<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 29 Aug 2026 08:41:24 +0530</lastBuildDate>
        <atom:link href="https://kannada.asianetnews.com/rss/jobs" rel="self" type="application/rss+xml"/>
        <item>
            <title><![CDATA[ಐಟಿ ಉದ್ಯೋಗಿಗಳ ಪ್ರೈವೆಸಿಗೆ ಬಿತ್ತು ಕನ್ನ: ಲ್ಯಾಪ್‌ಟಾಪ್‌ಗಳಲ್ಲಿ ಮಾನಿಟರಿಂಗ್ ಸಾಫ್ಟ್‌ವೇರ್ ಹಾಕಿ ಟ್ರ್ಯಾಕ್‌ ಮಾಡಲು ಆರಂಭಿಸಿದ ಟಿಸಿಎಸ್!]]></title>
            <link>https://kannada.asianetnews.com/it-jobs/tcs-laptop-monitoring-tool-sparks-employee-surveillance-security-concerns-san/articleshow-0127uo0</link>
            <guid isPermaLink="true">https://kannada.asianetnews.com/it-jobs/tcs-laptop-monitoring-tool-sparks-employee-surveillance-security-concerns-san/articleshow-0127uo0</guid>
            <pubDate>Thu, 20 Aug 2026 20:24:01 +0530</pubDate>
            <description><![CDATA[&lt;p&gt;TCS ತನ್ನ ಉದ್ಯೋಗಿಗಳ ಲ್ಯಾಪ್&zwnj;ಟಾಪ್&zwnj;ಗಳಲ್ಲಿ 'ಡಿಜಿಟಲ್ ಯೂಸರ್ ಎಕ್ಸ್&zwnj;ಪೀರಿಯನ್ಸ್ ಮಾನಿಟರಿಂಗ್' ಟೂಲ್ ಅಳವಡಿಸಿದೆ. ಈ ಕ್ರಮವು ಡೇಟಾ ಭದ್ರತೆಗಾಗಿಯೇ ಅಥವಾ ಉದ್ಯೋಗಿಗಳ ಚಟುವಟಿಕೆಗಳ ಮೇಲೆ ಕಣ್ಣಿಡಲು ಬಳಸಲಾಗುತ್ತಿದೆಯೇ ಎಂಬ ಆತಂಕ ಮತ್ತು ಅನುಮಾನಗಳನ್ನು ಸಿಬ್ಬಂದಿ ವಲಯದಲ್ಲಿ ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5kt78q4akp266c66373ycb,imgname-tcs-hiring-ai-jobs-india-it-sector-freshers-recruitment-workforce-1783673724183.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.20): &lt;/strong&gt;ಭಾರತದ ಪ್ರಮುಖ ಐಟಿ ದೈತ್ಯ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನ ಉದ್ಯೋಗಿಗಳಿಗೆ ನೀಡಲಾಗಿರುವ ಲ್ಯಾಪ್&zwnj;ಟಾಪ್&zwnj;ಗಳಲ್ಲಿ 'ಡಿಜಿಟಲ್ ಯೂಸರ್ ಎಕ್ಸ್&zwnj;ಪೀರಿಯನ್ಸ್ ಮಾನಿಟರಿಂಗ್' (Digital User Experience Monitoring) ಎಂಬ ವಿಶೇಷ ಟೂಲ್ ಒಂದನ್ನು ಅಳವಡಿಸಿದೆ. ಈ ನಡೆ ಇದೀಗ ಉದ್ಯೋಗಿಗಳ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಇದನ್ನು ಡೇಟಾ ಭದ್ರತೆಗಾಗಿ ಬಳಸಲಾಗುತ್ತಿದೆಯೇ ಅಥವಾ ಸಿಬ್ಬಂದಿಗಳ ದಿನನಿತ್ಯದ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ತರಲಾಗಿದೆಯೇ ಎನ್ನುವ ಪ್ರಶ್ನೆಗಳು ಎದ್ದಿವೆ.&lt;/p&gt;&lt;p&gt;ಕಂಪನಿ ನೀಡಿದ ಲ್ಯಾಪ್&zwnj;ಟಾಪ್&zwnj;ಗಳಲ್ಲಿ ಅಳವಡಿಸಲಾಗಿರುವ ಈ ತಂತ್ರಜ್ಞಾನವು, ಉದ್ಯೋಗಿಗಳು ಯಾವೆಲ್ಲಾ ಆ್ಯಪ್&zwnj;ಗಳನ್ನು ಬಳಸುತ್ತಿದ್ದಾರೆ ಮತ್ತು ಪ್ರತಿಯೊಂದು ಆ್ಯಪ್&zwnj;ನಲ್ಲಿ ಎಷ್ಟು ಸಮಯ ಕಳೆಯುತ್ತಿದ್ದಾರೆ ಎನ್ನುವುದನ್ನು ಒಳಗೊಂಡಂತೆ ಹಲವು ಪ್ರಮುಖ ಮಾಹಿತಿಗಳನ್ನು ಟ್ರ್ಯಾಕ್ ಮಾಡಲು ಟಿಸಿಎಸ್&zwnj;ಗೆ ಅವಕಾಶ ನೀಡುತ್ತದೆ.&lt;/p&gt;&lt;h2&gt;&lt;strong&gt;ಸುರಕ್ಷತೆಯೋ ಅಥವಾ ಅತಿಯಾದ ನಿಯಂತ್ರಣವೋ?&lt;/strong&gt;&lt;/h2&gt;&lt;p&gt;ಟಿಸಿಎಸ್ ಸಂಸ್ಥೆಯ ಈ ನಡೆಯನ್ನು ಆಂತರಿಕವಾಗಿ ಎರಡು ಕೋನಗಳಲ್ಲಿ ನೋಡಲಾಗುತ್ತಿದೆ. ಮೊದಲನೆಯದಾಗಿ ಕಂಪನಿಯ ಪ್ರಮುಖ ಡೇಟಾ ಸೋರಿಕೆಯಾಗುವುದನ್ನು (Data Leak) ತಡೆಯುವುದು. ಎರಡನೆಯದಾಗಿ, ಉದ್ಯೋಗಿಗಳ ಸಾಧನಗಳಲ್ಲಿ (Devices) ಅವರ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಯಂತ್ರಣ ಮತ್ತು ನಿಗಾ ಹೊಂದುವುದು.&lt;/p&gt;&lt;p&gt;ಆದರೆ, ಈ ಕುರಿತು ಮಾಧ್ಯಮಗಳು ಕೇಳಿದ ಯಾವುದೇ ಪ್ರಶ್ನೆಗಳಿಗೆ ಟಿಸಿಎಸ್ ಕಂಪನಿ ಅಧಿಕೃತವಾಗಿ ಉತ್ತರಿಸಿಲ್ಲ. ಅಳವಡಿಸಲಾದ ಸಾಫ್ಟ್&zwnj;ವೇರ್&zwnj;ನ ಹೆಸರೇನು? ಅದನ್ನು ಪೂರೈಸಿದ ವೆಂಡರ್ ಯಾರು? ಸಾಫ್ಟ್&zwnj;ವೇರ್&zwnj;ನ ಸಾಮರ್ಥ್ಯವೇನು? ಉದ್ಯೋಗಿಗಳ ಯಾವ ಪ್ರಕಾರದ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ? ಮತ್ತು ಕಂಪನಿಯ ಯಾರಿಗೆ ಈ ಮಾಹಿತಿಯನ್ನು ವೀಕ್ಷಿಸುವ ಅಧಿಕಾರವಿದೆ? ಎಂಬ ಯಾವುದೇ ಪ್ರಶ್ನೆಗೂ ಟಿಸಿಎಸ್ ಸ್ಪಷ್ಟನೆ ನೀಡಿಲ್ಲ.&lt;/p&gt;&lt;h2&gt;&lt;strong&gt;ಉದ್ಯೋಗಿಗಳಲ್ಲಿ ಹೆಚ್ಚಿದ ಅನುಮಾನ&lt;/strong&gt;&lt;/h2&gt;&lt;p&gt;ಐಟಿ ಹಾಗೂ ಬಿಸಿನೆಸ್ ಪ್ರೊಸೆಸ್ ಮ್ಯಾನೇಜ್&zwnj;ಮೆಂಟ್ (BPM) ಕಂಪನಿಗಳು ಉದ್ಯೋಗಿ ಮಾನಿಟರಿಂಗ್ ಟೂಲ್&zwnj;ಗಳನ್ನು ವರ್ಷಗಳಿಂದ ಬಳಸುತ್ತಾ ಬಂದಿವೆಯಾದರೂ, ಟಿಸಿಎಸ್ ಈ ಹಠಾತ್ ಬದಲಾವಣೆಯ ಕುರಿತು ತನ್ನ ಸಿಬ್ಬಂದಿಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಕಮ್ಯುನಿಕೇಶನ್ ಕೊರತೆಯೇ ಇದೀಗ ಸಾಲು ಸಾಲು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.&lt;/p&gt;&lt;p&gt;ಈ ಕುರಿತು ಮಾತನಾಡಿರುವ ಇಐಐಆರ್&zwnj;ಟ್ರೆಂಡ್ (EIIRTrend) ಸಿಇಒ ಪರೀಕ್ಷ್ ಜೈನ್, &quot;ಯೂಸರ್&zwnj; ಡಿಜಿಟಲ್ ಅನುಭವ ಸರಿಯಾಗಿದೆಯೇ? ಅಪ್ಲಿಕೇಶನ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಅಥವಾ ಹ್ಯಾಂಗ್ ಆಗುತ್ತಿದೆಯೇ? ಮತ್ತು ಪ್ರತಿಯೊಂದು ಆ್ಯಪ್&zwnj;ನಲ್ಲಿ ಎಷ್ಟು ಸಮಯ ವಿನಿಯೋಗಿಸಲಾಗುತ್ತಿದೆ? ಎಂಬುದನ್ನು ಅರ್ಥಮಾಡಿಕೊಳ್ಳುವುದು ಈ ಸಾಫ್ಟ್&zwnj;ವೇರ್&zwnj;ನ ಉದ್ದೇಶವಾಗಿರಬಹುದು. ಕ್ಲೈಂಟ್ ನೆಟ್&zwnj;ವರ್ಕ್ ನಿರ್ವಹಿಸುವಾಗ ಇದೊಂದು ಪ್ರಮುಖ ನಿಯತಾಂಕವಾಗಿರುತ್ತದೆ. ಆದರೆ, ಹೌದು, ಕಂಪನಿಯು ಬಯಸಿದರೆ ಇದನ್ನು ಉದ್ಯೋಗಿಗಳ ಮೇಲೆ ಕಣ್ಣಿಡುವ ಸ್ಪೈವೇರ್ ಅಥವಾ ಸರ್ವೇಲೆನ್ಸ್ ಟೂಲ್ ಆಗಿಯೂ ಬಳಸಬಹುದು&quot; ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಮಾಹಿತಿ ಸುರಕ್ಷತೆಯ ಸವಾಲು ಹಾಗೂ ಪ್ರೈವೆಸಿ ಆತಂಕ&lt;/strong&gt;&lt;/h2&gt;&lt;p&gt;ಜಾಗತಿಕವಾಗಿ ಐಟಿ ಕಂಪನಿಗಳ ಮೇಲೆ ಗ್ರಾಹಕರ ಸೂಕ್ಷ್ಮ ಡೇಟಾವನ್ನು ರಕ್ಷಿಸುವ ಭಾರಿ ಒತ್ತಡವಿದೆ. ಆದರೆ ಈ ರೀತಿಯ ಟೂಲ್&zwnj;ಗಳ ಮೂಲಕ ಪ್ರತಿಯೊಬ್ಬ ಉದ್ಯೋಗಿಯ ಕೆಲಸದ ಸಮಯ ಮತ್ತು ಆ್ಯಪ್ ಬಳಕೆಯನ್ನು ವ್ಯಕ್ತಿಗತ ಮಟ್ಟದಲ್ಲಿ ಸಂಗ್ರಹಿಸಿದರೆ ಅದು ಅವರ ಖಾಸಗಿತನಕ್ಕೆ ಧಕ್ಕೆ ತರುತ್ತದೆ ಎನ್ನಲಾಗಿದೆ.&lt;/p&gt;&lt;p&gt;ಟಿಸಿಎಸ್&zwnj;ನಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಇಷ್ಟೊಂದು ಭಾರಿ ಪ್ರಮಾಣದ ಸಿಬ್ಬಂದಿಯ ಕಾರ್ಯಚಟುವಟಿಕೆಯ ಡೇಟಾವನ್ನು ಟ್ರ್ಯಾಕ್ ಮಾಡುವುದು ಮತ್ತು ವಿಶ್ಲೇಷಿಸುವುದೇ ಕಂಪನಿಗೆ ಮತ್ತೊಂದು ಕಾರ್ಯಾಚರಣೆಯ ಹಾಗೂ ಡೇಟಾ ನಿರ್ವಹಣೆಯ ಸವಾಲಾಗಲಿದೆ. ಈ ಸಾಫ್ಟ್&zwnj;ವೇರ್ ಮೂಲಕ ಲಭ್ಯವಾಗುವ ಡೇಟಾವನ್ನು ವ್ಯಕ್ತಿಗತವಾಗಿ ಲಿಂಕ್ ಮಾಡಲಾಗುತ್ತಿದೆಯೇ ಅಥವಾ ಐಟಿ ಭದ್ರತಾ ತಂಡಕ್ಕೆ ಕ್ರೋಢೀಕರಿಸಿ ನೀಡಲಾಗುತ್ತಿದೆಯೇ ಅಥವಾ ಮ್ಯಾನೇಜರ್&zwnj;ಗಳಿಗೆ ಪ್ರವೇಶ ನೀಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.&lt;/p&gt;&lt;h2&gt;&lt;strong&gt;ಕಾಫ್ನಿಝೆಂಟ್ ಹಾದಿಯಲ್ಲಿ ಟಿಸಿಎಸ್?&lt;/strong&gt;&lt;/h2&gt;&lt;p&gt;ಕಳೆದ ವರ್ಷ ಪ್ರಸಿದ್ಧ ಕಾಫ್ನಿಝೆಂಟ್ ಕಂಪನಿಯು 'ಪ್ರೋಹ್ಯಾನ್ಸ್' (ProHance) ಎಂಬ ವರ್ಕ್&zwnj;ಫೋರ್ಸ್ ಮಾನಿಟರಿಂಗ್ ಟೂಲ್ ಬಳಸಿ ಸುದ್ದಿಯಾಗಿತ್ತು. ಈ ಸಾಫ್ಟ್&zwnj;ವೇರ್ ಉದ್ಯೋಗಿಗಳು ಲ್ಯಾಪ್&zwnj;ಟಾಪ್ ಲಾಗಿನ್ ಆದ ಸಮಯ, ಬಳಸಿದ ಆ್ಯಪ್/ವೆಬ್&zwnj;ಸೈಟ್ ಹಾಗೂ ಕೆಲಸ ಮಾಡದೆ ಸುಮ್ಮನೆ ಕುಳಿತ (Inactivity) ಸಮಯವನ್ನು ಟ್ರ್ಯಾಕ್ ಮಾಡುತ್ತಿತ್ತು. ಆದರೆ ಕಾಫ್ನಿಝೆಂಟ್ ಇದನ್ನು ಉದ್ಯೋಗಿಗಳ ಕಾರ್ಯಕ್ಷಮತೆ ಅಳೆಯಲು ಬಳಸುತ್ತಿಲ್ಲ, ಕೇವಲ ಕ್ಲೈಂಟ್&zwnj;ಗಳ ವಿನಂತಿಯ ಮೇರೆಗೆ ಪ್ರಕ್ರಿಯೆಯ ದಕ್ಷತೆ ತಿಳಿಯಲು ಬಳಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿತ್ತು.&lt;/p&gt;&lt;h2&gt;&lt;strong&gt;ಝಡ್&zwnj;ಸ್ಕೇಲರ್ (Zscaler) ಜೊತೆಗಿನ ಪಾಲುದಾರಿಕೆ&lt;/strong&gt;&lt;/h2&gt;&lt;p&gt;ಕೆಲವು ತಿಂಗಳ ಹಿಂದೆಯಷ್ಟೇ ಟಿಸಿಎಸ್ ತನ್ನ ಸೈಬರ್ ಸೆಕ್ಯುರಿಟಿ ಪಾಲುದಾರ ಸಂಸ್ಥೆಯಾದ 'ಝಡ್&zwnj;ಸ್ಕೇಲರ್' ಜೊತೆಗಿನ ಒಪ್ಪಂದವನ್ನು ವಿಸ್ತರಿಸಿ 'ಟಿಸಿಎಸ್ ವರ್ಕ್&zwnj;ಸ್ಪೇಸ್ ಎಕ್ಸ್&zwnj;ಪೀರಿಯನ್ಸ್ ಸ್ಟುಡಿಯೋ' ಅನ್ನು ಬಿಡುಗಡೆ ಮಾಡಿತ್ತು. ಇದು 'ಝೀರೋ-ಟ್ರಸ್ಟ್ ಸೆಕ್ಯುರಿಟಿ' ಮತ್ತು 'ಡಿಜಿಟಲ್ ಎಕ್ಸ್&zwnj;ಪೀರಿಯನ್ಸ್ ಮಾನಿಟರಿಂಗ್' ಸೌಲಭ್ಯ ಹೊಂದಿದೆ ಎಂದು ತಿಳಿಸಲಾಗಿತ್ತು. ಪ್ರಸ್ತುತ ಉದ್ಯೋಗಿಗಳ ಲ್ಯಾಪ್&zwnj;ಟಾಪ್&zwnj;ಗೆ ಹಾಕಲಾಗಿರುವ ಟೂಲ್ ಇದೇ ಝಡ್&zwnj;ಸ್ಕೇಲರ್ ತಂತ್ರಜ್ಞಾನವೇ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.&lt;/p&gt;]]></content:encoded>
            <category>jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/it-jobs/tcs-laptop-monitoring-tool-sparks-employee-surveillance-security-concerns-san/articleshow-0127uo0"/>
        </item>
        <item>
            <title><![CDATA["ಎಷ್ಟು ಸಹಿಸಿಕೊಳ್ಲೋ ಅಷ್ಟು ಸಹಿಸಿಕೊಂಡೆ...": ಕಚೇರಿಯಲ್ಲಿ ನಡೆದ ಈ ಒಂದು ಘಟನೆಗೆ ದಿಢೀರ್ ರಾಜೀನಾಮೆ ನೀಡಿದ ಯುವತಿ!]]></title>
            <link>https://kannada.asianetnews.com/viral/cigarette-smoke-drives-woman-to-quit-her-job-resignation-letter-going-viral/articleshow-2vlzh7t</link>
            <guid isPermaLink="true">https://kannada.asianetnews.com/viral/cigarette-smoke-drives-woman-to-quit-her-job-resignation-letter-going-viral/articleshow-2vlzh7t</guid>
            <pubDate>Thu, 27 Aug 2026 18:18:59 +0530</pubDate>
            <description><![CDATA[&lt;p&gt;ಕಚೇರಿಯಲ್ಲಿ ಸಿಗರೇಟ್ ಹೊಗೆಯ ವಾಸನೆ ಹಾಗೂ ಅದರಿಂದ ಉಂಟಾಗುತ್ತಿದ್ದ ಅಸಹನೀಯ ವಾತಾವರಣದಿಂದ ಬೇಸತ್ತ ಜಾನ್ಹವಿ ಎಂಬ ಮಹಿಳೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. &lsquo;ಸಾಧ್ಯವಾದಷ್ಟು ಹೊಂದಿಕೊಳ್ಳಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ&rsquo; ಎಂದು ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಆರಂಭವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11c0sett9t1hspdrg183snr,imgname-woman-s-resignation-letter-going-viral-1787826300378.jpg" type="image/jpeg" height="390" width="690"/>
            <content:encoded><![CDATA[&lt;h2&gt;&lsquo;ಎಷ್ಟು ಸಹಿಸಿಕೊಳ್ಲೋ ಅಷ್ಟು ಸಹಿಸಿಕೊಂಡೆ&hellip;&rsquo;&lt;/h2&gt;&lt;p&gt;ಕೆಲಸದ ಸ್ಥಳದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೊಂದಿಕೊಳ್ಳುವುದು ಅನಿವಾರ್ಯ ಎಂದು ಹಲವರು ಭಾವಿಸುತ್ತಾರೆ. ಆದರೆ ಕಚೇರಿಯಲ್ಲಿನ ಸಿಗರೇಟ್ ಹೊಗೆಯ ವಾಸನೆ ಹಾಗೂ ಅದರಿಂದ ಉಂಟಾಗುತ್ತಿದ್ದ ಅಸಹನೀಯ ವಾತಾವರಣವನ್ನು ಕಾರಣವಾಗಿಸಿಕೊಂಡು ಜಾನ್ಹವಿ ಎಂಬ ಮಹಿಳೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಇಮೇಲ್&zwnj;ನ ಸ್ಕ್ರೀನ್&zwnj;ಶಾಟ್ ಅನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ತಮ್ಮ ಇಮೇಲ್&zwnj;ನಲ್ಲಿ ಜಾನ್ಹವಿ, &ldquo;ಸಿಗರೇಟಿನ ವಾಸನೆಯನ್ನು ಸಹಿಸಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಹೊಂದಿಕೊಳ್ಳಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ&rdquo; ಎಂದು ತಿಳಿಸಿದ್ದಾರೆ. ಕೊನೆಯಲ್ಲಿ, &ldquo;ನಾನು ಬದಲಾಗಬೇಕಾದ ವ್ಯಕ್ತಿ ಅಲ್ಲ&rdquo; ಎಂಬರ್ಥದ ಹೇಳಿಕೆಯನ್ನೂ ನೀಡಿದ್ದಾರೆ.&lt;/p&gt;&lt;h3&gt;ಹೊಗೆ ಮಾತ್ರವಲ್ಲ, ಆರೋಗ್ಯದ ಚಿಂತೆಯೂ ಇದೆ&lt;/h3&gt;&lt;p&gt;ರಾಜೀನಾಮೆ ಪತ್ರದೊಂದಿಗೆ ಜಾನ್ಹವಿ ಸಿಗರೇಟ್ ಹೊಗೆಗೆ ಒಡ್ಡಿಕೊಳ್ಳುವುದರಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ತಂಬಾಕು ಹೊಗೆ ವಾಯುಮಾರ್ಗಗಳನ್ನು ಕೆರಳಿಸಬಹುದು. ಕೆಲವರಲ್ಲಿ ಮೂಗು, ಗಂಟಲು ಮತ್ತು ಉಸಿರಾಟದ ಮಾರ್ಗದಲ್ಲಿ ಕಿರಿಕಿರಿ, ಎದೆಯಲ್ಲಿ ಅಸ್ವಸ್ಥತೆ ಅಥವಾ ಬಿಗಿತದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ಅವರು ಉಲ್ಲೇಖಿಸಿದ್ದಾರೆ.&lt;/p&gt;&lt;h3&gt;ಸೆಕೆಂಡ್&zwnj;ಹ್ಯಾಂಡ್ ಸ್ಮೋಕ್ ಮತ್ತೆ ಚರ್ಚೆಯಲ್ಲಿ&lt;/h3&gt;&lt;p&gt;ಧೂಮಪಾನ ಮಾಡದ ವ್ಯಕ್ತಿಗೂ ಸುತ್ತಮುತ್ತಲಿನವರ ಹೊಗೆಯಿಂದ ತೊಂದರೆಯಾಗಬಹುದೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ವಿಶೇಷವಾಗಿ ಕಚೇರಿ ಆವರಣ, ಕಟ್ಟಡದ ಪ್ರವೇಶದ್ವಾರ ಅಥವಾ ಬ್ರೇಕ್ ಪ್ರದೇಶಗಳಲ್ಲಿ ಧೂಮಪಾನ ಮಾಡುವುದರಿಂದ ಅದರ ವಾಸನೆ ಮತ್ತು ಹೊಗೆ ಇತರ ಉದ್ಯೋಗಿಗಳಿಗೂ ತಲುಪಬಹುದು.&lt;/p&gt;&lt;h3&gt;ರಾಜೀನಾಮೆಯೇ ಪರಿಹಾರವೇ?&lt;/h3&gt;&lt;p&gt;ಜಾನ್ಹವಿ ಅವರ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ತಮ್ಮ ಆರೋಗ್ಯ ಮತ್ತು ನೆಮ್ಮದಿಗೆ ಆದ್ಯತೆ ನೀಡಿ ರಾಜೀನಾಮೆ ನೀಡಿದ್ದನ್ನು ಧೈರ್ಯದ ನಿರ್ಧಾರ ಎಂದು ಶ್ಲಾಘಿಸಿದ್ದಾರೆ.&lt;/p&gt;&lt;p&gt;ಇನ್ನೊಂದೆಡೆ, ಮೊದಲು ಮ್ಯಾನೇಜ್&zwnj;ಮೆಂಟ್ ಅಥವಾ HR ಬಳಿ ದೂರು ನೀಡಿ, ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬಹುದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ತಮ್ಮ ಕಚೇರಿಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಎದುರಾಗಿದ್ದು, ನಿರ್ವಹಣೆಯ ಮಧ್ಯಸ್ಥಿಕೆಯಿಂದ ಪರಿಹಾರ ಕಂಡುಕೊಂಡಿರುವುದಾಗಿ ಹೇಳಿದ್ದಾರೆ.&lt;/p&gt;&lt;p&gt;Resigned from my job yesterday ! pic.twitter.com/gdKkA1KZW8&lt;/p&gt;&lt;p&gt;&mdash; Janhavi (@JanhaviChavada) August 26, 2026&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/cigarette-smoke-drives-woman-to-quit-her-job-resignation-letter-going-viral/articleshow-2vlzh7t"/>
        </item>
        <item>
