<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 19 Jul 2026 19:30:46 +0530</lastBuildDate>
        <atom:link href="https://kannada.asianetnews.com/rss/jobs" rel="self" type="application/rss+xml"/>
        <item>
            <title><![CDATA[ಹಾಕಿದ ಬಂಡವಾಳ ಒಂದೇ ತಿಂಗಳಲ್ಲಿ ವಾವಸ್​: ಕೆಲ್ಸ ಬಿಟ್ಟು ಟೀ ಅಂಗಡಿ ಇಟ್ಟ ಯುವಕನ ಇನ್​ಸ್ಪೈರಿಂಗ್​ ಸ್ಟೋರಿ]]></title>
            <link>https://kannada.asianetnews.com/jobs/man-quits-rs-38000-a-month-job-starts-tea-shop-now-earns-rs-2-lakh-every-month/articleshow-5ohmtcs</link>
            <guid isPermaLink="true">https://kannada.asianetnews.com/jobs/man-quits-rs-38000-a-month-job-starts-tea-shop-now-earns-rs-2-lakh-every-month/articleshow-5ohmtcs</guid>
            <pubDate>Sun, 19 Jul 2026 12:41:13 +0530</pubDate>
            <description><![CDATA[&lt;p&gt;₹38,000 ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿ, ಸ್ವಂತ ಚಹಾ ಅಂಗಡಿ ಆರಂಭಿಸಿದ ಯುವಕನೊಬ್ಬನ ಸ್ಪೂರ್ತಿದಾಯಕ ಕಥೆಯಿದು. ಕೇವಲ ₹2 ಲಕ್ಷ ಹೂಡಿಕೆಯಿಂದ ತಿಂಗಳಿಗೆ ₹1 ಲಕ್ಷ ನಿವ್ವಳ ಲಾಭ ಗಳಿಸಿ, ಇದೀಗ ತನ್ನ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwkdfb3z9ah0zh90vxwdx9k,imgname-tea-shop-1784445058403.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ: ಉತ್ತಮ ಡಿಗ್ರಿ ಪಡೆದು ಯಾವುದೋ ಕಂಪೆನಿಯಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿ ಸುಸ್ತಾದವರೇ ಹೆಚ್ಚುಮಂದಿ. ವೈಟ್ ಕಾಲರ್​ ಜಾಬ್​ ಬೇಕೆಂದು ಪಟ್ಟು ಹಿಡಿದು ಕುಳಿತವರು ಹಲವರು. ಚಿಕ್ಕ ಪುಟ್ಟ ಕೆಲಸ ಸಿಕ್ಕರೂ ತಾವು ಪಡೆದ ಡಿಗ್ರಿಗೆ ತಕ್ಕನಾಗಿಲ್ಲ ಎಂದು ಸಿಗುವ ಕೆಲಸವನ್ನೆಲ್ಲಾ ಬಿಟ್ಟು ಕೊನೆಗೆ ನಿರುದ್ಯೋಗಿಯಾಗಿದ್ದೇನೆ ಎಂದು ಸರ್ಕಾರದ ಮೇಲೆ ಗೂಬೆ ಕೂಡ್ರಿಸೋದು, ಎಲ್ಲೆಲ್ಲೂ ನಿರುದ್ಯೋಗ ಎಂದು ಬಾಯಿಬಾಯಿ ಬಡಿದುಕೊಳ್ಳುವುದು ನಡೆದೇ ಇದೆ. ಒಂದೆಡೆ ಇಂಥವರು ತಮ್ಮ ಸರ್ಟಿಫಿಕೇಟ್​ ಹಿಡಿದು ಉದ್ಯೋಗಕಕ್ಕೆ ಅಲೆದಾಡುತ್ತಿದ್ದರೆ, ಅದೇ ಇನ್ನೊಂದೆಡೆ ತಣ್ಣಗೇ ತಾವೇ ಸ್ವ ಉದ್ಯೋಗ ಮಾಡಿ ಲಕ್ಷ ಲಕ್ಷ ದುಡಿಯುತ್ತಿರುವ ಯುವಕರು ಮತ್ತೊಂದೆಡೆ. ಲಕ್ಷ ಲಕ್ಷ ದುಡಿದರೂ ಚಿಕ್ಕಪುಟ್ಟ ಉದ್ಯೋಗ ಮಾಡಿದರೆ ಮದುವೆಯಾಗಲು ಹೆಣ್ಣು ಸಿಗಲ್ಲ ಎನ್ನುವ ಕೊರಗೂ ಕೆಲವು ಯುವಕರದ್ದು. ಆದರೆ ಹಣಕ್ಕಾಗಿಯೇ ಬರುವ ಹುಡುಗಿಯರಿಗೆ ಸೆಡ್ಡು ಹೊಡೆದು ಕೈತುಂಬಾ ಸಂಪಾದನೆ ಮಾಡುವ ಮಾರ್ಗವನ್ನು ಹುಡುಕುವವನೇ ನಿಜವಾದ ಹೀರೋ ಎನ್ನುವ ಸ್ಟೋರಿಯೊಂದು ಇದೀಗ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.&lt;/p&gt;&lt;p&gt;ಇದೀಗ ಅಂಥದ್ದೇ ಒಂದು ಇನ್​ಸ್ಪೈರಿಂಗ್​ ಸ್ಟೋರಿ ಈ ಯುವಕದ್ದು. ಜನರು ನಿರಂತರವಾಗಿ ಸುರಕ್ಷಿತ ಉದ್ಯೋಗವನ್ನು ಹುಡುಕುತ್ತಿರುವಾಗ, ತಮ್ಮದೇ ಆದ ಹಣೆಬರಹವನ್ನು ಸೃಷ್ಟಿಸಿಕೊಳ್ಳಲು ಧೈರ್ಯ ಮಾಡುವ ಕೆಲವರ ಪೈಕಿ ಈ ಯುವಕನ ಸಾಧನೆಯನ್ನು ಅಂಕಿತ್ ಪಾಂಡೆ ಎನ್ನುವವರು ಶೇರ್​ ಮಾಡಿದ್ದಾರೆ. ತಮ್ಮ ನೆರೆಯ ಯುವಕನೊಬ್ಬನ ಸ್ಟೋರಿಯನ್ನು ಅಂಕಿತ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಯುಕ ಒಂದು ಕಂಪೆನಿಯಲ್ಲಿ ಉದ್ಯೋಗಕ್ಕೆ ಇದ್ದ. ಅಲ್ಲಿ ಆತನಿಗೆ ತಿಂಗಳಿಗೆ 38 ಸಾವಿರ ರೂಪಾಯಿ ಸಂಬಳ. ಆದರೆ, ತಾವು ಮಾಡುವ ಕೆಲಸಕ್ಕೆ ಈ ಸಂಬಳ ತುಂಬಾ ಕಡಿಮೆ ಎನ್ನಿಸಿತು. ಹಾಗೆಂದು ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಕುಳಿತುಕೊಳ್ಳಲಿಲ್ಲ. ತಮಗೆ ಇದಕ್ಕಿಂತ ಹೆಚ್ಚಿಗೆ ದುಡಿಯುವ ತಾಕತ್ತು ಇದೆ ಎಂದುಕೊಂಡು ಧೈರ್ಯ ಮಾಡಿ ಕೆಲಸ ಬಿಟ್ಟು ಇದೀಗ ತಿಂಗಳಿಗೆ ಎಲ್ಲಾ ಖರ್ಚು ಕಳೆದು ಕನಿಷ್ಠ 1 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಎನ್ನುವ ಸ್ಟೋರಿ ಶೇರ್​ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ತಿಂಗಳಿಗೆ 38 ಸಾವಿರ ಸಂಬಳ&lt;/strong&gt;&lt;/h2&gt;&lt;p&gt;ಅಂಕಿತ್ ಅವರ ಪ್ರಕಾರ, ಈ ಯುವಕ, ಹಿಂದೆ ಟೆಲಿಪರ್&zwnj;ಫಾರ್ಮನ್ಸ್&zwnj;ನಲ್ಲಿ ಕೆಲಸ ಮಾಡುತ್ತಿದ್ದರು, ಸುಮಾರು ₹38,000 ಮಾಸಿಕ ಸಂಬಳವನ್ನು ಗಳಿಸುತ್ತಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿತ. ಬಿಡುವೇ ಇಲ್ಲದ ಕೆಲಸ. ಆದರೆ ತಮ್ಮ ಸಂಬಳ ಕಡಿಮೆ ಎನ್ನಿಸಿತು. ಕಳೆದ ಮೇ ತಿಂಗಳಲ್ಲಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಅವರು ಕೆಲಸ ತ್ಯಜಿಸಿದಾಗ, ಅವರ ಸುತ್ತಲಿನ ಜನರು ಮತ್ತು ಪರಿಚಯಸ್ಥರು ಟೀಕಿಸಿದರು. ಆದರೆ ಯುವಕ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ, ಆಟೋ ಸ್ಟ್ಯಾಂಡ್ ಬಳಿ ಚಹಾ ಅಂಗಡಿಯನ್ನು ತೆರೆದರು. ಆರಂಭದಲ್ಲಿ ಮಾಡಿದ್ದು, ಸುಮಾರು 2 ಲಕ್ಷ ರೂಪಾಯಿ ಹೂಡಿಕೆ. ಆಟೋ ಸ್ಟ್ಯಾಂಡ್ ಬಳಿ ಸುಂದರವಾಗಿ ವಿನ್ಯಾಸಗೊಳಿಸಲಾದ ಚಹಾ ಅಂಗಡಿಯನ್ನು ತೆರೆದರು. ಅಂಗಡಿಯನ್ನು ಪರಿಣಾಮಕಾರಿಯಾಗಿ ನಡೆಸಲು, ಅವರು ಚಹಾ ತಯಾರಿಸಲು ಮತ್ತು ಬಡಿಸಲು ಇಬ್ಬರು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಂಡರು. ಅವರು ಒಂದು ಕಪ್ ಚಹಾವನ್ನು ₹10 ಕ್ಕೆ ಮತ್ತು ಒಂದು ಕಪ್ ಅನ್ನು ₹20 ಕ್ಕೆ ಮಾರಾಟ ಮಾಡುತ್ತಾರೆ.&lt;/p&gt;&lt;h3&gt;&lt;strong&gt;ಮಾಸಿಕ ವಹಿವಾಟು ₹1.8 ಲಕ್ಷ&lt;/strong&gt;&lt;/h3&gt;&lt;p&gt;ಅಂಗಡಿ ತೆರೆದ ಕೂಡಲೇ ಅವರ ಈ ಕಲ್ಪನೆ ಜನಪ್ರಿಯವಾಯಿತು. ಇಂದು, ಅವರ ಅಂಗಡಿಯು ಪ್ರತಿದಿನ ಸುಮಾರು 400 ಕಪ್ ಚಹಾವನ್ನು ಮಾರಾಟ ಮಾಡುತ್ತದೆ. ಇದು ಅವರ ದೈನಂದಿನ ಆದಾಯವನ್ನು ಸುಮಾರು ₹6,000 ಕ್ಕೆ ತರುತ್ತದೆ, ಅಂದರೆ ಮಾಸಿಕ ವಹಿವಾಟು ಸುಮಾರು ₹1.8 ಲಕ್ಷ. ಅವರ ವೆಚ್ಚಗಳು ಹೀಗಿವೆ:&lt;/p&gt;&lt;p&gt;ಅಂಗಡಿ ಬಾಡಿಗೆ: ₹25,000&lt;/p&gt;&lt;p&gt;ಸಿಬ್ಬಂದಿ ವೇತನ: ₹30,000&lt;/p&gt;&lt;p&gt;ವಿದ್ಯುತ್ ಮತ್ತು ಕಚ್ಚಾ ವಸ್ತುಗಳು (ಹಾಲು, ಸಕ್ಕರೆ, ಎಲೆಗಳು, ಇತ್ಯಾದಿ): ₹25,000&lt;/p&gt;&lt;p&gt;ನಿವ್ವಳ ಲಾಭ: ₹1 ಲಕ್ಷ&lt;/p&gt;&lt;p&gt;ಈ ಎಲ್ಲಾ ಖರ್ಚುಗಳನ್ನು ಕಡಿತಗೊಳಿಸಿದ ನಂತರವೂ, ಅವರು ಪ್ರತಿ ತಿಂಗಳು ಸುಮಾರು ₹1 ಲಕ್ಷ ನಿವ್ವಳ ಲಾಭವನ್ನು ಮನೆಗೆ ತರುತ್ತಾರೆ. ಇದು ಅವರ ಹಿಂದಿನ ಸಂಬಳಕ್ಕಿಂತ (₹38,000) ಸುಮಾರು ಎರಡೂವರೆ ಪಟ್ಟು ಹೆಚ್ಚು. ಈ ಕಥೆ ಚಹಾಕ್ಕೆ ಸೀಮಿತವಾಗಿಲ್ಲ. ಅವರ ಯಶಸ್ವಿ ವ್ಯವಹಾರದ ನಂತರ, ಅವರು ಅದನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಅಂಗಡಿಯ ಬಳಿ ವಡಾ ಪಾವ್, ಸಮೋಸಾ ಮತ್ತು ಜಿಲೇಬಿಗಳನ್ನು ಮಾರಾಟ ಮಾಡುವ ಹೊಸ ಕೌಂಟರ್ ಅನ್ನು ತೆರೆದರು. ಈ ಹೊಸ ಆರಂಭವನ್ನು ಆಚರಿಸಲು, ಅವರು ತಮಗೆ ಸ್ವೀಟ್​ ನೀಡಿ ಆಹ್ವಾನ ನೀಡಿರುವುದಾಗಿ ಅಂಕಿತ್&zwnj; ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/jobs/man-quits-rs-38000-a-month-job-starts-tea-shop-now-earns-rs-2-lakh-every-month/articleshow-5ohmtcs"/>
        </item>
        <item>
            <title><![CDATA[ಕರ್ನಾಟಕ ಲೋಕಾಯುಕ್ತ ನೇಮಕಾತಿ 2026: ಕ್ಲರ್ಕ್, ಟೈಪಿಸ್ಟ್ ಹುದ್ದೆ, ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ!]]></title>
            <link>https://kannada.asianetnews.com/jobs/karnataka-lokayukta-recruitment-2026-apply-online-for-clerk-and-typist-posts-salary-up-to-67600-gdp/articleshow-61odw3i</link>
            <guid isPermaLink="true">https://kannada.asianetnews.com/jobs/karnataka-lokayukta-recruitment-2026-apply-online-for-clerk-and-typist-posts-salary-up-to-67600-gdp/articleshow-61odw3i</guid>
            <pubDate>Sat, 18 Jul 2026 13:33:53 +0530</pubDate>
            <description><![CDATA[ಕರ್ನಾಟಕ ಲೋಕಾಯುಕ್ತವು 25 ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಪಿಯುಸಿ ಪಾಸಾದ ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ಮಾಸಿಕ 67,600 ರೂ. ವರೆಗೆ ವೇತನ ನೀಡಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwjpwac1efee4yf0v117axvs,imgname----------------------95--1783039404417.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಲೋಕಾಯುಕ್ತವು ಖಾಲಿ ಇರುವ ಕ್ಲರ್ಕ್ (ಗುಮಾಸ್ತ) ಮತ್ತು ಟೈಪಿಸ್ಟ್ (ಬೆರಳಚ್ಚುಗಾರ) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್&zwnj;ಲೈನ್&zwnj; ಮೂಲಕ ಅರ್ಜಿ ಸಲ್ಲಸಬಹುದು.&lt;/p&gt;&lt;h2&gt;ಹುದ್ದೆಗಳ ವಿವರ:&lt;/h2&gt;&lt;p&gt;ಸಂಸ್ಥೆಯ ಹೆಸರು: ಕರ್ನಾಟಕ ಲೋಕಾಯುಕ್ತ&lt;/p&gt;&lt;p&gt;ಒಟ್ಟು ಹುದ್ದೆಗಳ ಸಂಖ್ಯೆ: 25&lt;/p&gt;&lt;p&gt;ಹುದ್ದೆಯ ಹೆಸರು: ಕ್ಲರ್ಕ್ ಮತ್ತು ಟೈಪಿಸ್ಟ್&lt;/p&gt;&lt;p&gt;ಉದ್ಯೋಗ ಸ್ಥಳ: ಬೆಂಗಳೂರು (ಕರ್ನಾಟಕ)&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ:&lt;/h2&gt;&lt;p&gt;ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಯುಸಿ ಪೂರ್ಣಗೊಳಿಸಿರಬೇಕು.&lt;/p&gt;&lt;h2&gt;ವೇತನ:&lt;/h2&gt;&lt;p&gt;ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 34,100-67,600 ರು. ವರೆಗೆ ವೇತನವನ್ನು ನೀಡಲಾಗುತ್ತದೆ&lt;/p&gt;&lt;h2&gt;ವಯೋಮಿತಿ:&lt;/h2&gt;&lt;p&gt;ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.&lt;/p&gt;&lt;h3&gt;ವಯೋಮಿತಿ ಸಡಿಲಿಕೆ:&lt;/h3&gt;&lt;p&gt;2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ&lt;/p&gt;&lt;p&gt;ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ: 5 ವರ್ಷ&lt;/p&gt;&lt;h2&gt;ಅರ್ಜಿ ಶುಲ್ಕದ ವಿವರ&lt;/h2&gt;&lt;p&gt;ಕ್ಯಾಟ್ 2A, 2B, 3A, 3B, ಮಾಜಿ ಸೇವಾ ಅಭ್ಯರ್ಥಿಗಳಿಗೆ: 250&lt;/p&gt;&lt;p&gt;ಎಸ್&zwnj;ಸಿ/ಎಸ್&zwnj;ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇಲ್ಲ&lt;/p&gt;&lt;p&gt;ಪಾವತಿ ವಿಧಾನ: ಆನ್&zwnj;ಲೈನ್&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?&lt;/h2&gt;&lt;p&gt;ಮೆರಿಟ್ ಪಟ್ಟಿ&lt;/p&gt;&lt;p&gt;ಸಂದರ್ಶನ&lt;/p&gt;&lt;h2&gt;ಅರ್ಜಿ ಸಲ್ಲಿಸುವುದು ಹೇಗೆ:&lt;/h2&gt;&lt;p&gt;ಮೊದಲು ಕರ್ನಾಟಕ ಲೋಕಾಯುಕ್ತದ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ ಅಥವಾ ಕೆಳಗಿನ ಲಿಂಕ್ ಬಳಸಿ.&lt;/p&gt;&lt;p&gt;https://lokayukta.karnataka.gov.in/onlinerecruitment/ctk/home.php&lt;/p&gt;&lt;p&gt;ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್&zwnj;ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.&lt;/p&gt;&lt;p&gt;ನಿಮ್ಮ ಇತ್ತೀಚಿನ ಛಾಯಾಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ಅಪ್&zwnj;ಲೋಡ್ ಮಾಡಿ.&lt;/p&gt;&lt;p&gt;ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್&zwnj;ಲೈನ್ ಮೂಲಕ ಪಾವತಿಸಿ.&lt;/p&gt;&lt;p&gt;ಕೊನೆಯದಾಗಿ, ಎಲ್ಲವನ್ನೂ ಮರುಪರಿಶೀಲಿಸಿ &lsquo;Submit&rsquo; ಬಟನ್ ಒತ್ತಿ. ಮುಂದಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ: ಜುಲೈ 17-2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್&zwnj; 17-2026&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-lokayukta-recruitment-2026-apply-online-for-clerk-and-typist-posts-salary-up-to-67600-gdp/articleshow-61odw3i"/>
