<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 06 Apr 2026 09:48:58 +0530</lastBuildDate>
        <atom:link href="https://kannada.asianetnews.com/rss/kalaburagi" rel="self" type="application/rss+xml"/>
        <item>
            <title><![CDATA[ಕಲಬುರಗಿ: ನಡುರಸ್ತೆಯಲ್ಲಿ ಕುಡುಗೋಲಿನಿಂದ ಪತ್ನಿಯ ಕತ್ತು ಕತ್ತರಿಸಿ, ಹೆಣದ ಮೇಲೆ ಕಾರು ಹರಿಸಿ ಪತಿಯ ಅಟ್ಟಹಾಸ!]]></title>
            <link>https://kannada.asianetnews.com/karnataka-districts/kalaburagi-horror-husband-kills-wife-brutally-in-broad-daylight-near-afzalpur-gdp/articleshow-0pg97ne</link>
            <guid isPermaLink="true">https://kannada.asianetnews.com/karnataka-districts/kalaburagi-horror-husband-kills-wife-brutally-in-broad-daylight-near-afzalpur-gdp/articleshow-0pg97ne</guid>
            <pubDate>Thu, 26 Mar 2026 16:24:26 +0530</pubDate>
            <description><![CDATA[ಕಲಬುರಗಿಯ ಅಫಜಲಪುರ ತಾಲೂಕಿನ ಬಳಿ ಪತಿಯೊಬ್ಬ ತನ್ನ ಪತ್ನಿಯನ್ನು ಕುಡುಗೋಲಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಆಕೆಯ ಮೇಲೆ ಕಾರ್ ಹತ್ತಿಸಿ ವಿಕೃತಿ ಮೆರೆದಿದ್ದು, ಈ ಘಟನೆಗೆ ಸಾರ್ವಜನಿಕರು ಮೂಕಪ್ರೇಕ್ಷಕರಾಗಿದ್ದರು. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmmwe4sbms2rg69w3dv25cea,imgname-kalaburagi-murder-case-1774522405675.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿಯಲ್ಲಿ ಇಂದು ಹಾಡುಹಗಲೇ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಅಫಜಲಪುರ ತಾಲೂಕಿನ ಬಳುರಗಿ ಬಳಿ ರಕ್ಕಸ ಪತಿಯೊಬ್ಬ ತನ್ನ ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ದಾರಿ ಮಧ್ಯೆ ಕೊಲೆ ಮಾಡಿದ್ದಾನೆ. ಕುರಿ ಕತ್ತರಿಸುವಂತೆ ಪತ್ನಿಯ ಕತ್ತು ಸೀಳಿದ್ದಲ್ಲದೇ, ಆಕೆಯ ಮೇಲೆ ಇನೋವಾ ಕಾರ್ ಹತ್ತಿಸಿ ವಿಕೃತಿ ಮೆರೆದಿದ್ದಾನೆ. ರಸ್ತೆಯಲ್ಲಿ ಹೋಗುವವರೆಲ್ಲಾ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರೂ, ಆ ರಾಕ್ಷಸ ಮಾತ್ರ ತನ್ನ ಅಟ್ಟಹಾಸ ಮೆರೆದಿದ್ದಾನೆ. ನೋಡುಗರು ಮೊಬೈಲ್ ನಲ್ಲಿ ಈ ಕೃತ್ಯ ಚಿತ್ರಿಕರಿಸಿಕೊಂಡಿದ್ದಾರೆಯೇ ಹೊರತು ಯಾರೊಬ್ಬರೂ ಮಹಿಳೆಯ ರಕ್ಷಣೆಗೆ ಧಾವಿಸಿಲ್ಲ.&lt;/p&gt;&lt;h2&gt;ಕುಡುಗೋಲಿನಿಂದ ಕತ್ತು ಕತ್ತರಿಸಿದ ಗಂಡ!&lt;/h2&gt;&lt;p&gt;ಪತ್ನಿಯ ತಲೆಗೂದಲು ಹಿಡಿದು ಕುಡುಗೋಲಿನಿಂದ ಆಕೆಯ ಕತ್ತನ್ನು ಕತ್ತರಿಸುತ್ತಿದ್ದಾನೆ. ನೆಲಕ್ಕೆ ಬಿದ್ದು ಆತನಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿರುವ ಮಹಿಳೆ, ಹತ್ತಾರು ಜನರ ಎದುರುಗಡೆಯೇ ಪ್ರಾಣ ಬಿಟ್ಟಿದ್ದಾಳೆ. ಈ ಭೀಭತ್ಸ ಘಟನೆ ನಡೆದಿದ್ದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳುರಗಿ ಗ್ರಾಮದ ಬಳಿ ಮಾರ್ಚ್ 26ರ ಮಧ್ಯಾಹ್ನ ಸುಮಾರು 11:30 ರ ಸುಮಾರಿಗೆ ನಡೆದಿದೆ. ಇಷ್ಟಕ್ಕೂ ಸುಮ್ಮನಾಗದ ಈ ಕಿರಾತಕ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಮೇಲೆ ತನ್ನ ಕಾರ್ ಹತ್ತಿಸಿ ವಿಕೃತಿ ಮೆರೆದಿದ್ದಾನೆ. ಈ ಘಟನೆ ಹತ್ತಾರು ಜನರ ಸಮ್ಮುಖದಲ್ಲಿಯೇ ನಡೆದಿದ್ದು, ಹಲವರು ಮೊಬೈಲ್ ನಲ್ಲಿ ಈ ದೃಷ್ಯ ಸೆರೆ ಹಿಡಿದಿದ್ದಾರೆ. ಆದರೆ ಯಾರೊಬ್ಬರೂ ಮಹಿಳೆಯ ನೆರವಿಗೆ ಧಾವಿಸದಿರುವುದು ಮಾತ್ರ ದುರ್ದೈವ.&lt;/p&gt;&lt;h2&gt;ಕಾರಲ್ಲಿ ಸಂಬಂಧಿಕರಿದ್ದರೂ ಸುಮ್ಮನೆ ಕುಳಿತಿದ್ದರು!&lt;/h2&gt;&lt;p&gt;ನೆರೆಯ ಮಹಾರಾಷ್ಟ್ರದ ಬಾರಾಮತಿ ಮೂಲದ ಶೈಲಾ (28 ವರ್ಷ) ಎನ್ನುವ ಮಹಿಳೆಯೇ ಕೊಲೆಯಾದ ದುರ್ದೈವಿ. ಈತನ ಪತಿ ಅಕ್ಷಯ್ ಜಾಧವ್ ಎಂಬಾತನೇ ತನ್ನ ಪತ್ನಿಯನ್ನು ಅಕ್ಷರಶಃ ಕುರಿ ಕೊಯ್ದಂತೆ ಕೊಯ್ದ ಕಿರಾತಕ ಹಂತಕ. ಮಹಾರಾಷ್ಟ್ರದ ಬಾರಾಮತಿಯಿಂದ ಇವರು ಕಲಬುರಗಿಯ ಗಾಣಗಾಪೂರಕ್ಕೆ ಬಂದಿದ್ದರು. ದತ್ತನ ದರ್ಶನಕ್ಕೆ ಹೋಗೋಣ ಅಂತ ಕರೆತಂದಿದ್ದನಂತೆ, ಈ ವೇಳೆ ಅಫಜಲಪುರ ಹೊರವಲಯದ ಬಳುರಗಿ ಬಳಿ ಏಕಾಏಕಿ ಕಾರು ನಿಲ್ಲಿಸಿದ ಪತಿ ಅಕ್ಷಯ ಜಾಧವ್, ಪತ್ನಿಯ ಕೂದಲನ್ನು ಹಿಡಿದು ನೆಲಕ್ಕೆ ಬೀಳಿಸಿದ್ದಾನೆ. ಬಳಿಕ ತನ್ನ ಬಳಿಯಿದ್ದ ಕುಡುಗೋಲಿನಿಂದ ಆಕೆಯ ಕತ್ತನ್ನು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.&amp;nbsp;&lt;/p&gt;&lt;p&gt;ಆ ವಾಹನದಲ್ಲಿ ಆತನ ತಂದೆ ತಾಯಿ ಸಂಬಂಧಿಕರು ಸೇರಿ ಐವರು ಇದ್ದರೆನ್ನಲಾಗಿದೆ. ಅವರು ಮೌನವಾಗಿ ಕೂರುವ ಮೂಲಕ ಸೊಸೆಯ ಕೊಲೆಗೆ ಪರೋಕ್ಷವಾಗಿ ಸಹಕರಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿ ಅಕ್ಷಯ ಜಾಧವನನ್ನು ಅಫಜಲಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.&lt;/p&gt;&lt;p&gt;ಸದ್ಯ ಕೊಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪತ್ನಿಯನ್ನೇ ಕೊಂದು ವಿಕೃತಿ ಮೆರೆದ ಪತಿ ಈಗ ಪೊಲೀಸ್ ಅತಿಥಿಯಾಗಿದ್ದಾನೆ. ಆದರೆ ಹಾಡುಹಗಲೇ ನಡೆದ ಈ ಕೊಲೆ ಕಂಡು ಕಲಬುರ್ಗಿ ಜನತೆ ಅಕ್ಷರಶಃ ಸ್ತಬ್ಧರಾಗಿದ್ದಾರೆ. ಸ್ಥಳಿಯರು ಒಂದಿಷ್ಟು ದೈರ್ಯ ತಗೊಂಡು ಆತನಿಗೆ ತಡೆದಿದ್ದರೆ ಪಾಪ ಒಂದು ಮಹಿಳೆಯ ಜೀವವಾದ್ರೂ ಉಳಿಯುತ್ತಿತ್ತು.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kalaburagi-horror-husband-kills-wife-brutally-in-broad-daylight-near-afzalpur-gdp/articleshow-0pg97ne"/>
        </item>
        <item>
            <title><![CDATA[ಉಳಿ ಪೆಟ್ಟು ಬಿದ್ದರಷ್ಟೇ ಶಿಲೆಯು ಮೂರ್ತಿ ಆಗುತ್ತೆ: ಮತ್ತೆ ಡಿಸಿಎಂ ಮಾರ್ಮಿಕ ನುಡಿ]]></title>
            <link>https://kannada.asianetnews.com/state/dk-shivakumar-speech-at-kalaburagi-development-program/articleshow-1h9y3ye</link>
            <guid isPermaLink="true">https://kannada.asianetnews.com/state/dk-shivakumar-speech-at-kalaburagi-development-program/articleshow-1h9y3ye</guid>
            <pubDate>Mon, 09 Mar 2026 06:02:15 +0530</pubDate>
            <description><![CDATA[&lt;p&gt;ಕಲಬುರಗಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ಉಳಿಯ ಪೆಟ್ಟು ಬಿದ್ದರೆ ಶಿಲೆ ಮೂರ್ತಿಯಾಗುತ್ತದೆ' ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಚರ್ಚೆಯ ನಡುವೆಯೇ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khfee2pzd9xkawvh1ewnz2n4,imgname-dk-shivakumar-1771118725855.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಮಾ.9): &lt;/strong&gt;ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;, ಉಳಿಯ ಪೆಟ್ಟು ಬಿದ್ದರೆ ಶಿಲೆ ಕೂಡ ಮೂರ್ತಿ ಆಗುತ್ತೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತ ಗೊಂದಲ ಮುಂದುವರಿದಿರುವುದರ ನಡುವೆ ಡಿಕೆಶಿ ಆಡಿದ ಈ ಮಾತುಗಳು ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;p&gt;ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆನೆರವೇರಿಸಿ ಅವರು ಮಾತನಾಡಿದರು. ತಮ್ಮ ಸ್ವಂತ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆಯನ್ನು ಹಾಡಿ ಹೊಗಳಿದ ಡಿಕೆಶಿ, ಕನಕಪುರದಲ್ಲಿ ಅಲ್ಲಿನ ಜನ ನನ್ನನ್ನು ಗೆಲ್ಲಿಸಿದ್ದಂತೆ, ಚಿತ್ತಾಪುರದಲ್ಲಿ ನೀವು ಯಾವಾಗಲೂ ಪ್ರಿಯಾಂಕ್&zwnj; ಖರ್ಗೆಯವರನ್ನು ಗೆಲ್ಲಿಸಿ. ನೀವು ಯಾವಾಗಲೂ ಖರ್ಗೆ ಮತ್ತು ಕಾಂಗ್ರೆಸ್ ಕುಟುಂಬದ ಜೊತೆಗೆ ಇರಿ ಎಂದು ಕರೆ ನೀಡಿದರು.&lt;/p&gt;&lt;p&gt;ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ. ನಾವು ಐದು ಗ್ಯಾರಂಟಿಗಳನ್ನು ಕೊಟ್ಟು ನಿಮ್ಮ ಬದುಕಿಗೆ ಸಹಾಯ ಕಲ್ಪಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಗ್ಯಾಸ್ ದರ ಏರಿಕೆ ಮಾಡಿ, ಜನಸಾಮಾನ್ಯರ ಬದುಕಿಗೆ ಬರೆ ಎಳೆದಿದೆ. ಇದಕ್ಕೆ ಬಿಜೆಪಿ ಸಂಸದರು ಉತ್ತರ ಕೊಡಬೇಕು ಎಂದರು.&lt;/p&gt;&lt;h2&gt;ಒಂದೇ ವಿಮಾನದಲ್ಲಿ ಖರ್ಗೆ- ಡಿಕೆ ದೆಹಲಿಗೆ:&lt;/h2&gt;&lt;p&gt;ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು.&lt;/p&gt;&lt;p&gt;ಸಮಾರಂಭದ ಬಳಿಕ ಖರ್ಗೆ ಮತ್ತು ಡಿಕೆಶಿ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು. ದೆಹಲಿಯಲ್ಲಿ ನಡೆದ ತಮ್ಮ ಸ್ನೇಹಿತರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಡಿಕೆಶಿ ದೆಹಲಿಗೆ ತೆರಳಿದ್ದು, ಸೋಮವಾರವೇ ಅವರು ಬೆಂಗಳೂರಿಗೆ ಮರಳಲಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತ ಗೊಂದಲ ಮುಂದುವರಿದಿರುವುದರ ನಡುವೆಯೇ ಖರ್ಗೆ ಜೊತೆ ಡಿಕೆಶಿ ಪ್ರಯಾಣ ಬೆಳೆಸಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/dk-shivakumar-speech-at-kalaburagi-development-program/articleshow-1h9y3ye"/>
        </item>
        <item>
            <title><![CDATA[ಕಲಬುರಗಿ: ಚಲಿಸುತ್ತಿರುವ ರಥಕ್ಕೆ ಕೈ ಮುಗಿಯಲು ಹೋಗಿ ಎರಡೂ ಕಾಲು ಕಳೆದುಕೊಂಡ ಮಹಿಳೆ]]></title>
            <link>https://kannada.asianetnews.com/state/kalaburagi-news-woman-loses-both-legs-after-being-hit-by-chariot-wheel/articleshow-2gkc1rm</link>
            <guid isPermaLink="true">https://kannada.asianetnews.com/state/kalaburagi-news-woman-loses-both-legs-after-being-hit-by-chariot-wheel/articleshow-2gkc1rm</guid>
            <pubDate>Mon, 09 Mar 2026 09:05:35 +0530</pubDate>
            <description><![CDATA[&lt;p&gt;ರಥದ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ತನ್ನ ಎರಡು ಕಾಲು ಕಳೆದುಕೊಂಡ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದ ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ನಿನ್ನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk896mn3dtqnh01psafn70p0,imgname-kalaburagi-news-woman-lost-leg-1773025841827.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಥದ ಚಕ್ರಕ್ಕೆ ಸಿಲುಕಿ ಎರಡೂ ಕಾಲು ಕಳೆದುಕೊಂಡ ಮಹಿಳೆ&lt;/strong&gt;&lt;/h2&gt;&lt;p&gt;ಕಲಬುರಗಿ: ರಥದ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ತನ್ನ ಎರಡು ಕಾಲು ಕಳೆದುಕೊಂಡ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದ ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ನಿನ್ನೆ ನಡೆದಿದೆ.&lt;/p&gt;&lt;h3&gt;&lt;strong&gt;ಚಲಿಸುವ ರಥದ ಮುಂದೆ ನಮಸ್ಕರಿಸಲು ಹೋಗಿ ದುರಂತ&lt;/strong&gt;&lt;/h3&gt;&lt;p&gt;ರಥೋತ್ಸವದ ವೇಳೆ ಮಹಿಳೆಯೊಬ್ಬರು ಚಲಿಸುವ ರಥದ ಮುಂದೆ ನಮಸ್ಕರಿಸಲು ಹೋಗಿ ತಮ್ಮೆರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಚಲಿಸುವ ರಥಕ್ಕೆ ನಮಸ್ಕರಿಸಲು ಹೋದಾಗ ನೂಕುನುಗಲ್ಲಿನಲ್ಲಿ ಮಹಿಳೆ ರಥದ ಅಡಿಗೆ ಬಿದ್ದಿದ್ದು, ಅವರ ಎರಡೂ ಕಾಲುಗಳ ಮೇಲೆ ರಥದ ಚಕ್ರ ಹೋದ ಪರಿಣಾಮ ಕಾಲುಗಳು ನಜ್ಜುಗುಜ್ಜಾಗಿದೆ. ಹೀಗೆ ಕಾಲು ಕಳೆದುಕೊಂಡ ಮಹಿಳೆಯನ್ನು ನಾಗಮ್ಮ ಯಲಗೋಡ ಎಂದು ಗುರುತಿಸಲಾಗಿದೆ. ಅವರನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪ್ರಿಯಕರನ ಬಿಡುಗಡೆಗಾಗಿ ಮೊಬೈಲ್ ಟವರ್ ಏರಿದ ಗೆಳತಿ: ಗಂಟೆಗಳ ಹೈಡ್ರಾಮಾಗೆ ಪೊಲೀಸರು ಸುಸ್ತು..!&lt;/strong&gt;&lt;/p&gt;&lt;p&gt;&lt;strong&gt;ಡಾ.&zwnj;ಶರಣಬಸಪ್ಪಾ ಅಪ್ಪಾ ಇಲ್ಲದ ಮೊದಲ ಜಾತ್ರಾ ಮಹೋತ್ಸವ&lt;/strong&gt;&lt;/p&gt;&lt;p&gt;ಮತ್ತೊಂದೆಡೆ ಮಹಾದಾಸೋಹಿ ಕಲಬುರಗಿಯ ಶ್ರೀ ಶರಣಬಾವೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದಿದೆ.. ನಿನ್ಮೆ ಸಂಜೆ ನಡೆದ ಶರಣಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನ ಭಾಗವಹಿಸಿ ಸಂಪ್ರದಾಯದಂತೆ ರಥಕ್ಕೆ ಉತ್ತತ್ತಿ ನಾರು ಅರ್ಪಿಸಿ ಭಕ್ತಿ ಪರವಶರಾದರು. ಶರಣಬಸವೇಶ್ವರ ಸಂಸ್ಥಾನದ 8 ನೇ ಪೀಠಾಧಿಪತಿ ಶ್ರೀ ಶರಣಬಸಪ್ಪಾ ಅಪ್ಪಾ ಅವರು ಇತ್ತಿಚಿಗೆ ಲಿಂಗೈಕ್ಯರಾಗಿದ್ದು, ಕಳೆದ 50 ವರ್ಷಗಳಲ್ಲಿಯೇ ಡಾ.&zwnj;ಶರಣಬಸಪ್ಪಾ ಅಪ್ಪಾ ಇಲ್ಲದ ಮೊದಲ ಜಾತ್ರಾ ಮಹೋತ್ಸವ ಇದಾಗಿತ್ತು.&amp;nbsp;&lt;/p&gt;&lt;p&gt;&lt;img&gt;&lt;/p&gt;&lt;p&gt;ಅವರ ಪುತ್ರ ನೂತನ ಪೀಠಾಧೀಪತಿ 11 ವರ್ಷದ ಚಿರಂಜಿವಿ ದೊಡ್ಡಪ್ಪ ಅಪ್ಪ ಅವರು ಸಂಪ್ರದಾಯದಂತೆ&zwnj; ಶಂಕನಾದ ಮೊಳಗಿಸಿ, ಮಠದ ಕಾಮಧೇನು ಎನ್ನಿಸಿಕೊಳ್ಳುವ ಪರ್ಸ ಬಟ್ಟಲು ಪ್ರದರ್ಶಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಂಜೆ 6-15 ನಿಮಿಷಕ್ಕೆ ಲಕ್ಷಾಂತರ ಭಕ್ತ ಸಮೂಹದ ನಡುವೆ, ಭಕ್ತರ ಮುಗಿಲು ಮುಟ್ಟಿದ ಜಯಘೋಷಗಳ ಮಧ್ಯೆ ಶರಣಬಸವೇಶ್ವರರ ರಥೋತ್ಸವ ನಡೆಯಿತು.&zwnj; ಕರ್ನಾಟಕದ ಮೂಲೆ ಮೂಲೆಗಳಿಂದ ಮಾತ್ರವಲ್ಲದೇ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದೇಶದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>kalaburagi</category>
