<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 31 May 2026 11:51:45 +0530</lastBuildDate>
        <atom:link href="https://kannada.asianetnews.com/rss/karnataka-districts" rel="self" type="application/rss+xml"/>
        <item>
            <title><![CDATA[2028ರಿಂದ ಡಿಕೆಶಿಗೆ ಡೇಂಜರ್​: ವಿಜಯ್​ ಪಿಎಂ ಆಗೋ ಮೊದಲು ಜೈಲಿಗೆ- ತ್ರಿಷಾ ಸಿಎಂ;  ಗುರೂಜಿ ಭವಿಷ್ಯವಾಣಿ ಏನಿದೆ]]></title>
            <link>https://kannada.asianetnews.com/gallery/astrology/aryavardhan-guruji-about-dkshivakumar-and-joseph-vijays-political-prediction-suc-wc2eu8o</link>
            <guid isPermaLink="true">https://kannada.asianetnews.com/gallery/astrology/aryavardhan-guruji-about-dkshivakumar-and-joseph-vijays-political-prediction-suc-wc2eu8o</guid>
            <pubDate>Sun, 31 May 2026 11:51:40 +0530</pubDate>
            <description><![CDATA[&lt;p&gt;ಆರ್ಯವರ್ಧನ್ ಗುರೂಜಿ ಅವರು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದು, 2028 ರಿಂದ ಅವರಿಗೆ ಅಪಾಯದ ಅವಧಿ ಎಂದು ಹೇಳಿದ್ದಾರೆ. ಹಾಗೆಯೇ, ವಿಜಯ್ ಎರಡು ಬಾರಿ ಸಿಎಂ ಆಗಲಿದ್ದು, ನಂತರ ಜೈಲಿಗೆ ಹೋಗುವ ಸಾಧ್ಯತೆಯಿದ್ದು, ಆ ವೇಳೆ ತ್ರಿಷಾ ಸಿಎಂ ಆಗ್ರಾರೆ ಎಂದು ಭವಿಷ್ಯ ನುಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyav0esa5xjrqv48xtdj9z4,imgname-political-prediction-1780208206297.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರ್ಯವರ್ಧನ್ ಗುರೂಜಿ ಅವರು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದು, 2028 ರಿಂದ ಅವರಿಗೆ ಅಪಾಯದ ಅವಧಿ ಎಂದು ಹೇಳಿದ್ದಾರೆ. ಹಾಗೆಯೇ, ವಿಜಯ್ ಎರಡು ಬಾರಿ ಸಿಎಂ ಆಗಲಿದ್ದು, ನಂತರ ಜೈಲಿಗೆ ಹೋಗುವ ಸಾಧ್ಯತೆಯಿದ್ದು, ಆ ವೇಳೆ ತ್ರಿಷಾ ಸಿಎಂ ಆಗ್ರಾರೆ ಎಂದು ಭವಿಷ್ಯ ನುಡಿದಿದ್ದಾರೆ.&lt;/p&gt;&lt;img&gt;&lt;p&gt;ಕೊನೆಗೂ ಡಿ.ಕೆ.ಶಿವಕುಮಾರ್​ ಅವರು ಮುಖ್ಯಮಂತ್ರಿಯಾಗುವ ಹಾದಿಯಲ್ಲಿ ಇದ್ದಾರೆ. ಇವರು ಸಿಎಂ ಆಗಲಿದ್ದಾರೆ ಎಂದು ಆರ್ಯವರ್ಧನ್​ ಗುರೂಜಿ ಈ ಹಿಂದೆ ಭವಿಷ್ಯ ನುಡಿದಿದ್ದರು. ಅದೇ ರೀತಿ ತಮಿಳುನಾಡಿನಲ್ಲಿ ಜೋಸೆಫ್​ ವಿಜಯ್​ ಅವರ ಗೆಲುವಿನ ಬಗ್ಗೆಯೂ ಸೂಚನೆ ಕೊಟ್ಟಿದ್ದರು.&lt;/p&gt;&lt;img&gt;&lt;p&gt;ಇದೀಗ ಅವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಬಾಸ್​ಟಿವಿಗೆ ನೀಡಿರುವ ಸಂದರ್ಶನದಲ್ಲಿ ಆರ್ಯವರ್ಧನ್​ ಗುರೂಜಿ, 2028ರಿಂದ ಸೆಪ್ಟೆಂಬರ್​ನಿಂದ ರಾಹುಭುಕ್ತಿ ಬರಲಿದೆ. 2031ರವರೆಗೆ ಡಿ.ಕೆ.ಶಿವಕುಮಾರ್​ ಅವರ ಜಾತಕದ ಪ್ರಕಾರ ಸ್ವಲ್ಪ ಅಪಾಯವಿದೆ. ಇದು ಅವರಿಗೆ ಡೇಂಜರಸ್​ ಅವಧಿಯಾಗಿದೆ. ಆದರೆ ಅದಕ್ಕೆ ಸರಿಯಾದ ಪರಿಹಾರ ಮಾಡಿಕೊಂಡರೆ ಮುಂದೆ ಅವರಿಗೆ ಯಾವುದೇ ಕಂಟಕ ಇರುವುದಿಲ್ಲ. ರಾಜಯೋಗವಿದ್ದು, ತುಂಬಾ ಒಳ್ಳೆಯದಾಗಲಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಕಾಂಗ್ರೆಸ್​ನಲ್ಲಿ ಸದ್ಯ ಯಾವುದೇ ಒಡಕು ಬರುವುದಿಲ್ಲ. ಡಿ.ಕೆ.ಶಿವಕುಮಾರ್​ ಅವರು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆ. 2028ರಲ್ಲಿ ಸ್ವಲ್ಪ ಜರಕ್​ ಹೊಡೆಯಲಿದೆ. ಅದನ್ನು ಸರಿ ಮಾಡಿಕೊಳ್ಳಬೇಕಿದೆ ಅಷ್ಟೇ ಎಂದಿದ್ದಾರೆ ಗುರೂಜಿ.&lt;/p&gt;&lt;img&gt;&lt;p&gt;ಇದೇ ವೇಳೆ ತಮಿಳುನಾಡಿನ ಸಿಎಂ ದಳಪತಿ ಜೋಸೆಫ್​ ವಿಜಯ್​ ಅವರ ಭವಿಷ್ಯದ ಬಗ್ಗೆಯೂ ಮಾತನಾಡಿರುವ ಆರ್ಯವರ್ಧನ್​ ಗುರೂಜಿ, ಕಟಕ ರಾಶಿ, ಕಟಕ ಲಗ್ನದ ವಿಜಯ್​ ಅವರಿಗೆ ಪ್ರಧಾನಿಯಾಗುವ ಎಲ್ಲಾ ಯೋಗವೂ ಇದೆ. ಆದರೆ ಇನ್ನು 10 ವರ್ಷದಲ್ಲಿ ಅವರಿಗೆ ಒಂದು ಅಪಾಯವೂ ಇದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ವಿಜಯ್​ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ, ಇದೇ ವೇಳೆ ಅವರಿಗೆ ಜೈಲಿಗೆ ಹೋಗುವ ಯೋಗವಿದೆ. ಆ ಸಮಯದಲ್ಲಿ ತ್ರಿಷಾ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಗುರೂಜಿ ಹೇಳಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/astrology/aryavardhan-guruji-about-dkshivakumar-and-joseph-vijays-political-prediction-suc-wc2eu8o"/>
        </item>
        <item>
            <title><![CDATA[Pralhad Joshi: ಡಿಕೆ ಶಿವಕುಮಾರ್ ಸಿಎಂ ಆಗುವುದರಿಂದ ಏನೂ ಬದಲಾಗೋಲ್ಲ; ಕಾಂಗ್ರೆಸ್ ವಿರುದ್ಧ ಜೋಶಿ ವಾಗ್ದಾಳಿ]]></title>
            <link>https://kannada.asianetnews.com/politics/nothing-will-change-if-dk-shivakumar-becomes-cm-pralhad-joshi-slams-congress-rav/articleshow-dc0ea2d</link>
            <guid isPermaLink="true">https://kannada.asianetnews.com/politics/nothing-will-change-if-dk-shivakumar-becomes-cm-pralhad-joshi-slams-congress-rav/articleshow-dc0ea2d</guid>
            <pubDate>Sun, 31 May 2026 11:41:41 +0530</pubDate>
            <description><![CDATA[&lt;p&gt;ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಕಾಂಗ್ರೆಸ್&zwnj;ಗೆ ಕರ್ನಾಟಕ ಒಂದು ಎಟಿಎಂ ಇದ್ದಂತೆ ಎಂದು ಟೀಕಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೂ ಈ ಪರಿಸ್ಥಿತಿ ಬದಲಾಗುವುದಿಲ್ಲ ಎಂದ ಅವರು, ಸಿದ್ದರಾಮಯ್ಯನವರನ್ನು ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಬಗ್ಗೆಯೂ ಟೀಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke4n1xnvjrzzjtqd1pe35z2a,imgname-----------------------2026-01-04t193146.172-1767535343291.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ (ಮೇ.31): &lt;/strong&gt;ಡಿ.ಕೆ.ಶಿವಕುಮಾರ(DK Shivakumar) ಸಿಎಂ ಆಗುತ್ತಿರುವುದರಿಂದ ಏನೂ ವ್ಯತ್ಯಾಸ ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi) ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್&zwnj;ಗೆ ಕರ್ನಾಟಕ(Karnataka Congress) ಒಂದು ಎಟಿಎಂ ಇದ್ದಂತೆ. ಅದು ಡಿಕೆಶಿ ಅವಧಿಯಲ್ಲೂ ಯಥಾಪ್ರಕಾರ ಮುಂದುವರಿಯುತ್ತದೆ ಅಷ್ಟೇ. ಹೀಗಾಗಿ ಡಿಕೆಶಿ ಸಿಎಂ ಆಗುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದರು. ಕಾಂಗ್ರೆಸ್&zwnj; ಪಕ್ಷಕ್ಕೆ 56 ವರ್ಷದ ಯುವಕ ನಾಯಕನಾಗಿದ್ದು ಅವರೇ ಭ್ರಷ್ಟಾಚಾರಿಯಾಗಿದ್ದಾರೆ. ಹೀಗಾಗಿ ಆ ಪಕ್ಷಕ್ಕೆ ಯಾವುದೇ ಗುರಿ ಇಲ್ಲ. ಅವರು ದೇಶದ ವಿರುದ್ಧ ಆಸಕ್ತಿಯಿಂದ ಮಾತನಾಡುವುದನ್ನು ಕಂಡಿದ್ದೇವೆ ಎಂದು ಪರೋಕ್ಷವಾಗಿ ರಾಹುಲ್&zwnj; ಗಾಂಧಿಯನ್ನು ಟೀಕಿಸಿದರು.&lt;/p&gt;&lt;p&gt;ಬಿ.ಎಸ್&zwnj;.ಯಡಿಯೂರಪ್ಪ(BS Yadiyurappa) ಬದಲಾವಣೆಯಾದಾಗ ಕಾಂಗ್ರೆಸ್&zwnj; ಮುಖಂಡರೆಲ್ಲರೂ ಮಾತನಾಡಿದ್ದನ್ನು ನೋಡಿದ್ದೇವೆ. ನನಗೆ 80 ವರ್ಷ ಆದ ನಂತರ ನಾನು ರಾಜೀನಾಮೆ ಕೊಡುತ್ತೇನೆ ಎಂದು ಬಿಎಸ್&zwnj;ವೈ(BSY) ನನಗೆ ಹೇಳಿದ್ದರು. ಅದರಂತೆ ರಾಜೀನಾಮೆ ಕೊಟ್ಟಿದ್ದರು. ಹೀಗಾಗಿ ಈಗಲೂ ಸಹ ಪ್ರಧಾನಿ ಹಾಗೂ ಗೃಹ ಸಚಿವರು ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದು ಯಡಿಯೂರಪ್ಪ ಅವರಿಗೂ ಸಂತೃಪ್ತಿ ತಂದಿದೆ. ಆದರೆ ಸಿದ್ದರಾಮಯ್ಯ ಅವರನ್ನು ರಾಹುಲ್&zwnj; ಗಾಂಧಿ ಹೇಗೆ ನಡೆಸಿಕೊಂಡರು ಎಂಬುದರ ಕುರಿತು ಮಾಧ್ಯಮಗಳೇ ವರದಿ ಮಾಡಿವೆ ಎಂದು ಹೇಳಿದರು.&lt;/p&gt;&lt;p&gt;ಹಿಮಂತ ಶರ್ಮಾ ಸೇರಿ ಬೇರೆ ಮುಖಂಡರ ಜತೆಗೆ ಕಾಂಗ್ರೆಸ್&zwnj; ನಾಯಕರು ಹೇಗೆ ನಡೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೇ ರೀತಿ ಸಿದ್ದರಾಮಯ್ಯ ಜತೆಗೆ ವರ್ತಿಸಿದ್ದಾರೆ ಎಂಬುದು ಮಾಧ್ಯಮಗಳ ವರದಿ ಇದೆ. ಸಿದ್ದರಾಮಯ್ಯ ಹಾಗೂ ಅವರ ಹಿರಿತನದ ಬಗ್ಗೆ ಅಪಾರ ಗೌರವವಿದೆ. ಆದರೆ, ಅವರ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಕೆಟ್ಟ ಆಡಳಿತ ಕೊಟ್ಟರು ಎಂಬ ಅಸಮಾಧಾನವಿದೆ. ಇದನ್ನು ಹೊರತುಪಡಿಸಿ ರಾಹುಲ್&zwnj; ಗಾಂಧಿ ಅವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ ಎಂದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/nothing-will-change-if-dk-shivakumar-becomes-cm-pralhad-joshi-slams-congress-rav/articleshow-dc0ea2d"/>
        </item>
        <item>
            <title><![CDATA[KAAMS app for teachers: ಕರ್ನಾಟಕದ ಸರ್ಕಾರಿ ಶಿಕ್ಷಕರಿಗೆ ಹೊಸ ಹಾಜರಾತಿ ನಿಯಮ; ಫೇಸ್‌, ಲೊಕೇಶನ್‌ ಹಾಜರಾತಿ ಕಡ್ಡಾಯ!]]></title>
            <link>https://kannada.asianetnews.com/education/karnataka-teacher-facial-recognition-and-location-attendance-mandatory/articleshow-9goxu4k</link>
            <guid isPermaLink="true">https://kannada.asianetnews.com/education/karnataka-teacher-facial-recognition-and-location-attendance-mandatory/articleshow-9goxu4k</guid>
            <pubDate>Sun, 31 May 2026 09:07:58 +0530</pubDate>
            <description><![CDATA[&lt;p&gt;ರಾಜ್ಯ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕರಿಗೆ ಲೊಕೇಶನ್ ಮತ್ತು ಫೇಸ್ ಆಧರಿತ 'ಕೆಎಎಎಂಎಸ್&zwnj;' ಆ್ಯಪ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದ ಪ್ರಕಾರ, ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗದಿದ್ದರೆ ಅಥವಾ ಬೇಗ ನಿರ್ಗಮಿಸಿದರೆ, ಅದನ್ನು ರಜೆ ಎಂದು ಪರಿಗಣಿಸಿ ಕಠಿಣ ಕ್ರಮ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksy16s2112m6fz4vydev1qbg,imgname-----------------------2026-05-31t085645.476-1780198106177.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಜುನಾಥ ಕೆ.ಎಂ.&lt;/p&gt;&lt;p&gt;&lt;strong&gt;&amp;nbsp;ಬಳ್ಳಾರಿ (ಮೇ.31): &lt;/strong&gt;ಇನ್ನು ಮುಂದೆ ಸರ್ಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ ನಾನಾ ಕಾರಣವೊಡ್ಡಿ ಶಾಲೆಗೆ ತಡವಾಗಿ ಬರುವಂತಿಲ್ಲ. ಶಾಲೆಗೆ ಚಕ್ಕರ್ ಹೊಡೆದು ಅಲ್ಲಲ್ಲಿ ಓಡಾಡುವಂತಿಲ್ಲ.&lt;/p&gt;&lt;p&gt;ರಾಜ್ಯ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಿಂದ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ. ನಿರ್ದಿಷ್ಟ ಸಮಯ ಮೀರಿ ಶಾಲೆಗೆ ಹಾಜರಾದರೆ ಆ ದಿನ ಆಕಸ್ಮಿಕ ರಜೆಯೆಂದೇ ಪರಿಗಣಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಅಡ್ವಾನ್ಸ್&zwnj; ಅಟೆಂಡೆನ್ಸ್ ಮ್ಯಾನೇಜ್&zwnj;ಮೆಂಟ್ ಸಿಸ್ಟಮ್ (ಕೆಎಎಎಂಎಸ್&zwnj;) ಆ್ಯಪ್&zwnj; ರೂಪಿಸಲಾಗಿದೆ.&lt;/p&gt;&lt;p&gt;ಶುಕ್ರವಾರದಿಂದಲೇ ರಾಜ್ಯಾದ್ಯಂತ ಈ ನಿಯಮ ಜಾರಿಗೊಂಡಿದೆ. ಇನ್ಮುಂದೆ ಸರ್ಕಾರಿ ಶಾಲೆ ಶಿಕ್ಷಕರು ನಿರ್ದಿಷ್ಟ ಅವಧಿಯೊಳಗೆ ಶಾಲೆಗೆ ಹಾಜರಾಗಿ ದಿನಕ್ಕೆರೆಡು ಬಾರಿ ಲೊಕೇಶನ್, ಫೇಸ್ ಆಧರಿತ ಹಾಜರಾತಿ ಹಾಕಬೇಕಾಗಿದೆ. ಸರ್ಕಾರದ ಈ ನಿಲುವನ್ನು ಪೋಷಕರು, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರ ವಲಯ ಸ್ವಾಗತಿಸಿದೆ. ಇನ್ನೊಂದು ತಿಂಗಳಲ್ಲಿ ವಿದ್ಯಾರ್ಥಿಗಳಿಗೂ ಎಐ ಆಧಾರಿತ ಹಾಜರಾತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.&lt;/p&gt;&lt;h2&gt;ಹೊಂದಾಣಿಕೆಗೆ ಕುತ್ತು:&lt;/h2&gt;&lt;p&gt;ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ಪೈಕಿ ಕೆಲವರು ಶಾಲೆಗೆ ಹಾಜರಾಗದೆ ಹಾಜರಾತಿ ಪಡೆದುಕೊಂಡು ಸಂಬಳ ಮಾಡಿಕೊಳ್ಳುತ್ತಿದ್ದರು. ಕೆಲವರು ಮುಖ್ಯಗುರುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹಾಜರಾತಿ ಪಡೆದುಕೊಂಡರೆ, ಇನ್ನು ಕೆಲವರು ಸಂಘಟನೆ ಹೆಸರಿನಲ್ಲಿ ಓಡಾಡಿಕೊಂಡು ಶಾಲೆಗೆ ಗೈರಾಗುತ್ತಿದ್ದರು. ಶಾಲೆಗೆ ಗೈರಾಗುವುದನ್ನೇ ಕಾಯಕ ಮಾಡಿಕೊಂಡ ಅನೇಕ ಶಿಕ್ಷಕರು ಶಾಲೆಯ ಮುಖ ನೋಡುವುದೇ ಅಪರೂಪ ಎನ್ನುವಂತಾಗಿತ್ತು.&lt;/p&gt;&lt;h3&gt;ಬೇಗ ಹೋದರು ತೊಂದರೆ:&lt;/h3&gt;&lt;p&gt;ಶಿಕ್ಷಕರ ಕಡ್ಡಾಯ ಹಾಜರಾತಿ ಸಂಬಂಧ ಕೈಗೊಂಡ ತಂತ್ರಜ್ಞಾನ ಆಧರಿತ ಹಾಜರಾತಿ ಬಗ್ಗೆ ನಿರ್ಲಕ್ಷಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಿಗದಿತ ಶಾಲಾ ಅವಧಿ ಮುಗಿಯುವ ಮುನ್ನವೇ ಚೆಕ್&zwnj;ಔಟ್ ಆದಲ್ಲಿ ಆರಂಭಿಕ ನಿರ್ಗಮನ (Early Departure) ಎಂದು ಪರಿಗಣಿಸಿ, ಅದನ್ನು ಕರ್ತವ್ಯದ ಅವಗಣನೆ ಅಥವಾ ಕರ್ತವ್ಯ ಲೋಪ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಅರ್ಧ ದಿನದ ರಜೆ ಕಡಿತವಾಗಲಿದೆ.&lt;/p&gt;&lt;p&gt;ಶಾಲೆಯ ಅಧಿಕೃತ ಮುಕ್ತಾಯದ ಸಮಯಕ್ಕಿಂತ ತೀರಾ ಮುಂಚಿತವಾಗಿ (ಉದಾಹರಣೆಗೆ ಮಧ್ಯಾಹ್ನದ ಅವಧಿಯಲ್ಲಿ) ಯಾವುದೇ ಪೂರ್ವಾನುಮತಿ ಇಲ್ಲದೇ ಚೆಕ್&zwnj;ಔಟ್ ಆದರೆ ಆ ದಿನದ ದ್ವಿತೀಯಾರ್ಧವನ್ನು ಅರ್ಧ ದಿನದ ರಜೆ, ಅರ್ಧದಿನದ ಆಕಸ್ಮಿಕ ರಜೆ (ಸಿಎಲ್) ಎಂದು ಪರಿಗಣಿಸಲಾಗುವುದು. ರಜೆಯ ಖಾತೆಯಲ್ಲಿ ಆಕಸ್ಮಿಕ ರಜೆ ಬಾಕಿ ಇಲ್ಲದಿದ್ದರೆ, ಅದನ್ನು ಗಳಿಕೆ ರಜೆ (ಇಎಲ್) ಅಥವಾ ವೇತನ ರಹಿತ ರಜೆ ಎಂದು ಬದಲಾಯಿಸಲಾಗುತ್ತದೆ.&lt;/p&gt;&lt;p&gt;&lt;strong&gt;ಬಿಇಒ ನೋಟಿಸ್:&lt;/strong&gt;&lt;/p&gt;&lt;p&gt;ಒಂದು ತಿಂಗಳಲ್ಲಿ ಮೂರು ಬಾರಿ ತಡವಾಗಿ ಬರುವುದು ಮತ್ತು ಬೇಗ ಹೋಗುವುದು ಮಾಡಿದಲ್ಲಿ 1 ದಿನದ ಆಕಸ್ಮಿಕ ರಜೆ ಕಡಿತಗೊಳಿಸಲಾಗುವುದು. ​ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೇ ಬೇಗ ಚೆಕ್&zwnj;ಔಟ್ ಆಗುವುದು ಸತತ ಕಂಡುಬಂದಲ್ಲಿ ಅದನ್ನು &lsquo;ಅನಧಿಕೃತ ಗೈರುಹಾಜರಿ&rsquo; ಎಂದು ಪರಿಗಣಿಸಿ, ಬಿಇಒ ಅಥವಾ ಡಿಡಿಪಿಐ ಮಟ್ಟದಲ್ಲಿ ಕಾರಣ ಕೇಳುವ ನೋಟಿಸ್ ನೀಡಲಾಗುತ್ತದೆ. ​ಇದು ಸೇವಾ ವರದಿ ಮತ್ತು ವಾರ್ಷಿಕ ವೇತನ ಬಡ್ತಿ ಮೇಲೆಯೂ ಪ್ರಭಾವ ಬೀರಲಿದೆ.&lt;/p&gt;&lt;p&gt;&lt;strong&gt;ರಿಯಾಯಿತಿ ದರ ಅರ್ಧ ಗಂಟೆಗೆ ಹೆಚ್ಚಿಸಲಿ:&lt;/strong&gt;&lt;/p&gt;&lt;p&gt;ಶಾಲೆ ಬೆಳಗ್ಗೆ 9:45ಕ್ಕೆ ಆರಂಭ ಆಗುವುದಾದರೆ, 9:55 ಅಥವಾ 10 ಗಂಟೆ ಒಳಗೆ Check-in ಮಾಡಲು ಅವಕಾಶವಿದೆ. ಆದರೆ, ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಿಗೆ ಶಿಕ್ಷಕರು ತಲುಪುವುದು ಕಷ್ಟವಾಗಲಿದೆ. 15 ನಿಮಿಷಗಳ ರಿಯಾಯಿತಿ ಸಮಯ ಅರ್ಧಗಂಟೆಗೆ ಹೆಚ್ಚಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.&lt;/p&gt;&lt;p&gt;----&lt;/p&gt;&lt;p&gt;&lt;strong&gt;ಕ್ರಮ ಎದುರಿಸಿ&lt;/strong&gt;&lt;/p&gt;&lt;p&gt;ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಲಾಗಿದೆ. ಶಿಕ್ಷಕರು ಇಲಾಖೆಯ ಸೂಚನೆಯಂತೆ ನಿಗದಿತ ಸಮಯಕ್ಕೆ ಹಾಜರಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಇಲಾಖೆ ಕ್ರಮ ಎದುರಿಸಬೇಕು.&lt;/p&gt;&lt;p&gt;-ಬಿ.ಉಮಾದೇವಿ, ಡಿಡಿಪಿಐ ಬಳ್ಳಾರಿ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/karnataka-teacher-facial-recognition-and-location-attendance-mandatory/articleshow-9goxu4k"/>
        </item>
        <item>
            <title><![CDATA[ಶತಾಯುಷಿ ತಾಯಿಯ ಮೃತದೇಹ ಕಂಡು ಮಗಳು ಸಾವು..!]]></title>
            <link>https://kannada.asianetnews.com/karnataka-districts/daughter-dies-after-mother-death-incident-happens-in-parthanahalli-bagalkote-rav/articleshow-gnfqyfx</link>
            <guid isPermaLink="true">https://kannada.asianetnews.com/karnataka-districts/daughter-dies-after-mother-death-incident-happens-in-parthanahalli-bagalkote-rav/articleshow-gnfqyfx</guid>
            <pubDate>Sun, 31 May 2026 08:12:40 +0530</pubDate>
            <description><![CDATA[ಶತಾಯುಷಿ ತಾಯಿಯ ನಿಧನದ ಸುದ್ದಿ ಕೇಳಿ ಅಂತ್ಯಕ್ರಿಯೆಗೆ ಬಂದ ಮಗಳು, ತಾಯಿಯ ಶವವನ್ನು ಕಂಡು ಆಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksxyf0qk8er0fgcghzf6yjth,imgname-----------------------2026-05-31t080955.453-1780195230451.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾಗವಾಡ (ಮೇ.31):&lt;/strong&gt; ಅಗಲಿದ ತಾಯಿಯ ಕಂಡು ಆಘಾತಕ್ಕೊಳಗಾದ ಮಗಳು ತಾಯಿಯ ಶವದ ಎದುರೇ ಪ್ರಾಣ ಬಿಟ್ಟ ಘಟನೆ ಸಂಭವಿಸಿದೆ. ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮ(Parthanahalli village)ದ 76 ವರ್ಷದ&lt;strong&gt; ಹಣಮವ್ವ ರಾಮು ಮುಜಗೋಣಿ&lt;/strong&gt;(Hanamvva Ramu Mujagoni) ಸಾವನ್ನಪ್ಪಿದ ಮಗಳು.&lt;/p&gt;&lt;h2&gt;ಶತಾಯುಷಿ ತಾಯಿ ಸಾವು ತಂದ ಆಘಾತ&lt;/h2&gt;&lt;p&gt;ಬಾಗಲಕೋಟ(Bagalkote) ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮTodalubagi village(ದಲ್ಲಿ ವಾಸವಾಗಿರುವ ಶತಾಯುಷಿ, ತಾಯಿ&lt;strong&gt; ಗಂಗವ್ವ ಚನ್ನಬಸಪ್ಪ ಪಾರ್ಥಹನಳ್ಳಿ&lt;/strong&gt;(101) ಇವರು ಶುಕ್ರವಾರ ವಯೋಸಹಜವಾಗಿ ನಿಧನರಾಗಿದ್ದರು. ತಾಯಿಯ ಸಾವಿನ ಸುದ್ದಿ ತಿಳಿದು ಹಣಮವ್ವ ಶುಕ್ರವಾರ ತನ್ನ ಮಕ್ಕಳೊಂದಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೊದಲಬಾಗಿಗೆ ತೆರಳಿದ್ದಳು. ಆದರೆ, ಅಲ್ಲಿ ತಾಯಿಯ ಶವ ಕಂಡು ಆಘಾತಕ್ಕೊಳಗಾದ ಹಣಮವ್ವ ಕುಸಿದು ಬಿದ್ದಿದ್ದು, ಆಕೆಯೂ ಸಹ ತಾಯಿಯೊಂದಿಗೆ ಇಹಲೋಕ ತ್ಯಜಿಸಿದ್ದಾರೆ.&lt;/p&gt;&lt;p&gt;ಮೃತ ಹಣುಮವ್ವನನ್ನು ಅಥಣಿ ತಾಲೂಕಿನ ಪಾರ್ಥನಳ್ಳಿ ಗ್ರಾಮಕ್ಕೆ ವಿವಾಹ ಮಾಡಿ ಕೊಟ್ಟಿದ್ದರು. ಅವರಿಗೆ ಮೂರು ಜನ ಗಂಡು ಮಕ್ಕಳು ಅಪಾರ ಬಂಧು ಬಳಗವಿದೆ. ಅವರ ಅಂತ್ಯಕ್ರಿಯೆ ಶನಿವಾರ ನೆರವೇರಿತು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/daughter-dies-after-mother-death-incident-happens-in-parthanahalli-bagalkote-rav/articleshow-gnfqyfx"/>
        </item>
        <item>
            <title><![CDATA[Vice President Visits Dharmasthala: ಇಂದು ಧರ್ಮಸ್ಥಳಕ್ಕೆ ಉಪರಾಷ್ಟ್ರಪತಿ; 'ಸಿರಿ' ಇಂಡಸ್ಟ್ರಿಯಲ್ ಪಾರ್ಕ್' ಉದ್ಘಾಟನೆ]]></title>
            <link>https://kannada.asianetnews.com/state/vice-president-cp-radhakrishnan-visits-dharmasthala-inauguration-siri-industrial-park-rav/articleshow-7ver2bd</link>
            <guid isPermaLink="true">https://kannada.asianetnews.com/state/vice-president-cp-radhakrishnan-visits-dharmasthala-inauguration-siri-industrial-park-rav/articleshow-7ver2bd</guid>
            <pubDate>Sun, 31 May 2026 05:28:01 +0530</pubDate>
            <description><![CDATA[&lt;p&gt;ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಬೆಳ್ತಂಗಡಿಯ ರೆಂಕೆದಗುತ್ತುವಿನಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆಗಾಗಿ ನಿರ್ಮಿಸಲಾದ ಸುಸಜ್ಜಿತ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಇಂದು (ಮೇ 31 ರಂದು) ಭಾರತದ ಉಪರಾಷ್ಟ್ರಪತಿಗಳು &amp;nbsp;ಉದ್ಘಾಟನೆಗೊಳ್ಳಲಿದೆ. ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksxmmzb1mw6m19mk5y39jp20,imgname-----------------------2026-05-31t051833.908-1780184939873.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳ್ತಂಗಡಿ (ಮೇ.31): &lt;/strong&gt;ಹಳ್ಳಿಗಾಡಿನ ಸಾವಿರಾರು ಮಹಿಳೆಯರ ಬದುಕನ್ನು ಹಸನುಗೊಳಿಸಿ ಅವರಿಗೊಂದು ಭದ್ರವಾದ ಬದುಕನ್ನು ಕಟ್ಟಿಕೊಟ್ಟ ಬೆಳ್ತಂಗಡಿ ರೆಂಕೆದಗುತ್ತು ಎಂಬಲ್ಲಿ ಸಿರಿ ಗ್ರಾಮೋದ್ಯೋಗ(Siri Gramodyoga Samsthe Belthangady) ಸಂಸ್ಥೆಗಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ನ ಉದ್ಘಾಟನಾ(Matrushree Industrial Park inauguration) ಸಮಾರಂಭವು 31ರಂದು ಪೂರ್ವಾಹ್ನ 10 ಗಂಟೆಗೆ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ.&lt;/p&gt;&lt;p&gt;ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಕಾರ್ಯಕ್ರಮ ವಿವರ ನೀಡಿದರು.&lt;/p&gt;&lt;p&gt;ಭಾರತದ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಮಾತೃಶ್ರೀ ಇಂಡಸ್ಟಿ&ccedil;ಯಲ್ ಪಾರ್ಕ್ ಉದ್ಘಾಟಿಸುವರು.&lt;/p&gt;&lt;p&gt;ಕರ್ನಾಟಕದ ರಾಜ್ಯಪಾಲ ಥಾವರ್&zwnj;ಚಂದ್ ಗೆಹ್ಲೋಟ್ ಗೌರವ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.&lt;/p&gt;&lt;p&gt;ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೆಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಸಿರಿ ಸಂಸ್ಥೆಯ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ರಾಜ್ಯಸಭೆ ಕಾರ್ಯದರ್ಶಿ ಡಾ.ಕೆ.ಎಸ್. ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.&lt;/p&gt;&lt;h2&gt;ಧರ್ಮಸ್ಥಳದಲ್ಲಿ ಉಪರಾಷ್ಟ್ರಪತಿ ರಾಧಾಕೃಷ್ಣನ್&zwnj; ಗೆ ಸ್ವಾಗತ&lt;/h2&gt;&lt;p&gt;ಬೆಳ್ತಂಗಡಿ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ವಾಯುಪಡೆಯ ವಿಶೇಷ ಹೆಲಿಕಾಪ್ಟರ್&zwnj;ನಲ್ಲಿ ಧರ್ಮಸ್ಥಳಕ್ಕೆ ಶನಿವಾರ ಸಂಜೆ ಆಗಮಿಸಿದರು. ಅವರಿಗೆ ಧರ್ಮಸ್ಥಳ ಹೆಲಿಪ್ಯಾಡ್&zwnj;ನಲ್ಲಿ ಗೌರವಪೂರ್ವಕ ಸ್ವಾಗತ ಕೋರಲಾಯಿತು.&lt;/p&gt;&lt;p&gt;ಅವರನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಕ್ಷೇತ್ರದ ಪರವಾಗಿ ಸ್ವಾಗತಿಸಿದರು.&lt;/p&gt;&lt;p&gt;ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಶನಿವಾರ ರಾತ್ರಿ ತಂಗಿದ ಅವರು ಭಾನುವಾರ ಮುಂಜಾನೆ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗುವರು. ಅನ್ನಪೂರ್ಣ ಭೋಜನಾಲಯ ಮತ್ತು ಸಾನ್ನಿಧ್ಯ ಸರದಿ ಸಾಲು ವ್ಯವಸ್ಥೆ (ಕ್ಯೂ ಕಾಂಪ್ಲೆಕ್ಸ್) ವೀಕ್ಷಿಸುವರು. ಪೂರ್ವಾಹ್ನ ೧೦ ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್&zwnj; ಪಾರ್ಕ್ ಉದ್ಘಾಟಿಸುವರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/vice-president-cp-radhakrishnan-visits-dharmasthala-inauguration-siri-industrial-park-rav/articleshow-7ver2bd"/>
        </item>
        <item>
            <title><![CDATA[ಅಜ್ಞಾತ ಸ್ಥಳದಲ್ಲಿ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ವಿಶೇಷ ಹೋಮ, ಕುಟುಂಬಸ್ಥರು ಭಾಗಿ?]]></title>
            <link>https://kannada.asianetnews.com/state/cm-designate-dk-shivakumar-performs-special-homa-at-undisclosed-location-says-report/articleshow-ty7tdf5</link>
            <guid isPermaLink="true">https://kannada.asianetnews.com/state/cm-designate-dk-shivakumar-performs-special-homa-at-undisclosed-location-says-report/articleshow-ty7tdf5</guid>
            <pubDate>Sat, 30 May 2026 22:29:51 +0530</pubDate>
            <description><![CDATA[&lt;p&gt;ರಾಜಭವನದಿಂದ ಡಿಕೆ ಶಿವಕುಮಾರ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ. ಇದೇ ವೇಳೆ ಕುಟುಂಬಸ್ಥರ ಜೊತೆ ವಿಶೇಷ ಹೋಮದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswx6akv3jwg7y87sebmbxvg,imgname-dk-shivakumar-1780160342650.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.30) &lt;/strong&gt;ಕರ್ನಾಟಕ ಮುಂದಿನ ಮುಖ್ಯಮಂತ್ರಿಯಾಗಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಬಳಿಕ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇರವಾಗಿ ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚನೆಗೆ ಅನುಮತಿ ಕೇಳಿದ್ದರು. ರಾಜಭವನದಿಂದ ತೆರಳಿದ ಡಿಕೆ ಶಿವಕುಮಾರ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ. ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಹಾಗೂ ಕುಟುಂಬಸ್ಥರು ವಿಶೇಷ ಹೋಮದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ.&lt;/p&gt;&lt;h2&gt;ರಾತ್ರಿ 11 ಗಂಟೆ ಬಳಿಕ ಸದಾಶಿವನಗರ ನಿವಾಸಕ್ಕೆ ಡಿಕೆ ಶಿವಕುಮಾರ್ ಆಗಮನ&lt;/h2&gt;&lt;p&gt;ಕುಟುಂಬಸ್ಥರ ಜೊತೆ ವಿಶೇಷ ಹೋಮದಲ್ಲಿ ಪಾಲ್ಗೊಂಡಿರುವ ಡಿಕೆ ಶಿವಕುಮಾರ್ ರಾತ್ರಿ 11 ಗಂಟೆ ಬಳಿಕ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸಕ್ಕೆ ಆಗಮಿಸಲಿದ್ದಾರೆ. ಪೂಜೆ ಮುಗಿಸಿ ಕುಟುಂಬ ಸಮೇತ ನಿವಾಸಕ್ಕೆ ಮರಳಲಿದ್ದಾರೆ ಎಂದು ಮಾಹಿತಿಗಳು ಲಭ್ಯವಾಗಿದೆ.&lt;/p&gt;&lt;p&gt;ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಸೂಚನೆ&lt;/p&gt;&lt;p&gt;ಹೋಮ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಲ್ಳುತ್ತಿರುವ ಕಾರಣದಿಂದ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಈ ಸಮಯದಲ್ಲಿ ಸದಾಶಿವನಗರ ಮನೆ ಬಳಿ ಯಾರೂ ಆಗಮಿಸದಂತೆ ಸೂಚಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.&lt;/p&gt;&lt;h2&gt;ಡಿಕೆ ಶಿವಕುಮಾರ್&zwnj;ಗೆ ಶುಭಾಶಯಗಳ ಮಹಾಪೂರ&lt;/h2&gt;&lt;p&gt;ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್&zwnj;ಗೆ ಎಲ್ಲೆಡೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇನ್ನುಳಿದ 2 ವರ್ಷ ಡಿಕೆ ಶಿವಕುಮಾರ್ ಆಡಳಿತದಲ್ಲಿ ಕರ್ನಾಟಕ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ಹಾರೈಸಿದ್ದಾರೆ.&lt;/p&gt;&lt;p&gt;ಇತ್ತ ಸಿದ್ದರಾಮಯ್ಯ ಟ್ವೀಟ್ ಮೂಲಕ ಡಿಕೆ ಶಿವಕುಮಾರ್ ಅಭಿನಂದಿಸಿದ್ದಾರೆ. ಇದೇ ವೇಳೆ ರಾಜ್ಯ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದ್ದಾರೆ. ಪ್ರಿಯ ಶಿವಕುಮಾರ್, ನಿಮ್ಮಲ್ಲಿರುವ ಅದಮ್ಯವಾದ ಕ್ರೀಯಾಶೀಲತೆ, ಸಂಘಟನಾ ಚಾತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಸಂಶಾಯತೀತ ನಿಷ್ಠೆಯನ್ನು ಒಬ್ಬ ಸಹದ್ಯೋಗಿಯಾಗಿ ನಾನು ಸಮೀಪದಿಂದ ಗಮನಿಸಿದ್ದೇನೆ. ಇವೆಲ್ಲದರ ಸದುಪಯೋಗ ರಾಜ್ಯದ ಜನತೆಗೆ ಆಗಲಿ ಎಂದು ಹೃತ್ಪೂರ್ವಕಾಗಿ ಹಾರೈಸುವೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.&lt;/p&gt;&lt;p&gt;ಇಂದು ಕರ್ನಾಟಕ ತಲಾವಾರು ಆಧಾಯದಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿರುವುದು ಮಾತ್ರವಲ್ಲ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲಿಯೂ ದೇಶಕ್ಕೆ ಮಾದರಿಯಾಗಿದೆ. ನಾವು ಪ್ರಾರಂಭಿಸಿರುವ ಪ್ರತಿಯೊಂದು ಯೋಜನೆಯನ್ನೂ ಉಳಿದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಿ ಅನುಷ&zwj;್ಠಾನಕ್ಕೆ ತರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗಾತಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/cm-designate-dk-shivakumar-performs-special-homa-at-undisclosed-location-says-report/articleshow-ty7tdf5"/>
        </item>
        <item>
            <title><![CDATA[ರೈಲು ಪ್ರಯಾಣಿಕರೇ ಗಮನಿಸಿ: ಜೂನ್ 1ರಿಂದ ಕಲಬುರಗಿ, ಗಾಣಗಾಪುರ ಮಾರ್ಗದ ಪ್ರಮುಖ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ!]]></title>
            <link>https://kannada.asianetnews.com/karnataka-districts/karnataka-railways-solapur-division-revises-train-timetables-at-kalaburagi-ganagapur-road-hotgi-stations-from-june1-gdp/articleshow-dx152ao</link>
            <guid isPermaLink="true">https://kannada.asianetnews.com/karnataka-districts/karnataka-railways-solapur-division-revises-train-timetables-at-kalaburagi-ganagapur-road-hotgi-stations-from-june1-gdp/articleshow-dx152ao</guid>
            <pubDate>Sat, 30 May 2026 19:39:57 +0530</pubDate>
            <description><![CDATA[ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಕಲಬುರಗಿ, ಗಾಣಗಾಪುರ ರಸ್ತೆ, ಮತ್ತು ಹೊಟ್ಲಿ ನಿಲ್ದಾಣಗಳ ಮೂಲಕ ಹಾದುಹೋಗುವ ಕೆಲವು ಪ್ರಮುಖ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಈ ಹೊಸ ವೇಳಾಪಟ್ಟಿಯು ಜೂನ್ 1 ರಿಂದ ಹಂತ ಹಂತವಾಗಿ ಜಾರಿಗೆ ಬರಲಿದ್ದು, ಪ್ರಯಾಣಿಕರು ನವೀಕೃತ ಸಮಯವನ್ನು ಪರಿಶೀಲಿಸಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knzr06zeea1hqff78krd0yts,imgname-indian-railways-2026-reforms-vande-bharat-sleeper-hydrogen-train-ticket-refund-cancellation-board-change-policy-2-1775960595438.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ರೈಲು ಪ್ರಯಾಣಿಕರ ಅನುಕೂಲತೆ, ಕಟ್ಟುನಿಟ್ಟಿನ ಸಮಯಪಾಲನೆ ಹಾಗೂ ರೈಲು ಕಾರ್ಯಾಚರಣೆಯ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ವಲಯದ ವ್ಯಾಪ್ತಿಗೆ ಬರುವ ಕಲಬುರಗಿ, ಗಾಣಗಾಪುರ ರಸ್ತೆ ಹಾಗೂ ಹೊಟ್ಲಿ ರೈಲು ನಿಲ್ದಾಣಗಳ ಮಾರ್ಗವಾಗಿ ಸಂಚರಿಸುವ ಕೆಲವು ಪ್ರಮುಖ ಎಕ್ಸ್&zwnj;ಪ್ರೆಸ್ ಮತ್ತು ಸಾಪ್ತಾಹಿಕ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;&lt;p&gt;ಈ ನೂತನ ಪರಿಷ್ಕೃತ ವೇಳಾಪಟ್ಟಿಯು ಜೂನ್ 1ರಿಂದ ಹಂತ ಹಂತವಾಗಿ ಜಾರಿಗೆ ಬರಲಿದ್ದು, ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ಈ ಕೆಳಗಿನ ಬದಲಾವಣೆಗಳನ್ನು ಕಡ್ಡಾಯವಾಗಿ ಗಮನಿಸಬೇಕಿದೆ.&lt;/p&gt;&lt;h2&gt;ನಿಲ್ದಾಣವಾರು ಪರಿಷ್ಕೃತ ವೇಳಾಪಟ್ಟಿಯ ಸಂಪೂರ್ಣ ವಿವರಗಳು:&lt;/h2&gt;&lt;p&gt;ವಿವಿಧ ರೈಲು ನಿಲ್ದಾಣಗಳಲ್ಲಿ ರೈಲುಗಳ ಆಗಮನ (Arrival) ಮತ್ತು ನಿರ್ಗಮನ (Departure) ಸಮಯವನ್ನು ಬದಲಾಯಿಸಲಾಗಿದ್ದು, ಅದರ ಅಧಿಕೃತ ಮಾಹಿತಿ ಇಲ್ಲಿದೆ.&lt;/p&gt;&lt;h3&gt;1. ಹೊಟ್ಲಿ ರೈಲು ನಿಲ್ದಾಣ (Hotgi Station)&lt;/h3&gt;&lt;p&gt;ಬಾಗಲಕೋಟೆ - ಮೈಸೂರು ಬಸವ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 17308): ಈ ರೈಲಿನ ಸಂಚಾರ ಸಮಯವನ್ನು 10 ನಿಮಿಷಗಳಷ್ಟು ಮುಂಚಿತಗೊಳಿಸಲಾಗಿದೆ. ಜೂನ್ 1ರಿಂದ ಅನ್ವಯವಾಗುವಂತೆ ಈ ರೈಲು ಸಂಜೆ 6:18ಕ್ಕೆ ಹೊಟ್ಲಿ ನಿಲ್ದಾಣಕ್ಕೆ ಆಗಮಿಸಿ, 6:20ಕ್ಕೆ ಮೈಸೂರಿನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಲಿದೆ.&lt;/p&gt;&lt;h3&gt;2. ಗಾಣಗಾಪುರ ರಸ್ತೆ ನಿಲ್ದಾಣ (Ganagapur Road Station)&lt;/h3&gt;&lt;p&gt;ಹೈದರಾಬಾದ್ - ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 17050): ದತ್ತಾತ್ರೇಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಪ್ರಮುಖವಾಗಿರುವ ಈ ರೈಲಿನ ಸಮಯದಲ್ಲೂ ಮಾರ್ಪಾಡು ಮಾಡಲಾಗಿದೆ. ಜೂನ್ 1ರಿಂದ ಈ ರೈಲು ರಾತ್ರಿ 8:28ಕ್ಕೆ ನಿಲ್ದಾಣಕ್ಕೆ ಆಗಮಿಸಲಿದ್ದು, ರಾತ್ರಿ 8:30ಕ್ಕೆ ಹುಬ್ಬಳ್ಳಿಯ ಕಡೆಗೆ ಹೊರಡಲಿದೆ.&lt;/p&gt;&lt;h3&gt;3. ಕಲಬುರಗಿ ರೈಲು ನಿಲ್ದಾಣ (Kalaburagi Junction)&lt;/h3&gt;&lt;p&gt;ಕಲಬುರಗಿ ನಿಲ್ದಾಣದ ಮೂಲಕ ಹಾದುಹೋಗುವ ಹಲವು ದೂರಪ್ರಯಾಣದ ಮತ್ತು ಸಾಪ್ತಾಹಿಕ ಪ್ರೀಮಿಯಂ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ:&lt;/p&gt;&lt;ul&gt; &lt;li&gt;ಚೆನ್ನೈ ಸೆಂಟ್ರಲ್ - ಸಿಎಸ್&zwnj;ಎಂಟಿ ಮುಂಬೈ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22160): ಜೂನ್ 1ರಿಂದ ಅನ್ವಯವಾಗುವಂತೆ ಈ ರೈಲು ಮಧ್ಯರಾತ್ರಿ ನಂತರ 1:50ಕ್ಕೆ ಕಲಬುರಗಿ ನಿಲ್ದಾಣಕ್ಕೆ ಆಗಮಿಸಿ, 1:53ಕ್ಕೆ ಮುಂಬೈ ಕಡೆಗೆ ಹೊರಡಲಿದೆ.&lt;/li&gt; &lt;li&gt;ಚೆನ್ನೈ ಸೆಂಟ್ರಲ್ - ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22601): ಈ ಸಾಪ್ತಾಹಿಕ ರೈಲಿನ ಹೊಸ ಸಮಯವು ಜೂನ್ 3 ರಿಂದ ಜಾರಿಗೆ ಬರಲಿದ್ದು, ರಾತ್ರಿ 1:45ಕ್ಕೆ ನಿಲ್ದಾಣಕ್ಕೆ ಬಂದು 1:48ಕ್ಕೆ ನಿರ್ಗಮಿಸಲಿದೆ.&lt;/li&gt; &lt;li&gt;ಯಶವಂತಪುರ - ಜೈಪುರ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 20667): ಈ ರೈಲಿನ ಪರಿಷ್ಕೃತ ಸಮಯವು ಜೂನ್ 4 ರಿಂದ ಜಾರಿಗೆ ಬರಲಿದ್ದು, ರಾತ್ರಿ 1:45ಕ್ಕೆ ಕಲಬುರಗಿಗೆ ಆಗಮಿಸಿ, 1:48ಕ್ಕೆ ಜೈಪುರದ ಕಡೆಗೆ ಸಂಚರಿಸಲಿದೆ.&lt;/li&gt; &lt;li&gt;ಯಶವಂತಪುರ - ಅಹಮದಾಬಾದ್ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22690): ಈ ರೈಲಿನ ವೇಳಾಪಟ್ಟಿಯು ಜೂನ್ 7 ರಿಂದ ಬದಲಾಗಲಿದ್ದು, ರಾತ್ರಿ 1:45ಕ್ಕೆ ನಿಲ್ದಾಣಕ್ಕೆ ಬಂದು 1:48ಕ್ಕೆ ಅಹಮದಾಬಾದ್ ಕಡೆಗೆ ತನ್ನ ಪ್ರಯಾಣ ಮುಂದುವರಿಸಲಿದೆ.&lt;/li&gt;&lt;/ul&gt;&lt;h2&gt;ಇತರೆ ನಿಲ್ದಾಣಗಳಲ್ಲಿ ಬದಲಾವಣೆ ಇಲ್ಲ: ರೈಲ್ವೆ ಇಲಾಖೆ ಸ್ಪಷ್ಟನೆ&lt;/h2&gt;&lt;p&gt;ಈ ನಿರ್ದಿಷ್ಟ ರೈಲುಗಳ ವೇಳಾಪಟ್ಟಿಯು ಕೇವಲ ಸೂಚಿಸಲಾದ ನಿಲ್ದಾಣಗಳಲ್ಲಿ ಮಾತ್ರ ಬದಲಾಗಲಿದ್ದು, ಉಳಿದ ಯಾವುದೇ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಸೋಲಾಪುರ ವಿಭಾಗದ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಪ್ರಯಾಣಿಕರಿಗೆ ಪ್ರಮುಖ ಸಲಹೆ&lt;/h2&gt;&lt;p&gt;ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ನಿಮಿಷಗಳ ವ್ಯತ್ಯಾಸವಿರುವುದರಿಂದ ಪ್ರಯಾಣಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ನಿಲ್ದಾಣಕ್ಕೆ ಹೊರಡುವ ಮುನ್ನ ಅಧಿಕೃತ ರೈಲ್ವೆ ಮಾಹಿತಿ ಕೇಂದ್ರಗಳ ಮೂಲಕ ಅಥವಾ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (NTES) ಮೊಬೈಲ್ ಆ್ಯಪ್ ಹಾಗೂ ಐಆರ್&zwnj;ಸಿಟಿಸಿ (IRCTC) ಪೋರ್ಟಲ್ ಮೂಲಕ ರೈಲುಗಳ ನವೀಕೃತ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ವಿನಂತಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-railways-solapur-division-revises-train-timetables-at-kalaburagi-ganagapur-road-hotgi-stations-from-june1-gdp/articleshow-dx152ao"/>
