<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 18 Sep 2026 09:32:54 +0530</lastBuildDate>
        <atom:link href="https://kannada.asianetnews.com/rss/jobs" rel="self" type="application/rss+xml"/>
        <item>
            <title><![CDATA[NCRTC ನೇಮಕಾತಿ 2026: 90 ಹುದ್ದೆಗಳಿಗೆ ಅರ್ಜಿ ಆಹ್ವಾನ, 1.5 ಲಕ್ಷವರೆಗೆ ವೇತನ! ಆಸಕ್ತರು ಅರ್ಜಿ ಸಲ್ಲಿಸಿ]]></title>
            <link>https://kannada.asianetnews.com/jobs/ncrtc-recruitment-2026-supervisor-and-junior-maintainer-post-apply-now-gdp/articleshow-16g1uk1</link>
            <guid isPermaLink="true">https://kannada.asianetnews.com/jobs/ncrtc-recruitment-2026-supervisor-and-junior-maintainer-post-apply-now-gdp/articleshow-16g1uk1</guid>
            <pubDate>Thu, 17 Sep 2026 13:36:36 +0530</pubDate>
            <description><![CDATA[ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮವು (NCRTC) 2026ನೇ ಸಾಲಿನ 90 ಸೂಪರ್&zwnj;ವೈಸರ್ ಮತ್ತು ಜೂನಿಯರ್ ಮೆಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ, ಪದವಿ ಅಥವಾ ಐಟಿಐ ಮುಗಿಸಿದ ಅಭ್ಯರ್ಥಿಗಳು ಅಕ್ಟೋಬರ್ 9, 2026 ರೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2q60jhmj30a431409df6wrc,imgname-ncrtc-1789631941171.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮವು (NCRTC) 2026ರ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಸೂಪರ್&zwnj;ವೈಸರ್ ಮತ್ತು ಜೂನಿಯರ್ ಮೆಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;ಹುದ್ದೆಗಳ ವಿವರ:&lt;/h2&gt;&lt;p&gt;ಸಂಸ್ಥೆಯ ಹೆಸರು: ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC)&lt;/p&gt;&lt;p&gt;ಒಟ್ಟು ಹುದ್ದೆಗಳು: 90&lt;/p&gt;&lt;p&gt;ಸೂಪರ್&zwnj;ವೈಸರ್ (62 ಹುದ್ದೆಗಳು), ಜೂನಿಯರ್ ಮೆಂಟೇನರ್ (28 ಹುದ್ದೆಗಳು):&lt;/p&gt;&lt;p&gt;ಉದ್ಯೋಗ ಸ್ಥಳ: ಅಖಿಲ ಭಾರತ (All India)&lt;/p&gt;&lt;p&gt;ವೇತನ ಶ್ರೇಣಿ: ತಿಂಗಳಿಗೆ 18,250 ರಿಂದ-1,50,000&lt;/p&gt;&lt;h2&gt;ಯಾರಿಗೆಲ್ಲ ಅರ್ಹತೆ ಇದೆ?&lt;/h2&gt;&lt;p&gt;ಸೂಪರ್&zwnj;ವೈಸರ್: ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ, ಪದವಿ, BE/B.Tech, BCA, B.Sc, MCA ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು.&lt;/p&gt;&lt;p&gt;ಜೂನಿಯರ್ ಮೆಂಟೇನರ್: ಸಂಬಂಧಿತ ವಿಭಾಗದಲ್ಲಿ ITI ಪೂರ್ಣಗೊಳಿಸಿರಬೇಕು.&lt;/p&gt;&lt;p&gt;&lt;strong&gt;ವಯೋಮಿತಿ&lt;/strong&gt;: ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 28 ವರ್ಷ ಮೀರರಬಾರದು. ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಲಭ್ಯವಿದೆ.&lt;/p&gt;&lt;p&gt;&lt;strong&gt;ವಯೋಮಿತಿ ಸಡಿಲಿಕೆ:&lt;/strong&gt;&lt;/p&gt;&lt;p&gt;ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ&lt;/p&gt;&lt;p&gt;ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ: 5 ವರ್ಷಪಿಡಬ್ಲ್ಯೂಬಿಡಿ (ಅಂಗವಿಕಲ) ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷಗಳು&lt;/p&gt;&lt;h2&gt;ಅರ್ಜಿ ಶುಲ್ಕ ಎಷ್ಟು?&lt;/h2&gt;&lt;p&gt;UR, OBC, EWS ಮತ್ತು ಮಾಜಿ ಸೈನಿಕರು: 500 ರು.&lt;/p&gt;&lt;p&gt;ಎಸ್&zwnj;ಸಿ, ಎಸ್&zwnj;ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ&lt;/p&gt;&lt;p&gt;ಪಾವತಿ ವಿಧಾನ: ಆನ್&zwnj;ಲೈನ್ ಮೂಲಕ&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ ಹೇಗೆ?&lt;/h2&gt;&lt;p&gt;ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಹಾಗೂ ವೈದ್ಯಕೀಯ ಫಿಟ್&zwnj;ನೆಸ್ (Medical Test) ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.&lt;/p&gt;&lt;h2&gt;ಅರ್ಜಿ ಸಲ್ಲಿಸುವುದು ಹೇಗೆ?&lt;/h2&gt;&lt;p&gt;ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.&lt;/p&gt;&lt;p&gt;ಅಗತ್ಯ ದಾಖಲೆಗಳು (ಐಡಿ ಪ್ರೂಫ್, ಶೈಕ್ಷಣಿಕ ಪ್ರಮಾಣಪತ್ರ, ಫೋಟೋ, ಸಹಿ) ಸಿದ್ಧವಿಟ್ಟುಕೊಳ್ಳಿ.&lt;/p&gt;&lt;p&gt;NCRTC ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ, ಆನ್&zwnj;ಲೈನ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.&lt;/p&gt;&lt;p&gt;ಅರ್ಜಿ ಶುಲ್ಕ ಪಾವತಿಸಿ, &lsquo;Submit&rsquo; ನೀಡಿ ಅರ್ಜಿಯ ಪ್ರಿಂಟ್&zwnj;ಔಟ್ ತೆಗೆದಿಟ್ಟುಕೊಳ್ಳಿ.&lt;/p&gt;&lt;p&gt;ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಸೆಪ್ಟೆಂಬರ್ 10 2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 9 2026&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/ncrtc-recruitment-2026-supervisor-and-junior-maintainer-post-apply-now-gdp/articleshow-16g1uk1"/>
        </item>
        <item>
            <title><![CDATA[ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ ಫ್ರೆಶರ್‌ಗಳ ವಾರ್ಷಿಕ ಸ್ಯಾಲರಿ ಪ್ಯಾಕೇಜ್‌ಗಿಂತ ದುಬಾರಿ iPhone Duo, ಭಾರೀ ವೈರಲ್‌ ಆದ ಪೋಸ್ಟ್‌]]></title>
            <link>https://kannada.asianetnews.com/viral/iphone-duo-price-vs-it-fresher-salary-viral-post-san/articleshow-2drwetx</link>
            <guid isPermaLink="true">https://kannada.asianetnews.com/viral/iphone-duo-price-vs-it-fresher-salary-viral-post-san/articleshow-2drwetx</guid>
            <pubDate>Fri, 11 Sep 2026 19:14:17 +0530</pubDate>
            <description><![CDATA[&lt;p&gt;ಆಪಲ್&zwnj;ನ ಹೊಸ 'ಐಫೋನ್ ಡ್ಯುಯೋ' ಬೆಲೆಯು ಭಾರತದ ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್&zwnj;ನ ಫ್ರೆಷರ್ಸ್ ವಾರ್ಷಿಕ ಸಂಬಳಕ್ಕೆ ಸಮನಾಗಿದೆ ಎಂದು 'ಎಕ್ಸ್'ನಲ್ಲಿ ವೈರಲ್ ಆದ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m28b8mfmh0z5v0f2pnzxnt87,imgname-it-fresher-ann-iphone-duo-1789134131700.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): &lt;/strong&gt;ಜಾಗತಿಕ ತಂತ್ರಜ್ಞಾನ ದೈತ್ಯ 'ಆಪಲ್' (Apple) ಸಂಸ್ಥೆಯು ತನ್ನ ಚೊಚ್ಚಲ ಫೋಲ್ಡಬಲ್ ಸ್ಮಾರ್ಟ್&zwnj;ಫೋನ್ 'ಐಫೋನ್ ಡ್ಯುಯೋ' (iPhone Duo) ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಂತೆ, ಅದರ ಭಾರತದ ಪ್ರೀಮಿಯಂ ಬೆಲೆಗಳನ್ನು ಕಂಡ ತಂತ್ರಜ್ಞಾನ ಪ್ರಿಯರು ತಲೆಬಿಸಿ ಮಾಡಿಕೊಂಡಿದ್ದಾರೆ. ಪ್ರೀಮಿಯಂ ಸ್ಮಾರ್ಟ್&zwnj;ಫೋನ್&zwnj;ಗಳ ಬೆಲೆಗಳು ಎಷ್ಟು ಗಗನಕ್ಕೇರಿವೆ ಎಂದರೆ, ಪ್ರಮುಖ ಐಟಿ ಕಂಪನಿಗಳು ಪದವೀಧರ ಫ್ರೆಷರ್&zwnj;ಗಳಿಗೆ ನೀಡುವ ವಾರ್ಷಿಕ ಸ್ಯಾಲರಿ ಪ್ಯಾಕೇಜ್&zwnj;ಗೆ (Annual CTC) ಈ ಫೋನ್&zwnj;ನ ಬೆಲೆಗಳು ನೇರವಾಗಿ ಪೈಪೋಟಿ ನೀಡುತ್ತಿವೆ!&lt;/p&gt;&lt;p&gt;'ಎಕ್ಸ್'ನಲ್ಲಿ (X) ಗಗನ್ ಎಂಬುವವರು 'ಐಫೋನ್ ಡ್ಯುಯೋ' ಮಾದರಿಗಳ ಬೆಲೆಯನ್ನು ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ವಿಪ್ರೋ, ಅಕ್ಸೆಂಚರ್ ಹಾಗೂ ಇನ್ಫೋಸಿಸ್ ನೀಡುವ ಫ್ರೆಷರ್ಸ್&zwnj; ಸ್ಯಾಲರಿಗೆ ಹೋಲಿಸಿ ಮಾಡಿರುವ ಪೋಸ್ಟ್ ಈಗ ಇಂಟರ್ನೆಟ್&zwnj;ನಲ್ಲಿ ತೀವ್ರ ವೈರಲ್ ಆಗಿದೆ.&lt;/p&gt;&lt;h2&gt;&lt;strong&gt;ವೈರಲ್ ಪೋಸ್ಟ್&zwnj;ನಲ್ಲಿರುವ ಬೆಲೆ ಹಾಗೂ ಸಂಬಳದ ಹೋಲಿಕೆ ಇಲ್ಲಿದೆ&lt;/strong&gt;&lt;/h2&gt;&lt;p&gt;&lt;strong&gt;256GB ಆವೃತ್ತಿ&lt;/strong&gt; &ndash; ₹2,99,900. ಇದು ಟಿಸಿಎಸ್ (TCS) ಕಂಪನಿಯ ಫ್ರೆಷರ್ಸ್&zwnj; ವಾರ್ಷಿಕ ಸ್ಯಾಲರಿ ಪ್ಯಾಕೇಜ್.&lt;/p&gt;&lt;p&gt;&lt;strong&gt;512GB ಆವೃತ್ತಿ &lt;/strong&gt;&ndash; ₹3,24,900 ಇದು ವಿಪ್ರೋ (Wipro) ಸಂಸ್ಥೆಗೆ ಸೇರುವ ಫ್ರೆಶರ್&zwnj; ಉದ್ಯೋಗಿಯ ವಾರ್ಷಿಕ ವೇತನ.&lt;/p&gt;&lt;p&gt;&lt;strong&gt;1TB ಆವೃತ್ತಿ &lt;/strong&gt;&ndash; ₹3,74,900. ಇದು ಅಕ್ಸೆಂಚರ್ (Accenture) ಕಂಪನಿಯ ವೇರಿಯೇಬಲ್ ಪೇ ಸೇರಿದಂತೆ ಸಿಗುವ ವಾರ್ಷಿಕ ವೇತನ.&lt;/p&gt;&lt;p&gt;&lt;strong&gt;2TB ಆವೃತ್ತಿ &lt;/strong&gt;&ndash; ₹4,49,900. ಇದು ಇನ್ಫೋಸಿಸ್ (Infosys) ಸಂಸ್ಥೆಯ ಆರಂಭಿಕ ಹಂತದ ಫ್ರೆಷರ್ಸ್&zwnj; ವಾರ್ಷಿಕ ಸಿಟಿಸಿ.&lt;/p&gt;&lt;h2&gt;&lt;strong&gt;ಫೋನ್ ಸ್ಪೆಸಿಫಿಕೇಶನ್ ವರ್ಸಸ್ ವಾಸ್ತವ ಬಜೆಟ್&lt;/strong&gt;&lt;/h2&gt;&lt;p&gt;ನಿಮ್ಮ ಸ್ಮಾರ್ಟ್&zwnj;ಫೋನ್&zwnj;ನ ಆರಂಭಿಕ ಬೆಲೆಯೇ ಒಬ್ಬ ಐಟಿ ಫ್ರೆಷರ್&zwnj;ನ ವಾರ್ಷಿಕ ಸಿಟಿಸಿಯಂತೆ (CTC) ಕಾಣಲು ಪ್ರಾರಂಭಿಸಿದಾಗ, ವಿಷಯಗಳು ನಿಜಕ್ಕೂ ಗಂಭೀರ ಹಂತಕ್ಕೆ ತಲುಪಿವೆ ಎಂಬುದು ಅರಿವಾಗುತ್ತದೆ ಎಂದು ವೈರಲ್ ಪೋಸ್ಟ್ ತಮಾಷೆಯಾಗಿ ಚಾಟಿ ಬೀಸಿದೆ.&lt;/p&gt;&lt;p&gt;ಒಂದು ಕಾಲದಲ್ಲಿ ಸ್ಮಾರ್ಟ್&zwnj;ಫೋನ್ ಖರೀದಿಸುವಾಗ ಇದರ ಸ್ಪೆಸಿಫಿಕೇಶನ್&zwnj;ಗಳು ಮತ್ತು ಫೀಚರ್&zwnj;ಗಳು ಏನೇನಿವೆ? ಎಂದು ರಿಸರ್ಚ್ ಮಾಡುತ್ತಿದ್ದ ಜನ, ಇಂದು ಪ್ರೀಮಿಯಂ ಫೋನ್&zwnj;ಗಳ ಬೆಲೆ ನೋಡಿ &quot;ಇದನ್ನು ಕೊಳ್ಳಲು ನನ್ನಿಂದ ನಿಜಕ್ಕೂ ಸಾಧ್ಯವೇ?&quot; ಎಂದು ಯೋಚಿಸುವ ಸ್ಥಿತಿಗೆ ತಲುಪಿದ್ದಾರೆ. &quot;ಒಂದು ಇಡೀ ವರ್ಷ ಕಷ್ಟಪಟ್ಟು ದುಡಿದ ಸಂಪೂರ್ಣ ಸಂಬಳವನ್ನು ಕೇವಲ ಒಂದೇ ಒಂದು ಸ್ಮಾರ್ಟ್&zwnj;ಫೋನ್ ಖರೀದಿಸಲು ನೀವು ಖರ್ಚು ಮಾಡುತ್ತೀರಾ?&quot; ಎಂಬ ಪ್ರಶ್ನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ಐಟಿ ವಲಯದಲ್ಲಿ ಇಂದಿಗೂ ಆರಂಭಿಕ ಹಂತದ ವೇತನಗಳು ಹತ್ತಾರು ವರ್ಷಗಳಿಂದ ಗಣನೀಯವಾಗಿ ಏರಿಕೆಯಾಗದಿರುವುದು ಮತ್ತು ಇನ್ನೊಂದೆಡೆ ಪ್ರೀಮಿಯಂ ತಂತ್ರಜ್ಞಾನದ ಬೆಲೆ ಕಲ್ಪನೆಗೂ ಮೀರಿದ ವೇಗದಲ್ಲಿ ಗಗನಕ್ಕೇರುತ್ತಿರುವುದನ್ನು ಈ ವೈರಲ್ ಪೋಸ್ಟ್ ಅತ್ಯಂತ ರೋಚಕವಾಗಿ ಹಾಗೂ ಹಾಸ್ಯಾಸ್ಪದವಾಗಿ ಪ್ರತಿಬಿಂಬಿಸಿದೆ.&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/viral/iphone-duo-price-vs-it-fresher-salary-viral-post-san/articleshow-2drwetx"/>
        </item>
        <item>
            <title><![CDATA[ಐಟಿ ಕಂಪನಿಯಲ್ಲಿ ರಾತ್ರಿಪಾಳಿ ಮಾಡುವ ಮಹಿಳಾ ಟೆಕ್ಕಿಗಳ ಸುರಕ್ಷತಾ ನಿಯಮ ಹಿಂಪಡೆದ ಸರ್ಕಾರ; ನೌಕರರಿಂದ ಆಕ್ರೋಶ]]></title>
            <link>https://kannada.asianetnews.com/state/karnataka-govt-rolls-back-women-night-shift-safety-rules-kitu-protests-sat/articleshow-2h5npwl</link>
            <guid isPermaLink="true">https://kannada.asianetnews.com/state/karnataka-govt-rolls-back-women-night-shift-safety-rules-kitu-protests-sat/articleshow-2h5npwl</guid>
            <pubDate>Tue, 15 Sep 2026 11:12:32 +0530</pubDate>
            <description><![CDATA[&lt;p&gt;ಐಟಿ/ಬಿಟಿ ಸಂಸ್ಥೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಸುರಕ್ಷತೆ ಮತ್ತು ಸಾರಿಗೆ ನಿಯಮಗಳನ್ನು ಕರ್ನಾಟಕ ಸರ್ಕಾರ ಹಿಂಪಡೆದಿದೆ. ಈ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಮಹಿಳೆಯರನ್ನು ಅಸುರಕ್ಷತೆಗೆ ತಳ್ಳುತ್ತದೆ ಎಂದು ಎಚ್ಚರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2hs5ezfb0w0xr35m5fn84b3,imgname-bengaluru-it-employees-1789450697711.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.15): ರಾ&lt;/strong&gt;ಜ್ಯದ ಐಟಿ, ಬಿಟಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಉದ್ಯೋಗಿಗಳ ಸುರಕ್ಷತೆ ಮತ್ತು ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಕಡ್ಡಾಯ ನಿಯಮಗಳನ್ನು ಹಿಂಪಡೆದಿರುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ &lt;strong&gt;ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU)&lt;/strong&gt; ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಜನವಿರೋಧಿ ತಿದ್ದುಪಡಿಯನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಸಂಘಟನೆ ಆಗ್ರಹಿಸಿದೆ.&lt;/p&gt;&lt;p&gt;ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಕಾಯ್ದೆ ಮೂಲಕ ಕಾಯ್ದೆಯ ಕಲಂ 25(1)(h) ನಿಂದ 25(1)(o) ವರೆಗಿನ ಉಪ-ವಿಧಿಗಳನ್ನು ಕೈಬಿಡಲಾಗಿದೆ. ಈ ವಿಧಿಗಳು ರಾತ್ರಿ ವೇಳೆ ಕೆಲಸ ಮಾಡುವ ಮಹಿಳೆಯರ ಪ್ರಯಾಣ, ವಾಹನ ಚಾಲಕರ ಹಿನ್ನೆಲೆ ಪರಿಶೀಲನೆ, ಭದ್ರತಾ ಸಿಬ್ಬಂದಿ ಒದಗಿಸುವಿಕೆ ಸೇರಿದಂತೆ ಹಲವು ಅತ್ಯಗತ್ಯ ರಕ್ಷಣಾ ಕ್ರಮಗಳನ್ನು ಕಡ್ಡಾಯಗೊಳಿಸಿದ್ದವು. ಸರ್ಕಾರದ ಈ ಕ್ರಮದಿಂದಾಗಿ ಮಹಿಳಾ ಉದ್ಯೋಗಿಗಳನ್ನು ತೀವ್ರ ಅಸುರಕ್ಷತೆಗೆ ತಳ್ಳಿದಂತಾಗಿದೆ ಎಂದು &lsquo;ಕಿಟು&rsquo; ಎಚ್ಚರಿಸಿದೆ.&lt;/p&gt;&lt;h2&gt;&lt;strong&gt;ಸರ್ಕಾರ ಕೈಬಿಟ್ಟಿರುವ ಪ್ರಮುಖ ಸುರಕ್ಷತಾ ನಿಯಮಗಳು ಇಂತಿವೆ:&lt;/strong&gt;&lt;/h2&gt;&lt;p&gt;&lt;strong&gt;ಚಾಲಕರ ಕಡ್ಡಾಯ ಹಿನ್ನೆಲೆ ಪರಿಶೀಲನೆ:&lt;/strong&gt; ಮಹಿಳೆಯರನ್ನು ಕರೆದೊಯ್ಯುವ ಕ್ಯಾಬ್ ಚಾಲಕರ ಪೂರ್ವಾಪರ ಮತ್ತು ಪೊಲೀಸ್ ಪರಿಶೀಲನೆ ಕಡ್ಡಾಯವಾಗಿರಬೇಕಿತ್ತು.&lt;/p&gt;&lt;p&gt;&lt;strong&gt;ನಿಗದಿತ ಮಾರ್ಗಗಳು: &lt;/strong&gt;ಅಧಿಕೃತ ಪಿಕ್-ಅಪ್ ಮತ್ತು ಡ್ರಾಪ್ ಮಾರ್ಗಗಳ ನಿರ್ವಹಣೆ.&lt;/p&gt;&lt;p&gt;&lt;strong&gt;ಖಾಸಗಿತನದ ರಕ್ಷಣೆ: &lt;/strong&gt;ಮಹಿಳಾ ಉದ್ಯೋಗಿಗಳ ಮೊಬೈಲ್ ಸಂಖ್ಯೆ, ವಿಳಾಸ, ಇ-ಮೇಲ್ ಮುಂತಾದ ವಿವರಗಳು ಅನಧಿಕೃತ ವ್ಯಕ್ತಿಗಳ ಕೈಸೇರದಂತೆ ಗೌಪ್ಯತೆ ಕಾಯ್ದುಕೊಳ್ಳುವುದು.&lt;/p&gt;&lt;p&gt;&lt;strong&gt;ಮೊದಲು ಪಿಕ್/ಕೊನೆಗೆ ಡ್ರಾಪ್ ನಿರ್ಬಂಧ: &lt;/strong&gt;ರಾತ್ರಿ ವೇಳೆ ಮಹಿಳೆಯನ್ನು ಮೊದಲು ಪಿಕ್ ಮಾಡುವುದು ಅಥವಾ ಕೊನೆಯಲ್ಲಿ ಡ್ರಾಪ್ ಮಾಡುವುದನ್ನು ನಿರ್ಬಂಧಿಸಲಾಗಿತ್ತು.&lt;/p&gt;&lt;p&gt;&lt;strong&gt;ಭದ್ರತಾ ಸಿಬ್ಬಂದಿ (Security Escort):&lt;/strong&gt; ರಾತ್ರಿ ವೇಳೆ ಮಹಿಳೆಯರು ಪ್ರಯಾಣಿಸುವಾಗ ನಿರ್ದಿಷ್ಟ ಸಂದರ್ಭಗಳಲ್ಲಿ ಸೆಕ್ಯುರಿಟಿ ಗಾರ್ಡ್ ಒದಗಿಸುವುದು ಕಡ್ಡಾಯವಾಗಿತ್ತು.&lt;/p&gt;&lt;p&gt;&lt;strong&gt;ಆಕಸ್ಮಿಕ ತಪಾಸಣೆ: &lt;/strong&gt;ರಾತ್ರಿ ಪಾಳಿಯ ವಾಹನಗಳನ್ನು ಮೇಲ್ವಿಚಾರಕರು (Supervisors) ಹಠಾತ್ ತಪಾಸಣೆಗೆ ಒಳಪಡಿಸುವುದು.