<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 22 Aug 2026 17:01:24 +0530</lastBuildDate>
        <atom:link href="https://kannada.asianetnews.com/rss/kalaburagi" rel="self" type="application/rss+xml"/>
        <item>
            <title><![CDATA[ಪಾಕ್ ಉಗ್ರರ ಜೊತೆ ನಂಟು; ಕಲಬುರಗಿಯಲ್ಲಿ ಇಬ್ಬರು ಶಂಕಿತರು ವಶಕ್ಕೆ!]]></title>
            <link>https://kannada.asianetnews.com/karnataka-districts/pak-terror-links-ccb-police-detain-two-suspects-in-kalaburagi-rav/articleshow-0elfbzd</link>
            <guid isPermaLink="true">https://kannada.asianetnews.com/karnataka-districts/pak-terror-links-ccb-police-detain-two-suspects-in-kalaburagi-rav/articleshow-0elfbzd</guid>
            <pubDate>Fri, 14 Aug 2026 05:09:48 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಮತ್ತು ದೇಶ ವಿರೋಧಿ ಜಾಲತಾಣ ಚಟುವಟಿಕೆಗಳ ಶಂಕೆಯ ಮೇಲೆ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರನ್ನು ಸಿಸಿಬಿ ಪೊಲೀಸರು ವಶಕ್ಕೆ.. ವಿಚಾರಣೆ ಬಳಿಕ ಒಬ್ಬನನ್ನು ಬಿಡುಗಡೆ ಮಾಡಲಾಗಿದ್ದು, ಮತ್ತೊಬ್ಬ ಆರೋಪಿ ಸಮೀರ್&zwnj; ಬಂಧಿಸಿ ತನಿಖೆ ಮುಂದುವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzyqqaqrnkf5swz44qxhpm32,imgname-----------------------2026-08-14t050548.930-1786664168184.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಪ್ರದೇಶ ಮೂಲದ ಯುವಕರು ವಶಕ್ಕೆ- ತೀವ್ರ ವಿಚಾರಣೆ ನಡೆಸಿದ ಬಳಿಕ ಒಬ್ಬನ ಬಿಡುಗಡೆ&lt;/p&gt;&lt;p&gt;ಕಲಬುರಗಿ (ಆ.14): ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಉಗ್ರರ ಜೊತೆ ಸಂಪರ್ಕ ಶಂಕೆ ಮತ್ತು ಜಾಲತಾಣಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳ ಆರೋಪದ ಮೇರೆಗೆ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಕಲಬುರಗಿಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಘಟನೆ ನಡೆದಿದೆ.&lt;/p&gt;&lt;p&gt;ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಸದಾರಪೂರ ಗ್ರಾಮದ ಮೊಹಮ್ಮದ್ ಸಮೀರ್ ಹಾಗೂ ಈತನ ಸಹೋದ್ಯೋಗಿ ಸಲ್ಮಾನ್&zwnj;ನನ್ನು ವಶಕ್ಕೆ ಪಡೆಯಲಾಗಿತ್ತು. ಏತನ್ಮಧ್ಯೆ ವಿಚಾರಣೆ ನಡೆಸಿ ಸಲ್ಮಾನ್&zwnj;ನನ್ನು ಬಿಡುಗಡೆ ಮಾಡಿರುವ ಪೊಲೀಸರು, ಸಮೀರ್&zwnj;ನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.&lt;/p&gt;&lt;p&gt;ದೇಶವಿರೋಧಿ ಹಾಗೂ ಮೂಲಭೂತವಾದಿ ಚಟುವಟಿಕೆಗಳಲ್ಲಿ ತೊಡಗಿವೆ ಎನ್ನಲಾದ ಹಲವು ಇನ್&zwnj;ಸ್ಟಾಗ್ರಾಂ ಖಾತೆಗಳನ್ನು ಆರೋಪಿ ಸಮೀರ್ ಫಾಲೋ ಮಾಡುತ್ತಿದ್ದ. ಸಹೋದ್ಯೋಗಿ ಸಲ್ಮಾನ್&zwnj; ಅವುಗಳಿಗೆ ಕಮೆಂಟ್&zwnj; ಮಾಡುತ್ತಿದ್ದನೆಂಬ ಸಂಗತಿ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರು ತಿಳಿಸಿದ್ದಾರೆ.&lt;/p&gt;&lt;p&gt;ದೇಶ ವಿರೋಧಿ ರೀತಿಯ ಸಾಮಾಜಿಕ ಜಾಲತಾಣ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆ ಸಮೀರ್&zwnj;ನನ್ನು ಬಂಧಿಸಲಾಗಿದೆ. ಈ ಖಾತೆಗಳನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳಿಗೆ ಪಾಕಿಸ್ತಾನ ಅಥವಾ ಭಾರತದ ಹೊರಗಿನ ಇತರ ಯಾವುದೇ ಪ್ರದೇಶಗಳೊಂದಿಗೆ ಸಂಪರ್ಕವಿದೆಯೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/pak-terror-links-ccb-police-detain-two-suspects-in-kalaburagi-rav/articleshow-0elfbzd"/>
        </item>
        <item>
            <title><![CDATA[Crigler-Najjar Syndrome: 9 ವರ್ಷದ ಬಾಲಕನ ಅನುವಂಶಿಕ ಕಾಯಿಲೆಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಶಸ್ತ್ರಚಿಕಿತ್ಸೆ!]]></title>
            <link>https://kannada.asianetnews.com/karnataka-districts/crigler-najjar-syndrome-kalaburagi-9-year-old-boy-genetic-condition-surgery-unavailable-in-karnataka-govt-hospital-rav/articleshow-19dngy2</link>
            <guid isPermaLink="true">https://kannada.asianetnews.com/karnataka-districts/crigler-najjar-syndrome-kalaburagi-9-year-old-boy-genetic-condition-surgery-unavailable-in-karnataka-govt-hospital-rav/articleshow-19dngy2</guid>
            <pubDate>Fri, 24 Jul 2026 13:05:22 +0530</pubDate>
            <description><![CDATA[ಕಲಬುರಗಿಯ 9 ವರ್ಷದ ಬಾಲಕನೊಬ್ಬ 'ಕ್ರಿಗ್ಲರ್ ನಜ್ಜರ್ ಸಿಂಡ್ರೋಮ್' ಎಂಬ ಅಪರೂಪದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದಾನೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಯಕೃತ್ತು ಕಸಿ ಸೌಲಭ್ಯವಿಲ್ಲದ ಕಾರಣ, ಬಡ ಕುಟುಂಬವು ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅನಿವಾರ್ಯತೆಗೆ ಸಿಲುಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky9gpfmz1b1jsj59pw8gsb70,imgname-----------------------2026-07-24t130012.275-1784878415518.jpg" type="image/jpeg" height="390" width="690"/>
            <content:encoded><![CDATA[&lt;p&gt;ಈ ಸಮಸ್ಯೆಗೆ ಯಕೃತ್ತು ಟ್ರಾನ್ಸ್&zwnj;ಪ್ಲಾಂಟ್&zwnj; ಅನಿವಾರ್ಯ!&lt;/p&gt;&lt;h2&gt;&lt;strong&gt;ಬೆಂಗಳೂರು (ಜು.24) &lt;/strong&gt;ಯಕೃತ್ತು ಸಂಬಂಧಿಸಿದ ಅಪರೂಪದ ಅನುವಂಶಿಕ ಕಾಯಿಲೆಗೆ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸೌಲಭ್ಯ ಇಲ್ಲದ ಕಾರಣ ಬಡ ಕುಟುಂಬದ ಬಾಲಕನ ಪಾಲಕರು ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.&lt;/h2&gt;&lt;h2&gt;ಏನಿದು ಕ್ರಿಗ್ಲರ್ ನಜ್ಜರ್ ಸಿಂಡ್ರೋಮ್&rsquo;?&lt;/h2&gt;&lt;p&gt;ಕಲಬುರಗಿ ಮೂಲದ ಬಡ ಕುಟುಂಬದ 9 ವರ್ಷದ ಬಾಲಕ ಬನ್ನಪ್ಪಗೌಡನಿಗೆ ಯಕೃತ್ತಿಗೆ ಸಂಬಂಧಿಸಿದ &lsquo;ಕ್ರಿಗ್ಲರ್ ನಜ್ಜರ್ ಸಿಂಡ್ರೋಮ್&rsquo; ಎಂಬ ಕಾಯಿಲೆ ಇದೆ.&lt;/p&gt;&lt;p&gt;ದೇಹದಲ್ಲಿ ಉತ್ಪತ್ತಿಯಾಗುವ ಬಿಲ್ಬುರಿನ್ ಅನ್ನು ಯಕೃತ್ತಿನಲ್ಲಿರುವ ಕಿಣ್ವಗಳು ಸಂಸ್ಕರಿಸುತ್ತವೆ. ಆದರೆ, ಈ ಕಾಯಿಲೆ ಇರುವವರಲ್ಲಿ ಕಿಣ್ವಗಳು ಅಗತ್ಯ ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಆಗ, ಪದೇ ಪದೆ ಕಾಮಾಲೆ ಆಗುತ್ತಿರುತ್ತದೆ.&lt;/p&gt;&lt;p&gt;ಬನ್ನಪ್ಪಗೌಡನಿಗೆ ಚಿಕಿತ್ಸೆ ಕೊಡಿಸಲು ಓಡಾಡುತ್ತಿರುವ ಆತನ ಮಾವ ಎಂ.ಎಸ್. ಪಾಟೀಲ್ ನರಿಬೋಳ ಮಾತನಾಡಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕಾಯಿಲೆಗೆ ಶಸ್ತ್ರಚಿಕಿತ್ಸೆ ವ್ಯವಸ್ಥೆ ಇಲ್ಲ. ಹೈದ್ರಾಬಾದ್&zwnj;ನ ಖಾಸಗಿ ಆಸ್ಪತ್ರೆಯಲ್ಲಿ ₹25 ಲಕ್ಷ ಖರ್ಚಾಗುತ್ತದೆ. ಚಿಕಿತ್ಸೆಗಾಗಿ ಬಡ ಕುಟುಂಬ ಹೇಗೋ ಹಣ ಹೊಂದಿಸುತ್ತಿದೆ. ಆದರೆ ಇಂತಹ ಸಮಸ್ಯೆ ಇರುವ ಬೇರೆ ಮಕ್ಕಳಿಗೆ ಅನುಕೂಲವಾಗಲು ಸರ್ಕಾರಿ ಆಸ್ಪತ್ರೆಯಲ್ಲೂ ಈ ಸೌಲಭ್ಯ ಸಿಗಬೇಕು ಎಂದು ಮನವಿ ಮಾಡಿದ್ದಾರೆ.&lt;/p&gt;&lt;h3&gt;ಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಶಸ್ತ್ರಚಿಕಿತ್ಸೆ!!&lt;/h3&gt;&lt;p&gt;ಕಳೆದ ಕೆಲ ವರ್ಷಗಳಿಂದ ಫೋಟೋ ಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಶ್ವತವಾಗಿ ಪರಿಹಾರಕ್ಕಾಗಿ ಲಿವರ್ ಟ್ರಾನ್ಸ್&zwnj;ಪ್ಲಾಂಟ್ ಶಸ್ತ್ರಚಿಕಿತ್ಸೆ ಸೌಲಭ್ಯ ಇರುವ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದ್ದೆವು. ಆದರೆ, ಮಕ್ಕಳಿಗೆ ಲಿವರ್ ಟ್ರಾನ್ಸ್&zwnj;ಪ್ಲಾಂಟ್ ಸೌಲಭ್ಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದರು. ನಗರದ ಇಂದಿರಾ ಗಾಂಧಿ ಆಸ್ಪತ್ರೆಯಲ್ಲೂ ಈ ಸೌಲಭ್ಯ ಇಲ್ಲ. ಆದರೆ, ಹೈದರಬಾದ್&zwnj;ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸೌಲಭ್ಯವಿದೆ. ಬಾಲಕನ ತಾಯಿಯೇ ಯಕೃತ್ತು ದಾನ ಮಾಡಲು ಸಿದ್ಧರಿದ್ದಾರೆ. ಅದಕ್ಕೆ ಕನಿಷ್ಠ 25 ಲಕ್ಷ ರು. ಖರ್ಚಾಗುತ್ತದೆ. ಈಗಾಗಲೇ ಲಕ್ಷಾಂತರ ರು. ಖರ್ಚು ಮಾಡಿರುವ ಬಡ ಕುಟುಂಬಕ್ಕೆ ಇದು ಹೊರೆಯಾಗುತ್ತದೆ. ಹೇಗೋ ಭರಿಸಿಕೊಳ್ಳಲು ಸಿದ್ಧರಿದ್ದಾರೆ. ಆದರೆ,&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/crigler-najjar-syndrome-kalaburagi-9-year-old-boy-genetic-condition-surgery-unavailable-in-karnataka-govt-hospital-rav/articleshow-19dngy2"/>
        </item>
        <item>
            <title><![CDATA[ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್:  6 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!]]></title>
            <link>https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</link>
            <guid isPermaLink="true">https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</guid>
            <pubDate>Wed, 08 Jul 2026 11:25:56 +0530</pubDate>
            <description><![CDATA[ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಮೆಗಾ ಆಪರೇಷನ್&zwnj;ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx04edrp64anbam01r602epp,imgname-lokayukta-raids-in-across-karnataka-1783489836822.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿದಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಇಂದು ಮುಂಜಾನೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನೂರಾರು ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಈ ಮೆಗಾ ಆಪರೇಷನ್ ಕೈಗೊಂಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;ಧಾರವಾಡ ಮತ್ತು ಶಿವಮೊಗ್ಗ: ಎಸಿಎಫ್ ಕಿರಣ್ ಅಂಗಡಿಗೆ ಶಾಕ್!&lt;/h2&gt;&lt;p&gt;ಶಿವಮೊಗ್ಗದ ಅರಣ್ಯ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಗಿ ಸೇವೆ ಸಲ್ಲಿಸುತ್ತಿರುವ ಕಿರಣ್ ಅಂಗಡಿ ಅವರಿಗೆ ಸೇರಿದ ಧಾರವಾಡ ಮತ್ತು ಶಿವಮೊಗ್ಗದ ಒಟ್ಟು ೫ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಧಾರವಾಡದ ಲೋಕಾ ಎಸ್ಪಿ ಸಿದ್ದಲಿಂಗಪ್ಪ ಹಾಗೂ ಶಿವಮೊಗ್ಗದ ಲೋಕಾಯುಕ್ತ ಇನ್&zwnj;ಸ್ಪೆಕ್ಟರ್ ವೀರಬಸಪ್ಪ ಕುಶಲಾಪೂರ ಮತ್ತು ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರುವ ಐಷಾರಾಮಿ ಮನೆ, ಅಳ್ನಾವರ ರಸ್ತೆಯಲ್ಲಿರುವ ಫಾರ್ಮ್ ಹೌಸ್, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪತ್ನಿಯ ಹೆಸರಿನಲ್ಲಿದೆ ಎನ್ನಲಾದ ಉದ್ಯಮ) ಹಾಗೂ ಅವರ ಸೋದರ ಮಾವನ ಮನೆಗಳ ಮೇಲೆ ಶೋಧ ನಡೆಸಲಾಗುತ್ತಿದೆ.&lt;/p&gt;&lt;h2&gt;ಶಿವಮೊಗ್ಗದ ಕಚೇರಿ ಮೇಲೂ ದಾಳಿ&lt;/h2&gt;&lt;p&gt;ಇತ್ತ ಶಿವಮೊಗ್ಗದ ಆಲ್ಕೋಳ ರಸ್ತೆಯಲ್ಲಿರುವ ಕಿರಣ್ ಅಂಗಡಿ ಅವರ ಅರಣ್ಯ ಸಂಶೋಧನಾ ಕಚೇರಿಯ ಮೇಲೂ ಲೋಕಾಯುಕ್ತ ತಂಡ ತಪಾಸಣೆ ನಡೆಸುತ್ತಿದೆ. ದಾಳಿಯ ವೇಳೆ ಅಧಿಕಾರಿ ಕಿರಣ್ ಅಂಗಡಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಐದು ಜನರ ಅಧಿಕಾರಿಗಳ ತಂಡ ಸದ್ಯ ದಾಖಲೆಗಳನ್ನು ಜಾಲಾಡುತ್ತಿದೆ.&lt;/p&gt;&lt;h2&gt;ರಾಯಚೂರು: ಕೆಬಿಜೆಎನ್&zwnj;ಎಲ್ ಇಇ ಬಸನಗೌಡಗೆ ಸೇರಿದ 7 ಕಡೆ ದಾಳಿ&lt;/h2&gt;&lt;p&gt;ರಾಯಚೂರಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಕಾರ್ಯನಿರ್ವಾಹಕ ಇಂಜಿನಿಯರ್ (EE) ಬಸನಗೌಡ ಅವರ ವಿರುದ್ಧ ಲೋಕಾಯುಕ್ತರು ತನಿಖೆ ತೀವ್ರಗೊಳಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ 7 ಪ್ರತ್ಯೇಕ ತಂಡಗಳು ಏಕಕಾಲದಲ್ಲಿ 7 ಕಡೆ ಧಾಳಿ ನಡೆಸಿವೆ. ಬಸನಗೌಡ ಅವರ ರಾಯಚೂರು ನಗರದ ಎಚ್.ಆರ್.ಬಿ ಲೇಔಟ್&zwnj;ನಲ್ಲಿರುವ ಮನೆ, ಯಕ್ಲಾಸಪುರದ ಸೆಲೆಬ್ರಿಟಿ ಗಾರ್ಡನ್&zwnj;ನಲ್ಲಿರುವ ಅಣ್ಣನ ಮನೆ ಹಾಗೂ ಯಕ್ಲಾಪುರದ ತೋಟದ ಮನೆಯಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ.&lt;/p&gt;&lt;h2&gt;ಬಾರ್ ಮತ್ತು ಪೆಟ್ರೋಲ್ ಬಂಕ್ ಪತ್ತೆ&lt;/h2&gt;&lt;p&gt;ಬಸನಗೌಡ ಅವರ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ನಾಯರಾ ಪೆಟ್ರೋಲ್ ಬಂಕ್, ಅದರ ಪಕ್ಕದಲ್ಲೇ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಗೋದಾಮಿನ (Warehouse) ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ದೇವದುರ್ಗ ತಾಲೂಕಿನ ಚಿಕ್ಕ ಹೊನ್ನಕುಣಿ ವ್ಯಾಪ್ತಿಯ ಕೆಬಿಜೆಎನ್&zwnj;ಎಲ್ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.&lt;/p&gt;&lt;h2&gt;ಚಿತ್ರದುರ್ಗ ಆರ್&zwnj;ಎಫ್&zwnj;ಒ ಮತ್ತು ಪ್ರೊಫೆಸರ್ ಮನೆಗೆ ಅಧಿಕಾರಿಗಳ ಎಂಟ್ರಿ&lt;/h2&gt;&lt;p&gt;ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇಬ್ಬರು ಪ್ರಮುಖ ಅಧಿಕಾರಿಗಳ ಆಸ್ತಿಪಾಸ್ತಿಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿದೆ. ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿರುವ ವಲಯ ಅರಣ್ಯಾಧಿಕಾರಿ (RFO) ದುಗ್ಗಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರೊಫೆಸರ್ ಶಂಕರ್ ಅವರ ಮನೆ ಹಾಗೂ ತೋಟದ ಮೇಲೂ ಲೋಕಾಯುಕ್ತರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.&lt;/p&gt;&lt;h2&gt;ಕಲಬುರಗಿ ಜೇಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಫ್ಲ್ಯಾಟ್ ಮೇಲೆ ದಾಳಿ&lt;/h2&gt;&lt;p&gt;ಕಲಬುರಗಿಯಲ್ಲಿ ಜೆಸ್ಕಾಂ (GESCOM) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಅಮೃತರಾವ್ ಯಲಾಲ್ ಅವರಿಗೆ ಸೇರಿದ ಕಚೇರಿ ಹಾಗೂ ಮನೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ ತಂಡ ದಾಳಿ ಮಾಡಿದೆ. ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿರುವ ನಿವಾಸ, ಬಸವ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಫ್ಲ್ಯಾಟ್, ಮತ್ತು ಕೊತ್ತಂಬರಿ ಲೇಔಟ್&zwnj;ನಲ್ಲಿರುವ ಜೇಸ್ಕಾಂ ಕಚೇರಿಗಳ ಮೇಲೆ ದಾಳಿಯಾಗಿದೆ. ಇದಲ್ಲದೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮನೆಯ ಮೇಲೂ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಎಇಇ ಅಮೃತರಾವ್ ಅವರು ಜಾಗೃತಿ ಕಾಲೋನಿಯಲ್ಲಿ 'ಪ್ಲಾಟಿನಂ ಸ್ಟುಡಿಯೋ' ಎಂಬ ಹೈಟೆಕ್ ಸ್ಟುಡಿಯೋ ಹೊಂದಿದ್ದು, ನಂದೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫ್ಲ್ಯಾಟ್ ಹಾಗೂ ವಿವಿಧೆಡೆ 20 ಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;ತುಮಕೂರು ಸಣ್ಣ ನೀರಾವರಿ ಇಲಾಖೆ ಎಇಇ ಮನೆ ಮೇಲೆ ಲೋಕಾ ದಾಳಿ&lt;/h2&gt;&lt;p&gt;ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇ ಆಗಿರುವ ಮಧುಸೂದನ್ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಮಧುಸೂದನ್ ಮನೆ. ಸಣ್ಣ ನೀರಾವರಿ ಇಲಾಖೆ ತಿಪಟೂರು ಉಪವಿಭಾಗದಲ್ಲಿ ಎಇಇ ಆಗಿ ಕೆಲಸ ಮಾಡುತ್ತಿರುವ ಮಧುಸೂದನ್ ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಲೋಕಾ ದಾಳಿ. ಮಧುಸೂದನ್ ಮನೆಯನ್ನ ಪರಿಶೀಲನೆ ನಡೆಸುತ್ತಿರುವ ಲೋಕಾ ಟೀಮ್. ಸದ್ಯ ಎಲ್ಲಾ ಕಡೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ಚಿನ್ನಾಭರಣ, ನಗದು ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಬೇಕಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet"/>
        </item>
        <item>
            <title><![CDATA[ಕುಡಿದು ‘ಯಾರಿವಳು ಯಾರಿವಳು’ ಎಂದು ಹಾಡಿದ ಮರುಳಾರಾಧ್ಯ ಶ್ರೀ! ಹಾಡು ಹಾಡಿದ ಖಾವಿಧಾರಿ]]></title>
            <link>https://kannada.asianetnews.com/karnataka-districts/kalaburagi-marularadhya-swamiji-sang-a-movie-song-while-holding-a-bottle-of-liquor-in-front-of-him-mrq/articleshow-3dc2rmq</link>
            <guid isPermaLink="true">https://kannada.asianetnews.com/karnataka-districts/kalaburagi-marularadhya-swamiji-sang-a-movie-song-while-holding-a-bottle-of-liquor-in-front-of-him-mrq/articleshow-3dc2rmq</guid>
            <pubDate>Tue, 18 Aug 2026 06:14:11 +0530</pubDate>
            <description><![CDATA[ಕಲಬುರಗಿ ಜಿಲ್ಲೆಯ ಮಾಶಾಳ ಮಠದ ಮರುಳಾರಾಧ್ಯ ಸ್ವಾಮೀಜಿ ಅವರು ಶ್ರಾವಣ ಮಾಸದಲ್ಲಿ ಮದ್ಯದ ಬಾಟಲಿ ಮುಂದಿಟ್ಟುಕೊಂಡು ಸಿನಿಮಾ ಹಾಡು ಹಾಡಿ ಮೋಜು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಭಕ್ತರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಹಿಂದೆಯೂ ಸ್ವಾಮೀಜಿ ಹಲವು ವಿವಾದಗಳಿಂದ ಸುದ್ದಿಯಾಗಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m094yr8ykxfvzjm9dhycgr2x,imgname-swamiji-1787013587230.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ಭಕ್ತಿಯ ಶ್ರಾವಣ ಮಾಸದ ಆರಂಭದಲ್ಲೇ ಧಾರ್ಮಿಕ ವಲಯ ತಲೆತಗ್ಗಿಸುವಂತಹ ಕೆಲಸವೊಂದು ಜಿಲ್ಲೆಯ ಮಾಶಾಳದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಮರುಳಾರಾಧ್ಯ ಸ್ವಾಮೀಜಿ ಅವರ ಮಠದಲ್ಲಿ ನಡೆದಿದೆ.ಮರುಳಾರಾಧ್ಯ ಸ್ವಾಮೀಜಿ ತಾವೇ ಪಾನಮತ್ತರಾಗಿ ಸಿನಿಮಾ ಗೀತೆ ಹಾಡುತ್ತ ಮೋಜು, ಮಸ್ತಿ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.&lt;/p&gt;&lt;p&gt;ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಮರುಳಾರಾಧ್ಯ ಸ್ವಾಮೀಜಿ ಶ್ರಾವಣ ಮಾಸದ ಪವಿತ್ರ ದಿನಗಳಲ್ಲೇ ಮಠದ ಒಳಗೆ ಮದ್ಯದ ಬಾಟಲಿ ಮುಂದಿಟ್ಟುಕೊಂಡು ಸಿನಿಮಾ ಹಾಡು ಹಾಡಿ ಮೋಜು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.&lt;/p&gt;&lt;h2&gt;&lt;strong&gt;ಸ್ವಾಮೀಜಿಯ ಬಿಂದಾಸ್ ಲೈಫ್&zwnj;ಸ್ಟೈಲ್&lt;/strong&gt;&lt;/h2&gt;&lt;p&gt;ಸ್ವಾಮೀಜಿಯ ಈ ಬಿಂದಾಸ್ ಲೈಫ್&zwnj;ಸ್ಟೈಲ್ ವಿಡಿಯೋ ಹೊರಬಂದಿರುವುದು ಭಕ್ತ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆಯೂ ಮರುಳಾರಾಧ್ಯ ಸ್ವಾಮೀಜಿ ಅವರು ಕೆಲವು ದಿನಗಳ &quot;ಹಿಂದೂ ಧರ್ಮದ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲಿಗೆ ಖಡ್ಗ ಕೊಡಿ&quot; ಎಂದು ಭಾಷಣ ಮಾಡಿ ಭಾರಿ ವಿವಾದ ಸೃಷ್ಟಿಸಿದ್ದರು.&lt;/p&gt;&lt;p&gt;ಸಮಾಜಕ್ಕೆ ಧರ್ಮ ಮತ್ತು ಸಂಸ್ಕಾರದ ಪಾಠ ಮಾಡಬೇಕಾದ ಹಾಗೂ ಮಕ್ಕಳ ಕೈಗೆ ಮಾರಕಾಸ್ತ್ರ ನೀಡಲು ಪ್ರಚೋದಿಸಿದರು. ಅಲ್ಲದೇ ಅನ್ಯ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿದ್ದು ಸೇರಿದಂತೆ ಈ ಸ್ವಾಮೀಜಿ ವಿರುದ್ಧ ಈಗಾಗಲೇ ಎರಡ್ಮೂರು ಪ್ರಕರಣಗಳು ಪೋಲಿಸ್ ಠಾಣೆಯಲ್ಲಿ ದಾಖಲಾಗಿವೆ. ಈಗ ಸ್ವಾಮೀಜಿಯ ಅಸಲಿ ಮುಖವಾಡ ಈಗ ಅವರದ್ದೇ ಮಠದಲ್ಲಿ ಬಯಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.&lt;/p&gt;&lt;h3&gt;&lt;strong&gt;ವಿಡಿಯೋದಲ್ಲೇನಿದೆ?&lt;/strong&gt;&lt;/h3&gt;&lt;p&gt;ವೈರಲ್ ಆಗಿರುವ ವಿಡಿಯೋದಲ್ಲಿ ಮರುಳಾರಾಧ್ಯ ಸ್ವಾಮೀಜಿ ಅವರು ಕೈಯಲ್ಲಿ ಮೈಕ್ ಹಿಡಿದು, ಪಕ್ಕದಲ್ಲೇ ಮದ್ಯದ ಬಾಟಲಿ ಇಟ್ಟುಕೊಂಡು ಅತ್ಯಂತ ಗತ್ತಿನಿಂದ ''''ರಾಮಾಚಾರಿ'''' ಚಿತ್ರದ &quot;ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು... ಪ್ರೇಮಗೀತೆ ಹಾಡುತ್ತಾ ಮೋಜು ಮಸ್ತಿಯಲ್ಲಿ ಮುಳುಗಿರುವುದು ಸ್ಪಷ್ಟವಾಗಿದೆ. ಮಠದ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಪೀಠಾಧಿಪತಿಯೇ ಈ ರೀತಿ ವರ್ತಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.&lt;/p&gt;&lt;p&gt;ಪೂಜ್ಯ ಭಾವನೆಯಿಂದ ನೋಡುವ ಮಠದಲ್ಲೇ ಸ್ವಾಮೀಜಿ ಈ ರೀತಿ ಮದ್ಯದ ಬಾಟಲಿ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಬೇಕಾದರೆ ಮಠ ಬಿಟ್ಟು ಮೊದಲು ಹೊರಗೆ ಹೋಗಲಿ, ಅವರ ಮನೆಗೆ ಮರಳಲಿ. ಇಂತಹ ಸ್ವಾಮೀಜಿಗಳಿಂದ ಮಠ ಮಂದಿರಗಳ ಮೇಲೆ ಭಕ್ತಿ ಭಾವದಿಂದ ಕಾಣುವ ನಮ್ಮಂತಹ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆ ಬರುತ್ತಿದೆ. ಈ ಕೂಡಲೇ ಈ ಸ್ವಾಮೀಜಿಯನ್ನು ಮಠದಿಂದ ತೆಗೆದು ಹಾಕಬೇಕು.&lt;/p&gt;&lt;p&gt;-ಶಿವು ಪ್ಯಾಟಿ, ಗ್ರಾಮಸ್ಥರು ಮಾಶಾಳ&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburagi-marularadhya-swamiji-sang-a-movie-song-while-holding-a-bottle-of-liquor-in-front-of-him-mrq/articleshow-3dc2rmq"/>
        </item>
        <item>
            <title><![CDATA[ಗೃಹ ಸಚಿವರ ತವರು ಜಿಲ್ಲೆ ಕಲಬುರಗಿಯ ಸೆಂಟ್ರಲ್ ಜೈಲ್‌ನಿಂದ 3 ಕೈದಿಗಳು ಪರಾರಿ: ಖಾಕಿ ಶೋಧ]]></title>
            <link>https://kannada.asianetnews.com/karnataka-districts/3-prisoners-escape-from-kalaburagi-central-jail-police-searching-rav/articleshow-5krft79</link>
            <guid isPermaLink="true">https://kannada.asianetnews.com/karnataka-districts/3-prisoners-escape-from-kalaburagi-central-jail-police-searching-rav/articleshow-5krft79</guid>
            <pubDate>Wed, 15 Jul 2026 05:25:04 +0530</pubDate>
            <description><![CDATA[&lt;p&gt;3 prisoners escape from Kalaburagi Central Jail ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಮೂವರು ಕೈದಿಗಳು ಪರಾರಿಯಾಗಿರುವ ಘಟನೆ ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxhgj171b2174a4s0jdng154,imgname-----------------------2026-07-15t051909.037-1784072963296.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ನಿನ್ನೆ ಮುಂಜಾನೆ ಜೈಲಿನ ಗೋಡೆ ಹಾರಿ ಎಸ್ಕೇಪ್&lt;/li&gt; &lt;li&gt;ಕೊಲೆ ಕೇಸ್&zwnj;ನಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಗಳು&lt;/li&gt;&lt;/ul&gt;&lt;p&gt;&lt;strong&gt;ಕಲಬುರಗಿ (ಜು.15) &lt;/strong&gt;ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಮೂವರು ಕೈದಿಗಳು ಪರಾರಿಯಾಗಿರುವ ಘಟನೆ ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.&lt;/p&gt;&lt;h2&gt;ಪರಾರಿಯಾದ ಕೈದಿಗಳು ಯಾರು?&lt;/h2&gt;&lt;p&gt;ಪರಾರಿಯಾದ ಕೈದಿಗಳನ್ನು ಬೀದರ್&zwnj; ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಇಸ್ಲಾಂಪುರದ ಮಸ್ತಾನ್, ಔರಾದ್ ತಾಲೂಕಿನ ಸಂತಾಪುರ ಗ್ರಾಮದ ಸಂತೋಷ ಬಸಪ್ಪ ಹಾಗೂ ಬೀದರ್&zwnj; ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ ಭೀಮರಾಯ ಎಂದು ಗುರುತಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಐದೇ ವರ್ಷದಲ್ಲಿ ಯಾದಗಿರಿಯ 16116 ಗರ್ಭಗಳೇ ನಾಪತ್ತೆ! - ಗರ್ಭ ಧರಿಸಿದ್ದವರಿಗೆ ಹೆರಿಗೆಯಾಯಿತೆ? ಗರ್ಭಪಾತವಾಯಿತೆ? ಲೆಕ್ಕವೇ ಇಲ್ಲ&lt;/p&gt;&lt;h3&gt;ಎಸ್ಕೇಪ್ ಆಗಿದ್ದು ಹೇಗೆ?&lt;/h3&gt;&lt;p&gt;ಪ್ರಾಥಮಿಕ ಮಾಹಿತಿಯ ಪ್ರಕಾರ, ಕೈದಿಗಳು ಜೈಲಿನ ಭದ್ರತಾ ಗೋಡೆ ಹಾರಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಜೈಲು ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;ಈ ಘಟನೆ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪರಾರಿಯಾದ ಕೈದಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಹಾಗೂ ಗಡಿ ಭಾಗಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಕೈದಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.&lt;/p&gt;&lt;p&gt;&lt;strong&gt;ಗೃಹ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ಕೃತ್ಯ!&lt;/strong&gt;&lt;/p&gt;&lt;p&gt;ಸ್ವತಃ ಗೃಹ ಸಚಿವರ ತವರಿನಲ್ಲೇ ಇಂತಹ ಲೋಪ ಆಗಿರುವುದು ಇದು ಎರಡನೇ ಬಾರಿ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/3-prisoners-escape-from-kalaburagi-central-jail-police-searching-rav/articleshow-5krft79"/>
        </item>
        <item>
            <title><![CDATA[ಅನ್ನದಾತರಿಗೆ ಡಿಕೆಶಿಯಿಂದ ಗುಡ್‌ನ್ಯೂಸ್.. ಸಾಲ ಮನ್ನದ ಬಗ್ಗೆ ಮಹತ್ವದ ಸುಳಿವು ನೀಡಿದ ಸಿಎಂ]]></title>
