<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 28 Apr 2026 22:12:15 +0530</lastBuildDate>
        <atom:link href="https://kannada.asianetnews.com/rss/jobs" rel="self" type="application/rss+xml"/>
        <item>
            <title><![CDATA[ಡೆಲಿವರಿ ಕೆಲಸದಲ್ಲಿ ಬಂಪರ್ ಆದಾಯ, ದಿನಕ್ಕೆ  20,000 ಗಳಿಕೆ! ಟಾಪ್ನಲ್ಲಿದ್ದಾರೆ ಹುಡುಗಿಯರು]]></title>
            <link>https://kannada.asianetnews.com/private-jobs/a-fun-job-where-delivery-partners-earn-5-6-lakh-and-women-are-leading-too/articleshow-17efolz</link>
            <guid isPermaLink="true">https://kannada.asianetnews.com/private-jobs/a-fun-job-where-delivery-partners-earn-5-6-lakh-and-women-are-leading-too/articleshow-17efolz</guid>
            <pubDate>Sat, 25 Apr 2026 13:41:14 +0530</pubDate>
            <description><![CDATA[&lt;p&gt;ಕೆಲ್ಸ ಯಾವ್ದೆ ಆಗಿರಲಿ, ಕೈತುಂಬ ಸಂಪಾದನೆ ಮಾಡೋದು ಮುಖ್ಯ. ಡೆಲಿವರಿ ಕೆಲ್ಸ ಮಾಡಿ ತಿಂಗಳಿಗೆ 5 -6 ಲಕ್ಷ ಸಂಪಾದನೆ ಮಾಡ್ತಿರೋ ಸಿಬ್ಬಂದಿ ಇದ್ದಾರೆ. ಈ ಕೆಲ್ಸದ ಬಗ್ಗೆ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq1v20qcbse3ga05jee32b3j,imgname-delivery-jobs-1777104650988.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಡೆಲಿವರಿ ಬಾಯ್ ಕೆಲ್ಸ ಅಂದ್ರೆ ಮೂಗು ಮುರಿಯೋರೇ ಹೆಚ್ಚು. ಇವ್ದು ಕೆಲ್ಸ ಇಲ್ಲ ಎನ್ನುವವರು ಇದನ್ನು ಮಾಡ್ತಾರೆ ಎನ್ನುವ ಒಂದು ಭಾವನೆ ಇದೆ. ಹಾಗೆ ಅವರು ಅತೀ ಕಡಿಮೆ ಸಂಬಳ ಪಡೀತಾರೆ ಅಂತ ಬಹುತೇಕರು ನಂಬಿದ್ದಾರೆ. ಭಾರದಲ್ಲಿ ಡೆಲಿವರಿ ಬಾಯ್ಸ್ ಸಂಬಳ 25 ರಿಂದ 30 ಸಾವಿರ ಇರುತ್ತೆ. ಇದಕ್ಕಿಂತ ಹೆಚ್ಚು ಸಂಪಾದನೆ ಮಾಡೋರಿದ್ರೂ ಅವರು ಹಗಲು &ndash; ರಾತ್ರಿ ಅಂದೆ ದುಡಿತಾರೆ. ಆದ್ರೆ ಅಮೆರಿಕಾದಲ್ಲಿ ಹಾಗಲ್ಲ. ಡೆಲಿವರಿ ಕೆಲ್ಸವನ್ನು ಯುನೈಟೆಡ್ ಸ್ಟೇಟ್ಸ್ನಂತಹ ದೇಶದಲ್ಲಿ ಮೋಜಿನ ಕೆಲಸವಾಗಿ ನೋಡಲಾಗುತ್ತೆ. ಹಾಗಾಗಿಯೇ ಹೆಣ್ಮಕ್ಕಳೂ ಈ ಕೆಲ್ಸದಲ್ಲಿ ಆಸಕ್ತಿ ತೋರಿಸ್ತಾರೆ.&lt;/p&gt;&lt;h2&gt;ಅಮೆರಿಕಾದಲ್ಲಿ ಡೆಲಿವರಿ ಕೆಲ್ಸಕ್ಕೆ ಎಷ್ಟು ಸಂಬಳ ?&lt;/h2&gt;&lt;p&gt;ಡೆಲಿವರಿ ಕೆಲಸವನ್ನು ಅಮೆರಿಕಾದಲ್ಲಿ ಹೆಚ್ಚಾಗಿ ಅರೆಕಾಲಿಕ ಕೆಲಸವೆಂದು ಪರಿಗಣಿಸಲಾಗುತ್ತದೆ. ಕೆಲವು ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರುವವರಿಗೆ, ಡೆಲಿವರಿ ಕೆಲಸವು ಅತ್ಯುತ್ತಮ ಆಯ್ಕೆಯಾಗಿದೆ. ಕಡಿಮೆ ಸಮಯದಲ್ಲೇ ಇವರು ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡ್ತಾರೆ. ಇಲ್ಲಿ ಡೆಲಿವರಿ ಬಾಯ್ಸ್ ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ. ಫುಲ್ ಟೈಮ ಡೆಲಿವರಿ ಕೆಲ್ಸ ಮಾಡುವ ಜನರೂ ಅಮೆರಿಕಾದಲ್ಲಿದ್ದಾರೆ. ಅವರು 8 ಗಂಟೆ ಕೆಲ್ಸ ಮಾಡಿದ್ರೆ ಪಾರ್ಟ್ ಟೈಂ ಕೆಲಸಗಾರರು 4 ಗಂಟೆ ಕೆಲ್ಸ ಮಾಡ್ತಾರೆ.&lt;/p&gt;&lt;p&gt;ಬಿಪಿಸಿಎಲ್ ನೇಮಕಾತಿ: ಆಯ್ಕೆಯಾದವರಿಗೆ ಭರ್ಜರಿ ಜಾಕ್&zwnj;ಪಾಟ್&zwnj; , ತಿಂಗಳಿಗೆ ₹1.40&lt;/p&gt;&lt;h3&gt;ಆನ್ಲೈನ್ ಆಪ್ ಬಳಕೆ ಹೆಚ್ಚು&lt;/h3&gt;&lt;p&gt;ಅಮೆರಿಕಾದಲ್ಲಿ ಆನ್ಲೈನ್ ಆಪ್ ಬಳಸುವವರ ಸಂಖ್ಯೆ ಹೆಚ್ಚಿದೆ. ಹಾಗೆ ಡೆಲಿವರಿ ಸಿಬ್ಬಂದಿ ಕೂಡ ಒಂದಕ್ಕಿಂತ ಹೆಚ್ಚು ಅಪ್ಲಿಕೇಷನ್ ಬಳಸ್ತಾರೆ. ಉಬರ್ ಈಟ್ಸ್ ಮತ್ತು ಡೋರ್ಡ್ಯಾಶ್ನಂತಹ ಅಪ್ಲಿಕೇಶನ್ ಗಳನ್ನು ಏಕಕಾಲದಲ್ಲಿ ಬಳಸುತ್ತಾರೆ. ಕಡಿಮೆ ದೂರದ, ಹೆಚ್ಚಿನ ಆದಾಯ ಬರುವ ಆರ್ಡರ್ ಮಾತ್ರ ಒಪ್ಪಿಕೊಂಡು, ಸಮಯ ಉಳಿಸೋ ಜೊತೆಗೆ ಹಣ ಸಂಪಾದನೆ ಮಾಡ್ತಾರೆ,&lt;/p&gt;&lt;p&gt;&lt;strong&gt;ಹೆಚ್ಚೆಚ್ಚು ಸಿಗುತ್ತೆ ಟಿಪ್&lt;/strong&gt;&lt;/p&gt;&lt;p&gt;ಯುಎಸ್ ನಗರಗಳಲ್ಲಿ, ಡೆಲಿವರಿ ಸಿಬ್ಬಂದಿ ಡೆಲಿವರಿ ಹಣಕ್ಕಿಂತ ಟಿಪ್ ನಿಂದ ಹೆಚ್ಚು ಗಳಿಸ್ತಾರೆ. ಪ್ರತಿ ಡೆಲಿವರಿಗೆ ಟಿಪ್ ಮಾಡುವ ಸಂಸ್ಕೃತಿ ಇದೆ. ಹೆಚ್ಚಿನ ನಗರಗಳಲ್ಲಿ ಟಿಪ್ ಮೂಲಕ ಡೆಲಿವರಿ ಸಿಬ್ಬಂದಿ 10 ರಿಂದ 15 ಡಾಲರ್ ಗಳಿಸ್ತಾರೆ. ದೊಡ್ಡ ನಗರದಲ್ಲಿ ಇದು 30 ಡಾಲರ್ ಗಿಂತ ಹೆಚ್ಚಿದೆ.&lt;/p&gt;&lt;p&gt;&lt;strong&gt;ಬೋನಸ್ ವ್ಯವಸ್ಥೆ&lt;/strong&gt;&lt;/p&gt;&lt;p&gt;ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಂತಹ ಅಮೆರಿಕ ನಗರಗಳಲ್ಲಿ, ಆರ್ಡರ್ಗಳ ಸಂಖ್ಯೆ ತುಂಬಾ ಹೆಚ್ಚು. ಹಾಗಾಗಿ ಡೆಲಿವರಿ ಬಾಯ್ಸ್ ಗಳಿಕೆ ಕೂಡ ಹೆಚ್ಚು. ಈ ಪ್ರದೇಶಗಳಲ್ಲಿನ ಕಂಪನಿಗಳು ಬೋನಸ್ ಸಹ ನೀಡುತ್ವೆ. ಇದು ಗಳಿಕೆಯನ್ನು ದ್ವಿಗುಣಗೊಳಿಸುತ್ತೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಅಥವಾ ಲಾಸ್ ಏಂಜಲೀಸ್ನಂತಹ ದುಬಾರಿ ನಗರಗಳಲ್ಲಿ ಡೆಲಿವರಿಗೆ ಬೇಡಿಕೆ ಮತ್ತು ಸಂಬಳ ಹೆಚ್ಚಿದೆ.&lt;/p&gt;&lt;p&gt;ಕೃಷಿ ಇಲಾಖೆಯಲ್ಲಿ ನಿಮಗಿದೋ ಸುವರ್ಣಾವಕಾಶ,&lt;/p&gt;&lt;p&gt;&lt;strong&gt;ದಿನಕ್ಕಿಷ್ಟು ಗಳಿಸ್ತಾರೆ ಡೆಲಿವರಿ ಸಿಬ್ಬಂದಿ&lt;/strong&gt;&lt;/p&gt;&lt;p&gt;ಯುಎಸ್ನಲ್ಲಿ ಡೆಲಿವರಿ ಸಿಬ್ಬಂದಿ ತಿಂಗಳಿಗೆ 5 ಲಕ್ಷ ರೂಪಾಯಿ ಗಳಿಸುವ ಅವಕಾಶ ಇದೆ. ದಿನಕ್ಕೆ ಸರಿಸುಮಾರು 20,000 ಸಾವಿರ ಗಳಿಸುವ ಅವಕಾಶ ಇದೆ. ಡೆಲಿವರಿ ಕೆಲಸಗಾರರು ಗಂಟೆಗೆ 20 ರಿಂದ 25 ಡಾಲರ್ ಗಳಿಸುತ್ತಾರೆ. ಕೆಲವರು ಕೇವಲ 4 ಗಂಟೆಗಳಲ್ಲಿ 100 ಡಾಲರ್ ಅಂದ್ರೆ 9,000ದವರೆಗೆ ಗಳಿಸುತ್ತಾರೆ. ಅದೇ ಫುಲ್ ಟೈಂ ಡೆಲಿವರಿ ಕೆಲಸಗಾರರು 200 ರಿಂದ 220 ಡಾಲರ್ ಕಡ್ಡಾಯವಾಗಿ ಗಳಿಸುತ್ತಾರೆ.&lt;/p&gt;&lt;p&gt;ಪೀಕ್ ಅವರ್ಗಳು, ಬೋನಸ್ಗಳು ಮತ್ತು ಉತ್ತಮ ಸಲಹೆಗಳನ್ನು ಹೊಂದಿರುವ ಪ್ರದೇಶಗಳಲ್ಲಿ, ಡೆಲಿವರಿ ಕೆಲಸಗಾರರು ಗಂಟೆಗೆ 30 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಗಣ ಸಂಪಾದನೆ ಮಾಡ್ತಾರೆ. ಎಲ್ಲ ಲೆಕ್ಕ ಹಾಕಿದ್ರೆ 8 ಗಂಟೆ ಡೆಲಿವರಿ ಕೆಲ್ಸ ಮಾಡುವ ವ್ಯಕ್ತಿ ತಿಂಗಳಿಗೆ 6 ಲಕ್ಷದವರೆಗೆ ಗಳಿಸಬಹುದು. ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ಸಮಯದಲ್ಲಿ ಕೆಲ್ಸ ಮಾಡುವ ಸಿಬ್ಬಂದಿ ಗಳಿಕೆ ಮತ್ತಷ್ಟು ಹೆಚ್ಚಿರುತ್ತದೆ. ಇಲ್ಲಿ ಕೆಲ್ಸ ಮಾಡೋಕೆ ಯಾವುದೇ ಒತ್ತಡ ಇಲ್ಲ. ಹಾಗಾಗಿ ಮಹಿಳೆಯರು ಆರಾಮವಾಗಿ ಕೆಲ್ಸ ಮಾಡ್ತಾರೆ. ಪಾರ್ಟ್ ಟೈಂ ಕೆಲ್ಸ ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/private-jobs/a-fun-job-where-delivery-partners-earn-5-6-lakh-and-women-are-leading-too/articleshow-17efolz"/>
        </item>
        <item>
            <title><![CDATA[ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ; SC-C ಕೆಟಗರಿಯಲ್ಲಿದೆ ಟ್ವಿಸ್ಟ್!]]></title>
            <link>https://kannada.asianetnews.com/state/karnataka-govt-issues-order-on-scheduled-castes-internal-reservation-56432-jobs-recruitment-sat/articleshow-303tac4</link>
            <guid isPermaLink="true">https://kannada.asianetnews.com/state/karnataka-govt-issues-order-on-scheduled-castes-internal-reservation-56432-jobs-recruitment-sat/articleshow-303tac4</guid>
            <pubDate>Tue, 28 Apr 2026 20:39:02 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು ಹೈಕೋರ್ಟ್&zwnj;ನ ಮಧ್ಯಂತರ ಆದೇಶದ ಮೇರೆಗೆ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ನಿಯಮದ ಅಡಿಯಲ್ಲಿ, 56,432 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ. ಈ ಮೀಸಲಾತಿಯನ್ನು ಪ್ರವರ್ಗ-ಎ, ಬಿ, ಮತ್ತು ಸಿ ಎಂದು ವರ್ಗೀಕರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01cmhbvs9q5f2p3b9b489b69dd,imgname-banner.00_02_04_18.Still176.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): ಕ&lt;/strong&gt;ರ್ನಾಟಕದ ಪರಿಶಿಷ್ಟ ಜಾತಿ (SC) ಸಮುದಾಯಗಳಲ್ಲಿ ದಶಕಗಳಿಂದ ನಡೆಯುತ್ತಿದ್ದ ಒಳಮೀಸಲಾತಿ ಹೋರಾಟಕ್ಕೆ ಈಗ ದೊಡ್ಡ ತಾರ್ಕಿಕ ಅಂತ್ಯ ಸಿಕ್ಕಿದೆ. ಮಾನ್ಯ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಒಳಮೀಸಲಾತಿಯನ್ನು ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಬಹಳ ದಿನಗಳಿಂದ ಬಾಕಿ ಉಳಿದಿದ್ದ 56,432 ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಮೀಸಲಾತಿ ಪ್ರಮಾಣದಲ್ಲಿ ಬದಲಾವಣೆ:&lt;/strong&gt;&lt;/h2&gt;&lt;p&gt;ಸರ್ಕಾರದ ಹೊಸ ಆದೇಶದ ಪ್ರಕಾರ, ಈ ಹಿಂದೆ ಶೇಕಡಾ 17ರಷ್ಟಿದ್ದ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಹೈಕೋರ್ಟ್&zwnj;ನ ಮಧ್ಯಂತರ ಆದೇಶದ ಅನ್ವಯ ತಾತ್ಕಾಲಿಕವಾಗಿ ಶೇಕಡಾ 15ಕ್ಕೆ ಮಿತಗೊಳಿಸಲಾಗಿದೆ. ಈ ಬದಲಾವಣೆಯು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಒಳಮೀಸಲಾತಿ ವರ್ಗೀಕರಣ ಹೇಗೆ?&lt;/strong&gt;&lt;/h2&gt;&lt;p&gt;ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಉಪಜಾತಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮೀಸಲಾತಿಯನ್ನು ಮೂರು ಪ್ರಮುಖ ಪ್ರವರ್ಗಗಳಾಗಿ ವಿಂಗಡಿಸಲಾಗಿದೆ:&lt;/p&gt;&lt;ul&gt; &lt;li&gt;&lt;strong&gt;ಪ್ರವರ್ಗ-ಎ (SC-A):&lt;/strong&gt; ಶೇಕಡಾ 5.25 ರಷ್ಟು ಮೀಸಲಾತಿ.&lt;/li&gt; &lt;li&gt;&lt;strong&gt;ಪ್ರವರ್ಗ-ಬಿ (SC-B):&lt;/strong&gt; ಶೇಕಡಾ 5.25 ರಷ್ಟು ಮೀಸಲಾತಿ.&lt;/li&gt; &lt;li&gt;&lt;strong&gt;ಪ್ರವರ್ಗ-ಸಿ (SC-C):&lt;/strong&gt; ಶೇಕಡಾ 4.5 ರಷ್ಟು ಮೀಸಲಾತಿ.&lt;/li&gt;&lt;/ul&gt;&lt;p&gt;ವಿಶೇಷವೆಂದರೆ, ಪ್ರವರ್ಗ-ಸಿ ಅಡಿಯಲ್ಲಿ ಬರುವ ಒಟ್ಟು ಹುದ್ದೆಗಳಲ್ಲಿ ಶೇಕಡಾ 20ರಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿಯಲ್ಲಿರುವ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿಡಲಾಗಿದೆ. ಒಂದು ವೇಳೆ ಈ ಗುಂಪಿನ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ, ಆ ಹುದ್ದೆಗಳನ್ನು ಪ್ರವರ್ಗ-ಸಿ ಅಡಿಯಲ್ಲಿರುವ ಇತರ ಜಾತಿಗಳ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅವಕಾಶ ನೀಡಲಾಗಿದೆ.&lt;/p&gt;&lt;h2&gt;&lt;strong&gt;56,432 ಹುದ್ದೆಗಳ ಭರ್ತಿಗೆ ಆದೇಶ:&lt;/strong&gt;&lt;/h2&gt;&lt;p&gt;ಉದ್ಯೋಗಾಕಾಂಕ್ಷಿಗಳಿಗೆ ಇದು ಅತ್ಯಂತ ಸಿಹಿ ಸುದ್ದಿಯಾಗಿದೆ. ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದಿರುವ ವಿವಿಧ ಇಲಾಖೆಗಳ ಒಟ್ಟು 56,432 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಲು ಸರ್ಕಾರ ಸೂಚಿಸಿದೆ. ಈ ನೇಮಕಾತಿಗಳಲ್ಲಿ 400 ಬಿಂದುಗಳ ರೋಸ್ಟರ್ ಪದ್ಧತಿಯನ್ನು ಅನುಸರಿಸಲು ನಿರ್ದೇಶನ ನೀಡಲಾಗಿದೆ. ಒಳಮೀಸಲಾತಿ ಅಳವಡಿಸದೆ ಹೊರಡಿಸಲಾಗಿದ್ದ ಹಳೆಯ ಅಧಿಸೂಚನೆಗಳನ್ನು ಹಿಂಪಡೆದು, ಹೊಸ ಒಳಮೀಸಲಾತಿ ನಿಯಮದಡಿ ತಕ್ಷಣವೇ ಮರು-ಅಧಿಸೂಚನೆ ಹೊರಡಿಸಲು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;&lt;strong&gt;ಸಮರ್ಪಕ ಜಾರಿಗಾಗಿ ಸೂಚನೆ:&lt;/strong&gt;&lt;/h3&gt;&lt;p&gt;ಈ ಹೊಸ ಮೀಸಲಾತಿ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರವು 400 ಬಿಂದುಗಳ ರೋಸ್ಟರ್ ವರ್ತುಲಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದೆ. ಯಾವುದೇ ವೃಂದದಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳಿದ್ದಲ್ಲಿ, ಅಂತಹ ಹುದ್ದೆಗಳನ್ನು 'ಪರಿಶಿಷ್ಟ ಜಾತಿ ಸಾಮಾನ್ಯ' ಎಂದು ಪರಿಗಣಿಸಿ ನೇಮಕಾತಿ ಮಾಡಲು ಸೂಚಿಸಲಾಗಿದೆ.&lt;/p&gt;&lt;p&gt;ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಪರಿಶಿಷ್ಟ ಜಾತಿಯೊಳಗಿನ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗುವ ನಿರೀಕ್ಷೆಯಿದೆ. ಈ ಐತಿಹಾಸಿಕ ಬದಲಾವಣೆಯು ರಾಜ್ಯದ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಮೂಡಿಸಲಿದೆ.&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-issues-order-on-scheduled-castes-internal-reservation-56432-jobs-recruitment-sat/articleshow-303tac4"/>
        </item>
        <item>
            <title><![CDATA[Bengaluru Employee Termination: ಆಫೀಸ್‌ ನನ್ನ ಲೈಫ್ ಅನ್ಕೊಂಡೆ;‌ ಕೆಲಸದಿಂದಲೇ ತೆಗೆದ್ರು; ಬೆಂಗಳೂರು ಹುಡುಗಿ]]></title>
            <link>https://kannada.asianetnews.com/private-jobs/bengaluru-corporate-women-nidhi-job-fired-she-says-she-is-done-five-mistakes/articleshow-350gn0b</link>
            <guid isPermaLink="true">https://kannada.asianetnews.com/private-jobs/bengaluru-corporate-women-nidhi-job-fired-she-says-she-is-done-five-mistakes/articleshow-350gn0b</guid>
            <pubDate>Mon, 27 Apr 2026 12:51:36 +0530</pubDate>