        </item>
        <item>
            <title><![CDATA[ಒಂದೇ ರಾತ್ರಿಗೆ ಸಿಗುತ್ತೆ 31 ಸಾವಿರ ರೂ ಸಂಬಳ.! ವೈರಲ್ ಆಗ್ತಿದೆ ಈ ಕಂಪೆನಿಯ ಜಾಬ್ ಆಫರ್‌!]]></title>
            <link>https://kannada.asianetnews.com/viral/spend-a-night-in-a-haunted-house-earn-31000-japans-creepiest-job-goes-viral/articleshow-6a2tw50</link>
            <guid isPermaLink="true">https://kannada.asianetnews.com/viral/spend-a-night-in-a-haunted-house-earn-31000-japans-creepiest-job-goes-viral/articleshow-6a2tw50</guid>
            <pubDate>Sat, 18 Jul 2026 20:08:08 +0530</pubDate>
            <description><![CDATA[&lt;p&gt;ಜಪಾನ್&zwnj;ನಲ್ಲಿ ಆತ್ಮಹತ್ಯೆ ಅಥವಾ ಕೊಲೆ ನಡೆದ 'ಜಿಕೊ ಬುಕ್ಕೆನ್' ಮನೆಗಳನ್ನು ಮಾರಾಟ ಮಾಡಲು ರಿಯಲ್ ಎಸ್ಟೇಟ್ ಕಂಪನಿಗಳು ಹೊಸ ಹಾರರ್ ಟ್ರಿಕ್ ಬಳಸ್ತಿವೆ. ಇಂತಹ ಮನೆಗಳಲ್ಲಿ ದೆವ್ವಗಳಿಲ್ಲ ಎಂದು ಸಾಬೀತುಪಡಿಸಲು ಹೈಟೆಕ್ ಸಾಧನಗಳೊಂದಿಗೆ ರಾತ್ರಿ ಕಳೆಯುವ ವಿಶೇಷ ತನಿಖಾಧಿಕಾರಿಗಳಿಗೆ ಸುಮಾರು ₹31,000 ನೀಡಲಾಗುತ್ತಿದೆ. ಈ ರಾತ್ರಿ ತಪಾಸಣೆಯ ವರದಿಯು ಗ್ರಾಹಕರಲ್ಲಿ ಧೈರ್ಯ ತುಂಬಲು ನೆರವಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxtsff85pc2n0x4b47ejbbgb,imgname-japanese-company-s-viral-job-offer-1784384306436.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟೋಕಿಯೋ:&lt;/strong&gt; ಜಪಾನ್&zwnj;ನಲ್ಲಿ ಆತ್ಮಹತ್ಯೆ, ಕೊಲೆ ಅಥವಾ ಒಂಟಿ ಸಾವುಗಳಂತಹ ದುರಂತ ಘಟನೆಗಳು ನಡೆದ ಮನೆಗಳನ್ನು &quot;ಜಿಕೊ ಬುಕ್ಕೆನ್&quot; (ಕಳಂಕಿತ ಆಸ್ತಿಗಳು) ಎಂದು ಕರೆಯಲಾಗುತ್ತದೆ. ಇಂತಹ ಮನೆಗಳು ದುರದೃಷ್ಟ ತರುತ್ತವೆ ಅಥವಾ ಆಧ್ಯಾತ್ಮಿಕವಾಗಿ ಅಪವಿತ್ರವಾಗಿರುತ್ತವೆ ಎಂಬ ಬಲವಾದ ನಂಬಿಕೆ ಜಪಾನಿಯರಲ್ಲಿದೆ. ಹೀಗಾಗಿ, ಸಾವಿರಾರು ಸುಸಜ್ಜಿತ ಮನೆಗಳು ವರ್ಷಗಟ್ಟಲೆ ಖಾಲಿ ಬಿದ್ದಿವೆ. ಈ ಸಮಸ್ಯೆಗೆ ಪರಿಹಾರವಾಗಿ ಜಪಾನ್&zwnj;ನ ರಿಯಲ್ ಎಸ್ಟೇಟ್ ಕಂಪನಿಯೊಂದು ಅತ್ಯಂತ ವಿಚಿತ್ರ ಹಾಗೂ ಅಸಾಮಾನ್ಯ ಮಾರ್ಗವನ್ನು ಕಂಡುಕೊಂಡಿದೆ.&lt;/p&gt;&lt;p&gt;&lt;strong&gt;ಪ್ಯಾರಾನಾರ್ಮಲ್ ತನಿಖಾ ಸಿಬ್ಬಂದಿ ನೇಮಕ..!&lt;/strong&gt;&lt;/p&gt;&lt;p&gt;ಪ್ರಾಪರ್ಟಿ ಮ್ಯಾನೇಜ್ಮೆಂಟ್ ಕಂಪನಿಯಾದ 'ಕಚಿಮೋಡೆ' ಇಂತಹ ಮನೆಗಳಲ್ಲಿ ಯಾವುದೇ ಅಲೌಕಿಕ ಅಥವಾ ದೆವ್ವದ ಚಟುವಟಿಕೆಗಳು ಇಲ್ಲ ಎಂಬುದನ್ನು ಸಾಬೀತುಪಡಿಸಲು ವಿಶೇಷ &quot;ನೈಟ್ ಡಿಟೆಕ್ಟಿವ್ಸ್ ಗಳನ್ನು&quot; ನೇಮಿಸಿಕೊಳ್ಳುತ್ತಿದೆ. ಈ ಡಿಟೆಕ್ಟಿವ್ಸ್ ಗಳು ಹಾರರ್ ಸಿನಿಮಾಗಳಂತೆ ಪ್ರಾಣ ಕೈಯಲ್ಲಿ ಹಿಡಿದು ಇಡೀ ರಾತ್ರಿ ಆ ಮನೆಯಲ್ಲೇ ಕಳೆಯಬೇಕಾಗುತ್ತದೆ. ಈ ವಿಶೇಷ ಸೇವೆಗೆ ಕಂಪನಿಯು ಪ್ರತಿ ಆಸ್ತಿಗೆ 88,000 ಯೆನ್ (ಸುಮಾರು ₹31,000) ಶುಲ್ಕ ವಿಧಿಸುತ್ತದೆ.&lt;/p&gt;&lt;p&gt;&lt;strong&gt;ಹೈಟೆಕ್ ಗ್ಯಾಜೆಟ್&zwnj;ಗಳೊಂದಿಗೆ ತಪಾಸಣೆ:&lt;/strong&gt;&lt;/p&gt;&lt;p&gt;ಈ ಕಾರ್ಯಾಚರಣೆಯು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಡೆಯುತ್ತದೆ. ತನಿಖಾಧಿಕಾರಿಗಳು ಕೇವಲ ಮಲಗುವುದಿಲ್ಲ; ಬದಲಿಗೆ ವೀಡಿಯೊ ಕ್ಯಾಮೆರಾಗಳು, ಆಡಿಯೊ ರೆಕಾರ್ಡರ್&zwnj;ಗಳು, ಥರ್ಮಲ್ ಇಮೇಜಿಂಗ್ ಸಾಧನಗಳು ಮತ್ತು ವಿದ್ಯುತ್ಕಾಂತೀಯ ಕ್ಷೇತ್ರ ಪತ್ತೆಕಾರಕಗಳ (EMF) ಸಹಾಯದಿಂದ ಮನೆಯ ತಾಪಮಾನ, ಆರ್ದ್ರತೆ, ವಾಯು ಒತ್ತಡ ಹಾಗೂ ವಿಚಿತ್ರ ಶಬ್ದಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ರಾತ್ರಿಯ ವಾಸ್ತವ್ಯದ ಬಳಿಕ ಯಾವುದೇ ಅಸಹಜ ಘಟನೆ ನಡೆಯದಿದ್ದರೆ, ಕಂಪನಿಯು ಒಂದು ವಿವರವಾದ ವರದಿಯನ್ನು ಸಿದ್ಧಪಡಿಸಿ ಮಾಲೀಕರಿಗೆ ನೀಡುತ್ತದೆ. ಇದು ಖರೀದಿದಾರರಿಗೆ ಧೈರ್ಯ ತುಂಬಲು ನೆರವಾಗುತ್ತದೆ.&lt;/p&gt;&lt;p&gt;&lt;strong&gt;ನಿಜವಾಗಿಯೂ ದೆವ್ವಗಳಿವೆಯೇ?&lt;/strong&gt;&lt;/p&gt;&lt;p&gt;ಕಂಪನಿಯ ಅಧ್ಯಕ್ಷ ಕಜುತೋಶಿ ಕೊಡಮಾ ಅವರ ಪ್ರಕಾರ, ಕೆಲವು ತಪಾಸಣೆಗಳ ಸಂದರ್ಭದಲ್ಲಿ ಕ್ಯಾಮೆರಾಗಳು ತಂತಾನೇ ಆಫ್ ಆಗುವುದು ಅಥವಾ ಮೈಕ್ರೊಫೋನ್&zwnj;ಗಳು ಕೆಲಸ ಮಾಡುವುದನ್ನು ನಿಲ್ಲಿಸುವಂತಹ ವಿಚಿತ್ರ ಘಟನೆಗಳು ನಡೆದಿವೆ. ಆದರೆ ಇವು ಅತ್ಯಂತ ಅಪರೂಪ. ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಅಧಿಸಾಮಾನ್ಯ ಚಟುವಟಿಕೆಗಳು ಕಂಡು ಬರುವುದಿಲ್ಲ. ಜಪಾನ್ ಕಾನೂನಿನ ಪ್ರಕಾರ ಆಸ್ತಿಯ ಇತಿಹಾಸವನ್ನು ಗ್ರಾಹಕರಿಗೆ ತಿಳಿಸುವುದು ಕಡ್ಡಾಯವಾಗಿರುವುದರಿಂದ, ಇಂತಹ ಮನೆಗಳ ಬೆಲೆಯನ್ನು ದೊಡ್ಡ ನಗರಗಳಲ್ಲಿ ಶೇ. 30 ರಷ್ಟು ಮತ್ತು ಸಣ್ಣ ಪಟ್ಟಣಗಳಲ್ಲಿ ಶೇ. 50 ರಷ್ಟು ಕಡಿತಗೊಳಿಸಿ ಮಾರಾಟ ಮಾಡಲಾಗುತ್ತದೆ.&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/spend-a-night-in-a-haunted-house-earn-31000-japans-creepiest-job-goes-viral/articleshow-6a2tw50"/>
        </item>
        <item>
            <title><![CDATA[ಕೋಟಿ ಕೋಟಿ ಸಂಪಾದನೆ... ಆದರೂ ಹಳೇ ಕಾರು! ಈ ಬೆಂಗಳೂರಿಗನ ಸರಳ ಜೀವನದ ಹಿಂದೆ ಅಡಗಿದೆ ದೊಡ್ಡ ಸತ್ಯ]]></title>
            <link>https://kannada.asianetnews.com/viral/old-car-no-iphone-zero-show-off-bengaluru-mans-money-philosophy-wins-praise/articleshow-9za8hfm</link>
            <guid isPermaLink="true">https://kannada.asianetnews.com/viral/old-car-no-iphone-zero-show-off-bengaluru-mans-money-philosophy-wins-praise/articleshow-9za8hfm</guid>
            <pubDate>Sat, 18 Jul 2026 17:25:14 +0530</pubDate>
            <description><![CDATA[&lt;p&gt;ಶ್ರೀಮಂತಿಕೆಯನ್ನು ಪ್ರದರ್ಶಿಸುವುದರಿಂದ ದೈನಂದಿನ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತದೆ ಎಂದು ನಂಬಿ, ಉದ್ದೇಶಪೂರ್ವಕವಾಗಿ ಲೋ-ಪ್ರೊಫೈಲ್ ಕಾಯ್ದುಕೊಳ್ಳುತ್ತಿರುವ ಬೆಂಗಳೂರಿನ ಮೀನಾಂಕ್ ಮಿನ್ನು ಅವರ ಲಿಂಕ್ಡ್&zwnj;ಇನ್ ಪೋಸ್ಟ್ ವೈರಲ್ ಆಗಿದೆ. ಐಫೋನ್ ಮಾರಿ ದುಬಾರಿ ಪರ್ಯಾಯ ಬಳಸುವ ಮತ್ತು ಹಳೇ ಕಾರ್ ಓಡಿಸುವ ಮೂಲಕ ಇವರು 'ಶ್ರೀಮಂತಿಕೆಯ ಗುಪ್ತ ತೆರಿಗೆ'ಯಿಂದ ಬಚಾವಾಗುವ ತಂತ್ರ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxtgx3c28r7a6kn58vr9rpxx,imgname-bengaluru-man-s-linkedin-post-goes-viral.-image-source--1--1784375315842.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿಯಲ್ಲಿ ತೋರ್ಪಡಿಕೆಯ ಐಷಾರಾಮಿ ಜೀವನವೇ ಮೇಲುಗೈ ಸಾಧಿಸುತ್ತಿರುವ ಇಂದಿನ ದಿನಗಳಲ್ಲಿ, ಬೆಂಗಳೂರಿನ ವೃತ್ತಿಪರರೊಬ್ಬರು ತಮ್ಮ ವಿಭಿನ್ನ ಆರ್ಥಿಕ ತಂತ್ರದ ಮೂಲಕ ಇಂಟರ್ನೆಟ್&zwnj;ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಲಿಂಕ್ಡ್&zwnj;ಇನ್&zwnj;ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೀನಾಂಕ್ ಮಿನ್ನು ಅವರು, ತಾವು ಶ್ರೀಮಂತರೆಂದು ಬಿಂಬಿಸಿಕೊಳ್ಳುವುದನ್ನು ಪ್ರಜ್ಞಾಪೂರ್ವಕವಾಗಿ ಹೇಗೆ ನಿಲ್ಲಿಸಿದರು ಮತ್ತು ಅದರಿಂದ ತಮಗೆ ದೈನಂದಿನ ವೆಚ್ಚಗಳಲ್ಲಿ ಎಷ್ಟು ಲಾಭವಾಗುತ್ತಿದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಬಡವನಂತೆ ಕಾಣುವುದರ ಹಿಂದಿನ ಕಾರಣ:&lt;/strong&gt;&lt;/p&gt;&lt;p&gt;ಮೀನಾಂಕ್ ಅವರ ಪ್ರಕಾರ, ಭಾರತದಲ್ಲಿ ನಾವು ಆಡಂಬರ ಪ್ರದರ್ಶಿಸಿದ ತಕ್ಷಣ ನಮ್ಮ ಸುತ್ತಲಿನ ಸಮಾಜ ನಮಗೆ ಗೊತ್ತಿಲ್ಲದಂತೆ 'ಶ್ರೀಮಂತಿಕೆಯ ತೆರಿಗೆ' ವಿಧಿಸಲು ಆರಂಭಿಸುತ್ತದೆ. &quot;ನಾನು ಯಾವಾಗಲೂ ಬಡವನಾಗಿ ಕಾಣಲು ಪ್ರಯತ್ನಿಸುತ್ತೇನೆ. ಇದು ಮಾರುಕಟ್ಟೆಯಲ್ಲಿ ಕಠಿಣವಾಗಿ ಮಾತುಕತೆ ನಡೆಸಿ ಬೆಲೆ ಇಳಿಸಲು ನನಗೆ ಸಹಾಯ ಮಾಡುತ್ತದೆ&quot; ಎಂದು ಅವರು ಬರೆದಿದ್ದಾರೆ. ಜನರು ನಿಮ್ಮನ್ನು ನೀವು ಹೇಗೆ ಪ್ರಸ್ತುತಪಡಿಸುತ್ತೀರಿ ಎಂಬುದರ ಆಧಾರದ ಮೇಲೆ ಬೆಲೆ ನಿಗದಿಪಡಿಸುತ್ತಾರೆ ಎಂಬುದು ಅವರ ಬಲವಾದ ವಾದ. ಉದಾಹರಣೆಗೆ, ನಿಮ್ಮ ಕೈಯಲ್ಲಿ ಐಫೋನ್ ಇದ್ದರೆ ₹200ರ ಬ್ಯಾಕ್ ಕವರ್ ಬೆಲೆ ₹700 ಆಗುತ್ತದೆ, ₹20ರ ಆಲೂಗಡ್ಡೆ ₹28ಕ್ಕೆ ಏರುತ್ತದೆ ಮತ್ತು ಟ್ರಾಫಿಕ್ ಪೊಲೀಸರು ವಿಧಿಸುವ ದಂಡವೂ ತಂತಾನೇ ಹೆಚ್ಚಾಗುತ್ತದೆ ಎಂದು ಅವರು ಉದಾಹರಣೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಆ್ಯಪಲ್ ಫೋನ್, &amp;nbsp;ಮ್ಯಾಕ್&zwnj;ಬುಕ್ ಗೆ ಗುಡ್&zwnj;ಬೈ... ಇದರ ಹಿಂದಿದೆ ಅಸಲಿ ಟ್ವಿಸ್ಟ್!&lt;/strong&gt;&lt;/p&gt;&lt;p&gt;ಈ ತಂತ್ರಕ್ಕಾಗಿ ಮಿನ್ನು ಅವರು ತಮ್ಮ ದುಬಾರಿ ಐಫೋನ್ ಮತ್ತು ಮ್ಯಾಕ್&zwnj;ಬುಕ್ ಸಾಧನಗಳನ್ನು ಮಾರಿ, ಅವುಗಳ ಬದಲಿಗೆ ವಿವೋ ಮತ್ತು ಆಸಸ್ (ASUS) ಬ್ರ್ಯಾಂಡ್&zwnj;ಗಳ ಗ್ಯಾಜೆಟ್&zwnj;ಗಳನ್ನು ಖರೀದಿಸಿದ್ದಾರೆ. ಅಷ್ಟೇ ಅಲ್ಲದೆ, ಹೊಸ ಕಾರು ಖರೀದಿಸುವ ಆರ್ಥಿಕ ಶಕ್ತಿ ಇದ್ದರೂ ಅವರು ಇಂದಿಗೂ 10 ವರ್ಷ ಹಳೆಯ ಹ್ಯಾಚ್&zwnj;ಬ್ಯಾಕ್ ಕಾರನ್ನೇ ಬಳಸುತ್ತಿದ್ದಾರೆ. ಇಲ್ಲಿರುವ ತಮಾಷೆಯ ವಿಷಯವೆಂದರೆ, ಅವರು ಖರೀದಿಸಿದ ಹೊಸ ವಿವೋ ಮತ್ತು ಆಸಸ್ ಸಾಧನಗಳು ಅವರು ಮಾರಾಟ ಮಾಡಿದ ಆಪಲ್ ಉತ್ಪನ್ನಗಳಿಗಿಂತಲೂ ಹೆಚ್ಚು ದುಬಾರಿಯಾಗಿದ್ದವು! ಅಂದರೆ, ಬಜೆಟ್ ಕಡಿತ ಮಾಡುವುದು ಅವರ ಗುರಿಯಾಗಿರಲಿಲ್ಲ, ಬದಲಿಗೆ ಆಪಲ್ ಸಾಧನಗಳನ್ನು ಹಿಡಿದು ಓಡಾಡುವಾಗ ಸಮಾಜ ವಿಧಿಸುವ 'ಗಮನದ ತೆರಿಗೆ'ಯಿಂದ ಪಾರಾಗುವುದು ಅವರ ಆಶಯವಾಗಿತ್ತು.&lt;/p&gt;&lt;p&gt;&lt;strong&gt;ಹೆಸರಿಗಿಂತ ನೆಮ್ಮದಿ ಮುಖ್ಯ... ಅನಾಮಧೇಯ ಜೀವನದ ಮಂತ್ರ!&lt;/strong&gt;&lt;/p&gt;&lt;p&gt;ಭಾರತದಲ್ಲಿ ನಿಜವಾದ ಬಿಲಿಯನ್ ಡಾಲರ್ ಉದ್ಯಮಗಳು ಸ್ಟಾರ್&zwnj;ಬಕ್ಸ್&zwnj;ನಂತಹ ಹೈ-ಫೈ ಕೆಫೆಗಳಲ್ಲಿ ನಡೆಯುವುದಿಲ್ಲ, ಬದಲಿಗೆ ಹಳೆಯ ಶಾಲಾ ಕೆಫೆಗಳಲ್ಲಿ ಅತ್ಯಂತ ಸರಳವಾಗಿ ಮಾತುಕತೆ ನಡೆಸುವ ನೈಜ ಶ್ರೀಮಂತರಿಂದ ನಡೆಯುತ್ತವೆ ಎಂದು ಮಿನ್ನು ಅಭಿಪ್ರಾಯಪಟ್ಟಿದ್ದಾರೆ. &quot;ಕಡಿಮೆ ಫ್ಲ್ಯಾಶ್ ಮಾಡಿ, ಶಾಂತಿಯುತವಾಗಿ ಬದುಕಿ. ಬೇರೆಯವರು ಗಮನ ಸೆಳೆಯುವ ತೆರಿಗೆಯನ್ನು ಪಾವತಿಸಲಿ&quot; ಎಂದು ಅವರು ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.&lt;/p&gt;&lt;p&gt;ಈ ಪೋಸ್ಟ್ ಲಿಂಕ್ಡ್&zwnj;ಇನ್&zwnj;ನಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದ್ದು, ಕೆಲವರು ಈ ಸರಳತೆಯ ತತ್ವವನ್ನು ಒಪ್ಪಿಕೊಂಡರೆ, ಇನ್ನು ಕೆಲವರು ಗ್ಯಾಜೆಟ್&zwnj;ಗಳ ದಕ್ಷತೆ ಮತ್ತು ಮೌಲ್ಯದ ಆಧಾರದ ಮೇಲೆ ವಸ್ತುಗಳನ್ನು ಕೊಳ್ಳಬೇಕೇ ಹೊರತು ಕೇವಲ ಲೋ-ಪ್ರೊಫೈಲ್ ಕಾಯ್ದುಕೊಳ್ಳಲು ಅಲ್ಲ ಎಂದು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/old-car-no-iphone-zero-show-off-bengaluru-mans-money-philosophy-wins-praise/articleshow-9za8hfm"/>
        </item>
        <item>
            <title><![CDATA['ಶೌಚಾಲಯ ಬಳಸಬಹುದಾ' ಕೇಳಿದ್ದೇ ತಪ್ಪಾಯ್ತು: ಗಿಗ್​ ವರ್ಕ್​ರ್​ಗೆ 5 ದಿನ ಕೆಲಸ ಸಿಗದಂತೆ ಮಾಡಿದ ಆ 'ಶ್ರೀಮಂತ']]></title>
            <link>https://kannada.asianetnews.com/india-news/denied-washroom-access-then-hit-with-a-1-star-rating-claims-gig-worker-suc/articleshow-a892sc7</link>