            <link>https://kannada.asianetnews.com/karnataka-districts/good-news-for-karnataka-farmers-cm-dk-shivakumar-statement-about-loan-waivers-gkn/articleshow-7hiogzy</link>
            <guid isPermaLink="true">https://kannada.asianetnews.com/karnataka-districts/good-news-for-karnataka-farmers-cm-dk-shivakumar-statement-about-loan-waivers-gkn/articleshow-7hiogzy</guid>
            <pubDate>Tue, 07 Jul 2026 13:29:35 +0530</pubDate>
            <description><![CDATA[&lt;p&gt;ರಾಜ್ಯದ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಹೆಚ್ಚಾಗಿದೆ. ಕಲಬುರಗಿಯಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತು ಸಿಎಂ ಡಿಕೆ ಶಿವಕುಮಾರ್ ಅವರು ಮಾತನ್ನಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡ್ತೀವಿ ಎಂದಷ್ಟೇ ಹೇಳಿದ್ದರೂ, ಅನ್ನದಾತರಿಗೆ ಸರ್ಕಾರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxsd81ztn02rk7vmvy3g7at,imgname-farmers-loan-waiver-1783411155007.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರಗಾಲದ ಕರಿನೆರಳು ಆವರಿಸಿದೆ. ಮಳೆ ಬಾರದೆ &amp;nbsp;ಕಂಗಾಲಾಗಿರುವ ರೈತರ ನೋವಿಗೆ ಸ್ಪಂದಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಕಲಬುರಗಿಯಲ್ಲಿ ಬಿಡುವಿಲ್ಲದ ಪ್ರವಾಸ ಕೈಗೊಂಡಿದ್ದಾರೆ. ಜನರ ಅಹವಾಲು ಸ್ವೀಕರಿಸುವ ವೇಳೆ ಸಿಎಂ, ನೀಡಿದ ಒಂದು ಭರವಸೆ ಈಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;h2&gt;&lt;strong&gt;ಕೂಲ್ ಆಗಿಯೇ ಉತ್ತರಿಸಿದ ಸಿಎಂ!&lt;/strong&gt;&lt;/h2&gt;&lt;p&gt;ಅಹವಾಲು ಸ್ವೀಕಾರದ ವೇಳೆ ಒಂದು ನಾಟಕೀಯ ಘಟನೆ ನಡೆಯಿತು. ವ್ಯಕ್ತಿಯೊಬ್ಬರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ ಎದೆ ಬಡಿದುಕೊಂಡು ಸಿಎಂ ಎದುರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಳೆ ವಿಮೆ ಬಿಡುಗಡೆ ಮಾಡಿ, ರೈತರ ಸಾಲ ಮನ್ನಾ ಮಾಡಿ ಹಾಗೂ ನಿವೇಶನ ನೀಡಿ ಎಂದು ಕೂಗಾಡಿದರು. ಈ ವೇಳೆ ಗಾಬರಿಯಾಗದ ಡಿ.ಕೆ.ಶಿವಕುಮಾರ್ ಅವರು ಅತ್ಯಂತ ತಾಳ್ಮೆಯಿಂದ ಅಹವಾಲು ಕೊಡಿ, ಖಂಡಿತಾ ಪರಿಶೀಲನೆ ನಡೆಸುತ್ತೇನೆ ಎಂದು ಹೇಳುವ ಮೂಲಕ ಆಕ್ರೋಶಗೊಂಡಿದ್ದ ವ್ಯಕ್ತಿಯನ್ನು ಶಾಂತಗೊಳಿಸಿದರು.&lt;/p&gt;&lt;p&gt;&lt;strong&gt;ರೈತರ ಸಾಲ ಮನ್ನಾ ಆಗುತ್ತಾ?&lt;/strong&gt;&lt;/p&gt;&lt;p&gt;ಬರಗಾಲ ಮತ್ತು ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಆಶಾದಾಯಕ ಮಾತುಗಳನ್ನಾಡಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ. ಯಾರ ಸಾಲ? ಯಾವ ರೀತಿಯ ಸಾಲ? ಎಷ್ಟು ಮೊತ್ತದ ಸಾಲ? ಎಂಬ ಎಲ್ಲ ವಿವರಗಳನ್ನು ಪಡೆದು ಸಮಗ್ರವಾಗಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಈ ಹೇಳಿಕೆಯು ಸಾಲಬಾಧೆಯಲ್ಲಿರುವ ಅನ್ನದಾತನಿಗೆ ಸದ್ಯದಲ್ಲೇ ಸಿಹಿ ಸುದ್ದಿ ಸಿಗಬಹುದು ಎಂಬ ನಿರೀಕ್ಷೆ ಮೂಡಿಸಿದೆ.&lt;/p&gt;&lt;h3&gt;&lt;strong&gt;ಕಬ್ಬು ಕೊಟ್ಟು ಮನವಿ ಮಾಡಿದ ರೈತರು!&lt;/strong&gt;&lt;/h3&gt;&lt;p&gt;ಇದೇ ವೇಳೆ ರೈತರು ಸಿಎಂಗೆ ಕಬ್ಬಿನ ಜಲ್ಲೆಗಳನ್ನು ನೀಡುವ ಮೂಲಕ ವಿಭಿನ್ನವಾಗಿ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿ, ಉಜನಿ ಜಲಾಶಯದಿಂದ ನೀರು ಬಿಡಿಸಿ ಹಾಗೂ ಕಬ್ಬಿನ ದರವನ್ನು ತಕ್ಷಣವೇ ಹೆಚ್ಚಳ ಮಾಡಿ ಎಂದು ಒತ್ತಾಯಿಸಿದರು. ಕಲ್ಯಾಣ ಕರ್ನಾಟಕದ ರೈತರ ಸಂಕಷ್ಟವನ್ನು ಆಲಿಸಿದ ಸಿಎಂ, ಎಲ್ಲವನ್ನೂ ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.&lt;/p&gt;&lt;h3&gt;&lt;strong&gt;ಬರಗಾಲದ ಕುರಿತು ಹಿರಿಯ ಅಧಿಕಾರಿಗಳ ಮಹತ್ವದ ಸಭೆ&lt;/strong&gt;&lt;/h3&gt;&lt;p&gt;ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಭಾಗೀಯ ಮಟ್ಟದ ಅಧಿಕಾರಿಗಳ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಶಾಸಕರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದಾರೆ. ಮಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಯಾವ ರೀತಿಯ ಪರಿಹಾರ ನೀಡಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿದೆ. ಇಂದಿನ ಸಭೆಯ ನಂತರ ಎರಡು ಮೂರು ದಿನಗಳಲ್ಲಿ ಬೆಳಗಾವಿಗೂ ತೆರಳಿ ಅಲ್ಲಿನ ಪರಿಸ್ಥಿತಿ ಪರಾಮರ್ಶೆ ನಡೆಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಕಲಬುರಗಿ ಭೇಟಿಯು ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಸಾಲ ಮನ್ನಾ ರೂಪದಲ್ಲಿ ಯಾವುದಾದರೂ ದೊಡ್ಡ ಘೋಷಣೆ ಹೊರಬೀಳುತ್ತದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/good-news-for-karnataka-farmers-cm-dk-shivakumar-statement-about-loan-waivers-gkn/articleshow-7hiogzy"/>
        </item>
        <item>
            <title><![CDATA[ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಚಾಲನೆ: ಕಲಬುರಗಿ ಕೆಕೆಆರ್‌ಟಿಸಿ ಚಾಲಕ ಅಮಾನತು, ತಾಂತ್ರಿಕ ಸಿಬ್ಬಂದಿಗೂ ಶಾಕ್!]]></title>
            <link>https://kannada.asianetnews.com/karnataka-districts/kalaburagi-kkrtc-bus-driver-suspended-mobile-torch-light-incident-kannada/articleshow-83ef1o5</link>
            <guid isPermaLink="true">https://kannada.asianetnews.com/karnataka-districts/kalaburagi-kkrtc-bus-driver-suspended-mobile-torch-light-incident-kannada/articleshow-83ef1o5</guid>
            <pubDate>Mon, 06 Jul 2026 22:54:39 +0530</pubDate>
            <description><![CDATA[&lt;p&gt;ಕಲಬುರಗಿ ಕೆಕೆಆರ್&zwnj;ಟಿಸಿ ಬಸ್ಸಿನ ಹೆಡ್&zwnj;ಲೈಟ್ ಕೆಟ್ಟಾಗ, ಚಾಲಕ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ್ದರು. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕನನ್ನು ಅಮಾನತುಗೊಳಿಸಲಾಗಿದೆ ಮತ್ತು ನಿರ್ವಹಣಾ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kws68x9ypm69ks1ejwgnhrj6,imgname-kkrtc-bus-headlight-damage-1783256872253.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಜು.06): ಸಾ&lt;/strong&gt;ರಿಗೆ ಸಂಸ್ಥೆಯ ಬಸ್ಸೊಂದರ ಹೆಡ್&zwnj;ಲೈಟ್ ಕೆಟ್ಟುಹೋಗಿದ್ದರೂ, ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಅಪಾಯಕಾರಿಯಾಗಿ ಬಸ್ ಚಲಾಯಿಸಿದ ಘಟನೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಬಸ್ ಚಾಲಕನನ್ನು ಅಮಾನತುಗೊಳಿಸಲಾಗಿದ್ದು, ಬಸ್ಸಿನ ನಿರ್ವಹಣೆಯಲ್ಲಿ ವಿಫಲರಾದ ತಾಂತ್ರಿಕ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಭೀಕರ ಘಟನೆ?&lt;/strong&gt;&lt;/h2&gt;&lt;p&gt;ಜುಲೈ 4 ರಂದು ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುತ್ತಿದ್ದ ಚಿಂಚೋಳಿ ಘಟಕದ ಬಸ್ (ನೋಂದಣಿ ಸಂಖ್ಯೆ: KA-28 F-1985) ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಏಕಿ ಹೆಡ್&zwnj;ಲೈಟ್ ಕೈಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಚಾಲಕ ಬಸ್ಸನ್ನು ಸುರಕ್ಷಿತವಾಗಿ ರಸ್ತೆ ಬದಿ ನಿಲ್ಲಿಸಿ ಬದಲಿ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಚಾಲಕ ಮತ್ತು ಕಂಡಕ್ಟರ್ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಕಂಡಕ್ಟರ್ ಕಿಟಕಿಯಿಂದ ಮೊಬೈಲ್ ಫೋನ್ ಫ್ಲಾಶ್ ಲೈಟ್ ಹಿಡಿದು ದಾರಿ ತೋರಿಸುತ್ತಿದ್ದರೆ, ಚಾಲಕ ಕತ್ತಲಲ್ಲೇ ಬಸ್ ಓಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.&lt;/p&gt;&lt;h2&gt;&lt;strong&gt;ಅಧಿಕೃತ ಕ್ರಮ ಮತ್ತು ಅಮಾನತು:&lt;/strong&gt;&lt;/h2&gt;&lt;p&gt;ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಕೆಆರ್&zwnj;ಟಿಸಿ ಮುಖ್ಯ ತಾಂತ್ರಿಕ ಅಭಿಯಂತರರು, ಸಮಗ್ರ ತನಿಖೆ ನಡೆಸಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ವರದಿಯ ಮುಖ್ಯಾಂಶಗಳು ಇಲ್ಲಿವೆ:&lt;/p&gt;&lt;p&gt;&lt;strong&gt;ಚಾಲಕನ ಅಮಾನತು: &lt;/strong&gt;ಬಸ್ಸಿನಲ್ಲಿ ದೋಷ ಬಂದಿದ್ದರೂ ಹತ್ತಿರದ ಘಟಕಕ್ಕೆ ತೆರಳಿ ದುರಸ್ತಿ ಮಾಡಿಸದೆ, ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಓಡಿಸಿ ಪ್ರಯಾಣಿಕರ ಪ್ರಾಣಾಪಾಯಕ್ಕೆ ಕಾರಣವಾದ ಚಾಲಕನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ತಾಂತ್ರಿಕ ಸಿಬ್ಬಂದಿಗೆ ಬಿಸಿ:&lt;/strong&gt; ವಾಹನದ ಸೂಕ್ತ ನಿರ್ವಹಣೆ ಮಾಡುವಲ್ಲಿ ವಿಫಲರಾದ ಘಟಕದ ತಾಂತ್ರಿಕ ಮೇಲ್ವಿಚಾರಕರು ಮತ್ತು ತಾಂತ್ರಿಕ ಸಿಬ್ಬಂದಿ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಸಾರಿಗೆ ವ್ಯವಸ್ಥೆಯ ದಯನೀಯ ಸ್ಥಿತಿಗೆ ಸಾಕ್ಷಿ:&lt;/strong&gt;&lt;/h2&gt;&lt;p&gt;ಬಸ್ಸಿನ ಹೆಡ್&zwnj;ಲೈಟ್ ಇಲ್ಲದೆ ರಸ್ತೆಗೆ ಬಿಟ್ಟಿದ್ದು ಯಾರು? ಬಸ್ಸಿನ ಫಿಟ್&zwnj;ನೆಸ್ ಪರಿಶೀಲನೆ ಸರಿಯಾಗಿ ನಡೆಯುತ್ತಿದೆಯೇ? ಎಂಬ ಪ್ರಶ್ನೆಗಳು ಈ ಘಟನೆಯಿಂದ ಎದ್ದಿವೆ. ಸರ್ಕಾರದ 'ಶಕ್ತಿ' ಯೋಜನೆಯಡಿ ಬಸ್&zwnj;ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರೂ, ಬಸ್&zwnj;ಗಳ ನಿರ್ವಹಣೆಯತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ. &lsquo;ಸಾಮಾನ್ಯರು ಹೆಲ್ಮೆಟ್ ಹಾಕದಿದ್ದರೆ ದಂಡ ಹಾಕುವ ಸರ್ಕಾರ, ಇಂತಹ ಮರಣಮೃದಂಗ ಬಸ್&zwnj;ಗಳನ್ನು ರಸ್ತೆಗೆ ಬಿಡುವವರ ಮೇಲೆ ಯಾಕೆ ಕಣ್ಣು ಮುಚ್ಚಿ ಕುಳಿತಿದೆ?&rsquo; ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ವೈರಲ್ ವಿಡಿಯೋ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾದರೂ, ಇಂತಹ ಘಟನೆಗಳು ಮರುಕಳಿಸದಂತೆ ಬಸ್&zwnj;ಗಳ ತಾಂತ್ರಿಕ ಸ್ಥಿತಿಗತಿಯನ್ನು ಸುಧಾರಿಸಬೇಕಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kalaburagi-kkrtc-bus-driver-suspended-mobile-torch-light-incident-kannada/articleshow-83ef1o5"/>
        </item>
        <item>
            <title><![CDATA[Kalaburagi: ಗೃಹ ಸಚಿವರೊಂದಿಗೆ ಸಭೆ ನಡೆಯುತ್ತಿರುವಾಗಲೇ ಡಿಸಿ, ಎಡಿಸಿ, ಎಸಿ ಕಾರು ಜಪ್ತಿ; ಮುಜುಗರಕ್ಕೆ ಒಳಗಾದ ಅಧಿಕಾರಿಗಳು, ಆಗಿದ್ದೇನು?]]></title>
            <link>https://kannada.asianetnews.com/karnataka-districts/cars-belonging-to-kalaburagi-dc-adc-ac-were-seized-as-court-orders-regarding-providing-land-compensation-to-farmer-sns/articleshow-98itf56</link>
            <guid isPermaLink="true">https://kannada.asianetnews.com/karnataka-districts/cars-belonging-to-kalaburagi-dc-adc-ac-were-seized-as-court-orders-regarding-providing-land-compensation-to-farmer-sns/articleshow-98itf56</guid>
            <pubDate>Tue, 11 Aug 2026 10:48:45 +0530</pubDate>
