<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 24 Jun 2026 07:52:56 +0530</lastBuildDate>
        <atom:link href="https://kannada.asianetnews.com/rss/kalaburagi" rel="self" type="application/rss+xml"/>
        <item>
            <title><![CDATA[ಇಂಧನ ಉಳಿಸಿ ಎಂದ ಪ್ರಧಾನಿ ಮೋದಿ, ತಾವೇ 53 ನಗರ ಸುತ್ತಾಡಿದರು: ಪ್ರಿಯಾಂಕ್ ಖರ್ಗೆ ಟೀಕೆ]]></title>
            <link>https://kannada.asianetnews.com/karnataka-districts/priyank-kharge-slams-pm-modi-over-fuel-crisis-gvd/articleshow-0ylxxp2</link>
            <guid isPermaLink="true">https://kannada.asianetnews.com/karnataka-districts/priyank-kharge-slams-pm-modi-over-fuel-crisis-gvd/articleshow-0ylxxp2</guid>
            <pubDate>Tue, 02 Jun 2026 00:26:54 +0530</pubDate>
            <description><![CDATA[&lt;p&gt;ಜಾಲತಾಣದ ಪ್ರಭಾವಿ ಇನ್&zwnj;ಫ್ಲೂಯೆನ್ಸರ್ ಹಾಗೂ ವಿಷಯ ರಚನಾಕಾರ ಮಹಾಮಾನವ ಮೋದಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಓಡಾಡುತ್ತಿದ್ದರು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಮೋದಿ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk67zh6mptcmb3mr46h0kb1y,imgname----------------------95--1772957451476.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಜೂ.02): &lt;/strong&gt;ಒಂದು ಕಡೆ ಇಡೀ ದೇಶ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಹಾಗೂ ಡಿಸೇಲ್ ಕೊರತೆ ಎದುರಿಸುತ್ತಿದ್ದಾಗ, ಮತ್ತೊಂದು ಕಡೆ ಭಾರತದ ಸಾಮಾಜಿಕ ಜಾಲತಾಣದ ಪ್ರಭಾವಿ ಇನ್&zwnj;ಫ್ಲೂಯೆನ್ಸರ್ ಹಾಗೂ ವಿಷಯ ರಚನಾಕಾರ ಮಹಾಮಾನವ ಮೋದಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಓಡಾಡುತ್ತಿದ್ದರು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಮೋದಿ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.&lt;/p&gt;&lt;p&gt;ದಿ ವೈರ್ ವೆಬ್ ಸೈಟ್ ನ್ಯೂಸ್ ಪೋರ್ಟಲ್ ನಲ್ಲಿ ಪ್ರಕಟವಾದ ಸುದ್ದಿಯ ಲಿಂಕ್ ನ್ನು ಎಕ್ಸ್ ನಲ್ಲಿ ಹಂಚಿಕೊಂಡು ಬರೆದುಕೊಂಡಿರುವ ಖರ್ಗೆ, ಇಂಧನ ಉಳಿಸುವಂತೆ ಮೇ 10ರಂದು ಸಾರ್ವಜನಿಕರಿಗೆ ಕರೆ ನೀಡಿದ್ದ ಮೋದಿ ಪ್ರತಿಯೊಬ್ಬರು ಕಾರ್ ಬಳಸುವ ಬದಲು ಸಾರ್ವಜನಿಕ ಸಾರಿಗೆ ಬಳಸುವ ಮೂಲಕ ಇಂಧನ ಉಳಿಸುವಂತೆ ಹೇಳಿದ್ದರು.&lt;/p&gt;&lt;p&gt;ಆದರೆ, ಯುದ್ದ ಪ್ರಾರಂಭವಾದ 70 ದಿನಗಳ ನಂತರವೂ, ಮೋದಿ ದೇಶದ 12 ರಾಜ್ಯಗಳ 53 ನಗರಗಳಿಗೆ ಭೇಟಿ ನೀಡಿ 25 ರೋಡ್ ಶೋ ಗಳು ಸೇರಿದಂತೆ 81 ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಈ 81ರಲ್ಲಿ ಕೇವಲ 13 ಸಮಾರಂಭಗಳು ಮಾತ್ರ ಸರ್ಕಾರಿ ಕಾರ್ಯಕ್ರಮಗಳಾಗಿವೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಬಿಜೆಪಿ ವಿರುದ್ಧ ವಾಗ್ದಾಳಿ&lt;/strong&gt;&lt;/h2&gt;&lt;p&gt;ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಿಂದಾಗಿ ವ್ಯಾಪಾರ ವ್ಯವಹಾರಗಳು ನಿಂತುಹೋಗಿ, ಜನರು ಅಡುಗೆ ಅ&zwnj;ನಿಲ ಪಡೆದುಕೊಳ್ಳಲು ಸರದಿಯಲ್ಲಿ ನಿಂತಿರುವಾಗ, ಮೋದಿ ಅವರು ತಮ್ಮ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಆಯೋಜಿಸಲಾದ ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ ಪ್ರದರ್ಶನ ಮತ್ತು ಹೆಲಿಕಾಪ್ಟರ್ ಪುಷ್ಪ ವೃಷ್ಟಿಯನ್ನು ನೋಡಿ ಆನಂದಿಸುತ್ತಿದ್ದರು ಎಂದು ಕುಟುಕಿದ್ದಾರೆ.&lt;/p&gt;&lt;p&gt;ಚುನಾವಣೆ ಫಲಿತಾಂಶ ಘೋಷಣೆಯಾದ ನಂತರದ 10 ದಿನಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರಗಳನ್ನು ನಾಲ್ಕು ಸಲ ಏರಿಸಲಾಯಿತು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಪದೇ ಪದೇ ಮಾಡುತ್ತಿರುವ ಹೆಚ್ಚಳ ಸಾಮಾನ್ಯ ಜನರ ಮೇಲೆ ಬಿಜೆಪಿ ನಡೆಸುತ್ತಿರುವ ವಂಚನೆ ಹಾಗೂ ಕ್ರೌರ್ಯಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/priyank-kharge-slams-pm-modi-over-fuel-crisis-gvd/articleshow-0ylxxp2"/>
        </item>
        <item>
            <title><![CDATA[Kalaburagi PSI Death: ಗೃಹ ಸಚಿವರ ತವರಲ್ಲಿ ಪಿಎಸ್‌ಐ ಬಸವರಾಜ್ ಆತ್ಮ*ಹತ್ಯೆ ಹಿಂದಿದೆಯೇ ನಿಗೂಢ ರಹಸ್ಯ?]]></title>
            <link>https://kannada.asianetnews.com/gallery/karnataka-districts/karnataka-police-psi-basavaraj-herur-kalaburagi-station-death-native-of-home-minister-2oe6hfk</link>
            <guid isPermaLink="true">https://kannada.asianetnews.com/gallery/karnataka-districts/karnataka-police-psi-basavaraj-herur-kalaburagi-station-death-native-of-home-minister-2oe6hfk</guid>
            <pubDate>Wed, 17 Jun 2026 17:05:30 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ ಡಿಜಿಆರ್&zwnj;ಬಿ ಘಟಕದ ಪಿಎಸ್&zwnj;ಐ ಬಸವರಾಜ್ ಹೇರೂರ್ (PSI Basavaraj Herur) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಪದೋನ್ನತಿ ಹೊಂದಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಹೊಟ್ಟೆನೋವು ಎಂದು ಹೇಳಲಾಗುತ್ತಿದ್ದರೂ, ವೃತ್ತಿ ಒತ್ತಡದ ಶಂಕೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvan3xdg949qp18d8r9vr96f,imgname-kalaburagi-psi-basavaraj-death-1781695378864.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿಯಲ್ಲಿ ಡಿಜಿಆರ್&zwnj;ಬಿ ಘಟಕದ ಪಿಎಸ್&zwnj;ಐ ಬಸವರಾಜ್ ಹೇರೂರ್ (PSI Basavaraj Herur) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಪದೋನ್ನತಿ ಹೊಂದಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಹೊಟ್ಟೆನೋವು ಎಂದು ಹೇಳಲಾಗುತ್ತಿದ್ದರೂ, ವೃತ್ತಿ ಒತ್ತಡದ ಶಂಕೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಕಲಬುರಗಿ (ಜೂ.17): ನ್ಯಾ&lt;/strong&gt;ಯ ಕೊಡಿಸಬೇಕಾದ ಪೊಲೀಸ್ ಅಧಿಕಾರಿಯೇ ಸಾವಿನ ಹಾದಿ ಹಿಡಿದಿರುವ ಆಘಾತಕಾರಿ ಘಟನೆ ರಾಜ್ಯದ ಗೃಹ ಸಚಿವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆಯ ಡಿಜಿಆರ್&zwnj;ಬಿ (DCRB) ಘಟಕದಲ್ಲಿ ಪಿಎಸ್&zwnj;ಐ ಆಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್ ಹೇರೂರ್ (42) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಂಡು ಸಾವಿಗೆ ಶರಣಾಗಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯಲ್ಲಿ ನಡೆದಿದ್ದೇನು?&lt;/strong&gt;&lt;/p&gt;&lt;p&gt;ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಲೂರ ಗ್ರಾಮದವರಾದ ಬಸವರಾಜ್ ಹೇರೂರ್, ಇತ್ತೀಚೆಗಷ್ಟೇ ಪಿಎಸ್&zwnj;ಐ ಆಗಿ ಪದೋನ್ನತಿ ಹೊಂದಿದ್ದರು. ಎಂದಿನಂತೆ ರಾತ್ರಿ ಕರ್ತವ್ಯ ಮುಗಿಸಿ ಕಲಬುರಗಿ ನಗರದ ಗಂಗಾ ನಗರ ಬಡಾವಣೆಯಲ್ಲಿರುವ ತಮ್ಮ ಮನೆಗೆ ಬಂದಿದ್ದರು. ತಡರಾತ್ರಿ ಹಠಾತ್ ಆಗಿ ತಮ್ಮ ಸ್ನೇಹಿತರಿಗೆ ಕರೆ ಮಾಡಿದ ಬಸವರಾಜ್, 'ನಾನು ಆತ್ಮಹ*ತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಗಾಬರಿಗೊಂಡ ಸ್ನೇಹಿತರು ಕೂಡಲೇ ಬಸವರಾಜ್ ತಂದೆ ಶಾಂತಪ್ಪ ಅವರಿಗೆ ವಿಷಯ ಮುಟ್ಟಿಸಿದ್ದಾರೆ.&lt;/p&gt;&lt;p&gt;ತಂದೆ ಶಾಂತಪ್ಪ ಮಗನ ಕೋಣೆಯ ಬಳಿ ಹೋದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಕರೆದರೂ ಓಗೊಡದಿದ್ದಾಗ, ಕಬ್ಬಿಣದ ರಾಡ್&zwnj;ನಿಂದ ಬಾಗಿಲು ಒಡೆದು ಒಳಹೋಗಿದ್ದಾರೆ. ಆದರೆ ಅಷ್ಟರಲ್ಲೇ ಕಾಲ ಮಿಂಚಿಹೋಗಿತ್ತು. ಬಸವರಾಜ್ ಪತ್ನಿಯ ಸೀರೆಯಿಂದ ಫ್ಯಾನ್&zwnj;ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದರು.&lt;/p&gt;&lt;img&gt;&lt;p&gt;&lt;strong&gt;ವೃತ್ತಿ ಜೀವನ ಮತ್ತು ಹಿನ್ನೆಲೆ:&lt;/strong&gt;&lt;/p&gt;&lt;p&gt;2014ರ ಬ್ಯಾಚ್&zwnj;ನ ಪೊಲೀಸ್ ಅಧಿಕಾರಿಯಾದ ಬಸವರಾಜ್, ಈ ಹಿಂದೆ ಹುಮನಾಬಾದ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಕ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಘಟನೆ ನಡೆದ ಸಮಯದಲ್ಲಿ ಪತ್ನಿ ಮತ್ತು ಮಕ್ಕಳು ತವರು ಮನೆಗೆ ಹೋಗಿದ್ದರು ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಸಾವಿನ ಸುತ್ತ ಅನುಮಾನದ ಹುತ್ತ:&lt;/strong&gt;&lt;/p&gt;&lt;p&gt;ಬಸವರಾಜ್ ಅವರ ಈ ನಿರ್ಧಾರಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಂದೆ ಶಾಂತಪ್ಪ ಅವರ ಪ್ರಕಾರ, ಬಸವರಾಜ್&zwnj;ಗೆ ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವು ಇತ್ತು. ಅಲ್ಲದೆ ಅವರು ಆಗಾಗ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಒಬ್ಬ ಪೊಲೀಸ್ ಅಧಿಕಾರಿಯಾಗಿ ಕೇವಲ ಹೊಟ್ಟೆ ನೋವಿನ ಕಾರಣಕ್ಕೆ ಆತ್ಮ*ಹ*ತ್ಯೆ ಮಾಡಿಕೊಂಡರಾ ಅಥವಾ ಇದರ ಹಿಂದೆ ವೃತ್ತಿ ಜೀವನದ ಒತ್ತಡ ಅಥವಾ ಬೇರೆನಾದರೂ ಕಾರಣಗಳಿವೆಯೇ ಎಂಬ ಪ್ರಶ್ನೆ ಮೂಡಿದೆ.&lt;/p&gt;&lt;img&gt;&lt;p&gt;ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಲಬುರಗಿಯ ಆರ್&zwnj;ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಯೊಬ್ಬರ ಈ ಸಾವು ಇಡೀ ಜಿಲ್ಲೆಯನ್ನು ಕಂಬನಿ ಮಿಡಿಯುವಂತೆ ಮಾಡಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/karnataka-police-psi-basavaraj-herur-kalaburagi-station-death-native-of-home-minister-2oe6hfk"/>
        </item>
        <item>
            <title><![CDATA[ಕರ್ನಾಟಕದಿಂದ ಸೋಲಾಪುರ ಮಾರ್ಗವಾಗಿ ಹೋಗುವ ಹಲವು ರೈಲು ಸಂಚಾರ ನಿರ್ಬಂಧ, ಜೂ. 5ರಿಂದ10ರವರೆಗೆ ಹಲವು ಟ್ರೈನ್ ರದ್ದು!]]></title>
            <link>https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</link>
            <guid isPermaLink="true">https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</guid>
            <pubDate>Fri, 05 Jun 2026 12:14:53 +0530</pubDate>
            <description><![CDATA[ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ನಡೆಯುತ್ತಿರುವ ಮೇಲ್ದರ್ಜೆ ಕಾಮಗಾರಿಯಿಂದಾಗಿ ಕೇಂದ್ರ ರೈಲ್ವೆಯು ಜೂನ್ 5 ರಿಂದ 10 ರವರೆಗೆ ಹಲವು ರೈಲುಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ಕೆಲವು ರೈಲುಗಳ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ ಹಾಗೂ ಸೋಲಾಪುರ-ಕಲಬುರಗಿ ವಿಶೇಷ ರೈಲು ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks4rgymmydvxhdywfct5zw88,imgname-indian-railways--2--1779350141588.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ಮೇಲ್ದರ್ಜೆ ಕಾಮಗಾರಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಇಂಟರ್&zwnj;ಲಾಕಿಂಗ್&zwnj;ನ್ನು ನಿಯೋಜಿಸಲು ಪೂರ್ವ-ಇಂಟರ್&zwnj;ಲಾಕಿಂಗ್ ಅಲ್ಲದ ಮತ್ತು ಇಂಟರ್&zwnj;ಲಾಕಿಂಗ್ ಅಲ್ಲದ ಕೆಲಸದಿಂದಾಗಿ ಜೂನ್ 5ರಿಂದ 10ರವರೆಗೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಹಲವು ರೈಲುಗಳ ಮೇಲೆ ಸಂಚಾರ ನಿರ್ಬಂಧ ವಿಧಿಸಿದೆ.&lt;/p&gt;&lt;h2&gt;ನಿಯಂತ್ರಣ ಯಾವ ರೈಲುಗಳ ಮೇಲೆ ?&lt;/h2&gt;&lt;p&gt;ಜೂನ್&zwnj; 5 ರಂದು ರೈಲು ಸಂಖ್ಯೆ 11311 ಸೋಲಾಪುರ-ಹಾಸನ ಎಕ್ಸ್&zwnj;ಪ್ರೆಸ್ ಹಾಗೂ ರೈಲು ಸಂಖ್ಯೆ 17308 ಬಾಗಲಕೋಟೆ- ಮೈಸೂರು ಬಸವಾ ಎಕ್ಸ್&zwnj;ಪ್ರೆಸ್ ಸಂಚಾರದ ಮೇಲೆ 45 ನಿಮಿಷಗಳ ನಿಯಂತ್ರಣವಿರಲಿದೆ. ಜೂ. 8 ರಂದು ರೈಲು ಸಂಖ್ಯೆ 18520 ಎಲ್&zwnj;ಟಿಟಿ ಮುಂಬೈ- ವಿಶಾಖಪಟ್ಟಣ ಎಕ್ಸ್&zwnj;ಪ್ರೆಸ್ಜೂ 2 ಗಂಟೆ, ರೈಲು ಸಂಖ್ಯೆ 01465 ಸೋಲಾಪುರ-ಕಲಬುರಗಿ ವಿಶೇಷ 1 ಗಂಟೆ 30 ನಿಮಿಷ, ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ 30 ನಿಮಿಷ, ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 30 ನಿಮಿಷ ನಿಯಂತ್ರಣದಲ್ಲಿರಲಿವೆ.&lt;/p&gt;&lt;p&gt;ಜೂನ್&zwnj; 9 ರಂದು ರೈಲು ಸಂಖ್ಯೆ 16382 ಕನ್ಯಾಕುಮಾರಿ-ಪುಣೆ ಎಕ್ಸ್&zwnj;ಪ್ರೆಸ್ 1 ಗಂಟೆ 15 ನಿಮಿಷ, ರೈಲು ಸಂಖ್ಯೆ 11020 ಭುವನೇಶ್ವರ- ಸಿಎಸ್&zwnj;ಎಂಟಿ ಮುಂಬೈ ಎಕ್ಸ್&zwnj;ಪ್ರೆಸ್ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.&lt;/p&gt;&lt;h2&gt;ಕೆಲವು ರೈಲು ಮಾರ್ಗ ಬದಲಾವಣೆ:&lt;/h2&gt;&lt;p&gt;ರೈಲು ಸಂಖ್ಯೆ 57662 ವಿಜಯಪುರ-ರಾಯಚೂರು ಪ್ಯಾಸೆಂಜರ್ ಜೂ. 5 ರಿಂದ 10 ರ ವರೆಗೆ ವಿಜಯಪುರ-ಹೋಟ್ಗಿ-ವಾಡಿ ಮಾರ್ಗ, ರೈಲು ಸಂಖ್ಯೆ 57661 ರಾಯಚೂರು-ವಿಜಯಪುರ ಪ್ಯಾಸೆಂಜರ್ ವಾಡಿ-ಹೋಟ್ಗಿ-ವಿಜಯಪುರ ಮೂಲಕ ಮಾರ್ಗ ಬದಲಾವಣೆ ಮಾಡಲಾಗುತ್ತದೆ.&lt;/p&gt;&lt;p&gt;ಕೆಳಗಿನ ರೈಲುಗಳನ್ನು ನಿರ್ದಿಷ್ಟಪಡಿಸಿದಂತೆ ಮರುಹೊಂದಿಸಲಾಗುತ್ತದೆ. ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ ಜೂ. 10 ರಂದು 2 ಗಂಟೆ 20 ನಿಮಿಷಗಳ ಕಾಲ ಮತ್ತು ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 2 ಗಂಟೆ 15 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ.&lt;/p&gt;&lt;p&gt;ರೈಲು ಸಂಖ್ಯೆ 01465 ಸೋಲಾಪುರ- ಕಲಬುರಗಿ ಮತ್ತು ರೈಲು ಸಂಖ್ಯೆ 01466 ಕಲಬುರಗಿ- ಸೋಲಾಪುರ ಈ ರೈಲು ಜೂ. 10 ರಂದು ರದ್ದು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep"/>