            <description><![CDATA[&lt;p&gt;Bengaluru Women Nidhi Job Terminate: ಇಂದು ಸಾಕಷ್ಟು ಜನರು ಕಾರ್ಪೋರೇಟ್&zwnj; ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಂದಿನ ತಕ್ಷಣ ಲೇಆಫ್&zwnj; ಅಥವಾ ಟರ್ಮಿನೇಟ್&zwnj; ಎಂದು ಹೇಳಿ ಕೆಲಸದಿಂದ ತೆಗೆದು ಹಾಕಲಾಗುವುದು. ಹೀಗೆ ಟರ್ಮಿನೇಟ್&zwnj; ಆದ ಬೆಂಗಳೂರಿನ ಹುಡುಗಿಯೊಬ್ಬರು ಏನು ತಪ್ಪು ಮಾಡಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq6x0et37z5619y22h4arbdz,imgname-new-project---2026-04-27t124724.127-1777274469187.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ನಿಧಿ ಎನ್ನುವವರು ಕಾರ್ಪೋರೇಟ್&zwnj; ಕಂಪೆನಿಯಲ್ಲಿ ಕೆಲಸ ( A Bengaluru employee was allegedly fired ) ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್&zwnj; ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದಾರೆ. ನಾನು ಏನು ತಪ್ಪು ಮಾಡಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಯಾಕೆ ಕೆಲಸ ಹೋಗುತ್ತದೆ?&lt;/h2&gt;&lt;p&gt;ಕೆಲಸ ಚೆನ್ನಾಗಿ ಮಾಡಿಲ್ಲ ಎಂದಾಗಲೂ ಕೂಡ ಕೆಲಸ ಹೋಗೋದು ಸಹಜ ಆಗಿದೆ. ಇನ್ನೂ ಕೆಲವೊಮ್ಮೆ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಕೂಡ, ಆಫೀಸ್&zwnj;ನ ಒಣ ರಾಜಕೀಯಕ್ಕೆ ಕೆಲಸ ಹೋಗುವಂಥ ಪರಿಸ್ಥಿತಿ ಬರುತ್ತದೆ. ಇನ್ನೂ ಕೆಲವೊಮ್ಮೆ ಸಂಬಳ ಹೆಚ್ಚಿದ್ದರೂ, ಇನ್ಯಾವುದೋ ಬೇಡಿಕೆಗೆ ಒಪ್ಪಿಲ್ಲ ಎಂದಾಗ, ಮ್ಯಾನೇಜರ್&zwnj; ಹೇಳಿದಂತೆ ಕೇಳಿಲ್ಲ ಎಂದಾಗಲೂ ಕೂಡ ಕೆಲಸ ಹೋಗುವುದು.&lt;/p&gt;&lt;p&gt;ಮ್ಯಾನೇಜರ್&zwnj; ಮೊಂಡು ಹಠಕ್ಕೋ ಅಥವಾ ಅರ್ಥವಿಲ್ಲದ ಹೇಳಿಕೆಗೆ ಜೈ ಎಂದಿಲ್ಲ ಅಂದಾಗಲೂ ಕೂಡ ಕೆಲಸ ಹೋಗುವುದು. ಅಷ್ಟೇ ಯಾಕೆ? ಇನ್ಯಾವುದೋ ಉದ್ಯೋಗಿಯನ್ನು ಓಲೈಸಲು ಹೋಗಿ ಕೂಡ ಕೆಲಸ ಹೋಗುವುದು. ಆಡುಭಾಷೆಯಲ್ಲಿ ಹೇಳುವಂತೆ ಬಕೆಟ್&zwnj; ಹಿಡಿದಿಲ್ಲ ಎಂದಾಗಲೂ ಕೆಲಸ ಹೋಗುವುದು.&lt;/p&gt;&lt;p&gt;ಕಾರ್ಪೋರೇಟ್&zwnj; ಕೆಲಸದ ಮಧ್ಯೆ ನಿಧಿ ಏನೇನು ತಪ್ಪು ಮಾಡಿದೆ ಎಂದು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ&lt;/p&gt;&lt;h2&gt;ಕೆಲಸವೇ ಅಸ್ತಿತ್ವ ಎಂದುಕೊಂಡೆ&lt;/h2&gt;&lt;p&gt;ನನಗೂ ವೈಯಕ್ತಿಕ ಜೀವನ ಇದೆ ಎಂದು ಮರೆತು ಹೋದೆ, ಕೆಲಸವೇ ನನ್ನ ಅಸ್ತಿತ್ವ ಎಂದುಕೊಂಡೆ ಎಂದು ನಿಧಿ ಹೇಳಿದ್ದಾರೆ.&lt;/p&gt;&lt;h2&gt;ಆರೋಗ್ಯಕ್ಕೆ ಗಮನ ಕೊಡಲಿಲ್ಲ&lt;/h2&gt;&lt;p&gt;ನಾನು ನನಗೂ ಆರೋಗ್ಯ ಇದೆ, ಬದುಕಬೇಕು ಎನ್ನೋದು ಮರೆತೆ. ನನ್ನ ದಿನಚರಿ ಕಡೆಗೆ ಗಮನವೇ ಕೊಡಲಿಲ್ಲ. ಸರಿಯಾಗಿ ಊಟ-ತಿಂಡಿ ಕೂಡ ಮಾಡಲಿಲ್ಲ. ಪೌಷ್ಟಿಕ ಆಹಾರ ತಿನ್ನುತ್ತಿರಲಿಲ್ಲ, ವ್ಯಾಯಾಮ ಮಾಡುತ್ತಿರಲಿಲ್ಲ.&lt;/p&gt;&lt;h2&gt;ಒತ್ತಡದಲ್ಲಿ ಬದುಕುತ್ತಿದ್ದೆ&lt;/h2&gt;&lt;p&gt;ಆಫೀಸ್&zwnj;ಗೆ ಹೋಗಬೇಕು, ಕೆಲಸ ಆಗಿಲ್ಲ, ಟಾರ್ಗೆಟ್&zwnj; ರೀಚ್&zwnj; ಆಗಬೇಕು ಎಂದು ನಾನು ಒತ್ತಡದಲ್ಲಿ ಬದುಕುತ್ತಿದ್ದೆ. ಆಫೀಸ್&zwnj;ಗೆ ಹೋಗೋದು, ಮನೆಗೆ ಬರೋದು ಆಗುತ್ತಿತ್ತು. ಇದರ ಮಧ್ಯೆ ಮಾನಸಿಕವಾಗಿ ಕೂಡ ನನಗೆ ರೆಸ್ಟ್&zwnj; ಬೇಕು ಎನ್ನೋದು ಮರೆತಿದ್ದೆ ಎಂದು ಹೇಳಿದ್ದಾರೆ.&lt;/p&gt;&lt;h2&gt;ಲೈಫ್&zwnj;ಸ್ಟೈಲ್&zwnj; ಮರೆತಿದ್ದೆ&lt;/h2&gt;&lt;p&gt;ಆಫೀಸ್&zwnj; ಕೆಲಸದ ಮಧ್ಯೆ ಆಹಾರ, ವ್ಯಾಯಾಮದ ಕಡೆಗೆ ಗಮನವೇ ಕೊಡಲಿಲ್ಲ, ಇತರ ಕೌಶಲಗಳನ್ನು ಅಳವಡಿಸಿಕೊಳ್ಳಲು ಯೋಚಿಸಿರಲಿಲ್ಲ. ಅಷ್ಟೇ ಅಲ್ಲದೆ ಸ್ನೇಹಿತರನ್ನು ಭೇಟಿ ಆಗೋದು, ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿ ಆಗೋದನ್ನು ಬಿಟ್ಟಿದ್ದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/private-jobs/bengaluru-corporate-women-nidhi-job-fired-she-says-she-is-done-five-mistakes/articleshow-350gn0b"/>
        </item>
        <item>
            <title><![CDATA[ಚಾಮರಾಜನಗರ ಆಕ್ಸಿಜನ್ ದುರಂತ: ಸಂತ್ರಸ್ತರ ಕುಟುಂಬಕ್ಕೆ ಕೊನೆಗೂ ಸಿಕ್ತು ಸರ್ಕಾರಿ ನೌಕರಿ; ಅರ್ಹರ ಪಟ್ಟಿ ಇಲ್ಲಿದೆ ನೋಡಿ]]></title>
            <link>https://kannada.asianetnews.com/state/chamarajanagar-oxygen-tragedy-victims-get-government-jobs-cm-siddaramaiah-sat/articleshow-3qefgfp</link>
            <guid isPermaLink="true">https://kannada.asianetnews.com/state/chamarajanagar-oxygen-tragedy-victims-get-government-jobs-cm-siddaramaiah-sat/articleshow-3qefgfp</guid>
            <pubDate>Sun, 19 Apr 2026 13:17:42 +0530</pubDate>
            <description><![CDATA[&lt;p&gt;2021ರ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳು ಕಳೆದ ಐದು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಗಳ ಅರ್ಹ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲು ಏ.21 ರಂದು ಸಿದ್ದರಾಮಯ್ಯ ನೇಮಕಾತಿ ಆದೇಶ ಪತ್ರ ವಿತರಿಸಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpjawjzwe65n240sq115k28h,imgname-chamarajanagar-oxygen-tragedy--1--1776584379388.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಏ.19): ಆ&lt;/strong&gt; ಕರಾಳ ರಾತ್ರಿಯ ಘೋರ ದುರಂತ ನಡೆದು ಇಂದಿಗೆ ಸುಮಾರು 5 ವರ್ಷಗಳಾಗುತ್ತಾ ಬಂದಿವೆ. ಉಸಿರಾಡಲು ಆಕ್ಸಿಜನ್ ಸಿಗದೆ ಪ್ರಾಣಪಕ್ಷಿ ಹಾರಿಹೋದ ಆ ನೋವಿನ ನೆನಪುಗಳು ಇಂದಿಗೂ ಸಂತ್ರಸ್ತ ಕುಟುಂಬಗಳನ್ನು ಕಾಡುತ್ತಿವೆ. ಆದರೆ, ಸಂಕಷ್ಟದಲ್ಲಿದ್ದ ಆ ಕುಟುಂಬಗಳಿಗೆ ಇದೀಗ ಮರುಜೀವ ಸಿಕ್ಕಂತಾಗಿದೆ. ಕಳೆದ ಹಲವು ವರ್ಷಗಳಿಂದ ನಡೆಸುತ್ತಿದ್ದ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ರಾಜ್ಯ ಸರ್ಕಾರ ಸಂತ್ರಸ್ತ ಕುಟುಂಬದವರಿಗೆ ಸರ್ಕಾರಿ ನೌಕರಿಯನ್ನು ನೀಡಲು ಮುಂದಾಗಿದೆ.&lt;/p&gt;&lt;h2&gt;&lt;strong&gt;ಏಪ್ರಿಲ್ 21ಕ್ಕೆ ನೇಮಕಾತಿ ಆದೇಶ ವಿತರಣೆ&lt;/strong&gt;&lt;/h2&gt;&lt;p&gt;ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಏಪ್ರಿಲ್ 21ರಂದು ಆಯೋಜಿಸಲಾಗಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಅಧಿಕೃತವಾಗಿ ಸರ್ಕಾರಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಿದ್ದಾರೆ. ಮೊದಲ ಹಂತದಲ್ಲಿ ಅರ್ಹತೆ ಹೊಂದಿರುವ 21 ಮಂದಿಗೆ ಈ ಸರ್ಕಾರಿ ಉದ್ಯೋಗದ ಭಾಗ್ಯ ಸಿಗಲಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ? ಅಂದು ನಡೆದಿದ್ದೇನು?&lt;/strong&gt;&lt;/h2&gt;&lt;p&gt;2021ರ ಮೇ 2ರಂದು ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿತ್ತು. ಕೊರೋನಾ ಎರಡನೇ ಅಲೆಯ ವೇಳೆ ಆಕ್ಸಿಜನ್ ಕೊರತೆಯಿಂದಾಗಿ ಒಂದೇ ರಾತ್ರಿ ಸುಮಾರು 36ಕ್ಕೂ ಹೆಚ್ಚು ಮಂದಿ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕುಟುಂಬದ ಆಧಾರ ಸ್ತಂಭಗಳನ್ನೇ ಕಳೆದುಕೊಂಡ ಕುಟುಂಬಗಳು ಬೀದಿಗೆ ಬಿದ್ದಿದ್ದವು. ಅಂದಿನಿಂದ ಇಂದಿನವರೆಗೆ ಈ ಕುಟುಂಬಗಳು ತಮಗೆ ನ್ಯಾಯ ಬೇಕು ಮತ್ತು ಜೀವನೋಪಾಯಕ್ಕಾಗಿ ಸರ್ಕಾರಿ ನೌಕರಿ ನೀಡಬೇಕು ಎಂದು ಸತತವಾಗಿ ಹೋರಾಟ ನಡೆಸುತ್ತಾ ಬಂದಿದ್ದರು.&lt;/p&gt;&lt;h3&gt;&lt;strong&gt;ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನೀಡಿದ್ದ ಭರವಸೆ&lt;/strong&gt;&lt;/h3&gt;&lt;p&gt;ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮತ್ತು 'ಭಾರತ್ ಜೋಡೋ ಯಾತ್ರೆ'ಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂತ್ರಸ್ತ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ನೀಡಿದ ಮಾತಿನಂತೆ ಸಿದ್ದರಾಮಯ್ಯ ಸರ್ಕಾರ ತನ್ನ ಭರವಸೆಯನ್ನು ಈಡೇರಿಸುತ್ತಿದೆ.&lt;/p&gt;&lt;h3&gt;&lt;strong&gt;ವಿದ್ಯಾರ್ಹತೆಗೆ ತಕ್ಕಂತೆ ನೌಕರಿ&lt;/strong&gt;&lt;/h3&gt;&lt;p&gt;ಸಂತ್ರಸ್ತ ಕುಟುಂಬದ ಸದಸ್ಯರ ವಿದ್ಯಾರ್ಹತೆಯನ್ನು ಪರಿಗಣಿಸಿ ಅವರಿಗೆ ಸೂಕ್ತವಾದ ಹುದ್ದೆಗಳನ್ನು ನೀಡಲಾಗುತ್ತಿದೆ. ಪ್ರಮುಖವಾಗಿ ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲೇ (CIMS) ಈ ಉದ್ಯೋಗಗಳನ್ನು ನೀಡಲಾಗುತ್ತಿದ್ದು, ಇದು ಸಂತ್ರಸ್ತರಿಗೆ ತಮ್ಮ ಸ್ವಂತ ಜಿಲ್ಲೆಯಲ್ಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಐದು ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಹೋರಾಟದ ನಂತರ ಸಂತ್ರಸ್ತರ ಕಣ್ಣೀರು ವೊರೆಸುವ ಕೆಲಸಕ್ಕೆ ಸರ್ಕಾರ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.&lt;/p&gt;&lt;p&gt;ಸರ್ಕಾರಿ ಉದ್ಯೋಗ ಪಡೆದವರ ಪಟ್ಟಿ ಇಲ್ಲಿದೆ ನೋಡಿ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/chamarajanagar-oxygen-tragedy-victims-get-government-jobs-cm-siddaramaiah-sat/articleshow-3qefgfp"/>
        </item>
        <item>
            <title><![CDATA[ಎಐ ಅಬ್ಬರಕ್ಕೆ ಟೆಕ್ ಉದ್ಯೋಗಿಗಳ ಭವಿಷ್ಯಕ್ಕೆ ಕುತ್ತು, 3 ಟೆಕ್‌ ಕಂಪನಿಗಳಿಂದ 46 ಸಾವಿರ ಸಿಬ್ಬಂದಿ ಕಡಿತ!]]></title>
            <link>https://kannada.asianetnews.com/jobs/tech-layoffs-surge-meta-oracle-and-microsoft-cut-over-46000-jobs-amid-ai-boom-gdp/articleshow-3x3x7wt</link>
            <guid isPermaLink="true">https://kannada.asianetnews.com/jobs/tech-layoffs-surge-meta-oracle-and-microsoft-cut-over-46000-jobs-amid-ai-boom-gdp/articleshow-3x3x7wt</guid>
            <pubDate>Sat, 25 Apr 2026 18:09:11 +0530</pubDate>
            <description><![CDATA[ಕೃತಕ ಬುದ್ಧಿಮತ್ತೆ (ಎಐ) ಪ್ರಭಾವದಿಂದಾಗಿ ಮೆಟಾ, ಒರಾಕಲ್&zwnj;, ಮತ್ತು ಮೈಕ್ರೋಸಾಫ್ಟ್&zwnj; ನಂತಹ ಪ್ರಮುಖ ಟೆಕ್ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಒಂದೇ ತಿಂಗಳಲ್ಲಿ 46,000ಕ್ಕೂ ಹೆಚ್ಚು ಸಿಬ್ಬಂದಿ ಕಡಿತವಾಗಿದ್ದು, ಎಐ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಲು ಕಂಪನಿಗಳು ಈ ಕ್ರಮಕ್ಕೆ ಮುಂದಾಗಿವೆ, ಇದು ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j6m31a2fkwkzt4nmzpsf9jjx,imgname-August-2024-Tech-Layoffs-1725103646799.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೆಕ್&zwnj; ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ, ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿಗಳು ಭಾರೀ ಪ್ರಮಾಣದಲ್ಲಿ ಸಿಬ್ಬಂದಿ ಕಡಿತಕ್ಕೆ ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಮೆಟಾ, ಒರಾಕಲ್&zwnj; ಮತ್ತು ಮೈಕ್ರೋಸಾಫ್ಟ್&zwnj; ಕಂಪನಿಗಳು ಒಟ್ಟಾರೆ 46,000ಕ್ಕೂ ಹೆಚ್ಚು ನೌಕರರನ್ನು ವಜಾ ಮಾಡಿರುವುದು ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;ತಂತ್ರಜ್ಞಾನ ವಲಯದಲ್ಲಿ ದೊಡ್ಡ ಮಟ್ಟದ ಬದಲಾವಣೆ&lt;/h2&gt;&lt;p&gt;ಇತ್ತೀಚಿನ ತಿಂಗಳುಗಳಲ್ಲಿ ಆ್ಯಂಥ್ರೋಪಿಕ್&zwnj;, ಓಪನ್&zwnj;ಎಐ ಮತ್ತು ಡೀಪ್&zwnj;ಮೈಂಡ್&zwnj; ಸೇರಿದಂತೆ ಎಐ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳ ಪರಿಣಾಮ, ತಂತ್ರಜ್ಞಾನ ವಲಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಕಂಡುಬರುತ್ತಿವೆ. ಈ ಬದಲಾವಣೆಗಳಿಗೆ ಹೊಂದಿಕೊಳ್ಳಲು ಹಾಗೂ ಎಐ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಪ್ರಮುಖ ಕಂಪನಿಗಳು ತಮ್ಮ ಕಾರ್ಯಪದ್ಧತಿಯಲ್ಲಿ ಬದಲಾವಣೆಗಳನ್ನು ತರಲು ಆರಂಭಿಸಿವೆ. ಅದರ ಭಾಗವಾಗಿಯೇ ಸಿಬ್ಬಂದಿ ಕಡಿತ ನಡೆಯುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.&lt;/p&gt;&lt;h2&gt;ಮೆಟಾ ಕಂಪನಿಯು ಸುಮಾರು 8,000 ಸಿಬ್ಬಂದಿ ವಜಾ&lt;/h2&gt;&lt;p&gt;ಮೆಟಾ ಕಂಪನಿಯು ಸುಮಾರು 8,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದು, ಇದು ಅದರ ಒಟ್ಟು ನೌಕರರ ಸಂಖ್ಯೆಯ ಸುಮಾರು 10 ಶೇಕಡಾ ಎಂದು ಹೇಳಲಾಗಿದೆ. ಎಐ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಮಾಡುತ್ತಿರುವ ಮೆಟಾ, ಮುಂದಿನ ಒಂದು ವರ್ಷದಲ್ಲಿ ಮಾತ್ರವೇ ಸುಮಾರು ₹11.30 ಲಕ್ಷ ಕೋಟಿ ವೆಚ್ಚ ಮಾಡಲು ಯೋಜನೆ ರೂಪಿಸಿರುವುದಾಗಿ ತಿಳಿದುಬಂದಿದೆ. ಈ ಮೊತ್ತವು ಕಳೆದ ಮೂರು ವರ್ಷಗಳಲ್ಲಿ ಕಂಪನಿಯು ಎಐ ಮೇಲೆ ಮಾಡಿದ ಒಟ್ಟು ವೆಚ್ಚಕ್ಕೆ ಸಮಾನವಾಗಿದೆ. ಇದೇ ವೇಳೆ, ಕಂಪನಿಯು ಈ ಹಿಂದೆ ಘೋಷಿಸಿದ್ದ ಹೊಸ ನೇಮಕಾತಿ ಯೋಜನೆಗಳನ್ನೂ ಹಿಂಪಡೆಯಲು ನಿರ್ಧರಿಸಿದೆ.&lt;/p&gt;&lt;h2&gt;ಒರಾಕಲ್&zwnj; ನಿಂದ 30,000 ಸಿಬ್ಬಂದಿ ವಜಾ&lt;/h2&gt;&lt;p&gt;ಇನ್ನೊಂದೆಡೆ, ಒರಾಕಲ್&zwnj; ಕಂಪನಿಯು ಅತಿದೊಡ್ಡ ಪ್ರಮಾಣದಲ್ಲಿ, ಸುಮಾರು 30,000 ಸಿಬ್ಬಂದಿಯನ್ನು ಏಕಾಏಕಿ ವಜಾ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಪೂರ್ವ ಸೂಚನೆ ಇಲ್ಲದೆ ಇ-ಮೇಲ್&zwnj; ಮೂಲಕ ಕೆಲಸದಿಂದ ತೆಗೆದುಹಾಕಿರುವ ಕ್ರಮ ಉದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಭಾರತದಲ್ಲೇ ಸುಮಾರು 12,000 ಮಂದಿಗೆ ಈ ಪರಿಣಾಮ ಬಿದ್ದಿರುವುದಾಗಿ ತಿಳಿದುಬಂದಿದೆ.&lt;/p&gt;&lt;h2&gt;ಮೈಕ್ರೋಸಾಫ್ಟ್&zwnj; 8,750 ಸಿಬ್ಬಂದಿ ಕಡಿತಕ್ಕೆ ನಿರ್ಧಾರ&lt;/h2&gt;&lt;p&gt;ಮೈಕ್ರೋಸಾಫ್ಟ್&zwnj; ಕಂಪನಿಯು ಸುಮಾರು 8,750 ಸಿಬ್ಬಂದಿ ಕಡಿತಕ್ಕೆ ಮುಂದಾಗಿದ್ದು, ಇತರ ಕಂಪನಿಗಳಿಗಿಂತ ಭಿನ್ನವಾಗಿ ಸ್ವಯಂ ನಿವೃತ್ತಿ ಅಥವಾ ರಾಜೀನಾಮೆ ನೀಡುವ ಅವಕಾಶ ನೀಡಿದೆ. ಅಮೆರಿಕಾದಲ್ಲಿ ಸುಮಾರು 7 ಶೇಕಡಾ ಸಿಬ್ಬಂದಿ ಕಡಿತಕ್ಕೆ ಈ ವಿಧಾನ ಅನುಸರಿಸಲಾಗಿದ್ದು, ನಿವೃತ್ತರಾಗುವ ಅಥವಾ ರಾಜೀನಾಮೆ ನೀಡುವವರಿಗೆ ಹಣಕಾಸು ಪರಿಹಾರ ಪ್ಯಾಕೇಜ್&zwnj; ನೀಡಲಾಗುತ್ತಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ ಟೆಕ್&zwnj; ಕಂಪನಿಗಳು ತಮ್ಮ ವ್ಯವಹಾರ ಮಾದರಿಯನ್ನು ಪುನರ್&zwnj;ರಚನೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಆದರೆ, ಈ ಬದಲಾವಣೆಗಳ ಪರಿಣಾಮವಾಗಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿರುವುದು ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿದೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/tech-layoffs-surge-meta-oracle-and-microsoft-cut-over-46000-jobs-amid-ai-boom-gdp/articleshow-3x3x7wt"/>
        </item>
        <item>
            <title><![CDATA[ಕೃಷಿ ಇಲಾಖೆಯಲ್ಲಿ ನಿಮಗಿದೋ ಸುವರ್ಣಾವಕಾಶ, ಕೆಇಎಯಿಂದ ಅರ್ಜಿ ಆಹ್ವಾನ!]]></title>
            <link>https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4</link>
            <guid isPermaLink="true">https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4</guid>
            <pubDate>Wed, 22 Apr 2026 18:44:05 +0530</pubDate>