            <title><![CDATA[UPSC interview: ಎತ್ತರ ಇರೋರು ಹೆಚ್ಚು ಊಟ ಮಾಡ್ತಾರಾ? ಈ ವಿಚಿತ್ರ ಪ್ರಶ್ನೆಗೆ ಜಾಣ್ಮೆಯ ಉತ್ತರ]]></title>
            <link>https://kannada.asianetnews.com/jobs/upsc-interview-do-tall-people-eat-more-tricky-upsc-interview-question-gkn/articleshow-30nd7qw</link>
            <guid isPermaLink="true">https://kannada.asianetnews.com/jobs/upsc-interview-do-tall-people-eat-more-tricky-upsc-interview-question-gkn/articleshow-30nd7qw</guid>
            <pubDate>Tue, 25 Aug 2026 09:05:18 +0530</pubDate>
            <description><![CDATA[&lt;p&gt;ಯುಪಿಎಸ್&zwnj;ಸಿ ಸಂದರ್ಶನದಲ್ಲಿ ಕೇಳಲಾಗುವ ಎತ್ತರ ಇರುವವರು ಹೆಚ್ಚು ಊಟ ಮಾಡುತ್ತಾರಾ? ಎಂಬಂತಹ ಪ್ರಶ್ನೆಗಳು ಅಭ್ಯರ್ಥಿಯ ವಿಶ್ಲೇಷಣಾ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಅದಕ್ಕೆ ನಿಮ್ಮ ಉತ್ತರ ಈ ಕೆಳಗಿನಂತೆ ಇರಲಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0t1wjjgwmp18gbhba87pctp,imgname-upsc-interview-1787580795472.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಯುಪಿಎಸ್&zwnj;ಸಿ (UPSC) ಸಂದರ್ಶನ ಎಂದರೆ ಕೇವಲ ಸಾಮಾನ್ಯ ಜ್ಞಾನದ ಪರೀಕ್ಷೆಯಲ್ಲ. ಇದು ಅಭ್ಯರ್ಥಿಯ ತಾರ್ಕಿಕ ಆಲೋಚನೆ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಸಮತೋಲಿತವಾಗಿ ಪ್ರತಿಕ್ರಿಯಿಸುವ ರೀತಿಯನ್ನು ಪರೀಕ್ಷಿಸುವ ವೇದಿಕೆ. ಕೆಲವೊಮ್ಮೆ ಇಲ್ಲಿ ಕೇಳಲಾಗುವ ಪ್ರಶ್ನೆಗಳು ತುಂಬಾ ಸರಳವಾಗಿ ಕಂಡರೂ ಅದರ ಹಿಂದೆ ಅಭ್ಯರ್ಥಿಯ ವ್ಯಕ್ತಿತ್ವವನ್ನು ಅಳೆಯುವ ಉದ್ದೇಶವಿರುತ್ತದೆ.&lt;/p&gt;&lt;p&gt;ಇತ್ತೀಚೆಗೆ ಯುಪಿಎಸ್&zwnj;ಸಿ ಮಾದರಿ ಸಂದರ್ಶನವೊಂದರಲ್ಲಿ (Mock Interview) ಅಭ್ಯರ್ಥಿಗೆ ಇಂತಹದ್ದೇ ಒಂದು ಪ್ರಶ್ನೆ ಕೇಳಲಾಗಿತ್ತು.ಎತ್ತರ ಇರುವ ವ್ಯಕ್ತಿಗಳು ಹೆಚ್ಚು ಆಹಾರ ಸೇವಿಸುತ್ತಾರೆಯೇ? ಎಂದು. ಈ ಪ್ರಶ್ನೆಗೆ ತಕ್ಷಣವೇ 'ಹೌದು' ಅಥವಾ 'ಇಲ್ಲ' ಎಂದು ಉತ್ತರಿಸುವುದು ಸರಿಯಲ್ಲ. ಬದಲಾಗಿ ಒಬ್ಬ ವ್ಯಕ್ತಿಯ ಆಹಾರದ ಪ್ರಮಾಣವು ಕೇವಲ ಎತ್ತರದ ಮೇಲೆ ಮಾತ್ರ ಅವಲಂಬಿತವಾಗಿಲ್ಲ ಎಂದು ವಿವರಿಸುವುದು ಜಾಣ್ಮೆಯ ಲಕ್ಷಣ.&lt;/p&gt;&lt;h2&gt;&lt;strong&gt;ಸಂದರ್ಶನದಲ್ಲಿ ನಿಮ್ಮ ಉತ್ತರ ಹೀಗಿರಲಿ&lt;/strong&gt;&lt;/h2&gt;&lt;p&gt;ಸರ್/ಮೇಡಂ, ಎತ್ತರ ಇರುವ ವ್ಯಕ್ತಿಗಳು ಕಡ್ಡಾಯವಾಗಿ ಹೆಚ್ಚು ಆಹಾರ ಸೇವಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ದೇಹದ ಗಾತ್ರ ಮತ್ತು ತೂಕ ಹೆಚ್ಚಾದಂತೆ ದೇಹಕ್ಕೆ ಬೇಕಾದ ಶಕ್ತಿಯ ಪ್ರಮಾಣವೂ ಹೆಚ್ಚಾಗಬಹುದು. ಒಬ್ಬ ವ್ಯಕ್ತಿಗೆ ಬೇಕಾದ ಆಹಾರದ ಪ್ರಮಾಣವು ಕೇವಲ ಎತ್ತರವನ್ನಲ್ಲದೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.&lt;/p&gt;&lt;h2&gt;&lt;strong&gt;ಆಹಾರದ ಪ್ರಮಾಣವನ್ನು ನಿರ್ಧರಿಸುವ ಪ್ರಮುಖ ಅಂಶಗಳು&lt;/strong&gt;&lt;/h2&gt;&lt;p&gt;ಎತ್ತರವಾಗಿದ್ದು ದಿನವಿಡೀ ಯಾವುದೇ ದೈಹಿಕ ಕೆಲಸ ಮಾಡದ ವ್ಯಕ್ತಿಗಿಂತ, ಕುಳ್ಳಗಿದ್ದರೂ ದಿನವಿಡೀ ದೈಹಿಕವಾಗಿ ಹೆಚ್ಚು ಸಕ್ರಿಯವಾಗಿರುವ ವ್ಯಕ್ತಿಗೆ ಹೆಚ್ಚಿನ ಆಹಾರದ ಅಗತ್ಯವಿರುತ್ತದೆ. ಪ್ರತಿಯೊಬ್ಬರ ದೇಹದ ಮೆಟಬಾಲಿಸಂ ದರವು ವಿಭಿನ್ನವಾಗಿರುತ್ತದೆ. ಇದು ದೇಹವು ಎಷ್ಟು ವೇಗವಾಗಿ ಶಕ್ತಿಯನ್ನು ವ್ಯಯಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಬೆಳೆಯುವ ವಯಸ್ಸಿನ ಮಕ್ಕಳಿಗೆ ಮತ್ತು ಹೆಚ್ಚು ದೈಹಿಕ ಶ್ರಮ ಪಡುವ ಯುವಕರಿಗೆ ಹೆಚ್ಚಿನ ಕ್ಯಾಲೊರಿಗಳ ಅಗತ್ಯವಿರುತ್ತದೆ. ವ್ಯಕ್ತಿಯ ಆರೋಗ್ಯ ಮತ್ತು ಜೀವನಶೈಲಿಯೂ ಆಹಾರದ ಪ್ರಮಾಣದ ಮೇಲೆ ಪ್ರಭಾವ ಬೀರುತ್ತದೆ.&lt;/p&gt;&lt;h2&gt;&lt;strong&gt;ಈ ಪ್ರಶ್ನೆಯ ಮೂಲಕ ಬೋರ್ಡ್ ಏನನ್ನು ಪರೀಕ್ಷಿಸುತ್ತದೆ?&lt;/strong&gt;&lt;/h2&gt;&lt;p&gt;ಯುಪಿಎಸ್&zwnj;ಸಿ ಸಂದರ್ಶನ ಮಂಡಳಿಯು ಇಂತಹ ಪ್ರಶ್ನೆಗಳ ಮೂಲಕ ಅಭ್ಯರ್ಥಿಯು ಯಾವುದೇ ವಿಷಯವನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ನೋಡದೆ ವೈಜ್ಞಾನಿಕ ಮತ್ತು ತಾರ್ಕಿಕವಾಗಿ ವಿಶ್ಲೇಷಿಸುತ್ತಾನೆಯೇ ಎಂದು ಗಮನಿಸುತ್ತದೆ. 'ಹೌದು' ಅಥವಾ 'ಇಲ್ಲ' ಎಂದು ನೇರವಾಗಿ ಹೇಳುವ ಬದಲು, ಅದರ ಹಿಂದಿನ ಕಾರಣಗಳನ್ನು ವಿವರಿಸುವುದು ಅಭ್ಯರ್ಥಿಯ ಆಳವಾದ ಆಲೋಚನಾ ಕ್ರಮವನ್ನು ತೋರಿಸುತ್ತದೆ.&lt;/p&gt;&lt;p&gt;ಯಾವುದೇ ವಿಷಯವನ್ನು ಅತಿಯಾಗಿ ಸಾಮಾನ್ಯೀಕರಿಸುವುದು ಸರಿಯಲ್ಲ. ಎತ್ತರವು ಆಹಾರದ ಅಗತ್ಯದ ಮೇಲೆ ಪ್ರಭಾವ ಬೀರಬಹುದಾದ ಒಂದು ಅಂಶ ಮಾತ್ರವೇ ಹೊರತು, ಅದೇ ಅಂತಿಮ ನಿರ್ಧಾರವಲ್ಲ ಎಂಬ ಸಮತೋಲಿತ ಉತ್ತರವು ನಿಮ್ಮನ್ನು ಒಬ್ಬ ಉತ್ತಮ ಆಡಳಿತಾಧಿಕಾರಿಯಾಗಿ ಬಿಂಬಿಸುತ್ತದೆ.&lt;/p&gt;]]></content:encoded>
            <category>jobs</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/jobs/upsc-interview-do-tall-people-eat-more-tricky-upsc-interview-question-gkn/articleshow-30nd7qw"/>
        </item>
        <item>
            <title><![CDATA[ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ.. ಈ ಬ್ಯಾಂಕ್‌ನಲ್ಲಿ 2,482 ಹುದ್ದೆಗಳಿಗೆ ಅರ್ಜಿ ಆಹ್ವಾನ..]]></title>
            <link>https://kannada.asianetnews.com/bank-jobs/golden-opportunity-for-bank-job-seekers-bank-of-baroda-announces-recruitment-for-2482-vacancies-gkn/articleshow-3vf2uua</link>
            <guid isPermaLink="true">https://kannada.asianetnews.com/bank-jobs/golden-opportunity-for-bank-job-seekers-bank-of-baroda-announces-recruitment-for-2482-vacancies-gkn/articleshow-3vf2uua</guid>
            <pubDate>Sat, 22 Aug 2026 17:53:09 +0530</pubDate>
            <description><![CDATA[&lt;p&gt;ಬ್ಯಾಂಕ್ ಆಫ್ ಬರೋಡಾ ದೇಶಾದ್ಯಂತ ಒಟ್ಟು 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಪದವಿ ಜೊತೆಗೆ ಕನಿಷ್ಠ ಒಂದು ವರ್ಷದ ಬ್ಯಾಂಕಿಂಗ್ ಅಧಿಕಾರಿ ಹುದ್ದೆಯ ಅನುಭವ ಹೊಂದಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 7, 2026 ರೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0p4aq3abncbk14mrscjqhjp,imgname-gemini-generated-image-mjavcbmjavcbmjav-1753089399914.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಬ್ಯಾಂಕ್ ಆಫ್ ಬರೋಡಾ (BOB) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ಇರುವ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ನಿಯಮಿತ (Regular) ಆಧಾರದ ಮೇಲೆ &lsquo;ಲೋಕಲ್ ಬ್ಯಾಂಕ್ ಆಫೀಸರ್&rsquo; (LBO) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ ಒಟ್ಟು 2,482 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ ಕರ್ನಾಟಕಕ್ಕೆ 130 ಹುದ್ದೆಗಳನ್ನು ಮೀಸಲಿಡಲಾಗಿದೆ. ಇನ್ನುಳಿದಂತೆ ನೆರೆರಾಜ್ಯಗಳಾದ ಆಂಧ್ರಪ್ರದೇಶದಲ್ಲಿ 80 ಹಾಗೂ ತೆಲಂಗಾಣದಲ್ಲಿ 50 ಹುದ್ದೆಗಳು ಲಭ್ಯವಿವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 7, 2026ರೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.&lt;/p&gt;&lt;h2&gt;&lt;strong&gt;ಅಗತ್ಯ ಶೈಕ್ಷಣಿಕ ಅರ್ಹತೆ&lt;/strong&gt;&lt;/h2&gt;&lt;ul&gt; &lt;li&gt;ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಪಡೆದಿರಬೇಕು.&lt;/li&gt; &lt;li&gt;ಇದರೊಂದಿಗೆ, ಆರ್&zwnj;ಬಿಐನ ಎರಡನೇ ಶೆಡ್ಯೂಲ್&zwnj;ನಲ್ಲಿ ನೋಂದಾಯಿತವಾಗಿರುವ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್&zwnj;ನಲ್ಲಿ ಕನಿಷ್ಠ ಒಂದು ವರ್ಷದ ಹುದ್ದೆಯ ನಂತರದ ಅಧಿಕಾರಿ ಮಟ್ಟದ ಅನುಭವ (Post-Qualification Experience as an Officer) ಹೊಂದಿರಬೇಕು.&lt;/li&gt; &lt;li&gt;ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು (ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡ) ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ನಿರರ್ಗಳವಾಗಿ ತಿಳಿದಿರಬೇಕು.&lt;/li&gt;&lt;/ul&gt;&lt;h2&gt;&lt;strong&gt;ವಯೋಮಿತಿ (ಆಗಸ್ಟ್ 1, 2026 ಕ್ಕೆ ಅನ್ವಯಿಸುವಂತೆ)&lt;/strong&gt;&lt;/h2&gt;&lt;ul&gt; &lt;li&gt;ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷಗಳ ಮಿತಿಯಲ್ಲಿರಬೇಕು&lt;/li&gt; &lt;li&gt;ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ&lt;/li&gt; &lt;li&gt;ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ: 5 ವರ್ಷಗಳ ಸಡಿಲಿಕೆ&lt;/li&gt; &lt;li&gt;ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ&lt;/li&gt; &lt;li&gt;ಪಿಡಬ್ಲ್ಯೂಬಿಡಿ (ವಿಕಲಚೇತನ) ಅಭ್ಯರ್ಥಿಗಳಿಗೆ: ಗರಿಷ್ಠ 15 ವರ್ಷಗಳವರೆಗೆ ಸಡಿಲಿಕೆ&lt;/li&gt;&lt;/ul&gt;&lt;h2&gt;&lt;strong&gt;ಅರ್ಜಿ ಶುಲ್ಕ&lt;/strong&gt;&lt;/h2&gt;&lt;ul&gt; &lt;li&gt;ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹850&lt;/li&gt; &lt;li&gt;ಎಸ್&zwnj;ಸಿ / ಎಸ್&zwnj;ಟಿ / ಪಿಡಬ್ಲ್ಯೂಬಿಡಿ / ಮಾಜಿ ಸೈನಿಕರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ: ₹175&lt;/li&gt;&lt;/ul&gt;&lt;h2&gt;&lt;strong&gt;ವೇತನ ಶ್ರೇಣಿ&lt;/strong&gt;&lt;/h2&gt;&lt;p&gt;ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹48,480 ರಿಂದ ಆರಂಭವಾಗಿ ₹85,920 ರವರೆಗೆ ಮೂಲ ವೇತನ (Basic Pay) ಸಿಗಲಿದೆ. ಇದರೊಂದಿಗೆ ಬ್ಯಾಂಕ್ ನಿಯಮಗಳ ಅನ್ವಯ ವಿವಿಧ ಭತ್ಯೆಗಳು ಮತ್ತು ಇತರೆ ಪ್ರయోజನಗಳು ಲಭ್ಯವಿರಲಿವೆ.&lt;/p&gt;&lt;h2&gt;&lt;strong&gt;ಆಯ್ಕೆ ಪ್ರಕ್ರಿಯೆ&lt;/strong&gt;&lt;/h2&gt;&lt;ul&gt; &lt;li&gt;ಆನ್&zwnj;ಲೈನ್ ಲಿಖಿತ ಪರೀಕ್ಷೆ&lt;/li&gt; &lt;li&gt;ಸೈಕೋಮೆಟ್ರಿಕ್ ಟೆಸ್ಟ್ (Psychometric Test)&lt;/li&gt; &lt;li&gt;ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (Language Test)&lt;/li&gt; &lt;li&gt;ಗ್ರೂಪ್ ಡಿಸ್ಕಷನ್ (GD) ಅಥವಾ ವೈಯಕ್ತಿಕ ಸಂದರ್ಶನ (Interview)&lt;/li&gt;&lt;/ul&gt;&lt;h2&gt;&lt;strong&gt;ಆನ್&zwnj;ಲೈನ್ ಪರೀಕ್ಷಾ ವಿಧಾನ&lt;/strong&gt;&lt;/h2&gt;&lt;ol&gt; &lt;li&gt;ಪರೀಕ್ಷೆಯು ಒಟ್ಟು 120 ಅಂಕಗಳಿಗೆ 120 ಬಹು ಆಯ್ಕೆಯ (MCQ) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.&lt;/li&gt; &lt;li&gt;ಪರೀಕ್ಷೆಯ ಒಟ್ಟು ಅವಧಿ 120 ನಿಮಿಷಗಳು (2 ಗಂಟೆ).&lt;/li&gt; &lt;li&gt;ವಿಷಯವಾರು ಅಂಕಗಳ ವಿವರ&lt;/li&gt; &lt;li&gt;ಇಂಗ್ಲಿಷ್ ವಿಭಾಗ: 30 ಪ್ರಶ್ನೆಗಳು - 30 ಅಂಕಗಳು&lt;/li&gt; &lt;li&gt;ಬ್ಯಾಂಕಿಂಗ್ ಜ್ಞಾನ (Banking Knowledge): 30 ಪ್ರಶ್ನೆಗಳು - 30 ಅಂಕಗಳು&lt;/li&gt; &lt;li&gt;ಸಾಮಾನ್ಯ / ಆರ್ಥಿಕ ಜಾಗೃತಿ (General/Economic Awareness): 30 ಪ್ರಶ್ನೆಗಳು - 30 ಅಂಕಗಳು&lt;/li&gt; &lt;li&gt;ರೀಸನಿಂಗ್ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್: 30 ಪ್ರಶ್ನೆಗಳು - 30 ಅಂಕಗಳು&lt;/li&gt; &lt;li&gt;ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.&lt;/li&gt;&lt;/ol&gt;&lt;p&gt;ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಮತ್ತು ಆನ್&zwnj;ಲೈನ್ ಅರ್ಜಿ ಸಲ್ಲಿಕೆಗಾಗಿ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್&zwnj;ಸೈಟ್ ಆದ https://www.bankofbaroda.in/ ಗೆ ಭೇಟಿ ನೀಡಬಹುದು.&lt;/p&gt;]]></content:encoded>
            <category>jobs</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bank-jobs/golden-opportunity-for-bank-job-seekers-bank-of-baroda-announces-recruitment-for-2482-vacancies-gkn/articleshow-3vf2uua"/>
        </item>
        <item>
            <title><![CDATA["ನನಗೂ ಇಂಥದ್ದೇ ಕಷ್ಟ ಬರಲಿ ದೇವ್ರೇ!"  ₹92 ಲಕ್ಷ ಆಫರ್‌ನಿಂದ ಗೊಂದಲಕ್ಕೀಡಾದ ಬೆಂಗಳೂರು ಟೆಕ್ಕಿಯ ಕಥೆ!]]></title>
            <link>https://kannada.asianetnews.com/viral/bengaluru-tech-manager-dilemma-between-rs-75l-comfort-zone-and-rs-92l-offer-sparks-debate-on-reddit-gdp/articleshow-7vpwhiv</link>
            <guid isPermaLink="true">https://kannada.asianetnews.com/viral/bengaluru-tech-manager-dilemma-between-rs-75l-comfort-zone-and-rs-92l-offer-sparks-debate-on-reddit-gdp/articleshow-7vpwhiv</guid>
            <pubDate>Sat, 22 Aug 2026 13:04:24 +0530</pubDate>
