<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 08 Apr 2026 21:52:24 +0530</lastBuildDate>
        <atom:link href="https://kannada.asianetnews.com/rss/jobs" rel="self" type="application/rss+xml"/>
        <item>
            <title><![CDATA[ಪೊಲೀಸ್ ಸಿಬ್ಬಂದಿಗೆ ಬಂದೂಕು ಹೊರಿಸಿ ರಣಬಿಸಿಲಲ್ಲಿ ನಿಲ್ಲಿಸಿದ್ದ PSI ನೇತ್ರಾವತಿಗೆ, ಕೇವಲ ಎತ್ತಂಗಡಿ ಶಿಕ್ಷೆ!]]></title>
            <link>https://kannada.asianetnews.com/state/chitradurga-psi-netravati-transferred-punishing-police-staff-in-sunlight-chikkajajuru-sat/articleshow-1n4g9cs</link>
            <guid isPermaLink="true">https://kannada.asianetnews.com/state/chitradurga-psi-netravati-transferred-punishing-police-staff-in-sunlight-chikkajajuru-sat/articleshow-1n4g9cs</guid>
            <pubDate>Wed, 08 Apr 2026 21:52:17 +0530</pubDate>
            <description><![CDATA[&lt;p&gt;ಚಿತ್ರದುರ್ಗದ ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ, ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ 12 ಸಿಬ್ಬಂದಿಗಳಿಗೆ ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದರು. ಈ ಘಟನೆಯಿಂದಾಗಿ ಸಿಬ್ಬಂದಿ ಅಸ್ವಸ್ಥರಾಗಿದ್ದು, ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಪಿಎಸ್ಐ ನೇತ್ರಾವತಿ ಈಗ ವರ್ಗಾವಣೆ ಆಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkxgcknj27d34qbq55brsme,imgname-chitradurga-police-news--1--1775563715189.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಏ.08): ಕ&lt;/strong&gt;ರ್ತವ್ಯ ನಿರ್ಲಕ್ಷ್ಯದ ನೆಪವೊಡ್ಡಿ ತನ್ನದೇ ಸಹೋದ್ಯೋಗಿಗಳಿಗೆ ಶಾಲಾ ಮಕ್ಕಳಂತೆ ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ ಪಿಎಸ್ಐ ನೇತ್ರಾವತಿ ವಿರುದ್ಧ ಕೊನೆಗೂ ಶಿಸ್ತು ಕ್ರಮ ಜರುಗಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯ ಪಿಎಸ್ಐ ನೇತ್ರಾವತಿ ಅವರನ್ನು ಕಂಟ್ರೋಲ್ ರೂಂಗೆ ವರ್ಗಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಂಜಿತ್ ಕುಮಾರ್ ಬಂಡಾರು ಆದೇಶ ಹೊರಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಏನಿದು &lsquo;ಬಿಸಿಲು ಶಿಕ್ಷೆ&rsquo; ಘಟನೆ?:&lt;/strong&gt;&lt;/h3&gt;&lt;p&gt;ಕೆಲವು ದಿನಗಳ ಹಿಂದೆ ಚಿಕ್ಕಜಾಜೂರು ಪೊಲೀಸ್ ಠಾಣೆಯ ಪಿಎಸ್ಐ ನೇತ್ರಾವತಿ ಅವರು ತಮ್ಮ ಠಾಣೆಯ ಸಿಬ್ಬಂದಿಗಳ ಮೇಲೆ ದರ್ಪ ತೋರಿದ್ದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಕಾರಣ ನೀಡಿ, ಒಬ್ಬ ಎಎಸ್ಐ (ASI) ಸೇರಿದಂತೆ ಒಟ್ಟು 12 ಜನ ಪೊಲೀಸ್ ಸಿಬ್ಬಂದಿಗೆ ಕಠಿಣ ಶಿಕ್ಷೆ ವಿಧಿಸಿದ್ದರು. ಅದು ಸಣ್ಣಪುಟ್ಟ ಶಿಕ್ಷೆಯಾಗಿರಲಿಲ್ಲ; ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಸುಡುವ ರಣಬಿಸಿಲಿನಲ್ಲಿ ಬಂದೂಕು ಹಿಡಿದು ನಿಲ್ಲುವಂತೆ ಆದೇಶಿಸಿದ್ದರು.&lt;/p&gt;&lt;h3&gt;&lt;strong&gt;ಆಸ್ಪತ್ರೆ ಪಾಲಾಗಿದ್ದ ಸಿಬ್ಬಂದಿ:&lt;/strong&gt;&lt;/h3&gt;&lt;p&gt;ಏಪ್ರಿಲ್ ತಿಂಗಳ ಅತೀವ ಬಿಸಿಲಿನಲ್ಲಿ ಸತತ ಮೂರು ಗಂಟೆಗಳ ಕಾಲ ಭಾರವಾದ ಬಂದೂಕು ಹೊತ್ತು ನಿಂತಿದ್ದರಿಂದ ಹಲವು ಸಿಬ್ಬಂದಿಗಳ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಿಸಿಲ ಧಗೆ ತಾಳಲಾರದೆ ಸುಸ್ತಾಗಿದ್ದ ಕೆಲವು ಪೊಲೀಸರು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಯಿಂದ ಮನನೊಂದ ಸಿಬ್ಬಂದಿಗಳು ಪಿಎಸ್ಐ ನೇತ್ರಾವತಿ ಅವರ ವರ್ತನೆಯ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಇಲಾಖೆಯ ಒಳಗಿನ ಶಿಸ್ತಿನ ಹೆಸರಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.&lt;/p&gt;&lt;h2&gt;&lt;strong&gt;ಎಸ್ಪಿ ಕಟ್ಟುನಿಟ್ಟಿನ ಕ್ರಮ:&lt;/strong&gt;&lt;/h2&gt;&lt;p&gt;ಘಟನೆಯ ಗಾಂಭೀರ್ಯವನ್ನು ಅರಿತ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ತಕ್ಷಣವೇ ತನಿಖೆಗೆ ಆದೇಶಿಸಿದ್ದರು. ಡಿವೈಎಸ್ಪಿ ಅರುಣ್ ಗೌಡ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ವರದಿ ನೀಡುವಂತೆ ಸೂಚಿಸಿದ್ದರು. ಡಿವೈಎಸ್ಪಿ ಅವರು ನೀಡಿದ ಪ್ರಾಥಮಿಕ ತನಿಖಾ ವರದಿಯಲ್ಲಿ ಪಿಎಸ್ಐ ನೇತ್ರಾವತಿ ಅವರು ಸಿಬ್ಬಂದಿಗಳಿಗೆ ಶಿಕ್ಷೆ ನೀಡಿರುವುದು ಮತ್ತು ದರ್ಪ ತೋರಿರುವುದು ದೃಢಪಟ್ಟಿದೆ.&lt;/p&gt;&lt;h3&gt;&lt;strong&gt;ಕಂಟ್ರೋಲ್ ರೂಂಗೆ ವರ್ಗಾವಣೆ:&lt;/strong&gt;&lt;/h3&gt;&lt;p&gt;ತನಿಖಾ ವರದಿ ಕೈ ಸೇರಿದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಪಿಎಸ್ಐ ನೇತ್ರಾವತಿ ಅವರನ್ನು ಚಿಕ್ಕಜಾಜೂರು ಠಾಣೆಯಿಂದ ಚಿತ್ರದುರ್ಗದ ಪೊಲೀಸ್ ನಿಯಂತ್ರಣ ಕೊಠಡಿಗೆ (Control Room) ವರ್ಗಾವಣೆ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮುಖ್ಯವಾದರೂ, ಅಮಾನವೀಯವಾಗಿ ಶಿಕ್ಷೆ ನೀಡುವುದು ತಪ್ಪು ಎಂಬ ಸಂದೇಶವನ್ನು ಈ ಕ್ರಮದ ಮೂಲಕ ರವಾನಿಸಲಾಗಿದೆ. ಸದ್ಯ ಈ ಘಟನೆ ಇಡೀ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/chitradurga-psi-netravati-transferred-punishing-police-staff-in-sunlight-chikkajajuru-sat/articleshow-1n4g9cs"/>
        </item>
        <item>
            <title><![CDATA[ಬಿಂದಾಸ್ ಆಗಿ ಮಾತಾಡಿ ₹1.8 ಲಕ್ಷದ ಕೆಲಸ ಗಿಟ್ಟಿಸಿಕೊಂಡ ಯುವಕನಿಗೆ ಜೈ ಎಂದ ನೆಟ್ಟಿಗರು]]></title>
            <link>https://kannada.asianetnews.com/jobs/why-this-candidates-bold-move-is-going-viral-online/articleshow-27g3305</link>
            <guid isPermaLink="true">https://kannada.asianetnews.com/jobs/why-this-candidates-bold-move-is-going-viral-online/articleshow-27g3305</guid>
            <pubDate>Sun, 05 Apr 2026 20:46:45 +0530</pubDate>
            <description><![CDATA[&lt;p&gt;&lt;strong&gt;Know your market value: &lt;/strong&gt;ಸಂಬಳದ ವಿಷಯ ಬಂದಾಗ ಹೆಚ್ಚಿನವರು ಸಿಕ್ಕ ಆಫರ್&zwnj;ಗೆ ತೃಪ್ತಿಪಡುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೇವಲ 'ವರ್ಕ್ ಕಲ್ಚರ್' ಮತ್ತು 'ಫ್ರೀ ಕಾಫಿ' ಎಂಬ ಆಮಿಷಗಳಿಗೆ ಬಲಿಯಾಗದೆ, ಸ್ಮಾರ್ಟ್ ಆಗಿ ಮಾತುಕತೆ ನಡೆಸಿ ಯಶಸ್ವಿಯಾಗಿದ್ದಾನೆ. ಈತನ ರೋಚಕ ಕಥೆ ಪ್ರತಿಯೊಬ್ಬ ಉದ್ಯೋಗಿಗೂ ಸ್ಫೂರ್ತಿ. ಇಲ್ಲಿದೆ ಈ ಬಗ್ಗೆ ಆಸಕ್ತಿದಾಯಕ ವಿವರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkdwmmahe90j0mzmah6s3590,imgname-new-project---2026-03-11t125400.143-1773213995345.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊ&lt;/strong&gt;ಸ ಉದ್ಯೋಗಕ್ಕೆ ಸೇರುವಾಗ ಅಥವಾ ಹಳೆಯ ಕೆಲಸ ಬದಲಿಸುವಾಗ ನಾವು ಸಂಬಳದ ವಿಷಯದಲ್ಲಿ ಹೇಗೆ ಮಾತುಕತೆ ನಡೆಸುತ್ತೇವೆ ಎಂಬುದು ನಮ್ಮ ಇಡೀ ವೃತ್ತಿಜೀವನದ ಮೌಲ್ಯವನ್ನು ನಿರ್ಧರಿಸುತ್ತದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವ್ಯಕ್ತಿಯೊಬ್ಬರ ಈ ಸ್ಫೂರ್ತಿದಾಯಕ ಕಥೆ ಈಗ ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಉದ್ಯೋಗದ ವಿಷಯವಲ್ಲ, ಬದಲಿಗೆ ಪ್ರತಿಯೊಬ್ಬ ಉದ್ಯೋಗಿಯ ಆತ್ಮಗೌರವ ಮತ್ತು ಮೌಲ್ಯದ ಪ್ರಶ್ನೆಯೂ ಹೌದು ಎಂಬುದನ್ನು ಈ ಘಟನೆ ಜಗತ್ತಿಗೆ ಸಾರಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?, ಯಾರು ಆ ಯುವಕ?&lt;/strong&gt;&lt;/h2&gt;&lt;p&gt;ಸೈಮನ್ ಇಂಗಾರಿ ಎಂಬುವವರು 'X' (ಟ್ವಿಟರ್) ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ತಿಂಗಳಿಗೆ ₹1 ಲಕ್ಷ ಗಳಿಸುತ್ತಿದ್ದ ಅಭ್ಯರ್ಥಿಯೊಬ್ಬರಿಗೆ ಮತ್ತೊಂದು ಹೆಸರಾಂತ ಕಂಪನಿಯಿಂದ ₹1.2 ಲಕ್ಷದ ಆಫರ್ ಬಂದಿತ್ತು. ಸಾಮಾನ್ಯ ಸಂದರ್ಭದಲ್ಲಿ ಶೇ. 20 ರಷ್ಟು ಸಂಬಳ ಏರಿಕೆ ಸಿಕ್ಕರೆ ಸಾಕು ಎಂದು ಯಾರು ಬೇಕಾದರೂ ಈ ಆಫರ್ ಅನ್ನು ತಕ್ಷಣ ಒಪ್ಪಿಕೊಳ್ಳುತ್ತಿದ್ದರು. ಆದರೆ ಈ ಅಭ್ಯರ್ಥಿ ತನ್ನ ಅರ್ಹತೆಯ ಮೇಲೆ ಅಚಲ ನಂಬಿಕೆಯಿಟ್ಟು ಈ ಆಫರ್ ಅನ್ನು ಧೈರ್ಯವಾಗಿ ತಿರಸ್ಕರಿಸಿದರು. ಇದು ಅನೇಕರಿಗೆ ಆಶ್ಚರ್ಯ ತಂದರೂ, ಆತನಿಗೆ ಗುರಿ ಮತ್ತು ತನ್ನ ಮೌಲ್ಯದ ಬಗ್ಗೆ ಸ್ಪಷ್ಟತೆಯಿತ್ತು.&lt;/p&gt;&lt;p&gt;ಅಭ್ಯರ್ಥಿಯನ್ನು ಹೇಗಾದರೂ ಮಾಡಿ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿಸಿಕೊಳ್ಳಲು ಹೈರಿಂಗ್ ತಂಡವು ಹಲವು ತಂತ್ರಗಳನ್ನು ಬಳಸಿತು. &quot;ನಮ್ಮ ಕಂಪನಿಯ ಸಂಸ್ಕೃತಿ (Work Culture) ತುಂಬಾ ಚೆನ್ನಾಗಿದೆ, ಉದ್ಯೋಗಿಗಳಿಗೆ ಉಚಿತ ವಿಮೆ, ಜಿಮ್ ಮತ್ತು ಮನರಂಜನೆಯಂತಹ ಉತ್ತಮ ಸೌಲಭ್ಯಗಳಿವೆ, ಮುಂದಿನ ದಿನಗಳಲ್ಲಿ ಕಂಪನಿಯಲ್ಲಿ ನೀವು ದೊಡ್ಡ ಮಟ್ಟದ ಪ್ರಗತಿ ಕಾಣಬಹುದು&quot; ಎಂದು ಹಲವು ಆಮಿಷವೊಡ್ಡಿತು. ಆದರೆ, ಆ ಅಭ್ಯರ್ಥಿ ಮಾತ್ರ ತನ್ನ ನಿರ್ಧಾರದಿಂದ ಕಿಂಚಿತ್ತೂ ಹಿಂದೆ ಸರಿಯಲಿಲ್ಲ. ಕಂಪನಿಯು ಭವಿಷ್ಯದ ಬೆಳವಣಿಗೆಯ ಭರವಸೆ ನೀಡಿದಾಗ, ಅಭ್ಯರ್ಥಿಯು ಅತ್ಯಂತ ಮಾರ್ಮಿಕವಾಗಿ ಉತ್ತರಿಸಿದರು: &quot;ಗೌರವ ಮತ್ತು ಯೋಗ್ಯತೆಯು ಕೇವಲ ಬಾಯಿಮಾತಿನ ಭರವಸೆಯಿಂದ ಅಥವಾ ಆಫೀಸಿನ ಫ್ರೀ ಕಾಫಿಯಿಂದ ಸಿಗುವುದಿಲ್ಲ, ಅದು ನೀವು ಪ್ರತಿ ತಿಂಗಳು ನೀಡುವ ಸಂಭಾವನೆಯಲ್ಲಿ ಪ್ರತಿಫಲಿಸಬೇಕು.&quot;&lt;/p&gt;&lt;h3&gt;&lt;strong&gt;ದೊಡ್ಡ ಗೆಲುವು ಮತ್ತು ಸಾಮಾಜಿಕ ಸ್ಪಂದನೆ&lt;/strong&gt;&lt;/h3&gt;&lt;p&gt;ವಿಶೇಷವೆಂದರೆ, ಮೊದಲ ಕಂಪನಿಯು ಸುಮಾರು ಮೂರು ತಿಂಗಳ ಕಾಲ ಆತನನ್ನು ಒಪ್ಪಿಸಲು ಹರಸಾಹಸ ಪಡುತ್ತಲೇ ಇತ್ತು. ಆದರೆ ಆ ಅಭ್ಯರ್ಥಿ ಆ ಸಮಯವನ್ನು ವ್ಯರ್ಥ ಮಾಡದೆ ತನ್ನ ಪ್ರತಿಭೆಯ ಮೇಲೆ ವಿಶ್ವಾಸವಿಟ್ಟು ಬೇರೆ ಕಡೆಗಳಲ್ಲಿ ಸಂದರ್ಶನಗಳನ್ನು ನೀಡುತ್ತಿದ್ದರು. ಅಂತಿಮವಾಗಿ, ಅವರಿಗೆ ಮತ್ತೊಂದು ಕಂಪನಿಯಿಂದ ಬರೋಬ್ಬರಿ ₹1.8 ಲಕ್ಷದ ಭರ್ಜರಿ ಆಫರ್ ದೊರೆಯಿತು! ಇದು ಮೊದಲ ಕಂಪನಿ ನೀಡಿದ್ದ ಆಫರ್&zwnj;ಗಿಂತ ಬರೋಬ್ಬರಿ ಶೇ. 50 ರಷ್ಟು ಹೆಚ್ಚಾಗಿತ್ತು ಮತ್ತು ಅವರ ಅರ್ಹತೆಗೆ ಸಿಕ್ಕ ನಿಜವಾದ ಗೌರವವಾಗಿತ್ತು.&lt;/p&gt;&lt;p&gt;ಈ ಪೋಸ್ಟ್ ನೋಡಿದ ನೆಟ್ಟಿಗರು ಅನೇಕ ಆಸಕ್ತಿದಾಯಕ ಕಾಮೆಂಟ್&zwnj;ಗಳನ್ನು ಮಾಡಿದ್ದಾರೆ. &quot;ಆಫೀಸ್&zwnj;ನಲ್ಲಿ ಸಿಗುವ 'ಫ್ರೀ ಸ್ನ್ಯಾಕ್ಸ್' ಅಥವಾ 'ಗ್ರೇಟ್ ಕಲ್ಚರ್' ಎಂಬ ಪದಗಳು ಅತಿಯಾದ ಕೆಲಸದ ಹೊರೆಯನ್ನು ಮುಚ್ಚಿಡಲು ಬಳಸುವ ಆಕರ್ಷಕ ತಂತ್ರಗಳಾಗಿವೆ&quot; ಎಂದು ಕೆಲವರು ನೇರವಾಗಿಯೇ ಟೀಕಿಸಿದ್ದಾರೆ. &quot;ಯಾವಾಗಲೂ ನಿಮ್ಮ ಮೌಲ್ಯವನ್ನು ನೀವೇ ಗುರುತಿಸಿ, ಬರಿ ಭರವಸೆಗಳಿಗಾಗಿ ನಿಮ್ಮ ಅರ್ಹತೆಗಿಂತ ಕಡಿಮೆ ಸಂಬಳಕ್ಕೆ ಎಂದಿಗೂ ಒಪ್ಪಿಕೊಳ್ಳಬೇಡಿ&quot; ಎಂಬುದು ಈ ಲೇಖನದ ಪ್ರಮುಖ ಸಂದೇಶವಾಗಿದೆ. ಇದು ಪ್ರತಿಯೊಬ್ಬ ಉದ್ಯೋಗಿಗೂ ತಮ್ಮ ವೃತ್ತಿಜೀವನದಲ್ಲಿ ಒಂದು ದೊಡ್ಡ ಪಾಠದಂತಿದೆ.&lt;/p&gt;&lt;p&gt;Candidate's current salary was 100,000.He received an offer of 120,000.He refused.The company said, &quot;Look at the perks, look at the culture!&quot;Still refused.They explained, &quot;You'll get career growth!&quot;Still refused.They even promised a raise in appraisal.But his&hellip;&lt;/p&gt;&lt;p&gt;&mdash; Simons (@Simon_Ingari) April 5, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Ashwini HR</dc:creator>
            <atom:link href="https://kannada.asianetnews.com/jobs/why-this-candidates-bold-move-is-going-viral-online/articleshow-27g3305"/>
        </item>
        <item>
            <title><![CDATA[2026ರಲ್ಲಿ ಪ್ರತಿ ದಿನಕ್ಕೆ 936 ಮಂದಿಯಂತೆ ಐಟಿಯಲ್ಲಿ ಲೇಆಫ್‌, ಕೆಲಸ ಕಳೆದುಕೊಂಡ 85,156 ಟೆಕ್ಕಿಗಳು]]></title>
            <link>https://kannada.asianetnews.com/gallery/private-jobs/it-layoffs-2026-tech-companies-job-cuts-amazon-oracle-tcs-kannada-news-san-2omqxlq</link>
            <guid isPermaLink="true">https://kannada.asianetnews.com/gallery/private-jobs/it-layoffs-2026-tech-companies-job-cuts-amazon-oracle-tcs-kannada-news-san-2omqxlq</guid>
            <pubDate>Thu, 02 Apr 2026 15:08:38 +0530</pubDate>
            <description><![CDATA[2026ರಲ್ಲೂ ಐಟಿ ವಲಯದಲ್ಲಿ ಉದ್ಯೋಗ ಕಡಿತದ ಅಲೆ ಮುಂದುವರಿದಿದ್ದು, ವರ್ಷದ ಆರಂಭದಲ್ಲೇ 85,156 ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ. ಒರಾಕಲ್, ಅಮೆಜಾನ್, ಇಂಟೆಲ್&zwnj;ನಂತಹ ದೈತ್ಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದು ಐಟಿ ಉದ್ಯೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn6rjqev6wt4bb7bx3ncsq7a,imgname-it-layoffs-2026--2--1775122341339.jpeg" type="image/jpeg" height="390" width="690"/>