            <description><![CDATA[ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕೃಷಿ ಇಲಾಖೆಯಲ್ಲಿ ಖಾಲಿ ಇರುವ 890 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಮೇ 10ರೊಳಗೆ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ ತಿಂಗಳಲ್ಲಿ ಲಿಖಿತ ಪರೀಕ್ಷೆಗಳು ನಡೆಯಲಿವೆ. ಈ ನೇಮಕಾತಿಯು ಕೃಷಿ ಪದವೀಧರರಿಗೆ ಸರ್ಕಾರಿ ವಲಯದಲ್ಲಿ ಸೇವೆ ಸಲ್ಲಿಸಲು ಉತ್ತಮ ಅವಕಾಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kktgd6bd5fgq0amyfwsjav01,imgname-agriculture-officer-salary-1773637376365.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದ ಕೃಷಿ ಕ್ಷೇತ್ರದ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಹತ್ವದ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 890 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್&zwnj;ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.&lt;/p&gt;&lt;h2&gt;ಹುದ್ದೆಗಳ ವಿವರ ಮತ್ತು ವರ್ಗೀಕರಣ&lt;/h2&gt;&lt;p&gt;ಈ ನೇಮಕಾತಿ ಪ್ರಕ್ರಿಯೆ ಮುಖ್ಯವಾಗಿ ಎರಡು ವೃಂದಗಳಲ್ಲಿ ನಡೆಯಲಿದೆ. ಒಟ್ಟು 890 ಹುದ್ದೆಗಳ ಪೈಕಿ &lsquo;ಗ್ರೂಪ್-ಬಿ&rsquo; ವೃಂದದ ಅಡಿಯಲ್ಲಿ 632 ಹುದ್ದೆಗಳು ಸೇರಿವೆ. ಇದರಲ್ಲಿ 81 ಕೃಷಿ ಅಧಿಕಾರಿ ಮತ್ತು 551 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿವೆ. ಉಳಿದಂತೆ, ಕಲ್ಯಾಣ ಕರ್ನಾಟಕ (371ಜೆ) ವೃಂದಕ್ಕೆ ಮೀಸಲಾದ 258 ಹುದ್ದೆಗಳಿಗೂ ಪ್ರತ್ಯೇಕ ನೇಮಕಾತಿ ನಡೆಯಲಿದೆ. ಕೃಷಿ ಪದವೀಧರರಿಗೆ ಸರ್ಕಾರದ ವಲಯದಲ್ಲಿ ಸೇವೆ ಸಲ್ಲಿಸಲು ಇದು ಮಹತ್ವದ ಅವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.&lt;/p&gt;&lt;h2&gt;ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು&lt;/h2&gt;&lt;p&gt;ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮೇ 10ರೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ದಿನಾಂಕವು ಕಲ್ಯಾಣ ಕರ್ನಾಟಕ ಹಾಗೂ ಇತರ ಎಲ್ಲಾ ವೃಂದದ ಅಭ್ಯರ್ಥಿಗಳಿಗೆ ಅನ್ವಯವಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ನಿಗದಿತ ಶುಲ್ಕವನ್ನು ಪಾವತಿಸಲು ಮೇ 12ರವರೆಗೆ ಅವಕಾಶ ನೀಡಲಾಗಿದೆ. ಕೊನೆಯ ಕ್ಷಣದ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಕೆಇಎ ಸಲಹೆ ನೀಡಿದೆ.&lt;/p&gt;&lt;h2&gt;ಪರೀಕ್ಷಾ ವೇಳಾಪಟ್ಟಿ&lt;/h2&gt;&lt;p&gt;ನೇಮಕಾತಿ ಪ್ರಕ್ರಿಯೆಯ ಅಂಗವಾಗಿ ಲಿಖಿತ ಪರೀಕ್ಷೆಗಳು ಜೂನ್ ತಿಂಗಳಲ್ಲಿ ನಡೆಯಲಿವೆ.&lt;/p&gt;&lt;p&gt;ಕನ್ನಡ ಭಾಷಾ ಪರೀಕ್ಷೆ: ಮೂಲ ಹಾಗೂ ಕಲ್ಯಾಣ ಕರ್ನಾಟಕ ಎರಡೂ ವೃಂದದ ಅಭ್ಯರ್ಥಿಗಳಿಗೆ ಜೂನ್ 6ರಂದು ಕಡ್ಡಾಯವಾಗಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಗ್ರೂಪ್-ಬಿ ಪರೀಕ್ಷೆ: ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಜೂನ್ 7ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ವೃಂದ: 371ಜೆ ವೃಂದಕ್ಕೆ ಸೇರಿದ 258 ಹುದ್ದೆಗಳಿಗಾಗಿ ಜೂನ್ 14ರಂದು ಪರೀಕ್ಷೆ ನಿಗದಿಯಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ&lt;/p&gt;&lt;p&gt;ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿದ್ದ ಹುದ್ದೆಗಳ ಭರ್ತಿಯಿಂದ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಾಗುವ ನಿರೀಕ್ಷೆಯಿದೆ. ರೈತರಿಗೆ ತಾಂತ್ರಿಕ ಸಲಹೆ ನೀಡುವುದು, ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ.&lt;/p&gt;&lt;p&gt;ಅರ್ಹತೆ, ಅರ್ಜಿ ವಿಧಾನ ಮತ್ತು ಇತರ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಬಹುದು. ಜೂನ್ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿರುವುದರಿಂದ ಅಭ್ಯರ್ಥಿಗಳಿಗೆ ಸಿದ್ಧತೆಗಾಗಿ ಸೀಮಿತ ಸಮಯ ಮಾತ್ರ ಇರುವುದರಿಂದ, ಕೃಷಿ ಪದವೀಧರರು ಈಗಿನಿಂದಲೇ ಯೋಜಿತವಾಗಿ ಅಭ್ಯಾಸ ಆರಂಭಿಸುವುದು ಅಗತ್ಯವಾಗಿದೆ.&lt;/p&gt;&lt;p&gt;ಒಟ್ಟಾರೆ, ಈ ನೇಮಕಾತಿ ಪ್ರಕ್ರಿಯೆ ಕೃಷಿ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವ ಜೊತೆಗೆ, ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನು ಒದಗಿಸಿದೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4"/>
        </item>
        <item>
            <title><![CDATA['ನನ್ನ ಡಿಗ್ರಿ ಕೇವಲ ಎಂಟ್ರಿ ಟಿಕೆಟ್ ಅಷ್ಟೇ': ಜಾಬ್‌ ವೇಳೆ ಪದವಿ ಕೇವಲ ಶೇ. 3ರಷ್ಟು ಮಾತ್ರ ಬಳಕೆಯಾಗುತ್ತಿದೆ ಎಂದ NIT ಪದವೀಧರೆ!]]></title>
            <link>https://kannada.asianetnews.com/private-jobs/nit-graduate-manvi-viral-video-on-degree-utility-and-skills-in-corporate-jobs-san/articleshow-6itm2r0</link>
            <guid isPermaLink="true">https://kannada.asianetnews.com/private-jobs/nit-graduate-manvi-viral-video-on-degree-utility-and-skills-in-corporate-jobs-san/articleshow-6itm2r0</guid>
            <pubDate>Fri, 17 Apr 2026 21:10:11 +0530</pubDate>
            <description><![CDATA[&lt;p&gt;ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆ ಮಾನ್ವಿ, ತಮ್ಮ ಪದವಿಗಿಂತ ಸಂವಹನ ಕಲೆ ಮತ್ತು ಹೊಸ ಕೌಶಲಗಳೇ ಉದ್ಯೋಗದಲ್ಲಿ ಯಶಸ್ಸು ನೀಡಿದವು ಎಂದು ಹೇಳಿದ್ದಾರೆ. ಪದವಿ ಕೇವಲ ಕೆಲಸಕ್ಕೆ ಪ್ರವೇಶ ಟಿಕೆಟ್ ಮಾತ್ರ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe18x6h5asczqw124h31t4c,imgname-whatsapp-image-2026-04-17-at-9.04.00-pm-1776440079569.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.17): &lt;/strong&gt;ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆ ಮಾನ್ವಿ ಎಂಬುವವರು ಹಂಚಿಕೊಂಡ ವಿಡಿಯೋವೊಂದು ಈಗ ವೈರಲ್ ಆಗಿದೆ. ನಾಲ್ಕು ವರ್ಷಗಳ ಕಷ್ಟದ ಓದು ಉದ್ಯೋಗದ ಅವಧಿಯಲ್ಲಿ ಎಷ್ಟು ಕಡಿಮೆ ಬಳಕೆಯಾಗುತ್ತಿದೆ ಎಂಬ ಕಹಿಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಮಾನ್ವಿ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಾ, &quot;ನಾನು NIT ಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದೇನೆ. ಆದರೆ ನನ್ನ ಕೆಲಸದಲ್ಲಿ ಆ ಪದವಿಯ ಕೇವಲ ಶೇ. 3ರಷ್ಟು ಅಂಶಗಳು ಮಾತ್ರ ಬಳಕೆಯಾಗುತ್ತಿವೆ. ಡಿಗ್ರಿ ಎನ್ನುವುದು ಕೆಲಸ ಸಿಗಲು ಬೇಕಾದ ಎಂಟ್ರಿ ಟಿಕೆಟ್ ಮಾತ್ರವೇ ಹೊರತು, ಇಡೀ ಪಯಣವಲ್ಲ,&quot; ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಓದಿದ್ದಕ್ಕೂ ಮಾಡುವ ಕೆಲಸಕ್ಕೂ ಸಂಬಂಧವಿಲ್ಲ&lt;/strong&gt;&lt;/h2&gt;&lt;p&gt;ತಮ್ಮ ಸಹಪಾಠಿಗಳ ಪರಿಸ್ಥಿತಿಯ ಬಗ್ಗೆ ವಿವರಿಸಿದ ಅವರು, &quot;ನನ್ನ ಬ್ಯಾಚ್&zwnj;ನ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಾವು ಓದಿದ ವಿಷಯಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿಲ್ಲ. ಕಾಲೇಜಿನಲ್ಲಿ ನಾನು ಥರ್ಮೋಡೈನಾಮಿಕ್ಸ್, ಮೆಕ್ಯಾನಿಕ್ಸ್ ಮತ್ತು ಕೈನೆಟಿಕ್ಸ್&zwnj;ನಂತಹ ವಿಜ್ಞಾನದ ವಿಷಯಗಳನ್ನು ಓದಿದೆ. ಆದರೆ ಕೆಲಸದ ಸ್ಥಳದಲ್ಲಿ ನಾನು ಕೇವಲ ಎಕ್ಸೆಲ್ ಶೀಟ್ ನೋಡುವುದು, ಮೀಟಿಂಗ್&zwnj;ಗಳನ್ನು ಮಾಡುವುದು ಮತ್ತು ಇಂಟರ್ನೆಟ್ ಮೂಲಕ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿಯೇ ನಿರತರಾಗಿದ್ದೇನೆ,&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಶಸ್ಸಿಗೆ ಬೇಕಾದ ನಿಜವಾದ ಕೌಶಲಗಳೇನು?&lt;/strong&gt;&lt;/h2&gt;&lt;p&gt;ಕೆಲಸದಲ್ಲಿ ಬೆಳೆಯಲು ಪದವಿಗಿಂತ ಹೆಚ್ಚಾಗಿ ಸಂವಹನ ಕಲೆ (Communication) ಮತ್ತು ಕೌಶಲದ ಅಪ್&zwnj;ಗ್ರೇಡ್ (Upskilling) ಸಹಾಯ ಮಾಡಿತು ಎಂದು ಮಾನ್ವಿ ಅಭಿಪ್ರಾಯಪಟ್ಟಿದ್ದಾರೆ. &quot;ನನ್ನ ಡಿಗ್ರಿ ನನಗೆ ಕೇವಲ ಸಂದರ್ಶನದವರೆಗೆ ಹೋಗಲು ಸಹಾಯ ಮಾಡಿತು. ಅಲ್ಲಿಂದ ಮುಂದಿನ ಹಾದಿಯಲ್ಲಿ ನಾನು ಕಲಿತ ವೈಯಕ್ತಿಕ ಕೌಶಲಗಳೇ ನನ್ನನ್ನು ಕಾಪಾಡಿದವು,&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳಿಗೆ ಮಾನ್ವಿ ನೀಡಿದ ಕಿವಿಮಾತು&lt;/strong&gt;&lt;/h2&gt;&lt;p&gt;ಕಾಲೇಜಿನಲ್ಲಿ ಓದುತ್ತಿರುವಾಗಲೇ ಯಾವುದಾದರೂ ಒಂದು ಹೆಚ್ಚುವರಿ ಕೌಶಲ, ಟೂಲ್ ಅಥವಾ ಹವ್ಯಾಸವನ್ನು ಕಲಿತುಕೊಳ್ಳಿ. ಪದವಿಯ ಜೊತೆಗೆ ನಿಮಗೆ ಹಣ ಗಳಿಸಿಕೊಡುವಂತಹ ಯಾವುದಾದರೂ ಹೊಸ ವಿಷಯವನ್ನು ಕಲಿಯುವುದು ಇಂದಿನ ಕಾಲದಲ್ಲಿ ಅತಿ ಮುಖ್ಯ. ಡಿಗ್ರಿಯನ್ನು ನಿರ್ಲಕ್ಷಿಸಬೇಡಿ, ಆದರೆ ಡಿಗ್ರಿ ಒಂದೇ ಸಾಕು ಎಂದು ಕುಳಿತುಕೊಳ್ಳಬೇಡಿ ಎಂದಿದ್ದಾರೆ.&lt;/p&gt;&lt;p&gt;ಮಾನ್ವಿ ಅವರ ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಒಬ್ಬ ಯೂಸರ್&zwnj; &quot;ಇದು ನೂರಕ್ಕೆ ನೂರರಷ್ಟು ಸತ್ಯ, ನಾವೆಲ್ಲರೂ ಓದಿದ್ದಕ್ಕೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ,&quot; ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಸಿವಿಲ್ ಇಂಜಿನಿಯರ್, &quot;ನಾನು ಇಂಜಿನಿಯರಿಂಗ್ ಮುಗಿಸಿ ಈಗ ಬ್ಯಾಂಕರ್ ಆಗಿ ಕೆಲಸ ಮಾಡುತ್ತಿದ್ದೇನೆ,&quot; ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇನ್ನೊಬ್ಬ ಯೂಸರ್&zwnj;, &quot;ಡಿಗ್ರಿ ಎನ್ನುವುದು ಕೇವಲ ಒಂದು ಐಡಿ ಕಾರ್ಡ್ ಅಷ್ಟೇ,&quot; ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Manviiii (@manvi.diary)&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/private-jobs/nit-graduate-manvi-viral-video-on-degree-utility-and-skills-in-corporate-jobs-san/articleshow-6itm2r0"/>
        </item>
        <item>
            <title><![CDATA[ಕೆಲಸ ಇದೆ ಎಂದು ಬೀಗಬೇಡ! ಬೃಹತ್‌ ಲಾಭವಿದ್ರೂ, ಉದ್ಯೋಗಿಗಳ ಹೊಟ್ಟೆಪಾಡು ಕಿತ್ತುಕೊಂಡ ದೈತ್ಯ ಕಂಪೆನಿ, ಬ್ಯಾಂಕ್!]]></title>
            <link>https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h</link>
            <guid isPermaLink="true">https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h</guid>
            <pubDate>Mon, 27 Apr 2026 17:00:42 +0530</pubDate>
            <description><![CDATA[&lt;p&gt;ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್&zwnj;ನಂತಹ ಟೆಕ್ ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಈಗ ಅಕ್ಸಿಸ್&zwnj; ಬ್ಯಾಂಕ್&zwnj; ಕೂಡ ಲೇಆಫ್&zwnj; ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpst958axanasrak62ap6ghk,imgname-tcs-victim-recounts-horror-office-bullying-politics-gettyimages-470766688-1776835400970.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್&zwnj;ನಂತಹ ಟೆಕ್ ಕಂಪೆನಿಗಳು ಲೇಆಫ್&zwnj; ಮಾಡುತ್ತಿವೆ. ಈಗ ಅಕ್ಸಿಸ್&zwnj; ಬ್ಯಾಂಕ್&zwnj; ಕೂಡ ಲೇಆಫ್&zwnj; ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈಗಾಗಲೇ ಐಟಿ ಕಂಪೆನಿಗಳು ಸಾಕಷ್ಟು ಉದ್ಯೋಗಿಗಳ ವಜಾ ಮಾಡಿದೆ. ಒರಾಕಲ್ (Oracle) ಕಂಪನಿಯು ಜಾಗತಿಕವಾಗಿ ಅಂದಾಜು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮೆಟಾ, ಮೈಕ್ರೋಸಾಫ್ಟ್, ಡಿಸ್ನಿ, ಎಎಸ್&zwnj;ಎಮ್&zwnj;ಎಲ್ ಕಂಪನಿಗಳು ಉದ್ಯೋಗ ಕಡಿತ ಮಾಡಲಿವೆ.&lt;/p&gt;&lt;img&gt;&lt;p&gt;ಕಂಪನಿಗಳು ಕೃತಕ ಬುದ್ಧಿಮತ್ತೆಯಲ್ಲಿ ಬೃಹತ್ ಹೂಡಿಕೆ ಮಾಡುತ್ತಿವೆ. ಇದರಿಂದ ಹೆಚ್ಚು ಲಾಭ ಬರುತ್ತಿದೆ, ಆದರೆ ದಶಕಗಳಿಂದ ಕೆಲಸ ಮಾಡುತ್ತಿದ್ದವರು ಮನೆಗೆ ಹೋಗುತ್ತಿದ್ದಾರೆ. ಒರಾಕಲ್&zwnj;ನಲ್ಲಿ 33 ವರ್ಷ ಕೆಲಸ ಮಾಡಿದ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.&amp;nbsp;&lt;/p&gt;&lt;img&gt;&lt;p&gt;ಭಾರತದಲ್ಲಿ ಆಕ್ಸಿಸ್ ಬ್ಯಾಂಕ್&zwnj; ಸಹ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು, ತನ್ನ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 2026ರಲ್ಲಿ 3,100ರಷ್ಟು ಉದ್ಯೋಗಿಗಳ ಸಂಖ್ಯೆ ಕುಸಿದಿದೆ.&lt;/p&gt;&lt;img&gt;&lt;p&gt;ಈಗ ಬ್ಯಾಂಕ್&zwnj;ನಲ್ಲಿ ಸಿಬ್ಬಂದಿ ಸಂಖ್ಯೆ ಇಳಿಕೆಯಾಗಿದ್ದರೂ ಬ್ಯಾಂಕ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇದೇ ಅವಧಿಯಲ್ಲಿ ಸುಮಾರು 400 ಹೊಸ ಶಾಖೆಗಳನ್ನು ತೆರೆಯಲಾಗಿದ್ದು, ₹7,071 ಕೋಟಿಗಳಷ್ಟು ಬೃಹತ್ ಲಾಭ ಮಾಡಿದೆ&lt;/p&gt;]]></content:encoded>
            <category>jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/private-jobs/corporate-it-company-axis-bank-and-oracle-job-layoffs-2026-a1g8k4h"/>
        </item>
        <item>
            <title><![CDATA[ಆಕ್ಟಿಂಗ್‌ನಿಂದ ಕೋಟಿ ಕೋಟಿ ದುಡಿತಿರೋ ಪಾಲಕರು, ಅತ್ತ ಮುಖ ಕೂಡ ಹಾಕದೆ, ಬೇರೆ ಜಾಬ್‌ ಮಾಡ್ತಿರೋ ಸ್ಟಾರ್‌ ಕಿಡ್ಸ್‌ ಇವ್ರು]]></title>
            <link>https://kannada.asianetnews.com/gallery/cine-world/bollywood-celebrity-children-who-chose-other-careers-than-acting-list-dbmgook</link>
            <guid isPermaLink="true">https://kannada.asianetnews.com/gallery/cine-world/bollywood-celebrity-children-who-chose-other-careers-than-acting-list-dbmgook</guid>
            <pubDate>Tue, 21 Apr 2026 13:17:11 +0530</pubDate>
            <description><![CDATA[&lt;p&gt;Bollywood Star Kids: ಬಾಲಿವುಡ್ ಒಂದು ಗ್ಲಾಮರ್ ಪ್ರಪಂಚ. ಇದರ ಆಕರ್ಷಣೆಯಿಂದ ದೂರವಿರುವುದು ಸುಲಭವಲ್ಲ. ಹೀಗಾಗಿಯೇ ಹಲವು ಸ್ಟಾರ್&zwnj;ಗಳ ಮಕ್ಕಳು ಚಿತ್ರರಂಗಕ್ಕೆ ಬಂದರು. ಆದರೆ ಕೆಲವರಿಗೆ ಈ ಗ್ಲಾಮರ್ ಇಷ್ಟವಾಗಲಿಲ್ಲ, ಅವರು ಬೇರೆ ಕ್ಷೇತ್ರವನ್ನು ಆರಿಸಿಕೊಂಡರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpqfk5jr0a13cyvnk2302dha,imgname-new-project---2026-04-21t130423.753-1776757085784.jpg" type="image/jpeg" height="390" width="690"/>