        </item>
        <item>
            <title><![CDATA[ಕಲಬುರಗಿ: ನಿವೃತ್ತ ಇಂಜಿನಿಯರ್ ಮೇಲೆ ಲೋಕಾಯುಕ್ತ ದಾಳಿ. ಬ್ಯಾಂಕ್ ಲಾಕರ್‌ನಲ್ಲಿ ₹9 ಲಕ್ಷ ಹಳೆಯ ನೋಟು, 20 ತೊಲೆ ಚಿನ್ನ ಪತ್ತೆ!]]></title>
            <link>https://kannada.asianetnews.com/karnataka-districts/kalaburagi-lokayukta-raids-officer-s-bank-locker-finds-rs-9-lakh-in-old-notes-rav/articleshow-86aggfg</link>
            <guid isPermaLink="true">https://kannada.asianetnews.com/karnataka-districts/kalaburagi-lokayukta-raids-officer-s-bank-locker-finds-rs-9-lakh-in-old-notes-rav/articleshow-86aggfg</guid>
            <pubDate>Thu, 18 Jun 2026 10:42:46 +0530</pubDate>
            <description><![CDATA[ಕಲಬುರಗಿಯಲ್ಲಿ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇಲೆ ನಿವೃತ್ತ ಇಂಜಿನಿಯರ್ ಮಾಣಿಕ್ ಕನಕಟ್ಟೆ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅವರ ಬ್ಯಾಂಕ್ ಲಾಕರ್ ಪರಿಶೀಲಿಸಿದಾಗ, ನಿಷೇಧಿತ ₹1000 ಮುಖಬೆಲೆಯ ಹಳೆಯ ನೋಟುಗಳು ಮತ್ತು 20 ತೊಲೆಗೂ ಅಧಿಕ ಚಿನ್ನಾಭರಣಗಳು ಪತ್ತೆಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvcja2hj2t0nxc36z7ce9409,imgname-----------------------2026-06-18t103144.848-1781759543858.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಕಲಬುರಗಿ (ಜೂ.18):&lt;/strong&gt; ನಿವೃತ್ತ ಅಧಿಕಾರಿಯ ಬ್ಯಾಂಕ್&zwnj; ಲಾಕರ್&zwnj;ನಲ್ಲಿ ಹಳೆಯ ನೋಟುಗಳು, ಚಿನ್ನಾಭರಣಗಳು ಲೋಕಾಯುಕ್ತ ದಾಳಿಯ ವೇಳೆ ಪತ್ತೆ ಆಗಿವೆ.&lt;/p&gt;&lt;h2&gt;₹1 ಸಾವಿರ ಮುಖಬೆಲೆಯ ₹9 ಲಕ್ಷ ಹಳೆಯ ನೋಟು ಪತ್ತೆ!&lt;/h2&gt;&lt;p&gt;ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಇಲ್ಲಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಲಬುರಗಿ ವೃತ್ತದ ನಿವೃತ್ತ ಅಧೀಕ್ಷಕ ಅಭಿಯಂತರ ಮಾಣಿಕ್ ಕನಕಟ್ಟೆ ಅವರ ಮನೆ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಬುಧವಾರ ನಗರದ ಸಂಗಮೇಶ್ವರ ಕಾಲೋನಿಯ ಎಸ್&zwnj;ಬಿಐ ಬ್ಯಾಂಕ್&zwnj;ನಲ್ಲಿರುವ ಅವರ ಲಾಕರ್&zwnj; ಪರಿಶೀಲಿಸಿದಾಗ ₹1 ಸಾವಿರ ಮುಖಬೆಲೆಯ ₹9 ಲಕ್ಷ ಹಳೆಯ ನೋಟುಗಳು, ಉಂಗುರ ಸೇರಿ 20ಕ್ಕೂ ಹೆಚ್ಚು ತೊಲೆ ಚಿನ್ನಾಭರಣ ಪತ್ತೆಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Karnataka Lokayukta Raid: 8 ಅಧಿಕಾರಿಗಳ ಬಳಿ ಪತ್ತೆಯಾಯ್ತಯ ₹31.11 ಕೋಟಿ ಆಸ್ತಿ&lt;/p&gt;&lt;h3&gt;ಎಲ್ಲೆಲ್ಲಿ ಲೋಕಾಯುಕ್ತ ದಾಳಿ?&lt;/h3&gt;&lt;p&gt;ಕಲಬುರಗಿಯ ಗೋದುತಾಯಿ ನಗರದ ಎರಡು ಮನೆಗಳು, ಬೀದರ್ ಜಿಲ್ಲೆಯ ಹಳ್ಳಿಖೇಡ (ಬಿ) ಗ್ರಾಮದ ಮನೆ, ತೋಟಗಳು ಹಾಗೂ ಹುಮನಾಬಾದ್&zwj;ನಲ್ಲಿರುವ ಎರಡು ಕಾಂಪ್ಲೆಕ್ಸ್&zwnj;ಗಳ ಮೇಲೆ ಮಂಗಳವಾರ ದಾಳಿ ನಡೆದಿತ್ತು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburagi-lokayukta-raids-officer-s-bank-locker-finds-rs-9-lakh-in-old-notes-rav/articleshow-86aggfg"/>
        </item>
        <item>
            <title><![CDATA[Travel Good News: ಕಲಬುರಗಿ-ಬೆಂಗಳೂರು ವಿಮಾನಯಾನ ಸೇವೆ ಪುನಾರಂಭ: ನಾಳೆಯಿಂದಲೇ ಹಾರಲಿವೆ 'ಲೋಹದ ಹಕ್ಕಿಗಳು'!]]></title>
            <link>https://kannada.asianetnews.com/gallery/state/kalaburagi-bengaluru-flight-service-resumes-star-air-june-10-timings-details-sat-b8gtr4m</link>
            <guid isPermaLink="true">https://kannada.asianetnews.com/gallery/state/kalaburagi-bengaluru-flight-service-resumes-star-air-june-10-timings-details-sat-b8gtr4m</guid>
            <pubDate>Tue, 09 Jun 2026 21:24:50 +0530</pubDate>
            <description><![CDATA[ಕಳೆದ 8 ತಿಂಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ ಮತ್ತು ಬೆಂಗಳೂರು ನಡುವಿನ ವಿಮಾನಯಾನ ಸೇವೆ ಜೂನ್ 10 ರಿಂದ ಪುನಾರಂಭಗೊಳ್ಳಲಿದೆ. ರಾಜ್ಯ ಸರ್ಕಾರದ ಆರ್ಥಿಕ ನೆರವಿನೊಂದಿಗೆ, ಸ್ಟಾರ್ ಏರ್ ಸಂಸ್ಥೆಯು ವಾರದ ಏಳೂ ದಿನಗಳ ಕಾಲ ಈ ಮಾರ್ಗದಲ್ಲಿ 'ಎಂಬ್ರೆಯರ್ 175' ವಿಮಾನದ ಮೂಲಕ ಸೇವೆ ಒದಗಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktph4c4mp0z3w2305qacggev,imgname-kalaburagi-airport-flight-traffic-start-1781020110996.jpg" type="image/jpeg" height="390" width="690"/>
            <content:encoded><![CDATA[ಕಳೆದ 8 ತಿಂಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ ಮತ್ತು ಬೆಂಗಳೂರು ನಡುವಿನ ವಿಮಾನಯಾನ ಸೇವೆ ಜೂನ್ 10 ರಿಂದ ಪುನಾರಂಭಗೊಳ್ಳಲಿದೆ. ರಾಜ್ಯ ಸರ್ಕಾರದ ಆರ್ಥಿಕ ನೆರವಿನೊಂದಿಗೆ, ಸ್ಟಾರ್ ಏರ್ ಸಂಸ್ಥೆಯು ವಾರದ ಏಳೂ ದಿನಗಳ ಕಾಲ ಈ ಮಾರ್ಗದಲ್ಲಿ 'ಎಂಬ್ರೆಯರ್ 175' ವಿಮಾನದ ಮೂಲಕ ಸೇವೆ ಒದಗಿಸಲಿದೆ.&lt;img&gt;&lt;p&gt;&lt;strong&gt;ಕಲಬುರಗಿ (ಜೂ.09): ಕ&lt;/strong&gt;ಲ್ಯಾಣ ಕರ್ನಾಟಕದ ಜನತೆಗೆ ಹಾಗೂ ಪ್ರಯಾಣಿಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಕಳೆದ 8 ತಿಂಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ ಮತ್ತು ಬೆಂಗಳೂರು ನಡುವಿನ ವಿಮಾನಯಾನ ಸೇವೆ ಜೂನ್ 10 (ನಾಳೆ) ರಿಂದ ಅಧಿಕೃತವಾಗಿ ಪುನಾರಂಭಗೊಳ್ಳಲಿದೆ. ಇದರೊಂದಿಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮತ್ತೆ ಲೋಹದ ಹಕ್ಕಿಗಳ ಹಾರಾಟ ಶುರುವಾಗಲಿದೆ.&lt;/p&gt;&lt;img&gt;&lt;p&gt;&lt;strong&gt;8 ತಿಂಗಳ ಸುದೀರ್ಘ ಕಾಯುವಿಕೆಗೆ ಅಂತ್ಯ:&lt;/strong&gt;&lt;/p&gt;&lt;p&gt;ಕೇಂದ್ರ ಸರ್ಕಾರದ 'ಉಡಾನ್' (UDAN) ಯೋಜನೆಯಡಿ ನೀಡಲಾಗುತ್ತಿದ್ದ ಆರ್ಥಿಕ ನೆರವು ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಕಳೆದ ಎಂಟು ತಿಂಗಳ ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ಇದ್ದ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.&lt;/p&gt;&lt;img&gt;&lt;p&gt;ಇದರಿಂದಾಗಿ ಈ ಭಾಗದ ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುವ ರೋಗಿಗಳಿಗೆ ಭಾರಿ ತೊಂದರೆಯಾಗಿತ್ತು. ಆದರೆ ಈಗ ರಾಜ್ಯ ಸರ್ಕಾರವು ಆರ್ಥಿಕ ನೆರವು ನೀಡಲು ಮುಂದೆ ಬಂದಿರುವ ಹಿನ್ನೆಲೆಯಲ್ಲಿ, ಸ್ಟಾರ್ ಏರ್ (Star Air) ಸಂಸ್ಥೆಯು ತನ್ನ ವಿಮಾನ ಸೇವೆಯನ್ನು ಪುನಾರಂಭಿಸಲು ಸಜ್ಜಾಗಿದೆ.&lt;/p&gt;&lt;img&gt;&lt;p&gt;&lt;strong&gt;ವಾರದ ಏಳೂ ದಿನಗಳ ಕಾಲ ಸೇವೆ:&lt;/strong&gt;&lt;/p&gt;&lt;p&gt;ವಿಶೇಷವೆಂದರೆ, ಈ ವಿಮಾನಯಾನ ಸೇವೆಯು ವಾರದ ಏಳೂ ದಿನಗಳ ಕಾಲ ಲಭ್ಯವಿರಲಿದೆ. ಸ್ಟಾರ್ ಏರ್ ಸಂಸ್ಥೆಯು 76 ಆಸನಗಳ ಸಾಮರ್ಥ್ಯದ ಅತ್ಯಾಧುನಿಕ 'ಎಂಬ್ರೆಯರ್ 175' (Embraer 175) ಮಾದರಿಯ ವಿಮಾನವನ್ನು ಈ ಮಾರ್ಗದಲ್ಲಿ ಕಾರ್ಯಾಚರಿಸಲಿದೆ.&lt;/p&gt;&lt;img&gt;&lt;p&gt;&lt;strong&gt;ವಿಮಾನದ ಸಮಯದ ವಿವರ:&lt;/strong&gt;&lt;/p&gt;&lt;p&gt;ಪ್ರತಿದಿನ ಬೆಳಿಗ್ಗೆ ಈ ವಿಮಾನವು ಉಭಯ ನಗರಗಳ ನಡುವೆ ಸಂಚರಿಸಲಿದ್ದು, ಸಮಯದ ವಿವರ ಈ ಕೆಳಗಿನಂತಿದೆ:&lt;/p&gt;&lt;p&gt;ಬೆಂಗಳೂರಿನಿಂದ ನಿರ್ಗಮನ: ಬೆಳಿಗ್ಗೆ 6:30 ಗಂಟೆಗೆ&lt;/p&gt;&lt;p&gt;ಕಲಬುರಗಿಗೆ ಆಗಮನ: ಬೆಳಿಗ್ಗೆ 7:40 ಗಂಟೆಗೆ&lt;/p&gt;&lt;p&gt;ಕಲಬುರಗಿಯಿಂದ ನಿರ್ಗಮನ: ಬೆಳಿಗ್ಗೆ 8:10 ಗಂಟೆಗೆ&lt;/p&gt;&lt;p&gt;ಬೆಂಗಳೂರಿಗೆ ಆಗಮನ: ಬೆಳಿಗ್ಗೆ 9:20 ಗಂಟೆಗೆ (ಅಂದಾಜು)&lt;/p&gt;&lt;img&gt;&lt;p&gt;ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮತ್ತು ಬೆಂಗಳೂರಿನೊಂದಿಗೆ ಸುಲಭ ಸಂಪರ್ಕ ಸಾಧಿಸಲು ದೊಡ್ಡ ಮಟ್ಟದ ನೆರವಾಗಲಿದೆ. ಕಲಬುರಗಿ ವಿಮಾನ ನಿಲ್ದಾಣದ ಈ ಮರು ಚಾಲನೆಯಿಂದ ಈ ಭಾಗದ ಆರ್ಥಿಕ ಚಟುವಟಿಕೆಗಳಿಗೂ ಹೆಚ್ಚಿನ ವೇಗ ಸಿಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/kalaburagi-bengaluru-flight-service-resumes-star-air-june-10-timings-details-sat-b8gtr4m"/>
        </item>
        <item>
            <title><![CDATA[ಡಿಕೆ ಸಂಪುಟ ರಚನೆ ಹೇಗೆ ಅಗುತ್ತೆ? ಯಾರಿಗೆಲ್ಲಾ ಸಿಗುತ್ತೆ ಸ್ಥಾನ? ಖರ್ಗೆ ಹೇಳಿದ ರಹಸ್ಯಗಳು]]></title>
            <link>https://kannada.asianetnews.com/karnataka-districts/karnataka-politics-update-how-will-dk-shivakumar-s-cabinet-be-formed-who-will-get-a-place-mrq/articleshow-bzrogfe</link>
            <guid isPermaLink="true">https://kannada.asianetnews.com/karnataka-districts/karnataka-politics-update-how-will-dk-shivakumar-s-cabinet-be-formed-who-will-get-a-place-mrq/articleshow-bzrogfe</guid>
            <pubDate>Mon, 01 Jun 2026 05:46:10 +0530</pubDate>
            <description><![CDATA[ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಡಿ.ಕೆ.ಶಿವಕುಮಾರ್ ನೇತೃತ್ವದ ಹೊಸ ಸರ್ಕಾರದ ಸಂಪುಟ ರಚನೆಯು ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಕಲಬುರಗಿಯಲ್ಲಿ ತಿಳಿಸಿದ್ದಾರೆ. ಮೊದಲ ಹಂತದಲ್ಲಿ 8-10 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ನಂತರ ಸಂಪುಟ ವಿಸ್ತರಣೆಯಾಗಲಿದೆ. ಅಲ್ಲದೆ, ಡಿಕೆಶಿ ಸಿಎಂ ಆದ ಬಳಿಕ ಹೊಸ ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆಯೂ ಅವರು ಸುಳಿವು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt08gxdz3yy6vy1nshzgqh25,imgname-mallikarjun-kharge-1780272887231.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ : &lt;/strong&gt;ಜೂನ್&zwnj; 3ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್&zwnj; ಅವರೊಂದಿಗೆ ಮೊದಲ ಹಂತದಲ್ಲಿ ಎಂಟೋ, ಹತ್ತೋ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಾದ ನಂತರ, 15 ದಿನಗಳು ಅಥವಾ ತಿಂಗಳೊಳಗೆ ಮತ್ತೊಮ್ಮೆ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.&lt;/p&gt;&lt;p&gt;ಅಧಿಕ ಜೇಷ್ಠ ಪೂರ್ಣಿಮೆ ದಿನವಾದ ಭಾನುವಾರ, ಕಲಬುರಗಿಯ ಬುದ್ಧವಿಹಾರದಲ್ಲಿ ಪೂರ್ಣಿಮೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ಮಾಹಿತಿ ನೀಡಿದರು.&lt;/p&gt;&lt;h2&gt;&lt;strong&gt;ತಿಂಗಳಲ್ಲಿ ಮತ್ತೊಮ್ಮೆ ಸಂಪುಟ ವಿಸ್ತರಣೆ&lt;/strong&gt;&lt;/h2&gt;&lt;p&gt;ಸಂಪುಟ ಸೇರಲಿರುವ ಸಚಿವರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜೂನ್&zwnj; 3ರಂದು ಮೊದಲ ಹಂತದಲ್ಲಿ ಎಂಟೋ, ಹತ್ತೋ ಸಚಿವರ ಪ್ರಮಾಣವಚನ ನಡೆಯಬಹುದು. ಅದಾದ 15 ದಿನ ಅಥವಾ ಒಂದು ತಿಂಗಳೊಳಗೆ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳುವ ಮೂಲಕ 2 ಹಂತದಲ್ಲಿ ಡಿ.ಕೆ.ಶಿವಕುಮಾರ್&zwnj; ಸರ್ಕಾರದ ಸಂಪುಟ ರಚನೆಯಾಗುವ ಸುಳಿವು ನೀಡಿದರು.