            <content:encoded><![CDATA[2026ರಲ್ಲೂ ಐಟಿ ವಲಯದಲ್ಲಿ ಉದ್ಯೋಗ ಕಡಿತದ ಅಲೆ ಮುಂದುವರಿದಿದ್ದು, ವರ್ಷದ ಆರಂಭದಲ್ಲೇ 85,156 ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ. ಒರಾಕಲ್, ಅಮೆಜಾನ್, ಇಂಟೆಲ್&zwnj;ನಂತಹ ದೈತ್ಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದು ಐಟಿ ಉದ್ಯೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.&lt;img&gt;&lt;p&gt;ಕಳೆದ ಎರಡು ವರ್ಷಗಳಿಂದ ಐಟಿ (IT) ವಲಯದಲ್ಲಿ ಎದ್ದಿರುವ ಉದ್ಯೋಗ ಕಡಿತದ (Layoffs) ಅಲೆ 2026ರಲ್ಲೂ ಮುಂದುವರಿದಿದ್ದು, ಟೆಕ್ಕಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 2026ರ ಆರಂಭದ ಕೆಲವೇ ತಿಂಗಳುಗಳಲ್ಲಿ ಸುಮಾರು 85,156 ಮಂದಿ ಕೆಲಸ ಕಳೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;2026ರ ವರ್ಷದ ಇಲ್ಲಿಯವರೆಗೆ ಒಟ್ಟು 208 ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದು, ದಿನವೊಂದಕ್ಕೆ ಸರಾಸರಿ 936 ಟೆಕ್ಕಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಒಟ್ಟು 783 ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದವು, ಇದರಿಂದ 2,45,953 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಯಾವೆಲ್ಲಾ ಕಂಪನಿಗಳು ಎಷ್ಟು ಪ್ರಮಾಣದ ಟೆಕ್ಕಿಗಳನ್ನು ಲೇಆಫ್&zwnj; ಮಾಡಿದ್ದಾರೆ ಅನ್ನೋ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಒರಾಕಲ್&zwnj; ಕಂಪನಿ ಲೇಆಫ್&zwnj; ಲಿಸ್ಟ್&zwnj;ಗೆ ಹೊಸದಾಗಿ ಸೇರ್ಪಡೆಯಾಗಿದ್ದು, ಭಾರತದಲ್ಲಿ 12 ಸಾವಿರಕ್ಕೂ ಅಧಿಕ ಉದ್ಯೋಗಿಗಳೊಂದಿಗೆ ವಿಶ್ವದಾದ್ಯಂತ 30 ಸಾವಿರ ಟೆಕ್ಕಿಗಳನ್ನು ಏಕಾಏಕಿ ಕೆಲಸದಿಂದ ಕಿತ್ತುಹಾಕಿದೆ.&lt;/p&gt;&lt;img&gt;&lt;p&gt;ಪ್ರಖ್ಯಾತ ಚಿಪ್&zwnj; ಕಂಪನಿ ಇಂಟೆಲ್&zwnj; ಇಲ್ಲಿಯವರೆಗೆ 21 ಸಾವಿರ ಟೆಕ್ಕಿಗಳನ್ನು ವಜಾ ಮಾಡಿದೆ. 2025ರ ಜುಲೈನಲ್ಲಿ ಟೆಕ್ಕಿಗಳನ್ನು ವಜಾ ಮಾಡುವ ನಿರ್ಧಾರ ಪ್ರಕಟಿಸಿತ್ತು.&lt;/p&gt;&lt;img&gt;&lt;p&gt;ಗರಿಷ್ಠ ಉದ್ಯೋಗಿಗಳನ್ನು ವಜಾ ಮಾಡಿದ ಪಟ್ಟಿಯಲ್ಲಿ ಅಮೆಜಾನ್&zwnj; ಮುಂಚೂಣಿಯಲ್ಲಿದೆ. ಎರಡು ಬಾರಿ ಈ ಕೆಲಸವನ್ನು ಅಮೆಜಾನ್ ಮಾಡಿದೆ. 2025ರ ಅಕ್ಟೋಬರ್&zwnj;ನಲ್ಲಿ 14 ಸಾವಿರ ಉದ್ಯೋಗಳ ವಜಾ ಮಾಡಿದ್ದರೆ, 2026ರ ಜನವರಿಲ್ಲಿ 16 ಸಾವಿರ ಟೆಕ್ಕಿಗಳಿಗೆ ಗೇಟ್&zwnj;ಪಾಸ್&zwnj; ನೀಡಿತ್ತು. ಆ ಮೂಲಕ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ 30 ಸಾವಿರ ಕಡಿತ ಮಾಡಿದೆ.&lt;/p&gt;&lt;img&gt;&lt;p&gt;ಭಾರತದ ಐಟಿ ಸರ್ವೀಸ್&zwnj; ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್&zwnj; 2025ರ ಜುಲೈನಲ್ಲಿ 12 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ವಜಾ ಮಾಡಿದೆ.&lt;/p&gt;&lt;img&gt;&lt;p&gt;ಅಕ್ಸೆಂಚರ್&zwnj; ಕಂಪನಿ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ವರ್ಷದ ಸೆಪ್ಟೆಂಬರ್&zwnj;ನಲ್ಲಿ 11 ಸಾವಿರ ಉದ್ಯೋಗಿಗಳಿಗೆ ಗೇಟ್&zwnj;ಪಾಸ್&zwnj; ನೀಡಿದೆ.&lt;/p&gt;&lt;img&gt;&lt;p&gt;ಕೋಟ್ಯಧಿಪತಿ ಬಿಲ್&zwnj;ಗೇಟ್ಸ್&zwnj; ಅವರ ಮೈಕ್ರೋಸಾಫ್ಟ್&zwnj; ಕೂಡ 2025ರ ಜುಲೈನಲ್ಲಿ 9 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು.&lt;/p&gt;&lt;img&gt;&lt;p&gt;ಸೇಲ್ಸ್&zwnj; ಫೋರ್ಸ್&zwnj; ಕಂಪನಿ ಕೂಡ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರೀ ಕಡಿತ ಮಾಡಿದೆ. 2025ರ ಸೆಪ್ಟೆಂಬರ್&zwnj;ನಲ್ಲಿ 4 ಸಾವಿರ ಟೆಕ್ಕಿಗಳನ್ನು ವಜಾ ಮಾಡಿತ್ತು.&lt;/p&gt;&lt;img&gt;&lt;p&gt;ವಿಶ್ವದ ದೊಡ್ಡ ಟೆಕ್ ಕಂಪನಿಗಳೇ ಆರ್ಥಿಕ ಮುಗ್ಗಟ್ಟು ಅಥವಾ ಮರುಸಂಘಟನೆಯ ನೆಪದಲ್ಲಿ ಸಾವಿರಾರು ನೌಕರರನ್ನು ಏಕಕಾಲಕ್ಕೆ ಮನೆಗೆ ಕಳುಹಿಸುತ್ತಿರುವುದು ಐಟಿ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಒರಾಕಲ್ ಮತ್ತು ಅಮೆಜಾನ್ ಕಂಪನಿಗಳು ಉದ್ಯೋಗ ಕಡಿತದಲ್ಲಿ ಮುಂಚೂಣಿಯಲ್ಲಿವೆ.&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/private-jobs/it-layoffs-2026-tech-companies-job-cuts-amazon-oracle-tcs-kannada-news-san-2omqxlq"/>
        </item>
        <item>
            <title><![CDATA[ಲೋಕಾಯುಕ್ತ ಬಲೆಗೆ ಬಿತ್ತು ಮೀನುಗಾರಿಕೆ ಇಲಾಖೆಯ ದೊಡ್ಡ ತಿಮಿಂಗಲ; ಉಪ ನಿರ್ದೇಶಕ ಶಿವಣ್ಣನ ಮನೇಲಿ ಕೋಟಿ, ಕೋಟಿ ಆಸ್ತಿ!]]></title>
            <link>https://kannada.asianetnews.com/karnataka-districts/ballari-lokayukta-raid-fisheries-deputy-director-shivanna-assets-found-sat/articleshow-55vgd28</link>
            <guid isPermaLink="true">https://kannada.asianetnews.com/karnataka-districts/ballari-lokayukta-raid-fisheries-deputy-director-shivanna-assets-found-sat/articleshow-55vgd28</guid>
            <pubDate>Tue, 07 Apr 2026 20:38:02 +0530</pubDate>
            <description><![CDATA[&lt;p&gt;ಬಳ್ಳಾರಿಯ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ, ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿದ್ದು, ಬೇನಾಮಿ ಆಸ್ತಿಗಳ ಬಗ್ಗೆಯೂ ತನಿಖೆ ಮುಂದುವರೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knm7pew50f96bmgvwvzc6sam,imgname-ballari-shivanna-lokayukta-trap-1775574399874.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಏ.07): ಭ್ರ&lt;/strong&gt;ಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರೆದಿದ್ದು, ಗಣಿ ನಾಡು ಬಳ್ಳಾರಿಯಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ನಸುಕಿನ ಜಾವವೇ ಶಿವಣ್ಣ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು, ಆಸ್ತಿ ವಿವರಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅಧಿಕಾರಿಯೊಬ್ಬರು ತನ್ನ ಅವಧಿಯಲ್ಲಿ ಎಷ್ಟು ಪ್ರಮಾಣದ ಆಸ್ತಿ ಮಾಡಿದ್ದಾರೆ ಎಂಬುದು ಈಗ ಬಯಲಾಗಿದೆ.&lt;/p&gt;&lt;h3&gt;&lt;strong&gt;ಆಸ್ತಿಯ ವಿವರಗಳು:&lt;/strong&gt;&lt;/h3&gt;&lt;p&gt;ಲೋಕಾಯುಕ್ತ ದಾಳಿಯ ವೇಳೆ ಪತ್ತೆಯಾದ ಆಸ್ತಿಗಳ ಪಟ್ಟಿ ಬೆಟ್ಟದಷ್ಟಿದೆ. ಬಳ್ಳಾರಿ ನಗರವೊಂದರಲ್ಲೇ ಶಿವಣ್ಣ ಅವರು ಬರೋಬ್ಬರಿ 14 ಸೈಟುಗಳನ್ನು ಹೊಂದಿದ್ದಾರೆ. ಇದಲ್ಲದೆ ಬಳ್ಳಾರಿ ನಗರದ ವಿವಿಧ ಬಡಾವಣೆಗಳಲ್ಲಿ 3 ಐಷಾರಾಮಿ ಮನೆಗಳು ಪತ್ತೆಯಾಗಿವೆ. ಇನ್ನು ಕೃಷಿ ಭೂಮಿಯ ವಿಷಯಕ್ಕೆ ಬಂದರೆ, ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು 44 ಎಕರೆ ಜಮೀನು ಇರುವುದು ದಾಖಲೆಗಳಿಂದ ದೃಢಪಟ್ಟಿದೆ.&lt;/p&gt;&lt;h2&gt;&lt;strong&gt;ಚಿನ್ನ, ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್:&lt;/strong&gt;&lt;/h2&gt;&lt;p&gt;ಮನೆಯಲ್ಲಿ ನಡೆಸಿದ ಶೋಧದ ವೇಳೆ 600 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಮನೆಯಲ್ಲೇ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದು, ಒಟ್ಟು 8.5 ಲಕ್ಷ ರೂಪಾಯಿ ನಗದನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ. ಇದರ ಜೊತೆಗೆ, ಶಿವಣ್ಣ ಅವರ ಬ್ಯಾಂಕ್ ಖಾತೆಯಲ್ಲಿದ್ದ 20 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.&lt;/p&gt;&lt;h3&gt;&lt;strong&gt;ಬೇನಾಮಿ ಆಸ್ತಿಯ ಶಂಕೆ:&lt;/strong&gt;&lt;/h3&gt;&lt;p&gt;ಕೇವಲ ಇಷ್ಟೇ ಅಲ್ಲದೆ, ಶಿವಣ್ಣ ಅವರು ತಮ್ಮ ಕುಟುಂಬಸ್ಥರು ಹಾಗೂ ಇತರರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಗಳನ್ನು ಮಾಡಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಕಚೇರಿ ಕೆಲಸದಲ್ಲಿ ಭ್ರಷ್ಟಾಚಾರ ನಡೆಸಿ, ಅಕ್ರಮ ಮಾರ್ಗದ ಮೂಲಕ ಈ ಹಣ ಸಂಪಾದನೆ ಮಾಡಿರಬಹುದು ಎಂಬ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ. ಮನೆಯಲ್ಲಿ ಸಿಕ್ಕಿರುವ ಹಲವು ಪ್ರಮುಖ ದಾಖಲೆಗಳು ಮತ್ತು ಡೈರಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ತಲಾಶ್ ಮುಂದುವರಿಕೆ:&lt;/strong&gt;&lt;/h3&gt;&lt;p&gt;ಬಳ್ಳಾರಿಯ ಲೋಕಾಯುಕ್ತ ಅಧಿಕಾರಿಗಳ ತಂಡವು ಇನ್ನೂ ಶೋಧ ಕಾರ್ಯವನ್ನು ಮುಂದುವರೆಸಿದೆ. ಶಿವಣ್ಣ ಅವರ ಆಪ್ತರು ಮತ್ತು ಸಂಬಂಧಿಕರ ಮನೆಗಳ ಮೇಲೂ ನಿಗಾ ಇಡಲಾಗಿದ್ದು, ದಾಖಲೆಗಳ ಪರಿಶೀಲನೆಯ ನಂತರ ಆಸ್ತಿಯ ಒಟ್ಟು ಮೌಲ್ಯ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಸರ್ಕಾರಿ ಅಧಿಕಾರಿಯೊಬ್ಬರು ಅಕ್ರಮವಾಗಿ ಇಷ್ಟೊಂದು ಆಸ್ತಿ ಮಾಡಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಬಳ್ಳಾರಿಯಲ್ಲಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ ಮೇಲೆ 10 ಕ್ಕೂ ಹೆಚ್ಚು ದೂರುಗಳು ಲೊಕಾಯುಕ್ತರಿಗೆ ಸಲ್ಲಿಕೆಯಾಗಿದ್ದವು. ಭಷ್ಟಚಾರ ಹಾಗೂ ಅಕ್ರಮ ಆದಾಯದ ದೂರುಗಳು ಸಲ್ಲಿಕೆ ಪ್ರಕರಣಗಳು ಇವಾಇದ್ದವು. ಕಳೆದ ಹತ್ತು ವರ್ಷದಿಂದ ಶಿವಣ್ಣ ಎಲ್ಲಿಯೂ ವರ್ಗಾವಣೆ ಆಗದೇ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ತನ್ನ ಪ್ರಭಾವವನ್ನು ಬಳಸಿಕೊಂಡು ಎಲ್ಲಿಗೂ ವರ್ಗಾವಣೆ ಆಗದಂತೆ ನೋಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/ballari-lokayukta-raid-fisheries-deputy-director-shivanna-assets-found-sat/articleshow-55vgd28"/>
        </item>
        <item>
            <title><![CDATA[2021ರಲ್ಲಿ 3.2 ಲಕ್ಷ ವೇತನಕ್ಕೆ TCSಗೆ ಕೆಲಸಕ್ಕೆ ಸೇರಿದ ಯುವಕನಿಗೆ ಈಗ ಗೂಗಲ್‌ನಲ್ಲಿ  80 ಲಕ್ಷದ ಉದ್ಯೋಗ]]></title>
            <link>https://kannada.asianetnews.com/jobs/software-engineer-salary-jump-techie-earns-rs-80-lakh-per-year-at-google-says-he-will-retire-by-2031/articleshow-58i4tod</link>
            <guid isPermaLink="true">https://kannada.asianetnews.com/jobs/software-engineer-salary-jump-techie-earns-rs-80-lakh-per-year-at-google-says-he-will-retire-by-2031/articleshow-58i4tod</guid>
            <pubDate>Tue, 31 Mar 2026 13:28:52 +0530</pubDate>
            <description><![CDATA[&lt;p&gt;&lt;strong&gt;Software engineer salary jump: &lt;/strong&gt;ತಮ್ಮ 23ರ ಹರೆಯದಲ್ಲಿ ಟಿಸಿಎಸ್ ಕಂಪನಿಗೆ ವಾರ್ಷಿಕ 3.2 ಲಕ್ಷ ವೇತನಕ್ಕೆ ಕೆಲಸಕ್ಕೆ ಸೇರಿದ ಬೆಂಗಳೂರಿನ ಸಾಫ್ಟ್&zwnj;ವೇರ್ ಡೆವಲಪರ್ ಹೇಗೆ 80 ಲಕ್ಷದ ಗೂಗಲ್ ಉದ್ಯೋಗ ಗಿಟ್ಟಿಸಿದೆ ಎಂಬುದನ್ನು ಹೇಳಿಕೊಂಡಿದ್ದು ಅವರ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn1dyd1nqydry81qg9kp88yb,imgname-google-techie-job-1774943417397.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸಾಫ್ಟ್&zwnj;ವೇರ್ ಡೆವಲಪರ್ ಸ್ಟೋರಿ ಭಾರಿ ವೈರಲ್&lt;/strong&gt;&lt;/h2&gt;&lt;p&gt;ಒಳ್ಳೆಯ ಸ್ಕಿಲ್ ಇದ್ದರೆ ಸಾಫ್ಟ್&zwnj;ವೇರ್ ಇಂಜಿನಿಯರ್&zwnj;ಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ವಾರ್ಷಿಕವಾಗಿ ಕೋಟಿ ಸಮೀಪಿಸುವ ವೇತನವನ್ನೂ ನೀಡಲು ಸಿದ್ಧವಿರುತ್ತವೆ. ಟೆಕ್ ದೈತ್ಯ ಗೂಗಲ್ ಕೂಡ ತನ್ನ ಉದ್ಯೋಗಿಯೊಬ್ಬರಿಗೆ ವಾರ್ಷಿಕ 80 ಲಕ್ಷದ ವೇತನ ನೀಡುತ್ತಿದ್ದು, ಈ ಕೆಲಸ ಗಿಟ್ಟಿಸಿಕೊಂಡ ಯುವಕ ತನ್ನ ಈ ಕೆರಿಯರ್ ಜರ್ನಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಹೌದು ಬೆಂಗಳೂರು ಮೂಲದ ಸಾಫ್ಟ್&zwnj;ವೇರ್ ಡೆವಲಪರ್ ಅಕ್ರಾ ಮಜುಮ್&zwnj;ದಾರ್ ಎಂಬುವವರು ಪ್ರಸ್ತುತ ಗೂಗಲ್&zwnj;ನಲ್ಲಿ ಕೆಲಸ ಮಾಡುತ್ತಿದ್ದು ನಿಷ್ಠೆಯು ವೇತನವನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿಕೊಂಡು ತಮ್ಮ ಇನ್ಸ್ಟಾಗ್ರಾಮ್&zwnj;ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ 23ರ ಹರೆಯದಲ್ಲಿ ಟಿಸಿಎಸ್ ಕಂಪನಿಗೆ ವಾರ್ಷಿಕ 3.2 ಲಕ್ಷ ವೇತನಕ್ಕೆ ಕೆಲಸಕ್ಕೆ ಸೇರಿದ ಅವರು ಎರಡು ವರ್ಷದ ನಂತರ ಕೆಲಸ ತೊರೆದು ಕುಕು ಎಫ್&zwnj;ಎಂಗೆ ಸೇರಿದರು ಅವರ ವೇತನ ವಾರ್ಷಿಕವಾಗಿ 14 ಲಕ್ಷ ಇತ್ತು. ಇದಾದ ನಂತರ ಅವರು ಗೂಗಲ್ ಕೆಲಸ ಗಿಟ್ಟಿಸಿದ್ದು, ಅಲ್ಲಿ ಅವರಿಗೆ ವಾರ್ಷಿಕ ವೇತನ 80 ಲಕ್ಷ ನಿಗದಿ ಮಾಡಲಾಗಿತ್ತು.&lt;/p&gt;&lt;h3&gt;&lt;strong&gt;ವೇತನ 3.2 ಲಕ್ಷದಿಂದ 80 ಲಕ್ಷಕ್ಕೆ ಏರಿಕೆಯಾಗಿದ್ದು ಹೇಗೆ&lt;/strong&gt;&lt;/h3&gt;&lt;p&gt;2021 ರಲ್ಲಿ ಟಿಸಿಎಸ್&zwnj;ನ ನಿಂಜಾ ಕಾರ್ಯಕ್ರಮದ ಮೂಲಕ ಸಹಾಯಕ ಸಿಸ್ಟಮ್ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಕ್ರಾ ರೂ. 3.2 ಲಕ್ಷ ವೇತನ ಗಳಿಸಿದರು. ಆಗಷ್ಟೇ ಕಾಲೇಜು ತೊರೆದಿದ್ದರಿಂದ ತಾನು ವಿಶಾಲ ದೃಷ್ಟಿಯುಳ್ಳ ಮತ್ತು ಕಲಿಯಲು ಉತ್ಸುಕನಾಗಿದ್ದವನಾಗಿದೆ ಎಂದು ಹೇಳಿಕೊಂಡಿದ್ದಾರೆ. ಬಣ್ಣಿಸಿಕೊಂಡರು. 2022 ರಲ್ಲಿ, ಅವರು TCS ನ ಡಿಜಿಟಲ್ ಪ್ರೋಗ್ರಾಂ (ವಿಂಗ್ಸ್ 1) ಅನ್ನು ಪೂರ್ಣಗೊಳಿಸಿದ ನಂತರ ಸಿಸ್ಟಮ್ ಎಂಜಿನಿಯರ್ ಆಗಿ ಬಡ್ತಿ ಪಡೆದರು. ಇದು ಅವರ ಸಂಬಳವನ್ನು ಸುಮಾರು ರೂಪಾಯಿ 7 ಲಕ್ಷಕ್ಕೆ(ವಾರ್ಷಿಕ) ಹೆಚ್ಚಿಸಿತು. ಅದೇ ಸಮಯದಲ್ಲಿ, ಅವರು ಡೇಟಾ ರಚನೆಗಳು ಮತ್ತು ಅಲ್ಗಾರಿದಮ್&zwnj;ಗಳು (DSA) ಗಾಗಿ ಗಂಭೀರವಾಗಿ ತಯಾರಿ ನಡೆಸಲು ಪ್ರಾರಂಭಿಸಿದರು, ಇದು ಉತ್ಪನ್ನ ಆಧಾರಿತ ತಾಂತ್ರಿಕ ಪಾತ್ರಗಳಿಗೆ ನಿರ್ಣಾಯಕವೆಂದು ವ್ಯಾಪಕವಾಗಿ ಪರಿಗಣಿಸಲಾದ ಕೌಶಲ್ಯವಾಗಿದೆ.&lt;/p&gt;&lt;p&gt;2023 ರ ಹೊತ್ತಿಗೆ, ಮಜುಂದರ್ ಅವರು ಪ್ರತಿದಿನ ಐದರಿಂದ ಆರು ಗಂಟೆಗಳ ಕಾಲ DSA( data structures and algorithms) ಅಭ್ಯಾಸಕ್ಕೆ ಮೀಸಲಿಡುತ್ತಿದ್ದರು ಮತ್ತು 380 ಕ್ಕೂ ಹೆಚ್ಚು ಲೀಟ್&zwnj;ಕೋಡ್ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಹೀಗಾಗಿ ಜನವರಿ 2024 ರಲ್ಲಿ, ಅವರು ಟಿಸಿಎಸ್&zwnj;ನ ಹೊರಗೆ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿದರು. ಆದರೆ ತಮ್ಮ ಮೊದಲ ಆಫರ್&zwnj;ಗಾಗಿ ಸುಮಾರು ಎಂಟು ತಿಂಗಳು ಕಾಯುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಹಲವಾರು ವಿಫಲ ಸಂದರ್ಶನಗಳ ಹೊರತಾಗಿಯೂ, ಅವರು ಅಂತಿಮವಾಗಿ ಬೆಂಗಳೂರು ಮೂಲದ ಉತ್ಪನ್ನ ಸ್ಟಾರ್ಟ್ಅಪ್ ಕುಕು ಎಫ್&zwnj;ಎಂನಲ್ಲಿ ಒಂದು ಕೆಲಸ ಗಿಟ್ಟಿಸಿದರು. ಅಲ್ಲಿ ಅವರ ವೇತನ ಸುಮಾರು ರೂ 14ರಿಂದ 15 ಎಲ್&zwnj;ಪಿಎಗೆ ಏರಿತು.&lt;/p&gt;&lt;p&gt;ಆದರೆ ಅವರಿಗೆ ದೊಡ್ಡ ಟರ್ನಿಂಗ್ ಪಾಯಿಂಟ್&zwnj; ಆಗಿದ್ದು,2025 ರಲ್ಲಿ. ಹೌದು ಅಕ್ರಾ ಮಜುಂದರ್ ಅವರು ವಾರ್ಷಿಕ 80 ಲಕ್ಷ ಪ್ಯಾಕೇಜ್&zwnj;ನೊಂದಿಗೆ ಗೂಗಲ್&zwnj;ಗೆ ಕೆಲಸಕ್ಕೆ ಸೇರಿದರು. ಇದನ್ನು ಅವರ ವೃತ್ತಿಜೀವನದ ಅತಿದೊಡ್ಡ ಬೆಳವಣಿಗೆ ಎಂದು ಕರೆದಿದ್ದಾರೆ.. ಆಫರ್ ಪಡೆದ ನಂತರವೂ ಅವರು ಗ್ರಾಫ್&zwnj;ಗಳು, ಪ್ರಯತ್ನಗಳು ಮತ್ತು ಡೈನಾಮಿಕ್ ಪ್ರೋಗ್ರಾಮಿಂಗ್&zwnj;ನಂತಹ ಮುಂದುವರಿದ ವಿಷಯಗಳನ್ನು ಒಳಗೊಂಡು ತಮ್ಮ ಲೀಟ್&zwnj;ಕೋಡ್ ಸಂಖ್ಯೆಯನ್ನು 750ಕ್ಕೆ ದಾಟಿಸಿದ್ದಾರೆ ಎಂದು ಅವರು ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಇರಾನ್ ಯುದ್ಧ: ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್&zwnj;ಗೆ 4 ಡಾಲರ್&zwnj;ಗೆ ಏರಿಕೆ&lt;/strong&gt;&lt;/p&gt;&lt;p&gt;ಪ್ರತಿಯೊಬ್ಬ ಬಿಟೆಕ್ ವಿದ್ಯಾರ್ಥಿಯಂತೆ ನನಗೂ ಕಾಲೇಜಿನಲ್ಲಿ ಗೂಗಲ್&zwnj;ನಲ್ಲಿ ಕೆಲಸ ಮಾಡುವ ಕನಸು ಇತ್ತು . ಆದರೆ ಮಾರ್ಗದರ್ಶನದ ಕೊರತೆ ಮತ್ತು ಟೈಯರ್ -3 ಕಾಲೇಜಿನ ನಿರ್ಬಂಧಗಳಿಂದಾಗಿ, ನಾನು ಟಿಸಿಎಸ್&zwnj;ನಲ್ಲಿ 3.2 ಎಲ್&zwnj;ಪಿಎಗೆ ಸೇರಿದೆ ಎಂದು ಮಜುಂದರ್ ಹೇಳಿದರು. ಇದು ಕೇವಲ ಆರಂಭ ಎಂದು ಹೇಳಿದ ಅವರು ಐದು ವರ್ಷಗಳಲ್ಲಿ ನಿವೃತ್ತಿ ಹೊಂದಿ ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವ ಆಶಯವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಇವರ ಪೋಸ್ಟ್&zwnj; ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಅವರನ್ನು ಅಭಿನಂದಿಸಿದ್ದಾರೆ. ಆದರೆ ಅವರ ಹೇಳಿಕೆಗಳಿಗೆ ಅನೇಕರು ಸಂದೇಹ ವ್ಯಕ್ತಪಡಿಸಿದ್ದಾರೆ. ಕೇವಲ 15 ಲಕ್ಷದಿಂದ 80 ಲಕ್ಷಕ್ಕೆ ಸ್ಯಾಲರಿ ಏರಿಕೆಯಾದ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ರೂ. 15 ಲಕ್ಷದಿಂದ ರೂ. 80 ಲಕ್ಷಕ್ಕೆ ವೇತನ ಹೆಚ್ಚಳ ನಿಜವಾಗಿಯೂ ಅಚ್ಚರಿ ಎನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಟಿಸಿಎಸ್&zwnj;ನಲ್ಲಿ ಹದಿನಾಲ್ಕು ವರ್ಷ ಕಳೆದಿದ್ದು, ನಿಮ್ಮ ಸಂಬಳದ ಒಂಬತ್ತನೇ ಒಂದು ಭಾಗವನ್ನು ನಾನು ಗಳಿಸುತ್ತಿದ್ದೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಷ್ಟೊಂದು ವೇತನ ಇರುವವರು ಯಾರು ಹೇಳಿಕೊಳ್ಳುವುದಿಲ್ಲ ಇದು ಸುಳ್ಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಮೆರಿಕಾ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್: ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಟ್ರಂಪ್ ಕಿಡಿ&lt;/strong&gt;&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Arka Mazumder (@push__to__prod)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Anusha Kb</dc:creator>
