<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 12 May 2026 17:05:48 +0530</lastBuildDate>
        <atom:link href="https://kannada.asianetnews.com/rss/kalaburagi" rel="self" type="application/rss+xml"/>
        <item>
            <title><![CDATA[ಕಲಬುರಗಿ ಜೈಲಿನ ಶೌಚಾಲಯದಲ್ಲಿ ಮೊಬೈಲ್, ಇಯರ್ ಬಡ್ಸ್ ಪತ್ತೆ!]]></title>
            <link>https://kannada.asianetnews.com/crime/kalaburagi-jail-smartphone-found-hidden-in-toilet-during-surprise-inspection/articleshow-gxtyk1h</link>
            <guid isPermaLink="true">https://kannada.asianetnews.com/crime/kalaburagi-jail-smartphone-found-hidden-in-toilet-during-surprise-inspection/articleshow-gxtyk1h</guid>
            <pubDate>Wed, 04 Feb 2026 14:02:52 +0530</pubDate>
            <description><![CDATA[&lt;p&gt;ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ, ಕೈದಿಗಳು ಬಳಸುತ್ತಿದ್ದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಶೌಚಾಲಯದಲ್ಲಿ ಬಚ್ಚಿಟ್ಟಿದ್ದ ಮೂರು ಸ್ಮಾರ್ಟ್&zwnj;ಫೋನ್&zwnj;ಗಳು ಇಯರ್ ಬಡ್ಸ್&zwnj; ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ತನಿಖೆ ಮುಂದುವರೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgkvzc7w5safmk0n70n1eexf,imgname-----------------------2026-02-04t134644.865-1770193400060.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಫೆ.4): &lt;/strong&gt;ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಪೊಲೀಸರು ನಡೆಸಿದ ಅನಿರೀಕ್ಷಿತ ತಪಾಸಣೆ ವೇಳೆ ಭಾರೀ ಅಕ್ರಮ ಬಯಲಾಗಿದೆ. ಜೈಲಿನೊಳಗೆ ನಿಷೇಧಿತ ವಸ್ತುಗಳ ಬಳಕೆ ನಡೆಯುತ್ತಿದೆ ಎಂಬ ಸಂಶಯದ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಕೈದಿಗಳ ಹೈಟೆಕ್ ವ್ಯವಹಾರ ಕಂಡುಬಂದಿದೆ.&lt;/p&gt;&lt;h2&gt;ಶೌಚಾಲಯದಲ್ಲೇ ಸ್ಮಾರ್ಟ್&zwnj;ಫೋನ್ ಇಯರ್ ಬಡ್ಸ್!&lt;/h2&gt;&lt;p&gt;ಜೈಲಿನ ವಿಚಾರಣಾಧೀನ ಕೈದಿಗಳಾದ ಗಣೇಶ, ಪ್ರದೀಪ್ ಮತ್ತು ದಿನೇಶ್ ಎಂಬುವವರು ಕಾನೂನು ಬಾಹಿರವಾಗಿ ಮೊಬೈಲ್ ಬಳಸುತ್ತಿದ್ದರು. ಪೊಲೀಸರ ಕಣ್ಣು ತಪ್ಪಿಸಲು ಇವರು ತಮ್ಮ ಸ್ಮಾರ್ಟ್&zwnj;ಫೋನ್ ಮತ್ತು ಇಯರ್ ಬಡ್ಸ್ ಮಾದರಿಯ ಗ್ಯಾಜೆಟ್&zwnj;ಗಳನ್ನು ಜೈಲಿನ ಶೌಚಾಲಯದ ಒಳಗೆ ಮುಚ್ಚಿಟ್ಟಿದ್ದರು. ಪೊಲೀಸರು ಹഴുಹಿನಿಂದ ಶೋಧ ನಡೆಸಿದಾಗ ಈ ವಸ್ತುಗಳು ಸಿಕ್ಕಿಬಿದ್ದಿವೆ.&lt;/p&gt;&lt;h3&gt;ಮೂರು ಫೋನ್, ಇಯರ್ ಬಡ್ಸ್ ಜಪ್ತಿ&lt;/h3&gt;&lt;p&gt;ತಪಾಸಣೆ ವೇಳೆ ಒಟ್ಟು ಮೂರು ಸ್ಮಾರ್ಟ್&zwnj;ಫೋನ್&zwnj;ಗಳು ಹಾಗೂ ಎರಡು ಇಯರ್ ಬಡ್ಸ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೈಲಿನ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಇವು ಒಳಗೆ ಬಂದಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದ್ದು, ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಈಗ ಈ ಜಾಲದ ಹಿಂದೆ ಯಾರಿದ್ದಾರೆ ಎಂಬ ತನಿಖೆ ಆರಂಭಿಸಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/kalaburagi-jail-smartphone-found-hidden-in-toilet-during-surprise-inspection/articleshow-gxtyk1h"/>
        </item>
        <item>
            <title><![CDATA[ಭಕ್ತನಂತೆ ಬರ್ತಾನೆ, ದೇವರ ಆಭರಣ ಕದ್ದು ಪರಾರಿಯಾಗ್ತಾನೆ: ಕಲಬುರ್ಗಿ ಖದೀಮ ಯಾರು ನೋಡಿ]]></title>
            <link>https://kannada.asianetnews.com/crime/comes-as-a-devotee-steals-gods-jewelry-and-escapes-mohemmed-shaikh-arrested-suc/articleshow-00yttho</link>
            <guid isPermaLink="true">https://kannada.asianetnews.com/crime/comes-as-a-devotee-steals-gods-jewelry-and-escapes-mohemmed-shaikh-arrested-suc/articleshow-00yttho</guid>
            <pubDate>Sat, 02 May 2026 19:06:41 +0530</pubDate>
            <description><![CDATA[ಕಲಬುರ್ಗಿಯ ಅಡ್ವೊಕೇಟ್ ಕಾಲನಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ, 1.37 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿ ಮೊಹಮ್ಮದ್ ಶೇಖ್&zwnj;ನನ್ನು ಬಂಧಿಸಿ, ಕಳುವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqmeez2xysq3f0jp4fgsam2z,imgname-theft-1777728978013.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರ್ಗಿಯಲ್ಲಿ ಈಚೆಗೆ ನಡೆದಿದ್ದ ಅಡ್ವೊಕೇಟ್ ಕಾಲನಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಸುಮಾರು 1.37 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಖದೀಮ ಪರಾರಿಯಾಗಿದ್ದ. ಇದಕ್ಕೂ ಮುನ್ನ ಕೆಲವು ದೇವಸ್ಥಾನದಲ್ಲಿ ಇದೇ ರೀತಿ ಕಳ್ಳತನವಾಗಿದ್ದರೂ ಕಳ್ಳನ ಸುಳಿವು ಸಿಕ್ಕಿರಲಿಲ್ಲ. ಇದೀಗ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳನ್ನು ನೋಡಿ ಪೊಲೀಸರು ಬೆನ್ನತ್ತಿದ್ದರು. ದೇವಿಯ ಮುಖವಾಡ, ತಾಳಿ ಸೇರಿದಂತೆ ಸುಮಾರು 1.37 ಲಕ್ಷ ಮೌಲ್ಯದ ಆಭರಣಗಳನ್ನು ಈತ ಕದ್ದು ಪರಾರಿಯಾಗಿದ್ದ.&lt;/p&gt;&lt;h2&gt;&lt;strong&gt;ಸಿಸಿಟಿವಿಯಲ್ಲಿ ದೃಶ್ಯ ಸೆರೆ&lt;/strong&gt;&lt;/h2&gt;&lt;p&gt;ಸಿಸಿಟಿವಿಯಲ್ಲಿ ಈತನ ದೃಶ್ಯ ಸೆರೆಯಾಗಿತ್ತು. ಮಾಸ್ಕ್​ ಧರಿಸಿ ಬಂದಿದ್ದ ಈತ, ಅಲ್ಲಿ ಸಿಸಿಟಿವಿ ಇರುವುದನ್ನು ಗಮನಿಸದೇ (ಗಮನಿಸಿದರೂ ಹಿಂದೆ ಸಿಕ್ಕಿಬಿದಿಲ್ಲ ಎನ್ನುವ ಧೈರ್ಯದಿಂದಲೋ ಏನೋ) ಆರಾಮಾಗಿ ಒಳಗೆ ನುಗ್ಗಿದ್ದ. ದೇವಾಲಯದ ಪುರೋಹಿತರು ಹಿಂದಿನ ರಾತ್ರಿ ದೇವಸ್ಥಾನಕ್ಕೆ ಬೀಗ ಹಾಕಿ ಹೋಗಿದ್ದರು. ಮಾರನೆಯ ದಿನ ಬಂದಾಗ ಬಾಗಿಲು ಒಡೆದದ್ದು ಕಂಡು ಗಾಬರಿಯಾದರು. ಒಳಗೆ ಹೋಗಿ ನೋಡಿದರೆ ಆಭರಣಗಳೆಲ್ಲಾ ಕಾಣೆಯಾಗಿದ್ದವು. ಕೊನೆಗೆ ಅವರು ಪೊಲೀಸರಿಗೆ ದೂರು ನೀಡಿದರು.&lt;/p&gt;&lt;h3&gt;&lt;strong&gt;ಕೊನೆಗೂ ಸಿಕ್ಕಿಬಿದ್ದ&lt;/strong&gt;&lt;/h3&gt;&lt;p&gt;ಈ ಹಿಂದೆ ದೇವಸ್ಥಾನಗಳ ಕಳ್ಳತನ ಮಾಡಿ ಸಿಗದೇ ಪರಾರಿಯಾದ್ದ ಖದೀಮ ಕೊನೆಗೂ ಸಿಕ್ಕ. ಅವನ ಹೆಸರು ಮೊಹಮ್ಮದ್​ ಶೇಖ್​. ಅಫಜಲಪಟ್ಟಣದ ನಿವಾಸಿ. ಆತನಿಂದ ಪೊಲೀಸರು 1.37 ಲಕ್ಷ ಮೌಲ್ಯದ 9 ಗ್ರಾಂ ಚಿನ್ನಾಭರಣ ಮತ್ತು 100 ಗ್ರಾಂನಷ್ಟು ಇರುವ ಬೆಳ್ಳಿಯ ದೇವಿಯ ಮುಖವಾಡ ವಶಪಡಿಸಿಕೊಂಡಿದ್ದಾರೆ.&lt;/p&gt;&lt;p&gt;ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್​ ಕಮಿಷನರ್​ ಶರಣಪ್ಪ ಎಸ್​.ಡಿ. ಮಾಹಿತಿ ನೀಡಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಕೆಲವು ದೇವಾಲಯಗಳ ಕಳ್ಳತನವನ್ನು ಈತ ಮಾಡಿದ್ದು, ಈತನ ವಿರುದ್ಧ ಆರೋಪಗಳಿವೆ ಎಂದರು. ಸದ್ಯ ಪೊಲೀಸರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜನರು ಕಾಯುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kalaburagi</category>
            <dc:creator>Suchethana D</dc:creator>
            <atom:link href="https://kannada.asianetnews.com/crime/comes-as-a-devotee-steals-gods-jewelry-and-escapes-mohemmed-shaikh-arrested-suc/articleshow-00yttho"/>
        </item>
        <item>
            <title><![CDATA[Kalaburagi heatwave record: ಕಲಬುರಗಿಯಲ್ಲಿ ಈ  ಬೇಸಿಗೆಯ ದಾಖಲೆ 45 ಡಿಗ್ರಿ ತಾಪಮಾನ; ಸುರಪುರದಲ್ಲಿ ಕಾರ್ಮಿಕ ಸಾವು!]]></title>
            <link>https://kannada.asianetnews.com/state/record-45-degree-summer-temperature-in-kalaburagi-laborer-dies-in-surapura-rav/articleshow-1m1i2w4</link>
            <guid isPermaLink="true">https://kannada.asianetnews.com/state/record-45-degree-summer-temperature-in-kalaburagi-laborer-dies-in-surapura-rav/articleshow-1m1i2w4</guid>
            <pubDate>Sun, 03 May 2026 04:33:28 +0530</pubDate>
            <description><![CDATA[ಕಲಬುರಗಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಗರಿಷ್ಠ 45.4 ಡಿಗ್ರಿ ಸೆಲ್ಸಿಯಸ್&zwnj; ತಾಪಮಾನ ದಾಖಲಾಗಿದ್ದು, ಇದು ಈ ಬೇಸಿಗೆಯ ಅತ್ಯಧಿಕ ತಾಪಮಾನವಾಗಿದೆ. ಈ ತೀವ್ರ ಬಿಸಿಲಿನ ತಾಪಕ್ಕೆ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpt7saq90h94gm2mzq05p5jz,imgname-fotojet--80--1776849562345.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಮೇ.3): &lt;/strong&gt;ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, &lsquo;ಬಿಸಿಲ ನಗರಿ&rsquo; ಕಲಬುರಗಿ ಅಕ್ಷರಶಃ ಕೆಂಡದಂತಾಗಿದೆ. ಜಿಲ್ಲೆಯ ಕಾಳಗಿಯ ಕೋಡ್ಲಿ ಗ್ರಾಮದಲ್ಲಿ ಶನಿವಾರ ರಾಜ್ಯದಲ್ಲೇ ಗರಿಷ್ಠ ತಾಪಮಾನ 45.4 ಡಿಗ್ರಿ ಸೆಲ್ಸಿಯಸ್&zwnj; ದಾಖಲಾಗಿದ್ದು, ಇದು ಈ ಬೇಸಿಗೆಯ ಅತ್ಯಧಿಕ ತಾಪಮಾನ ಎನಿಸಿದೆ.&lt;/p&gt;&lt;p&gt;ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಶನಿವಾರ, ಕಾಳಗಿಯ ಕೋಡ್ಲಿ ಗ್ರಾಮದಲ್ಲಿ 45.4 ಡಿಗ್ರಿ ಸೆಲ್ಸಿಯಸ್&zwnj;, ಚಿಂಚಳಿಯ ಐನಾಪುರದಲ್ಲಿ 45 ಡಿಗ್ರಿ, ಆಳಂದದ ನರೋಣಾದಲ್ಲಿ 44. 7 ಡಿಗ್ರಿ, ಅಫಜಲಪುರದ ಆತನೂರಲ್ಲಿ 44.6 ಡಿಗ್ರಿ ತಾಪಮಾನ ದಾಖಲಾಗಿದೆ.&lt;/p&gt;&lt;p&gt;ಜಿಲ್ಲೆಯಲ್ಲಿ ಶನಿವಾರ ಬಹುತೇಕ ತಾಲೂಕುಗಳಲ್ಲಿ ತಾಪಮಾನ 44 ಡಿಗ್ರಿಗಿಂತ ಅಧಿಕ ಪ್ರಮಾಣದಲ್ಲಿಯೇ ದಾಖಲಾಗಿತ್ತು. ಜಿಲ್ಲೆಯಾದ್ಯಂತ ಬಿಸಿಗಾಳಿ ಮುಂದುವರಿದಿದ್ದು, ಜನರು ಬೆಳಗ್ಗೆ 10 ಗಂಟೆಯ ನಂತರ ಸಂಜೆ 5 ಗಂಟೆವರೆಗೂ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.&lt;/p&gt;&lt;p&gt;ಇದಕ್ಕೂ ಮೊದಲು, ಏ.22ರಿಂದ 3 ದಿನ ಕಲಬುರಗಿಯಲ್ಲಿ ಬಿಸಿಗಾಳಿಯ ಅಲೆ ಎದುರಾಗಿತ್ತು. ಆಗಲೂ ತಾಪಮಾನ 45.4 ಡಿಗ್ರಿ ದಾಖಲಾಗಿ ಅದು ಏಪ್ರಿಲ್&zwnj; ತಿಂಗಳ 53 ವರ್ಷಗಳ ದಾಖಲೆಯನ್ನೇ ಮುರಿದಿತ್ತು. ಶನಿವಾರ ಕೂಡ 45.4 ಡಿಗ್ರಿ ಸೆಲ್ಸಿಯಸ್&zwnj; ತಾಪಮಾನ ದಾಖಲಾಗುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲೇ ಈ ಬೇಸಿಗೆಯ ಅತ್ಯಧಿಕ ತಾಪಮಾನವಾಗಿ ಗಮನ ಸೆಳೆದಿದೆ.&lt;/p&gt;&lt;h2&gt;--ಸುರಪುರದಲ್ಲಿ ಬಿಸಿಲ ತಾಪಕ್ಕೆ ಕಾರ್ಮಿಕ ಸಾವು&lt;/h2&gt;&lt;p&gt;ಯಾದಗಿರಿ ಜಿಲ್ಲೆ ಸುರಪುರ ಸಮೀಪದ ಸತ್ಯಂಪೇಟೆ ಗ್ರಾಮದಲ್ಲಿ ಬಿಸಿಲ ತಾಪದಿಂದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.&lt;/p&gt;&lt;p&gt;ಸಿದ್ದಪ್ಪ ಶರಣಪ್ಪ ಕೊಂಡಗೂಳಿ (30) ಮೃತರು. ಸುರಪುರದ ಹಸನಾಪುರ ಪೆಟ್ರೋಲ್ ಬಂಕ್ ಸಮೀಪ ಕೂಲಿ ಕೆಲಸಕ್ಕೆ ತೆರಳಿದ್ದ ಸಿದ್ದಪ್ಪ, ಬಿಸಿಲಿನ ತಾಪದಿಂದ ಆಯಾಸಗೊಂಡು ಮನೆಗೆ ಮರಳಿದ ಕೆಲವೇ ಕ್ಷಣಗಳಲ್ಲಿ ಬಳಲಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಕೊನೆಯುಸಿರೆಳೆದಿದ್ದರು. ಸುರಪುರದಲ್ಲಿ ಶನಿವಾರ 42 ಡಿಗ್ರಿ ಸೆಲ್ಸಿಯಸ್&zwnj; ತಾಪಮಾನ ದಾಖಲಾಗಿತ್ತು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/record-45-degree-summer-temperature-in-kalaburagi-laborer-dies-in-surapura-rav/articleshow-1m1i2w4"/>
        </item>
        <item>
            <title><![CDATA[ಯಾದಗಿರಿ ಬಳಿ ಬಸ್ ಮತ್ತು ಕಾರು ನಡುವೆ  ಭಯಾನಕ ಅಪಘಾತ: ಕಾರಲ್ಲಿದ್ದ 6 ಮಂದಿ ಸುಟ್ಟು ಭಸ್ಮ!]]></title>
            <link>https://kannada.asianetnews.com/karnataka-districts/horrific-bus-car-collision-in-yadagiri-shantapura-cross-many-burnt-alive-gdp/articleshow-21hf9na</link>
            <guid isPermaLink="true">https://kannada.asianetnews.com/karnataka-districts/horrific-bus-car-collision-in-yadagiri-shantapura-cross-many-burnt-alive-gdp/articleshow-21hf9na</guid>
