<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 19 May 2026 17:16:22 +0530</lastBuildDate>
        <atom:link href="https://kannada.asianetnews.com/rss/jobs" rel="self" type="application/rss+xml"/>
        <item>
            <title><![CDATA[ಐಟಿ ದೈತ್ಯ ಕಾಗ್ನಿಜೆಂಟ್‌ನಿಂದ 15,000 ಟೆಕ್ಕಿಗಳ ಲೇಆಫ್‌ಗೆ ಸಿದ್ದತೆ, ಇದರಲ್ಲಿ ಭಾರತೀಯರೇ ಹೆಚ್ಚು!]]></title>
            <link>https://kannada.asianetnews.com/it-jobs/cognizant-layoffs-2026-project-leap-15000-jobs-cut-india-impact-san/articleshow-1akinn6</link>
            <guid isPermaLink="true">https://kannada.asianetnews.com/it-jobs/cognizant-layoffs-2026-project-leap-15000-jobs-cut-india-impact-san/articleshow-1akinn6</guid>
            <pubDate>Tue, 05 May 2026 20:21:24 +0530</pubDate>
            <description><![CDATA[&lt;p&gt;ಐಟಿ ದೈತ್ಯ ಕಾಗ್ನಿಜೆಂಟ್ ತನ್ನ 'ಪ್ರಾಜೆಕ್ಟ್ ಲೀಪ್' ಅಡಿಯಲ್ಲಿ ಜಾಗತಿಕವಾಗಿ 15,000 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ, ಇದರಲ್ಲಿ ಹೆಚ್ಚಿನ ಪಾಲು ಭಾರತೀಯರದ್ದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hts32ph0jtevq41etgnm0nwj,imgname-Cognizant-Salary-Hike-2024-1712386562592.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.5): &lt;/strong&gt;ಐಟಿ ಸೇವಾ ಕ್ಷೇತ್ರದ ಪ್ರಮುಖ ಕಂಪನಿ ಕಾಗ್ನಿಜೆಂಟ್ (Cognizant) ತನ್ನ ಉದ್ಯೋಗಿಗಳಲ್ಲಿ ಭಾರಿ ಪ್ರಮಾಣದ ಕಡಿತಕ್ಕೆ ಮುಂದಾಗುತ್ತಿದೆ. ಜಾಗತಿಕವಾಗಿ ಸುಮಾರು 12,000 ದಿಂದ 15,000 ಉದ್ಯೋಗಿಗಳ ಮೇಲೆ ಇದು ಪರಿಣಾಮ ಬೀರಲಿದ್ದು, ಕಡಿತಗೊಳ್ಳಲಿರುವ ಉದ್ಯೋಗಗಳಲ್ಲಿ ಬಹುಪಾಲು ಭಾರತದಲ್ಲಿವೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಘೋಷಿಸಲಾದ 'ಪ್ರಾಜೆಕ್ಟ್ ಲೀಪ್' ಅಡಿಯಲ್ಲಿ ಕಂಪನಿಯು ಸುಮಾರು 230 ಮಿಲಿಯನ್ ಡಾಲರ್&zwnj;ನಿಂದ 320 ಮಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಿದೆ. ಇದರಲ್ಲಿ ಸುಮಾರು 200 ರಿಂದ 270 ಮಿಲಿಯನ್ ಡಾಲರ್ ಮೊತ್ತವನ್ನು ಉದ್ಯೋಗಿಗಳ ವಜಾ ವೇಳೆ ನೀಡಲಾಗುವ ಪರಿಹಾರ (Severance Pay) ಮತ್ತು ಇತರ ಸಿಬ್ಬಂದಿ ವೆಚ್ಚಗಳಿಗಾಗಿಯೇ ಮೀಸಲಿಡಲಾಗಿದೆ.&lt;/p&gt;&lt;p&gt;ಕಾಗ್ನಿಜೆಂಟ್ ಪ್ರಸ್ತುತ ಜಾಗತಿಕವಾಗಿ 3.57 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಈ ಪೈಕಿ 2.50 ಲಕ್ಷಕ್ಕೂ ಹೆಚ್ಚು ಜನರು ಭಾರತದಲ್ಲೇ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಉದ್ಯೋಗಿಗಳ ಸಂಬಳ ಮತ್ತು ವಜಾ ವೇಳೆ ನೀಡುವ ಪರಿಹಾರದ ಆಧಾರದ ಮೇಲೆ ಈ ಸಂಖ್ಯೆಯನ್ನು ಲೆಕ್ಕಹಾಕಲಾಗಿದೆ.&lt;/p&gt;&lt;p&gt;ಭಾರತದಲ್ಲಿ ಸರಾಸರಿ ವಾರ್ಷಿಕ ವೇತನ ₹15 ಲಕ್ಷ ಎಂದು ಅಂದಾಜಿಸಿದರೆ, ಆರು ತಿಂಗಳ ಪರಿಹಾರವಾಗಿ ₹7.5 ಲಕ್ಷ ನೀಡಬೇಕಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಭಾರತವೊಂದರಲ್ಲೇ 12,000 ದಿಂದ 13,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಮೆರಿಕಾದಲ್ಲಿ ಸರಾಸರಿ ವೇತನ $100,000 ಆಗಿರುವುದರಿಂದ, ಒಬ್ಬ ಉದ್ಯೋಗಿಗೆ ಸುಮಾರು $50,000 ಪರಿಹಾರ ನೀಡಬೇಕಾಗುತ್ತದೆ. ಹೀಗಾಗಿ ಅಲ್ಲಿ ಕಡಿತಗೊಳ್ಳುವ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರಲಿದೆ.&lt;/p&gt;&lt;h2&gt;&lt;strong&gt;ಬದಲಾಗುತ್ತಿರುವ ಐಟಿ ವ್ಯವಹಾರದ ಮಾದರಿ&lt;/strong&gt;&lt;/h2&gt;&lt;p&gt;ಈ ಉದ್ಯೋಗ ಕಡಿತಕ್ಕೆ ಕೇವಲ ವೆಚ್ಚದ ಕಡಿತವೊಂದೇ ಕಾರಣವಲ್ಲ, ಬದಲಾಗಿ ಕಂಪನಿಗಳ ಕೆಲಸದ ಶೈಲಿಯಲ್ಲಿ ಉಂಟಾಗುತ್ತಿರುವ ಬದಲಾವಣೆಯೂ ಕಾರಣವಾಗಿದೆ ಗ್ರಾಹಕರು ಇನ್ನು ಮುಂದೆ ಸಾಂಪ್ರದಾಯಿಕ 'ಪಿರಮಿಡ್' ಮಾದರಿಯನ್ನು ಇಷ್ಟಪಡುತ್ತಿಲ್ಲ. ಅಂದರೆ, ಹೆಚ್ಚಿನ ಸಂಖ್ಯೆಯ ಫ್ರೆಶರ್&zwnj;ಗಳನ್ನು (Freshers) ತರಬೇತಿಗೊಳಿಸಲು ಅವರು ಹಣ ನೀಡಲು ಸಿದ್ಧರಿಲ್ಲ. ಕಾಗ್ನಿಜೆಂಟ್ ಸಿಇಒ ರವಿ ಕುಮಾರ್ ಎಸ್ ಹೇಳುವಂತೆ, ಕಂಪನಿಯು ಈಗ &quot;ಡಿಜಿಟಲ್ ಶ್ರಮ (Automation/AI) ಮತ್ತು ಮಾನವ ಶ್ರಮ&quot;ದ ಮಿಶ್ರಿತ ಮಾದರಿಗೆ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಆಟೊಮೇಷನ್ ಬಳಕೆಯಿಂದಾಗಿ ಹೆಚ್ಚಿನ ಕೆಲಸಗಳು ಮನುಷ್ಯರ ಹಸ್ತಕ್ಷೇಪವಿಲ್ಲದೆಯೇ ನಡೆಯಲಿದೆ.&lt;/p&gt;&lt;h2&gt;&lt;strong&gt;ಐಟಿ ಕ್ಷೇತ್ರದಲ್ಲಿ ಮುಂದುವರಿದ ಕಡಿತ&lt;/strong&gt;&lt;/h2&gt;&lt;p&gt;ಕೇವಲ ಕಾಗ್ನಿಜೆಂಟ್ ಮಾತ್ರವಲ್ಲದೆ, ಇಡೀ ಐಟಿ ಉದ್ಯಮದಲ್ಲಿ ಈ ಟ್ರೆಂಡ್ ಮುಂದುವರಿದಿದೆ. ಟಿಸಿಎಸ್ (TCS) ಜುಲೈ 2025 ರಲ್ಲಿ 12,500 ಉದ್ಯೋಗಿಗಳನ್ನು ವಜಾ ಮಾಡಿತ್ತು. ಅಕ್ಸೆಂಚರ್ (Accenture), ಎಚ್&zwnj;ಸಿಎಲ್&zwnj;ಟೆಕ್ (HCLTech) ಮತ್ತು ಒರಾಕಲ್ (Oracle) ಕಂಪನಿಗಳು ಕೂಡ ಉದ್ಯೋಗ ಕಡಿತವನ್ನು ನಡೆಸಿವೆ. ಇದು ಕಾಗ್ನಿಜೆಂಟ್&zwnj;ನ ಮೊದಲ ರೀಸೆಟ್ ಏನಲ್ಲ. 2023-24ರ 'ನೆಕ್ಸ್ಟ್&zwnj;ಜೆನ್' (NextGen) ಕಾರ್ಯಕ್ರಮದ ಅಡಿಯಲ್ಲಿ ಕಂಪನಿಯು ಸುಮಾರು 3,500 ಉದ್ಯೋಗಗಳನ್ನು ಕಡಿತಗೊಳಿಸಿತ್ತು ಮತ್ತು 1.1 ಕೋಟಿ ಚದರ ಅಡಿ ಕಚೇರಿ ಜಾಗವನ್ನು ಖಾಲಿ ಮಾಡಿತ್ತು. ಪ್ರಸ್ತುತ ಹೊಸ ಬದಲಾವಣೆಗಳು ಐಟಿ ವಲಯದಲ್ಲಿ ಉದ್ಯೋಗಿಗಳಿಗೆ ಸವಾಲಿನ ಕಾಲ ಎದುರಾಗಿರುವುದನ್ನು ಸೂಚಿಸುತ್ತಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/it-jobs/cognizant-layoffs-2026-project-leap-15000-jobs-cut-india-impact-san/articleshow-1akinn6"/>
        </item>
        <item>
            <title><![CDATA[ಕ್ರೀಡಾಪಟುಗಳಿಗೆ ಮೀಸಲಾತಿ, ಸರ್ಕಾರಿ ಉದ್ಯೋಗದಲ್ಲಿ ಶೇ.2 ರಷ್ಟು ಕೋಟಾ, ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ]]></title>
            <link>https://kannada.asianetnews.com/jobs/karnataka-cabinet-approves-2-percent-reservation-for-sportspersons-in-civil-services-recruitment-gdp/articleshow-3asx5ki</link>
            <guid isPermaLink="true">https://kannada.asianetnews.com/jobs/karnataka-cabinet-approves-2-percent-reservation-for-sportspersons-in-civil-services-recruitment-gdp/articleshow-3asx5ki</guid>
            <pubDate>Fri, 08 May 2026 18:14:42 +0530</pubDate>
            <description><![CDATA[ಕ್ರೀಡಾ ಸಾಧಕರಿಗೆ ರಾಜ್ಯ ಸಿವಿಲ್ ಸೇವಾ ಹುದ್ದೆಗಳಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲು ಕರ್ನಾಟಕ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಹಿಂದೆ ತಡೆಹಿಡಿಯಲಾಗಿದ್ದ ಈ ಆದೇಶವನ್ನು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳಿಗೆ ಒಪ್ಪಿಗೆ ನೀಡುವ ಮೂಲಕ ಪುನಃ ಜಾರಿಗೆ ತರಲು ನಿರ್ಧರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kh7tcyr030t64ap8rvgy88hg,imgname-up-sports-budget-2026-1770862836480.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸಿವಿಲ್&zwnj; ಸೇವೆಗಳಲ್ಲಿ ಹುದ್ದೆಗಳ ನೇಮಾತಿಯಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್&zwnj; ತಿಳಿಸಿದ್ದಾರೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಇದಕ್ಕಾಗಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2026ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;h2&gt;2024ರ ಡಿಸೆಂಬರ್&zwnj;ನಲ್ಲಿ ತಡೆ ನೀಡಲಾಗಿದ್ದ ಆದೇಶ&lt;/h2&gt;&lt;p&gt;ಮೂಲಗಳ ಪ್ರಕಾರ, ಈ ಹಿಂದೆ ಕರ್ನಾಟಕ ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ.2 ರಷ್ಟು ಹುದ್ದೆಗಳನ್ನು ಮೀಸಲಿರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಮಾಡಿತ್ತು. ಆದರೆ 2024ರ ಡಿಸೆಂಬರ್&zwnj;ನಲ್ಲಿ ಈ ಆದೇಶಕ್ಕೆ ತಡೆ ನೀಡಲಾಗಿತ್ತು. ವಿಶೇಷ ರಾಜ್ಯಪತ್ರದ ಮೂಲಕ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿತ್ತು.&lt;/p&gt;&lt;h2&gt;ಪುನರ್&zwnj; ಪರಿಶೀಲನೆ:&lt;/h2&gt;&lt;p&gt;ಆದೇಶದಲ್ಲಿ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 19770 ನಿಯಮ 9ಕ್ಕೆ ತಿದ್ದುಪಡಿ ಮಾಡಿರುವುದನ್ನು ಪುನರ್ ಪರಿಶೀಲಿಸಲಿದೆ. ಆದುದರಿಂದ, ರಾಜ್ಯ ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ. 2 ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಹೊರಡಿಸಲಾಗಿರುವ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ ಎಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಆದೇಶದಲ್ಲಿ ಸೂಚನೆ ಕೊಡಲಾಗಿತ್ತು.&lt;/p&gt;&lt;p&gt;ಇದೀಗ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವ ನಿಯಮಗಳ ಅಡಿ ಕ್ರೀಡಾ ಸಾಧಕರಿಗೆ ಮೀಸಲಾತಿ ಒದಗಿಸಬಹುದು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಂಡಿಸಿದ್ದ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2026ಕ್ಕೆ ಒಪ್ಪಿಗೆ ದೊರೆತಿರುವುದಾಗಿ ತಿಳಿದುಬಂದಿದೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-cabinet-approves-2-percent-reservation-for-sportspersons-in-civil-services-recruitment-gdp/articleshow-3asx5ki"/>
        </item>
        <item>
            <title><![CDATA[ರಾಜ್ಯ ಪೊಲೀಸ್ ಇಲಾಖೆ 293 ಇನ್ಸ್‌ಪೆಕ್ಟರ್ ಹಾಗೂ 74 ಡಿವೈಎಸ್‌ಪಿಗಳ ವರ್ಗಾವಣೆ! ನಿಮ್ಮ ಠಾಣೆಗೆ ಬಂದವರಾರು ಪಟ್ಟಿನೋಡಿ!]]></title>
            <link>https://kannada.asianetnews.com/state/karnataka-government-massive-police-transfer-293-inspectors-and-74-dysp-list-2026-sat/articleshow-6beo47m</link>
            <guid isPermaLink="true">https://kannada.asianetnews.com/state/karnataka-government-massive-police-transfer-293-inspectors-and-74-dysp-list-2026-sat/articleshow-6beo47m</guid>
            <pubDate>Sun, 10 May 2026 19:28:49 +0530</pubDate>
            <description><![CDATA[&lt;p&gt;ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ! 293 ಇನ್ಸ್&zwnj;ಪೆಕ್ಟರ್&zwnj;ಗಳು ಹಾಗೂ 74 ಡಿವೈಎಸ್&zwnj;ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಯಾವ ಅಧಿಕಾರಿಗಳು ಬಂದಿದ್ದಾರೆ ಸಂಪೂರ್ಣ ಪಟ್ಟಿ ಮತ್ತು ವಿವರಗಳಿಗಾಗಿ ಇಲ್ಲಿ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k1a4265x54yexyhfasv0e6yc,imgname-----------------------2025-07-29t090628.790-1753760209085.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 10): ರಾ&lt;/strong&gt;ಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಭಾರಿ ಮಟ್ಟದ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದೆ. ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಪೊಲೀಸ್ ಇನ್ಸ್&zwnj;ಪೆಕ್ಟರ್ ಹಾಗೂ ಡಿವೈಎಸ್&zwnj;ಪಿ ದರ್ಜೆಯ ಅಧಿಕಾರಿಗಳ ವರ್ಗಾವಣೆಗೆ ಕೊನೆಗೂ ಚಾಲನೆ ನೀಡಲಾಗಿದ್ದು, ಒಟ್ಟು 293 ಪೊಲೀಸ್ ಇನ್ಸ್&zwnj;ಪೆಕ್ಟರ್ (ಸಿವಿಲ್) ಹಾಗೂ 74 ಡಿವೈಎಸ್&zwnj;ಪಿ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ಸಿಬ್ಬಂದಿ ಮಂಡಳಿ ನಿರ್ಧಾರ&lt;/strong&gt;&lt;/h3&gt;&lt;p&gt;ಮೇ 10, 2026ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ (Police Establishment Board) ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಡಿಜಿ ಮತ್ತು ಐಜಿಪಿ ಕಚೇರಿಯ ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;293 ಇನ್ಸ್&zwnj;ಪೆಕ್ಟರ್&zwnj;ಗಳ ಅದಲು-ಬದಲು&lt;/strong&gt;&lt;/h2&gt;&lt;p&gt;ವರ್ಗಾವಣೆಗೊಂಡ 293 ಇನ್ಸ್&zwnj;ಪೆಕ್ಟರ್&zwnj;ಗಳಲ್ಲಿ ಹೆಚ್ಚಿನವರು ಬೆಂಗಳೂರು ನಗರ, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದಂತಹ ಪ್ರಮುಖ ನಗರ ಪ್ರದೇಶಗಳ ವಿವಿಧ ಠಾಣೆಗಳಿಗೆ ನಿಯುಕ್ತಿಗೊಂಡಿದ್ದಾರೆ. ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಮತ್ತು ವಿಶೇಷ ತನಿಖಾ ತಂಡಗಳಿಂದ (SIT) ಹಲವು ಅಧಿಕಾರಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ತರಲಾಗಿದ್ದರೆ, ಕೆಲವು ಅನುಭವಿ ಅಧಿಕಾರಿಗಳನ್ನು ಕ್ರೈಂ ಬ್ರಾಂಚ್ ಮತ್ತು ಗುಪ್ತಚರ ವಿಭಾಗಗಳಿಗೆ ನಿಯೋಜಿಸಲಾಗಿದೆ. ಪ್ರಮುಖವಾಗಿ ಸೂರ್ಯನಗರ, ಮಡಿವಾಳ, ಚಂದ್ರಾ ಲೇಔಟ್&zwnj;ನಂತಹ ಪ್ರಮುಖ ಠಾಣೆಗಳ ಇನ್ಸ್&zwnj;ಪೆಕ್ಟರ್&zwnj;ಗಳನ್ನು ಬದಲಾಯಿಸಲಾಗಿದೆ.&lt;/p&gt;&lt;p&gt;&lt;/p&gt;&lt;h3&gt;&lt;strong&gt;74 ಡಿವೈಎಸ್&zwnj;ಪಿಗಳ ವರ್ಗಾವಣೆ&lt;/strong&gt;&lt;/h3&gt;&lt;p&gt;ಇನ್ಸ್&zwnj;ಪೆಕ್ಟರ್&zwnj;ಗಳ ಜೊತೆಗೆ 74 ಡಿವೈಎಸ್&zwnj;ಪಿ (DySP) ದರ್ಜೆಯ ಅಧಿಕಾರಿಗಳಿಗೂ ಹೊಸ ಸ್ಥಳಗಳನ್ನು ನಿಯುಕ್ತಿಗೊಳಿಸಲಾಗಿದೆ. ಉಪವಿಭಾಗಗಳ ಎಸಿಪಿ (ACP) ಮತ್ತು ಡಿವೈಎಸ್&zwnj;ಪಿ ಹುದ್ದೆಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಬೆಂಗಳೂರು ನಗರದ ಸಂಚಾರ ವಿಭಾಗ, ವಿಶೇಷ ಜಾರಿ ಕೋಶ (EEC) ಮತ್ತು ಜಿಲ್ಲಾ ಪೊಲೀಸ್ ಉಪವಿಭಾಗಗಳಲ್ಲಿ ಹೊಸ ಅಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ.&lt;/p&gt;&lt;p&gt;&lt;/p&gt;&lt;h3&gt;&lt;strong&gt;ತಕ್ಷಣದಿಂದ ಜಾರಿಗೆ ಆದೇಶ&lt;/strong&gt;&lt;/h3&gt;&lt;p&gt;ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹಳೆಯ ಹುದ್ದೆಗಳಿಂದ ಬಿಡುಗಡೆಗೊಂಡು, ನಿಯೋಜಿತ ಹೊಸ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ (Wait) ಅನೇಕ ಅಧಿಕಾರಿಗಳಿಗೆ ಈ ಆದೇಶದ ಮೂಲಕ ಸಕ್ರಿಯ ಹುದ್ದೆಗಳನ್ನು ನೀಡಲಾಗಿದೆ. ಪ್ರಧಾನಿ ಮೋದಿ ಅವರ ಭೇಟಿ ಹಾಗೂ ರಾಜ್ಯದ ಹವಾಮಾನ ವೈಪರೀತ್ಯದಂತಹ ಸವಾಲುಗಳ ನಡುವೆಯೇ ಈ ವರ್ಗಾವಣೆ ನಡೆದಿರುವುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-government-massive-police-transfer-293-inspectors-and-74-dysp-list-2026-sat/articleshow-6beo47m"/>