            <atom:link href="https://kannada.asianetnews.com/jobs/software-engineer-salary-jump-techie-earns-rs-80-lakh-per-year-at-google-says-he-will-retire-by-2031/articleshow-58i4tod"/>
        </item>
        <item>
            <title><![CDATA["ಇಂದೇ ನಿಮ್ಮ ಕಡೆಯ ದಿನ" ಒರಾಕಲ್‌ನಿಂದ 12 ಸಾವಿರಾರು ಉದ್ಯೋಗಿಗಳ ವಜಾ! ಬೆಂಗಳೂರು ಐಟಿ ವಲಯದಲ್ಲಿ ಆತಂಕ]]></title>
            <link>https://kannada.asianetnews.com/jobs/oracle-layoffs-12-000-jobs-cut-in-india-30000-globally-amid-it-slowdown-gdp/articleshow-5edrg28</link>
            <guid isPermaLink="true">https://kannada.asianetnews.com/jobs/oracle-layoffs-12-000-jobs-cut-in-india-30000-globally-amid-it-slowdown-gdp/articleshow-5edrg28</guid>
            <pubDate>Wed, 01 Apr 2026 16:46:24 +0530</pubDate>
            <description><![CDATA[ಒರಾಕಲ್ ಇಂಡಿಯಾದಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದು ಬೆಂಗಳೂರಿನಂತಹ ಐಟಿ ಕೇಂದ್ರಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಬೆಳವಣಿಗೆಯು ಐಟಿ ವಲಯದ ನಿಧಾನಗತಿಯನ್ನು ಸೂಚಿಸುತ್ತಿದ್ದು, ವೃತ್ತಿಪರರು ತಮ್ಮ ಆರ್ಥಿಕ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ಮಾಡಿದೆ. ಜಾಗತಿಕ ಪುನರ್&zwnj;ರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn3fvf36ywkmj1dhez70sz41,imgname-oracle-layoffs-30000-employees-india-impact-morning-email-job-cuts-ai-restructuring-global-3-1775012527206.jpg" type="image/jpeg" height="390" width="690"/>
            <content:encoded><![CDATA[&lt;p&gt;ಒರಾಕಲ್ ಕಂಪನಿಯಲ್ಲಿ ನಡೆಯುತ್ತಿರುವ ಭಾರೀ ಮಟ್ಟದ ಉದ್ಯೋಗ ಕಡಿತವು ಭಾರತದ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಆತಂಕದ ವಾತಾವರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ಐಟಿ ಹಬ್ಬಗಳಾಗಿ ಬೆಳೆದಿರುವ ನಗರಗಳಲ್ಲಿ ಇದರ ಪರಿಣಾಮ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದ್ದು, ಐಟಿ ವೃತ್ತಿಪರರು ತಮ್ಮ ಆರ್ಥಿಕ ನಿರ್ಧಾರಗಳನ್ನು, ವಿಶೇಷವಾಗಿ ದೊಡ್ಡ ಮೊತ್ತದ ಹೂಡಿಕೆಗಳನ್ನು ಮರುಪರಿಶೀಲಿಸಲು ಮುಂದಾಗಿದ್ದಾರೆ. ಇದರಿಂದ ಈಗಾಗಲೇ ಒತ್ತಡದಲ್ಲಿರುವ ವಸತಿ ಮಾರುಕಟ್ಟೆಯ ಮೇಲೂ ಹೆಚ್ಚುವರಿ ಬಾಧೆ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ವರದಿಗಳ ಪ್ರಕಾರ, ಅಮೆರಿಕ ಮೂಲದ ತಂತ್ರಜ್ಞಾನ ದೈತ್ಯ ಕಂಪನಿಯಾದ ಒರಾಕಲ್ ಇಂಡಿಯಾದಲ್ಲಿ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇದಲ್ಲದೆ, ಮುಂದಿನ ಕೆಲವೇ ವಾರಗಳಲ್ಲಿ ಮತ್ತೊಂದು ಹಂತದ ಉದ್ಯೋಗ ಕಡಿತ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ಸುಮಾರು 30,000 ಹುದ್ದೆಗಳನ್ನು ಕಡಿತಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಎರಡು ದಶಕಗಳ ಕಾಲ ನಿರಂತರವಾಗಿ ಬೆಳವಣಿಗೆಯನ್ನು ಕಂಡಿದ್ದ ಭಾರತದ ಐಟಿ ಸೇವಾ ವಲಯವು ಈಗ ನಿಧಾನಗತಿಯತ್ತ ಸಾಗುತ್ತಿರುವುದು ಈ ಬೆಳವಣಿಗೆಯ ಹಿಂದೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಒರಾಕಲ್ ಕಂಪನಿಯು ಭಾರತದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ಹೊಂದಿದ್ದು, ಮೇ 2025ರ ವೇಳೆಗೆ ಜಾಗತಿಕವಾಗಿ ಸುಮಾರು 1.62 ಲಕ್ಷ ಪೂರ್ಣಕಾಲಿಕ ಉದ್ಯೋಗಿಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಲು ಕಂಪನಿ ನಿರಾಕರಿಸಿರುವುದಾಗಿ ತಿಳಿದುಬಂದಿದೆ.&lt;/p&gt;&lt;p&gt;ಆಸ್ಟಿನ್&zwnj;ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಒರಾಕಲ್ ಕಂಪನಿಯು ಈ ಕ್ರಮವನ್ನು ಸಂಸ್ಥೆಯ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಕೈಗೊಂಡಿದೆ ಎಂದು ವರದಿಗಳು ಸೂಚಿಸುತ್ತವೆ. ಸಂಸ್ಥೆಯ ಒಳಾಂಗಣ ಬದಲಾವಣೆಗಳ ಬಗ್ಗೆ ಉದ್ಯೋಗಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗಿದ್ದು, &ldquo;ಈ ಬದಲಾವಣೆಗಳ ಪರಿಣಾಮವಾಗಿ ಕೆಲವು ಹುದ್ದೆಗಳು ಅನಗತ್ಯವಾಗುತ್ತಿವೆ&rdquo; ಎಂದು ತಿಳಿಸಲಾಗಿದೆ.&lt;/p&gt;&lt;h2&gt;ಸಾಂಸ್ಥಿಕ ಬದಲಾವಣೆ&lt;/h2&gt;&lt;p&gt;ಕಂಪನಿಯು ಈ ಕ್ರಮವನ್ನು &ldquo;ಸಾಂಸ್ಥಿಕ ಬದಲಾವಣೆ&rdquo; (Organizational Restructuring) ಎಂದು ವಿವರಿಸಿದ್ದು, ಕೆಲವು ಹುದ್ದೆಗಳು ತಕ್ಷಣದಿಂದಲೇ ರದ್ದುಗೊಂಡಿವೆ ಎಂದು ತಿಳಿಸಿದೆ. ವರದಿಗಳ ಪ್ರಕಾರ, ವಜಾಗೊಳಿಸಲಾದ ಉದ್ಯೋಗಿಗಳಿಗೆ ಮಂಗಳವಾರ ಬೆಳಿಗ್ಗೆ 6 ಗಂಟೆಗೆ (EST) ಕಳುಹಿಸಲಾದ ಇಮೇಲ್&zwnj;ನಲ್ಲಿ &ldquo;ಇಂದು ನಿಮ್ಮ ಕೊನೆಯ ಕೆಲಸದ ದಿನ&rdquo; ಎಂದು ನೇರವಾಗಿ ತಿಳಿಸಲಾಗಿದೆ. ಈ ರೀತಿಯ ಆಕಸ್ಮಿಕ ನಿರ್ಧಾರವು ಉದ್ಯೋಗಿಗಳಲ್ಲಿ ಆತಂಕ ಮತ್ತು ಅಸಮಾಧಾನವನ್ನು ಉಂಟುಮಾಡಿದೆ.&lt;/p&gt;&lt;p&gt;ಇದಕ್ಕೂ ನಡುವಲ್ಲಿ, ಮಾರ್ಸೆಲಸ್ ಇನ್ವೆಸ್ಟ್&zwnj;ಮೆಂಟ್ ಮ್ಯಾನೇಜರ್ಸ್&zwnj;ನ ಸೌರಭ್ ಮುಖರ್ಜಿ ಅವರು ಒಂದು ಪಾಡ್&zwnj;ಕ್ಯಾಸ್ಟ್&zwnj;ನಲ್ಲಿ ಮಾತನಾಡುತ್ತಾ, ಐಟಿ ಸೇವಾ ವಲಯವು ಈಗ ರಚನಾತ್ಮಕ ಮಂದಗತಿಯ (Structural Slowdown) ಹಂತಕ್ಕೆ ಪ್ರವೇಶಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ, 2005 ರಿಂದ 2020ರವರೆಗೆ ಐಟಿ ಕಂಪನಿಗಳು ವರ್ಷಕ್ಕೆ ಸರಾಸರಿ 15 ಶೇಕಡಾ ಪ್ರಮಾಣದಲ್ಲಿ ಆದಾಯ ಮತ್ತು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಬೆಳವಣಿಗೆಯ ವೇಗವು ಗಣನೀಯವಾಗಿ ಕುಸಿದು, ಸುಮಾರು 5 ರಿಂದ 6 ಶೇಕಡಾ ಮಟ್ಟಕ್ಕೆ ಇಳಿದಿದೆ.&lt;/p&gt;&lt;p&gt;ಕೋವಿಡ್ ಮಹಾಮಾರಿಯ ನಂತರ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಡುಬಂದ ಕುಂಠಿತತೆ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿ ಗುರುತಿಸಲ್ಪಟ್ಟಿವೆ. ಒಟ್ಟಾರೆ, ಒರಾಕಲ್&zwnj;ನ ಉದ್ಯೋಗ ಕಡಿತವು ಕೇವಲ ಒಂದು ಕಂಪನಿಗೆ ಸೀಮಿತವಾಗದೇ, ಭಾರತದ ಐಟಿ ವಲಯದ ಭವಿಷ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುವಂತಾಗಿದೆ.&lt;/p&gt;&lt;h2&gt;15 ದಿನಗಳ ಸಂಬಳ&lt;/h2&gt;&lt;p&gt;ವಜಾಗೊಂಡ ಉದ್ಯೋಗಿಗಳಿಗೆ ಪರಿಹಾರ ಪ್ಯಾಕೇಜ್ ನೀಡುವ ಬಗ್ಗೆ ಕೂಡ ಮಾಹಿತಿ ಲಭ್ಯವಾಗಿದೆ. ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸಿದ ಪ್ರತಿಯೊಬ್ಬ ಉದ್ಯೋಗಿಗೆ 15 ದಿನಗಳ ಸಂಬಳವನ್ನು ನೀಡಲಾಗುವುದು. ಇದರ ಜೊತೆಗೆ, ವಜಾಗೊಳಿಸುವ ದಿನಾಂಕದವರೆಗೆ ಬಾಕಿ ಇರುವ ಒಂದು ತಿಂಗಳ ವೇತನ, ಉಳಿದಿರುವ ರಜೆಗಳ ನಗದು ಮೌಲ್ಯ, ಅರ್ಹತೆಯ ಆಧಾರದ ಮೇಲೆ ಗ್ರಾಚ್ಯುಟಿ ಹಾಗೂ ಒಂದು ತಿಂಗಳ ನೋಟಿಸ್ ಅವಧಿಯ ಸಂಬಳವನ್ನು ನೀಡಲಾಗುತ್ತದೆ. ಇನ್ನಷ್ಟು ಸಹಾಯವಾಗಿ, ಎರಡು ತಿಂಗಳ ಸಂಬಳವನ್ನು ಟಾಪ್-ಅಪ್ ರೂಪದಲ್ಲಿ ನೀಡಲಾಗುತ್ತದೆ ಎಂದು ವರದಿ ಹೇಳುತ್ತದೆ. ಆದರೆ, ಸ್ವಯಂಪ್ರೇರಿತವಾಗಿ ಹಾಗೂ ಸೌಹಾರ್ದಯುತವಾಗಿ ರಾಜೀನಾಮೆ ನೀಡುವವರಿಗೆ ಮಾತ್ರ ಈ ಬೇರ್ಪಡಿಕೆ ಪ್ಯಾಕೇಜ್ ಲಭ್ಯವಾಗುತ್ತದೆ ಎಂಬ ಅಂಶವೂ ಗಮನಾರ್ಹವಾಗಿದೆ.&lt;/p&gt;&lt;p&gt;ಇದರ ನಡುವೆ, ಒರಾಕಲ್&zwnj;ನ ಮಾಜಿ ಉದ್ಯೋಗಿ ಮೇರುಗು ಶ್ರೀಧರ್ ಅವರು, ಕಂಪನಿಯಲ್ಲಿ ಜಾರಿಗೆ ತಂದಿದ್ದ 16 ಗಂಟೆಗಳ ಕೆಲಸದ ಶಿಫ್ಟ್&zwnj; ವಿರುದ್ಧ ತಾವು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ತಮ್ಮನ್ನು ವಜಾಗೊಳಿಸಲಾಯಿತು ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು ತಮ್ಮ ಸ್ನೇಹಿತರು ಮತ್ತು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಸಂಪರ್ಕಿಸಿದಾಗ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹಲವಾರು ಭಾರತೀಯ ಉದ್ಯೋಗಿಗಳು ಸ್ಥಳೀಯ ಕಾನೂನುಗಳ ಕಟ್ಟುನಿಟ್ಟಿನ ಕಾರಣದಿಂದ ಹೆಚ್ಚು ಪರಿಣಾಮಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ಒರಾಕಲ್ ಕಂಪನಿಯ ಈ ಭಾರೀ ಮಟ್ಟದ ಉದ್ಯೋಗ ಕಡಿತವು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೆ ಒಂದು ಚರ್ಚೆಯ ವಿಷಯವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಉದ್ಯೋಗ ಕಡಿತಗಳು ನಡೆಯುವ ಸಾಧ್ಯತೆಗಳ ಬಗ್ಗೆ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/oracle-layoffs-12-000-jobs-cut-in-india-30000-globally-amid-it-slowdown-gdp/articleshow-5edrg28"/>
        </item>
        <item>
            <title><![CDATA[ಭಾರತದಲ್ಲಿ ಸರ್ಕಾರಿ ನೌಕರಿಗಳಿಗೆ ಮಾತ್ರ ಅಲ್ಲ…. ಈ ಕೆಲಸಗಳಿಗೂ ಸಿಗುತ್ತೆ ಹೆಚ್ಚು ಸಂಬಳ]]></title>
            <link>https://kannada.asianetnews.com/webstories/jobs/not-only-government-jobs-these-jobs-also-pays-high-salary-6bkzyxe</link>
            <guid isPermaLink="true">https://kannada.asianetnews.com/webstories/jobs/not-only-government-jobs-these-jobs-also-pays-high-salary-6bkzyxe</guid>
            <pubDate>Fri, 03 Apr 2026 17:05:59 +0530</pubDate>
            <description><![CDATA[&lt;p&gt;ಸರ್ಕಾರಿ ಕೆಲಸ ಅಂದರೆ ಜೀವನದ ಅಂತಿಮ ಯಶಸ್ಸು ಎಂದು ಅಂದುಕೊಳ್ಳುವ ಕಾಲ ಈಗಿಲ್ಲ. ಸರ್ಕಾರಿ ಕೆಲಸಗಳಲ್ಲಿ ಮಾತ್ರ ಹೆಚ್ಚು ವೇತನ ನೀಡುವುದಿಲ್ಲ. ಬದಲಾಗಿ ಈ ಕೆಲಸಗಳಲ್ಲಿ ಸಿಗುತ್ತೆ ಹೆಚ್ಚಿನ ವೇತನ. ನಿಮಗೆ ಸ್ಕಿಲ್ ಇದ್ರೆ, ಕೈತುಂಬಾ ವೇತನ ಗ್ಯಾರಂಟಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jv17k6t0zzfwq7aa32vxhttx,imgname-money-making-1747019471680.jpg" type="image/jpeg" height="390" width="690"/>
            <category>jobs</category>
            <dc:creator>Pavna Das</dc:creator>
            <atom:link href="https://kannada.asianetnews.com/webstories/jobs/not-only-government-jobs-these-jobs-also-pays-high-salary-6bkzyxe"/>
        </item>
        <item>
            <title><![CDATA[ತುಮಕೂರು ಗ್ರಾಮ ಆಡಳಿತ ಅಧಿಕಾರಿ (VAO) ಕರ್ತವ್ಯ ಮುಗಿಸಿ ಮನೆಗೆ ಹೊರಟರು; ಆದ್ರೆ ದಾರಿಯಲ್ಲೇ ಮಸಣ ಸೇರಿದರು!]]></title>
            <link>https://kannada.asianetnews.com/karnataka-districts/tumakuru-village-administrative-officer-poovappa-rathod-dies-in-car-accident-mayasandra-sat/articleshow-bhwvhly</link>
            <guid isPermaLink="true">https://kannada.asianetnews.com/karnataka-districts/tumakuru-village-administrative-officer-poovappa-rathod-dies-in-car-accident-mayasandra-sat/articleshow-bhwvhly</guid>
            <pubDate>Tue, 07 Apr 2026 18:15:20 +0530</pubDate>