            <description><![CDATA[&lt;p&gt;ಕಲಬುರಗಿಯ ನಂದಿಕೂರ ಗ್ರಾಮದಲ್ಲಿ ಎಸ್ಸಿಪಿ ಘಟಕ ನಿರ್ಮಾಣಕ್ಕೆ ರೈತನ ಎರಡು ಎಕರೆ ಹನ್ನೊಂದು ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಭೂಮಿಗೆ ಪರಿಹಾರವಾಗಿ ನೀಡಬೇಕಿರುವ 8 ಕೋಟಿ ರೂಪಾಯಿ ನೀಡಲು ಅಧಿಕಾರಿಗಳು ವಿಳಂಬ ಮಾಡಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzqkmzw14ev6ttch4cv3zxe1,imgname-kalaburagi-dc--1786425016193.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸಭೆಯ ನಡೆಯುತ್ತಿರುವ ಸಂದರ್ಭದಲ್ಲಿಯೇ ಹೊರಗಡೆ ಅಧಿಕಾರಿಗಳ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇದರಿಂದ ಜಿಲ್ಲಾಧಿಕಾರಿಗಳು ಸೇರಿದಂತೆ ಇತರೇ ಉನ್ನತ ಅಧಿಕಾರಿಗಳು ಮುಜುಗರಕ್ಕೆ ಒಳಗಾಗಿದ್ದಾರೆ.&lt;/p&gt;&lt;p&gt;ಕಲಬುರಗಿ ಮಿನಿ ವಿಧಾನಸೌಧದ ಒಳಗೆ ಗೃಹ ಸಚಿವರೊಂದಿಗೆ ಅಧಿಕಾರಿಗಳ ಸಭೆ ನಡೆಯುತ್ತಿದ್ದಾಗಲೇ ಘಟನೆ ನಡೆದಿದ್ದು, ಕಲಬುರಗಿ ಜಿಲ್ಲಾಧಿಕಾರಿ (ಡಿಸಿ), ಅಪರ ಜಿಲ್ಲಾಧಿಕಾರಿ (ಎ&zwnj;ಡಿಸಿ), ಸಹಾಯಕ ಆಯುಕ್ತರ (ಎಸಿ) ಕಾರುಗಳನ್ನು ಕಲಬುರಗಿ ಜಿಲ್ಲಾ ನ್ಯಾಯಾಲಯದ ಆದೇಶದ ಮೆರೆಗೆ ಕೋರ್ಟ್ ಸಿಬ್ಬಂದಿಗಳು ಜಪ್ತಿ ಮಾಡಿದ್ದಾರೆ.&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ಭೂಸ್ವಾಧೀನ ಪಡೆದುಕೊಂಡಿದ್ದ ರೈತನಿಗೆ ಪರಿಹಾರ ನೀಡಲು ವಿಳಂಬ ಹಿನ್ನಲೆ&zwnj; ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿ ಅಧಿಕಾರಿಗಳ ವಾಹನ ಜಪ್ತಿಗೆ ಆದೇಶ ನೀಡಿತ್ತು. ಕಲಬುರಗಿಯ ನಂದಿಕೂರ ಗ್ರಾಮದಲ್ಲಿ ಎಸ್ಸಿಪಿ ಘಟಕ ನಿರ್ಮಾಣಕ್ಕೆ ರೈತನ ಎರಡು ಎಕರೆ ಹನ್ನೊಂದು ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಭೂಮಿಗೆ ಪರಿಹಾರವಾಗಿ ನೀಡಬೇಕಿರುವ 8 ಕೋಟಿ ರೂಪಾಯಿ ನೀಡಲು ಅಧಿಕಾರಿಗಳು ವಿಳಂಬ ಮಾಡಿದ್ದರು. ಇದರೊಂದಿಗೆ ಭೂಮಿ ಕಳೆದುಕೊಂಡಿದ್ದ ನಂದಿಕೂರ ಗ್ರಾಮದ ರೈತ ಪ್ರಕಾಶ್ ಮಲಕಪ್ಪ ಕೋರ್ಟ್ ಮೋರೆ ಹೋಗಿದ್ದರು.&lt;/p&gt;&lt;p&gt;&lt;img&gt;&lt;/p&gt;&lt;p&gt;2009ರಲ್ಲಿ ನಗರದಿಂದ ಹೋಗುವ ಕೊಳಚೆ ನೀರಿನ ಶುದ್ದೀಕರಣ ಘಟಕ ನಿರ್ಮಾಣಕ್ಕಾಗಿ ಪ್ರಕಾಶ್ ಮಲಕಪ್ಪ ಅವರ ಜಮೀನನ್ನು ಅಧಿಕಾರಿಗಳು ಭೂಸ್ವಾಧೀನ ಮಾಡಿಕೊಂಡಿದ್ದರು. ಆದರೆ ಆ ಬಳಿಕ ಬರೋಬ್ಬರಿ 09 ವರ್ಷ ಕಳೆದರೂ ಕೂಡ ರೈತನಿಗೆ ಪರಿಹಾರ ಸಿಕ್ಕಿರಲಿಲ್ಲ. ಇದರೊಂದಿಗೆ 2018ರಲ್ಲಿ ಸೂಕ್ತ ಪರಿಹಾರ ನೀಡುವಂತೆ ಸೂಚನೆ ನೀಡಲು ರೈತ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ರೈತನಿಗೆ ನ್ಯಾಯಯುತವಾಗಿ ನೀಡಬೇಕಿದ್ದ 8 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಆದೇಶ ಹೊರಡಿಸಿತ್ತು.&lt;/p&gt;&lt;p&gt;ಆದರೆ ಕೋರ್ಟ್ ಆದೇಶದ ಬಳಿಕವೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿರಲಿಲ್ಲ. ರೈತನಿಗೆ ಕೇವಲ 10 ಲಕ್ಷ ಮಾತ್ರ ನೀಡಿ ಜಿಲ್ಲಾಡಳಿತ ಕೈ ತೊಳೆದುಕೊಂಡಿತ್ತು. ಇದರೊಂದಿಗೆ ಮತ್ತೊಮ್ಮೆ ನ್ಯಾಯಾಲಯಕ್ಕೆ ರೈತ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ಪರಿಶೀಲನೆ ನಡೆಸಿದ ನ್ಯಾಯಾಲಯ ಅಧಿಕಾರಿಗಳ ಕಾರುಗಳನ್ನು ಜಪ್ತಿ ಮಾಡಿಕೊಂಡು ರೈತನಿಗೆ ಪರಿಹಾರ ನೀಡಲು ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಕಲಬುರಗಿ ಡಿಸಿ, ಎಡಿಸಿ, ಎಸಿ ಅವರ ಕಾರುಗಳನ್ನು ಕೋರ್ಟ್ ಸಿಬ್ಬಂದಿಗಳು ಜಪ್ತಿಗೆ ಮಾಡಿಕೊಂಡಿದ್ದರು. ಆದರೆ ವಿಧಾನಸೌಧದಲ್ಲಿ ಗೃಹ ಸಚಿವರೊಂದಿಗೆ ಸಭೆ ನಡೆಯುತ್ತಿದ್ದಾಗಲೇ ಹೊರಗಡೆ ಕಾರುಗಳು ಜಪ್ತಿಯಾದ ಹಿನ್ನಲೆ ಅಧಿಕಾರಿಗಳು ತೀವ್ರ ಮುಜುಗರಕ್ಕೆ ಒಳಗಾಗಿದ್ದರು.&lt;/p&gt;&lt;h2&gt;&lt;strong&gt;ರೈತ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಈ ಬಗ್ಗೆ ಸುವರ್ಣ ನ್ಯೂಸ್&zwnj;ನೊಂದಿಗೆ ಮಾತನಾಡಿದ ರೈತ ಪ್ರಕಾಶ್ ಮಲಕಪ್ಪ, ನಂದಿಕೂರಿನಲ್ಲಿ ಎಸ್&zwnj;ಟಿಪಿ ಘಟಕದ ನಿರ್ಮಾಣಕ್ಕೆ ನಮ್ಮ ಹೊಲವನ್ನು ಸರ್ಕಾರ ಸ್ವಾಧೀನ ಮಾಡಿಕೊಂಡಿತ್ತು. 2018ರಲ್ಲಿ ಹೆಚ್ಚುವರಿ ಭೂಪರಿಹಾರ ನೀಡಲು ಕೋರ್ಟ್ ಆದೇಶ ನೀಡಿದೆ. ನಮ್ಮ 2 ಎಕರೆ 11 ಗುಂಟೆ ಜಮೀನಿಗೆ ಪರಿಹಾರವಾಗಿ 8 ಕೋಟಿ ರೂಪಾಯಿ ಪರಿಹಾರ ನೀಡಲು ಕೋರ್ಟ್ ಆದೇಶ ನೀಡಿದೆ. ಆದರೆ ಅಧಿಕಾರಿಗಳು ಎರಡು ಹಂತದಲ್ಲಿ ಕೇವಲ 10 ಲಕ್ಷ ರೂಪಾಯಿ ಮಾತ್ರ ನೀಡಿದ್ದಾರೆ. ನಮ್ಮ ಸುತ್ತಮುತ್ತಿನ ಹೊಲಗಳ ರೈತರಿಗೆ ಪರಹಾರ ನೀಡಿದ್ದಾರೆ. ಆದರೆ ನಮಗೆ ಮಾತ್ರ ಪರಿಹಾರ ನೀಡಿಲ್ಲ. ಈಗ ನ್ಯಾಯಾಲಯ ಕನಿಷ್ಠ ಶೇಕಡಾ 50ರಷ್ಟು ಆದರೂ ಕೂಡಲೇ ಬಿಡುಗಡೆ ಮಾಡಲು ಹೇಳಿತ್ತು. ಈಗ ಕೋರ್ಟ್ ಕಾರು ಸೀಜ್ ಮಾಡಲು ಹೇಳಿದೆ ಎಂದು ತಿಳಿಸಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/cars-belonging-to-kalaburagi-dc-adc-ac-were-seized-as-court-orders-regarding-providing-land-compensation-to-farmer-sns/articleshow-98itf56"/>
        </item>
        <item>
            <title><![CDATA[Monsoon deficit: ಕೈ ಕೊಟ್ಟ ಮುಂಗಾರು; ಮಳೆಗಾಲದಲ್ಲೇ ಬತ್ತಿದ ನದಿ, ನೀರಿಲ್ಲದೇ ಜಾನುವಾರು ಪರದಾಟ]]></title>
            <link>https://kannada.asianetnews.com/karnataka-districts/monsoon-deficit-in-karnataka-bhima-river-is-dry-no-water-for-livestock-or-agriculture-rav/articleshow-fiwgcm1</link>
            <guid isPermaLink="true">https://kannada.asianetnews.com/karnataka-districts/monsoon-deficit-in-karnataka-bhima-river-is-dry-no-water-for-livestock-or-agriculture-rav/articleshow-fiwgcm1</guid>
            <pubDate>Fri, 17 Jul 2026 12:05:46 +0530</pubDate>
            <description><![CDATA[ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜೀವನಾಡಿ ಭೀಮಾ ನದಿ ಬತ್ತಿ ಹೋಗಿದ್ದು, ಅಫಜಲಪುರ, ಜೇವರ್ಗಿ ಭಾಗದ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತಿದ ಬೆಳೆಗಳು ಒಣಗುತ್ತಿದ್ದು, ಸೊನ್ನ ಬ್ಯಾರೇಜ್&zwnj;ನಲ್ಲಿ ನೀರಿನ ಮಟ್ಟ ಕುಸಿದಿದೆ, ಇದರಿಂದಾಗಿ ರೈತರು ಸರ್ಕಾರದ ನೆರವಿಗಾಗಿ ಆಗ್ರಹಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxqcd43ng393f62tp2nx91x5,imgname-----------------------2026-07-17t115048.155-1784269934709.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕರಜಗಿ (ಜು.17):&lt;/strong&gt; ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯಲ್ಲಿ ಹಲವು ಜಲಮೂಲಗಳು ಬತ್ತಿದ್ದು, ರೈತರ ಜೀವನಾಡಿಯಾಗಿರುವ ಭೀಮಾ ನದಿ ಈ ಬಾರಿ ನೀರಿಲ್ಲದೆ ಬಿಕೋ ಎನ್ನುತ್ತಿದೆ.&lt;/p&gt;&lt;p&gt;ನದಿಯನ್ನು ಅವಲಂಬಿಸಿರುವ ಅಫಜಲಪುರ, ಜೇವರ್ಗಿ ಹಾಗೂ ಶಹಾಬಾದ್&zwnj; ಭಾಗಗಳ ಸಾವಿರಾರು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಉಳಿಸಿಕೊಳ್ಳಲು ಮುಗಿಯುತ್ತ ಚಿತ್ತ ನೆಟ್ಟಿದ್ದಾರೆ. ಸಂಕಟದಲ್ಲಿರುವ ರೈತರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು ಎಂಬುದು ರೈತರ ಆಗ್ರಹವಾಗಿದೆ.&lt;/p&gt;&lt;h2&gt;ಜೂನ್ ತಿಂಗಳು ಸುರಿದ ಮಳೆ ಬರಲಿಲ್ಲ ಮತ್ತೆ!&lt;/h2&gt;&lt;p&gt;ಜೂನ್ ತಿಂಗಳಲ್ಲಿ ಸುರಿದ ಮಳೆಯಿಂದ ಸಂತಸಗೊಂಡ ರೈತರು ಬೀಜ, ರಸಗೊಬ್ಬರ, ಕ್ರಿಮಿನಾಶಕ ಇನ್ನಿತರ ಕೃಷಿ ಪರಿಕರಗಳನ್ನು ಖರೀದಿಸಿ ಬಿತ್ತನೆಗೆ ಸಜ್ಜುಗೊಂಡಿದ್ದರು. ಇದೇ ಸಂದರ್ಭದಲ್ಲಿ ಕೆಲವು ರೈತರು ಬಿತ್ತನೆ ಕಾರ್ಯ ಮಾಡಿದರೆ ಇನ್ನೂ ಕೆಲವರು ಮತ್ತಷ್ಟು ಮಳೆಗಾಗಿ ಕಾಯುತ್ತಿದ್ದು. ಇದೀಗ ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡಿದ ಭೂಮಿಗಳಲ್ಲಿ ಚಿಗುರಿದ ಬೆಳೆಯೂ ಒಣಗಿ ಹೋಗುತ್ತಿದೆ. ಇನ್ನೊಂದೆಡೆ, ಬಿತ್ತನೆ ಮಾಡದೆ ಇರುವ ರೈತರು ಕೃಷಿ ಬೀಜ ರಸಗೊಬ್ಬರಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಭೂಮಿಯನ್ನು ಬೀಳು ಬಿಟ್ಟಿದ್ದಾರೆ.&lt;/p&gt;&lt;h3&gt;ನೀರಿಲ್ಲದೆ ಒಣಗಿ ನಿಂತ ಕಬ್ಬು!&lt;/h3&gt;&lt;p&gt;ನೀರಿಲ್ಲದೆ ಒಣಗಿದ ಕಬ್ಬು ಮಳೆ ಹಿನ್ನಡೆಯಾಗಿದ್ದರಿಂದ ನದಿ ತೀರದ ಜಮೀನುಗಳು ಹಾಗೂ ಅಫಜಲಪುರ, ಆಳಂದ, ಜೇವರ್ಗಿ ತಾಲೂಕುಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳೆದಿರುವ ಬಚಾವತ್ ಆಯೋಗದ ಪ್ರಕಾರ ''ಬರ'' ದ ನೀರು ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿರುವ ಕಬ್ಬು, ಉದ್ದು, ಹೆಸರು ಮತ್ತಿತ್ತರ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ಸಾಲ ಮಾಡಿ ಕೃಷಿ ಆರಂಭಿಸಿದ್ದ ರೈತರು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಕೈತಪ್ಪುವ ಆತಂಕದಲ್ಲಿದ್ದಾರೆ.&lt;/p&gt;&lt;h3&gt;ಜಲಮೂಲಗಳು ಖಾಲಿ ಖಾಲಿ!&lt;/h3&gt;&lt;p&gt;ಸೊನ್ನ ಬ್ಯಾರೇಜ್&zwnj;ನಲ್ಲಿ 0.248 ಟಿಎಂಸಿ ಮಾತ್ರ ನೀರು: ಮಹಾರಾಷ್ಟ್ರದಿಂದ ಹರಿವ ಭೀಮಾ ನದಿಯು ಅಫಜಲಪುರ, ಜೇವರ್ಗಿ, ತಾಲೂಕಿನ ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ ನೀರು ಒದಗಿಸುತ್ತದೆ.&lt;/p&gt;&lt;p&gt;ದಿಢೀರ್ ಮಳೆ ಬಂದಾಗ ಸೊನ್ನ ಬ್ರಿಡ್ಜ್&zwnj; ಕಮ್&zwnj; ಬ್ಯಾರೇಜ್&zwnj;ನಲ್ಲಿ ವೈಜ್ಞಾನಿಕವಾಗಿ ನೀರು ಸಂಗ್ರಹಣೆ ಮಾಡದೆ ಇರುವುದರಿಂದ ಬೇಸಿಗೆಯಲ್ಲಿ ನೀರಿನ ಬವಣೆ ಹೆಚ್ಚಾಗಲು ಕಾರಣವಾಗಿದೆ. 3.166 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿರುವ ಬ್ಯಾರೇಜ್&zwnj;ನಲ್ಲಿ ಪ್ರಸ್ತುತ ಕೇವಲ 0.248 ಟಿಎಂಸಿ ನೀರು ಮಾತ್ರ ಉಳಿದಿದ್ದು ನದಿ ತೀರದ ಗ್ರಾಮಗಳಲ್ಲೂ ನೀರಿನ ಅಭಾವ ತೀವ್ರಗೊಂಡಿದೆ.&lt;/p&gt;&lt;p&gt;ಬಚಾವತ್ ಆಯೋಗ ಪ್ರಕಾರ ಬರದ ನೀರು: ಬಚಾವತ್ ಆಯೋಗದ ಪ್ರಕಾರ, ಮಹಾರಾಷ್ಟ್ರದ ಸೋಲಾಪುರದ ಉಜ್ಜನಿ ಬಳಿ ಭೀಮಾ ನದಿಗೆ ಅಡ್ಡ ಲಾಗಿ ಕಟ್ಟಿರುವ ಈ ಅಣೆಕಟ್ಟಿನಿಂದ 15 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಮಳೆಗಾಲದಲ್ಲಿ ಪ್ರವಾಹ ಬಂದಾಗ ನೀಡುವ ನೀರು ಬೇಕಾದ ಸಂದರ್ಭದಲ್ಲಿ ಬಿಡುಗಡೆ ಆಗುವುದಿಲ್ಲ, ಈ ಭಾಗದಲ್ಲಿ 30ಲಕ್ಷ ಹೆಕ್ಟೇರ್&zwnj;ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿಲ್ಲ.&lt;/p&gt;&lt;p&gt;ರಾಜ್ಯದ ಬರಪೀಡಿತವಾಗಿ ನರಳುತ್ತಿದ್ದರು ಕೃಷಿ ಸಚಿವರೇ ಇಲ್ಲ, ಸರ್ಕಾರದಲ್ಲಿ ರೈತರ ಗೋಳು ಕೇಳುವವರು ಯಾರು ಇಲ್ಲ, ಸಿಎಂ ಕಾಟಾಚಾರಕ್ಕೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೂಡಲೇ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸಬೇಕು. ಮಹಾರಾಷ್ಟ್ರ ಸರ್ಕಾರಕ್ಕೆ ಮನವೊಲಿಸಿ ನೀರು ಬಿಡುವಂತೆ ಒತ್ತಾಯಿಸಬೇಕು. ಇಲ್ಲದಿದ್ದರೆ ಬಚಾವತ್ ಆಯೋಗ ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಬೇಕು. ಆದರೆ, ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯವಹಿಸಿವೆ ಎನ್ನುತ್ತಾರೆ ರೈತ ಶ್ರೀಮಂತ ಬಿರಾದಾರ.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/monsoon-deficit-in-karnataka-bhima-river-is-dry-no-water-for-livestock-or-agriculture-rav/articleshow-fiwgcm1"/>
        </item>
        <item>
            <title><![CDATA[ಬೆಂಗಳೂರು-ಮುಂಬೈ ವಂದೇ ಭಾರತ್: ಕಲಬುರಗಿ ಮಾರ್ಗ ಬದಲಾವಣೆ ಮಾಡಿ ಬೇರೆ ಕಡೆ ತಿರುಗಿಸಲು ಹುನ್ನಾರ ನಡೀತಿದ್ಯಾ?]]></title>
            <link>https://kannada.asianetnews.com/karnataka-districts/bengaluru-mumbai-vande-bharat-sleeper-row-over-route-change-kalaburagi-divert-via-hubballi-gdp/articleshow-ibffheh</link>
            <guid isPermaLink="true">https://kannada.asianetnews.com/karnataka-districts/bengaluru-mumbai-vande-bharat-sleeper-row-over-route-change-kalaburagi-divert-via-hubballi-gdp/articleshow-ibffheh</guid>
            <pubDate>Thu, 16 Jul 2026 13:10:39 +0530</pubDate>
