<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Jul 2026 05:42:05 +0530</lastBuildDate>
        <atom:link href="https://kannada.asianetnews.com/rss/kalaburagi" rel="self" type="application/rss+xml"/>
        <item>
            <title><![CDATA[ತಾಂಡಾಗಳಲ್ಲಿ ಕ್ರಾಂತಿಕಾರಿ ಹೆಜ್ಜೆ; ನಿಯಮ ಉಲ್ಲಂಘಿಸಿದವರಿಗೆ 1 ಲಕ್ಷ ರೂಪಾಯಿ ದಂಡ]]></title>
            <link>https://kannada.asianetnews.com/karnataka-districts/kalaburgi-rs-1-lakh-fine-for-giving-dowry-in-aland-taluk-s-lambani-tanda-mrq/articleshow-0aio4am</link>
            <guid isPermaLink="true">https://kannada.asianetnews.com/karnataka-districts/kalaburgi-rs-1-lakh-fine-for-giving-dowry-in-aland-taluk-s-lambani-tanda-mrq/articleshow-0aio4am</guid>
            <pubDate>Wed, 01 Jul 2026 07:23:12 +0530</pubDate>
            <description><![CDATA[&lt;p&gt;ಲಂಬಾಣಿ ತಾಂಡಾಗಳಲ್ಲಿ, ಬಂಜಾರಾ ಕ್ರಾಂತಿದಳ ಮತ್ತು ಸೇವಾಲಾಲ ಜಯಂತಿ ಸಮಿತಿಗಳು ವರದಕ್ಷಿಣೆ ಪಿಡುಗಿನ ವಿರುದ್ಧ ಹೊಸ ಕ್ರಾಂತಿಯನ್ನು ಆರಂಭಿಸಿವೆ. ವರದಕ್ಷಿಣೆ ಕೊಡು-ಕೊಳ್ಳುವಿಕೆಯನ್ನು ನಿಷೇಧಿಸಿ, ನಿಯಮ ಉಲ್ಲಂಘಿಸಿದವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಮೂಲಕ ಸರಳ ವಿವಾಹಗಳಿಗೆ ಆದ್ಯತೆ ನೀಡುತ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwdnzf3r964jj0q2hbdbn958,imgname-lambani-tanda-1782870686840.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶೇಷಮೂರ್ತಿ ಅವಧಾನಿ&lt;/strong&gt;&lt;/p&gt;&lt;p&gt;&lt;strong&gt;ಕಲಬುರಗಿ: &amp;nbsp;&lt;/strong&gt;ಇಂದಿಗೂ ವರದಕ್ಷಿಣೆ ಸಾಮಾಜಿಕ ಪಿಡುಗಾಗಿ, ಅನಿಷ್ಠ ಪದ್ಧತಿಯಾಗಿ ಕಾಡುತ್ತಿರುವಾಗ ಇದಕ್ಕೆ ಕಡಿವಾಣ ಹಾಕಲು ಜಿಲ್ಲೆಯ ಆಳಂದ ತಾಲೂಕಿನ ಲಂಬಾಣಿ ತಾಂಡಾಗಳಲ್ಲಿ ಸದ್ದಿಲ್ಲದಂತೆ ಹೊಸ ಕ್ರಾಂತಿಯೇ ಶುರುವಾಗಿದೆ. ಬಂಜಾರಾ ಕ್ರಾಂತಿದಳ, ಸೇವಾಲಾಲ ಜಯಂತಿ ಸಮಿತಿ ಜಂಟಿಯಾಗಿ ಲಂಬಾಣಿ ಸಮಾಜದ ಹಿರಿಯರು, ಯುವಕರು ಒಂದಾಗಿ ವರದಕ್ಷಿಣೆ ಕೊಡುಕೊಳ್ಳುವುದನ್ನು ತಾಂಡಾಗಳಲ್ಲಿ ನಿಷೇಧಿಸುವ ಮೂಲಕ ಸರಳ, ವರದಕ್ಷಿಣೆ ರಹಿತ ವಿವಾಹಗಳಿಗೆ ಆದ್ಯತೆ ನೀಡುವಂತಹ ಐತಿಹಾಸಿಕ ನಿರ್ಧಾರ ಕೈಗೊಂಡು ಸಾಮಾಜಿಕ ಬದ್ಧತೆ ತೋರಿದ್ದಾರೆ.&lt;/p&gt;&lt;p&gt;ವರದಕ್ಷಿಣೆ ಮುಕ್ತ ಸರಳ ವಿವಾಹ ಜಾಗೃತಿ ಅಭಿಯಾನ ಶುರುಮಾಡಿರುವ ಬಂಜಾರಾ ಯುವಪಡೆ ಹಾಗೂ ಆ ಸಮುದಾಯದ ಹಿರಿಯರು, ಕಿರಿಯರು ವರದಕ್ಷಿಣೆ ರಹಿತ ವಿವಾಹ, ಆಚರಣೆಗಳಿಗೇ ಆದ್ಯತೆ, ಆಡಂಬರಗಳಿಗೆ ಗುಡ್&zwnj;ಬೈ ಹೇಳುವಂತಹ ವಿನೂತನ ಪರಿಕಲ್ಪನೆಗಳೊಂದಿಗೆ ಹೊಸ ಹೆಜ್ಜೆ ಇಡುತ್ತಿದ್ದಾರೆ.&lt;/p&gt;&lt;p&gt;ತಾಲೂಕಿನ ಸೀಡ್ಸ್&zwnj; ಫಾರ್ಮ್&zwnj; ತಾಂಡಾ, ನೆಹರು ನಗರ ತಾಂಡಾ, ಹೆಬಳ್ಳಿ ತಾಂಡಾ, ಪಿ.ಎನ್.ತಾಂಡಾ, ಮೋರಿಸಾಬ್ ತಾಂಡಾಗಳು ಸೇರಿದಂತೆ 52ಕ್ಕೂ ಅಧಿಕ ತಾಂಡಾಗಳಲ್ಲಿ ವರದಕ್ಷಿಣೆ ವಿರುದ್ಧ ಜಾಗೃತಿ ಅಭಿಯಾನ ಕೈಗೆತ್ತಿಕೊಂಡಿರುವ ಬಂಜಾರಾ ಕ್ರಾಂತಿದಳ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ಸಂಕಲ್ಪಿಸಿದೆ.&lt;/p&gt;&lt;p&gt;ಲಂಬಾಣಿ ಸಮುದಾಯದಲ್ಲಿ ವರದಕ್ಷಿಣೆ ರಹಿತ ವಿವಾಹಗಳಾಗಬೇಕು, ಹಣ, ದುಬಾರಿ ಉಡುಗೊರೆ, ಆಮಿಷ ಇನ್ಯಾವುದೇ ರೂಪದಲ್ಲಿ ವರದಕ್ಷಿಣೆ ಭೂತ ಕಾಡಬಾರದು. ಶಿಕ್ಷಣ, ಸರ್ಕಾರಿ ಸೌಲಭ್ಯಗಳ ಹಕ್ಕುಗಳ ಅರಿವು ಉಂಟಾಗಿ ಎಲ್ಲರೂ ಶಿಕ್ಷಿತರಾಬೇಕು, ಸಂಘಟಿತರಾಗುವ ಮೂಲಕ ಸಮಾಜದ ಒಗ್ಗಟ್ಟಿಗೆ, ಆರ್ಥಿಕ ಬಲಗೊಳ್ಳುವಿಕಿಗೆ ಕಾರಣರಾಗಬೇಕೆಂಬ ಸಂಕಲ್ಪ ಇಟ್ಟುಕೊಂಡು ಜಾಗೃತಿ ಅಭಿಯಾನ ಸದ್ದಿಲ್ಲದೆ ತಾಂಡಾಗಳಲ್ಲಿ ಶುರುವಾಗಿದೆ.&lt;/p&gt;&lt;h2&gt;&lt;strong&gt;ವರದಕ್ಷಿಣೆ ಕೊಟ್ರೆ 1 ಲಕ್ಷ ರು. ದಂಡ&lt;/strong&gt;&lt;/h2&gt;&lt;p&gt;ಆಳಂದ ತಾಲೂಕಿನ 52 ತಾಂಡಾಗಳಲ್ಲಿ ವರದಕ್ಷಿಣೆ ರಹಿತ, ಆಚರಣೆ ಸಹಿತ ಮದುವೆಗಳಿಗೆ ಆದ್ಯತೆ ನೀಡುವ ಸತ್ಸಂಕಲ್ಪದೊಂದಿಗೆ ಬಂಜಾರಾ ಕ್ರಾಂತಿ ದಳ ಕೆಲವು ಸೂಚನೆಗಳನ್ನು ಸಮುದಾಯದಲ್ಲಿ ರವಾನಿಸಿದೆ. ತಾಂಡಾಗಳಲ್ಲಿನ ಮದುವೆಗಳಲ್ಲಿ ವರದಕ್ಷಿಣೆ ರೂಪದಲ್ಲಿ ಹಣ, ವಾಹನ, ದುಬಾರಿ ಉಡುಗೊರೆ ನಿಷೇಧ. ಈ ನಿಯಮವನ್ನು ಉಲ್ಲಂಘಿಸಿದರೆ 1 ಲಕ್ಷ ರು.ದಂಡ. ವರದಕ್ಷಿಣೆ ಪಡೆಯುವವರ ಮಾಹಿತಿ ನೀಡುವವರಿಗೆ 15 ಸಾವಿರ ರು. ಬಹುಮಾನ. ಮದುವೆಗಳಲ್ಲಿ ಡಿಜೆ, ಮೈಕ್&zwnj; ಬಳಕೆ, ಮದ್ಯಪಾನ ನಿಷೇಧ. ಸಮುದಾಯದ ಸಾಂಪ್ರದಾಯಿಕ ಆಚರಣೆಗಳಿಗೆ ಪ್ರಥಮ ಆದ್ಯತೆ ಎಂಬ ಸೂಚನೆಗಳನ್ನು ನೀಡಿದೆ.&lt;/p&gt;&lt;h3&gt;&lt;strong&gt;ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಶ್ಲಾಘನೆ&lt;/strong&gt;&lt;/h3&gt;&lt;p&gt;ವರದಕ್ಷಿಣೆ ವಿರುದ್ದ ಆಳಂದ ತಾಂಡಾಗಳಲ್ಲಿ ಜಾಗೃತಿಗೆ ಮುಂದಾಗಿರುವ ಯುವಕರ ಕಾರ್ಯಕ್ಕೆ ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರದಕ್ಷಿಣೆ ಪಿಡುಗಿನ ವಿರುದ್ಧ ಲಂಬಾಣಿ ಸಮುದಾಯ ಕೈಗೊಂಡ ನಿರ್ಧಾರ ಅತ್ಯಂತ ಪ್ರಶಂಸಾರ್ಹ. ಬಂಜಾರಾ ಸಮುದಾಯದಲ್ಲಿ ಮೊದಲು ಸರಳ ವಿವಾಹಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಕಾಲ ಬದಲಾದಂತೆ ಸಮುದಾಯದ ಜನರು ಕೂಡಾ ವರದಕ್ಷಿಣೆ ಕೊಟ್ಟು ಕೊಳ್ಳುವಿಕೆಗೆ ಒಗ್ಗಿಕೊಳ್ಳಬೇಕಾಯಿತು. ಇದರಿಂದಾಗಿ ಸಮುದಾಯದಲ್ಲಿ ಆರ್ಥಿಕವಾಗಿ ದುರ್ಬಲವಾದವರಿಗೆ ಹೊರೆಯಾಗತೊಡಗಿತು. ಈ ಅನಿಷ್ಟ ಪದ್ಧತಿಯಿಂದ ಸಮುದಾಯದ ಜನರ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡ ಬಂಜಾರಾ ಕ್ರಾಂತಿದಳ ಹಾಗೂ ಸೇವಾಲಾಲ್ ಜಯಂತಿ ಸಮಿತಿಯ ಯುವಕರು ತಾಂಡಾಗಳಲ್ಲಿ ವರದಕ್ಷಿಣೆ ವಿರುದ್ದ ಜನಜಾಗೃತ ಮೂಡಿಸುತ್ತಿರೋದು ಉತ್ತಮ ಕೆಲಸವಾಗಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಆಚರಣೆಗೇ ಆದ್ಯತೆ- ಕ್ರಾಂತಿದಳ ಸಂಕಲ್ಪ&lt;/strong&gt;&lt;/h3&gt;&lt;p&gt;ಆಳಂದ ತಾಲೂಕಿನ ಬಂಜಾರಾ ಸಮಾಜದ 52 ತಾಂಡಾಗಳಲ್ಲಿ ವರದಕ್ಷಿಣೆ ಕಡಿವಾಣ ಹಾಕಲು ಬಂಜಾರಾ ಕ್ರಾಂತಿ ದಳ ಮತ್ತು ಸೇವಾಲಾಲ್ ಜಯಂತಿ ಸಮಿತಿ ಜಂಟಿಯಾಗಿ ತಾಂಡಾಗಳಲಿ ಸರಣಿ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಹಿಂದೆಲ್ಲಾ ಲಂಬಾಣಿ ಸಮಾಜದಲ್ಲಿ ವರದಕ್ಷಿಣೆಸ ಡಿಜೆ, ಮೈಕ್&zwnj;, ಮದ್ಯ ಇವೆಲ್ಲ ಇರಲೇ ಇಲ್ಲ. ಅದೇನಿದ್ದರೂ ವಧು- ವರ ಪಕ್ಷದವರಲ್ಲಿ 2 ಅಥವಾ 4 ಎತ್ತುಗಳ ವಿನಿಮಯದೊಂದಿಗೆ ಮದುವೆಯಾಗುತ್ತಿತ್ತು. ಇವತ್ತು ಮದುವೆ ಎಂದರೆ ದುಬಾರಿ 20 ಲಕ್ಷ ರು. ವೆಚ್ಚವಾಗುತ್ತಿದ್ದು ಬಡ, ಮಧ್ಯಮ ಬಂಜಾರಾ ಕುಟುಂಬಗಳ ಪಾಲಿಗೆ ಹಲವು ಸವಾಲುಗಳನ್ನು ತಂದೊಡ್ಡುತ್ತಿದೆ. ಸಮಾಜದ ಬಡವರು ಎದುರಿಸುತ್ತಿರುವ ಇಂತಹ ಸಂಕಷ್ಟಗಳಿಗೆ ಪರಿಹಾರ ರೂಪದಲ್ಲಿ ಜಾಗೃತಿ ಅಭಿಯಾನ ಬಂಜಾರಾ ಕ್ರಾಂತಿದಳ ಹಮ್ಮಿಕೊಂಡಿದೆ.&lt;/p&gt;&lt;p&gt;ಬಂಜಾರಾ ಕ್ರಾಂತಿದಳ ರಾಜ್ಯ ಉಪಾಧ್ಯಕ್ಷ ಗೋವಿಂದರಾಜ್, ಜಿಲ್ಲಾಧ್ಯಕ್ಷ ಅಮರೇಶ ರಾಠೋಡ್ , ಧಾರ್ಮಿಕ ಮುಖಂಡರು ಹಾಗೂ ತಾಂಡಾದ ಕಾರಭಾರಿಗಳು, ಲಂಬಾಣಿ ತರುಣ ಸಂಘದ ಅಧ್ಯಕ್ಷ ಶಿವಾಜಿ ರಾಠೋಡ, ಸಮಾಜ ಮುಖಂಡ ಠಾಕೂರಸಿಂಗ್ ರಾಠೋಡ, ಲಂಬಾಣಿ ವಸತಿ ನಿಲಯ ಅಧ್ಯಕ್ಷ ಗಂಗಾರಾಮ ಪವಾರ, ಶಿವಾಜಿ ರಾಠೋಡ ಹೋದಲೂರ್ ಮುಂದಾಳತ್ವದಲ್ಲಿ ಸೀಡ್ಸ್&zwnj; ಫಾರಂ ತಾಂಡಾ, ನೆಹರು ನಗರ ತಾಂಡಾ, ಹೆಬಳ್ಳಿ ತಾಂಡಾ, ಪಿ.ಎನ್.ತಾಂಡಾ, ಮೋರಿಸಾಬ್ ತಾಂಡಾಗಳಲ್ಲಿ ನಿರಂತರ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.&lt;/p&gt;&lt;p&gt;ವರದಕ್ಷಿಣೆ ರಹಿತ ಸರಳ ವಿವಾಹ, ಶಿಕ್ಷಣ ಸಂಘಟನೆ ಆರ್ಥಿಕ ಸಮಾಜಿಕ ರಾಜಕೀಯವಾಗಿ ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಲಂಬಾಣಿ ಸಮಾಜ ಬಾಂಧವರು ಪರಸ್ಪರ ವಿಶ್ವಾಸ ಮತ್ತು ಸೌಹಾರ್ದ ಬದುಕಿಗೆ ಒಗ್ಗೂಡಬೇಕು. ಸಮುದಾಯದ ತಾಂಡಾಗಳಲ್ಲಿ ಇನ್ನು ಮುಂದೆ ವರದಕ್ಷಿಣೆ ಪಡೆಯುವುದು ಅಥವಾ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆಳಂದದಲ್ಲಿರುವ ಬಂಜಾರಾ ಭವನದಲ್ಲಿ ಅಖಿಲ ಭಾರತ ಬಂಜಾರಾ ಸೇವಾ ಸಂಘ ಹಾಗೂ ಬಂಜಾರಾ ಕ್ರಾಂತಿ ದಳ, ಸೇವಾಲಾಲ ಜಯಂತಿ ಸಮೀತಿ ಸಭೆಯಲ್ಲಿ ಈ ಕ್ರಾಂತಿಕಾರಿ ತೀರ್ಮಾನಕ್ಕೆ ಒಮ್ಮತ ವ್ಯಕ್ತವಾಗಿದೆ ಎಂದು ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ್&zwnj; ಹೇಳುತ್ತಾರೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಪದ್ಧತಿಯಿಂದಾಗಿ ಲಂಬಾಣಿ ತಾಂಡಾದ ಬಡ ಕುಟುಂಬಗಳು ಅನುಭವಿಸುತ್ತಿರುವ ಸಂಕಷ್ಟ ಹತ್ತಿರದಿಂದ ನೋಡುತ್ತಿದ್ದೇವೆ. ಜೊತೆಗೇ ಸಂಪ್ರದಾಯ, ಆಚರಣೆಗಳಲ್ಲಿ ಮುಖ್ಯವಾದವು ಮಾಯವಾಗಿ ನೈತಿಕ ಮೌಲ್ಯಗಳ ಕುಸಿತವಾಗುತ್ತಿರೋದನ್ನ ತಡೆಗಟ್ಟಲು ಈ ಜಾಗೃತಿ ಅಭಿಯಾನವನ್ನು ತೀವ್ರಗೊಳಿಸಲಾಗಿದೆ ಎಂದು ಬಂಜಾರಾ ಕ್ರಾಂತಿ ದಳದ ಆಳಂದ ತಾಲೂಕು ಘಟಕ ಅಧ್ಯಕ್ಷ ವೆಂಕಟೇಶ ರಾಠೋಡ್ ಹೇಳಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburgi-rs-1-lakh-fine-for-giving-dowry-in-aland-taluk-s-lambani-tanda-mrq/articleshow-0aio4am"/>
        </item>
        <item>
            <title><![CDATA[ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್:  6 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!]]></title>
            <link>https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</link>
            <guid isPermaLink="true">https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</guid>
            <pubDate>Wed, 08 Jul 2026 11:25:56 +0530</pubDate>
            <description><![CDATA[ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಮೆಗಾ ಆಪರೇಷನ್&zwnj;ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx04edrp64anbam01r602epp,imgname-lokayukta-raids-in-across-karnataka-1783489836822.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿದಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಇಂದು ಮುಂಜಾನೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನೂರಾರು ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಈ ಮೆಗಾ ಆಪರೇಷನ್ ಕೈಗೊಂಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;ಧಾರವಾಡ ಮತ್ತು ಶಿವಮೊಗ್ಗ: ಎಸಿಎಫ್ ಕಿರಣ್ ಅಂಗಡಿಗೆ ಶಾಕ್!&lt;/h2&gt;&lt;p&gt;ಶಿವಮೊಗ್ಗದ ಅರಣ್ಯ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಗಿ ಸೇವೆ ಸಲ್ಲಿಸುತ್ತಿರುವ ಕಿರಣ್ ಅಂಗಡಿ ಅವರಿಗೆ ಸೇರಿದ ಧಾರವಾಡ ಮತ್ತು ಶಿವಮೊಗ್ಗದ ಒಟ್ಟು ೫ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಧಾರವಾಡದ ಲೋಕಾ ಎಸ್ಪಿ ಸಿದ್ದಲಿಂಗಪ್ಪ ಹಾಗೂ ಶಿವಮೊಗ್ಗದ ಲೋಕಾಯುಕ್ತ ಇನ್&zwnj;ಸ್ಪೆಕ್ಟರ್ ವೀರಬಸಪ್ಪ ಕುಶಲಾಪೂರ ಮತ್ತು ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರುವ ಐಷಾರಾಮಿ ಮನೆ, ಅಳ್ನಾವರ ರಸ್ತೆಯಲ್ಲಿರುವ ಫಾರ್ಮ್ ಹೌಸ್, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪತ್ನಿಯ ಹೆಸರಿನಲ್ಲಿದೆ ಎನ್ನಲಾದ ಉದ್ಯಮ) ಹಾಗೂ ಅವರ ಸೋದರ ಮಾವನ ಮನೆಗಳ ಮೇಲೆ ಶೋಧ ನಡೆಸಲಾಗುತ್ತಿದೆ.&lt;/p&gt;&lt;h2&gt;ಶಿವಮೊಗ್ಗದ ಕಚೇರಿ ಮೇಲೂ ದಾಳಿ&lt;/h2&gt;&lt;p&gt;ಇತ್ತ ಶಿವಮೊಗ್ಗದ ಆಲ್ಕೋಳ ರಸ್ತೆಯಲ್ಲಿರುವ ಕಿರಣ್ ಅಂಗಡಿ ಅವರ ಅರಣ್ಯ ಸಂಶೋಧನಾ ಕಚೇರಿಯ ಮೇಲೂ ಲೋಕಾಯುಕ್ತ ತಂಡ ತಪಾಸಣೆ ನಡೆಸುತ್ತಿದೆ. ದಾಳಿಯ ವೇಳೆ ಅಧಿಕಾರಿ ಕಿರಣ್ ಅಂಗಡಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಐದು ಜನರ ಅಧಿಕಾರಿಗಳ ತಂಡ ಸದ್ಯ ದಾಖಲೆಗಳನ್ನು ಜಾಲಾಡುತ್ತಿದೆ.&lt;/p&gt;&lt;h2&gt;ರಾಯಚೂರು: ಕೆಬಿಜೆಎನ್&zwnj;ಎಲ್ ಇಇ ಬಸನಗೌಡಗೆ ಸೇರಿದ 7 ಕಡೆ ದಾಳಿ&lt;/h2&gt;&lt;p&gt;ರಾಯಚೂರಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಕಾರ್ಯನಿರ್ವಾಹಕ ಇಂಜಿನಿಯರ್ (EE) ಬಸನಗೌಡ ಅವರ ವಿರುದ್ಧ ಲೋಕಾಯುಕ್ತರು ತನಿಖೆ ತೀವ್ರಗೊಳಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ 7 ಪ್ರತ್ಯೇಕ ತಂಡಗಳು ಏಕಕಾಲದಲ್ಲಿ 7 ಕಡೆ ಧಾಳಿ ನಡೆಸಿವೆ. ಬಸನಗೌಡ ಅವರ ರಾಯಚೂರು ನಗರದ ಎಚ್.ಆರ್.ಬಿ ಲೇಔಟ್&zwnj;ನಲ್ಲಿರುವ ಮನೆ, ಯಕ್ಲಾಸಪುರದ ಸೆಲೆಬ್ರಿಟಿ ಗಾರ್ಡನ್&zwnj;ನಲ್ಲಿರುವ ಅಣ್ಣನ ಮನೆ ಹಾಗೂ ಯಕ್ಲಾಪುರದ ತೋಟದ ಮನೆಯಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ.&lt;/p&gt;&lt;h2&gt;ಬಾರ್ ಮತ್ತು ಪೆಟ್ರೋಲ್ ಬಂಕ್ ಪತ್ತೆ&lt;/h2&gt;&lt;p&gt;ಬಸನಗೌಡ ಅವರ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ನಾಯರಾ ಪೆಟ್ರೋಲ್ ಬಂಕ್, ಅದರ ಪಕ್ಕದಲ್ಲೇ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಗೋದಾಮಿನ (Warehouse) ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ದೇವದುರ್ಗ ತಾಲೂಕಿನ ಚಿಕ್ಕ ಹೊನ್ನಕುಣಿ ವ್ಯಾಪ್ತಿಯ ಕೆಬಿಜೆಎನ್&zwnj;ಎಲ್ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.&lt;/p&gt;&lt;h2&gt;ಚಿತ್ರದುರ್ಗ ಆರ್&zwnj;ಎಫ್&zwnj;ಒ ಮತ್ತು ಪ್ರೊಫೆಸರ್ ಮನೆಗೆ ಅಧಿಕಾರಿಗಳ ಎಂಟ್ರಿ&lt;/h2&gt;&lt;p&gt;ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇಬ್ಬರು ಪ್ರಮುಖ ಅಧಿಕಾರಿಗಳ ಆಸ್ತಿಪಾಸ್ತಿಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿದೆ. ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿರುವ ವಲಯ ಅರಣ್ಯಾಧಿಕಾರಿ (RFO) ದುಗ್ಗಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರೊಫೆಸರ್ ಶಂಕರ್ ಅವರ ಮನೆ ಹಾಗೂ ತೋಟದ ಮೇಲೂ ಲೋಕಾಯುಕ್ತರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.&lt;/p&gt;&lt;h2&gt;ಕಲಬುರಗಿ ಜೇಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಫ್ಲ್ಯಾಟ್ ಮೇಲೆ ದಾಳಿ&lt;/h2&gt;&lt;p&gt;ಕಲಬುರಗಿಯಲ್ಲಿ ಜೆಸ್ಕಾಂ (GESCOM) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಅಮೃತರಾವ್ ಯಲಾಲ್ ಅವರಿಗೆ ಸೇರಿದ ಕಚೇರಿ ಹಾಗೂ ಮನೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ ತಂಡ ದಾಳಿ ಮಾಡಿದೆ. ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿರುವ ನಿವಾಸ, ಬಸವ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಫ್ಲ್ಯಾಟ್, ಮತ್ತು ಕೊತ್ತಂಬರಿ ಲೇಔಟ್&zwnj;ನಲ್ಲಿರುವ ಜೇಸ್ಕಾಂ ಕಚೇರಿಗಳ ಮೇಲೆ ದಾಳಿಯಾಗಿದೆ. ಇದಲ್ಲದೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮನೆಯ ಮೇಲೂ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಎಇಇ ಅಮೃತರಾವ್ ಅವರು ಜಾಗೃತಿ ಕಾಲೋನಿಯಲ್ಲಿ 'ಪ್ಲಾಟಿನಂ ಸ್ಟುಡಿಯೋ' ಎಂಬ ಹೈಟೆಕ್ ಸ್ಟುಡಿಯೋ ಹೊಂದಿದ್ದು, ನಂದೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫ್ಲ್ಯಾಟ್ ಹಾಗೂ ವಿವಿಧೆಡೆ 20 ಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;ತುಮಕೂರು ಸಣ್ಣ ನೀರಾವರಿ ಇಲಾಖೆ ಎಇಇ ಮನೆ ಮೇಲೆ ಲೋಕಾ ದಾಳಿ&lt;/h2&gt;&lt;p&gt;ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇ ಆಗಿರುವ ಮಧುಸೂದನ್ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಮಧುಸೂದನ್ ಮನೆ. ಸಣ್ಣ ನೀರಾವರಿ ಇಲಾಖೆ ತಿಪಟೂರು ಉಪವಿಭಾಗದಲ್ಲಿ ಎಇಇ ಆಗಿ ಕೆಲಸ ಮಾಡುತ್ತಿರುವ ಮಧುಸೂದನ್ ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಲೋಕಾ ದಾಳಿ. ಮಧುಸೂದನ್ ಮನೆಯನ್ನ ಪರಿಶೀಲನೆ ನಡೆಸುತ್ತಿರುವ ಲೋಕಾ ಟೀಮ್. ಸದ್ಯ ಎಲ್ಲಾ ಕಡೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ಚಿನ್ನಾಭರಣ, ನಗದು ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಬೇಕಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet"/>
        </item>
        <item>
            <title><![CDATA[Kalaburagi PSI Death: ಗೃಹ ಸಚಿವರ ತವರಲ್ಲಿ ಪಿಎಸ್‌ಐ ಬಸವರಾಜ್ ಆತ್ಮ*ಹತ್ಯೆ ಹಿಂದಿದೆಯೇ ನಿಗೂಢ ರಹಸ್ಯ?]]></title>
            <link>https://kannada.asianetnews.com/gallery/karnataka-districts/karnataka-police-psi-basavaraj-herur-kalaburagi-station-death-native-of-home-minister-2oe6hfk</link>
            <guid isPermaLink="true">https://kannada.asianetnews.com/gallery/karnataka-districts/karnataka-police-psi-basavaraj-herur-kalaburagi-station-death-native-of-home-minister-2oe6hfk</guid>
            <pubDate>Wed, 17 Jun 2026 17:05:30 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ ಡಿಜಿಆರ್&zwnj;ಬಿ ಘಟಕದ ಪಿಎಸ್&zwnj;ಐ ಬಸವರಾಜ್ ಹೇರೂರ್ (PSI Basavaraj Herur) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಪದೋನ್ನತಿ ಹೊಂದಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಹೊಟ್ಟೆನೋವು ಎಂದು ಹೇಳಲಾಗುತ್ತಿದ್ದರೂ, ವೃತ್ತಿ ಒತ್ತಡದ ಶಂಕೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvan3xdg949qp18d8r9vr96f,imgname-kalaburagi-psi-basavaraj-death-1781695378864.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿಯಲ್ಲಿ ಡಿಜಿಆರ್&zwnj;ಬಿ ಘಟಕದ ಪಿಎಸ್&zwnj;ಐ ಬಸವರಾಜ್ ಹೇರೂರ್ (PSI Basavaraj Herur) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಪದೋನ್ನತಿ ಹೊಂದಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಹೊಟ್ಟೆನೋವು ಎಂದು ಹೇಳಲಾಗುತ್ತಿದ್ದರೂ, ವೃತ್ತಿ ಒತ್ತಡದ ಶಂಕೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಕಲಬುರಗಿ (ಜೂ.17): ನ್ಯಾ&lt;/strong&gt;ಯ ಕೊಡಿಸಬೇಕಾದ ಪೊಲೀಸ್ ಅಧಿಕಾರಿಯೇ ಸಾವಿನ ಹಾದಿ ಹಿಡಿದಿರುವ ಆಘಾತಕಾರಿ ಘಟನೆ ರಾಜ್ಯದ ಗೃಹ ಸಚಿವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆಯ ಡಿಜಿಆರ್&zwnj;ಬಿ (DCRB) ಘಟಕದಲ್ಲಿ ಪಿಎಸ್&zwnj;ಐ ಆಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್ ಹೇರೂರ್ (42) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಂಡು ಸಾವಿಗೆ ಶರಣಾಗಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯಲ್ಲಿ ನಡೆದಿದ್ದೇನು?&lt;/strong&gt;&lt;/p&gt;&lt;p&gt;ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಲೂರ ಗ್ರಾಮದವರಾದ ಬಸವರಾಜ್ ಹೇರೂರ್, ಇತ್ತೀಚೆಗಷ್ಟೇ ಪಿಎಸ್&zwnj;ಐ ಆಗಿ ಪದೋನ್ನತಿ ಹೊಂದಿದ್ದರು. ಎಂದಿನಂತೆ ರಾತ್ರಿ ಕರ್ತವ್ಯ ಮುಗಿಸಿ ಕಲಬುರಗಿ ನಗರದ ಗಂಗಾ ನಗರ ಬಡಾವಣೆಯಲ್ಲಿರುವ ತಮ್ಮ ಮನೆಗೆ ಬಂದಿದ್ದರು. ತಡರಾತ್ರಿ ಹಠಾತ್ ಆಗಿ ತಮ್ಮ ಸ್ನೇಹಿತರಿಗೆ ಕರೆ ಮಾಡಿದ ಬಸವರಾಜ್, 'ನಾನು ಆತ್ಮಹ*ತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಗಾಬರಿಗೊಂಡ ಸ್ನೇಹಿತರು ಕೂಡಲೇ ಬಸವರಾಜ್ ತಂದೆ ಶಾಂತಪ್ಪ ಅವರಿಗೆ ವಿಷಯ ಮುಟ್ಟಿಸಿದ್ದಾರೆ.&lt;/p&gt;&lt;p&gt;ತಂದೆ ಶಾಂತಪ್ಪ ಮಗನ ಕೋಣೆಯ ಬಳಿ ಹೋದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಕರೆದರೂ ಓಗೊಡದಿದ್ದಾಗ, ಕಬ್ಬಿಣದ ರಾಡ್&zwnj;ನಿಂದ ಬಾಗಿಲು ಒಡೆದು ಒಳಹೋಗಿದ್ದಾರೆ. ಆದರೆ ಅಷ್ಟರಲ್ಲೇ ಕಾಲ ಮಿಂಚಿಹೋಗಿತ್ತು. ಬಸವರಾಜ್ ಪತ್ನಿಯ ಸೀರೆಯಿಂದ ಫ್ಯಾನ್&zwnj;ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದರು.&lt;/p&gt;&lt;img&gt;&lt;p&gt;&lt;strong&gt;ವೃತ್ತಿ ಜೀವನ ಮತ್ತು ಹಿನ್ನೆಲೆ:&lt;/strong&gt;&lt;/p&gt;&lt;p&gt;2014ರ ಬ್ಯಾಚ್&zwnj;ನ ಪೊಲೀಸ್ ಅಧಿಕಾರಿಯಾದ ಬಸವರಾಜ್, ಈ ಹಿಂದೆ ಹುಮನಾಬಾದ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಕ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಘಟನೆ ನಡೆದ ಸಮಯದಲ್ಲಿ ಪತ್ನಿ ಮತ್ತು ಮಕ್ಕಳು ತವರು ಮನೆಗೆ ಹೋಗಿದ್ದರು ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಸಾವಿನ ಸುತ್ತ ಅನುಮಾನದ ಹುತ್ತ:&lt;/strong&gt;&lt;/p&gt;&lt;p&gt;ಬಸವರಾಜ್ ಅವರ ಈ ನಿರ್ಧಾರಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಂದೆ ಶಾಂತಪ್ಪ ಅವರ ಪ್ರಕಾರ, ಬಸವರಾಜ್&zwnj;ಗೆ ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವು ಇತ್ತು. ಅಲ್ಲದೆ ಅವರು ಆಗಾಗ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಒಬ್ಬ ಪೊಲೀಸ್ ಅಧಿಕಾರಿಯಾಗಿ ಕೇವಲ ಹೊಟ್ಟೆ ನೋವಿನ ಕಾರಣಕ್ಕೆ ಆತ್ಮ*ಹ*ತ್ಯೆ ಮಾಡಿಕೊಂಡರಾ ಅಥವಾ ಇದರ ಹಿಂದೆ ವೃತ್ತಿ ಜೀವನದ ಒತ್ತಡ ಅಥವಾ ಬೇರೆನಾದರೂ ಕಾರಣಗಳಿವೆಯೇ ಎಂಬ ಪ್ರಶ್ನೆ ಮೂಡಿದೆ.&lt;/p&gt;&lt;img&gt;&lt;p&gt;ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಲಬುರಗಿಯ ಆರ್&zwnj;ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಯೊಬ್ಬರ ಈ ಸಾವು ಇಡೀ ಜಿಲ್ಲೆಯನ್ನು ಕಂಬನಿ ಮಿಡಿಯುವಂತೆ ಮಾಡಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/karnataka-police-psi-basavaraj-herur-kalaburagi-station-death-native-of-home-minister-2oe6hfk"/>
        </item>
        <item>
            <title><![CDATA[ಗೃಹ ಸಚಿವರ ತವರು ಜಿಲ್ಲೆ ಕಲಬುರಗಿಯ ಸೆಂಟ್ರಲ್ ಜೈಲ್‌ನಿಂದ 3 ಕೈದಿಗಳು ಪರಾರಿ: ಖಾಕಿ ಶೋಧ]]></title>
            <link>https://kannada.asianetnews.com/karnataka-districts/3-prisoners-escape-from-kalaburagi-central-jail-police-searching-rav/articleshow-5krft79</link>
            <guid isPermaLink="true">https://kannada.asianetnews.com/karnataka-districts/3-prisoners-escape-from-kalaburagi-central-jail-police-searching-rav/articleshow-5krft79</guid>
            <pubDate>Wed, 15 Jul 2026 05:25:04 +0530</pubDate>
            <description><![CDATA[&lt;p&gt;3 prisoners escape from Kalaburagi Central Jail ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಮೂವರು ಕೈದಿಗಳು ಪರಾರಿಯಾಗಿರುವ ಘಟನೆ ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxhgj171b2174a4s0jdng154,imgname-----------------------2026-07-15t051909.037-1784072963296.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ನಿನ್ನೆ ಮುಂಜಾನೆ ಜೈಲಿನ ಗೋಡೆ ಹಾರಿ ಎಸ್ಕೇಪ್&lt;/li&gt; &lt;li&gt;ಕೊಲೆ ಕೇಸ್&zwnj;ನಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಗಳು&lt;/li&gt;&lt;/ul&gt;&lt;p&gt;&lt;strong&gt;ಕಲಬುರಗಿ (ಜು.15) &lt;/strong&gt;ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಮೂವರು ಕೈದಿಗಳು ಪರಾರಿಯಾಗಿರುವ ಘಟನೆ ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.&lt;/p&gt;&lt;h2&gt;ಪರಾರಿಯಾದ ಕೈದಿಗಳು ಯಾರು?&lt;/h2&gt;&lt;p&gt;ಪರಾರಿಯಾದ ಕೈದಿಗಳನ್ನು ಬೀದರ್&zwnj; ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಇಸ್ಲಾಂಪುರದ ಮಸ್ತಾನ್, ಔರಾದ್ ತಾಲೂಕಿನ ಸಂತಾಪುರ ಗ್ರಾಮದ ಸಂತೋಷ ಬಸಪ್ಪ ಹಾಗೂ ಬೀದರ್&zwnj; ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ ಭೀಮರಾಯ ಎಂದು ಗುರುತಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಐದೇ ವರ್ಷದಲ್ಲಿ ಯಾದಗಿರಿಯ 16116 ಗರ್ಭಗಳೇ ನಾಪತ್ತೆ! - ಗರ್ಭ ಧರಿಸಿದ್ದವರಿಗೆ ಹೆರಿಗೆಯಾಯಿತೆ? ಗರ್ಭಪಾತವಾಯಿತೆ? ಲೆಕ್ಕವೇ ಇಲ್ಲ&lt;/p&gt;&lt;h3&gt;ಎಸ್ಕೇಪ್ ಆಗಿದ್ದು ಹೇಗೆ?&lt;/h3&gt;&lt;p&gt;ಪ್ರಾಥಮಿಕ ಮಾಹಿತಿಯ ಪ್ರಕಾರ, ಕೈದಿಗಳು ಜೈಲಿನ ಭದ್ರತಾ ಗೋಡೆ ಹಾರಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಜೈಲು ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;ಈ ಘಟನೆ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪರಾರಿಯಾದ ಕೈದಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಹಾಗೂ ಗಡಿ ಭಾಗಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಕೈದಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.&lt;/p&gt;&lt;p&gt;&lt;strong&gt;ಗೃಹ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ಕೃತ್ಯ!&lt;/strong&gt;&lt;/p&gt;&lt;p&gt;ಸ್ವತಃ ಗೃಹ ಸಚಿವರ ತವರಿನಲ್ಲೇ ಇಂತಹ ಲೋಪ ಆಗಿರುವುದು ಇದು ಎರಡನೇ ಬಾರಿ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/3-prisoners-escape-from-kalaburagi-central-jail-police-searching-rav/articleshow-5krft79"/>
        </item>
        <item>
            <title><![CDATA[ಕಲ್ಯಾಣ 'ಕಾಣದ' ಕರ್ನಾಟಕ ವಾಸ್ತವ ಸ್ಥಿತಿ ಇಲ್ಲಿದೆ ನೋಡಿ; ಮೊಬೈಲ್ ಬೆಳಕಿನಲ್ಲಿ ಕೆಕೆಆರ್‌ಟಿಸಿ ಬಸ್ ಪ್ರಯಾಣ!]]></title>
            <link>https://kannada.asianetnews.com/karnataka-districts/kkrtc-bus-driver-uses-mobile-torch-as-headlight-kalaburagi-incident-safety-lapse-in-karnataka/articleshow-6etmetv</link>
            <guid isPermaLink="true">https://kannada.asianetnews.com/karnataka-districts/kkrtc-bus-driver-uses-mobile-torch-as-headlight-kalaburagi-incident-safety-lapse-in-karnataka/articleshow-6etmetv</guid>