        </item>
        <item>
            <title><![CDATA[ರಾಜೀನಾಮೆ ನೀಡುವ ಮುನ್ನ ತನ್ನ ಬಾಸ್ ಬಾಯಿ ಮುಚ್ಚಿಸಿದ ಉದ್ಯೋಗಿಯ ಖಡಕ್ ಮಾತು ಈಗ ವೈರಲ್]]></title>
            <link>https://kannada.asianetnews.com/life/employees-viral-resignation-prioritizing-health-over-toxic-productivity/articleshow-7zgck16</link>
            <guid isPermaLink="true">https://kannada.asianetnews.com/life/employees-viral-resignation-prioritizing-health-over-toxic-productivity/articleshow-7zgck16</guid>
            <pubDate>Tue, 05 May 2026 16:19:00 +0530</pubDate>
            <description><![CDATA[&lt;p&gt;&lt;strong&gt;Workplace burnout: &lt;/strong&gt;ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಘಟನೆಯು, ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸದ ಒತ್ತಡ ಮತ್ತು ವೈಯಕ್ತಿಕ ಆರೋಗ್ಯದ ನಡುವಿನ ಸಂಘರ್ಷವನ್ನು ಬಿಂಬಿಸುತ್ತದೆ. ತೀವ್ರ ಕೆಲಸದ ಹೊರೆಯಿಂದ ಬೇಸತ್ತ ಉದ್ಯೋಗಿಯೊಬ್ಬರು ಪ್ರಮುಖ ಪ್ರಾಜೆಕ್ಟ್ ನಡೆಯುತ್ತಿದ್ದರೂ ರಾಜೀನಾಮೆ ನೀಡಲು ನಿರ್ಧರಿಸಿದಾಗ, ಮ್ಯಾನೇಜರ್ ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7kt51jpxpjg2eswbx75kmz5,imgname-untitled-design---2025-10-15t165232.175-1760527812182.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಂ&lt;/strong&gt;ದಿನ ಧಾವಂತದ ಜಗತ್ತಿನಲ್ಲಿ ಕೆಲಸದ ಒತ್ತಡ (Burnout) ಎನ್ನುವುದು ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಮಸ್ಯೆ. ಈ ನಡುವೆ, ರಾಜೀನಾಮೆ ನೀಡಲು ನಿರ್ಧರಿಸಿದ ಉದ್ಯೋಗಿಯೊಬ್ಬರು ತನ್ನ ಬಾಸ್&zwnj;ಗೆ ನೀಡಿದ ಮರುಉತ್ತರವು ಇಡೀ ಕಾರ್ಪೊರೇಟ್ ಜಗತ್ತಿಗೆ ಕನ್ನಡಿ ಹಿಡಿಯುವಂತಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಅದಾಗಲೇ ಕೆಲಸದ ಹೊರೆಯಿಂದ ಆ ಉದ್ಯೋಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತರಾಗಿದ್ದರು. ಅಂದಹಾಗೆ ತಂಡವು ಒಂದು ಪ್ರಮುಖ ಪ್ರಾಜೆಕ್ಟ್&zwnj;ನ ಮಧ್ಯದಲ್ಲಿರುವಾಗಲೇ ಉದ್ಯೋಗಿಯು ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಇದು ಮ್ಯಾನೇಜರ್&zwnj;ನಲ್ಲಿ ಅಸಮಾಧಾನ ಮತ್ತು ಆತಂಕ ಮೂಡಿಸಿತು.&lt;/p&gt;&lt;h2&gt;&lt;strong&gt;ಕಚೇರಿಯಲ್ಲಿ ನಡೆದ ಸಂಭಾಷಣೆ ಇಂತಿದೆ...&lt;/strong&gt;&lt;/h2&gt;&lt;p&gt;&lt;strong&gt;ಸಮಯದ ಪ್ರಶ್ನೆ: &lt;/strong&gt;ರಾಜೀನಾಮೆ ನೀಡಿದಾಗ ಮ್ಯಾನೇಜರ್ ಮೊದಲು ಹೇಳಿದ್ದೇ ಸಮಯದ ಬಗ್ಗೆ. &quot;ಈಗಾಗಲೇ ಪ್ರಮುಖ ಕೆಲಸಗಳು ನಡೆಯುತ್ತಿವೆ, ಈಗ ಹೋಗುವುದು ಸರಿಯಲ್ಲ&quot; ಎಂದು ತಿಳಿಸಿದರು. ಆದರೆ ಆ ಉದ್ಯೋಗಿಗೆ ತನ್ನ ಸುಸ್ತು ಭರಿಸಲಾಗದ ಮಟ್ಟಕ್ಕೆ ತಲುಪಿತ್ತು.&lt;/p&gt;&lt;p&gt;&lt;strong&gt;ಹೊಸಬರ ನೆಪ:&lt;/strong&gt; &quot;ನಿಮ್ಮ ಜಾಗಕ್ಕೆ ಬೇರೆಯವರು ಬರುವವರೆಗಾದರೂ ಇರಿ&quot; ಎಂದು ಮ್ಯಾನೇಜರ್ ಕೇಳಿಕೊಂಡರು. ಆದರೆ ಒಮ್ಮೆ ದೃಢ ನಿರ್ಧಾರ ಮಾಡಿದ್ದ ಉದ್ಯೋಗಿ ಅದಕ್ಕೆ ಮಣಿಯಲಿಲ್ಲ.&lt;/p&gt;&lt;p&gt;&lt;strong&gt;ಜವಾಬ್ದಾರಿಯ ಪಾಠ: &lt;/strong&gt;ಕರ್ತವ್ಯದ ಬಗ್ಗೆ ಬಾಸ್ ಮಾತನಾಡಿದಾಗ, ಆ ಉದ್ಯೋಗಿ ಒಂದು ದೊಡ್ಡ ಸತ್ಯವನ್ನು ನೆನಪಿಸಿದರು. ಕೆಲಸ ಮಾಡುವುದು ಎಷ್ಟು ಜವಾಬ್ದಾರಿಯೋ, ನಮ್ಮ ಸ್ವಂತ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ದೊಡ್ಡ ಜವಾಬ್ದಾರಿ.&lt;/p&gt;&lt;p&gt;&lt;strong&gt;ಕೆಲಸದ ಹೊರೆ ಇಳಿಸುವ ಆಮಿಷ: &lt;/strong&gt;ಹೇಗಾದರೂ ಮಾಡಿ ಉದ್ಯೋಗಿಯನ್ನ ಉಳಿಸಿಕೊಳ್ಳಲು ಮ್ಯಾನೇಜರ್ ಕೆಲಸದ ಹೊರೆಯನ್ನು ಕಡಿಮೆ ಮಾಡುವ ಭರವಸೆ ನೀಡಿದರು. ಆದರೆ ಹದಗೆಟ್ಟ ಆರೋಗ್ಯವನ್ನು ಇಂತಹ ಸಣ್ಣ ಬದಲಾವಣೆಗಳಿಂದ ತಕ್ಷಣ ಸರಿಪಡಿಸಲು ಸಾಧ್ಯವಿಲ್ಲ ಎಂದು ಆ ಉದ್ಯೋಗಿ ಸ್ಪಷ್ಟಪಡಿಸಿದರು.&lt;/p&gt;&lt;h2&gt;&lt;strong&gt;ಕೊನೆಗೆ ಎಲ್ಲರನ್ನೂ ಮೌನವಾಗಿಸಿದ ಆ ಒಂದು ಮಾತು&lt;/strong&gt;&lt;/h2&gt;&lt;p&gt;ಹೌದು. ಆ ಉದ್ಯೋಗಿ ಬಾಸ್ ಎದುರು ಒಂದು ಪ್ರಶ್ನೆ ಇಟ್ಟರು: &quot;ಸರ್, ನೀವು ನನ್ನ ಜಾಗಕ್ಕೆ ಮೂರೇ ದಿನದಲ್ಲಿ ಹೊಸಬರನ್ನು ಕೆಲಸಕ್ಕೆ ತರಬಹುದು, ಆದರೆ ಈ ಕೆಲಸದ ಒತ್ತಡದಿಂದ ನನ್ನ ಆರೋಗ್ಯ ಹಾಳಾದರೆ ಅದನ್ನು ಸರಿಪಡಿಸಲು ಯಾರಿಂದ ಸಾಧ್ಯ?&quot;. ಈ ಮಾತು ಇಡೀ ಕಚೇರಿಯಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿತು.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಈ ಘಟನೆಯು ನಮಗೆ ಕೆಲವು ಕಟು ಸತ್ಯಗಳನ್ನು ಕಲಿಸುತ್ತದೆ:&lt;/strong&gt;&lt;/h3&gt;&lt;p&gt;&lt;strong&gt;ಬದಲೀ ವ್ಯವಸ್ಥೆ: &lt;/strong&gt;ಯಾವುದೇ ಕಂಪನಿಗೆ ಉದ್ಯೋಗಿ ಅನಿವಾರ್ಯವಲ್ಲ, ಅಲ್ಲಿ ಯಾವಾಗಲೂ ಮತ್ತೊಬ್ಬರು ಬಂದೇ ಬರುತ್ತಾರೆ.&lt;strong&gt;ಆರೋಗ್ಯಕ್ಕೆ ಪರ್ಯಾಯವಿಲ್ಲ: &lt;/strong&gt;ಆದರೆ ನಮ್ಮ ದೇಹ ಮತ್ತು ಮನಸ್ಸಿಗೆ ಯಾವುದೇ ಬದಲೀ ವ್ಯವಸ್ಥೆ ಇಲ್ಲ. ಒಮ್ಮೆ ಆರೋಗ್ಯ ಕೆಟ್ಟರೆ ಅದನ್ನು ಸರಿಪಡಿಸುವುದು ಬಹಳ ಕಷ್ಟ.&lt;strong&gt;ನಿಮ್ಮ ಮಿತಿ ಅರಿಯಿರಿ: &lt;/strong&gt;ಅತಿಯಾದ ಕೆಲಸದ ನಡುವೆ ವಿಶ್ರಾಂತಿಯ ಅಗತ್ಯವನ್ನು ಗುರುತಿಸುವುದು ದೌರ್ಬಲ್ಯವಲ್ಲ, ಅದು ಬದುಕಿನ ಅನಿವಾರ್ಯತೆ.ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, &quot;ಕೆಲಸವು ಜೀವನದ ಭಾಗವಾಗಬೇಕೇ ಹೊರತು, ಕೆಲಸವೇ ಜೀವನವಾಗಬಾರದು&quot; ಎಂಬ ಸಂದೇಶವನ್ನು ಸಾರುತ್ತಿದೆ.&lt;/p&gt;&lt;h3&gt;&lt;strong&gt;ಕೆಲಸದ ಒತ್ತಡ ತಾಳಲಾರದೆ ಆತ್ಮ*ಹ*ತ್ಯೆ&lt;/strong&gt;&lt;/h3&gt;&lt;p&gt;ಅನೇಕ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಿಗಳು ಕಚೇರಿಯಲ್ಲೇ ಕುಸಿದು ಬಿದ್ದ ಅಥವಾ ಕೆಲಸದ ಒತ್ತಡ ತಾಳಲಾರದೆ ಆತ್ಮ*ಹ*ತ್ಯೆಗೆ ಶರಣಾದ ಘಟನೆಗಳನ್ನು ನಾವು ಕೇಳಿದ್ದೇವೆ. ಅಂತಹ ಪ್ರತಿಯೊಂದು ಘಟನೆಯೂ ಸಾರುವ ಸತ್ಯ ಒಂದೇ: &quot;ನೀವು ಕೆಲಸ ಮಾಡುವುದು ಬದುಕುವುದಕ್ಕಾಗಿ, ಬದುಕುತ್ತಿರುವುದು ಕೆಲಸ ಮಾಡುವುದಕ್ಕಾಗಿ ಅಲ್ಲ.&quot; ಮೇಲಿನ ಉದ್ಯೋಗಿ ನೀಡಿದ ಉತ್ತರವು ಇಂತಹ ಸಾವಿರಾರು ಜನರ ನೋವಿನ ಪ್ರತಿಧ್ವನಿಯಾಗಿದೆ.&amp;nbsp;&lt;/p&gt;]]></content:encoded>
            <category>jobs</category>
            <dc:creator>Ashwini HR</dc:creator>
            <atom:link href="https://kannada.asianetnews.com/life/employees-viral-resignation-prioritizing-health-over-toxic-productivity/articleshow-7zgck16"/>
        </item>
        <item>
            <title><![CDATA[ದಕ್ಷಿಣ ಕನ್ನಡದ ಮಹಿಳೆಯರಿಗೆ ಸಿಹಿಸುದ್ದಿ, ವಿವಿಧ ತಾಲೂಕುಗಳ ಅಂಗನವಾಡಿಯಲ್ಲಿ ಖಾಲಿ ಇರೋ ಹುದ್ದೆಗಳಿಗೆ ಅರ್ಜಿ ಅಹ್ವಾನ]]></title>
            <link>https://kannada.asianetnews.com/jobs/anganwadi-worker-and-helper-recruitment-2026-in-dakshina-kannada-apply-before-may-16th-gdp/articleshow-9fzal26</link>
            <guid isPermaLink="true">https://kannada.asianetnews.com/jobs/anganwadi-worker-and-helper-recruitment-2026-in-dakshina-kannada-apply-before-may-16th-gdp/articleshow-9fzal26</guid>
            <pubDate>Fri, 01 May 2026 19:39:11 +0530</pubDate>
            <description><![CDATA[ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾದ ಈ ಉದ್ಯೋಗಾವಕಾಶಕ್ಕೆ ಅರ್ಜಿ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jw0avyxjcwjxyjpm973xmqyk,imgname-untitled-design---2025-05-24t103312.389-1748063091634.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಈ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ.&lt;/p&gt;&lt;h2&gt;ಮೇ 16ರೊಳಗೆ ಅರ್ಜಿ ಸಲ್ಲಿಸಿ&lt;/h2&gt;&lt;p&gt;ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಆಯ್ಕೆಯಾಗುವವರಿಗೆ ಮಾಸಿಕವಾಗಿ ₹5,500 ಗೌರವಧನ ನೀಡಲಾಗುತ್ತದೆ. ಅದೇ ರೀತಿ ಸಹಾಯಕಿ ಹುದ್ದೆಗೆ ಆಯ್ಕೆಯಾಗುವವರಿಗೆ ತಿಂಗಳಿಗೆ ₹3,000 ಗೌರವಧನ ನಿಗದಿಪಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಮಹಿಳಾ ಅಭ್ಯರ್ಥಿಗಳು ಮೇ 16ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.&lt;/p&gt;&lt;p&gt;ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸಂಬಂಧಿತ ಅಂಗನವಾಡಿ ಕೇಂದ್ರದ ಸರ್ವೆ ವ್ಯಾಪ್ತಿಯವರಾಗಿರಬೇಕು ಹಾಗೂ ವಯೋಮಿತಿ 18ರಿಂದ 35 ವರ್ಷಗಳೊಳಗಿರಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.&lt;/p&gt;&lt;p&gt;ಶೈಕ್ಷಣಿಕ ಅರ್ಹತೆ ಕುರಿತು ಮಾತನಾಡುವುದಾದರೆ, ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ (PUC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಈ ಅರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ಸಹಾಯಕಿ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಈ ಅರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, 7ನೇ ತರಗತಿ ತೇರ್ಗಡೆಯಾದವರನ್ನೂ ಪರಿಗಣಿಸಲಾಗುತ್ತದೆ. ಆದರೆ ಹೆಚ್ಚಿನ ವಿದ್ಯಾರ್ಹತೆಯನ್ನು ಇಲ್ಲಿ ಪರಿಗಣಿಸಲಾಗುವುದಿಲ್ಲ ಎಂಬುದು ಗಮನಾರ್ಹ.&lt;/p&gt;&lt;h2&gt;ಆಸಕ್ತರು ಈ ನಂಬರ್ &amp;nbsp;ಸಂಪರ್ಕಿಸಿ&lt;/h2&gt;&lt;p&gt;ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳನ್ನು ಸಂಪರ್ಕಿಸಬಹುದು. ಮಂಗಳೂರು ನಗರ (0824-2959809), ಮಂಗಳೂರು ಗ್ರಾಮಾಂತರ (9620636888 / 7760729919), ವಿಟ್ಲ (08255-238080), ಬೆಳ್ತಂಗಡಿ (08256-295134), ಸುಳ್ಯ (08257-298139) ಕಚೇರಿಗಳಲ್ಲಿ ಕಚೇರಿ ಅವಧಿಯಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರಿಗೆ ಇದು ಉತ್ತಮ ಉದ್ಯೋಗಾವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಇಲಾಖೆಯು ಮನವಿ ಮಾಡಿದೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/anganwadi-worker-and-helper-recruitment-2026-in-dakshina-kannada-apply-before-may-16th-gdp/articleshow-9fzal26"/>
        </item>
        <item>
            <title><![CDATA[ಬೆಂಗಳೂರು: ಇನ್ಸ್‌ಪೆಕ್ಟರ್ ಶಿವಪ್ಪ ನಾಯಕರ್ ಹೃದಯಾಘಾತದಿಂದ ನಿಧನ; ಪೊಲೀಸ್ ಇಲಾಖೆಯಲ್ಲಿ ಶೋಕ]]></title>
            <link>https://kannada.asianetnews.com/state/bengaluru-police-inspector-shivappa-nayakar-passes-away-heart-attack-jayadeva-hospital-sat/articleshow-by98osp</link>
            <guid isPermaLink="true">https://kannada.asianetnews.com/state/bengaluru-police-inspector-shivappa-nayakar-passes-away-heart-attack-jayadeva-hospital-sat/articleshow-by98osp</guid>
            <pubDate>Fri, 15 May 2026 11:08:12 +0530</pubDate>
            <description><![CDATA[ಬೆಂಗಳೂರು ಸಿಟಿ ಸ್ಪೆಷಲ್ ಬ್ರಾಂಚ್ (CSB) ಇನ್ಸ್&zwnj;ಪೆಕ್ಟರ್ ಶಿವಪ್ಪ ನಾಯಕರ್ (56) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 2010ರ ಬ್ಯಾಚ್&zwnj;ನ ಅಧಿಕಾರಿಯಾಗಿದ್ದ ಅವರ ಅಕಾಲಿಕ ಮರಣವು ಪೊಲೀಸ್ ಇಲಾಖೆಯಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krn1tfj3v2tqkgesknn60cke,imgname-police-sub-inspector-shivappa-mn-death-1778823020098.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 15): ರಾ&lt;/strong&gt;ಜ್ಯ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಯೊಬ್ಬರನ್ನು ಬೆಂಗಳೂರು ಕಳೆದುಕೊಂಡಿದೆ. ಸಿಟಿ ಸ್ಪೆಷಲ್ ಬ್ರಾಂಚ್&zwnj;ನಲ್ಲಿ (CSB) ಇನ್ಸ್&zwnj;ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ಪ ನಾಯಕರ್ (56) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 2010ರ ಬ್ಯಾಚ್&zwnj;ನ ಅಧಿಕಾರಿಯಾಗಿದ್ದ ಅವರು, ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಶಿವಪ್ಪ ನಾಯಕರ್ ಅವರಿಗೆ ನಿನ್ನೆ ರಾತ್ರಿ ದಿಢೀರ್ ಎಂದು ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ನಗರದ ಪ್ರತಿಷ್ಠಿತ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. 56 ವರ್ಷ ವಯಸ್ಸಿನ ಅಧಿಕಾರಿಯೊಬ್ಬರು ಅಕಾಲಿಕವಾಗಿ ನಿಧನರಾಗಿರುವುದು ಪೊಲೀಸ್ ಇಲಾಖೆಯಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.&lt;/p&gt;&lt;h2&gt;&lt;strong&gt;ವೃತ್ತಿಜೀವನ ಮತ್ತು ಹಿನ್ನೆಲೆ:&lt;/strong&gt;&lt;/h2&gt;&lt;p&gt;ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮಹಟ್ಟಿ ಗ್ರಾಮದವರಾದ ಶಿವಪ್ಪ ನಾಯಕರ್ ಅವರು, 2010ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಸದ್ಯ ಬೆಂಗಳೂರು ನಗರದ ಸಿಟಿ ಸ್ಪೆಷಲ್ ಬ್ರಾಂಚ್&zwnj;ನಲ್ಲಿ ಇನ್ಸ್&zwnj;ಪೆಕ್ಟರ್ ಆಗಿ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಕಿರಿಯ ಅಧಿಕಾರಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಮಾರ್ಗದರ್ಶಕರಾಗಿದ್ದ ಅವರು, ತಮ್ಮ ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದರು.&lt;/p&gt;&lt;h3&gt;&lt;strong&gt;ಕಂಬನಿ ಮಿಡಿದ ಸಹೋದ್ಯೋಗಿಗಳು:&lt;/strong&gt;&lt;/h3&gt;&lt;p&gt;ಶಿವಪ್ಪ ನಾಯಕರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮೃತರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮವಾದ ಸೋಮಹಟ್ಟಿಗೆ ಕೊಂಡೊಯ್ಯುವ ಸಾಧ್ಯತೆಯಿದೆ. ಶಿವಪ್ಪ ನಾಯಕರ್ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪೊಲೀಸ್ ವಲಯದ ಹಿರಿಯ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳಲ್ಲಿ ಕೆಲಸದ ಒತ್ತಡ ಮತ್ತು ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-police-inspector-shivappa-nayakar-passes-away-heart-attack-jayadeva-hospital-sat/articleshow-by98osp"/>