            <description><![CDATA[ಬೆಂಗಳೂರಿನ 40 ವರ್ಷದ ಟೆಕ್ ಮ್ಯಾನೇಜರ್ ಒಬ್ಬರು 15 ವರ್ಷಗಳಿಂದ ದುಡಿಯುತ್ತಿರುವ ಕಂಪನಿಯಲ್ಲಿನ ₹75 ಲಕ್ಷ ಸಂಬಳದ ನೆಮ್ಮದಿಯ ಕೆಲಸ ಮತ್ತು ಮತ್ತೊಂದು ಕಂಪನಿಯಿಂದ ಬಂದಿರುವ ₹92 ಲಕ್ಷದ ಬೃಹತ್ ಆಫರ್ ನಡುವೆ ಗೊಂದಲಕ್ಕೀಡಾಗಿದ್ದಾರೆ. ಈ ವೃತ್ತಿಪರ ಸಂದಿಗ್ಧತೆಯ ಬಗ್ಗೆ ಸಲಹೆ ಕೋರಿ ಅವರು ರೆಡ್ಡಿಟ್ ಮೊರೆ ಹೋಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jp7jacrvss5jbvy3kv9f4m0g,imgname-hr-manager.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ನೀವು ಒಂದು ಕಂಪನಿಯಲ್ಲಿ 15 ವರ್ಷಗಳ ಕಾಲ ದುಡಿದು, ಉತ್ತಮ ಸಂಬಳ ಮತ್ತು ನೆಮ್ಮದಿಯ ವಾತಾವರಣದಲ್ಲಿದ್ದೀರಿ ಎಂದುಕೊಳ್ಳಿ. ಅದೇ ಸಮಯದಲ್ಲಿ ನಿಮಗೆ ಮತ್ತೊಂದು ಪ್ರತಿಷ್ಠಿತ ಟೆಕ್ ಕಂಪನಿಯಿಂದ ಬರೋಬ್ಬರಿ 92 ಲಕ್ಷ ರೂಪಾಯಿಗಳ ಬೃಹತ್ ಆಫರ್ ಬಂದರೆ, ನೀವು ಏನು ಮಾಡುತ್ತೀರಿ? ಇದೇ ಪ್ರಶ್ನೆ ಈಗ ಬೆಂಗಳೂರಿನ 40 ವರ್ಷದ ಟೆಕ್ ಮ್ಯಾನೇಜರ್ ಒಬ್ಬರನ್ನು ಗೊಂದಲಕ್ಕೆ ದೂಡಿದೆ. ನೆಮ್ಮದಿಯ ಕೆಲಸದ ವಾತಾವರಣದಲ್ಲಿ ಉಳಿಯಬೇಕೆ ಅಥವಾ ಬೃಹತ್ ವೇತನದೊಂದಿಗೆ ಹೊಸ ಅವಕಾಶವನ್ನು ಅಪ್ಪಿಕೊಳ್ಳಬೇಕೆ ಎಂಬ ಗೊಂದಲದಲ್ಲಿರುವ ಈ ಮ್ಯಾನೇಜರ್, ವೃತ್ತಿ ಸಲಹೆಗಾಗಿ ಈಗ &lsquo;ರೆಡ್ಡಿಟ್&rsquo; (Reddit) ಮೊರೆ ಹೋಗಿದ್ದಾರೆ.&lt;/p&gt;&lt;h2&gt;ಏನಿದು ಘಟನೆ?&lt;/h2&gt;&lt;p&gt;ರೆಡ್ಡಿಟ್&zwnj;ನಲ್ಲಿ ತಮ್ಮ ಗೊಂದಲವನ್ನು ತೋಡಿಕೊಂಡಿರುವ ಆ ವ್ಯಕ್ತಿ, &ldquo;ನನಗೆ ಈಗ 40 ವರ್ಷ. ಪ್ರಸ್ತುತ ಬೆಂಗಳೂರಿನ ಕಂಪನಿಯೊಂದರಲ್ಲಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಲೀಡ್ ಮತ್ತು ಆರ್ಕಿಟೆಕ್ಟ್ ಹುದ್ದೆಗಳ ಮೂಲಕ ಬೆಳೆದು, ಕಳೆದ 3.5 ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದೀಗ ನನಗೆ ಮತ್ತೊಂದು ಬೃಹತ್ ಜಾಗತಿಕ ತಂತ್ರಜ್ಞಾನ ಕಂಪನಿಯಿಂದ ಬಂಪರ್ ಆಫರ್ ಬಂದಿದೆ&rdquo; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ಪ್ರಸ್ತುತ ಕಂಪನಿಯ ಸ್ಥಿತಿ:&lt;/h2&gt;&lt;p&gt;ನನ್ನ ಈಗಿನ ಕಂಪನಿಯಲ್ಲಿ ₹75 ಲಕ್ಷದ ಸಿಟಿಸಿ (CTC) ಇದ್ದು, ಇದರಲ್ಲಿ ₹65.25 ಲಕ್ಷ ಫಿಕ್ಸ್ಡ್ ಸ್ಯಾಲರಿ ಇದೆ. ಕಳೆದ 15 ವರ್ಷಗಳಿಂದ ದುಡಿದಿರುವ ಕಾರಣ ಕಂಪನಿಯಲ್ಲಿ ಅಪಾರ ವಿಶ್ವಾಸ ಇದೆ. ನೆಮ್ಮದಿಯ ವಾತಾವರಣ, ಸುಲಭವಾದ ಕೆಲಸ, ಜೊತೆಗೆ ಕಚೇರಿ ನನ್ನ ಮನೆಗೆ ಹತ್ತಿರವಿದ್ದು ಪ್ರಯಾಣದ ಕಿರಿಕಿರಿಯೂ ಇಲ್ಲ. ಮುಂದೆ ಹಿರಿಯ ನಾಯಕತ್ವದ ಹುದ್ದೆಗೇರುವ ಸಣ್ಣ ಅವಕಾಶವೂ ಇದೆ.&lt;/p&gt;&lt;h2&gt;ಹೊಸ ಆಫರ್ ಏನಿದೆ?&lt;/h2&gt;&lt;p&gt;ಮತ್ತೊಂದು ಜಾಗತಿಕ ಟೆಕ್ ಕಂಪನಿಯಿಂದ ₹92 ಲಕ್ಷ ಸಿಟಿಸಿ (₹80 ಲಕ್ಷ ಫಿಕ್ಸ್ಡ್) ಆಫರ್ ಬಂದಿದೆ. ಇದು ಲೈನ್ ಮ್ಯಾನೇಜರ್ (Line Manager) ಹುದ್ದೆಯಾಗಿದ್ದು, ಗಣನೀಯ ಪ್ರಮಾಣದ ವೇತನ ಹೆಚ್ಚಳವಾಗಿದೆ. ನನ್ನ ಪ್ರಸ್ತುತ ಕಂಪನಿಯ ಹೊರತಾಗಿ ಹೊಸ ಜವಾಬ್ದಾರಿಗಳು ಮತ್ತು ಮ್ಯಾನೇಜ್&zwnj;ಮೆಂಟ್ ಕೌಶಲ್ಯವನ್ನು ಬೆಳೆಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.&lt;/p&gt;&lt;h2&gt;ರೆಡ್ಡಿಟ್ ಬಳಕೆದಾರರ ಪ್ರತಿಕ್ರಿಯೆಗಳೇನು?&lt;/h2&gt;&lt;p&gt;ಈ ಪೋಸ್ಟ್ ನೋಡಿದ ನೆಟ್ಟಿಗರು ನಾನಾ ರೀತಿಯ ಸಲಹೆಗಳನ್ನು ನೀಡಿದ್ದಾರೆ. ಒಬ್ಬರು, &ldquo;40ರ ವಯಸ್ಸಿನಲ್ಲಿ ನೀವು ಕೇವಲ ವೇತನವನ್ನಷ್ಟೇ ನೋಡದೆ, ನಿಮ್ಮ ವೃತ್ತಿಜೀವನದ ಗುರಿಗಳು ಮತ್ತು ವೈಯಕ್ತಿಕ ಆದ್ಯತೆಗಳನ್ನು ಗಮನಿಸಬೇಕು. ಲೈನ್ ಮ್ಯಾನೇಜರ್ ಆಗಿ ಹೋದರೆ ಭವಿಷ್ಯದಲ್ಲಿ ನಿರ್ದೇಶಕರ ಮಟ್ಟಕ್ಕೆ ಏರಬೇಕಾಗುತ್ತದೆ. ಹಾಗಾಗಿ ಕೇವಲ ಹಣಕ್ಕಾಗಿ ಮಾತ್ರ ಈ ನಿರ್ಧಾರ ತೆಗೆದುಕೊಳ್ಳಬೇಡಿ&rdquo; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಮತ್ತೊಬ್ಬರು ಕಟುವಾಗಿ ಪ್ರತಿಕ್ರಿಯಿಸಿ, &ldquo;ನೀವು ಈಗಾಗಲೇ ನಿಮ್ಮ ಕಂಪನಿಗೆ ಬೇರೆ ಆಫರ್ ಬಗ್ಗೆ ತಿಳಿಸಿರುತ್ತೀರಿ. ಅಂದರೆ ನೀವು ಕೆಲಸ ಬಿಡುವ ಯೋಚನೆಯಲ್ಲಿದ್ದೀರಿ ಎಂಬುದು ಅವರಿಗೆ ತಿಳಿದಿರುತ್ತದೆ. ಮುಂದೆ ಅವಕಾಶ ಸಿಕ್ಕಾಗ ಅವರು ನಿಮ್ಮನ್ನೇ ಮೊದಲು ಕೈಬಿಡಬಹುದು. ಆದ್ದರಿಂದ ಹೊಸ ಕಂಪನಿಗೆ ಸೇರುವುದೇ ಉತ್ತಮ&rdquo; ಎಂದಿದ್ದಾರೆ.&lt;/p&gt;&lt;p&gt;ಮೂರನೆಯವರು ತಮಾಷೆ ಮಾಡುತ್ತಾ, &ldquo;ದೇವರೇ! ನನಗೂ ಜೀವನದಲ್ಲಿ ಇಂತಹದ್ದೇ ಕಷ್ಟಗಳು ಬರಲಿ&rdquo; ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ನಾಲ್ಕನೆಯವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ, &ldquo;ನೀವು ಈಗಿರುವ ಕಂಪನಿಯಲ್ಲೇ ಉಳಿಯಬೇಕು. 15 ವರ್ಷಗಳಿಂದ ಬೆಳೆಸಿಕೊಂಡಿರುವ ವಿಶ್ವಾಸಾರ್ಹತೆ, 20% ವೇತನ ಹೆಚ್ಚಳಕ್ಕಿಂತ ದೊಡ್ಡದು&rdquo; ಎಂದು ಸಲಹೆ ನೀಡಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/viral/bengaluru-tech-manager-dilemma-between-rs-75l-comfort-zone-and-rs-92l-offer-sparks-debate-on-reddit-gdp/articleshow-7vpwhiv"/>
        </item>
        <item>
            <title><![CDATA[₹85 ಲಕ್ಷದ ಕೆಲಸಕ್ಕೆ ಗಂಡ ಟಾಟಾ.. ₹1.5 ಲಕ್ಷ ಸಂಬಳದ ಹೆಂಡತಿಯಿಂದ ಬಿಗ್ ಸಪೋರ್ಟ್! ಕಾರಣವೇನು ಗೊತ್ತಾ?]]></title>
            <link>https://kannada.asianetnews.com/viral/techie-quits-high-paying-job-to-chase-travel-dreams-his-wife-supports-with-1-5-lakh-salary/articleshow-arding6</link>
            <guid isPermaLink="true">https://kannada.asianetnews.com/viral/techie-quits-high-paying-job-to-chase-travel-dreams-his-wife-supports-with-1-5-lakh-salary/articleshow-arding6</guid>
            <pubDate>Sun, 23 Aug 2026 16:54:43 +0530</pubDate>
            <description><![CDATA[&lt;p&gt;₹85 ಲಕ್ಷ ವಾರ್ಷಿಕ ವೇತನದ ಸಾಫ್ಟ್&zwnj;ವೇರ್ ಉದ್ಯೋಗ ತೊರೆದ ಬೆಂಗಳೂರಿನ ಟೆಕ್ಕಿ ಸಕ್ಷಮ್ ರಾಜ್ ಸೇಠ್, ಇದೀಗ ಪೂರ್ಣಕಾಲಿಕ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಸಮಯದ ಸ್ವಾತಂತ್ರ್ಯಕ್ಕಾಗಿ ಅವರು ಈ ನಿರ್ಧಾರ ಕೈಗೊಂಡಿದ್ದು, ಸಂಗಾತಿ ಸ್ಮೃತಿ ಸಿದಾನಾ ₹1.5 ಲಕ್ಷ ಮಾಸಿಕ ಸಂಬಳದ ಸಾಫ್ಟ್&zwnj;ವೇರ್ ಉದ್ಯೋಗ ಮುಂದುವರಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0pf9vpb77pqpw1b657bsxnw,imgname-from--85-lakh-software-job-to-full-time-travel-creator---couple-s-bold-career-bet--1--1787460644554.jpg" type="image/jpeg" height="390" width="690"/>
            <content:encoded><![CDATA[&lt;h2&gt;₹85 ಲಕ್ಷದ ಉದ್ಯೋಗ ತೊರೆದು ಟ್ರಾವೆಲ್ ಕಂಟೆಂಟ್&zwnj;: ಬೆಂಗಳೂರಿನ ಟೆಕ್ಕಿಯ ಹೊಸ ಬದುಕಿನ ಪ್ರಯೋಗ&lt;/h2&gt;&lt;p&gt;ಬೆಂಗಳೂರಿನ ಸಾಫ್ಟ್&zwnj;ವೇರ್ ಎಂಜಿನಿಯರ್ ಸಕ್ಷಮ್ ರಾಜ್ ಸೇಠ್ ವರ್ಷಕ್ಕೆ ₹85 ಲಕ್ಷ ವೇತನ ನೀಡುತ್ತಿದ್ದ ಉದ್ಯೋಗಕ್ಕೆ ವಿದಾಯ ಹೇಳಿ, ಇದೀಗ ಪೂರ್ಣಕಾಲಿಕ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಆಗಿ ಹೊಸ ವೃತ್ತಿಜೀವನ ಆರಂಭಿಸಿದ್ದಾರೆ. ಉತ್ತಮ ಸಂಬಳ, ಕಾರ್ಪೊರೇಟ್ ಭದ್ರತೆ ಇದ್ದರೂ, ಏಕತಾನತೆಯ ದಿನಚರಿ ಮತ್ತು ಸಮಯದ ಮೇಲಿನ ಕಡಿಮೆ ನಿಯಂತ್ರಣ ಅವರನ್ನು ವೃತ್ತಿ ಬದಲಾವಣೆಯತ್ತ ಕೊಂಡೊಯ್ದಿದೆ.&lt;/p&gt;&lt;h3&gt;₹85 ಲಕ್ಷದ ಪ್ಯಾಕೇಜ್&zwnj;ಗಿಂತ ಸ್ವಾತಂತ್ರ್ಯ ಮುಖ್ಯವಾಯಿತೇ?&lt;/h3&gt;&lt;p&gt;ಸೇಠ್ ಪ್ರಕಾರ, ಉದ್ಯೋಗ ತೊರೆಯುವ ನಿರ್ಧಾರವು ಕೆಲಸದ ಮೇಲಿನ ಅಸಮಾಧಾನದಿಂದ ಬಂದದ್ದಲ್ಲ. ಬದಲಾಗಿ, ಕೆಲಸವೇ ತಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ ಮತ್ತು ಗಳಿಕೆಯಿದ್ದರೂ ಜೀವನವನ್ನು ತಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ಮೂಡಿತ್ತು.&lt;/p&gt;&lt;p&gt;ಈ ನಡುವೆ, ಅವರು ತಮ್ಮ ಸಂಗಾತಿ ಸ್ಮೃತಿ ಸಿದಾನಾ ಅವರೊಂದಿಗೆ ಈಗಾಗಲೇ ಟ್ರಾವೆಲ್ ಕಂಟೆಂಟ್ ಮಾಡುತ್ತಿದ್ದರು. ಹೀಗಾಗಿ ಅದನ್ನೇ ಪೂರ್ಣಕಾಲಿಕ ವೃತ್ತಿಯನ್ನಾಗಿ ಪ್ರಯತ್ನಿಸಲು ನಿರ್ಧರಿಸಿದರು.&lt;/p&gt;&lt;h3&gt;ಕಂಟೆಂಟ್ ಕ್ರಿಯೇಷನ್&zwnj;ಗೂ ಇದೆ &lsquo;ಬಿಗ್ ರಿಸ್ಕ್&rsquo;&lt;/h3&gt;&lt;p&gt;ಸ್ಥಿರ ಸಂಬಳವನ್ನು ತೊರೆದು ಕಂಟೆಂಟ್ ಕ್ಷೇತ್ರಕ್ಕೆ ಕಾಲಿಡುವುದು ಸುಲಭದ ನಿರ್ಧಾರವಲ್ಲ. ಪ್ರತಿ ತಿಂಗಳು ಖಚಿತ ಆದಾಯವಿಲ್ಲ, ವೃತ್ತಿ ಬೆಳವಣಿಗೆಗೆ ನಿಶ್ಚಿತ ಮಾರ್ಗವಿಲ್ಲ. ಪ್ರಯಾಣಿಸುವುದರ ಜೊತೆಗೆ ಕಥೆ ಹುಡುಕುವುದು, ಶೂಟಿಂಗ್, ಎಡಿಟಿಂಗ್, ಬ್ರ್ಯಾಂಡ್&zwnj;ಗಳಿಗೆ ಪಿಚ್ ಮಾಡುವುದು ಮತ್ತು ನಿರಂತರವಾಗಿ ಹೊಸ ಕಂಟೆಂಟ್ ನೀಡುವುದು ಸವಾಲಿನ ಕೆಲಸವಾಗಿದೆ.&lt;/p&gt;&lt;p&gt;ಸೇಠ್ ಅವರ ಹೊಸ ಆದಾಯವು ಸಾಫ್ಟ್&zwnj;ವೇರ್ ಉದ್ಯೋಗದ ವೇತನಕ್ಕೆ ಹತ್ತಿರವೂ ಇಲ್ಲ. ಆದರೂ, ಸಮಯದ ಮೇಲಿನ ಹೆಚ್ಚಿನ ನಿಯಂತ್ರಣ ಮತ್ತು ಇಷ್ಟದ ಕೆಲಸ ಮಾಡುವ ಅವಕಾಶ ಅವರಿಗೆ ಪ್ರಮುಖವಾಗಿದೆ.&lt;/p&gt;&lt;h3&gt;ಒಬ್ಬರ ಉದ್ಯೋಗ, ಮತ್ತೊಬ್ಬರ ಸ್ಥಿರ ಆದಾಯ!&lt;/h3&gt;&lt;p&gt;ಈ ದಂಪತಿಯ ವೃತ್ತಿ ತಂತ್ರದಲ್ಲಿ ವಿಶೇಷತೆ ಇದೆ. ಸೇಠ್ ಸ್ಥಿರ ಉದ್ಯೋಗ ತೊರೆದರೆ, ಸಿದಾನಾ ತಮ್ಮ ಸಾಫ್ಟ್&zwnj;ವೇರ್ ಎಂಜಿನಿಯರಿಂಗ್ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಅವರು ತಿಂಗಳಿಗೆ ಸುಮಾರು ₹1.5 ಲಕ್ಷ ಗಳಿಸುತ್ತಿದ್ದು, ಜೊತೆಗೆ ಅರೆಕಾಲಿಕವಾಗಿ ಟ್ರಾವೆಲ್ ಕಂಟೆಂಟ್ ಕೂಡ ಮಾಡುತ್ತಿದ್ದಾರೆ.&lt;/p&gt;&lt;p&gt;ಇದರಿಂದ ಕುಟುಂಬಕ್ಕೆ ಒಂದು ಕಡೆ ಸ್ಥಿರ ಆದಾಯ ಮುಂದುವರಿದರೆ, ಮತ್ತೊಂದೆಡೆ ಸೇಠ್ ತಮ್ಮ ಹೊಸ ವೃತ್ತಿಯನ್ನು ಯಾವುದೇ ತಕ್ಷಣದ ಆರ್ಥಿಕ ಒತ್ತಡವಿಲ್ಲದೆ ಕಟ್ಟಿಕೊಳ್ಳಲು ಅವಕಾಶ ಸಿಕ್ಕಿದೆ.&lt;/p&gt;&lt;h3&gt;&lsquo;ಟ್ರಾವೆಲ್ ಲೈಫ್&rsquo; ಅಷ್ಟು ಸುಲಭವಲ್ಲ&lt;/h3&gt;&lt;p&gt;ಪ್ರಯಾಣದ ವಿಡಿಯೋಗಳಲ್ಲಿ ಕಾಣುವ ಸ್ವಾತಂತ್ರ್ಯದ ಹಿಂದೆ ಸಾಕಷ್ಟು ಪರಿಶ್ರಮವಿದೆ. ದಂಪತಿ ಕೂಡ ಪೂರ್ಣಕಾಲಿಕ ಕಂಟೆಂಟ್ ಕ್ರಿಯೇಷನ್ ಅನ್ನು ರೊಮ್ಯಾಂಟಿಸೈಸ್ ಮಾಡಬಾರದು ಎನ್ನುತ್ತಾರೆ.&lt;/p&gt;&lt;p&gt;ಸಣ್ಣ ರಜೆಯ ಬದಲು ದೀರ್ಘಾವಧಿಯ ವಾಸ್ತವ್ಯ ಆಯ್ಕೆ ಮಾಡಿಕೊಂಡು, ಪ್ರಯಾಣ, ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಈ ಹೊಸ ಜೀವನಶೈಲಿ ದೀರ್ಘಾವಧಿಯಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ.&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/techie-quits-high-paying-job-to-chase-travel-dreams-his-wife-supports-with-1-5-lakh-salary/articleshow-arding6"/>
        </item>
        <item>
            <title><![CDATA[ಟೀ ಅಂಗಡಿಯಿಂದ ಪಿಜಿವರೆಗೆ: ಸಾಫ್ಟ್‌ವೇರ್ ಉದ್ಯೋಗಿಗಳನ್ನೇ ಮೀರಿಸಿದ ‘ಈ’ ಉದ್ಯೋಗಗಳು!]]></title>
            <link>https://kannada.asianetnews.com/viral/bengaluru-pg-owners-earn-more-than-software-engineers-viral-post-sparks-debate/articleshow-f9l50i6</link>
            <guid isPermaLink="true">https://kannada.asianetnews.com/viral/bengaluru-pg-owners-earn-more-than-software-engineers-viral-post-sparks-debate/articleshow-f9l50i6</guid>
            <pubDate>Thu, 27 Aug 2026 09:13:31 +0530</pubDate>
            <description><![CDATA[&lt;p&gt;IIT, FAANG ಮತ್ತು DSA ಹಿಂದೆ ಓಡುವ ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳಿಗಿಂತ ಪಿಜಿ ಮಾಲೀಕರು, ಮನೆ ಮಾಲೀಕರು, ನೀರಿನ ಟ್ಯಾಂಕರ್&zwnj;ಗಳು ಹಾಗೂ ಚಾಯ್ ಅಂಗಡಿ ಮಾಲೀಕರೇ ಹೆಚ್ಚು ಗಳಿಸುತ್ತಾರೆ ಎಂಬ ವೈರಲ್ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ. ಇದು ಅಧಿಕೃತ ರ&zwj;್ಯಾಂಕಿಂಗ್ ಅಲ್ಲ; ನಗರಗಳ ಬಾಡಿಗೆ, ನೀರು ಮತ್ತು ದಿನನಿತ್ಯದ ಬೇಡಿಕೆಯ ಆಧಾರದ ಮೇಲಿನ ವ್ಯಂಗ್ಯಾತ್ಮಕ ಲೆಕ್ಕಾಚಾರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m10dzmam2f2vd1r9d8md1gc5,imgname-highest-paying-careers-in-india--1--1787794805076.jpg" type="image/jpeg" height="390" width="690"/>
            <content:encoded><![CDATA[&lt;h2&gt;ಸಾಫ್ಟ್&zwnj;ವೇರ್ ಉದ್ಯೋಗವೇ ದೊಡ್ಡ ಆದಾಯದ ದಾರಿ?&lt;/h2&gt;&lt;p&gt;ಭಾರತದಲ್ಲಿ ಉತ್ತಮ ಸಂಬಳದ ಉದ್ಯೋಗ ಎಂದಾಕ್ಷಣ IIT, MNC, FAANG ಅಥವಾ ಸಾಫ್ಟ್&zwnj;ವೇರ್ ಎಂಜಿನಿಯರಿಂಗ್ ನೆನಪಾಗುತ್ತದೆ. ಡೇಟಾ ಸ್ಟ್ರಕ್ಚರ್ಸ್ ಮತ್ತು ಅಲ್ಗಾರಿದಮ್&zwnj;ಗಳ (DSA) ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡು, ತಡರಾತ್ರಿಯವರೆಗೂ ಕೋಡಿಂಗ್ ಮಾಡುವ ಯುವಕರ ಸಂಖ್ಯೆಯೂ ಕಡಿಮೆಯಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ಪೋಸ್ಟ್ ಈ ಸಾಂಪ್ರದಾಯಿಕ ಕಲ್ಪನೆಗೆ ತಮಾಷೆಯ ತಿರುವು ನೀಡಿದೆ.&lt;/p&gt;&lt;h3&gt;ಪಿಜಿ ಮಾಲೀಕರು &lsquo;ನಂ.1&rsquo;!&lt;/h3&gt;&lt;p&gt;ಟೆಕ್ ಮತ್ತು AI ಕ್ಷೇತ್ರದ ನಿರೂಪಕಿ ಸಾಕ್ಷಿ ಹಂಚಿಕೊಂಡಿರುವ ವೈರಲ್ ರ&zwj;್ಯಾಂಕಿಂಗ್&zwnj;ನಲ್ಲಿ ಪೇಯಿಂಗ್ ಗೆಸ್ಟ್ (PG) ಮಾಲೀಕರನ್ನು ಅಗ್ರಸ್ಥಾನದಲ್ಲಿರಿಸಲಾಗಿದೆ. ನಗರಗಳಲ್ಲಿ ಉದ್ಯೋಗ, ಶಿಕ್ಷಣಕ್ಕಾಗಿ ಬರುವ ಜನರಿಗೆ ಒಂದೇ ಕೊಠಡಿಯಲ್ಲಿ ಹಲವು ಹಾಸಿಗೆಗಳನ್ನು ಒದಗಿಸಿ ಬಾಡಿಗೆ ಪಡೆಯುವ ಮಾದರಿಯನ್ನು ಪೋಸ್ಟ್ ವ್ಯಂಗ್ಯವಾಗಿ ವಿವರಿಸುತ್ತದೆ.&lt;/p&gt;&lt;p&gt;ಕೆಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯಿಂದ ₹10,000&ndash;₹15,000 ವರೆಗೆ ಪಡೆಯುವ ಮೂಲಕ, ಹಲವು ನಿವಾಸಿಗಳಿಂದ ಒಟ್ಟಾರೆ ದೊಡ್ಡ ಮೊತ್ತದ ಆದಾಯ ಗಳಿಸಬಹುದು ಎಂಬುದು ಇದರ ವಾದ.&lt;/p&gt;&lt;h3&gt;ಚಾಯ್ ಅಂಗಡಿ, ಮನೆ ಮಾಲೀಕರಿಗೂ ಸ್ಥಾನ&lt;/h3&gt;&lt;p&gt;ಟೆಕ್ ಪಾರ್ಕ್&zwnj;ಗಳ ಸುತ್ತಲಿನ ಚಹಾ, ತಿಂಡಿ ಮತ್ತು ಸಿಗರೇಟ್ ಅಂಗಡಿಗಳ ಮಾಲೀಕರನ್ನೂ ಪಟ್ಟಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಪ್ರತಿದಿನ ಸಾವಿರಾರು ಟೆಕ್ಕಿಗಳ ಓಡಾಟವಿರುವ ಪ್ರದೇಶಗಳಲ್ಲಿ ಇಂತಹ ಸಣ್ಣ ವ್ಯಾಪಾರಗಳು ನಿರಂತರ ಗ್ರಾಹಕರನ್ನು ಹೊಂದಿರುತ್ತವೆ.&lt;/p&gt;&lt;p&gt;ಬೆಂಗಳೂರಿನ ಮನೆ ಮಾಲೀಕರು ಮತ್ತು ನೀರಿನ ಟ್ಯಾಂಕರ್ ಮಾಲೀಕರನ್ನೂ ವೈರಲ್ ಪೋಸ್ಟ್ ತನ್ನ ಪಟ್ಟಿಯಲ್ಲಿ ಸೇರಿಸಿದೆ. ನಗರದಲ್ಲಿ ಮನೆ ಬಾಡಿಗೆ ಮತ್ತು ನೀರಿನ ಬೇಡಿಕೆ ಹೆಚ್ಚಿರುವುದೇ ಇವರ ಆದಾಯಕ್ಕೆ ಪ್ರಮುಖ ಕಾರಣವೆಂದು ಪೋಸ್ಟ್ ವ್ಯಂಗ್ಯವಾಡುತ್ತದೆ.&lt;/p&gt;&lt;h3&gt;DSA ಹಿಂದೆ ಓಡುವ ಟೆಕ್ಕಿಗಳಿಗೆ ವೈರಲ್ ಪೋಸ್ಟ್&zwnj;ನ ಚಾಟಿ&lt;/h3&gt;&lt;p&gt;&ldquo;ಬೆಳಗಿನ ಜಾವ 2 ಗಂಟೆಗೆ DSA ಪ್ರಶ್ನೆಗಳನ್ನು ಬಿಡಿಸುತ್ತಿರುವ ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳು&rdquo; ಎಂಬ ಸಾಲು ನೆಟ್ಟಿಗರ ಗಮನ ಸೆಳೆದಿದೆ. ಕೆಲವರು ಇದನ್ನು ತಮಾಷೆಯಾಗಿ ಸ್ವೀಕರಿಸಿದರೆ, ಮತ್ತಷ್ಟು ಮಂದಿ ಆದಾಯವನ್ನು ಕೇವಲ ಸಂಬಳದ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ವಾಸ್ತವವಾಗಿ, ಈ ವೈರಲ್ ಪಟ್ಟಿ ಅಧಿಕೃತ ಆದಾಯ ಸಮೀಕ್ಷೆಯಲ್ಲ. ಬಾಡಿಗೆ, ಆಸ್ತಿ ಮೌಲ್ಯ, ವ್ಯಾಪಾರ ವೆಚ್ಚ, ತೆರಿಗೆ, ಸಾಲ ಮತ್ತು ಸ್ಥಳೀಯ ಬೇಡಿಕೆ ಸೇರಿದಂತೆ ಹಲವು ಅಂಶಗಳು ನಿಜವಾದ ಲಾಭವನ್ನು ನಿರ್ಧರಿಸುತ್ತವೆ. ಹೀಗಾಗಿ ಇದು ಗಂಭೀರ ವೃತ್ತಿ ರ&zwj;್ಯಾಂಕಿಂಗ್&zwnj;ಗಿಂತ ನಗರ ಜೀವನದ ಆರ್ಥಿಕ ವಾಸ್ತವತೆಯ ಮೇಲಿನ ವ್ಯಂಗ್ಯಾತ್ಮಕ ಚರ್ಚೆಯಾಗಿ ನೋಡಬಹುದು.&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/bengaluru-pg-owners-earn-more-than-software-engineers-viral-post-sparks-debate/articleshow-f9l50i6"/>