        </item>
        <item>
            <title><![CDATA[ಬೆಂಗಳೂರಿಂದ ಒಡಿಶಾಗೆ ತೆರಳುವ ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ವ್ಯತ್ಯಯ! ಮುಂಗಡ ಟಿಕೆಟ್ ಕಾಯ್ದಿರಿಸಿದವರು ಚೆಕ್‌ ಮಾಡಿ]]></title>
            <link>https://kannada.asianetnews.com/karnataka-districts/indian-railways-alert-howrah-bengaluru-duronto-and-major-express-trains-delayed-in-june-check-revised-timelines-gdp/articleshow-cbw6h3k</link>
            <guid isPermaLink="true">https://kannada.asianetnews.com/karnataka-districts/indian-railways-alert-howrah-bengaluru-duronto-and-major-express-trains-delayed-in-june-check-revised-timelines-gdp/articleshow-cbw6h3k</guid>
            <pubDate>Sat, 30 May 2026 19:13:27 +0530</pubDate>
            <description><![CDATA[ಒಡಿಶಾದಲ್ಲಿ ನಡೆಯುತ್ತಿರುವ ರೈಲ್ವೆ ನಿರ್ವಹಣಾ ಕಾಮಗಾರಿಯಿಂದಾಗಿ, ಜೂನ್ ತಿಂಗಳಲ್ಲಿ ಬೆಂಗಳೂರಿನಿಂದ ಹೌರಾ ಮತ್ತು ಕಾಮಕ್ಯಕ್ಕೆ ಸಂಚರಿಸುವ ಹಲವು ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಡುರಂಟೊ ಎಕ್ಸ್&zwnj;ಪ್ರೆಸ್ ಮತ್ತು ಸಾಪ್ತಾಹಿಕ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲುಗಳು ತಡವಾಗಿ ಸಂಚರಿಸಲಿವೆ ಅಥವಾ ಮಾರ್ಗಮಧ್ಯೆ ನಿಯಂತ್ರಣಕ್ಕೆ ಒಳಪಡಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kshamfcb642ftj4pq07ab7fn,imgname-indian-railways-rules--1--1779771784587.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರೈಲು ಮಾರ್ಗಗಳ ಆಧುನೀಕರಣ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ನಿರಂತರವಾಗಿ ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುತ್ತದೆ. ಇದೀಗ ಒಡಿಶಾದ ಪ್ರಮುಖ ರೈಲ್ವೆ ವಲಯದಲ್ಲಿ ಹಳಿಗಳ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ, ಜೂನ್ ತಿಂಗಳಲ್ಲಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹಲವು ಪ್ರಮುಖ ದೂರದೂದದ ರೈಲುಗಳ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಪರಿಷ್ಕರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ದಕ್ಷಿಣ ಪೂರ್ವ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ನಾರಾಯಣಗಢ-ಭದ್ರಕ್ ವಿಭಾಗದ 3ನೇ ರೈಲು ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸಗಳು ಹಾಗೂ ರೂಪ್ಸಾ ಯಾರ್ಡ್&zwnj;ನಲ್ಲಿ ಅತ್ಯಗತ್ಯ ನವೀಕರಣ ಪ್ರಕ್ರಿಯೆಗಳು ಭರದಿಂದ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸುವಂಯೆ ಕೋರಲಾಗಿದೆ.&lt;/p&gt;&lt;h2&gt;ವಿಳಂಬ ಹಾಗೂ ನಿಯಂತ್ರಣಕ್ಕೊಳಗಾಗಲಿರುವ ರೈಲುಗಳ ಸಂಪೂರ್ಣ ವಿವರ:&lt;/h2&gt;&lt;p&gt;ಕಾಮಗಾರಿಯ ಕಾರಣದಿಂದಾಗಿ ಹೌರಾ, ಬೆಂಗಳೂರು ಹಾಗೂ ಕಾಮಕ್ಯ ನಡುವೆ ಸಂಚರಿಸುವ ಸೂಪರ್&zwnj;ಫಾಸ್ಟ್ ಹಾಗೂ ಪ್ರೀಮಿಯಂ ರೈಲುಗಳ ಓಡಾಟದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಅದರ ಅಧಿಕೃತ ವಿವರಗಳು ಈ ಕೆಳಗಿನಂತಿವೆ:&lt;/p&gt;&lt;h3&gt;1. ಹೌರಾ - SMVT ಬೆಂಗಳೂರು ಡುರಂಟೊ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 12245)&lt;/h3&gt;&lt;p&gt;ಜೂನ್ 06ರ ಬದಲಾವಣೆ: ಈ ದಿನದಂದು ಹೌರಾದಿಂದ ಹೊರಡಬೇಕಾದ ಈ ರೈಲು ತನ್ನ ಮೂಲ ನಿಲ್ದಾಣದಿಂದ ನಿಗದಿತ ಸಮಯಕ್ಕಿಂತ 60 ನಿಮಿಷ (1 ಗಂಟೆ) ತಡವಾಗಿ ಪ್ರಯಾಣ ಆರಂಭಿಸಲಿದೆ.&lt;/p&gt;&lt;p&gt;ಜೂನ್ 07ರ ಬದಲಾವಣೆ: ಮರುದಿನ ಅಂದರೆ ಜೂನ್ 7 ರಂದು ಇದೇ ದಿಕ್ಕಿನಲ್ಲಿ ಸಂಚರಿಸುವ ರೈಲು ಹೌರಾ ರೈಲು ನಿಲ್ದಾಣದಿಂದ ಬರೋಬ್ಬರಿ 120 ನಿಮಿಷ (2 ಗಂಟೆ) ತಡವಾಗಿ ತನ್ನ ಸಂಚಾರವನ್ನು ಆರಂಭಿಸಲಿದೆ.&lt;/p&gt;&lt;h3&gt;2. SMVT ಬೆಂಗಳೂರು - ಹೌರಾ ಡುರಂಟೊ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 12246)&lt;/h3&gt;&lt;p&gt;ಜೂನ್ 05ರ ಬದಲಾವಣೆ: ಬೆಂಗಳೂರಿನಿಂದ ಹೌರಾ ಕಡೆಗೆ ಸಂಚರಿಸುವ ಈ ರೈಲನ್ನು ಜೂನ್ 5 ರಂದು ಮಾರ್ಗ ಮಧ್ಯದಲ್ಲಿ ಸುಮಾರು ಎರಡು ಗಂಟೆಗಳ ಕಾಲ (120 ನಿಮಿಷ) ನಿಯಂತ್ರಣಕ್ಕೆ (Hold) ಒಳಪಡಿಸಲಾಗುತ್ತದೆ. ಇದರಿಂದಾಗಿ ಈ ರೈಲು ನಿಯಮಿತ ಸಮಯಕ್ಕಿಂತ ತಡವಾಗಿ ತಲುಪಲಿದೆ.&lt;/p&gt;&lt;h3&gt;3. SMVT ಬೆಂಗಳೂರು - ಕಾಮಕ್ಯ ಸಾಪ್ತಾಹಿಕ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 12551)&lt;/h3&gt;&lt;p&gt;ಜೂನ್ 06ರ ಬದಲಾವಣೆ: ಬೆಂಗಳೂರಿನ SMVT ನಿಲ್ದಾಣದಿಂದ ಹೊರಡುವ ಈ ಸಾಪ್ತಾಹಿಕ ರೈಲನ್ನು ಜೂನ್ 06 ರಂದು ಮಾರ್ಗದ ನಡುವೆ ಸುಮಾರು ಮೂರು ಗಂಟೆಗಳ ಕಾಲ (180 ನಿಮಿಷ) ನಿಯಂತ್ರಿಸಿ (ತಡೆಹಿಡಿದು) ಚಲಾಯಿಸಲಾಗುತ್ತದೆ.&lt;/p&gt;&lt;h2&gt;ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ಮಹತ್ವದ ಸಲಹೆ&lt;/h2&gt;&lt;p&gt;ಅತ್ಯಗತ್ಯ ರೈಲ್ವೆ ಸುರಕ್ಷತಾ ಕಾಮಗಾರಿ ಇದಾಗಿರುವುದರಿಂದ ರೈಲುಗಳ ಸಂಚಾರ ವಿಳಂಬ ಅನಿವಾರ್ಯವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ತಾತ್ಕಾಲಿಕ ವೇಳಾಪಟ್ಟಿ ಪರಿಷ್ಕರಣೆಯಿಂದ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಗೆ ರೈಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿದೆ.&lt;/p&gt;&lt;p&gt;ಹೌರಾ ಮತ್ತು ಬೆಂಗಳೂರು ಎರಡು ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ಈ ಮೇಲಿನ ಬದಲಾವಣೆಗಳನ್ನು ಕಡ್ಡಾಯವಾಗಿ ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕು. ನಿಲ್ದಾಣಕ್ಕೆ ಹೊರಡುವ ಮುನ್ನ ರೈಲ್ವೆ ಇಲಾಖೆಯ ಅಧಿಕೃತ ವೆಬ್&zwnj;ಸೈಟ್ ಅಥವಾ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (NTES) ಮೊಬೈಲ್ ಆ್ಯಪ್ ಮೂಲಕ ರೈಲುಗಳ ಪ್ರಸ್ತುತ ಲೈವ್ ಸ್ಟೇಟಸ್ (Live Status) ಪರಿಶೀಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/indian-railways-alert-howrah-bengaluru-duronto-and-major-express-trains-delayed-in-june-check-revised-timelines-gdp/articleshow-cbw6h3k"/>
        </item>
        <item>
            <title><![CDATA[ದೇವೇಗೌಡ್ರ ಆಶೀರ್ವಾದ ಪಡೆದ ಜೋಶ್​ನಲ್ಲಿ Bigg Boss ಜಾಹ್ನವಿ: ನಗರಸಭೆ, ಜನರಿಗೆ ಫುಲ್​ ಕ್ಲಾಸ್​]]></title>
            <link>https://kannada.asianetnews.com/gallery/entertainment/bigg-boss-jhanvi-about-patholes-and-waste-problem-in-bengaluru-hebbala-suc-9xwi9wd</link>
            <guid isPermaLink="true">https://kannada.asianetnews.com/gallery/entertainment/bigg-boss-jhanvi-about-patholes-and-waste-problem-in-bengaluru-hebbala-suc-9xwi9wd</guid>
            <pubDate>Sat, 30 May 2026 19:09:02 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ನಟಿ ಮತ್ತು ನಿರೂಪಕಿ ಜಾಹ್ನವಿ, ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂಬರುವ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಅವರು, &amp;nbsp;ಭೂಪಸಂದ್ರ ವಾರ್ಡ್&zwnj;ನ &amp;nbsp;ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswhht6kdtwxn4ya614jsk6e,imgname-bigg-boss-jhanvi-1780148136146.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ನಟಿ ಮತ್ತು ನಿರೂಪಕಿ ಜಾಹ್ನವಿ, ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂಬರುವ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಅವರು, &amp;nbsp;ಭೂಪಸಂದ್ರ ವಾರ್ಡ್&zwnj;ನ &amp;nbsp;ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಖ್ಯಾತ ಆ್ಯಂಕರ್ ಆಗಿಯೂ ನಟಿಯಾಗಿಯೂ ಗುರುತಿಸಿಕೊಂಡಿರೋ ಜಾಹ್ನವಿ (Bigg Boss Jhanvi) ಅವರು ಬಿಗ್​ಬಾಸ್​ 12ಕ್ಕೆ ಹೋಗಿ ಬಂದ ಮೇಲೆ ಬಿಗ್​ಬಾಸ್​ ಜಾಹ್ನವಿಯಾಗಿದ್ದಾರೆ. ಬಿಗ್​ಬಾಸ್​ನಿಂದ ಬಂದ ಮೇಲೆ ಸಹಜವಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಜೊತೆಗೆನೇ ಒಳ್ಳೆಯ ಆಫರ್ಸ್​ಗಳೂ ಬರುತ್ತಿವೆ.&lt;/p&gt;&lt;img&gt;&lt;p&gt;ನಟಿ, ನಿರೂಪಕಿಯಾಗಿ ಇಲ್ಲಿಯವರೆಗೆ ಗುರುತಿಸಿಕೊಂಡಿದ್ದ ಜಾಹ್ನವಿ ಇದೀಗ ರಾಜಕಾರಣಿಯಾಗಿದ್ದಾರೆ. ಈಚೆಗಷ್ಟೇ ಅವರು ಜೆಡಿಎಸ್​ ಪಕ್ಷವನ್ನು ಸೇರಿದ್ದಾರೆ. ಎಚ್​ಜಿಎಸ್​ ನಾಯಕ, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಟಿ ಪಕ್ಷವನ್ನು ಸೇರಿದರು.&lt;/p&gt;&lt;img&gt;&lt;p&gt;ಇದೀಗ ಅವರಿಗೆ ದೊಡ್ಡ ಹುದ್ದೆ ಏರುವ ಆಸೆನಾ ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ಜಾಹ್ನವಿ ಅವರು, ಸದ್ಯ ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಚುನಾವಣೆ ನಡೆಯುತ್ತಿದೆ. ಆಗಸ್ಟ್​ 31ರ ಒಳಗೆ ಮಾಡುವಂತೆ ಸುಪ್ರೀಂಕೋರ್ಟ್​ ಕೂಡ ಹೇಳಿದೆ. ನಾನು ಪವರ್​ ಆಕಾಂಕ್ಷಿ ಅಲ್ಲ ಅಂತ ಖಂಡಿತ ಹೇಳುವುದಿಲ್ಲ ಎನ್ನುತ್ತಲೇ ಇದರಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಜಾಹ್ನವಿ.&lt;/p&gt;&lt;img&gt;&lt;p&gt;ಇದರ ಬೆನ್ನಲ್ಲೇ ಮೊನ್ನೆಯಷ್ಟೇ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಅವರಿಗೆ ಆಶೀರ್ವಾದ ಪಡೆದು ಬಂದಿದ್ದಾರೆ ನಟಿ. ಇದರ ಬೆನ್ನಲ್ಲೇ ಇದೀಗ ಫುಲ್​ ಆ್ಯಕ್ಟೀವ್​ ಆಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲ ರೀತಿಯ ರೆಡಿ ಮಾಡಿಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರ , ಭೂಪಸಂದ್ರ ವಾರ್ಡ್ ರಸ್ತೆಗಳ ದುಸ್ಥಿತಿ ಹಾಗೂ ಕಸದ ಗೋಪುರದ ಬಗ್ಗೆ ನಟಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಎಲ್ಲೆಂದರಲ್ಲಿ ಕಸ ಎಸೆಯುವುದು ಹಲವರಿಗೆ ಕೆಟ್ಟ ಚಾಳಿ ಆಗಿಬಿಟ್ಟಿದೆ. ಮನೆ ಬಾಗಿಲಿಗೆ ಕಸದ ಗಾಡಿ ಬಂದರೂ, ತಾವು ಇಷ್ಟಪಟ್ಟಲ್ಲಿ ಕಸ ಎಸೆಯುವುದೇ ಅವರಿಗೆ ವಿಕೃತ ಖುಷಿ ನೀಡುತ್ತದೆ. ಈ ಬಗ್ಗೆ ಜಾಹ್ನವಿ ಜನರ ಗಮನ ಸೆಳೆದಿದ್ದಾರೆ.&lt;/p&gt;&lt;img&gt;&lt;p&gt;ಇದೇ ವೇಳೆ ಈ ವಾರ್ಡ್​ನ ರಸ್ತೆಯ ದುಃಸ್ಥಿತಿಯ ಬಗ್ಗೆ ಸರ್ಕಾರದ ಗಮನವನ್ನೂ ಸೆಳೆದಿದ್ದಾರೆ ಜಾಹ್ನವಿ. ಇಲ್ಲಿ ಓಡಾಡುವ ವಾಹನ ಸವಾರರಿಗೆ ಎಷ್ಟು ಕಷ್ಟವಾಗುತ್ತಿದೆ ಎನ್ನುವುದನ್ನು ಹೇಳಿದ್ದಾರೆ. ನಟಿಯ ಕಾರ್ಯಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/bigg-boss-jhanvi-about-patholes-and-waste-problem-in-bengaluru-hebbala-suc-9xwi9wd"/>
        </item>
        <item>
            <title><![CDATA[ಬೆಂಗಳೂರಿನ ಪ್ರಮುಖ ಅಂಡರ್ ಬ್ರಿಡ್ಜ್ ಬಂದ್! ಪರ್ಯಾಯ ಮಾರ್ಗ ಪ್ರಕಟಿಸಿದ ಟ್ರಾಫಿಕ್ ಪೊಲೀಸ್]]></title>
            <link>https://kannada.asianetnews.com/gallery/karnataka-districts/kr-puram-traffic-advisory-lowry-under-bridge-closed-completely-from-june-4-to-9-alternate-routes-issued-gdp-v6ntkcg</link>
            <guid isPermaLink="true">https://kannada.asianetnews.com/gallery/karnataka-districts/kr-puram-traffic-advisory-lowry-under-bridge-closed-completely-from-june-4-to-9-alternate-routes-issued-gdp-v6ntkcg</guid>
            <pubDate>Sat, 30 May 2026 18:57:45 +0530</pubDate>
            <description><![CDATA[&lt;p&gt;ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಸಮೀಪದ ಲೌರಿ ರೋಡ್ ಅಂಡರ್ ಬ್ರಿಡ್ಜ್&zwnj; &amp;nbsp;ಜೂನ್ 4 ರಿಂದ 9 ರವರೆಗೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ, ವಾಹನ ಸವಾರರು ಕೆ.ಆರ್. ಪುರಂ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಪರ್ಯಾಯ ಮಾರ್ಗವಾಗಿ ಬಳಸಲು ಬೆಂಗಳೂರು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswfg24xfdrnr1b6gh03vdzb,imgname-lowry-road-under-bridge-kr-puram--3--1780145981597.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಸಮೀಪದ ಲೌರಿ ರೋಡ್ ಅಂಡರ್ ಬ್ರಿಡ್ಜ್&zwnj; &amp;nbsp;ಜೂನ್ 4 ರಿಂದ 9 ರವರೆಗೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ, ವಾಹನ ಸವಾರರು ಕೆ.ಆರ್. ಪುರಂ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಪರ್ಯಾಯ ಮಾರ್ಗವಾಗಿ ಬಳಸಲು ಬೆಂಗಳೂರು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ, ರಸ್ತೆ ನವೀಕರಣ ಅಥವಾ ರೈಲ್ವೆ ಮೇಲ್ಸೇತುವೆಗಳ ದುರಸ್ತಿ ಕಾರ್ಯಗಳಿಂದಾಗಿ ನಿರಂತರವಾಗಿ ಸಂಚಾರ ಮಾರ್ಗಗಳಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಇದೀಗ ಕೃಷ್ಣರಾಜಪುರಂ (ಕೆ.ಆರ್. ಪುರಂ) ರೈಲ್ವೆ ನಿಲ್ದಾಣದ ಸಮೀಪವಿರುವ ಪ್ರಮುಖ ಕೊಂಡಿಯಾದ 'ಲೌರಿ ರೋಡ್ ಅಂಡರ್ ಬ್ರಿಡ್ಜ್'ನಲ್ಲಿ (Lowry Road Under Bridge) ನೈಋತ್ಯ ರೈಲ್ವೆಯು ಅತ್ಯಗತ್ಯ ತಾಂತ್ರಿಕ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.&lt;/p&gt;&lt;p&gt;ಇಲ್ಲಿನ ರೈಲ್ವೆ ಸೇತುವೆಯ ಹಳೆಯ ಸ್ಲ್ಯಾಬ್&zwnj;ಗಳನ್ನು ಬದಲಾಯಿಸುವ ಮಹತ್ವದ ಇಂಜಿನಿಯರಿಂಗ್ ಕೆಲಸ ನಡೆಯಲಿರುವುದರಿಂದ, ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಜೂನ್ 4ರಿಂದ ಭಾರಿ ಸಂಚಾರ ನಿರ್ಬಂಧಗಳನ್ನು ಹೇರಲಾಗಿದೆ. ವಾಹನ ಸವಾರರ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸರು ಪರ್ಯಾಯ ಮಾರ್ಗಗಳ ಪ್ರಕಟಣೆಯನ್ನು ಹೊರಡಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು ವಿಭಾಗದ ನೈಋತ್ಯ ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಜೂನ್ 4 ರಿಂದ ಜೂನ್ 9 ರವರೆಗೆ ಲೌರಿ ಅಂಡರ್ ಬ್ರಿಡ್ಜ್ ಮುಖಾಂತರ ಸಾಗುವ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಈ 6 ದಿನಗಳ ಅವಧಿಯಲ್ಲಿ ಯಾವುದೇ ರೀತಿಯ ವಾಹನಗಳ ಸಂಚಾರಕ್ಕೆ ಇಲ್ಲಿ ಅವಕಾಶವಿರುವುದಿಲ್ಲ.&lt;/p&gt;&lt;img&gt;&lt;p&gt;ಕೆ.ಆರ್.ಪುರಂ, ರಾಮಮೂರ್ತಿ ನಗರ ಮತ್ತು ಐಟಿಐ ಕಾಲೋನಿ ಕಡೆಗೆ ಹೋಗುವವರಿಗೆ: ಲೌರಿ ಅಂಡರ್ ಬ್ರಿಡ್ಜ್ ಮೂಲಕ ಈ ಪ್ರದೇಶಗಳಿಗೆ ತೆರಳುತ್ತಿದ್ದ ಸವಾರರು ಜೂನ್ 4 ರಿಂದ 9 ರವರೆಗೆ ಈ ಮಾರ್ಗದ ಬದಲಾಗಿ ಕೆ.ಆರ್. ಪುರಂ ಕೇಬಲ್-ಸ್ಟೇಯ್ಡ್ ಸೇತುವೆಯನ್ನು (Cable-Stayed Bridge) ಪರ್ಯಾಯ ಮಾರ್ಗವಾಗಿ ಬಳಸಬೇಕಾಗುತ್ತದೆ.&lt;/p&gt;&lt;h2&gt;ಐಟಿಪಿಎಲ್ (ITPL) ಮತ್ತು ವೈಟ್&zwnj;ಫೀಲ್ಡ್ ಕಡೆಗೆ ಸಾಗುವವರಿಗೆ&lt;/h2&gt;&lt;p&gt;ಇದೇ ಅವಧಿಯಲ್ಲಿ ಲೌರಿ ಅಂಡರ್ ಬ್ರಿಡ್ಜ್ ಮಾರ್ಗವಾಗಿ ಐಟಿಪಿಎಲ್ ಹಾಗೂ ವೈಟ್&zwnj;ಫೀಲ್ಡ್ ಕಡೆಗೆ ಹೋಗುವ ರಸ್ತೆಯೂ ಬಂದ್ ಆಗಿರುತ್ತದೆ. ಈ ಭಾಗದ ಪ್ರಯಾಣಿಕರು ಸಹ ಕೆ.ಆರ್. ಪುರಂ ಕೇಬಲ್ ಸೇತುವೆಯ ಮೇಲಿಂದಲೇ ಸಂಚರಿಸಲು ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಲೌರಿ ಅಂಡರ್ ಬ್ರಿಡ್ಜ್ ಬಂದ್ ಆಗುವುದರ ಜೊತೆಗೆ, ಕೆ.ಆರ್. ಪುರಂ-ಐಟಿಪಿಎಲ್ ಮುಖ್ಯ ರಸ್ತೆಯಲ್ಲೂ ಒಂದು ದಿನದ ಮಟ್ಟಿಗೆ ಸಂಚಾರ ನಿಯಂತ್ರಣ ಹೇರಲಾಗಿದೆ. ಜೂನ್ 7ರ ಸಂಜೆ 6:00 ಗಂಟೆಯಿಂದ ಜೂನ್ 8ರ ಬೆಳಗ್ಗೆ 6:00 ಗಂಟೆಯವರೆಗೆ (ಒಟ್ಟು 12 ಗಂಟೆಗಳು) ನಿಯಂತ್ರಣ ಇರಲಿದೆ.&lt;/p&gt;&lt;p&gt;ಐಟಿಪಿಎಲ್/ವೈಟ್&zwnj;ಫೀಲ್ಡ್ ಕಡೆಗೆ ಹೋಗುವ ಮುಖ್ಯ ರಸ್ತೆಯ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ ವಾಹನ ಸವಾರರು ರೋಡ್ ಅಂಡರ್ ಬ್ರಿಡ್ಜ್ (RUB) ಬಳಿ ರೈಲ್ವೆ ಇಲಾಖೆಯು ಒದಗಿಸಿರುವ ವಿಶೇಷ 'ತಿರುವು ರಸ್ತೆ'ಯನ್ನು (Diversion Road) ಬಳಸಿಕೊಂಡು ತಮ್ಮ ಪ್ರಯಾಣ ಮುಂದುವರಿಸಬಹುದು.&lt;/p&gt;&lt;p&gt;ಅತ್ಯಗತ್ಯ ರೈಲ್ವೆ ಸುರಕ್ಷತಾ ಕಾಮಗಾರಿ ಇದಾಗಿರುವುದರಿಂದ ಸಂಚಾರ ವಿಳಂಬ ಅನಿವಾರ್ಯವಾಗಿದೆ. ಉಂಟಾಗಲಿರುವ ತಾತ್ಕಾಲಿಕ ಅನಾನುಕೂಲತೆಗೆ ರೈಲ್ವೆ ಅಧಿಕಾರಿಗಳು ಹಾಗೂ ಬೆಂಗಳೂರು ಸಂಚಾರಿ ಪೊಲೀಸರು ವಿಷಾದ ವ್ಯಕ್ತಪಡಿಸಿದ್ದು, ನಾಗರಿಕರು ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಕೋರಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/kr-puram-traffic-advisory-lowry-under-bridge-closed-completely-from-june-4-to-9-alternate-routes-issued-gdp-v6ntkcg"/>
        </item>
        <item>
            <title><![CDATA[ವೇತನದ ಮುಕ್ಕಾಲು ಭಾಗ ಬಾಡಿಗೆ, ಟ್ರಾಫಿಕ್ ಕಿರಿಕಿರಿ ಇದ್ದರೂ ಬೆಂಗಳೂರಿಗೆ ಬಂದೋರು ಈ ಕಾರಣಕ್ಕೆ ಊರಿಗೆ  ಹಿಂತಿರುಗುವುದಿಲ್ಲವಂತೆ!]]></title>
            <link>https://kannada.asianetnews.com/karnataka-districts/the-ultimate-bengaluru-paradox-why-commuters-complain-about-rent-and-traffic-but-refuse-to-leave-gdp/articleshow-krbnfwo</link>
            <guid isPermaLink="true">https://kannada.asianetnews.com/karnataka-districts/the-ultimate-bengaluru-paradox-why-commuters-complain-about-rent-and-traffic-but-refuse-to-leave-gdp/articleshow-krbnfwo</guid>
            <pubDate>Sat, 30 May 2026 17:50:53 +0530</pubDate>
            <description><![CDATA[ಬೆಂಗಳೂರಿನ ಟ್ರಾಫಿಕ್, ದುಬಾರಿ ಬಾಡಿಗೆಯಂತಹ ಸಮಸ್ಯೆಗಳ ಬಗ್ಗೆ ಜನರು ದೂರುತ್ತಾರೆ, ಆದರೂ ಈ ನಗರವನ್ನು ಬಿಟ್ಟು ಹೋಗಲು ಇಷ್ಟಪಡುವುದಿಲ್ಲ. ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದರಲ್ಲಿ, ಬಿಹಾರ ಮೂಲದ ಯುವಕನೊಬ್ಬ ಈ ವಿರೋಧಾಭಾಸಕ್ಕೆ ಬೆಂಗಳೂರಿನ ಆಹ್ಲಾದಕರ ಹವಾಮಾನವೇ ಪ್ರಮುಖ ಕಾರಣ ಎಂದು ವಿವರಿಸಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kswcebhznp1x018f445823b5,imgname-bengaluru-1780142779967.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನೀವು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಸಿಸುವ ಯಾವುದೇ ಒಬ್ಬ ಸಾಮಾನ್ಯ ನಾಗರಿಕನನ್ನು ಭೇಟಿಯಾಗಿ, &quot;ನಿಮಗೆ ಈ ನಗರದಲ್ಲಿ ಏನು ಇಷ್ಟವಿಲ್ಲ?&quot; ಎಂದು ಕೇಳಿ ನೋಡಿ. ನಿಮಗೆ ಎಲ್ಲರಿಂದಲೂ ಬಹುತೇಕ ಒಂದೇ ರೀತಿಯ ಉತ್ತರ ಬರುತ್ತದೆ. ಉಸಿರುಗಟ್ಟಿಸುವ ಟ್ರಾಫಿಕ್ ಜ್ಯಾಮ್, ಕೈಗೆಟುಕದ ದುಬಾರಿ ಮನೆ ಬಾಡಿಗೆ, ಕಚೇರಿ ತಲುಪಲು ಮಾಡಬೇಕಾದ ಸುದೀರ್ಘ ಪ್ರಯಾಣದ ಸಮಯ.&lt;/p&gt;&lt;p&gt;ಬೆಳಗ್ಗೆಯಿಂದ ರಾತ್ರಿಯವರೆಗೆ ದಿನದ ಬಹುತೇಕ ಪ್ರತಿ ಗಂಟೆಯೂ ಇಲ್ಲಿನ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿರುತ್ತವೆ. ಆದರೆ, ಆಶ್ಚರ್ಯದ ಸಂಗತಿ ಎಂದರೆ, ಅದೇ ದೂರು ನೀಡಿದ ಜನರನ್ನು ಹಾಗಾದರೆ ನೀವು ಬೆಂಗಳೂರು ಬಿಟ್ಟು ಬೇರೆ ನಗರಕ್ಕೆ ಹೋಗುತ್ತೀರಾ? ಎಂದು ಕೇಳಿದರೆ, ಅವರಲ್ಲಿ ಶೇಕಡಾ 90 ರಷ್ಟು ಜನರಿಂದ ಬರುವ ಉತ್ತರ ಖಂಡಿತವಾಗಿಯೂ ಇಲ್ಲ ಎಂದಾಗಿರುತ್ತದೆ!&lt;/p&gt;&lt;p&gt;ಬೆಂಗಳೂರಿನ ಬಗ್ಗೆ ಇರುವ ಅತ್ಯಂತ ವಿಚಿತ್ರ ಮತ್ತು ಆಪ್ತವಾದ ವಿಷಯವೇ ಇದು. ಜನರು ಇದರ ಮೂಲಸೌಕರ್ಯಗಳ ಬಗ್ಗೆ ನಿರಂತರವಾಗಿ ದೂರು ನೀಡುತ್ತಾರೆ, ಆದರೆ ಹೇಗೋ ಈ ನಗರವನ್ನು ಪ್ರೀತಿಸುತ್ತಾ ವರ್ಷಗಳ ಕಾಲ ಇಲ್ಲಿಯೇ ಉಳಿದುಬಿಡುತ್ತಾರೆ. ಇತ್ತೀಚೆಗೆ ಬಿಹಾರ ಮೂಲದ ಯುವಕನೊಬ್ಬ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಬೆಂಗಳೂರಿನ ಈ ವಿರೋಧಾಭಾಸವನ್ನು (Paradox) ಅತ್ಯಂತ ರೋಚಕವಾಗಿ ಸೆರೆಹಿಡಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.&lt;/p&gt;&lt;h2&gt;ಜನರಿಗೆ ಇಲ್ಲಿಂದ ಹೋಗಲು ಮನಸ್ಸಾಗಲ್ಲ&lt;/h2&gt;&lt;p&gt;ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ವಿಡಿಯೋವನ್ನು ಇನ್&zwnj;ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಆದ 'ಅಂಕಿತ್' ಎಂಬ ಯುವಕ ಸೃಷ್ಟಿಸಿದ್ದಾನೆ. ಭಾರತದ ಇತರ ಮಹಾನಗರಗಳಿಗಿಂತ ಬೆಂಗಳೂರನ್ನು ಯಾವುದು ಸಂಪೂರ್ಣವಾಗಿ ಭಿನ್ನವಾಗಿಸುತ್ತದೆ ಎಂಬುದನ್ನು ಆತ ತನ್ನ ವಿಡಿಯೋದಲ್ಲಿ ಸೂಕ್ಷ್ಮವಾಗಿ ವಿವರಿಸಿದ್ದಾನೆ.&lt;/p&gt;&lt;p&gt;ಅಂಕಿತ್ ಅವರ ಅವಲೋಕನ ಅತ್ಯಂತ ಸರಳ ಹಾಗೂ ಸತ್ಯವಾಗಿತ್ತು. ಹೊರಗಿನಿಂದ ಬಂದು ಬೆಂಗಳೂರಿನಲ್ಲಿ ನೆಲೆಸುವ ಅನೇಕ ಯುವ ವೃತ್ತಿಪರರು ಆರಂಭದಲ್ಲಿ ಒಂಟಿತನವನ್ನು ಎದುರಿಸುತ್ತಿರಬಹುದು, ಕೆಲಸದ ಒತ್ತಡದಿಂದ ಆತಂಕಕ್ಕೆ ಒಳಗಾಗಿರಬಹುದು, ಪ್ರತೀ ವಾರ ಟ್ರಾಫಿಕ್&zwnj;ನಲ್ಲಿ ಸಿಲುಕಿ ಗಂಟೆಗಟ್ಟಲೆ ಕಾಲ ಕಳೆಯುತ್ತಿರಬಹುದು ಅಥವಾ ಅವರ ದುಡಿಮೆಯ ಸಂಬಳದ ಬಹುದೊಡ್ಡ ಭಾಗವು ಮನೆ ಬಾಡಿಗೆಗೇ ಹೋಗುತ್ತಿರಬಹುದು. ಆದರೂ, ಇವೆಲ್ಲಾ ಕಷ್ಟಗಳ ಮಧ್ಯೆಯೂ ಯಾರೂ ಬೆಂಗಳೂರನ್ನು ತೊರೆದು ಹೋಗಲು ಇಷ್ಟಪಡುವುದಿಲ್ಲ!&lt;/p&gt;&lt;h2&gt;ಉದ್ಯೋಗಗಳ ಏಕಸ್ವಾಮ್ಯವಿಲ್ಲದಿದ್ದರೂ ಬೆಂಗಳೂರಿಗೇ ಏಕೆ ಮೊದಲ ಆದ್ಯತೆ?&lt;/h2&gt;&lt;p&gt;ಅಂಕಿತ್ ಹೇಳುವ ಪ್ರಕಾರ, ಐಟಿ ಮತ್ತು ಕಾರ್ಪೊರೇಟ್ ಉದ್ಯೋಗಗಳ ವಿಷಯಕ್ಕೆ ಬಂದರೆ ಭಾರತದಲ್ಲಿ ಕೇವಲ ಬೆಂಗಳೂರು ಮಾತ್ರ ಏಕೈಕ ಆಯ್ಕೆಯಾಗಿ ಉಳಿದಿಲ್ಲ. ಇಂದು ಗುರಗಾಂವ್, ದೆಹಲಿ, ಹೈದರಾಬಾದ್, ಮುಂಬೈ ಮತ್ತು ಚೆನ್ನೈನಂತಹ ನಗರಗಳಲ್ಲೂ ಅಪಾರ ಅವಕಾಶಗಳು ಹಾಗೂ ಬೃಹತ್ ಐಟಿ ಕಂಪನಿಗಳಿವೆ. ಆದರೂ ದೇಶದ ಮೂಲೆ ಮೂಲೆಗಳಿಂದ ಬರುವ ಉದ್ಯೋಗಿಗಳು ಬೆಂಗಳೂರನ್ನೇ ತಮ್ಮ ಮೊದಲ ಮನೆಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ಇದಕ್ಕೆ ಅಂಕಿತ್ ನೀಡಿದ ಉತ್ತರ ಆಶ್ಚರ್ಯಕರ ಹಾಗೂ ನದಿಯಷ್ಟೇ ಸ್ಪಷ್ಟವಾಗಿತ್ತು: ಅದುವೇ ಬೆಂಗಳೂರಿನ ಅದ್ಭುತ &quot;ಹವಾಮಾನ&quot; (Weather).&lt;/p&gt;&lt;p&gt;ನಿಮ್ಮ ಕಷ್ಟಪಟ್ಟು ಗಳಿಸಿದ ಸಂಬಳದ ಅರ್ಧದಷ್ಟು ಭಾಗ ಕೇವಲ ಅಪಾರ್ಟ್&zwnj;ಮೆಂಟ್ ಬಾಡಿಗೆಗೆ ಖರ್ಚಾಗುತ್ತಿದ್ದರೂ, ಬೆಂಗಳೂರಿನ ಆಹ್ಲಾದಕರ ಹಾಗೂ ತಂಪಾದ ಹವಾಮಾನವು ನಿಮ್ಮ ಸಕಲ ಆಯಾಸವನ್ನು ಮರೆಸಿ, ನಿಮ್ಮನ್ನು ಹೇಗಾದರೂ ಮಾಡಿ ಇಲ್ಲಿಯೇ ಇರಲು ಮನವೊಲಿಸುತ್ತದೆ ಎಂದು ಆತ ತಮಾಷೆ ಮಾಡುತ್ತಲೇ ಸತ್ಯ ಬಿಚ್ಚಿಟ್ಟಿದ್ದಾನೆ. ಭಾರತದ ಬೇರೆ ಪ್ರಮುಖ ನಗರಗಳಾದ ದೆಹಲಿ ಅಥವಾ ಮುಂಬೈನಲ್ಲಿ ಉರಿ ಬೇಸಿಗೆಯನ್ನು ಕಳೆದ ಯಾರಿಗಾದರೂ, ಬೆಂಗಳೂರಿನ ಹವಾಮಾನದ ಮಹತ್ವ ಏನೆಂಬುದು ಸುಲಭವಾಗಿ ಅರ್ಥವಾಗುತ್ತದೆ.&lt;/p&gt;&lt;h2&gt;ನೆಟ್ಟಿಗರ ಮನಗೆದ್ದ ವಿಡಿಯೋ: ಕಮೆಂಟ್ ಬಾಕ್ಸ್ ಈಗ 'ಸಪೋರ್ಟ್ ಗ್ರೂಪ್'!&lt;/h2&gt;&lt;p&gt;ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿತು. ಕಾಮೆಂಟ್&zwnj;ಗಳ ವಿಭಾಗವು ಬೆಂಗಳೂರು ನಿವಾಸಿಗಳ ಪಾಲಿಗೆ ಒಂದು ದೈತ್ಯ ಬೆಂಬಲ ಗುಂಪಿನಂತೆ (Support Group) ಬದಲಾಯಿತು. ಸಾವಿರಾರು ಕೆಲಸ ಮಾಡುವ ವೃತ್ತಿಪರರು ಮತ್ತು ನಿವಾಸಿಗಳು ಅಂಕಿತ್ ಅವರ ಮಾತುಗಳಿಗೆ ಸಂಪೂರ್ಣ ಸಮ್ಮತಿ ಸೂಚಿಸಿದ್ದಾರೆ.&lt;/p&gt;&lt;h2&gt;ನೆಟ್ಟಿಗರ ಪ್ರತಿಕ್ರಿಯೆಗಳು:&lt;/h2&gt;&lt;p&gt;ಒಬ್ಬ ಬಳಕೆದಾರರು, ಇದು ನೂರಕ್ಕೆ ನೂರು ನಿಜ. ಬೆಂಗಳೂರಿನ ಟ್ರಾಫಿಕ್ ಎಷ್ಟೇ ಕಾಡಿದರೂ ಇಲ್ಲಿನ ಸಂಜೆ ಹೊತ್ತಿನ ತಂಗಾಳಿ ಎಲ್ಲವನ್ನೂ ಮರೆಸುತ್ತದೆ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಮತ್ತೊಬ್ಬ ಬಳಕೆದಾರರು, ಬೆಂಗಳೂರಿನ ಹವಾಮಾನ ಮತ್ತು ಇಲ್ಲಿನ ಮುಕ್ತ ಸಂಸ್ಕೃತಿ ತುಂಬಾ ಚೆನ್ನಾಗಿದೆ. ಇಲ್ಲಿ ಒಮ್ಮೆ ಬಂದು ಬದುಕಿದವರು ಬೇರೆಲ್ಲೂ ಬಾಳಲಾರರು ಎಂದು ಕಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ದೈನಂದಿನ ಹಲವಾರು ಸವಾಲುಗಳು, ವೈಯಕ್ತಿಕ ಅಥವಾ ವೃತ್ತಿಪರ ಒತ್ತಡಗಳಿದ್ದರೂ ಬೆಂಗಳೂರು ನಗರವು ತನ್ನ ಒಡಲಿಗೆ ಬಂದವರನ್ನು ಹೇಗೆ ಪ್ರೀತಿಯಿಂದ ಹಿಡಿದಿಟ್ಟುಕೊಳ್ಳುತ್ತದೆ ಎಂಬುದಕ್ಕೆ ಅಂಕಿತ್ ಅವರ ಈ ವೈರಲ್ ವಿಡಿಯೋವೇ ಸಾಕ್ಷಿಯಾಗಿದೆ. ಸವಾಲುಗಳ ನಡುವೆಯೂ ಸೌಕರ್ಯ ಮತ್ತು ಪ್ರಕೃತಿಯ ಸೌಂದರ್ಯವನ್ನು ಸಮತೋಲನಗೊಳಿಸಿರುವ ಬೆಂಗಳೂರು, ಇಂದಿಗೂ ಭಾರತದ ಅತ್ಯಂತ ಪ್ರಭಾವಶಾಲಿ ಮತ್ತು ಪ್ರೀತಿಪಾತ್ರ ಆರ್ಥಿಕ ನಗರಿಯಾಗಿ ಮುನ್ನುಗ್ಗುತ್ತಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/the-ultimate-bengaluru-paradox-why-commuters-complain-about-rent-and-traffic-but-refuse-to-leave-gdp/articleshow-krbnfwo"/>
        </item>
        <item>
            <title><![CDATA[ಸಿದ್ದರಾಮಯ್ಯನವರೇ, ಬಿಡುಗಡೆಯಾದ ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ. ಎಲ್ಲೋಯ್ತು, ಲೆಕ್ಕ ಕೊಡ್ತೀರಾ]]></title>
            <link>https://kannada.asianetnews.com/politics/suresh-kumar-asking-siddaramaih-about-5-thousand-crores-of-bhagyalakshmi-scheme-suc/articleshow-pns8qag</link>
            <guid isPermaLink="true">https://kannada.asianetnews.com/politics/suresh-kumar-asking-siddaramaih-about-5-thousand-crores-of-bhagyalakshmi-scheme-suc/articleshow-pns8qag</guid>
            <pubDate>Sat, 30 May 2026 15:26:33 +0530</pubDate>
            <description><![CDATA[ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಸುರೇಶ್ ಕುಮಾರ್ ಅವರು ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ರೂಪಾಯಿ ಹಣದ ಬಗ್ಗೆ ಪ್ರಶ್ನಿಸಿದ್ದಾರೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಆರೋಪಿಸಿ, ಈ ಹಣದ ಹಣೆಬರಹದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksw4yje6mfr7d2x84kvthgrr,imgname-siddaramaiaha-and-suresh-kumar-1780134922694.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ರಾಜಕೀಯದಲ್ಲಿ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಪ್ರಹಸನ ಒಂದು ಹಂತಕ್ಕೆ ಬಂದಿದೆ. ಸದ್ಯ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಉಪ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಕಸರತ್ತು ನಡೆಯುತ್ತಿದೆ. ಇದರ ನಡುವೆಯೇ, ಮಾಜಿ ಸಚಿವ ಸುರೇಶ್​ ಕುಮಾರ್​ ಅವರು, ಬಿಡುಗಡೆಯಾದರೂ ಜನರಿಗೆ ಇನ್ನೂ ಸಿಗದ 5 ಸಾವಿರ ಕೋಟಿ ರೂಪಾಯಿ ಲೆಕ್ಕ ನೀಡುವಂತೆ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರು ಬರೆದಿರುವುದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.&lt;/p&gt;&lt;h2&gt;&lt;strong&gt;ಸುರೇಶ್​ ಕುಮಾರ್​ ಬರೆದಿದ್ದೇನು?&lt;/strong&gt;&lt;/h2&gt;&lt;p&gt;ಮಾನ್ಯ ಶ್ರೀ ಸಿದ್ದರಾಮಯ್ಯನವರೇ.&lt;/p&gt;&lt;p&gt;ನಮಸ್ಕಾರ.&lt;/p&gt;&lt;p&gt;ತಮ್ಮ ಪಕ್ಷದ ಸೂಚನೆಯಂತೆ ತಾವು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ. ಇಂದಿನ ತಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ನಾಯಕರನ್ನು ಆರಿಸಲಾಗುತ್ತದೆ ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ.&lt;/p&gt;&lt;p&gt;ತಮ್ಮ ಮುಂದಿನ ದಿನಗಳು ಶುಭಕರವಾಗಿರಲಿ ಎಂದು ನಾನು ಮನ:ಪೂರ್ವಕವಾಗಿ ಹಾರೈಸುತ್ತೇನೆ. ಈ ಸಮಯದಲ್ಲಿ ತಮ್ಮಲ್ಲಿ ಒಂದು ವಿನಮ್ರ ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ. ತಾವು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಜೊತೆಗೆ ಅದೇ ಸಮಯದಲ್ಲಿ ನಮ್ಮ ರಾಜ್ಯದ ಹಣಕಾಸು ಸಚಿವರೂ ಆಗಿದ್ದಿರಿ. ಇಡೀ ದೇಶದಲ್ಲಿ ದಾಖಲೆ ಸಂಖ್ಯೆಯ ಬಜೆಟ್ ಗಳನ್ನು ಮಂಡಿಸಿದ ಹೆಗ್ಗಳಿಕೆ ನಿಮ್ಮದು. ಒಂದು ರೀತಿಯಲ್ಲಿ ನಮ್ಮ ರಾಜ್ಯದ ಆರ್ಥಿಕ ತಜ್ಞರು ತಾವು.&lt;/p&gt;&lt;p&gt;ಕಳೆದ ವರ್ಷ, 2025 ಡಿಸೆಂಬರ್ 9 ರಂದು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ, ವಿಧಾನಸಭೆಯಲ್ಲಿ ನಮ್ಮ ಪಕ್ಷದ ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿರವರು ಒಂದು ಬಹಳ ಮಹತ್ವದ ವಿಚಾರವನ್ನು ಸದನದ ಗಮನಕ್ಕೆ ತಂದರು.&lt;/p&gt;&lt;p&gt;ತಮ್ಮ ಪಕ್ಷದ ಚುನಾವಣಾ ಗ್ಯಾರಂಟಿಯಾದ, ಬಹಳಷ್ಟು ಜನರ ಮತವನ್ನು ಗಳಿಸಲು ಸಾಧನವಾಗಿದ್ದ, ಗೃಹಲಕ್ಷ್ಮಿ ಯೋಜನೆಯಲ್ಲಿ ಸಂಭವಿಸಿದ್ದ ಬಹಳ ಗಂಭೀರ ಪ್ರಮಾದವನ್ನು ಅಂದು ಶ್ರೀ ಮಹೇಶ ಟೆಂಗಿನಕಾಯಿ ಪ್ರಸ್ತಾಪಿಸಿದರು. 2025 ಫೆಬ್ರವರಿ ಹಾಗೂ ಮಾರ್ಚಿ ತಿಂಗಳುಗಳ ಗೃಹಲಕ್ಷ್ಮಿ ಯೋಜನೆಯ ಹಣ ರಾಜ್ಯದ ಕುಟುಂಬಗಳಿಗೆ ತಲುಪದಿರುವ ಆರೋಪ ಮಾಡಿದರು. ಇದರ ಒಟ್ಟು ಮೊತ್ತ ₹ 5000 ಕೋಟಿ. (#ಹೌದು. #ಐದು_ಸಾವಿರ_ಕೋಟಿ) )&lt;/p&gt;&lt;p&gt;1.14 ಕೋಟಿ ಗೃಹಲಕ್ಷ್ಮಿಯರ ಪಾಲಿಗೆ ಇದೊಂದು ದೊಡ್ಡ ವಂಚನೆ. ತಮ್ಮ ಸಚಿವ ಸಂಪುಟದ ಮಾನ್ಯ ಸಚಿವೆ ಹಣ ಪಾವತಿಯಾಗಿದೆ ಎಂದು ಮೊದಲು ಹೇಳಿದ್ದರು. ಆದರೆ ನನ್ನ ಗೆಳೆಯ ಶಾಸಕ ಪಾವತಿ ಆಗಿಲ್ಲದಿರುವುದನ್ನು ದಾಖಲೆ ಸಮೇತ ಸಭೆಯ ಗಮನಕ್ಕೆ ತಂದು ₹ 5000 ಕೋಟಿ ಎಲ್ಲಿ ಹೋಯಿತು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು. ಅದಕ್ಕೆ ಸರಕಾರದ ನಿರುತ್ತರವೇ ಉತ್ತರವಾಗಿತ್ತು. ಇದು ಸಣ್ಣ ಮೊತ್ತವಲ್ಲ. ಮತ್ತು ಈ ಹಣ ಫಲಾನುಭವಿಗಳಿಗೆ ತಲುಪದಿರುವುದು ಸಣ್ಣ ಪ್ರಮಾದವಲ್ಲ. ರಾಜ್ಯದ ತಿಜೋರಿಯನ್ನೇ ಲೂಟಿ ಹೊಡೆದಿರುವ ಸ್ಪಷ್ಟ ಉದಾಹರಣೆ ಇದು ಎಂದು ಅಂದು ಸದನ ಮತ್ತು ಇಡೀ ರಾಜ್ಯ ಭಾವಿಸಿತು.&lt;/p&gt;&lt;p&gt;ಮಾನ್ಯರೇ. ರಾಜ್ಯದ ಜನತೆಯಿಂದ ಸಂಗ್ರಹ ಮಾಡಿರುವ ತೆರಿಗೆಯ ಪಾವಿತ್ರ್ಯತೆ ಕುರಿತು ನಾನು ನಿಮಗೆ ಏನೂ ಹೇಳಬೇಕಿಲ್ಲ. ಪ್ರತಿಯೊಂದು ಪೈಸೆಗೂ ಸರ್ಕಾರ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕಿದೆ. ಇದು ಜನತೆ ಅಪೇಕ್ಷಿಸುವ ಉತ್ತರದಾಯಿತ್ವ. ಕಳೆದ ಡಿಸೆಂಬರ್ 9 ರ ಮಾನ್ಯ ಶಾಸಕರ ಈ ಪ್ರಸ್ತಾವನೆಗೆ ಇದೀಗ ಐದು ತಿಂಗಳು ಪೂರ್ಣಗೊಂಡಿವೆ. ಆದರೆ ಆ ಪ್ರಶ್ನೆಗೆ ಉತ್ತರ ದೊರಕಿಲ್ಲ. ರಾಜ್ಯದ ಗೃಹಲಕ್ಷ್ಮಿಯರಿಗೆ ಈ ಹಣ ತಲುಪಿಲ್ಲ. ಈ ಬಾರಿ ಮೊತ್ತದ ಹಣ ಎಲ್ಲಿ, ಯಾರಿಗೆ ಹೋಗಿದೆ ಎಂಬುದು ಇದುವರೆಗೂ ರಾಜ್ಯದ ನಾಗರಿಕರಿಗೆ ತಿಳಿದುಬಂದಿಲ್ಲ. ತಮ್ಮಲ್ಲಿ ನನಗೆ ಗೌರವವಿರುವುದರಿಂದ, ನಾನು ಈ ಮನವಿ ಮಾಡಿಕೊಳ್ಳುತ್ತಿದ್ದೇನೆ.&lt;/p&gt;&lt;p&gt;ರಾಜ್ಯದ ಗೃಹಲಕ್ಷ್ಮಿಯರಿಗೆ ತಲುಪಬೇಕಾಗಿದ್ದ, 2025 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಹಣದ ಸ್ಥಿತಿಗತಿ ಏನು ಎಂಬುದನ್ನು ರಾಜ್ಯಕ್ಕೆ ತಿಳಿಸಬೇಕಿರುವುದು ರಾಜ್ಯದ ತಿಜೋರಿಯ ಸಂಪೂರ್ಣ ನಿಯಂತ್ರಣ ಹೊಂದಿದ್ದ ನಿಮ್ಮ ಜವಾಬ್ದಾರಿ. ಇದು ಯಾವುದೇ ಸರಕಾರದ ನೈತಿಕತೆ ಪ್ರಶ್ನೆ. ಆ ಜವಾಬ್ದಾರಿಯನ್ನು ತಾವು ಪ್ರಾಮಾಣಿಕವಾಗಿ ನಿರ್ವಹಿಸಿ ರಾಜ್ಯಕ್ಕೆ ಈ ಭಾರಿ ಮೊತ್ತದ ಹಣದ ಹಣೆಬರಹದ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸುತ್ತೇನೆ.&lt;/p&gt;&lt;p&gt;ತಮ್ಮ ವಿಶ್ವಾಸಿ&lt;/p&gt;&lt;p&gt;ಎಸ್ ಸುರೇಶ್ ಕುಮಾರ್&lt;/p&gt;&lt;p&gt;ಎಂದು ಬರೆದಿದ್ದಾರೆ.&lt;/p&gt;&lt;h3&gt;&lt;strong&gt;ಭಾರಿ ಚರ್ಚೆ&lt;/strong&gt;&lt;/h3&gt;&lt;p&gt;ಸುರೇಶ್​ ಕುಮಾರ್​ ಅವರ ಈ ಪತ್ರದ ಕುರಿತು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದಾಗಲೇ ಭಾಗ್ಯಲಕ್ಷ್ಮಿ ಹಣ ಬಂದಿಲ್ಲ ಎಂದು ಕೆಲವರು ಹೈಕೋರ್ಟ್​ ಮೊರೆ ಹೋಗಿದ್ದಾರೆ. ಅದರ ಬೆನ್ನಲ್ಲೇ ಗೃಹಲಕ್ಷ್ಮಿಯ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಮಾಡುತ್ತಿದೆ ಸರ್ಕಾರ. ಇದರ ನಡುವೆಯೇ 5 ಸಾವಿರ ಕೋಟಿಯ ಲೆಕ್ಕ ಕೇಳಿದ್ದಾರೆ ಸುರೇಶ್​ ಕುಮಾರ್​.&lt;/p&gt;&lt;p&gt;&lt;/p&gt;]]></content:encoded>
            <category>karnataka-districts</category>
            <dc:creator>Suchethana D</dc:creator>
            <atom:link href="https://kannada.asianetnews.com/politics/suresh-kumar-asking-siddaramaih-about-5-thousand-crores-of-bhagyalakshmi-scheme-suc/articleshow-pns8qag"/>
        </item>
        <item>
            <title><![CDATA[ಬಳ್ಳಾರಿ ಪಾಲಿಕೆಗೆ ಲೋಕಾಯುಕ್ತ ಶಾಕ್:  4 ತಂಡಗಳಾಗಿ ದಾಳಿ, ಬಯಲಾಗಲಿದೆಯೇ ಭ್ರಷ್ಟಾಚಾರ?]]></title>
            <link>https://kannada.asianetnews.com/karnataka-districts/lokayukta-raids-ballari-city-corporation-over-massive-illegal-b-khata-and-form-2-property-scam-gdp/articleshow-d7un96t</link>
            <guid isPermaLink="true">https://kannada.asianetnews.com/karnataka-districts/lokayukta-raids-ballari-city-corporation-over-massive-illegal-b-khata-and-form-2-property-scam-gdp/articleshow-d7un96t</guid>
            <pubDate>Sat, 30 May 2026 13:23:57 +0530</pubDate>