&lt;/p&gt;&lt;p&gt;&lt;strong&gt;ಕಂಟ್ರೋಲ್ ರೂಂ/ಟ್ರಾವೆಲ್ ಡೆಸ್ಕ್:&lt;/strong&gt; ವಾಹನಗಳ ಸಂಚಾರವನ್ನು ನೈಜ ಸಮಯದಲ್ಲಿ (Real-time) ಟ್ರ್ಯಾಕ್ ಮಾಡಲು ಕಂಟ್ರೋಲ್ ರೂಂ ವ್ಯವಸ್ಥೆ.&lt;/p&gt;&lt;p&gt;&lt;strong&gt;ತುರ್ತು ಸಹಾಯ ವ್ಯವಸ್ಥೆ:&lt;/strong&gt; ಮಹಿಳಾ ಉದ್ಯೋಗಿಗಳು ಅಪಾಯದ ಸಂದರ್ಭದಲ್ಲಿ ತಕ್ಷಣವೇ ನೆರವು ಪಡೆಯಲು ತುರ್ತು ಕರೆ/ಎಸ್&zwnj;ಒಎಸ್ (SOS) ವ್ಯವಸ್ಥೆ.&lt;/p&gt;&lt;h2&gt;&lt;strong&gt;ಉದ್ಯೋಗದಾತರ ಹೊಣೆಗಾರಿಕೆ ಕಡಿತ, ಮಹಿಳೆಯರಿಗೆ ಅಪಾಯ&lt;/strong&gt;&lt;/h2&gt;&lt;p&gt;ಕರ್ನಾಟಕದ ಐಟಿ ಮತ್ತು ಐಟಿಇಎಸ್ (IT/ITeS) ವಲಯದಲ್ಲಿ ಲಕ್ಷಾಂತರ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕ್ಷೇತ್ರದಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆಗೆ ಸುರಕ್ಷಿತ ಸಾರಿಗೆ ಮತ್ತು ಪರಿಣಾಮಕಾರಿ ಭದ್ರತಾ ವ್ಯವಸ್ಥೆಗಳು ಕನಿಷ್ಠ ಹಾಗೂ ರಾಜಿ ಮಾಡಿಕೊಳ್ಳಲಾಗದ ಷರತ್ತುಗಳಾಗಿವೆ. ಇಂತಹ ಸಂದರ್ಭದಲ್ಲಿ ಕಾನೂನುಬದ್ಧ ರಕ್ಷಣೆಯನ್ನು ಹಿಂಪಡೆಯುವುದು ಉದ್ಯೋಗದಾತ ಕಂಪನಿಗಳ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಹಿಳಾ ಉದ್ಯೋಗಿಗಳನ್ನು ಹೆಚ್ಚಿನ ಅಪಾಯಕ್ಕೆ ದೂಡುತ್ತದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.&lt;/p&gt;&lt;h2&gt;&lt;strong&gt;'ಕಿಟು' ಆಗ್ರಹವೇನು?&lt;/strong&gt;&lt;/h2&gt;&lt;p&gt;ಸರ್ಕಾರ ಯಾವುದೇ ಕಾರಣಕ್ಕೂ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು. ಸೆಕ್ಷನ್ 25(1)(h) ನಿಂದ (o) ವರೆಗಿನ ವಿಧಿಗಳನ್ನು ರದ್ದುಪಡಿಸಿರುವ ತಿದ್ದುಪಡಿಯನ್ನು ತಕ್ಷಣವೇ ವಾಪಸ್ ಪಡೆಯಬೇಕು. ಮಹಿಳೆಯರ ರಾತ್ರಿ ಪಾಳಿಯ ಸಾರಿಗೆ ಮತ್ತು ಭದ್ರತೆಗೆ ಸಂಬಂಧಿಸಿದ ಎಲ್ಲಾ ಶಾಸನಬದ್ಧ ಸುರಕ್ಷತಾ ಕ್ರಮಗಳನ್ನು ಮರುಸ್ಥಾಪಿಸಬೇಕು' ಎಂದು ಕಿಟು ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಆಗ್ರಹಿಸಿದ್ದಾರೆ.&lt;/p&gt;&lt;p&gt;ಅಲ್ಲದೆ, ಸರ್ಕಾರದ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಲು ಹಾಗೂ ಸುರಕ್ಷತಾ ನಿಯಮಗಳನ್ನು ಮರಳಿ ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಐಟಿ ಮತ್ತು ಸಂಬಂಧಿತ ವಲಯದ ಎಲ್ಲಾ ಉದ್ಯೋಗಿಗಳು ಒಗ್ಗಟ್ಟಾಗಿ ಮುಂದೆ ಬರಬೇಕೆಂದು ಸಂಘಟನೆ ಕರೆ ನೀಡಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-rolls-back-women-night-shift-safety-rules-kitu-protests-sat/articleshow-2h5npwl"/>
        </item>
        <item>
            <title><![CDATA[ಕಾರ್ಪೋರೇಟ್‌ ಜಗತ್ತಿಗೆ ಗುಡ್‌ಬೈ: ತುಳಸಿ ಕೃಷಿಯಿಂದ ತಿಂಗಳಿಗೆ 6 ಲಕ್ಷ ಆದಾಯ- ಎಂಬಿಎ ಪದವೀಧರನ ಸಾಧನೆ]]></title>
            <link>https://kannada.asianetnews.com/business/mba-graduate-earns-6-lakh-monthly-from-tulsi-cultivation-after-resiging-to-tata-job-suc/articleshow-4lkr97g</link>
            <guid isPermaLink="true">https://kannada.asianetnews.com/business/mba-graduate-earns-6-lakh-monthly-from-tulsi-cultivation-after-resiging-to-tata-job-suc/articleshow-4lkr97g</guid>
            <pubDate>Thu, 10 Sep 2026 19:37:37 +0530</pubDate>
            <description><![CDATA[ಎಂಬಿಎ ಪದವೀಧರರಾದ ಅಲೋಕ್ ಪಟ್ನಾಯಕ್ ಅವರು ತಮ್ಮ 16 ವರ್ಷಗಳ ಕಾರ್ಪೊರೇಟ್ ವೃತ್ತಿಜೀವನವನ್ನು ತೊರೆದು ತುಳಸಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ತುಳಸಿ ಎಣ್ಣೆ ಮತ್ತು ಅದರ ತ್ಯಾಜ್ಯದಿಂದ ತಯಾರಿಸಿದ ಮಣಿಗಳನ್ನು ನೇರವಾಗಿ ಕಂಪನಿಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಮಾರಾಟ ಮಾಡುವ ಮೂಲಕ ತಿಂಗಳಿಗೆ 6 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m25t9jqx22vszwwmy6120jxr,imgname-alok-patnayak-1789049228029.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾರ್ಪೋರೇಟ್&zwnj; ಜಗತ್ತಿನ ಡೆಡ್&zwnj;ಲೈನ್, ಟಾರ್ಗೆಟ್&zwnj;, ಹಗಲು-ರಾತ್ರಿ ಪಾಳಿಯಲ್ಲಿ ಕೆಲಸ... ಹೀಗೆ ಇದರ ಜಂಜಾಟವೇ ಬೇಡ ಎಂದು ಕೆಲವರು ಇದೀಗ ಹಳ್ಳಿಯತ್ತ ಮುಖ ಮಾಡುತ್ತಿದ್ದಾರೆ. ಕೆಲವರು ಎಐ ಕಾರಣದಿಂದ ಕೆಲಸ ಕಳೆದುಕೊಂಡು ಹಳ್ಳಿಗೆ ವಾಪಸಾಗುತ್ತಿದ್ದರೆ, ಮತ್ತೆ ಕೆಲವರು ಇದರ ಉಸಾಬರಿಯೇ ಬೇಡ ಎಂದು ತಮಗೆ ಇರುವ ಜಮೀನಿನಲ್ಲಿಯೇ ಕೃಷಿ ಮಾಡಲು ಮುಂದಾಗುತ್ತಿದ್ದಾರೆ. ಅವರಲ್ಲಿ ಹಲವರು ಭಾರಿ ಯಶಸ್ಸನ್ನೂ ಕಂಡಿದ್ದಾರೆ. ಅಂಥವರಲ್ಲಿ ಒಬ್ಬರು ಎಂಬಿಎ ಪದವೀಧರ ಅಲೋಕ್ ಪಟ್ನಾಯಕ್. ಟಾಟಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಇವರು, ಇದೀಗ ತುಳಸಿಯನ್ನು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;16 ವರ್ಷ ಉನ್ನತ ಹುದ್ದೆ&lt;/strong&gt;&lt;/h3&gt;&lt;p&gt;16 ವರ್ಷಗಳ ಕಾಲ ಕಾರ್ಪೊರೇಟ್ ಜಗತ್ತಿನಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಲೋಕ್&zwnj; ಅವರು, ಇದರ ಜೀವ ಸಾಕು ಎಂದೆನಿಸಿ ಕೃಷಿಯತ್ತ ವಾಲಿದರು. ಅಲ್ಲಿಯೇ ತುಳಸಿ ಬೆಳೆ ಬೆಳದು ಈಗ ಕನಿಷ್ಠ ಆರು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದು, ಇವರ ಜೀವನ ಇತರರಿಗೂ ಮಾದರಿಯಾಗಿದೆ. ಅಲೋಕ್ ಪಟ್ನಾಯಕ್ ಅವರು 2002ರಲ್ಲಿ ಸಂಬಲ್&zwnj;ಪುರ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪೂರೈಸಿದ್ದರು. 2003ರಲ್ಲಿ ಬಜಾಜ್ ಆಟೋ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು, 2009ರಲ್ಲಿ ಪ್ರತಿಷ್ಠಿತ ಟಾಟಾ ಆಟೋಮೋಟಿವ್ ಸೇರಿದ್ದರು. ಇಲ್ಲಿ 16 ವರ್ಷ ಸೇವೆ ಸಲ್ಲಿಸಿದರು, ಕೈತುಂಬಾ ಸಂಬಳ ಪಡೆಯುತ್ತಿದ್ದರೂ, ಅವರಿಗೆ ಕೃಷಿಯತ್ತ ವಾಲುವ ಮನಸ್ಸಾಗಿತ್ತು. ಇದರಿಂದ ಉದ್ಯೋಗ ಬಿಟ್ಟು ಹಳ್ಳಿಗೆ ಮರಳಿದರು.&lt;/p&gt;&lt;h2&gt;&lt;strong&gt;ಕೆಲಸಕ್ಕೆ ಗುಡ್&zwnj;ಬೈ&lt;/strong&gt;&lt;/h2&gt;&lt;p&gt;2018ರಲ್ಲಿ ತಮ್ಮ ಮಾರ್ಕೆಟಿಂಗ್ ಕೆಲಸಕ್ಕೆ ರಿಸೈನ್&zwnj; ಮಾಡಿ, ಕೃಷಿ ಮಾಡುವ ದೃಷ್ಟಿಯಿಂದ ಸ್ವಗ್ರಾಮಕ್ಕೆ ಮರಳಿದರು. ಎಲೆಗಳಿಗಿಂತ ತುಳಸಿ ಎಣ್ಣೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಅಲೋಕ್ ಕೇವಲ ಸಾಂಪ್ರದಾಯಿಕ ರೀತಿಯಲ್ಲಿ ತುಳಸಿ ಬೆಳೆಯುವುದನ್ನೇ ತಮ್ಮ ಗುರಿಯಾಗಿಸಿಕೊಳ್ಳಲಿಲ್ಲ. ಮಾರುಕಟ್ಟೆಯಲ್ಲಿ ಕೇವಲ ತುಳಸಿ ಎಲೆಗಳಿಗೆ ಹೆಚ್ಚಿನ ಬೆಲೆಯಿಲ್ಲ ಎಂಬುದನ್ನು ಚೆನ್ನಾಗಿ ಅರಿತಿದ್ದ ಅವರು, ಅದರ ಮೌಲ್ಯವರ್ಧನೆಗೆ ಮುಂದಾದರು. ತುಳಸಿ ಎಲೆಗಳಿಗಿಂತ ಅದರಿಂದ ತೆಗೆಯುವ ಎಣ್ಣೆಗೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಿದೆ. ದೊಡ್ಡ ದೊಡ್ಡ ಔಷಧೀಯ ವಸ್ತುಗಳ ಉತ್ಪಾದಕರು ಮತ್ತು ಸೌಂದರ್ಯವರ್ಧಕ ಕಂಪನಿಗಳು ಈ ತುಳಸಿ ಎಣ್ಣೆಯನ್ನ ಅತ್ಯಂತ ದುಬಾರಿ ಬೆಲೆ ಕೊಟ್ಟು ಖರೀದಿಸುತ್ತವೆ. ಈ ಮಾರುಕಟ್ಟೆ ತಂತ್ರವನ್ನು ಅರ್ಥಮಾಡಿಕೊಂಡ ಅಲೋಕ್, ತಮ್ಮ ಜಮೀನಿನಲ್ಲಿ ಸಾವಯವ ತುಳಸಿ ಬೆಳೆದು, ಪ್ರತ್ಯೇಕ ಘಟಕದ ಮೂಲಕ ಅದರಿಂದ ಪ್ರತಿದಿನ 7 ರಿಂದ 8 ಲೀಟರ್ ಎಣ್ಣೆಯನ್ನು ಹೊರತೆಗೆಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಸಕ್ಸಸ್&zwnj; ಸ್ಟೋರಿಯ ಕಥೆ...&lt;/strong&gt;&lt;/h3&gt;&lt;p&gt;ಅವರ ಸಕ್ಸಸ್&zwnj; ಹಿಂದಿರೋ ಸ್ಟೋರಿ ಎಂದರೆ, ಅವರು ಅದನ್ನು ಸ್ಥಳೀಯ ಕೃಷಿ ಮಂಡಿಗಳಿಗೆ ತೆಗೆದುಕೊಂಡು ಹೋಗುಲಿಲ್ಲ. ಬದಲಿಗೆ ನೇರವಾಗಿ ಬೃಹತ್ ಕೈಗಾರಿಕಾ ಕಂಪನಿಗಳಿಗೆ ಗುತ್ತಿಗೆ ಆಧಾರದ ಮೇಲೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅವರ ಉದ್ಯಮದ ವಹಿವಾಟು ದಿನಕ್ಕೆ ಸರಿಸುಮಾರು 21,000 ರೂಪಾಯಿಗಳಷ್ಟಿದ್ದು, ತಿಂಗಳಿಗೆ 6 ಲಕ್ಷ ರೂಪಾಯಿ ಗಡಿ ದಾಟುತ್ತದೆ. &rsquo;&lt;/p&gt;&lt;p&gt;ಇವರು, ಐಐಟಿ ದೆಹಲಿ ವಿನ್ಯಾಸಗೊಳಿಸಿದ ಸಣ್ಣ ಯಂತ್ರವೊಂದನ್ನ ಖರೀದಿಸಿರುವ ಅವರು, ಆ ತ್ಯಾಜ್ಯದಿಂದ ಪವಿತ್ರವಾದ ತುಳಸಿ ಮಣಿಗಳನ್ನ ತಯಾರಿಸುತ್ತಿದ್ದಾರೆ. ಈ ಮಣಿಗಳಿಗೆ ದೇವಸ್ಥಾನಗಳು, ಇಸ್ಕಾನ್ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಂದ ಭಾರಿ ಬೇಡಿಕೆಯಿದೆ. ಒಂದೇ ಬೆಳೆಯಿಂದ, ಎಣ್ಣೆಯ ಮೂಲಕ ಬೃಹತ್ ಕಂಪನಿಗಳಿಗೆ, ಮತ್ತು ಮಣಿಗಳ ಮೂಲಕ ಆಧ್ಯಾತ್ಮಿಕ ಗ್ರಾಹಕರಿಗೆ ಉತ್ಪನ್ನಗಳನ್ನ ತಲುಪಿಸುವ ಮೂಲಕ ಎರಡು ವಿಭಿನ್ನ ಆದಾಯದ ಮೂಲಗಳನ್ನ ಸೃಷ್ಟಿಸಿದ್ದಾರೆ. ತಮ್ಮ ಗ್ರಾಮದ ಸುತ್ತಮುತ್ತಲಿನ ಬುಡಕಟ್ಟು ಸಮುದಾಯದ ಜನರಿಗೆ ಅವರು ತಮ್ಮ ತೋಟದಲ್ಲಿ ಉದ್ಯೋಗ ನೀಡುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಗೆ ಆಸರೆಯಾಗಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/business/mba-graduate-earns-6-lakh-monthly-from-tulsi-cultivation-after-resiging-to-tata-job-suc/articleshow-4lkr97g"/>
        </item>
        <item>
            <title><![CDATA[ಶಾಸಕ ಉಮೇಶ್ ಮೇಟಿ ಸೊಸೆಗೆ ಅಕ್ರಮವಾಗಿ 75 ಸಾವಿರ ಸಂಬಳ? ಪುತ್ರಿಯನ್ನೇ ವಜಾ ಮಾಡಿದ ತಂದೆ]]></title>
            <link>https://kannada.asianetnews.com/karnataka-districts/karnataka-sacks-congress-mla-umesh-metis-niece-over-rs-75000-salary-row-suc/articleshow-59sgqu0</link>
            <guid isPermaLink="true">https://kannada.asianetnews.com/karnataka-districts/karnataka-sacks-congress-mla-umesh-metis-niece-over-rs-75000-salary-row-suc/articleshow-59sgqu0</guid>
            <pubDate>Tue, 15 Sep 2026 21:39:19 +0530</pubDate>
            <description><![CDATA[ಬಾಗಲಕೋಟೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಡಾ. ಅಂಕಿತಾ, ಎಂಡಿ ವ್ಯಾಸಂಗ ಮಾಡುತ್ತಲೇ 'ನಮ್ಮ ಕ್ಲಿನಿಕ್' ವೈದ್ಯಾಧಿಕಾರಿಯಾಗಿ ಸರ್ಕಾರಿ ವೇತನ ಪಡೆಯುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದರು. ಈ ಅಕ್ರಮ ಮತ್ತು ಅನಧಿಕೃತ ಗೈರುಹಾಜರಿ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ, ಸ್ವತಃ ಅವರ ತಂದೆಯೇ ಮಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2jx8aaw0trczs5qtcg3m61r,imgname-dr.ankitha-1789488539996.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಹಾಗೂ ಕಾಂಗ್ರೆಸ್ ಶಾಸಕ ಉಮೇಶ್ ಮೇಟಿ ಅವರ ಸೊಸೆ ಡಾ. ಅಂಕಿತಾ ಯರಗಲ್ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಅಂಕಿತಾ ಅವರ ತಂದೆಯೇ, ಖುದ್ದು ಮಗಳನ್ನು ಕೆಲಸದಿಂದ ಬಿಡುಗಡೆಗೊಳಿಸಿರುವ ಕುತೂಹಲದ ಘಟನೆ ನಡೆದಿದೆ. ಡಾ. ಅಂಕಿತಾ ಯರಗಲ್ ಅವರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ಇವರು, ಪೂರ್ಣಾವಧಿ ಸ್ನಾತಕೋತ್ತರ ವ್ಯಾಸಂಗ ಅರ್ಥಾತ್​ ಎಂಡಿ ಪದವಿ ಮಾಡುತ್ತಿದ್ದರೂ, ಪ್ರತಿ ತಿಂಗಳು ಸರ್ಕಾರದಿಂದ 75 ಸಾವಿರ ರೂಪಾಯಿ ವೇತನ ಪಡೆಯುತ್ತಿರುವ ಗಂಭೀರ ಆರೋಪ ಕೇಳಿಬಂದಿತ್ತು.&lt;/p&gt;&lt;p&gt;ಡಾ. ಅಂಕಿತಾ ಯರಗಲ್ ಅವರು 2025ರ ಸೆಪ್ಟೆಂಬರ್&zwnj;ನಿಂದ ಬಾಗಲಕೋಟೆಯ ವಾಂಬೆ ಕಾಲೋನಿಯ &lsquo;ನಮ್ಮ ಕ್ಲಿನಿಕ್&rsquo;ಗೆ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದರು.ಆದರೆ ಮರುವರ್ಷ ಅರ್ಥಾತ್​ 2026ರ ಮಾರ್ಚ್&zwnj;ನಲ್ಲಿ ಬಾಗಲಕೋಟೆಯ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪ್ಯಾಥಾಲಜಿ ಕೋರ್ಸ್&zwnj;ಗೆ ಪ್ರವೇಶ ಪಡೆದಿದ್ದಾರೆ. ಏಪ್ರಿಲ್​ನಿಂದ ತರಗತಿಗಳಿಗೆ ಹಾಜರು ಕೂಡ ಆಗುತ್ತಿದ್ದಾರೆ. ನಿಯಮಗಳ ಪ್ರಕಾರ ಬೆಳಗ್ಗೆ 9 ರಿಂದ ಸಂಜೆ 4:30 ರವರೆಗೆ ಕ್ಲಿನಿಕ್&zwnj;ನಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅಂಕಿತಾ, ಕಾಲೇಜಿನಲ್ಲಿ ಪೂರ್ಣಾವಧಿ ಶಿಕ್ಷಣ ಪಡೆಯುತ್ತಿರುವುದರಿಂದ ಕ್ಲಿನಿಕ್&zwnj;ಗೆ ಸರಿಯಾಗಿ ಹಾಜರಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಸಿಗದೆ ವಾಂಬೆ ಕಾಲೋನಿಯ ನಮ್ಮ ಕ್ಲಿನಿಕ್ ಬಹುತೇಕ ಬಂದ್ ಆದ ಸ್ಥಿತಿಯಲ್ಲಿದೆ ಎಂಬ ಆರೋಪ ಕೇಳಿಬಂದಿತ್ತು.&lt;/p&gt;&lt;h2&gt;&lt;strong&gt;ಸರ್ಕಾರದ ನಿಯಮಾವಳಿ ಏನಿದೆ?&lt;/strong&gt;&lt;/h2&gt;&lt;p&gt;ಸರ್ಕಾರಿ ನಿಯಮಾವಳಿ ಪ್ರಕಾರ ಎಂ.ಡಿ. ವ್ಯಾಸಂಗ ಮಾಡುತ್ತಾ ಸರ್ಕಾರಿ ಸೇವೆಯ ವೇತನ ಪಡೆಯುವುದು ಕಾನೂನುಬಾಹಿರವಾಗಿದೆ. ಈ ಬಗ್ಗೆ ಡಾ. ರಾಜಕುಮಾರ ಯರಗಲ್ ಮಾತ್ರ ನುಣುಚಿಕೊಳ್ಳೋ ಕೆಲಸ ಮಾಡುತ್ತಿದ್ದಾರೆ ಎಂಬೆಲ್ಲಾ ಆರೋಪಗಳು ಕೇಳಿಬಂದಿದ್ದವು. ಆರೋಗ್ಯ ಇಲಾಖೆ ಸಹ ಈ ಬಗ್ಗೆ ಮೌನವಾಗಿದ್ದು, ಇಷ್ಟೆಲ್ಲ ಅಕ್ರಮ ಬಯಲಾದ್ರೂ ಡಿಎಚ್&zwnj;ಓ ಯರಗಲ್ ವಿರುದ್ಧವಾಗಲಿ ಅಥವಾ ಅವರ ಮಗಳ ವಿರುದ್ಧವಾಗಲಿ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಗಂಭೀರ ಆರೋಪ ಮಾಡಲಾಗಿತ್ತು.&lt;/p&gt;&lt;h3&gt;&lt;strong&gt;ಕರ್ತವ್ಯದಿಂದ ಬಿಡುಗಡೆ&lt;/strong&gt;&lt;/h3&gt;&lt;p&gt;ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ, ಇದೀಗ ವೈದ್ಯಾಧಿಕಾರಿ ಡಾ. ಅಂಕಿತಾ ಯರಗಲ್​​ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ್ ಅರ್ಥಾತ್​ ಅಂಕಿತಾ ಅವರ ತಂದೆಯೇ ಆದೇಶ ಹೊರಡಿಸಿದ್ದಾರೆ. ಡಾ. ಅಂಕಿತಾ ಯರಗಲ್, ನಮ್ಮ ಕ್ಲಿನಿಕ್&zwnj;ನಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, 2023ರ ಮಾರ್ಚ್ 23ರಿಂದ ಬಾಗಲಕೋಟೆ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪೆಥಾಲಜಿ ಅಧ್ಯಯನ ಮಾಡುತ್ತಿದ್ದರು. ಈ ಅವಧಿಯಲ್ಲಿ ಎರಡೂ ಕಡೆ ಹಾಜರಾತಿ ಸಹಿ ಮಾಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದು ಮತ್ತು ಅನಧಿಕೃತ ಗೈರು ಹಾಜರಿ ಕರ್ತವ್ಯ ಲೋಪಕ್ಕೆ ಕಾರಣವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು, ಸೇವೆಯಿಂದ ಬಿಡುಗಡೆ ಮಾಡಲಾಗಿದೆ.&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/karnataka-sacks-congress-mla-umesh-metis-niece-over-rs-75000-salary-row-suc/articleshow-59sgqu0"/>
        </item>
        <item>
            <title><![CDATA[ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬೃಹತ್​ ನೇಮಕಾತಿ: 4699 ಹುದ್ದೆಗಳಿಗೆ ಅರ್ಜಿ ಆಹ್ವಾನ- ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/state-government-jobs/karnataka-examinations-authority-invites-applications-for-4699-posts-details-here-suc/articleshow-5berdp5</link>
            <guid isPermaLink="true">https://kannada.asianetnews.com/state-government-jobs/karnataka-examinations-authority-invites-applications-for-4699-posts-details-here-suc/articleshow-5berdp5</guid>
            <pubDate>Thu, 17 Sep 2026 20:01:39 +0530</pubDate>
