<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 16 Sep 2026 12:35:34 +0530</lastBuildDate>
        <atom:link href="https://kannada.asianetnews.com/rss/kalaburagi" rel="self" type="application/rss+xml"/>
        <item>
            <title><![CDATA[ಪಾಕ್ ಉಗ್ರರ ಜೊತೆ ನಂಟು; ಕಲಬುರಗಿಯಲ್ಲಿ ಇಬ್ಬರು ಶಂಕಿತರು ವಶಕ್ಕೆ!]]></title>
            <link>https://kannada.asianetnews.com/karnataka-districts/pak-terror-links-ccb-police-detain-two-suspects-in-kalaburagi-rav/articleshow-0elfbzd</link>
            <guid isPermaLink="true">https://kannada.asianetnews.com/karnataka-districts/pak-terror-links-ccb-police-detain-two-suspects-in-kalaburagi-rav/articleshow-0elfbzd</guid>
            <pubDate>Fri, 14 Aug 2026 05:09:48 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಮತ್ತು ದೇಶ ವಿರೋಧಿ ಜಾಲತಾಣ ಚಟುವಟಿಕೆಗಳ ಶಂಕೆಯ ಮೇಲೆ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರನ್ನು ಸಿಸಿಬಿ ಪೊಲೀಸರು ವಶಕ್ಕೆ.. ವಿಚಾರಣೆ ಬಳಿಕ ಒಬ್ಬನನ್ನು ಬಿಡುಗಡೆ ಮಾಡಲಾಗಿದ್ದು, ಮತ್ತೊಬ್ಬ ಆರೋಪಿ ಸಮೀರ್&zwnj; ಬಂಧಿಸಿ ತನಿಖೆ ಮುಂದುವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzyqqaqrnkf5swz44qxhpm32,imgname-----------------------2026-08-14t050548.930-1786664168184.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಪ್ರದೇಶ ಮೂಲದ ಯುವಕರು ವಶಕ್ಕೆ- ತೀವ್ರ ವಿಚಾರಣೆ ನಡೆಸಿದ ಬಳಿಕ ಒಬ್ಬನ ಬಿಡುಗಡೆ&lt;/p&gt;&lt;p&gt;ಕಲಬುರಗಿ (ಆ.14): ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಉಗ್ರರ ಜೊತೆ ಸಂಪರ್ಕ ಶಂಕೆ ಮತ್ತು ಜಾಲತಾಣಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳ ಆರೋಪದ ಮೇರೆಗೆ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಕಲಬುರಗಿಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಘಟನೆ ನಡೆದಿದೆ.&lt;/p&gt;&lt;p&gt;ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಸದಾರಪೂರ ಗ್ರಾಮದ ಮೊಹಮ್ಮದ್ ಸಮೀರ್ ಹಾಗೂ ಈತನ ಸಹೋದ್ಯೋಗಿ ಸಲ್ಮಾನ್&zwnj;ನನ್ನು ವಶಕ್ಕೆ ಪಡೆಯಲಾಗಿತ್ತು. ಏತನ್ಮಧ್ಯೆ ವಿಚಾರಣೆ ನಡೆಸಿ ಸಲ್ಮಾನ್&zwnj;ನನ್ನು ಬಿಡುಗಡೆ ಮಾಡಿರುವ ಪೊಲೀಸರು, ಸಮೀರ್&zwnj;ನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.&lt;/p&gt;&lt;p&gt;ದೇಶವಿರೋಧಿ ಹಾಗೂ ಮೂಲಭೂತವಾದಿ ಚಟುವಟಿಕೆಗಳಲ್ಲಿ ತೊಡಗಿವೆ ಎನ್ನಲಾದ ಹಲವು ಇನ್&zwnj;ಸ್ಟಾಗ್ರಾಂ ಖಾತೆಗಳನ್ನು ಆರೋಪಿ ಸಮೀರ್ ಫಾಲೋ ಮಾಡುತ್ತಿದ್ದ. ಸಹೋದ್ಯೋಗಿ ಸಲ್ಮಾನ್&zwnj; ಅವುಗಳಿಗೆ ಕಮೆಂಟ್&zwnj; ಮಾಡುತ್ತಿದ್ದನೆಂಬ ಸಂಗತಿ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರು ತಿಳಿಸಿದ್ದಾರೆ.&lt;/p&gt;&lt;p&gt;ದೇಶ ವಿರೋಧಿ ರೀತಿಯ ಸಾಮಾಜಿಕ ಜಾಲತಾಣ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆ ಸಮೀರ್&zwnj;ನನ್ನು ಬಂಧಿಸಲಾಗಿದೆ. ಈ ಖಾತೆಗಳನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳಿಗೆ ಪಾಕಿಸ್ತಾನ ಅಥವಾ ಭಾರತದ ಹೊರಗಿನ ಇತರ ಯಾವುದೇ ಪ್ರದೇಶಗಳೊಂದಿಗೆ ಸಂಪರ್ಕವಿದೆಯೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/pak-terror-links-ccb-police-detain-two-suspects-in-kalaburagi-rav/articleshow-0elfbzd"/>
        </item>
        <item>
            <title><![CDATA[2019ರಲ್ಲಿ 6 ಸಾವಿರಕ್ಕೆ ಕೆಲಸ, ಕೆಪಿಎಸ್ಸಿ ಸದಸ್ಯನಾದ ಬಳಿಕ 100 ಎಕರೆ ಜಮೀನು: ಇದು 'ನುಂಗಪ್ಪ' ಸಾಹುಕಾರ್‌ ಸ್ಟೋರಿ]]></title>
            <link>https://kannada.asianetnews.com/karnataka-districts/kpsc-ex-chairman-shivashankarappa-sahukar-illegal-assets-scam-san/articleshow-1wastxd</link>
            <guid isPermaLink="true">https://kannada.asianetnews.com/karnataka-districts/kpsc-ex-chairman-shivashankarappa-sahukar-illegal-assets-scam-san/articleshow-1wastxd</guid>
            <pubDate>Sat, 05 Sep 2026 07:30:37 +0530</pubDate>
            <description><![CDATA[&lt;p&gt;ಕೆಪಿಎಸ್&zwnj;ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಪಶುವೈದ್ಯ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಪಿಎಸ್&zwnj;ಸಿ ಸದಸ್ಯರಾದ ನಂತರ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೂರಾರು ಎಕರೆ ಜಮೀನು ಖರೀದಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx6f30f9v04b846swtjxw1vh,imgname-kpsc-chairman-shivashankarappa-sahukar-1783702323689.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಕಲಬುರಗಿ (ಸೆ.5):&lt;/strong&gt; ಕೆಪಿಎಸ್&zwnj;ಸಿ ಪಶುವೈದ್ಯ ಹುದ್ದೆಗಳ ನೇಮಕಾತಿ ಅಕ್ರಮ ಹಗರಣದಲ್ಲಿ ಆರೋಪ ಹೊತ್ತಿರುವ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಂಪತ್ತು ಬಗೆದಷ್ಟು ಬಯಲಾಗುತ್ತಿದೆ.&lt;/p&gt;&lt;p&gt;ಕೆಪಿಎಸ್&zwnj;ಸಿ ಸದಸ್ಯನಾಗಿ 2019ರಲ್ಲಿ ನೇಮಕವಾಗಿದ್ದ ಶಿವಶಂಕರಪ್ಪ ಸಾಹುಕಾರ್ 2019ವರೆಗೆ ಕಲಬುರಗಿ ಸರ್ಕಾರೆತರ ಸಂಸ್ಥೆಯಲ್ಲಿ ಮಾಸಿಕ ₹6 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿದ್ದರು. ಕೆಪಿಎಸ್&zwnj;ಸಿ ಸದಸ್ಯರಾಗಿ ನೇಮಕವಾದ ಬಳಿಕ ಕೋಟಿ ಕೋಟಿ ಆಸ್ತಿ ಖರೀದಿ ಮಾಡಿ ಶಿವಶಂಕರಪ್ಪ ಸಾಹುಕಾರ್ ಆಗಿದ್ದಾರೆ ಎಂದು ಶರಣ್ ಐಟಿ ದಾಖಲೆ ಬಿಡುಗಡೆ ಮಾಡಿದ್ದಾರೆ.&lt;/p&gt;&lt;p&gt;ಸಾಹುಕಾರ್&zwnj;ಗೆ ಇರುವ ಪಿತ್ರಾರ್ಜಿತ ಆಸ್ತಿ ಕೇವಲ 4 ಎಕರೆ ಮಾತ್ರ. ತಮ್ಮ ಹೆಸರಿಗೆ ಹೆಂಡತಿ ಮತ್ತು ಮಗನ ಹೆಸರಲ್ಲಿ ನೂರು ಎಕರೆಗೂ ಹೆಚ್ಚು ಜಮೀನು ಖರೀದಿ ಮಾಡಿದ್ದಾರೆಂದು ಆರೋಪಿಸಲಾಗಿದೆ. ಕೆಪಿಎಸ್&zwnj;ಸಿ ಸದಸ್ಯ ಮತ್ತು ಅಧ್ಯಕ್ಷ ಆದ ಮೇಲೆ ನೂರು ಎಕರೆಗೂ ಹೆಚ್ಚು ಎಕರೆ ಜಮೀನು ಖರೀದಿಸಿದ್ದಾರೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ವಿವಿಧೆಡೆ ಕೋಟ್ಯಾಂತರ ರು. ಮೌಲ್ಯದ ಜಮೀನು ಖರೀದಿಸಿದ್ದರು. ಕಲಬುರಗಿಯ ಸಾಮಾಜಿಕ ಕಾರ್ಯಕರ್ತ ಶರಣ್ ಐಟಿ ಸಾಹುಕಾರ್ ಅವರ ಜಮೀನಿನ ದಾಖಲೆಗಳ ಬಿಡುಗಡೆ ಮಾಡಿದ್ದಾರೆ.&lt;/p&gt;&lt;p&gt;ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಹಣ ಪಡೆದು ಕೋಟಿ ಕೋಟಿ ಆಸ್ತಿ ಮಾಡಿಕೊಂಡಿದ್ದಾರೆ. ನಿಷ್ಪಕ್ಷಪಾತ ತನಿಖೆ ಮಾಡಿದರೆ ಅವರ ಅಕ್ರಮ ಆಸ್ತಿ ಇನ್ನೂ ಹೊರಗೆ ಬರುತ್ತದೆ ಎಂದು ಶರಣು ಐಟಿ ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಿಐಡಿ ಎದುರು ವಿಚಾರಣೆಗೆ ಸಾಹುಕಾರ್&zwnj; ದಿಢೀರ್&zwnj; ಹಾಜರ್&zwnj;&lt;/strong&gt;&lt;/h2&gt;&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು:&lt;/strong&gt; ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ನೋಟಿಸ್ ನೀಡಿದ ಕೆಲವೇ ಕ್ಷಣಗಳಲ್ಲಿ ಸಿಐಡಿ ಮುಂದೆ ಗುರುವಾರ ರಾತ್ರಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್&zwnj;ಸಿ) ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ದಿಢೀರ್ ವಿಚಾರಣೆಗೆ ಹಾಜರಾಗಿದ್ದಾರೆ. ನಗರದ ಅರಮನೆ ರಸ್ತೆಯಲ್ಲಿ ಸಿಐಡಿ ಕೇಂದ್ರ ಕಚೇರಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ತನಿಖಾಧಿಕಾರಿ ಮುಂದೆ ಎರಡನೇ ಬಾರಿಗೆ ಶಿವಶಂಕರಪ್ಪ ಹಾಜರಾಗಿದ್ದಾರೆ. ಒಂದು ಗಂಟೆಗೂ ಅಧಿಕ ಹೊತ್ತು ಸಾಹುಕಾರ್&zwnj;ರನ್ನು ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಂಡ ಸಿಐಡಿ, ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಕಳುಹಿಸಿದೆ ಎಂದು ತಿಳಿದು ಬಂದಿದೆ.&lt;/p&gt;&lt;h3&gt;&lt;strong&gt;ಯಾವುದೇ ತಪ್ಪು ಮಾಡಿಲ್ಲ-ಸಾಹುಕಾರ್&zwnj;&lt;/strong&gt;&lt;/h3&gt;&lt;p&gt;ಇನ್ನು ವಿಚಾರಣೆ ವೇಳೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಪುನರುಚ್ಚರಿಸಿರುವ ಶಿವಶಂಕರಪ್ಪ ಅವರು, ಸಿಐಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅಧಿಕಾರಿಗಳ ಮುಂದೆ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಈ ವಿಚಾರಣೆ ಸಂದರ್ಭದಲ್ಲಿ ಹಗರಣದಲ್ಲಿ ಬಂಧಿತ ಆರೋಪಿಗಳಾದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಹಾಗೂ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಸ್ನೇಹ ಬಗ್ಗೆ ತನಿಖಾಧಿಕಾರಿ ಪ್ರಸ್ತಾಪಿಸಿದ್ದಾರೆ. ತನಗೆ ವೈಯಕ್ತಿಕವಾಗಿ ಬಸವರಾಜ್ ಪರಿಚಯಿವಿಲ್ಲ. ಆತ ಯಾರೆಂಬುದೂ ಗೊತ್ತಿಲ್ಲ. ಆದರೆ ಕೆಪಿಎಸ್&zwnj;ಸಿ ಅಧ್ಯಕ್ಷನಾಗಿರುವ ಕಾರಣ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಅವರ ಜತೆ ಒಡನಾಟವಿತ್ತು. ಆಯೋಗದ ಕೆಲಸಗಳಿಗೆ ಸೀಮಿತವಾಗಿ ಅಧಿಕಾರಿ ಜತೆ ಸಂಪರ್ಕವಿತ್ತು. ನೇಮಕಾತಿ ಅಕ್ರಮದಲ್ಲಿ ಅವರ ಪಾತ್ರದ ಬಗ್ಗೆ ಗೊತ್ತಿಲ್ಲ ಎಂದು ಶಿವಶಂಕರಪ್ಪ ಹೇಳಿರುವುದಾಗಿ ಮೂಲಗಳು ತಿಳಿಸಿವೆ.&lt;/p&gt;&lt;p&gt;ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಶಿವಶಂಕರಪ್ಪ ಅವರಿಗೆ ಗುರುವಾರ ಮಧ್ಯಾಹ್ನ ಸಿಐಡಿ ಎರಡನೇ ಬಾರಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸ್ ಸ್ವೀಕರಿಸಿದ ಕೆಲವೇ ತಾಸುಗಳಲ್ಲಿ ತಮ್ಮ ವಕೀಲರನ್ನು ಸಂಪರ್ಕಿಸಿ ಸಮಾಲೋಚಿಸಿ ಅವರು ಅಭಿಪ್ರಾಯಪಡೆದರು. ಕೊನೆಗೆ ತಮ್ಮ ವಕೀಲರ ಸಲಹೆ ಮೇರೆಗೆ ರಾತ್ರಿಯೇ ಸಿಐಡಿ ಕಚೇರಿಗೆ ತೆರಳಿ ತನಿಖಾಧಿಕಾರಿ ಮುಂದೆ ಶಿವಶಂಕರಪ್ಪ ಹಾಜರಾಗಿದ್ದಾರೆ ಎನ್ನಲಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/kpsc-ex-chairman-shivashankarappa-sahukar-illegal-assets-scam-san/articleshow-1wastxd"/>
        </item>
        <item>
            <title><![CDATA[ಕುಡಿದು ‘ಯಾರಿವಳು ಯಾರಿವಳು’ ಎಂದು ಹಾಡಿದ ಮರುಳಾರಾಧ್ಯ ಶ್ರೀ! ಹಾಡು ಹಾಡಿದ ಖಾವಿಧಾರಿ]]></title>
            <link>https://kannada.asianetnews.com/karnataka-districts/kalaburagi-marularadhya-swamiji-sang-a-movie-song-while-holding-a-bottle-of-liquor-in-front-of-him-mrq/articleshow-3dc2rmq</link>
            <guid isPermaLink="true">https://kannada.asianetnews.com/karnataka-districts/kalaburagi-marularadhya-swamiji-sang-a-movie-song-while-holding-a-bottle-of-liquor-in-front-of-him-mrq/articleshow-3dc2rmq</guid>
            <pubDate>Tue, 18 Aug 2026 06:14:11 +0530</pubDate>
            <description><![CDATA[ಕಲಬುರಗಿ ಜಿಲ್ಲೆಯ ಮಾಶಾಳ ಮಠದ ಮರುಳಾರಾಧ್ಯ ಸ್ವಾಮೀಜಿ ಅವರು ಶ್ರಾವಣ ಮಾಸದಲ್ಲಿ ಮದ್ಯದ ಬಾಟಲಿ ಮುಂದಿಟ್ಟುಕೊಂಡು ಸಿನಿಮಾ ಹಾಡು ಹಾಡಿ ಮೋಜು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಭಕ್ತರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಹಿಂದೆಯೂ ಸ್ವಾಮೀಜಿ ಹಲವು ವಿವಾದಗಳಿಂದ ಸುದ್ದಿಯಾಗಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m094yr8ykxfvzjm9dhycgr2x,imgname-swamiji-1787013587230.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ಭಕ್ತಿಯ ಶ್ರಾವಣ ಮಾಸದ ಆರಂಭದಲ್ಲೇ ಧಾರ್ಮಿಕ ವಲಯ ತಲೆತಗ್ಗಿಸುವಂತಹ ಕೆಲಸವೊಂದು ಜಿಲ್ಲೆಯ ಮಾಶಾಳದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಮರುಳಾರಾಧ್ಯ ಸ್ವಾಮೀಜಿ ಅವರ ಮಠದಲ್ಲಿ ನಡೆದಿದೆ.ಮರುಳಾರಾಧ್ಯ ಸ್ವಾಮೀಜಿ ತಾವೇ ಪಾನಮತ್ತರಾಗಿ ಸಿನಿಮಾ ಗೀತೆ ಹಾಡುತ್ತ ಮೋಜು, ಮಸ್ತಿ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.&lt;/p&gt;&lt;p&gt;ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಮರುಳಾರಾಧ್ಯ ಸ್ವಾಮೀಜಿ ಶ್ರಾವಣ ಮಾಸದ ಪವಿತ್ರ ದಿನಗಳಲ್ಲೇ ಮಠದ ಒಳಗೆ ಮದ್ಯದ ಬಾಟಲಿ ಮುಂದಿಟ್ಟುಕೊಂಡು ಸಿನಿಮಾ ಹಾಡು ಹಾಡಿ ಮೋಜು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.&lt;/p&gt;&lt;h2&gt;&lt;strong&gt;ಸ್ವಾಮೀಜಿಯ ಬಿಂದಾಸ್ ಲೈಫ್&zwnj;ಸ್ಟೈಲ್&lt;/strong&gt;&lt;/h2&gt;&lt;p&gt;ಸ್ವಾಮೀಜಿಯ ಈ ಬಿಂದಾಸ್ ಲೈಫ್&zwnj;ಸ್ಟೈಲ್ ವಿಡಿಯೋ ಹೊರಬಂದಿರುವುದು ಭಕ್ತ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆಯೂ ಮರುಳಾರಾಧ್ಯ ಸ್ವಾಮೀಜಿ ಅವರು ಕೆಲವು ದಿನಗಳ &quot;ಹಿಂದೂ ಧರ್ಮದ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲಿಗೆ ಖಡ್ಗ ಕೊಡಿ&quot; ಎಂದು ಭಾಷಣ ಮಾಡಿ ಭಾರಿ ವಿವಾದ ಸೃಷ್ಟಿಸಿದ್ದರು.