            <pubDate>Sun, 05 Jul 2026 18:41:48 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ, ಕೆಕೆಆರ್&zwnj;ಟಿಸಿ ಬಸ್ಸೊಂದರ ಹೆಡ್&zwnj;ಲೈಟ್ ಕೆಟ್ಟುಹೋದಾಗ, ನಿರ್ವಾಹಕ ಮೊಬೈಲ್ ಟಾರ್ಚ್ ಹಿಡಿದು ದಾರಿ ತೋರಿಸುತ್ತಿದ್ದರೆ, ಚಾಲಕ ಕತ್ತಲಲ್ಲೇ ಬಸ್ ಚಲಾಯಿಸಿ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ. ಈ ಘಟನೆಯು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kws68x9ypm69ks1ejwgnhrj6,imgname-kkrtc-bus-headlight-damage-1783256872253.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಜು.05): ಕ&lt;/strong&gt;ರ್ನಾಟಕದ ಸಾರಿಗೆ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಈ ಘಟನೆ ಒಂದು ಕನ್ನಡಿ ಹಿಡಿದಂತಿದೆ. ಬಸ್ಸಿನ ಹೆಡ್&zwnj;ಲೈಟ್ ಕೆಟ್ಟುಹೋಗಿದ್ದರೂ, ಕಂಡಕ್ಟರ್ ಮೊಬೈಲ್ ಫೋನ್ ಟಾರ್ಚ್ ಹಿಡಿದು ದಾರಿ ತೋರಿಸುತ್ತಿದ್ದರೆ, ಚಾಲಕ ಕತ್ತಲಲ್ಲೇ ಬಸ್ ಚಲಾಯಿಸಿರುವ ಭೀಕರ ಘಟನೆ ಕಲಬುರಗಿಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಕಲಬುರಗಿಯಿಂದ ಚಿಂಚೋಳಿ ಮಾರ್ಗವಾಗಿ ಸಂಚರಿಸುತ್ತಿದ್ದ &lt;strong&gt;KA-28 F-1985 ನೋಂದಣಿ ಸಂಖ್ಯೆ&lt;/strong&gt;ಯ ಕೆಕೆಆರ್&zwnj;ಟಿಸಿ (KKRTC) ಬಸ್ಸಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್ಸಿನ ಹೆಡ್&zwnj;ಲೈಟ್&zwnj;ಗಳು ಸಂಪೂರ್ಣವಾಗಿ ಕೆಟ್ಟುಹೋಗಿದ್ದವು. ಆದರೆ, ಬಸ್ಸನ್ನು ರಸ್ತೆಯಲ್ಲೇ ನಿಲ್ಲಿಸುವ ಬದಲು ಅಥವಾ ಬದಲಿ ವ್ಯವಸ್ಥೆ ಮಾಡುವ ಬದಲು, ಚಾಲಕ ಮತ್ತು ಕಂಡಕ್ಟರ್ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ. ಕಂಡಕ್ಟರ್ ಬಸ್ಸಿನ ಮುಂದಿನ ಕಿಟಕಿಯಿಂದ ಮೊಬೈಲ್ ಫೋನ್ ಫ್ಲಾಶ್ ಲೈಟ್ ಆನ್ ಮಾಡಿ ದಾರಿ ತೋರಿಸುತ್ತಿದ್ದರೆ, ಚಾಲಕ ಬಸ್ ಓಡಿಸುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರ ಆಕ್ರೋಶ:&lt;/strong&gt;&lt;/h2&gt;&lt;p&gt;'ಇದು ಸರ್ಕಾರದ ಹೊಸ ಹೆಡ್&zwnj;ಲೈಟ್ ತಂತ್ರಜ್ಞಾನವೇ?' ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಹೆಡ್&zwnj;ಲೈಟ್ ಇಲ್ಲದ ಬಸ್ಸನ್ನು ರಸ್ತೆಗೆ ಬಿಟ್ಟಿದ್ದು ಯಾರು? ಫಿಟ್&zwnj;ನೆಸ್ ಸರ್ಟಿಫಿಕೇಟ್ ನೀಡಿದವರು ಯಾರು? ಎಂಬ ಪ್ರಶ್ನೆಗಳು ಎದ್ದಿವೆ. ಸಾಮಾನ್ಯ ನಾಗರಿಕರು ತಮ್ಮ ಖಾಸಗಿ ವಾಹನದಲ್ಲಿ ಸಣ್ಣ ತಪ್ಪು ಮಾಡಿದರೂ ದಂಡ ವಿಧಿಸುವ ಸಾರಿಗೆ ಇಲಾಖೆ, ಸರ್ಕಾರಿ ಬಸ್&zwnj;ಗಳ ಈ ಭೀಕರ ನಿರ್ಲಕ್ಷ್ಯಕ್ಕೆ ಏನು ಹೇಳುತ್ತದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಶಕ್ತಿ ಯೋಜನೆ ಮತ್ತು ನಿರ್ವಹಣಾ ಕೊರತೆ:&lt;/strong&gt;&lt;/h2&gt;&lt;p&gt;ಈ ಘಟನೆಯು ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಆರ್ಥಿಕ ಸಂಕಷ್ಟವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳಿಗೆ ಬರಬೇಕಾದ ಸುಮಾರು 4,573 ಕೋಟಿ ರೂಪಾಯಿ ಅನುದಾನ ಬಾಕಿ ಇದೆ ಎಂದು ವರದಿಯಾಗಿದೆ. ಹಣದ ಕೊರತೆಯಿಂದಾಗಿ ಹಳೆಯ ಬಸ್&zwnj;ಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲವೇ? ಪ್ರಯಾಣಿಕರ ಸುರಕ್ಷತೆಯನ್ನು ಗಾಳಿಗೆ ತೂರಿ ಬಸ್&zwnj;ಗಳನ್ನು ಓಡಿಸಲಾಗುತ್ತಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ.&lt;/p&gt;&lt;h2&gt;&lt;strong&gt;ಪ್ರಯಾಣಿಕರ ಜೀವಕ್ಕೆ ಬೆಲೆ ಇಲ್ಲವೇ?&lt;/strong&gt;&lt;/h2&gt;&lt;p&gt;ಹೆಡ್&zwnj;ಲೈಟ್ ಇಲ್ಲದ ಬಸ್ಸನ್ನು ರಾತ್ರಿ ಸಮಯದಲ್ಲಿ ಓಡಿಸುವುದು ಕೇವಲ ನಿಯಮದ ಉಲ್ಲಂಘನೆಯಲ್ಲ, ಬದಲಾಗಿ ಅದೊಂದು ಆತ್ಮಹತ್ಯಾಕಾರಿ ನಿರ್ಧಾರ. ಬಸ್ಸಿನಲ್ಲಿದ್ದ ಪ್ರಯಾಣಿಕರು, ರಸ್ತೆಯಲ್ಲಿ ಬರುವ ಇತರ ವಾಹನ ಸವಾರರು ಈ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಸಾರಿಗೆ ಇಲಾಖೆ ಕೂಡಲೇ ಈ ಬಸ್ಸಿನ ಚಾಲಕ, ನಿರ್ವಾಹಕ ಮತ್ತು ಬಸ್ಸಿನ ನಿರ್ವಹಣೆಯ ಜವಾಬ್ದಾರಿ ಹೊತ್ತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Is this Karnataka's Government New 'Headlight Technology' ?? A Conductor's Mobile Phone?&amp;nbsp;Is this what public transport has come to? A government bus was allegedly seen operating without a working headlight, with the driver forced to drive in the dark while the conductor used a&hellip; pic.twitter.com/u1lSTLe71Q&lt;/p&gt;&lt;p&gt;&mdash; Karnataka Portfolio (@karnatakaportf) July 5, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kkrtc-bus-driver-uses-mobile-torch-as-headlight-kalaburagi-incident-safety-lapse-in-karnataka/articleshow-6etmetv"/>
        </item>
        <item>
            <title><![CDATA[ಅನ್ನದಾತರಿಗೆ ಡಿಕೆಶಿಯಿಂದ ಗುಡ್‌ನ್ಯೂಸ್.. ಸಾಲ ಮನ್ನದ ಬಗ್ಗೆ ಮಹತ್ವದ ಸುಳಿವು ನೀಡಿದ ಸಿಎಂ]]></title>
            <link>https://kannada.asianetnews.com/karnataka-districts/good-news-for-karnataka-farmers-cm-dk-shivakumar-statement-about-loan-waivers-gkn/articleshow-7hiogzy</link>
            <guid isPermaLink="true">https://kannada.asianetnews.com/karnataka-districts/good-news-for-karnataka-farmers-cm-dk-shivakumar-statement-about-loan-waivers-gkn/articleshow-7hiogzy</guid>
            <pubDate>Tue, 07 Jul 2026 13:29:35 +0530</pubDate>
            <description><![CDATA[&lt;p&gt;ರಾಜ್ಯದ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಹೆಚ್ಚಾಗಿದೆ. ಕಲಬುರಗಿಯಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತು ಸಿಎಂ ಡಿಕೆ ಶಿವಕುಮಾರ್ ಅವರು ಮಾತನ್ನಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡ್ತೀವಿ ಎಂದಷ್ಟೇ ಹೇಳಿದ್ದರೂ, ಅನ್ನದಾತರಿಗೆ ಸರ್ಕಾರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxsd81ztn02rk7vmvy3g7at,imgname-farmers-loan-waiver-1783411155007.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರಗಾಲದ ಕರಿನೆರಳು ಆವರಿಸಿದೆ. ಮಳೆ ಬಾರದೆ &amp;nbsp;ಕಂಗಾಲಾಗಿರುವ ರೈತರ ನೋವಿಗೆ ಸ್ಪಂದಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಕಲಬುರಗಿಯಲ್ಲಿ ಬಿಡುವಿಲ್ಲದ ಪ್ರವಾಸ ಕೈಗೊಂಡಿದ್ದಾರೆ. ಜನರ ಅಹವಾಲು ಸ್ವೀಕರಿಸುವ ವೇಳೆ ಸಿಎಂ, ನೀಡಿದ ಒಂದು ಭರವಸೆ ಈಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;h2&gt;&lt;strong&gt;ಕೂಲ್ ಆಗಿಯೇ ಉತ್ತರಿಸಿದ ಸಿಎಂ!&lt;/strong&gt;&lt;/h2&gt;&lt;p&gt;ಅಹವಾಲು ಸ್ವೀಕಾರದ ವೇಳೆ ಒಂದು ನಾಟಕೀಯ ಘಟನೆ ನಡೆಯಿತು. ವ್ಯಕ್ತಿಯೊಬ್ಬರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ ಎದೆ ಬಡಿದುಕೊಂಡು ಸಿಎಂ ಎದುರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಳೆ ವಿಮೆ ಬಿಡುಗಡೆ ಮಾಡಿ, ರೈತರ ಸಾಲ ಮನ್ನಾ ಮಾಡಿ ಹಾಗೂ ನಿವೇಶನ ನೀಡಿ ಎಂದು ಕೂಗಾಡಿದರು. ಈ ವೇಳೆ ಗಾಬರಿಯಾಗದ ಡಿ.ಕೆ.ಶಿವಕುಮಾರ್ ಅವರು ಅತ್ಯಂತ ತಾಳ್ಮೆಯಿಂದ ಅಹವಾಲು ಕೊಡಿ, ಖಂಡಿತಾ ಪರಿಶೀಲನೆ ನಡೆಸುತ್ತೇನೆ ಎಂದು ಹೇಳುವ ಮೂಲಕ ಆಕ್ರೋಶಗೊಂಡಿದ್ದ ವ್ಯಕ್ತಿಯನ್ನು ಶಾಂತಗೊಳಿಸಿದರು.&lt;/p&gt;&lt;p&gt;&lt;strong&gt;ರೈತರ ಸಾಲ ಮನ್ನಾ ಆಗುತ್ತಾ?&lt;/strong&gt;&lt;/p&gt;&lt;p&gt;ಬರಗಾಲ ಮತ್ತು ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಆಶಾದಾಯಕ ಮಾತುಗಳನ್ನಾಡಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ. ಯಾರ ಸಾಲ? ಯಾವ ರೀತಿಯ ಸಾಲ? ಎಷ್ಟು ಮೊತ್ತದ ಸಾಲ? ಎಂಬ ಎಲ್ಲ ವಿವರಗಳನ್ನು ಪಡೆದು ಸಮಗ್ರವಾಗಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಈ ಹೇಳಿಕೆಯು ಸಾಲಬಾಧೆಯಲ್ಲಿರುವ ಅನ್ನದಾತನಿಗೆ ಸದ್ಯದಲ್ಲೇ ಸಿಹಿ ಸುದ್ದಿ ಸಿಗಬಹುದು ಎಂಬ ನಿರೀಕ್ಷೆ ಮೂಡಿಸಿದೆ.&lt;/p&gt;&lt;h3&gt;&lt;strong&gt;ಕಬ್ಬು ಕೊಟ್ಟು ಮನವಿ ಮಾಡಿದ ರೈತರು!&lt;/strong&gt;&lt;/h3&gt;&lt;p&gt;ಇದೇ ವೇಳೆ ರೈತರು ಸಿಎಂಗೆ ಕಬ್ಬಿನ ಜಲ್ಲೆಗಳನ್ನು ನೀಡುವ ಮೂಲಕ ವಿಭಿನ್ನವಾಗಿ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿ, ಉಜನಿ ಜಲಾಶಯದಿಂದ ನೀರು ಬಿಡಿಸಿ ಹಾಗೂ ಕಬ್ಬಿನ ದರವನ್ನು ತಕ್ಷಣವೇ ಹೆಚ್ಚಳ ಮಾಡಿ ಎಂದು ಒತ್ತಾಯಿಸಿದರು. ಕಲ್ಯಾಣ ಕರ್ನಾಟಕದ ರೈತರ ಸಂಕಷ್ಟವನ್ನು ಆಲಿಸಿದ ಸಿಎಂ, ಎಲ್ಲವನ್ನೂ ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.&lt;/p&gt;&lt;h3&gt;&lt;strong&gt;ಬರಗಾಲದ ಕುರಿತು ಹಿರಿಯ ಅಧಿಕಾರಿಗಳ ಮಹತ್ವದ ಸಭೆ&lt;/strong&gt;&lt;/h3&gt;&lt;p&gt;ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಭಾಗೀಯ ಮಟ್ಟದ ಅಧಿಕಾರಿಗಳ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಶಾಸಕರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದಾರೆ. ಮಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಯಾವ ರೀತಿಯ ಪರಿಹಾರ ನೀಡಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿದೆ. ಇಂದಿನ ಸಭೆಯ ನಂತರ ಎರಡು ಮೂರು ದಿನಗಳಲ್ಲಿ ಬೆಳಗಾವಿಗೂ ತೆರಳಿ ಅಲ್ಲಿನ ಪರಿಸ್ಥಿತಿ ಪರಾಮರ್ಶೆ ನಡೆಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಕಲಬುರಗಿ ಭೇಟಿಯು ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಸಾಲ ಮನ್ನಾ ರೂಪದಲ್ಲಿ ಯಾವುದಾದರೂ ದೊಡ್ಡ ಘೋಷಣೆ ಹೊರಬೀಳುತ್ತದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/good-news-for-karnataka-farmers-cm-dk-shivakumar-statement-about-loan-waivers-gkn/articleshow-7hiogzy"/>
        </item>
        <item>
            <title><![CDATA[ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಚಾಲನೆ: ಕಲಬುರಗಿ ಕೆಕೆಆರ್‌ಟಿಸಿ ಚಾಲಕ ಅಮಾನತು, ತಾಂತ್ರಿಕ ಸಿಬ್ಬಂದಿಗೂ ಶಾಕ್!]]></title>
            <link>https://kannada.asianetnews.com/karnataka-districts/kalaburagi-kkrtc-bus-driver-suspended-mobile-torch-light-incident-kannada/articleshow-83ef1o5</link>
            <guid isPermaLink="true">https://kannada.asianetnews.com/karnataka-districts/kalaburagi-kkrtc-bus-driver-suspended-mobile-torch-light-incident-kannada/articleshow-83ef1o5</guid>
            <pubDate>Mon, 06 Jul 2026 22:54:39 +0530</pubDate>
            <description><![CDATA[&lt;p&gt;ಕಲಬುರಗಿ ಕೆಕೆಆರ್&zwnj;ಟಿಸಿ ಬಸ್ಸಿನ ಹೆಡ್&zwnj;ಲೈಟ್ ಕೆಟ್ಟಾಗ, ಚಾಲಕ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ್ದರು. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕನನ್ನು ಅಮಾನತುಗೊಳಿಸಲಾಗಿದೆ ಮತ್ತು ನಿರ್ವಹಣಾ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kws68x9ypm69ks1ejwgnhrj6,imgname-kkrtc-bus-headlight-damage-1783256872253.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಜು.06): ಸಾ&lt;/strong&gt;ರಿಗೆ ಸಂಸ್ಥೆಯ ಬಸ್ಸೊಂದರ ಹೆಡ್&zwnj;ಲೈಟ್ ಕೆಟ್ಟುಹೋಗಿದ್ದರೂ, ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಅಪಾಯಕಾರಿಯಾಗಿ ಬಸ್ ಚಲಾಯಿಸಿದ ಘಟನೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಬಸ್ ಚಾಲಕನನ್ನು ಅಮಾನತುಗೊಳಿಸಲಾಗಿದ್ದು, ಬಸ್ಸಿನ ನಿರ್ವಹಣೆಯಲ್ಲಿ ವಿಫಲರಾದ ತಾಂತ್ರಿಕ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಭೀಕರ ಘಟನೆ?&lt;/strong&gt;&lt;/h2&gt;&lt;p&gt;ಜುಲೈ 4 ರಂದು ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುತ್ತಿದ್ದ ಚಿಂಚೋಳಿ ಘಟಕದ ಬಸ್ (ನೋಂದಣಿ ಸಂಖ್ಯೆ: KA-28 F-1985) ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಏಕಿ ಹೆಡ್&zwnj;ಲೈಟ್ ಕೈಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಚಾಲಕ ಬಸ್ಸನ್ನು ಸುರಕ್ಷಿತವಾಗಿ ರಸ್ತೆ ಬದಿ ನಿಲ್ಲಿಸಿ ಬದಲಿ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಚಾಲಕ ಮತ್ತು ಕಂಡಕ್ಟರ್ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಕಂಡಕ್ಟರ್ ಕಿಟಕಿಯಿಂದ ಮೊಬೈಲ್ ಫೋನ್ ಫ್ಲಾಶ್ ಲೈಟ್ ಹಿಡಿದು ದಾರಿ ತೋರಿಸುತ್ತಿದ್ದರೆ, ಚಾಲಕ ಕತ್ತಲಲ್ಲೇ ಬಸ್ ಓಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.&lt;/p&gt;&lt;h2&gt;&lt;strong&gt;ಅಧಿಕೃತ ಕ್ರಮ ಮತ್ತು ಅಮಾನತು:&lt;/strong&gt;&lt;/h2&gt;&lt;p&gt;ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಕೆಆರ್&zwnj;ಟಿಸಿ ಮುಖ್ಯ ತಾಂತ್ರಿಕ ಅಭಿಯಂತರರು, ಸಮಗ್ರ ತನಿಖೆ ನಡೆಸಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ವರದಿಯ ಮುಖ್ಯಾಂಶಗಳು ಇಲ್ಲಿವೆ:&lt;/p&gt;&lt;p&gt;&lt;strong&gt;ಚಾಲಕನ ಅಮಾನತು: &lt;/strong&gt;ಬಸ್ಸಿನಲ್ಲಿ ದೋಷ ಬಂದಿದ್ದರೂ ಹತ್ತಿರದ ಘಟಕಕ್ಕೆ ತೆರಳಿ ದುರಸ್ತಿ ಮಾಡಿಸದೆ, ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಓಡಿಸಿ ಪ್ರಯಾಣಿಕರ ಪ್ರಾಣಾಪಾಯಕ್ಕೆ ಕಾರಣವಾದ ಚಾಲಕನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ತಾಂತ್ರಿಕ ಸಿಬ್ಬಂದಿಗೆ ಬಿಸಿ:&lt;/strong&gt; ವಾಹನದ ಸೂಕ್ತ ನಿರ್ವಹಣೆ ಮಾಡುವಲ್ಲಿ ವಿಫಲರಾದ ಘಟಕದ ತಾಂತ್ರಿಕ ಮೇಲ್ವಿಚಾರಕರು ಮತ್ತು ತಾಂತ್ರಿಕ ಸಿಬ್ಬಂದಿ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಸಾರಿಗೆ ವ್ಯವಸ್ಥೆಯ ದಯನೀಯ ಸ್ಥಿತಿಗೆ ಸಾಕ್ಷಿ:&lt;/strong&gt;&lt;/h2&gt;&lt;p&gt;ಬಸ್ಸಿನ ಹೆಡ್&zwnj;ಲೈಟ್ ಇಲ್ಲದೆ ರಸ್ತೆಗೆ ಬಿಟ್ಟಿದ್ದು ಯಾರು? ಬಸ್ಸಿನ ಫಿಟ್&zwnj;ನೆಸ್ ಪರಿಶೀಲನೆ ಸರಿಯಾಗಿ ನಡೆಯುತ್ತಿದೆಯೇ? ಎಂಬ ಪ್ರಶ್ನೆಗಳು ಈ ಘಟನೆಯಿಂದ ಎದ್ದಿವೆ. ಸರ್ಕಾರದ 'ಶಕ್ತಿ' ಯೋಜನೆಯಡಿ ಬಸ್&zwnj;ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರೂ, ಬಸ್&zwnj;ಗಳ ನಿರ್ವಹಣೆಯತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ. &lsquo;ಸಾಮಾನ್ಯರು ಹೆಲ್ಮೆಟ್ ಹಾಕದಿದ್ದರೆ ದಂಡ ಹಾಕುವ ಸರ್ಕಾರ, ಇಂತಹ ಮರಣಮೃದಂಗ ಬಸ್&zwnj;ಗಳನ್ನು ರಸ್ತೆಗೆ ಬಿಡುವವರ ಮೇಲೆ ಯಾಕೆ ಕಣ್ಣು ಮುಚ್ಚಿ ಕುಳಿತಿದೆ?&rsquo; ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ವೈರಲ್ ವಿಡಿಯೋ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾದರೂ, ಇಂತಹ ಘಟನೆಗಳು ಮರುಕಳಿಸದಂತೆ ಬಸ್&zwnj;ಗಳ ತಾಂತ್ರಿಕ ಸ್ಥಿತಿಗತಿಯನ್ನು ಸುಧಾರಿಸಬೇಕಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kalaburagi-kkrtc-bus-driver-suspended-mobile-torch-light-incident-kannada/articleshow-83ef1o5"/>