            <description><![CDATA[&lt;p&gt;ತುಮಕೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಗ್ರಾಮ ಆಡಳಿತ ಅಧಿಕಾರಿ ಪೂವಪ್ಪ ರಾಥೋಡ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ತಗ್ಗಿಗೆ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkzfkgaa7rsrvx3c7va8zew,imgname-tumakuru-village-accountant-death-1775565786634.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಏ.07): ಜಿ&lt;/strong&gt;ಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಗ್ರಾಮ ಆಡಳಿತ ಅಧಿಕಾರಿಯೊಬ್ಬರು (VAO) ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ತುರುವೇಕೆರೆ ತಾಲೂಕಿನ ಮಾಯಸಂದ್ರ ಸಮೀಪದ ಕುಂದುರನಹಳ್ಳಿ ಪಾಳ್ಯದ ಬಳಿ ನಡೆದಿದ್ದು, ಇಡೀ ಕಂದಾಯ ಇಲಾಖೆಯನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.&lt;/p&gt;&lt;h3&gt;&lt;strong&gt;ಮೃತ ಅಧಿಕಾರಿಯ ವಿವರ:&lt;/strong&gt;&lt;/h3&gt;&lt;p&gt;ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಯನ್ನು 35 ವರ್ಷದ ಪೂವಪ್ಪ ರಾಥೋಡ್ ಎಂದು ಗುರುತಿಸಲಾಗಿದೆ. ಇವರು ಮೂಲತಃ ರಾಯಚೂರು ಜಿಲ್ಲೆಯವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ (Village Administrative Officer) ಸೇವೆ ಸಲ್ಲಿಸುತ್ತಿದ್ದರು. ತಮ್ಮ ಕೆಲಸದ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದ ಪೂವಪ್ಪ ಅವರು ಇಂದು ನಮ್ಮೊಂದಿಗಿಲ್ಲ ಎಂಬ ಸುದ್ದಿ ಕಂದಾಯ ಇಲಾಖೆಯ ಸಿಬ್ಬಂದಿಗೆ ಆಘಾತ ತಂದಿದೆ.&lt;/p&gt;&lt;h3&gt;&lt;strong&gt;ಘಟನೆಯಲ್ಲಿ ನಡೆದದ್ದೇನು?&lt;/strong&gt;&lt;/h3&gt;&lt;p&gt;ಪೂವಪ್ಪ ರಾಥೋಡ್ ಅವರು ನಿನ್ನೆ ಸಂಜೆ ತಮ್ಮ ಕಚೇರಿಯ ಕೆಲಸಗಳನ್ನು ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಕುಂದುರನಹಳ್ಳಿ ಪಾಳ್ಯದ ಬಳಿ ಚಲಿಸುತ್ತಿದ್ದಾಗ ಕಾರು ಹಠಾತ್ತಾಗಿ ಚಾಲಕನ ನಿಯಂತ್ರಣ ತಪ್ಪಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಬದಿಯ ತಗ್ಗಿಗೆ ಉರುಳಿ ಬಿದ್ದಿದೆ. ಕಾರು ಬಿದ್ದ ರಭಸ ಎಷ್ಟಿತ್ತೆಂದರೆ, ಪೂವಪ್ಪ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಘಟನೆಯು ನಿನ್ನೆ ಸಂಜೆ ನಡೆದಿದ್ದರೂ, ಜನಸಂಚಾರ ವಿರಳವಾಗಿದ್ದ ಪ್ರದೇಶವಾದ್ದರಿಂದ ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಭೇಟಿ ಮತ್ತು ತನಿಖೆ:&lt;/strong&gt;&lt;/h2&gt;&lt;p&gt;ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ತುರುವೇಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಪೂವಪ್ಪ ಅವರ ಮೃತದೇಹವನ್ನು ಕಾರಿನಿಂದ ಹೊರತೆಗೆದು, ತುರುವೇಕೆರೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ರಾಯಚೂರಿನಲ್ಲಿರುವ ಅವರ ಕುಟುಂಬಸ್ಥರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಸಂಬಂಧಿಕರು ತುರುವೇಕೆರೆಗೆ ಆಗಮಿಸುತ್ತಿದ್ದಾರೆ.&lt;/p&gt;&lt;p&gt;ಈ ಅಪಘಾತಕ್ಕೆ ಅತಿ ವೇಗ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಸಮರ್ಥ ಅಧಿಕಾರಿಯೊಬ್ಬರು ರಸ್ತೆ ಅಪಘಾತಕ್ಕೆ ಬಲಿಯಾಗಿರುವುದು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ತೀವ್ರ ವಿಷಾದ ಮೂಡಿಸಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/tumakuru-village-administrative-officer-poovappa-rathod-dies-in-car-accident-mayasandra-sat/articleshow-bhwvhly"/>
        </item>
        <item>
            <title><![CDATA[ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಉನ್ನತ ಹುದ್ದೆಗೆ ಅರ್ಜಿ ಆಹ್ವಾನ, 2 ಲಕ್ಷಕ್ಕೂ ಅಧಿಕ ವೇತನ!]]></title>
            <link>https://kannada.asianetnews.com/jobs/new-mangalore-port-authority-recruitment-2026-apply-for-senior-deputy-traffic-manager-posts-gdp/articleshow-cnxrggk</link>
            <guid isPermaLink="true">https://kannada.asianetnews.com/jobs/new-mangalore-port-authority-recruitment-2026-apply-for-senior-deputy-traffic-manager-posts-gdp/articleshow-cnxrggk</guid>
            <pubDate>Thu, 02 Apr 2026 14:40:25 +0530</pubDate>
            <description><![CDATA[ನವ ಮಂಗಳೂರು ಬಂದರು ಪ್ರಾಧಿಕಾರವು (NMPA) ಸೀನಿಯರ್ ಡೆಪ್ಯೂಟಿ ಟ್ರಾಫಿಕ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಿಸಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಈ ಉನ್ನತ ವೇತನದ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ನೇಮಕ ಮಾಡಿಕೊಂಡು ಮಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn6q3tp4ghnb41be8qr8nmxj,imgname-nmpt-1775120804548.jpg" type="image/jpeg" height="390" width="690"/>
            <content:encoded><![CDATA[&lt;p&gt;ಉನ್ನತ ಮಟ್ಟದ ಸರ್ಕಾರಿ ಹುದ್ದೆಯಲ್ಲಿ ಉದ್ಯೋಗ ಪಡೆಯುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ನವ ಮಂಗಳೂರು ಬಂದರು ಪ್ರಾಧಿಕಾರ (New Mangalore Port Authority - NMPA) ಇದೀಗ ಸೀನಿಯರ್ ಡೆಪ್ಯೂಟಿ ಟ್ರಾಫಿಕ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;ಹುದ್ದೆಯ ಪ್ರಮುಖ ಮಾಹಿತಿ&lt;/h2&gt;&lt;p&gt;ಸಂಸ್ಥೆಯ ಹೆಸರು: ನವ ಮಂಗಳೂರು ಬಂದರು ಪ್ರಾಧಿಕಾರ (NMPA)&lt;/p&gt;&lt;p&gt;ಹುದ್ದೆಯ ಹೆಸರು: ಸೀನಿಯರ್ ಡೆಪ್ಯೂಟಿ ಟ್ರಾಫಿಕ್ ಮ್ಯಾನೇಜರ್&lt;/p&gt;&lt;p&gt;ಒಟ್ಟು ಹುದ್ದೆಗಳು: ವಿವಿಧ&lt;/p&gt;&lt;p&gt;ಉದ್ಯೋಗ ಸ್ಥಳ: ಮಂಗಳೂರು, ಕರ್ನಾಟಕ&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ&lt;/h2&gt;&lt;p&gt;ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ (Degree) ಪೂರ್ಣಗೊಳಿಸಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.&lt;/p&gt;&lt;h2&gt;ವೇತನ ವಿವರ&lt;/h2&gt;&lt;p&gt;ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹80,000 ರಿಂದ ₹2,20,000 ವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ. ಇದು ಕೇಂದ್ರ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿರುತ್ತದೆ.&lt;/p&gt;&lt;h2&gt;ವಯೋಮಿತಿ&lt;/h2&gt;&lt;p&gt;ಅಭ್ಯರ್ಥಿಗಳ ಗರಿಷ್ಠ ವಯಸ್ಸು ಏಪ್ರಿಲ್ 20, 2026ರಂತೆ 42 ವರ್ಷಗಳು ಆಗಿರಬೇಕು. ವಯೋಮಿತಿಯಲ್ಲಿ ಸರ್ಕಾರದ ನಿಯಮಾನುಸಾರ ಸಡಿಲಿಕೆ ಇರಬಹುದು.&lt;/p&gt;&lt;h2&gt;ಅರ್ಜಿ ಶುಲ್ಕ&lt;/h2&gt;&lt;p&gt;ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ, ಇದು ಅಭ್ಯರ್ಥಿಗಳಿಗೆ ಹೆಚ್ಚುವರಿ ಪ್ರಯೋಜನವಾಗಿದೆ.&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ&lt;/h2&gt;&lt;p&gt;ಅಭ್ಯರ್ಥಿಗಳನ್ನು ಸಂದರ್ಶನ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳನ್ನು ಶಾರ್ಟ್&zwnj;ಲಿಸ್ಟ್ ಮಾಡಿ ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ.&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;h3&gt;ಅಧಿಕೃತ ವೆಬ್&zwnj;ಸೈಟ್ ಭೇಟಿ:&lt;/h3&gt;&lt;p&gt;ಮೊದಲು ನವ ಮಂಗಳೂರು ಬಂದರು ಪ್ರಾಧಿಕಾರದ ಅಧಿಕೃತ ವೆಬ್&zwnj;ಸೈಟ್ https://newmangaloreport.gov.in/ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.&lt;/p&gt;&lt;h3&gt;ಆನ್&zwnj;ಲೈನ್ ಅರ್ಜಿ ಸಲ್ಲಿಕೆ:&lt;/h3&gt;&lt;p&gt;ಅರ್ಜಿಯನ್ನು ಆನ್&zwnj;ಲೈನ್ ಮೂಲಕ ಭರ್ತಿ ಮಾಡಿ ಏಪ್ರಿಲ್ 19, 2026ರೊಳಗೆ ಸಲ್ಲಿಸಬೇಕು.&lt;/p&gt;&lt;h3&gt;ಇಮೇಲ್ ಮೂಲಕ ಸಲ್ಲಿಕೆ:&lt;/h3&gt;&lt;p&gt;ಭರ್ತಿ ಮಾಡಿದ ಅರ್ಜಿಯ ಸಾಫ್ಟ್ ಕಾಪಿಯನ್ನು secretary@nmpt.gov.in&lt;/p&gt;&lt;p&gt;ಗೆ ಇಮೇಲ್ ಮೂಲಕ ಕಳುಹಿಸಬೇಕು.&lt;/p&gt;&lt;h3&gt;ಹಾರ್ಡ್ ಕಾಪಿ ಕಳುಹಿಕೆ:&lt;/h3&gt;&lt;p&gt;ಅರ್ಜಿಯ ಮುದ್ರಿತ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:&lt;/p&gt;&lt;h2&gt;ವಿಳಾಸ:&lt;/h2&gt;&lt;p&gt;ಕಾರ್ಯದರ್ಶಿ,&lt;/p&gt;&lt;p&gt;ನವ ಮಂಗಳೂರು ಬಂದರು ಪ್ರಾಧಿಕಾರ,&lt;/p&gt;&lt;p&gt;ಸಾಮಾನ್ಯ ಆಡಳಿತ ಇಲಾಖೆ, ಆಡಳಿತ ಕಟ್ಟಡ,&lt;/p&gt;&lt;p&gt;ಪಣಂಬೂರು, ಮಂಗಳೂರು &ndash; 575010&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಮಾರ್ಚ್ 20, 2026&lt;/p&gt;&lt;p&gt;ಆನ್&zwnj;ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 19, 2026&lt;/p&gt;&lt;p&gt;ಹಾರ್ಡ್ ಕಾಪಿ ತಲುಪುವ ಕೊನೆಯ ದಿನಾಂಕ: ಮೇ 4, 2026&lt;/p&gt;&lt;p&gt;ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಉತ್ತಮ ವೇತನದೊಂದಿಗೆ ಪ್ರತಿಷ್ಠಿತ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಇದು ಅಪರೂಪದ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/new-mangalore-port-authority-recruitment-2026-apply-for-senior-deputy-traffic-manager-posts-gdp/articleshow-cnxrggk"/>
        </item>
        <item>
            <title><![CDATA[ಚಿತ್ರದುರ್ಗ PSI ನೇತ್ರಾವತಿ ದರ್ಪ: ಪೊಲೀಸ್ ಸಿಬ್ಬಂದಿಗೆ ರಣಬಿಸಿಲಲ್ಲಿ ಬಂದೂಕು ಹೊತ್ತು ನಿಲ್ಲುವ ಶಿಕ್ಷೆ!]]></title>
            <link>https://kannada.asianetnews.com/gallery/state/karnataka-police-chitradurga-chikkajajuru-psi-netravathi-punishes-12-police-staff-in-sunlight-sat-d6s5l92</link>
            <guid isPermaLink="true">https://kannada.asianetnews.com/gallery/state/karnataka-police-chitradurga-chikkajajuru-psi-netravathi-punishes-12-police-staff-in-sunlight-sat-d6s5l92</guid>
            <pubDate>Tue, 07 Apr 2026 17:48:00 +0530</pubDate>
            <description><![CDATA[ಚಿತ್ರದುರ್ಗದ ಚಿಕ್ಕಜಾಜೂರು ಠಾಣೆಯ ಪಿಎಸ್&zwnj;ಐ ನೇತ್ರಾವತಿ, ಕರ್ತವ್ಯ ಲೋಪದ ಆರೋಪದ ಮೇಲೆ 12 ಸಿಬ್ಬಂದಿಗೆ ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದಾರೆ. ಈ ಅಮಾನವೀಯ ಶಿಕ್ಷೆಯಿಂದಾಗಿ ಕೆಲ ಸಿಬ್ಬಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಯ ಬಗ್ಗೆ ಎಸ್ಪಿ ತನಿಖೆಗೆ ಆದೇಶಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knkxgcknj27d34qbq55brsme,imgname-chitradurga-police-news--1--1775563715189.jpg" type="image/jpeg" height="390" width="690"/>
            <content:encoded><![CDATA[ಚಿತ್ರದುರ್ಗದ ಚಿಕ್ಕಜಾಜೂರು ಠಾಣೆಯ ಪಿಎಸ್&zwnj;ಐ ನೇತ್ರಾವತಿ, ಕರ್ತವ್ಯ ಲೋಪದ ಆರೋಪದ ಮೇಲೆ 12 ಸಿಬ್ಬಂದಿಗೆ ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದಾರೆ. ಈ ಅಮಾನವೀಯ ಶಿಕ್ಷೆಯಿಂದಾಗಿ ಕೆಲ ಸಿಬ್ಬಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಯ ಬಗ್ಗೆ ಎಸ್ಪಿ ತನಿಖೆಗೆ ಆದೇಶಿಸಿದ್ದಾರೆ.&lt;img&gt;&lt;p&gt;&lt;strong&gt;ಚಿತ್ರದುರ್ಗ (ಏ.07): ಶಿ&lt;/strong&gt;ಸ್ತಿನ ಇಲಾಖೆ ಎಂದೇ ಕರೆಯಲ್ಪಡುವ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಶಿಕ್ಷೆ ನೀಡುವುದು ಹೊಸದೇನಲ್ಲ. ಆದರೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪಿಎಸ್&zwnj;ಐ ನೇತ್ರಾವತಿ ಅವರು ತಮ್ಮದೇ ಸಿಬ್ಬಂದಿಗೆ ನೀಡಿರುವ ಶಿಕ್ಷೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕರ್ತವ್ಯ ಲೋಪದ ಹೆಸರಿನಲ್ಲಿ ಬರೋಬ್ಬರಿ 12 ಮಂದಿ ಸಿಬ್ಬಂದಿಯನ್ನು ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಲಾಗಿದ್ದು, ಇಲಾಖೆಯ ಒಳಗಿನ ಶಿಸ್ತು ಮತ್ತು ಮಾನವೀಯತೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ.&lt;/p&gt;&lt;img&gt;&lt;p&gt;ಚಿಕ್ಕಜಾಜೂರು ಠಾಣೆಯ ಪಿಎಸ್&zwnj;ಐ ನೇತ್ರಾವತಿ ಅವರು ತಮ್ಮ ಠಾಣೆಯ ಎಎಸ್&zwnj;ಐ (ASI) ಸೇರಿದಂತೆ ಒಟ್ಟು 12 ಮಂದಿ ಸಿಬ್ಬಂದಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಅಂದರೆ ಸೂರ್ಯನ ಶಾಖ ಅತಿ ಹೆಚ್ಚಿರುವ ಸಮಯದಲ್ಲಿ, ಸಿಬ್ಬಂದಿಯನ್ನು ಠಾಣೆಯ ಹೊರಗೆ ನಿಲ್ಲಿಸಲಾಗಿದೆ. ಕೇವಲ ನಿಲ್ಲಿಸುವುದು ಮಾತ್ರವಲ್ಲದೆ, ಹೆಗಲ ಮೇಲೆ ಭಾರವಾದ ಬಂದೂಕುಗಳನ್ನು (Rifles) ಹೊತ್ತು ನಿಲ್ಲುವಂತೆ ಆದೇಶಿಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ಅಗ್ನಿ ಉಗುಳುವ ಬಿಸಿಲಿನಲ್ಲಿ ಸಿಬ್ಬಂದಿ ಈ ಶಿಕ್ಷೆಯನ್ನು ಅನುಭವಿಸಿದ್ದಾರೆ.&lt;/p&gt;&lt;img&gt;&lt;p&gt;ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸ್ತುತ ತಾಪಮಾನ ಏರಿಕೆಯಾಗಿದ್ದು, ಜನಸಾಮಾನ್ಯರೇ ಹೊರಬರಲು ಭಯಪಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ 3 ಗಂಟೆಗಳ ಕಾಲ ಬಂದೂಕು ಹೊತ್ತು ಬಿಸಿಲಿನಲ್ಲಿ ನಿಂತ ಪರಿಣಾಮ, ಶಿಕ್ಷೆ ಅನುಭವಿಸಿದ ಸಿಬ್ಬಂದಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಕೆಲವರು ತೀವ್ರ ಸುಸ್ತಿನಿಂದ ಬಳಲಿದರೆ, ಇನ್ನು ಕೆಲವರಿಗೆ ತಲೆಸುತ್ತು ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ಕೆಲ ಸಿಬ್ಬಂದಿಯನ್ನು ತಕ್ಷಣವೇ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆಯಿಂದ ಪೊಲೀಸ್ ಸಿಬ್ಬಂದಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಪಿಎಸ್&zwnj;ಐ ಅವರ ಈ ನಡೆ 'ದರ್ಪ'ದ ಪರಮಾವಧಿ ಎಂದು ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಮಾಡಿದ್ದರೆ ಇಲಾಖಾ ತನಿಖೆ ನಡೆಸಿ ನೋಟಿಸ್ ನೀಡಬಹುದಿತ್ತು ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳಬಹುದಿತ್ತು. ಅದನ್ನು ಬಿಟ್ಟು ಇಂತಹ ಅಮಾನವೀಯ ಶಿಕ್ಷೆ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್ಪಿ ಗಿರೀಶ್ ಗೌಡ ಅವರಿಗೆ ಸೂಚನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮುಖ್ಯ ನಿಜ, ಆದರೆ ಶಿಕ್ಷೆಯ ಹೆಸರಿನಲ್ಲಿ ಸಿಬ್ಬಂದಿಯ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪಿಎಸ್&zwnj;ಐ ನೇತ್ರಾವತಿ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲೂ ಟೀಕೆ ವ್ಯಕ್ತವಾಗುತ್ತಿದ್ದು, ತನಿಖಾ ವರದಿಯ ನಂತರ ಅವರ ವಿರುದ್ಧ ಯಾವ ರೀತಿಯ ಕ್ರಮ ಜರುಗಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ, ರಕ್ಷಣೆ ನೀಡಬೇಕಾದ ಪೊಲೀಸರೇ ತಮ್ಮ ಅಧಿಕಾರಿಯ ದರ್ಪಕ್ಕೆ ಬಲಿಯಾಗಿ ಆಸ್ಪತ್ರೆ ಸೇರಿರುವುದು ಇಲಾಖೆಗೆ ಮುಜುಗರ ತಂದಿಟ್ಟಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-police-chitradurga-chikkajajuru-psi-netravathi-punishes-12-police-staff-in-sunlight-sat-d6s5l92"/>
        </item>
        <item>
            <title><![CDATA[ಕೆಲಸ ಹೋದ್ರೂ ಕೆಡದ ನೆಮ್ಮದಿ: ಬೆಂಗಳೂರಿನ ಒರಾಕಲ್ ಟೆಕ್ಕಿಯ 'ಓಲ್ಡ್ ಸ್ಕೂಲ್' ಸೇವಿಂಗ್ಸ್ ಪ್ಲ್ಯಾನ್ ಈಗ ವೈರಲ್!]]></title>
            <link>https://kannada.asianetnews.com/business/oracle-techie-layoff-savings-plan-viral-financial-planning-tips-kannada-san/articleshow-edvpr5x</link>
            <guid isPermaLink="true">https://kannada.asianetnews.com/business/oracle-techie-layoff-savings-plan-viral-financial-planning-tips-kannada-san/articleshow-edvpr5x</guid>
            <pubDate>Mon, 06 Apr 2026 16:29:22 +0530</pubDate>