            <description><![CDATA[ಕೇಂದ್ರ ಸರ್ಕಾರ ಘೋಷಿಸಿದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿನ ಮಾರ್ಗವನ್ನು ಕಲಬುರಗಿಯಿಂದ ಹುಬ್ಬಳ್ಳಿ-ಬೆಳಗಾವಿಗೆ ಬದಲಾಯಿಸಲು ನಡೆಯುತ್ತಿರುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸಲಾಗಿದೆ. ಈ ರಾಜಕೀಯ ಒತ್ತಡಕ್ಕೆ ಮಣಿದು ಮಾರ್ಗ ಬದಲಿಸಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knzr06zjsgm9tffs2c0e3qf0,imgname-indian-railways-2026-reforms-vande-bharat-sleeper-hydrogen-train-ticket-refund-cancellation-board-change-policy-5-1775960595442.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು-ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲನ್ನು ಕಲಬುರಗಿ ಮಾರ್ಗವಾಗಿ ಸಂಚರಿಸುವಂತೆ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದರೂ, ಇದೀಗ ಆ ಮಾರ್ಗವನ್ನು ಹುಬ್ಬಳ್ಳಿ-ಬೆಳಗಾವಿ ಕಡೆಗೆ ಬದಲಾಯಿಸಲು ನಡೆಯುತ್ತಿರುವ ಯತ್ನವನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಹಾಗೂ ಟೀಮ್ ಯುವಾ ಸಂಘಟನೆಯ ಸಂಚಾಲಕ ವಿನಯ್ ಕುಮಾರ್ ಮಾಳಗೆ ತೀವ್ರವಾಗಿ ಖಂಡಿಸಿದ್ದಾರೆ.&lt;/p&gt;&lt;h2&gt;ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ವಿರುದ್ಧ ಆರೋಪ&lt;/h2&gt;&lt;p&gt;ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಏ.27, 2026ರಂದು ಕಲಬುರಗಿ ಮಾರ್ಗವಾಗಿ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಈ ಮಾರ್ಗವನ್ನು ಹುಬ್ಬಳ್ಳಿ-ಬೆಳಗಾವಿ ಕಡೆಗೆ ಬದಲಾಯಿಸಲು ಒತ್ತಡ ಹೇರುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ ವಾಗಿದೆ ಎಂದು ಆರೋಪಿಸಿದ್ದಾರೆ.&lt;/p&gt;&lt;p&gt;ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಿಜೆಪಿ ನಾಯಕರು ನಿರಂತರವಾಗಿ ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿದ ಮಾಳಗೆ, ಈ ಹಿಂದೆ ರಾಯಚೂರಿಗೆ ಮಂಜೂರಾಗಬೇಕಿದ್ದ ಐಐಟಿ ಹಾಗೂ ಏಮ್ಸ್ ಸಂಸ್ಥೆಗಳನ್ನು ಹುಬ್ಬಳ್ಳಿ - ಧಾರವಾಡಕ್ಕೆ ಸ್ಥಳಾಂತರಿಸುವ ಮೂಲಕ ಈ ಭಾಗದ ಯುವಕರಿಗೆ ಅನ್ಯಾಯ ಮಾಡ ಲಾಗಿದೆ ಎಂದು ಟೀಕಿಸಿದರು.&lt;/p&gt;&lt;p&gt;ಬೀದರ್ ಜಿಲ್ಲೆಯಲ್ಲಿಯೂ ಹೆಚ್&zwnj;ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ, ಬಿಎಸ್&zwnj;ಎಫ್ ತರಬೇತಿ ಕೇಂದ್ರ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ಎನ್&zwnj;ಐಎಂಜೆಡ್) ಯೋಜನೆಗಳು ಬಿಜೆಪಿ ನಾಯಕರ ನಿರ್ಲಕ್ಷ್ಯದಿಂದ ಕೈತಪ್ಪಿವೆ ಎಂದು ಆರೋಪಿಸಿದರು.&lt;/p&gt;&lt;p&gt;ಬೆಂಗಳೂರು - ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಯಾವುದೇ ಕಾರಣಕ್ಕೂ ಕಲಬುರಗಿ ಮಾರ್ಗದಿಂದ ಬದಲಾಗಬಾರದು. ಕಲ್ಯಾಣ ಕರ್ನಾಟಕದ ಎಲ್ಲ ಸಂಸದರು, ಶಾಸಕರು ಹಾಗೂ ಪಕ್ಷಾತೀತ ನಾಯಕರು ಒಗ್ಗಟ್ಟಿನಿಂದ ಈ ಪ್ರಸ್ತಾವನೆಯನ್ನು ವಿರೋಧಿಸಿ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಕಲಬುರಗಿ ಮಾರ್ಗವನ್ನೇ ಅಂತಿಮಗೊಳಿಸುವಂತೆ ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದರು. ಒಂದು ವೇಳೆ ಕೇಂದ್ರ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು ರೈಲು ಮಾರ್ಗ ಬದಲಾಯಿಸಿದರೆ, ಕಲ್ಯಾಣ ಕರ್ನಾಟಕ ಭಾಗದಾದ್ಯಂತ ಸಾರ್ವಜನಿಕರು, ಯುವಕರು ಹಾಗೂ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿನಯ್ ಕುಮಾರ್ ಮಾಳಗೆ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-mumbai-vande-bharat-sleeper-row-over-route-change-kalaburagi-divert-via-hubballi-gdp/articleshow-ibffheh"/>
        </item>
        <item>
            <title><![CDATA[ಕಲಬುರಗಿ: ಅಫಜಲಪುರ ಮಾಜಿ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌]]></title>
            <link>https://kannada.asianetnews.com/gallery/kalaburagi/kalaburagi-ex-tahsildar-shashikala-padagatti-jail-term-corruption-case-san-q2sg0vw</link>
            <guid isPermaLink="true">https://kannada.asianetnews.com/gallery/kalaburagi/kalaburagi-ex-tahsildar-shashikala-padagatti-jail-term-corruption-case-san-q2sg0vw</guid>
            <pubDate>Fri, 10 Jul 2026 15:43:34 +0530</pubDate>
            <description><![CDATA[&lt;p&gt;ಕಲಬುರಗಿಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಮತ್ತು ಮತ್ತೊಬ್ಬರಿಗೆ ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5r179apxcbezbq3vhkq6px,imgname-shashikala-padagatti---1--1783678147882.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಮತ್ತು ಮತ್ತೊಬ್ಬರಿಗೆ ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.&amp;nbsp;&lt;/p&gt;&lt;img&gt;&lt;p&gt;ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಹಾಗೂ ಅವರಿಗೆ ಲಂಚದ ಹಣ ತಲುಪಿಸಿದ್ದ ಶಿವಾನಂದ ಜಮಖಂಡಿಗೆ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಇಬ್ಬರಿಗೂ ತಲಾ 20 ಸಾವಿರ ರೂಪಾಯಿ ದಂಡವನ್ನು ವಿಧಿಸಿ ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಮಹತ್ವದ ಆದೇಶ ನೀಡಿದ್ದಾರೆ.&lt;/p&gt;&lt;img&gt;&lt;p&gt;2017ರಲ್ಲಿ ಅಫಜಲಪುರ ತಾಲ್ಲೂಕಿನ ಕರಜಗಿ ನಾಡ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್ ಆಗಿ ಶಿವಲಿಂಗಯ್ಯ ಬಸಯ್ಯ ಮಠ ಅವರು ಕೆಲಸ ಮಾಡುತ್ತಿದ್ದರು. ಇವರು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ದೂರು ತಹಶೀಲ್ದಾರ್ ಶಶಿಕಲಾ ಅವರಿಗೆ ಬಂದಿತ್ತು. ಈ ಪ್ರಕರಣದಲ್ಲಿ ತಮಗೆ ಸಹಾಯ ಮಾಡುವಂತೆ ಶಿವಲಿಂಗಯ್ಯ ಅವರು ಕೋರಿದಾಗ, ತಹಶೀಲ್ದಾರ್ ಶಶಿಕಲಾ ಅವರು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಹಣವನ್ನು ಶಿವಾನಂದ ಜಮಖಂಡಿಗೆ ತಲುಪಿಸಬೇಕು, ಇಲ್ಲದಿದ್ದರೆ ಕೆಲಸಕ್ಕೆ ಬೇರೆಯವರನ್ನು ನೇಮಿಸಿಕೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದರು.&lt;/p&gt;&lt;img&gt;&lt;p&gt;ಲಂಚದ ಬೇಡಿಕೆಯಿಂದ ಬೇಸತ್ತ ಶಿವಲಿಂಗಯ್ಯ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, 2017ರ ಆಗಸ್ಟ್ 31ರಂದು ಶಿವಲಿಂಗಯ್ಯ ಅವರಿಂದ ಲಂಚದ ಹಣವನ್ನು ಪಡೆದ ಶಿವಾನಂದ ಜಮಖಂಡಿ, ಅದನ್ನು ತಹಶೀಲ್ದಾರ್ ಶಶಿಕಲಾ ಅವರಿಗೆ ತಲುಪಿಸಲು ಹೋಗಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ರೆಡ್&zwnj;ಹ್ಯಾಂಡ್ ಆಗಿ ಬಂಧಿಸಿದ್ದರು. ಲೋಕಾಯುಕ್ತ ಡಿವೈಎಸ್&zwnj;ಪಿ ಸಂತೋಷ ಬನ್ನಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದರು.&lt;/p&gt;&lt;img&gt;&lt;p&gt;ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರು ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ರಾಜ್ಯ ಸರ್ಕಾರ ಅವರಿಗೆ ಕಡ್ಡಾಯ ನಿವೃತ್ತಿಗೆ (Compulsory Retirement) ಸೂಚಿಸಿ, ಕೆಲಸದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು.&lt;/p&gt;&lt;img&gt;&lt;p&gt;ಈ ಗಂಭೀರ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿ ಕೃಷ್ಣಪ್ಪ ಕಲ್ಲದೇವರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (ಚಾರ್ಜ್&zwnj;ಶೀಟ್) ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ (SPP) ಅಶೋಕ ಎಸ್. ಚಾಂದಕವಠ ಅವರು ಸರ್ಕಾರದ ಪರವಾಗಿ ಪ್ರಬಲ ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ಇಬ್ಬರೂ ಆರೋಪಿಗಳು ಅಪರಾಧಿಗಳು ಎಂದು ತೀರ್ಪು ನೀಡಿ ಜೈಲು ಶಿಕ್ಷೆ ಪ್ರಕಟಿಸಿದೆ.&lt;/p&gt;]]></content:encoded>
            <category>kalaburagi</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/kalaburagi/kalaburagi-ex-tahsildar-shashikala-padagatti-jail-term-corruption-case-san-q2sg0vw"/>
        </item>
        <item>
            <title><![CDATA[ರಸ್ತೆ ಕಾಮಗಾರಿ ವೇಳೆ ಸಿಕ್ಕಿತು ರಾಷ್ಟ್ರಕೂಟರ ಕಾಲದ ಅಪರೂಪದ ನಿಧಿ!]]></title>
            <link>https://kannada.asianetnews.com/gallery/karnataka-districts/rashtrakuta-era-suryanarayana-statue-found-in-kalaburagi-kamalapur-san-q3giz9h</link>
            <guid isPermaLink="true">https://kannada.asianetnews.com/gallery/karnataka-districts/rashtrakuta-era-suryanarayana-statue-found-in-kalaburagi-kamalapur-san-q3giz9h</guid>
            <pubDate>Sat, 01 Aug 2026 15:30:34 +0530</pubDate>
            <description><![CDATA[&lt;p&gt;ಕಲಬುರಗಿ ಜಿಲ್ಲೆಯ ಹೊಳಕುಂದಾ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಸುವಾಗ, ರಾಷ್ಟ್ರಕೂಟರ ಕಾಲದ್ದೆಂದು ನಂಬಲಾದ ಅಪರೂಪದ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿಯೊಂದು ಪತ್ತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyyc217gh6k37ed4j0ae6yh7,imgname-kalaburagi-stone-1785578194159.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ ಜಿಲ್ಲೆಯ ಹೊಳಕುಂದಾ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಸುವಾಗ, ರಾಷ್ಟ್ರಕೂಟರ ಕಾಲದ್ದೆಂದು ನಂಬಲಾದ ಅಪರೂಪದ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿಯೊಂದು ಪತ್ತೆಯಾಗಿದೆ.&lt;/p&gt;&lt;img&gt;&lt;p&gt;ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಹೊಳಕುಂದಾ ಗ್ರಾಮದ ರುಕ್ಮಿಣಿ -ವಿಠ್ಠಲ ದೇವಸ್ಥಾನದ ಆವರಣದಲ್ಲಿನ ಸಿಸಿ ರಸ್ತೆ ಕಾಮಗಾರಿ ನಡೆಸಲಾಗುತ್ತಿತ್ತು. ಈ ವೇಳೆ ನೆಲ ಅಗಿಯುವಾಗ ಐತಿಹಾಸಿಕ ಹಾಗೂ ಪುರಾತನವಾದ ಶ್ರೀ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿಯೊಂದು ಪತ್ತೆಯಾಗಿದೆ.&lt;/p&gt;&lt;img&gt;&lt;p&gt;ಈ ಪತ್ತೆಯಾಗಿರುವ ಸೂರ್ಯನಾರಾಯಣ ದೇವರ ವಿಗ್ರಹವು 2.1 ಅಡಿ ಎತ್ತರವಿದ್ದು, ಅತ್ಯಂತ ಆಕರ್ಷಕವಾದ ಕಪ್ಪು ಶಿಲೆಯಲ್ಲಿ (Black stone) ಕೆತ್ತಲ್ಪಟ್ಟಿದೆ. ಮೂರ್ತಿಯ ಎರಡೂ ಕೈಗಳಲ್ಲಿ ಕಮಲದ ಹೂವುಗಳಿರುವುದು ಇದರ ವಿಶೇಷತೆಯಾಗಿದೆ.&lt;/p&gt;&lt;img&gt;&lt;p&gt;ಈ ಶಿಲಾ ಮೂರ್ತಿಯಲ್ಲಿ ಸೂರ್ಯನಾರಾಯಣ ದೇವರ ಜೊತೆಗೆ ಸಂಧ್ಯಾದೇವಿ ಮತ್ತು ಛಾಯಾದೇವಿಯರ ಕೆತ್ತನೆಗಳಿವೆ. ಅಷ್ಟೇ ಅಲ್ಲದೆ, ಸೂರ್ಯನ ರಥವನ್ನು ಎಳೆಯುವ ಸಪ್ತ ಅಶ್ವಗಳ (ಏಳು ಕುದುರೆಗಳು) ಸೂಕ್ಷ್ಮ ಕೆತ್ತನೆಯೂ ಈ ವಿಗ್ರಹದಲ್ಲಿದೆ.&lt;/p&gt;&lt;img&gt;&lt;p&gt;ಐತಿಹಾಸಿಕ ಸಂಶೋಧಕರ ಪ್ರಾಥಮಿಕ ಅಭಿಪ್ರಾಯ ಹಾಗೂ ಪರಿಶೀಲನೆಯ ಪ್ರಕಾರ, ಈ ಸೂರ್ಯನಾರಾಯಣ ವಿಗ್ರಹವು ಕಲ್ಯಾಣ ಕರ್ನಾಟಕ ಭಾಗವನ್ನು ಆಳಿದ ರಾಷ್ಟ್ರಕೂಟರ ಕಾಲದ ಅತ್ಯಪೂರ್ವ ಶಿಲ್ಪಕಲೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ದೇವಸ್ಥಾನದ ಆವರಣದಲ್ಲೇ ಈ ಪುರಾತನ ಮೂರ್ತಿ ಸಿಕ್ಕಿರುವುದರಿಂದ ಹೊಳಕುಂದಾ ಗ್ರಾಮದ ಜನರಲ್ಲಿ ತೀವ್ರ ಕೌತುಕ ಹಾಗೂ ಭಕ್ತಿಭಾವ ಮೂಡಿದ್ದು, ಈ ಐತಿಹಾಸಿಕ ಮೂರ್ತಿಯನ್ನು ವೀಕ್ಷಿಸಲು ನೂರಾರು ಜನ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/rashtrakuta-era-suryanarayana-statue-found-in-kalaburagi-kamalapur-san-q3giz9h"/>
        </item>
        <item>
            <title><![CDATA[ಅಂದು ಮನೆಗಾಗಿ 1 ಹಸು ಖರೀದಿ,  ಇಂದು 100 ಎಮ್ಮೆಗಳ ಒಡತಿ ಕಲಬುರಗಿ ಮಹಿಳೆ; Dairy Farming]]></title>
            <link>https://kannada.asianetnews.com/gallery/business/kalaburagi-jyoti-avinash-uplavkar-of-started-dairy-farming-with-one-cow-is-now-raising-100-haryana-breed-buffaloes-mrq-qt859fe</link>
            <guid isPermaLink="true">https://kannada.asianetnews.com/gallery/business/kalaburagi-jyoti-avinash-uplavkar-of-started-dairy-farming-with-one-cow-is-now-raising-100-haryana-breed-buffaloes-mrq-qt859fe</guid>
            <pubDate>Sat, 22 Aug 2026 12:31:30 +0530</pubDate>
            <description><![CDATA[ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಒಂದು ಹಸುವಿನಿಂದ ಹೈನುಗಾರಿಕೆ ಆರಂಭಿಸಿ, ಇದೀಗ 100 ಹರಿಯಾಣ ತಳಿಯ ಎಮ್ಮೆಗಳ ಒಡತಿಯಾಗಿದ್ದಾರೆ. ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಇವರ ಡೈರಿ ಫಾರ್ಮ್, 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿ ಯಶಸ್ವಿ ಉದ್ಯಮವಾಗಿ ಬೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0m3vbgqn13w3byjm0sqn06k,imgname-dairy-farming--3--1787381526039.jpg" type="image/jpeg" height="390" width="690"/>