            <pubDate>Fri, 17 Apr 2026 12:03:57 +0530</pubDate>
            <description><![CDATA[ಯಾದಗಿರಿ ಜಿಲ್ಲೆಯ ಸುರಪುರ ಬಳಿ ಕಾರು ಮತ್ತು ಖಾಸಗಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್&zwnj;ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd28gy82ct386kxm2tnn8g5,imgname-yadagiri-accident-news-1776407561160.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಭಯಾನಕ ಅಪಘಾತದಲ್ಲಿ ಕನಿಷ್ಠ 6 ಮಂದಿ ಸಜೀವ ದಹನಗೊಂಡಿರುವ ದಾರುಣ ಘಟನೆ ನಡೆದಿದೆ. ಕಾರು ಮತ್ತು ಖಾಸಗಿ ಬಸ್ ನಡುವಿನ ಮುಖಾಮುಖಿ ಡಿಕ್ಕಿಯಿಂದ ಈ ದುರಂತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಬೆಂಕಿಗಾಹುತಿಯಾಗಿವೆ. ಅಪಘಾತದ ಭೀಕರತೆ ಎಷ್ಟಿದೆ ಎಂದರೆ ಮೃತರ ತಲೆಬುರುಡೆಗಳು ಕಾರಿನಲ್ಲಿ ಕಾಣಿಸಿದೆ.&lt;/p&gt;&lt;h2&gt;ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್&lt;/h2&gt;&lt;p&gt;ಪ್ರಾಥಮಿಕ ಮಾಹಿತಿ ಪ್ರಕಾರ, ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಏಸಿ ಬಸ್ ಮತ್ತು ಯಾದಗಿರಿಯಿಂದ ರಾಯಚೂರಿನ ಲಿಂಗಸೂಗೂರು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ಬೆಂಕಿಯಲ್ಲಿ ಸಿಲುಕಿಕೊಂಡು ಸಜೀವ ದಹನಗೊಂಡಿದ್ದಾರೆ. ಕಾರು ಸಂಪೂರ್ಣವಾಗಿ ಕರಕಲಾಗಿದ್ದು, ಅದರಲ್ಲಿದ್ದ 6 ಮಂದಿ ಸ್ಥಳದಲ್ಲೇ &amp;nbsp;ಭಸ್ಮವಾಗಿದ್ದಾರೆ. ಬಸ್&zwnj;ನಲ್ಲಿ ಸುಮಾರು 40 ಜನ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;h2&gt;ಬಸ್&zwnj;ಗೂ ವ್ಯಾಪಿಸಿದ ಬೆಂಕಿ&lt;/h2&gt;&lt;p&gt;ಅಪಘಾತದ ಹೊಡೆತಕ್ಕೆ ಬಸ್&zwnj;ಗೂ ಬೆಂಕಿ ತಗುಲಿದ್ದು, ಕೆಲ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸ್ಥಳೀಯರು ಹಾಗೂ ತಕ್ಷಣ ಆಗಮಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಲು ಮುಂದಾದರು. ಆದರೆ ಕಾರು ಅಪ್ಪಚ್ಚಿಯಾಗಿ &amp;nbsp;ಡೋರ್ ಓಪನ್ &amp;nbsp;ಆಗಲೇ ಇಲ್ಲ. ನೋಡ ನೋಡುತ್ತಿದ್ದಂತೆಯೇ ಬೆಂಕಿ ಹರಡಿತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಬೆಂಕಿ ನಂದಿಸಿದ ನಂತರ ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಆರಂಭಿಸಲಾಗಿದೆ.&lt;/p&gt;&lt;p&gt;ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಸುರಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮೃತರ ಗುರುತು ಪತ್ತೆ ಹಾಗೂ ಅಪಘಾತದ ನಿಖರ ಕಾರಣವನ್ನು ತಿಳಿಯುವ ಕಾರ್ಯ ಮುಂದುವರೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಈ ದುರಂತದಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದಲ್ಲಿ ಮತ್ತೆ ಖಾಸಗಿ ಬಸ್ ಅಪಘಾತದ ಭೀತಿ ಮೂಡಿಸಿದೆ. ರಸ್ತೆ ಸುರಕ್ಷತೆ ಕುರಿತು ಪ್ರಶ್ನೆಗಳು ಮತ್ತೆ ಉದ್ಭವಿಸಿವೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/horrific-bus-car-collision-in-yadagiri-shantapura-cross-many-burnt-alive-gdp/articleshow-21hf9na"/>
        </item>
        <item>
            <title><![CDATA[ಎರಡು ಜಿಲ್ಲೆಯ ರೈತರಿಗೆ ಸುಮಾರು 20 ಸಾವಿರ ಹಸು ವಿತರಣೆ ಯೋಜನೆ  ಘೋಷಿಸಿದ ರಾಜ್ಯ ಸರ್ಕಾರ]]></title>
            <link>https://kannada.asianetnews.com/karnataka-districts/government-has-announced-a-scheme-to-distribute-about-20000-cows-to-farmers-in-belagavi-kalaburgi-mrq/articleshow-6cnz45t</link>
            <guid isPermaLink="true">https://kannada.asianetnews.com/karnataka-districts/government-has-announced-a-scheme-to-distribute-about-20000-cows-to-farmers-in-belagavi-kalaburgi-mrq/articleshow-6cnz45t</guid>
            <pubDate>Sun, 26 Apr 2026 06:02:08 +0530</pubDate>
            <description><![CDATA[&lt;p&gt;ಬೆಳಗಾವಿಯಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆಯಂದು ಕಾಲು-ಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ, ಪಶು ಸಂಗೋಪನೆ ಸಚಿವರು 2 ಜಿಲ್ಲೆಗಳ ರೈತರಿಗೆ ಶೇ.25ರ ಸಬ್ಸಿಡಿಯೊಂದಿಗೆ 20 ಸಾವಿರ ಹಸುಗಳನ್ನು ವಿತರಿಸುವ ಯೋಜನೆಯನ್ನು ಘೋಷಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jwmwqz7q9t758y9z0x56x99t,imgname-cows-1748752923894.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ:&lt;/strong&gt; ಗ್ರಾಮೀಣ ಭಾಗದ ಜನರಿಗೆ ಹೈನುಗಾರಿಕೆ ಆದಾಯದ ಪ್ರಮುಖ ಮೂಲವಾಗಿದ್ದು, ಸರ್ಕಾರದಿಂದ ಈ ಕ್ಷೇತ್ರಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.&lt;/p&gt;&lt;p&gt;ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮಹಾಂತೇಶ ನಗರದ ಸ್ಪೇಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆ ಅಂಗವಾಗಿ 9ನೇ ಸುತ್ತಿನ ಕಾಲು-ಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.&amp;nbsp;&lt;/p&gt;&lt;h2&gt;&lt;strong&gt;20 ಸಾವಿರ ಹಸುಗಳನ್ನು ವಿತರಿಸುವ ಯೋಜನೆ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ದಿನಕ್ಕೆ 70-80 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಸರ್ಕಾರದ ಪ್ರೋತ್ಸಾಹದಿಂದ ಇದು 1 ಕೋಟಿಗೂ ಹೆಚ್ಚು ಲೀಟರ್&zwnj;ಗೆ ಏರಿಕೆಯಾಗಿದೆ. ಬಡ ರೈತರಿಗೆ ಹಸು ಖರೀದಿಸಲು ಅನುಕೂಲವಾಗಲು ಶೇ.25 ಸಬ್ಸಿಡಿ ನೀಡಲಾಗಿದ್ದು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಸುಮಾರು 20 ಸಾವಿರ ಹಸುಗಳನ್ನು ವಿತರಿಸುವ ಯೋಜನೆ ಕೈಗೊಳ್ಳಲಾಗಿದೆ ಎಂದು ಹೇಳಿದರು.&lt;/p&gt;&lt;p&gt;ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಲಸಿಕಾ ಕಾರ್ಯಕ್ರಮ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಂದು ಗ್ರಾಮ ಹಾಗೂ ಕುಟುಂಬಕ್ಕೂ ಇದರ ಪ್ರಯೋಜನ ತಲುಪಬೇಕು ಎಂದರು.&lt;/p&gt;&lt;p&gt;ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಹೈನುಗಾರಿಕೆ ಮಹಿಳೆಯರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು. ಎಲ್ಲ ಜಾನುವಾರುಗಳಿಗೆ ಸೂಕ್ತ ಲಸಿಕೆ ನೀಡುವಂತೆ ಕರೆ ನೀಡಿದರು.&lt;/p&gt;&lt;p&gt;ಅಧ್ಯಕ್ಷತೆ ವಹಿಸಿದ ಶಾಸಕ ಆಸೀಫ್ ಸೇಠ್, ಪಶುಸಂಗೋಪನೆಯನ್ನು ಉತ್ತೇಜಿಸಿ ಜಾನುವಾರುಗಳ ಸಮರ್ಪಕ ಆರೈಕೆ ಮಾಡಬೇಕು ಎಂದು ತಿಳಿಸಿದರು.&lt;/p&gt;&lt;h3&gt;&lt;strong&gt;ಲಸಿಕಾ ಕಾರ್ಯಕ್ರಮ ಯಶಸ್ವಿ&lt;/strong&gt;&lt;/h3&gt;&lt;p&gt;ಪಶುಪಾಲನೆ ಇಲಾಖೆ ಆಯುಕ್ತ ಶಿಲ್ಪಾ ನಾಗ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಾದ್ಯಂತ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಶಾಸಕ ಗಣೇಶ ಹುಕ್ಕೇರಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಉಪ ಮೇಯರ್&zwnj; ಹನುಮಂತ ಕೊಂಗಾಲಿ, ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಯಲಗೋಡ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ಡಾ.ಪಿ.ಶ್ರೀನಿವಾಸು, ಅಪರ ನಿರ್ದೇಶಕ ಡಾ.ಶಿವರುದ್ರಪ್ಪ, ಕೆ.ಎಲ್.ಅಪರ ನಿರ್ದೇಶಕ ಡಾ.ಪ್ರಸಾದ ಮೂರ್ತಿ, ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಜಿಪಂ ಸಿಇಒ ರಾಹುಲ್ ಶಿಂಧೆ, ಜಂಟಿ ನಿರ್ದೇಶಕ ಡಾ.ಹೆಚ್.ನಾಗರಾಜ್, ಬೆಳಗಾವಿ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ.ವಿ.ಎನ್, ಅಧಿಕಾರಿಗಳು ಉಪಸ್ಥಿತರಿದ್ದರು&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/government-has-announced-a-scheme-to-distribute-about-20000-cows-to-farmers-in-belagavi-kalaburgi-mrq/articleshow-6cnz45t"/>
        </item>
        <item>
            <title><![CDATA[Kalaburagi: ಮಗ ಬಂಗಾರ ಪದಕ ಪಡೆಯುವುದನ್ನು ನೋಡಬೇಕಿದ್ದ ತಂದೆ ಅಪಘಾತಕ್ಕೆ ಬಲಿ]]></title>
            <link>https://kannada.asianetnews.com/karnataka-districts/father-dies-in-accident-while-attending-son-s-college-event-cuk-convocation-kalaburagi-mrq/articleshow-8slktl2</link>
            <guid isPermaLink="true">https://kannada.asianetnews.com/karnataka-districts/father-dies-in-accident-while-attending-son-s-college-event-cuk-convocation-kalaburagi-mrq/articleshow-8slktl2</guid>
            <pubDate>Thu, 23 Apr 2026 07:33:47 +0530</pubDate>
            <description><![CDATA[ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಸ್ವೀಕರಿಸಬೇಕಿದ್ದ ವಿದ್ಯಾರ್ಥಿಯ ತಂದೆ, ಸಮಾರಂಭಕ್ಕೆ ಬರುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದಿಂದ ಮಗನ ಸಂಭ್ರಮ ಕಣ್ತುಂಬಿಕೊಳ್ಳಲು ಬಂದಿದ್ದ ತಂದೆಯ ದುರಂತ ಸಾವು, ಪದಕ ವಿಜೇತ ವಿದ್ಯಾರ್ಥಿಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpw1899x5myx88ekcky0ytfv,imgname-accident-1776909821245.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಘಟಿಕೋತ್ಸವದಲ್ಲಿ ಪುತ್ರ ಚಿನ್ನದ ಪದಕ ಪಡೆಯುವ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಲು ಮಧ್ಯಪ್ರದೇಶದಿಂದ ಬಂದಿದ್ದ ತಂದೆ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಕಲಬುರಗಿಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ದಿವ್ಯಾಂಶು ತಂದೆ ರಸ್ತೆ ಅಪಘಾತದಲ್ಲಿ ಸಾವು&lt;/strong&gt;&lt;/h2&gt;&lt;p&gt;ಸಿಯುಕೆಯಲ್ಲಿ ಅಧ್ಯಯನ ಮಾಡುತ್ತಿರುವ ಮಧ್ಯಪ್ರದೇಶದ ಉಜ್ಜಯಿನಿ ನಿವಾಸಿ ದಿವ್ಯಾಂಶು ಸಕ್ಸೇನಾ ಎಂಬ ವಿದ್ಯಾರ್ಥಿ ಇಲೆಕ್ಟಾನಿಕ್ಸ್&zwnj; ಮತ್ತು ಕಮ್ಯೂನಿಕೇಷನ್&zwnj; ಎಂಜಿನಿಯರಿಂಗ್&zwnj; ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದು ಡಬ್ಬಲ್&zwnj; ಗೋಲ್ಡ್&zwnj; ಮೆಡಲ್&zwnj; ಬಾಚಿಕೊಂಡಿದ್ದ. ಬುಧವಾರ ನಡೆದ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಅವರಿಂದ ಚಿನ್ನದ ಪದಕ ಪಡೆಯಬೇಕಿತ್ತು. ಆದರೆ, ಸಮಾರಂಭಕ್ಕೆ 4 ಗಂಟೆ ಬಾಕಿ ಇರುವಾಗಲೇ ದಿವ್ಯಾಂಶು ತಂದೆ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.&lt;/p&gt;&lt;h3&gt;&lt;strong&gt;ಸಹಪಾಠಿಗಳು ಕಣ್ಣೀರು&lt;/strong&gt;&lt;/h3&gt;&lt;p&gt;ಮಗನ ಚಿನ್ನದ ನಗು ಕಣ್ಣು ತುಂಬಿಕೊಳ್ಳಲು ಮಧ್ಯಪ್ರದೇಶದ ಉಜ್ಜಯಿನಿಯಿಂದ ಕಲಬುರಗಿಗೆ ಬಂದಿದ್ದ ತಂದೆ ಶಿವಕುಮಾರ್&zwnj; ಹಾಗೂ ತಾಯಿ ಮಾಲತಿ ಅವರು ನಗರದಿಂದ 18 ಕಿ.ಮೀ. ದೂರದ್ಲಲಿರುವ ವಿವಿಯ ಕ್ಯಾಂಪಸ್&zwnj;ಗೆ ಬರುವಾಗ ಅವರು ಪ್ರಯಾಣಿಸುತ್ತಿದ್ದ ಆಟೋ ಪಲ್ಟಿ ಹೊಡೆದಿದ್ದು, ದುರಂತದಲ್ಲಿ ಶಿವಕುಮಾರ್&zwnj; ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿನ್ನದ ಪಕಗಳಿಗೆ ಕೊರಳಿಗೆ ಹಾಕಿಕೊಂಡು ಸಂಭ್ರಮಿಸಬೇಕಿದ್ದ ದಿವ್ಯಾಂಶು ತಂದೆ ಶವದ ಮುಂದೆ ಕಣ್ಣೀರು ಹಾಕುವ ದುರಂತ ಕಂಡು ಆತನ ಸಹಪಾಠಿಗಳು ಸಹ ಕಣ್ಣೀರು ಹಾಕಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಾಂಗ್ರೆಸ್&zwnj; ಸರ್ಕಾರ ಮಹಿಳಾ ಮೀಸಲಾತಿ ವಿರೋಧಿ ಪಕ್ಷ : ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ : &lt;/strong&gt;&lt;strong&gt;ಬೆಂಗಳೂರು ನಗರದಲ್ಲಿ ಅಸಹನೀಯ ಬೇಸಿಗೆ, ಹೀಟ್ ಸ್ಟ್ರೋಕ್&zwnj;: ಅಂಗಾಂಗ ವೈಫಲ್ಯ ಭೀತಿ!&lt;/strong&gt;&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/father-dies-in-accident-while-attending-son-s-college-event-cuk-convocation-kalaburagi-mrq/articleshow-8slktl2"/>
        </item>
        <item>