&lt;/p&gt;&lt;p&gt;ಹೊಸ ಡಿಸಿಎಂ ಹುದ್ದೆ ಸೃಷ್ಟಿ ಮತ್ತು ಹೊಸ ಸಂಪುಟ ರಚನೆಯ ಬಗ್ಗೆ ನನ್ನ ಬಳಿಗೆ ಇದುವರೆಗೂ ಯಾವುದೇ ಅಧಿಕೃತ ಪ್ರಸ್ತಾವನೆ ಬಂದಿಲ್ಲ. ಪ್ರಸ್ತಾಪ ಬಂದ ಬಳಿಕವೇ ಡಿಸಿಎಂ ಹಾಗೂ ಸಚಿವರ ಸಂಖ್ಯೆ ತೀರ್ಮಾನವಾಗಲಿದೆ. ಸಿಎಂ ಮೊದಲು ಸಚಿವರ ಲಿಸ್ಟ್ ಅನ್ನು ನಮಗೆ ಕೊಡಲಿ. ಅದಾದ ನಂತರವಷ್ಟೇ ಎಷ್ಟು ಡಿಸಿಎಂ ಮಾಡಬೇಕು?, ಎಷ್ಟು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು? ಎಂಬುದನ್ನು ತೀರ್ಮಾನಿಸಲಾಗುವುದು. ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕವನ್ನೂ ಜೊತೆಯಲ್ಲೇ ಮಾಡಬೇಕಾ? ಎನ್ನುವ ಚರ್ಚೆ ಸಹ ನಡೆದಿದೆ. ಇವೆಲ್ಲವನ್ನೂ ಜೂನ್&zwnj; 3ರ ನಂತರ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಯಾರು?&lt;/strong&gt;&lt;/h3&gt;&lt;p&gt;ಕೆಪಿಸಿಸಿ ಅಧ್ಯಕ್ಷ ಹುದ್ದೆ ಕುರಿತು ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್&zwnj; ಅವರು ಸಿಎಂ ಆದ ಬಳಿಕ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಸಹಜ. ಮುಂಬರುವ ಚುನಾವಣೆ ದೃಷ್ಟಿಯಿಂದ ಎಲ್ಲರನ್ನೂ ಒಗ್ಗಟ್ಟಾಗಿ ಕೊಂಡೊಯ್ಯುವ, ಸಿಎಂ ಜೊತೆ ಉತ್ತಮ ಸಮನ್ವಯ ಹೊಂದಿರುವ ಸೂಕ್ತ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.&lt;/p&gt;&lt;p&gt;ಚುನಾವಣೆಗೆ ಕೇವಲ 2 ವರ್ಷ ಮಾತ್ರ ಬಾಕಿಯಿದೆ. ಬಹಳ ವೇಗವಾಗಿ ಕೆಲಸ ಮಾಡಬೇಕಿದೆ. ವೇಗವಾಗಿ ಕೆಲಸ ಮಾಡುವ, ಸಾಮೂಹಿಕವಾಗಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಸಾಮರ್ಥ್ಯ ಇರುವ ನಾಯಕನನ್ನು ಹುಡುಕಬೇಕಿದೆ. ಜೊತೆಗೆ, ಅವರಿಗೆ ಸಹಕಾರ ನೀಡುವ ತಂಡವೂ ಇರಬೇಕಾಗುತ್ತದೆ. ಇವೆಲ್ಲವನ್ನೂ ವಿಚಾರ ಮಾಡಿ ನಾವು ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುತ್ತೇವೆ ಎಂದರು.&lt;/p&gt;&lt;p&gt;ಹೊಸ ಸಚಿವ ಸಂಪುಟ ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಸರತ್ತಿಗೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ತೀವ್ರ ಚರ್ಚೆಗಳ ನಡುವೆಯೇ ಖರ್ಗೆಯವರ ಕಲಬುರಗಿಯ ಈ ಭೇಟಿ, ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.&lt;/p&gt;&lt;p&gt;ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ನಂತರ, ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ. ಈ ಸಂದರ್ಭದಲ್ಲಿಯೇ ಖರ್ಗೆಯವರು ತಮ್ಮ ತವರು ಜಿಲ್ಲೆಯಾದ ಕಲಬುರಗಿಗೆ ಭೇಟಿ ನೀಡಿದ್ದಾರೆ. ಸ್ಥಳೀಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಶಾಸಕರು ಹಾಗೂ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿ, ಗಮನ ಸೆಳೆದಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/karnataka-politics-update-how-will-dk-shivakumar-s-cabinet-be-formed-who-will-get-a-place-mrq/articleshow-bzrogfe"/>
        </item>
        <item>
            <title><![CDATA[ರೈಲು ಪ್ರಯಾಣಿಕರೇ ಗಮನಿಸಿ: ಜೂನ್ 1ರಿಂದ ಕಲಬುರಗಿ, ಗಾಣಗಾಪುರ ಮಾರ್ಗದ ಪ್ರಮುಖ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ!]]></title>
            <link>https://kannada.asianetnews.com/karnataka-districts/karnataka-railways-solapur-division-revises-train-timetables-at-kalaburagi-ganagapur-road-hotgi-stations-from-june1-gdp/articleshow-dx152ao</link>
            <guid isPermaLink="true">https://kannada.asianetnews.com/karnataka-districts/karnataka-railways-solapur-division-revises-train-timetables-at-kalaburagi-ganagapur-road-hotgi-stations-from-june1-gdp/articleshow-dx152ao</guid>
            <pubDate>Sat, 30 May 2026 19:39:57 +0530</pubDate>
            <description><![CDATA[ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಕಲಬುರಗಿ, ಗಾಣಗಾಪುರ ರಸ್ತೆ, ಮತ್ತು ಹೊಟ್ಲಿ ನಿಲ್ದಾಣಗಳ ಮೂಲಕ ಹಾದುಹೋಗುವ ಕೆಲವು ಪ್ರಮುಖ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಈ ಹೊಸ ವೇಳಾಪಟ್ಟಿಯು ಜೂನ್ 1 ರಿಂದ ಹಂತ ಹಂತವಾಗಿ ಜಾರಿಗೆ ಬರಲಿದ್ದು, ಪ್ರಯಾಣಿಕರು ನವೀಕೃತ ಸಮಯವನ್ನು ಪರಿಶೀಲಿಸಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knzr06zeea1hqff78krd0yts,imgname-indian-railways-2026-reforms-vande-bharat-sleeper-hydrogen-train-ticket-refund-cancellation-board-change-policy-2-1775960595438.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ರೈಲು ಪ್ರಯಾಣಿಕರ ಅನುಕೂಲತೆ, ಕಟ್ಟುನಿಟ್ಟಿನ ಸಮಯಪಾಲನೆ ಹಾಗೂ ರೈಲು ಕಾರ್ಯಾಚರಣೆಯ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ವಲಯದ ವ್ಯಾಪ್ತಿಗೆ ಬರುವ ಕಲಬುರಗಿ, ಗಾಣಗಾಪುರ ರಸ್ತೆ ಹಾಗೂ ಹೊಟ್ಲಿ ರೈಲು ನಿಲ್ದಾಣಗಳ ಮಾರ್ಗವಾಗಿ ಸಂಚರಿಸುವ ಕೆಲವು ಪ್ರಮುಖ ಎಕ್ಸ್&zwnj;ಪ್ರೆಸ್ ಮತ್ತು ಸಾಪ್ತಾಹಿಕ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;&lt;p&gt;ಈ ನೂತನ ಪರಿಷ್ಕೃತ ವೇಳಾಪಟ್ಟಿಯು ಜೂನ್ 1ರಿಂದ ಹಂತ ಹಂತವಾಗಿ ಜಾರಿಗೆ ಬರಲಿದ್ದು, ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ಈ ಕೆಳಗಿನ ಬದಲಾವಣೆಗಳನ್ನು ಕಡ್ಡಾಯವಾಗಿ ಗಮನಿಸಬೇಕಿದೆ.&lt;/p&gt;&lt;h2&gt;ನಿಲ್ದಾಣವಾರು ಪರಿಷ್ಕೃತ ವೇಳಾಪಟ್ಟಿಯ ಸಂಪೂರ್ಣ ವಿವರಗಳು:&lt;/h2&gt;&lt;p&gt;ವಿವಿಧ ರೈಲು ನಿಲ್ದಾಣಗಳಲ್ಲಿ ರೈಲುಗಳ ಆಗಮನ (Arrival) ಮತ್ತು ನಿರ್ಗಮನ (Departure) ಸಮಯವನ್ನು ಬದಲಾಯಿಸಲಾಗಿದ್ದು, ಅದರ ಅಧಿಕೃತ ಮಾಹಿತಿ ಇಲ್ಲಿದೆ.&lt;/p&gt;&lt;h3&gt;1. ಹೊಟ್ಲಿ ರೈಲು ನಿಲ್ದಾಣ (Hotgi Station)&lt;/h3&gt;&lt;p&gt;ಬಾಗಲಕೋಟೆ - ಮೈಸೂರು ಬಸವ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 17308): ಈ ರೈಲಿನ ಸಂಚಾರ ಸಮಯವನ್ನು 10 ನಿಮಿಷಗಳಷ್ಟು ಮುಂಚಿತಗೊಳಿಸಲಾಗಿದೆ. ಜೂನ್ 1ರಿಂದ ಅನ್ವಯವಾಗುವಂತೆ ಈ ರೈಲು ಸಂಜೆ 6:18ಕ್ಕೆ ಹೊಟ್ಲಿ ನಿಲ್ದಾಣಕ್ಕೆ ಆಗಮಿಸಿ, 6:20ಕ್ಕೆ ಮೈಸೂರಿನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಲಿದೆ.&lt;/p&gt;&lt;h3&gt;2. ಗಾಣಗಾಪುರ ರಸ್ತೆ ನಿಲ್ದಾಣ (Ganagapur Road Station)&lt;/h3&gt;&lt;p&gt;ಹೈದರಾಬಾದ್ - ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 17050): ದತ್ತಾತ್ರೇಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಪ್ರಮುಖವಾಗಿರುವ ಈ ರೈಲಿನ ಸಮಯದಲ್ಲೂ ಮಾರ್ಪಾಡು ಮಾಡಲಾಗಿದೆ. ಜೂನ್ 1ರಿಂದ ಈ ರೈಲು ರಾತ್ರಿ 8:28ಕ್ಕೆ ನಿಲ್ದಾಣಕ್ಕೆ ಆಗಮಿಸಲಿದ್ದು, ರಾತ್ರಿ 8:30ಕ್ಕೆ ಹುಬ್ಬಳ್ಳಿಯ ಕಡೆಗೆ ಹೊರಡಲಿದೆ.&lt;/p&gt;&lt;h3&gt;3. ಕಲಬುರಗಿ ರೈಲು ನಿಲ್ದಾಣ (Kalaburagi Junction)&lt;/h3&gt;&lt;p&gt;ಕಲಬುರಗಿ ನಿಲ್ದಾಣದ ಮೂಲಕ ಹಾದುಹೋಗುವ ಹಲವು ದೂರಪ್ರಯಾಣದ ಮತ್ತು ಸಾಪ್ತಾಹಿಕ ಪ್ರೀಮಿಯಂ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ:&lt;/p&gt;&lt;ul&gt; &lt;li&gt;ಚೆನ್ನೈ ಸೆಂಟ್ರಲ್ - ಸಿಎಸ್&zwnj;ಎಂಟಿ ಮುಂಬೈ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22160): ಜೂನ್ 1ರಿಂದ ಅನ್ವಯವಾಗುವಂತೆ ಈ ರೈಲು ಮಧ್ಯರಾತ್ರಿ ನಂತರ 1:50ಕ್ಕೆ ಕಲಬುರಗಿ ನಿಲ್ದಾಣಕ್ಕೆ ಆಗಮಿಸಿ, 1:53ಕ್ಕೆ ಮುಂಬೈ ಕಡೆಗೆ ಹೊರಡಲಿದೆ.&lt;/li&gt; &lt;li&gt;ಚೆನ್ನೈ ಸೆಂಟ್ರಲ್ - ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22601): ಈ ಸಾಪ್ತಾಹಿಕ ರೈಲಿನ ಹೊಸ ಸಮಯವು ಜೂನ್ 3 ರಿಂದ ಜಾರಿಗೆ ಬರಲಿದ್ದು, ರಾತ್ರಿ 1:45ಕ್ಕೆ ನಿಲ್ದಾಣಕ್ಕೆ ಬಂದು 1:48ಕ್ಕೆ ನಿರ್ಗಮಿಸಲಿದೆ.&lt;/li&gt; &lt;li&gt;ಯಶವಂತಪುರ - ಜೈಪುರ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 20667): ಈ ರೈಲಿನ ಪರಿಷ್ಕೃತ ಸಮಯವು ಜೂನ್ 4 ರಿಂದ ಜಾರಿಗೆ ಬರಲಿದ್ದು, ರಾತ್ರಿ 1:45ಕ್ಕೆ ಕಲಬುರಗಿಗೆ ಆಗಮಿಸಿ, 1:48ಕ್ಕೆ ಜೈಪುರದ ಕಡೆಗೆ ಸಂಚರಿಸಲಿದೆ.&lt;/li&gt; &lt;li&gt;ಯಶವಂತಪುರ - ಅಹಮದಾಬಾದ್ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22690): ಈ ರೈಲಿನ ವೇಳಾಪಟ್ಟಿಯು ಜೂನ್ 7 ರಿಂದ ಬದಲಾಗಲಿದ್ದು, ರಾತ್ರಿ 1:45ಕ್ಕೆ ನಿಲ್ದಾಣಕ್ಕೆ ಬಂದು 1:48ಕ್ಕೆ ಅಹಮದಾಬಾದ್ ಕಡೆಗೆ ತನ್ನ ಪ್ರಯಾಣ ಮುಂದುವರಿಸಲಿದೆ.&lt;/li&gt;&lt;/ul&gt;&lt;h2&gt;ಇತರೆ ನಿಲ್ದಾಣಗಳಲ್ಲಿ ಬದಲಾವಣೆ ಇಲ್ಲ: ರೈಲ್ವೆ ಇಲಾಖೆ ಸ್ಪಷ್ಟನೆ&lt;/h2&gt;&lt;p&gt;ಈ ನಿರ್ದಿಷ್ಟ ರೈಲುಗಳ ವೇಳಾಪಟ್ಟಿಯು ಕೇವಲ ಸೂಚಿಸಲಾದ ನಿಲ್ದಾಣಗಳಲ್ಲಿ ಮಾತ್ರ ಬದಲಾಗಲಿದ್ದು, ಉಳಿದ ಯಾವುದೇ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಸೋಲಾಪುರ ವಿಭಾಗದ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಪ್ರಯಾಣಿಕರಿಗೆ ಪ್ರಮುಖ ಸಲಹೆ&lt;/h2&gt;&lt;p&gt;ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ನಿಮಿಷಗಳ ವ್ಯತ್ಯಾಸವಿರುವುದರಿಂದ ಪ್ರಯಾಣಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ನಿಲ್ದಾಣಕ್ಕೆ ಹೊರಡುವ ಮುನ್ನ ಅಧಿಕೃತ ರೈಲ್ವೆ ಮಾಹಿತಿ ಕೇಂದ್ರಗಳ ಮೂಲಕ ಅಥವಾ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (NTES) ಮೊಬೈಲ್ ಆ್ಯಪ್ ಹಾಗೂ ಐಆರ್&zwnj;ಸಿಟಿಸಿ (IRCTC) ಪೋರ್ಟಲ್ ಮೂಲಕ ರೈಲುಗಳ ನವೀಕೃತ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ವಿನಂತಿಸಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-railways-solapur-division-revises-train-timetables-at-kalaburagi-ganagapur-road-hotgi-stations-from-june1-gdp/articleshow-dx152ao"/>
        </item>
        <item>
            <title><![CDATA[ಅಯ್ಯಯ್ಯೋ! ಪೊಲೀಸ್ರೇ ಹೆಣ ಬಿದ್ದಿದೆ ಬನ್ನಿ ಎಂದ ಮಹಿಳೆ, ಹೋಗಿ ನೋಡಿದರೆ ಸತ್ತು ಬಿದ್ದಿರೋದು ಹೆಗ್ಗಣ!]]></title>
            <link>https://kannada.asianetnews.com/karnataka-districts/kalaburagi-woman-call-to-112-cops-win-hearts-by-removing-dead-bandicoot-rat-sat/articleshow-grcgct6</link>
            <guid isPermaLink="true">https://kannada.asianetnews.com/karnataka-districts/kalaburagi-woman-call-to-112-cops-win-hearts-by-removing-dead-bandicoot-rat-sat/articleshow-grcgct6</guid>
            <pubDate>Sun, 24 May 2026 15:52:24 +0530</pubDate>