            <description><![CDATA[ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಅಕ್ರಮ 'ಬಿ-ಖಾತೆ' ವಿತರಣೆಯ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಎಸ್&zwnj;ಪಿ ವಾಸುದೇವರಾವ್ ನೇತೃತ್ವದ ತಂಡಗಳು ಪಾಲಿಕೆಯ ಕಚೇರಿಗಳಲ್ಲಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvxmaaxhh0z6php828hbhr2,imgname-lokayukta-raids-1780127246685.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ:&lt;/strong&gt; ಬಳ್ಳಾರಿ ಮಹಾನಗರ ಪಾಲಿಕೆ (BMC) ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕೇಳಿಬಂದಿದ್ದ ಭ್ರಷ್ಟಾಚಾರ ಮತ್ತು ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಪೊಲೀಸರು ಪಾಲಿಕೆಯ ಕಚೇರಿಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ. ನಾಗರಿಕ ಸೇವೆಗಳನ್ನು ಒದಗಿಸುವಲ್ಲಿ ವಿಳಂಬ ಹಾಗೂ ಅಕ್ರಮವಾಗಿ 'ಬಿ-ಖಾತೆ' ಮತ್ತು 'ಫಾರಂ-2' ವಿತರಣೆ ಮಾಡುತ್ತಿರುವ ಗಂಭೀರ ದೂರುಗಳ ಆಧಾರದ ಮೇಲೆ ಈ ಬೃಹತ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ.&lt;/p&gt;&lt;p&gt;ಲೋಕಾಯುಕ್ತ ಎಸ್&zwnj;ಪಿ (SP) ವಾಸುದೇವರಾವ್ ಅವರ ನೇರ ನೇತೃತ್ವದಲ್ಲಿ ಇಡೀ ಕಾರ್ಯಾಚರಣೆ ನಡೆದಿದ್ದು, ಪಾಲಿಕೆಯ ಇತಿಹಾಸದಲ್ಲೇ ಇದು ಅತ್ಯಂತ ಪ್ರಮುಖ ದಾಳಿಗಳಲ್ಲಿ ಒಂದಾಗಿದೆ.&lt;/p&gt;&lt;h2&gt;4 ಪ್ರತ್ಯೇಕ ತಂಡಗಳಿಂದ ಏಕಕಾಲಕ್ಕೆ ದಾಳಿ&lt;/h2&gt;&lt;p&gt;ತೀವ್ರ ಪರಿಶೀಲನೆ ಬಳ್ಳಾರಿ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಮಾತ್ರವಲ್ಲದೆ, ನಗರದ ವಿವಿಧೆಡೆ ಇರುವ ವಲಯ ಕಚೇರಿಗಳ (Zone Offices) ಮೇಲೂ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಬೆಳಗ್ಗೆಯಿಂದಲೇ ದಾಳಿ ಆರಂಭಿಸಿದ್ದಾರೆ. ಒಟ್ಟು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಅಧಿಕಾರಿಗಳು ಕಚೇರಿಗಳಿಗೆ ನುಗ್ಗಿದ್ದು, ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;&lt;p&gt;ಬೆಳಗ್ಗಿನಿಂದಲೇ ಆರಂಭವಾದ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ತಂಡಗಳು ಪ್ರಮುಖವಾಗಿ ಆಸ್ತಿ ದಾಖಲೆಗಳು, ಬಿ-ಖಾತೆ ಮತ್ತು ಫಾರಂ-2 ಅರ್ಜಿಗಳು, ವಿಳಂಬವಾಗಿರುವ ಕಡತಗಳು, ಜೊತೆಗೆ ಅಕ್ರಮ ಹಣದ ಬೇಡಿಕೆ ಮತ್ತು ಭ್ರಷ್ಟಾಚಾರ. ಕಳೆದ ಕೆಲವು ತಿಂಗಳುಗಳಿಂದ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ ಮತ್ತು ಪ್ರತಿಯೊಂದು ನಾಗರಿಕ ಸೇವೆಗೂ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮಧ್ಯವರ್ತಿಗಳ ಮೂಲಕ ಭಾರಿ ಪ್ರಮಾಣದ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು.&lt;/p&gt;&lt;p&gt;ವಿಶೇಷವಾಗಿ, ಅನಧಿಕೃತ ಲೇಔಟ್&zwnj;ಗಳು ಹಾಗೂ ನಿಯಮಬಾಹಿರ ಆಸ್ತಿಗಳಿಗೆ ಅಕ್ರಮವಾಗಿ 'ಬಿ-ಖಾತೆ' ಮತ್ತು 'ಫಾರಂ-2'ಗಳನ್ನು ಸೃಷ್ಟಿಸಿ ವಿತರಿಸಲು ಕಂದಾಯ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಅಕ್ರಮ ಹಣದ ಬೇಡಿಕೆ ಇಡುತ್ತಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್&zwnj;ಪಿ ವಾಸುದೇವರಾವ್ ಅವರು ರಹಸ್ಯ ಕಾರ್ಯಾಚರಣೆ ನಡೆಸಿ, ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.&lt;/p&gt;&lt;p&gt;ಮಹತ್ವದ ದಾಖಲೆಗಳು ಲೋಕಾಯುಕ್ತ ವಶಕ್ಕೆ ದಾಳಿಯ ವೇಳೆ ಕಂದಾಯ ಮತ್ತು ನಗರಾಭಿವೃದ್ಧಿ ಶಾಖೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದಕ್ಕೆ ಪ್ರಥಮ ದೃಷ್ಟಿಯಲ್ಲೇ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ. ಕಚೇರಿಯ ಕಂಪ್ಯೂಟರ್ ಹಾರ್ಡ್ ಡಿಸ್ಕ್, ಲಾಗ್ ಬುಕ್ ಹಾಗೂ ನಿಯಮ ಉಲ್ಲಂಘಿಸಿ ಅನುಮೋದನೆ ಪಡೆದುಕೊಂಡಿದ್ದ ನೂರಾರು ಮಹತ್ವದ ಕಡತಗಳನ್ನು ಲೋಕಾಯುಕ್ತ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.&lt;/p&gt;&lt;p&gt;ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಲೋಕಾಯುಕ್ತ ಅಧಿಕಾರಿಗಳು, &quot;ಸಾರ್ವಜನಿಕರ ದೂರುಗಳ ಅನ್ವಯ ಈ ದಿಢೀರ್ ದಾಳಿ ನಡೆಸಲಾಗಿದೆ. ವಶಪಡಿಸಿಕೊಳ್ಳಲಾದ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಕರ್ತವ್ಯ ಲೋಪ ಎಸಗಿದ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು,&quot; ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;ಲೋಕಾಯುಕ್ತರ ಈ ದಿಢೀರ್ ಭೇಟಿಯಿಂದಾಗಿ ಬಳ್ಳಾರಿ ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳು ಹಾಗೂ ಲಂಚದ ದಂಧೆಯಲ್ಲಿ ತೊಡಗಿದ್ದ ಮಧ್ಯವರ್ತಿಗಳಲ್ಲಿ ನಡುಕ ಹುಟ್ಟಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/lokayukta-raids-ballari-city-corporation-over-massive-illegal-b-khata-and-form-2-property-scam-gdp/articleshow-d7un96t"/>
        </item>
        <item>
            <title><![CDATA[RCB ಅಭಿಮಾನಿಗಳಿಗೆ ನಮ್ಮ ಮೆಟ್ರೋ ಪ್ರಯಾಣ ಉಚಿತ ಎಂಬುದು ಸುಳ್ಳು! ಬಿಎಂಆರ್‌ಸಿಎಲ್ ಸ್ಪಷ್ಟನೆ]]></title>
            <link>https://kannada.asianetnews.com/gallery/karnataka-districts/bengaluru-bmrcl-clarifies-fake-news-on-free-metro-ride-for-royal-challengers-bangalore-fans-sat-520oflx</link>
            <guid isPermaLink="true">https://kannada.asianetnews.com/gallery/karnataka-districts/bengaluru-bmrcl-clarifies-fake-news-on-free-metro-ride-for-royal-challengers-bangalore-fans-sat-520oflx</guid>
            <pubDate>Sat, 30 May 2026 13:19:47 +0530</pubDate>
            <description><![CDATA[&lt;p&gt;2026ರ ಐಪಿಎಲ್ ಫೈನಲ್ ವೇಳೆ RCB ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣದ ಅವಕಾಶವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸುದ್ದಿ ಸಂಪೂರ್ಣ ಸುಳ್ಳು. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮೇ 31ರಂದು ಉಚಿತ ಪ್ರಯಾಣವಿಲ್ಲ ಎಂದು ತಿಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gxsx68vymvkhg76rczmm8tkn,imgname-rcb-rcb-metro-video-1681275429756.jpg" type="image/jpeg" height="390" width="690"/>
            <content:encoded><![CDATA[&lt;p&gt;2026ರ ಐಪಿಎಲ್ ಫೈನಲ್ ವೇಳೆ RCB ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣದ ಅವಕಾಶವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸುದ್ದಿ ಸಂಪೂರ್ಣ ಸುಳ್ಳು. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮೇ 31ರಂದು ಉಚಿತ ಪ್ರಯಾಣವಿಲ್ಲ ಎಂದು ತಿಳಿಸಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು&lt;/strong&gt;: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಹಾ ಫೈನಲ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಮೇ 31ರ ಭಾನುವಾರದಂದು ಅಹಮದಾಬಾದ್&zwnj;ನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪ್ರಶಸ್ತಿಗಾಗಿ ಕಾದಾಡಲಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿದೆ.&amp;nbsp;&lt;/p&gt;&lt;p&gt;ಆದರೆ, ಇದೇ ಸಂಭ್ರಮದ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 'ಆರ್&zwnj;ಸಿಬಿ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣ' ಎಂಬ ಸುದ್ದಿಯ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BANGALORE METRO RAIL CORPORATION LIMITED- BMRCL) ಮಹತ್ವದ ಸ್ಪಷ್ಟನೆಯನ್ನು ನೀಡಿದೆ.&lt;/p&gt;&lt;img&gt;&lt;p&gt;ಮೆಟ್ರೋ ಪ್ರಯಾಣ ಉಚಿತ ಎಂಬುದು ಸಂಪೂರ್ಣವಾಗಿ ಸುಳ್ಳು ಮತ್ತು ತಪ್ಪು ಮಾಹಿತಿ ಎಂದು ಬಿಎಂಆರ್&zwnj;ಸಿಎಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್&zwnj;ಗಳು ಮತ್ತು ಜಾಹೀರಾತುಗಳನ್ನು ಪ್ರಕಟಿಸಿದ್ದರು. ಅದರಲ್ಲಿ, ಮೇ 31ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿಯ ಪ್ರಯುಕ್ತ ಬೆಂಗಳೂರಿನ ಆರ್&zwnj;ಸಿಬಿ ಅಭಿಮಾನಿಗಳಿಗೆ 'ನಮ್ಮ ಮೆಟ್ರೋ'ದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಪ್ಪಾಗಿ ಪ್ರಚಾರ ಮಾಡಲಾಗಿತ್ತು. ಈ ಸುದ್ದಿ ಅತಿ ವೇಗವಾಗಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿತ್ತು.&lt;/p&gt;&lt;img&gt;&lt;p&gt;&lt;strong&gt;ಯಾರಿಗೂ ಉಚಿತ ಪ್ರಯಾಣವಿಲ್ಲ:&lt;/strong&gt; 2026ರ ಮೇ 31ರಂದು ಆರ್&zwnj;ಸಿಬಿ ಅಭಿಮಾನಿಗಳಿಗೆ ಆಗಲಿ ಅಥವಾ ಯಾವುದೇ ಇತರ ಪ್ರಯಾಣಿಕರ ವರ್ಗಕ್ಕಾಗಲಿ ಉಚಿತ ಮೆಟ್ರೋ ಪ್ರಯಾಣ ಸೌಲಭ್ಯ ಒದಗಿಸುವ ಯಾವುದೇ ಯೋಜನೆಯನ್ನು ಬಿಎಂಆರ್&zwnj;ಸಿಎಲ್&zwnj; ಘೋಷಿಸಿಲ್ಲ ಹಾಗೂ ಅನುಮೋದಿಸಿಲ್ಲ.&lt;/p&gt;&lt;p&gt;&lt;strong&gt;ಅನಧಿಕೃತ ಪ್ರಚಾರಕ್ಕೆ ಮಾನ್ಯತೆ ಇಲ್ಲ: &lt;/strong&gt;ಮೆಟ್ರೋ ಪ್ರಯಾಣ ಉಚಿತವಾಗಿರುತ್ತದೆ ಎಂದು ಜಾಹೀರಾತು ನೀಡಲು ಅಥವಾ ಪ್ರಚಾರ ಮಾಡಲು ಯಾವುದೇ ಖಾಸಗಿ ವ್ಯಕ್ತಿ, ಸಂಸ್ಥೆ ಅಥವಾ ಸಂಘಟನೆಗೆ ಬಿಎಂಆರ್&zwnj;ಸಿಎಲ್ ಯಾವುದೇ ರೀತಿಯ ಅನುಮತಿ ಅಥವಾ ಅಧಿಕೃತ ಮಾನ್ಯತೆಯನ್ನು ನೀಡಿರುವುದಿಲ್ಲ.&lt;/p&gt;&lt;img&gt;&lt;p&gt;&lt;strong&gt;ಟಿಕೆಟ್ ಕಡ್ಡಾಯ: &lt;/strong&gt;ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಎಲ್ಲಾ ಪ್ರಯಾಣಿಕರು ಎಂದಿನಂತೆ ಟಿಕೆಟ್ ಖರೀದಿಸುವುದು ಕಡ್ಡಾಯವಾಗಿದೆ. ಪ್ರಯಾಣಿಕರು ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್, ಎನ್&zwnj;ಸಿಎಂಸಿ (NCMC) ಕಾರ್ಡ್ ಅಥವಾ ಬಿಎಂಆರ್&zwnj;ಸಿಎಲ್ ಅನುಮೋದಿಸಿರುವ ಇತರೆ ಪ್ರಯಾಣ ಮಾಧ್ಯಮಗಳನ್ನು ಬಳಸಿಕೊಂಡೇ ಪ್ರಯಾಣಿಸಬೇಕು.&lt;/p&gt;&lt;p&gt;&lt;strong&gt;ನಿಯಮಗಳು ಅನ್ವಯ: &lt;/strong&gt;ಮೇ 31ರ ಮೆಟ್ರೋ ಪ್ರಯಾಣವು ಬಿಎಂಆರ್&zwnj;ಸಿಎಲ್&zwnj;ನ ಪ್ರಚಲಿತ ದರ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಸಂಸ್ಥೆ ನೆನಪಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/bengaluru-bmrcl-clarifies-fake-news-on-free-metro-ride-for-royal-challengers-bangalore-fans-sat-520oflx"/>
        </item>
        <item>
            <title><![CDATA[ಅಂಕೋಲಾ ಬಳಿ ಗೋವಾಕ್ಕೆ ತೆರಳುತ್ತಿದ್ದ ಸೀಬರ್ಡ್ ಬಸ್ ಪಲ್ಟಿ, ಆಂಧ್ರ ಮೂಲದ ಪ್ರಯಾಣಿಕ ಸಾವು]]></title>
            <link>https://kannada.asianetnews.com/karnataka-districts/seabird-bus-accident-ankola-nh-52-one-dead-20-injured-bellary-to-goa-san/articleshow-begdoay</link>
            <guid isPermaLink="true">https://kannada.asianetnews.com/karnataka-districts/seabird-bus-accident-ankola-nh-52-one-dead-20-injured-bellary-to-goa-san/articleshow-begdoay</guid>
            <pubDate>Sat, 30 May 2026 12:33:15 +0530</pubDate>
            <description><![CDATA[ಬಳ್ಳಾರಿಯಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಪ್ರವಾಸಿ ಬಸ್ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvts61vt5dbbk26h2g35qkt,imgname-seabird-bus-accident-1780124260411.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕಾರವಾರ/ಅಂಕೋಲಾ (ಮೇ.30): ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್&zwnj; ಹೆದ್ದಾರಿಯಲ್ಲೇ ಪಲ್ಟಿಯಾಗಿದ್ದು, ಪರಿಣಾಮವಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿ, 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳ್ಳಾರಿಯಿಂದ ಪ್ರವಾಸಿಗರನ್ನು ಹೊತ್ತು ಗೋವಾಕ್ಕೆ ತೆರಳುತ್ತಿದ್ದ &lsquo;ಸೀಬರ್ಡ್&rsquo; (Sea Bird) ಸಂಸ್ಥೆಗೆ ಸೇರಿದ ಬಸ್, ರಾಷ್ಟ್ರೀಯ ಹೆದ್ದಾರಿ 52 ರ ಅಂಕೋಲಾ - ಯಲ್ಲಾಪುರ ರಸ್ತೆಯ ಕಂಚಿನಬಾಗಿಲು ತಲುಪುತ್ತಿದ್ದಂತೆ ಈ ದುರಂತ ಸಂಭವಿಸಿದೆ. ಅತಿವೇಗ ಹಾಗೂ ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ನೇರ ಕಾರಣ ಎನ್ನಲಾಗುತ್ತಿದ್ದು, ಬಸ್ಸು ಹೆದ್ದಾರಿಗೆ ಸಂಪೂರ್ಣವಾಗಿ ಅಡ್ಡಲಾಗಿ ಪಲ್ಟಿಯಾಗಿದೆ. ದುರಂತದ ಸಮಯದಲ್ಲಿ ಬಸ್&zwnj;ನಲ್ಲಿ ಒಟ್ಟು 36 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;p&gt;ಬಸ್ ಪಲ್ಟಿಯಾದ ಭೀಕರತೆಗೆ ಆಂಧ್ರಪ್ರದೇಶ ಮೂಲದ ಶರಣಯ್ಯ (42) ಎಂಬ ಪ್ರಯಾಣಿಕರು ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಸ್&zwnj;ನಲ್ಲಿದ್ದ ಉಳಿದ 36 ಪ್ರಯಾಣಿಕರ ಪೈಕಿ 20 ಜನರಿಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ತಕ್ಷಣವೇ ಎಲ್ಲ ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ವಿಜ್ಞಾನ ಸಂಸ್ಥೆ (KRIMS - ಕ್ರಿಮ್ಸ್) ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕಲ್ಪಿಸಲಾಗಿದೆ.&lt;/p&gt;&lt;p&gt;ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸ್ತಬ್ಧಗೊಂಡ ಸಂಚಾರ!&lt;/p&gt;&lt;p&gt;ಭಾರೀ ಗಾತ್ರದ ಸೀಬರ್ಡ್ ಬಸ್ ರಾಷ್ಟ್ರೀಯ ಹೆದ್ದಾರಿ 52 ರ ಮಧ್ಯದಲ್ಲೇ ಅಡ್ಡವಾಗಿ ಬಿದ್ದಿದ್ದರಿಂದ ಅಂಕೋಲಾ-ಯಲ್ಲಾಪುರ ರಸ್ತೆಯ ಸಂಪೂರ್ಣ ವಾಹನ ಸಂಚಾರ ಗಂಟೆಗಟ್ಟಲೆ ಸ್ಥಗಿತಗೊಂಡಿತ್ತು. ಹೆದ್ದಾರಿಯ ಎರಡೂ ಬದಿಗಳಲ್ಲಿ ಕಿಲೋಮೀಟರ್&zwnj;ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಭೀಕರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಅಂಕೋಲಾ ಪೊಲೀಸರು ಕ್ರೇನ್ ಬಳಸಿ ಬಸ್ಸನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿ, ಟ್ರಾಫಿಕ್ ಸುಗಮಗೊಳಿಸಲು ಹರಸಾಹಸ ಪಟ್ಟರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/seabird-bus-accident-ankola-nh-52-one-dead-20-injured-bellary-to-goa-san/articleshow-begdoay"/>
        </item>
        <item>
            <title><![CDATA[Priyank kharge: ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹರಿಕಾರ ಪ್ರಿಯಾಂಕ್‌ಗೆ ಡಿಸಿಎಂ ಸ್ಥಾನಕ್ಕೆ ಶಾಸಕರ ಒತ್ತಾಯ]]></title>
            <link>https://kannada.asianetnews.com/politics/karnataka-cabinet-reshuffle-mlas-demand-priyank-for-dcm-post-rav/articleshow-wptk08h</link>
            <guid isPermaLink="true">https://kannada.asianetnews.com/politics/karnataka-cabinet-reshuffle-mlas-demand-priyank-for-dcm-post-rav/articleshow-wptk08h</guid>
            <pubDate>Sat, 30 May 2026 12:30:56 +0530</pubDate>
            <description><![CDATA[&lt;p&gt;ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸಂಪುಟದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಲ್ಯಾಣ ಕರ್ನಾಟಕ ಭಾಗದ ಹಲವು ಶಾಸಕರು ಹೈಕಮಾಂಡ್&zwnj;ಗೆ ಒತ್ತಾಯಿಸಿದ್ದಾರೆ. ಪ್ರಿಯಾಂಕ್ ಅವರ ಸಮರ್ಥ ಆಡಳಿತ &amp;nbsp;ಹಿಂದುಳಿದ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಈ ಬೇಡಿಕೆ ಮುಂದಿಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksvt9bz0e87j09457t3xat6q,imgname-----------------------2026-05-30t121834.997-1780123742175.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.30): &lt;/strong&gt;ಡಿ.ಕೆ.ಶಿವಕುಮಾರ್&zwnj;(DK Shivakumar) ಅವರ ನೇತೃತ್ವದಲ್ಲಿ ಶೀಘ್ರದಲ್ಲೇ ರಚನೆಯಾಗಲಿರುವ ಹೊಸ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವ ಪ್ರಿಯಾಂಕ್&zwnj; ಖರ್ಗೆ(Priyank kharge) ಅವರಿಗೆ ಉಪಮುಖ್ಯಮಂತ್ರಿ ಸ್ಥಾನ(DCM Post) ನೀಡಬೇಕೆಂದು ಕಲ್ಯಾಣ ಕರ್ನಾಟಕ ಭಾಗದ ವಿವಿಧ ಶಾಸಕರು(Kalyan karnataka MLAs) ಹೈಕಮಾಂಡ್&zwnj;(Congress highcommand) ನಾಯಕರನ್ನು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅಫಜಲ್ಪುರ ಶಾಸಕ ಎಂ.ವೈ.ಪಾಟೀಲ್&zwnj;(MY Patil), ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಸುರಪುರ ಶಾಸಕ ರಾಜ ವೇಣುಗೋಪಾಲ್&zwnj; ನಾಯಕ, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್&zwnj;, ವಿಧಾನ ಪರಿಷತ್&zwnj; ಶಾಸಕ ತಿಪ್ಪಣ್ಣಪ್ಪ ಕಮಕನೂರ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಕಾಂಗ್ರೆಸ್&zwnj; ಸರ್ಕಾರ ಉತ್ತಮ ಆಡಳಿತ ನೀಡಿದೆ. ಈಗ ಡಿ.ಕೆ.ಶಿವಕುಮಾರ್&zwnj; ಅವರಿಗೆ ಮುಖ್ಯಮಂತ್ರಿಯಾಗುವ ಯೋಗ ಬಂದಿದೆ. ಶೀಘ್ರದಲ್ಲೇ ಅವರು ಪ್ರಮಾಣವಚನ ಸ್ವೀಕರಿಸಿ ಹೊಸ ಸಚಿವ ಸಂಪುಟ ರಚಿಸಲಿದ್ದಾರೆ.&lt;/p&gt;&lt;p&gt;&amp;nbsp;ತಮ್ಮ ಸಂಪುಟದಲ್ಲಿ ಸಚಿವ ಪ್ರಿಯಾಂಕ್&zwnj; ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಏಕೆಂದರೆ ಅವರು, ಸಿದ್ದರಾಮಯ್ಯ ಅವರ ಈಗಿನ ಸರ್ಕಾರದಲ್ಲಿ ಹಾಗೂ ಹಿಂದಿನ ಸರ್ಕಾರದಲ್ಲಿ ಅವರಿಗೆ ವಹಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್&zwnj; ರಾಜ್&zwnj; ಇಲಾಖೆ ಹಾಗೂ ಐಟಿ ಬಿಟಿ ಇಲಾಖೆಗಳನ್ನುಅತ್ಯಂತ ಸಮರ್ಥವಾಗಿ ನಿಭಾಯಿಸಿ ಕೇಂದ್ರ ಸರ್ಕಾರದಿಂದಲೂ ಪ್ರಶಸ್ತಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಅವರು ರಾಜ್ಯದ ಪ್ರಭಾವಿ ನಾಯರಲ್ಲಿ ಒಬ್ಬರು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ ಹರಿಕಾರ. ಬಹಳ ಹಿಂದುಳಿದಿರುವ ಆ ಭಾಗದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರಿಯಾಂಕ್&zwnj; ಖರ್ಗೆ ಅವರನ್ನು ಹೊಸ ಸಂಪುಟದಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್&zwnj; ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಐವರೂ ಶಾಸಕರು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-cabinet-reshuffle-mlas-demand-priyank-for-dcm-post-rav/articleshow-wptk08h"/>
        </item>
        <item>
            <title><![CDATA[DK Shivakumar: ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ರಾಮನಗರದಿಂದ 60 ಸಾವಿರ ಜನ ಸೇರಿಸಲು ಸಿದ್ಧತೆ!]]></title>
            <link>https://kannada.asianetnews.com/politics/dk-shivakumar-as-chief-minister-swearing-ceremony-june-3-60000-supporters-attend-rav/articleshow-2pg1qfo</link>
            <guid isPermaLink="true">https://kannada.asianetnews.com/politics/dk-shivakumar-as-chief-minister-swearing-ceremony-june-3-60000-supporters-attend-rav/articleshow-2pg1qfo</guid>
            <pubDate>Sat, 30 May 2026 12:00:25 +0530</pubDate>
            <description><![CDATA[&lt;p&gt;ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಪದಗ್ರಹಣ ಸಮಾರಂಭಕ್ಕೆ ಅವರ ತವರು ಜಿಲ್ಲೆಯಾದ ರಾಮನಗರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ, ಜಿಲ್ಲೆಯಿಂದ ಸುಮಾರು 60 ಸಾವಿರ ಜನರನ್ನು ಸಮಾರಂಭಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksvrvgaergy2yskgnk2vafr1,imgname-----------------------2026-05-30t114848.242-1780122239310.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮೇ.30):&lt;/strong&gt; ಜಿಲ್ಲೆಯ ಸುಪುತ್ರ ಡಿ.ಕೆ.ಶಿವಕುಮಾರ್(DK Shivakumar) ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಪದಗ್ರಹಣ ಸಮಾರಂಭಕ್ಕೆ ಜಿಲ್ಲೆಯಿಂದ ಸುಮಾರು 50 ರಿಂದ 60 ಸಾವಿರ ಜನರು ಸಾಕ್ಷಿಯಾಗುವಂತೆ ಮಾಡಲು ಜಿಲ್ಲಾ ಕಾಂಗ್ರೆಸ್&zwnj;ನಲ್ಲಿ ಭರದ ಸಿದ್ದತೆಗಳು ನಡೆದಿವೆ.&lt;/p&gt;&lt;p&gt;ತವರು ಜಿಲ್ಲೆ ಬೆಂಗಳೂರು&zwnj; ದಕ್ಷಿಣದಿಂದ ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಶಕ್ತಿ ಪ್ರದರ್ಶನ ಮಾಡಲು ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ ತಾಲೂಕುಗಳಲ್ಲಿ ಪೂರ್ವಭಾವಿ ಸಭೆಗಳು ನಡೆಯುತ್ತಿವೆ.&lt;/p&gt;&lt;p&gt;ಈಗಾಗಲೇ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ರಾಮನಗರ ಮತ್ತು ಹಾರೋಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದರೆ, ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಬಿಡದಿಯಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.&lt;/p&gt;&lt;p&gt;ಪದಗ್ರಹಣ ಸಮಾರಂಭಕ್ಕೆ ಜಿಲ್ಲೆಯಿಂದ ನಿರೀಕ್ಷೆಗೂ ಮೀರಿ ಜನರು ಆ ಸಂಭ್ರಮದಲ್ಲಿ ಭಾಗಿಯಾಗಲು ಬಸ್ಸು ಮತ್ತು ಊಟದ ವ್ಯವಸ್ಥೆ ಮಾಡುವುದು. ಶುಭ ಕೋರುವ ಕಟೌಟ್ ಗಳನ್ನು ಅಳವಡಿಸುವ ಬಗ್ಗೆಯೂ ಶಾಸಕರು ಮುಖಂಡರು ಮತ್ತು ಕಾರ್ಯಕರ್ತರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.&lt;/p&gt;&lt;p&gt;ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಜಿಲ್ಲೆಯಿಂದ ಹೆಚ್ಚಿನ&zwnj; ಸಂಖ್ಯೆಯಲ್ಲಿ ಭಾಗವಹಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ಶಾಸಕ ಇಕ್ಬಾಲ್ ಹುಸೇನ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದರು.&lt;/p&gt;&lt;p&gt;ರಾಮನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿ ಮತ್ತು ಹಾರೋಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ ಇಕ್ಬಾಲ್ ಹುಸೇನ್ ರವರು ಯುವ ಕಾಂಗ್ರೆಸ್, ಎನ್ ಎಸ್ ಯುಐ, ಮಹಿಳಾ ಘಟಕ ಸೇರಿದಂತೆ ಎಲ್ಲ ಘಟಕದ ಪದಾಧಿಕಾರಿಗಳು, ಗ್ರಾಮ&zwnj; ಪಂಚಾಯಿತಿ ಮಟ್ಟದಿಂದ ಸುಮಾರು 60 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಪಕ್ಷದ ಮುಖಂಡರು ಡಿಕೆಶಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.&lt;/p&gt;&lt;p&gt;ಬಹಳ&zwnj; ದಿನಗಳ ರಾಜ್ಯದ ಜನರ ಕನಸ್ಸು ನನಸ್ಸಾಗುತ್ತಿದೆ. ಡಿ.ಕೆ.ಶಿವಕುಮಾರ್ ರವರು ಕಾಂಗ್ರೆಸ್ ಪಕ್ಷವನ್ನು ದೇವರೆಂದು ಪೂಜಿಸಿ, ಆರಾಧಿಸಿದವರು. ದೇಶದಲ್ಲಿ ಎಲ್ಲೆ ಕಾಂಗ್ರೆಸ್ ಪಕ್ಷ ಸಂಕಷ್ಟ ಸಮಯದಲ್ಲಿದ್ದಾಗ ಹೆಗಲು ಕೊಟ್ಟವರು. ಆ ಮೂಲಕ ರಾಷ್ಟ್ರ&zwnj;ಮಟ್ಟದಲ್ಲಿ ಡಿ.ಕೆ.ಶಿವಕುಮಾರ್ ಜನಮ್ನಣೆ ಗಳಿಸಿದ್ದಾರೆ. ಗ್ರಾಮ ಮಟ್ಟದಿಂದ ದೆಹಲಿ ಮಟ್ಟದವರೆಗೆ ಕಾಂಗ್ರೆಸ್ &zwnj;ಪಕ್ಷವನ್ನು ಹಂತ ಹಂತವಾಗಿ ಸಂಘಟಿಸಿದ ಮಹಾನ್ ಚತುರರು. ಅವರ ಕಾಯಕ&zwnj;ನಿಷ್ಟೆಯನ್ನು ಗುರುತಿಸಿ ದೆಹಲಿ ವರಿಷ್ಟರು ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ. ಅವರೆಲ್ಲರಿಗೂ ಜಿಲ್ಲೆಯ ಜನತೆಯ ಪರವಾಗಿ ಕೋಟಿ ನಮಸ್ಕಾರಗಳನ್ನು ತಿಳಿಸುತ್ತೇನೆ ಎಂದರು.&lt;/p&gt;&lt;p&gt;ನಮ್ಮ&zwnj; ಜೆಲ್ಲೆಯವರಾದ ಡಿಕೆಶಿ ಅವರು ಸಿಎಂ ಆಗುತ್ತಿರುವುದರಲ್ಲಿ ಅರ್ಥವಿದೆ.ಅವರ ರಾಜಕೀಯ ಪಯಣ ಸಾಧಾರಣವಾದದ್ದಲ್ಲ. ಅವರ ಪಯಣ ದೊಡ್ಡ ಮಟ್ಟದ್ದು, ಅವರ ಸಂಘಟನೆ ನಮ್ಮೆಲ್ಲರಿಗೂ ಸ್ಪೂರ್ತಿ, ಅದು ಮುಂದಿನ&zwnj; ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;ಡಿ.ಕೆ.ಶಿವಕುಮಾರ್ ಸಂಕಷ್ಟದ ದಿನಗಳಲ್ಲಿ ತಿಹಾರ್ ಜೈಲಿನಿಂದ ಬಂದ ತಕ್ಷಣ ಕಾಂಗ್ರೆಸ್ ಪಕ್ಷದ ವರಿಷ್ಠರು ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ ಜವಾಬ್ದಾರಿ ವಹಿಸಿದರು. ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮತ್ತು ಪ್ರಮುಖರ ಜೊತೆ ಪ್ರತಿದಿನ ಜೂಮ್ ಮೀಟಿಂಗ್, ಹೋರಾಟ&zwnj;ಗಳು, ಸ್ವಾತಂತ್ರ ನಡಿಗೆ, ಆರೋಗ್ಯ ಹಸ್ತ, ಮೇಕೆದಾಟು ಹೋರಾಟದಂತಹ ಹತ್ತು ಹಲವು ಹೋರಾಟಗಳ ಮೂಲಕ ರಾಜ್ಯದಲ್ಲಿ ಅವರ ಸಂಘಟನೆಯ ಪರಿಶ್ರಮದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಇಕ್ಬಾಲ್ ಹುಸೇನ್ ಹೇಳಿದರು.&lt;/p&gt;&lt;p&gt;ಸಭೆಯಲ್ಲಿ ಮಾಜಿ ಶಾಸಕ ಕೆ.ರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಜಿ.ಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಹೆಚ್.ರಾಜು, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್ ನಗರಸಭೆ ಮಾಜಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಸೇರಿದಂತೆ ನಗರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿಗಳ ಮುಖಂಡರು ಹಾಜರಿದ್ದರು.&lt;/p&gt;&lt;p&gt;ಕಾಂಗ್ರೆಸ್ ಪಕ್ಷದ ನಿಷ್ಟಾವಂತರು, ನಮ್ಮ ಜಿಲ್ಲೆಯವರಾದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಿರುವುದು ಜಿಲ್ಲೆಯ ಜನರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಮ್ಮೆಲ್ಲರಿಗೂ ಬಹಳ ಸಂತಸ ತಂದಿದೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮಾಡಲು ಶಾಸಕ ಇಕ್ಬಾಲ್ ಹುಸೇನ್ ಮತ್ತು ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಎಲ್ಲ ಸಕಲ ಸಿದ್ದತೆಗಳು ನಡೆಯುತ್ತಿವೆ.&lt;/p&gt;&lt;h2&gt;-ಚೇತನ್&zwnj;ಕುಮಾರ್, ಅಧ್ಯಕ್ಷರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ........&lt;/h2&gt;&lt;p&gt;ಡಿ&zwnj;&zwnj;.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನಮ್ಮ ಜಿಲ್ಲೆಯ ಜನತೆಯ ಕನಸು. ಈ ಸಮಾರಂಭಕ್ಕೆ ಜನರನ್ನು ಕರೆದುಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಜಿಲ್ಲೆಯಿಂದ 60 ಸಾವಿರ ಜನರನ್ನು ಕರೆದುಕೊಂಡು ಹೋಗಲು ಸಿದ್ಧತೆ ಮಾಡುತ್ತಿದ್ದೇವೆ. ಅದಕ್ಕಾಗಿ ಬಸ್ಸು, ಊಟ, ತಿಂಡಿ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ. ಇದು ನಮ್ಮ ಕಾರ್ಯಕ್ರಮ, ನಮ್ಮ ಜಿಲ್ಲೆಯ ಕಾರ್ಯಕ್ರಮ. ಹಾಗಾಗಿ ಜವಾಬ್ದಾರಿ ತೆಗೆದುಕೊಂಡು ಪದಗ್ರಹಣಕ್ಕೆ ಸಿದ್ಧತೆ ಮಾಡುತ್ತಿದ್ದೇವೆ.&lt;/p&gt;&lt;p&gt;-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/dk-shivakumar-as-chief-minister-swearing-ceremony-june-3-60000-supporters-attend-rav/articleshow-2pg1qfo"/>
        </item>
        <item>
            <title><![CDATA[ಬೆಂಗಳೂರು ಪ್ರಯಾಣಿಕರ ಗಮನಕ್ಕೆ ಮೇ 31ರಂದು ನಮ್ಮ ಮೆಟ್ರೋ ನೇರಳೆ ಮಾರ್ಗ ಕೆಲ ಗಂಟೆಗಳ ಸೇವೆ ಸ್ಥಗಿತ]]></title>
            <link>https://kannada.asianetnews.com/gallery/karnataka-districts/bangalore-namma-metro-alert-purple-line-services-partially-suspended-may-31-check-timings-and-alternative-routes-gdp-55w0ui2</link>
            <guid isPermaLink="true">https://kannada.asianetnews.com/gallery/karnataka-districts/bangalore-namma-metro-alert-purple-line-services-partially-suspended-may-31-check-timings-and-alternative-routes-gdp-55w0ui2</guid>
            <pubDate>Sat, 30 May 2026 12:06:29 +0530</pubDate>
            <description><![CDATA[&lt;p&gt;ಮೇ 31ರ ಭಾನುವಾರದಂದು, ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತಾಂತ್ರಿಕ ನಿರ್ವಹಣಾ ಕಾಮಗಾರಿಯಿಂದಾಗಿ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ದೀಪಾಂಜಲಿನಗರ ಮತ್ತು ಕೆ.ಎಸ್.ಆರ್. ಬೆಂಗಳೂರು ನಿಲ್ದಾಣದ ನಡುವೆ ಸೇವೆ ಲಭ್ಯವಿರುವುದಿಲ್ಲ, &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4yppefvemjfw7v3bmza2zy9,imgname-namma-metro-fares-to-rise-1757672061435.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೇ 31ರ ಭಾನುವಾರದಂದು, ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತಾಂತ್ರಿಕ ನಿರ್ವಹಣಾ ಕಾಮಗಾರಿಯಿಂದಾಗಿ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ದೀಪಾಂಜಲಿನಗರ ಮತ್ತು ಕೆ.ಎಸ್.ಆರ್. ಬೆಂಗಳೂರು ನಿಲ್ದಾಣದ ನಡುವೆ ಸೇವೆ ಲಭ್ಯವಿರುವುದಿಲ್ಲ, &amp;nbsp;&lt;/p&gt;&lt;img&gt;&lt;p&gt;ಬೆಂಗಳೂರು: ಸಿಲಿಕಾನ್ ಸಿಟಿಯ ಜೀವನಾಡಿಯಾಗಿರುವ 'ನಮ್ಮ ಮೆಟ್ರೋ'ದ ನೇರಳೆ ಮಾರ್ಗದಲ್ಲಿ (Purple Line) ಪ್ರಯಾಣಿಸುವ ಸಾರ್ವಜನಿಕರು ಈ ಬರುವ ಭಾನುವಾರ, ಮೇ 31ರಂದು ತಮ್ಮ ಪ್ರಯಾಣದ ವೇಳಾಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ. ಅತ್ಯಗತ್ಯ ತಾಂತ್ರಿಕ ಮತ್ತು ಹಳಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ, ಮೇ 31ರ ಭಾನುವಾರದಂದು ಬೆಳಗ್ಗೆ 2 ಗಂಟೆಗಳ ಕಾಲ ನೇರಳೆ ಮಾರ್ಗದ ಪ್ರಮುಖ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಸುಗಮ ಸಂಚಾರಕ್ಕಾಗಿ ಬಿಎಂಆರ್&zwnj;ಸಿಎಲ್ ಈ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಮೆಟ್ರೋ ಸಿಬ್ಬಂದಿಯೊಂದಿಗೆ ಸಹಕರಿಸಲು ಕೋರಲಾಗಿದೆ.&lt;/p&gt;&lt;img&gt;&lt;p&gt;ಬಿಎಂಆರ್&zwnj;ಸಿಎಲ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ತುರ್ತು ನಿರ್ವಹಣಾ ಕಾಮಗಾರಿಗಳು ನಡೆಯಲಿವೆ. ಮೇ 31ರ ಭಾನುವಾರ ಬೆಳಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ ಒಟ್ಟು 2 ಗಂಟೆಗಳು. ದೀಪಾಂಜಲಿನಗರ ಮೆಟ್ರೋ ನಿಲ್ದಾಣದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆ.ಎಸ್.ಆರ್. ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ) ಮೆಟ್ರೋ ನಿಲ್ದಾಣದವರೆಗೆ ರೈಲು ಸೇವೆಗಳು ಸಂಪೂರ್ಣವಾಗಿ ಇರುವುದಿಲ್ಲ.&lt;/p&gt;&lt;img&gt;&lt;p&gt;ಈ ಎರಡು ಗಂಟೆಗಳ ಅವಧಿಯಲ್ಲಿ ಇಡೀ ನೇರಳೆ ಮಾರ್ಗ ಸ್ಥಗಿತಗೊಳ್ಳುವುದಿಲ್ಲ. ಬದಲಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಇತರೆ ವಿಭಾಗಗಳಲ್ಲಿ ರೈಲುಗಳು ಎಂದಿನಂತೆ ಸಂಚರಿಸಲಿವೆ. ವೈಟ್&zwnj;ಫೀಲ್ಡ್ (ಕಾಡುಗೋಡಿ) ನಿಂದ ಮೆಜೆಸ್ಟಿಕ್ (ಕೆ.ಎಸ್.ಆರ್. ಬೆಂಗಳೂರು) ವರೆಗೆ: ಈ ಮಾರ್ಗದಲ್ಲಿ ರೈಲುಗಳು ಯಥಾಸ್ಥಿತಿಯಲ್ಲಿ ಓಡಾಡಲಿವೆ. ಚಲ್ಲಘಟ್ಟದಿಂದ ಮೈಸೂರು ರಸ್ತೆ ನಿಲ್ದಾಣದವರೆಗೂ ಮೆಟ್ರೋ ಸೇವೆಗಳು ಎಂದಿನಂತೆ ಸಕ್ರಿಯವಾಗಿರುತ್ತವೆ.&lt;/p&gt;&lt;p&gt;ನೀವು ಮೈಸೂರು ರಸ್ತೆ ಕಡೆಯಿಂದ ವೈಟ್&zwnj;ಫೀಲ್ಡ್ ಕಡೆಗೆ ಅಥವಾ ವೈಟ್&zwnj;ಫೀಲ್ಡ್ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಅಡ್ಡಲಾಗಿ ಪ್ರಯಾಣಿಸಬೇಕಿದ್ದರೆ, ದೀಪಾಂಜಲಿನಗರದಿಂದ ಕೆ.ಎಸ್.ಆರ್ ರೈಲ್ವೆ ನಿಲ್ದಾಣದವರೆಗಿನ ಲಿಂಕ್ ಕಡಿತಗೊಂಡಿರುವುದರಿಂದ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;ನೇರಳೆ ಮಾರ್ಗದಲ್ಲಿ ಮಾತ್ರ ಈ ತಾಂತ್ರಿಕ ಕಾಮಗಾರಿ ನಡೆಯುತ್ತಿರುವುದರಿಂದ, ನಮ್ಮ ಮೆಟ್ರೋದ ಹಸಿರು ಮಾರ್ಗ (Green Line) ಮತ್ತು ಹೊಸದಾಗಿ ಆರಂಭವಾಗಿರುವ ಹಳದಿ ಮಾರ್ಗಗಳಲ್ಲಿ (Yellow Line) ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಮಾರ್ಗಗಳಲ್ಲಿ ಎಂದಿನ ವೇಳಾಪಟ್ಟಿಯಂತೆಯೇ ರೈಲುಗಳು ಸಂಚರಿಸಲಿವೆ.&lt;/p&gt;&lt;img&gt;&lt;p&gt;ಭಾನುವಾರ ಬೆಳಗ್ಗೆ ಕೆ.ಎಸ್.ಆರ್ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ ಅಥವಾ ಕೆಂಪೇಗೌಡ ಬಸ್ ನಿಲ್ದಾಣಕ್ಕೆ (ಮೆಜೆಸ್ಟಿಕ್) ತಲುಪಬೇಕಾದ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣಕ್ಕೆ ಲಿಂಕ್ ರೈಲುಗಳ ಮೂಲಕ ತೆರಳುವವರು ವಿಳಂಬವನ್ನು ತಪ್ಪಿಸಲು ಈ ಕೆಳಗಿನ ಪರ್ಯಾಯಗಳನ್ನು ಬಳಸಬಹುದು:&lt;/p&gt;&lt;p&gt;ಬಿಎಂಟಿಸಿ ಬಸ್ ಸೇವೆಗಳು: ಮೈಸೂರು ರಸ್ತೆಯ ಉದ್ದಕ್ಕೂ ಚಲಿಸುವ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (BMTC) ಬಸ್&zwnj;ಗಳು ಈ ಸಮಯದಲ್ಲಿ ಅತ್ಯಂತ ವಿಶ್ವಾಸಾರ್ಹ ಆಯ್ಕೆಯಾಗಿದೆ.&lt;/p&gt;&lt;p&gt;ಆಟೋ ಮತ್ತು ರೈಡ್-ಹೇಲಿಂಗ್ ಆಪ್ಸ್: ಕಡಿಮೆ ದೂರದ ಪ್ರಯಾಣಕ್ಕಾಗಿ ಆಟೋ ರಿಕ್ಷಾಗಳು, ಓಲಾ, ಉಬರ್ ಅಥವಾ ನಮ್ಮ ಯಾತ್ರಿ ನಂತಹ ಆಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಬಳಸಿಕೊಳ್ಳಬಹುದು.&lt;/p&gt;&lt;p&gt;ಹೆಚ್ಚುವರಿ ಸಮಯದ ಯೋಜನೆ: ಬೆಳಗ್ಗೆ ರೈಲುಗಳ ದಟ್ಟಣೆಯನ್ನು ನಿಭಾಯಿಸಲು ಮತ್ತು ನಿಗದಿತ ಸಮಯಕ್ಕೆ ತಲುಪಲು ನಿಮ್ಮ ಸಾಮಾನ್ಯ ಪ್ರಯಾಣದ ಸಮಯಕ್ಕಿಂತ ಕನಿಷ್ಠ 30 ನಿಮಿಷ ಮುಂಚಿತವಾಗಿ ಹೊರಡುವುದು ಸೂಕ್ತ.&lt;/p&gt;&lt;img&gt;&lt;p&gt;ಭಾನುವಾರದ ಸಾರ್ವಜನಿಕ ರಜಾದಿನದಂದು ಜನರಿಗೆ ಹೆಚ್ಚಿನ ತೊಂದರೆಯಾಗದಂತೆ ತಡೆಯಲು ಬಿಎಂಆರ್&zwnj;ಸಿಎಲ್ ಈ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸುವ ಗುರಿ ಹೊಂದಿದೆ. ಬೆಳಗ್ಗೆ 9:00 ಗಂಟೆಯ ನಂತರ ಎಲ್ಲಾ ಮಾರ್ಗಗಳಲ್ಲೂ (ನೇರಳೆ ಮಾರ್ಗವೂ ಸೇರಿದಂತೆ) ಪೂರ್ಣ ಪ್ರಮಾಣದ ಮೆಟ್ರೋ ರೈಲು ಸೇವೆಗಳು ಪುನರಾರಂಭಗೊಳ್ಳಲಿವೆ. ಆದಾಗ್ಯೂ, ಸೇವೆ ಪುನರಾರಂಭಗೊಂಡ ತಕ್ಷಣ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್&zwnj;ನಲ್ಲಿ ಪ್ರಯಾಣಿಕರ ದಟ್ಟಣೆ ಒಮ್ಮೆಲೇ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭದ್ರತಾ ತಪಾಸಣೆ ಮತ್ತು ಟಿಕೆಟ್ ಕೌಂಟರ್&zwnj;ಗಳ ಬಳಿ ಹೆಚ್ಚಿನ ಜನಸಂದಣಿಯನ್ನು ನಿರೀಕ್ಷಿಸಬಹುದಾಗಿದೆ.&lt;/p&gt;&lt;p&gt;ಪ್ರಯಾಣಿಕರು ಯಾವುದೇ ಗೊಂದಲಕ್ಕೊಳಗಾಗದೆ, ನಿರಂತರ ನವೀಕರಣಗಳಿಗಾಗಿ ನಮ್ಮ ಮೆಟ್ರೋದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹಾಗೂ ಮೆಟ್ರೋ ನಿಲ್ದಾಣಗಳಲ್ಲಿನ ಪ್ರಕಟಣಾ ಫಲಕಗಳನ್ನು ಗಮನಿಸುತ್ತಿರಬೇಕಾಗಿ ವಿನಂತಿಸಲಾಗಿದೆ. ಭಾನುವಾರದ ನಿಮ್ಮ ಪ್ರಯಾಣ ಸುಖಕರವಾಗಿರಲಿ!&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bangalore-namma-metro-alert-purple-line-services-partially-suspended-may-31-check-timings-and-alternative-routes-gdp-55w0ui2"/>
        </item>
        <item>
            <title><![CDATA[Kalaburagi: ಬಕ್ರೀದ್ ಹಬ್ಬಕ್ಕೆ ಗೋಶಾಲೆಗೆ ಮೇವು ದೇಣಿಗೆ ನೀಡಿದ ಮುಸ್ಲಿಂ ಕುಟುಂಬ]]></title>
            <link>https://kannada.asianetnews.com/karnataka-districts/kalaburgi-chittapur-muslim-family-donates-fodder-to-cowshed-on-the-occasion-of-bakrid-festival-mrq/articleshow-p8pdhgo</link>
            <guid isPermaLink="true">https://kannada.asianetnews.com/karnataka-districts/kalaburgi-chittapur-muslim-family-donates-fodder-to-cowshed-on-the-occasion-of-bakrid-festival-mrq/articleshow-p8pdhgo</guid>
            <pubDate>Sat, 30 May 2026 10:50:06 +0530</pubDate>