            <title><![CDATA[ಮುಖ್ಯಮಂತ್ರಿ ಸ್ಥಾನಕ್ಕೆ ತಾವು ಯೋಗ್ಯ ಎಂಬ ಸುದ್ದಿಗೆ  'ನಮಗೆ ಹಣೆಬರಹವೂ ಇರಬೇಕು' ಎಂದ ಮಲ್ಲಿಕಾರ್ಜುನ ಖರ್ಗೆ]]></title>
            <link>https://kannada.asianetnews.com/politics/aicc-chief-mallikarjun-kharge-on-karnataka-leadership-row-says-issue-will-be-resolved-soon-gdp/articleshow-a266ygs</link>
            <guid isPermaLink="true">https://kannada.asianetnews.com/politics/aicc-chief-mallikarjun-kharge-on-karnataka-leadership-row-says-issue-will-be-resolved-soon-gdp/articleshow-a266ygs</guid>
            <pubDate>Thu, 30 Apr 2026 16:36:30 +0530</pubDate>
            <description><![CDATA[ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ನಾಯಕತ್ವ ಗೊಂದಲವನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಸಿಎಂ ಬದಲಾವಣೆ ಸದ್ಯಕ್ಕಿಲ್ಲ ಎಂದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಕೆಲವು ರಾಜ್ಯಗಳಲ್ಲಿ ಮೈತ್ರಿಕೂಟಗಳಿಗೆ ಗೆಲುವಿನ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-ani20250220153044,imgname-image-17551429-79d6-4e7a-b4ad-a51f7fa1932a.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಲವು ಮಹತ್ವದ ರಾಜಕೀಯ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ರಾಜಕೀಯದ ನಾಯಕತ್ವ ಗೊಂದಲದಿಂದ ಹಿಡಿದು ಪಂಚರಾಜ್ಯ ಚುನಾವಣೆಗಳ ಫಲಿತಾಂಶದವರೆಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;ರಾಜ್ಯದಲ್ಲಿ ನಾಯಕತ್ವ ಗೊಂದಲ ಬಗ್ಗೆ ಹೇಳಿದ್ದೇನು?&lt;/h2&gt;&lt;p&gt;ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಉಂಟಾಗಿರುವ ಗೊಂದಲದ ಬಗ್ಗೆ ಮಾತನಾಡಿದ ಖರ್ಗೆ, ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಹೇಳಿದರು. ತಮ್ಮನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯ ಎಂದು ಕೆಲವರು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಹೇಳ್ತಾರೆ, ನೀವು ಹೇಳ್ತೀರಿ, ಮೇಲಿನವರು (ಹೈಕಮಾಂಡ್) ಹೇಳ್ತಾರೆ. ಆದರೆ ನಮ್ಮ ಹಣೆಬರಹವೂ ಇರಬೇಕು. ಹಣೆಬರಹ ಅಂದರೆ ಅದು ಕೇವಲ ಅದೃಷ್ಟವಲ್ಲ, ಅದು ನಮ್ಮ ಐಡಿಯಾಲಜಿ, ಮತ್ತು ಪಕ್ಷಕ್ಕಾಗಿ ನಾವು ಇಷ್ಟು ವರ್ಷಗಳಿಂದ ಮಾಡಿದ ಶ್ರಮವೂ ಸೇರಿದೆ ಎಂದು ಖರ್ಗೆ ಸ್ಪಷ್ಟಪಡಿಸಿದರು.&lt;/p&gt;&lt;h2&gt;ಹೈಕಮಾಂಡ್ ಪಾತ್ರ ಮತ್ತು ಸಿಎಂ ಬದಲಾವಣೆ ಪ್ರಶ್ನೆ&lt;/h2&gt;&lt;p&gt;ಪಕ್ಷದ ಪ್ರಮುಖ ನಿರ್ಧಾರಗಳನ್ನು ಸಾಮಾನ್ಯವಾಗಿ ಸೋನಿಯಾ ಗಾಂಧಿ ಅವರು ಕೈಗೊಳ್ಳುತ್ತಾರೆ ಎಂದು ಖರ್ಗೆ ತಿಳಿಸಿದರು. ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ. ಆದ್ದರಿಂದ ಸಿಎಂ ಬದಲಾವಣೆ ಬಗ್ಗೆ ತಕ್ಷಣದ ಯಾವುದೇ ಪ್ರಶ್ನೆ ಇಲ್ಲ. ಆದರೆ ಅಂತಹ ಪರಿಸ್ಥಿತಿ ಬಂದರೆ, ನಾವು ಎಲ್ಲರೂ ಸೇರಿ ಚರ್ಚೆ ಮಾಡುತ್ತೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ನಾವು ಎಲ್ಲರೂ ಕೂಡಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಸಿಎಂ ಬದಲಾವಣೆ ಬಗ್ಗೆ ಮಾತನಾಡುವ ಸಮಯ ಬಂದಿಲ್ಲ; ಸಮಯ ಬಂದಾಗ ನೋಡೋಣ ಎಂದು ಹೇಳಿದರು.&lt;/p&gt;&lt;h2&gt;ತಮಿಳುನಾಡು ಮತ್ತು ಕೇರಳದಲ್ಲಿ ಮೈತ್ರಿಗೆ ಮುನ್ನಡೆ&lt;/h2&gt;&lt;p&gt;ಪಂಚರಾಜ್ಯ ಚುನಾವಣೆಗಳ ಫಲಿತಾಂಶದ ಕುರಿತು ಮಾತನಾಡಿದ ಖರ್ಗೆ, ಕೆಲವು ರಾಜ್ಯಗಳಲ್ಲಿ ಸ್ಪಷ್ಟತೆ ಇದ್ದರೂ, ಇನ್ನೂ ಕೆಲವು ಕಡೆ ಗೊಂದಲದ ಸ್ಥಿತಿ ಇದೆ ಎಂದು ಹೇಳಿದರು. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಇದೆ ಎಂದು ಖರ್ಗೆ ಹೇಳಿದರು. ಅದೇ ರೀತಿ ಕೇರಳದಲ್ಲಿ ಯುಡಿಎಫ್ ಮೈತ್ರಿಗೆ ಬಹುಮತ ಲಭ್ಯವಾಗುವ ನಿರೀಕ್ಷೆಯೂ ಇದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h2&gt;ಅಸ್ಸಾಂ ಮತ್ತು ಪಾಂಡಿಚೇರಿ, ಸ್ಪರ್ಧಾತ್ಮಕ ಪೈಪೋಟಿ&lt;/h2&gt;&lt;p&gt;ಅಸ್ಸಾಂನಲ್ಲಿ ಪಕ್ಷ ನಿರೀಕ್ಷಿಸಿದ್ದಷ್ಟು ಸ್ಥಾನಗಳು ಸಿಗುತ್ತಿಲ್ಲ ಎಂಬ ವರದಿಗಳು ಇದ್ದರೂ, ಅಂತಿಮ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಖರ್ಗೆ ಹೇಳಿದ್ದಾರೆ. ಪಾಂಡಿಚೇರಿಯಲ್ಲಿ ಬಿಜೆಪಿ ವಿರುದ್ಧ ಸಮಬಲದ ಹೋರಾಟ ನಡೆದಿದ್ದು, ಅಲ್ಲಿ ಕೂಡ ತೀವ್ರ ಪೈಪೋಟಿ ಕಂಡುಬಂದಿದೆ ಎಂದು ಅವರು ಹೇಳಿದರು.&lt;/p&gt;&lt;h2&gt;ಪಶ್ಚಿಮ ಬಂಗಾಳದಲ್ಲಿ ಹಣಾಹಣಿ&lt;/h2&gt;&lt;p&gt;ಪಶ್ಚಿಮ ಬಂಗಾಳದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಖರ್ಗೆ ಹೇಳಿದರು. ಟಿಎಂಸಿಗೆ ಮುನ್ನಡೆ ಇದೆ ಎಂಬ ಮಾಹಿತಿ ಇದ್ದರೂ, ಬಿಜೆಪಿ ಮತ್ತು ಅವರ ಮೈತ್ರಿ ಪಕ್ಷಗಳು ಒತ್ತಡ ತಂತ್ರಗಳನ್ನು ಬಳಸಿಕೊಂಡಿವೆ. ಕೇಂದ್ರ ಪಡೆಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ದಬ್ಬಾಳಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷ ಮೊದಲು ಬಲವಾಗಿರಲಿಲ್ಲ. ಈ ಬಾರಿ ನಾವು ಸ್ವತಂತ್ರವಾಗಿ ಸ್ಪರ್ಧಿಸಿದ್ದೇವೆ. ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದು, ಈ ಬಾರಿ ಉತ್ತಮ ಬೆಳವಣಿಗೆ ಕಾಣಬಹುದು,&rdquo; ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;h2&gt;ಟಿಎಂಸಿ ಬೆಂಬಲ ಪ್ರಶ್ನೆ&lt;/h2&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಬೆಂಬಲ ನೀಡುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, &ldquo;ಮೊದಲು ಫಲಿತಾಂಶ ಬರಲಿ, ನಂತರ ನೋಡೋಣ,&rdquo; ಎಂದು ತಿಳಿಸಿದ್ದಾರೆ. ಒಟ್ಟಾರೆ, ರಾಜ್ಯದಲ್ಲಿ ನಾಯಕತ್ವ ಗೊಂದಲ ಶೀಘ್ರದಲ್ಲೇ ನಿವಾರಣೆಯಾಗಲಿದೆ ಎಂಬ ಭರವಸೆ ನೀಡಿದ ಖರ್ಗೆ, ಸಿಎಂ ಬದಲಾವಣೆ ವಿಚಾರದಲ್ಲಿ ಯಾವುದೇ ತುರ್ತು ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಪಂಚರಾಜ್ಯ ಚುನಾವಣೆಯ ಫಲಿತಾಂಶಗಳು ಮಿಶ್ರವಾಗಿದ್ದರೂ, ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/politics/aicc-chief-mallikarjun-kharge-on-karnataka-leadership-row-says-issue-will-be-resolved-soon-gdp/articleshow-a266ygs"/>
        </item>
        <item>
            <title><![CDATA[ಮತ್ತೆ ಗರಿಗೆದರಿದ ಕಲಬುರಗಿ-ಬೆಂಗಳೂರು ವಿಮಾನಯಾನ ಕನಸು, ಕೆಕೆಆರ್‌ಡಿಬಿಯಿಂದ 80% ಸರ್ಕಾರದಿಂದ 20% ನೆರವು]]></title>
            <link>https://kannada.asianetnews.com/karnataka-districts/kalaburagi-bengaluru-flight-services-set-to-resume-with-kkrdb-and-government-subsidy-support-gdp/articleshow-aqugwq2</link>
            <guid isPermaLink="true">https://kannada.asianetnews.com/karnataka-districts/kalaburagi-bengaluru-flight-services-set-to-resume-with-kkrdb-and-government-subsidy-support-gdp/articleshow-aqugwq2</guid>
            <pubDate>Mon, 11 May 2026 23:15:07 +0530</pubDate>
            <description><![CDATA[ವಾಣಿಜ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ-ಬೆಂಗಳೂರು ವಿಮಾನಯಾನ ಸೇವೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರವು 'ವೈಯಬಿಲಿಟಿ ಗ್ಯಾಪ್ ಫಂಡಿಂಗ್' ಯೋಜನೆಯಡಿ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ. ಈ ಯೋಜನೆಯಲ್ಲಿ ಕೆಕೆಆರ್&zwnj;ಡಿಬಿ ಶೇ. 80 ರಷ್ಟು ಮತ್ತು ರಾಜ್ಯ ಸರ್ಕಾರ ಶೇ. 20 ರಷ್ಟು ವೆಚ್ಚವನ್ನು ಭರಿಸಲಿದ್ದು, ಶೀಘ್ರದಲ್ಲೇ ಸೇವೆ ಪುನಾರಂಭಗೊಳ್ಳುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krc1ggjh20q4mz0zyvf7smwf,imgname-kalaburagi-airport-1778520703568.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಜಿಲ್ಲೆಯ ಜನತೆಯ ಬಹುದಿನದ ಬೇಡಿಕೆಯಾದ ಕಲಬುರಗಿ-ಬೆಂಗಳೂರು ನಡುವಿನ ವಿಮಾನಯಾನ ಸೇವೆಯನ್ನು ಪುನಾರಂಭಿಸಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ವಾಣಿಜ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ಈ ಮಾರ್ಗದ ಕಾರ್ಯಾಚರಣೆಗೆ ಜೀವ ತುಂಬಲು &lsquo;ವೈಯಬಿಲಿಟಿ ಗ್ಯಾಪ್ ಫಂಡಿಂಗ್&rsquo; (ವಿಜಿಎಪ್&zwnj;) ಯೋಜನೆಯಡಿ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಸ್ಥಗಿತಗೊಂಡಿರುವ ಕಲಬುರಗಿ ಹಾಗೂ ಬೆಂಗಳೂರು ನಡುವಿನ ವಿಮಾನ ಸೇವೆ ಪುನಾರಂಭಗೊಳ್ಳಲು ಎಲ್ಲ ರೀತಿಯ ಸಿದ್ಧತೆಗಳು ನಡೆದಂತಾಗಿದೆ.&lt;/p&gt;&lt;h2&gt;ಅಂದಾಜು ರು. 2.50 ಕೋಟಿ ಆರ್ಥಿಕ ಬೆಂಬಲ&lt;/h2&gt;&lt;p&gt;ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಪಂಚಾಯತ್ ರಾಜ್ ಮತ್ತು ಐ.ಟಿ. ಇಲಾಖೆಯ ಮಂತ್ರಿಗಳು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಮಂತ್ರಿಗಳು, ಪೌರಾಡಳಿತ ಮತ್ತು ಹಜ್ ಇಲಾಖೆಯ ಮಂತ್ರಿಗಳ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ವಿಮಾನಯಾನ ಸಂಸ್ಥೆಗಳು ಪ್ರತಿದಿನ ಕಾರ್ಯಾಚರಣೆ ನಡೆಸಲು ಆಸಕ್ತಿ ತೋರಿದ್ದು, ಇದಕ್ಕಾಗಿ ವರ್ಷಕ್ಕೆ ಅಂದಾಜು ರು. 2.50 ಕೋಟಿ ಆರ್ಥಿಕ ಬೆಂಬಲದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ ಎಂದು ಕೆಕೆಆರ್&zwnj;ಡಿಬಿ ಅಧ್ಯಕ್ಷ ಡಾ. ಅಜಯ್&zwnj; ಸಿಂಗ್&zwnj; ಹೇಳಿದ್ದಾರೆ.&lt;/p&gt;&lt;p&gt;ವಿಮಾನಯಾನ ಸಂಸ್ಥೆಗಳಿಗೆ ನೀಡಬೇಕಾದ ಈ ಮೊತ್ತದಲ್ಲಿ ಸಿಂಹಪಾಲು ಅಂದರೆ ಶೇ. 80 ರಷ್ಟನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಭರಿಸಲಿದ್ದು, ಉಳಿದ ಶೇ. 20 ರಷ್ಟನ್ನು ರಾಜ್ಯ ಸರ್ಕಾರ ನೀಡಲಿದೆ. ಈಗಾಗಲೇ ಬೀದರ್-ಬೆಂಗಳೂರು ಮಾರ್ಗಕ್ಕಾಗಿ 2025-26ನೇ ಸಾಲಿನಲ್ಲಿ 12.20 ಕೋಟಿ ರು. ಮಂಡಳಿಯಿಂದ ಮಂಜೂರು ಮಾಡಲಾಗಿದ್ದು, ಇದೇ ಮಾದರಿಯಲ್ಲಿ ಕಲಬುರಗಿ ಮಾರ್ಗಕ್ಕೂ ಅನುದಾನ ಒದಗಿಸಲು ಮಂಡಳಿಯ ಕ್ರಿಯಾ ಯೋಜನೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಾ. ಅಜಯ್&zwnj; ಸಿಂಗ್&zwnj; ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಹಿನ್ನೆಲೆ ಮತ್ತು ಸವಾಲು:&lt;/h2&gt;&lt;p&gt;ಕಲಬುರಗಿ ವಿಮಾನ ನಿಲ್ದಾಣವು ಕೇವಲ ಜಿಲ್ಲೆಗೆ ಮಾತ್ರವಲ್ಲದೆ, ಸುತ್ತಮುತ್ತಲಿನ ಆರು ಜಿಲ್ಲೆಗಳು ಹಾಗೂ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣದ ಪ್ರಯಾಣಿಕರಿಗೂ ಆಸರೆಯಾಗಿದೆ. ಏರ್&zwnj;ಬಸ್&zwnj; 320 ಹಾಗೂ ಬೋಯಿಂಗ್-737 ನಂತಹ ಬೃಹತ್ ವಿಮಾನಗಳ ಸಂಚಾರಕ್ಕೆ ಬೇಕಾದ ಅತ್ಯಾಧುನಿಕ ಮೂಲಸೌಕರ್ಯಗಳಿವೆ. ಆದರೆ, ಈ ಹಿಂದೆ ಸೇವೆ ನೀಡುತ್ತಿದ್ದ ಘೋಡಾವತ್ ಸಂಸ್ಥೆಯು ಪ್ರಯಾಣಿಕರ ಕೊರತೆ ಮತ್ತು ಆರ್ಥಿಕ ನಷ್ಟದ ಕಾರಣ ನೀಡಿ ಅಕ್ಟೋಬರ್ 15, 2025 ರಿಂದ ಸೇವೆಯನ್ನು ಸ್ಥಗಿತಗೊಳಿಸಿತ್ತು.&lt;/p&gt;&lt;p&gt;ಸರ್ಕಾರ ಹಾಗೂ ಕೆಕೆಆರ್&zwnj;ಡಿಬಿಯ ಸಹಯೋಗದಲ್ಲಿ ವಿಮಾನಯಾನ ಸಂಸ್ಥೆಗಳು ಪ್ರತಿದಿನ ಕಾರ್ಯಾಚರಣೆ ನಡೆಸಲು ಇದಕ್ಕಾಗಿ ವರ್ಷಕ್ಕೆ ಅಂದಾಜು ರು. 12.50 ಕೋಟಿ ಆರ್ಥಿಕ ಬೆಂಬಲದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈ ನಿರ್ಧಾರದಿಂದಾಗಿ ಕಲಬುರಗಿ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ ಪ್ರತಿನಿತ್ಯ ವಿಮಾನ ಸಂಚಾರ ಆರಂಭವಾಗುವ ನಿರೀಕ್ಷೆಯಿದ್ದು, ಇದು ಈ ಭಾಗದ ಕೈಗಾರಿಕಾ ಮತ್ತು ಶೈಕ್ಷಣಿಕ ಪ್ರಗತಿಗೆ ಹೊಸ ವೇಗ ನೀಡಲಿದೆ ಎಂದು ಡಾ. ಅಜಯ್&zwnj; ಸಿಂಗ್&zwnj; ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kalaburagi-bengaluru-flight-services-set-to-resume-with-kkrdb-and-government-subsidy-support-gdp/articleshow-aqugwq2"/>
        </item>
        <item>
            <title><![CDATA[ಆರ್‌ಡಿ ಪಾಟೀಲ್ ಜೈಲು ವರ್ಗಾವಣೆ ರದ್ದು, ಹೈಕೋರ್ಟ್ ಮಹತ್ವದ ತೀರ್ಪು ಮತ್ತೆ ಕಲಬುರಗಿಗೆ ಶಿಫ್ಟ್]]></title>
            <link>https://kannada.asianetnews.com/karnataka-districts/karnataka-high-court-quashes-psi-scam-accused-rd-patil-jail-transfer-order-gdp/articleshow-atsyoa0</link>
