿಕ ಬದಲಾವಣೆಯು ಕೃತಕವಾಗಿ ಕೊಳಗಳಲ್ಲಿ ಅಥವಾ ಹಿನ್ನೀರಿನಲ್ಲಿ ಮಾಡುವ ಮತ್ಸ್ಯಕೃಷಿಯ (Aquaculture) ಮೇಲೆ ಭಾರಿ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮೀನುಗಳು ಸಾಯುವ ಸಾಧ್ಯತೆ ಇರುವುದರಿಂದ ಕರಾವಳಿ ಭಾಗದ ಮೀನು ಕೃಷಿಕರು ಮುಂಚಿತವಾಗಿಯೇ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸ್ಥೆ ಸೂಚಿಸಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ಜಾಗತಿಕ ತಾಪಮಾನ ಏರಿಕೆಯು ಕೇವಲ ಮೀನಿನ ಲಭ್ಯತೆಯನ್ನು ಕುಗ್ಗಿಸುವುದಲ್ಲದೆ, ಸಮುದ್ರದ ಸಂಪೂರ್ಣ ಜೈವಿಕ ಸರಪಳಿಯನ್ನೇ ಏರುಪೇರು ಮಾಡುತ್ತದೆ. ದೇಶದಾದ್ಯಂತ ಕಡಲ ಮೀನುಗಾರಿಕೆಯ ಒಟ್ಟು ಉತ್ಪಾದನೆಯಲ್ಲಿ ಇಳಿಕೆಯಾಗುವ ಮುನ್ಸೂಚನೆ ಇರುವುದರಿಂದ, ಮೀನುಗಾರಿಕೆಯನ್ನು ನಂಬಿ ಬದುಕುವ ಲಕ್ಷಾಂತರ ಕುಟುಂಬಗಳ ಆರ್ಥಿಕತೆಯ ಮೇಲೆ ಇದು ನೇರ ಹೊಡೆತ ನೀಡಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd"/>
        </item>
        <item>
            <title><![CDATA[ಬೆಂಗಳೂರಲ್ಲಿ ಮೀಟರ್ ಬಡ್ಡಿ ಕ್ರೌರ್ಯಕ್ಕೆ ಆಟೋ ಚಾಲಕ ಬಲಿ: ಆಟೋದಲ್ಲಿ ಸೆಲ್ಫಿ ವಿಡಿಯೋ ಮಾಡಿ ಜೀವಬಿಟ್ಟ ಜಮಾಲ್!]]></title>
            <link>https://kannada.asianetnews.com/bengaluru-urban/auto-driver-ends-life-due-to-high-interest-loan-harassment-in-bengaluru/articleshow-wfetr8y</link>
            <guid isPermaLink="true">https://kannada.asianetnews.com/bengaluru-urban/auto-driver-ends-life-due-to-high-interest-loan-harassment-in-bengaluru/articleshow-wfetr8y</guid>
            <pubDate>Fri, 10 Jul 2026 19:25:23 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಜಮಾಲ್ ಉದ್ದೀನ್ ಎಂಬ ಆಟೋ ಚಾಲಕ ಸಾವಿಗೆ ಶರಣಾಗಿದ್ದಾರೆ. ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿ, ಮೀಟರ್ ಬಡ್ಡಿ ವ್ಯವಹಾರದ ಹಿಂದಿನ ಕರಾಳ ಮುಖವನ್ನು ಅವರು ಬಯಲು ಮಾಡಿದ್ದಾರೆ. ಈ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx64sa56r26bh8p04ecyy4zf,imgname-bengaluru-auto-driver-death-1783691520166.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.10): ಸಾ&lt;/strong&gt;ಲದ ಸುಳಿಗೆ ಸಿಲುಕಿ ಸಾಲಗಾರರ ಕಿರುಕುಳ ತಾಳಲಾರದೆ ಆಟೋ ಚಾಲಕರೊಬ್ಬರು ತಮ್ಮ ಜೀವನದ ಪಯಣವನ್ನು ಅಕಾಲಿಕವಾಗಿ ಅಂತ್ಯಗೊಳಿಸಿರುವ ಹೃದಯವಿದ್ರಾವಕ ಘಟನೆ ನಗರದ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಮಾಲ್ ಉದ್ದೀನ್ ಎಂಬುವವರೇ ಸಾಲದ ಬಾಧೆಯಿಂದಾಗಿ ಈ ಕಠಿಣ ನಿರ್ಧಾರ ತೆಗೆದುಕೊಂಡ ದುರ್ದೈವಿ. ಸಾಯುವ ಮುನ್ನ ಅವರು ತಮ್ಮ ಆಟೋದಲ್ಲಿ ಕುಳಿತು ಮಾಡಿಕೊಂಡಿರುವ ಸೆಲ್ಫಿ ವಿಡಿಯೋ ಈಗ ಸಾಲಗಾರರ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ.&lt;/p&gt;&lt;h2&gt;&lt;strong&gt;ಸಹಾಯದ ನೆಪದಲ್ಲಿ ಶುರುವಾದ ಕಿರುಕುಳ:&lt;/strong&gt;&lt;/h2&gt;&lt;p&gt;ಸುಮಾರು ಒಂದು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ಜಮಾಲ್ ಉದ್ದೀನ್ ಅವರಿಗೆ ಆರಂಭದಲ್ಲಿ ಸಾಲ ನೀಡಿದ್ದ ವ್ಯಕ್ತಿ, ಬಡ್ಡಿ ಬೇಡ ಕೇವಲ ವಾರಕ್ಕೆ 10 ಸಾವಿರದಂತೆ ಅಸಲು ಮರಳಿಸಿದರೆ ಸಾಕು ಎಂದು ನಂಬಿಸಿದ್ದ. ಆದರೆ, ಕಾಲಕ್ರಮೇಣ ಸಾಲಗಾರನ ಅಸಲಿ ಮುಖವಾಡ ಕಳಚಿದೆ. 20 ಸಾವಿರ ರೂಪಾಯಿಗೆ 4 ಸಾವಿರದಂತೆ ಭಾರಿ ಬಡ್ಡಿ ನೀಡುವಂತೆ ಒತ್ತಡ ಹೇರಲಾರಂಭಿಸಿದ್ದಾನೆ. ನಂತರ ಹಂತ ಹಂತವಾಗಿ 5 ಸಾವಿರ ಹಾಗೂ 10 ಸಾವಿರದಷ್ಟು ಬಡ್ಡಿ ನೀಡುವಂತೆ ಟಾರ್ಚರ್ ಶುರು ಮಾಡಿದ್ದಾನೆ ಎಂದು ಮೃತರು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಬೆದರಿಕೆಗೆ ನಲುಗಿದ ಕುಟುಂಬ:&lt;/strong&gt;&lt;/h2&gt;&lt;p&gt;'ಹಣ ನೀಡದಿದ್ದರೆ ನಿನ್ನ ಆಟೋ ಮತ್ತು ನಿನ್ನ ಮಗನ ಆಟೋವನ್ನು ಸೀಜ್ ಮಾಡಿಕೊಂಡು ಹೋಗುತ್ತೇನೆ. ಅಷ್ಟೇ ಅಲ್ಲದೆ ನಿನ್ನ ಮನೆಯವರಿಗೂ ತೊಂದರೆ ಕೊಡುತ್ತೇನೆ' ಎಂದು ಸಾಲಗಾರ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಬ್ಯುಸಿನೆಸ್ ಡಲ್ ಆಗಿದ್ದ ಕಾರಣ ಹಣ ಕಟ್ಟಲು ಜಮಾಲ್ ಅವರು ಕಷ್ಟಪಡುತ್ತಿದ್ದರು. 'ದಿನಕ್ಕೆ ಸಾವಿರ ರೂಪಾಯಿ ದುಡಿಯುತ್ತಿದ್ದೆ, ಅದರಲ್ಲಿ ಇಷ್ಟು ದೊಡ್ಡ ಮಟ್ಟದ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ' ಎಂದು ಅವರು ವಿಡಿಯೋದಲ್ಲಿ ನೋವಿನಿಂದ ನುಡಿದಿದ್ದಾರೆ. 50 ಸಾವಿರಕ್ಕೆ ಶೇ. 20ರಷ್ಟು ಬಡ್ಡಿ ಕೇಳುವ ಮೂಲಕ ಸಾಲಗಾರ ಜಮಾಲ್ ಅವರ ಬದುಕನ್ನು ಹೈರಾಣಾಗಿಸಿದ್ದನು.&lt;/p&gt;&lt;h2&gt;&lt;strong&gt;ಬಾಗಲೂರು ಠಾಣೆಯಲ್ಲಿ ಪ್ರಕರಣ:&lt;/strong&gt;&lt;/h2&gt;&lt;p&gt;ಸಾಲಗಾರನ ನಿರಂತರ ಕಿರುಕುಳ ಹಾಗೂ ಅವಮಾನದಿಂದ ಮನನೊಂದ ಜಮಾಲ್ ಉದ್ದೀನ್, ತಮ್ಮ ಆಟೋದಲ್ಲಿಯೇ ವಿಷಕಾರಿ ಪದಾರ್ಥ ಸೇವಿಸಿ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಬಾಗಲೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೀಟರ್ ಬಡ್ಡಿ ಆಸೆಗೆ ಬಡವರ ಬದುಕು ಬೀದಿಗೆ ಬರುತ್ತಿರುವುದಕ್ಕೆ ಈ ಘಟನೆ ಮತ್ತೊಂದು ಕನ್ನಡಿ ಹಿಡಿದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Suvarna News</dc:creator>
            <atom:link href="https://kannada.asianetnews.com/bengaluru-urban/auto-driver-ends-life-due-to-high-interest-loan-harassment-in-bengaluru/articleshow-wfetr8y"/>
        </item>
        <item>
            <title><![CDATA[Shivamogga: ಮತದಾರರ ಪಟ್ಟಿ ಸಮೀಕ್ಷೆ ವೇಳೆ ಬಿಎಲ್‌ಒ ಮೇಲೆ ಮುಗಿಬಿದ್ದ ಸಾಕು ನಾಯಿ! ಅಧಿಕಾರಿಗೆ ಗಂಭೀರ ಗಾಯ]]></title>
            <link>https://kannada.asianetnews.com/shivamogga/shivamogga-anandapura-blo-officer-lakshmi-singh-attacked-by-pet-dog-during-survey/articleshow-7bi7rnb</link>
            <guid isPermaLink="true">https://kannada.asianetnews.com/shivamogga/shivamogga-anandapura-blo-officer-lakshmi-singh-attacked-by-pet-dog-during-survey/articleshow-7bi7rnb</guid>
            <pubDate>Fri, 10 Jul 2026 18:31:32 +0530</pubDate>
            <description><![CDATA[&lt;p&gt;ಆನಂದಪುರದಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿದ್ದ ಬಿ.ಎಲ್.ಓ ಲಕ್ಷ್ಮಿ ಸಿಂಗ್ ಅವರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ಮಾಡಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆಯು ಸರ್ಕಾರಿ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx61sr40v99vnsq9yn0hetey,imgname-shivamogga-blo-lakshmi-sing-dog-attack-1783688388736.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಜು.10): &lt;/strong&gt;ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮನೆ-ಮನೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದ ಬಿ.ಎಲ್.ಓ (BLO) ಲಕ್ಷ್ಮಿ ಸಿಂಗ್ ಅವರು ಶ್ವಾನ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಪ್ರಸ್ತುತ ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಸಿಂಗ್ ಅವರು ಆನಂದಪುರ ಭಾಗದಲ್ಲಿ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ನಿಗದಿಪಡಿಸಿದ ಮನೆಯೊಂದರ ಬಳಿ ತೆರಳಿದಾಗ, ಆ ಮನೆಯಲ್ಲಿ ಸಾಕಿದ್ದ ನಾಯಿಯೊಂದು ದಿಢೀರನೆ ಅವರ ಮೇಲೆ ಮುಗಿಬಿದ್ದಿದೆ. ನಾಯಿಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಅಧಿಕಾರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.&lt;/p&gt;&lt;h2&gt;&lt;strong&gt;ತೀವ್ರ ರಕ್ತಸ್ರಾವ:&lt;/strong&gt;&lt;/h2&gt;&lt;p&gt;ಸಾಕು ನಾಯಿಯು ಲಕ್ಷ್ಮಿ ಸಿಂಗ್ ಅವರ ಕಾಲಿಗೆ ಬಲವಾಗಿ ಕಚ್ಚಿದ್ದು, ದಾಳಿಯ ತೀವ್ರತೆಗೆ ಅವರ ಕಾಲಿನ ಭಾಗದಲ್ಲಿ ಆಳವಾದ ಗಾಯಗಳಾಗಿವೆ. ಇದರಿಂದಾಗಿ ಸ್ಥಳದಲ್ಲೇ ತೀವ್ರ ರಕ್ತಸ್ರಾವ ಉಂಟಾಗಿದ್ದು, ಅಧಿಕಾರಿ ನೋವಿನಿಂದ ಕಿರುಚಾಡಿದ್ದಾರೆ. ಕೂಡಲೇ ಸ್ಥಳೀಯ ನಿವಾಸಿಗಳು ಹಾಗೂ ಅವರ ಜೊತೆಯಲ್ಲಿದ್ದ ಸಹೋದ್ಯೋಗಿಗಳು ಕಾರ್ಯಪ್ರವೃತ್ತರಾಗಿ ನಾಯಿಯನ್ನು ಓಡಿಸಿ, ಲಕ್ಷ್ಮಿ ಸಿಂಗ್ ಅವರನ್ನು ರಕ್ಷಿಸಿದ್ದಾರೆ. ಗಾಯಗೊಂಡ ಲಕ್ಷ್ಮಿ ಸಿಂಗ್ ಅವರನ್ನು ತಕ್ಷಣವೇ ಆನಂದಪುರದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಹೆಚ್ಚುತ್ತಿರುವ ಆತಂಕ:&lt;/strong&gt;&lt;/h2&gt;&lt;p&gt;ಸಮೀಕ್ಷೆ ಅಥವಾ ಸರ್ಕಾರಿ ಕೆಲಸದ ನಿಮಿತ್ತ ಮನೆ-ಮನೆಗೆ ತೆರಳುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಇಂತಹ ಘಟನೆಗಳು ಆತಂಕ ತಂದೊಡ್ಡಿವೆ. ಮನೆಯ ಮಾಲೀಕರು ತಮ್ಮ ಸಾಕು ನಾಯಿಗಳನ್ನು ಸರಿಯಾಗಿ ನಿಯಂತ್ರಿಸದ ಕಾರಣ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಕಾರ್ಯದಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ಮತ್ತು ಮಾಲೀಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/shivamogga/shivamogga-anandapura-blo-officer-lakshmi-singh-attacked-by-pet-dog-during-survey/articleshow-7bi7rnb"/>
        </item>
        <item>
            <title><![CDATA[Bengaluru: ಪ್ಲೇಸ್ಕೂಲ್‌ ಟೀಚರ್‌ಗೆ ತಿಂಗಳಿಗೆ 6 ಸಾವಿರ ಸಂಬಳ, 'ಕಲಾಸಿಪಾಳ್ಯದ ಕೂಲಿ ಇದಕ್ಕಿಂತ ಹೆಚ್ಚು ದುಡೀತಾರೆ..' ಎಂದ ನೆಟ್ಟಿಗರು!]]></title>
            <link>https://kannada.asianetnews.com/bengaluru-urban/bengaluru-playschool-teacher-low-salary-viral-post-cost-of-living-debate-san/articleshow-gq6v887</link>
            <guid isPermaLink="true">https://kannada.asianetnews.com/bengaluru-urban/bengaluru-playschool-teacher-low-salary-viral-post-cost-of-living-debate-san/articleshow-gq6v887</guid>
            <pubDate>Fri, 10 Jul 2026 18:23:14 +0530</pubDate>
            <description><![CDATA[ಬೆಂಗಳೂರಿನ ಪ್ಲೇಸ್ಕೂಲ್ ಶಿಕ್ಷಕಿಯೊಬ್ಬರಿಗೆ ಕೇವಲ ₹6,000 ಸಂಬಳ ನೀಡಿದ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದುಬಾರಿ ನಗರದಲ್ಲಿ ಇಷ್ಟು ಕಡಿಮೆ ಸಂಬಳದಲ್ಲಿ ಬದುಕುವುದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿದ್ದು, ಶಿಕ್ಷಕರ ಕಡಿಮೆ ವೇತನದ ಬಗ್ಗೆ ತೀವ್ರ ಚರ್ಚೆ ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx6194bgzykkax8njq3kkmeq,imgname-bengaluru-playschool-teacher-1783687844208.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.10):&lt;/strong&gt; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೀವನ ವೆಚ್ಚ (Cost of Living) ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಪ್ಲೇಸ್ಕೂಲ್ (LKG/UKG) ಶಿಕ್ಷಕಿಯೊಬ್ಬರಿಗೆ ನೀಡಲಾದ ಅತೀ ಕಡಿಮೆ ಸಂಬಳದ ಕುರಿತಾದ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದು ಇದೀಗ ಇಂಟರ್ನೆಟ್&zwnj;ನಲ್ಲಿ ಭಾರಿ ವೈರಲ್ ಆಗಿದೆ. ಇಷ್ಟು ಕಡಿಮೆ ಆದಾಯದಲ್ಲಿ ಈ ಮೆಟ್ರೋ ನಗರದಲ್ಲಿ ಯಾರಾದರೂ ಬದುಕಲು ಸಾಧ್ಯವೇ ಎಂದು ನೆಟ್ಟಿಗರು ತೀವ್ರವಾಗಿ ಪ್ರಶ್ನೆ ಮಾಡಿದ್ದಾರೆ. ಎಕ್ಸ್&zwnj;ನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ಪೋಸ್ಟ್ ಈ ಇಡೀ ಚರ್ಚೆಗೆ ಕಾರಣವಾಗಿದೆ. ತಮ್ಮ ನಾದಿನಿಗೆ ಬೆಂಗಳೂರಿನ ಪ್ಲೇಸ್ಕೂಲ್ ಒಂದರಲ್ಲಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿದ್ದು, ಆಕೆಗೆ ತಿಂಗಳಿಗೆ ಕೇವಲ 6,000 ರೂಪಾಯಿ ಸಂಬಳ ನಿಗದಿಪಡಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಅವರು ತಮ್ಮ ಪೋಸ್ಟ್&zwnj;ನಲ್ಲಿ, &quot;ನನ್ನ ನಾದಿನಿಗೆ ಪ್ಲೇಸ್ಕೂಲ್/ಕಿಂಡರ್&zwnj;ಗಾರ್ಟನ್ ಶಿಕ್ಷಕಿಯಾಗಿ ಕೆಲಸ ಸಿಕ್ಕಿದೆ. ಆಕೆಗೆ ಬೆಂಗಳೂರಿನಲ್ಲಿ ತಿಂಗಳಿಗೆ ಬರೋಬ್ಬರಿ 6,000 ರೂಪಾಯಿ ಸಂಬಳ ನೀಡಲಾಗುತ್ತದೆಯಂತೆ! ಇಂದು ಶಾಲೆಗಳ ಫೀಸ್ ಗಗನಚುಂಬಿಯಾಗುತ್ತಿದ್ದರೆ, ಶಿಕ್ಷಕರ ಸಂಬಳ ಮಾತ್ರ ತಳ ಹಿಡಿಯುತ್ತಿದೆ. ಇಂತಹ ಮೆಟ್ರೋ ಸಿಟಿಯಲ್ಲಿ ತಿಂಗಳಿಗೆ 6,000 ರೂಪಾಯಿಗಿಂತ ಕಡಿಮೆ ಹಣದಲ್ಲಿ ಯಾರಾದರೂ ಹೇಗೆ ತಾನೇ ಬದುಕಲು ಸಾಧ್ಯ?&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಸೋಶಿಯಲ್&zwnj; ಮೀಡಿಯಾದಲ್ಲಿ ಭಾರೀ ಕಾಮೆಂಟ್ಸ್&zwnj;&lt;/strong&gt;&lt;/h2&gt;&lt;p&gt;&lt;strong&gt;ಮನೆಗೆಲಸದವರಿಗಿಂತ ಕಮ್ಮಿ ಸಂಬಳ: &lt;/strong&gt;&quot;ನಮ್ಮ ಮನೆಯಲ್ಲಿ ಅರ್ಧ ದಿನ ಮಾತ್ರ ಕೆಲಸ ಮಾಡುವ ಮನೆಗೆಲಸದ ಮಹಿಳೆ ಕೂಡ ಇದಕ್ಕಿಂತ ಹೆಚ್ಚಿನ ಹಣ ಗಳಿಸುತ್ತಾಳೆ&quot; ಎಂದು ಯೂಸರ್&zwnj; ಒಬ್ಬರು ಬರೆದುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಬೇಡಿಕೆ ಮತ್ತು ಪೂರೈಕೆಯ ತಾರತಮ್ಯ: &lt;/strong&gt;ಮತ್ತೊಬ್ಬರು ಕಾಮೆಂಟ್ ಮಾಡಿ, &quot;ಇದು ಮಾರುಕಟ್ಟೆಯಲ್ಲಿರುವ ಬೇಡಿಕೆ ಮತ್ತು ಪೂರೈಕೆಯ ನಡುವಿನ ತಾರತಮ್ಯವನ್ನು ತೋರಿಸುತ್ತದೆ. ಭಾರತದಲ್ಲಿ ನರ್ಸ್&zwnj; ಕೂಡ ತಿಂಗಳಿಗೆ ಕೇವಲ 10,000 ದಿಂದ 15,000 ರೂ. ಗಳಿಸುತ್ತಾರೆ. ಅದೇ ಅವರು ಯುರೋಪ್ ಅಥವಾ ಗಲ್ಫ್ ದೇಶಗಳಿಗೆ ಹೋದರೆ ಭವ್ಯವಾಗಿ ಬದುಕುತ್ತಾರೆ&quot; ಎಂದು ವ್ಯವಸ್ಥೆಯನ್ನು ಕುಟುಕಿದ್ದಾರೆ.&lt;/p&gt;&lt;p&gt;&lt;strong&gt;ಆಯಾಗಳಿಗಿಂತಲೂ ಕಮ್ಮಿ ವೇತನ: &lt;/strong&gt;&quot;ಸ್ನ್ಯಾಬಿಟ್ (Snabbit) ಕಂಪನಿಯು ತನ್ನ ಉದ್ಯೋಗಿಗಳಿಗೆ 18,000 ರೂ. ನಿಂದ 20,000 ರೂ. ನೀಡುತ್ತದೆ. ಬಹುಶಃ ನಿಮ್ಮ ನಾದಿನಿಗೆ ಆ ಕಿಂಡರ್&zwnj;ಗಾರ್ಟನ್&zwnj;ನಲ್ಲಿ ಕೆಲಸ ಮಾಡುವ ಆಯಾ ಅಥವಾ ಹೆಲ್ಪರ್&zwnj;ಗಳಿಗಿಂತಲೂ ಕಡಿಮೆ ಸಂಬಳ ನೀಡಲಾಗುತ್ತಿದೆ ಅನಿಸುತ್ತದೆ. ಆಕೆ ಈ ಸಂಬಳಕ್ಕೆ ಆ ಕೆಲಸಕ್ಕೆ ಸೇರಲೇಬಾರದು&quot; ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಸರ್ಕಾರದ ಲೆಕ್ಕಾಚಾರದ ವ್ಯಂಗ್ಯ: &lt;/strong&gt;ಸರ್ಕಾರದ ನೀತಿಗಳನ್ನು ವ್ಯಂಗ್ಯವಾಡಿರುವ ಮತ್ತೊಬ್ಬ ನೆಟ್ಟಿಗ, &quot;ಸರ್ಕಾರದ ಲೆಕ್ಕಾಚಾರದ ಪ್ರಕಾರ, ಈ 6,000 ರೂಪಾಯಿಯಲ್ಲಿ ಆಕೆ 1,000 ರೂ. ಬಾಡಿಗೆ ಕಟ್ಟಬಹುದು, 1,000 ರೂ. ಮಕ್ಕಳ ಶಿಕ್ಷಣಕ್ಕೆ ಇಡಬಹುದು, 500 ರೂ. ಕರೆಂಟ್ ಮತ್ತು ನೀರಿಗೆ ನೀಡಬಹುದು, ತರಕಾರಿಗೆ 1,000 ರೂ. ಖರ್ಚು ಮಾಡಬಹುದು. ಬೆಂಗಳೂರಿನಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ ಇರುವುದರಿಂದ ಆ ಹಣ ಉಳಿಯುತ್ತದೆ. ಇನ್ನುಳಿದ ಹಣದಲ್ಲಿ 1,000 ರೂ. ಉಳಿತಾಯ ಮಾಡಿ, ಬಾಕಿ ಹಣದಲ್ಲಿ ಹೊರಗಡೆ ಹೋಟೆಲ್&zwnj;ನಲ್ಲಿ ಊಟ ಮಾಡಿ ಎಂಜಾಯ್ ಮಾಡಬಹುದು! ಆಕೆ ಕೇವಲ ಅಡ್ಜಸ್ಟ್ ಮಾಡಿಕೊಳ್ಳಬೇಕು ಮತ್ತು ಎಂದಿಗೂ ದೂರು ನೀಡಬಾರದು, ನೀಡಿದರೆ ಕೆಲಸ ಹೋಗುತ್ತದೆ ಅಷ್ಟೇ&quot; ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-playschool-teacher-low-salary-viral-post-cost-of-living-debate-san/articleshow-gq6v887"/>
        </item>
        <item>
            <title><![CDATA[ಸರ್ಕಾರದ ವಿರುದ್ಧ ಸಿಡಿದ ಮಡಿವಾಳ ಸಮುದಾಯ; ಎಚ್.ಎಂ. ಗೋಪಿಕೃಷ್ಣಗೆ MLC ಸ್ಥಾನ ಕೊಡುವಂತೆ ಆಗ್ರಹ]]></title>
            <link>https://kannada.asianetnews.com/gallery/karnataka-districts/chikkamagaluru-madivala-community-demands-mlc-seat-for-congress-leader-hm-gopikrishna-oaev6ge</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-madivala-community-demands-mlc-seat-for-congress-leader-hm-gopikrishna-oaev6ge</guid>
            <pubDate>Fri, 10 Jul 2026 17:17:59 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನಲ್ಲಿ, ತಮ್ಮನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡು ಅಧಿಕಾರ ಹಂಚಿಕೆಯಲ್ಲಿ ಕಡೆಗಣಿಸಲಾಗಿದೆ ಎಂದು ಮಡಿವಾಳ ಸಮುದಾಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಸಮುದಾಯದ ಮುಖಂಡ ಎಚ್.ಎಂ. ಗೋಪಿಕೃಷ್ಣ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ಆಗ್ರಹಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5xar40sq4rw40arrrwcdcn,imgname-chikkamagaluru-madiwala-press-meet-1783683702911.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನಲ್ಲಿ, ತಮ್ಮನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡು ಅಧಿಕಾರ ಹಂಚಿಕೆಯಲ್ಲಿ ಕಡೆಗಣಿಸಲಾಗಿದೆ ಎಂದು ಮಡಿವಾಳ ಸಮುದಾಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಸಮುದಾಯದ ಮುಖಂಡ ಎಚ್.ಎಂ. ಗೋಪಿಕೃಷ್ಣ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ಆಗ್ರಹಿಸಿದೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು (ಜು.10): 'ಅಹಿಂದ ವರ್ಗಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ' ಎಂದು ಮಡಿವಾಳ ಸಮುದಾಯದ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ, ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಸಮಯದಲ್ಲಿ ಮತ್ತು ಪಕ್ಷ ಸಂಘಟನೆಯ ವಿವಿಧ ಹಂತಗಳಲ್ಲಿ ಮಡಿವಾಳ ಸಮುದಾಯದ ಜನರು ಸಕ್ರಿಯವಾಗಿ ಶ್ರಮಿಸಿದ್ದಾರೆ. ಪಾದಯಾತ್ರೆ ಹಾಗೂ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರೂ, ಅಧಿಕಾರ ಹಂಚಿಕೆಯ ವಿಷಯಕ್ಕೆ ಬಂದಾಗ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ದೂರಿದರು.&lt;/p&gt;&lt;img&gt;&lt;p&gt;&lt;strong&gt;ಕಾಗದಕ್ಕೆ ಸೀಮಿತವಾದ 'ಸಮಪಾಲು-ಸಮಬಾಳು':&lt;/strong&gt;&lt;/p&gt;&lt;p&gt;'ಸರ್ಕಾರ ಹೇಳುವ 'ಎಲ್ಲರಿಗೂ ಸಮಪಾಲು, ಸಮಬಾಳು' ಎಂಬ ನೀತಿ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ. ವಾಸ್ತವದಲ್ಲಿ ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಣ್ಣ ಸಮುದಾಯಗಳ ನಿಷ್ಠಾವಂತ ನಾಯಕರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ' ಎಂದು ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;&lt;strong&gt;ಎಚ್.ಎಂ. ಗೋಪಿಕೃಷ್ಣಗೆ MLC ಸ್ಥಾನಕ್ಕಾಗಿ ಆಗ್ರಹ:&lt;/strong&gt;&lt;/p&gt;&lt;p&gt;ಮಡಿವಾಳ ಸಮುದಾಯದ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಎಚ್.ಎಂ. ಗೋಪಿಕೃಷ್ಣ ಅವರಿಗೆ ವಿಧಾನಪರಿಷತ್ ಸದಸ್ಯ (MLC) ಸ್ಥಾನವನ್ನು ನೀಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. 'ಕಳೆದ ಹದಿನೈದು ವರ್ಷಗಳಿಂದ ತರೀಕೆರೆ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗೋಪಿಕೃಷ್ಣ ಅವರು ರಾಜ್ಯಾದ್ಯಂತ ಸಮುದಾಯದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಿಷ್ಠೆ ಮತ್ತು ಸೇವೆಯನ್ನು ಪರಿಗಣಿಸಿ ಅವರಿಗೆ ವಿಧಾನಪರಿಷತ್&zwnj;ಗೆ ನಾಮನಿರ್ದೇಶನ ಮಾಡಬೇಕು' ಎಂದು ಮುಖಂಡರು ಸರ್ಕಾರವನ್ನು ಆಗ್ರಹಿಸಿದರು.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ಸರ್ಕಾರದ ಇನ್ನುಳಿದ ಅವಧಿಯಲ್ಲಾದರೂ ಹಿಂದುಳಿದ ಮಡಿವಾಳ ಸಮುದಾಯಕ್ಕೆ ನ್ಯಾಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ವತಿಯಿಂದ ತೀವ್ರ ಹೋರಾಟ ನಡೆಸುವ ಮುನ್ಸೂಚನೆಯನ್ನು ಮುಖಂಡರು ನೀಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chikkamagaluru-madivala-community-demands-mlc-seat-for-congress-leader-hm-gopikrishna-oaev6ge"/>
        </item>
        <item>
            <title><![CDATA[ಕೇವಲ ದೊಡ್ಡ ಬ್ರ್ಯಾಂಡ್ ಹೆಸರಿಗಾಗಿ ₹7 ಲಕ್ಷ ಕಳೆದುಕೊಳ್ಳಬೇಕಾ? ಬೆಂಗಳೂರು ಟೆಕ್ಕಿಯ ವೈರಲ್ ಪೋಸ್ಟ್]]></title>
            <link>https://kannada.asianetnews.com/viral/rs-35-lpa-ebay-bengaluru-or-rs-28-lpa-amazon-techie-seeks-advice-on-choosing-salary-over-faang-tag-suh/articleshow-ginc1x2</link>
            <guid isPermaLink="true">https://kannada.asianetnews.com/viral/rs-35-lpa-ebay-bengaluru-or-rs-28-lpa-amazon-techie-seeks-advice-on-choosing-salary-over-faang-tag-suh/articleshow-ginc1x2</guid>
            <pubDate>Fri, 10 Jul 2026 16:57:10 +0530</pubDate>
            <description><![CDATA[&lt;p&gt;Gurgaon amazon vs Bengaluru eBay job offer ಬೆಂಗಳೂರುದಲ್ಲಿ ₹35 ಲಕ್ಷದ eBay ಆಫರ್&zwnj; ಮತ್ತು ಗುರ್ಗಾಂವ್&zwnj;ನಲ್ಲಿ ₹28 ಲಕ್ಷದ Amazon FAANG ಆಫರ್&zwnj; ನಡುವೆ ಗೊಂದಲಕ್ಕೀಡಾದ ಟೆಕ್ಕಿ&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5vv650qg3vscyx53gqahpt,imgname-gurgaon-amazon-vs-bengaluru-ebay-job-offer-1783682144415.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೆಚ್ಚು ಸಂಬಳ ಇರುವ ಉದ್ಯೋಗ ಆಯ್ಕೆ ಮಾಡಬೇಕಾ ಅಥವಾ FAANG ಕಂಪನಿಯ ಬ್ರ್ಯಾಂಡ್ ಮೌಲ್ಯಕ್ಕೆ ಆದ್ಯತೆ ನೀಡಬೇಕಾ? ಈ ಪ್ರಶ್ನೆಯನ್ನು ಕೇಳಿದ ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ರೊಬ್ಬರ ರೆಡ್ಡಿಟ್ ಪೋಸ್ಟ್&zwnj; ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&quot;Amazon Gurgaon vs eBay Bengaluru &ndash; FAANG ಬ್ರ್ಯಾಂಡ್&zwnj;ನಾ ಅಥವಾ ಹೆಚ್ಚು ಫಿಕ್ಸ್ಡ್&zwnj; ಸಂಬಳನಾ?&quot; ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್&zwnj; ಹಂಚಿಕೊಂಡಿರುವ ಟೆಕ್ಕಿ, ಸೆಪ್ಟೆಂಬರ್&zwnj;ನಲ್ಲಿ ಹೊಸ ಕಂಪನಿ ಸೇರಲು ಯೋಜಿಸಿದ್ದು, ಮುಂದಿನ 12 ರಿಂದ 18 ತಿಂಗಳಲ್ಲಿ ದೆಹಲಿ-ಎನ್&zwnj;ಸಿಆರ್&zwnj;ನಲ್ಲಿ ಇರುವ Microsoft ಅಥವಾ Adobe ಕಂಪನಿಗಳಿಗೆ ಬದಲಾಯಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿರುವ ತಮ್ಮ ಊರಿಗೆ ಹತ್ತಿರವಾಗಿರಲು ಈ ಯೋಜನೆ ರೂಪಿಸಿರುವುದಾಗಿ ಅವರು ಹೇಳಿದ್ದಾರೆ.&lt;/p&gt;&lt;h2&gt;ಎರಡು ಕಂಪನಿಗಳ ಆಫರ್&zwnj; ಏನು?&lt;/h2&gt;&lt;p&gt;ಟೆಕ್ಕಿಯ ಮಾಹಿತಿ ಪ್ರಕಾರ, Amazon Gurgaon ನೀಡಿರುವ ಪ್ಯಾಕೇಜ್&zwnj;ನಲ್ಲಿ:&lt;/p&gt;&lt;p&gt;₹19.17 ಲಕ್ಷ ವಾರ್ಷಿಕ ಫಿಕ್ಸ್ಡ್ ವೇತನ&lt;/p&gt;&lt;p&gt;ಮೊದಲ ವರ್ಷದ ₹6.47 ಲಕ್ಷ ಜಾಯಿನಿಂಗ್ ಬೋನಸ್&lt;/p&gt;&lt;p&gt;₹1.5 ಲಕ್ಷ ರಿಲೊಕೇಶನ್ ಬೋನಸ್&lt;/p&gt;&lt;p&gt;4 ವರ್ಷಗಳಲ್ಲಿ ವೆಸ್ಟ್ ಆಗುವ ₹15.56 ಲಕ್ಷ ಮೌಲ್ಯದ ಸ್ಟಾಕ್&lt;/p&gt;&lt;p&gt;ಇದರೊಂದಿಗೆ ಮೊದಲ ವರ್ಷದ ಒಟ್ಟು ಪ್ಯಾಕೇಜ್ ಸುಮಾರು ₹27.9 ಲಕ್ಷ ಆಗಿದೆ.&lt;/p&gt;&lt;h2&gt;ಇನ್ನೊಂದೆಡೆ, eBay Bengaluru ನೀಡಿರುವ ಆಫರ್&zwnj;ನಲ್ಲಿ:&lt;/h2&gt;&lt;p&gt;₹24 ಲಕ್ಷ ಫಿಕ್ಸ್ಡ್ ವೇತನ&lt;/p&gt;&lt;p&gt;₹2.4 ಲಕ್ಷ ಪರ್ಫಾರ್ಮೆನ್ಸ್ ಬೋನಸ್&lt;/p&gt;&lt;p&gt;₹1.5 ಲಕ್ಷ ಜಾಯಿನಿಂಗ್ ಬೋನಸ್&lt;/p&gt;&lt;p&gt;₹1 ಲಕ್ಷ ರಿಲೊಕೇಶನ್ ಬೋನಸ್&lt;/p&gt;&lt;p&gt;ನಾಲ್ಕು ವರ್ಷಗಳಲ್ಲಿ ವೆಸ್ಟ್ ಆಗುವ 25,000 ಡಾಲರ್ ಮೌಲ್ಯದ ಸ್ಟಾಕ್&lt;/p&gt;&lt;p&gt;ಇದರೊಂದಿಗೆ ಮೊದಲ ವರ್ಷದ ಒಟ್ಟು ಪ್ಯಾಕೇಜ್ ಸುಮಾರು ₹34.8 ಲಕ್ಷ ಆಗುತ್ತದೆ.&lt;/p&gt;&lt;h2&gt;ಟೆಕ್ಕಿಯ ಗೊಂದಲ ಏನು?&lt;/h2&gt;&lt;p&gt;ಎರಡೂ ಕಂಪನಿಗಳ ಪ್ಯಾಕೇಜ್ ನಡುವೆ ಸುಮಾರು ₹7 ಲಕ್ಷ ವ್ಯತ್ಯಾಸ ಇದ್ದರೂ, Amazonನ FAANG ಬ್ರ್ಯಾಂಡ್ ತ್ಯಜಿಸಿದರೆ ಭವಿಷ್ಯದಲ್ಲಿ ದೊಡ್ಡ ಟೆಕ್ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶಗಳಿಗೆ ತೊಂದರೆಯಾಗುತ್ತದೆಯೇ ಎಂಬ ಪ್ರಶ್ನೆಯನ್ನು ಟೆಕ್ಕಿ ಕೇಳಿದ್ದಾರೆ.&lt;/p&gt;&lt;p&gt;&quot;eBay ಆಯ್ಕೆ ಮಾಡಿದರೆ Google, Microsoft ಅಥವಾ ಇತರ ಉನ್ನತ ಕಂಪನಿಗಳಲ್ಲಿ ರೆಸ್ಯೂಮ್ ಶಾರ್ಟ್&zwnj;ಲಿಸ್ಟ್ ಆಗುವ ಅವಕಾಶ ಕಳೆದುಕೊಳ್ಳುತ್ತೇನೆಯೇ?&quot; ಎಂದು ಅವರು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ, ಭವಿಷ್ಯದಲ್ಲಿ ಉದ್ಯೋಗ ಬದಲಿಸಿದಾಗ ಹೊಸ ಸಂಬಳವನ್ನು ಫಿಕ್ಸ್ಡ್ ಬೇಸ್ ವೇತನದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆಯೇ? ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ. ಈ ಲೆಕ್ಕದಲ್ಲಿ eBayಯ ₹24 ಲಕ್ಷ ಫಿಕ್ಸ್ಡ್ ವೇತನ Amazonನ ₹19.17 ಲಕ್ಷಕ್ಕಿಂತ ಹೆಚ್ಚು ಅನುಕೂಲಕರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;ನೆಟ್ಟಿಗರ ಅಭಿಪ್ರಾಯ ಏನು?&lt;/h2&gt;&lt;p&gt;ಈ ಪೋಸ್ಟ್&zwnj;ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.&lt;/p&gt;&lt;p&gt;ಒಬ್ಬ ಬಳಕೆದಾರರು, &quot;ದಯವಿಟ್ಟು Amazon ಸೇರಬೇಡಿ. ಅಲ್ಲಿನ ಕೆಲಸದ ಸಂಸ್ಕೃತಿ ತುಂಬಾ ಕಠಿಣವಾಗಿದೆ. ದಿನಕ್ಕೆ 12-14 ಗಂಟೆ ಕೆಲಸ ಸಾಮಾನ್ಯ. FAANG ಕನಸಿಗಿಂತ ಆರೋಗ್ಯ ಮತ್ತು Work-Life Balance ಮುಖ್ಯ,&quot; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಮತ್ತೊಬ್ಬರು, &quot;ಯಾವುದೇ ದಿನ eBay ಆಯ್ಕೆ ಮಾಡುತ್ತೇನೆ. Amazonನಲ್ಲಿ ಕೆಲಸ-ಜೀವನ ಸಮತೋಲನ ತುಂಬಾ ಕಳಪೆಯಾಗಿದೆ,&quot; ಎಂದು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಆದರೆ Amazon ಹಾಗೂ eBay ಎರಡರಲ್ಲೂ ಕೆಲಸ ಮಾಡಿದ ಅನುಭವ ಹೊಂದಿರುವ ಮತ್ತೊಬ್ಬರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&quot;ನಾನು ಯಾವುದೇ ದಿನ Amazon ಆಯ್ಕೆ ಮಾಡುತ್ತೇನೆ. ದೀರ್ಘಾವಧಿಯ ವೃತ್ತಿಜೀವನದ ಬೆಳವಣಿಗೆ, ಉತ್ತಮ ಕಲಿಕೆ, ಪ್ರತಿಭಾವಂತ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುವ ಅವಕಾಶ ಅಲ್ಲಿ ಹೆಚ್ಚು. ವೃತ್ತಿಜೀವನದ ಆರಂಭದಲ್ಲಿ ಹೆಚ್ಚು ಕಲಿಯುವುದು ಮುಖ್ಯ,&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಇನ್ನೊಬ್ಬ ಬಳಕೆದಾರರು, &quot;ಅಂತಿಮ ಗುರಿ Google ಸೇರೋದು ಆಗಿದ್ದರೆ Amazon ಉತ್ತಮ ಆಯ್ಕೆ. ಹಿರಿಯ ಹುದ್ದೆಗಳಲ್ಲಿ ಅಲ್ಲಿನ ಸಂಬಳವೂ ಹೆಚ್ಚು. ಆದರೆ ಅಲ್ಪಾವಧಿಯಲ್ಲಿ Work-Life Balance ಮುಖ್ಯವಾದರೆ ಮಾತ್ರ eBay ಆಯ್ಕೆ ಮಾಡಿ,&quot; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಈ ಪೋಸ್ಟ್&zwnj; ಇದೀಗ ಸಂಬಳ, ಬ್ರ್ಯಾಂಡ್ ಮೌಲ್ಯ, ಕೆಲಸ-ಜೀವನ ಸಮತೋಲನ ಹಾಗೂ ಭವಿಷ್ಯದ ವೃತ್ತಿಜೀವನದ ಬಗ್ಗೆ ಟೆಕ್ ಉದ್ಯೋಗಿಗಳ ನಡುವೆ ಹೊಸ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/rs-35-lpa-ebay-bengaluru-or-rs-28-lpa-amazon-techie-seeks-advice-on-choosing-salary-over-faang-tag-suh/articleshow-ginc1x2"/>
        </item>
        <item>
            <title><![CDATA[ಕಲಬುರಗಿ: ಅಫಜಲಪುರ ಮಾಜಿ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌]]></title>
            <link>https://kannada.asianetnews.com/gallery/kalaburagi/kalaburagi-ex-tahsildar-shashikala-padagatti-jail-term-corruption-case-san-q2sg0vw</link>
            <guid isPermaLink="true">https://kannada.asianetnews.com/gallery/kalaburagi/kalaburagi-ex-tahsildar-shashikala-padagatti-jail-term-corruption-case-san-q2sg0vw</guid>
            <pubDate>Fri, 10 Jul 2026 15:43:34 +0530</pubDate>
            <description><![CDATA[&lt;p&gt;ಕಲಬುರಗಿಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಮತ್ತು ಮತ್ತೊಬ್ಬರಿಗೆ ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5r179apxcbezbq3vhkq6px,imgname-shashikala-padagatti---1--1783678147882.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಮತ್ತು ಮತ್ತೊಬ್ಬರಿಗೆ ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.&amp;nbsp;&lt;/p&gt;&lt;img&gt;&lt;p&gt;ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಹಾಗೂ ಅವರಿಗೆ ಲಂಚದ ಹಣ ತಲುಪಿಸಿದ್ದ ಶಿವಾನಂದ ಜಮಖಂಡಿಗೆ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಇಬ್ಬರಿಗೂ ತಲಾ 20 ಸಾವಿರ ರೂಪಾಯಿ ದಂಡವನ್ನು ವಿಧಿಸಿ ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಮಹತ್ವದ ಆದೇಶ ನೀಡಿದ್ದಾರೆ.&lt;/p&gt;&lt;img&gt;&lt;p&gt;2017ರಲ್ಲಿ ಅಫಜಲಪುರ ತಾಲ್ಲೂಕಿನ ಕರಜಗಿ ನಾಡ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್ ಆಗಿ ಶಿವಲಿಂಗಯ್ಯ ಬಸಯ್ಯ ಮಠ ಅವರು ಕೆಲಸ ಮಾಡುತ್ತಿದ್ದರು. ಇವರು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ದೂರು ತಹಶೀಲ್ದಾರ್ ಶಶಿಕಲಾ ಅವರಿಗೆ ಬಂದಿತ್ತು. ಈ ಪ್ರಕರಣದಲ್ಲಿ ತಮಗೆ ಸಹಾಯ ಮಾಡುವಂತೆ ಶಿವಲಿಂಗಯ್ಯ ಅವರು ಕೋರಿದಾಗ, ತಹಶೀಲ್ದಾರ್ ಶಶಿಕಲಾ ಅವರು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಹಣವನ್ನು ಶಿವಾನಂದ ಜಮಖಂಡಿಗೆ ತಲುಪಿಸಬೇಕು, ಇಲ್ಲದಿದ್ದರೆ ಕೆಲಸಕ್ಕೆ ಬೇರೆಯವರನ್ನು ನೇಮಿಸಿಕೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದರು.&lt;/p&gt;&lt;img&gt;&lt;p&gt;ಲಂಚದ ಬೇಡಿಕೆಯಿಂದ ಬೇಸತ್ತ ಶಿವಲಿಂಗಯ್ಯ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, 2017ರ ಆಗಸ್ಟ್ 31ರಂದು ಶಿವಲಿಂಗಯ್ಯ ಅವರಿಂದ ಲಂಚದ ಹಣವನ್ನು ಪಡೆದ ಶಿವಾನಂದ ಜಮಖಂಡಿ, ಅದನ್ನು ತಹಶೀಲ್ದಾರ್ ಶಶಿಕಲಾ ಅವರಿಗೆ ತಲುಪಿಸಲು ಹೋಗಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ರೆಡ್&zwnj;ಹ್ಯಾಂಡ್ ಆಗಿ ಬಂಧಿಸಿದ್ದರು. ಲೋಕಾಯುಕ್ತ ಡಿವೈಎಸ್&zwnj;ಪಿ ಸಂತೋಷ ಬನ್ನಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದರು.&lt;/p&gt;&lt;img&gt;&lt;p&gt;ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರು ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ರಾಜ್ಯ ಸರ್ಕಾರ ಅವರಿಗೆ ಕಡ್ಡಾಯ ನಿವೃತ್ತಿಗೆ (Compulsory Retirement) ಸೂಚಿಸಿ, ಕೆಲಸದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು.&lt;/p&gt;&lt;img&gt;&lt;p&gt;ಈ ಗಂಭೀರ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿ ಕೃಷ್ಣಪ್ಪ ಕಲ್ಲದೇವರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (ಚಾರ್ಜ್&zwnj;ಶೀಟ್) ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ (SPP) ಅಶೋಕ ಎಸ್. ಚಾಂದಕವಠ ಅವರು ಸರ್ಕಾರದ ಪರವಾಗಿ ಪ್ರಬಲ ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ಇಬ್ಬರೂ ಆರೋಪಿಗಳು ಅಪರಾಧಿಗಳು ಎಂದು ತೀರ್ಪು ನೀಡಿ ಜೈಲು ಶಿಕ್ಷೆ ಪ್ರಕಟಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/kalaburagi/kalaburagi-ex-tahsildar-shashikala-padagatti-jail-term-corruption-case-san-q2sg0vw"/>
        </item>
        <item>
            <title><![CDATA[Shivamogga shocking: ಪ್ರೀತಿ ನೆಪದಲ್ಲಿ ಹೊರ ರಾಜ್ಯದ ಯುವತಿಗೆ ಗರ್ಭಿಣಿ ಮಾಡಿ ಟೈಲರ್ ಪರಾರಿ!]]></title>
            <link>https://kannada.asianetnews.com/karnataka-districts/shivamogga-tailor-cheating-young-woman-from-another-state-under-the-pretext-of-love-rav/articleshow-hvyggog</link>
            <guid isPermaLink="true">https://kannada.asianetnews.com/karnataka-districts/shivamogga-tailor-cheating-young-woman-from-another-state-under-the-pretext-of-love-rav/articleshow-hvyggog</guid>
            <pubDate>Fri, 10 Jul 2026 15:22:56 +0530</pubDate>
            <description><![CDATA[&lt;p&gt;ಪ್ರೀತಿ ಪ್ರೇಮದ ನೆಪದಲ್ಲಿ ಹೊರ ರಾಜ್ಯದ ಯುವತಿಯನ್ನು ನಂಬಿಸಿ ಅತ್ಯಾ೧ಚಾರ ನಡೆಸಿದಲ್ಲದೆ ನಂತರ ಅಬಾರ್ಷನ್ ಕೂಡ ಮಾಡಿಸಿ ವಂಚಿಸಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5pzvqg9y3hswmsv75eqc5q,imgname-image--7--1783677054704.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ(ಜು.10):&lt;/strong&gt; ಪ್ರೀತಿ ಪ್ರೇಮದ ನೆಪದಲ್ಲಿ ಹೊರ ರಾಜ್ಯದ ಯುವತಿಯನ್ನು ನಂಬಿಸಿ ಅತ್ಯಾ೧ಚಾರ ನಡೆಸಿದಲ್ಲದೆ ನಂತರ ಅಬಾರ್ಷನ್ ಕೂಡ ಮಾಡಿಸಿ ವಂಚಿಸಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ&lt;/p&gt;&lt;h2&gt;ಯುವತಿಯ ಅಸಹಾಯಕತೆ ಬಂಡವಾಳ ಮಾಡಿಕೊಂಡ ಪಾಪಿ!&lt;/h2&gt;&lt;p&gt;ಕೆಲವೊಮ್ಮೆ ಬಡತನ, ಉದ್ಯೋಗ, ವಿದ್ಯಾಭ್ಯಾಸದ ಕಾರಣಕ್ಕಾಗಿ ಹೊರರಾಜ್ಯಗಳಿಂದ ಬಂದು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನ ಪಡುವ ಯುವತಿಯರು ಇಂಥ ವಂಚನೆ ಜಾಲಕ್ಕೆ ಸಿಲುಕಿಕೊಂಡು ಬದುಕು ನರಕ ಮಾಡಿಕೊಳ್ಳುತ್ತಾರೆ. ಇಲ್ಲಿಯೂ ಇದೇ ಆಗಿದೆ. ಮೊದಲಿಗೆ ಆ ಯುವತಿಯನ್ನ ಪರಿಚಯಿಸಿಕೊಂಡು ಬಳಿಕ ಪ್ರೀತಿಯ ಹೆಸರಿನಲ್ಲಿ ಟಾರ್ಗೆಟ್ ಮಾಡಿ ವಂಚಿಸುವ ದೊಡ್ಡ ಜಾಲವೇ ರಾಜ್ಯದಲ್ಲಿ ಸಕ್ರಿಯವಾಗಿದೆ. ಅಂತೆಯೇ ಶಿವಮೊಗ್ಗದ ಯುವಕನೊಬ್ಬ ಇದೇ ರೀತಿ ಕೃತ್ಯವೆಸಗಿದ್ದಾನೆ.&lt;/p&gt;&lt;h3&gt;ಮದುವೆಯಾಗುವುದಾಗಿ ನಂಬಿಸಿ ಮೋಸ&lt;/h3&gt;&lt;p&gt;ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಕರೆಸಿಕೊಂಡಿದ್ದಾನೆ. ಇವನ ಮಾತನ್ನು ನಂಬಿ ಬಂದ ಹೊರರಾಜ್ಯದ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿ ಮಾಡಿರುವ ಆರೋಪಿ ಬಳಿಕ ಕೈಕೊಟ್ಟು ಪರಾರಿಯಾಗಿದ್ದಾನೆ., ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.&lt;/p&gt;&lt;p&gt;ಹೌದು ಇಷ್ಟಕ್ಕೂ ನಡೆದಿದ್ದೇನೆಂದರೆ ಶಿವಮೊಗ್ಗ ನಗರದ ದುರ್ಗಿ ಗುಡಿಯಲ್ಲಿ ಅನುರಾಧ ಕ್ರಿಯೇಶನ್ಸ್ ಹೆಸರಿನ ಟೈಲರಿಂಗ್ ಅಂಗಡಿ ನಡೆಸುತ್ತಿದ್ದ ಶಿವಮೊಗ್ಗದ ಸೀಗೆಹಟ್ಟಿಯ ಯುವಕ ಶ್ರೀನಿಧಿ ಎಂಬಾತ ಹೊರ ರಾಜ್ಯದ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿರುವ ಆರೋಪ ಕೇಳಿಬಂದಿದೆ. ಹೋಟೆಲ್ ಕೆಲಸಕ್ಕೆ ಬಂದಿದ್ದ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿದ್ದ. ಪ್ರೀತಿಯ ಹೆಸರಿನಲ್ಲಿ ಅಂಗಡಿಗೆ ಕರೆಸಿಕೊಂಡಿದ್ದ. ಸಮಯ ನೋಡಿ ಯುವತಿ ಮೇಲೆ ಅತ್ಯಾ೧ಚಾರ ಎಸಗಿದ್ದಾನೆ. ಇತ್ತೀಚೆಗೆ ಯುವತಿ ಗರ್ಭಿಣಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಮದುವೆಯಾಗಲು ನಿರಾಕರಿಸಿ ಕೈಕೊಟ್ಟಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನನ್ವಯ ಮಹಿಳಾ ಠಾಣೆ ಪೊಲೀಸರು ಆರೋಪಿ ವಿರುದ್ಧ ಅತ್ಯಾ೧ಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.&lt;/p&gt;&lt;h3&gt;ಟೈಲರ್ ಅಂಗಡಿ ಇಟ್ಕೊಂಡು ಯುವತಿಯರಿಗೆ ಹೊಂಚು ಹಾಕ್ತಿದ್ದ ಕಾಮುಕ&lt;/h3&gt;&lt;p&gt;ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ರವರು ದುರ್ಗಿಗುಡಿ ಯಲ್ಲಿರುವ ಆರೋಪಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಅತ್ಯಾ೧ಚಾರ ಕ್ಕೊಳಗಾದ ಯುವತಿಯನ್ನು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ. ಅದೇ ಅಂಗಡಿಯಲ್ಲೇ ಯುವತಿ ಮೇಲೆ ಅತ್ಯಾ೧ಚಾರ ಕೃತ್ಯ ನಡೆದಿದೆ ಎಂದು ಆರೋಪಿಸಿದ್ದಾಳೆ. ವಿದ್ಯಾಭ್ಯಾಸ ಅಥವಾ ಉದ್ಯೋಗದ ಕಾರಣದಿಂದ ಹೊರ ರಾಜ್ಯಗಳಿಂದ ಬರುವ ಯುವತಿಯರಿಗೆ ಪಿಜಿ ಅಥವಾ ರೂಮ್ ಮಾಡಿಕೊಂಡ ಸಂದರ್ಭದಲ್ಲಿ ರಕ್ಷಣೆ ಎಂಬುದೇ ಇರುವುದಿಲ್ಲ. ಕುಟುಂಬ ತೊರೆದು ಬರುವ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಳ್ಳುವ ಇಂಥ ಕಾಮುಕರು ಪ್ರೀತಿಯ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ನಡುನೀರಲ್ಲಿ ಕೈಬಿಟ್ಟು ಪರಾರಿಯಾಗುತ್ತಾರೆ.&lt;/p&gt;&lt;p&gt;ಇದೀಗ ಪ್ರೀತಿಯ ಹೆಸರಿನಲ್ಲಿ ಕಾಮದಾಟ ನಡೆಸಿ ಪರಾರಿಯಾಗಿರುವ ಯುವಕ ಶ್ರೀನಿಧಿ ವಿರುದ್ಧ ಹಲವಾರು ಯುವತಿಯರಿಗೆ ಇದೇ ರೀತಿ ವಂಚಿಸಿರುವ ಆರೋಪಗಳು ಕೇಳಿ ಬರುತ್ತಿವೆ. ಇದೀಗ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿ ಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆದರೆ ನೊಂದ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ಅತಂತ್ರ ಪರಿಸ್ಥಿತಿಯಲ್ಲಿ ನಿಂತಿದ್ದಾಳೆ&lt;/p&gt;&lt;p&gt;ಶಿವಮೊಗ್ಗದಿಂದ ರಾಜೇಶ್ ಏಷ್ಯಾನೆಟ್ ಸುವರ್ಣ ನ್ಯೂಸ್&lt;/p&gt;]]></content:encoded>
            <category>karnataka-districts</category>
            <dc:creator>Suvarna News</dc:creator>
            <atom:link href="https://kannada.asianetnews.com/karnataka-districts/shivamogga-tailor-cheating-young-woman-from-another-state-under-the-pretext-of-love-rav/articleshow-hvyggog"/>
        </item>
        <item>
            <title><![CDATA[ಹಿಪ್ಪರಗಿ ಬ್ಯಾರೇಜ್‌ನ ಕ್ರಸ್ಟ್‌ಗೇಟ್‌ಗಳ ಬದಲಾವಣೆಗೆ ₹42 ಕೋಟಿ ವೆಚ್ಚದ ಟೆಂಡರ್ ಆಹ್ವಾನಿಸಿದ ರಾಜ್ಯ ನೀರಾವರಿ ನಿಗಮ!]]></title>
            <link>https://kannada.asianetnews.com/karnataka-districts/hipparagi-barrage-to-get-new-steel-gates-rs-42-cr-tender-invited-by-karnataka-neeravari-nigama-gdp/articleshow-ghgapn1</link>
            <guid isPermaLink="true">https://kannada.asianetnews.com/karnataka-districts/hipparagi-barrage-to-get-new-steel-gates-rs-42-cr-tender-invited-by-karnataka-neeravari-nigama-gdp/articleshow-ghgapn1</guid>
            <pubDate>Fri, 10 Jul 2026 14:41:12 +0530</pubDate>