            <guid isPermaLink="true">https://kannada.asianetnews.com/india-news/denied-washroom-access-then-hit-with-a-1-star-rating-claims-gig-worker-suc/articleshow-a892sc7</guid>
            <pubDate>Thu, 16 Jul 2026 19:58:34 +0530</pubDate>
            <description><![CDATA[ಮೂರು ಗಂಟೆಗಳ ಕಾಲ ಕೆಲಸ ಮಾಡಿದ ನಂತರ ಶೌಚಾಲಯ ಬಳಸಲು ಕೇಳಿದ ಗಿಗ್ ವರ್ಕರ್&zwnj;ಗೆ ಗ್ರಾಹಕರೊಬ್ಬರು ಅನುಮತಿ ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಕಳಪೆ ರೇಟಿಂಗ್ ನೀಡಿ, ಆಕೆಗೆ ಐದು ದಿನಗಳ ಕಾಲ ಕೆಲಸ ಸಿಗದಂತೆ ಮಾಡಿದ್ದಾರೆ. ಈ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ಗಿಗ್ ವರ್ಕರ್&zwnj;ಗಳ ಸ್ಥಿತಿಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxnn824dbrt29xm03830tj9n,imgname-gig-worker-1784212097165.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆ, ಕಚೇರಿಗಳನ್ನು ಶುಚಿಯಾಗಿಟ್ಟುಕೊಳ್ಳಲು, ತಮ್ಮಿಂದ ಸಾಧ್ಯವಾಗದ ಕೆಲಸ ಮಾಡಲು ಕೆಲವು ಮಧ್ಯಮ ವರ್ಗದವರು, ಶ್ರೀಮಂತರು ಎನ್ನಿಸಿಕೊಂಡವರಿಗೆ ಕೆಲಸದವರು ಬೇಕು. ಆಗ ಜಾತಿ, ಪಾತಿ, ಧರ್ಮ-ಗಿರ್ಮ ಯಾವುದೂ ಬರುವುದಿಲ್ಲ. ಏಕೆಂದರೆ, ಆ ಕೆಲಸ ಅವರಿಗೆ ಮಾಡಲು ಬಂದಿರುವುದಿಲ್ಲ, ಬಂದರೂ ಅದು ಅತ್ಯಂತ ಕನಿಷ್ಠ ಕೆಲಸ ಎನ್ನುವ ಭ್ರಮೆಯಲ್ಲಿ ತೇಲಾಡುವ ಮಂದಿ ಇವರು. ಇಂಥದ್ದೇ ಒಂದು ಪ್ರಕರಣದಲ್ಲಿ ಹೇಗೆ, ಅಧಿಕಾರದ ಮದದಲ್ಲಿ, ಗಿಗ್​ ವರ್ಕರ್​ ಒಬ್ಬರ ಕೆಲಸವನ್ನು ಒಬ್ಬ ವ್ಯಕ್ತಿ ಕಸಿದುಕೊಂಡರು ಎನ್ನುವಂಥ ಶಾಕಿಂಗ್​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಈಗ ವೈರಲ್​ ಆಗುತ್ತಿದೆ.&lt;/p&gt;&lt;p&gt;ಒಬ್ಬರ ಮನೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕೆಲಸ ಮಾಡಿದ ಬಳಿಕ ಅಲ್ಲಿಯ ಶೌಚಾಲಯ ಬಳಸಲು ಅನುಮತಿ ಕೇಳಿದ ಒಂದೇ ಕಾರಣಕ್ಕೆ, ಆ ಪುಣ್ಯಾತ್ಮ ವಾಷ್​ರೂಮ್​ ಬಳಸಲು ಅನುಮತಿ ನಿರಾಕರಿಸಿದ್ದೂ ಅಲ್ಲದೇ, ತಮ್ಮ ಮನೆಯ ವಾಷ್​ರೂಮ್​ ಕೇಳಿದ್ದಾರೆ ಎನ್ನುವ ಸೊಕ್ಕಿನಿಂದ ಆ ಮಹಿಳಾ ಗಿಗ್​ ವರ್ಕರ್​ಗೆ ಕಳಪೆ ರೇಟಿಂಗ್ ನೀಡಿ ಐದು ದಿನಗಳ ಕಾಲ ಕೆಲಸವೇ ಸಿಗದಂತೆ ಮಾಡಲಾಗಿದೆ! ಇದರ ವಿಡಿಯೋ ಒಂದನ್ನು ಅರ್ಬನ್ ಕಂಪೆನಿಯ ಸೇವಾ ವೃತ್ತಿಪರರೊಬ್ಬರು ಶೇರ್​ ಮಾಡಿಕೊಂಡಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಶ್ರೀಮಂತಿಕೆಗೆ ಅಹಂಕಾರ&lt;/strong&gt;&lt;/h2&gt;&lt;p&gt;ತಮ್ಮ ಮಹಿಳಾ ಸಹೋದ್ಯೋಗಿಯೊಬ್ಬರನ್ನು ಗ್ರಾಹಕರೊಬ್ಬರು ಹೇಗೆ ನಡೆಸಿಕೊಂಡರು ಎನ್ನುವ ಬಗ್ಗೆ ವಿಡಿಯೋದಲ್ಲಿ ತಿಳಿಸಲಾಗಿದೆ. ಗ್ರಾಹಕರ ಮನೆಯಲ್ಲಿ ಮಹಿಳೆ ಮೂರು ಗಂಟೆಗಳ ಕಾಲ ಕೆಲಸ ಮಾಡಿದ ಬಳಿಕ, ಶೌಚಾಲಯಕ್ಕೆ ಅನುಮತಿ ಕೇಳಿದಾಗ ಅದನ್ನು ನಿರಾಕರಿಸಲಾಗಿದೆ. ಅಷ್ಟಕ್ಕೂ ಆ ಗ್ರಾಹಕನ ಐಷಾರಾಮಿ ಶೌಚಾಲಯವನ್ನೇನೂ ಈ ಮಹಿಳೆ ಕೇಳಿರಲಿಲ್ಲ. ಬದಲಿಗೆ ಅವರ ಮನೆಯ ಭದ್ರತಾ ಸಿಬ್ಬಂದಿಯ ಶೌಚಾಲಯವನ್ನು ಬಳಸಲು ಕೇಳಿಕೊಂಡಿದ್ದರು ಅಷ್ಟೇ. ಆದರೆ ಶ್ರೀಮಂತಿಕೆಯ ಮದದಿಂದ ನಿರಾಕರಿಸಿದ್ದೂ ಅಲ್ಲದೇ, ಇದೇ ಕಾರಣಕ್ಕೆ ಆಕೆಗೆ ಕಳಪೆ ರೇಟಿಂಗ್​ ನೀಡುವಂಥ ಅಹಂಕಾರ ಮೆರೆದಿದ್ದಾರೆ ಆ ಗ್ರಾಹಕ.&lt;/p&gt;&lt;h3&gt;&lt;strong&gt;ಪ್ಲೀಸ್​​ ಹಾಗೆ ಮಾಡಬೇಡಿ-ಮನವಿ&lt;/strong&gt;&lt;/h3&gt;&lt;p&gt;ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊವೊಂದು ದೆಹಲಿಯ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳುತ್ತದೆ. X ನಲ್ಲಿ ಹಂಚಿಕೊಂಡಿರುವ ವೀಡಿಯೊದ ಶೀರ್ಷಿಕೆಯ ಪ್ರಕಾರ, ಅರ್ಬನ್ ಕಂಪೆನಿಯ ಉದ್ಯೋಗಿ ಮೂರು ಗಂಟೆಗಳ ಕೆಲಸ ಮುಗಿದ ನಂತರ ಗ್ರಾಹಕರ ಶೌಚಾಲಯವನ್ನು ಬಳಸಲು ಅನುಮತಿ ಕೇಳಿದರು. ಗ್ರಾಹಕರು ನಿರಾಕರಿಸಿದರು, ಭದ್ರತಾ ಸಿಬ್ಬಂದಿಯ ಶೌಚಾಲಯವನ್ನು ಬಳಸಲು ಕೇಳಿದರು. ಇದೇ ಕಾರಣಕ್ಕೆ ಒನ್​ ಸ್ಟಾರ್​ ರೇಟಿಂಗ್​ ನೀಡಲಾಗಿದೆ.&lt;/p&gt;&lt;p&gt;ಕಳಪೆ ರೇಟಿಂಗ್ ಕಾರಣ, ಉದ್ಯೋಗಿಗೆ ಐದು ದಿನಗಳವರೆಗೆ ಕೆಲಸ ಸಿಗಲಿಲ್ಲ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಅರ್ಬನ್ ಕಂಪೆನಿಯ ಮತ್ತೊಬ್ಬ ಉದ್ಯೋಗಿ ಘಟನೆಯ ಬಗ್ಗೆ ಕೋಪ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ, ಕಳೆದ ಆರು ವರ್ಷಗಳಿಂದ ನೂರಾರು ಮನೆಗಳಲ್ಲಿ ಕೆಲಸ ಮಾಡುತ್ತಿದ್ದರೂ, ಅಂತಹ ನಡವಳಿಕೆಯನ್ನು ತಾನು ಎಂದಿಗೂ ಎದುರಿಸಿಲ್ಲ ಎಂದು ಹೇಳಿದ್ದಾರೆ. &quot;ಯಾರಾದರೂ ನಿಮ್ಮ ಮನೆಗೆ ಕೆಲಸ ಮಾಡಲು ಬಂದರೆ, ಕನಿಷ್ಠ ಅವರಿಗೆ ನಿಮ್ಮ ಶೌಚಾಲಯವನ್ನು ಬಳಸಲು ಬಿಡಿ&quot; ಎಂದು ಅವರು ಕೇಳಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ಸಹೋದ್ಯೋಗಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, &quot;ಆ ಹುಡುಗಿಗೆ ಆ ಐದು ದಿನಗಳವರೆಗೆ ಯಾವುದೇ ಆದಾಯವಿಲ್ಲದ ಕಾರಣ ನನಗೆ ತುಂಬಾ ಕೆಟ್ಟದಾಗಿದೆ. ಆಕೆಗೆ ಎಷ್ಟು ಒತ್ತಡವಿರಬೇಕು ಎಂದು ಊಹಿಸಿ&quot; ಎಂದು ಪ್ರಶ್ನಿಸಿದ್ದಾರೆ. ಗಿಗ್ ಕೆಲಸಗಾರರ ಬಗ್ಗೆ ಹೆಚ್ಚು ಸಹಾನುಭೂತಿ ಹೊಂದಲು ಉದ್ಯೋಗಿ ಗ್ರಾಹಕರನ್ನು ಒತ್ತಾಯಿಸಿದರು, ಪ್ರತಿ ಬುಕಿಂಗ್ ಮತ್ತು ರೇಟಿಂಗ್&zwnj;ನ ಮೇಲೆ ಸೇವಾ ವೃತ್ತಿಪರರು ಎಷ್ಟು ಅವಲಂಬಿತರಾಗಿದ್ದಾರೆಂದು ಅನೇಕ ಜನರು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೊಂಡರು.&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/denied-washroom-access-then-hit-with-a-1-star-rating-claims-gig-worker-suc/articleshow-a892sc7"/>
        </item>
        <item>
            <title><![CDATA[ಬರೋಬ್ಬರಿ 3 ಕೋಟಿ ರೂಪಾಯಿ ಸ್ಕಾಲರ್‍‌ಶಿಪ್ ಗೆದ್ದ ವಿದ್ಯಾರ್ಥಿನಿ..!]]></title>
            <link>https://kannada.asianetnews.com/education/rs-3-crore-lincoln-scholarship-bihars-shreya-kaushik-wins-gkn/articleshow-bv3fokc</link>
            <guid isPermaLink="true">https://kannada.asianetnews.com/education/rs-3-crore-lincoln-scholarship-bihars-shreya-kaushik-wins-gkn/articleshow-bv3fokc</guid>
            <pubDate>Fri, 17 Jul 2026 10:19:59 +0530</pubDate>
            <description><![CDATA[&lt;p&gt;ಪ್ರತಿಭೆಗೆ ಬಡತನ ಅಡ್ಡಿಯಾಗದು ಎಂಬ ಮಾತನ್ನು ಬಿಹಾರದ 18 ವರ್ಷದ ವಿದ್ಯಾರ್ಥಿನಿ ಶ್ರೇಯಾ ಕೌಶಿಕ್ ಸಾಬೀತುಪಡಿಸಿದ್ದಾರೆ. ಬಿಹಾರದ ಸಿವಾನ್ ಮೂಲದ ಶ್ರೇಯಾ, ಅಮೆರಿಕದ ಪ್ರತಿಷ್ಠಿತ 'ಲಿಂಕನ್ ಸ್ಕಾಲರ್&zwnj;ಶಿಪ್' (Lincoln Scholarship)ಗೆ ಆಯ್ಕೆಯಾಗುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq6f9b4adz2ggj1ywes481n,imgname-shreya-kaushik-wins-rs-3-crore-lincoln-scholarship-1784263714029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಾಟ್ನಾ: &lt;/strong&gt;ಪ್ರತಿಭೆಗೆ ಬಡತನ ಅಡ್ಡಿಯಾಗದು ಎಂಬ ಮಾತನ್ನು ಬಿಹಾರದ 18 ವರ್ಷದ ವಿದ್ಯಾರ್ಥಿನಿ ಶ್ರೇಯಾ ಕೌಶಿಕ್ ಸಾಬೀತುಪಡಿಸಿದ್ದಾರೆ. ಬಿಹಾರದ ಸಿವಾನ್ ಮೂಲದ ಶ್ರೇಯಾ, ಅಮೆರಿಕದ ಪ್ರತಿಷ್ಠಿತ 'ಲಿಂಕನ್ ಸ್ಕಾಲರ್&zwnj;ಶಿಪ್' (Lincoln Scholarship)ಗೆ ಆಯ್ಕೆಯಾಗುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಈ ಪ್ರತಿಷ್ಠಿತ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಏಕೈಕ ಭಾರತೀಯ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.&lt;/p&gt;&lt;h2&gt;&lt;strong&gt;3 ಕೋಟಿ ರೂಪಾಯಿ ವಿದ್ಯಾರ್ಥಿವೇತನ!&lt;/strong&gt;&lt;/h2&gt;&lt;p&gt;ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಈ ವಿದ್ಯಾರ್ಥಿವೇತನವು ಶ್ರೇಯಾ ಅವರ ಅಮೆರಿಕದ ಉನ್ನತ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲಿದೆ. ಅಮೆರಿಕದ ಕೆಂಟುಕಿಯಲ್ಲಿರುವ 'ಸೆಂಟರ್ ಕಾಲೇಜ್'ನಲ್ಲಿ (Centre College) ಪದವಿ ಶಿಕ್ಷಣ ಪಡೆಯಲು ಈ ಹಣ ಬಳಕೆಯಾಗಲಿದೆ.&lt;/p&gt;&lt;h2&gt;&lt;strong&gt;ಏನಿದು ಲಿಂಕನ್ ಸ್ಕಾಲರ್&zwnj;ಶಿಪ್?&lt;/strong&gt;&lt;/h2&gt;&lt;p&gt;ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಗೌರವಾರ್ಥವಾಗಿ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇದು ಜಗತ್ತಿನಾದ್ಯಂತ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ಸ್ಕಾಲರ್&zwnj;ಶಿಪ್&zwnj;ಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಇಡೀ ವಿಶ್ವದಾದ್ಯಂತ ಕೇವಲ 10 ವಿದ್ಯಾರ್ಥಿಗಳನ್ನು ಮಾತ್ರ ಈ ಪ್ರೋಗ್ರಾಂಗೆ ಆಯ್ಕೆ ಮಾಡಲಾಗುತ್ತದೆ. ಶೈಕ್ಷಣಿಕ ಸಾಧನೆ, ನಾಯಕತ್ವದ ಗುಣಗಳು ಮತ್ತು ಸಮಾಜ ಸೇವೆಗೆ ಬದ್ಧತೆ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಈ ಗೌರವ ನೀಡಲಾಗುತ್ತದೆ. ಈ ಸ್ಕಾಲರ್&zwnj;ಶಿಪ್ ವಿದ್ಯಾರ್ಥಿಯ ಬೋಧನಾ ಶುಲ್ಕ (Tuition fees), ವಸತಿ, ಊಟ, ಪುಸ್ತಕಗಳು, ಆರೋಗ್ಯ ವಿಮೆ, ಪ್ರಯಾಣ ವೆಚ್ಚ ಹಾಗೂ ಇತರ ವೈಯಕ್ತಿಕ ವೆಚ್ಚಗಳನ್ನು ಸಂಪೂರ್ಣವಾಗಿ ಭರಿಸುತ್ತದೆ.&lt;/p&gt;&lt;h2&gt;&lt;strong&gt;ಶ್ರೇಯಾ ಕೌಶಿಕ್ ಅವರ ಶೈಕ್ಷಣಿಕ ಪ್ರಯಾಣ&lt;/strong&gt;&lt;/h2&gt;&lt;p&gt;ಬಿಹಾರದ ಸಿವಾನ್&zwnj;ನಲ್ಲಿ ಜನಿಸಿದ ಶ್ರೇಯಾ, ನಂತರ ದೆಹಲಿಗೆ ತೆರಳಿ ಅಲ್ಲಿನ ಆಯಾ ನಗರದ 'ಸರ್ವೋದಯ ಕನ್ಯಾ ವಿದ್ಯಾಲಯ'ದಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದರು. 13ನೇ ವಯಸ್ಸಿನಲ್ಲೇ ಅವರು 'ಡೆಕ್ಸ್ಟೆರಿಟಿ ಗ್ಲೋಬಲ್' (Dexterity Global) ಎಂಬ ಸಂಸ್ಥೆಯನ್ನು ಸೇರಿದರು. ಈ ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಮತ್ತು ಶೈಕ್ಷಣಿಕ ಮಾರ್ಗದರ್ಶನ ನೀಡುತ್ತದೆ. ಈ ತರಬೇತಿಯೇ ಶ್ರೇಯಾ ಅವರಿಗೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಯಿತು.&lt;/p&gt;&lt;h3&gt;&lt;strong&gt;ಸಮಾಜಕ್ಕೆ ಮರಳಿಸುವ ಹಂಬಲ&lt;/strong&gt;&lt;/h3&gt;&lt;p&gt;ತನ್ನ ಈ ಸಾಧನೆಯ ಬಗ್ಗೆ ಮಾತನಾಡಿದ ಶ್ರೇಯಾ, ಅಬ್ರಹಾಂ ಲಿಂಕನ್ ಅವರ ಹೆಸರಿನಲ್ಲಿರುವ ಈ ವಿದ್ಯಾರ್ಥಿವೇತನ ಪಡೆಯುವುದು ನನಗೆ ದೊರೆತ ದೊಡ್ಡ ಗೌರವ. ನನ್ನ ಪರಿಸ್ಥಿತಿಯನ್ನು ಮೀರಿ ಬೆಳೆಯಲು ನನಗೆ ಸಿಕ್ಕ ಮಾರ್ಗದರ್ಶನ ಮತ್ತು ತರಬೇತಿ ಕಾರಣ. ನನ್ನ ಶಿಕ್ಷಣ ಮುಗಿದ ನಂತರ ಸಮಾಜದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಡೆಕ್ಸ್ಟೆರಿಟಿ ಗ್ಲೋಬಲ್ ಸಂಸ್ಥೆಯ ಸಿಇಒ ಶರದ್ ವಿವೇಕ್ ಸಾಗರ್ ಅವರು ಶ್ರೇಯಾ ಅವರನ್ನು ಅಭಿನಂದಿಸಿದ್ದು, ಸರಿಯಾದ ಮಾರ್ಗದರ್ಶನ ಸಿಕ್ಕರೆ ಪ್ರತಿಭಾವಂತ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಸಂಸ್ಥೆಗಳನ್ನು ತಲುಪಬಲ್ಲರು ಎಂಬುದಕ್ಕೆ ಶ್ರೇಯಾ ಅವರೇ ಸಾಕ್ಷಿ ಎಂದು ಶ್ಲಾಘಿಸಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/education/rs-3-crore-lincoln-scholarship-bihars-shreya-kaushik-wins-gkn/articleshow-bv3fokc"/>
        </item>
        <item>
            <title><![CDATA["ನಾನು ಗರ್ಭಿಣಿ" ಎಂದಿದ್ದೇ ತಪ್ಪಾಯ್ತಾ? ಮ್ಯಾನೇಜರ್‌ಗೆ ವಿಷಯ ತಿಳಿಸಿದ 3 ಗಂಟೆಯಲ್ಲೇ ಮಹಿಳೆ ಕೆಲಸದಿಂದ ವಜಾ!]]></title>
            <link>https://kannada.asianetnews.com/viral/pregnancy-announcement-ends-in-job-loss-woman-shares-shocking-experience/articleshow-cariyrt</link>