            <guid isPermaLink="true">https://kannada.asianetnews.com/karnataka-districts/karnataka-high-court-quashes-psi-scam-accused-rd-patil-jail-transfer-order-gdp/articleshow-atsyoa0</guid>
            <pubDate>Sat, 11 Apr 2026 18:50:00 +0530</pubDate>
            <description><![CDATA[ಪಿಎಸ್&zwnj;ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್&zwnj;ಡಿ ಪಾಟೀಲ್ ಅವರನ್ನು ಮೈಸೂರು ಜೈಲಿಗೆ ವರ್ಗಾಯಿಸಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ನೈಸರ್ಗಿಕ ನ್ಯಾಯತತ್ವಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟ ಪೀಠ, ಪಾಟೀಲ್ ಅವರನ್ನು ತಕ್ಷಣವೇ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಮರಳಿ ಸ್ಥಳಾಂತರಿಸಲು ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kdwes8n7s58fx7fcnw53dwez,imgname-rd-patil--1--1767260332711.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ: ಪಿಎಸ್&zwnj;ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ (ಆರ್&zwnj;ಡಿ ಪಾಟೀಲ್) ಅವರನ್ನು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಜೈಲಿಗೆ ವರ್ಗಾಯಿಸುವ ಕುರಿತು ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್&zwnj;ನ ಕಲಬುರಗಿ ಪೀಠ ರದ್ದುಗೊಳಿಸಿದೆ. ಇದರೊಂದಿಗೆ ಆರ್&zwnj;ಡಿ ಪಾಟೀಲ್ ಮತ್ತೆ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಮರಳುವಂತಾಗಿದೆ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2026ರ ಜನವರಿ 27ರಂದು ಆರ್&zwnj;ಡಿ ಪಾಟೀಲ್ ಅವರನ್ನು ಮೈಸೂರು ಜೈಲಿಗೆ ವರ್ಗಾಯಿಸಲು ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರ ಪತ್ನಿ ಶೋಭಾ ಹೈಕೋರ್ಟ್&zwnj;ಗೆ ಮೊರೆ ಹೋಗಿ ರಿಟ್ ಅರ್ಜಿ ಸಲ್ಲಿಸಿದ್ದರು.&lt;/p&gt;&lt;h2&gt;ಭದ್ರತಾ ಕಾರಣ ನೀಡಿರುವುದಕ್ಕೆ ಅಸಮಾಧಾನ&lt;/h2&gt;&lt;p&gt;ಈ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ವಿಚಾರಣಾಧೀನ ಕೈದಿಯನ್ನು ವರ್ಗಾವಣೆ ಮಾಡುವ ಮುನ್ನ ಆತನಿಗೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಅಥವಾ ವಾದ ಮಂಡಿಸಲು ಅವಕಾಶ ನೀಡದಿರುವುದು ನೈಸರ್ಗಿಕ ನ್ಯಾಯತತ್ವಗಳ ಉಲ್ಲಂಘನೆ ಎಂದು ಸ್ಪಷ್ಟಪಡಿಸಿದೆ. ಜಿಲ್ಲಾ ನ್ಯಾಯಾಲಯ ಯಾವುದೇ ಸ್ಪಷ್ಟ ಹಾಗೂ ಸಮರ್ಪಕ ಕಾರಣಗಳನ್ನು ನೀಡದೆ ಕೇವಲ &lsquo;ಭದ್ರತಾ ಕಾರಣ&rsquo; ಎಂಬ ಸಾಮಾನ್ಯ ಪದ ಬಳಸಿ ಆದೇಶ ಹೊರಡಿಸಿರುವುದನ್ನೂ ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ.&lt;/p&gt;&lt;p&gt;ಅರ್ಜಿದಾರರ ಪರ ವಕೀಲರು, ವಿಚಾರಣಾಧೀನ ಕೈದಿಯ ಹಕ್ಕುಗಳನ್ನು ಕಡೆಗಣಿಸಿ ಅವನನ್ನು ವರ್ಗಾವಣೆ ಮಾಡಲಾಗಿದೆ ಎಂದು ವಾದಿಸಿದ್ದರು. ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ವಿಚಾರಣಾಧೀನ ವ್ಯಕ್ತಿಗೆ ಕೇಳುವ ಹಕ್ಕು ನೀಡದೇ ತೆಗೆದುಕೊಂಡ ನಿರ್ಧಾರ ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿದೆ. ಇನ್ನೊಂದೆಡೆ, ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೈಲಿನ ಭದ್ರತೆಯ ದೃಷ್ಟಿಯಿಂದ ಈ ವರ್ಗಾವಣೆ ಅಗತ್ಯವಾಗಿತ್ತು ಎಂದು ವಾದಿಸಿದರು. ಆದರೆ, ವರ್ಗಾವಣೆ ಆದೇಶ ಹೊರಡಿಸುವ ಮೊದಲು ಆರೋಪಿ ತನ್ನ ಅಭಿಪ್ರಾಯ ಮಂಡಿಸಲು ಅವಕಾಶ ನೀಡಲಾಗಿಲ್ಲ ಎಂಬುದನ್ನು ಅವರು ಒಪ್ಪಿಕೊಂಡರು.&lt;/p&gt;&lt;h2&gt;ಮೈಸೂರು ಜೈಲಿನಿಂದ ಕಲಬುರಗಿ ಕೇಂದ್ರ ಕಾರಾಗೃಹ&lt;/h2&gt;&lt;p&gt;ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ, ತಕ್ಷಣವೇ ಆರ್&zwnj;ಡಿ ಪಾಟೀಲ್ ಅವರನ್ನು ಮೈಸೂರು ಜೈಲಿನಿಂದ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಮರು ವರ್ಗಾವಣೆ ಮಾಡುವಂತೆ ಸೂಚಿಸಿದೆ. ಆದಾಗ್ಯೂ, ನ್ಯಾಯಾಲಯ ತನ್ನ ಆದೇಶದಲ್ಲಿ ಒಂದು ಮಹತ್ವದ ವಿಷಯವನ್ನು ಸ್ಪಷ್ಟಪಡಿಸಿದ್ದು, ಜೈಲು ಅಧಿಕಾರಿಗಳು ಕಾನೂನುಬದ್ಧ ವಿಧಾನಗಳನ್ನು ಅನುಸರಿಸಿ, ಸಮರ್ಪಕ ಕಾರಣಗಳನ್ನು ನೀಡುವ ಮೂಲಕ ಮುಂದಿನ ದಿನಗಳಲ್ಲಿ ವರ್ಗಾವಣೆ ಮಾಡಲು ಬಯಸಿದರೆ ಅದಕ್ಕೆ ಅವಕಾಶವಿದೆ ಎಂದು ಹೇಳಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಹೈಕೋರ್ಟ್ ತೀರ್ಪು ವಿಚಾರಣಾಧೀನ ಕೈದಿಗಳ ಹಕ್ಕುಗಳ ರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳಿದ್ದು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೈಸರ್ಗಿಕ ನ್ಯಾಯತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸಂದೇಶವನ್ನು ನೀಡಿದೆ. ಈ ತೀರ್ಪಿನಿಂದ ಆರ್&zwnj;ಡಿ ಪಾಟೀಲ್ ಅವರ ಕುಟುಂಬಕ್ಕೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-high-court-quashes-psi-scam-accused-rd-patil-jail-transfer-order-gdp/articleshow-atsyoa0"/>
        </item>
        <item>
            <title><![CDATA[ಕೇಳಿದ್ದೆಲ್ಲವನ್ನೂ ಕೊಡ್ತಿದ್ದ 57ರ ಸರ್ಕಾರಿ ಶಾಲಾ ಶಿಕ್ಷಕಿಯ 27ರ ಹರೆಯದ ಪ್ರೇಮಿ: ಏಕಾಏಕಿ ಸುಟ್ಟು ಹಾಕಿದ್ದೇಕೆ?]]></title>
            <link>https://kannada.asianetnews.com/relationship/20-year-age-gap-kalaburagi-57-year-old-jyoti-teacher-murder-case-27-year-old-amar-guddalli-arrested-sat/articleshow-b22l1y0</link>
            <guid isPermaLink="true">https://kannada.asianetnews.com/relationship/20-year-age-gap-kalaburagi-57-year-old-jyoti-teacher-murder-case-27-year-old-amar-guddalli-arrested-sat/articleshow-b22l1y0</guid>
            <pubDate>Wed, 08 Apr 2026 17:34:50 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ 57 ವರ್ಷದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮಗನ ವಯಸ್ಸಿನ ಯುವಕನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಆರೋಪಿ ಆಕೆಯನ್ನು ಕೊಲೆ ಮಾಡಿ ಶವವನ್ನು ಸುಟ್ಟುಹಾಕಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knpff7ybcznn98k5td84rdte,imgname-kalaburagi-teacher-1775649660875.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಏ.08): &lt;/strong&gt;ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಆದರೆ ಅದೇ ಪ್ರೀತಿ ಹಾದಿ ತಪ್ಪಿದಾಗ, ಹಣದ ವ್ಯಾಮೋಹ ಬೆರೆತಾಗ ಎಂತಹ ಭೀಕರ ಅಂತ್ಯ ಕಾಣುತ್ತದೆ ಎಂಬುದಕ್ಕೆ ಕಲಬುರಗಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮಗನ ವಯಸ್ಸಿನ ಯುವಕನೊಂದಿಗೆ ಸಲ್ಲದ ಸಂಬಂಧ ಬೆಳೆಸಿದ್ದ 57 ವರ್ಷದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಅದೇ ಯುವಕನ ಕೈಯಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. ಕೊಲೆ ಮಾಡಿದ ಬಳಿಕ ಶವವನ್ನು ಸುಟ್ಟು ಹಾಕಿದ್ದ ಕಿರಾತಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.&lt;/p&gt;&lt;h2&gt;&lt;strong&gt;ಸುಟ್ಟು ಕರಕಲಾಗಿದ್ದ ಶವದ ರಹಸ್ಯ:&lt;/strong&gt;&lt;/h2&gt;&lt;p&gt;ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲಮೂಡ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಅರ್ಧಮರ್ದ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಶವ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ತನಿಖೆ ಚುರುಕುಗೊಳಿಸಿದ ಕಮಲಾಪುರ ಪೊಲೀಸರಿಗೆ ಇದು ಕಲಬುರಗಿ ನಿವಾಸಿ ಜ್ಯೋತಿ ಕಪಾಳೆ (57) ಅವರ ಶವ ಎಂದು ತಿಳಿದುಬಂದಿದೆ. ಜ್ಯೋತಿ ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಾಂಜರಖೇಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.&lt;/p&gt;&lt;h2&gt;&lt;strong&gt;ಅಕ್ರಮ ಸಂಬಂಧ ಮತ್ತು ಹಣದ ವ್ಯವಹಾರ:&lt;/strong&gt;&lt;/h2&gt;&lt;p&gt;ಅವಿವಾಹಿತೆಯಾಗಿದ್ದ ಜ್ಯೋತಿ ಅವರು ಭಾಲ್ಕಿಯಲ್ಲಿ ವಾಸವಿದ್ದರು. ರಜೆ ದಿನಗಳಲ್ಲಿ ಕಲಬುರಗಿಯ ಆನಂದ ನಗರದಲ್ಲಿರುವ ತಾಯಿ ಮನೆಗೆ ಬರುತ್ತಿದ್ದರು. ಈ ವೇಳೆ ಅವರಿಗೆ ನೆರೆಯ ನಿವಾಸಿ ಅಮರ ಗುಡ್ಡಳ್ಳಿ (27) ಎಂಬಾತನ ಪರಿಚಯವಾಗಿತ್ತು. ಕಳೆದ ಐದು ವರ್ಷಗಳಿಂದ ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು. 27ರ ಹರೆಯದ ಅಮರನಿಗೆ ಮದುವೆಯಾಗಿ ಹೆಂಡತಿ ಮಕ್ಕಳಿದ್ದರೂ, ಟೀಚರ್ ಜ್ಯೋತಿ ನೀಡುತ್ತಿದ್ದ ಹಣದ ಆಮಿಷಕ್ಕೆ ಬಿದ್ದು ಆಕೆಯೊಂದಿಗೆ ಸಂಬಂಧ ಮುಂದುವರಿಸಿದ್ದ. ಜ್ಯೋತಿ ನೀಡಿದ್ದ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣದಲ್ಲಿ ಅಮರ್ ಐಷಾರಾಮಿ 'ಥಾರ್' ಕಾರನ್ನು ಕೂಡ ಖರೀದಿಸಿದ್ದ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;40 ವರ್ಷದ ಗಂಡ ಬೇಡ, ಪ್ರಿಯತಮ ಬೇಕು: ಯುವತಿ ಕೋರಿಕೆಗೆ ನ್ಯಾಯಾಲಯದಿಂದ ಮಹತ್ವದ ತೀರ್ಪು&lt;/strong&gt;&lt;/p&gt;&lt;h3&gt;&lt;strong&gt;ಕೊಲೆಗೆ ಕಾರಣವಾಯ್ತು ಹಣದ ಒತ್ತಡ:&lt;/strong&gt;&lt;/h3&gt;&lt;p&gt;ಇತ್ತೀಚಿನ ದಿನಗಳಲ್ಲಿ ಜ್ಯೋತಿ ಅವರು ತಾನು ನೀಡಿದ್ದ ಹಣವನ್ನು ಮರಳಿ ನೀಡುವಂತೆ ಅಮರನಿಗೆ ಒತ್ತಡ ಹೇರಲಾರಂಭಿಸಿದ್ದರು. ಇದರಿಂದ ಆಕ್ರೋಶಗೊಂಡ ಅಮರ್, ಜ್ಯೋತಿಯನ್ನು ಹಾದಿಯಿಂದ ತಪ್ಪಿಸಲು ಸಂಚು ರೂಪಿಸಿದ್ದಾನೆ. ಏಪ್ರಿಲ್ 3 ರಂದು ಜ್ಯೋತಿಯನ್ನು ತನ್ನ ಥಾರ್ ಕಾರಿನಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಸುತ್ತಾಡಿಸಿದ್ದಾನೆ. ರಾತ್ರಿ ವೇಳೆಗೆ ಕಲಮೂಡ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮೊದಲೇ ಸಿದ್ಧಪಡಿಸಿಕೊಂಡಿದ್ದ ಹರಿತವಾದ ಆಯುಧದಿಂದ ಜ್ಯೋತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸಲು ಕಾರಿನ ಡಿಕ್ಕಿಯಲ್ಲಿ ತಂದಿದ್ದ ಪೆಟ್ರೋಲ್ ಸುರಿದು ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.&lt;/p&gt;&lt;h2&gt;&lt;strong&gt;ಪೊಲೀಸರ ಬಲೆಗೆ ಬಿದ್ದ ಕಿರಾತಕ:&lt;/strong&gt;&lt;/h2&gt;&lt;p&gt;ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಅಮರನ ಮೇಲೆ ಅನುಮಾನ ಬಂದಿತ್ತು. ತಲೆಮರೆಸಿಕೊಂಡಿದ್ದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಯಿಂದ ಕೊಲೆಗೆ ಬಳಸಿದ ಆಯುಧ, ಪೆಟ್ರೋಲ್ ಕ್ಯಾನ್ ಹಾಗೂ ಥಾರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಹಂತಕ ಅಮರ ಕಲಬುರಗಿ ಕೇಂದ್ರ ಕಾರಾಗೃಹ ಸೇರಿದ್ದಾನೆ. ಒಟ್ಟಿನಲ್ಲಿ, ಸಲ್ಲದ ಸಂಬಂಧ ಮತ್ತು ಹಣದ ಹಪಾಹಪಿ ಒಬ್ಬ ಶಿಕ್ಷಕಿಯ ಪ್ರಾಣವನ್ನು ಬಲಿ ಪಡೆದರೆ, ಒಬ್ಬ ಯುವಕನ ಜೀವನವನ್ನು ಜೈಲು ಪಾಲಾಗುವಂತೆ ಮಾಡಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/20-year-age-gap-kalaburagi-57-year-old-jyoti-teacher-murder-case-27-year-old-amar-guddalli-arrested-sat/articleshow-b22l1y0"/>
        </item>
        <item>
            <title><![CDATA[ಪ್ರೀತಿ ವಿಶ್ವಾಸದೊಂದಿಗೆ ಭಾವೈಕ್ಯತೆಯಿಂದ ಬಾಳಿ, ಮೂಢನಂಬಿಕೆ ಬಿಟ್ಬಾಕಿ: ಸಿಎಂ ಸಿದ್ದರಾಮಯ್ಯ]]></title>
            <link>https://kannada.asianetnews.com/karnataka-districts/cm-siddaramaiah-caste-free-society-message-kalaburagi-gvd/articleshow-e37img6</link>
            <guid isPermaLink="true">https://kannada.asianetnews.com/karnataka-districts/cm-siddaramaiah-caste-free-society-message-kalaburagi-gvd/articleshow-e37img6</guid>
            <pubDate>Sun, 12 Apr 2026 18:30:50 +0530</pubDate>