            <description><![CDATA[&lt;p&gt;ಅಯ್ಯಯ್ಯೋ ಪೊಲೀಸರೇ ನಮ್ಮ ಮನೆಯ ಬಳಿ ಯಾವುದೇ ಹೆಣ ಬಿದ್ದಿರಬೇಕು. ಕೊಳೆತು ಗಬ್ಬು ವಾಸನೆ ಬರ್ತಿದೆ ಒಮ್ಮೆ ಬಂದುಹೋಗಿ ಎಂದು ಮಹಿಳೆ ಕರೆ ಮಾಡಿದ್ದಾರೆ. ಪೊಲೀಸರು ಹೋಗಿ ನೋಡಿದರೆ ಅಲ್ಲಿ ಸತ್ತು ಬಿದ್ದಿದ್ದು ಹೆಗ್ಗಣ ಎನ್ನುವುದು ಗೊತ್ತಾಗಿದೆ. ಮುಂದೇನಾಯ್ತು ನೀವೇ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kscqyrwmfz58vrc6kcsz9qm3,imgname-kalaburagi-police-1779617981332.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಮೇ 24): ಸ&lt;/strong&gt;ಮಾಜದಲ್ಲಿ ಯಾವುದೇ ಅನಾಹುತ ನಡೆದು ಹೆಣ ಬಿದ್ದರೂ ಪೊಲೀಸರೇ ಬರಬೇಕು.. ಕೊನೆಗೆ ಮನೆ ಮುಂದೆ ಹೆಗ್ಗಣ ಸತ್ತು ಬಿದ್ದರೂ ಆ ಹೆಗ್ಗಣ ಎತ್ತಲು ಪೊಲೀಸರೇ ಬರಬೇಕು! - ಇದು ಸದ್ಯ ಕಲಬುರಗಿ ನಗರದಲ್ಲಿ ಸಾರ್ವಜನಿಕರು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ, ಪೊಲೀಸರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿರುವ ಪರಿ. ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಮಾಡಬೇಕಿದ್ದ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ಪೊಲೀಸ್ ಸಿಬ್ಬಂದಿಯ ಮಾನವೀಯ ನಡೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h3&gt;&lt;strong&gt;ಮೂರು ದಿನಗಳಿಂದ ನಾರುತ್ತಿದ್ದ ಹೆಗ್ಗಣ, ಪಾಲಿಕೆಯ ಅತಿಯಾದ ನಿರ್ಲಕ್ಷ್ಯ!&lt;/strong&gt;&lt;/h3&gt;&lt;p&gt;ಕಲಬುರಗಿ ನಗರದ ಖಾದ್ರಿ ಚೌಕ್ ಬಳಿಯ ಮನೆಯೊಂದರ ಮುಂದೆ ಕಳೆದ ಮೂರು ದಿನಗಳ ಹಿಂದೆ ದೊಡ್ಡ ಹೆಗ್ಗಣವೊಂದು ಸತ್ತು ಬಿದ್ದಿತ್ತು. ಬಿಸಿಲಿನ ತಾಪಕ್ಕೆ ಸತ್ತ ಹೆಗ್ಗಣ ಸಂಪೂರ್ಣವಾಗಿ ಕೊಳೆತು ಹೋಗಿ, ಇಡೀ ಬಡಾವಣೆಯ ತುಂಬಾ ಅಸಹನೀಯ ವಾಸನೆ ಹರಡಿತ್ತು. ಇದರಿಂದ ಕಂಗಾಲಾದ ಆ ಮನೆಯ ಮಹಿಳೆ ತಕ್ಷಣವೇ ಕಲಬುರಗಿ ಮಹಾನಗರ ಪಾಲಿಕೆಯ (Mahanagara Palike) ಸಂಬಂಧಪಟ್ಟ ಅಧಿಕಾರಿ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಕರೆ ಮಾಡಿ ಸತ್ತ ಜೀವಿ ಇರುವುದನ್ನು ವಿಲೇವಾರಿ ಮಾಡುವಂತೆ ತಿಳಿಸಿದ್ದರು. ಆದರೆ, ಅಧಿಕಾರಿಗಳು ಮಾತ್ರ 'ಇವತ್ತು ಬರ್ತೀವಿ, ನಾಳೆ ಬರ್ತೀವಿ' ಎನ್ನುತ್ತಾ ಮೂರು ದಿನಗಳ ಕಾಲ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಕೊನೆಗೆ '112' ಸಹಾಯವಾಣಿಗೆ ಕರೆ ಮಾಡಿದ ಮಹಿಳೆ!&lt;/strong&gt;&lt;/h2&gt;&lt;p&gt;ವಾಸನೆ ತಡೆಯಲಾರದೆ ಹಾಗೂ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬೇಸತ್ತ ಮಹಿಳೆ, ಕೊನೆಗೆ ಯಾವುದೇ ದಾರಿ ಕಾಣದೆ ತಕ್ಷಣವೇ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ ಆರ್.ಎಸ್.ಎಸ್ 112 (ERSS 112) ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಇನ್ಸಿಡೆಂಟ್ ರಿಪೋರ್ಟ್ ಆದ ತಕ್ಷಣವೇ ಕಾರ್ಯಾಚರಣೆಗೆ ಇಳಿಯುವ 112 ಸಿಬ್ಬಂದಿ, ಕರೆಯ ಜಾಡು ಹಿಡಿದು ಖಾದ್ರಿ ಚೌಕ್&zwnj;ನ ಸದರಿ ಮಹಿಳೆಯ ಮನೆಗೆ ದೌಡಾಯಿಸಿದ್ದಾರೆ.&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಬಂದ ಪೊಲೀಸರಿಗೆ ಕಾದಿತ್ತು ದೊಡ್ಡ ಶಾಕ್!&lt;/strong&gt;&lt;/h2&gt;&lt;p&gt;ಯಾವುದೋ ದೊಡ್ಡ ಗಲಾಟೆ ಅಥವಾ ಗಂಭೀರ ಪ್ರಕರಣ ಇರಬಹುದೆಂದು ಸೈರನ್ ಹಾಕಿಕೊಂಡು ಬಂದ ಪೊಲೀಸರಿಗೆ ಸ್ಥಳಕ್ಕೆ ಬಂದಾಗ ಅಸಲಿ ಶಾಕ್ ಕಾದಿತ್ತು. ಅಲ್ಲಿ ಯಾವುದೇ ಅಪರಾಧ ನಡೆದಿರಲಿಲ್ಲ, ಬದಲಾಗಿ ಮೂರು ದಿನಗಳಿಂದ ಸತ್ತು ಕೊಳೆಯುತ್ತಿದ್ದ ಹೆಗ್ಗಣ ಬಿದ್ದಿತ್ತು. ತುರ್ತು ಸೇವೆಗೆ ಬರುವ ಪೊಲೀಸರಿಗೆ ಇದು ತಮ್ಮ ವ್ಯಾಪ್ತಿಯ ಕೆಲಸವಲ್ಲದಿದ್ದರೂ, ಸ್ಥಳದಲ್ಲಿದ್ದ ಮಹಿಳೆಯ ಅಸಹಾಯಕತೆ ಮತ್ತು ಕಷ್ಟವನ್ನು ಕಂಡು ಅವರು ಸುಮ್ಮನೆ ಮರಳಲಿಲ್ಲ.&lt;/p&gt;&lt;p&gt;'ಯಾರೋ ಮಾಡಿದ ತಪ್ಪಿಗೆ ಈ ಜನ ಕಷ್ಟಪಡಬಾರದು, ಹೆಂಗೂ ಸ್ಥಳಕ್ಕೆ ಬಂದಾಯ್ತಲ್ಲ ಮಹಿಳೆಯ ಕಷ್ಟ ನಿವಾರಣೆ ಮಾಡೋಣ' ಎಂದು ಯೋಚಿಸಿದ ಸಿಬ್ಬಂದಿ, ತಾವೇ ಖುದ್ದಾಗಿ ಮುನ್ನಡೆದು ಆ ಸತ್ತ ಹೆಗ್ಗಣವನ್ನು ಎತ್ತಿ, ಸುರಕ್ಷಿತವಾಗಿ ಡಿಸ್ಪ್ಯಾಚ್ (ವಿಲೇವಾರಿ) ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಪಾಲಿಕೆಗೆ ಧಿಕ್ಕಾರ, ಪೊಲೀಸರಿಗೆ ಜಯಕಾರ!&lt;/strong&gt;&lt;/h3&gt;&lt;p&gt;ತಮ್ಮದಲ್ಲದ ಕೆಲಸವಾಗಿದ್ದರೂ ಸಾರ್ವಜನಿಕರ ಆರೋಗ್ಯ ಮತ್ತು ನೆಮ್ಮದಿಯ ದೃಷ್ಟಿಯಿಂದ ತಾವೇ ಮುಂದೆ ನಿಂತು ಸತ್ತ ಹೆಗ್ಗಣ ಎತ್ತಿದ ಪೊಲೀಸರ ಈ ಅದ್ಭುತ ಕಾರ್ಯಕ್ಕೆ ಇಡೀ ಕಲಬುರಗಿ ಜನತೆ ಪ್ರಶಂಸೆಗಳ ಸುರಿಮಳೆಗೈದಿದೆ. ಇದೇ ವೇಳೆ, ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡಿ, ಸಣ್ಣದೊಂದು ಸತ್ತ ಪ್ರಾಣಿಯನ್ನು ವಿಲೇವಾರಿ ಮಾಡಲಾಗದ ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖಾಕಿ ಪಡೆಯ ಈ ಜನಸ್ನೇಹಿ ನಡೆ ಇಲಾಖೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kalaburagi-woman-call-to-112-cops-win-hearts-by-removing-dead-bandicoot-rat-sat/articleshow-grcgct6"/>
        </item>
        <item>
            <title><![CDATA[kalaburagi: ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತ]]></title>
            <link>https://kannada.asianetnews.com/gallery/karnataka-districts/kalaburagi-rain-effect-bridge-connecting-chimmanachoda-naranal-villages-collapses-mrq-hac4zi0</link>
            <guid isPermaLink="true">https://kannada.asianetnews.com/gallery/karnataka-districts/kalaburagi-rain-effect-bridge-connecting-chimmanachoda-naranal-villages-collapses-mrq-hac4zi0</guid>
            <pubDate>Sun, 07 Jun 2026 08:16:19 +0530</pubDate>
            <description><![CDATA[&lt;p&gt;ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತವಾಗಿದೆ. ಸೇತುವೆ ಕುಸಿತಕ್ಕೆ ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktfzayzttg9qr1hqzy048jwy,imgname-chincholli--1--1780800125945.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತವಾಗಿದೆ. ಸೇತುವೆ ಕುಸಿತಕ್ಕೆ ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತವಾಗಿದೆ. ಇದರಿಂದ ಎರಡು ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಸೇತುವೆ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ಬಳಿಯಲ್ಲಿ ಸೇತುವೆ ಕುಸಿತವಾಗಿದೆ. ಗ್ರಾಮಸ್ಥರು ಸೇತುವೆ ಕುಸಿತದ ದೃಶ್ಯಗಳನ್ನು ಮೊಬೈಲ್&zwnj;ನಲ್ಲಿ ಸರೆಹಿಡಿದುಕೊಂಡಿದ್ದಾರೆ. ಸೇತುವೆ ಕುಸಿತಕ್ಕೆ ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಬೀದರ್&zwnj;ನ ಹುಮ್ನಾಬಾದ್ ಮೂಲಕ ಚಿಂಚೋಳಿಗೆ ಹೊರಟಿದ್ದ ಬಸ್ ಕೆಲವೇ ಕ್ಷಣದಲ್ಲಿ ರಸ್ತೆ ದಾಟಬೇಕಾಗಿತ್ತು. ಆದರೆ, ದಿಢೀರ್&zwnj; ರಸ್ತೆ ಕುಸಿದ ಪರಿಣಾಮ ಚಾಲಕ ಬ್ರೇಕ್ ಹಾಕಿ ಅನಾಹುತ ತಪ್ಪಿಸಿದ್ದಾನೆ. ಒಂದು ವೇಳೆ ಬಸ್ ಸೇತುವೆ ಮೇಲೆ ಸಂಚರಿಸಿದ್ರೆ ದೊಡ್ಡ ಅನಾಹುತ ಉಂಟಾಗುತ್ತಿತ್ತು.&lt;/p&gt;]]></content:encoded>
            <category>kalaburagi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/kalaburagi-rain-effect-bridge-connecting-chimmanachoda-naranal-villages-collapses-mrq-hac4zi0"/>
        </item>
        <item>
            <title><![CDATA[ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ಆರಂಭಿಸಲು ಒತ್ತಾಯ, 16 ಗಂಟೆಗಳ ರಸ್ತೆ ಪ್ರಯಾಣಕ್ಕೆ ಮುಕ್ತಿ ಸಿಗುವುದೇ?]]></title>
            <link>https://kannada.asianetnews.com/karnataka-districts/kalaburagi-mangaluru-flight-service-demanded-star-air-officials-meet-regional-stakeholders-gdp/articleshow-ktqu3ft</link>
            <guid isPermaLink="true">https://kannada.asianetnews.com/karnataka-districts/kalaburagi-mangaluru-flight-service-demanded-star-air-officials-meet-regional-stakeholders-gdp/articleshow-ktqu3ft</guid>
            <pubDate>Thu, 11 Jun 2026 19:10:15 +0530</pubDate>
            <description><![CDATA[ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ವಿಸ್ತರಿಸಲು ಸ್ಥಳೀಯ ಸಂಘಟನೆಗಳು ಸ್ಟಾರ್ ಏರ್ ಸಂಸ್ಥೆಯೊಂದಿಗೆ ಚರ್ಚಿಸಿವೆ. ಈ ಸೇವೆ ಆರಂಭವಾದರೆ 16 ಗಂಟೆಗಳ ಪ್ರಯಾಣದ ಅವಧಿ ತಪ್ಪಲಿದ್ದು, ಪ್ರವಾಸೋದ್ಯಮ ಮತ್ತು ವಾಣಿಜ್ಯಕ್ಕೆ ಅನುಕೂಲವಾಗಲಿದೆ. ಜಾಗತಿಕ ಇಂಧನ ಬೆಲೆ ಏರಿಕೆಯ ಕಾರಣ ಸದ್ಯಕ್ಕೆ ವಿಳಂಬವಾದರೂ, ಸಂಸ್ಥೆಯು ಸಕಾರಾತ್ಮಕ ಭರವಸೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktph4c4mp0z3w2305qacggev,imgname-kalaburagi-airport-flight-traffic-start-1781020110996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ - ಬೆಂಗಳೂರು ನಡುವಿನ ವಿಮಾನ ಸಂಚಾರವು ಇತ್ತೀಚೆಗಷ್ಟೇ ಪುನರಾರಂಭಗೊಂಡಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನಿರಾಳತೆ ತಂದಿದೆ. ಇದರ ಬೆನ್ನಲ್ಲೇ, ಈ ವಿಮಾನ ಸೇವೆಯನ್ನು ಕರಾವಳಿಯ ಪ್ರಮುಖ ನಗರವಾದ ಮಂಗಳೂರಿನವರೆಗೂ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಕುರಿತು ಕಲಬುರಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಹಾಗೂ ದಕ್ಷಿಣ ಕನ್ನಡ ಸಂಘದ ಪದಾಧಿಕಾರಿಗಳು ಸ್ಟಾರ್ ಏರ್ (Star Air) ವಿಮಾನ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಹತ್ವದ ಚರ್ಚೆ ನಡೆಸಿ, ಮನವಿ ಸಲ್ಲಿಸಿದ್ದಾರೆ.&lt;/p&gt;&lt;p&gt;ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಡೆದ ಈ ಸಭೆಯಲ್ಲಿ, ಸ್ಟಾರ್ ಏರ್&zwnj;ಲೈನ್ಸ್ ಸಂಸ್ಥೆಯ ವಿಮಾನ ನಿಲ್ದಾಣಗಳ ನಿರ್ವಹಣಾ ಮುಖ್ಯಸ್ಥರಾದ ಸಿ.ಎ. ಬೋಪಣ್ಣ ಹಾಗೂ ಮಾರುಕಟ್ಟೆ ವಿಭಾಗದ ಮೊಹಮ್ಮದ್ ಸೊಹೈಲ್ ಅವರೊಂದಿಗೆ ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಮತ್ತು ಕಲಬುರಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಅವರು ಸುದೀರ್ಘ ಸಮಾಲೋಚನೆ ನಡೆಸಿದರು.&lt;/p&gt;&lt;h2&gt;16 ಗಂಟೆಗಳ ಬಸ್ ಪ್ರಯಾಣಕ್ಕೆ ಮುಕ್ತಿ ಸಿಗುವುದೇ?&lt;/h2&gt;&lt;p&gt;ಪ್ರಸ್ತುತ ಕಲಬುರಗಿಯಿಂದ ಕರಾವಳಿ ಭಾಗಕ್ಕೆ ಇರುವ ಪ್ರಯಾಣದ ದಟ್ಟಣೆ ಹಾಗೂ ಸಾರಿಗೆ ವ್ಯವಸ್ಥೆಯ ಸವಾಲುಗಳನ್ನು ನಿಯೋಗವು ವಿಮಾನ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದಿತು.&lt;/p&gt;&lt;p&gt;&lt;strong&gt;ದೀರ್ಘಾವಧಿಯ ಪ್ರಯಾಣ: &lt;/strong&gt;ಕಲಬುರಗಿಯಿಂದ ನಿತ್ಯ ಐದಾರು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಮಂಗಳೂರಿಗೆ ಸಂಚರಿಸುತ್ತಿವೆ. ಆದರೆ, ಬಸ್ ಮೂಲಕ ಪ್ರಯಾಣಿಸಲು ಬರೋಬ್ಬರಿ 16 ಗಂಟೆಗಳ ಸುದೀರ್ಘ ಅವಧಿ ಬೇಕಾಗುತ್ತಿದೆ. ಇದರಿಂದ ರೋಗಿಗಳು, ವೃದ್ಧರು ಹಾಗೂ ಉದ್ಯಮಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಒನ್ ಸ್ಟಾಪ್ ವಿಮಾನ ಸೇವೆಗೆ ಪ್ರಸ್ತಾಪ:&lt;/strong&gt; ಕಲಬುರಗಿಯಿಂದ ಬೆಂಗಳೂರು ಮೂಲಕವಾಗಿ ಮಂಗಳೂರಿಗೆ (ಒನ್ ಸ್ಟಾಪ್ ಫ್ಲೈಟ್) ವಿಮಾನ ಸಂಪರ್ಕ ಕಲ್ಪಿಸಿದರೆ ಕರಾವಳಿ ಹಾಗೂ ಕೇರಳದ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ವರದಾನವಾಗಲಿದೆ ಎಂದು ಅಧಿಕಾರಿಗಳಿಗೆ ವಿವರಿಸಲಾಯಿತು.&lt;/p&gt;&lt;h2&gt;ಪ್ರವಾಸೋದ್ಯಮ, ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರಕ್ಕೆ ಆನೆಬಲ&lt;/h2&gt;&lt;p&gt;ಕರಾವಳಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ನಡುವಿನ ಒಡನಾಟವನ್ನು ಉಲ್ಲೇಖಿಸಿ ಡಾ. ಸದಾನಂದ ಪೆರ್ಲ ಮತ್ತು ನರಸಿಂಹ ಮೆಂಡನ್ ಅವರು ವಿಮಾನ ಸೇವೆಯ ಅಗತ್ಯತೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಉತ್ತರ ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಶಿಕ್ಷಣ ಹಾಗೂ ಪ್ರವಾಸೋದ್ಯಮದ ನಿಮಿತ್ತ ಕರಾವಳಿ ಭಾಗಕ್ಕೆ ನಿರಂತರವಾಗಿ ತೆರಳುತ್ತಿದ್ದಾರೆ. ಜೊತೆಗೆ ಕರಾವಳಿ ಮೂಲದ ನೂರಾರು ಉದ್ಯಮಿಗಳು ಉತ್ತರ ಕರ್ನಾಟಕದಲ್ಲಿ ನೆಲೆಸಿದ್ದು, ಸ್ವಂತ ಊರುಗಳಿಗೆ ಸಂಚರಿಸಲು ಸೂಕ್ತ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ. ವಿಮಾನ ಸೇವೆ ಆರಂಭವಾದರೆ ಉಭಯ ಪ್ರಾಂತ್ಯಗಳ ವಾಣಿಜ್ಯ ವ್ಯವಹಾರಗಳಿಗೂ ಹೆಚ್ಚಿನ ವೇಗ ಸಿಗಲಿದೆ.&lt;/p&gt;&lt;h2&gt;ಜಾಗತಿಕ ಬಿಕ್ಕಟ್ಟು ಹಾಗೂ ವಿಮಾನ ಸಂಸ್ಥೆಯ ಪ್ರತಿಕ್ರಿಯೆ&lt;/h2&gt;&lt;p&gt;ನಿಯೋಗದ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸ್ಟಾರ್ ಏರ್ ಸಂಸ್ಥೆಯ ವಿಮಾನ ನಿಲ್ದಾಣಗಳ ನಿರ್ವಹಣಾಧಿಕಾರಿ ಸಿ.ಎ. ಬೋಪಣ್ಣ ಅವರು ಪ್ರಸ್ತುತ ಇರುವ ಕೆಲವು ತಾಂತ್ರಿಕ ಹಾಗೂ ಜಾಗತಿಕ ಸವಾಲುಗಳನ್ನು ಹಂಚಿಕೊಂಡರು.&lt;/p&gt;&lt;p&gt;ಪೌರಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಇಂಧನ (Aviation Turbine Fuel) ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಈ ಕಾರಣದಿಂದಾಗಿ ಸದ್ಯಕ್ಕೆ ಹೊಸ ಮಾರ್ಗಗಳಿಗೆ ವಿಮಾನ ಸೇವೆ ವಿಸ್ತರಿಸುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.&lt;/p&gt;&lt;h2&gt;ಕಲಬುರಗಿಯಿಂದ ಮುಂಬೈಗೆ ಮುಂದಿನ ತಿಂಗಳು ಸಂಚಾರ ಸಾಧ್ಯತೆ&lt;/h2&gt;&lt;p&gt;ಬಹುತೇಕ ಮುಂದಿನ ತಿಂಗಳಿನಿಂದ ಮುಂಬೈ ನಗರಕ್ಕೆ ಕಲಬುರಗಿಯಿಂದ ಸಂಚಾರ ಆರಂಭಿಸಲು ಸಂಸ್ಥೆ ಚಿಂತನೆ ನಡೆಸುತ್ತಿದೆ. ತದನಂತರ, ಪ್ರಯಾಣಿಕರ ದಟ್ಟಣೆ ಮತ್ತು ಮಾರುಕಟ್ಟೆಯ ಸಾಧ್ಯತೆಗಳನ್ನು ಸಮೀಕ್ಷೆ ನಡೆಸಿ ಮಂಗಳೂರು ಸೇರಿದಂತೆ ಇತರ ಹೊಸ ಮಾರ್ಗಗಳಲ್ಲಿ ಸೇವೆ ಆರಂಭಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.&lt;/p&gt;&lt;p&gt;ಈ ಪ್ರಮುಖ ಸಮಾಲೋಚನಾ ಸಭೆಯಲ್ಲಿ ಕಲಬುರಗಿಯ ಖ್ಯಾತ ಉದ್ಯಮಿ ಮಹೇಶ್ ಎಂ. ಕಡೇಚೂರ್ ಅವರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.&lt;/p&gt;&lt;p&gt;ಕಲಬುರಗಿ ಮತ್ತು ಮಂಗಳೂರು ನಡುವೆ ವಿಮಾನ ಸಂಪರ್ಕ ಏರ್ಪಟ್ಟರೆ ಅದು ಕೇವಲ ಸಮಯದ ಉಳಿತಾಯವಷ್ಟೇ ಅಲ್ಲದೆ, ಕಲ್ಯಾಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಜಾಗತಿಕ ತೈಲ ಬಿಕ್ಕಟ್ಟಿನ ನಡುವೆಯೂ ಸ್ಟಾರ್ ಏರ್ ಸಂಸ್ಥೆಯು ಸಕಾರಾತ್ಮಕ ಭರವಸೆ ನೀಡಿರುವುದು ಈ ಭಾಗದ ಜನರಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kalaburagi-mangaluru-flight-service-demanded-star-air-officials-meet-regional-stakeholders-gdp/articleshow-ktqu3ft"/>
        </item>
        <item>
            <title><![CDATA[ಹಿಂದುಗಳ ಮೇಲೆ ದೌರ್ಜನ್ಯ ನಡೆದರೆ ಠಾಣೆಗೂ ಮುತ್ತಿಗೆ: ಬಿ.ವೈ.ವಿಜಯೇಂದ್ರ ಎಚ್ಚರಿಕೆ]]></title>
            <link>https://kannada.asianetnews.com/karnataka-districts/by-vijayendra-warns-protests-over-attacks-on-hindus-kalaburagi-gvd/articleshow-m043ytg</link>
            <guid isPermaLink="true">https://kannada.asianetnews.com/karnataka-districts/by-vijayendra-warns-protests-over-attacks-on-hindus-kalaburagi-gvd/articleshow-m043ytg</guid>
            <pubDate>Tue, 02 Jun 2026 19:11:36 +0530</pubDate>
            <description><![CDATA[&lt;p&gt;ರಾಜ್ಯದ ಯಾವ ಮೂಲೆಯಲ್ಲೆ ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಪ್ರತಿಭಟಿಸುತ್ತೇವೆ, ಕೇಸ್&zwnj; ಮಾಡದೆ ಹೋದರೆ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4wp2b5v03z6v8krfh3yrqaf,imgname-gnghmn-1757604293819.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಜೂ.02):&lt;/strong&gt; ರಾಜ್ಯದ ಯಾವ ಮೂಲೆಯಲ್ಲೆ ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಪ್ರತಿಭಟಿಸುತ್ತೇವೆ, ಕೇಸ್&zwnj; ಮಾಡದೆ ಹೋದರೆ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ. ಕಾಂಗ್ರೆಸ್&zwnj; ಹಿಂದು ವಿರೋಧಿ, ಕಳೆದ 3 ವರ್ಷಗಳ ಕಾಂಗ್ರೆಸ್&zwnj; ಆಡಳಿತದಲ್ಲಿ ರಾಜ್ಯದಲ್ಲಿ ನೂರಾರು ಹಿಂದು ವಿರೋಧಿ ಕೆಲಸಗಳೇ ಆಗಿವೆ ಎಂದು ಕಾಂಗ್ರೆಸ್&zwnj; ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಬಿಜೆಪಿ ಕಲಬುರಗಿ ಘಟಕ ಮಿನಿ ವಿಧಾನಸೌಧ ಕಚೇರಿ ಎದುರು ರಾಜ್ಯದ ಕಾಂಗ್ರೆಸ್ ಸರ್ಕಾರವು ಆಳಂದ ನಗರದ ಲಾಡ್ಲೇ ಮಶಾಕ್&zwnj;, ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಅಡ್ಡಿಪಡಿಸಿದವರ ಮೇಲಿನ ಕೇಸ್ ವಾಪಸ್ ಪಡೆದಿರುವುದರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.&lt;/p&gt;&lt;p&gt;ಈಚೆಗೆ ದಕ್ಷಿಣ ಕನ್ನಡದಲ್ಲಿ ಮಧ್ಯರಾತ್ರಿ ಹಿಂದು ಕಾರ್ಯಕರ್ತನ ಮನೆಗೆ ಹೋಗಿ ಪೊಲೀಸರು ಫೋಟೋ ತೆಗೆದು ವಶಕ್ಕೆ ಪಡೆದಿದ್ದಾರೆ, ಇಂತಹ ಹಲವು ಘಟನೆಗಳಾಗುತ್ತಿವೆ. ಇವನ್ನೆಲ್ಲ ನೋಡಿ ಸುಮ್ಮನಿರೋದಿಲ್ಲ. ರಾಜ್ಯಾದ್ಯಂತ ಎಲ್ಲೇ ಇಂತಹ ಘಟನೆಗಳಾದರೂ ತಕ್ಷಣ ಪ್ರತಿಭಟಿಸುವಂತೆ ಬಿಜೆಪಿ ಜಿಲ್ಲಾ ಘಟಕಗಳಿಗೆ ಕರೆ ನೀಡಿದ ವಿಜಯೇಂದ್ರ, ಕೇಸ್&zwnj; ದಾಖಲಿಸಲು ಹಿಂದೆ ಮುಂದೆ ಪೊಲೀಸರು ನೋಡಿದರೆ ಠಾಣೆಗೂ ಮುತ್ತಿಗೆ ಹಾಕುವಂತೆ ಕರೆ ನೀಡಿದರು.&lt;/p&gt;&lt;p&gt;2028ರಲ್ಲಿ ಬಿಜೆಪಿಯೇ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ನಿಶ್ಚಿತ, ಬಿಜೆಪಿ ಸರ್ಕಾರ ರಚನೆಯಾದ 24 ಗಂಟೆಯೊಳಗೆ ಎಲ್ಲಾ ಹಿಂದು ಕಾರ್ಯಕರ್ತರ ಮೇಲೆ ಹಾಕಲಾಗಿರುವ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಕೇಸ್&zwnj;ಗಳನ್ನು ವಾಪಸ್&zwnj; ಪಡೆಯುತ್ತೇವೆಂದು ಘೋಷಿಸಿದರು.&lt;/p&gt;&lt;p&gt;ಆಳಂದ ಲಾಡ್ಲೆ ಮಶಾಕ್&zwnj; ದರ್ಗಾ, ರಾಘವ ಚೈತನ್ಯ ಶಿವಲಿಂಗ ಪೂಜೆಯ ವಿವಾದ, ಗಲಭೆಯ ಕೇಸ್&zwnj;ಗಳನ್ನು ಸರ್ಕಾರ ವಾಪಸ್ ಪಡೆದುದರ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಯಲಿದೆ. ಕೋರ್ಟ್&zwnj; ಮೆಟ್ಟಿಲು ಹತ್ತಿ ನ್ಯಾಯ ಕೋರುತ್ತೇವೆ. ಕಲಬುರಗಿಗೆ ಬಂದು ಗಿಮಿಕ್&zwnj; ಮಾಡೋದಲ್ಲ, ಇದು ನಮ್ಮ ಪ್ರಾಮಾಣಿಕ ಹೋರಾಟ ಅನ್ನೋದನ್ನು ಯಾರೂ ಮರೆಯಬಾರದು ಎಂದು ವಿಜಯೇಂದ್ರ ಹೇಳಿದರು.&lt;/p&gt;&lt;h2&gt;&lt;strong&gt;ಕೇಸ್&zwnj; ವಾಪಸ್&zwnj;&lt;/strong&gt;&lt;/h2&gt;&lt;p&gt;ಆಳಂದದಲ್ಲಿ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜಿಸಲು ತೆರಳುತ್ತಿದ್ದ ಹಿಂದುಗಳ ಮೇಲೆ ಮುಸ್ಲಿಂ ಸಮುದಾಯದ ಗೂಂಡಾಗಳು ದಾಳಿ ನಡೆಸಿದ್ದನ್ನು ಅಲ್ಲಿನ ಶಾಸಕ ಬಿ.ಆರ್&zwnj;.ಪಾಟೀಲ್&zwnj; ಖಂಡಿಸಬೇಕಿತ್ತು, ಅದನ್ನು ಬಿಟ್ಟು ಯು.ಟಿ.ಖಾದರ್&zwnj; ಪತ್ರ ಮುಂದೆ ಮಾಡಿ ಗೂಂಡಾಗಳ ಮೇಲಿನ ಕೇಸ್&zwnj; ವಾಪಸ್&zwnj; ಮಾಡಿಸಿದ್ದಾರೆ. ಇಂತಹವರು ಹಿಂದುಗಳು ಎನ್ನಲಾದೀತೆ? ಹಿಂದುಗಳು ಇನ್ನಾದರೂ ಎಚ್ಚರವಾಗಬೇಕು, ಹಿಂದುಗಳಿಗೆ ಎಲ್ಲೇ ಸಂಕಷ್ಟ ಎದುರಾದರೂ ಬಿಜೆಪಿಯ ರಾಜ್ಯ, ಜಿಲ್ಲಾ ಮುಖಂಡರು, ಹಾಲಿ, ಮಾಜಿ ಶಾಸಕರು ಅಲ್ಲಿ ಧಾವಿಸುತ್ತೇವೆ, ನೊಂದ ಹಿಂದುಗಳ ನೆರವಿಗೆ ನಿಲ್ಲುತ್ತೇವೆಂದು ಹೇಳಿದರು.&lt;/p&gt;]]></content:encoded>
            <category>kalaburagi</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/by-vijayendra-warns-protests-over-attacks-on-hindus-kalaburagi-gvd/articleshow-m043ytg"/>
        </item>
        <item>
            <title><![CDATA[Basavaraj Patil Marum victory: ಮಹಾರಾಷ್ಟ್ರ ವಿಧಾನಪರಿಷತ್‌ಗೆ ಕಲಬುರಗಿಯ ಕನ್ನಡಿಗ ಆಯ್ಕೆ]]></title>
            <link>https://kannada.asianetnews.com/politics/basavaraj-patil-from-kalaburagi-elected-to-maharashtra-legislative-council-rav/articleshow-n0ii7kz</link>
            <guid isPermaLink="true">https://kannada.asianetnews.com/politics/basavaraj-patil-from-kalaburagi-elected-to-maharashtra-legislative-council-rav/articleshow-n0ii7kz</guid>
            <pubDate>Wed, 24 Jun 2026 07:52:51 +0530</pubDate>
            <description><![CDATA[ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಬಸವರಾಜ ಪಾಟೀಲ ಮರುಮ್ ಅವರು ಧಾರಾಶಿವ-ಲಾತೂರ-ಬೀಡ ವಿಧಾನ ಪರಿಷತ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆಳಂದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಅವರ ಸಹೋದರರಾದ ಇವರ ಗೆಲುವನ್ನು ಆಳಂದದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kvvpvjpk4y0wwvmvsdyyf0s0,imgname----------------------82--1782267628243.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆಳಂದ (ಕಲಬುರಗಿ):&lt;/strong&gt; &amp;nbsp;ಆಳಂದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಸಹೋದರ, ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಬಸವರಾಜ ಪಾಟೀಲ ಮರುಮ್(Basavaraj Patil) ಅವರು ಧಾರಾಶಿವ- ಲಾತೂರ- ಬೀಡ ಜಿಲ್ಲೆಗಳ ಸ್ಥಳೀಯ ಸಂಘ&ndash;ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದಲ್ಲಿ 850 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.&lt;/p&gt;&lt;h2&gt;ಆಳಂದಲ್ಲಿ ವಿಜಯೋತ್ಸವ&lt;/h2&gt;&lt;p&gt;ಈ ಗೆಲುವು ಆಳಂದದಲ್ಲಿ ಸಂಭ್ರಮ ಮತ್ತು ಸಡಗರ ಮೂಡಿಸಿದ್ದು, ಕುಟುಂಬಸ್ಥರು, ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉತ್ಸಾಹದಿಂದ ವಿಜಯೋತ್ಸವ ಆಚರಿಸಿದರು. 2 ಬಾರಿ ಶಾಸಕರಾಗಿ ಹಾಗೂ ಒಮ್ಮೆ ಸಚಿವರಾಗಿ ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಬಸವರಾಜ ಪಾಟೀಲ ಮರುಮ್ ಅವರು, ಈ ಗೆಲುವಿನ ಮೂಲಕ ವಿಧಾನ ಪರಿಷತ್ ಸದಸ್ಯರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.&lt;/p&gt;&lt;h3&gt;ಕುಟುಂಬಕ್ಕೆ ಹೆಮ್ಮೆ&lt;/h3&gt;&lt;p&gt;ವಿಜಯೋತ್ಸವದಲ್ಲಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್, &lsquo;ನಮ್ಮ ಮನೆತನದ ಕುಡಿ ಶಾಸಕರಾಗಿ, ಸಚಿವರಾಗಿ ಅನುಪಮ ಸೇವೆ ಸಲ್ಲಿಸಿ, ಈಗ ಮತ್ತೊಮ್ಮೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವುದು ನಮ್ಮ ಇಡೀ ಕುಟುಂಬಕ್ಕೆ ಅಪಾರ ಹೆಮ್ಮೆ ಮತ್ತು ಸಂತಸ ತಂದಿದೆ. ಅವರ ಜನಪ್ರಿಯತೆ ಮತ್ತು ಸಮಾಜ ಸೇವೆ ಮತದಾರರು ಮತ್ತೊಮ್ಮೆ ಗುರುತಿಸಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ&rsquo; ಎಂದು ಭಾವುಕರಾಗಿ ಹೇಳಿದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/basavaraj-patil-from-kalaburagi-elected-to-maharashtra-legislative-council-rav/articleshow-n0ii7kz"/>
        </item>
        <item>
            <title><![CDATA[ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಶಾಲೆ ಮೇಲ್ಛಾವಣಿ ಕಾಂಕ್ರೀಟ್‌ ಕುಸಿತ: ತಪ್ಪಿದ ಅವಘಡ]]></title>
            <link>https://kannada.asianetnews.com/karnataka-districts/another-school-roof-concrete-collapses-in-kalaburagi-district-aland-taluk-sangolagi-mrq/articleshow-n3ru51f</link>
            <guid isPermaLink="true">https://kannada.asianetnews.com/karnataka-districts/another-school-roof-concrete-collapses-in-kalaburagi-district-aland-taluk-sangolagi-mrq/articleshow-n3ru51f</guid>
            <pubDate>Mon, 15 Jun 2026 06:37:25 +0530</pubDate>
            <description><![CDATA[&lt;p&gt;ಸಂಗೋಳಗಿ ಗ್ರಾಮದ ಸರ್ಕಾರಿ ಶಾಲೆಯ ಹಳೆಯ, ಬಳಕೆಯಲ್ಲಿಲ್ಲದ ಕಟ್ಟಡದ ಛಾವಣಿ ಕುಸಿದಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಈ ಘಟನೆಯು ತಾಲೂಕಿನಲ್ಲಿರುವ ಶಿಥಿಲಗೊಂಡ ಶಾಲಾ ಕಟ್ಟಡಗಳ ಸುರಕ್ಷತೆಯ ಗಂಭೀರ ಸಮಸ್ಯೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv4d0cz7ycfxr64ftkk96dw1,imgname-school-building-1781485548519.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಕಲಬುರಗಿ ಸರ್ಕಾರಿ ಪಪೂ ಕಾಲೇಜಿನ ಮೇಲ್ಛಾವಣಿ ಕಾಂಕ್ರೀಟ್&zwnj; ಬಿದ್ದು 5 ವಿದ್ಯಾರ್ಥಿನಿಯರಿಗೆ ಗಾಯಗಳಾಗಿರುವ ಘಟನೆ ಮಾಸುವ ಮುನ್ನವೇ ಜಿಲ್ಲೆಯ ಆಳಂದ ತಾಲೂಕಿನ ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಚಿಂಚನಸೂರ ಕ್ಲಸ್ಟರ್&zwnj;ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಗೋಳಗಿ (ಸಿ)ಯಲ್ಲಿ ಬಳಕೆಯಲ್ಲಿಲ್ಲದ ಹಳೆಯ ಶಾಲಾ ಕಟ್ಟಡದ ಛಾವಣಿಯ ಪದರು ಭಾನುವಾರ ಬೆಳಗಿನ ಜಾವ ಕುಸಿದು ಬಿದ್ದ ಘಟನೆ ನಡೆದಿದೆ.&lt;/p&gt;&lt;p&gt;ಶನಿವಾರ ಸಂಜೆ ವೇಳೆಯಲ್ಲಿ ಸುರಿದ ಕೊಂಚ ಮಳೆಯ ನಡುವೆ ಕಟ್ಟಡಕ್ಕೆ ಹೊಂದಿಕೊಂಡಿದ್ದ ಮರದ ಮೇಲೆ ಓಡಾಡುತ್ತಿದ್ದ ಮಂಗನ ಹಾರಾಟದಿಂದ ಛಾವಣಿಯ ಭಾಗ ಕುಸಿದು ಬಿದ್ದಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಳೆಯ ಕಟ್ಟಡದ ವರಾಂಡಾದ ಮೇಲ್ಭಾಗದ ಛಾವಣಿಯ ಪದರು ಮತ್ತು ಅವಶೇಷಗಳು ನೆಲಕ್ಕುರುಳಿದ್ದು, ಕಟ್ಟಡದ ಶಿಥಿಲಾವಸ್ಥೆ ಮತ್ತೊಮ್ಮೆ ಬಯಲಿಗೆ ಬಂದಿದೆ.&lt;/p&gt;&lt;h2&gt;&lt;strong&gt;ಖಾಲಿಯಾಗಿರೋ ಕಟ್ಟಡ&lt;/strong&gt;&lt;/h2&gt;&lt;p&gt;ಈ ಕುರಿತು ಪ್ರತಿಕ್ರಿಯಿಸಿರುವ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಅಣ್ಣಪ್ಪ ಹಾದಿಮನಿ, ಈ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ. ಶಾಲೆಗೆ ಈಗಾಗಲೇ 8 ಕೊಠಡಿಗಳನ್ನು ಹೊಂದಿರುವ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಅದೇ ಕಟ್ಟಡದಲ್ಲಿ ಪಾಠ ಬೋಧನೆ ಮಾಡಲಾಗುತ್ತಿದೆ. ಮಕ್ಕಳು ಸಂಪೂರ್ಣ ಸುರಕ್ಷಿತ ವಾತಾವರಣದಲ್ಲಿದ್ದಾರೆ. ಹಳೆಯ ಕಟ್ಟಡವನ್ನು ನೆಲಸಮಗೊಳಿಸಬೇಕಾಗಿದ್ದರೂ ಅದು ಇನ್ನೂ ತೆರವುಗೊಳ್ಳದೇ ಉಳಿದಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಶಿಕ್ಷಣ ಇಲಾಖೆ ಮಾಹಿತಿಯ ಪ್ರಕಾರ, ತಾಲೂಕಿನ ಶಾಲೆಗಳಲ್ಲಿ ಹಲವು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಅವು ಮಳೆಗಾಲದಲ್ಲಿ ಅಪಾಯದ ತಾಣಗಳಾಗಿ ಪರಿಣಮಿಸುತ್ತಿವೆ. ಬಳಕೆ ಕೈಬಿಟ್ಟಿರುವ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸದಿದ್ದರೆ ಶಾಲಾ ಆವರಣದಲ್ಲಿ ಓಡಾಡುವ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಅಪಾಯ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.&lt;/p&gt;&lt;p&gt;ತಾಲೂಕಿನ ಶಾಲೆಗಳಲ್ಲಿ ಕಳೆದ ಸಾಲಿನ ವರದಿಯಂತೆ ಒಟ್ಟು 218 ಕೊಠಡಿಗಳ ಪೈಕಿ 142 ಹೊಸ ಕೊಠಡಿಗಳು ನಿರ್ಮಾಣಗೊಂಡಿದ್ದು, ಇನ್ನೂ 76 ಶಿಥಿಲಾವಸ್ಥೆಯ ಕೊಠಡಿಗಳು ನೆಲಸಮಗೊಳಿಸುವುದಕ್ಕಾಗಿ ಕಾಯುತ್ತಿವೆ. ಕೆಲವು ಕಟ್ಟಡಗಳು ಸಾಮಾನ್ಯ ದುರಸ್ತಿಗಾಗಿ ಸಹ ನಿರೀಕ್ಷೆಯಲ್ಲಿವೆ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಈಗಾಗಲೇ ದೃಢೀಕರಣ ನೀಡಿದ್ದು, ಎಲ್ಲ ಶಾಲಾ ಕಟ್ಟಡಗಳ ಸುರಕ್ಷತಾ ಪರಿಶೀಲನೆ ನಡೆಸಿ ಸುರಕ್ಷತಾ ಪ್ರಮಾಣಪತ್ರ ನೀಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಅಣ್ಣಪ್ಪ ಹಾದಿಮನಿ ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಶಾಲಾ ಕಟ್ಟಡಗಳ ಸುರಕ್ಷತೆ&lt;/strong&gt;&lt;/h3&gt;&lt;p&gt;ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಶಾಲಾ ಕಟ್ಟಡಗಳ ಸುರಕ್ಷತೆ ಕುರಿತು ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಸಂಗೋಳಗಿ ಘಟನೆಯು ಶಿಥಿಲ ಶಾಲಾ ಕಟ್ಟಡಗಳ ಸಮಸ್ಯೆಯ ಗಂಭೀರತೆಯನ್ನು ಮತ್ತೆ ನೆನಪಿಸಿದ್ದು, ಅನಾಹುತ ಸಂಭವಿಸುವ ಮುನ್ನವೇ ಅಪಾಯಕಾರಿ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಲಬುರಗಿ ಸರ್ಕಾರಿ ಕಾಲೇಜಿನಲ್ಲಿ ಪಾಠ ಕೇಳುತ್ತಿದ್ದಾಗಲೇ ಮೇಲ್ಛಾವಣಿ ಕುಸಿತ; ಐವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ!&lt;/strong&gt;&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/another-school-roof-concrete-collapses-in-kalaburagi-district-aland-taluk-sangolagi-mrq/articleshow-n3ru51f"/>