            <description><![CDATA[ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿವಿಧ ಸರ್ಕಾರಿ ಇಲಾಖೆಗಳಲ್ಲಿ 4,699 ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪಿಯುಸಿ, ಡಿಪ್ಲೊಮಾ ಮತ್ತು ಪದವಿ ಮುಗಿಸಿದ ಅಭ್ಯರ್ಥಿಗಳು ಎಫ್&zwnj;ಡಿಎ, ಎಸ್&zwnj;ಡಿಎ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳು ನವೆಂಬರ್ ಮತ್ತು ಡಿಸೆಂಬರ್ 2026 ರಲ್ಲಿ ನಡೆಯಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2qwezgd60ar41j94grnccfz,imgname-kea-jobs-1789655481869.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಉದ್ಯೋಗಾಕಾಂಕ್ಷಿಗಳಿಗೆ ಬಹು ದೊಡ್ಡ ಗುಡ್​ನ್ಯೂಸ್​ ಕೊಟ್ಟಿದೆ. ನೇರ ನೇಮಕಾತಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. 4,699 ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳುವಿವಿಧ ಸರ್ಕಾರಿ ಇಲಾಖೆಗಳಲ್ಲಿ. ಈ ನೇಮಕಾತಿಯು ಪಿಯುಸಿ, ಡಿಪ್ಲೊಮಾ ಮತ್ತು ಪದವಿಯಂತಹ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಒದಗಿಸಲಾಗಿದೆ. ಖಾಲಿ ಹುದ್ದೆಗಳಲ್ಲಿ ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA), ಕಿರಿಯ ಎಂಜಿನಿಯರ್, ಗ್ರಾಮ ಪಂಚಾಯತ್ ಕಾರ್ಯದರ್ಶಿ, ವಾರ್ಡನ್&zwnj;ಗಳು, ಲೆಕ್ಕಪತ್ರ ಸಹಾಯಕರು, ಹಾಸ್ಟೆಲ್ ಸೂಪರಿಂಟೆಂಡೆಂಟ್&zwnj;ಗಳು ಮತ್ತು ಇತರ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳು ಸೇರಿವೆ. ಆನ್&zwnj;ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನವೆಂಬರ್ ಮತ್ತು ಡಿಸೆಂಬರ್ 2026 ರಲ್ಲಿ ನಡೆಸುವುದಾಗಿ ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;- ಒಟ್ಟು 2,421 ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಇವುಗಳಲ್ಲಿ 1,912 ಹುದ್ದೆಗಳು ಉಳಿಕೆ ಪೋಷಕ ಕೇಡರ್ ಅಡಿಯಲ್ಲಿದ್ದರೆ, 509 ಹುದ್ದೆಗಳು ಕಲ್ಯಾಣ ಕರ್ನಾಟಕ ಕೇಡರ್ ಅಡಿಯಲ್ಲಿವೆ.&lt;/p&gt;&lt;p&gt;- ಪಿಯುಸಿ ಮಟ್ಟದ 2,062 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಇದಕ್ಕೆ ಅರ್ಹರು. ಇವುಗಳ ಪೈಕಿ 1,548 ಹುದ್ದೆಗಳು ಉಳಿಕೆ ಪೋಷಕ ವರ್ಗಕ್ಕೆ ಸೇರಿವೆ ಮತ್ತು 514 ಹುದ್ದೆಗಳು ಕಲ್ಯಾಣ ಕರ್ನಾಟಕ ವರ್ಗಕ್ಕೆ ಸೇರಿವೆ.&lt;/p&gt;&lt;p&gt;- ಡಿಪ್ಲೊಮಾ ಮಟ್ಟದ ತಾಂತ್ರಿಕ ಹುದ್ದೆಗಳು &ndash; 216 ಇದ್ದು, ಡಿಪ್ಲೊಮಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇವುಗಳಲ್ಲಿ 185 ಹುದ್ದೆಗಳು ಉಳಿಕೆ ಪೋಷಕ ಕೇಡರ್ ಅಡಿಯಲ್ಲಿ ಮತ್ತು 31 ಹುದ್ದೆಗಳು ಕಲ್ಯಾಣ ಕರ್ನಾಟಕ ಕೇಡರ್ ಅಡಿಯಲ್ಲಿವೆ. ಸಿವಿಲ್ ಎಂಜಿನಿಯರಿಂಗ್&zwnj;ನಂತಹ ಸಂಬಂಧಿತ ತಾಂತ್ರಿಕ ವಿಭಾಗದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಹರಾಗಿರಬಹುದು.&lt;/p&gt;&lt;h2&gt;&lt;strong&gt;ಲೆಕ್ಕಪತ್ರ ಸಹಾಯಕ &ndash; 502 ಹುದ್ದೆಗಳು&lt;/strong&gt;&lt;/h2&gt;&lt;p&gt;ಸಮಾಜ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ &ndash; 350 ಹುದ್ದೆಗಳು&lt;/p&gt;&lt;p&gt;ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್ ಸೂಪರಿಂಟೆಂಡೆಂಟ್ &ndash; 386 ಹುದ್ದೆಗಳು&lt;/p&gt;&lt;p&gt;ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್ 1 ಮತ್ತು ಗ್ರೇಡ್ 2 &ndash; 506 ಹುದ್ದೆಗಳು&lt;/p&gt;&lt;p&gt;ಪ್ರಥಮ ದರ್ಜೆ ಸಹಾಯಕ (FDA) &ndash; 500 ಕ್ಕೂ ಹೆಚ್ಚು ಹುದ್ದೆಗಳು&lt;/p&gt;&lt;p&gt;ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ &ndash; 590 ಹುದ್ದೆಗಳು&lt;/p&gt;&lt;p&gt;ವಿವಿಧ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳು &ndash; 1,000 ಕ್ಕೂ ಹೆಚ್ಚು ಹುದ್ದೆಗಳು&lt;/p&gt;&lt;p&gt;ಜೂನಿಯರ್ ಎಂಜಿನಿಯರ್ (Civil) ಮತ್ತು ಇತರ ತಾಂತ್ರಿಕ ಹುದ್ದೆಗಳು &ndash; 216 ಹುದ್ದೆಗಳು&lt;/p&gt;&lt;h3&gt;&lt;strong&gt;ಇವುಗಳಿಗೆ ಶೈಕ್ಷಣಿಕ ಅರ್ಹತೆ:&lt;/strong&gt;&lt;/h3&gt;&lt;p&gt;ಕೆಇಎ ನೇಮಕಾತಿ 2026 ಕ್ಕೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆಯು ವೈಯಕ್ತಿಕ ಹುದ್ದೆಯನ್ನು ಅವಲಂಬಿಸಿರುತ್ತದೆ. ಎಲ್ಲಾ ಹುದ್ದೆಗಳು ಒಂದೇ ರೀತಿಯ ಅರ್ಹತಾ ಮಾನದಂಡಗಳನ್ನು ಹೊಂದಿರುವುದಿಲ್ಲವಾದ್ದರಿಂದ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಅವಶ್ಯಕತೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.&lt;/p&gt;&lt;h3&gt;&lt;strong&gt;ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳಿಗೆ&lt;/strong&gt;&lt;/h3&gt;&lt;p&gt;ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೂರ್ಣಗೊಳಿಸಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಅರ್ಹತೆ. ಕೆಲವು ಹುದ್ದೆಗಳಿಗೆ, ನಿರ್ದಿಷ್ಟ ಪದವಿ ಅಥವಾ ಹೆಚ್ಚುವರಿ ಅರ್ಹತೆಯ ಅಗತ್ಯವಿರಬಹುದು. ಆದ್ದರಿಂದ, ಅರ್ಜಿದಾರರು ಅಧಿಕೃತ ಅಧಿಸೂಚನೆಯಲ್ಲಿ ಪೋಸ್ಟ್&zwnj;ವಾರು ಅವಶ್ಯಕತೆಗಳನ್ನು ಪರಿಶೀಲಿಸಬೇಕು.&lt;/p&gt;&lt;h3&gt;&lt;strong&gt;ಪಿಯುಸಿ ಮಟ್ಟದ ಹುದ್ದೆಗಳಿಗೆ&lt;/strong&gt;&lt;/h3&gt;&lt;p&gt;ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಶಸ್ವಿಯಾಗಿ ಪೂರ್ಣಗೊಳಿಸಿರಬೇಕುದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ವಿದ್ಯಾರ್ಹತೆ ಮಾನ್ಯತೆ ಪಡೆದ ಮಂಡಳಿಯಿಂದ. ಈ ವರ್ಗವು ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ ಮತ್ತು ಸರ್ಕಾರಿ ಸೇವೆಗೆ ಪ್ರವೇಶಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವನ್ನು ಒದಗಿಸುತ್ತದೆ.&lt;/p&gt;&lt;h2&gt;&lt;strong&gt;ತಾಂತ್ರಿಕ ಹುದ್ದೆಗಳಿಗಾಗಿ&lt;/strong&gt;&lt;/h2&gt;&lt;p&gt;ತಾಂತ್ರಿಕ ಹುದ್ದೆಗಳಿಗೆ, ಅಭ್ಯರ್ಥಿಗಳುಸಂಬಂಧಿತ ವಿಷಯದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಥವಾ ತತ್ಸಮಾನ ಅರ್ಹತೆ. ಉದಾಹರಣೆಗೆ, ಅನ್ವಯವಾಗುವ ಸಿವಿಲ್ ಎಂಜಿನಿಯರಿಂಗ್ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಿವಿಲ್ ಎಂಜಿನಿಯರಿಂಗ್&zwnj;ನಲ್ಲಿ ಡಿಪ್ಲೊಮಾ ಅಗತ್ಯವಿರಬಹುದು.&lt;/p&gt;&lt;p&gt;KEA ನೇಮಕಾತಿ 2026 ಕ್ಕೆ ವಯಸ್ಸಿನ ಮಿತಿ&lt;/p&gt;&lt;p&gt;ಅರ್ಹ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯನ್ನು ಅನ್ವಯವಾಗುವ ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳ ಪ್ರಕಾರ ನಿರ್ಧರಿಸಲಾಗುತ್ತದೆ. ಈ ನೇಮಕಾತಿಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಕನಿಷ್ಠ ವಯಸ್ಸಿನ ಅವಶ್ಯಕತೆ 18 ವರ್ಷಗಳು.&lt;/p&gt;&lt;p&gt;ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು:35 ವರ್ಷಗಳವರೆಗೆ&lt;/p&gt;&lt;p&gt;2A, 2B, 3A ಮತ್ತು 3B ಅಭ್ಯರ್ಥಿಗಳು:38 ವರ್ಷಗಳವರೆಗೆ&lt;/p&gt;&lt;p&gt;ಎಸ್&zwnj;ಸಿ, ಎಸ್&zwnj;ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳು:40 ವರ್ಷಗಳವರೆಗೆ&lt;/p&gt;&lt;p&gt;ಅಂಗವಿಕಲರು ಮತ್ತು ಮಾಜಿ ಸೈನಿಕರು:ಅನ್ವಯವಾಗುವ ನಿಯಮಗಳ ಪ್ರಕಾರ ಹೆಚ್ಚುವರಿ ಸಡಿಲಿಕೆ&lt;/p&gt;&lt;p&gt;ವಿವರವಾದ ಅಧಿಸೂಚನೆ ಪ್ರಕಟವಾದಾಗ ಅಭ್ಯರ್ಥಿಗಳು ತಮ್ಮ ವಯಸ್ಸನ್ನು ಲೆಕ್ಕಹಾಕಲು ಕಟ್-ಆಫ್ ದಿನಾಂಕವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.&lt;/p&gt;&lt;h2&gt;&lt;strong&gt;ಸಂಬಳ ಮತ್ತು ವೇತನ ಶ್ರೇಣಿ&lt;/strong&gt;&lt;/h2&gt;&lt;p&gt;ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವೇತನ ನಿಯಮಗಳ ಪ್ರಕಾರ ವೇತನ ಮತ್ತು ಭತ್ಯೆಗಳನ್ನು ನೀಡಲಾಗುವುದು.&lt;/p&gt;&lt;p&gt;ವೇತನವು ಪ್ರತಿಯೊಂದು ಹುದ್ದೆಗೂ ಒಂದೇ ಆಗಿರುವುದಿಲ್ಲ ಏಕೆಂದರೆ ವೇತನ ಪ್ರಮಾಣವು ಹುದ್ದೆ, ಇಲಾಖೆ, ಜವಾಬ್ದಾರಿಯ ಮಟ್ಟ ಮತ್ತು ಅನ್ವಯವಾಗುವ ಸರ್ಕಾರಿ ನಿಯಮಗಳನ್ನು ಅವಲಂಬಿಸಿರುತ್ತದೆ.&lt;/p&gt;&lt;p&gt;ಪ್ರತಿಯೊಂದು ಹುದ್ದೆಗೂ ನಿಖರವಾದ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ವಿವರವಾದ ಅಧಿಕೃತ ಅಧಿಸೂಚನೆಯಲ್ಲಿ ಒದಗಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.&lt;/p&gt;&lt;p&gt;ಆದ್ದರಿಂದ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆವಾರು ವೇತನ ಮಾಹಿತಿಯನ್ನು ಪರಿಶೀಲಿಸಬೇಕು.&lt;/p&gt;&lt;h2&gt;&lt;strong&gt;ಅರ್ಜಿ ಶುಲ್ಕ&lt;/strong&gt;&lt;/h2&gt;&lt;p&gt;ಅಭ್ಯರ್ಥಿಗಳು ಆನ್&zwnj;ಲೈನ್ ಪಾವತಿ ವ್ಯವಸ್ಥೆಯ ಮೂಲಕ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆನ್&zwnj;ಲೈನ್ ಅರ್ಜಿ ಪ್ರಕ್ರಿಯೆಯು ಅಧಿಕೃತವಾಗಿ ಪ್ರಾರಂಭವಾದ ನಂತರ, ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಗೊತ್ತುಪಡಿಸಿದ KEA ಆನ್&zwnj;ಲೈನ್ ಪೋರ್ಟಲ್ ಮೂಲಕ ಸಲ್ಲಿಸಬೇಕಾಗುತ್ತದೆ.&lt;/p&gt;&lt;p&gt;&lt;strong&gt;ಹೆಚ್ಚಿನ ಮಾಹಿತಿಗೆ ಈ ಲಿಂಕ್​ ಮೇಲೆ ಕ್ಲಿಕ್ ​ಮಾಡಿ:&lt;/strong&gt; https://drive.google.com/file/d/1JQqfuXprcTDNvn_w34divwvcCKt6tL3_/view&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/state-government-jobs/karnataka-examinations-authority-invites-applications-for-4699-posts-details-here-suc/articleshow-5berdp5"/>
        </item>
        <item>
            <title><![CDATA[4 ಲಕ್ಷದಿಂದ 64 ಲಕ್ಷಕ್ಕೆ ಜಂಪ್, ಸರ್ಕಾರಿ ಕಾಲೇಜಿನಲ್ಲಿ ಓದಿದ ಹುಡುಗನ ಸ್ಫೂರ್ತಿದಾಯಕ ಸಾಹಸ]]></title>
            <link>https://kannada.asianetnews.com/jobs/beating-tier-3-odds-engineer-lands-rs-64-lpa-amazon-role-with-smart-networking-and-coding-skills-gkn/articleshow-5rfxqe9</link>
            <guid isPermaLink="true">https://kannada.asianetnews.com/jobs/beating-tier-3-odds-engineer-lands-rs-64-lpa-amazon-role-with-smart-networking-and-coding-skills-gkn/articleshow-5rfxqe9</guid>
            <pubDate>Thu, 10 Sep 2026 19:06:42 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ಟೈರ್-3 ಎಂಜಿನಿಯರಿಂಗ್ ಕಾಲೇಜು ಎಂದ ಕೂಡಲೇ ಕ್ಯಾಂಪಸ್ ಸೆಲೆಕ್ಷನ್&zwnj;ನಲ್ಲಿ 3 ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕರೆ ಹೆಚ್ಚು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಪ್ರತಿಭೆ ಜೊತೆಗೆ ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವಿದ್ದರೆ ಕಾಲೇಜು ಅಥವಾ ಕ್ಯಾಂಪಸ್ ಮಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾರತೀಯ ಯುವ ಎಂಜಿನಿಯರ್ ಒಬ್ಬರು ಸಾಬೀತುಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25rbjcm299vhkc4rjpr17x4,imgname-job-1789047196051.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಟೈರ್-3 ಎಂಜಿನಿಯರಿಂಗ್ ಕಾಲೇಜು ಎಂದ ಕೂಡಲೇ ಕ್ಯಾಂಪಸ್ ಸೆಲೆಕ್ಷನ್&zwnj;ನಲ್ಲಿ 3 ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕರೆ ಹೆಚ್ಚು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಪ್ರತಿಭೆ ಜೊತೆಗೆ ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವಿದ್ದರೆ ಕಾಲೇಜು ಅಥವಾ ಕ್ಯಾಂಪಸ್ ಮಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾರತೀಯ ಯುವ ಎಂಜಿನಿಯರ್ ಒಬ್ಬರು ಸಾಬೀತುಪಡಿಸಿದ್ದಾರೆ.&lt;/p&gt;&lt;p&gt;ಕೇವಲ 4 ಲಕ್ಷ ರೂಪಾಯಿ ಸರಾಸರಿ ಪ್ಯಾಕೇಜ್ ನೀಡುತ್ತಿದ್ದ ಸಾಮಾನ್ಯ ಸರ್ಕಾರಿ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಯೊಬ್ಬ, ಇಂದು ಜಾಗತಿಕ ಟೆಕ್ ದೈತ್ಯ ಅಮೆಜಾನ್ (Amazon) ಸಂಸ್ಥೆಯಲ್ಲಿ ಬರೋಬ್ಬರಿ 64 ಲಕ್ಷ ರೂಪಾಯಿ ವಾರ್ಷಿಕ ವೇತನದೊಂದಿಗೆ 'ಸಾಫ್ಟ್&zwnj;ವೇರ್ ಡೆವಲಪ್&zwnj;ಮೆಂಟ್ ಎಂಜಿನಿಯರ್ 2' ಹುದ್ದೆ ಗಿಟ್ಟಿಸಿಕೊಂಡು ಹುಬ್ಬೇರಿಸಿದ್ದಾರೆ!&lt;/p&gt;&lt;p&gt;ವಿಕಾಸ್ ಅಲ್ವಿಸ್ (Vikas Alwys) ಎಂಬುವವರು 'X' (ಟ್ವಿಟರ್) ಜಾಲತಾಣದಲ್ಲಿ ಹಂಚಿಕೊಂಡಿರುವ ಯಶೋಗಾಥೆಯ ಪ್ರಕಾರ, ಈ ಯುವಕ ತೆಲಂಗಾಣದ ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದ (JNTU ಜಗಿತ್ಯಾಲ) ಟೈರ್-3 ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಟೆಕ್ ಮುಗಿಸಿದ್ದರು. ಈ ಕಾಲೇಜಿನಲ್ಲಿ ಸರಾಸರಿ ವೇತನ ಪ್ಯಾಕೇಜ್ ಸುಮಾರು 4 ಲಕ್ಷ ರೂ. ಇತ್ತು. ಹೆಚ್ಚಿನ ವಿದ್ಯಾರ್ಥಿಗಳು ಟಿಸಿಎಸ್, ಕಾಗ್ನಿಜೆಂಟ್, ಕ್ಯಾಪ್&zwnj;ಜೆಮಿನಿ, ಅಕ್ಸೆಂಚರ್&zwnj;ನಂತಹ ಸಾಫ್ಟ್&zwnj;ವೇರ್ ಸರ್ವಿಸ್ ಕಂಪನಿಗಳಿಗೆ ಮಾತ್ರ ಆಯ್ಕೆಯಾಗುತ್ತಿದ್ದರು. ಜೊತೆಗೆ ಕಾಲೇಜಿನಲ್ಲಿ ಕಾಂಪಿಟಿಟಿವ್ ಪ್ರೋಗ್ರಾಮಿಂಗ್ ಅಥವಾ ಹೈ-ಲೆವೆಲ್ ಟೆಕ್ ಇಂಟರ್ವ್ಯೂಗಳಿಗೆ ತರಬೇತಿ ನೀಡುವ ಪೂರಕ ವಾತಾವರಣವೂ ಇರಲಿಲ್ಲ.&lt;/p&gt;&lt;h2&gt;&lt;strong&gt;ಸ್ನೇಹಿತರ ನೆಟ್&zwnj;ವರ್ಕ್&lt;/strong&gt;&lt;/h2&gt;&lt;p&gt;ಕಾಲೇಜಿನ ಮಿತಿಗಳನ್ನೇ ನೆಪ ಮಾಡಿಕೊಳ್ಳದ ಎಂಜಿನಿಯರ್ ತಮಗೆ ತಾವೇ ಒಂದು ಹೊಸ ದಾರಿ ಕಂಡುಕೊಂಡರು. ಐಐಟಿ (IIT) ಮತ್ತು ಎನ್&zwnj;ಐಟಿ (NIT) ಕಾಲೇಜುಗಳಲ್ಲಿ ಓದುತ್ತಿದ್ದ ಸ್ನೇಹಿತರೊಂದಿಗೆ ನಿರಂತರ ಸಂಪರ್ಕ ಸಾಧಿಸಿದರು. ಅವರ ಮೂಲಕ ಕಾಂಪಿಟಿಟಿವ್ ಪ್ರೋಗ್ರಾಮಿಂಗ್, ಕೋಡಿಂಗ್ ಚರ್ಚೆಗಳು ಮತ್ತು ಇತ್ತೀಚಿನ ಟೆಕ್ ಟ್ರೆಂಡ್&zwnj;ಗಳ ಬಗ್ಗೆ ಮಾಹಿತಿ ಪಡೆದರು. ಕಾಲೇಜು ಪಠ್ಯಕ್ಕೆ ಸೀಮಿತವಾಗದೆ ಆನ್&zwnj;ಲೈನ್ ಕೋಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಹೆಚ್ಚಿಸಿಕೊಂಡರು.&lt;/p&gt;&lt;h2&gt;&lt;strong&gt;ಇನ್ಫೋಸಿಸ್&zwnj;ನಿಂದ ಅಮೆಜಾನ್&zwnj;ವರೆಗೆ&lt;/strong&gt;&lt;/h2&gt;&lt;p&gt;ಕಠಿಣ ಪರಿಶ್ರಮದ ಫಲವಾಗಿ ಕಾಲೇಜಿನ ಸರಾಸರಿಗಿಂತ ಮೂರು ಪಟ್ಟು ಹೆಚ್ಚು ಅಂದರೆ ವಾರ್ಷಿಕ 11 ಲಕ್ಷ ರೂ. ಪ್ಯಾಕೇಜ್&zwnj;ನೊಂದಿಗೆ ಇನ್ಫೋಸಿಸ್&zwnj;ನಲ್ಲಿ 'ಸ್ಪೆಷಲಿಸ್ಟ್ ಪ್ರೋಗ್ರಾಮರ್' ಆಗಿ ಮೊದಲ ಉದ್ಯೋಗ ಪಡೆದರು. ಇನ್ಫೋಸಿಸ್&zwnj;ಗೆ ಸೇರಿಕೊಂಡ ನಂತರವೂ ಕಲಿಕೆಯನ್ನು ನಿಲ್ಲಿಸದ ಅವರು, ಕೇವಲ 3 ವರ್ಷಗಳ ವೃತ್ತಿಜೀವನದಲ್ಲಿ ನೇರವಾಗಿ ಅಮೆಜಾನ್ ಸಂಸ್ಥೆಯ 'SDE 2' ಹುದ್ದೆಗೆ ಆಯ್ಕೆಯಾಗುವ ಮೂಲಕ ವಾರ್ಷಿಕ 64 ಲಕ್ಷ ರೂ. ವೇತನ ಪಡೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.&lt;/p&gt;&lt;p&gt;ನೀವು ಓದುವ ಕಾಲೇಜು ನಿಮ್ಮ ವೃತ್ತಿಜೀವನದ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಟೈರ್-3 ಕಾಲೇಜಿನಲ್ಲಿದ್ದರೂ, ಸ್ವಯಂ ಕಲಿಕೆ, ಉನ್ನತ ಕನಸು ಕಾಣುವ ಗೆಳೆಯರ ನೆಟ್&zwnj;ವರ್ಕ್ ಮತ್ತು ನೈಜ ತಾಂತ್ರಿಕ ಕೌಶಲಗಳು ನಿಮ್ಮಲ್ಲಿದ್ದರೆ ಗೂಗಲ್, ಅಮೆಜಾನ್&zwnj;ನಂತಹ ಜಾಗತಿಕ ದೈತ್ಯ ಸಂಸ್ಥೆಗಳ ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ ಎಂಬುದಕ್ಕೆ ಈ ಯುವಕನ ಪಯಣವೇ ಸಾಕ್ಷಿ!&lt;/p&gt;&lt;p&gt;There is a friend of mine who completed his https://t.co/BC6fLkcQNf CS from JNTU Jagityal, a tier-3 Govt college. To be honest, the college's average package is 4 LPA and most students get placed in TCS, Cognizant, Capgemini, and Accenture.But he is SDE 2 at Amazon earning&hellip;&lt;/p&gt;&lt;p&gt;&mdash; Vikas Alwys (@VikasAlwys) September 9, 2026&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/jobs/beating-tier-3-odds-engineer-lands-rs-64-lpa-amazon-role-with-smart-networking-and-coding-skills-gkn/articleshow-5rfxqe9"/>