            <content:encoded><![CDATA[&lt;p&gt;Bollywood Star Kids: ಬಾಲಿವುಡ್ ಒಂದು ಗ್ಲಾಮರ್ ಪ್ರಪಂಚ. ಇದರ ಆಕರ್ಷಣೆಯಿಂದ ದೂರವಿರುವುದು ಸುಲಭವಲ್ಲ. ಹೀಗಾಗಿಯೇ ಹಲವು ಸ್ಟಾರ್&zwnj;ಗಳ ಮಕ್ಕಳು ಚಿತ್ರರಂಗಕ್ಕೆ ಬಂದರು. ಆದರೆ ಕೆಲವರಿಗೆ ಈ ಗ್ಲಾಮರ್ ಇಷ್ಟವಾಗಲಿಲ್ಲ, ಅವರು ಬೇರೆ ಕ್ಷೇತ್ರವನ್ನು ಆರಿಸಿಕೊಂಡರು.&lt;/p&gt;&lt;img&gt;&lt;p&gt;ತಮ್ಮ ಮಗ ಆರವ್&zwnj;ಗೆ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ ಎಂದು ಇತ್ತೀಚೆಗೆ ಅಕ್ಷಯ್ ಕುಮಾರ್ ಹೇಳಿದ್ದರು. ಅಷ್ಟೇ ಅಲ್ಲ, ಅವನು ತಿಂಗಳಿಗೆ ₹4500 ಸಂಬಳಕ್ಕೆ ಕೆಲಸ ಮಾಡುತ್ತಿದ್ದಾನೆ ಎಂದೂ ಬಹಿರಂಗಪಡಿಸಿದ್ದರು.&lt;/p&gt;&lt;img&gt;&lt;p&gt;ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ನಂದಾಗೆ ನಟನೆಯಲ್ಲಿ ಎಂದಿಗೂ ಆಸಕ್ತಿ ಇರಲಿಲ್ಲ. ಅವರು ವೃತ್ತಿಯಲ್ಲಿ ಲೇಖಕಿ ಮತ್ತು ಅಂಕಣಕಾರ್ತಿ. ಶ್ವೇತಾ ಟಿವಿ ಜಾಹೀರಾತುಗಳಿಗಾಗಿ ಮಾಡೆಲಿಂಗ್ ಮಾಡಿದ್ದಾರೆ. 2018ರಲ್ಲಿ, ಅವರು ತಮ್ಮ ಫ್ಯಾಷನ್ ಲೇಬಲ್ 'MxS' ಅನ್ನು ಪ್ರಾರಂಭಿಸಿದರು.&lt;/p&gt;&lt;img&gt;&lt;p&gt;ಸಂಜಯ್ ದತ್ ಅವರ ಪುತ್ರಿ ತ್ರಿಶಾಲಾ ದತ್ ಲೈಮ್&zwnj;ಲೈಟ್&zwnj;ನಿಂದ ದೂರವಿರಲು ಇಷ್ಟಪಡುತ್ತಾರೆ. ಅವರು ಶೋಬಿಜ್&zwnj;ನಿಂದ ದೂರವಿದ್ದು, ವೃತ್ತಿಯಲ್ಲಿ ಸೈಕೋಥೆರಪಿಸ್ಟ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ.&lt;/p&gt;&lt;img&gt;&lt;p&gt;ಜೂಹಿ ಚಾವ್ಲಾ ಅವರ ಪುತ್ರಿ ಜಾಹ್ನವಿ ಮೆಹ್ತಾಗೆ ಬ್ಯುಸಿನೆಸ್&zwnj;ನಲ್ಲಿ ಹೆಚ್ಚು ಆಸಕ್ತಿ. ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್&zwnj; ಪರ ಬಿಡ್ ಮಾಡುವುದನ್ನು ನೋಡಲಾಗಿದೆ. ಜಾಹ್ನವಿಗೆ ನಟನೆಯಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲ.&lt;/p&gt;&lt;img&gt;&lt;p&gt;ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್&zwnj;ಗೆ ಚಿತ್ರರಂಗದಲ್ಲಿ ಯಾವುದೇ ಆಸಕ್ತಿ ಇಲ್ಲ. ಅವರು ಕ್ರೀಡೆಯಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ವೇದಾಂತ್ ರಾಷ್ಟ್ರಮಟ್ಟದ ಈಜುಪಟುವಾಗಿದ್ದು, ಹಲವು ಪದಕಗಳನ್ನು ಗೆದ್ದಿದ್ದಾರೆ.&lt;/p&gt;&lt;img&gt;&lt;p&gt;ಬೋನಿ ಕಪೂರ್ ಅವರ ಪುತ್ರಿ ಅಂಶುಲಾಗೆ ನಟನೆಯಲ್ಲಿ ಅಷ್ಟೇನೂ ಆಸಕ್ತಿ ಇಲ್ಲ. ಅವರು ಲೈಫ್&zwnj;ಸ್ಟೈಲ್ ಇನ್&zwnj;ಫ್ಲುಯೆನ್ಸರ್ ಆಗಿದ್ದಾರೆ. ಕರಣ್ ಜೋಹರ್ ಅವರ ರಿಯಾಲಿಟಿ ಶೋ 'ದಿ ಟ್ರೇಟರ್ಸ್'ನಲ್ಲಿ ಅವರು ಕಾಣಿಸಿಕೊಂಡಿದ್ದರು.&lt;/p&gt;]]></content:encoded>
            <category>jobs</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/bollywood-celebrity-children-who-chose-other-careers-than-acting-list-dbmgook"/>
        </item>
        <item>
            <title><![CDATA[ಸಿಆರ್‌ಪಿಎಫ್ ಬೃಹತ್ ನೇಮಕಾತಿ: 9195 ಹುದ್ದೆಗಳಿಗೆ  ಅವಕಾಶ! ಆಯ್ಕೆಯಾದವರಿಗೆ ಭರ್ಜರಿ ವೇತನ]]></title>
            <link>https://kannada.asianetnews.com/jobs/crpf-constable-recruitment-2026-apply-online-for-9195-posts-from-april-20-eligibility-salary-and-details-gdp/articleshow-dphelrr</link>
            <guid isPermaLink="true">https://kannada.asianetnews.com/jobs/crpf-constable-recruitment-2026-apply-online-for-9195-posts-from-april-20-eligibility-salary-and-details-gdp/articleshow-dphelrr</guid>
            <pubDate>Tue, 21 Apr 2026 16:43:37 +0530</pubDate>
            <description><![CDATA[ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 2026ನೇ ಸಾಲಿನಲ್ಲಿ 9,195 ಕಾನ್ಸ್&zwnj;ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ತಾಂತ್ರಿಕ, ಟ್ರೇಡ್ಸ್&zwnj;ಮನ್ ಮತ್ತು ಪಯೋನಿಯರ್ ವಿಭಾಗಗಳಲ್ಲಿನ ಈ ಹುದ್ದೆಗಳಿಗೆ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು, ಅರ್ಜಿ ಪ್ರಕ್ರಿಯೆ ಏಪ್ರಿಲ್ 20, 2026 ರಿಂದ ಆರಂಭವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kj2df31phmbey94j6frd3a7k,imgname-jammu-kashmir-kishtwar-encounter-operation-trashi-terrorists-killed-ak47-crpf-army-chhatroo-3-1771755244598.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ವತಿಯಿಂದ 2026ನೇ ಸಾಲಿನ ಕಾನ್ಸ್&zwnj;ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ಹೊರಬಿದ್ದಿದ್ದು, ಏಪ್ರಿಲ್ 20, 2026ರಿಂದ ಆನ್&zwnj;ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈ ನೇಮಕಾತಿಯಡಿ ತಾಂತ್ರಿಕ, ಟ್ರೇಡ್ಸ್&zwnj;ಮನ್ ಹಾಗೂ ಪಯೋನಿಯರ್ ವಿಭಾಗಗಳಲ್ಲಿ ಒಟ್ಟು 9,195 ಹುದ್ದೆಗಳು ಭರ್ತಿಯಾಗಲಿವೆ.&lt;/p&gt;&lt;h2&gt;&lt;strong&gt;ಅರ್ಹತೆ ಮತ್ತು ವಿದ್ಯಾರ್ಹತೆ&lt;/strong&gt;&lt;/h2&gt;&lt;p&gt;ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಕೆಲವು ನಿರ್ದಿಷ್ಟ ಹುದ್ದೆಗಳಿಗಾಗಿ ಹೆಚ್ಚುವರಿ ತಾಂತ್ರಿಕ ಅರ್ಹತೆಗಳು, ಕೈಗಾರಿಕಾ ತರಬೇತಿ ಸಂಸ್ಥೆ (ITI) ಪ್ರಮಾಣಪತ್ರಗಳು ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವ ಅಗತ್ಯವಾಗಿರುತ್ತದೆ.&lt;/p&gt;&lt;h2&gt;ವೇತನ ಮತ್ತು ವಯೋಮಿತಿ&lt;/h2&gt;&lt;p&gt;ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 21,700ರಿಂದ ರೂ. 69,100ರವರೆಗೆ ವೇತನ ಶ್ರೇಣಿ ನೀಡಲಾಗುತ್ತದೆ.&lt;/p&gt;&lt;p&gt;ಚಾಲಕ ಹುದ್ದೆಗೆ: 21ರಿಂದ 27 ವರ್ಷ&lt;/p&gt;&lt;p&gt;ಇತರ ಹುದ್ದೆಗಳಿಗೆ: 18ರಿಂದ 23 ವರ್ಷ ವಯೋಮಿತಿ ನಿಗದಿಯಾಗಿದೆ&lt;/p&gt;&lt;h2&gt;ಹುದ್ದೆಗಳ ಮೀಸಲು&amp;nbsp;&lt;/h2&gt;&lt;p&gt;ಒಟ್ಟು ಹುದ್ದೆಗಳಲ್ಲಿನ 79 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿದ್ದು, ಉಳಿದವು ಪುರುಷ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಜೊತೆಗೆ, 20 ಹುದ್ದೆಗಳು ಪಯೋನಿಯರ್ ವಿಭಾಗದಡಿ ಕಾಯ್ದಿರಿಸಲಾಗಿದೆ.&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ ವಿವರ&lt;/h2&gt;&lt;p&gt;ಅಭ್ಯರ್ಥಿಗಳ ಆಯ್ಕೆ ಬಹು ಹಂತಗಳಲ್ಲಿ ನಡೆಯಲಿದೆ:&lt;/p&gt;&lt;p&gt;ದೈಹಿಕ ದಕ್ಷತೆ ಪರೀಕ್ಷೆ (PET)&lt;/p&gt;&lt;p&gt;ದೈಹಿಕ ಮಾನದಂಡ ಪರೀಕ್ಷೆ (PST)&lt;/p&gt;&lt;p&gt;ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)&lt;/p&gt;&lt;p&gt;ವ್ಯಾಪಾರ/ಕೌಶಲ್ಯ ಪರೀಕ್ಷೆ&lt;/p&gt;&lt;p&gt;ದಾಖಲೆ ಪರಿಶೀಲನೆ&lt;/p&gt;&lt;p&gt;ವೈದ್ಯಕೀಯ ಪರೀಕ್ಷೆ&lt;/p&gt;&lt;p&gt;ಇವುಗಳಲ್ಲಿ PET ಮತ್ತು PST ಸೇರಿ ಇತರೆ ಹಂತಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಅಂತಿಮವಾಗಿ CBT ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಆಯ್ಕೆಯಾಗುತ್ತಾರೆ.&lt;/p&gt;&lt;h2&gt;ಲಭ್ಯವಿರುವ ಟ್ರೇಡ್&zwnj;ಗಳು&lt;/h2&gt;&lt;p&gt;ಈ ನೇಮಕಾತಿಯಡಿ ವಿವಿಧ ವೃತ್ತಿಪರ ಹುದ್ದೆಗಳು ಲಭ್ಯವಿದ್ದು, ಅವುಗಳಲ್ಲಿ ಪ್ರಮುಖವಾದವು:&lt;/p&gt;&lt;ul&gt; &lt;li&gt;ಅಡುಗೆಯವರು&lt;/li&gt; &lt;li&gt;ಚಾಲಕ&lt;/li&gt; &lt;li&gt;ಬಡಗಿ&lt;/li&gt; &lt;li&gt;ದರ್ಜಿ&lt;/li&gt; &lt;li&gt;ಕ್ಷೌರಿಕ&lt;/li&gt; &lt;li&gt;ಇತರ ತಾಂತ್ರಿಕ ಮತ್ತು ಟ್ರೇಡ್ಸ್&zwnj;ಮನ್ ಹುದ್ದೆಗಳು&lt;/li&gt;&lt;/ul&gt;&lt;p&gt;ಅರ್ಜಿಯನ್ನು ಹೇಗೆ ಸಲ್ಲಿಸಬೇಕು?&lt;/p&gt;&lt;p&gt;ಅಭ್ಯರ್ಥಿಗಳು ಕೆಳಗಿನ ಕ್ರಮಗಳನ್ನು ಅನುಸರಿಸಿ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:&lt;/p&gt;&lt;p&gt;ಅಧಿಕೃತ CRPF ವೆಬ್&zwnj;ಸೈಟ್ (crpf.gov.in)ಗೆ ಭೇಟಿ ನೀಡಿ&lt;/p&gt;&lt;p&gt;ಮುಖಪುಟದಲ್ಲಿರುವ &ldquo;ಕಾನ್ಸ್&zwnj;ಟೇಬಲ್ ನೇಮಕಾತಿ 2026&rdquo; ಲಿಂಕ್ ಆಯ್ಕೆಮಾಡಿ&lt;/p&gt;&lt;p&gt;ಮೊದಲು ನೋಂದಾಯಿಸಿ, ನಂತರ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ&lt;/p&gt;&lt;p&gt;ಅಗತ್ಯ ದಾಖಲೆಗಳನ್ನು ಅಪ್&zwnj;ಲೋಡ್ ಮಾಡಿ&lt;/p&gt;&lt;p&gt;ಅರ್ಜಿ ಶುಲ್ಕ ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ&lt;/p&gt;&lt;h2&gt;ಅರ್ಜಿ ಶುಲ್ಕ ವಿವರ&lt;/h2&gt;&lt;p&gt;ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಪುರುಷ ಅಭ್ಯರ್ಥಿಗಳಿಗೆ ಪ್ರತಿ ಹುದ್ದೆಗೆ ರೂ. 100 ಅರ್ಜಿ ಶುಲ್ಕ ವಿಧಿಸಲಾಗಿದೆ. ಇತರ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಿನಾಯಿತಿಗಳು ಅನ್ವಯಿಸುತ್ತವೆ.&lt;/p&gt;&lt;p&gt;ಮುಖ್ಯ ದಿನಾಂಕಗಳು&lt;/p&gt;&lt;p&gt;ಅರ್ಜಿ ಪ್ರಾರಂಭ: ಏಪ್ರಿಲ್ 20, 2026&lt;/p&gt;&lt;p&gt;ಅರ್ಜಿ ಕೊನೆಯ ದಿನಾಂಕ: ಮೇ 19, 2026&lt;/p&gt;&lt;p&gt;ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಈ ಕೇಂದ್ರ ಸರ್ಕಾರದ ಉದ್ಯೋಗಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/crpf-constable-recruitment-2026-apply-online-for-9195-posts-from-april-20-eligibility-salary-and-details-gdp/articleshow-dphelrr"/>
        </item>
        <item>
            <title><![CDATA[ಮಾರಾಟಕ್ಕಿದೆ ಈ ಪರೀಕ್ಷಾ ಕೇಂದ್ರ!  300 ರೂ. ಕೊಟ್ರೆ ಸಾಕು, ಓದದೇ IAS, IPS, IFS ಅಧಿಕಾರಿಯಾಗಲು ದಾರಿ]]></title>
            <link>https://kannada.asianetnews.com/education/exam-hall-for-sale-civil-services-aspirants-allowed-to-cheat-for-rs-300-in-maharashtra-suc/articleshow-eyk2hi2</link>
            <guid isPermaLink="true">https://kannada.asianetnews.com/education/exam-hall-for-sale-civil-services-aspirants-allowed-to-cheat-for-rs-300-in-maharashtra-suc/articleshow-eyk2hi2</guid>
            <pubDate>Fri, 24 Apr 2026 19:35:44 +0530</pubDate>
            <description><![CDATA[&lt;p&gt;&amp;nbsp;ಬಿ.ಎ. ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಮೇಲ್ವಿಚಾರಕರಿಗೆ 300 ರೂಪಾಯಿ ಲಂಚ ನೀಡಿ, ಮೊಬೈಲ್ ಫೋನ್ ಬಳಸಿ ನಕಲು ಮಾಡಿದ್ದಾರೆ. ಲಂಚ ನೀಡಲು ನಿರಾಕರಿಸಿದ ಕೆಲವು ವಿದ್ಯಾರ್ಥಿಗಳು ತಮಗೂ ಉಚಿತವಾಗಿ ನಕಲು ಮಾಡಲು ಅವಕಾಶ ನೀಡಬೇಕೆಂದು ಪ್ರತಿಭಟಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpzwr1g9je3rjff5azv7jqr0,imgname-bribe-ai-generated-photo-1777039312393.jpg" type="image/jpeg" height="390" width="690"/>
            <content:encoded><![CDATA[&lt;p&gt;ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ಮಾಡುವುದು ಮಾಮೂಲು. ಕಾಪಿ ಮಾಡುವುದಕ್ಕಾಗಿ ವಿದ್ಯಾರ್ಥಿಗಳು ವಿವಿಧ ರೀತಿಯ ಟ್ಯಾಲೆಂಟ್​ ಉಪಯೋಗಿಸುವುದು ಇದ್ದೇ ಇದೆ. ಆದರೆ ಇಲ್ಲೊಂದು ಆಘಾತಕಾರಿ ಘಟನೆಯಲ್ಲಿ ಸಿವಿಲ್​ ಸರ್ವಿಸ್​ ಅಭ್ಯರ್ಥಿಗಳು ಲಂಚ ಕೊಟ್ಟು ಮೊಬೈಲ್​ ನೋಡಿ ಪರೀಕ್ಷೆ ಬರೆದಿದ್ದಾರೆ! ಭಾವಿ ಐಎಎಸ್​​, ಐಪಿಎಸ್​ ಸೇರಿದಂತೆ ವಿವಿಧ ಉನ್ನತ ಅಧಿಕಾರಿಗಳಾಗುವ ಈ ಅಭ್ಯರ್ಥಿಗಳು 300 ರೂಪಾಯಿ ಕೊಟ್ಟು ಮೊಬೈಲ್​ ನೋಡಿ ಬಿಎ ಸಿವಿಲ್​ ಸರ್ವಿಸ್​ ಪರೀಕ್ಷೆ ಬರೆದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಬಿ.ಎ. ಸಿವಿಲ್ ಸರ್ವೀಸಸ್ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಒಳಗೆ ಅನ್ಯಾಯದ ಅಭ್ಯಾಸಗಳಲ್ಲಿ ತೊಡಗಿರುವುದು ಕಂಡುಬಂದಿದೆ.&lt;/p&gt;&lt;h2&gt;&lt;strong&gt;ಮೊಬೈಲ್​ ಫೋನ್​ ಬಳಕೆ- ಏನಿದು ಬಿಎ ಸಿವಿಲ್​ ಸರ್ವಿಸ್​ ಎಕ್ಸಾಂ?&lt;/strong&gt;&lt;/h2&gt;&lt;p&gt;ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಅವರು ತಮ್ಮ ಮೊಬೈಲ್ ಫೋನ್&zwnj;ಗಳನ್ನು ಬಳಸುವ ಮೂಲಕ ಇವರು ವಂಚನೆ ಮಾಡಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಿದವರು ಅಲ್ಲಿಯ ಮೇಲ್ವಿಚಾರಕರು. ಪ್ರತಿಯೊಬ್ಬರಿಂದ 300 ರೂಪಾಯಿ ಪಡೆದು ಮೊಬೈಲ್​ ನೋಡಲು ಅವಕಾಶ ಕಲ್ಪಿಸಲಾಗಿದೆ. ಕೇಳಿದ ಪ್ರಶ್ನೆಗಳಿಗೆ ಗೂಗಲ್​ ಸರ್ಚ್​ ಮಾಡಿ ಉತ್ತರ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇದು ಎಷ್ಟು ವರ್ಷಗಳಿಂದ, ಇನ್ನು ಎಲ್ಲೆಲ್ಲಿ ನಡೆಯುತ್ತಿವೆಯೋ ಆ ದೇವರಿಗೇ ಗೊತ್ತು. ಇಂಥ ಮಾರಾಟಕ್ಕಿರುವ ಪರೀಕ್ಷಾ ಕೇಂದ್ರಗಳು ಇನ್ನೆಲ್ಲೆಲ್ಲಿ ನಿರಾತಂಕವಾಗಿ ನಡೆಯುತ್ತಿದೆ ಎನ್ನುವುದು ಸೂಕ್ತ ತನಿಖೆ ಮಾಡಿದರಷ್ಟೇ ತಿಳಿಯಲಿದೆ. ಆದರೆ, ಇಲ್ಲಿ ಆದ ಒಂದು ಚಿಕ್ಕ ಎಡವಟ್ಟಿನಿಂದಾಗಿ ಮೋಸದ ಜಾಲ ಬೆಳಕಿಗೆ ಬಂದಿದೆ.&lt;/p&gt;&lt;p&gt;ನಾಗರಿಕ ಸೇವೆಗಳಲ್ಲಿ ಬಿಎ (ಬ್ಯಾಚುಲರ್ ಆಫ್ ಆರ್ಟ್ಸ್) ಎಂಬುದು 3 ವರ್ಷಗಳ ಪದವಿಪೂರ್ವ ಪದವಿಯಾಗಿದ್ದು, ಸಾಂಪ್ರದಾಯಿಕ ಶೈಕ್ಷಣಿಕ ಅಧ್ಯಯನಗಳನ್ನು ಯುಪಿಎಸ್&zwnj;ಸಿ ನಾಗರಿಕ ಸೇವೆಗಳ ಪರೀಕ್ಷೆಯಂತಹ ಸ್ಪರ್ಧಾತ್ಮಕ ಸರ್ಕಾರಿ ಪರೀಕ್ಷೆಗಳಿಗೆ ಕೇಂದ್ರೀಕೃತ ತಯಾರಿಯೊಂದಿಗೆ ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸಾಮಾಜಿಕ ವಿಜ್ಞಾನ, ಇತಿಹಾಸ ಮತ್ತು ಸಾರ್ವಜನಿಕ ನೀತಿಯ ಮೂಲಭೂತ ತಿಳಿವಳಿಕೆಯನ್ನು ಒದಗಿಸುತ್ತದೆ, ಇದು ಸಾರ್ವಜನಿಕ ಆಡಳಿತದಲ್ಲಿ ವೃತ್ತಿಜೀವನಕ್ಕೆ ನೇರ ಪೂರ್ವಸಿದ್ಧತಾ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಇವರಿಗೆ ಭವಿಷ್ಯದಲ್ಲಿ ಸಿವಿಲ್​ ಸರ್ವಿಸ್​ ಅಧಿಕಾರಿಗಳಾಗಲು ದಾರಿ ಸುಗಮವಾಗುತ್ತದೆ!&lt;/p&gt;&lt;h3&gt;&lt;strong&gt;ಬೆಳಕಿಗೆ ಬಂದದ್ದು ಹೇಗೆ?&lt;/strong&gt;&lt;/h3&gt;&lt;p&gt;ಈ ಘಟನೆ ಏಪ್ರಿಲ್ 22 ರಂದು ಮುಲ್&zwnj;ನಲ್ಲಿರುವ ಮತ್ತು ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಸರ್ವೋದಯ ಕಾಲೇಜಿನಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿದ್ಯಾರ್ಥಿಗಳು ಗೂಗಲ್ ಮತ್ತು ಎಐ ಪರಿಕರಗಳಲ್ಲಿ ಉತ್ತರಗಳನ್ನು ಹುಡುಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ. ಅಷ್ಟಕ್ಕೂ ಕೆಲವು ಅಭ್ಯರ್ಥಿಗಳು 300 ರೂಪಾಯಿ ನೀಡಲು ನಿರಾಕರಿಸಿದ್ದರು. ಹಾಗೆಂದು ಅವರು ಮೊಬೈಲ್​ ನೋಡದೇ ಇದರ ವಿರುದ್ಧ ಪ್ರತಿಭಟಿಸಿದ್ದು ಅಂತಲ್ಲ. ತಮಗೆ ಲಂಚ ನೀಡಲು ಆಗುವುದಿಲ್ಲ. ಹಾಗೆಯೇ ಮೊಬೈಲ್​ ನೋಡಲು ಅವಕಾಶ ಕಲ್ಪಿಸಬೇಕು ಎನ್ನುವುದು ಇವರ ಹಟವಾಗಿತ್ತು. ಆದರೆ, ಅದನ್ನು ನಿರಾಕರಿಸಿದಾಗ, ಆ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ಮಾಡಿದರು. ಇದು ದೊಡ್ಡದಾದಾಗ, ಪೊಲೀಸರ ಪ್ರವೇಶವಾಗಿದೆ. ಆಗ ಅಸಲಿಯತ್ತು ಬೆಳಕಿಗೆ ಬಂದಿದೆ.&lt;/p&gt;&lt;h3&gt;&lt;strong&gt;ನೀತಿ ಸಂಹಿತೆ ಉಲ್ಲಂಘನೆ&lt;/strong&gt;&lt;/h3&gt;&lt;p&gt;ನಾಗರಿಕ ಸೇವಕರಾಗಲು ಬಯಸುವ ವಿದ್ಯಾರ್ಥಿಗಳು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬುದು ಕಳವಳಕಾರಿ. ಭಾರತದಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ವಂಚನೆ ಮತ್ತು ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಸರಿಯಾದ ಆಸನ ವ್ಯವಸ್ಥೆ ಕೂಡ ಇರಲಿಲ್ಲ. ಈ ಕೇಂದ್ರದಲ್ಲಿ ಸುಮಾರು 400 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ, ಒಂದು ಸೀಟಿನಲ್ಲಿ ಮೂವರು ವಿದ್ಯಾರ್ಥಿಗಳು ತುಂಬಿರುತ್ತಾರೆ. ಸ್ಥಳಾವಕಾಶದ ಕೊರತೆಯಿಂದಾಗಿ, ಕೆಲವರು ಪರೀಕ್ಷೆ ಬರೆಯಲು ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು. ಇದಲ್ಲದೆ, ಪರೀಕ್ಷಾರ್ಥಿಗಳಿಗೆ ಕೇಂದ್ರದಲ್ಲಿ ಶೌಚಾಲಯ ಸೌಲಭ್ಯವಿಲ್ಲ.&lt;/p&gt;&lt;h3&gt;&lt;strong&gt;ಹೀಗಿದೆ ವ್ಯವಸ್ಥೆ&lt;/strong&gt;&lt;/h3&gt;&lt;p&gt;ವಿಷಾದಕರವೆಂದರೆ, ಕಳೆದ ಕೆಲವು ವರ್ಷಗಳಿಂದ, ವಿದ್ಯಾರ್ಥಿಗಳು ಸಭಾಂಗಣಗಳ ಒಳಗೆ ಬಹಿರಂಗವಾಗಿ ನಕಲು ಮಾಡುವುದು ಮತ್ತು ಒಳಗಿನವರು ದೊಡ್ಡ ಹಗರಣಗಳಲ್ಲಿ ಭಾಗಿಯಾಗಿರುವ ವ್ಯವಸ್ಥಿತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಪಟ್ಟಣದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಕೆಲವು ಸಂಘಟನಾ ಅಧಿಕಾರಿಗಳು ಇಂತಹ ಘಟನೆಗಳು ನಡೆಯಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರೂ, ಇತರರು ಇನ್ನೂ ಈ ವಿಷಯದ ಬಗ್ಗೆ ಪೂರ್ವಭಾವಿ ನಿರ್ಧಾರ ತೆಗೆದುಕೊಂಡಿಲ್ಲ! ಹೀಗಿದೆ ನಮ್ಮ ವ್ಯವಸ್ಥೆ!&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/education/exam-hall-for-sale-civil-services-aspirants-allowed-to-cheat-for-rs-300-in-maharashtra-suc/articleshow-eyk2hi2"/>