            <description><![CDATA[&lt;p&gt;ಬೆಂಗಳೂರಿನ ಒರಾಕಲ್ ಕಂಪನಿಯಿಂದ ಲೇ-ಆಫ್ ಆದ 14 ವರ್ಷಗಳ ಅನುಭವಿ ಉದ್ಯೋಗಿಯೊಬ್ಬರು, ಆತಂಕಪಡದೆ ತಮ್ಮ ಊರಿಗೆ ಮರಳಿದ್ದಾರೆ. ತಮ್ಮ ಉತ್ತಮ ಆರ್ಥಿಕ ಯೋಜನೆಯಿಂದಾಗಿ, ಅಂಚೆ ಕಚೇರಿ ಮತ್ತು ಬ್ಯಾಂಕ್ ಎಫ್&zwnj;ಡಿಗಳಿಂದ ತಿಂಗಳಿಗೆ ₹43,000 ನಿಷ್ಕ್ರಿಯ ಆದಾಯ ಗಳಿಸುತ್ತಿದ್ದು, ಸಾಲಮುಕ್ತರಾಗಿ ಹೊಸ ಜೀವನ ಆರಂಭಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn3fvf377pqxhyqp9vbf159s,imgname-oracle-layoffs-30000-employees-india-impact-morning-email-job-cuts-ai-restructuring-global-4-1775012527207.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭುವನೇಶ್ವರ (ಏ.6):&lt;/strong&gt; ಐಟಿ ಕ್ಷೇತ್ರದಲ್ಲಿ ಕೆಲಸ ಕಳೆದುಕೊಳ್ಳುವುದು ಎಂದರೆ ಬೆಟ್ಟವೇ ಕುಸಿದು ಬಿದ್ದಂತಾಗುವ ಇಂದಿನ ಕಾಲದಲ್ಲಿ, ಬೆಂಗಳೂರಿನಲ್ಲಿದ್ದ ಒರಾಕಲ್ ಉದ್ಯೋಗಿಯೊಬ್ಬರು ಕೆಲಸ ಹೋದ ತಕ್ಷಣವೇ ತೋರಿದ ಸಂಯಮ ಮತ್ತು ಅವರ ಆರ್ಥಿಕ ಯೋಜನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. 14 ವರ್ಷಗಳ ಅನುಭವವಿದ್ದರೂ ಲೇ-ಆಫ್&zwnj;ಗೆ ಬಲಿಯಾದ ಈ ವ್ಯಕ್ತಿ, ಯಾವುದೇ ಆತಂಕವಿಲ್ಲದೆ ತಮ್ಮ ತವರು ಮನೆ ಒಡಿಶಾದ ಭುವನೇಶ್ವರಕ್ಕೆ ಮರಳಿದ್ದಾರೆ. ಇವರ ಈ ಸ್ಫೂರ್ತಿದಾಯಕ ಕಥೆಯನ್ನು ಅವರ ಗೆಳೆಯ ನಾಯಕ್ ಸತ್ಯ ಎಂಬುವವರು 'X' (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಸತ್ಯ ಅವರ ಪ್ರಕಾರ, &quot;ಯಾವುದೇ ಪ್ಯಾನಿಕ್ ಇಲ್ಲ, ಒತ್ತಡವಿಲ್ಲ. ಅವರು ನೇರವಾಗಿ ತಮ್ಮ ಅವರ ಊರು ಭುವನೇಶ್ವರಕ್ಕೆ ಮರಳಿದರು.&quot; ಇಂತಹ ಶಾಂತ ನಿರ್ಧಾರಕ್ಕೆ ಕಾರಣವಾಗಿದ್ದು ವರ್ಷಗಳಿಂದ ಅವರು ಮಾಡುತ್ತಾ ಬಂದಿದ್ದ ಸಾಂಪ್ರದಾಯಿಕ ಉಳಿತಾಯ ಕ್ರಮ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಹೇಗಿತ್ತು ವ್ಯಕ್ತಿಯ ಹೂಡಿಕೆ?&lt;/strong&gt;&lt;/h2&gt;&lt;p&gt;ಅಂಚೆ ಕಚೇರಿಯಲ್ಲಿ ಅನೇಕ ಪೋಸ್ಟಲ್ ಫಿಕ್ಸೆಡ್ ಡೆಪಾಸಿಟ್ (FD) ಗಳಲ್ಲಿ ಹೂಡಿಕೆ ಮಾಡಿದ್ದರು. ಪೋಷಕರೊಂದಿಗೆ ಜಂಟಿ ಖಾತೆಯಲ್ಲಿ 15 ಲಕ್ಷ ರೂ. ಮತ್ತು ಪತ್ನಿಯೊಂದಿಗೆ 15 ಲಕ್ಷ ರೂ.ಗಳ ಎರಡು ಜಂಟಿ ಖಾತೆಗಳನ್ನು ಹೊಂದಿದ್ದರು. ಇದರ ಜೊತೆಗೆ ಮಗುವಿನ ಹೆಸರಿನಲ್ಲಿಯೂ ಠೇವಣಿ ಇರಿಸಿದ್ದರು. ಈ ಎಲ್ಲಾ ಅಂಚೆ ಉಳಿತಾಯಗಳಿಂದ ಅವರಿಗೆ ಮಾಸಿಕ ಸುಮಾರು 28,000 ರೂಪಾಯಿ ಬಡ್ಡಿ ಬರುತ್ತಿದೆ. ಭಾರತೀಯ ಬ್ಯಾಂಕ್&zwnj;ಗಳಲ್ಲಿ ಸುಮಾರು 30 ಲಕ್ಷ ರೂ.ಗಳ ಫಿಕ್ಸೆಡ್ ಡೆಪಾಸಿಟ್ ಹೊಂದಿದ್ದು, ಅದರಿಂದ ತಿಂಗಳಿಗೆ 15,000 ರೂಪಾಯಿ ಆದಾಯ ಬರುತ್ತಿದೆ.&lt;/p&gt;&lt;p&gt;ಅಂದರೆ, ಕೆಲಸವಿಲ್ಲದಿದ್ದರೂ ಪ್ರತಿ ತಿಂಗಳು ಸುಮಾರು 43,000 ರೂಪಾಯಿ ನಿರಂತರ 'ಪ್ಯಾಸಿವ್ ಇನ್ಕಮ್' (Passive Income) ಬರುವಂತೆ ಅವರು ಮೊದಲೇ ಯೋಜನೆ ರೂಪಿಸಿದ್ದರು.&lt;/p&gt;&lt;h2&gt;&lt;strong&gt;ಈಗಿನ ಜೀವನ ಶೈಲಿ&lt;/strong&gt;&lt;/h2&gt;&lt;p&gt;ಭುವನೇಶ್ವರಕ್ಕೆ ಮರಳಿದ ಅವರು ಈಗ ತಮ್ಮ ಪೋಷಕರ ಜೊತೆ ವಾಸಿಸುತ್ತಿದ್ದಾರೆ. ಯಾವುದೇ ಇಎಂಐ (EMI) ಅಥವಾ ಸಾಲದ ಹೊರೆ ಇಲ್ಲದ ಕಾರಣ, ಅವರು ಈಗ ತಮ್ಮ ಬಿಡುವಿನ ವೇಳೆಯಲ್ಲಿ 'ಉಬರ್' (Uber) ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕುಟುಂಬದ ಬೆಂಬಲದೊಂದಿಗೆ ಸಣ್ಣ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆಯೂ ಅವರು ಈಗ ಯೋಚಿಸುತ್ತಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಬರೆದಿರುವ ಸತ್ಯ ಅವರು, &quot;ಇದು ಸಂಪೂರ್ಣ 'ಓಲ್ಡ್ ಸ್ಕೂಲ್' ಸ್ಟೈಲ್. ಅವರು ಯಾವುದೇ ಹೊಸ ಟ್ರೆಂಡ್&zwnj;ಗಳ ಹಿಂದೆ ಬೀಳದೆ ಸಾಂಪ್ರದಾಯಿಕ ಉಳಿತಾಯವನ್ನು ನಂಬಿದ್ದರು. ಹಾಗಾಗಿ ನೀವು ಮುಂಚಿತವಾಗಿಯೇ ಯೋಜನೆ ರೂಪಿಸಿ, ಆಗ ಸಂಕಷ್ಟದ ಸಮಯದಲ್ಲಿ ನೀವು ಎಂದಿಗೂ ತಡಕಾಡಬೇಕಾಗಿಲ್ಲ,&quot; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;One of my close friends was fired from Oracle Bangalore.No panic, no stress, and no crying on social media.&amp;nbsp;He straight away came back to his hometown Bhubaneswar&amp;nbsp;He had postal fixed deposits in two joint accounts ₹15 lakh each. One with his parents, and the other in his&hellip;&lt;/p&gt;&lt;p&gt;&mdash; Nayak Satya (@NayakSatya_SG) April 5, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/business/oracle-techie-layoff-savings-plan-viral-financial-planning-tips-kannada-san/articleshow-edvpr5x"/>
        </item>
        <item>
            <title><![CDATA[ಏಪ್ರಿಲ್ 2026ರಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ: ಇಲ್ಲಿದೆ 11 ರಜಾ ದಿನಗಳ ಸಂಪೂರ್ಣ ಪಟ್ಟಿ!]]></title>
            <link>https://kannada.asianetnews.com/india-news/april-2026-bank-holidays-list-india-ambedkar-jayanti-good-friday-sat/articleshow-m1ut9iw</link>
            <guid isPermaLink="true">https://kannada.asianetnews.com/india-news/april-2026-bank-holidays-list-india-ambedkar-jayanti-good-friday-sat/articleshow-m1ut9iw</guid>
            <pubDate>Thu, 02 Apr 2026 16:37:18 +0530</pubDate>
            <description><![CDATA[&lt;p&gt;2026ರ ಏಪ್ರಿಲ್ ತಿಂಗಳಲ್ಲಿ ಹೊಸ ಆರ್ಥಿಕ ವರ್ಷದ ಆರಂಭ, ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡೇ ಸೇರಿದಂತೆ ಸಾಲು ಸಾಲು ಹಬ್ಬಗಳು ಮತ್ತು ವಾರಾಂತ್ಯದ ರಜೆಗಳಿಂದಾಗಿ ಬ್ಯಾಂಕ್&zwnj;ಗಳು ಹಲವು ದಿನಗಳ ಕಾಲ ಮುಚ್ಚಲಿವೆ. ಗ್ರಾಹಕರು ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳುವುದು ಉತ್ತಮ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k139mhbzjbpxamnhrq868j63,imgname-bank-holidays-1753531172223.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.02): ನೀ&lt;/strong&gt;ವು ಬ್ಯಾಂಕ್&zwnj;ಗೆ ಸಂಬಂಧಿಸಿದ ಯಾವುದಾದರೂ ಪ್ರಮುಖ ಕೆಲಸಗಳನ್ನು ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿಯನ್ನು ನೀವು ಗಮನಿಸಲೇಬೇಕು. 2026ರ ಏಪ್ರಿಲ್ ತಿಂಗಳು ಬ್ಯಾಂಕಿಂಗ್ ವ್ಯವಹಾರಗಳಿಗೆ ಸಾಕಷ್ಟು ಸವಾಲಾಗಲಿದೆ. ಹೊಸ ಆರ್ಥಿಕ ವರ್ಷದ ಆರಂಭದ ಜೊತೆಗೆ ಸಾಲು ಸಾಲು ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಬರುವುದರಿಂದ ಏಪ್ರಿಲ್&zwnj;ನಲ್ಲಿ ಬ್ಯಾಂಕ್&zwnj;ಗಳು ಹಲವು ದಿನಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ.&lt;/p&gt;&lt;h3&gt;&lt;strong&gt;ವಾರ್ಷಿಕ ಲೆಕ್ಕಪತ್ರ ಮುಕ್ತಾಯ ಮತ್ತು ಹಬ್ಬಗಳ ಸರಣಿ:&lt;/strong&gt;&lt;/h3&gt;&lt;p&gt;ಏಪ್ರಿಲ್ ತಿಂಗಳ ಆರಂಭವೇ ಬ್ಯಾಂಕ್ ರಜೆಯೊಂದಿಗೆ ಶುರುವಾಗುತ್ತದೆ. ಏಪ್ರಿಲ್ 1ರಂದು ಬ್ಯಾಂಕುಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯ (Annual Closing of Accounts) ಇರುವುದರಿಂದ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ. ಇದಾದ ಬೆನ್ನಲ್ಲೇ ಏಪ್ರಿಲ್ 3ರಂದು 'ಗುಡ್ ಫ್ರೈಡೇ' (Good Friday) ಅಂಗವಾಗಿ ದೇಶಾದ್ಯಂತ ರಜೆ ಇರಲಿದೆ.&lt;/p&gt;&lt;h2&gt;&lt;strong&gt;ಅಂಬೇಡ್ಕರ್ ಜಯಂತಿ ಮತ್ತು ಪ್ರಾದೇಶಿಕ ಹಬ್ಬಗಳು:&lt;/strong&gt;&lt;/h2&gt;&lt;p&gt;ಏಪ್ರಿಲ್ ತಿಂಗಳ ಅತ್ಯಂತ ಪ್ರಮುಖ ರಜಾದಿನವೆಂದರೆ ಅದು ಏಪ್ರಿಲ್ 14. ಅಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಪ್ರಯುಕ್ತ ದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿ ಬ್ಯಾಂಕ್&zwnj;ಗಳು ಮುಚ್ಚಿರುತ್ತವೆ. ಇದೇ ಅವಧಿಯಲ್ಲಿ ಬೈಸಾಖಿ, ತಮಿಳು ಹೊಸ ವರ್ಷ, ವಿಷು ಮತ್ತು ಬೋಹಾಗ್ ಬಿಹು ಮುಂತಾದ ಪ್ರಾದೇಶಿಕ ಹಬ್ಬಗಳು ಬರುವುದರಿಂದ ಸತತವಾಗಿ ಬ್ಯಾಂಕ್&zwnj;ಗಳಿಗೆ ರಜೆ ಇರಲಿದೆ.&lt;/p&gt;&lt;h2&gt;&lt;strong&gt;ಏಪ್ರಿಲ್ 2026ರ ಪ್ರಮುಖ ರಜಾದಿನಗಳ ಪಟ್ಟಿ:&lt;/strong&gt;&lt;/h2&gt;&lt;p&gt;&lt;strong&gt;ಏಪ್ರಿಲ್ 1: &lt;/strong&gt;ಬ್ಯಾಂಕ್&zwnj;ಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯ (ಗ್ರಾಹಕರಿಗೆ ಸೇವೆಯಿಲ್ಲ).&lt;/p&gt;&lt;p&gt;&lt;strong&gt;ಏಪ್ರಿಲ್ 3: &lt;/strong&gt;ಗುಡ್ ಫ್ರೈಡೇ.&lt;/p&gt;&lt;p&gt;&lt;strong&gt;ಏಪ್ರಿಲ್ 5:&lt;/strong&gt; ಭಾನುವಾರ (ಸಾಮಾನ್ಯ ರಜೆ).&lt;/p&gt;&lt;p&gt;&lt;strong&gt;ಏಪ್ರಿಲ್ 11:&lt;/strong&gt; ಎರಡನೇ ಶನಿವಾರ.&lt;/p&gt;&lt;p&gt;&lt;strong&gt;ಏಪ್ರಿಲ್ 12:&lt;/strong&gt; ಭಾನುವಾರ.&lt;/p&gt;&lt;p&gt;&lt;strong&gt;ಏಪ್ರಿಲ್ 14:&lt;/strong&gt; ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ / ತಮಿಳು ಹೊಸ ವರ್ಷ / ವಿಷು.&lt;/p&gt;&lt;p&gt;&lt;strong&gt;ಏಪ್ರಿಲ್ 15:&lt;/strong&gt; ಬೋಹಾಗ್ ಬಿಹೂ / ಹಿಮಾಚಲ ದಿನ (ಕೆಲವು ರಾಜ್ಯಗಳಲ್ಲಿ).&lt;/p&gt;&lt;p&gt;&lt;strong&gt;ಏಪ್ರಿಲ್ 16:&lt;/strong&gt; ಬೆಂಗಾಲಿ ಹೊಸ ವರ್ಷ (ಪಶ್ಚಿಮ ಬಂಗಾಳದಲ್ಲಿ).&lt;/p&gt;&lt;p&gt;&lt;strong&gt;ಏಪ್ರಿಲ್ 19:&lt;/strong&gt; ಭಾನುವಾರ.&lt;/p&gt;&lt;p&gt;&lt;strong&gt;ಏಪ್ರಿಲ್ 25: &lt;/strong&gt;ನಾಲ್ಕನೇ ಶನಿವಾರ.&lt;/p&gt;&lt;p&gt;&lt;strong&gt;ಏಪ್ರಿಲ್ 26&lt;/strong&gt;: ಭಾನುವಾರ.&lt;/p&gt;&lt;h2&gt;&lt;strong&gt;ಗ್ರಾಹಕರಿಗೆ ಕಿವಿಮಾತು:&lt;/strong&gt;&lt;/h2&gt;&lt;p&gt;ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಹೀಗಾಗಿ ನಿಮ್ಮ ಸ್ಥಳೀಯ ಶಾಖೆಯ ರಜೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ಸಹ, ಆನ್&zwnj;ಲೈನ್ ಬ್ಯಾಂಕಿಂಗ್ (Online Banking), ಯುಪಿಐ (UPI) ವರ್ಗಾವಣೆಗಳು ಮತ್ತು ಎಟಿಎಂ (ATM) ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ನಗದು ಹಿಂಪಡೆಯುವಿಕೆ ಅಥವಾ ತುರ್ತು ಹಣ ವರ್ಗಾವಣೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಆದರೆ ಚೆಕ್ ಕ್ಲಿಯರೆನ್ಸ್ ಅಥವಾ ಡಿಡಿ (DD) ಪಡೆಯುವಂತಹ ಕೆಲಸಗಳಿದ್ದರೆ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳಿ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/april-2026-bank-holidays-list-india-ambedkar-jayanti-good-friday-sat/articleshow-m1ut9iw"/>
        </item>
        <item>
            <title><![CDATA[ಡಿಗ್ರಿ ಇಲ್ಲದಿದ್ದರೂ BMW ಕಂಪನಿಯಲ್ಲಿ ಕೆಲಸ! 19ರ ಯುವತಿಯ ಸಾಧನೆ ನೋಡಿ ಬೆರಗಾದ ನೆಟ್ಟಿಗರು]]></title>
            <link>https://kannada.asianetnews.com/private-jobs/19-year-old-gauri-m-lands-bmw-job-without-degree-personal-branding-viral-san/articleshow-oknl09u</link>
            <guid isPermaLink="true">https://kannada.asianetnews.com/private-jobs/19-year-old-gauri-m-lands-bmw-job-without-degree-personal-branding-viral-san/articleshow-oknl09u</guid>
            <pubDate>Wed, 08 Apr 2026 15:42:32 +0530</pubDate>
            <description><![CDATA[&lt;p&gt;19 ವರ್ಷದ ಗೌರಿ ಎಂ, ಯಾವುದೇ ಪದವಿ ಇಲ್ಲದಿದ್ದರೂ ತನ್ನ ಬಲವಾದ ಪರ್ಸನಲ್ ಬ್ರ್ಯಾಂಡಿಂಗ್ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವದಿಂದ ವಿಶ್ವಪ್ರಸಿದ್ಧ BMW ಕಂಪನಿಯಲ್ಲಿ ಮಾರ್ಕೆಟಿಂಗ್ ಉದ್ಯೋಗವನ್ನು ಪಡೆದುಕೊಂಡಿದ್ದಾಳೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knp8e0ad5dxkd70me4gtjmnq,imgname-bmw-job-for-19-year-old-girl-1775642280269.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.8):&lt;/strong&gt; ಸಾಂಪ್ರದಾಯಿಕ ಶಿಕ್ಷಣ ಅಥವಾ ಪದವಿಗಿಂತ ಕೌಶಲ ಮತ್ತು ವೈಯಕ್ತಿಕ ಬ್ರ್ಯಾಂಡಿಂಗ್ ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಗೌರಿ ಎಂ ಎಂಬ 19 ವರ್ಷದ ಯುವತಿ, ಪದವಿ ಇಲ್ಲದಿದ್ದರೂ ವಿಶ್ವದ ಪ್ರಮುಖ ಕಾರು ತಯಾರಿಕಾ ಸಂಸ್ಥೆಯಾದ BMW ನಲ್ಲಿ ಪೂರ್ಣಾವಧಿಯ 'ಪರ್ಸನಲ್ ಮಾರ್ಕೆಟಿಂಗ್' ಜಾಬ್&zwnj; ಗಿಟ್ಟಿಸಿಕೊಂಡಿದ್ದಾಳೆ. ಈ ಕುರಿತಾದ ಲಿಂಕ್ಡ್&zwnj;ಇನ್ (LinkedIn) ಪೋಸ್ಟ್ ಈಗ ವೈರಲ್ ಆಗಿದ್ದು, ಕೌಶಲ vs ಶಿಕ್ಷಣದ ನಡುವಿನ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.&lt;/p&gt;&lt;h2&gt;&lt;strong&gt;ಅನುಭವವಿಲ್ಲದಿದ್ದರೂ ಸಿಕ್ಕಿತು ಅವಕಾಶ!&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಬಿಎಂಡಬ್ಲ್ಯೂ ಅಂತಹ ಕಂಪನಿಗಳಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಪಡೆಯಲು ಕನಿಷ್ಠ 5 ವರ್ಷಗಳ ಅನುಭವದ ಅಗತ್ಯವಿರುತ್ತದೆ. ಆದರೆ, ಗೌರಿ ಎಂ ತನ್ನ ಬಲವಾದ ಡಿಜಿಟಲ್ ರೆಕಗ್ನಿಶನ್&zwnj; ಮತ್ತು ಸೋಷಿಯಲ್ ಮೀಡಿಯಾ ಪ್ರಭಾವದ ಮೂಲಕ ಈ ಅವಕಾಶವನ್ನು ಪಡೆದುಕೊಂಡಿದ್ದಾಳೆ. ಲಿಂಕ್ಡ್&zwnj;ಇನ್&zwnj;ನಲ್ಲಿ 65,000 ಕ್ಕೂ ಹೆಚ್ಚು ಮತ್ತು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ 35,000 ಕ್ಕೂ ಹೆಚ್ಚು ಫಾಲೋವರ್ಸ್&zwnj;ಗಳನ್ನು ಹೊಂದಿರುವ ಗೌರಿ, ತನ್ನದೇ ಆದ ಪ್ರೇಕ್ಷಕ ಬಳಗವನ್ನು ಕಟ್ಟಿಕೊಂಡಿರುವುದು ಈಕೆಯ ಆಯ್ಕೆಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಲಿಂಕ್ಡ್&zwnj;ಇನ್ ಪೋಸ್ಟ್&zwnj;ನಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;&quot;ಆಕೆಯ ಬಳಿ ಯಾವುದೇ ಪದವಿ ಅಥವಾ ದೀರ್ಘಕಾಲದ ಅನುಭವಕ್ಕಿಂತ ಹೆಚ್ಚಿನ ಪರ್ಸನಲ್&zwnj; ಬ್ರ್ಯಾಂಡ್&zwnj; ಇತ್ತು. ನಿಮ್ಮ ಕನಸಿನ ಕೆಲಸವನ್ನು ಪಡೆಯಲು ನಿಮ್ಮ ಲಿಂಕ್ಡ್&zwnj;ಇನ್ ಮತ್ತು ಇನ್&zwnj;ಸ್ಟಾಗ್ರಾಮ್ ಖಾತೆಗಳನ್ನು ಒಂದು ಮಿನಿ ಪ್ರಾಜೆಕ್ಟ್&zwnj;ನಂತೆ ಬಳಸಿಕೊಳ್ಳುವ ಸಮಯ ಬಂದಿದೆ,&quot; ಎಂದು ಅರುಷಿ ಎಂಬುವವರು ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಖುದ್ದು ಆಫರ್ ಲೆಟರ್ ಹಂಚಿಕೊಂಡ ಗೌರಿ&lt;/strong&gt;&lt;/h2&gt;&lt;p&gt;ತನ್ನ ಸಾಧನೆಯ ಬಗ್ಗೆ ಖುಷಿ ಹಂಚಿಕೊಂಡಿರುವ ಗೌರಿ, ಬಿಎಂಡಬ್ಲ್ಯೂನೊಂದಿಗೆ ನಡೆದ ಇಮೇಲ್ ಸಂಭಾಷಣೆಯ ಸ್ಕ್ರೀನ್&zwnj;ಶಾಟ್ ಅನ್ನು ಹಂಚಿಕೊಂಡಿದ್ದಾಳೆ. &quot;ವಿಶ್ವದ ಅತಿದೊಡ್ಡ ಕಾರು ಸಮೂಹವೊಂದರಿಂದ ನನಗೆ ಉದ್ಯೋಗದ ಆಫರ್ ಬಂದಿದೆ. ಇದು ಕೇವಲ ಸಹಯೋಗಕ್ಕಾಗಿ (Collaboration) ಅಲ್ಲ, ಬದಲಿಗೆ ಗಂಭೀರವಾದ ಮಾರ್ಕೆಟಿಂಗ್ ಜಾಬ್&zwnj;ಗಾಗಿ ಬಂದಿರುವ ಆಫರ್. ನಾನು ಕೇವಲ 19 ವರ್ಷದ ಹುಡುಗಿ, ನನ್ನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಏನಾದರೂ ಸಾಧಿಸಲು ಪ್ರಯತ್ನಿಸುತ್ತಿದ್ದೆ. ಹೇಗೋ ಅವರು ನನ್ನನ್ನು ಹುಡುಕಿಕೊಂಡು ಬಂದರು. ಆ ನಂತರ ಸ್ಪೋರ್ಟ್ಸ್ ಬ್ರ್ಯಾಂಡ್ ಸಂಸ್ಥಾಪಕರೊಬ್ಬರು ಸಂಪರ್ಕಿಸಿದರು. ಅಚ್ಚರಿಯೆಂದರೆ ನಾನು ಅರ್ಜಿ ಸಲ್ಲಿಸದಿದ್ದರೂ ಒಂದೇ ವಾರದಲ್ಲಿ ಮೂರು ಉದ್ಯೋಗದ ಆಫರ್&zwnj;ಗಳು ಬಂದವು. ನಾನು ಯಾರಿಗೂ ಇಮೇಲ್ ಮಾಡಿರಲಿಲ್ಲ ಅಥವಾ ಅವಕಾಶಕ್ಕಾಗಿ ಕೇಳಿರಲಿಲ್ಲ,&quot; ಎಂದು ಗೌರಿ ಬರೆದುಕೊಂಡಿದ್ದಾಳೆ.