            <guid isPermaLink="true">https://kannada.asianetnews.com/viral/pregnancy-announcement-ends-in-job-loss-woman-shares-shocking-experience/articleshow-cariyrt</guid>
            <pubDate>Fri, 17 Jul 2026 19:00:58 +0530</pubDate>
            <description><![CDATA[&lt;p&gt;ಗರ್ಭಿಣಿಯಾಗಿರುವ ಕಾರಣ ಶಿಫ್ಟ್ ಸಮಯದಲ್ಲಿ ಬಿಸ್ಕತ್ತು ತಿನ್ನಲು ಮ್ಯಾನೇಜರ್ ಬಳಿ ಅನುಮತಿ ಕೇಳಿದ ಮಹಿಳೆಯನ್ನು ಕೇವಲ 3 ಗಂಟೆಗಳಲ್ಲಿ ಕೆಲಸದಿಂದ ವಜಾಗೊಳಿಸಿದ ಆಘಾತಕಾರಿ ಘಟನೆ ಎಕ್ಸ್&zwnj;ನಲ್ಲಿ ವೈರಲ್ ಆಗಿದೆ. ಪ್ರೊಬೇಷನರಿ ಅವಧಿಯ ನೆಪ ಒಡ್ಡಿ ಕಂಪನಿ ನೀಡಿದ ಈ ವಜಾ ಪತ್ರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ನಂಬಿ ಮೋಸಹೋದೆ ಎಂದು ಗರ್ಭಿಣಿ ಮಹಿಳೆ ಕಣ್ಣೀರು ಹಾಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq9zt1de4hh6ab3s1xkz0cs,imgname-the-woman-s-post-alleging-she-was-fired-after-revealing-her-pregnancy-has-sparked-outrage.--representational-image--1784267401261.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್:&lt;/strong&gt; ಉದ್ಯೋಗದ ಅವಧಿಯಲ್ಲಿ ತೀವ್ರವಾದ ವಾಕರಿಕೆ ಮತ್ತು ಸುಸ್ತು ಕಾಣಿಸಿಕೊಂಡಾಗ ಉದ್ಯೋಗದಾತರು ಮಾನವೀಯತೆಯಿಂದ ವರ್ತಿಸುತ್ತಾರೆ ಎಂಬ ನಂಬಿಕೆ ಮಹಿಳೆಯೊಬ್ಬರ ಪಾಲಿಗೆ ಘೋರ ನಂಬಿಕೆ ದ್ರೋಹವಾಗಿ ಪರಿಣಮಿಸಿದೆ. ತಾನು ಗರ್ಭಿಣಿ ಎಂಬ ವಿಷಯವನ್ನು ಮ್ಯಾನೇಜರ್&zwnj;ಗೆ ತಿಳಿಸಿ, ಶಿಫ್ಟ್ ಸಮಯದಲ್ಲಿ ಬಿಸ್ಕತ್ತು/ಕ್ರ್ಯಾಕರ್ಸ್ ತಿನ್ನಲು ಅನುಮತಿ ಕೇಳಿದ ಕೇವಲ 3 ಗಂಟೆಗಳಲ್ಲಿ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;Biscuit ತಿನ್ನಲು ಅನುಮತಿ ಕೇಳಿದ್ದೇ ತಪ್ಪಾಯ್ತು:&lt;/strong&gt;&lt;/p&gt;&lt;p&gt;&quot;ಜಿನ್&quot; ಎಂಬ ಹೆಸರಿನ ಈ ಮಹಿಳೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತನ್ನ ಮ್ಯಾನೇಜರ್&zwnj;ಗೆ ಕಳುಹಿಸಿದ ಸಂದೇಶ ಹಾಗೂ ಕಂಪನಿ ತನಗೆ ನೀಡಿದ ವಜಾ ಪತ್ರದ ಸ್ಕ್ರೀನ್&zwnj;ಶಾಟ್&zwnj;ಗಳನ್ನು ಹಂಚಿಕೊಂಡಿದ್ದಾರೆ. ಸಂದೇಶದಲ್ಲಿ ಆಕೆ, &quot;ನಾಳೆಯ ಶಿಫ್ಟ್&zwnj;ಗಾಗಿ ನಾನು ಕಾಯುತ್ತಿದ್ದೇನೆ. ಆದರೆ ನನ್ನದೊಂದು ಖಾಸಗಿ ವಿಷಯ ಹಂಚಿಕೊಳ್ಳಬೇಕಿದೆ. ನಾನು ಪ್ರಸ್ತುತ ಗರ್ಭಿಣಿಯಾಗಿದ್ದು, ತೀವ್ರವಾಗಿ ಹೊಟ್ಟೆ ತೊಳಸುತ್ತಿದೆ ಮತ್ತು ಹಸಿವಾದಂತೆ ಭಾಸವಾಗುತ್ತಿದೆ. ಆದ್ದರಿಂದ ಶಿಫ್ಟ್ ಸಮಯದಲ್ಲಿ ತಿನ್ನಲು ಕೆಲವು ಕ್ರ್ಯಾಕರ್&zwnj;ಗಳನ್ನು ತರಲು ಅನುಮತಿ ನೀಡುತ್ತೀರಾ?&quot; ಎಂದು ವಿನಂತಿಸಿದ್ದರು.&lt;/p&gt;&lt;p&gt;&lt;strong&gt;ಕಂಪನಿಯಿಂದ ಸಿಕ್ಕಿತು ವಜಾ ಪತ್ರ:&lt;/strong&gt;&lt;/p&gt;&lt;p&gt;ಮ್ಯಾನೇಜರ್&zwnj;ನಿಂದ ಸಹಾನುಭೂತಿಯನ್ನು ನಿರೀಕ್ಷಿಸಿದ್ದ ಮಹಿಳೆಗೆ ಕೇವಲ ಮೂರು ಗಂಟೆಗಳ ಒಳಗೆ &quot;ಉದ್ಯೋಗ ಮುಕ್ತಾಯ&quot; ಎಂಬ ಹೆಡ್ಡಿಂಗ್&zwnj;ನೊಂದಿಗೆ ವಜಾ ಪತ್ರ ಸಿಕ್ಕಿದೆ. ಅದರಲ್ಲಿ, &quot;ನೀವು ಪ್ರೊಬೇಷನರಿ (probationary) ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸದ ಕಾರಣ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲಾಗುತ್ತಿದೆ. ನಿಮ್ಮ ನೋಟಿಸ್ ಅವಧಿಯನ್ನು ನೀವು ಪೂರೈಸಬೇಕಾಗುತ್ತದೆ ಮತ್ತು ಬಾಕಿ ಸಂಬಳವನ್ನು ನೀಡಲಾಗುವುದು&quot; ಎಂದು ಬರೆಯಲಾಗಿತ್ತು.&lt;/p&gt;&lt;p&gt;&lt;strong&gt;ನಂಬಿ ಮೋಸ ಹೋದೆ ಎಂದ ಮಹಿಳೆ:&lt;/strong&gt;&lt;/p&gt;&lt;p&gt;ಮಹಿಳೆ ತನ್ನ ಅಳಲನ್ನು ತೋಡಿಕೊಳ್ಳುತ್ತಾ, &quot;ನಾನು ಈ ಮ್ಯಾನೇಜರ್ ಅನ್ನು ತುಂಬಾ ನಂಬಿದ್ದೆ. ನನ್ನ ಜೀವನದಲ್ಲಿ ಈಗ ಬೆಂಬಲ ನೀಡಲು ಯಾರೂ ಇಲ್ಲ. ಶಿಫ್ಟ್ ಮಧ್ಯೆ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಭಾವಿಸುವಷ್ಟು ನಾನು ಮೂರ್ಖಳಾಗಿದ್ದೆ. ರೆಸ್ಟೋರೆಂಟ್&zwnj;ನಲ್ಲಿ 6 ಗಂಟೆಗಳ ಕೆಲಸದ ನಂತರವಷ್ಟೇ 20 ನಿಮಿಷಗಳ ವಿರಾಮ ಸಿಗುತ್ತಿತ್ತು. ತೀವ್ರವಾಗಿ ವಾಕರಿಕೆ ಬರುತ್ತಿದ್ದ ಕಾರಣ ಹಜಾರಕ್ಕೆ ಹೋಗಿ ಬಿಸ್ಕತ್ತು ತಿನ್ನಲು ಅನುಮತಿ ಕೇಳಿದ್ದೆ. ನಾನು ರಜೆ ಕೇಳಿರಲಿಲ್ಲ, ಕೇವಲ ನನ್ನ ಪರಿಸ್ಥಿತಿ ತಿಳಿಸಿದ್ದೆ&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಂಪನಿಯ ಕಠೋರ ನಿರ್ಧಾರದ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;3 hours after i sent the message to my manager pic.twitter.com/i9eGZmeDUQ&lt;/p&gt;&lt;p&gt;&mdash; jin (@jnsulz) July 16, 2026&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/pregnancy-announcement-ends-in-job-loss-woman-shares-shocking-experience/articleshow-cariyrt"/>
        </item>
        <item>
            <title><![CDATA[ಪ್ರಮೋಷನ್ ಸಿಕ್ಕರೂ ನೆಮ್ಮದಿ ಇಲ್ಲ! ಸಹೋದ್ಯೋಗಿಗಳ ಗೇಲಿ, ಮ್ಯಾನೇಜರ್‌ನ ನಿರ್ಲಕ್ಷ್ಯದಿಂದ ಉದ್ಯೋಗಿಗೆ ಸಂಕಷ್ಟ]]></title>
            <link>https://kannada.asianetnews.com/jobs/promotion-turned-into-a-nightmare-employee-claims-colleagues-wanted-them-to-fail/articleshow-cq2s8gx</link>
            <guid isPermaLink="true">https://kannada.asianetnews.com/jobs/promotion-turned-into-a-nightmare-employee-claims-colleagues-wanted-them-to-fail/articleshow-cq2s8gx</guid>
            <pubDate>Sun, 19 Jul 2026 10:26:43 +0530</pubDate>
            <description><![CDATA[&lt;p&gt;ಕಾರ್ಪೊರೇಟ್ ವಲಯದಲ್ಲಿ ತ್ವರಿತ ಬಡ್ತಿ ಸಿಕ್ಕಾಗ ಎದುರಾಗುವ ಅಸೂಯೆ ಹಾಗೂ ರಾಜಕೀಯವನ್ನು ಈ ಪೋಸ್ಟ್ ಬಿಂಬಿಸುತ್ತದೆ. ಹೊಸ ಮ್ಯಾನೇಜರ್&zwnj;ಗೆ ಹಿರಿಯ ಸಿಬ್ಬಂದಿ ಸಹಕರಿಸದೆ ಮಾನಸಿಕ ಒತ್ತಡ ಹೇರುತ್ತಿರುವ ತಂತ್ರಗಳು ಇಲ್ಲಿವೆ. ಈ ಪರಿಸ್ಥಿತಿಯಲ್ಲಿ ತನ್ನ ರಕ್ಷಣೆಗಾಗಿ ಉದ್ಯೋಗಿ ತಳೆದ ದಾಖಲಾತಿಯ (Documentation) ನಿರ್ಧಾರವನ್ನು ಕೆಲವರು ಶ್ಲಾಘಿಸಿದರೆ, ಇನ್ನು ಕೆಲವರು ನಾಯಕತ್ವದ ಜವಾಬ್ದಾರಿ ಹೊರಲು ಸಲಹೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwb8jwwj0x15yezy6bdd7n2,imgname-i-feel-like-they-want-me-to-fail-employee-s-post-sparks-debate-1784436509596.jpg" type="image/jpeg" height="390" width="690"/>
            <content:encoded><![CDATA[&lt;p&gt;ಉದ್ಯೋಗದಲ್ಲಿ ಬಡ್ತಿ (Promotion) ಎನ್ನುವುದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಖುಷಿ ಮತ್ತು ಸಂಭ್ರಮದ ಕ್ಷಣ. ಆದರೆ, ಎಲ್ಲರಿಗೂ ಅದು ನೆಮ್ಮದಿ ತರುತ್ತದೆ ಎಂದೇನಿಲ್ಲ. ಇಲ್ಲೊಬ್ಬ ಉದ್ಯೋಗಿಗೆ ಕಂಪನಿಯಲ್ಲಿ ಸಿಕ್ಕ ತ್ವರಿತ ಬಡ್ತಿಯು ಸಂಭ್ರಮದ ಬದಲು, ಸಹೋದ್ಯೋಗಿಗಳಿಂದ ತೀವ್ರ ಹಗೆತನ, ಅಸಮಾಧಾನ ಮತ್ತು &quot;ರಚನಾತ್ಮಕ ವಿಧ್ವಂಸಕತೆ&quot;ಯನ್ನು (Structural Sabotage) ತಂದಿಟ್ಟಿದೆ. ಈ ಕಹಿ ಅನುಭವದ ಕುರಿತು ಉದ್ಯೋಗಿ ರೆಡ್ಡಿಟ್&zwnj;ನಲ್ಲಿ ಮಾಡಿರುವ ಪೋಸ್ಟ್ ಸದ್ಯ ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.&lt;/p&gt;&lt;p&gt;&lt;strong&gt;ಐದೇ ನಿಮಿಷದ ತರಬೇತಿ, ಕಾಲೆಳೆದ ಹಿರಿಯ ಸಿಬ್ಬಂದಿ:&lt;/strong&gt;&lt;/p&gt;&lt;p&gt;ಪೋಸ್ಟ್ ಪ್ರಕಾರ, ಈ ಉದ್ಯೋಗಿಗೆ ಇತ್ತೀಚೆಗೆ ಮತ್ತೊಂದು ಶಾಖೆಯ ಶಿಫ್ಟ್ ನಿರ್ವಹಣೆಯ ಜವಾಬ್ದಾರಿ ನೀಡಿ ಬಡ್ತಿ ನೀಡಲಾಗಿತ್ತು. ಆದರೆ, ಕಂಪನಿಯಲ್ಲಿ ದೀರ್ಘಕಾಲದಿಂದ ಇದ್ದ ಹಿರಿಯ ಸಹೋದ್ಯೋಗಿಗಳಿಗೆ ಈ ತ್ವರಿತ ಬೆಳವಣಿಗೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೊಸ ಜವಾಬ್ದಾರಿಯ ಆನ್&zwnj;ಬೋರ್ಡಿಂಗ್ ಅಥವಾ ಸಾಫ್ಟ್&zwnj;ವೇರ್ ತರಬೇತಿ ನೀಡುವ ಬದಲು, ಕೇವಲ ಐದು ನಿಮಿಷದ ಅರೆಬರೆ ಮಾಹಿತಿ ನೀಡಿ ಕೈತೊಳೆದುಕೊಳ್ಳಲಾಯಿತು. ಕೆಲಸದ ಮೊದಲ ದಿನದ ಮುನ್ನಾದಿನ ಕೇವಲ &quot;ಕೀಲಿಗಳನ್ನು ಸಂಗ್ರಹಿಸಿ, ಲೈಟ್ ಆನ್ ಮಾಡಿ&quot; ಎಂಬ ಅಲ್ಪ ಸಂದೇಶವಷ್ಟೇ ಸಿಕ್ಕಿತ್ತು. ಹೊಸ ರೂಲ್ಸ್ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಸಹೋದ್ಯೋಗಿಗಳು ಲೇವಡಿ ಮಾಡಲಾರಂಭಿಸಿದರು.&lt;/p&gt;&lt;p&gt;&lt;strong&gt;ಸ್ನೇಹಿತರೇ ಆದರು ಶತ್ರುಗಳು:&lt;/strong&gt;&lt;/p&gt;&lt;p&gt;ಅಧಿಕಾರ ವಹಿಸಿಕೊಂಡ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಹಿಂದೆ ಸ್ನೇಹಪರರಾಗಿದ್ದ ಸಹೋದ್ಯೋಗಿಯೊಬ್ಬರು ಇದ್ದಕ್ಕಿದ್ದಂತೆ, &quot;ನೀನು ಯಾಕೆ ಇಷ್ಟೊಂದು ಪ್ರಶ್ನೆ ಕೇಳುತ್ತೀಯಾ ಎಂದು ಬೇರೆಯವರು ದೂರುತ್ತಿದ್ದಾರೆ&quot; ಎಂದು ಅಸ್ಪಷ್ಟವಾಗಿ ಚುಚ್ಚಿ ಮಾತನಾಡತೊಡಗಿದರು. ಮತ್ತೊಬ್ಬರು ಈತನ ನಿರ್ಧಾರಗಳನ್ನು ತಳ್ಳಿಹಾಕಿ, ಪ್ರಜ್ಞಾಪೂರ್ವಕವಾಗಿ ತರಬೇತಿಯ ಕೊರತೆಯನ್ನೇ ದೊಡ್ಡ ಸಮಸ್ಯೆಯಾಗಿ ಬಿಂಬಿಸಲು ಯತ್ನಿಸಿದರು. ಈ ಎಲ್ಲಾ ಕುತಂತ್ರಗಳ ನಡುವೆಯೂ ಉದ್ಯೋಗಿ ಧೃತಿಗೆಡದೆ, ತನಗೆ ಸಿಕ್ಕ ಸಂದೇಶಗಳು, ಇಮೇಲ್&zwnj;ಗಳು ಮತ್ತು ಸಂಭಾಷಣೆಗಳ ಪ್ರತಿಯೊಂದು ವಿವರವನ್ನು ಲಿಖಿತ ರೂಪದಲ್ಲಿ ದಾಖಲಿಸಿಟ್ಟುಕೊಂಡು (Documentation) ಶಾಂತವಾಗಿ ಹೋರಾಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ರೆಡ್ಡಿಟ್&zwnj;ನಲ್ಲಿ ಪರ-ವಿರೋಧದ ಚರ್ಚೆ:&lt;/strong&gt;&lt;/p&gt;&lt;p&gt;ಈ ಪೋಸ್ಟ್ ರೆಡ್ಡಿಟ್ ಬಳಕೆದಾರರನ್ನು ಎರಡು ಬಣಗಳನ್ನಾಗಿ ವಿಭಜಿಸಿದೆ. ಕೆಲವರು ಉದ್ಯೋಗಿಯ ಬೆಂಬಲಕ್ಕೆ ನಿಂತು, &quot;ವೇಗದ ಬಡ್ತಿ ಸಿಕ್ಕಾಗ ಕಡೆಗಣಿಸಲ್ಪಟ್ಟ ಜನರಿಂದ ಇಂತಹ ಪ್ರತಿಕ್ರಿಯೆ ಸಹಜ. ನಿಮ್ಮ ಲಿಖಿತ ದಾಖಲೆಗಳೇ (Paper Trail) ನಿಮ್ಮ ದೊಡ್ಡ ಆಸ್ತಿ, ಶಾಂತವಾಗಿರಿ&quot; ಎಂದು ಧೈರ್ಯ ತುಂಬಿದ್ದಾರೆ. ಆದರೆ ಇನ್ನು ಕೆಲವರು ಉದ್ಯೋಗಿಯನ್ನೇ ಟೀಕಿಸಿದ್ದು, &quot;ನೀವು ಬಲಿಪಶುವಿನಂತೆ ನಟಿಸುವುದನ್ನು ನಿಲ್ಲಿಸಿ. ನೀವು ಈಗಾಗಲೇ ಉನ್ನತ ಸ್ಥಾನದಲ್ಲಿದ್ದೀರಿ, ದ್ವೇಷಿಸುವವರನ್ನು ದೂಷಿಸುವ ಬದಲು ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಮುನ್ನಡೆಯಿರಿ&quot; ಎಂದು ಕಟುವಾಗಿ ಸಲಹೆ ನೀಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Promoted quickly at work, now dealing with severe...&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/jobs/promotion-turned-into-a-nightmare-employee-claims-colleagues-wanted-them-to-fail/articleshow-cq2s8gx"/>
        </item>
        <item>
            <title><![CDATA[ಗಗನಯಾನಕ್ಕೆ ಸಿದ್ಧತೆ ಮಾಡುವಾಗಲೇ ಇಸ್ರೋದಲ್ಲಿ ಬಿಕ್ಕಟ್ಟು; ಬಾಹ್ಯಾಕಾಶ ಸಂಸ್ಥೆ ತೊರೆದ 100ಕ್ಕೂ ಅಧಿಕ ವಿಜ್ಞಾನಿಗಳು!]]></title>
            <link>https://kannada.asianetnews.com/science/over-100-isro-scientists-resign-ahead-of-gaganyaan-mission-san/articleshow-dixqbk3</link>
            <guid isPermaLink="true">https://kannada.asianetnews.com/science/over-100-isro-scientists-resign-ahead-of-gaganyaan-mission-san/articleshow-dixqbk3</guid>
            <pubDate>Thu, 16 Jul 2026 19:24:39 +0530</pubDate>