            <dc:creator>Anusha Kb</dc:creator>
            <atom:link href="https://kannada.asianetnews.com/state/kalaburagi-news-woman-loses-both-legs-after-being-hit-by-chariot-wheel/articleshow-2gkc1rm"/>
        </item>
        <item>
            <title><![CDATA[ಕಲಬುರಗಿಯಲ್ಲಿ ಮಾಜಿ ಸಚಿವರ ಅಳಿಯನ ಬರ್ಬರ ಹ*ತ್ಯೆ: ಕಚೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿದ ದುಷ್ಕರ್ಮಿಗಳು!]]></title>
            <link>https://kannada.asianetnews.com/state/kalaburagi-former-minister-relative-anil-rathod-murder-case-police-investigation-san/articleshow-36mebw5</link>
            <guid isPermaLink="true">https://kannada.asianetnews.com/state/kalaburagi-former-minister-relative-anil-rathod-murder-case-police-investigation-san/articleshow-36mebw5</guid>
            <pubDate>Fri, 03 Apr 2026 07:41:54 +0530</pubDate>
            <description><![CDATA[ಕಲಬುರಗಿಯಲ್ಲಿ ಮಾಜಿ ಸಚಿವ ರೇವೂನಾಯಕ ಬೆಳಮಗಿ ಅವರ ಸಂಬಂಧಿ, ಉದ್ಯಮಿ ಅನಿಲ್ ರಾಠೋಡ್ ಅವರನ್ನು ಅವರ ಕಚೇರಿಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಹಣಕಾಸಿನ ವೈಷಮ್ಯವೇ ಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn8hrw19bwgn3gpnf2j7q8fx,imgname-anil-rathod-murder-in-kalaburagi-1775182311465.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಶರಣಯ್ಯ ಎಸ್&zwnj; ಹೀರೇಮಠ, ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಕಲಬುರಗಿ ಪ್ರತಿನಿಧಿ&lt;/strong&gt;&lt;/p&gt;&lt;p&gt;&lt;strong&gt;ಕಲಬುರಗಿ (ಏ.3): &lt;/strong&gt;ನಗರದ ಹೃದಯಭಾಗದಲ್ಲಿರುವ ಪಿ ಆಂಡ್ ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್&zwnj;ನಲ್ಲಿ ತಡರಾತ್ರಿ ಮಾಜಿ ಸಚಿವ ರೇವೂನಾಯಕ ಬೆಳಮಗಿ ಅವರ ಅಳಿಯನ ಸಹೋದರ ಅನಿಲ್ ರಾಠೋಡ್ (45) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯು ಕಲಬುರಗಿ ನಗರದಲ್ಲಿ ಭಾರಿ ಆತಂಕ ಮತ್ತು ಸಂಚಲನ ಮೂಡಿಸಿದೆ.&lt;/p&gt;&lt;p&gt;ಅನಿಲ್ ರಾಠೋಡ್ ಅವರು ವೆಂಕಟೇಶ್ವರ ಕಾಂಪ್ಲೆಕ್ಸ್&zwnj;ನಲ್ಲಿರುವ ತಮ್ಮ ಕಚೇರಿಯಲ್ಲಿದ್ದಾಗ, ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ನೇರವಾಗಿ ಕಚೇರಿ ಒಳಗೆ ನುಗ್ಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಮಾರಕಾಸ್ತ್ರಗಳಿಂದ ಅನಿಲ್ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಹಂತಕರು ಅದೇ ಆಟೋದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ವ್ಯಾಪಾರ ಮತ್ತು ಆರ್ಥಿಕ ವೈಷಮ್ಯದ ಶಂಕೆ&lt;/strong&gt;&lt;/h2&gt;&lt;p&gt;ಮೃತ ಅನಿಲ್ ರಾಠೋಡ್ ಅವರು ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ವ್ಯವಹಾರದಲ್ಲಿ ಸಕ್ರಿಯರಾಗಿದ್ದರು. ಅವರ ಹತ್ಯೆಗೆ ಹಣಕಾಸಿನ ವಿಚಾರವೇ ಪ್ರಮುಖ ಕಾರಣವಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕಿಸಿದ್ದಾರೆ. ವೈಯಕ್ತಿಕ ಅಥವಾ ವ್ಯವಹಾರಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ.&lt;/p&gt;&lt;p&gt;ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳಿವುಗಳನ್ನು ಪತ್ತೆ ಹಚ್ಚಲು ಶ್ವಾನ ದಳ (Dog Squad) ಮತ್ತು ಫಿಂಗರ್ ಪ್ರಿಂಟ್ ತಜ್ಞರ ತಂಡ ಸ್ಥಳದಲ್ಲಿ ತೀವ್ರ ತಪಾಸಣೆ ನಡೆಸಿದೆ.&lt;/p&gt;&lt;p&gt;ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳು ಆಟೋದಲ್ಲಿ ಬಂದಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿರುವುದರಿಂದ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರವೇ ಹಂತಕರನ್ನು ಸೆರೆ ಹಿಡಿಯುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kalaburagi</category>
            <dc:creator>Santosh Naik</dc:creator>
            <atom:link href="https://kannada.asianetnews.com/state/kalaburagi-former-minister-relative-anil-rathod-murder-case-police-investigation-san/articleshow-36mebw5"/>
        </item>
        <item>
            <title><![CDATA[ಕಲಬುರಗಿ: ದೇವಸ್ಥಾನಕ್ಕೆ ಹರಕೆ ತೀರಿಸಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಭೀಮಾ ನದಿಯಲ್ಲಿ ಮುಳುಗಿ ಸಾವು!]]></title>
            <link>https://kannada.asianetnews.com/karnataka-districts/kalaburagi-afzalpur-mannur-two-students-drown-in-bhima-river-they-came-temple-sat/articleshow-8egpbpa</link>
            <guid isPermaLink="true">https://kannada.asianetnews.com/karnataka-districts/kalaburagi-afzalpur-mannur-two-students-drown-in-bhima-river-they-came-temple-sat/articleshow-8egpbpa</guid>
            <pubDate>Sun, 05 Apr 2026 13:29:48 +0530</pubDate>
            <description><![CDATA[&lt;p&gt;ಕಲಬುರಗಿಯ ಅಫಜಲಪುರ ತಾಲೂಕಿನಲ್ಲಿ, ದೇವಸ್ಥಾನಕ್ಕೆ ಹರಕೆ ತೀರಿಸಲು ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಭೀಮಾ ನದಿಯಲ್ಲಿ ಈಜಲು ಹೋಗಿ ಜಲಸಮಾಧಿಯಾಗಿದ್ದಾರೆ. ಮಣ್ಣೂರ್ ಯಲ್ಲಮ್ಮ ದೇವಸ್ಥಾನದ ಬಳಿ ಈ ದುರಂತ ಸಂಭವಿಸಿದ್ದು, ಇತ್ತೀಚೆಗೆ ಸುರಿದ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದ್ದೇ ಘಟನೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knead61k6419nkaenrjhkrb8,imgname-kalaburagi-bhima-river-death-1775375915059.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಏ.05): ಜಿ&lt;/strong&gt;ಲ್ಲೆಯ ಅಫಜಲಪುರ ತಾಲೂಕಿನಲ್ಲಿ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ದೈವದ ಹರಕೆ ತೀರಿಸಲು ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಭೀಮಾ ನದಿಯಲ್ಲಿ ಈಜಲು ಹೋಗಿ ಜಲಸಮಾಧಿಯಾದ ದಾರುಣ ಘಟನೆ ಮಣ್ಣೂರ್ ಗ್ರಾಮದಲ್ಲಿ ನಡೆದಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಮೃತ ವಿದ್ಯಾರ್ಥಿಗಳನ್ನು ಅಫಜಲಪುರ ತಾಲೂಕಿನ ಗೌರ್ (ಕೆ) ಗ್ರಾಮದ ನಿವಾಸಿಗಳಾದ ಪುಂಡಲಿಕ್ ಮೂಲಿಮನಿ (17) ಮತ್ತು ಮಹೇಶ್ (16) ಎಂದು ಗುರುತಿಸಲಾಗಿದೆ. ಈ ಇಬ್ಬರು ಸ್ನೇಹಿತರು ತಮ್ಮ ಕುಟುಂಬಸ್ಥರೊಂದಿಗೆ ಮಣ್ಣೂರ್ ಗ್ರಾಮದ ಪ್ರಸಿದ್ಧ ಮಣ್ಣೂರ್ ಯಲ್ಲಮ್ಮನ ದೇವಸ್ಥಾನಕ್ಕೆ ಹರಕೆ ತೀರಿಸುವ ಸಲುವಾಗಿ ಆಗಮಿಸಿದ್ದರು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ದರ್ಶನ ಪಡೆದ ನಂತರ, ಮಧ್ಯಾಹ್ನದ ಸಮಯದಲ್ಲಿ ದೇವಸ್ಥಾನದ ಸಮೀಪದಲ್ಲೇ ಹರಿಯುವ ಭೀಮಾ ನದಿಯಲ್ಲಿ ಸ್ನಾನ ಮಾಡಲು ಮತ್ತು ಈಜಲು ತೆರಳಿದ್ದರು.&lt;/p&gt;&lt;h2&gt;&lt;strong&gt;ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆ ದುರಂತ:&lt;/strong&gt;&lt;/h2&gt;&lt;p&gt;ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಭೀಮಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನದಿಯ ಮೇಲ್ಭಾಗದಿಂದ ನೀರಿನ ಒಳಹರಿವು ಹೆಚ್ಚಾಗಿದ್ದರಿಂದ ನೀರಿನ ಹರಿವಿನ ವೇಗವು ಜೋರಾಗಿತ್ತು. ಇದನ್ನು ಗಮನಿಸದ ವಿದ್ಯಾರ್ಥಿಗಳು ಈಜಲು ನದಿಗೆ ಇಳಿದಿದ್ದಾರೆ. ಆದರೆ, ನೀರಿನ ಸೆಳೆತಕ್ಕೆ ಸಿಲುಕಿದ ವಿದ್ಯಾರ್ಥಿಗಳು ದಡಕ್ಕೆ ಬರಲಾಗದೆ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಕಂಡ ಸ್ಥಳೀಯರು ರಕ್ಷಣೆಗೆ ಮುಂದಾದರಾದರೂ ಅಷ್ಟರಲ್ಲೇ ವಿದ್ಯಾರ್ಥಿಗಳು ನೀರಿನಲ್ಲಿ ಮರೆಯಾಗಿದ್ದರು.&lt;/p&gt;&lt;h2&gt;&lt;strong&gt;ಕುಟುಂಬಸ್ಥರ ಆಕ್ರಂದನ:&lt;/strong&gt;&lt;/h2&gt;&lt;p&gt;ಹರಕೆ ತೀರಿಸಿ ಸಂತೋಷದಿಂದ ಮನೆಗೆ ಮರಳಬೇಕಿದ್ದ ಕುಟುಂಬದಲ್ಲಿ ಈಗ ಮಗುವನ್ನು ಕಳೆದುಕೊಂಡ ಆಕ್ರಂದನ ಮುಗಿಲು ಮುಟ್ಟಿದೆ. ದೇವಸ್ಥಾನಕ್ಕೆಂದು ಬಂದವರು ಹೆಣವಾಗಿ ಮರಳುತ್ತಿರುವುದನ್ನು ಕಂಡು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಪುಂಡಲಿಕ್ ಮತ್ತು ಮಹೇಶ್ ಇಬ್ಬರೂ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದು, ಅವರ ಅಕಾಲಿಕ ಮರಣವು ಇಡೀ ಗೌರ್ (ಕೆ) ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ&lt;/strong&gt;&lt;/p&gt;&lt;h2&gt;&lt;strong&gt;ಪೊಲೀಸ್ ತನಿಖೆ:&lt;/strong&gt;&lt;/h2&gt;&lt;p&gt;ವಿಷಯ ತಿಳಿದ ಕೂಡಲೇ ಅಫಜಲಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಮೀನುಗಾರರು ಮತ್ತು ಈಜುಗಾರರ ಸಹಾಯದಿಂದ ನದಿಯಲ್ಲಿದ್ದ ವಿದ್ಯಾರ್ಥಿಗಳ ಶವಗಳನ್ನು ಹೊರತೆಗೆಯಲಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕ್ರಿಯೆ ಮುಗಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.&lt;/p&gt;&lt;h3&gt;&lt;strong&gt;ನದಿ ತೀರದಲ್ಲಿ ಎಚ್ಚರಿಕೆ ಅಗತ್ಯ:&lt;/strong&gt;&lt;/h3&gt;&lt;p&gt;ಮಳೆಗಾಲದ ಸಮಯದಲ್ಲಿ ಅಥವಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾದಾಗ ಸಾರ್ವಜನಿಕರು ಮತ್ತು ಪ್ರವಾಸಿಗರು ನದಿಗೆ ಇಳಿಯಬಾರದು ಎಂದು ಜಿಲ್ಲಾಡಳಿತ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ವಿಶೇಷವಾಗಿ ಯುವಕರು ಮತ್ತು ವಿದ್ಯಾರ್ಥಿಗಳು ನೀರಿನ ಆಳ ತಿಳಿಯದೆ ಸಾಹಸಕ್ಕೆ ಕೈಹಾಕಿ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದನೀಯ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kalaburagi-afzalpur-mannur-two-students-drown-in-bhima-river-they-came-temple-sat/articleshow-8egpbpa"/>
        </item>
        <item>
            <title><![CDATA[ನಿಧಿ ಆಸೆಗಾಗಿ ಚಾಲುಕ್ಯರ ಕಾಲದ ದೇಗುಲ ಧ್ವಂಸ; ಗಂಗಾವತಿಯಲ್ಲಿ ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ]]></title>
            <link>https://kannada.asianetnews.com/karnataka-districts/chalukya-temple-destroyed-in-search-of-treasure-kalaburgi-inscription-from-krishnadevaraya-s-era-found-in-gangavati-mrq/articleshow-9i9vzz9</link>
            <guid isPermaLink="true">https://kannada.asianetnews.com/karnataka-districts/chalukya-temple-destroyed-in-search-of-treasure-kalaburgi-inscription-from-krishnadevaraya-s-era-found-in-gangavati-mrq/articleshow-9i9vzz9</guid>
            <pubDate>Sat, 28 Mar 2026 08:22:57 +0530</pubDate>