        </item>
        <item>
            <title><![CDATA[ನೀಟ್ ರದ್ದಾಗಿದ್ದಕ್ಕೆ ಜೀವ ಕಳಕೊಂಡ ವಿದ್ಯಾರ್ಥಿನಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪಾಲಕರಿಗೆ ಸುಳ್ಳು]]></title>
            <link>https://kannada.asianetnews.com/karnataka-districts/kalaburgi-big-twist-in-the-case-of-the-student-who-lost-her-life-due-to-neet-cancellation-mrq/articleshow-n9vpqmp</link>
            <guid isPermaLink="true">https://kannada.asianetnews.com/karnataka-districts/kalaburgi-big-twist-in-the-case-of-the-student-who-lost-her-life-due-to-neet-cancellation-mrq/articleshow-n9vpqmp</guid>
            <pubDate>Mon, 25 May 2026 05:45:48 +0530</pubDate>
            <description><![CDATA[&lt;p&gt;ನೀಟ್ ಪರೀಕ್ಷೆ ರದ್ದಾದ ಕಾರಣಕ್ಕೆ ಕಲಬುರಗಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿತ್ತು. ಆದರೆ, ಪೊಲೀಸ್ ತನಿಖೆಯಲ್ಲಿ ಆಕೆ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದು, ಈ ವಿಷಯವನ್ನು ಪಾಲಕರಿಂದ ಮುಚ್ಚಿಟ್ಟಿದ್ದಳು ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kse7seegn3d44e282eteyawn,imgname-neet-1779668138448.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ನೀಟ್ ಪರೀಕ್ಷೆ ರದ್ದಾದ ಕಾರಣಕ್ಕೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದ್ದ ಕಲಬುರಗಿಯ ವಿದ್ಯಾರ್ಥಿನಿಯ ಸಾವಿನ ಪ್ರಕರಣಕ್ಕೆ ಪೊಲೀಸ್ ತನಿಖೆಯಲ್ಲಿ ಹೊಸ ತಿರುವು ದೊರೆತಿದ್ದು, ಆಕೆ ಪಿಯುಸಿ ಪರೀಕ್ಷೆಯಲ್ಲಿ ಫೇಲ್&zwnj; ಆಗಿದ್ದ ಸಂಗತಿ ಬೆಳಕಿಗೆ ಬಂದಿದೆ. ಅಲ್ಲದೇ, ತನ್ನ ಪಾಲಕರಿಗೆ ಪಾಸ್&zwnj; ಆಗಿದ್ದೆನೆಂದು ಸುಳ್ಳು ಹೇಳಿರುವ ವಿಚಾರ ಗೊತ್ತಾಗಿದೆ.&lt;/p&gt;&lt;p&gt;ಭಾಗ್ಯಶ್ರೀ (18) ಶನಿವಾರ ಆತ್ಮ*ಹತ್ಯೆ ಮಾಡಿಕೊಂಡಿದ್ದಳು. ಈಕೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ರದ್ದಾದ ಕಾರಣ ಸಾವಿಗೆ ಶರಣಾಗಿದ್ದಾರೆ ಎಂದು ಮೃತಳ ಮನೆಯವರೇ ಮಾಹಿತಿ ನೀಡಿದ್ದರು.&lt;/p&gt;&lt;h2&gt;&lt;strong&gt;ನೀಟ್&zwnj; ಕೋಚಿಂಗ್ ಕೊಡಿಸಿದ್ದರು ಪೋಷಕರು&lt;/strong&gt;&lt;/h2&gt;&lt;p&gt;ದ್ವಿತೀಯ ಪಿಯುಸಿ ಫಲಿತಾಂಶ ಬಂದಾಗ ಭಾಗ್ಯಶ್ರೀ ತಾನು ಶೇ.92ರಷ್ಟು ಅಂಕ ಪಡೆದು ಪಾಸ್ ಆಗಿರುವುದಾಗಿ ಹೆತ್ತವರ ಬಳಿ ಹೇಳಿಕೊಂಡಿದ್ದಳು. ಮಗಳ ಮಾತನ್ನು ನಂಬಿದ್ದ ಪಾಲಕರು, ಆಕೆ ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ನೀಟ್ ಪರೀಕ್ಷೆ ಬರೆಯಲು ಸಂಪೂರ್ಣ ಬೆಂಬಲ ನೀಡಿ ಕೋಚಿಂಗ್ ಕೊಡಿಸಿದ್ದರು. ಇತ್ತೀಚೆಗಷ್ಟೇ ಭಾಗ್ಯಶ್ರೀ ನೀಟ್ ಪರೀಕ್ಷೆ ಬರೆದಿದ್ದಳು. ಸುಳ್ಳು ಹೇಳಿದ ವಿಷಯ ಮನೆಯವರಿಗೆ ಗೊತ್ತಾದರೆ ಎಲ್ಲಿ ಬೈಯುತ್ತಾರೋ ಅಥವಾ ಪಾಲಕರ ನಿರೀಕ್ಷೆ ಸುಳ್ಳಾಯಿತಲ್ಲ ಎಂಬ ಭಯದಿಂದಲೇ ಆತ್ಮಹತ್ಯೆಯ ಮಾಡಿಕೊಂಡಿರಬಹುದು ಎಂಬ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಆದರೀಗ ಯಾರಿಗೂ ಊಹಿಸಲಾಗದ ರೀತಿ ಸತ್ಯ ಬಯಲಾಗಿದ್ದು, ಪೊಲೀಸರ ತನಿಖೆಯಲ್ಲಿ ಭಾಗ್ಯಶ್ರೀ ಪಿಯುಸಿ ಫಲಿತಾಂಶ ಪರಿಶೀಲಿಸಿದಾಗ ಆಕೆ ಪಾಲಕರಿಗೂ ಸುಳ್ಳು ಹೇಳಿರುವ ವಿಷಯ ತಿಳಿದು ಬಂದಿದೆ.&lt;/p&gt;&lt;p&gt;ಇದೀಗ ಭಾಗ್ಯಶ್ರೀ ಆತ್ಮ*ಹತ್ಯೆ ಕೇಸ್&zwnj; ತನಿಖೆ ನಡೆಸಿದ ಪೊಲೀಸರು ಆಕೆಯ ಫಲಿತಾಂಶ ಪರಿಶೀಲಿಸಿದ್ದು, ಮೊದಲ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಪರೀಕ್ಷೆಯಲ್ಲಿ ಫೇಲ್&zwnj; ಆಗಿರುವ ಸತ್ಯ ಸಂಗತಿ ಬಯಲಾಗಿದೆ. ಬಳಿಕ ಅವಳು ಎರಡೂ ವಿಷಯಗಳಿಗೆ ಮರು ಪರೀಕ್ಷೆ ಬರೆದಿದ್ದು, ಮೇ 21 ರಂದು ಪ್ರಕಟವಾದ ಫಲಿತಾಂಶದಲ್ಲಿ ಭೌತಶಾಸ್ತ್ರಕ್ಕೆ 51 ಅಂಕ ಪಡೆದು ತೇರ್ಗಡೆಯಾಗಿ ಗಣಿತದಲ್ಲಿ 24 ಅಂಕ ಪಡೆದು ಅನುತ್ತೀರ್ಣಗೊಂಡಿದ್ದಳು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburgi-big-twist-in-the-case-of-the-student-who-lost-her-life-due-to-neet-cancellation-mrq/articleshow-n9vpqmp"/>
        </item>
        <item>
            <title><![CDATA[ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಮೆಜೆಸ್ಟಿಕ್‌ವರೆಗೆ ವಿಸ್ತರಿಸಿ: ಜನರ ಆಗ್ರಹಕ್ಕೆ ರೈಲ್ವೆ ಇಲಾಖೆ ಹೇಳಿದ್ದೇನು?]]></title>
            <link>https://kannada.asianetnews.com/gallery/state/indian-railway-users-demand-extend-bidar-express-and-kalaburagi-vande-bharat-smvt-to-ksr-bengaluru-p0uuaf9</link>
            <guid isPermaLink="true">https://kannada.asianetnews.com/gallery/state/indian-railway-users-demand-extend-bidar-express-and-kalaburagi-vande-bharat-smvt-to-ksr-bengaluru-p0uuaf9</guid>
            <pubDate>Mon, 15 Jun 2026 21:40:25 +0530</pubDate>
            <description><![CDATA[&lt;p&gt;ಉತ್ತರ ಕರ್ನಾಟಕದ ಪ್ರಯಾಣಿಕರು, ಬೆಂಗಳೂರು-ಬೀದರ್ ಎಕ್ಸ್&zwnj;ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲುಗಳನ್ನು SMVT ನಿಲ್ದಾಣದಿಂದ ನಗರದ ಹೃದಯಭಾಗದಲ್ಲಿರುವ KSR ಬೆಂಗಳೂರು ನಿಲ್ದಾಣಕ್ಕೆ ವಿಸ್ತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ರೈಲ್ವೆ ಇಲಾಖೆ ಹೇಳಿದ್ದೇನು? ಮಾಹಿತಿ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv608jpx9vmpeav19kpmt0r0,imgname-vande-bharat-train-extend-to-majestic-1781539293916.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕರ್ನಾಟಕದ ಪ್ರಯಾಣಿಕರು, ಬೆಂಗಳೂರು-ಬೀದರ್ ಎಕ್ಸ್&zwnj;ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲುಗಳನ್ನು SMVT ನಿಲ್ದಾಣದಿಂದ ನಗರದ ಹೃದಯಭಾಗದಲ್ಲಿರುವ KSR ಬೆಂಗಳೂರು ನಿಲ್ದಾಣಕ್ಕೆ ವಿಸ್ತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ರೈಲ್ವೆ ಇಲಾಖೆ ಹೇಳಿದ್ದೇನು? ಮಾಹಿತಿ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಬೆಂಗಳೂರಿಗೆ ಸಂಚರಿಸುವ ಸಾವಿರಾರು ಪ್ರಯಾಣಿಕರು ಈಗ ರೈಲ್ವೆ ಇಲಾಖೆಯ ಮುಂದೆ ಒಂದು ಪ್ರಮುಖ ಬೇಡಿಕೆಯನ್ನು ಇಟ್ಟಿದ್ದಾರೆ. ಪ್ರಸ್ತುತ ಭೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಂದ ಸಂಚರಿಸುತ್ತಿರುವ ಬೆಂಗಳೂರು-ಬೀದರ್ ಎಕ್ಸ್&zwnj;ಪ್ರೆಸ್ ಮತ್ತು ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲುಗಳನ್ನು ನಗರದ ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು ನಿಲ್ದಾಣದವರೆಗೆ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.&lt;/p&gt;&lt;img&gt;&lt;p&gt;ಸದ್ಯಕ್ಕೆ ಈ ಎರಡೂ ರೈಲುಗಳು ಭೈಯಪ್ಪನಹಳ್ಳಿಯ SMVT ನಿಲ್ದಾಣದಿಂದ ಆರಂಭವಾಗಿ ಅಲ್ಲೇ ಕೊನೆಗೊಳ್ಳುತ್ತವೆ. ಆದರೆ, ಬೆಂಗಳೂರಿನ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ವಾಸಿಸುವ ಪ್ರಯಾಣಿಕರಿಗೆ SMVT ನಿಲ್ದಾಣಕ್ಕೆ ತಲುಪುವುದು ಒಂದು ದೊಡ್ಡ ಸವಾಲಾಗಿದೆ. 'ನಗರದ ಪಶ್ಚಿಮ ಭಾಗಗಳಿಂದ SMVT ನಿಲ್ದಾಣಕ್ಕೆ ಹೋಗಲು ಗಂಟೆಗಟ್ಟಲೆ ಟ್ರಾಫಿಕ್&zwnj;ನಲ್ಲಿ ಸಿಲುಕಬೇಕಾಗುತ್ತದೆ. ವಿಶೇಷವಾಗಿ ತಡರಾತ್ರಿ ಅಥವಾ ಮುಂಜಾನೆ ರೈಲು ಹತ್ತಬೇಕಾದಾಗ ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ದುಬಾರಿ ಕ್ಯಾಬ್&zwnj;ಗಳನ್ನು ಅವಲಂಬಿಸಬೇಕಾಗುತ್ತದೆ,' ಎಂದು ಜಾಲಹಳ್ಳಿಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಪ್ರಕಾರ, ಮೆಜೆಸ್ಟಿಕ್ ನಿಲ್ದಾಣವು ನಗರದ ಮಧ್ಯಭಾಗದಲ್ಲಿದೆ ಮತ್ತು ಇಲ್ಲಿಂದ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಸಂಪರ್ಕ ಅತ್ಯುತ್ತಮವಾಗಿದೆ. ಮೆಜೆಸ್ಟಿಕ್&zwnj;ನಿಂದ ನಗರದ ಯಾವುದೇ ಮೂಲೆಗೆ ಹೋಗಲು ಸುಲಭ ಮತ್ತು ಕಡಿಮೆ ವೆಚ್ಚವಾಗುತ್ತದೆ. 'ದೂರದ ಊರುಗಳಿಗೆ ಹೋಗುವ ರೈಲುಗಳು ಮೆಜೆಸ್ಟಿಕ್&zwnj;ನಿಂದ ಹೊರಟರೆ ನಮಗೆ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. SMVT ನಿಲ್ದಾಣವು ಸಂಪರ್ಕದ ದೃಷ್ಟಿಯಿಂದ ಇನ್ನೂ ಸಾಕಷ್ಟು ಸುಧಾರಿಸಬೇಕಿದೆ' ಎಂದು ಪ್ರಯಾಣಿಕರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಬಗ್ಗೆ ರೈಲ್ವೆ ಅಧಿಕಾರಿಗಳನ್ನು ಕೇಳಿದಾಗ, ಅವರು ಮೆಜೆಸ್ಟಿಕ್ ಮತ್ತು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿನ ಅತಿಯಾದ ದಟ್ಟಣೆಯನ್ನು ಕಡಿಮೆ ಮಾಡಲು SMVT ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಆರಂಭದಲ್ಲಿ ಕಂಟೋನ್ಮೆಂಟ್ ನಿಲ್ದಾಣವನ್ನು ಈ ರೈಲುಗಳಿಗೆ ಟರ್ಮಿನಲ್ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಅಲ್ಲಿ 'ಪಿಟ್-ಲೈನ್' ಮತ್ತು ಚಾರ್ಜಿಂಗ್ ಸೌಲಭ್ಯಗಳ ಕೊರತೆ ಇರುವುದರಿಂದ ತಾತ್ಕಾಲಿಕವಾಗಿ SMVT ನಿಲ್ದಾಣವನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಕೇವಲ ದಟ್ಟಣೆ ಕಡಿಮೆ ಮಾಡುವ ನೆಪದಲ್ಲಿ ಪ್ರಯಾಣಿಕರಿಗೆ ತೊಂದರೆ ಕೊಡಬಾರದು ಎಂಬುದು ರೈಲು ಬಳಕೆದಾರರ ವಾದವಾಗಿದೆ. ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಈ ಪ್ರಮುಖ ರೈಲುಗಳನ್ನು ಮೆಜೆಸ್ಟಿಕ್ ನಿಲ್ದಾಣದವರೆಗೆ ವಿಸ್ತರಿಸುವ ಬಗ್ಗೆ ರೈಲ್ವೆ ಮಂಡಳಿ ಶೀಘ್ರವೇ ತೀರ್ಮಾನ ಕೈಗೊಳ್ಳಬೇಕೆಂದು ಪ್ರಯಾಣಿಕರ ಸಂಘಟನೆಗಳು ಒತ್ತಾಯಿಸಿವೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railway-users-demand-extend-bidar-express-and-kalaburagi-vande-bharat-smvt-to-ksr-bengaluru-p0uuaf9"/>
        </item>
        <item>
            <title><![CDATA[Kalaburagi: ಬಕ್ರೀದ್ ಹಬ್ಬಕ್ಕೆ ಗೋಶಾಲೆಗೆ ಮೇವು ದೇಣಿಗೆ ನೀಡಿದ ಮುಸ್ಲಿಂ ಕುಟುಂಬ]]></title>
            <link>https://kannada.asianetnews.com/karnataka-districts/kalaburgi-chittapur-muslim-family-donates-fodder-to-cowshed-on-the-occasion-of-bakrid-festival-mrq/articleshow-p8pdhgo</link>
            <guid isPermaLink="true">https://kannada.asianetnews.com/karnataka-districts/kalaburgi-chittapur-muslim-family-donates-fodder-to-cowshed-on-the-occasion-of-bakrid-festival-mrq/articleshow-p8pdhgo</guid>
            <pubDate>Sat, 30 May 2026 10:50:06 +0530</pubDate>