            <description><![CDATA[&lt;p&gt;ಗಗನಯಾನದಂತಹ ರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿದ್ದ ನೂರಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ಇಸ್ರೋವನ್ನು ತೊರೆದಿದ್ದಾರೆ. ಈ ಸಾಮೂಹಿಕ ನಿರ್ಗಮನದಿಂದ ಉಂಟಾಗಬಹುದಾದ ಹಿನ್ನಡೆಯನ್ನು ತಡೆಯಲು, ಕೇಂದ್ರ ಬಾಹ್ಯಾಕಾಶ ಇಲಾಖೆಯು ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿ ನಿಯಮಗಳನ್ನು ಕಠಿಣಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmqt3nrtj7kbbp54zwq6bdj,imgname-isro-resignation-1784181231288.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.16): &lt;/strong&gt;ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅತ್ಯಂತ ಮಹತ್ವಾಕಾಂಕ್ಷೆಯ 'ಗಗನಯಾನ' ಸೇರಿದಂತೆ ಪ್ರಮುಖ ರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ನೂರಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ಸದ್ದಿಲ್ಲದೆ ಸಂಸ್ಥೆಯನ್ನು ತೊರೆದಿದ್ದಾರೆ. ಇಸ್ರೋ ಇತಿಹಾಸದಲ್ಲೇ ಅತ್ಯಂತ ಗಂಭೀರ ಎನ್ನಲಾದ ಈ ಸಾಮೂಹಿಕ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ (VRS) ಪ್ರಕ್ರಿಯೆಗೆ ಬ್ರೇಕ್ ಹಾಕಲು ಕೇಂದ್ರ ಬಾಹ್ಯಾಕಾಶ ಇಲಾಖೆಯು (DoS) ಇದೀಗ ನಿಯಮಗಳನ್ನು ತೀವ್ರವಾಗಿ ಬಿಗಿಗೊಳಿಸಿದೆ. ವಿಜ್ಞಾನಿಗಳು ದಿಢೀರನೆ ಹೊರಹೋಗುವುದರಿಂದ ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯತಂತ್ರದ ಯೋಜನೆಗಳ ಮೇಲಾಗುವ ಭಾರಿ ಹಿನ್ನಡೆಯನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;ಜುಲೈ 14 ರಂದು ಬಾಹ್ಯಾಕಾಶ ಇಲಾಖೆಯು ಹೊರಡಿಸಿರುವ ಆಂತರಿಕ ಮೆಮೊ ಪ್ರಕಾರ, ಗಗನಯಾನ ಮತ್ತು ಇತರ ಪ್ರಮುಖ ಮಿಷನ್&zwnj;ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ &lsquo;ಎ&rsquo; (Group A) ದರ್ಜೆಯ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿ ವಿನಂತಿಗಳನ್ನು ಇಸ್ರೋ ಕೇಂದ್ರಗಳು ಇನ್ನು ಮುಂದೆ ನೇರವಾಗಿ ಸ್ವೀಕರಿಸುವಂತಿಲ್ಲ. ಇಂತಹ ಎಲ್ಲಾ ವಿನಂತಿಗಳನ್ನು ಕಡ್ಡಾಯವಾಗಿ ಅಂತಿಮ ಅನುಮೋದನೆಗಾಗಿ ಕೇಂದ್ರ ಬಾಹ್ಯಾಕಾಶ ಇಲಾಖೆಗೆ ಕಳುಹಿಸಿಕೊಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.&lt;/p&gt;&lt;h2&gt;&lt;strong&gt;ರಾಜೀನಾಮೆ ನೀಡಿದ ಪ್ರಮುಖರು ಯಾರು?&lt;/strong&gt;&lt;/h2&gt;&lt;p&gt;ಅಧಿಕೃತವಾಗಿ ಬಾಹ್ಯಾಕಾಶ ಇಲಾಖೆಯು ಹೊರಹೋಗಿರುವ ವಿಜ್ಞಾನಿಗಳ ನಿಖರ ಸಂಖ್ಯೆಯನ್ನು ಬಹಿರಂಗಪಡಿಸದಿದ್ದರೂ, ಮೂಲಗಳ ಪ್ರಕಾರ ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು 100 ರಿಂದ 120 ಕ್ಕೂ ಹೆಚ್ಚು ತಜ್ಞ ವಿಜ್ಞಾನಿಗಳು ಇಸ್ರೋ ತೊರೆದಿದ್ದಾರೆ.ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರ (URSC) ಇಲ್ಲಿಂದಲೇ ಅತಿ ಹೆಚ್ಚು ಅಂದರೆ ಸುಮಾರು 80 ವಿಜ್ಞಾನಿಗಳು ಹೊರನಡೆದಿದ್ದಾರೆ. ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಸಂಸ್ಥೆಯಿಂದ 20 ಕ್ಕೂ ಹೆಚ್ಚು ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ.&lt;/p&gt;&lt;p&gt;ಇದರಲ್ಲಿ ಅತ್ಯಂತ ಹಿರಿಯ ಮತ್ತು ಹೈ-ಪ್ರೊಫೈಲ್ ವಿಜ್ಞಾನಿಗಳೂ ಸೇರಿದ್ದಾರೆ. ಎಲ್&zwnj;ವಿಎಂ3 (LVM3) ಪ್ರಾಜೆಕ್ಟ್ ಡೈರೆಕ್ಟರ್ ವಿಕ್ಟರ್ ಜೋಸೆಫ್, ಯುಆರ್&zwnj;ಎಸ್&zwnj;ಸಿಯ ಸ್ಪೇಸ್&zwnj;ಡೆಕ್ಸ್ (SpaDeX) ಪ್ರಾಜೆಕ್ಟ್ ಡೈರೆಕ್ಟರ್ ಹಾಗೂ ಚಂದ್ರಯಾನ-3 ಮಿಷನ್&zwnj;ನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರಮುಖ ವಿಜ್ಞಾನಿ ಆದಿತ್ಯ ರಾಲ್ಲಪಲ್ಲಿ ಅವರು ಇಸ್ರೋ ತೊರೆದ ಪ್ರಮುಖರಾಗಿದ್ದಾರೆ. ಆದಿತ್ಯ ರಾಲ್ಲಪಲ್ಲಿ ಅವರು ಚಂದ್ರಯಾನ ನೌಕೆಯ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು 1,00,000 ಕ್ಕೂ ಹೆಚ್ಚು ಸಿಮ್ಯುಲೇಶನ್&zwnj;ಗಳ ಮೂಲಕ ಸುಮಾರು 25 ಟೆರಾಬೈಟ್&zwnj;ಗಳಷ್ಟು ಮಿಷನ್ ಡೇಟಾವನ್ನು ಸಿದ್ಧಪಡಿಸಿದ ತಂಡದ ನೇತೃತ್ವ ವಹಿಸಿದ್ದರು.&lt;/p&gt;&lt;h2&gt;&lt;strong&gt;2020ರ ಸುಧಾರಣಾ ನಿಯಮ ಉಲ್ಟಾ&lt;/strong&gt;&lt;/h2&gt;&lt;p&gt;ಬಾಹ್ಯಾಕಾಶ ಇಲಾಖೆಯ ಈ ಹೊಸ ಆದೇಶವು ನವೆಂಬರ್ 2020 ರಲ್ಲಿ ಜಾರಿಗೆ ತರಲಾಗಿದ್ದ ಆಡಳಿತಾತ್ಮಕ ಸುಧಾರಣಾ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಈ ಹಿಂದೆ ಇಸ್ರೋ ಕೇಂದ್ರಗಳ ನಿರ್ದೇಶಕರಿಗೆ 'ಸೈಂಟಿಸ್ಟ್/ಇಂಜಿನಿಯರ್-ಎಸ್&zwnj;ಜಿ' ದರ್ಜೆಯವರೆಗಿನ ಅಧಿಕಾರಿಗಳ ರಾಜೀನಾಮೆ ಅಂಗೀಕರಿಸುವ ಸ್ವಾಯತ್ತ ಅಧಿಕಾರ ನೀಡಲಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ, ಪ್ರಮುಖ ಮಿಷನ್&zwnj;ಗಳು ಪೂರ್ಣಗೊಳ್ಳುವವರೆಗೆ ಯಾವುದೇ ರಾಜೀನಾಮೆಯನ್ನು ಸ್ವೀಕರಿಸದಂತೆ ಕೇಂದ್ರಗಳ ನಿರ್ದೇಶಕರಿಗೆ ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;ಕಳವಳಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಇಸ್ರೋ ಹೊಂದಿರುವ ಒಟ್ಟು 14,600 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಹೋಲಿಸಿದರೆ ಈ ರಾಜೀನಾಮೆಗಳ ಸಂಖ್ಯೆ ಚಿಕ್ಕದಾಗಿ ಕಂಡರೂ, ಹೊರ ಹೋಗುತ್ತಿರುವವರೆಲ್ಲರೂ ದೇಶದ ಫ್ಲ್ಯಾಗ್&zwnj;ಶಿಪ್ ಯೋಜನೆಗಳ ಮುಂಚೂಣಿಯಲ್ಲಿದ್ದವರಾಗಿದ್ದಾರೆ. ಹೊಸದಾಗಿ ನೇಮಕಾತಿ ಮಾಡಿಕೊಳ್ಳುವುದು ಸುಲಭ, ಆದರೆ ಗಗನಯಾನ, ಚಂದ್ರಯಾನದಂತಹ ಜಟಿಲ ಯೋಜನೆಗಳ ಮೂಲಕ ವಿಜ್ಞಾನಿಗಳು ಗಳಿಸಿರುವ ವರ್ಷಗಳ ಮಿಷನ್-ನಿರ್ದಿಷ್ಟ ಪರಿಣತಿ ಹಾಗೂ ಸಾಂಸ್ಥಿಕ ಜ್ಞಾನವನ್ನು ತಕ್ಷಣಕ್ಕೆ ಭರ್ತಿ ಮಾಡುವುದು ಅಸಾಧ್ಯ ಎಂಬುದು ಇಲಾಖೆಯ ಆತಂಕವಾಗಿದೆ.&lt;/p&gt;&lt;p&gt;ಈ ಬೆಳವಣಿಗೆಯನ್ನು ಒಪ್ಪಿಕೊಂಡಿರುವ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಆತಂಕವನ್ನು ತಳ್ಳಿಹಾಕಿದ್ದಾರೆ. &quot;ಹೌದು, ಅನೇಕ ಜನರು ಹೋಗುತ್ತಾರೆ, ಇದು ಪ್ರತಿಯೊಂದು ಸಂಸ್ಥೆಯಲ್ಲೂ ಸಾಮಾನ್ಯ ಪ್ರಕ್ರಿಯೆ. ಈ ಹೊಸ ನಿಯಮವು ಕೇವಲ ವಿಜ್ಞಾನಿಗಳನ್ನು ಹಿಡಿದಿಟ್ಟುಕೊಳ್ಳಲು ಮಾತ್ರವಲ್ಲ, ಪ್ರಮುಖ ಯೋಜನೆಗಳು ದಿಢೀರನೆ ಅರ್ಧಕ್ಕೆ ನಿಂತು ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕೆಯಾಗಿದೆ. ಯಾರಾದರೂ ಹೋದರೆ, ಅವರ ಜವಾಬ್ದಾರಿಯನ್ನು ಮತ್ತೊಬ್ಬರು ವಹಿಸಿಕೊಳ್ಳುತ್ತಾರೆ. ನಾವು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇವೆ,&quot; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಇಸ್ರೋದಲ್ಲಿ ಇಂತಹ ವಲಸೆ ಹೊಸದೇನಲ್ಲ. ಅಧಿಕೃತ ಅಂಕಿ-ಅಂಶಗಳ ಪ್ರಕಾರ 2012 ರಿಂದ 2024 ರ ನಡುವೆ ಸುಮಾರು 700 ಉದ್ಯೋಗಿಗಳು ರಾಜೀನಾಮೆ ನೀಡಿದ್ದರು. ಹಾಗೆಯೇ 2004 ರಿಂದ 2007 ರ ಅವಧಿಯಲ್ಲಿ ನೇಮಕಗೊಂಡಿದ್ದ ಹೊಸಬರಲ್ಲಿ ಅರ್ಧದಷ್ಟು ಜನ ಸಂಸ್ಥೆ ತೊರೆದಿದ್ದರು. ಪ್ರಸ್ತುತ 1,050 ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ, ಗಗನಯಾನ, ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಭವಿಷ್ಯದ ಚಂದ್ರನ ಪರಿಶೋಧನಾ ಯೋಜನೆಗಳ ಹಿನ್ನೆಲೆಯಲ್ಲಿ ಅನುಭವಿಗಳನ್ನು ಉಳಿಸಿಕೊಳ್ಳುವುದು ಇಸ್ರೋಗೆ ಈಗ ತಾಂತ್ರಿಕ ಸವಾಲಾಗಿ ಪರಿಣಮಿಸಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/science/over-100-isro-scientists-resign-ahead-of-gaganyaan-mission-san/articleshow-dixqbk3"/>
        </item>
        <item>
            <title><![CDATA[ಗೌರವ, ನೆಮ್ಮದಿ ಮುಖ್ಯ ಎಂದು 90 ಲಕ್ಷ ರೂ. ಪ್ಯಾಕೇಜ್‌ ಜಾಬ್‌ ಬಿಟ್ಟ ಉದ್ಯೋಗಿ; ಮ್ಯಾನೇಜರ್‌ ಸರಿ ಇರ್ಬೇಕು-HR]]></title>
            <link>https://kannada.asianetnews.com/jobs/a-person-reject-90-lakh-rupees-job-offer-due-to-manager/articleshow-gdgfgx4</link>
            <guid isPermaLink="true">https://kannada.asianetnews.com/jobs/a-person-reject-90-lakh-rupees-job-offer-due-to-manager/articleshow-gdgfgx4</guid>
            <pubDate>Fri, 17 Jul 2026 08:55:46 +0530</pubDate>
            <description><![CDATA[&lt;p&gt;90 Lakh Rupees offer Job Offer Reject ಕೆಲಸ ಮಾಡೋದು ಎಲ್ಲಿಯಾದರೇನು? ಒಳ್ಳೆಯ ಸಂಬಳ ಮುಖ್ಯ ಎಂದುಕೊಳ್ಳುವವರೂ ಇರುತ್ತಾರೆ. ಇನ್ನೊಂದು ಕಡೆ ಈ ನಿರುದ್ಯೋಗ ಇರುವ ಈ ಕಾಲದಲ್ಲಿ ಕೆಲಸ ಸಿಕ್ಕಿದರೆ ಸಾಕು ಎಂದುಕೊಳ್ಳುವವರೂ ಇರುತ್ತಾರೆ. ಈಗ ವ್ಯಕ್ತಿಯೋರ್ವ 90 ಲಕ್ಷದ ಆಫರ್&zwnj; ರಿಜೆಕ್ಟ್&zwnj; ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq1n1452zwjws4r5nbeqxfm,imgname-new-project--43--1784258659460.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದೊಳ್ಳೆ ಕಂಪೆನಿಯಿಂದ 90 ಲಕ್ಷ ರೂಪಾಯಿ ಆಫರ್&zwnj; ಬಂದಿತ್ತು. ಆದರೂ ಕೂಡ ವ್ಯಕ್ತಿಯೋರ್ವ ಕೆಲಸ ಬೇಡ ಎಂದಿದ್ದಾರೆ. ಇದರಿಂದ HR ನೇಮಕಾತಿದಾರ ಮನೋಜ್&zwnj; ಕುಮಾರ್&zwnj;ಗೆ ಸಿಗಬೇಕಿದ್ದ ಡೀಲ್&zwnj; ತಪ್ಪಿ ಹೋಗಿದೆ.&lt;/p&gt;&lt;h2&gt;ಆಫರ್&zwnj; ರಿಜೆಕ್ಟ್&zwnj; ಮಾಡಿದ ವ್ಯಕ್ತಿ ಹೇಳಿದ್ದೇನು?&lt;/h2&gt;&lt;p&gt;ಆ ಕಂಪೆನಿಯ ಮ್ಯಾನೇಜರ್&zwnj; ಅಡಿಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ ಕಾರಣ ಆ ವ್ಯಕ್ತಿ ಆ ಆಫರ್&zwnj; ರಿಜೆಕ್ಟ್&zwnj; ಮಾಡಿದ್ದಾನೆ. &ldquo;ಆಫರ್&zwnj; ತುಂಬ ಚೆನ್ನಾಗಿದೆ. ನಾನು ಯಾರ ಕೈಕೆಳಗೆ ಕೆಲಸ ಮಾಡಬೇಕೋ ಅವರ ಜೊತೆ ಕೆಲಸ ಮಾಡಲು ಇಷ್ಟವಿಲ್ಲ, ಎಂಜಾಯ್&zwnj; ಮಾಡಿಕೊಂಡು ಕೆಲಸ ಮಾಡಲು ಆಗೋದಿಲ್ಲ&rdquo; ಎಂದು ಕಾರಣ ಹೇಳಿ ಆ ಆಫರ್&zwnj; ರಿಜೆಕ್ಟ್&zwnj; ಮಾಡಿದ್ದಾರಂತೆ.&lt;/p&gt;&lt;h2&gt;ಲಿಂಕ್ಡ್&zwnj;ಇನ್&zwnj;ನಲ್ಲಿ ಎಚ್&zwnj; ಆರ್&zwnj; ಹೇಳಿದ್ದೇನು?&lt;/h2&gt;&lt;p&gt;ಇದರ ಬಗ್ಗೆ ಲಿಂಕ್ಡ್&zwnj;ಇನ್&zwnj;ನಲ್ಲಿ ಬರೆದುಕೊಂಡಿರುವ ಮನೋಜ್ ಕುಮಾರ್, &quot;ಕೇವಲ ಕಂಪನಿಗಳನ್ನು ನೋಡಿ ಜನರು ಕೆಲಸಕ್ಕೆ ಸೇರುವುದಿಲ್ಲ, ಅವರು ಒಳ್ಳೆಯ ಮ್ಯಾನೇಜರ್&zwnj; ನೋಡಿ ಕೂಡ ಕೆಲಸಕ್ಕೆ ಸೇರುತ್ತಾರೆ. ಕಂಪೆನಿಯು ಉತ್ತಮ ಸಂಬಳ ಕೊಡಬಹುದು, ಆದರೆ ಒಳ್ಳೆಯ ಮ್ಯಾನೇಜರ್&zwnj;ನಿಂದ ಮಾತ್ರ ಅವರು ಆ ಕಂಪೆನಿಯಲ್ಲಿ ಉಳಿಯಬಹುದು&rdquo; ಎಂದು ಹೇಳಿದ್ದಾರೆ.&lt;/p&gt;&lt;h2&gt;ಜನರು ಹೇಳಿದ್ದೇನು?&lt;/h2&gt;&lt;p&gt;ಅನೇಕರು ಈ ಪೋಸ್ಟ್&zwnj; ನೋಡಿ ನೆಮ್ಮದಿ ಮುಖ್ಯ ಎಂದು ಹೇಳಿದ್ದಾರೆ. ಹಣಕ್ಕಿಂತ ಮನಸ್ಸಿನ ಶಾಂತಿ, ಆರೋಗ್ಯ ಮುಖ್ಯವಾಗಿದೆ. ದಬ್ಬಾಳಿಕೆ ಮಾಡುವ ಮ್ಯಾನೇಜರ್&zwnj;ಗಳಿದ್ದರೆ ಕಂಪನಿಗಳಿಗೆ ನಿಜಕ್ಕೂ ನಷ್ಟ ಆಗುವುದು ಎಂದಿದ್ದಾರೆ.&lt;/p&gt;&lt;p&gt;ಗೌರವ ಮತ್ತು ನಂಬಿಕೆ: ಇಂಟರ್ವ್ಯೂ ಮಾಡುವಾಗಲೇ ಮ್ಯಾನೇಜರ್ ಅಹಂಕಾರ ತೋರಿಸಿದರೆ ಅಥವಾ ಸಣ್ಣ ವಿಷಯದಲ್ಲೂ ಮೂಗು ತೂರಿಸುವ ಸ್ವಭಾವ ಹೊಂದಿದ್ದರೆ ಎಷ್ಟೇ ಸಂಬಳ ಕೊಟ್ಟರೂ ಕೂಡ, ಅಲ್ಲಿ ಕೆಲಸ ಮಾಡಲು ಒಪ್ಪೋದಿಲ್ಲ.&lt;/p&gt;&lt;p&gt;ಅದರಲ್ಲಿಯೂ ZenG ಪೀಳಿಗೆಯವರು ಮಾತ್ರ ಕೆಲಸ ಜಾಸ್ತಿ, ಒತ್ತಡ ಜಾಸ್ತಿ ಎಂದರೆ ಅಲ್ಲಿ ಇರೋದಿಲ್ಲ. ಸಂಬಳ ಕಡಿಮೆ ಆದರೂ ಓಕೆ, ಕೆಲಸ ಇಲ್ಲ ಅಂದ್ರೂ ಓಕೆ ಎಂದು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಕೈಯಲ್ಲಿ ಬೇರೆ ಆಪ್ಶನಲ್ ಕೆಲಸ ಇಲ್ಲದೆ, ಹಣವೂ ಇಲ್ಲದೆ ಕೆಲಸ ಬಿಟ್ಟು ಆಮೇಲೆ&zwnj; ಪರದಾಡಿದವರೂ ಕೂಡ ಇದ್ದಾರೆ.&amp;nbsp;&lt;/p&gt;&lt;p&gt;ಕೆಲಸದ ಒತ್ತಡ, ಆಫೀಸ್&zwnj; ರಾಜಕೀಯದಿಂದ ಸಾಕಷ್ಟು ಒಳ್ಳೆಯ ಉದ್ಯೋಗಿಗಳನ್ನು ಕೂಡ ಕಂಪೆನಿ ಕಳೆದುಕೊಳ್ತಿದೆ. ಇದು ಎಲ್ಲ ರಂಗದಲ್ಲಿಯೂ ಸಹಜ ಎನ್ನುವಂತಾಗಿದೆ.&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/jobs/a-person-reject-90-lakh-rupees-job-offer-due-to-manager/articleshow-gdgfgx4"/>
        </item>
        <item>