            <description><![CDATA[ಕಲಬುರಗಿಯಲ್ಲಿ ಮುಸ್ಲಿಂ ಕುಟುಂಬವೊಂದು ಬಕ್ರೀದ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದೆ. ತಮ್ಮ ಹಿರಿಯರ ಸ್ಮರಣಾರ್ಥ ಗೋಶಾಲೆಗೆ 25 ಸಾವಿರ ಮೌಲ್ಯದ ಮೇವು ದಾನ ಮಾಡಿ, ಪ್ರಾಣಿ ದಯೆ ಮತ್ತು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvn1wxvtfqnjapb268cfgqw,imgname-kalaburgi-go-shala-1780118254523.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಸಂಬ್ರಮದಿಂದ ಆಚರಿಸುತ್ತಿದ್ದು ಮುಸ್ಲಿಂ ಸಮುದಾಯದ ಕುಟುಂಬವೊಂದು ಗೋಶಾಲೆಗೆ 25 ಸಾವಿರ ಮೌಲ್ಯದ ಮೇವು ದೇಣಿಗೆ ನೀಡುವ ಮೂಲಕ ಬಕ್ರೀದ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಮುಸ್ಲಿಂ ಸಮುದಾಯದ ಮುಖಂಡರಾದ ಸೈಯದ ಜಾಫರ್ ಉಲ್ ಹಸನ್ ಅವರು ತಮ್ಮ ತಂದೆ ಸೈಯದ್ ಹಫಿಸ್ ಉಲ್ ಹಸನ್, ತಾಯಿ ಸೈದಾ ಕೌಸರ್ ಆಫೀಸ್ ಹಾಗೂ ಸಹೋದರಿ ಸೆಮಿಸ್ ಬೇಗಂ ಅವರ ಪವಿತ್ರ ಸ್ಮರಣಾರ್ಥ ಗೋಶಾಲೆಗೆ ಭೇಟಿ ನೀಡಿ ಗೊವುಗಳ ಹಸಿವು ನೀಗಿಸಲು ಒಂದು ಟ್ರ್ಯಾಕ್ಟರ್&zwnj; ಕಣಕಿಯನ್ನು ದೇಣಿಗೆ ನೀಡಿದರು.&lt;/p&gt;&lt;h2&gt;&lt;strong&gt;ಕಂಬಳೇಶ್ವರ ಸೊಮಶೇಖರ ಶಿವಾಚಾರ್ಯರ ಹೇಳಿಕೆ&lt;/strong&gt;&lt;/h2&gt;&lt;p&gt;ಕಂಬಳೇಶ್ವರ ಸೊಮಶೇಖರ ಶಿವಾಚಾರ್ಯರು, ಹಬ್ಬ ಹರಿದಿನಗಳ ಹೆಸರಿನಲ್ಲಿ ಗೋವುಗಳನ್ನು ಕಡಿಯುವುದನ್ನು ಹಿಂಸಿಸುವುದನ್ನು ನಾವು ಹೆಚ್ಚಾಗಿ ನೋಡುತ್ತಿದ್ದೇವೆ. ಆದರೆ, ಇಂದಿನ ಬಕ್ರೀದ್ ಹಬ್ಬದ ಪವಿತ್ರ ದಿನದಂದು ಮುಸ್ಲಿಂ ಸಮುದಾಯದ ಸೈಯದ ಜಫರ್ ಅವರ ಕುಟುಂಬವು ತಮ್ಮ ಹಿರಿಯರ ಸ್ಮರಣಾರ್ಥ ಗೋಶಾಲೆಗೆ ಬಂದು ಗೋವುಗಳ ರಕ್ಷಣೆಗೆ ಧಾವಿಸಿರುವದು ಅವುಗಳಿಗೆ ಮೇವು ನೀಡಿರುವದು ನಿಜಕ್ಕೂ ಶ್ಲಾಘನೀಯ.&lt;/p&gt;&lt;p&gt;ಧರ್ಮ ಯಾವುದಾದರೂ ಮಾನವೀಯತೆ ಮತ್ತು ಪ್ರಾಣಿದಯೇ ಎಲ್ಲಕ್ಕಿಂತ ದೊಡ್ಡದು, ಸಮಾಜದಲ್ಲಿ ಇಂತಹ ಸೌಹಾರ್ದಯುತ ಚಿಂತನೆಗಳು ಹೆಚ್ಚಾಗಬೇಕು. ಗೋವುಗಳ ಕಡಿಯುವ ಕೈಗಳ ಮಧ್ಯ ಗೋವುಗಳನ್ನು ಕಾಯುವ ಮತ್ತು ಅವುಗಳ ಹಸಿವು ನೀಗಿಸುವ ಉದಾತ್ತ ಮನಸ್ಸುಗಳನ್ನು ನಾವಿಂದು ನೊಡುತ್ತಿರುವದು ಸಂತಸ ತಂದಿದೆ. ಈ ಕುಟುಂಬದ ಸತ್ಕಾರ್ಯ ಚಿತ್ತಾಪುರ ತಾಲೂಕಷ್ಟೆ ಅಲ್ಲದೇ ಇಡೀ ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಹರಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಗೊಶಾಲೆಯ ಅಧ್ಯಕ್ಷರಾದ ರಮೇಶ ಬೊಮ್ಮನಳ್ಳಿ, ಮುಖಂಡರಾದ ಧನರಾಜ ದೇಶಪಾಂಡೆ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಲಕ್ಷ್ಮೀ ಮಟ್ಟಿ, ನಟರಾಜ ಶಿಲ್ಪಿ, ಮಂಜುನಾಥ ಶಾಸ್ತ್ರೀ, ಗೋಪಾಲಕರಾದ ಚನ್ನಬಸಪ್ಪ, ಆಕಾಶ ಇದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburgi-chittapur-muslim-family-donates-fodder-to-cowshed-on-the-occasion-of-bakrid-festival-mrq/articleshow-p8pdhgo"/>
        </item>
        <item>
            <title><![CDATA[ಬೆಂಗಳೂರಲ್ಲಿ ಅದೆಂಥಾ ಮೇಧಾವಿ ಇಂಜಿನಿಯರ್‌ ಇದ್ರೇನು ಪ್ರಯೋಜನ, ಎಂದೂ ಮುಗಿಯದ ಸಮಸ್ಯೆಯಾಗಿ ಉಳಿದ ಸಿಲ್ಕ್‌ಬೋರ್ಡ್‌]]></title>
            <link>https://kannada.asianetnews.com/bengaluru-urban/silk-board-junction-waterlogging-traffic-jam-double-decker-flyover-bengaluru-san/articleshow-t376ldt</link>
            <guid isPermaLink="true">https://kannada.asianetnews.com/bengaluru-urban/silk-board-junction-waterlogging-traffic-jam-double-decker-flyover-bengaluru-san/articleshow-t376ldt</guid>
            <pubDate>Sat, 30 May 2026 10:43:00 +0530</pubDate>
            <description><![CDATA[&lt;p&gt;ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್&zwnj;ನಲ್ಲಿ ಹೊಸ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣವಾದರೂ, ಮಳೆಯಿಂದಾಗಿ ತೀವ್ರ ಜಲಾವೃತ ಮತ್ತು ಸಂಚಾರ ದಟ್ಟಣೆ ಮುಂದುವರೆದಿದೆ. ರಾಜಕಾಲುವೆಗಳಲ್ಲಿನ ಹೂಳು, ಕಸ ಮತ್ತು ಅಪೂರ್ಣ ಕಾಮಗಾರಿಗಳು ಈ ಸಮಸ್ಯೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksvm83vzfqxszf1gfsa76xrd,imgname-bengaluru-silk-board-1780117409663.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.30): &lt;/strong&gt;ಸಿಲಿಕಾನ್ ಸಿಟಿಯ ವಾಹನ ಸವಾರರು ಹಾಗೂ ಪಾದಚಾರಿಗಳ ಪಾಲಿಗೆ, ಮಳೆ ಬಂತೆಂದರೆ ಸಾಕು ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತೊಮ್ಮೆ ಭೀಕರ ಸಂಚಾರ ದಟ್ಟಣೆ ದುರ್ಗಮ ಸ್ಥಳವಾಗಿ ಮಾರ್ಪಟ್ಟಿದೆ. ನಗರದ ಅತ್ಯಂತ ಬಿಡುವಿಲ್ಲದ ಐಟಿ ಕಾರಿಡಾರ್&zwnj;ನಲ್ಲಿ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಅತ್ಯಂತ ಅದ್ಧೂರಿಯಾಗಿ ಉದ್ಘಾಟನೆಗೊಂಡಿದ್ದ &lsquo;ಡಬಲ್ ಡೆಕ್ಕರ್ ಫ್ಲೈಓವರ್&rsquo; (Double-decker Flyover) ವಾಹನ ಸವಾರರ ಸಂಕಷ್ಟವನ್ನು ದೂರ ಮಾಡುತ್ತದೆ ಎಂದು ನಂಬಲಾಗಿತ್ತು. ಆದರೆ, ಪ್ರತಿ ಬಾರಿ ಮಳೆ ಸುರಿದಾಗಲೂ ಇಲ್ಲಿ ಸೃಷ್ಟಿಯಾಗುತ್ತಿರುವ ತೀವ್ರ ಜಲಾವೃತ ಬಿಕ್ಕಟ್ಟು ಸವಾರರು ಮತ್ತೊಮ್ಮೆ ಜಂಕ್ಷನ್&zwnj;ಗೆ ಶಾಪ ಹಾಕುವಂತೆ ಮಾಡಿದೆ.&lt;/p&gt;&lt;p&gt;ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದ ಸಮೀಪದ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಟ್ಟಿತ್ತು. ಇದರಿಂದಾಗಿ ಪೀಕ್ ಅವರ್ (Peak-hour) ಟ್ರಾಫಿಕ್&zwnj;ನಲ್ಲಿ ವಾಹನಗಳು ಮಂಡಿಯುದ್ದ ನೀರಲ್ಲೇ ಹರಿದಾಡುವಂತಾಯಿತು. ಗುರುವಾರ ಸಂಜೆ ಕೂಡ ಇದೇ ರೀತಿಯ ದೃಶ್ಯ ಕಂಡುಬಂದಿದ್ದು, ಗಂಟೆಗಟ್ಟಲೆ ಬಂಪರ್-ಟು-ಬಂಪರ್ ಟ್ರಾಫಿಕ್ ಜ್ಯಾಮ್&zwnj;ನಲ್ಲಿ ಸಿಲುಕಿ ಸವಾರರು ತೀವ್ರ ಹತಾಶೆ ಅನುಭವಿಸಿದರು.&lt;/p&gt;&lt;p&gt;ಬೆಂಗಳೂರಿಗರಿಗೆ ಈ ಕಥೆ ಹೊಸದೇನಲ್ಲ, ಪ್ರತಿ ವರ್ಷವೂ ಇದು ಸಾಮಾನ್ಯ ಎನ್ನುವಂತಾಗಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲೂ ಮುಂಗಾರು ಪೂರ್ವ ಮಳೆಗೆ ಈ ಪ್ರಮುಖ ಜಂಕ್ಷನ್ ಮತ್ತು ಸುತ್ತಮುತ್ತಲಿನ ರಸ್ತೆಗಳು ಜಲಾವೃತಗೊಂಡಿದ್ದವು. ಆಗ ಮಳೆನೀರು ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದ ಒಳಗೂ ನುಗ್ಗಿತ್ತು. ಆ ಸಮಯದಲ್ಲಿ ಬಿಬಿಎಂಪಿ (ಪ್ರಸ್ತುತ ಜಿಬಿಎ - GBA) ಅಧಿಕಾರಿಗಳು ನಮ್ಮ ಮೆಟ್ರೋ ಕಾಮಗಾರಿ ಮತ್ತು ರಾಜಕಾಲುವೆಗಳ ಬ್ಲಾಕ್ ಆಗಿರುವುದೇ ಮಳೆನೀರಿನ ನೈಸರ್ಗಿಕ ಹರಿವಿಗೆ ಅಡ್ಡಿಯಾಗಿದೆ ಎಂದು ದೂಷಿಸಿದ್ದರು. ಮುಂದಿನ ಮುಂಗಾರು ಬರುವಷ್ಟರಲ್ಲಿ ಹೂಳು ತೆಗೆದು, ಪ್ರವಾಹ ನಿಯಂತ್ರಣ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ಪರಿಸ್ಥಿತಿ ಕಿಂಚಿತ್ತೂ ಬದಲಾಗಿಲ್ಲ ಎಂದು ಸವಾರರು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಸಮಸ್ಯೆ ಏನು? ಪರಿಹಾರವೇನು?&lt;/strong&gt;&lt;/h2&gt;&lt;p&gt;ಅಧಿಕಾರಿಗಳ ಪ್ರಕಾರ, ಮಡಿವಾಳ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಕೆರೆಗಳಿಂದ ಹರಿದು ಬರುವ ಮಳೆನೀರು ಸಿಲ್ಕ್ ಬೋರ್ಡ್ ಜಂಕ್ಷನ್ ತಲುಪುತ್ತದೆ. ಪ್ರಸ್ತುತ ಇರುವ ರಾಜಕಾಲುವೆ (Stormwater Drain) ಜಾಲಕ್ಕೆ ಇಷ್ಟು ಭಾರಿ ಪ್ರಮಾಣದ ನೀರನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲ. ಇದಕ್ಕೆ ಪರಿಹಾರವಾಗಿ, ಜಿಬಿಎ (GBA) ಸ್ಟೀಲ್ ಗಿರ್ಡರ್&zwnj;ಗಳನ್ನು ಬಳಸಿ ಕಾಲುವೆಯ ಅಗಲವನ್ನು 1.5 ಮೀಟರ್&zwnj;ನಿಂದ 3.5 ಮೀಟರ್&zwnj;ಗೆ ವಿಸ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಏಪ್ರಿಲ್&zwnj;ನಲ್ಲಿ ಪ್ರಾರಂಭವಾಗಿರುವ ಈ ಯೋಜನೆಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ.&lt;/p&gt;&lt;p&gt;ಜಿಬಿಎ ಯೋಜನಾ ಜಾರಿಯ ಮುಖ್ಯ ಎಂಜಿನಿಯರ್ ಎಸ್.ವಿ. ರಾಜೇಶ್, 'ರಾಜಕಾಲುವೆಗಳಲ್ಲಿ ಟನ್&zwnj;ಗಟ್ಟಲೆ ಕಸ ಬಂದು ಸಿಲುಕಿಕೊಳ್ಳುತ್ತಿರುವುದು ಪ್ರವಾಹದ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಸಿಲ್ಕ್ ಬೋರ್ಡ್ ಸಮೀಪದ ಡ್ರೈನ್&zwnj;ಗಳಿಂದ ಪ್ಲಾಸ್ಟಿಕ್ ಬಾಟಲಿಗಳು, ಬಟ್ಟೆಗಳು ಮತ್ತು ಘನತ್ಯಾಜ್ಯ ಸೇರಿದಂತೆ ಬರೋಬ್ಬರಿ 40 ಟನ್&zwnj;ಗಿಂತಲೂ ಹೆಚ್ಚು ಕಸವನ್ನು ಹೊರತೆಗೆಯಲಾಗಿದೆ..' ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರವಾಹ ತಡೆಯಲು ನೀರನ್ನು ಎಚ್&zwnj;ಎಸ್&zwnj;ಆರ್ ಲೇಔಟ್ ಕಡೆಗೆ ತಿರುಗಿಸಲು ಎಲ್-ಆಕಾರದ (L-shaped) ಕಲ್ವರ್ಟ್ ನಿರ್ಮಿಸಲಾಗುತ್ತಿದೆ. ಆದರೆ, ಈ ನಡೆಯುತ್ತಿರುವ ಕಾಮಗಾರಿಯಿಂದಾಗಿ ರಸ್ತೆ ಮುಚ್ಚಿರುವುದು ಮತ್ತು ಟ್ರಾಫಿಕ್ ಡೈವರ್ಷನ್&zwnj;ಗಳು ಸವಾರರ ಕೋಪವನ್ನು ಮತ್ತಷ್ಟು ಹೆಚ್ಚಿಸಿವೆ.&lt;/p&gt;&lt;h2&gt;&lt;strong&gt;ಕಾಮಗಾರಿಗಳ ಎಡವಟ್ಟು: ನೈಸರ್ಗಿಕ ಹರಿವಿಗೆ ಬಿದ್ದ ಬ್ರೇಕ್&lt;/strong&gt;&lt;/h2&gt;&lt;p&gt;ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಅಧಿಕಾರಿಗಳ ಪ್ರಕಾರ, ಕಳೆದ ಹಲವು ವರ್ಷಗಳಿಂದ ಇಲ್ಲಿ ನಡೆದಿರುವ ಸಾಲು ಸಾಲು ಮೂಲಸೌಕರ್ಯ ಯೋಜನೆಗಳು ಸಿಲ್ಕ್ ಬೋರ್ಡ್ ಸುತ್ತಮುತ್ತಲಿನ ನೈಸರ್ಗಿಕ ಜಲಾನಯನ ಮಾದರಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಈ ಹಿಂದೆ ಎನ್&zwnj;ಎಚ್&zwnj;ಎಐ (NHAI) ಫ್ಲೈಓವರ್ ನಿರ್ಮಾಣವು ನೀರಿನ ಹರಿವನ್ನು ಬದಲಾಯಿಸಿತು. ಅದರ ಬೆನ್ನಲ್ಲೇ ಮೆಟ್ರೋ ಕಾಮಗಾರಿಗಳು ಮತ್ತು ಈಗ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗಾಗಿ ನಿರ್ಮಿಸಲಾದ ಬೃಹತ್ ಪಿಲ್ಲರ್&zwnj;ಗಳು ಜಂಕ್ಷನ್ ಸುತ್ತಲಿನ ಚರಂಡಿ ಮಾರ್ಗಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿವೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಜೀವ ಕೈಯಲ್ಲಿ ಹಿಡಿದು ನಡೆಯುವ ಪಾದಚಾರಿಗಳು&lt;/strong&gt;&lt;/h2&gt;&lt;p&gt;ರಾಜಕಾಲುವೆ ಕಾಮಗಾರಿಗಳು ಇಲ್ಲಿನ ಯೆಲ್ಲೋ ಲೈನ್ ಮೆಟ್ರೋ ನಿಲ್ದಾಣ ಮತ್ತು ಬಿಎಂಟಿಸಿ (BMTC) ಬಸ್ ನಿಲ್ದಾಣವನ್ನು ಬಳಸುವ ಸಾವಿರಾರು ಪಾದಚಾರಿಗಳಿಗೆ ಸಂಚಕಾರವಾಗಿ ಮಾರ್ಪಟ್ಟಿದೆ. ಪಾದಚಾರಿಗಳಿಗೆ ಪ್ರತ್ಯೇಕ ಮಾರ್ಗವಿಲ್ಲದ ಕಾರಣ, ಜನರು ಕೆಸರು ಮತ್ತು ಕಸದಿಂದ ತುಂಬಿದ ರಸ್ತೆಯಲ್ಲೇ ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದು ನಡೆಯಬೇಕಾಗಿದೆ.&lt;/p&gt;&lt;p&gt;'ಮೆಟ್ರೋ ನಿಲ್ದಾಣದಲ್ಲಿ ಇಳಿದ ನಂತರ ಬಿಎಂಟಿಸಿ ಬಸ್ ನಿಲ್ದಾಣ ತಲುಪಲು ನಾನು ಸುಮಾರು 300 ಮೀಟರ್ ನಡೆಯಬೇಕು. ಈ ಇಡೀ ರಸ್ತೆ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಪಾದಚಾರಿಗಳಿಗೆ ನಡೆಯಲು ಜಾಗವೇ ಇಲ್ಲ. ಹೂಳು ತೆಗೆದ ನಂತರ ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ಸುರಿಯಲಾಗಿದೆ, ಮಳೆ ಬಂದಾಗ ಅದು ರಸ್ತೆಯುದ್ದಕ್ಕೂ ಹರಡುತ್ತದೆ' ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. 'ಜನರಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ಮತ್ತು ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಸಿಲ್ಕ್ ಬೋರ್ಡ್ ಜಂಕ್ಷನ್ ಇಂದಿನ ಈ ದುಸ್ಥಿತಿಗೆ ತಲುಪಲು ಕಾರಣ..' ಎಂದು ಟೆಕ್ಕಿಯೊಬ್ಬರು ದೂಷಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by   (@amburexpress)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/silk-board-junction-waterlogging-traffic-jam-double-decker-flyover-bengaluru-san/articleshow-t376ldt"/>
        </item>
        <item>
            <title><![CDATA[21 ಲಕ್ಷದ ಲಿಫ್ಟ್ ಇದ್ದೂ ಪ್ರಯೋಜನವಿಲ್ಲ: ವೃದ್ಧರನ್ನು ಹೆಗಲ ಮೇಲೆ ಹೊತ್ತು ಸಾಗುವ ದುಸ್ಥಿತಿ!]]></title>
            <link>https://kannada.asianetnews.com/karnataka-districts/lift-built-for-senior-citizens-at-the-huvinahadagali-sub-registration-office-but-it-is-not-yet-available-for-use-mrq/articleshow-toty1to</link>
            <guid isPermaLink="true">https://kannada.asianetnews.com/karnataka-districts/lift-built-for-senior-citizens-at-the-huvinahadagali-sub-registration-office-but-it-is-not-yet-available-for-use-mrq/articleshow-toty1to</guid>
            <pubDate>Sat, 30 May 2026 10:27:30 +0530</pubDate>
            <description><![CDATA[ಹೂವಿನಹಡಗಲಿಯ ಉಪ ನೋಂದಣಿ ಕಚೇರಿಯಲ್ಲಿ ಹಿರಿಯ ನಾಗರಿಕರ ಅನುಕೂಲಕ್ಕಾಗಿ ನಿರ್ಮಿಸಿದ ಲಿಫ್ಟ್ ಉದ್ಘಾಟನೆಯಾದರೂ ಬಳಕೆಗೆ ಲಭ್ಯವಾಗಿಲ್ಲ. ಗುತ್ತಿಗೆದಾರರು ಲಿಫ್ಟ್&zwnj;ನ ಕೀಲಿಯನ್ನು ಇನ್ನೂ ಹಸ್ತಾಂತರಿಸದ ಕಾರಣ, ವಯೋವೃದ್ಧರನ್ನು ಹೊತ್ತುಕೊಂಡು ಮೆಟ್ಟಿಲು ಹತ್ತುವ ಸಂಕಷ್ಟ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvkq2zwfyb2cvsbe831man1,imgname-hoovina-hadagali-1780116851708.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ: &lt;/strong&gt;ಹೂವಿನಹಡಗಲಿಯ ಕಂದಾಯ ಇಲಾಖೆಯ 2ನೇ ಮಹಡಿಯ ಉಪ ನೋಂದಣಿ ಕಚೇರಿಗೆ ನಿರ್ಮಿಸಿದ್ದ ಲಿಫ್ಟ್&zwnj;ನ ಕೀ ಇಲ್ಲದೇ ವಯಸ್ಸಾಗಿರುವ ವ್ಯಕ್ತಿಗಳನ್ನು ಹೊತ್ತುಕೊಂಡು ಹೋಗುವ ಸ್ಥಿತಿ ಇನ್ನು ಬದಲಾಗಿಲ್ಲ.&lt;/p&gt;&lt;h2&gt;&lt;strong&gt;ಲಿಫ್ಟ್&zwnj; ಕೀ ನೀಡದ ಗುತ್ತಿಗೆದಾರ!&lt;/strong&gt;&lt;/h2&gt;&lt;p&gt;ಹೌದು, ಉಪ ನೋಂದಣಾಧಿಕಾರಿ ಕಚೇರಿಗೆ ಹಿರಿಯ ನಾಗರಿಕರು, ಅಂಗವಿಕಲರು ಮೆಟ್ಟಲು ಹತ್ತಿಕೊಂಡು ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನರಿತ ಶಾಸಕ ಕೃಷ್ಣನಾಯ್ಕ ಪುರಸಭೆ ನಗರೋತ್ಥಾನ ಯೋಜನೆಯ ಉಳಿಕೆಯ ₹21 ಲಕ್ಷ ಅನುದಾನದಲ್ಲಿ ಹೊಸ ಲಿಫ್ಟ್&zwnj; ನಿರ್ಮಿಸಿ ಚಾಲನೆ ನೀಡಿದ್ದರು. ಆದರೆ ಲಿಫ್ಟ್&zwnj; ನಿರ್ಮಾಣ ಗುತ್ತಿಗೆ ಪಡೆದ ಗುತ್ತಿಗೆದಾರರ ಈವರೆಗೂ ಉಪ ನೋಂದಣಾಧಿಕಾರಿಗೆ ಕೀಲಿ ನೀಡಿಲ್ಲ.&lt;/p&gt;&lt;p&gt;ಲಿಫ್ಟ್ ಇಲ್ಲದ ಕಾರಣ ಸಾರ್ವಜನಿಕರು ವಯಸ್ಸಾಗಿರುವ ವ್ಯಕ್ತಿಯನ್ನು ಪಾಲಕರು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಚಾಲನೆ ನೀಡಿದ್ದರೂ ಇನ್ನು ಲಿಫ್ಟ್&zwnj; ಕೆಲಸ ಮಾಡುತ್ತಿಲ್ಲ. ಈ ಲಿಫ್ಟ್&zwnj;ನ ಕೀ ನಮಗೆ ನೀಡುವಂತೆ ಶಾಸಕರು ತಿಳಿಸಿದ್ದಾರೆ. ಆದರೆ ಗುತ್ತಿಗೆದಾರರು ನಮಗೆ ನೀಡಿಲ್ಲ ಎನ್ನುತ್ತಾರೆ ಉಪ ನೋಂದಣಾಧಿಕಾರಿ ನಾಗೇಂದ್ರಪ್ಪ.&lt;/p&gt;&lt;h3&gt;&lt;strong&gt;ಪುರಸಭೆ ಅಧಿಕಾರಿಗಳು ಏನ್ ಹೇಳ್ತಾರೆ?&lt;/strong&gt;&lt;/h3&gt;&lt;p&gt;ಲಿಫ್ಟ್&zwnj; ಕಾಮಗಾರಿ ಮಾಡಿರುವ ಗುತ್ತಿಗೆದಾರರು ಉಪ ನೋಂದಣಾಧಿಕಾರಿಗೆ ಪತ್ರ ಬರೆದು ನಂತರದಲ್ಲಿ ಅವರಿಗೆ ಹಸ್ತಾಂತರಿಸುವ ಕೆಲಸ ಬಾಕಿ ಇದೆ. ಕೀ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಹೇಳಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/lift-built-for-senior-citizens-at-the-huvinahadagali-sub-registration-office-but-it-is-not-yet-available-for-use-mrq/articleshow-toty1to"/>
        </item>
        <item>
            <title><![CDATA[Bidar BRIMS hospital crime: ಪೋಸ್ಟ್‌ ಮಾರ್ಟ್‌ಮ್‌ ವೇಳೆ ಹೆಣ್ಣು ಶವಗಳ ಬೆತ್ತಲೆ ಚಿತ್ರ ಸೆರೆಹಿಡಿಯುತ್ತಿದ್ದ ಅಟೆಂಡರ್ ಅರೆಸ್ಟ್]]></title>
            <link>https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5</link>
            <guid isPermaLink="true">https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5</guid>
            <pubDate>Sat, 30 May 2026 09:12:01 +0530</pubDate>
            <description><![CDATA[ಬೀದರ್&zwnj;ನ ಬ್ರಿಮ್ಸ್&zwnj; ಆಸ್ಪತ್ರೆಯ ಶವಾಗಾರದಲ್ಲಿ, ಪೋಸ್ಟ್&zwnj;ಮಾರ್ಟ್&zwnj;ಮ್&zwnj; ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತೆಗೆಯುತ್ತಿದ್ದ ಅಟೆಂಡರ್&zwnj;ನನ್ನು ಬಂಧಿಸಲಾಗಿದೆ. ಆಸ್ಪತ್ರೆ ಆಡಳಿತ ಮಂಡಳಿ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvf511ys88d1qmvq5ffjhpk,imgname-----------------------2026-05-30t090355.165-1780112065598.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್&zwnj;ನ ಬ್ರಿಮ್ಸ್&zwnj; (BRIMS) ಜಿಲ್ಲಾಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದ್ದು, ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಟೆಂಡರ್&zwnj;ನೊಬ್ಬ ಪೋಸ್ಟ್&zwnj;ಮಾರ್ಟ್&zwnj;ಮ್&zwnj; ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತನ್ನ ಮೊಬೈಲ್&zwnj;ನಲ್ಲಿ ಸೆರೆಹಿಡಿಯುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.&lt;/p&gt;&lt;p&gt;ಆರೋಪಿ ಮುನೀರ್&zwnj; ಅಹ್ಮದ್&zwnj; ಹಲವು ವರ್ಷಗಳಿಂದ ಆಸ್ಪತ್ರೆಯ ಶವಾಗಾರ ವಿಭಾಗದಲ್ಲಿ ಅಟೆಂಡರ್&zwnj; ಆಗಿ ಕೆಲಸ ಮಾಡುತ್ತಿದ್ದಾನೆ. ಪೋಸ್ಟ್&zwnj;ಮಾರ್ಟ್&zwnj;ಮ್&zwnj; ಪ್ರಕ್ರಿಯೆ ನಡೆಯುವ ವೇಳೆ ಮಹಿಳಾ ಶವಗಳ ಫೋಟೋಗಳನ್ನು ರಹಸ್ಯವಾಗಿ ತೆಗೆದು ಸಂಗ್ರಹಿಸಿಡುತ್ತಿದ್ದನೆಂಬ ವಿಚಾರ ತಿಳಿದು ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಮಾಹಿತಿಯ ಪ್ರಕಾರ, ಆರೋಪಿಯ ಮೊಬೈಲ್&zwnj; ಫೋನ್&zwnj; ಪರಿಶೀಲಿಸಿದಾಗ ಹಲವು ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳು ಪತ್ತೆಯಾಗಿವೆ. ಇದರಿಂದ ಆತ ಹಲವು ವರ್ಷಗಳಿಂದ ಇದೇ ರೀತಿಯ ವಿಕೃತ ಕೃತ್ಯ ಎಸಗುತ್ತಿದ್ದಾನೆಯೇ ಎಂಬ ಅನುಮಾನ ಮೂಡಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಪ್ರಕರಣದ ಗಂಭೀರತೆಯನ್ನು ಮನಗಂಡ ಬ್ರಿಮ್ಸ್&zwnj; ಮುಖ್ಯಸ್ಥ ಡಾ. ಮೊಸಿನ್&zwnj; ಉಲ್&zwnj; ಹಕ್&zwnj; ಅವರು ನ್ಯೂಟೌನ್&zwnj; ಪೊಲೀಸ್&zwnj; ಠಾಣೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಮುನೀರ್&zwnj; ಅಹ್ಮದ್&zwnj;ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಸ್ಪತ್ರೆಯಂತಹ ಸೂಕ್ಷ್ಮ ಮತ್ತು ಗೌರವಯುತ ಸ್ಥಳದಲ್ಲಿ ನಡೆದಿರುವ ಈ ಕೃತ್ಯ ಸಾರ್ವಜನಿಕರಲ್ಲಿ ತೀವ್ರ ಆಘಾತ ಉಂಟುಮಾಡಿದ್ದು, ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5"/>
        </item>
        <item>
            <title><![CDATA[Bengaluru: ಕುರಿ ಮಟನ್ ಬದಲಾಗಿ ದನದ ಮಾಂಸ ನೀಡ್ತಿದ್ದ ರೆಸ್ಟೋರೆಂಟ್‌ಗೆ ಬೀಗ; ಇಬ್ಬರ ಬಂಧನ]]></title>
            <link>https://kannada.asianetnews.com/gallery/karnataka-districts/bengaluru-customers-were-served-beef-at-the-kayaloram-restaurant-believing-it-to-be-mutton-mrq-s8p02ql</link>
            <guid isPermaLink="true">https://kannada.asianetnews.com/gallery/karnataka-districts/bengaluru-customers-were-served-beef-at-the-kayaloram-restaurant-believing-it-to-be-mutton-mrq-s8p02ql</guid>
            <pubDate>Sat, 30 May 2026 09:04:56 +0530</pubDate>
            <description><![CDATA[ಬೆಂಗಳೂರಿನ ಬೂದಿಗೆರೆ ಕ್ರಾಸ್&zwnj;ನಲ್ಲಿರುವ ಕಾಯಲೋರಂ ರೆಸ್ಟೋರೆಂಟ್&zwnj;ನಲ್ಲಿ ಮಟನ್ ಎಂದು ನಂಬಿಸಿ ಗ್ರಾಹಕರಿಗೆ ದನದ ಮಾಂಸವನ್ನು ನೀಡಲಾಗುತ್ತಿತ್ತು. ಅನುಮಾನಗೊಂಡ ಯುವಕರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಂಚನೆ ಬಯಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ರೆಸ್ಟೋರೆಂಟ್&zwnj;ಗೆ ಬೀಗ ಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvew686xdjtapafk5ecdhxj,imgname-mutton--1--1780111776006.jpg" type="image/jpeg" height="390" width="690"/>
            <content:encoded><![CDATA[ಬೆಂಗಳೂರಿನ ಬೂದಿಗೆರೆ ಕ್ರಾಸ್&zwnj;ನಲ್ಲಿರುವ ಕಾಯಲೋರಂ ರೆಸ್ಟೋರೆಂಟ್&zwnj;ನಲ್ಲಿ ಮಟನ್ ಎಂದು ನಂಬಿಸಿ ಗ್ರಾಹಕರಿಗೆ ದನದ ಮಾಂಸವನ್ನು ನೀಡಲಾಗುತ್ತಿತ್ತು. ಅನುಮಾನಗೊಂಡ ಯುವಕರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಂಚನೆ ಬಯಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ರೆಸ್ಟೋರೆಂಟ್&zwnj;ಗೆ ಬೀಗ ಹಾಕಿದ್ದಾರೆ.&lt;img&gt;&lt;p&gt;ಸಿಕ್ಕ ಸಿಕ್ಕ ಜಾಗದಲ್ಲಿ ಅಥವಾ ನಂಬಿಕೆಗೆ ಅರ್ಹವಲ್ಲದ ಹೋಟೆಲ್&zwnj;ಗಳಲ್ಲಿ ಮಾಂಸಾಹಾರ ಸೇವನೆ ಮಾಡುವ ಜನರು ಎಚ್ಚರಿಕೆಯಿಂದಿರಬೇಕಾಗುತ್ತದೆ. ಮಟನ್ ಹೆಸರಿನಲ್ಲಿ ಗ್ರಾಹಕರಿಗೆ ದನದ ಮಾಂಸ ನೀಡುತ್ತಿದ್ದ ಬೆಂಗಳೂರಿನ ರೆಸ್ಟೋರೆಂಟ್&zwnj;ಗೆ ಬೀಗ ಹಾಕಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಬೂದಿಗೆರೆ ಕ್ರಾಸ್ ಬೊಮ್ಮೇನಹಳ್ಳಿಯ ಐಸಿರಿ ಹಬ್ ನಲ್ಲಿರುವ ಕಾಯಲೋರಂ ರೆಸ್ಟೊರೆಂಟ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆವಲಹಳ್ಳಿ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಜೀಜು ಮತ್ತು ಶಿಬು ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಕಾಯಲೋರಂ ಹೆಸರಿನಲ್ಲಿ ಈ ರೆಸ್ಟೋರೆಂಟ್ ನಡೆಸಲಾಗುತ್ತಿದೆ.&lt;/p&gt;&lt;img&gt;&lt;p&gt;ಕೆಲವು ದಿನಗಳ ಹಿಂದೆ ಯುವಕರು ಕಾಯಲೋರಂ ರೆಸ್ಟೋರೆಂಟ್&zwnj;ಗೆ ಊಟಕ್ಕೆ ಬಂದು ಮಟನ್ ಮೀಲ್ಸ್ ಆರ್ಡರ್ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ, ಮಟನ್ ಬದಲಿಗೆ ದನದ ಮಾಂಸವನ್ನು ನೀಡಿದ್ದಾರೆ. ಅನುಮಾನಗೊಂಡ ಯುವಕರು ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಆವಲಹಳ್ಳಿ ಪೊಲೀಸರಿಗೂ ಸಹ ಈ ಮಾಹಿತಿಯನ್ನು ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)&lt;/p&gt;&lt;img&gt;&lt;p&gt;ವಿಷಯ ತಿಳಿದು ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ದನದ ಮಾಂಸ ನೀಡಿರೋದು ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ರೆಸ್ಟೋರೆಂಟ್&zwnj;ನನ್ನು ಬಂದ್ ಮಾಡಿದ್ದಾರೆ. ಈ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)&lt;/p&gt;]]></content:encoded>
            <category>karnataka-districts</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bengaluru-customers-were-served-beef-at-the-kayaloram-restaurant-believing-it-to-be-mutton-mrq-s8p02ql"/>
        </item>
        <item>
            <title><![CDATA[Job: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ]]></title>
            <link>https://kannada.asianetnews.com/jobs/doddaballapur-devanahalli-applications-invited-for-the-posts-of-9-anganwadi-workers-84-assistants-technical-managers-mrq/articleshow-qazidfs</link>
            <guid isPermaLink="true">https://kannada.asianetnews.com/jobs/doddaballapur-devanahalli-applications-invited-for-the-posts-of-9-anganwadi-workers-84-assistants-technical-managers-mrq/articleshow-qazidfs</guid>
            <pubDate>Sat, 30 May 2026 08:41:45 +0530</pubDate>
            <description><![CDATA[ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕುಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರೊಂದಿಗೆ, ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೂ ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತರು ನಿಗದಿತ ದಿನಾಂಕದೊಳಗೆ ಆಫ್&zwnj;ಲೈನ್&zwnj; ಮೂಲಕ ಅರ್ಜಿ ಸಲ್ಲಿಸಬೇಕು.]]></description>
            <media:content url="https://static.asianetnews.com/images/w-1280,h-720,format-jpg,imgid-01ksvdq2hwhc2kyrbwewqgqa7b,imgname-job-1780110559803.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು ಗ್ರಾಮಾಂತರ: &lt;/strong&gt;ದೊಡ್ಡಬಳ್ಳಾಪುರ ತಾಲೂಕು ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 09 ಅಂಗನವಾಡಿ ಕಾರ್ಯಕರ್ತೆ ಮತ್ತು 84 ಸಹಾಯಕಿ ಹುದ್ದೆಗಳಿಗೆ ಗೌರವ ಸೇವೆಯ ಆಧಾರದ ಮೇಲೆ ಆಯ್ಕೆ ಮಾಡಲು ಆಫ್&zwnj;ಲೈನ್&zwnj; ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಅರ್ಜಿ ಪಡೆದು ಜೂ. 30 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ: 080-27625228 ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಎ.ಪಿ.ಎಂ.ಸಿ ಬಿಲ್ಡಿಂಗ್ ಒಳಾವರಣ, ದೊಡ್ಡಬಳ್ಳಾಪುರ ಇಲ್ಲಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.&lt;/p&gt;&lt;h2&gt;&lt;strong&gt;ದೇವನಹಳ್ಳಿಯಲ್ಲೂ ಹುದ್ದೆ&lt;/strong&gt;&lt;/h2&gt;&lt;p&gt;ಅದೇ ರೀತಿ ದೇವನಹಳ್ಳಿ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 10 ಅಂಗನವಾಡಿ ಕಾರ್ಯಕರ್ತೆ ಮತ್ತು 58 ಸಹಾಯಕಿ ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಅರ್ಜಿ ಪಡೆದು ಜೂ. 30 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಎರಡನೇ ಮಹಡಿ, ಅಕ್ಷಯ ಭವನ, ಪಿಎಲ್ ಡಿ ಬ್ಯಾಂಕ್ ಕಟ್ಟಡ ಆವರಣ, ದೇವನಹಳ್ಳಿ ಟೌನ್. ದೂ. ಸಂಖ್ಯೆ: 080-29565103 ಇಲ್ಲಿಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.&lt;/p&gt;&lt;h3&gt;ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಅವಧಿ ವಿಸ್ತರಣೆ&lt;/h3&gt;&lt;p&gt;ಕೃಷಿ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ನೇರಗುತ್ತಿಗೆ ಆಧಾರದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ. ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅಭ್ಯರ್ಥಿಗಳು ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಕನಿಷ್ಠ 01 ವರ್ಷ ಕೃಷಿ ಅಥವಾ ಕೃಷಿ ಸಂಬಂಧಿತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು. ಆಸಕ್ತರು ಅಗತ್ಯ ದಾಖಲಾತಿಗಳು ಹಾಗೂ ತಮ್ಮ ಬಯೋಡೇಟಾದೊಂದಿಗೆ ಜೂ. 6 ರೊಳಗೆ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಠಡಿ ಸಂಖ್ಯೆ 208 /209, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಸಲ್ಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/jobs/doddaballapur-devanahalli-applications-invited-for-the-posts-of-9-anganwadi-workers-84-assistants-technical-managers-mrq/articleshow-qazidfs"/>
        </item>
        <item>
            <title><![CDATA[ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು! ತಕರಾರಿನಲ್ಲಿದ್ದ ಜಮೀನು ಖರೀದಿ, ಒಂದೇ ಕುಟುಂಬದ 6 ಜನರ ಕೊಲೆ!]]></title>
            <link>https://kannada.asianetnews.com/crime/six-shot-dead-near-chadchan-vijayapur-over-property-dispute-rav/articleshow-4ww3b4w</link>
            <guid isPermaLink="true">https://kannada.asianetnews.com/crime/six-shot-dead-near-chadchan-vijayapur-over-property-dispute-rav/articleshow-4ww3b4w</guid>
            <pubDate>Sat, 30 May 2026 08:22:21 +0530</pubDate>
            <description><![CDATA[ವಿಜಯಪುರದ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಆರು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 15 ವರ್ಷಗಳ ಹಿಂದಿನ ಹಗೆತನಕ್ಕೆ ಕಾರಣವಾಗಿದ್ದ ವಿವಾದಿತ ಜಮೀನನ್ನು ಖರೀದಿಸಿದ್ದೇ ಈ ಘಟನೆಗೆ ಕಾರಣವೆಂದು ಶಂಕಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvcm37hay5bqc9nd0fvvmxd,imgname-----------------------2026-05-30t081437.836-1780109413617.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಶಿಕಾಂತ ಮೆಂಡೆಗಾರ&lt;/strong&gt;&lt;/p&gt;&lt;p&gt;&lt;strong&gt;ವಿಜಯಪುರ (ಮೇ.30):&lt;/strong&gt; ಹೆಣ್ಣು, ಹೊನ್ನು, ಮಣ್ಣಿಗಾಗಿ ಹಗೆತನಕ್ಕೆ ಬಿದ್ದ ಅದೆಷ್ಟೋ ಪ್ರತಿಷ್ಠಿತ ಮನೆತನಗಳೇ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಅದರಂತೆ ಜಮೀನಿನ ಬದುವೊಂದರ ವಿಚಾರವಾಗಿ ಕಳೆದ 4 ದಶಕಗಳ ಹಿಂದೆ ಭೀಮಾತೀರದಲ್ಲಿನ ಚಡಚಣದಲ್ಲಿ ಭೈರಗೊಂಡ-ಚಡಚಣ ಕುಟುಂಬಗಳ ಮದ್ಯೆ ಶುರುವಾಗಿದ್ದ ಹತ್ಯಾಕಾಂಡಗಳು ಸಾಲು, ಸಾಲು ಹೆಣಗಳು ಬಿದ್ದರೂ ಇನ್ನೂ ನಿಂತಿಲ್ಲ. ಈ ಎರಡು ಕುಟುಂಬಗಳ ಮಧ್ಯ ಶುರುವಾದ ವ್ಯಾಜ್ಯ ದಿನಗಳುರಿಳಿದಂತೆ ತಲೆಗಳುರುಳಿ ಅನೇಕ ಕುಟುಂಬಗಳ ಸಮಾಧಿಯನ್ನೇ ಕಟ್ಟಿವೆ. ಈ ಹಿಂದೆ ಅಲೋಕಕುಮಾರ ಅವರು ಉತ್ತರ ವಲಯ ಐಜಿಪಿ ಇದ್ದಾಗ ಇದೆಲ್ಲವೂ ಇಲ್ಲಿಗೆ ನಿಲ್ಲಬೇಕೆಂದು ಹಗೆತನದ ಕುಟುಂಬಳನ್ನೆಲ್ಲ ಒಂದುಗೂಡಿಸುವ ಪ್ರಯತ್ನ ಮಾಡಿದರೂ ಅಷ್ಟೆನೂ ಸಫಲತೆ ಕಂಡಿಲ್ಲ. ಆದರೆ, ಇಂದು ನಡೆದ ಭಯಾಕನ 6 ಜನರ ಹತ್ಯೆಯ ಘಟನೆ ಮತ್ತೆ ಭೀಮಾತೀರದ ಕ್ರೌರ್ಯ ಮೆರೆದಿದೆ.&lt;/p&gt;&lt;h2&gt;ಬೆಚ್ಚಿ ಬೀಳಿಸಿದ ಕೊಲೆ:&lt;/h2&gt;&lt;p&gt;ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ಭೀಕರ ಕೊಲೆ ನಡೆದಿದ್ದು, ಆರು ಜನರು ಕೊಲೆಯಾಗಿದ್ದಾರೆ. ದುಂಡಪ್ಪ ನಿರಾಳೆ (65), ಸಹೋದರರಾದ ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ(55) ಶಿವಪುತ್ರನ ಮಕ್ಕಳಾದ ರಾಹುಲ ನಿರಾಳೆ(25), ಸಮರ್ಥ ನಿರಾಳೆ(23)ಶಿವರ ಸಹಚರ ಶಬ್ಬೀರ ಅತ್ತಾರ(45) ಕೊಲೆಯಾಗಿದ್ದಾರೆ. ಇವರ ಜೊತೆಯಲ್ಲಿದ್ದ ಅರವಿಂದ ಕಟಗೆ ಹಾಗೂ ಜೆಸಿಬಿ ಆಪರೇಟರ್ ಸಂದೀಪ ಮಾನೆ ಗಾಯಗೊಂಡಿದ್ದು, ವಿಜಯಪುರ ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.&lt;/p&gt;&lt;h3&gt;ಚಡಚಣ ಜಮೀನು ವಿವಾದ, ಕೊಲೆ ಘಟನೆ ಹಿನ್ನೆಲೆ:&lt;/h3&gt;&lt;p&gt;ಈ ಹಿಂದೆ 2015ರಲ್ಲಿ ಚಡಚಣ ತಾಲೂಕಿನ ಗೋವಿಂದಪುರದ ನಿವಾಸಿ ಶಿವಾನಂದ ತಳವಾರ ಎಂಬಾತ ತೇಲಿ ಮನೆತನದ ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದ. ಇದರಿಂದ ಕುಪಿತಗೊಂಡ ತೇಲಿ ಮನೆತನದ ಶಶಿಕಾಂತ ತೇಲಿ, ಪ್ರಶಾಂತ ತೇಲಿ, ಕಾಮನಿಂಗ ತೇಲಿ, ಮಹಾದೇವ ತೇಲಿ ಸೇರಿಕೊಂಡು ಶಿವಾನಂದ ತಳವಾರ ಎಂಬಾತನನ್ನು ಕೊಲೆ ಮಾಡಿದ್ದು, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಈ ಸಮಯದಲ್ಲಿ ತೇಲಿ ಮನೆತನದವರು ಗೋವಿಂದಪೂರದಲ್ಲಿನ ಜಮೀನು ಬಿಟ್ಟು ಬೇರೆಡೆ ನೆಲೆಸಿದ್ದು, ಅಂದಿನಿಂದ ಈ ಜಮೀನು ಖಾಲಿ ಬಿದ್ದಿತ್ತು. ಸದರಿಯವರಿಗೆ ಸೇರಿದ ಜಮೀನು ಉಳಿಮೆ ಇಲ್ಲದೇ ಹಾಗೇ ಉಳಿದಿತ್ತು.&lt;/p&gt;&lt;p&gt;ಜಮೀನು ಖರೀದಿಸಿ ಕೊಲೆಯಾದರಾ?&lt;/p&gt;&lt;p&gt;ಕಳೆದ 15 ವರ್ಷಗಳ ಹಿಂದೆ ಹೆಣ್ಣೊಂದರ ವಿಚಾರದಲ್ಲಿ ತೇಲಿ ಹಾಗೂ ತಳವಾರ ಕುಟುಂಬಗಳ ಮಧ್ಯ ಮೂಡಿದ್ದ ವೈಷ್ಯಮ್ಯ ಇಂದು ಸ್ಫೋಟಗೊಂಡಿದೆ. ಜಮೀನಿನ ಕುರಿತು ತಕರಾರು ಇದೆಂದು ಹೇಳಿದ್ದರೂ ಅದೇ ಜಮೀನು ಖರೀದಿಸಿ ಉಳುಮೆಗೆ ಮುಂದಾಗಿದ್ದರಿಂದ ತಳವಾರ ಕುಟುಂಬದವರು ಕುಪಿತಗೊಂಡು ಅವರ ಕಡೆಯವರೇ ಕೊಲೆ ಮಾಡಿಸಿರಬಹುದು ಎಂದು ಶಂಕಿಸಲಾಗಿದೆ. 15 ವರ್ಷಗಳ ಹಿಂದೆ ನಡೆದ ಘಟನೆಯಿಂದ ಬೀಳು ಬಿದ್ದಿದ್ದ ಜಮೀನು ಖರೀದಿಸಿದ ನಿರಾಳೆ ಕುಟುಂದವರು ಉಸಿರು ಚೆಲ್ಲಿದ್ದಾರೆ. ಸುಮಾರು 15 ವರ್ಷಗಳಿಂದ ಉಳುಮೆ ಮಾಡದೆ ತಕರಾರಿನಲ್ಲೇ ಇದ್ದ ಈ 15 ಎಕರೆ ಜಮೀನನ್ನು ನಿರಾಳೆ ಕುಟುಂಬಸ್ಥರು ಖರೀದಿ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ತಕರಾರು ತೆಗೆದಿದ್ದ ಕುಟುಂಬಸ್ಥರೇ ಹಗೆತನ ಸಾಧಿಸಿ ಈ ಆರು ಜನರನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳ ಬಂಧನವಾದ ಬಳಿಕಷ್ಟೆ ನಿಖರ ಮಾಹಿತಿ ದೊರೆಯಲಿದೆ.&lt;/p&gt;&lt;p&gt;ಪೊಲೀಸ್ ಬಂದೋಬಸ್ತ್: ಕೊಲೆಯಾದ ಘಟನಾ ಸ್ಥಳಕ್ಕೆ ಸೋಕೋ ತಂಡ, ಬೆರಳು ಮುದ್ರೆ ತಂಡ ಭೇಟಿ ನೀಡಿ, ಪರಿಶೀಲನೆ ಕೈಕೊಂಡಿದ್ಧಾರೆ. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಹಿರಿಯ ಅಧಿಕಾರಿಗಳು, ಚಡಚಣ ಠಾಣೆ ಪೊಲೀಸರು ಹಾಗೂ ಮೂರು ಡಿಎಆರ್&zwnj; ತಂಡಗಳು ಹಾಗೂ 4 ಕೆಎಸ್&zwnj;ಆರ್&zwnj;ಪಿ ತಂಡಗಳನ್ನು ನಿಯೋಜಿಸಲಾಗಿದೆ.&lt;/p&gt;&lt;p&gt;ಪ್ರಾಥಮಿಕ ಮಾಹಿತಿಯಂತೆ ಸದರಿ ಘಟನೆಯಲ್ಲಿ ಈ ಹಿಂದೆ ನಡೆದ ಚಡಚಣ ಠಾಣೆಯ ಕ್ರೈಂ ಸಂಖ್ಯೆ: 156/2015 ಯು/ಎಸ್&zwnj; 302 ಐಪಿಸಿ ಪ್ರಕರಣದಲ್ಲಿನ ಗೋವಿಂದಪುರ ನಿವಾಸಿ, ದೂರುದಾರ ಕಲ್ಲನಗೌಡ ತಂ.ಈಶ್ವರಗೌಡ ಪಾಟೀಲನ ಈತನ ಕಡೆಯವರು ಇರಬಹುದೆಂದು ಶಂಕಿಸಲಾಗಿದೆ. ಘಟನೆ ಕುರಿತು ತನಿಖೆ ಮುಂದುವರೆದಿದೆ.&lt;/p&gt;&lt;p&gt;-ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/six-shot-dead-near-chadchan-vijayapur-over-property-dispute-rav/articleshow-4ww3b4w"/>
        </item>
        <item>
            <title><![CDATA[ಜೂನ್ 1ರಿಂದ ಯಶವಂತಪುರ-ವಿಜಯಪುರ ನಡುವೆ ಹೊಸ ಎಕ್ಸ್‌ಪ್ರೆಸ್‌; ಗದಗ ಬೈಪಾಸ್ ಮೂಲಕ ನೇರ ಪ್ರಯಾಣ]]></title>
            <link>https://kannada.asianetnews.com/gallery/karnataka-districts/indian-railways-new-bi-weekly-express-train-service-between-yeshwanthpur-and-vijayapura-to-start-from-june-1-mrq-tmlg01x</link>
            <guid isPermaLink="true">https://kannada.asianetnews.com/gallery/karnataka-districts/indian-railways-new-bi-weekly-express-train-service-between-yeshwanthpur-and-vijayapura-to-start-from-june-1-mrq-tmlg01x</guid>
            <pubDate>Sat, 30 May 2026 08:21:50 +0530</pubDate>
            <description><![CDATA[&lt;p&gt;ಬೆಂಗಳೂರಿನ ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್&zwnj; ರೈಲು ಸಂಚಾರ ಜೂನ್ 1 ರಿಂದ ಆರಂಭವಾಗಿದೆ. ಗದಗ, ಬಾದಾಮಿ, ಬಾಗಲಕೋಟೆ ಮೂಲಕ ಸಂಚರಿಸುವ ಈ ರೈಲಿನ ಸಮಯ ಬದಲಾವಣೆಗೆ ಪ್ರಯಾಣಿಕರು ಮನವಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksvc9j6ygjnf658hrwpack5n,imgname-indian-railways--1780109068510.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್&zwnj; ರೈಲು ಸಂಚಾರ ಜೂನ್ 1 ರಿಂದ ಆರಂಭವಾಗಿದೆ. ಗದಗ, ಬಾದಾಮಿ, ಬಾಗಲಕೋಟೆ ಮೂಲಕ ಸಂಚರಿಸುವ ಈ ರೈಲಿನ ಸಮಯ ಬದಲಾವಣೆಗೆ ಪ್ರಯಾಣಿಕರು ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್&zwnj; ರೈಲು ಪ್ರಾರಂಭಕ್ಕೆ ರೈಲ್ವೆ ಇಲಾಖೆ ನನ್ನ ಪ್ರಸ್ತಾವನೆ ಮೇರೆಗೆ ಅನುಮೋದಿಸಿ ಜೂ. 1ರಿಂದ ಆರಂಭಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಕುರಿತು ಪ್ರಕಟಣೆ ನೀಡಿರುವ, ವಿಜಯಪುರ ನಾಗರಿಕರ ಅತಿ ಬೇಡಿಕೆಯಾಗಿದ್ದ ಈ ವಿಶೇಷ ರೈಲು ಯಶವಂತಪುರ ಹಾಗೂ ವಿಜಯಪುರದ ಮಧ್ಯೆ ನೇರವಾಗಿ ಸಂಪರ್ಕಿಸಲಿದೆ. ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಬೈಪಾಸ್ ಮುಖಾಂತರ ಈ ರೈಲು ಸಂಚರಿಸಲಿದೆ. ಇದು ವಿಜಯಪುರ - ಬಾಗಲಕೋಟೆ ಜಿಲ್ಲೆಯ ಭಾಗದ ಜನರಿಗೆ ಸೂಪರ್ ಫಾಸ್ಟ್ ರೈಲಿನ ರೀತಿ ಕೆಲಸ ಮಾಡಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?&lt;/strong&gt;&lt;/p&gt;&lt;img&gt;&lt;p&gt;ಪ್ರತಿ ಶನಿವಾರ ಮತ್ತು ಸೋಮವಾರ ರೈಲು ಸಂಖ್ಯೆ 06577 ಯಶವಂತಪುರ-ವಿಜಯಪುರ ಹಾಗೂ ಪ್ರತಿ ಭಾನುವಾರ ಹಾಗೂ ಮಂಗಳವಾರ ರೈಲು ಸಂಖ್ಯೆ 06578 ವಿಜಯಪುರ-ಯಶವಂತಪುರ ನಡುವೆ ಈ ವಿಶೇಷ ರೈಲು ಸಂಚರಿಸಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೊಸಪೇಟೆ ಮಾರ್ಗವಾಗಿ ಚಲಿಸುವ ಯಶವಂತಪುರ-ವಿಜಯಪುರ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ&lt;/strong&gt;&lt;/p&gt;&lt;img&gt;&lt;p&gt;ಈ ರೈಲಿನ ಸ್ವಲ್ಪ ಸಮಯದ ಬದಲಾವಣೆ ಮಾಡಿ ಯಶವಂತಪುರಕ್ಕೆ ಬೆಳಗ್ಗೆ 5.30-6.30 ಗಂಟೆಯ ಮಧ್ಯೆ ತಲುಪುವ ರೀತಿ ಆದರೆ ಹಾಗೂ ಬಾಗಲಕೋಟೆಗೆ 5.00-5.30 ಗಂಟೆಗೆ ತಲುಪುವ ರೀತಿ ಆದರೆ ಈ ರೈಲಿಗೆ ಅತ್ಯಂತ ದೊಡ್ಡ ಯಶಸ್ಸು ದೊರೆಯುತ್ತದೆ ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ರೈಲು ಪ್ರಯಾಣ ಆರಂಭಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಬೆಂಗಳೂರಿನಿಂದ ಬೆಳಗಾವಿಗೆ ಟಿಕೆಟ್ ಸಿಗ್ತಿಲ್ಲವಾ? ಇಲ್ಲಿವೆ ಸ್ಪೆಷಲ್ ರೈಲುಗಳ ಡಿಟೈಲ್ಸ್&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/indian-railways-new-bi-weekly-express-train-service-between-yeshwanthpur-and-vijayapura-to-start-from-june-1-mrq-tmlg01x"/>