&lt;/p&gt;&lt;h2&gt;&lt;strong&gt;ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;ಗೌರಿಯ ಈ ಪೋಸ್ಟ್ ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. &quot;ಇದು ಅದೃಷ್ಟವಲ್ಲ, ಪರ್ಸನಲ್ ಬ್ರ್ಯಾಂಡಿಂಗ್&zwnj;ನ ಶಕ್ತಿ. ಕಳೆದ ವರ್ಷವಷ್ಟೇ ಗೌರಿ ಟಾಟಾ ಮೋಟಾರ್ಸ್ ಜೊತೆ ಕೆಲಸ ಮಾಡುತ್ತಿದ್ದಾಗ ನಾನು ಅವಳ ಕಂಟೆಂಟ್ ನೋಡಿದ್ದೆ. ಪದವಿ ಇಲ್ಲದಿದ್ದರೂ ಅವಳು ತನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ರೀತಿಗೆ ಇಂದು ಬೆಲೆ ಸಿಕ್ಕಿದೆ,&quot; ಎಂದು ಬಳಕೆದಾರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಆದರೆ, ಈ ಬಗ್ಗೆ ಕೆಲವರು ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣಗಳು ಎಲ್ಲ ಉದ್ಯಮಗಳಿಗೂ ಅನ್ವಯಿಸುವುದಿಲ್ಲ ಮತ್ತು ಪದವಿ ಶಿಕ್ಷಣದ ಪ್ರಾಮುಖ್ಯತೆಯನ್ನು ಕಡೆಗಣಿಸಬಾರದು ಎಂದು ಕೆಲವರು ಎಚ್ಚರಿಸಿದ್ದಾರೆ. ಈ ಕುರಿತು ಅಧಿಕೃತ ಪ್ರತಿಕ್ರಿಯೆಗಾಗಿ ಎನ್&zwnj;ಡಿಟಿವಿ (NDTV) ಸಂಸ್ಥೆಯು ಬಿಎಂಡಬ್ಲ್ಯೂ ಕಂಪನಿಯನ್ನು ಸಂಪರ್ಕಿಸಿದ್ದು, ಅವರಿಂದ ಉತ್ತರ ಬಂದ ನಂತರ ವರದಿಯನ್ನು ಅಪ್&zwnj;ಡೇಟ್ ಮಾಡಲಾಗುವುದು ಎಂದು ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/private-jobs/19-year-old-gauri-m-lands-bmw-job-without-degree-personal-branding-viral-san/articleshow-oknl09u"/>
        </item>
        <item>
            <title><![CDATA[ಮನೆಗೆಲಸದಿಂದ ಏರ್‌ಲೈನ್ಸ್‌ವರೆಗೆ:  21ನೇ ವಯಸ್ಸಿಗೆ ಅಕ್ಷರ ಕಲಿತಾ ಅರ್ಚನಾ ಇಂದು ವಿಮಾನಯಾನ ಸಂಸ್ಥೆ ಉದ್ಯೋಗಿ]]></title>
            <link>https://kannada.asianetnews.com/gallery/women/learned-to-read-write-at-21-housemaid-inspires-many-by-changing-her-job-as-an-airport-staff-oluzyvn</link>
            <guid isPermaLink="true">https://kannada.asianetnews.com/gallery/women/learned-to-read-write-at-21-housemaid-inspires-many-by-changing-her-job-as-an-airport-staff-oluzyvn</guid>
            <pubDate>Tue, 07 Apr 2026 16:57:33 +0530</pubDate>
            <description><![CDATA[&lt;p&gt;&lt;strong&gt;from housemaid to airline staff: &lt;/strong&gt;ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkt0fnyhtempc7y3r595ex8,imgname-inspiring-story--4--1775560048318.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;from housemaid to airline staff: &lt;/strong&gt;ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ.&amp;nbsp;&lt;/p&gt;&lt;img&gt;&lt;p&gt;ಎಲ್ಲರಿಗೂ ಬದುಕು ಒಂದೇ ರೀತಿಯ ಅವಕಾಶಗಳನ್ನು ನೀಡುವುದಿಲ್ಲ, ಕೆಲವರಿಗೆ ಅವಕಾಶಗಳು ತಾನಾಗೇ ಬಂದರೆ ಮತ್ತೆ ಕೆಲವರು ಅವಕಾಶವನ್ನು ತಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ತಾವಾಗೇ ಅವಕಾಶ ಸೃಷ್ಟಿಸಿದವರ ಬದುಕು ಅನೇಕರಿಗೆ ಸ್ಫೂರ್ತಿ ತುಂಬುತ್ತದೆ. ಜೊತೆಗೆ ಮನಸ್ಸಿದ್ದರೆ ಯಾರೋ ಊಹಿಸಲೂ ಕೂಡ ಆಗದಿರುವುದನ್ನು ಮಾಡಬಹುದು ಎಂಬುದಕ್ಕೆ ಇಲ್ಲೊಬ್ಬರು ಯುವತಿಯ ಬದುಕು ಸಾಕ್ಷಿಯಾಗಿದೆ. ಹೌದು ನಮ್ಮಲ್ಲನೇಕರು ಮಕ್ಕಳ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಾರೆ. ಇಂದು ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಖಾಸಗಿ ಶಾಲೆಗಳಲ್ಲಿ ಎಲ್&zwnj;ಕೆಜಿ ಯುಕೆಜಿ ಮಕ್ಕಳ ವಾರ್ಷಿಕ ಶಾಲಾ ಶುಲ್ಕವೇ ಲಕ್ಷ ದಾಟಿದೆ.&lt;/p&gt;&lt;img&gt;&lt;p&gt;ಆದರೆ ಪೊಷಕರೇ ಇಲ್ಲದ ಮಕ್ಕಳು ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕಾಗುತ್ತದೆ. ಅವರಿಗೆ ಇಂತಹ ಶಾಲೆಗಳನ್ನು ಕನಸುಗಳಲ್ಲಿ ಊಹಿಸುವುದಕ್ಕೂ ಸಾಧ್ಯವಿಲ್ಲ, ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ. ಹೌದು ಆಕೆಯ ಹೆಸರು ಅರ್ಚನಾ ಪಾಟೀಲ್, ಆಕೆಯ ವಯಸ್ಸಿನ ಎಲ್ಲರೂ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡುವ ಸಮಯದಲ್ಲಿ ಆಕೆ ಕುಟುಂಬ ಸದಸ್ಯರ ತುತ್ತಿನ ಚೀಲ ತುಂಬಿಸುವುದಕ್ಕಾಗಿ ಮನೆ ಕೆಲಸದವಳಾಗಿ ಕೆಲಸ ಮಾಡಬೇಕಿತ್ತು. ಆಕೆಯ ಮಾತಿನಲ್ಲೇ ಆಕೆಯ ಯಶೋಗಾಥೆಯನ್ನು ಕೇಳುವುದಾದರೆ...&lt;/p&gt;&lt;img&gt;&lt;p&gt;ನಾನು 21 ವರ್ಷ ತುಂಬುವವರೆಗೆ ಶಾಲೆಯ ಮೆಟ್ಟಿಲುಗಳನ್ನೇ ಹತ್ತಿದವಳಲ್ಲ, ಆದರೆ ಇಂದು ಮುಂಬೈನಂತಹ ಮಹಾನಗರಿಯಲ್ಲಿ ನಾನು ಮನೆ ಹೊಂದಿದ್ದೇನೆ. ಅದು ನನ್ನ ಸ್ವಂತ ಹಣ, ಬೆವರು ರಕ್ತ ಹಾಗೂ ಧೈರ್ಯದಿಂದ ಸಂಪಾದಿಸಿದ್ದು. ನನ್ನ ಅಮ್ಮ ಒಬ್ಬರು ಅಂಧೆ, ನನ್ನ ಅಪ್ಪ ಕುಡಿತಕ್ಕೆ ದಾಸನಾಗಿದ್ದ. ನಾನು ಬಡತನದಲ್ಲೇ ಬೆಳೆದೆ. ಹೀಗಾಗಿ ಬಾಲ್ಯದಲ್ಲೇ ನಾನು ಮನೆಕೆಲಸದವಳಾಗಿ ಕೆಲಸಕ್ಕೆ ಸೇರಿಕೊಂಡೆ. ಒಂದು ದಶಕದ ಕಾಲ ನಾನು ನನ್ನ ಕುಟುಂಬವನ್ನು ಸಲಹುವುದಕ್ಕಾಗಿ ಕೆಲಸ ಮಾಡಿದೆ. ನನ್ನ ಸೋದರರನ್ನು ಶಾಲೆಗೆ ಕಳುಹಿಸಿದೆ. ಆದರೆ 2020ರಲ್ಲಿ ನನ್ನ ಬದುಕು ಬದಲಾಯ್ತು.&lt;/p&gt;&lt;img&gt;&lt;p&gt;ಆ ವರ್ಷ ನಾನು ನನ್ನ 16 ವರ್ಷದ ಸೋದರನನ್ನು ಕಳೆದುಕೊಂಡೆ. ಬ್ರೈನ್ ಟ್ಯೂಮರ್ ಆದ ಒಂದೇ ವಾರಕ್ಕೆ ಆತ ನಮ್ಮನ್ನು ಬಿಟ್ಟು ಹೋದ. ಇದು ನನಗೆ ನಾನು ಸೋತೆ ಎಂಬ ಭಾವನೆ ಮೂಡಿಸಿತು. ನಾನು ನನ್ನ ಸೋದರನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ಹತಾಶೆ ಮೂಡಿತು. ಇದರಿಂದ ನನಗೆ ಖಿನ್ನತೆ ಉಂಟಾಯ್ತು. ಆದರೆ ನನ್ನ ಸೋದರ ಸಾಯುವ ಮೊದಲು ಕೊನೆಯದಾಗಿ ಹೇಳಿದ ಮಾತು ನನಗೆ ನೆನಪಾಯ್ತು. ನಾನು ನೀನು ಖುಷಿಯಾಗಿರುವುದನ್ನು ನೊಡಲು ಬಯಸುವೆ. ನೀನು ನಿನ್ನ ಕನಸುಗಳನ್ನು ಪೂರೈಸಿದಾಗ ಮಾತ್ರ ನೀನು ಖುಷಿಯಾಗಿರಬಹುದು ಎಂದು ಆತ ಹೇಳಿದ್ದ. ಈ ಮಾತು ನೆನಪಾಗಿ ಯಾರೂ ಯೋಚಿಸದೇ ಇರುವುದನ್ನು ಮಾಡುವುದಕ್ಕೆ ಸಿದ್ಧಳಾದೆ.&lt;/p&gt;&lt;p&gt;ನನ್ನ ವಯಸ್ಸಿನ ಎಲ್ಲರೂ ಪದವಿ ಓದುತ್ತಿರುವ ಸಮಯದಲ್ಲಿ ನಾನು ನನ್ನ ಬದುಕಿನ ಮೊದಲ ಅಕ್ಷರಗಳನ್ನು ಕಲಿಯುವುದಕ್ಕೆ ಶುರು ಮಾಡಿದೆ. ನಾನು ಕೈಬರಹವನ್ನು ಸರಿಪಡಿಸುವುದಕ್ಕೆ ರಾತ್ರಿಯೆಲ್ಲಾ ಎಚ್ಚರವಿದ್ದು, ಅಭ್ಯಾಸ ಮಾಡಿದೆ. 2021ರಲ್ಲಿ 65 ಶೇಕಡಾ ಅಂಕಗಳೊಂದಿಗೆ ನಾನು ನನ್ನ 10ನೇ ತರಗತಿಯನ್ನು ಪಾಸು ಮಾಡಿದೆ. 2023ರಲ್ಲಿ 12ನೇ ತರಗತಿ ಪಾಸು ಮಾಡಿದೆ. ಈಗ ನನ್ನ ವಯಸ್ಸು 26 ನಾನೀಗ ನನ್ನ ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದೇನೆ.&lt;/p&gt;&lt;img&gt;&lt;p&gt;ಕೆಲ ತಿಂಗಳ ಹಿಂದಷ್ಟೇ ನಾನು ಒಂದು ಅಂತಾರಾಷ್ಟ್ರೀಯ ಏರ್&zwnj;ಲೈನ್ಸ್&zwnj;ನಲ್ಲಿ ಗ್ರೌಂಡ್ ಸ್ಟಾಪ್ ಆಗಿ ಕೆಲಸಕ್ಕೆ ಸೇರಿದೆ. ಕೆಲಸಕ್ಕೆ ಸೇರಿದ ಮೊದಲ ದಿನ ನಾನು ಮಾಡಿದ ಮೊದಲ ಕೆಲಸ ಎಂದರೆ ನಮ್ಮದೆಂದು ಕರೆಯುವ ಒಂದು ಮನೆಯೊಂದಕ್ಕೆ ಡೆಪಾಸಿಟ್ ಮಾಡಿದ್ದು, ಬಳಿಕ ನಾನು ಅದರ ಕೀಯನ್ನು ನನ್ನ ಅಮ್ಮನ ಕೈಗೆ ಇತ್ತಾಗ ಆಕೆಗೆ ಮನೆಯನ್ನು ನೋಡುವುದಕ್ಕೆ ಸಾಧ್ಯವಿರಲಿಲ್ಲ, ಆದರೆ ನಾನು ಅವಳ ಕಣ್ಣುಗಳಲ್ಲಿ ಹೆಮ್ಮೆಯನ್ನು ಕಂಡೆ. ಜೊತೆಗೆ ನಾನು ಒಂದು ನಿರ್ಧಾರಕ್ಕೆ ಬಂದೇ ಜೀವನ ಹೇಗೆಯೇ ಇರಲಿ ಆದರೆ ಬದುಕು ನಿಲ್ಲಬಾರದು ಎಂದು.&lt;/p&gt;&lt;p&gt;ನಾನು ನನ್ನ ಶಿಕ್ಷಣವನ್ನು ಮುಂದುವರಿಸಬೇಕು. ದೊಡ್ಡ ಕಚೇರಿಯಲ್ಲಿ ಕೆಲಸ ಮಾಡಬೇಕು, ನನ್ನ ಪೋಷಕರನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯಬೇಕು ಹೀಗೆ ಕನಸುಗಳಿವೆ. ಇವೆಲ್ಲಾ ಕನಸುಗಳನ್ನು ಈಡೇರಿಸಲು ಸ್ವಲ್ಪ ಸಮಯ ಬೇಕು. ಆದರೆ ನಾನು ಇಷ್ಟೊಂದು ದೊಡ್ಡ ಕನಸು ಕಾಣಬಲ್ಲೆ ಎಂಬುದೇ ನನ್ನ ಜೀವನದ ದೊಡ್ಡ ಸಾಧನೆಯಾಗಿದೆ ಎಂದು ಅರ್ಚನಾ ಪಾಟೀಲ್ ಹೇಳಿಕೊಂಡಿದ್ದಾರೆ. ಇವರ ಕತೆ ಈಗ ಅನೇಕರಿಗೆ ಸ್ಪೂರ್ತಿಯಾಗಿದೆ.&lt;/p&gt;]]></content:encoded>
            <category>jobs</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/women/learned-to-read-write-at-21-housemaid-inspires-many-by-changing-her-job-as-an-airport-staff-oluzyvn"/>
        </item>
        <item>
            <title><![CDATA[ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್‌ ವಿ ನಗರದಲ್ಲಿ ತಳಮಳ]]></title>
            <link>https://kannada.asianetnews.com/gallery/private-jobs/meta-layoffs-2026-facebook-parent-to-cut-jobs-in-silicon-valley-amid-massive-ai-push-pz8bkoz</link>
            <guid isPermaLink="true">https://kannada.asianetnews.com/gallery/private-jobs/meta-layoffs-2026-facebook-parent-to-cut-jobs-in-silicon-valley-amid-massive-ai-push-pz8bkoz</guid>
            <pubDate>Mon, 06 Apr 2026 21:36:34 +0530</pubDate>
            <description><![CDATA[&lt;p&gt;ಫೇಸ್&zwnj;ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್&zwnj; ವಿ ನಗರದಲ್ಲಿ ತಳಮಳ, ಒಂದೇ ಕಚೇರಿಯಿಂದ 200 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಎಐ ಬಳಕೆ ಹಲವರ ಕೆಲಸಕ್ಕೆ ಕುತ್ತು ತಂದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3tqsxqxj08n89h4p7fgvrn0,imgname-meta-1756465264381.jpg" type="image/jpeg" height="390" width="690"/>
            <content:encoded><![CDATA[&lt;p&gt;ಫೇಸ್&zwnj;ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್&zwnj; ವಿ ನಗರದಲ್ಲಿ ತಳಮಳ, ಒಂದೇ ಕಚೇರಿಯಿಂದ 200 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಎಐ ಬಳಕೆ ಹಲವರ ಕೆಲಸಕ್ಕೆ ಕುತ್ತು ತಂದಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಫೇಸ್&zwnj;ಬುಕ್ ಮಾತೃಸಂಸ್ಥೆ ಮೆಟಾ ಇದೀಗ ಮತ್ತೆ ಉದ್ಯೋಗ ಕಡಿತ ಮಾಡಿದೆ. ಸಿಲಿಕಾನ್ ವ್ಯಾಲಿಯಲ್ಲಿರುವ ಕಚೇರಿಗಳಿಂದ 200 ಮಂದಿ ಉದ್ಯೋಗ ಕಡಿತ ಮಾಡಿದೆ. ಬರ್ಲಿಂಗ್&zwnj;ಗೇಮ್ ಕಚೇರಿ ಉದ್ಯೋಗಿಗಳಿಗೆ ಮೇ 22 ಕೊನೆಯ ದಿನ. ಸನ್ನಿವೇಲ್ ಉದ್ಯೋಗಿಗಳಿಗೆ ಮೇ 29 ಕೊನೆಯ ದಿನ. ಒರಾಕಲ್ ಕಂಪನಿ ಈಗಾಗಲೇ 12 ಸಾವಿರ ಉದ್ಯೋಗಳನ್ನು ಕಡಿತ ಮಾಡಿದ ಬೆನ್ನಲ್ಲೇ ಇದೀಗ ಮೆಟಾ ಮತ್ತೆ ಉದ್ಯೋದ ಕಡಿತ ಮಾಡಿದೆ.&lt;/p&gt;&lt;img&gt;&lt;p&gt;ಕ್ಯಾಲಿಫೋರ್ನಿಯಾದ ಎರಡು ಕಚೇರಿಗಳಾದ ಬರ್ಲಿನ್&zwnj;ಗೇಮ್ ಹಾಗೂ ಸನ್ನಿವೇಲ್ ಕಚೇರಿಗಳಲ್ಲಿ ಮೊದಲ ಹಂತದಲ್ಲಿ 200 ಮಂದಿಯ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ಈಗಾಗಲೇ ಮೆಟಾ ಸಿಇಒ ಮಾರ್ಕ್ ಜುಕರ್&zwnj;ಬರ್ಗ್ ಮೆಟಾದ ಎಲ್ಲಾ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಎಐ ಬಳಕೆ ಮಾಡಲಾಗುತ್ತಿದೆ. ಈ ಉದ್ಯೋಗ ಕಡಿತವನ್ನು ಮೆಟಾ ಕಂಪನಿ ಉದ್ಯೋಗಿಗಳಿಗೆ ಎಪ್ರಿಲ್ ತಿಂಗಳಲ್ಲಿ ಸೂಚನೆ ನೀಡಲಾಗಿತ್ತು. ಇದೀಗ ಮೇ.29ಕ್ಕೆ ಎರಡು ಹಂತದಲ್ಲಿ ಉದ್ಯೋಗಿಗಳ ವೃತ್ತಿಯ ಕೊನೆಯ ದಿನವಾಗಲಿದೆ.&lt;/p&gt;&lt;img&gt;&lt;p&gt;ಮೇಟಾ ಸೇಲ್ಸ್, ರಿಕ್ರೂಟಿಂಗ್, ರಿಲಾಯಿಟಿ ಲ್ಯಾಬ್, ಹಾರ್ಡ್&zwnj;ವೇರ್ ಟೀಂ ಸೇರಿದಂತೆ ಹಲುವು ವಿಭಾಗಗಳಿಂದ ಮೆಟಾ ಉದ್ಯೋಗ ಕಡಿತ ಮಾಡುತ್ತಿದೆ. ಮೆಟಾ ಈಗಾಲೇ ಎಐ ಬಳಕೆಗೆ ದುಬಾರಿ ಮೊತ್ತ ಹೂಡಿಕೆ ಮಾಡಿದೆ. ಹಂತ ಹಂತವಾಗಿ ಎಐ ಆವರಿಸಿಕೊಳ್ಳುತ್ತಿದ್ದಂತೆ ಉದ್ಯೋದ ಕಡಿತ ಮಾಡುತ್ತಿದೆ.&lt;/p&gt;&lt;img&gt;&lt;p&gt;ಕಳೆದ ತಿಂಗಳು ಮೆಟಾ 700 ಮಂದಿ ಉದ್ಯೋದ ಕಡಿತ ಘೋಷಿಸಿತ್ತು. 2022, 2023ರಲ್ಲೂ ಮೆಟಾ ಉದ್ಯೋಗ ಕಡಿತ ಮಾಡಿದೆ. ಮೆಟಾ ಹಂತ ಹಂತವಾಗಿ ಉದ್ಯೋಗ ಕಡಿತ ಮಾಡುತ್ತಲೇ ಬಂದಿದೆ. ಇದೀಗ ಹೊಸ ಘೋಷಣೆ ಮಾಡಿದೆ.&lt;/p&gt;&lt;img&gt;&lt;p&gt;ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಈಗಾಗಲೇ ಒರಾಕಲ್ ಉದ್ಯೋಗ ಕಡಿತ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳಲ್ಲಿ ಎಐ ಆವರಿಸಿಕೊಳ್ಳುತ್ತಿದೆ. ಜೊತೆಗೆ ಆರ್ಥಿಕ ಹಿಂಜರಿತಗಲೂ ಉದ್ಯೋದ ಕಡಿತ ಸಮಸ್ಯೆ ತೀವ್ರಗೊಳ್ಳುತ್ತಿದೆ.&lt;/p&gt;&lt;h2&gt;ಎಐ ಆತಂಕ&lt;/h2&gt;]]></content:encoded>
            <category>jobs</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/private-jobs/meta-layoffs-2026-facebook-parent-to-cut-jobs-in-silicon-valley-amid-massive-ai-push-pz8bkoz"/>
        </item>
        <item>
            <title><![CDATA[ಕೊಪ್ಪಳ ಪಿಎಸ್‌ಐ ಸುನೀಲ್ ಅಮಾನತು; ಅಕ್ರಮಗಳಿಗೆ ಕಡಿವಾಣ ಹಾಕದ ಹಿನ್ನೆಲೆ ಎಸ್ಪಿ ರಾಮ್ ಅರಸಿದ್ದಿ ಖಡಕ್ ಆದೇಶ!]]></title>
            <link>https://kannada.asianetnews.com/state/koppal-munirabad-psi-sunil-suspended-sp-ram-arasiddi-illegal-activities-sat/articleshow-q3lzsgk</link>
            <guid isPermaLink="true">https://kannada.asianetnews.com/state/koppal-munirabad-psi-sunil-suspended-sp-ram-arasiddi-illegal-activities-sat/articleshow-q3lzsgk</guid>
            <pubDate>Wed, 01 Apr 2026 16:40:37 +0530</pubDate>