            <description><![CDATA[ಕಲಬುರಗಿಯಲ್ಲಿ ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಚಾಲುಕ್ಯರ ಕಾಲದ ಪುರಾತನ ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ಮತ್ತೊಂದೆಡೆ, ಗಂಗಾವತಿಯಲ್ಲಿ ಚಾರಣಿಗರ ತಂಡವು ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಕಾಲದ, ಭೂದಾನದ ಮಾಹಿತಿ ನೀಡುವ ಅಪರೂಪದ ಶಿಲಾಶಾಸನವನ್ನು ಪತ್ತೆ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kms5dn6yb7pe2n0a50bkpedy,imgname-temple-1774666044638.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ:&lt;/strong&gt; ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಚಾಲುಕ್ಯರ ಕಾಲದ ಪುರಾತನ ದೇಗುಲವನ್ನು ಧ್ವಂಸ ಮಾಡಿ ಗರ್ಭಗುಡಿಯಲ್ಲಿದ್ದ ಶಿವಲಿಂಗ, ಬಸವಣ್ಣ (ನಂದಿ), ಹನುಮಾನ್ ಮೂರ್ತಿಗಳನ್ನು ಭಗ್ನಗೊಳಿಸಿರುವ ದುರ್ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.&lt;/p&gt;&lt;h2&gt;&lt;strong&gt;ಈ ಹಿಂದೆಯೂ ನಡೆದಿತ್ತು ನಿಧಿಶೋಧ ಕಾರ್ಯ&lt;/strong&gt;&lt;/h2&gt;&lt;p&gt;ಬಡದಾಳ ಗ್ರಾಮದಲ್ಲಿರುವ &lsquo;ಬನದ ಬಸವಣ್ಣ&rsquo; ದೇವಸ್ಥಾನಕ್ಕೆ ಮಾ.25ರಂದು ರಾತ್ರಿ ನುಗ್ಗಿದ ದುಷ್ಕರ್ಮಿಗಳು, ಅಲ್ಲಿ ಪೂಜೆ ಮಾಡುತ್ತಿದ್ದ ಶಿವಲಿಂಗ, ನಂದಿ ಹಾಗೂ ಹನುಮಾನ್ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಅಲ್ಲದೇ 4 ಅಡಿ ನೆಲವನ್ನು ಅಗೆದು ನಿಧಿ ಹುಡುಕಾಟ ನಡೆಸಿದ್ದಾರೆ. ಈ ದೇಗುಲ ಚಾಲುಕ್ಯರ ಕಾಲದ್ದಾಗಿದ್ದು, ಹಿರಿಯರು ಇಲ್ಲಿ ಸಾಕಷ್ಟು ನಿಧಿ ಇದೆ ಎಂದು ಹೇಳುತ್ತಿದ್ದರು. ಅದನ್ನೇ ನೆಪ ಮಾಡಿಕೊಂಡು ಕಳ್ಳರು ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ಈ ಹಿಂದೊಮ್ಮೆ ದೇವಸ್ಥಾನದ ಮುಂಭಾಗದ ಕಟ್ಟೆಯನ್ನು ಅಗೆದು ನಿಧಿ ಶೋಧ ಮಾಡಲಾಗಿತ್ತು. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದವರನ್ನು ಪತ್ತೆಹಚ್ಚಿ ಬಂಧಿಸುವ ಮೂಲಕ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.&lt;/p&gt;&lt;h3&gt;&lt;strong&gt;ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ&lt;/strong&gt;&lt;/h3&gt;&lt;p&gt;ಗಂಗಾವತಿ: ನಗರದ ವಿರುಪಾಪುರ ವ್ಯಾಪ್ತಿಯಲ್ಲಿ ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಕಾಲದ ಶಿಲಾಶಾಸನವನ್ನು ಗಂಗಾವತಿ ಚಾರಣ ಬಳಗ ಪತ್ತೆ ಮಾಡಿದೆ ಎಂದು ಚಾರಣ ಬಳಗದ ಸಂಚಾಲಕ ದಂತವೈದ್ಯ ಡಾ. ಶಿವಕುಮಾರ್ ಮಾಲಿಪಾಟೀಲ್ ತಿಳಿಸಿದ್ದಾರೆ.&lt;/p&gt;&lt;p&gt;ನಗರದ ವಿರುಪಾಪುರ ವ್ಯಾಪ್ತಿಯ ಹಿರೇಜಂತಕಲ್ ವೀರಣ್ಣ ದೇವರ ಗುಡ್ಡದ ಹಿಂಬದಿಯ ಬಂಡೆಯೊಂದರಲ್ಲಿ ಈ ಶಾಸನ ಕಂಡು ಬಂದಿದೆ. ಶಾಸನವನ್ನು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಪರಿಶೀಲಿಸಿದ್ದು, ಶಾಸನವು 13 ಸಾಲುಗಳಲ್ಲಿ ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳಿವೆ. ನಮಸ್ತುಂಗ ಶಿರಶ್ಚುಂಬಿ ಎಂಬ ಶಿವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಶಾಸನವು ಶಾಲಿವಾಹನ 1448ನೇ ಸಂವತ್ಸರದ ಮಾಘ ಶುದ್ಧ 7ರ ಕಾಲ ಉಲ್ಲೇಖಿಸುತ್ತದೆ. ಅದು ಪ್ರಸ್ತುತ ಸಾಮಾನ್ಯ ಶಕೆ 1527 ಕ್ಕೆ ಸರಿಯಾಗುತ್ತದೆ. ಅಂದರೆ 16ನೇ ಶತಮಾನದ ಶಾಸನವಿದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಲಕ್ಕುಂಡಿ ಹಳೇ ಹಂಡೆಯಲ್ಲಿ ಗೋಲ್ಡನ್ ಕವರ್ ಚಾಕ್ಲೆಟ್ ಹಾಕಿ 22 ಲಕ್ಷ ದೋಚಿದ್ದ ಮೌಲ್ವಿ ಅರೆಸ್ಟ್&lt;/strong&gt;&lt;/p&gt;&lt;h3&gt;&lt;strong&gt;ಭೂಮಿ ದಾನದ ಮಾಹಿತಿ ನೀಡುತ್ತಿರೋ ಶಾಸನ&lt;/strong&gt;&lt;/h3&gt;&lt;p&gt;ಶಾಸನದಲ್ಲಿ ಶ್ರೀ ಮನ್ಮಾಹಾರಾಜಾಧಿರಾಜ ಪರಮೇಶ್ವರ ವೀರಪ್ರತಾಪ ಕೃಷ್ಣರಾಯರ ಆಳ್ವಿಕೆ ಕಾಲದಲ್ಲಿ ಆನೆಗುಂದಿ ಮಾಗಣೆಯನ್ನು ಯಾವುದೋ ವ್ಯಕ್ತಿಯ (ಅಕ್ಷರ ಸವೆದಿವೆ) ಮಗ ಪಾಲಿಸುತ್ತಿರುವಾಗ ಭದ್ರಯ್ಯನ ಮಗ ಗಂಧದ ಸೂರಯ್ಯನು ವಿರುಪಾಪುರ ಸೀಮೆಯ ಮಲ್ಲಿಕಾರ್ಜುನ ದೇವರಿಗೆ ಹಾಗೂ ಕೆಲವು ಬ್ರಾಹ್ಮಣರಿಗೆ ಭೂಮಿ ದಾನ ನೀಡಿದ ಬಗ್ಗೆ ತಿಳಿಸುತ್ತದೆ. ಶಾಸನದ ಕೆಳಸಾಲುಗಳು ಸವೆದಿರುವುದರಿಂದ ಹೆಚ್ಚಿನ ವಿಷಯ ಸ್ಪಷ್ಟವಾಗುತ್ತಿಲ್ಲ.&lt;/p&gt;&lt;p&gt;ಗಂಗಾವತಿ ನಗರದಲ್ಲಿ ಈಗಾಗಲೇ ವಿಜಯನಗರದ ಪ್ರೌಢದೇವರಾಯ ಮತ್ತು ಸದಾಶಿವದೇವರಾಯನ ಶಾಸನಗಳು ಮಾತ್ರ ದೊರೆತಿದ್ದವು. ಈಗ ಕೃಷ್ಣದೇವರಾಯನ ಕಾಲದ ಶಾಸನ ದೊರೆತಿರುವುದು ಮಹತ್ವದ ಸಂಗತಿಯಾಗಿದೆ. ಹಾಗಾಗಿ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲಾಗುವುದೆಂದು ಮತ್ತು ಶಾಸನ ಶೋಧನೆಯಲ್ಲಿ ಚಾರಣ ಬಳಗದ ಕೇಶವ ನಾಯ್ಕ್,ಪ್ರಹ್ಲಾದ್ ಕುಲಕರ್ಣಿ, ಮಂಜುನಾಥ್ ಗುಡ್ಲಾನೂರ, ಚಿದಾನಂದ ಕೀರ್ತಿ ಮತ್ತು ವಿನಯ್ ಕುಮಾರ್ ಅಂಗಡಿ ನೆರವಾಗಿದ್ದಾರೆಂದು ಡಾ.ಕೋಲ್ಕಾರ್ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನಿಧಿ ಆಸೆ ತೋರಿಸಿ ಯಮಾರಿಸುವ ಹೂವಿನ ಹಡಗಲಿಯ ಗ್ಯಾಂಗ್ - ಪೋನ್ ಮಾಡಿ ಬಂಗಾರ ತಗೊಳ್ಳಿ ಅಂತಾರೆ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;India Latest News Live: 4 ಲೀಟರ್ ಪೆಟ್ರೋಲ್ ಕೂಡಿಟ್ಟ ಲಸಂತ ಕುಮಾರ ಬಾಲಸೂರ್ಯಗೆ 21 ದಿನ ಜೈಲು#Petrol https://t.co/UGqgnYJZIP&lt;/p&gt;&lt;p&gt;&mdash; Asianet Suvarna News (@AsianetNewsSN) March 28, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chalukya-temple-destroyed-in-search-of-treasure-kalaburgi-inscription-from-krishnadevaraya-s-era-found-in-gangavati-mrq/articleshow-9i9vzz9"/>
        </item>
        <item>
            <title><![CDATA[ಕಲಬುರಗಿಗೆ ಆರ್ಥಿಕ ಹಿನ್ನಡೆ, ತಲಾ ಆದಾಯ ಇದೇ ಮೊದಲ ಬಾರಿಗೆ ಋಣಾತ್ಮಕ! ಜಿಲ್ಲೆ ಕೊನೆಯ ಸ್ಥಾನಕ್ಕೆ ಕುಸಿತ!]]></title>
            <link>https://kannada.asianetnews.com/gallery/karnataka-districts/kalaburagi-records-negative-per-capita-income-growth-for-first-time-raises-economic-concerns-gdp-eade592</link>
            <guid isPermaLink="true">https://kannada.asianetnews.com/gallery/karnataka-districts/kalaburagi-records-negative-per-capita-income-growth-for-first-time-raises-economic-concerns-gdp-eade592</guid>
            <pubDate>Tue, 17 Mar 2026 22:55:05 +0530</pubDate>
            <description><![CDATA[&lt;p&gt;ವರದಿ: ಶೇಷಮೂರ್ತಿ ಅವಧಾನಿ&lt;/p&gt;&lt;p&gt;2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಕಲಬುರಗಿ ಜಿಲ್ಲೆಯ ತಲಾ ಆದಾಯವು ಮೊದಲ ಬಾರಿಗೆ ಋಣಾತ್ಮಕ ಬೆಳವಣಿಗೆ ದಾಖಲಿಸಿ, ರಾಜ್ಯದಲ್ಲೇ ಕೊನೆಯ ಸ್ಥಾನ ಪಡೆದಿದೆ. ಕೃಷಿ ವೈಫಲ್ಯ, ಉದ್ದಿಮೆಗಳ ತೀವ್ರ ಕೊರತೆ ಜಿಲ್ಲೆಯು ಆರ್ಥಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkycavbk75v29zp7zs6wa462,imgname----------1773767322995.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಶೇಷಮೂರ್ತಿ ಅವಧಾನಿ&lt;/p&gt;&lt;p&gt;2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಕಲಬುರಗಿ ಜಿಲ್ಲೆಯ ತಲಾ ಆದಾಯವು ಮೊದಲ ಬಾರಿಗೆ ಋಣಾತ್ಮಕ ಬೆಳವಣಿಗೆ ದಾಖಲಿಸಿ, ರಾಜ್ಯದಲ್ಲೇ ಕೊನೆಯ ಸ್ಥಾನ ಪಡೆದಿದೆ. ಕೃಷಿ ವೈಫಲ್ಯ, ಉದ್ದಿಮೆಗಳ ತೀವ್ರ ಕೊರತೆ ಜಿಲ್ಲೆಯು ಆರ್ಥಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದೆ.&lt;/p&gt;&lt;img&gt;&lt;p&gt;&lt;strong&gt;ಕಲಬುರಗಿ:&lt;/strong&gt; ರಾಜ್ಯ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ, ಸಾಂಖ್ಯಿಕ ಇಲಾಖೆ ನಡೆಸಿರುವ 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಜಿಲ್ಲೆಯ ತಲಾ ಆದಾಯ ಇದೇ ಮೊದಲ ಬಾರಿಗೆ ಋಣಾತ್ಮಕ ಬೆಳವಣಿಗೆ ದಾಖಲಿಸಿದೆ! ಇದರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ, ಬಡತನ ರೇಖೆ ಕೆಳಗಿರುವ ಕುಟುಂಬಗಳ ಲೆಕ್ಕಾಚಾರ, ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳ ವಿಷಯ, ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಗಳ ಆಚರಣೆ ಸೇರಿದಂತೆ ಹಲವು ರಂಗಗಳಲ್ಲಿ ಕಳಪೆ ಸಾಧನೆಯಿಂದ ಗಮನಸೆಳೆಯುತ್ತಿದ್ದ ಕಲಬುರಗಿಗೆ ತಲಾ ಆದಾಯಾದಲ್ಲೂ ಲಾಸ್ಟ್&zwnj; ಎಂಬ ಹೊಸ ಪಟ್ಟ ದೊರಕಿದೆ.&lt;/p&gt;&lt;img&gt;&lt;p&gt;2023-24ರಲ್ಲಿ ನಡೆದ ಆರ್ಥಿಕ ಸಮೀಕ್ಷೆಯಲ್ಲಿದ್ದ ಕಲಬುರಗಿ 1, 45, 377 ಲಕ್ಷ ರು. ತಲಾ ಆದಾಯ 2026- 27ರ ಸಮೀಕ್ಷೆಯಲ್ಲಿ 928 ರು. ನಷ್ಟು ಜಿಲ್ಲೆಯ ತಲಾ ಆದಾಯ ತಗ್ಗಿ 1, 44, 449 ರು. ದಾಖಲಾಗಿದೆ. ತಲಾ ಆದಾಯದಲ್ಲಿ ರಾಜ್ಯದ ಸರಾಸರಿ 3, 86, 156 ರು. ನಷ್ಟು ದಾಖಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ತಲಾ ಆದಾಯದಲ್ಲಿ ಬೆಳವಣಿಗೆಯಾಗಿದ್ದು ಜಿಲ್ಲೆಯಲ್ಲಿ ಮಾತ್ರ ಇಳಿಕೆ ದಾಖಲಾಗಿದೆ. ಆರ್ಥಿಕವಾಗಿ ಕಂಡಿರುವ ಈ ವಿಲಕ್ಷಣ ಬೆಳವಣಿಗೆ ಜಿಲ್ಲೆಯ ಪ್ರಗತಿ ವಿಚಾರದಲ್ಲಿ ಆತಂಕ ಹುಟ್ಟುಹಾಕಿದೆಯಲ್ಲದೆ ಇಲ್ಲಿನ ನೀತಿ ನಿರೂಪಕರಿಗೆ, ರಾಜ್ಯ ಸರ್ಕಾರಕ್ಕೆ, ಜನ ನಾಯಕರಿಗೂ ಎಚ್ಚರಿಕೆ ಗಂಟೆಯಾಗಿ ಹೊರಹೊಮ್ಮಿದೆ.&lt;/p&gt;&lt;img&gt;&lt;p&gt;ಉದ್ದಿಮೆಗಳ ಬರದಿಂದ ಜಿಲ್ಲೆಯಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಳು ಅರಳುತ್ತಿಲ್ಲ, ಹೀಗಾಗಿ ತಲಾ ಆದಾಯಕ್ಕೆ ಭಾರಿ ಪೆಟ್ಟು ಬೀಳುತ್ತಿದೆ ಎಂಬ ಮಾತುಗಳಿವೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸೇರಿದಂತೆ ಹಲವು ರಂಗಗಳಲ್ಲಿನ ಧನಾತ್ಮಕತೆಯೇ ತಲಾ ಆದಾಯಕ್ಕೂ ಮೂಲ, ಆದರಿಲ್ಲಿ ಬಿಸಿಲೂರಲ್ಲಿ ತಲಾ ಆದಾಯ ಹೆಚ್ಚಿಸುವಂತಹ ಯಾವುದೇ ಫಲಪ್ರದ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ತಲಾ ಆದಾಯ ತಾನಾಗಿಯೇ ಹೆಚ್ಚೆಂದರೆ ಹೇಗೆಂಬ ಪ್ರಶ್ನೆಗಳು ಮೂಡಿವೆ.&lt;/p&gt;&lt;img&gt;&lt;ul&gt; &lt;li&gt;ಕಲಬುರಗಿ ತಲಾ ಆದಾಯಕ್ಕೆ ಕೃಷಿಯೇ ಮೂಲಾಧಾರ, 3 ವರ್ಷದಿಂದ ಕೃಷಿ ಲಾಭದಾಯಕವಾಗಿಲ್ಲ&lt;/li&gt; &lt;li&gt;ಅತಿವೃಷ್ಟಿ, ನೆರೆಯಿಂದ ಕೃಷಿ ಕುಸಿತ, ತಲ್ಲಣ- ಜನರಿಗೆ ಆದಾಯವೆಲ್ಲಿಂದ ಬರಬೇಕು?&lt;/li&gt; &lt;li&gt;ಉದ್ದಿಮೆಗಳ ಬರ, ಉದ್ಯೋಗಕ್ಕಾಗಿ 6ರಿಂದ 8ತಿಂಗಳು ಜನರ ಗುಳೆ ಮಾಮೂಲು&lt;/li&gt; &lt;li&gt;ಟೆಕ್ಸಟೈಲ್, ಸೋಲಾರ್&zwnj; ಪಾರ್ಕ್&zwnj;ನಂತಹ ಉದ್ದಿಮೆಗಳು ಘೋಷಣೆಯಲ್ಲೇ ನರಳುತ್ತಿವೆ&lt;/li&gt; &lt;li&gt;ಸಿಮೆಂಟ್&zwnj; ಉದ್ದಿಮೆಗಳಲ್ಲಿ ಸ್ಥಳೀಯರ ಬರ, ತಲಾ ಆದಾಯಕ್ಕೆ ಕೊಡುಗೆ ಅಷ್ಟಕ್ಕಷ್ಟೆ&lt;/li&gt; &lt;li&gt;ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿದ್ದರೂ ಇಂದಿಗೂ ಅರಳುತ್ತಿಲ್ಲ ಪ್ರವಾಸೋದ್ಯಮ&lt;/li&gt;&lt;/ul&gt;&lt;img&gt;&lt;p&gt;ಕಲಬುರಗಿಯಲ್ಲಿ ಇಂಡಸ್ಟ್ರೀಸ್&zwnj; ಬೆಳೆಯಬೇಕಂದ್ರೆ ವಿಮಾನ ಸವಲತ್ತು ಬೇಕ್ರಿ ಎಂದು ರಾಗ ಎಳೆಯುತ್ತಿದ್ದವರಿಗೆ ಮಾರುತ್ತರವಾಗಿ ಏರ್ಪೋರ್ಟ್&zwnj; ಇಲ್ಲಿಗೆ ಬಂದ್ರೂ ವಿಮಾನ ಹತ್ತಿ ಉದ್ದಿಮೆದಾರರಾರೂ ಇಲ್ಲಿಗೆ ಬರಲೇ ಇಲ್ಲ. 2019 ರಲ್ಲೇ ಏರ್ಪೋರ್ಟ್&zwnj; ಸವಲತ್ತು ಬಂದರೂ ಕಳೆದ 7 ವರ್ಷಗಳಲ್ಲಿ ಒಂದೂ ಹೊಸ ಉದ್ದಿಮೆ ಕಲಬುರಗಿ ಒಡಲು ಸೇರಲಿಲ್ಲ, ಏತನ್ಮಧ್ಯೆ ವಿಮಾನ ನಿಲ್ದಾಣವೇ ಬಾಗಿಲು ಮುಚ್ಚಿಕೊಂಡಿತೇ ಹೊರತು ಉದ್ದಿಮೆದಾರರು ಇತ್ತ ಬರಲೇ ಇಲ್ಲ ಎಂಬುದು ಕಟು ವಾಸ್ತವ.&lt;/p&gt;&lt;img&gt;&lt;p&gt;ಜಿಲ್ಲೆಯಲ್ಲಿ ಔದ್ಯಮೀಕರಣ ಸೇರದಂತೆ ಹಲವಾರು ರಂಗಗಳಲ್ಲಿ ಬೆಳವಣಿಗೆ ದಾಖಲಿಸಲು ವರವಾಗಬೇಕಿದ್ದ ರಾಜಕೀಯ ಇಚ್ಚಾಶಕ್ತಿಯ ಬರವೂ ಇಲ್ಲಿದೆ. ಉದ್ದಿಮೆರಂಗ ಹಸಿರು ಚಿಗುರಿ ಯಾವುದೇ ಆಶಾದಾಯಕ ಪ್ರಯತ್ನಗಳು ಇಂದಿಗೂ ಇಲ್ಲಿ ನಡೆದಿಲ್ಲ ಎಂಬುದು ದುರಂತವೇ ಸರಿ. ಹೀಗಾಗಿ ಕೃಷಿಗೇ ಜೋತು ಬಿದ್ದಿರುವ ತೊಗರಿ ಕಣಜದ ಜನತೆಗೆ ಪರ್ಯಾಯ ಆದಾಯ ಮೂಲವಾಗಿ ಉದ್ದಿಮೆ ರಂಗ ಕೈಗೆಟುಕ್ಕಿಲ್ಲ. ಇದರಿಂದಾಗಿ ತಲಾ ಆದಾಯದಲ್ಲಿ ಜಿಲ್ಲೆ ಲಾಸ್ಟ್&zwnj; ಆಗಿ ಹೊರಹೊಮ್ಮಿದೆ ಎಂಬ ಮಾತುಗಳಿವೆ.&lt;/p&gt;&lt;img&gt;&lt;p&gt;ರಾಜ್ಯದ ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 8, 55, 960 ರು. ದಾಖಲೆ ಮಾಡುವ ಮೂಲಕ ರಾಜ್ಯದ ಜಿಲ್ಲೆಗಳ ಪೈಕಿ ತಲಾ ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ತಲಾ ಆದಾಯಕ್ಕೆ ಹೋಲಿಕೆ ಮಾಡಿದಲ್ಲಿ ಬೆಂಗಳೂರು ಗ್ರಾಮಾಂತರದ್ದು 6 ಪಟ್ಟು ಅಧಿಕವಾಗಿದೆ. ದಕ್ಷಿಣ ಕನ್ನಡ (6, 26, 279 ರು), ಉಡುಪಿ (6, 00, 683 ರು) , ಚಿಕ್ಕಮಗಳೂರು (4, 94, 787 ರು) ಶಿವಮೊಗ್ಗ (3, 89, 743 ರು) ದಾಖಲಾಗಿದೆ.&lt;/p&gt;&lt;p&gt;ಕಲಬುರಗಿ ಹೊರತುಪಡಿಸಿ ಕಲ್ಯಾಣ ಕರ್ನಾಟಕದ ಇನ್ನುಳಿದ ಯಾದಗಿರಿ (1, 64, 388 ರು), ರಾಯಚೂರು (1, 78, 888 ರು) ಕೊಪ್ಪಳ (1, 81, 152) ಬೀದರ್&zwnj; (1, 85, 079 ರು) , ವಿಜಯನಗರ (1, 93, 230 ರು) ಜಿಲ್ಲೆಗಳ ತಲಾ ಆದಾಯವೂ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕೊನೆಯಲ್ಲಿದೆ.&lt;/p&gt;&lt;p&gt;ಕಲಬುರಗಿ ಜೊತೆಗೇ ರಾಜ್ಯದ ಬೆಳಗಾವಿ (1, 83, 271 ರು), ವಿಜಯಪುರ (1, 87, 429 ರು) ಕೂಡಾ ತಲಾ ಆದಾಯದಲ ಮೊತ್ತ ತಗ್ಗಿದೆ. ಬಳ್ಳಾರಿ ಜಿಲ್ಲೆ ಮಾತ್ರ ತಲಾ ಆದಾಯದಲ್ಲಿ 3, 24, 111 ರು ದಖಲಿಸಿ 11 ನೇ ಸ್ಥಾನದಲ್ಲಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/kalaburagi-records-negative-per-capita-income-growth-for-first-time-raises-economic-concerns-gdp-eade592"/>
        </item>
        <item>
            <title><![CDATA[ಧಾರವಾಡ ವಿದ್ಯಾರ್ಥಿಗಳ ಪ್ರತಿಭಟನೆ ರೀತಿ ಕಲಬುರಗಿಯಲ್ಲೂ ಉದ್ಯೋಗ ಆಕಾಂಕ್ಷಿಗಳ ಹೋರಾಟ]]></title>
            <link>https://kannada.asianetnews.com/karnataka-districts/job-aspirants-protest-spreads-kalaburagi-joins-dharwad-style-stir-over-recruitment-rav/articleshow-gdbn8qe</link>
            <guid isPermaLink="true">https://kannada.asianetnews.com/karnataka-districts/job-aspirants-protest-spreads-kalaburagi-joins-dharwad-style-stir-over-recruitment-rav/articleshow-gdbn8qe</guid>
            <pubDate>Sat, 28 Mar 2026 10:58:27 +0530</pubDate>