            <description><![CDATA[ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್&zwnj;ನ 25 ವರ್ಷ ಹಳೆಯ ಕ್ರಸ್ಟ್&zwnj;ಗೇಟ್&zwnj;ಗಳ ಬದಲಿಗೆ ₹42 ಕೋಟಿ ವೆಚ್ಚದಲ್ಲಿ ಹೊಸ, ಆಧುನಿಕ ಸ್ಟೀಲ್ ಗೇಟ್&zwnj;ಗಳನ್ನು ಅಳವಡಿಸಲು ಕರ್ನಾಟಕ ನೀರಾವರಿ ನಿಗಮ ಟೆಂಡರ್ ಕರೆದಿದೆ. ಶಾಸಕ ಸಿದ್ದು ಸವದಿ ಅವರ ನಿರಂತರ ಒತ್ತಾಯದ ಫಲವಾಗಿ, ಬ್ಯಾರೇಜ್&zwnj;ನ ಸುರಕ್ಷತೆ ಮತ್ತು ರೈತರ ಹಿತ ಕಾಯುವ ಈ ಮಹತ್ವದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx5mb0xt1zpvah6y4gydy91b,imgname-hipparagi-barrage--1--1783674274744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಬಕವಿ-ಬನಹಟ್ಟಿ:&lt;/strong&gt; ಬಾಗಲಕೋಟೆ ಜಿಲ್ಲೆಯ ರೈತರ ಜೀವನಾಡಿಯಾಗಿರುವ 25 ವರ್ಷಗಳಿಂದ ಸತತವಾಗಿ ಯಾವ ಬದಲಾವಣೆಯಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಹಿಪ್ಪರಗಿ ಬ್ಯಾರೇಜ್&zwnj;ನ ಹಳೆಯ ಕ್ರಸ್ಟ್&zwnj;ಗೇಟ್&zwnj;ಗಳ ಬದಲಿಗೆ ಹೊಸ ಆಧುನಿಕ ತಂತ್ರಜ್ಞಾನದ ಸ್ಟೀಲ್ ಕ್ರಸ್ಟ್&zwnj;ಗೇಟ್&zwnj;ಗಳನ್ನು ಅಳವಡಿಸುವ ಮಹತ್ವದ ಕಾಮಗಾರಿಗೆ ಕರ್ನಾಟಕ ನೀರಾವರಿ ನಿಗಮವು ₹ 42 ಕೋಟಿ.ಗಳ ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಿದೆ. ಜನವರಿಯಲ್ಲಿ ಬ್ಯಾರೇಜ್&zwnj;ನ 22ನೇಕ್ರಸ್ ಗೇಟ್ ನೀರಿನ ಒತ್ತಡಕ್ಕೆ ಮುರಿದು ಅಪಾರ ನೀರು ಪೋಲಾಗಿತ್ತು. ಬಳಿಕ ಅಂದಾಜು 1.60 ಲಕ್ಷ ರೂ.ದಲ್ಲಿ ಹೊಸ ಗೇಟ್ ಅಳವಡಿಕೆ ಮಾಡಲಾಗಿತ್ತು. ಹೀಗಾಗಿ ಈಗ ಉಳಿದಿರುವ 21 ಹೊಸ ಗೇಟ್&zwnj;ಗಳ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ.&lt;/p&gt;&lt;p&gt;ಹಿಪ್ಪರಗಿ ಬ್ಯಾರೇಜ್&zwnj;ನ ಕ್ರೆಸ್ಟ್ಗೇಟ್&zwnj;ಗಳು ಸವಕಳಿಗೊಂಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಕ್ಷಣ ನವೀಕರಿಸಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ವಿಧಾನಸಭೆಯಲ್ಲಿ ನಿರಂತರವಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದರು. ಅವರ ಪತ್ರ ನೀಡಿದ ಬಳಿಕ ಸರ್ಕಾರ ಅಗತ್ಯ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ.&lt;/p&gt;&lt;p&gt;ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಸಿದ್ದು ಸವದಿ, 2001ರಲ್ಲಿ ಹಿಪ್ಪರಗಿ ಬ್ಯಾರೇಜ್&zwnj;ಗೆ ಕಬ್ಬಿಣದ ಕ್ರೆಸ್ಟ್ಗೇಟ್&zwnj;ಗಳನ್ನು ಅಳವಡಿಸಲಾಗಿತ್ತು. ಹೈದರಾಬಾದ್&zwnj;ನಿಂದ ಬಂದ ತಜ್ಞರ ಪ್ರಕಾರ ಅವುಗಳ ಬಾಳಿಕೆ 15 ವರ್ಷಗಳಷ್ಟೇ ಇದ್ದರೂ, ಹೆಚ್ಚುವರಿಯಾಗಿ ಸುಮಾರು 10 ವರ್ಷಗಳಿಗೂ ಹೆಚ್ಚು ಅವು ಕಾರ್ಯನಿರ್ವಹಿಸಿವೆ. ಆದರೆ, ಕಳೆದ ಜನವರಿಯಲ್ಲಿ 22ನೇ ಗೇಟ್&zwnj;ನಲ್ಲಿ ಸಂಭವಿಸಿದ ಅವಘಡ ಗೇಟ್&zwnj;ಗಳ ಸ್ಥಿತಿಗತಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂಬ ಎಚ್ಚರಿಕೆಯನ್ನು ನೀಡಿತ್ತು ಎಂದರು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಎಲ್ಲ ಕ್ರೆಸ್ಟ್ಗೇಟ್&zwnj;ಗಳನ್ನು ಹೊಸದಾಗಿ ಅಳವಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದೆವು. ಇದೀಗ ಕಾಮಗಾರಿಗೆ ಟೆಂಡರ್ ಕರೆಯಲಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ಕ್ರಮಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಈ ಬಾರಿ ಕಬ್ಬಿಣದ ಬದಲಿಗೆ ಉಕ್ಕಿನಿಂದ (ಸ್ಟೀಲ್) ಕ್ರೆಸ್ಟ್ಗೇಟ್&zwnj;ಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳ ಬಾಳಿಕೆ ಸುಮಾರು 50 ವರ್ಷಗಳವರೆಗೆ ಇರಲಿದೆ ಎಂದು ಶಾಸಕರು ಮಾಹಿತಿ ನೀಡಿದರು. ಒಟ್ಟು 22 ಗೇಟ್&zwnj;ಗಳ ಪೈಕಿ 21 ಗೇಟ್&zwnj;ಗಳನ್ನು ನವೀಕರಿಸಲಾಗುತ್ತದೆ. ಪ್ರಸಕ್ತ ಮಳೆಗಾಲ ಮುಗಿದ ನಂತರ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಮಳೆಗಾಲದ ವೇಳೆಗೆ ಹೊಸ ಕ್ರೆಸ್ಟ್ಗೇಟ್&zwnj;ಗಳ ಮೂಲಕವೇ ಬ್ಯಾರೇಜ್&zwnj;ನಲ್ಲಿ ನೀರು ತಡೆಹಿಡಿಯುವ ವ್ಯವಸ್ಥೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.&lt;/p&gt;&lt;h2&gt;ತಜ್ಞರ ತಂಡದ ವರದಿಗೆ ಮನ್ನಣೆ:&lt;/h2&gt;&lt;p&gt;ಕಳೆದ ಮೇ ತಿಂಗಳಲ್ಲಿ ಹೈದರಾಬಾದ್&zwnj;ನ ತಜ್ಞರ ವಿಶೇಷ ತಂಡ ಬ್ಯಾರೇಜ್&zwnj;ಗೆ ಭೇಟಿ ನೀಡಿ ಕ್ರೆಸ್ಟ್ಗೇಟ್&zwnj;ಗಳ ಸಮಗ್ರ ಪರಿಶೀಲನೆ ನಡೆಸಿತ್ತು. ಪರಿಶೀಲನೆಯಲ್ಲಿ ಬಹುತೇಕ ಎಲ್ಲ ಗೇಟ್&zwnj;ಗಳು ಸವಕಳಿಗೊಂಡಿರುವುದು ದೃಢಪಟ್ಟಿದ್ದು, ಅವುಗಳನ್ನು ಸಂಪೂರ್ಣವಾಗಿ ನವೀಕರಿಸಬೇಕೆಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಅದರ ಆಧಾರದ ಮೇಲೆ ಸುಮಾರು ₹ 42 ಕೋಟಿಗಳ ಅಂದಾಜು ವೆಚ್ಚದಲ್ಲಿ ನವೀಕರಣ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಇದೀಗ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಶಾಸಕ ಸವದಿ ನಿರಂತರ ಆಗ್ರಹದಿಂದ ನೂತನ ಗೇಟ್&zwnj;ಗಳು ಅಳವಡಿಕೆಯಾಗುತ್ತಿದ್ದು, ಶಾಸಕರನ್ನು ಧುರೀಣರಾದ ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಆನಂದ ಕಂಪು ಮೊದಲಾದವರು ಅಭಿನಂದಿಸಿದ್ದಾರೆ.&lt;/p&gt;&lt;p&gt;2001ರಲ್ಲಿ ಹಿಪ್ಪರಗಿ ಬ್ಯಾರೇಜ್&zwnj; ಗೆ ಕ್ರಸ್ಟ್&zwnj; ಗೇಟ್ ಅಳವಡಿಸಲಾಗಿತ್ತು. ತಜ್ಞರ ಪ್ರಕಾರ ಅವುಗಳ ಬಾಳಿಕೆ 15 ವರ್ಷ. ಆದರೆ ಹೆಚ್ಚುವರಿಯಾಗಿ 10 ವರ್ಷ ಕಾರ್ಯನಿರ್ವಹಿಸಿವೆ. ಹೊಸಗೇಟ್ ಅಳವಡಿಕೆಗೆ ಸರಕಾರದ ಮೇಲೆ ನಿರಂತರ ಒತ್ತಡ ಹೇರಲಾಗಿತ್ತು.ಹಿಪ್ಪರಗಿ ಬ್ಯಾರೇಜ್&zwnj;ನ ಸುರಕ್ಷತೆ ಮತ್ತು ರೈತರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಶ್ಲಾಘನೀಯ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.&lt;/p&gt;&lt;p&gt;-ಸಿದ್ದು ಸವದಿ ತೇರದಾಳ ಶಾಸಕ&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hipparagi-barrage-to-get-new-steel-gates-rs-42-cr-tender-invited-by-karnataka-neeravari-nigama-gdp/articleshow-ghgapn1"/>
        </item>
        <item>
            <title><![CDATA[ಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್: ಫುಟ್ಪಾತ್ ತೆರವು ಕಾರ್ಯಾಚರಣೆ ವೀಕ್ಷಣೆ, ಸಚಿವ ಕೃಷ್ಣ ಬೈರೇಗೌಡ ಸಾಥ್]]></title>
            <link>https://kannada.asianetnews.com/gallery/state/bengaluru-footpaths-clearance-encroachment-cm-dk-shivakumar-city-round-today-nbmssfy</link>
            <guid isPermaLink="true">https://kannada.asianetnews.com/gallery/state/bengaluru-footpaths-clearance-encroachment-cm-dk-shivakumar-city-round-today-nbmssfy</guid>
            <pubDate>Fri, 10 Jul 2026 13:51:56 +0530</pubDate>
            <description><![CDATA[&lt;p&gt;CM DK Shivakumar City round's Photos: ಬೆಳಗಾವಿಯಿಂದ ಆಗಮಿಸುತ್ತಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫುಟ್ಪಾತ್ ತೆರವು ಕಾರ್ಯಾಚರಣೆ ಹಿನ್ನೆಲೆ ಖುದ್ದಾಗಿ ಸಿಟಿ ರೌಂಡ್ ನಡೆಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸಾಥ್ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5gddp883vcp5gnjcdbta84,imgname-whatsapp-image-2026-07-10-at-12.56.06-pm-1783670159048.jpeg" type="image/jpeg" height="390" width="690"/>
            <content:encoded><![CDATA[&lt;p&gt;CM DK Shivakumar City round's Photos: ಬೆಳಗಾವಿಯಿಂದ ಆಗಮಿಸುತ್ತಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫುಟ್ಪಾತ್ ತೆರವು ಕಾರ್ಯಾಚರಣೆ ಹಿನ್ನೆಲೆ ಖುದ್ದಾಗಿ ಸಿಟಿ ರೌಂಡ್ ನಡೆಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸಾಥ್ ನೀಡಿದರು.&lt;/p&gt;&lt;img&gt;&lt;p&gt;ಬೆಂಗಳೂರು: ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ(Bengaluru Footpath clear encroachment) ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM DK Shivakumar) ಇಂದು ದಿಢೀರ್ ಸಿಟಿ ರೌಂಡ್ ನಡೆಸಿ ಒತ್ತುವರಿ ತೆರವು ಕಾರ್ಯಾಚರಣೆ ಪರಿಶೀಲಿಸಿದರು. ಕಳೆದ ಹಲವು ದಿನಗಳಿಂದ ಜಿಬಿಎ (GBA) ವತಿಯಿಂದ ನಡೆಯುತ್ತಿರುವ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಬಳಿಕ ಸ್ಥಳದಲ್ಲಿನ ವಾಸ್ತವ ಸ್ಥಿತಿಯನ್ನು ಖುದ್ದಾಗಿ ಸ್ಥಳ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು.&lt;/p&gt;&lt;img&gt;&lt;p&gt;ಬೆಳಗಾವಿಯಿಂದ ಆಗಮಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ(Krishna Byregowda) ಹಾಗೂ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು. ಹೆಚ್&zwnj;ಎಎಲ್ ವಿಮಾನ ನಿಲ್ದಾಣದ ಮುಂಭಾಗದ ರಸ್ತೆಯ ಫುಟ್ಪಾತ್&zwnj;ಗಳು, ಹೆಚ್&zwnj;ಎಎಲ್ ಸ್ಪೋರ್ಟ್ಸ್ ಕ್ಲಬ್ ನಿರ್ಮಿಸಿರುವ ಪಾದಚಾರಿ ಮಾರ್ಗ ಸೇರಿದಂತೆ ವಿವಿಧ ಪ್ರದೇಶಗಳನ್ನು ಪರಿಶೀಲಿಸಿದರು.&lt;/p&gt;&lt;img&gt;&lt;p&gt;ಒತ್ತುವರಿ ತೆರವುಗೊಳಿಸಿದ ಬಳಿಕ ಕೆಲವೆಡೆ ಅಂಗಡಿಗಳ ಅವಶೇಷಗಳು, ಮರದ ಹಲಗೆಗಳು ಹಾಗೂ ಕಸದ ರಾಶಿಗಳು ಹಾಗೆಯೇ ಬಿದ್ದಿತ್ತು. ಆದರೆ ಇಂದು ಸಿಎಂ ಭೇಟಿ ಬೆನ್ನಲ್ಲೇ ಪೌರಕಾರ್ಮಿಕರು ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಹಲವು ವರ್ಷಗಳಿಂದ ಕಸದಿಂದ ತುಂಬಿದ್ದ ಫುಟ್ಪಾತ್&zwnj;ಗಳನ್ನು ಶುಚಿಗೊಳಿಸಲು ಸಿಬ್ಬಂದಿ ಹರಸಾಹಸ ಪಟ್ಟರು.&lt;/p&gt;&lt;img&gt;&lt;p&gt;ಪರಿಶೀಲನೆ ವೇಳೆ ಅಧಿಕಾರಿಗಳು ಮಿನಿ ಬಸ್&zwnj;ನಲ್ಲೇ ಸಿಎಂಗೆ ರಸ್ತೆ ಅಭಿವೃದ್ಧಿ, ಫುಟ್ಪಾತ್ ನಿರ್ವಹಣೆ ಹಾಗೂ ಮುಂದಿನ ಕ್ರಮಗಳ ಕುರಿತು ಮಾಹಿತಿ ನೀಡಿದರು. ಕೆಲ ದಿನಗಳ ಹಿಂದೆಯೇ ಒಆರ್&zwnj;ಆರ್ ರಸ್ತೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದ್ದ ಸಚಿವ ಕೃಷ್ಣ ಬೈರೇಗೌಡ, ಇಂದು ಕಾಮಗಾರಿ ಮಾಹಿತಿಯನ್ನು ಸಿಎಂಗೆ ವಿವರಿಸಿದರು.&amp;nbsp;&lt;/p&gt;&lt;img&gt;&lt;p&gt;ಬಳಿಕ ಸಿಎಂ ಹೆಚ್&zwnj;ಎಸ್&zwnj;ಆರ್ ಲೇಔಟ್&zwnj;ನ 27ನೇ ಮುಖ್ಯರಸ್ತೆಗೆ ಆಗಮಿಸಿ ಅಲ್ಲಿನ ಫುಟ್ಪಾತ್ ಹಾಗೂ ಪಾದಚಾರಿ ವ್ಯವಸ್ಥೆಯನ್ನು ವೀಕ್ಷಿಸಿದರು. 27ನೇ ಮುಖ್ಯರಸ್ತೆಯಿಂದ 24ನೇ ಮುಖ್ಯರಸ್ತೆಯವರೆಗೆ ಕಾಲ್ನಡಿಗೆಯಲ್ಲೇ ಪರಿಶೀಲನೆ ನಡೆಸಿ, ಒತ್ತುವರಿ ತೆರವುಗೊಂಡಿರುವ ಫುಟ್ಪಾತ್&zwnj;ಗಳ ಸ್ಥಿತಿಯನ್ನು ಸಿಎಂ ಪರಿಶೀಲಿಸಿದರು. ಇನ್ನೊಂದೆಡೆ, ಸಿಎಂ ಸಂಚರಿಸಿದ ಮಾರ್ಗದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/bengaluru-footpaths-clearance-encroachment-cm-dk-shivakumar-city-round-today-nbmssfy"/>
        </item>
        <item>
            <title><![CDATA[Priyank kharge:  ಬಿಜೆಪಿ ಗೆಲ್ಲಿಸಲು ಚುನಾವಣಾ ಆಯೋಗ ಸಂಚು? ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ! ಹೇಳಿದ್ದೇನು?]]></title>
            <link>https://kannada.asianetnews.com/politics/karnataka-politics-livee-minister-priyank-kharge-slams-rss-bjp-leaders-at-bengaluru-rav/articleshow-exidzwv</link>
            <guid isPermaLink="true">https://kannada.asianetnews.com/politics/karnataka-politics-livee-minister-priyank-kharge-slams-rss-bjp-leaders-at-bengaluru-rav/articleshow-exidzwv</guid>
            <pubDate>Fri, 10 Jul 2026 12:53:23 +0530</pubDate>
            <description><![CDATA[&lt;p&gt;ಬೆಳಗಾವಿಯಲ್ಲಿಂದು ಆರೆಸ್ಸೆಸ್ ಸಭೆ ನಡೆಯುತ್ತಿರುವ ಬೆನ್ನಲ್ಲೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ರಾಮಮಂದಿರ, ಚುನಾವಣಾ ಆಯೋಗ, ಬಿಜೆಪಿ, ಎಸ್&zwnj;ಐಆರ್, ಬೆಳಗಾವಿ ಗಡಿ ಸಮಸ್ಯೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5d6dgaagvg5a55dtvaqzts,imgname-----------------------2026-07-10t122543.115-1783666783754.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಜು.10):&lt;/strong&gt; ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಇಂದಿನಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಸಂಘದ ಸರಸಂಘಚಾಲಕ ಡಾ.ಮೋಹನ್&zwnj; ಭಾಗವತ್ ಸೇರಿ ಉನ್ನತ ನಾಯಕತ್ವ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರಚಾರಕರು ಪಾಲ್ಗೊಳ್ಳಲಿದ್ದಾರೆ. ಈ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್&zwnj;ಎಸ್&zwnj;ಎಸ್&zwnj; ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;h2&gt;ಆರೆಸ್ಸೆಸ್ ಏನಾದ್ರೂ ಮಾಡಿಕೊಳ್ಳಲಿ ಆದ್ರೆ..&lt;/h2&gt;&lt;p&gt;ಬೆಳಗಾವಿಯಲ್ಲಿ ಆರ್&zwnj;ಎಸ್&zwnj;ಎಸ್&zwnj; ಸಭೆ ನಡೆಸುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, 'ಅವ್ರು ಖಾಸಗಿಯಾಗಿ ಮೀಟಿ ಮಾಡಿಕೊಳ್ತಿದ್ದಾರೆ. ಏನಾದ್ರೂ ಮಾಡಿಕೊಳ್ಳಲಿ, ನಮಗೆ ತೊಂದರೆ ಇಲ್ಲ. ಟ್ರಾನ್ಸಫರೆನ್ಸಿ ತಗೊಂಡು ಬನ್ನಿ. ರಾಮ ಮಂದಿರದ ಹುಂಡಿ ಕಳ್ಳತನದ ಕ್ರೆಡಿಟ್ ಕೂಡ ತಗೊಳ್ಳಿ. ಬರೀ ಸೋಷಿಯಲ್ ಮೀಡಿಯಾದು ಹೇಳಿಕೆ ನೀಡೋದು ಅಲ್ಲ, ಹುಂಡಿ ಕಳ್ಳತನದಲ್ಲಿ ನಿಮಗೆಷ್ಟು ಪಾಲು ಬಂದಿದೆ, ಯಾರಾರು ಎಷ್ಟೆಷ್ಟು ಕೊಟ್ಟಿದ್ದಾರೆ ಅದನ್ನು ಹೇಳಲಿ, ಕಳ್ಳತನ ಮಾಡೋವರೆಗೆ ಯಾಕೆ ಸುಮ್ನಿದ್ರು? ಈಗ ಕ್ರಮದ ಬಗ್ಗೆ ಮಾತನಾಡ್ತಾರೆ ಎಂದು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;h3&gt;ಬಿಜೆಪಿ ಗೆಲ್ಲಿಸಲು ಚುನಾವಣಾ ಆಯೋಗ ಸಂಚು: ಪ್ರಿಯಾಂಕ್ ಗಂಭೀರ ಅರೋಪ&lt;/h3&gt;&lt;p&gt;ಇನ್ನು ರಾಜ್ಯ ಸರ್ಕಾರ ವಾಸಸ್ಥಳ ಪ್ರಮಾಣಪತ್ರ ನೀಡ್ತಿರೋದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ನಾವು ಶಾಸಕರು, ನಮ್ಮ ಕೆಲಸ ಶಾಸನ ಮಾಡೋದು. ಸರ್ಕಾರದಿಂದ ಅಧಿಕೃತವಾಗಿ ವಾಸಸ್ಥಳ ದೃಢೀಕರಣ ಪತ್ರ ಕೊಡ್ತೇವೆ. ನಾವೇನು ಪಕ್ಷದಿಂದ ಕೊಡ್ತಿದ್ದೇವಾ? ಎಂದು ಪ್ರಶ್ನಿಸಿದರು ಮುಂದುವರಿದು, SIR ನಲ್ಲಿರುವ ನ್ಯೂನತೆ ಸರಿಪಡಿಸಬೇಕು. ಒಂದೊಂದು ಪುಟ ಜಾಹೀರಾತು ಕೊಡ್ತಿದ್ದೀವಿ ಅಂದ್ರೆ ಎಸ್&zwnj;ಐಆರ್&zwnj;ಗೆ ನಮ್ಮ ಬೆಂಬಲ ಇದೆ ಅಂತಾ ಅಲ್ವಾ? ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದೆ. ಎಸ್&zwnj;ಐಆರ್&zwnj;ನಲ್ಲಿ ಯಾವುದೇ ಲಾಜಿಕ್ ಇಲ್ಲ, ಅರ್ಥವಿಲ್ಲ. ಅಡ್ಡಾದಿಡ್ಡಿಯಾಗಿ ಹೆಸರು ಡಿಲಿಟ್ ಮಾಡ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಇದೆಲ್ಲ ಆಯೋಗದ ಸಂಚು ಎಂದು ಗಂಭೀರ ಆರೋಪ ಮಾಡಿದರು.&lt;/p&gt;&lt;p&gt;ನೋಡ್ತೀರಿ ಇನ್ನು ಆರು ತಿಂಗಳಲ್ಲಿ ಏನೇನು ಆಗುತ್ತೆ ಅಂತಾ. ನಿಮ್ಮ ನಾಗರಿಕತ್ವ ಹೇಗೆ ಪ್ರೂವ್ ಮಾಡ್ತೀರಿ? ಪಾಸ್&zwnj;ಪೋರ್ಟ್, ಟ್ರಾವೆಲ್ ಡಾಕ್ಯುಮೆಂಟ್ ಅಂತಾ ಕೇಳ್ತಾರೆ ಇದು ಆಯೋಗ ನಡೆದುಕೊಳ್ಳೋ ರೀತಿನಾ? ಎಂದು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದರು.&lt;/p&gt;&lt;h3&gt;ಮರಾಠಿಗರಿಗೆ ಖರ್ಗೆ ಎಚ್ಚರಿಕೆ&lt;/h3&gt;&lt;p&gt;ಬಿಜೆಪಿ-ಜೆಡಿಎಸ್&zwnj;ನವ್ರು ನಾಯಕತ್ವ ಉಳಿಸಿಕೊಳ್ಳಲು ದೊಂಬರಾಟ ಮಾಡ್ತಿದ್ದಾರೆ. ಅಡ್ಡಮತದಾನದಿಂದ ಬಿಜೆಪಿಗೆ ಮುಖಭಂಗವಾಗಿದ್ರೂ ಇನ್ನೂವರೆಗೆ ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ. ಬಿಜೆಪಿಯಲ್ಲಿ ಲೀಡರ್&zwnj;ಶಿಪ್ ಬಗ್ಗೆ ಗೊಂದಲ ಇದೆ. ಯಾರು ಯಾರ ಮೇಲೆ ಕ್ರಮ ತಗೊಳ್ಳೋಕಾಗದಷ್ಟು ಲೀಡರ್&zwnj;ಗಳ ನಡುವೆ ಗೊಂದಲ ಇದೆ ಎಂದು ಲೇವಡಿ ಮಾಡಿದರು. ಇದೇ ವೇಳೆ ಮಹಾರಾಷ್ಟ್ರ ಗಡಿ ಕ್ಯಾತೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾಡಿನ ನೆಲ, ಜಲ, ಭಾಷೆ ವಚಾರದ್ಲಲಿ ಯಾರೇ ಕೈಯಾಡಿಸಿದರೂ ನಾವು ಸುಮ್ಮನೆ ಇರೋಲ್ಲ, ನಿಮಗಿಂತ ಹೆಚ್ಚು ಪ್ರೀತಿ ಕನ್ನಡ, ಕನ್ನಡಿಗರ ಬಗ್ಗೆ ನಮಗೆ ಪ್ರೀತಿ ಇದೆ. ನಾವು ಯಾರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಅನ್ನೋದು ಯೋಚನೆ ಮಾಡಬೇಕು. ಕಾನೂನು ಸುವ್ಯವಸ್ಥೆ ಹಾಳು ಮಾಡಲು ಪ್ರಚೋದಿಸುವ ಮಾತನಾಡುವುದಲ್ಲ ಎಂದು ಎಂದು ಮಹಾರಾಷ್ಟ್ರ ನಾಯಕರಿಗೆ ಎಚ್ಚರಿಕೆ ನೀಡಿದರು.&lt;/p&gt;&lt;p&gt;&lt;strong&gt;ಯುಜಿಸಿ ಪ್ರಶ್ನೆ ಪತ್ರಿಕೆ ಸೋರಿಕೆ:&lt;/strong&gt;&lt;/p&gt;&lt;p&gt;ಯುಜಿಸಿ ಪ್ರಶ್ನೆ ಪತ್ರಿಕೆ ಬಗ್ಗೆ ರಾಹುಲ್ ಗಾಂಧಿಯವರು ಆರೋಪ ಮಾಡಿದ್ದಲ್ಲ, ಅದ ಸತ್ಯ. ಯುಜಿಸಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಇದೇ ಮೊದಲಲ್ಲ, ಹತ್ತು ವರ್ಷದಲ್ಲಿ ಎಷ್ಟೊಂದು ಪೇಪರ್ ಲೀಕ್ ಆಗಿದೆ. ಇಂಥ ಸಮಸ್ಯೆಗಳಾದಾಗ ಮೋದಿ ದೇಶ ಬಿಟ್ಟು ಓಡಿಹೋಗ್ತಾರೆ. ಎಲ್ಲದಕ್ಕೂ ಕ್ರೆಡಿಟ್ ತಗೊಳ್ತಾರಲ್ಲ, ಇದಕ್ಕೂ ತಗೊಳ್ಳಲಿ. ಎಷ್ಟೊಂದು ಅಮಾಯಕ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಇದಕ್ಕೆ ಯಾರು ಹೊಣೆ? ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯೋ ಶಕ್ತಿ ಪ್ರಧಾನಿ ಮೋದಿಗೆ ಇಲ್ವ? ಹಾಗಾದ್ರೆ ಧರ್ಮೇಂದ್ರ ಪ್ರಧಾನ್ ಅವರು ಮೋದಿಗಿಂತ ಪವರ್ ಫುಲ್ ಅಂತಾಯ್ತು? ಎಂದು ಲೇವಡಿ ಮಾಡಿದರು.&lt;/p&gt;&lt;p&gt;&lt;strong&gt;ಲವ್ ಜಿಹಾದ್ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಇನ್ನು ದಾವಣಗೆರೆ ಲವ್ ಜೆಹಾದ್ ವಿಚಾರವಾಗಿ ಪ್ರತಿಕ್ರಿಯಿಸಿದ ಖರ್ಗೆ ಅವರು, ಭಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ದಾಳಿ ಮಾಡೋ ಬದಲು ಪೊಲೀಸ್ ಠಾಣೆಗೆ ದೂರು ಕೊಡಿ, ಕಾನೂನು ಪ್ರಕಾರ ಏನಿದೆಯೋ ನಾವು ನೋಡ್ತೇವೆ. ಅದುಬಿಟ್ಟು ನೀವೇ ಪ್ಯಾರಲರ್ ಆಗಿ ಕ್ರಮ ತೆಗೆದುಕೊಂಡ್ರೆ ಅದನ್ನ ನಾವು ಒಪ್ಪೋದಿಲ್ಲ. ನಾವು ಕಾನೂನು ಪ್ರಕಾರ ಕ್ರಮ ತಗೊಳ್ತೇವೆ. ನೀವು ನೈತಿಕ ಪೊಲೀಸ್&zwnj;ಗಿರಿ ಮಾಡ್ತಿವಿ ಅಂದ್ರೆ ಅದ್ನನ ನಾವು ಒಪ್ಪೋಲ್ಲ. ಹೀಗಾಗಿ ಇಂಥ ಸಂದರ್ಭದಲ್ಲಿ ನಾವು ನಿಮ್ಮ ಮೇಲೆಯೂ ಕ್ರಮ ತಗೊಳ್ಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/karnataka-politics-livee-minister-priyank-kharge-slams-rss-bjp-leaders-at-bengaluru-rav/articleshow-exidzwv"/>
        </item>
        <item>
            <title><![CDATA[ಅಣಬೆ ಪ್ರಿಯರೇ ಎಚ್ಚರ! ಅಣಬೆ ತಿಂದ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ; ಅಸಲಿಗೆ ಆಗಿದ್ದೇನು?]]></title>
            <link>https://kannada.asianetnews.com/belagavi/mushroom-lovers-beware-9-people-from-the-same-family-fell-ill-after-eating-mushrooms-gkn/articleshow-emv0k41</link>
            <guid isPermaLink="true">https://kannada.asianetnews.com/belagavi/mushroom-lovers-beware-9-people-from-the-same-family-fell-ill-after-eating-mushrooms-gkn/articleshow-emv0k41</guid>
            <pubDate>Fri, 10 Jul 2026 13:04:05 +0530</pubDate>
            <description><![CDATA[&lt;p&gt;ಹೊಲದಲ್ಲಿ ರಾಶಿ ರಾಶಿ ಅಣಬೆಗಳು ಕಂಡ ಮಾಲೀಕರು ಖುಷಿಯಿಂದ ಅವುಗಳನ್ನ ಮನೆಗೆ ತಂದು ಸಂಬಾರ್ ಮಾಡಿದ್ದರು. ಅದನ್ನು ಸೇವಿಸಿದ್ದ 9 ಮಂದಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಅಷ್ಟಕ್ಕೂ ಅಸಲಿಗೆ ಆಗಿದ್ದೇನು? ಇಲ್ಲಿದೆ ಮಾಹಿತಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5f3yt7s0evgvqz0gjpe8wg,imgname-belagavi-mushroom--1--1783668800327.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ:&lt;/strong&gt; ಹೇಳಿ ಕೇಳಿ ಇದು ಮಳೆಗಾಲ. ಮಳೆ ಆರಂಭವಾಗುತ್ತಿದ್ದಂತೆಯೇ ಹಳ್ಳಿಗಳಲ್ಲಿ ಹೊಲ, ಗದ್ದೆ ಹಾಗೂ ಬಯಲು ಪ್ರದೇಶಗಳಲ್ಲಿ ಅಣಬೆಗಳು (Mushrooms) ಏಳುವುದು ಸಾಮಾನ್ಯ. ಈ ಅಪರೂಪದ ಅಣಬೆಗಳನ್ನು ಕಂಡ ತಕ್ಷಣ ಜನರು ಅದನ್ನು ಮನೆಗೆ ತಂದು ಅಡುಗೆ ಮಾಡಿ ಸವಿಯುತ್ತಾರೆ. ಆದರೆ, ಹೀಗೆ ಅಣಬೆ ತಿನ್ನುವ ಮೊದಲು ಒಮ್ಮೆ ಎಚ್ಚರಿಕೆ ವಹಿಸುವುದು ಉತ್ತಮ. ಇಲ್ಲದಿದ್ದರೆ ನಿಮ್ಮ ಜೀವಕ್ಕೇ ಅಪಾಯ ಬಂದೊದಗಬಹುದು!&lt;/p&gt;&lt;p&gt;ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಇಂತಹದ್ದೇ ಒಂದು ಆತಂಕಕಾರಿ ಘಟನೆ ನಡೆದಿದ್ದು, ವಿಷಪೂರಿತ ಅಣಬೆ ಸೇವಿಸಿ ಒಂದೇ ಕುಟುಂಬದ 9 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಉಮರಾಣಿ ಗ್ರಾಮದ ಜಿದ್ದಿಮನಿ ಹಾಗೂ ಕೋಳಿ ಕುಟುಂಬದ ಸದಸ್ಯರು ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುವಾಗ, ಅಲ್ಲಿ ಬೆಳೆದಿದ್ದ ಅಣಬೆಗಳನ್ನು ಕಿತ್ತು ತಂದಿದ್ದರು. ಅಣಬೆ ಕಂಡ ಖುಷಿಯಲ್ಲಿ ಮನೆಯಲ್ಲಿ ಅಡುಗೆ ಮಾಡಿ ಎಲ್ಲರೂ ಸವಿದಿದ್ದರು. ಆದರೆ, ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ಎಲ್ಲರಿಗೂ ವಾಂತಿ ಹಾಗೂ ಭೇದಿ ಕಾಣಿಸಿಕೊಂಡು ಮನೆಯಲ್ಲೇ ನರಳಾಡತೊಡಗಿದ್ದಾರೆ.&lt;/p&gt;&lt;h3&gt;&lt;strong&gt;ಕಾರಣವೇನು?&lt;/strong&gt;&lt;/h3&gt;&lt;p&gt;ವರದಿಗಳ ಪ್ರಕಾರ, ಅಣಬೆ ಬೆಳೆದಿದ್ದ ಹೊಲಕ್ಕೆ ಅದರ ಮಾಲೀಕರು ಕ್ರಿಮಿನಾಶಕ ಔಷಧಿಯನ್ನು ಸಿಡಿಸಿದ್ದರು. ಔಷಧಿ ಹೊಡೆದ ವಿಷಯ ತಿಳಿಯದ ಕುಟುಂಬದ ಸದಸ್ಯರು ಆ ಅಣಬೆಯನ್ನು ಕಿತ್ತು ತಂದು ಸೇವಿಸಿದ್ದಾರೆ. ಕೀಟನಾಶಕದ ಅಂಶ ಅಣಬೆಯೊಳಗೆ ಸೇರಿದ ಪರಿಣಾಮ ಅದು ವಿಷವಾಗಿ ಮಾರ್ಪಟ್ಟು ಇಡೀ ಕುಟುಂಬ ಅಸ್ವಸ್ಥಗೊಳ್ಳಲು ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಆಸ್ಪತ್ರೆಗೆ ದಾಖಲು&lt;/strong&gt;&lt;/h3&gt;&lt;p&gt;ತೀವ್ರ ಅಸ್ವಸ್ಥಗೊಂಡ 9 ಜನರನ್ನು ತಕ್ಷಣವೇ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಲ್ಲಿ ಒಬ್ಬರು ಗರ್ಭಿಣಿ ಮಹಿಳೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಇರಲಿ ಎಚ್ಚರ&lt;/strong&gt;&lt;/h3&gt;&lt;ul&gt; &lt;li&gt;ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಅಣಬೆಗಳ ಬಗ್ಗೆ ಜಾಗ್ರತೆ ಇರಲಿ&lt;/li&gt; &lt;li&gt;ಹೊಲಗಳಲ್ಲಿ ಬೆಳೆಯುವ ಅಣಬೆಗಳ ಮೇಲೆ ಕ್ರಿಮಿನಾಶಕಗಳು ಬಿದ್ದಿರುವ ಸಾಧ್ಯತೆ ಹೆಚ್ಚಿರುತ್ತದೆ&lt;/li&gt; &lt;li&gt;ಕೆಲವು ಜಾತಿಯ ಅಣಬೆಗಳು ನೈಸರ್ಗಿಕವಾಗಿಯೇ ವಿಷಕಾರಿಯಾಗಿರುತ್ತವೆ. ಅವುಗಳನ್ನು ಗುರುತಿಸುವುದು ಕಷ್ಟ&lt;/li&gt; &lt;li&gt;ಅಣಬೆ ತರುವ ಮುನ್ನ ಅವು ಬೆಳೆದ ಜಾಗ ಮತ್ತು ಅವುಗಳ ವಿಧದ ಬಗ್ಗೆ ಖಚಿತ ಮಾಹಿತಿ ಇರಲಿ&lt;/li&gt; &lt;li&gt;ಅಪರಿಚಿತ ಅಣಬೆಗಳನ್ನು ತಿಂದು ಜೀವಕ್ಕೆ ಸಂಚಕಾರ ತಂದುಕೊಳ್ಳಬೇಡಿ&lt;/li&gt;&lt;/ul&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/belagavi/mushroom-lovers-beware-9-people-from-the-same-family-fell-ill-after-eating-mushrooms-gkn/articleshow-emv0k41"/>
        </item>
        <item>
            <title><![CDATA[ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ  ವೈದ್ಯರಿಲ್ಲ, ಸೂಕ್ತ ಚಿಕಿತ್ಸೆ ಸಿಗದೆ ಮಗು ಸಾವು! ರೊಚ್ಚಿಗೆದ್ದ ಕುಟುಂಬ]]></title>
            <link>https://kannada.asianetnews.com/karnataka-districts/one-year-old-girl-dies-due-to-absence-of-doctor-protests-outside-haveri-government-hospital-gdp/articleshow-9g4o32z</link>
            <guid isPermaLink="true">https://kannada.asianetnews.com/karnataka-districts/one-year-old-girl-dies-due-to-absence-of-doctor-protests-outside-haveri-government-hospital-gdp/articleshow-9g4o32z</guid>
            <pubDate>Fri, 10 Jul 2026 13:02:14 +0530</pubDate>
            <description><![CDATA[ಹಾವೇರಿ ತಾಲ್ಲೂಕಿನ ಹಾವನೂರು ಗ್ರಾಮದಲ್ಲಿ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಒಂದು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ಆಸ್ಪತ್ರೆಯ ಮುಂದೆ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದ್ದು, ವೈದ್ಯರ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx5ev9k9fp859rdrb9dxqgm3,imgname-haveri-government-hospital-negligence-1783668516456.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಸರ್ಕಾರಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರು ಸಿಗದೆ, ಸೂಕ್ತ ಚಿಕಿತ್ಸೆ ಲಭಿಸದೇ ಕೇವಲ ಒಂದು ವರ್ಷದ ಹೆಣ್ಣು ಮಗುವೊಂದು ಪ್ರಾಣ ಕಳೆದುಕೊಂಡಿರುವ ಕರುಳು ಹಿಂಡುವ ಘಟನೆ ಹಾವೇರಿ ತಾಲ್ಲೂಕಿನ ಹಾವನೂರು ಗ್ರಾಮದಲ್ಲಿ ನಡೆದಿದೆ. ಭವಾನಿ ಮಹೇಶ ಕಿಳ್ಳಿಕ್ಯಾತರ್ (1 ವರ್ಷ) ಮೃತಪಟ್ಟ ದುರ್ದೈವಿ ಮಗುವಾಗಿದ್ದಾಳೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆಯ ಮುಂದೆಯೇ ಮಗುವಿನ ಶವವನ್ನಿಟ್ಟು ತೀವ್ರ ಪ್ರತಿಭಟನೆ ನಡೆಸಿದ್ದಾರೆ.&lt;/p&gt;&lt;h2&gt;ಆಟವಾಡುತ್ತಿದ್ದ ಮಗು ಏಕಾಏಕಿ ಮೂರ್ಛೆ ಹೋಗಿತ್ತು:&lt;/h2&gt;&lt;p&gt;ಮಗು ಭವಾನಿ ಮನೆಯಲ್ಲಿ ಎಂದಿನಂತೆ ನಗುನಗುತ್ತಾ ಆಟವಾಡುತ್ತಿತ್ತು. ಆದರೆ ಆಟವಾಡುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಮಗು ಪ್ರಜ್ಞೆ ತಪ್ಪಿ ಮೂರ್ಛೆ ಹೋಗಿದೆ. ಇದರಿಂದ ತೀವ್ರ ಆತಂಕಗೊಂಡ ಪೋಷಕರು ತಕ್ಷಣವೇ ಮಗುವನ್ನು ಉಪಚರಿಸಲು ಹಾವನೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.&lt;/p&gt;&lt;h2&gt;ಆಸ್ಪತ್ರೆಯಲ್ಲಿ ಇರಲಿಲ್ಲ ವೈದ್ಯರು&lt;/h2&gt;&lt;p&gt;ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಅಲ್ಲಿ ಯಾವುದೇ ವೈದ್ಯರು ಕರ್ತವ್ಯದಲ್ಲಿ ಇರಲಿಲ್ಲ ಎನ್ನಲಾಗಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರೂ ತುರ್ತು ಚಿಕಿತ್ಸೆ ನೀಡಲು ವೈದ್ಯರಿಲ್ಲದ ಕಾರಣ ಪೋಷಕರು ಅಸಹಾಯಕರಾಗಿ ಕಣ್ಣೀರು ಹಾಕಿದ್ದಾರೆ. ಅಲ್ಲಿ ಯಾವುದೇ ಸಕಾಲಿಕ ವೈದ್ಯಕೀಯ ನೆರವು ಸಿಗದ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಹಾವನೂರಿನ ಪಕ್ಕದ ಪಟ್ಟಣವಾದ ಗುತ್ತಲದ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಹಾವನೂರಿನಿಂದ ಗುತ್ತಲ ಪಟ್ಟಣದ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಮಗು ಜೀವ ಕಳೆದುಕೊಂಡಿದೆ. ಸಕಾಲಕ್ಕೆ ಹಾವನೂರು ಆಸ್ಪತ್ರೆಯಲ್ಲೇ ಚಿಕಿತ್ಸೆ ಸಿಕ್ಕಿದ್ದರೆ ನಮ್ಮ ಮಗು ಬದುಕುತ್ತಿತ್ತು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.&lt;/p&gt;&lt;h2&gt;ಶವವಿಟ್ಟು ಪ್ರತಿಭಟನೆ, ಸಾರ್ವಜನಿಕರ ಆಕ್ರೋಶ:&lt;/h2&gt;&lt;p&gt;ವೈದ್ಯರ ಬೇಜವಾಬ್ದಾರಿತನ ಹಾಗೂ ಆಸ್ಪತ್ರೆಯ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ನೇರ ಕಾರಣ ಎಂದು ರೊಚ್ಚಿಗೆದ್ದ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಮಗುವಿನ ಶವವನ್ನು ಹಾವನೂರು ಸರ್ಕಾರಿ ಆಸ್ಪತ್ರೆಯ ಮುಂದೆಯೇ ಇಟ್ಟು ಧರಣಿ ಕುಳಿತರು. ಆರೋಗ್ಯ ಇಲಾಖೆ ಹಾಗೂ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಗೈರುಹಾಜರಿಯಿಂದಾಗಿ ಬಡವರ ಜೀವಗಳು ಬಲಿಯಾಗುತ್ತಿವೆ ಎಂದು ಸಾರ್ವಜನಿಕರು ಆಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;h2&gt;ಸ್ಥಳಕ್ಕೆ ತಾಲ್ಲೂಕು ವೈದ್ಯಾಧಿಕಾರಿ ಭೇಟಿ:&lt;/h2&gt;&lt;p&gt;ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಹಾವೇರಿ ತಾಲ್ಲೂಕು ವೈದ್ಯಾಧಿಕಾರಿ (ಟಿ.ಎಚ್.ಒ) ಡಾ. ಪ್ರಭಾಕರ್ ಕುಂದೂರ ಅವರು ತಕ್ಷಣ ಹಾವನೂರು ಆಸ್ಪತ್ರೆಗೆ ಭೇಟಿ ನೀಡಿದರು. ಸ್ಥಳದಲ್ಲಿದ್ದ ಉದ್ರಿಕ್ತ ಜನರನ್ನು ಮಾತುಕತೆ ನಡೆಸಿ ಮಗುವಿನ ಕುಟುಂಬ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ವೇಳೆ ಸಾರ್ವಜನಿಕರು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಮುಗಿಬಿದ್ದು, ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದರು.&lt;/p&gt;&lt;h2&gt;ಪೊಲೀಸ್ ಪ್ರಕರಣ ದಾಖಲು:&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಸದ್ಯ ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಮುಂದಿನ ತನಿಖೆ ಪ್ರಗತಿಯಲ್ಲಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/one-year-old-girl-dies-due-to-absence-of-doctor-protests-outside-haveri-government-hospital-gdp/articleshow-9g4o32z"/>
        </item>
        <item>
            <title><![CDATA[ಬೆಂಗಳೂರಿಗೆ ಮತ್ತೆ ಬಂತು 'ಬ್ಯಾಡರಳ್ಳಿ ಚಿರತೆ'; ಈ ಏರಿಯಾದಲ್ಲಿ ಓಡಾಡೋರು ಹುಷಾರು ಕಣ್ರಪ್ಪೋ..!]]></title>
            <link>https://kannada.asianetnews.com/bengaluru-urban/cheetah-found-again-in-badaralli-bengaluru-operation-cheetah-leopard-gkn/articleshow-3kdfm51</link>
            <guid isPermaLink="true">https://kannada.asianetnews.com/bengaluru-urban/cheetah-found-again-in-badaralli-bengaluru-operation-cheetah-leopard-gkn/articleshow-3kdfm51</guid>
            <pubDate>Fri, 10 Jul 2026 10:46:21 +0530</pubDate>
            <description><![CDATA[&lt;p&gt;ಬೆಂಗಳೂರಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಇದು ನಗರದ ಜನರಲ್ಲಿ ದಿಗಿಲು ಹುಟ್ಟಿಸಿದೆ. ಸದ್ಯ ಅರಣ್ಯ ಇಲಾಖೆ ಆಪರೇಷನ್ ಚೀತಾ ಶುರುಮಾಡಿದೆ. ಆದರೆ ಸಿಲಿಕಾನ್ ಸಿಟಿಯ ಈ ಏರಿಯಾದ ಜನರಿಗೆ ಸದ್ಯಕ್ಕಿಲ್ಲ ನಿಟ್ಟುಸಿರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx570ka2amdkn6htk4t574ry,imgname-bangalore-cheata--1--1783660301634.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿ ಮಂದಿಗೆ ಮತ್ತೆ ಚಿರತೆ ಭೀತಿ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿ ಚಿರತೆ ಓಡಾಟ ಹೆಚ್ಚಾಗಿದ್ದು, ಜನ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿಗೆ ಮತ್ತೆ ಚಿರತೆ 'ಗುಮ್ಮ' ಬಂದಂತಾಗಿದ್ದು, ಜನರು ಆತಂಕದ ನೆರಳಿನಲ್ಲಿ ಬದುಕುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಬ್ಯಾಡರಹಳ್ಳಿಯಲ್ಲಿ ಚಿರತೆ ಅಟ್ಟಹಾಸ&lt;/strong&gt;&lt;/h2&gt;&lt;p&gt;ಬೆಂಗಳೂರಿನ ಬ್ಯಾಡರಹಳ್ಳಿ ಬಳಿಯ ಭಾರತ್ ಲೇಔಟ್&zwnj;ನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಇಡೀ ಏರಿಯಾದ ಜನರಲ್ಲಿ ನಡುಕ ಹುಟ್ಟಿಸಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಮೊನ್ನೆಯೂ ಈ ಭಾಗದಲ್ಲಿ ಪತ್ತೆಯಾಗಿದ್ದ ಚಿರತೆ, ನಿನ್ನೆ ನಸುಕಿನ ಜಾವ ಭಾರತ್ ನಗರದಲ್ಲಿ ಕಾಣಿಸಿಕೊಂಡಿತ್ತು. ನಿನ್ನೆ ರಾತ್ರಿ ಸುಮಾರು 9:30ರ ವೇಳೆಗೆ ಮತ್ತೆ ರಸ್ತೆ ದಾಟಿ ಪಾರ್ಕ್ ಮುಖಾಂತರ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.&lt;/p&gt;&lt;h3&gt;&lt;strong&gt;ಕಣ್ಣಾಮುಚ್ಚಾಲೆ ಆಡುತ್ತಿರುವ ಕ್ರೂರ ಮೃಗ&lt;/strong&gt;&lt;/h3&gt;&lt;p&gt;ನಿನ್ನೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಚಿರತೆ ಎಲ್ಲಿಯೂ ಪತ್ತೆಯಾಗದ ಕಾರಣ ಅವರು ವಾಪಸ್ ತೆರಳಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಹೋದ ಕೆಲವೇ ಗಂಟೆಗಳಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಭಾರತ್ ನಗರ ಏರಿಯಾದೊಳಗೆ ಪದೇ ಪದೇ ಚಿರತೆ ಓಡಾಡುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿದೆ.&lt;/p&gt;&lt;h3&gt;&lt;strong&gt;ಆಪರೇಷನ್ ಚಿರತೆ ಆರಂಭ&lt;/strong&gt;&lt;/h3&gt;&lt;p&gt;ಚಿರತೆ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಯ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬ್ಯಾಡರಹಳ್ಳಿ ಪೊಲೀಸರು ಜಂಟಿಯಾಗಿ ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಚಿರತೆ ಅಡಗಿದೆ ಎನ್ನಲಾದ ಪಾರ್ಕ್ ಸುತ್ತಮುತ್ತ ಈಗ ಹದ್ದಿನ ಕಣ್ಣು ಇಡಲಾಗಿದೆ.ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬಲೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಚಿರತೆ ಓಡಾಟ ನಡೆಸುವ ಪಾರ್ಕ್&zwnj;ನ ಒಂದು ಭಾಗದಲ್ಲಿ ಬಲೆಗಳನ್ನು ಹಾಕಲಾಗುತ್ತಿದೆ. ಮತ್ತೊಂದು ಭಾಗದಿಂದ ಪಟಾಕಿಗಳನ್ನು ಸಿಡಿಸುವ ಮೂಲಕ ಚಿರತೆಯನ್ನು ಒಂದು ಕಡೆಗೆ ಓಡಿಸಿ ಬಲೆಗೆ ಬೀಳಿಸಲು ಪ್ಲಾನ್ ಮಾಡಲಾಗಿದೆ. ಸದ್ಯ ಭಾರತ್ ನಗರ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಮನೆಯಿಂದ ಹೊರಬರಬಾರದು ಎಂದು ಸೂಚನೆ ನೀಡಲಾಗಿದೆ. ಜನನಿಬಿಡ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಬೆಂಗಳೂರಿಗರನ್ನು ಮತ್ತೆ ಆತಂಕಕ್ಕೆ ತಳ್ಳಿದೆ. ಅರಣ್ಯ ಇಲಾಖೆಯ ಈ ಕಾರ್ಯಾಚರಣೆ ಯಶಸ್ವಿಯಾಗಿ ಚಿರತೆ ಸೆರೆಯಾಗುತ್ತಾ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/cheetah-found-again-in-badaralli-bengaluru-operation-cheetah-leopard-gkn/articleshow-3kdfm51"/>
        </item>
        <item>
            <title><![CDATA['ಕರಾವಳಿ' ಸಿನಿಮಾ ಗಲಾಟೆಗೆ ಟ್ವಿಸ್ಟ್‌: ಮೂವರ ವಿರುದ್ಧ FIR, ಪ್ರಜ್ವಲ್ ವಿರುದ್ಧ ಗಂಭೀರ ಆರೋಪ]]></title>
            <link>https://kannada.asianetnews.com/sandalwood/karavli-film-controversy-case-fir-on-actor-prajwal-devarajs-fans-gkn/articleshow-irmxbgi</link>
            <guid isPermaLink="true">https://kannada.asianetnews.com/sandalwood/karavli-film-controversy-case-fir-on-actor-prajwal-devarajs-fans-gkn/articleshow-irmxbgi</guid>
            <pubDate>Fri, 10 Jul 2026 09:46:15 +0530</pubDate>
            <description><![CDATA[&lt;p&gt;ಇತ್ತೀಚೆಗೆ 'ಕರಾವಳಿ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಎಂದು ಹೇಳಿಕೊಂಡು ಬಂದ ಕೆಲವರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಏನಿದು ಪ್ರಕರಣ? ಈ ಸ್ಟೋರಿ ಓದಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx53tj1s2q2b16ed12te74e0,imgname-karavali-movie-clash-1783656958009.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬಹುನಿರೀಕ್ಷಿತ 'ಕರಾವಳಿ' ಸಿನಿಮಾ ತಂಡದಲ್ಲಿ ಬಿರುಕು ಮೂಡಿದ್ದು, ವಿವಾದ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ನಡೆದ ಗಲಾಟೆ ಸಂಬಂಧ ನಟ ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಇತ್ತೀಚೆಗೆ 'ಕರಾವಳಿ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಎಂದು ಹೇಳಿಕೊಂಡು ಬಂದ ಕೆಲವರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಗುಂಪು ಕಟ್ಟಿಕೊಂಡು ಬಂದಿದ್ದ ಇವರು, ಚಿತ್ರದ ನಿರ್ದೇಶಕರು, ನಿರ್ಮಾಪಕರು ಹಾಗೂ ಅಲ್ಲಿದ್ದ ಸಿಬ್ಬಂದಿಗೆ ತೊಂದರೆ ಕೊಟ್ಟು, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂಬ ದೂರು ಕೇಳಿಬಂದಿದೆ.&lt;/p&gt;&lt;h3&gt;&lt;strong&gt;ಮೂವರ ವಿರುದ್ಧ ಕೇಸ್ ದಾಖಲು&lt;/strong&gt;&lt;/h3&gt;&lt;p&gt;ನಿರ್ದೇಶಕ ಗುರುದತ್ ಗಾಣಿಗ ನೀಡಿದ ದೂರಿನ ಅನ್ವಯ, ದಿಲೀಪ್, ಅವಿನಾಶ್ ಮತ್ತು ನಂದಕುಮಾರ್ ಎಂಬುವರ ವಿರುದ್ಧ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಸೆಕ್ಷನ್ 352, 292 ಮತ್ತು 3(5) ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.&lt;/p&gt;&lt;p&gt;ಈ ಗಲಾಟೆ ಬಗ್ಗೆ ನಿರ್ದೇಶಕರು ಗಂಭೀರ ಆರೋಪ ಮಾಡಿದ್ದಾರೆ. ಗಲಾಟೆ ಮಾಡಿದವರು ಕೇವಲ ಅಭಿಮಾನಿಗಳಲ್ಲ, ಬದಲಾಗಿ ಅವರು ನಟ ಪ್ರಜ್ವಲ್ ದೇವರಾಜ್ ಅವರ ಜೊತೆ ಕೆಲಸ ಮಾಡುವವರು ಮತ್ತು ಅವರ ಅಸಿಸ್ಟೆಂಟ್&zwnj;ಗಳಾಗಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಪ್ರಜ್ವಲ್ ದೇವರಾಜ್ ಅವರಿಗೆ ಇವರು ಸಹಾಯಕವಾಗಿ ಕೆಲಸ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ವ್ಯವಹಾರದ ಕಿರಿಕ್ ಕಾರಣವೇ?&lt;/strong&gt;&lt;/h3&gt;&lt;p&gt;ನಟ ಪ್ರಜ್ವಲ್ ದೇವರಾಜ್ ಅವರು ಉದ್ದೇಶಪೂರ್ವಕವಾಗಿಯೇ ಈ ಗಲಾಟೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಿತ್ರದ ವ್ಯವಹಾರಕ್ಕೆ (Business) ಸಂಬಂಧಿಸಿದಂತೆ ನಿರ್ಮಾಣ ತಂಡ ಹಾಗೂ ನಟನ ನಡುವೆ ಉಂಟಾದ ಭಿನ್ನಾಭಿಪ್ರಾಯವೇ ಈ ಗಲಾಟೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ವ್ಯವಹಾರದಲ್ಲಿ ವ್ಯತ್ಯಾಸವಾಗಿದ್ದಕ್ಕೆ ಪ್ರಜ್ವಲ್ ಅವರೇ ಈ ವ್ಯಕ್ತಿಗಳನ್ನು ಕಳುಹಿಸಿ ತೊಂದರೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟಿನಲ್ಲಿ ಸ್ಯಾಂಡಲ್&zwnj;ವುಡ್&zwnj;ನಲ್ಲಿ ಸದ್ದು ಮಾಡುತ್ತಿದ್ದ 'ಕರಾವಳಿ' ಸಿನಿಮಾ ಈಗ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ಈ ಕುರಿತು ನಟ ಪ್ರಜ್ವಲ್ ದೇವರಾಜ್ ಅವರ ಪ್ರತಿಕ್ರಿಯೆ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/sandalwood/karavli-film-controversy-case-fir-on-actor-prajwal-devarajs-fans-gkn/articleshow-irmxbgi"/>
        </item>
        <item>
            <title><![CDATA[ಕೆ.ಆರ್.ಮಾರುಕಟ್ಟೆ ಬಿಡಿಗಾಸು ಬಾಡಿಗೆ ಪರಿಷ್ಕರಿಸಿ ಹೊರಡಿಸಿದ್ದ ಆದೇಶ ಬರೋಬ್ಬರಿ 12 ವರ್ಷಗಳ ಬಳಿಕ ಜಾರಿ!]]></title>
            <link>https://kannada.asianetnews.com/karnataka-districts/after-12-year-delay-bengaluru-kr-market-shop-rents-revised-tenants-to-pay-arrears-with-interest-gdp/articleshow-nw0lvk3</link>
            <guid isPermaLink="true">https://kannada.asianetnews.com/karnataka-districts/after-12-year-delay-bengaluru-kr-market-shop-rents-revised-tenants-to-pay-arrears-with-interest-gdp/articleshow-nw0lvk3</guid>
            <pubDate>Fri, 10 Jul 2026 09:25:58 +0530</pubDate>
            <description><![CDATA[ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಮಳಿಗೆಗಳ ಬಾಡಿಗೆಯನ್ನು ಪರಿಷ್ಕರಿಸಿ 2014ರಲ್ಲಿ ಹೊರಡಿಸಿದ್ದ ಆದೇಶವು ಹೈಕೋರ್ಟ್ ತೀರ್ಪಿನ ನಂತರ ಇದೀಗ ಜಾರಿಯಾಗುತ್ತಿದೆ. ಇದರಿಂದಾಗಿ, ವ್ಯಾಪಾರಿಗಳು ಪ್ರತಿ ಚದರಡಿಗೆ ಸರಾಸರಿ 98 ರು. ನಂತೆ ಪರಿಷ್ಕೃತ ಬಾಡಿಗೆಯನ್ನು 2014ರಿಂದಲೇ ಬಡ್ಡಿ ಸಮೇತ ಪಾವತಿಸಬೇಕಾಗಿದ್ದು, ಇದು ಪಾಲಿಕೆಯ ಆದಾಯವನ್ನು ಹೆಚ್ಚಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx52fgpb0etdypdfzvg4zjre,imgname-kr-market--1--1783655547594.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕೋಟ್ಯಂತರ ರು. ವಹಿವಾಟು ನಡೆಯುವ ನಗರದ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಕೆ.ಆರ್. ಮಾರುಕಟ್ಟೆಯಲ್ಲಿನ ಮಳಿಗೆಗಳಿಗೆ ವಿಧಿಸಲಾಗುತ್ತಿದ್ದ ಬಿಡಿಗಾಸು ಬಾಡಿಗೆಯನ್ನು ಪರಿಷ್ಕರಿಸಿ 2014ರಲ್ಲಿ ಹೊರಡಿಸಿದ್ದ ಆದೇಶ ಬರೋಬ್ಬರಿ 12 ವರ್ಷಗಳ ಬಳಿಕ ಜಾರಿಯಾಗುತ್ತಿದೆ.&lt;/p&gt;&lt;p&gt;ಪ್ರತಿ ಚದರಡಿಗೆ 98 ರು. ಬಾಡಿಗೆ ನಿಗದಿಪಡಿಸಿ ಹಿಂದಿನ ಬಿಬಿಎಂಪಿ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್&zwnj;ನಲ್ಲಿ ಇತ್ತೀಚೆಗೆ ಇತ್ಯರ್ಥವಾದ ಹಿನ್ನೆಲೆಯಲ್ಲಿ ಜಿಬಿಎ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ಅವರು ಗುರುವಾರ ಜಾರಿಗೊಳಿಸಿ ಆದೇಶಿದ್ದಾರೆ. ಇನ್ನು ಮುಂದೆ ಮಳಿಗೆ ಬಾಡಿಗೆದಾರರು ಹೊಸ ದರದಲ್ಲಿ ಬಾಡಿಗೆ ಪಾವತಿಸಬೇಕು.&lt;/p&gt;&lt;p&gt;ಕೆ.ಆರ್. ಮಾರುಕಟ್ಟೆ 7.96 ಎಕರೆ ವಿಸ್ತೀರ್ಣ ಹೊಂದಿದ್ದು ಈ ಪೈಕಿ 3.09 ಎಕರೆ ಪ್ರದೇಶದಲ್ಲಿ ಮಾರುಕಟ್ಟೆ, ವಿವಿಧ ಗಾತ್ರದ 1269 ಮಳಿಗೆಗಳನ್ನು ನಿರ್ಮಿಸಲಾಗಿದೆ. 2014ರವರೆಗೂ ಮಳಿಗೆಗಳಿಗೆ ಪ್ರತಿ ಚದರಡಿಗೆ 25 ರು.ನಂತೆ ಬಾಡಿಗೆ ಪಾವತಿ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ 2014ರಲ್ಲಿ ಅಂದಿನ ಬಿಬಿಎಂಪಿ ಆಯುಕ್ತರು ಬಾಡಿಗೆ ಪರಿಷ್ಕರಿಸುವ ಸಂಬಂಧ &lsquo;ಚಾರ್ಟರ್ಡ್ ಎಂಜಿನಿಯರ್ ಮತ್ತು ರಿಜಿಸ್ಟ್ರಾರ್ಡ್ ವ್ಯಾಲ್ಯುವರ್&rsquo; ಮೂಲಕ ವೈಜ್ಞಾನಿಕವಾಗಿ ಬಾಡಿಗೆ ನಿಗದಿಪಡಿಸಲು ವರದಿಯನ್ನು ಪಡೆದುಕೊಂಡಿದ್ದರು. ಮೌಲ್ಯಮಾಪಕರು ಅಧ್ಯಯನ ನಡೆಸಿ 2014ರ ಅಕ್ಟೋಬರ್&zwnj;ನಲ್ಲಿ ಪ್ರತಿ ಚದರಡಿಗೆ ಸರಾಸರಿ 98 ರು. ಬಾಡಿಗೆ ಸಂಗ್ರಹಿಸಬಹುದು ಎಂದು ವರದಿ ನೀಡಿದ್ದರು. ಆದರೆ, ಇದನ್ನು ಪ್ರಶ್ನಿಸಿ ವ್ಯಾಪಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಇತ್ತೀಚೆಗೆ ಪ್ರಕರಣ ಇತ್ಯರ್ಥಗೊಳಿಸಿದ ಹೈಕೋರ್ಟ್&zwnj; ಬಾಡಿಗೆ ದರ ನಿಗದಿಯ ನಿರ್ಧಾರವನ್ನು ಆಯುಕ್ತರೇ ತೆಗೆದುಕೊಳ್ಳಬಹುದು ಎಂದು ಆದೇಶಿಸಿತ್ತು.&lt;/p&gt;&lt;h2&gt;ಕೋಟ್ಯಂತರ ರು. &amp;nbsp;ಬಾಡಿಗೆ ಬಾಕಿ&amp;nbsp;&lt;/h2&gt;&lt;p&gt;ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ನೂರಾರು ವ್ಯಾಪಾರಿಗಳು ಹತ್ತಾರು ವರ್ಷಗಳಿಂದ ಬಾಡಿಗೆ ಕಟ್ಟಿಲ್ಲ. ಅನೇಕರು ತಮ್ಮ ಹೆಸರಿಗೆ ಇರುವ ಮಳಿಗೆಗಳನ್ನು ಬೇರೆಯವರಿಗೆ ಬಾಡಿಗೆ ಕೊಟ್ಟು ಲಕ್ಷಾಂತರ ರು. ಆದಾಯ ಗಳಿಸುತ್ತಿದ್ದಾರೆ. ಆದರೆ, ಪಾಲಿಕೆಗೆ ಒಂದೇ ಒಂದು ನಯಾ ಪೈಸೆ ಆದಾಯ ಬರುತ್ತಿಲ್ಲ. ಈಗ ಕೇಂದ್ರ ನಗರ ಪಾಲಿಕೆ ಆಯುಕ್ತರು ಹೊರಡಿಸಿರುವ ಬಾಡಿಗೆ ಪರಿಷ್ಕರಣೆ ಆದೇಶ ಜಾರಿಯಾದರೆ ಪಾಲಿಕೆಗೆ ಕೋಟ್ಯಂತರ ರು. ಆದಾಯ ಬರುತ್ತದೆ.&lt;/p&gt;&lt;ul&gt; &lt;li&gt;ಬಾಡಿಗೆ ದರ (ಪ್ರತಿ ಚದರಡಿ)&lt;/li&gt; &lt;li&gt;ಅಪ್ಪರ್ ಬೇಸ್ಮೆಂಟ್ 122.50 ರು.&lt;/li&gt; &lt;li&gt;ಗ್ರೌಂಡ್ ಫ್ಲೋರ್ 122.50 ರು.&lt;/li&gt; &lt;li&gt;ಮೊದಲನೇ ಮಹಡಿ 83.50 ರು.&lt;/li&gt; &lt;li&gt;2ನೇ ಮಹಡಿ 68.60 ರು.&lt;/li&gt;&lt;/ul&gt;&lt;p&gt;ಬಾಡಿಗೆ ಪರಿಷ್ಕರಣೆ ಮಾಡಿ 2014ರಲ್ಲಿ ಹೊರಡಿಸಿದ್ದ ಆದೇಶ ಜಾರಿಗೊಳಿಸಲಾಗಿದೆ. ಹೀಗಾಗಿ, ಬಾಡಿಗೆದಾರರು 2014ರಿಂದ ಈವರೆಗೆ ಪರಿಷ್ಕೃತ ಬಾಡಿಗೆಯನ್ನು ಬಡ್ಡಿ ಸಮೇತ ಪಾಲಿಕೆಗೆ ಪಾವತಿಸಬೇಕು.&lt;/p&gt;&lt;p&gt;&amp;nbsp;ಜಿ. ಜಗದೀಶ್, &amp;nbsp;ಆಯುಕ್ತ, ಕೇಂದ್ರ ನಗರ ಪಾಲಿಕೆ&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/after-12-year-delay-bengaluru-kr-market-shop-rents-revised-tenants-to-pay-arrears-with-interest-gdp/articleshow-nw0lvk3"/>
        </item>
        <item>
            <title><![CDATA[ಮೈಸೂರಲ್ಲಿ ಕೆಸರು ಗದ್ದೆಯೂ ಇಲ್ಲ, ಕೋಣಗಳೂ ಇಲ್ಲ: ದಸರಾದಲ್ಲಿ ಕಂಬಳ ಆಯೋಜನೆಗೆ ತೀವ್ರ ವಿರೋಧ!]]></title>
            <link>https://kannada.asianetnews.com/state/farmer-and-dalit-organizations-oppose-the-kambala-at-the-mysore-dasara-2026-rav/articleshow-smwevnt</link>
            <guid isPermaLink="true">https://kannada.asianetnews.com/state/farmer-and-dalit-organizations-oppose-the-kambala-at-the-mysore-dasara-2026-rav/articleshow-smwevnt</guid>
            <pubDate>Fri, 10 Jul 2026 08:04:03 +0530</pubDate>