            <title><![CDATA[ಭಾರತೀಯ ಸೇನೆ ನೇಮಕಾತಿ 2026: 350 ತಾಂತ್ರಿಕ ಹುದ್ದೆಗಳಿಗೆ ಇಂಜಿನಿಯರ್‌ಗಳಿಗೆ ಬಂಪರ್ ಅವಕಾಶ]]></title>
            <link>https://kannada.asianetnews.com/jobs/indian-army-ssc-tech-recruitment-2026-apply-for-350-posts-engineering-vacancies-gdp/articleshow-noyk7xs</link>
            <guid isPermaLink="true">https://kannada.asianetnews.com/jobs/indian-army-ssc-tech-recruitment-2026-apply-for-350-posts-engineering-vacancies-gdp/articleshow-noyk7xs</guid>
            <pubDate>Thu, 16 Jul 2026 15:11:58 +0530</pubDate>
            <description><![CDATA[ಭಾರತೀಯ ಸೇನೆಯು 350 ಶಾರ್ಟ್ ಸರ್ವಿಸ್ ಎಂಟ್ರಿ (ತಾಂತ್ರಿಕ) ಪುರುಷ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇಂಜಿನಿಯರಿಂಗ್ ಪದವಿ (BE/B.Tech) ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ ಮತ್ತು ಆಯ್ಕೆಯಾದವರಿಗೆ ಆಕರ್ಷಕ ವೇತನ ಶ್ರೇಣಿ ಇರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkqsncb914fypccb7hshp3cy,imgname-jammu-kashmir-uri-infiltration-attempt-foiled-indian-army-operation-diggi-2-terrorist-killed-loc-4--2--1773546418537.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಸೇನೆಯು 350 ಶಾರ್ಟ್ ಸರ್ವಿಸ್ ಎಂಟ್ರಿ (ತಾಂತ್ರಿಕ) ಪುರುಷ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್&zwnj;ಲೈನ್&zwnj; ಮೂಲಕ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;ಹುದ್ದೆಗಳ ವಿವರಗಳು:&lt;/h2&gt;&lt;p&gt;ಸೇವೆಯ ಹೆಸರು: ಭಾರತೀಯ ಸೇನೆ (Indian Army)&lt;/p&gt;&lt;p&gt;ಹುದ್ದೆಯ ಹೆಸರು: ಶಾರ್ಟ್ ಸರ್ವಿಸ್ ಎಂಟ್ರಿ&lt;/p&gt;&lt;p&gt;ಒಟ್ಟು ಹುದ್ದೆಗಳು: 350&lt;/p&gt;&lt;p&gt;ಉದ್ಯೋಗ ಸ್ಥಳ: ಅಖಿಲ ಭಾರತ&lt;/p&gt;&lt;h2&gt;ಈ ಹುದ್ದೆಯ ವಿಶೇಷತೆಗಳೇನು?&lt;/h2&gt;&lt;p&gt;ವೇತನ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 56,000 ದಿಂದ-2,24,400 ವರೆಗೆ ಅತ್ಯುತ್ತಮ ವೇತನ ಶ್ರೇಣಿ ಸಿಗಲಿದೆ.&lt;/p&gt;&lt;p&gt;ಅರ್ಜಿ ಶುಲ್ಕವಿಲ್ಲ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ:&lt;/h2&gt;&lt;p&gt;ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ BE / B.Tech (ಇಂಜಿನಿಯರಿಂಗ್) ಪದವಿ ಪೂರ್ಣಗೊಳಿಸಿರಬೇಕು.&lt;/p&gt;&lt;h2&gt;ವಯೋಮಿತಿ&lt;/h2&gt;&lt;p&gt;ಏಪ್ರಿಲ್&zwnj; 01-2027ರ ಅನ್ವಯ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು: 20 ವರ್ಷ, ಗರಿಷ್ಠ ವಯಸ್ಸು: 27 ವರ್ಷಗಳು.&lt;/p&gt;&lt;p&gt;ಭಾರತೀಯ ಸೇನೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?&lt;/h2&gt;&lt;p&gt;ಶಾರ್ಟ್&zwnj;ಲಿಸ್ಟಿಂಗ್&lt;/p&gt;&lt;p&gt;SSB ಸಂದರ್ಶನ&lt;/p&gt;&lt;p&gt;ವೈದ್ಯಕೀಯ ತಪಾಸಣೆ&lt;/p&gt;&lt;p&gt;ಅಂತಿಮ ಅರ್ಹತಾ ಪಟ್ಟಿ&lt;/p&gt;&lt;h2&gt;ಅರ್ಜಿ ಸಲ್ಲಿಸುವುದು ಹೇಗೆ?&lt;/h2&gt;&lt;p&gt;ಮೊದಲಿಗೆ ಭಾರತೀಯ ಸೇನೆಯ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ.&lt;/p&gt;&lt;p&gt;ಆನ್&zwnj;ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮುನ್ನ ನಿಮ್ಮ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಐಡಿ ಪ್ರೂಫ್, ವಯಸ್ಸಿನ ದಾಖಲೆ, ಬಿಇ/ಬಿ.ಟೆಕ್ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.&lt;/p&gt;&lt;p&gt;ವೆಬ್&zwnj;ಸೈಟ್&zwnj;ನಲ್ಲಿ ನೀಡಲಾದ SSC(T)-68 Men ಆನ್&zwnj;ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.&lt;/p&gt;&lt;p&gt;ಅಗತ್ಯವಿರುವ ಎಲ್ಲಾ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ ಮತ್ತು ನಿಮ್ಮ ಇತ್ತೀಚಿನ ಫೋಟೋ ಹಾಗೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್&zwnj;ಲೋಡ್ ಮಾಡಿ.&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಜುಲೈ 09-2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್&zwnj; 07-2026&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/indian-army-ssc-tech-recruitment-2026-apply-for-350-posts-engineering-vacancies-gdp/articleshow-noyk7xs"/>
        </item>
        <item>
            <title><![CDATA[ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್‌ರು; ಆ ಊರಿನಲ್ಲಿ ವಾತಾವರಣವನ್ನಷ್ಟೇ ಅಲ್ಲ ಹೊಸ ಇತಿಹಾಸ ಸೃಷ್ಟಿಸಿದ ರೈತನ ಮಕ್ಕಳು!]]></title>
            <link>https://kannada.asianetnews.com/education/one-house-four-police-officers-farmers-children-make-village-proud-bmk/articleshow-nvi0get</link>
            <guid isPermaLink="true">https://kannada.asianetnews.com/education/one-house-four-police-officers-farmers-children-make-village-proud-bmk/articleshow-nvi0get</guid>
            <pubDate>Fri, 17 Jul 2026 16:42:56 +0530</pubDate>
            <description><![CDATA[&lt;p&gt;ತೀವ್ರ ಬಡತನದ ನಡುವೆಯೂ, ವೃದ್ಧ ರೈತನೊಬ್ಬ ತನ್ನ ನಾಲ್ವರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ತಂದೆಯ ಕಷ್ಟವನ್ನು ಅರಿತ ಮಕ್ಕಳು, ಸ್ವಂತ ಪರಿಶ್ರಮದಿಂದ ಓದಿ, ನಾಲ್ವರೂ ಪೊಲೀಸ್ ಇಲಾಖೆಗೆ ಸೇರಿ ಇತಿಹಾಸ ಸೃಷ್ಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqwaqvdvp6kvtmwgf74xe38,imgname-police-1784286633837.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಪುಟ್ಟ ಹಳ್ಳಿ. ಅಲ್ಲಿನ ಮುರಿದು ಬಿದ್ದ ಹಳೇ ಮನೆಯೊಂದರ ಮುಂದೆ ಅಂದು ಇಡೀ ಗ್ರಾಮವೇ ನೆರೆದಿತ್ತು. ಸದಾ ಸಾಲದ ಸುಳಿಗೆ ಸಿಲುಕಿ, ಹರಿದ ಅಂಗಿ, ತೇಪೆ ಹಾಕಿದ ಚಪ್ಪಲಿ ಧರಿಸಿ ತಲೆ ತಗ್ಗಿಸಿ ನಡೆಯುತ್ತಿದ್ದ ವೃದ್ಧ ರೈತನ ಕಣ್ಣುಗಳಿಂದ ಅಂದು ನೀರು ನಿಲ್ಲುತ್ತಿರಲಿಲ್ಲ. ಆದರೆ ಆ ಕಣ್ಣೀರಿನಲ್ಲಿ ಅಂದು ಹತಾಶೆ ಇರಲಿಲ್ಲ, ಬದಲಿಗೆ ಜಗತ್ತನ್ನೇ ಗೆದ್ದ ಹೆಮ್ಮೆಯಿತ್ತು! ಏಕೆಂದರೆ, ಬಡತನದ ಕಾರಣಕ್ಕೆ ಸಮಾಜ ಯಾರನ್ನು ಕಡೆಗಣಿಸಿತ್ತೋ, ಅದೇ ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್&zwnj;ರು ಒಟ್ಟಿಗೆ ಖಾಕಿ ಉಡುಪು ಧರಿಸಿ ಆ ವೃದ್ಧ ತಂದೆಯ ಮುಂದೆ ತಲೆ ಎತ್ತಿ ನಿಂತಿದ್ದರು.&lt;/p&gt;&lt;h2&gt;&lt;strong&gt;ಬಡತನದ ಕತ್ತಲಲ್ಲಿ ಬೆಂದ ಬಾಲ್ಯ!&lt;/strong&gt;&lt;/h2&gt;&lt;p&gt;ಅತ್ತರ್ ಸಿಂಗ್ ಮತ್ತು ಅವರ ಪತ್ನಿ ರಾಜ್ವಂತಿ ದೇವಿಗೆ ದುಬಾರಿ ಶಿಕ್ಷಣದ ಅರಿವಿರಲಿಲ್ಲ. ಹೊಲದಲ್ಲಿ ಹಗಲಿರುಳು ಕಷ್ಟಪಟ್ಟರೂ ದಿನದ ಕೊನೆಯಲ್ಲಿ ಕೈಗೆ ಸಿಗುತ್ತಿದ್ದುದು ಕೇವಲ ಕೆಲವು ರೂಪಾಯಿಗಳು ಮಾತ್ರ. ಮೂವರು ಹೆಣ್ಣುಮಕ್ಕಳು ಹುಟ್ಟಿದಾಗ, ಇವರ ಮದುವೆ ಮಾಡುವುದು ಹೇಗೆ? ಈ ಬಡತನದಲ್ಲಿ ಇವರನ್ನು ಸಾಕುವುದು ಹೇಗೆ? ಎಂದು ಸಮಾಜ ನಿಟ್ಟುಸಿರು ಬಿಟ್ಟಿತ್ತು. ಆದರೆ ಆ ವೃದ್ಧ ತಂದೆ ತನ್ನ ಹೊಟ್ಟೆಗೆ ಬಟ್ಟೆ ಕಟ್ಟಿಯಾದರೂ ಮಕ್ಕಳ ಕೈಗೆ ಪುಸ್ತಕ ನೀಡಿದರು. ತಂದೆಯ ಪಾದದ ಬಿರುಕುಗಳು ಮತ್ತು ತಾಯಿಯ ಕಣ್ಣೀರನ್ನು ಕಂಡ ಮಕ್ಕಳಿಗೆ ಒಂದೇ ಹಠವಿತ್ತು. ಅದೇನೆಂದರೆ, ನಮ್ಮ ತಂದೆಯ ಹೆಗಲ ಮೇಲಿರುವ ಬಡತನದ ಈ ನೊಗ ನಾವೇ ಮುರಿಯಬೇಕು.&lt;/p&gt;&lt;p&gt;ಕೋಚಿಂಗ್&zwnj;ಗೆ ಇರಲಿಲ್ಲ ಹಣ!&lt;/p&gt;&lt;p&gt;ಕೋಚಿಂಗ್ ಸೆಂಟರ್&zwnj;ಗೆ ಹೋಗಲು ಹಣವಿರಲಿಲ್ಲ, ಸರಿಯಾದ ಸ್ಟಡಿ ಮೆಟೀರಿಯಲ್ ಇರಲಿಲ್ಲ. ಆದರೆ ಅವರ ಬಳಿ ಬೆಂಕಿಯಂತಹ ಛಲವಿತ್ತು. ಹಳ್ಳಿಯ ಕತ್ತಲ ರಾತ್ರಿಯಲ್ಲಿ ಒಂದೇ ದೀಪದ ಬೆಳಕಿನಲ್ಲಿ ಹಳೆಯ ಪುಸ್ತಕಗಳನ್ನು ನಾಲ್ವರೂ ಒಟ್ಟಿಗೆ ಹಂಚಿಕೊಂಡು ಓದಿದರು. ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆಗಾಗಿ ಬೆಳಗಿನ ಜಾವ 4 ಗಂಟೆಗೆ ಬರಿಗಾಲಿನಲ್ಲೇ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ ಓಡಿ ರಕ್ತ ಮತ್ತು ಬೆವರನ್ನು ಒಂದಾಗಿಸಿದರು.&lt;/p&gt;&lt;h3&gt;&lt;strong&gt;ಸಮಾಜದ ಬಡತನ ಮಂಡಿಯೂರಿದ ಕ್ಷಣ!&lt;/strong&gt;&lt;/h3&gt;&lt;p&gt;ಇವರ ಕಠಿಣ ಪರಿಶ್ರಮದ ಮುಂದೆ ವಿಧಿ ಕೂಡ ಸೋಲಲೇಬೇಕಾಯಿತು. ಮೊದಲಿಗೆ ಹಿರಿಯ ಮಗಳು ಸುದೇಶ್ ಚಂಡೀಗಢ ಪೊಲೀಸ್&zwnj; ಕಾನ್&zwnj;ಸ್ಟೆಬಲ್ ಆಗಿ ಆಯ್ಕೆಯಾಗಿ ಇತಿಹಾಸ ಬರೆದರು. ಅವಳ ಹಾದಿಯನ್ನೇ ಹಿಡಿದು ಎರಡನೇ ಮಗಳು ಊರ್ಮಿಳಾ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಸೇರಿಕೊಂಡರೆ, ಮೂರನೇ ಮಗಳು ಮೋನಿಕಾ ದೆಹಲಿ ಪೊಲೀಸ್&zwnj; ಇಲಾಖೆಗೆ ಸಿಂಹಿಣಿಯಂತೆ ಹೆಜ್ಜೆ ಇಟ್ಟರು. ಕೊನೆಯಲ್ಲಿ ಕಿರಿಯ ಮಗ ಅಂಕಿತ್ ಹರಿಯಾಣ ಪೊಲೀಸ್ ಪಡೆಗೆ ಸೇರ್ಪಡೆಯಾದರು. ಇಡೀ ದೇಶದ ಇತಿಹಾಸದಲ್ಲೇ ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್&zwnj;ರು ಒಟ್ಟಿಗೆ ದೇಶಸೇವೆಗೆ ನಿಂತ ಅತ್ಯಂತ ಅಪರೂಪದ ಘಟನೆ ಇದಾಯಿತು.&lt;/p&gt;&lt;h3&gt;&lt;strong&gt;ಕಣ್ಣೀರ ಧಾರೆ ಹರಿದ ಆ ಮಹಾ ಕ್ಷಣ!&lt;/strong&gt;&lt;/h3&gt;&lt;p&gt;ನಾಲ್ವರೂ ಒಟ್ಟಿಗೆ ತರಬೇತಿ ಮುಗಿಸಿ, ತಲೆಯ ಮೇಲೊಂದು ಖಾಕಿ ಕ್ಯಾಪ್, ಮೈಮೇಲೆ ಖಡಕ್ ಯೂನಿಫಾರ್ಮ್ ಧರಿಸಿ ತಮ್ಮ ಹಳ್ಳಿಯ ಮನೆಗೆ ಬಂದಾಗ ಇಡೀ ಗ್ರಾಮವೇ ಕಣ್ಣೀರು ಹಾಕಿತು. ಸದಾ ಬಡತನದಿಂದ ತಲೆ ತಗ್ಗಿಸಿ ನಡೆಯುತ್ತಿದ್ದ ಆ ವೃದ್ಧ ತಂದೆಯ ಮುಂದೆ ನಿಂತು, ಈ ನಾಲ್ಕು ಜನ ಮಕ್ಕಳು ಒಟ್ಟಿಗೆ ಹಸ್ತ ಎತ್ತಿ 'ಸೆಲ್ಯೂಟ್' ಹೊಡೆದಾಗ ಆ ತಂದೆಯ ಎದೆ ಹೆಮ್ಮೆಯಿಂದ ಉಬ್ಬಿತು. ತನ್ನ ಹರಿದ ಅಂಗಿಯ ಹೆಗಲ ಮೇಲೆ ಮುಖ ಮುಚ್ಚಿಕೊಂಡು, ಆನಂದಬಾಷ್ಪ ಸುರಿಸುತ್ತಾ ಆ ತಂದೆ ಬಿಕ್ಕಿ ಬಿಕ್ಕಿ ಅತ್ತರು. ನನ್ನ ಮಕ್ಕಳು ಕೇವಲ ನನ್ನ ಸಾಲ ತೀರಿಸಲಿಲ್ಲ, ನನ್ನ ಜನ್ಮವನ್ನೇ ಸಾರ್ಥಕಗೊಳಿಸಿದರು. ಇಡೀ ದೇಶ ಕಾಯುವ ಜವಾಬ್ದಾರಿ ಇಂದು ನನ್ನ ಮಕ್ಕಳ ಮೇಲಿದೆ,&quot; ಎಂದು ತಂದೆ ಅತ್ತಾಗ ಅಲ್ಲಿ ನೆರೆದಿದ್ದ ಇಡೀ ಹಳ್ಳಿಯ ಕಣ್ಣುಗಳು ತೇವವಾಗಿದ್ದವು.&lt;/p&gt;]]></content:encoded>
            <category>jobs</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/education/one-house-four-police-officers-farmers-children-make-village-proud-bmk/articleshow-nvi0get"/>
        </item>
        <item>
            <title><![CDATA["ಅವತ್ತು ಕೆಲಸ ಕಳೆದುಕೊಂಡಿದ್ದೇ ನನಗೆ ವರವಾಯ್ತು!" - ಮಹಿಳಾ ಉದ್ಯಮಿಯ ರೋಚಕ ಸಕ್ಸಸ್ ಸ್ಟೋರಿ]]></title>
            <link>https://kannada.asianetnews.com/viral/woman-says-losing-her-job-after-maternity-leave-inspired-her-entrepreneurial-journey/articleshow-pklpl6p</link>
            <guid isPermaLink="true">https://kannada.asianetnews.com/viral/woman-says-losing-her-job-after-maternity-leave-inspired-her-entrepreneurial-journey/articleshow-pklpl6p</guid>
            <pubDate>Thu, 16 Jul 2026 19:00:29 +0530</pubDate>