        </item>
        <item>
            <title><![CDATA[ಕರ್ತವ್ಯದೂರಿನಲ್ಲೇ ಅನಾಥ ಶವವಾದ ಸರ್ಕಾರಿ ಅಧಿಕಾರಿ! ಸಾಯುವ ಕೊನೆ ಗಳಿಗೆಯಲ್ಲೂ ಸಿಗಲಿಲ್ಲ ಕುಟುಂಬದ ಆಸರೆ!]]></title>
            <link>https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri</link>
            <guid isPermaLink="true">https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri</guid>
            <pubDate>Fri, 11 Sep 2026 12:38:45 +0530</pubDate>
            <description><![CDATA[&lt;p&gt;ಹಾಸನದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ ಅವರು ತಾವು ವಾಸವಿದ್ದ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬ ಬೆಂಗಳೂರಿನಲ್ಲಿದ್ದ ಕಾರಣ ಒಬ್ಬರೇ ವಾಸಿಸುತ್ತಿದ್ದ ಅವರ ಸಾವು, ಕಚೇರಿ ಸಿಬ್ಬಂದಿ ಕರೆ ಮಾಡಿದಾಗ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m27mnfzax8ddnmabz9jdswyw,imgname-hassan-govt-officer-death-1789110435817.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಸೆ.11): ಇ&lt;/strong&gt;ಡೀ ಕುಟುಂಬವು ಚೆನ್ನಾಗಿರಲೆಂದು ಬೆಂಗಳೂರಿನಲ್ಲಿ ಬಿಟ್ಟು ಸರ್ಕಾರಿ ಕೆಲಸದ ನಿಮಿತ್ತ ದೂರದ ಊರಿನಲ್ಲಿ ವಾಸವಾಗಿದ್ದ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ ಅವರು ತಾವು ವಾಸವಾಗಿದ್ದ ಮನೆಯಲ್ಲಿ ಅನಾಥವಾಗಿ ಶವವಾಗಿದ್ದಾರೆ. ಜೀವನ ಪೂರ್ತಿ ಕುಟುಂಬ ನೆಮ್ಮದಿಗಾಗಿ ದುಡಿಯುತ್ತಿದ್ದ ಸರ್ಕಾರಿ ಅಧಿಕಾರಿ ತಮ್ಮ ಸಾವಿನ ಕೊನೆಯ ಕ್ಷಣಗಳಲ್ಲಿ ಕುಟುಂಬದ ಒಬ್ಬರೇ ಒಬ್ಬ ಸದಸ್ಯರೂ ಆಸರೆಯೂ ಸಿಗಲಿಲ್ಲ.&lt;/p&gt;&lt;p&gt;ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಸರ್ಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ (55) ಅವರು ತೀವ್ರ ಹೃದಯಾಘಾತದಿಂದ ಏಕಾಏಕಿ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಫೋನ್ ರಿಸೀವ್ ಮಾಡದಿದ್ದಾಗ ಬೆಳಕಿಗೆ ಬಂತು ದುರಂತ:&lt;/strong&gt;&lt;/h2&gt;&lt;p&gt;ಡಾ.ವೆಂಕಟೇಶ್ ಅವರು ಎಂದಿನಂತೆ ನಿನ್ನೆ ಸಂಜೆ ಕಚೇರಿ ಕೆಲಸ ಮುಗಿಸಿ ತಮ್ಮ ಬಾಡಿಗೆ ಮನೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಕಚೇರಿಯ ಸಿಬ್ಬಂದಿ ಅಗತ್ಯ ಕೆಲಸದ ನಿಮಿತ್ತ ಹಲವು ಬಾರಿ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಮೊಬೈಲ್ ಕರೆ ಸ್ವೀಕರಿಸದ ಕಾರಣ ಅನುಮಾನಗೊಂಡ ಸಿಬ್ಬಂದಿ ನೇರವಾಗಿ ಸಕಲೇಶಪುರದಲ್ಲಿರುವ ಅವರ ಮನೆಗೆ ತೆರಳಿ ನೋಡಿದ್ದಾರೆ. ಈ ವೇಳೆ ಡಾ.ವೆಂಕಟೇಶ್ ಅವರು ಮನೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಪರಿಶೀಲಿಸಿದಾಗ, ಅವರು ರಾತ್ರಿಯೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.&lt;/p&gt;&lt;h2&gt;&lt;strong&gt;ಮೂಲತಃ ಚಿಕ್ಕಬಳ್ಳಾಪುರದವರು:&lt;/strong&gt;&lt;/h2&gt;&lt;p&gt;ಮೃತ ಡಾ.ವೆಂಕಟೇಶ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಕಳೆದ ಐದಾರು ವರ್ಷಗಳಿಂದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದ ಅವರು, ಸಕಲೇಶಪುರ ಪಟ್ಟಣದಲ್ಲಿ ಒಬ್ಬರೇ ವಾಸವಿದ್ದರು.&lt;/p&gt;&lt;h3&gt;ಕಂಬನಿ ಮಿಡಿದ ಸಿಬ್ಬಂದಿ, ರೈತರು:&lt;/h3&gt;&lt;p&gt;ಸರಳ ಸಜ್ಜನಿಕೆಯ ಅಧಿಕಾರಿಯಾಗಿದ್ದ ಡಾ.ವೆಂಕಟೇಶ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಇಲಾಖೆಯ ಸಹೋದ್ಯೋಗಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ತಾಲೂಕಿನ ರೈತರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri"/>
        </item>
        <item>
            <title><![CDATA[ನೀನೊಬ್ಬನೇ ಜಾಣನಾ! ಚುನಾವಣೇಲಿ ಸೋತ ಬಳಿಕ ಪುನಃ ಸರ್ಕಾರಿ ನೌಕರಿಗೆ ಸೇರಿಸಿಕೊಳ್ಳಲಾಗಲ್ಲ-ಹೈಕೋರ್ಟ್!]]></title>
            <link>https://kannada.asianetnews.com/viral/rajasthan-high-court-ruling-govt-employee-resignation-withdrawal-election-efeat-sat/articleshow-bw2wmu8</link>
            <guid isPermaLink="true">https://kannada.asianetnews.com/viral/rajasthan-high-court-ruling-govt-employee-resignation-withdrawal-election-efeat-sat/articleshow-bw2wmu8</guid>
            <pubDate>Sun, 13 Sep 2026 11:38:33 +0530</pubDate>
            <description><![CDATA[&lt;p&gt;ಸರ್ಕಾರದ ಸೇವೆಯಲ್ಲಿ ದುಡಿದು ಹಣ ಮಾಡಿಕೊಂಡು, ಸೇವೆಯಲ್ಲಿರುವಾಗಲೇ ಚುನಾವನೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ದೀರಿ.ಇದೀಗ ಚುನಾವಣೆಯಲ್ಲಿ ಸೋಲುಂಡ ಬಳಿಕ ಪುನಃ ವಾಪಸ್ ಸರ್ಕಾರಿ ನೌಕರಿಗೆ ಸೇರಿಸಿಕೊಳ್ಳಿ ಎಂದರೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cnpy6na8njkhsyjz2m6a5t,imgname-indian-railway-job-1789279303893.jpg" type="image/jpeg" height="390" width="690"/>
            <content:encoded><![CDATA[&lt;p&gt;ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಉದ್ಯೋಗಿಯೊಬ್ಬರು, ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ &lsquo;ನನ್ನ ರಾಜೀನಾಮೆ ವಾಪಸ್ ಪಡೆಯುತ್ತೇನೆ, ಮತ್ತೆ ಕೆಲಸ ಕೊಡಿ&rsquo; ಎಂದು ಕೇಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ರಾಜಸ್ಥಾನ ಹೈಕೋರ್ಟ್&zwnj; ಮಹತ್ವದ ತೀರ್ಪು ನೀಡಿದೆ.&lt;/p&gt;&lt;p&gt;ವಾಯವ್ಯ ರೈಲ್ವೆ ವಿಭಾಗದಲ್ಲಿ (North Western Railway) ಹಿರಿಯ ಆಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ನೀರಜ್ ಬಿಷ್ಣೋಯ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿ ಸಂಪೂರ್ಣವಾಗಿ ವಜಾಗೊಳಿಸಿದೆ. 'ಚುನಾವಣಾ ಸೋಲು ಎಂಬುದು ಸೇವಾ ನಿಯಮಾವಳಿಗಳ ಅಡಿಯಲ್ಲಿ ರಾಜೀನಾಮೆಯನ್ನು ಹಿಂಪಡೆಯಲು ಯಾವುದೇ ಸಕಾರಣವಾಗಲು ಸಾಧ್ಯವಿಲ್ಲ' ಎಂದು ಹೈಕೋರ್ಟ್ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ನೀರಜ್ ಬಿಷ್ಣೋಯ್ ಅವರು 2023ರ ಅಕ್ಟೋಬರ್ 10ರಂದು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ತಮ್ಮ ಹಿರಿಯ ಆಡಿಟರ್ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದರು. ರೈಲ್ವೆ ಇಲಾಖೆಯು ನಿಯಮಾನುಸಾರ ಅವರ ರಾಜೀನಾಮೆಯನ್ನು ಪರಿಶೀಲಿಸಿ, ನವೆಂಬರ್ 1ರಂದು ಅಧಿಕೃತವಾಗಿ ಅಂಗೀಕರಿಸಿತ್ತು. ಬಳಿಕ ಬಹುಜನ ಸಮಾಜ ಪಕ್ಷದ (BSP) ಅಭ್ಯರ್ಥಿಯಾಗಿ ರತ್ನಗಢ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ ಬಿಷ್ಣೋಯ್, ಚುನಾವಣೆಯಲ್ಲಿ ಸೋಲು ಕಂಡರು. ಸೋಲಿನ ಬಳಿಕ ಅಂದರೆ 2024ರ ಜನವರಿ 1ರಂದು, &lsquo;ನನ್ನ ರಾಜೀನಾಮೆಯನ್ನು ಹಿಂಪಡೆದು ನನ್ನನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಿ&rsquo; ಎಂದು ರೈಲ್ವೆ ಇಲಾಖೆಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.&lt;/p&gt;&lt;h2&gt;&lt;strong&gt;ಅರ್ಜಿ ತಿರಸ್ಕರಿಸಿದ್ದ ರೈಲ್ವೆ ಇಲಾಖೆ&lt;/strong&gt;&lt;/h2&gt;&lt;p&gt;ರೈಲ್ವೆ ಸೇವಾ ನಿಯಮಗಳ ಪ್ರಕಾರ ಒಮ್ಮೆ ಅಂಗೀಕೃತವಾದ ರಾಜೀನಾಮೆಯನ್ನು ಹೀಗೆ ಹಿಂಪಡೆಯಲು ಅವಕಾಶವಿಲ್ಲ ಎಂದು ತಿಳಿಸಿ ರೈಲ್ವೆ ಇಲಾಖೆಯು ಅವರ ಮನವಿಯನ್ನು ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಬಿಷ್ಣೋಯ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಅರ್ಜಿದಾರರು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಇಲಾಖೆಯು ಅದನ್ನು ಈಗಾಗಲೇ ಅಂಗೀಕರಿಸಿದೆ. ರಾಜಕೀಯ ಪ್ರವೇಶಿಸಿ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಮತ್ತೆ ಸರ್ಕಾರಿ ಹುದ್ದೆಗೆ ಮರಳುವುದು ಸೇವಾ ಶಿಸ್ತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ರದ್ದುಗೊಳಿಸಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/rajasthan-high-court-ruling-govt-employee-resignation-withdrawal-election-efeat-sat/articleshow-bw2wmu8"/>
        </item>
        <item>
            <title><![CDATA[ಕೇವಲ 5 ವರ್ಷದಲ್ಲಿ ಶೂನ್ಯದಿಂದ ಕೋಟಿ ಕುಬೇರನಾಗಿದ್ದ ಬಸವರಾಜ್ ಕನ್ನಾಳೆ; ಸಿಐಡಿ ಮುಂದೆ ರೋಚಕ ಸತ್ಯ ಬಯಲು!]]></title>
            <link>https://kannada.asianetnews.com/state/kpsc-recruitment-scam-middleman-basavaraj-kannale-cid-investigation-0-to-10000000-revelations-sat/articleshow-fci2anh</link>
            <guid isPermaLink="true">https://kannada.asianetnews.com/state/kpsc-recruitment-scam-middleman-basavaraj-kannale-cid-investigation-0-to-10000000-revelations-sat/articleshow-fci2anh</guid>
            <pubDate>Sun, 13 Sep 2026 11:11:26 +0530</pubDate>
            <description><![CDATA[ಕೆಪಿಎಸ್&zwnj;ಸಿ ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದ್ದು, ಪ್ರಮುಖ ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಕರಾಳ ಜಾಲ ಬಯಲಾಗಿದೆ. ಶಾಸಕರ ಆಪ್ತ ಸಹಾಯಕನಾಗಿ ವಿಧಾನಸೌಧದಲ್ಲಿ ತನ್ನ ಪ್ರಭಾವ ಬಳಸಿ, ನೇಮಕಾತಿ, ವರ್ಗಾವಣೆ ದಂಧೆಗಳ ಮೂಲಕ ನೂರಾರು ಕೋಟಿ ಸಂಪಾದಿಸಿದ ಈತನ ಅಕ್ರಮಗಳನ್ನು ಸಿಐಡಿ ತನಿಖೆ ಬಹಿರಂಗಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1ghwnvgd3b0mgay8e4fs8az,imgname-basavaraj-kannale-kpsc-scam-1788335773551.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): ರಾ&lt;/strong&gt;ಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ಪ್ರಮುಖ ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಕರಾಳ ಜಾಲ ಸಿಐಡಿ (CID) ವಿಚಾರಣೆ ವೇಳೆ ಬಯಲಾಗಿದೆ. ಕೇವಲ ಐದೇ ವರ್ಷಗಳಲ್ಲಿ ಶೂನ್ಯದಿಂದ ನೂರಾರು ಕೋಟಿ ಒಡೆಯನಾಗಿ ಬೆಳೆದ ಈತನ ಹಿನ್ನೆಲೆ ಹಾಗೂ ವಿಧಾನಸೌಧದ ಕಾರಿಡಾರ್&zwnj;ನಲ್ಲಿ ನಡೆಸಿದ ಅಕ್ರಮ ದಂಧೆಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ.&lt;/p&gt;&lt;h2&gt;&lt;strong&gt;ಭಾಲ್ಕಿಯಿಂದ ದೆಹಲಿ ಯುಪಿಎಸ್&zwnj;ಸಿ ಕೋಚಿಂಗ್&zwnj;ವರೆಗೆ!&lt;/strong&gt;&lt;/h2&gt;&lt;p&gt;ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಹುಟ್ಟಿ ಬೆಳೆದ ಬಸವರಾಜ್ ಕನ್ನಾಳೆ, ಮೈಸೂರಿನ ಜೆಎಸ್&zwnj;ಎಸ್ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ (KSOU) ಸ್ನಾತಕೋತ್ತರ ಪದವಿ ಪೂರೈಸಿದ್ದ. ಬಳಿಕ ನಾಗರಿಕ ಸೇವಾ ಪರೀಕ್ಷೆ (UPSC) ಬರೆಯುವ ಕನಸು ಹೊತ್ತು ದೆಹಲಿಗೆ ತೆರಳಿ, ಅಲ್ಲಿನ ಪ್ರತಿಷ್ಠಿತ ಕೋಚಿಂಗ್ ಸೆಂಟರ್&zwnj;ನಲ್ಲಿ ತರಬೇತಿ ಕೂಡ ಪಡೆದುಕೊಂಡಿದ್ದ. ಆದರೆ, ಈ ಐಎಎಸ್/ಐಪಿಎಸ್ ಕನಸಿನ ಹಾದಿಯಲ್ಲೇ ಆತನಿಗೆ ಭ್ರಷ್ಟಾಚಾರದ ಸುಲಭ ಮಾರ್ಗ ಕಂಡಿತ್ತು.&lt;/p&gt;&lt;h2&gt;&lt;strong&gt;ರಾಜಕೀಯ ನಂಟು &amp;amp; ಶಾಸಕರ ಪಿಎ ಆಗಿ ಎಂಟ್ರಿ:&lt;/strong&gt;&lt;/h2&gt;&lt;p&gt;ದೆಹಲಿ ಮತ್ತು ಮೈಸೂರಿನ ದಿನಗಳಲ್ಲಿ ಮೈಸೂರು ಭಾಗದ ಶಾಸಕರೊಬ್ಬರ ಪುತ್ರನ ಪರಿಚಯದ ಮೂಲಕ ಮೊದಲು ಜೆಡಿಎಸ್ (JDS) ಸೇರಿದ್ದ. ಬಳಿಕ ತನ್ನ ಸಮುದಾಯದ ಮುಖಂಡರ ಒಡನಾಟ ಬೆಳೆಸಿಕೊಂಡು ಬಿಜೆಪಿ (BJP) ಕಡೆಗೆ ವಾಲಿದ. 2018 ರಿಂದ 2023ರ ಅವಧಿಯಲ್ಲಿ ಬೀದರ್ ಭಾಗದ ಬಿಜೆಪಿ ಶಾಸಕರೊಬ್ಬರ ಆಪ್ತ ಸಹಾಯಕನಾಗಿ (PA) ನೇಮಕಗೊಂಡಿದ್ದೇ ಈತನ ಜೀವನದ ಅತಿದೊಡ್ಡ ಟರ್ನಿಂಗ್ ಪಾಯಿಂಟ್ ಆಯಿತು.&lt;/p&gt;&lt;p&gt;ಶಾಸಕರ ಪಿಎ ಆದ ಬಳಿಕ ವಿಧಾನಸೌಧವೇ ಆತನ ಪ್ರಮುಖ ಕಾರ್ಯಸ್ಥಾನವಾಯಿತು. ಕೈಯಲ್ಲಿ ಫೈಲ್ ಹಿಡಿದು ವಿಧಾನಸೌಧದ ಕೊಠಡಿಗಳಿಗೆ ನಿರಂತರ ಓಡಾಟ ನಡೆಸುತ್ತಿದ್ದ ಕನ್ನಾಳೆ, ಎಲ್ಲಾ ಹಂತದ ಸರ್ಕಾರಿ ಅಧಿಕಾರಿಗಳೊಂದಿಗೆ ಬಲವಾದ ಸಂಪರ್ಕ ಜಾಲವನ್ನು ಹೆಣೆದಿದ್ದ.&lt;/p&gt;&lt;h2&gt;&lt;strong&gt;ಐಎಎಸ್ ಜ್ಞಾನೇಂದ್ರ ಜತೆ ನಂಟು: ನೂರಾರು ಕೋಟಿ ಲೂಟಿ!&lt;/strong&gt;&lt;/h2&gt;&lt;p&gt;ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ದುಬಾರಿ ಉಡುಗೊರೆಗಳನ್ನು ನೀಡಿ, ನಾಯಕರೊಂದಿಗೆ ಮೋಜು-ಮಸ್ತಿ ಕೂಟಗಳನ್ನು ಆಯೋಜಿಸುತ್ತಾ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಒಂದು ಹಂತದಲ್ಲಿ ಕೆಪಿಎಸ್&zwnj;ಸಿ ಸದಸ್ಯರನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡು ಉದ್ಯೋಗ ಆಕಾಂಕ್ಷಿಗಳಿಂದ ಕೋಟಿ ಕೋಟಿ ಹಣ ವಸೂಲಿ ಮಾಡಲು ಆರಂಭಿಸಿದ್ದ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಸೇರಿದಂತೆ ಹಲವು ಉನ್ನತಾಧಿಕಾರಿಗಳ ಜತೆ ಕೈಜೋಡಿಸಿ ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದಾನೆ ಎಂಬ ಸ್ಫೋಟಕ ಸತ್ಯ ಸಿಐಡಿ ತನಿಖೆಯಲ್ಲಿ ಬಯಲಾಗಿದೆ.&lt;/p&gt;&lt;h3&gt;&lt;strong&gt;ಕೇವಲ ಕೆಪಿಎಸ್&zwnj;ಸಿ ಅಷ್ಟೇ ಅಲ್ಲ; ವರ್ಗಾವಣೆ, ರಿಯಲ್ ಎಸ್ಟೇಟ್ ದಂಧೆ!&lt;/strong&gt;&lt;/h3&gt;&lt;p&gt;ವಿಚಾರಣೆ ವೇಳೆ ಕನ್ನಾಳೆ ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲೂ ಸಂಚಲನ ಸೃಷ್ಟಿಸಿವೆ. ತನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರ ಜತೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾನೆ. ಕೇವಲ ನೇಮಕಾತಿ ಅಕ್ರಮ ಮಾತ್ರವಲ್ಲದೆ, ಅಧಿಕಾರಿಗಳ ವರ್ಗಾವಣೆ ದಂಧೆ, ಟ್ರಾವೆಲ್ಸ್ ಬಿಸಿನೆಸ್ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಹೂಡಿಕೆ ಮಾಡಿ ಕಪ್ಪು ಹಣವನ್ನು ಬಿಳಿ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.&lt;/p&gt;&lt;p&gt;ಸದ್ಯ ಸಿಐಡಿ ಬಲೆಗೆ ಬಿದ್ದು ತೀವ್ರ ವಿಚಾರಣೆ ಎದುರಿಸುತ್ತಿರುವ ಬಸವರಾಜ್ ಕನ್ನಾಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕಂಬಿ ಎಣಿಸುತ್ತಿದ್ದಾನೆ. ಈತನ ಜಾಲದಲ್ಲಿ ಇನ್ನೆಷ್ಟು ಜನ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂಬುದು ಮುಂದಿನ ತನಿಖೆಯಿಂದ ಹೊರಬರಬೇಕಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kpsc-recruitment-scam-middleman-basavaraj-kannale-cid-investigation-0-to-10000000-revelations-sat/articleshow-fci2anh"/>