            <description><![CDATA[&lt;p&gt;ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ನೇತೃತ್ವದಲ್ಲಿ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಕಲಬುರಗಿಯಲ್ಲಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmsea8v589zjtg39mhfgw1wr,imgname----------------------66--1774675370853.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡದ ರೀತಿಯಲ್ಲೇ ವಿದ್ಯಾರ್ಥಿಗಳ ಬೃಹತ್ ಧರಣಿ । ಖಾಲಿ ಹುದ್ದೆ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ&lt;/p&gt;&lt;p&gt;&amp;nbsp;&lt;strong&gt;ಕಲಬುರಗಿ (ಮಾ.28): &lt;/strong&gt;ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನಿಗದಿತ ಕಾಲಮಿತಿಯಲ್ಲಿ ಭರ್ತಿ ಮಾಡುವಂತೆ ಆಗ್ರಹಿಸಿ ಧಾರವಾಡದ ಮಾದರಿಯಲ್ಲಿಯೇ ಶುಕ್ರವಾರ ಕಲಬುರಗಿಯಲ್ಲಿಯೂ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್&zwnj; ಪ್ರತಿಭಟನೆ ನಡೆಯಿತು.&lt;/p&gt;&lt;p&gt;ಅಕ್ಸಾ ಸಂಘಟನೆಯ ಕರೆಯ ಮೇರೆಗೆ ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳು, ನಿರುದ್ಯೋಗಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸುಡು ಬಿಸಿಲಿನಲ್ಲಿಯೇ ನಗರದ ಜಗತ್&zwnj; ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಘೋಷಣೆ ಕೂಗುತ್ತಲೇ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 56 ಸಾವಿರ ಹುದ್ದೆ ಭರ್ತಿ ಮಾಡೋದಾಗಿ ಸರ್ಕಾರ ಹೇಳಿದ್ದು, ಭರ್ತಿ ಪ್ರಕ್ರಿಯೆಗೆ ಕಾಲಮಿತಿ ಹಾಕಬೇಕು. ಜೊತೆಗೆ ಕೆಪಿಎಸ್&zwnj;ಸಿ ಹಗರಣಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.&lt;/p&gt;&lt;h2&gt;.80 ಲಕ್ಷ ಹುದ್ದೆ ಖಾಲಿ:&amp;nbsp;&lt;/h2&gt;&lt;p&gt;ಕಳೆದ ದಶಕದಿಂದ ನೇಮಕಾತಿ ಮಾಡದ್ದರಿಂದ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.80 ಲಕ್ಷ ಹುದ್ದೆಗಳು ಖಾಲಿ ಇವೆ. ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದು, 30 ದಿನಗಳಲ್ಲಿ ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ ಶುರು ಮಾಡಬೇಕು ಎಂದು ಕಾಂತಕುಮಾರ್&zwnj; ಒತ್ತಾಯಿಸಿದರು.&lt;/p&gt;&lt;p&gt;ಕಳೆದ ಫೆಬ್ರವರಿಯಲ್ಲಿ ಧಾರವಾಡದಲ್ಲಿ ಗಮನ ಸೆಳೆಯುವಂತೆ ಹೋರಾಟ ಮಾಡಿ ಸುದ್ದಿಯಾಗಿದ್ದ &lsquo;ಅಕ್ಸಾ&rsquo; ಸಂಘಟನೆ ಕಲಬುರಗಿಯಲ್ಲಿ ಮಾ.23ರಂದು ನಡೆಸಲು ಉದ್ದೇಶಿಸಿದ್ದ ಹೋರಾಟಕ್ಕೆ ಪೊಲೀಸರು ಪರವಾನಿಗೆ ನಿರಾಕರಿಸಿದಾಗ ಸಂಘಟಕರು ಹೈಕೋರ್ಟ್&zwnj;ನಲ್ಲಿ ಪ್ರಶ್ನಿಸಿ ಪರವಾನಿಗೆ ಪಡೆದಿದ್ದರಿಂದ ಹೋರಾಟವು ಗಮನ ಸೆಳೆಯುವಂತೆ ಮಾಡಿತ್ತು.&lt;/p&gt;&lt;p&gt;ಅಕ್ಸಾ ಅಧ್ಯಕ್ಷ ಕಾಂತಕುಮಾರ್&zwnj; ಹೋರಾಟದ ನೇತೃತ್ವ ವಹಿಸಿದ್ದರು. ಸ್ಥಳೀಯ ಬಿಜೆಪಿ, ಶಿವಸೇನೆ ಸೇರಿ ವಿವಿಧ ಸಂಘಟನೆಗಳ ಮುಖಂಡರು ಹೋರಾಟಕ್ಕೆ ಬೆಂಬಲಿಸಿದರು. ಶಿವಸೇನಾ ರಾಜ್ಯಾಧ್ಯಕ್ಷರೂ ಆಗಿರುವ ಆಂದೋಲಾ ಸಿದ್ದಲಿಂಗ ಸ್ವಾಮೀಜಿ, ಪಾಳಾ ಗುರುಮೂರ್ತಿ ಶಿವಾಚಾರ್ಯರು, ಆರ್&zwnj;ಟಿಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ, ಬಿಜೆಪಿ ನಗರಾಧ್ಯಕ್ಷ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.&lt;/p&gt;&lt;h3&gt;ಪ್ರತಿಭಟನೆಯುದ್ದಕ್ಕೂ ಪೊಲೀಸ್&zwnj; ಸರ್ಪಗಾವಲು&lt;/h3&gt;&lt;p&gt;ಪ್ರತಿಭಟನೆಯಲ್ಲಿ ನೂರಾರು ಯುವಕರು ಸೇರಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಕ್ರಮ ಪೊಲೀಸರು ಕೈಗೊಂಡಿದ್ದರು. ದಾರಿಯುದ್ದಕ್ಕೂ ನಗರ ಪೊಲೀಸ್&zwnj; ಸರ್ಪಗಾವಲು ಹಾಕಲಾಗಿತ್ತು. ಪ್ರತಿಭಟನಾ ಮೇರವಣಿಗೆ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ತೆರಳಿತು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/job-aspirants-protest-spreads-kalaburagi-joins-dharwad-style-stir-over-recruitment-rav/articleshow-gdbn8qe"/>
        </item>
        <item>
            <title><![CDATA[ಚಿತ್ತಾಪುರ: ಪ್ರಿಯಾಂಕ್ ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ, ಅಪಪ್ರಚಾರ ಮಾಡುವವರಿಗೆ ಖರ್ಗೆ ಎಚ್ಚರಿಕೆ]]></title>
            <link>https://kannada.asianetnews.com/cine-world/aicc-president-mallikarjun-kharge-says-minister-priyank-kharge-is-the-voice-of-common-people/articleshow-i6oqwyq</link>
            <guid isPermaLink="true">https://kannada.asianetnews.com/cine-world/aicc-president-mallikarjun-kharge-says-minister-priyank-kharge-is-the-voice-of-common-people/articleshow-i6oqwyq</guid>
            <pubDate>Sun, 08 Mar 2026 15:05:58 +0530</pubDate>
            <description><![CDATA[&lt;p&gt;ಚಿತ್ತಾಪುರದಲ್ಲಿ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪುತ್ರ ಪ್ರಿಯಾಂಕ್ ಖರ್ಗೆಯವರ ಕಾರ್ಯವನ್ನು ಶ್ಲಾಘಿಸಿದರು. ಅಭಿವೃದ್ಧಿ ಕಾರ್ಯಗಳ ನಡುವೆಯೂ ಅಪಪ್ರಚಾರ ಮಾಡುವ ವಿರೋಧಿಗಳಿಗೆ &amp;nbsp;ಖಡಕ್ ಎಚ್ಚರಿಕೆ ನೀಡಿದರು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k6f14nzm3zzr18268ax04awh,imgname-mallikarjun-kharge-1759293626356.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಮಾ.8):&lt;/strong&gt; ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕ್ಷೇತ್ರದ ಅಭಿವೃದ್ಧಿ ಮತ್ತು ವಿರೋಧ ಪಕ್ಷಗಳ ಟೀಕೆಗಳ ಬಗ್ಗೆ ಮಾತನಾಡಿದರು..&lt;/p&gt;&lt;h2&gt;ಪ್ರಿಯಾಂಕ್ ಜನಸಾಮಾನ್ಯರ ಧ್ವನಿ ಎಂದ ಖರ್ಗೆ&lt;/h2&gt;&lt;p&gt;ಚಿತ್ತಾಪುರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಪರ ಬೆಳವಣಿಗೆಯನ್ನಶ್ಲಾಘಿಸಿದ ಖರ್ಗೆ ಅವರು, ಪ್ರಿಯಾಂಕ್ ಖರ್ಗೆ ಅವರು ಈ ಕ್ಷೇತ್ರದ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರಕ್ಕೆ ಬರೋಬ್ಬರಿ 1,069 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಅವರು ತಂದಿದ್ದಾರೆ. ಇಷ್ಟೊಂದು ಕೆಲಸಗಳು ಕಣ್ಣಮುಂದೆ ನಡೆಯುತ್ತಿದ್ದರೂ ಸಹ, ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ನಮ್ಮವರೇ ಆ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ; ಯಾವಾಗಲೂ 'ಕುಂಯ್ಯಿ ಕುಂಯ್ಯಿ' ಎನ್ನುವ ಗುಣ ಬಿಡಬೇಕು ಎಂದು ಸ್ವಪಕ್ಷದವರಿಗೆ ಮತ್ತು ವಿರೋಧ ಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದರು.&lt;/p&gt;&lt;h3&gt;ಅಭಿವೃದ್ಧಿ ಮಾಡಿದ್ದು ಯಾರು ಹೇಳಿ? ಬಿಜೆಪಿಗೆ ಖರ್ಗೆ ನೇರ ಸವಾಲು&lt;/h3&gt;&lt;p&gt;ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ ಅವರು, 'ಹಿಂದೆ ಚಿತ್ತಾಪುರಕ್ಕೆ ಬರಲು ಸರಿಯಾದ ರಸ್ತೆಗಳೇ ಇರಲಿಲ್ಲ. ಈಗಿರುವ ಅದ್ಭುತ ರಸ್ತೆಗಳನ್ನು ಮಾಡಿದ್ದು ಯಾರು? ಬಿಜೆಪಿಯವರಾ? ಪ್ರಿಯಾಂಕ್ ಖರ್ಗೆ ಬಂದ ಮೇಲೆ ಈ ಭಾಗ ಚಿತ್ರಣ ಬದಲಾಗಿದೆ. ಕೆಲಸ ಮಾಡುವವರಿಗೆ ನೀವು ಬೆಂಬಲ ನೀಡಬೇಕು. ಸುಮ್ಮನೆ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ' ಎಂದು ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಜನರ ಮುಂದಿಟ್ಟರು.&lt;/p&gt;&lt;h3&gt;371ಜೆ ಜಾರಿಯ ಲಾಭ ಪ್ರತಿಯೊಬ್ಬರಿಗೂ ತಲುಪುತ್ತಿದೆ&lt;/h3&gt;&lt;p&gt;ಕಲ್ಯಾಣ ಕರ್ನಾಟಕದ ಭಾಗಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಬಗ್ಗೆ ಮಾತನಾಡಿದ ಅವರು, 'ನಾನು ಮತ್ತು ಧರ್ಮಸಿಂಗ್ ಸೇರಿ ಹೋರಾಡಿ 371ಜೆ ಜಾರಿಗೆ ತಂದೆವು. ಇಂದು ಸಾವಿರಾರು ಕೋಟಿ ಅನುದಾನ ಬರುತ್ತಿದೆ ಎಂದರೆ ಅದು ಪುಕ್ಸಟ್ಟೆ ಬಂದಿಲ್ಲ. ಇದರ ಲಾಭ ನಾನೊಬ್ಬನೇ ಪಡೆಯುತ್ತಿಲ್ಲ, ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಉದ್ಯೋಗಾಕಾಂಕ್ಷಿಗೆ ಇದರ ಸೌಲಭ್ಯ ಸಿಗುತ್ತಿದೆ. ಕಲಬುರಗಿ ವಿಮಾನ ನಿಲ್ದಾಣಕ್ಕಾಗಿ ಸರಡಗಿ ಗ್ರಾಮದ ಜನ ಸಾವಿರ ಎಕರೆ ಜಮೀನನ್ನು ಕಡಿಮೆ ದರದಲ್ಲಿ ನೀಡಿದ್ದಾರೆ, ಅವರ ತ್ಯಾಗ ದೊಡ್ಡದು' ಎಂದು ಸ್ಮರಿಸಿದರು.&lt;/p&gt;&lt;p&gt;&lt;strong&gt;ತುರ್ತು ದೆಹಲಿ ಪ್ರವಾಸ: ಸಮಯದ ಅಭಾವದ ನಡುವೆಯೂ ಭಾಷಣ&lt;/strong&gt;&lt;/p&gt;&lt;p&gt;ಪಕ್ಷದ ಕಾರ್ಯದೊತ್ತಡದ ಬಗ್ಗೆ ಮಾಹಿತಿ ನೀಡಿದ ಖರ್ಗೆ ಅವರು, ಇಂದು ಸಂಜೆ 6 ಗಂಟೆಗೆ ದೆಹಲಿಯಲ್ಲಿ ಪಕ್ಷದ ತುರ್ತು ಸಭೆಯಿದೆ. ನಾಳೆ ಕ್ಯಾಬಿನೆಟ್ ಕೂಡ ಆರಂಭವಾಗಲಿದೆ. ಹಾಗಾಗಿ ಹೆಚ್ಚು ಮಾತನಾಡಲು ಸಮಯವಿಲ್ಲ, ನನ್ನನ್ನು ಕ್ಷಮಿಸಬೇಕು' ಎಂದು ಹೇಳಿ ತಮ್ಮ ಭಾಷಣವನ್ನು ಸಂಕ್ಷಿಪ್ತವಾಗಿ ಮುಗಿಸಿ ದೆಹಲಿಯತ್ತ ಪ್ರಯಾಣ ಬೆಳೆಸಿದರು.&lt;/p&gt;]]></content:encoded>
            <category>kalaburagi</category>
            <dc:creator>Ravi Janekal</dc:creator>
            <atom:link href="https://kannada.asianetnews.com/cine-world/aicc-president-mallikarjun-kharge-says-minister-priyank-kharge-is-the-voice-of-common-people/articleshow-i6oqwyq"/>
        </item>
        <item>
            <title><![CDATA[ಕಲಬುರಗಿ: 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ ಅದ್ದೂರಿ ನಾಮಕರಣ: ಗೋ ಸೇವಕರಿಗೆ ಸನ್ಮಾನ]]></title>
            <link>https://kannada.asianetnews.com/gallery/state/kalaburagi-news-lavish-naming-ceremony-to-8-day-old-calf-in-sedam-l2woqnz</link>
            <guid isPermaLink="true">https://kannada.asianetnews.com/gallery/state/kalaburagi-news-lavish-naming-ceremony-to-8-day-old-calf-in-sedam-l2woqnz</guid>
            <pubDate>Mon, 16 Mar 2026 11:31:22 +0530</pubDate>
            <description><![CDATA[&lt;p&gt;ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ, 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ, ಜೋಗುಳ ಹಾಡಿ 'ಭೀಮಾ' ಎಂದು ವಿಶಿಷ್ಟವಾಗಿ ನಾಮಕರಣ ಮಾಡಲಾಯಿತು. ಇದೇ ವೇಳೆ ಗೋಪಾಲಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kktk81y1whxdy7c19kfpr9df,imgname-kalaburagi-naming-ceremoney--1--1773640353729.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ, 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ, ಜೋಗುಳ ಹಾಡಿ 'ಭೀಮಾ' ಎಂದು ವಿಶಿಷ್ಟವಾಗಿ ನಾಮಕರಣ ಮಾಡಲಾಯಿತು. ಇದೇ ವೇಳೆ ಗೋಪಾಲಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.&lt;/p&gt;&lt;img&gt;&lt;p&gt;ಮಕ್ಕಳ ನಾಮಕರಣ ಅದ್ದೂರಿಯಾಗಿ ಮಾಡೋದು ಕಾಮನ್. ಆದ್ರೆ ಇಲ್ಲಿ ಕರುವನ್ನು ತೊಟ್ಟಿಲಲ್ಲಿ&zwnj; ಮಲಗಿಸಿ, ಜೋಗುಳ ಹಾಡಿ ನಾಮಕರಣ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಹಾರ ಅರಸಿ ಬಂದ ಕರಡಿ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣ ಸಾವು&lt;/strong&gt;&lt;/p&gt;&lt;img&gt;&lt;p&gt;ತೊಟ್ಟಿಲಿಗೆ ಬಲೂನ್ ಕಟ್ಟಿ ಹೂಗಳಿಂದ ಅಲಂಕರಿಸಿ ನಂತರ ಅದರಲ್ಲಿ ಕರುವನ್ನು ಮಲಗಿಸಿ ಅದ್ದೂರಿಯಾಗಿ ನಾಮಕರಣ ಶಾಸ್ತ್ರ ಮಾಡಲಾಯ್ತು. ಮಹಿಳೆಯರು 8 ದಿನದ ಕರುವಿಗೆ ಆರತಿ ಬೆಳಗಿ ಭೀಮಾ ಎಂದು ನಾಮಕರಣ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವಿವಿ ಪ್ಯಾಟ್ ಬಗ್ಗೆ ದೂರುವ ಕಾಂಗ್ರೆಸ್&zwnj;ನಿಂದಲೇ ಸಹಕಾರಿ ಸಂಘದ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅಕ್ರಮ&lt;/strong&gt;&lt;/p&gt;&lt;img&gt;&lt;p&gt;8 ದಿನದ ಹಿಂದೆ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ ಹಸುವೊಂದು ಮುದ್ದಾದ ಗಂಡು ಕರುವಿಗೆ ಜನ್ಮ ನೀಡಿತ್ತು. ಈ ಕರುವಿಗೆ ಇಂದು ನಾಮಕರಣ ಮಾಡಲಾಯ್ತು. ಇಲ್ಲಿ ಇದೇನು ಹೊಸ ಆಚರಣೆ ಅಲ್ಲ, ಪ್ರತಿ ಬಾರಿ ಇಲ್ಲಿ ಹಸುವೊಂದು ಕರು ಹಾಕಿದಾಗಲೆಲ್ಲಾ ಇಲ್ಲಿ ಕರುಗಳಿಗೆ ನಾಮಕರಣ ಮಾಡಲಾಗುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದುಬೈ ವಿಮಾನ ನಿಲ್ದಾಣದ ಸಮೀಪ ಇರಾನ್ ಮತ್ತೆ ಡ್ರೋನ್ ದಾಳಿ, ಭಾರಿ ಬೆಂಕಿ: ವಿಮಾನಗಳ ಹಾರಾಟ ಸ್ಥಗಿತ&lt;/strong&gt;&lt;/p&gt;&lt;img&gt;&lt;p&gt;ಇದೇ ಸಮಯದಲ್ಲಿ ಗೋ ಸೇವೆ ಮಾಡುವ ಕಲಬುರಗಿ ಜಿಲ್ಲೆಯ 12 ಜನ ಗೋವುಗಳ ಸೇವಕರನ್ನು ಗುರುತಿಸಿ ಅವರಿಗೆ ಗೋಪಾಲರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸೇಡಂನ ನವನೀತ ಗೋಶಾಲಾ ಆಡಳಿತ ಮಂಡಳಿಯವರ ಈ ಕಾರ್ಯಕ್ಕೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಮಗನ ಮಾನಗೇಡಿ ಕೆಲಸಕ್ಕೆ ಇಡೀ ಕುಟುಂಬಕ್ಕೆ ಬಹಿಷ್ಕಾರ: ಮನನೊಂದು ನದಿಗೆ ಹಾರಿದ ತಾಯಿ&lt;/strong&gt;&lt;/p&gt;]]></content:encoded>