        </item>
        <item>
            <title><![CDATA[Gadag: ಅಪಾಯದಂಚಿನ ಮಾರ್ಗ: ಜೀವ ಪಣಕ್ಕಿಟ್ಟು ಸಾಗುವ 1 ಕಿ.ಮೀ ರಸ್ತೆ ಪಯಣ, ಆಟೋಗಷ್ಟೇ ದಾರಿ]]></title>
            <link>https://kannada.asianetnews.com/karnataka-districts/gadag-hole-alur-amaragol-road-deteriorated-severely-1-km-of-the-road-is-at-point-of-cracking-collapsing-fear-mrq/articleshow-3sfkdwc</link>
            <guid isPermaLink="true">https://kannada.asianetnews.com/karnataka-districts/gadag-hole-alur-amaragol-road-deteriorated-severely-1-km-of-the-road-is-at-point-of-cracking-collapsing-fear-mrq/articleshow-3sfkdwc</guid>
            <pubDate>Sat, 30 May 2026 08:02:28 +0530</pubDate>
            <description><![CDATA[2019ರಿಂದ ಮಲಪ್ರಭಾ ಮತ್ತು ಬೆಣ್ಣಿಹಳ್ಳ ಪ್ರವಾಹದಿಂದಾಗಿ ಹೊಳೆಆಲೂರು-ಅಮರಗೋಳ ಸಂಪರ್ಕ ರಸ್ತೆ ತೀವ್ರವಾಗಿ ಹದಗೆಟ್ಟಿದೆ. ಸುಮಾರು 1 ಕಿ.ಮೀ ರಸ್ತೆಯು ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಜೀವ ಭಯದಿಂದ ಸಂಚರಿಸುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರವಾಗಿ ತಡೆಗೋಡೆ ಅಥವಾ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvbf9vwqw3n21hcga61mxb0,imgname-road--1--1780108207996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಜೀವಕುಮಾರ ಹಿರೇಮಠ&lt;/strong&gt;&lt;/p&gt;&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಹೊಳೆಆಲೂರು: &amp;nbsp;&lt;/strong&gt;2019ರಿಂದ ಮಲಪ್ರಭಾ ಮತ್ತು ಬೆಣ್ಣಿಹಳ್ಳ ಪ್ರವಾಹಕ್ಕೆ ಪ್ರತಿವರ್ಷ ರಸ್ತೆಗಳು ಸಂಪೂರ್ಣ ಹಾಳಾಗುತ್ತಾ ಬರುತ್ತಿದ್ದು, ಅಮರಗೋಳದ 1 ಕಿಮೀ ರಸ್ತೆ ಬಿರುಕು ಬಿಟ್ಟು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.&lt;/p&gt;&lt;p&gt;ಹೊಳೆಆಲೂರಿನಿಂದ ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಹೊಳೆಆಲೂರು ಹಾಗೂ ಅಮರಗೋಳ ನಡುವೆ 1 ಕಿಮೀ ರಸ್ತೆ ಪಕ್ಕ ಮಲಪ್ರಭಾ ನದಿ ನೀರು ಹರಿಯುತ್ತಿದ್ದು, 2019ರಿಂದ 3- 4 ಬಾರಿ ತಡೆ ಕಟ್ಟಿ ಮಣ್ಣು ಹಾಕಿದರೂ ಪ್ರಯೋಜನವಾಗಿಲ್ಲ. ಅರ್ಧ ರಸ್ತೆ ಮಾತ್ರ ಉಳಿದುಕೊಂಡಿದ್ದು, ಪ್ರಯಾಣಿಕರಿಗೆ ಜೀವ ಕಂಟಕವಾಗಿದೆ.&lt;/p&gt;&lt;p&gt;ಈಗ ದೊಡ್ಡ ಸೇತುವೆ ಆಗಿದೆ ಸರಿ, ಮೊದಲು ಸಣ್ಣ ಸೇತುವೆ ಇದ್ದ ಸಂದರ್ಭದಲ್ಲಿ ಮುಳುಗಡೆ ಆದರೆ 10ರಿಂದ 15 ಕಿಮೀ ವ್ಯತ್ಯಾಸವಾಗಬಹುದು ಅಷ್ಟೇ. ಬಿಟ್ಟರೆ ಹೊಳೆಆಲೂರಿನಿಂದ ರೈತರಿಗೆ ಬೇಲೂರು(ಜಾಲಿಹಾಳ) ಸಂತೆಗೆ, ನೈನಾಪುರ, ಮಣ್ಣೀರಿ, ಬಾದಾಮಿ ತಾಲೂಕಿನ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.&lt;/p&gt;&lt;p&gt;ಈ ಮಾರ್ಗದಲ್ಲಿ ಬರುವ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಒಂದು ಆಟೋ ಹೋಗುವಷ್ಟು ಮಾತ್ರ ರಸ್ತೆ ಉಳಿದಿದ್ದು, ಅದು ರಸ್ತೆ ಬುಡದ ಮಣ್ಣು ಹಸಿಯಾಗಿದ್ದು, ಟಾರು ರಸ್ತೆ ಸಹ ಬಿರುಕು ಬಿಡುತ್ತಿದೆ. ಪ್ರಯಾಣಿಕರು ತುಂಬಿದ ವಾಹನ, ವಸ್ತುಗಳು ಲೋಡ್ ಆದ ವಾಹನದ ಚಾಲಕರು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ಇದೆ. ಮಲಪ್ರಭಾ ನದಿ ಸ್ವಲ್ಪ ಏರಿಕೆಯಾಗಿ ಬಂದರೂ ಇಲ್ಲಿಯ ರಸ್ತೆ ಸಂಪೂರ್ಣ ಕುಸಿದು ಬಿದ್ದು, ನದಿ ಸೇರುವ ಸ್ಥಿತಿಯಲ್ಲಿದೆ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳಿಗೆ ಸಮಸ್ಯೆ&lt;/strong&gt;&lt;/h2&gt;&lt;p&gt;ಹೊಳೆಆಲೂರಿಗೆ ಶಿಕ್ಷಣಕ್ಕೆ ಎಲ್ಕೆಜಿಯಿಂದ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಡಿಪ್ಲೊಮಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಪಾಡು ನೋಡುವಂತಿಲ್ಲ. ಬಸ್ ವ್ಯವಸ್ಥೆ ಇಲ್ಲದೆ, ಗ್ರಾಮಗಳಲ್ಲಿ ಆಟೋ ಹಿಡಿದು ಬರಬೇಕು. ಇಲ್ಲವಾದರೆ ನಡೆದು ಬರಬೇಕು. ಆಟೋಗಳಲ್ಲಿ ಬಂದ ವಿದ್ಯಾರ್ಥಿಗಳು 1 ಕಿಮೀ ರಸ್ತೆಯಲ್ಲಿ ಭಯದಿಂದ ಸಂಚರಿಸಬೇಕಿದೆ.&lt;/p&gt;&lt;h3&gt;&lt;strong&gt;ಶಾಶ್ವತ ಪರಿಹಾರ ಅವಶ್ಯ:&lt;/strong&gt;&lt;/h3&gt;&lt;p&gt;2019ರಿಂದ ಇಲ್ಲಿಯವರೆಗೆ 3- 4 ಬಾರಿ ಕಿತ್ತ ರಸ್ತೆ ಹಾಗೆ 3- 4 ಬಾರಿ ಮಣ್ಣು ಹಾಕಲಾಗಿದೆ. ಆದರೂ ರಸ್ತೆ ಕೊರೆತ ಹೆಚ್ಚಾಗಿದ್ದು, ನಾಲ್ಕೈದು ಗ್ರಾಮಗಳ ಜನರು, ವಿದ್ಯಾರ್ಥಿಗಳು, ರೈತರ ಪಾಡು ಹೇಳಲಾಗದು. ಅದೇ ಪರಿಸ್ಥಿತಿ ನಡುವೆಯೇ ಪ್ರಯಾಣಿಸುತ್ತಾರೆ. ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ವ್ಯವಸ್ಥಿತ ಕಾಮಗಾರಿ ಕೈಗೊಂಡು ಸುರಕ್ಷಿತ ಸೇತುವೆ ಇಲ್ಲವೇ ತಡೆಗೋಡೆ ನಿರ್ಮಾಣ ಮಾಡಬೇಕಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಕುಷ್ಟಗಿಯವರೆಗೆ ವಿಸ್ತರಿಸಲು ಹೆಚ್ಚಿದ ಒತ್ತಾಯ, ಪ್ರಯೋಜನವೇನು?&lt;/strong&gt;&lt;/p&gt;&lt;p&gt;ಸುರಕ್ಷಿತ ಸೇತುವೆ ಇಲ್ಲವೇ ತಡೆಗೋಡೆ ನಿರ್ಮಾಣ ಮಾಡಿದರೆ ತುಂಬಾ ಅನುಕೂಲ ಆಗುತ್ತದೆ. ನಾವು ಆಟೋರಿಕ್ಷಾ ಓಡಿಸುತ್ತೇವೆ. ಆದರೆ ಬಸ್, ಟ್ರ್ಯಾಕ್ಟರ್, ರೈತರು ಕಾಳು ಕಡಿ ತುಂಬಿ ಸಂಚರಿಸಿದರೆ ಸಮಸ್ಯೆ ಆಗುತ್ತದೆ. ರಸ್ತೆ ಸಂಪೂರ್ಣ ಹಾಳಾದರೆ ಇಲ್ಲಿಯ ರೈತರಿಗೆ ನದಿಯಿಂದ ತುಂಬಾ ಸಮಸ್ಯೆ ಆಗುತ್ತದೆ. ನದಿಯಲ್ಲಿ ನಿತ್ಯ ಹರಿಯುವ ಸ್ವಲ್ಪ ನೀರು ರೈತರ ಜಮೀನಿನ ಮೇಲೆ ಹರಿಯುತ್ತದೆ ಎಂದು ಸ್ಥಳೀಯ ಆಟೋ ಚಾಲಕರು ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ, ಗದಗ-ಮುಂಬೈ ವಂದೇ ಭಾರತ್ ಎಕ್ಸಪ್ರೆಸ್&zwnj;ಗೆ ಡಿಮ್ಯಾಂಡ್&lt;/strong&gt;&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-hole-alur-amaragol-road-deteriorated-severely-1-km-of-the-road-is-at-point-of-cracking-collapsing-fear-mrq/articleshow-3sfkdwc"/>
        </item>
        <item>
            <title><![CDATA[ಸಾಯಲೆತ್ನಿಸಿದ ಪತ್ನಿ ಬದುಕುಳಿದ್ರೂ ಪತಿ ಮೇಲೆ ಚಾರ್ಜ್‌ಶೀಟ್; ಇನ್ಸ್‌ಪೆಕ್ಟರ್‌ಗೆ ಹೈಕೋರ್ಟ್ ತರಾಟೆ, ಏನಿದು ಪ್ರಕರಣ?]]></title>
            <link>https://kannada.asianetnews.com/state/chargesheet-filed-against-husband-despite-wife-s-attempted-su-side-karnataka-hc-furious-rav/articleshow-xfspoy2</link>
            <guid isPermaLink="true">https://kannada.asianetnews.com/state/chargesheet-filed-against-husband-despite-wife-s-attempted-su-side-karnataka-hc-furious-rav/articleshow-xfspoy2</guid>
            <pubDate>Sat, 30 May 2026 07:34:54 +0530</pubDate>
            <description><![CDATA[&lt;p&gt;ಪತಿಯ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಪತ್ನಿಯ ಪ್ರಕರಣದಲ್ಲಿ, ಪತಿಯ ಮೇಲೆ ಆತ್ಮಹತ್ಯೆ ಪ್ರಚೋದನೆ ಆರೋಪದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸ್ ಇನ್ಸ್&zwnj;ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆಗೆ ಹೈಕೋರ್ಟ್ ಆದೇಶಿಸಿದೆ. ಪತಿಯ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5xvrhbtf3jycpmrdj3gwwck,imgname-karnataka-high-court-1758717560186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಮೇ.30): &lt;/strong&gt;ಪತಿಯ ಕಿರುಕುಳದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿ ಪ್ರಾಣಾಪಾಯದಿಂದ ಪಾರಾಗಿದ್ದರೂ ಪತಿ ಮೇಲೆ ಬಿಎನ್&zwnj;ಎಸ್&zwnj; ಸೆಕ್ಷನ್ 108 ಅಡಿಯಲ್ಲಿ ಕೇಸ್&zwnj; ದಾಖಲಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ಬಾಣಸವಾಡಿ ಠಾಣೆಯ ಇನ್ಸ್&zwnj;ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.&lt;/p&gt;&lt;p&gt;ಪ್ರಕರಣದ ಸಂಬಂಧ&zwnj; ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಆರ್.ಎಸ್.ಪಾಳ್ಯದ ನಿವಾಸಿ ನಿಕ್ಸೋನ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ಕಳೆದ 2025ರ ಅ.20ರಂದು ಅರ್ಜಿದಾರ ಹಾಗೂ ಆತನ ಪತ್ನಿ ನಡುವೆ ಜಗಳ ನಡೆದು ಪತ್ನಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮನೆಯ 2ನೇಯ ಮಹಡಿಯಿಂದ ಕೆಳಗೆ ಜಿಗಿದಿದ್ದರು. ಪರಿಣಾಮ ಬೆನ್ನುಮೂಳೆ ಮತ್ತು ಕೈ ಮುರಿದಿತ್ತು. ನಂತರ ಸಂಪೂರ್ಣ ಚೇತರಿಸಿಕೊಂಡಿದ್ದರು. ಆತ್ಮಹತ್ಯೆಗೆ ಪ್ರಯತ್ನಿಸಿದ ಅರ್ಜಿದಾರರ ಪತ್ನಿ ಬದುಕಿರುವಾಗ ತನಿಖಾಧಿಕಾರಿಗಳು ಬಿಎನ್&zwnj;ಎಸ್ ಸೆಕ್ಷನ್ 108ರ ಆಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧ ಮೇಲೆ&zwnj; ಅರ್ಜಿದಾರನ ಮೇಲೆ&zwnj; ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಮೂರ್ಖತನ ಎಂದು ಪೀಠ ಕಟುವಾಗಿ ನುಡಿದಿದೆ.&lt;/p&gt;&lt;p&gt;ಅಜಾಗರೂಕತೆಯಿಂದ ಅಥವಾ ಕಾನೂನು ಕ್ರಮ ಕೈಗೊಳ್ಳುವ ಆತುರದಲ್ಲಿ ದೋಷಾರೋಪ&zwnj; ಪಟ್ಟಿಯನ್ನು ತಪ್ಪಾಗಿ ಸಲ್ಲಿಸಲಾಗಿದೆ. ಇದರಿಂದ ಈವರೆಗೂ ಅರ್ಜಿದಾರರನ್ನು ಬಂಧಿಸಿ ಇಡಲಾಗಿದೆ&zwnj;.&zwnj; ಇದು ತನಿಖೆಯ ಅವಿವೇಕ ಮತ್ತು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಅಸಡ್ಡೆ ಹೊಂದಿರುವುದನ್ನು ಪ್ರತಿಬಿಂಬಿಸುತ್ತದೆ. ತನಿಖಾಧಿಕಾರಿಯ (ಇನ್&zwnj;ಸ್ಪೆಕ್ಟರ್&zwnj; ) ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ತೋರುವ ಈ ಪ್ರಕರಣ ನ್ಯಾಯಾಂಗದ ಮನಃಸ್ಸಾಕ್ಷಿಗೆ ಆಘಾತ ಉಂಟು ಮಾಡಿದೆ.&zwnj;&zwnj; ಹಾಗಾಗಿ ಅರ್ಜಿದಾರರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು&zwnj;. ಇನ್ಸ್&zwnj;ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಿ,&zwnj; ಅದರ ಆಧಾರದಲ್ಲಿ ಕೈಗೊಂಡ ಕ್ರಮದ ಬಗ್ಗೆ 3 ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.&lt;/p&gt;&lt;h3&gt;ರಾಜಿ ಸಂಧಾನ: ಪತಿ ವಿರುದ್ಧ ಕೇಸ್&zwnj; ರದ್ದು&lt;/h3&gt;&lt;p&gt;ಪತಿ ಹಾಗೂ ಪತ್ನಿ ಇನ್ನೂ ಜೊತೆಯಾಗಿ ಜೀವನ ಮಾಡಲಾಗುವುದು ಹಾಗೂ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವುದಾಗಿ&zwnj; ತಿಳಿಸಿದ ಹಿನ್ನೆಲೆಯಲ್ಲಿ ಅರ್ಜಿದಾರನ ವಿರುದ್ಧ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/chargesheet-filed-against-husband-despite-wife-s-attempted-su-side-karnataka-hc-furious-rav/articleshow-xfspoy2"/>
        </item>
        <item>
            <title><![CDATA[ತಾಜಾ ಮಾವಿನ ಹಣ್ಣು ನೇರವಾಗಿ ರೈತರಿಂದ ನಿಮ್ಮ ಮನೆಗೆ! ಹಾಪ್‌ಕಾಮ್ಸ್-ಅಂಚೆ ಇಲಾಖೆ ಹೊಸ ಸೇವೆ ಆರಂಭ, ಆರ್ಡರ್ ಮಾಡುವ ಲಿಂಕ್ ಇಲ್ಲಿದೆ!]]></title>
            <link>https://kannada.asianetnews.com/gallery/state/fresh-mangoes-delivered-your-doorstep-hopcoms-and-india-post-launch-new-home-delivery-service-from-may-30-rav-5olfw9p</link>
            <guid isPermaLink="true">https://kannada.asianetnews.com/gallery/state/fresh-mangoes-delivered-your-doorstep-hopcoms-and-india-post-launch-new-home-delivery-service-from-may-30-rav-5olfw9p</guid>
            <pubDate>Sat, 30 May 2026 07:08:21 +0530</pubDate>
            <description><![CDATA[&lt;p&gt;ಹಾಪ್&zwnj;ಕಾಮ್ಸ್ ಮತ್ತು ಅಂಚೆ ಇಲಾಖೆಯ ಸಹಯೋಗದಲ್ಲಿ ಇಂದಿನಿಂದ ತಾಜಾ ಮಾವಿನ ಹಣ್ಣುಗಳ ಡೋರ್&zwnj;ಡೆಲಿವರಿ ಸೇವೆ ಆರಂಭವಾಗಿದೆ. ಆರ್ಡರ್ ಮಾಡಿದ 24 ಗಂಟೆಯೊಳಗೆ ಮನೆ ಬಾಗಿಲಿಗೆ ಹಣ್ಣು ತಲುಪಲಿದ್ದು, ಆನ್&zwnj;ಲೈನ್ ಮೂಲಕ ಸುಲಭವಾಗಿ ಬುಕ್ ಮಾಡಬಹುದು. ಲಿಂಕ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksv7gz4rktccg3cmzkf516fn,imgname-----------------------2026-05-30t064804.832-1780104068247.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಪ್&zwnj;ಕಾಮ್ಸ್ ಮತ್ತು ಅಂಚೆ ಇಲಾಖೆಯ ಸಹಯೋಗದಲ್ಲಿ ಇಂದಿನಿಂದ ತಾಜಾ ಮಾವಿನ ಹಣ್ಣುಗಳ ಡೋರ್&zwnj;ಡೆಲಿವರಿ ಸೇವೆ ಆರಂಭವಾಗಿದೆ. ಆರ್ಡರ್ ಮಾಡಿದ 24 ಗಂಟೆಯೊಳಗೆ ಮನೆ ಬಾಗಿಲಿಗೆ ಹಣ್ಣು ತಲುಪಲಿದ್ದು, ಆನ್&zwnj;ಲೈನ್ ಮೂಲಕ ಸುಲಭವಾಗಿ ಬುಕ್ ಮಾಡಬಹುದು. ಲಿಂಕ್ ಇಲ್ಲಿದೆ.&lt;/p&gt;&lt;img&gt;&lt;p&gt;ತಾಜಾ ಮಾವಿನ ಹಣ್ಣುಗಳನ್ನು ಮನೆ ಬಾಗಿಲಿಗೆ ತರಿಸಿಕೊಂಡು ಸವಿಯುವ ಆಸೆ ಈಡೇರಿಸಲು ಹಾಪ್&zwnj;ಕಾಮ್ಸ್&zwnj; ಅಂಚೆ ಇಲಾಖೆಯ ಸಹಯೋಗದಲ್ಲಿ ಮೇ 30ರಿಂದ ನೂತನ ಸೇವೆ ಆರಂಭಿಸುತ್ತಿದೆ.&lt;/p&gt;&lt;img&gt;&lt;p&gt;ತಾಜಾ ಹಣ್ಣುಗಳನ್ನು ನಿಗದಿತ ದರಗಳಲ್ಲಿ ತಲುಪಿಸಲು ಹಾಪ್&zwnj;ಕಾಮ್ಸ್&zwnj; ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ &lsquo;ರೈತರ ಅಂಚೆ&rsquo; ಆನ್&zwnj;ಲೈನ್&zwnj; ವ್ಯಾಪಾರ ಪ್ರಾರಂಭಿಸಿದ್ದು, ಗ್ರಾಹಕರು ಆನ್&zwnj;ಲೈನ್&zwnj;ನಲ್ಲಿ ಹಣಪಾವತಿಸಿ ಆರ್ಡರ್&zwnj; ಮಾಡಿದ 24 ಗಂಟೆಯೊಳಗೆ ಮನೆ ಬಾಗಿಲಿಗೆ ಮಾವಿನ ಹಣ್ಣುಗಳು ತಲುಪಲಿದೆ.&lt;/p&gt;&lt;img&gt;&lt;p&gt;ಪ್ರಸ್ತುತ ಹಾಪ್&zwnj;ಕಾಮ್ಸ್&zwnj; ಮಳಿಗೆಗಳಲ್ಲಿ ಮಾವು ಮೇಳ ಚಾಲ್ತಿಯಲ್ಲಿದ್ದು ನೈಸರ್ಗಿಕವಾಗಿ ಮಾಗಿಸಿದ ಆಲ್ಫಾನ್ಸ್&zwnj;, ಬನೇಶನ್&zwnj;, ದಶೇರಿ, ಇಮಾಮ್&zwnj; ಪಸಂದ್&zwnj;, ಕೇಸರ್&zwnj;, ಮಲ್ಲಿಕಾ ಸೇರಿ 11ಕ್ಕೂ ಹೆಚ್ಚು ತಳಿಯ ಮಾವಿನ ಹಣ್ಣುಗಳು ಆನ್&zwnj;ಲೈನ್&zwnj;ನಲ್ಲಿ ಲಭ್ಯವಿದೆ. ಗ್ರಾಹಕರು ಕನಿಷ್ಠ 3 ಕೆಜಿ ಮಾವಿನ ಹಣ್ಣನ್ನು ಖರೀದಿಸಬೇಕಿದೆ. ಪ್ರಸ್ತುತ ವಿವಿಧ ತಳಿಯ ಉತ್ಕೃಷ್ಟ ಮಾವಿನ ಹಣ್ಣುಗಳು 3 ಕೆಜಿ ಮತ್ತು 5 ಕೆಜಿ ಬಾಕ್ಸ್&zwnj;ಗಳಲ್ಲಿ ಲಭ್ಯವಿದ್ದು ಗ್ರಾಹಕರು ಆನ್&zwnj;ಲೈನ್&zwnj;ನಲ್ಲಿ ಖರೀದಿಸಬಹುದು.&lt;/p&gt;&lt;img&gt;&lt;p&gt;&lt;strong&gt;ವೆಬ್&zwnj;ಸೈಟ್&zwnj;ನಲ್ಲಿ ನೋಂದಣಿ&lt;/strong&gt;&lt;/p&gt;&lt;p&gt;ಗ್ರಾಹಕರು ಹಾಪ್&zwnj;ಕಾಮ್ಸ್&zwnj;ನ ಅಧಿಕೃತ ವೆಬ್&zwnj;ಸೈಟ್&zwnj;: https://hopcomsbengaluru.com ನಲ್ಲಿ ನೋಂದಣಿ ಮಾಡಿಕೊಂಡು ಹಣ ಪಾವತಿಸಿ, ಖರೀದಿ ಆರಂಭಿಸಬಹುದು. ಪ್ರಸ್ತುತ ಹಾಪ್&zwnj;ಕಾಮ್ಸ್&zwnj; ವೆಬ್&zwnj;ಸೈಟ್&zwnj;ನಲ್ಲಿ 11 ತಳಿಯ ಮಾವಿನಹಣ್ಣುಗಳು ಲಭ್ಯ ಇವೆ. 3 ಮತ್ತು 5 ಕೆಜಿಯ ಬಾಕ್ಸ್&zwnj;ಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.&lt;/p&gt;&lt;img&gt;&lt;p&gt;ಮೂರು ಕೆಜಿಯ ಅಲ್ಫಾನ್ಸ್&zwnj; 396 ರು.(ಅಂಚೆ ಶುಲ್ಕ ಸೇರಿ), ಬನೇಶನ್&zwnj; 336 ರು., ದಶೇರಿ 378 ರು., ಇಮಾಮ್&zwnj;ಪಸಂದ್&zwnj; 765 ರು., ಕೇಸರ್&zwnj; 564 ರು., ಮಲ್ಲಿಕಾ 330 ರು., ಮಲಗೋವ 651 ರು., ರಸಪುರಿ 321 ರು., ಸೆಂಧೂರ 222 ರು., ತೋತಾಪುರಿ 177 ರು.ನಂತೆ ನಿಗದಿಪಡಿಸಲಾಗಿದೆ. 5 ಕೆಜಿ ಮಾವಿನ ಹಣ್ಣಿನ ಬಾಕ್ಸ್&zwnj;ಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.&lt;/p&gt;&lt;img&gt;&lt;p&gt;ರಾಜಭವನ ರಸ್ತೆಯಲ್ಲಿರುವ ಅಂಚೆ ಇಲಾಖೆಯ ಸಭಾಂಗಣದಲ್ಲಿ ಮೇ 30 11ಕ್ಕೆ ಚೀಫ್&zwnj; ಪೋಸ್ಟ್&zwnj;ಮಾಸ್ಟರ್&zwnj; ಜನರಲ್&zwnj; ಕೆ.ಪ್ರಕಾಶ್&zwnj; ಅವರು &lsquo;ರೈತರ ಅಂಚೆ ಯೋಜನೆ&rsquo;ಗೆ ಚಾಲನೆ ನೀಡಲಿದ್ದಾರೆ. ಮೊದಲ ಹಂತದಲ್ಲಿ ಮಾವಿನ ಹಣ್ಣನ್ನು ಅಂಚೆ ಮೂಲಕ ಗ್ರಾಹಕರಿಗೆ ಆನ್&zwnj;ಲೈನ್&zwnj; ಮೂಲಕ ತಲುಪಿಸಲಾಗುವುದು. ನಂತರ ತಾಜಾ ತರಕಾರಿಯನ್ನು ಸಹ ಮನೆಬಾಗಿಲಿಗೆ ತಲುಪಿಸುವ ಸೌಲಭ್ಯ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಹಾಪ್&zwnj;ಕಾಮ್ಸ್&zwnj; ಮಾರುಕಟ್ಟೆ ವ್ಯವಸ್ಥಾಪಕ ವಿನಾಯಕ್&zwnj; ಅವರು ತಿಳಿಸಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/fresh-mangoes-delivered-your-doorstep-hopcoms-and-india-post-launch-new-home-delivery-service-from-may-30-rav-5olfw9p"/>
        </item>
        <item>
            <title><![CDATA[RCB ಗೆಲ್ತು ಅಂತ ಪಟಾಕಿ ಸಿಡ್ಸಿದ್ರೆ ಪೊಲೀಸರು ಬರುತ್ತಾರೆ ಹುಷಾರ್‌!]]></title>
            <link>https://kannada.asianetnews.com/cricket-sports/ipl-final-bengaluru-police-ban-public-crackers-and-rcb-win-rallies-rav/articleshow-0t1ze3o</link>
            <guid isPermaLink="true">https://kannada.asianetnews.com/cricket-sports/ipl-final-bengaluru-police-ban-public-crackers-and-rcb-win-rallies-rav/articleshow-0t1ze3o</guid>
            <pubDate>Sat, 30 May 2026 06:27:52 +0530</pubDate>
            <description><![CDATA[&lt;p&gt;ಐಪಿಎಲ್ ಫೈನಲ್&zwnj;ನಲ್ಲಿ ಆರ್&zwnj;ಸಿಬಿ ಗೆದ್ದರೆ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಕಳೆದ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ದುರಂತವನ್ನು ಗಮನದಲ್ಲಿಟ್ಟುಕೊಂಡು, ಪಟಾಕಿ ಸಿಡಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಿಸುವುದನ್ನು ನಿಷೇಧ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksv5aa6g7vn6df2njvb6n63t,imgname-----------------------2026-05-30t061212.862-1780101753039.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.30) &lt;/strong&gt;ಇಂಡಿಯನ್ ಪ್ರೀಮಿಯರ್ ಲೀಗ್&zwnj;ನ (IPL) ಫೈನಲ್&zwnj;ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್&zwnj;(Bangalore Royal Challengers) 2ನೇ ಬಾರಿಗೆ ವಿಜೇತರಾದರೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಲು ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.&lt;/p&gt;&lt;p&gt;ಐಪಿಎಲ್&zwnj; ಫೈನಲ್&zwnj;ಗೆ ಸತತ ಎರಡನೇ ಬಾರಿ ಆರ್&zwnj;ಸಿಬಿ(RCB) ಪ್ರವೇಶಿಸಿ, ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಿಗೆ ಪೊಲೀಸರು ಕೆಲ ಸೂಚನೆಗಳನ್ನು ನೀಡಿದ್ದಾರೆ. ಕಳೆದ ಬಾರಿಯ ಚಿನ್ನಸ್ವಾಮಿ ಕ್ರೀಡಾಂಗಣ(Chinnaswamy Stadium)ದ ಬಳಿ ಕಾಲ್ತುಳಿತದಲ್ಲಿ 11 ಆರ್&zwnj;ಸಿಬಿ ಅಭಿಮಾನಿಗಳ ಸಾವಿನ ಕರಾಳ ದುರಂತ ಹಿನ್ನಲೆಯಲ್ಲಿ ಮುಂಜಾಗ್ರತೆವಹಿಸಿರುವ ಪೊಲೀಸರು, ಪ್ರಸಕ್ತ ಸಾಲಿನಲ್ಲಿ ಐಪಿಎಲ್ ಗೆದ್ದರೆ ಆರ್&zwnj;ಸಿಬಿ ಅಭಿಮಾನಿಗಳ ಸಡಗರಕ್ಕೆ ಬ್ರೇಕ್ ಹಾಕಿದ್ದಾರೆ.&lt;/p&gt;&lt;h2&gt;ಸಾರ್ವಜನಿಕರಿಗೆ ಪೊಲೀಸರ ಸೂಚನೆಗಳು&lt;/h2&gt;&lt;p&gt;ಫೈನಲ್&zwnj; ಪಂದ್ಯದ ಫಲಿತಾಂಶ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆ ಇಲ್ಲ&lt;/p&gt;&lt;p&gt;ರಸ್ತೆಗಳಿಗೆ ಮುಖಮಾಡಿರುವ ಎಲ್&zwnj;ಇಡಿ ವಾಲ್&zwnj;ಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೆ ಅಳವಡಿಸಬಾರದು.&lt;/p&gt;&lt;p&gt;ಪಟಾಕಿ ಸಿಡಿಸಬಾರದು, ಅಪಾಯಕಾರಿ ವಸ್ತುಗಳನ್ನು ಬಳಸಬಾರದು. ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡುವುದು.&lt;/p&gt;&lt;p&gt;ಸಂಚಾರ ಪೊಲೀಸರ ನೀಡುವ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.&lt;/p&gt;&lt;p&gt;ಬೈಕ್ ರ್&zwj;ಯಾಲಿ, ಅತಿವೇಗ ಚಾಲನೆ, ಸ್ಟಂಟ್, ಹಾರ್ನ್ ದುರುಪಯೋಗ ಮತ್ತು ರಸ್ತೆ ತಡೆ ನಿಷೇಧ&lt;/p&gt;&lt;p&gt;ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಅಶಾಂತಿ ಸೃಷ್ಟಿಸುವುದು, ಜಗಳವಾಡುವುದು ಅಥವಾ ಅಸಭ್ಯ ವರ್ತನೆಗೆ ತಡೆ&lt;/p&gt;&lt;p&gt;ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್, ದ್ವೇಷಪೂರಿತ ಸಂದೇಶ ಅಥವಾ ವದಂತಿಗಳಿಗೆ ಬ್ರೇಕ್&zwnj;&lt;/p&gt;&lt;p&gt;ಪಂದ್ಯ ಫಲಿತಾಂಶದ ಹೆಸರಿನಲ್ಲಿ ಇತರ ತಂಡದ ಅಭಿಮಾನಿಗಳನ್ನು ಪ್ರಚೋದಿಸುವುದು, ನಿಂದಿಸುವುದು ಅಥವಾ ಜಗಳಕ್ಕೆ ಕಾರಣವಾಗುವಂತೆ ವರ್ತಿಸಬಾರದು&lt;/p&gt;&lt;p&gt;ಕಾನೂನು-ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಮರೆಯಬಾರದು&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/ipl-final-bengaluru-police-ban-public-crackers-and-rcb-win-rallies-rav/articleshow-0t1ze3o"/>
        </item>
        <item>
            <title><![CDATA[ಸಂಪುಟ ಕಸರತ್ತು: ಹೊಸ ಸಿಎಂ ಆಯ್ಕೆಗೆ ಮುನ್ನವೇ ಮಂತ್ರಿಗಿರಿಗೆ ಲಾಭಿ, ಸಿದ್ದರಾಮಯ್ಯ ಸಂಪುಟದ ಈ ಸಚಿವರಿಗೆ ಕೊಕ್‌ !]]></title>
            <link>https://kannada.asianetnews.com/politics/karnataka-cabinet-row-intensifies-leaders-lobbying-for-minister-posts-begins-even-before-new-cm-selection-rav/articleshow-evnagk7</link>
            <guid isPermaLink="true">https://kannada.asianetnews.com/politics/karnataka-cabinet-row-intensifies-leaders-lobbying-for-minister-posts-begins-even-before-new-cm-selection-rav/articleshow-evnagk7</guid>
            <pubDate>Sat, 30 May 2026 05:33:07 +0530</pubDate>
            <description><![CDATA[ಕಾಂಗ್ರೆಸ್ ಹೈಕಮಾಂಡ್ ಮಾರ್ಗಸೂಚಿ ಅನ್ವಯ ನೂತನ ಸಚಿವ ಸಂಪುಟ ರಚನೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಸೂತ್ರದ ಅನ್ವಯ, ಸುಮಾರು 20-25 ಹಿರಿಯ ಸಚಿವರಿಗೆ ಕೊಕ್ ನೀಡಿ, ಯುವಕರಿಗೆ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksps9v1xgvarn0jh6tkrt3pc,imgname-siddaramaiah-and-dk-shivakumar--1--1779954936893.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.30): &lt;/strong&gt;ಕಾಂಗ್ರೆಸ್&zwnj; ಹೈಕಮಾಂಡ್&zwnj;(Congress Highcommand) ನೀಡಿರುವ ಮಾರ್ಗಸೂಚಿ ಅನುಸಾರ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸುವ ಪ್ರಕ್ರಿಯೆ ಶನಿವಾರ ನಡೆಯುವ ಸಾಧ್ಯತೆಯಿದೆ.&lt;/p&gt;&lt;p&gt;ಶನಿವಾರ ಆಯೋಜನೆಯಾಗಿರುವ ಕಾಂಗ್ರೆಸ್&zwnj; ಶಾಸಕಾಂಗ ಪಕ್ಷದ ಸಭೆ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್&zwnj;ಸಿಂಗ್&zwnj; ಸುರ್ಜೇವಾಲ, ಹಂಗಾಮಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಸಭೆ ನಡೆಸಲಿದ್ದು, ಸಭೆಯಲ್ಲಿ ಮೊದಲ ಹಂತದಲ್ಲಿ ಸಂಪುಟ ಸೇರ್ಪಡೆಯಾಗಲಿರುವವರ ಹೆಸರು ಬಹುತೇಕ ಅಖೈರುಗೊಳ್ಳಲಿದೆ.&lt;/p&gt;&lt;p&gt;ಅಲ್ಲದೆ, ಎರಡನೇ ಹಂತದಲ್ಲಿ ಸಂಪುಟ ಸೇರ್ಪಡೆಯಾಗುವವರ ಹೆಸರುಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಪಟ್ಟಿ ಅಂತಿಮಗೊಳ್ಳಲಿದೆ. ನಂತರ ಈ ಪಟ್ಟಿಯನ್ನು ಹೈಕಮಾಂಡ್ ಒಪ್ಪಿಗೆ ದೊರೆತ ನಂತರ ಎರಡನೇ ಹಂತದ ಪ್ರಮಾಣ ವಚನ ಸ್ವೀಕಾರ ದಿನಾಂಕ ನಿರ್ಧಾರವಾಗಲಿದೆ ಎಂದು ಮೂಲಗಳು ಹೇಳಿವೆ.&lt;/p&gt;&lt;h2&gt;20 ರಿಂದ 25 ಸಚಿವರಿಗೆ ಕೊಕ್:&lt;/h2&gt;&lt;p&gt;ಈ ಮೂಲಗಳ ಪ್ರಕಾರ ನೂತನ ಸಂಪುಟ ರಚನೆಗೆ ಹೈಕಮಾಂಡ್&zwnj; ಕೆಲವೊಂದು ಮಾರ್ಗಸೂಚಿ ನೀಡಿದೆ. ಈ ಮಾರ್ಗಸೂಚಿ ಅನುಸರಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿರುವ 20 ರಿಂದ 25 ಮಂದಿಗೆ ಕೊಕ್ ದೊರೆಯಲಿದೆ.&lt;/p&gt;&lt;p&gt;ಏಕೆಂದರೆ, ಹೊಸ ಸಂಪುಟದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಮಾತ್ರ 65 ವರ್ಷ ವಯಸ್ಸಾದ ಹಿರಿಯರಿಗೆ ಅವಕಾಶ ನೀಡಬೇಕು (ಬಹುತೇಕ 5 ರಿಂದ 7 ಮಂದಿಗೆ ಮಾತ್ರ) ಅವಕಾಶ ನೀಡಬೇಕು. ಸುಮಾರು 8 ರಿಂದ 10 ಮಂದಿ 50 ವರ್ಷದೊಳಗಿನವರಿಗೆ ಅವಕಾಶ ನೀಡಬೇಕು. ಜಾತಿ ಹಾಗೂ ಪ್ರಾದೇಶಿಕ ಹಂಚಿಕೆ ಸಮರ್ಪಕವಾಗಿ ನಡೆಯಬೇಕು ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಹೈಕಮಾಂಡ್ ಮಾರ್ಗಸೂಚಿ ನೀಡಿದೆ.&lt;/p&gt;&lt;h3&gt;ಪ್ರತ್ಯೇಕ ಪಟ್ಟಿ ನೀಡಿರುವ ನಾಯಕರು:&lt;/h3&gt;&lt;p&gt;ದೆಹಲಿ ಪ್ರವಾಸದ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ನೂತನ ಸಂಪುಟಕ್ಕೆ ಪ್ರತ್ಯೇಕ ಪಟ್ಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರು ಸುಮಾರು 8 ಮಂದಿ ಹೆಸರು ಸೂಚಿಸಿದ್ದರೆ, ಡಿ.ಕೆ.ಶಿವಕುಮಾರ್ ಇನ್ನೂ ಹೆಚ್ಚಿನ ಹೆಸರು ನೀಡಿದ್ದಾರೆ ಎನ್ನಲಾಗುತ್ತಿದೆ.&lt;/p&gt;&lt;p&gt;ಕುತೂಹಲದ ಸಂಗತಿಯೇನೆಂದರೆ, ರಾಜ್ಯ ನಾಯಕರು ನೀಡಿರುವ ಪಟ್ಟಿ ಮಾತ್ರವಲ್ಲದೆ ಹೈಕಮಾಂಡ್&zwnj; ತನ್ನದೇ ಆದ 10 ಹೆಸರುಗಳ ಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿದ್ದು, ಈ ಎಲ್ಲ ಹೆಸರುಗಳನ್ನು ಮುಂದಿಟ್ಟುಕೊಂಡು ಹೈಕಮಾಂಡ್&zwnj; ಮಾರ್ಗಸೂಚಿ, ಜಾತಿ ಹಾಗೂ ಪ್ರಾದೇಶಿಕ ಹಂಚಿಕೆ ಸರಿದೂಗಿಸಿ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಆದರೆ, ಮೊದಲ ಹಂತದಲ್ಲಿ ಸಂಪುಟ ಸೇರಲಿರುವ 8 ರಿಂದ 10 ಹೆಸರುಗಳು ಈಗಾಗಲೇ ಬಹುತೇಕ ಅಖೈರುಗೊಂಡಿದೆ ಎಂದು ಮೂಲಗಳು ಹೇಳಿವೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-cabinet-row-intensifies-leaders-lobbying-for-minister-posts-begins-even-before-new-cm-selection-rav/articleshow-evnagk7"/>
        </item>
        <item>
            <title><![CDATA[Karnataka politics: ಸಂಪುಟ ರಚನೆ ಕಸರತ್ತು, ಹೈಕಮಾಂಡ್‌ಗೆ ಕಗ್ಗಂಟು, ಯಾರಿಗೆ ಸಿಗಲಿದೆ ಡಿಸಿಎಂ ಪಟ್ಟ? ಇವರು ಉಪಮುಖ್ಯಮಂತ್ರಿ ಆಗೋದು ಗ್ಯಾರಂಟಿ!]]></title>
            <link>https://kannada.asianetnews.com/politics/karnataka-leadership-change-tussle-congress-plans-to-create-four-dcm-posts-rav/articleshow-wb5gkbr</link>
            <guid isPermaLink="true">https://kannada.asianetnews.com/politics/karnataka-leadership-change-tussle-congress-plans-to-create-four-dcm-posts-rav/articleshow-wb5gkbr</guid>
            <pubDate>Sat, 30 May 2026 05:09:10 +0530</pubDate>
            <description><![CDATA[&lt;p&gt;ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸಂಪುಟದಲ್ಲಿ ನಾಲ್ಕು ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಲು ಕಾಂಗ್ರೆಸ್ ಹೈಕಮಾಂಡ್ ಯೋಜಿಸಿದೆ. ಆದರೆ, ಪರಿಶಿಷ್ಟ ಜಾತಿ, ಲಿಂಗಾಯತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ತೀವ್ರ ಪೈಪೋಟಿ ಲಾಬಿ ನಡೆತಿದೆ. ಯಾರನ್ನು ಆಯ್ಕೆ ಮಾಡಬೇಕೆಂಬುದು ಹೈಕಮಾಂಡ್&zwnj;ಗೆ ದೊಡ್ಡ ತಲೆನೋವು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj02kfe5kz4qaaezvd5hr74z,imgname-siddaramaiah-dk-shivakumar-mallikarjun-kharge-1771676745157.png" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;4 ಡಿಸಿಎಂ ಸ್ಥಾನ ಸೃಜಿಸಲು ಪಕ್ಷ ಯೋಚನೆ । ಅಹಿಂದ, ಲಿಂಗಾಯತ ಸಮುದಾಯಕ್ಕೆ ಹುದ್ದೆ&lt;/li&gt; &lt;li&gt;ದಲಿತರಲ್ಲಿ ಎಡಗೈ-ಬಲಗೈ ಮಧ್ಯೆ ಲಾಬಿ । ಕೆಎಚ್&zwnj;ಎಂ, ಪ್ರಿಯಾಂಕ್&zwnj;, ಪರಂ ಮಧ್ಯೆ ಸ್ಪರ್ಧೆ&lt;/li&gt;&lt;/ul&gt;&lt;p&gt;&amp;nbsp;&lt;strong&gt;ಬೆಂಗಳೂರು (ಮೇ.30): &lt;/strong&gt;ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿತವಾಗಿರುವ ಡಿ.ಕೆ.ಶಿವಕುಮಾರ್&zwnj;(DK Shivakumar) ಅವರ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹಲವರಿಂದ ಭಾರೀ ಪೈಪೋಟಿ ಶುರುವಾಗಿರುವುದರಿಂದ ಹೈಕಮಾಂಡ್&zwnj;ಗೆ ಕಗ್ಗಂಟಾಗಿ ಪರಿಣಮಿಸಿದೆ.&lt;/p&gt;&lt;p&gt;ಹೊಸ ಸಂಪುಟದಲ್ಲಿ ವಾಸ್ತವವಾಗಿ ನಾಲ್ಕು ಉಪ ಮುಖ್ಯಮಂತ್ರಿ ಸ್ಥಾನ ಸೃಜಿಸಲು ಹೈಕಮಾಂಡ್&zwnj; ಯೋಜಿಸಿತ್ತು. ಈ ಪೈಕಿ ಪಶಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಲಿಂಗಾಯತ ಸಮುದಾಯಗಳಿಗೆ ತಲಾ ಒಂದೊಂದು ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಇರಾದೆ ಇತ್ತು. ಆದರೆ, ಹಿಂದುಳಿದ ವರ್ಗ ಹೊರತುಪಡಿಸಿ ಉಳಿದ ಮೂರೂ ಸಮುದಾಯದಲ್ಲೂ ಇಬ್ಬರು, ಮೂವರು ನಾಯಕರಿಂದ ಪೈಪೋಟಿ, ಲಾಬಿ ತೀವ್ರವಾಗಿರುವುದರಿಂದ ಹೈಕಮಾಂಡ್&zwnj;ಗೆ ತಲೆನೋವು ತರಿಸಿದೆ.&lt;/p&gt;&lt;h2&gt;ಡಿಸಿಎಂ ಸ್ಥಾನಕ್ಕೆ ಎಡಗೈ-ಬಲಗೈ ಸ್ಪರ್ಧೆ:&lt;/h2&gt;&lt;p&gt;ಪರಿಶಿಷ್ಠ ಜಾತಿಯಿಂದ ಪ್ರಿಯಾಂಕ್&zwnj; ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಆಲೋಚನೆ ಹೈಕಮಾಂಡ್&zwnj;ನಲ್ಲಿತ್ತು. ಆದರೆ, ಈಗ ಅಲ್ಲಿ ಎಡಗೈ ಮತ್ತು ಬಲಗೈ ಸಮುದಾಯದ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಸರ್ಕಾರದಲ್ಲಿ (2013-18) ಬಲಗೈ ನಾಯಕರಾದ ಡಾ.ಜಿ.ಪರಮೇಶ್ವರ್&zwnj; ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಈಗ ಪ್ರಿಯಾಂಕ್&zwnj; ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಬಲಗೈ ಸಮುದಾಯಕ್ಕೇ ಆ ಸ್ಥಾನ ಸಿಗಲಿದೆ. ಹಾಗಾಗಿ ಈ ಬಾರಿ ನಮಗೆ ಆ ಸ್ಥಾನ ನೀಡಬೇಕೆಂದು ಎಡಗೈ ಸಮುದಾಯದ ನಾಯಕರು ಹೈಕಮಾಂಡ್&zwnj; ಮೇಲೆ ಒತ್ತಡ ಹಾಕುತ್ತಿದ್ದಾರೆ.&lt;/p&gt;&lt;p&gt;ಪ್ರಮುಖವಾಗಿ ಎಡಗೈನಲ್ಲಿ ಕೆ.ಎಚ್&zwnj;.ಮುನಿಯಪ್ಪ ಅವರು ಲಾಬಿ ನಡೆಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ಬಲಗೈ ಸಮುದಾಯದಿಂದ ಪ್ರಿಯಾಂಕ್&zwnj; ಖರ್ಗೆ ಅವರ ಜೊತೆಗೆ ಪರಮೇಶ್ವರ್&zwnj; ಅವರ ಹೆಸರೂ ಪರಿಗಣನೆಗೆ ಬರುತ್ತಿದೆ. ಹಾಗಾಗಿ ಇದನ್ನು ಹೇಗೆ ನಿಭಾಯಿಸುವುದು ಹೈಕಮಾಂಡ್&zwnj;ಗೆ ತಿಳಿಯದಾಗಿದೆ.&lt;/p&gt;&lt;p&gt;ಇನ್ನು, ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್&zwnj; ಮತ್ತು ಈಶ್ವರ್&zwnj; ಖಂಡ್ರೆ ಅವರ ನಡುವೆ ಡಿಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಅಲ್ಪಸಂಖ್ಯಾತರಲ್ಲಿ ಜಮೀರ್ ಅಹಮದ್&zwnj; ಖಾನ್&zwnj; ಅವರ ಹೆಸರು ಕೇಳಿಬರುತ್ತಿದ್ದರೂ, ಮತ್ತೊಂದೆಡೆ ಯು.ಟಿ.ಖಾದರ್&zwnj; ಅವರೂ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಹಿಂದುಳಿದ ವರ್ಗದಿಂದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಸ್ಥಾನ ನೀಡುವ ಆಲೋಚನೆ ಹೈಕಮಾಂಡ್&zwnj;ಗಿತ್ತು.&lt;/p&gt;&lt;p&gt;ಆದರೆ, ಸ್ವತಃ ಸಿದ್ದರಾಮಯ್ಯ ಅವರೇ ಬೇಡ ಎಂದು ಹೇಳಿದ್ದಾರೆ. ಹಾಗಾಗಿ ಮೂರು ಡಿಸಿಎಂ ಸ್ಥಾನಗಳಿಗೆ ಪೈಪೋಟಿ ನಡೆಯುತ್ತಿರುವುದರಿಂದ ಕಗ್ಗಂಟಾಗಿದೆ. ಆದರೂ, ಹೈಕಮಾಂಡ್&zwnj; ಉಪ ಮುಖ್ಯಮಂತ್ರಿ ಸ್ಥಾನ ಸೃಜಿಸಲೇ ಬೇಕೆಂದು ನಿರ್ಧರಿಸಿದೆ. ಕಗ್ಗಂಟು ನಿಭಾಯಿಸುವ ಜೊತೆಗೆ ಎಷ್ಟು ಡಿಸಿಎಂ ಸ್ಥಾನಗಳಿಗೆ ಒಪ್ಪಿಗೆ ನೀಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-leadership-change-tussle-congress-plans-to-create-four-dcm-posts-rav/articleshow-wb5gkbr"/>
        </item>
        <item>
            <title><![CDATA['ಒದ್ದು ಸಿಎಂ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ' ಸಿದ್ದು-ಡಿಕೆಶಿ ಕುರ್ಚಿ ಕದನ ಬಗ್ಗೆ ಆರ್‌ ಅಶೋಕ್ ಶಾಕಿಂಗ್ ಹೇಳಿಕೆ!]]></title>
            <link>https://kannada.asianetnews.com/politics/dk-shivakumar-has-taken-the-cm-post-by-kicking-r-ashok-shocking-statement-rav/articleshow-g5fngsv</link>
            <guid isPermaLink="true">https://kannada.asianetnews.com/politics/dk-shivakumar-has-taken-the-cm-post-by-kicking-r-ashok-shocking-statement-rav/articleshow-g5fngsv</guid>
            <pubDate>Sat, 30 May 2026 04:48:09 +0530</pubDate>