            <description><![CDATA[&lt;p&gt;ಹೆರಿಗೆ ರಜೆ ಮುಗಿಸಿ ಹಿಂದಿರುಗಿದ ಬೆನ್ನಲ್ಲೇ ಕೆಲಸ ಕಳೆದುಕೊಂಡ ತಾರಿಣಿ ಎಂಬ ಮಹಿಳೆಯ ಸ್ಪೂರ್ತಿದಾಯಕ ಕಥೆ ಇಲ್ಲಿದೆ. ಕಾರ್ಪೊರೇಟ್ ಉದ್ಯೋಗ ಭದ್ರತೆಯ ಭ್ರಮೆಯಿಂದ ಹೊರಬಂದ ಅವರು, ಬೇರೆಯವರ ಕಂಪನಿಗಾಗಿ ದುಡಿಯುವ ಬದಲು ಮೊದಲಿನಿಂದ ತಮ್ಮದೇ ಆದ ಸ್ವಂತ ಬಿಸಿನೆಸ್ ನಿರ್ಮಿಸಲು ನಿರ್ಧರಿಸಿದ್ದಾರೆ. ತಾಯ್ತನ ಹಾಗೂ ನಿರುದ್ಯೋಗದ ಸವಾಲುಗಳನ್ನು ಎದುರಿಸಿ ಅವರು ಇಟ್ಟ ದಿಟ್ಟ ಹೆಜ್ಜೆಗೆ ನೆಟ್ಟಿಗರಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmw8eq4m4caxhgtqyt8chkv,imgname-laid-off-after-maternity-leave-woman-turns-setback-into-a-thriving-business-1784185895651.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಜೀವನದಲ್ಲಿ ಅತ್ಯಂತ ಸ್ಥಿರತೆಯನ್ನು ನಿರೀಕ್ಷಿಸುವ ಸಮಯದಲ್ಲಿ ಉದ್ಯೋಗ ನಷ್ಟದಂತಹ ಆಘಾತ ಎದುರಾದರೆ ಅದನ್ನು ತಡೆದುಕೊಳ್ಳುವುದು ಸುಲಭವಲ್ಲ. ಅದರಲ್ಲೂ ತಾಯಿತನದ ಸುಂದರ ದಿನಗಳನ್ನು ಕಳೆದು, ಹೆರಿಗೆ ರಜೆಯ ನಂತರ ಕಚೇರಿಗೆ ಮರಳಲು ಸಿದ್ಧರಾಗಿದ್ದ ಮಹಿಳೆಯೊಬ್ಬರನ್ನು ಕೆಲಸದಿಂದ ವಜಾಗೊಳಿಸಿದ ಕಾರ್ಪೊರೇಟ್ ಕ್ರೌರ್ಯದ ಕಥೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಆದರೆ, ಈ ಹಿನ್ನಡೆಗೆ ಧೃತಿಗೆಡದ ಆ ದಿಟ್ಟ ಮಹಿಳೆ, ಅದೇ ನಷ್ಟವನ್ನು ಪ್ರೇರಣೆಯಾಗಿ ಪಡೆದು ತನ್ನದೇ ಆದ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.&lt;/p&gt;&lt;p&gt;&lt;strong&gt;ಉದ್ಯೋಗ ಭದ್ರತೆಯ ಭ್ರಮೆ ನಿರಸನ..!&lt;/strong&gt;&lt;/p&gt;&lt;p&gt;ತಾರಿಣಿ ಎಂಬುವವರು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಈ ಸ್ಪೂರ್ತಿದಾಯಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. &quot;ನನ್ನ ಹೆರಿಗೆ ರಜೆಯ ನಂತರ ನನ್ನನ್ನು ಕೆಲಸದಿಂದ ವಜಾಗೊಳಿಸಲಾಯಿತು. ಪ್ರಾಮಾಣಿಕವಾಗಿ ಕಷ್ಟಪಟ್ಟು ಕೆಲಸ ಮಾಡಿದರೆ ಉದ್ಯೋಗ ಭದ್ರತೆ ಇರುತ್ತದೆ ಎಂದು ನಾನು ನಂಬಿದ್ದೆ. ಆದರೆ ನನ್ನ ವೃತ್ತಿಜೀವನದ ಅತ್ಯಂತ ಸೂಕ್ಷ್ಮ ಹಂತದಲ್ಲೇ ನನಗೆ ಲೇ-ಆಫ್ ಶಾಕ್ ನೀಡಲಾಯಿತು. ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಭದ್ರತೆ ಎಂಬುದೇ ಇಲ್ಲ ಎಂಬುದು ನನಗೆ ಆಗ ಅರಿವಾಯಿತು. ನನ್ನ ಇಡೀ ಕಠಿಣ ಪರಿಶ್ರಮ ಮತ್ತು ಸೃಜನಶೀಲತೆಯನ್ನು ಬೇರೆಯವರ ಬಿಸಿನೆಸ್&zwnj;ಗೆ ಸುರಿಯುವ ಬದಲು, ನನ್ನದೇ ಆದ ಸ್ವಂತ ಉದ್ಯಮವನ್ನು ಏಕೆ ಪ್ರಾರಂಭಿಸಬಾರದು ಎಂದು ಯೋಚಿಸಿದೆ. ಕಂಟೆಂಟ್ ಕ್ರಿಯೇಷನ್ ಇರಲಿ ಅಥವಾ ಫ್ರೀಲ್ಯಾನ್ಸ್ ಕೆಲಸವಿರಲಿ, ನಾನು ನನ್ನ ಹೊಸ ಪ್ರಯಾಣವನ್ನು ಆರಂಭಿಸುತ್ತಿದ್ದೇನೆ,&quot; ಎಂದು ತಾರಿಣಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಬೆರೋಜ್&zwnj;ಗಾರ್ ಮತ್ತು ಬಿಲ್ಡಿಂಗ್' ಯುಗಕ್ಕೆ ಸ್ವಾಗತ:&lt;/strong&gt;&lt;/p&gt;&lt;p&gt;ತಮ್ಮ ವೃತ್ತಿಜೀವನದ ಈ ಅನಿರೀಕ್ಷಿತ ತಿರುವಿನ ಬಗ್ಗೆ ತಾರಿಣಿ ಭಾವನಾತ್ಮಕ ಶೀರ್ಷಿಕೆಯನ್ನು ಬರೆದಿದ್ದಾರೆ. &quot;ನನ್ನ ಬೆರೋಜ್&zwnj;ಗಾರ್ (ನಿರುದ್ಯೋಗಿ) ಮತ್ತು ಕಟ್ಟಡ ನಿರ್ಮಾಣ ಯುಗಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ನಾನು ಈ ಅಧ್ಯಾಯವನ್ನು ಎಂದೂ ಯೋಜಿಸಿರಲಿಲ್ಲ. ಕೆಲಸ ಹೋದಾಗ ಎಲ್ಲವೂ ಮುಗಿದುಹೋಯಿತು ಅನಿಸಿತು. ಆದರೆ ಉದ್ಯೋಗದ ಅರ್ಜಿಗಳು, ರಿಜೆಕ್ಷನ್ ಇಮೇಲ್&zwnj;ಗಳು ಮತ್ತು ನನ್ನ ಮಗುವನ್ನು ನೋಡಿಕೊಳ್ಳುವ ನಡುವೆ ನನಗೆ ಹೊಸ ಸತ್ಯದ ಅರಿವಾಯಿತು. ಇದು ನನ್ನ ವೃತ್ತಿಜೀವನದ ಅಂತ್ಯವಲ್ಲ, ಬದಲಿಗೆ ನನ್ನದೇ ಆದ ಹೊಸ ಸಾಮ್ರಾಜ್ಯವನ್ನು ಕಟ್ಟುವ ಆರಂಭ. ಈ ಸರಣಿಯು ಮೊದಲಿನಿಂದ ಬಿಸಿನೆಸ್ ಬೆಳೆಸುವುದು, ತಾಯ್ತನವನ್ನು ನಿಭಾಯಿಸುವುದು ಮತ್ತು ಬೇರೊಬ್ಬರ ತೀರ್ಮಾನದ ಮೇಲೆ ಬದುಕದೆ ನನ್ನದೇ ಆದ ಸ್ವತಂತ್ರ ಜೀವನವನ್ನು ರೂಪಿಸಿಕೊಳ್ಳುವುದರ ಬಗ್ಗೆಯಾಗಿದೆ,&quot; ಎಂದು ಅವರು ಇತರರಿಗೂ ಧೈರ್ಯ ತುಂಬಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Taarini&rsquo;sdayoff (@taarinisdayoff)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/woman-says-losing-her-job-after-maternity-leave-inspired-her-entrepreneurial-journey/articleshow-pklpl6p"/>
        </item>
        <item>
            <title><![CDATA[ಹಳೆ ನೌಕರಿ ಬೋರಾಗೋಯ್ತ? 50ರ ನಂತರ ಹೊಸ ಕರಿಯರ್ ಹೀಗೆ ಶುರು ಮಾಡಿ]]></title>
            <link>https://kannada.asianetnews.com/private-jobs/job-change-after-the-age-of-50-is-right-time-for-career-growth/articleshow-pnfpu30</link>
            <guid isPermaLink="true">https://kannada.asianetnews.com/private-jobs/job-change-after-the-age-of-50-is-right-time-for-career-growth/articleshow-pnfpu30</guid>
            <pubDate>Sat, 18 Jul 2026 22:42:17 +0530</pubDate>
            <description><![CDATA[&lt;p&gt;ಈಗ ಇರುವಂತಹ ಕೆಲಸವು ಬೋರ್ ಹೊಡೆಸಿದ್ದು, 50ರ ನಂತರ ನೀವು ಬೇರೆ ಕೆಲಸ ಮಾಡಬೇಕು ಎಂದು ಬಯಸಿದರೆ, ಇಲ್ಲಿದೆ ನಿಮಗಾಗಿ ಒಂದಷ್ಟು ಸಲಹೆಗಳು. ಈ ಸಮಯದಲ್ಲಿ ನೀವು ಹಣವನ್ನಲ್ಲದೇ ನಿಮ್ಮ ಪ್ಯಾಶನ್ ಬೆನ್ನಟ್ಟಿ ಹೊರಟಿದ್ದರೆ, ಈ ಅವಕಾಶಗಳಿಗೆ ನೀವು ಖಂಡಿತವಾಗಿ ಕರಿಯರ್ ನಲ್ಲಿ ಬದಲಾವಣೆ ತರಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jz5dd0j26mkrb15m93re97bt,imgname-stress--1--1751454745154.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;50ರ ನಂತರ ಹೊಸ ಕರಿಯರ್&lt;/strong&gt;&lt;/h2&gt;&lt;p&gt;ಹಿಂದೆ, ಜನರು 40 ಅಥವಾ 50 ವರ್ಷ ವಯಸ್ಸಾಗುತ್ತಿದ್ದಂತೆ ಜೀವನದಲ್ಲಿ ಸೆಟಲ್ ಆಗಲು ಯೋಚನೆ ಮಾಡುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ. ಹಿಂದೆ ಈ ವಯಸ್ಸಿನಲ್ಲಿ ಜನರು ಎಲ್ಲಾ ಜವಾಬ್ದಾರಿಗಳಿಂದ ಮುಕ್ತರಾಗುತ್ತಿದ್ದರು, ಆದರೆ ಈಗ ಅವರು ಹೊಸ ಕರಿಯರ್ ಆಯ್ಕೆಗಳನ್ನು ಹುಡುಕುತ್ತಿರುತ್ತಾರೆ. ನೀವು ಕೂಡ 50ರ ನಂತರ ಹೊಸ ಕರಿಯರ್ ಶುರು ಮಾಡಲು ಬಯಸಿದರೆ ನೀವು ಯಾವ ಕೆಲಸ ಆಯ್ಕೆ ಮಾಡಬಹುದು ನೋಡೋಣ&lt;/p&gt;&lt;h3&gt;&lt;strong&gt;ಹಣವನ್ನಲ್ಲ, ಪ್ಯಾಶನ್ ಬೆನ್ನಟ್ಟಿರಿ&lt;/strong&gt;&lt;/h3&gt;&lt;p&gt;ಜನರು ಹದಿಹರೆಯದಲ್ಲಿದ್ದಾಗ, ಪ್ರತಿಯೊಂದು ಕರಿಯರ್ ಆಕರ್ಷಕವಾಗಿರುತ್ತದೆ, ಆದರೆ 50ರ ಹೊತ್ತಿಗೆ, ನಿಮ್ಮ ಸಾಮರ್ಥ್ಯ ಮತ್ತು ವೀಕ್ ನೆಸ್ ಎರಡೂ ನೀವು ಚೆನ್ನಾಗಿ ತಿಳಿದಿರುತ್ತೀರಿ. ನೀವು ಯಾವುದರಲ್ಲಿ ಉತ್ತಮರು ಎಂದು ನಿಮಗೆ ತಿಳಿದಿದೆ. ಇದಲ್ಲದೆ, ಹಣಕಾಸಿನ ಸಮಸ್ಯೆ ಅಥವಾ ಸೆಟಲ್ ಆಗುವ ಭಯವಿರುವುದಿಲ್ಲ. 50 ನೇ ವಯಸ್ಸಿನಲ್ಲಿ, ನೀವು ನಿಮ್ಮ ಎಲ್ಲಾ ಪ್ರಮುಖ ಜವಾಬ್ದಾರಿಗಳನ್ನು ಪೂರೈಸಿರುತ್ತೀರಿ, ಹಾಗಾಗಿ ನಿಮ್ಮ ಪ್ಯಾಶನ್ ಫಾಲೋ ಮಾಡಿ.&lt;/p&gt;&lt;h3&gt;&lt;strong&gt;ಈ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿವೆಯೇ?&lt;/strong&gt;&lt;/h3&gt;&lt;p&gt;ಈ ವಯಸ್ಸಿನಲ್ಲಿ ಯಾರೂ ಮತ್ತೆ ಶಿಕ್ಷಣ ಪಡೆಯಲು ಅಥವಾ ಹೊಸ ಸ್ಕಿಲ್ ಕಲಿಯಲು ಸಾಧ್ಯವಿಲ್ಲ ಎಂದು ಹಲವರು ಭಾವಿಸುತ್ತಾರೆ, ಆದರೆ ಇದು ತಪ್ಪು. ಇಂದಿನ ಡಿಜಿಟಲ್ ಯುಗದಲ್ಲಿ, ಹೊಸ ಕೌಶಲ್ಯಗಳನ್ನು ಕಲಿಯುವುದು ತುಂಬಾ ಸುಲಭ. ಪದವಿ ಅಗತ್ಯವಿ ಕೂಡ ಇರುವುದಿಲ್ಲ. ನೀವು ಯಾವೆಲ್ಲಾ ಉದ್ಯೋಗವನ್ನು ಮಾಡಬಹುದು ನೋಡೋಣ.&lt;/p&gt;&lt;p&gt;&lt;strong&gt;AI ಮತ್ತು ಡಿಜಿಟಲ್ ಸ್ಕಿಲ್&lt;/strong&gt;&lt;/p&gt;&lt;p&gt;AI ಟೂಲ್ಸ್, ಪ್ರಾಮ್ಟ್ ರೈಟಿಂಗ್, ಡೇಟಾ ಅನಾಲಿಸೀಸ್ ಮತ್ತು ಅಟೋಮೇಶನ್ ನಂತಹ ಕೌಶಲ್ಯಗಳಿಗೆ ಇದೀಗ ಹೆಚ್ಚು ಬೇಡಿಕೆ ಇದೆ. ನಿಮಗೆ ಟೆಕ್ನಾಲಜಿ ಬಗ್ಗೆ ಗೊತ್ತಿರದೇ ಇದ್ದರೂ ಕೆಲವು ಆರಂಭಿಕ ಕೋರ್ಸ್ ಲಭ್ಯವಿದೆ.&lt;/p&gt;&lt;p&gt;&lt;strong&gt;ಸೈಬರ್ ಸೆಕ್ಯೂರಿಟಿ&lt;/strong&gt;&lt;/p&gt;&lt;p&gt;ಡಿಜಿಟಲ್ ಜಗತ್ತು ವಿಸ್ತಾರವಾಗುತ್ತಿದ್ದಂತೆ, ಸೈಬರ್ ಸೆಕ್ಯೂರಿಟಿ ಪ್ರೊಫೆಶನ್ ಅಗತ್ಯವು ನಿರಂತರವಾಗಿ ಹೆಚ್ಚುತ್ತಿದೆ. ರಿಸ್ಕ್ ಮ್ಯಾನೇಜ್ ಮೆಂಟ್ ಮತ್ತು ಕಂಪ್ಲಾಯನ್ಸ್ ಹುದ್ದೆಗಳಿಗೆ ಅನುಭವಿ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಾರೆ.&lt;/p&gt;&lt;p&gt;&lt;strong&gt;ಪ್ರಾಜೆಕ್ಟ್ ಮತ್ತು ಪ್ರಾಡಕ್ಟ್ ಮ್ಯಾನೇಜ್ ಮೆಂಟ್&lt;/strong&gt;&lt;/p&gt;&lt;p&gt;ನೀವು ತಂಡಗಳು ಮತ್ತು ಪ್ರಾಜೆಕ್ಟ್ ನಿರ್ವಹಿಸುವಲ್ಲಿ ಅನುಭವ ಹೊಂದಿದ್ದರೆ, ಈ ಕ್ಷೇತ್ರವು ನಿಮಗೆ ಉತ್ತಮ ಆಯ್ಕೆಯಾಗಬಹುದು.&lt;/p&gt;&lt;p&gt;&lt;strong&gt;ಫಿನಾನ್ಶಿಯಲ್ ಪ್ಲಾನಿಂಗ್&lt;/strong&gt;&lt;/p&gt;&lt;p&gt;ನೀವು ಹಣಕಾಸು ಯೋಜನೆಯಲ್ಲಿ ಆಸಕ್ತಿ ಹೊಂದಿದ್ದರೆ, ನೀವು ಫಿನಾನ್ಸಿಯಲ್ ಅಡ್ವೈಸರ್ ಅಥವಾ ವೆಲ್ತ್ ಮ್ಯಾನೇಜರ್ ಆಗಿ ಕೆಲಸ ಮಾಡಬಹುದು.&lt;/p&gt;&lt;p&gt;&lt;strong&gt;ಡಿಜಿಟಲ್ ಮಾರ್ಕೆಟಿಂಗ್ ಮತ್ತು ವಿಷಯ&lt;/strong&gt;&lt;/p&gt;&lt;p&gt;ಕಂಟೆಂಟ್ ರೈಟಿಂಗ್, ಸೋಶಿಯಲ್ ಮೀಡಿಯಾ ಮ್ಯಾನೇಜ್ ಮೆಂಟ್ ಮತ್ತು ಇ-ಕಾಮರ್ಸ್&zwnj;ನಂತಹ ಕ್ಷೇತ್ರಗಳಲ್ಲಿ ಸ್ವತಂತ್ರ ಮತ್ತು ಪೂರ್ಣ ಸಮಯದ ಅವಕಾಶಗಳಿವೆ. ಇವುಗಳಲ್ಲಿ ಯಾವುದನ್ನೂ ಬೇಕಾದರೂ ನೀವು ಟ್ರೈ ಮಾಡಬಹುದು.&lt;/p&gt;]]></content:encoded>
            <category>jobs</category>
            <dc:creator>Pavna Das</dc:creator>
            <atom:link href="https://kannada.asianetnews.com/private-jobs/job-change-after-the-age-of-50-is-right-time-for-career-growth/articleshow-pnfpu30"/>
        </item>
        <item>
            <title><![CDATA[3 ಕೋಟಿ ರೂ.ಕಾರಲ್ಲಿ ಮನೆಗೆಲಸ ಮಾಡಲು ಬರುವಾಕೆ! ಜಾಲತಾಣದಲ್ಲಿ ಈಕೆಯದ್ದೇ ಹವಾ]]></title>
            <link>https://kannada.asianetnews.com/viral/chinese-woman-arrives-in-rs-3-crore-bentley-washes-dishes-at-restaurant-suc/articleshow-vd36xgk</link>
            <guid isPermaLink="true">https://kannada.asianetnews.com/viral/chinese-woman-arrives-in-rs-3-crore-bentley-washes-dishes-at-restaurant-suc/articleshow-vd36xgk</guid>
            <pubDate>Sun, 19 Jul 2026 19:30:39 +0530</pubDate>