        </item>
        <item>
            <title><![CDATA[ಶಿವಮೊಗ್ಗ: ಉದ್ಯೋಗಕಾಂಕ್ಷಿಗಳಿಗೆ ಗುಡ್‌ ನ್ಯೂಸ್; ಶನಿವಾರ ‘ಮಲೆನಾಡು ಮೆಗಾ ಜಾಬಥಾನ್‌ 2026’]]></title>
            <link>https://kannada.asianetnews.com/karnataka-districts/mega-job-fair-in-shivamogga-10000-plus-jobs-across-166-companies-check-details-kvn/articleshow-g4sqh0o</link>
            <guid isPermaLink="true">https://kannada.asianetnews.com/karnataka-districts/mega-job-fair-in-shivamogga-10000-plus-jobs-across-166-companies-check-details-kvn/articleshow-g4sqh0o</guid>
            <pubDate>Fri, 18 Sep 2026 09:32:48 +0530</pubDate>
            <description><![CDATA[ಶಿವಮೊಗ್ಗದ ಎನ್&zwnj;ಇಎಸ್ ಮೈದಾನದಲ್ಲಿ ಸೆಪ್ಟೆಂಬರ್ 19ರಂದು ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ 'ಮಲೆನಾಡು ಮೆಗಾ ಜಾಬಥಾನ್ 2026' ಆಯೋಜಿಸಲಾಗಿದೆ. ಈ ಬೃಹತ್ ಉದ್ಯೋಗ ಮೇಳದಲ್ಲಿ 166 ಕಂಪನಿಗಳು ಭಾಗವಹಿಸುತ್ತಿದ್ದು, 10 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯವಿವೆ. 8ನೇ ತರಗತಿಯಿಂದ ಸ್ನಾತಕೋತ್ತರ ಪದವೀಧರರು ಹಾಗೂ ಅಂಗವಿಕಲರು ಇದರಲ್ಲಿ ಪಾಲ್ಗೊಳ್ಳಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m2sajksr39qm4apkw3anvk5m,imgname-untitled-design--56--1789703835447.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರು ಹಾಗೂ ಅಂಗವಿಕಲ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಸೆ.19ರಂದು ನಗರದ ಎನ್&zwnj;ಇಎಸ್ ಮೈದಾನದಲ್ಲಿ &lsquo;ಮಲೆನಾಡು ಮೆಗಾ ಜಾಬಥಾನ್ 2026&rsquo; ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.&lt;/p&gt;&lt;p&gt;ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ ನಡೆಯಲಿರುವ ಮೇಳಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವಂತೆ ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ಮನವಿ ಮಾಡಿದರು.&lt;/p&gt;&lt;h2&gt;&lt;strong&gt;166 ಕಂಪನಿಗಳು ಭಾಗಿ&lt;/strong&gt;&lt;/h2&gt;&lt;p&gt;ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೇಳದ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದ್ದು, 166 ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ. ಈ ಪೈಕಿ ಶಿವಮೊಗ್ಗದ 38 ಕಂಪನಿಗಳಿದ್ದು, ಒಟ್ಟು 10 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯವಿವೆ ಎಂದು ತಿಳಿಸಿದರು.&lt;/p&gt;&lt;p&gt;ಆರಂಭದಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಹಾಗೂ ಸುಮಾರು 3 ಸಾವಿರ ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಕಂಪನಿಗಳು ಸ್ಪಂದಿಸಿರುವುದು ಸಂತಸ ತಂದಿದೆ. ಇದೀಗ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ಸಾಫ್ಟ್&zwnj;ವೇರ್, ಐಟಿ, ಬ್ಯಾಂಕಿಂಗ್, ಫೈನಾನ್ಸ್, ಹಾಸ್ಪಿಟಾಲಿಟಿ, ರಿಟೇಲ್, ಬಿಪಿಒ, ಕೆಪಿಒ, ಕಸ್ಟಮರ್ ಸರ್ವಿಸ್, ಮೆಡಿಕಲ್, ಹೆಲ್ತ್&zwnj;ಕೇರ್, ಉತ್ಪಾದನೆ, ಎಂಜಿನಿಯರಿಂಗ್, ಫಾರ್ಮಸಿ, ನರ್ಸಿಂಗ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಚಾಲಕರು, ಭದ್ರತಾ ಸಿಬ್ಬಂದಿ, ಗಾರ್ಮೆಂಟ್ಸ್, ಹೌಸ್&zwnj;ಕೀಪಿಂಗ್, ಎಚ್&zwnj;ಆರ್ ಹಾಗೂ ಆಡಳಿತಾತ್ಮಕ ವಿಭಾಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ ಎಂದರು.&lt;/p&gt;&lt;p&gt;೮ನೇ ತರಗತಿಯಿಂದ ಎಸ್&zwnj;ಎಸ್&zwnj;ಎಲ್&zwnj;ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಎಂಜಿನಿಯರಿಂಗ್, ಎಂಬಿಎ, ಎಂಕಾಂ, ಎಂಎಸ್ಸಿ, ಎಂಫಾರ್ಮ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವವರು ಹಾಗೂ ನರ್ಸಿಂಗ್ ಪದವೀಧರರು ಮತ್ತು ಅಂಗವಿಕಲ ಅಭ್ಯರ್ಥಿಗಳು ಭಾಗವಹಿಸಬಹುದು. ಆಯಾ ಕಂಪನಿಗಳ ನಿಯಮ ಹಾಗೂ ಮಾನದಂಡಗಳ ಆಧಾರದ ಮೇಲೆ ನೇಮಕಾತಿ ನಡೆಯಲಿದೆ ಎಂದು ಹೇಳಿದರು.&lt;/p&gt;&lt;p&gt;ಉದ್ಯೋಗಾಕಾಂಕ್ಷಿಗಳು ಬಯೋಡೇಟಾ ಹಾಗೂ ವಿದ್ಯಾರ್ಹತಾ ಪ್ರಮಾಣಪತ್ರಗಳ ಜೆರಾಕ್ಸ್ ಪ್ರತಿಗಳನ್ನು ಕನಿಷ್ಠ ಹತ್ತು ಪ್ರತಿಗಳಷ್ಟು ತರಬೇಕು. ಹುದ್ದೆಗೆ ಅನುಗುಣವಾದ ಉಡುಪು ಧರಿಸುವುದು, ಸಮಯಪಾಲನೆ, ವಿಷಯ ಜ್ಞಾನ, ಕೌಶಲ್ಯ ಹಾಗೂ ಶಿಸ್ತಿಗೆ ಆದ್ಯತೆ ನೀಡಬೇಕು. 18 ರಿಂದ 45 ವರ್ಷದೊಳಗಿನವರು ಮೇಳದಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕುರಿತು ನಗರದ ವಿವಿಧ ಕಾಲೇಜುಗಳಲ್ಲಿ ಫೌಂಡೇಷನ್ ತಂಡದಿಂದ ಈಗಾಗಲೇ ತರಬೇತಿ ನೀಡಲಾಗಿದೆ. ವಿವಿಧ ವೃತ್ತಿಪರ ಕೋರ್ಸ್&zwnj;ಗಳು ಸೇರಿದಂತೆ ಪದವಿಗಳನ್ನು ಪೂರ್ಣಗೊಳಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ ಎಂದು ಡಾ. ಶರತ್ ಮರಿಯಪ್ಪ ತಿಳಿಸಿದರು.&lt;/p&gt;&lt;p&gt;ಆಯ್ಕೆಯಾದ ಅಭ್ಯರ್ಥಿಗಳಿಗೆ ಸೆ.19ರಂದು ಮಧ್ಯಾಹ್ನ 2 ರವರೆಗೆ ಸಚಿವರಾದ ಮಧು ಬಂಗಾರಪ್ಪ ಹಾಗೂ ಸಂತೋಷ್ ಲಾಡ್ ಅವರು ಆಫರ್ ಲೆಟರ್&zwnj;ಗಳನ್ನು ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.&lt;/p&gt;&lt;p&gt;ಮೇಳಕ್ಕೆ ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್&zwnj;ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 96206 27697, 93805 56464, 95358 93447 ಸಂಪರ್ಕಿಸಬಹುದು.&lt;/p&gt;&lt;p&gt;ಪ್ರಮುಖರಾದ ಕುಮಾರ್ ಉಪ್ಪಾರ್, ಪ್ರಕಾಶ್, ರಾಜೇಶ್, ಪತ್ರೇಶ್, ವರುಣ್, ಸಾಯಿರಾಮಣ್ಣ, ತ್ಯಾಗರಾಜ್ ಇದ್ದರು.&lt;/p&gt;&lt;p&gt;----------&lt;/p&gt;]]></content:encoded>
            <category>jobs</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mega-job-fair-in-shivamogga-10000-plus-jobs-across-166-companies-check-details-kvn/articleshow-g4sqh0o"/>
        </item>
        <item>
            <title><![CDATA[ಹೊಸ ಮನೆ, ಹುಟ್ಟಲಿರುವ ಮಗು... ಅಷ್ಟರಲ್ಲೇ ಶಾಕ್ ಕೊಟ್ಟ ಕಂಪನಿ: ಕಣ್ಣೀರಲ್ಲಿ ಮುಳುಗಿದ ಉದ್ಯೋಗಿಯ ಕಥೆ!]]></title>
            <link>https://kannada.asianetnews.com/india-news/house-emi-expecting-a-second-child-and-job-loss-founders-post-sparks-debate/articleshow-g5d9o9i</link>
            <guid isPermaLink="true">https://kannada.asianetnews.com/india-news/house-emi-expecting-a-second-child-and-job-loss-founders-post-sparks-debate/articleshow-g5d9o9i</guid>
            <pubDate>Wed, 16 Sep 2026 08:45:57 +0530</pubDate>
            <description><![CDATA[&lt;p&gt;ಹೊಸ ಮನೆ ಖರೀದಿಸಿ, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ವ್ಯಕ್ತಿಯೊಬ್ಬರು ಕೆಲಸ ಕಳೆದುಕೊಂಡ ಘಟನೆ ಸ್ಟಾರ್ಟ್ಅಪ್ ಸಂಸ್ಥಾಪಕರ ಪೋಸ್ಟ್ ಮೂಲಕ ಚರ್ಚೆಗೆ ಬಂದಿದೆ. Layoff ಕೇವಲ ಸಂಬಳ ನಷ್ಟವಲ್ಲ; EMI, ಕುಟುಂಬದ ಖರ್ಚು ಮತ್ತು ಭವಿಷ್ಯದ ಯೋಜನೆಗಳ ಮೇಲೂ ಪರಿಣಾಮ ಬೀರುತ್ತದೆ ಎಂಬ ವಿಚಾರದೊಂದಿಗೆ ಹಣಕಾಸು ಸಿದ್ಧತೆಯ ಅಗತ್ಯವೂ ಚರ್ಚೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2kw2z0h9acmn7nmcej1t0qg,imgname-bought-a-house--expected-a-second-child--then-came-the-layoff-shock--1--1789520870416.jpg" type="image/jpeg" height="390" width="690"/>
            <content:encoded><![CDATA[&lt;h2&gt;ಮನೆ ಖರೀದಿ, 2ನೇ ಮಗುವಿನ ನಿರೀಕ್ಷೆ&hellip; ಅಷ್ಟರಲ್ಲೇ Layoff!&lt;/h2&gt;&lt;p&gt;ಜೀವನದಲ್ಲಿ ಎಲ್ಲವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಒಂದೇ ಉದ್ಯೋಗ ನಷ್ಟ ದೊಡ್ಡ ಆಘಾತ ನೀಡಿದೆ. ಹೊಸ ಮನೆ ಖರೀದಿಸಿ, ಪತ್ನಿಯೊಂದಿಗೆ ಎರಡನೇ ಮಗುವಿನ ಆಗಮನಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಕೆಲಸ ಕಳೆದುಕೊಂಡ ಸ್ನೇಹಿತನ ಕಥೆಯನ್ನು ಸ್ಟಾರ್ಟ್ಅಪ್ ಸಂಸ್ಥಾಪಕ ದೇಬ್ಜಿತ್ ಸೇನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವಜಾಗೊಳಿಸುವಿಕೆಯ ಮಾನವೀಯ ಮತ್ತು ಆರ್ಥಿಕ ಪರಿಣಾಮಗಳ ಕುರಿತು ಚರ್ಚೆ ಹುಟ್ಟುಹಾಕಿದೆ.&lt;/p&gt;&lt;h3&gt;ಒಂದೇ ಇಮೇಲ್&hellip; ಬದಲಾದ ಬದುಕಿನ ಲೆಕ್ಕಾಚಾರ! ಸಂಬಳ ನಿಂತರೆ EMI ಹೇಗೆ?&lt;/h3&gt;&lt;p&gt;ಉದ್ಯೋಗ ಕಳೆದುಕೊಳ್ಳುವುದು ಎಂದರೆ ಕೇವಲ ಮಾಸಿಕ ಸಂಬಳ ನಿಲ್ಲುವುದು ಮಾತ್ರವಲ್ಲ. ಮನೆ ಸಾಲದ EMI, ದಿನನಿತ್ಯದ ಖರ್ಚು, ಮಕ್ಕಳ ಜವಾಬ್ದಾರಿ ಮತ್ತು ಭವಿಷ್ಯದ ಯೋಜನೆಗಳ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಹೊಸದಾಗಿ ದೊಡ್ಡ ಹಣಕಾಸಿನ ಬದ್ಧತೆ ಮಾಡಿಕೊಂಡಿರುವ ಕುಟುಂಬಗಳಿಗೆ ಇಂತಹ ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗಬಹುದು.&lt;/p&gt;&lt;p&gt;ಸೇನ್ ತಮ್ಮ ಪೋಸ್ಟ್&zwnj;ನಲ್ಲಿ, ವಜಾಗೊಳಿಸುವಿಕೆಯು ವ್ಯಕ್ತಿಯ ವೃತ್ತಿಜೀವನದ ಮೇಲೆ ಮಾತ್ರವಲ್ಲದೆ, ಅವರು ವರ್ಷಗಳಿಂದ ರೂಪಿಸಿಕೊಂಡಿರುವ ವೈಯಕ್ತಿಕ ಜೀವನದ ಯೋಜನೆಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಬರೆದಿದ್ದಾರೆ.&lt;/p&gt;&lt;h3&gt;&lsquo;ಸ್ಥಿರ ಉದ್ಯೋಗ&rsquo; ಎಂಬ ನಂಬಿಕೆಗೆ ಸವಾಲು&lt;/h3&gt;&lt;p&gt;ಒಂದು ಕಾಲದಲ್ಲಿ ಉತ್ತಮ ಸಂಬಳದ ಉದ್ಯೋಗ ಸಿಕ್ಕರೆ ಜೀವನ ಬಹುತೇಕ ಸುರಕ್ಷಿತ ಎಂಬ ಭಾವನೆ ಇತ್ತು. ಆದರೆ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಕಂಪನಿಗಳ ಪುನರ್&zwnj;ರಚನೆ ಅಥವಾ ಸಿಬ್ಬಂದಿ ಕಡಿತದಿಂದ ಸ್ಥಿರವಾಗಿ ಕಾಣುವ ಉದ್ಯೋಗವೂ ಅನಿರೀಕ್ಷಿತವಾಗಿ ಕಳೆದುಹೋಗಬಹುದು.&lt;/p&gt;&lt;p&gt;ಇದರಿಂದಾಗಿ ಮನೆ, ಕಾರು ಅಥವಾ ಇತರ ದೊಡ್ಡ ಸಾಲಗಳನ್ನು ತೆಗೆದುಕೊಳ್ಳುವಾಗ ಭವಿಷ್ಯದ ಆದಾಯದ ಬಗ್ಗೆ ಮಾತ್ರವಲ್ಲ, ತುರ್ತು ಪರಿಸ್ಥಿತಿಗಾಗಿ ಹಣಕಾಸಿನ ಸುರಕ್ಷತೆಯ ಬಗ್ಗೆಯೂ ಯೋಚಿಸುವ ಅಗತ್ಯವಿದೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.&lt;/p&gt;&lt;h3&gt;ನೆಟ್ಟಿಗರ ನಡುವೆ ಹಣಕಾಸು ಯೋಜನೆ ಚರ್ಚೆ&lt;/h3&gt;&lt;p&gt;ಸೇನ್ ಅವರ ಪೋಸ್ಟ್&zwnj;ಗೆ ಪ್ರತಿಕ್ರಿಯಿಸಿದ ಕೆಲವರು, ದೊಡ್ಡ ಸಾಲ ತೆಗೆದುಕೊಳ್ಳುವ ಮೊದಲು ತುರ್ತು ನಿಧಿ ಮತ್ತು ಆದಾಯದ ಸ್ಥಿರತೆಯನ್ನು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು, ಉದ್ಯೋಗ ಕಡಿತದ ಅಪಾಯವನ್ನು ಸಂಪೂರ್ಣವಾಗಿ ಊಹಿಸಲು ಸಾಧ್ಯವಿಲ್ಲದ ಕಾರಣ, ಕುಟುಂಬದ ಹಣಕಾಸು ಯೋಜನೆಯಲ್ಲಿ ಪರ್ಯಾಯ ಆದಾಯ ಮತ್ತು ಉಳಿತಾಯಕ್ಕೂ ಸ್ಥಾನ ಇರಬೇಕು ಎಂದು ಹೇಳಿದ್ದಾರೆ.&lt;/p&gt;&lt;p&gt;ಈ ಚರ್ಚೆಯ ಪ್ರಮುಖ ಪ್ರಶ್ನೆ ಒಂದೇ&mdash;ಉದ್ಯೋಗ ಎಷ್ಟು ಸ್ಥಿರವಾಗಿರಬಹುದು ಎಂಬುದನ್ನು ಊಹಿಸುವ ಬದಲು, ಉದ್ಯೋಗ ಹೋದರೂ ಕುಟುಂಬದ ಹಣಕಾಸು ಎಷ್ಟು ಕಾಲ ನಿಭಾಯಿಸಬಹುದು ಎಂಬುದನ್ನು ಯೋಜಿಸಬೇಕೇ?&lt;/p&gt;&lt;h3&gt;Layoff ಕೇವಲ Job Loss ಅಲ್ಲ&lt;/h3&gt;&lt;p&gt;ಈ ಘಟನೆ ಮತ್ತೊಮ್ಮೆ ನೆನಪಿಸುವ ಸಂಗತಿ ಏನೆಂದರೆ, ಉದ್ಯೋಗ ನಷ್ಟದ ಪರಿಣಾಮ ಕಚೇರಿಯ ಗಡಿಯನ್ನು ಮೀರಿ ಕುಟುಂಬದ ಜೀವನಕ್ಕೂ ತಲುಪಬಹುದು. EMI, ಮಕ್ಕಳ ಭವಿಷ್ಯ, ಮನೆ ಖರ್ಚು ಮತ್ತು ಮಾನಸಿಕ ಒತ್ತಡ&mdash;ಎಲ್ಲವೂ ಒಂದೇ ಸಮಯದಲ್ಲಿ ಎದುರಾಗಬಹುದು. ಹೀಗಾಗಿ ಇಂದಿನ ಅನಿಶ್ಚಿತ ಉದ್ಯೋಗ ಪರಿಸ್ಥಿತಿಯಲ್ಲಿ ಹಣಕಾಸಿನ ಸಿದ್ಧತೆ ಕೂಡ ವೃತ್ತಿಜೀವನದ ಯೋಜನೆಯಷ್ಟೇ ಮುಖ್ಯವಾಗುತ್ತಿದೆ.&lt;/p&gt;&lt;p&gt;Layoffs are so brutal.One of my old friends was laid off recently. He has just bought a new house, and he and his wife are expecting their second child. Now he doesn&rsquo;t know how he is going to manage the EMIs and everything else.This is what layoffs do to people. It&rsquo;s not just&hellip;&lt;/p&gt;&lt;p&gt;&mdash; Debjit Sen (@debjitsen) September 15, 2026&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/house-emi-expecting-a-second-child-and-job-loss-founders-post-sparks-debate/articleshow-g5d9o9i"/>
        </item>
        <item>
            <title><![CDATA[ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಖಾಲಿ ಇದೆ, ಆದ್ರೆ ಕನ್ನಡಿಗರಿಗೆ ಕೊಡಲ್ಲ; ತಮಿಳರಷ್ಟೇ ಅರ್ಜಿ ಸಲ್ಲಿಸಿ]]></title>
            <link>https://kannada.asianetnews.com/bengaluru-urban/bengaluru-private-company-job-posting-tamil-nadu-candidates-only-kannadigas-outrage-sat/articleshow-m675qg4</link>
            <guid isPermaLink="true">https://kannada.asianetnews.com/bengaluru-urban/bengaluru-private-company-job-posting-tamil-nadu-candidates-only-kannadigas-outrage-sat/articleshow-m675qg4</guid>
            <pubDate>Mon, 14 Sep 2026 06:46:22 +0530</pubDate>