        </item>
        <item>
            <title><![CDATA[ಅಮೆರಿಕದ ಕಚೇರಿಯಲ್ಲಿ ಬೆಂಗಳೂರು ಮಹಿಳೆಗೆ ಕಾದಿತ್ತು ಅಚ್ಚರಿ!ಭಾರತ ಕೆಲಸದ ಸಂಸ್ಕೃತಿ ಪ್ರಶ್ನಿಸಿದ ವಿಡಿಯೋ ಸಖತ್ ವೈರಲ್]]></title>
            <link>https://kannada.asianetnews.com/gallery/private-jobs/bengaluru-woman-questions-india-work-culture-after-us-visit-viral-video-sparks-debate-on-work-life-balance-gdp-bzixanu</link>
            <guid isPermaLink="true">https://kannada.asianetnews.com/gallery/private-jobs/bengaluru-woman-questions-india-work-culture-after-us-visit-viral-video-sparks-debate-on-work-life-balance-gdp-bzixanu</guid>
            <pubDate>Sat, 16 May 2026 19:31:06 +0530</pubDate>
            <description><![CDATA[&lt;p&gt;ಬೆಂಗಳೂರಿನ ವೃತ್ತಿಪರ ಮಹಿಳೆಯೊಬ್ಬರು ಅಮೆರಿಕ ಮತ್ತು ಭಾರತದ ಕೆಲಸದ ಸಂಸ್ಕೃತಿಯ ವ್ಯತ್ಯಾಸವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವ ಪದ್ಧತಿ ಮತ್ತು ಭಾರತದಲ್ಲಿನ ದೀರ್ಘಾವಧಿಯ ಕೆಲಸದ ನಡುವಿನ ಅಂತರವನ್ನು ಅವರು ಎತ್ತಿ ತೋರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krrg93q7at43kjgxqh4ka1n7,imgname-bengaluru-women-work-culture--1--1778938842855.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ವೃತ್ತಿಪರ ಮಹಿಳೆಯೊಬ್ಬರು ಅಮೆರಿಕ ಮತ್ತು ಭಾರತದ ಕೆಲಸದ ಸಂಸ್ಕೃತಿಯ ವ್ಯತ್ಯಾಸವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವ ಪದ್ಧತಿ ಮತ್ತು ಭಾರತದಲ್ಲಿನ ದೀರ್ಘಾವಧಿಯ ಕೆಲಸದ ನಡುವಿನ ಅಂತರವನ್ನು ಅವರು ಎತ್ತಿ ತೋರಿಸಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಕೆಲಸದ ಸಂಸ್ಕೃತಿ ಮತ್ತು ದೈನಂದಿನ ಕಚೇರಿ ದಿನಚರಿ ಮತ್ತೆ ಪ್ರಮುಖ ಚರ್ಚೆಯ ವಿಷಯವಾಗಿದೆ. ದೀರ್ಘ ಕೆಲಸದ ಅವಧಿ, ತಡರಾತ್ರಿ ಸಭೆಗಳು ಹಾಗೂ ನಿರಂತರ ಕಾರ್ಯಭಾರ ಕುರಿತು ಅನೇಕ ಉದ್ಯೋಗಿಗಳು ಮುಕ್ತವಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಕೆಲಸ-ಜೀವನ ಸಮತೋಲನದ ಕುರಿತು ಚರ್ಚೆಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲೇ, ಬೆಂಗಳೂರಿನ ಒಬ್ಬ ವೃತ್ತಿಪರ ಮಹಿಳೆ ಹಂಚಿಕೊಂಡಿರುವ ಇತ್ತೀಚಿನ ವಿಡಿಯೋ ಭಾರತ ಮತ್ತು ಅಮೆರಿಕದ ಕೆಲಸದ ಸಂಸ್ಕೃತಿಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಈ ಮಹಿಳೆ ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದ ವೇಳೆ ಕಂಡ ಅನುಭವಗಳನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೋ ಮೂಲಕ ವಿವಿಧ ದೇಶಗಳ ಕೆಲಸದ ವೇಳಾಪಟ್ಟಿಗಳು ಮತ್ತು ಕಾರ್ಯಪದ್ಧತಿಗಳ ನಡುವಿನ ವ್ಯತ್ಯಾಸ ಕುರಿತು ಹೊಸ ಚರ್ಚೆಗೆ ವೇದಿಕೆ ಸಿಕ್ಕಿದೆ.&lt;/p&gt;&lt;img&gt;&lt;p&gt;ತಮ್ಮ ವಿಡಿಯೋದಲ್ಲಿ ಅವರು ಅಮೆರಿಕದ ಕೆಲಸದ ವಾತಾವರಣ ಭಾರತದಲ್ಲಿನ ಸಂಸ್ಕೃತಿಗಿಂತ ಬಹಳ ಭಿನ್ನವಾಗಿದೆ ಎಂದು ವಿವರಿಸಿದ್ದಾರೆ. ವಿಶೇಷವಾಗಿ, ಅಲ್ಲಿನ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ ಮನೆಗೆ ತೆರಳುವ ಕ್ರಮ ಅವರನ್ನು ಆಶ್ಚರ್ಯಚಕಿತರನ್ನಾಗಿಸಿದೆ. &ldquo;ಭಾರತೀಯ ಕಾರ್ಪೊರೇಟ್ ಮನೋಭಾವನೆ ಕೆಲವೊಮ್ಮೆ ಅತಿಯಾಗಿ ಕಠಿಣವಾಗಿರುತ್ತದೆ. ನಾವು ಹೆಚ್ಚು ಸಮಯ ಕೆಲಸ ಮಾಡುವುದನ್ನೇ ಸಾಮಾನ್ಯವೆಂದು ಒಪ್ಪಿಕೊಂಡಿದ್ದೇವೆ. ಅಮೆರಿಕದಲ್ಲಿ ನಾನು ಬೆಳಿಗ್ಗೆ 9:30 ಅಥವಾ 10 ಗಂಟೆ ಸುಮಾರಿಗೆ ಕಚೇರಿಗೆ ಹೋದೆ. ಸಂಜೆ 4:30ಕ್ಕೆ ಇಡೀ ಮಹಡಿ ಖಾಲಿಯಾಗಿತ್ತು. 5 ಗಂಟೆಗೆ ನಾನು ಸಹ ಹೊರಬಂದೆ. ಅದರ ನಂತರ ನನಗೆ ನಿಜವಾದ ವಿಶ್ರಾಂತಿ ಅನುಭವವಾಯಿತು ಎಂದಿದ್ದಾರೆ.&lt;/p&gt;&lt;img&gt;&lt;p&gt;ಅವರು ಮುಂದುವರಿದು ಮಾತನಾಡಿ ಬಹಳ ದಿನಗಳ ನಂತರ ಕೆಲಸದ ನಂತರ ಸ್ವಂತ ಸಮಯ ಸಿಕ್ಕಿದ್ದು, ವಾಕಿಂಗ್ ಹೋಗಿ ಸೂರ್ಯಾಸ್ತವನ್ನು ಅನುಭವಿಸಲು ಸಾಧ್ಯವಾಯಿತು. ಈ ಅನುಭವವು ಭಾರತದಲ್ಲಿ ಕೆಲಸ ಮಾಡುವಾಗ ವೈಯಕ್ತಿಕ ಜೀವನಕ್ಕೆ ಎಷ್ಟು ಕಡಿಮೆ ಸಮಯ ಸಿಗುತ್ತದೆ ಎಂಬುದನ್ನು ನೆನಪಿಸಿತು ಎಂದಿದ್ದಾರೆ.&lt;/p&gt;&lt;img&gt;&lt;p&gt;ಭಾರತದಲ್ಲಿನ ತಮ್ಮ ಸಾಮಾನ್ಯ ಕಚೇರಿ ದಿನವನ್ನು ವಿವರಿಸುತ್ತಾ, ಅವರು ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ಕೆಲಸ ರಾತ್ರಿ 10 ಗಂಟೆಯವರೆಗೆ ಮುಂದುವರಿಯುತ್ತದೆ ಎಂದಿದ್ದಾರೆ. ನಿರಂತರ ಸಭೆಗಳು ಮತ್ತು ಕಾರ್ಯಭಾರದಿಂದ ಅಡುಗೆ ಮಾಡುವುದು ಅಥವಾ ಸ್ವಲ್ಪ ಸಮಯ ನಡೆದುಬರುವುದು ಸಹ ಕಷ್ಟಕರವಾಗುತ್ತದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;&ldquo;ಇದು ನಾನು ಮಾತ್ರವೇ ಅಥವಾ ಭಾರತದಲ್ಲಿ ಕಾರ್ಪೊರೇಟ್ ಪರಿಸರ ಹೆಚ್ಚು ಕಠಿಣವಾಗುತ್ತಿದೆಯೇ?&rdquo; ಎಂಬ ಪ್ರಶ್ನೆಯೊಂದಿಗೆ ಅವರು ವಿಡಿಯೋ ಹಂಚಿಕೊಂಡಿದ್ದು, ಅದು ಹಲವರ ಗಮನ ಸೆಳೆದಿದೆ.&lt;/p&gt;&lt;p&gt;ಅನೇಕ ಬಳಕೆದಾರರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ವೈಯಕ್ತಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದರೂ ಸಹ ಭಾರತದಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದನ್ನು ನಿಷ್ಠೆ ಮತ್ತು ಉತ್ಪಾದಕತೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇನ್ನೂ ಕೆಲವರು, ಈ ಸಂಸ್ಕೃತಿ ಹೆಚ್ಚಿದ ಒತ್ತಡ ಮತ್ತು ದೀರ್ಘ ಕೆಲಸದ ಅವಧಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದು, ಅಮೆರಿಕದಲ್ಲಿ ಫಲಿತಾಂಶ ಆಧಾರಿತ ಮತ್ತು ಸಮತೋಲನದ ಕಾರ್ಯಪದ್ಧತಿ ಕಂಡುಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಒಬ್ಬ ಬಳಕೆದಾರರು, &ldquo;ಸಮಸ್ಯೆ ಕೆಲಸದಲ್ಲಿಲ್ಲ; ಹೆಚ್ಚು ಗಂಟೆಗಳು ಎಂದರೆ ಹೆಚ್ಚು ಉತ್ಪಾದಕತೆ ಎನ್ನುವ ಮನೋಭಾವದಲ್ಲಿದೆ, ಎಂದು ಹೇಳಿದ್ದಾರೆ.&lt;/p&gt;&lt;p&gt;ಇನ್ನೊಬ್ಬರು, &ldquo;ಅಮೆರಿಕದಲ್ಲಿ ಉದ್ಯೋಗಿಗಳು ಬೇಗನೆ ಕೆಲಸ ಪ್ರಾರಂಭಿಸಿ ದಿನವಿಡೀ ಹೆಚ್ಚು ಉತ್ಪಾದಕರಾಗಿರುತ್ತಾರೆ,&rdquo; ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಎಲ್ಲರೂ ಈ ಹೋಲಿಕೆಯನ್ನು ಒಪ್ಪಿಕೊಂಡಿಲ್ಲ. ಕೆಲವರು, ಭಾರತೀಯ ಕಂಪನಿಗಳು ಅಮೆರಿಕದ ಕಂಪನಿಗಳೊಂದಿಗೆ ಕೆಲಸ ಮಾಡುವ ಕಾರಣದಿಂದ ಸಮಯ ವ್ಯತ್ಯಾಸವು ಕೆಲಸದ ಅವಧಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;h2&gt;ಒಬ್ಬ ಬಳಕೆದಾರರು ವಿವರಿಸುತ್ತಾ,&lt;/h2&gt;&lt;p&gt;ಯುಎಸ್&zwnj; ಕಂಪನಿಗಳೊಂದಿಗೆ ಸಭೆಗಳು ನಡೆಯಬೇಕಾದರೆ, ಭಾರತೀಯ ಉದ್ಯೋಗಿಗಳು ತಮ್ಮ ಕೆಲಸದ ಸಮಯವನ್ನು ವಿಸ್ತರಿಸಬೇಕಾಗುತ್ತದೆ. ಇದು ಅನಿವಾರ್ಯ ಪರಿಸ್ಥಿತಿ. ಭಾರತ ಸ್ವಾವಲಂಬಿಯಾಗುವ ದಿನ, ನಮ್ಮ ಕೆಲಸದ ಸಂಸ್ಕೃತಿ ಕೂಡ ಬದಲಾಗಬಹುದು, ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;&amp;nbsp;ಈ ವಿಡಿಯೋವು ಒಂದು ಮಹತ್ವದ ಪ್ರಶ್ನೆಯನ್ನು ಮತ್ತೊಮ್ಮೆ ಮುಂದಿಟ್ಟಿದೆ. ಭಾರತದಲ್ಲಿ ಕೆಲಸದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೇ?&lt;/p&gt;&lt;p&gt;ಇದಕ್ಕೆ ಪ್ರತಿಕ್ರಿಯಿಸಿದ ಅನೇಕರು, ಸಮಯಕ್ಕೆ ಮನೆಗೆ ತೆರಳುವುದು ಇಲ್ಲಿ ಅಪರಾಧದಂತೆ ಭಾಸವಾಗುತ್ತದೆ, ಕೆಲಸ-ಜೀವನ ಸಮತೋಲನ ಇನ್ನೂ ಐಷಾರಾಮಿ ಎಂಬಂತೆ ಕಾಣುತ್ತದೆ. ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇನ್ನೊಬ್ಬರು ಸಲಹೆ ನೀಡುತ್ತಾ, &ldquo;ತುರ್ತು ಪರಿಸ್ಥಿತಿ ಹೊರತುಪಡಿಸಿ ಸಂಜೆ 7 ಗಂಟೆಯ ನಂತರ ಸಭೆಗಳನ್ನು ನಿರ್ಬಂಧಿಸಬೇಕು ಎಂದಿದ್ದಾರೆ.&lt;/p&gt;&lt;p&gt;ಈ ಘಟನೆ, ಕೆಲಸದ ಸಂಸ್ಕೃತಿಯಲ್ಲಿ ಸಮತೋಲನದ ಅಗತ್ಯತೆಯನ್ನು ಮತ್ತೊಮ್ಮೆ ಒತ್ತಿಹೇಳುತ್ತಿದ್ದು, ಉದ್ಯೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸುವ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತಿದೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/private-jobs/bengaluru-woman-questions-india-work-culture-after-us-visit-viral-video-sparks-debate-on-work-life-balance-gdp-bzixanu"/>
        </item>
        <item>
            <title><![CDATA[ಸರ್ಕಾರಿ ನೌಕರಿ ಕನಸು ಕಂಡವರಿಗೆ ಬಂಪರ್ ನ್ಯೂಸ್: 56 ಸಾವಿರ ಸರ್ಕಾರಿ ನೇಮಕಾತಿಗೆ ಗ್ರೀನ್‌ ಸಿಗ್ನಲ್‌!]]></title>
            <link>https://kannada.asianetnews.com/state/good-news-for-who-those-dreaming-govt-job-green-signal-for-56-000-government-recruitments-rav/articleshow-cr2l5wc</link>
            <guid isPermaLink="true">https://kannada.asianetnews.com/state/good-news-for-who-those-dreaming-govt-job-green-signal-for-56-000-government-recruitments-rav/articleshow-cr2l5wc</guid>
            <pubDate>Thu, 14 May 2026 09:41:02 +0530</pubDate>
            <description><![CDATA[ಪರಿಶಿಷ್ಟ ಜಾತಿಗಳ ಒಳಮೀಸಲಾತಿ ತೀರ್ಮಾನದ ಅನ್ವಯ, ರಾಜ್ಯ ಸರ್ಕಾರವು 400 ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಿದೆ. ಈ ಮಹತ್ವದ ನಿರ್ಧಾರದಿಂದಾಗಿ ರಾಜ್ಯದಲ್ಲಿ ಖಾಲಿ ಇರುವ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಹಸಿರು ನಿಶಾನೆ ದೊರೆತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krjan7amn9e0jv3dcjfypppy,imgname-----------------------2026-05-14t093634.811-1778731621716.jpg" type="image/jpeg" height="390" width="690"/>
            <content:encoded><![CDATA[&lt;h2&gt;ರೋಸ್ಟರ್ ಬಿಂದು ಅಂತಿಮ 56000 ನೇಮಕಾತಿ ಸುಗಮ&lt;/h2&gt;&lt;p&gt;&lt;strong&gt;ಬೆಂಗಳೂರು (ಮೇ.14):&lt;/strong&gt; ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪ್ರಮಾಣ ಸಂಬಂಧ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ, 400 ಬಿಂದುಗಳ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಲಾಗಿದೆ. ಈ ಮೂಲಕ 56,432 ಹುದ್ದೆಗಳ ನೇಮಕಕ್ಕೆ ಹಾದಿ ಸುಗಮವಾಗಿದೆ.&lt;/p&gt;&lt;h2&gt;ಒಳಮೀಸಲಾತಿ ಬೆನ್ನಲ್ಲೇ ನೇಮಕಾತಿ&lt;/h2&gt;&lt;p&gt;ರೋಸ್ಟರ್&zwnj; ಬಿಂದುಗಳ ಕುರಿತ ವಿವರವಾದ ಪಟ್ಟಿಯನ್ನು ರಾಜ್ಯ ಸರ್ಕಾರ ಬುಧವಾರ ಬಿಡುಗಡೆ ಮಾಡಿದ್ದು, ಜತೆಗೆ ಎಸ್ಸಿ ಪ್ರವರ್ಗ ಎ, ಬಿ ಮತ್ತು ಸಿಗಳ ಒಳಮೀಸಲಾತಿ ಬಿಂದುಗಳನ್ನೂ ಗುರುತಿದೆ. ಇತ್ತೀಚೆಗೆ ಸರ್ಕಾರ ಶೇ.15 ಎಸ್ಸಿ ಮೀಸಲಲ್ಲಿ ಪ್ರವರ್ಗ &lsquo;ಎ&rsquo;ಗೆ ಶೇ. 5.25, &lsquo;ಬಿ&rsquo;ಗೆ ಶೇ. 5.25 ಮತ್ತು &lsquo;ಸಿ&rsquo;ಗೆ ಶೇ. 4.5ರಷ್ಟು ಪಾಲನ್ನು ಮೀಸಲಿರಿಸಿ ಆದೇಶ ಮಾಡಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/good-news-for-who-those-dreaming-govt-job-green-signal-for-56-000-government-recruitments-rav/articleshow-cr2l5wc"/>
        </item>
        <item>
            <title><![CDATA[ಅಮೆರಿಕನ್‌ ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಕಟ್‌;  ಇದು ತಾತ್ಕಾಲಿಕವಲ್ಲ, ಶಾಶ್ವತ ಬದಲಾವಣೆ]]></title>
            <link>https://kannada.asianetnews.com/world-news/american-tech-companies-are-making-massive-job-cuts-due-to-the-adoption-of-artificial-intelligence-mrq/articleshow-fckzfvg</link>
            <guid isPermaLink="true">https://kannada.asianetnews.com/world-news/american-tech-companies-are-making-massive-job-cuts-due-to-the-adoption-of-artificial-intelligence-mrq/articleshow-fckzfvg</guid>
            <pubDate>Mon, 11 May 2026 07:26:09 +0530</pubDate>
