<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 02 Aug 2026 10:49:16 +0530</lastBuildDate>
        <atom:link href="https://kannada.asianetnews.com/rss/it-jobs" rel="self" type="application/rss+xml"/>
        <item>
            <title><![CDATA["ನನ್ನ ಕಷ್ಟ ಆ ದೇವರಿಗೇ ಗೊತ್ತು..." - ತಂದೆಯ ಅನಾರೋಗ್ಯದ ಮಧ್ಯೆಯೂ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಟೆಕ್ಕಿ]]></title>
            <link>https://kannada.asianetnews.com/viral/employee-fears-pip-after-requesting-hybrid-work-to-care-for-ailing-father/articleshow-3xwp29g</link>
            <guid isPermaLink="true">https://kannada.asianetnews.com/viral/employee-fears-pip-after-requesting-hybrid-work-to-care-for-ailing-father/articleshow-3xwp29g</guid>
            <pubDate>Mon, 20 Jul 2026 13:35:59 +0530</pubDate>
            <description><![CDATA[&lt;p&gt;ತಂದೆಯ ಅನಾರೋಗ್ಯದ ಕಾರಣದಿಂದ ಆಫೀಸ್ ಬದಲಿಗೆ ಸಾಮಾನ್ಯ ಹೈಬ್ರಿಡ್ ಕೆಲಸದ ವ್ಯವಸ್ಥೆ ಕೇಳಿದ ಉದ್ಯೋಗಿಗೆ, ಮ್ಯಾನೇಜರ್ PIP ಮತ್ತು BOTP ಬೆದರಿಕೆ ಒಡ್ಡಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಕೆಲಸದಲ್ಲಿ ಯಾವುದೇ ಲೋಪವಿಲ್ಲದಿದ್ದರೂ ಕಂಪನಿಯಿಂದ ಎದುರಾಗಿರುವ ಈ ಮಾನಸಿಕ ಕಿರುಕುಳ ಹಾಗೂ ಕಾರ್ಪೊರೇಟ್ ಜಗತ್ತಿನ ಕ್ರೂರ ಮನಸ್ಥಿತಿಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz54rprbjmay9xrzq0zapyp,imgname-employee-seeks-advice-after-requesting-hybrid-work-1784530756311.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರ್ಪೊರೇಟ್ ಜಗತ್ತಿನಲ್ಲಿ ಕ್ಷೀಣಿಸುತ್ತಿರುವ ಮಾನವೀಯತೆ&lt;/strong&gt;&lt;/p&gt;&lt;p&gt;ಕುಟುಂಬದ ತುರ್ತು ಪರಿಸ್ಥಿತಿ ಮತ್ತು ಕಚೇರಿಯ ಜವಾಬ್ದಾರಿಗಳನ್ನು ಒಟ್ಟಿಗೆ ಸರಿದೂಗಿಸುವುದು ಪ್ರತಿಯೊಬ್ಬ ಉದ್ಯೋಗಿಗೂ ಸವಾಲಿನ ಕೆಲಸ. ಆದರೆ, ತಂದೆಯ ಗಂಭೀರ ಅನಾರೋಗ್ಯದ ಹಿನ್ನೆಲೆಯಲ್ಲಿ ಕೇವಲ 