            <description><![CDATA[&lt;p&gt;ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜನೆಗೆ ಮುಂದಾಗಿರುವುದನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ನ್ಯಾಯಾಲಯಕ್ಕೆ ದಾವೆ ಹೂಡಲು ಹಾಗೂ ಬೀದಿಗಿಳಿದು ಹೋರಾಟ ಮಾಡುವುದಾಗಿ ಪರಿಸರಕ್ಕಾಗಿ ನಾವು, ರೈತ ಸಂಘ ಮತ್ತು ದಲಿತ ಸಂಘಟನೆಗಳು ಘೋಷಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx4xrmsgs3rnm8qca5yttq6p,imgname-----------------------2026-07-10t075934.392-1783650603823.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಜು.10):&lt;/strong&gt; ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜನೆಗೆ ಮುಂದಾಗಿರುವುದನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ನ್ಯಾಯಾಲಯಕ್ಕೆ ದಾವೆ ಹೂಡಲು ಹಾಗೂ ಬೀದಿಗಿಳಿದು ಹೋರಾಟ ಮಾಡುವುದಾಗಿ ಪರಿಸರಕ್ಕಾಗಿ ನಾವು, ರೈತ ಸಂಘ ಮತ್ತು ದಲಿತ ಸಂಘಟನೆಗಳು ಘೋಷಿಸಿವೆ.&lt;/p&gt;&lt;p&gt;ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ದಸರಾದಲ್ಲಿ ಕಂಬಳ ಆಯೋಜನೆ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದರು. ಹಿಂಪಡೆಯದಿದ್ದರೇ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.&lt;/p&gt;&lt;h2&gt;ಬಡಗಲಪುರ ನಾಗೇಂದ್ರ ಹೇಳಿದ್ದೇನು?&lt;/h2&gt;&lt;p&gt;ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ನಾವು ಕಂಬಳ ಕ್ರೀಡೆಯನ್ನು ವಿರೋಧಿಸುತ್ತಿಲ್ಲ. ಬಲತ್ಕಾರವಾಗಿ ಹೇರುವುದಕ್ಕೆ ವಿರೋಧ ಇದೆ. ಮೈಸೂರಲ್ಲಿ ಕೆಸರು ಗದ್ದೆಯೂ ಇಲ್ಲ. ಕೋಣಗಳೂ ಇಲ್ಲ. ದಸರಾದಲ್ಲಿ ಸ್ಥಳೀಯ ಕ್ರೀಡೆ, ಸಾಂಸ್ಕೃತಿಕ ಕಲೆಗಳಿಗೆ ಉತ್ತೇಜನ ಕೊಡಬೇಕು. ಜನರ ಭಾವನೆಯನ್ನು ಸರ್ಕಾರ ಗೌರವಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;ಜನರು ವಿರೋಧಿಸುವುದನ್ನೇ ಸರ್ಕಾರ ಹಠಕ್ಕೆ ಬಿದ್ದವರಂತೆ ಜಾರಿಗೆ ತರುತ್ತದೆ. ಸರ್ಕಾರ ವಾರದೊಳಗೆ ಸ್ಪಷ್ಟವಾದ ನಿರ್ಧಾರ ಕೈಗೊಳ್ಳದಿದ್ದರೆ ಬೀದಿಗಿಳಿದು ಅಹಿಂಸಾತ್ಮಕ ಹೋರಾಟದ ಜೊತೆಗೆ ಪ್ರತಿರೋಧ ಒಡ್ಡುತ್ತೇವೆ ಎಂದು ಅವರು ಹೇಳಿದರು.&lt;/p&gt;&lt;h3&gt;ಪ್ರವಾಸೋದ್ಯಮ ಹೆಸರಲ್ಲಿ ಜನಪದ ಕ್ರೀಡೆ?&lt;/h3&gt;&lt;p&gt;ಪಾರಂಪರಿಕ ತಜ್ಞ ಪ್ರೊ.ಎನ್.ಎಸ್. ರಂಗರಾಜು ಮಾತನಾಡಿ, ಪ್ರವಾಸೋದ್ಯಮದ ಹೆಸರಿನಲ್ಲಿ ಜನಪದ ಕ್ರೀಡೆ ತುರುಕುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಿ ಕ್ರೀಡೆ ಆಯೋಜಿಸಿ ದುಂದುವೆಚ್ಚ ಮಾಡುವುದು ಸರಿಯಲ್ಲ. ಮಂಗಳೂರು, ಮೂಡಬಿದರೆ ದಸರಾಗಳಲ್ಲಿ ಕಂಬಳ ಆಯೋಜಿಸಬೇಕು ಎಂದರು.&lt;/p&gt;&lt;p&gt;ಪರಿಸರಕ್ಕಾಗಿ ನಾವು ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ದಸರಾದಲ್ಲಿ ಕಂಬಳ ಆಯೋಜನೆಗೆ ಹಠಬೇಡ. ಕಂಬಳಕ್ಕೆ ಅದರದೇ ಆದ ವೈಶಿಷ್ಟ್ಯ, ಧಾರ್ಮಿಕತೆ ಇದೆ. ಮೈಸೂರಲ್ಲಿ ಕಂಬಳ ಆಯೋಜನೆಗೆ ತುಳುನಾಡಿನ ಜನರೇ ವಿರೋಧ ಮಾಡುತ್ತಿದ್ದಾರೆ. ದಸರಾದಲ್ಲಿ ಕಂಬಳ ವಿರೋಧಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.&lt;/p&gt;&lt;p&gt;ಮುಖಂಡರಾದ ಭಾನು ಮೋಹನ್, ಬೆಟ್ಟಯ್ಯ ಕೋಟೆ, ಮ.ಗು. ಸದಾನಂದಯ್ಯ, ಮನ್ಸೂರ್ ಅಹಮದ್, ಹೊರೆಯಾಲ ದೊರೆಸ್ವಾಮಿ, ಸಿಂಧುವಳ್ಳಿ ಅಕ್ಬರ್, ಶಂಭುಲಿಂಗಸ್ವಾಮಿ ಇದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/farmer-and-dalit-organizations-oppose-the-kambala-at-the-mysore-dasara-2026-rav/articleshow-smwevnt"/>
        </item>
        <item>
            <title><![CDATA[ರಾಜ್ಯದ ರೈತರ ಸಾಲ ಕೇಂದ್ರವೇ ಮನ್ನಾ ಮಾಡಲಿ: ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ]]></title>
            <link>https://kannada.asianetnews.com/state/minister-priyank-kharge-demand-centre-waive-karnataka-farm-loan-slams-bjp-rav/articleshow-vvpsosg</link>
            <guid isPermaLink="true">https://kannada.asianetnews.com/state/minister-priyank-kharge-demand-centre-waive-karnataka-farm-loan-slams-bjp-rav/articleshow-vvpsosg</guid>
            <pubDate>Fri, 10 Jul 2026 07:36:03 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಬರ ಆವರಿಸಿದೆ. ಹೀಗಾಗಿ ಕೇಂದ್ರ ಸರ್ಕಾರವು ರಾಜ್ಯದ ರೈತರ ಸಾಲ ಮನ್ನಾ ಮಾಡಲಿ. ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಕೇಳುವ ಬದಲು ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿ&rsquo; ಎಂದು ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6mf3epsrp7x7r6vrwgfcpr,imgname-priyank-kharge-rss-case-1782634221014.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.10):&lt;/strong&gt; &lsquo;ರಾಜ್ಯದಲ್ಲಿ ಬರ ಆವರಿಸಿದೆ. ಹೀಗಾಗಿ ಕೇಂದ್ರ ಸರ್ಕಾರವು ರಾಜ್ಯದ ರೈತರ ಸಾಲ ಮನ್ನಾ ಮಾಡಲಿ. ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಕೇಳುವ ಬದಲು ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿ&rsquo; ಎಂದು ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಹೇಳಿದ್ದಾರೆ.&amp;nbsp;&lt;/p&gt;&lt;h2&gt;ರಾಜ್ಯ ಬಿಜೆಪಿ ನಾಯಕರು ಕೇವಲ ಮನ್&zwnj; ಕೀ ಬಾತ್&zwnj;&rsquo; ಕೇಳಲು ಇದ್ದಾರೆಯೇ?&lt;/h2&gt;&lt;p&gt;ರಾಜ್ಯ ಬಿಜೆಪಿ ನಾಯಕರು ರಾಜ್ಯದ ಪರ ಒತ್ತಾಯ ಮಾಡದೇ ಕೇವಲ &lsquo;ಮನ್&zwnj; ಕೀ ಬಾತ್&zwnj;&rsquo; ಕೇಳಲು ಇದ್ದಾರೆಯೇ ಎಂದೂ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ ಎನ್ನುವ ಬದಲು ಕೇಂದ್ರ ಸರ್ಕಾರವೇ ಮಾಡಬಹುದಲ್ಲವೇ? ರಾಜ್ಯ ಬಿಜೆಪಿ ನಾಯಕರು ರೈತರ ಪರ ಒತ್ತಾಯ ಮಾಡಬಹುದಲ್ಲವೇ ಎಂದರು. ಎಲ್ಲವನ್ನೂ ರಾಜ್ಯ ಸರ್ಕಾರವೇ ಮಾಡುವುದಾದರೆ ಕೇಂದ್ರ ಸರ್ಕಾರ ಏನು ಮಾಡುತ್ತದೆ? ರೈತರ ಸಾಲ ಮನ್ನಾ ಎಲ್ಲವನ್ನೂ ರಾಜ್ಯ ಸರ್ಕಾರವೇ ಮಾಡಿದರೆ ಕೇಂದ್ರ ಯಾಕೆ ಇದೆ? ಎಂದು ಪ್ರಶ್ನಿಸಿದರು.&lt;/p&gt;&lt;p&gt;ವಿಬಿ ಜಿ ರಾಮ್&zwnj; ಜಿ, ಜಲಜೀವನ್&zwnj; ಮಿಷನ್&zwnj; ಸೇರಿ ಎಲ್ಲಾ ಕೇಂದ್ರ ಪುರಸ್ಕೃತ ಯೋಜನೆಗಳಿಗೂ ರಾಜ್ಯ ಸರ್ಕಾರವೇ ಹಣ ಕೊಡಬೇಕು. ರಾಜ್ಯ ಬಿಜೆಪಿ ನಾಯಕರು ರಾಜ್ಯದ ಪರ ಒತ್ತಾಯ ಮಾಡದೇ ಕೇವಲ ಮನ್&zwnj; ಕೀ ಬಾತ್&zwnj; ಕೇಳಲು ಇದ್ದಾರೆಯೇ ಎಂದು ಕಿಡಿಕಾರಿದರು.&lt;/p&gt;&lt;p&gt;ಸಂಪುಟ ವಿಸ್ತರಣೆ ವಿಳಂಬದಿಂದ ಬರ ನಿರ್ವಹಣೆಗೆ ಕಷ್ಟ ಆಗುತ್ತಿರುವ ಬಗೆಗಿನ ಪ್ರಶ್ನೆಗೆ ಮಾತನಾಡಿ, ನಾಲ್ಕೂ ಕಂದಾಯ ವಿಭಾಗಗಳಿಗೂ ಮುಖ್ಯಮಂತ್ರಿ ಹೋಗುತ್ತಿದ್ದಾರೆ. ಕೇಂದ್ರದ ಮಾನದಂಡದ ಪ್ರಕಾರ ವರದಿ ಸಿದ್ಧಪಡಿಸಿ ಸದ್ಯದಲ್ಲೇ ಬರ ಘೋಷಣೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಅದನ್ನು ಕೇಂದ್ರ ಘೋಷಣೆ ಮಾಡಬೇಕು. ಇನ್ನು ಸಂಪುಟ ಒಂದೆರಡು ವಾರದಲ್ಲಿ ವಿಸ್ತರಣೆ ಆಗಲಿದೆ ಎಂದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/minister-priyank-kharge-demand-centre-waive-karnataka-farm-loan-slams-bjp-rav/articleshow-vvpsosg"/>
        </item>
        <item>
            <title><![CDATA[ದಲಿತ ದೌರ್ಜನ್ಯ ಪ್ರದೇಶದಲ್ಲಿ ಶೋಷಣೆ ತಡೆಗೆ DCRE ಪ್ಲ್ಯಾನ್‌! ಏನಿದು ಗಸ್ತು-ಸೂಕ್ಷ್ಮ ವಲಯ?]]></title>
            <link>https://kannada.asianetnews.com/state/dcre-plan-to-prevent-atrocities-against-dalits-karnataka-rav/articleshow-28o49ua</link>
            <guid isPermaLink="true">https://kannada.asianetnews.com/state/dcre-plan-to-prevent-atrocities-against-dalits-karnataka-rav/articleshow-28o49ua</guid>
            <pubDate>Fri, 10 Jul 2026 07:13:21 +0530</pubDate>
            <description><![CDATA[&lt;p&gt;ನಾಡಿನಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್&zwnj;ಇ) ಹೊಸ ಯೋಜನೆ ರೂಪಿಸಿದೆ. ದೌರ್ಜನ್ಯ ಹೆಚ್ಚಿರುವ ಪ್ರದೇಶಗಳಲ್ಲಿ 'ಸೂಕ್ಷ್ಮ ಪ್ರದೇಶ' ಎಂದು ಗುರುತಿಸುವುದು, ಎಸ್&zwnj;ಸಿ/ಎಸ್&zwnj;ಟಿ ವಿದ್ಯಾರ್ಥಿಗಳ ಹಾಸ್ಟೆಲ್&zwnj;ಗೆ ವಿಶೇಷ ಪೊಲೀಸ್ ಗಸ್ತು ವ್ಯವಸ್ಥೆ ಜಾರಿ ಉದ್ದೇಶ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx4ty9syzsv9cre3e2tt57av,imgname-----------------------2026-07-10t071021.260-1783647643454.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಿರೀಶ್ ಮಾದೇನಹಳ್ಳಿ&amp;nbsp;&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಜು.11): &lt;/strong&gt;ನಾಡಿನಲ್ಲಿ ದಲಿತ ಸಮುದಾಯ ಮೇಲಿನ ದೌರ್ಜನ್ಯ ತಡೆಗೆ ಮಹತ್ವದ ಹೆಜ್ಜೆ ಇಟ್ಟಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು (ಡಿಸಿಆರ್&zwnj;ಇ), ಶೋಷಿತರು ಹೆಚ್ಚು ಬಾಧನೆಗೊಳಗಾಗಿರುವ ನೆಲೆಗಳನ್ನು &lsquo;ಸೂಕ್ಷ್ಮ ಪ್ರದೇಶಗಳೆಂದು&rsquo; ಗುರುತಿಸುವುದು ಹಾಗೂ ದಲಿತ ವಿದ್ಯಾರ್ಥಿಗಳ ಹಾಸ್ಟೆಲ್&zwnj;ಗಳಿಗೆ &lsquo;ವಿಶೇಷ ಪೊಲೀಸ್ ಗಸ್ತು&rsquo; ವ್ಯವಸ್ಥೆ ಜಾರಿಗೊಳಿಸಲು ಯೋಜನೆ ರೂಪಿಸಿದೆ.&lt;/p&gt;&lt;p&gt;ರಾಜ್ಯ ವ್ಯಾಪಿ ಹೋಬಳಿ ಮಟ್ಟದಿಂದಲೇ ಪರಿಶಿಷ್ಟ ಜಾತಿ (ಎಸ್ಪಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಅವಲೋಕಿಸಿರುವ ಡಿಸಿಆರ್&zwnj;ಇ ಅಧಿಕಾರಿಗಳು, ಆಯಾ ಜಿಲ್ಲಾ ಪೊಲೀಸರ ಜತೆಗೂಡಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ &lsquo;ಸಹಬಾಳ್ವೆ ಹಾಗೂ ಸಾಮರಸ್ಯ ಜೀವನ&rsquo; ಧ್ಯೇಯದಡಿ ಅರಿವು ಕಾರ್ಯಕ್ರಮ ಆಯೋಜನೆ ಹಾಗೂ ಸಮುದಾಯಗಳ ನಡುವೆ ಶಾಂತಿ ನೆಲೆಗೊಳಿಸಲು ಸಮನ್ವಯಕ್ಕೆ ಮುಂದಾಗಿದ್ದಾರೆ.&lt;/p&gt;&lt;p&gt;ಅದೇ ರೀತಿ ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಹಾಸ್ಟೆಲ್&zwnj;ಗಳಿಗೆ ವಿಶೇಷ ಗಸ್ತು ವ್ಯವಸ್ಥೆಯನ್ನು ಸ್ಥಳೀಯ ಪೊಲೀಸರ ಸಹಕಾರದಲ್ಲಿ ಡಿಸಿಆರ್&zwnj;ಇ ಜಾರಿಗೊಳಿಸಿದೆ. ಆ ಹಾಸ್ಟೆಲ್&zwnj;ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಸುರಕ್ಷತಾ ಭಾವ ಮೂಡಿಸುವುದು ಗಸ್ತು ವ್ಯವಸ್ಥೆ ಹಿಂದಿರುವ ಸದುದ್ದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;h2&gt;ಸೂಕ್ಷ್ಮವಲಯಗಳ ಆಯ್ಕೆ ಹೇಗೆ?:&lt;/h2&gt;&lt;p&gt;ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಮೇಲಿನ ಶೋಷಣೆ ತಡೆಗೆ ರಾಜ್ಯದಲ್ಲಿ ಡಿಸಿಆರ್&zwnj;ಇ ಪೊಲೀಸ್ ಠಾಣೆಗಳನ್ನು ರಾಜ್ಯ ಸರ್ಕಾರ ಆರಂಭಿಸಿತು. ಈ ಠಾಣೆಗಳು ಎಸ್ಪಿ-ಎಸ್ಟಿ ದೌರ್ಜನ್ಯ ನಿರ್ಬಂಧ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತವೆ. ಶೋಷಿತ ವರ್ಗಗಳ ಮೇಲಿನ ಹಲ್ಲೆ, ಸಾಮಾಜಿಕ ಬಹಿಷ್ಕಾರ, ಜಾತಿ ತಾರತಮ್ಯ ಹಾಗೂ ನಿಂದನೆ ಸೇರಿ ದೌರ್ಜನ್ಯಗಳನ್ನು ತಳಹಂತದಿಂದಲೇ ನಿಯಂತ್ರಿಸಲು ಜಿಲ್ಲಾ ಪೊಲೀಸರ ಸಹಕಾರದಲ್ಲಿ ಡಿಸಿಇಆರ್ ಡಿಜಿಪಿ ಉಮೇಶ್ ಕುಮಾರ್ ಯೋಜಿಸಿದ್ದಾರೆ.&lt;/p&gt;&lt;p&gt;ಮೊದಲ ಹಂತದಲ್ಲಿ ಹೆಚ್ಚು ಶೋಷಣೆ ಬಾಧಿತ ವಲಯಗಳನ್ನು ಪತ್ತೆ ಹಚ್ಚಿ ಅಲ್ಲಿ ಭೀತಿಗೊಳಗಾಗಿರುವ ವರ್ಗಗಳಿಗೆ ಧೈರ್ಯ ತುಂಬುವ ಕೆಲಸ ಡಿಸಿಇಆರ್&zwnj; ಕೈಗೆತ್ತಿಕೊಂಡಿದೆ. ಅಲ್ಲದೆ, ಸಮುದಾಯಗಳ ಮಧ್ಯೆ ಜಾತಿ ದ್ವೇಷದ ಅಗ್ನಿಜ್ವಾಲೆ ತಣ್ಣಗಾಗಿಸಿ ಸಾಮಾಜಿಕ ಸಾಮರಸ್ಯ ಹಾಗೂ ಸಹೋದರತೆ ಮೂಡಿಸಲು ಡಿಜಿಪಿ ಉಮೇಶ್ ಕುಮಾರ್ ಸೂಚಿಸಿದ್ದಾರೆ.&lt;/p&gt;&lt;p&gt;ಈ ಸೂಕ್ಷ್ಮ ಪ್ರದೇಶಗಳ ಆಯ್ಕೆಗೆ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನೇ ಮಾನದಂಡವಾಗಿ ಡಿಸಿಇಆರ್ ಪರಿಗಣಿಸಿದೆ. ಅಂತೆಯೇ ಕಳೆದ 5 ವರ್ಷಗಳಲ್ಲಿ 3ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿರುವ ಹಳ್ಳಿ ಹಾಗೂ ನಗರದ ವಾರ್ಡ್&zwnj;ಗಳನ್ನು &lsquo;ಸೂಕ್ಷ್ಮ ಪ್ರದೇಶಗಳು&rsquo; ಎಂದು ಗುರುತಿಸಲಾಗುತ್ತದೆ. ಬಳಿಕ ಆ ಪ್ರದೇಶಗಳಲ್ಲಿ ಹೆಚ್ಚಿನ ಒತ್ತು ಕೊಟ್ಟು ಜಾಗೃತಿ ಜತೆ ಶಾಂತಿ ನೆಲೆಗೊಳಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತದೆ.&lt;/p&gt;&lt;p&gt;ಪ್ರತಿ ಹೋಬಳಿಗಳ ವ್ಯಾಪ್ತಿಯಲ್ಲಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಾರಥ್ಯದಲ್ಲಿ ಡಿಸಿಆರ್&zwnj;ಇ ಡಿವೈಎಸ್ಪಿಗಳು ಶಾಂತಿ ಸಭೆ ನಡೆಸಲಿದ್ದಾರೆ. ಅಲ್ಲದೆ, ಪೊಲೀಸರ ಜೊತೆ ದೌರ್ಜನ್ಯ ನಿಯಂತ್ರಣಕ್ಕೂ ಅವರು ಕಾನೂನು ಕ್ರಮ ಜರುಗಿಸಲಿದ್ದಾರೆ. ಇನ್ನು ಪ್ರತಿ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಈ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಬಗ್ಗೆ ಡಿಸಿಇಆರ್&zwnj; ಡಿಜಿಪಿ ಉಮೇಶ್ ಕುಮಾರ್ ಪರಿಶೀಲಿಸಲಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.&lt;/p&gt;&lt;h3&gt;ಹಾಸ್ಟೆಲ್&zwnj;ಗಳ ಬೀಟ್ ಪೊಲೀಸ್&lt;/h3&gt;&lt;p&gt;ಎಸ್ಸಿ-ಎಸ್ಟಿ ಸಮುದಾಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಾಸ್ಟೆಲ್&zwnj;ಗಳಲ್ಲಿ ವಿಶೇಷ ಪೊಲೀಸ್ ಗಸ್ತು ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಬೀಟ್ ಪಾಯಿಂಟ್&zwnj;ಗಳಲ್ಲಿ ನಿಯಮಿತವಾಗಿ ಪೊಲೀಸ್ ಹೊಯ್ಸಳ ವಾಹನಗಳು ಸಂಚರಿಸುತ್ತವೆ. ಅಲ್ಲದೆ. ಆ ಹಾಸ್ಟೆಲ್&zwnj;ಗಳ ಪ್ರವೇಶ ದ್ವಾರದಲ್ಲಿ ಗಸ್ತು ನಡೆಸಿರುವ ಬಗ್ಗೆ ಪೊಲೀಸರು ನಮೂದಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಶಿಕ್ಷೆ ಪ್ರಮಾಣ ಹೆಚ್ಚಳ&lt;/strong&gt;&lt;/p&gt;&lt;p&gt;ಇನ್ನು ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣಗಳ ತನಿಖೆಗೂ ಗಮನಹರಿಸಲಾಗಿದ್ದು, ತಪ್ಪಿತಸ್ಥರನ್ನು ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಪಡಿಸಲು ಪ್ರಾಸಿಕ್ಯೂಷನ್&zwnj; ಅನ್ನು ಸಶಕ್ತಗೊಳಿಸಲಾಗಿದೆ. ಇದರ ಪರಿಣಾಮ 2025ರಲ್ಲಿ ಶೇ.8ರಷ್ಟಿದ್ದ ಶಿಕ್ಷೆ ಪ್ರಮಾಣ 2026ರಲ್ಲಿ ಶೇ.17ರಷ್ಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ರಾಜ್ಯದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳ ಮೇಲೆ ದೌರ್ಜನ್ಯ ತಡೆ ಹಾಗೂ ಆ ವರ್ಗಗಳ ರಕ್ಷಣೆಗೆ ಹೋಬಳಿ ಮಟ್ಟದಿಂದಲೇ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಡಿಸಿಇಆರ್&zwnj; ಜಂಟಿಯಾಗಿ ಕೆಲಸ ಮಾಡುತ್ತವೆ.&lt;/p&gt;&lt;p&gt;&lt;strong&gt;ಉಮೇಶ್ ಕುಮಾರ್, ಡಿಜಿಪಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್&zwnj;ಇ)&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/dcre-plan-to-prevent-atrocities-against-dalits-karnataka-rav/articleshow-28o49ua"/>
        </item>
        <item>
            <title><![CDATA[ಇಂದಿನಿಂದ 3 ದಿನ ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರ ಸಭೆ, ಯಾರಾರು ಆಗಮಿಸಲಿದ್ದಾರೆ? ಸಭೆಯ ಚರ್ಚೆಗಳೇನು?]]></title>
            <link>https://kannada.asianetnews.com/state/rss-pracharak-meeting-in-belagavi-for-three-days-starting-today-rav/articleshow-e2nycuu</link>
            <guid isPermaLink="true">https://kannada.asianetnews.com/state/rss-pracharak-meeting-in-belagavi-for-three-days-starting-today-rav/articleshow-e2nycuu</guid>
            <pubDate>Fri, 10 Jul 2026 06:42:21 +0530</pubDate>
            <description><![CDATA[&lt;p&gt;ಬೆಳಗಾವಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ನಡೆಯಲಿದ್ದು, ಸರಸಂಘಚಾಲಕ ಡಾ.ಮೋಹನ್&zwnj; ಭಾಗವತ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಈ ಮೂರು ದಿನಗಳ ಸಭೆಯಲ್ಲಿ ನಡೆಯಲಿರುವ ಚರ್ಚೆಗಳೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwwy1h6424ewvjc66pvxn5qs,imgname-----------------------2026-07-07t053029.416-1783382459588.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಜು.10): &lt;/strong&gt;ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆಗೆ ಬೆಳಗಾವಿ ಸಜ್ಜುಗೊಂಡಿದೆ. ಶುಕ್ರವಾರದಿಂದ ಮೂರು ದಿನ ನಡೆಯಲಿರುವ ಸಭೆಯಲ್ಲಿ ಸಂಘದ ಸರಸಂಘಚಾಲಕ ಡಾ.ಮೋಹನ್&zwnj; ಭಾಗವತ್ ಸೇರಿ ಉನ್ನತ ನಾಯಕತ್ವ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರಚಾರಕರು ಪಾಲ್ಗೊಳ್ಳಲಿದ್ದಾರೆ.&lt;/p&gt;&lt;h2&gt;ಆರ್&zwnj;ಎಸ್&zwnj;ಎಸ್&zwnj; ಸಭೆ ನಡೆಯುವ ಸ್ಥಳ&lt;/h2&gt;&lt;p&gt;ಅನಗೋಳದ ಸಂತ ಮೀರಾ ಶಾಲೆ, ಶಾಸ್ತ್ರಿನಗರದಲ್ಲಿರುವ ಸಂಘದ ಕಚೇರಿ ಹಾಗೂ ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್&zwnj;ನಲ್ಲಿ ವಿವಿಧ ಹಂತದ ಸಭೆಗಳು ನಡೆಯಲಿವೆ. ಪ್ರಮುಖ ಚರ್ಚೆಗಳು ಸಂತ ಮೀರಾ ಶಾಲೆಯಲ್ಲೇ ನಡೆಯಲಿದ್ದು, ಸಭಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.&lt;/p&gt;&lt;h3&gt;ಯಾರಾರು ಆಗಮಿಸಲಿದ್ದಾರೆ&lt;/h3&gt;&lt;p&gt;ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಹ ಸರಕಾರ್ಯವಾಹರಾದ ಡಾ। ಕೃಷ್ಣಗೋಪಾಲ, ಸಿ.ಆರ್.ಮುಕುಂದ, ಅರುಣಕುಮಾರ, ರಾಮದತ್ತ, ಆಲೋಕ ಕುಮಾರ ಹಾಗೂ ಅತುಲ್ ಲಿಮಯೆ ಸೇರಿದಂತೆ ಸಂಘದ ಹಿರಿಯ ಪದಾಧಿಕಾರಿಗಳು ಈಗಾಗಲೇ ಬೆಳಗಾವಿಗೆ ಆಗಮಿಸಿದ್ದಾರೆ.&lt;/p&gt;&lt;p&gt;ಅಲ್ಲದೆ 11 ಕ್ಷೇತ್ರಗಳು, 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು, ಸಂಘಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಸುಮಾರು 130ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.&lt;/p&gt;&lt;p&gt;ಗುರುವಾರ ಸಂತ ಮೀರಾ ಶಾಲೆಯಲ್ಲಿ ಸಭೆಯ ಪೂರ್ವಸಿದ್ಧತಾ ಸಭೆಗಳು ನಡೆದವು. ವಸತಿ, ಭದ್ರತೆ ಹಾಗೂ ಸಭೆಯ ಸಂಘಟನಾ ವ್ಯವಸ್ಥೆಗಳ ಕುರಿತು ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸಲಾಯಿತು. ಕಳೆದ ಮಾರ್ಚ್&zwnj;ನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಮುಂದುವರಿದ ಭಾಗವಾಗಿ ಈ ಸಭೆ ನಡೆಯುತ್ತಿದೆ. ಸಂಘಟನಾ ವಿಸ್ತರಣೆ, ಶತಮಾನೋತ್ಸವ ವರ್ಷದ ಕಾರ್ಯಕ್ರಮಗಳು, ತರಬೇತಿ ವರ್ಗಗಳ ಪರಿಶೀಲನೆ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಲಾಗಿದೆ.&lt;/p&gt;&lt;p&gt;ರಾಮಮಂದಿರ ಮತ್ತು ಬದರಿನಾಥ ದೇವಸ್ಥಾನಗಳ ಹುಂಡಿ ಸಂಬಂಧಿತ ಬೆಳವಣಿಗೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿ ಕೆಲವು ಮೂಲಗಳಿಂದ ವ್ಯಕ್ತವಾಗಿದ್ದರೂ, ಈ ಕುರಿತು ಸಂಘದಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rss-pracharak-meeting-in-belagavi-for-three-days-starting-today-rav/articleshow-e2nycuu"/>
        </item>
        <item>
            <title><![CDATA[ರಾಜ್ಯದ ಡ್ಯಾಂಗಳಲ್ಲಿ ನೀರು ಸಂಗ್ರಹ 5 ದಿನದಲ್ಲೇ ಡಬಲ್! ಇಂದು ಜಲಾಶಯಗಳ ನೀರಿನ ಮಟ್ಟ ಎಷ್ಟು?]]></title>
            <link>https://kannada.asianetnews.com/state/water-levels-improve-in-karnataka-reservoirs-monsoon-picks-up-rav/articleshow-wxg1a88</link>
            <guid isPermaLink="true">https://kannada.asianetnews.com/state/water-levels-improve-in-karnataka-reservoirs-monsoon-picks-up-rav/articleshow-wxg1a88</guid>
            <pubDate>Fri, 10 Jul 2026 06:24:48 +0530</pubDate>
            <description><![CDATA[&lt;p&gt;ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ. ಕೇವಲ ಐದು ದಿನಗಳಲ್ಲಿ ರಾಜ್ಯದ ಡ್ಯಾಂಗಳಿಗೆ 50 ಟಿಎಂಸಿಗೂ ಅಧಿಕ ನೀರು ಹರಿದುಬಂದಿದ್ದು, ಒಟ್ಟು ನೀರಿನ ಸಂಗ್ರಹ 66.62 ಟಿಎಂಸಿಯಿಂದ 117.53 ಟಿಎಂಸಿಗೆ ದ್ವಿಗುಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvmdfvntkgpks4t0jzkmnzj,imgname-shivamogga-tunga-dam-full-2026--1783338811253.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಮಾಯದಂಥ ಮಳೆಯ ಪರಿಣಾಮ&amp;nbsp;&lt;/li&gt; &lt;li&gt;ಜಲ ಸಂಗ್ರಹ 66.62ರಿಂದ 117 ಟಿಎಂಸಿಗೇರಿಕೆ&lt;/li&gt; &lt;li&gt;ಬರಗಾಲದ ಭೀತಿಯ ನಡುವೆಯೂ ಶುಭಸುದ್ದಿ&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಜು.10): &lt;/strong&gt;ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಮುಂಗಾರು ಆರಂಭವಾಗಿ ತಿಂಗಳಾದರೂ ಖಾಲಿಯಾಗಿದ್ದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಐದು ದಿನದಲ್ಲೇ ಡ್ಯಾಂಗಳಿಗೆ 50 ಟಿಎಂಸಿಗೂ ಅಧಿಕ ನೀರು ಹರಿದುಬಂದಿದ್ದು, ಈ ಅವಧಿಯಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಬಹುತೇಕ ಡಬಲ್&zwnj; ಆಗಿದೆ.&lt;/p&gt;&lt;p&gt;ಸೂಪರ್&zwnj; ಎಲ್&zwnj;ನಿನೋ ಕಾರಣದಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೀಗ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ರಾಜ್ಯದ ಪ್ರಮುಖ 22 ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದು ನೆಮ್ಮದಿ ತಂದಿದೆ.&lt;/p&gt;&lt;p&gt;ಅದರಲ್ಲೂ 5 ದಿನಗಳಿಂದೀಚೆಗೆ ಅಣೆಕಟ್ಟುಗಳಲ್ಲಿ 50.91 ಟಿಎಂಸಿ ಅಡಿಗಳಷ್ಟು ನೀರು ಹೆಚ್ಚಾಗಿದೆ. ಜಲಸಂಪನ್ಮೂಲ ಇಲಾಖೆ ಮಾಹಿತಿಯಂತೆ ಕಳೆದ ಶನಿವಾರ (ಜು. 4)ರಂದು 22 ಅಣೆಕಟ್ಟುಗಳಲ್ಲಿ ಕೇವಲ 66.62 ಟಿಎಂಸಿ ನೀರು ಭರ್ತಿಯಾಗಿತ್ತು. ಅದೇ ಜು. 9ಕ್ಕೆ ನೀರಿನ ಪ್ರಮಾಣ 117.53 ಟಿಎಂಸಿ ಅಡಿಗಳಿಗೆ ಏರಿಕೆಯಾಗಿದೆ.&lt;/p&gt;&lt;h2&gt;ಎಷ್ಟು ಏರಿಕೆ?:&lt;/h2&gt;&lt;p&gt;ಕಳೆದ ಐದು ದಿನಗಳ ಹಿಂದಷ್ಟೇ ಏಳು ಅಣೆಕಟ್ಟುಗಳಲ್ಲಿ ಒಟ್ಟು ಸಾಮರ್ಥ್ಯದ ಶೇ. 25ಕ್ಕಿಂತ ಕಡಿಮೆ ನೀರಿತ್ತು. ಉಳಿದಂತೆ 6 ಜಲಾಶಯಗಳಲ್ಲಿ ಶೇ. 25ರಿಂದ 55ರಷ್ಟು, 7 ಜಲಾಶಯಗಳಲ್ಲಿ ಶೇ. 55ರಿಂದ 75 ಹಾಗೂ ಎರಡು ಜಲಾಶಯಗಳಲ್ಲಿ (ವಾಣಿ ವಿಲಾಸ ಸಾಗರ ಮತ್ತು ಮುಲ್ಲಾಮಾರಿ ಕೆಳದಂಡೆ ಜಲಾಶಯ) ಮಾತ್ರ ಶೇ. 75ರಿಂದ 100ರಷ್ಟು ನೀರು ಭರ್ತಿಯಾಗಿತ್ತು.&lt;/p&gt;&lt;p&gt;ಅದೇ ಜು. 19ಕ್ಕೆ ತುಂಗಭದ್ರಾ ಜಲಾಶಯ, ಭೀಮಾ ಏತ ಜಲಾಶಯ, ಸೌದಾಗರ್&zwnj; ಜಲಾಶಯಗಳಲ್ಲಿ ಮಾತ್ರ ಶೇ. 25ಕ್ಕಿಂತ ಕಡಿಮೆ ನೀಡಿದೆ. ಉಳಿದಂತೆ ಕೆಆರ್&zwnj;ಎಸ್&zwnj; ಜಲಾಶಯ, ಆಲಮಟ್ಟಿ ಜಲಾಶಯ ಸೇರಿದಂತೆ 10 ಜಲಾಶಯಗಳಲ್ಲಿ ಶೇ. 25ರಿಂದ 55ರಷ್ಟು, 6 ಜಲಾಶಯಗಳಲ್ಲಿ ಶೇ. 55ರಿಂದ 75 ಹಾಗೂ ವಾಣಿ ವಿಲಾಸ ಸಾಗರ ಮತ್ತು ಮುಲ್ಲಾಮಾರಿ ಕೆಳದಂಡೆ ಜಲಾಶಯಗಳಲ್ಲಿ ಶೇ. 75ರಿಂದ 100ರಷ್ಟು ನೀರು ಭರ್ತಿಯಾಗಿದೆ.&lt;/p&gt;&lt;p&gt;ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕಾರಣದಿಂದಾಗಿ ಕೃಷಿ ಚಟುವಟಿಕೆಗೆ ಇದ್ದ ತೊಡಕು ನಿವಾರಣೆಯಾಗುತ್ತಿದೆ. ಅಲ್ಲದೆ, ಕೆಆರ್&zwnj;ಎಸ್&zwnj; ಜಲಾಶಯದಲ್ಲಿ ಸದ್ಯ 13.51 ಟಿಎಂಸಿ ಅಡಿಗಳಷ್ಟು ನೀರಿದ್ದು 5.13 ಟಿಎಂಸಿ ಅಡಿಗಳಷ್ಟು ನೀರನ್ನು ಬಳಸಬಹುದಾಗಿದೆ. ಅಲ್ಲದೆ ಒಳಹರಿವು 12694 ಕ್ಯುಸೆಕ್&zwnj;ಗೆ ಹೆಚ್ಚಳವಾಗಿದ್ದು, ಹೊರಹರಿವು ಕೇವಲ 684 ಕ್ಯುಸೆಕ್&zwnj; ಇದೆ. ಅದೇ ರೀತಿ ಆಲಮಟ್ಟಿ ಜಲಾಶಯಕ್ಕೆ 1.31 ಲಕ್ಷ ಕ್ಯುಸೆಕ್&zwnj; ಒಳಹರಿವು, ತುಂಗಭದ್ರಾ ಜಲಾಶಯಕ್ಕೆ 28 ಸಾವಿರ ಕ್ಯುಸೆಕ್&zwnj;, ಭದ್ರಾ ಜಲಾಶಯಕ್ಕೆ 16304 ಕ್ಯುಸೆಕ್&zwnj;, ಹೇಮಾವತಿ ಜಲಾಶಯಕ್ಕೆ 15646 ಕ್ಯುಸೆಕ್&zwnj; ಒಳಹರಿವಿದೆ.&lt;/p&gt;&lt;h3&gt;&lt;strong&gt;ಜಲಾಶಯಗಳ ನೀರಿನ ಮಟ್ಟ (9-7-2026)&lt;/strong&gt;&lt;/h3&gt;&lt;ul&gt; &lt;li&gt;ಕಬಿನಿ 47% 2284 2264.53&lt;/li&gt; &lt;li&gt;ಹೇಮಾವತಿ 54% 2922 2900.63&lt;/li&gt; &lt;li&gt;ತುಂಗಭದ್ರಾ 13% 1624.83 1592.95&lt;/li&gt; &lt;li&gt;ಸೂಪಾ(ಮೀ.) 25% 564 528.65&lt;/li&gt; &lt;li&gt;ಕೆಆರ್&zwnj;ಎಸ್ 27% 124.80 85.66&lt;/li&gt; &lt;li&gt;ಘಟಪ್ರಭಾ 31% 2175 2116.30&lt;/li&gt; &lt;li&gt;ಲಿಂಗನಮಕ್ಕಿ 19% 1819.12 1760.85&lt;/li&gt; &lt;li&gt;ಭದ್ರಾ 42% 2158.00 2116.58&lt;/li&gt; &lt;li&gt;ಹಾರಂಗಿ 51% 2859 2841.55&lt;/li&gt; &lt;li&gt;ಆಲಮಟ್ಟಿ(ಮೀ.) 36% 519.60 512.56&lt;/li&gt; &lt;li&gt;ನಾರಾಯಣಪುರ(ಮೀ.) 59% 492.25 488.75&lt;/li&gt; &lt;li&gt;ಮಲಪ್ರಭಾ 29% 2079.50 2052.10&lt;/li&gt;&lt;/ul&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/water-levels-improve-in-karnataka-reservoirs-monsoon-picks-up-rav/articleshow-wxg1a88"/>
        </item>
        <item>
            <title><![CDATA[Parappana Agrahara Jail Update : ಜೈಲಿನ ಕೂಲಿ ಕೆಲಸಕ್ಕೆ ಪ್ರಜ್ವಲ್‌ ರೇವಣ್ಣ ಚಕ್ಕರ್‌! ವಿನಯ್ ಕುಲಕರ್ಣಿಗೆ ಏನು ಕೆಲಸ?]]></title>
            <link>https://kannada.asianetnews.com/state/parappana-agrahara-jail-update-no-labour-assigned-to-prajwal-revanna-vinay-kulkarni-rav/articleshow-0zxe6qy</link>
            <guid isPermaLink="true">https://kannada.asianetnews.com/state/parappana-agrahara-jail-update-no-labour-assigned-to-prajwal-revanna-vinay-kulkarni-rav/articleshow-0zxe6qy</guid>
            <pubDate>Fri, 10 Jul 2026 05:35:35 +0530</pubDate>
            <description><![CDATA[&lt;p&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಮಗೆ ನೀಡಲಾದ ಕೆಲಸವನ್ನು ಮಾಡದೆ ಅತ್ಯಾ೧ಚಾರ ಪ್ರಕರಣದ ಸಜಾ ಕೈದಿ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ(prajwal revanna) ಅವರು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx4n84m474k4tgd7ysy7bzrv,imgname-----------------------2026-07-10t053038.098-1783641674371.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಆರಾಮವಾಗಿ ದಿನದೂಡುತ್ತಿರುವ ಮಾಜಿ ಸಂಸದ&lt;/li&gt; &lt;li&gt;ಲೈಬ್ರರಿ ಸಹಾಯಕ ಕೆಲಸ ಮಾಡಲು ಹಿಂದೇಟು&lt;/li&gt; &lt;li&gt;ವಿನಯ್&zwnj; ಕುಲಕರ್ಣಿಗೆ ಕೂಡ ಕೆಲಸ ಇಲ್ಲ&lt;/li&gt;&lt;/ul&gt;&lt;p&gt;&lt;strong&gt;ಗಿರೀಶ್ ಮಾದೇನಹಳ್ಳಿ&amp;nbsp;&lt;/strong&gt;&lt;/p&gt;&lt;p&gt;&amp;nbsp;&lt;strong&gt;ಬೆಂಗಳೂರು (ಜು.11&lt;/strong&gt;): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಮಗೆ ನೀಡಲಾದ ಕೆಲಸವನ್ನು ಮಾಡದೆ ಅತ್ಯಾ೧ಚಾರ ಪ್ರಕರಣದ ಸಜಾ ಕೈದಿ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ(prajwal revanna) ಅವರು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಅತ್ಯಾ೧ಚಾರ ಪ್ರಕರಣ ಸಂಬಂಧ ಕಳೆದ ವರ್ಷ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ ಬಳಿಕ ಕಾರಾಗೃಹದ ಗ್ರಂಥಾಲಯದಲ್ಲಿನ ಸಹಾಯಕನ ಕೆಲಸವನ್ನು ಪ್ರಜ್ವಲ್ ಅವರೇ ಆಯ್ಕೆ ಮಾಡಿಕೊಂಡಿದ್ದರು. ಈ ಕೆಲಸಕ್ಕೆ ಅವರಿಗೆ 520 ರು. ದಿನಗೂಲಿ ಸಹ ನಿಗದಿಯಾಗಿತ್ತು. ಆದರೆ ಇದುವರೆಗೆ ಕೆಲಸಕ್ಕೆ ಪ್ರಜ್ವಲ್ ಹಾಜರಾಗದೆ ಗೈರಾಗಿದ್ದಾರೆ ಎಂದು ಉನ್ನತ ಮೂಲಗಳು &lsquo;ಕನ್ನಡಪ್ರಭ&rsquo; ಮಾಹಿತಿ ನೀಡಿವೆ.&lt;/p&gt;&lt;p&gt;ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ತಮ್ಮ ಇತರೆ ಪ್ರಕರಣಗಳ ವಿಚಾರಣೆಗೆ ಹಾಜರಾಗುವ ಅವರು, ಇನ್ನುಳಿದ ಸಮಯವನ್ನು ಯೋಗ, ಪುಸ್ತಕ ಓದು ಹಾಗೂ ಧ್ಯಾನ ಮಾಡುತ್ತಾ ಕಳೆಯುತ್ತಿದ್ದಾರೆ. ಕೆಲಸಕ್ಕೆ ಹಾಜರಾಗುವಂತೆ ಅವರಿಗೆ ಅಧಿಕಾರಿಗಳು ಕಟ್ಟುನಿಟ್ಟಾಗಿ ತಾಕೀತು ಮಾಡಿಲ್ಲ. ಇದರಿಂದ ಪ್ರಜ್ವಲ್ ಅವರು ನಿರಾಳರಾಗಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;ಪ್ರಜ್ವಲ್ ರೇವಣ್ಣಗೆ ಯಾಕೆ ಕೆಲಸ?:&lt;/h2&gt;&lt;p&gt;2024ರ ಲೋಕಸಭಾ ಚುನಾವಣೆ ಸಮರದ ಅಂತ್ಯದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಅಂದಿನ ಸಂಸದ ಹಾಗೂ ಜೆಡಿಎಸ್ ಹುರಿಯಾಳು ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿತ್ತು. ಮತದಾನದ ಮರುದಿನ ಲೈಂಗಿಕ ಹಗರಣದ್ದು ಎನ್ನಲಾದ ಅಶ್ಲೀಲ ವಿಡಿಯೋ ತುಂಬಿದ್ದ &lsquo;ಪೆನ್&zwnj; ಡ್ರೈವ್&zwnj;&rsquo;ಗಳು ಹಂಚಿಕೆಯಾಗಿ ವೈರಲ್ ಆಗಿದ್ದವು. ಈ ಹಗರಣದ ಕುರಿತು ತನಿಖೆಗೆ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ಸಾರಥ್ಯದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ)ಯನ್ನು ಸರ್ಕಾರ ರಚಿಸಿತ್ತು. ಬಳಿಕ ಮೂರು ಅತ್ಯಾ೧ಚಾರ ಪ್ರಕರಣಗಳು ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದವು.&lt;/p&gt;&lt;p&gt;ಈ ಕೃತ್ಯ ಬೆಳಕಿಗೆ ಬಂದ ನಂತರ ವಿದೇಶಕ್ಕೆ ಪರಾರಿಯಾಗಿದ್ದ ಅವರು ತಾಯ್ನಾಡಿಗೆ ಮರಳಿದ ಕೂಡಲೇ ಬಂಧನವಾಯಿತು. 2025ರ ಆಗಸ್ಟ್ 2ರಂದು ತಮ್ಮ ಮನೆ ಕೆಲಸದಾಳು ಮೇಲೆ ಅತ್ಯಾ೧ಚಾರ ಎಸಗಿದ ಪ್ರಕರಣದಲ್ಲಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಸಜಾ ಕೈದಿಯಾದ ನಂತರ ಜೈಲಿನ ನಿಯಮಾವಳಿ ಅನ್ವಯ ಜೈಲಿನಲ್ಲಿ ಅವರು ಶ್ರಮದಾನ ಮಾಡಬೇಕಿತ್ತು.&lt;/p&gt;&lt;p&gt;ಕೌಶಲ್ಯಕ್ಕೆ ಅನುಗುಣವಾಗಿ ಕೈದಿಗಳಿಗೆ ಕೆಲಸದ ಆಯ್ಕೆ ಸ್ವಾತಂತ್ರ್ಯವಿದೆ. ಅಂತೆಯೇ ಗ್ರಂಥಾಲಯದಲ್ಲಿ ಸಹಾಯಕನ ಕೆಲಸವನ್ನು ಪ್ರಜ್ವಲ್ ಆರಿಸಿಕೊಂಡರು. ಇದಕ್ಕೆ ಪ್ರತಿ ದಿನ ಅವರಿಗೆ 520 ರು. ಕೂಲಿ ನಿಗದಿಯಾಗಿತ್ತು (ಕೈದಿಗಳಿಗೆ ಜೈಲಿನಲ್ಲಿ ಕನಿಷ್ಠ 520 ರು.ನಿಂದ ಗರಿಷ್ಠ 610 ರು. ದಿನಗೂಲಿ ಸಿಗಲಿದೆ). ಆರಂಭದಲ್ಲಿ ಕೆಲ ತಾಸು ಕೆಲಸಕ್ಕೆ ಹಾಜರಾದ ಮಾಜಿ ಸಂಸದ ಆನಂತರ ಗ್ರಂಥಾಲಯದ ಕಡೆ ಹೆಜ್ಜೆ ಹಾಕದೆ ದೂರ ಉಳಿದಿದ್ದಾರೆ ಎಂದು ಮೂಲಗಳು ವಿವರಿಸಿವೆ.&lt;/p&gt;&lt;p&gt;&lt;strong&gt;ಕೋರ್ಟ್ ವಿಚಾರಣೆ ಕಾರಣ&amp;nbsp;&lt;/strong&gt;&lt;/p&gt;&lt;p&gt;ನ್ಯಾಯಾಲಯದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈ ಕಾರಣ ಮುಂದಿಟ್ಟು ಅವರು ಕೆಲಸಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಸನ್ನಡತೆಗೆ ಶ್ರಮದಾನ ಪರಿಗಣನೆ&lt;/strong&gt;&lt;/p&gt;&lt;p&gt;ಜೈಲಿನಲ್ಲಿ ಶ್ರಮದಾನವು ಅವಧಿಪೂರ್ವ ಕೈದಿಗಳ ಬಿಡುಗಡೆಗೆ ಅನುಕೂಲವಾಗಲಿದೆ. ಸನ್ನಡತೆ ಆಧಾರದಡಿ ಕೈದಿಗಳು ಬಂಧಮುಕ್ತರಾಗುತ್ತಾರೆ. ಜೈಲಿನಲ್ಲಿ ಕಾನೂನುಪಾಲನೆ ಹಾಗೂ ಶ್ರಮದಾನವು ಒಳ್ಳೆಯ ನಡವಳಿಕೆ ನಿರೂಪಿಸುವ ಮಾನದಂಡವಾಗಿದೆ. ಹೀಗಾಗಿ ಕಾರಾಗೃಹದಲ್ಲಿ ಕೈದಿಗಳು ಕೆಲಸ ಮಾಡದೆ ಹೋದರೆ ಸನ್ನಡತೆ ಆಧಾರದಲ್ಲಿ ಆ ಕೈದಿಗಳ ಬಿಡುಗಡೆಗೆ ಶಿಫಾರಸು ಮಾಡಲು ಅವಕಾಶವಿರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;ಪ್ರಸುತ್ತ ಕಾರಾಗೃಹದಲ್ಲಿ ಸುಮಾರು 500 ಕೈದಿಗಳಿಗೆ ಕೂಲಿ ಕೊಡಬಹುದು. ಹೀಗಾಗಿ ಎಲ್ಲಾ ಸಜಾ ಬಂಧಿಗಳಿಗೂ ಕೆಲಸ ಹಂಚಿಕೆ ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಶ್ರಮದಾನವನ್ನು ಕಡ್ಡಾಯಗೊಳಿಸಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h3&gt;ವಿನಯ್&zwnj; ಕುಲಕರ್ಣಿಗೆ ಕೂಡ ಕೆಲಸ ಇಲ್ಲ&lt;/h3&gt;&lt;p&gt;ಇನ್ನು ಜಿಪಂ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಇನ್ನೂ ಕೆಲಸ ಆಯ್ಕೆ ಮಾಡಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್&zwnj;ಗೆ ಸಜಾ ಕೈದಿ ವಿನಯ್ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಶ್ರಮದಾನಕ್ಕೆ ಕೆಲಸವನ್ನು ಮಾಜಿ ಸಚಿವರು ಆಯ್ಕೆ ಮಾಡಿಕೊಂಡಿಲ್ಲ ಎಂದು ತಿಳಿದು ಬಂದಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/parappana-agrahara-jail-update-no-labour-assigned-to-prajwal-revanna-vinay-kulkarni-rav/articleshow-0zxe6qy"/>
        </item>
        <item>
            <title><![CDATA['ಬೆಂಗಳೂರು ಅಂದ್ರೆ ದೇವರ ಎಸಿ ರೂಮ್‌..' ಉದ್ಯಾನನಗರಿಯ ವೆದರ್‌ಗೆ ಫಿದಾ ಆದ ನಟಿ ಗಿರಿಜಾ ಓಕ್‌]]></title>
            <link>https://kannada.asianetnews.com/gallery/bengaluru-urban/actress-girija-oak-viral-comments-bengaluru-weather-nature-experience-san-sqkqeu9</link>
            <guid isPermaLink="true">https://kannada.asianetnews.com/gallery/bengaluru-urban/actress-girija-oak-viral-comments-bengaluru-weather-nature-experience-san-sqkqeu9</guid>
            <pubDate>Thu, 09 Jul 2026 22:00:54 +0530</pubDate>
            <description><![CDATA[ಬಾಲಿವುಡ್ ನಟಿ ಗಿರಿಜಾ ಓಕ್ ಅವರು ತಮ್ಮ ಮೊದಲ ಬೆಂಗಳೂರು ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ರೈಲಿನಿಂದ ಇಳಿಯುತ್ತಿದ್ದಂತೆ ನಗರದ ತಂಪಾದ ಹವಾಮಾನವು ಎಸಿ ಆನ್ ಮಾಡಿದಂತೆ ಭಾಸವಾಯಿತು ಎಂದ ಅವರು, ನಗರದ ಮಧ್ಯದಲ್ಲಿರುವ ಉದ್ಯಾನವನಗಳ ಸೌಂದರ್ಯ ಮತ್ತು ಅಲ್ಲಿನ ಪ್ರಶಾಂತ ವಾತಾವರಣವನ್ನು ಕೊಂಡಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k9y2e9hmp1m29p52j42sc9c5,imgname-giri--1--1763019531828.png" type="image/jpeg" height="390" width="690"/>
            <content:encoded><![CDATA[ಬಾಲಿವುಡ್ ನಟಿ ಗಿರಿಜಾ ಓಕ್ ಅವರು ತಮ್ಮ ಮೊದಲ ಬೆಂಗಳೂರು ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ರೈಲಿನಿಂದ ಇಳಿಯುತ್ತಿದ್ದಂತೆ ನಗರದ ತಂಪಾದ ಹವಾಮಾನವು ಎಸಿ ಆನ್ ಮಾಡಿದಂತೆ ಭಾಸವಾಯಿತು ಎಂದ ಅವರು, ನಗರದ ಮಧ್ಯದಲ್ಲಿರುವ ಉದ್ಯಾನವನಗಳ ಸೌಂದರ್ಯ ಮತ್ತು ಅಲ್ಲಿನ ಪ್ರಶಾಂತ ವಾತಾವರಣವನ್ನು ಕೊಂಡಾಡಿದ್ದಾರೆ.&lt;img&gt;&lt;p&gt;ಪಾಡ್&zwnj;ಕಾಸ್ಟ್&zwnj; ಒಂದರಲ್ಲಿ ಮಾತನಾಡಿರುವ ಬಾಲಿವುಡ್&zwnj; ನಟಿ ಹಾಗೂ ರಂಗಭೂಮಿ ಕಲಾವಿದೆ ಗಿರಿಜಾ ಓಕ್ ಅವರು, ತಾವು ಜೀವನದಲ್ಲಿ ಮೊದಲ ಬಾರಿಗೆ ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. &quot;ನಾವು ರೈಲಿನಿಂದ ಪ್ಲಾಟ್&zwnj;ಫಾರ್ಮ್&zwnj;ಗೆ ಇಳಿದು, ಬೆಂಗಳೂರಿನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ನನಗೆ ಯಾರೋ ದಿಢೀರನೆ ಎಸಿ (AC) ಆನ್ ಮಾಡಿದ ಹಾಗೆ ಅನಿಸಿತು!&quot; ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಬಳಿಕ ಬೆಂಗಳೂರಿನ ಹವಾಮಾನದ ಬಗ್ಗೆ ಮಾತನಾಡಿದ ಆಕೆ, ಇಲ್ಲಿನ ತಂಪಾದ ಗಾಳಿ ಕೇವಲ ಸಾಧಾರಣ ಗಾಳಿಯಾಗಿರಲಿಲ್ಲ, ಅದು ನೈಸರ್ಗಿಕವಾಗಿ ಮೂಡಿಬಂದಿದ್ದ ಅದ್ಭುತ ಅನುಭವವಾಗಿತ್ತು. ಯಾರಾದರೂ ಒಂದು ಕೊಠಡಿಯನ್ನು ಪ್ರೀತಿಯಿಂದ, ಅಲ್ಲಿರುವವರ ಕಂಫರ್ಟ್&zwnj;ಗೆ (ಆರಾಮಕ್ಕೆ) ತಕ್ಕಂತೆ ತಾಪಮಾನವನ್ನು ನಿಯಂತ್ರಿಸಿ (Temperature Control) ಸಿದ್ಧಪಡಿಸಿದರೆ ಹೇಗೆ ಕಾಣುತ್ತದೆಯೋ, ಬೆಂಗಳೂರಿನ ಹವಾಮಾನ ಕೂಡ ಇಡೀ ದಿನ ಹಾಗೆಯೇ ಇತ್ತು ಎಂದು ಅವರು ಬಣ್ಣಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿ ಕಳೆಯುವ ದಿನಗಳ ಕಲ್ಪನೆಯೇ ಅದ್ಭುತವಾಗಿದೆ. ಕೈಯಲ್ಲೊಂದು ಪ್ರೀತಿಯ ಪುಸ್ತಕ ಹಿಡಿದು, ಸಣ್ಣದೊಂದು ಸ್ಯಾಂಡ್&zwnj;ವಿಚ್ ಪ್ಯಾಕ್ ಮಾಡಿಕೊಂಡು, ಕೆಟಲ್&zwnj;ನಲ್ಲಿ ಬಿಸಿ ಬಿಸಿ ಚಹಾ ತುಂಬಿಕೊಂಡು ಇಲ್ಲಿನ ಸುಂದರ ಉದ್ಯಾನವನಗಳಿಗೆ (Gardens) ಆರಾಮವಾಗಿ ಹೋಗಬಹುದು ಎಂಬ ಯೋಚನೆಯೇ ಅತ್ಯಂತ ರೋಮಾಂಚನಕಾರಿಯಾಗಿದೆ ಎಂದು ಬೆಂಗಳೂರನ್ನು ಕೊಂಡಾಡಿದ್ದಾರೆ.&lt;/p&gt;&lt;img&gt;&lt;p&gt;ಯಾವುದೋ ದೂರದ ಹಳ್ಳಿಗೋ ಅಥವಾ ಗಿರಿಧಾಮಕ್ಕೋ ಹೋಗಬೇಕಾಗಿಲ್ಲ; ಇಡೀ ದಿನ ಉದ್ಯಾನವನದ ಹಸಿರು ಹುಲ್ಲಿನ ಮೇಲೆ ಮಲಗಿ ನಿರಾಳವಾಗಿ ಪುಸ್ತಕ ಓದುತ್ತಾ, ತಂದಿಟ್ಟ ಆಹಾರ ಸವಿಯುತ್ತಾ ಕಾಲ ಕಳೆಯುವ ಇಂತಹ ಅಪರೂಪದ ಅವಕಾಶ ಈ ಮಹಾನಗರದ ಹೃದಯಭಾಗದಲ್ಲೇ (ನಗರದ ಮಧ್ಯದಲ್ಲೇ) ಸಿಗುತ್ತದೆ ಎನ್ನುವುದೇ ಬೆಂಗಳೂರಿನ ವಿಶೇಷತೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ನಗರದ ಮಧ್ಯಭಾಗದಲ್ಲೇ ಪ್ರಕೃತಿಯನ್ನು ಇಷ್ಟೊಂದು ಹತ್ತಿರದಿಂದ ಅನುಭವಿಸಲು ಮತ್ತು ಆಸ್ವಾದಿಸಲು ಅವಕಾಶ ಮಾಡಿಕೊಡುವ ಬೆಂಗಳೂರು ನಿಜಕ್ಕೂ ಎಷ್ಟು ಅದ್ಭುತವಾದ ನಗರ ಅಲ್ವಾ? ಅದಕ್ಕಾಗಿಯೇ &quot;ಐ ಜಸ್ಟ್ ಲವ್ ದ್ಯಾಟ್ ಸಿಟಿ&quot; (ನನಗೆ ಆ ನಗರ ಎಂದರೆ ತುಂಬಾ ಇಷ್ಟ) ಎಂದು ನಟಿ ಗಿರಿಜಾ ಓಕ್ ಬೆಂಗಳೂರಿನ ಮೇಲಿರುವ ತಮ್ಮ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/actress-girija-oak-viral-comments-bengaluru-weather-nature-experience-san-sqkqeu9"/>
        </item>
        <item>
            <title><![CDATA[ಕಾವೇರಿಗೆ ಕ್ಯಾತೆ ತೆಗೆದ ಸ್ಟಾಲಿನ್; ನಮಗೆ ಕುಡಿಯಲು ನೀರಿಲ್ಲ, ನೀವು ನೀರು ಪೋಲು ಮಾಡದೇ ಸಂರಕ್ಷಿಸಿ-ರಾಮಲಿಂಗಾರೆಡ್ಡಿ]]></title>
            <link>https://kannada.asianetnews.com/state/karnataka-ramalinga-reddy-tells-to-tamil-nadu-conserve-cauvery-water-react-to-udhayanidhi-stalin/articleshow-zpvu8qn</link>
            <guid isPermaLink="true">https://kannada.asianetnews.com/state/karnataka-ramalinga-reddy-tells-to-tamil-nadu-conserve-cauvery-water-react-to-udhayanidhi-stalin/articleshow-zpvu8qn</guid>
            <pubDate>Thu, 09 Jul 2026 21:07:57 +0530</pubDate>
            <description><![CDATA[ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ವಿವಾದ ಭುಗಿಲೆದ್ದಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆಯಾಗಿದ್ದು, ಮಳೆಯ ಅಭಾವದಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನವೇ ಅಂತಿಮ ಎಂದು ಅವರು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx3qyn5b7r9650f811wb2syh,imgname-ramalinga-reddy-udhayanidhi-stalin-cauvery-water-1783610954923.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.09): ಕಾ&lt;/strong&gt;ವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ವಾಕ್ಸಮರ ಆರಂಭವಾಗಿದೆ. ತಮಿಳುನಾಡು ನೀರಿಗಾಗಿ ಆಗ್ರಹಿಸುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕರ್ನಾಟಕದ ಸಚಿವ ರಾಮಲಿಂಗಾರೆಡ್ಡಿ, 'ರಾಜ್ಯದ ಜಲಾಶಯಗಳಲ್ಲಿ ಸದ್ಯಕ್ಕೆ ನೀರಿನ ಸಂಗ್ರಹ ಕಡಿಮೆ ಇದೆ. ಹೀಗಾಗಿ ತಮಿಳುನಾಡು ಲಭ್ಯವಿರುವ ನೀರನ್ನು ಸಂರಕ್ಷಿಸಿಕೊಳ್ಳುವತ್ತ ಗಮನ ಹರಿಸಬೇಕು' ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಇತ್ತೀಚೆಗೆ ನಡೆಸಿದ ಸಭೆಯಲ್ಲಿ, ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ತಮ್ಮ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಸಾಧ್ಯವಾದಷ್ಟು ಮಿತವಾಗಿ ಬಳಸಬೇಕು ಮತ್ತು ಕುಡಿಯುವ ನೀರು ಹಾಗೂ ಪರಿಸರ ಹರಿವಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿವೆ.&lt;/p&gt;&lt;h2&gt;&lt;strong&gt;ಜಲಾಶಯಗಳಲ್ಲಿನ ನೀರಿನ ಕೊರತೆ:&lt;/strong&gt;&lt;/h2&gt;&lt;p&gt;ಜೂನ್ 30ರ ಅಂಕಿಅಂಶಗಳ ಪ್ರಕಾರ, ಕರ್ನಾಟಕದ ಕಾವೇರಿ ಪಾತ್ರದ ನಾಲ್ಕು ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ (KRS), ಕಬಿನಿ, ಹಾರಂಗಿ ಮತ್ತು ಹೇಮಾವತಿಯಲ್ಲಿ ಒಟ್ಟು ಜೀವಂತ ನೀರಿನ ಸಂಗ್ರಹ ಕೇವಲ 15.761 ಟಿಎಂಸಿ ಅಡಿ ಮಾತ್ರ ಇದೆ. ಈ ಪ್ರಮಾಣದ ನೀರು ಮುಂದಿನ ಮೂರು ತಿಂಗಳ ಕಾಲ ಬೆಂಗಳೂರು ಮಹಾನಗರ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಇತರ ಪಟ್ಟಣಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಸಾಲದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ತಮಿಳುನಾಡು ನಾಯಕ ಉದಯನಿಧಿ ಸ್ಟಾಲಿನ್ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, 'ಕರ್ನಾಟಕವು ಉದ್ದೇಶಪೂರ್ವಕವಾಗಿ ನೀರು ನಿಲ್ಲಿಸುತ್ತಿಲ್ಲ. ಮಳೆಯ ಅಭಾವದಿಂದ ಜಲಾಶಯಗಳಿಗೆ ಒಳಹರಿವು ಇಲ್ಲದಿರುವುದು ನಮ್ಮ ಅಸಹಾಯಕತೆಗೆ ಕಾರಣವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಕೂಡ ಈ ಬಾರಿ ಮುಂಗಾರು ವಿಳಂಬ ಮತ್ತು ಮಳೆಯ ಕೊರತೆಯ ಬಗ್ಗೆ ವರದಿ ನೀಡಿದೆ. ಕಾವೇರಿ ಕಣಿವೆ ಸದ್ಯಕ್ಕೆ ನೀರಿನ ಕೊರತೆಯನ್ನು ಎದುರಿಸುತ್ತಿದೆ' ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಪ್ರಾಧಿಕಾರದ ತೀರ್ಮಾನವೇ ಅಂತಿಮ:&lt;/strong&gt;&lt;/h2&gt;&lt;p&gt;ಕೆಆರ್ಎಸ್ ಜಲಾಶಯದಿಂದ ನೀರು ಬಿಡುವ ಅಧಿಕಾರ ಕರ್ನಾಟಕ ಸರ್ಕಾರದ ಕೈಲಿಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸಿನ ಮೇರೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಕರ್ನಾಟಕದ ಪಾತ್ರ ಸೀಮಿತವಾಗಿದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.&lt;/p&gt;&lt;p&gt;ಆದಾಗ್ಯೂ, ಮುಂದಿನ ದಿನಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಳ್ಳುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಜಲಾಶಯಗಳು ಭರ್ತಿಯಾಗಲಿವೆ ಮತ್ತು ನೀರಿನ ಬಿಕ್ಕಟ್ಟು ಬಗೆಹರಿಯಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-ramalinga-reddy-tells-to-tamil-nadu-conserve-cauvery-water-react-to-udhayanidhi-stalin/articleshow-zpvu8qn"/>