            <description><![CDATA[ಅಮೆರಿಕದ ಟೆಕ್ ಕಂಪನಿಗಳು ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದಾಗಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುತ್ತಿವೆ. ಇದು ತಾತ್ಕಾಲಿಕವಲ್ಲ, ಶಾಶ್ವತ ಬದಲಾವಣೆ ಎನ್ನಲಾಗಿದ್ದು, ಸಂಬಳದಿಂದ ಉಳಿದ ಹಣವನ್ನು ಎಐ ಮೇಲೆ ಹೂಡಿಕೆ ಮಾಡಲಾಗುತ್ತಿದೆ. ಈ ಬೆಳವಣಿಗೆಯು ಟೆಕ್ ಉದ್ಯೋಗಿಗಳ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krabxwnajdvrmpwv9c0n5drv,imgname-layoff-1778464518826.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj;: &lt;/strong&gt;ಟೆಕ್&zwnj; ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಕ್ರಮಣ ಶುರುವಾದ ಬೆನ್ನಲ್ಲೇ ಅಮೆರಿಕದ ಬಹುತೇಕ ಕಂಪನಿಗಳು ಉದ್ಯೋಗ ಕಡಿತವನ್ನು ಭಾರೀ ಪ್ರಮಾಣದಲ್ಲಿ ಮಾಡುತ್ತಿವೆ. ಇದು ತಾತ್ಕಾಲಿಕ ಬದಲಾವಣೆಯಾಗಿರದೆ, ಶಾಶ್ವತ ರೂಪಾಂತರ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;2026ರಲ್ಲಿ 92,000 ಟೆಕ್ಕಿಗಳನ್ನು ತೆಗೆದುಹಾಕಲಾಗಿದ್ದರೆ, 2020ರಿಂದ ಈವರೆಗೆ 9,00,000 ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಟೆಕ್&zwnj; ದೈತ್ಯ ಮೆಟಾ ಮತ್ತು ಮೈಕ್ರೋಸಾಫ್ಟ್&zwnj;ನಿಂದ ಗೇಟ್&zwnj;ಪಾಸ್&zwnj; ಪಡೆದವರೇ 20,000 ಮಂದಿಯಾಗುತ್ತಾರೆ. ಅಮೆಜಾನ್, ಗೂಗಲ್, ಒರಾಕಲ್, ಸೇಲ್ಸ್&zwnj;ಫೋರ್ಸ್, ನೈಕಿ ಮತ್ತು ಸ್ನ್ಯಾಪ್&zwnj;ನಂತಹ ಕಂಪನಿಗಳೂ ಉದ್ಯೋಗ ಕಡಿತಕ್ಕೆ ಹೊರತಾಗಿಲ್ಲ. ಎಐ ಅಳವಡಿಕೆ ಮತ್ತು ಕೊರೋನಾ ಕಾಲದಲ್ಲಾದ ಅನಗತ್ಯ ನೇಮಕಾತಿಗಳ ಪರಿಣಾಮ ಇದು ಎನ್ನಲಾಗುತ್ತಿದೆ.&lt;/p&gt;&lt;h2&gt;&lt;strong&gt;ನಿಲ್ಲದ ಪ್ರಕ್ರಿಯೆ&lt;/strong&gt;&lt;/h2&gt;&lt;p&gt;ಮುಂದಿನ ದಿನಗಳಲ್ಲಿ 8,000 ಜನರ ಕೆಲಸ ಕಸಿಯುವ ಯೋಜನೆಯಲ್ಲಿರುವ ಮೆಟಾ, 6,000 ಹುದ್ದೆಗಳಿಗೆ ಹೊಸ ನೇಮಕಾತಿಗಳನ್ನು ಮಾಡದೇ ಇರಲು ನಿರ್ಧರಿಸಿದೆ. ಮೈಕ್ರೊಸಾಫ್ಟ್&zwnj; ತನ್ನ ಅಮೆರಿಕನ್&zwnj; ಉದ್ಯೋಗಿಗಳಲ್ಲಿ ಶೇ.7ರಷ್ಟು ಮಂದಿಗೆ ಸ್ವಯಂ ನಿವೃತ್ತಿ ಪಡೆಯಲು ಹಲವು ಪ್ರೋತ್ಸಾಹಿಸುತ್ತಿದೆ. ನೈಕಿ 1,400 ಹುದ್ದೆಗಳನ್ನೇ ರದ್ದು ಮಾಡಿದೆ.&lt;/p&gt;&lt;h3&gt;&lt;strong&gt;ಎಐ ಮೇಲೆ ಅತ್ಯಧಿಕ ಹೂಡಿಕೆ&lt;/strong&gt;&lt;/h3&gt;&lt;p&gt;ಒಂದು ಕಡೆ ವೆಚ್ಚ ಕಡಿತಕ್ಕಾಗಿ ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವ ಕಂಪನಿಗಳು, ಇನ್ನೊಂದು ಕಡೆ ಎಐ ಮೇಲೆ ಅಪಾರ ಹೂಡಿಕೆ ಮಾಡುತ್ತಿವೆ. ಆಲ್ಫಬೆಟ್, ಮೈಕ್ರೋಸಾಫ್ಟ್, ಮೆಟಾ ಮತ್ತು ಅಮೆಜಾನ್ 2026ರಲ್ಲಿ ಮಾಡಲಿರುವ ಹೂಡಿಕೆಯನ್ನು ಒಟ್ಟುಗೂಡಿಸಿದರೆ 66 ಲಕ್ಷ ಕೋಟಿ ರು. ಆಗುತ್ತದೆಂಬ ಅಂದಾಜಿದೆ. ಒರಾಕಲ್&zwnj;ನಲ್ಲಿ ಉದ್ಯೋಗ ಕಡಿತದಿಂದಾಗಿ 75-94 ಸಾವಿರ ಕೋಟಿ ರು. ಉಳಿತಾಯವಾಗಲಿದೆ. ಈ ಮುಂಚೆ 250 ಉದ್ಯೋಗಿಗಳಿದ್ದಾಗ 472 ಕೋಟಿ ರು. ಆದಾಯ ಗಳಿಸುತ್ತಿದ್ದ ಕಂಪನಿಗಳು ಈಗ ಇದೇ ಮೊತ್ತವನ್ನು ಕೇವಲ 50 ಕೆಲಸಗಾರರನ್ನಿಟ್ಟುಕೊಂಡು ಸಂಪಾದಿಸುತ್ತಿವೆ.&lt;/p&gt;&lt;p&gt;ಅಮೆರಿಕದ ಉದ್ಯೋಗಿಗಳು ತನ್ನ ಕಂಪನಿಯ ಭವಿಷ್ಯದ ಬೆಳವಣಿಗೆಯ ಬಗ್ಗೆ ಹೊಂದಿರುವ ಭರವಸೆಯನ್ನು ಅಳೆಯುವ ಗ್ಲಾಸ್&zwnj;ಡೋರ್ ಎಂಪ್ಲಾಯಿ ಕಾನ್ಫಿಡೆನ್ಸ್&zwnj; ಸೂಚ್ಯಂಕದ ಪ್ರಕಾರ, ಟೆಕ್&zwnj; ಕ್ಷೇತ್ರದಲ್ಲಿ ಈ ಭರವಸೆಯು ಶೇ.6.8ರಷ್ಟು ಕುಸಿದು, ಮಾರ್ಚ್&zwnj;ನಲ್ಲಿ ಶೇ.47.2ರಷ್ಟಾಗಿದೆ. ಇದರಿಂದ ಭೀತಿಗೊಳಗಾಗಿ ಹಲವರು ಕೆಲಸ ತೊರೆಯತೊಡಗಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಕದನವಿರಾಮದ ಅಮೆರಿಕ ಪ್ರಸ್ತಾವವಕ್ಕೆ ಇರಾನ್&zwnj; ಪ್ರತ್ಯುತ್ತರ&lt;/strong&gt;&lt;/h3&gt;&lt;p&gt;ಇಸ್ಲಾಮಾಬಾದ್: ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಪ್ರಸ್ತಾವನೆಗೆ ಇರಾನ್&zwnj;ನ ಪ್ರತಿಕ್ರಿಯೆಯನ್ನು ಮಧ್ಯವರ್ತಿ ಪಾಕಿಸ್ತಾನದ ಮೂಲಕ ಕಳುಹಿಸಲಾಗಿದೆ ಎಂದು ಇರಾನ್&zwnj;ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್&zwnj;ಎನ್&zwnj;ಎ ತಿಳಿಸಿದೆ. ಇದನ್ನು ಪಾಕಿಸ್ತಾನ ಕೂಡ ಖಚಿತಪಡಿಸಿದೆ,&lt;/p&gt;&lt;p&gt;ಪ್ರಸ್ತಾವಿತ ಯೋಜನೆಯ ಪ್ರಕಾರ, ಮಾತುಕತೆಗಳ ಮೊದಲ ಹಂತವು ಯುದ್ಧವನ್ನು ಕೊನೆಗೊಳಿಸುವುದರ ಜೊತೆಗೆ ಕೊಲ್ಲಿ ಮತ್ತು ಹೋರ್ಮುಜ್ ಜಲಸಂಧಿಯಲ್ಲಿ &lsquo;ಸಮುದ್ರ ಭದ್ರತೆ&rsquo;ಯನ್ನು ಖಚಿತಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ವರದಿ ಭಾನುವಾರ ತಿಳಿಸಿದೆ.&lt;/p&gt;&lt;p&gt;ಇರಾನಿನ ಪ್ರತಿಕ್ರಿಯೆಯನ್ನು ಪಾಕಿಸ್ತಾನವು ಅಮೆರಿಕದ ಕಡೆಗೆ ವರ್ಗಾಯಿಸಿದೆ ಎಂದು ಪಾಕಿಸ್ತಾನದ ರಾಜತಾಂತ್ರಿಕ ಮೂಲವೊಂದು ತಿಳಿಸಿದೆ. ಆದರೆವಿರಾನ್&zwnj; ಪ್ರಸ್ತಾವದಲ್ಲೇನಿದೆ ಎಂಬುದನ್ನು ಹೇಳಲು ಪಾಕ್&zwnj; ಪ್ರಧಾನಿ ಶೆಹಬಾಜ್&zwnj; ಷರೀಫ್ ನಿರಾಕರಿಸಿದ್ದಾರೆ. ಈ ವಾರದ ಆರಂಭದಲ್ಲಿ ವಾಷಿಂಗ್ಟನ್ ಇರಾನ್&zwnj;ಗೆ 14 ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಿತ್ತು&lt;/p&gt;]]></content:encoded>
            <category>jobs</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/american-tech-companies-are-making-massive-job-cuts-due-to-the-adoption-of-artificial-intelligence-mrq/articleshow-fckzfvg"/>
        </item>
        <item>
            <title><![CDATA[ಏರ್ ಇಂಡಿಯಾದಿಂದ 1 ಸಾವಿರ ಸಿಬ್ಬಂದಿಗಳ ವಜಾ,  ಭವಿಷ್ಯದಲ್ಲಿ ಕಷ್ಟದ ದಿನಗಳು ಬರದಂತೆ ಈ ನಿರ್ಧಾರವೆಂದ ಸಿಇಒ!]]></title>
            <link>https://kannada.asianetnews.com/gallery/business/air-india-fires-over-1000-employees-for-ethical-violations-amid-rising-financial-pressure-says-ceo-campbell-wilson-gdp-guyqmw8</link>
            <guid isPermaLink="true">https://kannada.asianetnews.com/gallery/business/air-india-fires-over-1000-employees-for-ethical-violations-amid-rising-financial-pressure-says-ceo-campbell-wilson-gdp-guyqmw8</guid>
            <pubDate>Mon, 11 May 2026 16:54:32 +0530</pubDate>
            <description><![CDATA[&lt;p&gt;ಕಳೆದ ಮೂರು ವರ್ಷಗಳಲ್ಲಿ, ಏರ್ ಇಂಡಿಯಾ ನೈತಿಕ ಉಲ್ಲಂಘನೆಗಳಿಗಾಗಿ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಿಇಒ ಕ್ಯಾಂಪ್&zwnj;ಬೆಲ್ ವಿಲ್ಸನ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ELT ಯೋಜನೆಯ ದುರುಪಯೋಗ ಮತ್ತು ಕಳ್ಳಸಾಗಣೆಯಂತಹ ಗಂಭೀರ ಕಾರಣಗಳನ್ನು ಉಲ್ಲೇಖಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqc4hq94dtm23j90h6qn0d5g,imgname-air-india-hub-spoke-varanasi-international-connectivity-udan-india-aviation-model-updates-3-1777450147108.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಮೂರು ವರ್ಷಗಳಲ್ಲಿ, ಏರ್ ಇಂಡಿಯಾ ನೈತಿಕ ಉಲ್ಲಂಘನೆಗಳಿಗಾಗಿ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಿಇಒ ಕ್ಯಾಂಪ್&zwnj;ಬೆಲ್ ವಿಲ್ಸನ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ELT ಯೋಜನೆಯ ದುರುಪಯೋಗ ಮತ್ತು ಕಳ್ಳಸಾಗಣೆಯಂತಹ ಗಂಭೀರ ಕಾರಣಗಳನ್ನು ಉಲ್ಲೇಖಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಕಳೆದ ಮೂರು ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೈತಿಕ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ವಜಾಗೊಳಿಸಿರುವುದು ಬೆಳಕಿಗೆ ಬಂದಿದೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್&zwnj;ಬೆಲ್ ವಿಲ್ಸನ್ ಈ ಮಾಹಿತಿಯನ್ನು ಸಿಬ್ಬಂದಿಯೊಂದಿಗೆ ನಡೆದ ಟೌನ್&zwnj;ಹಾಲ್ ಸಭೆಯಲ್ಲಿ ಬಹಿರಂಗಪಡಿಸಿದ್ದು, ಸಂಸ್ಥೆಯ ಒಳಗೆ ನಿಯಮ ಪಾಲನೆಗೆ ನೀಡಲಾಗುತ್ತಿರುವ ಮಹತ್ವವನ್ನು ಒತ್ತಿಹೇಳಿದ್ದಾರೆ.&lt;/p&gt;&lt;img&gt;&lt;p&gt;ಕ್ಯಾಂಪ್&zwnj;ಬೆಲ್ ವಿಲ್ಸನ್ ಅವರ ಪ್ರಕಾರ, ಪ್ರತಿವರ್ಷ ನೂರಾರು ಉದ್ಯೋಗಿಗಳನ್ನು ವಿವಿಧ ರೀತಿಯ ನಿಯಮ ಉಲ್ಲಂಘನೆಗಳ ಕಾರಣದಿಂದ ವಜಾಗೊಳಿಸಲಾಗುತ್ತಿದೆ. ಯಾರೂ ನೋಡದಿದ್ದರೂ ಸಹ ಸರಿಯಾದ ನಡವಳಿಕೆಯನ್ನು ಅನುಸರಿಸುವುದು ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯ ಎಂದು ಹೇಳಿದರು.&lt;/p&gt;&lt;p&gt;ವಿಮಾನದಿಂದ ವಸ್ತುಗಳನ್ನು ಕಳ್ಳಸಾಗಣೆ ಮಾಡುವುದು, ಶುಲ್ಕವಿಲ್ಲದೆ ಹೆಚ್ಚುವರಿ ಸಾಮಾನುಗಳನ್ನು ಸಾಗಿಸಲು ಅವಕಾಶ ನೀಡುವುದು ಹಾಗೂ ಉದ್ಯೋಗಿಗಳಿಗೆ ನೀಡಲಾಗುವ ಉದ್ಯೋಗಿಗಳ ಮನರಂಜನಾ ಪ್ರಯಾಣ ಯೋಜನೆ (Employee Leisure Travel-ELT) ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದು ಸೇರಿದಂತೆ ಹಲವು ಗಂಭೀರ ಉಲ್ಲಂಘನೆಗಳಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಠಿಣ ಶಿಸ್ತು ಕ್ರಮಗಳನ್ನು ಜಾರಿಗೆ ತರಲಾಗಿದೆ.&lt;/p&gt;&lt;img&gt;&lt;p&gt;ಮಾರ್ಚ್ ತಿಂಗಳಲ್ಲಿ ಸಂಸ್ಥೆಯು ELT (Employee Leisure Travel) ವ್ಯವಸ್ಥೆಯ ಬಳಕೆಯಲ್ಲಿ ದೊಡ್ಡ ಮಟ್ಟದ ಅಕ್ರಮಗಳನ್ನು ಪತ್ತೆಹಚ್ಚಿತ್ತು. ಮೂಲಗಳ ಪ್ರಕಾರ, 4,000 ಕ್ಕೂ ಹೆಚ್ಚು ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ದಂಡ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಈ ಕ್ರಮಗಳು ಸಂಸ್ಥೆ ಎದುರಿಸುತ್ತಿರುವ ಆರ್ಥಿಕ ಸವಾಲುಗಳ ನಡುವೆಯೇ ಜಾರಿಗೆ ಬಂದಿವೆ. ಟಾಟಾ ಗ್ರೂಪ್ ಅಧೀನದಲ್ಲಿರುವ ಏರ್ ಇಂಡಿಯಾ ಪ್ರಸ್ತುತ ಸುಮಾರು 24,000 ಉದ್ಯೋಗಿಗಳನ್ನು ಹೊಂದಿದೆ. ಆದರೆ, ಮಾರ್ಚ್ 2026ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಗ್ರೂಪ್ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸೇರಿ ₹22,000 ಕೋಟಿಗೂ ಅಧಿಕ ನಷ್ಟವನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಸಂಸ್ಥೆ ಹಲವಾರು ವೆಚ್ಚ ಉಳಿತಾಯ ಕ್ರಮಗಳನ್ನು ಜಾರಿಗೆ ತಂದಿದೆ. ವಾರ್ಷಿಕ ವೇತನ ಹೆಚ್ಚಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು, ಅಗತ್ಯವಿಲ್ಲದ ವೆಚ್ಚಗಳನ್ನು ಕಡಿತಗೊಳಿಸುವುದು ಹಾಗೂ ವಿವೇಚನೆಯ ವೆಚ್ಚ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಲೋಕಸಭೆಗೆ ನೀಡಿದ ಲಿಖಿತ ಉತ್ತರದ ಪ್ರಕಾರ, ವಿಮಾನಯಾನ ಸಂಸ್ಥೆಯ ಆರ್ಥಿಕ ಸ್ಥಿತಿ ಗಂಭೀರವಾಗಿದೆ. 2022-23ನೇ ಹಣಕಾಸು ವರ್ಷದಲ್ಲಿ ₹1,16.32 ಕೋಟಿ ಲಾಭ ದಾಖಲಿಸಿದ್ದ ಸಂಸ್ಥೆ, 2023-24ರಲ್ಲಿ ₹1,63.12 ಕೋಟಿ ನಷ್ಟ ಕಂಡಿತ್ತು. ಇದಾದ ಬಳಿಕ 2024-25ರಲ್ಲಿ ₹58,32.37 ಕೋಟಿ ಭಾರೀ ನಷ್ಟವನ್ನು ದಾಖಲಿಸಿರುವುದು ಪರಿಸ್ಥಿತಿಯ ತೀವ್ರತೆಯನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಮಧ್ಯಪ್ರಾಚ್ಯದ ಭೂರಾಜಕೀಯ ಪರಿಸ್ಥಿತಿ ಸೇರಿದಂತೆ ಜಾಗತಿಕ ಅಂಶಗಳು ವಿಮಾನಯಾನ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿವೆ. ಈ ಬಗ್ಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಕ್ಯಾಂಪ್&zwnj;ಬೆಲ್ ವಿಲ್ಸನ್, &ldquo;ಮಧ್ಯಪ್ರಾಚ್ಯದ ಪರಿಸ್ಥಿತಿ ಸುಧಾರಿಸದಿದ್ದರೆ ಈ ಹಣಕಾಸು ವರ್ಷ ಅತ್ಯಂತ ಕಷ್ಟಕರವಾಗಬಹುದು&rdquo; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಏರ್ ಇಂಡಿಯಾ ತನ್ನ ಆಂತರಿಕ ನಿಯಮ ಪಾಲನೆ, ನೈತಿಕ ಮೌಲ್ಯಗಳು ಮತ್ತು ವೆಚ್ಚ ನಿಯಂತ್ರಣದ ಮೇಲೆ ಹೆಚ್ಚು ಒತ್ತು ನೀಡುತ್ತಿರುವುದು ಸ್ಪಷ್ಟವಾಗಿದೆ. ಆರ್ಥಿಕ ಒತ್ತಡ ಮತ್ತು ಕಾರ್ಯಾಚರಣಾ ಸವಾಲುಗಳ ನಡುವೆಯೂ ಸಂಸ್ಥೆ ಶಿಸ್ತು ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು, ಮುಂದಿನ ದಿನಗಳಲ್ಲಿ ಅದರ ಪುನರುತ್ಥಾನಕ್ಕೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/air-india-fires-over-1000-employees-for-ethical-violations-amid-rising-financial-pressure-says-ceo-campbell-wilson-gdp-guyqmw8"/>
        </item>
        <item>
            <title><![CDATA[ಮೆಟಾದಿಂದ ಬೃಹತ್ ಉದ್ಯೋಗ ಕಡಿತ: AI ಹೂಡಿಕೆ, ಭವಿಷ್ಯದ ಯೋಜನೆಯ ವೆಚ್ಚ ನಿರ್ವಹಣೆಗಾಗಿ ಈ ಕ್ರಮವೆಂದ ಜುಕರ್‌ಬರ್ಗ್!]]></title>
            <link>https://kannada.asianetnews.com/jobs/meta-layoffs-2026-meta-plans-10-percent-workforce-cut-amid-rising-ai-investment-costs-gdp/articleshow-hv63edg</link>
            <guid isPermaLink="true">https://kannada.asianetnews.com/jobs/meta-layoffs-2026-meta-plans-10-percent-workforce-cut-amid-rising-ai-investment-costs-gdp/articleshow-hv63edg</guid>
            <pubDate>Fri, 01 May 2026 09:22:16 +0530</pubDate>
            <description><![CDATA[ಮೆಟಾ ಸಂಸ್ಥೆಯು ತನ್ನ ಒಟ್ಟು ಸಿಬ್ಬಂದಿಯಲ್ಲಿ ಸುಮಾರು 10% ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ. ಕೃತಕ ಬುದ್ಧಿಮತ್ತೆ (AI) ಮೇಲಿನ ಹೆಚ್ಚುತ್ತಿರುವ ಹೂಡಿಕೆಯನ್ನು ಸಮತೋಲನಗೊಳಿಸಲು ಮತ್ತು ವೆಚ್ಚ ನಿರ್ವಹಣೆಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾರ್ಕ್ ಜುಕರ್&zwnj;ಬರ್ಗ್ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpzdbhpx4dhvxsn6mxenk5gn,imgname-meta-layoffs-new-2026-1777023174364.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಟಾ ಸಂಸ್ಥೆಯು ಮುಂದಿನ ತಿಂಗಳು ತನ್ನ ಒಟ್ಟು ಸಿಬ್ಬಂದಿಯಲ್ಲಿ ಸುಮಾರು 10% ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿರುವುದಾಗಿ ವರದಿ ತಿಳಿಸಿದೆ. ಇದೇ ವೇಳೆ, ಅಗತ್ಯವಿದ್ದರೆ ಇನ್ನಷ್ಟು ಕಡಿತ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯನ್ನೂ ಕಂಪನಿ ತಳ್ಳಿಹಾಕಿಲ್ಲ. ಈ ಮಾಹಿತಿ ಸಂಸ್ಥೆಯ ಆಂತರಿಕ ಸಭೆಯಲ್ಲಿ ಹೊರಬಂದಿದ್ದು, ಮುಖ್ಯ ಜನಾಧಿಕಾರಿ ಜನೆಲ್ ಗೇಲ್ ಉದ್ಯೋಗಿಗಳಿಗೆ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಸಭೆಯಲ್ಲಿ ಮಾತನಾಡಿದ ಅವರು, ಮತ್ತಷ್ಟಯ ವಜಾಗಳು ನಡೆಯುತ್ತವೆಯೇ ಎಂಬ ಪ್ರಶ್ನೆ ಸಹಜ. ಮುಂದೆ ಯಾವುದೇ ವಜಾಗಳಿಲ್ಲ ಎಂದು ಹೇಳಲು ನಾನು ಬಯಸುತ್ತೇನೆ, ಆದರೆ ಭರವಸೆ ನೀಡಲು ಸಾಧ್ಯವಿಲ್ಲ. ವ್ಯವಹಾರ ಬಲವಾಗಿದ್ದರೂ ಆದ್ಯತೆಗಳು ಬದಲಾಗುತ್ತವೆ, ಸ್ಪರ್ಧೆ ಹೆಚ್ಚುತ್ತಿದೆ ಮತ್ತು ವೆಚ್ಚ ನಿರ್ವಹಣೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಕಂಪನಿಯು ಮುಂದುವರಿದು ತಂಡಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮರುಸಂರಚನೆ ಮಾಡಲಿದ್ದು, ಪ್ರತಿಭೆಯನ್ನು ಹೊಸ ವಿಭಾಗಗಳಿಗೆ ಮರುನಿಯೋಜಿಸಲು ಪ್ರಯತ್ನಿಸಲಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಮಾರ್ಕ್ ಜುಕರ್&zwnj;ಬರ್ಗ್ ಹೇಳಿದ್ದೇನು?&lt;/h2&gt;&lt;p&gt;ಈ ಸಂದರ್ಭದಲ್ಲಿ ಮಾರ್ಕ್ ಜುಕರ್&zwnj;ಬರ್ಗ್ (Mark Zuckerberg) ಕೂಡ ಮಾತನಾಡಿ, ಕಂಪನಿಯ ವೆಚ್ಚದಲ್ಲಿ &ldquo;ಕಂಪ್ಯೂಟ್ ಮತ್ತು ಮೂಲಸೌಕರ್ಯ&rdquo; ಹಾಗೂ &ldquo;ಮಾನವ ಸಂಪನ್ಮೂಲ&rdquo; ಪ್ರಮುಖ ಪಾತ್ರವಹಿಸುತ್ತಿವೆ ಎಂದು ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಹೂಡಿಕೆಗಳನ್ನು ಉಲ್ಲೇಖಿಸಿದ ಅವರು, ಈ ಹೂಡಿಕೆಗಳನ್ನು ಸಮತೋಲನಗೊಳಿಸಲು ಕಂಪನಿಯ ಗಾತ್ರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಕೆಲವು ವಿಭಾಗಗಳು ಇತರ ವಿಭಾಗಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ವಜಾಗೊಳಿಸುವಿಕೆಯಿಂದ ಪ್ರಭಾವಿತವಾಗಬಹುದು ಎಂದು ಜನೆಲ್ ಗೇಲ್ ಸೂಚಿಸಿದರೂ, ಯಾವ ವಿಭಾಗಗಳೆಂದು ವಿವರಣೆ ನೀಡಿಲ್ಲ. ಇದೇ ವೇಳೆ, AI ಟೋಕನ್ ಬಳಕೆ ಅಥವಾ ಸ್ವಯಂಚಾಲಿತ ಪ್ರಕ್ರಿಯೆಗಳು ನೇರವಾಗಿ ವಜಾಗಳಿಗೆ ಕಾರಣವಾಗುವುದಿಲ್ಲ ಎಂದು ಕಂಪನಿ ನಾಯಕತ್ವ ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಸುಮಾರು 8,000 ಉದ್ಯೋಗಿಗಳ ವಜಾ&lt;/h2&gt;&lt;p&gt;ಮಾಧ್ಯಮ ವರದಿಗಳ ಪ್ರಕಾರ, ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ AI ಮೇಲಿನ ಹೆಚ್ಚುತ್ತಿರುವ ವೆಚ್ಚವನ್ನು ಸಮತೋಲನಗೊಳಿಸಲು ಕಂಪನಿ ಯತ್ನಿಸುತ್ತಿದೆ. Meta Platforms ಸಂಸ್ಥೆಯು ತಂಡಗಳ ಗಾತ್ರವನ್ನು ಮರುಪರಿಶೀಲಿಸುತ್ತಿದ್ದು, ಹಿಂದೆ 50-100 ಜನರ ಅಗತ್ಯವಿದ್ದ ಕೆಲಸಗಳನ್ನು ಈಗ 10 ಜನರ ತಂಡವೇ ನಿರ್ವಹಿಸಬಹುದಾದ ಮಟ್ಟಕ್ಕೆ AI ಅಭಿವೃದ್ಧಿ ತಲುಪಿದೆ ಎಂದು ಜುಕರ್&zwnj;ಬರ್ಗ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ತಂಡದ ಗಾತ್ರವನ್ನು ಮುಂದುವರಿಸುವುದು ಪರಿಣಾಮಕಾರಿಯಾಗುವುದಿಲ್ಲ ಎಂದರು.