        </item>
        <item>
            <title><![CDATA[65 ತೆರಿಗೆ ಸಂಗ್ರಾಹಕರು, ಗುಮಾಸ್ತರು, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ]]></title>
            <link>https://kannada.asianetnews.com/state-government-jobs/raichur-zp-recruitment-2026-apply-65-tax-collector-data-entry-operator-posts-san/articleshow-gyga9z4</link>
            <guid isPermaLink="true">https://kannada.asianetnews.com/state-government-jobs/raichur-zp-recruitment-2026-apply-65-tax-collector-data-entry-operator-posts-san/articleshow-gyga9z4</guid>
            <pubDate>Fri, 28 Aug 2026 06:05:24 +0530</pubDate>
            <description><![CDATA[ರಾಯಚೂರು ಜಿಲ್ಲಾ ಪಂಚಾಯತ್, ತೆರಿಗೆ ಸಂಗ್ರಾಹಕ ಮತ್ತು ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ಒಟ್ಟು 65 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಪಾಸಾದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kt8gjwdffymv3aszhdtnmqfy,imgname-exam-1780549775791.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಆ.28): &lt;/strong&gt;ಜಿಲ್ಲಾ ಪಂಚಾಯತ್ ಅಧಿಕೃತ ಅಧಿಸೂಚನೆ ಮೂಲಕ ತೆರಿಗೆ ಸಂಗ್ರಾಹಕ, ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;&lt;strong&gt;ಹುದ್ದೆಗಳ ಸಂಪೂರ್ಣ ವಿವರ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಸಂಸ್ಥೆಯ ಹೆಸರು :&lt;/strong&gt; ಜಿಲ್ಲಾ ಪಂಚಾಯತ್ ರಾಯಚೂರು&lt;/li&gt; &lt;li&gt;&lt;strong&gt;ಹುದ್ದೆಗಳ ಸಂಖ್ಯೆ: &lt;/strong&gt;65&lt;/li&gt; &lt;li&gt;&lt;strong&gt;ಉದ್ಯೋಗ ಸ್ಥಳ: &lt;/strong&gt;ರಾಯಚೂರು - ಕರ್ನಾಟಕ&lt;/li&gt; &lt;li&gt;&lt;strong&gt;ಪೋಸ್ಟ್ ಹೆಸರು: &lt;/strong&gt;ತೆರಿಗೆ ಸಂಗ್ರಾಹಕ, ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್&lt;/li&gt;&lt;/ul&gt;&lt;h2&gt;&lt;strong&gt;ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ತೆರಿಗೆ ಸಂಗ್ರಹಕಾರ:&lt;/strong&gt; 31 ಹುದ್ದೆಗಳು&lt;/li&gt; &lt;li&gt;&lt;strong&gt;ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್: &lt;/strong&gt;34 ಹುದ್ದೆಗಳು&lt;/li&gt;&lt;/ul&gt;&lt;h2&gt;&lt;strong&gt;ಶೈಕ್ಷಣಿಕ ಅರ್ಹತೆ&lt;/strong&gt;&lt;/h2&gt;&lt;p&gt;ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ /12 ನೇ ತರಗತಿ (ಮೂರು ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್&zwnj;ನೊಂದಿಗೆ) ಪೂರ್ಣಗೊಳಿಸಿರಬೇಕು.&lt;/p&gt;&lt;h2&gt;&lt;strong&gt;ವಯೋಮಿತಿ&lt;/strong&gt;&lt;/h2&gt;&lt;p&gt;ಅಭ್ಯರ್ಥಿಯು 03-09-2026ಕ್ಕೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳನ್ನು ಹೊಂದಿರಬೇಕು.&lt;/p&gt;&lt;h3&gt;&lt;strong&gt;ವಯೋಮಿತಿ ಸಡಿಲಿಕೆ&lt;/strong&gt;&lt;/h3&gt;&lt;ul&gt; &lt;li&gt;&lt;strong&gt;ವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: &lt;/strong&gt;3 ವರ್ಷ&lt;/li&gt; &lt;li&gt;&lt;strong&gt;ಎಸ್&zwnj;ಸಿ/ಎಸ್&zwnj;ಟಿ, ವಿಭಾಗ 1 ಅಭ್ಯರ್ಥಿಗಳು: &lt;/strong&gt;5 ವರ್ಷ&lt;/li&gt;&lt;/ul&gt;&lt;h2&gt;&lt;strong&gt;ಅರ್ಜಿ ಶುಲ್ಕ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಸಾಮಾನ್ಯ ಅಭ್ಯರ್ಥಿಗಳಿಗೆ: &lt;/strong&gt;500 ರು.&lt;/li&gt; &lt;li&gt;&lt;strong&gt;2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: &lt;/strong&gt;300 ರು.&lt;/li&gt; &lt;li&gt;&lt;strong&gt;ಎಸ್&zwnj;ಸಿ/ಎಸ್&zwnj;ಟಿ, P1, ಮಾಜಿ ಸೈನಿಕರ ಅಭ್ಯರ್ಥಿಗಳಿಗೆ: &lt;/strong&gt;200 ರು.&lt;/li&gt; &lt;li&gt;&lt;strong&gt;ವಿಶೇಷವಾಗಿ ಅಭ್ಯರ್ಥಿಗಳಿಗೆ:&lt;/strong&gt; 100 ರು.&lt;/li&gt; &lt;li&gt;ಪಾವತಿ ವಿಧಾನ: ಆನ್&zwnj;ಲೈನ್&lt;/li&gt;&lt;/ul&gt;&lt;p&gt;&lt;strong&gt;ಆಯ್ಕೆ ಪ್ರಕ್ರಿಯೆ: &lt;/strong&gt;ಮೆರಿಟ್ ಪಟ್ಟಿ (ಸಂಬಂಧಿತ ಅರ್ಹತೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ), ಸಂದರ್ಶನ&lt;/p&gt;&lt;h2&gt;&lt;strong&gt;ಅರ್ಜಿ ಸಲ್ಲಿಸುವುದು ಹೇಗೆ?&lt;/strong&gt;&lt;/h2&gt;&lt;ul&gt; &lt;li&gt;-ಮೊದಲನೆಯದಾಗಿ ಜಿಲ್ಲಾ ಪಂಚಾಯತ್ ರಾಯಚೂರು ನೇಮಕಾತಿ ಅಧಿಸೂಚನೆ 2026 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.&lt;/li&gt; &lt;li&gt;ಆನ್&zwnj;ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.&lt;/li&gt; &lt;li&gt;ಜಿಲ್ಲಾ ಪಂಚಾಯತ್ ರಾಯಚೂರು ತೆರಿಗೆ ಸಂಗ್ರಹಕಾರ, ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಿ. - ಜಿಲ್ಲಾ ಪಂಚಾಯತ್ ರಾಯಚೂರು ಆನ್&zwnj;ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್&zwnj;ಲೋಡ್ ಮಾಡಿ.&lt;/li&gt; &lt;li&gt;ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.&lt;/li&gt;&lt;/ul&gt;&lt;h2&gt;&lt;strong&gt;ಪ್ರಮುಖ ದಿನಾಂಕಗಳು&lt;/strong&gt;&lt;/h2&gt;&lt;ul&gt; &lt;li&gt;ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಆಗಸ್ಟ್&zwnj; 20-08-2026&lt;/li&gt; &lt;li&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್-03-2026&lt;/li&gt;&lt;/ul&gt;]]></content:encoded>
            <category>jobs</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state-government-jobs/raichur-zp-recruitment-2026-apply-65-tax-collector-data-entry-operator-posts-san/articleshow-gyga9z4"/>
        </item>
        <item>
            <title><![CDATA[Layoffs ಬಳಿಕ ಸಿಗದ ಜಾಬ್, ನೆಮ್ಮದಿಗಾಗಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿದ ಯುವಕ, ವೇತನ ಗಂಟೆಗೆ 1000 ರೂ!]]></title>
            <link>https://kannada.asianetnews.com/viral/laid-off-corporate-employee-takes-rs-1000-for-hour-dishwasher-job-for-mental-health-gdp/articleshow-hwlxgpq</link>
            <guid isPermaLink="true">https://kannada.asianetnews.com/viral/laid-off-corporate-employee-takes-rs-1000-for-hour-dishwasher-job-for-mental-health-gdp/articleshow-hwlxgpq</guid>
            <pubDate>Fri, 28 Aug 2026 16:42:06 +0530</pubDate>
            <description><![CDATA[ಕಾರ್ಪೊರೇಟ್ ಉದ್ಯೋಗ ಕಳೆದುಕೊಂಡ 29 ವರ್ಷದ ಯುವಕ, ನಿರುದ್ಯೋಗದಿಂದ ಉಂಟಾದ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಅಚ್ಚರಿಯ ಹಾದಿ ಹಿಡಿದಿದ್ದಾನೆ. ಆರ್ಥಿಕವಾಗಿ ಸದೃಢನಾಗಿದ್ದರೂ, ಕಳೆದುಹೋದ ದಿನಚರಿ ಮತ್ತು ಮಾನಸಿಕ ನೆಮ್ಮದಿಗಾಗಿ ಆತ ಗಂಟೆಗೆ ಸುಮಾರು 1,000 ರೂಪಾಯಿ ಸಂಬಳದ ಪಾತ್ರೆ ತೊಳೆಯುವ ಕೆಲಸವನ್ನು ಆರಿಸಿಕೊಂಡನು.]]></description>
            <media:content url="https://static.asianetnews.com/images/w-1280,h-720,format-jpg,imgid-01m1404e55cqbt4nkrnh8ba4jw,imgname-man-dish-wash--1--1787914500261.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಕಾರ್ಪೊರೇಟ್ ವಲಯದಲ್ಲಿ ಕೈತುಂಬ ಸಂಬಳ ಪಡೆಯುವ ಉದ್ಯೋಗಿಯೊಬ್ಬರು ಅಕಸ್ಮಾತ್ ಕೆಲಸ ಕಳೆದುಕೊಂಡರೆ ಮತ್ತೊಂದು ಕಾರ್ಪೊರೇಟ್ ಹುದ್ದೆಗಾಗಿ ಕಾಯುವುದು, ತೀವ್ರ ಹುಡುಕಾಟ ನಡೆಸುವುದು ಸಹಜ. ಆದರೆ, ಉದ್ಯೋಗಕ್ಕಾಗಿ 200 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿ, 15 ಕ್ಕೂ ಹೆಚ್ಚು ಸಂದರ್ಶನಗಳಲ್ಲಿ ಭಾಗವಹಿಸಿದರೂ ಕೆಲಸ ಸಿಗದಿದ್ದಾಗ 29 ವರ್ಷದ ಯುವಕನೊಬ್ಬ ಕಂಡುಕೊಂಡ ಹಾದಿ ಸಂಪೂರ್ಣ ಭಿನ್ನವಾಗಿದೆ. ನಾಲ್ಕು ತಿಂಗಳ ಸುದೀರ್ಘ ನಿರುದ್ಯೋಗದ ನಂತರ, ಆತ ಗಂಟೆಗೆ ಸುಮಾರು 1,000 ರೂಪಾಯಿ ವೇತನದ ಅರೆಕಾಲಿಕ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿದ್ದಾನೆ.&lt;/p&gt;&lt;p&gt;ವಿಶೇಷವೆಂದರೆ, ಆತ ಈ ನಿರ್ಧಾರವನ್ನು ಹಣಕಾಸಿನ ಮುಗ್ಗಟ್ಟಿನಿಂದಾಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ, ನಿರುದ್ಯೋಗದಿಂದ ಉಂಟಾಗಿದ್ದ ನಿರಾಸಕ್ತಿ, ಮಾನಸಿಕ ಒತ್ತಡ ಹಾಗೂ ಕಳೆದುಹೋಗಿದ್ದ ದೈನಂದಿನ ದಿನಚರಿಯನ್ನು ಮತ್ತೆ ಮರಳಿ ಪಡೆಯಲು ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ.&lt;/p&gt;&lt;h2&gt;ರೆಡ್ಡಿಟ್&zwnj;ನಲ್ಲಿ ವೈರಲ್ ಆದ ಯುವಕನ ಅನುಭವ&lt;/h2&gt;&lt;p&gt;ಕಳೆದ ಏಪ್ರಿಲ್ ತಿಂಗಳಿನಲ್ಲಿ ಕಾರ್ಪೊರೇಟ್ ಉದ್ಯೋಗದಿಂದ ವಜಾಗೊಂಡಿದ್ದ ಈ ಯುವಕ, ರೆಡ್ಡಿಟ್ ನಲ್ಲಿ &quot;ಕಾರ್ಪೊರೇಟ್&zwnj;ನಿಂದ ಗಂಟೆಗೆ $11 ಡಾಲರ್ ಪಾತ್ರೆ ತೊಳೆಯುವ ಕೆಲಸ&quot; ಎಂಬ ಶೀರ್ಷಿಕೆಯಡಿ ತಮ್ಮ ಭಾವನಾತ್ಮಕ ಅನುಭವವನ್ನು ಹಂಚಿಕೊಂಡಿದ್ದಾನೆ. ಅದರ ಸಾರಾಂಶ ಈ ಕೆಳಗಿನಂತಿದೆ.&lt;/p&gt;&lt;p&gt;&quot;ಏಪ್ರಿಲ್&zwnj;ನಲ್ಲಿ ನನ್ನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಕಂಪನಿಯು 9 ತಿಂಗಳ ಉತ್ತಮ ಪ್ಯಾಕೇಜ್ (Severance Package) ನೀಡಿದ್ದರಿಂದ ಮತ್ತು ನವೆಂಬರ್&zwnj;ವರೆಗೆ ನಿರುದ್ಯೋಗ ಭತ್ಯೆ ಸಿಗುತ್ತಿರುವುದರಿಂದ ನನಗೆ ಆರ್ಥಿಕವಾಗಿ ಯಾವುದೇ ತೊಂದರೆಯಿರಲಿಲ್ಲ. ಜೊತೆಗೆ ಕಳೆದ 5 ವರ್ಷಗಳಿಂದ ಸಣ್ಣ ಮಟ್ಟದ ಉಳಿತಾಯವೂ ಇತ್ತು. ಆದರೆ, 4 ತಿಂಗಳ ನಿರುದ್ಯೋಗವು ನನ್ನ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತು. ದಿನವಿಡೀ ಯಾವುದೇ ಕೆಲಸವಿಲ್ಲದೆ ನಿಷ್ಪ್ರಯೋಜಕ ಎಂಬ ಭಾವನೆ ನನ್ನನ್ನು ಕಾಡತೊಡಗಿತು&quot;&lt;/p&gt;&lt;p&gt;&quot;ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಕನಿಷ್ಠ ದಿನದಲ್ಲಿ ಕೆಲವು ಗಂಟೆಗಳ ಕಾಲ ಆತಂಕದಿಂದ ಹೊರಬರಲು, ಖುಷಿ ಅನುಭವಿಸಲು ಹಾಗೂ ಜೀವನಕ್ಕೆ ಒಂದು ನಿರ್ದಿಷ್ಟ ಸ್ವರೂಪ ನೀಡಲು ಈ ಕೆಲಸಕ್ಕೆ ಸೇರಿಕೊಂಡೆ. ಒಂದು ವೇಳೆ ನಾನು ಆರ್ಥಿಕವಾಗಿ ಸ್ವತಂತ್ರನಾಗಿ ಬೇಗ ನಿವೃತ್ತಿ ಹೊಂದಿದ್ದರೂ ಸಹ, ನನ್ನ ಸಮಯವನ್ನು ಏನು ಮಾಡಬೇಕೆಂದು ತಿಳಿಯದೆ ಇದೇ ರೀತಿ ಆತಂಕಕ್ಕೊಳಗಾಗುತ್ತಿದ್ದೆನೇನೋ? ಉದ್ಯೋಗದ ಮೂಲಕ ಸಮಯವನ್ನು ತುಂಬಿಕೊಳ್ಳುವ ಈ ನಿರಂತರ ಹತಾಶೆ ನನ್ನನ್ನು ಕಾಡುತ್ತಿತ್ತು&quot;ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ.&lt;/p&gt;&lt;h2&gt;ನೆಟ್ಟಿಗರ ಸಾಂತ್ವನ&lt;/h2&gt;&lt;p&gt;ಈ ರೆಡ್ಡಿಟ್ ಪೋಸ್ಟ್ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಉದ್ಯೋಗ ಕಳೆದುಕೊಂಡು ಮಾನಸಿಕ ಸವಾಲು ಎದುರಿಸುತ್ತಿರುವ ಹಲವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಯುವಕನ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.&lt;/p&gt;&lt;h2&gt;ಮನೆಯಲ್ಲಿ ಮಗುವಿನ ಆರೈಕೆ ಮಾಡಿದ ಉದ್ಯೋಗಿ:&lt;/h2&gt;&lt;p&gt;&quot;ದೀರ್ಘಕಾಲ ಕಾರ್ಪೊರೇಟ್ ವಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ತಕ್ಷಣಕ್ಕೆ ಕೆಲಸ ಕಳೆದುಕೊಂಡಾಗ ಈ ರೀತಿಯ ಸವಾಲು ಎದುರಾಗುವುದು ಸಹಜ. ನಾನು ಕೆಲಸ ಕಳೆದುಕೊಂಡಾಗ ಮನೆಯಲ್ಲಿ ಮಗುವಿನ ಆರೈಕೆಯಲ್ಲಿ ನಿರತನಾದೆ. ಇಲ್ಲದಿದ್ದರೆ ನಾನೂ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದೆ. ಕನಿಷ್ಠ ನೀವು ಒಂದು ಕೆಲಸದ ಕಡೆಗೆ ಗಮನಹರಿಸಿ ದಿನಚರಿಯನ್ನು ಕಾಯ್ದುಕೊಳ್ಳುತ್ತಿದ್ದೀರಲ್ಲ, ಅದು ಶ್ಲಾಘನೀಯ.&quot; ಎಂದು ಒಬ್ಬರು ಬರೆದುಕೊಂಡಿದ್ದಾರೆ&lt;/p&gt;&lt;h2&gt;ಕಾಯಕವೇ ಕೈಲಾಸ:&lt;/h2&gt;&lt;p&gt;&quot;ನಿಮ್ಮ ಬಳಿ 5 ವರ್ಷಗಳ ತುರ್ತು ನಿಧಿ ಇದೆಯೆಂದರೆ ಅದು ದೊಡ್ಡ ಆಸ್ತಿ. ಯಾವುದೇ ಸಣ್ಣ ಕೆಲಸದಲ್ಲೂ ಅದರದ್ದೇ ಆದ ಘನತೆ ಇರುತ್ತದೆ. ಇಂತಹ ಸಣ್ಣ ಅರೆಕಾಲಿಕ ಕೆಲಸಗಳು ಕಾರ್ಪೊರೇಟ್ ಉದ್ಯೋಗದಷ್ಟು ಒತ್ತಡವನ್ನು ತರುವುದಿಲ್ಲ.&quot; ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ನೆಮ್ಮದಿ ಅನುಭವ :&lt;/h2&gt;&lt;p&gt;&quot;ಪಾತ್ರೆ ತೊಳೆಯುವ ಕೆಲಸವು ನಿಜಕ್ಕೂ ಮಾನಸಿಕ ಶಮನ ನೀಡಬಲ್ಲದು . ನಾನು ಉಚಿತ ಅನ್ನದಾಸೋಹ ಕೇಂದ್ರಗಳಲ್ಲಿ ಸ್ವಯಂಸೇವಕನಾಗಿ ಪಾತ್ರೆ ತೊಳೆಯುವ ಕೆಲಸ ಮಾಡಿದ್ದೇನೆ. ಅದು ನಿಜಕ್ಕೂ ಅತ್ಯಂತ ಉತ್ಪಾದಕ ಮತ್ತು ಉಪಯುಕ್ತ ಕೆಲಸ ಎಂಬ ಅನುಭವ ನೀಡುತ್ತದೆ ಎಂದು ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ಹಠಾತ್ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಮಾನಸಿಕ ಸ್ಥಿತಿ ಮತ್ತು ಅವರು ಎದುರಿಸುವ 'ಅಸ್ತಿತ್ವದ ಬಿಕ್ಕಟ್ಟನ್ನು' ಎತ್ತಿ ತೋರಿಸುತ್ತದೆ. ಕೇವಲ ಹಣ ಗಳಿಕೆಯಷ್ಟೇ ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯ ಹಾಗೂ ದಿನನಿತ್ಯದ ಶಿಸ್ತಿಗೆ ಒಂದು ನಿರ್ದಿಷ್ಟ ಕಾಯಕ ಅಥವಾ ಕೆಲಸ ಎಷ್ಟು ಮುಖ್ಯ ಎಂಬುದಕ್ಕೆ ಈ ಯುವಕನ ಕಥೆ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>jobs</category>