        </item>
        <item>
            <title><![CDATA[ಜೀವನದ ಕೊನೆಯ ಸೆಲ್ಫಿ: ಅರಬೈಲ್ ಘಾಟ್‌ನಲ್ಲಿ ಅಂತ್ಯವಾದ ಸ್ನೇಹಯಾತ್ರೆ, ಮೃತರ ಫೋಟೋ ರಿಲೀಸ್ ಮಾಡಿದ ಜಿಲ್ಲಾಡಳಿತ!]]></title>
            <link>https://kannada.asianetnews.com/gallery/karnataka-districts/yallapur-arbail-ghat-accident-cruiser-lorry-collision-7-food-delivery-boys-dead-dharwad-nt2kgih</link>
            <guid isPermaLink="true">https://kannada.asianetnews.com/gallery/karnataka-districts/yallapur-arbail-ghat-accident-cruiser-lorry-collision-7-food-delivery-boys-dead-dharwad-nt2kgih</guid>
            <pubDate>Thu, 09 Jul 2026 19:38:48 +0530</pubDate>
            <description><![CDATA[&lt;p&gt;ಉತ್ತರ ಕನ್ನಡದ ಅರಬೈಲ್ ಘಾಟ್&zwnj;ನಲ್ಲಿ ಲಾರಿ ಮತ್ತು ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಧಾರವಾಡ ಮೂಲದ ಏಳು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಕರ್ಣ ಪ್ರವಾಸಕ್ಕೆ ಹೊರಟಿದ್ದ ಡೆಲಿವರಿ ಬಾಯ್ಸ್ ತಂಡದ ವಾಹನವು ಅಪಘಾತವಾಗಿದ್ದು, ಮೃತರ ಫೋಟೋಗಳನ್ನು ಜಿಲ್ಲಾಡಳಿತ ಹಂಚಿಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3jk5zf2ffxtv0t141ek2zf,imgname-uttara-kannada-arabail-ghat-accident--2--1783605336047.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡದ ಅರಬೈಲ್ ಘಾಟ್&zwnj;ನಲ್ಲಿ ಲಾರಿ ಮತ್ತು ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಧಾರವಾಡ ಮೂಲದ ಏಳು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಕರ್ಣ ಪ್ರವಾಸಕ್ಕೆ ಹೊರಟಿದ್ದ ಡೆಲಿವರಿ ಬಾಯ್ಸ್ ತಂಡದ ವಾಹನವು ಅಪಘಾತವಾಗಿದ್ದು, ಮೃತರ ಫೋಟೋಗಳನ್ನು ಜಿಲ್ಲಾಡಳಿತ ಹಂಚಿಕೊಂಡಿದೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಕನ್ನಡ (ಜು.09): &lt;/strong&gt;ಬೆಳ್ಳಂಬೆಳಗ್ಗೆ ಅರಬೈಲ್ ಘಟ್ಟ ಪ್ರದೇಶದಲ್ಲಿ ಜವರಾಯನ ಅಟ್ಟಹಾಸ ನಡೆದಿದೆ. ಪ್ರವಾಸಕ್ಕೆಂದು ಖುಷಿಯಿಂದ ಹೊರಟಿದ್ದ ಸ್ನೇಹಿತರ ತಂಡವೊಂದು ಮನೆಗೆ ಶವವಾಗಿ ಮರಳುವಂತಾದ ಎದೆನಡುಗಿಸುವ ಘಟನೆ ಸಂಭವಿಸಿದೆ. ಲಾರಿ ಮತ್ತು ತೂಫಾನ್ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಧಾರವಾಡ ಮೂಲದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಫೋಟೋಗಳನ್ನು ಜಿಲ್ಲಾಡಳಿತವು ಬಿಡುಗಡೆ ಮಾಡಿದೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಗೋಕರ್ಣ, ಮುರುಡೇಶ್ವರ ಮತ್ತು ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ಒಟ್ಟು ಒಂಬತ್ತು ಜನ ಸ್ನೇಹಿತರು ಕ್ರೂಸರ್ ವಾಹನದಲ್ಲಿ ಹೊರಟಿದ್ದರು. ಇಂದು ಮುಂಜಾನೆ ಸುಮಾರು ಧಾರವಾಡದಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದಾಗ, ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್&zwnj;ನಲ್ಲಿ ಮಂಗಳೂರಿನಿಂದ ಕುಡತನಿ ಕಡೆಗೆ ಬರುತ್ತಿದ್ದ ಲಾರಿಗೆ ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, 7 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ದೇವಸ್ಥಾನದಲ್ಲಿ ತೆಗೆಸಿಕೊಂಡಿದ್ದ ಸೆಲ್ಫಿಯೇ ಕೊನೆಯಾಯ್ತು!&lt;/strong&gt;&lt;/p&gt;&lt;p&gt;ಮೃತಪಟ್ಟವರೆಲ್ಲರೂ ಧಾರವಾಡದ ವಿವಿಧ ಕಂಪನಿಗಳಲ್ಲಿ 'ಡೆಲಿವರಿ ಬಾಯ್ಸ್' ಆಗಿ ಕೆಲಸ ಮಾಡುತ್ತಿದ್ದ ಸ್ನೇಹಿತರು. ಕೆಲಸದ ಒತ್ತಡದಿಂದ ಸ್ವಲ್ಪ ವಿರಾಮ ಪಡೆಯಲು ಗೋಕರ್ಣ, ಧರ್ಮಸ್ಥಳ ಪ್ರವಾಸಕ್ಕೆ ಯೋಜಿಸಿದ್ದರು. ಪ್ರವಾಸಕ್ಕೆ ಹೊರಡುವ ಮುನ್ನ ಧಾರವಾಡದ ಕೆಸಿಡಿ ಸರ್ಕಲ್ ಬಳಿಯ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ದರ್ಶನ ಪಡೆದ ಬಳಿಕ ಎಲ್ಲರೂ ಸೇರಿ ಒಂದು ಗ್ರೂಪ್ ಸೆಲ್ಫಿ ತೆಗೆದುಕೊಂಡಿದ್ದರು. ದುರದೃಷ್ಟವಶಾತ್, ಆ ಫೋಟೋ ಅವರ ಜೀವನದ ಕೊನೆಯ ಸೆಲ್ಫಿಯಾಗಿದೆ. ದೇವರ ಆಶೀರ್ವಾದ ಪಡೆದು ಹೊರಟವರು ಅರ್ಧ ಹಾದಿಯಲ್ಲೇ ಸಾವಿನ ದವಡೆಗೆ ಸಿಲುಕಿರುವುದು ಸಂಕಟ ಮೂಡಿಸಿದೆ.&lt;/p&gt;&lt;img&gt;&lt;p&gt;&lt;strong&gt;ಮೃತರ ವಿವರ:&lt;/strong&gt;&lt;/p&gt;&lt;ul&gt; &lt;li&gt;ಸಂಜಯ್ ಅಂಗಡಿ (33) - ಚಾಲಕ&lt;/li&gt; &lt;li&gt;ಅಭಿಷೇಕ ಈಶ್ವರ (28)&lt;/li&gt; &lt;li&gt;ಅಭಿಷೇಕ ಮಡಬಾವಿ (26)&lt;/li&gt; &lt;li&gt;ಬಸವರಾಜ (48)&lt;/li&gt; &lt;li&gt;ಅಕ್ಷಯ್ (26)&lt;/li&gt; &lt;li&gt;ಮಂಜುನಾಥ ಚುಲಕಿ (32)&lt;/li&gt; &lt;li&gt;ಸಚಿನ್ (28)&lt;/li&gt;&lt;/ul&gt;&lt;p&gt;ಗಾಯಾಳುಗಳಾದ ಶಿವರಾಜ್ ಮಡಿವಾಳ್ ಮತ್ತು ಚೆನ್ನಬಸಯ್ಯ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬದುಕುಳಿದ ಶಿವರಾಜ್ ಹೇಳಿಕೆ:&lt;/strong&gt;&lt;/p&gt;&lt;p&gt;ಅಪಘಾತದಲ್ಲಿ ಬದುಕುಳಿದ ಶಿವರಾಜ್ ಮಾತನಾಡಿ, 'ನಾವು ರಾತ್ರಿ 11 ಗಂಟೆಗೆ ಧಾರವಾಡದಿಂದ ಹೊರಟಿದ್ದೆವು. ನಾವೆಲ್ಲರೂ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದೆವು. ಘಟನೆಯ ಸಮಯದಲ್ಲಿ ನಾನು ಮಲಗಿದ್ದೆ, ಒಮ್ಮೆಲೇ ಜೋರಾಗಿ ಶಬ್ದವಾಯಿತು. ಕಣ್ಣು ಬಿಟ್ಟು ನೋಡಿದಾಗ ಅಪಘಾತವಾಗಿತ್ತು. ನಾನು ಮತ್ತು ಚನ್ನಬಸು ಮಾತ್ರ ಬದುಕಿದ್ದೇವೆ, ಉಳಿದವರೆಲ್ಲಾ ನಮ್ಮ ಕಣ್ಣ ಮುಂದೆಯೇ ಪ್ರಾಣ ಬಿಟ್ಟರು' ಎಂದು ಕಣ್ಣೀರಿಟ್ಟಿದ್ದಾರೆ.&amp;nbsp;&lt;/p&gt;&lt;p&gt;ಇನ್ನು ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳನ್ನು ವಿಚಾರಿಸಿದ್ದಾರೆ. ಜೊತೆಗೆ, ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಲಾರಿ ಚಾಲಕನ ಪ್ರತಿಕ್ರಿಯೆ:&lt;/strong&gt;&lt;/p&gt;&lt;p&gt;ಲಾರಿ ಚಾಲಕ ಸಮ್ಸೀರ್ ಪ್ರಕಾರ, ಅರಬೈಲ್ ಘಾಟ್ ಹತ್ತುವಾಗ ಎದುರುಗಡೆಯಿಂದ ಬಂದ ಕ್ರೂಸರ್ ವಾಹನ ಅತ್ಯಂತ ವೇಗವಾಗಿತ್ತು. ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದರೂ ಸಹ ವೇಗವಾಗಿ ಬಂದ ಕ್ರೂಸರ್ ನೇರವಾಗಿ ಲಾರಿಗೆ ಗುದ್ದಿದೆ ಎಂದು ತಿಳಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಕೆಲವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟರು.&lt;/p&gt;&lt;img&gt;&lt;p&gt;&lt;strong&gt;ಸ್ಥಳಕ್ಕೆ ಅಧಿಕಾರಿಗಳ ಭೇಟಿ:&lt;/strong&gt;&lt;/p&gt;&lt;p&gt;ಘಟನೆ ನಡೆದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಎಸ್ಪಿ ದೀಪನ್ ಮತ್ತು ಸಿಇಒ ದಿಲೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ಶಿವರಾಮ್ ಹೆಬ್ಬಾರ್ ಅವರು ಯಲ್ಲಾಪುರ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಶೀಘ್ರವಾಗಿ ಮುಗಿಸಿ ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/yallapur-arbail-ghat-accident-cruiser-lorry-collision-7-food-delivery-boys-dead-dharwad-nt2kgih"/>
        </item>
        <item>
            <title><![CDATA[ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಮಾಜಿ ಪ್ರಿಯತಮನಿಂದ ಚಾಕು ಇರಿತ: ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ]]></title>
            <link>https://kannada.asianetnews.com/crime/bengaluru-woman-stabbed-by-ex-lover-at-ramagondanahalli-gvd/articleshow-hoiydyr</link>
            <guid isPermaLink="true">https://kannada.asianetnews.com/crime/bengaluru-woman-stabbed-by-ex-lover-at-ramagondanahalli-gvd/articleshow-hoiydyr</guid>
            <pubDate>Thu, 09 Jul 2026 19:01:54 +0530</pubDate>
            <description><![CDATA[&lt;p&gt;ಪ್ರೀತಿಯನ್ನು ನಿರಾಕರಿಸಿ, ಕುಟುಂಬದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದ ಯುವತಿಗೆ ಆಕೆಯ ಮಾಜಿ ಪ್ರಿಯತಮನೇ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3h0c2bgwwq4cv24vvzmjvg,imgname-ch-1783603671115.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.09): &lt;/strong&gt;ಪ್ರೀತಿಯನ್ನು ನಿರಾಕರಿಸಿ, ಕುಟುಂಬದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದ ಯುವತಿಗೆ ಆಕೆಯ ಮಾಜಿ ಪ್ರಿಯತಮನೇ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ. ಘಟನೆ ಬಳಿಕ ಆರೋಪಿ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮ*ಹ*ತ್ಯೆಗೆ ಯತ್ನಿಸಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;p&gt;&lt;strong&gt;ಮೂರು ವರ್ಷಗಳಿಂದ ಪರಿಚಯ&lt;/strong&gt;&lt;/p&gt;&lt;p&gt;ಗಾಯಗೊಂಡ ಯುವತಿಯನ್ನು ಪಶ್ಚಿಮ ಬಂಗಾಳ ಮೂಲದ ನಂದಿನಿ ದಾಸ್ (18) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಕೋಲಾರ ಮೂಲದ ಬಂಡೆ ನವಾಜ್ (18) ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರಿಗೂ ಕಳೆದ ಮೂರು ವರ್ಷಗಳಿಂದ ಪರಿಚಯವಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಸಂಬಂಧಕ್ಕೆ ಯುವತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದು, ಆಕೆಗೆ ಬೇರೆ ವರನೊಂದಿಗೆ ಮದುವೆ ಮಾಡುವ ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಚಾಕುವಿನಿಂದ ಹಲ್ಲೆ&lt;/strong&gt;&lt;/p&gt;&lt;p&gt;ಈ ವಿಚಾರ ತಿಳಿದ ಬಳಿಕ ಆರೋಪಿ ಬಂಡೆ ನವಾಜ್, ಯುವತಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಾಕು ಹಿಡಿದು ಮನೆಗೆ ಬಂದಿದ್ದಾನೆ. ಈ ವೇಳೆ ಬೇರೆಯವರನ್ನು ಮದುವೆಯಾಗಬಾರದು ಎಂದು ಯುವತಿಯೊಂದಿಗೆ ವಾಗ್ವಾದ ನಡೆಸಿದ್ದಾನೆ. ಇದಕ್ಕೆ ಯುವತಿ, &quot;ಮನೆಯವರ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ&quot; ಎಂದು ಹೇಳಿದ ಬಳಿಕ ಆಕ್ರೋಶಗೊಂಡ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯಲ್ಲಿ ಯುವತಿಯ ಕುತ್ತಿಗೆ, ಕೈ ಹಾಗೂ ತೊಡೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಬಳಿಕ ಆರೋಪಿ ಕೂಡ ಅದೇ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡು ಆತ್ಮ*ಹ*ತ್ಯೆಗೆ ಯತ್ನಿಸಿದ್ದಾನೆ. ಯುವತಿಯ ಕಿರುಚಾಟ ಕೇಳಿ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ವರ್ತೂರು ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ವೈದ್ಯಕೀಯ ನಿಗಾದಲ್ಲಿದ್ದಾರೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/bengaluru-woman-stabbed-by-ex-lover-at-ramagondanahalli-gvd/articleshow-hoiydyr"/>
        </item>
        <item>
            <title><![CDATA[ಕರ್ನಾಟಕದ ಜಲಾಶಯಗಳಿಗೆ ಹರಿದುಬಂದ ಜಲರಾಶಿ: ಒಂದೇ ದಿನದಲ್ಲಿ ಆಲಮಟ್ಟಿಗೆ 11 ಟಿಎಂಸಿ ನೀರು]]></title>
            <link>https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx</link>
            <guid isPermaLink="true">https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx</guid>
            <pubDate>Thu, 09 Jul 2026 18:00:43 +0530</pubDate>
            <description><![CDATA[&lt;p&gt;ಮಹಾರಾಷ್ಟ್ರ ಮತ್ತು ಕರ್ನಾಟಕದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ರಾಜ್ಯದ ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳಲ್ಲಿ 20 ಟಿಎಂಸಿ ನೀರು ಹರಿದುಬಂದಿದೆ. ಕೃಷ್ಣಾ ಕೊಳ್ಳದ ಆಲಮಟ್ಟಿ, ಘಟಪ್ರಭಾ ಜಲಾಶಯಗಳು ಗಣನೀಯ ಪ್ರಮಾಣದ ನೀರನ್ನು ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3d6vm0cz6ss4d6kpwsxq8q,imgname-almatti-reservoir-storage-1783599689344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಜು.9): &lt;/strong&gt;ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಹಾಗೂ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮುಂಗಾರಿನ ಭಾರಿ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ. ಕುಡಿಯುವ ನೀರು ಮತ್ತು ಕೃಷಿ ಉದ್ದೇಶಗಳಿಗಾಗಿ ಬಳಸಲಾಗುವ ಕರ್ನಾಟಕದ 10 ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 20 ಟಿಎಂಸಿ (TMC) ನೀರು ಹರಿದುಬಂದಿದೆ. ಇದರಲ್ಲಿ ಕೃಷ್ಣಾ ಕೊಳ್ಳದ ಆರು ಜಲಾಶಯಗಳಿಗೇ ದಾಖಲೆಯ 17.4 ಟಿಎಂಸಿ ನೀರು ಸೇರ್ಪಡೆಯಾಗಿದೆ.&lt;/p&gt;&lt;p&gt;ಮಹಾರಾಷ್ಟ್ರ ಮತ್ತು ಕರ್ನಾಟಕದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಆಲಮಟ್ಟಿ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಮತ್ತು ಭದ್ರಾ ಜಲಾಶಯಗಳಿಗೆ ನಿರಂತರ ನೀರಿನ ಆಸರೆಯಾಗುತ್ತಿದೆ. ವಿಶೇಷವೆಂದರೆ, ಜುಲೈ ತಿಂಗಳ ಆರಂಭದಲ್ಲಿ ಭದ್ರಾ ಜಲಾಶಯವನ್ನು ಹೊರತುಪಡಿಸಿ ಈ ಕೊಳ್ಳದ ಉಳಿದೆಲ್ಲಾ ಅಣೆಕಟ್ಟುಗಳಲ್ಲಿ ಒಳಹರಿವಿನ ಪ್ರಮಾಣ ಸಂಪೂರ್ಣ ಶೂನ್ಯವಾಗಿತ್ತು.&lt;/p&gt;&lt;h2&gt;&lt;strong&gt;ಆಲಮಟ್ಟಿಗೆ ಒಂದೇ ದಿನದಲ್ಲಿ 11 ಟಿಎಂಸಿ ನೀರು&lt;/strong&gt;&lt;/h2&gt;&lt;p&gt;ಜುಲೈ 8 ರಂದು ಕೃಷ್ಣಾ ಕೊಳ್ಳದ ಪ್ರಮುಖ ಜಲಾಶಯವಾದ ಆಲಮಟ್ಟಿಗೆ ಕೇವಲ 24 ಗಂಟೆಗಳಲ್ಲಿ 1.26 ಲಕ್ಷ ಕ್ಯೂಸೆಕ್ (ಅಂದರೆ ಸುಮಾರು 10.92 ಟಿಎಂಸಿ) ನಷ್ಟು ಭಾರಿ ಒಳಹರಿವು ದಾಖಲಾಗಿದೆ. ಜುಲೈ 7 ರಂದು ಆಲಮಟ್ಟಿ ಜಲಾಶಯದಲ್ಲಿ 22.46 ಟಿಎಂಸಿ ನೀರು ಸಂಗ್ರಹವಿತ್ತು ಮತ್ತು ಕೇವಲ 21,625 ಕ್ಯೂಸೆಕ್ ಒಳಹರಿವು ಇತ್ತು. ಆದರೆ, ಬುಧವಾರದ ವೇಳೆಗೆ ಜಲಾಶಯದ ಪ್ರಸ್ತುತ ನೀರಿನ ಸಂಗ್ರಹ 33.34 ಟಿಎಂಸಿಗೆ ಏರಿಕೆಯಾಗಿದ್ದು, ಒಳಹರಿವು ಕೂಡ 1,26,373 ಕ್ಯೂಸೆಕ್&zwnj;ಗೆ ತಲುಪಿದೆ.&lt;/p&gt;&lt;h2&gt;&lt;strong&gt;ಘಟಪ್ರಭಾ ಮತ್ತು ತುಂಗಭದ್ರಾ ಜಲಾಶಯಗಳ ಸ್ಥಿತಿ&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅತಿ ಹೆಚ್ಚು ಪ್ರಯೋಜನ ಪಡೆದ ಮತ್ತೊಂದು ಜಲಾಶಯವೆಂದರೆ ಘಟಪ್ರಭಾ. ಕೇವಲ 24 ಗಂಟೆಗಳ ಅವಧಿಯಲ್ಲಿ ಈ ಅಣೆಕಟ್ಟಿನ ನೀರಿನ ಮಟ್ಟ ಸುಮಾರು 4 ಟಿಎಂಸಿಯಷ್ಟು ಹೆಚ್ಚಾಗಿದೆ. ಇತ್ತ ತುಂಗಭದ್ರಾ ಜಲಾಶಯಕ್ಕೂ 24 ಗಂಟೆಗಳಲ್ಲಿ 17,507 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 2 ಟಿಎಂಸಿಯಷ್ಟು ನೀರು ಸಂಗ್ರಹಕ್ಕೆ ಸೇರ್ಪಡೆಯಾಗಿದೆ.&lt;/p&gt;&lt;h2&gt;&lt;strong&gt;ಮಲಪ್ರಭಾಗೆ ಮೂರು ಪಟ್ಟು ಹೆಚ್ಚಿದ ಒಳಹರಿವು&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಲಪ್ರಭಾ ಅಣೆಕಟ್ಟಿನ ಒಳಹರಿವು ಹಿಂದಿನ ದಿನಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಜಲಾಶಯಕ್ಕೆ 13,700 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇನ್ನು ಆಲಮಟ್ಟಿ ಜಲಾಶಯದ ಸಮತೋಲನ ಅಣೆಕಟ್ಟಾಗಿರುವ ನಾರಾಯಣಪುರ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಶೂನ್ಯವಾಗಿಯೇ ಮುಂದುವರಿದಿದೆ. ಪ್ರಸ್ತುತ ಈ ಅಣೆಕಟ್ಟು ತನ್ನ ಒಟ್ಟು 33 ಟಿಎಂಸಿ ಸಾಮರ್ಥ್ಯದ ಎದುರು 19.89 ಟಿಎಂಸಿ ನೀರನ್ನು ಹೊಂದಿದೆ.&lt;/p&gt;&lt;table&gt; &lt;tbody&gt;  &lt;tr&gt;   &lt;td&gt;ಜಲಾಶಯ&lt;/td&gt;   &lt;td&gt;ಒಟ್ಟು ಸಾಮರ್ಥ್ಯ&lt;/td&gt;   &lt;td&gt;ಪ್ರಸ್ತುತ ಸಂಗ್ರಹಣೆ (In tmcft)&lt;/td&gt;   &lt;td&gt;ಒಳಹರಿವು (cusec)&lt;/td&gt;   &lt;td&gt;ಹೊರಹರಿವು (cusec)&lt;/td&gt;  &lt;/tr&gt;  &lt;tr&gt;   &lt;td&gt;&lt;strong&gt;ಕೃಷ್ಣಾ ಕೊಳ್ಳ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;ಆಲಮಟ್ಟಿ&lt;/td&gt;   &lt;td&gt;123.08&lt;/td&gt;   &lt;td&gt;33.34&lt;/td&gt;   &lt;td&gt;1,26,625&lt;/td&gt;   &lt;td&gt;100&lt;/td&gt;  &lt;/tr&gt;  &lt;tr&gt;   &lt;td&gt;ತುಂಗಭದ್ರಾ&lt;/td&gt;   &lt;td&gt;105.79&lt;/td&gt;   &lt;td&gt;11.22&lt;/td&gt;   &lt;td&gt;17,507&lt;/td&gt;   &lt;td&gt;170&lt;/td&gt;  &lt;/tr&gt;  &lt;tr&gt;   &lt;td&gt;ಭದ್ರಾ&lt;/td&gt;   &lt;td&gt;71.54&lt;/td&gt;   &lt;td&gt;28.75&lt;/td&gt;   &lt;td&gt;17,818&lt;/td&gt;   &lt;td&gt;214&lt;/td&gt;  &lt;/tr&gt;  &lt;tr&gt;   &lt;td&gt;ಹಿಡಕಲ್&lt;/td&gt;   &lt;td&gt;51&lt;/td&gt;   &lt;td&gt;13.18&lt;/td&gt;   &lt;td&gt;26,393&lt;/td&gt;   &lt;td&gt;110&lt;/td&gt;  &lt;/tr&gt;  &lt;tr&gt;   &lt;td&gt;ಮಲಪ್ರಭಾ&lt;/td&gt;   &lt;td&gt;37.73&lt;/td&gt;   &lt;td&gt;10.38&lt;/td&gt;   &lt;td&gt;13,700&lt;/td&gt;   &lt;td&gt;194&lt;/td&gt;  &lt;/tr&gt;  &lt;tr&gt;   &lt;td&gt;ನಾರಾಯಣಪುರ&lt;/td&gt;   &lt;td&gt;33.31&lt;/td&gt;   &lt;td&gt;19.82&lt;/td&gt;   &lt;td&gt;0&lt;/td&gt;   &lt;td&gt;767&lt;/td&gt;  &lt;/tr&gt;  &lt;tr&gt;   &lt;td&gt;&lt;strong&gt;ಕಾವೇರಿ ಕೊಳ್ಳ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;ಹಾರಂಗಿ&lt;/td&gt;   &lt;td&gt;8.5&lt;/td&gt;   &lt;td&gt;4.03&lt;/td&gt;   &lt;td&gt;2,090&lt;/td&gt;   &lt;td&gt;180&lt;/td&gt;  &lt;/tr&gt;  &lt;tr&gt;   &lt;td&gt;ಹೇಮಾವತಿ&lt;/td&gt;   &lt;td&gt;37.10&lt;/td&gt;   &lt;td&gt;18.78&lt;/td&gt;   &lt;td&gt;16,593&lt;/td&gt;   &lt;td&gt;300&lt;/td&gt;  &lt;/tr&gt;  &lt;tr&gt;   &lt;td&gt;ಕೆಆರ್&zwnj; ಸಾಗರ&lt;/td&gt;   &lt;td&gt;49.45&lt;/td&gt;   &lt;td&gt;12.49&lt;/td&gt;   &lt;td&gt;7,531&lt;/td&gt;   &lt;td&gt;790&lt;/td&gt;  &lt;/tr&gt;  &lt;tr&gt;   &lt;td&gt;ಕಬಿನಿ&lt;/td&gt;   &lt;td&gt;19.52&lt;/td&gt;   &lt;td&gt;7.96&lt;/td&gt;   &lt;td&gt;10,757&lt;/td&gt;   &lt;td&gt;500&lt;/td&gt;  &lt;/tr&gt;  &lt;tr&gt;   &lt;td&gt;ವಾಣಿವಿಲಾಸ ಸಾಗರ&lt;/td&gt;   &lt;td&gt;30.42&lt;/td&gt;   &lt;td&gt;23.76&lt;/td&gt;   &lt;td&gt;0&lt;/td&gt;   &lt;td&gt;0&lt;/td&gt;  &lt;/tr&gt; &lt;/tbody&gt;&lt;/table&gt;&lt;h2&gt;&lt;strong&gt;ಕಾವೇರಿ ಕೊಳ್ಳದ ಜಲಾಶಯಗಳಲ್ಲೂ ಸ್ಥಿರ ಪ್ರಗತಿ&lt;/strong&gt;&lt;/h2&gt;&lt;p&gt;ಮತ್ತೊಂದೆಡೆ ಕಾವೇರಿ ಕೊಳ್ಳದ ನಾಲ್ಕು ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ನಿಧಾನ ಹಾಗೂ ಸ್ಥಿರವಾಗಿ ಮುಂದುವರಿದಿದೆ. ಈ ನಾಲ್ಕು ಅಣೆಕಟ್ಟುಗಳ ಒಟ್ಟು ನೀರಿನ ಸಾಮರ್ಥ್ಯ 114.57 ಟಿಎಂಸಿ ಆಗಿದ್ದು, ಪ್ರಸ್ತುತ 43.25 ಟಿಎಂಸಿ (ಶೇ. 38 ರಷ್ಟು) ನೀರು ಸಂಗ್ರಹವಾಗಿದೆ. ಜುಲೈ 7 ರಂದು ಇವುಗಳಲ್ಲಿ 40.23 ಟಿಎಂಸಿ ನೀರಿತ್ತು.&lt;/p&gt;&lt;p&gt;ಕಾವೇರಿ ಕೊಳ್ಳದಲ್ಲಿ ಹಾರಂಗಿ ಜಲಾಶಯವು ಅತ್ಯಂತ ಕಡಿಮೆ ಎಂದರೆ 1,657 ಕ್ಯೂಸೆಕ್ ಒಳಹರಿವನ್ನು ಪಡೆದಿದೆ. ಆದರೆ ಹೇಮಾವತಿ ಜಲಾಶಯದ ಒಳಹರಿವು ಕಳೆದ 24 ಗಂಟೆಗಳಲ್ಲಿ ದುಪ್ಪಟ್ಟಾಗಿದ್ದು, 16,593 ಕ್ಯೂಸೆಕ್&zwnj;ಗೆ ತಲುಪಿದೆ. ಅದೇ ರೀತಿ ಕಬಿನಿ ಜಲಾಶಯದ ಒಳಹರಿವು ಕೂಡ ಒಂದೇ ದಿನದಲ್ಲಿ ದುಪ್ಪಟ್ಟಾಗಿದ್ದು, ಪ್ರಸ್ತುತ 10,757 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಒಟ್ಟಾರೆಯಾಗಿ ರಾಜ್ಯದ ಪ್ರಮುಖ ನದಿ ಕೊಳ್ಳಗಳಲ್ಲಿ ನೀರಿನ ಆಶಾಭಾವನೆ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx"/>
        </item>
        <item>
            <title><![CDATA[ರೈಲು ಟಿಕೆಟ್‌ಗೆ ಹೊಸ ನಿಯಮ: ಇನ್ನುಮುಂದೆ ವಾಟ್ಸಾಪ್ ಟಿಕೆಟ್ ತೋರಿಸಿದರೆ ನಡೆಯಲ್ಲ! ದಂಡ ಕಟ್ಟೋ ಮುನ್ನ ನಿಯಮ ತಿಳಿಯಿರಿ]]></title>
            <link>https://kannada.asianetnews.com/karnataka-districts/indian-railways-new-rule-railone-app-tickets-on-whatsapp-screenshot-invalid-sat/articleshow-1gz0yyy</link>
            <guid isPermaLink="true">https://kannada.asianetnews.com/karnataka-districts/indian-railways-new-rule-railone-app-tickets-on-whatsapp-screenshot-invalid-sat/articleshow-1gz0yyy</guid>
            <pubDate>Thu, 09 Jul 2026 18:04:18 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆಯು 'RailOne' ಆಪ್ ಮೂಲಕ ಬುಕ್ ಮಾಡಿದ ಟಿಕೆಟ್&zwnj;ಗಳ ಬಗ್ಗೆ ಹೊಸ ನಿಯಮ ಜಾರಿಗೊಳಿಸಿದೆ. ಇನ್ನು ಮುಂದೆ ಟಿಕೆಟ್&zwnj;ನ ಸ್ಕ್ರೀನ್&zwnj;ಶಾಟ್ ಅಥವಾ ವಾಟ್ಸಾಪ್ ಫೋಟೋ ತೋರಿಸಿ ಪ್ರಯಾಣಿಸುವಂತಿಲ್ಲ. ಇನ್ನು ಮುಂದೆ ಹೊಸ ನಿಯಮ ಜಾರಿಯಾಗಿದ್ದು, ಅದನ್ನು ಪಾಲಿಸದಿದ್ದರೆ ದಂಡ ವಿಧಿಸಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3dt041mw52nbnf81c02kgc,imgname-indian-railway-ticket-new-rules-1783600316544.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.09): ಭಾ&lt;/strong&gt;ರತೀಯ ರೈಲ್ವೆಯಲ್ಲಿ ಪ್ರಯಾಣಿಸುವಾಗ ಡಿಜಿಟಲ್ ಟಿಕೆಟ್ ತೋರಿಸುವುದು ಈಗ ಸಾಮಾನ್ಯವಾಗಿದೆ. ಆದರೆ, ಇತ್ತೀಚೆಗೆ ರೈಲ್ವೆ ಇಲಾಖೆಯು 'RailOne' ಆಪ್ ಮೂಲಕ ಬುಕ್ ಮಾಡಿದ ಅನಾರಕ್ಷಿತ (Unreserved) ಟಿಕೆಟ್&zwnj;ಗಳ ಬಗ್ಗೆ ಹೊಸದೊಂದು ಎಚ್ಚರಿಕೆಯನ್ನು ನೀಡಿದೆ. ಇನ್ನು ಮುಂದೆ ನಿಮ್ಮ ಮೊಬೈಲ್&zwnj;ನಲ್ಲಿರುವ ಟಿಕೆಟ್&zwnj;ನ ಸ್ಕ್ರೀನ್&zwnj;ಶಾಟ್ (Screenshot) ಅಥವಾ ವಾಟ್ಸಾಪ್&zwnj;ನಲ್ಲಿ (WhatsApp) ಬಂದಿರುವ ಫೋಟೋ ತೋರಿಸಿ ಪ್ರಯಾಣಿಸಲು ಸಾಧ್ಯವಿಲ್ಲ. ಒಂದು ವೇಳೆ ಹೀಗೆ ಮಾಡಿದರೆ, ನಿಮ್ಮನ್ನು ಟಿಕೆಟ್ ರಹಿತ ಪ್ರಯಾಣಿಕ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ವಾಟ್ಸಾಪ್ ಮತ್ತು ಸ್ಕ್ರೀನ್&zwnj;ಶಾಟ್ ಏಕೆ ಅಮಾನ್ಯ?&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಅನೇಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ ನಂತರ ಅದರ ಸ್ಕ್ರೀನ್&zwnj;ಶಾಟ್ ತೆಗೆದಿಟ್ಟುಕೊಳ್ಳುತ್ತಾರೆ ಅಥವಾ ಕುಟುಂಬದ ಸದಸ್ಯರಿಗೆ ವಾಟ್ಸಾಪ್ ಮೂಲಕ ಕಳುಹಿಸುತ್ತಾರೆ. ಆದರೆ, 'RailOne' ಆಪ್ ನಿಯಮದ ಪ್ರಕಾರ, ಟಿಕೆಟ್ ಯಾವ ಮೊಬೈಲ್ ಸಂಖ್ಯೆ ಮತ್ತು ಯಾವ ಸಾಧನದಿಂದ (Device) ಬುಕ್ ಆಗಿದೆಯೋ, ಅದೇ ಮೊಬೈಲ್&zwnj;ನಲ್ಲಿ ಟಿಕೆಟ್ ಅನ್ನು ತೋರಿಸಬೇಕು. ಸ್ಕ್ರೀನ್&zwnj;ಶಾಟ್ ಅಥವಾ ಫಾರ್ವರ್ಡ್ ಮಾಡಲಾದ ಸಂದೇಶಗಳು ಕೇವಲ ಮಾಹಿತಿ ಉದ್ದೇಶಕ್ಕಷ್ಟೇ ಸೀಮಿತವಾಗಿದ್ದು, ಅವುಗಳನ್ನು ಕಾನೂನುಬದ್ಧ ಪ್ರಯಾಣದ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ. ಟಿಕೆಟ್&zwnj;ಗಳ ದುರುಪಯೋಗ ಮತ್ತು ನಕಲಿ ಟಿಕೆಟ್ ಹಾವಳಿಯನ್ನು ತಡೆಗಟ್ಟಲು ರೈಲ್ವೆ ಈ ಕಠಿಣ ಕ್ರಮ ಕೈಗೊಂಡಿದೆ.&lt;/p&gt;&lt;h2&gt;&lt;strong&gt;ಪ್ರಯಾಣದ ವೇಳೆ ಇವು ಕಡ್ಡಾಯ:&lt;/strong&gt;&lt;/h2&gt;&lt;ul&gt; &lt;li&gt;ನೀವು RailOne ಆಪ್ ಮೂಲಕ ಟಿಕೆಟ್ ಪಡೆದಿದ್ದರೆ, ಟಿಕೆಟ್ ತಪಾಸಣೆಯ ಸಮಯದಲ್ಲಿ (TTE ಚೆಕಿಂಗ್) ಈ ಕೆಳಗಿನ ಎರಡು ಅಂಶಗಳನ್ನು ಪ್ರಸ್ತುತಪಡಿಸುವುದು ಕಡ್ಡಾಯ:&lt;/li&gt; &lt;li&gt;ನೋಂದಾಯಿತ ಮೊಬೈಲ್ ಫೋನ್: ಯಾವ ಮೊಬೈಲ್&zwnj;ನಿಂದ ಟಿಕೆಟ್ ಬುಕ್ ಮಾಡಲಾಗಿದೆಯೋ ಅದೇ ಫೋನ್&zwnj;ನಲ್ಲಿ ಆಪ್ ಓಪನ್ ಮಾಡಿ ಟಿಕೆಟ್ ತೋರಿಸಬೇಕು.&lt;/li&gt; &lt;li&gt;ಮೂಲ ಗುರುತಿನ ಚೀಟಿ: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಪಾಸ್&zwnj;ಪೋರ್ಟ್&zwnj;ನಂತಹ ಯಾವುದಾದರೂ ಒಂದು ಸರ್ಕಾರಿ ಫೋಟೋ ಗುರುತಿನ ಚೀಟಿಯನ್ನು ಜೊತೆಯಲ್ಲಿಟ್ಟುಕೊಳ್ಳಬೇಕು.&lt;/li&gt;&lt;/ul&gt;&lt;h2&gt;&lt;strong&gt;ನಿಯಮ ಉಲ್ಲಂಘಿಸಿದರೆ ಏನಾಗುತ್ತದೆ?&lt;/strong&gt;&lt;/h2&gt;&lt;p&gt;ಒಂದು ವೇಳೆ ನೀವು ಟಿಕೆಟ್ ಬುಕ್ ಮಾಡಿದ ಫೋನ್ ತರಲು ಮರೆತರೆ ಅಥವಾ ಕೇವಲ ವಾಟ್ಸಾಪ್ ಫೋಟೋ ತೋರಿಸಿದರೆ, ಟಿಟಿಇ (TTE) ನಿಮ್ಮ ಟಿಕೆಟ್ ಅನ್ನು ಅಮಾನ್ಯಗೊಳಿಸಬಹುದು. ಇಂತಹ ಸಂದರ್ಭದಲ್ಲಿ ರೈಲ್ವೆ ನಿಯಮದಂತೆ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದಾರೆ ಎಂದು ಭಾವಿಸಿ ಭಾರಿ ದಂಡದ ಜೊತೆಗೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ.&lt;/p&gt;&lt;h2&gt;&lt;strong&gt;ಪ್ರಯಾಣಿಕರಿಗೆ ಕಿವಿಮಾತು:&lt;/strong&gt;&lt;/h2&gt;&lt;ul&gt; &lt;li&gt;ನಿಮ್ಮ ಪ್ರಯಾಣದ ಉದ್ದಕ್ಕೂ ಟಿಕೆಟ್ ಬುಕ್ ಮಾಡಿದ ಮೊಬೈಲ್ ಫೋನ್ ಅನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ.&lt;/li&gt; &lt;li&gt;ಮೊಬೈಲ್ ಬ್ಯಾಟರಿ ಖಾಲಿಯಾಗದಂತೆ ಎಚ್ಚರವಹಿಸಿ, ಏಕೆಂದರೆ ಟಿಕೆಟ್ ತೋರಿಸಲು ಫೋನ್ ಆನ್ ಆಗಿರಲೇಬೇಕು.&lt;/li&gt; &lt;li&gt;ಯಾರೋ ಸ್ನೇಹಿತರು ಅಥವಾ ಸಂಬಂಧಿಕರು ಕಳುಹಿಸಿದ ಸ್ಕ್ರೀನ್&zwnj;ಶಾಟ್ ನಂಬಿ ರೈಲು ಹತ್ತಬೇಡಿ.&lt;/li&gt; &lt;li&gt;ಯಾವಾಗಲೂ ಮೂಲ ಗುರುತಿನ ಚೀಟಿಯನ್ನು (Physical copy or DigiLocker) ಜೊತೆಯಲ್ಲಿಟ್ಟುಕೊಳ್ಳಿ.&lt;/li&gt;&lt;/ul&gt;&lt;p&gt;ಭಾರತೀಯ ರೈಲ್ವೆಯ ಈ ಹೊಸ ಬದಲಾವಣೆಯು ಪ್ರಯಾಣಿಕರಿಗೆ ಸ್ವಲ್ಪ ಕಿರಿಕಿರಿ ಎನಿಸಿದರೂ, ಇದು ಭದ್ರತೆ ಮತ್ತು ಪಾರದರ್ಶಕತೆಯ ದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿದೆ. ಆದ್ದರಿಂದ ನಿಮ್ಮ ಪ್ರಯಾಣ ಸುಖಕರವಾಗಿರಲು ರೈಲ್ವೆ ನಿಯಮಗಳನ್ನು ತಪ್ಪದೇ ಪಾಲಿಸಿ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/indian-railways-new-rule-railone-app-tickets-on-whatsapp-screenshot-invalid-sat/articleshow-1gz0yyy"/>
        </item>
        <item>
            <title><![CDATA[ಬೆಂಗಳೂರಿನ Manyata Tech Park ಸಮೀಪ ವಂದೇ ಭಾರತ್‌ ಸ್ಲೀಪರ್‌ ರೈಲಿನ ಡಿಪೋ, 14 ಹೆಕ್ಟೇರ್‌ ಭೂಸ್ವಾಧೀನ ಆರಂಭಿಸಿದ ರೈಲ್ವೇಸ್‌]]></title>
            <link>https://kannada.asianetnews.com/bengaluru-urban/avande-bharat-sleeper-depot-bengaluru-thanisandra-land-acquisition-san/articleshow-vrbu93u</link>
            <guid isPermaLink="true">https://kannada.asianetnews.com/bengaluru-urban/avande-bharat-sleeper-depot-bengaluru-thanisandra-land-acquisition-san/articleshow-vrbu93u</guid>
            <pubDate>Thu, 09 Jul 2026 17:31:58 +0530</pubDate>
            <description><![CDATA[&lt;p&gt;ಬೆಂಗಳೂರಿನ ಥಣಿಸಂದ್ರದಲ್ಲಿ 'ವಂದೇ ಭಾರತ್ ಸ್ಲೀಪರ್' ರೈಲುಗಳ ನಿರ್ವಹಣೆಗಾಗಿ ಬೃಹತ್ ಡಿಪೋ ನಿರ್ಮಿಸಲು SWR ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ. ಈ ಯೋಜನೆಯು ಅತ್ಯಾಧುನಿಕ ವರ್ಕ್&zwnj;ಶಾಪ್&zwnj;ಗಳು ಮತ್ತು ರೈಲು ನಿಲುಗಡೆ ಹಳಿಗಳನ್ನು ಒಳಗೊಂಡಿರಲಿದ್ದು, ಇದರ ನಿರ್ಮಾಣಕ್ಕೆ ಈಗಾಗಲೇ ಗುತ್ತಿಗೆಯನ್ನೂ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3c06bngfsf070y3wm09dvy,imgname-vande-bharat-sleeper-depot-bengaluru-thanisandra-1783598422389.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.9): &lt;/strong&gt;ಕರ್ನಾಟಕದಲ್ಲಿ ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ಬರಲಿರುವ ಅತ್ಯಾಧುನಿಕ &lsquo;ವಂದೇ ಭಾರತ್ ಸ್ಲೀಪರ್&rsquo; (Vande Bharat Sleeper) ರೈಲುಗಳ ಸುಗಮ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಬೆಂಗಳೂರಿನ ಥಣಿಸಂದ್ರದಲ್ಲಿ ಬೃಹತ್ ಡಿಪೋ ನಿರ್ಮಿಸಲು ನೈಋತ್ಯ ರೈಲ್ವೆ (SWR) ಅಧಿಕೃತವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಅತ್ಯಾಧುನಿಕ ಡಿಪೋ ಮತ್ತು ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಒಟ್ಟು 13.95 ಹೆಕ್ಟೇರ್ (ಸುಮಾರು 14 ಹೆಕ್ಟೇರ್) ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ರೈಲ್ವೆ ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.&lt;/p&gt;&lt;p&gt;ಚನ್ನಸಂದ್ರ-ಯಲಹಂಕ ವಿಭಾಗದ ಥಣಿಸಂದ್ರದಲ್ಲಿ ಈ ಹೊಸ ಡಿಪೋ ತಲೆಯೆತ್ತಲಿದೆ. ಮಾನ್ಯತಾ ಟೆಕ್ ಪಾರ್ಕ್ (Manyata Tech Park) ಸಮೀಪವಿರುವ ಥಣಿಸಂದ್ರವು ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಹೀಲಲಿಗೆ-ರಾಜಾನುಕುಂಟೆ ಉಪನಗರ ರೈಲು (Suburban Rail) ಕಾರಿಡಾರ್&zwnj;ನಲ್ಲೂ ಒಂದು ನಿಲ್ದಾಣವನ್ನು ಹೊಂದಲಿದೆ. ಈ ಹಿಂದೆ ಚನ್ನಸಂದ್ರ-ಯಲಹಂಕ ರೈಲ್ವೆ ಹಳಿ ದ್ವಿಗುಣಗೊಳಿಸುವ ಯೋಜನೆಯ ಭಾಗವಾಗಿ, ಥಣಿಸಂದ್ರದಲ್ಲಿದ್ದ ಹಳೆಯ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ ಅನ್ನು ನೈಋತ್ಯ ರೈಲ್ವೆಯು ಕೆಲವು ವರ್ಷಗಳ ಹಿಂದೆ ಧ್ವಂಸಗೊಳಿಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.&lt;/p&gt;&lt;h2&gt;&lt;strong&gt;ಡಿಪೋದಲ್ಲಿ ಏನೇನಿರಲಿವೆ?&lt;/strong&gt;&lt;/h2&gt;&lt;p&gt;ಈ ಮಹತ್ವಾಕಾಂಕ್ಷಿ ಯೋಜನೆಯು ವಂದೇ ಭಾರತ್ ಸ್ಲೀಪರ್ ರೈಲುಗಳ ದೈನಂದಿನ ನಿರ್ವಹಣೆಗೆ ಅತ್ಯಗತ್ಯವಾದ ಮೂಲಸೌಕರ್ಯಗಳನ್ನು ಒಳಗೊಂಡಿರಲಿದೆ. ಅತ್ಯಾಧುನಿಕ ವರ್ಕ್&zwnj;ಶಾಪ್&zwnj;ಗಳು (Workshops), ಸ್ಟೇಬ್ಲಿಂಗ್ ಲೈನ್&zwnj;ಗಳು (Stabling Lines - ರೈಲು ನಿಲುಗಡೆ ಹಳಿಗಳು), ಯುಟಿಲಿಟಿ ಸೇವೆಗಳು ಹಾಗೂ ಸಂಪರ್ಕ ಮತ್ತು ಸೇವಾ ರಸ್ತೆಗಳು (Approach and Service Roads) ಇರಲಿವೆ. ಈ ಯೋಜನೆಯ ಉದ್ದೇಶಕ್ಕಾಗಿ ಥಣಿಸಂದ್ರದಲ್ಲಿ ಖಾಸಗಿಯವರಿಗೆ ಸೇರಿದ ಒಟ್ಟು 14 ಭೂಮಿಗಳನ್ನು (Land Parcels) ಸ್ವಾಧೀನಪಡಿಸಿಕೊಳ್ಳಲು ಗುರಿ ಇರಿಸಲಾಗಿದೆ. ಕರ್ನಾಟಕದಿಂದ ಕಾರ್ಯಾಚರಣೆ ನಡೆಸಲಿರುವ ವಂದೇ ಭಾರತ್ ಸ್ಲೀಪರ್ ರೈಲುಗಳ ಸುಸ್ಥಿತಿ ಕಾಯ್ದುಕೊಳ್ಳಲು ಈ ಡಿಪೋ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ.&lt;/p&gt;&lt;h2&gt;&lt;strong&gt;ಆಕ್ಷೇಪಣೆ ಸಲ್ಲಿಕೆಗೆ 30 ದಿನಗಳ ಅವಕಾಶ&lt;/strong&gt;&lt;/h2&gt;&lt;p&gt;ಪ್ರಸ್ತಾವಿತ ಭೂಸ್ವಾಧೀನಕ್ಕೆ ಯಾವುದೇ ರೀತಿಯ ವಿರೋಧ ಅಥವಾ ಆಕ್ಷೇಪಣೆಗಳಿದ್ದಲ್ಲಿ, ಈ ಅಧಿಸೂಚನೆಯು ಅಧಿಕೃತ ಗಜೆಟ್&zwnj;ನಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಸ್ವೀಕೃತವಾಗುವ ಎಲ್ಲಾ ಆಕ್ಷೇಪಣೆಗಳನ್ನು ಭೂಸ್ವಾಧೀನ ಪ್ರಕ್ರಿಯೆಯ ಮುಂದಿನ ಹಂತಕ್ಕೆ ಹೋಗುವ ಮುನ್ನ ಸಕ್ಷಮ ಪ್ರಾಧಿಕಾರವು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಅಧಿಸೂಚನೆ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;227.95 ಕೋಟಿ ರೂಪಾಯಿಗಳ ಬೃಹತ್ ಗುತ್ತಿಗೆ&lt;/strong&gt;&lt;/h2&gt;&lt;p&gt;ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುವ ಮುನ್ನವೇ, ಈ ವರ್ಷದ ಆರಂಭದಲ್ಲಿ ಡಿಪೋ ನಿರ್ಮಾಣದ ಪ್ರಮುಖ ಗುತ್ತಿಗೆಯನ್ನು ಹಂಚಿಕೆ ಮಾಡಲಾಗಿದೆ. ಏಪ್ರಿಲ್ 27 ರಂದು ಮಾಹಿತಿ ನೀಡಿದ್ದ &lsquo;ಪವರ್ ಮೆಕ್ ಪ್ರಾಜೆಕ್ಟ್ಸ್ ಲಿಮಿಟೆಡ್&rsquo; (Power Mech Projects Ltd), ಈ ಡಿಪೋ ನಿರ್ಮಾಣಕ್ಕಾಗಿ ತನಗೆ 227.95 ಕೋಟಿ ರೂಪಾಯಿಗಳ (ಸರಿಸುಮಾರು 228 ಕೋಟಿ ರೂ.) ಇಂಜಿನಿಯರಿಂಗ್, ಪ್ರೊಕ್ಯೂರ್&zwnj;ಮೆಂಟ್ ಮತ್ತು ಕನ್ಸ್ಟ್ರಕ್ಷನ್ (EPC) ಗುತ್ತಿಗೆ ಲಭಿಸಿದೆ ಎಂದು ಪ್ರಕಟಿಸಿತ್ತು. ಕೆಲಸ ಪ್ರಾರಂಭವಾದ 30 ತಿಂಗಳ ಒಳಗಾಗಿ ಈ ಯೋಜನೆಯನ್ನು ಪೂರ್ಣಗೊಳಿಸಬೇಕಾಗಿದೆ. ಇದರೊಂದಿಗೆ, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಲ್ಲಿ ವಂದೇ ಭಾರತ್ ಚೇರ್ ಕಾರ್ (Chair Car) ರೈಲುಗಳ ನಿರ್ವಹಣಾ ಸೌಲಭ್ಯವನ್ನೂ ನೈಋತ್ಯ ರೈಲ್ವೆಯು ಅಭಿವೃದ್ಧಿಪಡಿಸುತ್ತಿದ್ದು, ಇದಕ್ಕೆ ಅಂದಾಜು 52.73 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/avande-bharat-sleeper-depot-bengaluru-thanisandra-land-acquisition-san/articleshow-vrbu93u"/>
        </item>
        <item>
            <title><![CDATA[ಟೀಚರ್ ಬೈದ್ರು ಎಂದು ದುರಂತ ಅಂತ್ಯಕಂಡ ವಿದ್ಯಾರ್ಥಿನಿ.. ಕಣ್ಣಾಲೆಗಳ ಒದ್ದೆ ಮಾಡ್ತಿವೆ ಆಕೆಯ ವಿದಾಯದ ಸಾಲುಗಳು..]]></title>
            <link>https://kannada.asianetnews.com/bengaluru-rural/14-year-old-student-madhushree-died-in-anekal-bengaluru-gkn/articleshow-pwvegeg</link>
            <guid isPermaLink="true">https://kannada.asianetnews.com/bengaluru-rural/14-year-old-student-madhushree-died-in-anekal-bengaluru-gkn/articleshow-pwvegeg</guid>
            <pubDate>Thu, 09 Jul 2026 17:11:56 +0530</pubDate>
            <description><![CDATA[&lt;p&gt;ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ ಎಳೆಯ ಮನಸ್ಸೊಂದು ಶಿಕ್ಷಕಿಯ ನಿರ್ಲಕ್ಷ್ಯ ಮತ್ತು ಅವಮಾನಕ್ಕೆ ಬಲಿಯಾಗಿದೆ. ಮರಸೂರು ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮಧುಶ್ರೀ (14) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದ್ದು, ಬಾಲಕಿ ಬರೆದಿಟ್ಟ ಚೀಟಿಯು ಕಣ್ಣಂಚನ್ನು ತೇವಗೊಳಿಸಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3axa1xfxf6mynzsypwwdp0,imgname-student-madhushree-died--1--1783597279293.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆನೇಕಲ್ (ಬೆಂಗಳೂರು):&lt;/strong&gt; ಕಲಿಯುವ ವಯಸ್ಸಿನಲ್ಲೇ ಶಿಕ್ಷಕರ ಕಿರುಕುಳ ಅಥವಾ ಅವಮಾನಕ್ಕೆ ಬಲಿಯಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಶಿಕ್ಷಕಿ ಬೈದಿದ್ದಕ್ಕೆ ಮನನೊಂದು ನೇಣು ಬಿಗಿದುಕೊಂಡು ಪ್ರಾಣಬಿಟ್ಟಿರುವ ಆರೋಪ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಮರಸೂರು ಮಡಿವಾಳ ನಿವಾಸಿ ಮಧುಶ್ರೀ (14) ಆತ್ಮ*ತ್ಯೆ ಮಾಡಿಕೊಂಡ ಬಾಲಕಿ. ಈಕೆ ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಗುರುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಧುಶ್ರೀ ನೇಣು ಹಾಕಿಕೊಂಡಿದ್ದಾಳೆ. ಇಂದು (ಶುಕ್ರವಾರ) ಬೆಳಿಗ್ಗೆ ಪೋಷಕರು ಎದ್ದು ನೋಡಿದಾಗ ಮಗಳ ಮೃತದೇಹ ಪತ್ತೆಯಾಗಿದೆ.&lt;/p&gt;&lt;h3&gt;&lt;strong&gt;ಕಣ್ಣಾಲೆಗಳ ಒದ್ದೆ ಮಾಡಿದ ಪತ್ರ&lt;/strong&gt;&lt;/h3&gt;&lt;p&gt;ದುಡುಕಿನ ನಿರ್ಧಾರಕ್ಕೂ ಮುನ್ನ ಮಧುಶ್ರೀ ಬರೆದಿರುವ ನೋಟ್ ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುವಂತಿದೆ. ಅದರಲ್ಲಿ ತನ್ನ ಸಾವಿಗೆ ಶಾಲೆಯಲ್ಲಿ ನಡೆದ ಘಟನೆಯೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾಳೆ ಎಂದು ಹೇಳಲಾಗುತ್ತಿರುವ ಫೋಟೋ ವೈರಲ್ ಆಗಿದೆ. ಅದರಲ್ಲಿ ಏನಿದೆ ಅನ್ನೋ ವಿವರ ಹೀಗಿದೆ..&lt;/p&gt;&lt;p&gt;&quot;ಅಮ್ಮ ನನ್ನ ಕ್ಷಮಿಸಿ ಬಿಡು. ನನಗೆ ಈ ಭೂಮಿ ಮೇಲೆ ಬದುಕಲು ಇಷ್ಟವೇ ಇಲ್ಲ. ಶಾಲೆಯಲ್ಲಿ ನಡೆದ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ನನ್ನ ಮೇಲೆ ಇಲ್ಲಸಲ್ಲದ ಅಪವಾದಗಳನ್ನು (ಆರೋಪ) ಹೊರಿಸಿದರು. ಆ ಅವಮಾನವನ್ನು ಸಹಿಸಿಕೊಂಡು ಬದುಕಲು ನನ್ನ ಮನಸ್ಸು ಒಪ್ಪುತ್ತಿಲ್ಲ. ತುಂಬಾ ಹಿಂಸೆಯಾಗುತ್ತಿದೆ ಎಂದು ಪತ್ರದಲ್ಲಿ ನೋವು ತೋಡಿಕೊಂಡಿದ್ದಾಳೆ.&lt;/p&gt;&lt;h3&gt;&lt;strong&gt;ಅಮ್ಮನ ಮೇಲೆ ಆಣೆ ಹಾಕಿದ ಮಗಳು&lt;/strong&gt;&lt;/h3&gt;&lt;p&gt;ತಾನು ಇಲ್ಲದಿದ್ದರೂ ತನ್ನ ತಾಯಿ ಮತ್ತು ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪತ್ರದಲ್ಲಿ ಬೇಡಿಕೊಂಡಿದ್ದಾಳೆ. ನನ್ನ ತಮ್ಮ, ತಂಗಿ, ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳಿ. ಅಮ್ಮನನ್ನು ಯಾರೂ ಬೈಯಬೇಡಿ. ಒಂದು ವೇಳೆ ಅಮ್ಮನನ್ನು ಬೈದರೆ ನನ್ನ ಮೇಲೆ ಆಣೆ ಎಂದು ಬರೆಯುವ ಮೂಲಕ ತನ್ನ ತಾಯಿಯ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಕೊನೆಯಲ್ಲಿ I am sorry mom and all ಎಂದು ಬರೆದು ಜೀವನಕ್ಕೆ ವಿದಾಯ ಹೇಳಿದ್ದಾಳೆ.&lt;/p&gt;&lt;h3&gt;&lt;strong&gt;ಶಾಲೆಯಲ್ಲಿ ನಡೆದಿದ್ದೇನು?&lt;/strong&gt;&lt;/h3&gt;&lt;p&gt;ಲಭ್ಯವಿರುವ ಮಾಹಿತಿಗಳ ಪ್ರಕಾರ, ಶಾಲೆಯಲ್ಲಿ ಕೆಲವು ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಸಣ್ಣಪುಟ್ಟ ವಿಚಾರಕ್ಕೆ ಅಪವಾದ ಹೊರಿಸುವುದು, ದಂಡ ವಿಧಿಸುವುದು ಮತ್ತು ಅವಮಾನ ಮಾಡುವುದು ಮಾಡುತ್ತಿದ್ದರು ಎನ್ನಲಾಗಿದೆ. ಮಧುಶ್ರೀಯ ಮೇಲೆ ಹೊರಿಸಲಾದ ಯಾವುದೋ ಒಂದು ಸುಳ್ಳು ಆರೋಪ ಅಥವಾ ಅವಮಾನ ಆಕೆಯ ಎಳೆಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ ಎಂಬುದು ಈ ಪತ್ರದಿಂದ ತಿಳಿದುಬರುತ್ತಿದೆ.&lt;/p&gt;&lt;p&gt;ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.&lt;/p&gt;&lt;p&gt;ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿ ಹೀಗೆ ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿರುವುದು ಇಡೀ ಆನೇಕಲ್ ಭಾಗದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-rural/14-year-old-student-madhushree-died-in-anekal-bengaluru-gkn/articleshow-pwvegeg"/>
        </item>
        <item>
            <title><![CDATA['ನನ್ನ ಒಡವೆ ತಗೊಳ್ಳಿ, ಪತಿಯನ್ನು ಬಿಟ್ಟುಬಿಡಿ': ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಿರಾತಕರ ಅಟ್ಟಹಾಸ!]]></title>
            <link>https://kannada.asianetnews.com/karnataka-districts/bengaluru-mysuru-expressway-road-rage-family-attacked-viral-video-arrests/articleshow-g9b0xtn</link>
            <guid isPermaLink="true">https://kannada.asianetnews.com/karnataka-districts/bengaluru-mysuru-expressway-road-rage-family-attacked-viral-video-arrests/articleshow-g9b0xtn</guid>
            <pubDate>Thu, 09 Jul 2026 16:48:58 +0530</pubDate>