&lt;/p&gt;&lt;p&gt;ಆದರೆ, ತಂಡದ ಗಾತ್ರ ಕಡಿತವೇ ಉದ್ಯೋಗ ಕಳೆದುಕೊಳ್ಳುವುದಕ್ಕೆ ಸಮಾನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. AI ಬಳಕೆ ಉದ್ಯೋಗಿಗಳಿಗೆ ಹೊಸ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂಬುದನ್ನೂ ಹೇಳಿದ್ದಾರೆ.&lt;/p&gt;&lt;p&gt;ಇನ್ನೊಂದೆಡೆ, ಜಾಗತಿಕ ಆರ್ಥಿಕ ಪರಿಸ್ಥಿತಿಗಳೂ ಕಂಪನಿಯ ಮೇಲೆ ಪರಿಣಾಮ ಬೀರಿವೆ. ಇರಾನ್ ವಿರುದ್ಧ ಅಮೆರಿಕ ನಡೆಸಿದ ದಾಳಿಯ ನಂತರ ತೈಲ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಅನಿವಾರ್ಯ ಖರ್ಚುಗಳಿಗೆ ಹೆಚ್ಚು ಹಣ ವ್ಯಯಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಜಾಹೀರಾತುಗಳ ಮೇಲೆ ಖರ್ಚು ಕಡಿಮೆಯಾಗಿದ್ದು, ಕಂಪನಿಯ ಜಾಹೀರಾತು ವ್ಯವಹಾರಕ್ಕೆ ಹೊಡೆತ ಬಿದ್ದಿದೆ ಎಂದು ಜುಕರ್&zwnj;ಬರ್ಗ್ ತಿಳಿಸಿದ್ದಾರೆ.&lt;/p&gt;&lt;p&gt;ಹೂಡಿಕೆ ದೃಷ್ಟಿಯಿಂದ ನೋಡಿದರೆ, ಕಂಪನಿಯ ಬಂಡವಾಳ ವೆಚ್ಚ (CapEx) ಮಾರ್ಗದರ್ಶನವನ್ನು $115 ಬಿಲಿಯನ್&ndash;$135 ಬಿಲಿಯನ್&zwnj;ನಿಂದ ಹೆಚ್ಚಿಸಿ $125 ಬಿಲಿಯನ್&ndash;$145 ಬಿಲಿಯನ್&zwnj;ಗೆ ಏರಿಸಲಾಗಿದೆ. ಅಮೆಜಾನ್ ಹಾಗೂ ಗೂಗಲ್ ಸೇರಿದಂತೆ ಪ್ರಮುಖ ಟೆಕ್ ಕಂಪನಿಗಳು ಈ ವರ್ಷ AI ಕ್ಷೇತ್ರಕ್ಕೆ ಒಟ್ಟಾರೆ ಸುಮಾರು $750 ಬಿಲಿಯನ್ ಹೂಡಿಕೆ ಮಾಡುವ ನಿರೀಕ್ಷೆಯಿದೆ. ಈ ಹೆಚ್ಚಿದ ಹೂಡಿಕೆಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದು, ಮೆಟಾ ಷೇರುಗಳಲ್ಲಿ ಸುಮಾರು 9% ಕುಸಿತ ಕಂಡುಬಂದಿದೆ.&lt;/p&gt;&lt;p&gt;ಸಭೆಯ ವೇಳೆ, ಉದ್ಯೋಗಿಗಳ ಕೀಸ್ಟ್ರೋಕ್ ಮತ್ತು ಮೌಸ್ ಚಲನೆಯನ್ನು ವಿಶ್ಲೇಷಿಸಿ AI ಮಾದರಿಗಳನ್ನು ಸುಧಾರಿಸುವ ಯೋಜನೆಯನ್ನೂ ಜುಕರ್&zwnj;ಬರ್ಗ್ ಉಲ್ಲೇಖಿಸಿದ್ದಾರೆ. ಈ ಡೇಟಾವನ್ನು ವೈಯಕ್ತಿಕವಾಗಿ ಯಾರೂ ವೀಕ್ಷಿಸುವುದಿಲ್ಲ, ಬದಲಾಗಿ ಸಂಗ್ರಹಿತ ರೂಪದಲ್ಲಿ AI ತರಬೇತಿಗೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;p&gt;AI ವಿಭಾಗದ ಮುಖ್ಯಸ್ಥ ಅಲೆಗ್ಸಾಂಡರ್ Wang ಕೂಡ ಸಭೆಯಲ್ಲಿ ಪಾಲ್ಗೊಂಡು, ಕಂಪನಿಯ ಹೊಸ AI ಮಾದರಿಗಳ ಸಾಧನೆಯನ್ನು ಶ್ಲಾಘಿಸಿದರು. ವಿಶೇಷವಾಗಿ &ldquo;ಸ್ಪಾರ್ಕ್&rdquo; ಮಾದರಿಯ ಬಿಡುಗಡೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;h2&gt;6,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಕೈಬಿಟ್ಟ ಮೆಟಾ&lt;/h2&gt;&lt;p&gt;ಇದರ ನಡುವೆ, ಮಾರ್ಚ್ ತಿಂಗಳಲ್ಲಿ ಬಂದ ವರದಿಗಳ ಪ್ರಕಾರ, ಕಂಪನಿ ಈ ವರ್ಷ ಒಟ್ಟು ಸಿಬ್ಬಂದಿಯಲ್ಲಿ ಸುಮಾರು 20% ರಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ. ಮೇ 20ರಿಂದ ವಜಾಗೊಳಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಸುಮಾರು 6,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆಯನ್ನೂ ಕಂಪನಿ ಕೈಬಿಡಲಿದೆ.&lt;/p&gt;&lt;p&gt;ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಸುಸಾನ್ ಲಿ ಮಾತನಾಡಿ, ಸಂಸ್ಥೆಯ ಆದರ್ಶ ಸಿಬ್ಬಂದಿ ಸಂಖ್ಯೆಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ 77,000ಕ್ಕೂ ಹೆಚ್ಚು ಉದ್ಯೋಗಿಗಳಿರುವ ಮೆಟಾದಲ್ಲಿ, ಮೂಲಸೌಕರ್ಯ ವೆಚ್ಚಗಳು ಬಹುಪಾಲು AI ಅಭಿವೃದ್ಧಿಗೆ ಮೀಸಲಾಗಿದ್ದು, 2025ರ $72.2 ಬಿಲಿಯನ್ ವೆಚ್ಚದಿಂದ ಈ ವರ್ಷ ಅದು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.&lt;/p&gt;&lt;p&gt;ಒಟ್ಟಿನಲ್ಲಿ, Meta Platforms ಸಂಸ್ಥೆ AI ಮೇಲೆ ಭಾರೀ ಹೂಡಿಕೆ ಮಾಡುತ್ತಾ ತನ್ನ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಲು ಪ್ರಯತ್ನಿಸುತ್ತಿದೆ. ಈ ಬದಲಾವಣೆಗಳ ಭಾಗವಾಗಿ ಉದ್ಯೋಗ ಕಡಿತವೂ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಂಪನಿಯ ಸಂರಚನೆಯಲ್ಲಿ ಇನ್ನಷ್ಟು ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/meta-layoffs-2026-meta-plans-10-percent-workforce-cut-amid-rising-ai-investment-costs-gdp/articleshow-hv63edg"/>
        </item>
        <item>
            <title><![CDATA[ರಾಜ್ಯ ಸರ್ಕಾರದಿಂದ ಎಸ್‌ಸಿ ಒಳಮೀಸಲಾತಿಗೆ ಅಧಿಕೃತ ಮುದ್ರೆ; 400 ಬಿಂದುಗಳ ರೋಸ್ಟರ್, ಮರು ಅಧಿಸೂಚನೆಗೆ ಆದೇಶ!]]></title>
            <link>https://kannada.asianetnews.com/state/karnataka-government-order-sc-internal-reservation-400-point-roster-implementation-sat/articleshow-k156yn0</link>
            <guid isPermaLink="true">https://kannada.asianetnews.com/state/karnataka-government-order-sc-internal-reservation-400-point-roster-implementation-sat/articleshow-k156yn0</guid>
            <pubDate>Wed, 13 May 2026 17:40:01 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಅಧಿಕೃತ ಆದೇಶ ಹೊರಡಿಸಿದೆ. ಈ ಆದೇಶದನ್ವಯ, ಶೇ. 15ರ ಮೀಸಲಾತಿಯನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಲಾಗಿದ್ದು, ನೇಮಕಾತಿಗಾಗಿ 400 ಬಿಂದುಗಳ ರೋಸ್ಟರ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 56,432 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k31kwedj9ktnhh91f1ajy4nb,imgname-karnataka-internal-reservation-1755622291890.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 13): ಕ&lt;/strong&gt;ರ್ನಾಟಕ ರಾಜ್ಯದಲ್ಲಿ ಬಹುದಿನಗಳಿಂದ ಚರ್ಚೆಯಲ್ಲಿದ್ದ ಪರಿಶಿಷ್ಟ ಜಾತಿಗಳ (SC) ಒಳಮೀಸಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮಾನ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ತಾತ್ಕಾಲಿಕವಾಗಿ ಶೇ. 17 ರಿಂದ ಶೇ. 15ಕ್ಕೆ ಸೀಮಿತಗೊಳಿಸಿ, ಅದರೊಳಗೆ ಒಳಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;h3&gt;&lt;strong&gt;ಹೊಸ ವರ್ಗೀಕರಣ ಮತ್ತು ಮೀಸಲಾತಿ ಪ್ರಮಾಣ:&lt;/strong&gt;&lt;/h3&gt;&lt;p&gt;ದಿನಾಂಕ 13.05.2026 ರಂದು ಹೊರಡಿಸಲಾದ ಈ ಆದೇಶದನ್ವಯ, ಪರಿಶಿಷ್ಟ ಜಾತಿಯ ಒಟ್ಟು ಶೇ. 15 ರಷ್ಟು ಮೀಸಲಾತಿಯನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:&lt;/p&gt;&lt;ul&gt; &lt;li&gt;ಪೃವರ್ಗ-ಎ (SC-A): ಶೇಕಡಾ 5.25&lt;/li&gt; &lt;li&gt;ಪೃವರ್ಗ-ಬಿ (SC-B): ಶೇಕಡಾ 5.25&lt;/li&gt; &lt;li&gt;ಪೃವರ್ಗ-ಸಿ (SC-C): ಶೇಕಡಾ 4.5&lt;/li&gt;&lt;/ul&gt;&lt;p&gt;ವಿಶೇಷವಾಗಿ, 'ಪೃವರ್ಗ-ಸಿ' ಅಡಿಯಲ್ಲಿ ಲಭ್ಯವಾಗುವ ಹುದ್ದೆಗಳಲ್ಲಿ ಶೇಕಡಾ 20 ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿಗಳಲ್ಲಿನ ಅತ್ಯಂತ ಹಿಂದುಳಿದ 59 ಜಾತಿಗಳಿಗೆ ಮೀಸಲಿರಿಸಲಾಗಿದೆ. ಒಂದು ವೇಳೆ ಈ 59 ಜಾತಿಗಳಿಗೆ ಸೇರಿದ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ, ಆ ಹುದ್ದೆಗಳನ್ನು 'ಪೃವರ್ಗ-ಸಿ'ಯ ಇತರ ಜಾತಿಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;h2&gt;&lt;strong&gt;400 ಬಿಂದುಗಳ ರೋಸ್ಟರ್ ಜಾರಿ:&lt;/strong&gt;&lt;/h2&gt;&lt;p&gt;ಈ ಒಳಮೀಸಲಾತಿ ತೀರ್ಮಾನಗಳನ್ನು ಅನುಷ್ಠಾನಗೊಳಿಸಲು ಸರ್ಕಾರವು '400 ಬಿಂದುಗಳ ರೋಸ್ಟರ್' (400-Point Roster) ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇನ್ನು ಮುಂದೆ ನಡೆಯುವ ಎಲ್ಲಾ ನೇರ ನೇಮಕಾತಿಗಳಲ್ಲಿ ಈ ರೋಸ್ಟರ್ ಬಿಂದುಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಹಿಂದಿನ ನೇಮಕಾತಿಯಲ್ಲಿ ಯಾವ ಬಿಂದುವಿನವರೆಗೆ ಪ್ರಕ್ರಿಯೆ ಮುಗಿದಿದೆಯೋ, ಅದರ ಮುಂದಿನ ಬಿಂದುವಿನಿಂದ ಹೊಸ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.&lt;/p&gt;&lt;h3&gt;&lt;strong&gt;56,432 ಹುದ್ದೆಗಳ ನೇಮಕಾತಿಗೆ ಒಪ್ಪಿಗೆ: ಹಿಂದಿನ ಅಧಿಸೂಚನೆ ವಾಪಸ್&lt;/strong&gt;&lt;/h3&gt;&lt;p&gt;ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ನೇರ ನೇಮಕಾತಿಗಾಗಿ ಆರ್ಥಿಕ ಇಲಾಖೆಯು ಈಗಾಗಲೇ ಅನುಮೋದನೆ ನೀಡಿದೆ. ಈ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಳ್ಳಲು ಸಚಿವ ಸಂಪುಟವು ನಿರ್ಧರಿಸಿದ್ದು, ಹೊಸ ಒಳಮೀಸಲಾತಿ ನೀತಿಯ ಅನ್ವಯವೇ ಈ ನೇಮಕಾತಿಗಳು ನಡೆಯಲಿವೆ. ಈ ಹಿಂದೆ ಹೊರಡಿಸಲಾಗಿದ್ದ ಕೆಲವು ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಹೊಸ ಮಾರ್ಗಸೂಚಿಯಂತೆ ಮರು ಅಧಿಸೂಚನೆ ಹೊರಡಿಸಲು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಪ್ರಮುಖ ಮಾರ್ಗಸೂಚಿಗಳು:&lt;/strong&gt;&lt;/h2&gt;&lt;p&gt;ಯಾವುದೇ ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಯ ಬಿಂದುಗಳು 3ಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ಹುದ್ದೆಗಳಿಗೆ ಎಲ್ಲಾ 101 ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳು ಸ್ಪರ್ಧಿಸಲು ಅವಕಾಶ ನೀಡಲಾಗಿದೆ.&lt;/p&gt;&lt;p&gt;ಬ್ಯಾಕ್&zwnj;ಲಾಗ್ ಹುದ್ದೆಗಳ ವಿಚಾರದಲ್ಲಿ, ಮಾನ್ಯ ನ್ಯಾಯಾಲಯವು ಶೇ. 24 ರಷ್ಟು ಮೀಸಲಾತಿ ಪ್ರಮಾಣವನ್ನು ಒಪ್ಪಿದಲ್ಲಿ, ಹೆಚ್ಚುವರಿ ಶೇ. 6 ರಷ್ಟು ಹುದ್ದೆಗಳನ್ನು ಬ್ಯಾಕ್&zwnj;ಲಾಗ್ ಎಂದು ಪರಿಗಣಿಸಿ ನೇಮಕಾತಿ ಮಾಡಲಾಗುವುದು. ಸಮತಳ ಮೀಸಲಾತಿ (Horizontal Reservation) ಅನ್ವಯಿಸುವಾಗಲೂ ಸರ್ಕಾರವು ನಿಗದಿಪಡಿಸಿದ ಹೊಸ ರೋಸ್ಟರ್ ನಿಯಮಗಳನ್ನೇ ಪಾಲಿಸಬೇಕಾಗುತ್ತದೆ.&lt;/p&gt;&lt;h3&gt;&lt;strong&gt;ತಕ್ಷಣದಿಂದಲೇ ಜಾರಿ&lt;/strong&gt;&lt;/h3&gt;&lt;p&gt;ಈ ಆದೇಶವು ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಉಪಜಾತಿಗಳ ನಡುವೆ ಸಮಾನ ಅವಕಾಶಗಳನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ವಿಶೇಷವಾಗಿ ಅತ್ಯಂತ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಸಮಾಲೋಚನೆಯೊಂದಿಗೆ ಸಿದ್ಧಪಡಿಸಲಾದ ಈ 400 ಬಿಂದುಗಳ ರೋಸ್ಟರ್ ಇನ್ನು ಮುಂದೆ ರಾಜ್ಯದ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ದಾರಿದೀಪವಾಗಲಿದೆ.&lt;/p&gt;&lt;p&gt;ಈ ಹೊಸ ನಿಯಮಾವಳಿಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಇದರಿಂದಾಗಿ ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಸ್ಪಷ್ಟವಾದ ಮೀಸಲಾತಿ ಚೌಕಟ್ಟು ಲಭ್ಯವಾದಂತಾಗಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-government-order-sc-internal-reservation-400-point-roster-implementation-sat/articleshow-k156yn0"/>
        </item>
        <item>
            <title><![CDATA[ಹಾಸನ: ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳ ಫೈಟ್! ಹೆಚ್‌ಆರ್‌ಪಿ ಕಚೇರಿಯಲ್ಲಿ ಹೈಡ್ರಾಮಾ!]]></title>
            <link>https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0</link>
            <guid isPermaLink="true">https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0</guid>
            <pubDate>Fri, 01 May 2026 13:29:55 +0530</pubDate>
            <description><![CDATA[&lt;p&gt;ಹಾಸನದ ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ವರ್ಗಾವಣೆಗೊಂಡ ಅಧಿಕಾರಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಮರಳಿದ್ದಾರೆ. ನೂತನವಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿ ಮತ್ತು ಹಿಂದಿನ ಅಧಿಕಾರಿಯ ನಡುವೆ ಒಂದೇ ಕುರ್ಚಿಗಾಗಿ ಜಿದ್ದಾಜಿದ್ದಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqh8mg8gax28d8zxrky28cpr,imgname-hassan-govt-officials-1777622204688.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮೇ 01): &lt;/strong&gt;ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಹೇಮಾವತಿ ಜಲಾಶಯ ಯೋಜನೆಯ (HRP) ವಿಶೇಷ ಭೂಸ್ವಾಧೀನಾಧಿಕಾರಿ (SLAO) ಕಚೇರಿ ಈಗ ಹೈಡ್ರಾಮಾದ ಕೇಂದ್ರಬಿಂದುವಾಗಿದೆ. ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಸಾರ್ವಜನಿಕರು ಮತ್ತು ಸಿಬ್ಬಂದಿ ಕಣ್ಣರಳಿಸಿ ನೋಡುವಂತಾಗಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಕಳೆದ ಒಂದು ವಾರದ ಹಿಂದೆಯಷ್ಟೇ ಹೇಮಾವತಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ಜಾಗಕ್ಕೆ ಮಹೇಶ್ ಎಂಬ ಅಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದಂತೆ ನೂತನ ಅಧಿಕಾರಿ ಮಹೇಶ್ ಅವರು ಈಗಾಗಲೇ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿ, ಅಧಿಕಾರಿಯ ಕುರ್ಚಿಯ ಮೇಲೆ ಕುಳಿತಿದ್ದಾರೆ.&lt;/p&gt;&lt;h2&gt;&lt;strong&gt;ಕೆಎಟಿ ಮೊರೆ ಹೋದ ಮಂಜುನಾಥ್:&lt;/strong&gt;&lt;/h2&gt;&lt;p&gt;ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಹಿಂದಿನ ಅಧಿಕಾರಿ ಮಂಜುನಾಥ್ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಮೆಟ್ಟಿಲೇರಿದ್ದರು. ಮಂಜುನಾಥ್ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮಂಡಳಿಯು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ (Stay) ನೀಡಿದೆ. ನ್ಯಾಯಾಲಯದಿಂದ ಸ್ಟೇ ತಂದ ಬೆನ್ನಲ್ಲೇ ಮಂಜುನಾಥ್ ಅವರು ಕಚೇರಿಗೆ ಹಾಜರಾಗಿದ್ದಾರೆ.&lt;/p&gt;&lt;h3&gt;&lt;strong&gt;ಚೇರ್ ಮೇಲೆ ಹೊಸಬರು, ಪಕ್ಕದಲ್ಲೇ ನಿಂತ ಹಳಬರು!&lt;/strong&gt;&lt;/h3&gt;&lt;p&gt;ಸದ್ಯ ಕಚೇರಿಯಲ್ಲಿ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನವಾಗಿ ಅಧಿಕಾರ ಸ್ವೀಕರಿಸಿರುವ ಮಹೇಶ್ ಅವರು ಅಧಿಕೃತವಾಗಿ ಕುರ್ಚಿಯ ಮೇಲೆ ಕುಳಿತಿದ್ದರೆ, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಮಂಜುನಾಥ್ ಅವರು ಪಕ್ಕದಲ್ಲೇ ನಿಂತು ತಮಗೆ ಕುರ್ಚಿ ಬಿಟ್ಟುಕೊಡುವಂತೆ ಆಗ್ರಹಿಸುತ್ತಿದ್ದಾರೆ. &quot;ನನ್ನ ವರ್ಗಾವಣೆಗೆ ಕೋರ್ಟ್ ತಡೆ ನೀಡಿದೆ, ಹಾಗಾಗಿ ಈ ಸ್ಥಾನ ನನಗೆ ಸೇರಬೇಕು&quot; ಎಂಬುದು ಮಂಜುನಾಥ್ ವಾದ. ಆದರೆ, &quot;ನಾನು ಸರ್ಕಾರದ ಆದೇಶದಂತೆ ಅಧಿಕಾರ ಸ್ವೀಕರಿಸಿದ್ದೇನೆ&quot; ಎನ್ನುವುದು ಮಹೇಶ್ ಅವರ ನಿಲುವು.&lt;/p&gt;&lt;h3&gt;&lt;strong&gt;ಗೊಂದಲದಲ್ಲಿ ಕಚೇರಿ ಸಿಬ್ಬಂದಿ:&lt;/strong&gt;&lt;/h3&gt;&lt;p&gt;ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಪಟ್ಟು ಹಿಡಿದಿರುವುದರಿಂದ ಕಚೇರಿಯ ಕಡತಗಳ ವಿಲೇವಾರಿ ಮತ್ತು ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗಿದೆ. ಯಾವ ಅಧಿಕಾರಿಯ ಆದೇಶ ಪಾಲಿಸಬೇಕು ಎಂಬ ಗೊಂದಲದಲ್ಲಿ ಸಿಬ್ಬಂದಿ ವರ್ಗದವರಿದ್ದಾರೆ. ಹೇಮಾವತಿ ಜಲಾಶಯ ಯೋಜನೆಯಂತಹ ಪ್ರಮುಖ ವಿಭಾಗದಲ್ಲಿ ಈ ರೀತಿ ಅಧಿಕಾರಿಗಳ ನಡುವಿನ ಕಿತ್ತಾಟ ಸಾರ್ವಜನಿಕರ ಟೀಕೆಗೂ ಗುರಿಯಾಗಿದೆ.&lt;/p&gt;&lt;p&gt;ಸದ್ಯ ಈ ಕುರ್ಚಿ ಸಮರ ಜಿಲ್ಲಾಡಳಿತದ ಅಂಗಳ ತಲುಪಿದ್ದು, ಈ ಹಗ್ಗಜಗ್ಗಾಟಕ್ಕೆ ಯಾರು ಬ್ರೇಕ್ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0"/>