        </item>
        <item>
            <title><![CDATA[TCS ಎಚ್‌ಆರ್ ನಿಧಾ ಖಾನ್ ಸಂಬಳ, ಶಿಕ್ಷಣದ ಸೀಕ್ರೆಟ್ಸ್! ಕೇಳಿದ್ರೆ ಶಾಕ್ ಆಗ್ತೀರಾ]]></title>
            <link>https://kannada.asianetnews.com/webstories/news/tcs-hr-nida-khan-salary-education-and-controversy-details-kvn-gn14hfu</link>
            <guid isPermaLink="true">https://kannada.asianetnews.com/webstories/news/tcs-hr-nida-khan-salary-education-and-controversy-details-kvn-gn14hfu</guid>
            <pubDate>Thu, 16 Apr 2026 15:06:11 +0530</pubDate>
            <description><![CDATA[&lt;p&gt;ನಾಸಿಕ್&zwnj;ನ TCS ಬಿಪಿಒ ಎಚ್&zwnj;ಆರ್ ಹೆಡ್ ನಿಧಾ ಖಾನ್ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ. ಸಹೋದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಒತ್ತಡ ಮತ್ತು ಧಾರ್ಮಿಕ ಆಚರಣೆಗಳಿಗೆ ಬಲವಂತಪಡಿಸಿದ ಆರೋಪಗಳಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpaqgwed1jey6sphb5aefg7f,imgname-untitled-design---2026-04-16t135955.378-1776329191885.jpg" type="image/jpeg" height="390" width="690"/>
            <category>jobs</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/news/tcs-hr-nida-khan-salary-education-and-controversy-details-kvn-gn14hfu"/>
        </item>
        <item>
            <title><![CDATA[ಸಾಫ್ಟ್‌ವೇರ್ ವಿನ್ಯಾಸ, ಅಭಿವೃದ್ಧಿ ಕಾರ್ಯ ಓಪನ್ಎಐ ಜೊತೆ ಕೈ ಜೋಡಿಸಿದ ಕಾಗ್ನಿಜೆಂಟ್, ಎಐ ಜಗತ್ತಿನ ಹೊಸ ಅಧ್ಯಾಯ ಆರಂಭ]]></title>
            <link>https://kannada.asianetnews.com/business/cognizant-partners-with-openai-to-deploy-codex-for-enterprise-ai-and-software-engineering/articleshow-i3o7m6a</link>
            <guid isPermaLink="true">https://kannada.asianetnews.com/business/cognizant-partners-with-openai-to-deploy-codex-for-enterprise-ai-and-software-engineering/articleshow-i3o7m6a</guid>
            <pubDate>Wed, 22 Apr 2026 11:53:55 +0530</pubDate>
            <description><![CDATA[ಪ್ರಖ್ಯಾತ ಐಟಿ ಸಂಸ್ಥೆ ಕಾಗ್ನಿಜೆಂಟ್, ಎಂಟರ್&zwnj;ಪ್ರೈಸ್ ಗ್ರಾಹಕರಿಗೆ ಎಐ ಲಾಭ ಒದಗಿಸಲು ಓಪನ್ಎಐ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ಓಪನ್ಎಐನ 'ಕೋಡೆಕ್ಸ್' ತಂತ್ರಜ್ಞಾನವನ್ನು ತನ್ನ ಸಾಫ್ಟ್&zwnj;ವೇರ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಳವಡಿಸಿಕೊಳ್ಳಲಿದೆ. ಇದು ಮಾನವ ಮತ್ತು ಎಐ ಸಾಮರ್ಥ್ಯಗಳನ್ನು ಒಗ್ಗೂಡಿಸಿ, ಸಾಫ್ಟ್&zwnj;ವೇರ್ ವಿತರಣೆಯನ್ನು ವೇಗಗೊಳಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kabb5d09prsq0q91tg21r8bw,imgname-cognizant-prohance-1763464885255.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪ್ರಖ್ಯಾತ ಐಟಿ ಸೇವಾ ಸಂಸ್ಥೆ ಕಾಗ್ನಿಜೆಂಟ್ ಜಾಗತಿಕ ಮಟ್ಟದಲ್ಲಿ ಎಂಟರ್&zwnj;ಪ್ರೈಸ್ ಗ್ರಾಹಕರಿಗೆ ಎಐ ತಂತ್ರಜ್ಞಾನದ ಗರಿಷ್ಠ ಲಾಭವನ್ನು ಒದಗಿಸುವ ಉದ್ದೇಶದಿಂದ ಓಪನ್ಎಐ ಜೊತೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ ಓಪನ್ಎಐನ 'ಕೋಡೆಕ್ಸ್' ತಂತ್ರಜ್ಞಾನವನ್ನು ಕಾಗ್ನಿಜೆಂಟ್ ತನ್ನ ಸಾಫ್ಟ್&zwnj;ವೇರ್ ಇಂಜಿನಿಯರಿಂಗ್ ವಿಭಾಗದಾದ್ಯಂತ ಅಳವಡಿಸಿಕೊಳ್ಳಲಿದೆ.&lt;/p&gt;&lt;p&gt;ಸಂಕೀರ್ಣವಾದ ಎಂಟರ್&zwnj;ಪ್ರೈಸ್ ಪರಿಸರದಲ್ಲಿ ಕೋಡೆಕ್ಸ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ನಿಯೋಜಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಗುರುತಿಸಿ ಓಪನ್ಎಐ ಸಂಸ್ಥೆಯು ಕಾಗ್ನಿಜೆಂಟ್ ಅನ್ನು ತನ್ನ 'ಆಯ್ದ ಪಾಲುದಾರರ' ಪಟ್ಟಿಗೆ ಸೇರಿಸಿದೆ. ಎಐ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಕಾಗ್ನಿಜೆಂಟ್ ಹೊಂದಿರುವ ಸುದೀರ್ಘ ಅನುಭವವೇ ಈ ಆಯ್ಕೆಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;ʼಇದು ಮಾನವ ಮತ್ತು ಎಐ ಒಟ್ಟಾಗಿ ಕಾರ್ಯನಿರ್ವಹಿಸುವ ಕಾಲʼ&lt;/h2&gt;&lt;p&gt;ಪಾಲುದಾರಿಕೆ ಕುರಿತು ಮಾತನಾಡಿದ ಕಾಗ್ನಿಜೆಂಟ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ರಾಜೇಶ್ ವಾರಿಯರ್, &quot;ಮುಂದಿನ ದಶಕದ ಅತ್ಯುತ್ತಮ ಇಂಜಿನಿಯರಿಂಗ್ ಸಂಸ್ಥೆಗಳು, ಎಷ್ಟು ಜನ ಇಂಜಿನಿಯರ್&zwnj;ಗಳನ್ನು ಹೊಂದಿವೆ ಎಂಬುದರ ಮೇಲೆ ನಿರ್ಧಾರವಾಗುವುದಿಲ್ಲ. ಬದಲಾಗಿ, ಮಾನವನ ಆಲೋಚನಾ ಶಕ್ತಿ ಮತ್ತು ಎಐ ಸಾಮರ್ಥ್ಯಗಳು ಎಷ್ಟು ಪರಿಣಾಮಕಾರಿಯಾಗಿ ಒಟ್ಟಾಗಿ ಕೆಲಸ ಮಾಡುತ್ತವೆ ಎಂಬುದರ ಮೇಲೆ ನಿರ್ಧಾರವಾಗುತ್ತವೆ. ನಾವು ಕೋಡೆಕ್ಸ್ ಅನ್ನು ನಮ್ಮ ಇಂಜಿನಿಯರ್&zwnj;ಗಳ ದೈನಂದಿನ ಕಾರ್ಯಗಳಲ್ಲಿ ಪಾಲುದಾರನನ್ನಾಗಿ ಮಾಡುತ್ತಿದ್ದೇವೆ. ಇದು ಕೋಡ್ ರಚನೆ, ಟೆಸ್ಟಿಂಗ್, ರಿಫ್ಯಾಕ್ಟರಿಂಗ್ ಮತ್ತು ಡಾಕ್ಯುಮೆಂಟೇಶನ್&zwnj;ನಂತಹ ಕೆಲಸಗಳನ್ನು ನಿಭಾಯಿಸಲಿದೆ. ಓಪನ್ಎಐ ಅತ್ಯಾಧುನಿಕ ಬುದ್ಧಿಮತ್ತೆಯನ್ನು ತಂದರೆ, ಕಾಗ್ನಿಜೆಂಟ್ ಉದ್ಯಮದ ಅನುಭವ ಹಾಗೂ ಸುರಕ್ಷತಾ ಕ್ರಮಗಳನ್ನು ಒದಗಿಸುತ್ತದೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಸಕ್ರಿಯ ಬಳಕೆ&lt;/h2&gt;&lt;p&gt;ಕಾಗ್ನಿಜೆಂಟ್ ಇಂಜಿನಿಯರ್&zwnj;ಗಳು ಈಗಾಗಲೇ ಗ್ರಾಹಕರ ಯೋಜನೆಗಳಲ್ಲಿ ಕೋಡೆಕ್ಸ್ ಅನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಎಐ ಮತ್ತು ಮಷಿನ್ ಲರ್ನಿಂಗ್ ಮಾಡೆಲ್ ಅಭಿವೃದ್ಧಿ, ಕೋಡ್ ರಿಫ್ಯಾಕ್ಟರಿಂಗ್ ಮತ್ತು ದಶಕಗಳಷ್ಟು ಹಳೆಯದಾದ ಸಿಸ್ಟಮ್&zwnj;ಗಳ ನವೀಕರಣ ಕಾರ್ಯಗಳಲ್ಲಿ ಇದನ್ನು ಬಳಸಲಾಗುತ್ತಿದೆ.&lt;/p&gt;&lt;p&gt;ಇದರಿಂದ ಸಾಫ್ಟ್&zwnj;ವೇರ್ ವಿತರಣೆಯ ಸಮಯ ಗಣನೀಯವಾಗಿ ಕಡಿಮೆಯಾಗುತ್ತಿದೆ, ಕೋಡ್&zwnj;ನ ಗುಣಮಟ್ಟ ಹೆಚ್ಚಾಗುತ್ತಿದೆ ಹಾಗೂ ದೊಡ್ಡ ಮಟ್ಟದ ಯೋಜನೆಗಳ ವೆಚ್ಚ ಮತ್ತು ಅಪಾಯಗಳು ತಗ್ಗುತ್ತಿವೆ ಎಂದು ಸಂಸ್ಥೆ ತಿಳಿಸಿದೆ.&lt;/p&gt;&lt;p&gt;ಓಪನ್ಎಐನ ಮುಖ್ಯ ಆದಾಯ ಅಧಿಕಾರಿ (ಸಿಆರ್&zwnj;ಒ) ಡೆನಿಸ್ ಡ್ರೆಸ್ಸರ್ ಈ ಬಗ್ಗೆ ಪ್ರತಿಕ್ರಿಯಿಸಿ, &quot;ಕೋಡೆಕ್ಸ್ ತಂತ್ರಜ್ಞಾನವು ಸಾಫ್ಟ್&zwnj;ವೇರ್ ಅಭಿವೃದ್ಧಿ ಮತ್ತು ವ್ಯವಹಾರ ಪ್ರಕ್ರಿಯೆಗಳನ್ನು ನಿರ್ವಹಿಸಲು ಪ್ರಬಲ ಸಾಧನವಾಗಿ ಹೊರಹೊಮ್ಮುತ್ತಿದೆ. ಕಾಗ್ನಿಜೆಂಟ್&zwnj;ನಂತಹ ಪ್ರಮುಖ ಪಾಲುದಾರರೊಂದಿಗೆ ಸೇರಿ, ಸಂಸ್ಥೆಗಳಿಗೆ ಹಳೆಯ ಕೋಡ್&zwnj;ಗಳ ನವೀಕರಣ, ದೋಷ ಪತ್ತೆ, ಅಪ್ಲಿಕೇಶನ್ ಅಭಿವೃದ್ಧಿ ಮತ್ತು ಕೋಡ್ ವಿಮರ್ಶೆ ಪ್ರಕ್ರಿಯೆಗಳಲ್ಲಿ ಕೋಡೆಕ್ಸ್ ನಿಯೋಜಿಸಲು ನಾವು ನೆರವಾಗಲಿದ್ದೇವೆ,&quot; ಎಂದರು.&lt;/p&gt;&lt;p&gt;ಈ ಪಾಲುದಾರಿಕೆಯು ಕಾಗ್ನಿಜೆಂಟ್&zwnj;ನ 'ಎಐ ಬಿಲ್ಡರ್' ಕಾರ್ಯತಂತ್ರಕ್ಕೆ ಮತ್ತಷ್ಟು ಬಲ ತುಂಬಲಿದೆ. ಕೇವಲ ಎಐ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದಷ್ಟೇ ಅಲ್ಲದೆ, ಅದನ್ನು ವಾಸ್ತವಿಕ ವ್ಯವಹಾರಗಳಿಗೆ ಅನ್ವಯಿಸಿ ಉತ್ತಮ ಫಲಿತಾಂಶ ತರುವುದು ಕಾಗ್ನಿಜೆಂಟ್&zwnj;ನ ಉದ್ದೇಶವಾಗಿದೆ. ಒಟ್ಟಾರೆಯಾಗಿ, ಈ ಎರಡು ದೈತ್ಯ ಸಂಸ್ಥೆಗಳು ಮುಂದಿನ ದಿನಗಳಲ್ಲಿ ವಿವಿಧ ವಲಯದ ಕೈಗಾರಿಕೆಗಳಿಗೆ ಅತ್ಯಾಧುನಿಕ, ಸುರಕ್ಷಿತ ಹಾಗೂ ವೇಗದ ಸಾಫ್ಟ್&zwnj;ವೇರ್ ಸೇವೆಗಳನ್ನು ನೀಡಲು ಮುನ್ನುಡಿ ಬರೆದಿವೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/business/cognizant-partners-with-openai-to-deploy-codex-for-enterprise-ai-and-software-engineering/articleshow-i3o7m6a"/>
        </item>
        <item>
            <title><![CDATA[ಬ್ಯಾಂಕ್ ಆಫ್ ಬರೋಡಾ ಅಧಿಕಾರಿಯ ಮೊದಲ ಪೇ ಸ್ಲಿಪ್‌ ವೈರಲ್: ಕೈಗೆ ಬರುವ ಹಣ ಎಷ್ಟು? ಸೌಲಭ್ಯಗಳ ಪಟ್ಟಿ ಕೇಳಿದ್ರೆ ಬೆರಗಾಗ್ತೀರಿ!]]></title>
            <link>https://kannada.asianetnews.com/central-government-jobs/bank-of-baroda-po-salary-slip-viral-perks-benefits-pankaj-kumar-das-san/articleshow-icgyvqf</link>
            <guid isPermaLink="true">https://kannada.asianetnews.com/central-government-jobs/bank-of-baroda-po-salary-slip-viral-perks-benefits-pankaj-kumar-das-san/articleshow-icgyvqf</guid>
            <pubDate>Tue, 28 Apr 2026 22:12:10 +0530</pubDate>
            <description><![CDATA[&lt;p&gt;ಬ್ಯಾಂಕ್ ಆಫ್ ಬರೋಡಾದ ಪ್ರೊಬೇಷನರಿ ಅಧಿಕಾರಿಯೊಬ್ಬರು ತಮ್ಮ 40 ದಿನಗಳ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದು, ಅದು ಇಂಟರ್ನೆಟ್&zwnj;ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಮ್ಮ 98,745 ರೂ. ಸಂಬಳ ಮತ್ತು ಪೆಟ್ರೋಲ್ ಭತ್ಯೆ, ವಸತಿ ಸೌಲಭ್ಯದಂತಹ ಅನೇಕ ಸೌಲಭ್ಯಗಳ ವಿವರಗಳನ್ನು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqafamjd4gw3q8b39cvbfgfa,imgname-pankaj-kumar-das-1777394340429.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.28): &lt;/strong&gt;ಸಾರ್ವಜನಿಕ ವಲಯದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಇಂದಿಗೂ ಅನೇಕರ ಕನಸು. ಇದಕ್ಕೆ ಸಾಕ್ಷಿ ಎಂಬಂತೆ, ಬ್ಯಾಂಕ್ ಆಫ್ ಬರೋಡಾದ (BoB) ಪ್ರೊಬೇಷನರಿ ಆಫೀಸರ್ (PO) ಒಬ್ಬರು ತಮ್ಮ ಮೊದಲ ತಿಂಗಳ ವೇತನ ಮತ್ತು ಸಿಗುವ ಸೌಲಭ್ಯಗಳ ವಿವರವನ್ನು ಹಂಚಿಕೊಂಡಿದ್ದು, ಇದು ಇಂಟರ್ನೆಟ್&zwnj;ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಪಂಕಜ್ ಕುಮಾರ್ ದಾಸ್ ಎಂಬುವವರು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಬ್ಯಾಂಕ್ ಉದ್ಯೋಗದ ಆರ್ಥಿಕ ಭದ್ರತೆ ಮತ್ತು ವೈಭೋಗದ ಜೀವನಶೈಲಿಯನ್ನು ತೆರೆದಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ವೇತನದ ವಿವರ ಹೀಗಿದೆ&lt;/strong&gt;&lt;/h2&gt;&lt;p&gt;ಪಂಕಜ್ ದಾಸ್ ತಮ್ಮ 2025ರ ಮೇ ತಿಂಗಳ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಕೈಗೆ ಬಂದ ಒಟ್ಟು ಮೊತ್ತ (In-hand salary) 98,745 ರೂಪಾಯಿ. ಆದರೆ, ಈ ಮೊತ್ತವು ಕೇವಲ ಒಂದು ತಿಂಗಳದ್ದಲ್ಲ, ಬದಲಾಗಿ 40 ದಿನಗಳ ಕೆಲಸದ ಸಂಬಳ ಎಂದು ಅವರು ನಂತರ ಸ್ಪಷ್ಟಪಡಿಸಿದ್ದಾರೆ. ಸಂಬಳದ ಸ್ಲಿಪ್&zwnj;ನಲ್ಲಿ ಮೂಲ ವೇತನ (Basic Pay), ಮನೆ ಬಾಡಿಗೆ ಭತ್ಯೆ (HRA), ತುಟ್ಟಿಭತ್ಯೆ (DA) ಸೇರಿದಂತೆ ವಿವಿಧ ಕಡಿತಗಳ ನಂತರದ ವಿವರವಾದ ಅಂಕಿಅಂಶಗಳನ್ನು ನೀಡಲಾಗಿದೆ.&lt;/p&gt;&lt;h2&gt;&lt;strong&gt;ಸೌಲಭ್ಯಗಳ ಸುರಿಮಳೆ&lt;/strong&gt;&lt;/h2&gt;&lt;p&gt;ಕೇವಲ ಸಂಬಳ ಮಾತ್ರವಲ್ಲದೆ, ಬ್ಯಾಂಕ್ ಅಧಿಕಾರಿಯಾಗಿ ತಮಗೆ ಸಿಗುವ ದೀರ್ಘಕಾಲದ ಸೌಲಭ್ಯಗಳ ಪಟ್ಟಿಯನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಪೆಟ್ರೋಲ್ ಭತ್ಯೆ, ದಿನಪತ್ರಿಕೆ ಭತ್ಯೆ, ಮನರಂಜನಾ ಭತ್ಯೆ (Entertainment allowance), ಉಪಾಹಾರ ಭತ್ಯೆ (Refreshment allowance) ಜೊತೆಯಲ್ಲಿ, ಮನೆ ನಿರ್ವಹಣೆ ವೆಚ್ಚ, ಮೊಬೈಲ್ ಮತ್ತು ರೀಚಾರ್ಜ್ ವೆಚ್ಚಗಳು, ವೈದ್ಯಕೀಯ ನೆರವು ಮತ್ತು ಕಣ್ಣಿನ ತಪಾಸಣೆಯ (Eye check-up) ಕವರೇಜ್ ಕೂಡ ಲಭ್ಯವಿದೆ.ಅದರೊಂದಿಗೆ ಲೀಸ್ ಆಧಾರಿತ ವಸತಿ ಸೌಲಭ್ಯ (Leased Accommodation), ಬಳಕೆಯಾಗದ ರಜೆಗಳ ನಗದೀಕರಣ (Leave Encashment) ಮತ್ತು ರಜಾದಿನಗಳಲ್ಲಿ ಬ್ಯಾಂಕ್&zwnj;ನ ಅತಿಥಿ ಗೃಹಗಳು ಹಾಗೂ ಹಾಲಿಡೇ ಹೋಮ್&zwnj;ಗಳನ್ನು ಬಳಸಿಕೊಳ್ಳುವ ಅವಕಾಶ ಕೂಡ ಇದರಲ್ಲಿದೆ.&lt;/p&gt;&lt;p&gt;ಇನ್&zwnj;ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಡೆಸುವ ಪಿಒ (PO) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ದಾಸ್, ತಮ್ಮ ಬಯೋದಲ್ಲಿ ಆರ್&zwnj;ಆರ್&zwnj;ಬಿ ಸಿಎಸ್&zwnj;ಎ (RRB CSA) ಪರೀಕ್ಷೆಯನ್ನೂ ಪೂರ್ಣಗೊಳಿಸಿರುವುದಾಗಿ ಉಲ್ಲೇಖಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Pankaj Kumar Das (@mr__pankaj_000)&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಎಸ್&zwnj;ಬಿಐ ಅಧಿಕಾರಿಯ ಸಂಬಳವೂ ವೈರಲ್&lt;/strong&gt;&lt;/h2&gt;&lt;p&gt;ಇದೇ ಸಂದರ್ಭದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಮಹಿಳಾ ಅಧಿಕಾರಿಯ ವಿಡಿಯೋ ಕೂಡ ಸದ್ದು ಮಾಡುತ್ತಿದೆ. ಆಕೆ 2.5 ವರ್ಷಗಳ ಸೇವೆ ಮತ್ತು 5 ಇನ್ಕ್ರಿಮೆಂಟ್ ಪಡೆದ ನಂತರ ತಿಂಗಳಿಗೆ ಸುಮಾರು 95,000 ರೂಪಾಯಿ ವೇತನ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಜೈಬ್/ಕೈಬ್ (JAIIB/CAIIB) ಸರ್ಟಿಫಿಕೇಶನ್&zwnj;ಗಳು ಅವರ ವೇತನ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ. ಖಾಸಗಿ ವಲಯದ ಉದ್ಯೋಗಗಳಿಗೆ ಹೋಲಿಸಿದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಉದ್ಯೋಗಗಳು ಎಷ್ಟು ಲಾಭದಾಯಕ ಮತ್ತು ಸ್ಥಿರವಾಗಿವೆ ಅನ್ನೋದಕ್ಕೆ ಇವು ಸಾಕ್ಷಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/central-government-jobs/bank-of-baroda-po-salary-slip-viral-perks-benefits-pankaj-kumar-das-san/articleshow-icgyvqf"/>