            <dc:creator>Gowthami K</dc:creator>
            <atom:link href="https://kannada.asianetnews.com/viral/laid-off-corporate-employee-takes-rs-1000-for-hour-dishwasher-job-for-mental-health-gdp/articleshow-hwlxgpq"/>
        </item>
        <item>
            <title><![CDATA[ಕೆಪಿಎಸ್‌ಸಿ ಹಗರಣ: ಇಡಿ ಅಧಿಕಾರಿಗಳು ಬರ್ತಿದ್ದಂತೆ ಮನೆಗೆ ಬೀಗ ಹಾಕಿ IAS ಜ್ಞಾನೇಂದ್ರ ಕುಮಾರ್ ಪರಾರಿ!]]></title>
            <link>https://kannada.asianetnews.com/gallery/state/kpsc-veterinary-exam-scam-ed-raid-ias-officer-gyanendra-kumar-home-jayamahal-bengaluru-igfucl2</link>
            <guid isPermaLink="true">https://kannada.asianetnews.com/gallery/state/kpsc-veterinary-exam-scam-ed-raid-ias-officer-gyanendra-kumar-home-jayamahal-bengaluru-igfucl2</guid>
            <pubDate>Sun, 23 Aug 2026 17:21:02 +0530</pubDate>
            <description><![CDATA[&lt;p&gt;ಕೆಪಿಎಸ್&zwnj;ಸಿ ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಅಧಿಕಾರಿಗಳು ಬರುವಷ್ಟರಲ್ಲಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನು. ಆದರೆ, ದಾಳಿಗೆ ಬಂದ ಇಡಿ ಅಧಿಕಾರಿಗಳು ಪಟ್ಟು ಬಿಡದೇ ಮಾಡಿದ್ದೇನು ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0q6g86q7p181q3694mf2hbp,imgname-ias-gyanendra-kumar--1--1787484971223.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಪಿಎಸ್&zwnj;ಸಿ ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಅಧಿಕಾರಿಗಳು ಬರುವಷ್ಟರಲ್ಲಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನು. ಆದರೆ, ದಾಳಿಗೆ ಬಂದ ಇಡಿ ಅಧಿಕಾರಿಗಳು ಪಟ್ಟು ಬಿಡದೇ ಮಾಡಿದ್ದೇನು ನೋಡಿ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: ರಾ&lt;/strong&gt;ಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್&zwnj;ಸಿ (KPSC) ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಬೆಂಗಳೂರಿನ ಜಯಮಹಲ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಇಡಿ ದಾಳಿ ನಡೆಸಿದ್ದು, ಅಪಾರ್ಟ್&zwnj;ಮೆಂಟ್ ಆವರಣದಲ್ಲಿ ಗಂಟೆಗಳ ಕಾಲ ಭಾರೀ ಹೈಡ್ರಾಮಾ ನಡೆದಿದೆ.&lt;/p&gt;&lt;img&gt;&lt;p&gt;&lt;strong&gt;ತನಿಖೆ ಆರಂಭವಾಗ್ತಿದ್ದಂತೆ ಐಎಎಸ್ ಅಧಿಕಾರಿ ಪರಾರಿ!&lt;/strong&gt;&lt;/p&gt;&lt;p&gt;ಕೆಪಿಎಸ್&zwnj;ಸಿ ಪಶು ವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆಯನ್ನು ಇಡಿ ಅಧಿಕಾರಿಗಳು ಕೈಗೆತ್ತಿಕೊಳ್ಳುತ್ತಿದ್ದಂತೆಯೇ, ಎಚ್ಚೆತ್ತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಜಯಮಹಲ್&zwnj;ನಲ್ಲಿರುವ ಖಾಸಗಿ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಜ್ಞಾನೇಂದ್ರ ಕುಮಾರ್ ಅವರ ಫ್ಲ್ಯಾಟ್&zwnj;ಗೆ ಶುಕ್ರವಾರ ಮುಂಜಾನೆ 3 ಇನ್ನೋವಾ (Innova) ಕಾರುಗಳಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಯೋಧರೊಂದಿಗೆ ಇಡಿ ಅಧಿಕಾರಿಗಳ ತಂಡ ಆಗಮಿಸಿತು.&lt;/p&gt;&lt;img&gt;&lt;p&gt;ಅಧಿಕಾರಿಗಳು ಬರುತ್ತಿದ್ದಂತೆ ಅಪಾರ್ಟ್&zwnj;ಮೆಂಟ್&zwnj;ನ ಸೆಕ್ಯೂರಿಟಿ ಗಾರ್ಡ್ ಮುಖ್ಯ ಗೇಟ್&zwnj;ಗೆ ಬೀಗ ಹಾಕಿದನು. 'ಯಾರನ್ನೂ ಒಳಗೆ ಬಿಡಲು ನನಗೆ ಅನುಮತಿ ಇಲ್ಲ' ಎಂದು ಅಧಿಕಾರಿಗಳನ್ನು ತಡೆದನು. ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಸೆಕ್ಯೂರಿಟಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ, ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಳಿಕ ಗೇಟ್ ಓಪನ್ ಮಾಡಲಾಯಿತು. ಬಳಿಕ ಮುಂಜಾಗ್ರತಾ ಕ್ರಮವಾಗಿ ಅಪಾರ್ಟ್&zwnj;ಮೆಂಟ್ ಮುಂಭಾಗ ಬ್ಯಾರಿಕೇಡ್ ಹಾಕಿ ಸಿಆರ್&zwnj;ಪಿಎಫ್ ಭದ್ರತೆ ಒದಗಿಸಲಾಯಿತು.&lt;/p&gt;&lt;img&gt;&lt;p&gt;&lt;strong&gt;ಸಾಕ್ಷಿಗೆ (Witness) ನಿರಾಕರಿಸಿದ ಎದುರು ಮನೆಯವರು!&lt;/strong&gt;&lt;/p&gt;&lt;ul&gt; &lt;li&gt;ಅಧಿಕಾರಿಯ ಮನೆ ಲಾಕ್ ಆಗಿದ್ದರಿಂದ ಬಾಗಿಲು ಮುರಿಯಲು ಸ್ಥಳೀಯ ಸಾಕ್ಷಿಗಳ (Panchas) ಅಗತ್ಯವಿತ್ತು.&lt;/li&gt; &lt;li&gt;ಇಡಿ ಅಧಿಕಾರಿಗಳು ನಿಯಮಾವಳಿ ಪ್ರಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (Chief Secretary) ಹಾಗೂ ಪೊಲೀಸ್ ಇಲಾಖೆಗೆ ಲಿಖಿತ ಮಾಹಿತಿ ರವಾನಿಸಿದರು.&lt;/li&gt; &lt;li&gt;ಬಳಿಕ ಜ್ಞಾನೇಂದ್ರ ಕುಮಾರ್ ಅವರ ಎದುರು ಮನೆಯ ವ್ಯಕ್ತಿಯ ಬಳಿ ಬಾಗಿಲು ತೆಗೆಯುವಾಗ &lsquo;ಸಾಕ್ಷಿ&rsquo;ಯಾಗುವಂತೆ ಅಧಿಕಾರಿಗಳು ಮನವಿ ಮಾಡಿದರು. ಆದರೆ ಆ ವ್ಯಕ್ತಿ ತಾನು ಸಾಕ್ಷಿಯಾಗಲು ಸಾಧ್ಯವಿಲ್ಲ ಎಂದು ನೇರವಾಗಿ ನಿರಾಕರಿಸಿದರು.&lt;/li&gt; &lt;li&gt;ನಂತರ ಮತ್ತೊಂದು ಮನೆಯವರ ಜೊತೆ ಮಾತನಾಡಿದಾಗ, ಪಕ್ಕದ ಮನೆಯ ಓರ್ವ ವ್ಯಕ್ತಿ ಅಧಿಕೃತ ಸಾಕ್ಷಿಯಾಗಲು ಒಪ್ಪಿಕೊಂಡರು.&lt;/li&gt;&lt;/ul&gt;&lt;img&gt;&lt;p&gt;&lt;strong&gt;ವೈಯಾಲಿಕಾವಲ್&zwnj;ನಿಂದ ಕೀ ಮೇಕರ್ ಕರೆಸಿದ ಇಡಿ: ಬಾಗಿಲು ಓಪನ್&lt;/strong&gt;&lt;/p&gt;&lt;p&gt;ಬೀಗ ಒಡೆಯುವ ಬದಲು ಹೊಸ ಕೀ ತಯಾರಿಸಲು ನಿರ್ಧರಿಸಿದ ಅಧಿಕಾರಿಗಳು, ಸಮೀಪದ ವೈಯಾಲಿಕಾವಲ್&zwnj;ನಿಂದ ನುರಿತ &lsquo;ಕೀ ಮೇಕರ್&rsquo; (Key Maker) ಒಬ್ಬರನ್ನು ಸ್ಥಳಕ್ಕೆ ಕರೆಸಿದರು. ಕೀ ಮೇಕರ್ ಮೂಲಕ ಬಾಗಿಲಿನ ಲಾಕ್ ಓಪನ್ ಮಾಡಿಸಿ, ಸಾಕ್ಷಿಗಳ ಸಮ್ಮುಖದಲ್ಲಿ ಅಧಿಕಾರಿಗಳ ತಂಡ ಫ್ಲ್ಯಾಟ್&zwnj;ನೊಳಗೆ ಪ್ರವೇಶಿಸಿತು.&lt;/p&gt;&lt;img&gt;&lt;p&gt;ಸ್ಕ್ಯಾನರ್, ಪ್ರಿಂಟರ್ ಹಿಡಿದು ಒಳನುಗ್ಗಿದ ಅಧಿಕಾರಿಗಳು!&lt;/p&gt;&lt;p&gt;ಫ್ಲ್ಯಾಟ್ ಒಳಗೆ ಪ್ರವೇಶಿಸಿದ ಬೆನ್ನಲ್ಲೇ ಅಧಿಕಾರಿಗಳು ತಮ್ಮೊಂದಿಗೆ ಪ್ರಿಂಟರ್ ಹಾಗೂ ಸ್ಕ್ಯಾನರ್&zwnj;ಗಳನ್ನು ಒಳಗೆ ಕೊಂಡೊಯ್ದಿದ್ದಾರೆ. ಮನೆಯ ಪ್ರತಿಯೊಂದು ಕೊಠಡಿ, ಕಪಾಟುಗಳನ್ನು ಜಾಲಾಡಲಾಗುತ್ತಿದ್ದು, ಪಶು ವೈದ್ಯಕೀಯ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ ಕಡತಗಳು, ಅಕ್ರಮ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಭರದಿಂದ ಸಾಗಿದೆ. ನಾಪತ್ತೆಯಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಪತ್ತೆಗೂ ಶೋಧ ತೀವ್ರಗೊಂಡಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/kpsc-veterinary-exam-scam-ed-raid-ias-officer-gyanendra-kumar-home-jayamahal-bengaluru-igfucl2"/>
        </item>
        <item>
            <title><![CDATA[ವಿಪ್ರೋ ಕೆಲಸಕ್ಕೆ ಗುಡ್‌ಬೈ, 10 ಬಾರಿ ದಿವಾಳಿ ಅಂಚಿಗೆ! ಇಂದು 600 ಕೋಟಿ ಸಾಮ್ರಾಜ್ಯ ಕಟ್ಟಿದ ಕನ್ನಡಿಗನ ಯಶೋಗಾಥೆ!]]></title>
            <link>https://kannada.asianetnews.com/viral/he-left-a-wipro-tech-career-for-farming-now-his-agri-business-targets-600-crore-revenue/articleshow-k1lxhnd</link>
            <guid isPermaLink="true">https://kannada.asianetnews.com/viral/he-left-a-wipro-tech-career-for-farming-now-his-agri-business-targets-600-crore-revenue/articleshow-k1lxhnd</guid>
            <pubDate>Thu, 27 Aug 2026 11:26:19 +0530</pubDate>
            <description><![CDATA[&lt;p&gt;12 ವರ್ಷಗಳ ವಿಪ್ರೋ ವೃತ್ತಿಜೀವನ ತೊರೆದು ಕೃಷಿಯತ್ತ ಮುಖ ಮಾಡಿದ ಶಶಿ ಕುಮಾರ್&zwnj;ರ ಕಥೆ ಈಗ ಉದ್ಯಮಶೀಲತೆಗೆ ಮಾದರಿಯಾಗಿದೆ. ಆರಂಭದಲ್ಲಿ ಕುಟುಂಬದ ವಿರೋಧ ಮತ್ತು ಹಲವು ಬಾರಿ ದಿವಾಳಿಯ ಅಂಚಿನ ಸಂಕಷ್ಟ ಎದುರಿಸಿದ ಅವರು, ಪತ್ನಿ ಹಾಗೂ ಕುಟುಂಬದ ನೆರವಿನಿಂದ ಅಕ್ಷಯಕಲ್ಪ ಆರ್ಗ್ಯಾನಿಕ್ ಕಟ್ಟಿದರು. ಇಂದು 2,800 ಹಳ್ಳಿಗಳ 2,800 ರೈತರೊಂದಿಗೆ ಸಂಸ್ಥೆ ಕೆಲಸ ಮಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m10ew16csjmdw31ea1f901nd,imgname-from-wipro-architect-to-agri-entrepreneur---shashikumar-s-success-story--1--1787795735756.jpg" type="image/jpeg" height="390" width="690"/>
            <content:encoded><![CDATA[&lt;h2&gt;Wipro ತೊರೆದು ಮಣ್ಣಿನತ್ತ ಹೆಜ್ಜೆ: ಶಶಿ ಕುಮಾರ್&zwnj;ರ ಕೃಷಿ ಉದ್ಯಮದ ಯಶೋಗಾಥೆ, 12 ವರ್ಷದ ಟೆಕ್ ವೃತ್ತಿಗೆ ವಿದಾಯ&lt;/h2&gt;&lt;p&gt;ಉತ್ತಮ ಸಂಬಳ, ಪ್ರತಿಷ್ಠಿತ ಹುದ್ದೆ ಮತ್ತು ಸ್ಥಿರ ವೃತ್ತಿಜೀವನವನ್ನು ಬಿಟ್ಟು ಸಂಪೂರ್ಣ ವಿಭಿನ್ನ ಕ್ಷೇತ್ರಕ್ಕೆ ಕಾಲಿಡುವುದು ಸುಲಭದ ನಿರ್ಧಾರವಲ್ಲ. ಆದರೆ ಶಶಿ ಕುಮಾರ್ ಅವರು 2010ರಲ್ಲಿ ಇಂತಹದ್ದೊಂದು ದೊಡ್ಡ ನಿರ್ಧಾರ ಕೈಗೊಂಡರು. ವಿಪ್ರೋದಲ್ಲಿ ಲೀಡ್ ಆರ್ಕಿಟೆಕ್ಟ್ ಆಗಿ 12 ವರ್ಷ ಕೆಲಸ ಮಾಡಿದ ಅವರು, ಕಾರ್ಪೊರೇಟ್ ಬದುಕಿಗೆ ವಿದಾಯ ಹೇಳಿ ಕೃಷಿ ಆಧಾರಿತ ಉದ್ಯಮದತ್ತ ಮುಖ ಮಾಡಿದರು.&lt;/p&gt;&lt;p&gt;ಬೆಂಗಳೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಕುಮಾರ್, ಅಮೆರಿಕದ ಇಲಿನಾಯ್ಸ್ ಇನ್&zwnj;ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದರು.&lt;/p&gt;&lt;h3&gt;ಕೃಷಿಯ ಬೀಜ ಬಿತ್ತಿದ್ದು ಕಾಲೇಜು ದಿನಗಳಲ್ಲೇ&lt;/h3&gt;&lt;p&gt;ಕೃಷಿಯ ಮೇಲಿನ ಅವರ ಆಸಕ್ತಿ 2010ರಲ್ಲಿ ಹುಟ್ಟಿದ್ದಲ್ಲ. 1991ರಲ್ಲೇ, ಕಾಲೇಜಿನಲ್ಲಿದ್ದಾಗ ತಮ್ಮ ಪೂರ್ವಜರ ಜಮೀನಿನಲ್ಲಿ ನೈಸರ್ಗಿಕ ಕೃಷಿ ಆರಂಭಿಸುವ ಆಲೋಚನೆ ಹೊಂದಿದ್ದರು. ಉಡುಪಿಯ ನೈಸರ್ಗಿಕ ಕೃಷಿಕ ಚೆರ್ಕಾಡಿ ರಾಮಚಂದ್ರ ರಾವ್ ಅವರ ಪರಿಚಯವೂ ಅವರ ಚಿಂತನೆಗೆ ದೊಡ್ಡ ಪ್ರಭಾವ ಬೀರಿತು.&lt;/p&gt;&lt;p&gt;ರಾವ್ ಅವರ ಸಣ್ಣ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದಷ್ಟೇ ಅಲ್ಲದೆ, ಉತ್ಪನ್ನಗಳನ್ನು ಮಾರಾಟ ಮಾಡಿ ಕೃಷಿಯನ್ನು ಆರ್ಥಿಕವಾಗಿ ಲಾಭದಾಯಕವಾಗಿಸಬಹುದೆಂಬುದನ್ನು ಕುಮಾರ್ ಅರಿತುಕೊಂಡರು.&lt;/p&gt;&lt;h3&gt;ಕುಟುಂಬದ ವಿರೋಧ, ಹಣಕಾಸಿನ ಸಂಕಷ್ಟ&lt;/h3&gt;&lt;p&gt;ವೃತ್ತಿ ಬದಲಾವಣೆಯ ನಿರ್ಧಾರಕ್ಕೆ ಕುಟುಂಬದಿಂದ ಆರಂಭದಲ್ಲಿ ಬೆಂಬಲ ಸಿಗಲಿಲ್ಲ. ತಂದೆ ಸುಮಾರು ಎಂಟು ವರ್ಷಗಳ ಕಾಲ ಅವರೊಂದಿಗೆ ಮಾತನಾಡಲಿಲ್ಲ ಎನ್ನಲಾಗಿದೆ. ಉದ್ಯಮದ ಆರಂಭಿಕ ಹಂತದಲ್ಲೂ ಸಂಕಷ್ಟಗಳು ಎದುರಾದವು. ವ್ಯವಹಾರ ಸುಮಾರು 10 ಬಾರಿ ದಿವಾಳಿಯ ಅಂಚಿಗೆ ತಲುಪಿತ್ತು.&lt;/p&gt;&lt;p&gt;ಆ ಸಂದರ್ಭದಲ್ಲಿ ಪತ್ನಿ ಶಿಲ್ಪಾ ಜಿ ತಮ್ಮ ಉಳಿತಾಯದಿಂದ ₹30 ಲಕ್ಷ ಹಾಗೂ ಚಿಕ್ಕಪ್ಪ ಡಾ. ಮುನಿ ರೆಡ್ಡಿ ₹10 ಲಕ್ಷ ಹೂಡಿಕೆ ಮಾಡಿದ್ದು ಉದ್ಯಮಕ್ಕೆ ನೆರವಾಯಿತು.&lt;/p&gt;&lt;h3&gt;ಅಕ್ಷಯಕಲ್ಪದಿಂದ ರೈತರ ಆದಾಯಕ್ಕೆ ಹೊಸ ಮಾದರಿ&lt;/h3&gt;&lt;p&gt;ಕುಮಾರ್ ಸ್ಥಾಪಿಸಿದ ಅಕ್ಷಯಕಲ್ಪ ಆರ್ಗ್ಯಾನಿಕ್ ಮೊದಲು ಡೈರಿ ಕ್ಷೇತ್ರದೊಂದಿಗೆ ಆರಂಭವಾಯಿತು. ಋತುಮಾನಕ್ಕೆ ಅವಲಂಬಿತ ಬೆಳೆಗಳ ಬದಲು ರೈತರಿಗೆ ನಿಯಮಿತ ಆದಾಯ ಸಿಗುವಂತೆ ಮಾಡುವ ಉದ್ದೇಶ ಇದರ ಹಿಂದಿತ್ತು.&lt;/p&gt;&lt;p&gt;ನಂತರ ಮಣ್ಣಿನ ನಿರ್ವಹಣೆ, ಜೇನು ಸಾಕಣೆ, ಕೋಳಿ ಸಾಕಣೆ, ಬಾಳೆ ಕೃಷಿ ಹಾಗೂ ಗೊಬ್ಬರ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಉದ್ಯಮ ವಿಸ್ತರಿಸಿತು.&lt;/p&gt;&lt;h3&gt;2,800 ಹಳ್ಳಿಗಳಲ್ಲಿ 2,800 ರೈತರು&lt;/h3&gt;&lt;p&gt;ಇಂದು ಸಂಸ್ಥೆ ಸುಮಾರು 2,800 ಹಳ್ಳಿಗಳ 2,800 ರೈತರೊಂದಿಗೆ ಕೆಲಸ ಮಾಡುತ್ತಿದೆ ಎಂದು ಕುಮಾರ್ ಹೇಳಿದ್ದಾರೆ. ರೈತರ ಸರಾಸರಿ ವಯಸ್ಸು 32 ವರ್ಷವಾಗಿದ್ದು, ಅವರಲ್ಲಿ ಸುಮಾರು 1,200 ಮಂದಿ ಮಹಿಳೆಯರು.&lt;/p&gt;&lt;p&gt;ಕಂಪನಿಯ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ಕೃಷಿ ಕುಟುಂಬಕ್ಕೆ ಸರಾಸರಿ ಮಾಸಿಕ ಪಾವತಿ ₹1.28 ಲಕ್ಷದಷ್ಟಿತ್ತು. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಗ್ರಾಹಕ ಕಾರ್ಯಾಚರಣೆಗಳನ್ನು ವಿಸ್ತರಿಸಿರುವ ಸಂಸ್ಥೆ, ಮುಂಬೈ ಮತ್ತು ಪುಣೆಯಂತಹ ಮಾರುಕಟ್ಟೆಗಳತ್ತವೂ ಹೆಜ್ಜೆ ಇಟ್ಟಿದೆ.&lt;/p&gt;&lt;p&gt;ಒಂದು ಕಾಲದಲ್ಲಿ ಟೆಕ್ ಉದ್ಯೋಗ ತೊರೆದು ಅಪಾಯ ಸ್ವೀಕರಿಸಿದ್ದ ಶಶಿ ಕುಮಾರ್, ಕೃಷಿಯನ್ನೂ ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ದೃಷ್ಟಿಕೋನದಿಂದ ನೋಡಿದರೆ ಯುವಕರಿಗೆ ಹೊಸ ವೃತ್ತಿ ಅವಕಾಶವಾಗಬಹುದು ಎಂಬ ಮಾದರಿಯನ್ನು ನಿರ್ಮಿಸಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/he-left-a-wipro-tech-career-for-farming-now-his-agri-business-targets-600-crore-revenue/articleshow-k1lxhnd"/>
        </item>
        <item>
            <title><![CDATA[KPSC ಪಶು ವೈದ್ಯಾಧಿಕಾರಿ ಮಾತ್ರವಲ್ಲ, 3 ವರ್ಷಗಳಲ್ಲಿ ನಡೆದ 4 ಪ್ರಮುಖ ಪರೀಕ್ಷೆಗಳ ತನಿಖೆಗೆ ಇಳಿದ ಸಿಐಡಿ ಮತ್ತು ಇಡಿ!]]></title>
            <link>https://kannada.asianetnews.com/state/kpsc-recruitment-scam-cid-ed-probe-four-exams-omr-tampering/articleshow-kc43nhg</link>
            <guid isPermaLink="true">https://kannada.asianetnews.com/state/kpsc-recruitment-scam-cid-ed-probe-four-exams-omr-tampering/articleshow-kc43nhg</guid>
            <pubDate>Sat, 29 Aug 2026 08:41:19 +0530</pubDate>