'ಹೈಬ್ರಿಡ್ ವರ್ಕ್' (Hybrid Work) ವ್ಯವಸ್ಥೆಗೆ ವಿನಂತಿಸಿದ ಉದ್ಯೋಗಿಯೊಬ್ಬರಿಗೆ, ಕಂಪನಿಯು 'ಪಿಐಪಿ' (PIP - Performance Improvement Plan) ಅಥವಾ BOTP ಬೆದರಿಕೆ ಒಡ್ಡಿರುವ ಘಟನೆ ರೆಡ್ಡಿಟ್&zwnj;ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;1&lt;strong&gt;00% ಬದ್ಧತೆ ಇದ್ದರೂ ಸಿಕ್ಕಿತು ಪಿಐಪಿ:&lt;/strong&gt;&lt;/p&gt;&lt;p&gt;ಉದ್ಯೋಗಿ ಹಂಚಿಕೊಂಡ ಪೋಸ್ಟ್ ಪ್ರಕಾರ, ಅವರು ಕಂಪನಿಯ ಯೋಜನೆಗಳನ್ನು 100% ನಿಯಮಬದ್ಧವಾಗಿ ಪೂರೈಸಿದ್ದು, ಯಾವುದೇ ಕಾರ್ಯಕ್ಷಮತೆ ಅಥವಾ ಶಿಸ್ತಿನ ಲೋಪ ಎಸಗಿರಲಿಲ್ಲ. ಪ್ರಸ್ತುತ ವಾರದ 5 ದಿನಗಳ ಕಾಲ ಆಫೀಸ್&zwnj;ನಿಂದಲೇ (ODC) ಕೆಲಸ ಮಾಡುವ ವ್ಯವಸ್ಥೆಯ ಬದಲಿಗೆ, ಸಂಸ್ಥೆಯ ಸಾಮಾನ್ಯ ಹೈಬ್ರಿಡ್ ಮಾದರಿಗೆ ಸ್ಥಳಾಂತರಿಸಲು ಕೇಳಿಕೊಂಡಿದ್ದರು. ಅವರು ಸಂಪೂರ್ಣ ವರ್ಕ್ ಫ್ರಮ್ ಹೋಮ್ (WFH) ಅಥವಾ ಪ್ರಾಜೆಕ್ಟ್&zwnj;ನಿಂದ ಹೊರಹೋಗಲು ಬಯಸಿರಲಿಲ್ಲ. ಮುನ್ನೆಚ್ಚರಿಕೆಯಾಗಿ ಕಿರಿಯ ಉದ್ಯೋಗಿಗಳಿಗೆ ಕೆಲಸದ ಜ್ಞಾನ ಹಸ್ತಾಂತರಿಸಿ, ತುರ್ತು ಸಮಯದಲ್ಲಿ ಲಭ್ಯವಿರುವುದಾಗಿಯೂ ಭರವಸೆ ನೀಡಿದ್ದರು.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ಮ್ಯಾನೇಜರ್ ಕಿರುಕುಳ ಮತ್ತು BU ಮುಖ್ಯಸ್ಥರಿಗೆ ದೂರು&lt;/strong&gt;&lt;/p&gt;&lt;p&gt;ಉದ್ಯೋಗಿಯ ಈ ವಿನಂತಿಯನ್ನು ಪುರಸ್ಕರಿಸುವ ಬದಲು, ಮ್ಯಾನೇಜರ್ ಅದನ್ನು ತೀರಾ ನೆಗೆಟಿವ್ ಆಗಿ ಸ್ವೀಕರಿಸಿದರು. &quot;ಈ ಉದ್ಯೋಗಿಯೂ ಯಾವಾಗಲೂ ODCಯಿಂದ ಹೊರಹೋಗಲು ನೆಪ ಹುಡುಕುತ್ತಾರೆ&quot; ಎಂದು ಬಿಸಿನೆಸ್ ಯುನಿಟ್ (BU) ಮುಖ್ಯಸ್ಥರಿಗೆ ದೂರು ನೀಡಿದರು. ಪೂರ್ವ ಮಾಹಿತಿ ನೀಡದೆ ಇಮೇಲ್ ಕಳುಹಿಸಿದ್ದಕ್ಕೆ ಕೋಪಗೊಂಡ ಮ್ಯಾನೇಜರ್, ಉದ್ಯೋಗಿಯನ್ನು BOTPಗೆ ತಳ್ಳಲು ನಿರ್ಧರಿಸಿದ್ದಾರೆ. &quot;ನಿಜವಾದ ವೈದ್ಯಕೀಯ ಸಮಸ್ಯೆಗೆ ಸೌಲಭ್ಯ ಕೇಳಿದ್ದಕ್ಕೆ ಇಂತಹ ಆಘಾತಕಾರಿ ಪ್ರತಿಕ್ರಿಯೆ ಸಿಗುತ್ತಿದೆ&quot; ಎಂದು ಉದ್ಯೋಗಿ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಉದ್ಯೋಗಿಗೆ ನೆಟ್ಟಿಗರ ಉಪಯುಕ್ತ ಸಲಹೆಗಳು:&lt;/strong&gt;&amp;nbsp;&lt;/p&gt;&lt;p&gt;ಈ ಘಟನೆಗೆ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.