&lt;/p&gt;&lt;p&gt;ಸಮಾಜಕ್ಕೆ ಧರ್ಮ ಮತ್ತು ಸಂಸ್ಕಾರದ ಪಾಠ ಮಾಡಬೇಕಾದ ಹಾಗೂ ಮಕ್ಕಳ ಕೈಗೆ ಮಾರಕಾಸ್ತ್ರ ನೀಡಲು ಪ್ರಚೋದಿಸಿದರು. ಅಲ್ಲದೇ ಅನ್ಯ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿದ್ದು ಸೇರಿದಂತೆ ಈ ಸ್ವಾಮೀಜಿ ವಿರುದ್ಧ ಈಗಾಗಲೇ ಎರಡ್ಮೂರು ಪ್ರಕರಣಗಳು ಪೋಲಿಸ್ ಠಾಣೆಯಲ್ಲಿ ದಾಖಲಾಗಿವೆ. ಈಗ ಸ್ವಾಮೀಜಿಯ ಅಸಲಿ ಮುಖವಾಡ ಈಗ ಅವರದ್ದೇ ಮಠದಲ್ಲಿ ಬಯಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.&lt;/p&gt;&lt;h3&gt;&lt;strong&gt;ವಿಡಿಯೋದಲ್ಲೇನಿದೆ?&lt;/strong&gt;&lt;/h3&gt;&lt;p&gt;ವೈರಲ್ ಆಗಿರುವ ವಿಡಿಯೋದಲ್ಲಿ ಮರುಳಾರಾಧ್ಯ ಸ್ವಾಮೀಜಿ ಅವರು ಕೈಯಲ್ಲಿ ಮೈಕ್ ಹಿಡಿದು, ಪಕ್ಕದಲ್ಲೇ ಮದ್ಯದ ಬಾಟಲಿ ಇಟ್ಟುಕೊಂಡು ಅತ್ಯಂತ ಗತ್ತಿನಿಂದ ''''ರಾಮಾಚಾರಿ'''' ಚಿತ್ರದ &quot;ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು... ಪ್ರೇಮಗೀತೆ ಹಾಡುತ್ತಾ ಮೋಜು ಮಸ್ತಿಯಲ್ಲಿ ಮುಳುಗಿರುವುದು ಸ್ಪಷ್ಟವಾಗಿದೆ. ಮಠದ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಪೀಠಾಧಿಪತಿಯೇ ಈ ರೀತಿ ವರ್ತಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.&lt;/p&gt;&lt;p&gt;ಪೂಜ್ಯ ಭಾವನೆಯಿಂದ ನೋಡುವ ಮಠದಲ್ಲೇ ಸ್ವಾಮೀಜಿ ಈ ರೀತಿ ಮದ್ಯದ ಬಾಟಲಿ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಬೇಕಾದರೆ ಮಠ ಬಿಟ್ಟು ಮೊದಲು ಹೊರಗೆ ಹೋಗಲಿ, ಅವರ ಮನೆಗೆ ಮರಳಲಿ. ಇಂತಹ ಸ್ವಾಮೀಜಿಗಳಿಂದ ಮಠ ಮಂದಿರಗಳ ಮೇಲೆ ಭಕ್ತಿ ಭಾವದಿಂದ ಕಾಣುವ ನಮ್ಮಂತಹ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆ ಬರುತ್ತಿದೆ. ಈ ಕೂಡಲೇ ಈ ಸ್ವಾಮೀಜಿಯನ್ನು ಮಠದಿಂದ ತೆಗೆದು ಹಾಕಬೇಕು.&lt;/p&gt;&lt;p&gt;-ಶಿವು ಪ್ಯಾಟಿ, ಗ್ರಾಮಸ್ಥರು ಮಾಶಾಳ&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburagi-marularadhya-swamiji-sang-a-movie-song-while-holding-a-bottle-of-liquor-in-front-of-him-mrq/articleshow-3dc2rmq"/>
        </item>
        <item>
            <title><![CDATA[Kalaburagi: ಮಗನ ಜೊತೆ ಚಿಕ್ಕಮ್ಮನ ಲವ್; ಅಕ್ಕನ ಮಗನ ಜೊತೆ ಅಕ್ರಮ ಸಂಬಂಧಕ್ಕೆ ಇಬ್ಬರು ಬಲಿ!]]></title>
            <link>https://kannada.asianetnews.com/karnataka-districts/aunt-falls-in-love-with-nephew-illicit-affair-with-sister-s-son-in-kalaburagi-sns/articleshow-74qb8cq</link>
            <guid isPermaLink="true">https://kannada.asianetnews.com/karnataka-districts/aunt-falls-in-love-with-nephew-illicit-affair-with-sister-s-son-in-kalaburagi-sns/articleshow-74qb8cq</guid>
            <pubDate>Sun, 13 Sep 2026 10:50:35 +0530</pubDate>
            <description><![CDATA[ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಬೆಟ್ಟದಲ್ಲಿ ಚಿಕ್ಕಮ್ಮ ಮತ್ತು ಅಕ್ಕನ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತೆಯಾಗಿದ್ದ ಮಹಿಳೆ, ಅವಿವಾಹಿತ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಇಬ್ಬರೂ ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ck5ztk8an95qn65kfh7vqz,imgname-basavaraj-and-sharanamma--1789276651347.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ: ಸಂಬಂಧದಲ್ಲಿ ಅವರಿಬ್ಬರು ಚಿಕ್ಕಮ್ಮ- ಮಗ. ಆದರೆ ಈ ಹುಚ್ಚಖೋಡಿ ಪ್ರೀತಿ ಈ ಇಬ್ಬರನ್ನು ಅಕ್ಷರಶಃ ಕುರುಡರನ್ನಾಗಿಸಿದೆ. ಆತನೆನೋ ಅವಾಹಿತ. 23 ರ ಹರೆಯದ ಯುವಕ&zwnj;. ಇನ್ನು ಆಕೆಗೆ ಗಂಡ ಇದ್ದಾನೆ. ಮುದ್ದಾದ ಮಗು ಇದೆ&zwnj;. ಆದರೂ ಈಕೆ ತನ್ನ ಅಕ್ಕಳ ಮಗನ ಜೊತೆಗೆ ಪ್ರೀತಿಯ ಸಂಬಂಧ ಬೆಳೆಸಿದ್ದಳು. ಈ ಕುರುಡು ಪ್ರೀತಿ ಈ ಇಬ್ಬರನ್ನ ಬಲಿ ತೆಗೆದುಕೊಂಡಿದೆ. ಈ ಕುಡಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.&lt;/p&gt;&lt;h2&gt;ಸಂಕನೂರು ಬೆಟ್ಟದಲ್ಲಿ ವಿಚಿತ್ರ ಪ್ರೇಮದ ಕರಾಳ ಅಂತ್ಯ!&lt;/h2&gt;&lt;p&gt;ಇದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದಲ್ಲಿರುವ ಬೆಟ್ಟ ಪ್ರದೇಶ. ಇಲ್ಲಿನ ದಟ್ಟವಾದ ಗಿಡಗಂಟಿಗಳ ನಡುವೆ ಒಂದು ಗಂಡು ಇನ್ನೊಂದು ಹೆಣ್ಣಿನ ಮೃತದೇಹ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;ಇಬ್ಬರೂ ಒಂದೇ ಮರಕ್ಕೆ, ಒಂದೇ ಬಟ್ಟೆಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದು ನಾಲ್ಕು ದಿನಗಳೇ ಕಳೆದು ಹೋಗಿವೆ. ಕುರಿ ಕಾಯುವ ಹುಡುಗರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರವೇ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಬಂದು ಪರಿಶೀಲಿಸುವ ಹೊತ್ತಿಗೆ ಶವ ಕೊಳೆತು ದುರ್ವಾಸನೆ ಬೀರಲು ಆರಂಭಿಸಿದ್ವು. ಶವದ ಫೋಟೋಗಳನ್ನು ಕಳಿಸಿ ವಿಚಾರಿಸಿದಾಗ,ಮೃತರನ್ನು ಯಾದಗಿರಿ ಜಿಲ್ಲೆಯ ಬಾಚವಾರ ಗ್ರಾಮದ 23 ವರ್ಷದ ಬಸವರಾಜ್ ಹಾಗೂ ಚಿತ್ತಾಪುರ ಪಟ್ಟಣದ ಬಸವನಗರ ನಿವಾಸಿ 32 ವರ್ಷದ ಶರಣಮ್ಮ ಭೀಮನಹಳ್ಳಿ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;ಆತನೇನೋ ಅವಿವಾಹಿತ, ಆಕೆಗೆ ಗಂಡ-ಮುದ್ದಾದ ಮಗುವಿದೆ&lt;/h2&gt;&lt;p&gt;ಹೀಗೆ ನೇಣಿಗೆ ಕೊರಲೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಇವರಿಬ್ಬರೂ ಸಂಬಂಧಿಕರು. ಈ ಬಸವರಾಜ್ ಅವಿವಾಹಿತನಾದರೆ, ಶರಣಮ್ಮಳಿಗೆ 12 ವರ್ಷಗಳ ಹಿಂದೆಯೇ ಮದುವೆಯಾಗಿದೆ. ಸಭ್ಯ ಗಂಡ, ಮುದ್ದಾದ ಹೆಣ್ಣು ಮಗು ಮನೆಯಲ್ಲಿದ್ದರೂ ಈ ಶರಣಮ್ಮ, ತನ್ನ ಸಂಬಂಧಿಕ ಬಸವರಾಜನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅಷ್ಟಕ್ಕೂ ಬಸವರಾಜ್, ಈ ಶರಣಮ್ಮಳಿಗೆ ಏನಾಗಬೇಕು ಎನ್ನುವುದು ಗೊತ್ತಾದ್ರೆ ಶಾಕ್ ಆಗ್ತೀರಾ. ಶರಣಮ್ಮಳ ಸಹೋದರಿಯ ಮಗನೆ ಈ ಬಸವರಾಜ್. ಅಂದ್ರೆ ಬಸವರಾಜನ ಪಾಲಿಗೆ ಈಕೆ ಚಿಕ್ಕಮ್ಮ. ತಾಯಿ ಮಗನ ಪವಿತ್ರ ಸಂಬಂಧ ಹೊಂದಿರುವ ಇವರು, ಮಾಡಿದ್ದು ಮಾತ್ರ ಇಡೀ ಸಮಾಜವೇ ತಲೆತಗ್ಗಿಸುವ ಕೆಲಸ.&lt;/p&gt;&lt;h2&gt;ಅಕ್ಕನ ಮಗನ ಜೊತೆ ಅಕ್ರಮ ಸಂಬಂಧ!&lt;/h2&gt;&lt;p&gt;ಹೊತ್ತಲದ ಹೊತ್ತಲ್ಲಿ ಸಹ ವಿಡಿಯೋ ಕಾಲ್ ಮಾಡಿ ಗಂಟೆಗಟ್ಟಲೆ ಮಾತನಾಡುವುದು, ಆಗಾಗ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೊರಡುವುದು ಸೇರಿದಂತೆ ಇವರ ಸರಸಸಲ್ಲಪ ನಡದೇ ಇತ್ತು. ಈ ವಿಚಾರ ಸ್ವತಃ ಆಕೆಯ ಗಂಡನಿಗೂ ಗೊತ್ತಾದ ನಂತರ ಬೈದು ಬುದ್ಧಿ ಹೇಳಿದ್ದ. ಸಮಾಜ ಮತ್ತು ಸ್ವಾಭಿಮಾನಕ್ಕೆ ಹೆದರಿ, ಮತ್ತು ಮಗಳ ಭವಿಷ್ಯ ಹಾಳಾಗಬಾರದು ಎನ್ನುವ ಕಾರಣಕ್ಕೆ ಹಾಗೂ ಮುಂದಾದರೂ ತಪ್ಪು ತಿದ್ದಿಕೊಳ್ಳಬಹುದು ಎನ್ನುವ ನಿರೀಕ್ಷೆಯಿಂದ ಈಕೆಯ ಗಂಡ ಈಕೆಗೆ ಮತ್ತೆ ಮತ್ತೆ ಅವಕಾಶ ಕೊಡುತ್ತಲೇ ಇದ್ದ. ಅದಾಗಿವೆ ಕಳೆದ ನಾಲ್ಕು ದಿನಗಳ ಹಿಂದೆ, ಮನೆ ಬಿಟ್ಟು ಬಸವರಾಜನ ಜೊತೆ ಬೈಕ್ ಹತ್ತಿ ಹೊರಟವಳು, ಸದ್ಯ ಆತನೊಂದಿಗೆ ಹೆಣವಾಗಿ ಪತ್ತೆಯಾಗಿದ್ದಾಳೆ.&lt;/p&gt;&lt;h2&gt;ಚಿಕ್ಕಮ್ಮ-ಮಗ ಎನ್ನುವ ಪವಿತ್ರ ಸಂಬಂಧವನ್ನೇ ಸಾಯಿಸಿದವರು, ಶವವಾಗಿದ್ದರೂ ಏಕೆ?&lt;/h2&gt;&lt;p&gt;ಇವರು ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಒಂದೂವರೆ ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ಮಾತ್ರ ಹೋಗಬಹುದಾಗಿದೆ. ಆ ಸ್ಥಳದಿಂದ ಕೊಳತ ಶವಗಳನ್ನ ಆಸ್ಪತ್ರೆಗೆ ಸಾಗಿಸಲು ಪೊಲೀಸರು ಪಟ್ಟ ಕಷ್ಟ ಅತಿಷ್ಟಲ್ಲ. ಸದ್ಯ ಚಿತ್ತಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.&lt;/p&gt;&lt;p&gt;ಸಂಕನೂರು ಬೆಟ್ಟದಲ್ಲಿ ನಡೆದ ಈ ಘಟನೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಅಕ್ರಮ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆಯೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯಿಂದಷ್ಟೇ ನಿಜವಾದ ಕಾರಣ ಹೊರಬರಬೇಕಿದೆ. &lt;strong&gt;(ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ)&amp;nbsp;&lt;/strong&gt;&lt;/p&gt;]]></content:encoded>
            <category>kalaburagi</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/aunt-falls-in-love-with-nephew-illicit-affair-with-sister-s-son-in-kalaburagi-sns/articleshow-74qb8cq"/>
        </item>
        <item>
            <title><![CDATA[ಕಲಬುರಗಿ: ರೌಡಿಶೀಟರ್‌ನಿಂದ ಲಂಚ ಪಡೆಯುವಾಗ ಪೊಲೀಸ್ ಕಾನ್ಸ್‌ಟೇಬಲ್‌ಗಳೇ ಲೋಕಾಯುಕ್ತ ಬಲೆಗೆ!]]></title>
            <link>https://kannada.asianetnews.com/karnataka-districts/kalaburagi-constables-trap-in-lokayukta-raid-while-bribe-from-rowdy-sheeter/articleshow-81vv3lw</link>
            <guid isPermaLink="true">https://kannada.asianetnews.com/karnataka-districts/kalaburagi-constables-trap-in-lokayukta-raid-while-bribe-from-rowdy-sheeter/articleshow-81vv3lw</guid>
            <pubDate>Thu, 03 Sep 2026 15:59:02 +0530</pubDate>
            <description><![CDATA[ಕಲಬುರಗಿಯಲ್ಲಿ ರೌಡಿಶೀಟರ್&zwnj;ಗೆ ಗಡಿಪಾರು ಮಾಡುವುದಾಗಿ ಹೆದರಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬ್ರಹ್ಮಪುರ ಪೊಲೀಸ್ ಠಾಣೆಯ ಇಬ್ಬರು ಪೇದೆಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1kd050qz3ghs8sjr3kf6fjd,imgname-kalaburagi-lokayukta-raids-1788431307799.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ (ಸೆ.3): ರೌಡಿಶೀಟರ್&zwnj;ಗಳಿಗೆ ಗಡಿಪಾರು ಮಾಡುವುದಾಗಿ ಹೆದರಿಸಿ ಅವರಿಂದ ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಪೊಲೀಸ್ ಪೇದೆಗಳು ರೆಡ್&zwnj;ಹ್ಯಾಂಡ್&zwnj; ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ.&lt;/p&gt;&lt;p&gt;ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್ಸ್&zwnj;ಟೇಬಲ್&zwnj;ಗಳಾದ ಪರಶುರಾಮ್ ಮತ್ತು ವೀರೇಶ್ ಲೋಕಾಯುಕ್ತ ಬಲೆಗೆ ಬಿದ್ದಿರೋ ಪೇದೆಗಳು.&lt;/p&gt;&lt;h2&gt;ಬ್ರಹ್ಮಪುರ ಠಾಣೆಯ ಲಂಚಬಾಕ ಪೇದೆಗಳು ಲೋಕಬಲೆಗೆ&lt;/h2&gt;&lt;p&gt;ಬ್ರಹ್ಮಪುರ ಪೊಲೀಸ್ ಠಾಣೆಯ ಪೇದೆಗಳಾದ ವೀರೇಶ್, ಪರಶುರಾಮ್ ಇಬ್ಬರು ಸೇರಿಕೊಂಡು ರೌಡಿಶೀಟರ್&zwnj; ಖನ್ನಾ ಪಟೇಲ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಕೇಳಿದಷ್ಟು ಹಣ ಕೊಡದಿದ್ದರೆ ಗಡಿಪಾರು ಮಾಡುವುದಾಗಿ ಹೆದರಿಸಿದ್ದಾರೆ. ಖನ್ನಾ ಪಟೇಲ್&zwnj;ಗೆ ಗಡಿಪಾರಿನ ಬೆದರಿಕೆ ಹಾಕಿ ಮೊದಲಿಗೆ 50,000 ಲಂಚ ಪಡೆದಿದ್ದಾರೆ. ಅಷ್ಟು ಸಾಲದ್ದಕ್ಕೆ ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಇತ್ತ ಲೋಕಾಯುಕ್ತ ಎಸ್&zwnj;ಪಿ ಸಿದ್ದರಾಜ್ ನೇತೃತ್ವದಲ್ಲಿ ಬಲೆಗೆ ಕೆಡವಲು ಸಿದ್ಧತೆ ನಡೆಸಿದ್ದಾರೆ.&lt;/p&gt;&lt;p&gt;ಇತ್ತ ಮೊದಲು 50000 ರೂಪಾಯಿ ಪಡೆದು ಲಂಚದ ರುಚಿ ಹತ್ತಿಸಿಕೊಂಡಿದ್ದ ಇಬ್ಬರು ಪೇದೆಗಳು ಖನ್ನಾ ಪಟೇಲ್&zwnj;ನ ತಾವಿದ್ದಲ್ಲಿಗೆ ಕರೆಸಿಕೊಂಡು ಉಳಿದ ಲಂಚ ಪಡೆಯಲು ಪ್ಲಾನ್ ಮಾಡಿದ್ದಾರೆ. ಅದರಂತೆ ಬ್ರಹ್ಮಪುರ ಪೊಲೀಸ್ ಠಾಣೆ ಕಾಂಪೌಂಡಿನಲ್ಲೇ 20,000 ರೂಪಾಯಿ ಲಂಚ ಪಡೆಯಲು ಕೈಚಾಚಿದಾಗಲೆ.. ಇತ್ತ ಇದೇ ಕ್ಷಣಕ್ಕೆ ಕಾದು ಕುಳಿತಿದ್ದ ಲೋಕಾಯುಕ್ತ ಎಸ್ಪಿ ಸಿದ್ಧರಾಜು ಟೀಂ ದಾಳಿ ನಡೆಸಿದೆ.&lt;/p&gt;&lt;h3&gt;ಲೋಕಾಯುಕ್ತ ಪೊಲೀಸರನ್ನು ಕಂಡು ಬೆಚ್ಚಿಬಿದ್ದರು!&lt;/h3&gt;&lt;p&gt;ಮೊದಲಿಗೆ 50,000 ಲಂಚ ಪಡೆದಾಗ ಯಾವುದೇ ದಾಳಿ ನಡೆದಿರಲಿಲ್ಲ. ಈ ಬಾರಿ ಠಾಣೆ ಬಳಿಯೇ ಲಂಚ ಪಡೆಯುವುದೇ ಸೇಫ್ ಎಂದುಕೊಂಡಿದ್ದ ಕಾನ್&zwnj;ಸ್ಟೇಬಲ್&zwnj;ಗಳು, ಲೋಕಾಯುಕ್ತ ಪೊಲೀಸರನ್ನ ಕಂಡು ಬೆಚ್ಚಿಬಿದ್ದಾರೆ. ಈ ವೇಳೆ ಪರಶುರಾಮ್ ಪೊಲೀಸರ ಕೈಗೆ ಸಿಕ್ಕಿಬಿದ್ದರೆ, ಲೋಕಾಯುಕ್ತ ದಾಳಿಯ ಸುಳಿವು ಸಿಗುತ್ತಿದ್ದಂತೆ ಸ್ಥಳದಿಂದ ಪೊಲೀಸ್ ಪೇದೆ ವೀರೇಶ್ ತಪ್ಪಿಸಿಕೊಂಡಿದ್ದಾರೆ. ಸದ್ಯ ಸೆರೆ ಸಿಕ್ಕಿರುವ ಪೇದೆ ಪರಶುರಾಮರನ್ನ ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ಹೆಚ್ಚಿನ ವಿಚಾರಣೆಗೆ ಕರೆದೊಯ್ದಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/kalaburagi-constables-trap-in-lokayukta-raid-while-bribe-from-rowdy-sheeter/articleshow-81vv3lw"/>
        </item>
        <item>
            <title><![CDATA[Priyak Kharge: ಪ್ರಜ್ವಲ್‌ ರೇವಣ್ಣ ಸೆಲ್‌ ಮೇಲೆ ದಾಳಿ; ಪ್ರಿಯಾಂಕ್‌ ಖರ್ಗೆ ಮಾತಲ್ಲಿ ಬಯಲಾಯ್ತು ‘ಅಸಲಿ’ ಸೀಕ್ರೆಟ್‌!]]></title>
            <link>https://kannada.asianetnews.com/karnataka-districts/priyank-kharge-prajwal-revanna-parappana-agrahara-jail-ccb-raid-mobile-phone-hd-kumaraswamy-bmk/articleshow-bahv4qz</link>
            <guid isPermaLink="true">https://kannada.asianetnews.com/karnataka-districts/priyank-kharge-prajwal-revanna-parappana-agrahara-jail-ccb-raid-mobile-phone-hd-kumaraswamy-bmk/articleshow-bahv4qz</guid>