            <description><![CDATA[&lt;p&gt;ದ್ವೇಷ ಬಿಟ್ಟು ಎಲ್ಲರೂ ಪರಸ್ಪರ&zwnj; ಪ್ರೀತಿ ವಿಶ್ವಾಸದೊಂದಿಗೆ ಭಾವೈಕ್ಯತೆಯಿಂದ ಮನುಷ್ಯರಾಗಿ ಬಾಳಬೇಕಿದೆ. ಮೂಢನಂಬಿಕೆ&zwnj; ಬಿಟ್ಟು ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kezraqgntjngtebfj526shcc,imgname-siddaramaiah-1768444747285.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಏ.12):&lt;/strong&gt; ಜಾತಿ ರಹಿತ ಸಮ&zwnj;-ಸಮಾಜ ನಿರ್ಮಾಣವಾಗಬೇಕಾದರೆ ದ್ವೇಷ ಬಿಟ್ಟು ಎಲ್ಲರೂ ಪರಸ್ಪರ&zwnj; ಪ್ರೀತಿ ವಿಶ್ವಾಸದೊಂದಿಗೆ ಭಾವೈಕ್ಯತೆಯಿಂದ ಮನುಷ್ಯರಾಗಿ ಬಾಳಬೇಕಿದೆ. ಮೂಢನಂಬಿಕೆ&zwnj; ಬಿಟ್ಟು ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಗೂರ (ಎನ್) ಗ್ರಾಮದಲ್ಲಿ ಮಹಾತ್ಮ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದಿಂದ ಆಯೋಜಿಸಿದ ಭೋಜಲಿಂಗೇಶ್ವರರ ನೂತನ ದೇವಸ್ಥಾನ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ, ನೂತನ ಬೆಳ್ಳಿ ರಥೋತ್ಸವ ಚಾಲನೆ ಹಾಗೂ ಕಲ್ಯಾಣ ಮಂಟಪ ಉದ್ಘಾಟಿಸಿ ಮಾತನಾಡಿದರು.&lt;/p&gt;&lt;p&gt;ಸಮಾಜದಲ್ಲಿ ಅನೇಕ ಜಾತಿ ಧರ್ಮಗಳಿವೆ, ಅನೇಕ ಭಾಷೆ ಸಂಸ್ಕೃತಿಗಳಿವೆ. ವೈವಿದ್ಯತೆ ಇರುವ ಸಮಾಜದಲ್ಲಿ ಏಕತೆ ಪ್ರದರ್ಶನ ಮಾಡುವುದು ಅತ್ಯವಶ್ಯಕ. ಯಾವುದೇ ಧರ್ಮ ದ್ವೇಷ ಮಾಡಲು ಹೇಳುವುದಿಲ್ಲ ಎಲ್ಲರನ್ನೂ ಪ್ರೀತಿಸಿದಾಗಲೇ ಮಾನವ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಇದೇ ತತ್ವವನ್ನು ಸಾರಿದ ಮತ್ತು ಸತ್ಯದ ಹಾದಿ ತೋರಿದ ಭೋಜಲಿಂಗೇಶ್ವರ ಮಠ ಸರ್ವ&zwnj; ಧರ್ಮದ ಭಕ್ತ ವೃಂದದ ಉದ್ದಾರಕ್ಕೆ ಶ್ರಮಿಸುವ ಜಾತ್ಯಾತೀತ ಮಠವಾಗಿ ಬೆಳೆಯಲಿ ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದರು.&lt;/p&gt;&lt;p&gt;ಧರ್ಮದ ಹೆಸರಲ್ಲಿ ಜಾತಿಯನ್ನು ಒಡೆದು, ಒಂದು ಧರ್ಮದ ಜನರನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ನಡುವೆ ಇದ್ದಾರೆ. ನೀವು ಅಂತಹ ಪಟ್ಟಭದ್ರರ ಮಾತು ಕೇಳಬಾರದು. ಸರ್ವರನ್ನು ಪ್ರೀತಿಸುವ ಮನೋಬಾವನೆ ಬೆಳೆಸಿಕೊಳ್ಲಬೇಕು ಮತ್ತು ಒಗ್ಗಟ್ಟಾಗಿರಬೇಕು ಎಂದು ಸಮುದಾಯಕ್ಕೆ ಕರೆ ನೀಡಿದ ಸಿ.ಎಂ. ಅವರು, ಇದನ್ನೆ ಭೋಜಲಿಂಗೇಶ್ವರ ಹೇಳಿದ್ದಾರೆ ಎಂದು ಪುನರುಚ್ಚರಿಸಿದರು.&lt;/p&gt;&lt;p&gt;ಸ್ವಚ್ಛ ಮನಸಿನಿಂದ ದೇವಸ್ಥಾನಕ್ಕೆ ಹೋಗಿ ನಮಗಷ್ಟೇ ಅಲ್ಲದೇ ಎಲ್ಲರಿಗೂ ಒಳ್ಳೆಯದು ಮಾಡು ಎಂದು ಪ್ರಾರ್ಥಿಸಿದಾಗ ಮಾತ್ರ ಫಲ ಸಿಗುತ್ತದೆ. ಬಸವಣ್ಣ, ಸೂಫಿ, ಸಂತರು ಕೂಡಾ ಇದನ್ನೇ ಪ್ರತಿಪಾದಿಸಿದರು. ಬಸವಣ್ಣ ಕಾಯಕ ಹಾಗೂ ದಾಸೋಹ ಎರಡನ್ನು ಒತ್ತಿ ಹೇಳಿದ್ದಾರೆ. ಎಲ್ಲರೂ ಕಷ್ಟಪಟ್ಟು ದುಡಿಯಬೇಕು. ಸಮಾನವಾಗಿ ಹಂಚಿಕೊಳ್ಳಬೇಕು. ಕಾಯಕ ಹಾಗೂ ದಾಸೋಹಗಳನ್ನು ಎಲ್ಲರೂ ಮಾಡಬೇಕು. ಕೆಲವರೇ ಮಾಡಿದರೆ ಅಸಮಾನತೆ ಸಮಾಜ&zwnj; ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರಿಗೆ ಸಮಾನತೆ ಹಾಗೂ ಆರ್ಥಿಕ&zwnj;ಶಕ್ತಿ ಬಂದಾಗ ಮಾತ್ರ ಸಮಾನತೆ&zwnj; ಬರಲು ಸಾಧ್ಯ ಎಂದರು.&lt;/p&gt;&lt;p&gt;ಭೋಜಲಿಂಗೇಶ್ವರ ದೇವಾಲಯದ ಶಕ್ತಿ ಜನರಿಗೆ ತಿಳಿಸುವ ಕೆಲಸ ನೀವೆಲ್ಲ ಮಾಡಬೇಕು ಎಂದು ಹೇಳಿದ ಸಿಎಂ, ಬಸವಣ್ಣನವರ ಇವನಾರವ ಇವನಾರವ ಎಂದೆನಿಸದಿರಯ್ಯ ಎನ್ನುವ ವಚನ ಹಾಗೂ ಕನಕದಾಸರ ಕುಲಕುಲವೆಂದು ಹೊಡದಾಡದಿರಿ ಎನ್ನುವ ವಾಣಿಯನ್ನು ಸಿಎಂ ಉಚ್ಚರಿಸಿದರು.&lt;/p&gt;&lt;p&gt;ಬಸವಣ್ಣನವರ,&zwnj; ಕನಕದಾಸರ ಶರಣರ, ಸಾಧು ಸಂತರ ಸಮಾನತೆಯ ತತ್ವಗಳು ಇದ್ದರೂ ಇನ್ನೂ&zwnj; ಜಾತಿ ವ್ಯವಸ್ಥೆ ಹೋಗಿಲ್ಲ. ಇವನಾರವ ಎನ್ನುತ್ತೇವೆ ಹೊರತು ಇವ ನಮ್ಮವ ಎನ್ನುತ್ತಿಲ್ಲ. ಕನಕದಾಸರ ಉಕ್ತಿ ಯಂತೆ ಕುಲದ ಆಚೆಗೆ ನಾವೆಲ್ಲ&zwnj; ಮನುಷ್ಯರಾಗಿ ಬಾಳಬೇಕು ಎಂದು ಕರೆ ನೀಡಿದ ಸಿಎಂ, ಡಾ ಅಂಬೇಡ್ಕರ್ ಅವರ ಆಶಯದಂತೆ ಎಲ್ಲರೂ ಸಮಾನವಾಗಿ ಬಾಳಬೇಕು. ಈ ಎಲ್ಲ ತತ್ವಗಳು ಜಾರಿಗೆ ಬರಲು ಪ್ರತಿಯೊಬ್ಬರು ಆಚರಣೆ ಮಾಡಬೇಕು. ಜಾತಿ ವ್ಯವಸ್ಥೆಯ ವಿರುದ್ಧ ಚಾಲನೆ ಸಿಗಬೇಕೆಂದರೆ ಶಿಕ್ಷಣ ದೊರಕಿದಾಗ ಮಾತ್ರ ಸಮಾನತೆ ಸಿಗುತ್ತದೆ. ದೇವಸ್ಥಾನ ಉದ್ಘಾಟನೆ ನೆರವೇರಿಸಿದ್ದೇನೆ. ಇದು ಸಾರ್ಥಕವಾಗಬೇಕಾದರೆ ನೀವೆಲ್ಲ ಮನುಷ್ಯರಾಗಿ ಬಾಳಬೇಕು ಎಂದರು.&lt;/p&gt;&lt;p&gt;ಜಾತಿ ವ್ಯವಸ್ಥೆ ಸ್ವಲ್ಪ&zwnj; ಕಡಿಮೆಯಾಗಿದೆಯಾದರು ಇನ್ನೂ ಪೂರ್ಣವಾಗಿ ಹೋಗಿಲ್ಲ. ಅದು ತುಂಬಾ ಜಡತ್ವ ಹೊಂದಿದೆ. ಪ್ರತಿಯೊಬ್ಬರು ವೈಚಾರಿಕತೆ ಹಾಗೂ ವೈಜ್ಞಾನಿಕ ಹಿನ್ನೆಲೆಯ ಇರುವ ವಿದ್ಯೆ ಪಡೆದುಕೊಳ್ಳಬೇಕು. ಸಮಾಜದಲ್ಲಿ ಮೂಢನಂಬಿಕೆಗಳ ದಾಸರಾಗಬೇಡಿ. ಬಸವಣ್ಣನವರು ಆ ಕಾಲದಲ್ಲಿಯೇ ಕರ್ಮ ಸಿದ್ಧಾಂತ ತಿರಸ್ಕಾರ ಮಾಡಿದ್ದರು. ಈಗಲೂ ವಿದ್ಯಾವಂತರು ಇದನ್ನು&zwnj; ನಂಬುತ್ತಿರುವುದು ದುರಂತ. ಕರ್ಮ&zwnj;ಸಿದ್ದಾಂತವೇ ಶುದ್ಧ ಸುಳು. ಅದನ್ನು ನಂಬಬೇಡಿ ಎಂದು ಜನ ಸಮುದಾಯಕ್ಕೆ ಕರೆ&zwnj;ನೀಡಿದರು.&lt;/p&gt;&lt;h2&gt;&lt;strong&gt;ವಸತಿ ನಿಲಯ, ಯಾತ್ರಿಕ ನಿವಾಸಕ್ಕೆ ಅನುದಾನ&lt;/strong&gt;&lt;/h2&gt;&lt;p&gt;ಹಿರಗಪ್ಪ ತಾತನವರ ಬೇಡಿಕೆಯಂತೆ ಸುಕ್ಷೇತ್ರದಲ್ಲಿ ವಸತಿ&zwnj; ನಿಲಯ ನಿರ್ಮಾಣ ಹಾಗೂ ಭಕ್ತಾದಿಗಳಿಗೆ ಯಾತ್ರಿ ನಿವಾಸ ಸ್ಥಾಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಯಾತ್ರಿ&zwnj; ನಿವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು 1 ಕೋಟಿ ರೂ. ಹಣ ನೀಡುವ ಭರವಸೆ ನೀಡಿದ್ದಾರೆ. ವಸತಿ ನಿಲಯ ಪ್ರಾರಂಭಕ್ಕೆ&zwnj; ಸರ್ಕಾರ ಸಹಾಯ ಮಾಡಲಿದೆ ಎಂದು ಭರವಸೆ ನೀಡಿದರು. ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಭಕ್ತರ ಕೋರಿಕೆಯಂತೆ ಸುಕ್ಷೇತ್ರದ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡಲಾಗುವುದು. ಇದಲ್ಲದೆ ಭಕ್ತರಿಂದ ನಿರ್ಮಿಸಲಾದ ದೇವಸ್ಥಾನದ ಜೀರ್ಣೋದ್ಧಾರಕ್ಕು ಸಹ ತಾವು ಬದ್ದ ಇರುವುದಾಗಿ ತಿಳಿಸಿದರು.&lt;/p&gt;]]></content:encoded>
            <category>kalaburagi</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-siddaramaiah-caste-free-society-message-kalaburagi-gvd/articleshow-e37img6"/>
        </item>
        <item>
            <title><![CDATA[ಸಂಧಾನದ ನಂತರವೂ ಸರಿಹೋಗದ ಸಂಸಾರ: 4 ದಿನದ ಹಿಂದಷ್ಟೇ ಮನೆಗೆ ಬಂದ ಪತ್ನಿಯ ಕೊಂದು ಮಗುವಿನೊಂದಿಗೆ ಬಾವಿಗೆ ಜಿಗಿದ ಪತಿ]]></title>
            <link>https://kannada.asianetnews.com/crime/kalaburgi-husband-kills-wife-who-came-home-just-4-days-ago-and-jumps-into-well/articleshow-ebuxb3i</link>
            <guid isPermaLink="true">https://kannada.asianetnews.com/crime/kalaburgi-husband-kills-wife-who-came-home-just-4-days-ago-and-jumps-into-well/articleshow-ebuxb3i</guid>
            <pubDate>Tue, 28 Apr 2026 15:57:23 +0530</pubDate>
            <description><![CDATA[&lt;p&gt;ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೊಬ್ಬ ಪತ್ನಿಯನ್ನು ಕೊಂದು, ಮಗುವಿನೊಂದಿಗೆ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಸ್ಥಳೀಯರು ಕೂಡಲೇ ಮಗುವನ್ನು ರಕ್ಷಿಸಿದರೂ, ಪತಿ ಪತ್ನಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq9ryzhnv663jntsdvhkxh6x,imgname-kalburgi-husband-suicide-killing-his-wife-1777370889781.jpeg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯ ಕೊಂದು ಸಾವಿಗೆ ಶರಣಾದ ಪತಿ&lt;/strong&gt;&lt;/h2&gt;&lt;p&gt;ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಕೊಂದು ಪತಿ ಸಾವಿಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮದರಾ ಕೆ ಗ್ರಾಮದಲ್ಲಿ ನಡೆದಿದೆ. ಪತ್ನಿಯನ್ನು ಕೊಲೆ ಮಾಡಿ ಪತಿ ಮಗುವಿನೊಂದಿಗೆ ಬಾವಿಗೆ ಹಾರಿದ್ದಾನೆ. ಆದರೆ ಈ ವೇಳೆ ಸಮಯಪ್ರಜ್ಞೆ ಮೆರೆದ ಸ್ಥಳೀಯರು ಕೂಡಲೇ ಬಾವಿಗಿಳಿದು ಮಗುವನ್ನು ರಕ್ಷಿಸಿದ್ದಾರೆ. ಆದರೆ ಬಾವಿಯಲ್ಲಿ ಮುಳುಗಿ ಪತಿ ಸಾವಿಗೆ ಶರಣಾಗಿದ್ದಾನೆ. ಗಂಡನಿಂದಲೇ ಕೊಲೆಯಾದ ಮಹಿಳೆಯನ್ನು 23 ವರ್ಷದ ಅಂಜಲಿ ಎಂದು ಗುರುತಿಸಲಾಗಿದೆ. ಹಾಗೆಯೇ ಲಕ್ಷ್ಮೀಕಾಂತ ಎಂಬಾತನೇ ಪತ್ನಿಯನ್ನು ಕೊಂದು ಸಾವಿಗೆ ಶರಣಾದಂತಹ ವ್ಯಕ್ತಿ.&lt;/p&gt;&lt;p&gt;&lt;strong&gt;ಪತ್ನಿ ಕೊಂದು ಮಗುವಿನೊಂದಿಗೆ ಬಾವಿಗೆ ಹಾರಿದ ಪತಿ&lt;/strong&gt;&lt;/p&gt;&lt;p&gt;ಮನೆಯೊಳಗೆ ಹೆಂಡತಿ ಕೊಲೆ ಮಾಡಿದ ಲಕ್ಷ್ಮೀಕಾಂತ ಬಳಿಕ ಮನೆಯ ಹೊರಗಿದ್ದ ಬಾವಿಗೆ ಹಾರಿದ್ದ. ಪತ್ನಿ ಅಂಜಲಿ ಹಾಗೂ ಪತಿ ಲಕ್ಷ್ಮೀಕಾಂತ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿದ್ದವು, ಕೌಟುಂಬಿಕ ಕಲಹದಿಂದಾಗಿ ಪತ್ನಿ ಅಂಜಲಿ ಗಂಡನ ಕಾಟ ತಾಳದೇ ಒಂದೂವರೆ ವರ್ಷದ ಹಿಂದೆಯೇ ತವರಿಗೆ ಹೋಗಿದ್ದಳು. ಅಂಜಲಿ ಮೂಲತಃ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಚಿಕ್ಕೆಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಅಲ್ಲಿಯೇ ನೆಲೆಸಿದ್ದಳು. ಅಂಜಲಿಗೆ ಮದರಾ ಕೆ ಗ್ರಾಮದಲ್ಲಿ ನೆಲೆಸುವುದು ಇಷ್ಟವಿರಲಿಲ್ಲ, ಮಹಾರಾಷ್ಟ್ರದ ಪೂನಾದಲ್ಲಿ ಕೆಲಸ ಮಾಡಿ ಬದುಕಬೇಕು ಎಂಬುದು ಆಕೆಯ ಬೇಡಿಕೆಯಾಗಿತ್ತು. ಇದೇ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ನಡೆದಿತ್ತು. ಹೀಗಾಗಿ ಕೇವಲ ನಾಲ್ಕೆ ನಾಲ್ಕು ದಿನಗಳ ಹಿಂದಷ್ಟೇ ಗ್ರಾಮಸ್ಥರು ಹಾಗೂ ಸಂಬಂಧಿಕರು ದಂಪತಿಗಳ ನಡುವೆ ರಾಜೀ ಪಂಚಾಯತಿ ಮಾಡಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನಾಸಿಕ್ ಟಿಸಿಎಸ್ ಜಿಹಾದ್ ಪ್ರಕರಣ: ಮತಾಂತರಕ್ಕೆ ಬುರ್ಖಾ, ಇಸ್ಲಾಮಿಕ್ ಪುಸ್ತಕ, ಹೆಸರು ಬದಲಿಸಲು ಸಂತ್ರಸ್ತರಿಗೆ ಒತ್ತಾಯ&lt;/strong&gt;&lt;/p&gt;&lt;p&gt;&lt;strong&gt;4 ದಿನದ ಹಿಂದಷ್ಟೇ ಗಂಡನ ಮನೆಗೆ ಬಂದಿದ್ದ ಅಂಜಲಿ:&lt;/strong&gt;&lt;/p&gt;&lt;p&gt;ಹೀಗಾಗಿ ನಾಲ್ಕು ದಿನಗಳ ಹಿಂದಷ್ಟೇ ಅಂಜಲಿ ಗಂಡನ ಮನೆಗೆ ಬಂದಿದ್ದಳು. ಆದರೆ ಸಂಧಾನದ ನಂತರ ಹೊಸ ಬದುಕಿ ಭರವಸೆಯೊಂದಿಗೆ ಗಂಡನ ಮನೆಗೆ ಬಂದಿದ್ದ ಅಂಜಲಿ ಇಂದು ಗಂಡನ ಕೈಯಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಪತ್ನಿಯನ್ನು ಕೊಂದ ನಂತರ ಎರಡು ವರ್ಷದ ಮಗುವಿನ ಜೊತೆಗೆ ಲಕ್ಷ್ಮೀಕಾಂತ ಬಾವಿಗೆ ಹಾರಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ಸ್ಥಳೀಯರು ಕೂಡಲೇ ಬಾವಿಗೆ ಜಿಗಿದು ಮಗುವನ್ನು ರಕ್ಷಿಸಿದ್ದಾರೆ ಆದರೆ ಲಕ್ಷ್ಮೀಕಾಂತ ಮಾತ್ರ ಸಾವಿಗೀಡಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರೇವೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಜ್ಯೂಸ್ ಬಾಟಲ್ ಸಾಗಿಸುತ್ತಿದ್ದ ಲಾರಿ ಪಲ್ಟಿ: ಚಾಲಕನ ನೆರವಿಗೆ ಧಾವಿಸದೇ ಬಿಟ್ಟಿಯಾಗಿ ಸಿಕ್ಕ ಜ್ಯೂಸ್&zwnj;ಗೆ ಮುಗಿಬಿದ್ದ ಜನ&lt;/strong&gt;&lt;/p&gt;]]></content:encoded>
            <category>kalaburagi</category>
            <dc:creator>Anusha Kb</dc:creator>
            <atom:link href="https://kannada.asianetnews.com/crime/kalaburgi-husband-kills-wife-who-came-home-just-4-days-ago-and-jumps-into-well/articleshow-ebuxb3i"/>
        </item>
        <item>
            <title><![CDATA[ಕಲಬುರಗಿ ಸರ್ಕಾರಿ ಶಿಕ್ಷಕಿ ಹತ್ಯೆ ರಹಸ್ಯ ಬಯಲು; ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಸ್ನೇಹಿತನಿಂದಲೇ ಕೊಲೆ!]]></title>
            <link>https://kannada.asianetnews.com/karnataka-districts/kalaburagi-government-teacher-murdered-for-demanding-money-back-rav/articleshow-m56hg61</link>
            <guid isPermaLink="true">https://kannada.asianetnews.com/karnataka-districts/kalaburagi-government-teacher-murdered-for-demanding-money-back-rav/articleshow-m56hg61</guid>
            <pubDate>Wed, 08 Apr 2026 06:58:17 +0530</pubDate>