            <description><![CDATA[ಕಲಬುರಗಿಯಲ್ಲಿ ಮುಸ್ಲಿಂ ಕುಟುಂಬವೊಂದು ಬಕ್ರೀದ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದೆ. ತಮ್ಮ ಹಿರಿಯರ ಸ್ಮರಣಾರ್ಥ ಗೋಶಾಲೆಗೆ 25 ಸಾವಿರ ಮೌಲ್ಯದ ಮೇವು ದಾನ ಮಾಡಿ, ಪ್ರಾಣಿ ದಯೆ ಮತ್ತು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvn1wxvtfqnjapb268cfgqw,imgname-kalaburgi-go-shala-1780118254523.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಸಂಬ್ರಮದಿಂದ ಆಚರಿಸುತ್ತಿದ್ದು ಮುಸ್ಲಿಂ ಸಮುದಾಯದ ಕುಟುಂಬವೊಂದು ಗೋಶಾಲೆಗೆ 25 ಸಾವಿರ ಮೌಲ್ಯದ ಮೇವು ದೇಣಿಗೆ ನೀಡುವ ಮೂಲಕ ಬಕ್ರೀದ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಮುಸ್ಲಿಂ ಸಮುದಾಯದ ಮುಖಂಡರಾದ ಸೈಯದ ಜಾಫರ್ ಉಲ್ ಹಸನ್ ಅವರು ತಮ್ಮ ತಂದೆ ಸೈಯದ್ ಹಫಿಸ್ ಉಲ್ ಹಸನ್, ತಾಯಿ ಸೈದಾ ಕೌಸರ್ ಆಫೀಸ್ ಹಾಗೂ ಸಹೋದರಿ ಸೆಮಿಸ್ ಬೇಗಂ ಅವರ ಪವಿತ್ರ ಸ್ಮರಣಾರ್ಥ ಗೋಶಾಲೆಗೆ ಭೇಟಿ ನೀಡಿ ಗೊವುಗಳ ಹಸಿವು ನೀಗಿಸಲು ಒಂದು ಟ್ರ್ಯಾಕ್ಟರ್&zwnj; ಕಣಕಿಯನ್ನು ದೇಣಿಗೆ ನೀಡಿದರು.&lt;/p&gt;&lt;h2&gt;&lt;strong&gt;ಕಂಬಳೇಶ್ವರ ಸೊಮಶೇಖರ ಶಿವಾಚಾರ್ಯರ ಹೇಳಿಕೆ&lt;/strong&gt;&lt;/h2&gt;&lt;p&gt;ಕಂಬಳೇಶ್ವರ ಸೊಮಶೇಖರ ಶಿವಾಚಾರ್ಯರು, ಹಬ್ಬ ಹರಿದಿನಗಳ ಹೆಸರಿನಲ್ಲಿ ಗೋವುಗಳನ್ನು ಕಡಿಯುವುದನ್ನು ಹಿಂಸಿಸುವುದನ್ನು ನಾವು ಹೆಚ್ಚಾಗಿ ನೋಡುತ್ತಿದ್ದೇವೆ. ಆದರೆ, ಇಂದಿನ ಬಕ್ರೀದ್ ಹಬ್ಬದ ಪವಿತ್ರ ದಿನದಂದು ಮುಸ್ಲಿಂ ಸಮುದಾಯದ ಸೈಯದ ಜಫರ್ ಅವರ ಕುಟುಂಬವು ತಮ್ಮ ಹಿರಿಯರ ಸ್ಮರಣಾರ್ಥ ಗೋಶಾಲೆಗೆ ಬಂದು ಗೋವುಗಳ ರಕ್ಷಣೆಗೆ ಧಾವಿಸಿರುವದು ಅವುಗಳಿಗೆ ಮೇವು ನೀಡಿರುವದು ನಿಜಕ್ಕೂ ಶ್ಲಾಘನೀಯ.&lt;/p&gt;&lt;p&gt;ಧರ್ಮ ಯಾವುದಾದರೂ ಮಾನವೀಯತೆ ಮತ್ತು ಪ್ರಾಣಿದಯೇ ಎಲ್ಲಕ್ಕಿಂತ ದೊಡ್ಡದು, ಸಮಾಜದಲ್ಲಿ ಇಂತಹ ಸೌಹಾರ್ದಯುತ ಚಿಂತನೆಗಳು ಹೆಚ್ಚಾಗಬೇಕು. ಗೋವುಗಳ ಕಡಿಯುವ ಕೈಗಳ ಮಧ್ಯ ಗೋವುಗಳನ್ನು ಕಾಯುವ ಮತ್ತು ಅವುಗಳ ಹಸಿವು ನೀಗಿಸುವ ಉದಾತ್ತ ಮನಸ್ಸುಗಳನ್ನು ನಾವಿಂದು ನೊಡುತ್ತಿರುವದು ಸಂತಸ ತಂದಿದೆ. ಈ ಕುಟುಂಬದ ಸತ್ಕಾರ್ಯ ಚಿತ್ತಾಪುರ ತಾಲೂಕಷ್ಟೆ ಅಲ್ಲದೇ ಇಡೀ ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಹರಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಗೊಶಾಲೆಯ ಅಧ್ಯಕ್ಷರಾದ ರಮೇಶ ಬೊಮ್ಮನಳ್ಳಿ, ಮುಖಂಡರಾದ ಧನರಾಜ ದೇಶಪಾಂಡೆ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಲಕ್ಷ್ಮೀ ಮಟ್ಟಿ, ನಟರಾಜ ಶಿಲ್ಪಿ, ಮಂಜುನಾಥ ಶಾಸ್ತ್ರೀ, ಗೋಪಾಲಕರಾದ ಚನ್ನಬಸಪ್ಪ, ಆಕಾಶ ಇದ್ದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburgi-chittapur-muslim-family-donates-fodder-to-cowshed-on-the-occasion-of-bakrid-festival-mrq/articleshow-p8pdhgo"/>
        </item>
        <item>
            <title><![CDATA[ಕಲಬುರಗಿ-ಬೆಂಗಳೂರು ವಿಮಾನ ಸೇವೆ ಪುನರಾರಂಭ ಬೆನ್ನಲ್ಲೇ  ಏರ್ಪೋರ್ಟ್‌ನಿಂದ ವಿಶೇಷ ಕೆಕೆಆರ್‌ಟಿಸಿ ಬಸ್ ಸಂಚಾರ ಆರಂಭ]]></title>
            <link>https://kannada.asianetnews.com/karnataka-districts/flights-resume-kkrtc-launches-kalaburagi-airport-feeder-bus-service-check-timings-gdp/articleshow-r7w36nz</link>
            <guid isPermaLink="true">https://kannada.asianetnews.com/karnataka-districts/flights-resume-kkrtc-launches-kalaburagi-airport-feeder-bus-service-check-timings-gdp/articleshow-r7w36nz</guid>
            <pubDate>Wed, 10 Jun 2026 20:10:05 +0530</pubDate>
            <description><![CDATA[ಕಲಬುರಗಿ ಮತ್ತು ಬೆಂಗಳೂರು ನಡುವಿನ ವಿಮಾನ ಸೇವೆ ಪುನರಾರಂಭಗೊಂಡ ಹಿನ್ನೆಲೆಯಲ್ಲಿ, ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ KKRTCಯು ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್, ವಿಮಾನದ ಸಮಯಕ್ಕೆ ಅನುಗುಣವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ನಿಗದಿತ ಸಮಯಕ್ಕೆ ನಿಲ್ದಾಣ ತಲುಪಲು ಅನುಕೂಲ ಮಾಡಿಕೊಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktrzff5eef0segkj1s3xqxxg,imgname-kkrtc-launches-kalaburagi-airport-feeder-bus-1781102263469.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ ಮತ್ತು ರಾಜಧಾನಿ ಬೆಂಗಳೂರು ನಡುವೆ ಬಹುದಿನಗಳ ಬಳಿಕ ವಿಮಾನ ಸೇವೆಗಳು ಪುನರಾರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಿಕರ ಸಾರ್ವಜನಿಕ ಸಾರಿಗೆಯ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ವತಿಯಿಂದ ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಸೇವೆಗೆ ಚಾಲನೆ ನೀಡಲಾಗಿದೆ.&lt;/p&gt;&lt;p&gt;ಕೆಕೆಆರ್&zwnj;ಟಿಸಿ ಅಧ್ಯಕ್ಷರಾದ ಅರುಣಕುಮಾರ ಪಾಟೀಲ ಅವರು ಈ ನೂತನ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, &quot;ವಿಮಾನ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನಿಗದಿತ ಸಮಯಕ್ಕೆ ನಿಲ್ದಾಣ ತಲುಪಿಸಲು ಈ ಬಸ್ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಅಗತ್ಯಕ್ಕೆ ತಕ್ಕಂತೆ ಟ್ರಿಪ್&zwnj;ಗಳ ಸಂಖ್ಯೆಯನ್ನು ಹೆಚ್ಚಿಸಲು ಸಂಸ್ಥೆ ಯೋಜಿಸಿದೆ&quot; ಎಂದು ತಿಳಿಸಿದರು.&lt;/p&gt;&lt;h2&gt;ವಿಶೇಷ ಬಸ್ ಸಂಚಾರದ ವೇಳಾಪಟ್ಟಿ ಮತ್ತು ಮಾರ್ಗ:&lt;/h2&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಬಸ್ ಪ್ರತಿದಿನ ಮುಂಜಾನೆಯೇ ತನ್ನ ಸೇವೆಯನ್ನು ಆರಂಭಿಸಲಿದೆ.&lt;/p&gt;&lt;ul&gt; &lt;li&gt;ಬಸ್ ಹೊರಡುವ ಸಮಯ: ಪ್ರತಿದಿನ ಬೆಳಗ್ಗೆ 6:10ಕ್ಕೆ ಕಲಬುರಗಿ ಕೇಂದ್ರೀಯ ಬಸ್ ನಿಲ್ದಾಣದಿಂದ ಹೊರಡಲಿದೆ.&lt;/li&gt; &lt;li&gt;ಸಂಚರಿಸುವ ಮಾರ್ಗ: ನಗರದ ಪ್ರಮುಖ ರಸ್ತೆಗಳಾದ ವಲ್ಲಭಭಾಯಿ ಸರ್ಕಲ್ (ತಿಮ್ಮಪೂರ) ಮತ್ತು ಅನ್ನಪೂರ್ಣ ಕ್ರಾಸ್ ಮಾರ್ಗವಾಗಿ ಪ್ರಯಾಣಿಸಲಿದೆ.&lt;/li&gt; &lt;li&gt;ವಿಮಾನ ನಿಲ್ದಾಣ ತಲುಪುವ ಸಮಯ: ಬೆಳಗ್ಗೆ 7:00 ಗಂಟೆಗೆ ಸರಿಯಾಗಿ ವಿಮಾನ ನಿಲ್ದಾಣವನ್ನು ತಲುಪಲಿದೆ.&lt;/li&gt; &lt;li&gt;ಮರಳಿ ಬರುವ ಸಮಯ: ಬೆಳಗ್ಗೆ 8:00 ಗಂಟೆಗೆ ವಿಮಾನ ನಿಲ್ದಾಣದಿಂದ ಹೊರಟು ಕಲಬುರಗಿ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ.&lt;/li&gt;&lt;/ul&gt;&lt;p&gt;ಬಸ್ ಸೇವೆಗೆ ಚಾಲನೆ ನೀಡುವ ಈ ಮಹತ್ವದ ಸಂದರ್ಭದಲ್ಲಿ ಕಲಬುರಗಿ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್. ಜಿ. ಗಂಗಾಧರ್, ಕಲಬುರಗಿ-2ರ ವಿಭಾಗೀಯ ನಿಯಂತ್ರಣಾಧಿಕಾರಿ ಬಸಂತಪ್ಪ ಬಿ. ಎಮ್., ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್&zwnj; ಶೇಖ್ ಹುಸೇನಿ, ಪ್ರಶಾಂತ, ಡಿಪೋ ಮ್ಯಾನೇಜರ್ ಅನಿಲ, ಆಡಳಿತಾಧಿಕಾರಿ ಗುರುಲಿಂಗಪ್ಪ, ಡಿಟಿಓ ಹೊಸಮನಿ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.&lt;/p&gt;&lt;h2&gt;ಕಲಬುರಗಿ - ಬೆಂಗಳೂರು ವಿಮಾನ ಸಂಚಾರದ ಪೂರ್ಣ ವೇಳಾಪಟ್ಟಿ&lt;/h2&gt;&lt;p&gt;ಬೆಂಗಳೂರಿನಿಂದ ನಿರ್ಗಮನ ಬೆಳಗ್ಗೆ 06:30&lt;/p&gt;&lt;p&gt;ಕಲಬುರಗಿಗೆ ಆಗಮನ ಬೆಳಿಗ್ಗೆ 7:40&lt;/p&gt;&lt;p&gt;ಬೆಂಗಳೂರಿಗೆ ಆಗಮನ: ಬೆಳಿಗ್ಗೆ 9:20&lt;/p&gt;&lt;p&gt;ಕಲಬುರಗಿಯಿಂದ ನಿರ್ಗಮನ: ಬೆಳಿಗ್ಗೆ 8:10&lt;/p&gt;&lt;p&gt;ಬೆಳಗ್ಗೆ 7:40ಕ್ಕೆ ಬೆಂಗಳೂರಿನಿಂದ ಬರುವ ವಿಮಾನದ ಪ್ರಯಾಣಿಕರು ಮತ್ತು 8:10ಕ್ಕೆ ಬೆಂಗಳೂರಿಗೆ ಹೊರಡುವ ಪ್ರಯಾಣಿಕರು, ಇಬ್ಬರಿಗೂ ಅನುಕೂಲವಾಗುವಂತೆ ಕೆಕೆಆರ್&zwnj;ಟಿಸಿ ಬಸ್ ಸಮಯವನ್ನು (ಬೆಳಗ್ಗೆ 7:00 ರಿಂದ 8:00) ಅತ್ಯಂತ ಅಚ್ಚುಕಟ್ಟಾಗಿ ಹೊಂದಾಣಿಕೆ ಮಾಡಲಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/flights-resume-kkrtc-launches-kalaburagi-airport-feeder-bus-service-check-timings-gdp/articleshow-r7w36nz"/>
        </item>
        <item>
            <title><![CDATA[ಮುಂಬೈ-ಹೈದರಾಬಾದ್ ಬುಲೆಟ್ ರೈಲು ಯೋಜನೆ: ಡಿಪಿಆರ್ ವರದಿ ಸಿದ್ಧ, ಕಲಬುರಗಿಗೆ ಸಿಗಲಿದೆ ಹೈ-ಸ್ಪೀಡ್ ನಿಲ್ದಾಣ!]]></title>
            <link>https://kannada.asianetnews.com/karnataka-districts/mumbai-hyderabad-bullet-train-dpr-finalized-kalaburagi-picked-as-key-station-in-karnataka-gdp/articleshow-vqg1gzg</link>
            <guid isPermaLink="true">https://kannada.asianetnews.com/karnataka-districts/mumbai-hyderabad-bullet-train-dpr-finalized-kalaburagi-picked-as-key-station-in-karnataka-gdp/articleshow-vqg1gzg</guid>
            <pubDate>Thu, 11 Jun 2026 19:38:38 +0530</pubDate>
            <description><![CDATA[ಮುಂಬೈ-ಹೈದರಾಬಾದ್ ಬುಲೆಟ್ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಪೂರ್ಣಗೊಂಡಿದೆ. ಈ ಹೈ-ಸ್ಪೀಡ್ ಕಾರಿಡಾರ್ ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣವನ್ನು ಸಂಪರ್ಕಿಸಲಿದ್ದು, ಕಲಬುರಗಿಯಲ್ಲಿ ಪ್ರಮುಖ ನಿಲ್ದಾಣದೊಂದಿಗೆ ಪ್ರಯಾಣದ ಸಮಯವನ್ನು ಕೇವಲ 3 ಗಂಟೆಗಳಿಗೆ ಇಳಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3ykd1r8dc1wt2037yzp870,imgname-bullet-train-1778249217074.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ದೇಶದ ಹೈ-ಸ್ಪೀಡ್ ರೈಲು ನೆಟ್&zwnj;ವರ್ಕ್&zwnj;ನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಭಾರತ ಮುಂದಾಗಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈ ಮತ್ತು ಪ್ರಮುಖ ತಂತ್ರಜ್ಞಾನ ಕೇಂದ್ರವಾದ ಹೈದರಾಬಾದ್ ನಡುವೆ ಪ್ರಸ್ತಾವಿತ ಬುಲೆಟ್ ರೈಲು ಯೋಜನೆಗೆ ಈಗ ದಾರಿಸುಗಮವಾಗಿದ್ದು, ಈ ಮಾರ್ಗದ ವಿವರವಾದ ಯೋಜನಾ ವರದಿ (DPR - Detailed Project Report) ಪೂರ್ಣಗೊಂಡಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಈ ಹೈ-ಸ್ಪೀಡ್ ರೈಲು ಕಾರಿಡಾರ್&zwnj;ನಲ್ಲಿ ಕರ್ನಾಟಕಕ್ಕೂ ಅತ್ಯಂತ ಪ್ರಮುಖ ಪಾತ್ರ ಲಭಿಸಿದೆ. ಯಾಕೆಂದರೆ ಪ್ರಮುಖ ನಿಲ್ದಾಣ ಕಲಬುರಗಿಯಲ್ಲಿ ನಿಲುಗಡೆ ಇದೆ.&lt;/p&gt;&lt;h2&gt;671 ಕಿ.ಮೀ. ಉದ್ದದ ಕಾರಿಡಾರ್: ಮೂರು ರಾಜ್ಯಗಳಿಗೆ ಸಂಪರ್ಕ&lt;/h2&gt;&lt;p&gt;ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಸಿದ್ಧಪಡಿಸಿರುವ ಈ ಯೋಜನೆಯು ಒಟ್ಟು 671 ಕಿಲೋಮೀಟರ್ ಉದ್ದದ ಮಾರ್ಗವನ್ನು ಹೊಂದಿದೆ. ಇದು ಮೂರು ಪ್ರಮುಖ ರಾಜ್ಯಗಳ ಮೂಲಕ ಹಾದು ಹೋಗಲಿದ್ದು, ರಾಜ್ಯವಾರು ಹಂಚಿಕೆ ಈ ಕೆಳಗಿನಂತಿದೆ:&lt;/p&gt;&lt;ul&gt; &lt;li&gt;&lt;strong&gt;ಮಹಾರಾಷ್ಟ್ರ: 457 ಕಿ.ಮೀ.&lt;/strong&gt;&lt;/li&gt; &lt;li&gt;&lt;strong&gt;ಕರ್ನಾಟಕ: 121 ಕಿ.ಮೀ.&lt;/strong&gt;&lt;/li&gt; &lt;li&gt;&lt;strong&gt;ತೆಲಂಗಾಣ: 93 ಕಿ.ಮೀ.&lt;/strong&gt;&lt;/li&gt;&lt;/ul&gt;&lt;p&gt;ಈ ಕಾರಿಡಾರ್&zwnj;ನಲ್ಲಿ ಕರ್ನಾಟಕದ ಮೂಲಕ ಹಾದುಹೋಗುವ 121 ಕಿ.ಮೀ. ಮಾರ್ಗದಲ್ಲಿ, ರಾಜ್ಯದ ಪ್ರಮುಖ ನಗರವಾದ ಕಲಬುರಗಿಯಲ್ಲಿ ಹೈ-ಸ್ಪೀಡ್ ನಿಲ್ದಾಣವನ್ನು ನಿರ್ಮಿಸಲು ಯೋಜಿಸಲಾಗಿದೆ. ಇದರಿಂದಾಗಿ ಇಡೀ ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಭಾಗದ ಪ್ರಯಾಣಿಕರಿಗೆ ಮತ್ತು ಉದ್ಯಮಿಗಳಿಗೆ ಜಾಗತಿಕ ಮಟ್ಟದ ಸಾರಿಗೆ ಸೌಲಭ್ಯ ಸಿಕ್ಕಂತಾಗಲಿದೆ.&lt;/p&gt;&lt;h2&gt;12 ಗಂಟೆಗಳ ಪ್ರಯಾಣ ಕೇವಲ 3 ಗಂಟೆಗೆ ಮುಕ್ತಾಯ!&lt;/h2&gt;&lt;p&gt;ಪ್ರಸ್ತುತ ಮುಂಬೈ ಮತ್ತು ಹೈದರಾಬಾದ್ ನಡುವೆ ಸಂಚರಿಸುವ ಸಮಯ ಸುಮಾರು 12 ರಿಂದ 15 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತವೆ. ಆದರೆ, ಪ್ರಸ್ತಾವಿತ ಬುಲೆಟ್ ರೈಲುಗಳು ಗಂಟೆಗೆ ಸುಮಾರು 300 ಕಿ.ಮೀ ವೇಗದಲ್ಲಿ ಚಲಿಸಲಿವೆ. ಇದು ಸದ್ಯದ ಎಕ್ಸ್&zwnj;ಪ್ರೆಸ್ ರೈಲುಗಳಿಗಿಂತ ಐದು ಪಟ್ಟು ಹೆಚ್ಚು ವೇಗವಾಗಿದೆ.&lt;/p&gt;&lt;p&gt;ಯೋಜನೆಯ ಅಂದಾಜಿನ ಪ್ರಕಾರ, ಯಾವುದೇ ನಿಲ್ದಾಣಗಳಲ್ಲಿ ನಿಲ್ಲದೆ ನೇರವಾಗಿ ಚಲಿಸಿದರೆ, ಮುಂಬೈನಿಂದ ಹೈದರಾಬಾದ್&zwnj;ಗೆ ಕೇವಲ 2 ಗಂಟೆ 55 ನಿಮಿಷಗಳಲ್ಲಿ ತಲುಪಬಹುದು. ಮಾರ್ಗ ಮಧ್ಯದ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಪಡೆದರೂ ಸಹ, ಇಡೀ ಪ್ರಯಾಣಕ್ಕೆ ಗರಿಷ್ಠ 3 ಗಂಟೆ 13 ನಿಮಿಷಗಳು ಮಾತ್ರ ಬೇಕಾಗಬಹುದು.&lt;/p&gt;&lt;h2&gt;ಆರ್ಥಿಕ ಮತ್ತು ಐಟಿ ಹಬ್&zwnj;ಗಳ ಜೋಡಣೆ: ನಿಲ್ದಾಣಗಳ ವಿವರ&lt;/h2&gt;&lt;p&gt;ಈ ಹೈ-ಸ್ಪೀಡ್ ಕಾರಿಡಾರ್ ಮುಂಬೈ-ಪುಣೆ-ಸೋಲಾಪುರ-ಕಲಬುರಗಿ-ಹೈದರಾಬಾದ್ ನಗರಗಳನ್ನು ಜೋಡಿಸಲಿದ್ದು, ದೇಶದ ಪ್ರಮುಖ ಹಣಕಾಸು ಮತ್ತು ಐಟಿ ಕೇಂದ್ರಗಳನ್ನು ಬೆಸೆಯುವ ಶಕ್ತಿಶಾಲಿ ಆರ್ಥಿಕ ಕಾರಿಡಾರ್ ಆಗಿ ಮಾರ್ಪಡಲಿದೆ.&lt;/p&gt;&lt;h3&gt;ವಿವಿಧ ರಾಜ್ಯಗಳಲ್ಲಿ ಪ್ರಸ್ತಾವಿತ ನಿಲ್ದಾಣಗಳ ವಿವರ:&lt;/h3&gt;&lt;p&gt;ಮಹಾರಾಷ್ಟ್ರ: ವಿಖ್ರೋಲಿ, ಥಾಣೆ, ನವಿ ಮುಂಬೈ, ಲೋನಾವಾಲಾ, ಪಿಂಪ್ರಿ-ಚಿಂಚ್&zwnj;ವಾಡ್, ಪುಣೆ, ಬಾರಾಮತಿ, ಪಂಢರಪುರ ಮತ್ತು ಸೋಲಾಪುರ್.