            <content:encoded><![CDATA[ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಒಂದು ಹಸುವಿನಿಂದ ಹೈನುಗಾರಿಕೆ ಆರಂಭಿಸಿ, ಇದೀಗ 100 ಹರಿಯಾಣ ತಳಿಯ ಎಮ್ಮೆಗಳ ಒಡತಿಯಾಗಿದ್ದಾರೆ. ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಇವರ ಡೈರಿ ಫಾರ್ಮ್, 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿ ಯಶಸ್ವಿ ಉದ್ಯಮವಾಗಿ ಬೆಳೆದಿದೆ.&lt;img&gt;&lt;p&gt;9 To 5 ಜಾಬ್&zwnj; ಮಾಡಲು ಬೇಸರಗೊಳ್ಳುತ್ತಿರುವ ಯುವ ಸಮುದಾಯ ಸ್ವಂತ ಉದ್ಯಮದತ್ತ ಮುಖ ಮಾಡುತ್ತಿದ್ದಾರೆ. ಇಂದು ನಾವು ನಿಮಗೆ ಒಂದು ಹಸುವಿನಿಂದ ಆರಂಭಿಸಿ 100 ಎಮ್ಮೆಗಳ ಒಡತಿಯಾಗಿರುವ ಕಲಬುರಗಿ ಮಹಿಳೆ ಬಗ್ಗೆ ಹೇಳುತ್ತಿದ್ದೇವೆ. ಹೈನುಗಾರಿಕೆಯಲ್ಲಿ ಯಶಸ್ವಿಯಾಗಿರುವ ಇವರು ಇಂದು 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಹಾಗೆಯೇ ಇವರ ಡೈರಿಯಿಂದ ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ.&lt;/p&gt;&lt;img&gt;&lt;p&gt;ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಹೈನುಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿ ತಾಲೂಕಿನ ಸೈಯ್ಯದ್ ಚಿಂಕೊಳ್ಳಿ ಗ್ರಾಮದ ವ್ಯಾಪ್ತಿಯ 20 ಎಕರೆ ಜಮೀನಿನಲ್ಲಿ ಕೃಷಿ ಜೊತೆ ಹೈನುಗಾರಿಕೆಯನ್ನು ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಮನೆ ಬಳಕೆಗೆ ಹಾಲು ಬೇಕೆಂದು ಒಂದು ಹಸು ಖರೀದಿಸಿದ್ದರು. ನಂತರ ಒಂದಾದ ನಂತರ ಒಂದರಂತೆ ಎಮ್ಮೆಗಳನ್ನು ಸಾಕಾಣಿಕೆ ಮಾಡಲು ಆರಂಭಿಸಿದ್ದರು. ಇದೀಗ ಇವರ ಡೈರಿಯಲ್ಲಿ ಹರಿಯಾಣ ತಳಿಯ 100 ಎಮ್ಮೆಗಳಿವೆ. ಈ ಎಮ್ಮೆಗಳ ಆರೈಕೆಗಾಗಿ ಬಿಹಾರ ಮತ್ತು ಹರಿಯಾಣ ಭಾಗದ 15ಕ್ಕೂ ಹೆಚ್ಚು ಕಾರ್ಮಿಕರನ್ನು ಸಹ ನೇಮಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;20ರಲ್ಲಿ 10 ಎಕರೆ ಭೂಮಿಯಲ್ಲಿ ಜಾನುವಾರಗಳಿಗೆ ಬೇಕಾದ ಮೇವು ಬೆಳೆಯುತ್ತಾರೆ. ಬೇಸಿಗೆಯಲ್ಲಿ ಹುಲ್ಲು ಕಡಿಮೆಯಾಗುವ ಕಾರಣ ಜೋಳ ಮತ್ತು ತೊಗರಿ ಬೆಳೆಯ ಮೇವು ಸಂಗ್ರಹ ಮಾಡಿಕೊಳ್ಳುತ್ತಾರೆ. ಇಲ್ಲಿಯ ಕಾರ್ಮಿಕರು ಜಾನುವಾರಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸುವ ಮೂಲಕ ಜಾನುವಾರಗಳ ಆರೋಗ್ಯ ಕಾಪಾಡಿಕೊಳ್ಳಲಾಗುತ್ತೆ ಎಂದು ಜ್ಯೋತಿ ಅವಿನಾಶ್ ಹೇಳುತ್ತಾರೆ.&lt;/p&gt;&lt;img&gt;&lt;p&gt;ಜ್ಯೋತಿ ಅವಿನಾಶ್ ಅವರ ಒಡೆತನದ ಡೈರಿಯಿಂದ ದಿನಕ್ಕೆ ಅಂದಾಜು 500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಕಾರ್ಮಿಕರ ಮೂಲಕ ಈ ಹಾಲು ಸುಮಾರು 250 ರಿಂದ 300 ಮನೆಗಳಿಗೆ ತಲುಪಿಸಲಾಗುತ್ತದೆ. ಹೆಚ್ಚುವರಿ ಹಾಲನ್ನು ಹೋಟೆಲ್&zwnj;ಗಳಿಗೆ ಮಾರಾಟ ಮಾಡಲಾಗುತ್ತದೆ. ಸಗಣಿಯಿಂದಲೂ ಉತ್ತಮ ಆದಾಯ ಬರುತ್ತದೆ. ಸುತ್ತಲಿನ ಭಾಗದಲ್ಲಿ ನಮ್ಮ ಡೈರಿಯ ಗೊಬ್ಬರಕ್ಕೆ ಉತ್ತಮ ಬೇಡಿಕೆ ಇದೆ ಎಂದು ಹೇಳುತ್ತಾರೆ ಜ್ಯೋತಿ ಅವಿನಾಶ್.&lt;/p&gt;&lt;img&gt;&lt;p&gt;ಈ ಡೈರಿಯಿಂದಲೇ ಗೋಬರ್ ಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ. ಡೈರಿಯಲ್ಲಿ ಕೆಲಸ ಮಾಡುವ ಐದು ಕುಟುಂಬಗಳು ಮತ್ತು ಕಾರ್ಮಿಕರು ಈ ಗೋಬರ್ ಗ್ಯಾಸ್ ಬಳಸಿಯೇ ಅಡುಗೆ ತಯಾರಿಸಿಕೊಳ್ಳುತ್ತಾರೆ. ನಾವೇ ಎಲ್ಲಾ ಕೆಲಸ ಮಾಡಬೇಕು ಅಂತೇನಿಲ್ಲ. ಕಾರ್ಮಿಕರ ಸಹಾಯದಿಂದ ಈ ಕೆಲಸ ಮಾಡಿಕೊಳ್ಳಬಹುದು. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ನೀಡಬೇಕು ಅನ್ನೋದು ನಮ್ಮ ಉದ್ದೇಶ. ಗ್ರಾಹಕರಿಗೆ ವಿತರಿಸುವ ಹಾಲಿಗೆ ನೀರು ಸಹ ಸೇರಿಸಲ್ಲ. 100 ಎಮ್ಮೆಗಳನ್ನು ಸಾಕಬೇಕು ಅನ್ನೋದು ನಮ್ಮ ಆಸೆಯಾಗಿತ್ತು. ಈಗ ಅದು ನನಸು ಆಗಿದೆ ಎಂದು ಜ್ಯೋತಿ ಅವಿನಾಶ್ ಸಂತೋಷ ಹಂಚಿಕೊಂಡರು.&lt;/p&gt;&lt;p&gt;&lt;strong&gt;Rangu Kasturi - Farming in Kannada &lt;/strong&gt;ಯುಟ್ಯೂಬ್ ವಾಹಿನಿಯಲ್ಲಿ ಜ್ಯೋತಿ ಅವಿನಾಶ್ ಅವರು ಡೈರಿ ಫಾರ್ಮಿಂಗ್ ವಿಡಿಯೋ ನೋಡಬಹುದು.&lt;/p&gt;]]></content:encoded>
            <category>kalaburagi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/kalaburagi-jyoti-avinash-uplavkar-of-started-dairy-farming-with-one-cow-is-now-raising-100-haryana-breed-buffaloes-mrq-qt859fe"/>
        </item>
        <item>
            <title><![CDATA[ಕಲಬುರಗಿ: ಮಳೆಗಾಗಿ ಪ್ರಾರ್ಥಿಸಿ ಮೂರು ದಿನದಲ್ಲಿ ಬರೋಬ್ಬರಿ 45 ಕಿ.ಮೀ ಉರುಳುಸೇವೆ ಮಾಡಿದ ಮಹಿಳೆ!]]></title>
            <link>https://kannada.asianetnews.com/karnataka-districts/woman-performs-45-km-urulu-seve-rolling-ritual-to-pray-for-rain-rav/articleshow-rp96ihi</link>
            <guid isPermaLink="true">https://kannada.asianetnews.com/karnataka-districts/woman-performs-45-km-urulu-seve-rolling-ritual-to-pray-for-rain-rav/articleshow-rp96ihi</guid>
            <pubDate>Fri, 17 Jul 2026 05:42:00 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮಳೆಗಾಗಿ ಜನ ಪೂಜೆ, ಪ್ರಾರ್ಥನೆ ಮಾಡುತ್ತಿದ್ದು, ಇಲ್ಲೊಬ್ಬ ಮಹಿಳೆ 3 ದಿನದಲ್ಲಿ ಬರೋಬ್ಬರಿ 45 ಕಿ.ಮೀ. ಉರುಳುಸೇವೆ ಸೇವೆ ಮಾಡಿ ಮುಂಬರುವ ದಿನಗಳಲ್ಲಿ ಸಕಾಲಕ್ಕೆ ಸರಿಯಾಗಿ ಮಳೆಯಾಗಿ ಉತ್ತಮ ಬೆಳೆ ಬರುವಂತೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxpnre5ayyjm18c6sywwxwy5,imgname-----------------------2026-07-17t052327.883-1784246188201.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಫಜಲಪುರ (ಜು.17): &amp;nbsp;&lt;/strong&gt;ರಾಜ್ಯದಲ್ಲಿ ಮಳೆಗಾಗಿ ಜನ ಪೂಜೆ, ಪ್ರಾರ್ಥನೆ ಮಾಡುತ್ತಿದ್ದು, ಇಲ್ಲೊಬ್ಬ ಮಹಿಳೆ 3 ದಿನದಲ್ಲಿ ಬರೋಬ್ಬರಿ 45 ಕಿ.ಮೀ. ಉರುಳುಸೇವೆ ಸೇವೆ ಮಾಡಿ ಮುಂಬರುವ ದಿನಗಳಲ್ಲಿ ಸಕಾಲಕ್ಕೆ ಸರಿಯಾಗಿ ಮಳೆಯಾಗಿ ಉತ್ತಮ ಬೆಳೆ ಬರುವಂತೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.&lt;/p&gt;&lt;p&gt;ಮಹಾನಂದಾ ಅಮಾತಿ(Mahananda amaati) ಹದರೆ ಎನ್ನುವರೇ ಉರುಳುಸೇವೆ ಮಾಡಿದ ಭಕ್ತೆ. ಇವರು ಮಂಗಳವಾರ ಮಹಾರಾಷ್ಟ್ರದ ಸೊಲ್ಲಾಪುರ್ ಜಿಲ್ಲೆಯ ಆಹೇರವಾಡಿ (ಐರೋಡಿ) ಗ್ರಾಮದಿಂದ ಆರಂಭಿಸಿ ಗುರುವಾರ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಮಣ್ಣೂರು ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಯಶಸ್ವಿಯಾಗಿ ತಲುಪಿದ್ದಾರೆ.&lt;/p&gt;&lt;h2&gt;ಉರುಳು ಸೇವೆ ಉದ್ದಕ್ಕೂ ಸಾಧು ಸಂತರು ಭಾಗಿ&lt;/h2&gt;&lt;p&gt;ಆಹೇರವಾಡಿ ಗ್ರಾಮದಿಂದ 45 ಕಿ.ಮೀ. ದಾರಿಯುದ್ದಕ್ಕೂ ರಸ್ತೆ ಮೇಲೆ ಬೆಡ್&zwnj;ಶೀಟ್ ಹಾಗೂ ಬಟ್ಟೆ ಹಾಕಲಾಗಿತ್ತು. ಇದರ ಮೇಲೆ ಮಹಾನಂದಾ ಅವರು ಉರುಳುಸೇವೆ ಮಾಡಿ ದೇವಿ ದರ್ಶನ ಪಡೆದಿದ್ದಾರೆ. ಉರುಳು ಸೇವೆಯುದ್ದಕ್ಕೂ ಸಾಧು-ಸಂತರು, ಭಕ್ತರು, ಯುವಕರು, ಮಕ್ಕಳು ಭಜನೆ ಮಾಡುತ್ತಾ ಪ್ರಾರ್ಥನೆ ಸಲ್ಲಿಸಿದರು.&lt;/p&gt;&lt;h3&gt;ಎಲ್ಲಿಂದ ಎಲ್ಲಿಗೆ?&lt;/h3&gt;&lt;p&gt;ಮಹಾನಂದ ಅಮಾತಿ ಎನ್ನುವ ಮಹಾರಾಷ್ಟ್ರ ಗಡಿಯ ಮಹಿಳೆ ರಾಜ್ಯದಲ್ಲಿ ಮಳೆಗಾಗಿ ಪ್ರಾರ್ಥಿಸಿ 3 ದಿನದಲ್ಲಿ ಬರೋಬ್ಬರಿ 45 ಕಿ.ಮೀ. ಉರುಳು ಸೇವೆ ಮಾಡಿ ಪ್ರಾರ್ಥಿಸಿದ್ದಾರೆ. ಮಂಗಳವಾರ ಮಹಾರಾಷ್ಟ್ರದ ಸೊಲ್ಲಾಪುರ್ ಜಿಲ್ಲೆಯ ಆಹೇರವಾಡಿ (ಐರೋಡಿ) ಗ್ರಾಮದಿಂದ ಉರುಳು ಸೇವೆ ಆರಂಭಿಸಿ ಗುರುವಾರ ಕಲಬುರಗಿಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಮಣ್ಣೂರು ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಬಂದು ತಲುಪಿದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/woman-performs-45-km-urulu-seve-rolling-ritual-to-pray-for-rain-rav/articleshow-rp96ihi"/>
        </item>
        <item>
            <title><![CDATA[ಮಹಾಪ್ರಭು ಮೋದಿ ಸ್ವಶಕ್ತಿ ಮೇಲೆ ನಿಂತಿಲ್ಲ, ಪವನ್-ನಿತೀಶ್ ಆಸರೆ ಬೇಕು -ಪ್ರಕಾಶ್ ರಾಜ್ ಮತ್ತೆ ತೀವ್ರ ವಾಗ್ದಾಳಿ]]></title>
            <link>https://kannada.asianetnews.com/kalaburagi/modi-is-not-standing-on-his-own-strength-he-needs-pawan-kalyan-and-nitish-kumars-support-prakash-raj-slams-pm-gkn/articleshow-sebqn0s</link>
            <guid isPermaLink="true">https://kannada.asianetnews.com/kalaburagi/modi-is-not-standing-on-his-own-strength-he-needs-pawan-kalyan-and-nitish-kumars-support-prakash-raj-slams-pm-gkn/articleshow-sebqn0s</guid>
            <pubDate>Sat, 22 Aug 2026 17:01:18 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ ನಡೆದ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. &quot;ಮಹಾಪ್ರಭು ಮೋದಿ ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ, ಅವರು ಪವನ್ ಕಲ್ಯಾಣ್ ಮತ್ತು ನಿತೀಶ್ ಕುಮಾರ್ ಅವರ ಆಸರೆಯ ಮೇಲೆ ನಿಂತಿದ್ದಾರೆ&quot; ಎಂದು ಲೇವಡಿ ಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyy0gpar3c4g68rwzjxyztxk,imgname-prakash-raj-1785566091608.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ಮಹಾಪ್ರಭು ನರೇಂದ್ರ ಮೋದಿ ಅವರು ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ. ಅವರು ತಮ್ಮ ಅಕ್ಕಪಕ್ಕದಲ್ಲಿ ಇರುವ ಪವನ್ ಕಲ್ಯಾಣ್ ಮತ್ತು ನಿತೀಶ್ ಕುಮಾರ್ ಅವರ ಹೆಗಲ ಮೇಲೆ ನಿಂತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಲೇವಡಿ ಮಾಡಿದ್ದಾರೆ.&lt;/p&gt;&lt;p&gt;ಕಲಬುರಗಿಯಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶವನ್ನು ವಿಕಸಿತ ಭಾರತ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು, ಇವರು ಭಾರತವನ್ನು ಅವನತಿಯತ್ತ ಕೊಂಡೊಯ್ದಿದ್ದಾರೆ. ಮಹಾಪ್ರಭು ಮೋದಿ ಅವರು ಒಬ್ಬ ರಾಜನಂತೆ ಬದುಕುತ್ತಿದ್ದಾರೆ. ಅವರ ಬಟ್ಟೆಗಳು, ವೈಭವದ ಮೆರವಣಿಗೆಗಳು ಅವರಿಗೆ ಬೇಕಾ? ಒಬ್ಬ ದೇಶದ ಪ್ರಧಾನಿಯನ್ನು ಸಾಮಾನ್ಯ ಜನ ಮುಟ್ಟದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅವರು ರಾಮ ಮಂದಿರ ವ್ಯಾಪ್ತಿಯ ಕ್ಷೇತ್ರದಲ್ಲೇ ಸೋಲು ಕಂಡಿದ್ದಾರೆ. ಎಂಪಿ, ಎಂಎಲ್&zwnj;ಎಗಳನ್ನು ಖರೀದಿ ಮಾಡಲು ರಾಮ ಮಂದಿರದ ದುಡ್ಡನ್ನು ಕದಿಯಲಾಗಿದೆ ಎಂದು ಪ್ರಕಾಶ್ ರಾಜ್ ಗಂಭೀರವಾಗಿ ಆರೋಪಿಸಿದರು.&lt;/p&gt;&lt;h2&gt;&lt;strong&gt;ಕರಾವಳಿ ಮಂದಿ ನನ್ನಂತೆ ಆದರೆ ಇವರ ಕಥೆ ಏನು?&lt;/strong&gt;&lt;/h2&gt;&lt;p&gt;ತಮ್ಮನ್ನು ಕರಾವಳಿ ಭಾಗಕ್ಕೆ ಕಳುಹಿಸಬೇಕು ಎನ್ನುವ ವಿರೋಧಿಗಳ ಹೇಳಿಕೆಗೆ ಟಾಂಗ್ ನೀಡಿದ ಅವರು, ಪ್ರಕಾಶ್ ರಾಜ್&zwnj;ನನ್ನು ಕರಾವಳಿಗೆ ಹಾಕಿ ಎಂದು ಕೆಲವರು ಹೇಳುತ್ತಿದ್ದಾರೆ. ಒಂದು ವೇಳೆ ಆ ಕರಾವಳಿಯ ಜನ ಅಲ್ಲಿನ ಸಮುದ್ರದ ಮೀನು ತಿಂದು ನನ್ನಂತೆಯೇ ಯೋಚಿಸಿ, ಪ್ರಶ್ನೆ ಮಾಡಲು ಆರಂಭಿಸಿದರೆ ಇವರ ಪರಿಸ್ಥಿತಿ ಏನಾಗಬಹುದು? ಎಂದು ಪ್ರಶ್ನಿಸಿದರು. ಅಲ್ಲದೆ ಪ್ರತಿದಿನ ಸುಳ್ಳು ಹೇಳುವವರನ್ನು ಮತ್ತು ಅಪಶಬ್ದಗಳನ್ನು ಬಳಸುವವರನ್ನು ಮೊದಲು ಶುದ್ಧೀಕರಿಸಬೇಕಾಗಿದೆ ಎಂದರು.&lt;/p&gt;&lt;p&gt;ಇವರಿಗೆ ಮಲ್ಲಿಕಾರ್ಜುನ ಖರ್ಗೆ ಅಂದರೆ ಆಗಿಬರುವುದಿಲ್ಲ. ಅದರರ್ಥ ಇವರಿಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಆಗಿಬರುವುದಿಲ್ಲ ಎಂದೇ ಅರ್ಥ. ಸಂವಿಧಾನ ಎನ್ನುವುದು ಬ್ರಿಟಿಷರು ಬಂದ ಮೇಲೆ ರಚನೆಯಾಗಿದ್ದು. ಇವರು ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಕಾಂಟ್ರಾಕ್ಟ್ ಪಡೆದುಕೊಂಡವರಂತೆ ಆಡುತ್ತಿದ್ದಾರೆ. ಹಿಂದೆ ಡಿಮಾನಿಟೈಸೇಶನ್ ಮಾಡಿ ದೇಶದ ಜನರ ದುಡ್ಡನ್ನು ಜನರೇ ತೆಗೆದುಕೊಳ್ಳದಂತೆ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಒಂದು ಕೋಟಿ ಮತಗಳನ್ನು ಡಿಲೀಟ್ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸೋಲಿನ ಭಯದಿಂದ ದೇಶದಲ್ಲಿ ತನಿಖಾ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಕಿಡಿಕಾರಿದರು.&lt;/p&gt;&lt;p&gt;ವೇದಿಕೆಯಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧೈರ್ಯ ತುಂಬಿದ ಪ್ರಕಾಶ್ ರಾಜ್ ಖರ್ಗೆಯವರೇ, ನೀವು ಸದನದಲ್ಲಿ ಹೀಗೆಯೇ ಗುಡುಗುತ್ತಿರಿ, ನಾವೆಲ್ಲರೂ ನಿಮ್ಮ ಜೊತೆಗಿರುತ್ತೇವೆ. ಮೋದಿ ಅಧಿಕಾರದಿಂದ ಕೆಳಗಿಳಿಯುತ್ತಾರೆ, ದೇಶದ ಜನರೇ ಅವರನ್ನು ಇಳಿಸುತ್ತಾರೆ. ಆ ಬಳಿಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿದ ದಾರಿದೀಪದಂತೆ ನಡೆಯುವ ಮುಂದಿನ ಪ್ರಧಾನಿಯನ್ನು ನಾವೆಲ್ಲರೂ ಸೇರಿ ಆರಿಸೋಣ ಎಂದು ಕರೆ ನೀಡಿದರು. ಕರ್ನಾಟಕದಲ್ಲಿ ಪ್ರಜೆಗಳೇ ಆರಿಸಿದ ಸರ್ಕಾರವಿದ್ದು, ರಾಜ್ಯದಲ್ಲಿ ಯಾವೊಬ್ಬ ನಾಗರಿಕನೂ ತನ್ನ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.&lt;/p&gt;]]></content:encoded>