            <pubDate>Tue, 15 Sep 2026 16:21:50 +0530</pubDate>
            <description><![CDATA[&lt;p&gt;ಪರಪ್ಪನ ಅಗ್ರಹಾರ ಜೈಲಿನ ಮೇಲಿನ ದಾಳಿ ಕೇವಲ ಪ್ರಜ್ವಲ್ ರೇವಣ್ಣ ಸೆಲ್&zwnj;ಗೆ ಸೀಮಿತವಾಗಿಲ್ಲ, ಇದೊಂದು ರಾಜ್ಯಾದ್ಯಂತ ನಡೆದ ಪ್ರಕ್ರಿಯೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2jb2wbhk8mn0vn0kkekf6kg,imgname-priyak-kharge-1789469487473.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲ್ಬುರ್ಗಿ; ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ (ಸೆಲ್) ಮೇಲೆ ನಡೆದ ಸಿಸಿಬಿ ದಾಳಿ ಹಾಗೂ ಮೊಬೈಲ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಅಭಿವೃದ್ಧಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಲ್ಬುರ್ಗಿಯಲ್ಲಿ ಅತ್ಯಂತ ಕಟು ಹಾಗೂ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು, ಈ ಪ್ರಕರಣವನ್ನು ಅನಗತ್ಯವಾಗಿ ಒಂದೇ ವ್ಯಕ್ತಿಯ ಸುತ್ತ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಬರೀ ಒಂದೇ ಸೆಲ್ ಮೇಲೆ ದಾಳಿಯಾಗಿಲ್ಲ!&lt;/strong&gt;&lt;/h2&gt;&lt;p&gt;ಕಲ್ಬುರ್ಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, &quot;ರೇಡ್ ಆಗಿರುವುದು ಕೇವಲ ಪ್ರಜ್ವಲ್ ರೇವಣ್ಣ ಇರಿಸಲಾಗಿರುವ ಸೆಲ್&zwnj;ಗೆ ಮಾತ್ರವಲ್ಲ, ಇಡೀ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಈ ದಾಳಿ ನಡೆದಿದೆ&quot; ಎಂದು ಸ್ಪಷ್ಟಪಡಿಸಿದರು. ಮೊಬೈಲ್ ಫೋನ್&zwnj;ಗಳು ಕೇವಲ ಪ್ರಜ್ವಲ್ ಬಳಿ ಮಾತ್ರ ಸಿಕ್ಕಿಲ್ಲ. ಜೈಲಿನಲ್ಲಿದ್ದ ಇತರ ಹಲವು ಕೈದಿಗಳ ಬಳಿಯೂ ಸಾಕಷ್ಟು ಮೊಬೈಲ್&zwnj;ಗಳು ಮತ್ತು ಶಂಕಿತ ವಸ್ತುಗಳು ಜಪ್ತಿಯಾಗಿವೆ. ದುರ್ದೈವದ ಸಂಗತಿಯೆಂದರೆ, ಮಾಧ್ಯಮದವರು ಕೇವಲ ಪ್ರಜ್ವಲ್ ರೇವಣ್ಣ ಅವರ ಒಂದೇ ವಿಷಯಕ್ಕೆ ಗರಿಷ್ಠ ಆದ್ಯತೆ ನೀಡಿ ಸುದ್ದಿ ಬಿತ್ತರಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.&lt;/p&gt;&lt;h3&gt;&lt;strong&gt;'ನಾನೇನು ಬರೀ ಪರಪ್ಪನ ಅಗ್ರಹಾರದ ಹೋಂ ಮಿನಿಸ್ಟರಾ?&lt;/strong&gt;&lt;/h3&gt;&lt;p&gt;ಸರ್ಕಾರದ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ಸಚಿವರು, &quot;ನಾವು ಬರೀ ಪರಪ್ಪನ ಅಗ್ರಹಾರಕ್ಕೆ ಮಾತ್ರ ಸೀಮಿತವಾದ ಗೃಹ ಸಚಿವರಾ? ನಾನೇನು ಒಂದೇ ಒಂದು ಸೆಲ್&zwnj;ಗೆ ಮಾತ್ರ ಮಂತ್ರಿಯೇ?&quot; ಎಂದು ಪ್ರಶ್ನಿಸಿದರು. ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಜೈಲುಗಳ ಭದ್ರತೆ ನಮ್ಮ ಆದ್ಯತೆಯಾಗಿದೆ. ಕೇವಲ ಬೆಂಗಳೂರಿನ ಪರಪ್ಪನ ಅಗ್ರಹಾರ ಮಾತ್ರವಲ್ಲದೆ, ಕಲ್ಬುರ್ಗಿ, ಮಂಡ್ಯ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಇರುವ ಪ್ರಮುಖ ಕಾರಾಗೃಹಗಳ ಮೇಲೆಯೂ ದಿಢೀರ್ ದಾಳಿಗಳನ್ನು ನಡೆಸಲಾಗಿದೆ ಎಂದರು.&lt;/p&gt;&lt;h3&gt;&lt;strong&gt;ಅದು ರೂಟಿನ್&zwnj; ಪ್ರಕ್ರಿಯೆ!&lt;/strong&gt;&lt;/h3&gt;&lt;p&gt;ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಅಥವಾ ಮಾದಕ ವಸ್ತುಗಳ (ಡ್ರಗ್ಸ್) ಬಳಕೆ ನಡೆಯುತ್ತಿದೆ ಎಂಬ ನಿಖರ ಮಾಹಿತಿ ಬಂದಾಗ ಕಾನೂನು ಪ್ರಕಾರ ಸರ್ಪ್ರೈಸ್ ರೇಡ್ ಮಾಡುವುದು ರೂಟಿನ್ ಪ್ರಕ್ರಿಯೆ. ಅದನ್ನು ಮಾಡಬೇಡಿ ಎಂದರೆ ಹೇಗೆ? ಜೈಲಿನ ಭದ್ರತೆಯನ್ನು ಕಾಯ್ದುಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಖರ್ಗೆ ಪ್ರತಿಪಾದಿಸಿದರು.&lt;/p&gt;&lt;h3&gt;&lt;strong&gt;ಕುಟುಂಬದ ಜವಾಬ್ದಾರಿ ಎಲ್ಲಿ ಹೋಯ್ತು?&lt;/strong&gt;&lt;/h3&gt;&lt;p&gt;ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಇತ್ತು ಹಾಗೂ ಅವರು ಜೈಲಿನಿಂದಲೇ ತಮ್ಮ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾದ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, &quot;ಜೈಲಿನಲ್ಲಿ ಮೊಬೈಲ್ ಇಟ್ಟುಕೊಂಡು ಕಾನೂನುಬಾಹಿರವಾಗಿ ಸಂಪರ್ಕದಲ್ಲಿದ್ದಾಗ, ಅವರ ಕುಟುಂಬದವರೇ ಅದಕ್ಕೆ ತಡೆ ಒಡ್ಡಬೇಕಿತ್ತು. ಮೊಬೈಲ್ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ (ಕ್ರೈಮ್) ಎಂಬುದು ಎಲ್ಲರಿಗೂ ಗೊತ್ತಿದೆ&quot; ಎಂದರು.&lt;/p&gt;&lt;h3&gt;&lt;strong&gt;ಬುದ್ದಿ ಹೇಳಬೇಕಿತ್ತು ಕುಟುಂಬ!&lt;/strong&gt;&lt;/h3&gt;&lt;p&gt;ರೇವಣ್ಣ ಅವರದ್ದು ಸಾಮಾನ್ಯ ಅಥವಾ ಆರ್ಡಿನರಿ ಫ್ಯಾಮಿಲಿ ಅಲ್ಲ. ರಾಜಕೀಯವಾಗಿ ದೊಡ್ಡ ಹೆಸರು ಹೊಂದಿರುವ ಕುಟುಂಬ. ಈ ರೀತಿ ತಪ್ಪು ಮಾಡುತ್ತಿರುವುದನ್ನು ಕಂಡು, ಈಗಾಗಲೇ ಸಾಕಷ್ಟು ಮುಜುಗರ ಎದುರಿಸಿದ್ದೇವೆ, ಇನ್ನು ಮುಂದೆ ಹೀಗೆ ಮಾಡಿ ಮತ್ತಷ್ಟು ಮುಜುಗರಕ್ಕೆ ತಳ್ಳಬೇಡ ಎಂದು ಕುಟುಂಬದವರೇ ಅವರಿಗೆ ಬುದ್ಧಿ ಹೇಳಬಹುದಿತ್ತು. ಕುಟುಂಬದವರು ಹೋಗಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ನಮಗಾದರೂ ಒಂದು ಪತ್ರ ಬರೆದು 'ಯಾರೋ ಮೊಬೈಲ್ ತಲುಪಿಸಿದ್ದಾರೆ, ತನಿಖೆ ಮಾಡಿ' ಎಂದು ತಿಳಿಸಬಹುದಿತ್ತು. ಹಾಗೆ ಮಾಡಿದ್ದರೆ ಅದನ್ನು ಜವಾಬ್ದಾರಿಯುತ ನಾಯಕರ ಲಕ್ಷಣ ಎನ್ನಬಹುದಿತ್ತು&quot; ಎಂದು ಹೆಚ್.ಡಿ. ಕುಮಾರಸ್ವಾಮಿ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/priyank-kharge-prajwal-revanna-parappana-agrahara-jail-ccb-raid-mobile-phone-hd-kumaraswamy-bmk/articleshow-bahv4qz"/>
        </item>
        <item>
            <title><![CDATA[Cyber: ಕಲಬುರಗಿಯಲ್ಲಿ ಭೀಕರ ಸೈಬರ್ ವಂಚನೆ;  'ಡಿಜಿಟಲ್ ಅರೆಸ್ಟ್' ನೆಪದಲ್ಲಿ ವೈದ್ಯನಿಗೆ 1.79 ಕೋಟಿ ರೂ. ಟೋಪಿ!]]></title>
            <link>https://kannada.asianetnews.com/karnataka-districts/fake-cyber-crime-officer-cheated-karnataka-doctor-rs-1-79-crore-cyber-fraud-scam-bmk/articleshow-cld187v</link>
            <guid isPermaLink="true">https://kannada.asianetnews.com/karnataka-districts/fake-cyber-crime-officer-cheated-karnataka-doctor-rs-1-79-crore-cyber-fraud-scam-bmk/articleshow-cld187v</guid>
            <pubDate>Mon, 31 Aug 2026 20:29:37 +0530</pubDate>
            <description><![CDATA[ಕಲಬುರಗಿಯ ನಿವೃತ್ತ ವೈದ್ಯರೊಬ್ಬರು 'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ನಕಲಿ ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಬೆದರಿಸಿ ದಂಪತಿಯಿಂದ 1.79 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ. ಬೆಂಗಳೂರಿನಲ್ಲಿದ್ದ ಮಗ ಮನೆಗೆ ಬಂದಾಗ ಈ ಬೃಹತ್ ವಂಚನೆಯ ಜಾಲ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk42dw5edk52kn4rdqjwxadt,imgname-cyber-attack-1772884521134.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಆನ್&zwnj;ಲೈನ್ ಸೈಬರ್ ಅಪರಾಧಿಗಳ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಭೀತಿಯನ್ನೇ ಬಂಡವಾಳ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ದೋಚುವ ಕೃತ್ಯಗಳು ಮುಂದುವರಿದಿವೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ಕರ್ನಾಟಕದ ಕಲಬುರಗಿ ನಿವಾಸಿಯಾಗಿರುವ 67 ವರ್ಷದ ನಿವೃತ್ತ ವೈದ್ಯರೊಬ್ಬರು &quot;ಡಿಜಿಟಲ್ ಅರೆಸ್ಟ್&quot; ಎಂಬ ಹೈಟೆಕ್ ವಂಚನೆಗೆ ಬಲಿಯಾಗಿ ಬರೋಬ್ಬರಿ 1.79 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ಹಂತ-ಹಂತದ ಹಿನ್ನೆಲೆ!&lt;/strong&gt;&lt;/h2&gt;&lt;p&gt;ಸಂಕಷ್ಟ ತಂದ ಮೊದಲ ಫೋನ್ ಕರೆ; ಜುಲೈ 14 ರಂದು ನಿವೃತ್ತ ವೈದ್ಯರ ಪತ್ನಿಗೆ ಪ್ರಸಿದ್ಧ ಕೊರಿಯರ್ ಕಂಪನಿಯೊಂದರ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ. &quot;ನಿಮ್ಮ ಹೆಸರಿನಲ್ಲಿ ಮುಂಬೈಗೆ ಅಕ್ರಮ ವಸ್ತುಗಳಿರುವ ಪ್ಯಾಕೇಜ್ ಒಂದನ್ನು ರವಾನಿಸಲಾಗುತ್ತಿದೆ ಎಂದು ಹೇಳಿ ಆಕೆಯನ್ನು ಹೆದರಿಸಿದ್ದ. ನಕಲಿ ಸೈಬರ್ ಅಧಿಕಾರಿಯ ಎಂಟ್ರಿ; ತಕ್ಷಣವೇ ಆ ಕರೆಯನ್ನು ಮುಂಬೈನ &quot;ಭಾರತೀಯ ಸೈಬರ್ ಅಪರಾಧ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ ಎಂದು ತನ್ನನ್ನು ಪರಿಚಯಿಸಿಕೊಂಡ ಅಮನ್ ಕುಮಾರ್ ಶರ್ಮಾ ಎಂಬ ವ್ಯಕ್ತಿಗೆ ವರ್ಗಾಯಿಸಲಾಯಿತು. ಆತ, &quot;ನಿಮ್ಮ ಆಧಾರ್ ಕಾರ್ಡ್ ಬಳಸಿ ನಿಷೇಧಿತ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' (PFI) ಸಂಸ್ಥೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಬ್ಯಾಂಕ್ ಖಾತೆ ತೆರೆಯಲಾಗಿದೆ&quot; ಎಂದು ದಂಪತಿಗಳನ್ನು ಬೆದರಿಸಿದ್ದ.&lt;/p&gt;&lt;p&gt;&lt;strong&gt;ಬೆದರಿಕೆ ಮತ್ತು 'ರಾಷ್ಟ್ರೀಯ ಭದ್ರತೆ' ನಾಟಕ;&lt;/strong&gt; ಪ್ರಕರಣದಿಂದ ಹೆಸರು ತೆರವುಗೊಳಿಸಲು ಅಕ್ರಮ ನಿಧಿಯ ಶೇಕಡಾ 10 ರಷ್ಟು ಅಂದರೆ 20 ಲಕ್ಷ ರೂಪಾಯಿ ನೀಡುವಂತೆ ಮೊದಲಿಗೆ ಬೇಡಿಕೆ ಇಟ್ಟಿದ್ದರು. ತದನಂತರ ವಾಟ್ಸಾಪ್ ವೀಡಿಯೋ ಕರೆಗಳ ಮೂಲಕ ತಾನು ಸಬ್ ಇನ್ಸ್&zwnj;ಪೆಕ್ಟರ್ ವಿಶ್ವಾಸ್ ರಾವ್ ಎಂದು ಹೇಳಿಕೊಂಡ ಇನ್ನೊಬ್ಬ ವ್ಯಕ್ತಿ ತನಿಖೆಯ ನಾಟಕವಾಡಿದ್ದ. &quot;ರಾಷ್ಟ್ರೀಯ ಭದ್ರತೆ&quot;ಯ ವಿಷಯವೆಂದು ಬೆದರಿಸಿ, ಈ ವಿಚಾರವನ್ನು ಯಾರಿಗೂ ಬಹಿರಂಗಪಡಿಸದಂತೆ ಎಚ್ಚರಿಕೆ ನೀಡಿದ್ದ.&lt;/p&gt;&lt;h3&gt;&lt;strong&gt;ಆಸ್ತಿ-ಪಾಸ್ತಿ ಮಾರಿಸಿ 1.79 ಕೋಟಿ ರೂ. ದೋಚಿದ ಖದೀಮರು!&lt;/strong&gt;&lt;/h3&gt;&lt;p&gt;ತನಿಖೆಯ ನೆಪದಲ್ಲಿ ವಂಚಕರು ವೈದ್ಯರು ಮತ್ತು ಅವರ ಪತ್ನಿಯ ಬ್ಯಾಂಕ್ ಖಾತೆಗಳು, ಸ್ಥಿರ ಠೇವಣಿಗಳು (FD), ಉಳಿತಾಯ ಖಾತೆ, ಎಲ್&zwnj;ಐಸಿ ಪಾಲಿಸಿಗಳು, ಚಿನ್ನದ ವಿವರ ಹಾಗೂ ಆಸ್ತಿ ಮಾಹಿತಿಯನ್ನೊಳಗೊಂಡ ಸೂಕ್ಷ್ಮ ವಿವರಗಳನ್ನು ಕಲೆಹಾಕಿದ್ದರು. ವಂಚಕರ ಮಾತನ್ನು ನಂಬಿದ ದಂಪತಿಗಳು ತಮ್ಮ ಸ್ಥಿರ ಠೇವಣಿಗಳನ್ನು ಮುಕ್ತಾಯಗೊಳಿಸಿ, ಎಲ್&zwnj;ಐಸಿ ಹಣವನ್ನು ಹಿಂತೆಗೆದುಕೊಂಡರು. ಅಷ್ಟೇ ಅಲ್ಲದೆ, ಕೊನೆಗೆ ತಮ್ಮ ಮನೆಯ ಮೇಲೆಯೇ 50 ಲಕ್ಷ ರೂಪಾಯಿ ವೈಯಕ್ತಿಕ ಸಾಲ ಪಡೆದು, ವಿವಿಧ ಖಾತೆಗಳ ಮೂಲಕ ಒಟ್ಟು 1.79 ಕೋಟಿ ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದರು.&lt;/p&gt;&lt;h3&gt;&lt;strong&gt;ಮಗ ಮನೆಗೆ ಬಂದ ಮೇಲೆಯೇ ಬಯಲಾಯ್ತು ವಂಚನೆ!&lt;/strong&gt;&lt;/h3&gt;&lt;p&gt;ಆಗಸ್ಟ್ 21 ರಂದು ಬೆಂಗಳೂರಿನಲ್ಲಿ ಸಾಫ್ಟ್&zwnj;ವೇರ್ ಎಂಜಿನಿಯರ್ ಆಗಿರುವ ಇವರ ಮಗ ಕಲಬುರಗಿಯ ಮನೆಗೆ ಭೇಟಿ ನೀಡಿದ್ದ. ಆ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ 'ಡಿಜಿಟಲ್ ಅರೆಸ್ಟ್' ವಂಚನೆಗಳ ಬಗ್ಗೆ ಪೋಷಕರಿಗೆ ವಿವರಿಸಿದಾಗಷ್ಟೇ, ತಾವು ಬೃಹತ್ ಹಗರಣಕ್ಕೆ ಬಲಿಯಾಗಿದ್ದೇವೆ ಎಂಬ ಕಹಿ ಸತ್ಯ ವೈದ್ಯ ದಂಪತಿಗೆ ಅರಿವಾಗಿದೆ.&lt;/p&gt;&lt;h3&gt;&lt;strong&gt;ದೂರು ಸಲ್ಲಿಸಿದ ವೈದ್ಯ!&lt;/strong&gt;&lt;/h3&gt;&lt;p&gt;ಕೂಡಲೇ ಜಾಗೃತರಾದ ವೈದ್ಯರು ಆಗಸ್ಟ್ 28 ರಂದು ಕಲಬುರಗಿ ಸಿಇಎನ್ (CEN) ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಗುರುತಿನ ಕಳ್ಳತನ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. &quot;ಜಾರಿ ನಿರ್ದೇಶನಾಲಯ (ED) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳ ಹೆಸರಿನಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಗಳ ಕರೆ ದಾಖಲೆಗಳು ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ&quot; ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/fake-cyber-crime-officer-cheated-karnataka-doctor-rs-1-79-crore-cyber-fraud-scam-bmk/articleshow-cld187v"/>
        </item>
        <item>
            <title><![CDATA['ಫೈಲ್ ನನ್ನ ಬಳಿಯೇ ಬರಬೇಕು ತಾನೇ?.. ಸಂಪುಟ ಬದಲಾವಣೆ ಚರ್ಚೆಗೆ ಖರ್ಗೆ ತೆರೆ: ಯಾವಾಗ ಏನು ಬೇಕಾದ್ರೂ ಆಗಬಹುದು ಎಂದಿದ್ದೇಕೆ ಹೆಬ್ಬಾಳ್ಕರ್?]]></title>
            <link>https://kannada.asianetnews.com/politics/no-files-reache-me-aicc-president-kharge-reacts-on-cabinet-expansion-at-kalaburagi-rav/articleshow-dmdyphf</link>
            <guid isPermaLink="true">https://kannada.asianetnews.com/politics/no-files-reache-me-aicc-president-kharge-reacts-on-cabinet-expansion-at-kalaburagi-rav/articleshow-dmdyphf</guid>
            <pubDate>Fri, 28 Aug 2026 10:01:56 +0530</pubDate>