&lt;/p&gt;&lt;p&gt;ಕರ್ನಾಟಕ: ಕಲಬುರಗಿ (ಪ್ರಮುಖ ನಿಲುಗಡೆ).&lt;/p&gt;&lt;p&gt;ತೆಲಂಗಾಣ: ಕೋಕಾಪೇಟ್, ವಿಕಾರಾಬಾದ್ ಮತ್ತು ಶಂಶಾಬಾದ್. (ಶಂಶಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೈಲುಗಳ ನಿರ್ವಹಣೆಗಾಗಿ ಬೃಹತ್ ಡಿಪೋವನ್ನು ಕೂಡ ನಿರ್ಮಿಸಲಾಗುತ್ತದೆ).&lt;/p&gt;&lt;h2&gt;ಖಂಡಾಲಾ ಘಾಟ್: ದೇಶದ ಅತ್ಯಂತ ಸವಾಲಿನ ಪ್ರದೇಶ&lt;/h2&gt;&lt;p&gt;ಈ ಬೃಹತ್ ಯೋಜನೆಯಲ್ಲಿ ತಾಂತ್ರಿಕವಾಗಿ ಅತ್ಯಂತ ಕಠಿಣವಾದ ಭಾಗವೆಂದರೆ ಮಹಾರಾಷ್ಟ್ರದ ಖಂಡಾಲಾ ಘಾಟ್ ಪ್ರದೇಶ. ಈ ಪಶ್ಚಿಮ ಘಟ್ಟಗಳ ಸವಾಲಿನ ಭೂಪ್ರದೇಶವನ್ನು ದಾಟಲು ಇಂಜಿನಿಯರಿಂಗ್ ಮಟ್ಟದಲ್ಲಿ ದೈತ್ಯ ಯೋಜನೆ ರೂಪಿಸಲಾಗಿದೆ. ಇಲ್ಲಿ ಸುಮಾರು 24 ಕಿ.ಮೀ ವ್ಯಾಪ್ತಿಯಲ್ಲಿ 13 ಅತ್ಯಾಧುನಿಕ ಸುರಂಗ ಮಾರ್ಗಗಳನ್ನು (Tunnels) ನಿರ್ಮಿಸಲಾಗುವುದು. ಇದರೊಂದಿಗೆ ಒಟ್ಟು 35 ಕಿ.ಮೀ ಉದ್ದದ ಭೂಗತ (Underground) ಮಾರ್ಗವನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಭಾರತೀಯ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಸಂಕೀರ್ಣ ಹಾಗೂ ಸಾಹಸಮಯ ಯೋಜನೆಯಾಗಲಿದೆ.&lt;/p&gt;&lt;h2&gt;ಭೂಸ್ವಾಧೀನ ಪ್ರಕ್ರಿಯೆ ಮತ್ತು ನಿರ್ಮಾಣ&lt;/h2&gt;&lt;p&gt;ಪ್ರಸ್ತುತ ವಿವರವಾದ ಯೋಜನಾ ವರದಿ (DPR) ಅಂತಿಮ ಹಂತಕ್ಕೆ ತಲುಪಿರುವುದರಿಂದ, ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಈಗ ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳ ಸಹಕಾರವನ್ನು ಕೋರಿದೆ. ವಿಶೇಷವಾಗಿ ಬುಲೆಟ್ ರೈಲು ಹಳಿಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ (Land Acquisition) ಪ್ರಕ್ರಿಯೆ ಮತ್ತು ವಿವಿಧ ಇಲಾಖೆಗಳ ಶಾಸನಬದ್ಧ ಅನುಮೋದನೆಗಳನ್ನು ಶೀಘ್ರವಾಗಿ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಮಾತುಕತೆ ಆರಂಭವಾಗಿದೆ.&lt;/p&gt;&lt;p&gt;ಎಲ್ಲಾ ಅಧಿಕೃತ ಒಪ್ಪಿಗೆಗಳು ಮತ್ತು ಅಂತಿಮ ಅನುಮತಿಗಳು ದೊರೆತ ನಂತರ, ಅಂದರೆ ಬಹುಶಃ 2026 ರ ಅಂತ್ಯದ ವೇಳೆಗೆ ಈ ಯೋಜನೆಯ ತಳಮಟ್ಟದ ನಿರ್ಮಾಣ ಕಾರ್ಯಗಳು ಆರಂಭವಾಗುವ ನಿರೀಕ್ಷೆಯಿದೆ. ಮುಂದಿನ 10 ವರ್ಷಗಳಲ್ಲಿ ಈ ಸಂಪೂರ್ಣ ಬುಲೆಟ್ ರೈಲು ಕಾರಿಡಾರ್ ಅನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mumbai-hyderabad-bullet-train-dpr-finalized-kalaburagi-picked-as-key-station-in-karnataka-gdp/articleshow-vqg1gzg"/>
        </item>
        <item>
            <title><![CDATA[ಕಲಬುರಗಿ ಸರ್ಕಾರಿ ಕಾಲೇಜಿನಲ್ಲಿ ಪಾಠ ಕೇಳುತ್ತಿದ್ದಾಗಲೇ ಮೇಲ್ಛಾವಣಿ ಕುಸಿತ; ಐವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ!]]></title>
            <link>https://kannada.asianetnews.com/gallery/karnataka-districts/kalaburagi-govt-girls-pu-college-ceiling-collapse-students-injured-sat-wswwqcb</link>
            <guid isPermaLink="true">https://kannada.asianetnews.com/gallery/karnataka-districts/kalaburagi-govt-girls-pu-college-ceiling-collapse-students-injured-sat-wswwqcb</guid>
            <pubDate>Fri, 12 Jun 2026 14:11:35 +0530</pubDate>
            <description><![CDATA[&lt;p&gt;ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿ ನಡೆಯುತ್ತಿದ್ದ ವೇಳೆ ಏಕಾಏಕಿ ಮೇಲ್ಛಾವಣಿ ಕುಸಿದು ಐವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಟ್ರಾಮಾ ಕೇರ್ ಸೆಂಟರ್&zwnj;ಗೆ ದಾಖಲಿಸಲಾಗಿದ್ದು, ಕಟ್ಟಡದ ದುಸ್ಥಿತಿಯೇ ಈ ಅವಘಡಕ್ಕೆ ಕಾರಣವೆಂದು ಹೇಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktxfcjt5yfy798476z5vvynr,imgname-kalaburagi-college-ceiling-collapse-1781253163845.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿ ನಡೆಯುತ್ತಿದ್ದ ವೇಳೆ ಏಕಾಏಕಿ ಮೇಲ್ಛಾವಣಿ ಕುಸಿದು ಐವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಟ್ರಾಮಾ ಕೇರ್ ಸೆಂಟರ್&zwnj;ಗೆ ದಾಖಲಿಸಲಾಗಿದ್ದು, ಕಟ್ಟಡದ ದುಸ್ಥಿತಿಯೇ ಈ ಅವಘಡಕ್ಕೆ ಕಾರಣವೆಂದು ಹೇಳಲಾಗಿದೆ.&lt;/p&gt;&lt;img&gt;&lt;p&gt;ಕಲಬುರಗಿ ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಕಾಲೇಜೊಂದರಲ್ಲಿ ಶುಕಗ್ರವಾರ ಬೆಳಗ್ಗೆ ಭೀಕರ ಅವಘಡವೊಂದು ಸಂಭವಿಸಿದೆ. ಪಾಠ ಕೇಳುತ್ತಾ ಕುಳಿತಿದ್ದ ವಿದ್ಯಾರ್ಥಿನಿಯರ ಮೇಲೆ ಏಕಾಏಕಿ ಶಾಲಾ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಐವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಾಲ್ಕನೇ ಮಹಡಿಯ ಕ್ಲಾಸ್ ರೂಂನಲ್ಲಿ ಇಂದು ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿನಿಯರಿಗೆ 'ಅಕೌಂಟೆನ್ಸಿ' (Accountancy) ಪಾಠ ಭೋದನೆ ನಡೆಯುತ್ತಿತ್ತು. ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತುಂಬಿದ್ದ ಕೊಠಡಿಯಲ್ಲಿ ಪಾಠ ಕೇಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮೇಲ್ಚಾವಣಿಯ ಕಾಂಕ್ರೀಟ್ ಭಾಗ ವಿದ್ಯಾರ್ಥಿನಿಯರ ಮೇಲೆ ಕುಸಿದು ಬಿದ್ದಿದೆ.&lt;/p&gt;&lt;img&gt;&lt;p&gt;&lt;strong&gt;ವಿದ್ಯಾರ್ಥಿನಿಯರ ಆಕ್ರಂದನ, ನೂಕುನುಗ್ಗಲು:&lt;/strong&gt;&lt;/p&gt;&lt;p&gt;ಮೇಲ್ಚಾವಣಿ ಕುಸಿಯುತ್ತಿದ್ದಂತೆ ಗಾಬರಿಗೊಂಡ ವಿದ್ಯಾರ್ಥಿನಿಯರು ಪ್ರಾಣ ಉಳಿಸಿಕೊಳ್ಳಲು ಏಕಕಾಲಕ್ಕೆ ಕೊಠಡಿಯಿಂದ ಹೊರಗೆ ಓಡಲು ಯತ್ನಿಸಿದರು. ಇದರಿಂದಾಗಿ ಕ್ಲಾಸ್ ರೂಂನಲ್ಲಿ ನೂಕುನುಗ್ಗಲು ಉಂಟಾಗಿ ಕೆಲವರು ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳನ್ನೂ ಮಾಡಿಕೊಂಡಿದ್ದಾರೆ. ಮೇಲ್ಚಾವಣಿಯ ದೊಡ್ಡ ಕಾಂಕ್ರೀಟ್ ತುಂಡುಗಳು ನೇರವಾಗಿ ತಲೆಯ ಮೇಲೆ ಬಿದ್ದಿದ್ದರಿಂದ ಮೂವರು ವಿದ್ಯಾರ್ಥಿನಿಯರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.&lt;/p&gt;&lt;img&gt;&lt;p&gt;&lt;strong&gt;ಗಾಯಾಳುಗಳ ವಿವರ:&lt;/strong&gt;&lt;/p&gt;&lt;p&gt;ಈ ಘಟನೆಯಲ್ಲಿ ಶೀತಲ್ (ತಂದೆ ಬಸವರಾಜ್), ಸ್ನೇಹಾ (ತಂದೆ ಕಾಶಿನಾಥ್), ದಿವ್ಯಾ ಸುಭಾಷ್ ಎಂಬುವವರಿಗೆ ತೀವ್ರ ರಕ್ತಗಾಯಗಳಾಗಿವೆ. ಇವರ ಜೊತೆಗೆ ಪೂಜಾ ಗುಂಡಪ್ಪ ಹಾಗೂ ಸೃಷ್ಟಿ ಶಿವಾನಂದ ಎಂಬುವವರಿಗೂ ಗಾಯಗಳಾಗಿವೆ. ತಕ್ಷಣವೇ ಕಾಲೇಜು ಸಿಬ್ಬಂದಿ ಹಾಗೂ ಸ್ಥಳೀಯರು ಗಾಯಾಳುಗಳನ್ನು ಕಲಬುರಗಿಯ ಟ್ರಾಮಾ ಕೇರ್ ಸೆಂಟರ್&zwnj;ಗೆ ದಾಖಲಿಸಿದ್ದು, ಸದ್ಯ ಅಲ್ಲಿ ಚಿಕಿತ್ಸೆ ಮುಂದುವರಿದಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಾಂಶುಪಾಲರ ಆತಂಕದ ಮಾತು:&lt;/strong&gt;&lt;/p&gt;&lt;p&gt;ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಲೇಜು ಪ್ರಾಂಶುಪಾಲ ದೇವನಗೌಡ ಅವರು, 'ಕಟ್ಟಡವು ತುಂಬಾ ಹಳೆಯದೇನಲ್ಲ, ಆದರೆ ಮೇಲ್ಛಾವಣಿಯ ಮೇಲೆ ಮಳೆ ನೀರು ನಿಲ್ಲುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಇಡೀ ಕಟ್ಟಡದ ಸ್ಥಿತಿ ಸದ್ಯ ಹೀಗೆಯೇ ಇದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿದಿನ ಭಯದಲ್ಲೇ ಕಾಲ ಕಳೆಯುವಂತಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ,' ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಘಟನೆಯಿಂದಾಗಿ ಕಾಲೇಜಿನ ಇತರ ವಿದ್ಯಾರ್ಥಿನಿಯರು ಮತ್ತು ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಸರ್ಕಾರಿ ಕಟ್ಟಡಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಈಗ ತೀವ್ರ ಚರ್ಚೆ ಆರಂಭವಾಗಿದ್ದು, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂಬ ಎಚ್ಚರಿಕೆ ಕೇಳಿಬರುತ್ತಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/kalaburagi-govt-girls-pu-college-ceiling-collapse-students-injured-sat-wswwqcb"/>
        </item>
        <item>
            <title><![CDATA[Kalaburagi Lokayukta Raid: ಸರ್ಕಾರಿ ಅಧಿಕಾರಿಗೆ ಲಂಚ ಕೊಡಲು ಬಂದು ಲೋಕಾಯುಕ್ತ ಬಲೆಗೆ ಬಿದ್ದ ತಂದೆ-ಮಗ!]]></title>
            <link>https://kannada.asianetnews.com/gallery/karnataka-districts/kalaburagi-lokayukta-arrests-father-son-for-offering-bribe-to-govt-prosecutor-z569w9y</link>
            <guid isPermaLink="true">https://kannada.asianetnews.com/gallery/karnataka-districts/kalaburagi-lokayukta-arrests-father-son-for-offering-bribe-to-govt-prosecutor-z569w9y</guid>
            <pubDate>Mon, 15 Jun 2026 21:58:27 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ, ಎಸ್&zwnj;ಸಿ-ಎಸ್&zwnj;ಟಿ ಪ್ರಕರಣವೊಂದರಲ್ಲಿ (SC-ST Case) ಅನುಕೂಲಿ ಮಾಡಿಕೊಡುವಂತೆ ಸರ್ಕಾರಿ ಅಭಿಯೋಜಕರಿಗೆ (Public prosecutor) ಲಂಚ ನೀಡಲು ಯತ್ನಿಸಿದ ತಂದೆ-ಮಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲಂಚ ನೀಡಲು ಬಂದವರೇ ಸಿಕ್ಕಿಬಿದ್ದ ಈ ಅಪರೂಪದ ಘಟನೆ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv61efg9qg1p6v6rr62t74ph,imgname-karnataka-lokayukta-kalaburagi-1781540535817.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿಯಲ್ಲಿ, ಎಸ್&zwnj;ಸಿ-ಎಸ್&zwnj;ಟಿ ಪ್ರಕರಣವೊಂದರಲ್ಲಿ (SC-ST Case) ಅನುಕೂಲಿ ಮಾಡಿಕೊಡುವಂತೆ ಸರ್ಕಾರಿ ಅಭಿಯೋಜಕರಿಗೆ (Public prosecutor) ಲಂಚ ನೀಡಲು ಯತ್ನಿಸಿದ ತಂದೆ-ಮಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲಂಚ ನೀಡಲು ಬಂದವರೇ ಸಿಕ್ಕಿಬಿದ್ದ ಈ ಅಪರೂಪದ ಘಟನೆ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;img&gt;&lt;p&gt;ಕಲಬುರಗಿ (ಜೂ.15): ಸಾಮಾನ್ಯವಾಗಿ ಸರ್ಕಾರಿ ನೌಕರರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬೀಳುವುದನ್ನು ನಾವು ಕೇಳಿದ್ದೇವೆ. ಆದರೆ, ಕಲಬುರಗಿಯಲ್ಲಿ ಒಂದು ಅಪರೂಪದ ಮತ್ತು ಅಚ್ಚರಿಯ ಪ್ರಕರಣ ನಡೆದಿದೆ. ಇಲ್ಲಿ ಲಂಚ ಪಡೆಯುವವರ ಬದಲು, ಲಂಚ ನೀಡಲು ಬಂದವರೇ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ!&lt;/p&gt;&lt;img&gt;&lt;p&gt;ಸಂಜೀವ್ ಪಾಟೀಲ್ ಮತ್ತು ಸುರೇಶ್ ಪಾಟೀಲ್ ಎಂಬ ತಂದೆ-ಮಗನೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಎಸ್&zwnj;ಸಿ-ಎಸ್&zwnj;ಟಿ (SC-ST) ಕಾಯ್ದೆಯಡಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅನುಕೂಲ ಮಾಡಿಕೊಡುವಂತೆ ಕೋರಿ ಇವರು ಸರ್ಕಾರಿ ಅಭಿಯೋಜಕರಿಗೆ (Public Prosecutor) ಲಂಚ ನೀಡಲು ಮುಂದಾಗಿದ್ದರು.&lt;/p&gt;&lt;img&gt;&lt;p&gt;ಹಿರಿಯ ಸರ್ಕಾರಿ ಅಭಿಯೋಜಕರಾದ ಪ್ರಾಣೇಶ ಭರತನೂರ ಅವರಿಗೆ ಈ ತಂದೆ-ಮಗ 5,000 ರೂಪಾಯಿ ಲಂಚ ನೀಡಲು ಪ್ರಯತ್ನಿಸಿದ್ದರು. ಎಷ್ಟೇ ಬೇಡವೆಂದರೂ ಒತ್ತಾಯಪೂರ್ವಕವಾಗಿ ಲಂಚ ನೀಡಲು ಮುಂದಾದಾಗ, ಭರತನೂರ ಅವರು ಕೂಡಲೇ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಬ್ಬ ಸರ್ಕಾರಿ ಅಧಿಕಾರಿಯಾಗಿ ಭ್ರಷ್ಟಾಚಾರಕ್ಕೆ ಮಣಿಯದೆ, ಲಂಚ ನೀಡಲು ಬಂದವರ ವಿರುದ್ಧವೇ ದೂರು ನೀಡುವ ಮೂಲಕ ಪ್ರಾಣೇಶ ಭರತನೂರ ಅವರು ಮಾದರಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಅಭಿಯೋಜಕರ ದೂರಿನ ಅನ್ವಯ ತಕ್ಷಣ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು, ಲಂಚದ ಹಣದೊಂದಿಗೆ ಬಂದಿದ್ದ ಸಂಜೀವ್ ಪಾಟೀಲ್ ಮತ್ತು ಸುರೇಶ್ ಪಾಟೀಲ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ತಂದೆ ಮತ್ತು ಮಗ ಇಬ್ಬರನ್ನೂ ಬಂಧಿಸಿರುವ ಪೊಲೀಸರು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಲಂಚಕ್ಕಾಗಿ ಪೀಡಿಸುವ ಅಧಿಕಾರಿಗಳ ನಡುವೆ, ಲಂಚ ನೀಡಲು ಬಂದವರನ್ನೇ ಪೊಲೀಸರಿಗೆ ಹಿಡಿದುಕೊಟ್ಟ ಈ ಘಟನೆ ಈಗ ಕಲಬುರಗಿಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಭ್ರಷ್ಟಾಚಾರ ಕೇವಲ ಅಧಿಕಾರಿಗಳಿಂದ ಮಾತ್ರವಲ್ಲ, ಸಾರ್ವಜನಿಕರಿಂದಲೂ ಆರಂಭವಾಗುತ್ತದೆ ಮತ್ತು ಅಂತಹವರಿಗೆ ಇದು ಒಂದು ದೊಡ್ಡ ಎಚ್ಚರಿಕೆಯಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/kalaburagi-lokayukta-arrests-father-son-for-offering-bribe-to-govt-prosecutor-z569w9y"/>
        </item>
    </channel>
</rss>