        </item>
        <item>
            <title><![CDATA[ಯುವಕರ ಹೊಸ ಭವಿಷ್ಯ ಬರೆಯಲಿದೆ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿ ಜಿಟಿಟಿಸಿ ಒಪ್ಪಂದ!]]></title>
            <link>https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis</link>
            <guid isPermaLink="true">https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis</guid>
            <pubDate>Sat, 25 Apr 2026 16:57:58 +0530</pubDate>
            <description><![CDATA[ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.) ನಡುವೆ ಶೈಕ್ಷಣಿಕ-ಉದ್ಯೋಗ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಮೂಲಕ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ತರಬೇತಿ, ಇಂಟರ್ನ್&zwnj;ಶಿಪ್&zwnj; ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಿ, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq25qzaeg80hnf34p78cg70h,imgname-proxin-tech-partners-with-gttc-dandeli-1777115856206.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ: ಪಟ್ಟಣ ಹಾಗೂ ಬೆಂಗಳೂರಿನಲ್ಲಿ ಐಟಿ ಕೇಂದ್ರಗಳನ್ನು ಹೊಂದಿರುವ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.) ನಡುವೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳಿಗಾಗಿ ಮಹತ್ವದ ಶೈಕ್ಷಣಿಕ&ndash;ಉದ್ಯೋಗ ಒಪ್ಪಂದ ಜರುಗಿದೆ.&lt;/p&gt;&lt;p&gt;ಪ್ರಾಕ್ಸಿನ್ ಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ನಾರಾಯಣ ಠೊಸುರ ಅವರು ಜಿ.ಟಿ.ಟಿ.ಸಿ. ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ, ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು. ಈ ಒಪ್ಪಂದದ ಮೂಲಕ ವಿದ್ಯಾರ್ಥಿಗಳಿಗೆ ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ.&lt;/p&gt;&lt;h2&gt;ಕೈಗಾರಿಕಾ ಮಾರುಕಟ್ಟೆಗೆ ಹೊಂದುವ ತರಬೇತಿ&lt;/h2&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿ ನಾರಾಯಣ ಠೊಸುರ ಅವರು, &ldquo;ನಮ್ಮ ಸಂಸ್ಥೆ ವಿದ್ಯಾರ್ಥಿಗಳಲ್ಲಿನ ಅಡಗಿದ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಪ್ರಸ್ತುತ ಕೈಗಾರಿಕಾ ಮಾರುಕಟ್ಟೆಗೆ ಹೊಂದುವ ತರಬೇತಿಯನ್ನು ನೀಡಲಿದೆ. ಇಂದಿನ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ರೂಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಆಧುನಿಕ ತಾಂತ್ರಿಕ ಕೌಶಲ್ಯಗಳ ಜೊತೆಗೆ ಮಾನವೀಯ ಮೌಲ್ಯಗಳ ಬೆಳವಣಿಗೆಗೂ ನಾವು ಸಮಾನ ಆದ್ಯತೆ ನೀಡುತ್ತೇವೆ&rdquo; ಎಂದು ಹೇಳಿದರು.&lt;/p&gt;&lt;p&gt;ಅವರು ಮುಂದುವರಿದು, &ldquo;ಗ್ರಾಮೀಣ ಪ್ರದೇಶದ ಪ್ರತಿಭಾವಂತರಿಗೆ ಸೂಕ್ತ ಅವಕಾಶಗಳನ್ನು ಒದಗಿಸುವ ಜೊತೆಗೆ, ತಮ್ಮ ಕುಟುಂಬದೊಂದಿಗೆ ಇರುವ ಯುವಕರಿಗೆ ವಿಶೇಷ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಕೊರೋನಾ ಸಮಯದಲ್ಲಿ ರೂಪಿಸಿದ ನಮ್ಮ ಈ ಉದ್ಯೋಗ ನೀತಿಗೆ ರಾಷ್ಟ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರಶಂಸೆ ಲಭಿಸಿದೆ&rdquo; ಎಂದರು.&lt;/p&gt;&lt;h2&gt;ಪ್ರಾಕ್ಸಿನ್ ಟೆಕ್ ಕಂಪನಿಯಲ್ಲಿ ಇಂಟರ್ನ್&zwnj;ಶಿಪ್&zwnj; ಅವಕಾಶ&lt;/h2&gt;&lt;p&gt;ಈ ಒಪ್ಪಂದದ ಪ್ರಮುಖ ಅಂಶವಾಗಿ, ಜಿ.ಟಿ.ಟಿ.ಸಿ. ವಿದ್ಯಾರ್ಥಿಗಳಿಗೆ ಪ್ರಾಕ್ಸಿನ್ ಟೆಕ್ ಕಂಪನಿಯಲ್ಲಿ ಇಂಟರ್ನ್&zwnj;ಶಿಪ್&zwnj; ಅವಕಾಶ ಕಲ್ಪಿಸಲಾಗುತ್ತದೆ. ಇಂಟರ್ನ್&zwnj;ಶಿಪ್&zwnj; ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿಯೇ ಪೂರ್ಣಾವಧಿ ಉದ್ಯೋಗ ನೀಡುವ ವ್ಯವಸ್ಥೆಯೂ ಇದೆ. ಇದಲ್ಲದೆ, ಪ್ರಾಕ್ಸಿನ್ ಸಂಸ್ಥೆಯ ಉದ್ಯೋಗಿಗಳ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿಗೆ ಜಿ.ಟಿ.ಟಿ.ಸಿ. ಅಧ್ಯಾಪಕರ ಸಹಕಾರ ಪಡೆಯಲಾಗುತ್ತದೆ.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಜಿ.ಟಿ.ಟಿ.ಸಿ. ಸಂಸ್ಥೆಯ ಪ್ರಾಚಾರ್ಯ ದತ್ತಾತ್ರೇಯ, ಉದ್ಯೋಗಾಧಿಕಾರಿ ನಿಂಗಪ್ಪ ಸೇರಿದಂತೆ ಪ್ರಾಕ್ಸಿನ್ ಟೆಕ್ ಕಂಪನಿಯ ರಾಘವೇಂದ್ರ ಸಾಂಬ್ರೇಕರ, ನಯನಾ ಗೌಡಪ್ಪನವರ, ಮಣಿಕಂಠ ಸಾಂಬ್ರಾಣಿ, ಪ್ರಿಯಾ ಪಾಟೀಲ, ವಸುಂಧರಾ ನಾಯ್ಕ ಮತ್ತು ಕಲ್ಲಯ್ಯ ಪೂಜಾರಿ ಉಪಸ್ಥಿತರಿದ್ದರು.&lt;/p&gt;&lt;p&gt;ಒಟ್ಟಿನಲ್ಲಿ, ಈ ಒಪ್ಪಂದವು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಮಹತ್ವದ ಹೆಜ್ಜೆಯಾಗಿದ್ದು, ಕೈಗಾರಿಕೆ&ndash;ಶೈಕ್ಷಣಿಕ ಸಂಸ್ಥೆಗಳ ಸಹಕಾರದ ಉತ್ತಮ ಮಾದರಿಯಾಗಿ ಪರಿಣಮಿಸಲಿದೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis"/>
        </item>
        <item>
            <title><![CDATA[ನವವಿವಾಹಿತೆಯ ಸೀರೆ ಎಳೆದ ಕಿರಾತಕರು: ನಾಸಿಕ್ TCSನಲ್ಲಿ ಮತಾಂಧರ ಮತ್ತೊಂದು ಕಾಮಕಾಂಡ ತೆರೆದಿಟ್ಟ ಮಹಿಳಾ ಉದ್ಯೋಗಿ]]></title>
            <link>https://kannada.asianetnews.com/private-jobs/newlyweds-saree-pulled-another-nashik-tcs-employee-reveals-the-horror-she-endured/articleshow-s0e7qay</link>
            <guid isPermaLink="true">https://kannada.asianetnews.com/private-jobs/newlyweds-saree-pulled-another-nashik-tcs-employee-reveals-the-horror-she-endured/articleshow-s0e7qay</guid>
            <pubDate>Mon, 20 Apr 2026 16:38:33 +0530</pubDate>
            <description><![CDATA[&lt;p&gt;ನಾಸಿಕ್&zwnj;ನ ಟಿಸಿಎಸ್&zwnj; ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ. ಟೀಮ್ ಲೀಡರ್ ರಾಝಾ ಮೆನನ್ ಮತ್ತು ತರಬೇತುದಾರ ಶಾರುಖ್ ಖುರೇಷಿ ಅಸಭ್ಯವಾಗಿ ವರ್ತಿಸಿದ್ದು, ಸೀರೆ ಎಳೆದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpn8pvzd9xavw5fyn778vwsb,imgname-tcs-employee-harassment-scam-1776682758125.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಕರಾಳ ಅನುಭವ ಬಿಚ್ಚಿಟ್ಟ ನಾಸಿಕ್ ಟಿಸಿಎಸ್ ಮಹಿಳಾ ಉದ್ಯೋಗಿ&lt;/strong&gt;&lt;/h2&gt;&lt;p&gt;ದೇಶವನ್ನೇ ಬೆಚ್ಚಿ ಬೀಳಿಸಿದ ಟಿಸಿಎಸ್&zwnj; ಸಂಸ್ಥೆಯಲ್ಲಿ ನಡೆದ ಕಾರ್ಪೋರೇಟ್ ಜಿಹಾದ್&zwnj;ಗೆ ಸಂಬಂಧಿಸಿದ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಈಗ ಮತ್ತೊಬ್ಬ ಮಹಿಳಾ ಉದ್ಯೋಗಿ ತಾನು ಅನುಭವಿಸಿದ ಕರಾಳ ಘಟನೆಯನ್ನು ಬಯಲು ಮಾಡಿದ್ದು, ಬೆಚ್ಚಿ ಬೀಳಿಸುವಂತಿದೆ.&lt;/p&gt;&lt;p&gt;ಈಗ ತನಗಾದ ಕೆಟ್ಟ ಘಟನೆಯನನ್ನು ಬಹಿರಂಗಪಡಿಸಿರುವ ಮಹಿಳೆ ನಾಸಿಕ್&zwnj;ನಲ್ಲಿರುವ ಟಿಸಿಎಸ್&zwnj; ಸಂಸ್ಥೆಗೆ ಅಸೋಸಿಯೆಟ್ ಆಗಿ ಉದ್ಯೋಗಕ್ಕೆ ಸೇರಿದ್ದರು. ಆಗಷ್ಟೇ ಅವರ ಮದುವೆಯೂ ಆಗಿತ್ತು. ತಮ್ಮ ಸಂಸ್ಥೆಯಲ್ಲಿ ಹಿಂದೂ ಉದ್ಯೋಗಿಗಳ ಮೇಲೆ ಮ್ಯಾನೇಜರ್ ಮಟ್ಟದ ಅಧಿಕಾರಿಗಳು ಹಾಗೂ ಹೆಚ್&zwnj; ಆರ್&zwnj;ಗಳು ನಡೆಸುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಪುರುಷ ಉದ್ಯೋಗಿಗಳ ಬಲವಂತದ ಮತಾಂತರದ ಬಗ್ಗೆ ಬಾಯ್ಬಿಟ್ಟ 8ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳ ಪೈಕಿ ಇವರು ಒಬ್ಬರಾಗಿದ್ದಾರೆ.&lt;/p&gt;&lt;p&gt;ತನ್ನ ಪತಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಿದ್ದರಿಂದ ತಾನು ನಾಸಿಕ್&zwnj;ನಲ್ಲಿ ತನ್ನ ಅತ್ತೆ ಮಾವನ ಜೊತೆ ವಾಸ ಮಾಡುತ್ತಿದ್ದೆ ನನ್ನ ಮದುವೆಯ ನಂತರ 2025ರ ಜೂನ್&zwnj;ನಿಂದ ನಾನು ಟಿಸಿಎಸ್&zwnj;ನ ನಾಸಿಕ್ ಸಂಸ್ಥೆಯಲ್ಲಿ ಅಸೋಸಿಯೇಟ್ ಆಗಿ ಕೆಲ ಮಾಡುತ್ತಿದ್ದೆ. 2025ರ ಜೂನ್ 24ರಿಂದ ನನ್ನ ಮೂರು ತಿಂಗಳ ತರಬೇತಿ ಅವಧಿ ಇಲ್ಲಿ ಆರಂಭವಾಯ್ತು. ಶಾರುಖ್ ಖುರೇಷಿ ಹಾಗೂ ಜಯೇಶ್ ಗುಂಜಲ್ ಎಂಬುವವರು ನನಗೆ ತರಬೇತಿ ನೀಡುತ್ತಿದ್ದರು ಎಂದು ಮಹಿಳೆ ವಿಚಾರಣೆಯಲ್ಲಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ನವವಿವಾಹಿತೆಗೆ ಸಹಾಯ ಬೇಕಿದ್ದರೆ ಕೇಳಿ ಎಂದಿದ್ದ ರಾಝಾ ಮೆನನ್&lt;/strong&gt;&lt;/p&gt;&lt;p&gt;ತರಬೇತಿ ವೇಳೆ ಲೋನ್ ಬ್ರಾಂಚ್&zwnj;ನ ಟೀಮ್ ಲೀಡರ್ ರಾಝಾ ಮೆನನ್ ಎಂಬಾತ ತಮ್ಮ ತರಬೇತಿ ಕೊಠಡಿಗೆ ಬರುತ್ತಿದ್ದ. ಆತನಿಗೂ ತರಬೇತಿಗೂ ಯಾವುದೇ ಸಂಬಂಧ ಇರಲಿಲ್ಲ, ಆದರೂ ಆತ ಅಲ್ಲಿಗೆ ಬಂದು ತನ್ನ ವೈಯಕ್ತಿಕ ಜೀವನದ ಬಗ್ಗೆ ಕೇಳುತ್ತಿದ್ದ. ನಿನ್ನ ಗಂಡ ನಿನ್ನಿಂದ ದೂರ ವಾಸ ಮಾಡುತ್ತಿರುವುದರಿಂದ ನಿನಗೆ ಎಲ್ಲವನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆಯೇ? ನಿನಗೆ ಭಯವಾಗುವುದಿಲ್ಲವೇ? ನಿಮಗೆ ನನ್ನ ಸಹಾಯ ಬೇಕಿದ್ದರೆ ನನಗೆ ಹೇಳಿ ನಾನು ನಿಮಗೆ ಯಾವುದೇ ಸಮಯದಲ್ಲಿ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಆತ ಹೇಳುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.&lt;/p&gt;&lt;p&gt;ಆಗ ತನಗೆ ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಆದರೂ ಆತ ನನ್ನ ವೈವಾಹಿಕ ಜೀವನದ ಬಗ್ಗೆ ಆಗಾಗ ಕಾಮೆಂಟ್ ಮಾಡುತ್ತಲೇ ಇದ್ದ. ನೀನು ಈಗಷ್ಟೇ ಮದುವೆಯಾಗಿದ್ದಿಯಾ? ಹನಿಮೂನ್&zwnj;ಗೆ ಎಲ್ಲಿಗೆ ಹೋಗುತ್ತಿದ್ದಿಯಾ? ಅಲ್ಲಿ ಏನು ಮಾಡುತ್ತೀಯಾ ಎಂದೆಲ್ಲಾ ಆತ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದ. ಈ ರಾಝಾನ ಈ ರೀತಿಯ ಅಧಿಕಪ್ರಸಂಗಿತನದ ಬಗ್ಗೆ ಟೀಮ್ ಲೀಡರ್ ಖುರೇಷಿ ಬಳಿ ಹೇಳಿದಾಗ ಆ ಟೀಮ್ ಲೀಡರ್ ಆತನ ವರ್ತನೆಯನ್ನು ನಿಯಂತ್ರಿಸುವ ಬದಲು ಆತನನ್ನೇ ಬೆಂಬಲಿಸುತ್ತಿದ್ದ.&lt;/p&gt;&lt;p&gt;ಶಾರುಖ್ ಖುರೇಷಿ ಕೂಡ ತನ್ನ ಮದುವೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ಲವ್ ಮ್ಯಾರೇಜ್&zwnj; ಅಥವಾ ಅರೆಂಜ್ ಮ್ಯಾರೇಜಾ ಎಂದು ಕೇಳುತ್ತಿದ್ದ, ಈ ಖುರೇಷಿ ಜೊತೆ ಸೇರಿ ರಾಝಾನೂ ನನಗೆ ಕಿರುಕುಳ ನೀಡುವುದಕ್ಕೆ ಶುರು ಮಾಡಿದ್ದ.&lt;/p&gt;&lt;p&gt;&lt;strong&gt;ಹೇಗೆ ಮಾಡಬೇಕೆಂದು ಕಲಿಸುತ್ತೇವೆ ಎಂದಿದ್ದ ಕಾಮುಕರು&lt;/strong&gt;&lt;/p&gt;&lt;p&gt;ನಿನಗೆ ನಿನ್ನ ಗಂಡನೊಂದಿಗೆ ಹೊಂದಿಕೆಯಾಗದಿದ್ದರೆ, ನಮಗೆ ತಿಳಿಸು ನಾವು ನಿಮಗೆ ನಿಖರವಾಗಿ ಏನು ಮಾಡಬೇಕೆಂದು ಮತ್ತು ಅದನ್ನು ಹೇಗೆ ಮಾಡಬೇಕೆಂದು ಕಲಿಸುತ್ತೇವೆ. ನಿಮಗೆ ಸಾಕಷ್ಟು ಗೆಳೆಯರು ಇದ್ದಿರಬೇಕು. ಅವರೆಲ್ಲರನ್ನೂ ಬಿಟ್ಟು ನೀವು ಹೇಗೆ ಮದುವೆಯಾದಿರಿ? ಆ ಗೆಳೆಯರು ಇನ್ನೂ ಹಿಂದಿನಂತೆಯೇ ನಿಮ್ಮನ್ನು ಬೆನ್ನಟ್ಟುತ್ತಿದ್ದರೆ ಮತ್ತು ನಿಮ್ಮ ಕುಟುಂಬ ಅಥವಾ ಪತಿಗೆ ಅದು ತಿಳಿದಿದ್ದರೆ, ಏನಾಗುತ್ತಿತ್ತು? ನೀವು ಏನು ಮಾಡುತ್ತೀರಿ? ಎಂದು ರಝಾ ತನಗೆ ಕೇಳುತ್ತಾ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.&lt;/p&gt;&lt;p&gt;ತನಗೆ ಪ್ಲೇಯರ್ ಎಂದು ಹೆಸರಿಟ್ಟಿದ್ದ ಆತ ತಾನು ಕಚೇರಿಗೆ ಪ್ರವೇಶಿಸಿದಾಗಲೆಲ್ಲಾ ಪ್ಲೇಯರ್ ಎಂದು ಕರೆಯುತ್ತಿದ್ದ. ನನ್ನ ಕೆಲಸದಲ್ಲಿ ಯಾವುದೇ ತೊಂದರೆಗಳು ಎದುರಾದರೆ ಮತ್ತು ನಾನು ಅದನ್ನು ಶಾರುಖ್&zwnj;ಗೆ ಹೇಳಿದರೆ, ಆತ ಈ ರಝಾನನ್ನು ಕರೆಸುತ್ತಿದ್ದ. ಈ ರಝಾ ಬಂದು ಏನಾಯ್ತು ಪ್ಲೇಯರ್? ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ? ನೀವು ಕಷ್ಟಪಡುತ್ತಿದ್ದರೆ, ನನಗೆ ತಿಳಿಸಿ ಎಂದು ಹೇಳುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತಿರುವಿನಲ್ಲಿ ಕಾದಿದ್ದ ಜವರಾಯ: ಕಂದಕಕ್ಕೆ ಉರುಳಿದ ಬಸ್ : 21 ಜನರ ದಾರುಣ ಸಾವು&lt;/strong&gt;&lt;/p&gt;&lt;p&gt;ನಿಮ್ಮ ಗಂಡ ಇಲ್ಲಿಗೆ ಏಕೆ ಬರುವುದಿಲ್ಲ? ನೀವು ನವವಿವಾಹಿತರು. ನಿಮ್ಮಿಂದ ದೂರ ಇರುವುದನ್ನು ಅವನು ಹೇಗೆ ಸಹಿಸಿಕೊಳ್ಳಬಲ್ಲನು? ನಾನು ಅವನ ಸ್ಥಾನದಲ್ಲಿದ್ದರೆ, ನೀವು ಇಲ್ಲದೆ ನಾನು ಎಲ್ಲಿಗೂ ಹೋಗುತ್ತಿರಲಿಲ್ಲ; ನಾನು ನಿಮ್ಮ ಪಕ್ಕದಲ್ಲಿಯೇ ಇರುತ್ತಿದ್ದೆ ಎಂದು ಹೇಳುತ್ತಾ ಆತ ತನಗೆ ಕಿರುಕುಳ ನೀಡುತ್ತಿದ್ದ, ಈ ವರ್ಷದ ಮಾರ್ಚ್&zwnj;ನಲ್ಲಿ ಗುಡಿ ಪಾಡ್ವಾ ಹಬ್ಬದ ದಿನದಂದು ಸೀರೆ ಉಟ್ಟು ಕಚೇರಿಗೆ ಬಂದಿದ್ದಾಗ ರಾಝಾ ನನ್ನ ಸೀರೆಯನ್ನು ಎಳೆದಾಡಿದ ಎಂದು ಮಹಿಳೆ ದೂರಿದ್ದಾರೆ.&lt;/p&gt;&lt;p&gt;ನಾನು ಸೀರೆ ಧರಿಸಿ ಬಂದಿದ್ದೆ. ನಾನು ಲಾಬಿಯ ಮೂಲಕ ಸಾಗಿ ಪ್ಯಾಂಟ್ರಿಯ ಮೂಲಕ ನಡೆಯುತ್ತಿದ್ದಾಗ, ಯಾರೋ ನನ್ನ ಸೀರೆಯ ಸೆರಗನ್ನು ಹಿಡಿದು ಎಳೆದ ಅನುಭವ ಆಯ್ತು. ನಾನು ತಿರುಗಿ ನೋಡಿದಾಗ, ಸೀರೆಯ ಸೆರಗು ರಾಝಾ ಕೈಯಲ್ಲಿತ್ತು. ನಾನು ತಕ್ಷಣ ನನ್ನ ಸೀರೆಯ ಸೆರಗನ್ನು ಹಿಂದಕ್ಕೆ ಎಳೆದಾಗ ಅವನು ನನ್ನನ್ನು ಅಸಭ್ಯವಾಗಿ ನೋಡಿ ಮುಗುಳ್ನಕ್ಕ ಎಂದು ಆ ಮಹಿಳಾ ಉದ್ಯೋಗಿ ಆರೋಪಿಸಿದ್ದಾರೆ.&lt;/p&gt;&lt;p&gt;ನಾಸಿಕ್&zwnj;ನಲ್ಲಿ ಟಿಸಿಎಸ್ ಕಂಪನಿಯಲ್ಲಿ ನಡೆದ ಒತ್ತಾಯಪೂರ್ವಕ ಮತಾಂತರ ಹಾಗೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 8 ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿ ಉದ್ಯೋಗದಿಂದ ಅಮಾನತಾಗಿರುವ ಉದ್ಯೋಗಿಗಳನ್ನು ದಾನಿಶ್ ಶೇಖ್, ತೌಸಿಫ್ ಅತ್ತರ್, ರಾಝಾ ಮೆಮನ್, ಶಾರುಖ್ ಖುರೇಶಿ, ಶಾಫಿ ಶೇಖ್, ಅಸೀಫ್ ಅಫ್ತಾಬ್ ಅನ್ಸಾರಿ ಹಾಗೂ ಹೆಚ್&zwnj; ಆರ್ ಮುಖ್ಯಸ್ಥೆಅಶ್ವಿನಿ ಚೈನಾನಿ ಎಂದು ಗುರುತಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪ್ರಧಾನಿ ಕಿವಿಯಲ್ಲಿ ಹೇಳಿದ ಗುಟ್ಟು ಮಾಡಿದ ಸಿಎಂ: ಮೋದಿ ಸಿದ್ದು ಬಳಿ ಹೇಳಿದ್ದೇನು?&lt;/strong&gt;&lt;/p&gt;]]></content:encoded>