            <category>kalaburagi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/kalaburagi/modi-is-not-standing-on-his-own-strength-he-needs-pawan-kalyan-and-nitish-kumars-support-prakash-raj-slams-pm-gkn/articleshow-sebqn0s"/>
        </item>
        <item>
            <title><![CDATA[ಕಲಬುರಗಿ ದಾಹಕ್ಕೆ ಮುಕ್ತಿ: ನಾರಾಯಣಪುರ ಜಲಾಶಯದಿಂದ ಭೀಮೆಗೆ ಹರಿದ 1.20 TMC ಜೀವಜಲ]]></title>
            <link>https://kannada.asianetnews.com/karnataka-districts/government-has-ordered-the-release-of-1-point-20-tmc-of-water-from-the-narayanpur-reservoir-into-the-bhima-river-mrq/articleshow-tg1ebei</link>
            <guid isPermaLink="true">https://kannada.asianetnews.com/karnataka-districts/government-has-ordered-the-release-of-1-point-20-tmc-of-water-from-the-narayanpur-reservoir-into-the-bhima-river-mrq/articleshow-tg1ebei</guid>
            <pubDate>Wed, 22 Jul 2026 07:47:03 +0530</pubDate>
            <description><![CDATA[ಕಲಬುರಗಿ ಜಿಲ್ಲೆಯ ಮಳೆ ಕೊರತೆ ಪೀಡಿತ ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು, ಸರ್ಕಾರವು ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ 1.20 ಟಿ.ಎಂ.ಸಿ ನೀರು ಬಿಡುಗಡೆಗೆ ಆದೇಶಿಸಿದೆ. ಈ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಬಳಸಲು, ಪೊಲೀಸ್ ಭದ್ರತೆಯೊಂದಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky3sptcsjr9x55rhtvxzdvb1,imgname-bhima-river-1784686537113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; &amp;nbsp;ಜಿಲ್ಲೆಯ ಅಫಜಲಪೂರ, ಜೇವರ್ಗಿ ಮತ್ತು ಯಡ್ರಾಮಿ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಕೊರತೆಯಿಂದಾಗಿ ಕಳೆದ 3, 4 ತಿಂಗಳಿಂದ ತಲೆದೋರಿರುವ ತೀವ್ರ ಕುಡಿಯುವ ನೀರಿನ ಅಭಾವವನ್ನು ನಿವಾರಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.&lt;/p&gt;&lt;p&gt;ಈ ಭಾಗದ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ನಾರಾಯಣಪುರ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಲು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.&lt;/p&gt;&lt;h2&gt;&lt;strong&gt;ದಿನಂಪ್ರತಿ 300 ಕ್ಯೂಸೆಕ್ಸ್ ನೀರು ಹರಿವು&lt;/strong&gt;&lt;/h2&gt;&lt;p&gt;ಕಲಬುರಗಿ ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಅಭಿಯಂತರರ ತಾಂತ್ರಿಕ ಅಭಿಪ್ರಾಯದ ವರದಿಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ನಾರಾಯಣಪೂರ ಜಲಾಶಯದಿಂದ ಇಂಡಿ ಶಾಖಾ ಕಾಲುವೆಯ (IBC) ಎಸ್ಕೆಪ್ 34.10 ಕಿ.ಮೀ ಮತ್ತು 50.00 ಕಿ.ಮೀ ಮುಖಾಂತರ ಒಟ್ಟು 1.20 ಟಿ.ಎಂ.ಸಿ ನೀರನ್ನು ಭೀಮಾ ನದಿಗೆ ಹರಿಸಲಾಗುತ್ತಿದೆ. ಜುಲೈ 18 ರಿಂದ ಜಾರಿಗೆ ಬರುವಂತೆ ದಿನಂಪ್ರತಿ 300 ಕ್ಯೂಸೆಕ್&zwnj;ನಂತೆ ಈ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.&lt;/p&gt;&lt;p&gt;ಸಾರ್ವಜನಿಕ ಹಿತದೃಷ್ಟಿಯಿಂದ ಬಿಡುಗಡೆ ಮಾಡಲಾದ ಈ ಕುಡಿಯುವ ನೀರು ಎಲ್ಲೂ ಪೋಲಾಗದಂತೆ ಮತ್ತು ಸುರಕ್ಷಿತವಾಗಿ ಗೊತ್ತುಪಡಿಸಿದ ಸ್ಥಳಕ್ಕೆ ತಲುಪುವಂತೆ ಸೂಕ್ತ ಮುಂಜಾಗೃತಾ ಮತ್ತು ಮೇಲುಸ್ತುವಾರಿ ಕ್ರಮಗಳನ್ನು ವಹಿಸಲು ಕಲಬುರಗಿ, ಯಾದಗಿರಿ ಹಾಗೂ ವಿಜಯಪೂರ ಜಿಲ್ಲಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಪೊಲೀಸ್ ಭದ್ರತೆ&lt;/strong&gt;&lt;/p&gt;&lt;p&gt;ಕುಡಿಯುವ ನೀರಿಗಾಗಿ ಮೀಸಲಾಗಿಟ್ಟಿರುವ ಈ ನೀರನ್ನು ಕೃಷಿ ಅಥವಾ ಕೈಗಾರಿಕೆಗೆ ಇತರೆ ಯಾವುದೇ ಬೇರೆ ಉದ್ದೇಶಗಳಿಗೆ ಬಳಸದಂತೆ ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ನೀರಿನ ಸುರಕ್ಷತೆ ಹಾಗೂ ಸುಗಮ ಹರಿವಿಗಾಗಿ ನದಿಯ ಉದ್ದಕ್ಕೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವಂತೆ ಕಲಬುರಗಿ, ಯಾದಗಿರಿ ಮತ್ತು ವಿಜಯಪೂರ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.&lt;/p&gt;&lt;p&gt;ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪೂರ ಹಾಗೂ ಭೀಮರಾಯನಗುಡಿಯ ಮುಖ್ಯ ಅಭಿಯಂತರರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.&lt;/p&gt;&lt;h3&gt;&lt;strong&gt;ಶಾಸಕ ಅಜಯ್ ಧರ್ಮಸಿಂಗ್ &amp;nbsp;ಧನ್ಯವಾದ&lt;/strong&gt;&lt;/h3&gt;&lt;p&gt;ನೀರು ಬಿಡುಗಡೆಯಾಗಿರುವುದರಿಂದ ಜೇವರ್ಗಿ, ಅಫಜಲಪುರ ಮತ್ತು ಯಡ್ರಾಮಿ ತಾಲೂಕಿನ ಹಾಗೂ ಈ ಭಾಗದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದ್ದು, ಜನತೆಯಲ್ಲಿ ನೆಮ್ಮದಿ ತಂದಿದೆ ಎಂದು ಡಾ. ಅಜಯ್&zwnj; ಧರ್ಮಸಿಂಗ್&zwnj; ಹೇಳಿದ್ದಾರೆ.&lt;/p&gt;&lt;p&gt;ಸಾರ್ವಜನಿಕರ ಈ ಪ್ರಮುಖ ಬೇಡಿಕೆಯನ್ನು ಈಡೇರಿಸಲು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ, ಕಲಬುರಗಿ ವಿಭಾಗದ ಆಯುಕ್ತರು, ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ನಾರಾಯಣಪುರ ಜಲಾಶಯದ ಮುಖ್ಯ ಇಂಜಿನಿಯರ್ ಅವರಿಗೆ ಶಾಸಕ ಅಜಯ್ ಧರ್ಮಸಿಂಗ್ ಅವರು ಧನ್ಯವಾದ ಸಮರ್ಪಿಸಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/government-has-ordered-the-release-of-1-point-20-tmc-of-water-from-the-narayanpur-reservoir-into-the-bhima-river-mrq/articleshow-tg1ebei"/>
        </item>
        <item>
            <title><![CDATA[ಲಂಚಕ್ಕೆ ಸೀರೆ, ಚಪ್ಪಲಿ, ಜೀನ್ಸ್ ಪ್ಯಾಂಟ್ ಕೇಳಿದ ಸರ್ಕಾರಿ ಅಧಿಕಾರಿ ಸಂತೋಷ್ ಕುಮಾರ್]]></title>
            <link>https://kannada.asianetnews.com/gallery/karnataka-districts/kalaburgi-government-official-santosh-kumar-asked-for-a-saree-slippers-and-jeans-as-a-bribe-mrq-tz3xit6</link>
            <guid isPermaLink="true">https://kannada.asianetnews.com/gallery/karnataka-districts/kalaburgi-government-official-santosh-kumar-asked-for-a-saree-slippers-and-jeans-as-a-bribe-mrq-tz3xit6</guid>
            <pubDate>Mon, 20 Jul 2026 12:43:28 +0530</pubDate>
            <description><![CDATA[ಕಲಬುರಗಿಯಲ್ಲಿ, ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷ್ ಕುಮಾರ್ ಲೋಕಂಡೆ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಪ್ರಕರಣವೊಂದರಲ್ಲಿ ರಾಜಿ ಅರ್ಜಿ ಸಲ್ಲಿಸಲು ₹10,000 ನಗದು ಹಾಗೂ ಸೀರೆ, ಬಟ್ಟೆ, ಚಪ್ಪಲಿಗಳಂತಹ ವಸ್ತುಗಳನ್ನು ಲಂಚವಾಗಿ ಕೇಳಿದ ಆರೋಪದ ಮೇಲೆ ಅವರನ್ನು ಬಲೆಗೆ ಬೀಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxz5nyt4dq5q37qy33s4g73a,imgname-kalburgi---1--1784531319620.jpg" type="image/jpeg" height="390" width="690"/>
            <content:encoded><![CDATA[ಕಲಬುರಗಿಯಲ್ಲಿ, ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷ್ ಕುಮಾರ್ ಲೋಕಂಡೆ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಪ್ರಕರಣವೊಂದರಲ್ಲಿ ರಾಜಿ ಅರ್ಜಿ ಸಲ್ಲಿಸಲು ₹10,000 ನಗದು ಹಾಗೂ ಸೀರೆ, ಬಟ್ಟೆ, ಚಪ್ಪಲಿಗಳಂತಹ ವಸ್ತುಗಳನ್ನು ಲಂಚವಾಗಿ ಕೇಳಿದ ಆರೋಪದ ಮೇಲೆ ಅವರನ್ನು ಬಲೆಗೆ ಬೀಳಿಸಲಾಗಿದೆ.&lt;img&gt;&lt;p&gt;ಕಲಬುರಗಿ: ಭರ್ಜರಿ ಕಾರ್ಯಾಚರಣೆ ನಡೆಸಿರುವ ಲೋಕಾಯಕ್ತ ಪೊಲೀಸರು ಲಂಚದ ಬೇಡಿಕೆ ಆರೋಪದಡಿ ಸಹಾಯಕ ಸರ್ಕಾರಿ ಅಭಿಯೋಜಕರೊಬ್ಬರನ್ನು ಬಲೆಗೆ ಬೀಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಈತ ಲಂಚದ ರೂಪದಲ್ಲಿ ಕೇವಲ ನಗದು ಹಣವಷ್ಟೇ ಅಲ್ಲದೆ, ತನ್ನ ಹಾಗೂ ತನ್ನ ಕುಟುಂಬದವರಿಗಾಗಿ ಬಟ್ಟೆ, ಚಪ್ಪಲಿ, ಸೀರೆ ಸೇರಿ ವಿವಿಧ ವಸ್ತುಗಳನ್ನು ಲಂಚವಾಗಿ ಬೇಡಿಕೆ ಇಟ್ಟಿದ್ದ ಎಂಬ ಆರೋಪ ಕೇಳಿ ಬಂದಿದೆ. ಬಂಧಿತನನ್ನು ಕಲಬುರಗಿಯ 5ನೇ ಜೆಎಂಎಫ್&zwnj;ಸಿ ನ್ಯಾಯಾಲಯದ ಎಪಿಪಿ ಸಂತೋಷ್ ಕುಮಾರ್ ಲೋಕಂಡೆ ಎಂದು ಗುರುತಿಸಲಾಗಿದೆ.&lt;/p&gt;&lt;img&gt;&lt;p&gt;ಹೈದರಾಬಾದ್ ಮೂಲದ ರಾಹುಲ್ ಎಂಬುವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಲ್ಲಿ ರಾಜಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ₹10,000 ನಗದು ಜೊತೆಗೆ 9 ಸೀರೆ, 4 ಶರ್ಟ್&zwnj;, 4 ಬ್ರ್ಯಾಂಡೆಡ್ ಜೀನ್ಸ್ ಪ್ಯಾಂಟ್&zwnj;, 1 ಜೋಡಿ ಶೂ, 4 ಮಹಿಳೆಯರ ಉಡುಪುಗಳು ಹಾಗೂ 6 ಜೋಡಿ ಮಹಿಳೆಯರ ಚಪ್ಪಲಿ ನೀಡುವಂತೆ ಒತ್ತಡ ಹೇರಿದ್ದ ಎಂದು ಆರೋಪಿಸಲಾಗಿದೆ.&lt;/p&gt;&lt;img&gt;&lt;p&gt;ಈ ಬೇಡಿಕೆಯಿಂದ ಬೇಸತ್ತ ದೂರುದಾರ ರಾಹುಲ್ ಅವರು ಕಲಬುರಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುವ ವೇಳೆ ಎಪಿಪಿ ಸಂತೋಷ್ ಕುಮಾರ್ ಲೋಕಂಡೆಯನ್ನು ಬಂಧಿಸಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/kalaburgi-government-official-santosh-kumar-asked-for-a-saree-slippers-and-jeans-as-a-bribe-mrq-tz3xit6"/>
        </item>
        <item>
            <title><![CDATA[Kalaburagi: ಕೋಪದ ಕೈಗೆ ಬುದ್ಧಿ ಕೊಟ್ಟ ಗಂಡ: ಹೆಂಡತಿ ಮೇಲಿನ ಸಿಟ್ಟಿಗೆ ಪತ್ನಿ, ಮಕ್ಕಳಿದ್ದ ರೂಮ್‌ಗೆ ನುಗ್ಗಿ..]]></title>
            <link>https://kannada.asianetnews.com/karnataka-districts/two-people-died-four-admitted-to-hospital-after-husband-blew-himself-up-after-fight-with-wife-in-kalaburagi-sns/articleshow-x9aiivc</link>
            <guid isPermaLink="true">https://kannada.asianetnews.com/karnataka-districts/two-people-died-four-admitted-to-hospital-after-husband-blew-himself-up-after-fight-with-wife-in-kalaburagi-sns/articleshow-x9aiivc</guid>
            <pubDate>Tue, 11 Aug 2026 17:32:43 +0530</pubDate>