            <description><![CDATA[&lt;p&gt;ರಾಜ್ಯ ಸಚಿವ ಸಂಪುಟ ಬದಲಾವಣೆ ವದಂತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದು, ಯಾವುದೇ ಫೈಲ್ ತನ್ನ ಬಳಿ ಬರಬೇಕು ಎಂದು ಸ್ಪಷ್ಟಪಡಿಸಿದರು. ಇತ್ತ, ಮಾಜಿ ಸಚಿವೆ ಹೆಬ್ಬಾಳಕರ್, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದು, ಸಂಪುಟದಲ್ಲಿ ಮಹಿಳೆಯರಿಲ್ಲದಿದ್ದರೆ ಅದು ಅಪೂರ್ಣ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m139qq0cyp9qnc3sv60t3j1s,imgname-----------------------2026-08-28t095320.205-1787891014668.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಆ.28):&lt;/strong&gt; ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರ ತಳ್ಳಿ ಹಾಕಿರುವ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ತಮಗೆ ಈ ವಿಚಾರದಲ್ಲಿ ಯಾವುದೇ ಸುದ್ದಿ ಗಮನಕ್ಕೆ ಬಂದಿಲ್ಲವೆಂದು ಹೇಳುವ ಮೂಲಕ ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ತಳ್ಳಿ ಹಾಕಿದ್ದಾರೆ.&lt;/p&gt;&lt;h2&gt;ಏನಾದ್ರೂ ಫೈಲ್ ಬರಬೇಕಿದ್ದರೆ ನನ್ನ ಹತ್ತಿರವೇ ಬರಬೇಕು ತಾನೆ?&lt;/h2&gt;&lt;p&gt;ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಗುರುವಾರ ಕಲಬುರಗಿಗೆ ಬಂದಿಳಿದಿರುವ ಖರ್ಗೆ, ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಸಂಪುಟದಲ್ಲಿನ ಬದಲಾವಣೆ ಬಗ್ಗೆ ನನಗೆ ಈ ಬಗ್ಗೆ ಯಾವುದೇ ಸುದ್ದಿ ಇಲ್ಲ, ನಿಮಗೆ ಏನಾದರೂ ಗೊತ್ತಿದ್ದರೆ ಹೇಳಿ. ನಾನು ಈಗ ಸದ್ಯ ಕಲ್ಬುರ್ಗಿಯಲ್ಲಿ ಇದ್ದೇನೆ. ಏನಾದರೂ ಫೈಲ್ ಬರಬೇಕಿದ್ದರೆ ಅದು ನನ್ನ ಹತ್ತಿರವೇ ಬರಬೇಕು ತಾನೆ? ಬೇರೆಯವರ ಹತ್ತಿರ ಅಂತೂ ಹೋಗುವುದಿಲ್ಲ ಎಂದು ಹೇಳುವ ಮೂಲಕ ಸಂಪುಟದಲ್ಲಿನ ಬದಲಾವಣೆ ವಿಚಾರ ಚರ್ಚೆಗೆ ತೆರೆ ಎಳೆದರು.&lt;/p&gt;&lt;h3&gt;ಮಹಿಳೆಯರಿಲ್ಲದೆ ಸಚಿವ ಸಂಪುಟ ಅಪೂರ್ಣ: ಲಕ್ಷ್ಮೀ ಹೆಬ್ಬಾಳಕರ್&zwnj;&lt;/h3&gt;&lt;p&gt;ಬೆಳಗಾವಿ: ನಾನು ಕಾಂಗ್ರೆಸ್&zwnj; ಪಕ್ಷದ ಶಿಸ್ತಿನ ಸಿಪಾಯಿ. ಅವಕಾಶ ಕೊಟ್ಟರೂ, ಕೊಡದಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಮೂರು ವರ್ಷಗಳ ಕಾಲ ಸಚಿವೆಯಾಗಿ ಕಾರ್ಯನಿರ್ವಹಿಸಲು ಅ&zwj;ವಕಾಶ ನೀಡಿದ ಪಕ್ಷಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಪಕ್ಷದ ಹೈಕಮಾಂಡ್&zwnj; ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಅ&zwj;ವರು, ಸಚಿವ ಸ್ಥಾನ ಮುಂದುವರಿಸುವಂತೆ ತಾವು ಯಾರನ್ನೂ ಕೇಳಿಲ್ಲ. ರಾಜಕಾರಣದಲ್ಲಿ ಇಂತಹ ಬೆಳವಣಿಗೆ ಸಹಜವಾಗಿದ್ದು, ಯಾವಾಗ ಏನು ಬೇಕಾದರೂ ಆಗಬಹುದು. ಹೈಕಮಾಂಡ್ ಸಾಕಷ್ಟು ಆಲೋಚಿಸಿ ನಿರ್ಧಾರ ಕೈಗೊಳ್ಳುತ್ತದೆ. ಅದನ್ನು ಪ್ರಶ್ನಿಸುವುದು ತಮ್ಮ ಕೆಲಸವಲ್ಲ. ಆದರೆ, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು. ಮಹಿಳೆಯರಿಲ್ಲದ ಸಂಪುಟ ಅಪೂರ್ಣ ಎನ್ನುವುದು ತಮ್ಮ ಅಭಿಪ್ರಾಯ ಎಂದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/no-files-reache-me-aicc-president-kharge-reacts-on-cabinet-expansion-at-kalaburagi-rav/articleshow-dmdyphf"/>
        </item>
        <item>
            <title><![CDATA[ರೈತರಿಗೆ ₹18 ಕೋಟಿ ಮಧ್ಯಂತರ ಪರಿಹಾರ ಶೀಘ್ರದಲ್ಲೇ ಮಂಜೂರು: ಸಚಿವ ಪ್ರಿಯಾಂಕ್ ಖರ್ಗೆ]]></title>
            <link>https://kannada.asianetnews.com/karnataka-districts/kalaburagi-rs-18-crore-interim-relief-to-farmers-to-be-sanctioned-soon-minister-priyank-kharge-mrq/articleshow-dmwtfyv</link>
            <guid isPermaLink="true">https://kannada.asianetnews.com/karnataka-districts/kalaburagi-rs-18-crore-interim-relief-to-farmers-to-be-sanctioned-soon-minister-priyank-kharge-mrq/articleshow-dmwtfyv</guid>
            <pubDate>Wed, 02 Sep 2026 08:40:54 +0530</pubDate>
            <description><![CDATA[&lt;p&gt;ಖಾರಿಫ್ ಋತುವಿನಲ್ಲಿ ಮಳೆ ಕೊರತೆಯಿಂದಾದ ಬೆಳೆ ನಷ್ಟಕ್ಕೆ, ಕಲಬುರಗಿ ಜಿಲ್ಲೆಯ 37,051 ರೈತರಿಗೆ 18 ಕೋಟಿ ರೂ. ಮಧ್ಯಂತರ ಬೆಳೆ ವಿಮೆ ಪರಿಹಾರ ಶೀಘ್ರದಲ್ಲೇ ಮಂಜೂರಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಅಲ್ಲದೆ, ಆಗಸ್ಟ್ ತಿಂಗಳ ಮಳೆ ಕೊರತೆ ಆಧರಿಸಿ ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1g1ajyg1678byrn19s36kat,imgname-priyank-kharge-1788318403536.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ಖಾರಿಫ್ ಋತುಮಾನದಲ್ಲಿ&zwnj; ಮಳೆ ಕೊರತೆ ಕಾರಣ ಪ್ರಸಕ್ತ 2026-27ನೇ ಸಾಲಿನ ಬೆಳೆ ವಿಮೆ ಯೋಜನೆಯಡಿ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಹಾಗೂ ಸೋಯಾಬೀನ್ ಬೆಳೆಗಳಿಗೆ ಬೆಳೆ ವಿಮೆ ಮದ್ಯಂತರ ಪರಿಹಾರಕ್ಕಾಗಿ 18 ಕೋಟಿ ರು. ಸರ್ಕಾರಕ್ಕೆ ಕಲಬುರಗಿ ಜಿಲ್ಲಾಡಳಿತದಿಂದ ವರದಿ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಪರಿಹಾರ ಮಂಜೂರಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.&lt;/p&gt;&lt;h2&gt;&lt;strong&gt;ರೈತರಿಗೆ ದಾಖಲೆ ಪ್ರಮಾಣದಲ್ಲಿ ಪರಿಹಾರ&lt;/strong&gt;&lt;/h2&gt;&lt;p&gt;ಮಂಗಳವಾರ ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದರಿಂದ ಜಿಲ್ಲೆಯ 37,051 ರೈತರಿಗೆ ನೆರವಾಗಲಿದೆ.&zwnj; ಕಳೆದ ವರ್ಷವೂ ಸಹ ಜಿಲ್ಲಾಡಳಿತ ಹಾಗೂ ನಮ್ಮೆಲ್ಲರ ಪ್ರಯತ್ನದಿಂದ ನಮ್ಮ ಜಿಲ್ಲೆಯ ರೈತರಿಗೆ ದಾಖಲೆ ಪ್ರಮಾಣದಲ್ಲಿ ಪರಿಹಾರ ಬರಲು ಸಾಧ್ಯವಾಗಿದೆ ಎಂದರು.&lt;/p&gt;&lt;p&gt;ಪ್ರಸ್ತುತ ಜೂನ್ ಮತ್ತು ಜುಲೈ ಮಾಹೆಯಲ್ಲಿ ಸತತ ಮೂರು ವಾರಗಳ ಕಾಲ ಮಳೆ&zwnj; ಇಲ್ಲದ ತಾಲೂಕುಗಳನ್ನು ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಬರ ಘೋಷಣೆಯ ತಾಲೂಕಿನಲ್ಲಿ ಕಲಬುರಗಿ ಜಿಲ್ಲೆಯ ಒಂದು ತಾಲೂಕು ಇಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಗಸ್ಟ್ ಮಾಹೆಯಲ್ಲಿ ಅಫಜಲಪುರದಲ್ಲಿ ಶೇ.65, ಆಳಂದ ಶೇ.66, ಚಿಂಚೋಳಿ ಶೇ.61, ಕಲಬುರಗಿ ಶೇ.68, ಜೇವರ್ಗಿ ಶೇ.74, ಕಮಲಾಪೂರ ಶೇ.57, ಯಡ್ರಾಮಿ ಶೇ.69 ಹಾಗೂ ಶಹಾಬಾದ್&zwnj; ಶೇ.62 ಮಳೆ&zwnj; ಕೊರತೆ ಇದೆ. ಮುಂದಿನ ದಿನದಲ್ಲಿ ಈ ತಾಲೂಕುಗಳನ್ನು ಎನ್.ಡಿ.ಅರ್.ಎಫ್ ನಿಯಮಾವಳಿ ಪ್ರಕಾರ ಮಾಸಿಕ ಶೇ.55-60ರಷ್ಟು ಮಳೆ ಕೊರತೆ ಪ್ರದೇಶವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗುವುದು ಎಂದರು.&lt;/p&gt;&lt;h3&gt;&lt;strong&gt;ಎನ್&zwnj;ಡಿಆರ್&zwnj;ಎಫ್ ನಿಯಮ ಬದಲಾವಣೆ ತನ್ನಿ&lt;/strong&gt;&lt;/h3&gt;&lt;p&gt;ಬರ ಘೋಷಣೆಯ ಎನ್.ಡಿ.ಆರ್.ಎಫ್&zwnj; ನಿಯಮಾವಳಿ&zwnj; 2020ರಲ್ಲಿ ಎನ್.ಡಿ.ಎ. ಸರ್ಕಾರ ಪರಿಷ್ಕರಿಸಿದ್ದು, ಇದರಿಂದ&zwnj; ವಾಸ್ತವದಲ್ಲಿ ಬರಗಾಲವಿದ್ದರೂ, ಬರ ಘೋಷಣೆ ಮಾಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಬರ ಘೋಷಣೆ ರಾಜ್ಯಗಳಿಗೆ ಸ್ವಾತಂತ್ರ್ಯವಿಲ್ಲ. ಯು.ಪಿ.ಎ. ಅವಧಿಯಲ್ಲಿದ್ದ ಎನ್.ಡಿ.ಆರ್.ಎಫ್. ನಿಯಮಾವಳಿ ಜಾರಿಗೆ ತರಬೇಕೆಂಬುದು ನಮ್ಮ&zwnj; ಬೇಡಿಕೆಯಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ&zwnj; ಸ್ಪಂದಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.&lt;/p&gt;&lt;p&gt;ಪೊಲೀಸ್ ಇಲಾಖೆಯಲ್ಲಿ ಸುಧಾರಣೆ: ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಪುನರ್ ರಚನೆ ಸಮಿತಿ ರಚಿಸಿದ್ದು, ಮುಂದಿನ ಒಂದು ತಿಂಗಳಲ್ಲಿ ಸಚಿವ ಸಂಪುಟ ಸಭೆಯ ಮುಂದೆ ಬರಲಿದೆ. ನಿನ್ನೆಯಷ್ಟೆ ರಾಜ್ಯದ ಬೆಸ್ಟ್ ಪಿ.ಸಿ. ಹೆಡ್ ಕಾನ್ಸ್ಟೇಬಲ್ ಅವರೊಂದಿಗೆ ಸಂವಾದ ನಡೆಸಿದ್ದೇನೆ. ಸಿ &amp;amp; ಆರ್ ಸಹ ತಿದ್ದುಪಡಿ ತರಲಾಗುತ್ತಿದೆ. ಡ್ರಗ್ಸ್ ಮಾಫಿಯಾಗೆ ಬ್ರೇಕ್, ಜೂಜಾಟ ತಡೆಯಲು, ಯುವ ಜನರನ್ನು ದುಶ್ಚಟದಿಂದ ರಕ್ಷಿಸಲು ನಶಾಮುಕ್ತ ಅಭಿಯಾನ, ಬೇಡ ಬ್ರೋ ಅಭಿಯಾನ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.&lt;/p&gt;&lt;p&gt;ಪತ್ರಿಕಾಗೋಷ್ಠಿಯಲ್ಲಿ ವಿಪ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಇದ್ದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburagi-rs-18-crore-interim-relief-to-farmers-to-be-sanctioned-soon-minister-priyank-kharge-mrq/articleshow-dmwtfyv"/>
        </item>
        <item>
            <title><![CDATA['ಮೋದಿ ಮಾತಾಡಿದ್ರೆ ಕಾನೂನು ಬೇರೆಯಾಗಲ್ಲ' ನಿಂಗಮ್ಮನ ಇಡ್ಲಿ ಬಂಡಿ ತೆರವು ಸಮರ್ಥಿಸಿದ ಪ್ರಿಯಾಂಕ್‌ ಖರ್ಗೆ]]></title>
            <link>https://kannada.asianetnews.com/karnataka-districts/pm-modi-mann-ki-baat-ningamma-idli-stall-gba-eviction-priyank-kharge-san/articleshow-fho304c</link>
            <guid isPermaLink="true">https://kannada.asianetnews.com/karnataka-districts/pm-modi-mann-ki-baat-ningamma-idli-stall-gba-eviction-priyank-kharge-san/articleshow-fho304c</guid>
            <pubDate>Sat, 05 Sep 2026 10:37:19 +0530</pubDate>
            <description><![CDATA[&lt;p&gt;ಪ್ರಧಾನಿ ಮೋದಿಯವರಿಂದ 'ಮನ್ ಕೀ ಬಾತ್'ನಲ್ಲಿ ಶ್ಲಾಘನೆಗೆ ಒಳಗಾಗಿದ್ದ ಬೆಂಗಳೂರಿನ ಫುಟ್&zwnj;ಪಾತ್ ಇಡ್ಲಿ ವ್ಯಾಪಾರಿ ನಿಂಗಮ್ಮ ಅವರಿಗೆ ಜಿಬಿಎ ಅಧಿಕಾರಿಗಳು ಅಂಗಡಿ ತೆರವುಗೊಳಿಸಲು ಸೂಚಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1qzahems9h53y3shyaxfkwt,imgname-priyank-kharge-on-ningamma-1788584740308.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.5): &lt;/strong&gt;ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ &lsquo;ಮನ್ ಕೀ ಬಾತ್&rsquo; (Mann Ki Baat) ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದ ಬೆಂಗಳೂರಿನ ಫುಟ್&zwnj;ಪಾತ್ ಇಡ್ಲಿ ವ್ಯಾಪಾರಿ ನಿಂಗಮ್ಮ ಅವರ ಅಂಗಡಿ ತೆರವುಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮೌಖಿಕ ಸೂಚನೆ ನೀಡಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ, &quot;ಮನ್ ಕೀ ಬಾತ್&zwnj;ನಲ್ಲಿ ಪ್ರಧಾನಿ ಮೋದಿ ಮಾತನಾಡಿದರು ಎಂದ ತಕ್ಷಣ ಕಾನೂನು ಬದಲಾಯಿಸಲು ಬರುವುದಿಲ್ಲ,&quot; ಎಂದು ಖಡಕ್ ಆಗಿ ಹೇಳಿದ್ದಾರೆ.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, &quot;ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳು ಹಾಗೂ ಫುಟ್&zwnj;ಪಾತ್&zwnj;ಗಳಿಂದ ಗೂಡಂಗಡಿಗಳನ್ನು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತೆರವುಗೊಳಿಸಲಾಗುತ್ತದೆ. ಹಾಗೇ ಬಿಟ್ಟರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಪ್ರಧಾನಿಯವರು ಯಾರದ್ದೋ ಬಗ್ಗೆ ಹೇಳಿದರೆಂದು ಕಾನೂನು ಅಥವಾ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಉಲ್ಲಂಘಿಸಿ ಬಿಟ್ಟರೆ ಕೊನೆಗೆ ನಿಮ್ಮಿಂದಲೇ ಬೈಸಿಕೊಳ್ಳಬೇಕಾಗುತ್ತದೆ,&quot; ಎಂದು ಕಾನೂನು ಪಾಲನೆಯ ಅಗತ್ಯವನ್ನು ಪ್ರತಿಪಾದಿಸಿದರು.&lt;/p&gt;&lt;h2&gt;&lt;strong&gt;ಪ್ರಧಾನಿ ಶ್ಲಾಘಿಸಿದ್ದ ನಿಂಗಮ್ಮನ ಸಾಧನೆ&lt;/strong&gt;&lt;/h2&gt;&lt;p&gt;ಹಾಸನ ಮೂಲದ ನಿಂಗಮ್ಮ ಅವರು ಬೆಂಗಳೂರಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಫುಟ್&zwnj;ಪಾತ್&zwnj;ನಲ್ಲಿ ಸಣ್ಣ ತಳ್ಳುವ ಗಾಡಿಯಲ್ಲಿ ಇಡ್ಲಿ, ದೋಸೆ ಮಾರಾಟ ಮಾಡುವ ಟಿಫನ್ ಸೆಂಟರ್ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ 'ಪಿಎಂ ಸ್ವನಿಧಿ' (PM SVANidhi) ಯೋಜನೆಯಡಿ ಸಣ್ಣ ಸಾಲ ಪಡೆದು, ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ನಿಂಗಮ್ಮ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಇತ್ತೀಚಿನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಂಗಮ್ಮ ಅವರ ಸ್ವಾವಲಂಬನೆಯ ಕಥೆಯನ್ನು ಉಲ್ಲೇಖಿಸಿ, ಅವರ ಸಾಧನೆ ಹಾಗೂ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಪ್ರಧಾನಿಯವರ ಬಾಯಲ್ಲಿ ತಮ್ಮ ಹೆಸರು ಕೇಳಿ ನಿಂಗಮ್ಮ ತೀವ್ರ ಸಂತಸ ವ್ಯಕ್ತಪಡಿಸಿದ್ದರು.&lt;/p&gt;&lt;h2&gt;&lt;strong&gt;ಸನ್ಮಾನಿಸಿದ ಜಿಬಿಎಯಿಂದಲೇ ತೆರವು ಸೂಚನೆ!&lt;/strong&gt;&lt;/h2&gt;&lt;p&gt;ಪ್ರಧಾನಿ ಮೋದಿ ಅವರ ಶ್ಲಾಘನೆಯ ಬೆನ್ನಲ್ಲೇ ಕಳೆದ ಭಾನುವಾರ ಜಿಬಿಎ (GBA) ಅಧಿಕಾರಿಗಳು ನಿಂಗಮ್ಮ ಅವರನ್ನು ಪ್ರೀತಿಯಿಂದ ಸನ್ಮಾನಿಸಿದ್ದರು. ಆದರೆ, ಸನ್ಮಾನಿಸಿದ ಕೆಲವೇ ದಿನಗಳಲ್ಲಿ ಅಧಿಕಾರ ವರ್ಗ ನಿಂಗಮ್ಮನಿಗೆ ಬಿಗ್ ಶಾಕ್ ನೀಡಿದೆ. ಫುಟ್&zwnj;ಪಾತ್ ಮೇಲೆ ಅಂಗಡಿ ಹಾಕುವಂತಿಲ್ಲ, ತಕ್ಷಣವೇ ಜಾಗ ತೆರವುಗೊಳಿಸಿ ಎಂದು ಜಿಬಿಎ ಅಧಿಕಾರಿಗಳು ನಿನ್ನೆ ಮೌಖಿಕ ಸೂಚನೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;'ಅಂಗಡಿ ತೆಗೆದರೆ ಬದುಕೋದು ಹೇಗೆ?': ಕಣ್ಣೀರಿಟ್ಟ ನಿಂಗಮ್ಮ&lt;/strong&gt;&lt;/h2&gt;&lt;p&gt;ಅಧಿಕಾರಿಗಳ ಬೆದರಿಕೆ ಹಾಗೂ ತೆರವು ಸೂಚನೆಯ ಹೊರತಾಗಿಯೂ ನಿಂಗಮ್ಮ ಇಂದು ಎಂದಿನಂತೆ ತಮ್ಮ ಟಿಫನ್ ಸೆಂಟರ್ ಓಪನ್ ಮಾಡಿ ವ್ಯಾಪಾರ ಮುಂದುವರಿಸಿದ್ದಾರೆ. &quot;ನಾನು ಅಂಗಡಿ ತೆರವು ಮಾಡುವುದಿಲ್ಲ, ಇಲ್ಲೇ ವ್ಯಾಪಾರ ಮಾಡುತ್ತೇನೆ. ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿದ್ದೇನೆ. ಒಂದು ವೇಳೆ ಈ ಅಂಗಡಿಯನ್ನೂ ತೆರವುಗೊಳಿಸಿದರೆ ನನ್ನ ಕುಟುಂಬದ ಜೀವನಕ್ಕೆ ನಾನೇನು ಮಾಡಲಿ?&quot; ಎಂದು ನಿಂಗಮ್ಮ ಅಳಲು ತೋಡಿಕೊಂಡಿದ್ದಾರೆ. ಪ್ರಧಾನಿಯಿಂದ ಮೆಚ್ಚುಗೆ ಪಡೆದ ವ್ಯಾಪಾರಿಗೆ ಈಗ ಬದುಕಿನ ಆಸರೆಯೇ ಕೈತಪ್ಪುವ ಭೀತಿ ಎದುರಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/pm-modi-mann-ki-baat-ningamma-idli-stall-gba-eviction-priyank-kharge-san/articleshow-fho304c"/>