            <description><![CDATA[ಬೆಂಗಳೂರಿನ ಖಾಸಗಿ ಕಂಪನಿಯೊಂದು ಡೇಟಾ ಅನಾಲಿಸ್ಟ್ ಹುದ್ದೆಗೆ ತಮಿಳುನಾಡು ಮೂಲದವರನ್ನು ಮಾತ್ರ ಆಹ್ವಾನಿಸಿ ವಿವಾದ ಸೃಷ್ಟಿಸಿದೆ. ಈ ತಾರತಮ್ಯದ ವಿರುದ್ಧ ಜಾಲತಾಣಗಳಲ್ಲಿ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2eqkyhzhc0rpq8t5b5fatb4,imgname-bengaluru-private-job-for-tamil-candidates-1789348411967.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.14): ಖಾ&lt;/strong&gt;ಸಗಿ ಕಂಪನಿಯೊಂದರಲ್ಲಿನ ಡೇಟಾ ಅನಾಲಿಸ್ಟ್ ಹುದ್ದೆಗೆ ತಮಿಳುನಾಡು ಮೂಲದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂಬ ಷರತ್ತು ವಿಧಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಖಾಸಗಿ ಕಂಪನಿಯ ಎಚ್ಆರ್ ಮ್ಯಾನೇಜರ್ ವಿಧಿಸಿದ್ದ ಷರತ್ತಿಗೆ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ, ಷರತ್ತನ್ನು ಹಿಂಪಡೆಯಲಾಗಿದೆ.&lt;/p&gt;&lt;p&gt;ಜನರಲ್ ಮ್ಯಾನೇಜರ್ ಮತ್ತು ಎಚ್ಆರ್ ಟೀಮ್ ಹೆಡ್ ಆಗಿರುವ ಬಾಲ ಎಂ. ಎಂಬುವರು ಎರಡು ದಿನಗಳ ಹಿಂದೆ ಲಿಂಕ್ಡ್&zwnj;ಇನ್&zwnj;ನಲ್ಲಿ ಮಾಡಿರುವ ಪೋಸ್ಟ್&zwnj;ನಲ್ಲಿ ಬೆಂಗಳೂರು, ತಮಿಳುನಾಡಿನ ಕೊಯಮತ್ತೂರು ಹಾಗೂ ನಮಕ್ಕಲ್&zwnj; ನಗರಗಳಲ್ಲಿ ಕಾರ್ಯಾಚರಿಸುವ ಕಂಪನಿಯಲ್ಲಿನ ಡೇಟಾ ಅನಾಲಿಸ್ಟ್ ಹುದ್ದೆಗೆ &lsquo;ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಬೇರೆ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಾರದು&rsquo; ಎಂದು ಉಲ್ಲೇಖಿಸಲಾಗಿದೆ.&lt;/p&gt;&lt;p&gt;ಈ ತಾರತಮ್ಯದ ಕುರಿತು ಕರಣ್ ಗೌಡ ಎಂಬುವರು ಎಕ್ಸ್&zwnj;ನಲ್ಲಿ ಪೋಸ್ಟ್ ಮಾಡಿದ್ದು, ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಾಚರಿಸುವ ಕಂಪನಿಯೊಂದು ಈ ರೀತಿ ತಾರತಮ್ಯ ಮಾಡಲು ಹೇಗೆ ಸಾಧ್ಯ? ಕಾರ್ಮಿಕ ಇಲಾಖೆ ಹಾಗೂ ರಾಜ್ಯ ಸರ್ಕಾರ, ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ&lt;/p&gt;&lt;h2&gt;&lt;strong&gt;ತಾರತಮ್ಯ ನಡೆಯುತ್ತಿದೆ:&lt;/strong&gt;&lt;/h2&gt;&lt;p&gt;ನಗರದಲ್ಲಿನ ಅನೇಕ ಕಂಪನಿಗಳಲ್ಲಿ ಪ್ರತಿಭೆ ಮತ್ತು ಅರ್ಹತೆ ಇದ್ದರೂ ಕನ್ನಡಿಗರನ್ನು ಕಡೆಗಣಿಸಿ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳ ಅಭ್ಯರ್ಥಿಗಳಿಗೆ ಮಣೆ ಹಾಕಿ ಆಯ್ಕೆ ಮಾಡಿಕೊಳ್ಳುವ ತಾರತಮ್ಯ ಪದ್ಧತಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಕುರಿತು ಸಂಬಂಧಿಸಿದ ಇಲಾಖೆಗಳು ಹಾಗೂ ಸರ್ಕಾರ ಕ್ರಮ ವಹಿಸಬೇಕು ಎಂಬ ಒತ್ತಾಯಗಳು ಜಾಲ ತಾಣದಲ್ಲಿ ಕೇಳಿ ಬಂದಿವೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/bengaluru-private-company-job-posting-tamil-nadu-candidates-only-kannadigas-outrage-sat/articleshow-m675qg4"/>
        </item>
        <item>
            <title><![CDATA[20 ಸಾವಿರ ಉದ್ಯೋಗಿಗಳ ಕೆಲಸ ಮಾಡಲಿದೆ ಕೆಲವೇ ಕೆಲವು AI ಏಜೆಂಟ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಗೆ WIPRO ಭಾರಿ ಸಿದ್ಧತೆ!]]></title>
            <link>https://kannada.asianetnews.com/technology/wipro-ai-initiatives-free-capacity-equivalent-to-20k-workers-san/articleshow-mihvg9g</link>
            <guid isPermaLink="true">https://kannada.asianetnews.com/technology/wipro-ai-initiatives-free-capacity-equivalent-to-20k-workers-san/articleshow-mihvg9g</guid>
            <pubDate>Fri, 11 Sep 2026 16:32:43 +0530</pubDate>
            <description><![CDATA[&lt;p&gt;ವಿಪ್ರೋ ಸಂಸ್ಥೆಯು ತನ್ನ ನೂತನ ಕೃತಕ ಬುದ್ಧಿಮತ್ತೆ (AI) ಯೋಜನೆಗಳ ಮೂಲಕ ಸುಮಾರು 20,000 ಉದ್ಯೋಗಿಗಳ ಕೆಲಸದ ಸಾಮರ್ಥ್ಯಕ್ಕೆ ಸಮನಾದ ಉತ್ಪಾದಕತೆಯನ್ನು ಸಾಧಿಸಿದೆ. ಈ ಹಿನ್ನೆಲೆಯಲ್ಲಿ, ಉಳಿತಾಯವಾದ ಮಾನವ ಸಂಪನ್ಮೂಲವನ್ನು ಬೇರೆಡೆಗೆ ನಿಯೋಜಿಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m28209y615dnk1xjagxxm9d7,imgname-sandhya-arun-wipro-1789124421574.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): &lt;/strong&gt;ಭಾರತೀಯ ಐಟಿ ರಂಗದ ದೈತ್ಯ ಸಂಸ್ಥೆಯಾದ 'ವಿಪ್ರೋ' (Wipro) ಕೈಗೆತ್ತಿಕೊಂಡಿರುವ ನೂತನ ಕೃತಕ ಬುದ್ಧಿಮತ್ತೆ (AI) ಯೋಜನೆಗಳು ಸುಮಾರು 20,000 ಉದ್ಯೋಗಿಗಳ ಒಟ್ಟು ಕೆಲಸದ ಸಾಮರ್ಥ್ಯಕ್ಕೆ (Productivity) ಸಮನಾದ ಯಶಸ್ಸನ್ನು ತಂದುಕೊಟ್ಟಿವೆ ಎಂದು ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಸಂಧ್ಯಾ ಅರುಣ್ ತಿಳಿಸಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಉಳಿತಾಯವಾಗಿರುವ ಈ ಮಾನವ ಸಂಪನ್ಮೂಲವನ್ನು ಕಂಪನಿಯ ಒಳಗಡೆಯೇ ಇತರ ಪ್ರಮುಖ ಯೋಜನೆಗಳಿಗೆ ಪುನರ್ ನಿಯೋಜಿಸಲಾಗಿದೆ (Redeployed) ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಪ್ರಸ್ತುತ ಸುಮಾರು 315 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ತಂತ್ರಜ್ಞಾನ ಹಾಗೂ ಸಾಫ್ಟ್&zwnj;ವೇರ್ ಸೇವಾ ಕ್ಷೇತ್ರವು (Software Services Industry) ಎಐ ತಂತ್ರಜ್ಞಾನದ ತೀವ್ರ ಅಳವಡಿಕೆಯಿಂದಾಗಿ ನೌಕರರ ನೇಮಕಾತಿ, ಸಾಫ್ಟ್&zwnj;ವೇರ್ ಅಭಿವೃದ್ಧಿ ಹಾಗೂ ಗ್ರಾಹಕರ ಒಪ್ಪಂದಗಳ ಸ್ವರೂಪದಲ್ಲೇ ಭಾರಿ ಬದಲಾವಣೆಗಳನ್ನು ಕಾಣುತ್ತಿದ್ದು, ಈ ಹಂತದಲ್ಲಿ ವಿಪ್ರೋದ ಈ ಬೆಳವಣಿಗೆ ಪ್ರಮುಖ ಎನಿಸಿದೆ.&lt;/p&gt;&lt;h2&gt;&lt;strong&gt;1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ಎಐ ತರಬೇತಿ&lt;/strong&gt;&lt;/h2&gt;&lt;p&gt;ಜೂನ್ ತಿಂಗಳ ವೇಳೆಗೆ ದೇಶಾದ್ಯಂತ ಸುಮಾರು 2,43,000 ಉದ್ಯೋಗಿಗಳನ್ನು ಹೊಂದಿರುವ ವಿಪ್ರೋ, ಈಗ &quot;ಮಾನವ-ಎಐ ಕಾರ್ಯಾಚರಣೆ ಮಾದರಿ&quot;ಗೆ (Human-AI Operating Model) ಸಂಪೂರ್ಣವಾಗಿ ತೆರೆದುಕೊಳ್ಳುತ್ತಿದೆ. ಇದರ ಭಾಗವಾಗಿ ಈಗಾಗಲೇ 1,00,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸುಧಾರಿತ ಎಐ ಸಂಬಂಧಿತ ತರಬೇತಿ ಮತ್ತು ಪ್ರಮಾಣಪತ್ರಗಳನ್ನು (Certifications) ನೀಡಲಾಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಸಂಧ್ಯಾ ಅರುಣ್ ಹೇಳಿದ್ದಾರೆ.&lt;/p&gt;&lt;p&gt;&quot;ಇದರರ್ಥ ಒಬ್ಬನೇ ಇಂಜಿನಿಯರ್ ಹಲವು ಎಐ ಏಜೆಂಟ್&zwnj;ಗಳನ್ನು (AI Agents) ನಿರ್ವಹಿಸಬಹುದು, ಅಥವಾ ಅವರನ್ನು ಇತರ ಯೋಜನೆಗಳಿಗೆ ನಿಯೋಜಿಸಬಹುದು ಇಲ್ಲವೇ ಹೊಸ ಪಾತ್ರಕ್ಕಾಗಿ ತರಬೇತಿ ನೀಡಬಹುದು. ಎಐ ಏಜೆಂಟ್&zwnj;ಗಳು ನೇರವಾಗಿ ಮನುಷ್ಯರನ್ನು ಕೆಲಸದಿಂದ ತೆಗೆದುಹಾಕಿ ಅವರ ಜಾಗವನ್ನು ತುಂಬುತ್ತಿದ್ದಾರೆ ಎಂದು ಭಾವಿಸಬೇಕಿಲ್ಲ&quot; ಎಂದು ಅವರು ವಿವರಿಸಿದ್ದಾರೆ. ಇತ್ತೀಚೆಗೆ ವಿಪ್ರೋ ಕಾರ್ಯಕಾರಿ ಅಧ್ಯಕ್ಷ ರಿಷದ್ ಪ್ರೇಮ್&zwnj;ಜಿ ಅವರು ವ್ಯಕ್ತಪಡಿಸಿದ್ದ ಕಳಕಳಿ ಮತ್ತು ವಿಚಾರಗಳಿಗೆ ಸಂಧ್ಯಾ ಅರುಣ್ ಅವರ ಈ ಮಾತುಗಳು ಪೂರಕವಾಗಿವೆ.&lt;/p&gt;&lt;h2&gt;&lt;strong&gt;ಐಟಿ ವಲಯದಲ್ಲಿ ಎಐ ಏಜೆಂಟ್&zwnj;ಗಳ ಹವಾ&lt;/strong&gt;&lt;/h2&gt;&lt;p&gt;ಭಾರತದ ಅತಿದೊಡ್ಡ ಸಾಫ್ಟ್&zwnj;ವೇರ್ ರಫ್ತು ಸಂಸ್ಥೆಯಾದ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' (TCS), ಮುಂಬರುವ ದಿನಗಳಲ್ಲಿ ತನ್ನ ಕಾರ್ಯಪಡೆಯಲ್ಲಿ ನೌಕರರು ಮತ್ತು ಎಐ ಏಜೆಂಟ್&zwnj;ಗಳ ಸಂಖ್ಯೆಯನ್ನು ಸಮಾನವಾಗಿ (50:50) ತರಲು ಯೋಜಿಸುತ್ತಿದ್ದು, ಈ ಕಾರಣಕ್ಕೆ ಸಾಂಪ್ರದಾಯಿಕ ನೌಕರರ ನೇಮಕಾತಿ ಪ್ರಕ್ರಿಯೆ ಮಂದಗತಿಯಲ್ಲಿರಲಿದೆ ಎಂದು ಕಳೆದ ಜೂನ್&zwnj;ನಲ್ಲೇ ಸುಳಿವು ನೀಡಿತ್ತು.&lt;/p&gt;&lt;p&gt;ಗ್ರಾಹಕರಲ್ಲಿ ಎಐ ತಂತ್ರಜ್ಞಾನದ ಬಳಕೆಯನ್ನು ವೇಗಗೊಳಿಸಲು ತಾವೇ ನೇರವಾಗಿ ಗ್ರಾಹಕರ ಆವರಣದಲ್ಲಿ ಕಾರ್ಯನಿರ್ವಹಿಸುವ (Forward-deployed engineers) ತಜ್ಞ ಇಂಜಿನಿಯರ್&zwnj;ಗಳ ತಂಡವನ್ನು ಕಟ್ಟಲು ಪ್ರಮುಖ ಕಂಪನಿಗಳು ಮುಂದಾಗಿವೆ. ಟಿಸಿಎಸ್ ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 8,900 ಹಾಗೂ ಇನ್ಫೋಸಿಸ್ (Infosys) ಸುಮಾರು 6,000 ಇಂತಹ ಇಂಜಿನಿಯರ್&zwnj;ಗಳನ್ನು ಸಿದ್ಧಪಡಿಸಲು ಪ್ಲಾನ್ ಮಾಡಿವೆ. ವಿಪ್ರೋ ಸಹ ಇಂತಹ ಇಂಜಿನಿಯರ್&zwnj;ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆಯಾದರೂ, ಯಾವುದೇ ನಿರ್ದಿಷ್ಟ ಗುರಿಯನ್ನು ಬಹಿರಂಗಪಡಿಸಿಲ್ಲ. ತಮ್ಮ ಈ ಶಕ್ತಿ ಇತರ ಪೈಪೋಟಿ ಸಂಸ್ಥೆಗಳಿಗೆ ಸಮನಾಗಿರಲಿದೆ ಎಂದು ಸಿಟಿಒ ತಿಳಿಸಿದ್ದಾರೆ.&lt;/p&gt;&lt;p&gt;ಆದರೆ, ಕೇವಲ ನಿರ್ದಿಷ್ಟ ಹುದ್ದೆಗಳ ಮೇಲಷ್ಟೇ ಗಮನ ಹರಿಸುವುದನ್ನು ತಡೆದಿರುವ ಅವರು, &quot;ಎಲ್ಲಾ ಇಂಜಿನಿಯರ್&zwnj;ಗಳು ಎಐ ವ್ಯವಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದೇ ಇಂದಿನ ಪ್ರಮುಖ ಸವಾಲಾಗಿದೆ&quot; ಎಂದಿದ್ದಾರೆ.&lt;/p&gt;&lt;p&gt;&quot;ನಮ್ಮ ಗಮನ ಉತ್ಪಾದಕತೆಯಿಂದ (Productivity) ಅಂತಿಮ ಫಲಿತಾಂಶದತ್ತ (Outcomes) ಬದಲಾಗಬೇಕಿದೆ. ಎಐ ತಂತ್ರಜ್ಞಾನವು ಗ್ರಾಹಕರ ಅನುಭವವನ್ನು ಉತ್ತಮಗೊಳಿಸುತ್ತದೆಯೇ, ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸುತ್ತದೆಯೇ ಮತ್ತು ವ್ಯಾಪಾರದ ಗುರಿಗಳನ್ನು ತಲುಪಲು ನೆರವಾಗುತ್ತದೆಯೇ ಎಂಬುದರ ಆಧಾರದ ಮೇಲೆ ಅದರ ಮೌಲ್ಯಮಾಪನ ನಡೆಯಬೇಕು&quot; ಎಂದು ಸಂಧ್ಯಾ ಅರುಣ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಆದಾಯ ಗಳಿಕೆಯಲ್ಲಿ ಹಿನ್ನಡೆ?&lt;/strong&gt;&lt;/h2&gt;&lt;p&gt;ಭಾರತದ ಪ್ರಮುಖ ನಾಲ್ಕು ಐಟಿ ಕಂಪನಿಗಳ ಪೈಕಿ ವಿಪ್ರೋ ಒಂದೇ ತನ್ನ 'ಎಐ ಆದಾಯವನ್ನು' (AI Revenue) ಪ್ರತ್ಯೇಕವಾಗಿ ಬಹಿರಂಗಪಡಿಸದಿರುವ ಕಂಪನಿಯಾಗಿದೆ.&lt;/p&gt;&lt;p&gt;ಈ ಕುರಿತು ವಿಶ್ಲೇಷಣೆ ನೀಡಿರುವ 'ನಾರ್ಡ್-ಐಕ್ಯೂ ರಿಸರ್ಚ್'ನ (Nord-IQ Research) ಪ್ರಮುಖ ವಿಶ್ಲೇಷಕ ಮನೋಜ್ ಚಂದ್ರ ಝಾ, &quot;ಪೈಪೋಟಿ ಸಂಸ್ಥೆಗಳಿಗೆ ಹೋಲಿಸಿದರೆ ವಿಪ್ರೋ ಇನ್ನು ಸಹ ಎಐ ನಿಂದ ನೇರ ಆದಾಯ ಗಳಿಸುವ (Commercialization/Monetisation) ವಿಚಾರದಲ್ಲಿ ಆರಂಭಿಕ ಹಂತದಲ್ಲೇ ಇದೆ. ಪ್ರಸ್ತುತ ಕಂಪನಿಯು ಮೂಲಸೌಕರ್ಯ ಹಾಗೂ ತರಬೇತಿಗಾಗಿ ವೆಚ್ಚ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಎಐ ಒಪ್ಪಂದಗಳು ನೇರ ಆದಾಯವಾಗಿ ಮತ್ತು ಶೇಕಡಾವಾರು ಲಾಭವಾಗಿ ಲಾಭದಾಯಕವಾಗಿ ಬದಲಾದಾಗ ಕಂಪನಿಯ ನಿಜವಾದ ಪರೀಕ್ಷೆ ಎದುರಾಗಲಿದೆ&quot; ಎಂದಿದ್ದಾರೆ.&lt;/p&gt;&lt;p&gt;ಎಐ ತರಬೇತಿ ಮತ್ತು ಮಾರುಕಟ್ಟೆ ಪಾಲುದಾರಿಕೆಯಲ್ಲಿ ವಿಪ್ರೋ ಹೂಡಿಕೆಯು ಟಿಸಿಎಸ್, ಇನ್ಫೋಸಿಸ್ ಮತ್ತು ಹೆಚ್&zwnj;ಸಿಎಲ್&zwnj;ಟೆಕ್ (HCLTech) ಕಂಪನಿಗಳಿಗೆ ಸಮನಾಗಿದೆಯಾದರೂ, ಅದನ್ನು ನೇರ ವಾಣಿಜ್ಯ ಲಾಭವಾಗಿ ಬದಲಾಯಿಸುವ ಪಕ್ವತೆಯಲ್ಲಿ ವಿಪ್ರೋ ಕೊಂಚ ಹಿಂದುಳಿದಿದೆ ಎಂದು ಝಾ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/technology/wipro-ai-initiatives-free-capacity-equivalent-to-20k-workers-san/articleshow-mihvg9g"/>
        </item>
        <item>
            <title><![CDATA[ಇಂಟರ್‌ವ್ಯೂಗೆ CEO ತಡವಾಗಿ ಬಂದಿದ್ದಕ್ಕೆ ಆಫರ್‌ ಅನ್ನೇ ರಿಜೆಕ್ಟ್ ಮಾಡಿದ ಅಭ್ಯರ್ಥಿ! ವೈರಲ್ ಇಮೇಲ್‌ನಲ್ಲೇನಿದೆ?]]></title>
            <link>https://kannada.asianetnews.com/jobs/your-time-matters-too-candidate-turns-down-company-after-ceo-arrives-late/articleshow-n1l8do8</link>
            <guid isPermaLink="true">https://kannada.asianetnews.com/jobs/your-time-matters-too-candidate-turns-down-company-after-ceo-arrives-late/articleshow-n1l8do8</guid>
            <pubDate>Mon, 14 Sep 2026 12:29:47 +0530</pubDate>
            <description><![CDATA[&lt;p&gt;CEO ಸಂದರ್ಶನಕ್ಕೆ ಒಂದು ಗಂಟೆಗೂ ಹೆಚ್ಚು ತಡವಾಗಿ ಬಂದಿದ್ದಾರೆ ಎಂದು ಆರೋಪಿಸಿ, ಅಭ್ಯರ್ಥಿಯೊಬ್ಬರು ಸಂದರ್ಶನವನ್ನೇ ತಿರಸ್ಕರಿಸಿರುವ ಇಮೇಲ್ ಸ್ಕ್ರೀನ್&zwnj;ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭ್ಯರ್ಥಿಯ ಸಮಯವನ್ನು ಗೌರವಿಸದ ಕಂಪನಿಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ. CEO ತಡಕ್ಕೆ ಕಾರಣವೇನು ಎಂಬುದು ವೈರಲ್ ಪೋಸ್ಟ್&zwnj;ನಲ್ಲಿ ಸ್ಪಷ್ಟವಾಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d8ynb96rc82xrd6m0d8dxv,imgname-candidate-rejects-ceo-after-interview-delay-sparks-viral-debate-1789299479913.jpg" type="image/jpeg" height="390" width="690"/>
            <content:encoded><![CDATA[&lt;h2&gt;CEOಗಾಗಿ ಕಾದ ಅಭ್ಯರ್ಥಿ, ಕೊನೆಗೆ ಹೇಳಿದ್ದೇನು?&lt;/h2&gt;&lt;p&gt;ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಗಳು ಸಮಯಪಾಲನೆ ಮತ್ತು ವೃತ್ತಿಪರತೆಯನ್ನು ಪಾಲಿಸಬೇಕು ಎಂಬ ನಿರೀಕ್ಷೆ ಸಾಮಾನ್ಯ. ಆದರೆ ಇದೇ ನಿಯಮ ಸಂದರ್ಶಕರಿಗೂ ಅನ್ವಯಿಸಬೇಕಲ್ಲವೇ? ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಇಮೇಲ್ ಸ್ಕ್ರೀನ್&zwnj;ಶಾಟ್ ಈ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.&lt;/p&gt;&lt;h3&gt;30 ನಿಮಿಷ ಮುಂಚೆಯೇ ಬಂದಿದ್ದ ಅಭ್ಯರ್ಥಿ&lt;/h3&gt;&lt;p&gt;ವೈರಲ್ ಆಗಿರುವ ಸ್ಕ್ರೀನ್&zwnj;ಶಾಟ್&zwnj;ನ ಪ್ರಕಾರ, ಅಭ್ಯರ್ಥಿಯೊಬ್ಬರು ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದ್ದ ಸಂದರ್ಶನಕ್ಕೆ ಸುಮಾರು 30 ನಿಮಿಷ ಮುಂಚಿತವಾಗಿಯೇ ಬಂದಿದ್ದರು. ಆದರೆ ಕಂಪನಿಯ CEO ಒಂದು ಗಂಟೆಗೂ ಹೆಚ್ಚು ತಡವಾಗಿ, ಸುಮಾರು 3:10ಕ್ಕೆ ಸಂದರ್ಶನಕ್ಕೆ ಹಾಜರಾದರು ಎಂದು ಇಮೇಲ್&zwnj;ನಲ್ಲಿ ಆರೋಪಿಸಲಾಗಿದೆ.&lt;/p&gt;&lt;p&gt;ಅಭ್ಯರ್ಥಿಯ ಪ್ರಕಾರ, CEO ತಡವಾಗಿ ಬಂದಿದ್ದಕ್ಕೆ ಯಾವುದೇ ಸ್ಪಷ್ಟನೆ ಅಥವಾ ಕ್ಷಮೆಯಾಚನೆ ನೀಡದೆ ಸಂದರ್ಶನ ಮುಂದುವರಿಸಿದರು ಎನ್ನಲಾಗಿದೆ.&lt;/p&gt;&lt;h3&gt;&ldquo;ಸಂದರ್ಶನ ಬೇಡ, ಕಂಪನಿಯೂ ಬೇಡ!&rdquo;&lt;/h3&gt;&lt;p&gt;ಇದರಿಂದ ಬೇಸರಗೊಂಡ ಅಭ್ಯರ್ಥಿ ಸಂದರ್ಶನ ಆರಂಭವಾದ ನಂತರವೇ ಹೊರನಡೆಯಲು ನಿರ್ಧರಿಸಿದ್ದಾಗಿ ಇಮೇಲ್&zwnj;ನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಕಂಪನಿ ತನ್ನ ಉದ್ಯೋಗಿಗಳ ಸಮಯವನ್ನು ಹೇಗೆ ಗೌರವಿಸಬಹುದು ಎಂಬುದರ ಬಗ್ಗೆ ಈ ಘಟನೆ ಸಂದೇಹ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಅಷ್ಟೇ ಅಲ್ಲದೆ, ಉದ್ಯೋಗಕ್ಕೆ ಸೇರುವ ಮೊದಲೇ ಇಂತಹ ಅನುಭವವಾಗಿದ್ದರೆ, ಮುಂದೆ ಕಂಪನಿಯ ಕೆಲಸದ ಸಂಸ್ಕೃತಿ ಹೇಗಿರಬಹುದು ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ. ಕೊನೆಗೆ ಸಂದರ್ಶನವನ್ನೂ, ಆ ಕಂಪನಿಯ ಉದ್ಯೋಗಾವಕಾಶವನ್ನೂ ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;ನೆಟ್ಟಿಗರಲ್ಲೂ ಭಿನ್ನಾಭಿಪ್ರಾಯ&lt;/h3&gt;&lt;p&gt;ಇಮೇಲ್ ಸ್ಕ್ರೀನ್&zwnj;ಶಾಟ್ ವೈರಲ್ ಆದ ಬಳಿಕ ಕೆಲವರು ಅಭ್ಯರ್ಥಿಯ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಅಭ್ಯರ್ಥಿಯ ಸಮಯವನ್ನು ಗೌರವಿಸುವುದು ಕಂಪನಿಯ ಜವಾಬ್ದಾರಿ ಎಂದಿದ್ದಾರೆ.&lt;/p&gt;&lt;p&gt;ಆದರೆ ಮತ್ತೊಂದು ವರ್ಗದವರು CEO ತಡವಾಗಲು ಅನಿರೀಕ್ಷಿತ ತುರ್ತು ಪರಿಸ್ಥಿತಿ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಉತ್ಪಾದನಾ ಸಮಸ್ಯೆ ಅಥವಾ ತುರ್ತು ವ್ಯವಹಾರ ವಿಷಯಗಳಿಂದ ಹಿರಿಯ ಅಧಿಕಾರಿಗಳ ವೇಳಾಪಟ್ಟಿ ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ನಿರ್ಧಾರ ತೆಗೆದುಕೊಳ್ಳುವ ಬದಲು ಕಾರಣ ಕೇಳಬಹುದಿತ್ತು ಎಂದು ಕೆಲವರು ಹೇಳಿದ್ದಾರೆ.&lt;/p&gt;&lt;h3&gt;ಅಭ್ಯರ್ಥಿ ಅನುಭವವೂ ಮುಖ್ಯ&lt;/h3&gt;&lt;p&gt;ಈ ಚರ್ಚೆ ಒಂದು ಪ್ರಮುಖ ವಿಚಾರವನ್ನು ಎತ್ತಿಹಿಡಿದಿದೆ&mdash;ನೇಮಕಾತಿ ಪ್ರಕ್ರಿಯೆಯಲ್ಲಿ ಗೌರವ ಮತ್ತು ಸಂವಹನ ಎರಡೂ ಕಡೆಗಳಿಂದ ಇರಬೇಕು. ಅಭ್ಯರ್ಥಿಗಳು ಸಂದರ್ಶನಕ್ಕಾಗಿ ಸಮಯ, ಸಿದ್ಧತೆ ಮತ್ತು ಶ್ರಮ ಹೂಡುತ್ತಾರೆ. ಅದೇ ರೀತಿ ಕಂಪನಿಗಳಿಗೂ ಅನಿರೀಕ್ಷಿತ ಪರಿಸ್ಥಿತಿಗಳು ಎದುರಾಗಬಹುದು.&lt;/p&gt;&lt;p&gt;ಆದ್ದರಿಂದ ಸಂದರ್ಶನ ವಿಳಂಬವಾದರೆ ಸ್ಪಷ್ಟ ಮಾಹಿತಿ ನೀಡುವುದು ಮತ್ತು ಅಗತ್ಯವಿದ್ದರೆ ಕ್ಷಮೆಯಾಚಿಸುವುದು ಅಭ್ಯರ್ಥಿಯ ಅನುಭವವನ್ನು ಉತ್ತಮಗೊಳಿಸಬಹುದು. ವೈರಲ್ ಇಮೇಲ್ ನಿಜವಾದ ಘಟನೆಯ ಸಂಪೂರ್ಣ ಚಿತ್ರಣ ನೀಡುತ್ತದೆಯೇ ಎಂಬುದು ಸ್ಪಷ್ಟವಾಗದಿದ್ದರೂ, ನೇಮಕಾತಿಯಲ್ಲಿ ಸಮಯಪಾಲನೆ, ಸಂವಹನ ಮತ್ತು ಪರಸ್ಪರ ಗೌರವ ಎಷ್ಟು ಮುಖ್ಯ ಎಂಬ ಚರ್ಚೆಯನ್ನು ಇದು ಹುಟ್ಟುಹಾಕಿದೆ.&lt;/p&gt;&lt;p&gt;Respect is part of the interview process and is applicable both ways.. pic.twitter.com/jLlDwtVuFn&lt;/p&gt;&lt;p&gt;&mdash; SumitM (@SumitM_X) September 13, 2026&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/jobs/your-time-matters-too-candidate-turns-down-company-after-ceo-arrives-late/articleshow-n1l8do8"/>