        </item>
        <item>
            <title><![CDATA[ಕಾರ್ಪೊರೇಟ್ ಲೋಕಕ್ಕೆ 'ಗುಡ್‌ಬೈ': 11 ವರ್ಷಗಳ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ 35 ವರ್ಷದ ಯುವಕ!]]></title>
            <link>https://kannada.asianetnews.com/private-jobs/biswajit-mohanty-retires-at-35-corporate-job-goodbye-mail-viral-instagram-video-san/articleshow-mekouok</link>
            <guid isPermaLink="true">https://kannada.asianetnews.com/private-jobs/biswajit-mohanty-retires-at-35-corporate-job-goodbye-mail-viral-instagram-video-san/articleshow-mekouok</guid>
            <pubDate>Wed, 06 May 2026 20:05:13 +0530</pubDate>
            <description><![CDATA[35 ವರ್ಷದ ಕಾರ್ಪೊರೇಟ್ ಉದ್ಯೋಗಿ ಬಿಸ್ವಜಿತ್ ಮೊಹಂತಿ, ತಮ್ಮ 11 ವರ್ಷಗಳ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಜೀವನದ ಅರ್ಥ ಮತ್ತು ವೈಯಕ್ತಿಕ ತೃಪ್ತಿಗಾಗಿ ಅಧಿಕ ಸಂಬಳದ ಕೆಲಸವನ್ನು ತೊರೆದ ಅವರ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಬೆಂಬಲಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyv4z0sq7wsvx21h6d35xz9,imgname-whatsapp-image-2026-05-06-at-7.59.02-pm-1778077826073.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.6): &lt;/strong&gt;ಇಂದು ಹತ್ತಾರು ಲಕ್ಷ ಸಂಬಳವಿದ್ದರೂ ಕಾರ್ಪೊರೇಟ್ ವಲಯದ ಒತ್ತಡಕ್ಕೆ ಸಿಲುಕಿ ಜೀವನದ ಅರ್ಥವನ್ನೇ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ 35 ವರ್ಷದ ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ಜೀವನದ ಉದ್ದೇಶ ಮತ್ತು ಆದ್ಯತೆಗಳ ಬಗ್ಗೆ ಆಳವಾಗಿ ಯೋಚಿಸಿದ ನಂತರ, ಹನ್ನೊಂದು ವರ್ಷಗಳ ಸುದೀರ್ಘ ವೃತ್ತಿಜೀವನದಿಂದ ಹೊರಬರಲು ನಿರ್ಧರಿಸಿದ್ದಾರೆ. ಬಿಸ್ವಜಿತ್ ಮೊಹಂತಿ ಎಂಬುವವರು ತಮ್ಮ ಇನ್&zwnj;ಸ್ಟಾಗ್ರಾಮ್ ವಿಡಿಯೋದ ಮೂಲಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. 35ನೇ ವಯಸ್ಸಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮ ಕೊನೆಯ ದಿನವನ್ನು ಗುರುತಿಸಿರುವ ಬಿಸ್ವಜಿತ್, ಈ ನಿರ್ಧಾರಕ್ಕೆ ಪ್ರೇರೇಪಿಸಿದ ಅಂಶಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಶಾಲಾ ಶಿಕ್ಷಣ, ಸಾಲ ಮಾಡಿ ಪಡೆದ ಉನ್ನತ ಶಿಕ್ಷಣ ಮತ್ತು 11 ವರ್ಷಗಳ ವೃತ್ತಿಪರ ಅನುಭವ. ಇವೆಲ್ಲವೂ ಕಾರ್ಪೊರೇಟ್ ಹಾದಿಯಿಂದ ಹೊರಬರುವ ನಿರ್ಧಾರಕ್ಕೆ ಮುನ್ನುಡಿಯಾದವು. ಸುಮಾರು ಮೂರು ವರ್ಷಗಳ ಹಿಂದೆಯೇ ತಾವು ನಿವೃತ್ತಿಯವರೆಗೆ ಇದೇ ಕೆಲಸದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ ಎಂಬ ಕಠಿಣ ಸತ್ಯ ಅವರಿಗೆ ಅರಿವಾಯಿತು. ಈ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಅವರು ತಮ್ಮನ್ನು ತಾವು ಎರಡು ಪ್ರಶ್ನೆಗಳನ್ನು ಕೇಳಿಕೊಂಡಿದ್ದರು:&lt;/p&gt;&lt;p&gt;ಆರ್ಥಿಕ ಭದ್ರತೆ ಈಗಾಗಲೇ ಖಚಿತವಾಗಿದ್ದರೆ, ನಾನು ಇದೇ ಕೆಲಸವನ್ನು ಮುಂದುವರಿಸುತ್ತಿದ್ದೇನೆಯೇ? ನಾನು ಮಾಡುತ್ತಿರುವ ಕೆಲಸವು ನೈಜ ಜಗತ್ತಿನಲ್ಲಿ ಏನಾದರೂ ಅರ್ಥಪೂರ್ಣ ಪ್ರಭಾವ ಬೀರಲಿದೆಯೇ? ಒಂದು ವೇಳೆ ನನ್ನ ಈ ಹುದ್ದೆ ಇಲ್ಲದಿದ್ದರೆ ಜಗತ್ತು ಅದನ್ನು ಮಿಸ್ ಮಾಡಿಕೊಳ್ಳುತ್ತದೆಯೇ? ಎನ್ನುವುದು.&lt;/p&gt;&lt;p&gt;&quot;ನನ್ನ ಫೈನಲ್ ಮೇಲ್, ಅಂದರೆ ಗುಡ್&zwnj;ಬೈ ಮೇಲ್ ನನ್ನ ಡ್ರಾಫ್ಟ್&zwnj;ನಲ್ಲಿ ಸಿದ್ಧವಾಗಿದೆ. ಮುಂದಿನ ಒಂದೆರಡು ಗಂಟೆಗಳಲ್ಲಿ ನಾನು ಅದನ್ನು ಕಳುಹಿಸಲಿದ್ದೇನೆ ಮತ್ತು ಈ ಕಾರ್ಪೊರೇಟ್ ಪ್ರಪಂಚದಿಂದ ಹೊರಬರಲಿದ್ದೇನೆ. ಸಮಯ ಮತ್ತು ಶಕ್ತಿ ಇಲ್ಲದಿದ್ದರೆ, ಬ್ಯಾಂಕ್ ಬ್ಯಾಲೆನ್ಸ್ ಕೇವಲ ಅನುಕೂಲವನ್ನು ನೀಡುತ್ತದೆಯೇ ಹೊರತು ಸಂತೋಷವನ್ನಲ್ಲ. ಅದು ರಾತ್ರಿ ನೆಮ್ಮದಿಯ ನಿದ್ರೆ ನೀಡುವುದಿಲ್ಲ ಎಂಬ ಕಹಿ ಸತ್ಯ ನನಗೆ ಅರಿವಾಯಿತು,&quot; ಎಂದು ಬಿಸ್ವಜಿತ್ ವಿಡಿಯೋದಲ್ಲಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ನೆಟ್ಟಿಗರ ಬೆಂಬಲ ಮತ್ತು ಚರ್ಚೆ&lt;/strong&gt;&lt;/h2&gt;&lt;p&gt;ಬಿಸ್ವಜಿತ್ ಅವರ ಈ ಧೈರ್ಯದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಾಂಪ್ರದಾಯಿಕ ವೃತ್ತಿಜೀವನದ ಹಾದಿಗಿಂತ ವೈಯಕ್ತಿಕ ತೃಪ್ತಿಗೆ ಆದ್ಯತೆ ನೀಡಿದ್ದಕ್ಕಾಗಿ ಹಲವರು ಅವರನ್ನು ಶ್ಲಾಘಿಸಿದ್ದಾರೆ. &quot;ಕಾರ್ಪೊರೇಟ್ ಕೆಲಸ ಒಂದು ದೊಡ್ಡ ಬಲೆ! ಕೆಲಸವು ನಿಮ್ಮನ್ನು ಎಂದಿಗೂ ಶ್ರೀಮಂತರನ್ನಾಗಿ ಮಾಡುವುದಿಲ್ಲ, ಬದಲಾಗಿ ನಿಮ್ಮ ಶ್ರಮದಿಂದ 10 ಪಟ್ಟು ಹೆಚ್ಚು ಸಂಪಾದಿಸುವವರ ಕೆಳಗೆ ನಿಮ್ಮನ್ನು ಇರಿಸುತ್ತದೆ. ಈ ಅರಿವು ಯುವ ಪೀಳಿಗೆಗೆ ಬರಬೇಕು,&quot; ಎಂದು ಒಬ್ಬ ಯೂಸರ್&zwnj; ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&quot;35ನೇ ವಯಸ್ಸಿಗೆ ಕಾರ್ಪೊರೇಟ್ ಜೀವನ ಬೇಸರ ತರಿಸುವುದು ಸಹಜ. ಸಾಲದ ಹೊರೆಯಿಲ್ಲದಿದ್ದರೆ ರೋಬೋಟ್&zwnj;ಗಳಂತೆ ಕೆಲಸ ಮಾಡುವುದು ಕಷ್ಟ. ನೆಮ್ಮದಿಯ ಜೀವನಕ್ಕೆ ನಮಗೆ ಅಷ್ಟೊಂದು ಹಣದ ಅಗತ್ಯವಿಲ್ಲ,&quot; ಎಂದು ಬೆಂಬಲಿಸಿದ್ದಾರೆ. &quot;35ನೇ ವಯಸ್ಸಿನಲ್ಲಿ ಇಂತಹ ಅರಿವು ನನಗೂ ಉಂಟಾಗಿತ್ತು. ಈಗ ನನಗೆ 39 ವರ್ಷ, ಸವಾಲುಗಳಿದ್ದರೂ ಸಾಕಷ್ಟು ಕಲಿಯುತ್ತಿದ್ದೇನೆ. ಜನರೊಂದಿಗೆ ವ್ಯವಹರಿಸುವ ಕಲೆ ಕೆಲಸಕ್ಕಿಂತ ಮುಖ್ಯ,&quot; ಎಂದು ಹಾರೈಸಿದ್ದಾರೆ.&lt;/p&gt;&lt;p&gt;ಬರ್ನ್-ಔಟ್ (Burn-out) ಸಮಸ್ಯೆಯಿಂದ ಬಳಲುತ್ತಿದ್ದರೂ 9 ರಿಂದ 5ರ ಕೆಲಸದ ಬಲೆಯಿಂದ ಹೊರಬರಲು ಸಾಧ್ಯವಾಗದ ಸಾವಿರಾರು ಜನರಿಗೆ ಬಿಸ್ವಜಿತ್ ಅವರ ಈ ನಿರ್ಧಾರ ಸ್ಫೂರ್ತಿಯಾಗಿದೆ. ಮುಂದೆ ಅನಿಶ್ಚಿತತೆ ಇದ್ದರೂ, ಕಾರ್ಪೊರೇಟ್ ವ್ಯವಸ್ಥೆಯಿಂದ ಹೊರಬಂದಿರುವುದು ಅವರಿಗೆ ಮನಸ್ಸಿನ ಶಾಂತಿಯನ್ನು ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/private-jobs/biswajit-mohanty-retires-at-35-corporate-job-goodbye-mail-viral-instagram-video-san/articleshow-mekouok"/>
        </item>
        <item>
            <title><![CDATA[ರಿಜೆಕ್ಟ್‌ ಮಾಡಿದ ಕಂಪನಿಗೆ ಊಹಿಸೋಕೂ ಆಗದಂಥ ಶಾಕ್‌ ಕೊಟ್ಟ ವ್ಯಕ್ತಿ; ಕಂಗಾಲಾದ ಮ್ಯಾನೇಜರ್]]></title>
            <link>https://kannada.asianetnews.com/gallery/viral/job-seeker-says-i-reject-your-rejection-email-goes-viral-on-internet-suh-otboakm</link>
            <guid isPermaLink="true">https://kannada.asianetnews.com/gallery/viral/job-seeker-says-i-reject-your-rejection-email-goes-viral-on-internet-suh-otboakm</guid>
            <pubDate>Tue, 19 May 2026 17:16:18 +0530</pubDate>
            <description><![CDATA[&lt;p&gt;Job seekers ಸಾಮಾನ್ಯವಾಗಿ ಕಂಪನಿಯಿಂದ rejection mail ಬಂದರೆ ಅಭ್ಯರ್ಥಿಗಳು ಮೌನವಾಗಿರುತ್ತಾರೆ. ಆದರೆ ಈ ಬಾರಿ ಒಬ್ಬ job seeker ಕೊಟ್ಟ reply ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks009v4vx7k2q23h6r8qkvq8,imgname-job-seeker-1779190525083.jpg" type="image/jpeg" height="390" width="690"/>
            <content:encoded><![CDATA[&lt;p&gt;Job seekers ಸಾಮಾನ್ಯವಾಗಿ ಕಂಪನಿಯಿಂದ rejection mail ಬಂದರೆ ಅಭ್ಯರ್ಥಿಗಳು ಮೌನವಾಗಿರುತ್ತಾರೆ. ಆದರೆ ಈ ಬಾರಿ ಒಬ್ಬ job seeker ಕೊಟ್ಟ reply ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಮೇಲ್ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಕಂಪನಿಯಿಂದ &ldquo;ನೀವು ಆಯ್ಕೆಯಾಗಿಲ್ಲ&rdquo; ಅನ್ನೋ ಮೇಲ್ ಬಂದರೆ ಅಭ್ಯರ್ಥಿಗಳು ಮೌನವಾಗಿರುತ್ತಾರೆ. ಆದರೆ ಈ ಬಾರಿ ಒಬ್ಬ ಉದ್ಯೋಗ ಹುಡುಕೋರ ಕೊಟ್ಟ ಉತ್ತರವೇ ಇಂಟರ್ನೆಟ್&zwnj;ನಲ್ಲಿ ಭಾರೀ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಕಂಪನಿಯಿಂದ &ldquo;ಈ ಹುದ್ದೆಗೆ ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ&rdquo; ಎಂದು ಮೇಲ್ ಬಂದಿತ್ತು. ಆದರೆ ಅದಕ್ಕೆ ಅಭ್ಯರ್ಥಿ ಕೊಟ್ಟ ಉತ್ತರ ಮಾತ್ರ ಸಿಕ್ಕಾಪಟ್ಟೆ ವಿಭಿನ್ನವಾಗಿತ್ತು.&lt;/p&gt;&lt;p&gt;&ldquo;ನಿಮ್ಮ ರಿಜೆಕ್ಷನ್ ಅನ್ನು ನಾನು ಒಪ್ಪೋದಿಲ್ಲ&rdquo; ಎಂದು ಆರಂಭಿಸಿದ ಆತ, &ldquo;ಇಷ್ಟು ದಿನ ಕಂಪನಿಗಳು ಮಾತ್ರ ಅಭ್ಯರ್ಥಿಗಳನ್ನು ತಿರಸ್ಕರಿಸುತ್ತಿದ್ದವು, ಈಗ ಅಭ್ಯರ್ಥಿಗಳಿಗೂ ಕಂಪನಿಯನ್ನು ತಿರಸ್ಕರಿಸುವ ಹಕ್ಕಿದೆ&rdquo; ಎಂದು ಫನ್ನಿಯಾಗಿ ಬರೆದಿದ್ದಾನೆ.&lt;/p&gt;&lt;img&gt;&lt;p&gt;ಈ ಮೇಲ್&zwnj;ನ ಸ್ಕ್ರೀನ್&zwnj;ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸಾವಿರಾರು ಜನರು ನಕ್ಕಿದ್ದಾರೆ. ಕೆಲವರು &ldquo;ಇದು ನಿಜವಾದ ರಿವರ್ಸ್ ಆಟ&rdquo; ಎಂದರೆ, ಇನ್ನೂ ಕೆಲವರು &ldquo;ಈ ಆತ್ಮವಿಶ್ವಾಸ ಇದ್ದರೆ ಇನ್ನೂ ದೊಡ್ಡ ಕಂಪನಿಯಲ್ಲಿ ಕೆಲಸ ಸಿಗುತ್ತೆ&rdquo; ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಉದ್ಯೋಗ ಹುಡುಕಾಟದಲ್ಲಿ ಹಲವರು ಎದುರಿಸುತ್ತಿರುವ ನಿರಾಕರಣೆ, ಉತ್ತರವೇ ಬರದ ಇಂಟರ್ವ್ಯೂಗಳು ಮತ್ತು ಒತ್ತಡದ ನಡುವೆ ಈ ಫನ್ನಿ ಉತ್ತರ ಹಲವರಿಗೆ ರಿಲೇಟ್ ಆಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಒಂದು ಸಾಮಾನ್ಯ ರಿಜೆಕ್ಷನ್ ಮೇಲ್&zwnj;ಗೆ ಬಂದ ಈ ಮಜಾದಾರ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಗೆ ಫುಲ್ ಎಂಟರ್ಟೈನ್&zwnj;ಮೆಂಟ್ ನೀಡುತ್ತಿದೆ.&lt;/p&gt;]]></content:encoded>
            <category>jobs</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/viral/job-seeker-says-i-reject-your-rejection-email-goes-viral-on-internet-suh-otboakm"/>
        </item>
        <item>
            <title><![CDATA[ರಾಸಲೀಲೆ ಪ್ರಕರಣದ ಆರೋಪಿ ಡಿಜಿಪಿ ರಾಮಚಂದ್ರ ರಾವ್ ಅಮಾನತು ರದ್ದು; ಮತ್ತೆ ಉನ್ನತ ಹುದ್ದೆ ನಿಯೋಜಿಸಿದ ಸರ್ಕಾರ!]]></title>
            <link>https://kannada.asianetnews.com/state/karnataka-govt-revokes-suspension-of-dgp-ramachandra-rao-ips-rasaleele-case-sat/articleshow-ozz4v1e</link>
            <guid isPermaLink="true">https://kannada.asianetnews.com/state/karnataka-govt-revokes-suspension-of-dgp-ramachandra-rao-ips-rasaleele-case-sat/articleshow-ozz4v1e</guid>
            <pubDate>Wed, 06 May 2026 19:14:47 +0530</pubDate>
            <description><![CDATA[&lt;p&gt;'ರಾಸಲೀಲೆ' ವಿಡಿಯೋ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 'ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್)' ಹುದ್ದೆಗೆ ಮರುನೇಮಕ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyrdwhmbn4s4r7kyc4hbxgz,imgname-ips-ramachandra-rao-1778074972724.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 06): ರಾ&lt;/strong&gt;ಜ್ಯ ಪೊಲೀಸ್ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದ 'ರಾಸಲೀಲೆ' ಪ್ರಕರಣದ ಆರೋಪಿ, ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ (IPS: 1993) ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಮೂಲಕ ವಿವಾದಿತ ಅಧಿಕಾರಿಯನ್ನು ಮತ್ತೆ ಸೇವೆಗೆ ನಿಯೋಜನೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.&lt;/p&gt;&lt;h3&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h3&gt;&lt;p&gt;ಕೆಲವು ತಿಂಗಳ ಹಿಂದೆ ಡಿಜಿಪಿ ದರ್ಜೆಯ ಅಧಿಕಾರಿಯಾಗಿದ್ದ ಕೆ. ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲೇ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಮತ್ತು 'ರಾಸಲೀಲೆ' ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಕಚೇರಿಯಂತಹ ಪವಿತ್ರ ಜಾಗದಲ್ಲಿ ಉನ್ನತ ದರ್ಜೆಯ ಅಧಿಕಾರಿಯೊಬ್ಬರು ಇಂತಹ ಕೃತ್ಯವೆಸಗಿರುವುದು ಇಡೀ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ ತಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಜನವರಿ 19, 2026 ರಂದು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿತ್ತು.&lt;/p&gt;&lt;h2&gt;&lt;strong&gt;ಅಮಾನತು ರದ್ದತಿ ಮತ್ತು ಮರು ನಿಯೋಜನೆ:&lt;/strong&gt;&lt;/h2&gt;&lt;p&gt;ಸರ್ಕಾರದ ಇತ್ತೀಚಿನ ಆದೇಶದಂತೆ (DPAR 26 SPS 2026, ದಿನಾಂಕ: 06.05.2026), ರಾಮಚಂದ್ರ ರಾವ್ ಅವರ ಅಮಾನತನ್ನು ರದ್ದುಪಡಿಸಲಾಗಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಗೆ ಮರುಸೇರ್ಪಡೆಗೊಳಿಸಲಾಗಿದ್ದು, 'ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್)' ಹುದ್ದೆಗೆ ನೇಮಿಸಲಾಗಿದೆ. ವಿಶೇಷವೆಂದರೆ, ಈ ಹುದ್ದೆಯನ್ನು ಸಿಐಡಿ (CID) ಡಿಜಿಪಿ ಹುದ್ದೆಗೆ ಸಮಾನವೆಂದು ಪರಿಗಣಿಸಿ ಸರ್ಕಾರ ಅವರಿಗೆ ಮತ್ತೆ ಪವರ್&zwnj;ಫುಲ್ ಸ್ಥಾನವನ್ನೇ ನೀಡಿದೆ.&lt;/p&gt;&lt;h3&gt;&lt;strong&gt;ಸರ್ಕಾರದ ಆದೇಶದ ಸಾರಾಂಶ:&lt;/strong&gt;&lt;/h3&gt;&lt;p&gt;ಮಾರ್ಚ್ 18, 2026 ರಂದು ರಾಮಚಂದ್ರ ರಾವ್ ಅವರ ವಿರುದ್ಧ ಇಲಾಖಾ ತನಿಖೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಈಗ ಹಠಾತ್ ಆಗಿ ಆಲ್ ಇಂಡಿಯಾ ಸರ್ವಿಸ್ (AIS) ನಿಯಮಗಳ ಅಡಿಯಲ್ಲಿ ಅವರ ಅಮಾನತು ಆದೇಶವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ರಾಜಭವನದ ಆದೇಶದ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ. ಎಸ್. ಅವರು ಈ ಆದೇಶಕ್ಕೆ ಸಹಿ ಹಾಕಿದ್ದಾರೆ.&lt;/p&gt;&lt;h3&gt;&lt;strong&gt;ಸಾರ್ವಜನಿಕ ವಲಯದಲ್ಲಿ ಆಕ್ರೋಶ:&lt;/strong&gt;&lt;/h3&gt;&lt;p&gt;ಗಂಭೀರವಾದ ನೈತಿಕ ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಯನ್ನು ತನಿಖೆ ಪೂರ್ಣಗೊಳ್ಳುವ ಮೊದಲೇ ಅಥವಾ ವಿವಾದದ ಕಾವು ಆರುವ ಮೊದಲೇ ಮತ್ತೆ ಇಂತಹ ಉನ್ನತ ಹುದ್ದೆಗೆ ನಿಯೋಜಿಸಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಕಚೇರಿಯಲ್ಲೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ವಿಡಿಯೋ ಸಾಕ್ಷ್ಯಗಳಿದ್ದರೂ ಸರ್ಕಾರ ಇಂತಹ ಮೃದು ಧೋರಣೆ ತೋರುತ್ತಿರುವುದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.&lt;/p&gt;&lt;p&gt;ಒಟ್ಟಾರೆಯಾಗಿ, ಜನವರಿ ತಿಂಗಳಲ್ಲಿ ಸಸ್ಪೆಂಡ್ ಆಗಿದ್ದ ರಾಮಚಂದ್ರ ರಾವ್, ಮೇ ತಿಂಗಳಿನಲ್ಲಿ ಮತ್ತೆ 'ಡಿಜಿಪಿ' ಎಂಬ ಗತ್ತು-ಗೈರತ್ತಿನೊಂದಿಗೆ ಪೊಲೀಸ್ ಇಲಾಖೆಯ ಮುಖ್ಯವಾಹಿನಿಗೆ ಮರಳಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-revokes-suspension-of-dgp-ramachandra-rao-ips-rasaleele-case-sat/articleshow-ozz4v1e"/>