&lt;/p&gt;&lt;ul&gt; &lt;li&gt;&lt;strong&gt;ದಾಖಲೆಗಳನ್ನು ಕಾಯ್ದುಕೊಳ್ಳಿ:&lt;/strong&gt; ಮ್ಯಾನೇಜರ್&zwnj;ಗಳ ಜೊತೆಗಿನ ಪ್ರತಿಯೊಂದು ಸಂಭಾಷಣೆ ಹಾಗೂ ಇಮೇಲ್&zwnj;ಗಳನ್ನು ಪ್ರತಿಯಾಗಿ ದಾಖಲಿಸಿ (Documentation) ಇಟ್ಟುಕೊಳ್ಳಿ.&lt;/li&gt; &lt;li&gt;&lt;strong&gt;ಆತುರಪಟ್ಟು ನಿರ್ಧಾರ ಬೇಡ:&lt;/strong&gt; ತಕ್ಷಣವೇ ರಾಜೀನಾಮೆ ನೀಡದೆ, ಇಮೇಲ್ ಸಾಕ್ಷ್ಯಗಳೊಂದಿಗೆ HR ಅನ್ನು ಸಂಪರ್ಕಿಸಿ.&lt;/li&gt; &lt;li&gt;&lt;strong&gt;ಹೊಸ ಆಯ್ಕೆ ಹುಡುಕಿ:&lt;/strong&gt; ಕಾರ್ಪೊರೇಟ್ ವಲಯದಲ್ಲಿ ಮಾನವೀಯತೆ ನಿರೀಕ್ಷಿಸುವುದು ಕಷ್ಟ. ಆದ್ದರಿಂದ ತಕ್ಷಣವೇ ಬೇರೆ ಕೆಲಸಕ್ಕೆ ಅರ್ಜಿ ಸಲ್ಲಿಸಲು ನೆಟ್ಟಿಗರು ಸಲಹೆ ನೀಡಿದ್ದಾರೆ.&lt;/li&gt;&lt;/ul&gt;&lt;p&gt;&amp;nbsp;&lt;/p&gt;&lt;p&gt;Manager escalated my request for hybrid work and...&amp;nbsp;by u/USERNAME in r/developersIndia&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>it-jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/employee-fears-pip-after-requesting-hybrid-work-to-care-for-ailing-father/articleshow-3xwp29g"/>
        </item>
        <item>
            <title><![CDATA[IT ಕೆಲಸಕ್ಕೆ 'ಗುಡ್ ಬೈ', ರೈಸ್ ಬಿಸಿನೆಸ್‌ಗೆ 'ಹೈ': ಈಗ ಕೋಟಿ ಕೋಟಿ ವಹಿವಾಟು, ವರ್ಷಕ್ಕೆ 25 ಲಕ್ಷ ಗಳಿಸುತ್ತಿರುವ ಯುವಕ!]]></title>
            <link>https://kannada.asianetnews.com/viral/he-rejected-a-tcs-job-now-earns-25-lakh-a-year-selling-rice/articleshow-53a0a47</link>
            <guid isPermaLink="true">https://kannada.asianetnews.com/viral/he-rejected-a-tcs-job-now-earns-25-lakh-a-year-selling-rice/articleshow-53a0a47</guid>
            <pubDate>Sun, 26 Jul 2026 19:00:44 +0530</pubDate>