            <category>kalaburagi</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/kalaburagi-news-lavish-naming-ceremony-to-8-day-old-calf-in-sedam-l2woqnz"/>
        </item>
        <item>
            <title><![CDATA[ರಾಜ್ಯದಲ್ಲಿ ಕೆಂಡದಂತಹ ಬಿಸಿಲು ಹವಾಮಾನ ಇಲಾಖೆಯ ಎಚ್ಚರಿಕೆ ಗಂಟೆ, 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲು!]]></title>
            <link>https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v</link>
            <guid isPermaLink="true">https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v</guid>
            <pubDate>Thu, 02 Apr 2026 11:26:01 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಬಿಸಿಲಿನ ತೀವ್ರತೆ ಹೆಚ್ಚಿರುವ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjptv959tj7p1s6exffvkc02,imgname-heatwave-1772440364201.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿಯೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಕೆಂಡದಂತಹ ಬಿಸಿಲು ದಾಖಲಾಗುವ ಸಾಧ್ಯತೆ ಇದ್ದು, ಜನಜೀವನದ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ ಒಣ ಹವಾಮಾನ&lt;/h2&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಒಣ ಹವೆ ಮುಂದುವರಿಯಲಿದ್ದು, ಗರಿಷ್ಠ ಉಷ್ಣಾಂಶವು ಸುಮಾರು 35&deg;C ರಿಂದ 37&deg;C ನಡುವೆಯೇ ಇರಲಿದೆ ಎಂದು ಅಂದಾಜಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಸ್ವಲ್ಪ ತಂಪಾದ ವಾತಾವರಣ ಕಂಡುಬಂದರೂ, ಮಧ್ಯಾಹ್ನ ವೇಳೆಗೆ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.&lt;/p&gt;&lt;h2&gt;ಉತ್ತರ ಕರ್ನಾಟಕದಲ್ಲಿ ಬಿಸಿಲ ಧಗೆ ತೀವ್ರ&lt;/h2&gt;&lt;p&gt;ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ 42&deg;C ತನಕ ಏರಿಕೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಬಿಸಿಗಾಳಿ (Heat Wave) ಉಂಟಾಗುವ ಸಾಧ್ಯತೆಯೂ ಹೆಚ್ಚಿದ್ದು, ಜನರು ಹೆಚ್ಚಿನ ಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಬಿಸಿಗಾಳಿಯ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಲಿದೆ. ಈ ಅವಧಿಯಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಹಿರಿಯ ನಾಗರಿಕರು, ಮಕ್ಕಳು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆಯಿಂದಿರಬೇಕು.&lt;/p&gt;&lt;h2&gt;ಕರಾವಳಿ ಜಿಲ್ಲೆಗಳಲ್ಲಿ ಸೆಕೆ&ndash;ಹಬೆ ಹೆಚ್ಚಳ&lt;/h2&gt;&lt;p&gt;ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ತೇವಾಂಶ ಹೆಚ್ಚಿರುವ ಕಾರಣ ಸೆಕೆ ಮತ್ತು ಹಬೆ (humidity) ಹೆಚ್ಚಾಗಲಿದೆ. ಇದರಿಂದ ಜನರಿಗೆ ತೀವ್ರ ಬೆವರಿನ ಜೊತೆಗೆ ಬಿಸಿಲಿನ ಅನುಭವವಾಗುವ ಸಾಧ್ಯತೆ ಇದೆ. ಸಮುದ್ರ ತೀರ ಪ್ರದೇಶಗಳಲ್ಲಿ ಉಷ್ಣಾಂಶ ಅಷ್ಟಾಗಿ ಏರಿಕೆಯಾಗದಿದ್ದರೂ, ಹವಾಮಾನ ಉರಿಯುತ್ತಿರುವ ಅನುಭವವಾಗಲಿದೆ&lt;/p&gt;&lt;h2&gt;ಮಲೆನಾಡಿನಲ್ಲಿ ತುಂತುರು ಮಳೆ ಸಾಧ್ಯತೆ&lt;/h2&gt;&lt;p&gt;ಮಲೆನಾಡು ಭಾಗಗಳಲ್ಲಿ, ವಿಶೇಷವಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದ್ದು, ಅಲ್ಲಲ್ಲಿ ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಕನಿಷ್ಠ ಉಷ್ಣಾಂಶವು 20&deg;C ರಿಂದ 22&deg;C ನಡುವೆಯೇ ಇರಲಿದೆ.&lt;/p&gt;&lt;h2&gt;ಜನರಿಗೆ ಎಚ್ಚರಿಕೆ ಮತ್ತು ಸಲಹೆಗಳು&lt;/h2&gt;&lt;p&gt;ಹವಾಮಾನ ಇಲಾಖೆಯು ಉತ್ತರ ಕರ್ನಾಟಕದ ಜನರಿಗೆ ವಿಶೇಷ ಎಚ್ಚರಿಕೆ ನೀಡಿದ್ದು, ಬಿಸಿಲಿನ ತೀವ್ರತೆ ಹೆಚ್ಚಿರುವ ಸಮಯದಲ್ಲಿ ಮನೆಯೊಳಗೇ ಇರುವಂತೆ ಸಲಹೆ ನೀಡಿದೆ. ಮಧ್ಯಾಹ್ನ 12ರಿಂದ 4ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ, ಹೆಚ್ಚು ನೀರು ಕುಡಿಯಿರಿ, ಹಗುರವಾದ ಬಟ್ಟೆ ಧರಿಸಿ . ನೇರ ಬಿಸಿಲಿನಿಂದ ದೂರವಿರಿ ಎಂದು ಸಲಹೆ ನೀಡಲಾಗಿದೆ.&lt;/p&gt;&lt;h2&gt;9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಕೆಲಸದ ಸಮಯ ಬದಲು&lt;/h2&gt;&lt;p&gt;ವಿಪರೀತ ಬಿಸಿಲಿನ ಹಿನ್ನೆಲೆಯಲ್ಲಿ ಕಲಬುರಗಿ ಕಂದಾಯ ವಿಭಾಗದ ಕಲಬುರಗಿ, ಬೀದರ್&zwnj;, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳು, ಬೆಳಗಾವಿ ಕಂದಾಯ ವಿಭಾಗದ ವಿಜಯನಗರ, ಬಾಗಲಕೋಟೆ 2 ಜಿಲ್ಲೆಗಳು ಸೇರಿದಂತೆ 9 ಜಿಲ್ಲೆಗಳಲ್ಲಿನ ಸರ್ಕಾರದ ಕಚೇರಿಗಳ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗಿನ 8 ರಿಂದ ಮಧ್ಯಾಹ್ನ 1.30ರವರೆಗೆ ಸಮಯ ಬದಲಿಸಿ ಏ.1ರಿಂದಲೇ ಜಾರಿಗೆ ಬರುವಂತೆ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.&lt;/p&gt;&lt;p&gt;ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಹೆಚ್ಚಿನ ಬಿಸಿಲು ಇರುವ ಕಾರಣ ಈ ಬದಲಾವಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿನ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ಎಂದಿನಂತೆ ಯಾವುದೇ ಲೋಷ/ ಅಡೆತಡೆಯಿಲ್ಲದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು/ಜಿಪಂ ಸಿಇಒ ತುರ್ತು ಸಂದರ್ಭಗಳಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಸಮಯದ ಮಿತಿಯಿಲ್ಲದೆ ಕೆಲಸ ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಒಟ್ಟಾರೆ, ರಾಜ್ಯದ ವಿವಿಧ ಭಾಗಗಳಲ್ಲಿ ವಿಭಿನ್ನ ಹವಾಮಾನ ಸ್ಥಿತಿಗಳು ಕಂಡುಬರುತ್ತಿದ್ದರೂ, ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆ ಹೆಚ್ಚು ಇರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v"/>
        </item>
        <item>
            <title><![CDATA[ರಾಜ್ಯದ ಜನತೆಗೆ ಅಲರ್ಟ್: ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ!]]></title>
            <link>https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc</link>
            <guid isPermaLink="true">https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc</guid>
            <pubDate>Tue, 24 Mar 2026 20:43:56 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmc4fptfwz060wyzsnqeqzh5,imgname-rain-1774228855631.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.&lt;img&gt;&lt;p&gt;ಕರ್ನಾಟಕದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದೆ.&lt;/p&gt;&lt;img&gt;&lt;p&gt;ರಾಜ್ಯದ ಆರು ಪ್ರಮುಖ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು 'ಯೆಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕರಾವಳಿ ಮತ್ತು ಮಲೆನಾಡು ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಿರಲಿದೆ.&lt;/p&gt;&lt;img&gt;&lt;p&gt;ಈ ಜಿಲ್ಲೆಗಳಲ್ಲಿ ಕೇವಲ ಮಳೆ ಮಾತ್ರವಲ್ಲದೆ, ಜೋರಾದ ಗಾಳಿಯೊಂದಿಗೆ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಮಳೆಯ ಸಮಯದಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಓಡಾಡಬಾರದು. ವಿಶೇಷವಾಗಿ ಮಿಂಚಿನ ಸಂದರ್ಭದಲ್ಲಿ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಮತ್ತು ವಿದ್ಯುತ್ ಕಂಬಗಳು ಅಥವಾ ತಂತಿಗಳ ಬಳಿ ಹೋಗಬಾರದು ಎಂದು ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಹವಾಮಾನ ಬದಲಾವಣೆಯ ಈ ಸಂದರ್ಭದಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;p&gt;&lt;/p&gt;]]></content:encoded>
            <category>kalaburagi</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc"/>
        </item>
        <item>
            <title><![CDATA[ಕರ್ನಾಟಕದ ಪ್ರತೀ ಜಿಲ್ಲೆಗಳಲ್ಲೂ LPG ಗ್ಯಾಸ್ ಸಿಲಿಂಡರ್ ಕೊರತೆ: ಹೋಟೆಲ್ ಮುಚ್ಚಲು ನಿರ್ಧರಿಸಿದ ಮಾಲೀಕರು!]]></title>
            <link>https://kannada.asianetnews.com/gallery/state/middle-east-war-impact-lpg-cylinder-shortage-hits-hotels-across-karnataka-gdp-m2sa16o</link>
            <guid isPermaLink="true">https://kannada.asianetnews.com/gallery/state/middle-east-war-impact-lpg-cylinder-shortage-hits-hotels-across-karnataka-gdp-m2sa16o</guid>
            <pubDate>Tue, 10 Mar 2026 16:25:41 +0530</pubDate>
            <description><![CDATA[ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದೆ. ಇದರಿಂದಾಗಿ ಹೋಟೆಲ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್&zwnj;ಗಳನ್ನು ಬಂದ್ ಮಾಡುವ ಆತಂಕ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkas8c0q2qyjp2t4q7s6j1v1,imgname-commercial-lpg-cylinder-shortage-india-mumbai-bengaluru-restaurants-gas-supply-crisis-hospitality-sector-impact0-1773109784599.jpg" type="image/jpeg" height="390" width="690"/>
            <content:encoded><![CDATA[ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದೆ. ಇದರಿಂದಾಗಿ ಹೋಟೆಲ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್&zwnj;ಗಳನ್ನು ಬಂದ್ ಮಾಡುವ ಆತಂಕ ಎದುರಾಗಿದೆ.&lt;img&gt;&lt;p&gt;ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಪರಿಣಾಮ ಇದೀಗ ಭಾರತದಲ್ಲಿಯೂ ಕಾಣಿಸಿಕೊಳ್ಳಲು ಆರಂಭವಾಗಿದೆ. ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಆತಂಕದ ನಡುವೆ ದೇಶದ ಹಲವು ಭಾಗಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ಕಾಣಿಸಿಕೊಂಡಿದ್ದು, ಇದರ ಪರಿಣಾಮವಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದ್ದು, ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕಲಬುರಗಿ ನಗರದಲ್ಲಿ ಕಳೆದ ಎರಡು ದಿನಗಳಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ. ನಗರದಲ್ಲಿರುವ 300ಕ್ಕೂ ಹೆಚ್ಚು ಹೋಟೆಲ್&zwnj;ಗಳು ಈ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್&zwnj;ಗಳನ್ನು ಬಂದ್ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗದೇ ಉದ್ಯಮಿಗಳು ಕಂಗಾಲಾಗಿದ್ದಾರೆ. ಸಿಲಿಂಡರ್ ಕೊರತೆಯ ಜೊತೆಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಿದ್ದು, ಗೃಹ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗಿರುವುದಾಗಿ ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ರಾಯಚೂರಿನಲ್ಲಿಯೂ ವಾಣಿಜ್ಯ ಬಳಕೆಯ ಅಡುಗೆ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದೆ. ನಾಲ್ಕು ಸಿಲಿಂಡರ್ ಕೇಳಿದರೆ ಕೇವಲ ಎರಡು ಸಿಲಿಂಡರ್ ಮಾತ್ರ ಸರಬರಾಜು ಮಾಡಲಾಗುತ್ತಿದೆ ಎಂದು ಹೋಟೆಲ್ ಮಾಲೀಕ ದಾಮೋದರ್ ಪ್ರಭು ಹೇಳಿದ್ದಾರೆ. ಸಿಲಿಂಡರ್ ಕೊರತೆಯಿಂದಾಗಿ ಮಸಾಲಾ ದೋಸೆ, ಸೆಟ್ ದೋಸೆ ಸೇರಿದಂತೆ ಹತ್ತುಕ್ಕೂ ಹೆಚ್ಚು ತಿಂಡಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಬಳ್ಳಾರಿಯಲ್ಲಿಯೂ ದೊಡ್ಡ 25 ಕೆಜಿ ಕಮರ್ಷಿಯಲ್ ಸಿಲಿಂಡರ್ ದೊರೆಯದೆ ಹೋಟೆಲ್ ಉದ್ಯಮಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕೆಲವರು ಐದು ಕೆಜಿ ಸಾಮರ್ಥ್ಯದ ಸಣ್ಣ ಕಮರ್ಷಿಯಲ್ ಸಿಲಿಂಡರ್ ಬಳಸುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಹೆಚ್ಚುವರಿ ವೆಚ್ಚದ ಜೊತೆಗೆ ಸಾಗಾಟದಲ್ಲಿಯೂ ತೊಂದರೆ ಎದುರಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್ ನಡೆಸುವುದು ಕಷ್ಟವಾಗಲಿದೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಬಾಗಲಕೋಟೆ ನಗರದಲ್ಲಿಯೂ ಗ್ಯಾಸ್ ಸರಬರಾಜು ಸಮಸ್ಯೆ ಕಾಣಿಸಿಕೊಂಡಿದ್ದು, 200ಕ್ಕೂ ಹೆಚ್ಚು ಹೋಟೆಲ್&zwnj;ಗಳು ಆತಂಕದಲ್ಲಿವೆ. ಗ್ಯಾಸ್ ಪೂರೈಕೆ ಸಮರ್ಪಕವಾಗಿ ನಡೆಯದಿರುವುದರಿಂದ ಹೋಟೆಲ್ ಮಾಲೀಕರು ಶೀಘ್ರ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಬಾಗಲಕೋಟೆ ಹೋಟೆಲ್ ಮತ್ತು ಉಪಹಾರ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ. ಈಗಾಗಲೇ ಗ್ಯಾಸ್ ದರದಲ್ಲೂ ಸುಮಾರು 115 ರೂಪಾಯಿ ಹೆಚ್ಚಳವಾಗಿರುವುದಾಗಿ ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಬೀದರ್ ಜಿಲ್ಲೆಯ ಹಲವು ಗ್ಯಾಸ್ ಏಜೆನ್ಸಿಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಸ್ಟಾಕ್ ಸಂಪೂರ್ಣ ಖಾಲಿಯಾಗಿದ್ದು, ಗೋದಾಮುಗಳಲ್ಲಿ ಖಾಲಿ ಸಿಲಿಂಡರ್&zwnj;ಗಳೇ ಕಾಣಿಸುತ್ತಿವೆ. ಕಳೆದ ಎರಡು ದಿನಗಳಿಂದ ಪೂರೈಕೆ ಸ್ಥಗಿತಗೊಂಡಿರುವುದರಿಂದ ಹೋಟೆಲ್ ಉದ್ಯಮಿಗಳು ಏಜೆನ್ಸಿಗಳನ್ನು ಸಂಪರ್ಕಿಸಿ ಸಿಲಿಂಡರ್ ಕೇಳುತ್ತಿರುವುದಾಗಿ ತಿಳಿದು ಬಂದಿದೆ. ಸ್ಟಾಕ್ ಬಂದ ಬಳಿಕವೇ ವಿತರಣೆ ಸಾಧ್ಯ ಎಂದು ಏಜೆನ್ಸಿ ಮಾಲೀಕರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ವಿಜಯಪುರದಲ್ಲಿ ದಿನಕ್ಕೆ ಮೂರುರಿಂದ ನಾಲ್ಕು ಸಿಲಿಂಡರ್ ಅಗತ್ಯವಿರುವ ಹೋಟೆಲ್&zwnj;ಗಳಿಗೆ ಸಿಲಿಂಡರ್ ಪೂರೈಕೆ ಕಡಿಮೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಲೀಕರು ಆತಂಕದಲ್ಲಿದ್ದಾರೆ. ಸಾಲ ಮಾಡಿ ಹೋಟೆಲ್ ಆರಂಭಿಸಿರುವ ನಮಗೆ ಹೋಟೆಲ್ ಬಂದ್ ಆದ್ರೆ ಬಾಡಿಗೆ ಹಾಗೂ ಸಿಬ್ಬಂದಿ ಸಂಬಳ ಹೇಗೆ ಕೊಡಬೇಕು ಎಂಬ ಚಿಂತೆಯಿದೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಧಾರವಾಡ ಜಿಲ್ಲೆಯಲ್ಲಿಯೂ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಸುಮಾರು 60 ರೂಪಾಯಿ ಹೆಚ್ಚಳವಾಗಿದೆ ಎಂದು ಗೃಹಿಣಿಯರು ಆರೋಪಿಸಿದ್ದಾರೆ. ಬೆಲೆ ಏರಿಕೆಯ ಕಾರಣದಿಂದ ಮಧ್ಯಮ ವರ್ಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಿಲಿಂಡರ್ ದರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಹುಬ್ಬಳ್ಳಿಯಲ್ಲಿ LPG ಮತ್ತು CNG ಬೆಲೆ ಏರಿಕೆ&lt;/h2&gt;&lt;p&gt;ಹುಬ್ಬಳ್ಳಿಯಲ್ಲಿ LPG ಹಾಗೂ CNG ಬೆಲೆ ಏರಿಕೆಯಿಂದ ಆಟೋ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಲೀಟರ್&zwnj;ಗೆ ಸುಮಾರು 10 ರೂಪಾಯಿ ಏರಿಕೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಉಚಿತ ಬಸ್ ಯೋಜನೆಯಿಂದ ಆಟೋ ಉದ್ಯಮಕ್ಕೆ ಹೊಡೆತ ಬಿದ್ದಿರುವುದರಿಂದ ಈ ಬೆಲೆ ಏರಿಕೆ ಮತ್ತಷ್ಟು ಸಮಸ್ಯೆ ಉಂಟುಮಾಡಿದೆ ಎಂದು ಚಾಲಕರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಿಕೊಂಡಿರುವ ಹೋಟೆಲ್ ಉದ್ಯಮಿಗಳಿಗೆ ಗ್ಯಾಸ್ ಕೊರತೆ ದೊಡ್ಡ ಸಮಸ್ಯೆಯಾಗಿದೆ. ದಿನಕ್ಕೆ ನಾಲ್ಕು ರಿಂದ ಆರು ಸಿಲಿಂಡರ್ ಬೇಕಾಗಿದ್ದ ಜಾಗದಲ್ಲಿ ಕೇವಲ ಎರಡು ಸಿಲಿಂಡರ್ ಮಾತ್ರ ಪೂರೈಕೆ ಆಗುತ್ತಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಸಿಲಿಂಡರ್ ಯಾವಾಗ ಖಾಲಿಯಾಗುತ್ತದೋ ಎಂಬ ಆತಂಕದಲ್ಲೇ ಅಡುಗೆ ಮಾಡುವ ಪರಿಸ್ಥಿತಿ ಎದುರಾಗಿದೆ.&lt;/p&gt;&lt;h2&gt;ಕೊಡಗಿನಲ್ಲಿ ನಾಲ್ಕು ದಿನಗಳಿಂದ ಸಿಲಿಂಡರ್ ಇಲ್ಲ&lt;/h2&gt;&lt;p&gt;ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಆಗಿಲ್ಲ. ಮೈಸೂರಿನ ಹೆಬ್ಬಾಳ ಘಟಕದಿಂದ ಪೂರೈಕೆಯಾಗುವ ಅನಿಲವನ್ನು ಪ್ರಸ್ತುತ ಗೃಹ ಬಳಕೆಗೆ ಮಾತ್ರ ನೀಡಲಾಗುತ್ತಿರುವುದರಿಂದ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರು ಆತಂಕದಲ್ಲಿದ್ದಾರೆ.&lt;/p&gt;&lt;img&gt;&lt;p&gt;ದಾವಣಗೆರೆಯಲ್ಲಿಯೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದ್ದು, ಹೋಟೆಲ್ ಮಾಲೀಕರು ಇರುವ ಸ್ಟಾಕ್ ಬಳಸಿ ಸೇವೆ ಮುಂದುವರೆಸುತ್ತಿದ್ದಾರೆ. ಆದರೆ ಸಿಲಿಂಡರ್ ಸಿಗದಿದ್ದರೆ ಎಲೆಕ್ಟ್ರಿಕ್ ಸ್ಟೋ ಬಳಸಿ ಅಡುಗೆ ಮಾಡಲು ಹೆಚ್ಚಿನ ಯೂನಿಟ್ ವಿದ್ಯುತ್ ಬಳಸಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಹೋಟೆಲ್ ಬಂದ್ ಆತಂಕ&lt;/p&gt;&lt;p&gt;ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ಮುಂದುವರೆದರೆ ಹೋಟೆಲ್&zwnj;ಗಳನ್ನು ಬಂದ್ ಮಾಡುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಉದ್ಯಮಿಗಳು ಎಚ್ಚರಿಕೆ ನೀಡಿದ್ದಾರೆ. ಹೋಟೆಲ್ ಬಂದ್ ಆದರೆ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಭಾರತದಲ್ಲಿಯೂ ಆರ್ಥಿಕ ಹಾಗೂ ಪೂರೈಕೆ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಹೋಟೆಲ್ ಉದ್ಯಮಿಗಳು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>kalaburagi</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/middle-east-war-impact-lpg-cylinder-shortage-hits-hotels-across-karnataka-gdp-m2sa16o"/>
        </item>
        <item>
            <title><![CDATA[ನಿಮ್ಮ ಸಲುವಾಗಿ ನಾವು ಪ್ರಾರ್ಥಿಸುತ್ತೇವೆ, ನಮ್ಮೊಂದಿಗೆ ನೀವು ಬನ್ನಿ; ಹಳ್ಳಿಗಳಲ್ಲಿ ಯೇಸು ಕ್ರಿಸ್ತನ ಕರಪತ್ರ ಹಂಚಿಕೆ]]></title>
            <link>https://kannada.asianetnews.com/karnataka-districts/kalaburagi-christian-religious-conversion-attempt-stopped-by-hindu-activists-sharanasirasagi-sat/articleshow-n8tbzav</link>
            <guid isPermaLink="true">https://kannada.asianetnews.com/karnataka-districts/kalaburagi-christian-religious-conversion-attempt-stopped-by-hindu-activists-sharanasirasagi-sat/articleshow-n8tbzav</guid>
            <pubDate>Tue, 10 Mar 2026 16:46:47 +0530</pubDate>
            <description><![CDATA[&lt;p&gt;ಹಳ್ಳಿಗಳಲ್ಲಿ ಪ್ರಾರ್ಥನೆ ನೆಪದಲ್ಲಿ ಯೇಸು ಕ್ರಿಸ್ತನ ಬೋಧನೆಗಳ ಕರಪತ್ರ ಹಂಚಿ ಮತಾಂತರಕ್ಕೆ ಪ್ರಚೋದಿಸುತ್ತಿದ್ದ ತಂಡವನ್ನು ಹಿಂದೂ ಕಾರ್ಯಕರ್ತರು ತಡೆದಿದ್ದಾರೆ. ಈ ಘಟನೆಯು ಮಾತಿನ ಚಕಮಕಿಗೆ ಕಾರಣವಾಗಿ, ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkbqczd3q61jbm8fqf44dz8z,imgname-kalaburagi-christian-religious-conversion-1773141392801.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಮಾ.10): ಸ&lt;/strong&gt;ದ್ದಿಲ್ಲದೇ ನಡೆಯುತ್ತಿದ್ದ ಧಾರ್ಮಿಕ ಮತಾಂತರದ ಷಡ್ಯಂತ್ರವೊಂದನ್ನು ಹಿಂದೂ ಕಾರ್ಯಕರ್ತರು ಬಯಲಿಗೆಳೆದಿದ್ದಾರೆ. ಹಳ್ಳಿ ಹಳ್ಳಿಗಳಿಗೆ ಹೋಗಿ ನಾವು ನಿಮಗಾಗಿ ಪ್ರಾರ್ಥನೆ ಮಾಡುತ್ತೇವೆ. ನಮ್ಮೊಂದಿಗೆ ನೀವೂ ಕೂಡ ಭಾನುವಾರ ಬಂದು ಪ್ರಾರ್ಥನೆ ಮಾಡಿ ಎಂದು ಯೇಸು ಕ್ರಿಸ್ತನ ಬೋಧನೆಗಳ ಕರಪತ್ರಗಳನ್ನು ಹಂಚಿಕೆ ಮಾಡುತ್ತಾ ಮತಾಂತರಕ್ಕೆ ಷಡ್ಯಂತ್ರ ಮಾಡುತ್ತಿದ್ದ ಗ್ಯಾಂಗ್ ಅನ್ನು ಹಿಂದೂ ಕಾರ್ಯಕರ್ತರು ಭೇದಿಸಿದ್ದಾರೆ.&lt;/p&gt;&lt;p&gt;ಕಲಬುರಗಿ ನಗರದ ಹೊರವಲಯದ ಶರಣಸಿರಸಗಿ ಗ್ರಾಮದ ಬಳಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದನೆ ನೀಡುತ್ತಿದ್ದ ತಂಡವೊಂದನ್ನು ಬಜರಂಗದಳ ಹಾಗೂ ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಪತ್ರ ಹಂಚಿಕೆ ಮಾಡಿದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ, ಪ್ರತಿಭಟನೆ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಕಳೆದ ಎರಡು ದಿನಗಳಿಂದ ಕಲಬುರಗಿಯ ಶರಣಸಿರಸಗಿ ಗ್ರಾಮದಲ್ಲಿ ಅಪರಿಚಿತ ಯುವಕರ ತಂಡವೊಂದು ಮನೆ ಮನೆಗೆ ಸುತ್ತುತ್ತಿತ್ತು. ಈ ತಂಡವು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಹ್ಯಾಂಡ್&zwnj;ಬಿಲ್&zwnj;ಗಳು (ಕರಪತ್ರ) ಮತ್ತು ಧಾರ್ಮಿಕ ಪುಸ್ತಕಗಳನ್ನು ಹಿಡಿದು ಗ್ರಾಮಸ್ಥರ ವಿಶ್ವಾಸ ಗಳಿಸಲು ಯತ್ನಿಸುತ್ತಿತ್ತು. 'ನಿಮ್ಮ ಮನೆಯಲ್ಲಿ ಯಾರಾದರೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಸಂಕಷ್ಟದಲ್ಲಿದ್ದರೆ ನಮಗೆ ತಿಳಿಸಿ, ನಾವು ಅವರ ಪರವಾಗಿ ನಾಳೆ ವಿಶೇಷ ಪ್ರಾರ್ಥನೆ (Prayer) ಮಾಡುತ್ತೇವೆ. ಇದರಿಂದ ನಿಮ್ಮೆಲ್ಲಾ ಸಂಕಷ್ಟಗಳು ದೂರವಾಗುತ್ತವೆ' ಎಂದು ಗ್ರಾಮಸ್ಥರಿಗೆ ಆಮಿಷ ಒಡ್ಡುತ್ತಿದ್ದರು ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಹಿಂದೂ ಕಾರ್ಯಕರ್ತರ ಎಂಟ್ರಿ:&lt;/strong&gt;&lt;/h3&gt;&lt;p&gt;ಧರ್ಮ ಪ್ರಚಾರದ ಹೆಸರಿನಲ್ಲಿ ಬಡ ಮತ್ತು ಮುಗ್ಧ ಜನರನ್ನು ಮತಾಂತರ ಮಾಡಲು ಈ ತಂಡವು ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿರುವ ಬಜರಂಗದಳದ ಕಾರ್ಯಕರ್ತರು, ಪ್ರಚಾರ ಮಾಡುತ್ತಿದ್ದವರನ್ನು ಸ್ಥಳದಲ್ಲೇ ತಡೆದು ನಿಲ್ಲಿಸಿದರು. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಮತಾಂತರಕ್ಕೆ ಪ್ರಚೋದನೆ ನೀಡುವ ಹ್ಯಾಂಡ್&zwnj;ಬಿಲ್&zwnj;ಗಳನ್ನು ವಶಪಡಿಸಿಕೊಂಡ ಕಾರ್ಯಕರ್ತರು, ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಮತಾಂತರದ ಜಾಲ ಎಂದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ:&lt;/strong&gt;&lt;/h2&gt;&lt;p&gt;ಘಟನೆಯ ಬೆನ್ನಲ್ಲೇ ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಹಿಂದೂ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಆಮಿಷವೊಡ್ಡಿ ಮತಾಂತರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಘೋಷಣೆಗಳನ್ನು ಕೂಗಿದರು.&lt;/p&gt;&lt;h2&gt;&lt;strong&gt;ಕಾನೂನು ಕ್ರಮಕ್ಕೆ ಆಗ್ರಹ:&lt;/strong&gt;&lt;/h2&gt;&lt;p&gt;'ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮತಾಂತರದ ಹಾವಳಿ ಹೆಚ್ಚಾಗುತ್ತಿದೆ. ಅನಾರೋಗ್ಯದ ನೆಪವೊಡ್ಡಿ ಮುಗ್ಧ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಸರ್ಕಾರ ಕೂಡಲೇ ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸದ್ಯ ಪೊಲೀಸರು ಪ್ರಕರಣದ ಮಾಹಿತಿ ಕಲೆಹಾಕುತ್ತಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಶರಣಸಿರಸಗಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಧಾರ್ಮಿಕ ಸಂಘರ್ಷದ ಆತಂಕ ಮೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kalaburagi-christian-religious-conversion-attempt-stopped-by-hindu-activists-sharanasirasagi-sat/articleshow-n8tbzav"/>
        </item>
        <item>
            <title><![CDATA[ಕಲಬುರಗಿಯಲ್ಲಿ ಗ್ಯಾಸ್‌ ಸಿಲಿಂಡರ್‌ಗಾಗಿ ಪರದಾಟ, ಕ್ಯೂ ತಪ್ಪದಂತೆ ನಡುರಸ್ತೆಯಲ್ಲೇ ಹಾಸಿಗೆ ಹಾಸಿ ಮಲಗಿದ ಜನ!]]></title>
            <link>https://kannada.asianetnews.com/karnataka-districts/massive-lpg-shortage-in-kalaburagi-residents-queue-up-overnight-on-streets-rav/articleshow-rd69pp0</link>
            <guid isPermaLink="true">https://kannada.asianetnews.com/karnataka-districts/massive-lpg-shortage-in-kalaburagi-residents-queue-up-overnight-on-streets-rav/articleshow-rd69pp0</guid>
            <pubDate>Sun, 29 Mar 2026 12:42:37 +0530</pubDate>
            <description><![CDATA[ಇರಾನ್-ಇಸ್ರೇಲ್ ಯುದ್ಧ ಸಂಘರ್ಷದಿಂದಾಗಿ ಕಲಬುರಗಿಯ ಆಳಂದ ಪಟ್ಟಣದಲ್ಲಿ ತೀವ್ರ ಎಲ್&zwnj;ಪಿಜಿ ಗ್ಯಾಸ್ ಕೊರತೆ ಉಂಟಾಗಿದೆ. ಸಿಲಿಂಡರ್&zwnj;ಗಾಗಿ ಜನರು ರಾತ್ರಿಯಿಡೀ ರಸ್ತೆಯಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದು, ಅಡುಗೆ ಮಾಡಲು ಪರದಾಡುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ಪಟ್ಟಣದ ಜನಜೀವನ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmw6hp3gkrmdmdan2hwch9gy,imgname-whatsapp-image-2026-03-29-at-11.15.15-am-1774767888496.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಮಾ.29&lt;/strong&gt;): ಇರಾನ್, ಇಸ್ರೇಲ್ ಅಮೆರಿಕ ನಡುವಿನ ಯುದ್ಧಸಂಘರ್ಷ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಭಾರತಕ್ಕೂ ಇದರ ಪರಿಣಾಮ ತೀವ್ರವಾಗಿ ತಟ್ಟಿದ್ದು ಎಲ್&zwnj;ಪಿಜಿ ಗ್ಯಾಸ್ ಗ್ಯಾಸ್ ಕೊರತೆಯಿಂದಾಗಿ ಜನರು ಬೀದಿಗೆ ಬರುವಂತಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಜನ ಸಾಮಾನ್ಯರ ಬದುಕು ಬರ್ಬದ್ ಆಗಿದೆ. ಮನೆಯಲ್ಲಿ ಅಡುಗೆ ಮಾಡೋಣವೆಂದರೆ ಸಿಲಿಂಡರ್ ಖಾಲಿ, ಸೌದೆಯೂ ಸಿಗುತ್ತಿಲ್ಲ, ಸೌದೆಗಾಗಿ ಪ್ರತ್ಯೇಕ ಒಲೆಯೂ ಇಲ್ಲದೆ ಜನರ ಪರದಾಟ ಹೇಳತೀರದಾಗಿದೆ. ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ಭಾರಿ ವ್ಯತ್ಯಯದಿಂದಾಗಿ ಪಟ್ಟಣದಲ್ಲಿ ಕುಡಿಯುವ ನೀರಿನಂತೆ ಗ್ಯಾಸ್&zwnj;ಗಾಗಿ ಅಕ್ಷರಶಃ ಹಾಹಾಕಾರ ಶುರುವಾಗಿದೆ.&lt;/p&gt;&lt;h2&gt;ಬೆಳ್ಳಂಬೆಳಗ್ಗೆ ಅಲ್ಲ, ರಾತ್ರಿಯಿಂದಲೇ ರಸ್ತೆಯ ಮೇಲೆ ಸಿಲಿಂಡರ್ ಸಾಲು!&lt;/h2&gt;&lt;p&gt;ಆಳಂದ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಈಗ ಸಿಲಿಂಡರ್ ಪಡೆಯುವುದೇ ಒಂದು ದೊಡ್ಡ ಸವಾಲಾಗಿದೆ. ಜನ ಬೆಳ್ಳಂಬೆಳಗ್ಗೆ ಎದ್ದು ಬಂದರೂ ಗ್ಯಾಸ್ ಸಿಗುವುದು ಗ್ಯಾರಂಟಿ ಇಲ್ಲ ಎಂದು ರಾತ್ರಿಯೇ ರಸ್ತೆ ಮೇಲೆ ಸರತಿ ಸಾಲಿಗೆ ಗ್ಯಾಸ್ ಸಿಲಿಂಡರ್ ಇಟ್ಟು ಅದರ ಪಕ್ಕದಲ್ಲೇ ಹಾಸಿಗೆ ಹಾಸಿ ಮಲಗಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಸಿಲಿಂಡರ್ ಸಿಗದೇ ಹೋದರೆ ಒಲೆ ಉರಿಯಲ್ಲ ಎಂಬ ಆತಂಕದಲ್ಲಿ ಜನರು ನಡುರಸ್ತೆಯಲ್ಲೇ ನಿದ್ದೆಗೆಟ್ಟು ಪಾಳಿ ಹಚ್ಚಿರುವ ದೃಶ್ಯ ಮನಕಲಕುವಂತಿದೆ.&lt;/p&gt;&lt;h3&gt;ಸಿಲಿಂಡರ್ ಬದಲು ಬಕೆಟ್, ಕೊಡಗಳನ್ನಿಟ್ಟ ಮಹಿಳೆಯರು&lt;/h3&gt;&lt;p&gt;ಸಿಲಿಂಡರ್ ಲಾರಿ ಬರುವ ಸುಳಿವು ಸಿಗುತ್ತಿದ್ದಂತೆಯೇ ಮಹಿಳೆಯರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಒಬ್ಬೊಬ್ಬರು ತಮ್ಮ ಸರದಿ ತಪ್ಪಬಾರದೆಂದು ಸಿಲಿಂಡರ್ ಜೊತೆಗೆ ನೀರು ತುಂಬುವ ಕೊಡಗಳು ಮತ್ತು ಬಕೇಟ್&zwnj;ಗಳನ್ನು ಇಟ್ಟು ಸಾಲನ್ನು ಕಾಯ್ದಿರಿಸುತ್ತಿದ್ದಾರೆ. ಪಟ್ಟಣದ ಸುಲ್ತಾನ್&zwnj;ಪುರ ಏರಿಯಾ, ಏಕಾಂತರಾಮಯ್ಯ ಮಂದಿರ ಹಾಗೂ ಮಹಾದೇವ ಮಂದಿರದ ಬಳಿ ಕಿಲೋಮೀಟರ್&zwnj;ಗಟ್ಟಲೆ ಉದ್ದದ ಸಾಲು ಕಂಡುಬರುತ್ತಿದೆ.&lt;/p&gt;&lt;p&gt;&lt;strong&gt;ಸಾಮಾನ್ಯರ ಪರದಾಟಕ್ಕೆ ಮುಕ್ತಿ ಯಾವಾಗ?&lt;/strong&gt;&lt;/p&gt;&lt;p&gt;ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಈ ಯುದ್ಧದ ಬೆಳವಣಿಗೆಗಳು ಅನಿಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಹೇಳಲಾಗುತ್ತಿದೆ. ಪೂರೈಕೆಯಲ್ಲಿ ಉಂಟಾಗಿರುವ ಈ ವ್ಯತ್ಯಯದಿಂದಾಗಿ ಆಳಂದದ ಜನ ಹೈರಾಣಾಗಿದ್ದಾರೆ. ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಪಟ್ಟಣದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ದಟ್ಟವಾಗಿದೆ.&lt;/p&gt;]]></content:encoded>