            <description><![CDATA[ಮಂಡ್ಯದ ಮದ್ದೂರು ಬಳಿ ಬೆಂಗಳೂರು-ಮೈಸೂರು ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಸಣ್ಣ ಅಪಘಾತವೊಂದು ವಿಕೋಪಕ್ಕೆ ತಿರುಗಿದೆ. ದುಷ್ಕರ್ಮಿಗಳ ಗುಂಪೊಂದು 10 ತಿಂಗಳ ಮಗು ಸೇರಿದಂತೆ ಇಡೀ ಕುಟುಂಬದ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx39hsc1b7w6rhwq9z2xxypt,imgname-bengaluru-mysuru-expressway-1783595853184.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಮಂಡ್ಯ (ಜು.09): 'ನ&lt;/strong&gt;ನ್ನ ಚಿನ್ನದ ಒಡವೆಗಳನ್ನು ಬೇಕಾದರೆ ತೆಗೆದುಕೊಳ್ಳಿ, ಆದರೆ ನನ್ನ ಪತಿಯನ್ನು ಮಾತ್ರ ಬಿಟ್ಟುಬಿಡಿ...' - ಇದು ಮಂಡ್ಯ ಜಿಲ್ಲೆಯ ಮದ್ದೂರು ಬಳಿ ಬೆಂಗಳೂರು-ಮೈಸೂರು ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ದುಷ್ಕರ್ಮಿಗಳ ಕೈಗೆ ಸಿಲುಕಿ ನರಳುತ್ತಿದ್ದ ಮಹಿಳೆಯೊಬ್ಬರ ಆಕ್ರಂದನ. ಸಣ್ಣ ಕಾರು ಅಪಘಾತವೊಂದು ವಿಕೋಪಕ್ಕೆ ತಿರುಗಿ, ಇಡೀ ಕುಟುಂಬವನ್ನೇ ನಡುರಸ್ತೆಯಲ್ಲಿ ಅಮಾನವೀಯವಾಗಿ ಥಳಿಸಿದ ಘಟನೆ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಭಾನುವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಬೆಂಗಳೂರು ನಿವಾಸಿ ಸಾಗರ್ ಕುಮಾರ್ ಅವರು ತಮ್ಮ ಪತ್ನಿ, 10 ತಿಂಗಳ ಮಗು ಮತ್ತು ಹಿರಿಯ ಮಹಿಳೆಯೊಬ್ಬರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಭಾರಿ ಟ್ರಾಫಿಕ್ ಇದ್ದ ಕಾರಣ, ಸಾಗರ್ ಅವರ ಕಾರು ಮತ್ತೊಂದು ವಾಹನಕ್ಕೆ ಸ್ವಲ್ಪ ತಗುಲಿತ್ತು. ಇದೇ ವಿಚಾರಕ್ಕೆ ಗಲಾಟೆ ಆರಂಭಿಸಿದ ಸುಮಾರು 9 ಜನರ ಗುಂಪು, ಸಾಗರ್ ಅವರ ಕಾರನ್ನು ಅಡ್ಡಗಟ್ಟಿ ಅಟ್ಟಹಾಸ ಮೆರೆದಿದೆ.&lt;/p&gt;&lt;h2&gt;&lt;strong&gt;ವೈರಲ್ ವಿಡಿಯೋದಲ್ಲಿದೆ ಭೀಕರ ದೃಶ್ಯ:&lt;/strong&gt;&lt;/h2&gt;&lt;p&gt;ಹಿಂದಿನ ಕಾರಿನ ಡ್ಯಾಶ್&zwnj;ಕ್ಯಾಮ್&zwnj;ನಲ್ಲಿ ಈ ಇಡೀ ಘಟನೆ ಸೆರೆಯಾಗಿದೆ. ದುಷ್ಕರ್ಮಿಗಳು ಸಾಗರ್ ಅವರ ಕಾರನ್ನು ಸುತ್ತುವರಿದು, ಅವರನ್ನು ಬಲವಂತವಾಗಿ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಗರ್ ಪತ್ನಿ ಅಕ್ಷರಶಃ ಪ್ರಾಣಭಿಕ್ಷೆ ಕೇಳಿದ್ದಾರೆ. 'ನಮ್ಮ ಜೊತೆ ಮಗುವಿದೆ, ದಯವಿಟ್ಟು ಬಿಟ್ಟುಬಿಡಿ. ಬೇಕಿದ್ದರೆ ನನ್ನ ಮೈಮೇಲಿರುವ ಚಿನ್ನದ ಒಡವೆಗಳನ್ನು ಕಿತ್ತುಕೊಳ್ಳಿ, ಆದರೆ ಪತಿಯನ್ನು ಹೊಡೆಯಬೇಡಿ' ಎಂದು ಕಣ್ಣೀರಿಟ್ಟರೂ, ಆ ಪಾಪಿಗಳು ಮಾತ್ರ ಹಲ್ಲೆ ನಿಲ್ಲಿಸಲಿಲ್ಲ. ಹತ್ತು ತಿಂಗಳ ಹಸುಗೂಸಿನ ಮುಂದೆಯೇ ತಂದೆಯನ್ನು ಮನಬಂದಂತೆ ಥಳಿಸಲಾಗಿದೆ.&lt;/p&gt;&lt;h2&gt;&lt;strong&gt;ಸಾಗರ್ ಕುಮಾರ್ ಅವರ ಅಳಲು:&lt;/strong&gt;&lt;/h2&gt;&lt;p&gt;ಘಟನೆಯಿಂದ ತೀವ್ರವಾಗಿ ಗಾಯಗೊಂಡಿರುವ ಸಾಗರ್ ಎನ್&zwnj;ಡಿಟಿವಿಯೊಂದಿಗೆ ಮಾತನಾಡುತ್ತಾ, 'ಆ ರಾತ್ರಿ ನಾವು ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಸುಮಾರು 9 ಜನರು ನಮ್ಮ ಮೇಲೆ ಮುಗಿಬಿದ್ದರು. ನನ್ನ ಪತ್ನಿ ಕೈಮುಗಿದು ಬೇಡಿಕೊಂಡರೂ ಅವರು ಕರುಣೆ ತೋರಿಸಲಿಲ್ಲ. ಎಕ್ಸ್&zwnj;ಪ್ರೆಸ್&zwnj;ವೇನ ಅನೇಕ ಕಡೆ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಭದ್ರತೆಯೂ ಇಲ್ಲ. ಈ ವಿಡಿಯೋ ರೆಕಾರ್ಡ್ ಆಗಿದ್ದಕ್ಕೆ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಇಲ್ಲದಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು?' ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;&lt;strong&gt;ಪೊಲೀಸ್ ಕ್ರಮ:&lt;/strong&gt;&lt;/h3&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಂಡ್ಯ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ. ಹೆದ್ದಾರಿಗಳಲ್ಲಿ ಸಾರ್ವಜನಿಕರ ಸುರಕ್ಷತೆ ಎಲ್ಲಿದೆ ಎಂಬ ಪ್ರಶ್ನೆಯನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ಕುಟುಂಬ ಇಂದಿಗೂ ಆಘಾತದಿಂದ ಹೊರಬಂದಿಲ್ಲ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-mysuru-expressway-road-rage-family-attacked-viral-video-arrests/articleshow-g9b0xtn"/>
        </item>
        <item>
            <title><![CDATA[ಮದ್ಯಪ್ರಿಯರ ಶೈಲಿ ಬದಲಿಸಿದ ಹೊಸ AIB ನೀತಿ: ಮೊದಲ ತ್ರೈಮಾಸಿಕದಲ್ಲೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದಾಖಲೆಯ ಆದಾಯ!]]></title>
            <link>https://kannada.asianetnews.com/business/karnataka-aib-policy-boosts-excise-revenue-soars-as-new-premium-beer-sales-gdp/articleshow-gtftvql</link>
            <guid isPermaLink="true">https://kannada.asianetnews.com/business/karnataka-aib-policy-boosts-excise-revenue-soars-as-new-premium-beer-sales-gdp/articleshow-gtftvql</guid>
            <pubDate>Thu, 09 Jul 2026 16:36:23 +0530</pubDate>
            <description><![CDATA[ರಾಜ್ಯದಲ್ಲಿ ಜಾರಿಗೆ ಬಂದಿರುವ ಹೊಸ 'ಆಲ್ಕೋಹಾಲ್ ಇನ್ ಬೆವರೇಜ್' (AIB) ತೆರಿಗೆ ನೀತಿಯು ಸೌಮ್ಯ ಬಿಯರ್&zwnj;ಗಳ ದರವನ್ನು ಗಣನೀಯವಾಗಿ ಇಳಿಸಿದೆ. ಇದರ ಪರಿಣಾಮವಾಗಿ, ಬಿಯರ್ ಮಾರಾಟದಲ್ಲಿ ದಾಖಲೆಯ ಏರಿಕೆಯಾಗಿದ್ದು, ಸರ್ಕಾರದ ಆದಾಯ ಹೆಚ್ಚಳವಾಗಿದೆ ಮತ್ತು ಗ್ರಾಹಕರು ಸ್ಟ್ರಾಂಗ್ ಮದ್ಯದಿಂದ ಮೈಲ್ಡ್ ಬಿಯರ್&zwnj;ನತ್ತ ಆಕರ್ಷಿತರಾಗುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr37znjs40tfvw08zccr5zbp,imgname-3-1778225501785.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದಲ್ಲಿ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ಮದ್ಯಕ್ಕೆ ದರ ನಿಗದಿ ಮಾಡುವ ಸರ್ಕಾರದ ಹೊಸ ತೆರಿಗೆ ನೀತಿಯು ಅಬಕಾರಿ ಇಲಾಖೆಯ ಖಜಾನೆಯನ್ನು ತುಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಮೇ 11 ರಿಂದ ಜಾರಿಗೆ ಬಂದಿರುವ ನೂತನ 'ಆಲ್ಕೋಹಾಲ್ ಇನ್ ಬೆವರೇಜ್' (AIB) ತೆರಿಗೆ ನೀತಿಯು ಕೇವಲ ಸರ್ಕಾರದ ಆದಾಯವನ್ನು ಹೆಚ್ಚಿಸುತ್ತಿಲ್ಲ, ಬದಲಿಗೆ ರಾಜ್ಯದ ಮದ್ಯಪ್ರಿಯರ ಕುಡಿಯುವ ಶೈಲಿಯನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿದೆ. ಹೊಸ ನೀತಿಯ ಪರಿಣಾಮವಾಗಿ ಗ್ರಾಹಕರು ಹೆಚ್ಚಿನ ಆಲ್ಕೋಹಾಲ್ ಅಂಶವಿರುವ ಮದ್ಯದಿಂದ ಸೌಮ್ಯ (ಮೈಲ್ಡ್) ಮದ್ಯದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.&lt;/p&gt;&lt;h2&gt;ಬಿಯರ್ ದರ ಇಳಿಕೆ: ಮಾರುಕಟ್ಟೆಯಲ್ಲಿ ಹೊಸ ದಾಖಲೆ!&lt;/h2&gt;&lt;p&gt;ರಾಜ್ಯದಲ್ಲಿ ಶೇಕಡಾ 5 ಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಲಾಗರ್ ಬಿಯರ್&zwnj;ಗಳ ಬೆಲೆಯಲ್ಲಿ ಭಾರಿ ಕಡಿತವಾಗಿರುವ ಬೆನ್ನಲ್ಲೇ ಬಿಯರ್ ಸೇವನೆ ಮತ್ತು ಮಾರಾಟದ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ.&lt;/p&gt;&lt;p&gt;ಚಿಲ್ಲರೆ ವ್ಯಾಪಾರಿಗಳ (CL-2 ಪರವಾನಗಿದಾರರು) ಪ್ರಕಾರ, ಬೆಲೆ ಇಳಿಕೆಯ ನಂತರ ಲಾಗರ್ ಬಿಯರ್&zwnj;ಗಳಿಗೆ ಮಾರುಕಟ್ಟೆಯಲ್ಲಿ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಉದಾಹರಣೆಗೆ, ಅತ್ಯಂತ ಜನಪ್ರಿಯ ಯುನೈಟೆಡ್ ಬ್ರೂವರೀಸ್ (UB) ಸಂಸ್ಥೆಯ 'ಕಿಂಗ್&zwnj;ಫಿಷರ್ ಪ್ರೀಮಿಯಂ' 330 ಮಿಲಿ ಬಾಟಲಿಯ ಗರಿಷ್ಠ ಚಿಲ್ಲರೆ ಬೆಲೆ (MRP) 125 ರೂ.ಗಳಿಂದ ನೇರವಾಗಿ 60 ರೂ.ಗಳಿಗೆ ಕುಸಿದಿದೆ. ಇದರೊಂದಿಗೆ ಬಡ್&zwnj;ವೈಸರ್, ಕರೋನಾ, ಹೊಗಾರ್ಡನ್ ಹಾಗೂ ಸ್ಥಳೀಯ ಬೆಂಗಳೂರಿನ 'ಟಾಯ್ಟ್' ಬ್ರೂವರೀಸ್&zwnj;ನ ಗೋಧಿ, ಲಾಗರ್ ಮತ್ತು ಸ್ಟೌಟ್ ಬಿಯರ್&zwnj;ಗಳ ಮಾರಾಟವೂ ಗಗನಕ್ಕೇರಿದೆ.&lt;/p&gt;&lt;p&gt;ಹೊಸ ತೆರಿಗೆ ನೀತಿಯು ಅತ್ಯಂತ ಸೂಕ್ತ ಸಮಯದಲ್ಲಿ ಜಾರಿಗೆ ಬಂದಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಯರ್ ಬಳಕೆ ಹೆಚ್ಚಿರುತ್ತದೆ, ಅದರಲ್ಲೂ ಲಾಗರ್ ಬಿಯರ್ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಬೋನಸ್ ಆದಂತಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ ನಮ್ಮ ಬಿಯರ್ ದಾಸ್ತಾನು ಶೇ. 25 ರಿಂದ 30 ರಷ್ಟು ಖಾಲಿಯಾಗಿದೆ. ಜನರು ಸ್ಟ್ರಾಂಗ್ ಬಿಯರ್ ಬಿಟ್ಟು ಮೈಲ್ಡ್ ಬಿಯರ್&zwnj;ನತ್ತ ಮುಖ ಮಾಡುತ್ತಿದ್ದಾರೆ ಎಂದು ನಗರದ ಮದ್ಯದ ಚಿಲ್ಲರೆ ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಮೊದಲ ತ್ರೈಮಾಸಿಕದಲ್ಲಿ ಶೇ. 19.52 ರಷ್ಟು ಆದಾಯ ವೃದ್ಧಿ&lt;/h2&gt;&lt;p&gt;ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್&zwnj;ನಿಂದ ಜೂನ್) ಬಿಯರ್ ಮಾರಾಟದಿಂದಲೇ ಸರ್ಕಾರಕ್ಕೆ 312.67 ಕೋಟಿ ರೂ. ಹೆಚ್ಚುವರಿ ಆದಾಯ ಹರಿದುಬಂದಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 19.52 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಬಿಯರ್&zwnj;ನಿಂದ 1,602.14 ಕೋಟಿ ರೂ. ಆದಾಯ ಬಂದಿದ್ದರೆ, ಈ ಬಾರಿ ದಾಖಲೆಯ 1,914.81 ಕೋಟಿ ರೂ. ಆದಾಯ ಸಂಗ್ರಹವಾಗಿದೆ.&lt;/p&gt;&lt;p&gt;ಬಿಯರ್ ಮಾತ್ರವಲ್ಲದೆ, ಕೆಲವು ಪ್ರೀಮಿಯಂ ಇಂಡಿಯನ್ ಮೇಡ್ ಲಿಕ್ಕರ್ (IML) ಬ್ರಾಂಡ್&zwnj;ಗಳ ಎಂಆರ್&zwnj;ಪಿ ಪರಿಷ್ಕರಣೆಯಾಗಿರುವುದರಿಂದ, ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಮಾರಾಟದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಒಟ್ಟಾರೆಯಾಗಿ ಇಲಾಖೆಯು ಮೊದಲ ತ್ರೈಮಾಸಿಕದಲ್ಲಿ ಶೇ. 14.39 ರಷ್ಟು ಒಟ್ಟಾರೆ ಬೆಳವಣಿಗೆಯೊಂದಿಗೆ 10,599.29 ಕೋಟಿ ರೂ. ಸಂಗ್ರಹಿಸಿದೆ.&lt;/p&gt;&lt;h2&gt;45 ಸಾವಿರ ಕೋಟಿ ರೂ. ಆದಾಯದ ಬೃಹತ್ ಗುರಿ&lt;/h2&gt;&lt;p&gt;ರಾಜ್ಯ ಸರ್ಕಾರವು 2026-27ರ ಹಣಕಾಸು ವರ್ಷಕ್ಕೆ ಒಟ್ಟು 45,000 ಕೋಟಿ ರೂಪಾಯಿಗಳ ಅಬಕಾರಿ ಆದಾಯದ ಬೃಹತ್ ಗುರಿಯನ್ನು ಹೊಂದಿದೆ. ಈ ಗುರಿಯನ್ನು ತಲುಪಲು ಇಲಾಖೆಯು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.&lt;/p&gt;&lt;p&gt;ಆಲ್ಕೋಹಾಲ್ ಪ್ರಮಾಣ ಕಡ್ಡಾಯ: ಐಎಂಎಲ್ ತಯಾರಕರು ತಮ್ಮ ಮದ್ಯದ ಬಾಟಲಿಗಳಲ್ಲಿ ಕನಿಷ್ಠ ಶೇ. 40 ರಷ್ಟು ಆಲ್ಕೋಹಾಲ್ ಪ್ರಮಾಣವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚಿಸಿದೆ (ಈ ಹಿಂದೆ ಇದು ಶೇ. 37 ರಿಂದ ಶೇ. 42.8 ರಷ್ಟಿರುತ್ತಿತ್ತು). ಆದರೆ, ಸಾಂಪ್ರದಾಯಿಕ ಶೈಲಿಯನ್ನು ಪರಿಗಣಿಸಿ ವೋಡ್ಕಾಗೆ ಮಾತ್ರ ಶೇ. 37.5 ರಷ್ಟು ಆಲ್ಕೋಹಾಲ್ ಹೊಂದಲು ವಿನಾಯಿತಿ ನೀಡಲಾಗಿದೆ.&lt;/p&gt;&lt;p&gt;ಬಳಕೆಯಾಗದ ಪರವಾನಗಿಗಳ ಹರಾಜು: ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಅಥವಾ ಬಳಕೆಯಾಗದ 483 ಸಿಎಲ್-2ಎ (ಚಿಲ್ಲರೆ ಮದ್ಯದ ಅಂಗಡಿ) ಮತ್ತು 96 ಸಿಎಲ್-9ಎ (ಬಾರ್) ಪರವಾನಗಿಗಳನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಆನ್&zwnj;ಲೈನ್ ಹರಾಜು ಹಾಕಲು ಇಲಾಖೆ ನಿರ್ಧರಿಸಿದೆ. ಈ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಲೈಸೆನ್ಸ್&zwnj;ಗಳನ್ನು 2026-27 ರಿಂದ 2030-31 ರವರೆಗಿನ ಐದು ಅಬಕಾರಿ ವರ್ಷಗಳ ಅವಧಿಗೆ ನೀಡಲಾಗುತ್ತಿದ್ದು, ಇದರಿಂದ ಸರ್ಕಾರದ ಖಜಾನೆಗೆ ಮತ್ತಷ್ಟು ಆದಾಯ ಬರಲಿದೆ.&lt;/p&gt;&lt;p&gt;&quot;ಗ್ರಾಹಕರಲ್ಲಿ ಗುಣಮಟ್ಟದ ಮತ್ತು ಕಡಿಮೆ ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಬಳಕೆಯನ್ನು ಉತ್ತೇಜಿಸುವುದೇ ಎಐಬಿ (AIB) ನೀತಿಯ ಪ್ರಮುಖ ಉದ್ದೇಶವಾಗಿದೆ&quot; ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ರಿತೇಶ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಈ ನೂತನ ಪ್ರಯೋಗವು ಗ್ರಾಹಕರ ಆರೋಗ್ಯ ರಕ್ಷಣೆ ಮತ್ತು ಸರ್ಕಾರದ ಆದಾಯ ವೃದ್ಧಿ ಎರಡರಲ್ಲೂ ಸಕಾರಾತ್ಮಕ ಬದಲಾವಣೆ ತರುತ್ತಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/business/karnataka-aib-policy-boosts-excise-revenue-soars-as-new-premium-beer-sales-gdp/articleshow-gtftvql"/>
        </item>
        <item>
            <title><![CDATA[ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಕೊಟ್ಟ ‘ನಮ್ಮ ಬೆಂಗಳೂರು’; ಮೊದ್ಲೇ ಇಲ್ಲಿಗೆ ಬರಬಾರದಿತ್ತಾ? ತಲೆ ಚಚ್ಚಿಕೊಂಡ ಯುವಕ]]></title>
            <link>https://kannada.asianetnews.com/viral/techie-reveals-why-moving-to-bengaluru-was-his-best-career-decision-suh/articleshow-e2fo09i</link>
            <guid isPermaLink="true">https://kannada.asianetnews.com/viral/techie-reveals-why-moving-to-bengaluru-was-his-best-career-decision-suh/articleshow-e2fo09i</guid>
            <pubDate>Thu, 09 Jul 2026 15:47:56 +0530</pubDate>
            <description><![CDATA[&lt;p&gt;ಬೆಂಗಳೂರು ನನ್ನ ವೃತ್ತಿಜೀವನವನ್ನು ಸಂಪೂರ್ಣವಾಗಿ ಬದಲಿಸಿತು; ಮೊದಲೇ ಬಂದಿದ್ದರೆ ಇನ್ನಷ್ಟು ಸಾಧಿಸಬಹುದಿತ್ತು ಎಂದು AI ಸಾಫ್ಟ್&zwnj;ವೇರ್ ಆರ್ಕಿಟೆಕ್ಟ್ ಭುವನೇಶ್ ಆರ್ಯ ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx35tadgrwc9aja13avj5jg0,imgname-techie-reveals-why-moving-to-bengaluru-was-his-best-career-decision-1783591938479.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಂಗಳೂರಿನಲ್ಲಿ ವಾಸಿಸುವ ಟೆಕ್ಕಿಯೊಬ್ಬರು ಭಾರತದ ತಂತ್ರಜ್ಞಾನ ರಾಜಧಾನಿ ತಮ್ಮ ವೃತ್ತಿಜೀವನಕ್ಕೆ ಹೇಗೆ ಹೊಸ ತಿರುವು ನೀಡಿತು ಎಂಬುದನ್ನು ವಿವರಿಸಿ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಭಾರೀ ವೈರಲ್ ಆಗಿದೆ. ವೆಸ್ಕೊ ಕಂಪನಿಯಲ್ಲಿ AI ಸಾಫ್ಟ್&zwnj;ವೇರ್ ಆರ್ಕಿಟೆಕ್ಟ್ ಆಗಿರುವ ಭುವನೇಶ್ ಆರ್ಯ ಅವರು ಬೆಂಗಳೂರಿನಲ್ಲಿ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಈ ನಗರವು ತಾವು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಅವಕಾಶಗಳನ್ನು ನೀಡಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ ಪುಣೆ, ಮುಂಬೈ, ಹೈದರಾಬಾದ್ ಹಾಗೂ ದೆಹಲಿ-ಎನ್&zwnj;ಸಿಆರ್&zwnj;ನಲ್ಲಿ ಕೆಲಸ ಮಾಡಿರುವುದನ್ನು ನೆನಪಿಸಿಕೊಂಡಿರುವ ಅವರು, ಪ್ರತಿಯೊಂದು ನಗರವೂ ತಮ್ಮ ಬೆಳವಣಿಗೆಗೆ ಕೊಡುಗೆ ನೀಡಿದ್ದರೂ, ಬೆಂಗಳೂರಿನಷ್ಟು ತಮ್ಮ ವೃತ್ತಿಪರ ಬದುಕಿನ ಮೇಲೆ ಪ್ರಭಾವ ಬೀರಿದ ನಗರ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.&lt;/p&gt;&lt;h2&gt;ಬೆಂಗಳೂರನ್ನು ಹೊಗಳಿದ ಟೆಕ್ಕಿ&lt;/h2&gt;&lt;p&gt;&quot;ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಗಳಾಗಿವೆ. ಈ ನಗರ ನನಗೆ ನಾನು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಅವಕಾಶಗಳನ್ನು ನೀಡಿದೆ ಎಂದು ಪ್ರಾಮಾಣಿಕವಾಗಿ ಹೇಳಬಲ್ಲೆ,&quot; ಎಂದು ಅವರು ಪೋಸ್ಟ್&zwnj;ನಲ್ಲಿ ಬರೆದಿದ್ದಾರೆ.&lt;/p&gt;&lt;p&gt;ಕೇವಲ ನಾಲ್ಕು ವರ್ಷಗಳಲ್ಲೇ ತಮ್ಮ ವೃತ್ತಿಜೀವನದಲ್ಲಿ ಭಾರೀ ಬದಲಾವಣೆ ಕಂಡಿರುವುದಾಗಿ ಹೇಳಿರುವ ಅವರು, ಉತ್ತಮ ಉದ್ಯೋಗಾವಕಾಶಗಳು, ಹೆಚ್ಚಿನ ಸಂಬಳದ ಬೆಳವಣಿಗೆ, ಬಲವಾದ ನೆಟ್&zwnj;ವರ್ಕಿಂಗ್, ಉದ್ಯಮದ ಪ್ರಮುಖರೊಂದಿಗೆ ಸಂಪರ್ಕ, ವಿವಿಧ ಟೆಕ್ ಕಾರ್ಯಕ್ರಮಗಳು, ಸಮ್ಮೇಳನಗಳು ಹಾಗೂ ಭಾಷಣಗಳಿಗೆ ಆಹ್ವಾನಗಳು ದೊರೆತಿವೆ ಎಂದು ತಿಳಿಸಿದ್ದಾರೆ. ಜೊತೆಗೆ, ಬೆಂಗಳೂರನ್ನು &quot;ಮತ್ತೆ ಮರಳಲು ಅತ್ಯುತ್ತಮ ಮನೆ&quot; ಎಂದೂ ಬಣ್ಣಿಸಿದ್ದಾರೆ.&lt;/p&gt;&lt;p&gt;ಆರ್ಯ ತಮ್ಮ ಪೋಸ್ಟ್ ಯಾವುದೇ ನಗರವನ್ನು ಮತ್ತೊಂದು ನಗರದೊಂದಿಗೆ ಹೋಲಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. &quot;ಇದು ನಗರಗಳ ಹೋಲಿಕೆಯಲ್ಲ. ನನ್ನ ಬದುಕಿನಲ್ಲಿ ಹೊಸ ಸಾಧ್ಯತೆಗಳ ಬಾಗಿಲು ತೆರೆದ ಬೆಂಗಳೂರಿಗೆ ಸಲ್ಲಿಸುವ ಕೃತಜ್ಞತೆಯ ನಮನ ಮಾತ್ರ,&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಸವಾಲುಗಳನ್ನು ಮೀರಿ ನೋಡಿದರೆ ಅವಕಾಶಗಳ ಸಾಗರ&lt;/h2&gt;&lt;p&gt;ಬೆಂಗಳೂರು ಟ್ರಾಫಿಕ್, ಮೂಲಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವ ಅವರು, &quot;ಈ ಸವಾಲುಗಳನ್ನು ಮೀರಿ ನೋಡಿದರೆ, ಇಲ್ಲಿ ಅಂತ್ಯವಿಲ್ಲದ ಅವಕಾಶಗಳ ಸಾಗರವೇ ಕಾಣುತ್ತದೆ&quot; ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಇದೇ ವೇಳೆ, &quot;ನಾನು ಬೆಂಗಳೂರಿಗೆ ಇನ್ನೂ ಮೊದಲೇ ಬಂದಿದ್ದರೆ ನನ್ನ ವೃತ್ತಿಜೀವನ ಎಷ್ಟು ವಿಭಿನ್ನವಾಗಿರುತ್ತಿತ್ತೋ ಎಂದು ಕೆಲವೊಮ್ಮೆ ಅನಿಸುತ್ತದೆ. ಆಗ ಅವಕಾಶಗಳಿದ್ದರೂ ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಾಗಲಿಲ್ಲ. ಅದಕ್ಕೆ ಈಗ ಕೆಲವೊಮ್ಮೆ ವಿಷಾದವಾಗುತ್ತದೆ,&quot; ಎಂದು ಅವರು ಮನದಾಳದ ಮಾತು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ಮಾತಿಗೆ ಉದಾಹರಣೆಯಾಗಿ ಅವರು ನೀಡಿದ ಹೋಲಿಕೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಗಮನ ಸೆಳೆದಿದೆ. &quot;ರೈಲು ನಿಲ್ದಾಣದಲ್ಲಿ ₹10 ಬೆಲೆಯ ನೀರಿನ ಬಾಟಲಿ, ವಿಮಾನ ನಿಲ್ದಾಣದಲ್ಲಿ ₹100 ಹಾಗೂ ಪಂಚತಾರಾ ಹೋಟೆಲ್&zwnj;ನಲ್ಲಿ ₹500 ಆಗುತ್ತದೆ. ಅದೇ ರೀತಿ ಸರಿಯಾದ ಸ್ಥಳದಲ್ಲಿದ್ದರೆ ನಿಮ್ಮ ಮೌಲ್ಯವೂ ಹಲವು ಪಟ್ಟು ಹೆಚ್ಚಾಗುತ್ತದೆ. ನನಗೆ ಆ ಸ್ಥಳ ಬೆಂಗಳೂರು,&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಕೊನೆಯಲ್ಲಿ, &quot;ಬೆಂಗಳೂರು ನಿಜಕ್ಕೂ ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಸರಿಗೆ ಅರ್ಹವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ನಗರ ನನಗೆ ನೀಡಿದ ಎಲ್ಲ ಅವಕಾಶಗಳಿಗೆ ನಾನು ಸದಾ ಋಣಿಯಾಗಿರುತ್ತೇನೆ,&quot; ಎಂದು ಭುವನೇಶ್ ಆರ್ಯ ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.&lt;/p&gt;&lt;p&gt;ಅವರ ಈ ಪೋಸ್ಟ್&zwnj;ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ಅನೇಕ ಟೆಕ್ಕಿಗಳು ಬೆಂಗಳೂರಿನಲ್ಲಿರುವ ಉದ್ಯೋಗಾವಕಾಶಗಳು, ಸ್ಟಾರ್ಟ್&zwnj;ಅಪ್ ಪರಿಸರ ಮತ್ತು ವೃತ್ತಿಪರ ಬೆಳವಣಿಗೆಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ನಗರದ ಟ್ರಾಫಿಕ್ ಮತ್ತು ಮೂಲಸೌಕರ್ಯದ ಸಮಸ್ಯೆಗಳನ್ನೂ ಪ್ರಸ್ತಾಪಿಸಿದರೆ, ಇನ್ನೂ ಹಲವರು &quot;ಅವಕಾಶಗಳ ನಗರ&quot; ಎಂದು ಬೆಂಗಳೂರನ್ನು ಹೊಗಳಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/techie-reveals-why-moving-to-bengaluru-was-his-best-career-decision-suh/articleshow-e2fo09i"/>
        </item>
        <item>
            <title><![CDATA[ಪ್ರಯಾಣಿಕರ ಗಮನಕ್ಕೆ: ಬೆಂಗಳೂರು-ಚೆನ್ನೈ ಮಾರ್ಗದ ಹಲವು ರೈಲುಗಳ ಸಂಚಾರ ಭಾಗಶಃ ರದ್ದು!]]></title>
            <link>https://kannada.asianetnews.com/karnataka-districts/southern-railway-announces-partial-cancellation-several-trains-starts-from-bengaluru-due-to-engineering-work-gdp/articleshow-g1rrwka</link>
            <guid isPermaLink="true">https://kannada.asianetnews.com/karnataka-districts/southern-railway-announces-partial-cancellation-several-trains-starts-from-bengaluru-due-to-engineering-work-gdp/articleshow-g1rrwka</guid>
            <pubDate>Thu, 09 Jul 2026 15:23:35 +0530</pubDate>
            <description><![CDATA[ರೈಲ್ವೆ ಹಳಿಗಳ ನಿರ್ವಹಣಾ ಕಾಮಗಾರಿಯಿಂದಾಗಿ ಜುಲೈ 2026ರ ನಿರ್ದಿಷ್ಟ ದಿನಾಂಕಗಳಲ್ಲಿ ಬೆಂಗಳೂರು ಮತ್ತು ಚೆನ್ನೈ ನಡುವಿನ ಹಲವು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಲಾಲ್&zwnj;ಬಾಗ್ ಎಕ್ಸ್&zwnj;ಪ್ರೆಸ್ ಮತ್ತು ಜೋಲಾರ್&zwnj;ಪೇಟೆ ಮೆಮು ಸೇರಿದಂತೆ ಕೆಲವು ರೈಲುಗಳ ಸಂಚಾರವನ್ನು ಮೊಟಕುಗೊಳಿಸಲಾಗಿದ್ದು, ಪ್ರಯಾಣಿಕರು NTES ಮೂಲಕ ನೈಜ-ಸಮಯದ ಸ್ಥಿತಿಗತಿ ಪರಿಶೀಲಿಸಲು ರೈಲ್ವೆ ಇಲಾಖೆ ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsp1aqyprych72hgbtv30zq,imgname-gadag-railway-station-1782199659262.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರೈಲ್ವೆ ಹಳಿಗಳ ಬಲವರ್ಧನೆ ಹಾಗೂ ಸುರಕ್ಷಿತ ಎಂಜಿನಿಯರಿಂಗ್ ಮತ್ತು ಅಗತ್ಯ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಜುಲೈ 2026ರ ನಿರ್ದಿಷ್ಟ ದಿನಾಂಕಗಳಲ್ಲಿ ಬೆಂಗಳೂರು ಮತ್ತು ಚೆನ್ನೈ ನಡುವೆ ಸಂಚರಿಸುವ ಹಲವು ಪ್ರಮುಖ ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ದಕ್ಷಿಣ ಮತ್ತು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;ಕೆಲವು ರೈಲುಗಳ ಸಂಚಾರವನ್ನು ಮಧ್ಯದಲ್ಲೇ ಮೊಟಕುಗೊಳಿಸಲಾಗುತ್ತಿದ್ದು, ಇನ್ನು ಕೆಲವು ರೈಲುಗಳ ಪ್ರಯಾಣದ ಆರಂಭಿಕ ನಿಲ್ದಾಣಗಳನ್ನು ಬದಲಾಯಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಮುಂಚಿತವಾಗಿಯೇ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಲು ರೈಲ್ವೆ ಇಲಾಖೆ ಕೋರಿದೆ.&lt;/p&gt;&lt;h2&gt;ರೈಲುಗಳ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ:&lt;/h2&gt;&lt;h3&gt;ಬೆಂಗಳೂರು - ಜೋಲಾರ್&zwnj;ಪೇಟೆ ಮೆಮು (MEMU) ರೈಲುಗಳ ಸೇವೆ ವ್ಯತ್ಯಯ&lt;/h3&gt;&lt;p&gt;ದಿನಾಂಕ 14.07.2026 ರಂದು ಮಾತ್ರ ಅನ್ವಯಿಸುವಂತೆ: ರೈಲು ಸಂಖ್ಯೆ 66550 (ಕೆಎಸ್&zwnj;ಆರ್ ಬೆಂಗಳೂರು - ಜೋಲಾರ್&zwnj;ಪೆಟ್ಟೆ ಮೆಮು ರೈಲು): ಈ ರೈಲು ಸೋಮನಾಯಕನಪಟ್ಟಿ ಮತ್ತು ಜೋಲಾರ್&zwnj;ಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಅಂದರೆ, ಈ ರೈಲು ಜೋಲಾರ್&zwnj;ಪೇಟೆ ನಿಲ್ದಾಣದ ಬದಲಿಗೆ ಸೋಮನಾಯಕನಪಟ್ಟಿ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.&lt;/p&gt;&lt;p&gt;ರೈಲು ಸಂಖ್ಯೆ 66549 (ಜೋಲಾರ್&zwnj;ಪೆಟ್ಟೆ - ಕೆಎಸ್&zwnj;ಆರ್ ಬೆಂಗಳೂರು ಮೆಮು ರೈಲು): ಈ ರೈಲು ಸಹ ಜೋಲಾರ್&zwnj;ಪೇಟೆ ಮತ್ತು ಸೋಮನಾಯಕನಪಟ್ಟಿ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಹೀಗಾಗಿ, ಈ ರೈಲು ಜೋಲಾರ್&zwnj;ಪೇಟೆಯಿಂದ ಹೊರಡುವ ಬದಲಿಗೆ ಸೋಮನಾಯಕನಪಟ್ಟಿ ನಿಲ್ದಾಣದಿಂದಲೇ ತನ್ನ ಸಂಚಾರವನ್ನು ಆರಂಭಿಸಲಿದೆ.&lt;/p&gt;&lt;h3&gt;ಅಶೋಕಪುರಂ - ಚೆನ್ನೈ ಸೆಂಟ್ರಲ್ ಮತ್ತು ಲಾಲ್&zwnj;ಬಾಗ್ ಎಕ್ಸ್&zwnj;ಪ್ರೆಸ್ ರೈಲುಗಳ ವೇಳಾಪಟ್ಟಿ ಬದಲಾವಣೆ&lt;/h3&gt;&lt;p&gt;ಅನ್ವಯವಾಗುವ ದಿನಾಂಕಗಳು: ಜುಲೈ 10, 12, 15, 17, 19 ಮತ್ತು 22, 2026 &amp;nbsp;, ರೈಲು ಸಂಖ್ಯೆ 16552 (ಅಶೋಕಪುರಂ - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್&zwnj;ಪ್ರೆಸ್): ಈ ರೈಲು ಕಾಟ್ಪಾಡಿ ಮತ್ತು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ನಿಗದಿತ ದಿನಾಂಕಗಳಂದು ಈ ರೈಲು ಚೆನ್ನೈ ತಲುಪದೆ, ಕಾಟ್ಪಾಡಿ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.&lt;/p&gt;&lt;p&gt;ರೈಲು ಸಂಖ್ಯೆ 12607 (ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆಎಸ್&zwnj;ಆರ್ ಬೆಂಗಳೂರು ಲಾಲ್&zwnj;ಬಾಗ್ ಎಕ್ಸ್&zwnj;ಪ್ರೆಸ್): ಅತ್ಯಂತ ಜನನಿಬಿಡವಾಗಿರುವ ಈ ರೈಲು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಮತ್ತು ಕಾಟ್ಪಾಡಿ ನಡುವೆ ಭಾಗಶಃ ರದ್ದಾಗಲಿದೆ. ಪರಿಣಾಮವಾಗಿ, ಈ ರೈಲು ಚೆನ್ನೈ ಸೆಂಟ್ರಲ್ ಬದಲಿಗೆ ನಿಗದಿತ ದಿನಗಳಂದು ಸಂಜೆ 5:30 ಕ್ಕೆ ಕಾಟ್ಪಾಡಿ ನಿಲ್ದಾಣದಿಂದಲೇ ಬೆಂಗಳೂರಿನತ್ತ ತನ್ನ ಪ್ರಯಾಣವನ್ನು ಆರಂಭಿಸಲಿದೆ.&lt;/p&gt;&lt;h2&gt;ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ಪ್ರಮುಖ ಸೂಚನೆ&lt;/h2&gt;&lt;p&gt;ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (NTES) ಬಳಸಿ: ಕಾಮಗಾರಿಗಳ ಕಾರಣದಿಂದಾಗಿ ರೈಲುಗಳ ವೇಳಾಪಟ್ಟಿ ಮತ್ತು ಸಂಚಾರದಲ್ಲಿ ಕೊನೆಯ ಕ್ಷಣದ ಬದಲಾವಣೆಗಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರಯಾಣಿಕರು ನಿಲ್ದಾಣಕ್ಕೆ ಬರುವ ಮುನ್ನ ಅಧಿಕೃತ ಆನ್&zwnj;ಲೈನ್ ಪೋರ್ಟಲ್ ಅಥವಾ ಮೊಬೈಲ್ ಆಪ್ ಆದ NTES (National Train Enquiry System) ಮೂಲಕ ರೈಲುಗಳ ನೈಜ-ಸಮಯದ (Real-time) ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳಲು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ವಿನಂತಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/southern-railway-announces-partial-cancellation-several-trains-starts-from-bengaluru-due-to-engineering-work-gdp/articleshow-g1rrwka"/>
        </item>
        <item>
            <title><![CDATA[ಹಾಸನ: ಮನೆ ಮುಂದೆ ಜಾನುವಾರು ಕಟ್ಟುವಾಗ ಕಾಡಾನೆ ದಾಳಿ! ಸೊಂಡಿಲಿನಿಂದ ಎತ್ತಿ ಬಿಸಾಡಿದ ಸಲಗ, ರೈತ ಗಂಭೀರ ಗಾಯ!]]></title>
            <link>https://kannada.asianetnews.com/karnataka-districts/wild-elephant-attacks-farmer-in-hassan-siddashetti-critically-injured-rav/articleshow-lwiiz3c</link>
            <guid isPermaLink="true">https://kannada.asianetnews.com/karnataka-districts/wild-elephant-attacks-farmer-in-hassan-siddashetti-critically-injured-rav/articleshow-lwiiz3c</guid>
            <pubDate>Thu, 09 Jul 2026 14:48:48 +0530</pubDate>
            <description><![CDATA[ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ, ಮನೆಯ ಮುಂದೆ ಜಾನುವಾರು ಕಟ್ಟುತ್ತಿದ್ದ ಸಿದ್ದಶೆಟ್ಟಿ ಎಂಬ ರೈತನ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಆನೆಯು ಸೊಂಡಿಲಿನಿಂದ ಎತ್ತಿ ಬಿಸಾಡಿದ್ದರಿಂದ ತೀವ್ರವಾಗಿ ಗಾಯಗೊಂಡ ರೈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx32p3rmp4cpa5a5zw8ey3j8,imgname-----------------------2026-07-09t144715.812-1783588654867.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.9)&lt;/strong&gt;: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಹೆಚ್ಚುತ್ತಿದ್ದು ರೈತರು, ಕಾರ್ಮಿಕರು ಕೃಷಿ ಕೆಲಸಕ್ಕೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ತಡರಾತ್ರಿ ವಿದ್ಯುತ್ ದುರಸ್ತಿ ಕಾರ್ಯ ಮುಗಿಸಿ ವಾಪಸ್ ಆಗುತ್ತಿದ್ದ ಚೆಸ್ಕಾಂ ಸಿಬ್ಬಂದಿ ವಾಹನದ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ ಬೆನ್ನಲ್ಲೇ ಇದೀಗ ಜಾನುವಾರುಗಳನ್ನು ಕಟ್ಟುತ್ತಿದ್ದ ವೇಳೆ ರೈತನ ಮೇಲೆ ದಾಳಿ ನಡೆಸಿದ ಘಟನೆ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಜಾನುವಾರು ಕಟ್ಟುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ!&lt;/h2&gt;&lt;p&gt;ರೈತ ಸಿದ್ದಶೆಟ್ಟಿ ಎಂಬುವವರು ಮನೆಯ ಮುಂದಿನ ಜಾನುವಾರುಗಳನ್ನು ಕಟ್ಟುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದ ಒಂಟಿ ಸಲಗ, ರೈತ ಸಿದ್ಧಶೆಟ್ಟಿ(65) ತಪ್ಪಿಸಿಕೊಳ್ಳಲು ಅವಕಾಶ ಕೊಡದೆ ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಆನೆಯ ಅನಿರೀಕ್ಷಿತ ದಾಳಿಯಿಂದಾಗಿ ತೀವ್ರ ಗಾಯಗೊಂಡಿರುವ ರೈತ ಸಿದ್ಧಶೆಟ್ಟಿ ಅವರಿಗೆ ಬೇಲೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ, ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಮಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ಅಧಿಕಾರಿಗಳು ನಾಗರಿಕರು ಓಡಾಡಲು ಸುರಕ್ಷಿತ ಕ್ರಮ ಕೈಗೊಳ್ಳುವಂತೆ ನಾಗರಿರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/wild-elephant-attacks-farmer-in-hassan-siddashetti-critically-injured-rav/articleshow-lwiiz3c"/>
        </item>
        <item>
            <title><![CDATA[ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ; Rapido ಬುಕ್‌ ಮಾಡಿದ್ದು ಆ ವ್ಯಕ್ತಿ! ದಂಡ ತೆತ್ತಿದ್ದು ಮಾತ್ರ ಡ್ರೈವರ್‌]]></title>
            <link>https://kannada.asianetnews.com/viral/bengaluru-viral-news-garbage-dumping-video-leads-to-10000-penalty-for-rapido-driver-suh/articleshow-nm3mzwo</link>
            <guid isPermaLink="true">https://kannada.asianetnews.com/viral/bengaluru-viral-news-garbage-dumping-video-leads-to-10000-penalty-for-rapido-driver-suh/articleshow-nm3mzwo</guid>
            <pubDate>Thu, 09 Jul 2026 14:43:59 +0530</pubDate>
            <description><![CDATA[&lt;p&gt;Bengaluru News ಬೆಂಗಳೂರಿನ ರಾಪಿಡೋ ಆಟೋ ಚಾಲಕನೊಬ್ಬ ಕಸ ತುಂಬಿದ ಚೀಲವನ್ನು ಪಾರ್ಸೆಲ್ ಎಂದು ತಪ್ಪಾಗಿ ಭಾವಿಸಿ ಭಾರಿ ಬೆಲೆ ತೆರಬೇಕಾಯಿತು. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿದ್ದಕ್ಕಾಗಿ ನಗರಸಭೆ ಚಾಲಕನಿಗೆ ಭಾರೀ ಮೊತ್ತದ ದಂಡ ವಿಧಿಸಿತು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx32ebmchyndj74azssq5kgz,imgname-bengaluru-viral-news-1783588400777.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಪಿಡೋ ಆ್ಯಪ್ ಮೂಲಕ ಪಾರ್ಸೆಲ್ ಸಾಗಿಸಲು ಒಪ್ಪಿಕೊಂಡ ಆಟೋ ಚಾಲಕನೊಬ್ಬ, ಗ್ರಾಹಕನ ಮೋಸದಿಂದ ₹10,000 ದಂಡ ಕಟ್ಟಬೇಕಾದ ಘಟನೆ ಬೆಂಗಳೂರಿನ ಎಚ್&zwnj;ಎಸ್&zwnj;ಆರ್ ಲೇಔಟ್&zwnj;ನಲ್ಲಿ ನಡೆದಿದೆ. ಕಸದ ಚೀಲವನ್ನು ಸಾಮಾನ್ಯ ಪಾರ್ಸೆಲ್ ಎಂದು ಭಾವಿಸಿ ಸಾಗಿಸಿದ ಚಾಲಕ, ಕೊನೆಗೆ ಪಾಲಿಕೆಯ ಕ್ರಮಕ್ಕೆ ಗುರಿಯಾಗಿದ್ದಾನೆ.&lt;/p&gt;&lt;p&gt;ವರದಿಗಳ ಪ್ರಕಾರ, ಗ್ರಾಹಕ ರಾಪಿಡೋ ಆ್ಯಪ್&zwnj;ನಲ್ಲಿ ಆಟೋ ಬುಕ್ ಮಾಡಿ ಚಾಲಕನಿಗೆ ಒಂದು ಬ್ಯಾಗ್ ನೀಡಿ, ನಿಗದಿತ ಸ್ಥಳದಲ್ಲಿ ತಲುಪಿಸಲು ಸೂಚಿಸಿದ್ದ. ಬ್ಯಾಗ್&zwnj;ನಲ್ಲಿ ಕಸವಿದೆ ಎಂಬುದು ಚಾಲಕನಿಗೆ ತಿಳಿದಿರಲಿಲ್ಲ. ಗ್ರಾಹಕ ಹೇಳಿದ ಸ್ಥಳಕ್ಕೆ ತೆರಳಿ ಬ್ಯಾಗ್ ಇಳಿಸಲು ಮುಂದಾದ ವೇಳೆ, ಸ್ಥಳದಲ್ಲೇ ನಿಗಾ ವಹಿಸಿದ್ದ ಬಿಬಿಎಂಪಿ ಅಧಿಕಾರಿಗಳು ಚಾಲಕನನ್ನು ತಡೆದಿದ್ದಾರೆ.&lt;/p&gt;&lt;p&gt;ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕಸ ಸುರಿದ ಆರೋಪದಡಿ ಅಧಿಕಾರಿಗಳು ಚಾಲಕನಿಗೆ ₹10,000 ದಂಡ ವಿಧಿಸಿದ್ದಾರೆ. ಕಸ ತನ್ನದಲ್ಲ, ಗ್ರಾಹಕ ಪಾರ್ಸೆಲ್ ಎಂದು ನೀಡಿ ಕಳುಹಿಸಿದ್ದಾನೆ ಎಂದು ಚಾಲಕ ಮನವರಿಕೆ ಮಾಡಲು ಪ್ರಯತ್ನಿಸಿದರೂ, ಸ್ಥಳದಲ್ಲೇ ದಂಡ ವಿಧಿಸಲಾಗಿದೆ.&lt;/p&gt;&lt;p&gt;ದಂಡ ವಿಧಿಸಿದ ಬಳಿಕ ಚಾಲಕ ಬ್ಯಾಗ್ ನೀಡಿದ ಗ್ರಾಹಕನಿಗೆ ಹಲವು ಬಾರಿ ಕರೆ ಮಾಡಿದ್ದಾನೆ. ಆದರೆ ಗ್ರಾಹಕ ಯಾವುದೇ ಕರೆಯನ್ನು ಸ್ವೀಕರಿಸದ ಕಾರಣ, ತನ್ನ ಮಾತು ಸಾಬೀತುಪಡಿಸಲು ಸಾಧ್ಯವಾಗದೆ ಕೊನೆಗೆ ದಂಡ ಪಾವತಿಸಬೇಕಾಯಿತು.&lt;/p&gt;&lt;p&gt;ಈ ಘಟನೆ ಆ್ಯಪ್ ಆಧಾರಿತ ಪಾರ್ಸೆಲ್ ಸೇವೆ ಬಳಸುವ ಚಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಗ್ರಾಹಕರು ನೀಡುವ ಬ್ಯಾಗ್ ಅಥವಾ ಪಾರ್ಸೆಲ್&zwnj;ನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳದೆ ಸಾಗಿಸಿದರೆ, ಕಾನೂನು ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;&lt;p&gt;ಇದರ ನಡುವೆ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಕಸ ಸುರಿಯುವವರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಮುಂದುವರಿಸಿದ್ದು, ನಿಗದಿತ ಸ್ಥಳಗಳಲ್ಲಿ ಮಾತ್ರ ಕಸ ವಿಲೇವಾರಿ ಮಾಡುವಂತೆ ನಾಗರಿಕರಿಗೆ ಸೂಚನೆ ನೀಡಿದೆ. ನಿಯಮ ಉಲ್ಲಂಘಿಸಿದರೆ ದಂಡ ಸೇರಿದಂತೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/bengaluru-viral-news-garbage-dumping-video-leads-to-10000-penalty-for-rapido-driver-suh/articleshow-nm3mzwo"/>
        </item>
        <item>
            <title><![CDATA[ಬೆಂಗಳೂರು ಮೂಲಸೌಕರ್ಯಕ್ಕೆ ₹1.5 ಲಕ್ಷ ಕೋಟಿ: ಮೆಟ್ರೋ ಜಾಲ 500 ಕಿ.ಮೀ.ಗೆ ವಿಸ್ತರಣೆ ಗುರಿ, ಎಐ ವಿವಿ ಸ್ಥಾಪನೆ!]]></title>
            <link>https://kannada.asianetnews.com/gallery/karnataka-districts/brand-bengaluru-karnataka-govt-announces-rs1-5-lakh-crore-master-plan-40km-tunnel-road-and-ai-university-gdp-cuxygci</link>
            <guid isPermaLink="true">https://kannada.asianetnews.com/gallery/karnataka-districts/brand-bengaluru-karnataka-govt-announces-rs1-5-lakh-crore-master-plan-40km-tunnel-road-and-ai-university-gdp-cuxygci</guid>
            <pubDate>Thu, 09 Jul 2026 14:43:02 +0530</pubDate>
            <description><![CDATA[&lt;p&gt;'ಟಾರ್ಗೆಟ್ ಇಂಡಿಯಾ' ಕಾರ್ಯಕ್ರಮದಲ್ಲಿ, &amp;nbsp;ಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು 1.50 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಲ್ಲಿ 500 ಕಿ.ಮೀ. ಮೆಟ್ರೋ ವಿಸ್ತರಣೆ, 40 ಕಿ.ಮೀ. ಸುರಂಗ ರಸ್ತೆ ನಿರ್ಮಾಣ &amp;nbsp;ಸೇರಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2xg6x88xpjmvhe3w8hb809,imgname-dk-shivakumar--8--1783583218600.jpg" type="image/jpeg" height="390" width="690"/>
            <content:encoded><![CDATA[&lt;p&gt;'ಟಾರ್ಗೆಟ್ ಇಂಡಿಯಾ' ಕಾರ್ಯಕ್ರಮದಲ್ಲಿ, &amp;nbsp;ಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು 1.50 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಲ್ಲಿ 500 ಕಿ.ಮೀ. ಮೆಟ್ರೋ ವಿಸ್ತರಣೆ, 40 ಕಿ.ಮೀ. ಸುರಂಗ ರಸ್ತೆ ನಿರ್ಮಾಣ &amp;nbsp;ಸೇರಿವೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಪರ್ಯಾಯವಾಗಿ ಸುಗಮ ಸಂಚಾರ ಕಲ್ಪಿಸಲು ಮತ್ತು ರಾಜ್ಯದ ಎರಡು ಹಾಗೂ ಮೂರನೇ ಹಂತದ ನಗರಗಳ ಉದ್ಯಮ ಪ್ರಗತಿಗೆ ಬೂಸ್ಟರ್ ಡೋಸ್ ನೀಡಲು ರಾಜ್ಯ ಸರ್ಕಾರ ಬೃಹತ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ನಗರದ ಮಾನ್ಯತಾ ಟೆಕ್&zwnj;ಪಾರ್ಕ್&zwnj;ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ &lsquo;ಟಾರ್ಗೆಟ್ ಇಂಡಿಯಾ&rsquo; ಜಾಗತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ &amp;nbsp;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗಾಗಿ ಬರೋಬ್ಬರಿ 1.50 ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ&lt;/p&gt;&lt;img&gt;&lt;p&gt;ನಗರದಲ್ಲಿ ಪ್ರತಿ ತಿಂಗಳು ಸರಾಸರಿ 30 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿದ್ದು, ಸಂಚಾರ ದಟ್ಟಣೆ ನಿಯಂತ್ರಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಪ್ರತಿಯೊಬ್ಬ ಉದ್ಯೋಗಿಯೂ ಕಚೇರಿ ಮುಗಿಸಿ 30 ರಿಂದ 40 ನಿಮಿಷಗಳಲ್ಲಿ ಮನೆ ಸೇರಬೇಕು ಎನ್ನುವ ಗುರಿಯೊಂದಿಗೆ ಈ ಕೆಳಗಿನ ಬೃಹತ್ ಯೋಜನೆಗಳನ್ನು ರೂಪಿಸಲಾಗಿದೆ.&lt;/p&gt;&lt;h2&gt;'ನಮ್ಮ ಮೆಟ್ರೊ' 500 ಕಿ.ಮೀ ವಿಸ್ತರಣೆ&lt;/h2&gt;&lt;p&gt;ಸದ್ಯ 350 ಕಿ.ಮೀ. ಮಾರ್ಗದಲ್ಲಿ ಮೆಟ್ರೊ ಸಂಪರ್ಕ ಕಲ್ಪಿಸಲು ಯೋಜನೆ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ವೇಳೆಗೆ ಈ ಜಾಲವನ್ನು 500 ಕಿ.ಮೀ.ಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ.&lt;/p&gt;&lt;img&gt;&lt;p&gt;ಹೆಬ್ಬಾಳದ ಬಳಿ ಸಂಚಾರ ದಟ್ಟಣೆ ನಿಯಂತ್ರಿಸಲು ಈಗಾಗಲೇ ಸಣ್ಣದೊಂದು ಟನಲ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ನಗರದಲ್ಲಿ 40 ಕಿ.ಮೀ. ಉದ್ದದ ಬೃಹತ್ ಸುರಂಗ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗುವುದು.&lt;/p&gt;&lt;h2&gt;ಮೇಲ್ಸೇತುವೆಗಳು ಮತ್ತು ಪಿಆರ್&zwnj;ಆರ್&lt;/h2&gt;&lt;p&gt;ಸಂಚಾರ ಸುಧಾರಣೆಗಾಗಿ 44 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ರಸ್ತೆ, 133 ಕಿ.ಮೀ. ಉದ್ದದ ಮೇಲ್ಸೇತುವೆ (Flyover) ಮತ್ತು 123 ಕಿ.ಮೀ. ಉದ್ದದ ಪೆರಿಫೆರಲ್ ರಿಂಗ್ ರಸ್ತೆ (PRR) ನಿರ್ಮಾಣಕ್ಕೆ ಯೋಜನೆಗಳು ಸಿದ್ಧವಾಗಿವೆ. ಪಿಆರ್&zwnj;ಆರ್ ರಸ್ತೆ ನಿರ್ಮಾಣದ ಮೊದಲ ಹಂತಕ್ಕೆ 26,000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ರಾಜಧಾನಿಯ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು 'ಬೆಂಗಳೂರಿನ ಆಚೆಗೂ ಮತ್ತಷ್ಟು ಬೆಂಗಳೂರಿನಂತಹ ನಗರಗಳನ್ನು' ನಿರ್ಮಿಸಲು ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಸರ್ಕಾರ ಭರಪೂರ ಕೊಡುಗೆಗಳನ್ನು ಘೋಷಿಸಿದೆ.&lt;/p&gt;&lt;p&gt;ಬೆಂಗಳೂರಿನಲ್ಲಿ ಐಟಿ ಕಚೇರಿಗಳ ಜಾಗದ ಬಾಡಿಗೆಯು ಪ್ರತಿ ಚದರ ಅಡಿಗೆ 1 ರಿಂದ 1.50 ಡಾಲರ್&zwnj;ನಷ್ಟಿದೆ. ಆದರೆ, ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೇವಲ ಅರ್ಧ ಡಾಲರ್&zwnj;ಗೆ ಕಚೇರಿ ಜಾಗ ಸಿಗುತ್ತಿದೆ. ಈ ನಗರಗಳಲ್ಲಿ ಉದ್ಯಮ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ದುಪ್ಪಟ್ಟು ಎಫ್&zwnj;ಎಆರ್ (Floor Area Ratio) ನೀಡಲು ನಿರ್ಧರಿಸಲಾಗಿದ್ದು, ಅಲ್ಲಿಯೂ ಬಹುಮಹಡಿ ಕಟ್ಟಡಗಳ (High-rise Buildings) ನಿರ್ಮಾಣಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ನೆರೆಯ ಮಹಾರಾಷ್ಟ್ರವು ಉದ್ಯಮಗಳಿಗೆ ಅತ್ಯಂತ ದುಬಾರಿಯಾಗುತ್ತಿದ್ದು, ಹವಾಮಾನ, ಸಂಸ್ಕೃತಿ ಮತ್ತು ಪ್ರತಿಭೆಯ ದೃಷ್ಟಿಯಿಂದ ಕರ್ನಾಟಕವೇ ಜಾಗತಿಕ ಕಂಪನಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 257 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿ ವರ್ಷ 1.50 ಲಕ್ಷ ಎಂಜಿನಿಯರ್&zwnj;ಗಳು ಹೊರಬರುತ್ತಿದ್ದಾರೆ. ಅಲ್ಲದೆ ದೇಶದಲ್ಲಿರುವ 138 ಅಂತರರಾಷ್ಟ್ರೀಯ ಶಾಲೆಗಳ ಪೈಕಿ 40 ಶಾಲೆಗಳು ಕರ್ನಾಟಕದಲ್ಲೇ ಇರುವುದು ನಮ್ಮ ಮಾನವ ಸಂಪನ್ಮೂಲದ ಶಕ್ತಿಯನ್ನು ತೋರಿಸುತ್ತದೆ. 2029ರ ವೇಳೆಗೆ ರಾಜ್ಯದಲ್ಲಿ 500 ಹೊಸ ಜಿಸಿಸಿ (Global Capability Centres)ಗಳನ್ನು ಆಕರ್ಷಿಸುವ, 3.50 ಲಕ್ಷ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ 4.76 ಲಕ್ಷ ಕೋಟಿ ಮೊತ್ತದ ಆರ್ಥಿಕ ಉತ್ಪಾದನೆಯ ಗುರಿ ತಲುಪಲು ಸರ್ಕಾರ ಬದ್ಧವಾಗಿದೆ.&lt;/p&gt;&lt;img&gt;&lt;p&gt;ಭವಿಷ್ಯದ ಅತ್ಯಾಧುನಿಕ ಸಂಶೋಧನೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸರ್ಕಾರ, ಬೆಂಗಳೂರಿನಲ್ಲಿ ಪ್ರತ್ಯೇಕ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ (Artificial Intelligence University) ಸ್ಥಾಪಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಜಾಗತಿಕ ತಜ್ಞರಿಂದ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಇಡೀ ಪ್ರಪಂಚಕ್ಕೆ ಬೇಕಾದ ಮುಂದಿನ ತಲೆಮಾರಿನ ತಂತ್ರಜ್ಞಾನಗಳು ಬೆಂಗಳೂರಿನಿಂದಲೇ ವಿಸ್ತರಣೆಯಾಗಬೇಕು ಎನ್ನುವುದು ಸರ್ಕಾರದ ಸ್ಪಷ್ಟ ಉದ್ದೇಶವಾಗಿದೆ. ಈ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಸೇರಿದಂತೆ ಜಾಗತಿಕ ಉದ್ಯಮ ರಂಗದ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/brand-bengaluru-karnataka-govt-announces-rs1-5-lakh-crore-master-plan-40km-tunnel-road-and-ai-university-gdp-cuxygci"/>
        </item>
        <item>
            <title><![CDATA['ಬರ್ತೀನಿ ಅಂದ್ರೆ..' ರಾಜ್ಯ ರಾಜಕಾರಣಕ್ಕೆ ಎಂಟ್ರಿ ಬಗ್ಗೆ ಕುಮಾರಸ್ವಾಮಿ ಮಹತ್ವದ ಹೇಳಿಕೆ]]></title>
            <link>https://kannada.asianetnews.com/politics/central-minister-hd-kumaraswamy-on-state-politics-gkn/articleshow-x5g1gdd</link>
            <guid isPermaLink="true">https://kannada.asianetnews.com/politics/central-minister-hd-kumaraswamy-on-state-politics-gkn/articleshow-x5g1gdd</guid>
            <pubDate>Thu, 09 Jul 2026 14:16:18 +0530</pubDate>
            <description><![CDATA[&lt;p&gt;ಕುಮಾರಸ್ವಾಮಿ ಅವರು ತಾವು ದೆಹಲಿಯಲ್ಲಿದ್ದರೂ ಕರ್ನಾಟಕದ ಪ್ರತಿ ಬೆಳವಣಿಗೆಯ ಮೇಲೆ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾಗುವ ಮುನ್ಸೂಚನೆ ನೀಡಿದ್ದಾರೆ. ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಅನ್ನೋದ್ರ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx301h4366emhtcf4zjh083z,imgname-hd-kumaraswamy-1783585883267.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಸುತ್ತಲಿನ ರಾಜ್ಯ ರಾಜಕಾರಣದ ಚರ್ಚೆಗಳು ಮಾತ್ರ ನಿಂತಿಲ್ಲ. ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುತ್ತಾರಾ? ಎಂಬ ಪ್ರಶ್ನೆಗೆ ಈಗ ಸ್ವತಃ ಕುಮಾರಸ್ವಾಮಿ ಅವರೇ ಅಚ್ಚರಿಯ ಉತ್ತರ ನೀಡಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.&lt;/p&gt;&lt;h2&gt;&lt;strong&gt;ರಾಜ್ಯಕ್ಕೆ ಬರ್ತೀನಿ, ಆದ್ರೆ ಈಗಲೇ ಅಲ್ಲ&lt;/strong&gt;&lt;/h2&gt;&lt;p&gt;ರಾಜ್ಯ ರಾಜಕಾರಣಕ್ಕೆ ಮರಳುವ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಾನು ರಾಜ್ಯಕ್ಕೆ ವಾಪಸ್ ಬರುತ್ತೇನೆ ಅಂದ ಕೂಡಲೇ ಅದು ಈಗಲೇ ಎಂದು ಅರ್ಥವಲ್ಲ. ಸದ್ಯಕ್ಕೆ ನಾನು ಕೇಂದ್ರ ಸಚಿವನಾಗಿದ್ದೇನೆ, ಇನ್ನೂ ಮೂರು ವರ್ಷ ಸಂಸದನಾಗಿ ಅಧಿಕಾರಾವಧಿ ಇದೆ. ಹಾಗಾಗಿ ನಾಳೆಯೇ ಬರುತ್ತೇನೆ ಎಂದಲ್ಲ. ಕೇಂದ್ರದಲ್ಲಿ ನನಗೆ ಜವಾಬ್ದಾರಿ ನೀಡಲಾಗಿದೆ, ಅದನ್ನು ನಿಭಾಯಿಸುತ್ತಲೇ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನೂ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ನಾನು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.&lt;/p&gt;&lt;h3&gt;&lt;strong&gt;ಹಿರಿಯೂರು ಉಪ ಚುನಾವಣೆಗೆ ಜೆಡಿಎಸ್ ಸಜ್ಜು&lt;/strong&gt;&lt;/h3&gt;&lt;p&gt;ಹಿರಿಯೂರು ಕ್ಷೇತ್ರದ ಉಪ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದು ನಮ್ಮ ಅಪೇಕ್ಷೆ. ಈ ಬಗ್ಗೆ ಈಗಾಗಲೇ ಎನ್&zwnj;ಡಿಎ ಹೈಕಮಾಂಡ್&zwnj;ಗೆ ಮನವಿ ಮಾಡಿದ್ದೇನೆ. ಅಲ್ಲಿ ನಮ್ಮ ಪಕ್ಷದ ಇಚ್ಛೆಯಂತೆ ಸ್ಪರ್ಧೆ ಮಾಡುವ ಬಗ್ಗೆ ಶೀಘ್ರದಲ್ಲೇ ತೀರ್ಮಾನವಾಗಲಿದೆ ಎಂದರು.&lt;/p&gt;&lt;h3&gt;&lt;strong&gt;ಈಶ್ವರ್ ಖಂಡ್ರೆ ವಿರುದ್ಧ ವಾಗ್ದಾಳಿ&lt;/strong&gt;&lt;/h3&gt;&lt;p&gt;ಇದೇ ವೇಳೆ ಹೆಚ್&zwnj;ಎಂಟಿ (HMT) ಭೂಮಿಗೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. ಹೆಚ್&zwnj;ಎಂಟಿ ಪಕ್ಕದಲ್ಲೇ ಏರ್ ಫೋರ್ಸ್ ಇದೆ, ಅದಕ್ಕೆಲ್ಲಾ ನಮ್ಮ ಬಳಿ ದಾಖಲೆ ಇದೆ. ಹೆಚ್&zwnj;ಎಂಟಿ ಭೂಮಿಯನ್ನು ಮುಟ್ಟಲು ಆಗುವುದಿಲ್ಲ, ಕೋರ್ಟ್ ಸ್ಟೇ ನೀಡಿದೆ. ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿ ಎರಡು ವರ್ಷದಿಂದ ಎಲ್ಲೆಲ್ಲಿ ಭೂಮಿ ಉಳಿಸಿದ್ದಾರೆ? ಕೇವಲ ಹೆಚ್&zwnj;ಎಂಟಿ ಮತ್ತು ಕುದುರೆಮುಖ ಬಗ್ಗೆಯೂ ಯಾಕೆ ಮಾತನಾಡುತ್ತಿದ್ದಾರೆ? ಬೇರೆಯವರಿಗೆ ಕೊಟ್ಟ ಜಮೀನನ್ನು ವಾಪಸ್ ಪಡೆಯುವ ಕೆಲಸವನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಸವಾಲು ಹಾಕಿದರು.&lt;/p&gt;&lt;h3&gt;&lt;strong&gt;ಬೆಂಗಳೂರು ಉದ್ದಾರಕ್ಕೆ ಹಣ ಎಲ್ಲಿದೆ?&lt;/strong&gt;&lt;/h3&gt;&lt;p&gt;ಬೆಂಗಳೂರು ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ. ನೀಡುತ್ತೇವೆ ಎಂಬ ಸರ್ಕಾರದ ಘೋಷಣೆಯನ್ನು ಲೇವಡಿ ಮಾಡಿದ ಕುಮಾರಸ್ವಾಮಿ, ಸರ್ಕಾರದಲ್ಲಿ ಹಣ ಎಲ್ಲಿದೆ? ಯಾರ ತಲೆ ಮೇಲೆ ಸಾಲ ಹೊರಿಸುತ್ತೀರಿ? ಜನರ ಮೇಲೆ ಸಾಲದ ಹೊರೆ ಹಾಕಿ ಬೆಂಗಳೂರು ಉದ್ದಾರ ಮಾಡುತ್ತೀರಾ? ಎಂದು ಪ್ರಶ್ನಿಸಿದರು. ಸರ್ಕಾರದ 15 ಲಕ್ಷ ಸಸಿ ನೆಡುವ ಗಿನ್ನೆಸ್ ದಾಖಲೆಯ ಪ್ರಯತ್ನದ ಬಗ್ಗೆ ಕುಹಕವಾಡಿದ ಹೆಚ್&zwnj;ಡಿಕೆ, 15 ಲಕ್ಷ ಸಸಿ ನೆಟ್ಟು ಚೊಂಬಿನಲ್ಲಿ ನೀರು ಬಿಡುತ್ತಿದ್ದಾರೆ. ಗಿನ್ನೆಸ್ ದಾಖಲೆ ಅಂತಾರೆ, ಇದಕ್ಕಾಗಿ ಭತ್ತ ನೆಡುವವರನ್ನು ಕರೆದುಕೊಂಡು ಬಂದಿದ್ದರೇನೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;ಸಿದ್ದರಾಮಯ್ಯ ಕಾಲದ ಟೆಂಡರ್ ಕ್ಯಾನ್ಸಲ್ ಮಾಡಿ ಡಿ.ಕೆ. ಶಿವಕುಮಾರ್ ಮರು ಟೆಂಡರ್ ಮಾಡಿರುವ ವಿಚಾರದ ಬಗ್ಗೆ ಈಗಲೇ ಪ್ರತಿಕ್ರಿಯಿಸಲು ನಿರಾಕರಿಸಿದ ಕುಮಾರಸ್ವಾಮಿ, ಇಂದು ನಾನು ಈ ಬಗ್ಗೆ ಏನೂ ಮಾತನಾಡಲ್ಲ. ಅದಕ್ಕೆ ಸರಿಯಾದ ಸಮಯ ಬರಲಿ, ಆಗ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು. ಒಟ್ಟಿನಲ್ಲಿ ಕುಮಾರಸ್ವಾಮಿ ಅವರು ತಾವು ದೆಹಲಿಯಲ್ಲಿದ್ದರೂ ಕರ್ನಾಟಕದ ಪ್ರತಿ ಬೆಳವಣಿಗೆಯ ಮೇಲೆ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾಗುವ ಮುನ್ಸೂಚನೆ ನೀಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/central-minister-hd-kumaraswamy-on-state-politics-gkn/articleshow-x5g1gdd"/>