        </item>
        <item>
            <title><![CDATA[1.5 ಕೋಟಿ ಜಾಬ್ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆದವಳ ತಿಂಗಳ ಗಳಿಗೆ 500 ರೂ..!]]></title>
            <link>https://kannada.asianetnews.com/private-jobs/quit-a-1-crore-job-to-become-a-content-creator-now-earns-500-a-month/articleshow-ox843rv</link>
            <guid isPermaLink="true">https://kannada.asianetnews.com/private-jobs/quit-a-1-crore-job-to-become-a-content-creator-now-earns-500-a-month/articleshow-ox843rv</guid>
            <pubDate>Tue, 15 Sep 2026 12:00:17 +0530</pubDate>
            <description><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಕಂಟೆಂಟ್&zwnj; ಕ್ರಿಯೇಷನ್&zwnj; ಟ್ರೆಂಡ್&zwnj; ಆಗಿದೆ. ಜನರು ದೊಡ್ಡ ಹುದ್ದೆ ಬಿಟ್ಟು ಕಂಟೆಂಟ್ ಕ್ರಿಯೇಟರ್&zwnj; ಆಗ್ತಿದ್ದಾರೆ. ಕೆನಡಾದ ಮಹಿಳೆಯೊಬ್ಬರು ಇದೇ ವಿಷ್ಯಕ್ಕೆ ಈಗ ಸುದ್ದಿಯಲ್ಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2hw2ff03j9dx2x268rhgcte,imgname-content-creation-1789453745632.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡಿದರೆ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸಬಹುದು ಅನ್ನೋದು ಹಲವರ ಕಲ್ಪನೆ. ಆದರೆ ವಾಸ್ತವದಲ್ಲಿ ಹಾಗೇನಿಲ್ಲ. ಕೆಲವರಿಗೆ ಕಂಟೆಂಟ್ನಿಂದ ಆರಂಭದಲ್ಲಿ ನೂರು, ಸಾವಿರ ರೂಪಾಯಿಯಷ್ಟೇ ಸಿಗಬಹುದು. ಆದರೂ ಒಂದೇ ರೀತಿಯ ಕೆಲಸ ಮಾಡಿ ಸುಸ್ತಾದ ಕೆಲವರು, ಒಳ್ಳೆಯ ಸಂಬಳದ ಉದ್ಯೋಗವನ್ನೂ ಬಿಟ್ಟು ತಮ್ಮದೇ ಆದ ದಾರಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೆನಡಾದಲ್ಲಿ ವಾಸವಾಗಿರುವ ಪ್ರೊಡಕ್ಟ್ ಡಿಸೈನರ್ ಹೇಗಿ ಜಿಯಾಂಗ್ ಅವರ ಕಥೆಯೇ ಉದಾಹರಣೆ.&lt;/p&gt;&lt;h2&gt;1.5 ಕೋಟಿ ಸಂಬಳ ಬಿಟ್ಟ ಮಹಿಳೆ!&lt;/h2&gt;&lt;p&gt;ಜಿಯಾಂಗ್ ಅವರು ವರ್ಷಕ್ಕೆ ಸುಮಾರು 1.5 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದರು. ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕೆಲಸ. ವಾರಕ್ಕೆ ಸುಮಾರು 40 ಗಂಟೆ ಕೆಲಸ ಮಾಡುತ್ತಿದ್ದ ಅವರಿಗೆ ವರ್ಕ್-ಲೈಫ್ ಬ್ಯಾಲೆನ್ಸ್ ಕಷ್ಟವಾಗಿರಲಿಲ್ಲ. ಆದರೂ ಅವರು ತಮ್ಮ ಟೆಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.&lt;/p&gt;&lt;p&gt;ಅದಕ್ಕೆ ಕಾರಣ ಕೆಲ್ಸವಲ್ಲ. ಬರ್ನ್ಔಟ್ ಕೂಡ ಆಗಿರಲಿಲ್ಲ. ಉದ್ಯೋಗದ ಜೊತೆಗೆ ಕಂಟೆಂಟ್ ಕ್ರಿಯೇಷನ್ ಶುರು ಮಾಡಿದ್ದ ಜಿಯಾಂಗ್ ಅವರಿಗೆ ಪುಸ್ತಕ ಬರೆಯುವ ಅವಕಾಶವೂ ಸಿಕ್ಕಿತ್ತು. ಕೆಲಸ, ಪುಸ್ತಕ ಬರೆಯುವುದು ಮತ್ತು ಕಂಟೆಂಟ್ ಮಾಡುವುದು ಎಲ್ಲವನ್ನೂ ಒಟ್ಟಿಗೆ ನಿಭಾಯಿಸುವುದು ಕಷ್ಟವಾಗಿತ್ತು. ಹೀಗಾಗಿ ತಮ್ಮದೇ ಕೆಲಸದತ್ತ ಸಂಪೂರ್ಣ ಗಮನ ಕೊಡಲು ಅವರು ನಿರ್ಧರಿಸಿದರು. 2026ರ ಜೂನ್ನಲ್ಲಿ ಕೆಲಸ ಬಿಟ್ಟ ಅವರು, ತಮ್ಮ ನಿರ್ಧಾರವನ್ನು ಪರೀಕ್ಷಿಸಿಕೊಳ್ಳಲು ಒಂದು ವರ್ಷ ಸಮಯ ನೀಡಿದ್ದಾರೆ. ಒಂದು ವರ್ಷದ ನಂತರ ಮತ್ತೆ ಕಾರ್ಪೊರೇಟ್ ಕೆಲಸಕ್ಕೆ ಮರಳಬೇಕೋ ಅಥವಾ ಇದೇ ದಾರಿಯಲ್ಲಿ ಮುಂದುವರಿಯಬೇಕೋ ಎಂಬುದನ್ನು ನಿರ್ಧರಿಸಲಿದ್ದಾರೆ.&lt;/p&gt;&lt;p&gt;ಉದ್ಯೋಗ ಬಿಟ್ಟ ನಂತರ ಆದಾಯದಲ್ಲಿ ಮಾತ್ರ ದೊಡ್ಡ ಬದಲಾವಣೆಯಾಗಿದೆ. ಜುಲೈನಲ್ಲಿ ಕಂಟೆಂಟ್ ಕ್ರಿಯೇಷನ್ನಿಂದ ಅವರಿಗೆ ಸಿಕ್ಕಿದ್ದು ಕೇವಲ 6 ಡಾಲರ್, ಅಂದರೆ ಸುಮಾರು 500 ರೂಪಾಯಿ. ಆದರೆ ಅದು ಅವರ ಒಟ್ಟು ಆದಾಯವಲ್ಲ. ಪುಸ್ತಕದ ಅಡ್ವಾನ್ಸ್ ಸೇರಿದಂತೆ ಬೇರೆ ಆದಾಯ ಅವರಿಗೆ ಬರ್ತಿದೆ. ಮುಂದಿನ ತಿಂಗಳುಗಳಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ನಂಬಿದ್ದಾರೆ.&lt;/p&gt;&lt;p&gt;ತಿಂಗಳಿಗೆ 500 ರೂಪಾಯಿಯನ್ನು ಸೋಶಿಯಲ್&zwnj; ಮೀಡಿಯಾದಿಂದ ಗಳಿಸಿದ್ರೂ ಜಿಯಾಂಗ್ ಅವರಿಗೆ ತಮ್ಮ ನಿರ್ಧಾರದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ.ಸಮಯ ಮತ್ತು ಕೆಲಸದ ಮೇಲೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದೆ ಎನ್ನುತ್ತಾರೆ ಅವರು. ಕಂಟೆಂಟ್ ಕ್ರಿಯೇಟರ್ ಆದ ತಕ್ಷಣ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಸಾಧ್ಯವಿಲ್ಲ. ಇದಕ್ಕೆ ನಿರಂತರ ಪ್ರಯತ್ನ ಬೇಕು.&lt;/p&gt;]]></content:encoded>
            <category>jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/private-jobs/quit-a-1-crore-job-to-become-a-content-creator-now-earns-500-a-month/articleshow-ox843rv"/>
        </item>
        <item>
            <title><![CDATA[₹1 ಕೋಟಿ ಲಾಭ ಗಳಿಸಿದ ಸುಬ್ರಮಣ್ಯೇಶ್ವರ ಸಹಕಾರ ಬ್ಯಾಂಕ್‌: ಲಾಭದ ಹಿಂದಿನ ರಹಸ್ಯ ಸಭೆಯಲ್ಲೇ ರಿವೀಲ್!]]></title>
            <link>https://kannada.asianetnews.com/bengaluru-urban/subrahmanyeshwara-cooperative-bank-subco-profit-women-loan-discount-dividend-sat/articleshow-pvdn1sx</link>
            <guid isPermaLink="true">https://kannada.asianetnews.com/bengaluru-urban/subrahmanyeshwara-cooperative-bank-subco-profit-women-loan-discount-dividend-sat/articleshow-pvdn1sx</guid>
            <pubDate>Sun, 13 Sep 2026 07:02:27 +0530</pubDate>
            <description><![CDATA[&lt;p&gt;ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.10 ಕೋಟಿ ನಿವ್ವಳ ಲಾಭ ಗಳಿಸಿದ್ದು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಘೋಷಿಸಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು 'ಎಸ್.ಎಸ್.ಸಿ.ಬಿ.ಎಲ್- ಎಂ-ಪಾಸ್&zwnj;ಬುಕ್ ಆ್ಯಪ್' ಅನ್ನು ಸಹ ಪರಿಚಯಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2c60q8z9wbkx6swc7g8kwvk,imgname-subco-bank-1789262847263.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): ಸು&lt;/strong&gt;ಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಪ್ರಸಕ್ತ ಸಾಲಿನಲ್ಲಿ 1.10 ಕೋಟಿ ರು.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರಿ ರತ್ನ ಡಿ.ಆರ್.ವಿಜಯ ಸಾರಥಿ ಘೋಷಿಸಿದರು.&lt;/p&gt;&lt;p&gt;ಸೌತ್ ಎಂಡ್ ಸರ್ಕಲ್&zwnj;ನ ಚಾಮರಾಜ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕ್&zwnj;ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಬ್ಯಾಂಕ್&zwnj;ನ ಮಹಿಳಾ ಖಾತೆದಾರರು ಸಾಲ ಪಡೆದಾಗ ಸಾಮಾನ್ಯ ಬಡ್ಡಿದರಕ್ಕಿಂತ ಶೇ.1ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಮಹಿಳೆಯರಿಗೆ ವಿಶೇಷ ಬಡ್ಡಿದರ ರಿಯಾಯಿತಿ ನೀಡುವ ಮೂಲಕ ಅವರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಉದ್ದೇಶ ಎಂದು ತಿಳಿಸಿದರು.&lt;/p&gt;&lt;p&gt;ಬ್ಯಾಂಕ್ ಪ್ರಸ್ತುತ 33,755 ಸದಸ್ಯರನ್ನು ಹೊಂದಿದ್ದು, ಕಳೆದ 7 ವರ್ಷಗಳಿಂದ ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ಘೋಷಿಸಲಾಗುತ್ತಿದೆ. ಆರ್&zwnj;ಬಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿ ಮುನ್ನಡೆಯುತ್ತಿದೆ. ಪ್ರಸಕ್ತ ಸಾಲಿನ ಅಂತ್ಯಕ್ಕೆ ಒಟ್ಟು ಎನ್&zwnj;ಪಿಎ ಶೇ10.22, ನಿವ್ವಳ ಎನ್&zwnj;ಪಿಎ ಶೇ2.03 ಹಾಗೂ ಸಿಆರ್&zwnj;ಎಆರ್ ಶೇ.17.90ರಷ್ಟಿದೆ ಎಂದು ವಿಜಯ ಸಾರಥಿ ವಿವರಿಸಿದರು.&lt;/p&gt;&lt;h2&gt;&lt;strong&gt;ಡಿಜಿಟಲ್ ಪಾವತಿಗೆ ಹೆಚ್ಚಿನ ಸೌಲಭ್ಯ:&amp;nbsp;&lt;/strong&gt;&lt;/h2&gt;&lt;p&gt;ಸದಸ್ಯರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಒದಗಿಸಲು ಬ್ಯಾಂಕ್ ಫೋನ್&zwnj;ಪೇ, ಗೂಗಲ್&zwnj;ಪೇ ಹಾಗೂ ಮರ್ಚೆಂಟ್ ಪೇಮೆಂಟ್ ಸ್ಕ್ಯಾನರ್ ಸೌಲಭ್ಯ ಕಲ್ಪಿಸುತ್ತಿದೆ. ಈ ಮೂಲಕ ಗ್ರಾಹಕರು ಹಣ ವರ್ಗಾವಣೆ ಹಾಗೂ ವಿವಿಧ ಪಾವತಿಗಳನ್ನು ಸುಲಭವಾಗಿ ಡಿಜಿಟಲ್ ಮಾಧ್ಯಮದ ಮೂಲಕ ಪಾವತಿಸಬಹುದು. ಜೊತೆಗೆ ಖಾತೆ ವ್ಯವಹಾರಗಳ ಮಾಹಿತಿಯನ್ನು ಸುಲಭವಾಗಿ ಪಡೆಯಲು &lsquo;ಎಸ್.ಎಸ್.ಸಿ.ಬಿ.ಎಲ್- ಎಂ-ಪಾಸ್&zwnj;ಬುಕ್ ಆ್ಯಪ್&rsquo; ಪರಿಚಯಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕರು ಹಾಗೂ ಉಪಾಧ್ಯಕ್ಷ ಡಾ. ಕೆ.ಎಂ. ರಂಗಧಾಮಶೆಟ್ಟಿ, ಪ್ರಭಾರ ಪ್ರಧಾನ ವ್ಯವಸ್ಥಾಪಕ ಹರೀಶ್ ಬಿ.ಜೆ., ಪೂರ್ಣಾವಧಿ ಸಲಹೆಗಾರ ಬಿ.ಆರ್. ನಾಗರಾಜ್, ಬ್ಯಾಂಕಿನ ಪದಾಧಿಕಾರಿಗಳು ಇದ್ದರು.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/subrahmanyeshwara-cooperative-bank-subco-profit-women-loan-discount-dividend-sat/articleshow-pvdn1sx"/>
        </item>
        <item>
            <title><![CDATA[“ಇಂಟರ್‌ವ್ಯೂ ಕೊಡದಿದ್ರೆ Swiggy ಆರ್ಡರ್ ಮಾಡಲ್ಲ!” ಯುವಕನ ವಿಚಿತ್ರ Job Hunt ವೈರಲ್!]]></title>
            <link>https://kannada.asianetnews.com/india-news/swiggy-customer-turns-support-chat-into-job-follow-up-threatens-to-switch-to-zomato/articleshow-r1tuev6</link>
            <guid isPermaLink="true">https://kannada.asianetnews.com/india-news/swiggy-customer-turns-support-chat-into-job-follow-up-threatens-to-switch-to-zomato/articleshow-r1tuev6</guid>
            <pubDate>Thu, 17 Sep 2026 20:01:54 +0530</pubDate>
            <description><![CDATA[&lt;p&gt;Swiggy ಆರ್ಡರ್ ಸಮಸ್ಯೆ ಎಂದು Customer Supportಗೆ ಮೆಸೇಜ್ ಮಾಡಿದ ವ್ಯಕ್ತಿಯೊಬ್ಬರು, ಅದೇ ಚಾಟ್&zwnj;ನಲ್ಲಿ ತಮ್ಮ SDE ಉದ್ಯೋಗ ಅರ್ಜಿಯ ಫಾಲೋಅಪ್ ಮಾಡಿದ್ದಾರೆ. ಸಂದರ್ಶನ ಸಿಗದಿದ್ದರೆ Swiggy, Instamart ಆರ್ಡರ್ ನಿಲ್ಲಿಸಿ Zomatoಗೆ ಬದಲಾಗುವುದಾಗಿ ಹೇಳಿದ್ದಾರೆ. ₹2 ಲಕ್ಷ ಖರ್ಚಿನ ಲೆಕ್ಕವನ್ನೂ ನೀಡಿ ಮಾಡಿದ ಈ ವಿಚಿತ್ರ Job Hunt ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qw9majgavtv31qt5xbt5wx,imgname-swiggy-customer-turns-support-chat-into-job-follow-up--threatens-to-switch-to-zomato-1789655306578.jpg" type="image/jpeg" height="390" width="690"/>
            <content:encoded><![CDATA[&lt;h2&gt;ಆರ್ಡರ್ ಸಮಸ್ಯೆ ಎಂದು Swiggyಗೆ ಮೆಸೇಜ್; ಕೊನೆಗೆ ಕೆಲಸ ಕೇಳಿದ ವ್ಯಕ್ತಿ!&lt;/h2&gt;&lt;p&gt;ಆಹಾರ ವಿತರಣೆಯಲ್ಲಿ ಸಮಸ್ಯೆ ಎದುರಾದಾಗ ಗ್ರಾಹಕರು ಸಾಮಾನ್ಯವಾಗಿ Swiggy Customer Support ಅನ್ನು ಸಂಪರ್ಕಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಇದೇ ಚಾಟ್ ಅನ್ನು ತನ್ನ ಉದ್ಯೋಗ ಅರ್ಜಿ ಫಾಲೋಅಪ್&zwnj;ಗೆ ಬಳಸಿಕೊಂಡಿದ್ದಾರೆ. Swiggy Supportಗೆ ಕಳುಹಿಸಿದ ಅವರ ಸಂದೇಶಗಳ ಸ್ಕ್ರೀನ್&zwnj;ಶಾಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;&lt;h3&gt;ಮೊದಲು ಆರ್ಡರ್ ಬಗ್ಗೆ ದೂರು, ನಂತರ Job ಬಗ್ಗೆ ಮಾತು&lt;/h3&gt;&lt;p&gt;ಓಜಸ್ ಶರ್ಮಾ ಎಂಬ ವ್ಯಕ್ತಿ ಮೊದಲು ತಮ್ಮ Swiggy ಆರ್ಡರ್&zwnj;ನಲ್ಲಿ ಸಮಸ್ಯೆ ಇದೆ ಎಂದು Swiggy Caresಗೆ ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಎಂದಿನಂತೆ ಸಮಸ್ಯೆಯನ್ನು ವಿವರಿಸುವಂತೆ ಗ್ರಾಹಕ ಸೇವಾ ತಂಡದಿಂದ ಪ್ರತಿಕ್ರಿಯೆ ಬಂದಿದೆ.&lt;/p&gt;&lt;p&gt;ಆದರೆ ನಂತರ ಓಜಸ್ ಏಕಾಏಕಿ ವಿಷಯ ಬದಲಿಸಿದ್ದಾರೆ. Swiggyಯಲ್ಲಿ SDE (Software Development Engineer) ಹುದ್ದೆಗೆ ತಾವು ಅರ್ಜಿ ಸಲ್ಲಿಸಿರುವುದಾಗಿ ಹೇಳಿ, ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದ್ದಾರೆ.&lt;/p&gt;&lt;h3&gt;&ldquo;ಇಂಟರ್&zwnj;ವ್ಯೂ ಕೊಡದಿದ್ರೆ ಆರ್ಡರ್ ಮಾಡಲ್ಲ!&rdquo;&lt;/h3&gt;&lt;p&gt;ಇಷ್ಟಕ್ಕೇ ನಿಲ್ಲದ ಓಜಸ್, ತಮ್ಮ ಉದ್ಯೋಗ ಅರ್ಜಿಗೆ ಸಂದರ್ಶನದ ಅವಕಾಶ ನೀಡದಿದ್ದರೆ ಇನ್ನು ಮುಂದೆ Swiggy ಅಥವಾ Instamartನಿಂದ ಆರ್ಡರ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.&lt;/p&gt;&lt;p&gt;ತಮ್ಮ ಮಾತಿಗೆ ತೂಕ ನೀಡಲು Swiggy ಮತ್ತು Instamartನಲ್ಲಿ ಇದುವರೆಗೆ ಮಾಡಿರುವ ಖರ್ಚಿನ ಲೆಕ್ಕವನ್ನೂ ನೀಡಿದ್ದಾರೆ.&lt;/p&gt;&lt;h3&gt;₹2 ಲಕ್ಷ ಖರ್ಚಿನ ಲೆಕ್ಕ ಕೊಟ್ಟ ವ್ಯಕ್ತಿ&lt;/h3&gt;&lt;p&gt;ಓಜಸ್ ಹಂಚಿಕೊಂಡ ಸಂದೇಶದ ಪ್ರಕಾರ, Swiggy ಆರ್ಡರ್&zwnj;ಗಳಿಗೆ ಸುಮಾರು ₹1.5 ಲಕ್ಷ, Instamart ಖರೀದಿಗಳಿಗೆ ಸುಮಾರು ₹50 ಸಾವಿರ ಖರ್ಚು ಮಾಡಿದ್ದಾರೆ. ಅಂದರೆ ಒಟ್ಟು ₹2 ಲಕ್ಷ.&lt;/p&gt;&lt;p&gt;&ldquo;ನನಗೆ ಸಂದರ್ಶನವೂ ಸಿಗದಿದ್ದರೆ ಅದು ನಿಮ್ಮ ನಷ್ಟ&rdquo; ಎಂಬ ಅರ್ಥದಲ್ಲಿ ಅವರು ತಮ್ಮ ಸಂದೇಶವನ್ನು ಮುಗಿಸಿದ್ದಾರೆ. ಜೊತೆಗೆ ನಗುವಿನ ಎಮೋಜಿಯನ್ನೂ ಬಳಸಿದ್ದಾರೆ.&lt;/p&gt;&lt;p&gt;&lt;strong&gt;&ldquo;Job Huntನ Final Boss&rdquo;&lt;/strong&gt;&lt;/p&gt;&lt;p&gt;ಈ ವಿಚಿತ್ರ ಸಂಭಾಷಣೆಯ ಸ್ಕ್ರೀನ್&zwnj;ಶಾಟ್ ಅನ್ನು ಓಜಸ್ ಎಕ್ಸ್&zwnj;ನಲ್ಲಿ ಹಂಚಿಕೊಂಡಿದ್ದು, &ldquo;Job Hunt Final Boss&rdquo; ಎಂಬ ರೀತಿಯ ಶೀರ್ಷಿಕೆ ನೀಡಿದ್ದಾರೆ. ಒಂದು ವೇಳೆ Swiggyಯಿಂದ ಪ್ರತಿಕ್ರಿಯೆ ಬರದಿದ್ದರೆ Zomatoಗೆ ಬದಲಾಯಿಸುತ್ತೇನೆ ಎಂಬ ಹಾಸ್ಯವನ್ನೂ ಮಾಡಿದ್ದಾರೆ.&lt;/p&gt;&lt;p&gt;ನೆಟ್ಟಿಗರಿಗೆ ಸಿಕ್ಕಿದ್ದು ಹೊಸ Job Hunt ಐಡಿಯಾ!&lt;/p&gt;&lt;p&gt;ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದು, ಹಲವರು ಈ ಪ್ರಯತ್ನವನ್ನು ಹಾಸ್ಯಮಯವಾಗಿ ಸ್ವೀಕರಿಸಿದ್ದಾರೆ. ಕೆಲವರು ಇದನ್ನು &ldquo;Boss Move&rdquo; ಎಂದು ಕರೆದರೆ, ಮತ್ತಷ್ಟು ಮಂದಿ ಉದ್ಯೋಗ ಹುಡುಕುವಾಗ ಇಂಥ ಕ್ರಿಯೇಟಿವ್ ವಿಧಾನ ಬಳಸಿರುವುದಕ್ಕೆ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಈ ಘಟನೆಗೆ ಸಂಬಂಧಿಸಿದಂತೆ Swiggyಯಿಂದ ಸಂದರ್ಶನ ನೀಡುವ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ವರದಿಯಾಗಿಲ್ಲ.&lt;/p&gt;&lt;p&gt;Job Hunting Final Boss.I will switch to Zomato if they do not answer! pic.twitter.com/e3PPxE0xk0&lt;/p&gt;&lt;p&gt;&mdash; Ojas Sharma (@OjasSharma276) September 16, 2026&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/swiggy-customer-turns-support-chat-into-job-follow-up-threatens-to-switch-to-zomato/articleshow-r1tuev6"/>