            <description><![CDATA[&lt;p&gt;ಶ್ರೀಮಂತ ಮಹಿಳೆಯೊಬ್ಬಳು ತನ್ನ 3 ಕೋಟಿ ರೂಪಾಯಿ ಮೌಲ್ಯದ ಬೆಂಟ್ಲಿ ಕಾರಿನಲ್ಲಿ ಬಂದು ರೆಸ್ಟೋರೆಂಟ್&zwnj;ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾಳೆ. ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತನ್ನ ಸಂಪತ್ತಿನ ಹೊರತಾಗಿಯೂ ಕೆಲಸ ಮಾಡಲು ಇಷ್ಟಪಡುವ ಈಕೆಯ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxxavdhv4h0cvamwtzjnpmhm,imgname-china-1784469632571.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಕೆ ಮನೆಗೆಲಸದಾಕೆ. ಹಲವಾರು ಮನೆಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಇವಳದ್ದು. ಆದರೆ ಪ್ರತಿ ಮನೆಗೆ ಹೋಗುವಾಗ ಅವಳು ಹೋಗುವುದು ತನ್ನ 3 ಕೋಟಿ ರೂಪಾಯಿಯ ಕಾರಿನಲ್ಲಿ! ಹೆಚ್ಚಾಗಿ ಈಕೆ ರೆಸ್ಟೋರೆಂಟ್​ಗಳಲ್ಲಿಯೂ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾಳೆ. ಇದೀಗ ಈ ಮಹಿಳೆ ಸಿಕ್ಕಾಪಟ್ಟೆ ವೈರಲ್​ ಆಗಿದ್ದಾಳೆ. ರಾತ್ರೋರಾತ್ರಿ ಫೇಮಸ್​ ಆಗಿರೋ ಈಕೆ ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸ್ತಿದ್ದಾಳೆ. ಮೈಕ್ರೋಬ್ಲಾಗಿಂಗ್ ಪ್ಲಾಟ್&zwnj;ಫಾರ್ಮ್, ವೀಬೊದಲ್ಲಿ ಹಂಚಿಕೊಳ್ಳಲಾದ ಪೋಸ್ಟ್​ನಲ್ಲಿ ಈ ಮಹಿಳೆಯ ವಿಡಿಯೋ ಶೇರ್​ ಮಾಡಲಾಗಿದೆ. ಇದರಲ್ಲಿ ಮಹಿಳೆ ಪ್ರಯಾಣಿಸುವಾಗ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡಬಹುದಾಗಿದೆ.&lt;/p&gt;&lt;h2&gt;&lt;strong&gt;ಎಲ್ಲಿದು ಘಟನೆ?&lt;/strong&gt;&lt;/h2&gt;&lt;p&gt;ಅಂದಹಾಗೆ ಈಕೆ ಭಾರತದವಳಲ್ಲ, ಬದಲಿಗೆ ಚೀನಾದಲ್ಲಿ ನಡೆಯುತ್ತಿರುವ ಘಟನೆ. ಚೀನಾದ ಚೆಂಗ್ಡುವಿನಲ್ಲಿ ವೃದ್ಧ ಮಹಿಳೆಯ ದೈನಂದಿನ ಪಾತ್ರೆ ತೊಳೆಯುವ ದಿನಚರಿ ವೈರಲ್ ಆಗಿದ್ದು ಐಷಾರಾಮಿ ಕಾರಿನಲ್ಲಿ ಬರುವುದನ್ನು ನೊಡಬಹುದು.&lt;/p&gt;&lt;p&gt;ವಿಡಿಯೋದ ಸ್ಕ್ರೀನ್&zwnj;ಶಾಟ್&zwnj;ಗಳು ಟ್ವಿಟರ್ ಮತ್ತು ಇನ್&zwnj;ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ. ಗುಲಾಬಿ ಬಣ್ಣದ ಪಟ್ಟೆ ಶರ್ಟ್, ರಬ್ಬರ್ ಬೂಟುಗಳು ಮತ್ತು ಏಪ್ರನ್ ಧರಿಸಿದ ಮಹಿಳೆ ಐಷಾರಾಮಿ ಕಾರಿನಿಂದ ಹೊರಬಂದು ನಂತರ ರೆಸ್ಟೋರೆಂಟ್&zwnj;ಗೆ ಪ್ರವೇಶಿಸುವುದನ್ನು ಇದು ತೋರಿಸುತ್ತದೆ. ರಾತ್ರೋರಾತ್ರಿ ಈ ಮಹಿಳೆ ವರ್ಲ್ಡ್​ ಫೇಮಸ್​ ಆಗಿದ್ದಾಳೆ.&lt;/p&gt;&lt;h3&gt;&lt;strong&gt;ಯಾರೀಕೆ?&lt;/strong&gt;&lt;/h3&gt;&lt;p&gt;ವರದಿಗಳ ಪ್ರಕಾರ, ಈ ಮಹಿಳೆ ಶ್ರೀಮಂತ ಕುಟುಂಬದಿಂದ ಬಂದವಳು ಮತ್ತು ಆಕೆಯ ಮಗಳು ಪ್ರತಿದಿನ ಬೆಳಿಗ್ಗೆ ತನ್ನ ಐಷಾರಾಮಿ ಬೆಂಟ್ಲಿ ಕಾರಿನಲ್ಲಿ ಅವಳನ್ನು ರೆಸ್ಟೋರೆಂಟ್&zwnj;ಗೆ ಬಿಡುತ್ತಾಳೆ. ಅವಳ ಸಂಪತ್ತಿನ ಹೊರತಾಗಿಯೂ, ಅವಳು ರೆಸ್ಟೋರೆಂಟ್&zwnj;ನಲ್ಲಿ ಡಿಶ್&zwnj;ವಾಶರ್ ಮತ್ತು ಕ್ಲೀನರ್ ಆಗಿ ಕೆಲಸ ಮಾಡಲು ಆರಿಸಿಕೊಂಡಿದ್ದಾಳೆ.&lt;/p&gt;&lt;p&gt;ಈ ಪೋಸ್ಟ್ ಆನ್&zwnj;ಲೈನ್&zwnj;ನಲ್ಲಿ ಪ್ರಶಂಸೆಯ ಅಲೆಯನ್ನು ಸೃಷ್ಟಿಸಿದೆ. ಅನೇಕ ಬಳಕೆದಾರರು ಅವರ ನಿರ್ಧಾರವನ್ನು ಬುದ್ಧಿವಂತ ನಿರ್ಧಾರ ಎಂದು ಹೊಗಳುತ್ತಿದ್ದಾರೆ. ದೀರ್ಘಾಯುಷ್ಯಕ್ಕೆ ಮಾನವ ಸಂಪರ್ಕಗಳು ನಿರ್ಣಾಯಕವಾಗಿ ಈ ವಯಸ್ಸಿನಲ್ಲಿಯೂ ಈಕೆಯ ಸಾಧನೆ ಮೆಚ್ಚುವಂಥದ್ದು ಎನ್ನುತ್ತಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/viral/chinese-woman-arrives-in-rs-3-crore-bentley-washes-dishes-at-restaurant-suc/articleshow-vd36xgk"/>
        </item>
        <item>
            <title><![CDATA[ಆಫೀಸ್‌ ರಾಜಕೀಯ, ಒತ್ತಡಕ್ಕೆ ಬೇಸತ್ತು 6.8 ಕೋಟಿ ರೂ ಹೂಡಿಕೆ ಮಾಡಿ ಕೆಲಸ ಬಿಟ್ಟ 44 ವರ್ಷದ ಉದ್ಯೋಗಿ; ಆರೋಗ್ಯ ಮುಖ್ಯ]]></title>
            <link>https://kannada.asianetnews.com/jobs/44-years-man-quit-job-after-6-8-crore-rupees-investment-how/articleshow-w7thu1i</link>
            <guid isPermaLink="true">https://kannada.asianetnews.com/jobs/44-years-man-quit-job-after-6-8-crore-rupees-investment-how/articleshow-w7thu1i</guid>
            <pubDate>Fri, 17 Jul 2026 09:19:11 +0530</pubDate>
            <description><![CDATA[&lt;p&gt;44 year old Techie Retire: ಇಂದು ಸಾಕಷ್ಟು ಜನರು ಕೆಲಸ ಇಲ್ಲ ಎಂದು ಬೇಸರ ಮಾಡಿಕೊಂಡರೆ, ಇನ್ನೂ ಕೆಲವರು ಕಾರ್ಪೋರೇಟ್&zwnj; ಜಾಬ್&zwnj;ಗಳಲ್ಲಿ ಸಿಗುತ್ತಿರುವ ಒತ್ತಡ, ರಾಜಕೀಯಕ್ಕೆ ಬೇಸತ್ತಿದ್ದಾರೆ. ಎಷ್ಟೋ ವರ್ಷ ದುಡಿದರೂ ಕೂಡ ಒಮ್ಮೆಲೆ ಜಾಬ್&zwnj;ನಿಂದ ತೆಗೆಯೋದುಂಟು. ಹೀಗಾಗಿ ಹೂಡಿಕೆ ಮಾಡಿದ್ದಾರಂತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq2ytkw3f8w91hxqs149dcx,imgname-new-project--44--1784260029052.jpg" type="image/jpeg" height="390" width="690"/>
            <content:encoded><![CDATA[&lt;p&gt;44 year old Techie Retire: ಒಂದಿಷ್ಟು ವರ್ಷ ಕೆಲಸ ಮಾಡಿ, ಆರೋಗ್ಯವನ್ನು ಹಾಳು ಮಾಡಿಕೊಂಡ ನಂತರದಲ್ಲಿ 44 ವರ್ಷದ ಇಂಜಿನಿಯರ್ ಒಬ್ಬರು ₹6.5 ಕೋಟಿ ಮೌಲ್ಯದ ಹೂಡಿಕೆ ಮಾಡಿ ತಮ್ಮ ಕೆಲಸಕ್ಕೆ ಗುಡ್&zwnj;ಬೈ ಹೇಳಿದ್ದಾರೆ. ಈ ಬಗ್ಗೆ ಅವರು ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಒಂದಿಷ್ಟು ವರ್ಷ ಕೆಲಸ ಮಾಡಿದರೂ ಕೂಡ, ಅತಿ ಹೆಚ್ಚು ಖರ್ಚು ಮಾಡದೆ ಹಣ ಉಳಿತಾಯ ಮಾಡಿದರು. ಆಮೇಲೆ ಅವರು ಆ ಹಣದ ಬ್ಯಾಕಪ್&zwnj; ಇಟ್ಟುಕೊಂಡು ತಮ್ಮ ಕೆಲಸಕ್ಕೆ ಗುಡ್&zwnj;ಬೈ ಹೇಳಿದರು.&lt;/p&gt;&lt;h2&gt;ಕೆಲಸ ಬಿಡಲು ಕಾರಣ ಏನು?&lt;/h2&gt;&lt;p&gt;&ldquo;ನಾನು ಇಂಜಿನಿಯರಿಂಗ್ ಕೆಲಸದಿಂದ ನಿವೃತ್ತಿ ಪಡೆದಿಲ್ಲ, ಆದರೆ ಸಿಕ್ಕಾಪಟ್ಟೆ ಒತ್ತಡದ ಕೆಲಸ, ಆಯಾಸದಿಂದ ನಿವೃತ್ತಿ ಪಡೆದಿದ್ದೇನೆ ಅಷ್ಟೇ&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಇವರ ಜೀವನ ಹೇಗಿತ್ತು?&lt;/h2&gt;&lt;p&gt;ಟಯರ್-1 ಕಾಲೇಜಿನಲ್ಲಿ ಓದಿದ್ದ ಇವರು ಹೆಚ್ಚಾಗಿ ಸ್ಟಾರ್ಟ್&zwnj;ಅಪ್&zwnj;ಗಳಲ್ಲೇ ತಮ್ಮ ಕರಿಯರ್ ಕಳೆದಿದ್ದರು. ಅದರಲ್ಲಿಯೂ ಇವರ ಕೊನೇ ಕೆಲಸದಲ್ಲಿ ಸಿಕ್ಕಾಪಟ್ಟೆ ರಾಜಕೀಯ, ಟಾಕ್ಸಿಕ್&zwnj; ಜಾಗ, ದಿನಕ್ಕೆ 14 ಗಂಟೆ ಕೆಲಸ ಮಾಡಿ, ಆರೋಗ್ಯ ಹಾಳಾಗಿತ್ತು. ನಿದ್ದೆ ಇಲ್ಲದೆ ಆರೋಗ್ಯ ಸಂಪೂರ್ಣ ಹಾಳಾಗಿತ್ತು. ಶುಗರ್&zwnj; ಕಾಯಿಲೆ, ಬಿಪಿ ಸಮಸ್ಯೆ ಬಂದಿತ್ತು. 2023 ರಿಂದ ಅವರು ಆರೋಗ್ಯದ ಕಡೆಗೆ ಗಮನ ಕೊಡಲು ಆರಂಭಿಸಿದ್ದರು.&lt;/p&gt;&lt;h2&gt;6.5 ಕೋಟಿ ರೂ ಹೂಡಿಕೆ ಮಾಡಿದ್ದು ಹೇಗೆ?&lt;/h2&gt;&lt;p&gt;2018ರಿಂದ ಎಸ್&zwnj;ಐಪಿ (SIP) ಮೂಲಕ ಅವರು ಹಣ ಹೂಡಿಕೆ ಮಾಡಲು ಶುರು ಮಾಡಿದರು. ಇದಕ್ಕೆ ಅವರು ಹಣಕಾಸು ಸಲಹೆಗಾರರ ಸಹಾಯ ಪಡೆದರು. ಕೆಲಸ ಮಾಡುತ್ತಿದ್ದ ಕಂಪನಿಯು ಮಾರಾಟವಾದಾಗ, ಇಸೋಪ್ (ESOP) ಮೂಲಕ ಇವರಿಗೆ ₹1.4 ಕೋಟಿ ಸಿಕ್ಕಿತ್ತು. ಈ ಹಣವನ್ನು ಖರ್ಚು ಮಾಡದೆ ಹೂಡಿಕೆ ಮಾಡಿದರು. ಏಪ್ರಿಲ್ 2026 ರಲ್ಲಿ ಇವರ ಹೂಡಿಕೆ ₹6.5 ಕೋಟಿ ರೂಪಾಯಿ ಆಯ್ತು. ಒಳ್ಳೆಯ ನಗರದಲ್ಲಿ ಸ್ವಂತ ಮನೆ ಹೊಂದಿರೋ ಇವರ ಕುಟುಂಬದ ವಾರ್ಷಿಕ ಖರ್ಚು 14 ಲಕ್ಷ ರೂಪಾಯಿ ಅಷ್ಟೇ.&lt;/p&gt;&lt;h2&gt;ಕಲಿತ ಪಾಠಗಳು&lt;/h2&gt;&lt;p&gt;ಕೆಲಸ ಬಿಟ್ಟ ಮೂರು ತಿಂಗಳಲ್ಲಿ ಇವರ ಆರೋಗ್ಯ ಸುಧಾರಿಸಿದೆ. ಈಗ ಇವರು ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತ, ಧ್ಯಾನ, ಓಪನ್ ಸೋರ್ಸ್ ಪ್ರಾಜೆಕ್ಟ್&zwnj;ಗಳಲ್ಲಿ ತೊಡಗಿಸಿಕೊಂಡಿದ್ದಾರೆ.&lt;/p&gt;&lt;p&gt;ಆರಂಭದಲ್ಲೇ ನಿವೃತ್ತಿಯ ಗುರಿ ಹೊಂದಿರಿ, ಸಂಬಳದ ಬಗ್ಗೆ ಚೌಕಾಸಿ ಮಾಡಿ, ಆಡಂಬರದ ಜೀವನಶೈಲಿಗೆ ಮಾರುಹೋಗಬೇಡಿ.&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/jobs/44-years-man-quit-job-after-6-8-crore-rupees-investment-how/articleshow-w7thu1i"/>
        </item>
        <item>
            <title><![CDATA[ಬೆಂಗಳೂರು ಹವಾಮಾನ vs EMI... ಕಾಮಿಡಿಯನ್ ಕೊಟ್ಟ ಪಂಚ್... ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್!]]></title>
            <link>https://kannada.asianetnews.com/bengaluru-urban/this-comedians-bengaluru-weather-joke-is-too-relatable-for-every-working-professional/articleshow-xbrrqs6</link>
            <guid isPermaLink="true">https://kannada.asianetnews.com/bengaluru-urban/this-comedians-bengaluru-weather-joke-is-too-relatable-for-every-working-professional/articleshow-xbrrqs6</guid>
            <pubDate>Sun, 19 Jul 2026 11:39:39 +0530</pubDate>
            <description><![CDATA[&lt;p&gt;ಬೆಂಗಳೂರಿನ ತಂಪಾದ ವಾತಾವರಣ ಮತ್ತು ಜನರ ದೈನಂದಿನ ಕೆಲಸದ ಉತ್ಪಾದಕತೆಯನ್ನು ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ. ಕಾಮೆಡಿಯನ್ ಶುಭಂ ಪೂಜಾರಿ ಅವರು ದೆಹಲಿ ಹಾಗೂ ಬೆಂಗಳೂರಿನ ಹವಾಮಾನವನ್ನು ವಿಡಂಬನಾತ್ಮಕವಾಗಿ ಹೋಲಿಸಿದ್ದು, ಇಲ್ಲಿನ ವೆದರ್ ಕಂಬಳಿ ಹೊದ್ದು ಮಲಗಲು ಮಾತ್ರ ಪ್ರೇರೇಪಿಸುತ್ತದೆ ಎಂದಿದ್ದಾರೆ. ಇದಕ್ಕೆ ನೆಟ್ಟಿಗರು ಇಎಂಐಗಳೇ ನಮ್ಮನ್ನು ಕೆಲಸಕ್ಕೆ ಓಡಿಸುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwfcfxc5tmnx3hhe62cj6zw,imgname-video-shared-on-instagram-by-comedian-shubham-pujari--1--1784440831916.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿಯ ಆಹ್ಲಾದಕರ ಹವಾಮಾನದ ಬಗ್ಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಆದರೆ, ಇದೇ ತಂಪಾದ ವಾತಾವರಣವು ಜನರ ಕೆಲಸದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಶುಭಂ ಪೂಜಾರಿ ತಮ್ಮ ಇನ್&zwnj;ಸ್ಟಾಗ್ರಾಮ್ ರೀಲ್ಸ್&zwnj;ನಲ್ಲಿ ಅತ್ಯಂತ ಹಾಸ್ಯಭರಿತವಾಗಿ ವಿವರಿಸಿದ್ದಾರೆ. ಅವರ ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ವಿಶ್ರಾಂತಿಯ ತಾಣದಂತೆ ಬೆಂಗಳೂರು:&lt;/strong&gt;&lt;/p&gt;&lt;p&gt;ಶುಭಂ ಪೂಜಾರಿ ಅವರ ಪ್ರಕಾರ, ಬೆಂಗಳೂರಿನ ತಂಗಾಳಿ ಮತ್ತು ಮೋಡ ಕವಿದ ವಾತಾವರಣವು ಕೆಲಸ ಮಾಡಲು ಬಿಡುವುದೇ ಇಲ್ಲ. &quot;ಇಲ್ಲಿಗೆ ಬಂದ ತಕ್ಷಣ ನನಗಂತೂ ಕಂಬಳಿ ಹೊದ್ದು, ಫ್ಯಾನ್ ವೇಗವನ್ನು ಮಧ್ಯಮದಲ್ಲಿಟ್ಟುಕೊಂಡು, ಮೊಬೈಲ್ ಸ್ಕ್ರಾಲ್ ಮಾಡುತ್ತಾ ಮಲಗಬೇಕೆನಿಸುತ್ತದೆ. ಇದು ಐಟಿ ಹಬ್ ತರ ಕಾಣಲ್ಲ, ಬದಲಿಗೆ ನಿವೃತ್ತಿಯ ನಂತರ ವಿಶ್ರಾಂತಿ ಪಡೆಯುವ ತಾಣದಂತೆ ಭಾಸವಾಗುತ್ತದೆ&quot; ಎಂದು ಅವರು ವ್ಯಂಗ್ಯವಾಡಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರಿನಲ್ಲಿ ಕೆಲಸ ಮಾಡಲು ಇಎಂಐಗಳೇ ಪ್ರೇರಣೆ!&lt;/strong&gt;&lt;/p&gt;&lt;p&gt;ದೆಹಲಿಯ ಹವಾಮಾನಕ್ಕೆ ಹೋಲಿಸಿದ ಶುಭಂ, &quot;ದೆಹಲಿಯಲ್ಲಿ ಒಂದು ಕಪ್ ಚಹಾ ಕುಡಿದರೆ ಸಾಕು, ಮರುಕ್ಷಣವೇ ಕೆಲಸದ ಮೂಡ್ ಬರುತ್ತದೆ. ಆದರೆ ಬೆಂಗಳೂರಿನಲ್ಲಿ ಮೂರ್ನಾಲ್ಕು ಕಪ್ ಚಹಾ ಕುಡಿದರೂ ಆಲಸ್ಯ ದೂರಾಗುವುದಿಲ್ಲ. ಇಂತಹ ನಿದ್ದೆ ಬರಿಸುವ ಹವಾಮಾನದಲ್ಲೂ ಬೆಂಗಳೂರಿಗರು ಪ್ರತಿದಿನ ಬೆಳಿಗ್ಗೆ ಎಚ್ಚರಗೊಂಡು ಆಫೀಸ್&zwnj;ಗೆ ಹೇಗೆ ಓಡುತ್ತಾರೆ? ಬಹುಶಃ ಇವರೆಲ್ಲರಿಗೂ ದೊಡ್ಡ ದೊಡ್ಡ ಸಾಲ ಮತ್ತು ಇಎಂಐ (EMI) ಗಳ ಭಾರ ಇರಬೇಕು. ಇಲ್ಲದಿದ್ದರೆ ಈ ವೆದರ್&zwnj;ನಲ್ಲಿ ಕೆಲಸ ಮಾಡಲು ಬೇರೆ ಯಾವುದೇ ಪ್ರೇರಣೆ ಸಿಗಲು ಸಾಧ್ಯವೇ ಇಲ್ಲ!&quot; ಎಂದು ತಮಾಷೆ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:&lt;/strong&gt;&lt;/p&gt;&lt;p&gt;ಈ ವಿಡಿಯೋಗೆ ಕಾಮೆಂಟ್ ಬಾಕ್ಸ್&zwnj;ನಲ್ಲಿ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರರು, &quot;ಹೌದು, ಇಲ್ಲಿನ ದಿನಚರಿ ಎಂದರೆ ಮಲಗುವುದು, ಏಳುವುದು, ಸ್ವಲ್ಪ ಕೆಲಸ ಮಾಡಿ ಮತ್ತೆ ಮಲಗುವುದು ಅಷ್ಟೇ&quot; ಎಂದಿದ್ದಾರೆ. ಮುಂಬೈಗೆ ಹೋಲಿಸಿದ ಮತ್ತೊಬ್ಬರು, ಮುಂಬೈನಲ್ಲಿರುವ ಅವ್ಯವಸ್ಥೆಯ ನಡುವೆಯೂ ಅಲ್ಲಿನ ಜನ ಹೆಚ್ಚು ಉತ್ಪಾದಕರು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇನ್ನು ಕೆಲವು ಸ್ಥಳೀಯರು, &quot;ದಯವಿಟ್ಟು ಬೆಂಗಳೂರಿನ ಹವಾಮಾನವನ್ನು ವೈಭವೀಕರಿಸುವುದನ್ನು ನಿಲ್ಲಿಸಿ. ಇಲ್ಲಿ ಈಗಾಗಲೇ ವಾಹನ ದಟ್ಟಣೆ ಹೆಚ್ಚಾಗಿದೆ, ಮಳೆ ಕೊರತೆಯಿಂದ ನೀರಿನ ಸಮಸ್ಯೆಯೂ ಎದುರಾಗುತ್ತಿದೆ&quot; ಎಂದು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Shubham Pujari (@notsopujari)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/bengaluru-urban/this-comedians-bengaluru-weather-joke-is-too-relatable-for-every-working-professional/articleshow-xbrrqs6"/>
        </item>
    </channel>
</rss>