            <description><![CDATA[&lt;p&gt;ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್&zwnj;ಐ ಸುನೀಲ್ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗುದೆ. ಅಕ್ರಮ ವಿದೇಶಿ ಪಾರ್ಟಿಗಳು, ಕಲ್ಲು ಗಣಿಗಾರಿಕೆ, ಮತ್ತು ಅನ್ನ ಭಾಗ್ಯ ಅಕ್ಕಿ ದಂಧೆಯಂತಹ ಸರಣಿ ಅಕ್ರಮಗಳನ್ನು ತಡೆಯಲು ವಿಫಲರಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn4bp3w7w5vqe144emrzg2n8,imgname-koppal-psi-sunil-susopended-1775041712007.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಏ.01): ಕ&lt;/strong&gt;ರ್ತವ್ಯ ಲೋಪ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್&zwnj;ಐ (PSI) ಸುನೀಲ್ ಅವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಾಮ್ ಅರಸಿದ್ದಿ ಅವರು ಈ ಖಡಕ್ ಆದೇಶವನ್ನು ಹೊರಡಿಸಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಅಕ್ರಮ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಅಮಾನತ್ತಿಗೆ ಕಾರಣಗಳೇನು?:&lt;/strong&gt;&lt;/h2&gt;&lt;p&gt;ಕಳೆದ ಎರಡು ವರ್ಷಗಳಿಂದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪಿಎಸ್&zwnj;ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುನೀಲ್ ಅವರ ವಿರುದ್ಧ ಇತ್ತೀಚಿನ ದಿನಗಳಲ್ಲಿ ದೂರುಗಳು ಕೇಳಿಬರುತ್ತಿದ್ದವು. ಕಚೇರಿಯ ಆಡಳಿತಾತ್ಮಕ ವಿಚಾರಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಶಿಸ್ತು ಕ್ರಮ ಜರುಗಿಸಲಾಗಿದೆ.&lt;/p&gt;&lt;h3&gt;&lt;strong&gt;ಸರಣಿ ಅಕ್ರಮಗಳ ಸುಳಿವು:&lt;/strong&gt;&lt;/h3&gt;&lt;p&gt;ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಲವಾರು ಅಕ್ರಮ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದು ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿತ್ತು.&lt;/p&gt;&lt;p&gt;&lt;strong&gt;ಪ್ರಮುಖವಾಗಿ:&lt;/strong&gt;&lt;/p&gt;&lt;p&gt;&lt;strong&gt;ವಿದೇಶಿಗರ ಪಾರ್ಟಿ: &lt;/strong&gt;ಅನುಮತಿ ಇಲ್ಲದೆ ವಿದೇಶಿ ಪ್ರಜೆಗಳು ಭಾಗವಹಿಸಿದ್ದ ಪಾರ್ಟಿಗಳು ನಡೆದಿದ್ದು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.&lt;/p&gt;&lt;p&gt;&lt;strong&gt;ಅಕ್ರಮ ಕಲ್ಲು ಗಣಿಗಾರಿಕೆ:&lt;/strong&gt; ಮುನಿರಾಬಾದ್ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಪೊಲೀಸರು ಮೌನಕ್ಕೆ ಶರಣಾಗಿದ್ದರು ಎಂಬ ಆರೋಪವಿತ್ತು.&lt;/p&gt;&lt;p&gt;&lt;strong&gt;ಅನ್ನ ಭಾಗ್ಯ ಅಕ್ಕಿ ದಂಧೆ: &lt;/strong&gt;ಸರ್ಕಾರದ ಮಹತ್ವಾಕಾಂಕ್ಷಿ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲವೊಂದು ಇಲ್ಲಿ ಸಕ್ರಿಯವಾಗಿತ್ತು.&lt;/p&gt;&lt;p&gt;ಈ ಎಲ್ಲಾ ಪ್ರಕರಣಗಳು ಒಂದಾದ ಮೇಲೊಂದರಂತೆ ಬೆಳಕಿಗೆ ಬಂದಾಗ, ಸ್ಥಳೀಯ ಪೊಲೀಸರ ಶಾಮೀಲಾತಿ ಅಥವಾ ನಿರ್ಲಕ್ಷ್ಯದ ಬಗ್ಗೆ ಮೇಲಧಿಕಾರಿಗಳಿಗೆ ಶಂಕೆ ವ್ಯಕ್ತವಾಗಿತ್ತು.&lt;/p&gt;&lt;h2&gt;&lt;strong&gt;ಎಸ್ಪಿ ಖಡಕ್ ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಆಡಳಿತಾತ್ಮಕ ವಿಚಾರದಲ್ಲಿ ವಿಫಲರಾದ ಸುನೀಲ್ ಅವರಿಗೆ ಈ ಹಿಂದೆಯೇ ಎಚ್ಚರಿಕೆಗಳನ್ನು ನೀಡಲಾಗಿತ್ತು ಎನ್ನಲಾಗಿದೆ. ಆದರೂ ಕೆಲಸದಲ್ಲಿ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ, ಎಸ್ಪಿ ರಾಮ್ ಅರಸಿದ್ದಿ ಅವರು ಅಮಾನತ್ತಿನ ಅಸ್ತ್ರ ಪ್ರಯೋಗಿಸಿದ್ದಾರೆ. ಈ ಆದೇಶವು ಜಿಲ್ಲೆಯ ಇತರೆ ಪೊಲೀಸ್ ಅಧಿಕಾರಿಗಳಿಗೂ ಒಂದು ಎಚ್ಚರಿಕೆಯ ಸಂದೇಶವಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಅಕ್ರಮಗಳಿಗೆ ಅವಕಾಶ ನೀಡುವ ಅಥವಾ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸೂಚನೆಯನ್ನು ಈ ಮೂಲಕ ನೀಡಲಾಗಿದೆ. ಪ್ರಸ್ತುತ ಪಿಎಸ್&zwnj;ಐ ಸುನೀಲ್ ಅವರನ್ನು ಅಮಾನತ್ತುಗೊಳಿಸಲಾಗಿದ್ದು, ಇಲಾಖಾ ತನಿಖೆ ಮುಂದುವರಿಯಲಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/koppal-munirabad-psi-sunil-suspended-sp-ram-arasiddi-illegal-activities-sat/articleshow-q3lzsgk"/>
        </item>
        <item>
            <title><![CDATA[30 ಸಾವಿರ ಜನರ ಮಾರಣಹೋಮ ಮಾಡಿದ ಕಂಪೆನಿ; ಉಸಿರಾಡೋಕೂ ಅವಕಾಶ ಕೊಡ್ಲಿಲ್ಲ: ಕವಿರಾಜ್]]></title>
            <link>https://kannada.asianetnews.com/private-jobs/oracle-company-layoffs-2026-kannada-song-writer-kaviraj-post/articleshow-qp8ggvx</link>
            <guid isPermaLink="true">https://kannada.asianetnews.com/private-jobs/oracle-company-layoffs-2026-kannada-song-writer-kaviraj-post/articleshow-qp8ggvx</guid>
            <pubDate>Sat, 04 Apr 2026 17:43:41 +0530</pubDate>
            <description><![CDATA[&lt;p&gt;Company Layoffs:&zwnj; ಇಂದು ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಕಷ್ಟಪಟ್ಟು ಓದಿ, ಕಂಪೆನಿಯಲ್ಲಿ ಕೆಲಸ ಮಾಡೋಣ, ಸೆಟಲ್&zwnj; ಆಗೋಣ ಎಂದುಕೊಂಡರೆ ತುಂಬ ಕಷ್ಟ. ಯಾವಾಗ ಯಾರು ಲೇಆಫ್&zwnj; ಆಗುತ್ತಾರೆ ಎಂದು ಹೇಳಲಾಗದು. ಈ ಬಗ್ಗೆ ಗೀತರಚನೆಕಾರ ಕವಿರಾಜ್&zwnj; ಅವರು ವಿಶೇಷ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knc6hng8j6eq59s70tg3zxa0,imgname-layoff-by-amazon-1769753738028--1--1775304758792.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಗತ್ತಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಸೆಟಲ್ ಆಗಿದ್ದೇವೆ ಅಂದುಕೊಂಡು EMI ಮೂಲಕ ತನ್ನ ಪುಟ್ಟ ಸ್ವರ್ಗವನ್ನು ಕಟ್ಟಿಕೊಂಡಿರುತ್ತಾರೆ. ಬೆಳಿಗ್ಗೆ 6 ಗಂಟೆಗೆ ಒಂದು ಮೇಲ್ ಬರುತ್ತೆ, ಅದರಲ್ಲಿ ನಿಮ್ಮ ಸೇವೆ ನಮಗೆ ಅವಶ್ಯಕತೆಯಿಲ್ಲ. ನಿಮ್ಮನ್ನು ಈ ಕ್ಷಣದಿಂದ ಕೆಲಸದಿಂದ ತೆಗೆಯಲಾಗಿದೆ ಎಂದು ಬರೆಯಲಾಗಿರುತ್ತೆ. ಹೇಗಿರಬೇಡ ಆ ಆಘಾತ. ಅವರ ಇಡೀ ಜಗತ್ತೇ ಒಂದೇ ಕ್ಷಣಕ್ಕೆ ತಲೆಕೆಳಗಾಗಿರುತ್ತೆ.&lt;/p&gt;&lt;h2&gt;ಅಕ್ಷರಶಃ ಮೊನ್ನೆ oracle ನಡೆಸಿದ್ದು&lt;/h2&gt;&lt;p&gt;30 ಸಾವಿರ ಜನರ ಮಾರಣಹೋಮ ( oracle company layoffs 2026 ). ಇದು ಎಷ್ಟು ಬೃಹತ್ ಎಂದರೆ ಆ ಜಾಗತಿಕ ದೈತ್ಯ ಕಂಪನಿ ಇಷ್ಟು ದಿನ ತನಗಾಗಿ ದುಡಿದ ಶೇಕಡಾ 18 ರಷ್ಟು ಉದ್ಯೋಗಿಗಳನ್ನು ಉಸಿರೆತ್ತಲು ಅವಕಾಶವಿಲ್ಲದಂತೆ ಒಂದೇ ಏಟಿಗೆ ಹೊರದಬ್ಬಿದೆ. ಕಾರ್ಪೋರೇಟ್ ಜಗತ್ತಿನಷ್ಟು ನಿರ್ದಯಿ ರಾಕ್ಷಸ ಕೂಟ ಇನ್ನೊಂದು ಇರಲು ಸಾಧ್ಯವಿಲ್ಲ. ಕೆಲಸದಿಂದ ತೆಗೆಯುವ ಒಂದು ಗೌರವಯುತ ಮಾರ್ಗ ಅನುಸರಿಸುವ ನೈತಿಕತೆಯೂ ಆ ಧನದಾಹಿ ವ್ಯವಸ್ಥೆಗಿಲ್ಲ. ಇಡೀ ಪ್ರಪಂಚ ಅವರ ಹಿಡಿತದಲ್ಲೇ ಇದೆ. ರೂಲ್ಸ್ ಎಲ್ಲ ಅವರೇ ಬರೆಸುತ್ತಾರೆ. ಅವರ ಒಂದು ಕೂದಲು ಕೊಂಕಿಸಲು ಯಾರಿಗೂ ಸಾಧ್ಯವಿಲ್ಲ ಎಂಬುದು ಶತಸಿದ್ಧ. ಬೇರೆ ಹೊತ್ತಾಗಿದ್ದರೆ ಇಲ್ಲಿಲ್ಲ ಎಂದರೇ ಅಲ್ಲಿ ಕೆಲಸ ಸಿಗುತ್ತೆ ಅನ್ನಬಹುದಿತ್ತು. ಆದರೆ ಈಗೇನಿದ್ದರೂ ಕೆಲಸದಿಂದ ತೆಗೆದು ಬಿಸಾಕುವ ಕಾಲ. ಬಹುತೇಕ ಕಾರ್ಪೊರೇಟ್ ಕಂಪನಿಗಳು ಇದೇ ಹಾದಿಯಲ್ಲಿವೆ. ಕಳೆದೊಂದು ವರ್ಷದಲ್ಲಿ ಅಮೆಜಾನ್ 30 ಸಾವಿರ, ಇಂಟೆಲ್ 27 ಸಾವಿರ, ಮೈಕ್ರೋಸಾಫ್ಟ್ 15 ಸಾವಿರ, ಟಿಸಿಎಸ್ 12 ಸಾವಿರ ಉದ್ಯೋಗಳನ್ನು ಹೊರದಬ್ಬಿವೆ .&lt;/p&gt;&lt;h2&gt;Prompt ಮೂಲಕ ಎಲ್ಲ ಕೆಲಸ ಆಗ್ತಿದೆ&lt;/h2&gt;&lt;p&gt;ದೊಡ್ಡ ವಿಪರ್ಯಾಸ ಎಂದರೆ ನೌಕರರ ಗುಂಡಿಯನ್ನು ಸಂಬಳ ಕೊಟ್ಟು ಅವರ ಕೈಯಲ್ಲೇ ತೊಡಿಸಲಾಗಿರುತ್ತೆ. ಇವರ ಕೆಲಸ ಕಸಿಯುವ AI ತಂತ್ರಜ್ಞಾನಕ್ಕೆ ಇವರೇ ಮನೆ ಮಠ ಮರೆತು ಹಗಲಿರುಳು ದುಡಿದಿರುತ್ತಾರೆ. ನಿಜಕ್ಕೂ ಸಂಭ್ರಮ ಪಟ್ಟು ಬೆರಗುಗಣ್ಣಿನಿಂದ ನೋಡಬೇಕಿದ್ದ ತಾಂತ್ರಿಕ ಅಭಿವೃದ್ಧಿಗಳು ಭಯ ಹುಟ್ಟಿಸುತ್ತಿವೆ. ಅದರಲ್ಲೂ AI ಅಕ್ಷರಶಃ ನಡುಕ ಹುಟ್ಟಿಸುವ ವೇಗದಲ್ಲಿ ಎಲ್ಲವನ್ನೂ ನುಂಗುತ್ತಿದೆ. ಒಬ್ಬ ಡಿಜಿಟಲ್ ಅನಕ್ಷರಸ್ಥ ಎಂದೇ ಹೇಳಬಹುದಾದ ನಾನೇ ಎಷ್ಟೋ ತಂತ್ರಜ್ಞರಿಂದ ಮಾಡಿಸಿಕೊಳ್ಳಬೇಕಿದ್ದ ಕೆಲಸಗಳನ್ನಕೇವಲ prompt ಕೊಡುವ ಮೂಲಕ ನಾನೇ ಮಾಡಿಕೊಳ್ಳುತ್ತಿದ್ದೇನೆ.&lt;/p&gt;&lt;h2&gt;ಇನ್ನೆಷ್ಟು ಜನ ಕೆಲಸ ಕಳ್ಕೊಳ್ತಾರೆ?&lt;/h2&gt;&lt;p&gt;ಇನ್ನು ಡಿಜಿಟಲ್&zwnj; ಆಗಿ ತಿಳಿದವರು ಏನೇನು ಮಾಡುತ್ತಿರಬಹುದು. AI ಕೆಲಸ ಕಳೆಯೋದಿಲ್ಲ ಬದಲಿಗೆ ಹೊಸ ಉದ್ಯೋಗಳನ್ನು ಸೃಷ್ಟಿಸುತ್ತೆ ಎನ್ನುವ ಕಿವಿ ಮೇಲೆ ಹೂ ಇಡುವ ಹೇಳಿಕೆಗೆ ಯಾವ ಆಧಾರವೂ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಈಗಾಗಲೇ ನನ್ನ ವಲಯದಲ್ಲೇ ಕೆಲಸ ಕಳೆದುಕೊಂಡು ದಿಕ್ಕೆಟ್ಟಿರುವ ಮಿತ್ರರು ಹಲವರಿದ್ದಾರೆ ಇನ್ನೆಷ್ಟು ಜನ ಕೆಲಸ ಕಳೆದುಕೊಳ್ಳಬಹುದು ಗೊತ್ತಿಲ್ಲ.&lt;/p&gt;&lt;h2&gt;ಅಲ್ಲೆಲ್ಲೋ ನಡೆಯುತ್ತಿರುವ ಯುದ್ಧ ನಮ್ಮ ಊಟದ ತಟ್ಟೆ ತಟ್ಟಿದೆ&lt;/h2&gt;&lt;p&gt;ಅತ್ತ ದೇಶಗಳ ಅಧಿಕಾರ ಹಿಡಿದ ಅವಿವೇಕಿ ಹುಚ್ಚರ ಅಹಂನಿಂದಾಗಿ ಎಲ್ಲೋ ನಡೆಯುತ್ತಿರುವ ಯುದ್ಧ, ಇಲ್ಲಿ ನಮ್ಮ ದೈನಂದಿನ ಬದುಕನ್ನು, ನಮ್ಮ ಊಟದ ತಟ್ಟೆಯನ್ನು ತಟ್ಟಿದೆ. ಒಟ್ಟಾರೆ ಇಡೀ ಜಗತ್ತಲ್ಲೇ ಒಂದು ಅರಾಜಕತೆಯಿದೆಜಿ. ಎಲ್ಲಾ ದಿಕ್ಕಿನಲ್ಲೂ ಮಹಾ ವಿಪ್ಲವವೊಂದರೆಡೆಗೆ ದಾಪುಗಾಲು ಹಾಕುತ್ತಿರುವಂತಿದೆ. ಏನೇ ಆದರೂ ಇಂತಾ ಸುನಾಮಿಗಳೆದುರು ನಾವೆಲ್ಲರೂ ಅಸಹಾಯಕರು. ಕಾಲವೇ ಎಲ್ಲಕ್ಕೂ ಉತ್ತರ, ಪರಿಹಾರ ಕೊಡಬೇಕು. ಏನೇ ಬಂದರೂ ಕುಗ್ಗದೇ ಎದುರಿಸಲು ಮಾನಸಿಕವಾಗಿ ನಾವೆಲ್ಲರೂ ಸಿದ್ಧರಾಗಿರಬೇಕು ಅಷ್ಟೇ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/private-jobs/oracle-company-layoffs-2026-kannada-song-writer-kaviraj-post/articleshow-qp8ggvx"/>
        </item>
        <item>
            <title><![CDATA[ಡಿಗ್ರಿ ಇಲ್ಲದಿದ್ದರೂ ಕೈತುಂಬಾ ಸಂಪಾದನೆ:  45 ನಿಮಿಷದ ಕೆಲಸಕ್ಕೆ 900 ರೂಪಾಯಿ ಚಾರ್ಜ್ ಮಾಡಿದ ಕಾರ್‌ಪೆಂಟರ್‌]]></title>
            <link>https://kannada.asianetnews.com/jobs/no-ai-threat-these-jobs-better-than-software-jobs-hourly-work-pays-in-thousands/articleshow-qpezcgg</link>
            <guid isPermaLink="true">https://kannada.asianetnews.com/jobs/no-ai-threat-these-jobs-better-than-software-jobs-hourly-work-pays-in-thousands/articleshow-qpezcgg</guid>
            <pubDate>Tue, 07 Apr 2026 18:09:30 +0530</pubDate>
            <description><![CDATA[&lt;p&gt;&lt;strong&gt;high demand blue collar jobs: &lt;/strong&gt;ಕೃತಕ ಬುದ್ಧಿಮತ್ತೆಯಿಂದಾಗಿ (ಎಐ) ಸಾಫ್ಟ್&zwnj;ವೇರ್ ಉದ್ಯೋಗಗಳು ಅಪಾಯದಲ್ಲಿರುವಾಗ, ಕಾರ್ಪೆಂಟರ್&zwnj;, ಪ್ಲಂಬರ್&zwnj;ಗಳಂತಹ ಬ್ಲೂ ಕಾಲರ್ ಉದ್ಯೋಗಗಳಿಗೆ ನಗರಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.ಇವರು ಗಂಟೆಗೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkdz9cmbra0cr2n110c198v,imgname-gettyimages-1391182652-1775547426196.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಎಐ ಯುಗದಲ್ಲಿ ಬೆಳಗಿದ ಬ್ಲೂ ಕಾಲರ್ ಬದುಕು&lt;/strong&gt;&lt;/h2&gt;&lt;p&gt;ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದ ವ್ಯಾಪಕ ಬೆಳವಣಿಗೆಯಿಂದಾಗಿ ಇಂದು ಹಲವು ಕಂಪನಿಗಳು ತಮ್ಮ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. ಇದರ ಪರಿಣಾಮ ಸಾವಿರಾರು ಜನ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಸಾಮೂಹಿಕ ಉದ್ಯೋಗ ಕಡಿತದಿಂದಾಗಿ ವೈಟ್&zwnj; ಕಾಲರ್ ಉದ್ಯೋಗಿಳೆಂದೇ ಕರೆಯಲ್ಪಡುವ ಸಾಫ್ಟ್&zwnj;ವೇರ್ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದರೆ ಇತ್ತ ಎಐ ಟಚ್ ಮಾಡಲು ಕೂಡ ಸಾಧ್ಯವಿಲ್ಲದ ಉದ್ಯೋಗಗಳನ್ನು ಮಾಡುತ್ತಿರುವ ಹೆಚ್ಚೇನು ಓದದ ಉದ್ಯೋಗಿಗಳು ದಿನಕ್ಕೆ ಗಂಟೆಗೆ ಸಾವಿರಾರು ರೂಪಾಯಿಗಳನ್ನು ದುಡಿಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಸಾಫ್ಟ್&zwnj;ವೇರ್ ಉದ್ಯೋಗಿಗಳಿಗಿಂತ ಬಡಗಿ, ಪ್ಲಂಬರ್&zwnj;ಗಳೇ ಈಗ 'ಕಿಂಗ್&lt;/strong&gt;&lt;/h3&gt;&lt;p&gt;ಹೌದು ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರೊಬ್ಬರು ಈ ಬ್ಲೂ ಕಾಲರ್ ಜಾಬ್ ಉದ್ಯೋಗಿಗಳ ಕೆಲಸ ಹಾಗೂ ಸಂಪಾದನೆಯ ಬಗ್ಗೆ ಬರೆದುಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ಹೌದು ಕಾರ್&zwnj;ಪೆಂಟರ್&zwnj;ಗಳು(ಮರದ ಕೆಲಸ ಮಾಡುವ ಬಡಗಿ) ಪ್ಲಂಬರ್&zwnj;ಗಳು, ವೈರಿಂಗ್ ಮಾಡುವವರಿಗೆ ನಗರ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ನಗರಗಳಲ್ಲಿ ಅವರನ್ನು ಹುಡುಕುವುದೇ ಒಂದು ದೊಡ್ಡ ಕೆಲಸ ಇದರ ಜೊತೆಗೆ ಅವರಿಗೆ ಕೇವಲ ಕೆಲ ಗಂಟೆಗಳ ಕೆಲಸಕ್ಕೆ ಸಾಕಷ್ಟು ಮೊತ್ತದ ಹಣ ನೀಡಬೇಕಾಗುತ್ತದೆ. ಹಾಗೆಯೇ ಇಲ್ಲಿ ಈ ಉದ್ಯೋಗದ ಬಗ್ಗೆ ಹೇಳಿಕೊಂಡಿದ್ದು ಅವರ ಪೋಸ್ಟ್&zwnj; ಎಕ್ಸ್&zwnj;ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.&lt;/p&gt;&lt;h3&gt;&lt;strong&gt;ವೈರಲ್ ಪೋಸ್ಟ್ ಬಿಚ್ಚಿಟ್ಟ ಅಚ್ಚರಿಯ ಸತ್ಯ!&lt;/strong&gt;&lt;/h3&gt;&lt;p&gt;@GurugramDeals ಎಂಬುವವರು ಈ ಪೋಸ್ಟ್ ಮಾಡಿದ್ದು, ತಮ್ಮ ಪೋಸ್ಟ್&zwnj;ನಲ್ಲಿ ಹೀಗೆ ಬರೆದಿದ್ದಾರೆ. ಕೆಲವು ಕಪಾಟುಗಳನ್ನು ಅಳವಡಿಸುವ ಮತ್ತು ಒಂದೆರಡು ಪೇಟಿಂಗ್ ಚಿತ್ರಗಳನ್ನು ನೇತುಹಾಕುವ 45 ನಿಮಿಷಗಳ ಕೆಲಸಕ್ಕೆ ಬಡಗಿಗೆ 900 ರೂ. ಪಾವತಿಸಲಾಯಿತು. ಬ್ಲೂ ಕಾಲರ್ ಉದ್ಯೋಗಕ್ಕೆ ಭವಿಷ್ಯವಿದೆ, ಯುವಕರಿಗೆಇತರ ಬಳಕೆಯಲ್ಲಿಲ್ಲದ ಪದವಿಗಳಿಗಿಂತ ಕೌಶಲ್ಯ ಆಧಾರಿತ ತರಬೇತಿಗೆಆದ್ಯತೆ ನೀಡಬೇಕು. ಇವುಗಳಿಗೆ ಎಐನಿಂದ ಯಾವುದೇ ಬೆದರಿಕೆ ಇರುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ. ಜೊತೆಗೆ ಅನೇಕರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಗಂಟೆಯ ಕೆಲಸಕ್ಕೆ ಸಾವಿರಗಳಲ್ಲಿ ಸಂಭಾವನೆ&lt;/strong&gt;&lt;/p&gt;&lt;p&gt;ನಿಜ ಫಾಲ್ಸ್ ಸೀಲಿಂಗ್ ಎಲೆಕ್ಟ್ರಿಕ್ ವೈರಿಂಗ್&zwnj;ಗಾಗಿ ಸುಮಾರು 30000 ರೂಪಾಯಿ ಪಾವತಿಸಬೇಕಾಯಿತು ಮತ್ತು ಅವನು ಮಾಡಿದ ಕೆಲಸವನ್ನು ನೋಡಿ ನಾನು ಮೋಡಿಗೊಂಡೆ, ನನಗೂ ಅದನ್ನು ಮಾಡಬೇಕು ಎನಿಸಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕಳೆದ ತಿಂಗಳು, ಮುಂಬೈನ ವ್ಯಕ್ತಿಯೊಬ್ಬರು ತಮ್ಮ ಸೊಸೈಟಿಯ ಪ್ಲಂಬರ್ ಮೀರಾ ರಸ್ತೆ, ಬೋರಿವಲಿ ಮತ್ತು ಕಂಡಿವಲಿ ಪಟ್ಟಣಗಳಲ್ಲಿ ಕೆಲಸ ಮಾಡುತ್ತಾ ವರ್ಷಕ್ಕೆ 18 ಲಕ್ಷ ರೂ. (LPA) ಗಳಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಆ ಪ್ಲಂಬರ್ ಚೆನ್ನಾಗಿ ಸಂಪಾದಿಸುತ್ತಿದ್ದಿದ್ದಲ್ಲದೆ, ದುಬಾರಿ ಕಾರು ಖರೀದಿಸಿದ್ದರು, ಮನೆ ಕಟ್ಟಿದ್ದರು ಮತ್ತು ಕೃಷಿಭೂಮಿಯನ್ನು ಸಹ ಖರೀದಿಸಿದ್ದರು, ಇವೆಲ್ಲವನ್ನೂ ಅವರ ಸ್ವಂತ ಅನುಕೂಲಕ್ಕೆ ತಕ್ಕಂತೆ ಮಾಡಿದ್ದರು ಎಂದು ಅವರು ಹೇಳಿಕೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;21ನೇ ವಯಸ್ಸಿಗೆ ಅಕ್ಷರಾಭ್ಯಾಸ: ಏರ್&zwnj;ಪೋರ್ಟ್ ಸ್ಟಾಫ್ ಆಗಿ ಬದುಕು ಬಲಿಸಿಕೊಂಡ ಮನೆಗೆಲಸದ ಹುಡುಗಿ&lt;/strong&gt;&lt;/p&gt;&lt;p&gt;ಬೆಂಗಳೂರಿನಲ್ಲಿ ಇದು ತುಂಬಾ ಸಾಮಾನ್ಯವಾಗಿದೆ ನೀವು ಯಾವುದೇ ಎಲೆಕ್ಟ್ರಿಷಿಯನ್/ಬಡಗಿ/ಪ್ಲಂಬರ್&zwnj;ನ್ನು ಕರೆಯುತ್ತೀರಿ. ಅವರು 1-2 ಗಂಟೆಗಳ ಕೆಲಸಕ್ಕೆ 1000-2000 ಕೇಳುತ್ತಾರೆ. ಅದರ ಮೇಲೆ, ಅವರು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅಲ್ಲ, ಅವರ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಜನರು ಬ್ಲೂ-ಕಾಲರ್ ಕೆಲಸ ಹಾಗೂ ಕೆಲಸಗಾರರನ್ನು ಗೌರವಿಸಲು ಪ್ರಾರಂಭಿಸಿದರೆ ಅದು ಉತ್ತಮ ಆಯ್ಕೆಯಾಗುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭಾರತದ ಈ ಸಮುದಾಯದಲ್ಲಿ ಮದುವೆಗೂ ಮೊದಲೇ ಯುವತಿ ಗರ್ಭಿಣಿ ಆದರಷ್ಟೇ ಮದುವೆ&lt;/strong&gt;&lt;/p&gt;&lt;p&gt;ನಮಗೆ ಹೋಲಿಸಿದರೆ ವಿಯೆಟ್ನಾಂ ಉತ್ಪಾದನೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಇದೇ ಕಾರಣ. ಅವರು ದೊಡ್ಡ ದೊಡ್ಡ ಡಿಗ್ರಿಯ ಉನ್ನತ ಶಿಕ್ಷಣದ ಬದಲು ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯತ್ತ ಹೆಚ್ಚಿನ ಗಮನಹರಿಸಿದರು ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಬ್ಲೂ ಕಾಲರ್ ಜಾಬ್&zwnj;ಗಳಿಗೆ ಇರುವ ಉದ್ಯೋಗವಕಾಶಗಳು ನಗರಗಳಲ್ಲಿ ಧಾರಾಳವಾಗಿದ್ದಲ್ಲದೇ ಅವರ ಸಂಪಾದನೆಯೂ ಚೆನ್ನಾಗಿರುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Paid the carpenter Rs. 900 for a 45 minute job installing some shelves and hanging a couple of paintings. Blue collar jobs are the future, skill based training for the youth should be prioritised over other obsolete degrees. No threat from AI either.&lt;/p&gt;&lt;p&gt;&mdash; Bhandari ka Vyang (@GurugramDeals) April 5, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Anusha Kb</dc:creator>