            <description><![CDATA[ಕಮಲಾಪುರ ತಾಲೂಕಿನ ಕಲಮೂಡ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಶಿಕ್ಷಕಿ ಜ್ಯೋತಿ ಕಪಾಳ ಹತ್ಯೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಸ್ನೇಹಿತನೇ ಜ್ಯೋತಿಯನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಪೆಟ್ರೋಲ್ ಹಾಕಿ ಸುಟ್ಟಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knnb5fy82y3rq8vs724591n1,imgname----------------------92--1775611592648.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಮಲಾಪುರ (ಏ.8): &lt;/strong&gt;ತಾಲೂಕಿನ ಕಲಮೂಡ ಬಳಿ ಸುಟ್ಟ ಸ್ಥಿತಿಯಲ್ಲಿ ಶಿಕ್ಷಕಿ ಜ್ಯೋತಿ ಕಪಾಳ ಶವ ಶನಿವಾರ ಪತ್ತೆಯಾದ ಪ್ರಕರಣ ಕಳೆದ 24 ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.&amp;nbsp;&lt;/p&gt;&lt;p&gt;ಚಿಂಚೋಳಿ ತಾಲೂಕಿನ ಭುಂಯರ್ ಗ್ರಾಮದ ಅಮರ್ ಕುಡ್ದಳ್ಳಿ ಬಂಧಿತ ಆರೋಪಿ. ಕಷ್ಟ ಕಾಲದಲ್ಲಿ ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಜ್ಯೋತಿ ಅವರನ್ನು ಆರೋಪಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಮರ್ ಹಾಗೂ ಜ್ಯೋತಿ ಮೊದಲಿನಿಂದಲೇ ಸ್ನೇಹಿತರು. ಜ್ಯೋತಿ ಅವರಿಂದ ಅಮರ್ ₹14 ಲಕ್ಷ ಹಣ ಪಡೆದು ನಂದಿನಿ ಪಾರ್ಲರ್ ತೆರೆದಿದ್ದ. ಇತ್ತೀಚೆಗೆ ಜ್ಯೋತಿ ಹಣ ವಾಪಸ್ ಕೇಳಿದ್ದರು. 5 ದಿನ ಹಿಂದೆ ಹಣ ಕೊಡುತ್ತೇನೆ ಎಂದು ಹೇಳಿ ಜ್ಯೋತಿಯನ್ನು ಕಾರಲ್ಲಿ ಸುತ್ತಾಡಿಸಿ ಮಧ್ಯರಾತ್ರಿ 1ಕ್ಕೆ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಚಾಕುವಿನಿಂದ ಹತ್ಯೆ ಮಾಡಿದ್ದಾನೆ. ಬಳಿಕ ಸಾಕ್ಷಿ ನಾಶಪಡಿಸಲು ಮೃತದೇಹವನ್ನು ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್ ಮಾರ್ಗದರ್ಶನದಲ್ಲಿ ಸಿಪಿಐ ಶಿವಶಂಕರ್ ಸಾಹು ಪಿಎಸ್ಐ ಸುಖಾನಂದ ಸಿಂಗೆ ನೇತೃತ್ವದ ತಂಡ ಉಪೇಂದ್ರ, ಹುಸೇನ್ ಪಟೇಲ್, ರಾಕೇಶ್, ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburagi-government-teacher-murdered-for-demanding-money-back-rav/articleshow-m56hg61"/>
        </item>
        <item>
            <title><![CDATA[ಕಲಬುರಗಿ: ಶರಣಬಸವೇಶ್ವರ ರಥೋತ್ಸವ ವೇಳೆ ದುರಂತ: ಭಕ್ತನ ತೊಡೆ ಮೇಲೆ ಹರಿದ ಚಕ್ರ, ಸ್ಥಳದಲ್ಲೇ ದುರ್ಮರಣ]]></title>
            <link>https://kannada.asianetnews.com/karnataka-districts/kalaburagi-devotee-dies-after-hit-by-chariot-during-sharanabasaveshwara-rathtsava/articleshow-mwgdtsn</link>
            <guid isPermaLink="true">https://kannada.asianetnews.com/karnataka-districts/kalaburagi-devotee-dies-after-hit-by-chariot-during-sharanabasaveshwara-rathtsava/articleshow-mwgdtsn</guid>
            <pubDate>Wed, 08 Apr 2026 10:55:48 +0530</pubDate>
            <description><![CDATA[ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ನಡೆದ ಶ್ರೀ ಶರಣಬಸವೇಶ್ವರ ರಥೋತ್ಸವದ ವೇಳೆ ದುರಂತವೊಂದು ಸಂಭವಿಸಿದೆ. ರಥ ಎಳೆಯುವಾಗ ನೂಕುನುಗ್ಗಲಿನಲ್ಲಿ ಆಯತಪ್ಪಿ ಬಿದ್ದ ಭಕ್ತ ವಿನೋದ ರೆಡ್ಡಿ (49) ಅವರ ಮೇಲೆ ರಥದ ಚಕ್ರ ಹರಿದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knnrmzxxqd7dnjxjvfef5nee,imgname----------------------97--1775625732029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಏ.8): &lt;/strong&gt;ರಥದ ಚಕ್ರದಡಿ ಸಿಲುಕಿ ಭಕ್ತನೋರ್ವ ಭೀಕರವಾಗಿ ದುರ್ಮರಣಕ್ಕೀಡಾದ ಘಟನೆ ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಹಾಗರ ಗುಂಡಗಿಯಲ್ಲಿ ಪ್ರತಿ ವರ್ಷದಂತೆ ಶ್ರೀ ಶರಣಬಸವೇಶ್ವರ ರಥೋತ್ಸವ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಹಬ್ಬದ ಸಂಭ್ರಮ ಮನೆ ಮಾಡಿದ್ದ ಗ್ರಾಮ ಕ್ಷಣಾರ್ಧದಲ್ಲಿ ಸ್ಮಶಾನ ಮೌನವಾಗಿ ಮಾರ್ಪಟ್ಟಿದೆ. ಹಾಗರಗುಂಡಗಿ ಗ್ರಾಮದ ನಿವಾಸಿಯಾಗಿರುವ ವಿನೋದ ರೆಡ್ಡಿ(49) ಶ್ರೀ ಶರಣಬಸವೇಶ್ವರ ದೇವರ ರಥದ ಚಕ್ರದಡಿ ಸಿಲುಕಿ ಮೃತಪಟ್ಟಿರುವ ದುರ್ದೈವಿ.&lt;/p&gt;&lt;p&gt;ನಿನ್ನೆ ಸಂಜೆ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ದೇವರ ರಥೋತ್ಸವವು ಅತ್ಯಂತ ಅದ್ದೂರಿಯಾಗಿ ನಡೆಯುತ್ತಿತ್ತು. ಸಾವಿರಾರು ಭಕ್ತರು ಆಗಮಿಸಿದ್ದರು. ಜಯಘೋಷ ಹಾಕುತ್ತಾ ರಥವನ್ನು ಎಳೆಯುತ್ತಿದ್ದಾಗ ನಡೆದುಹೋಯ್ತು ದುರಂತ.&lt;/p&gt;&lt;p&gt;ರಥ ಎಳೆಯುವ ಸಂದರ್ಭದಲ್ಲಿ ಭಕ್ತರ ನೂಕುನುಗ್ಗಲಿನಲ್ಲಿ ಮೃತ ವಿನೋದ ರೆಡ್ಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದುರದೃಷ್ಟವಶಾತ್ ಚಲಿಸುತ್ತಿದ್ದ ರಥದ ಬೃಹತ್ ಚಕ್ರವು ನೇರವಾಗಿ ವಿನೋದ ರೆಡ್ಡಿ ತೊಡೆಯ ಮೇಲಿಂದ ಹರಿದು ಹೋಗಿದೆ.&lt;/p&gt;&lt;p&gt;ಚಕ್ರದಡಿ ಸಿಲುಕಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ವಿನೋದ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಣ್ಣೆದುರೇ ನಡೆದ ಈ ಭೀಕರ ಅಪಘಾತದಿಂದಾಗಿ ಜಾತ್ರೆಗೆ ಬಂದಿದ್ದ ಭಕ್ತರು ದಿಕ್ಕೆಟ್ಟು ಓಡಿದ್ದು, ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.&lt;/p&gt;&lt;p&gt;ಈ ಕುರಿತು ಮಾಹಿತಿ ಪಡೆದ *ಫರಹತಾಬಾದ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kalaburagi</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/kalaburagi-devotee-dies-after-hit-by-chariot-during-sharanabasaveshwara-rathtsava/articleshow-mwgdtsn"/>
        </item>
        <item>
            <title><![CDATA[ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆಯಾದ್ರೂ ಕೊನೆ ಸ್ಥಾನದಲ್ಲಿಯೇ ಉಳಿದ ಕಲಬುರಗಿ]]></title>
            <link>https://kannada.asianetnews.com/gallery/education/despite-improvement-in-sslc-results-kalaburagi-remains-at-the-bottom-35th-place-mrq-noffx0a</link>
            <guid isPermaLink="true">https://kannada.asianetnews.com/gallery/education/despite-improvement-in-sslc-results-kalaburagi-remains-at-the-bottom-35th-place-mrq-noffx0a</guid>
            <pubDate>Thu, 23 Apr 2026 13:32:43 +0530</pubDate>
            <description><![CDATA[ಎಸ್&zwnj;ಎಸ್&zwnj;ಎಲ್&zwnj;ಸಿ ಫಲಿತಾಂಶ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದರೂ ಕಳೆದ ವರ್ಷಕ್ಕಿಂತ ಶೇ.28.17ರಷ್ಟು ಫಲಿತಾಂಶದಲ್ಲಿ ಏರಿಕೆ ಕಂಡಿದೆ. ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳಿಗೆ ಸರ್ಕಾರವು ಶುಲ್ಕ ರಹಿತ ಮರುಪರೀಕ್ಷೆಯನ್ನು ಘೋಷಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khfjfhd2d90hftg9dd30nk1r,imgname-sslc-exam-1771122967970.jpg" type="image/jpeg" height="390" width="690"/>
            <content:encoded><![CDATA[ಎಸ್&zwnj;ಎಸ್&zwnj;ಎಲ್&zwnj;ಸಿ ಫಲಿತಾಂಶ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದರೂ ಕಳೆದ ವರ್ಷಕ್ಕಿಂತ ಶೇ.28.17ರಷ್ಟು ಫಲಿತಾಂಶದಲ್ಲಿ ಏರಿಕೆ ಕಂಡಿದೆ. ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳಿಗೆ ಸರ್ಕಾರವು ಶುಲ್ಕ ರಹಿತ ಮರುಪರೀಕ್ಷೆಯನ್ನು ಘೋಷಿಸಿದೆ.&lt;img&gt;&lt;p&gt;ಇಂದು ಎಸ್&zwnj;ಎಸ್&zwnj;ಎಲ್&zwnj;ಸಿ ಫಲಿತಾಂಶ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಕ್ರಮವಾಗಿ ಮೊದಲ, ಎರಡನೇ ಸ್ಥಾನದಲ್ಲಿವೆ. ಪಿಯು ಫಲಿತಾಂಶದಲ್ಲಿಯೂ ಕಲಬುರಗಿ 29ನೇ ಸ್ಥಾನದಲ್ಲಿತ್ತು. ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ತೆಗೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕ ಭಾಗದಲ್ಲಿ ನಾವು ಹೆಚ್ಚು ಶ್ರಮ ಹಾಕಿದ ಪರಿಣಾಮ ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. ಜಿಲ್ಲೆಯ ಅಧಿಕಾರಿಗಳು ವಿಶೇಷ ಕ್ಲಾಸ್, ಕೆಲವು ನಿಯಮಗಳನ್ನು ರೂಪಿಸುವ ಮೂಲಕ ಫಲಿತಾಂಶ ಸುಧಾರಣೆಗೆ ಕಾರಣವಾಗಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;2025ರಲ್ಲಿ ಕಲಬುರಗಿ ಶೇ.56.89 ಫಲಿತಾಂಶ ಪಡೆದುಕೊಂಡು 35ನೇ ಸ್ಥಾನದಲ್ಲಿತ್ತು. ಈ ವರ್ಷ (2026) ಶೇ.85.06 ಫಲಿತಾಂಶವನ್ನು ಕಲಬುರಗಿ ಜಿಲ್ಲೆ ದಾಖಲಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.28.17ರಷ್ಟು ಫಲಿತಾಂಶ ಏರಿಕೆಯಾಗಿದೆ. ಶೇ.90.26 ಫಲಿತಾಂಶದ ಮೂಲಕ ಮಧುಗಿರಿ 34ನೇ ಸ್ಥಾನದಲ್ಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Breaking ಎಸ್&zwnj;ಎಸ್&zwnj;ಎಲ್&zwnj;ಸಿ 2026 ಫಲಿತಾಂಶ ಪ್ರಕಟ, ಈ ಬಾರಿ ದಾಖಲೆಯ ಶೇ.94.10 ಫಲಿತಾಂಶ!&lt;/strong&gt;&lt;/p&gt;&lt;img&gt;&lt;p&gt;SSLC ಪರೀಕ್ಷೆಯನ್ನು ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳ ಮರು ಪರೀಕ್ಷೆ ಮೇ.18 ರಿಂದ 25 ವರೆಗೆ ನಡೆಯಲಿದೆ. ಈ ಮರುಪರೀಕ್ಷೆಗೆ ಯಾವುದೇ ಶುಲ್ಕವಿರಲ್ಲ. ಈ ಹಿಂದೆ ಪ್ರತಿ ವಿಷಯಕ್ಕೆ ವಿದ್ಯಾರ್ಥಿಗಳು 250 ರೂಪಾಯಿ ಕಟ್ಟಬೇಕಿತ್ತು. ಈ ಬಾರಿ ಸರ್ಕಾರವನ್ನು ಶುಲ್ಕವನ್ನು ಮನ್ನಾ ಮಾಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್, ಯಾವ ಜಿಲ್ಲೆಗೆ ಎಷ್ಟು ಬಂತು?&lt;/strong&gt;&lt;/p&gt;&lt;img&gt;&lt;p&gt;S.S.L.C ಫಲಿತಾಂಶ ಬಂದಿದೆ ಟ್ವೀಟ್ ಎಲ್ಲಿ ಮಹಾಜ್ಞಾನಿ Priyank Kharge ? ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.&amp;nbsp;&lt;/p&gt;&lt;p&gt;S.S.L.C ಫಲಿತಾಂಶ ಬಂದಿದೆ ಟ್ವೀಟ್ ಎಲ್ಲಿ ಮಹಾಜ್ಞಾನಿ @PriyankKharge ?#KhargeFailsKalaburgi pic.twitter.com/8iM5BJjHym&lt;/p&gt;&lt;p&gt;&mdash; BJP Karnataka (@BJP4Karnataka) April 23, 2026&lt;/p&gt;]]></content:encoded>
            <category>kalaburagi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/education/despite-improvement-in-sslc-results-kalaburagi-remains-at-the-bottom-35th-place-mrq-noffx0a"/>
        </item>
        <item>
            <title><![CDATA[Confusion over Karnataka CM Post: ಸಿಎಂ ಬದಲಾವಣೆಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ ಎಂದ ಖರ್ಗೆ]]></title>
            <link>https://kannada.asianetnews.com/politics/karnataka-politics-no-date-fixed-for-karnataka-cm-change-says-mallikarjun-kharge-clarifies-rav/articleshow-rb9xwuf</link>
            <guid isPermaLink="true">https://kannada.asianetnews.com/politics/karnataka-politics-no-date-fixed-for-karnataka-cm-change-says-mallikarjun-kharge-clarifies-rav/articleshow-rb9xwuf</guid>
            <pubDate>Sat, 02 May 2026 04:28:20 +0530</pubDate>
            <description><![CDATA[ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಹೇಳುವ ಮೂಲಕ ಹೊಸ ಕುತೂಹಲ ಮೂಡಿಸಿದ್ದಾರೆ. ಈ ಹಿಂದೆ ಬದಲಾವಣೆ ಇಲ್ಲ ಎಂದಿದ್ದ ಅವರು, ಇದೀಗ ಹೈಕಮಾಂಡ್ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knqxaacjkktrtqw8rra40m29,imgname-----------------------2026-04-09t065154.760-1775697734034.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಮೇ.2): &lt;/strong&gt;ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ಡೇಟ್&zwnj; ಫಿಕ್ಸ್ ಆಗಿಲ್ಲ. ದಿನಾಂಕವೇ ನಿಗದಿಯಾಗದೆ ಇರುವಾಗ ಮುಖ್ಯಮಂತ್ರಿ ಬದಲಾಗುತ್ತಾರೆ, ಬದಲಾಗಲ್ಲ ಎಂದು ನಾನು ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಗುರುವಾರವಷ್ಟೇ &lsquo;ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ&rsquo; ಎಂದಿದ್ದ ಖರ್ಗೆಯವರು ಶುಕ್ರವಾರ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡುತ್ತಾ, &lsquo;ಸಿಎಂ ಬದಲಾವಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ&rsquo; ಎಂದು ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿ ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ&rsquo; ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಖರ್ಗೆ, ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೇಳಿದರೆ ನಾನೇನು ಹೇಳಲಿ? ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಡೇಟ್&zwnj; ಫಿಕ್ಸ್&zwnj; ಆದ ಮೇಲೆ ನಾವೆಲ್ಲ ಅಂದರೆ, ನಾನು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎಲ್ಲರೂ ಸೇರಿ ಒಟ್ಟಾಗಿ ಚರ್ಚಿಸಿ, ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಏನು ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂದರು.&lt;/p&gt;&lt;p&gt;ಯಾವುದೇ ನಿರ್ಣಯ ಕೈಗೊಂಡರೂ ಅದರ ಸಾಧಕ-ಬಾಧಕಗಳನ್ನು ಚರ್ಚಿಸಿ ಮುಂದುವರಿಯುತ್ತೇವೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಪಕ್ಷದ ಪ್ರತಿಯೊಬ್ಬರೂ ಬೆಂಬಲ ನೀಡಬೇಕು. ಈಗಲೇ ಈ ಬಗ್ಗೆ ಯಾವುದೇ ಊಹಾಪೋಹ ಮಾಡಬೇಡಿ. ನಾನೊಂದು ಹೇಳಿದರೆ ನೀವು ಇನ್ನೊಂದನ್ನು ಅರ್ಥೈಸಬೇಡಿ. ಸುಮ್ಮನೆ ತಪ್ಪು ಸಂದೇಶ ನೀಡಬೇಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-politics-no-date-fixed-for-karnataka-cm-change-says-mallikarjun-kharge-clarifies-rav/articleshow-rb9xwuf"/>