            <description><![CDATA[&lt;p&gt;TCS ಉದ್ಯೋಗದ ಅವಕಾಶವನ್ನು ತಿರಸ್ಕರಿಸಿದ ಯುವಕ ಅಕ್ಕಿ ವಿತರಣಾ ವ್ಯವಹಾರ ಆರಂಭಿಸಿ ವರ್ಷಕ್ಕೆ ಸುಮಾರು ₹25 ಲಕ್ಷ ಆದಾಯ ಗಳಿಸುತ್ತಿದ್ದಾನೆ ಎಂಬ ಪೋಸ್ಟ್ ವೈರಲ್ ಆಗಿದೆ. ರೈತರಿಂದ ನೇರ ಖರೀದಿ, ಸ್ವಂತ ಬ್ರ್ಯಾಂಡ್ ಹಾಗೂ ಚಿಲ್ಲರೆ ಅಂಗಡಿಗಳಿಗೆ ಪೂರೈಕೆಯ ಮಾದರಿ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯಮಶೀಲತೆ ಕುರಿತು ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyf9s38a3arn3p2bvxv1yktw,imgname-viral-post-claims-man-earns--25-lakh-a-year-after-choosing-rice-trade--1--1785072487690.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;TCS ಉದ್ಯೋಗ ತಿರಸ್ಕರಿಸಿ ಅಕ್ಕಿ ವ್ಯವಹಾರಕ್ಕೆ ಎಂಟ್ರಿ! ವರ್ಷಕ್ಕೆ ₹25 ಲಕ್ಷ ಆದಾಯ ಗಳಿಸುತ್ತಿರುವ ಯುವಕನ ಕಥೆ ವೈರಲ್!&lt;/strong&gt;&lt;/p&gt;&lt;p&gt;ಕಾರ್ಪೊರೇಟ್ ಉದ್ಯೋಗವೇ ಯಶಸ್ಸಿನ ಏಕೈಕ ದಾರಿ ಎಂಬ ನಂಬಿಕೆಗೆ ಸವಾಲೊಡ್ಡುವ ಮತ್ತೊಂದು ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನೀಡಿದ್ದ ಕ್ಯಾಂಪಸ್ ಪ್ಲೇಸ್&zwnj;ಮೆಂಟ್ ಅವಕಾಶವನ್ನು ತಿರಸ್ಕರಿಸಿದ ಯುವಕನೊಬ್ಬ, ಇಂದು ಅಕ್ಕಿ ವಿತರಣಾ ಉದ್ಯಮದ ಮೂಲಕ ವರ್ಷಕ್ಕೆ ಸುಮಾರು ₹25 ಲಕ್ಷ ಆದಾಯ ಗಳಿಸುತ್ತಿದ್ದಾನೆ ಎಂಬ ಪೋಸ್ಟ್ X (ಹಿಂದಿನ ಟ್ವಿಟರ್)ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;TCS ಉದ್ಯೋಗಕ್ಕೆ ಗುಡ್&zwnj;ಬೈ ಹೇಳಿದ ಯುವಕ&lt;/strong&gt;&lt;/p&gt;&lt;p&gt;X ಬಳಕೆದಾರ ಅಂಕಿತ್ ಪಾಂಡೆ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಉತ್ತಮ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವ ಬದಲು, ಯುವಕ ಉದ್ಯಮಶೀಲತೆಯ ಹಾದಿ ಹಿಡಿದಿದ್ದಾನೆ. ಆರಂಭದಲ್ಲಿ ಈ ನಿರ್ಧಾರವನ್ನು ಹಲವರು ಟೀಕಿಸಿ, ಭದ್ರ ಉದ್ಯೋಗ ಬಿಟ್ಟು ದೊಡ್ಡ ಅಪಾಯ ತೆಗೆದುಕೊಳ್ಳುತ್ತಿದ್ದಾನೆ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಇಂದು ಅದೇ ನಿರ್ಧಾರ ಅವನಿಗೆ ಯಶಸ್ಸಿನ ದಾರಿ ತೋರಿಸಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ರೈತರಿಂದ ನೇರ ಖರೀದಿ, ಸ್ವಂತ ಬ್ರ್ಯಾಂಡ್ ನಿರ್ಮಾಣ&lt;/strong&gt;&lt;/p&gt;&lt;p&gt;ಯುವಕ ವಿವಿಧ ಹಳ್ಳಿಗಳು ಹಾಗೂ ರಾಜ್ಯಗಳ ರೈತರಿಂದ ನೇರವಾಗಿ ಅಕ್ಕಿಯನ್ನು ಖರೀದಿಸುತ್ತಾನೆ. ಬಳಿಕ ಅಕ್ಕಿಯನ್ನು ಸ್ವಚ್ಛಗೊಳಿಸಿ, ತನ್ನದೇ ಬ್ರ್ಯಾಂಡ್ ಹೆಸರಿನಲ್ಲಿ ಪ್ಯಾಕ್ ಮಾಡಿ ಸುಮಾರು 200 ಚಿಲ್ಲರೆ ಅಂಗಡಿಗಳಿಗೆ ಪೂರೈಕೆ ಮಾಡುತ್ತಾನೆ. ಮಧ್ಯವರ್ತಿಗಳನ್ನು ಕಡಿಮೆ ಮಾಡುವ ಈ ಮಾದರಿಯಿಂದ ರೈತರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವ ವ್ಯವಸ್ಥೆಯನ್ನು ರೂಪಿಸಿರುವುದಾಗಿ ಪೋಸ್ಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;&lt;strong&gt;ಅಕ್ಕಿ ವ್ಯವಹಾರದಿಂದ ಹೇಗೆ ಬರುತ್ತಿದೆ ಲಾಭ?&lt;/strong&gt;&lt;/p&gt;&lt;p&gt;ಪೋಸ್ಟ್&zwnj;ನಲ್ಲಿ ವಿವರಿಸಿರುವ ವ್ಯವಹಾರ ಮಾದರಿಯ ಪ್ರಕಾರ, ರೈತರಿಂದ ಪ್ರತಿ ಕೆಜಿ ಅಕ್ಕಿಯನ್ನು ಸುಮಾರು ₹35ಕ್ಕೆ ಖರೀದಿಸಲಾಗುತ್ತದೆ. ಪ್ಯಾಕಿಂಗ್&zwnj;ಗೆ ₹3 ಮತ್ತು ಸಾಗಣೆಗೆ ₹2 ವೆಚ್ಚವಾಗುವುದರಿಂದ ಒಟ್ಟು ವೆಚ್ಚ ₹40 ಆಗುತ್ತದೆ.&lt;/p&gt;&lt;p&gt;ಈ ಅಕ್ಕಿಯನ್ನು ಚಿಲ್ಲರೆ ವ್ಯಾಪಾರಿಗಳಿಗೆ ಪ್ರತಿ ಕೆಜಿಗೆ ₹50ಕ್ಕೆ ಮಾರಾಟ ಮಾಡಲಾಗುತ್ತದೆ. ನಂತರ ಚಿಲ್ಲರೆ ಅಂಗಡಿಗಳು ಅದನ್ನು ಗ್ರಾಹಕರಿಗೆ ₹55ರಿಂದ ₹57ರ ದರದಲ್ಲಿ ಮಾರಾಟ ಮಾಡುತ್ತವೆ. ಈ ಲೆಕ್ಕಾಚಾರದ ಪ್ರಕಾರ, ಪ್ರತಿ ಕೆಜಿಗೆ ಸುಮಾರು ₹10 ಲಾಭ ಸಿಗುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;My friend got a placement at TCS.He rejected it.Everyone said he was making the biggest mistake of his life.Today, he earns around ₹25 lakh a year selling rice.He buys rice directly from farmers across multiple villages and states, cleans it, packs it under his own&hellip; pic.twitter.com/93Ih45YckG&lt;/p&gt;&lt;p&gt;&mdash; Ankit Pandey (@iamankitpande) July 24, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ತಿಂಗಳಿಗೆ 20,000 ಕೆಜಿ ಅಕ್ಕಿ ಪೂರೈಕೆ&lt;/strong&gt;&lt;/p&gt;&lt;p&gt;ಈ ಉದ್ಯಮವು ಪ್ರತಿ ತಿಂಗಳು ಸುಮಾರು 20,000 ಕೆಜಿ ಅಕ್ಕಿಯನ್ನು ವಿವಿಧ ಚಿಲ್ಲರೆ ಅಂಗಡಿಗಳಿಗೆ ಪೂರೈಸುತ್ತಿದೆ ಎಂದು ಪೋಸ್ಟ್&zwnj;ನಲ್ಲಿ ಹೇಳಲಾಗಿದೆ. ಈ ಪ್ರಮಾಣದ ವ್ಯವಹಾರದಿಂದ ವರ್ಷಕ್ಕೆ ಸುಮಾರು ₹25 ಲಕ್ಷ ಆದಾಯ ಗಳಿಸಲಾಗುತ್ತಿದೆ ಎಂಬ ಅಂದಾಜು ವ್ಯಕ್ತಪಡಿಸಲಾಗಿದೆ. ಆದರೆ, ಈ ಅಂಕಿಅಂಶಗಳನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ ಎಂಬುದನ್ನು ಗಮನಿಸಬೇಕು.