        </item>
        <item>
            <title><![CDATA[ಕಲಬುರಗಿ: ನಿವೃತ್ತ ಇಂಜಿನಿಯರ್ ಮೇಲೆ ಲೋಕಾಯುಕ್ತ ದಾಳಿ. ಬ್ಯಾಂಕ್ ಲಾಕರ್‌ನಲ್ಲಿ ₹9 ಲಕ್ಷ ಹಳೆಯ ನೋಟು, 20 ತೊಲೆ ಚಿನ್ನ ಪತ್ತೆ!]]></title>
            <link>https://kannada.asianetnews.com/karnataka-districts/kalaburagi-lokayukta-raids-officer-s-bank-locker-finds-rs-9-lakh-in-old-notes-rav/articleshow-86aggfg</link>
            <guid isPermaLink="true">https://kannada.asianetnews.com/karnataka-districts/kalaburagi-lokayukta-raids-officer-s-bank-locker-finds-rs-9-lakh-in-old-notes-rav/articleshow-86aggfg</guid>
            <pubDate>Thu, 18 Jun 2026 10:42:46 +0530</pubDate>
            <description><![CDATA[ಕಲಬುರಗಿಯಲ್ಲಿ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇಲೆ ನಿವೃತ್ತ ಇಂಜಿನಿಯರ್ ಮಾಣಿಕ್ ಕನಕಟ್ಟೆ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅವರ ಬ್ಯಾಂಕ್ ಲಾಕರ್ ಪರಿಶೀಲಿಸಿದಾಗ, ನಿಷೇಧಿತ ₹1000 ಮುಖಬೆಲೆಯ ಹಳೆಯ ನೋಟುಗಳು ಮತ್ತು 20 ತೊಲೆಗೂ ಅಧಿಕ ಚಿನ್ನಾಭರಣಗಳು ಪತ್ತೆಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvcja2hj2t0nxc36z7ce9409,imgname-----------------------2026-06-18t103144.848-1781759543858.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಕಲಬುರಗಿ (ಜೂ.18):&lt;/strong&gt; ನಿವೃತ್ತ ಅಧಿಕಾರಿಯ ಬ್ಯಾಂಕ್&zwnj; ಲಾಕರ್&zwnj;ನಲ್ಲಿ ಹಳೆಯ ನೋಟುಗಳು, ಚಿನ್ನಾಭರಣಗಳು ಲೋಕಾಯುಕ್ತ ದಾಳಿಯ ವೇಳೆ ಪತ್ತೆ ಆಗಿವೆ.&lt;/p&gt;&lt;h2&gt;₹1 ಸಾವಿರ ಮುಖಬೆಲೆಯ ₹9 ಲಕ್ಷ ಹಳೆಯ ನೋಟು ಪತ್ತೆ!&lt;/h2&gt;&lt;p&gt;ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಇಲ್ಲಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಲಬುರಗಿ ವೃತ್ತದ ನಿವೃತ್ತ ಅಧೀಕ್ಷಕ ಅಭಿಯಂತರ ಮಾಣಿಕ್ ಕನಕಟ್ಟೆ ಅವರ ಮನೆ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಬುಧವಾರ ನಗರದ ಸಂಗಮೇಶ್ವರ ಕಾಲೋನಿಯ ಎಸ್&zwnj;ಬಿಐ ಬ್ಯಾಂಕ್&zwnj;ನಲ್ಲಿರುವ ಅವರ ಲಾಕರ್&zwnj; ಪರಿಶೀಲಿಸಿದಾಗ ₹1 ಸಾವಿರ ಮುಖಬೆಲೆಯ ₹9 ಲಕ್ಷ ಹಳೆಯ ನೋಟುಗಳು, ಉಂಗುರ ಸೇರಿ 20ಕ್ಕೂ ಹೆಚ್ಚು ತೊಲೆ ಚಿನ್ನಾಭರಣ ಪತ್ತೆಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Karnataka Lokayukta Raid: 8 ಅಧಿಕಾರಿಗಳ ಬಳಿ ಪತ್ತೆಯಾಯ್ತಯ ₹31.11 ಕೋಟಿ ಆಸ್ತಿ&lt;/p&gt;&lt;h3&gt;ಎಲ್ಲೆಲ್ಲಿ ಲೋಕಾಯುಕ್ತ ದಾಳಿ?&lt;/h3&gt;&lt;p&gt;ಕಲಬುರಗಿಯ ಗೋದುತಾಯಿ ನಗರದ ಎರಡು ಮನೆಗಳು, ಬೀದರ್ ಜಿಲ್ಲೆಯ ಹಳ್ಳಿಖೇಡ (ಬಿ) ಗ್ರಾಮದ ಮನೆ, ತೋಟಗಳು ಹಾಗೂ ಹುಮನಾಬಾದ್&zwj;ನಲ್ಲಿರುವ ಎರಡು ಕಾಂಪ್ಲೆಕ್ಸ್&zwnj;ಗಳ ಮೇಲೆ ಮಂಗಳವಾರ ದಾಳಿ ನಡೆದಿತ್ತು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburagi-lokayukta-raids-officer-s-bank-locker-finds-rs-9-lakh-in-old-notes-rav/articleshow-86aggfg"/>
        </item>
        <item>
            <title><![CDATA[ಬೆಂಗಳೂರು-ಮುಂಬೈ ವಂದೇ ಭಾರತ್: ಕಲಬುರಗಿ ಮಾರ್ಗ ಬದಲಾವಣೆ ಮಾಡಿ ಬೇರೆ ಕಡೆ ತಿರುಗಿಸಲು ಹುನ್ನಾರ ನಡೀತಿದ್ಯಾ?]]></title>
            <link>https://kannada.asianetnews.com/karnataka-districts/bengaluru-mumbai-vande-bharat-sleeper-row-over-route-change-kalaburagi-divert-via-hubballi-gdp/articleshow-ibffheh</link>
            <guid isPermaLink="true">https://kannada.asianetnews.com/karnataka-districts/bengaluru-mumbai-vande-bharat-sleeper-row-over-route-change-kalaburagi-divert-via-hubballi-gdp/articleshow-ibffheh</guid>
            <pubDate>Thu, 16 Jul 2026 13:10:39 +0530</pubDate>
            <description><![CDATA[ಕೇಂದ್ರ ಸರ್ಕಾರ ಘೋಷಿಸಿದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿನ ಮಾರ್ಗವನ್ನು ಕಲಬುರಗಿಯಿಂದ ಹುಬ್ಬಳ್ಳಿ-ಬೆಳಗಾವಿಗೆ ಬದಲಾಯಿಸಲು ನಡೆಯುತ್ತಿರುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸಲಾಗಿದೆ. ಈ ರಾಜಕೀಯ ಒತ್ತಡಕ್ಕೆ ಮಣಿದು ಮಾರ್ಗ ಬದಲಿಸಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knzr06zjsgm9tffs2c0e3qf0,imgname-indian-railways-2026-reforms-vande-bharat-sleeper-hydrogen-train-ticket-refund-cancellation-board-change-policy-5-1775960595442.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು-ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲನ್ನು ಕಲಬುರಗಿ ಮಾರ್ಗವಾಗಿ ಸಂಚರಿಸುವಂತೆ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದರೂ, ಇದೀಗ ಆ ಮಾರ್ಗವನ್ನು ಹುಬ್ಬಳ್ಳಿ-ಬೆಳಗಾವಿ ಕಡೆಗೆ ಬದಲಾಯಿಸಲು ನಡೆಯುತ್ತಿರುವ ಯತ್ನವನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಹಾಗೂ ಟೀಮ್ ಯುವಾ ಸಂಘಟನೆಯ ಸಂಚಾಲಕ ವಿನಯ್ ಕುಮಾರ್ ಮಾಳಗೆ ತೀವ್ರವಾಗಿ ಖಂಡಿಸಿದ್ದಾರೆ.&lt;/p&gt;&lt;h2&gt;ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ವಿರುದ್ಧ ಆರೋಪ&lt;/h2&gt;&lt;p&gt;ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಏ.27, 2026ರಂದು ಕಲಬುರಗಿ ಮಾರ್ಗವಾಗಿ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಈ ಮಾರ್ಗವನ್ನು ಹುಬ್ಬಳ್ಳಿ-ಬೆಳಗಾವಿ ಕಡೆಗೆ ಬದಲಾಯಿಸಲು ಒತ್ತಡ ಹೇರುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ ವಾಗಿದೆ ಎಂದು ಆರೋಪಿಸಿದ್ದಾರೆ.&lt;/p&gt;&lt;p&gt;ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಿಜೆಪಿ ನಾಯಕರು ನಿರಂತರವಾಗಿ ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿದ ಮಾಳಗೆ, ಈ ಹಿಂದೆ ರಾಯಚೂರಿಗೆ ಮಂಜೂರಾಗಬೇಕಿದ್ದ ಐಐಟಿ ಹಾಗೂ ಏಮ್ಸ್ ಸಂಸ್ಥೆಗಳನ್ನು ಹುಬ್ಬಳ್ಳಿ - ಧಾರವಾಡಕ್ಕೆ ಸ್ಥಳಾಂತರಿಸುವ ಮೂಲಕ ಈ ಭಾಗದ ಯುವಕರಿಗೆ ಅನ್ಯಾಯ ಮಾಡ ಲಾಗಿದೆ ಎಂದು ಟೀಕಿಸಿದರು.&lt;/p&gt;&lt;p&gt;ಬೀದರ್ ಜಿಲ್ಲೆಯಲ್ಲಿಯೂ ಹೆಚ್&zwnj;ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ, ಬಿಎಸ್&zwnj;ಎಫ್ ತರಬೇತಿ ಕೇಂದ್ರ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ಎನ್&zwnj;ಐಎಂಜೆಡ್) ಯೋಜನೆಗಳು ಬಿಜೆಪಿ ನಾಯಕರ ನಿರ್ಲಕ್ಷ್ಯದಿಂದ ಕೈತಪ್ಪಿವೆ ಎಂದು ಆರೋಪಿಸಿದರು.&lt;/p&gt;&lt;p&gt;ಬೆಂಗಳೂರು - ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಯಾವುದೇ ಕಾರಣಕ್ಕೂ ಕಲಬುರಗಿ ಮಾರ್ಗದಿಂದ ಬದಲಾಗಬಾರದು. ಕಲ್ಯಾಣ ಕರ್ನಾಟಕದ ಎಲ್ಲ ಸಂಸದರು, ಶಾಸಕರು ಹಾಗೂ ಪಕ್ಷಾತೀತ ನಾಯಕರು ಒಗ್ಗಟ್ಟಿನಿಂದ ಈ ಪ್ರಸ್ತಾವನೆಯನ್ನು ವಿರೋಧಿಸಿ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಕಲಬುರಗಿ ಮಾರ್ಗವನ್ನೇ ಅಂತಿಮಗೊಳಿಸುವಂತೆ ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದರು. ಒಂದು ವೇಳೆ ಕೇಂದ್ರ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು ರೈಲು ಮಾರ್ಗ ಬದಲಾಯಿಸಿದರೆ, ಕಲ್ಯಾಣ ಕರ್ನಾಟಕ ಭಾಗದಾದ್ಯಂತ ಸಾರ್ವಜನಿಕರು, ಯುವಕರು ಹಾಗೂ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿನಯ್ ಕುಮಾರ್ ಮಾಳಗೆ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-mumbai-vande-bharat-sleeper-row-over-route-change-kalaburagi-divert-via-hubballi-gdp/articleshow-ibffheh"/>
        </item>
        <item>
            <title><![CDATA[Bidadi: ಮುಖ್ಯಮಂತ್ರಿಗಳೇ, ಬಿಡದಿಗೊಂದು , ಆಳಂದ ರೈತರಿಗೊಂದು ನ್ಯಾಯವಾ?]]></title>
            <link>https://kannada.asianetnews.com/karnataka-districts/bidadi-township-row-rs-2-07-cr-vs-rs-2-lakh-aland-farmers-write-to-cm-questioning-compensation-disparity-rav/articleshow-ih7f3qb</link>
            <guid isPermaLink="true">https://kannada.asianetnews.com/karnataka-districts/bidadi-township-row-rs-2-07-cr-vs-rs-2-lakh-aland-farmers-write-to-cm-questioning-compensation-disparity-rav/articleshow-ih7f3qb</guid>
            <pubDate>Thu, 02 Jul 2026 11:09:28 +0530</pubDate>
            <description><![CDATA[&lt;p&gt;ಟೌನ್&zwnj;ಶಿಪ್ ಮಾಡಲು ಬಿಡದಿಯಲ್ಲಿ ರೈತರಿಗೆ ಎಕರೆಗೆ ₹2.07 ಕೋಟಿ ನೀಡುವಾಗ, ವಿಂಡ್ ಪವರ್ ಕಂಪನಿಗಳಿಗೆ ಜಮೀನು ನೀಡಿದ ಆಳಂದ ರೈತರಿಗೆ ಕೇವಲ ₹2-4 ಲಕ್ಷ ನೀಡುವುದು ತಾರತಮ್ಯ ಅಲ್ಲವೇ? ಮುಖ್ಯಮಂತ್ರಿಗಳೇ ಬಿಡದಿಗೊಂದು ನ್ಯಾಯ, ಆಳಂದ ರೈತರಿಗೊಂದು ನ್ಯಾಯವಾ? ಎಂದು ಬಿಜೆಪಿ ಮುಖಂಡ ಪ್ರಶ್ನಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwgmr5etam15tvasfb3c0pc0,imgname----------------------92--1782970062298.jpg" type="image/jpeg" height="390" width="690"/>
            <content:encoded><![CDATA[&lt;h2&gt;-ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಸಿದ್ದು ಹಿರೋಳಿ ಪ್ರಶ್ನೆ&lt;/h2&gt;&lt;h2&gt;----&lt;/h2&gt;&lt;p&gt;&lt;strong&gt;&amp;nbsp;ಆಳಂದ (ಜು.2): &lt;/strong&gt;ರೈತರ ಜಮೀನು ಖರೀದಿಸುವಲ್ಲಿ ಸರ್ಕಾರ ಬಿಡದಿಗೊಂದು ನ್ಯಾಯ ಆಳಂದಗೊಂದು ನ್ಯಾಯ ಪದ್ಧತಿ ಅನುಸರಿಸುತ್ತಿರುವುದು ಸರಿಯೇ ಎಂದು ಕಲಬುರಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಸಿದ್ದು ಹಿರೋಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಬುಧುವಾರ ಆಳಂದ ತಹಸೀಲದಾರ್&zwnj;ರ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಹಲವು ವಿಷಯ ಪ್ರಸ್ತಾಪಿಸುರುವ ಅವರು, ಆಳಂದ ತಾಲೂಕಿನಲ್ಲಿ ವಿಂಡ್ ಪವರ್ ಕಂಪನಿಗಳಿಂದ ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಗಡಿಭಾಗದ ಬಡ ರೈತರಿಗೆ ನ್ಯಾಯ ದೊರಕಿಸಿ ಕೊಡಲು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಆಳಂದ ತಾಲೂಕಿನಲ್ಲಿ 2-3 ವರ್ಷಗಳಿಂದ ವಿಂಡ್ ಪವರ್ ಕಂಪನಿಯವರು ರೈತರ ಜಮೀನಿಗಳಲ್ಲಿ ಪವನ ವಿದ್ಯುತ್ ಉತ್ಪಾದನಾ ಘಟಕಗಳನ್ನು ಕೂಡಿಸುತ್ತಿದ್ದಾರೆ. ಒಂದು ಘಟಕಕ್ಕೆ 10.00 ಎಕರೆ ಜಮೀನು ಖರೀದಿಸಬೇಕೆಂಬ ನಿಯಮವಿದ್ದರೂ ಕಂಪನಿಯವರು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ದಲ್ಲಾಳಿಗಳ ಮುಖಾಂತರ ಮನಸೋ ಇಚ್ಚೇ ರೈತರ ಜಮೀನು ಕಬಳಿಸುತ್ತಿದ್ದಾರೆ. ರೈತರ ಗೋಳು ಕೇಳುವರ್ಯಾರು? ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಇತ್ತೀಚಿಗೆ ಬಾಗಲಕೋಟೆ ಉಪಚುನಾವಣೆಗೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗುವ ನೀರಾವರಿ ಜಮೀನಿಗೆ ₹40.00 ಲಕ್ಷ ಪ್ರತಿ ಎಕರೆಗೆ ಒಣ ಬೇಸಾಯ ಜಮೀನಿಗೆ ₹30 ಲಕ್ಷ. ಪ್ರತಿ ಎಕರೆಗೆ ನೀಡುವುದಾಗಿ ಸರ್ಕಾರದ ನಿರ್ಧಾರ ತಿಳಿಸಿದ್ದಾರೆ.&lt;/p&gt;&lt;p&gt;ಪ್ರಸ್ತುತ ನಡೆಯುತ್ತಿರುವ ಬಿಡದಿ ಟೌನಶಿಪ್&zwj;ನಲ್ಲಿ ಜಮೀನು ಕಳೆದುಕೊಳ್ಳುತ್ತಿರುವ ರೈತರಿಗೆ ಒಂದು ಎಕರೆಗೆ ₹2.07 ಕೋಟಿ ಚೆಕ್&zwnj; ಗಳನ್ನು ರೈತರಿಗೆ ನೀಡುತ್ತಿರುವುದು ನೋಡಿ ನಮ್ಮ ಬಾಯಿಗೆ ನೀರು ಬರುತ್ತಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಹಾಗಾದರೇ ಕಲ್ಯಾಣ ಕರ್ನಾಟಕದ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಆಳಂದ ತಾಲೂಕಿನ ನಾವುಗಳು ಕೇವಲ 2.00 ಲಕ್ಷ, 4.00 ಲಕ್ಷ ಪ್ರತಿ ಎಕರೆಗೆ ಪಡೆದುಕೊಂಡು ಜಮೀನು ನೀಡಲು ನಾವುಗಳು ಪಾಪಿಗಳೇ, ದಿಕ್ಕಿಲ್ಲದವರೇ ಎಂಬ ವ್ಯಥೆ ನಮ್ಮ ರೈತರನ್ನು ಕಾಡುತ್ತಿದೆ. ಆದ್ದರಿಂದ, ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಭಾಗದ ರೈತರಿಗೆ ಪ್ರತಿ ಎಕರೆಗೆ 2 ಕೋಟಿ ನೀಡುವಂತೆ ವಿನಂತಿಸಿಕೊಂಡಿದ್ದಾರೆ.&lt;/p&gt;&lt;p&gt;ನಿಯೋಗದಲ್ಲಿ ಮುಖಂಡರಾದ ಅಜಿತ್&zwnj; ಕುಲಕರ್ಣಿ, ಈರಣ್ಣಾ ಹತ್ತರಕಿ, ಮಹೇಶ ಕೋರಳ್ಳಿ, ಮನೋಜ ಸಿಂಗೆ, ಮಹೇಶ ಪವಾರ, ಶೀರಿಷ್ ವರ್ಧಮಾನೆ, ಮೌಲಾಲಿ ಆಳಂದ, ಬಸವರಾಜ ವಾಡೇದ ಇದ್ದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bidadi-township-row-rs-2-07-cr-vs-rs-2-lakh-aland-farmers-write-to-cm-questioning-compensation-disparity-rav/articleshow-ih7f3qb"/>
        </item>
        <item>
            <title><![CDATA[ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ಆರಂಭಿಸಲು ಒತ್ತಾಯ, 16 ಗಂಟೆಗಳ ರಸ್ತೆ ಪ್ರಯಾಣಕ್ಕೆ ಮುಕ್ತಿ ಸಿಗುವುದೇ?]]></title>
            <link>https://kannada.asianetnews.com/karnataka-districts/kalaburagi-mangaluru-flight-service-demanded-star-air-officials-meet-regional-stakeholders-gdp/articleshow-ktqu3ft</link>
            <guid isPermaLink="true">https://kannada.asianetnews.com/karnataka-districts/kalaburagi-mangaluru-flight-service-demanded-star-air-officials-meet-regional-stakeholders-gdp/articleshow-ktqu3ft</guid>
            <pubDate>Thu, 11 Jun 2026 19:10:15 +0530</pubDate>
            <description><![CDATA[ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ವಿಸ್ತರಿಸಲು ಸ್ಥಳೀಯ ಸಂಘಟನೆಗಳು ಸ್ಟಾರ್ ಏರ್ ಸಂಸ್ಥೆಯೊಂದಿಗೆ ಚರ್ಚಿಸಿವೆ. ಈ ಸೇವೆ ಆರಂಭವಾದರೆ 16 ಗಂಟೆಗಳ ಪ್ರಯಾಣದ ಅವಧಿ ತಪ್ಪಲಿದ್ದು, ಪ್ರವಾಸೋದ್ಯಮ ಮತ್ತು ವಾಣಿಜ್ಯಕ್ಕೆ ಅನುಕೂಲವಾಗಲಿದೆ. ಜಾಗತಿಕ ಇಂಧನ ಬೆಲೆ ಏರಿಕೆಯ ಕಾರಣ ಸದ್ಯಕ್ಕೆ ವಿಳಂಬವಾದರೂ, ಸಂಸ್ಥೆಯು ಸಕಾರಾತ್ಮಕ ಭರವಸೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktph4c4mp0z3w2305qacggev,imgname-kalaburagi-airport-flight-traffic-start-1781020110996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ - ಬೆಂಗಳೂರು ನಡುವಿನ ವಿಮಾನ ಸಂಚಾರವು ಇತ್ತೀಚೆಗಷ್ಟೇ ಪುನರಾರಂಭಗೊಂಡಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನಿರಾಳತೆ ತಂದಿದೆ. ಇದರ ಬೆನ್ನಲ್ಲೇ, ಈ ವಿಮಾನ ಸೇವೆಯನ್ನು ಕರಾವಳಿಯ ಪ್ರಮುಖ ನಗರವಾದ ಮಂಗಳೂರಿನವರೆಗೂ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಕುರಿತು ಕಲಬುರಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಹಾಗೂ ದಕ್ಷಿಣ ಕನ್ನಡ ಸಂಘದ ಪದಾಧಿಕಾರಿಗಳು ಸ್ಟಾರ್ ಏರ್ (Star Air) ವಿಮಾನ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಹತ್ವದ ಚರ್ಚೆ ನಡೆಸಿ, ಮನವಿ ಸಲ್ಲಿಸಿದ್ದಾರೆ.&lt;/p&gt;&lt;p&gt;ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಡೆದ ಈ ಸಭೆಯಲ್ಲಿ, ಸ್ಟಾರ್ ಏರ್&zwnj;ಲೈನ್ಸ್ ಸಂಸ್ಥೆಯ ವಿಮಾನ ನಿಲ್ದಾಣಗಳ ನಿರ್ವಹಣಾ ಮುಖ್ಯಸ್ಥರಾದ ಸಿ.ಎ. ಬೋಪಣ್ಣ ಹಾಗೂ ಮಾರುಕಟ್ಟೆ ವಿಭಾಗದ ಮೊಹಮ್ಮದ್ ಸೊಹೈಲ್ ಅವರೊಂದಿಗೆ ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಮತ್ತು ಕಲಬುರಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಅವರು ಸುದೀರ್ಘ ಸಮಾಲೋಚನೆ ನಡೆಸಿದರು.&lt;/p&gt;&lt;h2&gt;16 ಗಂಟೆಗಳ ಬಸ್ ಪ್ರಯಾಣಕ್ಕೆ ಮುಕ್ತಿ ಸಿಗುವುದೇ?&lt;/h2&gt;&lt;p&gt;ಪ್ರಸ್ತುತ ಕಲಬುರಗಿಯಿಂದ ಕರಾವಳಿ ಭಾಗಕ್ಕೆ ಇರುವ ಪ್ರಯಾಣದ ದಟ್ಟಣೆ ಹಾಗೂ ಸಾರಿಗೆ ವ್ಯವಸ್ಥೆಯ ಸವಾಲುಗಳನ್ನು ನಿಯೋಗವು ವಿಮಾನ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದಿತು.&lt;/p&gt;&lt;p&gt;&lt;strong&gt;ದೀರ್ಘಾವಧಿಯ ಪ್ರಯಾಣ: &lt;/strong&gt;ಕಲಬುರಗಿಯಿಂದ ನಿತ್ಯ ಐದಾರು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಮಂಗಳೂರಿಗೆ ಸಂಚರಿಸುತ್ತಿವೆ. ಆದರೆ, ಬಸ್ ಮೂಲಕ ಪ್ರಯಾಣಿಸಲು ಬರೋಬ್ಬರಿ 16 ಗಂಟೆಗಳ ಸುದೀರ್ಘ ಅವಧಿ ಬೇಕಾಗುತ್ತಿದೆ. ಇದರಿಂದ ರೋಗಿಗಳು, ವೃದ್ಧರು ಹಾಗೂ ಉದ್ಯಮಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಒನ್ ಸ್ಟಾಪ್ ವಿಮಾನ ಸೇವೆಗೆ ಪ್ರಸ್ತಾಪ:&lt;/strong&gt; ಕಲಬುರಗಿಯಿಂದ ಬೆಂಗಳೂರು ಮೂಲಕವಾಗಿ ಮಂಗಳೂರಿಗೆ (ಒನ್ ಸ್ಟಾಪ್ ಫ್ಲೈಟ್) ವಿಮಾನ ಸಂಪರ್ಕ ಕಲ್ಪಿಸಿದರೆ ಕರಾವಳಿ ಹಾಗೂ ಕೇರಳದ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ವರದಾನವಾಗಲಿದೆ ಎಂದು ಅಧಿಕಾರಿಗಳಿಗೆ ವಿವರಿಸಲಾಯಿತು.&lt;/p&gt;&lt;h2&gt;ಪ್ರವಾಸೋದ್ಯಮ, ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರಕ್ಕೆ ಆನೆಬಲ&lt;/h2&gt;&lt;p&gt;ಕರಾವಳಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ನಡುವಿನ ಒಡನಾಟವನ್ನು ಉಲ್ಲೇಖಿಸಿ ಡಾ. ಸದಾನಂದ ಪೆರ್ಲ ಮತ್ತು ನರಸಿಂಹ ಮೆಂಡನ್ ಅವರು ವಿಮಾನ ಸೇವೆಯ ಅಗತ್ಯತೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಉತ್ತರ ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಶಿಕ್ಷಣ ಹಾಗೂ ಪ್ರವಾಸೋದ್ಯಮದ ನಿಮಿತ್ತ ಕರಾವಳಿ ಭಾಗಕ್ಕೆ ನಿರಂತರವಾಗಿ ತೆರಳುತ್ತಿದ್ದಾರೆ. ಜೊತೆಗೆ ಕರಾವಳಿ ಮೂಲದ ನೂರಾರು ಉದ್ಯಮಿಗಳು ಉತ್ತರ ಕರ್ನಾಟಕದಲ್ಲಿ ನೆಲೆಸಿದ್ದು, ಸ್ವಂತ ಊರುಗಳಿಗೆ ಸಂಚರಿಸಲು ಸೂಕ್ತ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ. ವಿಮಾನ ಸೇವೆ ಆರಂಭವಾದರೆ ಉಭಯ ಪ್ರಾಂತ್ಯಗಳ ವಾಣಿಜ್ಯ ವ್ಯವಹಾರಗಳಿಗೂ ಹೆಚ್ಚಿನ ವೇಗ ಸಿಗಲಿದೆ.&lt;/p&gt;&lt;h2&gt;ಜಾಗತಿಕ ಬಿಕ್ಕಟ್ಟು ಹಾಗೂ ವಿಮಾನ ಸಂಸ್ಥೆಯ ಪ್ರತಿಕ್ರಿಯೆ&lt;/h2&gt;&lt;p&gt;ನಿಯೋಗದ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸ್ಟಾರ್ ಏರ್ ಸಂಸ್ಥೆಯ ವಿಮಾನ ನಿಲ್ದಾಣಗಳ ನಿರ್ವಹಣಾಧಿಕಾರಿ ಸಿ.ಎ. ಬೋಪಣ್ಣ ಅವರು ಪ್ರಸ್ತುತ ಇರುವ ಕೆಲವು ತಾಂತ್ರಿಕ ಹಾಗೂ ಜಾಗತಿಕ ಸವಾಲುಗಳನ್ನು ಹಂಚಿಕೊಂಡರು.&lt;/p&gt;&lt;p&gt;ಪೌರಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಇಂಧನ (Aviation Turbine Fuel) ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಈ ಕಾರಣದಿಂದಾಗಿ ಸದ್ಯಕ್ಕೆ ಹೊಸ ಮಾರ್ಗಗಳಿಗೆ ವಿಮಾನ ಸೇವೆ ವಿಸ್ತರಿಸುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.&lt;/p&gt;&lt;h2&gt;ಕಲಬುರಗಿಯಿಂದ ಮುಂಬೈಗೆ ಮುಂದಿನ ತಿಂಗಳು ಸಂಚಾರ ಸಾಧ್ಯತೆ&lt;/h2&gt;&lt;p&gt;ಬಹುತೇಕ ಮುಂದಿನ ತಿಂಗಳಿನಿಂದ ಮುಂಬೈ ನಗರಕ್ಕೆ ಕಲಬುರಗಿಯಿಂದ ಸಂಚಾರ ಆರಂಭಿಸಲು ಸಂಸ್ಥೆ ಚಿಂತನೆ ನಡೆಸುತ್ತಿದೆ. ತದನಂತರ, ಪ್ರಯಾಣಿಕರ ದಟ್ಟಣೆ ಮತ್ತು ಮಾರುಕಟ್ಟೆಯ ಸಾಧ್ಯತೆಗಳನ್ನು ಸಮೀಕ್ಷೆ ನಡೆಸಿ ಮಂಗಳೂರು ಸೇರಿದಂತೆ ಇತರ ಹೊಸ ಮಾರ್ಗಗಳಲ್ಲಿ ಸೇವೆ ಆರಂಭಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.&lt;/p&gt;&lt;p&gt;ಈ ಪ್ರಮುಖ ಸಮಾಲೋಚನಾ ಸಭೆಯಲ್ಲಿ ಕಲಬುರಗಿಯ ಖ್ಯಾತ ಉದ್ಯಮಿ ಮಹೇಶ್ ಎಂ. ಕಡೇಚೂರ್ ಅವರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.&lt;/p&gt;&lt;p&gt;ಕಲಬುರಗಿ ಮತ್ತು ಮಂಗಳೂರು ನಡುವೆ ವಿಮಾನ ಸಂಪರ್ಕ ಏರ್ಪಟ್ಟರೆ ಅದು ಕೇವಲ ಸಮಯದ ಉಳಿತಾಯವಷ್ಟೇ ಅಲ್ಲದೆ, ಕಲ್ಯಾಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಜಾಗತಿಕ ತೈಲ ಬಿಕ್ಕಟ್ಟಿನ ನಡುವೆಯೂ ಸ್ಟಾರ್ ಏರ್ ಸಂಸ್ಥೆಯು ಸಕಾರಾತ್ಮಕ ಭರವಸೆ ನೀಡಿರುವುದು ಈ ಭಾಗದ ಜನರಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kalaburagi-mangaluru-flight-service-demanded-star-air-officials-meet-regional-stakeholders-gdp/articleshow-ktqu3ft"/>
        </item>
        <item>
            <title><![CDATA[Basavaraj Patil Marum victory: ಮಹಾರಾಷ್ಟ್ರ ವಿಧಾನಪರಿಷತ್‌ಗೆ ಕಲಬುರಗಿಯ ಕನ್ನಡಿಗ ಆಯ್ಕೆ]]></title>
            <link>https://kannada.asianetnews.com/politics/basavaraj-patil-from-kalaburagi-elected-to-maharashtra-legislative-council-rav/articleshow-n0ii7kz</link>
            <guid isPermaLink="true">https://kannada.asianetnews.com/politics/basavaraj-patil-from-kalaburagi-elected-to-maharashtra-legislative-council-rav/articleshow-n0ii7kz</guid>
            <pubDate>Wed, 24 Jun 2026 07:52:51 +0530</pubDate>
            <description><![CDATA[ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಬಸವರಾಜ ಪಾಟೀಲ ಮರುಮ್ ಅವರು ಧಾರಾಶಿವ-ಲಾತೂರ-ಬೀಡ ವಿಧಾನ ಪರಿಷತ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆಳಂದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಅವರ ಸಹೋದರರಾದ ಇವರ ಗೆಲುವನ್ನು ಆಳಂದದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kvvpvjpk4y0wwvmvsdyyf0s0,imgname----------------------82--1782267628243.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆಳಂದ (ಕಲಬುರಗಿ):&lt;/strong&gt; &amp;nbsp;ಆಳಂದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಸಹೋದರ, ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಬಸವರಾಜ ಪಾಟೀಲ ಮರುಮ್(Basavaraj Patil) ಅವರು ಧಾರಾಶಿವ- ಲಾತೂರ- ಬೀಡ ಜಿಲ್ಲೆಗಳ ಸ್ಥಳೀಯ ಸಂಘ&ndash;ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದಲ್ಲಿ 850 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.&lt;/p&gt;&lt;h2&gt;ಆಳಂದಲ್ಲಿ ವಿಜಯೋತ್ಸವ&lt;/h2&gt;&lt;p&gt;ಈ ಗೆಲುವು ಆಳಂದದಲ್ಲಿ ಸಂಭ್ರಮ ಮತ್ತು ಸಡಗರ ಮೂಡಿಸಿದ್ದು, ಕುಟುಂಬಸ್ಥರು, ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉತ್ಸಾಹದಿಂದ ವಿಜಯೋತ್ಸವ ಆಚರಿಸಿದರು. 2 ಬಾರಿ ಶಾಸಕರಾಗಿ ಹಾಗೂ ಒಮ್ಮೆ ಸಚಿವರಾಗಿ ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಬಸವರಾಜ ಪಾಟೀಲ ಮರುಮ್ ಅವರು, ಈ ಗೆಲುವಿನ ಮೂಲಕ ವಿಧಾನ ಪರಿಷತ್ ಸದಸ್ಯರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.&lt;/p&gt;&lt;h3&gt;ಕುಟುಂಬಕ್ಕೆ ಹೆಮ್ಮೆ&lt;/h3&gt;&lt;p&gt;ವಿಜಯೋತ್ಸವದಲ್ಲಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್, &lsquo;ನಮ್ಮ ಮನೆತನದ ಕುಡಿ ಶಾಸಕರಾಗಿ, ಸಚಿವರಾಗಿ ಅನುಪಮ ಸೇವೆ ಸಲ್ಲಿಸಿ, ಈಗ ಮತ್ತೊಮ್ಮೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವುದು ನಮ್ಮ ಇಡೀ ಕುಟುಂಬಕ್ಕೆ ಅಪಾರ ಹೆಮ್ಮೆ ಮತ್ತು ಸಂತಸ ತಂದಿದೆ. ಅವರ ಜನಪ್ರಿಯತೆ ಮತ್ತು ಸಮಾಜ ಸೇವೆ ಮತದಾರರು ಮತ್ತೊಮ್ಮೆ ಗುರುತಿಸಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ&rsquo; ಎಂದು ಭಾವುಕರಾಗಿ ಹೇಳಿದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/basavaraj-patil-from-kalaburagi-elected-to-maharashtra-legislative-council-rav/articleshow-n0ii7kz"/>
        </item>
        <item>
            <title><![CDATA[ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಶಾಲೆ ಮೇಲ್ಛಾವಣಿ ಕಾಂಕ್ರೀಟ್‌ ಕುಸಿತ: ತಪ್ಪಿದ ಅವಘಡ]]></title>
            <link>https://kannada.asianetnews.com/karnataka-districts/another-school-roof-concrete-collapses-in-kalaburagi-district-aland-taluk-sangolagi-mrq/articleshow-n3ru51f</link>
            <guid isPermaLink="true">https://kannada.asianetnews.com/karnataka-districts/another-school-roof-concrete-collapses-in-kalaburagi-district-aland-taluk-sangolagi-mrq/articleshow-n3ru51f</guid>
            <pubDate>Mon, 15 Jun 2026 06:37:25 +0530</pubDate>