            <category>kalaburagi</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/massive-lpg-shortage-in-kalaburagi-residents-queue-up-overnight-on-streets-rav/articleshow-rd69pp0"/>
        </item>
        <item>
            <title><![CDATA['ಟ್ರಂಪ್ ಒಬ್ಬ ಸರ್ವಾಧಿಕಾರಿ, ಮೋದಿ ಅವನ ಗುಲಾಮ' : ಚಿತ್ತಾಪುರದಲ್ಲಿ ಪ್ರಧಾನಿ ವಿರುದ್ಧ ಖರ್ಗೆ ಕಟು ವಾಗ್ದಾಳಿ]]></title>
            <link>https://kannada.asianetnews.com/politics/trump-is-a-dictator-modi-his-slave-mallikarjun-kharge-slams-pm-in-chittapur-kalaburagi/articleshow-s3fdlna</link>
            <guid isPermaLink="true">https://kannada.asianetnews.com/politics/trump-is-a-dictator-modi-his-slave-mallikarjun-kharge-slams-pm-in-chittapur-kalaburagi/articleshow-s3fdlna</guid>
            <pubDate>Sun, 08 Mar 2026 16:02:11 +0530</pubDate>
            <description><![CDATA[&lt;p&gt;Trump is a Dictator Modi His Slave ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯಿಂದ ಮೋದಿ ಸರ್ಕಾರದ ವಿರುದ್ಧ ಗುಡುಗು! ಟ್ರಂಪ್ ಓರ್ವ ಸರ್ವಾಧಿಕಾರಿ, ಮೋದಿ ಗುಲಾಮ ಎಂದ ಖರ್ಗೆ. ವಿದೇಶಾಂಗ ನೀತಿ ಬಗ್ಗೆ ಅವರು ಹೇಳಿದ್ದೇನು? ತಿಳಿಯಲು ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk6g25s64eynpnn8zczh6gam,imgname----------------------97--1772965926694.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಮಾ.8):&lt;/strong&gt; ಅಮೆರಿಕ ಅಧ್ಯಕ್ಷ ಟ್ರಂಪ್ ಒಬ್ಬ ಸರ್ವಾಧಿಕಾರಿ ಮೋದಿ ಅವನ ಗುಲಾಮ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಚಿತ್ತಾಪುರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಖರ್ಗೆ ಅವರು, ಕೇಂದ್ರ ಸರ್ಕಾರ ಮತ್ತು ಅಮೆರಿಕದ ವಿದೇಶಾಂಗ ನೀತಿಯ ವಿರುದ್ಧ ಕೆಂಡ ಕಾರಿದ್ದಾರೆ. ಪ್ರಧಾನಿ ಮೋದಿ ಅಮೆರಿಕಕ್ಕೆ ಶರಣಾಗಿದ್ದಾರೆ ಎಂದರು.&lt;/p&gt;&lt;h2&gt;ಬೈಟೋ ಅಂದ್ರೆ ಬೈಟೋ ಉಟೋ ಅಂದ್ರೆ ಉಟೋ&lt;/h2&gt;&lt;p&gt;ಅಮೆರಿಕ ಅಧ್ಯಕ್ಷ ಟ್ರಂಪ್ ಒಬ್ಬ ಸರ್ವಾಧಿಕಾರಿ (Dictator). ಪ್ರಧಾನಿ ಮೋದಿ ಅವರಿಗೆ ಗುಲಾಮನಂತೆ ನಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಬೈದು ಬೈದು ಅಧಿಕಾರಕ್ಕೆ ಬಂದವರು, ಇಂದು ಅಮೆರಿಕ ಹೇಳಿದಂತೆ 'ಬೈಟೋ ಅಂದ್ರೆ ಬೈಟೋ, ಉಟೋ ಅಂದ್ರೆ ಉಟೋ' ಎನ್ನುವ ಸ್ಥಿತಿಗೆ ತಲುಪಿದ್ದಾರೆ. ದೇಶವನ್ನು ಅಮೆರಿಕದ ಬಳಿ ಅಡವಿಡುತ್ತಿದ್ದೀರಿ ಎಂದು ಮೋದಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.&lt;/p&gt;&lt;p&gt;&lt;img&gt;&lt;/p&gt;&lt;h3&gt;ಕಾಂಗ್ರೆಸ್ ದೇಶ ಕಟ್ಟಿದರೆ, ಬಿಜೆಪಿ ದೇಶ ಹಾಳು ಮಾಡುತ್ತಿದೆ!&lt;/h3&gt;&lt;p&gt;'ಮೋದಿ ಬೆಳನಿಂದ ಸಂಜೆಯವರೆಗೆ ಕಾಂಗ್ರೆಸ್&zwnj;ಗೆ ಬೈಯುವುದೇ ಕೆಲಸವಾಗಿದೆ. ಮಾರಾಯಾ(ಮೋದಿ) ಊರೂರು ತಿರುಗುವುದು, ಹೋದಲೆಲ್ಲ ಕಾಂಗ್ರೆಸ್ ಗೆ ಬೈಯುವುದು. ಏಕೆಂದರೆ ಅವರಿಗೆ ಮಾಡಲು ಏನೂ ಆಗಲ್ಲ. ಅದಕ್ಕೆ ಕಾಂಗ್ರೆಸ್ ಬೈಯುವುದು. ಈ ದೇಶದಲ್ಲಿ ದೊಡ್ಡ ಕಾರ್ಖಾನೆಗಳು, ರಸ್ತೆಗಳು ಮತ್ತು ಶಾಲೆಗಳನ್ನು ಕಟ್ಟಿದ್ದು ಕಾಂಗ್ರೆಸ್. ನಾವು ದೇಶ ಕಟ್ಟುವ ಕೆಲಸ ಮಾಡಿದರೆ, ಮೋದಿ ಅವರು ದೇಶವನ್ನು ಒಡೆಯುವ, ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.&lt;/p&gt;&lt;p&gt;&lt;strong&gt;ಇರಾನ್ ನೌಕೆ ಅಮೆರಿಕ ಧ್ವಂಸ ಮಾಡಿತು, ಮೋದಿ ಮೌನವೇಕೆ?&lt;/strong&gt;&lt;/p&gt;&lt;p&gt;ಹಿಂದೂ ಮಹಾಸಾಗರದಲ್ಲಿನ ಇರಾನ್ ನೌಕೆಯನ್ನ ಅಮೆರಿಕದವರು ಸುಟ್ಟರು, ಮೋದಿ ಆ ಬಗ್ಗೆ ಮಾತನಾಡಲಿಲ್ಲ. ಮೋದಿಗೆ ದೇಶ ಉಳಿಸುವ ಶಕ್ತಿ ಎಷ್ಟು ಇದೆ? ಮಾತನಾಡಿ, ಮಂತ್ರ ಹಾಕಿ ದೇಶ ಉಳಿಸಲು ಆಗಲ್ಲ. ಯುವಕರಿಗೆ ಶಕ್ತಿ ತುಂಬಬೇಕು ಕೆಲಸ ಆಗಬೇಕು. ಮೋದಿಯವರು ಏನು ಮಾಡಿದ್ದಾರೆ? ನಮ್ಮ ದೇಶದಲ್ಲಿ ಯಾರಾದರೂ ದಾಳಿ&zwnj; ಮಾಡಿದ್ರೆ ಶ್ರೀಮಂತರು ಊರು ಬಿಟ್ಟು, ಬೇರೆ ದೇಶಕ್ಕೆ ಅಥವಾ ದ್ವೀಪಕ್ಕೆ ಹೋಗುತ್ತಾರೆ. ನಾವು ಬಡವರು ಎಲ್ಲಿಗೆ ಹೋಗಬೇಕು? ಕೇವಲ ಮಂತ್ರ ಹಾಕಿ ದೇಶ ಉಳಿಸಲು ಆಗಲ್ಲ, ಯುವಕರಿಗೆ ಕೆಲಸ ಸಿಗಬೇಕು. ಮೋದಿಯವರೇ, ಇಷ್ಟೆಲ್ಲಾ ನಡೆಯುತ್ತಿದ್ದರೂ ನೀವೆಲ್ಲಿದ್ದೀರಿ? ಯಾಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.&lt;img&gt;&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಅಮೆರಿಕಾಗೆ ಭಾರೀ ಸೊಕ್ಕು ಬಂದಿದೆ.&lt;/strong&gt;&lt;/p&gt;&lt;p&gt;ಅಮೆರಿಕಾಗೆ ಭಾರಿ ಸೊಕ್ಕು ಬಂದಿದೆ. ಖಮೇನಿಯನ್ನ ಹತ್ಯೆ ಮಾಡಿದ್ರು, ಅಮೆರಿಕ ಪಕ್ಕದ ದೇಶದ ಅಧ್ಯಕ್ಷನ್ನ ಎಳೆದೊಯ್ದರು. ಒಂದು ದೇಶದ ಮುಖ್ಯಸ್ಥನನ್ನ ರೀತಿ ಅವರ ದೇಶದ ಒಳಗೆ ನುಗ್ಗಿ ಹತ್ಯೆ ಮಾಡಿದ್ರೆ ವಿಶ್ವ ಹೇಗೆ ಸುರಕ್ಷಿತವಾಗಿರುತ್ತಾ? ನೀವು ಎಲ್ಲರನ್ನ ಕೊಲ್ಲುತ್ತಾ ಹೋದ್ರೆ ಶಾಂತಿ ಬರುತ್ತಾ? ನಾವು ಗಾಂಧಿ ಹೇಳಿದ ದಾರಿಯಲ್ಲಿ ನಡೆಯಬೇಕು. ಅದುಬಿಟ್ಟು ಅಮೆರಿಕ ಜೊತೆಗೂಡಿ ನಮ್ಮ ದೇಶವನ್ನು ಹಾಳುಮಾಡುತ್ತಿದ್ದೀರಿ. ಅಮೆರಿಕ ಹೇಳಿದ ಹಾಗೆ ನೀವು(ಮೋದಿ) ಕೇಳುತ್ತಿದ್ದೀರಿ. ನಮ್ಮದು ಸಾರ್ವಭೌಮ ದೇಶ. ನಾವು ಯಾರ ಬಳಿ ವ್ಯಾಪಾರ ಮಾಡಬೇಕು ಅನ್ನೋದು ನಮಗೆ ಬಿಟ್ಟಿದ್ದು, ಆದರೆ ನಾವು ರಷ್ಯಾ ತೈಲ ಖರೀದಿಸಲು ಅಮೆರಿಕ ನಮಗೆ ಒಂದು ತಿಂಗಳ ಸಮಯ ಕೊಡುತ್ತದೆ ಎಂದರೆ ಏನರ್ಥ? ಕಚ್ಚಾತೈಲ ಖರೀದಿಗೆ ಟ್ರಂಪ್ ಅಪ್ಪಣೆ ಬೇಕಾ? ಮುಂದೆ ಟ್ರಂಪ್ ಹೇಳಿದ್ರೆ ಮಾತ್ರ ತೈಲ ಖರೀದಿ ಮಾಡಬೇಕು. ಇಲ್ಲಾಂದ್ರೆ ಇಲ್ಲ. ನೀವು ಗುಲಾಮಗಿರಿ ಮಾಡೋದಲ್ಲದೇ ನಮ್ಮ ದೇಶವನ್ನು ಗುಲಾಮಗಿರಿಗೆ ತಳ್ಳುತ್ತಿದ್ದೀರಿ &amp;nbsp;ನಾವು ಗಾಂಧೀಜಿ ತೋರಿದ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ಅಮೆರಿಕದ ಸೊಕ್ಕಿಗೆ ಭಾರತ ಬಲಿಯಾಗಬಾರದು. ಎಂದು ಎಚ್ಚರಿಸಿದರು.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ಕಲಬುರಗಿ ವಿಮಾನ ನಿಲ್ದಾಣ ಸೇಡಿನ ರಾಜಕಾರಣ?&lt;/strong&gt;&lt;/p&gt;&lt;p&gt;ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಖರ್ಗೆ ಅವರು, 'ನಾವು ಕೆಕೆಆರ್&zwnj;ಡಿಬಿ ಅನುದಾನದಲ್ಲಿ ಕಲಬುರಗಿ ಏರ್&zwnj;ಪೋರ್ಟ್ ನಿರ್ಮಾಣ ಮಾಡಿದ್ದೆವು. ಆದರೆ ನಾನು ಇಲ್ಲಿ ಓಡಾಡುತ್ತಿದ್ದೇನೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ವಿಮಾನ ಹಾರಾಟವನ್ನೇ ಬಂದ್ ಮಾಡಿದೆ. ಮನ್ ಕೀ ಬಾತ್, ಉಸ್ ಕೀ ಬಾತ್ ಎನ್ನುವ ಮೋದಿ ಈಗ ಜನರ ಸಂಕಷ್ಟದ ಬಗ್ಗೆ ಮಾತನಾಡಲಿ. ಬ್ರಿಟಿಷರನ್ನು ಒದ್ದು ಓಡಿಸಿದ ಇತಿಹಾಸ ನಮ್ಮದು, ಮತ್ತೆ ನಮ್ಮನ್ನು ಗುಲಾಮಗಿರಿಗೆ ತಳ್ಳಬೇಡಿ ಎಂದು ಜನರು ಜಾಗೃತರಾಗುವಂತೆ ಕರೆ ನೀಡಿದರು.&lt;/p&gt;]]></content:encoded>
            <category>kalaburagi</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/trump-is-a-dictator-modi-his-slave-mallikarjun-kharge-slams-pm-in-chittapur-kalaburagi/articleshow-s3fdlna"/>
        </item>
        <item>
            <title><![CDATA[ಅದಾನಿ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ 850 ಕೋಟಿ ಹಣ ಬಾಕಿ!]]></title>
            <link>https://kannada.asianetnews.com/gallery/state/acc-adani-group-850-crore-royalty-dues-kalaburagi-mining-karnataka-san-t06xb12</link>
            <guid isPermaLink="true">https://kannada.asianetnews.com/gallery/state/acc-adani-group-850-crore-royalty-dues-kalaburagi-mining-karnataka-san-t06xb12</guid>
            <pubDate>Tue, 24 Mar 2026 21:34:01 +0530</pubDate>
            <description><![CDATA[&lt;p&gt;ಕಲಬುರಗಿ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಅದಾನಿ ಸಮೂಹದ ಎಸಿಸಿ ಕಂಪನಿಯು ಸರ್ಕಾರಕ್ಕೆ ₹850 ಕೋಟಿ ರಾಜಧನ ಮತ್ತು ದಂಡವನ್ನು ಬಾಕಿ ಉಳಿಸಿಕೊಂಡಿದೆ. ಈ ಪ್ರಕರಣವು ಸುಪ್ರೀಂ ಕೋರ್ಟ್&zwnj;ನಲ್ಲಿದ್ದರೂ, ಬಾಕಿ ವಸೂಲಿಗಾಗಿ ಕ್ರಿಮಿನಲ್ ಮೊಕದ್ದಮೆ ಕೈಗೊಳ್ಳಲು ಸರ್ಕಾರ ಮುಂದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmg92bf1pvpc2qpbm3x6pd6g,imgname-gautam-adani--2--1774367878625.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಅದಾನಿ ಸಮೂಹದ ಎಸಿಸಿ ಕಂಪನಿಯು ಸರ್ಕಾರಕ್ಕೆ ₹850 ಕೋಟಿ ರಾಜಧನ ಮತ್ತು ದಂಡವನ್ನು ಬಾಕಿ ಉಳಿಸಿಕೊಂಡಿದೆ. ಈ ಪ್ರಕರಣವು ಸುಪ್ರೀಂ ಕೋರ್ಟ್&zwnj;ನಲ್ಲಿದ್ದರೂ, ಬಾಕಿ ವಸೂಲಿಗಾಗಿ ಕ್ರಿಮಿನಲ್ ಮೊಕದ್ದಮೆ ಕೈಗೊಳ್ಳಲು ಸರ್ಕಾರ ಮುಂದಾಗಿದೆ.&lt;/p&gt;&lt;img&gt;&lt;p&gt;ಕಲಬುರಗಿ ಜಿಲ್ಲೆಯ ವಾಡಿ ಬಳಿಯ ಕಣ್ಣೂರು ಲೈಮ್&zwnj;ಸ್ಟೋನ್ ಬ್ಲಾಕ್ ಗುತ್ತಿಗೆ ಪಡೆದಿರುವ ಅದಾನಿ ಸಮೂಹದ ಎಸಿಸಿ ಕಂಪನಿಯು, ರಾಜಧನ ಹಾಗೂ ದಂಡದ ಮೊತ್ತ ಸೇರಿ ಒಟ್ಟು 850 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿಸಬೇಕಿದೆ. ವಿಧಾನ ಪರಿಷತ್&zwnj;ನಲ್ಲಿ ಕಾಂಗ್ರೆಸ್ ಸದಸ್ಯೆ ಆರತಿ ಕೃಷ್ಣ ಅವರು ಕೇಳಿದ ಪ್ರಶ್ನೆಗೆ ಗಣಿ ಸಚಿವ ಎಸ್&zwnj;ಎಸ್&zwnj; ಮಲ್ಲಿಕಾರ್ಜುನ ಅವರ ಅನುಪಸ್ಥಿತಿಯಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉತ್ತರಿಸಿದರು.&lt;/p&gt;&lt;img&gt;&lt;p&gt;ಜಿಲ್ಲೆಯ ಇಂಗಳಗಿ ಮತ್ತು ರಾವೂರ ಗ್ರಾಮಗಳ ವ್ಯಾಪ್ತಿಯಲ್ಲಿ 471.03 ಹೆಕ್ಟೇರ್ ಪ್ರದೇಶದಲ್ಲಿ ಸುಣ್ಣದ ಕಲ್ಲಿನ ಗಣಿಗಾರಿಕೆಗೆ ಈ ಕಂಪನಿಗೆ ಅವಕಾಶ ನೀಡಲಾಗಿತ್ತು. ಈ ವರ್ಷದ ಜನವರಿಯಲ್ಲಿಯೇ ಗುತ್ತಿಗೆ ಅವಧಿ ಮುಗಿದಿದ್ದರೂ, ಹೊಸದಾಗಿ ಗಣಿಗಾರಿಕೆಗೆ ಅನುಮತಿ ನೀಡಿಲ್ಲ.&lt;/p&gt;&lt;img&gt;&lt;p&gt;ರಾಜಧನ ಮತ್ತು ದಂಡದ ಮೊತ್ತವನ್ನು ಪ್ರಶ್ನಿಸಿ ಕಂಪನಿಯು ಕಾನೂನು ಹೋರಾಟ ನಡೆಸುತ್ತಿದ್ದು, ಪ್ರಕರಣವು ಸುಪ್ರೀಂ ಕೋರ್ಟ್&zwnj;ನಲ್ಲಿ ವಿಚಾರಣೆಯಲ್ಲಿದೆ. ಹಣ ಪಾವತಿಯ ಮೊತ್ತ ಇನ್ನೂ ಇತ್ಯರ್ಥವಾಗದ ಕಾರಣ, ನ್ಯಾಯಾಲಯದ ಅನುಮತಿಯ ಮೇರೆಗೆ ಸದ್ಯ ಗಣಿಗಾರಿಕೆ ಮುಂದುವರಿದಿದೆ.&lt;/p&gt;&lt;img&gt;&lt;p&gt;&quot;ಅದಾನಿ ಅವರನ್ನು ಮೋದಿಯವರ ಸ್ನೇಹಿತ ಎಂದು ಟೀಕಿಸುವ ಕಾಂಗ್ರೆಸ್ ಸರ್ಕಾರ, ಇಷ್ಟೊಂದು ದೊಡ್ಡ ಮೊತ್ತ ಬಾಕಿ ಇದ್ದರೂ ಗಣಿಗಾರಿಕೆಗೆ ಅವಕಾಶ ನೀಡಿರುವುದರ ಹಿಂದಿನ ಹಿತಾಸಕ್ತಿ ಏನು?&quot; ಎಂದು ಬಿಜೆಪಿಯ ಸಿ.ಟಿ. ರವಿ ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಕಾಂಗ್ರೆಸ್&zwnj;ನ ಕೆ. ಶಿವಕುಮಾರ್ ಕೂಡ ಬಾಕಿ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.&lt;/p&gt;&lt;img&gt;&lt;p&gt;ಅದಾನಿ ಸೇರಿದಂತೆ ಯಾರೇ ಆದರೂ ಸರ್ಕಾರ ಮುಲಾಜಿಗೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಈ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅಡ್ವಕೇಟ್ ಜನರಲ್ ಸಲಹೆ ನೀಡಿದ್ದಾರೆ. ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.&lt;/p&gt;]]></content:encoded>
            <category>kalaburagi</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/acc-adani-group-850-crore-royalty-dues-kalaburagi-mining-karnataka-san-t06xb12"/>
        </item>
        <item>
            <title><![CDATA[ಕಲಬುರಗಿ: ನಡುರಸ್ತೆಯಲ್ಲೇ ಸರ್ಕಾರಿ ಶಾಲಾ ಶಿಕ್ಷಕಿಯ ಬರ್ಬರ ಹತ್ಯೆ]]></title>
            <link>https://kannada.asianetnews.com/crime/kalaburagi-government-school-teacher-brutally-murdered-in-the-middle-of-the-road/articleshow-tufagoc</link>