        </item>
        <item>
            <title><![CDATA[Bengaluru Idli ದೇಶದ ಗಮನ ಸೆಳೆದ ಬೆಂಗಳೂರ 5 ರೂ. ಇಡ್ಲಿ: 60 ವರ್ಷದಿಂದ ಅದೇ ಟೇಸ್ಟ್​- ಅಜ್ಜನ ಕೈರುಚಿಗೆ ಜನರು ಫಿದಾ]]></title>
            <link>https://kannada.asianetnews.com/food/1500-idlis-a-day-rs-5-each-70-year-old-in-bengaluru-has-been-cooking-the-iconic-south-indian-breakfast-suc/articleshow-swuiyng</link>
            <guid isPermaLink="true">https://kannada.asianetnews.com/food/1500-idlis-a-day-rs-5-each-70-year-old-in-bengaluru-has-been-cooking-the-iconic-south-indian-breakfast-suc/articleshow-swuiyng</guid>
            <pubDate>Thu, 09 Jul 2026 14:00:22 +0530</pubDate>
            <description><![CDATA[ಕನಕಪುರದಲ್ಲಿ 70 ವರ್ಷದ ರಾಮಚಂದ್ರ ಅವರು ತಮ್ಮ ತಂದೆ ಸ್ಥಾಪಿಸಿದ 5 ದಶಕಗಳಷ್ಟು ಹಳೆಯದಾದ 'ಕೋಟೆ ಮನೆ ಇಡ್ಲಿ' ಅಂಗಡಿಯನ್ನು ನಡೆಸುತ್ತಿದ್ದಾರೆ. ಪ್ರತಿದಿನ ಉರುವಲು ಒಲೆಯ ಮೇಲೆ ತಯಾರಿಸಿದ 1500 ಇಡ್ಲಿಗಳನ್ನು ಕೇವಲ 5 ರೂಪಾಯಿಗೆ ಮಾರಾಟ ಮಾಡುವ ಮೂಲಕ, ಅವರು ತಮ್ಮ ಕುಟುಂಬದ ಪರಂಪರೆಯನ್ನು ಉತ್ಸಾಹದಿಂದ ಮುಂದುವರಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx2zz4t0bje80gx4adw3zxab,imgname-idli-1783585805120.jpg" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಭಾರತದ ಅತ್ಯುತ್ತಮ ಉಪಹಾರವೆಂದೇ ಫೇಮಸ್​ ಆಗಿರೋ ಇಡ್ಲಿ-ಸಾಂಬಾರ್​ಕ್ಕೆ ಅದೆಷ್ಟೋ ದಶಕಗಳಿಂದ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಸಮೃದ್ಧ ರುಚಿ ಮತ್ತು ಆರೋಗ್ಯಕರ ಪೌಷ್ಟಿಕಾಂಶ ಎರಡನ್ನೂ ಒಂದೇ ಆಹಾರದಲ್ಲಿ ಸೇವಿಸಬಹುದಾದರೆ ಅದು ಇಡ್ಲಿ ಎನ್ನಲಾಗುತ್ತದೆ. ಪ್ರೊಟೀನ್-ಭರಿತ ಮತ್ತು ಹೊಟ್ಟೆ ತುಂಬಿಸುವ ಅದರಲ್ಲಿಯೂ ಬೇರೆ ತಿನಿಸುಗಳಿಗೆ ಹೋಲಿಸಿದರೆ ತುಸು ಕಡಿಮೆ ದರದಲ್ಲಿ, ಮೃದುವಾದ-ಆವಿಯಲ್ಲಿ ಬೇಯಿಸಿದ ಇಡ್ಲಿಗಳು ಆರೋಗ್ಯಕರ ಕಾರ್ಬೋಹೈಡ್ರೇಟ್&zwnj;ಗಳು ಮತ್ತು ಅಗತ್ಯ ಅಮೈನೋ ಆಮ್ಲಗಳ ಶಕ್ತಿ ಕೇಂದ್ರವಾಗಿದೆ.&lt;/p&gt;&lt;p&gt;ಎಷ್ಟೋ ಮಂದಿ ಇಡ್ಲಿ ಮಾರಿಯೇ ಬದುಕು ಕಟ್ಟಿಕೊಂಡಿದ್ದಾರೆ. ಅದರಲ್ಲಿಯೂ ಬೆಂಗಳೂರಿನಂಥ ನಗರಗಳಲ್ಲಿ ಬೀದಿಬದಿಗಳಲ್ಲಿ ಇಡ್ಲಿಯನ್ನು ಸವಿಯುವವರೇ ಹೆಚ್ಚು. ಆದರೆ, ಆದರೆ ಬೆಂಗಳೂರಿನಿಂದ ಕೇವಲ 2 ಗಂಟೆಗಳ ದೂರದಲ್ಲಿ, ಕನಕಪುರದಲ್ಲಿ ಒಂದು ವಿಲಕ್ಷಣ ಅಂಗಡಿಯಿದೆ, ಅಲ್ಲಿ 70 ವರ್ಷ ವಯಸ್ಸಿನವರ ಮನೆಯಲ್ಲಿ ತಯಾರಿಸಿದ ಇಡ್ಲಿಗಳು ಮಾತ್ರ ಈಗ ದೇಶದ ಗಮನ ಸೆಳೆಯುತ್ತಿದೆ. ಅದರ ಒಡೆಯ 70 ವರ್ಷದ ರಾಮಚಂದ್ರ.&lt;/p&gt;&lt;h2&gt;&lt;strong&gt;5 ದಶಕಗಳ ಉರುವಲು ಮತ್ತು ರುಚಿಕರವಾದ ಇಡ್ಲಿಗಳು&lt;/strong&gt;&lt;/h2&gt;&lt;p&gt;ರಾಮಚಂದ್ರ 56 ವರ್ಷಗಳಿಂದ ಕನಕಪುರದ ಹೃದಯಭಾಗದಲ್ಲಿರುವ ತನ್ನ ಸಣ್ಣ ಇಡ್ಲಿ ಅಂಗಡಿ, ಕೋಟೆ ಮನೆ ಇಡ್ಲಿಯನ್ನು ನಡೆಸುತ್ತಿರುವ ವೃದ್ಧ ವ್ಯಕ್ತಿ. ಈ ಅಂಗಡಿಯನ್ನು 1970 ರ ದಶಕದಲ್ಲಿ ರಾಮಚಂದ್ರ ಅವರ ತಂದೆ ಶೇಷಪ್ಪ ಸ್ಥಾಪಿಸಿದರು. ಆಗ ಅವರು ಕೇವಲ 1 ರೂಪಾಯಿಗೆ 10 ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದರು. 10 ನೇ ತರಗತಿ ಮುಗಿಸಿದ ಕೂಡಲೇ, ರಾಮಚಂದ್ರ ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸಿ 16 ನೇ ವಯಸ್ಸಿನಲ್ಲಿ ಕೋಟೆ ಮನೆ ಇಡ್ಲಿಯ ನಿಯಂತ್ರಣವನ್ನು ಪಡೆದರು, ತಮ್ಮ ತಂದೆಯ ಪರಂಪರೆಯನ್ನು ಮುಂದುವರೆಸಿದರು.&lt;/p&gt;&lt;p&gt;ರಾಮಚಂದ್ರ ಅವರ ಅಂಗಡಿಗೆ ಗ್ರಾಹಕರನ್ನು ಆಕರ್ಷಿಸುವುದು ಕಳೆದ 5 ದಶಕಗಳಿಂದ ಬದಲಾಗದೆ ಉಳಿದಿರುವ ಅವರ ಮನೆಯಲ್ಲಿ ತಯಾರಿಸಿದ ಪಾಕವಿಧಾನ. ಅವರ ವಯಸ್ಸಿನಲ್ಲಿಯೂ ಸಹ, ರಾಮಚಂದ್ರ ಬೆಳಿಗ್ಗೆ 4 ಗಂಟೆಗೆ ಎಚ್ಚರಗೊಂಡು, ಇಡ್ಲಿ ಹಿಟ್ಟನ್ನು ಕೈಯಿಂದ ಕಲಸಿ ಸಾಂಪ್ರದಾಯಿಕ ಉರುವಲು ಒಲೆಯ ಮೇಲೆ ಆವಿಯಲ್ಲಿ ಬೇಯಿಸುತ್ತಾರೆ, ಅಡುಗೆಮನೆಯಲ್ಲಿ 6 ಗಂಟೆಗಳ ಕಾಲ ಕಳೆಯುತ್ತಾರೆ. ಜನರಿಗೆ ಆಹಾರ ನೀಡುವ ಮತ್ತು ಅವರ ತಂದೆಯ ನೆನಪುಗಳನ್ನು ಗೌರವಿಸುವ ಅವರ ಪ್ರೀತಿಯಿಂದ ಭೋಗದ ಇಡ್ಲಿಗಳನ್ನು ತಯಾರಿಸುವ ಅವರ ಬದ್ಧತೆಯು ನಡೆಸಲ್ಪಡುತ್ತದೆ.&lt;/p&gt;&lt;h3&gt;&lt;strong&gt;ಪ್ರತಿ ಹಬೆಯ ತಟ್ಟೆಯ ಹಿಂದಿನ ಉತ್ಸಾಹ&lt;/strong&gt;&lt;/h3&gt;&lt;p&gt;ರಾಮಚಂದ್ರ ಪ್ರತಿದಿನ 1500 ಇಡ್ಲಿಗಳನ್ನು ತಯಾರಿಸುತ್ತಾರೆ ಎಂದು ನೀವು ನಂಬುತ್ತೀರಾ, ಪ್ರತಿ ಇಡ್ಲಿಯ ಬೆಲೆ ಕೇವಲ 5 ರೂ. ಕೋಟೆ ಮನೆ ಇಡ್ಲಿಯನ್ನು ವಿಶಿಷ್ಟವಾಗಿಸುವುದು ಕೈಗೆಟುಕುವ ಬೆಲೆ ಮತ್ತು ಸೌಕರ್ಯ. ಆದಾಗ್ಯೂ, ರಾಮಚಂದ್ರ ಅವರ ಮಗ ಅನಂತ್ ಮತ್ತು ಸೊಸೆ ನಿರೋಷಾ ಸಹಾಯ ಮಾಡುತ್ತಾರೆ. ಅವರ ರಹಸ್ಯ ಪಾಕವಿಧಾನದಲ್ಲಿ 3/4 ಕಪ್ ಬೇಯಿಸಿದ ಅನ್ನ ಮತ್ತು 1/4 ಕಪ್ ಉದ್ದಿನ ಬೇಳೆಯನ್ನು ಕಟ್ಟಿಗೆಯ ಬೆಂಕಿಯೊಂದಿಗೆ ನಿಖರವಾಗಿ ಮಿಶ್ರಣ ಮಾಡಲಾಗುತ್ತದೆ, ಕೆಂಪು ಚಟ್ನಿಯೊಂದಿಗೆ ಬಡಿಸಲಾಗುತ್ತದೆ: ಗುಂಟೂರು ಮತ್ತು ಬ್ಯಾಡಗಿ ಮೆಣಸಿನಕಾಯಿಗಳು, ತಾಜಾ ಪುದೀನಾ ಮತ್ತು ಕಡಲೆ ಬೇಳೆಗಳ ಉರಿಯುವ ಮಿಶ್ರಣ ಈ ಚಟ್ನಿಯ ಟೇಸ್ಟ್​ ಹೆಚ್ಚಿಸುತ್ತವೆ.&lt;/p&gt;&lt;p&gt;ದಿ ಬೆಟರ್ ಇಂಡಿಯಾಗೆ ಮಾಧ್ಯಮಕ್ಕೆ ಈ ಕುರಿತು ಮಾತನಾಡಿರುವ ರಾಮಚಂದ್ರ ಅವರು, 70 ವರ್ಷ ವಯಸ್ಸಿನಲ್ಲೂ ನನಗೆ ಈ ಕೆಲಸ ಪ್ರೇರಣೆ ನೀಡುತ್ತೆ.ನಾನು ಕೆಲಸ ಮಾಡುವುದನ್ನು ನಿಲ್ಲಿಸಿದರೆ ನಾನು ಅಸ್ತಿತ್ವದಲ್ಲಿಲ್ಲ ಎಂದೇ ಅಂದುಕೊಂಡಿದ್ದೇನೆ ಎಂದಿದ್ದಾರೆ. ಬೆಂಕಿಯ ಮುಂದೆ ಅಡುಗೆಮನೆಯಲ್ಲಿ ದೀರ್ಘಕಾಲ ಕಳೆಯುವುದು ಕೆಲವೊಮ್ಮೆ ಸ್ವಲ್ಪ ಆಯಾಸವನ್ನುಂಟುಮಾಡುತ್ತದೆಯಾದರೂ, ತಮ್ಮ ಅಂಗಡಿಯಲ್ಲಿ ಆಹಾರ ಪ್ರಿಯರು ಸೇರುತ್ತಿರುವುದನ್ನು ನೋಡಿದಾಗ ಆಯಾಸ ಮಾಯವಾಗುತ್ತದೆ, ಸಂತೋಷದಿಂದ ಅವರನ್ನು ಹೆಚ್ಚು ಸಕ್ರಿಯರಾಗಲು ತಳ್ಳುತ್ತದೆ ಎಂದು ರಾಮಚಂದ್ರ ಹೇಳುತ್ತಾರೆ.&lt;/p&gt;]]></content:encoded>
            <category>karnataka-districts</category>
            <dc:creator>Suchethana D</dc:creator>
            <atom:link href="https://kannada.asianetnews.com/food/1500-idlis-a-day-rs-5-each-70-year-old-in-bengaluru-has-been-cooking-the-iconic-south-indian-breakfast-suc/articleshow-swuiyng"/>
        </item>
        <item>
            <title><![CDATA[ಬೆಳಗಾವಿ ಕಸದ ತಿಪ್ಪೆಯಿಂದ ಕೇಳಿಬಂತು ಹಸುಗೂಸು ಅರ್ತನಾದ! ಕುರಿಗಾಹಿಯಿಂದ ಗಂಡು ಮಗುವಿನ ರಕ್ಷಣೆ]]></title>
            <link>https://kannada.asianetnews.com/karnataka-districts/newborn-boy-found-in-belagavi-under-bridge-ramdurga-kittur-village-infant-rescue-gdp/articleshow-ogzmv3r</link>
            <guid isPermaLink="true">https://kannada.asianetnews.com/karnataka-districts/newborn-boy-found-in-belagavi-under-bridge-ramdurga-kittur-village-infant-rescue-gdp/articleshow-ogzmv3r</guid>
            <pubDate>Thu, 09 Jul 2026 13:21:30 +0530</pubDate>
            <description><![CDATA[ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ, ಹೆತ್ತ ತಾಯಿಯೇ ಹಸುಗೂಸನ್ನು ಕಸದ ತಿಪ್ಪೆಗೆ ಎಸೆದ ಅಮಾನವೀಯ ಘಟನೆ ನಡೆದಿದೆ. ಕುರಿಗಾಹಿಯೊಬ್ಬರು ಮಗುವನ್ನು ರಕ್ಷಿಸಿದ್ದು, ಸದ್ಯ ಮಗು ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದೆ. ಪೊಲೀಸರು ನಿರ್ದಯಿ ತಾಯಿಗಾಗಿ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwxh3nrnrze4560rw8fhd61b,imgname-newborn-baby-found-in-belagavi-1783402452757.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ:&lt;/strong&gt; ಹೆತ್ತ ತಾಯಿಯೇ ಮಮತೆಯನ್ನೇ ಮರೆತು, ತಾನು ಜನ್ಮ ನೀಡಿದ ಹಸುಗೂಸನ್ನು ಕಸದ ತಿಪ್ಪೆಗೆ ಎಸೆದು ಪರಾರಿಯಾಗಿರುವ ಅಮಾನವೀಯ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ತಿಪ್ಪೆಯಲ್ಲಿ ಮಗು ಪತ್ತೆಯಾಗಿದೆ.&lt;/p&gt;&lt;h2&gt;ಸೇತುವೆ ಕೆಳಗೆ ಪತ್ತೆಯಾದ ಗಂಡು ಮಗು&lt;/h2&gt;&lt;p&gt;ಕಿತ್ತೂರು-ನರಗುಂದ ರಸ್ತೆಯ ಬಸವಣಕಟ್ಟಿ ಸೇತುವೆಯ ಕೆಳಭಾಗದಲ್ಲಿ ಅನಾಥವಾಗಿ ಬಿದ್ದಿದ್ದ ಗಂಡು ಮಗುವಿನ ಅಳುವಿನ ಧ್ವನಿ ಕೇಳಿ, ಆ ಭಾಗದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿಯೊಬ್ಬರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ಮಗು ಅಸಹಾಯಕ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು, ತಡಮಾಡದೇ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.&lt;/p&gt;&lt;h2&gt;ಮಾನವೀಯತೆ ಮೆರೆದ ಕುರಿಗಾಹಿ&lt;/h2&gt;&lt;p&gt;ಮಗುವನ್ನು ರಕ್ಷಿಸಿದ ತಕ್ಷಣವೇ ಜಾಗರೂಕರಾದ ಕುರಿಗಾಹಿ, ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ತಕ್ಷಣವೇ ಮಗುವನ್ನು ಹೆಚ್ಚಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸವದತ್ತಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗುವಿಗೆ ವೈದ್ಯರ ಉಸ್ತುವಾರಿಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ&lt;/h2&gt;&lt;p&gt;ನವಜಾತ ಶಿಶುವನ್ನು ಚಿಕಿತ್ಸೆಗಾಗಿ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸುರೇಬಾನ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆಯೇ ರಾಮದುರ್ಗ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಎಸೆದು ಹೋದ ನಿರ್ದಯಿ ತಾಯಿ ಯಾರು? ಈ ಕೃತ್ಯದ ಹಿಂದಿನ ಕಾರಣವೇನು? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.&lt;/p&gt;&lt;p&gt;ಶಿಶುವನ್ನು ಕಸಕ್ಕೆ ಎಸೆದು ಹೋಗಿರುವ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಾಹಿತಿ ಹಾಗೂ ಲಭ್ಯವಿರುವ ಸುಳಿವುಗಳ ಆಧಾರದ ಮೇಲೆ ಪರಿಶೀಲನೆ ಮುಂದುವರಿದಿದೆ. ಪ್ರಕರಣವು ರಾಮದುರ್ಗ ತಾಲೂಕಿನ ಸುರೇಬಾನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪಿಎಸ್&zwnj;ಐ ಗುರುರಾಜ ಕಲಬುರ್ಗಿ ಮುಂದಿನ ತನಿಖೆ ಕೈಗೊಂಡಿದ್ದಾರೆ.&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/newborn-boy-found-in-belagavi-under-bridge-ramdurga-kittur-village-infant-rescue-gdp/articleshow-ogzmv3r"/>
        </item>
        <item>
            <title><![CDATA[ಬಿಡದಿ ಟೌನ್ ಶಿಪ್ ವಿರುದ್ಧದ ಹೋರಾಟಕ್ಕೆ ಆನೆಬಲ; ಪ್ರತಿಭಟನೆಗೆ ಧುಮುಕಿದ ಸಂತೋಷ್ ಹೆಗ್ಡೆ]]></title>
            <link>https://kannada.asianetnews.com/ramanagara/former-lokayukta-justice-santosh-hegde-has-come-out-to-protest-against-the-bidadi-township-gkn/articleshow-9ncpeu5</link>
            <guid isPermaLink="true">https://kannada.asianetnews.com/ramanagara/former-lokayukta-justice-santosh-hegde-has-come-out-to-protest-against-the-bidadi-township-gkn/articleshow-9ncpeu5</guid>
            <pubDate>Thu, 09 Jul 2026 12:58:44 +0530</pubDate>
            <description><![CDATA[ಬಿಡದಿ ಟೌನ್&zwnj;ಶಿಪ್ ಯೋಜನೆ ವಿರೋಧಿಸಿ 485 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿದೆ. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರ ಭೂಮಿ ಉಳಿಸುವ ನ್ಯಾಯಯುತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx2we6sxja4ea80tdc1wv3fk,imgname-santosh-hegde-1783582104380.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ/ಬಿಡದಿ: &lt;/strong&gt;ತಮ್ಮ ಫಲವತ್ತಾದ ಭೂಮಿಯನ್ನು ಉಳಿಸಿಕೊಳ್ಳಲು ಬಿಡದಿ ಭಾಗದ ರೈತರು ನಡೆಸುತ್ತಿರುವ ಸಂಘಟಿತ ಹೋರಾಟಕ್ಕೆ ಇಂದು ಮಹತ್ವದ ತಿರುವು ಪಡೆದುಕೊಂಡಿದೆ. ಕಳೆದ 485 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಕೂಗಿಗೆ ಈಗ ಕರ್ನಾಟಕದ ಧ್ವನಿ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಧ್ವನಿಗೂಡಿಸಿದ್ದಾರೆ. ಈ ಮೂಲಕ ಬಿಡದಿ ಟೌನ್ ಶಿಪ್ ವಿರೋಧಿ ಹೋರಾಟಕ್ಕೆ ದೊಡ್ಡ ಮಟ್ಟದ ಆನೆಬಲ ಬಂದಂತಾಗಿದೆ.&lt;/p&gt;&lt;h2&gt;&lt;strong&gt;ಪ್ರತಿಭಟನಾ ಕಣದಲ್ಲಿ ಸಂತೋಷ್ ಹೆಗ್ಡೆ&lt;/strong&gt;&lt;/h2&gt;&lt;p&gt;ಬಿಡದಿ ಹೋಬಳಿಯ ಭೈರಮಂಗಲ ಗ್ರಾಮದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನಾ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಸಂತೋಷ್ ಹೆಗ್ಡೆ ಅವರು, ರೈತರ ಜೊತೆ ನೆಲದ ಮೇಲೆ ಕುಳಿತು ಅವರ ಅಳಲನ್ನು ಆಲಿಸಿದರು. ಭೂಮಿ ಎಂಬುದು ರೈತನ ಪಾಲಿಗೆ ಬರಿ ಮಣ್ಣಲ್ಲ, ಅದು ಅವನ ಜೀವನಾಡಿ. ಅಭಿವೃದ್ಧಿಯ ಹೆಸರಿನಲ್ಲಿ ಅನ್ನ ನೀಡುವ ರೈತನನ್ನು ಬೀದಿಗೆ ತಳ್ಳುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಭೂಮಿ ಉಳಿಸಿಕೊಡುವಂತೆ ಕಣ್ಣೀರಿಟ್ಟ ರೈತರಿಗೆ ಧೈರ್ಯ ತುಂಬಿದ ಅವರು, ರೈತರ ಈ ನ್ಯಾಯಯುತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.&lt;/p&gt;&lt;h3&gt;&lt;strong&gt;ಏನಿದು ಬಿಡದಿ ಟೌನ್ ಶಿಪ್ ವಿವಾದ?&lt;/strong&gt;&lt;/h3&gt;&lt;p&gt;ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಬಿಡದಿ ಸುತ್ತಮುತ್ತ ಸುಮಾರು 10 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಅಥವಾ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಬಿಡಿಎ (BDA) ಮತ್ತು ಕೆಎಚ್&zwnj;ಬಿ (KHB) ಮೂಲಕ ಈ ಯೋಜನೆ ಜಾರಿಗೊಳಿಸಲು ನಕ್ಷೆ ಸಿದ್ಧಪಡಿಸಲಾಗಿದೆ. ಈ ಯೋಜನೆಯ ವ್ಯಾಪ್ತಿಗೆ ಬರುವ ಭೈರಮಂಗಲ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ರೈತರು ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಹೋರಾಟದ ಕಿಚ್ಚು ಹೆಚ್ಚಿಸಿದ್ದೇಕೆ?&lt;/strong&gt;&lt;/h3&gt;&lt;p&gt;ಈ ಭಾಗದ ಜಮೀನುಗಳು ವರ್ಷಕ್ಕೆ ಮೂರು ಬೆಳೆ ಬೆಳೆಯುವಷ್ಟು ಫಲವತ್ತಾಗಿವೆ. ಈ ಭೂಮಿಯನ್ನು ಕಳೆದುಕೊಂಡರೆ ರೈತರು ಅಕ್ಷರಶಃ ಅನಾಥರಾಗುತ್ತಾರೆ ಎಂಬುದು ಪ್ರತಿಭಟನಾಕಾರರ ವಾದ. 2006 ರಿಂದಲೂ ಈ ಯೋಜನೆಯ ಪ್ರಸ್ತಾಪವಿದ್ದು, ರೈತರು ತಮ್ಮ ಜಮೀನಿನ ಮೇಲೆ ಯಾವುದೇ ಸಾಲ ಪಡೆಯಲು ಅಥವಾ ಅಭಿವೃದ್ಧಿ ಪಡಿಸಲು ಸಾಧ್ಯವಾಗದಂತೆ ನಿರ್ಬಂಧ ಹೇರಲಾಗಿದೆ. ರಾಜ್ಯ ಸರ್ಕಾರವು ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಆಗಿ ಪರಿವರ್ತಿಸಲು ಮತ್ತು ಸುತ್ತಮುತ್ತಲಿನ ಉಪನಗರಗಳನ್ನು (Satellite Towns) ಅಭಿವೃದ್ಧಿಪಡಿಸಲು ವೇಗ ನೀಡಿದೆ. ಇದು ಬಿಡದಿ ರೈತರಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿರುವುದು 485 ದಿನಗಳ ಸುದೀರ್ಘ ಪ್ರತಿಭಟನೆಗೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಆನೆಬಲ ತಂದ ಸಂತೋಷ್ ಹೆಗ್ಡೆ ಭೇಟಿ&lt;/strong&gt;&lt;/h3&gt;&lt;p&gt;ಸಂತೋಷ್ ಹೆಗ್ಡೆ ಅವರಂತಹ ಪ್ರಭಾವಿ ವ್ಯಕ್ತಿಗಳು ಹೋರಾಟಕ್ಕೆ ಕೈಜೋಡಿಸಿರುವುದು ಸರ್ಕಾರದ ಮೇಲೆ ಒತ್ತಡ ಹೇರಲು ಸಹಕಾರಿಯಾಗಲಿದೆ. ಸತತ 485 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದು ಖೇದಕರ. ನ್ಯಾಯಾಲಯದ ಮಟ್ಟದಲ್ಲೂ ರೈತರಿಗೆ ನ್ಯಾಯ ಸಿಗುವಂತೆ ಪ್ರಯತ್ನಿಸೋಣ ಎಂದು ಹೆಗ್ಡೆ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ, ಬಿಡದಿ ಟೌನ್ ಶಿಪ್ ಯೋಜನೆ ಮತ್ತು ರೈತರ ಭೂಮಿಯ ನಡುವಿನ ಈ ಜಟಾಪಟಿ ಈಗ ರಾಜ್ಯ ಮಟ್ಟದ ಗಮನ ಸೆಳೆದಿದ್ದು, ಸರ್ಕಾರ ರೈತರ ಮನವೊಲಿಸುತ್ತದೆಯೇ ಅಥವಾ ಯೋಜನೆಯನ್ನು ಕೈಬಿಡುತ್ತದೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/ramanagara/former-lokayukta-justice-santosh-hegde-has-come-out-to-protest-against-the-bidadi-township-gkn/articleshow-9ncpeu5"/>
        </item>
        <item>
            <title><![CDATA[ಬಿಡದಿ ಟೌನ್‌ಶಿಪ್ ವಿವಾದದ ಬೆನ್ನಲ್ಲೇ ಮತ್ತೊಂದು ಸಮಗ್ರ ಟೌನ್‌ಶಿಪ್‌ಗೆ ಟೆಂಡರ್ ಕರೆದ ರಾಜ್ಯ ಸರ್ಕಾರ!]]></title>
            <link>https://kannada.asianetnews.com/karnataka-districts/kgf-integrated-township-revived-kuidfc-invites-tenders-for-dpr-on-960-acre-ppp-mega-project-near-expressway-gdp/articleshow-kce02fk</link>
            <guid isPermaLink="true">https://kannada.asianetnews.com/karnataka-districts/kgf-integrated-township-revived-kuidfc-invites-tenders-for-dpr-on-960-acre-ppp-mega-project-near-expressway-gdp/articleshow-kce02fk</guid>
            <pubDate>Thu, 09 Jul 2026 12:57:59 +0530</pubDate>
            <description><![CDATA[ರಾಜ್ಯ ಸರ್ಕಾರವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಜಿಎಫ್ ಸಮಗ್ರ ಟೌನ್&zwnj;ಶಿಪ್ ಯೋಜನೆಗೆ ಮರುಜೀವ ನೀಡಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) ನಿರ್ಮಾಣವಾಗಲಿರುವ ಈ ಯೋಜನೆಯು, ಬೆಂಗಳೂರಿಗೆ ವಲಸೆ ತಡೆಯುವ ಮತ್ತು ಚೆನ್ನೈ-ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ವೇ ಬಳಿ ಹೊಸ ಆರ್ಥಿಕ ವಲಯ ಸೃಷ್ಟಿಸುವ ಗುರಿ ಹೊಂದಿದೆ. ಇದಕ್ಕಾಗಿ KUIDFC ಸಲಹೆಗಾರರ ನೇಮಕಕ್ಕೆ ಟೆಂಡರ್ ಕರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx2vr6e8geytyrc633yea5cz,imgname-kgf--1--1783581383112.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಮನಗರ ಜಿಲ್ಲೆಯ ಬಿಡದಿ ಸ್ಮಾರ್ಟ್ ಟೌನ್&zwnj;ಶಿಪ್ ಯೋಜನೆಗೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಮತ್ತೊಂದು ಮಹತ್ವಾಕಾಂಕ್ಷಿ ಉಪನಗರ ಯೋಜನೆಗೆ ಮರುಜೀವ ನೀಡಿದೆ. ಕೋಲಾರ ಜಿಲ್ಲೆಯ ಕೆಜಿಎಫ್ (ಕೋಲಾರ ಚಿನ್ನದ ಗಣಿ) ಪ್ರದೇಶದಲ್ಲಿ ಸುಸಜ್ಜಿತ 'ಸಮಗ್ರ ಟೌನ್&zwnj;ಶಿಪ್' (Integrated Township) ನಿರ್ಮಾಣ ಮಾಡಲು ಸರ್ಕಾರ ಗಂಭೀರ ಹೆಜ್ಜೆ ಇಟ್ಟಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇನ್ನು ಕೆಲವೇ ದಿನಗಳಲ್ಲಿ ನೀಲನಕ್ಷೆ (DPR) ಸಿದ್ಧವಾಗಲಿದ್ದು, ಅರ್ಹ ಸಲಹೆಗಾರರ ನೇಮಕಾತಿಗಾಗಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (KUIDFC) ಅಧಿಕೃತವಾಗಿ ಟೆಂಡ&zwnj;ರ್ ಆಹ್ವಾನಿಸಿದೆ.&lt;/p&gt;&lt;h2&gt;ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (PPP) ಮಾದರಿ ಯೋಜನೆ:&lt;/h2&gt;&lt;p&gt;ಈ ಬೃಹತ್ ಟೌನ್&zwnj;ಶಿಪ್ ಯೋಜನೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ (Public-Private Partnership) ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಆಹ್ವಾನಿಸಲಾಗಿರುವ ಟೆಂಡರ್ ಮೂಲಕ ಆಯ್ಕೆಯಾಗುವ ಸಲಹಾ ಸಂಸ್ಥೆಯು ಕೆಜಿಎಫ್ ಟೌನ್&zwnj;ಶಿಪ್ ಯೋಜನೆಯ ತಾಂತ್ರಿಕ ಸಾಧಕ-ಬಾಧಕಗಳು ಹಾಗೂ ಆರ್ಥಿಕ ಕಾರ್ಯಸಾಧ್ಯತೆಯ ವರದಿಯನ್ನು ಸಿದ್ಧಪಡಿಸಲಿದೆ.&lt;/p&gt;&lt;p&gt;ಈ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆ ಬೇಡಿಕೆಯನ್ನು ಪರಿಶೀಲಿಸಿ, ಭೂಮಿಯ ಮೌಲ್ಯಮಾಪನ ಮಾಡಲಿದೆ. ಅಷ್ಟೇ ಅಲ್ಲದೆ, ದೇಶ-ವಿದೇಶಗಳಲ್ಲಿ ಯಶಸ್ವಿಯಾಗಿರುವ ಪ್ರಮುಖ ಟೌನ್&zwnj;ಶಿಪ್ ಯೋಜನೆಗಳನ್ನು ಆಳವಾಗಿ ಅಧ್ಯಯನ ಮಾಡಿ, ಕೆಜಿಎಫ್&zwnj;ಗೆ ಸೂಕ್ತವಾಗುವ ಅತ್ಯಾಧುನಿಕ ಮಾಸ್ಟರ್ ಪ್ಲಾನ್ ರೂಪಿಸಲಿದೆ. ಹಂತ-ಹಂತವಾಗಿ ಯೋಜನೆ ಜಾರಿಗೊಳಿಸುವ ಮೂಲಕ ಸರ್ಕಾರಕ್ಕೆ ನಿರಂತರ ಆದಾಯ ತರುವಂತಹ ಆರ್ಥಿಕ ವ್ಯವಸ್ಥೆಗೆ ಈ ಸಂಸ್ಥೆ ಶಿಫಾರಸು ಮಾಡಲಿದೆ.&lt;/p&gt;&lt;h2&gt;ಬೆಂಗಳೂರಿಗೆ ವಲಸೆ ತಪ್ಪಿಸುವ ಮಾಸ್ಟರ್ ಪ್ಲಾನ್:&lt;/h2&gt;&lt;p&gt;ರಾಜಧಾನಿ ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಕೆಜಿಎಫ್, ಒಂದು ಕಾಲದಲ್ಲಿ ದೇಶದ ಅತಿ ದೊಡ್ಡ ಚಿನ್ನದ ಗಣಿ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿತ್ತು. ಆದರೆ, 2001ರಲ್ಲಿ ಭಾರತ್ ಗೋಲ್ಡ್ ಮೈನ್ಸ್&zwnj; ಲಿಮಿಟೆಡ್ (BGML) ಅಧಿಕೃತವಾಗಿ ಬಂದ್ ಆದ ಬಳಿಕ ಇಲ್ಲಿನ ಚಿತ್ರಣವೇ ಬದಲಾಯಿತು. ಸೂಕ್ತ ಉದ್ಯೋಗಾವಕಾಶಗಳಿಲ್ಲದೆ ಇಲ್ಲಿನ ಸ್ಥಳೀಯರು ಮತ್ತು ಯುವಕರು ದಿನನಿತ್ಯ ಜೀವನೋಪಾಯಕ್ಕಾಗಿ ರೈಲು ಹಾಗೂ ಬಸ್&zwnj;ಗಳ ಮೂಲಕ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಈ ನಿರಂತರ ವಲಸೆಯನ್ನು ತಪ್ಪಿಸಿ, ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.&lt;/p&gt;&lt;h2&gt;960 ಎಕರೆ ಭೂಮಿ ಲಭ್ಯ: ಎಕ್ಸ್&zwnj;ಪ್ರೆಸ್&zwnj;ವೇ ಕನೆಕ್ಟಿವಿಟಿ ಪ್ಲಸ್ ಪಾಯಿಂಟ್!&lt;/h2&gt;&lt;p&gt;ಕಳೆದ ವರ್ಷ ಅಂದರೆ 2025ರ ಮಾರ್ಚ್&zwnj;ನಲ್ಲಿ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಭೈರತಿ ಸುರೇಶ್ ಅವರು ಬಿಜಿಎಂಎಲ್&zwnj;ಗೆ ಸೇರಿದ ಜಾಗದಲ್ಲಿ ಹಂತ ಹಂತವಾಗಿ ಟೌನ್&zwnj;ಶಿಪ್ ನಿರ್ಮಿಸುವುದಾಗಿ ಪ್ರಕಟಿಸಿದ್ದರು. ಪ್ರಸ್ತುತ ಬಿಜಿಎಂಎಲ್ ಒಡೆತನದ ಸುಮಾರು 960 ಎಕರೆ ಭೂಮಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದೆ. ಯೋಜನೆಯ ಮೊದಲ ಹಂತದ ಅಭಿವೃದ್ಧಿಗಾಗಿ ಈಗಾಗಲೇ 300 ಎಕರೆ ಜಾಗವನ್ನು ಗುರುತಿಸಲಾಗಿದೆ.&lt;/p&gt;&lt;h2&gt;ಚೆನ್ನೈ-ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ವೇ ಲಾಭ&lt;/h2&gt;&lt;p&gt;ಪ್ರಸ್ತುತ ವೇಗವಾಗಿ ನಿರ್ಮಾಣ ಹಂತದಲ್ಲಿರುವ ಮಹತ್ವಾಕಾಂಕ್ಷೆಯ ಚೆನ್ನೈ-ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ವೇ ಹೆದ್ದಾರಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಹೆದ್ದಾರಿಯು ಉದ್ದೇಶಿತ ಹೊಸ ಇಂಟಿಗ್ರೇಟೆಡ್ ಟೌನ್&zwnj;ಶಿಪ್ ನಿರ್ಮಾಣವಾಗಲಿರುವ ಜಾಗದಿಂದ ಕೇವಲ 2.5 ಕಿ.ಮೀ ಅಂತರದಲ್ಲೇ ಹಾದು ಹೋಗುತ್ತದೆ. ಹೆದ್ದಾರಿ ಸಂಪರ್ಕ ಅತ್ಯಂತ ಹತ್ತಿರವಿರುವುದರಿಂದ ಉದ್ದೇಶಿತ ಹೊಸ ಟೌನ್&zwnj;ಶಿಪ್ ಅನ್ನು ಕೇವಲ ವಸತಿ ಪ್ರದೇಶವನ್ನಾಗಿ ಮಾಡದೆ, ಬೃಹತ್ ಹೊಸ ಆರ್ಥಿಕ ವಲಯವನ್ನಾಗಿ (Economic Zone) ಮಾರ್ಪಡಿಸಲು ಸರ್ಕಾರ ತಂತ್ರ ರೂಪಿಸಿದೆ. ಈ ಯೋಜನೆ ಯಶಸ್ವಿಯಾದರೆ ಕೋಲಾರ ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗಲಿದ್ದು, ಬೆಂಗಳೂರಿನ ಮೇಲಿನ ಜನಸಂಖ್ಯೆಯ ಒತ್ತಡವೂ ಗಣನೀಯವಾಗಿ ಕಡಿಮೆಯಾಗಲಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kgf-integrated-township-revived-kuidfc-invites-tenders-for-dpr-on-960-acre-ppp-mega-project-near-expressway-gdp/articleshow-kce02fk"/>
        </item>
        <item>
            <title><![CDATA[ಬೆಂಗಳೂರಿನ ಬನಶಂಕರಿಯಲ್ಲಿ 280 ಮೀ. ಉದ್ದ, 6 ಮೀ. ಅಗಲದ ಸ್ಕೈವಾಕ್; ಹೊಸ ಫ್ಲೈಓವರ್]]></title>
            <link>https://kannada.asianetnews.com/bengaluru-urban/280-mtr-long-6-mtr-wide-skywalk-in-banashankari-junction-bmtc-namma-metro-station-bengaluru-new-flyover-mrq/articleshow-hxffygl</link>
            <guid isPermaLink="true">https://kannada.asianetnews.com/bengaluru-urban/280-mtr-long-6-mtr-wide-skywalk-in-banashankari-junction-bmtc-namma-metro-station-bengaluru-new-flyover-mrq/articleshow-hxffygl</guid>
            <pubDate>Thu, 09 Jul 2026 12:16:55 +0530</pubDate>
            <description><![CDATA[ಬೆಂಗಳೂರಿನ ಬನಶಂಕರಿ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಮತ್ತು ಫ್ಲೈಓವರ್ ನಿರ್ಮಾಣದ ಕುರಿತು ಸಭೆ ನಡೆದಿದೆ. ಮೆಟ್ರೋ ಮತ್ತು ಬಸ್ ನಿಲ್ದಾಣವನ್ನು ಸಂಪರ್ಕಿಸುವ ಈ ಯೋಜನೆಯು ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಅಂತಿಮ ನಿರ್ಧಾರಕ್ಕಾಗಿ ವಿಸ್ತೃತ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx2t0rw24pzscx49mh4gsd4z,imgname-bengaluru-banashankari-1783579566978.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಗರದ ಬಹುಕಾಲದ ಪ್ರಸ್ತಾಪಿತ ಬನಶಂಕರಿ ಬಸ್ ನಿಲ್ದಾಣ ಬಳಿಯಲ್ಲಿ ಸ್ಕೈವಾಕ್ ಮತ್ತು ಯೋಜಿತ ಫ್ಲೈವರ್ ನಿರ್ಮಾಣದ ಕುರಿತು ಬೆಂಗಳೂರು ದಕ್ಷಿಣ ನಗರ ನಿಗಮದ ಸಭೆಯಲ್ಲಿ ಸುದೀರ್ಘವಾದ ಚರ್ಚೆಗಳು ನಡೆದವು. ಬೆಂಗಳೂರು ದಕ್ಷಿಣ ನಗರ ನಿಗಮ ಆಯುಕ್ತ ಕೆ.ಎನ್. ರಮೇಶ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿತ್ತು. ಬೆಂಗಳೂರಿನ ಬನಶಂಕರಿ ಬಸ್ ಮತ್ತು ಮೆಟ್ರೋ ನಿಲ್ದಾಣ ಒಂದೇ ಭಾಗದಲ್ಲಿದ್ದು, ಈ ಸ್ಥಳ ವಾಹನದಟ್ಟಣೆಯಿಂದಿರುತ್ತದೆ. ಬಿಎಂಟಿಸಿ ಬಸ್&zwnj;ಗಳು ರಸ್ತೆಯಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತವೆ. ಹಾಗಾಗಿ ಜನರು ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ತೆರಳಲು ಹರಸಾಹಸ ಪಡುವಂತಾಗಿದೆ. ಇನ್ನು ಕೆಎಸ್&zwnj;ಆರ್&zwnj;ಟಿಸಿ ಬಸ್&zwnj;ಗಳು ಇದೇ ಮಾರ್ಗದಲ್ಲಿಯೇ ಸಂಚರಿಸೋದರಿಂದ ವಾಹನದಟ್ಟಣೆ ಅಧಿಕವಾಗಿರುತ್ತದೆ.&lt;/p&gt;&lt;p&gt;ಈ ಹಿನ್ನೆಲೆ ಮೆಟ್ರೋ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ರಸ್ತೆಗಳ ನಡುವಿನ ಸಂಪರ್ಕವನ್ನು ಸುಧಾರಿಸಲು ಬನಶಂಕರಿಯಲ್ಲಿ ಸುಧಾರಿತ ಮತ್ತು ಹಲವು ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಸುಧಾರಿತ ಸ್ಕೈವಾಕ್&zwnj;ನ (Integrated Multimodal Hub) ಅಗತ್ಯವಿದೆ. ಈ ಕುರಿತು ಸಭೆಯಲ್ಲಿ ಸಂಚಾರಿ ಪೊಲೀಸರು, ಬಿಎಂಆರ್&zwnj;ಸಿಎಲ್, ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B.SMILE), ಸಿವಿಲ್ ಅಫಿಸರ್ಸ್ ಜೊತೆಯಾಗಿ ಚರ್ಚೆ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಅಂದಾಜು 55 ಕೋಟಿ ವೆಚ್ಚದ ಯೋಜನೆ&lt;/strong&gt;&lt;/h2&gt;&lt;p&gt;2023ರಲ್ಲಿ ಯೋಜನಾವೆಚ್ಚವನ್ನು 50 ಕೋಟಿಗಳಿಂದ 55 ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜು ಮಾಡಲಾಗಿತ್ತು. ಈ ಯೋಜನೆಗೆ ಬಿಎಂಆರ್&zwnj;ಸಿಎಲ್ 25 ಕೋಟಿ ರೂಪಾಯಿ ನೀಡಲು ಒಪ್ಪಿಕೊಂಡಿತ್ತು. ಸರ್ಕಾರದ ಬದಲಾವಣೆಗಳಿಂದ ಈ ಯೋಜನೆ ವಿಳಂಬವಾಗಿದೆ. ವರದಿಗಳ ಪ್ರಕಾರ, ಬನಶಂಕರಿಯ ಈ ಜಂಕ್ಷನ್&zwnj;ನಲ್ಲಿ ಪ್ರತಿದಿನ 50 ಸಾವಿರಕ್ಕೂ ಜನರು ಸಂಚರಿಸುತ್ತಾರೆ. ಹಾಗಾಗಿ ಈ ಭಾಗದಲ್ಲಿ 280 ಮೀಟರ್ ಉದ್ದ ಮತ್ತು 6 ಮೀಟರ್ ಅಗಲದ ಸ್ಕೈವಾಕ್ ಮತ್ತು ರೆಸ್ಟ್ ಪ್ಲೇಸ್ ನಿರ್ಮಾಣದ ಉದ್ದೇಶವನ್ನು ಈ ಯೋಜನೆ ಹೊಂದಿದೆ.&lt;/p&gt;&lt;h3&gt;&lt;strong&gt;ಪಕ್ಕದಲ್ಲಿಯೇ ಇದೆ ಬನಶಂಕರಿ ದೇವಸ್ಥಾನ&lt;/strong&gt;&lt;/h3&gt;&lt;p&gt;ಇನ್ನು ಇದೇ ಸಭೆಯಲ್ಲಿ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣ, ಪ್ರತ್ಯೇಕ ಬಸ್ ಲೇನ್, ಪಾದಚಾರಿ ಮಾರ್ಗ ನಿರ್ಮಾಣದ ಕುರಿತು ಚರ್ಚೆ ನಡೆಸಲಾಗಿದೆ. ಬಸ್ ಮತ್ತು ಮೆಟ್ರೋ ನಿಲ್ದಾಣದ ಪಕ್ಕದಲ್ಲಿಯೇ ಬನಶಂಕರಿ ದೇವಸ್ಥಾನವಿದ್ದು, ಬೆಳಗ್ಗೆ ಭಕ್ತರ ಸಂಖ್ಯೆಯೂ ಹೆಚ್ಚಿರುತ್ತದೆ. ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಳವಾಗಿರುತ್ತದೆ. ಭವಿಷ್ಯದ ದೃಷ್ಟಿಯಿಂದ ಸ್ಕೈವಾಕ್ ಜೊತೆ ಅಂಡರ್&zwnj;ಪಾಸ್ ನಿರ್ಮಾಣದ ಕುರಿತು ಚರ್ಚೆಗಳು ನಡೆದಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೆಬ್ಬಾಳ ಬಳಿಕ ಬೆಂಗಳೂರಿಗೆ 6 ಪಥಗಳ ಮತ್ತೊಂದು ಸುರಂಗ ರಸ್ತೆ, ಡಾ.ರಾಜ್ ಸ್ಮಾರಕದಿಂದ ಬಿಇಎಲ್ ವೃತ್ತದವರೆಗೆ ನಿರ್ಮಾಣ&lt;/strong&gt;&lt;/p&gt;&lt;p&gt;ಆಯುಕ್ತ ಕೆ.ಎನ್. ರಮೇಶ್ ಅವರು, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಎರಡು ಯೋಜನೆಗಳಿಗೆ ಅವಕಾಶ ನೀಡಬಹುದೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ವಿವರವಾದ ವರದಿಗಳನ್ನು ಸಲ್ಲಿಕೆ ಮಾಡುವಂತೆ B.SMILEಗೆ ಸೂಚನೆ ನಿಡಿದರು. ಸ್ಕೈವಾಕ್ ಮತ್ತು ಯೋಜಿತ ಫ್ಲೈವರ್ ನಿರ್ಮಾಣದ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು, ಕಾರಣಾಂತರಗಳಿಂದ ಮುಂದೂಡಿಕೆಯಾಗುತ್ತಿದೆ. ಅಂತಿಮ ವರದಿ ಬಳಿಕ ಎರಡು ಕಾಮಗಾರಿಗಳು ಖರ್ಚು ವೆಚ್ಚ ಮತ್ತು ಸಾಧಕ ಬಾಧಕಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಾರೋಹಳ್ಳಿಯಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ? ಹೊಸ ಸ್ಥಳದತ್ತ ಸರ್ಕಾರದ ಚಿಂತನೆ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/bengaluru-urban/280-mtr-long-6-mtr-wide-skywalk-in-banashankari-junction-bmtc-namma-metro-station-bengaluru-new-flyover-mrq/articleshow-hxffygl"/>
        </item>
        <item>
            <title><![CDATA[ಕಾಪಾಡಿ, ಕಾಪಾಡಿ ಎಂದು ಕಂಬದ ಮೇಲೆಯೇ ಪ್ರಾಣಬಿಟ್ಟ ಕಾರ್ಮಿಕ ; ಹೃದಯ ವಿದ್ರಾವಕ ಘಟನೆ]]></title>
            <link>https://kannada.asianetnews.com/ballari/heart-touching-incident-in-ballari-worker-died-on-electric-poll-due-to-power-shocked/articleshow-t5p330n</link>
            <guid isPermaLink="true">https://kannada.asianetnews.com/ballari/heart-touching-incident-in-ballari-worker-died-on-electric-poll-due-to-power-shocked/articleshow-t5p330n</guid>
            <pubDate>Thu, 09 Jul 2026 12:05:55 +0530</pubDate>
            <description><![CDATA[&lt;p&gt;ಬಳ್ಳಾರಿಯ ಸಂಗನಕಲ್ ಗ್ರಾಮದ ಬಳಿ, ಜೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಹುಲಗಪ್ಪ ಎಂಬ 22 ವರ್ಷದ ಯುವಕ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಸುರಕ್ಷತಾ ಕ್ರಮಗಳಿಲ್ಲದೆ, ಲೈನ್ ಕ್ಲಿಯರೆನ್ಸ್ ಪಡೆಯದೆ ಕಂಬ ಹತ್ತಿಸಿದ್ದರಿಂದ, ಆತ ಸುಮಾರು 15 ನಿಮಿಷಗಳ ಕಾಲ ನರಳಾಡಿ ಪ್ರಾಣ ಬಿಟ್ಟಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2s9c77bq4pwezqz9d0jewn,imgname-ballari-lineman-1783578800359.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಳ್ಳಾರಿ: ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿಯಾಗಿದೆ. &amp;nbsp;&quot;ಕಾಪಾಡಿ.. ಕಾಪಾಡಿ..&quot; ಎಂದು ಕಂಬದ ಮೇಲೆಯೇ ನರಳಾಡುತ್ತಾ, ಜೀವ ಉಳಿಸಿಕೊಳ್ಳಲು ಹೋರಾಡಿದ ಯುವಕನೊಬ್ಬ ಆಸರೆಯಿಲ್ಲದೆ ಕಂಬದ ಮೇಲೆಯೇ ನೇತಾಡಿ ಪ್ರಾಣಬಿಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದ ಬಳಿ ನಡೆದಿದೆ.&lt;/p&gt;&lt;h2&gt;&lt;strong&gt;ಹೃದಯ ವಿದ್ರಾವಕ ಸಾವು&lt;/strong&gt;&lt;/h2&gt;&lt;p&gt;ಬಳ್ಳಾರಿ ಜಿಲ್ಲೆಯ ಯರ್ರಗುಡಿ ಗ್ರಾಮದ ನಿವಾಸಿ ಹುಲಗಪ್ಪ (22) ಮೃತಪಟ್ಟ ದುರ್ದೈವಿ. ಬಡತನದ ಹಿನ್ನೆಲೆಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಈ ಯುವಕನಿಗೆ ಸಾವು ಇಷ್ಟು ಭೀಕರವಾಗಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸಂಗನಕಲ್ ಗ್ರಾಮದ ಧ್ಯಾನ ಮಂದಿರದ ಬಳಿ ವಿದ್ಯುತ್ ಲೈನ್ ಸರಿಪಡಿಸಲು ಈತನನ್ನು ಕಂಬ ಹತ್ತಿಸಲಾಗಿತ್ತು.&lt;/p&gt;&lt;h3&gt;&lt;strong&gt;15 ನಿಮಿಷಗಳ ಕಾಲ ಸಾವಿನ ಕಿರುಚಾಟ!&lt;/strong&gt;&lt;/h3&gt;&lt;p&gt;ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಹೈವೋಲ್ಟೇಜ್ ಕರೆಂಟ್ ತಗುಲಿದ ಪರಿಣಾಮ ಹುಲಗಪ್ಪ ಕಂಬದ ಮೇಲೆಯೇ ಸಿಲುಕಿಕೊಂಡಿದ್ದಾನೆ. ಮೈ ನಡುಗಿಸುವ ಈ ದೃಶ್ಯ ನೋಡುಗರ ಎದೆ ಒಡೆಯುವಂತಿತ್ತು. ಸುಮಾರು 15 ನಿಮಿಷಗಳ ಕಾಲ ಹುಲಗಪ್ಪ ನನ್ನನ್ನು ಉಳಿಸಿ.. ಯಾರಾದರೂ ಕಾಪಾಡಿ ಎಂದು ಕಿರುಚಾಡಿದ್ದಾನೆ. ಆದರೆ ಕೆಳಗೆ ನಿಂತಿದ್ದ ಇತರ ಕಾರ್ಮಿಕರು ಅಸಹಾಯಕರಾಗಿ ನೋಡುತ್ತಿದ್ದರೇ ಹೊರತು, ಆತನನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಸರಿಯಾದ ಸುರಕ್ಷತಾ ಸಾಧನಗಳಿಲ್ಲದೆ, ಅಧಿಕಾರಿಗಳ ಮಾರ್ಗದರ್ಶನವಿಲ್ಲದೆ ಆ ಯುವಕ ನರಳಾಡಿ ನರಳಾಡಿ ಕಂಬದ ಮೇಲೆಯೇ ಶವವಾಗಿದ್ದಾನೆ.&lt;/p&gt;&lt;h3&gt;&lt;strong&gt;ಜೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ&lt;/strong&gt;&lt;/h3&gt;&lt;p&gt;ಈ ಸಾವಿಗೆ ಜೆಸ್ಕಾಂ (JESCOM) ಅಧಿಕಾರಿಗಳು ಮತ್ತು ಲೇಬರ್ ಗುತ್ತಿಗೆದಾರನ ನೇರ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಲೈನ್ ಸರಿಪಡಿಸುವ ಮೊದಲು ಲೈನ್ ಕ್ಲಿಯರೆನ್ಸ್ (LC - Line Clearance) ಪಡೆಯುವುದು ಕಡ್ಡಾಯ. ಆದರೆ ಅಧಿಕಾರಿಗಳು ಎಲ್&zwnj;ಸಿ ಪಡೆಯದೆಯೇ ಹುಲಗಪ್ಪನನ್ನು ಕಂಬ ಹತ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಅಪಾಯಕಾರಿ ಕೆಲಸ ನಡೆಯುವಾಗ ಸ್ಥಳದಲ್ಲಿ ಯಾವುದೇ ಲೈನ್ ಮ್ಯಾನ್ ಅಥವಾ ಜವಾಬ್ದಾರಿಯುತ ಅಧಿಕಾರಿ ಇರಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಮೃತ ಹುಲಗಪ್ಪನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಬಡ ಕುಟುಂಬದ ಆಧಾರಸ್ತಂಭವಾಗಿದ್ದ ಯುವಕ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಹೆಣವಾಗಿ ಮನೆಗೆ ಮರಳಿದ್ದಾನೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಘಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಡವರ ಜೀವಕ್ಕೆ ಬೆಲೆಯೇ ಇಲ್ಲವೇ? ಎಂದು ಸಾರ್ವಜನಿಕರು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/ballari/heart-touching-incident-in-ballari-worker-died-on-electric-poll-due-to-power-shocked/articleshow-t5p330n"/>
        </item>
        <item>
            <title><![CDATA[ಮಳೆಗಾಲದಲ್ಲಿ ಕೆಲಸ ಮಾಡೋ ಚೆಸ್ಕಾಂ ಸಿಬ್ಬಂದಿಗೆ ಕಾಡಾನೆಗಳಿಂದ ಜೀವಭಯ! ಈ ದೃಶ್ಯ ನೋಡಿದ್ರೆ ಜೀವ ಬಾಯಿಗೆ ಬರುತ್ತೆ!]]></title>
            <link>https://kannada.asianetnews.com/karnataka-districts/wild-elephant-attempts-to-attack-hassan-cescom-occupants-narrowly-escape/articleshow-7b168i6</link>
            <guid isPermaLink="true">https://kannada.asianetnews.com/karnataka-districts/wild-elephant-attempts-to-attack-hassan-cescom-occupants-narrowly-escape/articleshow-7b168i6</guid>
            <pubDate>Thu, 09 Jul 2026 11:46:30 +0530</pubDate>
            <description><![CDATA[&lt;p&gt;ಸಕಲೇಶಪುರ ತಾಲೂಕಿನ ಲಕ್ಕುಂದ ಗ್ರಾಮದ ಬಳಿ ಲೈನ್ ದುರಸ್ತಿ ಮುಗಿಸಿ ವಾಪಸಾಗುತ್ತಿದ್ದ ಚೆಸ್ಕಾಂ ಸಿಬ್ಬಂದಿಯ ವಾಹನದ ಮೇಲೆ ಒಂಟಿ ಸಲಗವೊಂದು ದಾಳಿಗೆ ಯತ್ನಿಸಿದೆ. ತಡರಾತ್ರಿ ನಡೆದ ಈ ಘಟನೆ ವಾಹನದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಬ್ಬಂದಿ ಅದೃಷ್ಟವಶಾತ್ ಪಾರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2r6qyfemted9n60t9hdk9w,imgname-----------------------2026-07-09t114355.769-1783577665487.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.9):&lt;/strong&gt; ಲೈನ್ ದುರಸ್ತಿ ಮುಗಿಸಿ ರಾತ್ರಿ ವಾಪಸ್ ಆಗುತ್ತಿದ್ದ ಚೆಸ್ಕಾಂ ಸಿಬ್ಬಂದಿ ಮೇಲೆ ರಸ್ತೆಗೆ ಅಡ್ಡಲಾಗಿ ನಿಂತ ಒಂಟಿ ಸಲಗ ಏಕಾಏಕಿ ದಾಳಿ ಮಾಡಲು ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಲಕ್ಕುಂದ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಕಾಡಾನೆ ದಾಳಿಯಿಂದ ಸಿಬ್ಬಂದಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ.&lt;/p&gt;&lt;h2&gt;ಒಂಟಿ ಸಲಗ ಏಕಾಏಕಿ ದಾಳಿ, ಡ್ಯಾಶ್&zwnj; ಕ್ಯಾಮ್&zwnj;ನಲ್ಲಿ ದೃಶ್ಯ ಸೆರೆ&lt;/h2&gt;&lt;p&gt;ನಿನ್ನೆ ತಡರಾತ್ರಿ ಸುಮಾರು 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಯಸಳೂರು ವಲಯ ವ್ಯಾಪ್ತಿಯ ಲಕ್ಕುಂದ ಗ್ರಾಮದ ಬಳಿ ಸಿಬ್ಬಂದಿ ವಾಹನದಲ್ಲಿ ವಾಪಸ್ ಆಗುತ್ತಿದ್ದರು. ಶಾಖಾಧಿಕಾರಿ ಮಂಜುನಾಥ್ ಹಾಗೂ ಪವರ್ ಮ್ಯಾನ್ ವಾಹನದಲ್ಲಿದ್ದರು. ವೇಗವಾಗಿ ಸಾಗುತ್ತಿದ್ದ ವೇಳೆ ಕಾಡಾನೆ ರಸ್ತೆಗೆ ನಿಂತಿರುವುದು ಕಾಣುತ್ತಿದ್ದಂತೆ ನಿಧಾನಗೊಳಿಸಿದ್ದಾರೆ. ಆದರೆ ರಸ್ತೆ ದಾಟುವ ಬದಲು ಒಂಟಿ ಸಲ ನೇರ ವಾಹನದತ್ತ ಬಂದು ದಾಳಿ ನಡೆಸಲು ಯತ್ನಿಸಿರುವುದು ವಾಹನದ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದೆ.&lt;/p&gt;&lt;h3&gt;ಮಳೆಗಾಲದಲ್ಲಿ ಕೆಲಸ ಮಾಡೋ&zwnj; ಚೆಸ್ಕಾಂ ಸಿಬ್ಬಂದಿಗೆ ಕಾಡಾನೆಯದ್ದೇ ಭಯ&lt;/h3&gt;&lt;p&gt;ಮಳೆಗಾಲದಲ್ಲಿ ಪದೇಪದೆ ವಿದ್ಯುತ್ ಸಮಸ್ಯೆಯಾಗ್ತಿದೆ. ನಿನ್ನೆಯೂ ವಿದ್ಯುತ್ ಸಮಸ್ಯೆಗೆ ಕರೆ ಬಂದಿದ್ದರಿಂದ ಸರಿಪಡಿಸಲು ವಾಹನದಲ್ಲಿ ತೆರಳಿದ್ದ ಸಿಬ್ಬಂದಿ ಆದರೆ ಬರುವುದು ತಡರಾತ್ರಿಯಾಗಿದೆ. ಮಲೆನಾಡಿನಲ್ಲಿ ಚೆಸ್ಕಾಂ ಸಿಬ್ಬಂದಿಗೆ ಇಂಥ ಅನುಭವಗಳು ಎದುರಾಗುತ್ತಿವೆ. ವನ್ಯಜೀವಿಗಳ ದಾಳಿಗೆ ಭಯದಲ್ಲೇ ಸಂಚರಿಸುವಂತಾಗಿದೆ. ಇತ್ಚೀಚೆಗೆ ಕಾಡಾನೆಗಳ ಹೆಚ್ಚಿರುವುದರಿಂದ ರಾತ್ರಿ ವೇಳೆ ವಿದ್ಯುತ್ ಸಮಸ್ಯೆ ಸರಿಪಡಿಸಲು ತೆರಳುವ ಸಿಬ್ಬಂದಿ ಜೀವಭಯದ ಆತಂಕ ಎದುರಾಗಿದೆ. ಹೀಗಾಗಿ ರಾತ್ರಿ ಕರ್ತವ್ಯಕ್ಕೆ ತೆರಳುವು ಸಿಬ್ಬಂದಿಗೆ ಅಗತ್ಯ ಭದ್ರತೆ ಒದಗಿಸಲು, ಕಾಡಾನೆ ಓಡಾಡುವ ಪ್ರದೇಶದಲ್ಲಿ ಸುರಕ್ಷತಾ ಕ್ರಮ ಬಲಪಡಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/wild-elephant-attempts-to-attack-hassan-cescom-occupants-narrowly-escape/articleshow-7b168i6"/>
        </item>
        <item>
            <title><![CDATA[Channakeshava temple donation theft: ಹಾಸನದ ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವ ದೇಗುಲದಲ್ಲೂ ಲಕ್ಷ ಲಕ್ಷ  ಹುಂಡಿ ಹಣ ಕಳವು!]]></title>
            <link>https://kannada.asianetnews.com/gallery/karnataka-districts/hassan-world-famous-beluru-channakeshava-temple-donation-theft-videographer-arrest-7em3gzi</link>
            <guid isPermaLink="true">https://kannada.asianetnews.com/gallery/karnataka-districts/hassan-world-famous-beluru-channakeshava-temple-donation-theft-videographer-arrest-7em3gzi</guid>
            <pubDate>Thu, 09 Jul 2026 10:46:16 +0530</pubDate>