            <category>jobs</category>
            <dc:creator>Anusha Kb</dc:creator>
            <atom:link href="https://kannada.asianetnews.com/private-jobs/newlyweds-saree-pulled-another-nashik-tcs-employee-reveals-the-horror-she-endured/articleshow-s0e7qay"/>
        </item>
        <item>
            <title><![CDATA[ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಅತ್ಯಂತ ವೇಗದ ಗಳಿಕೆಯ ಉದ್ಯೋಗ:ಲಿಂಕ್ಡ್‌ ಇನ್!]]></title>
            <link>https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od</link>
            <guid isPermaLink="true">https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od</guid>
            <pubDate>Thu, 16 Apr 2026 19:33:08 +0530</pubDate>
            <description><![CDATA[&lt;p&gt;ಲಿಂಕ್ಡ್&zwnj;ಇನ್ ತನ್ನ 'ಗ್ರಾಡ್ಸ್ ಗೈಡ್ 2026' ವರದಿಯನ್ನು ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿ ಹೊಸ ಪದವೀಧರರಿಗೆ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಈ ವರದಿಯ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ggh15q1vpmatfr0qfn7hgsgg,imgname-linkedin-is-introducing-a-new-feature-to-identify-fake-profiles.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್&zwnj; ಇನ್, ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೊಸ ಪದವೀಧರರಿಗೆ ಅವಕಾಶಗಳು ಎಲ್ಲಿವೆ ಎಂದು ತಿಳಿಯಲು ನೆರವಾಗುಲು ಮತ್ತು ಬದಲಾಗುತ್ತಿರುವ ಉದ್ಯೋಗದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ, ತನ್ನ 'ಗ್ರಾಡ್ಸ್ ಗೈಡ್ 2026' ಅನ್ನು ಬಿಡುಗಡೆ ಮಾಡಿದೆ. ಈ ವರದಿಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ಕೈಗಾರಿಕೆಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಲಿಂಕ್ಡ್&zwnj; ಇನ್ ಅಂಕಿಅಂಶಗಳ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಯುವ ಪ್ರತಿಭೆಗಳ ನಡುವೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.&lt;/p&gt;&lt;h2&gt;ಉದ್ಯಮ ಮತ್ತು ಜನಕೇಂದ್ರಿತ ವಲಯಗಳಲ್ಲಿ ಹೆಚ್ಚುತ್ತಿರುವ ಅವಕಾಶಗಳು&lt;/h2&gt;&lt;p&gt;ಯುವ ವೃತ್ತಿಪರರಿಗೆ ಕೇವಲ ತಂತ್ರಜ್ಞಾನ ಮಾತ್ರವಲ್ಲದೆ, ಉದ್ಯಮ ಅಭಿವೃದ್ಧಿ ಮತ್ತು ಜನಕೇಂದ್ರಿತ ಕೈಗಾರಿಕೆಗಳಲ್ಲೂ ಅವಕಾಶಗಳು ಲಭ್ಯವಾಗುತ್ತಿವೆ. ಶಿಕ್ಷಣ, ಸರ್ಕಾರಿ ಆಡಳಿತ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಹಾಗೂ ಎನರ್ಜಿ ಟೆಕ್ನಾಲಜಿ ಜೊತೆಗೆ 'ಯುಟಿಲಿಟಿಸ್' ಕ್ಷೇತ್ರವು ಈಗ ವೃತ್ತಿಜೀವನ ಆರಂಭಿಸುವವರಿಗೆ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಒಂದಾಗಿದೆ. ಮಾನವ ಸಂಪನ್ಮೂಲ, ಕನ್ಸಲ್ಟಿಂಗ್, ಮಾಹಿತಿ ತಂತ್ರಜ್ಞಾನ (ಐಟಿ), ಮಾರ್ಕೆಟಿಂಗ್, ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj; ಮೆಂಟ್ ಹಾಗೂ ಬಿಸಿನೆಸ್ ಡೆವಲಪ್&zwnj; ಮೆಂಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆರಂಭಿಕ ಹಂತದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ.&lt;/p&gt;&lt;p&gt;ಈ ಕುರಿತು ಲಿಂಕ್ಡ್&zwnj; ಇನ್&zwnj; ನ ಕರಿಯರ್ ಎಕ್ಸ್ ಪರ್ಟ್ ಮತ್ತು ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ಆದ ನಿರಾಜಿತಾ ಬ್ಯಾನರ್ಜಿ ಅವರು, &quot;ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಿರುವ ಯುವ ವೃತ್ತಿಪರರಿಗೆ ನನ್ನ ಅತ್ಯುತ್ತಮ ಸಲಹೆ ಎಂದರೆ, ಅಸಾಂಪ್ರದಾಯಿಕ ಹಾದಿಗಳು ಮತ್ತು ಅನಿರೀಕ್ಷಿತ ಸ್ಥಳಗಳಲ್ಲಿ ಸಿಗುವ ಉದ್ಯೋಗ ಅವಕಾಶಗಳಿಗೆ ಮುಕ್ತವಾಗಿರಿ. ಸರಿಯಾದ ಅವಕಾಶವು ನೀವು ನಿರೀಕ್ಷಿಸಿದ ಕಡೆಯೇ ಇರಬೇಕೆಂದಿಲ್ಲ. ಅದು ಬೇರೆ ಯಾವುದೋ ಉದ್ಯಮದಲ್ಲಿರಬಹುದು, ಹೊಸ ನಗರದಲ್ಲಿರಬಹುದು ಅಥವಾ ನೀವು ಇದುವರೆಗೆ ಪರಿಗಣಿಸದ ಹುದ್ದೆಯೂ ಆಗಿರಬಹುದು. ಕೌಶಲಗಳು ಒಂದು ವಲಯದಿಂದ ಇನ್ನೊಂದು ವಲಯಕ್ಕೂ ಹೊಂದಿಕೊಳ್ಳಬಲ್ಲ ಇಂದಿನ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ, ವೃತ್ತಿಪರರು ಬಹುಮುಖ ಕೌಶಲಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಆರಂಭಿಕ ವೃತ್ತಿಜೀವನವು ವಿವಿಧ ಹುದ್ದೆಗಳು ಮತ್ತು ಉದ್ಯಮಗಳ ಅನುಭವದಿಂದ ಹೆಚ್ಚು ಉತ್ತಮವಾಗಿ ರೂಪುಗೊಳ್ಳುತ್ತವೆ. ಆದರೆ ಮೊದಲ ಉದ್ಯೋಗದ ಹಾದಿಯು ಯಾವಾಗಲೂ ನೇರವಾಗಿರುವುದಿಲ್ಲ, ಹಾಗಾಗಿ ವೈವಿಧ್ಯಮಯ ಅನುಭವಗಳಿಗೆ ಮುಕ್ತವಾಗಿರುವುದು ನಿಮ್ಮ ವೃತ್ತಿಜೀವನಕ್ಕೆ ವೇಗವನ್ನು ನೀಡಲು ಮತ್ತು ನಿಮಗೆ ಸೂಕ್ತವಾದ ಉದ್ಯೋಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ&quot; ಎಂದು ಹೇಳುತ್ತಾರೆ.&lt;/p&gt;&lt;p&gt;ಲಿಂಕ್ಡ್&zwnj; ಇನ್ ಗ್ರಾಡ್ಸ್ ಗೈಡ್ 2026ರ ಪ್ರಕಾರ ಪದವೀಧರರಿಗಾಗಿ ಈ ವರ್ಷದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಕಾರ್ಯವಿಭಾಗಗಳು ಇಲ್ಲಿವೆ:&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ಉದ್ಯೋಗ ಹುದ್ದೆಗಳು:&lt;/h3&gt;&lt;p&gt;ಎಐ (Artificial Intelligence) ಸ್ಪೆಷಲಿಸ್ಟ್&lt;/p&gt;&lt;p&gt;ಜನರೇಟಿವ್ ಎಐ ಇಂಜಿನಿಯರ್&lt;/p&gt;&lt;p&gt;ಡಿಜಿಟಲ್ ಕಂಟೆಂಟ್ ಕ್ರಿಯೇಟರ್&lt;/p&gt;&lt;p&gt;ಬ್ರ್ಯಾಂಡ್ ರೆಪ್ರೆಸೆಂಟೇಟಿವ್&lt;/p&gt;&lt;p&gt;ಐಟಿ ಸ್ಪೆಷಲಿಸ್ಟ್&lt;/p&gt;&lt;p&gt;ಮೀಡಿಯಾ ಪ್ರೊಡಕ್ಷನ್ ಕ್ರೂ&lt;/p&gt;&lt;p&gt;ಬಿಡ್ ಮ್ಯಾನೇಜರ್&lt;/p&gt;&lt;p&gt;ಕೆಟಗರಿ ಮ್ಯಾನೇಜರ್&lt;/p&gt;&lt;p&gt;ಟೆಕ್ನಿಕಲ್ ಸಪೋರ್ಟ್ ಕನ್ಸಲ್ಟೆಂಟ್&lt;/p&gt;&lt;p&gt;ಸ್ಟೋರೇಜ್ ಇಂಜಿನಿಯರ್&lt;/p&gt;&lt;p&gt;&amp;nbsp;&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ವಲಯಗಳು:&lt;/h3&gt;&lt;p&gt;ಎಐ ಸ್ಪೆಷಲಿಸ್ಟ್ ಯುಟಿಲಿಟಿಸ್&lt;/p&gt;&lt;p&gt;ಶಿಕ್ಷಣ&lt;/p&gt;&lt;p&gt;ಸರ್ಕಾರಿ ಆಡಳಿತ&lt;/p&gt;&lt;p&gt;ಟ್ರಾನ್ಸ್&zwnj;ಪೋರ್ಟ್ ಮತ್ತು ಲಾಜಿಸ್ಟಿಕ್ಸ್&lt;/p&gt;&lt;p&gt;ಎನರ್ಜಿ ಟೆಕ್ನಾಲಜಿ&lt;/p&gt;&lt;p&gt;&amp;nbsp;&lt;/p&gt;&lt;h3&gt;ವೇಗವಾಗಿ ಬೆಳೆಯುತ್ತಿರುವ ಕಾರ್ಯವಿಭಾಗಗಳು:&lt;/h3&gt;&lt;p&gt;ಮಾನವ ಸಂಪನ್ಮೂಲ (HR)&lt;/p&gt;&lt;p&gt;ಕನ್ಸಲ್ಟಿಂಗ್&lt;/p&gt;&lt;p&gt;ಮಾಹಿತಿ ತಂತ್ರಜ್ಞಾನ (IT)&lt;/p&gt;&lt;p&gt;ಮಾರ್ಕೆಟಿಂಗ್&lt;/p&gt;&lt;p&gt;ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj;ಮೆಂಟ್&lt;/p&gt;&lt;h2&gt;ಸಣ್ಣ ಸಂಸ್ಥೆಗಳು ಮತ್ತು ಮಹಾನಗರವಲ್ಲದ ನಗರಗಳಲ್ಲಿ ಹೆಚ್ಚುತ್ತಿರುವ ನೇಮಕಾತಿ&lt;/h2&gt;&lt;p&gt;ಸಣ್ಣ ಕಂಪನಿಗಳು ಉದ್ಯೋಗ ಮಾರುಕಟ್ಟೆಯ ಪ್ರಮುಖ ಪ್ರವೇಶ ದ್ವಾರಗಳಾಗಿ ಬೆಳೆಯುತ್ತಿವೆ. ಹೀಗಾಗಿ, ವೃತ್ತಿಜೀವನ ಆರಂಭಿಸುವವರು ಕೇವಲ ದೊಡ್ಡ ಕಂಪನಿಗಳ ಬಗ್ಗೆ ಮಾತ್ರ ಯೋಚಿಸದೆ ಸಣ್ಣ ಸಂಸ್ಥೆಗಳಲ್ಲಿನ ಅವಕಾಶಗಳನ್ನು ಪರಿಗಣಿಸುವುದು ಅನಿವಾರ್ಯವಾಗಿದೆ. ಪದವೀಧರರಿಗೆ 1 ರಿಂದ 10 ಉದ್ಯೋಗಿಗಳಿರುವ ಸಣ್ಣ ಸಂಸ್ಥೆಗಳಲ್ಲಿನ ನೇಮಕಾತಿಯು 2023 ಮತ್ತು 2025ರ ನಡುವೆ 64% ರಷ್ಟು ಹೆಚ್ಚಾಗಿದೆ. ಇನ್ನು ಒಟ್ಟಾರೆ ಆರಂಭಿಕ ಹಂತದ ಉದ್ಯೋಗಿಗಳನ್ನು ಪರಿಗಣಿಸಿದರೆ, ಈ ಬೆಳವಣಿಗೆಯು 168% ರಷ್ಟಿದೆ. ಉದ್ಯೋಗಾವಕಾಶಗಳು ಈಗ ಭೌಗೋಳಿಕವಾಗಿ ಎಲ್ಲಾ ಕಡೆ ವ್ಯಾಪಿಸುತ್ತಿವೆ. ವಿಜಯವಾಡ, ಭೋಪಾಲ್, ಜೈಪುರ, ಇಂದೋರ್, ಗ್ವಾಲಿಯರ್ ಮತ್ತು ವಡೋದರಾ ಅಂತಹ ನಗರಗಳು ಈಗ ಮಹಾನಗರಗಳ ಜೊತೆಗೆ ಭಾರತದ ಪ್ರಮುಖ ನೇಮಕಾತಿ ಕೇಂದ್ರಗಳಾಗಿ ಹೊರಹೊಮ್ಮುತ್ತಿದ್ದು, ಇದು ಯುವಕರಿಗೆ ಸಾಂಪ್ರದಾಯಿಕ ಉದ್ಯೋಗ ಕೇಂದ್ರಗಳ ಹೊರತಾಗಿ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದೆ.&lt;/p&gt;&lt;h2&gt;ಇಂಟರ್ನ್&zwnj; ಶಿಪ್ ಮೂಲಕ ವೃತ್ತಿಜೀವನದತ್ತ ಹೆಜ್ಜೆ&lt;/h2&gt;&lt;p&gt;2020-2022ಕ್ಕೆ ಹೋಲಿಸಿದರೆ, 2023-2025ರ ಅವಧಿಯಲ್ಲಿ ಆರಂಭಿಕ ಹಂತದ ನೇಮಕಾತಿಗಳಲ್ಲಿ ಇಂಟರ್ನ್&zwnj; ಶಿಪ್ ಪೂರ್ಣಗೊಳಿಸಿದವರ ಸಂಖ್ಯೆ ಹೆಚ್ಚಿದೆ. ಲಿಂಕ್ಡ್&zwnj; ಇನ್ ದತ್ತಾಂಶದ ಪ್ರಕಾರ, ಕಾನೂನು, ಪ್ರಾಡಕ್ಟ್ ಮ್ಯಾನೇಜ್&zwnj; ಮೆಂಟ್, ಕನ್ಸಲ್ಟಿಂಗ್, ಇಂಜಿನಿಯರಿಂಗ್ ಮತ್ತು ಬಿಸಿನೆಸ್ ಡೆವಲಪ್&zwnj; ಮೆಂಟ್ ವಿಭಾಗಗಳಲ್ಲಿ ಇದು ಗಣನೀಯವಾಗಿ ಕಂಡುಬಂದಿದೆ. ಪದವಿ ಮುಗಿದ ನಂತರ ಇಂಟರ್ನ್&zwnj; ಶಿಪ್ ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದ್ದು, ವಿಶೇಷವಾಗಿ ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್&zwnj; ಮೆಂಟ್, ಇಂಜಿನಿಯರಿಂಗ್, ಐಟಿ, ಮೀಡಿಯಾ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ.&lt;/p&gt;&lt;p&gt;ನೀವು ಈಗಷ್ಟೇ ವೃತ್ತಿಜೀವನ ಆರಂಭಿಸುತ್ತಿದ್ದರೆ, ಉದ್ಯೋಗ ಮಾರುಕಟ್ಟೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಲಿಂಕ್ಡ್&zwnj; ಇನ್ ವೃತ್ತಿಜೀವನ ತಜ್ಞರಾದ ನಿರಾಜಿತಾ ಬ್ಯಾನರ್ಜಿ ಅವರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ:&lt;/p&gt;&lt;p&gt;&quot;ಅದೃಶ್ಯ&quot; ಉದ್ಯೋಗ ಮಾರುಕಟ್ಟೆಯನ್ನು ನಿರ್ಲಕ್ಷಿಸಬೇಡಿ: ನಿಮ್ಮ ಕೌಶಲಗಳು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಬಹುಮುಖಿಯಾಗಿವೆ. ಲಿಂಕ್ಡ್&zwnj; ಇನ್&zwnj; ನ ಎಐ-ಚಾಲಿತ ಉದ್ಯೋಗ ಹುಡುಕಾಟವು ನಿಮ್ಮ ಹಿನ್ನೆಲೆಗೆ ಹೊಂದಿಕೆಯಾಗುವ ಹುದ್ದೆಗಳನ್ನು ತೋರಿಸುವ ಮೂಲಕ ಇದನ್ನು ಸಾಬೀತುಪಡಿಸುತ್ತದೆ. ನೀವು ಯಾವತ್ತೂ ಪರಿಗಣಿಸದ ಉದ್ಯಮಗಳು ಅಥವಾ ಹುದ್ದೆಗಳನ್ನೂ ಇದು ನಿಮಗೆ ಸೂಚಿಸುತ್ತದೆ. ಈ ಎಐ-ಚಾಲಿತ ಉದ್ಯೋಗ ಹುಡುಕಾಟವು ಪ್ರಸ್ತುತ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್, ಪೋರ್ಚುಗೀಸ್ ಮತ್ತು ಜರ್ಮನ್ ಭಾಷೆಗಳಲ್ಲಿ ಲಭ್ಯವಿದೆ.&lt;/p&gt;&lt;p&gt;ಹೆಚ್ಚು ಫಲಿತಾಂಶ ನೀಡುವ ಕಡೆ ಗಮನಹರಿಸಿ: ಸಿಕ್ಕಸಿಕ್ಕ ಎಲ್ಲಾ ಕೆಲಸಗಳಿಗೂ ಅರ್ಜಿ ಸಲ್ಲಿಸುವ ಬದಲು, ನಿಮ್ಮ ಕೌಶಲಗಳಿಗೆ ಉತ್ತಮವಾಗಿ ಹೊಂದಿಕೆಯಾಗುವ ಉದ್ಯೋಗಗಳಿಗೆ ಆದ್ಯತೆ ನೀಡಿ. ಲಿಂಕ್ಡ್&zwnj; ಇನ್&zwnj; ನ 'ಜಾಬ್ ಮ್ಯಾಚ್' ನಂತಹ ಟೂಲ್ ಗಳು ನೀವು ಯಾವ ಉದ್ಯೋಗಕ್ಕೆ ಹೆಚ್ಚು ಸೂಕ್ತ ಎಂಬುದನ್ನು ತ್ವರಿತವಾಗಿ ಗುರುತಿಸಲು ಸಹಾಯ ಮಾಡುತ್ತವೆ. ಇದರಿಂದ ನೀವು ಹೆಚ್ಚು ಅವಕಾಶವಿರುವ ಅರ್ಜಿಗಳ ಮೇಲೆ ಹೆಚ್ಚಿನ ಸಮಯ ಕಳೆಯಬಹುದು.&lt;/p&gt;&lt;p&gt;ಕೇವಲ ಸಾಮರ್ಥ್ಯವಲ್ಲ, ಪುರಾವೆಯನ್ನು ತೋರಿಸಿ: ನಿಮಗೆ ವರ್ಷಗಳ ಅನುಭವ ಇಲ್ಲದಿದ್ದರೂ ಪರವಾಗಿಲ್ಲ. ನೀವು ಏನು ಮಾಡಬಲ್ಲಿರಿ ಎಂಬುದನ್ನು ತೋರಿಸುವುದು ಇಲ್ಲಿ ಮುಖ್ಯ. ನೀವು ಮಾಡಿದ ಪ್ರಾಜೆಕ್ಟ್&zwnj; ಗಳು, ಕೆಲಸದ ಉದಾಹರಣೆಗಳು ಮತ್ತು ನೀವು ಬೆಳೆಸಿಕೊಂಡ ಕೌಶಲಗಳನ್ನು ಹಂಚಿಕೊಳ್ಳಿ. ನೀವು ಬಳಸುವ Loveable ಅಥವಾ Replit ನಂತಹ ಎಐ ಟೂಲ್ ಗಳ ಮೂಲಕ ಕೌಶಲಗಳನ್ನು ದೃಢೀಕರಿಸುವುದರಿಂದ ಅಥವಾ ವೆರಿಫೈ ಮಾಡುವುದರಿಂದ ಉದ್ಯೋಗದಾತರು ನಿಮ್ಮ ಸಾಮರ್ಥ್ಯವನ್ನು ಬೇಗನೆ ಗುರುತಿಸಲು ಸಹಾಯ ಮಾಡುತ್ತದೆ.&lt;/p&gt;&lt;p&gt;ಸಂಘಟಿತರಾಗಿರಿ ಮತ್ತು ಉತ್ಸಾಹ ಕಳೆದುಕೊಳ್ಳಬೇಡಿ: ಅರ್ಜಿ ಸಲ್ಲಿಸಿದ ನಂತರ ಮುಂದೇನು ಎಂಬ ಗೊಂದಲ ಸಹಜ. ನಿಮ್ಮ ಅರ್ಜಿಯ ಸ್ಥಿತಿ ಮತ್ತು ಫಾಲೋ- ಅಪ್&zwnj; ಗಳನ್ನು ಟ್ರ್ಯಾಕ್ ಮಾಡಲು ಲಿಂಕ್ಡ್&zwnj; ಇನ್&zwnj; ನ 'ಜಾಬ್ ಟ್ರ್ಯಾಕರ್' ಬಳಸಿ. ಅಲ್ಲದೆ, ನಿಮ್ಮ ನೆಟ್&zwnj; ವರ್ಕ್&zwnj; ನಲ್ಲಿ ಯಾರು ನಿಮಗೆ ಸಹಾಯ ಮಾಡಬಲ್ಲರು ಎಂಬುದನ್ನು ಗುರುತಿಸಿ.&lt;/p&gt;&lt;p&gt;ಕಲಿಯಲು 'ಫಾಲೋ' ಮಾಡಿ: ನಿಮಗೆ ಪರಿಚಯವಿರುವ ಮತ್ತು ನಂಬಿಕಸ್ತ ವ್ಯಕ್ತಿಗಳೊಂದಿಗೆ ಮಾತ್ರ ಕನೆಕ್ಟ್ ಆಗಿ. ಉಳಿದವರಿಗೆ ಕೇವಲ &quot;ಫಾಲೋ&quot; ಬಟನ್ ಒತ್ತಿ. ಇದರಿಂದ ಅವರ ಪೋಸ್ಟ್&zwnj; ಗಳನ್ನು ನೋಡಲು ಮತ್ತು ಅವರ ವಿಷಯಗಳ ಬಗ್ಗೆ ಚರ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ಲಿಂಕ್ಡ್&zwnj; ಇನ್&zwnj; ನ ಹೊಸ 'ಪೀಪಲ್ ಸರ್ಚ್' ಮೂಲಕ ನಿಮಗೆ ಸ್ಫೂರ್ತಿ ನೀಡುವ ವೃತ್ತಿಪರರನ್ನು ಹುಡುಕುವುದು ಮತ್ತು ಸಂಪರ್ಕಿಸುವುದು ಈಗ ಸುಲಭವಾಗಿದೆ (ಪ್ರಸ್ತುತ ಅಮೆರಿಕದಲ್ಲಿ ಮಾತ್ರ ಲಭ್ಯ).&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/linkedin-grads-guide-2026-ai-jobs-content-creators-and-fastest-growing-careers-for-fresh-graduates-in-india-gdp/articleshow-tg9z6od"/>
        </item>
        <item>
            <title><![CDATA[ಬಿಪಿಸಿಎಲ್ ನೇಮಕಾತಿ: ಆಯ್ಕೆಯಾದವರಿಗೆ ಭರ್ಜರಿ ಜಾಕ್‌ಪಾಟ್‌ , ತಿಂಗಳಿಗೆ ₹1.40 ಲಕ್ಷ ಸಂಬಳ!]]></title>
            <link>https://kannada.asianetnews.com/jobs/bpcl-recruitment-2026-executive-posts-open-high-salary-and-benefits-announced-gdp/articleshow-vdnltgb</link>
            <guid isPermaLink="true">https://kannada.asianetnews.com/jobs/bpcl-recruitment-2026-executive-posts-open-high-salary-and-benefits-announced-gdp/articleshow-vdnltgb</guid>
            <pubDate>Fri, 24 Apr 2026 20:00:15 +0530</pubDate>