            <guid isPermaLink="true">https://kannada.asianetnews.com/crime/kalaburagi-government-school-teacher-brutally-murdered-in-the-middle-of-the-road/articleshow-tufagoc</guid>
            <pubDate>Mon, 06 Apr 2026 09:48:49 +0530</pubDate>
            <description><![CDATA[&lt;p&gt;&lt;strong&gt;Kalaburagi teacher murder case: &lt;/strong&gt;ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಸರ್ಕಾರಿ ಶಾಲಾ ಶಿಕ್ಷಕಿ ಜ್ಯೋತಿ ಕಪಾಳೆ (57) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ನಂತರ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngf7y2v3zhcn8qvdgfdkndv,imgname-government-school-teacher-murder-1775448094811.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸರ್ಕಾರಿ ಶಾಲಾ ಶಿಕ್ಷಕಿಯ ಬರ್ಬರ ಹತ್ಯೆ&lt;/strong&gt;&lt;/h2&gt;&lt;p&gt;ಕಲಬುರಗಿ: ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಶಿಕ್ಷಕಿಯನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು ಶವವನ್ನು ರಸ್ತೆಬದಿಯಲ್ಲೇ ಸುಟ್ಟು ಹಾಕಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಲ್ಮೂಡ ಗ್ರಾಮದ ರಸ್ತೆಯ ಪಕ್ಕದಲ್ಲಿ ಕೊಲೆ ಮಾಡಿದ ದುಷ್ಕರ್ಮಿಗಳು ಶವವನ್ನು ಅಲ್ಲೇ ರಸ್ತೆ ಬದಿ ಸುಟ್ಟು ಹಾಕಿದ್ದಾರೆ.&lt;/p&gt;&lt;p&gt;ಕೊಲೆಯಾದ ಶಿಕ್ಷಕಿಯನ್ನು 57 ವರ್ಷದ ಜ್ಯೋತಿ ಕಪಾಳೆ (57) ಎಂದು ಗುರುತಿಸಲಾಗಿದೆ. ಮೃತ ಜ್ಯೋತಿ ಕಪಾಳೆ ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾಗಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂಜರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದರು. ಹೀಗಾಗಿ ಬೀದರ್&zwnj;ನಲ್ಲೇ ಮನೆ ಮಾಡಿದ್ದ ಜ್ಯೋತಿ ಅಲ್ಲಿಂದಲೇ ಶಾಲೆಗೆ ಹೋಗಿ ಬರ್ತಿದ್ದರು. ವಾರಕ್ಕೊಮ್ಮೆ ಕಲಬುರಗಿಯಲ್ಲಿರುವ ಮನೆಗೆ ಬರುತ್ತಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪತ್ನಿಯ ಕೊಲ್ಲಲು ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಟೆಕ್ಕಿ ಪತಿ ಮುರುಗನ್&lt;/strong&gt;&lt;/p&gt;&lt;p&gt;ಆದರೆ ಈಗ ಕಲಬುರಗಿಯಿಂದ ಬೀದರ್&zwnj;ಗೆ ತೇರಳುವಾಗ ಮಾರ್ಗ ಮಧ್ಯದ ಕಮಲಾಪುರದ&zwnj; ಕಲ್ಮೂಡ ಎಂಬಲ್ಲಿ ಜ್ಯೋತಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿಕ್ಷಕಿ ಜ್ಯೋತಿಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಪೊಲೀಸರ ತನಿಖೆಯ ನಂತರವೇ ಶಿಕ್ಷಕಿಯ ಕೊಲೆಗೆ ಕಾರಣ ತಿಳಿಯಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಎಲ್&zwnj;&amp;amp;ಟಿಯ ₹57 ಕೋಟಿ ಹಣ ಕೆ-ರೈಡ್&zwnj;ನಿಂದ ಮುಟ್ಟುಗೋಲು&lt;/strong&gt;&lt;/p&gt;]]></content:encoded>
            <category>kalaburagi</category>
            <dc:creator>Anusha Kb</dc:creator>
            <atom:link href="https://kannada.asianetnews.com/crime/kalaburagi-government-school-teacher-brutally-murdered-in-the-middle-of-the-road/articleshow-tufagoc"/>
        </item>
        <item>
            <title><![CDATA[400ಕ್ಕೂ ಹೆಚ್ಚು ಕೆರೆ ತುಂಬಿಸುವ ನೀರಾವರಿ ಗ್ಯಾರಂಟಿ ಯೋಜನೆ ಕೈಗೆತ್ತಿಕೊಂಡಿದ್ದೇವೆ: ಡಿ.ಕೆ.ಶಿವಕುಮಾರ್‌]]></title>
            <link>https://kannada.asianetnews.com/politics/dk-shivakumar-irrigation-guarantee-scheme-kalaburagi-gvd/articleshow-txzyw9w</link>
            <guid isPermaLink="true">https://kannada.asianetnews.com/politics/dk-shivakumar-irrigation-guarantee-scheme-kalaburagi-gvd/articleshow-txzyw9w</guid>
            <pubDate>Mon, 09 Mar 2026 21:37:25 +0530</pubDate>
            <description><![CDATA[&lt;p&gt;ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 400ಕ್ಕೂ ಹೆಚ್ಚಿನ ಕೆರೆಗಳು ತುಂಬಿಸುವ ನೀರಾವರಿ ಗ್ಯಾರಂಟಿ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khfee2pzd9xkawvh1ewnz2n4,imgname-dk-shivakumar-1771118725855.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಮಾ.09): &lt;/strong&gt;ರಾಜ್ಯದಲ್ಲಿ ಈಗಾಗಲೆ ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದ ಜನತೆ ನೆಮ್ಮದಿ ಜೀವನ ನಡೆಸುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 400ಕ್ಕೂ ಹೆಚ್ಚಿನ ಕೆರೆಗಳು ತುಂಬಿಸುವ ನೀರಾವರಿ ಗ್ಯಾರಂಟಿ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ತಿಳಿಸಿದರು.&lt;/p&gt;&lt;p&gt;ಚಿತ್ತಾಪುರ ಪಟ್ಟಣದಲ್ಲಿ ವಿವಿಧ ಇಲಾಖೆಗಳ ಸುಮಾರು 1,069.41 ಕೋಟಿ ರು. ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ತಾಪುರ ಕ್ಷೇತ್ರದಲ್ಲಿಯೇ ಇಂದಿಲ್ಲಿ ಸುಮಾರು 365 ಕೋಟಿ ರು. ಮೊತ್ತದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.&lt;/p&gt;&lt;p&gt;ಶಿಕ್ಷಣ ಇಲಾಖೆ ಅಡಿಯಲ್ಲಿ ರಾಜ್ಯದಲ್ಲಿ 2,000 ಕೆ.ಪಿ.ಎಸ್ ಶಾಲೆಗಳನ್ನು ತೆರೆಯಲು ತೀರ್ಮಾನ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 330 ಶಾಲೆಗಳನ್ನು ಸ್ಥಾಪಿಸಲಾಗುತ್ತದೆ. 5,800 ಶಿಕ್ಷಕರ ಭರ್ತಿ ಪ್ರಕ್ರಿಯೆ ನಡೆದಿದೆ. ಜೊತೆಗೆ 2.50 ಲಕ್ಷ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು. ಸಧ್ಯ 56,000ಕ್ಕೂ ಅಧಿಕ ಖಾಲಿ ಹುದ್ದೆ ತುಂಬಲು ಈಗಾಗಲೇ ಕ್ರಮವಹಿಸಲಾಗಿದೆ ಎಂದರು.&lt;/p&gt;&lt;p&gt;ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಪ್ರತಿ ವರ್ಷ ರೂ 52,000 ಕೋಟಿಗೂ ಅಧಿಕ ಮೊತ್ತ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಖರ್ಚು ಮಾಡುತ್ತಿದೆ. ಹೀಗಂತ ಅಭಿವೃದ್ಧಿ ಕಾರ್ಯ ನಿಂತಿಲ್ಲ. ಚಿತ್ತಾಪುರ ಕ್ಷೇತ್ರದಲ್ಲಿಯೆ ಕಳೆದ ಎರಡೂವರೆ ವರ್ಷದಲ್ಲಿ 2,000 ಕೋಟಿ ರೂ. ಅನುದಾನ ನೀಡಿದ್ದೇವೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯಕ್ಷಮತೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ ಅವರು, ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಮಾರ್ಗದರ್ಶನದಲ್ಲಿ ಪ್ರಿಯಾಂಕ್ ಖರ್ಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಮಾನತೆ ಮತ್ತು ತತ್ವಾಧಾರಿತ ರಾಜಕಾರಣಿಯನ್ನು ರಾಜ್ಯಕ್ಕೆ ನೀಡಿದಕ್ಕೆ ಮತ್ತವರಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ಚಿತ್ತಾಪುರ ಕ್ಷೇತ್ರದ ಮಹಾನ್ ಜನತೆಗೆ ಕೃತಜ್ಞತೆಗಳು ಸಲ್ಲಿಸಲು ಬಯಸುತ್ತೇನೆ ಎಂದರು.&lt;/p&gt;&lt;h2&gt;&lt;strong&gt;ವಿಶ್ವ ಶಾಂತಿಗೆ ಗಾಂಧಿ ತತ್ವ ಮಾದರಿ&lt;/strong&gt;&lt;/h2&gt;&lt;p&gt;ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇಂದು ಕೊಲ್ಲಿ ರಾಷ್ಟ&ccedil;ಗಳ ಮಧ್ಯೆ ಯುದ್ದ ನಡೆಯುತ್ತಿದೆ. ಯುದ್ದದಿಂದ ಯಾರಿಗೂ ಒಳ್ಳೆಯದಾಗಲ್ಲ, ಬದಲಾಗಿ ಅಭಿವೃದ್ಧಿಗೆ ಮಾರಕವಾಗಲಿದೆ. ಹಿಂದಿಗಿಂತಲು ಇಂದು ವಿಶ್ವ ಶಾಂತಿಗೆ ಮಹಾತ್ಮ ಗಾಂಧಿ ಅವರ ಅಹಿಂಸೆ ತತ್ವ ಅತ್ಯಗತ್ಯತ್ಯವಿದೆ ಎಂದು ಅವರು ಹೇಳಿದರು.&lt;/p&gt;&lt;p&gt;ಇಙದು ಚಿತ್ತಾಪುರ ಕ್ಷೇತ್ರದಲ್ಲಿ 1,069 ಕೋಟಿ ರೂ. ಕೆಲಸ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ. ಪ್ರಿಯಾಂಕ್ ಖರ್ಗೆ ಇಷ್ಟು ಒಳ್ಳೆ ಕೆಲಸ ಮಾಡಿದ್ರು ವಿರೋಧ ಪಕ್ಷದವರ ಟೀಕೆ ಕಮ್ಮಿಯಾಗಿಲ್ಲ. ಹಿಂದೆ 2008ರಲ್ಲಿ ನಾನು ಇಲ್ಲಿಂದ ವಿಧಾನಸಭೆಗೆ ಆಯ್ಕೆಯಾಗಿ ಚಿತ್ತಾಪುರ ಜನರ ಸೇವೆ ಸಲ್ಲಿಸಲು ಕೇವಲ 1 ವರ್ಷ ಮಾತ್ರ ಅವಕಾಶ ಸಿಕ್ಕಿತು. ನಂತರ ದಿಲ್ಲಿ ರಾಜಕಾರಣಕ್ಕೆ ಹೋಗಬೇಕಾಯಿತೆಂದರು. ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಈ ಭಾಗದ ಹಿಂದುಳಿದ ಹಣೆಪಟ್ಟಿ ತೊಲಗಿಸಲು 371ಜೆ ಕಾಯ್ದೆ ಜಾರಿಗೆ ತರಲಾಯಿತು. ಪರಿಣಾಮ ಇಂದಿಲ್ಲಿ ನಮ್ಮ ಯುವಕರು, ಮೆಡಿಕಲ್-ಇಂಜಿನೀಯರಿಂಗ್ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆಂದರು.&lt;/p&gt;]]></content:encoded>
            <category>kalaburagi</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/dk-shivakumar-irrigation-guarantee-scheme-kalaburagi-gvd/articleshow-txzyw9w"/>
        </item>
        <item>
            <title><![CDATA[ಕಲಬುರಗಿ: ಬಜೆಟ್‌ಗೂ ಮುನ್ನ ಖಮೇನಿಗೆ ಸಂತಾಪ! ಪಾಲಿಕೆಗೂ ಇರಾನ್ ನಾಯಕನಿಗೂ ಏನು ಸಂಬಂಧ?]]></title>
            <link>https://kannada.asianetnews.com/karnataka-districts/kalaburagi-corporation-row-condolences-for-khamenei-before-budget-session-rav/articleshow-vkgu5ty</link>
            <guid isPermaLink="true">https://kannada.asianetnews.com/karnataka-districts/kalaburagi-corporation-row-condolences-for-khamenei-before-budget-session-rav/articleshow-vkgu5ty</guid>
            <pubDate>Thu, 02 Apr 2026 06:01:50 +0530</pubDate>
            <description><![CDATA[&lt;p&gt;ಇರಾನ್ ಸರ್ವೋಚ್ಚ ನಾಯಕ ಆಯತೋಲ್ಲಾ ಖಮೇನಿ ಸಾವಿಗೆ ಕಲಬುರಗಿ ಪಾಲಿಕೆಯಲ್ಲಿ ಸಂತಾಪ ಸೂಚಿಸಿದ್ದನ್ನು ಶಿವಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತೀವ್ರ ಆಕ್ರೋಶ. ಪಾಲಿಕೆಗೂ ಖಮೇನಿಗೂ ಏನು ಸಂಬಂ? ಸರ್ಕಾರಿ ಕಚೇರಿಯಲ್ಲಿ ಈ ರೀತಿ ಮೌನಾಚರಣೆ ನಡೆಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn5s4m2qfb1z5pj3w22j9r6j,imgname----------------------32--1775089373271.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಏ.2): &lt;/strong&gt;ಅಮೇರಿಕಾ ಹಾಗೂ ಇಸ್ರೇಲ್&zwnj; ಜಂಟಿ ದಾಳಿಗೆ ಹತನಾಗಿರುವ ಇರಾನ್&zwnj; ಸರ್ವೋಚ್ಚ ನಾಯಕ ಆಯತೋಲ್ಲಾ ಖಮೇನಿ ಸಾವಿಗೆ ಕಲಬುರಗಿ ಪಾಲಿಕೆಯಲ್ಲಿ ಕಂಬನಿ ಮಿಡಿದು ಮೌನಾಚರಣೆ ಶ್ರದ್ದಾಂಜಲಿ ಸಲ್ಲಿಸಿರೋದನ್ನ ತೀವ್ರವಾಗಿ ಖಂಡಿಸಿರುವ ಶಿವಸೇನೆ ಪಕ್ಷದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಲಬುರಗಿಗೂ ಪಾಲಿಕೆಗೂ ಖಮೇನಿಗೂ ಅದೇನ್&zwnj; ಸಂಬಂಧ? ಇಲ್ಯಾಕೆ ಇಂತಹ ಮೌನಾಚರಣೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್&zwnj; ದಾಳಿಯನ್ನು ಖಂಡಿಸಲಿಲ್ಲ, ಕಂಬನಿ ಸುರಿಸಲಿಲ್ಲ, ತಮ್ಮ ಸಮುದಾಯದ ಯುವತಿಯ ಹತ್ಯೆಗೂ ಮರುಗಲಿಲ್ಲ, ದೂರದ ಇರಾನ್&zwnj; ನಾಯಕ ಸತ್ತರೆ ಇವರಿಲ್ಲಿ ಕಂಬನಿ ಸುರಿಸುತ್ತಾರೆ. ವಾರ್ಡ್&zwnj; 24ರ ಸದಸ್ಯೆ ಸಯೀದಾ ನೂರ್&zwnj; ಫಾತೀಮಾಗೂ ಖಮೇನಿಗೂ ಅದೇನ್ ಸಂಬಂಧ? ಇವರೊಂದಿಗೆ ಬಿಜೆಪಿಯವರೂ ಕೂಡಾ ಸೇರಿಕೊಂಡು ಕಂಬನಿ ಮಿಡಿದು ಸಂತಾಪ ಸೂಚಿಸಿರೋದು ನೋಡಿದರೆ, ಪಾಲಿಕೆಯಲ್ಲಿ ವಿರೋಧ ಪಕ್ಷ ಅದೆಷ್ಟು ದುರ್ಬಲವಾಗಿದೆ ಅನ್ನೋದು ಗೊತ್ತಾಗುತ್ತದೆ. ಸರ್ಕಾರಿ ಕಚೇರಿಯಲ್ಲಿ ಖಮೇನಿಗೆ ಕಂಬನಿ ಮಿಡಿದವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಕಿಡಿ ಕಾರಿದ್ದಾರೆ.&lt;/p&gt;&lt;p&gt;ಖಮೇನಿ ಸಾವಿಗೆ ಸದನದಲ್ಲಿ, ಸಂಸತ್&zwnj;ನಲ್ಲಿ ಸಂತಾಪ ಸೂಚಿಸಲಿಲ್ಲ. ಅಲ್ಲೆಲ್ಲಾ ಇಲ್ಲದ ಕಂಬನಿ ಮಿಡಿತ ಪಾಲಿಕೆಯಲ್ಯಾಕೆ? ಪಾಲಿಕೆ ಮೇಯರ್&zwnj; ಪತಿ ರಾಜೀವ್&zwnj; ಜಾನೆ ಇವರು ಕಾನೂನು ಉಲ್ಲಂಘಿಸಿ ಸಭೆಗಳಲ್ಲಿ ಕಾಣಿಸುತ್ತಿದ್ದಾರೆ. ಇವೆಲ್ಲ ನೋಡಿದರೆ ಜಿಲ್ಲಾ ಉಸ್ತುವಾರಿ ಸಚಿವರ ಕೃಪಾಕಟಾಕ್ಷದಿಂದಲೇ ಘಜನಿ ಘೋರಿ ಸಂತತಿ ಪಾಲಿಕೆಯಲ್ಲಿ ಪಳಿಯುಳಿಕೆ ರೂಪದಲ್ಲಿನ್ನೂ ಉಳಿದಂತಿದೆ ಎಂದು ಸಿದ್ದಲಿಂಗ ಸ್ವಾಮೀಜಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;p&gt;ಖರ್ಗೆಯವರು ಮುಸ್ಲಿಂ ದೇಶಗಳಿಂದ ಭಾರತಕ್ಕೆ ಬರುವ ಪರಿಕರಗಳ ಬಗ್ಗೆ ಮಾತನಾಡುತ್ತ, ತೊಡುವ ಕೇಸರಿ ವಿದೇಶಗಳಿಂದ ಬುರುತ್ತದೆಂದು ಹೇಳಿದ್ದರು, ಇದು ಶುದ್ಧ ಸುಳ್ಳು. ನಮ್ಮ ಬಟ್ಟೆಗಳೇ ವಿದೇಶಗಳಿಗೆ ರಫ್ತಾಗೋದು ಅನ್ನೋದು ವಿಶ್ವದ 9ನೇ ನಾಯಕ ಅರಿಯಲಿ ಎಂದು ಟಾಂಗ್&zwnj; ನೀಡಿದರು. ಕೇಸರಿಗೆ ಅಪಮಾನ ಮಾಡುತ್ತ ಹಿಂದುಗಳನ್ನು ಅಪಮಾನಿಸುತ್ತಿದ್ದಾರೆ, ಇದು ನಿಲ್ಲಬೇಕು, ಇವರು ಬೇಕಾದರೆ ಹೋಗಿ ಪಾಕಿಸ್ತಾನದಲ್ಲಿ ಬಾಷಣ ಮಾಡಲಿ, ನಮ್ಮದೇನು ಅಭ್ಯಂತರವಿಲ್ಲವೆಂದರು.&lt;/p&gt;]]></content:encoded>
            <category>kalaburagi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalaburagi-corporation-row-condolences-for-khamenei-before-budget-session-rav/articleshow-vkgu5ty"/>
        </item>
    </channel>
</rss>