            <description><![CDATA[&lt;p&gt;ಹೆಂಡತಿಯ ಶೀಲದ ಮೇಲೆ ಸದಾ ಅನುಮಾನ ಪಡುತ್ತಿದ್ದ ವ್ಯಕ್ತಿಯೊಬ್ಬ, ಜಿಲೆಟಿನ್ ಕಡ್ಡಿಗಳನ್ನು ಇಡೀ ಮೈಗೆ ಕಟ್ಟಿಕೊಂಡು ಮನೆಗೆ ನುಗ್ಗಿ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ. ಈ ಭೀಕರ ದುರಂತದಲ್ಲಿ ಆತ ಹಾಗೂ ಆತನ 16 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹೆಂಡತಿ, ಮಗ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜ್ಯವೇ ಬೆಚ್ಚಿ ಬೀಳಿಸುವ ಈ ಭಯಾನಕ ಘಟನೆಯ ಕುರಿತು ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzraxjgt190vp3fb970jckdp,imgname-kalaburagi-husband-blast-1786449414682.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಛಿದ್ರ ಛಿದ್ರಗೊಂಡಿರುವ ಮನೆ. ಮನೆಯೊಳಗಿನ ವಸ್ತುಗಳು ಮಾತ್ರವಲ್ಲ, ದೇಹಗಳೂ ಸಹ ಛಿದ್ರ ಛಿದ್ರ. ಮುಂಡದಿಂದ ಬೇರ್ಪಟ್ಟು ಛಿದ್ರಗೊಂಡು ಬಿದ್ದಿರುವ ಮುಂಡ. ಈ ಭಯಾನಕ ಸ್ಪೋಟದ ದೃಷ್ಯಗಳು ಕಂಡು ಬಂದಿದ್ದು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ. ಅಂದ ಹಾಗೆ ಇಲ್ಲಿ ಸ್ಪೋಟ ಸಂಭವಿಸಿದ್ದು ಆಕಸ್ಮಿಕವಾಗಿ ಅಲ್ಲ. ಕುಟುಂಬದ ಯಜಮಾನನೇ ಇಲ್ಲಿ ಸೂಸೈಡ್ ಬಾಂಬರ್. ಅಕ್ಷರಶಃ ಭಯೋತ್ಪಾದನಾ ಕೃತ್ಯಕ್ಕೆ ಹೋಲಿಸಬಹುದಾದ ಭಯಾನಕ ಕೃತ್ಯವೊಂದು ಆಳಂದನ ಮಟಕಿ ತಾಂಡಾದಲ್ಲಿಂದು ನಡೆದಿದೆ.&lt;/p&gt;&lt;h2&gt;ತನ್ನನ್ನು ತಾನೇ ಸ್ಪೋಟಿಸಿಕೊಂಡ!&lt;/h2&gt;&lt;p&gt;ಹೌದು! ಹೆಂಡತಿಯ ಮೇಲಿನ ಹಗೆತನದಿಂದ ಗಂಡನೇ ತನ್ನ ಮೈಗೆ ಜಿಲೆಟಿನ್ ಸ್ಪೋಟಕ ಕಟ್ಟಿಕೊಂಡು ಹೆಂಡತಿ, ಮಗ, ಮಗಳು ಹಾಗೂ ಅಣ್ಣನ ಹೆಂಡತಿ ಇರುವ ಕೋಣೆಯೊಳಗೆ ಹೋಗಿ ತನ್ನನ್ನು ತಾನೇ ಸ್ಪೋಟಿಸಿಕೊಂಡಿದ್ದಾನೆ. ಪರಿಣಾಮ ತಾನೂ ಸಾವಿಗೀಡಾಗಿ ತನ್ನ 16 ವರ್ಷದ ಮಗಳನ್ನೂ ಬಲಿ ಪಡೆದಿದ್ದಾನೆ. ಅಷ್ಟೇ ಅಲ್ಲ ಘಟನೆಯಲ್ಲಿ ಆತನ ಹೆಂಡತಿ, ಮಗ, ಅಣ್ಣನ ಹೆಂಡತಿ ಸಹಿತ ನಾಲ್ಬರು ತೀವ್ರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಹೆಂಡತಿ ಜೊತೆ ಮಕ್ಕಳ ಮೇಲೆಯೂ ಧ್ವೇಷ!&lt;/h2&gt;&lt;p&gt;ಮಟಕಿ ತಾಂಡಾ ನಿವಾಸಿ 50 ವರ್ಷದ ಶೇವಾಲಾಲ್ ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಆರೋಪಿ. ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಾವಿ ತೋಡುವ ಬ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದ ಶೇವಾಲಾಲ್, ತನ್ನ ಪತ್ನಿ ಸವಿತಾಳ ಶೀಲದ ಮೇಲೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ. ಪತ್ನಿ ಹಾಗೂ ಮಕ್ಕಳು ಪುಣೆಯಲ್ಲಿದ್ದರು. ವಾರದ ಹಿಂದಷ್ಟೇ ಪತ್ನಿ ಮಟಕಿ ತಾಂಡಾಗೆ ಬಂದಿದ್ದ ವಿಚಾರ ತಿಳಿದು ಶೇವಾಲಾಲ್ ಕೂಡ ನಿನ್ನೆಯಷ್ಟೇ ಊರಿಗೆ ಬಂದಿದ್ದ. ನಿನ್ನೆ ಹೆಂಡತಿಯೊಂದಿಗೆ ಜಗಳ ಮಾಡಿದ್ದ. ಮಕ್ಕಳೂ ಸಹ ತಾಯಿಗೆ ಸಪೋರ್ಟ ಮಾಡಿದ್ದ ಕಾರಣ ಎಲ್ಲರನ್ನೂ ಒಂದೇ ಬಾರಿಗೆ ಬಲಿ ಪಡೆಯುವ ದುರುದ್ದೇಶದಿಂದ ಈ ಭಯಾನಕ ಪ್ಲಾನ್ ಮಾಡಿಕೊಂಡಿದ್ದಾನೆ.&lt;/p&gt;&lt;h2&gt;ಸ್ಫೋಟದ ತೀವ್ರತೆ ದೇಹ ಛಿದ್ರ ಛಿದ್ರ!&lt;/h2&gt;&lt;p&gt;ಅದರಂತೆ ಇಂದು ಬೆಳಿಗ್ಗೆ 9 ಗಂಟೆಗೆ ​ಮನೆಗೆ ಎಂಟ್ರಿ ಕೊಟ್ಟ ಶೇವಾಲಾಲ್, ಮೈತುಂಬಾ ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಮನೆಯಲ್ಲಿದ್ದ ಪತ್ನಿ, ಮಕ್ಕಳು ಹಾಗೂ ಅಣ್ಣನ ಹೆಂಡತಿಯ ಎದುರೇ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಶೇವಾಲಾಲ್ ದೇಹವೇ ಛಿದ್ರ ಛಿದ್ರಗೊಂಡಿದ್ದು, ಆತನ ಮುಖ ಹಾಗೂ ಕತ್ತಿನ ಭಾಗ ದೇಹದಿಂದ ಬೇರ್ಪಟ್ಟು ಬಿದ್ದಿದೆ.&lt;/p&gt;&lt;h2&gt;ನಾಲ್ವರು ಜೀವನ್ಮಾರಣ ಹೋರಾಟ&lt;/h2&gt;&lt;p&gt;ಘಟನೆಯಲ್ಲಿ ಶೇವಾಲಾಲ್ ಹಾಗೂ ಆತನ 16 ವರ್ಷದ ಮಗಳು ವೀರಾಬಾಯಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನು ಶೇವಾಲಾಲ್ ಪತ್ನಿ ಸವಿತಾ, ಮಗ ಹಾಗೂ ಅಣ್ಣನ ಹೆಂಡತಿ ಸೇರಿದಂತೆ ನಾಲ್ವರಿಗೆ ತೀವ್ರ ಗಾಯಗಳಾಗಿದ್ದು, ಕಲಬುರಗಿಯ ಟ್ರಾಮಾ ಕೇರನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸ್ಫೋಟದ ರಭಸಕ್ಕೆ ಇಡೀ ಮನೆಯೇ ಧರೆಗುರುಳಿದೆ. ವಿಷಯ ತಿಳಿಯುತ್ತಿದ್ದಂತೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಸ್ಥಳಕ್ಕೆ ಭೇಟಿ ನೋಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;​ಒಟ್ಟಿನಲ್ಲಿ ಅನುಮಾನ ಎನ್ನುವ ಪಿಡುಗು ಒಂದು ಇಡೀ ಕುಟುಂಬವನ್ನೇ ನಾಶಮಾಡಿದ್ದು, ಊರನ್ನೇ ಆತಂಕಕ್ಕೆ ತಳ್ಳಿದೆ. ಘಟನೆಗೆ ಸಂಬಂಧಿಸಿದಂತೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ವರದಿ: ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್, ಕಲಬುರಗಿ)&lt;/p&gt;]]></content:encoded>
            <category>kalaburagi</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/two-people-died-four-admitted-to-hospital-after-husband-blew-himself-up-after-fight-with-wife-in-kalaburagi-sns/articleshow-x9aiivc"/>
        </item>
        <item>
            <title><![CDATA[ನೂತನ ಸಚಿವರ ಲಿಸ್ಟ್ ರಿಲೀಸ್.. ಬೆನ್ನಲ್ಲೇ ಪತಿಯ ಫೋಟೋ ಮುಂದೆ ಮಗನ ತಬ್ಬಿ ಕಣ್ಣೀರಿಟ್ಟ ಧರ್ಮಸಿಂಗ್ ಪತ್ನಿ]]></title>
            <link>https://kannada.asianetnews.com/politics/dharmasinghs-wife-in-tears-as-son-ajay-singh-gets-ministerial-berth-karnataka-cabinet-expansion-gkn/articleshow-yxpugip</link>
            <guid isPermaLink="true">https://kannada.asianetnews.com/politics/dharmasinghs-wife-in-tears-as-son-ajay-singh-gets-ministerial-berth-karnataka-cabinet-expansion-gkn/articleshow-yxpugip</guid>
            <pubDate>Mon, 03 Aug 2026 14:17:10 +0530</pubDate>
            <description><![CDATA[ಮಾಜಿ ಸಿಎಂ ಧರ್ಮಸಿಂಗ್ ಅವರ ಪುತ್ರ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರಿಗೆ ಮೊದಲ ಬಾರಿಗೆ ಸಚಿವ ಸ್ಥಾನ ಲಭಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ತಾಯಿ ಪ್ರಭಾವತಿ ಧರ್ಮಸಿಂಗ್ ಅವರು ಭಾವುಕರಾಗಿ ಆನಂದಬಾಷ್ಪ ಸುರಿಸಿದ್ದು, ಅಜಯ್ ಸಿಂಗ್ ತಂದೆಯ ಭಾವಚಿತ್ರಕ್ಕೆ ನಮಿಸಿ ಆಶೀರ್ವಾದ ಪಡೆದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kz3cpc0wry04kww6h35f5534,imgname-ajaya-singh-with-mother-1785746632732.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದಶಕಗಳ ಕಾಲ ಕರ್ನಾಟಕ ರಾಜಕಾರಣದ ಅಜಾತಶತ್ರುವಾಗಿ ಮೆರೆದಿದ್ದ ದಿವಂಗತ ಎನ್.ಧರ್ಮಸಿಂಗ್ ಅವರ ನಿವಾಸದಲ್ಲಿ ಇಂದು ಸಂಭ್ರಮದ ಜೊತೆಗೆ ಭಾವನಾತ್ಮಕ ವಾತಾವರಣ ಮನೆಮಾಡಿದೆ. ಅವರ ಪುತ್ರ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರಿಗೆ ಕೊನೆಗೂ ಸಚಿವ ಸ್ಥಾನ ಒಲಿದು ಬಂದಿದ್ದು, ಈ ಸುದ್ದಿ ಕೇಳುತ್ತಿದ್ದಂತೆಯೇ ಅವರ ತಾಯಿ ಪ್ರಭಾವತಿ ಧರ್ಮಸಿಂಗ್ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಮಗನ ತಬ್ಬಿ ಆನಂದಬಾಷ್ಪ ಸುರಿಸಿದ ತಾಯಿ&lt;/strong&gt;&lt;/h2&gt;&lt;p&gt;ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಅಜಯ್ ಸಿಂಗ್&zwnj;ಗೆ ಸ್ಥಾನ ಸಿಕ್ಕಿರುವ ಅಧಿಕೃತ ಮಾಹಿತಿ ಹೊರಬೀಳುತ್ತಿದ್ದಂತೆಯೇ ಬೆಂಗಳೂರಿನ ಅಜಯ್ ಸಿಂಗ್ ನಿವಾಸದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಮಗ ಮಂತ್ರಿಯಾಗುತ್ತಿರುವುದನ್ನು ಕೇಳಿ ಸಂತಸಗೊಂಡ ತಾಯಿ ಪ್ರಭಾವತಿ ಧರ್ಮಸಿಂಗ್ ಅವರು ಆನಂದಬಾಷ್ಪ ಸುರಿಸಿದರು. ಮಗನನ್ನು ಪ್ರೀತಿಯಿಂದ ತಬ್ಬಿಕೊಂಡು ಹರಸಿದರು. ಅಜಯ್ ಸಿಂಗ್ ಅವರು ಕೂಡ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.&lt;/p&gt;&lt;h2&gt;&lt;strong&gt;ತಂದೆಯ ಭಾವಚಿತ್ರಕ್ಕೆ ನಮನ&lt;/strong&gt;&lt;/h2&gt;&lt;p&gt;ಸಚಿವ ಸ್ಥಾನ ಘೋಷಣೆಯಾದ ಬೆನ್ನಲ್ಲೇ ಅಜಯ್ ಸಿಂಗ್ ಅವರು ತಮ್ಮ ತಂದೆ, ಮಾಜಿ ಸಿಎಂ ದಿವಂಗತ ಎನ್. ಧರ್ಮಸಿಂಗ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಮಗನಿಗೆ ಮಂತ್ರಿ ಸ್ಥಾನ ಸಿಗಬೇಕೆಂಬುದು ಇಡೀ ಕುಟುಂಬದ ದೀರ್ಘಕಾಲದ ಕನಸಾಗಿತ್ತು. ಪ್ರತಿ ಬಾರಿ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ವೇಳೆ ಅಜಯ್ ಸಿಂಗ್ ಅವರಿಗೆ ಮಂತ್ರಿ ಸ್ಥಾನ ಕೈತಪ್ಪುತ್ತಿತ್ತು.&lt;/p&gt;&lt;h2&gt;&lt;strong&gt;ಜೇವರ್ಗಿಯ ಜನಪ್ರಿಯ ಶಾಸಕ&lt;/strong&gt;&lt;/h2&gt;&lt;p&gt;ಅಜಯ್ ಸಿಂಗ್ ಅವರು ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್&zwnj;ನ ನಿಷ್ಠಾವಂತ ಮತ್ತು ಯುವ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಇವರು ಹೈಕಮಾಂಡ್ ಮಟ್ಟದಲ್ಲೂ ಉತ್ತಮ ಪ್ರಭಾವ ಹೊಂದಿದ್ದಾರೆ. ತಮ್ಮ ತಂದೆಯ ರಾಜಕೀಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಜಯ್ ಸಿಂಗ್, ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ.&lt;/p&gt;&lt;p&gt;2004 ರಿಂದ 2006 ರವರೆಗೆ ಕರ್ನಾಟಕದ 11ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಧರ್ಮಸಿಂಗ್ ಅವರು 2017ರಲ್ಲಿ ನಿಧನರಾದರು. ಅವರ ನಿಧನದ ನಂತರ ಕುಟುಂಬಕ್ಕೆ ಸಿಗುತ್ತಿರುವ ಅತಿದೊಡ್ಡ ರಾಜಕೀಯ ಮನ್ನಣೆ ಇದಾಗಿದೆ. ಅಜಯ್ ಸಿಂಗ್ ಸಚಿವರಾಗುತ್ತಿರುವುದು ಅವರ ಕ್ಷೇತ್ರವಾದ ಜೇವರ್ಗಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;]]></content:encoded>
            <category>kalaburagi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/dharmasinghs-wife-in-tears-as-son-ajay-singh-gets-ministerial-berth-karnataka-cabinet-expansion-gkn/articleshow-yxpugip"/>
        </item>
        <item>
            <title><![CDATA[Kalaburagi: ಸಚಿವ ಪ್ರಿಯಾಂಕ್ ಖರ್ಗೆ ಸಭೆಯಲ್ಲಿ 'ಪ್ರಭು ಶ್ರೀರಾಮಚಂದ್ರ' ಪ್ರತ್ಯಕ್ಷ, ಕೈಮುಗಿದು ನ್ಯಾಯಕ್ಕಾಗಿ ಮನವಿ; ವಿಡಿಯೋ ನೋಡಿ]]></title>
            <link>https://kannada.asianetnews.com/karnataka-districts/person-dressed-as-lord-sri-rama-submitted-representation-to-minister-priyank-kharge-in-kalaburagi-sns/articleshow-zfncu5c</link>
            <guid isPermaLink="true">https://kannada.asianetnews.com/karnataka-districts/person-dressed-as-lord-sri-rama-submitted-representation-to-minister-priyank-kharge-in-kalaburagi-sns/articleshow-zfncu5c</guid>
            <pubDate>Tue, 11 Aug 2026 12:40:30 +0530</pubDate>
            <description><![CDATA[&lt;p&gt;ಹಗಲು ವೇಷ ಧರಿಸಿಯೇ ಜೀವನ ನಡೆಸುವ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಿಂದ ಆಗಮಿಸಿದ ವ್ಯಕ್ತಿಯೊಬ್ಬ, ತಮ್ಮ ನಿತ್ಯ ಕಾಯಕದ ಶ್ರೀರಾಮನ ಹಗಲು ವೇಷದಲ್ಲಿಯೇ ಸಚಿವರ ಸಭೆಗೆ ಬಂದು ಗಮನ ಸೆಳೆದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzqt1dc7yk2shra0g318exy9,imgname-priyank-kharge-1786431714695.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಸ್ವತಃ ಶ್ರೀರಾಮಚಂದ್ರನೇ ಪ್ರತ್ಯಕ್ಷವಾಗಿ ಎಲ್ಲರ ಗಮನ ಸೆಳೆದ ಘಟನೆ ನಡೆದಿದೆ. ಹೌದು, ಕೈಯಲ್ಲಿ ಬಾಣ.. ಬೆನ್ನಿಗೆ ಬತ್ತಳಿಕೆ ನೋಡಿದರೆ ಸಾಕು ಇದು ಶ್ರೀರಾಮಚಂದ್ರನೇ ಅಂತ ಯಾರಾದರೂ ಗುರುತಿಸುವ ರೂಪ. ಆದರೆ ಈ ಶ್ರೀರಾಮಚಂದ್ರ, ಸಚಿವ ಪ್ರಿಯಾಂಕ್ ಖರ್ಗೆ ಅವರ ಅಹವಾಲು ಸ್ವೀಕಾರ ಸಭೆಯಲ್ಲಿ ಸರದಿಯಲ್ಲಿ ಬಂದು ತಮಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಳ್ಳಲಾರಂಭಿಸಿದಾಗ ಇಡೀ ಸಭೆಯೇ ಅಚ್ಚರಿಯಿಂದ ನೋಡುತ್ತಿತ್ತು.&lt;/p&gt;&lt;h2&gt;ಜಮೀನು ವಿವಿಧ ಬಗೆಹರಿಸಲು ಮನವಿ&lt;/h2&gt;&lt;p&gt;ಹಗಲು ವೇಷ ಧರಿಸಿಯೇ ಜೀವನ ನಡೆಸುವ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಿಂದ ಆಗಮಿಸಿದ ವ್ಯಕ್ತಿಯೊಬ್ಬ, ತಮ್ಮ ನಿತ್ಯ ಕಾಯಕದ ಶ್ರೀರಾಮನ ಹಗಲು ವೇಷದಲ್ಲಿಯೇ ಸಚಿವರ ಸಭೆಗೆ ಬಂದು ಗಮನ ಸೆಳೆದರು. ತಮ್ಮ ಜಮೀನು ಪಕ್ಕದವರು ಒತ್ತುವರಿ ಮಾಡಿಕೊಂಡಿದ್ದಾರೆ, ದಯಮಾಡಿ ಬಿಡಿಸಿಕೊಡಿ ಎಂದು ಸಚಿವರಿಗೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಯಾವುದೇ ಲಿಖಿತ ಮನವಿ ಇಲ್ಲದಿದ್ದದನ್ನು ಗಮನಿಸಿದ ಸಚಿವರು, ಸ್ಥಳದಲ್ಲೇ ಮನವಿ ಬರೆದು ಪತ್ರ ಬರೆದು ಕೊಡಿ ಎಂದು ಸಲಹೆ ನೀಡಿದರು. ಒಟ್ಟಾರೆ ಶ್ರೀರಾಮಚಂದ್ರ ವೇಷಧಾರಿಯ ಅಹವಾಲು ಸಲ್ಲಿಕೆ ಪ್ರಿಯಾಂಕ್ ಖರ್ಗೆ ಅವರ ಸಭೆಯಲ್ಲಿ ತೀವ್ರ ಗಮನ ಸೆಳೆಯಿತು.&lt;/p&gt;&lt;h2&gt;ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡ್ತೀನಿ&lt;/h2&gt;&lt;p&gt;ಇನ್ನು, ಮುಂಗಾರು ಮಳೆಯ ಕೊರತೆಯಿಂದ ಹಾನಿಗೊಳಗಾಗಿರುವ ಬೆಳೆ ಪ್ರದೇಶಗಳನ್ನು ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, 224 ಶಾಸಕ ಪೈಕಿ ಕೇವಲ ಶೇಕಡಾ 15 ಮಂದಿಗೆ ಮಾತ್ರ ಸ್ಥಾನ ನೀಡಲು ಅವಕಾಶವಿದೆ. ಕಾಂಗ್ರೆಸ್ ಪಕ್ಷದ 135 ಶಾಸಕರಲ್ಲಿ ಯಾರಿಗೆ ಸಚಿವ ಮಾಡಬೇಕು ಎಂಬುವುದು ಸಿಎಂ ಅವರಿಗೆ ಸವಾಲಿನ ಕೆಲಸ. ನನಗೆ ಗೃಹ ಸಚಿವರ ಜವಾಬ್ದಾರಿ ನೀಡಲಾಗಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಒಂದೊಮ್ಮೆ ನಿಮಗೆ ಯಾವುದೇ ಜವಾಬ್ದಾರಿ ಇಲ್ಲ ಎಂದರೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತೀನಿ ಎಂದು ಹೇಳಿದರು.&lt;/p&gt;&lt;p&gt;&lt;/p&gt;]]></content:encoded>
            <category>kalaburagi</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/person-dressed-as-lord-sri-rama-submitted-representation-to-minister-priyank-kharge-in-kalaburagi-sns/articleshow-zfncu5c"/>
        </item>
    </channel>
</rss>