        </item>
        <item>
            <title><![CDATA[ಸ್ಯಾಟಲೈಟ್ ಫೋಟೋದಾಗ ಹಸಿರು ಕಾಣಿಸ್ತೈತಿ ಅಂತಾ ಬರಪೀಡಿತ ಪಟ್ಯಾಗ ಕಲ್ಬುರ್ಗಿ ಕೈಬಿಟ್ರಲ್ಲೋ ಸರ್ಕಾರದವ್ರು!]]></title>
            <link>https://kannada.asianetnews.com/karnataka-districts/kalaburagi-drought-list-satellite-imagery-greenery-controversy-farmers-outrage-sat/articleshow-fuh3ngi</link>
            <guid isPermaLink="true">https://kannada.asianetnews.com/karnataka-districts/kalaburagi-drought-list-satellite-imagery-greenery-controversy-farmers-outrage-sat/articleshow-fuh3ngi</guid>
            <pubDate>Mon, 07 Sep 2026 11:09:46 +0530</pubDate>
            <description><![CDATA[&lt;p&gt;ಸ್ಯಾಟಲೈಟ್&zwnj;ನಲ್ಲಿ ಹಸಿರು ಕಂಡಿದ್ದೇ ತಪ್ಪಾಯ್ತಾ?: ಬರ ಪಟ್ಟಿಯಿಂದ ಕಲಬುರಗಿ ಹೊರಗಿಟ್ಟ ಸರ್ಕಾರ! ಶೇ.50ಕ್ಕೂ ಹೆಚ್ಚು ಮಳೆ ಕೊರತೆಯಿದ್ದರೂ ಸ್ಯಾಟಲೈಟ್ ಫೋಟೋದಲ್ಲಿ ಹಸಿರು ಕಂಡಿದೆ ಎಂದು ಕಲಬುರಗಿಯನ್ನು ಬರ ಪಟ್ಟಿಯಿಂದ ಕೈಬಿಡಲಾಗಿದೆ. ತಂತ್ರಜ್ಞಾನವೇ ಕೈಕೊಟ್ಟಿತಾ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1x61n798v62wxm68r17qxq1,imgname-kalaburagi-draught-1788759561449.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ--ಶೇಷಮೂರ್ತಿ ಅವಧಾನಿ, ಚಂದ್ರ&lt;/strong&gt;&lt;/p&gt;&lt;p&gt;&lt;strong&gt;ಕಲಬುರಗಿ (ಸೆ.07): ಕೇಂ&lt;/strong&gt;ದ್ರದ ಡ್ರಾಟ್&zwnj; ಮ್ಯಾನುವಲ್&zwnj; (ಬರಗಾಲ ಸೂಚಿ ಮಾನದಂಡ) ಆಧರಿಸಿ ಬರಗಾಲ ಪಟ್ಟಿ ಸಿದ್ಧಪಡಸ್ಯಾರಂತ್ರಿ, ಸ್ಯಾಟಲೈಟ್ ಟೆಕ್ನಾಲಜಿಯಿಂದ್ಲೇ ನಮ್ಮೂರ ಹೊಲಗದ್ದಿ ಫೋಟೋ ತಗೊಂಡಾರ, ಸ್ಯಾಟಲೈಟ್&zwnj; ಫೋಟೋದಾಗ ಕಲಬುರಗಿ ಹಚ್ಚಗ (ಹಚ್ಚ ಹಸಿರು) ಕಾಣಸ್ಯದಂತ, ಅದ್ಕೇ ಇಲ್ಲಿನ ಯಾವ ತಾಲೂಕೂ ಬರಗಾಲ ಪಟ್ಟಿ ಸೇರಿಲ್ಲ.&lt;/p&gt;&lt;p&gt;ಇದು ಟೆಕ್ನಾಲಜಿ ಯುಗ, ಎಲ್ಲದಕ್ಕೂ ತಂತ್ರಜ್ಞಾನ ಬಳಸೋ ಕಾಲದಲ್ಲಿ ನಾವಿರೋವಾಗಲೇ ಬರಗಾಲದಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿರೋ ಕಲಬುರಗಿ ರೈತರ ಪಾಲಿಗೆ ಈ ಟೆಕ್ನಾಲಜಿಯೇ ಕೈ ಕೊಟ್ಟಿದೆಯಾ...? ಇಂಥ ಅನುಮಾನ ಈಗ ಜಿಲ್ಲೆಯ ಜನರಲ್ಲಿ ಮೂಡಿದೆ. ಮಳೆ ಕೊರತೆಯಾಗಿ ಭೀಕರ ಬರಗಾಲದ ದವಡೆಗೆ ಸಿಲುಕಿರುವಾಗ ರಾಜ್ಯ ಸರ್ಕಾರ ಘೋಷಿಸಿರೋ ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ 11 ತಾಲೂಕುಗಳಲ್ಲಿ ಒಂದೂ ಸೇರದೆ ಹೋಗಿರೋದು ಇಲ್ಲಿನ ಜನರನ್ನು, ರೈತರನ್ನು ಕೆರಳಿಸಿದೆ.&lt;/p&gt;&lt;p&gt;ಅದರ ಪರಿಣಾಮ ಈಚೆಗಿನ ಯಾವುದೇ ಸಮಾರಂಭದ ವೇದಿಕೆ ಇರಲಿ, ಅಲ್ಲಿ ಬರಗಾಲದ್ದೇ ಮಾತು. ಎಲ್ಲೇ ಹೋರಾಟಗಳು ನಡೆಯಲಿ, ಬರಗಾಲ ಘೋಷಿಸದ ಸರ್ಕಾರ ವಿರುದ್ಧ ಧಿಕ್ಕಾರ ಕೂಗಲಾಗ್ತಿದೆ. ಮೊನ್ನೆ ಹೀಂಗೆ ಆಯ್ತು, ಹೆದ್ದಾರಿ ಪ್ರಾಧಿಕಾರದವರು 7 ಕೊಳವೆ ತುಂಡರಿಸಿದ್ದರಿಂದ ಬೋರಿ ಹಳ್ಳದಿಂದ ಅಫಜಲ್ಪುರ ಹಾಗೂ ಆಳಂದ ಕೆರೆ, ಕಟ್ಟೆ ತುಂಬಿಸೋ ಯೋಜನೆಗೆ ಆಘಾತವಾಗಿದೆ ಎಂದು ಬಡದಾಳ-ಅರ್ಜುಣಗಿ ಬಳಿ ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷ ಆರ್&zwnj;.ಕೆ.ಪಾಟೀಲ್&zwnj; ನೇತೃತ್ವದ ಧರಣಿ ವೇಳೆ ಬರಗಾಲ ಪಟ್ಟಿಯಿಂದ ಕಲಬುರಗಿ ಔಟ್&zwnj; ಆಗಿರೋ ವಿಷಯ, ಯಾಕೆ ಹಿಗಾಯ್ತೆಂದು ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಯ್ತು.&lt;/p&gt;&lt;h2&gt;&lt;strong&gt;ಉಪಗ್ರಹ ಫೋಟೋದಾಗ ಕಲಬುರಗಿ ಹೊಲಗದ್ದಿ ಎಲ್ಲಾ ಹಚ್ಚ ಹಸಿರು&lt;/strong&gt;&lt;/h2&gt;&lt;p&gt;ಹೋರಾಟ ಬೆಂಬಲಿಸಲು ಬಂದಿದ್ದ ಆತನೂರ್&zwnj;-ಅಂಕಲಗಿ ಮಠದ ಗುರುಬಸವ ಶಿವಾಚಾರ್ಯರು, ಕಲಬುರಗ್ಯಾಗ ಶೇ.50 ಕ್ಕಿಂತ ಅಧಿಕ ಮಳೆ ಕೊರತೆ ಕಾಡಿದ್ರೂ ಉಪಗ್ರಹ ಫೋಟೋದಾಗ ಕಲಬುರಗಿ ಹೊಲಗದ್ದಿ ಎಲ್ಲಾ ಹಚ್ಚ ಹಸಿರು ಕಂಡಾವಂತ, ಅದ್ಕೇ ಇಲ್ಲೆಲ್ಲಿದೆ ಬರಗಾಲ ಎಂದು ಕೇಳ್ತಾ ಆಫೀಸರ್&zwnj; ಮಂದಿ ಬರಗಾಲ ಪಟ್ಟಿಯಿಂದ ಕಲಬುರಗಿ ಜಿಲ್ಲಾ ದೂರ ಇಟ್ಟಾರಂತ ಹೇಳಾಕತ್ತಾರ್ರಿ, ನಮಗ ಮನಷ್ಯಾರಷ್ಟೇ ಕೈ ಕೊಡ್ತಾರ ಅಂದ್ಕೊಂಡಿದ್ವಿ, ಈಗ ನೋಡಿದ್ರ ಕಲಬುರಗಿ ಪಾಲಿಗೆ ಟೆಕ್ನಾಲಜಿನೂ ಕೈ ಕೊಟ್ಟದ ನೋಡ್ರಿ ಅಂದ್ರು!&lt;/p&gt;&lt;p&gt;ಕೇಂದ್ರದ ಡ್ರಾಟ್&zwnj; ಮ್ಯಾನುವಲ್&zwnj; (ಬರಗಾಲ ಸೂಚಿ ಮಾನದಂಡ) ಆಧರಿಸಿ ಬರಗಾಲ ಪಟ್ಟಿ ಸಿದ್ಧಪಡಸ್ಯಾರಂತ್ರಿ, ಸ್ಯಾಟಲೈಟ್ ಟೆಕ್ನಾಲಜಿಯಿಂದ್ಲೇ ನಮ್ಮೂರ ಹೊಲಗದ್ದಿ ಫೋಟೋ ತಗೊಂಡಾರ, ಸ್ಯಾಟಲೈಟ್&zwnj; ಫೋಟೋದಾಗ ಕಲಬುರಗಿ ಹಚ್ಚಗ (ಹಚ್ಚ ಹಸಿರು) ಕಾಣಸ್ಯದಂತ, ಅದ್ಕೇ ಇಲ್ಲಿನ ಯಾವ ತಾಲೂಕೂ ಬರಗಾಲ ಪಟ್ಟಿ ಸೇರಿಲ್ಲ. ಟೆಕ್ನಾಲಜಿ ಕೂಡಾ ಹೀಂಗ ಕಲಬುರಗಿಗೆ ಮೋಸ ಮಾಡ್ಬೇಕಾ? ಎಂದಾಗ ಸೇರಿದ್ದ ರೈತರು ತಮ್ಮ ಹಣೆಬರಹ ಹಳಿಯುತ್ತ ಹಣಿಹಣಿ ಬಡ್ಕೊಂಡ್ರು.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kalaburagi-drought-list-satellite-imagery-greenery-controversy-farmers-outrage-sat/articleshow-fuh3ngi"/>
        </item>
        <item>
            <title><![CDATA[PDO: ಲೋಕಾ ಪೊಲೀಸರ ಡಿಜಿಟಲ್ ಟ್ರ್ಯಾಪ್; ಲಂಚಕ್ಕೆ ಬೇಡಿಕೆಯಿಟ್ಟು ಜೈಲು ಪಾಲಾದ ಗ್ರಾಪಂ ಪಿಡಿಒ ಅಧಿಕಾರಿ!]]></title>
            <link>https://kannada.asianetnews.com/karnataka-districts/kalaburagi-biral-gram-panchayat-pdo-mehboob-patel-caught-by-lokayukta-for-taking-bribe-via-phonepe-bmk/articleshow-gcwmpbk</link>
            <guid isPermaLink="true">https://kannada.asianetnews.com/karnataka-districts/kalaburagi-biral-gram-panchayat-pdo-mehboob-patel-caught-by-lokayukta-for-taking-bribe-via-phonepe-bmk/articleshow-gcwmpbk</guid>
            <pubDate>Sat, 29 Aug 2026 22:38:41 +0530</pubDate>
            <description><![CDATA[&lt;p&gt;ಪಿಡಿಒ ಮೆಹಬೂಬ್ ಪಟೇಲ್, ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಫೋನ್ ಪೇ ಮೂಲಕ ₹12,000 ಲಂಚ ಸ್ವೀಕರಿಸುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ಡಿಜಿಟಲ್ ಸಾಕ್ಷ್ಯದೊಂದಿಗೆ ಅಧಿಕಾರಿಯನ್ನು ರೆಡ್&zwnj;ಹ್ಯಾಂಡ್&zwnj; ಆಗಿ ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m177ttpye15vas6ny9r6nnpx,imgname-biral-gp-1788023237342.jpg" type="image/jpeg" height="390" width="690"/>
            <content:encoded><![CDATA[&lt;p&gt;ಸರ್ಕಾರಿ ಕೆಲಸ ಮಾಡಿಕೊಡಲು ಹಣಕ್ಕಾಗಿ ಪಟ್ಟು ಹಿಡಿದು, ಆನ್&zwnj;ಲೈನ್ ಮೂಲಕ ಲಂಚದ ಹಣ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತಿ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸರ್ಕಾರಿ ಜಾಗದ ಖಾತೆ ಬದಲಾವಣೆ (ಮ್ಯುಟೇಷನ್) ಮಾಡಿಕೊಡಲು ಲಂಚ ಪಡೆಯುತ್ತಿದ್ದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೆಹಬೂಬ್ ಪಟೇಲ್ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ರೆಡ್&zwnj;ಹ್ಯಾಂಡ್&zwnj; ಆಗಿ ಸಿಕ್ಕಿಬಿದ್ದಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ!&lt;/strong&gt;&lt;/h2&gt;&lt;p&gt;ಬಿರಾಳ ಗ್ರಾಮದ ನಿವಾಸಿ ಶಿವರೆಡ್ಡಿ ಎಂಬುವವರು ತಮ್ಮ ಸರ್ಕಾರಿ ಜಾಗದ ಮ್ಯುಟೇಷನ್ (ಖಾತೆ ಬದಲಾವಣೆ) ಮಾಡಿಕೊಡುವಂತೆ ಕೋರಿ ಬಿರಾಳ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ತಲುಪಿಸಬೇಕಾದ ಈ ಸರ್ಕಾರಿ ಸೇವೆಯನ್ನು ಒದಗಿಸಲು ಪಿಡಿಒ ಮೆಹಬೂಬ್ ಪಟೇಲ್ ಉಚಿತವಾಗಿ ಕೆಲಸ ಮಾಡಲು ನಿರಾಕರಿಸಿದ್ದರು. ಬದಲಿಗೆ, ಶಿವರೆಡ್ಡಿ ಅವರ ಬಳಿ ₹18,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಬಡ ಶಿವರೆಡ್ಡಿ ಅವರು ಹಣ ನೀಡಲು ಹಿಂದೇಟು ಹಾಕಿದರೂ, ಹಣ ನೀಡದಿದ್ದರೆ ಕೆಲಸ ಮಾಡಿಕೊಡುವುದಿಲ್ಲ ಎಂದು ಅಧಿಕಾರಿ ಸತಾಯಿಸುತ್ತಿದ್ದರು. ಕೊನೆಗೆ ಶಿವರೆಡ್ಡಿ ಅವರು ಲಂಚ ನೀಡಲು ಮನಸ್ಸಿಲ್ಲದೆ, ಭ್ರಷ್ಟ ಅಧಿಕಾರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ ಕಲಬುರಗಿ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು.&lt;/p&gt;&lt;h3&gt;&lt;strong&gt;ಆನ್&zwnj;ಲೈನ್ ಲಂಚ; ಲೋಕಾ ಡಿಜಿಟಲ್ ಟ್ರ್ಯಾಪ್!&lt;/strong&gt;&lt;/h3&gt;&lt;p&gt;ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆಗೆ ಸೂಕ್ತ ಯೋಜನೆ ರೂಪಿಸಿದರು. ಪಿಡಿಒ ಮೆಹಬೂಬ್ ಪಟೇಲ್ ಶಿವರೆಡ್ಡಿ ಅವರೊಂದಿಗೆ ಚೌಕಾಸಿ ನಡೆಸಿ, ₹12,000 ಹಣ ನೀಡುವಂತೆ ಒಪ್ಪಿಕೊಂಡಿದ್ದರು. ಭ್ರಷ್ಟಾಚಾರದ ಸಾಕ್ಷ್ಯ ಸಿಗದಂತೆ ತಡೆಯಲು ನಗದು ರೂಪದಲ್ಲಿ ಹಣ ಪಡೆಯುವ ಬದಲಿಗೆ ತಮ್ಮ 'ಫೋನ್ ಪೇ' (PhonePe) ಖಾತೆಗೆ ಹಣ ವರ್ಗಾಯಿಸಿಕೊಳ್ಳಲು ಸೂಚಿಸಿದ್ದರು. ಯೋಜನೆಯಂತೆ ಶಿವರೆಡ್ಡಿ ಅವರು ಪಿಡಿಒ ಸೂಚಿಸಿದ ಫೋನ್ ಪೇ ಸಂಖ್ಯೆಗೆ ₹12,000 ಲಂಚದ ಹಣವನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು. ಹಣ ತಲುಪಿದ ತಕ್ಷಣವೇ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಆನ್&zwnj;ಲೈನ್ ನಗದು ವರ್ಗಾವಣೆಯ ತಾಂತ್ರಿಕ ಸಾಕ್ಷ್ಯಾಧಾರಗಳೊಂದಿಗೆ ಪಿಡಿಒ ಮೆಹಬೂಬ್ ಪಟೇಲ್ ಅವರನ್ನು ಬಂಧಿಸಿದ್ದಾರೆ.&lt;/p&gt;&lt;h3&gt;&lt;strong&gt;ಲೋಕಾಯುಕ್ತ ದಾಳಿ ಹಾಗೂ ಬಂಧನ!&lt;/strong&gt;&lt;/h3&gt;&lt;p&gt;ಲಂಚದ ಹಣ ಖಾತೆಗೆ ಜಮೆಯಾಗಿದ್ದನ್ನು ಖಚಿತಪಡಿಸಿಕೊಂಡ ಲೋಕಾಯುಕ್ತ ಪೊಲೀಸ್ ಸಿಬ್ಬಂದಿ, ಅಧಿಕಾರಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪಿಡಿಒ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆಗಳು ನಡೆದಿವೆ. ಸರ್ಕಾರಿ ಹುದ್ದೆಯಲ್ಲಿದ್ದು ಸಾರ್ವಜನಿಕರ ಸೇವೆಯನ್ನು ಪಾರದರ್ಶಕವಾಗಿ ಮಾಡಬೇಕಾದ ಅಧಿಕಾರಿಯೇ ಡಿಜಿಟಲ್ ಪಾವತಿ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಂಡು ಲಂಚ ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/kalaburagi-biral-gram-panchayat-pdo-mehboob-patel-caught-by-lokayukta-for-taking-bribe-via-phonepe-bmk/articleshow-gcwmpbk"/>
        </item>
        <item>
            <title><![CDATA[ಗೃಹಸಚಿವರ ತವರು ಜಿಲ್ಲೆ ಕಲಬುರಗಿಯಲ್ಲೇ ಖೋಟಾ ನೋಟು ಜಾಲ ಪತ್ತೆ!  ಪೊಲೀಸ್ ದಾಳಿ ವೇಳೆ ಬಾಡಿಗೆ ಮನೆಯಲ್ಲಿ ಕಂಡಿದ್ದೇನು?]]></title>
            <link>https://kannada.asianetnews.com/gallery/karnataka-districts/counterfeit-currency-racket-busted-in-kalaburagi-two-arrested-one-escapes-rav-i11gfgs</link>
            <guid isPermaLink="true">https://kannada.asianetnews.com/gallery/karnataka-districts/counterfeit-currency-racket-busted-in-kalaburagi-two-arrested-one-escapes-rav-i11gfgs</guid>
            <pubDate>Sun, 06 Sep 2026 12:44:32 +0530</pubDate>