            <description><![CDATA[ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ನಾಲ್ಕು ಪ್ರಮುಖ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಿಐಡಿ ಮತ್ತು ಇಡಿ ತನಿಖೆ ತೀವ್ರಗೊಳಿಸಿವೆ. ಓಎಂಆರ್ ಶೀಟ್ ತಿದ್ದುಪಡಿ ಆರೋಪದ ಮೇಲೆ ಮೂಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್&zwnj;ಸಿ ಅಧ್ಯಕ್ಷರ ವಿರುದ್ಧ ಎಫ್&zwnj;ಐಆರ್&zwnj; ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09p3cx5t9cytr3wjbag2zc1,imgname-kpsc-ed-raid-shivashankarappa-sahukar-1787031565221.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.29): ಕ&lt;/strong&gt;ರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಹಾಗೂ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಆಯೋಗ ನಡೆಸಿದ ನಾಲ್ಕು ಪ್ರಮುಖ ನೇಮಕಾತಿ ಪರೀಕ್ಷೆಗಳ ಸಮಗ್ರ ದಾಖಲೆಗಳನ್ನು ಕಲೆಹಾಕಿ ತನಿಖೆ ಆರಂಭಿಸಲಾಗಿದೆ.&lt;/p&gt;&lt;h2&gt;&lt;strong&gt;ತನಿಖೆಯ ವ್ಯಾಪ್ತಿಯಲ್ಲಿರುವ 4 ಪರೀಕ್ಷೆಗಳು:&lt;/strong&gt;&lt;/h2&gt;&lt;ul&gt; &lt;li&gt;ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ&lt;/li&gt; &lt;li&gt;ಪಂಚಾಯತ್ ಅಭಿವೃದ್ಧಿ ಇಲಾಖೆ&lt;/li&gt; &lt;li&gt;ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ&lt;/li&gt; &lt;li&gt;ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ&lt;/li&gt;&lt;/ul&gt;&lt;h2&gt;&lt;strong&gt;ಓಎಂಆರ್ ಶೀಟ್ ತಿದ್ದುಪಡಿ ಆರೋಪ:&lt;/strong&gt;&lt;/h2&gt;&lt;p&gt;ಈ ನಾಲ್ಕೂ ಪರೀಕ್ಷೆಗಳ ಸಂದರ್ಭದಲ್ಲಿ ಓಎಂಆರ್ (OMR) ಶೀಟ್&zwnj;ಗಳನ್ನು ತಿದ್ದುಪಡಿ ಮಾಡಿರುವ ಹಾಗೂ ಪ್ರಶ್ನೆಪತ್ರಿಕೆ ವಿತರಣೆ ವೇಳೆ ವ್ಯವಸ್ಥಿತ ಲೋಪವೆಸಗಿರುವುದು ತನಿಖೆಯಲ್ಲಿ ಶಂಕಿಸಲಾಗಿದೆ. ಈ ಹಿಂದೆ ಈ ಅಕ್ರಮದ ಬಗ್ಗೆ ಆಯೋಗದ ಹಂತದಲ್ಲೇ ಸಣ್ಣಪುಟ್ಟ ಶಿಸ್ತುಕ್ರಮ ಕೈಗೊಂಡು ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.&lt;/p&gt;&lt;p&gt;ಇದೀಗ ಸಿಐಡಿ ಅಧಿಕಾರಿಗಳು ನಾಲ್ಕೂ ಪರೀಕ್ಷೆಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳು, ಪರೀಕ್ಷಾರ್ಥಿಗಳ ವಿವರ ಮತ್ತು ಅಂಕಪಟ್ಟಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರ್ಥಿಕ ಅಕ್ರಮದ ಜಾಡು ಹಿಡಿದು ಇ.ಡಿ ಕೂಡ ಮಾಹಿತಿ ಸಂಗ್ರಹಿಸುತ್ತಿದ್ದು, ನೇಮಕಾತಿ ಜಾಲದಲ್ಲಿದ್ದ ಕಿಂಗ್&zwnj;ಪಿನ್&zwnj;ಗಳಿಗೆ ಕಾನೂನಿನ ಸಂಕೋಲೆ ಬಿಗಿಯಾಗುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಪಶು ವೈದ್ಯಕೀಯ ಹಗರಣದ ತನಿಖೆ ಏನಾಯ್ತು?&lt;/strong&gt;&lt;/h2&gt;&lt;p&gt;ಕೆಪಿಎಸ್&zwnj;ಸಿ ನಡೆಸಿದ್ದ ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವಜನಪಕ್ಷಪಾತ ಆರೋಪ ಸಂಬಂಧ ಈಗಾಗಲೇ ಅಮಾನತಾಗಿರುವ ಕೆಪಿಎಸ್&zwnj;ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್&zwnj;, ಕೆಪಿಎಸ್&zwnj;ಸಿ ಸದಸ್ಯರು, ಅಧಿಕಾರಿಗಳು ಸೇರಿ ನಾಲ್ವರ ವಿರುದ್ಧ ವಿಧಾನಸೌಧ ಪೊಲೀಸ್&zwnj; ಠಾಣೆಯಲ್ಲಿ ಎಫ್&zwnj;ಐಆರ್&zwnj; ದಾಖಲಾಗಿದೆ. ಕೆಪಿಎಸ್&zwnj;ಸಿಯು 2026ರ ಜುಲೈ 17ರಂದು ಪಶು ವೈದ್ಯಾಧಿಕಾರಿಗಳ ಹುದ್ದೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಕೆಪಿಎಸ್&zwnj;ಸಿಯ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಸಂಬಂಧಿ ಅಭ್ಯರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತೀರ್ಣ ಹೊಂದಿದ್ದಾರೆ. ಕೆಪಿಎಸ್&zwnj;ಸಿಯು ಪಶುವೈದ್ಯಾಧಿಕಾರಿಗಳ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ, ಪದವಿಯಲ್ಲಿ ಚಿನ್ನದ ಪದಕ ಪಡೆದ ಅಭ್ಯರ್ಥಿಗಳು, ಯುಪಿಎಸ್&zwnj;ಸಿ ನಡೆಸುವ ಐಎಫ್ಎಸ್ ಪರೀಕ್ಷೆಯಲ್ಲಿ ಉತೀರ್ಣರಾದ ಅಭ್ಯರ್ಥಿಗಳು 350 ಅಂಕಗಳನ್ನೂ ಪಡೆಯಲು ವಿಫಲರಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೆಪಿಎಸ್&zwnj;ಸಿ ಅಧ್ಯಕ್ಷ ಶಿವಶಂಕರಪ್ಪ ಹಾಗೂ ಐಎಎಸ್ ಅಧಿಕಾರಿ ಜ್ನಾನೇಂದ್ರ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kpsc-recruitment-scam-cid-ed-probe-four-exams-omr-tampering/articleshow-kc43nhg"/>
        </item>
        <item>
            <title><![CDATA["WFH ಇರದಿದ್ದರೆ ಅಪ್ಪನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ!":ವೈರಲ್ ಆಯ್ತು ಟೆಕ್ಕಿಯ ಭಾವುಕ ಪೋಸ್ಟ್!]]></title>
            <link>https://kannada.asianetnews.com/viral/father-suffers-heart-attack-techie-works-remotely-for-2-months-while-caring-for-him/articleshow-lwiz9o6</link>
            <guid isPermaLink="true">https://kannada.asianetnews.com/viral/father-suffers-heart-attack-techie-works-remotely-for-2-months-while-caring-for-him/articleshow-lwiz9o6</guid>
            <pubDate>Sun, 23 Aug 2026 09:15:21 +0530</pubDate>
            <description><![CDATA[&lt;p&gt;ತಂದೆಗೆ ಹೃದಯಾಘಾತವಾದ ಬಳಿಕ ಟೆಕ್ಕಿಯೊಬ್ಬರು ಸುಮಾರು ಎರಡು ತಿಂಗಳು ಊರಲ್ಲೇ ಉಳಿದು, ಪೋಷಕರ ಆರೈಕೆ ಮಾಡುತ್ತಲೇ ರಿಮೋಟ್ ಆಗಿ ಕೆಲಸ ಮುಂದುವರಿಸಿದ್ದಾರೆ. ಕುಟುಂಬದ ಕಷ್ಟದ ಸಮಯದಲ್ಲಿ ವರ್ಕ್&zwnj; ಫ್ರಮ್&zwnj; ಹೋಮ್&zwnj; ಸೌಲಭ್ಯ ನೀಡಿದ ಮ್ಯಾನೇಜರ್ ಹಾಗೂ ಕಂಪನಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಅವರ ಹೃದಯಸ್ಪರ್ಶಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0m22b5yz9rmbgxgjjfppfr2,imgname-wfh-helped-this-techie-care-for-his-father-after-a-heart-attack--1--1787379657918.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ತಂದೆಗೆ ಹೃದಯಾಘಾತ, ಟೆಕ್ಕಿಗೆ ನೆರವಾದ WFH!&lt;/strong&gt;&lt;/h2&gt;&lt;p&gt;ರಿಮೋಟ್ ವರ್ಕ್&zwnj; ಅಥವಾ ವರ್ಕ್&zwnj; ಫ್ರಮ್&zwnj; ಹೋಮ್&zwnj; ಕೇವಲ ಕಚೇರಿಗೆ ಹೋಗದೆ ಕೆಲಸ ಮಾಡುವ ಸೌಲಭ್ಯವಲ್ಲ; ಕುಟುಂಬದ ಕಷ್ಟದ ಸಮಯದಲ್ಲಿ ಉದ್ಯೋಗಿಯೊಂದಿಗೆ ನಿಲ್ಲುವ ವ್ಯವಸ್ಥೆಯೂ ಹೌದು ಎಂಬುದನ್ನು ಟೆಕ್ಕಿಯೊಬ್ಬರ ಅನುಭವ ತೋರಿಸಿದೆ. ತಂದೆಗೆ ಹೃದಯಾಘಾತವಾದ ಬಳಿಕ ಅವರು ಸುಮಾರು ಎರಡು ತಿಂಗಳು ತಮ್ಮ ಊರಿನಲ್ಲೇ ಉಳಿದುಕೊಂಡು ಕೆಲಸ ಮುಂದುವರಿಸಿದ್ದಾರೆ.&lt;/p&gt;&lt;h3&gt;&lt;strong&gt;ತಂದೆಯ ಸೇವೆಯೊಂದಿಗೆ ಕೆಲಸಕ್ಕೂ ಸಮಯ ಕೊಟ್ಟ ಟೆಕ್ಕಿ!&lt;/strong&gt;&lt;/h3&gt;&lt;p&gt;ತಂದೆಗೆ ಹೃದಯಾಘಾತವಾದ ಸುದ್ದಿ ತಿಳಿದ ತಕ್ಷಣ ಟೆಕ್ಕಿ ತಮ್ಮ ಊರಿಗೆ ತೆರಳಿದ್ದಾರೆ. ಆಸ್ಪತ್ರೆ ಚಿಕಿತ್ಸೆ ಮುಗಿದ ಬಳಿಕವೂ ತಂದೆಯ ಚೇತರಿಕೆಯ ಅವಧಿಯಲ್ಲಿ ಅವರ ಜೊತೆಗಿದ್ದು, ಔಷಧಿ ನಿರ್ವಹಣೆ ಸೇರಿದಂತೆ ಅಗತ್ಯ ಆರೈಕೆಯಲ್ಲಿ ನೆರವಾಗಿದ್ದಾರೆ.&lt;/p&gt;&lt;p&gt;ಈ ಅವಧಿಯಲ್ಲಿ ಕೆಲಸಕ್ಕೆ ದೀರ್ಘ ರಜೆ ತೆಗೆದುಕೊಳ್ಳುವ ಬದಲು, ಕಂಪನಿಯ ರಿಮೋಟ್ ವರ್ಕ್&zwnj; ಸೌಲಭ್ಯ ಬಳಸಿಕೊಂಡು ಮನೆಯಲ್ಲೇ ಕೆಲಸ ಮುಂದುವರಿಸಿದ್ದಾರೆ. ಸುಮಾರು ಎರಡು ತಿಂಗಳು ಪೋಷಕರ ಜೊತೆಗಿದ್ದು ವೃತ್ತಿಪರ ಜವಾಬ್ದಾರಿಯನ್ನೂ ನಿಭಾಯಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.&lt;/p&gt;&lt;h3&gt;'ಕಷ್ಟದ ಸಮಯದಲ್ಲಿ ಕುಟುಂಬದ ಜೊತೆಗಿರುವುದೇ ದೊಡ್ಡ ಭಾಗ್ಯ'&lt;/h3&gt;&lt;p&gt;ತಮ್ಮ ಅನುಭವ ಹಂಚಿಕೊಂಡ ಟೆಕ್ಕಿ, ಚೇತರಿಕೆಯ ಸಂದರ್ಭದಲ್ಲಿ ವೈದ್ಯರ ಚಿಕಿತ್ಸೆಯಷ್ಟೇ ಕುಟುಂಬದ ಬೆಂಬಲವೂ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಪೋಷಕರಿಗೆ ಅಗತ್ಯವಿದ್ದ ಸಮಯದಲ್ಲಿ ಅವರ ಜೊತೆ ಇರಲು ಸಾಧ್ಯವಾಗಿದ್ದಕ್ಕೆ ತಮ್ಮ ಮ್ಯಾನೇಜರ್ ಮತ್ತು ಕಂಪನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;&lt;p&gt;ವರ್ಕ್&zwnj; ಫ್ರಮ್&zwnj; ಹೋಮ್&zwnj; ನೀತಿ ಇಲ್ಲದಿದ್ದರೆ ಈ ಅವಧಿಯಲ್ಲಿ ಕೆಲಸ ಮತ್ತು ಕುಟುಂಬದ ನಡುವೆ ಕಠಿಣ ಆಯ್ಕೆ ಮಾಡಬೇಕಾಗುತ್ತಿತ್ತು ಎಂಬ ಅರ್ಥದ ಭಾವನೆ ಅವರ ಪೋಸ್ಟ್&zwnj;ನಲ್ಲಿ ವ್ಯಕ್ತವಾಗಿದೆ.&lt;/p&gt;&lt;h3&gt;ಉದ್ಯೋಗಿಯ ಬೆನ್ನಿಗೆ ನಿಂತ ಸಂಸ್ಥೆಗೆ ನೆಟ್ಟಿಗರ ಪ್ರಶಂಸೆ&lt;/h3&gt;&lt;p&gt;ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕರು ಟೆಕ್ಕಿಯ ಕುಟುಂಬದ ಕಾಳಜಿಯನ್ನು ಮೆಚ್ಚಿದ್ದಾರೆ. ಜೊತೆಗೆ, ಕಷ್ಟದ ಸಮಯದಲ್ಲಿ ಉದ್ಯೋಗಿಗೆ ಬೆಂಬಲ ನೀಡಿದ ಮ್ಯಾನೇಜರ್ ಮತ್ತು ಸಂಸ್ಥೆಯ ನಿರ್ಧಾರಕ್ಕೂ ಪ್ರಶಂಸೆ ವ್ಯಕ್ತವಾಗಿದೆ.&lt;/p&gt;&lt;p&gt;ಕೆಲವರು, ಉದ್ಯೋಗಿಯ ಮೌಲ್ಯವನ್ನು ಕೇವಲ ಉತ್ಪಾದಕತೆ, ಗಡುವು ಅಥವಾ ಕಚೇರಿ ಹಾಜರಾತಿಯಿಂದ ಅಳೆಯಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕುಟುಂಬದ ಆರೋಗ್ಯದಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ಕೆಲಸದ ಸ್ಥಳದ ನಮ್ಯತೆ ಉದ್ಯೋಗಿಗಳಿಗೆ ದೊಡ್ಡ ಬೆಂಬಲವಾಗುತ್ತದೆ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.&lt;/p&gt;&lt;h3&gt;&lsquo;ಕೆಲಸಕ್ಕಿಂತ ಮಿಗಿಲಾದ ಕ್ಷಣಗಳು&rsquo;&lt;/h3&gt;&lt;p&gt;ನೆಟ್ಟಿಗರ ಪ್ರಕಾರ, ಸಂಬಳ, ಬಡ್ತಿ ಅಥವಾ ವೃತ್ತಿಜೀವನದ ಗುರಿಗಳಿಗಿಂತ ಕುಟುಂಬದೊಂದಿಗೆ ಕಳೆಯುವ ಕೆಲವು ಕ್ಷಣಗಳಿಗೆ ವಿಭಿನ್ನ ಮೌಲ್ಯವಿದೆ. ತಂದೆಯ ಚೇತರಿಕೆಯ ಸಂದರ್ಭದಲ್ಲಿ ಅವರ ಜೊತೆ ಕಳೆದ ಎರಡು ತಿಂಗಳುಗಳು ಟೆಕ್ಕಿಯ ಜೀವನದ ಅತ್ಯಂತ ಅರ್ಥಪೂರ್ಣ ಅವಧಿಗಳಲ್ಲಿ ಒಂದಾಗಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.&lt;/p&gt;&lt;p&gt;This WFH culture is such a blessing for corporate people...❤️A few months back, my dad had a heart attack. Without thinking much about holidays or work, I went to my hometown.I managed his medications and stayed there with my mom and dad for almost 2 months.❤️Because in&hellip;&lt;/p&gt;&lt;p&gt;&mdash; Kp_speaks (@kp_speaks05) August 21, 2026&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/father-suffers-heart-attack-techie-works-remotely-for-2-months-while-caring-for-him/articleshow-lwiz9o6"/>
        </item>
        <item>
            <title><![CDATA[ಅಪ್ಪನ ಸಂಪಾದನೆ 3 ಸಾವಿರ, ಮಗನ ಗಳಿಕೆ 1.5 ಕೋಟಿ - ಯುವಕರಿಗೆ ಮಾದರಿ ಶಶಾಂಕ್]]></title>
            <link>https://kannada.asianetnews.com/private-jobs/success-story-24-years-old-shashank-agrawal-earns-115-crore/articleshow-ohgbmlb</link>
            <guid isPermaLink="true">https://kannada.asianetnews.com/private-jobs/success-story-24-years-old-shashank-agrawal-earns-115-crore/articleshow-ohgbmlb</guid>
            <pubDate>Wed, 26 Aug 2026 14:43:36 +0530</pubDate>
            <description><![CDATA[&lt;p&gt;ಶಿಕ್ಷಣಕ್ಕೆ ಖರ್ಚು ಮಾಡಿದ ಹಣ ಈಗ ಹೊರೆಯಾದ್ರೂ ಮುಂದೊಂದು ದಿನ ದೊಡ್ಡ ಫಲ ನೀಡುತ್ತೆ. ಮಕ್ಕಳು, ಪಾಲಕರ ಶ್ರಮಕ್ಕೆ ಬೆಲೆ ನೀಡಿ, ಮನಸ್ಸುಕೊಟ್ಟು ವಿದ್ಯಾಭ್ಯಾಸ ಮಾಡಿದ್ರೆ ಮುಂದೊಂದು ದಿನ ಪಾಲಕರ ಜೀವನ ಸುಖಕರವಾಗಿರುತ್ತೆ. ಅದಕ್ಕೆ ಶಶಾಂಕ್&zwnj; ಅಗರ್ವಾಲ್&zwnj; ಉತ್ತಮ ನಿದರ್ಶನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ynda113htbt049nskg9rqc,imgname-shashank-agarwal-1787735484449.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಸಣ್ಣ ಅಂಗಡಿ, ತಿಂಗಳಿಗೆ ಕೇವಲ 3ರಿಂದ 4 ಸಾವಿರ ರೂಪಾಯಿ ಆದಾಯ. ಇಷ್ಟಿದ್ದರೂ ಶಶಾಂಕ್&zwnj; ಅಗರ್ವಾಲ್&zwnj; ತಂದೆ ಸೋಲೊಪ್ಪಿಕೊಳ್ಳಲಿಲ್ಲ. ಮಗನ ದೊಡ್ಡ ಕನಸನ್ನು ನನಸಾಗಿಸುವ ಪಣ ತೊಟ್ಟಿದ್ದರು. ಅದಕ್ಕೆ ಮಗ ಶಶಾಂಕ್ ಸಂಪೂರ್ಣ ಸಾಥ್&zwnj; ನೀಡಿದ್ದರು. ಅಪ್ಪನ ಶ್ರಮಕ್ಕೆ ಈಗ ಶಶಾಂಕ್ ಅವರಿಂದ ಫಲ ಸಿಕ್ಕಿದೆ. ತಂದೆ ಸಾಲ ಮಾಡಿ ಮಗನನ್ನು ಓದಿಸ್ತಿದ್ರೆ ಮಗ ಜೀವನವನ್ನು ಚಾಲೆಂಜ್&zwnj; ಆಗಿ ತೆಗೆದುಕೊಂಡು ಓದು ಮುಂದುವರೆಸಿದ್ರು. ಈಗ 1.5 ಕೋಟಿ ವಾರ್ಷಿಕ ಸಂಬಳ ಪಡೆಯುತ್ತಿದ್ದಾರೆ.&lt;/p&gt;&lt;h2&gt;ಯುವಕರಿಗೆ ಸ್ಫೂರ್ತಿ ಶಶಾಂಕ್&lt;/h2&gt;&lt;p&gt;ಇದು ರಾಜಸ್ಥಾನದ ಶಶಾಂಕ್ ಅವರ ಸ್ಪೂರ್ತಿದಾಯಕ ಯಶೋಗಾಥೆ. ಬಡ ಕುಟುಂಬದಲ್ಲಿ ಬೆಳೆದ ಶಶಾಂಕ್ ಅವರ ತಂದೆ ಸಗಟು ಅಂಗಡಿ ನಡೆಸುತ್ತಿದ್ದರು. ಆದಾಯ ಕಡಿಮೆಯಿದ್ದರೂ ಮಗನ ವಿದ್ಯಾಭ್ಯಾಸಕ್ಕೆ ಅವರು ಯಾವುದೇ ಕೊರತೆ ಮಾಡಲಿಲ್ಲ. ಅಗತ್ಯವಿದ್ದಾಗ ಸಾಲ ಮಾಡಿ ಮಗನ ಶಿಕ್ಷಣಕ್ಕೆ ಹಣ ಹೊಂದಿಸಿದರು. ಶಶಾಂಕ್ ಕೂಡ ತಂದೆಯ ಕಷ್ಟವನ್ನು ಅರ್ಥಮಾಡಿಕೊಂಡು ಓದಿನಲ್ಲಿ ಸಂಪೂರ್ಣ ಗಮನ ಹರಿಸಿದರು. 12ನೇ ತರಗತಿ ಮುಗಿಸಿದ ಬಳಿಕ ಎಂಜಿನಿಯರಿಂಗ್ ಓದುವ ಗುರಿ ಇಟ್ಟುಕೊಂಡರು.&lt;/p&gt;&lt;p&gt;ಅದಕ್ಕಾಗಿ ಕಠಿಣ ಪರಿಶ್ರಮ ಪಟ್ಟ ಅವರು 2018ರಲ್ಲಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ 330 ಅಂಕಗಳನ್ನು ಪಡೆದರು. ನಂತರ ಜೆಇಇ ಅಡ್ವಾನ್ಸ್ಡ್ನಲ್ಲೂ ಉತ್ತಮ ರ್ಯಾಂಕ್ ಪಡೆದು, ದೇಶದ ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಪ್ರವೇಶ ಪಡೆದರು. ಅಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದ ಶಶಾಂಕ್, ಓದಿನ ಜೊತೆಗೆ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನೂ ಬೆಳೆಸಿಕೊಂಡರು.&lt;/p&gt;&lt;p&gt;ಪೈಥಾನ್, ಸಿ++, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಡೇಟಾ ಸ್ಟ್ರಕ್ಚರ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಅವರ ಪ್ರತಿಭೆ ಮತ್ತು ಪರಿಶ್ರಮಕ್ಕೆ ತಕ್ಕಂತೆ ಅವಕಾಶಗಳೂ ಸಿಕ್ಕವು. ಇಂಟರ್ನ್ಶಿಪ್ ಬಳಿಕ ಕ್ವಾಂಟಿಟೇಟಿವ್ ಟ್ರೇಡಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಇದೀಗ ಝನ್ಸ್ಕಾರ್ ಕಾರ್ಪೊರೇಷನ್ನಲ್ಲಿ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಅವರ ವಾರ್ಷಿಕ ಪ್ಯಾಕೇಜ್ ಸುಮಾರು 1.5 ಕೋಟಿ ರೂಪಾಯಿ. ಅಂದರೆ ತಿಂಗಳಿಗೆ ಸರಾಸರಿ 8.75 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ ಶಶಾಂಕ್.&lt;/p&gt;&lt;p&gt;ಶಶಾಂಕ್&zwnj; ಅನೇಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಬಡಕುಟುಂಬದಲ್ಲಿ ಹುಟ್ಟೋದು ತಪ್ಪಲ್ಲ. ಸಣ್ಣಪುಟ್ಟ ಕನಸು ಕಾಣೋದು ತಪ್ಪು. ಎಲ್ಲಿ ಹುಟ್ಟಿದ್ರೂ ದೊಡ್ಡ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ಶ್ರಮಿಸೋದು ಮುಖ್ಯ. ಎಷ್ಟೆ ಕಷ್ಟ ಬಂದ್ರೂ ಗುರಿ ಕಡೆ ಗಮನವಿದ್ರೆ ಯಶಸ್ಸು ಸುಲಭ ಎಂಬುದನ್ನು ಶಶಾಂಕ್&zwnj; ತೋರಿಸಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/private-jobs/success-story-24-years-old-shashank-agrawal-earns-115-crore/articleshow-ohgbmlb"/>