        </item>
        <item>
            <title><![CDATA[ರಾಸಣಗಿ ಬಲಭೀಮಸೇನ ದೇವರಿಗೆ ಪಾದರಕ್ಷೆ ಸಮರ್ಪಣೆ; 5 ವರ್ಷಕ್ಕೊಮ್ಮೆ ನಡೆಯುವ ಸಂಪ್ರದಾಯ]]></title>
            <link>https://kannada.asianetnews.com/karnataka-districts/offering-footwear-to-the-god-of-rasanagi-balabhimasena-jevargi-religious-customs-kalaburagi-mrq/articleshow-ubfx8qu</link>
            <guid isPermaLink="true">https://kannada.asianetnews.com/karnataka-districts/offering-footwear-to-the-god-of-rasanagi-balabhimasena-jevargi-religious-customs-kalaburagi-mrq/articleshow-ubfx8qu</guid>
            <pubDate>Tue, 21 Apr 2026 10:57:44 +0530</pubDate>
            <description><![CDATA[&lt;p&gt;ರಾಸಣಗಿ ಬಲಭೀಮಸೇನ ದೇವರಿಗೆ ಅಕ್ಷಯ ತದಿಗೆಯಂದು ಪುರಾತನ ಪದ್ಧತಿಯಂತೆ ಪಾದರಕ್ಷೆ ಸಮರ್ಪಿಸಲಾಯಿತು. ಹರವಾಳ ಗ್ರಾಮದ ಹೇರೂರ ಮನೆತನದವರು 4 ಕಿ.ಮೀ. ಪಾದಯಾತ್ರೆ ಮೂಲಕ ಚಮ್ಮಾವುಗೆಗಳನ್ನು ತಂದು ದೇವರಿಗೆ ಅರ್ಪಿಸಿದರು. ಈ ವಿಶಿಷ್ಟ ಸಂಪ್ರದಾಯವು ಪ್ರತಿ 5 ವರ್ಷಕ್ಕೊಮ್ಮೆ ನಡೆಯುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpq7zwkfveh1kz7d3592sd84,imgname-rasanagi-balabhimasena-1776749113967.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ಜೇವರ್ಗಿ ತಾಲೂಕಿನ ಭೀಮಾನದಿ ತೀರದ ಸುಕ್ಷೇತ್ರ ರಾಸಣಗಿಯ ಮಹಾಮಹಿಮ ಬಲಭೀಮಸೇನ ದೇವರಿಗೆ ಅಕ್ಷಯ ತದಿಗೆ ದಿನ ಪುರಾತನ ಪದ್ಧತಿಯಂತೆ ನೂತನ ಚಮ್ಮಾವುಗೆ (ಪಾದರಕ್ಷೆ) ಸಮರ್ಪಿಸಲಾಯಿತು. ಹರವಾಳ ಗ್ರಾಮದ ಹೆರೂರ ಮನೆತನದ ಗಂಗಮ್ಮಾ ದಿ. ಶ್ರೀ ಹುಲೆಪ್ಪ ಹೇರೂರ ಮು. ಹರವಾಳ ರವರ ಕುಟುಂಸ್ಥರು ನಡೆಸಿಕೊಡುತ್ತಾರೆ.&lt;/p&gt;&lt;h2&gt;&lt;strong&gt;ಪಾದರಕ್ಷೆ ಸಮರ್ಪಣೆ ಪ್ರಕ್ರಿಯೆ ಹೇಗಿರುತ್ತೆ?&lt;/strong&gt;&lt;/h2&gt;&lt;p&gt;ಅಕ್ಷಯ ತೃತೀಯಗೆ ಬೆಳಗಿನ ಜಾವ ಈ ಬಾರಿಯ ಪಾದರಕ್ಷೆ ಸಮರ್ಪಣೆ ಪ್ರಕ್ರಿಯೆ ಆರಂಭವಾದವು. ಬೆಳಗ್ಗೆ 8 ಗಂಟೆಗೆ ಹರ&zwnj;ವಾಳ ಗ್ರಾಮದಿಂದ ಕಂಟೆಪ್ಪ ಹುಲೆಪ್ಪ ಹೇರೂರ ಹರವಾಳ ಅವರು ತಲೆಯ ಮೇಲೆ ಚಮ್ಮಾವುಗೆ ಇಟ್ಟುಕೊಂಡು ರಾಸಣಗಿವರೆಗೆ 4 ಕಿ.ಮೀ. ಗ್ರಾಮಸ್ಥರು ಮತ್ತು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಕಲ ವಾದ್ಯಗಳೊಂದಿಗೆ ನಡೆದುಕೊಂಡು ಬಂದರು.&lt;/p&gt;&lt;p&gt;ವಿಶೇಷವಾಗಿ ಡೊಳ್ಳು ಹಲಿಗೆ ಮತ್ತು ಬಾಜ, ಭಜಂತ್ರಿಗಳೊಂದಿಗೆ ಪಾದಯಾತ್ರೆ ಮೂಲಕ ಆಗಮಿಸಿದರು. ರಾಸಣಗಿ ಶ್ರೀ ಬಲಭೀಮ ದೇವಸ್ಥಾನ ಟ್ರಸ್ಟ್ ನವರು ಮತ್ತು ರಾಸಣಗಿ ಗ್ರಾಮಸ್ಥರು ಚಮ್ಮಾವೂಗೆಗಳನ್ನು ಪುರಪ್ರವೇಶ ಮಾಡಿಕೊಂಡು ದೇವಸ್ಥಾನಕ್ಕೆ ತಂದರು. ವಿಶೇಷ ವಿಧಿ ವಿಧಾನಗಳ ಮೂಲಕ ಚಮ್ಮಾವುಗೆ ದೇವರಿಗೆ ಅರ್ಪಿಸಲಾಯಿತು. ಬಲಭೀಮಸೇನ ದೇವರಿಗೆ ಪಂಚಾಮೃತ ಅಭಿಷೇಕ ಗಂಧಲೇಪನ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ನಡೆಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Dharwad: 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ&lt;/strong&gt;&lt;/p&gt;&lt;h3&gt;&lt;strong&gt;5 ವರ್ಷಕ್ಕೊಮ್ಮೆ ನಡೆಯುವ ವಿಶೇಷ ಜಾತ್ರೆ&lt;/strong&gt;&lt;/h3&gt;&lt;p&gt;ಈ ಎಲ್ಲಾ ಕಾರ್ಯಕ್ರಮದ ಸೇವೆಯನ್ನು ಶರಣಮ್ಮ ಕಂಟೆಪ್ಪ ಹೇರೂರ ಮು. ಹರವಾಳ ಹಾಗೂ ಸಹೋದರರು ನಡೆಸಿಕೊಟ್ಟರು. 5 ವರ್ಷಕ್ಕೊಮ್ಮೆ ನಡೆಯುವ ಪುರಾತನ ಪದ್ಧತಿಯಂತೆ ನೂತನ ಚಮ್ಮಾವುಗೆಗಳನ್ನು ಭಕ್ತರು ಅರ್ಪಿಸಲಾಗುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದೂದಿಹಳ್ಳಿ ಗ್ರಾಮದ ಕೆರೆಯ ಹೂಳು ತೆಗೆಯುವಾಗ ಸಿಕ್ತು 3 ಅಡಿ ಎತ್ತರದ ನಂದಿ ಮೂರ್ತಿ&lt;/strong&gt;&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/offering-footwear-to-the-god-of-rasanagi-balabhimasena-jevargi-religious-customs-kalaburagi-mrq/articleshow-ubfx8qu"/>
        </item>
        <item>
            <title><![CDATA[ಎಸ್ಸೆಸ್ಸೆಲ್ಸಿ ಫಲಿತಾಂಶ:  ಕರಾವಳಿ ಜಿಲ್ಲೆಗಳ ಕಮಾಲ್, ಕಲಬುರಗಿ ಕೊನೆ ಸ್ಥಾನ, ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs</link>
            <guid isPermaLink="true">https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs</guid>
            <pubDate>Thu, 23 Apr 2026 13:06:30 +0530</pubDate>
            <description><![CDATA[2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 94.1ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಕಲಬುರಗಿ ಜಿಲ್ಲೆಯು ಸತತವಾಗಿ ಕಳಪೆ ಪ್ರದರ್ಶನ ನೀಡಿ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hxfab2pjfxnzca3pghha8m3x,imgname-tn-sslc-results.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ನೇ ಸಾಲಿನ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಒಟ್ಟಾರೆ ಉತ್ತೀರ್ಣ ಪ್ರಮಾಣವು ಶೇಕಡಾ 94.1 ಆಗಿದ್ದು, ಕಳೆದ ವರ್ಷಗಳಿಗಿಂತ ಉತ್ತಮ ಸಾಧನೆ ದಾಖಲಾಗಿದೆ. ವಿದ್ಯಾರ್ಥಿಗಳ ಸಾಧನೆ, ಜಿಲ್ಲಾವಾರು ಫಲಿತಾಂಶ ಮತ್ತು ಗ್ರಾಮೀಣ ಪ್ರದೇಶಗಳ ಮೇಲುಗೈ&mdash;allವು ಈ ಬಾರಿ ವಿಶೇಷ ಚರ್ಚೆಗೆ ಕಾರಣವಾಗಿವೆ.&lt;/p&gt;&lt;h2&gt;ಯಾರು ಲಾಸ್ಟ್? ಯಾರು ಫಸ್ಟ್?&lt;/h2&gt;&lt;p&gt;ಜಿಲ್ಲಾವಾರು ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಮತ್ತೆ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 98.40 ಉತ್ತೀರ್ಣತೆಯೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಲಬುರಗಿ ಕೊನೆಯ ಸ್ಥಾನ ಪಡೆದಿದೆ. ಕಳೆದ ಬಾರಿಯೂ ಕಲಬುರಗಿ ಕಲಬುರಗಿ ಕೊನೆಯ ಸ್ಥಾನ ಪಡೆದಿತ್ತು. 2025ರಲ್ಲಿ 56.89 ಬಂದಿತ್ತು. &amp;nbsp;ಈ ಬಾರಿ 28.17 ಶೇಕಡ ಏರಿಕೆಯನ್ನೂ ದಾಖಲಿಸಿದರೂ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಫಲಿತಾಂಶವನ್ನು ಉತ್ತಮಗೊಳಿಸುವ ಮಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ ಮಹತ್ವದ ಕಾರ್ಯಗಳನ್ನು ಮಾಡಿತ್ತು.&lt;/p&gt;&lt;h2&gt;ಇಳಿಕೆಯತ್ತಲೇ ಸಾಗಿದ ಕಲಬುರಗಿ, ಏರಿಕೆ ಯಾವಾಗ?&lt;/h2&gt;&lt;p&gt;ಕಳೆದ ಬಾರಿಗಿಂತ ಈ ಬಾರಿ 28.17 ಶೇಕಡ ಏರಿಕೆಯನ್ನೂ ದಾಖಲಿಸಿದರೂ ಕೊನೆಯ ಸ್ಥಾನದಲ್ಲಿ ಇರುವ ಕಲಬುರಗಿ 2023 ನೇ ಸಾಲಿನಿಂದಲೇ &amp;nbsp;ಇಳಿಕೆಯತ್ತ ಫಲಿತಾಂಶವನ್ನು ದಾಖಲಿಸುತ್ತಲೇ ಬಂದಿದೆ. &amp;nbsp;2023ರಲ್ಲಿ 29ನೇ ಸ್ಥಾನದಲ್ಲಿತ್ತು, 2024ರಲ್ಲಿ 34ನೇ ಸ್ಥಾನ ಗಳಿಸಿತ್ತು. 2025ರಲ್ಲಿ 35ನೇ ಸ್ಥಾನ &amp;nbsp;ಪಡೆದು ಕೊನೆಯ ಸ್ಥಾನ ಪಡೆದಿತ್ತು. ಇದೀಗ ಈ ಸಾಲಿನಲ್ಲೂ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.&lt;/p&gt;&lt;h2&gt;ಜಿಲ್ಲಾವಾರು ಫಲಿತಾಂಶ ಹೀಗಿದೆ&lt;/h2&gt;&lt;p&gt;ದಕ್ಷಿಣ ಕನ್ನಡ 98.40&lt;/p&gt;&lt;p&gt;ಉಡುಪಿ 98.18&lt;/p&gt;&lt;p&gt;ಉತ್ತರ ಕನ್ನಡ 98.09&lt;/p&gt;&lt;p&gt;ಹಾಸನ 97.51&lt;/p&gt;&lt;p&gt;ಮಂಡ್ಯ 97.45&lt;/p&gt;&lt;p&gt;ಸಿರ್ಸಿ 97.21&lt;/p&gt;&lt;p&gt;ಹಾವೇರಿ 96.87&lt;/p&gt;&lt;p&gt;ಕೊಡಗು 96.70&lt;/p&gt;&lt;p&gt;ಶಿವಮೊಗ್ಗ 96.56&lt;/p&gt;&lt;p&gt;ವಿಜಯನಗರ 96.39&lt;/p&gt;&lt;p&gt;ಬೆಂಗಳೂರು ಗ್ರಾಮಾಂತರ 95.84&lt;/p&gt;&lt;p&gt;ಧಾರವಾಡ 95.59&lt;/p&gt;&lt;p&gt;ಕೋಲಾರ 95.50&lt;/p&gt;&lt;p&gt;ಬಾಗಲಕೋಟೆ 95.42&lt;/p&gt;&lt;p&gt;ಬೆಂಗಳೂರು ಉತ್ತರ 95.34&lt;/p&gt;&lt;p&gt;ಗದಗ 95.24&lt;/p&gt;&lt;p&gt;ಚಿಕ್ಕಮಗಳೂರು 94.99&lt;/p&gt;&lt;p&gt;ಬೆಳಗಾವಿ 94.75&lt;/p&gt;&lt;p&gt;ದಾವಣಗೆರೆ 94.64&lt;/p&gt;&lt;p&gt;ಮೈಸೂರು 94.50&lt;/p&gt;&lt;p&gt;ರಾಯಚೂರು 94.41&lt;/p&gt;&lt;p&gt;ವಿಜಯಪುರ 94.17&lt;/p&gt;&lt;p&gt;ಚಿಕ್ಕೋಡಿ 94.09&lt;/p&gt;&lt;p&gt;ಬಳ್ಳಾರಿ 93.36&lt;/p&gt;&lt;p&gt;ಕೊಪ್ಪಳ 93.10&lt;/p&gt;&lt;p&gt;ರಾಮನಗರ 92.83&lt;/p&gt;&lt;p&gt;ಚಿತ್ರದುರ್ಗ 92.25&lt;/p&gt;&lt;p&gt;ಬೀದರ 92.18&lt;/p&gt;&lt;p&gt;ತುಮಕೂರು 92.04&lt;/p&gt;&lt;p&gt;ಚಾಮರಾಜನಗರ 91.89&lt;/p&gt;&lt;p&gt;ಯಾದಗಿರಿ 91.89&lt;/p&gt;&lt;p&gt;ಬೆಂಗಳೂರು ದಕ್ಷಿಣ 91.65&lt;/p&gt;&lt;p&gt;ಚಿಕ್ಕಬಳ್ಳಾಪುರ 90.88&lt;/p&gt;&lt;p&gt;ಮಧುಗಿರಿ 90.26&lt;/p&gt;&lt;p&gt;ಕಲಬುರಗಿ 85.06&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs"/>
        </item>
        <item>
            <title><![CDATA[ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸುವ ಮಾರ್ಗ ಅಂತಿಮ]]></title>
            <link>https://kannada.asianetnews.com/karnataka-districts/indian-railways-new-bengaluru-mumbai-vande-bharat-sleeper-train-runs-through-kalaburagi-route-mrq/articleshow-uzd74sd</link>
            <guid isPermaLink="true">https://kannada.asianetnews.com/karnataka-districts/indian-railways-new-bengaluru-mumbai-vande-bharat-sleeper-train-runs-through-kalaburagi-route-mrq/articleshow-uzd74sd</guid>
            <pubDate>Tue, 14 Apr 2026 14:53:27 +0530</pubDate>