            <description><![CDATA[&lt;p&gt;ಕಲಬುರಗಿ ವಿಶ್ವವಿದ್ಯಾಲಯ ಪೊಲೀಸರು ಖೋಟಾ ನೋಟು ತಯಾರಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದಾರೆ. ರಾಜರಾಜೇಶ್ವರಿ ನಗರದ ಬಾಡಿಗೆ ಮನೆಯಲ್ಲಿ ಕಲರ್ ಪ್ರಿಂಟರ್ ಬಳಸಿ ನಕಲಿ ನೋಟು ಮುದ್ರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1trgggctgcnrdg98ytq5che,imgname-kalaburagi-fake-notes-printing-racket-1788678259212.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ ವಿಶ್ವವಿದ್ಯಾಲಯ ಪೊಲೀಸರು ಖೋಟಾ ನೋಟು ತಯಾರಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದಾರೆ. ರಾಜರಾಜೇಶ್ವರಿ ನಗರದ ಬಾಡಿಗೆ ಮನೆಯಲ್ಲಿ ಕಲರ್ ಪ್ರಿಂಟರ್ ಬಳಸಿ ನಕಲಿ ನೋಟು ಮುದ್ರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?&lt;/p&gt;&lt;img&gt;&lt;p&gt;&lt;strong&gt;ಕಲಬುರಗಿ (ಸೆ.6):&lt;/strong&gt; ಒಂದು ಕಡೆ ರೌಡಿಶೀಟರ್&zwnj;ಗಳಿಂದಲೇ ಹಣ ವಸೂಲಿ ಮಾಡುವ ಲಂಚಬಾಕ ಪೊಲೀಸರು, ಇನ್ನೊಂದೆಡೆ ದಿನೇದಿನೆ ಹೆಚ್ಚುತ್ತಿರುವ ಕ್ರಿಮಿನಲ್&zwnj;ಗಳ ಉಪಟಳ ಇವೆಲ್ಲವುಗಳ ನಡುವೆ ಇದೀಗ ಖೋಟಾ ನೋಟು ಜಾಲ ಪತ್ತೆಯಾಗಿರುವುದು ಗೃಹಸಚಿವರ ತವರು ಜಿಲ್ಲೆಯಲ್ಲೇ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆಯಾ ಎಂಬ ಅನುಮಾನ ಮೂಡಿಸಿದೆ.&lt;/p&gt;&lt;img&gt;&lt;p&gt;ಹೌದು ಕಲಬುರಗಿ ಜಿಲ್ಲೆಯಲ್ಲಿ ಖೋಟಾ ನೋಟು ತಯಾರಿಸಿ ಮಾರುತ್ತಿದ್ದ ಕಿಡಿಗೇಡಿಗಳ ಜಾಲವನ್ನು ವಿಶ್ವವಿದ್ಯಾಲಯ ಪೊಲೀಸರು ಪತ್ತೆಹಚ್ಚಿದ್ದಾರೆ. ಖಚಿತ ಮಾಹಿತಿ ಆಧಾರದ ಕಾರ್ಯಾಚರಣೆಗಿಳಿದ ಪೊಲೀಸರು ಕಲಬುರಗಿಯ ರಾಜರಾಜೇಶ್ವರಿ ನಗರದಲ್ಲಿ ಆರೋಪಿಗಳು ವಾಸವಿದ್ದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿ ಇಬ್ಬರು ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;ಈ ವೇಳೆ ಓರ್ವ ಆರೋಪಿ ಎಸ್ಕೇಪ್ ಆಗಿದ್ದಾನೆ. ಪೊಲೀಸರು ದಾಳಿ ನಡೆಸಿದ ವೇಳೆ ಮನೆಯಲ್ಲಿ 500 ರೂಪಾಯಿ ಬೆಲೆಯ 28 ನೋಟು ಒಟ್ಟು 14 ಸಾವಿರ ಮೌಲ್ಯದ ಖೋಟಾ ನೋಟು ಜಪ್ತಿ ಮಾಡಲಾಗಿದೆ. ದಶರಥ್ ರಾಠೋಡ್, ಸಿದ್ರಾಮ್ ಬಂಧಿತ ಆರೋಪಿಗಳಾಗಿದ್ದು ,ಇನ್ನೋವ ಆರೋಪಿ ಅಶ್ವಿನ್ ಕುಮಾರ್ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ.&lt;/p&gt;&lt;img&gt;&lt;p&gt;ಮೈತುಂಬಾ ಸಾಲ ಮಾಡಿಕೊಂಡಿದ್ದ ಖದೀಮರು. ಸಾಲ ತೀರಿಸಲು ಖೋಟಾ ನೋಟು ತಯಾರಿಸಿ ಚಲಾವಣೆಗೆ ತರುವ ಸ್ಕೆಚ್ ಹಾಕಿದ್ದಾರೆ. ಕಳೆದ ಮಾರ್ಚ್&zwnj;ನಲ್ಲೇ ಖೋಟಾ ನೋಟು ಮುದ್ರಿಸುವ ಕಲರ್ ಪ್ರಿಂಟ್ ಮಷಿನ್ ಖರೀದಿಸಿ ತಂದಿದ್ದ ಆರೋಪಿಗಳು ಆದರೆ ಕೆಲಸ ಪರ್ಫೆಕ್ಟ್ ಆಗದ ಕಾರಣ ಮುದ್ರಿಸಿದ ನೋಟುಗಳು ಚಲಾವಣೆ ಮಾಡಲು ವಿಫಲರಾಗಿದ್ದರು. ಮನೆಯಲ್ಲೇ ಇಟ್ಟುಕೊಂಡರೆ ಅಪಾಯ ಎಂದರಿತ ಕಿಡಿಗೇಡಿಗಳು ಮೊದಲಿಗೆ ಪ್ರಿಂಟ್ ಮಾಡಿದ್ದ ಖೋಟಾನೋಟುಗಳನ್ನ ಸುಟ್ಟುಹಾಕಿದ್ದಾರೆಂದು ಹೇಳಲಾಗಿದೆ.&lt;/p&gt;&lt;img&gt;&lt;p&gt;ಬಾಡಿಗೆ ಮನೆಯಲ್ಲಿದ್ದುಕೊಂಡು ಕಲರ್ ಪ್ರಿಂಟರ್ ಮಷಿನ್&zwnj;ನಿಂದ ಖೋಟಾ ನೋಟು ತಯಾರಿಸಿ ಒಂದು ಲಕ್ಷಕ್ಕೆ ಎರಡು ಲಕ್ಷ ಕೊಡುವ ಆಫರ್ ಕೊಟ್ಟಿದ್ದ ಕಿಡಿಗೇಡಿಗಳು. ಕೆಲವು ವ್ಯಕ್ತಿಗಳಿಗೆ ಒಂದು ಲಕ್ಷ ಕೊಟ್ಟರೆ ಎರಡು ಲಕ್ಷ ವಾಪಸ್ ಕೊಡುವುದಾಗಿ ಆಫರ್ ತೋರಿಸಿದ್ದ ಖದೀಮರು. ಖೋಟಾ ನೋಟು ಚಲಾವಣೆಗೆ ತರಲು ಸಂಚು ರೂಪಿಸಿದ್ದಾಗಲೇ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ತಡಮಾಡದೇ ಎಚ್ಚೆತ್ತ ವಿಶ್ವವಿದ್ಯಾಲಯ ಪೊಲೀಸರು ಖಚಿತವಾದ ಮಾಹಿತಿ ಆಧಾರಿಸಿ ಆರೋಪಿಗಳಿದ್ದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಸದ್ಯ ಓರ್ವ ಎಸ್ಕೇಪ್ ಆಗಿದ್ದು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/counterfeit-currency-racket-busted-in-kalaburagi-two-arrested-one-escapes-rav-i11gfgs"/>
        </item>
        <item>
            <title><![CDATA[90Km ವೇಗದಲ್ಲಿದ್ದಾಗ ಎದ್ದು ನಿಂತ ಚಾಲಕ! ಜಮೀನಿಗೆ ನುಗ್ಗಿ ನಿಂತ ಖಾಸಗಿ ಬಸ್! ಭಯಾನಕ ವಿಡಿಯೋ ವೈರಲ್!]]></title>
            <link>https://kannada.asianetnews.com/state/private-bus-terrible-accident-gulbarga-vijayapura-route-public-demand-investigation-rav/articleshow-nsh0wgy</link>
            <guid isPermaLink="true">https://kannada.asianetnews.com/state/private-bus-terrible-accident-gulbarga-vijayapura-route-public-demand-investigation-rav/articleshow-nsh0wgy</guid>
            <pubDate>Mon, 07 Sep 2026 08:44:02 +0530</pubDate>
            <description><![CDATA[&lt;p&gt;ಖಾಸಗಿ ಬಸ್ ಹೈವೇಯಲ್ಲಿ 90 ಕಿಮೀ ವೇಗದಲ್ಲಿದ್ದ ಚಲಿಸುತ್ತಿದ್ದಾಗಲೇ ಚಾಲಕ ಎದ್ದು ನಿಂತಿದ್ದರಿಂದ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಭಯಾನಕ ಘಟನೆ ಕಲಬುರಗಿ-ವಿಜಯಪುರ ಮಾರ್ಗದ ರಸ್ತೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1wwsr70ww9kh4yvr2mh76mf,imgname-private-bus-terrible-accident-gulbarga-vijayapura-route-1788749865184.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.7):&lt;/strong&gt; ಖಾಸಗಿ ಬಸ್ ಹೈವೇಯಲ್ಲಿ 90 ಕಿಮೀ ವೇಗದಲ್ಲಿದ್ದ ಚಲಿಸುತ್ತಿದ್ದಾಗಲೇ ಚಾಲಕ ಎದ್ದು ನಿಂತಿದ್ದರಿಂದ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಭಯಾನಕ ಘಟನೆ ಕಲಬುರಗಿ-ವಿಜಯಪುರ ಮಾರ್ಗದ ರಸ್ತೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.&lt;/p&gt;&lt;h3&gt;ಬಸ್ ವೇಗದಲ್ಲಿದ್ದಾಗ ಚಾಲಕ ಸೀಟಿನಿಂದ ಎದ್ದಿದ್ದೇಕೆ?&lt;/h3&gt;&lt;p&gt;ಈ ಆಘಾತಕಾರಿ ಘಟನೆಯ ದೃಶ್ಯ ಖಾಸಗಿ ಬಸ್&zwnj;ನಲ್ಲಿನಲ್ಲಿ ಅಳವಡಿಸಿದ್ದ ಸಿಸಿಟಿಯಲ್ಲಿ ದಾಖಲಾಗಿದೆ. ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 90 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಬಸ್&zwnj;ನಿಂದ ಚಾಲಕ ಎದ್ದು ನಿಂತಿದ್ದೇಕೆ? ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರ ಪ್ರಾಣಕ್ಕೆ ಕುತ್ತು. ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ ಎದ್ದಿದೆ. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ನೆಟಿಜನ್ ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದ್ದಾರೆ.&lt;/p&gt;&lt;h2&gt;ಚಾಲಕನ ಕಿವಿಯಲ್ಲಿ ಬ್ಲೂಟೂತ್ ಹಿಯರ್ ಬಡ್&zwnj;!&lt;/h2&gt;&lt;p&gt;ಚಾಲನೆ ಮಾಡುವಾಗ ಮೊಬೈಲ್&zwnj;ನಲ್ಲಿ ಮಾತನಾಡುವುದು ಬ್ಲ್ಯೂಟೂತ್ ಹಿಯರ್ ಬಡ್ ಬಳಸುವಂತಿಲ್ಲ, ಆದರೆ ಪ್ರಯಾಣಿಕರ ಸುರಕ್ಷತೆ ಮರೆತು ಚಾಲಕ ಕಿವಿಯಲ್ಲಿ ಹಿಯರ್ ಬಡ್ ಹಾಕಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಹಾಡುಗಳನ್ನ ಕೇಳುತ್ತಾ ಮೈಮರೆತು ಸೀಟಿನಿಂದ ಎದ್ದಿರುವ ಸಾಧ್ಯತೆಯಿದೆ. ಚಾಲಕನನ್ನು ನಂಬಿ ಪ್ರಯಾಣಿಸುವ ಪ್ರಯಾಣಿಕರಿಗೆ ಅದೆಷ್ಟು ಅಪಾಯಕಾರಿ! ಬಸ್&zwnj;ನಲ್ಲಿ ಸುಮಾರು ನಲ್ವತ್ತು ಪ್ರಯಾಣಿಕರು ಚಾಲಕನ ನಂಬಿಕೆ ಇಟ್ಟು ಮಲಗಿರ್ತಾರೆ. ಆದರೆ ಬ್ಲ್ಯೂಟೂತ್&zwnj;ನಲ್ಲಿ ಹಾಡುವುದು ಕೇಳುವುದು, ಬಸ್ ವೇಗದಲ್ಲಿದ್ದಾಗಲೇ ಸೀಟಿನಿಂದ ಎದ್ದಿರುವುದು ಎಷ್ಟೊಂದು ನಿರ್ಲಕ್ಶ್ಯ! ಪ್ರಕರಣದ ಬಗ್ಗೆ ತನಿಖೆ ನಡೆಸಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;&lt;p&gt;Gulbarga - Vijayapura Route ⚠️&amp;nbsp;What&rsquo;s with VRL Bus Driver with bluetooth ear buds at 90kmph, hallucinating? &zwj;♂️Luckily, bus didn&rsquo;t topple or no headON anywhere&hellip;@DriveSmart_IN @dabir @anil_lulla @RCBengaluru @InfraEye pic.twitter.com/z1X16afJIg&lt;/p&gt;&lt;p&gt;&mdash; Dave (Road Safety: City &amp;amp; Highways) (@motordave2) September 6, 2026&lt;/p&gt;&lt;p&gt;&lt;/p&gt;]]></content:encoded>
            <category>kalaburagi</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/private-bus-terrible-accident-gulbarga-vijayapura-route-public-demand-investigation-rav/articleshow-nsh0wgy"/>
        </item>
        <item>
            <title><![CDATA[ಅಂದು ಮನೆಗಾಗಿ 1 ಹಸು ಖರೀದಿ,  ಇಂದು 100 ಎಮ್ಮೆಗಳ ಒಡತಿ ಕಲಬುರಗಿ ಮಹಿಳೆ; Dairy Farming]]></title>
            <link>https://kannada.asianetnews.com/gallery/business/kalaburagi-jyoti-avinash-uplavkar-of-started-dairy-farming-with-one-cow-is-now-raising-100-haryana-breed-buffaloes-mrq-qt859fe</link>
            <guid isPermaLink="true">https://kannada.asianetnews.com/gallery/business/kalaburagi-jyoti-avinash-uplavkar-of-started-dairy-farming-with-one-cow-is-now-raising-100-haryana-breed-buffaloes-mrq-qt859fe</guid>
            <pubDate>Sat, 22 Aug 2026 12:31:30 +0530</pubDate>
            <description><![CDATA[ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಒಂದು ಹಸುವಿನಿಂದ ಹೈನುಗಾರಿಕೆ ಆರಂಭಿಸಿ, ಇದೀಗ 100 ಹರಿಯಾಣ ತಳಿಯ ಎಮ್ಮೆಗಳ ಒಡತಿಯಾಗಿದ್ದಾರೆ. ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಇವರ ಡೈರಿ ಫಾರ್ಮ್, 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿ ಯಶಸ್ವಿ ಉದ್ಯಮವಾಗಿ ಬೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0m3vbgqn13w3byjm0sqn06k,imgname-dairy-farming--3--1787381526039.jpg" type="image/jpeg" height="390" width="690"/>
            <content:encoded><![CDATA[ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಒಂದು ಹಸುವಿನಿಂದ ಹೈನುಗಾರಿಕೆ ಆರಂಭಿಸಿ, ಇದೀಗ 100 ಹರಿಯಾಣ ತಳಿಯ ಎಮ್ಮೆಗಳ ಒಡತಿಯಾಗಿದ್ದಾರೆ. ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದಿಸುವ ಇವರ ಡೈರಿ ಫಾರ್ಮ್, 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿ ಯಶಸ್ವಿ ಉದ್ಯಮವಾಗಿ ಬೆಳೆದಿದೆ.&lt;img&gt;&lt;p&gt;9 To 5 ಜಾಬ್&zwnj; ಮಾಡಲು ಬೇಸರಗೊಳ್ಳುತ್ತಿರುವ ಯುವ ಸಮುದಾಯ ಸ್ವಂತ ಉದ್ಯಮದತ್ತ ಮುಖ ಮಾಡುತ್ತಿದ್ದಾರೆ. ಇಂದು ನಾವು ನಿಮಗೆ ಒಂದು ಹಸುವಿನಿಂದ ಆರಂಭಿಸಿ 100 ಎಮ್ಮೆಗಳ ಒಡತಿಯಾಗಿರುವ ಕಲಬುರಗಿ ಮಹಿಳೆ ಬಗ್ಗೆ ಹೇಳುತ್ತಿದ್ದೇವೆ. ಹೈನುಗಾರಿಕೆಯಲ್ಲಿ ಯಶಸ್ವಿಯಾಗಿರುವ ಇವರು ಇಂದು 15ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಹಾಗೆಯೇ ಇವರ ಡೈರಿಯಿಂದ ಪ್ರತಿನಿತ್ಯ 500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ.&lt;/p&gt;&lt;img&gt;&lt;p&gt;ಕಲಬುರಗಿ ಜಿಲ್ಲೆಯ ಜ್ಯೋತಿ ಅವಿನಾಶ್ ಉಪ್ಲಾವ್ಕರ್ ಅವರು ಹೈನುಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿ ತಾಲೂಕಿನ ಸೈಯ್ಯದ್ ಚಿಂಕೊಳ್ಳಿ ಗ್ರಾಮದ ವ್ಯಾಪ್ತಿಯ 20 ಎಕರೆ ಜಮೀನಿನಲ್ಲಿ ಕೃಷಿ ಜೊತೆ ಹೈನುಗಾರಿಕೆಯನ್ನು ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಮನೆ ಬಳಕೆಗೆ ಹಾಲು ಬೇಕೆಂದು ಒಂದು ಹಸು ಖರೀದಿಸಿದ್ದರು. ನಂತರ ಒಂದಾದ ನಂತರ ಒಂದರಂತೆ ಎಮ್ಮೆಗಳನ್ನು ಸಾಕಾಣಿಕೆ ಮಾಡಲು ಆರಂಭಿಸಿದ್ದರು. ಇದೀಗ ಇವರ ಡೈರಿಯಲ್ಲಿ ಹರಿಯಾಣ ತಳಿಯ 100 ಎಮ್ಮೆಗಳಿವೆ. ಈ ಎಮ್ಮೆಗಳ ಆರೈಕೆಗಾಗಿ ಬಿಹಾರ ಮತ್ತು ಹರಿಯಾಣ ಭಾಗದ 15ಕ್ಕೂ ಹೆಚ್ಚು ಕಾರ್ಮಿಕರನ್ನು ಸಹ ನೇಮಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;20ರಲ್ಲಿ 10 ಎಕರೆ ಭೂಮಿಯಲ್ಲಿ ಜಾನುವಾರಗಳಿಗೆ ಬೇಕಾದ ಮೇವು ಬೆಳೆಯುತ್ತಾರೆ. ಬೇಸಿಗೆಯಲ್ಲಿ ಹುಲ್ಲು ಕಡಿಮೆಯಾಗುವ ಕಾರಣ ಜೋಳ ಮತ್ತು ತೊಗರಿ ಬೆಳೆಯ ಮೇವು ಸಂಗ್ರಹ ಮಾಡಿಕೊಳ್ಳುತ್ತಾರೆ. ಇಲ್ಲಿಯ ಕಾರ್ಮಿಕರು ಜಾನುವಾರಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸುವ ಮೂಲಕ ಜಾನುವಾರಗಳ ಆರೋಗ್ಯ ಕಾಪಾಡಿಕೊಳ್ಳಲಾಗುತ್ತೆ ಎಂದು ಜ್ಯೋತಿ ಅವಿನಾಶ್ ಹೇಳುತ್ತಾರೆ.&lt;/p&gt;&lt;img&gt;&lt;p&gt;ಜ್ಯೋತಿ ಅವಿನಾಶ್ ಅವರ ಒಡೆತನದ ಡೈರಿಯಿಂದ ದಿನಕ್ಕೆ ಅಂದಾಜು 500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಕಾರ್ಮಿಕರ ಮೂಲಕ ಈ ಹಾಲು ಸುಮಾರು 250 ರಿಂದ 300 ಮನೆಗಳಿಗೆ ತಲುಪಿಸಲಾಗುತ್ತದೆ. ಹೆಚ್ಚುವರಿ ಹಾಲನ್ನು ಹೋಟೆಲ್&zwnj;ಗಳಿಗೆ ಮಾರಾಟ ಮಾಡಲಾಗುತ್ತದೆ. ಸಗಣಿಯಿಂದಲೂ ಉತ್ತಮ ಆದಾಯ ಬರುತ್ತದೆ. ಸುತ್ತಲಿನ ಭಾಗದಲ್ಲಿ ನಮ್ಮ ಡೈರಿಯ ಗೊಬ್ಬರಕ್ಕೆ ಉತ್ತಮ ಬೇಡಿಕೆ ಇದೆ ಎಂದು ಹೇಳುತ್ತಾರೆ ಜ್ಯೋತಿ ಅವಿನಾಶ್.&lt;/p&gt;&lt;img&gt;&lt;p&gt;ಈ ಡೈರಿಯಿಂದಲೇ ಗೋಬರ್ ಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ. ಡೈರಿಯಲ್ಲಿ ಕೆಲಸ ಮಾಡುವ ಐದು ಕುಟುಂಬಗಳು ಮತ್ತು ಕಾರ್ಮಿಕರು ಈ ಗೋಬರ್ ಗ್ಯಾಸ್ ಬಳಸಿಯೇ ಅಡುಗೆ ತಯಾರಿಸಿಕೊಳ್ಳುತ್ತಾರೆ. ನಾವೇ ಎಲ್ಲಾ ಕೆಲಸ ಮಾಡಬೇಕು ಅಂತೇನಿಲ್ಲ. ಕಾರ್ಮಿಕರ ಸಹಾಯದಿಂದ ಈ ಕೆಲಸ ಮಾಡಿಕೊಳ್ಳಬಹುದು. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ನೀಡಬೇಕು ಅನ್ನೋದು ನಮ್ಮ ಉದ್ದೇಶ. ಗ್ರಾಹಕರಿಗೆ ವಿತರಿಸುವ ಹಾಲಿಗೆ ನೀರು ಸಹ ಸೇರಿಸಲ್ಲ. 100 ಎಮ್ಮೆಗಳನ್ನು ಸಾಕಬೇಕು ಅನ್ನೋದು ನಮ್ಮ ಆಸೆಯಾಗಿತ್ತು. ಈಗ ಅದು ನನಸು ಆಗಿದೆ ಎಂದು ಜ್ಯೋತಿ ಅವಿನಾಶ್ ಸಂತೋಷ ಹಂಚಿಕೊಂಡರು.&lt;/p&gt;&lt;p&gt;&lt;strong&gt;Rangu Kasturi - Farming in Kannada &lt;/strong&gt;ಯುಟ್ಯೂಬ್ ವಾಹಿನಿಯಲ್ಲಿ ಜ್ಯೋತಿ ಅವಿನಾಶ್ ಅವರು ಡೈರಿ ಫಾರ್ಮಿಂಗ್ ವಿಡಿಯೋ ನೋಡಬಹುದು.&lt;/p&gt;]]></content:encoded>
            <category>kalaburagi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/kalaburagi-jyoti-avinash-uplavkar-of-started-dairy-farming-with-one-cow-is-now-raising-100-haryana-breed-buffaloes-mrq-qt859fe"/>
        </item>
        <item>
            <title><![CDATA[ಗೃಹ ಸಚಿವರ ತವರಲ್ಲೇ ಪೊಲೀಸ್ ಇನ್ಸ್‌ಪೆಕ್ಟರ್ ಕಾರಿಗೆ ಬೆಂಕಿ ಹಚ್ಚಿದ ಕಾನ್‌ಸ್ಟೇಬಲ್!]]></title>
            <link>https://kannada.asianetnews.com/karnataka-districts/kalaburagi-police-constable-sets-fire-to-psi-car-in-home-minister-native-sat/articleshow-rgvvua2</link>