            <description><![CDATA[ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) 250ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಅಸೋಸಿಯೇಟ್ ಎಕ್ಸಿಕ್ಯೂಟಿವ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿದ್ದು, ಆಯ್ಕೆಯಾದವರಿಗೆ ಗರಿಷ್ಠ ₹1.40 ಲಕ್ಷದವರೆಗೆ ಆಕರ್ಷಕ ವೇತನ ದೊರೆಯಲಿದೆ. ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01e1ed8te9xbdbvfxakeagpvcs,imgname-pjimage--57--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದ ಪ್ರಮುಖ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಒಂದಾದ Bharat Petroleum Corporation Limited (ಬಿಪಿಸಿಎಲ್) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶವನ್ನು ಘೋಷಿಸಿದೆ. ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ ಸಾಧಿಸಲು ಬಯಸುವ ಅಭ್ಯರ್ಥಿಗಳಿಗಾಗಿ ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 250ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ವಿಶೇಷತೆ ಎಂದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಗರಿಷ್ಠ ₹1.40 ಲಕ್ಷವರೆಗೆ ಆಕರ್ಷಕ ಮಾಸಿಕ ವೇತನ ಲಭ್ಯವಿರುವುದು.&lt;/p&gt;&lt;h2&gt;ಹುದ್ದೆಗಳ ವಿವರ ಮತ್ತು ವೇತನ&lt;/h2&gt;&lt;p&gt;ಈ ನೇಮಕಾತಿಯಲ್ಲಿ ಮುಖ್ಯವಾಗಿ &lsquo;ಅಸೋಸಿಯೇಟ್ ಎಕ್ಸಿಕ್ಯೂಟಿವ್&rsquo; ಹಾಗೂ &lsquo;ಜೂನಿಯರ್ ಎಕ್ಸಿಕ್ಯೂಟಿವ್&rsquo; ಹುದ್ದೆಗಳಿಗೆ ಆದ್ಯತೆ ನೀಡಲಾಗಿದೆ.&lt;/p&gt;&lt;p&gt;ಅಸೋಸಿಯೇಟ್ ಎಕ್ಸಿಕ್ಯೂಟಿವ್: ಈ ಹುದ್ದೆಗೆ ಆಯ್ಕೆಯಾದವರಿಗೆ ₹40,000 ರಿಂದ ಆರಂಭವಾಗಿ ಗರಿಷ್ಠ ₹1,40,000 ವರೆಗೆ ಸಂಬಳ ನೀಡಲಾಗುತ್ತದೆ. ಜೂನಿಯರ್ ಎಕ್ಸಿಕ್ಯೂಟಿವ್: ತಾಂತ್ರಿಕ ವಿಭಾಗಕ್ಕೆ ಸೇರಿದ ಈ ಹುದ್ದೆಗಳಿಗೆ ₹30,000 ರಿಂದ ₹1,20,000 ವರೆಗೆ ವೇತನ ಇರಲಿದೆ.&lt;/p&gt;&lt;p&gt;ಇದರ ಜೊತೆಗೆ ವೈದ್ಯಕೀಯ ಸೌಲಭ್ಯಗಳು, ರಜೆ ಭತ್ಯೆ ಹಾಗೂ ಇತರೆ ಸರ್ಕಾರಿ ಕಂಪನಿಗಳ ಸೌಲಭ್ಯಗಳನ್ನೂ ಅಭ್ಯರ್ಥಿಗಳು ಪಡೆಯಬಹುದು.&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ ಮತ್ತು ಅನುಭವ&lt;/h2&gt;&lt;p&gt;ಪ್ರತಿ ಹುದ್ದೆಗೆ ಬಿಪಿಸಿಎಲ್ ವಿಭಿನ್ನ ಅರ್ಹತೆಗಳನ್ನು ನಿಗದಿಪಡಿಸಿದೆ:&lt;/p&gt;&lt;p&gt;ಕ್ವಾಲಿಟಿ ಅಶ್ಯುರೆನ್ಸ್: ಕೆಮಿಸ್ಟ್ರಿಯಲ್ಲಿ ಎಂ.ಎಸ್ಸಿ ಪದವಿ ಹೊಂದಿದ್ದು, ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಇರಬೇಕು. ಜೂನಿಯರ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್): ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಸಿವಿಲ್ ಎಂಜಿನಿಯರಿಂಗ್&zwnj;ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅಕೌಂಟ್ಸ್ ಮತ್ತು ಫೈನಾನ್ಸ್: ಸಿಎ (CA) ಅಥವಾ ಸಿಎಂಎ (CMA) ಇಂಟರ್ಮೀಡಿಯೇಟ್ ಪೂರೈಸಿದ ಅಭ್ಯರ್ಥಿಗಳಿಗೆ ಅವಕಾಶವಿದೆ. ಅಧಿಕೃತ ಭಾಷಾ ಅನುಷ್ಠಾನ: ಹಿಂದಿಯಲ್ಲಿ ಎಂಎ ಪದವಿ ಪಡೆದವರಿಗೆ ಈ ವಿಭಾಗದಲ್ಲಿ ಹುದ್ದೆಗಳು ಲಭ್ಯವಿವೆ. ವಯೋಮಿತಿ ಮತ್ತು ಸಡಿಲಿಕೆ&lt;/p&gt;&lt;p&gt;ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಿರಬೇಕು. ಹುದ್ದೆಗಳ ಪ್ರಕಾರ ಗರಿಷ್ಠ ವಯೋಮಿತಿ 32 ರಿಂದ 35 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಸರ್ಕಾರದ ಮೀಸಲಾತಿ ನಿಯಮಗಳಂತೆ ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ&lt;/h2&gt;&lt;p&gt;ಅಭ್ಯರ್ಥಿಗಳ ಸಾಮರ್ಥ್ಯವನ್ನು ಅಳೆಯಲು ಬಹುಹಂತದ ಆಯ್ಕೆ ಪ್ರಕ್ರಿಯೆಯನ್ನು ರೂಪಿಸಲಾಗಿದೆ. ಮೊದಲು ಅರ್ಜಿಗಳ ಸ್ಕ್ರೀನಿಂಗ್ ನಡೆಯುತ್ತದೆ. ಬಳಿಕ ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಗುಂಪು ಚರ್ಚೆ (GD) ಮತ್ತು ವೈಯಕ್ತಿಕ ಸಂದರ್ಶನ (PI) ನಡೆಯುತ್ತದೆ. ಅಂತಿಮ ಹಂತದಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;p&gt;ಆಸಕ್ತ ಅಭ್ಯರ್ಥಿಗಳು ಬಿಪಿಸಿಎಲ್&zwnj;ನ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ &lsquo;Careers&rsquo; ವಿಭಾಗದಲ್ಲಿ ಪ್ರಸ್ತುತ ನೇಮಕಾತಿ ಲಿಂಕ್ ಅನ್ನು ತೆರೆಯಬೇಕು. ಅಗತ್ಯ ದಾಖಲೆಗಳನ್ನು ಅಪ್&zwnj;ಲೋಡ್ ಮಾಡಿ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ₹1180 ಅರ್ಜಿ ಶುಲ್ಕವಿದ್ದು, ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.&lt;/p&gt;&lt;p&gt;ಈ ನೇಮಕಾತಿ ಪ್ರಕ್ರಿಯೆ ಮೂಲಕ ಉತ್ತಮ ಸಂಬಳ ಮತ್ತು ಭದ್ರ ಭವಿಷ್ಯವನ್ನು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭ್ಯವಾಗಿದ್ದು, ಆಸಕ್ತರು ಸಮಯ ವ್ಯರ್ಥ ಮಾಡದೇ ಅರ್ಜಿ ಸಲ್ಲಿಸುವುದು ಒಳಿತು.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/bpcl-recruitment-2026-executive-posts-open-high-salary-and-benefits-announced-gdp/articleshow-vdnltgb"/>
        </item>
        <item>
            <title><![CDATA[ಕೇಂದ್ರ ಸರ್ಕಾರಿ ನೌಕರರಿಗೆ ಭಲ್ಲೇ ಭಲ್ಲೇ, ಹೆಚ್ಚಾಗ್ತಿದೆ ಸಂಬಳ]]></title>
            <link>https://kannada.asianetnews.com/gallery/central-government-jobs/dearness-allowance-da-increased-good-news-for-central-government-employees-x1pyuag</link>
            <guid isPermaLink="true">https://kannada.asianetnews.com/gallery/central-government-jobs/dearness-allowance-da-increased-good-news-for-central-government-employees-x1pyuag</guid>
            <pubDate>Sat, 18 Apr 2026 20:57:27 +0530</pubDate>
            <description><![CDATA[&lt;p&gt;Dearness Allowance : ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಬಹುದಿನಗಳ ಆಸೆ ಈಡೇರಿದೆ. ಶೀಘ್ರವೇ ಕೇಂದ್ರ ಸರ್ಕಾರಿ ನೌಕರರ ಜೇಬು ತುಂಬಲಿದೆ. ತುಟ್ಟಿ ಭತ್ಯ ಏರಿಕೆಗೆ ಸರ್ಕಾರ ಅಸ್ತು ಎಂದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpgjz8srfwts9efgn37cy1jm,imgname-da-1776525747000.jpg" type="image/jpeg" height="390" width="690"/>
            <content:encoded><![CDATA[&lt;p&gt;Dearness Allowance : ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಬಹುದಿನಗಳ ಆಸೆ ಈಡೇರಿದೆ. ಶೀಘ್ರವೇ ಕೇಂದ್ರ ಸರ್ಕಾರಿ ನೌಕರರ ಜೇಬು ತುಂಬಲಿದೆ. ತುಟ್ಟಿ ಭತ್ಯ ಏರಿಕೆಗೆ ಸರ್ಕಾರ ಅಸ್ತು ಎಂದಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ಸಿಕ್ಕಿದೆ. ಭಾರತ ಸರ್ಕಾರ ಮಹತ್ವದ ಸುದ್ದಿ ನೀಡಿದೆ. ಮೂಲಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ (ಡಿಎ)ಯನ್ನು ಶೇಕಡಾ 2ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರ ಜೇಬು ತುಂಬಲಿದೆ.&lt;/p&gt;&lt;img&gt;&lt;p&gt;ಸರ್ಕಾರದ ಈ ನಿರ್ಧಾರದ ನಂತ್ರ ನೌಕರರ ಒಟ್ಟು ತುಟ್ಟಿ ಭತ್ಯೆ ಈಗ ಶೇಕಡಾ 58ರಿಂದ ಶೇಕಡಾ 60 ಕ್ಕೆ ಏರಿಕೆಯಾದಂತಾಗಿದೆ. ಈ ಹೆಚ್ಚಳವು ಸರಿಸುಮಾರು 5 ಮಿಲಿಯನ್ ಸರ್ಕಾರಿ ನೌಕರರು ಮತ್ತು 6.5 ಮಿಲಿಯನ್ಗಿಂತಲೂ ಹೆಚ್ಚು ಪಿಂಚಣಿದಾರರಿಗೆ ನೇರವಾಗಿ ಲಾಭ ನೀಡಲಿದೆ. ಸರ್ಕಾರಿ ನೌಕರರ ಮಾಸಿಕ ಸಂಬಳ ಹಾಗೂ ಪಿಂಚಣಿಯಲ್ಲಿ ಏರಿಕೆಯಾಗಲಿದೆ.&lt;/p&gt;&lt;img&gt;&lt;p&gt;ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಎಲ್ಲ ಕೇಂದ್ರ ಸರ್ಕಾರಿ ನೌಕರರ ಸಂಬಳ ಹೆಚ್ಚಾಗಲಿದೆ. ನೌಕರರ ಸಂಬಳ ಏರಿಕೆ ಬಗ್ಗೆ ಹೇಳೋದಾದ್ರೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 36,500 ಆಗಿದ್ದರೆ, ಶೇಕಡಾ 60 ರಷ್ಟು ತುಟ್ಟಿ ಭತ್ಯೆ ಅಂದ್ರೆ ಡಿಎ ರೂಪದಲ್ಲಿ ನೌಕರರಿಗೆ 21,900 ರೂಪಾಯಿ ಸಿಗಲಿದೆ. ಜನವರಿ 1, 2026 ರಿಂದಲೇ ಈ ಹೊಸ ತುಟ್ಟಿ ಭತ್ಯೆ ಹಣ ನೌಕರರಿಗೆ ಸಿಗಲಿದೆ. ನೌಕರರಿಗೆ ಮುಂದಿನ ತಿಂಗಳಿನಿಂದಲೇ ಹೆಚ್ಚಿದ ಸಂಬಳದ ಜೊತೆಗೆ ಹಿಂದಿನ ಮೂರು ತಿಂಗಳ ಬಾಕಿ ಸಂಬಳ ಕೂಡ ಸಿಗಲಿದೆ.&lt;/p&gt;&lt;img&gt;&lt;p&gt;ಕೇಂದ್ರ ಸರ್ಕಾರಿ ನೌಕರರು ಈ ದಿನಕ್ಕಾಗಿ ಕಾಯ್ತಿದ್ದರು. ಕೇಂದ್ರ ಸರ್ಕಾರ ತುಟ್ಟಿ ಭತ್ಯ ಹೆಚ್ಚಳ ಮಾಡಲಿದೆ ಎನ್ನುವ ಸುದ್ದಿ ಇತ್ತು. ಆದ್ರೆ ಅಧಿಕೃತ ಪ್ರಕಟಣೆ ಬಾಕಿ ಇತ್ತು. ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಉದ್ಯೋಗಿಗಳಿಗೆ ನೆಮ್ಮದಿ ನೀಡಿದೆ. 8 ನೇ ವೇತನ ಆಯೋಗದ ಅಡಿಯಲ್ಲಿ ವೇತನ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಉದ್ಯೋಗಿ ಸಂಘಟನೆಗಳು ಒತ್ತಾಯಿಸುತ್ತಿರುವ ಸಮಯದಲ್ಲಿ ಈ ಹೆಚ್ಚಳವಾಗಿದೆ.&lt;/p&gt;&lt;img&gt;&lt;p&gt;ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಸರ್ಕಾರಿ ನೌಕರರ ವೆಚ್ಚಗಳನ್ನು ಸರಿದೂಗಿಸಲು, ಸರ್ಕಾರವು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈನಲ್ಲಿ ತುಟ್ಟಿಭತ್ಯೆಯನ್ನು ಹೆಚ್ಚಿಸುತ್ತದೆ. ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ ಡೇಟಾ ಆಧರಿಸಿ ಲೆಕ್ಕಹಾಕಲಾಗುತ್ತದೆ. ಇದು ಅಗತ್ಯ ವಸ್ತುಗಳ ಬೆಲೆಗಳು ಎಷ್ಟು ಏರಿವೆ ಎಂಬುದನ್ನು ತೋರಿಸುತ್ತದೆ. ಮಾರುಕಟ್ಟೆ ಬೆಲೆಗಳು ಹೆಚ್ಚಾದಂತೆ ಸಂಬಳದ ಮೌಲ್ಯವನ್ನು ಕಾಪಾಡಿಕೊಳ್ಳಲು ಸರ್ಕಾರ ಈ ಭತ್ಯೆಯನ್ನು ಹೆಚ್ಚಿಸುತ್ತದೆ.&lt;/p&gt;]]></content:encoded>
            <category>jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/central-government-jobs/dearness-allowance-da-increased-good-news-for-central-government-employees-x1pyuag"/>
        </item>
        <item>
            <title><![CDATA[ಸರ್ಕಾರಿ ಟೆಂಡರ್ ಹೈಟೆಕ್ ವಂಚನೆ: ತಾನು IAS ಅಧಿಕಾರಿ ಎಂದು ನಂಬಿಸಿ ಉದ್ಯಮಿಗೆ ₹41 ಲಕ್ಷ ಪಂಗನಾಮ ಹಾಕಿದ ಕಿರಾತಕ!]]></title>
            <link>https://kannada.asianetnews.com/state/fake-ias-officer-fraud-bengaluru-amruthahally-41-lakh-scam-sat/articleshow-xpa24gk</link>
            <guid isPermaLink="true">https://kannada.asianetnews.com/state/fake-ias-officer-fraud-bengaluru-amruthahally-41-lakh-scam-sat/articleshow-xpa24gk</guid>
            <pubDate>Thu, 16 Apr 2026 13:27:37 +0530</pubDate>
            <description><![CDATA[&lt;p&gt;ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಚಿಕ್ಕಮಗಳೂರಿನ ಉದ್ಯಮಿಗೆ ಆಮಿಷವೊಡ್ಡಿ, ಅವರಿಂದ 41 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ. ವಂಚನೆಗೊಳಗಾದ ಉದ್ಯಮಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpamab2phv2cjs3qmxqcvhs9,imgname-chikkamagaluru-fake-ias-officer-scam-1776325831766.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಚಿಕ್ಕಮಗಳೂರು (ಏ.16): ರಾ&lt;/strong&gt;ಜಧಾನಿ ಬೆಂಗಳೂರಿನಲ್ಲಿ ಹೈಟೆಕ್ ವಂಚನೆಯೊಂದು ಬೆಳಕಿಗೆ ಬಂದಿದೆ. ತಾನು ಐಎಎಸ್ (IAS) ಅಧಿಕಾರಿ ಎಂದು ಸುಳ್ಳು ಹೇಳಿ, ಸರ್ಕಾರಿ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಚಿಕ್ಕಮಗಳೂರಿನ ಉದ್ಯಮಿಯೊಬ್ಬರಿಂದ ಬರೋಬ್ಬರಿ 41 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಘಟನೆ ನಡೆದಿದೆ. ಈ ಸಂಬಂಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಮೂಲತಃ ಚಿಕ್ಕಮಗಳೂರಿನ ನಿವಾಸಿಯಾದ ಸತೀಶ್ ಜಿ.ಆರ್. ಅವರು ಅಲ್ಲಿ ಮೆಡಿಕಲ್ ಮತ್ತು ಜನರಲ್ ಸ್ಟೋರ್ ನಡೆಸುತ್ತಿದ್ದಾರೆ. ಇವರಿಗೆ ಚಿಕ್ಕಮಗಳೂರಿನ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಚಂದ್ರಶೇಖರ್ ಅವರ ಮೂಲಕ ಮಿಥುನ್ (A1) ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಈ ಮಿಥುನ್ ತಾನು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿ ಸತೀಶ್ ಅವರ ನಂಬಿಕೆ ಗಳಿಸಿದ್ದಾನೆ.&lt;/p&gt;&lt;h2&gt;&lt;strong&gt;ಸಬ್ಸಿಡಿ ಮತ್ತು ಗುತ್ತಿಗೆಯ ಆಮಿಷ:&lt;/strong&gt;&lt;/h2&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧ ಸರಬರಾಜು ಮಾಡುವ (NHM) ಗುತ್ತಿಗೆಯನ್ನು ಕೊಡಿಸುವುದಾಗಿ ಮಿಥುನ್ ಆಮಿಷವೊಡ್ಡಿದ್ದಾನೆ. ಇದಕ್ಕಾಗಿ ಸುಮಾರು 1.8 ಕೋಟಿ ರೂಪಾಯಿ ಮೌಲ್ಯದ ಔಷಧ ಸರಬರಾಜು ಆದೇಶ ಕೊಡಿಸಲು 20% ಕಮಿಷನ್ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾನೆ. ಡಾ. ಚಂದ್ರಶೇಖರ್ ಅವರೇ ಈತನನ್ನು ಪರಿಚಯಿಸಿದ್ದರಿಂದ ಸತೀಶ್ ಅವರು ಯಾವುದೇ ಅನುಮಾನವಿಲ್ಲದೆ ಹಣ ನೀಡಲು ಒಪ್ಪಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಲಕ್ಷಾಂತರ ರೂಪಾಯಿ ವಸೂಲಿ:&lt;/strong&gt;&lt;/h3&gt;&lt;p&gt;ದೂರಿನ ಪ್ರಕಾರ, ದಿನಾಂಕ 18/01/2026 ರಂದು ಬೆಂಗಳೂರಿನ ಜಕ್ಕೂರು ಏರೋಡ್ರೋಮ್ ರಸ್ತೆಯಲ್ಲಿ ಸತೀಶ್ ಅವರು ಮಿಥುನ್&zwnj;ಗೆ ಮೊದಲ ಕಂತಿನ ರೂಪದಲ್ಲಿ 36 ಲಕ್ಷ ರೂಪಾಯಿ ನಗದು ಹಣವನ್ನು ನೀಡಿದ್ದಾರೆ. ನಂತರ ಮತ್ತೆ 5 ಲಕ್ಷ ರೂಪಾಯಿಗಳನ್ನು ಆನ್&zwnj;ಲೈನ್ ಬ್ಯಾಂಕಿಂಗ್ ಮೂಲಕ ಮಿಥುನ್&zwnj;ನ ಹೆಚ್&zwnj;ಡಿಎಫ್&zwnj;ಸಿ (HDFC) ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಒಟ್ಟಾರೆಯಾಗಿ 41 ಲಕ್ಷ ರೂಪಾಯಿಗಳನ್ನು ಆರೋಪಿಯು ವಂಚನೆಯಿಂದ ಪಡೆದುಕೊಂಡಿದ್ದಾನೆ.&lt;/p&gt;&lt;h2&gt;&lt;strong&gt;ಬೆಳಕಿಗೆ ಬಂದ ಸತ್ಯ:&lt;/strong&gt;&lt;/h2&gt;&lt;p&gt;ಹಣ ಪಡೆದ ನಂತರ ಗುತ್ತಿಗೆ ಆದೇಶ ನೀಡದೆ ಮಿಥುನ್ ಸತಾಯಿಸಲು ಶುರು ಮಾಡಿದ್ದಾನೆ. ಇದರಿಂದ ಅನುಮಾನಗೊಂಡ ಸತೀಶ್ ಅವರು ಆರೋಗ್ಯ ಸೌಧಕ್ಕೆ ಭೇಟಿ ನೀಡಿ ವಿಚಾರಿಸಿದಾಗ, ಮಿಥುನ್ ಎಂಬ ಹೆಸರಿನ ಯಾವುದೇ ಐಎಎಸ್ ಅಧಿಕಾರಿ ಅಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ಆಘಾತಕಾರಿ ಸತ್ಯ ತಿಳಿದುಬಂದಿದೆ. ತಾನು ವಂಚನೆಗೆ ಒಳಗಾಗಿರುವುದು ಖಚಿತವಾದ ನಂತರ ಸತೀಶ್ ಅವರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ತನಿಖೆ:&lt;/strong&gt;&lt;/h2&gt;&lt;p&gt;ಅಮೃತಹಳ್ಳಿ ಪೊಲೀಸರು ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 318(4) (ವಂಚನೆ) ಮತ್ತು 319(2) (ಆದರ್ಶ ಪುರುಷನಂತೆ ನಟಿಸಿ ವಂಚನೆ ಮಾಡುವುದು/Impersonation) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಎಸ್&zwnj;ಐ ಪ್ರಭು ಕೆ.ಎಲ್. ಅವರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಮಿಥುನ್ ಪತ್ತೆಗೆ ಬಲೆ ಬೀಸಿದ್ದಾರೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರಿಗೆ ಎಚ್ಚರಿಕೆ:&lt;/strong&gt;&lt;/h3&gt;&lt;p&gt;ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳ ಹೆಸರಲ್ಲಿ ಅಥವಾ ಪ್ರಭಾವಿ ವ್ಯಕ್ತಿಗಳ ಸೋಗಿನಲ್ಲಿ ಗುತ್ತಿಗೆ ಮತ್ತು ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುವ ಜಾಲಗಳು ಹೆಚ್ಚಾಗುತ್ತಿವೆ. ಯಾರೇ ಆಗಲಿ ಅಧಿಕೃತ ಕಚೇರಿಗಳಲ್ಲಿ ವಿಚಾರಿಸದೆ ಯಾರಿಗೂ ಲಕ್ಷಾಂತರ ರೂಪಾಯಿ ಹಣ ನೀಡಬಾರದು ಎಂದು ಪೊಲೀಸರು ಈ ಮೂಲಕ ಜನತೆಗೆ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/fake-ias-officer-fraud-bengaluru-amruthahally-41-lakh-scam-sat/articleshow-xpa24gk"/>
        </item>
    </channel>
</rss>