            <description><![CDATA[&lt;p&gt;ಬಹುನಿರೀಕ್ಷಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಲ್ಯಾಣ ಕರ್ನಾಟಕದ ಕಲಬುರಗಿ, ಸೊಲ್ಲಾಪುರ ಮಾರ್ಗವಾಗಿ ಸಂಚರಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಚಿತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp5mp54ztjf6gk3z0b2atrw8,imgname-vande-bharat-1776158446751.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ಬೆಂಗಳೂರು-ಮುಂಬೈ ವಂದೇ ಭಾರತ್&zwnj; ಸ್ಲೀಪರ್ ರೈಲಿನ ಮಾರ್ಗ ಖಚಿತವಾಗಿದೆ. ಬೆಂಗಳೂರು, ಕಲಬುರಗಿ, ಸೊಲ್ಲಾಪುರ ಮಾರ್ಗವಾಗಿ ಈ ರೈಲು ಸಂಚರಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್&zwnj; ಜೋಶಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ &lsquo;ಎಕ್ಸ್&zwnj;&rsquo; ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ರಾಜ್ಯಕ್ಕೆ ಹೊಸ ರೈಲು ನೀಡಿರುವುದಕ್ಕೆ ಪ್ರಧಾನಿ ಮೋದಿ ಹಾಗೂ ರೈಲ್ವೆ ಸಚಿವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಸಂಚರಿಸುವಂತೆ ನಾನು ಮನವಿ ಮಾಡಿದ್ದೆ, ನನ್ನ ಮನವಿಗೆ ರೈಲ್ವೆ ಇಲಾಖೆ ಮನ್ನಣೆ ನೀಡಿದೆ ಎಂದು ಜೋಶಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಟ್ವೀಟ್ ಮೂಲಕ ಖಚಿತಪಡಿಸಿದ ಜೋಶಿ&lt;/strong&gt;&lt;/h2&gt;&lt;p&gt;ಬಹುನಿರೀಕ್ಷಿತ ಬೆಂಗಳೂರು ಮುಂಬೈ ವಂದೇ ಭಾರತ್&zwnj; ಸ್ಲೀಪರ್&zwnj; ರೈಲು ಸಂಚಾರ ಮಾರ್ಗ ಎಲ್ಲಿಂದ ಎಂಬುದರ ಕುರಿತು ಖಚಿತ ಪಡಿಸಿರಲಿಲ್ಲ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಪುಣೆ ಮಾರ್ಗವೋ ಅಥವಾ ಬೆಂಗಳೂರು, ಕಲಬುರಗಿ, ಸೊಲ್ಲಾಪುರ, ಪುಣೆ ಮಾರ್ಗವೋ ಎಂಬ ಗೊಂದಲ ಪ್ರಯಾಣಿಕರಲ್ಲಿತ್ತು. ಸದ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್&zwnj; ಮಾಡಿ ಯಾವ ಮೂರ್ಗದ ಮೂಲಕ ರೈಲು ಸಂಚರಿಸಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಜೋಶಿ ಅವರ ಟ್ವಿಟ್&zwnj;ನಲ್ಲೇನಿದೆ?&lt;/strong&gt;&lt;/p&gt;&lt;p&gt;ನನ್ನ ಮನವಿಗೆ ಸ್ಪಂದಿಸಿ, ನೂತನ ವಂದೇ ಭಾರತ್ ಸ್ಲೀಪರ್ ರೈಲು ಕೆ&zwnj;ಎಸ್&zwnj;ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್&zwnj;ಗೆ ಸಂಚರಿಸಲಿದೆ. ಹಾಗೂ ಬೆಂಗಳೂರಿನಿಂದ ಕರ್ನಾಟಕದ ಮಧ್ಯ ಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ತೆರಳಲು ಬೆಂಗಳೂರು- ಮುಂಬೈ ಸೂಪರ್ ಫಾಸ್ಟ್ ರೈಲಿಗೆ ನನ್ನ ಮನವಿಯ ಮೇರೆಗೆ ಈಗಾಗಲೇ ಅನುಮೋದನೆ ನೀಡಲಾಗಿತ್ತು.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;ಬೆಂಗಳೂರಿನಿಂದ ಮುಂಬೈಗೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಈ ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಸಂಚರಿಸಲು ನನ್ನ ಮನವಿಗೆ ಸ್ಪಂದಿಸಿ, ನೂತನ ವಂದೇ ಭಾರತ್ ಸ್ಲೀಪರ್ ರೈಲು ಕೆ&zwnj; ಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್&hellip; pic.twitter.com/wdxvhqF2HV&lt;/p&gt;&lt;p&gt;&mdash; Pralhad Joshi (@JoshiPralhad) April 13, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಈ ಸೂಪರ್ ಫಾಸ್ಟ್ ರೈಲನ್ನು ಶೀಘ್ರವೇ ಪ್ರಾರಂಭಿಸುವುದಾಗಿ, ತದನಂತರದ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲಾಗಿ ಬದಲಾಯಿಸುವಂತೆ ನನ್ನ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಹೇಳಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಪರವಾಗಿ ಧನ್ಯವಾದಗಳು ಎಂದು ತಮ್ಮ &quot;ಎಕ್ಸ್&zwnj;&quot; ಖಾತೆಯಲ್ಲಿ ಪೋಸ್ಟ್&zwnj; ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ; ಗಂಟೆಗೆ 220 ಕಿ.ಮೀ ವೇಗದ ಹೊಸ ರೈಲು!&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲಿನ ಆಗಮನ ; ಎಷ್ಟು ಸಮಯ ಉಳಿತಾಯ?&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯಾಧುನಿಕ 'ವಂದೇ ಭಾರತ್ ಸ್ಲೀಪರ್' ರೈಲು ಸಂಚಾರಕ್ಕೆ ಅನುಮೋದನೆ ದೊರೆತಿದೆ. ಈ ಮಹತ್ವದ ನಿರ್ಧಾರಕ್ಕಾಗಿ ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಹಾಗೂ ಕೇಂದ್ರ ರೈಲ್ವೆ ಸಚಿವ ಶ್ರೀ @AshwiniVaishnaw ಹಾಗೂ ಶ್ರೀ @VSOMANNA_BJP ಅವರಿಗೆ ಹೃತ್ಪೂರ್ವಕ&hellip; pic.twitter.com/TkLKLp77zk&lt;/p&gt;&lt;p&gt;&mdash; BJP Karnataka (@BJP4Karnataka) April 13, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indian-railways-new-bengaluru-mumbai-vande-bharat-sleeper-train-runs-through-kalaburagi-route-mrq/articleshow-uzd74sd"/>
        </item>
        <item>
            <title><![CDATA[ಬೀದರ್‌ನ ಬಾನಿಗೆ ಮರಳಿದ ಲೋಹದ ಹಕ್ಕಿ! ಬೀದರ್‌-ಬೆಂಗಳೂರು ವಿಮಾನ ಸೇವೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್]]></title>
            <link>https://kannada.asianetnews.com/karnataka-districts/bidar-bengaluru-flight-services-set-to-resume-as-karnataka-govt-approves-funding-support-gdp/articleshow-v6ud2x1</link>
            <guid isPermaLink="true">https://kannada.asianetnews.com/karnataka-districts/bidar-bengaluru-flight-services-set-to-resume-as-karnataka-govt-approves-funding-support-gdp/articleshow-v6ud2x1</guid>
            <pubDate>Fri, 01 May 2026 16:39:34 +0530</pubDate>
            <description><![CDATA[ಸ್ಥಗಿತಗೊಂಡಿದ್ದ ಬೀದರ್&zwnj;-ಬೆಂಗಳೂರು ವಿಮಾನಯಾನ ಸೇವೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ. ಈ ಸೇವೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಮೂಲಕ ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ಅನುದಾನ ಒದಗಿಸಲಾಗುತ್ತಿದ್ದು, ಇದು ಜಿಲ್ಲೆಯ ಸಂಪರ್ಕ ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqhkkstz3m20dc86284nr8mz,imgname-star-air-bidar-flights--1--1777633716063.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್&zwnj; ಜಿಲ್ಲೆಗೆ ಮಹತ್ವದ ಬೆಳವಣಿಗೆಯಾಗಿ, ಸ್ಥಗಿತಗೊಂಡಿದ್ದ ನಾಗರಿಕ ವಿಮಾನಯಾನ ಸೇವೆ ಮತ್ತೆ ಆರಂಭಗೊಳ್ಳಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಬೀದರ್&zwnj;&ndash;ಬೆಂಗಳೂರು ನಡುವೆ ಕಾರ್ಯನಿರ್ವಹಿಸುತ್ತಿದ್ದ ವಿಮಾನ ಸೇವೆ ಪುನರಾರಂಭವಾಗಲಿದ್ದು, ಟರ್ಮಿನಲ್ ಕಾರ್ಯಾಚರಣೆಗಳು ಮತ್ತೆ ಚೇತರಿಸಿಕೊಳ್ಳಲು ದಾರಿ ಸುಗಮವಾಗಿದೆ.&lt;/p&gt;&lt;p&gt;ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಸಂಬಂಧ ಮನವಿ ಸಲ್ಲಿಸಿದ್ದರು. ಅವರ ಪ್ರಸ್ತಾವನೆಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸದಸ್ಯರು, ಬೀದರ್&zwnj;ನ ನಾಗರಿಕ ವಿಮಾನಯಾನ ಸೇವೆಗೆ ಅಗತ್ಯ ಅನುದಾನ ಒದಗಿಸಲು ಒಪ್ಪಿಗೆ ಸೂಚಿಸಿದ್ದಾರೆ.&lt;/p&gt;&lt;h2&gt;ವಿಮಾನಯಾನ ಸಂಸ್ಥೆ ಎದುರಿಸುವ ನಷ್ಟವನ್ನು ಭರಿಸಲು VGF ವ್ಯವಸ್ಥೆಯಡಿ ಅನುದಾನ&lt;/h2&gt;&lt;p&gt;ಈ ನಿರ್ಧಾರದ ಭಾಗವಾಗಿ, ವಿಮಾನಯಾನ ಸಂಸ್ಥೆಗಳು ಎದುರಿಸುವ ನಷ್ಟವನ್ನು ಭರಿಸಲು Viability Gap Funding (VGF) ವ್ಯವಸ್ಥೆಯಡಿ ಅನುದಾನ ನೀಡಲಾಗುತ್ತದೆ. ಈ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಮೂಲಕ ಭರಿಸಲಾಗುವುದು. ಇದರಿಂದ ವಿಮಾನ ಸೇವೆ ನಿರಂತರವಾಗಿ ಕಾರ್ಯನಿರ್ವಹಿಸಲು ಸಹಾಯವಾಗಲಿದ್ದು, ಜಿಲ್ಲೆಯ ಸಂಪರ್ಕ ವ್ಯವಸ್ಥೆಗೆ ಮಹತ್ವದ ಉತ್ತೇಜನ ದೊರೆಯಲಿದೆ.&lt;/p&gt;&lt;p&gt;ಇತ್ತೀಚೆಗೆ, ನಾಗರಿಕ ವಿಮಾನಯಾನ ಸೇವೆಯನ್ನು ನಿರ್ವಹಿಸುತ್ತಿದ್ದ ಸ್ಟಾರ್ ಏರ್ ಸಂಸ್ಥೆಯು ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅವಧಿ ಮುಗಿದ ಹಿನ್ನೆಲೆಯಲ್ಲಿ ಏಪ್ರಿಲ್ 13ರಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಕಳೆದ ವರ್ಷ ಸರ್ಕಾರವು ಕೆಕೆಆರ್&zwnj;ಡಿಬಿ ನಿಧಿಯಿಂದ ಸುಮಾರು 13 ಕೋಟಿ ರೂಪಾಯಿ ಅನುದಾನವನ್ನು ನೀಡಿತ್ತು. ಇದೀಗ ಹೊಸ ಅವಧಿಗೆ ಸ್ಟಾರ್ ಏರ್ ಸಂಸ್ಥೆಯು 20 ಕೋಟಿ ರೂಪಾಯಿಗಿಂತ ಹೆಚ್ಚು ಅನುದಾನ ಬೇಡಿಕೆ ಇಟ್ಟಿದ್ದುದಾಗಿ ಮೂಲಗಳು ತಿಳಿಸಿವೆ.&lt;/p&gt;&lt;p&gt;ಸಚಿವ ಈಶ್ವರ ಖಂಡ್ರೆ ಅವರ ಸತತ ಪ್ರಯತ್ನದ ಫಲವಾಗಿ ಸರ್ಕಾರ ಮತ್ತೆ ಅನುದಾನ ನೀಡಲು ಸಮ್ಮತಿಸಿರುವುದರಿಂದ, ಬೀದರ್&zwnj;ನಲ್ಲಿ ವಿಮಾನ ಸೇವೆ ಪುನರಾರಂಭವಾಗುವುದು ಖಚಿತವಾಗಿದೆ. ಈ ಕ್ರಮದಿಂದ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ವಲಯಗಳಿಗೆ ಮಹತ್ತರ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.&lt;/p&gt;&lt;h2&gt;ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪ್ರಯಾಣಿಕರಿಗೂ ಅನುಕೂಲ&lt;/h2&gt;&lt;p&gt;ಇದರಿಂದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪ್ರಯಾಣಿಕರಿಗೂ ಸಹ ಹೆಚ್ಚಿನ ಅನುಕೂಲ ಸಿಗಲಿದೆ, ಏಕೆಂದರೆ ಅವರು ಕೂಡ ಬೀದರ್ ವಿಮಾನ ನಿಲ್ದಾಣವನ್ನು ಬಳಸಿಕೊಂಡು ಪ್ರಯಾಣಿಸುತ್ತಿದ್ದರು. ಒಟ್ಟಿನಲ್ಲಿ, ಈ ನಿರ್ಧಾರ ಉತ್ತರ ಕರ್ನಾಟಕ ಭಾಗದ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.&lt;/p&gt;&lt;p&gt;ಬೀದರ್&zwnj; &ndash; ಬೆಂಗಳೂರು ನಡುವೆ ಮತ್ತೆ ನಾಗರಿಕ ವಿಮಾನಯಾನ ಸೇವೆ ಆರಂಭಿಸಲು ಇಂದು ನಡೆದ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವಾಗಲಿದ್ದು, ಸರ್ಕಾರಕ್ಕೆ ಹಾಗೂ ಕೆಕೆಆರ್&zwnj;ಡಿಬಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ಬೀದರ್ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ.&lt;/p&gt;&lt;p&gt;- ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bidar-bengaluru-flight-services-set-to-resume-as-karnataka-govt-approves-funding-support-gdp/articleshow-v6ud2x1"/>
        </item>
        <item>
            <title><![CDATA[ಬಸವ ವಸತಿ ಯೋಜನೆಯ ಹಣ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ: ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ಲೋಕಾಬಲೆಗೆ]]></title>
            <link>https://kannada.asianetnews.com/state/lokayukta-raid-in-kalaburgi-computer-operator-arrested-taking-bribe/articleshow-vgbdpbr</link>
            <guid isPermaLink="true">https://kannada.asianetnews.com/state/lokayukta-raid-in-kalaburgi-computer-operator-arrested-taking-bribe/articleshow-vgbdpbr</guid>
            <pubDate>Wed, 22 Apr 2026 18:16:57 +0530</pubDate>
            <description><![CDATA[&lt;p&gt;ಕಲಬುರಗಿಯ ಯಡ್ರಾಮಿ ತಾಲೂಕಿನಲ್ಲಿ ಬಸವ ವಸತಿ ಯೋಜನೆಯ ಸಹಾಯಧನ ಮಂಜೂರು ಮಾಡಲು ₹20,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್&zwnj;ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಫಲಾನುಭವಿಯೊಬ್ಬರ ದೂರಿನ ಮೇರೆಗೆ ಈ ದಾಳಿ ನಡೆದಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kptk6r87ctr0eqf160gqj28x,imgname-lokayukta-raid-1776861536518.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಬಸವ ವಸತಿ ಯೋಜನೆಯ ಸಹಾಯಧನ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ&lt;/strong&gt;&lt;/h2&gt;&lt;p&gt;ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಲೋಕಾ ಬಲೆಗೆ ಬಿದ್ದಿದ್ದಾರೆ. ಬಸವ ವಸತಿ ಯೋಜನೆಯ ಸಹಾಯಧನ ಮಂಜೂರು ಮಾಡುವುದಕ್ಕೆ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯತ್ ಕಂಪ್ಯೂಟರ್ ಆಪರೇಟರ್&zwnj;ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಬಂದೇನವಾಜ್ ಲೋಕಾ ಬಲೆಗೆ ಬಿದ್ದವ.&lt;/p&gt;&lt;h3&gt;&lt;strong&gt;ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ಲೋಕಾಬಲೆಗೆ&lt;/strong&gt;&lt;/h3&gt;&lt;p&gt;ಕಂಪ್ಯೂಟರ್ ಆಪರೇಟರ್ ಬಂದೇನವಾಜ್ ಮಲ್ಲಿಕಾರ್ಜುನ ಮಳ್ಳಿ ಎನ್ನುವ ಫಲಾನುಭವಿ ಬಳಿ ಬಸವ ವಸತಿ ಯೋಜನೆಯ ಸಹಾಯಧನ ಮಂಜೂರು ಮಾಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಡಿದ್ದ. ಮುಂಗಡವಾಗಿ 5 ಸಾವಿರ ರೂ. ನಗದು ಹಾಗೂ 3 ಸಾವಿರ ರೂಪಾಯಿ ಫೋನ್ ಪೇ ಮೂಲಕ ಲಂಚ ಪಡೆದಿದ್ದ. ಈ ಸಂಬಂಧ ಮಲ್ಲಿಕಾರ್ಜುನ ಮಳ್ಳಿ ಲೋಕಾಯುಕ್ತಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಂಪ್ಯೂಟರ್ ಆಪರೇಟರ್ ಬಂದೇನವಾಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಲೋಕಾಯುಕ್ತ ಎಸ್ ಪಿ ಸಿದ್ದರಾಜು ಸಿ ಮಾರ್ಗದರ್ಶನದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಮನೆಯಲ್ಲೇ ಲೈಂ*ಗಿಕ ದೌರ್ಜನ್ಯವೆಸಗಿ ಐಆರ್&zwnj;ಎಸ್ ಅಧಿಕಾರಿಯ 22ರ ಹರೆಯದ ಪುತ್ರಿಯ ಭೀಕರ ಹತ್ಯೆ&lt;/p&gt;]]></content:encoded>
            <category>kalaburagi</category>
            <dc:creator>Anusha Kb</dc:creator>
            <atom:link href="https://kannada.asianetnews.com/state/lokayukta-raid-in-kalaburgi-computer-operator-arrested-taking-bribe/articleshow-vgbdpbr"/>
        </item>
    </channel>
</rss>