            <description><![CDATA[&lt;p&gt;ಸಂಗೋಳಗಿ ಗ್ರಾಮದ ಸರ್ಕಾರಿ ಶಾಲೆಯ ಹಳೆಯ, ಬಳಕೆಯಲ್ಲಿಲ್ಲದ ಕಟ್ಟಡದ ಛಾವಣಿ ಕುಸಿದಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಈ ಘಟನೆಯು ತಾಲೂಕಿನಲ್ಲಿರುವ ಶಿಥಿಲಗೊಂಡ ಶಾಲಾ ಕಟ್ಟಡಗಳ ಸುರಕ್ಷತೆಯ ಗಂಭೀರ ಸಮಸ್ಯೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv4d0cz7ycfxr64ftkk96dw1,imgname-school-building-1781485548519.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಕಲಬುರಗಿ ಸರ್ಕಾರಿ ಪಪೂ ಕಾಲೇಜಿನ ಮೇಲ್ಛಾವಣಿ ಕಾಂಕ್ರೀಟ್&zwnj; ಬಿದ್ದು 5 ವಿದ್ಯಾರ್ಥಿನಿಯರಿಗೆ ಗಾಯಗಳಾಗಿರುವ ಘಟನೆ ಮಾಸುವ ಮುನ್ನವೇ ಜಿಲ್ಲೆಯ ಆಳಂದ ತಾಲೂಕಿನ ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಚಿಂಚನಸೂರ ಕ್ಲಸ್ಟರ್&zwnj;ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಗೋಳಗಿ (ಸಿ)ಯಲ್ಲಿ ಬಳಕೆಯಲ್ಲಿಲ್ಲದ ಹಳೆಯ ಶಾಲಾ ಕಟ್ಟಡದ ಛಾವಣಿಯ ಪದರು ಭಾನುವಾರ ಬೆಳಗಿನ ಜಾವ ಕುಸಿದು ಬಿದ್ದ ಘಟನೆ ನಡೆದಿದೆ.&lt;/p&gt;&lt;p&gt;ಶನಿವಾರ ಸಂಜೆ ವೇಳೆಯಲ್ಲಿ ಸುರಿದ ಕೊಂಚ ಮಳೆಯ ನಡುವೆ ಕಟ್ಟಡಕ್ಕೆ ಹೊಂದಿಕೊಂಡಿದ್ದ ಮರದ ಮೇಲೆ ಓಡಾಡುತ್ತಿದ್ದ ಮಂಗನ ಹಾರಾಟದಿಂದ ಛಾವಣಿಯ ಭಾಗ ಕುಸಿದು ಬಿದ್ದಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಳೆಯ ಕಟ್ಟಡದ ವರಾಂಡಾದ ಮೇಲ್ಭಾಗದ ಛಾವಣಿಯ ಪದರು ಮತ್ತು ಅವಶೇಷಗಳು ನೆಲಕ್ಕುರುಳಿದ್ದು, ಕಟ್ಟಡದ ಶಿಥಿಲಾವಸ್ಥೆ ಮತ್ತೊಮ್ಮೆ ಬಯಲಿಗೆ ಬಂದಿದೆ.&lt;/p&gt;&lt;h2&gt;&lt;strong&gt;ಖಾಲಿಯಾಗಿರೋ ಕಟ್ಟಡ&lt;/strong&gt;&lt;/h2&gt;&lt;p&gt;ಈ ಕುರಿತು ಪ್ರತಿಕ್ರಿಯಿಸಿರುವ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಅಣ್ಣಪ್ಪ ಹಾದಿಮನಿ, ಈ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ. ಶಾಲೆಗೆ ಈಗಾಗಲೇ 8 ಕೊಠಡಿಗಳನ್ನು ಹೊಂದಿರುವ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಅದೇ ಕಟ್ಟಡದಲ್ಲಿ ಪಾಠ ಬೋಧನೆ ಮಾಡಲಾಗುತ್ತಿದೆ. ಮಕ್ಕಳು ಸಂಪೂರ್ಣ ಸುರಕ್ಷಿತ ವಾತಾವರಣದಲ್ಲಿದ್ದಾರೆ. ಹಳೆಯ ಕಟ್ಟಡವನ್ನು ನೆಲಸಮಗೊಳಿಸಬೇಕಾಗಿದ್ದರೂ ಅದು ಇನ್ನೂ ತೆರವುಗೊಳ್ಳದೇ ಉಳಿದಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಶಿಕ್ಷಣ ಇಲಾಖೆ ಮಾಹಿತಿಯ ಪ್ರಕಾರ, ತಾಲೂಕಿನ ಶಾಲೆಗಳಲ್ಲಿ ಹಲವು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಅವು ಮಳೆಗಾಲದಲ್ಲಿ ಅಪಾಯದ ತಾಣಗಳಾಗಿ ಪರಿಣಮಿಸುತ್ತಿವೆ. ಬಳಕೆ ಕೈಬಿಟ್ಟಿರುವ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸದಿದ್ದರೆ ಶಾಲಾ ಆವರಣದಲ್ಲಿ ಓಡಾಡುವ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಅಪಾಯ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.&lt;/p&gt;&lt;p&gt;ತಾಲೂಕಿನ ಶಾಲೆಗಳಲ್ಲಿ ಕಳೆದ ಸಾಲಿನ ವರದಿಯಂತೆ ಒಟ್ಟು 218 ಕೊಠಡಿಗಳ ಪೈಕಿ 142 ಹೊಸ ಕೊಠಡಿಗಳು ನಿರ್ಮಾಣಗೊಂಡಿದ್ದು, ಇನ್ನೂ 76 ಶಿಥಿಲಾವಸ್ಥೆಯ ಕೊಠಡಿಗಳು ನೆಲಸಮಗೊಳಿಸುವುದಕ್ಕಾಗಿ ಕಾಯುತ್ತಿವೆ. ಕೆಲವು ಕಟ್ಟಡಗಳು ಸಾಮಾನ್ಯ ದುರಸ್ತಿಗಾಗಿ ಸಹ ನಿರೀಕ್ಷೆಯಲ್ಲಿವೆ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಈಗಾಗಲೇ ದೃಢೀಕರಣ ನೀಡಿದ್ದು, ಎಲ್ಲ ಶಾಲಾ ಕಟ್ಟಡಗಳ ಸುರಕ್ಷತಾ ಪರಿಶೀಲನೆ ನಡೆಸಿ ಸುರಕ್ಷತಾ ಪ್ರಮಾಣಪತ್ರ ನೀಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಅಣ್ಣಪ್ಪ ಹಾದಿಮನಿ ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಶಾಲಾ ಕಟ್ಟಡಗಳ ಸುರಕ್ಷತೆ&lt;/strong&gt;&lt;/h3&gt;&lt;p&gt;ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಶಾಲಾ ಕಟ್ಟಡಗಳ ಸುರಕ್ಷತೆ ಕುರಿತು ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಸಂಗೋಳಗಿ ಘಟನೆಯು ಶಿಥಿಲ ಶಾಲಾ ಕಟ್ಟಡಗಳ ಸಮಸ್ಯೆಯ ಗಂಭೀರತೆಯನ್ನು ಮತ್ತೆ ನೆನಪಿಸಿದ್ದು, ಅನಾಹುತ ಸಂಭವಿಸುವ ಮುನ್ನವೇ ಅಪಾಯಕಾರಿ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಲಬುರಗಿ ಸರ್ಕಾರಿ ಕಾಲೇಜಿನಲ್ಲಿ ಪಾಠ ಕೇಳುತ್ತಿದ್ದಾಗಲೇ ಮೇಲ್ಛಾವಣಿ ಕುಸಿತ; ಐವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ!&lt;/strong&gt;&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/another-school-roof-concrete-collapses-in-kalaburagi-district-aland-taluk-sangolagi-mrq/articleshow-n3ru51f"/>
        </item>
        <item>
            <title><![CDATA[ರಾಜ್ಯ ಸರ್ಕಾರದ 'ಕೇಸ್ ವಾಪಸಿ' ನಿರ್ಧಾರಕ್ಕೆ ಹೈಕೋರ್ಟ್ ತಡೆ!; ಲಾಡ್ಲೆ ಮಶಾಕ್‌ ಗಲಭೆ ಸೇರಿದಂತೆ 52 ಕ್ರಿಮಿನಲ್ ಕೇಸ್‌ ರದ್ದು ತೀರ್ಮಾನಕ್ಕೆ ಬ್ರೇಕ್‌]]></title>
            <link>https://kannada.asianetnews.com/state/karnataka-hc-stays-govt-decision-to-withdraw-52-criminal-cases-alanda-riots-san/articleshow-nl0l6e7</link>
            <guid isPermaLink="true">https://kannada.asianetnews.com/state/karnataka-hc-stays-govt-decision-to-withdraw-52-criminal-cases-alanda-riots-san/articleshow-nl0l6e7</guid>
            <pubDate>Thu, 02 Jul 2026 11:42:55 +0530</pubDate>
            <description><![CDATA[&lt;p&gt;ಆಳಂದ ಕೋಮು ಗಲಭೆ ಸೇರಿದಂತೆ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದ ಕ್ರಮದಲ್ಲಿ ಮೇಲ್ನೋಟಕ್ಕೆ ದೋಷಗಳಿವೆ ಎಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hn3ss3pzp42aysqahc9cbgyp,imgname-gng.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.2): &lt;/strong&gt;ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಭೀಕರ ಆಳಂದ ಕೋಮು ಗಲಭೆ ಸೇರಿದಂತೆ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮೇ 27 ರಂದು ರಾಜ್ಯ ಸರ್ಕಾರ ಕೈಗೊಂಡಿದ್ದ ಸಚಿವ ಸಂಪುಟದ ತೀರ್ಮಾನಕ್ಕೆ ಕರ್ನಾಟಕ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಗಿರೀಶ್ ಭಾರಧ್ವಜ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ಹೈಕೋರ್ಟ್&zwnj;ನ ಉನ್ನತ ವಿಭಾಗೀಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.&lt;/p&gt;&lt;p&gt;ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ವೆಂಕಟೇಶ್ ದಳವಾಯಿ ಅವರು ನ್ಯಾಯಪೀಠದ ಮುಂದೆ ಸುದೀರ್ಘ ವಾದ ಮಂಡಿಸಿದರು. &quot;ರಾಜ್ಯದ ಮೂವರು ಹಿರಿಯ ಸಚಿವರ ಶಿಫಾರಸಿನ ಮೇರೆಗೆ ವಿವಿಧ ಠಾಣೆಗಳಲ್ಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಪ್ರಾಸಿಕ್ಯೂಷನ್&zwnj;ನಿಂದ ಹಿಂಪಡೆಯಲಾಗಿದೆ. ಆದರೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ 2025 ರಲ್ಲಿ ಹೈಕೋರ್ಟ್ ಹೊರಡಿಸಿದ್ದ ಕಟ್ಟುನಿಟ್ಟಿನ ಆದೇಶಕ್ಕೆ ತದ್ವಿರುದ್ಧವಾದ ನಿಲುವನ್ನು ಸರ್ಕಾರ ತಳೆದಿದೆ. ರಾಜಕೀಯ ದುರುದ್ದೇಶದಿಂದ ನಿಯಮಗಳನ್ನು ಗಾಳಿಗೆ ತೂರಲಾಗಿದೆ,&quot; ಎಂದು ಅವರು ಕೋರ್ಟ್ ಗಮನಕ್ಕೆ ತಂದರು.&lt;/p&gt;&lt;p&gt;ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಕ್ರಿಮಿನಲ್ ಪ್ರೊಸೀಜರ್ ಕೋಡ್&zwnj;ನ ಸೆಕ್ಷನ್ 321 ರ ಅಡಿಯಲ್ಲಿ (Section 321 CrPC) ಪ್ರಾಸಿಕ್ಯೂಷನ್ ಹಿಂಪಡೆಯಲು ಕೈಗೊಂಡ ಕ್ರಮದಲ್ಲಿ ಮೇಲ್ನೋಟಕ್ಕೆ ತಪ್ಪುಗಳು ಕಂಡುಬಂದಿವೆ ಎಂದು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳಿಗೆ ತಡೆ ನೀಡಿರುವ ಪೀಠವು, ರಾಜ್ಯ ಗೃಹ ಇಲಾಖೆ ಹಾಗೂ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗೆ ತುರ್ತು ನೋಟಿಸ್ ಜಾರಿ ಮಾಡಿದೆ.&lt;/p&gt;&lt;h2&gt;&lt;strong&gt;ಲಾಡ್ಲೆ ಮಶಾಕ್ ದರ್ಗಾ ಗಲಭೆ ಕೇಸ್&zwnj;ಗೂ ತಡೆ&lt;/strong&gt;&lt;/h2&gt;&lt;p&gt;ಸರ್ಕಾರ ಹಿಂಪಡೆದಿದ್ದ 52 ಪ್ರಕರಣಗಳಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕುಖ್ಯಾತ 'ಲಾಡ್ಲೆ ಮಶಾಕ್ ದರ್ಗಾ ಗಲಭೆ' ಪ್ರಕರಣ ಸೇರಿದಂತೆ ಕೆಲವು ಅತ್ಯಂತ ಸೂಕ್ಷ್ಮ ಕೋಮುಗಲಭೆ ಪ್ರಕರಣಗಳೂ ಸೇರಿದ್ದವು. ವಿವಿಧ ರಾಜಕಾರಣಿಗಳು, ರೈತಪರ ಸಂಘಟನೆಗಳ ಮುಖಂಡರು, ಕನ್ನಡಪರ ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಈ ಪ್ರಕರಣಗಳನ್ನು ಕೈಬಿಡಲು ಸರ್ಕಾರ ಮುಂದಾಗಿತ್ತು. ಆದರೆ ಹೈಕೋರ್ಟ್&zwnj;ನ ಈಗಿನ ತಡೆಯಾಜ್ಞೆಯಿಂದಾಗಿ ಈ ಎಲ್ಲಾ ಪ್ರಕರಣಗಳ ಕಾನೂನು ಪ್ರಕ್ರಿಯೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.&lt;/p&gt;&lt;h2&gt;&lt;strong&gt;ಸಚಿವ ಯು.ಟಿ. ಖಾದರ್&zwnj;ಗೆ ನೋಟಿಸ್ ನೀಡಲು ಕೋರ್ಟ್ ನಿರಾಕರಣೆ&lt;/strong&gt;&lt;/h2&gt;&lt;p&gt;ಅರ್ಜಿಯಲ್ಲಿ ಮೂರನೇ ಪ್ರತಿವಾದಿಯನ್ನಾಗಿ ಮಾಡಲಾಗಿದ್ದ ಹಾಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. &quot;ಸದನದ ಒಳಗೆ (Assembly) ಶಾಸಕರು ಅಥವಾ ಸಚಿವರು ನೀಡುವ ಹೇಳಿಕೆಗಳಿಗೆ ಹಾಗೂ ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ಕಾನೂನಾತ್ಮಕ ವಿನಾಯಿತಿ ಇರುತ್ತದೆ. ಕೇವಲ ಸದನದ ಹೇಳಿಕೆಯನ್ನು ಆಧರಿಸಿ ಅವರೊಬ್ಬರನ್ನೇ ವೈಯಕ್ತಿಕವಾಗಿ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಲು ಬರುವುದಿಲ್ಲ,&quot; ಎಂದು ಸಿಜೆ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ. ಹಿಂದಿನ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಸರ್ಕಾರ ರಾಜಕೀಯ ಪ್ರಭಾವದಡಿ ಕೇಸ್&zwnj;ಗಳನ್ನು ವಾಪಸ್ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ, ಹೈಕೋರ್ಟ್&zwnj;ನ ಈ ಮಧ್ಯಂತರ ಆದೇಶವು ಸರ್ಕಾರಕ್ಕೆ ತೀವ್ರ ಕಾನೂನಾತ್ಮಕ ಹಿನ್ನಡೆಯನ್ನು ತಂದಿಟ್ಟಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kalaburagi</category>
            <dc:creator>Santosh Naik</dc:creator>
            <atom:link href="https://kannada.asianetnews.com/state/karnataka-hc-stays-govt-decision-to-withdraw-52-criminal-cases-alanda-riots-san/articleshow-nl0l6e7"/>
        </item>
        <item>
            <title><![CDATA[ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಮೆಜೆಸ್ಟಿಕ್‌ವರೆಗೆ ವಿಸ್ತರಿಸಿ: ಜನರ ಆಗ್ರಹಕ್ಕೆ ರೈಲ್ವೆ ಇಲಾಖೆ ಹೇಳಿದ್ದೇನು?]]></title>
            <link>https://kannada.asianetnews.com/gallery/state/indian-railway-users-demand-extend-bidar-express-and-kalaburagi-vande-bharat-smvt-to-ksr-bengaluru-p0uuaf9</link>
            <guid isPermaLink="true">https://kannada.asianetnews.com/gallery/state/indian-railway-users-demand-extend-bidar-express-and-kalaburagi-vande-bharat-smvt-to-ksr-bengaluru-p0uuaf9</guid>
            <pubDate>Mon, 15 Jun 2026 21:40:25 +0530</pubDate>
            <description><![CDATA[&lt;p&gt;ಉತ್ತರ ಕರ್ನಾಟಕದ ಪ್ರಯಾಣಿಕರು, ಬೆಂಗಳೂರು-ಬೀದರ್ ಎಕ್ಸ್&zwnj;ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲುಗಳನ್ನು SMVT ನಿಲ್ದಾಣದಿಂದ ನಗರದ ಹೃದಯಭಾಗದಲ್ಲಿರುವ KSR ಬೆಂಗಳೂರು ನಿಲ್ದಾಣಕ್ಕೆ ವಿಸ್ತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ರೈಲ್ವೆ ಇಲಾಖೆ ಹೇಳಿದ್ದೇನು? ಮಾಹಿತಿ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv608jpx9vmpeav19kpmt0r0,imgname-vande-bharat-train-extend-to-majestic-1781539293916.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕರ್ನಾಟಕದ ಪ್ರಯಾಣಿಕರು, ಬೆಂಗಳೂರು-ಬೀದರ್ ಎಕ್ಸ್&zwnj;ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲುಗಳನ್ನು SMVT ನಿಲ್ದಾಣದಿಂದ ನಗರದ ಹೃದಯಭಾಗದಲ್ಲಿರುವ KSR ಬೆಂಗಳೂರು ನಿಲ್ದಾಣಕ್ಕೆ ವಿಸ್ತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ರೈಲ್ವೆ ಇಲಾಖೆ ಹೇಳಿದ್ದೇನು? ಮಾಹಿತಿ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಬೆಂಗಳೂರಿಗೆ ಸಂಚರಿಸುವ ಸಾವಿರಾರು ಪ್ರಯಾಣಿಕರು ಈಗ ರೈಲ್ವೆ ಇಲಾಖೆಯ ಮುಂದೆ ಒಂದು ಪ್ರಮುಖ ಬೇಡಿಕೆಯನ್ನು ಇಟ್ಟಿದ್ದಾರೆ. ಪ್ರಸ್ತುತ ಭೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಂದ ಸಂಚರಿಸುತ್ತಿರುವ ಬೆಂಗಳೂರು-ಬೀದರ್ ಎಕ್ಸ್&zwnj;ಪ್ರೆಸ್ ಮತ್ತು ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲುಗಳನ್ನು ನಗರದ ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು ನಿಲ್ದಾಣದವರೆಗೆ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.&lt;/p&gt;&lt;img&gt;&lt;p&gt;ಸದ್ಯಕ್ಕೆ ಈ ಎರಡೂ ರೈಲುಗಳು ಭೈಯಪ್ಪನಹಳ್ಳಿಯ SMVT ನಿಲ್ದಾಣದಿಂದ ಆರಂಭವಾಗಿ ಅಲ್ಲೇ ಕೊನೆಗೊಳ್ಳುತ್ತವೆ. ಆದರೆ, ಬೆಂಗಳೂರಿನ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ವಾಸಿಸುವ ಪ್ರಯಾಣಿಕರಿಗೆ SMVT ನಿಲ್ದಾಣಕ್ಕೆ ತಲುಪುವುದು ಒಂದು ದೊಡ್ಡ ಸವಾಲಾಗಿದೆ. 'ನಗರದ ಪಶ್ಚಿಮ ಭಾಗಗಳಿಂದ SMVT ನಿಲ್ದಾಣಕ್ಕೆ ಹೋಗಲು ಗಂಟೆಗಟ್ಟಲೆ ಟ್ರಾಫಿಕ್&zwnj;ನಲ್ಲಿ ಸಿಲುಕಬೇಕಾಗುತ್ತದೆ. ವಿಶೇಷವಾಗಿ ತಡರಾತ್ರಿ ಅಥವಾ ಮುಂಜಾನೆ ರೈಲು ಹತ್ತಬೇಕಾದಾಗ ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ದುಬಾರಿ ಕ್ಯಾಬ್&zwnj;ಗಳನ್ನು ಅವಲಂಬಿಸಬೇಕಾಗುತ್ತದೆ,' ಎಂದು ಜಾಲಹಳ್ಳಿಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಪ್ರಕಾರ, ಮೆಜೆಸ್ಟಿಕ್ ನಿಲ್ದಾಣವು ನಗರದ ಮಧ್ಯಭಾಗದಲ್ಲಿದೆ ಮತ್ತು ಇಲ್ಲಿಂದ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಸಂಪರ್ಕ ಅತ್ಯುತ್ತಮವಾಗಿದೆ. ಮೆಜೆಸ್ಟಿಕ್&zwnj;ನಿಂದ ನಗರದ ಯಾವುದೇ ಮೂಲೆಗೆ ಹೋಗಲು ಸುಲಭ ಮತ್ತು ಕಡಿಮೆ ವೆಚ್ಚವಾಗುತ್ತದೆ. 'ದೂರದ ಊರುಗಳಿಗೆ ಹೋಗುವ ರೈಲುಗಳು ಮೆಜೆಸ್ಟಿಕ್&zwnj;ನಿಂದ ಹೊರಟರೆ ನಮಗೆ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. SMVT ನಿಲ್ದಾಣವು ಸಂಪರ್ಕದ ದೃಷ್ಟಿಯಿಂದ ಇನ್ನೂ ಸಾಕಷ್ಟು ಸುಧಾರಿಸಬೇಕಿದೆ' ಎಂದು ಪ್ರಯಾಣಿಕರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಬಗ್ಗೆ ರೈಲ್ವೆ ಅಧಿಕಾರಿಗಳನ್ನು ಕೇಳಿದಾಗ, ಅವರು ಮೆಜೆಸ್ಟಿಕ್ ಮತ್ತು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿನ ಅತಿಯಾದ ದಟ್ಟಣೆಯನ್ನು ಕಡಿಮೆ ಮಾಡಲು SMVT ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಆರಂಭದಲ್ಲಿ ಕಂಟೋನ್ಮೆಂಟ್ ನಿಲ್ದಾಣವನ್ನು ಈ ರೈಲುಗಳಿಗೆ ಟರ್ಮಿನಲ್ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಅಲ್ಲಿ 'ಪಿಟ್-ಲೈನ್' ಮತ್ತು ಚಾರ್ಜಿಂಗ್ ಸೌಲಭ್ಯಗಳ ಕೊರತೆ ಇರುವುದರಿಂದ ತಾತ್ಕಾಲಿಕವಾಗಿ SMVT ನಿಲ್ದಾಣವನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಕೇವಲ ದಟ್ಟಣೆ ಕಡಿಮೆ ಮಾಡುವ ನೆಪದಲ್ಲಿ ಪ್ರಯಾಣಿಕರಿಗೆ ತೊಂದರೆ ಕೊಡಬಾರದು ಎಂಬುದು ರೈಲು ಬಳಕೆದಾರರ ವಾದವಾಗಿದೆ. ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಈ ಪ್ರಮುಖ ರೈಲುಗಳನ್ನು ಮೆಜೆಸ್ಟಿಕ್ ನಿಲ್ದಾಣದವರೆಗೆ ವಿಸ್ತರಿಸುವ ಬಗ್ಗೆ ರೈಲ್ವೆ ಮಂಡಳಿ ಶೀಘ್ರವೇ ತೀರ್ಮಾನ ಕೈಗೊಳ್ಳಬೇಕೆಂದು ಪ್ರಯಾಣಿಕರ ಸಂಘಟನೆಗಳು ಒತ್ತಾಯಿಸಿವೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railway-users-demand-extend-bidar-express-and-kalaburagi-vande-bharat-smvt-to-ksr-bengaluru-p0uuaf9"/>