        </item>
        <item>
            <title><![CDATA[₹23 ಲಕ್ಷ CTC, ತಿಂಗಳ ಖರ್ಚು ಕೇವಲ ₹15 ಸಾವಿರ! MNCಗಿಂತ PSU ಉದ್ಯೋಗವೇ ಬೆಸ್ಟ್ ಎಂದ ನೆಟ್ಟಿಗರು]]></title>
            <link>https://kannada.asianetnews.com/jobs/23-lakh-ctc-just-15000-monthly-expenses-why-this-psu-employee-says-he-is-winning-the-money-game/articleshow-ouitmoc</link>
            <guid isPermaLink="true">https://kannada.asianetnews.com/jobs/23-lakh-ctc-just-15000-monthly-expenses-why-this-psu-employee-says-he-is-winning-the-money-game/articleshow-ouitmoc</guid>
            <pubDate>Wed, 26 Aug 2026 16:15:38 +0530</pubDate>
            <description><![CDATA[&lt;p&gt;₹23 ಲಕ್ಷ CTC ಹೊಂದಿರುವ 27 ವರ್ಷದ PSU ಉದ್ಯೋಗಿಯೊಬ್ಬರು ತಿಂಗಳಿಗೆ ₹1.3 ಲಕ್ಷ ಆದಾಯ ಬಂದರೂ ₹15 ಸಾವಿರಕ್ಕಿಂತ ಕಡಿಮೆ ಖರ್ಚು ಮಾಡುತ್ತೇನೆ ಎಂದು ರೆಡ್ಡಿಟ್&zwnj;ನಲ್ಲಿ ಹೇಳಿದ್ದಾರೆ. ಉಚಿತ ಮನೆ, ಇಂಧನ, ವಿದ್ಯುತ್ ಮತ್ತು ಸಬ್ಸಿಡಿ ಆಹಾರದಿಂದ ಉಳಿತಾಯ ಹೆಚ್ಚುತ್ತಿದೆ ಎನ್ನುವ ಅವರ ಅನುಭವ MNC vs PSU ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0yq9ms7hkwx45gkd1a5kbpq,imgname-27-year-old-psu-employee-earns--1.3-lakh-a-month-but-spends-under--15-000--1--1787737461543.jpg" type="image/jpeg" height="390" width="690"/>
            <content:encoded><![CDATA[&lt;h2&gt;₹23 ಲಕ್ಷ CTC, ಖರ್ಚು ₹15 ಸಾವಿರ: PSU ಉದ್ಯೋಗಿಯ ಉಳಿತಾಯದ ಲೆಕ್ಕಾಚಾರ!&lt;/h2&gt;&lt;p&gt;ಖಾಸಗಿ ಕಂಪನಿಯಲ್ಲಿ ದೊಡ್ಡ ಸಂಬಳ ಪಡೆಯುವುದೇ ವೇಗವಾಗಿ ಶ್ರೀಮಂತರಾಗುವ ಏಕೈಕ ಮಾರ್ಗವೇ? ಅಥವಾ ಕಡಿಮೆ ಜೀವನ ವೆಚ್ಚದ ಜೊತೆಗೆ ಸಿಗುವ ಉದ್ಯೋಗ ಸೌಲಭ್ಯಗಳು ಸಂಪತ್ತನ್ನು ಕಟ್ಟುವಲ್ಲಿ ಹೆಚ್ಚು ಪರಿಣಾಮಕಾರಿಯೇ? 27 ವರ್ಷದ PSU ಉದ್ಯೋಗಿಯೊಬ್ಬರ ರೆಡ್ಡಿಟ್ ಪೋಸ್ಟ್ ಈ ಪ್ರಶ್ನೆಯನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ.&lt;/p&gt;&lt;h3&gt;₹1.3 ಲಕ್ಷ ಆದಾಯ, ₹15 ಸಾವಿರಕ್ಕಿಂತ ಕಡಿಮೆ ಖರ್ಚು&lt;/h3&gt;&lt;p&gt;ತಮಗೆ ವಾರ್ಷಿಕ ₹23 ಲಕ್ಷ CTC ಇದ್ದು, ತಿಂಗಳಿಗೆ ಸುಮಾರು ₹1.3 ಲಕ್ಷ ಆದಾಯ ಬರುತ್ತದೆ ಎಂದು ಉದ್ಯೋಗಿ ಹೇಳಿದ್ದಾರೆ. ಆದರೆ ತಮ್ಮ ಮಾಸಿಕ ಖರ್ಚು ಸಾಮಾನ್ಯವಾಗಿ ₹15,000 ದಾಟುವುದಿಲ್ಲ ಎಂಬುದು ಅವರ ಹೇಳಿಕೆ.&lt;/p&gt;&lt;p&gt;ಅದಕ್ಕೆ ಪ್ರಮುಖ ಕಾರಣವಾಗಿ ಅವರು ಉಚಿತ ವಸತಿ, ಇಂಧನ, ಬಹುತೇಕ ಉಚಿತ ವಿದ್ಯುತ್ ಮತ್ತು ಸಬ್ಸಿಡಿ ದರದ ಆಹಾರದಂತಹ ಉದ್ಯೋಗ ಸೌಲಭ್ಯಗಳನ್ನು ಉಲ್ಲೇಖಿಸಿದ್ದಾರೆ.&lt;/p&gt;&lt;h3&gt;ಟೈಯರ್-3 ಪೋಸ್ಟಿಂಗ್&zwnj; ಉಳಿತಾಯದ ರಹಸ್ಯ?&lt;/h3&gt;&lt;p&gt;ಉದ್ಯೋಗಿಯ ಪ್ರಕಾರ, ಅವರ ಕೆಲಸದ ಸ್ಥಳದಿಂದ ಹತ್ತಿರದ ಪ್ರಮುಖ ನಾಗರಿಕ ಪ್ರದೇಶ ಸುಮಾರು 50 ಕಿ.ಮೀ ದೂರದಲ್ಲಿದೆ. ಮನರಂಜನೆ, ಶಾಪಿಂಗ್ ಮತ್ತು ನಗರ ಜೀವನದ ಹಲವು ಆಯ್ಕೆಗಳು ಇಲ್ಲದಿರುವುದು ಒಂದು ಅಸೌಕರ್ಯವಾದರೂ, ಅದೇ ಕಾರಣದಿಂದ ಅನಗತ್ಯ ಖರ್ಚು ಕಡಿಮೆಯಾಗಿದೆ.&lt;/p&gt;&lt;p&gt;ಅವರು ತಮ್ಮ ಪರಿಸ್ಥಿತಿಯನ್ನು ಮೆಟ್ರೋ ನಗರಗಳಲ್ಲಿ ಹೆಚ್ಚಿನ ಸಂಬಳ ಪಡೆಯುವ ಸ್ನೇಹಿತರೊಂದಿಗೆ ಹೋಲಿಸಿದ್ದಾರೆ. ಅಲ್ಲಿ ಹೆಚ್ಚಿನ ಬಾಡಿಗೆ, EMI, ಪ್ರಯಾಣ ಮತ್ತು ಜೀವನಶೈಲಿ ವೆಚ್ಚಗಳು ಆದಾಯದ ದೊಡ್ಡ ಭಾಗವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.&lt;/p&gt;&lt;h3&gt;ಸಂಬಳದ ಜೊತೆಗೆ ಸಾಲ, NPS ಸೌಲಭ್ಯ&lt;/h3&gt;&lt;p&gt;ಉದ್ಯೋಗಿಯ ಪ್ರಕಾರ, ಕಾರ್ಯಕ್ಷಮತೆ ಆಧಾರಿತ ವೇತನ, NPSಗೆ ಕಂಪನಿಯ ಕೊಡುಗೆ ಮತ್ತು ಬ್ಯಾಂಕ್ ಖಾತೆಗೆ ಬರುವ ಸಂಬಳ ಸೇರಿದಂತೆ ಹಲವು ರೀತಿಯಲ್ಲಿ ಪರಿಹಾರ ದೊರೆಯುತ್ತದೆ. ಜೊತೆಗೆ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಹಾಗೂ ಗೃಹ ಸಾಲದಂತಹ ಸೌಲಭ್ಯಗಳೂ ಲಭ್ಯವಿವೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h3&gt;ಹಣದ ಲಾಭ, ಆದರೆ ವೃತ್ತಿ ಬೆಳವಣಿಗೆ?&lt;/h3&gt;&lt;p&gt;ಆದರೆ ಈ ಉದ್ಯೋಗಕ್ಕೆ ಮತ್ತೊಂದು ಮುಖವೂ ಇದೆ. ಕೆಲಸದ ಸಂಸ್ಕೃತಿ ನಿರೀಕ್ಷಿತ ಮಟ್ಟದಲ್ಲಿಲ್ಲ ಮತ್ತು ವೃತ್ತಿಪರ ಬೆಳವಣಿಗೆ ಸೀಮಿತವಾಗಿದೆ ಎಂದು ಉದ್ಯೋಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಟಾಪ್ ಬಿಸಿನೆಸ್ ಸ್ಕೂಲ್&zwnj;ನಲ್ಲಿ ಓದಿ, ಟೈಯರ್-1 ನಗರಕ್ಕೆ ಮರಳುವ ಯೋಜನೆಯನ್ನೂ ಅವರು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಹೆಚ್ಚಿನ ಸಂಬಳಕ್ಕಿಂತ ಕಡಿಮೆ ಖರ್ಚು ಮತ್ತು ಉದ್ಯೋಗ ಸೌಲಭ್ಯಗಳು ನಿಜವಾದ ಉಳಿತಾಯವನ್ನು ನಿರ್ಧರಿಸಬಹುದು ಎಂಬುದನ್ನು ಈ ಅನುಭವ ತೋರಿಸುತ್ತದೆ.&lt;/p&gt;&lt;p&gt; &lt;/p&gt;]]></content:encoded>
            <category>jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/jobs/23-lakh-ctc-just-15000-monthly-expenses-why-this-psu-employee-says-he-is-winning-the-money-game/articleshow-ouitmoc"/>
        </item>
        <item>
            <title><![CDATA[ಅಪ್ಪನಿಗೆ ತಿಂಗಳಿಗೆ 3 ಸಾವಿರ ಸಂಬಳ: 24ರ ಹರೆಯದ ಮಗನಿಗೀಗ 1.5 ಕೋಟಿ ಪ್ಯಾಕೇಜ್​! ಯುವಕನ ಯಶೋಗಾಥೆ]]></title>
            <link>https://kannada.asianetnews.com/viral/father-earned-3000-a-month-he-now-earns-one-and-half-crore-at-24-iit-bombay-graduate-shashank-agarwals-suc/articleshow-q7519wt</link>
            <guid isPermaLink="true">https://kannada.asianetnews.com/viral/father-earned-3000-a-month-he-now-earns-one-and-half-crore-at-24-iit-bombay-graduate-shashank-agarwals-suc/articleshow-q7519wt</guid>
            <pubDate>Fri, 21 Aug 2026 19:50:09 +0530</pubDate>
            <description><![CDATA[ತಂದೆಯ ತಿಂಗಳ 3 ಸಾವಿರ ರೂ. ಆದಾಯದಲ್ಲಿ ಬೆಳೆದ ಶಶಾಂಕ್ ಅಗರವಾಲ್, ಕಠಿಣ ಪರಿಶ್ರಮದಿಂದ ಐಐಟಿ ಬಾಂಬೆ ಸೇರಿ, ಇಂದು ವಾರ್ಷಿಕ 1.5 ಕೋಟಿ ರೂ. ಸಂಬಳ ಗಳಿಸುತ್ತಿದ್ದಾರೆ. ಬಡತನವನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಿದ ಇವರ ಸ್ಪೂರ್ತಿದಾಯಕ ಕಥೆ ಇದು.]]></description>
            <media:content url="https://static.asianetnews.com/images/w-1280,h-720,format-jpg,imgid-01m0jb1frrtwbspavw3fsysrhh,imgname-shashank-agarwal-1787321958168.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಯಾವ ಸಮಸ್ಯೆಯೂ ಸಮಸ್ಯೆ ಎನ್ನಿಸುವುದೇ ಇಲ್ಲ. ಎಲ್ಲವೂ ಇದ್ದು, ಏನೂ ಇಲ್ಲ ಎಂದು ಗೋಳೋ ಎನ್ನುವವರ ಮಧ್ಯೆ, ಏನೂ ಇಲ್ಲದಿದ್ದರೂ ಇದ್ದುದ್ದರಲ್ಲಿಯೇ ಎಲ್ಲವನ್ನೂ ಸಾಧಿಸುವವರೂ ಇದ್ದಾರೆ. ಎರಡನೆಯ ಗುಂಪಿಗೆ ಸೇರಿರುವವರು ಶಶಾಂಕ್ ಅಗರವಾಲ್&zwnj;. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ, ಅಪ್ಪ ತಿಂಗಳಿಗೆ ಗಳಿಸುತ್ತಿದ್ದ 3 ಸಾವಿರ ರೂಪಾಯಿಗಳಿಂದಲೇ, ಕಷ್ಟವನ್ನು ನೋಡಿ ಬೆಳೆದ ಮಗನಿಂದು 24ನೇ ವಯಸ್ಸಿನಲ್ಲಿಯೇ ವರ್ಷಕ್ಕೆ ಒಂದೂವರೆ ಕೋಟಿ ರೂಪಾಯಿ ಸಂಬಳ ಗಳಿಸುತ್ತಿದ್ದಾರೆ. ಇದು ಐಐಟಿ ಬಾಂಬೆ ಪದವೀಧರ ಶಶಾಂಕ್ ಅಗರವಾಲ್&zwnj; ಅವರ ಸಾಧನೆ.&lt;/p&gt;&lt;p&gt;ಜೆಇಇಯಲ್ಲಿ 20ನೇ ರ್ಯಾಂಕ್ ಪಡೆದು ಐಐಟಿ ಬಾಂಬೆಯಲ್ಲಿ ಓದಿರುವ ಶಶಾಂಕ್&zwnj;, ಸದ್ಯ ಜಾನ್ಸ್ಕರ್ ಕಾರ್ಪೊರೇಷನ್&zwnj;ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳೂ ಮನೆಗೆ ಒಂದು ಲಕ್ಷ ರೂಪಾಯಿ ನೀಡುವ ಮೂಲಕ, ಎಲ್ಲರಿಗೂ ಮಾದರಿಯಾಗಿದ್ದಾರೆ.&lt;/p&gt;&lt;p&gt;ಅಂದಹಾಗೆ, ಶಶಾಂಕ್&zwnj; ಅವರದ್ದು ಇದಾಗಲೇ ತಿಳಿದಿರುವಂತೆ ತೀರಾ ಬಡತನದ ಕುಟುಂಬ. ಅಪ್ಪ, ಹೋಲ್&zwnj;ಸೇಲ್ ಶಾಪ್ ನಡೆಸುತ್ತಿದ್ದು, ಅಬ್ಬಬ್ಬಾ ಎಂದರೆ ಅವರಿಗೆ ಸಿಗುತ್ತಿದ್ದುದು ತಿಂಗಳಿಗೆ 3 ರಿಂದ 4 ಸಾವಿರ ರೂ. ಮಾತ್ರ. ಸಂಸಾರ ನಿಭಾಯಿಸುವುದು ಕಷ್ಟ ಎನ್ನುವ ಸ್ಥಿತಿ. ತುತ್ತು ಊಟಕ್ಕೂ ಕಷ್ಟಪಡುವ ಸ್ಥಿತಿ ಇತ್ತು. ಇದರ ಹೊರತಾಗಿಯೂ ಮಗನಿಗೆ ಅವನ ಅಭ್ಯಾಸವನ್ನು ಮುಂದುವರೆಸಲು ಮನೆಯಲ್ಲಿ ಅವಕಾಶ ಕಲ್ಪಿಸಲಾಯಿತು. ಎಷ್ಟೇ ಕಷ್ಟ ಬಂದರೂ ಮಗನ ಓದಿಗೆ ಕೊರತೆಯಾಗದಂತೆ ಸಾಲ ಮಾಡಿ ಶಿಕ್ಷಣ ಕೊಡಿಸಿದರು. ತಂದೆ-ತಾಯಿಯ ತ್ಯಾಗವನ್ನು ವ್ಯರ್ಥ ಮಾಡದ ಶಶಾಂಕ್, ಹಗಲಿರುಳು ಶ್ರಮಿಸಿ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ ಜೆಇಇ ಅಡ್ವಾನ್ಸ್&zwnj;ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 20ನೇ ರ್ಯಾಂಕ್ ಪಡೆದು ಐಐಟಿ ಬಾಂಬೆಗೆ ಪ್ರವೇಶ ಪಡೆದರು.&lt;/p&gt;&lt;h2&gt;&lt;strong&gt;ಬಿ.ಟೆಕ್ ಪೂರ್ಣ&lt;/strong&gt;&lt;/h2&gt;&lt;p&gt;ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪೂರ್ಣಗೊಳಿಸಿದರು ಅವರು. ಮನೆಯಲ್ಲಿನ ಬಡತನ ನೋಡಿ ಬೆಳೆದಿದ್ದ ಶಶಾಂಕ್ ಅವರಿಗೆ ಏನಾದರೂ ಸಾಧನೆ ಮಾಡಬೇಕು ಎನ್ನುವ ಛಲವಿತ್ತು. ಅದಕ್ಕೆ ತಕ್ಕಂತೆ ಅವರ ಪ್ರತಿಭೆಗೆ ಪ್ರತಿಷ್ಠಿತ ಕಂಪನಿಗಳಿಂದ ಅವಕಾಶಗಳು ಅರಸಿ ಬಂದವು. ಪ್ರಸ್ತುತ ಅವರು &lsquo;ಜಾನ್ಸ್ಕರ್ ಕಾರ್ಪೊರೇಷನ್&rsquo; ಕಂಪನಿಯಲ್ಲಿ ಅನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಸುಮಾರು 1.5 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಅವರ ಈ ಒಟ್ಟು ವೇತನದಲ್ಲಿ ಸುಮಾರು 55 ಲಕ್ಷ ರೂ. ಮೂಲ ವೇತನ ಹಾಗೂ 50 ಲಕ್ಷ ರೂ. ವೇರಿಯಬಲ್ ಪೇ ಮತ್ತು ಬೋನಸ್ ಸೇರಿದೆ.&lt;/p&gt;&lt;p&gt;ಶಶಾಂಕ್ ಅವರ ಮಾಸಿಕ ಒಟ್ಟು ಆದಾಯ ಸುಮಾರು 8.75 ಲಕ್ಷ. ಇದರಲ್ಲಿ ಸುಮಾರು 2.83 ಲಕ್ಷ ರೂ. ತೆರಿಗೆ ಹಾಗೂ ಇತರ ಕಡಿತಗಳ ನಂತರ, ಪ್ರತಿ ತಿಂಗಳು ಅವರ ಕೈಗೆ ಸರಿಸುಮಾರು 5.88 ಲಕ್ಷ ರೂ. ನಿವ್ವಳ ವೇತನ ಸಿಗುತ್ತದೆ. ವಿಶೇಷವೆಂದರೆ, ಇಂದು ಅನೇಕ ಉದ್ಯೋಗಿಗಳ ಒಟ್ಟು ಸಂಬಳಕ್ಕಿಂತ ಹೆಚ್ಚಾಗಿ ಶಶಾಂಕ್ ಅವರು ತಿಂಗಳಿಗೆ ಕೇವಲ ತೆರಿಗೆಯನ್ನೇ ಕಟ್ಟುತ್ತಿದ್ದಾರೆ!&lt;/p&gt;&lt;h3&gt;&lt;strong&gt;ಅಪ್ಪ-ಅಮ್ಮನಿಗಾಗಿ ಮಿಡಿತ&lt;/strong&gt;&lt;/h3&gt;&lt;p&gt;ಕೋಟಿ ಕೋಟಿ ಸಂಪಾದಿಸುತ್ತಿದ್ದರೂ ಶಶಾಂಕ್ ತಮ್ಮ ಹಳೆಯ ದಿನಗಳನ್ನು ಮತ್ತು ತಂದೆ-ತಾಯಿ ಪಟ್ಟ ಕಷ್ಟವನ್ನು ಮರೆತಿಲ್ಲ. ತಮ್ಮ ಗಳಿಕೆಯಲ್ಲಿ ಪ್ರತಿ ತಿಂಗಳು ₹1 ಲಕ್ಷ ರೂಪಾಯಿಯನ್ನು ತಂದೆ-ತಾಯಿಗೆ ಕಳುಹಿಸಿಕೊಡುತ್ತಾರೆ. ಹಣಕ್ಕಿಂತ ಹೆಚ್ಚಾಗಿ ತನ್ನ ಯಶಸ್ಸಿಗೆ ಕಾರಣರಾದ ಪೋಷಕರಿಗೆ ಅವರು ನೀಡುತ್ತಿರುವ ಗೌರವ ಮತ್ತು ಪ್ರೀತಿ ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.&lt;/p&gt;]]></content:encoded>
            <category>jobs</category>
            <dc:creator>Suchethana D</dc:creator>
            <atom:link href="https://kannada.asianetnews.com/viral/father-earned-3000-a-month-he-now-earns-one-and-half-crore-at-24-iit-bombay-graduate-shashank-agarwals-suc/articleshow-q7519wt"/>
        </item>
        <item>
            <title><![CDATA[ರಾಜ್ಯ ಸರ್ಕಾರದ 15,000 ಶಿಕ್ಷಕರ ನೇಮಕಾತಿ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್ ನಕಾರ]]></title>
            <link>https://kannada.asianetnews.com/state-government-jobs/karnataka-high-court-refuses-stay-15000-teachers-recruitment-urdu-schools-petition/articleshow-swmv7xc</link>
            <guid isPermaLink="true">https://kannada.asianetnews.com/state-government-jobs/karnataka-high-court-refuses-stay-15000-teachers-recruitment-urdu-schools-petition/articleshow-swmv7xc</guid>