            <description><![CDATA[&lt;p&gt;ಸಿದ್ದರಾಮಯ್ಯ ಅವರನ್ನು ಅನಿವಾರ್ಯವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ, ಡಿ.ಕೆ.ಶಿವಕುಮಾರ್ ಆ ಹುದ್ದೆಯನ್ನು ಒದ್ದು ಗಿಟ್ಟಿಸಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದ್ದು, ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆಆರೋಪಿಸಿದರು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdfnjbr95edhpdps6a4dekb,imgname-r-ashoka-1776421620088.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಟ್ಕಳ (ಮೇ.30): &lt;/strong&gt;ಸಿದ್ದರಾಮಯ್ಯ(Siddaramaiah) ಅವರು ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಮುಖ್ಯಮಂತ್ರಿ ಹುದ್ದೆ(CM Post) ಬಿಟ್ಟುಕೊಟ್ಟಿದ್ದಾರೆ. ಮಾಜಿ ಡಿಸಿಎಂ ಡಿ.ಕೆ.ಶಿವಕುಮಾರ್&zwnj;(DCM DK Shivakumar) ಒದ್ದು ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್&zwnj;(R Ashok) ಲೇವಡಿ ಮಾಡಿದ್ದಾರೆ.&lt;/p&gt;&lt;p&gt;ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ಸಿಎಂ ಖುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್(Congress highcommand) ಜತೆ ಕಾಲಾವಕಾಶ ಕೇಳಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್&zwnj; ಅವರಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಕಾಲವಕಾಶ ಕೊಟ್ಟಿಲ್ಲ. ದೆಹಲಿಯಲ್ಲಿ ಛೀಮಾರಿ ಹಾಕಿ ಕಳುಹಿಸಿದ್ದಾರೆ. ದೆಹಲಿಯಿಂದ ಸಿದ್ದರಾಮಯ್ಯ ಪೆಚ್ಚುಮೋರೆ ಮಾಡಿಕೊಂಡು ರಾಜ್ಯಕ್ಕೆ ಬಂದು ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಡಿ.ಕೆ.ಶಿವಕುಮಾರ್&zwnj; ಅವರು ವಿಧಾನಸಭೆಯಲ್ಲಿ ತಾನು ಈ ಹಿಂದೆ ಸಚಿವಗಿರಿಯನ್ನು ಒದ್ದು ಗಿಟ್ಟಿಸಿಕೊಂಡಿದ್ದೆ ಎಂದಿದ್ದರು. ಈಗ ಮುಖ್ಯಮಂತ್ರಿ ಹುದ್ದೆಯನ್ನೂ ಸಹ ಅವರು ಒದ್ದು ಗಿಟ್ಟಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಖುರ್ಚಿ ಕಚ್ಚಾಟದ ಬಗ್ಗೆ ಟೀಕಿಸಿದರು.&lt;/p&gt;&lt;p&gt;ಬಿಜೆಪಿಗೆ ಸಿದ್ದರಾಮಯ್ಯ ಅವರೂ, ಡಿ.ಕೆ.ಶಿವಕುಮಾರ ಅವರೂ ಒಂದೇ ಆಗಿದ್ದು, ಇಬ್ಬರೂ ಹಿಂದೂ ವಿರೋಧಿಗಳಾಗಿದ್ದಾರೆ. ಇಬ್ಬರೂ ಭ್ರಷ್ಟಾಚಾರ ಮಾಡುವವರಾಗಿದ್ದು, ಸಿದ್ದರಾಮಯ್ಯ ಕಾಲದಲ್ಲಿ ರಾಜ್ಯಕ್ಕೆ ₹7 ಲಕ್ಷ ಕೋಟಿ ಸಾಲವಾದರೆ ಡಿ.ಕೆ.ಶಿವಕುಮಾರ್&zwnj; ಕಾಲದಲ್ಲಿ ₹10 ಲಕ್ಷ ಕೋಟಿ ಸಾಲ ಆಗಲಿದೆ. ಕಾಂಗ್ರೆಸ್ ಹೈಕಮಾಂಡ್&zwnj; ಡಿ.ಕೆ.ಶಿವಕುಮಾರ ಅವರನ್ನು ಕರ್ನಾಟಕದ ಎಟಿಎಂ ಚೇರಮನ್ ಮಾಡಿಕೊಂಡಿದೆ. ಕಾಂಗ್ರೆಸ್ಸಿನ ಹೈಕಮಾಂಡಿಗೆ ಕರ್ನಾಟಕ ಎಟಿಎಂ ಆಗಿದೆ ಎಂದು ಆರೋಪಿಸಿದರು.&lt;/p&gt;&lt;h2&gt;ಮುಸ್ಲಿಂ ಓಲೈಕೆ ರಾಜಕಾರಣ:&lt;/h2&gt;&lt;p&gt;ರಾಜ್ಯ ಸರ್ಕಾರವನ್ನು ಐಸಿಯುನಲ್ಲಿಟ್ಟಿದ್ದು, ಇದೊಂದು ಲೂಟಿ ಸರ್ಕಾರವಾಗಿದೆ. ಗ್ಯಾರಂಟಿಯೂ ಕೊಡುತ್ತಿಲ್ಲ. ಅಭಿವೃದ್ಧಿಯೂ ಮಾಡುತ್ತಿಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೂ ರಾಜ್ಯದ ಪರಿಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆ. ಮುಸ್ಲಿಮರ ಅಭಿವೃದ್ಧಿಗೆ ₹200 ಕೋಟಿ ಕೊಟ್ಟರೆ ಹಿಂದೂಗಳಿಗೆ ಏನೂ ಕೊಟ್ಟಿಲ್ಲ. ಕಾಂಗ್ರೆಸ್ ಹಿಂದೂಗಳ ವಿರೋಧಿಯಾಗಿದೆ. ಈ ಪಕ್ಷದ್ದು ಕಳ್ಳ ಕೈ ಆಗಿದೆ ಎಂದು ಆರೋಪಿಸಿದರು.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/dk-shivakumar-has-taken-the-cm-post-by-kicking-r-ashok-shocking-statement-rav/articleshow-g5fngsv"/>
        </item>
        <item>
            <title><![CDATA[ಬೆಂಗಳೂರಿಗೆ 29ರ ಮಳೆ ಕಂಟಕ: ಬೌರಿಂಗ್ ಗೋಡೆಗೆ 7 ಬಲಿಯಾಗಿ ತಿಂಗಳಲ್ಲಿ ವಿಜಯನಗರ ಕ್ಲಬ್ ಗೋಡೆ ಕುಸಿದು ಆಟೋ ಚಾಲಕ ಸಾವು!]]></title>
            <link>https://kannada.asianetnews.com/state/bengaluru-heavy-rain-death-vijayanagar-club-wall-collapse-auto-driver-death-sat/articleshow-d0mp382</link>
            <guid isPermaLink="true">https://kannada.asianetnews.com/state/bengaluru-heavy-rain-death-vijayanagar-club-wall-collapse-auto-driver-death-sat/articleshow-d0mp382</guid>
            <pubDate>Fri, 29 May 2026 21:31:53 +0530</pubDate>
            <description><![CDATA[&lt;p&gt;ಬೆಂಗಳೂರಿಗೆ 29ರ ಮಳೆ ಕಂಟಕ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ದುರಂತಕ್ಕ 7 ಜನರ ಬಲಿಯಾಗಿ ಒಂದು ತಿಂಗಳಿಗೆ ವಿಜಯನಗರ ಕ್ಲಬ್ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವನ್ನಪ್ಪಿದ್ದಾನೆ. ಮಳೆಯಿಂದ ರಕ್ಷಣೆ ಪಡೆಯಲು ಆಟೋ ನಿಲ್ಲಿಸಿದ್ದ ಚಾಲಕ ಶಿವ ಬೋರಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kst7d5tbpwfk7jzprztxfhej,imgname-bengaluru-vijayanagara-club-wall-collapse-1780070389579.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 29): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru Rain) ಶುಕ್ರವಾರ ಸಂಜೆ ಸುರಿದ ಮಳೆ ಆರ್ಭಟಕ್ಕೆ ಕಾಂಪೌಂಡ್ ಕುಸಿದು (Wall Collapse) ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬೌರಿಂಗ್ ಆಸ್ಪತ್ರೆ ಗೋಡೆಯ ಕುಸಿದು 7 ಜನರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ವಿಜಯನಗರದ ಪ್ರತಿಷ್ಠಿತ ಕ್ಲಬ್ (Vijayanagara Club) ಗೋಡೆ ಕುಸಿದು ಆಟೋ ಚಾಲಕನೊಬ್ಬ ಸ್ಥಳದಲ್ಲೇ (Auto Driver) ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಮಳೆಯಿಂದ ರಕ್ಷಣೆ ಪಡೆಯಲು ಆಟೋವನ್ನು ಪಕ್ಕಕ್ಕೆ ನಿಲ್ಲಿಸಿದ್ದೇ ಆ ದುರ್ದೈವಿ ಮಾಡಿದ ತಪ್ಪಾಯಿತು.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಮೃತ ವ್ಯಕ್ತಿಯನ್ನು ಗಂಗೊಂಡಹಳ್ಳಿ ನಿವಾಸಿ ಶಿವ ಬೋರಯ್ಯ (55) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಇವರು, &amp;nbsp;ಶುಕ್ರವಾರ ಸಂಜೆ ವಿಜಯನಗರದ ಸುತ್ತಮುತ್ತ ಬಾಡಿಗೆಗಾಗಿ ಸಂಚರಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಜೋರು ಮಳೆ ಶುರುವಾದ ಕಾರಣ, ಮಳೆಯಿಂದ ಬಚಾವಾಗಲು ವಿಜಯನಗರ ಕ್ಲಬ್&zwnj;ನ ಸ್ವಿಮ್ಮಿಂಗ್ ಪೂಲ್ ಪಕ್ಕದ ಗೋಡೆಯ ಬಳಿ ತಮ್ಮ ಆಟೋವನ್ನು ಪಾರ್ಕ್ ಮಾಡಿದ್ದರು. ಮಳೆ ಕಡಿಮೆಯಾಗಲಿ ಎಂದು ಆಟೋದ ಒಳಗೇ ಕುಳಿತಿದ್ದಾಗ ಈ ದುರಂತ ಸಂಭವಿಸಿದೆ.&lt;/p&gt;&lt;h2&gt;&lt;strong&gt;ಬೃಹತ್ ಗೋಡೆ ಕುಸಿತ:&lt;/strong&gt;&lt;/h2&gt;&lt;p&gt;ಮಳೆಯ ಅಬ್ಬರಕ್ಕೆ ವಿಜಯನಗರ ಕ್ಲಬ್&zwnj;ನ ಸ್ವಿಮ್ಮಿಂಗ್ ಪೂಲ್ ಆವರಣದ ಬೃಹತ್ ಗೋಡೆ ಸಂಪೂರ್ಣವಾಗಿ ನೆನೆದು ದುರ್ಬಲಗೊಂಡಿತ್ತು. ಶಿವ ಬೋರಯ್ಯ ಅವರು ಆಟೋದಲ್ಲಿ ಕುಳಿತಿದ್ದಾಗಲೇ ಬೃಹತ್ ಗೋಡೆ ರಭಸವಾಗಿ ಆಟೋದ ಮೇಲೆಯೇ ಕುಸಿದು ಬಿದ್ದಿದೆ. ಗೋಡೆಯ ಇಟ್ಟಿಗೆ ಮತ್ತು ಕಲ್ಲುಗಳ ಭಾರಕ್ಕೆ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಕುಳಿತಿದ್ದ ಶಿವ ಬೋರಯ್ಯ ಅವರಿಗೆ ತೀವ್ರ ಪೆಟ್ಟು ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ಇದನ್ನೂ ಓದಿ: &lt;strong&gt;ಬೆಂಗಳೂರು ಮಹಾಮಳೆಗೆ 7 ಬಲಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಭೀಕರ ದುರಂತ; ಮೂವರು ಪುಟ್ಟ ಮಕ್ಕಳೂ ಸಾವು!&lt;/strong&gt;&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಪೊಲೀಸರ ಭೇಟಿ:&lt;/strong&gt;&lt;/h2&gt;&lt;p&gt;ಘಟನೆ ನಡೆದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಿಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಸಹಾಯದಿಂದ ಕುಸಿದಿದ್ದ ಗೋಡೆಯ ಅವಶೇಷಗಳನ್ನು ತೆರವುಗೊಳಿಸಿ, ಆಟೋದೊಳಗೆ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.&lt;/p&gt;&lt;h3&gt;&lt;strong&gt;ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ:&lt;/strong&gt;&lt;/h3&gt;&lt;p&gt;ನಗರದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಇಂತಹ ಹಳೆಯ ಮತ್ತು ದುರ್ಬಲ ಗೋಡೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳು ನಿರ್ಲಕ್ಷ್ಯ ವಹಿಸಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಗೋಡೆ ಕುಸಿತದಿಂದಾಗಿ ಬಡ ಕುಟುಂಬವೊಂದು ತನ್ನ ಆಧಾರಸ್ತಂಭವನ್ನೇ ಕಳೆದುಕೊಂಡಿದೆ. ಮೃತ ಶಿವ ಬೋರಯ್ಯ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;p&gt;ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಲಬ್ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ಮಳೆಯ ಸಮಯದಲ್ಲಿ ಮರಗಳು ಅಥವಾ ಹಳೆಯ ಕಟ್ಟಡಗಳ ಗೋಡೆಗಳ ಪಕ್ಕ ವಾಹನ ನಿಲ್ಲಿಸದಂತೆ ಪೊಲೀಸರು ಮನವಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 11 ಸಾವು:&amp;nbsp;&lt;/strong&gt;&lt;/h2&gt;&lt;p&gt;ಬೆಂಗಳೂರಿನಲ್ಲಿ ಏಪ್ರಿಲ್ 29ರಂದು ಸುರಿದ ಭಾರಿ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು, ಮೂವರು ಮಕ್ಕಳು ಸೇರಿದಂತೆ 7 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ದುರಂತ ನಗರದಲ್ಲಿ ಆಘಾತವನ್ನುಂಟು ಮಾಡಿದ್ದು, ಹಳೆಯ ಗೋಡೆಯ ನಿರ್ವಹಣೆ ಕೊರತೆಯೇ ಘಟನೆಗೆ ಕಾರಣವೆಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಂದು ತಿಂಗಳ ಅಂತರಕ್ಕೆ ಸರಿಯಾಗಿ ಮತ್ತೊಬ್ಬ ವ್ಯಕ್ತಿ ಕಾಂಪೌಂಡ್ ಕುಸಿದು ಮೃತಪಟ್ಟಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-heavy-rain-death-vijayanagar-club-wall-collapse-auto-driver-death-sat/articleshow-d0mp382"/>
        </item>
        <item>
            <title><![CDATA[ಭೀಮಾತೀರದಲ್ಲಿ ರಕ್ತದೋಕುಳಿ: ವಿಜಯಪುರದಲ್ಲಿ ಆಸ್ತಿ ವಿವಾದಕ್ಕೆ  6 ಜನರ ಭೀಕರ ಹ*ತ್ಯೆ!]]></title>
            <link>https://kannada.asianetnews.com/karnataka-districts/vijayapura-bhimateera-6-killed-firing-property-dispute-chadachan-govindpur-san/articleshow-mdtcsxz</link>
            <guid isPermaLink="true">https://kannada.asianetnews.com/karnataka-districts/vijayapura-bhimateera-6-killed-firing-property-dispute-chadachan-govindpur-san/articleshow-mdtcsxz</guid>
            <pubDate>Fri, 29 May 2026 19:19:34 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವ್ಯಾಜ್ಯವು ಭೀಕರ ಸ್ವರೂಪ ಪಡೆದಿದೆ. ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವಿನ ಆಸ್ತಿ ವಿವಾದವು ಗುಂಡಿನ ದಾಳಿ ಹಾಗೂ ಮಾರಕಾಸ್ತ್ರಗಳ ಬಳಕೆಗೆ ಕಾರಣವಾಗಿ, ಒಂದೇ ಕುಟುಂಬದ ಆರು ಮಂದಿ ಬರ್ಬರವಾಗಿ ಹತ್ಯೆಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksszffedx8mp0bxbdpqrmx48,imgname-vijayapura-bhima-teera-murders-1780062076365.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮೇ.29): &lt;/strong&gt;ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ನರಮೇಧ ನಡೆದಿದ್ದು, ಇಡೀ ಭೀಮಾತೀರ ಮತ್ತೊಮ್ಮೆ ರಕ್ತಸಿಕ್ತವಾಗಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಎದುರಾಳಿಗಳು ನಡೆಸಿದ ದಿಢೀರ್ ಫೈರಿಂಗ್ ಹಾಗೂ ಮಾರಕಾಸ್ತ್ರಗಳ ದಾಳಿಗೆ ಬರೋಬ್ಬರಿ ಆರು ಜನ ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ಈ ಘಟನೆಯಿಂದಾಗಿ ಇಡೀ ಜಿಲ್ಲೆ ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;h2&gt;&lt;strong&gt;ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವಿನ ಜಮೀನು ವ್ಯಾಜ್ಯ!&lt;/strong&gt;&lt;/h2&gt;&lt;p&gt;ಗೋವಿಂದಪುರ ಗ್ರಾಮದ ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವೆ ಕಳೆದ ಕೆಲವು ಸಮಯದಿಂದ ಜಮೀನಿಗೆ ಸಂಬಂಧಿಸಿದಂತೆ ತೀವ್ರ ಆಸ್ತಿ ವಿವಾದ ನಡೆದುಕೊಂಡು ಬಂದಿತ್ತು. ಇಂದು ಈ ವಿವಾದ ವಿಕೋಪಕ್ಕೆ ತಿರುಗಿದ್ದು, ಗೊಳಗಿ ಕುಟುಂಬದ ಸದಸ್ಯರು ನಿರಾಳೆ ಕುಟುಂಬದವರ ಮೇಲೆ ಏಕಾಏಕಿ ಬಂದೂಕಿನಿಂದ ಗುಂಡಿನ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ. ಗೊಳಗಿ ಕುಟುಂಬದವರ ಈ ಭೀಕರ ದಾಳಿಗೆ ನಿರಾಳೆ ಕುಟುಂಬದ ಪ್ರಮುಖರು ಹಾಗೂ ಅವರ ಬೆಂಬಲಿಗರು ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ, ಶಬ್ಬಿರ್ ನದಾಫ್ (ಇವರೊಂದಿಗೆ ಮತ್ತೊಬ್ಬರ ಹತ್ಯೆಯಾಗಿದ್ದು, ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ).&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆ, ಗ್ರಾಮದಲ್ಲಿ ಬಿಗಿಬಂದೋಬಸ್ತ್!&lt;/strong&gt;&lt;/h2&gt;&lt;p&gt;ಒಂದೇ ಗ್ರಾಮದ ಆರು ಜನರ ಭೀಕರ ಹತ್ಯೆಯಿಂದಾಗಿ ಭೀಮಾತೀರದಾದ್ಯಂತ ಹಳೇ ಹಗೆತನದ ನೆರಳು ಮತ್ತೆ ಆವರಿಸಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ದಂಡು ಸಶಸ್ತ್ರ ಪಡೆಗಳೊಂದಿಗೆ ಗೋವಿಂದಪುರ ಗ್ರಾಮಕ್ಕೆ ಧಾವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮುಂದಿನ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಇಡೀ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಒಟ್ಟು 25 ಏಕರೆ ಜಮೀನಿನ ವಿವಾದ ಇದಾಗಿದ್ದು, ಪ್ರತಿ ಏಕರೆಗೆ 15 ಲಕ್ಷದಂತೆ ನಿರಾಳೆ ಕುಟುಂಬ ಖರೀದಿ ಮಾಡಿತ್ತು. ಪಕ್ಕಾ ಜಮೀನು ಮೌಲ್ಯ ಬಂದು 25 ಲಕ್ಷ ಇತ್ತು. ಆದರೆ, ನಿರಾಳೆ ಕುಟುಂಬ 15 ಲಕ್ಷಕ್ಕೆ ಖರೀದಿ ಮಾಡಿತ್ತು.ಈ ಜಮೀನು ಪಕ್ಕದಲ್ಲಿಯೇ ಅಪ್ಪುಗೌಡ ಗೊಳಗಿ ಜಮೀನು ಕೂಡ ಇತ್ತು. ನಿರಾಳೆ ಕುಟುಂಬ ಖರೀದಿಸಿದ ಜಮೀನು ಮೇಲೆ ಅಪ್ಪುಗೌಡ ಗೊಳಗಿ ಕಣ್ಣಿಟ್ಟಿದ್ದ. ಆ ಜಮೀನು ಖರೀದಿ ಮಾಡದಂತೆ ನಿರಾಳೆ ಕುಟುಂಬಕ್ಕೆ ಅಪ್ಪುಗೌಡ ಗೊಳಗಿ ಧಮ್ಕಿ ಹಾಕಿದ್ದ. ಇದನ್ನು ಮೀರಿ 25 ಏಕರೆ ಜಮೀನನ್ನು ನಿರಾಳೆ ಕುಟುಂಬ ಖರೀದಿ ಮಾಡಿತ್ತು. ಪಕ್ಕದ&zwnj; ಜಮೀನು ಹೋಯ್ತಲ್ಲ ಎಂದು ಇಡೀ ನಿರಾಳೆ ಕುಟುಂಬವನ್ನೆ ಗೊಳಗಿ ಕುಟುಂಬ ಸರ್ವನಾಶ ಮಾಡಿದೆ.&lt;/p&gt;&lt;p&gt;ನಿರಾಳೆ ಚಡಚಣ ಮೂಲದವರು, ಗೊಳಗಿ ಗೋವಿಂದಪುರ ಗ್ರಾಮದವರು. ಚಡಚಣ ಊರಲ್ಲಿ ನಿರಾಳೆ ಫ್ಯಾಮಿಲಿ ಕೂಡು ಕುಟುಂಬ ಹೊಂದಿತ್ತು. ಒಂದೆ ಮನೆಯಲ್ಲಿ 30ಕ್ಕೂ ಅಧಿಕ ಜನ ವಾಸವಿದ್ದರು. ಚಡಚಣದ ಶ್ರೀಮಂತ ಕುಟುಂಬ ಪೈಕಿ ಒಂದಾಗಿತ್ತು. ಹತ್ಯೆಯಾಗಿರುವ ಚಂದು ನಿರಾಳೆ ತಾಲೂಕು ಪಂಚಾಯಿಸಿ ಮಾಜಿ ಸದಸ್ಯ ಕೂಡ ಆಗಿದ್ದ.&lt;/p&gt;&lt;h2&gt;&lt;strong&gt;10ಕ್ಕೂ ಅಧಿಕ ಜನರಿಂದ ಕೃತ್ಯ&lt;/strong&gt;&lt;/h2&gt;&lt;p&gt;ಅಪ್ಪುಗೌಡ ಗೊಳಗಿ ಸೇರಿ 10ಕ್ಕಿಂತ ಅಧಿಕ ಜನರಿಂದ ನಿರಾಳೆ ಕುಟುಂಬಸ್ಥರನ್ನು ಹತ್ಎ ಮಾಡಲಾಗಿದೆ. ಕಬ್ಬು ಕತ್ತರಿಸುವ ಕತ್ತಿಯಿಂದ ಹತ್ಯೆ ಮಾಡಲಾಗಿದೆ. ತೇಲಿ ಕುಟುಂಬಕ್ಕೆ ಸೇರಿದ 25 ಏಕರೆ ಜಮೀನನ್ನು 1 ವರ್ಷದ ಹಿಂದೆಯೇ ಮಾರಾಟ ಮಾಡಲಾಗಿತ್ತು. 15 ವರ್ಷಗಳಿಂದ ತೇಲಿ ಕುಟುಂಬಕ್ಕೂ ಗೊಳಗಿ ಕುಟುಂಬಕ್ಕೂ ಈ ಕುರಿತಾಗಿ ವಿವಾದವಿತ್ತು. ತೇಲಿ ಕುಟುಂಬದಿಂದ ಕಡಿಮೆ ದರಕ್ಕೆ 25 ಏಕರೆ ಜಮೀನನ್ನು ನಿರಾಳೆ ಕುಟುಂಬ ಖರೀದಿ ಮಾಡಿತ್ತು. ನಿರಾಳೆ ಕುಟುಂಬ ಕಡಿಮೆ ದರಕ್ಕೆ ತೇಲಿ ಕುಟುಂಬದಿಂದ 25 ಏಕರೆ ಖರೀದಿ ಮಾಡಿದ್ದಕ್ಕೆ ಗೊಳಗಿ ಕುಟುಂಬಕ್ಕೆ ಸಿಟ್ಟಾಗಿತ್ತು. ಇದೇ ಕಾರಣಕ್ಕೆ ನಿರಾಳೆ ಕುಟುಂಬಸ್ಥರನ್ನ ಅಟ್ಟಾಡಿಸಿ ಹೊಡೆದು ಗೊಳಗಿ ಕುಟುಂಬ ಹತ್ಯೆ ಮಾಡಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/vijayapura-bhimateera-6-killed-firing-property-dispute-chadachan-govindpur-san/articleshow-mdtcsxz"/>
        </item>
        <item>
            <title><![CDATA[ಮೆಜೆಸ್ಟಿಕ್‌ನಲ್ಲಿ ಮೈ ಮಾರಿಕೊಳ್ಳೋ ಆ ಮಹಿಳೆಯರು; ಕಣ್ಣಿಗೆ ಕಾಣಿಸದ ಸತ್ಯ ತೋರಿಸಿದ ನಟಿ ಕಾವ್ಯಾ ಶಾ!]]></title>
            <link>https://kannada.asianetnews.com/gallery/tv-talk/kannada-actress-kaavya-sha-on-majestic-women-call-girls-who-work-for-money-w98zc53</link>
            <guid isPermaLink="true">https://kannada.asianetnews.com/gallery/tv-talk/kannada-actress-kaavya-sha-on-majestic-women-call-girls-who-work-for-money-w98zc53</guid>
            <pubDate>Fri, 29 May 2026 19:39:47 +0530</pubDate>
            <description><![CDATA[&lt;p&gt;Actress Kaavya Sha: ಸಂಜೆಯಾಗುತ್ತಿದ್ದಂತೆ ಮೆಜೆಸ್ಟಿಕ್&zwnj;ನಲ್ಲಿ ಕೆಲ ಹುಡುಗಿಯರು ಅತಿಯಾಗಿ ಮೇಕಪ್&zwnj; ಮಾಡಿಕೊಂಡು, ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿರುತ್ತಾರೆ. ಅವರ ನಡವಳಿಕೆ ನೋಡಿದ್ರೆ, ಅವ್ರ ಉದ್ದೇಶ ಏನು ಎನ್ನೋದು ಗೊತ್ತಾಗುತ್ತದೆ. ಸಿಂಗಲ್&zwnj; ಆಗಿ ಓಡಾಡುವ ಹುಡುಗರ ಕಡೆಗೆ ಅವರ ಗಮನ ಹೆಚ್ಚಿರುತ್ತದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kst0ba4q1f513yp6ytqv4kxr,imgname-new-project---2026-05-29t192059.889-1780062988439.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Kaavya Sha: ಸಂಜೆಯಾಗುತ್ತಿದ್ದಂತೆ ಮೆಜೆಸ್ಟಿಕ್&zwnj;ನಲ್ಲಿ ಕೆಲ ಹುಡುಗಿಯರು ಅತಿಯಾಗಿ ಮೇಕಪ್&zwnj; ಮಾಡಿಕೊಂಡು, ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿರುತ್ತಾರೆ. ಅವರ ನಡವಳಿಕೆ ನೋಡಿದ್ರೆ, ಅವ್ರ ಉದ್ದೇಶ ಏನು ಎನ್ನೋದು ಗೊತ್ತಾಗುತ್ತದೆ. ಸಿಂಗಲ್&zwnj; ಆಗಿ ಓಡಾಡುವ ಹುಡುಗರ ಕಡೆಗೆ ಅವರ ಗಮನ ಹೆಚ್ಚಿರುತ್ತದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಟಿ ಕಾವ್ಯಾ ಶಾ ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಆಕ್ಟಿವ್&zwnj; ಆಗಿದ್ದು, ದಿನಕ್ಕೊಂದು ವಿಷಯಗಳನ್ನು ಇಟ್ಟುಕೊಂಡು ವಿಡಿಯೋ ಮಾಡುತ್ತಾರೆ. ಒಟ್ಟಿನಲ್ಲಿ ಒಂದಿಷ್ಟು ಸಂದೇಶ, ಸಾಮಾಜಿಕ ಕಳಕಳಿ ಮೂಡಿಸುವ ಕೆಲಸವನ್ನು ಮಾಡುತ್ತಿರೋದು ಖುಷಿಯ ವಿಷಯ. ಈಗ ಮೆಜೆಸ್ಟಿಕ್&zwnj;ನಲ್ಲಿರುವ ಆ ಮಹಿಳೆಯರ ಕುರಿತು ವಿಡಿಯೋ ಮಾಡಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಮೆಜೆಸ್ಟಿಕ್&zwnj;ನಲ್ಲಿ 500, 1000, 3000 ರೂಪಾಯಿಗೆ ದೇಹ ಮಾರಿಕೊಳ್ಳುವ ಮಹಿಳೆಯರಿದ್ದಾರೆ. ಕಾರ್&zwnj;ನಲ್ಲೋ, ಹೋಟೆಲ್&zwnj;ನಲ್ಲೋ ಗಂಟೆಗೆ ಇಂತಿಷ್ಟು ಎಂದು ಹಣ ಕೊಡಬೇಕು. ಮೊದಲೇ ಹೋಟೆಲ್&zwnj;ನಲ್ಲಿ ಮಾತನಾಡಿಕೊಳ್ಳೋದುಂಟು, ಆ ಹೋಟೆಲ್&zwnj;ನಲ್ಲಿ ಕೂಡ ಹೈ ಕ್ಲಾಸ್&zwnj;, ಲೋ ಕ್ಲಾಸ್&zwnj; ಎಂದು ಕೂಡ ಇರುವುದು.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಕಾವ್ಯಾ ಶಾ ಅವರು ಕಂಟೆಂಟ್&zwnj; ಕ್ರಿಯೇಟರ್&zwnj; ಆಗಿ ಈ ಬಾರಿ ಧೈರ್ಯದಿಂದ ಕಂಟೆಂಟ್&zwnj; ಆಯ್ಕೆ ಮಾಡಿಕೊಂಡು, ಎಲ್ಲರ ಮನಸ್ಸು ನಾಟುವಂತೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಮಾಡಿದ ಒಂದೇ ದಿನಕ್ಕೆ 6000 ಕ್ಕೂ ಅಧಿಕ ಜನರು ಕಾಮೆಂಟ್&zwnj; ಮಾಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.&lt;/p&gt;&lt;img&gt;&lt;p&gt;ದುಡ್ಡಿರೋನು ಬಂದರೆ ಸಾಕು, ಒಂದು ಗಂಟೆಯಲ್ಲಿ ಹಣ ಸಿಕ್ಕರೆ ಸಾಕು ಎಂದು ಮೆಜೆಸ್ಟಿಕ್&zwnj;ನಲ್ಲಿ ಗಂಟೆಗೆ ಇಂತಿಷ್ಟು ಎಂದು ಹಣ ಪಡೆಯುವ ಆ ಮಹಿಳೆ ಅಂದುಕೊಳ್ತಾರೆ. ಅದನ್ನು ನೋಡಿದ ಕೆಲವರು ಇಂಥವ್ರದ್ದೊಂದು ಜನ್ಮಾನಾ? ಬದುಕೋ ಬದಲು ಸತ್ತೋಗೋದು ಒಳ್ಳೆಯದು, ಕಾಸಿಗೋಸ್ಕರ ಮಾರಿಕೊಳ್ತಾರೆ ಎಂದು ಬೈಯ್ದುಕೊಳ್ತಾರೆ.&lt;/p&gt;&lt;img&gt;&lt;p&gt;&ldquo;ಹುಟ್ಟಿದಾಗಿನಿಂದ ಈಗಿನವರೆಗೂ ತುಂಬ ಸಲ ಸತ್ತು ಹೋದೆ, ಇನ್ನೂ ಎಷ್ಟು ಸಲ ಸತ್ತೋಗಲಿ? ಭಿಕ್ಷೆ ಬೇಡ್ತಿಲ್ಲ, ಇದು ಕೆಲಸವೇ. ಹದಿನೈದು ವರ್ಷಕ್ಕೆ ಅಪ್ಪ ಎಂದುಕೊಂಡವನು ಯಾವುದೋ ಮುದುಕನಿಗೆ ಮಾರಿದ, ಆಮೇಲೆ ಅವನು, ಅವನ ಮಗ, ಸಂಬಂಧಿಕರು ಯಾರೂ ಕೂಡ ನನ್ನ ಬಿಡಲಿಲ್ಲ. ನ್ಯಾಯವಾಗಿ ನನ್ನನ್ನು ಮಾರಿದ ಅವನ ತಂದೆ ಸಾಯಬೇಕು, ಆ ಮುದುಕನ ಮಗ, ಸಂಬಂಧಿಕರು ಸಾಯಬೇಕು, ಅವನು ಸತ್ತೋದ ಎಂದ ಬೇರೆಯವ್ರನ್ನು ಮದುವೆಯಾದರೆ, ಅವನು ಕೂಡ ನನ್ನನ್ನು ಮೆಜೆಸ್ಟಿಕ್&zwnj;ಗೆ ತಂದು ಕೂರಿಸಿದ, ಅವನು ಸಾಯಬೇಕು ಅಲ್ವಾ? ಮನೆಯಲ್ಲಿ ಹೆಂಡ್ತಿ ಇದ್ರೂ ಕೂಡ ನನ್ನ ಜೊತೆ ಮಲ್ಕೊಂಡ ನೀನು ಸಾಯಬೇಕು ಅಲ್ವಾ? ಸಮಾಜದಲ್ಲಿ ಯಾರೇ ತಪ್ಪು ಮಾಡಿದ್ರೂ, ಅವಮಾನ, ಶಿಕ್ಷೆ ಹೆಣ್ಣಿಗೆ ಮಾತ್ರಾನಾ? ಇದಕ್ಕೆಲ್ಲ ತಲೆಕೆಡಿಸಿಕೊಂಡ್ರೆ ಬದುಕೋಕೆ ಆಗೋದಿಲ್ಲ&rdquo; ಎಂದು ಆ ಮಹಿಳೆ ಮನಸ್ಸಿನಲ್ಲಿ ಅಂದುಕೊಳ್ತಾಳೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಮೆಜೆಸ್ಟಿಕ್&zwnj; ಮೈ ಮಾರಿಕೊಳ್ಳುವ ಕೆಲ ಮಹಿಳೆಯರ ಹಿಂದೆ ಒಂದಿಷ್ಟು ಕರಾಳ ಕತೆಗಳು ಇರುತ್ತವೆ, ಭಾವನಾತ್ಮಕ ಕತೆಯೂ ಇರುತ್ತದೆ, ಅವು ಎಲ್ಲರಿಗೂ ಗೊತ್ತಾಗೋದಿಲ್ಲ ಎನ್ನೋದನ್ನು ನಟಿ ಕಾವ್ಯಾ ಶಾ ಅವರು ರೀಲ್ಸ್&zwnj; ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/kannada-actress-kaavya-sha-on-majestic-women-call-girls-who-work-for-money-w98zc53"/>
        </item>
        <item>
            <title><![CDATA[ನೂತನ ಸಿಎಂ ಪ್ರಮಾಣವಚನಕ್ಕೆ ಸ್ಥಳ ಫಿಕ್ಸ್, ಆರ್‌ಸಿಬಿ ನೆನಪಿಟ್ಟುಕೊಂಡು ಎಚ್ಚೆತ್ತ ಅಧಿಕಾರಿ ವರ್ಗ]]></title>
            <link>https://kannada.asianetnews.com/gallery/state/karnataka-cm-oath-ceremony-on-vidhana-soudha-steps-amid-tight-security-arrangements-a55vlah</link>
            <guid isPermaLink="true">https://kannada.asianetnews.com/gallery/state/karnataka-cm-oath-ceremony-on-vidhana-soudha-steps-amid-tight-security-arrangements-a55vlah</guid>
            <pubDate>Fri, 29 May 2026 19:20:43 +0530</pubDate>
            <description><![CDATA[&lt;p&gt;ರಾಜ್ಯ ರಾಜಕಾರಣದಲ್ಲಿ ಎದ್ದ ಬಿರುಗಾಳಿ ಒಂದು ಹಂತಕ್ಕೆ ತಣ್ಣಗಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇದರ ಬೆನ್ನಲ್ಲೇ ನೂತನ ಸಿಎಂ ಪ್ರಮಾಣವಚನಕ್ಕೆ ಸ್ಥಳ ನಿಗಧಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksszm9jvw8vz2phgn5y3vx4k,imgname-cm-oath-ceremony-1780062234203.png" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ರಾಜಕಾರಣದಲ್ಲಿ ಎದ್ದ ಬಿರುಗಾಳಿ ಒಂದು ಹಂತಕ್ಕೆ ತಣ್ಣಗಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇದರ ಬೆನ್ನಲ್ಲೇ ನೂತನ ಸಿಎಂ ಪ್ರಮಾಣವಚನಕ್ಕೆ ಸ್ಥಳ ನಿಗಧಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ಕೊನೆಗೂ ಉತ್ತರ ಸಿಗುತ್ತಿದೆ. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿಕೆ ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ನಾಳೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತ ಘೋಷಣೆಯಾಗಲಿದೆ.&lt;/p&gt;&lt;img&gt;&lt;p&gt;ಕರ್ನಾಟಕದ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಸ್ಥಳ ನಗಿದಿಯಾಗಿದೆ. ವಿಧಾನಸೌಧದ ಮೆಟ್ಟಿಲು ಮೇಲೆ ನೂತನ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಸ್ಥಳ ನಿಗದಿಯಾಗುತ್ತಿದ್ದಂತೆ ಕಾರ್ಯಕ್ರಮ ಆಯೋಜನೆ ಚಟುವಟಿಕೆ ತೀವ್ರಗೊಂಡಿದೆ.&lt;/p&gt;&lt;img&gt;&lt;p&gt;ವಿಧಾನಸೌಧ ಮೆಟ್ಟಿಲು ಮೇಲೆ ಪ್ರಮಾಣವಚನ ಕಾರ್ಯಕ್ರಮ ನಿಗಧಿಯಾಗುತ್ತಿದ್ದಂತೆ ಅಧಿಕಾರಿ ವರ್ಗ ಎಚ್ಚೆತ್ತುಕೊಂಡಿದೆ. ಆರ್&zwnj;ಸಿಬಿ ವಿಜಯೋತ್ಸವ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ಸೇರಿ ದುರಂತ ಸಂಭವಿಸಿತ್ತು. ಆರಂಭದಲ್ಲಿ ವಿಧಾನಸೌಧ ಮೆಟ್ಟಿಲು ಮೇಲೆ ಕಾರ್ಯಕ್ರಮ ಬಳಿಕ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ನಡೆದಿತ್ತು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಈ ದುರಂತದಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.&lt;/p&gt;&lt;img&gt;&lt;p&gt;ವಿಧಾನಸೌಧ ಮೆಟ್ಟಿಲು ಮೇಲೆ ಪ್ರಮಾಣವಚನ ಕಾರ್ಯಕ್ರಮ ಆಯೋಜಿಸಿರುವ ಕಾರಣ ಸ್ಥಳಕ್ಕೆ ಡಿಸಿಪಿ ಎಸಿಪಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹೆಚ್ಚಿನ ಜನರು ಆಗಮನ ನಿರೀಕ್ಷೆ ಇರುವುದರಿಂದ ಯಾವುದೇ ಗೊಂದಲ ಆಗದಂತೆ ಎಚ್ಚರಿಕೆ ವಹಿಸಲು ಪ್ಲಾನ್ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಡಿಕೆ ಶಿವಕುಮಾರ್ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿ ಚರ್ಚಿಸಿದ್ದಾರೆ. ಮತ್ತೊಂದೆಡೆ ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಭ್ರಮ ಜೋರಾಗಿದೆ.&lt;/p&gt;&lt;img&gt;&lt;p&gt;ಕಳೆದ ಕೆಲ ವರ್ಷಗಳಿಂದ ಮುಖ್ಯಮಂತ್ರಿ ಬದಲಾವಣೆ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಇದೀಗ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದೆ. ಸಿದ್ದರಾಮಯ್ಯ ಯುಗ ಅಂತ್ಯವಾಗಿದೆ. ರಾಜ್ಯಸಭೆ ಪ್ರವೇಶ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸದ್ಯ ರಾಜ್ಯ ರಾಜಕಾರಣದಲ್ಲೇ ಇರುವುದಾಗಿ ಹೇಳಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/karnataka-cm-oath-ceremony-on-vidhana-soudha-steps-amid-tight-security-arrangements-a55vlah"/>
        </item>
        <item>
            <title><![CDATA[ಬೆಂಗಳೂರು ನೀರು ಸರಬರಾಜು ಕೊಳವೆ ಮಾರ್ಗದಲ್ಲಿ ತುರ್ತು ದುರಸ್ತಿ, ನಾಳೆ ಈ ಬಡಾವಣೆಗಳಲ್ಲಿ ನೀರು ಪೂರೈಕೆ ಸ್ಥಗಿತ!]]></title>
            <link>https://kannada.asianetnews.com/karnataka-districts/bengaluru-water-supply-disruption-mysore-road-bwssb-pipeline-repair-sat/articleshow-dg7g77x</link>
            <guid isPermaLink="true">https://kannada.asianetnews.com/karnataka-districts/bengaluru-water-supply-disruption-mysore-road-bwssb-pipeline-repair-sat/articleshow-dg7g77x</guid>
            <pubDate>Fri, 29 May 2026 16:05:40 +0530</pubDate>
            <description><![CDATA[ಬೆಂಗಳೂರಿನ ಮೈಸೂರು ರಸ್ತೆ ವ್ಯಾಪ್ತಿಯಲ್ಲಿ ಕಾವೇರಿ ಪೈಪ್&zwnj;ಲೈನ್&zwnj;ನಲ್ಲಿನ ಸೋರಿಕೆಯಿಂದಾಗಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ, ಕಸ್ತೂರಬಾ ನಗರ, ಬಾಪೂಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ 8 ಗಂಟೆಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kssmk6qvyc1wj2xk98xg3dxn,imgname-bengaluru-water-supply-1780050664187.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 29): &lt;/strong&gt;ಬೆಂಗಳೂರಿನ ಮೈಸೂರು ರಸ್ತೆ (Bengaluru Mysuru Road) ವ್ಯಾಪ್ತಿಯ ನಿವಾಸಿಗಳಿಗೆ ಬೆಂಗಳೂರು ಜಲಮಂಡಳಿಯು (BWSSB) ಮಹತ್ವದ ಸೂಚನೆಯೊಂದನ್ನು ನೀಡಿದೆ. ಕಾವೇರಿ 2ನೇ ಹಂತದ ಮುಖ್ಯ ಕುಡಿಯುವ ನೀರಿನ ಪೈಪ್&zwnj;ಲೈನ್&zwnj;ನಲ್ಲಿ (Kaveri 2nd stage drinking watere pipeline) ಉಂಟಾಗಿರುವ ತುರ್ತು ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವ ಹಿನ್ನೆಲೆಯಲ್ಲಿ, ನಾಳೆ ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಸುಮಾರು 8 ಗಂಟೆಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.&lt;/p&gt;&lt;h3&gt;&lt;strong&gt;ಪೈಪ್&zwnj;ಲೈನ್&zwnj;ನಲ್ಲಿ ಭಾರೀ ಸೋರಿಕೆ:&lt;/strong&gt;&lt;/h3&gt;&lt;p&gt;ಮೈಸೂರು ರಸ್ತೆ ಸೇವಾ ವ್ಯಾಪ್ತಿಗೆ ಬರುವ ಕಾವೇರಿ 2ನೇ ಹಂತದ 600 ಮಿ.ಮೀ. ವ್ಯಾಸದ ಮುಖ್ಯ ಪೈಪ್&zwnj;ಲೈನ್&zwnj;ನಲ್ಲಿ ಭಾರೀ ರಂಧ್ರ ಉಂಟಾಗಿದ್ದು, ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಹನುಮಂತನಗರ ಪೊಲೀಸ್ ಕ್ವಾರ್ಟರ್ಸ್ ಎದುರಿನ ಮುಖ್ಯ ರಸ್ತೆಯಲ್ಲಿ ಈ ಸೋರಿಕೆ ಕಾಣಿಸಿಕೊಂಡಿದ್ದು, ಹೆಚ್ಚಿನ ಒತ್ತಡದಿಂದ ನೀರು ಚಿಮ್ಮುತ್ತಿದೆ. ಇದರಿಂದಾಗಿ ಪ್ರತಿನಿತ್ಯ ಸರಬರಾಜಾಗುವ ಸುಮಾರು 14 ಎಂ.ಎಲ್.ಡಿ (MLD) ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ.&lt;/p&gt;&lt;h2&gt;&lt;strong&gt;8 ಗಂಟೆಗಳ ಕಾಲ ಶಟ್&zwnj;ಡೌನ್:&lt;/strong&gt;&lt;/h2&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು, 'ಸಾರ್ವಜನಿಕ ಹಿತದೃಷ್ಟಿ ಮತ್ತು ಕುಡಿಯುವ ನೀರಿನ ಉಳಿತಾಯದ ಉದ್ದೇಶದಿಂದ ಈ ತುರ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸೌತ್ ಎಂಡ್ ರಸ್ತೆಯ ಸುರಾನ ಕಾಲೇಜು ಬಳಿ ಇರುವ 24 ಅಂಗುಲದ ಕವಾಟವನ್ನು (Valve) 8 ಗಂಟೆಗಳ ಕಾಲ ಬಂದ್ ಮಾಡಿ (Local Shutdown), ಸಮರೋಪಾದಿಯಲ್ಲಿ ದುರಸ್ತಿ ಕಾಮಗಾರಿ ನಡೆಸಲಾಗುವುದು' ಎಂದು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಯಾವೆಲ್ಲಾ ಪ್ರದೇಶಗಳಲ್ಲಿ ನೀರು ಇರುವುದಿಲ್ಲ?&lt;/strong&gt;&lt;/h3&gt;&lt;p&gt;ಈ ದುರಸ್ತಿ ಕಾರ್ಯ ನಡೆಯುವ 8 ಗಂಟೆಗಳ ಅವಧಿಯಲ್ಲಿ ಮೈಸೂರು ರಸ್ತೆ ವ್ಯಾಪ್ತಿಯ ಈ ಕೆಳಗಿನ ಬಡಾವಣೆಗಳಲ್ಲಿ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಅಥವಾ ವ್ಯತ್ಯಯವಾಗಲಿದೆ:&lt;/p&gt;&lt;ul&gt; &lt;li&gt;ಕಸ್ತೂರಬಾ ನಗರ&lt;/li&gt; &lt;li&gt;ಬಾಪೂಜಿನಗರ&lt;/li&gt; &lt;li&gt;ಶಾಮಣ್ಣ ಗಾರ್ಡನ್&lt;/li&gt; &lt;li&gt;ಮಂಜುನಾಥನಗರ&lt;/li&gt; &lt;li&gt;ಹೊಸಗುಡ್ಡದಹಳ್ಳಿ&lt;/li&gt; &lt;li&gt;ಹಳೇಗುಡ್ಡದಹಳ್ಳಿ&lt;/li&gt; &lt;li&gt;ಅರಾಫತ್ ನಗರ&lt;/li&gt;&lt;/ul&gt;&lt;h2&gt;&lt;strong&gt;ಸಾರ್ವಜನಿಕರಿಗೆ ಜಲಮಂಡಳಿಯ ಮನವಿ:&lt;/strong&gt;&lt;/h2&gt;&lt;p&gt;ಪೈಪ್&zwnj;ಲೈನ್ ಸೋರಿಕೆಯಿಂದಾಗಿ ರಸ್ತೆಯೂ ಹಾಳಾಗುವ ಸಾಧ್ಯತೆ ಇರುವುದರಿಂದ, ವಿಳಂಬ ಮಾಡದೆ ತಕ್ಷಣವೇ ಕಾಮಗಾರಿ ಆರಂಭಿಸಲಾಗಿದೆ. ಈ ತುರ್ತು ದುರಸ್ತಿಯಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲತೆಗಾಗಿ ಜಲಮಂಡಳಿ ವಿಷಾದ ವ್ಯಕ್ತಪಡಿಸಿದೆ. ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಎಂದಿನಂತೆ ಸುಗಮವಾಗಿ ನೀರು ಸರಬರಾಜು ಮಾಡಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಹಾಗೂ ಗ್ರಾಹಕರು ಮಂಡಳಿಯೊಂದಿಗೆ ಸಹಕರಿಸಬೇಕು ಮತ್ತು ನೀರನ್ನು ಮಿತವಾಗಿ ಬಳಸಬೇಕು ಎಂದು ಕೋರಲಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-water-supply-disruption-mysore-road-bwssb-pipeline-repair-sat/articleshow-dg7g77x"/>
        </item>
        <item>
            <title><![CDATA[ಆಟೋದೊಳಗೆ ಮಿನಿ ಶಾಪಿಂಗ್​ ಮಾಲ್​: ಬೆಂಗಳೂರು ಚಾಲಕನ ತಲೆಗೆ ಭೇಷ್​ ಎಂದ ಪ್ರಯಾಣಿಕರು]]></title>
            <link>https://kannada.asianetnews.com/viral/a-mini-shopping-mall-is-now-running-inside-a-namma-bengaluru-auto-video-viral-suc/articleshow-gglym88</link>
            <guid isPermaLink="true">https://kannada.asianetnews.com/viral/a-mini-shopping-mall-is-now-running-inside-a-namma-bengaluru-auto-video-viral-suc/articleshow-gglym88</guid>
            <pubDate>Fri, 29 May 2026 18:19:28 +0530</pubDate>
            <description><![CDATA[ಬೆಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ವಾಹನದೊಳಗೆ ಮಿನಿ ಆಭರಣ ಅಂಗಡಿಯನ್ನು ಸ್ಥಾಪಿಸಿ ಸುದ್ದಿಯಾಗಿದ್ದಾರೆ. ಪ್ರಯಾಣಿಕರು ಸಂಚಾರದ ಸಮಯದಲ್ಲಿಯೇ ಆಭರಣಗಳನ್ನು ಖರೀದಿಸಲು ಅನುವು ಮಾಡಿಕೊಡುವ ಈ ವಿನೂತನ ವ್ಯಾಪಾರ ತಂತ್ರವು ಜಾಲತಾಣದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksswg49any5vgybg6ztkexqm,imgname-jewellary-isude-auto-1780058951978.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಜಿಬೆಸ್​ ಮೈಂಡ್​ ಇರುವ ವ್ಯಕ್ತಿಗಳು ಹೇಗಾದರೂ ಸಂಪಾದನೆ ಮಾಡುತ್ತಾರೆ. ಸಂಪಾದನೆ ಮಾಡಲು ಸೂಕ್ತವಾದ ಮಾರ್ಗಗಳನ್ನು ಹುಡುಕುತ್ತಾರೆ. ಯಾರಿಗೂ ಹೊಳೆಯದ್ದು ಅಂಥವರಿಗೆ ಹೊಳೆಯುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಬೆಂಗಳೂರಿನ ಈ ಆಟೋ.&lt;/p&gt;&lt;p&gt;ಜಾಲತಾಣದಲ್ಲಿ ವೈರಲ್​ ಆಗ್ತಿರೋ ಈ ಆಟೋದ ಒಳಗೆ ಮಿನಿ ಶಾಪಿಂಗ್​ ಮಾಲ್​ ಇರುವುದನ್ನು ನೋಡಬಹುದು. ಇದನ್ನು ಪಕ್ಕದಲ್ಲಿಯೇ ಹೋಗುತ್ತಿದ್ದ ಸವಾರನೊಬ್ಬ ವಿಡಿಯೋ ಮಾಡಿ ಅದನ್ನು ಶೇರ್​ ಮಾಡಿದ್ದಾರೆ. ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಆಭರಣಗಳನ್ನು ಖರೀದಿ ಮಾಡಲು ಅನುಕೂಲ ಆಗುವಂತೆ ಇಲ್ಲಿ ವಿವಿಧ ಆಭರಣಗಳನ್ನು ಇಡಲಾಗಿದೆ.&lt;/p&gt;&lt;h2&gt;&lt;strong&gt;ಹೊಸ ಹೊಸ ಅವಕಾಶ&lt;/strong&gt;&lt;/h2&gt;&lt;p&gt;ಟ್ರಾಫಿಕ್&zwnj;ನಲ್ಲಿ ಕಾಯುತ್ತಿರುವಾಗ ಅಥವಾ ನಗರದ ಮೂಲಕ ಪ್ರಯಾಣಿಸುವಾಗ, ಗ್ರಾಹಕರು ಈಗ ಆಟೋದೊಳಗೆ ಇಟ್ಟಿರುವ ಈ ಆಭರಗಳನ್ನು ಖರೀದಿಸುವ ಆಯ್ಕೆಯನ್ನು ಹೊಂದಿದ್ದಾರೆ. ಇದು ಬೆಂಗಳೂರಿನ ಉದ್ಯಮಶೀಲತಾ ಮನೋಭಾವವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತದೆ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಇಂಥ ವ್ಯಕ್ತಿಗಳು ಯಾವಾಗಲೂ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಲು ನವೀನ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅದು ಈ ರೀತಿಯಾಗಿ ವಿಭಿನ್ನವಾಗಿ ಯೋಚಿಸಿರುವುದು ಶ್ಲಾಘನಾರ್ಹ ಎನ್ನುತ್ತಿದ್ದಾರೆ.&lt;/p&gt;&lt;h3&gt;&lt;strong&gt;ನೆಟ್ಟಿಗರ ಶ್ಲಾಘನೆ&lt;/strong&gt;&lt;/h3&gt;&lt;p&gt;ಆಟೋ ಮೂರು ಚಕ್ರಗಳ ಮೇಲೆ ಮಿನಿ ಶಾಪಿಂಗ್ ಮಾಲ್&zwnj;ನಂತೆ ಕಾಣುವುದರಿಂದ ಅನೇಕ ಜನರನ್ನು ಅಚ್ಚರಿಗೊಳಿಸಿದೆ. ತಂತ್ರಜ್ಞಾನದ ಸ್ಟಾರ್ಟ್&zwnj;ಅಪ್&zwnj;ಗಳಿಂದ ಸೃಜನಶೀಲ ಬೀದಿ ಮಟ್ಟದ ವ್ಯಾಪಾರ ಕಲ್ಪನೆಗಳವರೆಗೆ, ಬೆಂಗಳೂರು ತನ್ನ ವಿಶಿಷ್ಟ ನಾವೀನ್ಯತೆಗಳಿಗೆ ಹೆಸರುವಾಸಿಯಾಗಿದೆ. ಟ್ರಾಫಿಕ್ ಮತ್ತು ಸೃಜನಶೀಲತೆ ಎರಡಕ್ಕೂ ಹೆಸರುವಾಸಿಯಾದ ಬೆಂಗಳೂರಿನಲ್ಲಿ, ಈ ಆಟೋ ಚಾಲಕ ಆಟೋ ಒಳಗೆ ಪ್ರಯಾಣಿಕ ಆಭರಣ ಅಂಗಡಿಯನ್ನು ರಚಿಸುವ ಮೂಲಕ ಅನುಕೂಲತೆ ಮತ್ತು ವ್ಯವಹಾರವನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಸಂಯೋಜಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಭೇಷ್​ ಎನ್ನುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Peak Bengaluru moment: A mini shopping mall is now running inside a Namma Bengaluru auto!An auto driver in Bengaluru has come up with a unique and creative business idea by turning his auto into a small moving jewellery store. Inside the auto, he has installed a display box&hellip; pic.twitter.com/nrVReaQMKA&lt;/p&gt;&lt;p&gt;&mdash; Karnataka Portfolio (@karnatakaportf) May 29, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Suchethana D</dc:creator>
            <atom:link href="https://kannada.asianetnews.com/viral/a-mini-shopping-mall-is-now-running-inside-a-namma-bengaluru-auto-video-viral-suc/articleshow-gglym88"/>
        </item>
        <item>
            <title><![CDATA[Bhatkal: 'ಮುರಿನ್‌ಕಟ್ಟೆ ಇದ್ದ ಜಾಗದಲ್ಲಿಯೇ ಕಟ್ಟುತ್ತೇನೆ..' ಭಟ್ಕಳ ಜನರಿಗೆ ಆಶ್ವಾಸನೆ ನೀಡಿದ ಸಚಿವ ಮಂಕಾಳ ವೈದ್ಯ]]></title>