            <atom:link href="https://kannada.asianetnews.com/jobs/no-ai-threat-these-jobs-better-than-software-jobs-hourly-work-pays-in-thousands/articleshow-qpezcgg"/>
        </item>
        <item>
            <title><![CDATA[ಕಂಪ್ಯೂಟರ್ ತೋರಿಸುತ್ತಲೇ ಮಹಿಳಾ ಉದ್ಯೋಗಿ ತುಟಿಗೆ ಮುತ್ತಿಡಲು ಮುಂದಾದ ಸಹೋದ್ಯೋಗಿ; ಪೋಶ್ ಕಾಯ್ದೆ ನೆನಪಿಸಿದ ತಿವಾರಿ!]]></title>
            <link>https://kannada.asianetnews.com/india-news/workplace-woman-employee-harassed-try-to-kiss-at-warehouse-cctv-video-posh-act-2013-awareness-sat/articleshow-wiui696</link>
            <guid isPermaLink="true">https://kannada.asianetnews.com/india-news/workplace-woman-employee-harassed-try-to-kiss-at-warehouse-cctv-video-posh-act-2013-awareness-sat/articleshow-wiui696</guid>
            <pubDate>Mon, 30 Mar 2026 18:19:24 +0530</pubDate>
            <description><![CDATA[&lt;p&gt;ಗೋದಾಮಿನಲ್ಲಿ ಸಹೋದ್ಯೋಗಿಯೊಬ್ಬ ಮಹಿಳಾ ಉದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಇರುವ 'ಪೋಶ್ ಕಾಯ್ದೆ 2013'ರ ಮಹತ್ವ, ನಿಯಮ, ದೂರು ದಾಖಲಿಸುವ ಬಗ್ಗೆ ವಿವರ ತಿಳಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmzchc5zy4tndasqfzm320zp,imgname-workplace-woman-employee-harassed-lip-kiss-1774874833087.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ/ಕೊಯಮತ್ತೂರು: ಭಾ&lt;/strong&gt;ರತದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಘಟನೆ ಸಾಕ್ಷಿಯಾಗಿದೆ. ಗೋದಾಮಿನ ಆಫೀಸಿನಲ್ಲಿ (Warehouse) ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯನ್ನು ಮೇಲೆ ಆಕೆಯ ಸಹೋದ್ಯೋಗಿಯೇ ಎಳೆದಾಡಿ ತುಟಿ ಕಚ್ಚುತ್ತಾ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಈ ಘಟನೆ ತಮಿಳುನಾಡಿದ ಕೊಯಮತ್ತೂರಿನ ವೇರ್&zwnj;ಹೌಸ್&zwnj;ನಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ, ಗೋದಾಮಿನ ಒಳಗೆ ಮಹಿಳೆಯೊಬ್ಬರು ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬರುವ ವ್ಯಕ್ತಿಯೊಬ್ಬ ಕಂಪ್ಯೂಟರ್&zwnj;ನಲ್ಲಿ ಏನೋ ತಪ್ಪಾಗಿದೆ ಎಂದು ತೋರಿಸುತ್ತಾ ಮುಂದಕ್ಕೆ ಬಾಗುತ್ತಾನೆ. ಕುರ್ಚಿಯಲ್ಲಿ ಕುಳಿತಿದ್ದ ಮಹಿಳಾ ಉದ್ಯೋಗಿ ಕಂಪ್ಯೂಟರ್&zwnj;ನಲ್ಲಿ ನೋಡುತ್ತಿದ್ದಾಗ ಮುಖದ ಹತ್ತಿರದಲ್ಲಿಯೇ ಟೇಬಲ್ ಬಳಿ ಬಗ್ಗಿದ್ದ ಪುರುಷ ಸಹೋದ್ಯೋಗಿ ಏಕಾಏಕಿ ಆಕೆಯ ತುಟಿಗೆ ಚುಂಬಿಸಲು ಮುಂದಾಗುತ್ತಾನೆ. ಇದಕ್ಕೆ ವಿರೋಧಿಸಿ ತಕ್ಷಣವೇ ಗಾಬರಿಬಿದ್ದು ಹಿಂದಕ್ಕೆ ಸರಿದ ಮಹಿಳಾ ಉದ್ಯೋಗಿಯನ್ನ ಹಿಡಿದು ಎಳೆದಾಡಿ, ಬಲವಂತವಾಗಿ ಮುತ್ತಿಡಲು ಪ್ರಯತ್ನಿಸುತ್ತಾನೆ. ಇದ್ಯಾಕೋ ಗಂಭೀರ ಪರಿಸ್ಥಿತಿಗೆ ಹೋಗುತ್ತದೆ ಎಂದು ಎಚ್ಚೆತ್ತ ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ಚೇರಿನಿಂದ ಎದ್ದು ಹಿಂದಕ್ಕೆ ಓಡಿ ಹೋಗುತ್ತಾರೆ.&lt;/p&gt;&lt;p&gt;ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್&zwnj;ನಲ್ಲಿ ರಮೇಶ್ ತಿವಾರಿ ಎಂಬುವವರು ಹಂಚಿಕೊಂಡಿದ್ದು, 'ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯ ಕಹಿ ಸತ್ಯವಿದು' ಎಂದು ಬರೆದುಕೊಂಡಿದ್ದಾರೆ. ಈ ಘಟನೆಯು ಕೇವಲ ಒಂದು ಅಪರಾಧವಲ್ಲ, ಬದಲಿಗೆ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ರಕ್ಷಣೆ ನೀಡುವಲ್ಲಿ ವ್ಯವಸ್ಥೆ ಸೋಲುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ನಿಮ್ಮ ರಕ್ಷಣೆಗೆ ಇದೆ 'ಪೋಶ್' (POSH) ಕಾಯ್ದೆ:&lt;/strong&gt;&lt;/h2&gt;&lt;p&gt;ಕೆಲಸದ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆದಾಗ ಅಥವಾ ಲೈಂಗಿಕ ಕಿರುಕುಳ ಎದುರಾದಾಗ ಮಹಿಳೆಯರನ್ನು ರಕ್ಷಿಸಲು ಭಾರತದಲ್ಲಿ ಅತ್ಯಂತ ಬಲಿಷ್ಠವಾದ ಕಾನೂನು ಇದೆ. ಅದೇ 'ಪೋಶ್ ಕಾಯ್ದೆ 2013' (The POSH Act 2013 - Sexual Harassment of Women at Workplace Act). ಪ್ರತಿಯೊಬ್ಬ ಉದ್ಯೋಗಿ ಮಹಿಳೆಯೂ ಈ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಇಂದಿನ ಕಾಲದಲ್ಲಿ ಅತ್ಯಗತ್ಯ.&lt;/p&gt;&lt;h3&gt;&lt;strong&gt;ಪೋಶ್ ಕಾಯ್ದೆಯ ಪ್ರಮುಖ ಅಂಶಗಳು:&lt;/strong&gt;&lt;/h3&gt;&lt;p&gt;ಲೈಂಗಿಕ ಕಿರುಕುಳದ ವ್ಯಾಖ್ಯಾನ: ಅನಪೇಕ್ಷಿತ ದೈಹಿಕ ಸಂಪರ್ಕ, ಲೈಂಗಿಕ ಮುನ್ಸೂಚನೆ ಇರುವ ಮಾತುಗಳು, ಲೈಂಗಿಕ ಬಯಕೆಯ ಪ್ರದರ್ಶನ ಅಥವಾ ಅಶ್ಲೀಲ ಸನ್ನೆಗಳನ್ನು ಈ ಕಾಯ್ದೆಯಡಿ ಗಂಭೀರ ಅಪರಾಧ ಎಂದು ಪರಿಗಣಿಸಲಾಗುತ್ತದೆ.&lt;/p&gt;&lt;p&gt;&lt;strong&gt;ಆಂತರಿಕ ದೂರು ಸಮಿತಿ (ICC): &lt;/strong&gt;10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆಯೂ ಕಡ್ಡಾಯವಾಗಿ 'ಆಂತರಿಕ ದೂರು ಸಮಿತಿ'ಯನ್ನು (Internal Complaints Committee - ICC) ರಚಿಸಬೇಕು. ಇದರ ಮುಖ್ಯಸ್ಥರು ಮಹಿಳೆಯೇ ಆಗಿರಬೇಕು.&lt;/p&gt;&lt;p&gt;&lt;strong&gt;ಶೂನ್ಯ ಸಹನೆ (Zero Tolerance): &lt;/strong&gt;ಲೈಂಗಿಕ ಕಿರುಕುಳದ ದೂರು ಬಂದಾಗ ಸಂಸ್ಥೆಯು ಕಟ್ಟುನಿಟ್ಟಿನ ತನಿಖೆ ನಡೆಸಬೇಕು ಮತ್ತು ದೂರು ನೀಡಿದ ಮಹಿಳೆಯ ಗೌಪ್ಯತೆಯನ್ನು ಕಾಪಾಡಬೇಕು.&lt;/p&gt;&lt;p&gt;&lt;strong&gt;ದೂರು ದಾಖಲಿಸುವುದು ಹೇಗೆ?: &lt;/strong&gt;ಕಿರುಕುಳ ಎದುರಿಸಿದ ಮಹಿಳೆ ಘಟನೆ ನಡೆದ ಮೂರು ತಿಂಗಳ ಒಳಗಾಗಿ ಐಸಿಸಿ (ICC) ಸಮಿತಿಗೆ ಲಿಖಿತ ದೂರು ನೀಡಬಹುದು. ಒಂದು ವೇಳೆ ಸಂಸ್ಥೆಯಲ್ಲಿ ಸಮಿತಿ ಇಲ್ಲದಿದ್ದರೆ, ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿಗೆ (LCC) ದೂರು ನೀಡಬಹುದು.&lt;/p&gt;&lt;p&gt; Do You Know?If sexual harassment happens at your workplace, do you know there is a strong law to protect you?️Yes! The POSH Act 2013️The Sexual Harassment of Women at Workplace (Prevention, Prohibition and Redressal) Act, 2013 &mdash; commonly known as the POSH Act &mdash; is a&hellip;&lt;/p&gt;&lt;p&gt;&mdash; Ramesh Tiwari (@rameshofficial0) March 28, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಸಂಸ್ಥೆಗಳ ಜವಾಬ್ದಾರಿ:&lt;/strong&gt;&lt;/h3&gt;&lt;p&gt;ಕೆಲಸದ ಸ್ಥಳದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸುವುದು ಪ್ರತಿಯೊಂದು ಕಂಪನಿಯ ಆದ್ಯ ಕರ್ತವ್ಯ. ಕೇವಲ ಸಿಸಿಟಿವಿ ಅಳವಡಿಸಿದರೆ ಸಾಲದು, ಬದಲಿಗೆ ಉದ್ಯೋಗಿಗಳಲ್ಲಿ ಜಾಗೃತಿ ಮೂಡಿಸಬೇಕು. ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಇತರರಿಗೆ ಎಚ್ಚರಿಕೆ ನೀಡಬೇಕಿದೆ. ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವುದು ನಿಮ್ಮ ಹಕ್ಕು. ಯಾವುದೇ ರೀತಿಯ ಕಿರುಕುಳವನ್ನು ಸಹಿಸಬೇಡಿ, ಧ್ವನಿ ಎತ್ತಿ ಮತ್ತು ಕಾನೂನಿನ ನೆರವು ಪಡೆಯಿರಿ ಎಂದು ಟ್ವೀಟ್ ಮೂಲಕ ತಮ್ಮ ಕಾಳಜಿ ಮತ್ತು ರಕ್ಷಣಾ ಅಂಶಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/workplace-woman-employee-harassed-try-to-kiss-at-warehouse-cctv-video-posh-act-2013-awareness-sat/articleshow-wiui696"/>
        </item>
        <item>
            <title><![CDATA[Layoff Story: ಕೆಲಸ ಹೋದ್ರೆ ಹೋಯ್ತು ಬಿಡಿ! ಸರಿಯಾಗಿ ಪ್ಲಾನ್ ಮಾಡಿದ ಬೆಂಗಳೂರು ಒರಾಕಲ್ ಉದ್ಯೋಗಿಯ ಸಕ್ಸಸ್ ಸ್ಟೋರಿ ಇದು]]></title>
            <link>https://kannada.asianetnews.com/gallery/jobs/oracle-employee-turns-layoff-into-opportunity-with-smart-savings-kvn-zyhs1zl</link>
            <guid isPermaLink="true">https://kannada.asianetnews.com/gallery/jobs/oracle-employee-turns-layoff-into-opportunity-with-smart-savings-kvn-zyhs1zl</guid>
            <pubDate>Wed, 08 Apr 2026 14:13:13 +0530</pubDate>
            <description><![CDATA[&lt;p&gt;ಐಟಿ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಲೇಆಫ್&zwnj;ಗಳು ನಡೆಯುತ್ತಿವೆ. ಕೆಲಸ ಕಳೆದುಕೊಂಡ ಅನೇಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಒರಾಕಲ್ ಕಂಪನಿಯ ಮಾಜಿ ಇಂಜಿನಿಯರ್ ಒಬ್ಬರು, ಕೆಲಸ ಹೋದರೂ ಪರಿಸ್ಥಿತಿಯನ್ನು ಎದುರಿಸುತ್ತಿರುವ ರೀತಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k96s3fsvhxtph0b5nyat0th2,imgname-tamil-news---2025-11-04t120208.316-1762237988666.png" type="image/jpeg" height="390" width="690"/>
            <content:encoded><![CDATA[&lt;p&gt;ಐಟಿ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಲೇಆಫ್&zwnj;ಗಳು ನಡೆಯುತ್ತಿವೆ. ಕೆಲಸ ಕಳೆದುಕೊಂಡ ಅನೇಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಒರಾಕಲ್ ಕಂಪನಿಯ ಮಾಜಿ ಇಂಜಿನಿಯರ್ ಒಬ್ಬರು, ಕೆಲಸ ಹೋದರೂ ಪರಿಸ್ಥಿತಿಯನ್ನು ಎದುರಿಸುತ್ತಿರುವ ರೀತಿ ವೈರಲ್ ಆಗಿದೆ.&lt;/p&gt;&lt;img&gt;ಒರಾಕಲ್ ಕಂಪನಿಯಿಂದ ಲೇಆಫ್ ಆದ ತಕ್ಷಣ ಈ ಇಂಜಿನಿಯರ್ ಬೆಂಗಳೂರಿನಲ್ಲೇ ಬೇರೆ ಕೆಲಸ ಹುಡುಕಲಿಲ್ಲ. ಬದಲಾಗಿ, ಅವರು ತಮ್ಮ ತವರೂರಾದ ಒಡಿಶಾದ ಭುವನೇಶ್ವರಕ್ಕೆ ಮರಳಿದರು. ಅಲ್ಲಿ ತಮ್ಮ ಪೋಷಕರೊಂದಿಗೆ ವಾಸಿಸುತ್ತಾ, ಮೆಟ್ರೋ ನಗರದ ದುಬಾರಿ ಖರ್ಚುಗಳನ್ನು ಕಡಿಮೆ ಮಾಡಿಕೊಂಡರು. ಇದರಿಂದ ಅವರ ಜೀವನ ವೆಚ್ಚವೂ ಕಡಿಮೆಯಾಯಿತು.&lt;img&gt;ಅವರಿಗೆ ಮೊದಲೇ ಡ್ರೈವಿಂಗ್&zwnj;ನಲ್ಲಿ ಕೌಶಲ್ಯವಿತ್ತು. ಅದನ್ನು ಬಳಸಿಕೊಂಡು ಅವರು ಊಬರ್ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅಗತ್ಯವಿದ್ದಾಗ ಮಾತ್ರ ಕೆಲಸ ಮಾಡುತ್ತಾ, ತಮಗೆ ಬೇಕಾದಷ್ಟು ಆದಾಯ ಗಳಿಸುತ್ತಿದ್ದಾರೆ. ಈ ನಿರ್ಧಾರವು ಆರ್ಥಿಕ ಒತ್ತಡದಿಂದಲ್ಲ, ಬದಲಾಗಿ ಸುಮ್ಮನೆ ಕೂರಬಾರದು ಎಂಬ ಯೋಚನೆಯಿಂದ ಬಂದಿದೆ.&lt;img&gt;&lt;p&gt;ಈ ಕಥೆಯನ್ನು ನಾಯಕ ಸತ್ಯ ಎಂಬುವವರು 'X' (ಹಿಂದಿನ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಈ ಇಂಜಿನಿಯರ್ ಬಹಳ ಹಿಂದಿನಿಂದಲೇ ವ್ಯವಸ್ಥಿತವಾಗಿ ಉಳಿತಾಯ ಮಾಡುತ್ತಿದ್ದರು. ಅವರನ್ನು ಒರಾಕಲ್ ಕಂಪನಿಯು ಕಿಕೌಟ್ ಮಾಡುವ ಮುನ್ನ ಅವರ ಬಳಿ ಸುಮಾರು 60 ಲಕ್ಷ ರುಪಾಯಿ ಉಳಿತಾಯವಿತ್ತು. ಪೋಸ್ಟಲ್ ಸ್ಕೀಮ್&zwnj;ಗಳಲ್ಲಿ ತಲಾ 15 ಲಕ್ಷ ರೂಪಾಯಿಯಂತೆ ಎರಡು ಜಂಟಿ ಖಾತೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಒಂದು ಖಾತೆ ಪೋಷಕರೊಂದಿಗೆ ಮತ್ತು ಇನ್ನೊಂದು ಪತ್ನಿಯೊಂದಿಗೆ ಇದೆ. ಹೆಚ್ಚುವರಿಯಾಗಿ, ತಮ್ಮ ಮಕ್ಕಳ ಹೆಸರಿನಲ್ಲೂ ಸಣ್ಣ ಮೊತ್ತದ ಠೇವಣಿ ಇಟ್ಟಿದ್ದಾರೆ.&lt;/p&gt;&lt;img&gt;&lt;p&gt;ಈ ಹೂಡಿಕೆಗಳಿಂದ ಅವರಿಗೆ ಪ್ರತಿ ತಿಂಗಳು ಸುಮಾರು 28,000 ರೂಪಾಯಿ ಬಡ್ಡಿ ಬರುತ್ತದೆ. ಇದರ ಜೊತೆಗೆ, ವಿವಿಧ ಬ್ಯಾಂಕ್&zwnj;ಗಳಲ್ಲಿ ಸುಮಾರು 30 ಲಕ್ಷ ರೂಪಾಯಿಗಳ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದಾರೆ. ಅವುಗಳಿಂದ ತಿಂಗಳಿಗೆ ಮತ್ತೊಂದು 15,000 ರೂಪಾಯಿ ಬಡ್ಡಿ ಬರುತ್ತದೆ. ಒಟ್ಟಾರೆಯಾಗಿ, ತಿಂಗಳಿಗೆ 40,000 ರೂಪಾಯಿಗಿಂತ ಹೆಚ್ಚು ನಿಶ್ಚಿತ ಆದಾಯ (passive income) ಬರುತ್ತಿದೆ. ಹೀಗಾಗಿ, ಕೆಲಸ ಹೋದರೂ ಅವರಿಗೆ ಆರ್ಥಿಕ ಒತ್ತಡವಿಲ್ಲ.&lt;/p&gt;&lt;img&gt;&lt;p&gt;ಈಗ ಅವರು ತಮ್ಮ ಪೋಷಕರೊಂದಿಗೆ ಸೇರಿ ಒಂದು ಸಣ್ಣ ವ್ಯಾಪಾರವನ್ನು ಪ್ರಾರಂಭಿಸುವ ಯೋಜನೆಯಲ್ಲಿದ್ದಾರೆ. ಈ ಹಂತವನ್ನು ಅವರು ಸಮಸ್ಯೆಯಾಗಿ ನೋಡದೆ, ಒಂದು ಬದಲಾವಣೆಯಾಗಿ ಸ್ವೀಕರಿಸಿದ್ದಾರೆ. ಮುಖ್ಯವಾಗಿ, ಅವರಿಗೆ ಯಾವುದೇ ಸಾಲ ಅಥವಾ ಇಎಂಐಗಳಿಲ್ಲ. ಅದಕ್ಕಾಗಿಯೇ ಅವರು ಪರಿಸ್ಥಿತಿಯನ್ನು ಶಾಂತವಾಗಿ ಎದುರಿಸುತ್ತಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಈ ಕಥೆಯನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಅವರ ಯೋಚನೆಯನ್ನು ಶ್ಲಾಘಿಸುತ್ತಿದ್ದಾರೆ. ಸರಿಯಾದ ಉಳಿತಾಯ ಮತ್ತು ಸರಳ ಜೀವನಶೈಲಿ ಇದ್ದರೆ ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/jobs/oracle-employee-turns-layoff-into-opportunity-with-smart-savings-kvn-zyhs1zl"/>
        </item>
    </channel>
</rss>