            <pubDate>Thu, 27 Aug 2026 11:46:24 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರದ 15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್&zwnj; ನಿರಾಕರಿಸಿದೆ. ಉರ್ದು ಮಾಧ್ಯಮ ಶಾಲೆಗಳನ್ನು ನೇಮಕಾತಿಯಿಂದ ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿದ್ದು, ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m10xnzwd9ypp5ajjqcf1gs85,imgname-karnataka-teachers-recruitment-1787811266445.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.27): ರಾ&lt;/strong&gt;ಜ್ಯ ಸರ್ಕಾರ ಸುಮಾರು 15 ಸಾವಿರ ಶಿಕ್ಷಕರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್&zwnj; ನಿರಾಕರಿಸಿದೆ.&lt;/p&gt;&lt;p&gt;ಆ.11ರಂದು ಸರ್ಕಾರ ಹೊರಡಿಸಿರುವ ನೇಮಕಾತಿ ಅಧಿಸೂಚನೆ ಪ್ರಶ್ನಿಸಿ ಹುಬ್ಬಳ್ಳಿಯ ಉರ್ದು ಭಾಷಾ ಶಿಕ್ಷಕಿ ಅಸ್ಮಾ ಘೋರಿ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಪೀಠ ಈ ನಿರ್ದೇಶನ ನೀಡಿದೆ.&lt;/p&gt;&lt;p&gt;ಕನ್ನಡ ಅಥವಾ ಇಂಗ್ಲಿಷ್&zwnj; ಬೋಧನಾ ಮಾಧ್ಯಮವಾಗಿರುವ ಶಾಲೆಗಳಲ್ಲಿ ಕೆಲವು ಖಾಲಿ ಹುದ್ದೆಗಳಿವೆ ಎಂದು ತೋರುತ್ತದೆ. ಸರ್ಕಾರ ಆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಿಸುತ್ತಿದೆ. ಆದರೆ, ಉರ್ದು ಶಾಲೆಗಳಲ್ಲಿ ನೇಮಕಾತಿ ಏಕೆ ನಡೆಯುತ್ತಿಲ್ಲ ಎಂಬುದು ಕಾನೂನು ಬದ್ಧ ಪ್ರಶ್ನೆ ಹಾಗಾಗಿ, ಉರ್ದು ಮಾಧ್ಯಮ ಶಾಲೆಗಳು ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಆಯ್ಕೆ ಪ್ರಕ್ರಿಯೆಯನ್ನು ಏಕೆ ಕೈಗೊಂಡಿಲ್ಲ ಎಂಬುದರ ಕುರಿತು ವಿವರಣೆ ನೀಡುವಂತೆ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದ ಪೀಠ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿದೆ.&lt;/p&gt;&lt;h2&gt;&lt;strong&gt;ನೇಮಕಾತಿಯಿಂದ ಹೊರಗುಳಿದ ಉರ್ದು ಮಾಧ್ಯಮ ಶಾಲೆಗಳು&lt;/strong&gt;&lt;/h2&gt;&lt;p&gt;ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರದ ನೇಮಕಾತಿ ಅಧಿಸೂಚನೆಯು ಉರ್ದು ಮಾಧ್ಯಮ ಶಾಲೆಗಳನ್ನು ಸಂಪೂರ್ಣವಾಗಿ ಹೊರಗಿಟ್ಟಿದೆ. ಇದು ಕರ್ನಾಟಕ ಶಿಕ್ಷ ಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷ ಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2026 ಮತ್ತು 19, 21, 29(1) ಮತ್ತು 350ಅ ವಿಧಿಗಳ ಉಲ್ಲಂಘನೆ ಎಂದು ವಾದಿಸಿದರು. ಅರ್ಜಿದಾರರ ಈ ಮನವಿ ತಳ್ಳಿಹಾಕಿದ ನ್ಯಾಯಾಲಯ, ಈ ನಿರ್ದಿಷ್ಟ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದಿತು.&lt;/p&gt;]]></content:encoded>
            <category>jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/karnataka-high-court-refuses-stay-15000-teachers-recruitment-urdu-schools-petition/articleshow-swmv7xc"/>
        </item>
        <item>
            <title><![CDATA[ಬೆಂಗಳೂರಲ್ಲಿ ಮಾತ್ರ ಸಾಧ್ಯ ಈ ರೋಚಕ ಟ್ವಿಸ್ಟ್, ಮನೆ ಹುಡುಕಲು ಹೋದ ಯುವತಿಗೆ ಸಿಕ್ಕಿತು ಲಕ್ಕಿ ಜಾಬ್ ಆಫರ್]]></title>
            <link>https://kannada.asianetnews.com/viral/bengaluru-never-fails-to-surprise-woman-goes-house-hunting-ends-up-with-a-startup-job-offer-suh/articleshow-vczz4n6</link>
            <guid isPermaLink="true">https://kannada.asianetnews.com/viral/bengaluru-never-fails-to-surprise-woman-goes-house-hunting-ends-up-with-a-startup-job-offer-suh/articleshow-vczz4n6</guid>
            <pubDate>Fri, 21 Aug 2026 16:58:35 +0530</pubDate>
            <description><![CDATA[&lt;p&gt;ಬೆಂಗಳೂರು ಎಂದರೆ ಅವಕಾಶಗಳ ನಗರ ಎನ್ನುವುದಕ್ಕೆ ಮತ್ತೊಂದು ಕುತೂಹಲಕಾರಿ ಉದಾಹರಣೆ ಸಿಕ್ಕಿದೆ. ಫ್ಲಾಟ್&zwnj; ಹುಡುಕಲು ಹೊರಟಿದ್ದ ಮಹಿಳೆಯೊಬ್ಬರಿಗೆ ಅದೇ ಕಟ್ಟಡದಲ್ಲಿ ಜಾಬ್ ಆಫರ್ ಸಿಕ್ಕಿದೆ ಅಂದ್ರೆ ನಂಬುತ್ತೀರಾ? ಇಲ್ಲಿದೆ ಸಂಪೂರ್ಣ ಸುದ್ದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0j18eh0ahjph4h8kqwdcep4,imgname-bengaluru-never-fails-to-surprise-woman-goes-house-hunting-ends-up-with-a-startup-job-offer-1787311700512.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಎಂದರೆ ಅವಕಾಶಗಳ ನಗರ ಎನ್ನುವುದಕ್ಕೆ ಮತ್ತೊಂದು ಕುತೂಹಲಕಾರಿ ಉದಾಹರಣೆ ಸಿಕ್ಕಿದೆ. ಫ್ಲಾಟ್&zwnj; ಹುಡುಕಲು ಹೊರಟಿದ್ದ ಮಹಿಳೆಯೊಬ್ಬರಿಗೆ ಅದೇ ಕಟ್ಟಡದಲ್ಲಿ ಸಿಕ್ಕ ಸ್ಟಾರ್ಟಪ್&zwnj; ಸಂಸ್ಥಾಪಕರೊಂದಿಗೆ ನಡೆದ ಸಣ್ಣ ಸಂಭಾಷಣೆ, ಕೊನೆಗೆ ಉದ್ಯೋಗದ ಅವಕಾಶದವರೆಗೂ ತಲುಪಿದೆ. ಇದೀಗ ಈ ವಿಶಿಷ್ಟ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅನುಭವವನ್ನು @neembu_paani31 ಎಂಬ ಎಕ್ಸ್&zwnj; ಬಳಕೆದಾರರು ಹಂಚಿಕೊಂಡಿದ್ದಾರೆ. ತಾನು ಮೂಲತಃ ನೋಡಲು ಹೋಗಿದ್ದ ಫ್ಲಾಟ್&zwnj;ನ ವ್ಯಕ್ತಿ ಲಭ್ಯವಿರದ ಕಾರಣ, ತಾನು ಅದೇ ಕಟ್ಟಡದಲ್ಲಿರುವ ಮತ್ತೊಂದು ಅಪಾರ್ಟ್&zwnj;ಮೆಂಟ್&zwnj;ಗೆ ತೆರಳಿ ಅದರ ಒಳಾಂಗಣವನ್ನು ನೋಡಿದ್ದಾಗಿ ಅವರು ತಿಳಿಸಿದ್ದಾರೆ. ಆದರೆ ಆ ಸಾಮಾನ್ಯ ಫ್ಲಾಟ್&zwnj; ಭೇಟಿಯೇ ಅನಿರೀಕ್ಷಿತವಾಗಿ ಹೊಸ ಉದ್ಯೋಗದ ಬಾಗಿಲು ತೆರೆಯಿತು.&lt;/p&gt;&lt;h2&gt;ಫ್ಲಾಟ್ ನೋಡಲು ಹೋಗಿ ಸ್ಟಾರ್ಟಪ್ ಸಂಸ್ಥಾಪಕರ ಭೇಟಿ&lt;/h2&gt;&lt;p&gt;ಮಹಿಳೆ ಮತ್ತೊಂದು ಫ್ಲಾಟ್&zwnj;ನ ಒಳಗೆ ನೋಡುತ್ತಿದ್ದ ವೇಳೆ, ಅಲ್ಲಿಯೇ ಲೀಗಲ್ AI ಸ್ಟಾರ್ಟಪ್&zwnj; ನಿರ್ಮಿಸುತ್ತಿದ್ದ ಸಂಸ್ಥಾಪಕರನ್ನು ಭೇಟಿಯಾಗಿದ್ದಾರೆ. ಸ್ಟಾರ್ಟಪ್&zwnj; ಏನು ಮಾಡುತ್ತಿದೆ ಎಂಬುದರ ಕುರಿತು ಅವರೊಂದಿಗೆ ಸಣ್ಣ ಸಂಭಾಷಣೆ ನಡೆಸಿದ ಮಹಿಳೆ, ಕಂಪನಿಯ ಉತ್ಪನ್ನದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಾನು ಆ ದಿನ ಉದ್ಯೋಗ ಹುಡುಕುತ್ತಿರಲಿಲ್ಲ, ಆದರೆ ಉತ್ಪನ್ನದ ಬಗ್ಗೆ ಸಹಜ ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿದ್ದಾಗಿ ಅವರು ಪೋಸ್ಟ್&zwnj;ನಲ್ಲಿ ವಿವರಿಸಿದ್ದಾರೆ.&lt;/p&gt;&lt;h2&gt;ಅವರ ಪ್ರಶ್ನೆಗಳು ಮತ್ತು ಕುತೂಹಲ ಸ್ಟಾರ್ಟಪ್&zwnj; ಸಂಸ್ಥಾಪಕರ ಗಮನ ಸೆಳೆದಿದೆ.&lt;/h2&gt;&lt;p&gt;ಅವರು ಏನು ನಿರ್ಮಿಸುತ್ತಿದ್ದಾರೆ ಎಂಬುದರ ಕುರಿತು ನಾನು ಅವರೊಂದಿಗೆ ಸಣ್ಣ ಚರ್ಚೆ ನಡೆಸಿದೆ. ನನ್ನ ಕುತೂಹಲ ಮತ್ತು ಪ್ರಶ್ನೆಗಳನ್ನು ನೋಡಿ ಅವರು ಪ್ರಭಾವಿತರಾಗಿ, ನನ್ನನ್ನು ನೇಮಿಸಿಕೊಳ್ಳಲು ಸಿದ್ಧರಾದರು ಎಂದು ಅವರು ಬರೆದಿದ್ದಾರೆ.&lt;/p&gt;&lt;h2&gt;ಚೆನ್ನೈ, ಬೆಂಗಳೂರಿನಿಂದ ದುಬೈ, ಮಲೇಷ್ಯಾಗೆ ವಿಸ್ತರಣೆ&lt;/h2&gt;&lt;p&gt;ಮಹಿಳೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ಸ್ಟಾರ್ಟಪ್&zwnj; ಈಗಾಗಲೇ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ದುಬೈ ಮತ್ತು ಮಲೇಷ್ಯಾಗೆ ವಿಸ್ತರಿಸುವ ಯೋಜನೆಯನ್ನೂ ಸಂಸ್ಥೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಉದ್ಯೋಗದ ಹುದ್ದೆ ಯಾವುದು, ವೇತನ ಎಷ್ಟು ಅಥವಾ ಮಹಿಳೆ ಕೊನೆಗೆ ಆ ಉದ್ಯೋಗದ ಆಫರ್&zwnj; ಅನ್ನು ಸ್ವೀಕರಿಸಿದ್ದಾರೆಯೇ ಎಂಬುದರ ಕುರಿತು ಪೋಸ್ಟ್&zwnj;ನಲ್ಲಿ ಹೆಚ್ಚಿನ ಮಾಹಿತಿ ನೀಡಲಾಗಿಲ್ಲ. ಆದರೂ ಫ್ಲಾಟ್&zwnj; ಹುಡುಕಲು ಹೋಗಿ, ಸ್ಟಾರ್ಟಪ್&zwnj; ಸಂಸ್ಥಾಪಕರನ್ನು ಭೇಟಿಯಾಗಿ, ಸಂಭಾವ್ಯ ಉದ್ಯೋಗದ ಅವಕಾಶದೊಂದಿಗೆ ಹಿಂದಿರುಗಿದ ಅನುಭವ ಅವರಿಗೆ ಬೆಂಗಳೂರಿನ ವಿಶೇಷತೆಯನ್ನು ಮತ್ತೊಮ್ಮೆ ನೆನಪಿಸಿದೆ.&lt;/p&gt;&lt;h2&gt;ಬೆಂಗಳೂರು ಎಂದಿಗೂ ಅಚ್ಚರಿ ಮೂಡಿಸುವಲ್ಲಿ ವಿಫಲವಾಗುವುದಿಲ್ಲ&lt;/h2&gt;&lt;p&gt;ತಮ್ಮ ಅನುಭವವನ್ನು ವಿವರಿಸಿದ ಮಹಿಳೆ, &ldquo;ಬೆಂಗಳೂರು ಎಂದಿಗೂ ಅಚ್ಚರಿ ಮೂಡಿಸುವಲ್ಲಿ ವಿಫಲವಾಗುವುದಿಲ್ಲ&rdquo; ಎಂದು ಬರೆದಿದ್ದಾರೆ. ಪೋಸ್ಟ್&zwnj; ವೈರಲ್&zwnj; ಆಗುತ್ತಿದ್ದಂತೆ ಎಕ್ಸ್&zwnj; ಬಳಕೆದಾರರಿಂದಲೂ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಒಬ್ಬ ಬಳಕೆದಾರರು &ldquo;ಖಂಡಿತವಾಗಿಯೂ ಪೀಕ್ ಬೆಂಗಳೂರು!&rdquo; ಎಂದು ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಇದು ಏಕೆ &lsquo;ಪೀಕ್ ಬೆಂಗಳೂರು&rsquo; ಎನಿಸುತ್ತದೆ ಎಂಬುದು ಅರ್ಥವಾಗುತ್ತದೆ. ಒಂದು ಕಡೆ ಮನೆ ಹುಡುಕಾಟ, ಮತ್ತೊಂದು ಕಡೆ ಸ್ಟಾರ್ಟಪ್&zwnj; ಸಂಸ್ಥಾಪಕರ ಭೇಟಿ, ಅಲ್ಲಿಂದ ಉತ್ಪನ್ನದ ಕುರಿತು ಚರ್ಚೆ ಮತ್ತು ಕೊನೆಗೆ ಉದ್ಯೋಗದ ಅವಕಾಶ&mdash;ಎಲ್ಲವೂ ಒಂದೇ ದಿನದಲ್ಲಿ ನಡೆದಿರುವುದು ಗಮನ ಸೆಳೆದಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ ಮಾತುಕತೆಯೂ ಅವಕಾಶವಾಗಬಹುದು&lt;/h2&gt;&lt;p&gt;ಈ ಘಟನೆ ಬೆಂಗಳೂರಿನ ಕೆಲಸ ಮತ್ತು ದೈನಂದಿನ ಜೀವನ ಎಷ್ಟು ಹತ್ತಿರವಾಗಿ ಬೆಸೆದುಕೊಂಡಿದೆ ಎಂಬುದನ್ನೂ ತೋರಿಸುತ್ತದೆ. ಮಹಿಳೆ ಆ ದಿನ ಉದ್ಯೋಗ ಹುಡುಕುತ್ತಿರಲಿಲ್ಲ. ಆದರೆ ಸ್ಟಾರ್ಟಪ್&zwnj; ಏನು ನಿರ್ಮಿಸುತ್ತಿದೆ ಎಂಬ ಕುತೂಹಲದಿಂದ ಕೆಲವು ಪ್ರಶ್ನೆಗಳನ್ನು ಕೇಳಿದರು. ಆ ಸಣ್ಣ ಸಂಭಾಷಣೆಯೇ ಅನಿರೀಕ್ಷಿತ ತಿರುವು ಪಡೆದು ಹೊಸ ವೃತ್ತಿ ಅವಕಾಶದ ಸಾಧ್ಯತೆಯನ್ನು ಸೃಷ್ಟಿಸಿದೆ. ಒಂದು ಸಾಮಾನ್ಯ ಮಾತುಕತೆ ಕೆಲವೊಮ್ಮೆ ಹೊಸ ಪರಿಚಯಕ್ಕೆ, ಹೊಸ ಆಲೋಚನೆಗೆ ಅಥವಾ ಉದ್ಯೋಗದಂತಹ ದೊಡ್ಡ ಅವಕಾಶಕ್ಕೂ ಕಾರಣವಾಗಬಹುದು ಎಂಬುದಕ್ಕೆ ಈ &lsquo;ಪೀಕ್ ಬೆಂಗಳೂರು&rsquo; ಘಟನೆ ಉತ್ತಮ ಉದಾಹರಣೆಯಾಗಿದೆ.&lt;/p&gt;]]></content:encoded>
            <category>jobs</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/bengaluru-never-fails-to-surprise-woman-goes-house-hunting-ends-up-with-a-startup-job-offer-suh/articleshow-vczz4n6"/>
        </item>
        <item>
            <title><![CDATA[ಲಂಡನ್‌ನಲ್ಲಿ ಕೆಲಸ ಕಳೆದುಕೊಂಡ ಮಗ.. ಭಾರತದಲ್ಲಿದ್ದ ಅಪ್ಪನ ರಿಯಾಕ್ಷನ್‌ಗೆ ಇಡೀ ಜಗ್ಗತ್ತು ಬೆರಗಾಯ್ತು..]]></title>
            <link>https://kannada.asianetnews.com/viral/indian-man-loses-job-in-uk-netizens-blown-away-by-father-heartwarming-reaction-gkn/articleshow-vdqp7ak</link>
            <guid isPermaLink="true">https://kannada.asianetnews.com/viral/indian-man-loses-job-in-uk-netizens-blown-away-by-father-heartwarming-reaction-gkn/articleshow-vdqp7ak</guid>
            <pubDate>Tue, 25 Aug 2026 06:44:44 +0530</pubDate>
            <description><![CDATA[&lt;p&gt;ಬ್ರಿಟನ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಯುವಕನೊಬ್ಬ ಏಕಾಏಕಿ ಕೆಲಸ ಕಳೆದುಕೊಂಡ. ಬೆನ್ನಲ್ಲೇ ಆತನಿಗೆ ಅಪ್ಪ ನೆನಪಾಗಿದ್ದಾನೆ. ಕರೆ ಮಾಡಿ ತಿಳಿಸಿದಾಗ ಅಪ್ಪ ಕೊಟ್ಟ ಉತ್ತರಕ್ಕೆ ಇಡೀ ವಿಶ್ವವೇ ಮೆಚ್ಚಿ ಭೇಷ್ ಎಂದಿದೆ. ಅಷ್ಟಕ್ಕೂ ಆ ಉತ್ತರ ಏನಾಗಿತ್ತು? ಈ ಸ್ಟೋರಿಯಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0tc8fd7yh1803mk3wcn9f4m,imgname-fathers-response-to-layoff-1787591671207.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್: &lt;/strong&gt;ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವೃತ್ತಿಪರ ಕೈಶ್ ಅನ್ಸಾರಿ (Kaish Ansari) ಅವರು ಇತ್ತೀಚೆಗೆ ಹಂಚಿಕೊಂಡಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬ್ರಿಟನ್&zwnj;ನಲ್ಲಿ ಕೆಲಸ ಕಳೆದುಕೊಂಡ (Layoff) ನಂತರ ಆ ವಿಷಯವನ್ನು ತಂದೆಗೆ ತಿಳಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ಈಗ ಲಕ್ಷಾಂತರ ಜನರ ಕಣ್ಣು ಒದ್ದೆ ಮಾಡಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಕೈಶ್ ಅನ್ಸಾರಿ ಸ್ಕಾಟ್ಲೆಂಡ್&zwnj;ನ ಗ್ಲ್ಯಾಸ್ಗೋದಲ್ಲಿರುವ 'ಜೆಪಿ ಮೋರ್ಗಾನ್' (JP Morgan) ಸಂಸ್ಥೆಯಲ್ಲಿ ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅವರಿಗೆ ಲೇ-ಆಫ್ (ಕೆಲಸದಿಂದ ತೆಗೆದುಹಾಕುವಿಕೆ) ಬಿಸಿ ತಟ್ಟಿದೆ. ವಿದೇಶದಲ್ಲಿ ಕೆಲಸ ಕಳೆದುಕೊಳ್ಳುವುದು ಆರ್ಥಿಕ ಸಮಸ್ಯೆ ಮಾತ್ರವಲ್ಲದೆ, ವೀಸಾ ಅವಲಂಬನೆಯಿಂದಾಗಿ ದೊಡ್ಡ ಆತಂಕವನ್ನು ತಂದೊಡ್ಡುತ್ತದೆ. ಈ ಕಹಿ ಸುದ್ದಿಯನ್ನು ಭಾರತದಲ್ಲಿರುವ ತನ್ನ ತಂದೆಗೆ ತಿಳಿಸಲು ಕೈಶ್ ಭಯಪಟ್ಟಿದ್ದರು.&lt;/p&gt;&lt;h2&gt;&lt;strong&gt;ತಂದೆಯ ಅಮೂಲ್ಯ ಮಾತು&lt;/strong&gt;&lt;/h2&gt;&lt;p&gt;ಕೈಶ್ ತನ್ನ ತಂದೆಗೆ ಫೋನ್ ಮಾಡಿ ಕೆಲಸ ಹೋದ ಬಗ್ಗೆ ತಿಳಿಸಿದಾಗ ತಂದೆ ಗಾಬರಿಯಾಗುವ ಬದಲು ಅತ್ಯಂತ ಶಾಂತವಾಗಿ ಪ್ರತಿಕ್ರಿಯಿಸಿದರು. ಇದು ಅಲ್ಲಾಹನ ಇಚ್ಛೆ. ಮುಂದೆ ನಿನಗೆ ಇದಕ್ಕಿಂತ ಒಳ್ಳೆಯದು ಸಿಗಬಹುದು ಎಂದು ಧೈರ್ಯ ತುಂಬಿದರು. ಮಗನ ವೃತ್ತಿಜೀವನಕ್ಕಿಂತ ಹೆಚ್ಚಾಗಿ ಆತನ ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯೇ ಮುಖ್ಯ ಎಂಬುದು ತಂದೆಯ ಆ ಮಾತಿನಲ್ಲಿ ಎದ್ದು ಕಾಣುತ್ತಿತ್ತು.&lt;/p&gt;&lt;p&gt;ಕೈಶ್ ಈ ವಿಡಿಯೋವನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಳ್ಳುತ್ತಾ ಹೀಗೆ ಬರೆದಿದ್ದಾರೆ: ನಾನು ಇದನ್ನು ಸಹಾನುಭೂತಿ ಪಡೆಯಲು ಹಂಚಿಕೊಳ್ಳುತ್ತಿಲ್ಲ. ಕಷ್ಟದ ಸಮಯದಲ್ಲಿ ನೀವು ಒಬ್ಬರೇ ಅಲ್ಲ, ನಿಮ್ಮ ಕುಟುಂಬ ಸದಾ ನಿಮ್ಮ ಜೊತೆ ಇರುತ್ತದೆ ಎಂದು ನೆನಪಿಸಲು ಹಂಚಿಕೊಳ್ಳುತ್ತಿದ್ದೇನೆ. ಲೇ-ಆಫ್ ಎಂಬುದು ನಿಮ್ಮ ಸಾಮರ್ಥ್ಯದ ಅಳತೆಯಲ್ಲ. ಇದು ನಿಮ್ಮ ವೃತ್ತಿಜೀವನದ ಒಂದು ಭಾಗವಷ್ಟೇ, ಅಂತ್ಯವಲ್ಲ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಈ ವಿಡಿಯೋ ಸುಮಾರು 8.3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. 51 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಕೈಶ್, ಇಷ್ಟು ಅರ್ಥ ಮಾಡಿಕೊಳ್ಳುವ ತಂದೆ ಸಿಗಲು ನೀನು ಪುಣ್ಯ ಮಾಡಿದ್ದೀಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತಂದೆಯ ಮುಖದಲ್ಲಿನ ಆ ನಗು ನಾನಿದ್ದೇನೆ ಮಗನೇ ಎಂಬ ಭರವಸೆ ನೀಡುವಂತಿತ್ತು ಎಂದು ಇನ್ನೊಬ್ಬರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಮತ್ತೊಬ್ಬ ನೆಟ್ಟಿಗರು ಅನ್ಸಾರಿ ಅವರ ತಂದೆಯ ನಿರ್ಧಾರವನ್ನು ಕಿಂಗ್ ಮೆಂಟಾಲಿಟಿ (ರಾಜನಂತಹ ಗುಣ) ಎಂದು ಬಣ್ಣಿಸಿದ್ದಾರೆ. ಸದ್ಯ ಆರ್ಥಿಕ ಅನಿಶ್ಚಿತತೆಯ ನಡುವೆ ಕೆಲಸ ಕಳೆದುಕೊಂಡು ಕಂಗಾಲಾಗಿರುವ ಸಾವಿರಾರು ಯುವಕರಿಗೆ ಕೈಶ್ ಅನ್ಸಾರಿ ಅವರ ಈ ವಿಡಿಯೋ ದೊಡ್ಡ ಮಟ್ಟದ ಸ್ಫೂರ್ತಿ ನೀಡುತ್ತಿದೆ.&lt;/p&gt;View this post on Instagram&lt;p&gt;A post shared by Kaish Ansari (@theengineerguy_)&lt;/p&gt;&lt;p&gt;&lt;/p&gt;]]></content:encoded>
            <category>jobs</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/indian-man-loses-job-in-uk-netizens-blown-away-by-father-heartwarming-reaction-gkn/articleshow-vdqp7ak"/>
        </item>
    </channel>
</rss>