            <link>https://kannada.asianetnews.com/uttara-kannada/mankal-vaidya-bhatkal-murinkatte-temple-promise-siddaramaiah-resignation-san/articleshow-cuuuga5</link>
            <guid isPermaLink="true">https://kannada.asianetnews.com/uttara-kannada/mankal-vaidya-bhatkal-murinkatte-temple-promise-siddaramaiah-resignation-san/articleshow-cuuuga5</guid>
            <pubDate>Fri, 29 May 2026 17:11:18 +0530</pubDate>
            <description><![CDATA[&lt;p&gt;ಭಟ್ಕಳದ ವಿವಾದಿತ ಮುರಿನ್&zwnj;ಕಟ್ಟೆಯನ್ನು ಶಾಸ್ತ್ರೋಕ್ತವಾಗಿ ಪುನರ್ ನಿರ್ಮಿಸುವುದಾಗಿ ಸಚಿವ ಮಂಕಾಳು ವೈದ್ಯ ಭರವಸೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ವಿವಾದ ಆರಂಭವಾಗಿದ್ದು, ಅವರು ದೇವರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssqt25ssvqdc0f2dgxmvyt5,imgname-mankal-vaidya-1780054034617.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ/ಭಟ್ಕಳ (ಮೇ.29):&lt;/strong&gt; ನಾನು ದೇವಸ್ಥಾನಗಳನ್ನು ಕಟ್ಟುವವನೇ ಹೊರತು, ದೇವರ ಸ್ಥಾನಗಳನ್ನು ಕೆಡವುವವನಲ್ಲ. ಭಟ್ಕಳದ ವಿವಾದಿತ ಮುರಿನ್&zwnj;ಕಟ್ಟೆಯನ್ನು ಅತ್ಯಂತ ಶಾಸ್ತ್ರೋಕ್ತವಾಗಿ ಅದು ಇದ್ದ ಜಾಗದಲ್ಲಿಯೇ ಅಥವಾ ಅದರ ಸನಿಹದಲ್ಲೇ ಪುನರ್ ನಿರ್ಮಾಣ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಭಟ್ಕಳದ ಜನತೆಗೆ ಭರವಸೆ ನೀಡಿದ್ದಾರೆ. ಶಿರಾಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುರಿನ್&zwnj;ಕಟ್ಟೆ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ಗರಂ ಆದರು.&lt;/p&gt;&lt;h2&gt;&lt;strong&gt;ಅಂದು ಸುನೀಲ್ ನಾಯ್ಕ್ ಹೊಂದಾಣಿಕೆ ಮಾಡಿಕೊಂಡಿದ್ದ ಸಂಶಯವಿದೆ: ಮಂಕಾಳ ವೈದ್ಯ&lt;/strong&gt;&lt;/h2&gt;&lt;p&gt;ಮುರಿನ್&zwnj;ಕಟ್ಟೆ ವಿವಾದದ ಹಿನ್ನೆಲೆಯನ್ನು ಕೆದಕಿದ ಸಚಿವ ಮಂಕಾಳು ವೈದ್ಯ, 'ಈ ಮುರಿನ್&zwnj;ಕಟ್ಟೆ ವಿವಾದ ಆರಂಭವಾಗಿದ್ದೇ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಸುನೀಲ್ ನಾಯ್ಕ್ ಶಾಸಕರಾಗಿದ್ದಾಗ. ಆ ಸಮಯದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ್ ಅವರು ಈ ವಿಷಯದಲ್ಲಿ ಒಳ ಒಪ್ಪಂದ ಅಥವಾ ಹೊಂದಾಣಿಕೆ ಮಾಡಿಕೊಂಡಿದ್ದರು ಎನ್ನುವ ಬಲವಾದ ಸಂಶಯ ನಮಗಿದೆ. ಅಂದು ಅಧಿಕಾರ ಕೈಯಲ್ಲಿದ್ದಾಗ ಸುಮ್ಮನೆ ಕೂತಿದ್ದ ಬಿಜೆಪಿ ನಾಯಕರು, ಈಗ ಧರ್ಮದ ಹೆಸರಿನಲ್ಲಿ ಗದ್ದಲ, ಗಲಾಟೆ ಮಾಡಲು ಹೊರಟಿರುವುದು ಯಾಕೆ? ಎಂದು ಪ್ರಶ್ನಿಸಿದರು.&lt;/p&gt;&lt;h2&gt;&lt;strong&gt;ದೇವರ ವಿಚಾರದಲ್ಲಿ ರಾಜಕೀಯ ಮಾಡಿದರೆ ಸರ್ವಸ್ವವೂ ನಾಶ!&lt;/strong&gt;&lt;/h2&gt;&lt;p&gt;&quot;ಇದು ದೇವರು ಮತ್ತು ದೈವಗಳ ಪವಿತ್ರ ಸ್ಥಾನ. ದೇವರ ವಿಚಾರದಲ್ಲಿ ಯಾರೇ ಅನ್ಯಾಯ ಅಥವಾ ಸ್ವಾರ್ಥದ ರಾಜಕೀಯ ಮಾಡಿದರೂ ಅವರು ತಮ್ಮ ಸರ್ವಸ್ವವನ್ನೇ ಕಳೆದುಕೊಳ್ಳುತ್ತಾರೆ. ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ. ಒಂದುವೇಳೆ ನಾನೇನಾದರೂ ದೇವರ ಹೆಸರಿನಲ್ಲಿ ರಾಜಕೀಯ ಮಾಡಲು ಹೋದರೆ ನನಗೂ ಕಂಟಕ ತಪ್ಪಿದ್ದಲ್ಲ,&quot; ಎಂದು ಸಚಿವರು ಎಚ್ಚರಿಕೆ ನೀಡಿದರು. ಬಿಜೆಪಿ ನಾಯಕರಿಗೆ ಕೇವಲ ರಾಜಕೀಯ ಮಾಡುವುದಷ್ಟೇ ಗೊತ್ತು, ಕ್ಷೇತ್ರದ ಅಭಿವೃದ್ಧಿಯಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.&lt;/p&gt;&lt;h2&gt;&lt;strong&gt;ಸಿಎಂ ಸಿದ್ದರಾಮಯ್ಯ ರಾಜೀನಾಮೆ: ಹೈಕಮಾಂಡ್ ನಿರ್ಧಾರಕ್ಕೆ 136 ಶಾಸಕರು ಬದ್ಧ!&lt;/strong&gt;&lt;/h2&gt;&lt;p&gt;ಇದೇ ವೇಳೆ ರಾಜ್ಯ ರಾಜಕೀಯದ ಹೈ-ಡ್ರಾಮಾ ಹಾಗೂ ಸಿಎಂ ಸಿದ್ದರಾಮಯ್ಯ ಅವರ ದಿಢೀರ್ ರಾಜೀನಾಮೆ ಕುರಿತು ಮಾತನಾಡಿದ ಸಚಿವರು, &quot;ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ (ಮೇ 28) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನಮ್ಮ ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಯೋಗ್ಯ ಮತ್ತು ಒಳ್ಳೆಯ ವ್ಯಕ್ತಿಯನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಲಿದೆ. ಆಯ್ಕೆಯಾಗುವ ಹೊಸ ನಾಯಕರು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡಲಿದ್ದಾರೆ,&quot; ಎಂದರು.&lt;/p&gt;&lt;p&gt;&quot;ಸದ್ಯ ದೆಹಲಿಗೆ ನಮ್ಮ ರಾಜ್ಯದ ಹಿರಿಯ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರು ಹೋಗಿದ್ದಾರೆ. ಹೈಕಮಾಂಡ್ ಸಮ್ಮುಖದಲ್ಲಿ ಅಲ್ಲಿ ಕೈಗೊಳ್ಳುವ ಅಂತಿಮ ನಿರ್ಧಾರಕ್ಕೆ ರಾಜ್ಯದ ಎಲ್ಲಾ 136 ಕಾಂಗ್ರೆಸ್ ಶಾಸಕರು ಸಂಪೂರ್ಣವಾಗಿ ಬದ್ಧರಾಗಿರುತ್ತಾರೆ. ಬಹುಶಃ ನಾಳೆ ಅಥವಾ ನಾಡಿದ್ದು ಶಾಸಕಾಂಗ ಪಕ್ಷದ (CLP) ಸಭೆ ಕರೆಯಬಹುದು. ನಾವೆಲ್ಲರೂ ಆ ಸಭೆಯಲ್ಲಿ ಭಾಗವಹಿಸಿ ಹೈಕಮಾಂಡ್ ತೀರ್ಮಾನವನ್ನು ಒಪ್ಪಿಕೊಳ್ಳಲಿದ್ದೇವೆ,&quot; ಎಂದು ಸ್ಪಷ್ಟಪಡಿಸಿದರು.&lt;/p&gt;&lt;h2&gt;&lt;strong&gt;ನನಗೆ ನನ್ನ ಕ್ಷೇತ್ರದ ಜನರೇ ಮುಖ್ಯ, ನಾನು ಇಲ್ಲೇ ಇರುತ್ತೇನೆ&lt;/strong&gt;&lt;/h2&gt;&lt;p&gt;ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯ ನಡುವೆಯೂ ತಮಗೆ ಕ್ಷೇತ್ರವೇ ಮುಖ್ಯ ಎಂದ ವೈದ್ಯ, ನಾನು ಇಂದು ಸಚಿವನಾಗಲು ನನ್ನ ಭಟ್ಕಳ-ಹೊನ್ನಾವರ ಕ್ಷೇತ್ರದ ಜನರೇ ಮುಖ್ಯ ಕಾರಣ. ಅವರು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೇ ನಾನು ಮಂತ್ರಿಯಾಗಿದ್ದೇನೆ. ದೆಹಲಿ ರಾಜಕಾರಣ ನಮಗೆ ಬೇಡ, ನನಗೆ ನನ್ನ ಕ್ಷೇತ್ರದ ಜನರ ಕೆಲಸ ಮಾಡಬೇಕಿದೆ. ಹಾಗಾಗಿ ನಾನು ಬೆಂಗಳೂರು ಅಥವಾ ದೆಹಲಿ ಎಂದು ಅಲೆಯದೇ ನನ್ನ ಕ್ಷೇತ್ರದಲ್ಲೇ ಇದ್ದು ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/uttara-kannada/mankal-vaidya-bhatkal-murinkatte-temple-promise-siddaramaiah-resignation-san/articleshow-cuuuga5"/>
        </item>
        <item>
            <title><![CDATA[ಭಟ್ಕಳ: ಕಳಿನಡ ತೆಗೆಯಲು ಹೋಗಿ 11 ಮಂದಿ ಸಾವು, ಪರಿಹಾರದ ಚೆಕ್‌ ನೀಡಿ ಭಾವುಕರಾದ ಸಚಿವ ಮಂಕಾಳ ವೈದ್ಯ]]></title>
            <link>https://kannada.asianetnews.com/uttara-kannada/bhatkal-fisherman-tragedy-mankal-vaidya-distributes-compensation-cheque-san/articleshow-8xxn131</link>
            <guid isPermaLink="true">https://kannada.asianetnews.com/uttara-kannada/bhatkal-fisherman-tragedy-mankal-vaidya-distributes-compensation-cheque-san/articleshow-8xxn131</guid>
            <pubDate>Fri, 29 May 2026 16:46:07 +0530</pubDate>
            <description><![CDATA[ಭಟ್ಕಳದಲ್ಲಿ ಜಲಸಮಾಧಿಯಾದ 11 ಮೀನುಗಾರರ ಕುಟುಂಬಗಳಿಗೆ ಸರ್ಕಾರ ಹಾಗೂ ಸಚಿವ ಮಂಕಾಳು ವೈದ್ಯರಿಂದ ಬೃಹತ್ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಸಚಿವರು ವೈಯಕ್ತಿಕವಾಗಿ ಅನಾಥ ಮಕ್ಕಳ ಶಿಕ್ಷಣದ ಜವಾಬ್ದಾರಿ ಹಾಗೂ ಕುಟುಂಬಗಳಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksspzg4gwn5xbmzxzy650pcc,imgname-mankal-vaidya-1780053164176.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಟ್ಕಳ (ಮೇ.29): &lt;/strong&gt;ಕಳಿನಡ ತೆಗೆಯಲು ಹೋಗಿ ಜಲಸಮಾಧಿಯಾಗಿದ್ದ 11 ಮೀನುಗಾರರ ಕುಟುಂಬಗಳ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ವೈಯಕ್ತಿಕ ಮಟ್ಟದಲ್ಲಿ ಬೃಹತ್ ಮೊತ್ತದ ಆರ್ಥಿಕ ನೆರವು ಮತ್ತು ಪುನರ್ವಸತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಮತ್ತು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಇಂದು ಮೃತರ ಮನೆಗಳಿಗೆ ಭೇಟಿ ನೀಡಿ ಅಧಿಕೃತವಾಗಿ ಪರಿಹಾರದ ಚೆಕ್&zwnj;ಗಳನ್ನು ಹಸ್ತಾಂತರಿಸಿದರು.&lt;/p&gt;&lt;h2&gt;&lt;strong&gt;ಪ್ರತಿ ಕುಟುಂಬಕ್ಕೆ ಒಟ್ಟು ₹16.50 ಲಕ್ಷ ರೂಪಾಯಿ ಆಸರೆ&lt;/strong&gt;&lt;/h2&gt;&lt;p&gt;ಮೃತಪಟ್ಟ ಮೀನುಗಾರರ ಕುಟುಂಬಗಳು ಬೀದಿಗೆ ಬೀಳಬಾರದು ಎಂಬ ನಿಟ್ಟಿನಲ್ಲಿ ವಿವಿಧ ಮೂಲಗಳಿಂದ ಒಟ್ಟುಗೂಡಿಸಿ ಬೃಹತ್ ಮೊತ್ತದ ಆರ್ಥಿಕ ಸಹಾಯವನ್ನು ಇವತ್ತು ಹಸ್ತಾಂತರಿಸಲಾಯಿತು. ಸರ್ಕಾರದ ವತಿಯಿಂದ ತಲಾ ₹5 ಲಕ್ಷ ರೂಪಾಯಿ ಪರಿಹಾರ, ಸಚಿವ ಮಂಕಾಳ ವೈದ್ಯ ಅವರ ಮೀನುಗಾರಿಕಾ ಇಲಾಖೆಯಿಂದ ತಲಾ ₹10 ಲಕ್ಷ ರೂಪಾಯಿ ಆರ್ಥಿಕ ನೆರವು ಅದರೊಂದಿಗೆ ಸಚಿವರು ವೈಯಕ್ತಿಕವಾಗಿ ತಲಾ ₹1 ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಅದರೊಂದಿಗೆ ಮಂಕಾಳು ವೈದ್ಯ ಅಧ್ಯಕ್ಷರಾಗಿರುವ ಜನತಾ ಸಹಕಾರ ಬ್ಯಾಂಕ್&zwnj;ನಿಂದ ತಲಾ ₹50 ಸಾವಿರ ರೂಪಾಯಿ ಸಹಾಯಧನ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಅನಾಥ ಮಕ್ಕಳ ಶಿಕ್ಷಣ ಜವಾಬ್ದಾರಿ ನನ್ನದು: ಸಚಿವ ಮಂಕಾಳು ವೈದ್ಯ ಭಾವುಕ&lt;/strong&gt;&lt;/h2&gt;&lt;p&gt;ಪರಿಹಾರ ಚೆಕ್ ವಿತರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಂಕಾಳು ವೈದ್ಯ ಅವರು ಅತ್ಯಂತ ಮಾನವೀಯ ನಿರ್ಧಾರಗಳನ್ನು ಪ್ರಕಟಿಸಿದರು. 'ಈ ಘಟನೆಯಿಂದಾಗಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿಯನ್ನು ವೈಯಕ್ತಿಕವಾಗಿ ನಾನೇ ವಹಿಸಿಕೊಳ್ಳುತ್ತಿದ್ದೇನೆ. ಆ ಮಕ್ಕಳು ದೇಶದ ಯಾವುದೇ ಮೂಲೆಯಲ್ಲಿ ಎಲ್ಲಿಯವರೆಗೆ ಓದುತ್ತಾರೋ, ಅಲ್ಲಿಯ ತನಕ ಅವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ..' ಎಂದು ಭರವಸೆ ನೀಡಿದರು.&lt;/p&gt;&lt;h2&gt;&lt;strong&gt;ಉದ್ಯೋಗಾವಕಾಶ ಮತ್ತು ಸ್ವಂತ ಮನೆ ನಿರ್ಮಾಣದ ಭರವಸೆ!&lt;/strong&gt;&lt;/h2&gt;&lt;p&gt;ದುರಂತದಲ್ಲಿ ಪೋಷಕರನ್ನು ಕಳೆದುಕೊಂಡು ನಿರಾಶ್ರಿತರಾದ ಮಕ್ಕಳಿಗೆ ತಕ್ಷಣಕ್ಕೆ ತಂಗಲು ವ್ಯವಸ್ಥೆ ಕಲ್ಪಿಸಲು ಮತ್ತು ಮನೆ ಕಟ್ಟಿಕೊಳ್ಳಲು ಸಚಿವರು ವೈಯಕ್ತಿಕವಾಗಿ ₹5 ಲಕ್ಷ ರೂಪಾಯಿ ಪ್ರತ್ಯೇಕ ನೆರವು ನೀಡಿದ್ದಾರೆ. ಇದರೊಂದಿಗೆ, ಈ ವರ್ಷವೇ ಅವರಿಗೆ ಅತ್ಯಾಧುನಿಕವಾದ ಒಂದು ಸುಸಜ್ಜಿತ ಸ್ವಂತ ಮನೆಯನ್ನು ತಮ್ಮದೇ ಸ್ವಂತ ಖರ್ಚಿನಲ್ಲಿ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು. ಜೊತೆಗೆ, ಸಂಕಷ್ಟದಲ್ಲಿರುವ ಈ ಕುಟುಂಬಗಳ ಅರ್ಹ ಸದಸ್ಯರಿಗೆ ಸ್ಥಳೀಯ ಸಹಕಾರಿ ಬ್ಯಾಂಕ್&zwnj;ಗಳಲ್ಲಿ ಗೌರವಯುತವಾದ ಉದ್ಯೋಗ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಈ ಬಾರಿ ಜನ್ಮದಿನ ಆಚರಣೆಯಿಲ್ಲ!&lt;/strong&gt;&lt;/h2&gt;&lt;p&gt;ಕ್ಷೇತ್ರದ ಜನರ ನೋವಿನಲ್ಲಿ ಭಾಗಿಯಾಗಿರುವ ಸಚಿವ ಮಂಕಾಳು ವೈದ್ಯ ಅವರು ಇದೇ ಬರುವ ಜೂನ್ 5 ರಂದು ಇರುವ ತಮ್ಮ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ತಮ್ಮ ತಾಲೂಕಿನ 11 ಜನ ಜೀವ ಕಳೆದುಕೊಂಡಿರುವಾಗ ಸಂಭ್ರಮ ಆಚರಿಸುವುದು ಸರಿಯಲ್ಲ, ಹೀಗಾಗಿ ಈ ವರ್ಷ ಯಾವುದೇ ಕಾರಣಕ್ಕೂ ಹುಟ್ಟುಹಬ್ಬದ ಆಚರಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>karnataka-districts</category>
            <dc:creator>Santosh Naik</dc:creator>
            <atom:link href="https://kannada.asianetnews.com/uttara-kannada/bhatkal-fisherman-tragedy-mankal-vaidya-distributes-compensation-cheque-san/articleshow-8xxn131"/>
        </item>
        <item>
            <title><![CDATA[ಬೆಂಗಳೂರು: ಕೋಟಿ ಕೋಟಿ ಬೆಲೆಬಾಳುವ ಜೈಲಿನ ಆಸ್ತಿಯನ್ನೇ ಕಬ್ಜಾ ಮಾಡಿದ ಖದೀಮರು, FIR ದಾಖಲು!]]></title>
            <link>https://kannada.asianetnews.com/karnataka-districts/bengaluru-prison-department-property-encroached-gandhinagar-case-registered-sat/articleshow-gacd8ro</link>
            <guid isPermaLink="true">https://kannada.asianetnews.com/karnataka-districts/bengaluru-prison-department-property-encroached-gandhinagar-case-registered-sat/articleshow-gacd8ro</guid>
            <pubDate>Fri, 29 May 2026 15:06:20 +0530</pubDate>
            <description><![CDATA[ಬೆಂಗಳೂರಿನ ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳ ವಿರುದ್ಧ ಎಫ್&zwnj;ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kssheszy8nn0pv5yzkz4bq1z,imgname-berngaluru-jail-land-1780047374334.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 29): ಬೆಂ&lt;/strong&gt;ಗಳೂರಿನ ಹೃದಯಭಾಗದಲ್ಲಿರುವ ಸರ್ಕಾರಿ ಆಸ್ತಿಗಳಿಗೂ ಈಗ ರಕ್ಷಣೆಯಿಲ್ಲದಂತಾಗಿದೆ. ಸಾರ್ವಜನಿಕರ ಆಸ್ತಿಯನ್ನು ಕಾಯಬೇಕಾದ ವ್ಯವಸ್ಥೆಯ ಕಣ್ಣೆದುರೇ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಬೆಂಗಳೂರಿನ ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ 'ಮೈಸೂರು ಡಿಸ್ಚಾರ್ಜ್ಡ್ ಪ್ರಿಸನರ್ಸ್ ಏಡ್ ಸೊಸೈಟಿ'ಗೆ (Mysore Discharged Prisoners' Aid Society) ಸೇರಿದ ಆಸ್ತಿಯ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಈ ಆಸ್ತಿಯು ನೇರವಾಗಿ ಕಾರಾಗೃಹ ಇಲಾಖೆಯ ಅಧೀನಕ್ಕೆ ಒಳಪಡುತ್ತದೆ. ಆದರೆ, ಕಳೆದ ಒಂದು ವರ್ಷದಿಂದ ಈ ಅಮೂಲ್ಯವಾದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಾನೂನುಬಾಹಿರವಾಗಿ ತಮ್ಮ ವಶಕ್ಕೆ ಪಡೆದುಕೊಂಡು ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಅತಿಕ್ರಮಣ ಮಾಡಿದ್ದು ಯಾರು?&lt;/strong&gt;&lt;/h2&gt;&lt;p&gt;ಈ ಆಸ್ತಿ ಅತಿಕ್ರಮಣ ಪ್ರಕರಣದಲ್ಲಿ ಮುಖ್ಯವಾಗಿ ಇಬ್ಬರ ಹೆಸರು ಕೇಳಿಬಂದಿದೆ. ಅನಿಲ್ ಎಂಬ ವಕೀಲರು ಹಾಗೂ ಖಲಿಂ ಎಂಬ ವ್ಯಕ್ತಿ ಈ ಜಾಗವನ್ನು ಕಬ್ಜ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಕೀಲ ಅನಿಲ್ ಅವರು ಯಾವುದೇ ಅನುಮತಿ ಪಡೆಯದೇ ಕಟ್ಟಡದ ಮೊದಲ ಮಹಡಿಯನ್ನು ಅತಿಕ್ರಮಣ ಮಾಡಿಕೊಂಡಿದ್ದರೆ, ಖಲಿಂ ಎಂಬ ವ್ಯಕ್ತಿ ಹಳೆಯ ಸಾಮಗ್ರಿಗಳನ್ನು (Scrap materials) ತಂದು ಹಾಕಿ ಇಡೀ ಆವರಣವನ್ನು ತನ್ನ ಸ್ವಂತ ಸೊತ್ತಿನಂತೆ ಬಳಸಿಕೊಳ್ಳುತ್ತಿದ್ದಾನೆ ಎಂಬ ದೂರು ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ದೂರು ಮತ್ತು ತನಿಖೆ:&lt;/strong&gt;&lt;/h2&gt;&lt;p&gt;ಈ ಸಂಬಂಧ ಶ್ರೀಶೈಲ್ ಎಸ್. ಮೇಟಿ ಎಂಬುವವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀನದಲ್ಲಿರುವ ಸ್ವತ್ತನ್ನು ಅಕ್ರಮವಾಗಿ ಪ್ರವೇಶಿಸಿ, ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ವಿನಂತಿಸಲಾಗಿದೆ.&lt;/p&gt;&lt;p&gt;ದೂರನ್ನು ಗಂಭೀರವಾಗಿ ಪರಿಗಣಿಸಿರುವ ಉಪ್ಪಾರಪೇಟೆ ಪೊಲೀಸರು, ಆರೋಪಿಗಳಾದ ಅನಿಲ್ ಮತ್ತು ಖಲಿಂ ವಿರುದ್ಧ ಎಫ್&zwnj;ಐಆರ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸರ್ಕಾರಿ ಆಸ್ತಿಯನ್ನು ಅತಿಕ್ರಮಣ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಇಲಾಖೆಯ ಮೌನಕ್ಕೆ ಆಕ್ರೋಶ:&lt;/strong&gt;&lt;/h3&gt;&lt;p&gt;ನಗರದ ಪ್ರಮುಖ ಜಾಗದಲ್ಲಿರುವ ಇಲಾಖೆಯ ಆಸ್ತಿಗೆ ಅತಿಕ್ರಮಣದಾರರು ಲಗ್ಗೆ ಇಟ್ಟಿದ್ದರೂ, ಇಲಾಖೆಯ ಅಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಕೋಟಿ ಕೋಟಿ ಬೆಲೆಬಾಳುವ ಈ ಜಾಗವನ್ನು ಖಾಸಗಿ ವ್ಯಕ್ತಿಗಳ ಕೈಯಿಂದ ಮುಕ್ತಗೊಳಿಸಿ, ಸರ್ಕಾರದ ವಶಕ್ಕೆ ಪಡೆಯಲು ಕಾರಾಗೃಹ ಇಲಾಖೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-prison-department-property-encroached-gandhinagar-case-registered-sat/articleshow-gacd8ro"/>
        </item>
        <item>
            <title><![CDATA[ಜನರು ಎಸೆದ ಮಾಂಸದ ತುಂಡುಗಳನ್ನು ತಿಂದು ಹೆಚ್ಚಾಯ್ತು ಹೆಬ್ಬಾವುಗಳ ಹಾವಳಿ; ಚರಂಡಿ, ಪೊದೆಗಳಲ್ಲಿ ಹೆಬ್ಬಾವು ರಾಶಿ!]]></title>
            <link>https://kannada.asianetnews.com/karnataka-districts/python-population-booms-in-alappuzha-due-to-canal-waste-dumping-sat/articleshow-hqdu392</link>
            <guid isPermaLink="true">https://kannada.asianetnews.com/karnataka-districts/python-population-booms-in-alappuzha-due-to-canal-waste-dumping-sat/articleshow-hqdu392</guid>
            <pubDate>Fri, 29 May 2026 12:46:22 +0530</pubDate>
            <description><![CDATA[&lt;p&gt;ಆಲಪ್ಪುಳ ನಗರ ಹೆಬ್ಬಾವುಗಳ ಹಾವಳಿಯಿಂದ ತತ್ತರಿಸಿದೆ. ಕಾಲುವೆಗಳಲ್ಲಿ ಮಾಂಸದ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಹೆಬ್ಬಾವುಗಳು ಹೆಚ್ಚಾಗಿದ್ದು, ಸ್ಥಳೀಯರು ಮತ್ತು ಅಧಿಕಾರಿಗಳು ಆತಂಕದಲ್ಲಿದ್ದಾರೆ. ಇವುಗಳಿಗೆ ವಿಷವಿಲ್ಲದಿದ್ದರೂ, ಅವುಗಳ ಕಡಿತ ಮತ್ತು ದಾಳಿಯಿಂದ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kss9dnb8tnj56x9ebc2hcdy6,imgname-python-snake-1780038948200.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದ ಆಲಪ್ಪುಳ ನಗರದ ಜನ ಸದ್ಯ ಹೆಬ್ಬಾವುಗಳ ಹಾವಳಿಯಿಂದ ಕಂಗಾಲಾಗಿದ್ದಾರೆ. ನಗರದ ಕಾಲುವೆಗಳಲ್ಲಿ ಎಲ್ಲೆಂದರಲ್ಲಿ ಮಾಂಸದ ತ್ಯಾಜ್ಯವನ್ನು ಸುರಿಯುತ್ತಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಬುಧವಾರ ಕೂಡ ಕೋರ್ಟ್ ಸೇತುವೆ ಬಳಿಯ ಅಂಬಲಪ್ಪುಳ ತಾಲೂಕು ಕಾರ್ಮಿಕ ಯೂನಿಯನ್ (ತಾಳೆ ಮರ ಹತ್ತುವವರ ಯೂನಿಯನ್) ಕಚೇರಿ ಆವರಣದಲ್ಲಿ ಒಂದು ಹೆಬ್ಬಾವನ್ನು ಹಿಡಿಯಲಾಗಿದೆ.&lt;/p&gt;&lt;p&gt;ಬೆಳಗ್ಗೆ 10:30ರ ಸುಮಾರಿಗೆ ಅರಣ್ಯ ಇಲಾಖೆಯ 'ಸರ್ಪ' ಪ್ರತಿನಿಧಿ ಜಿಬಿನ್ ಈ ಹಾವನ್ನು ಹಿಡಿದಿದ್ದಾರೆ. ಕಚೇರಿ ಮುಂದಿದ್ದ ಬಲೆಯಲ್ಲಿ ಹಾವಿನ ತಲೆ ಸಿಕ್ಕಿಹಾಕಿಕೊಂಡಿತ್ತು. ಇದೇ ಜಾಗದಲ್ಲಿ ಮಂಗಳವಾರ ಕೂಡ ಇನ್ನೊಂದು ಹೆಬ್ಬಾವನ್ನು ಹಿಡಿಯಲಾಗಿತ್ತು. ಜನವರಿಯಲ್ಲಿ ಶವಕ್ಕೊಟ್ಟಪ್ಪಾಲಂ ಸೇತುವೆ ಬಳಿ ನಾಲ್ಕು ಹಾವುಗಳು ಸಿಕ್ಕಿದ್ದವು. ಇತ್ತೀಚೆಗೆ ಕಳರ್ಕೋಡ್ ಪ್ರದೇಶದಲ್ಲೂ ಕೆಲವು ಹೆಬ್ಬಾವುಗಳನ್ನು ಹಿಡಿಯಲಾಗಿದೆ. ಆಲಪ್ಪುಳ ನಗರದಲ್ಲಿ ಇಷ್ಟೊಂದು ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಮತ್ತು ಸ್ಥಳೀಯರು ಹೇಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಪೊದೆಗಳಲ್ಲಿ ಗುಂಪು-ಗುಂಪು ಮರಿಗಳು&lt;/strong&gt;&lt;/h2&gt;&lt;p&gt;ಕಾಲುವೆಗಳಲ್ಲಿ ಕೋಳಿ ತ್ಯಾಜ್ಯವನ್ನು ಸುರಿಯುತ್ತಿರುವುದೇ ಹೆಬ್ಬಾವುಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಸಾಯಿಖಾನೆಗಳ ಮಾಂಸದ ತ್ಯಾಜ್ಯ ಮತ್ತು ಅದನ್ನು ತೊಳೆದ ನೀರನ್ನೂ ಹಲವೆಡೆ ನೇರವಾಗಿ ಕಾಲುವೆಗಳಿಗೆ ಬಿಡಲಾಗುತ್ತಿದೆ. ಹೀಗೆ ಸುಲಭವಾಗಿ ಆಹಾರ ಸಿಗುತ್ತಿರುವುದರಿಂದ, ಹೆಬ್ಬಾವುಗಳು ಇಲ್ಲೇ ಮೊಟ್ಟೆ ಇಟ್ಟು ಮರಿ ಮಾಡಿ ತಮ್ಮ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಸಾಮಾನ್ಯವಾಗಿ ಬೇರೆ ಹಾವುಗಳು ಒಂದು ಬಾರಿಗೆ 10-15 ಮೊಟ್ಟೆ ಇಟ್ಟರೆ, ಹೆಬ್ಬಾವುಗಳು 40ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತವೆ. ಇರುಂಪುಪಾಲಂ, ಶವಕ್ಕೊಟ್ಟಪ್ಪಾಲಂ, ಎ.ಎಸ್. ಕೆನಾಲ್&zwnj;ನಂತಹ ಕಾಲುವೆಗಳಲ್ಲಿ ಮತ್ತು ಪೊದೆಗಳು ಬೆಳೆದ ಜಾಗಗಳಲ್ಲಿ ಮರಿಗಳು ಸೇರಿದಂತೆ ಸಾಕಷ್ಟು ಹೆಬ್ಬಾವುಗಳು ಬೀಡುಬಿಟ್ಟಿವೆ. ರಾತ್ರಿ ಹೊತ್ತಲ್ಲಿ ಇವು ರಸ್ತೆಗಳಿಗೂ ಬರುತ್ತವೆ.&lt;/p&gt;&lt;p&gt;ಹೆಬ್ಬಾವುಗಳಿಗೆ ವಿಷ ಇಲ್ಲದಿದ್ದರೂ, ಅವು ಕಚ್ಚಿದರೆ ಗಾಯದ ಪರಿಣಾಮ ತೀವ್ರವಾಗಿರುತ್ತದೆ. ರಕ್ತನಾಳಗಳು ತುಂಡಾಗಿ, ಹೆಚ್ಚು ರಕ್ತಸ್ರಾವ ಆಗಬಹುದು. ಸೋಂಕು ತಗುಲುವ ಅಪಾಯವೂ ಇರುವುದರಿಂದ, ಕಡಿತಕ್ಕೊಳಗಾದವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕು. ಪ್ರಾಣಕ್ಕೆ ಅಪಾಯವಿದೆ ಎಂದು ಹೆಬ್ಬಾವಿಗೆ ಅನಿಸಿದರೆ, ಅದು ಮನುಷ್ಯರನ್ನೇ ಸುತ್ತಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.&lt;/p&gt;&lt;p&gt;ಇದೇ ವೇಳೆ, ಎಡತ್ವ ತಲವಡಿ ಪಂಚಾಯತ್&zwnj;ನ 13ನೇ ವಾರ್ಡ್&zwnj;ನಲ್ಲಿರುವ ತುಂಡಿಯಲ್ಲಿ ಜಾರ್ಜ್&zwnj;ಕುಟ್ಟಿ ಎಂಬುವವರ ಮನೆಯ ಕೋಳಿ ಗೂಡಿಗೆ ನುಗ್ಗಿದ್ದ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಬುಧವಾರ ಮುಂಜಾನೆ ಕೋಳಿಗಳು ಜೋರಾಗಿ ಕೂಗುವುದನ್ನು ಕೇಳಿ ಮನೆಯವರು ಹೋಗಿ ನೋಡಿದಾಗ, ದೊಡ್ಡ ಹೆಬ್ಬಾವು ಗೂಡಿನೊಳಗೆ ಇರುವುದು ಗೊತ್ತಾಗಿದೆ. ಗೂಡಿನಲ್ಲಿದ್ದ ಬಹುತೇಕ ಕೋಳಿಗಳನ್ನು ಹಾವು ತಿಂದು ಹಾಕಿತ್ತು. ಸ್ನೇಕ್ ರೆಸ್ಕ್ಯೂ ಕಾರ್ಯಕರ್ತ ಚಾರ್ಲಿ ವರ್ಗೀಸ್ ಸ್ಥಳಕ್ಕೆ ಬಂದು ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/python-population-booms-in-alappuzha-due-to-canal-waste-dumping-sat/articleshow-hqdu392"/>
        </item>
        <item>
            <title><![CDATA[ಬೆಂಗಳೂರು IISc-ವಾಧ್ವಾನಿ ಫೌಂಡೇಶನ್ ಜಂಟಿ ಹೆಜ್ಜೆ: ದೇಶದ ಅತ್ಯಾಧುನಿಕ ಆವಿಷ್ಕಾರ ಕೇಂದ್ರ, ಡೀಪ್-ಟೆಕ್ ರಂಗಕ್ಕೆ ಭಾರಿ ಬಲ!]]></title>
            <link>https://kannada.asianetnews.com/gallery/education/iisc-bengaluru-launches-wadhwani-innovation-centre-to-accelerate-india-s-deep-tech-and-quantum-startups-gdp-8297awm</link>
            <guid isPermaLink="true">https://kannada.asianetnews.com/gallery/education/iisc-bengaluru-launches-wadhwani-innovation-centre-to-accelerate-india-s-deep-tech-and-quantum-startups-gdp-8297awm</guid>
            <pubDate>Fri, 29 May 2026 14:06:18 +0530</pubDate>
            <description><![CDATA[&lt;p&gt;ಬೆಂಗಳೂರಿನ ಐಐಎಸ್&zwnj;ಸಿ ಆವರಣದಲ್ಲಿ 'ವಾಧ್ವಾನಿ-ಐಐಎಸ್&zwnj;ಸಿ ಇನ್ನೋವೇಶನ್ ಸೆಂಟರ್' ಉದ್ಘಾಟನೆಗೊಂಡಿದೆ. ಈ ಕೇಂದ್ರವು ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್&zwnj;ನಂತಹ ಡೀಪ್-ಟೆಕ್ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಲಿದ್ದು, ಸ್ಟಾರ್ಟ್&zwnj;ಅಪ್&zwnj;ಗಳಿಗೆ ಬೆಂಬಲ ನೀಡುತ್ತದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssd7ytg624za5k9gfvrds46,imgname-iisc--2--1780042955600.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಐಐಎಸ್&zwnj;ಸಿ ಆವರಣದಲ್ಲಿ 'ವಾಧ್ವಾನಿ-ಐಐಎಸ್&zwnj;ಸಿ ಇನ್ನೋವೇಶನ್ ಸೆಂಟರ್' ಉದ್ಘಾಟನೆಗೊಂಡಿದೆ. ಈ ಕೇಂದ್ರವು ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್&zwnj;ನಂತಹ ಡೀಪ್-ಟೆಕ್ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಲಿದ್ದು, ಸ್ಟಾರ್ಟ್&zwnj;ಅಪ್&zwnj;ಗಳಿಗೆ ಬೆಂಬಲ ನೀಡುತ್ತದೆ. &amp;nbsp;&lt;/p&gt;&lt;img&gt;&lt;p&gt;ಬೆಂಗಳೂರಿನ ಹೆಮ್ಮೆಯ ಸಂಸ್ಥೆಯಾದ ಇಂಡಿಯನ್ ಇನ್&zwnj;ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್&zwnj;ಸಿ) ಆವರಣದಲ್ಲಿ ದೇಶದ ಸಂಶೋಧನೆ ಹಾಗೂ ನಾವೀನ್ಯತೆ (Innovation) ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಅತ್ಯಾಧುನಿಕ 'ವಾಧ್ವಾನಿ-ಐಐಎಸ್&zwnj;ಸಿ ಇನ್ನೋವೇಶನ್ ಸೆಂಟರ್' ಅನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಹಾಗೂ ಖ್ಯಾತ ವಿಜ್ಞಾನಿ ಎ.ಎಸ್. ಕಿರಣ್ ಕುಮಾರ್ ಅವರು ಈ ನೂತನ ಕೇಂದ್ರಕ್ಕೆ ಚಾಲನೆ ನೀಡಿದರು. ಈ ಉದ್ಘಾಟನಾ ಸಮಾರಂಭದಲ್ಲಿ ವಾಧ್ವಾನಿ ಫೌಂಡೇಶನ್&zwnj;ನ ಸಿಇಒ ಡಾ. ಅಜಯ್ ಕೆಲಾ ಮತ್ತು ವಾಧ್ವಾನಿ ಇನ್ನೋವೇಶನ್ ನೆಟ್&zwnj;ವರ್ಕ್&zwnj;ನ (WIN) ವ್ಯವಸ್ಥಾಪಕ ನಿರ್ದೇಶಕ ಡಾ. ಶಿರ್ಷೇಂದು ಮುಖರ್ಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.&lt;/p&gt;&lt;img&gt;&lt;p&gt;ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆಗೆ ಹೊಸ ವೇಗ ನೀಡಲು ಸ್ಥಾಪಿತವಾಗಿರುವ ಈ ಕೇಂದ್ರದ ಪ್ರಮುಖ ಕಾರ್ಯಸೂಚಿಗಳು ಹೀಗಿವೆ:&lt;/p&gt;&lt;p&gt;&lt;strong&gt;ಡೀಪ್-ಟೆಕ್ ಆವಿಷ್ಕಾರಗಳಿಗೆ ಪ್ರೋತ್ಸಾಹ: &lt;/strong&gt;ಕೃತಕ ಬುದ್ಧಿಮತ್ತೆ (AI) ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್&zwnj;ನಂತಹ ಸುಧಾರಿತ ಡೀಪ್-ಟೆಕ್ ಆವಿಷ್ಕಾರಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು.&lt;/p&gt;&lt;p&gt;&lt;strong&gt;ಸ್ಟಾರ್ಟ್&zwnj;ಅಪ್&zwnj;ಗಳಿಗೆ ಸಕಾಲಿಕ ನೆರವು: &lt;/strong&gt;ಹೊಸ ಆಲೋಚನೆಗಳನ್ನು ಹೊಂದಿರುವ ಉದಯೋನ್ಮುಖ ಸ್ಟಾರ್ಟ್&zwnj;ಅಪ್&zwnj;ಗಳಿಗೆ ತಾಂತ್ರಿಕ ಹಾಗೂ ಆರ್ಥಿಕ ಮಾರ್ಗದರ್ಶನ ನೀಡುವುದು.&lt;/p&gt;&lt;p&gt;&lt;strong&gt;ಅಕಾಡೆಮಿಯಾ-ಕೈಗಾರಿಕೆ ಸಮನ್ವಯ: &lt;/strong&gt;ಶೈಕ್ಷಣಿಕ ಸಂಸ್ಥೆಗಳ ಸಂಶೋಧನೆಗಳನ್ನು ಉದ್ಯಮ ರಂಗದ (Industries) ಅಗತ್ಯತೆಗಳಿಗೆ ತಕ್ಕಂತೆ ರೂಪಿಸಲು ಎರಡೂ ವಲಯಗಳ ನಡುವೆ ದಾರಿದೀಪವಾಗಿ ಕೆಲಸ ಮಾಡುವುದು.&lt;/p&gt;&lt;p&gt;&lt;strong&gt;₹1,400 ಕೋಟಿ ರಾಷ್ಟ್ರೀಯ ಕಾರ್ಯಕ್ರಮದ ಭಾಗ: &lt;/strong&gt;&amp;gt; ಈ ನೂತನ ಕೇಂದ್ರವನ್ನು ಕಳೆದ ವರ್ಷ ವಾಧ್ವಾನಿ ಫೌಂಡೇಶನ್ ಘೋಷಿಸಿದ್ದ ಬೃಹತ್ ₹1,400 ಕೋಟಿ ಮೊತ್ತದ ರಾಷ್ಟ್ರೀಯ ಕಾರ್ಯಕ್ರಮದ ಒಪ್ಪಂದದ ಅಡಿಯಲ್ಲೇ ಐಐಎಸ್&zwnj;ಸಿ ಆವರಣದಲ್ಲಿ ತಲೆಎತ್ತಿದೆ.&lt;/p&gt;&lt;img&gt;&lt;p&gt;ಇನ್ನೋವೇಶನ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರು, &quot;ಕೇವಲ ಅತ್ಯಾಧುನಿಕ ತಂತ್ರಜ್ಞಾನವನ್ನು ಆವಿಷ್ಕರಿಸಿದರೆ ಸಾಲದು, ಆ ತಂತ್ರಜ್ಞಾನವು ದೇಶದ ಪ್ರಗತಿಗೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಒಳಿತಿಗೆ ಹೇಗೆ ಬಳಕೆಯಾಗುತ್ತದೆ ಎಂಬುದು ಮುಖ್ಯ,&quot; ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ಬಾಹ್ಯಾಕಾಶ ರಂಗದಲ್ಲಿ ಡಾ. ವಿಕ್ರಮ್ ಸಾರಾಭಾಯ್ ಹಾಗೂ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಡಾ. ಹೋಮಿ ಭಾಭಾ ಅವರು ಹೊಂದಿದ್ದ ದೂರದೃಷ್ಟಿಯನ್ನು ಸ್ಮರಿಸಿದ ಅವರು, &quot;ಇಂದಿನ ಜಗತ್ತಿನಲ್ಲಿ ಕ್ವಾಂಟಮ್ ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ ಮಟ್ಟದ ನಾಯಕನನ್ನಾಗಿ ಬೆಳೆಸಲು ಸರ್ಕಾರ ಮತ್ತು ದಾನಿಗಳ ಜಂಟಿ ಬೆಂಬಲ ಅತ್ಯಗತ್ಯ&quot; ಎಂದರು.&lt;/p&gt;&lt;p&gt;ವಾಧ್ವಾನಿ ಫೌಂಡೇಶನ್ ಸಿಇಒ ಡಾ. ಅಜಯ್ ಕೆಲಾ ಮಾತನಾಡಿ, &quot;ಭಾರತದಲ್ಲಿ ವಿಶ್ವದರ್ಜೆಯ ಸಂಶೋಧನಾ ಪ್ರತಿಭೆಗಳಿದ್ದಾರೆ. ಆದರೆ, ಸಂಶೋಧಕರ ಈ ಅಮೂಲ್ಯ ಐಡಿಯಾಗಳು ಕೇವಲ ಪ್ರಯೋಗಾಲಯದ ಫೈಲ್&zwnj;ಗಳಿಗೆ ಸೀಮಿತವಾಗಬಾರದು. ಅವುಗಳನ್ನು ಆದಷ್ಟು ಬೇಗ ವಾಣಿಜ್ಯ ಉತ್ಪನ್ನಗಳನ್ನಾಗಿ ಪರಿವರ್ತಿಸಿ, ಮಾರುಕಟ್ಟೆಗೆ ತರಲು ಮತ್ತು ಯಶಸ್ವಿ ಸ್ಟಾರ್ಟ್&zwnj;ಅಪ್&zwnj;ಗಳನ್ನಾಗಿ ರೂಪಿಸಲು ನಾವು ಐಐಎಸ್&zwnj;ಸಿಯಂತಹ ಜಾಗತಿಕ ಸಂಸ್ಥೆಯ ಜೊತೆ ಕೈಜೋಡಿಸಿದ್ದೇವೆ&quot; ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಈ ಉದ್ಘಾಟನೆಯ ಅಂಗವಾಗಿ ಐಐಎಸ್&zwnj;ಸಿ ಆವರಣದಲ್ಲಿ 'ಕ್ವಾಂಟಮ್ ಪಿಚ್ ಫೆಸ್ಟ್ 2026' ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇದಿಕೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಂಶೋಧಕರು ಹಾಗೂ ನವೋದ್ಯಮಿಗಳು ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕಮ್ಯುನಿಕೇಶನ್ ಕ್ಷೇತ್ರಕ್ಕೆ ಸಂಬಂಧಿಸಿದ ತಮ್ಮ ನಾವೀನ್ಯತೆಯ ಐಡಿಯಾಗಳನ್ನು ಹೂಡಿಕೆದಾರರ (Investors) ಮುಂದೆ ಪ್ರಸ್ತುತಪಡಿಸಿದರು. ಇಲ್ಲಿ ಆಯ್ಕೆಯಾಗುವ ಅತ್ಯುತ್ತಮ ಯೋಜನೆಗಳಿಗೆ ಐಐಎಸ್&zwnj;ಸಿ ವತಿಯಿಂದ ಉನ್ನತ ಮಟ್ಟದ ಮಾರ್ಗದರ್ಶನ ಮತ್ತು ಇನ್&zwnj;ಕ್ಯೂಬೇಶನ್ (Incubation) ಸೌಲಭ್ಯ ಸಿಗಲಿದೆ.&lt;/p&gt;&lt;img&gt;&lt;p&gt;ಇದೇ ಮಹತ್ವದ ಸಂದರ್ಭದಲ್ಲಿ 'ಇನ್&zwnj;ಕ್ಯೂಬೇಟ್' (Incubate) ಎಂಬ ಹೊಸ ಡಿಜಿಟಲ್ ಪ್ಲಾಟ್&zwnj;ಫಾರ್ಮ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಕ್ವಾಂಟಮ್ ತಂತ್ರಜ್ಞಾನದ ಆರಂಭಿಕ ಹಂತದ ಕಲ್ಪನೆಗಳು ಮತ್ತು ರಿಸರ್ಚ್&zwnj;ಗಳನ್ನು ವ್ಯವಸ್ಥಿತವಾಗಿ ಪೋಷಿಸಿ, ಅವುಗಳನ್ನು ದೊಡ್ಡ ಉದ್ದಿಮೆಗಳನ್ನಾಗಿ ಬೆಳೆಸುವುದು ಈ ಪ್ಲಾಟ್&zwnj;ಫಾರ್ಮ್&zwnj;ನ ಮುಖ್ಯ ಕಾರ್ಯಸೂಚಿಯಾಗಿದೆ. ಸಂಶೋಧಕರಿಗೆ ವಿಶ್ವದರ್ಜೆಯ ಮೂಲಸೌಕರ್ಯ ಹಾಗೂ ಪರಿಣಿತರ ಮಾರ್ಗದರ್ಶನ ನೀಡುವ ಮೂಲಕ ಭಾರತವನ್ನು ಜಾಗತಿಕ 'ಡೀಪ್-ಟೆಕ್' ಹಬ್ (Global Deep-Tech Hub) ಆಗಿ ರೂಪಿಸುವುದೇ ಈ ಇಡೀ ಯೋಜನೆಯ ಆಶಯವಾಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/education/iisc-bengaluru-launches-wadhwani-innovation-centre-to-accelerate-india-s-deep-tech-and-quantum-startups-gdp-8297awm"/>
        </item>
        <item>
            <title><![CDATA[ಡಿಕೆಶಿ ಮೌನಕ್ಕೆ ಕೊನೆಗೂ ಸಿಕ್ಕಿತು ಉತ್ತರ: 'ತೋಡಿದ ಬಾವಿಗೆ ಜಲವೇ ಸಾಕ್ಷಿ' ಎಂದದ್ಯಾಕೆ ನೊಣವೆಕೆರೆ ಅಜ್ಜಯ್ಯ]]></title>
            <link>https://kannada.asianetnews.com/gallery/politics/nonavakere-ajjayya-told-dk-shivakumar-not-to-talk-until-taking-oath-as-cm-suc-4slkgdn</link>
            <guid isPermaLink="true">https://kannada.asianetnews.com/gallery/politics/nonavakere-ajjayya-told-dk-shivakumar-not-to-talk-until-taking-oath-as-cm-suc-4slkgdn</guid>
            <pubDate>Fri, 29 May 2026 13:33:48 +0530</pubDate>
            <description><![CDATA[ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎನ್ನುವುದು ಬಹುತೇಕ ಖಚಿತವಾಗಿದ್ದರೂ, ಅವರು ಮೌನಕ್ಕೆ ಶರಣಾಗಿದ್ದಾರೆ. ಅವರ ಈ ಮೌನದ ಹಿಂದೆ, ಅವರು ನಂಬುವ ನೊಣವಿನಕೆರೆ ಅಜ್ಜಯ್ಯನವರ ಸಲಹೆಯಿದ್ದು, ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾತನಾಡದಂತೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kssc44f29mtvamqk4rca6cx9,imgname-nonavakere-ajjayya-01-1780041781730.jpg" type="image/jpeg" height="390" width="690"/>
            <content:encoded><![CDATA[ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎನ್ನುವುದು ಬಹುತೇಕ ಖಚಿತವಾಗಿದ್ದರೂ, ಅವರು ಮೌನಕ್ಕೆ ಶರಣಾಗಿದ್ದಾರೆ. ಅವರ ಈ ಮೌನದ ಹಿಂದೆ, ಅವರು ನಂಬುವ ನೊಣವಿನಕೆರೆ ಅಜ್ಜಯ್ಯನವರ ಸಲಹೆಯಿದ್ದು, ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾತನಾಡದಂತೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.&lt;img&gt;&lt;p&gt;ಕಳೆದೊಂದು ವರ್ಷಗಳಿಂದ ಮುಖ್ಯಮಂತ್ರಿ ಖುರ್ಚಿಗಾಗಿ ನಡೆಯುತ್ತಿದ್ದ ಜಟಾಪಟಿ ಒಂದು ಹಂತದವರೆಗೆ ಬಂದು ನಿಂತಿದೆ. ನಿನ್ನೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿಯಾಗಿದೆ. ಇದೀಗ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಇನ್ನು ಕುತೂಹಲ, ಊಹಾಪೋಹಗಳು ಇದ್ದರೂ ಡಿ.ಕೆ.ಶಿವಕುಮಾರ್​ ಅವರೇ ಎನ್ನುವುದು ಪಕ್ಕಾ ಆಗಿದೆ. ಇದರ ಹೊರತಾಗಿಯೂ ಡಿಕೆಶಿ ಅವರು ಯಾರ ಪ್ರಶ್ನೆಗೂ ಉತ್ತರಿಸದೇ, ಮೌನಕ್ಕೆ ಜಾರಿದ್ದು ಆಶ್ಚರ್ಯಕ್ಕೆ ಕಾರಣವಾಗಿತ್ತು. ಅದಕ್ಕೆ ಇದೀಗ ಉತ್ತರ ಸಿಕ್ಕಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಡಿಕೆಶಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಮೌನದಿಂದ ಇರುವಂತೆ ಅವರು ಹಲವು ವರ್ಷಗಳಿಂದ ನಂಬಿರುವ ನೊಣವಿನಕೆರೆ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು (ನೊಣವೆಕೆರೆ ಅಜ್ಜಯ್ಯ -Nonavinakere Ajjayya) ಅವರೇ ಹೇಳಿರುವುದಾಗಿ ತಿಳಿದುಬಂದಿದೆ. ಈ ಹಿಂದೆಯೇ ಅಜ್ಜಯ್ಯ ಅವರು ಡಿಕೆಶಿ ಮುಖ್ಯಮಂತ್ರಿಯಾಗುವ ಸೂಚನೆ ಕೊಟ್ಟಿದ್ದರು. ಇದೀಗ ಅವರು ಮೌನವೇ ಲೇಸು ಎಂದು ಹೇಳಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ನೊಣವಿನಕೆರೆ ಮಠದ ಆಶೀರ್ವಾದ ಡಿಕೆ ಶಿವಕುಮಾರ್ ಅವರ ಮೇಲಿದೆ, ಅವರು ಮಠದ ಭಕ್ತರಾಗಿದ್ದಾರೆ. ಡಿಕೆ ಶಿವಕುಮಾರ್ ಅವರು, ಮುಖ್ಯಮಂತ್ರಿ ಆಗೇ ಆಗುತ್ತಾರೆ. ಅವರು, ಉತ್ತಮ ಸಂಘಟನಾಕಾರರು ಎಂದು ಶ್ರೀಗಳು, ಕಳೆದ ವಾರ ಹೇಳಿದ್ದರು. ಚುನಾವಣೆಯ ವೇಳೆ, ನಾಮಪತ್ರ ಸಲ್ಲಿಸುವಾಗ, ಬಿ- ಫಾರಂ ವಿತರಿಸುವಾಗ, ಈ ಎಲ್ಲಾ ಕೆಲಸವನ್ನು ಆರಂಭಿಸುವ ಮುನ್ನಾ ಅಜ್ಜಯ್ಯನ ಆಶೀರ್ವಾದವನ್ನು ಪಡೆದೇ ಮುಂದಕ್ಕೆ ಹೋಗುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.&lt;/p&gt;&lt;img&gt;&lt;p&gt;ಮಾತು ಆಡಿದರೆ ಮುತ್ತು ಒಡೆದು ಹೋಗಲಿದೆ ಎಂದು ಡಿ. ಕೆ ಶಿವಕುಮಾರ್&zwnj;ಗೆ (DK Shivakumar) ಅವರು ನೊಣವಿನಕೆರೆ ಅಜ್ಜಯ್ಯ ಸಲಹೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಯಾವುದೇ ಮಾತನಾಡದಂತೆ ಅಜ್ಜಯ್ಯ ಎಚ್ಚರಿಕೆ ಕೊಟ್ಟಿದ್ದಾರೆ. ಮಾತನಾಡಿದರೆ ಕೆಲಸ ಕೆಡಲಿದೆ ಎಂದಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.&lt;/p&gt;&lt;img&gt;&lt;p&gt;ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನೊಣವಿನಕೆರೆ ಅಜ್ಜಯ್ಯ, ಅವರಿಗೆ ಶ್ರೀಮಠದ ಆಶೀರ್ವಾದ ಇದೆ. ಮುಂದೆ ಅವರು ರಾಜನಾಗಿ ಒಳಿತು ಮಾಡಲಿದ್ದಾರೆ ಎನ್ನುವ ನಂಬಿಕೆ ಇದೆ. ಅವರು ಯಾವಾಗ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವುದು ಅವರ ರಾಜಕೀಯದ ಮಾತುಕತೆಗೆ ಬಿಟ್ಟಿರುವ ವಿಷಯ. ನಾನು ಹೇಳುವಷ್ಟು ಹೇಳಿದ್ದೇನೆ. ಧರ್ಮದ ಧ್ವಜ ಕೊಟ್ಟಿದ್ದೇವೆ. ಮುಂದಿನ ದಿನ ಒಳಿತಾಗಲಿ, ಕಾದು ನೋಡೋಣ ಎಂದು ಅಜ್ಜಯ್ಯ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಉತ್ತಮ ರಾಜ ಪ್ರತ್ಯಕ್ಷ ದೇವತಾ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಮಾತನ್ನು ಅವರು ಪಾಲಿಸಲಿ ಎನ್ನುವುದು ನಮ್ಮ ಹಾರೈಕೆ. &quot;ಮಾಡಿದ ಪಾಪಕ್ಕೆ ಮನವೇ ಸಾಕ್ಷಿ, ತೋಡಿದ ಬಾವಿಗೆ ಜಲವೇ ಸಾಕ್ಷಿ ಎಂಬಂತೆ ಮುಂದೆ ಏನಾಗುತ್ತದೆಯೋ ನೋಡೋಣ ಎಂದು ಅಜ್ಜಯ್ಯ ಹೇಳಿದ್ದಾರೆ. (ಈ ಗಾದೆ ಮಾತಿನ ಅರ್ಥ, ಮನುಷ್ಯ ತಾನು ಮಾಡಿದ ತಪ್ಪು ಅಥವಾ ಪಾಪದ ಕೆಲಸಗಳಿಗೆ ಬೇರೆ ಯಾರೂ ಸಾಕ್ಷಿ ಬೇಕಾಗಿಲ್ಲ; ಅವನ ಒಳಮನಸ್ಸಿಗೇ ತಾನು ಮಾಡಿದ್ದು ಸರಿ ಅಥವಾ ತಪ್ಪು ಎಂಬುದು ಚೆನ್ನಾಗಿ ತಿಳಿದಿರುತ್ತದೆ ಎನ್ನುವುದು)&lt;/p&gt;]]></content:encoded>
            <category>karnataka-districts</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/politics/nonavakere-ajjayya-told-dk-shivakumar-not-to-talk-until-taking-oath-as-cm-suc-4slkgdn"/>