        </item>
        <item>
            <title><![CDATA[ದೇಶದ ಮಹಾರತ್ನ ಕಂಪನಿಯ ಕರಾಳ ಸತ್ಯ: ವರ್ಷಕ್ಕೆ 20 ಲಕ್ಷ ಸಂಬಳದ ಸರ್ಕಾರಿ ಕೆಲಸಕ್ಕೆ 2 ವರ್ಷದಲ್ಲೇ ಗುಡ್‌ಬೈ ಹೇಳಿದ 25ರ ಯುವಕ]]></title>
            <link>https://kannada.asianetnews.com/central-government-jobs/nit-graduate-quits-20-lpa-bpcl-govt-job-no-toilet-work-pressure-viral-news-san/articleshow-pq9gpsu</link>
            <guid isPermaLink="true">https://kannada.asianetnews.com/central-government-jobs/nit-graduate-quits-20-lpa-bpcl-govt-job-no-toilet-work-pressure-viral-news-san/articleshow-pq9gpsu</guid>
            <pubDate>Sun, 17 May 2026 21:24:31 +0530</pubDate>
            <description><![CDATA[25 ವರ್ಷದ ಎಂಜಿನಿಯರ್ ಸೌರಭ್ ಮಿತ್ತಲ್, ವಾರ್ಷಿಕ 20 ಲಕ್ಷ ರೂ. ಪ್ಯಾಕೇಜ್&zwnj;ನ ಬಿಪಿಸಿಎಲ್ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಕಚೇರಿಯಲ್ಲಿ ಶೌಚಾಲಯದಂತಹ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ತೀವ್ರ ಕೆಲಸದ ಒತ್ತಡದಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದು, ಇದೀಗ ಎಂಬಿಎ ಕಡೆಗೆ ಮುಖ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krva0wgdmb093wtmcs9mk2gz,imgname-bpcl-job-1779032945165.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.17):&lt;/strong&gt; ಯುವ ಪೀಳಿಗೆಯು ಲಕ್ಷಾಂತರ ರೂಪಾಯಿ ಸಂಬಳ ಹಾಗೂ ಸಾಮಾಜಿಕ ಗೌರವ ಸಿಗುವ ಕೇಂದ್ರ ಸರ್ಕಾರದ ಉದ್ಯೋಗಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದರೆ, ಇಲ್ಲೊಬ್ಬ 25 ವರ್ಷದ ಯುವ ಎಂಜಿನಿಯರ್ ತಮಗೆ ಸಿಕ್ಕಿದ್ದ ಪ್ರತಿಷ್ಠಿತ 'ಮಹಾರತ್ನ' ಕಂಪನಿಯ ಉದ್ಯೋಗಕ್ಕೆ ಕೇವಲ ಎರಡೇ ವರ್ಷದಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ವರ್ಷಕ್ಕೆ ಬರೋಬ್ಬರಿ 20 ಲಕ್ಷ ರೂಪಾಯಿ ಪ್ಯಾಕೇಜ್ ಇದ್ದರೂ, ಕಚೇರಿಯಲ್ಲಿ ಕನಿಷ್ಠ ಕುಡಿಯುವ ನೀರು ಮತ್ತು ಶೌಚಾಲಯದಂತಹ ಮೂಲಭೂತ ಸೌಕರ್ಯಗಳೂ ಇಲ್ಲದ ಕಾರಣಕ್ಕೆ ಬೇಸತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.&lt;/p&gt;&lt;p&gt;ರಾಜೀನಾಮೆ ನೀಡಿರುವ ಯುವಕ ಸೌರಭ್ ಮಿತ್ತಲ್, ಪ್ರತಿಷ್ಠಿತ ಎನ್&zwnj;ಐಟಿ (NIT) ಕುರುಕ್ಷೇತ್ರದ ಪದವೀಧರರಾಗಿದ್ದಾರೆ. ಕೇವಲ 22ನೇ ವಯಸ್ಸಿನಲ್ಲಿ ಅವರು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಕಂಪನಿಗೆ ಒನ್&zwnj; ಆಫ್ ದಿ ಬೆಸ್ಟ್ ಪ್ಯಾಕೇಜ್&zwnj;ನೊಂದಿಗೆ ಸೇರ್ಪಡೆಯಾಗಿದ್ದರು. ಸೌರಭ್ ಅವರಿಗೆ ಸಿಲಿಗುರಿಯಲ್ಲಿ ಪೋಸ್ಟಿಂಗ್ ನೀಡಲಾಗಿದ್ದು, ಇಡೀ ಉತ್ತರ ಬಂಗಾಳ, ಸಿಕ್ಕಿಂ ಮತ್ತು ಭೂತಾನ್ ಒಳಗೊಂಡ ವಲಯದ ಕಾರ್ಯಾಚರಣೆಯ ಜವಾಬ್ದಾರಿಯನ್ನು ಅವರು ನಿರ್ವಹಿಸುತ್ತಿದ್ದರು. ಆದರೆ, ಹೊರಗಿನಿಂದ ಅತ್ಯಂತ ಆಕರ್ಷಕವಾಗಿ ಕಾಣುವ ಮಹಾರತ್ನ ಪಿಎಸ್&zwnj;ಯು (PSU) ಉದ್ಯೋಗದ ಒಳಗಿನ ಕಹಿ ಸತ್ಯವೇ ಬೇರೆಯಾಗಿತ್ತು ಎಂದು ಸೌರಭ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;'ಶೌಚಾಲಯ ಕಟ್ಟಲು ಆರ್&zwnj;ಒಐ (ROI) ಇಲ್ಲ ಎಂದ ಫೈನಾನ್ಸ್ ಟೀಮ್!'&lt;/strong&gt;&lt;/h2&gt;&lt;p&gt;ತಮ್ಮ ಕಠಿಣ ಕೆಲಸದ ವಾತಾವರಣದ ಬಗ್ಗೆ ಮಾತನಾಡಿರುವ ಸೌರಭ್, &quot;ನನ್ನ ಕಚೇರಿ ಇದ್ದದ್ದು ಒಂದು ಹಳೆಯ ಗೋದಾಮಿನ (Warehouse) ಒಳಗೆ. ಅಲ್ಲಿ ಕನಿಷ್ಠ ಕುಡಿಯುವ ನೀರಾಗಲಿ ಅಥವಾ ಶೌಚಾಲಯವಾಗಲಿ ಇರಲಿಲ್ಲ. ಎಸಿ ಕೂಡ ಕೆಟ್ಟುಹೋಗಿತ್ತು, ಅದನ್ನು ನನ್ನ ಸ್ವಂತ ಹಣದಲ್ಲೇ ರಿಪೇರಿ ಮಾಡಿಸಿಕೊಂಡಿದ್ದೆ. ಕಚೇರಿಯಲ್ಲಿ ಶೌಚಾಲಯವಿಲ್ಲದ ಬಗ್ಗೆ ನಾನು ಮ್ಯಾನೇಜರ್, ಹಿರಿಯ ಅಧಿಕಾರಿಗಳು ಹಾಗೂ ಎಚ್&zwnj;ಆರ್ (HR) ವರೆಗೂ ಹತ್ತಾರು ಬಾರಿ ಮನವಿ ಮಾಡಿದೆ. ಆದರೆ ಅಧಿಕಾರಿಗಳ ಉದಾಸೀನತೆ ಪರಮಾವಧಿಯಾಗಿತ್ತು. ಎಚ್&zwnj;ಆರ್&zwnj;ನವರು ಇದು ಬಿಸಿನೆಸ್ ವಿಭಾಗಕ್ಕೆ ಸಂಬಂಧಿಸಿದ್ದು ಅಂದರು. ಮ್ಯಾನೇಜರ್ ಬಜೆಟ್ ಕೇಳುತ್ತೇನೆ ಎಂದರು. ಆದರೆ ಕೊನೆಗೆ ಫೈನಾನ್ಸ್ ಡಿಪಾರ್ಟ್&zwnj;ಮೆಂಟ್&zwnj;ನವರು, ಕಚೇರಿಯಲ್ಲಿ ಶೌಚಾಲಯ ಕಟ್ಟುವುದರಿಂದ ಕಂಪನಿಗೆ ಯಾವುದೇ ಆರ್&zwnj;ಒಐ (Return on Investment - ಹೂಡಿಕೆಯ ಮೇಲಿನ ಆದಾಯ) ಬರುವುದಿಲ್ಲ ಎಂದು ಪ್ರಸ್ತಾಪವನ್ನೇ ತಿರಸ್ಕರಿಸಿದರು!&quot; ಎಂದು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಅದೃಷ್ಟವಶಾತ್ ಸೌರಭ್ ಅವರ ಮನೆ ಕಚೇರಿಯಿಂದ 10 ನಿಮಿಷದ ದೂರದಲ್ಲಿದ್ದ ಕಾರಣ, ಅವರು ದಿನದಲ್ಲಿ ಹಲವು ಬಾರಿ ಶೌಚಾಲಯಕ್ಕಾಗಿ ಮನೆಗೆ ಹೋಗಿ ಬರುತ್ತಿದ್ದರು. &quot;ಕೊಲ್ಕತ್ತಾದ ಮುಖ್ಯ ಕಚೇರಿಯಲ್ಲಿ ಎಸಿ ರೂಂನಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳಿಗೆ ಗ್ರೌಂಡ್ ಲೆವೆಲ್&zwnj;ನಲ್ಲಿ ನಾವಿಲ್ಲಿ ಅನುಭವಿಸುತ್ತಿದ್ದ ನರಕದ ಅರಿವೇ ಇರಲಿಲ್ಲ&quot; ಎಂದು ಅವರು ಕಿಡಿಕಾರಿದ್ದಾರೆ.&lt;/p&gt;&lt;h2&gt;&lt;strong&gt;'ಭಾನುವಾರವೂ ಕಾಲ್ಸ್, ಮಧ್ಯರಾತ್ರಿವರೆಗೂ ಕಿರುಕುಳ, ಬೈಗುಳ ಮಾಮೂಲಿ'&lt;/strong&gt;&lt;/h2&gt;&lt;p&gt;ಕಚೇರಿಯ ಕೆಲಸದ ಒತ್ತಡದ ಬಗ್ಗೆಯೂ ಸೌರಭ್ ಗಂಭೀರ ಆರೋಪ ಮಾಡಿದ್ದಾರೆ. &quot;ಅಲ್ಲಿ ರಜೆ ಎಂಬ ಪದವೇ ಇರಲಿಲ್ಲ. ಒಮ್ಮೆ ನನ್ನ ಮ್ಯಾನೇಜರ್ ಕಂಪನಿಯಲ್ಲಿ ರಜೆ ನೀಡುವುದಿಲ್ಲ, ರಜೆ ದಿನಗಳೆಂದರೆ ವರ್ಕ್ ಫ್ರಮ್ ಹೋಮ್ (WFH) ಮಾಡಲು ಇರುವ ದಿನಗಳು ಎಂದು ನೇರವಾಗಿಯೇ ಹೇಳಿದ್ದರು. ವೀಕೆಂಡ್ ಹಾಗೂ ಭಾನುವಾರಗಳೂ ಸೇರಿ ಮಧ್ಯರಾತ್ರಿ 12 ಗಂಟೆಯವರೆಗೂ ಆಫೀಸ್ ಕರೆಗಳು ಬರುತ್ತಿದ್ದವು. ಇಷ್ಟೇ ಅಲ್ಲದೆ, ನನ್ನ ಕೆಲಸಕ್ಕೆ ಯಾವುದೇ ಸಂಬಂಧವಿಲ್ಲದ ಹಿರಿಯ ಅಧಿಕಾರಿಗಳನ್ನು ಏರ್&zwnj;ಪೋರ್ಟ್&zwnj;ನಿಂದ ಪಿಕ್ ಮಾಡುವುದು, ಅವರಿಗೆ ಹೋಟೆಲ್ ಬುಕ್ ಮಾಡುವಂತಹ ವೈಯಕ್ತಿಕ ಕೆಲಸಗಳನ್ನೂ ನನ್ನ ಕೈಯಲ್ಲಿ ಮಾಡಿಸುತ್ತಿದ್ದರು. ಮೀಟಿಂಗ್&zwnj;ಗಳಲ್ಲಿ ಹಾಗೂ ವಿಡಿಯೋ ಕಾನ್ಫರೆನ್ಸ್&zwnj;ಗಳಲ್ಲಿ ಜೋರಾಗಿ ಕಿರುಚಾಡುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಅಲ್ಲಿ ಸಾಮಾನ್ಯ ಎಂಬಂತಾಗಿತ್ತು,&quot; ಎಂದು ಸೌರಭ್ ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ತಂದೆಗೆ ತೀವ್ರ ನಿರಾಶೆ, ತಾಯಿಯ ಭರಪೂರ ಬೆಂಬಲ&lt;/strong&gt;&lt;/h2&gt;&lt;p&gt;ಕೇವಲ 3 ಪ್ರತಿಶತ ವಾರ್ಷಿಕ ಸಂಬಳದ ಏರಿಕೆ ಹಾಗೂ ಕೇವಲ ಹಿರಿತನದ ಆಧಾರದ ಮೇಲಿನ ಪ್ರಮೋಷನ್&zwnj;ಗಳಿಂದಾಗಿ ಅಲ್ಲಿ ಬೆಳವಣಿಗೆಯೂ ಇರಲಿಲ್ಲ. ಇಡೀ ಜೀವನವನ್ನು ಈ ರೀತಿ ಕಳೆಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಸೌರಭ್ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಹರಿಯಾಣದ ಕೈಥಾಲ್ ಎಂಬ ಸಣ್ಣ ಜಿಲ್ಲೆಯ ಸೌರಭ್ ಕುಟುಂಬಕ್ಕೆ ಬಿಪಿಸಿಎಲ್ ಕೆಲಸ ದೊಡ್ಡ ಪ್ರತಿಷ್ಠೆಯ ವಿಷಯವಾಗಿತ್ತು. ಹೀಗಾಗಿ ಮಗ ಸರ್ಕಾರಿ ಕೆಲಸ ಬಿಟ್ಟಿದ್ದನ್ನು ಅವರ ತಂದೆಗೆ ಇಂದಿಗೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲವಂತೆ. ಆದರೆ, ಮಗ ಅನುಭವಿಸುತ್ತಿದ್ದ ಮಾನಸಿಕ ಕಿರುಕುಳ ಮತ್ತು ತಡರಾತ್ರಿಯ ಕರೆಗಳನ್ನು ಖುದ್ದಾಗಿ ನೋಡಿದ್ದ ಅವರ ತಾಯಿ, &quot;ನನ್ನ ಮಗ ಇಂತಹ ನರಕದಲ್ಲಿ ಇರುವುದು ನನಗೆ ಇಷ್ಟವಿಲ್ಲ&quot; ಎಂದು ಮಗನ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಮುಂದಿನ ಹೆಜ್ಜೆ: ಎಂಬಿಎ ಕಡೆಗೆ ಮುಖ&lt;/strong&gt;&lt;/h2&gt;&lt;p&gt;ಪ್ರಸ್ತುತ ಗುರುಗ್ರಾಮ್&zwnj;ನಲ್ಲಿರುವ ಸೌರಭ್ ಮಿತ್ತಲ್, ತಮ್ಮ ವೃತ್ತಿಜೀವನಕ್ಕೆ ಒಂದು ಸ್ಪಷ್ಟ ಮುನ್ನಡೆ ಹಾಗೂ ಬಿಸಿನೆಸ್ ಬಗ್ಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಎಂಬಿಎ (MBA) ಕೋರ್ಸ್&zwnj;ಗೆ ಪ್ರವೇಶ ಪಡೆದಿದ್ದಾರೆ. ಇದರ ಜೊತೆಗೆ ತಮ್ಮ ದಿನನಿತ್ಯದ ವೆಚ್ಚಗಳನ್ನು ಸರಿದೂಗಿಸಲು ಮತ್ತು ಯುವ ವೃತ್ತಿಪರರಿಗೆ ಇಂತಹ ಉದ್ಯೋಗಗಳ ಸತ್ಯಾಸತ್ಯತೆಯನ್ನು ತಿಳಿಸಲು ಅರೆಕಾಲಿಕವಾಗಿ ಕಂಟೆಂಟ್ ಕ್ರಿಯೇಷನ್ (ವಿಡಿಯೋ ಬ್ಲಾಗಿಂಗ್) ಮಾಡಲು ಆರಂಭಿಸಿದ್ದಾರೆ. ಯುವ ಪೀಳಿಗೆಯು ಯಾವುದೇ ಸರ್ಕಾರಿ ಉದ್ಯೋಗದ ಕೇವಲ ಹೊರಗಿನ ವೈಭವವನ್ನು ನೋಡಿ ಮರುಳಾಗುವ ಮುನ್ನ ವಾಸ್ತವವನ್ನು ಅರಿತುಕೊಳ್ಳಬೇಕು ಎಂಬುದು ಅವರ ಸಲಹೆ.&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/central-government-jobs/nit-graduate-quits-20-lpa-bpcl-govt-job-no-toilet-work-pressure-viral-news-san/articleshow-pq9gpsu"/>
        </item>
        <item>
            <title><![CDATA[ಸಾರಿಗೆ ನೌಕರರಿಗೆ 12.5% ವೇತನ ಹೆಚ್ಚಳ; ಸರ್ಕಾರದ ಆಫರ್‌ ತಿರಸ್ಕರಿಸಿ ಮೇ 20ರಿಂದ ಪ್ರತಿಭಟನೆಗೆ ಸಜ್ಜಾದ ನೌಕರರು!]]></title>
            <link>https://kannada.asianetnews.com/state/karnataka-transport-ksrtc-employees-salary-hike-12-5-percent-union-strike-call-may-2026/articleshow-v22866y</link>
            <guid isPermaLink="true">https://kannada.asianetnews.com/state/karnataka-transport-ksrtc-employees-salary-hike-12-5-percent-union-strike-call-may-2026/articleshow-v22866y</guid>
            <pubDate>Tue, 12 May 2026 19:20:35 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಸಾರಿಗೆ ನಿಗಮಗಳ ನೌಕರರಿಗೆ ಶೇ. 12.5ರಷ್ಟು ವೇತನ ಹೆಚ್ಚಳವನ್ನು ಘೋಷಿಸಿದೆ. ಆದರೆ, ಶೇ. 25ರಷ್ಟು ಹೆಚ್ಚಳಕ್ಕೆ ಆಗ್ರಹಿಸಿದ್ದ ನೌಕರರ ಸಂಘಟನೆಗಳು ಸರ್ಕಾರದ ಈ ನಿರ್ಧಾರವನ್ನು ತಿರಸ್ಕರಿಸಿದ್ದು, ಮೇ 20 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kre73g8a6yrhzxtw8rnhe65w,imgname-ksrtc-employees-salary-hike-1778593677576.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 12): ದೀ&lt;/strong&gt;ರ್ಘಕಾಲದ ಹೋರಾಟದ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ನೌಕರರಿಗೆ ರಾಜ್ಯ ಸರ್ಕಾರವು ವೇತನ ಪರಿಷ್ಕರಣೆಯ ಸಿಹಿ ಸುದ್ದಿ ನೀಡಿದೆ. ಆದರೆ, ಸರ್ಕಾರ ಪ್ರಕಟಿಸಿರುವ ವೇತನ ಹೆಚ್ಚಳದ ಪ್ರಮಾಣವು ನೌಕರರ ನಿರೀಕ್ಷೆಯನ್ನು ತಲುಪದ ಕಾರಣ, ರಾಜ್ಯದಲ್ಲಿ ಮತ್ತೆ ಸಾರಿಗೆ ಮುಷ್ಕರದ ಕಾರ್ಮೋಡ ಕವಿದಿದೆ.&lt;/p&gt;&lt;h3&gt;&lt;strong&gt;ಸರ್ಕಾರದ ಆದೇಶದಲ್ಲೇನಿದೆ?&lt;/strong&gt;&lt;/h3&gt;&lt;p&gt;ಸಾರಿಗೆ ಇಲಾಖೆಯು ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ, ನಾಲ್ಕೂ ಸಾರಿಗೆ ನಿಗಮಗಳ ನೌಕರರ ಮೂಲ ವೇತನವನ್ನು ಶೇಕಡಾ 12.50 ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಈ ವೇತನ ಪರಿಷ್ಕರಣೆಯು 2025ರ ಮಾರ್ಚ್ 31 ರಂದು ನೌಕರರು ಪಡೆಯುತ್ತಿದ್ದ ಮೂಲ ವೇತನದ ಮೇಲೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ವೇತನ ಹೆಚ್ಚಳದ ಪ್ರಮುಖ ಅಂಶಗಳು:&lt;/strong&gt;&lt;/h2&gt;&lt;p&gt;&lt;strong&gt;ಅನುಷ್ಠಾನ: &lt;/strong&gt;ಹೊಸ ವೇತನ ಪರಿಷ್ಕರಣೆಯು 2026ರ ಜುಲೈ 1 ರಿಂದ ಜಾರಿಗೆ ಬರಲಿದ್ದು, ಜುಲೈ ಮಾಹೆಯ ವೇತನದಲ್ಲಿ ನೌಕರರಿಗೆ ಇದು ಲಭ್ಯವಾಗಲಿದೆ.&lt;/p&gt;&lt;p&gt;&lt;strong&gt;ಹಿಂಬಾಕಿ (Arrears): &lt;/strong&gt;2025ರ ಏಪ್ರಿಲ್ 1 ರಿಂದ 2026ರ ಜೂನ್ 30 ರವರೆಗಿನ ವೇತನ ಪರಿಷ್ಕರಣೆಯ ಹಿಂಬಾಕಿಯನ್ನು ನಿಗಮಗಳ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ಪಾವತಿಸಲು ಸರ್ಕಾರ ಸೂಚಿಸಿದೆ.&lt;/p&gt;&lt;p&gt;&lt;strong&gt;ಅವಧಿ: &lt;/strong&gt;ಈ ವೇತನ ಪರಿಷ್ಕರಣೆಯು ನಾಲ್ಕು ವರ್ಷಗಳ ಅವಧಿಗೆ ಅಂದರೆ 2025ರ ಏಪ್ರಿಲ್ 1 ರಿಂದ 2029ರ ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತದೆ.&lt;/p&gt;&lt;h3&gt;&lt;strong&gt;ನೌಕರರ ಸಂಘಟನೆಗಳ ಅಸಮಾಧಾನ ಏಕೆ?&lt;/strong&gt;&lt;/h3&gt;&lt;p&gt;ಸರ್ಕಾರವು 12.5% ವೇತನ ಹೆಚ್ಚಳ ಘೋಷಿಸಿದ ಬೆನ್ನಲ್ಲೇ ಸಾರಿಗೆ ನೌಕರರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕಳೆದ ಹಲವು ವರ್ಷಗಳಿಂದ ವೇತನ ಪರಿಷ್ಕರಣೆಯಾಗದ ಕಾರಣ, ನೌಕರರು ಕನಿಷ್ಠ ಶೇ. 25 ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಸರ್ಕಾರ ಘೋಷಿಸಿರುವ ಅರ್ಧದಷ್ಟು (12.5%) ಹೆಚ್ಚಳವು ನೌಕರರಿಗೆ ಮಾಡಿದ ಅನ್ಯಾಯ ಎಂದು ಸಂಘಟನೆಗಳು ಆಪಾದಿಸಿವೆ.&lt;/p&gt;&lt;h2&gt;&lt;strong&gt;ಮೇ 20ರಿಂದ ರಾಜ್ಯಾದ್ಯಂತ ಬಸ್ ಮುಷ್ಕರ?&lt;/strong&gt;&lt;/h2&gt;&lt;p&gt;ಸರ್ಕಾರದ ಈ ಅರೆಬರೆ ವೇತನ ಹೆಚ್ಚಳದ ಆದೇಶವನ್ನು ತಿರಸ್ಕರಿಸಿರುವ ಸಾರಿಗೆ ನೌಕರರ ಒಕ್ಕೂಟಗಳು, ತಮ್ಮ ಬೇಡಿಕೆ ಈಡೇರಿಕೆಗಾಗಿ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿವೆ. 'ನಾವು ಶೇ. 25 ರಷ್ಟು ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದೆವು, ಆದರೆ ಸರ್ಕಾರ ಕೇವಲ ಶೇ. 12.5 ರಷ್ಟು ಮಾತ್ರ ಘೋಷಿಸಿದೆ. ಇದು ನೌಕರರ ಕಣ್ಣೊರೆಸುವ ತಂತ್ರ' ಎಂದು ಸಂಘಟನೆಯ ನಾಯಕರು ತಿಳಿಸಿದ್ದಾರೆ. ನಾಲ್ಕೂ ನಿಗಮಗಳ ನೌಕರರು ಈ ಮುಷ್ಕರಕ್ಕೆ ಬೆಂಬಲ ನೀಡುತ್ತಿರುವುದರಿಂದ, ಮೇ 20ರಿಂದ ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರಿಗೆ ತೊಂದರೆ ಸಾಧ್ಯತೆ:&lt;/strong&gt;&lt;/h3&gt;&lt;p&gt;ಒಂದೆಡೆ ಸರ್ಕಾರವು ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂಬ ಕಾರಣ ನೀಡಿ ಕಡಿಮೆ ವೇತನ ಹೆಚ್ಚಳ ಮಾಡಿದೆ. ಇನ್ನೊಂದೆಡೆ ನೌಕರರು ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಇಬ್ಬರ ನಡುವಿನ ಸಂಘರ್ಷದಲ್ಲಿ ಸಾಮಾನ್ಯ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಸರ್ಕಾರವು ಮೇ 20ರ ಒಳಗಾಗಿ ನೌಕರರ ಮನವೊಲಿಸಿ ಮುಷ್ಕರ ತಡೆಯುತ್ತದೆಯೇ ಅಥವಾ ಬಸ್ ಸಂಚಾರ ಸ್ತಬ್ಧವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-transport-ksrtc-employees-salary-hike-12-5-percent-union-strike-call-may-2026/articleshow-v22866y"/>