            <description><![CDATA[&lt;p&gt;Hassan world famous belur channakeshava temple donation theft: &amp;nbsp;ಹಾಸನ ಪಟ್ಟಣದ ಶ್ರೀ ಚನ್ನಕೇಶವ ದೇಗುಲದ ಹುಂಡಿ ಹಣ ಎಣಿಕೆ ಮಾಡುವ ವೇಳೆ ₹1.98 ಲಕ್ಷ ನಗದು ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಗ್ರಾಫರ್ ನೀಲಕಂಠ ಸಿಕ್ಕಿಬಿದ್ದಿದ್ದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2mnamm1zvn8c07s5vgk9ag,imgname-----------------------2026-07-09t104211.448-1783573949076.jpg" type="image/jpeg" height="390" width="690"/>
            <content:encoded><![CDATA[&lt;p&gt;Hassan world famous belur channakeshava temple donation theft: &amp;nbsp;ಹಾಸನ ಪಟ್ಟಣದ ಶ್ರೀ ಚನ್ನಕೇಶವ ದೇಗುಲದ ಹುಂಡಿ ಹಣ ಎಣಿಕೆ ಮಾಡುವ ವೇಳೆ ₹1.98 ಲಕ್ಷ ನಗದು ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಗ್ರಾಫರ್ ನೀಲಕಂಠ ಸಿಕ್ಕಿಬಿದ್ದಿದ್ದು ಹೇಗೆ?&lt;/p&gt;&lt;img&gt;&lt;p&gt;ಅಯೋಧ್ಯೆ ರಾಮ ಮಂದಿರ, ಬದರಿನಾಥ ದೇಗುಲದಲ್ಲಿ ದೇಣಿಗೆ ಕಳವು ಪ್ರಕರಣದಲ್ಲಿ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ಕರ್ನಾಟಕದ ಹಾಸನ ಜಿಲ್ಲೆಯ ವಿಶ್ವ ವಿಖ್ಯಾತ ಚನ್ನಕೇಶವ ದೇಗುಲ(Channakeshava Temple)ದಲ್ಲಿಯೂ ಹುಂಡಿ ಎಣಿಕೆ ವೇಳೆ ಲಕ್ಷ ಲಕ್ಷ ಹಣ ಎಗರಿಸಿದ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಗರ್ಭಗುಡಿಯ ಹುಂಡಿ ತೆಗೆದು ಹಣವನ್ನು ಎಣಿಸಲು ದೇಗುಲದ ಹಿಂಭಾಗದ ಕಲ್ಯಾಣ ಮಂಟಪಕ್ಕೆ ತಂದು ಸುರಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ನಿಯೋಜಿಸಿದ್ದ ನೀಲಕಂಠ ಎಂಬಾತ ಹಣ ಕಳವು ಮಾಡಿದ್ದು, ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಳ್ಳತನದ ಯತ್ನ ವಿಫಲವಾಗಿದೆ. ಆರೋಪಿ ಹುಂಡಿಯಿಂದ ತೆಗೆದ ಕಳವು ಮಾಡಲು ಯತ್ನಿಸಿದ್ದ ವೇಳೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ದೇಣಿಗೆ ಹಣ ಕಳ್ಳತನವಾಗಬಾರದು ಎಲ್ಲವೂ ಪಾರದರ್ಶಕವಾಗಿಡಲು ವಿಡಿಯೋ ರೆಕಾರ್ಡ್ ಮಾಡಲು ನೀಲಕಂಠನನ್ನು ಕರೆಸಲಾಗಿತ್ತು. ಆದರೆ ಘಟನೆ ಬಳಿಕ ವಿಡಿಯೋ ಮಾಡಲು ಕರೆಸಿದರೋ, ವಿಡಿಯೋ ಮಾಡುವ ನೆಪದಲ್ಲಿ ದೇಗುಲದ ಹಣ ಎಗರಿಸಲು ಕರೆಸಿದರೋ ಎಂದು ಸ್ಥಳೀಯರು, ಭಕ್ತರು ಅನುಮಾನ ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;&lt;p&gt;ವಿಡಿಯೋ ಗ್ರಾಫರ್ ನೀಲಕಂಠ ಸಾವಿರೋ ಎರಡು ಸಾವಿರೋ ಕದ್ದಿದ್ದಲ್ಲ. ಈ ಭೂಪ ಬರೋಬ್ಬರಿ 1.98 ಲಕ್ಷ ಹಣ ಎಗರಿಸಿದ್ದಾನೆ ಊಹಿಸಿಕೊಳ್ಳಿ. ಇಷ್ಟೊಂದು ಹಣ ಸಿಬ್ಬಂದಿ ನಡುವೆ ಕದಿಯಲು ಹೇಗೆ ಸಾಧ್ಯ?&lt;/p&gt;&lt;img&gt;&lt;p&gt;ಕಾರ್ಯಾಚರಣೆಯ ವೇಳೆ ಒಟ್ಟು 1,98,000 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಕಳ್ಳತನದ ಯತ್ನದ ಹಿಂದಿನ ಉದ್ದೇಶ ಹಾಗೂ ಇತರರ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದರೂ, ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಯ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಅಲ್ಲೇ ಇದ್ದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ತನಿಖೆಗೆ ಸ್ಥಳೀಯರ ಆಗ್ರಹ&amp;nbsp;&lt;/strong&gt;&lt;/p&gt;&lt;p&gt;ದೇವಾಲಯ ಆಡಳಿತ ಮಂಡಳಿ, ಸಿಬ್ಬಂದಿ, ಅಧಿಕಾರಿಗಳ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಧಿಕಾರಿಗಳ ಶಾಮೀಲಿನಿಂದ ಹಲವು ಬಾರಿ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ ಎಂದರು. ಈ ಬಗ್ಗೆ ಸಹ ತನಿಖೆಯಾಗಬೇಕು, ಅಧಿಕಾರಿಗಳ ಪಾತ್ರವನ್ನ ಪತ್ತೆಹಚ್ಚಬೇಕು ಎಂಬುದು ಸ್ಥಳೀಯರು ಆಗ್ರಹಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/hassan-world-famous-beluru-channakeshava-temple-donation-theft-videographer-arrest-7em3gzi"/>
        </item>
        <item>
            <title><![CDATA[ಹಾರೋಹಳ್ಳಿಯಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ? ಹೊಸ ಸ್ಥಳದತ್ತ ಸರ್ಕಾರದ ಚಿಂತನೆ]]></title>
            <link>https://kannada.asianetnews.com/gallery/state/cm-dk-shivakumar-has-suggested-that-harohalli-be-considered-as-a-potential-location-for-bengaluru-second-airport-mrq-hfmcm1g</link>
            <guid isPermaLink="true">https://kannada.asianetnews.com/gallery/state/cm-dk-shivakumar-has-suggested-that-harohalli-be-considered-as-a-potential-location-for-bengaluru-second-airport-mrq-hfmcm1g</guid>
            <pubDate>Thu, 09 Jul 2026 11:01:15 +0530</pubDate>
            <description><![CDATA[&lt;p&gt;ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಸಂಭಾವ್ಯ ಸ್ಥಳವಾಗಿ ಹಾರೋಹಳ್ಳಿಯನ್ನು ಪರಿಗಣಿಸುವಂತೆ CM ಸೂಚಿಸಿದ್ದಾರೆ. ಈಗಾಗಲೇ ಶಾರ್ಟ್&zwnj;ಲಿಸ್ಟ್ ಮಾಡಲಾಗಿರುವ ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ ಜೊತೆಗೆ, ಕಡಿಮೆ ಭೂಸ್ವಾಧೀನ ವೆಚ್ಚ ಹಾಗೂ ಗ್ರಾಮಗಳ ಸ್ಥಳಾಂತರ ತಪ್ಪಿಸುವ ಸ್ಥಳಕ್ಕೆ ಸರ್ಕಾರ ಆದ್ಯತೆ ನೀಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2ndtm7r0y5p4a7zhed72qf,imgname-bengaluru-2nd-airport--4--1783574751879.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಸಂಭಾವ್ಯ ಸ್ಥಳವಾಗಿ ಹಾರೋಹಳ್ಳಿಯನ್ನು ಪರಿಗಣಿಸುವಂತೆ CM ಸೂಚಿಸಿದ್ದಾರೆ. ಈಗಾಗಲೇ ಶಾರ್ಟ್&zwnj;ಲಿಸ್ಟ್ ಮಾಡಲಾಗಿರುವ ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ ಜೊತೆಗೆ, ಕಡಿಮೆ ಭೂಸ್ವಾಧೀನ ವೆಚ್ಚ ಹಾಗೂ ಗ್ರಾಮಗಳ ಸ್ಥಳಾಂತರ ತಪ್ಪಿಸುವ ಸ್ಥಳಕ್ಕೆ ಸರ್ಕಾರ ಆದ್ಯತೆ ನೀಡಲಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಸ್ಥಳದ ಆಯ್ಕೆಯ ಪಟ್ಟಿಯಲ್ಲಿ ಹಾರೋಹಳ್ಳಿ ಬಗ್ಗೆ ಪರಿಶೀಲಿಸುವಂತೆ ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಬುಧವಾರ ಈ ಸಂಬಂಧ ನಡೆದ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದು, ಇಡೀ ಗ್ರಾಮಗಳನ್ನು ಸ್ಥಳಾಂತರ ಮಾಡೋದು ಕಷ್ಟಕರ, ಕಡಿಮೆ ಭೂಸ್ವಾಧೀನ ವೆಚ್ಚದ ಯೋಜನೆಗಳನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಬುಧವಾರದ ಸಭೆಯಲ್ಲಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು, ಹಾರೋಹಳ್ಳಿಯನ್ನು ನಾಲ್ಕನೇ ಸಂಭಾವ್ಯ ಸ್ಥಳವನ್ನಾಗಿ ಪರಿಗಣಿಸುವಂತೆ ಮೂಲಸೌಕರ್ಯ ಅಭಿವೃದ್ದಿ ಇಲಾಖೆಗೆ (IDD) ಸೂಚನೆ ನೀಡಿದ್ದಾರೆ. ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಶಾರ್ಟ್&zwnj; ಲಿಸ್ಟ್ ಮಾಡಲಾಗಿರುವ ಮೂರು ಸ್ಥಳಗಳ ಮೌಲ್ಯಮಾಪನ ಮಾಡಲಿದೆ.&lt;/p&gt;&lt;img&gt;&lt;p&gt;ತಾಂತ್ರಿಕ ಕಾರ್ಯಸಾಧ್ಯತೆ, ಭೂಸ್ವಾಧೀನ ವೆಚ್ಚಗಳನ್ನು ಆಧರಿಸಿ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಆಯ್ಕೆ ಮಾಡಲಾಗುವುದು. ಟೆಕ್ನಿಕಲ್ ವ್ಯಾಲೋಷನ್&zwnj;ಗಾಗಿ ಸಿಂಗಪುರ ಮೂಲದ ಸಲಹಾ ಸಮಿತಿಯನ್ನು ನೇಮಿಸಿಕೊಳ್ಳಲಾಗಿದೆ. ಸಾಧ್ಯವಾದಷ್ಟು ಗ್ರಾಮಗಳನ್ನು ಸ್ಥಳಾಂತರ ಮಾಡದಿರಲು ಪ್ರಯತ್ನಿಸಲಾಗುವುದು. ಸ್ಥಳ ಆಯ್ಕೆಯ ನಂತ್ರ ಕೆಲವು ಮನೆಗಳಿದ್ರೆ ಪರಿಹಾರ ನೀಡಿ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ ಮೂರು ಸ್ಥಳಗಳನ್ನು ಶಾರ್ಟ್&zwnj;ಲಿಸ್ಟ್ ಮಾಡಲಾಗಿದೆ. ಬೆಂಗಳೂರಿನ ದಕ್ಷಿಣಕ್ಕೆ ಕನಕಪುರ ಅಥವಾ ಬನ್ನೇರುಘಟ್ಟ ಕಾರಿಡಾರ್&zwnj;ನ ಉದ್ದಕ್ಕೂ ಇರುವ ಸೋಮನಹಳ್ಳಿ ಮತ್ತು ಚೂಡಹಳ್ಳಿ, ನಗರದ ಉತ್ತರ ಕಾರಿಡಾರ್&zwnj;ನಲ್ಲಿ ಟ್ರಾಫಿಮ್ ಕಡಿಮೆ ಮಾಡಬಹುದಾಗಿದೆ.&lt;/p&gt;&lt;img&gt;&lt;p&gt;ಸದ್ಯ ಚೂಡಹಳ್ಳಿಯಲ್ಲಿ 4655 ಎಕರೆ, ಸೋಮನಹಳ್ಳಿಯಲ್ಲಿ 4376 ಎಕರೆ ಭೂಮಿಯಿದ್ದು, ಎರಡೂ ಪ್ರದೇಶಗಳನ್ನು ಒಟ್ಟು ಗೂಡಿಸಿದರೆ 9 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಸಿಗಲಿದ್ದು, ಅಲ್ಲಿ ವಿಮಾನನಿಲ್ದಾಣ ನಿರ್ಮಾಣ ಸಾಧ್ಯತೆ. ಜತೆಗೆ ಕಡಿಮೆ ಭೂಸ್ವಾಧೀನ ಮಾಡಬಹುದಾದ ಅಥವಾ ಕಡಿಮೆ ಗ್ರಾಮಗಳನ್ನು ಸ್ವಾಧೀನ ಪಡಿಸಿಕೊಳ್ಳಬಹುದಾದ ಸ್ಥಳವನ್ನು ಅಂತಿಮಗೊಳಿಸುವಂತೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅಧಿಕಾರಿಗಳಿಗೆ ನಿರ್ದೇಶಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/state/cm-dk-shivakumar-has-suggested-that-harohalli-be-considered-as-a-potential-location-for-bengaluru-second-airport-mrq-hfmcm1g"/>
        </item>
        <item>
            <title><![CDATA[ಬೆಂಗಳೂರು ನಿವಾಸಿಗಳೇ ಗಮನಿಸಿ, ಬಿಡಾಡಿ ವಾಹನಗಳ ತೆರವಿಗೆ ಜಿಬಿಎ ಮಹಾ ಕಾರ್ಯಾಚರಣೆ, ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಿ]]></title>
            <link>https://kannada.asianetnews.com/karnataka-districts/bengaluru-civic-drive-gba-and-traffic-police-to-tow-and-auction-abandoned-roadside-vehicles-from-july-10-gdp/articleshow-u2c08l5</link>
            <guid isPermaLink="true">https://kannada.asianetnews.com/karnataka-districts/bengaluru-civic-drive-gba-and-traffic-police-to-tow-and-auction-abandoned-roadside-vehicles-from-july-10-gdp/articleshow-u2c08l5</guid>
            <pubDate>Thu, 09 Jul 2026 10:45:12 +0530</pubDate>
            <description><![CDATA[ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಲು ಜಿಬಿಎ ಮತ್ತು ಸಂಚಾರಿ ಪೊಲೀಸರು ಜುಲೈ 10 ರಿಂದ ಜಂಟಿ ಕಾರ್ಯಾಚರಣೆ ಆರಂಭಿಸಲಿದ್ದಾರೆ. 7 ದಿನಗಳ ನೋಟಿಸ್ ನೀಡಿದ ನಂತರವೂ ತೆರವುಗೊಳಿಸದ ವಾಹನಗಳನ್ನು ಜಪ್ತಿ ಮಾಡಿ ಹರಾಜು ಹಾಕಲಾಗುವುದು, ಸಾರ್ವಜನಿಕರು 'Public Eye' ಆಪ್ ಮೂಲಕ ದೂರು ನೀಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kx2mpr5gra2abmh59sh828wb,imgname-bengaluru-civic-drive-gba-and-traffic-1783573995695.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿಯ ರಸ್ತೆಗಳು, ಫುಟ್&zwnj;ಪಾತ್&zwnj;ಗಳು ಮತ್ತು ಸಾರ್ವಜನಿಕ ಮುಕ್ತ ಪ್ರದೇಶಗಳಲ್ಲಿ ದಿನಗಟ್ಟಲೆ, ತಿಂಗಳುಗಟ್ಟಲೆ ಅನಾಥವಾಗಿ ನಿಲ್ಲಿಸಲಾಗಿರುವ ಹಳೇ ವಾಹನಗಳ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರ ಸೂಚನೆ ಮೇರೆಗೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅನಾಥ ವಾಹನಗಳ ತೆರವು ಕಾರ್ಯಾಚರಣೆಗೆ ಕಠಿಣ ಮಾರ್ಗಸೂಚಿ ಪ್ರಕಟಿಸಿದ್ದು, ಜುಲೈ 10 ರಿಂದ ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಅಧಿಕೃತವಾಗಿ ಕಾರ್ಯಾಚರಣೆ ಆರಂಭವಾಗಲಿದೆ. ಜಿಬಿಎ ಕಾಯ್ದೆ-2024ರ ಸೆಕ್ಷನ್ 324ರ ಅನ್ವಯ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವ ಇಂತಹ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.&lt;/p&gt;&lt;h2&gt;ಜಿಬಿಎ ಹೊರಡಿಸಿರುವ ಕಠಿಣ ಮಾರ್ಗಸೂಚಿ ಮತ್ತು ಕ್ರಮಗಳು:&lt;/h2&gt;&lt;p&gt;ಅನಾಥ ಹಾಗೂ ಬಿಡಾಡಿ ವಾಹನಗಳನ್ನು ತೆರವುಗೊಳಿಸಲು ಜಿಬಿಎ ಹಂತ-ಹಂತದ ಕಠಿಣ ನಿಯಮಾವಳಿಗಳನ್ನು ರೂಪಿಸಿದೆ:&lt;/p&gt;&lt;h3&gt;7 ದಿನಗಳ ಅಧಿಕೃತ ನೋಟಿಸ್ ಹಾಗೂ ವೀಲ್ ಕ್ಲಾಂಪ್&lt;/h3&gt;&lt;p&gt;ರಸ್ತೆ ಬದಿ, ಸರ್ಕಾರಿ ಜಾಗ ಅಥವಾ ಫುಟ್&zwnj;ಪಾತ್&zwnj;ಗಳಲ್ಲಿ ದೀರ್ಘಕಾಲದಿಂದ ಬಿದ್ದಿರುವ ವಾಹನಗಳನ್ನು ಗುರುತಿಸಿ, ಅವುಗಳ ಮೇಲೆ ಅಧಿಕಾರಿಗಳು ಅಧಿಕೃತ ಸ್ಟಿಕ್ಕರ್ ಮಾದರಿಯ ನೋಟಿಸ್ ಅಂಟಿಸಲಿದ್ದಾರೆ. ಇದರೊಂದಿಗೆ ಆ ವಾಹನಗಳು ಅಲ್ಲಿಂದ ಕದಲದಂತೆ ಚಕ್ರಗಳಿಗೆ ವೀಲ್ ಕ್ಲಾಂಪ್ ಅಳವಡಿಸಲಾಗುತ್ತದೆ.&lt;/p&gt;&lt;h3&gt;ಟೋಯಿಂಗ್ (ವಾಹನ ಜಪ್ತಿ)&lt;/h3&gt;&lt;p&gt;ನೋಟಿಸ್ ಅಂಟಿಸಿದ 7 ದಿನಗಳ ಒಳಗಾಗಿ ವಾಹನಗಳ ಮಾಲೀಕರು ಎಚ್ಚೆತ್ತುಕೊಂಡು, ತಮ್ಮ ವಾಹನಗಳನ್ನು ಅಲ್ಲಿಂದ ತೆರವುಗೊಳಿಸದಿದ್ದರೆ, ಅಂತಹ ವಾಹನಗಳನ್ನು ಜಿಬಿಎ ಮತ್ತು ಪೊಲೀಸರು ಜಂಟಿಯಾಗಿ ಟೋಯಿಂಗ್ ಮೂಲಕ ಜಪ್ತಿ ಮಾಡಲಿದ್ದಾರೆ.&lt;/p&gt;&lt;h3&gt;ಬಹಿರಂಗ ಹರಾಜು&lt;/h3&gt;&lt;p&gt;ಜಪ್ತಿ ಮಾಡಲಾದ ವಾಹನಗಳನ್ನು ಹಿಂತಿರುಗಿಸದೆ, ನಿಯಮಾನುಸಾರ ಸರ್ಕಾರಿ ಪ್ರಕ್ರಿಯೆಗಳ ಮೂಲಕ ಬಹಿರಂಗವಾಗಿ ಹರಾಜು ಹಾಕಿ ವಿಲೇವಾರಿ ಮಾಡಲಾಗುತ್ತದೆ.&lt;/p&gt;&lt;h2&gt;ಸಾರ್ವಜನಿಕರ ದೂರಿಗೆ ಸಿಕ್ಕಿತು 'Public Eye' ಆಪ್ ನ ಶಕ್ತಿ!&lt;/h2&gt;&lt;p&gt;ನಿಮ್ಮ ಮನೆ ಮುಂದೆ, ಗಲ್ಲಿಗಳಲ್ಲಿ ಅಥವಾ ಅಪಾರ್ಟ್&zwnj;ಮೆಂಟ್&zwnj;ಗಳ ಸುತ್ತಮುತ್ತ ಯಾರಾದರೂ ಹಳೆಯ ವಾಹನಗಳನ್ನು ತಂದು ಅನಾಥವಾಗಿ ನಿಲ್ಲಿಸಿದ್ದಲ್ಲಿ, ಸಾರ್ವಜನಿಕರೇ ನೇರವಾಗಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ (Play Store) ಅಥವಾ ಆಪಲ್ ಆಪ್ ಸ್ಟೋರ್ (App Store) ನಿಂದ 'Public Eye' ಆಪ್ ಅನ್ನು ಡೌನ್&zwnj;ಲೋಡ್ ಮಾಡಿಕೊಳ್ಳಬಹುದು. ಫುಟ್&zwnj;ಪಾತ್ ಅಥವಾ ರಸ್ತೆ ಬದಿ ಅನಾಥವಾಗಿ ನಿಂತಿರುವ ವಾಹನಗಳ ಫೋಟೋವನ್ನು ಈ ಆಪ್&zwnj;ನಲ್ಲಿ ಅಪ್&zwnj;ಲೋಡ್ ಮಾಡಿ ಮಾಹಿತಿ ನೀಡಿದರೆ, ಸಂಚಾರಿ ಪೊಲೀಸರು ಮತ್ತು ಜಿಬಿಎ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ.&lt;/p&gt;&lt;h2&gt;ಸಾರ್ವಜನಿಕರಿಗೆ ಜಿಬಿಎ ಮುಖ್ಯ ಆಯುಕ್ತರ ಖಡಕ್ ಎಚ್ಚರಿಕೆ&lt;/h2&gt;&lt;p&gt;ನಗರದ ಸೌಂದರ್ಯಕ್ಕೆ ಕಳಂಕ ತರುತ್ತಿರುವ ಹಾಗೂ ಸಾರ್ವಜನಿಕರ ಮತ್ತು ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟುಮಾಡುತ್ತಿರುವ ಅನಾಥ ವಾಹನಗಳ ವಿರುದ್ಧ ನಾಳೆಯಿಂದಲೇ (ಜುಲೈ 10) ಜಂಟಿ ಕಾರ್ಯಾಚರಣೆ ಶುರುವಾಗಲಿದೆ. ಸಾರ್ವಜನಿಕರು ತಮ್ಮ ಯಾವುದೇ ಹಳೇ ಅಥವಾ ದುರಸ್ತಿಯಲ್ಲಿರುವ ವಾಹನಗಳನ್ನು ರಸ್ತೆ ಬದಿ ಬಿಟ್ಟಿದ್ದರೆ, ತಕ್ಷಣವೇ ಅವುಗಳನ್ನು ತಮ್ಮ ಸ್ವಂತ ಜಾಗಗಳಿಗೆ ಸ್ಥಳಾಂತರಿಸಿಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಯಾವುದೇ ಮುಲಾಜಿಲ್ಲದೆ ವಾಹನಗಳನ್ನು ಜಪ್ತಿ ಮಾಡಿ ಹರಾಜು ಹಾಕಲಾಗುವುದು.&quot; ಎಂದು ಜಿಬಿಎ ಮುಖ್ಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-civic-drive-gba-and-traffic-police-to-tow-and-auction-abandoned-roadside-vehicles-from-july-10-gdp/articleshow-u2c08l5"/>
        </item>
        <item>
            <title><![CDATA[ಬಾಗಲಕೋಟೆ: ಘಟಪ್ರಭಾ ನದಿಗೆ ಅಡ್ಡಲಾಗಿ ರೈಲ್ವೆ ಸೇತುವೆ, ರೈತರ ಹಿತಾಸಕ್ತಿ ರಕ್ಷಣೆಗೆ ವೈಜ್ಞಾನಿಕವಾಗಿ ನಿರ್ಮಾಣ]]></title>
            <link>https://kannada.asianetnews.com/karnataka-districts/bagalkote-kudachi-line-mp-pc-gaddigoudar-directs-officials-ensure-scientific-railway-bridge-over-ghataprabha-river-gdp/articleshow-bbc4a7v</link>
            <guid isPermaLink="true">https://kannada.asianetnews.com/karnataka-districts/bagalkote-kudachi-line-mp-pc-gaddigoudar-directs-officials-ensure-scientific-railway-bridge-over-ghataprabha-river-gdp/articleshow-bbc4a7v</guid>
            <pubDate>Thu, 09 Jul 2026 09:55:33 +0530</pubDate>
            <description><![CDATA[ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಭಾಗವಾಗಿ ಘಟಪ್ರಭಾ ನದಿಗೆ ರೈಲ್ವೆ ಸೇತುವೆ ನಿರ್ಮಾಣ ಕುರಿತು ಸಂಸದ ಪಿ.ಸಿ.ಗದ್ದಿಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸೇತುವೆ ನಿರ್ಮಾಣವು ವೈಜ್ಞಾನಿಕವಾಗಿರಬೇಕು ಮತ್ತು ಪ್ರವಾಹದ ಸಮಯದಲ್ಲಿ ರೈತರ ಜಮೀನುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kx2hz8nt2a0bexpfqvg578mm,imgname-uttar-kannada-road-accident--5--1783571129018.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬಾಗಲಕೋಟೆ:&lt;/strong&gt; ಮುಧೋಳ ತಾಲೂಕಿನ ಜಾಲಿಬೇರಿ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ರೈಲ್ವೆ ಸೇತುವೆ ನಿರ್ಮಾಣ ಕುರಿತು ಸಂಸದ ಪಿ.ಸಿ.ಗದ್ದಿಗೌಡ ಅವರ ಅಧ್ಯಕ್ಷತೆಯಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ಜರುಗಿತು.&lt;/p&gt;&lt;h2&gt;ಕುಡಚಿ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಪ್ರಗತಿ&lt;/h2&gt;&lt;p&gt;ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಬಾಗಲಕೋಟೆ ಕುಡಚಿ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಜಾಲಿಬೇರಿ ಭಾಗದಲ್ಲಿ ಘಟಪ್ರಭಾ ನದಿಗೆ ರೈಲು ಸೇತುವೆ ನಿರ್ಮಾಣ ಮಾಡುವ ಅಗತ್ಯವಿದೆ. ವೈಜ್ಞಾನಿಕವಾಗಿ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಅದೇ ಸಮಯದಲ್ಲಿ ರೈತರ ಹಿತಾಶಕ್ತಿಗೆ ಯಾವುದೇ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.&lt;/p&gt;&lt;h2&gt;ವೈಜ್ಞಾನಿಕವಾಗಿ ಸೇತುವ ನಿರ್ಮಾಣ&lt;/h2&gt;&lt;p&gt;ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಘಟಪ್ರಭಾ ನದಿಯಿಂದ ಉಂಟಾಗುವ ಪ್ರವಾಹವನ್ನು ಆಧರಿಸಿ ಸೇತುವೆ ನಿರ್ಮಾಣ ಕುರಿತು ಯೋಜನೆ ಸಿದ್ದಪಡಿಸಬೇಕು. ಪ್ರವಾಹ ಬಂದಾಗ ರೈತರ ಜಮೀನುಗಳಿಗೆ ನೀರು ಹೋಗದ ರೀತಿಯಲ್ಲಿ ವೈಜ್ಞಾನಿಕವಾಗಿ ಸೇತುವ ನಿರ್ಮಿಸುವ ನಿಟ್ಟಿನಲ್ಲಿ ಕೆಬಿಜೆಎನ್ಎಲ್, ರೈಲ್ವೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಜಂಟಿ ಸ್ಥಳ ಪರಿಶೀಲಿಸಿ, ನೀರಿನ ಹರಿವು ನೋಡಿಕೊಂಡು ಯೋಜನೆ ರೂಪಿಸಬೇಕು ಎಂದು ತಿಳಿಸಿದರು.&lt;/p&gt;&lt;p&gt;ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಭಾರತೀಯ ರೈಲ್ವೆ ಇಲಾಖೆಯ ಡೆಪ್ಯೂಟಿ ಸಿಇ ಶಿವುಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜು ನಾಯಕ, ಆಡಳಿತಾಧಿಕಾರಿ ಉಮೇಶ ನಾಯಕ, ಎಡಿಎಲ್ಆರ್ ಮಹೇಶ ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.&lt;/p&gt;&lt;p&gt;ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಂಡರೆ ರೈಲು ಸಂಚಾರಕ್ಕೆ ಅನುಕೂಲವಾಗುವದರ ಜತೆಗೆ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗೂ ಹೊಸ ಉತ್ತೇಜನ ದೊರೆಯಲಿದೆ. ಆದ್ದರಿಂದ ಕಾಮಗಾರಿಯ ಪ್ರತಿಯೊಂದು ಹಂತವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ರೈತರ ಹಿತಾಸಕ್ತಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಬೇಕು. ರೈತರು ಸಲ್ಲಿಸಿರುವ ನ್ಯಾಯಸಮ್ಮತ ಬೇಡಿಕೆಗಳನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು.&lt;/p&gt;&lt;p&gt;-ಪಿ.ಸಿ.ಗದ್ದಿಗೌಡರ, ಸಂಸದ&lt;/p&gt;&lt;p&gt;----&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bagalkote-kudachi-line-mp-pc-gaddigoudar-directs-officials-ensure-scientific-railway-bridge-over-ghataprabha-river-gdp/articleshow-bbc4a7v"/>
        </item>
        <item>
            <title><![CDATA[ಕರ್ನಾಟಕದಲ್ಲಿನ ಮರಾಠಿ ಹೋರಾಟಗಾರರ ಪರ ಮಹಾರಾಷ್ಟ್ರ ಸಿಎಂ ದೊಡ್ಡ ಘೋಷಣೆ! ಸುಪ್ರೀಂಗೆ ಅರ್ಜಿ]]></title>
            <link>https://kannada.asianetnews.com/india-news/maharashtra-panel-to-seek-early-hearing-of-belagavi-border-dispute-case-in-supreme-court-rav/articleshow-3mrs8sp</link>
            <guid isPermaLink="true">https://kannada.asianetnews.com/india-news/maharashtra-panel-to-seek-early-hearing-of-belagavi-border-dispute-case-in-supreme-court-rav/articleshow-3mrs8sp</guid>
            <pubDate>Thu, 09 Jul 2026 07:37:08 +0530</pubDate>
            <description><![CDATA[&lt;p&gt;ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್&zwnj;, ಸುಪ್ರೀಂಕೋರ್ಟ್&zwnj;ನಲ್ಲಿ ತ್ವರಿತ ವಿಚಾರಣೆಗೆ ಅರ್ಜಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ, ಕರ್ನಾಟಕದಲ್ಲಿನ ಮರಾಠಿ ಪರ ಹೋರಾಟಗಾರರಿಗೆ ಕಾನೂನು ನೆರವು ನೀಡುವುದಾಗಿ ಘೋಷಿಸಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx29k1td888m9x0swmpxsyh5,imgname-----------------------2026-07-09t072830.482-1783562340173.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜು.9):&lt;/strong&gt; ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿ ಕುರಿತು ಮತ್ತೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್&zwnj;, ಬೆಳಗಾವಿ ಗಡಿ ವಿವಾದ(belagavi border dispute) ಸಂಬಂಧ ಸುಪ್ರೀಂಕೋರ್ಟ್&zwnj;(Supreme court)ನಲ್ಲಿ ತ್ವರಿತ ವಿಚಾರಣೆ ಕೋರಿ ಅರ್ಜಿ ಸಲ್ಲಿಸುವ, ಕರ್ನಾಟದಲ್ಲಿನ ಮರಾಠಿ ಪರ ಹೋರಾಟಗಾರರಿಗೆ ಎಲ್ಲಾ ರೀತಿಯ ಕಾನೂನು ನೆರವು ನೀಡುವ ಮತ್ತು ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ನೀಡುವ ಘೋಷಣೆ ಮಾಡಿದ್ದಾರೆ.&lt;/p&gt;&lt;h2&gt;ಮಾತುಕತೆ ಮೂಲಕ ಇತ್ಯರ್ಥಕ್ಕೆ ಮನವಿ&lt;/h2&gt;&lt;p&gt;ಇದರ ಜೊತೆಜೊತೆಗೇ ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ವಿಷಯ ಇತ್ಯರ್ಥ ಸಂಬಂಧ ಮಹಾರಾಷ್ಟ್ರ ಮತ್ತು ಕರ್ನಾಟಕದ ತಲಾ ಮೂರು ಸಚಿವರ ಸಭೆ ಆಯೋಜಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್&zwnj; ಶಾಗೆ ಮನವಿ ಮಾಡುವುದಾಗಿಯೂ ತಿಳಿಸಿದ್ದಾರೆ.&lt;/p&gt;&lt;h3&gt;ಗಡಿ ವಿವಾದ ಸಂಬಂಧ ಉನ್ನತ ಮಟ್ಟದ ಸಭೆ&lt;/h3&gt;&lt;p&gt;ಗಡಿ ವಿವಾದ ಸಂಬಂಧ ಬುದವಾರ ಇಲ್ಲಿನ ವಿಧಾನಭವನದಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ಸರ್ಕಾರದ ಹಿರಿಯ ಸಚಿವರು, ವಿಪಕ್ಷ ನಾಯಕರು ಮತ್ತು ಕರ್ನಾಟಕದ ಮರಾಠಿ ಭಾಷಿಕರ ನಿಯೋಗ ಭಾಗಿಯಾಗಿತ್ತು. ಎನ್&zwnj;ಸಿಪಿ (ಪವಾರ್&zwnj; ಬಣ) ನಾಯಕ ಶರದ್&zwnj; ಪವಾರ್&zwnj; ಕೂಡ 3 ದಶಕಗಳ ಬಳಿಕ ವಿಧಾನಭವನದಲ್ಲಿ ನಡೆದ ಈ ಸಭೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.&lt;/p&gt;&lt;p&gt;ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್&zwnj;, &lsquo;ಮಹಾರಾಷ್ಟ್ರ ದೀರ್ಘಕಾಲದಿಂದ ಹೋರಾಟ ನಡೆಸುತ್ತಿದೆ. ಇಡೀ ಮಹಾರಾಷ್ಟ್ರದ ಜನತೆ ಗಡಿ ಭಾಗದಲ್ಲಿರುವ ಮರಾಠಿಗರ ಪರವಾಗಿ ನಿಲ್ಲಲಿದೆ. ಮರಾಠಿ ಭಾಷಿಕ ಹೋರಾಟಗಾರರಿಗೆ ಅಗತ್ಯವಾದ ಎಲ್ಲಾ ಕಾನೂನು, ಆರ್ಥಿಕ ನೆರವು ನೀಡಲು ಸರ್ಕಾರ ಸಿದ್ಧ&rsquo; ಎಂದು ಭರವಸೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;2004ರಿಂದಲೂ ಸುಪ್ರೀಂ ಅಂಗಳದಲ್ಲಿರುವ ಅಂತರರಾಜ್ಯ ಗಡಿ ವಿವಾದ&lt;/strong&gt;&lt;/p&gt;&lt;p&gt;ಜೊತೆಗೆ, &lsquo;ಕರ್ನಾಟಕದಲ್ಲಿ ಮರಾಠಿಗರ ಸಮಸ್ಯೆಯನ್ನು ಸಂಸದರ ಮೂಲಕ ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಗಮನಕ್ಕೆ ತರಲಾಗುವುದು. 2004ರಿಂದಲೂ ಸುಪ್ರೀಂ ಅಂಗಳದಲ್ಲಿರುವ ಅಂತರರಾಜ್ಯ ಗಡಿ ವಿವಾದದ ಬಗ್ಗೆ ತ್ವರಿತ ವಿಚಾರಣೆ ನಡೆಸುವಂತೆ ಹೊಸ ಅರ್ಜಿ ಸಲ್ಲಿಸುತ್ತೇವೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗಡಿಯಲ್ಲಿರುವ ಮರಾಠಿಗರ ವಿರುದ್ಧ ಪ್ರಕರಣಗಳಿದ್ದರೆ ನಾವೇ ವಕೀಲರನ್ನು ನೇಮಿಸಿ, ಅವರ ವೆಚ್ಚವನ್ನು ಭರಿಸುತ್ತೇವೆ&rsquo; ಎಂದು ಸಭೆಗೆ ಮುಖ್ಯಮಂತ್ರಿ ಭರವಸೆ ನೀಡಿದರು ಎನ್ನಲಾಗಿದೆ.&lt;/p&gt;&lt;p&gt;ಜತೆಗೆ &lsquo;ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಮತ್ತೊಂದೆಡೆ ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥದ ಸಾಧ್ಯತೆ ಬಗ್ಗೆ ಮಾತುಕತೆ ನಡೆಸಲು ಮಹಾರಾಷ್ಟ್ರ ಮತ್ತು ಕರ್ನಾಟಕದ ತಲಾ ಮೂವರು ಸಚಿವರ ಸಭೆ ಆಯೋಜಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು&rsquo; ಎಂದು ಫಡ್ನವೀಸ್&zwnj; ಹೇಳಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/maharashtra-panel-to-seek-early-hearing-of-belagavi-border-dispute-case-in-supreme-court-rav/articleshow-3mrs8sp"/>
        </item>
        <item>
            <title><![CDATA[ಧಾರವಾಡ ಡೆಲಿವರಿ ಬಾಯ್ ಸ್ನೇಹಿತರು ಯಲ್ಲಾಪುರ ಭೀಕರ ಅಪಘಾತದಲ್ಲಿ ಮೃತ್ಯು, ಭೀಕರತೆ ಬಿಚ್ಚಿಟ್ಟ ಫೋಟೋಗಳು!]]></title>
            <link>https://kannada.asianetnews.com/gallery/karnataka-districts/dharwad-delivery-boys-group-killed-in-horrific-cruiser-lorry-crash-at-yellapura-arabail-ghat-last-selfie-goes-viral-gdp-ozqapq2</link>
            <guid isPermaLink="true">https://kannada.asianetnews.com/gallery/karnataka-districts/dharwad-delivery-boys-group-killed-in-horrific-cruiser-lorry-crash-at-yellapura-arabail-ghat-last-selfie-goes-viral-gdp-ozqapq2</guid>
            <pubDate>Thu, 09 Jul 2026 08:53:56 +0530</pubDate>
            <description><![CDATA[ಧಾರವಾಡದಿಂದ ಧಾರ್ಮಿಕ ಪ್ರವಾಸಕ್ಕೆ ಹೊರಟಿದ್ದ ಏಳು ಸ್ನೇಹಿತರು ಯಲ್ಲಾಪುರದ ಅರಬೈಲ್ ಘಾಟ್&zwnj;ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx2dey9dbwmn0d47fv2y89mx,imgname-uttar-kannada-road-accident-1783566399789.jpg" type="image/jpeg" height="390" width="690"/>
            <content:encoded><![CDATA[ಧಾರವಾಡದಿಂದ ಧಾರ್ಮಿಕ ಪ್ರವಾಸಕ್ಕೆ ಹೊರಟಿದ್ದ ಏಳು ಸ್ನೇಹಿತರು ಯಲ್ಲಾಪುರದ ಅರಬೈಲ್ ಘಾಟ್&zwnj;ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.&lt;img&gt;&lt;p&gt;&lt;strong&gt;ಕಾರವಾರ/ಯಲ್ಲಾಪುರ&lt;/strong&gt;: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಪ್ರದೇಶದಲ್ಲಿ ಗುರುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರಿದ್ದ ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಗೋಕರ್ಣ, ಮುರುಡೇಶ್ವರ ಹಾಗೂ ಧರ್ಮಸ್ಥಳದ ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕಾಗಿ ಹೊರಟಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಮೃತಪಟ್ಟವರೆಲ್ಲರೂ ಧಾರವಾಡದಲ್ಲಿ ಡೆಲಿವರಿ ಬಾಯ್ಸ್ ಕೆಲಸ ಮಾಡುತ್ತಿದ್ದ ಸ್ನೇಹಿತರಾಗಿದ್ದಾರೆ. ಪ್ರತಿನಿತ್ಯದ ಕೆಲಸದ ಒತ್ತಡದಿಂದ ಕೊಂಚ ಬಿಡುವು ಮಾಡಿಕೊಂಡು, ದೇವಸ್ಥಾನಗಳ ದರ್ಶನ ಹಾಗೂ ಪ್ರವಾಸದ ಖುಷಿಯಲ್ಲಿದ್ದ ಯುವಕರಿಗೆ ವಿಧಿಯೇ ಸಂಚು ರೂಪಿಸಿತ್ತು. ಒಟ್ಟು 9 ಜನರಿದ್ದ ಈ ಸ್ನೇಹಿತರ ತಂಡವು ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಕರಾವಳಿಯತ್ತ ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ಬಂದ ಲಾರಿ, ಇವರು ಚಲಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.&lt;/p&gt;&lt;img&gt;&lt;p&gt;ಪ್ರವಾಸ ಹೊರಡುವ ಮುನ್ನ ಈ ಸ್ನೇಹಿತರು ಧಾರವಾಡದ ಪ್ರಸಿದ್ಧ ಕೆ.ಸಿ.ಡಿ (KCD) ಸರ್ಕಲ್ ಬಳಿ ಇರುವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದರು. ಸುಖಕರ ಪ್ರಯಾಣಕ್ಕಾಗಿ ಗಣಪತಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ದೇವಸ್ಥಾನದ ಮುಂಭಾಗದಲ್ಲೇ ಎಲ್ಲರೂ ಒಟ್ಟಾಗಿ ಅತ್ಯಂತ ಸಡಗರದಿಂದ ಸೆಲ್ಫಿ ಫೋಟೋವನ್ನೂ ತೆಗೆದುಕೊಂಡಿದ್ದರು. ಆದರೆ, ಆ ದೇವರ ದರ್ಶನ ಹಾಗೂ ಸೆಲ್ಫಿ ಫೋಟೋವೇ ಆ ಸ್ನೇಹಿತರ ಪಾಲಿಗೆ ಕೊನೆಯಾಗುವುದೆಂದು ಯಾರೂ ಊಹಿಸಿರಲಿಲ್ಲ. ದೇವರಲ್ಲಿ ಮಾಡಿದ ಪ್ರಾರ್ಥನೆ ಫಲಿಸಲಿಲ್ಲ. ಕೆಲವೇ ಗಂಟೆಗಳಲ್ಲಿ ಜವರಾಯ ಜೀವ ಕಸಿದುಕೊಂಡಿದ್ದಾನೆ.&lt;/p&gt;&lt;img&gt;&lt;p&gt;ಅಪಘಾತದ ಭೀಕರತೆಗೆ ಕ್ರೂಸರ್ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, 6 ಜನ ಸ್ಥಳದಲ್ಲೇ ಜೀವ ಬಿಟ್ಟಿದ್ದು ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.&lt;/p&gt;&lt;ul&gt; &lt;li&gt;ಬಸವರಾಜ್ (48 ವರ್ಷ)&lt;/li&gt; &lt;li&gt;ಅಭಿಷೇಕ್ ಈಶ್ವರ್ (28 ವರ್ಷ)&lt;/li&gt; &lt;li&gt;ಅಕ್ಷಯ (26 ವರ್ಷ)&lt;/li&gt; &lt;li&gt;ಅಭಿಷೇಕ್ (26 ವರ್ಷ)&lt;/li&gt; &lt;li&gt;ಸಂಜೀವ / ಸಂಜಯ ಅಂಗಡಿ (33 ವರ್ಷ - ಕ್ರೂಸರ್ ಚಾಲಕ)&lt;/li&gt; &lt;li&gt;ಮಂಜುನಾಥ ಚುಲಕಿ (32 ವರ್ಷ)&lt;/li&gt; &lt;li&gt;ಸಚಿನ್ ಹೆಬ್ಬಳ್ಳಿ(26 - ಕಿಮ್ಸ್ ಆಸ್ಪತ್ರೆಯಲ್ಲಿ ಸಾವು)&lt;/li&gt;&lt;/ul&gt;&lt;p&gt;ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಶಿವರಾಜ್ ದುರ್ಗಪ್ಪ ಮಡಿವಾಳ್ (22 ವರ್ಷ), ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28 ವರ್ಷ) ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.&lt;/p&gt;&lt;img&gt;&lt;p&gt;ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಯಲ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಹೊರತೆಗೆಯಲಾಯಿತು. ಸದ್ಯ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಧಾರವಾಡದ ಇವರ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/dharwad-delivery-boys-group-killed-in-horrific-cruiser-lorry-crash-at-yellapura-arabail-ghat-last-selfie-goes-viral-gdp-ozqapq2"/>
        </item>
        <item>
            <title><![CDATA[SSLC ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ 35 ವಿದ್ಯಾರ್ಥಿಗಳಿಗೆ ಬೆಳ್ಳಿ ಪೆನ್ ವಿತರಣೆ]]></title>
            <link>https://kannada.asianetnews.com/karnataka-districts/silver-pens-distributed-to-35-students-who-scored-125-out-of-125-in-sslc-kannada-chintamani-chikkaballapur-mrq/articleshow-3dn6drw</link>
            <guid isPermaLink="true">https://kannada.asianetnews.com/karnataka-districts/silver-pens-distributed-to-35-students-who-scored-125-out-of-125-in-sslc-kannada-chintamani-chikkaballapur-mrq/articleshow-3dn6drw</guid>
            <pubDate>Thu, 09 Jul 2026 08:37:29 +0530</pubDate>
            <description><![CDATA[&lt;p&gt;2025-26ನೇ ಸಾಲಿನ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ 35 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ಸಾಧಕ ವಿದ್ಯಾರ್ಥಿಗಳಿಗೆ ಶಿವ ಜ್ಯೂವರೆಲ್ಸ್ ವತಿಯಿಂದ ಬೆಳ್ಳಿಯ ಪೆನ್ನುಗಳನ್ನು ವಿತರಿಸಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2dda7tgqmspdmpepzf2sqp,imgname-silver-pen-1783566346490.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಂತಾಮಣಿ:&lt;/strong&gt; 2025-26 ನೇ ಸಾಲಿನ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125 ಅಂಕಗಳಿಗೆ 125 ಪೂರ್ಣಾಂಕಗಳನ್ನು ಪಡೆದಿರುವ ತಾಲೂಕಿನ ಸಾಧಕ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.&lt;/p&gt;&lt;h2&gt;&lt;strong&gt;ಶಿವ ಜ್ಯೂವರೆಲ್ಸ್ ಮಾಲೀಕರಿಂದ ಬೆಳ್ಳಿ ಪೆನ್ ವಿತರಣೆ&lt;/strong&gt;&lt;/h2&gt;&lt;p&gt;ನಗರದ ರಾಧಾಕೃಷ್ಣ ಪಾರ್ಟಿ ಹಾಲ್&zwnj;ನಲ್ಲಿ ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ 35 ವಿದ್ಯಾರ್ಥಿಗಳಿಗೆ ನಗರದ ಆಜಾದ್ ಚೌಕದಲ್ಲಿರುವ ಶಿವ ಜ್ಯೂವರೆಲ್ಸ್ ಮಾಲೀಕ ಬೆಳ್ಳಿಯ ಪೆನ್ನನ್ನು ನೀಡಿದರು.&lt;/p&gt;&lt;p&gt;ಶಿವ ಜ್ಯೂವರೆಲ್ಸ್ ಮಾಲೀಕ ಮಾತನಾಡಿ, ಬುದ್ದಿವಂತರಾಗಿ, ಜ್ಞಾನವಂತರಾಗಿ, ಕನಡಮ್ಮನ ಸೇವೆ ಮಾಡಿ ನಿಮ್ಮ ಭವಿಷ್ಯವನ್ನು ಸುಂದವಾಗಿಸಿಕೊಳ್ಳಿರೆಂದು ಆಶಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮುಂಡಗೋಡನಿಂದ ಹುಬ್ಬಳ್ಳಿ, ಗದಗ, ಕೊಪ್ಪಳ ಮಾರ್ಗವಾಗಿ ರಾಯಚೂರು ನಗರಕ್ಕೆ ನೇರ ಬಸ್ ಆರಂಭ&lt;/strong&gt;&lt;/p&gt;&lt;p&gt;ಎನ್.ವಿ. ಶ್ರೀನಿವಾಸನ್, ಕಾಗತಿ ವೆಂಕಟರತ್ನಂ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಚು.ಸಾ.ಪ. ಅಧ್ಯಕ್ಷ ಚಲಪತಿಗೌಡ, ದೇವರ ಮಳ್ಳೂರು ಮಹೇಶ್, ಸ್ವರ್ಣಗೌರಿ, ಕಸಾಪ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್, ಕೆಜಿಎಫ್ ಕವಿಯತ್ರಿ ರಾಧಾ ಡಿ ಪ್ರಕಾಶ್, ರಮಣರೆಡ್ಡಿ, ವೆಂಕಟೇಶಪ್ಪ, ಚೇಳೂರು ರಾಧಾಮಣಿ ಪಾಲ್ಗೊಂಡಿದ್ದರು&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Mysuru: ಸರಗೂರು ಅಂಚೆ ಕಚೇರಿಯಲ್ಲಿ 1.3 ಕೋಟಿ ರೂಪಾಯಿ ಮಾಯ; CBIನಿಂದ ಇಬ್ಬರ ಬಂಧನ&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/silver-pens-distributed-to-35-students-who-scored-125-out-of-125-in-sslc-kannada-chintamani-chikkaballapur-mrq/articleshow-3dn6drw"/>
        </item>
        <item>
            <title><![CDATA[ಮುಂಡಗೋಡನಿಂದ ಹುಬ್ಬಳ್ಳಿ, ಗದಗ, ಕೊಪ್ಪಳ ಮಾರ್ಗವಾಗಿ ರಾಯಚೂರು ನಗರಕ್ಕೆ ನೇರ ಬಸ್ ಆರಂಭ]]></title>
            <link>https://kannada.asianetnews.com/karnataka-districts/direct-nwkrtc-bus-service-from-mundagoda-to-raichur-city-via-hubballi-gadag-koppal-begins-mrq/articleshow-5e5he1p</link>
            <guid isPermaLink="true">https://kannada.asianetnews.com/karnataka-districts/direct-nwkrtc-bus-service-from-mundagoda-to-raichur-city-via-hubballi-gadag-koppal-begins-mrq/articleshow-5e5he1p</guid>
            <pubDate>Thu, 09 Jul 2026 08:18:01 +0530</pubDate>
            <description><![CDATA[&lt;p&gt;Mundagoda-Raichur bus service begins: ಮುಂಡಗೋಡ ಘಟಕದಿಂದ ರಾಯಚೂರಿಗೆ ನೂತನ ಬಸ್ ಸೇವೆ ಆರಂಭಗೊಂಡಿದೆ. ಈ ಬಸ್ ಪ್ರತಿದಿನ ಮುಂಡಗೋಡದಿಂದ ಹೊರಟು, ಹುಬ್ಬಳ್ಳಿ, ಗದಗ, ಕೊಪ್ಪಳ, ಸಿಂಧನೂರು ಮಾರ್ಗವಾಗಿ ರಾಯಚೂರು ತಲುಪಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2c8gmnd1njan0xtyt3kedn,imgname-bus--1--1783565140629.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ &lt;/strong&gt;: ಮುಂಡಗೋಡ ಘಟಕದಿಂದ ರಾಯಚೂರಿಗೆ ನೂತನ ಬಸ್ ಸೇವೆ ಆರಂಭಿಸಲಾಗಿದ್ದು, ಬುಧವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.&lt;/p&gt;&lt;p&gt;ಪ್ರತಿದಿನ ಬೆಳಗ್ಗೆ 10ಗಂಟೆಗೆ ಮುಂಡಗೋಡದಿಂದ ಹೊರಡುವ ಬಸ್ ಹುಬ್ಬಳ್ಳಿ, ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ಮಾನ್ವಿ ಮಾರ್ಗವಾಗಿ ಸಂಜೆ 7 ಗಂಟೆಗೆ ರಾಯಚೂರು ತಲುಪುತ್ತದೆ. ಮರು ದಿನ ಬೆಳಗ್ಗೆ 8 ಗಂಟೆಗೆ ರಾಯಚೂರಿನಿಂದ ಹೊರಟು ಸಂಜೆ 5 ಗಂಟೆಗೆ ಮುಂಡಗೋಡ ತಲುಪುತ್ತದೆ.&lt;/p&gt;&lt;p&gt;ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಹಾಗೂ ಗ್ಯಾರಂಟಿ ಸದಸ್ಯರಾದ ಧರ್ಮರಾಜ ನಡಗೇರ, ಹನುಮಂತಗೌಡ, ಸಚಿನ್ ಬಾಂದೇಕರ್, ಪಪಂ ಮಾಜಿ ಸದಸ್ಯ ಎಂ.ಕೆ. ರಜಾಕ, ಮುಂಡಗೋಡ ಡಿಪೋ ಮ್ಯಾನೇಜರ್ ಸಲೀಂ ಕುರ್ತುಕೋಟಿ, ಬಸವರಾಜ ಸಂಗಮೇಶ್ವರ, ಆಶಿಫ್ ಮಖಾಂದಾರ ಮುಂತಾದವರಿದ್ದರು.&lt;/p&gt;&lt;h2&gt;&lt;strong&gt;ಬಸ್ ಬ್ರೇಕ್ ಫೇಲ್: ಬೈಕ್ ಸವಾರರು ಪಾರು&lt;/strong&gt;&lt;/h2&gt;&lt;p&gt;ಹೊಸ ಬಸ್ ನಿಲ್ದಾಣದ ಬಳಿ ಸಾರಿಗೆ ಸಂಸ್ಥೆಯ ಬಸ್ ಒಂದರ ಬ್ರೇಕ್ ಫೇಲ್ ಆದ ಪರಿಣಾಮ, ಎರಡು ಬೈಕ್&zwnj;ಗಳು ಬಸ್ಸಿನ ಚಕ್ರದಡಿ ಸಿಲುಕಿ ಸವಾರರು ಪಾರಾದ ಘಟನೆ ಬುಧವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರರು ಸಮಯಪ್ರಜ್ಞೆ ಮೆರೆದು ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ಮುಂಡರಗಿಯಿಂದ ಗದಗ ನಗರಕ್ಕೆ ಬರುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್, ಕೇಂದ್ರ ಬಸ್ ನಿಲ್ದಾಣದ ಸಮೀಪ ಬರುತ್ತಿದ್ದಂತೆ ಏಕಾಏಕಿ ಬ್ರೇಕ್ ಫೇಲ್ ಆಗಿದೆ. ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಲು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ಬಸ್ಸಿನ ಹಿಂಬದಿಯಲ್ಲೇ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳ ಮೇಲೆ ಬಸ್ ನುಗ್ಗಿದೆ.&lt;/p&gt;&lt;p&gt;ಬಸ್ ತಮ್ಮ ಕಡೆಗೆ ನಿಯಂತ್ರಣ ತಪ್ಪಿ ಬರುತ್ತಿರುವುದನ್ನು ಮತ್ತು ಅದರ ಅಪಾಯವನ್ನು ತಕ್ಷಣವೇ ಅರಿತ ಇಬ್ಬರು ಬೈಕ್ ಸವಾರರು, ವಾಹನಗಳನ್ನು ರಸ್ತೆಯಲ್ಲೇ ಬಿಟ್ಟು ಪಕ್ಕಕ್ಕೆ ಜಿಗಿದಿದ್ದಾರೆ. ಪರಿಣಾಮವಾಗಿ ಇಬ್ಬರೂ ಸವಾರರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಸವಾರರ ಕಣ್ಣೆದುರೇ ಅವರ ಎರಡು ಬೈಕ್&zwnj;ಗಳು ಬಸ್ಸಿನ ಹಿಂಬದಿಯ ಚಕ್ರಗಳ ಅಡಿಯಲ್ಲಿ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.&lt;/p&gt;&lt;p&gt;ಬಸ್ ಏಕಾಏಕಿ ಹಿಂದಕ್ಕೆ ನುಗ್ಗಿದ ಹಾಗೂ ಬೈಕ್&zwnj;ಗಳು ಚಕ್ರದಡಿ ಸಿಲುಕಿದ ಸದ್ದಿಗೆ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಸ್ಥಳದಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಯಿತು.&lt;/p&gt;&lt;p&gt;ಸಾರಿಗೆ ಸಂಸ್ಥೆಯಲ್ಲಿ ಸದ್ಯ ಹಳೆಯ ಹಾಗೂ ಸೂಕ್ತ ನಿರ್ವಹಣೆ ಇಲ್ಲದ ಡಕೋಟಾ ಬಸ್&zwnj; ಗಳೇ ಇಂತಹ ಅಹಿತಕರ ಘಟನೆಗಳಿಗೆ ಮುಖ್ಯ ಕಾರಣವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/direct-nwkrtc-bus-service-from-mundagoda-to-raichur-city-via-hubballi-gadag-koppal-begins-mrq/articleshow-5e5he1p"/>
        </item>
        <item>
            <title><![CDATA[Mysuru: ಸರಗೂರು ಅಂಚೆ ಕಚೇರಿಯಲ್ಲಿ 1.3 ಕೋಟಿ ರೂಪಾಯಿ ಮಾಯ; CBIನಿಂದ ಇಬ್ಬರ ಬಂಧನ,]]></title>
            <link>https://kannada.asianetnews.com/karnataka-districts/mysuru-misappropriation-of-rs-1-point-3-crore-in-44-savings-accounts-at-saraguru-post-office-cbi-arrests-two-staff-mrq/articleshow-k973ebd</link>
            <guid isPermaLink="true">https://kannada.asianetnews.com/karnataka-districts/mysuru-misappropriation-of-rs-1-point-3-crore-in-44-savings-accounts-at-saraguru-post-office-cbi-arrests-two-staff-mrq/articleshow-k973ebd</guid>
            <pubDate>Thu, 09 Jul 2026 08:01:23 +0530</pubDate>
            <description><![CDATA[ಮೈಸೂರು ಜಿಲ್ಲೆಯ ಸರಗೂರು ಅಂಚೆ ಕಚೇರಿಯಲ್ಲಿ 44 ಉಳಿತಾಯ ಖಾತೆಗಳಿಂದ 1.3 ಕೋಟಿ ರು. ದುರ್ಬಳಕೆ ಮಾಡಿದ ಆರೋಪದ ಮೇಲೆ ಸಿಬಿಐ ಇಬ್ಬರು ನೌಕರರನ್ನು ಬಂಧಿಸಿದೆ. ಆರೋಪಿಗಳು ಗ್ರಾಹಕರ ಲಾಗಿನ್ ವಿವರಗಳನ್ನು ಬಳಸಿ ಹಣವನ್ನು ತಮ್ಮ ಮತ್ತು ಸಂಬಂಧಿಕರ ಖಾತೆಗಳಿಗೆ ವರ್ಗಾಯಿಸಿ ವಂಚನೆ ಎಸಗಿದ್ದಾರೆ. ಈ ಪ್ರಕರಣದ ಕುರಿತು ಸಿಬಿಐ ಹೆಚ್ಚಿನ ತನಿಖೆ ನಡೆಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx2b13g0b0nz1zw4sqddvbtj,imgname-post-office-1783563849216.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಅಂಚೆ ಕಚೇರಿಯಲ್ಲಿ 44 ಖಾತೆದಾರರ ಉಳಿತಾಯ ಖಾತೆಗಳ 1.3 ಕೋಟಿ ರು. ದುರ್ಬಳಕೆ ಮಾಡಿದ ಆರೋಪದಡಿ ಮೈಸೂರು ಜಿಲ್ಲೆಯ ಸರಗೂರು ಅಂಚೆ ಕಚೇರಿಯ ಇಬ್ಬರು ನೌಕರರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.ಅಂಚೆ ಕಚೇರಿ ಸಹಾಯಕ ಪೋಸ್ಟ್ ಮಾಸ್ಟರ್&zwnj; ಮತ್ತು ಪೋಸ್ಟ್ ಮ್ಯಾನ್&zwnj; ಬಂಧಿತರು. ಇಬ್ಬರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಗುರುತಿನ ಚೀಟಿಗಳು, ಪಾಸ್&zwnj; ವರ್ಡ್&zwnj; ದುರ್ಬಳಕೆ&lt;/strong&gt;&lt;/h2&gt;&lt;p&gt;ಈ ಇಬ್ಬರು ನೌಕರರು 2022-2025ರ ಅವಧಿಯಲ್ಲಿ ಅಂಚೆ ಕಚೇರಿಯ ಉಳಿತಾಯ ಖಾತೆದಾರರ ಲಾಗಿನ್&zwnj; ಗುರುತಿನ ಚೀಟಿಗಳು, ಪಾಸ್&zwnj; ವರ್ಡ್&zwnj;ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಗ್ರಾಹಕರ ಉಳಿತಾಯ ಖಾತೆಗಳ ಹಣವನ್ನು ಸ್ವಂತ ಖಾತೆಗಳು ಹಾಗೂ ತಮ್ಮ ಸಂಬಂಧಿಕರ ಖಾತೆಗಳಿಗೆ ಜಮೆ ಮಾಡಿಕೊಂಡು ವ್ಯವಸ್ಥಿತವಾಗಿ ವಂಚಿಸಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ಇತರೆ ಗ್ರಾಹಕರ ಖಾತೆಗಳ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆ ಇದ್ದು, ಹೆಚ್ಚಿನ ತನಿಖೆಯಿಂದ ಮತ್ತಷ್ಟು ವಿಚಾರಗಳು ಬಯಲಿಗೆ ಬರಲಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 'ನಿಮ್ಮನ್ನ ಸುಮ್ನೆ ಬಿಡೋಲ್ಲ..' ಮಂಡ್ಯ ಭ್ರಷ್ಟ ಪಿಡಿಒ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ!&lt;/strong&gt;&lt;/p&gt;&lt;h3&gt;&lt;strong&gt;ಇಬ್ಬರು ಆರೋಪಿಗಳ ಬಂಧನ&lt;/strong&gt;&lt;/h3&gt;&lt;p&gt;ಸರಗೂರು ಅಂಚೆ ಕಚೇರಿಯಲ್ಲಿ ಗ್ರಾಹಕರ ಹಣ ದುರ್ಬಳಕೆ ಸಂಬಂಧ ಕಳೆದ ಮಾರ್ಚ್&zwnj; 6ರಂದು ನೀಡಲಾದ ಲಿಖಿತ ದೂರಿನ ಮೇರೆಗೆ ವಂಚನೆ, ನಂಬಿಕೆ ದ್ರೋಹ, ಕ್ರಿಮಿನಲ್&zwnj; ಪಿತೂರಿ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru: 2ನೇ ವಿಮಾನ ನಿಲ್ದಾಣ ಎಲ್ಲಿ? ಕನಕಪುರ, ನೆಲಮಂಗಲ ರಸ್ತೆಯ ಈ ಗ್ರಾಮಗಳು ಶಾರ್ಟ್&zwnj;ಲಿಸ್ಟ್&zwnj;&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mysuru-misappropriation-of-rs-1-point-3-crore-in-44-savings-accounts-at-saraguru-post-office-cbi-arrests-two-staff-mrq/articleshow-k973ebd"/>