        </item>
        <item>
            <title><![CDATA[ಕಲಬುರಗಿ: ಅಫಜಲಪುರ ಮಾಜಿ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌]]></title>
            <link>https://kannada.asianetnews.com/gallery/kalaburagi/kalaburagi-ex-tahsildar-shashikala-padagatti-jail-term-corruption-case-san-q2sg0vw</link>
            <guid isPermaLink="true">https://kannada.asianetnews.com/gallery/kalaburagi/kalaburagi-ex-tahsildar-shashikala-padagatti-jail-term-corruption-case-san-q2sg0vw</guid>
            <pubDate>Fri, 10 Jul 2026 15:43:34 +0530</pubDate>
            <description><![CDATA[&lt;p&gt;ಕಲಬುರಗಿಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಮತ್ತು ಮತ್ತೊಬ್ಬರಿಗೆ ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5r179apxcbezbq3vhkq6px,imgname-shashikala-padagatti---1--1783678147882.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಮತ್ತು ಮತ್ತೊಬ್ಬರಿಗೆ ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.&amp;nbsp;&lt;/p&gt;&lt;img&gt;&lt;p&gt;ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಹಾಗೂ ಅವರಿಗೆ ಲಂಚದ ಹಣ ತಲುಪಿಸಿದ್ದ ಶಿವಾನಂದ ಜಮಖಂಡಿಗೆ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಇಬ್ಬರಿಗೂ ತಲಾ 20 ಸಾವಿರ ರೂಪಾಯಿ ದಂಡವನ್ನು ವಿಧಿಸಿ ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಮಹತ್ವದ ಆದೇಶ ನೀಡಿದ್ದಾರೆ.&lt;/p&gt;&lt;img&gt;&lt;p&gt;2017ರಲ್ಲಿ ಅಫಜಲಪುರ ತಾಲ್ಲೂಕಿನ ಕರಜಗಿ ನಾಡ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್ ಆಗಿ ಶಿವಲಿಂಗಯ್ಯ ಬಸಯ್ಯ ಮಠ ಅವರು ಕೆಲಸ ಮಾಡುತ್ತಿದ್ದರು. ಇವರು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ದೂರು ತಹಶೀಲ್ದಾರ್ ಶಶಿಕಲಾ ಅವರಿಗೆ ಬಂದಿತ್ತು. ಈ ಪ್ರಕರಣದಲ್ಲಿ ತಮಗೆ ಸಹಾಯ ಮಾಡುವಂತೆ ಶಿವಲಿಂಗಯ್ಯ ಅವರು ಕೋರಿದಾಗ, ತಹಶೀಲ್ದಾರ್ ಶಶಿಕಲಾ ಅವರು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಹಣವನ್ನು ಶಿವಾನಂದ ಜಮಖಂಡಿಗೆ ತಲುಪಿಸಬೇಕು, ಇಲ್ಲದಿದ್ದರೆ ಕೆಲಸಕ್ಕೆ ಬೇರೆಯವರನ್ನು ನೇಮಿಸಿಕೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದರು.&lt;/p&gt;&lt;img&gt;&lt;p&gt;ಲಂಚದ ಬೇಡಿಕೆಯಿಂದ ಬೇಸತ್ತ ಶಿವಲಿಂಗಯ್ಯ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, 2017ರ ಆಗಸ್ಟ್ 31ರಂದು ಶಿವಲಿಂಗಯ್ಯ ಅವರಿಂದ ಲಂಚದ ಹಣವನ್ನು ಪಡೆದ ಶಿವಾನಂದ ಜಮಖಂಡಿ, ಅದನ್ನು ತಹಶೀಲ್ದಾರ್ ಶಶಿಕಲಾ ಅವರಿಗೆ ತಲುಪಿಸಲು ಹೋಗಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ರೆಡ್&zwnj;ಹ್ಯಾಂಡ್ ಆಗಿ ಬಂಧಿಸಿದ್ದರು. ಲೋಕಾಯುಕ್ತ ಡಿವೈಎಸ್&zwnj;ಪಿ ಸಂತೋಷ ಬನ್ನಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದರು.&lt;/p&gt;&lt;img&gt;&lt;p&gt;ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರು ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ರಾಜ್ಯ ಸರ್ಕಾರ ಅವರಿಗೆ ಕಡ್ಡಾಯ ನಿವೃತ್ತಿಗೆ (Compulsory Retirement) ಸೂಚಿಸಿ, ಕೆಲಸದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು.&lt;/p&gt;&lt;img&gt;&lt;p&gt;ಈ ಗಂಭೀರ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿ ಕೃಷ್ಣಪ್ಪ ಕಲ್ಲದೇವರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (ಚಾರ್ಜ್&zwnj;ಶೀಟ್) ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ (SPP) ಅಶೋಕ ಎಸ್. ಚಾಂದಕವಠ ಅವರು ಸರ್ಕಾರದ ಪರವಾಗಿ ಪ್ರಬಲ ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ಇಬ್ಬರೂ ಆರೋಪಿಗಳು ಅಪರಾಧಿಗಳು ಎಂದು ತೀರ್ಪು ನೀಡಿ ಜೈಲು ಶಿಕ್ಷೆ ಪ್ರಕಟಿಸಿದೆ.&lt;/p&gt;]]></content:encoded>
            <category>kalaburagi</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/kalaburagi/kalaburagi-ex-tahsildar-shashikala-padagatti-jail-term-corruption-case-san-q2sg0vw"/>
        </item>
        <item>
            <title><![CDATA[ಕಲಬುರಗಿ: ಮಳೆಗಾಗಿ ಪ್ರಾರ್ಥಿಸಿ ಮೂರು ದಿನದಲ್ಲಿ ಬರೋಬ್ಬರಿ 45 ಕಿ.ಮೀ ಉರುಳುಸೇವೆ ಮಾಡಿದ ಮಹಿಳೆ!]]></title>
            <link>https://kannada.asianetnews.com/karnataka-districts/woman-performs-45-km-urulu-seve-rolling-ritual-to-pray-for-rain-rav/articleshow-rp96ihi</link>
            <guid isPermaLink="true">https://kannada.asianetnews.com/karnataka-districts/woman-performs-45-km-urulu-seve-rolling-ritual-to-pray-for-rain-rav/articleshow-rp96ihi</guid>
            <pubDate>Fri, 17 Jul 2026 05:42:00 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮಳೆಗಾಗಿ ಜನ ಪೂಜೆ, ಪ್ರಾರ್ಥನೆ ಮಾಡುತ್ತಿದ್ದು, ಇಲ್ಲೊಬ್ಬ ಮಹಿಳೆ 3 ದಿನದಲ್ಲಿ ಬರೋಬ್ಬರಿ 45 ಕಿ.ಮೀ. ಉರುಳುಸೇವೆ ಸೇವೆ ಮಾಡಿ ಮುಂಬರುವ ದಿನಗಳಲ್ಲಿ ಸಕಾಲಕ್ಕೆ ಸರಿಯಾಗಿ ಮಳೆಯಾಗಿ ಉತ್ತಮ ಬೆಳೆ ಬರುವಂತೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxpnre5ayyjm18c6sywwxwy5,imgname-----------------------2026-07-17t052327.883-1784246188201.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಫಜಲಪುರ (ಜು.17): &amp;nbsp;&lt;/strong&gt;ರಾಜ್ಯದಲ್ಲಿ ಮಳೆಗಾಗಿ ಜನ ಪೂಜೆ, ಪ್ರಾರ್ಥನೆ ಮಾಡುತ್ತಿದ್ದು, ಇಲ್ಲೊಬ್ಬ ಮಹಿಳೆ 3 ದಿನದಲ್ಲಿ ಬರೋಬ್ಬರಿ 45 ಕಿ.ಮೀ. ಉರುಳುಸೇವೆ ಸೇವೆ ಮಾಡಿ ಮುಂಬರುವ ದಿನಗಳಲ್ಲಿ ಸಕಾಲಕ್ಕೆ ಸರಿಯಾಗಿ ಮಳೆಯಾಗಿ ಉತ್ತಮ ಬೆಳೆ ಬರುವಂತೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.&lt;/p&gt;&lt;p&gt;ಮಹಾನಂದಾ ಅಮಾತಿ(Mahananda amaati) ಹದರೆ ಎನ್ನುವರೇ ಉರುಳುಸೇವೆ ಮಾಡಿದ ಭಕ್ತೆ. ಇವರು ಮಂಗಳವಾರ ಮಹಾರಾಷ್ಟ್ರದ ಸೊಲ್ಲಾಪುರ್ ಜಿಲ್ಲೆಯ ಆಹೇರವಾಡಿ (ಐರೋಡಿ) ಗ್ರಾಮದಿಂದ ಆರಂಭಿಸಿ ಗುರುವಾರ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಮಣ್ಣೂರು ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಯಶಸ್ವಿಯಾಗಿ ತಲುಪಿದ್ದಾರೆ.&lt;/p&gt;&lt;h2&gt;ಉರುಳು ಸೇವೆ ಉದ್ದಕ್ಕೂ ಸಾಧು ಸಂತರು ಭಾಗಿ&lt;/h2&gt;&lt;p&gt;ಆಹೇರವಾಡಿ ಗ್ರಾಮದಿಂದ 45 ಕಿ.ಮೀ. ದಾರಿಯುದ್ದಕ್ಕೂ ರಸ್ತೆ ಮೇಲೆ ಬೆಡ್&zwnj;ಶೀಟ್ ಹಾಗೂ ಬಟ್ಟೆ ಹಾಕಲಾಗಿತ್ತು. ಇದರ ಮೇಲೆ ಮಹಾನಂದಾ ಅವರು ಉರುಳುಸೇವೆ ಮಾಡಿ ದೇವಿ ದರ್ಶನ ಪಡೆದಿದ್ದಾರೆ. ಉರುಳು ಸೇವೆಯುದ್ದಕ್ಕೂ ಸಾಧು-ಸಂತರು, ಭಕ್ತರು, ಯುವಕರು, ಮಕ್ಕಳು ಭಜನೆ ಮಾಡುತ್ತಾ ಪ್ರಾರ್ಥನೆ ಸಲ್ಲಿಸಿದರು.&lt;/p&gt;&lt;h3&gt;ಎಲ್ಲಿಂದ ಎಲ್ಲಿಗೆ?&lt;/h3&gt;&lt;p&gt;ಮಹಾನಂದ ಅಮಾತಿ ಎನ್ನುವ ಮಹಾರಾಷ್ಟ್ರ ಗಡಿಯ ಮಹಿಳೆ ರಾಜ್ಯದಲ್ಲಿ ಮಳೆಗಾಗಿ ಪ್ರಾರ್ಥಿಸಿ 3 ದಿನದಲ್ಲಿ ಬರೋಬ್ಬರಿ 45 ಕಿ.ಮೀ. ಉರುಳು ಸೇವೆ ಮಾಡಿ ಪ್ರಾರ್ಥಿಸಿದ್ದಾರೆ. ಮಂಗಳವಾರ ಮಹಾರಾಷ್ಟ್ರದ ಸೊಲ್ಲಾಪುರ್ ಜಿಲ್ಲೆಯ ಆಹೇರವಾಡಿ (ಐರೋಡಿ) ಗ್ರಾಮದಿಂದ ಉರುಳು ಸೇವೆ ಆರಂಭಿಸಿ ಗುರುವಾರ ಕಲಬುರಗಿಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಮಣ್ಣೂರು ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಬಂದು ತಲುಪಿದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/woman-performs-45-km-urulu-seve-rolling-ritual-to-pray-for-rain-rav/articleshow-rp96ihi"/>
        </item>
        <item>
            <title><![CDATA[ಮುಂಬೈ-ಹೈದರಾಬಾದ್ ಬುಲೆಟ್ ರೈಲು ಯೋಜನೆ: ಡಿಪಿಆರ್ ವರದಿ ಸಿದ್ಧ, ಕಲಬುರಗಿಗೆ ಸಿಗಲಿದೆ ಹೈ-ಸ್ಪೀಡ್ ನಿಲ್ದಾಣ!]]></title>
            <link>https://kannada.asianetnews.com/karnataka-districts/mumbai-hyderabad-bullet-train-dpr-finalized-kalaburagi-picked-as-key-station-in-karnataka-gdp/articleshow-vqg1gzg</link>
            <guid isPermaLink="true">https://kannada.asianetnews.com/karnataka-districts/mumbai-hyderabad-bullet-train-dpr-finalized-kalaburagi-picked-as-key-station-in-karnataka-gdp/articleshow-vqg1gzg</guid>
            <pubDate>Thu, 11 Jun 2026 19:38:38 +0530</pubDate>
            <description><![CDATA[ಮುಂಬೈ-ಹೈದರಾಬಾದ್ ಬುಲೆಟ್ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಪೂರ್ಣಗೊಂಡಿದೆ. ಈ ಹೈ-ಸ್ಪೀಡ್ ಕಾರಿಡಾರ್ ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣವನ್ನು ಸಂಪರ್ಕಿಸಲಿದ್ದು, ಕಲಬುರಗಿಯಲ್ಲಿ ಪ್ರಮುಖ ನಿಲ್ದಾಣದೊಂದಿಗೆ ಪ್ರಯಾಣದ ಸಮಯವನ್ನು ಕೇವಲ 3 ಗಂಟೆಗಳಿಗೆ ಇಳಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3ykd1r8dc1wt2037yzp870,imgname-bullet-train-1778249217074.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ದೇಶದ ಹೈ-ಸ್ಪೀಡ್ ರೈಲು ನೆಟ್&zwnj;ವರ್ಕ್&zwnj;ನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಭಾರತ ಮುಂದಾಗಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈ ಮತ್ತು ಪ್ರಮುಖ ತಂತ್ರಜ್ಞಾನ ಕೇಂದ್ರವಾದ ಹೈದರಾಬಾದ್ ನಡುವೆ ಪ್ರಸ್ತಾವಿತ ಬುಲೆಟ್ ರೈಲು ಯೋಜನೆಗೆ ಈಗ ದಾರಿಸುಗಮವಾಗಿದ್ದು, ಈ ಮಾರ್ಗದ ವಿವರವಾದ ಯೋಜನಾ ವರದಿ (DPR - Detailed Project Report) ಪೂರ್ಣಗೊಂಡಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಈ ಹೈ-ಸ್ಪೀಡ್ ರೈಲು ಕಾರಿಡಾರ್&zwnj;ನಲ್ಲಿ ಕರ್ನಾಟಕಕ್ಕೂ ಅತ್ಯಂತ ಪ್ರಮುಖ ಪಾತ್ರ ಲಭಿಸಿದೆ. ಯಾಕೆಂದರೆ ಪ್ರಮುಖ ನಿಲ್ದಾಣ ಕಲಬುರಗಿಯಲ್ಲಿ ನಿಲುಗಡೆ ಇದೆ.&lt;/p&gt;&lt;h2&gt;671 ಕಿ.ಮೀ. ಉದ್ದದ ಕಾರಿಡಾರ್: ಮೂರು ರಾಜ್ಯಗಳಿಗೆ ಸಂಪರ್ಕ&lt;/h2&gt;&lt;p&gt;ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಸಿದ್ಧಪಡಿಸಿರುವ ಈ ಯೋಜನೆಯು ಒಟ್ಟು 671 ಕಿಲೋಮೀಟರ್ ಉದ್ದದ ಮಾರ್ಗವನ್ನು ಹೊಂದಿದೆ. ಇದು ಮೂರು ಪ್ರಮುಖ ರಾಜ್ಯಗಳ ಮೂಲಕ ಹಾದು ಹೋಗಲಿದ್ದು, ರಾಜ್ಯವಾರು ಹಂಚಿಕೆ ಈ ಕೆಳಗಿನಂತಿದೆ:&lt;/p&gt;&lt;ul&gt; &lt;li&gt;&lt;strong&gt;ಮಹಾರಾಷ್ಟ್ರ: 457 ಕಿ.ಮೀ.&lt;/strong&gt;&lt;/li&gt; &lt;li&gt;&lt;strong&gt;ಕರ್ನಾಟಕ: 121 ಕಿ.ಮೀ.&lt;/strong&gt;&lt;/li&gt; &lt;li&gt;&lt;strong&gt;ತೆಲಂಗಾಣ: 93 ಕಿ.ಮೀ.&lt;/strong&gt;&lt;/li&gt;&lt;/ul&gt;&lt;p&gt;ಈ ಕಾರಿಡಾರ್&zwnj;ನಲ್ಲಿ ಕರ್ನಾಟಕದ ಮೂಲಕ ಹಾದುಹೋಗುವ 121 ಕಿ.ಮೀ. ಮಾರ್ಗದಲ್ಲಿ, ರಾಜ್ಯದ ಪ್ರಮುಖ ನಗರವಾದ ಕಲಬುರಗಿಯಲ್ಲಿ ಹೈ-ಸ್ಪೀಡ್ ನಿಲ್ದಾಣವನ್ನು ನಿರ್ಮಿಸಲು ಯೋಜಿಸಲಾಗಿದೆ. ಇದರಿಂದಾಗಿ ಇಡೀ ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಭಾಗದ ಪ್ರಯಾಣಿಕರಿಗೆ ಮತ್ತು ಉದ್ಯಮಿಗಳಿಗೆ ಜಾಗತಿಕ ಮಟ್ಟದ ಸಾರಿಗೆ ಸೌಲಭ್ಯ ಸಿಕ್ಕಂತಾಗಲಿದೆ.&lt;/p&gt;&lt;h2&gt;12 ಗಂಟೆಗಳ ಪ್ರಯಾಣ ಕೇವಲ 3 ಗಂಟೆಗೆ ಮುಕ್ತಾಯ!&lt;/h2&gt;&lt;p&gt;ಪ್ರಸ್ತುತ ಮುಂಬೈ ಮತ್ತು ಹೈದರಾಬಾದ್ ನಡುವೆ ಸಂಚರಿಸುವ ಸಮಯ ಸುಮಾರು 12 ರಿಂದ 15 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತವೆ. ಆದರೆ, ಪ್ರಸ್ತಾವಿತ ಬುಲೆಟ್ ರೈಲುಗಳು ಗಂಟೆಗೆ ಸುಮಾರು 300 ಕಿ.ಮೀ ವೇಗದಲ್ಲಿ ಚಲಿಸಲಿವೆ. ಇದು ಸದ್ಯದ ಎಕ್ಸ್&zwnj;ಪ್ರೆಸ್ ರೈಲುಗಳಿಗಿಂತ ಐದು ಪಟ್ಟು ಹೆಚ್ಚು ವೇಗವಾಗಿದೆ.