        </item>
        <item>
            <title><![CDATA[ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ (DA) ಶೇ. 1.50 ರಷ್ಟು ಹೆಚ್ಚಳ - ಸರ್ಕಾರದ ಆದೇಶ ಪ್ರಕಟ]]></title>
            <link>https://kannada.asianetnews.com/gallery/state/karnataka-government-employees-and-pensioners-da-hike-january-2026-order-details-sat-wgk0vf0</link>
            <guid isPermaLink="true">https://kannada.asianetnews.com/gallery/state/karnataka-government-employees-and-pensioners-da-hike-january-2026-order-details-sat-wgk0vf0</guid>
            <pubDate>Mon, 11 May 2026 13:23:49 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿದೆ. ಈ ಶೇ. 1.50 ರಷ್ಟು ಹೆಚ್ಚಳವು 2026ರ ಜನವರಿ 1 ರಿಂದ ಪೂರ್ವಾನ್ವಯ ಆಗಲಿದೆ. ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd0mqnn1gqaxd5veqr661nk,imgname-capturek-1776405864116.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿದೆ. ಈ ಶೇ. 1.50 ರಷ್ಟು ಹೆಚ್ಚಳವು 2026ರ ಜನವರಿ 1 ರಿಂದ ಪೂರ್ವಾನ್ವಯ ಆಗಲಿದೆ. ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತ ವೇತನದಾರರಿಗೆ ಕರ್ನಾಟಕ ಸರ್ಕಾರವು ಒಂದು ಪ್ರಮುಖ ಸಿಹಿ ಸುದ್ದಿಯನ್ನು ನೀಡಿದೆ. ನೌಕರರ ತುಟ್ಟಿಭತ್ಯೆಯನ್ನು (Dearness Allowance) ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿ ಆರ್ಥಿಕ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;img&gt;&lt;p&gt;2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಈ ಹೆಚ್ಚಳ ಅನ್ವಯವಾಗಲಿದೆ. ಪ್ರಸ್ತುತ ಮೂಲ ವೇತನದ ಶೇಕಡಾ 14.25 ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇಕಡಾ 15.75 ಕ್ಕೆ ಪರಿಷ್ಕರಿಸಲಾಗಿದೆ. ಅಂದರೆ ಒಟ್ಟು ಶೇ. 1.50 ರಷ್ಟು ತುಟ್ಟಿಭತ್ಯೆ ಹೆಚ್ಚಳವಾದಂತಾಗಿದೆ.&lt;/p&gt;&lt;img&gt;&lt;p&gt;ಈ ಆದೇಶವು ಕೇವಲ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ, ಇನ್ನುಳಿದ ಹಲವು ವರ್ಗದವರಿಗೂ ಅನ್ವಯವಾಗಲಿದೆ:&lt;/p&gt;&lt;p&gt;ರಾಜ್ಯ ಸರ್ಕಾರದ ನಿವೃತ್ತ ವೇತನದಾರರು ಮತ್ತು ಕುಟುಂಬ ನಿವೃತ್ತ ವೇತನದಾರರು.&lt;/p&gt;&lt;p&gt;ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರು.&lt;/p&gt;&lt;p&gt;ಯುಜಿಸಿ (UGC), ಎಐಸಿಟಿಇ (AICTE), ಐಸಿಎಆರ್ (ICAR) ವೇತನ ಶ್ರೇಣಿಯ ನಿವೃತ್ತ ನೌಕರರು.&lt;/p&gt;&lt;p&gt;ಜಿಲ್ಲಾ ಪಂಚಾಯತ್&zwnj;ಗಳ ಪೂರ್ಣಾವಧಿ ನೌಕರರು.&lt;/p&gt;&lt;p&gt;ಪೂರ್ಣಾವಧಿ ಕೆಲಸ ಮಾಡುವ ವರ್ಕ್&zwnj;ಚಾರ್ಜ್ ನೌಕರರು.&lt;/p&gt;&lt;p&gt;ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಪೂರ್ಣಾವಧಿ ನೌಕರರು.&lt;/p&gt;&lt;img&gt;&lt;p&gt;ಈ ಪರಿಷ್ಕೃತ ತುಟ್ಟಿಭತ್ಯೆಯು 2026ರ ಜನವರಿ 1 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಸರ್ಕಾರಿ ಆದೇಶದ ಪ್ರಕಾರ, ಜನವರಿ 1 ರಿಂದ ಏಪ್ರಿಲ್ ತಿಂಗಳವರೆಗಿನ ಬಾಕಿ ಮೊತ್ತವನ್ನು (Arrears) ಮೇ 2026 ರ ವೇತನದೊಂದಿಗೆ ನಗದಾಗಿ ಪಾವತಿಸಲಾಗುವುದು.&lt;/p&gt;&lt;img&gt;&lt;p&gt;ತುಟ್ಟಿಭತ್ಯೆಯ ಲೆಕ್ಕಾಚಾರಕ್ಕಾಗಿ 'ಮೂಲ ವೇತನ' ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ. ಇದರಲ್ಲಿ ಸ್ಥಗಿತ ವೇತನ ಬಡ್ತಿ ಮತ್ತು ವೈಯಕ್ತಿಕ ವೇತನಗಳನ್ನು ಸೇರಿಸಿಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.&lt;/p&gt;&lt;img&gt;&lt;p&gt;ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸಬೇಕು, ಇದನ್ನು ಯಾವುದೇ ಉದ್ದೇಶಕ್ಕಾಗಿ ವೇತನ ಎಂದು ಪರಿಗಣಿಸಲಾಗುವುದಿಲ್ಲ.&lt;/p&gt;&lt;p&gt;ಹಣ ಪಾವತಿಯಲ್ಲಿ 50 ಪೈಸೆಗಿಂತ ಹೆಚ್ಚಿನ ಭಿನ್ನಾಂಕವಿದ್ದರೆ ಅದನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸಬೇಕು ಮತ್ತು 50 ಪೈಸೆಗಿಂತ ಕಡಿಮೆ ಇದ್ದರೆ ಅದನ್ನು ನಿರ್ಲಕ್ಷಿಸಬೇಕು.&lt;/p&gt;&lt;p&gt;ಈ ನಿರ್ಧಾರದಿಂದಾಗಿ ಲಕ್ಷಾಂತರ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕ ಅನುಕೂಲವಾಗಲಿದ್ದು, ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಇದು ಸಹಕಾರಿಯಾಗಲಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-government-employees-and-pensioners-da-hike-january-2026-order-details-sat-wgk0vf0"/>
        </item>
        <item>
            <title><![CDATA[ಸಾಫ್ಟ್​ವೇರ್​ ಎಂಜಿನಿಯರ್ ಕನಸಿಗೆ ಕಂಟಕ? ರಾಜ್ಯದಲ್ಲಿ ಶೇ.17ರಷ್ಟು ಮಾತ್ರ ಉದ್ಯೋಗ- ವರದಿ ಹೇಳಿದ್ದೇನು]]></title>
            <link>https://kannada.asianetnews.com/jobs/just-17-per-cent-engineering-graduates-in-karnataka-employable-report/articleshow-x52t1sp</link>
            <guid isPermaLink="true">https://kannada.asianetnews.com/jobs/just-17-per-cent-engineering-graduates-in-karnataka-employable-report/articleshow-x52t1sp</guid>
            <pubDate>Sat, 02 May 2026 12:54:06 +0530</pubDate>
            <description><![CDATA[ಕರ್ನಾಟಕದಲ್ಲಿ ಸಾಫ್ಟ್&zwnj;ವೇರ್ ಎಂಜಿನಿಯರಿಂಗ್ ವ್ಯಾಮೋಹ ಹೆಚ್ಚಾಗಿದ್ದು, ಪೋಷಕರು ಮಕ್ಕಳನ್ನು ಇದೇ ಕ್ಷೇತ್ರಕ್ಕೆ ತಳ್ಳುತ್ತಿದ್ದಾರೆ. ಆದರೆ, ಕರ್ನಾಟಕ ಎಂಜಿನಿಯರಿಂಗ್ ಶಿಕ್ಷಣ ಸುಧಾರಣಾ ಸಮಿತಿಯ ವರದಿಯ ಪ್ರಕಾರ, ಕೇವಲ 17% ಪದವೀಧರರು ಮಾತ್ರ ಉದ್ಯೋಗ ಪಡೆಯುತ್ತಿದ್ದು, ಈ ಬಿಕ್ಕಟ್ಟನ್ನು ನಿಭಾಯಿಸಲು ಕಾಲೇಜುಗಳಿಗೆ ಕಠಿಣ ನಿಯಮಗಳನ್ನು ಶಿಫಾರಸು ಮಾಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqks28ym44fh56vtsfwyx2te,imgname-no-job-1777706542036.jpg" type="image/jpeg" height="390" width="690"/>
            <content:encoded><![CDATA[&lt;p&gt;ದಶಕದ ಹಿಂದೆ ಎಂಜಿನಿಯರಿಂಗ್ ಪದವಿಗೆ ಸಿಕ್ಕಾಪಟ್ಟೆ ಡಿಮಾಂಡ್ ಇತ್ತು. ಅದರಲ್ಲಿಯೂ ಸಾಫ್ಟ್​ವೇರ್​​ ಕ್ಷೇತ್ರದಲ್ಲಿ ಅಷ್ಟೇ ಉದ್ಯೋಗಾವಕಾಶವೂ ಇತ್ತು. ತಿಂಗಳಿಗೆ ಆಗಲೇ ಲಕ್ಷ ಲಕ್ಷ ದುಡಿಯುತ್ತಿದ್ದರು. ಆದರೆ ಸದ್ಯ ಟ್ರೆಂಡಿಂಗ್​ ಹೇಗಿದೆ, ತಮ್ಮ ಮಕ್ಕಳ ಭವಿಷ್ಯ ಹೇಗಿದೆ ಎನ್ನೋದನ್ನು ಯೋಚನೆ ಮಾಡದೇ ಹಲವು ಪಾಲಕರು ತಮ್ಮ ಮಕ್ಕಳೂ ಸಾಫ್ಟ್​ವೇರ್​ ಎಂಜಿನಿಯರ್​ ಆಗಬೇಕು ಎಂದು ಅವರು ಹುಟ್ಟಿದಾಗಲೇ ಕನಸು ಕಂಡುಕೊಂಡಿರುತ್ತಾರೆ. ಮಕ್ಕಳಿಗೆ ಇಷ್ಟ ಇರಲಿ, ಬಿಡಲಿ, ಮಕ್ಕಳಿಗೆ ಬೇರೆ ಕ್ಷೇತ್ರದಲ್ಲಿ ಮುಂದೆ ಬರುವ ಆಸೆ ಇದ್ದರೂ, ಆ ಆಸೆಯನ್ನು ಚಿವುಟಿ ಎಂಜಿನಿಯರ್​ ಮಾಡಿಸುವ ಆಸೆ ಬಹಳಷ್ಟು ಪೋಷಕರದ್ದು. ಇದು ಕೆಲವರಿಗೆ ಪ್ರೆಸ್ಟೀಜ್​ ಪ್ರಶ್ನೆಯಾಗಿರುತ್ತದೆ. ಅಕ್ಕ ಪಕ್ಕದ ಮನೆಯವರೋ, ಇಲ್ಲವೇ ತಮ್ಮ ನೆಂಟರಿಷ್ಟರ ಮಕ್ಕಳೋ ಎಂಜಿನಿಯರ್​ ಆಗಿದ್ದರೆ ಆ ಪ್ರತಿಷ್ಠೆ ಇನ್ನೂ ಒಂದು ಹಂತಕ್ಕೆ ಮೇಲೆ ಹೋಗಿರುತ್ತದೆ. ಇದೇ ಕಾರಣಕ್ಕೆ ಸಾಫ್ಟ್​ವೇರ್​ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ವಿಪರೀತ ಆಗಿಬಿಟ್ಟಿದೆ.&lt;/p&gt;&lt;p&gt;ತಮ್ಮ ಮಕ್ಕಳಿಗೆ ಲಕ್ಷ ಲಕ್ಷ ಹಣ ಸುರಿದು ಈ ಪದವಿ ಕೊಡಿಸುವ ಅಪ್ಪ-ಅಮ್ಮನೂ ಸಾಕಷ್ಟು ಇದ್ದಾರೆ. ಮೆಕ್ಯಾನಿಕಲ್​, ಸಿವಿಲ್​, ಎಲೆಕ್ಟ್ರಿಕಲ್​ ಸೇರಿದಂತೆ ಎಂಜಿನಿಯರಿಂಗ್​ನಲ್ಲಿ ಇತರ ಕೋರ್ಸ್​ಗಳು ಇದ್ದರೂ ಅವ್ಯಾವುದೂ ಬೇಡ. ಸಾಫ್ಟ್​ವೇರೇ ಬೇಕು ಎಂದು ಕನಸು ಕಂಡವರಿಗೆ ಶಾಕಿಂಗ್​ ಎನ್ನುವಂಥ ವರದಿಯನ್ನು ಕರ್ನಾಟಕ ಎಂಜಿನಿಯರಿಂಗ್ ಶಿಕ್ಷಣ ಪರಿವರ್ತನೆಯ ಸುಧಾರಣಾ ಸಮಿತಿ ಸಲ್ಲಿಸಿದ ವರದಿ ಬಹಿರಂಗಪಡಿಸಿದೆ. ಕರ್ನಾಟಕದಲ್ಲಿ ಕೇವಲ 17 ರಷ್ಟು ಎಂಜಿನಿಯರಿಂಗ್ ಪದವೀಧರರು ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ, ಇದು ಒಂದು ದಿಗ್ಭ್ರಮೆಗೊಳಿಸುವ ಉದ್ಯೋಗಾವಕಾಶ ಬಿಕ್ಕಟ್ಟನ್ನು ಪ್ರತಿನಿಧಿಸುತ್ತದೆ ಎಂದು ವರದಿಯಲ್ಲಿ ಹೇಳಿದೆ.&lt;/p&gt;&lt;h2&gt;&lt;strong&gt;ವರದಿಯಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ಪ್ರೊಫೆಸರ್ ಸಡಗೋಪನ್ ಮತ್ತು ಇತರ ಐಐಐಟಿ ಮತ್ತು ಐಐಎಸ್ಸಿ ಪ್ರಾಧ್ಯಾಪಕರ ನೇತೃತ್ವದ ಉನ್ನತ ಶಿಕ್ಷಣ ಇಲಾಖೆಯಿಂದ ರಚಿಸಲ್ಪಟ್ಟ ಈ ಸಮಿತಿಯು ಕರ್ನಾಟಕದ ಎಂಜಿನಿಯರಿಂಗ್ ಶಿಕ್ಷಣದ ಕುರಿತು ವಿವರವಾದ ಅಧ್ಯಯನವನ್ನು ನಡೆಸಿ ಕೆಲವು ಪ್ರಮುಖ ಸುಧಾರಣೆಗಳನ್ನು ಸೂಚಿಸಿದೆ. ಇದು ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆಗೆ ಈ ವಿವರವಾದ ವರದಿಯನ್ನು ಸಲ್ಲಿಸಿದೆ. ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಕಂಪ್ಯೂಟರ್ ಸೈನ್ಸ್ ಪದವೀಧರರಲ್ಲಿ ಸಾಮೂಹಿಕ ನಿರುದ್ಯೋಗ, ಕೋರ್ ಅಥವಾ ಮೂಲ ಎಂಜಿನಿಯರಿಂಗ್ ಶಾಖೆಗಳಿಗೆ (ಮೆಕ್ಯಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್) ಪ್ರವೇಶದಲ್ಲಿ ತೀವ್ರ ಕುಸಿತ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ವಿಷಯದಲ್ಲಿ ಕುಸಿತ ಕಂಡ ರಾಜ್ಯ ಎಂಜಿನಿಯರಿಂಗ್ ಕಾಲೇಜುಗಳು, ಕೋರ್ ಶಾಖೆಗಳು ಕ್ರಾಸ್ ಡೊಮೇನ್ ವಾಸ್ತವವನ್ನು ನಿರ್ಲಕ್ಷಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯದ ಕೊರತೆ ಸೇರಿದಂತೆ ಕೆಲವು ಪ್ರಮುಖ ಕಾರಣಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ಏರೋಸ್ಪೇಸ್, ​​ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಪರರ ಕೊರತೆ&lt;/strong&gt;&lt;/h3&gt;&lt;p&gt;ಇದಲ್ಲದೆ, ಭಾರತದ ಸೆಮಿಕಂಡಕ್ಟರ್ ವಲಯವು 2027 ರ ವೇಳೆಗೆ 2.50 ಲಕ್ಷದಿಂದ 3 ಲಕ್ಷ ವೃತ್ತಿಪರರವರೆಗೆ ಪ್ರತಿಭಾ ಕೊರತೆಯನ್ನು ಎದುರಿಸಲಿದೆ ಎಂದು ಅದು ಹೇಳುತ್ತದೆ. ರಾಜ್ಯ ಮಟ್ಟದ ಅಂತರವು 10,000-15,000 ವೃತ್ತಿಪರರೆಂದು ಅಂದಾಜಿಸಲಾಗಿದೆ. ಅದೇ ರೀತಿ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಪರರ ಕೊರತೆ -4,500 ರಿಂದ 8,500, ಎಲೆಕ್ಟ್ರಿಕ್ ವಾಹನಗಳು -6,000-11,000, ಶುದ್ಧ ಇಂಧನ - 5,000-9,000, ಬಯೋಮೆಡಿಕಲ್ ಸಾಧನಗಳು - 2,200-4,200, ಇತ್ಯಾದಿಗಳಿದ್ದು, ಈ ಅಂತರವನ್ನು ಕಂಪ್ಯೂಟರ್ ವಿಜ್ಞಾನ ಅಥವಾ ಐಟಿ ಪದವೀಧರರು ಎಂದಿಗೂ ತುಂಬಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಕಾಲೇಜುಗಳಿಗೆ ನಿಯಮ&lt;/strong&gt;&lt;/h3&gt;&lt;p&gt;ಯಾವುದೇ ಖಾಸಗಿ ವಿಶ್ವವಿದ್ಯಾಲಯ/ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಆರಂಭದಲ್ಲಿ ವಿದ್ಯಾರ್ಥಿ ಕೋಟಾ ಮಂಜೂರಾತಿಯನ್ನು ನಿರ್ದಿಷ್ಟ ಕೋರ್ಸ್/ವಿಭಾಗಕ್ಕೆ 60 ಪ್ರವೇಶಗಳಿಗೆ ಸೀಮಿತಗೊಳಿಸಲು ಸಮಿತಿ ಶಿಫಾರಸು ಮಾಡಿದೆ. ಇದಲ್ಲದೆ, ವರ್ಷಕ್ಕೆ 60 ವಿದ್ಯಾರ್ಥಿಗಳ ಹೆಚ್ಚಳವನ್ನು ಅನುಮತಿಸಲಾಗುತ್ತದೆ ಮತ್ತು ಆರಂಭಿಕ ನಾಲ್ಕು ವರ್ಷಗಳ ಅವಧಿಗೆ ಗರಿಷ್ಠ 180 ಸೀಟುಗಳಿಗೆ ಸೀಮಿತಗೊಳಿಸಲಾಗುತ್ತದೆ. ಕೋರ್ಸ್/ವಿಭಾಗವು ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ (NBA) ಮಾನ್ಯತೆ ಪಡೆದಿದ್ದರೆ ಮಾತ್ರ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ವಾರ್ಷಿಕವಾಗಿ 60 ರಷ್ಟು ಪ್ರವೇಶವನ್ನು ಹೆಚ್ಚಿಸಬಹುದು. NBA ಮಾನ್ಯತೆಯ ಜೊತೆಗೆ, ಖಾಸಗಿ ವಿಶ್ವವಿದ್ಯಾಲಯಗಳು ಸಹ NAAC ಮಾನ್ಯತೆಯನ್ನು ಪಡೆಯಬೇಕು. ಯಾವುದೇ ಸಂದರ್ಭದಲ್ಲಿ ಕೋರ್ಸ್/ವಿಭಾಗದ ಒಟ್ಟು ವಿದ್ಯಾರ್ಥಿ ಬಲ 300 ಮೀರಬಾರದು ಎಂಬ ನಿಯಮ ರೂಪಿಸಲಾಗಿದೆ.&lt;/p&gt;&lt;p&gt;ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಯಾವುದೇ ಸಮಯದಲ್ಲಿ ಐದಕ್ಕಿಂತ ಹೆಚ್ಚು ಕಂಪ್ಯೂಟರ್ ಸಂಬಂಧಿತ ಕೋರ್ಸ್&zwnj;ಗಳು/ವಿಭಾಗಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಎಲ್ಲಾ ಕಂಪ್ಯೂಟರ್ ಸಂಬಂಧಿತ ವಿಭಾಗಗಳ ಒಟ್ಟು ವಿದ್ಯಾರ್ಥಿ ಬಲ 900 ಮೀರಬಾರದು. ಎಂಜಿನಿಯರಿಂಗ್/ತಂತ್ರಜ್ಞಾನ ಕಾರ್ಯಕ್ರಮಗಳ ಎಲ್ಲಾ ಕೋರ್ಸ್&zwnj;ಗಳು/ವಿಭಾಗಗಳಿಗೆ ಅದೇ ಷರತ್ತುಗಳು ಅನ್ವಯಿಸುತ್ತವೆ. ಅಸ್ತಿತ್ವದಲ್ಲಿರುವ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ನಿರ್ದಿಷ್ಟ ಕೋರ್ಸ್/ವಿಭಾಗದಲ್ಲಿ 300 ಕ್ಕೂ ಹೆಚ್ಚು ಪ್ರವೇಶಗಳನ್ನು ಹೊಂದಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಸಹ ಈ ನಿಯಮಗಳನ್ನು ಪ್ರಕಟಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗೆ ಕೋರ್ಸ್&zwnj;ಗಳು/ವಿಭಾಗಗಳಿಗೆ NBA ಮಾನ್ಯತೆಯನ್ನು ಪಡೆಯಬೇಕಾಗುತ್ತದೆ. ಹಾಗೆ ಮಾಡಲು ವಿಫಲವಾದರೆ ಉನ್ನತ ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ ಸೀಟುಗಳನ್ನು ಕಡಿತಗೊಳಿಸಲಾಗುತ್ತದೆ. ಈ ನಿಯಮಗಳು ರಾಜ್ಯಾದ್ಯಂತ ಡೀಮ್ಡ್ ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತವೆ.&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/jobs/just-17-per-cent-engineering-graduates-in-karnataka-employable-report/articleshow-x52t1sp"/>
        </item>
    </channel>
</rss>