        </item>
        <item>
            <title><![CDATA[Davanagere: ಪ್ರಧಾನಿ ಮೋದಿಯಿಂದ ದೇಶಕ್ಕೆ ದೊಡ್ಡ ಗಂಡಾಂತರ, ಒಳಿತು ಮಾಡುವುದಿದ್ದರೆ ತಕ್ಷಣ ರಾಜೀನಾಮೆ ಕೊಡಲಿ: ಕಾಂಗ್ರೆಸ್ ಮುಖಂಡ]]></title>
            <link>https://kannada.asianetnews.com/politics/pm-modi-failed-in-every-sector-should-resign-immediately-kpcc-d-basavaraj-demands-rav/articleshow-5dhpkwe</link>
            <guid isPermaLink="true">https://kannada.asianetnews.com/politics/pm-modi-failed-in-every-sector-should-resign-immediately-kpcc-d-basavaraj-demands-rav/articleshow-5dhpkwe</guid>
            <pubDate>Fri, 29 May 2026 13:38:11 +0530</pubDate>
            <description><![CDATA[&lt;p&gt;ಬೆಲೆ ಏರಿಕೆ, ವಿದೇಶಾಂಗ ನೀತಿ, ಆರ್ಥಿಕತೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ತಕ್ಷಣವೇ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮೋದಿ ಅಧಿಕಾರದಲ್ಲಿ ಮುಂದುವರಿದರೆ ದೇಶಕ್ಕೆ ದೊಡ್ಡ ಗಂಡಾಂತರವಿದೆ ಎಂದು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssc13s4zeypz21w3fw8djpz,imgname-----------------------2026-05-29t133051.907-1780041682723.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮೇ.29): &lt;/strong&gt;ಬೆಲೆ ಏರಿಕೆ, ವಿದೇಶ ವ್ಯವಹಾರ, ಆರ್ಥಿಕ ಕ್ಷೇತ್ರ ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲೂ ಸಂಪೂರ್ಣ ವಿಫಲವಾದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಒಳಿತು ಮಾಡುವುದಿದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಒತ್ತಾಯಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಜನರ ಹಿತದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮೋದಿಯವರು ಇದೇ ರೀತಿ ಅಧಿಕಾರದಲ್ಲಿ ಮುಂದುವರಿದರೆ ದೇಶಕ್ಕೆ ದೊಡ್ಡ ಗಂಡಾಂತರ ತಪ್ಪಿದ್ದಲ್ಲ ಎಂದರು.&lt;/p&gt;&lt;p&gt;ಮಧ್ಯ ಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ ತಿಂಗಳಾದರೂ ತೈಲ, ಅನಿಲ ಬೆಲೆ ಹೆಚ್ಚಳದ ಬಗ್ಗೆ ನರೇಂದ್ರ ಮೋದಿಯವರಿಗೆ ಗೊತ್ತಿರಲಿಲ್ಲ. ಆದರೆ, ಪಂಚ ರಾಜ್ಯಗಳ ಚುನಾವಣಾ ಪ್ರಚಾರದ ವೇಳೆಯೂ ಅದೆಲ್ಲಾ ನೆನಪಿಗೆ ಬರಲಿಲ್ಲ. ಐದೂ ರಾಜ್ಯಗಳ ಚುನಾವಣೆ ಮುಗಿದು, ಫಲಿತಾಂಶ ಬರುತ್ತಿದ್ದಂತೆ ಜ್ಞಾನೋದಯವಾಗಿ, ಪೆಟ್ರೋಲ್&zwnj;-ಡೀಸೆಲ್&zwnj; ಬಳಕೆ ಕಡಿಮೆ ಮಾಡಿ ಎಂಬ ಹೇಳಿಕೆ ಜೊತೆಗೆ ಅದರ ದರ ಹೆಚ್ಚಿಸಿದ್ದಾರೆ ಎಂದು ಅವರು ಟೀಕಿಸಿದರು.&lt;/p&gt;&lt;p&gt;ಮಿತವ್ಯಯದ ಬಗ್ಗೆ ದೇಶ ವಾಸಿಗಳಿಗೆ ಉಪದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಐದು ದೇಶಗಳ ವಿದೇಶ ಪ್ರವಾಸ ಕೈಗೊಂಡಿದ್ದು, ಇದಕ್ಕೆ ನೂರಾರು ಕೋಟಿ ರು. ಖರ್ಚು ಮಾಡುತ್ತಿದ್ದಾರೆ. ವಿದೇಶ ಪ್ರವಾಸ ಕೈಗೊಳ್ಳುವುದು ಅದಾನಿ ವ್ಯವಹಾರ ಸ್ಥಾಪನೆಗೆ ಹೊರತು, ದೇಶದ ಹಿತದೃಷ್ಟಿಯಿಂದ ಅಲ್ಲ. ಅದಾನಿ ಅಮೇರಿಕಾದ ಜೊತೆಗೆ ವ್ಯವಹಾರ ಸಂಬಂಧ ಹೊಂದಿರುವ ಕಾರಣಕ್ಕೆ ಮೋದಿ ಈಗ ಅಮೇರಿಕಾ ಹೇಳಿದಂತೆ ಕೇಳುತ್ತಿದ್ದಾರೆ ಎಂದು ದೂರಿದರು.&lt;/p&gt;&lt;p&gt;ಮೋದಿ ಸರ್ಕಾರದ ವಿದೇಶಾಂಗ ನೀತಿಗಳ ಪರಿಣಾಮವಾಗಿ ದೇಶ ಇಂದು ಸಂಕಷ್ಟಗಳನ್ನು ಅನುಭವಿಸುತ್ತಿದೆ. ನೆರೆಯ ದೇಶಗಳ ಜೊತೆಗೆ ಉತ್ತಮ ಸಂಬಂಧವನ್ನೇ ಹೊಂದಿಲ್ಲ. ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆಯಿಂದ ಜಗತ್ತಿನ ಮುಂದೆ ಭಾರತ ತಲೆ ತಗ್ಗಿಸುವಂತಾಗಿದೆ. ನರೇಂದ್ರ ಮೋದಿಯೆಂದರೆ ದುಬಾರಿ ಎನ್ನುವಂತೆ ತೈಲ, ಅನಿಲ ಬೆಲೆ ದಿನದಿನಕ್ಕೂ ಏರಿಕೆಯಾಗುತ್ತಿದ್ದು, ಜನಜೀವನಕ್ಕೆ ಒಂದಲ್ಲ ಒಂದು ರೀತಿ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ ಎಂದು ಆರೋಪಿಸಿದರು.&lt;/p&gt;&lt;p&gt;ಕಾಂಗ್ರೆಸ್ ಪಕ್ಷದ ಮುಖಂಡರಾದ ಇಂಟೆಕ್ ಅಧ್ಯಕ್ಷ ಕೆ.ಎಂ.ಮಂಜುನಾಥ, ಬಿ.ಎಚ್.ಉದಯಕುಮಾರ, ಡಿ.ಶಿವಕುಮಾರ, ಡಿ.ಕೇಶವ ನಾಯ್ಕ, ಬಿ.ಎಸ್.ಸುರೇಶ ಇತರರು ಇದ್ದರು.&lt;/p&gt;&lt;p&gt;ಅಚ್ಚೇ ದಿನ್&zwnj; ಅಂತಲೇ ಹೇಳಿಕೊಂಡೇ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಇರುವವರೆಗೂ ದೇಶಕ್ಕೆ ಅಚ್ಚೇ ದಿನ್ ಬರಲಿಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಜನರ ಒಳ್ಳೆಯದು ಮಾಡಬೇಕೆಂಬ ಕನಿಷ್ಠ ಕಾಳಜಿಯೇನಾದರೂ ನರೇಂದ್ರ ಮೋದಿ ಅವರಿಗೆ ಇದ್ದರೆ ತಕ್ಷಣವೇ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಕಾರ ಮಾಡಲಿ.&lt;/p&gt;&lt;p&gt;- ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ.&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/pm-modi-failed-in-every-sector-should-resign-immediately-kpcc-d-basavaraj-demands-rav/articleshow-5dhpkwe"/>
        </item>
        <item>
            <title><![CDATA[ಡಿಕೆಶಿ ಸಿಎಂ ಆಗಲೆಂದು ಒಬ್ಬೊಬ್ಬರದು ಒದೊಂದು ಸರಣಿ ಹರಕೆಗಳು, ಪ್ರಿಯಾಂಕ್ ಖರ್ಗೆ ಸಚಿವರಾಗಲಿ ಎಂದು ಈಡುಗಾಯಿ!]]></title>
            <link>https://kannada.asianetnews.com/gallery/karnataka-districts/karnataka-leadership-change-prayers-sweep-state-for-dk-shivakumar-as-cm-priyank-kharge-for-dycm-gdp-4bdluq2</link>
            <guid isPermaLink="true">https://kannada.asianetnews.com/gallery/karnataka-districts/karnataka-leadership-change-prayers-sweep-state-for-dk-shivakumar-as-cm-priyank-kharge-for-dycm-gdp-4bdluq2</guid>
            <pubDate>Fri, 29 May 2026 13:36:19 +0530</pubDate>
            <description><![CDATA[&lt;p&gt;ಸಿದ್ದರಾಮಯ್ಯನವರ ರಾಜೀನಾಮೆ ನಂತರ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಅವರ ಬೆಂಬಲಿಗರು ತಿರುಪತಿಯಲ್ಲಿ ಮುಡಿ ನೀಡುವುದು ಸೇರಿದಂತೆ ರಾಜ್ಯದಾದ್ಯಂತ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇದೇ ವೇಳೆ, ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssbhtsa28pgq2r9dz4q4f4c,imgname-dks--6--1780041181994.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿದ್ದರಾಮಯ್ಯನವರ ರಾಜೀನಾಮೆ ನಂತರ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಅವರ ಬೆಂಬಲಿಗರು ತಿರುಪತಿಯಲ್ಲಿ ಮುಡಿ ನೀಡುವುದು ಸೇರಿದಂತೆ ರಾಜ್ಯದಾದ್ಯಂತ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇದೇ ವೇಳೆ, ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಶಿಡ್ಲಘಟ್ಟ: ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾವುದೇ ಅಡ್ಡಿ ಆತಂಕವಿಲ್ಲದೆ ಮುಖ್ಯಮಂತ್ರಿಯಾಗಲಿ ಎಂದು ಎಬಿಡಿ ಟ್ರಸ್ಟ್&zwnj;ನ ಸಂಸ್ಥಾಪಕ ಅಧ್ಯಕ್ಷ ಬಿ.ವಿ. ರಾಜೀವ್&zwnj;ಗೌಡ ಅವರು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ವಿಶೇಷ ಪೂಜೆ ನೆರವೇರಿಸಿ ಮುಡಿ ಅರ್ಪಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ಮುಡಿಯನ್ನು ಅರ್ಪಿಸುವುದಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹರಕೆ ಹೊತ್ತಿದ್ದರಂತೆ. ಅದರಂತೆ ರಾಜೀವ್ ಗೌಡ ಅವರು ಕುಟುಂಬದವರು,ಬೆಂಬಲಿಗರೊಂದಿಗೆ ಗುರುವಾರ ತಿರುಪತಿಗೆ ಮೆಟ್ಟಿಲು ಮೂಲಕ ಹತ್ತಿ ಅಲ್ಲಿ ಕೇಶ ಮುಡಿ ನೀಡಿ ನಂತರ ವಿಶೇಷ ಪೂಜೆ ಸಲ್ಲಿಸಿದ್ದಾರೆ.&lt;/p&gt;&lt;p&gt;ಈ ವೇಳೆ ಮಾತನಾಡಿದ ರಾಜೀವ್&zwnj;ಗೌಡ ಅವರು, ಡಿ.ಕೆ ಶಿವಕುಮಾರ್ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದು ಈ ನಾಡಿನ ಕೋಟ್ಯಂತರ ಯುವಕರು, ರಾಜಕಾರಣಿಗಳು, ಸಮುದಾಯದವರು ಹಾಗೂ ಅವರ ಬೆಂಬಲಿಗರ ಕನಸಾಗಿತ್ತು. ಇದೀಗ ಅಂತಹ ಅಪರೂಪದ ಕ್ಷಣ ಹತ್ತಿರವಾಗುತ್ತಿದ್ದು ಯಾವುದೇ ವಿಘ್ನಗಳು ಎದುರಾಗದಂತೆ ಡಿಕೆಶಿ ಅವರು ಮುಖ್ಯಮಂತ್ರಿ ಆಗಲಿ ಎಂದು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಮೆಟ್ಟಿಲು ಹತ್ತಿಕೊಂಡು ಬಂದು ಕೇಶ ಮುಡಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದರು. ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನ ರಾಜೀವ್&zwnj;ಗೌಡ, ಕಾಂಗ್ರೆಸ್ ಮುಖಂಡ ವರದಣ್ಣ ಸೇರಿ ಅವರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.&lt;/p&gt;&lt;img&gt;&lt;p&gt;ಮದ್ದೂರು: ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಅಭಿಮಾನಿಯೊಬ್ಬರು ಮದ್ದೂರಮ್ಮದೇವಿ ಬಳಿ ಹರಕೆ ಕಟ್ಟಿಕೊಂಡು 6 ತಿಂಗಳಿನಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದಾರೆ. ನಗರದ ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ವರ್ತಕರಾಗಿರುವ ಅಶೋಕ್ ಡಿಕೆಶಿ ಅವರ ಅಭಿಮಾನಿಯಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಾಗ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಆಸೆ ಪಟ್ಟಿದ್ದರು. ಆದರೆ, ಸಿದ್ದರಾಮಯ್ಯ ಸಿಎಂ ಆದರು. 2.5 ವರ್ಷಗಳ ನಂತರವೂ ಡಿ.ಕೆ.ಶಿವಕುಮಾರ್ ಸಿಎಂ ಆಗದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳ ಹಿಂದೆ ನಗರದ ಶಕ್ತಿ ದೇವತೆ ಮದ್ದೂರಮ್ಮ ದೇವಿ ಬಳಿ ಡಿಕೆಶಿ ಅವರು ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಅಭಿಮಾನಿ ಅಶೋಕ್&zwnj; ಹರಕೆ ಕಟ್ಟಿಕೊಂಡಿದ್ದರು.&lt;/p&gt;&lt;img&gt;&lt;p&gt;ಮೈಸೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿ ಮೈಸೂರು ಮತ್ತು ಕೆ.ಆರ್&zwnj;.ಪೇಟೆಗಳಲ್ಲಿ ಅವರ ಅಭಿಮಾನಿಗಳು ಗುರುವಾರ ವಿಶೇಷ ಪೂಜೆ ಸಲ್ಲಿಸಿದರು. ಮಂಡ್ಯ ಜಿಲ್ಲೆ ಕೆ.ಆರ್&zwnj;.ಪೇಟೆಯಲ್ಲಿ ತಾಲೂಕು ಒಕ್ಕಲಿಗರ ವೇದಿಕೆ ಸದಸ್ಯರು ತಾಲೂಕಿನ ವಳಗೆರೆಮೆಣಸ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಡಿಕೆಶಿಯವರು ಶುಕ್ರವಾರವೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿ ಎಂದು ಪ್ರಾರ್ಥಿಸಿದರು. ಇದೇ ವೇಳೆ, ಮೈಸೂರಿನಲ್ಲಿ ಅಭಿಮಾನಿಗಳು ಅಗ್ರಹಾರದ ಗಣಪತಿಗೆ 101 ಈಡುಗಾಯಿ ಒಡೆದು, ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.&lt;/p&gt;&lt;img&gt;&lt;p&gt;ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಭಾರಿ ಬದಲಾವಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಸಲ್ಲಿಕೆ ಬೆನ್ನಲ್ಲಿಯೇ ಸಚಿವ ಪ್ರಿಯಾಂಕ್&zwnj; ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಕೋರಿ ಅವರ ಅಭಿಮಾನಿಗಳ ಬಳಗ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದ&zwnj; ಹೊನಗುಂಟಿ ನೇತೃತ್ವದಲ್ಲಿ ಶರಣಬಸವೇಶ್ವರರ ದೇವಸ್ಥಾನದಲ್ಲಿ ೧೦೧ ಈಡುಗಾಯಿ ಒಡೆದು ವಿಶೇಷ ಪೂಜೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.&lt;/p&gt;&lt;img&gt;&lt;p&gt;ಕೋಲಾರ: ದೇಶದಲ್ಲಿಯೇ ಬುಡ್ಗ ಜಂಗಮ ಸಮುದಾಯದ ಏಕೈಕ ಶಾಸಕ ಕೊತ್ತೂರು ಮಂಜುನಾಥ್&zwnj; ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ಹಾರೈಸಿ ಗುರುವಾರ ನಗರದ ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ೧೦೧ ಈಡುಗಾಯಿ ಒಡೆಯುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದರು.&lt;/p&gt;&lt;p&gt;ರಾಜ್ಯ ವಾಲ್ಮೀಕಿ ಸಂಘದ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್ ಮಾತನಾಡಿ, ಕೊತ್ತೂರು ಮಂಜುನಾಥ್ ಕ್ಷೇತ್ರದ ಅಭಿವೃದ್ಧಿ, ಜನಪರ ಕಾಳಜಿ ಅವರ ರಾಜಕೀಯ ಸಾಧನೆ ಪರಿಗಣಿಸಬೇಕು. ಅತಿ ಹಿಂದುಳಿದ ವರ್ಗದ ಬುಡ್ಗ ಜಂಗಮ ಸಮುದಾಯದಿಂದ ಬಂದವರಾಗಿದ್ದಾರೆ. ಉತ್ತಮ ಸಮಾಜ ಸೇವಕನಾಗಿ ಸಮಾಜದಲ್ಲಿನ ಬಡವರಿಗೆ, ವಿದ್ಯಾರ್ಥಿಗಳಿಗೆ, ಅನಾರೋಗ್ಯದ ವ್ಯಕ್ತಿಗಳಿಗೆ ನೆರವು ಕಲ್ಪಿಸುವ ಮುಖಾಂತರ ಉತ್ತಮ ಸಮಾಜ ನಿರ್ಮಾಣ ಮಾಡುವ ಕಾಯಕದಲ್ಲಿ ಪ್ರಮುಖರಾಗಿದ್ದಾರೆ. ಇಂತಹ ವ್ಯಕ್ತಿಗೆ ಸಚಿವ ಸ್ಥಾನ ನೀಡುವುದರಿಂದ ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ತಳ ಸಮುದಾಯಕ್ಕೆ ಸೂಕ್ತ ನ್ಯಾಯ ಒದಗಿಸಿದಂತಾಗುತ್ತದೆ. ಸಚಿವ ಸ್ಥಾನ ನೀಡಿದರೆ ಮುಂದೆ ೧೦೦೧ ಈಡಗಾಯಿ ಹೊಡೆದು ದೇವಸ್ಥಾನ ಬಳಿ ೧೦ ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.&lt;/p&gt;&lt;img&gt;&lt;p&gt;kರುನಾಡಿಗೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿರುವ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೂಲಕ ಐದನೇ ಬಾರಿಗೆ ಸಿಎಂ ಗಾದಿ ಒಲಿಯುತ್ತಿದೆಯೇ ಎಂಬ ಕುತೂಹಲ ಮೂಡಿದೆ.ರಾಜ್ಯದಲ್ಲಿ ಹಲವು ತಿಂಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ಇತಿಶ್ರೀ ಹಾಡಲಾಗಿದೆ. ಸಚಿವರೊಂದಿಗೆ ಬ್ರೇಕ್ ಪಾಸ್ಟ್ ಮೀಟಿಂಗ್ ಮುಗಿದ ಬಳಿಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬ ಸಂದೇಶ ನೀಡಿದ್ದಾರೆ.&lt;/p&gt;&lt;p&gt;ಮುಖ್ಯಮಂತ್ರಿ ಸ್ಥಾನದ ಹೊಸ್ತಿಲಲ್ಲಿ ನಿಂತಿದ್ದರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಗುರುವಾರವೂ ಸಮಚಿತ್ತದಿಂದ ಕಾಣಿಸಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಏರ್ಪಡಿಸಿದ್ದ ಉಪಹಾರ ಸಭೆಯಿಂದ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಿ, ಸುದ್ದಿಗೋಷ್ಠಿಯಲ್ಲಿ ನಡೆಸುವವರೆಗೆ ಅವರ ಜತೆಗೆ ಕಾಣಿಸಿಕೊಂಡ ಡಿ.ಕೆ. ಶಿವಕುಮಾರ್&zwnj;, ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡದೆ ಮೌನವಹಿಸಿದ್ದರು.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/karnataka-leadership-change-prayers-sweep-state-for-dk-shivakumar-as-cm-priyank-kharge-for-dycm-gdp-4bdluq2"/>
        </item>
        <item>
            <title><![CDATA[₹75 ಲಕ್ಷ ವೆಚ್ಚದಲ್ಲಿ ಈದ್ಗಾ ಮೈದಾನ, ₹4 ಕೋಟಿ ವೆಚ್ಚದಲ್ಲಿ ಏರ್‌ ಕಂಡಿಷನ್ಡ್ ಶಾದಿಮಹಲ್.. ಸರ್ವೇ ಜನಃ ಸುಖಿನೋ ಭವಂತು ಎಂದ ಬಿಜೆಪಿ ಶಾಸಕ]]></title>
            <link>https://kannada.asianetnews.com/politics/holalkere-bjp-mla-m-chandrappa-launches-eidgah-ground-works-worth-rs-75-lakh-rav/articleshow-uey97eb</link>
            <guid isPermaLink="true">https://kannada.asianetnews.com/politics/holalkere-bjp-mla-m-chandrappa-launches-eidgah-ground-works-worth-rs-75-lakh-rav/articleshow-uey97eb</guid>
            <pubDate>Fri, 29 May 2026 13:05:06 +0530</pubDate>
            <description><![CDATA[ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರು 75 ಲಕ್ಷ ರು. ವೆಚ್ಚದ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ʻಸರ್ವೇ ಜನಃ ಸುಖಿನೋ ಭವಂತುʼ ಧ್ಯೇಯದಡಿ ತಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kssa93cyy29d46k3zw87pha1,imgname-----------------------2026-05-29t125046.468-1780039847325.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಳಲ್ಕೆರೆ (ಮೇ.29):&lt;/strong&gt; ಕ್ಷೇತ್ರದಲ್ಲಿ ವಿಭಿನ್ನ ಮನೋಧರ್ಮದ ಜನರು ಇರುವುದು ಸಹಜ. ನನಗೆ ಆಗದವರು ಇದ್ದಾರೆ, ವಿಶ್ವಾಸಿಕರೂ ಇದ್ದಾರೆ. ಆದರೆ ನಾನು ಯಾರನ್ನೂ ಕಡೆಗಣಿಸದೆ ʻಸರ್ವೇ ಜನಃ ಸುಖಿನೋ ಭವಂತುʼ ಎಂಬ ಧ್ಯೇಯವನ್ನಿಟ್ಟುಕೊಂಡು ಕೇತ್ರದ ಜನರ ಸೇವೆ ಮಾಡುತ್ತಿದ್ದೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.&lt;/p&gt;&lt;p&gt;75 ಲಕ್ಷ ರು. ವೆಚ್ಚದಲ್ಲಿ ಪಟ್ಟಣದ ಹೊರ ವಲಯದಲ್ಲಿರುವ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.&lt;/p&gt;&lt;h2&gt;ಏರ್&zwnj; ಕಂಡಿಷನ್&zwnj;ವುಳ್ಳ ಶಾದಿ ಮಹಲ್ ನಿರ್ಮಾಣ&lt;/h2&gt;&lt;p&gt;ರಾಜ್ಯ ಸರ್ಕಾರದ ಅನುದಾನದಲ್ಲಿ ಶಾದಿ ಮಹಲ್&zwnj;ಗೆ ಹಣ ನೀಡಲು ಅವಕಾಶವಿಲ್ಲ. ಆದರೂ 4 ಕೋಟಿ ರು. ವೆಚ್ಚದಲ್ಲಿ ಏರ್ ಕಂಡೀಷನ್&zwnj;ವುಳ್ಳ ಶಾದಿ ಮಹಲ್ ಕಟ್ಟಿಸಲಾಗುತ್ತಿದೆ. ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮನವೊಲಿಸಿ ಶಾದಿ ಮಹಲ್&zwnj; ನಿರ್ಮಾಣಕ್ಕೆ ಅನುದಾನ ತಂದಿದ್ದೆ ಎಂದರು.&lt;/p&gt;&lt;p&gt;ಎಲ್ಲಿ ಯಾರಿಗೆ ನ್ಯಾಯ ಕೊಡಬೇಕು, ಅಲ್ಲಾನಿಗೆ ಗೊತ್ತಿದೆ!&lt;/p&gt;&lt;p&gt;ಹುಟ್ಟು-ಸಾವಿನ ನಡುವೆ ಇರುವ ಜೀವನ ಅತ್ಯಂತ ಪವಿತ್ರವಾದುದು. ಮನುಷ್ಯತ್ವವಿರುವ ಎಲ್ಲರೂ ಅವಕಾಶ ಸಿಕ್ಕಾಗ ಹತ್ತಾರು ಜನ ಮೆಚ್ಚುವ ರೀತಿ ಕೆಲಸ ಮಾಡಬೇಕು. ಅದೆ ನಿಜವಾದ ಮಾನವ ಧರ್ಮ. 32 ವರ್ಷಗಳ ಹಿಂದೆ ಭರಮಸಾಗರದಿಂದ ಪ್ರಥಮ ಬಾರಿ ಸ್ಪರ್ಧಿಸಿ ಈಗ ಐದು ಬಾರಿ ಶಾಸಕನಾಗಿದ್ದೇನೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದೇನೆ. ಎಲ್ಲಿ ಯಾರಿಗೆ ನ್ಯಾಯ ಕೊಡಬೇಕೆಂಬುದು ಅಲ್ಲಾನಿಗೆ ಗೊತ್ತಿದೆ. ನನಗೆ ಜಾತಿ ಗೊತ್ತಿಲ್ಲ. ಎಲ್ಲರನ್ನು ಕುಟುಂಬದವರಂತೆ ಕಾಣುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಿಯೂ ಗದ್ದಲ ಗಲಾಟೆಗೆ ಅವಕಾಶ ಕೊಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹಗಲು ರಾತ್ರಿ ಪ್ರಾಮಾಣ ಕವಾಗಿ ಶ್ರಮಿಸುತ್ತಿದ್ದೇನೆಂದು ತಿಳಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯರಾದ ಆರ್.ಎ.ಅಶೋಕ್, ಪಿ.ಮುರುಗೇಶ್, ಮಲ್ಲಿಕಾರ್ಜುನಸ್ವಾಮಿ, ಮುಸ್ಲಿಂ ಮುಖಂಡರಾದ ಮುತ್ತುಲಿ ಸಾಬ್, ಅಲಿಂಸಾಬ್, ಸೈಯದ್&zwnj;ಸಾಬ್, ಭಕ್ಷಿಸಾಬ್, ಜಾಕಿರ್ ಇನ್ನಿತರರು ಹಾಜರಿದ್ದರು&lt;/p&gt;]]></content:encoded>
            <category>karnataka-districts</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/holalkere-bjp-mla-m-chandrappa-launches-eidgah-ground-works-worth-rs-75-lakh-rav/articleshow-uey97eb"/>
        </item>
        <item>
            <title><![CDATA[ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮುಂದಿನ 7 ದಿನ ಭಾರೀ ಮಳೆ ಕರ್ನಾಟಕಕ್ಕೆ ಎಚ್ಚರಿಕೆ ಕೊಟ್ಟ ಐಎಂಡಿ!]]></title>
            <link>https://kannada.asianetnews.com/gallery/karnataka-districts/karnataka-weather-update-heavy-rain-likely-for-next-7-days-imd-issues-yellow-alert-gdp-sepgoqg</link>
            <guid isPermaLink="true">https://kannada.asianetnews.com/gallery/karnataka-districts/karnataka-weather-update-heavy-rain-likely-for-next-7-days-imd-issues-yellow-alert-gdp-sepgoqg</guid>
            <pubDate>Fri, 29 May 2026 12:43:25 +0530</pubDate>
            <description><![CDATA[&lt;p&gt;ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮುಂದಿನ 7ದಿನಗಳ ಕಾಲ ಭಾರೀ ಮಳೆಯಾಗಲಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸೆಕೆ ಮುಂದುವರೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksrzc3b4r2gsc0xpgf8aa2br,imgname-kerala-rain-1780028411236.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮುಂದಿನ 7ದಿನಗಳ ಕಾಲ ಭಾರೀ ಮಳೆಯಾಗಲಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸೆಕೆ ಮುಂದುವರೆಯಲಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು ಪೂರ್ವ ಮಳೆ ಚುರುಕಾಗಿದೆ. ಹೀಗಾಗಿ ಮುಂದಿನ ಏಳು ದಿನ ಕಾಲ ಭಾರೀ ಮಳೆ ಬರುವ ಸಾಧ್ಯತೆ ಇದೆ. ವಾಯುಭಾರ ಕುಸಿತದ ನೇರ ಪರಿಣಾಮ ಕರಾವಳಿ ತೀರದ ಮೇಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಮುದ್ರದ ಅಲೆಗಳ ಅಬ್ಬರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಬಿರುಗಾಳಿಯ ವೇಗ ತೀವ್ರವಾಗಿರುವುದರಿಂದ ಕಡಲು ರೊಚ್ಚಿಗೆದ್ದಿದ್ದು, ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದು ಎಂದು ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಸೂಚನೆ ರವಾನಿಸಿವೆ. ಕರಾವಳಿ ಭಾಗದಲ್ಲಿ ಮೇ 31ರವರೆಗೆ ಹಳದಿ ಎಚ್ಚರಿಕೆ (Yellow Alert) ಜಾರಿಯಲ್ಲಿದ್ದು, ನಿರಂತರ ಮಳೆ ಹಾಗೂ ಬಲವಾದ ಸಮುದ್ರ ಗಾಳಿ ಬೀಸಲಿದೆ.&lt;/p&gt;&lt;img&gt;&lt;p&gt;ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇತ್ತ ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಮಡಿಕೇರಿಯಲ್ಲಿ ಬೆಳಗಿನಿಂದಲೇ ಸಂಪೂರ್ಣ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸಂಜೆ ವೇಳೆಗೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸದ್ಯ ಗರಿಷ್ಠ ತಾಪಮಾನ 32&deg;C ಆಸುಪಾಸಿನಲ್ಲಿದೆ. ಶುಕ್ರವಾರ ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ವಾರಾಂತ್ಯದಲ್ಲಿ (ಮೇ 29 ರಿಂದ ಮೇ 31) ಚಂಡಮಾರುತದ ತೀವ್ರತೆಯು ಸ್ವಲ್ಪ ತಗ್ಗಲಿದ್ದು, ಹಳದಿ ಅಲರ್ಟ್&zwnj;ಗೆ ಇಳಿಕೆಯಾಗಲಿದೆ. ಶನಿವಾರ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ಭಾನುವಾರ ಮತ್ತು ಸೋಮವಾರ ಸಂಜೆ ಗುಡುಗು ಸಹಿತ ಮಳೆ ಸುರಿಯಲಿದೆ. ಇದರಿಂದಾಗಿ ತಾಪಮಾನವು 31&deg;C ಗೆ ಇಳಿಕೆಯಾಗುವ ಮೂಲಕ ನಗರದಲ್ಲಿ ತಂಪಾದ ವಾತಾವರಣವಿರಲಿದೆ.&lt;/p&gt;&lt;img&gt;&lt;p&gt;ಹವಾಮಾನ ಇಲಾಖೆಯ ಪ್ರಕಾರ, ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ (Hailstorm) ಮುನ್ಸೂಚನೆ ನೀಡಲಾಗಿದೆ. ಮೇ 30ರಂದು ಈ ಭಾಗಕ್ಕೆ ಹಳದಿ ಎಚ್ಚರಿಕೆ ನೀಡಲಾಗಿದ್ದು, ಅಪಾಯಕಾರಿ ಮಿಂಚು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಆದರೆ, ಕಲ್ಯಾಣ ಕರ್ನಾಟಕದ ಭಾಗಗಳಾದ ಕಲಬುರಗಿ ಮತ್ತು ರಾಯಚೂರಿನಲ್ಲಿ ಮಾತ್ರ ಗರಿಷ್ಠ 38&deg;C ವರೆಗೆ ತಾಪಮಾನ ದಾಖಲಾಗಲಿದ್ದು, ತೀವ್ರ ಸೆಕೆಯ ವಾತಾವರಣ ಮುಂದುವರೆಯಲಿದೆ.&lt;/p&gt;&lt;img&gt;&lt;ul&gt; &lt;li&gt;ಮುಂದಿನ ಎರಡು ದಿನಗಳಲ್ಲಿ ಹಠಾತ್ ಮತ್ತು ಅಪಾಯಕಾರಿ ಬಿರುಗಾಳಿಗಳು ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಜನರಲ್ಲಿ ಜಾಗರೂಕರಾಗಿರಲು ವಿನಂತಿಸಿದ್ದಾರೆ.&lt;/li&gt; &lt;li&gt;ಚಂಡಮಾರುತ ಅಥವಾ ಭಾರಿ ಗಾಳಿ-ಮಳೆ ಆರಂಭವಾದ ತಕ್ಷಣ ನಾಗರಿಕರು ತೆರೆದ ಪ್ರದೇಶಗಳಲ್ಲಿ ಇರದೆ, ತಕ್ಷಣವೇ ಸುರಕ್ಷಿತ ಹಾಗೂ ಶಾಶ್ವತ ಕಟ್ಟಡಗಳ ಒಳಗೆ ಹೋಗಬೇಕು.&lt;/li&gt; &lt;li&gt;ಹಳೆಯ ಮರಗಳು, ಬೃಹತ್ ಜಾಹೀರಾತು ಫಲಕಗಳು (ಬ್ಯಾನರ್) ಅಥವಾ ವಿದ್ಯುತ್ ಕಂಬಗಳ ಕೆಳಗೆ ನಿಲ್ಲುವುದನ್ನು ಹಾಗೂ ವಾಹನಗಳನ್ನು ನಿಲ್ಲಿಸುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು.&lt;/li&gt; &lt;li&gt;ತೆರೆದ ಹೊಲಗಳಲ್ಲಿ ಕೊಯ್ಲು ಮಾಡಿ ಇಡಲಾಗಿರುವ ಬೆಳೆಗಳನ್ನು ಮಳೆಯಿಂದ ರಕ್ಷಿಸಲು ತಕ್ಷಣವೇ ಸುರಕ್ಷಿತವಾಗಿ ಮುಚ್ಚಿಡಬೇಕು ಎಂದು ರೈತರಿಗೆ ಸೂಚಿಸಲಾಗಿದೆ.&lt;/li&gt;&lt;/ul&gt;&lt;img&gt;&lt;p&gt;ಪ್ರಸ್ತುತ ಉಂಟಾಗಿರುವ ಮಾನ್ಸೂನ್ ವ್ಯವಸ್ಥೆಯು ಹಂತ-ಹಂತವಾಗಿ ಸ್ಥಿರಗೊಳ್ಳುತ್ತಾ ಸಾಗಲಿದ್ದು, ಜೂನ್ 1 ಮತ್ತು ಜೂನ್ 3 ರ ನಡುವೆ ರಾಜ್ಯಾದ್ಯಂತ ಹವಾಮಾನವು ಅಂತಿಮವಾಗಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/karnataka-weather-update-heavy-rain-likely-for-next-7-days-imd-issues-yellow-alert-gdp-sepgoqg"/>
        </item>
        <item>
            <title><![CDATA['ಇದು ಬೊಂಬೆಯಾಟವಯ್ಯ..' ನಿಜವಾಯ್ತು ಬೊಂಬೆ ಭವಿಷ್ಯ! ಸಿಎಂ ಕುರ್ಚಿ ಬದಲಾವಣೆಗೆ ಮುಂಚೆಯೇ ನುಡಿ!]]></title>
            <link>https://kannada.asianetnews.com/gallery/state/clay-doll-s-prediction-comes-true-karnataka-cm-change-buzz-linked-to-dharwad-village-ritual-rav-5t6c3nq</link>
            <guid isPermaLink="true">https://kannada.asianetnews.com/gallery/state/clay-doll-s-prediction-comes-true-karnataka-cm-change-buzz-linked-to-dharwad-village-ritual-rav-5t6c3nq</guid>
            <pubDate>Fri, 29 May 2026 12:18:45 +0530</pubDate>
            <description><![CDATA[&lt;p&gt;ಧಾರವಾಡದ ಹನುಮನಕೊಪ್ಪ ಗ್ರಾಮದಲ್ಲಿ ಯುಗಾದಿ ದಿನ ಮಣ್ಣಿನ ಬೊಂಬೆ ನೀಡಿದ್ದ ಭವಿಷ್ಯ ಈಗ ನಿಜವಾಗ್ತಿದೆಯಾ? ಸಿಎಂ ಬದಲಾವಣೆ ಚರ್ಚೆ ನಡುವೆ ವೈರಲ್ ಆದ ಭಯಾನಕ ಸಂಪ್ರದಾಯದ ರೋಚಕ ಕಥೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kss6yrr0x7m0zjcksa1w9c7b,imgname-----------------------2026-05-29t120144.837-1780036363008.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡದ ಹನುಮನಕೊಪ್ಪ ಗ್ರಾಮದಲ್ಲಿ ಯುಗಾದಿ ದಿನ ಮಣ್ಣಿನ ಬೊಂಬೆ ನೀಡಿದ್ದ ಭವಿಷ್ಯ ಈಗ ನಿಜವಾಗ್ತಿದೆಯಾ? ಸಿಎಂ ಬದಲಾವಣೆ ಚರ್ಚೆ ನಡುವೆ ವೈರಲ್ ಆದ ಭಯಾನಕ ಸಂಪ್ರದಾಯದ ರೋಚಕ ಕಥೆ!&lt;/p&gt;&lt;img&gt;&lt;p&gt;ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿವರ್ಷ ಯುಗಾದಿ ಅಮವಾಸ್ಯೆ ದಿನ ನಡೆಯುವ ವಿಚಿತ್ರ ಆಚರಣೆ ಇದೀಗ ಮತ್ತೆ ರಾಜ್ಯದ ಗಮನ ಸೆಳೆದಿದೆ. ಹಳ್ಳದ ಮಣ್ಣಿನಿಂದ ನಾಲ್ಕು ದಿಕ್ಕುಗಳಿಗೆ ನಾಲ್ಕು ಬೊಂಬೆಗಳನ್ನು ನಿರ್ಮಿಸಿ, ಮರುದಿನ ಬೆಳಿಗ್ಗೆ ಗ್ರಾಮಸ್ಥರು ಅವುಗಳ ಸ್ಥಿತಿಯನ್ನು ಪರಿಶೀಲಿಸುವ ಪದ್ಧತಿ ವರ್ಷಗಳಿಂದ ನಡೆದುಕೊಂಡು ಬಂದಿದೆ.ಸ&lt;/p&gt;&lt;img&gt;&lt;p&gt;ಯಾವ ದಿಕ್ಕಿನ ಬೊಂಬೆಗೆ ಪೆಟ್ಟು ಬೀಳುತ್ತದೆಯೋ, ಆ ದಿಕ್ಕಿನ ನಾಯಕನಿಗೆ ದೊಡ್ಡ ಸಂಕಷ್ಟ ಅಥವಾ ರಾಜಕೀಯ ಬದಲಾವಣೆ ಕಾದಿದೆ ಎಂಬ ನಂಬಿಕೆ ಗ್ರಾಮಸ್ಥರದ್ದು. ಈ ಬಾರಿ ಕರ್ನಾಟಕ ದಿಕ್ಕಿನ ಬೊಂಬೆಗೆ ಪೆಟ್ಟಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯ ಸೂಚನೆ ಎಂದು ಜನರು ಚರ್ಚೆ ಆರಂಭಿಸಿದ್ದರು.&lt;/p&gt;&lt;img&gt;&lt;p&gt;ಬೊಂಬೆಗೆ ಪೆಟ್ಟಾದ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಗರಿಗೆದರಿದ್ದು, ಹನುಮನಕೊಪ್ಪದ ಬೊಂಬೆ ಭವಿಷ್ಯ ಮತ್ತೆ ವೈರಲ್ ಆಗಿದೆ. 'ಈ ಬಾರಿ ದೊಡ್ಡ ನಾಯಕನ ಸ್ಥಾನ ಕದಿಯಲಿದೆ' ಎಂದು ಗ್ರಾಮಸ್ಥರು ಹೇಳಿದ್ದ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಕುರಿತ ರಾಜಕೀಯ ಚಟುವಟಿಕೆಗಳು ವೇಗ ಪಡೆದಿರುವ ಬೆನ್ನಲ್ಲೇ, 'ಬೊಂಬೆ ಹೇಳಿದ್ದು ನಿಜವಾಯ್ತಾ?' ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ಗ್ರಾಮಸ್ಥರ ಪ್ರಕಾರ, ಈ ಆಚರಣೆಯ ಹಿಂದೆ ಹಲವು ದಶಕಗಳ ವಿಚಿತ್ರ ಘಟನೆಗಳ ಸರಮಾಲೆಯಿದೆ. ಹಿಂದೆ ಉತ್ತರ ದಿಕ್ಕಿನ ಬೊಂಬೆಗೆ ಪೆಟ್ಟಾಗಿದ್ದ ವರ್ಷದಲ್ಲೇ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಡೆದಿತ್ತು ಎನ್ನಲಾಗುತ್ತದೆ.&lt;/p&gt;&lt;img&gt;&lt;p&gt;ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧಿಕಾರ ಬದಲಾವಣೆಗೂ ಮುನ್ನ ಬೊಂಬೆ ಮುನ್ಸೂಚನೆ ನೀಡಿತ್ತು ಎಂಬ ನಂಬಿಕೆ ಸ್ಥಳೀಯರಲ್ಲಿ ಗಟ್ಟಿಯಾಗಿದೆ. ಹೀಗಾಗಿ ಈ ಆಚರಣೆಯನ್ನು ಕೇವಲ ಮೂಢನಂಬಿಕೆ ಎಂದು ತಳ್ಳಿ ಹಾಕದ ಜನರು, ಪ್ರತಿವರ್ಷವೂ ಭಕ್ತಿಭಾವದಿಂದ &ldquo;ಫಲ ಹಾಕುವ&rdquo; ಸಂಪ್ರದಾಯ ಮುಂದುವರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಈ ವರ್ಷದ ಬೊಂಬೆ ಭವಿಷ್ಯ ಈಗ ರಾಜ್ಯ ರಾಜಕೀಯದ ಹೈವೋಲ್ಟೇಜ್ ಚರ್ಚೆಯಾಗಿದೆ. ಕರ್ನಾಟಕ ನಾಯಕನ ಬೊಂಬೆಗೆ ಪೆಟ್ಟು ಎಂಬ ವಿಚಾರ ಹೊರಬಿದ್ದ ಬಳಿಕ, ಮುಖ್ಯಮಂತ್ರಿ ಕುರ್ಚಿ ಕಾದಾಟಕ್ಕೂ ಇದು ಸಂಬಂಧವಿದೆಯೇ ಎಂಬ ಕುತೂಹಲ ಹೆಚ್ಚಿದೆ. ಹನುಮನಕೊಪ್ಪದ ಮಣ್ಣಿನ ಬೊಂಬೆಗಳು ಹೇಳುವ ಭವಿಷ್ಯ ಕೇವಲ ಯಾದೃಚ್ಛಿಕವೇ? ಅಥವಾ ನಿಜವಾಗಿಯೂ ರಾಜಕೀಯ ಭೂಕಂಪದ ಮುನ್ಸೂಚನೆಯೇ? ಎಂಬ ಪ್ರಶ್ನೆ ಈಗ ಜನರನ್ನು ಕಾಡತೊಡಗಿದೆ.&lt;/p&gt;]]></content:encoded>
            <category>karnataka-districts</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/clay-doll-s-prediction-comes-true-karnataka-cm-change-buzz-linked-to-dharwad-village-ritual-rav-5t6c3nq"/>
        </item>
        <item>
            <title><![CDATA[ಬೆಂಗಳೂರು: ಹಳೇ ಲವ್ವರ್ ಜೊತೆ ಓಡಾಡಿದ್ದಕ್ಕೆ ಹೊಸ ಪ್ರೇಮಿಯಿಂದ ಗ್ಯಾಂಗ್ ಅಟ್ಯಾಕ್!]]></title>
            <link>https://kannada.asianetnews.com/karnataka-districts/bengaluru-shantinagar-assault-case-love-triangle-twist-exposed-as-current-boyfriend-attacks-ex-lover-gdp/articleshow-5qpu6at</link>
            <guid isPermaLink="true">https://kannada.asianetnews.com/karnataka-districts/bengaluru-shantinagar-assault-case-love-triangle-twist-exposed-as-current-boyfriend-attacks-ex-lover-gdp/articleshow-5qpu6at</guid>
            <pubDate>Fri, 29 May 2026 12:03:40 +0530</pubDate>
            <description><![CDATA[ಬೆಂಗಳೂರಿನ ಶಾಂತಿನಗರದಲ್ಲಿ ಕಾರು ಚಾಲಕನ ಮೇಲೆ ನಡೆದ ಗ್ಯಾಂಗ್ ಹಲ್ಲೆ ಪ್ರಕರಣವು ಪ್ರೇಮ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ತನ್ನ ಪ್ರೇಯಸಿ, ಆಕೆಯ ಮಾಜಿ ಪ್ರೇಮಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದನ್ನು ಸಹಿಸದ ಹಾಲಿ ಪ್ರೇಮಿ, ತನ್ನ ಸ್ನೇಹಿತರೊಂದಿಗೆ ಸೇರಿ ಈ ದಾಳಿ ನಡೆಸಿದ್ದಾನೆ. ವೈರಲ್ ಆದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kss6x9nzwxvq1sza098142mb,imgname-bengaluru-shantinagar-gang-attack-1780036314815.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿಯ ಶಾಂತಿನಗರದಲ್ಲಿ ಇತ್ತೀಚೆಗೆ ಕಾರು ಚಾಲಕನ ಮೇಲೆ ನಡೆದಿದ್ದ ಭೀಕರ ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಈಗ ರೋಚಕ ಪ್ರೇಮ ಕಥೆಯ ಟ್ವಿಸ್ಟ್ ಸಿಕ್ಕಿದೆ. ಯುವತಿಯೊಬ್ಬಳು ತನ್ನ ಮಾಜಿ ಪ್ರೇಮಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದನ್ನು ಸಹಿಸದ ಆಕೆಯ ಹಾಲಿ ಪ್ರೇಮಿ, ತನ್ನ ಪಟಾಲಂನೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ವಿಲ್ಸನ್ ಗಾರ್ಡನ್ ಪೊಲೀಸರು, ಸದ್ಯ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;ಸಿಸಿಟಿವಿ ವೈರಲ್ ಬೆನ್ನಲ್ಲೇ ತನಿಖೆ ಚುರುಕು&lt;/h2&gt;&lt;p&gt;ಕಳೆದ ಮೇ 22ರಂದು ಮುಂಜಾನೆ ಶಾಂತಿನಗರದ ಮುಖ್ಯರಸ್ತೆಯೊಂದರಲ್ಲಿ ಈ ಗ್ಯಾಂಗ್ ನಿಂದ ಗೂಂಡಾಗಿರಿ ನಡೆದಿತ್ತು. ಸಾರ್ವಜನಿಕ ರಸ್ತೆಯಲ್ಲೇ ಸುಮಾರು 6 ರಿಂದ 7 ಜನರ ಗ್ಯಾಂಗ್&zwnj; ಪ್ರಾಣಹಾನಿ ಮಾಡುವ ಉದ್ದೇಶದಿಂದ ಕಾರಿನಲ್ಲಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿ ಮನಬಂದಂತೆ ಥಳಿಸಿತ್ತು. ಈ ಹಲ್ಲೆಯ ಭೀಕರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು.&lt;/p&gt;&lt;h2&gt;ತನಿಖೆಯಲ್ಲಿ ಹೊರಬಂತು ಇಬ್ಬರ 'ಲವ್ ಕಹಾನಿ'!&lt;/h2&gt;&lt;p&gt;ಪೊಲೀಸರು ಹಲ್ಲೆಗೊಳಗಾದ ಚಾಲಕ ಅರ್ಫಾನ್&zwnj;ನನ್ನು ವಿಚಾರಣೆ ಒಳಪಡಿಸಿದಾಗ ಮತ್ತು ಸಿಸಿಟಿವಿ ಮೂಲಗಳನ್ನು ಜಾಲಾಡಿದಾಗ ಇದರ ಹಿಂದಿನ ಅಸಲಿ ಪ್ರೇಮ ಪುರಾಣ ಬಯಲಾಗಿದೆ. ಹಲ್ಲೆಗೊಳಗಾದ ಅರ್ಫಾನ್ ಎಂಬ ಯುವಕ ಈ ಹಿಂದೆ ಯುವತಿಯೊಬ್ಬಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು. ಅರ್ಫಾನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ನಂತರ ಆ ಯುವತಿ ಮಂಜು ಎಂಬಾತನೊಂದಿಗೆ ಹೊಸದಾಗಿ ಪ್ರೇಮಪಾಶದಲ್ಲಿ ಬಿದ್ದಿದ್ದಳು. ಸದ್ಯ ಇವರಿಬ್ಬರ ಲವ್ವಿ-ಡವ್ವಿ ಜೋರಾಗಿಯೇ ನಡೆದಿತ್ತು. ಆದರೆ, ಇತ್ತೀಚೆಗೆ ಹಾಲಿ ಪ್ರೇಮಿ ಮಂಜುಗೆ ಗೊತ್ತಿಲ್ಲದಂತೆ ಯುವತಿಯು ತನ್ನ ಹಳೇ ಲವ್ವರ್ ಅರ್ಫಾನ್&zwnj;ನನ್ನು ಮತ್ತೆ ಭೇಟಿಯಾಗಲು ಶುರು ಮಾಡಿದ್ದಳು. ಮೇ 22ರ ಮುಂಜಾನೆ ಯುವತಿ ಹಾಗೂ ಅರ್ಫಾನ್ ಇಬ್ಬರೂ ಶಾಂತಿನಗರದ ಬಳಿ ಕಾರಿನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು.&lt;/p&gt;&lt;h2&gt;ಪಟಾಲಂ ಕರೆತಂದು ಅಟ್ಯಾಕ್ ಮಾಡಿದ ಹಾಲಿ ಪ್ರೇಮಿ!&lt;/h2&gt;&lt;p&gt;ತನ್ನ ಗರ್ಲ್&zwnj;ಫ್ರೆಂಡ್ ತನಗೆ ತಿಳಿಸದೆ ಮಾಜಿ ಪ್ರೇಮಿ ಅರ್ಫಾನ್ ಜೊತೆ ಕಾರಿನಲ್ಲಿ ಸುತ್ತಾಡುತ್ತಿರುವ ವಿಷಯ ಹೇಗೋ ಮಂಜುಗೆ ತಿಳಿದಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಮಂಜು, ಅರ್ಫಾನ್&zwnj;ಗೆ ಬುದ್ಧಿ ಕಲಿಸಲು ನಿರ್ಧರಿಸಿ ತನ್ನ ರೌಡಿ ಪಟಾಲಂ ಅನ್ನು ಕರೆದುಕೊಂಡು ಸ್ಥಳಕ್ಕೆ ಧಾವಿಸಿದ್ದಾನೆ. ಶಾಂತಿನಗರದ ಬಳಿ ಅರ್ಫಾನ್ ಚಲಾಯಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ 6 ರಿಂದ 7 ಜನರ ಮಂಜು ಗ್ಯಾಂಗ್, ಅರ್ಫಾನ್&zwnj;ನನ್ನು ಕಾರಿನಿಂದ ಕೆಳಕ್ಕೆ ಎಳೆದು ರಸ್ತೆಯಲ್ಲೇ ಕ್ರೂರವಾಗಿ ಹಲ್ಲೆ ನಡೆಸಿದೆ.&lt;/p&gt;&lt;h2&gt;ಓರ್ವನ ಬಂಧನ; ಕಾರು ಜಪ್ತಿ&lt;/h2&gt;&lt;p&gt;ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ವಿಲ್ಸನ್ ಗಾರ್ಡನ್ ಪೊಲೀಸರು, ಹಲ್ಲೆಕೋರರ ಗ್ಯಾಂಗ್&zwnj;ನಲ್ಲಿದ್ದ ಓರ್ವ ಆರೋಪಿಯನ್ನು ಈಗಾಗಲೇ ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೆ, ಅರ್ಫಾನ್ ಮೇಲೆ ದಾಳಿ ಮಾಡಲು ಮತ್ತು ಸ್ಥಳಕ್ಕೆ ಬರಲು ಹಲ್ಲೆಕೋರರು ಬಳಸಿದ್ದ ಕಾರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಐಪಿಸಿ/ಬಿಎನ್&zwnj;ಎಸ್ ಸೆಕ್ಷನ್&zwnj;ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮಂಜು ಹಾಗೂ ಆತನ ಇನ್ನುಳಿದ ಪಟಾಲಂ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ನಗರದ ಹೃದಯಭಾಗದಲ್ಲಿ ಮುಂಜಾನೆ ಹೊತ್ತಿನಲ್ಲೇ ನಡೆದ ಈ ಗ್ಯಾಂಗ್ ಅಟ್ಯಾಕ್ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.&lt;/p&gt;]]></content:encoded>
            <category>karnataka-districts</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-shantinagar-assault-case-love-triangle-twist-exposed-as-current-boyfriend-attacks-ex-lover-gdp/articleshow-5qpu6at"/>
        </item>
    </channel>
</rss>