        </item>
        <item>
            <title><![CDATA[ಯಾವ ದೇಶದ ಪ್ರಧಾನಿಗೆ ಹೆಚ್ಚು ಸಂಬಳ? ಭಾರತಕ್ಕೆ ಎಷ್ಟನೇ ಸ್ಥಾನ? ಇಲ್ಲಿ ಸಿಗೋದೆಷ್ಟು? ಫುಲ್​ ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/world-news/singapur-prime-minister-has-the-highest-salary-in-the-world-indias-rank-is-82-suc/articleshow-spuse8k</link>
            <guid isPermaLink="true">https://kannada.asianetnews.com/world-news/singapur-prime-minister-has-the-highest-salary-in-the-world-indias-rank-is-82-suc/articleshow-spuse8k</guid>
            <pubDate>Thu, 17 Sep 2026 13:23:00 +0530</pubDate>
            <description><![CDATA[ಪ್ರಪಂಚದ ವಿವಿಧ ದೇಶಗಳ ಪ್ರಧಾನಿಗಳು ಮತ್ತು ಅಧ್ಯಕ್ಷರ ವಾರ್ಷಿಕ ವೇತನದಲ್ಲಿ ಭಾರಿ ವ್ಯತ್ಯಾಸಗಳಿವೆ. ಸಿಂಗಪುರದ ಪ್ರಧಾನಿ ವಾರ್ಷಿಕ 27 ಕೋಟಿ ರೂ. ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಭಾರತದ ಪ್ರಧಾನಿ ಕೇವಲ 20 ಲಕ್ಷ ರೂ. ವೇತನದೊಂದಿಗೆ 82ನೇ ಸ್ಥಾನದಲ್ಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2q5mcba6ae6mb89h0cs9cyv,imgname-prime-ministers-1789631541610.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಧಾನಿಯೊಬ್ಬರು ಎಷ್ಟು ಸಂಪಾದಿಸುತ್ತಾರೆ? ಉತ್ತರವು ವರ್ಷಕ್ಕೆ ಕೆಲವು ಮಿಲಿಯನ್ ರೂಪಾಯಿಗಳಿಂದ ಹತ್ತಾರು ಕೋಟಿಗಳವರೆಗೆ ಇರಬಹುದು, ಅದು ಅವರು ಆಡಳಿತ ನಡೆಸುವ ಸ್ಥಳವನ್ನು ಅವಲಂಬಿಸಿರುತ್ತದೆ. ದೇಶಾದ್ಯಂತ, ರಾಜಕೀಯ ನಾಯಕರಿಗೆ ವಿಭಿನ್ನ ವ್ಯವಸ್ಥೆಗಳ ಅಡಿಯಲ್ಲಿ ಸಂಬಳ ನೀಡಲಾಗುತ್ತದೆ; ಕೆಲವರು ಸ್ಥಿರ ಸಂಬಳವನ್ನು ಪಡೆಯುತ್ತಾರೆ, ಆದರೆ ಇತರರು ಹೆಚ್ಚುವರಿ ಸಂಸದೀಯ ವೇತನ, ಬೋನಸ್&zwnj;ಗಳು ಅಥವಾ ಭತ್ಯೆಗಳನ್ನು ಪಡೆಯುತ್ತಾರೆ.&lt;/p&gt;&lt;p&gt;ಸದ್ಯದ ಪರಿಸ್ಥಿತಿಯಲ್ಲಿ, ಸಿಂಗಪುರದ ಪ್ರಧಾನಿ ಟಾಪ್​-1 ಸ್ಥಾನದಲ್ಲಿ ಇದ್ದರೆ, ಬಳಿಕ ಹಾಂಗ್​ಕಾಂಗ್​, ಸ್ವಿಜರ್​ಲೆಂಡ್​, ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ, ಆಸ್ಟ್ರಿಯಾ, ನ್ಯೂಜಿಲೆಂಡ್​, ಜಪಾನ್​..... ಹೀಗೆ ಸಾಗುತ್ತದೆ. ಈ ದೇಶಗಳ ಪ್ರಧಾನಿ ಅಥವಾ ಅಧ್ಯಕ್ಷರ ಸಂಬಳ ಕೋಟಿ ಕೋಟಿ ರೂಪಾಯಿಗಳಲ್ಲಿ ಇದ್ದರೆ, ಭಾರತದ ಪ್ರಧಾನಿಯ ಸಂಬಳ ವಾರ್ಷಿಕವಾಗಿ 20 ಲಕ್ಷ ಮಾತ್ರ ಇದ್ದು, ಈ ಮೂಲಕ ಪ್ರಧಾನಿಗಳ ಸಂಬಳ ಪಟ್ಟಿಯಲ್ಲಿ ಭಾರತದ ಸ್ಥಾನ 82ನೇ ಸ್ಥಾನದಲ್ಲಿದೆ.&lt;/p&gt;&lt;h2&gt;&lt;strong&gt;ಸಿಂಗಪುರ ಟಾಪ್​-1&lt;/strong&gt;&lt;/h2&gt;&lt;p&gt;ಸದ್ಯದ ಪರಿಸ್ಥಿತಿಯಲ್ಲಿ ಸಿಂಗಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಸಂಬಳದಲ್ಲಿ ಟಾಪ್​-1ನಲ್ಲಿ ಇದ್ದಾರೆ. ಅವರ ವಾರ್ಷಿಕ ವೇತನ ಮಾನದಂಡದಲ್ಲಿ ಶೇಕಡಾ 64 ರಷ್ಟು ಹೆಚ್ಚಳವನ್ನು ಪಡೆಯಲಿದ್ದಾರೆ, ಇದು ಅಕ್ಟೋಬರ್ 15, 2026 ರಿಂದ ಜಾರಿಗೆ ಬರುವ ಪರಿಷ್ಕೃತ ವೇತನ ಚೌಕಟ್ಟಿನ ಅಡಿಯಲ್ಲಿ 3.6 ಮಿಲಿಯನ್ ಡಾಲರ್​ ಅಥವಾ ಸುಮಾರು 27 ಕೋಟಿ ರೂ.ಗಳಿಗೆ ತಲುಪಲಿದೆ. ಇದರ ಅರ್ಥ, ಸಿಂಗಪುರದ ಪ್ರಧಾನಿ ಇನ್ನುಮುಂದೆ ಪ್ರತಿವರ್ಷ 27 ಕೋಟಿ ರೂಪಾಯಿಗಳನ್ನು ಸಂಬಳದ ರೂಪದಲ್ಲಿ ಪಡೆಯಲಿದ್ದು, ಜೊತೆಗೆ ವಿವಿಧ ಭತ್ಯೆಗಳೂ ಸೇರಿಕೊಳ್ಳಲಿವೆ.&lt;/p&gt;&lt;h3&gt;&lt;strong&gt;ಕೆನಡಾ: CAD 217,700 ಪ್ಲಸ್ ಸಂಸದರ ಸಂಬಳ&lt;/strong&gt;&lt;/h3&gt;&lt;p&gt;ಕೆನಡಾದ ಪ್ರಧಾನ ಮಂತ್ರಿಗಳು ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುವುದಕ್ಕಾಗಿ CAD 435,400 ಅರ್ಥಾತ್​ ವಾರ್ಷಿಕವಾಗಿ 3 ಕೋಟಿ ರೂಪಾಯಿಗಳ ಸಂಬಳವನ್ನು ಪಡೆಯುತ್ತಾರೆ, ಸಂಸದೀಯ ಅಧಿವೇಶನ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳೂ ಸಿಗಲಿವೆ.&lt;/p&gt;&lt;h2&gt;&lt;strong&gt;ಭಾರತ: ಕಾನೂನಿನಿಂದ ನಿಯಂತ್ರಿಸಲ್ಪಡುವ ಸಂಬಳ&lt;/strong&gt;&lt;/h2&gt;&lt;p&gt;ಭಾರತದಲ್ಲಿ, ಪ್ರಧಾನ ಮಂತ್ರಿಗಳ ವೇತನ ಮತ್ತು ಭತ್ಯೆಗಳನ್ನು ಶಾಸನಬದ್ಧ ಭತ್ಯೆಗಳು ಮತ್ತು ಅಧಿಕೃತ ಭತ್ಯೆಗಳೊಂದಿಗೆ ಮಂತ್ರಿಗಳ ವೇತನ ಮತ್ತು ಭತ್ಯೆ ಕಾಯ್ದೆ, 1952 ರಿಂದ ನಿಯಂತ್ರಿಸಲಾಗುತ್ತದೆ. ಈ ಕಾಯಿದೆಯು ಪ್ರಧಾನ ಮಂತ್ರಿ ಮತ್ತು ಇತರ ಮಂತ್ರಿಗಳ ಸಂಭಾವನೆಯನ್ನು ನಿಯಂತ್ರಿಸುವ ಚೌಕಟ್ಟನ್ನು ನಿಗದಿಪಡಿಸುತ್ತದೆ. ಭಾರತದ ಪ್ರಧಾನ ಮಂತ್ರಿಗಳು ತಿಂಗಳಿಗೆ 1.66 ಲಕ್ಷ ರೂ.ಗಳನ್ನು ಪಡೆಯುತ್ತಾರೆ. ಇದರ ಅರ್ಥ ಭಾರತದ ಪ ಪ್ರಧಾನಿಯೊಬ್ಬರಿಗೆ ವರ್ಷಕ್ಕೆ ಸಿಗುವುದು ಸುಮಾರು 20 ಲಕ್ಷ ರೂಪಾಯಿಗಳು!&lt;/p&gt;&lt;h2&gt;&lt;strong&gt;ಸ್ವಿಟ್ಜರ್ಲೆಂಡ್: ವರ್ಷಕ್ಕೆ ಸುಮಾರು 606,000 USD&lt;/strong&gt;&lt;/h2&gt;&lt;p&gt;ರಾಯಿಟರ್ಸ್ ಪ್ರಕಾರ, ಸ್ವಿಟ್ಜರ್ಲೆಂಡ್ ಅಧ್ಯಕ್ಷರು ಸುಮಾರು 5.81 ಕೋಟಿ ರೂಪಾಯಿ ವಾರ್ಷಿಕ ವೇತನವನ್ನು ಪಡೆಯುತ್ತಾರೆ. ಈ ಅಂಕಿ ಅಂಶವು ಸ್ವಿಸ್ ಅಧ್ಯಕ್ಷ ಸ್ಥಾನವನ್ನು ಜಾಗತಿಕವಾಗಿ ಉತ್ತಮ ಸಂಭಾವನೆ ಪಡೆಯುವ ರಾಜಕೀಯ ನಾಯಕತ್ವದ ಸ್ಥಾನಗಳಲ್ಲಿ ಇರಿಸುತ್ತದೆ, ಆದರೂ ಸಂಭಾವನೆ ರಚನೆಗಳು ದೇಶಗಳಲ್ಲಿ ಬದಲಾಗುತ್ತವೆ.&lt;/p&gt;&lt;h3&gt;&lt;strong&gt;ಹಾಂಗ್ ಕಾಂಗ್: ವರ್ಷಕ್ಕೆ ಸುಮಾರು 719,000 USD&lt;/strong&gt;&lt;/h3&gt;&lt;p&gt;ರಾಯಿಟರ್ಸ್ ಪ್ರಕಾರ, ಹಾಂಗ್ ಕಾಂಗ್&zwnj;ನ ಮುಖ್ಯ ಕಾರ್ಯನಿರ್ವಾಹಕರು ವಾರ್ಷಿಕ ಸುಮಾರು 6.8 ಕೋಟಿ ರೂಪಾಯಿಗಳ ವೇತನವನ್ನು ಗಳಿಸುತ್ತಾರೆ, ಇದು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ರಾಜಕೀಯ ಸ್ಥಾನಗಳಲ್ಲಿ ಸ್ಥಾನ ನೀಡುತ್ತದೆ.&lt;/p&gt;&lt;h3&gt;&lt;strong&gt;ನ್ಯೂಜಿಲೆಂಡ್: ವರ್ಷಕ್ಕೆ ಸುಮಾರು 520,500 NZD&lt;/strong&gt;&lt;/h3&gt;&lt;p&gt;ಜುಲೈ 1, 2026 ರಿಂದ ಮುಂದಿನ ಸಾರ್ವತ್ರಿಕ ಚುನಾವಣೆಗೆ ಮತದಾನದ ದಿನದವರೆಗೆ ನ್ಯೂಜಿಲೆಂಡ್ ಪ್ರಧಾನ ಮಂತ್ರಿಯ ವೇತನವನ್ನು ವರ್ಷಕ್ಕೆ NZD 520,500 ಅರ್ಥಾತ್​ 2.86 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಈ ಅಂಕಿ ಅಂಶವನ್ನು ದೇಶದ ಅಧಿಕೃತ ಸಂಸದೀಯ ಸಂಭಾವನೆ ನಿರ್ಣಯದಲ್ಲಿ ನಿರ್ದಿಷ್ಟಪಡಿಸಲಾಗಿದೆ ಮತ್ತು ಪ್ರಧಾನ ಮಂತ್ರಿಗೆ ಪಾವತಿಸಬೇಕಾದ ವಾರ್ಷಿಕ ವೇತನವನ್ನು ಪ್ರತಿನಿಧಿಸುತ್ತದೆ.&lt;/p&gt;&lt;h3&gt;&lt;strong&gt;ಅಮೆರಿಕ: ವರ್ಷಕ್ಕೆ USD 400,000&lt;/strong&gt;&lt;/h3&gt;&lt;p&gt;ರಾಯಿಟರ್ಸ್ ಪ್ರಕಾರ, ಅಮೆರಿಕ ಅಧ್ಯಕ್ಷರು ಇತರ ಅಧಿಕೃತ ಭತ್ಯೆಗಳು ಮತ್ತು ಸವಲತ್ತುಗಳ ಜೊತೆಗೆ ವಾರ್ಷಿಕವಾಗಿ USD 400,000 ಅರ್ಥಾತ್​ ಸುಮಾರು 3.84 ಕೋಟಿ ರೂಪಾಯಿ ವೇತನವನ್ನು ಪಡೆಯುತ್ತಾರೆ.&lt;/p&gt;&lt;h3&gt;&lt;strong&gt;ನಾರ್ವೆ: NOK ವರ್ಷಕ್ಕೆ 2.23 ಮಿಲಿಯನ್&lt;/strong&gt;&lt;/h3&gt;&lt;p&gt;ನಾರ್ವೇಜಿಯನ್ ಪ್ರಧಾನಿ ವಾರ್ಷಿಕ NOK 2,234,978 ಅರ್ಥಾತ್​ ಸುಮಾರು 1.27 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಈ ಅಂಕಿ ಅಂಶವನ್ನು ನಾರ್ವೇಜಿಯನ್ ಸರ್ಕಾರವು ಜೂನ್ 2026 ರಲ್ಲಿ ರಾಜಕೀಯ ನಾಯಕರಿಗೆ ತನ್ನ ಅಧಿಕೃತ ಸಂಭಾವನೆ ಚೌಕಟ್ಟಿನ ಅಡಿಯಲ್ಲಿ ಪ್ರಕಟಿಸಿತು.&lt;/p&gt;&lt;h3&gt;&lt;strong&gt;ಯುಕೆ: ವರ್ಷಕ್ಕೆ ಸುಮಾರು USD 230,000&lt;/strong&gt;&lt;/h3&gt;&lt;p&gt;ರಾಯಿಟರ್ಸ್ ಪ್ರಕಾರ, ಯುಕೆ ಪ್ರಧಾನಿ ವರ್ಷಕ್ಕೆ ಸುಮಾರು US$ 230,000 ಅರ್ಥಾತ್​ 2.20 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ, ಇದು ಪ್ರಮುಖ ರಾಜಕೀಯ ನಾಯಕರಲ್ಲಿ ಅತ್ಯಧಿಕ ಸಂಬಳಗಳಲ್ಲಿ ಒಂದಾಗಿದೆ.&lt;/p&gt;&lt;h3&gt;&lt;strong&gt;ಐರ್ಲೆಂಡ್: EUR 132,820 ಜೊತೆಗೆ ಸಂಸತ್ತಿನ ವೇತನ&lt;/strong&gt;&lt;/h3&gt;&lt;p&gt;ಐರ್ಲೆಂಡ್&zwnj;ನಲ್ಲಿ, ದೇಶದ ಪ್ರಧಾನಿ EUR 132,820 ಅರ್ಥಾತ್​ 1.46 ಕೋಟಿ ರೂ. ಪ್ರಕಟಿತ ಮಂತ್ರಿ ವೇತನವನ್ನು ಹೊಂದಿದ್ದಾರೆ. ಆದಾಗ್ಯೂ, ಇದು ಕೇವಲ ಮಂತ್ರಿಮಂಡಲದ ಅಂಶವಾಗಿದೆ. ಪ್ರಧಾನಿ ದಿಲ್ ಸದಸ್ಯರಾಗಿ ಸಂಸದೀಯ ವೇತನವನ್ನು ಸಹ ಪಡೆಯುತ್ತಾರೆ. ಪರಿಣಾಮವಾಗಿ, EUR 132,820 ಅಂಕಿಅಂಶವನ್ನು ಬೇರೆ ದೇಶ ಪ್ರಕಟಿಸಿದ ಒಟ್ಟು ಸಂಭಾವನೆ ಪ್ಯಾಕೇಜ್&zwnj;ನೊಂದಿಗೆ ನೇರವಾಗಿ ಹೋಲಿಸಲಾಗುವುದಿಲ್ಲ.&lt;/p&gt;&lt;h3&gt;&lt;strong&gt;ಆಸ್ಟ್ರೇಲಿಯಾ: AUD 579,000 ಪ್ಲಸ್&lt;/strong&gt;&lt;/h3&gt;&lt;p&gt;ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಯ ಸಂಭಾವನೆಯು ಅವರ ಸಂಸದೀಯ ಸಂಬಳ ಮತ್ತು ಪ್ರಧಾನಿಯಾಗಿ ಸೇವೆ ಸಲ್ಲಿಸಲು ಹೆಚ್ಚುವರಿ ಮೊತ್ತವನ್ನು ಒಳಗೊಂಡಿದೆ. ಸಂಸದೀಯ ಮೂಲವು AUD 579,000 ಸುಮಾರು 3.95 ಕೋಟಿ ರೂಪಾಯಿ ಆಗಿದೆ.&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/world-news/singapur-prime-minister-has-the-highest-salary-in-the-world-indias-rank-is-82-suc/articleshow-spuse8k"/>
        </item>
        <item>
            <title><![CDATA[ಮುಂದುವರೆದ ವಜಾ ಪರ್ವ: ಶೇಕಡಾ 50ರಷ್ಟು ಟೆಕ್ಕಿಗಳ ಮನೆಗೆ ಕಳಿಸ್ತಿದೆ  ಅಡಿದಾಸ್​! ಎಲ್ಲಿದು]]></title>
            <link>https://kannada.asianetnews.com/private-jobs/adidas-confirms-layoffs-at-india-tech-hub-around-50-percent-employees-affected-suc/articleshow-x441mg4</link>
            <guid isPermaLink="true">https://kannada.asianetnews.com/private-jobs/adidas-confirms-layoffs-at-india-tech-hub-around-50-percent-employees-affected-suc/articleshow-x441mg4</guid>
            <pubDate>Thu, 17 Sep 2026 15:04:54 +0530</pubDate>
            <description><![CDATA[ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಗುರುಗ್ರಾಮದ ಅಡಿದಾಸ್ ಟೆಕ್ ಹಬ್&zwnj;ನಲ್ಲಿ ಉದ್ಯೋಗ ಕಡಿತಗೊಳಿಸಲಾಗುತ್ತಿದೆ. ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳು ಸೇರಿದಂತೆ ಶೇ. 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಕಂಪೆನಿ ದೃಢಪಡಿಸಿದೆ. ಬದಲಾಗುತ್ತಿರುವ ವ್ಯಾಪಾರ ಅಗತ್ಯಗಳಿಗೆ ಅನುಗುಣವಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ps3vtbsphdz3wrxkqytfgd,imgname-adidas-layoffs-2026-1789618417483.jpg" type="image/jpeg" height="390" width="690"/>
            <content:encoded><![CDATA[&lt;p&gt;ಗುರುಗ್ರಾಮ: ಕೃತಕ ಬುದ್ಧಿಮತ್ತೆ ಸೇರಿದಂತೆ ಕೆಲವು ಕಾರಣಗಳಿಂದಾಗಿ ಇದಾಗಲೇ ಲಕ್ಷಾಂತರ ಸಾಫ್ಟ್​ವೇರ್​ ಉದ್ಯೋಗಿಗಳು ಸೇರಿದಂತೆ ವಿಭಿನ್ನ ಕ್ಷೇತ್ರಗಳ ಉದ್ಯೋಗಿಗಳು ಕೆಲಸವನ್ನು ಕಳೆದುಕೊಂಡಿದ್ದಾರೆ. ವಿದೇಶದ ಕನಸು ಹೊತ್ತು ಅಮೆರಿಕಕ್ಕೆ ಹೋಗಿರುವವರ ಪರಿಸ್ಥಿತಿಯಂತೂ ಚಿಂತಾಜನಕವಾಗಿದೆ. ಭಾರತದಲ್ಲಿಯೂ ಹಲವು ಉದ್ಯೋಗಿಗಳನ್ನು ಹಲವು ಕಂಪೆನಿಗಳು ವಜಾ ಮಾಡುತ್ತಿದ್ದು, ಇದೀಗ ಪ್ರಸಿದ್ಧ ಕಂಪೆನಿಯಾಗಿರುವ ಅಡಿದಾಸ್​ (Adidas Layoff) ಶೇಕಡಾ 50ರಷ್ಟು ಉದ್ಯೋಗಿಗಳನ್ನು ವಜಾಮಾಡಲು ಮುಂದಾಗಿರುವುದಾಗಿ ವರದಿಯಾಗಿದೆ. ಅದರಲ್ಲಿಯೂ ಉತ್ತರ ಪ್ರದೇಶದ ಗುರುಗ್ರಾಮ್&zwnj;ನಲ್ಲಿರುವ ಶಾಖೆಯಲ್ಲಿಯೇ ಈ ಪರಿಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.&lt;/p&gt;&lt;p&gt;ಕಂಪೆನಿಯು ತನ್ನ ಇಂಡಿಯಾ ಟೆಕ್ ಹಬ್&zwnj;ನಲ್ಲಿ ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳು, ಡೇಟಾ ವಿಜ್ಞಾನಿಗಳು ಮತ್ತು ಡೇಟಾ ಎಂಜಿನಿಯರ್&zwnj;ಗಳು ಸೇರಿದಂತೆ ಸುಮಾರು 50 ಪ್ರತಿಶತದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಭಾರತದಲ್ಲಿನ ತನ್ನ ತಂತ್ರಜ್ಞಾನ ವಿಭಾಗದಲ್ಲಿನ ವಜಾಗಳನ್ನು ಅಡಿಡಾಸ್ ದೃಢಪಡಿಸಿದೆ, ಆದರೆ ಪರಿಣಾಮ ಬೀರುವ ಉದ್ಯೋಗಿಗಳ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ.&lt;/p&gt;&lt;h2&gt;&lt;strong&gt;ಭಾರತದಲ್ಲಿ ಪ್ರಭಾವ ಹೆಚ್ಚು&lt;/strong&gt;&lt;/h2&gt;&lt;p&gt;ಅಡಿದಾಸ್ ಈ ಹಿಂದೆ ತನ್ನ ಇಂಡಿಯಾ ಟೆಕ್ ಹಬ್&zwnj;ನಲ್ಲಿ ಸುಮಾರು 50 ಪ್ರತಿಶತದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ ಎಂದಿತ್ತು. ಈಗ, ಇಂಡಿಯಾ ಟುಡೇ ಟೆಕ್&zwnj;ಗೆ ನವೀಕರಿಸಿದ ಹೇಳಿಕೆಯಲ್ಲಿ, ಕಂಪೆನಿಯು ಸುಮಾರು 20 ಪ್ರತಿಶತದಷ್ಟು ಉದ್ಯೋಗಿಗಳು ವಜಾಗೊಳಿಸುವಿಕೆಯಿಂದ ಪ್ರಭಾವಿತರಾಗಿದ್ದಾರೆ ಎಂದು ದೃಢಪಡಿಸಿದೆ. &quot;ಬದಲಾಗುತ್ತಿರುವ ವ್ಯಾಪಾರ ಅಗತ್ಯಗಳಿಗೆ ಅನುಗುಣವಾಗಿ ನಮ್ಮ ಕಾರ್ಯಾಚರಣಾ ಮಾದರಿಯನ್ನು ಹೊಂದಿಸುವ ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿ, ಭಾರತದಲ್ಲಿನ ನಮ್ಮ ತಂತ್ರಜ್ಞಾನ ಸಂಸ್ಥೆಯೊಳಗೆ ಹಲವಾರು ಸ್ಥಾನಗಳನ್ನು ಕಡಿಮೆ ಮಾಡುವ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಈ ಬದಲಾವಣೆಗಳು ನಮ್ಮ ಸಂಸ್ಥೆಯ ಭಾಗಗಳನ್ನು ಸರಳೀಕರಿಸಲು, ಪ್ರಮುಖ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ವ್ಯವಹಾರ ಮತ್ತು ತಂತ್ರಜ್ಞಾನ ಪರಿಸರದಲ್ಲಿ ದೀರ್ಘಕಾಲೀನ ಯಶಸ್ಸಿಗೆ ಅಡಿದಾಸ್ ಅನ್ನು ಇರಿಸಲು ಉದ್ದೇಶಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.&lt;/p&gt;&lt;h3&gt;&lt;strong&gt;ಉದ್ಯೋಗಿಗಳ ಕುರಿತು ಕಂಪೆನಿ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಅಡಿದಾಸ್&zwnj;ನಲ್ಲಿರುವ ನಮ್ಮ ಸಹೋದ್ಯೋಗಿಗಳಿಗೆ ಅವರ ಅನೇಕ ಕೊಡುಗೆಗಳಿಗಾಗಿ ನಾವು ನಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಈ ಸಮಯದಲ್ಲಿ ಪೀಡಿತ ಉದ್ಯೋಗಿಗಳಿಗೆ ಕಾಳಜಿ, ಗೌರವ ಮತ್ತು ಸೂಕ್ತ ಪರಿವರ್ತನೆಯ ಬೆಂಬಲವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಕಂಪೆನಿ ಹೇಳಿದೆ. ಭಾರತವು ಅಡಿದಾಸ್&zwnj;ಗೆ ಕಾರ್ಯತಂತ್ರದ ಪ್ರಮುಖ ಮಾರುಕಟ್ಟೆಯಾಗಿ ಉಳಿದಿದೆ ಮತ್ತು ಕಂಪೆನಿಯ ಬೆಳವಣಿಗೆ, ನಾವೀನ್ಯತೆ ಮತ್ತು ಡಿಜಿಟಲ್ ರೂಪಾಂತರದ ಮಹತ್ವಾಕಾಂಕ್ಷೆಗಳನ್ನು ಅರಿತುಕೊಳ್ಳುವಲ್ಲಿ ನಮ್ಮ ತಂತ್ರಜ್ಞಾನ ಕೇಂದ್ರವು ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂದು ಅದು ತಿಳಿಸಿದೆ.&lt;/p&gt;&lt;p&gt;ಈ ಬದಲಾವಣೆಗಳು ನಮ್ಮ ಭಾರತೀಯ ತಂತ್ರಜ್ಞಾನ ಸಂಸ್ಥೆಯ 20% ಕ್ಕಿಂತ ಕಡಿಮೆ ಪರಿಣಾಮ ಬೀರುತ್ತವೆ. ನಾವು ಕಾರ್ಯತಂತ್ರದ ಸಾಮರ್ಥ್ಯಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಸಂಸ್ಥೆಯಾದ್ಯಂತ ಹಲವಾರು ಮುಕ್ತ ಹುದ್ದೆಗಳು ಲಭ್ಯವಿದೆ. ಭವಿಷ್ಯಕ್ಕೆ ಅಗತ್ಯವಿರುವ ಕೌಶಲ್ಯ ಮತ್ತು ಪರಿಣತಿಯನ್ನು ನಾವು ಅಭಿವೃದ್ಧಿಪಡಿಸುವಾಗ ಈ ಅವಕಾಶಗಳ ಲಾಭವನ್ನು ಪಡೆಯಲು ಬಾಧಿತ ಉದ್ಯೋಗಿಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/private-jobs/adidas-confirms-layoffs-at-india-tech-hub-around-50-percent-employees-affected-suc/articleshow-x441mg4"/>
        </item>
    </channel>
</rss>