            <guid isPermaLink="true">https://kannada.asianetnews.com/karnataka-districts/kalaburagi-police-constable-sets-fire-to-psi-car-in-home-minister-native-sat/articleshow-rgvvua2</guid>
            <pubDate>Wed, 16 Sep 2026 12:35:28 +0530</pubDate>
            <description><![CDATA[&lt;p&gt;ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನಿಂದ ಕೋಪಗೊಂಡ ಕಾನ್ಸ್ಟೇಬಲ್ ರಾಜಶೇಖರ ವರನಾಳ್, ಪಿಎಸ್&zwnj;ಐ ಬಸವರಾಜ್ ಚಿತಕೋಟೆ ಅವರ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ತನ್ನ ವಿರುದ್ಧ ದೂರು ದಾಖಲಿಸಿಕೊಂಡಿದ್ದಕ್ಕೆ ಸಿಟ್ಟಾಗಿ ಈ ಕೃತ್ಯವೆಸಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2mgg7vq5gjwjwjajvbtw3hh,imgname-kalaburagi-psi-car-fire-1789542276983.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಸೆ.16): ಖಾ&lt;/strong&gt;ಕಿ ರಕ್ಷಣೆ ಮಾಡಬೇಕಾದವರೇ ಖತರ್ನಾಕ್ ಕೃತ್ಯಕ್ಕೆ ಇಳಿದಿರುವ ಬೆಚ್ಚ ಬೀಳಿಸುವ ಘಟನೆಯೊಂದು ಗೃಹ ಸಚಿವರ ತವರು ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು ನೀಡಿದ ದೂರಿನಿಂದ ಕೋಪಗೊಂಡ ಪೊಲೀಸ್ ಕಾನ್ಸ್ಟೇಬಲ್ ಒಬ್ಬ, ನೇರವಾಗಿ ಠಾಣೆಯ ಪಿಎಸ್&zwnj;ಐ (PSI) ಅವರ ವೈಯಕ್ತಿಕ ಕಾರಿಗೇ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ.&lt;/p&gt;&lt;p&gt;ಮಹಾಗಾಂವ್ ಪೊಲೀಸ್ ಠಾಣೆಯ ಪಿಎಸ್&zwnj;ಐ ಬಸವರಾಜ್ ಚಿತಕೋಟೆ ಅವರ ಪರ್ಸನಲ್ ಕಾರಿಗೆ ಬೆಂಕಿ ಹಚ್ಚಿದ ಆರೋಪಿಯನ್ನು ಕಾನ್ಸ್ಟೇಬಲ್ ರಾಜಶೇಖರ ವರನಾಳ್ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಆರೋಪಿ ಕಾನ್ಸ್ಟೇಬಲ್ ರಾಜಶೇಖರ ವರನಾಳ್ ಕಳೆದ 4 ವರ್ಷಗಳಿಂದ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದನು. ಆದರೆ, ಆಡಳಿತಾತ್ಮಕ ಕಾರಣಗಳಿಂದ ಅಥವಾ ಇನ್ಯಾವುದೋ ಕಾರಣಕ್ಕಾಗಿ ತಿಂಗಳ ಹಿಂದಷ್ಟೇ ಆತನನ್ನು ಚಿಂಚೋಳಿ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಹಳೆಯ ಠಾಣೆಯ ಮೇಲಿನ ಮೋಹವೋ ಅಥವಾ ಇನ್ಯಾವ ಸಿಟ್ಟೋ ಒಟ್ಟಿನಲ್ಲಿ ಕಾನ್ಸ್ಟೇಬಲ್ ಹೊಸ ಠಾಣೆಗೆ ತೆರಳಿದ್ದರು.&lt;/p&gt;&lt;h2&gt;&lt;strong&gt;ದೂರು ದಾಖಲಾಗುತ್ತಿದ್ದಂತೆ ಕೆರಳಿದ ಕಾನ್ಸ್ಟೇಬಲ್:&lt;/strong&gt;&lt;/h2&gt;&lt;p&gt;ಇದೇ ವೇಳೆ, ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪ ಕಾನ್ಸ್ಟೇಬಲ್ ರಾಜಶೇಖರ್ ಮೇಲಿತ್ತು. ಈ ಸಂಬಂಧ ರೇಷ್ಮಾ ಎನ್ನುವ ಮಹಿಳೆ ಮಹಾಗಾಂವ್ ಠಾಣೆಗೆ ತೆರಳಿ ರಾಜಶೇಖರ್ ವಿರುದ್ಧ ದೂರು ದಾಖಲಿಸಿದ್ದರು. ನಾಲ್ಕು ವರ್ಷಗಳ ಕಾಲ ತಾನು ಕೆಲಸ ಮಾಡಿದ್ದ ಅದೇ ಠಾಣೆಯಲ್ಲಿಯೇ ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಕಾನ್ಸ್ಟೇಬಲ್ ರಾಜಶೇಖರ್&zwnj;ಗೆ ತೀವ್ರ ಕೋಪ ಬಂದಿದೆ. ತನ್ನ ವಿರುದ್ಧವೇ ದೂರು ದಾಖಲಿಸಿಕೊಳ್ಳಲು ಅವಕಾಶ ನೀಡಿದ ಪಿಎಸ್&zwnj;ಐ ಮೇಲಿನ ಸಿಟ್ಟಿಗೆ, ಮಹಾಗಾಂವ್ ಠಾಣೆಯ ಪಿಎಸ್&zwnj;ಐ ಬಸವರಾಜ್ ಚಿತಕೋಟೆ ಅವರ ವೈಯಕ್ತಿಕ ಕಾರಿಗೆ ಬೆಂಕಿ ಹಚ್ಚಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.&lt;/p&gt;&lt;h2&gt;&lt;strong&gt;ಅಲ್ಪ ಹಾನಿ, ಕಾನ್ಸ್ಟೇಬಲ್ ಮೇಲೆ ಮತ್ತೊಂದು ಕೇಸ್:&lt;/strong&gt;&lt;/h2&gt;&lt;p&gt;ಕಾರಿಗೆ ಬೆಂಕಿ ಹಚ್ಚುವುದನ್ನು ಗಮನಿಸಿದ ಸ್ಥಳದಲ್ಲಿದ್ದವರು ತಕ್ಷಣವೇ ಎಚ್ಚೆತ್ತುಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ದೊಡ್ಡಮಟ್ಟದ ಅನಾಹುತ ತಪ್ಪಿದ್ದು, ಕಾರಿಗೆ ಅಲ್ಪ ಹಾನಿಯಾಗಿದೆ.&lt;/p&gt;&lt;p&gt;ತನ್ನ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಕಾನ್ಸ್ಟೇಬಲ್ ರಾಜಶೇಖರ ವರನಾಳ್ ಕೃತ್ಯದ ವಿರುದ್ಧ ಸ್ವತಃ ಪಿಎಸ್&zwnj;ಐ ಬಸವರಾಜ್ ಚಿತಕೋಟೆ ಅವರೇ ಅತ್ತಿಬೆಲೆ/ಸಂಬಂಧಿತ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕರ್ತವ್ಯದಲ್ಲಿದ್ದುಕೊಂಡು ಇಂತಹ ಅಶಿಸ್ತಿನ ವರ್ತನೆ ತೋರಿರುವ ಕಾನ್&zwnj;ಸ್ಟೇಬಲ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರೆದಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kalaburagi-police-constable-sets-fire-to-psi-car-in-home-minister-native-sat/articleshow-rgvvua2"/>
        </item>
        <item>
            <title><![CDATA[ಮಹಾಪ್ರಭು ಮೋದಿ ಸ್ವಶಕ್ತಿ ಮೇಲೆ ನಿಂತಿಲ್ಲ, ಪವನ್-ನಿತೀಶ್ ಆಸರೆ ಬೇಕು -ಪ್ರಕಾಶ್ ರಾಜ್ ಮತ್ತೆ ತೀವ್ರ ವಾಗ್ದಾಳಿ]]></title>
            <link>https://kannada.asianetnews.com/kalaburagi/modi-is-not-standing-on-his-own-strength-he-needs-pawan-kalyan-and-nitish-kumars-support-prakash-raj-slams-pm-gkn/articleshow-sebqn0s</link>
            <guid isPermaLink="true">https://kannada.asianetnews.com/kalaburagi/modi-is-not-standing-on-his-own-strength-he-needs-pawan-kalyan-and-nitish-kumars-support-prakash-raj-slams-pm-gkn/articleshow-sebqn0s</guid>
            <pubDate>Sat, 22 Aug 2026 17:01:18 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ ನಡೆದ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. &quot;ಮಹಾಪ್ರಭು ಮೋದಿ ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ, ಅವರು ಪವನ್ ಕಲ್ಯಾಣ್ ಮತ್ತು ನಿತೀಶ್ ಕುಮಾರ್ ಅವರ ಆಸರೆಯ ಮೇಲೆ ನಿಂತಿದ್ದಾರೆ&quot; ಎಂದು ಲೇವಡಿ ಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyy0gpar3c4g68rwzjxyztxk,imgname-prakash-raj-1785566091608.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ಮಹಾಪ್ರಭು ನರೇಂದ್ರ ಮೋದಿ ಅವರು ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ. ಅವರು ತಮ್ಮ ಅಕ್ಕಪಕ್ಕದಲ್ಲಿ ಇರುವ ಪವನ್ ಕಲ್ಯಾಣ್ ಮತ್ತು ನಿತೀಶ್ ಕುಮಾರ್ ಅವರ ಹೆಗಲ ಮೇಲೆ ನಿಂತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಲೇವಡಿ ಮಾಡಿದ್ದಾರೆ.&lt;/p&gt;&lt;p&gt;ಕಲಬುರಗಿಯಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶವನ್ನು ವಿಕಸಿತ ಭಾರತ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು, ಇವರು ಭಾರತವನ್ನು ಅವನತಿಯತ್ತ ಕೊಂಡೊಯ್ದಿದ್ದಾರೆ. ಮಹಾಪ್ರಭು ಮೋದಿ ಅವರು ಒಬ್ಬ ರಾಜನಂತೆ ಬದುಕುತ್ತಿದ್ದಾರೆ. ಅವರ ಬಟ್ಟೆಗಳು, ವೈಭವದ ಮೆರವಣಿಗೆಗಳು ಅವರಿಗೆ ಬೇಕಾ? ಒಬ್ಬ ದೇಶದ ಪ್ರಧಾನಿಯನ್ನು ಸಾಮಾನ್ಯ ಜನ ಮುಟ್ಟದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅವರು ರಾಮ ಮಂದಿರ ವ್ಯಾಪ್ತಿಯ ಕ್ಷೇತ್ರದಲ್ಲೇ ಸೋಲು ಕಂಡಿದ್ದಾರೆ. ಎಂಪಿ, ಎಂಎಲ್&zwnj;ಎಗಳನ್ನು ಖರೀದಿ ಮಾಡಲು ರಾಮ ಮಂದಿರದ ದುಡ್ಡನ್ನು ಕದಿಯಲಾಗಿದೆ ಎಂದು ಪ್ರಕಾಶ್ ರಾಜ್ ಗಂಭೀರವಾಗಿ ಆರೋಪಿಸಿದರು.&lt;/p&gt;&lt;h2&gt;&lt;strong&gt;ಕರಾವಳಿ ಮಂದಿ ನನ್ನಂತೆ ಆದರೆ ಇವರ ಕಥೆ ಏನು?&lt;/strong&gt;&lt;/h2&gt;&lt;p&gt;ತಮ್ಮನ್ನು ಕರಾವಳಿ ಭಾಗಕ್ಕೆ ಕಳುಹಿಸಬೇಕು ಎನ್ನುವ ವಿರೋಧಿಗಳ ಹೇಳಿಕೆಗೆ ಟಾಂಗ್ ನೀಡಿದ ಅವರು, ಪ್ರಕಾಶ್ ರಾಜ್&zwnj;ನನ್ನು ಕರಾವಳಿಗೆ ಹಾಕಿ ಎಂದು ಕೆಲವರು ಹೇಳುತ್ತಿದ್ದಾರೆ. ಒಂದು ವೇಳೆ ಆ ಕರಾವಳಿಯ ಜನ ಅಲ್ಲಿನ ಸಮುದ್ರದ ಮೀನು ತಿಂದು ನನ್ನಂತೆಯೇ ಯೋಚಿಸಿ, ಪ್ರಶ್ನೆ ಮಾಡಲು ಆರಂಭಿಸಿದರೆ ಇವರ ಪರಿಸ್ಥಿತಿ ಏನಾಗಬಹುದು? ಎಂದು ಪ್ರಶ್ನಿಸಿದರು. ಅಲ್ಲದೆ ಪ್ರತಿದಿನ ಸುಳ್ಳು ಹೇಳುವವರನ್ನು ಮತ್ತು ಅಪಶಬ್ದಗಳನ್ನು ಬಳಸುವವರನ್ನು ಮೊದಲು ಶುದ್ಧೀಕರಿಸಬೇಕಾಗಿದೆ ಎಂದರು.&lt;/p&gt;&lt;p&gt;ಇವರಿಗೆ ಮಲ್ಲಿಕಾರ್ಜುನ ಖರ್ಗೆ ಅಂದರೆ ಆಗಿಬರುವುದಿಲ್ಲ. ಅದರರ್ಥ ಇವರಿಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಆಗಿಬರುವುದಿಲ್ಲ ಎಂದೇ ಅರ್ಥ. ಸಂವಿಧಾನ ಎನ್ನುವುದು ಬ್ರಿಟಿಷರು ಬಂದ ಮೇಲೆ ರಚನೆಯಾಗಿದ್ದು. ಇವರು ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಕಾಂಟ್ರಾಕ್ಟ್ ಪಡೆದುಕೊಂಡವರಂತೆ ಆಡುತ್ತಿದ್ದಾರೆ. ಹಿಂದೆ ಡಿಮಾನಿಟೈಸೇಶನ್ ಮಾಡಿ ದೇಶದ ಜನರ ದುಡ್ಡನ್ನು ಜನರೇ ತೆಗೆದುಕೊಳ್ಳದಂತೆ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಒಂದು ಕೋಟಿ ಮತಗಳನ್ನು ಡಿಲೀಟ್ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸೋಲಿನ ಭಯದಿಂದ ದೇಶದಲ್ಲಿ ತನಿಖಾ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಕಿಡಿಕಾರಿದರು.&lt;/p&gt;&lt;p&gt;ವೇದಿಕೆಯಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧೈರ್ಯ ತುಂಬಿದ ಪ್ರಕಾಶ್ ರಾಜ್ ಖರ್ಗೆಯವರೇ, ನೀವು ಸದನದಲ್ಲಿ ಹೀಗೆಯೇ ಗುಡುಗುತ್ತಿರಿ, ನಾವೆಲ್ಲರೂ ನಿಮ್ಮ ಜೊತೆಗಿರುತ್ತೇವೆ. ಮೋದಿ ಅಧಿಕಾರದಿಂದ ಕೆಳಗಿಳಿಯುತ್ತಾರೆ, ದೇಶದ ಜನರೇ ಅವರನ್ನು ಇಳಿಸುತ್ತಾರೆ. ಆ ಬಳಿಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿದ ದಾರಿದೀಪದಂತೆ ನಡೆಯುವ ಮುಂದಿನ ಪ್ರಧಾನಿಯನ್ನು ನಾವೆಲ್ಲರೂ ಸೇರಿ ಆರಿಸೋಣ ಎಂದು ಕರೆ ನೀಡಿದರು. ಕರ್ನಾಟಕದಲ್ಲಿ ಪ್ರಜೆಗಳೇ ಆರಿಸಿದ ಸರ್ಕಾರವಿದ್ದು, ರಾಜ್ಯದಲ್ಲಿ ಯಾವೊಬ್ಬ ನಾಗರಿಕನೂ ತನ್ನ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.&lt;/p&gt;]]></content:encoded>
            <category>kalaburagi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/kalaburagi/modi-is-not-standing-on-his-own-strength-he-needs-pawan-kalyan-and-nitish-kumars-support-prakash-raj-slams-pm-gkn/articleshow-sebqn0s"/>
        </item>
        <item>
            <title><![CDATA[Kalaburagi: ಕೋಪದ ಕೈಗೆ ಬುದ್ಧಿ ಕೊಟ್ಟ ಗಂಡ: ಹೆಂಡತಿ ಮೇಲಿನ ಸಿಟ್ಟಿಗೆ ಪತ್ನಿ, ಮಕ್ಕಳಿದ್ದ ರೂಮ್‌ಗೆ ನುಗ್ಗಿ..]]></title>
            <link>https://kannada.asianetnews.com/karnataka-districts/two-people-died-four-admitted-to-hospital-after-husband-blew-himself-up-after-fight-with-wife-in-kalaburagi-sns/articleshow-x9aiivc</link>
            <guid isPermaLink="true">https://kannada.asianetnews.com/karnataka-districts/two-people-died-four-admitted-to-hospital-after-husband-blew-himself-up-after-fight-with-wife-in-kalaburagi-sns/articleshow-x9aiivc</guid>
            <pubDate>Tue, 11 Aug 2026 17:32:43 +0530</pubDate>
            <description><![CDATA[&lt;p&gt;ಹೆಂಡತಿಯ ಶೀಲದ ಮೇಲೆ ಸದಾ ಅನುಮಾನ ಪಡುತ್ತಿದ್ದ ವ್ಯಕ್ತಿಯೊಬ್ಬ, ಜಿಲೆಟಿನ್ ಕಡ್ಡಿಗಳನ್ನು ಇಡೀ ಮೈಗೆ ಕಟ್ಟಿಕೊಂಡು ಮನೆಗೆ ನುಗ್ಗಿ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ. ಈ ಭೀಕರ ದುರಂತದಲ್ಲಿ ಆತ ಹಾಗೂ ಆತನ 16 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹೆಂಡತಿ, ಮಗ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜ್ಯವೇ ಬೆಚ್ಚಿ ಬೀಳಿಸುವ ಈ ಭಯಾನಕ ಘಟನೆಯ ಕುರಿತು ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzraxjgt190vp3fb970jckdp,imgname-kalaburagi-husband-blast-1786449414682.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಛಿದ್ರ ಛಿದ್ರಗೊಂಡಿರುವ ಮನೆ. ಮನೆಯೊಳಗಿನ ವಸ್ತುಗಳು ಮಾತ್ರವಲ್ಲ, ದೇಹಗಳೂ ಸಹ ಛಿದ್ರ ಛಿದ್ರ. ಮುಂಡದಿಂದ ಬೇರ್ಪಟ್ಟು ಛಿದ್ರಗೊಂಡು ಬಿದ್ದಿರುವ ಮುಂಡ. ಈ ಭಯಾನಕ ಸ್ಪೋಟದ ದೃಷ್ಯಗಳು ಕಂಡು ಬಂದಿದ್ದು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ. ಅಂದ ಹಾಗೆ ಇಲ್ಲಿ ಸ್ಪೋಟ ಸಂಭವಿಸಿದ್ದು ಆಕಸ್ಮಿಕವಾಗಿ ಅಲ್ಲ. ಕುಟುಂಬದ ಯಜಮಾನನೇ ಇಲ್ಲಿ ಸೂಸೈಡ್ ಬಾಂಬರ್. ಅಕ್ಷರಶಃ ಭಯೋತ್ಪಾದನಾ ಕೃತ್ಯಕ್ಕೆ ಹೋಲಿಸಬಹುದಾದ ಭಯಾನಕ ಕೃತ್ಯವೊಂದು ಆಳಂದನ ಮಟಕಿ ತಾಂಡಾದಲ್ಲಿಂದು ನಡೆದಿದೆ.&lt;/p&gt;&lt;h2&gt;ತನ್ನನ್ನು ತಾನೇ ಸ್ಪೋಟಿಸಿಕೊಂಡ!&lt;/h2&gt;&lt;p&gt;ಹೌದು! ಹೆಂಡತಿಯ ಮೇಲಿನ ಹಗೆತನದಿಂದ ಗಂಡನೇ ತನ್ನ ಮೈಗೆ ಜಿಲೆಟಿನ್ ಸ್ಪೋಟಕ ಕಟ್ಟಿಕೊಂಡು ಹೆಂಡತಿ, ಮಗ, ಮಗಳು ಹಾಗೂ ಅಣ್ಣನ ಹೆಂಡತಿ ಇರುವ ಕೋಣೆಯೊಳಗೆ ಹೋಗಿ ತನ್ನನ್ನು ತಾನೇ ಸ್ಪೋಟಿಸಿಕೊಂಡಿದ್ದಾನೆ. ಪರಿಣಾಮ ತಾನೂ ಸಾವಿಗೀಡಾಗಿ ತನ್ನ 16 ವರ್ಷದ ಮಗಳನ್ನೂ ಬಲಿ ಪಡೆದಿದ್ದಾನೆ. ಅಷ್ಟೇ ಅಲ್ಲ ಘಟನೆಯಲ್ಲಿ ಆತನ ಹೆಂಡತಿ, ಮಗ, ಅಣ್ಣನ ಹೆಂಡತಿ ಸಹಿತ ನಾಲ್ಬರು ತೀವ್ರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಹೆಂಡತಿ ಜೊತೆ ಮಕ್ಕಳ ಮೇಲೆಯೂ ಧ್ವೇಷ!&lt;/h2&gt;&lt;p&gt;ಮಟಕಿ ತಾಂಡಾ ನಿವಾಸಿ 50 ವರ್ಷದ ಶೇವಾಲಾಲ್ ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಆರೋಪಿ. ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಾವಿ ತೋಡುವ ಬ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದ ಶೇವಾಲಾಲ್, ತನ್ನ ಪತ್ನಿ ಸವಿತಾಳ ಶೀಲದ ಮೇಲೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ. ಪತ್ನಿ ಹಾಗೂ ಮಕ್ಕಳು ಪುಣೆಯಲ್ಲಿದ್ದರು. ವಾರದ ಹಿಂದಷ್ಟೇ ಪತ್ನಿ ಮಟಕಿ ತಾಂಡಾಗೆ ಬಂದಿದ್ದ ವಿಚಾರ ತಿಳಿದು ಶೇವಾಲಾಲ್ ಕೂಡ ನಿನ್ನೆಯಷ್ಟೇ ಊರಿಗೆ ಬಂದಿದ್ದ. ನಿನ್ನೆ ಹೆಂಡತಿಯೊಂದಿಗೆ ಜಗಳ ಮಾಡಿದ್ದ. ಮಕ್ಕಳೂ ಸಹ ತಾಯಿಗೆ ಸಪೋರ್ಟ ಮಾಡಿದ್ದ ಕಾರಣ ಎಲ್ಲರನ್ನೂ ಒಂದೇ ಬಾರಿಗೆ ಬಲಿ ಪಡೆಯುವ ದುರುದ್ದೇಶದಿಂದ ಈ ಭಯಾನಕ ಪ್ಲಾನ್ ಮಾಡಿಕೊಂಡಿದ್ದಾನೆ.&lt;/p&gt;&lt;h2&gt;ಸ್ಫೋಟದ ತೀವ್ರತೆ ದೇಹ ಛಿದ್ರ ಛಿದ್ರ!&lt;/h2&gt;&lt;p&gt;ಅದರಂತೆ ಇಂದು ಬೆಳಿಗ್ಗೆ 9 ಗಂಟೆಗೆ ​ಮನೆಗೆ ಎಂಟ್ರಿ ಕೊಟ್ಟ ಶೇವಾಲಾಲ್, ಮೈತುಂಬಾ ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಮನೆಯಲ್ಲಿದ್ದ ಪತ್ನಿ, ಮಕ್ಕಳು ಹಾಗೂ ಅಣ್ಣನ ಹೆಂಡತಿಯ ಎದುರೇ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಶೇವಾಲಾಲ್ ದೇಹವೇ ಛಿದ್ರ ಛಿದ್ರಗೊಂಡಿದ್ದು, ಆತನ ಮುಖ ಹಾಗೂ ಕತ್ತಿನ ಭಾಗ ದೇಹದಿಂದ ಬೇರ್ಪಟ್ಟು ಬಿದ್ದಿದೆ.&lt;/p&gt;&lt;h2&gt;ನಾಲ್ವರು ಜೀವನ್ಮಾರಣ ಹೋರಾಟ&lt;/h2&gt;&lt;p&gt;ಘಟನೆಯಲ್ಲಿ ಶೇವಾಲಾಲ್ ಹಾಗೂ ಆತನ 16 ವರ್ಷದ ಮಗಳು ವೀರಾಬಾಯಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನು ಶೇವಾಲಾಲ್ ಪತ್ನಿ ಸವಿತಾ, ಮಗ ಹಾಗೂ ಅಣ್ಣನ ಹೆಂಡತಿ ಸೇರಿದಂತೆ ನಾಲ್ವರಿಗೆ ತೀವ್ರ ಗಾಯಗಳಾಗಿದ್ದು, ಕಲಬುರಗಿಯ ಟ್ರಾಮಾ ಕೇರನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸ್ಫೋಟದ ರಭಸಕ್ಕೆ ಇಡೀ ಮನೆಯೇ ಧರೆಗುರುಳಿದೆ. ವಿಷಯ ತಿಳಿಯುತ್ತಿದ್ದಂತೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಸ್ಥಳಕ್ಕೆ ಭೇಟಿ ನೋಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;​ಒಟ್ಟಿನಲ್ಲಿ ಅನುಮಾನ ಎನ್ನುವ ಪಿಡುಗು ಒಂದು ಇಡೀ ಕುಟುಂಬವನ್ನೇ ನಾಶಮಾಡಿದ್ದು, ಊರನ್ನೇ ಆತಂಕಕ್ಕೆ ತಳ್ಳಿದೆ. ಘಟನೆಗೆ ಸಂಬಂಧಿಸಿದಂತೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ವರದಿ: ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್, ಕಲಬುರಗಿ)&lt;/p&gt;]]></content:encoded>
            <category>kalaburagi</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/two-people-died-four-admitted-to-hospital-after-husband-blew-himself-up-after-fight-with-wife-in-kalaburagi-sns/articleshow-x9aiivc"/>
        </item>
        <item>
            <title><![CDATA[ಕಲ್ಯಾಣ ಕರ್ನಾಟಕ ಉತ್ಸವ: ನಾಳೆ ಕಲಬುರಗಿಗೆ ಸಿಎಂ, ಬರ ಪರಿಹಾರ, ಸಾಲಮನ್ನಾ.. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ]]></title>
            <link>https://kannada.asianetnews.com/karnataka-districts/priyank-kahrge-press-conferecne-on-kalayana-karnataka-utsav-2026-kalaburagi-rav/articleshow-yn48h94</link>
            <guid isPermaLink="true">https://kannada.asianetnews.com/karnataka-districts/priyank-kahrge-press-conferecne-on-kalayana-karnataka-utsav-2026-kalaburagi-rav/articleshow-yn48h94</guid>
            <pubDate>Wed, 16 Sep 2026 10:57:58 +0530</pubDate>
            <description><![CDATA[&lt;p&gt;ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಕಲಬುರಗಿಗೆ ಭೇಟಿ ನೀಡಲಿದ್ದು, 1500 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅಪ್ಪಾ ಕೆರೆ ನವೀಕರಣವನ್ನು ಸಮರ್ಥಿಸಿಕೊಂಡಿದ್ದು, ಬರ ಘೋಷಣೆ ವಿಚಾರದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2mapyt086agaz4knba3967c,imgname-priyank-kharge-on-kalyana-karnataka-utsav-1789536205632.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ (ಸೆ.16): ನಾಳೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಿನ್ನೆಲೆ ಉತ್ಸವದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಡಿಕೆ ಶಿವಕುಮಾರ ಆಗಮಿಸಲಿದ್ದಾರೆ. ಇಂದು ಸಂಜೆ 7 ಗಂಟೆಗೆ ವಿಶೇಷ ವಿಮಾನದಲ್ಲಿ ಕಲಬುರಗಿ ಏರ್&zwnj;ಪೋರ್ಟ್&zwnj;ಗೆ ಬಂದಿಳಿಯಲಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.&lt;/p&gt;&lt;h2&gt;ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕಲಬುರಗಿಗೆ ಸಿಎಂ&lt;/h2&gt;&lt;p&gt;ಇಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ಕಲ್ಯಾಣ ಕರ್ನಾಟಕ ಉತ್ಸವ ದಿನ ಅಂಗವಾಗಿ ಸಿಎಂ ಡಿಕೆಶಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಸಂಜೆ ಕಲಬುರಗಿ ಸ್ಟ್ರಿಟ್ ಫೆಸ್ಟಿವಲ್ &zwnj;ಗೆ ಚಾಲನೆ ನೀಡಲಿದ್ದು, ಇದೇ ವೇಳೆ ಅಪ್ಪಾ ಕೆರೆ ಸೇರಿದಂತೆ 1500 ಕೋಟಿ ರೂಪಾಯಿ ವೆಚ್ಚದ 801 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.&lt;/p&gt;&lt;h3&gt;ನಾಳೆ ಸಿಎಂ ಡಿಕೆಶಿ ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ಭೇಟಿ:&lt;/h3&gt;&lt;p&gt;ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಕಲಬುರಗಿಗೆ ಆಗಮಿಸುತ್ತಿದ್ದು, ಇದೇ ವೇಳೆ ಮಧ್ಯಾಹ್ನ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.&lt;/p&gt;&lt;p&gt;ಅಪ್ಪಾ ಕೆರೆ ನವೀಕರಣಕ್ಕೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಹೌದು ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ನಾನೇ ಈ ಕೆರೆ ನವೀಕರಣ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಇಂದು ನನ್ನ ನೇತೃತ್ವದಲ್ಲಿ ಕೆರೆ ನವೀಕರಣ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿತ್ತು. ಕೆರೆ ಪರಿಸರಕ್ಕೆ ಧಕ್ಕೆ ಆಗುವಂತಹ ಕಾಮಗಾರಿಗಳನ್ನ ಕೈಗೊಳ್ಳಲಾಗಿತ್ತು. ಹೀಗಾಗಿ ಅಂದು ನಾನು ವಿರೋಧಿಸಿದ್ದೆ. ಸದ್ಯ ಕೆರೆ ನವೀಕರಣ ಕಾರ್ಯಕ್ಕೆ ಪರಿಸರ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಈಗಿನ ಅಪ್ಪಾ ಕೆರೆಗೆ ದಡದ ಸುತ್ತಲು ನಾಲ್ಕು ಕಿಮೀ ಸುತ್ತಳತೆಯಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ. ಬಿಜೆಪಿ ಮಾಡಿದ ತಪ್ಪುಗಳನ್ನು ನಾವು ತಿದ್ದೋ ಕೆಲಸ ಮಾಡುತ್ತಿದ್ದೇವೆ ಎಂದು ಅಪ್ಪಾ ಕೆರೆ ನವೀಕರಣ ಸಮರ್ಥಿಸಿಕೊಂಡರು&lt;/p&gt;&lt;h3&gt;&lt;strong&gt;ಬರ ಘೋಷಣೆ ಮಾಡೋದು ಕೇಂದ್ರ ಸರ್ಕಾರ&lt;/strong&gt;&lt;/h3&gt;&lt;p&gt;ಇನ್ನು ಬರ ಘೋಷಣೆ ವಿಳಂಬ ಕುರಿತಂತೆ ಪ್ರತಿಕ್ರಿಯಿಸಿದ ಗೃಹಸಚಿವರು, ಬರ ಘೋಷಣೆ ಮಾಡಲಿ ಅಂತಾ ಬಿಜೆಪಿಯವರು ಪ್ರತಿಭಟನೆ ಮಾಡ್ತಿದ್ದಾರೆ. ಅವರಿಗೆ ಯಾರು ಬರ ಘೋಷಣೆ ಮಾಡ್ತಾರೆ ಅಂತಲೇ ತಿಳಿದಿಲ್ಲ. ಬರ ಘೋಷಣೆ ಮಾಡೋರು ಯಾರು? ನಾವಾ(ರಾಜ್ಯ ಸರ್ಕಾರ) ಅಥವಾ ಕೇಂದ್ರ ಸರ್ಕಾರವಾ? ಎಂದು ಪ್ರಶ್ನಿಸಿದರು.&lt;/p&gt;&lt;h3&gt;ಉದ್ಯಮಿಗಳ ಸಾಲ ಮನ್ನಾ ಮಾಡೋ ಮೋದಿಗೆ ರೈತರ ಸಾಲ ಕಷ್ಟವಾ?&lt;/h3&gt;&lt;p&gt;ಇನ್ನೂ ಮಳೆಗಾಲನೇ ಮುಗಿದಿಲ್ಲ. ರಾಜ್ಯದ ರೈತರ ಕೈಹಿಡಿದಿರುವುದು ನಾವೇ ಹೊರತು ಕೇಂದ್ರ ಬಿಜೆಪಿಯವರಲ್ಲ. ಈ ಹಿಂದೆ ರೈತರ ಸಾಲ ಮಾಡಿ ಅಂದ್ರೆ ನಮ್ಮಲ್ಲಿ ನೋಟ್ ಪ್ರಿಂಟ್ ಮಾಡೋ ಮಷಿನ್ ಇಲ್ಲ ಅಂದಿದ್ದು ಬಿಜೆಪಿಯವರು ನೆನಪಿದೆಯಾ? ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡೋ ಮೋದಿಗೆ ರೈತರ ಸಾಲ ಮನ್ನಾ ಮಾಡೋಕೆ ಆಗೋಲ್ವ? ಸ್ವತಃ ನಾನೇ ವರದಿ ಕೊಟ್ಟರೂ ಕೇಂದ್ರ ಸರ್ಕಾರ ಒಪ್ಪೋದಿಲ್ಲ. ಮೋದಿ ಗೈಡ್&zwnj;ಲೈನ್ಸ್ ಮೇಲೆ ಪರಿಹಾರ ಬಿಡುಗಡೆ ಆಗುತ್ತೆ. ರಾಜ್ಯ ಸರ್ಕಾರ ರೈತರಿಗೆ ಏನು ಪರಿಹಾರ ಕೊಡಬೇಕೋ ಅದು ಕೊಟ್ಟ ಕೊಡುತ್ತದೆ ಎಂದರು.&lt;/p&gt;]]></content:encoded>
            <category>kalaburagi</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/priyank-kahrge-press-conferecne-on-kalayana-karnataka-utsav-2026-kalaburagi-rav/articleshow-yn48h94"/>
        </item>
        <item>
            <title><![CDATA[Kalaburagi ಮಹಾನಗರ ಪಾಲಿಕೆಗೆ ನೂತನ ಮೇಯರ್, ಉಪ ಮೇಯರ್ ಆಯ್ಕೆ: ಗೆದ್ದ ಕಾಂಗ್ರೆಸ್]]></title>
            <link>https://kannada.asianetnews.com/karnataka-districts/new-mayor-ajmal-ahmed-gola-deputy-mayor-farhanaz-khusro-jahgirdar-elected-for-kalaburagi-municipal-corporation-mrq/articleshow-yxmoiok</link>
            <guid isPermaLink="true">https://kannada.asianetnews.com/karnataka-districts/new-mayor-ajmal-ahmed-gola-deputy-mayor-farhanaz-khusro-jahgirdar-elected-for-kalaburagi-municipal-corporation-mrq/articleshow-yxmoiok</guid>
            <pubDate>Sun, 30 Aug 2026 08:34:20 +0530</pubDate>
            <description><![CDATA[&lt;p&gt;ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಜ್ಮಲ್ ಅಹಮದ್ ಗೋಳಾ ಅವರು ನೂತನ ಮೇಯರ್ ಆಗಿ ಮತ್ತು ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್&zwnj; ಆಗಿ ಆಯ್ಕೆಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m189r96xazzhg37csfneb967,imgname-kalaburgi-mayor-1788058805469.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ: ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್&zwnj; ಪಕ್ಷವೇ ಮೇಲುಗೈ ಸಾಧಿಸಿದ್ದು, ಅದೇ ಪಕ್ಷದ ಪಾಲಿಕೆ ಪುರಪಿತೃಗಳು ಇಬ್ಬರು ಆಡಳಿತದ ಚುಕ್ಕಾಣಿ ಮತ್ತೊಮ್ಮೆ ಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ, 21ನೇ ವಾರ್ಡ್&zwnj;ನ ಅಜ್ಮಲ್ ಅಹಮದ್ ಗೋಳಾ ಅವರು ನೂತನ ಮೇಯರ್ ಆಗಿ ಹಾಗೂ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್&zwnj; ಆಗಿ ಆಯ್ಕೆಯಾಗಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯ ಅಜ್ಮಲ್ ಅಹಮದ್ ಗೋಳಾ ಅವರು ಮೇಯರ್ ಸ್ಥಾನಕ್ಕೆ ಹಾಗೂ 20ನೇ ವಾರ್ಡ್&zwnj;ನ ಸದಸ್ಯೆ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.&lt;/p&gt;&lt;h2&gt;&lt;strong&gt;ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿ&lt;/strong&gt;&lt;/h2&gt;&lt;p&gt;ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಆಗಸ್ಟ್ 7ರಂದು ಚುನಾವಣೆ ನಡೆಯಬೇಕಾಗಿತ್ತು. ಆದರೆ ಕೆಲ ಕಾರಣಗಳಿಂದ ಚುನಾವಣೆ ಮುಂದೂಡಿಕೆಯಾಗಿದ್ದು, ಪ್ರಾದೇಶಿಕ ಆಯುಕ್ತೆ ಜಾಹೀರಾ ನಶೀಮ್ ಅವರು ಆಗಸ್ಟ್ 29ರಂದು ಚುನಾವಣೆ ನಡೆಸುವಂತೆ ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದರು. ಇದರಂತೆ ಶನಿವಾರ ನಡೆದ ಚುನಾವಣೆಯಲ್ಲಿ ಅಜ್ಮಲ್ ಅಹಮದ್ ಗೋಳಾ ಹಾಗೂ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಕ್ರಮವಾಗಿ ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಆಡಳಿತದ ಹೊಣೆ ಹೊತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 35 ಮತಗಳು ಪಡೆದರೆ ಬಿಜೆಪಿ ಅಭ್ಯರ್ಥಿ 29 ಮತಗಳನ್ನು ಪಡೆದರು.&lt;/p&gt;&lt;p&gt;ನೂತನ ಮೇಯರ್&zwnj; ಅಜ್ಮಲ್ ಗೋಳಾ ಅವರ ತಂದೆ ಜಮೀರ್ ಅಹ್ಮದ್&zwnj; ಗೋಳಾ ಅವರು ಈ ಹಿಂದೆ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಆಗಿದ್ದರು. ಇದೀಗ ಅವರ ಪುತ್ರ ಅಜ್ಮಲ್ ಗೋಳಾ ಅವರು ಮೇಯರ್ ಆಗಿ ಆಯ್ಕೆಯಾಗಿದ್ದು, ತಂದೆ-ಮಗ ಮೇಯರ್ ಹುದ್ದೆ ಅಲಂಕರಿಸಿದ್ದು ವಿಶೇಷವಾಗಿದೆ.&lt;/p&gt;&lt;p&gt;ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ಕಾಂಗ್ರೆಸ್ ಪಕ್ಷದಿಂದ ಅಜ್ಮಲ್ ಗೋಲಾ ಹಾಗೂ ಉಪಮೇಯರ್ ಹುದ್ದೆಗೆ ಫರ್ಜಾನಾ ಖುಸ್ರೋ ಜಾಗೀರದಾರ್ ಅವರನ್ನು ಆಯ್ಕೆ ಮಾಡಲಾಗಿದೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಮನಿ, ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್&zwnj;, ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್&zwnj; ಫಾತೀಮಾ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಪಾಲಿಕೆಯ ಇತರ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಹಾಜರಿದ್ದು, ನೂತನ ಮೇಯರ್ ಹಾಗೂ ಉಪಮೇಯರ್ ಅವರಿಗೆ ಶುಭ ಹಾರೈಸಿದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/new-mayor-ajmal-ahmed-gola-deputy-mayor-farhanaz-khusro-jahgirdar-elected-for-kalaburagi-municipal-corporation-mrq/articleshow-yxmoiok"/>
        </item>
    </channel>
</rss>