&lt;/p&gt;&lt;p&gt;ಯೋಜನೆಯ ಅಂದಾಜಿನ ಪ್ರಕಾರ, ಯಾವುದೇ ನಿಲ್ದಾಣಗಳಲ್ಲಿ ನಿಲ್ಲದೆ ನೇರವಾಗಿ ಚಲಿಸಿದರೆ, ಮುಂಬೈನಿಂದ ಹೈದರಾಬಾದ್&zwnj;ಗೆ ಕೇವಲ 2 ಗಂಟೆ 55 ನಿಮಿಷಗಳಲ್ಲಿ ತಲುಪಬಹುದು. ಮಾರ್ಗ ಮಧ್ಯದ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಪಡೆದರೂ ಸಹ, ಇಡೀ ಪ್ರಯಾಣಕ್ಕೆ ಗರಿಷ್ಠ 3 ಗಂಟೆ 13 ನಿಮಿಷಗಳು ಮಾತ್ರ ಬೇಕಾಗಬಹುದು.&lt;/p&gt;&lt;h2&gt;ಆರ್ಥಿಕ ಮತ್ತು ಐಟಿ ಹಬ್&zwnj;ಗಳ ಜೋಡಣೆ: ನಿಲ್ದಾಣಗಳ ವಿವರ&lt;/h2&gt;&lt;p&gt;ಈ ಹೈ-ಸ್ಪೀಡ್ ಕಾರಿಡಾರ್ ಮುಂಬೈ-ಪುಣೆ-ಸೋಲಾಪುರ-ಕಲಬುರಗಿ-ಹೈದರಾಬಾದ್ ನಗರಗಳನ್ನು ಜೋಡಿಸಲಿದ್ದು, ದೇಶದ ಪ್ರಮುಖ ಹಣಕಾಸು ಮತ್ತು ಐಟಿ ಕೇಂದ್ರಗಳನ್ನು ಬೆಸೆಯುವ ಶಕ್ತಿಶಾಲಿ ಆರ್ಥಿಕ ಕಾರಿಡಾರ್ ಆಗಿ ಮಾರ್ಪಡಲಿದೆ.&lt;/p&gt;&lt;h3&gt;ವಿವಿಧ ರಾಜ್ಯಗಳಲ್ಲಿ ಪ್ರಸ್ತಾವಿತ ನಿಲ್ದಾಣಗಳ ವಿವರ:&lt;/h3&gt;&lt;p&gt;ಮಹಾರಾಷ್ಟ್ರ: ವಿಖ್ರೋಲಿ, ಥಾಣೆ, ನವಿ ಮುಂಬೈ, ಲೋನಾವಾಲಾ, ಪಿಂಪ್ರಿ-ಚಿಂಚ್&zwnj;ವಾಡ್, ಪುಣೆ, ಬಾರಾಮತಿ, ಪಂಢರಪುರ ಮತ್ತು ಸೋಲಾಪುರ್.&lt;/p&gt;&lt;p&gt;ಕರ್ನಾಟಕ: ಕಲಬುರಗಿ (ಪ್ರಮುಖ ನಿಲುಗಡೆ).&lt;/p&gt;&lt;p&gt;ತೆಲಂಗಾಣ: ಕೋಕಾಪೇಟ್, ವಿಕಾರಾಬಾದ್ ಮತ್ತು ಶಂಶಾಬಾದ್. (ಶಂಶಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೈಲುಗಳ ನಿರ್ವಹಣೆಗಾಗಿ ಬೃಹತ್ ಡಿಪೋವನ್ನು ಕೂಡ ನಿರ್ಮಿಸಲಾಗುತ್ತದೆ).&lt;/p&gt;&lt;h2&gt;ಖಂಡಾಲಾ ಘಾಟ್: ದೇಶದ ಅತ್ಯಂತ ಸವಾಲಿನ ಪ್ರದೇಶ&lt;/h2&gt;&lt;p&gt;ಈ ಬೃಹತ್ ಯೋಜನೆಯಲ್ಲಿ ತಾಂತ್ರಿಕವಾಗಿ ಅತ್ಯಂತ ಕಠಿಣವಾದ ಭಾಗವೆಂದರೆ ಮಹಾರಾಷ್ಟ್ರದ ಖಂಡಾಲಾ ಘಾಟ್ ಪ್ರದೇಶ. ಈ ಪಶ್ಚಿಮ ಘಟ್ಟಗಳ ಸವಾಲಿನ ಭೂಪ್ರದೇಶವನ್ನು ದಾಟಲು ಇಂಜಿನಿಯರಿಂಗ್ ಮಟ್ಟದಲ್ಲಿ ದೈತ್ಯ ಯೋಜನೆ ರೂಪಿಸಲಾಗಿದೆ. ಇಲ್ಲಿ ಸುಮಾರು 24 ಕಿ.ಮೀ ವ್ಯಾಪ್ತಿಯಲ್ಲಿ 13 ಅತ್ಯಾಧುನಿಕ ಸುರಂಗ ಮಾರ್ಗಗಳನ್ನು (Tunnels) ನಿರ್ಮಿಸಲಾಗುವುದು. ಇದರೊಂದಿಗೆ ಒಟ್ಟು 35 ಕಿ.ಮೀ ಉದ್ದದ ಭೂಗತ (Underground) ಮಾರ್ಗವನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಭಾರತೀಯ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಸಂಕೀರ್ಣ ಹಾಗೂ ಸಾಹಸಮಯ ಯೋಜನೆಯಾಗಲಿದೆ.&lt;/p&gt;&lt;h2&gt;ಭೂಸ್ವಾಧೀನ ಪ್ರಕ್ರಿಯೆ ಮತ್ತು ನಿರ್ಮಾಣ&lt;/h2&gt;&lt;p&gt;ಪ್ರಸ್ತುತ ವಿವರವಾದ ಯೋಜನಾ ವರದಿ (DPR) ಅಂತಿಮ ಹಂತಕ್ಕೆ ತಲುಪಿರುವುದರಿಂದ, ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಈಗ ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳ ಸಹಕಾರವನ್ನು ಕೋರಿದೆ. ವಿಶೇಷವಾಗಿ ಬುಲೆಟ್ ರೈಲು ಹಳಿಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ (Land Acquisition) ಪ್ರಕ್ರಿಯೆ ಮತ್ತು ವಿವಿಧ ಇಲಾಖೆಗಳ ಶಾಸನಬದ್ಧ ಅನುಮೋದನೆಗಳನ್ನು ಶೀಘ್ರವಾಗಿ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಮಾತುಕತೆ ಆರಂಭವಾಗಿದೆ.&lt;/p&gt;&lt;p&gt;ಎಲ್ಲಾ ಅಧಿಕೃತ ಒಪ್ಪಿಗೆಗಳು ಮತ್ತು ಅಂತಿಮ ಅನುಮತಿಗಳು ದೊರೆತ ನಂತರ, ಅಂದರೆ ಬಹುಶಃ 2026 ರ ಅಂತ್ಯದ ವೇಳೆಗೆ ಈ ಯೋಜನೆಯ ತಳಮಟ್ಟದ ನಿರ್ಮಾಣ ಕಾರ್ಯಗಳು ಆರಂಭವಾಗುವ ನಿರೀಕ್ಷೆಯಿದೆ. ಮುಂದಿನ 10 ವರ್ಷಗಳಲ್ಲಿ ಈ ಸಂಪೂರ್ಣ ಬುಲೆಟ್ ರೈಲು ಕಾರಿಡಾರ್ ಅನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mumbai-hyderabad-bullet-train-dpr-finalized-kalaburagi-picked-as-key-station-in-karnataka-gdp/articleshow-vqg1gzg"/>
        </item>
        <item>
            <title><![CDATA[ಕಲಬುರಗಿ ಸರ್ಕಾರಿ ಕಾಲೇಜಿನಲ್ಲಿ ಪಾಠ ಕೇಳುತ್ತಿದ್ದಾಗಲೇ ಮೇಲ್ಛಾವಣಿ ಕುಸಿತ; ಐವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ!]]></title>
            <link>https://kannada.asianetnews.com/gallery/karnataka-districts/kalaburagi-govt-girls-pu-college-ceiling-collapse-students-injured-sat-wswwqcb</link>
            <guid isPermaLink="true">https://kannada.asianetnews.com/gallery/karnataka-districts/kalaburagi-govt-girls-pu-college-ceiling-collapse-students-injured-sat-wswwqcb</guid>
            <pubDate>Fri, 12 Jun 2026 14:11:35 +0530</pubDate>
            <description><![CDATA[&lt;p&gt;ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿ ನಡೆಯುತ್ತಿದ್ದ ವೇಳೆ ಏಕಾಏಕಿ ಮೇಲ್ಛಾವಣಿ ಕುಸಿದು ಐವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಟ್ರಾಮಾ ಕೇರ್ ಸೆಂಟರ್&zwnj;ಗೆ ದಾಖಲಿಸಲಾಗಿದ್ದು, ಕಟ್ಟಡದ ದುಸ್ಥಿತಿಯೇ ಈ ಅವಘಡಕ್ಕೆ ಕಾರಣವೆಂದು ಹೇಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktxfcjt5yfy798476z5vvynr,imgname-kalaburagi-college-ceiling-collapse-1781253163845.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿ ನಡೆಯುತ್ತಿದ್ದ ವೇಳೆ ಏಕಾಏಕಿ ಮೇಲ್ಛಾವಣಿ ಕುಸಿದು ಐವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಟ್ರಾಮಾ ಕೇರ್ ಸೆಂಟರ್&zwnj;ಗೆ ದಾಖಲಿಸಲಾಗಿದ್ದು, ಕಟ್ಟಡದ ದುಸ್ಥಿತಿಯೇ ಈ ಅವಘಡಕ್ಕೆ ಕಾರಣವೆಂದು ಹೇಳಲಾಗಿದೆ.&lt;/p&gt;&lt;img&gt;&lt;p&gt;ಕಲಬುರಗಿ ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಕಾಲೇಜೊಂದರಲ್ಲಿ ಶುಕಗ್ರವಾರ ಬೆಳಗ್ಗೆ ಭೀಕರ ಅವಘಡವೊಂದು ಸಂಭವಿಸಿದೆ. ಪಾಠ ಕೇಳುತ್ತಾ ಕುಳಿತಿದ್ದ ವಿದ್ಯಾರ್ಥಿನಿಯರ ಮೇಲೆ ಏಕಾಏಕಿ ಶಾಲಾ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಐವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಾಲ್ಕನೇ ಮಹಡಿಯ ಕ್ಲಾಸ್ ರೂಂನಲ್ಲಿ ಇಂದು ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿನಿಯರಿಗೆ 'ಅಕೌಂಟೆನ್ಸಿ' (Accountancy) ಪಾಠ ಭೋದನೆ ನಡೆಯುತ್ತಿತ್ತು. ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತುಂಬಿದ್ದ ಕೊಠಡಿಯಲ್ಲಿ ಪಾಠ ಕೇಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮೇಲ್ಚಾವಣಿಯ ಕಾಂಕ್ರೀಟ್ ಭಾಗ ವಿದ್ಯಾರ್ಥಿನಿಯರ ಮೇಲೆ ಕುಸಿದು ಬಿದ್ದಿದೆ.&lt;/p&gt;&lt;img&gt;&lt;p&gt;&lt;strong&gt;ವಿದ್ಯಾರ್ಥಿನಿಯರ ಆಕ್ರಂದನ, ನೂಕುನುಗ್ಗಲು:&lt;/strong&gt;&lt;/p&gt;&lt;p&gt;ಮೇಲ್ಚಾವಣಿ ಕುಸಿಯುತ್ತಿದ್ದಂತೆ ಗಾಬರಿಗೊಂಡ ವಿದ್ಯಾರ್ಥಿನಿಯರು ಪ್ರಾಣ ಉಳಿಸಿಕೊಳ್ಳಲು ಏಕಕಾಲಕ್ಕೆ ಕೊಠಡಿಯಿಂದ ಹೊರಗೆ ಓಡಲು ಯತ್ನಿಸಿದರು. ಇದರಿಂದಾಗಿ ಕ್ಲಾಸ್ ರೂಂನಲ್ಲಿ ನೂಕುನುಗ್ಗಲು ಉಂಟಾಗಿ ಕೆಲವರು ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳನ್ನೂ ಮಾಡಿಕೊಂಡಿದ್ದಾರೆ. ಮೇಲ್ಚಾವಣಿಯ ದೊಡ್ಡ ಕಾಂಕ್ರೀಟ್ ತುಂಡುಗಳು ನೇರವಾಗಿ ತಲೆಯ ಮೇಲೆ ಬಿದ್ದಿದ್ದರಿಂದ ಮೂವರು ವಿದ್ಯಾರ್ಥಿನಿಯರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.&lt;/p&gt;&lt;img&gt;&lt;p&gt;&lt;strong&gt;ಗಾಯಾಳುಗಳ ವಿವರ:&lt;/strong&gt;&lt;/p&gt;&lt;p&gt;ಈ ಘಟನೆಯಲ್ಲಿ ಶೀತಲ್ (ತಂದೆ ಬಸವರಾಜ್), ಸ್ನೇಹಾ (ತಂದೆ ಕಾಶಿನಾಥ್), ದಿವ್ಯಾ ಸುಭಾಷ್ ಎಂಬುವವರಿಗೆ ತೀವ್ರ ರಕ್ತಗಾಯಗಳಾಗಿವೆ. ಇವರ ಜೊತೆಗೆ ಪೂಜಾ ಗುಂಡಪ್ಪ ಹಾಗೂ ಸೃಷ್ಟಿ ಶಿವಾನಂದ ಎಂಬುವವರಿಗೂ ಗಾಯಗಳಾಗಿವೆ. ತಕ್ಷಣವೇ ಕಾಲೇಜು ಸಿಬ್ಬಂದಿ ಹಾಗೂ ಸ್ಥಳೀಯರು ಗಾಯಾಳುಗಳನ್ನು ಕಲಬುರಗಿಯ ಟ್ರಾಮಾ ಕೇರ್ ಸೆಂಟರ್&zwnj;ಗೆ ದಾಖಲಿಸಿದ್ದು, ಸದ್ಯ ಅಲ್ಲಿ ಚಿಕಿತ್ಸೆ ಮುಂದುವರಿದಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಾಂಶುಪಾಲರ ಆತಂಕದ ಮಾತು:&lt;/strong&gt;&lt;/p&gt;&lt;p&gt;ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಲೇಜು ಪ್ರಾಂಶುಪಾಲ ದೇವನಗೌಡ ಅವರು, 'ಕಟ್ಟಡವು ತುಂಬಾ ಹಳೆಯದೇನಲ್ಲ, ಆದರೆ ಮೇಲ್ಛಾವಣಿಯ ಮೇಲೆ ಮಳೆ ನೀರು ನಿಲ್ಲುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಇಡೀ ಕಟ್ಟಡದ ಸ್ಥಿತಿ ಸದ್ಯ ಹೀಗೆಯೇ ಇದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿದಿನ ಭಯದಲ್ಲೇ ಕಾಲ ಕಳೆಯುವಂತಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ,' ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಘಟನೆಯಿಂದಾಗಿ ಕಾಲೇಜಿನ ಇತರ ವಿದ್ಯಾರ್ಥಿನಿಯರು ಮತ್ತು ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಸರ್ಕಾರಿ ಕಟ್ಟಡಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಈಗ ತೀವ್ರ ಚರ್ಚೆ ಆರಂಭವಾಗಿದ್ದು, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂಬ ಎಚ್ಚರಿಕೆ ಕೇಳಿಬರುತ್ತಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/kalaburagi-govt-girls-pu-college-ceiling-collapse-students-injured-sat-wswwqcb"/>
        </item>
        <item>
            <title><![CDATA[Kalaburagi Lokayukta Raid: ಸರ್ಕಾರಿ ಅಧಿಕಾರಿಗೆ ಲಂಚ ಕೊಡಲು ಬಂದು ಲೋಕಾಯುಕ್ತ ಬಲೆಗೆ ಬಿದ್ದ ತಂದೆ-ಮಗ!]]></title>
            <link>https://kannada.asianetnews.com/gallery/karnataka-districts/kalaburagi-lokayukta-arrests-father-son-for-offering-bribe-to-govt-prosecutor-z569w9y</link>
            <guid isPermaLink="true">https://kannada.asianetnews.com/gallery/karnataka-districts/kalaburagi-lokayukta-arrests-father-son-for-offering-bribe-to-govt-prosecutor-z569w9y</guid>
            <pubDate>Mon, 15 Jun 2026 21:58:27 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ, ಎಸ್&zwnj;ಸಿ-ಎಸ್&zwnj;ಟಿ ಪ್ರಕರಣವೊಂದರಲ್ಲಿ (SC-ST Case) ಅನುಕೂಲಿ ಮಾಡಿಕೊಡುವಂತೆ ಸರ್ಕಾರಿ ಅಭಿಯೋಜಕರಿಗೆ (Public prosecutor) ಲಂಚ ನೀಡಲು ಯತ್ನಿಸಿದ ತಂದೆ-ಮಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲಂಚ ನೀಡಲು ಬಂದವರೇ ಸಿಕ್ಕಿಬಿದ್ದ ಈ ಅಪರೂಪದ ಘಟನೆ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv61efg9qg1p6v6rr62t74ph,imgname-karnataka-lokayukta-kalaburagi-1781540535817.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿಯಲ್ಲಿ, ಎಸ್&zwnj;ಸಿ-ಎಸ್&zwnj;ಟಿ ಪ್ರಕರಣವೊಂದರಲ್ಲಿ (SC-ST Case) ಅನುಕೂಲಿ ಮಾಡಿಕೊಡುವಂತೆ ಸರ್ಕಾರಿ ಅಭಿಯೋಜಕರಿಗೆ (Public prosecutor) ಲಂಚ ನೀಡಲು ಯತ್ನಿಸಿದ ತಂದೆ-ಮಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲಂಚ ನೀಡಲು ಬಂದವರೇ ಸಿಕ್ಕಿಬಿದ್ದ ಈ ಅಪರೂಪದ ಘಟನೆ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;img&gt;&lt;p&gt;ಕಲಬುರಗಿ (ಜೂ.15): ಸಾಮಾನ್ಯವಾಗಿ ಸರ್ಕಾರಿ ನೌಕರರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬೀಳುವುದನ್ನು ನಾವು ಕೇಳಿದ್ದೇವೆ. ಆದರೆ, ಕಲಬುರಗಿಯಲ್ಲಿ ಒಂದು ಅಪರೂಪದ ಮತ್ತು ಅಚ್ಚರಿಯ ಪ್ರಕರಣ ನಡೆದಿದೆ. ಇಲ್ಲಿ ಲಂಚ ಪಡೆಯುವವರ ಬದಲು, ಲಂಚ ನೀಡಲು ಬಂದವರೇ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ!&lt;/p&gt;&lt;img&gt;&lt;p&gt;ಸಂಜೀವ್ ಪಾಟೀಲ್ ಮತ್ತು ಸುರೇಶ್ ಪಾಟೀಲ್ ಎಂಬ ತಂದೆ-ಮಗನೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಎಸ್&zwnj;ಸಿ-ಎಸ್&zwnj;ಟಿ (SC-ST) ಕಾಯ್ದೆಯಡಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅನುಕೂಲ ಮಾಡಿಕೊಡುವಂತೆ ಕೋರಿ ಇವರು ಸರ್ಕಾರಿ ಅಭಿಯೋಜಕರಿಗೆ (Public Prosecutor) ಲಂಚ ನೀಡಲು ಮುಂದಾಗಿದ್ದರು.&lt;/p&gt;&lt;img&gt;&lt;p&gt;ಹಿರಿಯ ಸರ್ಕಾರಿ ಅಭಿಯೋಜಕರಾದ ಪ್ರಾಣೇಶ ಭರತನೂರ ಅವರಿಗೆ ಈ ತಂದೆ-ಮಗ 5,000 ರೂಪಾಯಿ ಲಂಚ ನೀಡಲು ಪ್ರಯತ್ನಿಸಿದ್ದರು. ಎಷ್ಟೇ ಬೇಡವೆಂದರೂ ಒತ್ತಾಯಪೂರ್ವಕವಾಗಿ ಲಂಚ ನೀಡಲು ಮುಂದಾದಾಗ, ಭರತನೂರ ಅವರು ಕೂಡಲೇ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಬ್ಬ ಸರ್ಕಾರಿ ಅಧಿಕಾರಿಯಾಗಿ ಭ್ರಷ್ಟಾಚಾರಕ್ಕೆ ಮಣಿಯದೆ, ಲಂಚ ನೀಡಲು ಬಂದವರ ವಿರುದ್ಧವೇ ದೂರು ನೀಡುವ ಮೂಲಕ ಪ್ರಾಣೇಶ ಭರತನೂರ ಅವರು ಮಾದರಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಅಭಿಯೋಜಕರ ದೂರಿನ ಅನ್ವಯ ತಕ್ಷಣ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು, ಲಂಚದ ಹಣದೊಂದಿಗೆ ಬಂದಿದ್ದ ಸಂಜೀವ್ ಪಾಟೀಲ್ ಮತ್ತು ಸುರೇಶ್ ಪಾಟೀಲ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ತಂದೆ ಮತ್ತು ಮಗ ಇಬ್ಬರನ್ನೂ ಬಂಧಿಸಿರುವ ಪೊಲೀಸರು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಲಂಚಕ್ಕಾಗಿ ಪೀಡಿಸುವ ಅಧಿಕಾರಿಗಳ ನಡುವೆ, ಲಂಚ ನೀಡಲು ಬಂದವರನ್ನೇ ಪೊಲೀಸರಿಗೆ ಹಿಡಿದುಕೊಟ್ಟ ಈ ಘಟನೆ ಈಗ ಕಲಬುರಗಿಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಭ್ರಷ್ಟಾಚಾರ ಕೇವಲ ಅಧಿಕಾರಿಗಳಿಂದ ಮಾತ್ರವಲ್ಲ, ಸಾರ್ವಜನಿಕರಿಂದಲೂ ಆರಂಭವಾಗುತ್ತದೆ ಮತ್ತು ಅಂತಹವರಿಗೆ ಇದು ಒಂದು ದೊಡ್ಡ ಎಚ್ಚರಿಕೆಯಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/kalaburagi-lokayukta-arrests-father-son-for-offering-bribe-to-govt-prosecutor-z569w9y"/>
        </item>
    </channel>
</rss>