        </item>
        <item>
            <title><![CDATA[NH 169: ತನಿಕೋಡ್‌ನಿಂದ SK ಬಾರ್ಡರ್‌ವರೆಗೆ ಭಾರೀ ವಾಹನಗಳಿಗೆ ನಿಷೇಧ; ಪರ್ಯಾಯ ಮಾರ್ಗ ಹೀಗಿದೆ]]></title>
            <link>https://kannada.asianetnews.com/gallery/karnataka-districts/chikkamagalur-national-highway-169-heavy-vehicles-banned-from-thanikode-to-sk-border-here-is-the-alternative-route-mrq-w246czg</link>
            <guid isPermaLink="true">https://kannada.asianetnews.com/gallery/karnataka-districts/chikkamagalur-national-highway-169-heavy-vehicles-banned-from-thanikode-to-sk-border-here-is-the-alternative-route-mrq-w246czg</guid>
            <pubDate>Thu, 09 Jul 2026 07:33:37 +0530</pubDate>
            <description><![CDATA[&lt;p&gt;ರಾಷ್ಟ್ರೀಯ ಹೆದ್ದಾರಿ 169ರಲ್ಲಿನ ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಕುಸಿಯುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ, 2026ರ ಸೆಪ್ಟೆಂಬರ್ 30ರವರೆಗೆ 12 ಟನ್&zwnj;ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ತನಿಕೋಡ್&zwnj;ನಿಂದ ಎಸ್.ಕೆ. ಬಾರ್ಡರ್&zwnj;ವರೆಗೆ ನಿಷೇಧಿಸಲಾಗಿದೆ. ಪ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx29gp7d013d97nqj246yz0d,imgname-national-highway--3--1783562262765.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರೀಯ ಹೆದ್ದಾರಿ 169ರಲ್ಲಿನ ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಕುಸಿಯುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ, 2026ರ ಸೆಪ್ಟೆಂಬರ್ 30ರವರೆಗೆ 12 ಟನ್&zwnj;ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ತನಿಕೋಡ್&zwnj;ನಿಂದ ಎಸ್.ಕೆ. ಬಾರ್ಡರ್&zwnj;ವರೆಗೆ ನಿಷೇಧಿಸಲಾಗಿದೆ. ಪ&lt;/p&gt;&lt;img&gt;&lt;p&gt;ರಾಷ್ಟ್ರೀಯ ಹೆದ್ದಾರಿ 169ರ ಕಿ.ಮೀದಲ್ಲಿನ ಸೇತುವೆಗಳನ್ನು ಪರಿವೀಕ್ಷಣೆ ಮಾಡಿದ್ದು, ಸದರಿ ಕಿರು ಸೇತುವೆಗಳ ಕಲ್ಲುಗಳು ಅಲ್ಲಲ್ಲಿ ಕಿತ್ತು ಬಂದಿರುವುದು, ಕಂಬಗಳು ಭಾಗಶಃ ಹಾನಿಗೊಳಗಾಗಿರೋದು ಕಂಡು ಬಂದಿದ. ಸೇತುವೆ ಸ್ಲಾಬ್ ನ ಬೀಮ್ ಗಳ ಕಾಂಕ್ರೀಟ್ ಅಲ್ಲಲ್ಲಿ ಬಿದ್ದು ಹೋಗಿದ್ದು ಸರಳುಗಳು ಹೊರಚಾಚಿರುವುದು ಮತ್ತು ಸೇತುವೆಗಳ ಕೈಪಿಡಿಗಳು ಬಿದ್ದು ಹೋಗಿರುವುದು ಕಂಡು ಬಂದಿರುತ್ತದೆ.&lt;/p&gt;&lt;img&gt;&lt;p&gt;ಈ ಹೆದ್ದಾರಿ ವಲಯದಲ್ಲಿ ಬರುವ ನಾಲ್ಕು ಕಿರು ಸೇತುವೆಗಳು ತೀರಾ ಶಿಥಿಲಾವಸ್ಥೆಯಲ್ಲಿದ್ದು, ಭಾರಿ ವಾಹನಗಳು ಸಂಚರಿಸಿದರೆ ಕುಸಿಯುವ ಅಪಾಯವಿದೆ. ನಿರಂತರ ಮಳೆಯಿಂದಾಗಿ ರಸ್ತೆಯ ಇಕ್ಕೆಲಗಳ (ಬದಿಗಳ) ಮಣ್ಣು ಕೊಚ್ಚಿ ಹೋಗುತ್ತಿದ್ದು, ಭಾರಿ ವಾಹನಗಳು ಚಲಿಸಿದಾಗ ರಸ್ತೆ ಕುಸಿದು ದೊಡ್ಡ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ.&lt;/p&gt;&lt;img&gt;&lt;p&gt;ಈ ಹಿನ್ನೆಲೆ ದಿನಾಂಕ 30-09-2026 ರವರೆಗೆ 12 ಟನ್ ಗಿಂತ ಅಧಿಕ ಭಾರದ ಸರಕು ಸಾಗಾಣಿಕೆಯ (ಟಿಪ್ಪರ್, ಲಾರಿ ಮತ್ತು ಕಟ್ಟಡ ನಿರ್ಮಾಣದ ಸಾಮಾಗ್ರಿಗಳು ಮತ್ತು ಇನ್ನಿತರೆ) ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಗೂ ಬದಲಿ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ರ ತನಿಕೋಡ್&zwnj;ನಿಂದ ಎಸ್.ಕೆ. ಬಾರ್ಡರ್&zwnj;ವರೆಗೆ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.&lt;/p&gt;&lt;img&gt;&lt;p&gt;1. ಚಿಕ್ಕಮಗಳೂರಿನಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು-ಮಾಗುಂಡಿ-ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.&lt;/p&gt;&lt;p&gt;2. ನರಸಿಂಹರಾಜಪುರ ಕಡೆಯಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು- ಮಾಗುಂಡಿ-ಕಳಸ -ಕುದುರೆಮುಖ-ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.&lt;/p&gt;&lt;p&gt;3. ಕೊಪ್ಪ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ-ಜಯಪುರ - ಬಾಳೆಹೊನ್ನೂರು- ಮಾಗುಂಡಿ-ಕಳಸ-ಕುದುರೆಮುಖ - ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.&lt;/p&gt;&lt;img&gt;&lt;p&gt;ಈ ಹೆದ್ದಾರಿಯು ತೀವ್ರ ತಿರುವುಗಳು, ಕಡಿದಾದ ಏರಿ ಹಾಗೂ ಏಕಪಥ (Single Lane) ರಸ್ತೆಯಾಗಿರುವುದರಿಂದ ಮಳೆಗಾಲದಲ್ಲಿ ಸಂಚಾರ ಅತ್ಯಂತ ಅಪಾಯಕಾರಿ. ನಿರಂತರ ಮಳೆಯಿಂದಾಗಿ ರಸ್ತೆಯ ಇಕ್ಕೆಲಗಳ (ಬದಿಗಳ) ಮಣ್ಣು ಕೊಚ್ಚಿ ಹೋಗುತ್ತಿದ್ದು, ಭಾರಿ ವಾಹನಗಳು ಚಲಿಸಿದಾಗ ರಸ್ತೆ ಕುಸಿದು ದೊಡ್ಡ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/chikkamagalur-national-highway-169-heavy-vehicles-banned-from-thanikode-to-sk-border-here-is-the-alternative-route-mrq-w246czg"/>
        </item>
        <item>
            <title><![CDATA[ಗಂಗಾವತಿ: ಮನೆ ಮುಂದೆ ಮಂಡಲ, ಅರಿಶಿನ ಕುಂಕುಮ! ವಾಮಾಚಾರಕ್ಕೆ ಬೆಚ್ಚಿಬಿದ್ದ ಜನ]]></title>
            <link>https://kannada.asianetnews.com/karnataka-districts/locals-in-gangavathi-fearful-after-acts-of-black-magic-by-miscreants-rav/articleshow-3m4axgw</link>
            <guid isPermaLink="true">https://kannada.asianetnews.com/karnataka-districts/locals-in-gangavathi-fearful-after-acts-of-black-magic-by-miscreants-rav/articleshow-3m4axgw</guid>
            <pubDate>Thu, 09 Jul 2026 07:15:22 +0530</pubDate>
            <description><![CDATA[&lt;p&gt;ಕೊಪ್ಪಳ ಜಿಲ್ಲೆಯ ಗಂಗಾವತಿಯ ಮುಜಾವರ್ ಕ್ಯಾಂಪ್&zwnj;ನಲ್ಲಿ ಕಿಡಿಗೇಡಿಗಳು ಹಲವು ಮನೆಗಳ ಮುಂದೆ ಮಂಡಲ, ಅರಿಶಿನ-ಕುಂಕುಮ ಹಾಗೂ ನಿಂಬೆಹಣ್ಣು ಇಟ್ಟು ವಾಮಾಚಾರ ನಡೆಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx28ep7n20y75455jajzc43m,imgname-----------------------2026-07-09t070734.555-1783561148661.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಜು.9)&lt;/strong&gt;: ಮನೆ ಮುಂದೆ ಮಂಡಲ ಹಾಕಿ ಅರಿಶಿನ ಕುಂಕುಮ,ನಿಂಬೆ ಹಣ್ಣು ಇಟ್ಟು ಕಿಡಿಗೇಡಿಗಳು ವಾಮಾಚಾರ ನಡೆಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮುಜಾವರ್ ಕ್ಯಾಂಪ್&zwnj;ನಲ್ಲಿನ ಹಲವು ಮನೆಗಳ ಮುಂದೆ ನಡೆದಿದ್ದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.&lt;/p&gt;&lt;h2&gt;ನಿಂಬೆ ಹಣ್ಣು ಅರಿಸಿನ ಕಂಡು ಭಯಬಿದ್ದ ಜನ:&lt;/h2&gt;&lt;p&gt;ಮಂಡಲ ಹಾಕಿ, ಅರಿಶಿನ-ಕುಂಕುಮ ಎರಚಿ, ನಿಂಬೆಹಣ್ಣುಗಳನ್ನು ಇಟ್ಟಿರುವ ದೃಶ್ಯಗಳು ಒಂದು ಮನೆಗಲ್ಲ, ದಾರಿಯುದ್ಧಕ್ಕೂ ಈ ರೀತಿ ವಾಮಾಚಾರ ಮಾಡಿರುವ ಕಿಡಿಗಳು. ಇದರಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದಾರಿಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ.&lt;/p&gt;&lt;p&gt;ಸ್ಥಳೀಯರು ಹೇಳುವಂತೆ, ಈ ಕೃತ್ಯ ಯಾರು ಮಾಡುತ್ತಿದ್ದರೋ, ಯಾಕೆ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಕೆಲ ದಿನಗಳಿಂದ ನಿರಂತರವಾಗಿ ಈ ರೀತಿಯ ಘಟನೆಗಳು ನಡೆಯುತ್ತಿವೆ. ಇದರಿಂದ ಇಲ್ಲಿನ ಜನ ಭಯಿದಿಂದ ಜೀವನ ನಡೆಸುವಂತಾಗಿದೆ ಆಗಿದೆ ಎಂದು ಗೋಳು ತೋಡಿಕೊಂಡಿದ್ದಾರೆ.&lt;/p&gt;&lt;h3&gt;ಕಿಡಿಗೇಡಿಗಳ ಕೃತ್ಯವೋ? ಭಯ ಹುಟ್ಟಿಸೋ ಪ್ರಯತ್ನವೋ?&lt;/h3&gt;&lt;p&gt;ಮೇಲ್ನೋಟಕ್ಕೆ ಇದು ಸ್ಥಳೀಯರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಈ ರೀತಿ ವಾಮಾಚಾರ ಮಾಡಿರುವ ಅನುಮಾನಗಳಿವೆ. ಇಂಥ ಕೃತ್ಯ ಮಾಡಿದವರನ್ನ ಪೊಲೀಸರು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/locals-in-gangavathi-fearful-after-acts-of-black-magic-by-miscreants-rav/articleshow-3m4axgw"/>
        </item>
        <item>
            <title><![CDATA[Varanasi train emergency delivery: ರೈಲಲ್ಲಿ ಹೆರಿಗೆ ಮಾಡಿಸಿದ ಹಾಸನ ಆಯುರ್ವೇದ ವಿದ್ಯಾರ್ಥಿನಿಯರು (ವಿಡಿಯೋ)]]></title>
            <link>https://kannada.asianetnews.com/karnataka-districts/hassan-ayurveda-research-students-assist-for-woman-s-safe-delivery-on-varanasi-train-rav/articleshow-l4xbbrb</link>
            <guid isPermaLink="true">https://kannada.asianetnews.com/karnataka-districts/hassan-ayurveda-research-students-assist-for-woman-s-safe-delivery-on-varanasi-train-rav/articleshow-l4xbbrb</guid>
            <pubDate>Thu, 09 Jul 2026 06:48:42 +0530</pubDate>
            <description><![CDATA[&lt;p&gt;ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅದೇ ರೈಲಿನಲ್ಲಿದ್ದ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ 3 ಸ್ನಾತಕೋತ್ತರ ವಿದ್ಯಾರ್ಥಿನಿಯರು &amp;nbsp;ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಹಾಗೂ ನವಜಾತ ಶಿಶುವಿನ ಜೀವ ಉಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx26m084mm3cya4t5fj6ym0d,imgname-----------------------2026-07-09t063305.127-1783559225604.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.9):&lt;/strong&gt; ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆ ದೂರವಿದ್ದರಿಂದ ಅದೇ ರೈಲಿನಲ್ಲಿದ್ದ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ 3 ಸ್ನಾತಕೋತ್ತರ ವಿದ್ಯಾರ್ಥಿನಿಯರು ತಮ್ಮ ಸಮಯಪ್ರಜ್ಞೆ ಮತ್ತು ಸೇವಾ ಮನೋಭಾವದ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಹಾಗೂ ನವಜಾತ ಶಿಶುವಿನ ಜೀವ ಉಳಿಸಿದ್ದಾರೆ.&lt;/p&gt;&lt;h2&gt;ಎಸ್&zwnj;ಡಿಎಂ ವಿದ್ಯಾರ್ಥಿನಿಯರ ಕಾರ್ಯಕ್ಕೆ ಮೆಚ್ಚುಗೆ&lt;/h2&gt;&lt;p&gt;ನಗರದ ತಣ್ಣೀರುಹಳ್ಳದಲ್ಲಿರುವ ಎಸ್&zwnj;ಡಿಎಂ ವಿದ್ಯಾರ್ಥಿನಿಯರಾದ ಡಾ.ರಶ್ಮಿ ಬಿಳಗಿ, ಡಾ.ಲತಾಶ್ರೀ ಎನ್. ಮತ್ತು ಡಾ.ಶಾಹಿನ್ ಎಂ. ಅವರು ರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನದಿಂದ ವಾರಣಾಸಿಗೆ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಅವರಿದ್ದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹಠಾತ್ತನೆ ತೀವ್ರ ಹೆರಿಗೆ ನೋವು ಆರಂಭವಾಗಿದ್ದು, ಮೂವರು ಮಹಿಳೆಯ ನೆರವಿಗೆ ಧಾವಿಸಿ ಸಹ ಪ್ರಯಾಣಿಕರ ಸಹಕಾರದೊಂದಿಗೆ ಹೆರಿಗೆ ಪ್ರಕ್ರಿಯೆಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿದ್ದಾರೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Shachiee 2.0 (@shachiee_2.0)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-ayurveda-research-students-assist-for-woman-s-safe-delivery-on-varanasi-train-rav/articleshow-l4xbbrb"/>
        </item>
        <item>
            <title><![CDATA[ವಯನಾಡು ರೀತಿ ರಾಜ್ಯದಲ್ಲೂ ಭೂಕುಸಿತದ ಆತಂಕ! ಚಂದ್ರಗಿರಿ ಪರ್ವತದಲ್ಲಿ ಕುಸಿತಿದೆ ಗುಡ್ಡ!]]></title>
            <link>https://kannada.asianetnews.com/karnataka-districts/landslides-mirror-wayanad-tragedy-in-karnataka-towns-chikkamagaluru-shivamogga-rav/articleshow-0mxrize</link>
            <guid isPermaLink="true">https://kannada.asianetnews.com/karnataka-districts/landslides-mirror-wayanad-tragedy-in-karnataka-towns-chikkamagaluru-shivamogga-rav/articleshow-0mxrize</guid>
            <pubDate>Thu, 09 Jul 2026 06:25:20 +0530</pubDate>
            <description><![CDATA[&lt;p&gt;ನೆರೆಯ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು(Wayanad landslide) ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲೇ ರಾಜ್ಯದ ಕೆಲವೆಡೆ ಬೆಟ್ಟ ಕುಸಿತವಾಗಿದೆ. ಚಿಕ್ಕಮಗಳೂರಿನ ಚಂದ್ರಗಿರಿ ಪರ್ವತದಲ್ಲಿ ಭೂ ಕುಸಿತವಾಗಿದೆ. ಭೂ ಕುಸಿತದಿಂದಾಗಿ ನೇತ್ರಾವತಿ ಪೀಕ್, ದಿಡುಪೆ ಫಾಲ್ಸ್&zwnj; ಪ್ರವೇಶ ನಿಷೇಧಿಸಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx25pwxk0c2stbw8d5x31zr4,imgname-----------------------2026-07-09t061723.717-1783558271923.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದ.ಕದಲ್ಲಿ ಭೂ ಕುಸಿತ । ಜನರಲ್ಲಿ ತೀವ್ರ ಆತಂಕ&lt;/p&gt;&lt;p&gt;&lt;strong&gt;ಬೆಂಗಳೂರು (ಜು.9): &lt;/strong&gt;ನೆರೆಯ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು(Wayanad landslide) ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲೇ ರಾಜ್ಯದ ಕೆಲವೆಡೆ ಬೆಟ್ಟ ಕುಸಿತವಾಗಿದೆ. ಚಿಕ್ಕಮಗಳೂರಿನ ಚಂದ್ರಗಿರಿ ಪರ್ವತದಲ್ಲಿ ಭೂ ಕುಸಿತವಾಗಿದೆ. ಭೂ ಕುಸಿತದಿಂದಾಗಿ ನೇತ್ರಾವತಿ ಪೀಕ್, ದಿಡುಪೆ ಫಾಲ್ಸ್&zwnj; ಪ್ರವೇಶ ನಿಷೇಧಿಸಲಾಗಿದೆ. ಶಿವಮೊಗ್ಗದಲ್ಲಿ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದಿದ್ದು ಒಂದೇ ಕುಟುಂಬದ ಮೂವರು ಪ್ರಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ಇನ್ನು ಗುಡ್ಡ ಕುಸಿತದ ಆತಂಕದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್&zwnj; (ಕಡಮಗುಂಡಿ), ನೇತ್ರಾವತಿ ಪೀಕ್&zwnj;ಗೆ ಜು.9, 10ರಂದು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ನಗರದ ಕೆಎಸ್&zwj;ಆರ್&zwj;ಟಿಸಿ ಬಸ್ ನಿಲ್ದಾಣ ಬಳಿ ಭೂ ಕುಸಿತ ಉಂಟಾಗಿದ್ದು, ತಾತ್ಕಾಲಿಕವಾಗಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಇದಕ್ಕಾಗಿ ರಾಜಾಸೀಟ್&zwnj;ಗೆ ಪ್ರವೇಶ ನಿಷೇಧಿಸಲಾಗಿದೆ.&lt;/p&gt;&lt;p&gt;ಇನ್ನು ವಯನಾಡು ಟನಲ್&zwnj; ಕಂಪನಿಯಿಂದ ಮಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಕೆತ್ತಿಕಲ್&zwnj;ನಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ತಡೆಗೋಡೆ ನಿರ್ಮಿಸುತ್ತಿರುವ ಡಿಬಿಎಲ್&zwnj; ಕಂಪನಿ ಅವೈಜ್ಞಾನಿಕವಾಗಿ ಮಣ್ಣು ತೆಗೆದಿತ್ತು. ಇದರಿಂದಾಗಿ ರಸ್ತೆಗೆ ಅಪಾರ ಪ್ರಮಾಣದ ಮಣ್ಣುಕಲ್ಲು ಬಿದ್ದಿದೆ. ಇದರಿಂದ ಗುಡ್ಡದ ಮೇಲ್ಭಾಗದ ನಿವಾಸಿಗಳಿಗೆ ಭಾರಿ ಆತಂಕದ ಸ್ಥಿತಿ ಆಗಿದೆ.&lt;/p&gt;&lt;p&gt;ಕರ್ನಾಟಕ-ಮಹಾರಾಷ್ಟ್ರ ಗಡಿಭಾಗಕ್ಕೆ ಸಮೀಪವಿರುವ ಪ್ರವಾಸಿ ತಾಣ ಅಂಬೋಲಿ ಫಾಲ್ಸ್ ಸಮೀಪ ತಡರಾತ್ರಿ ಭಾರಿ ಗುಡ್ಡ ಕುಸಿದು ನಾಲ್ಕು ಬೃಹತ್ ಬಂಡೆಗಳು ರಸ್ತೆಯ ಮೇಲೆ ಉರುಳಿ ಬಿದ್ದಿವೆ. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಅಂಬೋಲಿ ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುಡ್ಡದ ಮೇಲ್ಭಾಗದಿಂದ ಏಕಾಏಕಿ ಬೃಹತ್ ಬಂಡೆಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗಾವಿ-ಸಿಂಧದುರ್ಗ ನಡುವಿನ ವಾಹನ ಸಂಚಾರವನ್ನು ಮಧ್ಯರಾತ್ರಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/landslides-mirror-wayanad-tragedy-in-karnataka-towns-chikkamagaluru-shivamogga-rav/articleshow-0mxrize"/>
        </item>
        <item>
            <title><![CDATA['ನನ್ನನ್ನ ಭಾವಿ ಸಿಎಂ ಅಂತಾ ಕರೆಯೋದೇ ನನಗೆ ಸಮಸ್ಯೆ..: ವಿಜಯೇಂದ್ರ ಹೇಳಿಕೆ ವೈರಲ್]]></title>
            <link>https://kannada.asianetnews.com/politics/future-cm-is-a-problem-bjp-state-president-by-vijayendra-s-statement-goes-viral-rav/articleshow-cuxrzuy</link>
            <guid isPermaLink="true">https://kannada.asianetnews.com/politics/future-cm-is-a-problem-bjp-state-president-by-vijayendra-s-statement-goes-viral-rav/articleshow-cuxrzuy</guid>
            <pubDate>Thu, 09 Jul 2026 06:03:47 +0530</pubDate>
            <description><![CDATA[&lt;p&gt;ಲವರು ನನ್ನನ್ನು ಭಾವಿ ಮುಖ್ಯಮಂತ್ರಿ ಅಂತ ಕರೆಯುತ್ತಿರುವುದೇ ನನಗೆ ಸಮಸ್ಯೆಯಾಗಿದೆ. ಯಾರು ಮುಂದೆ ಸಿಎಂ ಆಗ್ತಾರೆಂಬುದು ಮುಖ್ಯವಲ್ಲ, ಮುಖಂಡರು ಜನರಿಗೆ ಹತ್ತಿರವಾದಾಗ ಮಾತ್ರ ಜನರು ವಿಶ್ವಾಸವಿಟ್ಟು ಬೆಂಬಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4wp2b5v03z6v8krfh3yrqaf,imgname-gnghmn-1757604293819.png" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಮುಂದೆ ಯಾರು ಸಿಎಂ ಆಗ್ತಾರೆ ಮುಖ್ಯವಲ್ಲ&lt;/li&gt; &lt;li&gt;&amp;nbsp;ಮುಖಂಡರು ಜನರಿಗೆ ಹತ್ತಿರವಾಗುವು ಮುಖ್ಯ&lt;/li&gt;&lt;/ul&gt;&lt;p&gt;&lt;strong&gt;ಚಿತ್ರದುರ್ಗ (ಜು.9): &lt;/strong&gt;ಕೆಲವರು ನನ್ನನ್ನು ಭಾವಿ ಮುಖ್ಯಮಂತ್ರಿ ಅಂತ ಕರೆಯುತ್ತಿರುವುದೇ ನನಗೆ ಸಮಸ್ಯೆಯಾಗಿದೆ. ಯಾರು ಮುಂದೆ ಸಿಎಂ ಆಗ್ತಾರೆಂಬುದು ಮುಖ್ಯವಲ್ಲ, ಮುಖಂಡರು ಜನರಿಗೆ ಹತ್ತಿರವಾದಾಗ ಮಾತ್ರ ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ಹೇಳಿದ್ದಾರೆ.&lt;/p&gt;&lt;h2&gt;ಮುಂದೆ ಯಾರು ಸಿಎಂ ಅನ್ನೋದು ಮುಖ್ಯ ಅಲ್ಲ: ವಿಜಯೇಂದ್ರ&lt;/h2&gt;&lt;p&gt;ನಗರದಲ್ಲಿ ಬುಧವಾರ ನಡೆದ ವಿಧಾನ ಪರಿಷತ್&zwnj; ಚುನಾವಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಅವರು ತಮ್ಮ ಭಾಷಣದಲ್ಲಿ ಭಾವಿ ಸಿಎಂ ವಿಜಯೇಂದ್ರ ಎಂದು ಉಲ್ಲೇಖಿಸಿದರು. ಈ ಸಂಗತಿಯನ್ನು ಆ ಬಳಿಕ ಮಾತನಾಡಿದ ವಿಜಯೇಂದ್ರ ಅವರು ಪ್ರಸ್ತಾಪಿಸಿ, &lsquo;ಯಾರು ಮುಂದೆ ಸಿಎಂ ಆಗ್ತಾರೆಂಬುದು ಮುಖ್ಯ ಅಲ್ಲ. ಮತದಾರರಿಗೆ ನಮ್ಮ ಮೇಲೆ ವಿಶ್ವಾಸ ಮೂಡುವಂತಹ ಕೆಲಸದ ಕಡೆ ಗಮನ ಹರಿಸಬೇಕು. ಕಾರ್ಯಕರ್ತರು ಹಾಗೂ ಮುಖಂಡರು ಜನರಿಗೆ ಹತ್ತಿರ ಆಗಬೇಕು. ಆಗ ಮಾತ್ರ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸುತ್ತಾರೆ. ಪಕ್ಷ ಅಧಿಕಾರಕ್ಕೆ ಬಂದ ಮೇಲಷ್ಟೆ ಉಳಿದವು ಚರ್ಚೆಯಾಗುತ್ತವೆ&rsquo; ಎಂದು ಹೇಳಿದರು.&lt;/p&gt;&lt;h3&gt;ವಿಧಾನ ಪರಿಷತ್ ಈಗ ಹಣವಂತರ ಚಾವಡಿಯಾಗಿದೆ&lt;/h3&gt;&lt;p&gt;ಈ ಹಿಂದೆ ವಿಧಾನ ಪರಿಷತ್&zwnj;ಗೆ ಚುನಾವಣೆ ನಡೆದಾಗ ವಾಗ್ಮಿಗಳು, ಚಿಂತಕರು, ಸಮಾಜ ಸೇವಕರು ಪ್ರವೇಶ ಮಾಡುತ್ತಿದ್ದರು. ಈಗ ಅದು ಹಣವಂತರ ಚಾವಡಿಯಾಗಿದೆ. ವಿಧಾನ ಸಭೆಯಲ್ಲಿ ಶಾಸಕರು ಮಾಡಿದ ಕಾನೂನು, ನಿರ್ಣಯಗಳನ್ನು ವಿಧಾನ ಪರಿಷತ್&zwj;ಗೆ ಕಳುಹಿಸಲಾಗುತ್ತದೆ. ಅದನ್ನು ಅವರು ಸರಿಯಾಗಿ ಇದೆಯೇ ಅಥವಾ ಇಲ್ಲವೋ ಎಂದು ಪರಿಶೀಲಿಸುತ್ತಿದ್ದರು. ಇದು ರಾಜ್ಯಕ್ಕೆ ಅಗತ್ಯವೇ ಎಂದು ಚರ್ಚೆಯನ್ನು ಮಾಡುವುದರ ಮೂಲಕ ಪಾಸಾಗುತ್ತಿತ್ತು. ಆದರೆ, ಈಗ ಚರ್ಚೆಯ ಸ್ವರೂಪ ಬದಲಾಗಿದೆ. ವಿಧಾನ ಪರಿಷತ್ ಎಂದರೆ ಹಣವಂತರ ಚಾವಡಿಯಾಗಿದೆ. ಹಣ ಇದ್ದವರು ಇಲ್ಲಿಗೆ ಬಂದು ತಮ್ಮ ವ್ಯವಹಾರವನ್ನು ಉಳಿಸಿಕೊಳ್ಳಲು ಅಧಿಕಾರ ಬಳಸಿಕೊಳ್ಳುತ್ತಿದ್ದಾರೆ ಎಂದರು.&lt;/p&gt;&lt;p&gt;&lt;strong&gt;ಆಗ್ನೇಯ ಕ್ಷೇತ್ರದಲ್ಲಿ 8 ಬಾರಿ ಗೆಲುವು:&lt;/strong&gt;&lt;/p&gt;&lt;p&gt;ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜನಸಂಘ ಹಾಗೂ ಬಿಜೆಪಿ 8 ಬಾರಿ ಗೆಲುವನ್ನು ಸಾಧಿಸಿದೆ. ವಿಧಾನ ಪರಿಷತ್&zwj;ನಲ್ಲಿ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಬುದ್ಧಿವಂತರು ಇರಬೇಕಾಗಿದೆ. ಬಿಜೆಪಿ ತನ್ನ ಕಾರ್ಯಕರ್ತ ಕೆ.ಎಂ.ಸುರೇಶ್&zwj; ಅವರನ್ನು ಅಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ಚುನಾವಣೆ 5 ಜಿಲ್ಲೆಯ 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಜಯವನ್ನು ಸಾಧಿಸಿದೆ ಎಂದರು.&lt;/p&gt;&lt;p&gt;ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಚುನಾವಣೆಗೆ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ಸಹಕಾರ ಕೊರಲಾಗಿದ್ದು, ಅವರಿಂದ ಪೂರಕ ಪ್ರತಿಕ್ರಿಯೆ ಬಂದಿದೆ. ನಮ್ಮ ಪಕ್ಷದ ಕಾರ್ಯಕರ್ತರು ಮುಂದಿನ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೂ ಮುನ್ನ ಪಕ್ಷದ ನಾಯಕರ ಮೇಲೆ ವಿಶ್ವಾಸ, ನಂಬಿಕೆ ಇಡಬೇಕಿದೆ ಎಂದು ಹೇಳಿದರು.&lt;/p&gt;&lt;p&gt;ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಶಿವಯೋಗಿಸ್ವಾಮಿ ಇದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/future-cm-is-a-problem-bjp-state-president-by-vijayendra-s-statement-goes-viral-rav/articleshow-cuxrzuy"/>
        </item>
        <item>
            <title><![CDATA[ಇಂಡೋನೇಷ್ಯಾಕ್ಕೆ ಧಾರವಾಡ ಗೋದಿ ಕೊಟ್ಟ ಮೋದಿ; ಧಾರವಾಡ ವಿವಿ ಶೋಧಿಸಿದ ತಳಿ ಇದು]]></title>
            <link>https://kannada.asianetnews.com/karnataka-districts/indonesia-india-agreement-for-seed-supply-of-dwr-162-variety-of-wheat-rav/articleshow-4f9v05h</link>
            <guid isPermaLink="true">https://kannada.asianetnews.com/karnataka-districts/indonesia-india-agreement-for-seed-supply-of-dwr-162-variety-of-wheat-rav/articleshow-4f9v05h</guid>
            <pubDate>Thu, 09 Jul 2026 05:47:14 +0530</pubDate>
            <description><![CDATA[&lt;p&gt;ಮೂರು ದಿನಗಳ ಕಾಲ ಇಂಡೋನೇಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಆ ದೇಶಕ್ಕೆ 100 ಟನ್&zwnj; ಉತ್ಕೃಷ್ಟ ದರ್ಜೆಯ &lsquo;ಡಿಡಬ್ಲ್ಯುಆರ್&zwnj; 162&rsquo; ತಳಿಯ ಗೋದಿ ಬಿತ್ತನೆ ಬೀಜ ಪೂರೈಸುವುದಾಗಿ ಘೋಷಿಸಿದ್ದಾರೆ. ವಿಶೇಷ ಎಂದರೆ, ಈ &amp;nbsp;ತಳಿಯನ್ನು ಅಭಿವೃದ್ಧಿಪಡಿಸಿದ್ದು ಕರ್ನಾಟಕದ ಧಾರವಾಡದ ಕೃಷಿ ವಿಶ್ವವಿದ್ಯಾಲಯ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx239vcp7wqsk4nef0ga5ar8,imgname-----------------------2026-07-09t053700.781-1783555747221.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಧಾರವಾಡ (ಜು.9): &lt;/strong&gt;ಮೂರು ದಿನಗಳ ಕಾಲ ಇಂಡೋನೇಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಆ ದೇಶಕ್ಕೆ 100 ಟನ್&zwnj; ಉತ್ಕೃಷ್ಟ ದರ್ಜೆಯ &lsquo;ಡಿಡಬ್ಲ್ಯುಆರ್&zwnj; 162&rsquo; ತಳಿಯ ಗೋದಿ ಬಿತ್ತನೆ ಬೀಜಗಳನ್ನು ಪೂರೈಸುವುದಾಗಿ ಘೋಷಿಸಿದ್ದಾರೆ. ವಿಶೇಷ ಎಂದರೆ, ಈ &lsquo;ಡಿಡಬ್ಲ್ಯುಆರ್&zwnj; 162&rsquo; ತಳಿಯನ್ನು ಅಭಿವೃದ್ಧಿಪಡಿಸಿದ್ದು ಕರ್ನಾಟಕದ ಧಾರವಾಡದ ಕೃಷಿ ವಿಶ್ವವಿದ್ಯಾಲಯ!&lt;/p&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಾದೇಶಿಕ ಆಹಾರ ಭದ್ರತೆ ಮತ್ತು ಕೃಷಿ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಗೋಧಿ ಬೀಜ ಪೂರೈಕೆಗೆ ಸಂಬಂಧಿಸಿದಂತೆ ಒಪ್ಪಂದ ಆಗಿದ್ದು, ಇದರ ಭಾಗವಾಗಿ ಧಾರವಾಡದ ಕೃಷಿ ವಿವಿ ಅಭಿವೃದ್ಧಿಪಡಿಸಿದ ಬೀಜಗಳನ್ನು ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.&lt;/p&gt;&lt;p&gt;ಗೋದಿಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದು, ಈ ಪ್ರದೇಶಗಳಲ್ಲಿ ಗೋದಿ ಬೆಳೆಯುವ ಅವಧಿಯುದ್ದಕ್ಕೂ ಉಷ್ಣಾಂಶ ಹೆಚ್ಚಾಗಿರುತ್ತದೆ. ಬೆಳೆ ಅವಧಿ ಕಡಿಮೆ ಇರಬೇಕು ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಗೋದಿ ತಳಿಗಳ ಅಭಿವೃದ್ಧಿಯಾಗಬೇಕು ಎಂಬುದು 1980ರ ದಶಕದಲ್ಲಿ ಪ್ರಮುಖ ಸಂಶೋಧನಾ ಗುರಿಯಾಗಿತ್ತು. ಆಗ ಧಾರವಾಡ ಕೃಷಿ ವಿವಿಯು ಅಂದಿನ ಗೋದಿ ತಳಿ ಶಾಸ್ತ್ರಜ್ಞರು, ಕೃಷಿ ವಿವಿ ವಿಶ್ರಾಂತ ಕುಲಪತಿಗಳೂ ಆದ ಡಾ.ಆರ್.ಆರ್.ಹಂಚಿನಾಳ ನೇತೃತ್ವದಲ್ಲಿ ಗೋದಿ ಸುಧಾರಣಾ ಕಾರ್ಯಕ್ರಮವನ್ನು ಆರಂಭಿಸಿತ್ತು.&lt;/p&gt;&lt;p&gt;ಶಟಲ್ ಬ್ರೀಡಿಂಗ್ ವಿಧಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾದ &lsquo;ಡಿಡಬ್ಲ್ಯುಆರ್ 162&rsquo; ಚಪಾತಿ ಗೋದಿ ತಳಿಯನ್ನು 1993ರಲ್ಲಿ ಭಾರತ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಈ ತಳಿಯು ಎಲೆ ತುಕ್ಕು ಹಾಗೂ ಕಾಂಡ ತುಕ್ಕು ರೋಗಗಳಿಗೆ ಪ್ರತಿರೋಧಕವಾಗಿದ್ದು, ಹೆಚ್ಚಿನ ಇಳುವರಿ ಸಾಮರ್ಥ್ಯ, ಉತ್ತಮ ಧಾನ್ಯದ ಗುಣಮಟ್ಟ ಹಾಗೂ ಬೆಳೆ ಬೆಳವಣಿಗೆಯ ಅವಧಿಯಲ್ಲಿ ಉಷ್ಣ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ವಿಶೇಷ ಗುಣಲಕ್ಷಣಗಳಿಂದಾಗಿ ಈ ತಳಿಯು ಉಷ್ಣ ಹವಾಮಾನದಲ್ಲಿಯೂ ಬೆಳೆಯುವ ಸಾಮರ್ಥ್ಯ ಹೊಂದಿದೆ. 3 ದಶಕದ ಹಿಂದೆ ಬಿಡುಗಡೆಯಾದರೂ, &lsquo;ಡಿಡಬ್ಲ್ಯುಆರ್ 162&rsquo; ಇಂದಿಗೂ ರೈತರ ಅತ್ಯಂತ ಮೆಚ್ಚಿನ ತಳಿಗಳಲ್ಲಿ ಒಂದಾಗಿದೆ.&lt;/p&gt;&lt;p&gt;&lt;strong&gt;ಪರೀಕ್ಷೆಯಲ್ಲಿ ಯಶಸ್ವಿ:&lt;/strong&gt;&lt;/p&gt;&lt;p&gt;ರಾಷ್ಟ್ರೀಯ ಆಹಾರ ಭದ್ರತೆ ಬಲಪಡಿಸುವ ಉದ್ದೇಶದಿಂದ ಇಂಡೋನೇಷ್ಯಾ ಸರ್ಕಾರ ಭಾರತೀಯ ಸಂಶೋಧನಾ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋದಿ ಸುಧಾರಣಾ ಕೇಂದ್ರ ಅಭಿವೃದ್ಧಿಪಡಿಸಿದ ವಿವಿಧ ಗೋದಿ ತಳಿಗಳನ್ನು ತನ್ನ ಉಷ್ಣವಲಯದ ಹವಾಮಾನಕ್ಕೆ ಹೊಂದಾಣಿಕೆ ಪರೀಕ್ಷಿಸಲು ಆಮದು ಮಾಡಿಕೊಂಡಿತ್ತು. ಈ ಪರೀಕ್ಷೆಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಡಿಡಬ್ಲ್ಯುಆರ್ 162 ತಳಿಯು ಇತರ ಎಲ್ಲ ತಳಿಗಳಿಗಿಂತ ಉತ್ತಮ ಇಳುವರಿ ಹಾಗೂ ಗುಣಮಟ್ಟವನ್ನು ಪ್ರದರ್ಶಿಸಿದೆ. ಈ ಅತ್ಯುತ್ತಮ ಫಲಿತಾಂಶ ಗುರುತಿಸಿದ ಇಂಡೋನೇಷ್ಯಾ ಸರ್ಕಾರ 2000ರಲ್ಲಿ ದೊಡ್ಡ ಪ್ರಮಾಣದ ಕ್ಷೇತ್ರ ಪರೀಕ್ಷೆಗಳಿಗಾಗಿ ಈ ತಳಿಯ ಬೀಜಗಳನ್ನು ಆಮದು ಮಾಡಿಕೊಂಡಿತ್ತು. ಜತೆಗೆ, ಈ ತಳಿಯ ಕೃಷಿ ತಂತ್ರಜ್ಞಾನ ಮತ್ತು ನಿರ್ವಹಣೆ ಕುರಿತು ತಾಂತ್ರಿಕ ಮಾರ್ಗದರ್ಶನ ನೀಡಲು ಡಾ.ಆರ್.ಆರ್.ಹಂಚಿನಾಳ ಅವರನ್ನು ಸಲಹೆಗಾರರಾಗಿ ಆಹ್ವಾನಿಸಿತ್ತು.&lt;/p&gt;&lt;p&gt;&lt;strong&gt;ಕಾನೂನು ತೊಡಕು ನಿವಾರಣೆ:&lt;/strong&gt;&lt;/p&gt;&lt;p&gt;ಭಾರತದಲ್ಲಿ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಕಾಯ್ದೆ ಹಾಗೂ ಜೈವಿಕ ವೈವಿಧ್ಯ ಕಾಯ್ದೆ ಜಾರಿಗೆ ಬಂದ ಪರಿಣಾಮ, ಇಂಡೋನೇಷ್ಯಾಗೆ ಉತ್ತಮ ಗುಣಮಟ್ಟದ ಡಿಡಬ್ಲ್ಯುಆರ್ 162 ಬೀಜಗಳನ್ನು ಪೂರೈಸುವಲ್ಲಿ ಕೆಲವು ಅಡೆತಡೆ ಎದುರಾದವು. ಇದರಿಂದ ಇಂಡೋನೇಷ್ಯಾ ಸರ್ಕಾರ ಭಾರತ ಸರ್ಕಾರದೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಿ, ಕಾನೂನುಬದ್ಧ ಹಾಗೂ ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ಬೀಜಗಳ ಪೂರೈಕೆಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಿತ್ತು. ಇದರ ಭಾಗವಾಗಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾಗೆ ಭೇಟಿ ವೇಳೆ ಒಪ್ಪಂದಕ್ಕೆ ಸಹಿಯಾಗಿದೆ.&lt;/p&gt;&lt;p&gt;&lt;strong&gt;ಕೃಷಿ ವಿವಿಗೆ ಹೆಮ್ಮೆ&amp;nbsp;&lt;/strong&gt;&lt;/p&gt;&lt;p&gt;ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಉತ್ಪಾದಿಸಲಾದ 100 ಟನ್ ಉನ್ನತ ಗುಣಮಟ್ಟದ ಡಿಡಬ್ಲ್ಯುಆರ್ 162 ಗೋದಿ ಬೀಜಗಳನ್ನು ಇಂಡೋನೇಷ್ಯಾಗೆ ಪೂರೈಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಕ್ರಮವು ಇಂಡೋನೇಷ್ಯಾದ ಆಹಾರ ಭದ್ರತಾ ಕಾರ್ಯಕ್ರಮಗಳಿಗೆ ಮಹತ್ವದ ಬೆಂಬಲ ಒದಗಿಸಲಿದೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ದೀರ್ಘಕಾಲೀನ ಕೃಷಿ ಸಹಭಾಗಿತ್ವದಲ್ಲಿ ಮಹತ್ವದ ಮೈಲಿಗಲ್ಲು ಹಾಗೂ ಕೃಷಿ ವಿವಿಗೆ ಹೆಮ್ಮೆಯ ಸಂಗತಿಯು ಹೌದು.&lt;/p&gt;&lt;p&gt;&lt;strong&gt;ಡಾ.ಎಂ.ವಿ.ಮಂಜುನಾಥ, ಪ್ರಭಾರಿ ಕುಲಪತಿ, ಧಾರವಾಡ ಕೃಷಿ ವಿವಿ&lt;/strong&gt;&lt;/p&gt;&lt;p&gt;--&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indonesia-india-agreement-for-seed-supply-of-dwr-162-variety-of-wheat-rav/articleshow-4f9v05h"/>
        </item>
        <item>
            <title><![CDATA[Onam Special Trains: ಓಣಂ ಪ್ರಯಾಣಿಕರಿಗೆ ಸಿಹಿಸುದ್ದಿ! ಮಂಗಳೂರು-ಚೆನ್ನೈ ನಡುವೆ ವಿಶೇಷ ರೈಲು ಘೋಷಣೆ]]></title>
            <link>https://kannada.asianetnews.com/india-news/indian-southern-railway-announces-onam-special-trains-between-mangaluru-and-chennai/articleshow-zowyk6r</link>
            <guid isPermaLink="true">https://kannada.asianetnews.com/india-news/indian-southern-railway-announces-onam-special-trains-between-mangaluru-and-chennai/articleshow-zowyk6r</guid>
            <pubDate>Wed, 08 Jul 2026 22:41:19 +0530</pubDate>
            <description><![CDATA[&lt;p&gt;ಓಣಂ ಹಬ್ಬದ ಪ್ರಯಾಣಿಕರ ದಟ್ಟಣೆ ನಿವಾರಿಸಲು, ದಕ್ಷಿಣ ರೈಲ್ವೆ ಮಂಗಳೂರು ಮತ್ತು ಚೆನ್ನೈ ನಡುವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಈ ರೈಲುಗಳು ಹಬ್ಬದ ಸಮಯದಲ್ಲಿ ಹೆಚ್ಚುವರಿ ಬೇಡಿಕೆ ಪೂರೈಸುವ ಗುರಿ ಹೊಂದಿದ್ದು, ಪ್ರಯಾಣಿಕರು ದಿನಾಂಕ ಮತ್ತು ನಿಲುಗಡೆಗಳ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx1ba8eyqchk39arwwmp788h,imgname-onam-special-train-mangaluru-1783530594782.jpg" type="image/jpeg" height="390" width="690"/>
            <content:encoded><![CDATA[&lt;p&gt;ಓಣಂ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ದಕ್ಷಿಣ ರೈಲ್ವೆ ಮುಂದಾಗಿದ್ದು, ಕೇರಳಕ್ಕೆ ತೆರಳುವವರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸೇವೆಗಳನ್ನು ಪ್ರಕಟಿಸಲು ಆರಂಭಿಸಿದೆ. ಇದರ ಮೊದಲ ಭಾಗವಾಗಿ, ಮಂಗಳೂರು ಮತ್ತು ಚೆನ್ನೈ ನಡುವೆ ವಿಶೇಷ ರೈಲು ಓಡಿಸುವುದಾಗಿ ಬುಧವಾರ ಘೋಷಿಸಿದೆ. ಇದು ಹಬ್ಬದ ಸಮಯದಲ್ಲಿ ಪ್ರಯಾಣಿಸುವ ಸಾವಿರಾರು ಜನರಿಗೆ ನೆಮ್ಮದಿ ತಂದಿದೆ.&lt;/p&gt;&lt;h2&gt;&lt;strong&gt;ಮಂಗಳೂರು-ಚೆನ್ನೈ ಮಾರ್ಗದ ರೈಲುಗಳ ವಿವರ&lt;/strong&gt;&lt;/h2&gt;&lt;p&gt;ದಕ್ಷಿಣ ರೈಲ್ವೆ ಹೊರಡಿಸಿದ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 06126 ಮಂಗಳೂರು ಸೆಂಟ್ರಲ್&zwnj;ನಿಂದ ಚೆನ್ನೈ ಎಗ್ಮೋರ್&zwnj;ಗೆ ಸಂಚರಿಸಲಿದೆ. ಇದರ ಜೊತೆಗೆ, ರೈಲು ಸಂಖ್ಯೆ 06125 ಚೆನ್ನೈ ಎಗ್ಮೋರ್&zwnj;ನಿಂದ ಹೊರಟು ಮಂಗಳೂರು ಸೆಂಟ್ರಲ್&zwnj;ಗೆ ಹಿಂತಿರುಗಲಿದೆ. ಈ ಎರಡೂ ರೈಲುಗಳು ಹಬ್ಬದ ಸಂದರ್ಭದಲ್ಲಿನ ಹೆಚ್ಚುವರಿ ಬೇಡಿಕೆಯನ್ನು ಪೂರೈಸುವ ಗುರಿ ಹೊಂದಿವೆ. ಓಣಂ ಕೇರಳದ ಪ್ರಮುಖ ಹಬ್ಬವಾದ ಕಾರಣ, ಈ ಸಮಯದಲ್ಲಿ ಬೆಂಗಳೂರು, ಚೆನ್ನೈ, ಮಂಗಳೂರಿನಂತಹ ನಗರಗಳಿಂದ ಲಕ್ಷಾಂತರ ಮಂದಿ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಈ ಕಾರಣದಿಂದ ಸಾಮಾನ್ಯ ರೈಲುಗಳಲ್ಲಿ ಟಿಕೆಟ್ ಸಿಗುವುದು ದುಸ್ತರವಾಗಿರುತ್ತದೆ. ಇಂತಹ ವಿಶೇಷ ರೈಲುಗಳ ಘೋಷಣೆಯು ಪ್ರಯಾಣಿಕರ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.&lt;/p&gt;&lt;h2&gt;&lt;strong&gt;ದಿನಾಂಕ, ನಿಲುಗಡೆ ಮಾಹಿತಿ ನಿರೀಕ್ಷೆಯಲ್ಲಿ ಪ್ರಯಾಣಿಕರು&lt;/strong&gt;&lt;/h2&gt;&lt;p&gt;ಈ ವಿಶೇಷ ರೈಲು ಸೇವೆ ಯಾವಾಗ ಆರಂಭವಾಗಲಿದೆ ಮತ್ತು ಯಾವೆಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ ಎಂಬ ಬಗ್ಗೆ ರೈಲ್ವೆ ಇಲಾಖೆ ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ. ಮೂಲ ವರದಿಯ ಶೀರ್ಷಿಕೆಯಲ್ಲಿ ಸೇವೆಯು 13ನೇ ತಾರೀಕಿನಿಂದ ಆರಂಭವಾಗಲಿದೆ ಎಂದು ಉಲ್ಲೇಖಿಸಲಾಗಿದ್ದರೂ, ರೈಲ್ವೆಯ ಅಧಿಕೃತ ಪ್ರಕಟಣೆಯಲ್ಲಿ ಈ ಕುರಿತು ವಿವರಗಳು ಲಭ್ಯವಾಗಿಲ್ಲ. ಇದು ಸ್ವಲ್ಪ ಗೊಂದಲಕ್ಕೆ ಕಾರಣವಾಗಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;Onam is calling home! Onam Special Trains are here &mdash; connecting Mangaluru Central &amp;amp; Chennai Egmore this festive season. 06126 Mangaluru&ndash;Chennai | Dep 16:00 hrs 06125 Chennai&ndash;Mangaluru | Dep 14:00 hrs8 services each way | July&ndash;Sept 2026#SouthernRailway pic.twitter.com/zw145QMvZl&lt;/p&gt;&lt;p&gt;&mdash; Southern Railway (@GMSRailway) July 8, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಇದು ಓಣಂ ವಿಶೇಷ ರೈಲುಗಳ ಸರಣಿಯಲ್ಲಿ ಮೊದಲ ಘೋಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ಕೇರಳದ ಇತರ ಭಾಗಗಳಿಗೆ ಹಾಗೂ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಇನ್ನಷ್ಟು ರೈಲುಗಳ ಬಗ್ಗೆ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ. ಪ್ರಯಾಣಿಕರು ಹೆಚ್ಚಿನ ಮತ್ತು ನಿಖರವಾದ ವಿವರಗಳಿಗಾಗಿ ದಕ್ಷಿಣ ರೈಲ್ವೆಯ ಅಧಿಕೃತ ಪ್ರಕಟಣೆಗಳನ್ನು ಗಮನಿಸುವುದು ಸೂಕ್ತವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/indian-southern-railway-announces-onam-special-trains-between-mangaluru-and-chennai/articleshow-zowyk6r"/>
        </item>
        <item>
            <title><![CDATA[Lokayukta Raid: ಬೆಂಗಳೂರಿನ 3 ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿ ನೋಡಿ ದಂಗಾಗುತ್ತೀರಿ! ಕೋಟಿ ಕೋಟಿ ಹಣ-ಚಿನ್ನ ಜಪ್ತಿ]]></title>
            <link>https://kannada.asianetnews.com/bengaluru-urban/karnataka-lokayukta-raid-bengaluru-three-officials-crores-of-cash-gold-and-assets-seized/articleshow-e7thh35</link>
            <guid isPermaLink="true">https://kannada.asianetnews.com/bengaluru-urban/karnataka-lokayukta-raid-bengaluru-three-officials-crores-of-cash-gold-and-assets-seized/articleshow-e7thh35</guid>
            <pubDate>Wed, 08 Jul 2026 22:16:27 +0530</pubDate>
            <description><![CDATA[&lt;p&gt;ಲೋಕಾಯುಕ್ತ ಪೊಲೀಸರು ರಾಜ್ಯಾದ್ಯಂತ 10 ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪೈಕಿ ಬೆಂಗಳೂರಿನ ಮೂವರು ಪ್ರಮುಖ ಅಧಿಕಾರಿಗಳಾದ ನರೇಂದ್ರ ಕುಮಾರ್, ಪ್ರವೀಣ್ ಶ್ರೀಹರಿ, ಮತ್ತು ಪುಷ್ಪ ಡಿ.ಆರ್. ಅವರ ಮನೆಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx19p8nyysgv2yxv68gvxb5s,imgname-bengaluru-lokayukta-raid-1783528891070.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.08): &amp;nbsp;ಭ್ರ&lt;/strong&gt;ಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯಾದ್ಯಂತ ಬೃಹತ್ ಬೇಟೆ ನಡೆಸಿದ್ದಾರೆ. ಒಟ್ಟು 7 ಜಿಲ್ಲೆಗಳ 10 ಅಧಿಕಾರಿಗಳಿಗೆ ಸಂಬಂಧಿಸಿದ 53 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳ ಅಕ್ರಮ ಆಸ್ತಿಯ ಪರ್ವತವೇ ಬಯಲಾಗಿದೆ. ಈ ಪೈಕಿ ಬೆಂಗಳೂರಿನ ಮೂವರು ಪ್ರಭಾವಿ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಆಸ್ತಿಪಾಸ್ತಿ ಮತ್ತು ನಗದು ನೋಡಿ ಸ್ವತಃ ಲೋಕಾಯುಕ್ತ ಸಿಬ್ಬಂದಿಯೇ ದಂಗಾಗಿದ್ದಾರೆ.&lt;/p&gt;&lt;h3&gt;&lt;strong&gt;ಬೆಂಗಳೂರಿನಲ್ಲಿ ದಾಳಿಗೊಳಗಾದ ಪ್ರಮುಖ ಅಧಿಕಾರಿಗಳು ಮತ್ತು ಅವರ ಬಳಿ ಪತ್ತೆಯಾದ ಅಕ್ರಮ ಆಸ್ತಿಯ ವಿವರ ಇಲ್ಲಿದೆ:&lt;/strong&gt;&lt;/h3&gt;&lt;h2&gt;&lt;strong&gt;1. ನರೇಂದ್ರ ಕುಮಾರ್ ಎಂ. (ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ)&lt;/strong&gt;&lt;/h2&gt;&lt;ul&gt; &lt;li&gt;ಲೋಕೋಪಯೋಗಿ ಇಲಾಖೆಯ ನರೇಂದ್ರ ಕುಮಾರ್ ಅವರಿಗೆ ಸೇರಿದ 4 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.&lt;/li&gt; &lt;li&gt;&lt;strong&gt;ಸ್ಥಿರ ಆಸ್ತಿ: &lt;/strong&gt;3 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು ಪತ್ತೆಯಾಗಿದ್ದು, ಇದರ ಮೌಲ್ಯ ಅಂದಾಜು ₹5.95 ಕೋಟಿ ಎಂದು ಅಂದಾಜಿಸಲಾಗಿದೆ.&lt;/li&gt; &lt;li&gt;&lt;strong&gt;ಚರ ಆಸ್ತಿ: &lt;/strong&gt;ದಾಳಿ ವೇಳೆ ₹3.10 ಲಕ್ಷ ನಗದು ಜೊತೆಗೆ ಬರೋಬ್ಬರಿ ₹1.20 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ₹1.2 ಕೋಟಿ ನಗದು ಪತ್ತೆಯಾಗಿದೆ.&amp;nbsp;&lt;/li&gt; &lt;li&gt;ಅಲ್ಲದೆ, ₹89.16 ಲಕ್ಷ ಮೌಲ್ಯದ ಐಷಾರಾಮಿ ವಾಹನಗಳು ಮತ್ತು ₹27.46 ಲಕ್ಷ ಬ್ಯಾಂಕ್ ಠೇವಣಿ ಪತ್ತೆಯಾಗಿದೆ.&amp;nbsp;&lt;/li&gt; &lt;li&gt;ಇವರ ಒಟ್ಟು ಅಸಮತೋಲನ ಆಸ್ತಿ ₹5.75 ಕೋಟಿಗೂ ಅಧಿಕ ಎನ್ನಲಾಗಿದೆ.&lt;/li&gt;&lt;/ul&gt;&lt;h2&gt;&lt;strong&gt;2. ಪ್ರವೀಣ್ ಶ್ರೀಹರಿ ಬಿ. (ಅಧೀಕ್ಷಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು)&lt;/strong&gt;&lt;/h2&gt;&lt;ul&gt; &lt;li&gt;ಕೆ.ಆರ್.ಐ.ಡಿ.ಎಲ್ ಅಧೀಕ್ಷಕ ಅಭಿಯಂತರ ಪ್ರವೀಣ್ ಶ್ರೀಹರಿ ಅವರಿಗೆ ಸೇರಿದ 5 ಕಡೆಗಳಲ್ಲಿ ಶೋಧ ನಡೆಸಲಾಯಿತು.&lt;/li&gt; &lt;li&gt;&lt;strong&gt;ಸ್ಥಿರ ಆಸ್ತಿ: &lt;/strong&gt;₹4.60 ಕೋಟಿ ಮೌಲ್ಯದ 2 ನಿವೇಶನಗಳು, 2 ವಾಸದ ಮನೆಗಳು ಹಾಗೂ 11 ಎಕರೆ ಕೃಷಿ ಜಮೀನನ್ನು ಇವರು ಹೊಂದಿದ್ದಾರೆ.&lt;/li&gt; &lt;li&gt;&lt;strong&gt;ಚರ ಆಸ್ತಿ: &lt;/strong&gt;₹2.35 ಲಕ್ಷ ನಗದು, ₹11.08 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹1.15 ಕೋಟಿ ಮೌಲ್ಯದ ಬೆಲೆಬಾಳುವ ವಾಹನಗಳು ಪತ್ತೆಯಾಗಿವೆ.&amp;nbsp;&lt;/li&gt; &lt;li&gt;ಇವರ ಅಸಮತೋಲನ ಆಸ್ತಿಯ ಒಟ್ಟು ಮೊತ್ತ ಸುಮಾರು ₹4.33 ಕೋಟಿ ಎಂದು ತಿಳಿದುಬಂದಿದೆ.&lt;/li&gt;&lt;/ul&gt;&lt;h2&gt;&lt;strong&gt;3. ಪುಷ್ಪ ಡಿ. ಆರ್ (ಹೆಚ್ಚುವರಿ ನಿರ್ದೇಶಕರು, ಕೃಷಿ ಮಾರಾಟ ಮಹಾ ಮಂಡಳಿ)&lt;/strong&gt;&lt;/h2&gt;&lt;ul&gt; &lt;li&gt;ಕೃಷಿ ಮಾರಾಟ ಮಹಾ ಮಂಡಳಿಯ ಹೆಚ್ಚುವರಿ ನಿರ್ದೇಶಕಿ ಪುಷ್ಪ ಅವರ 5 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ.&lt;/li&gt; &lt;li&gt;&lt;strong&gt;ಸ್ಥಿರ ಆಸ್ತಿ: &lt;/strong&gt;ಇವರ ಬಳಿ ಅಂದಾಜು ₹7.37 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.&amp;nbsp;&lt;/li&gt; &lt;li&gt;ಇದರಲ್ಲಿ 1 ನಿವೇಶನ, 3 ವಾಸದ ಮನೆಗಳು, 1 ವಾಣಿಜ್ಯ ಸಂಕೀರ್ಣ ಮತ್ತು 20 ಗುಂಟೆ ಕೃಷಿ ಜಮೀನು ಸೇರಿದೆ.&lt;/li&gt; &lt;li&gt;&lt;strong&gt;ಚರ ಆಸ್ತಿ:&lt;/strong&gt; ₹72,000 ನಗದು ಮತ್ತು ₹35 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.&amp;nbsp;&lt;/li&gt; &lt;li&gt;ಇವರ ಒಟ್ಟು ಅಸಮತೋಲನ ಆಸ್ತಿಯ ಮೌಲ್ಯ ಬರೋಬ್ಬರಿ ₹5.93 ಕೋಟಿ ದಾಟಿದೆ.&lt;/li&gt;&lt;/ul&gt;&lt;p&gt;ರಾಜ್ಯಾದ್ಯಂತ ನಡೆದ ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಈ ಭ್ರಷ್ಟ ಅಧಿಕಾರಿಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯ ಮೂಲದ ಬಗ್ಗೆ ಶೋಧ ನಡೆಸಲಾಗುತ್ತಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/karnataka-lokayukta-raid-bengaluru-three-officials-crores-of-cash-gold-and-assets-seized/articleshow-e7thh35"/>
        </item>
    </channel>
</rss>