&lt;/p&gt;&lt;p&gt;&lt;strong&gt;ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ&lt;/strong&gt;&lt;/p&gt;&lt;p&gt;ಈ ವೈರಲ್ ಪೋಸ್ಟ್ ಉದ್ಯಮಶೀಲತೆ, ಅಪಾಯ ಸ್ವೀಕಾರ ಮತ್ತು ವೃತ್ತಿ ಆಯ್ಕೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ಕೆಲವರು, &quot;ಉದ್ಯೋಗಕ್ಕಿಂತ ಸ್ವಂತ ವ್ಯವಹಾರದಲ್ಲಿ ಬೆಳವಣಿಗೆಯ ಅವಕಾಶ ಹೆಚ್ಚು&quot; ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಇನ್ನೂ ಕೆಲವರು, &quot;ವ್ಯವಹಾರ ಆರಂಭಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ನಿರಂತರ ಪರಿಶ್ರಮ, ಹಣಕಾಸಿನ ಶಿಸ್ತು, ಜವಾಬ್ದಾರಿ ಹಾಗೂ ತಾಳ್ಮೆ ಅಗತ್ಯ&quot; ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಉದ್ಯೋಗವೇ ಅಥವಾ ಉದ್ಯಮವೇ?&lt;/strong&gt;&lt;/p&gt;&lt;p&gt;ಈ ಕಥೆಯಲ್ಲಿರುವ ಆದಾಯ ಮತ್ತು ವ್ಯವಹಾರದ ವಿವರಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಆದರೂ, ಉತ್ತಮ ಉದ್ಯೋಗದ ಅವಕಾಶವಿದ್ದರೂ ಉದ್ಯಮಶೀಲತೆಯ ಮೂಲಕ ಯಶಸ್ಸು ಸಾಧಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ. ಸರಿಯಾದ ಯೋಜನೆ, ಮಾರುಕಟ್ಟೆಯ ಅರಿವು ಮತ್ತು ನಿರಂತರ ಪರಿಶ್ರಮ ಇದ್ದರೆ, ಉದ್ಯಮವೂ ಉತ್ತಮ ವೃತ್ತಿ ಆಯ್ಕೆಯಾಗಬಹುದು ಎಂಬ ಚರ್ಚೆಗೆ ಈ ವೈರಲ್ ಪೋಸ್ಟ್ ಹೊಸ ಆಯಾಮ ನೀಡಿದೆ.&lt;/p&gt;]]></content:encoded>
            <category>it-jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/he-rejected-a-tcs-job-now-earns-25-lakh-a-year-selling-rice/articleshow-53a0a47"/>
        </item>
        <item>
            <title><![CDATA["ನಾನು ಗರ್ಭಿಣಿ" ಎಂದಿದ್ದೇ ತಪ್ಪಾಯ್ತಾ? ಮ್ಯಾನೇಜರ್‌ಗೆ ವಿಷಯ ತಿಳಿಸಿದ 3 ಗಂಟೆಯಲ್ಲೇ ಮಹಿಳೆ ಕೆಲಸದಿಂದ ವಜಾ!]]></title>
            <link>https://kannada.asianetnews.com/viral/pregnancy-announcement-ends-in-job-loss-woman-shares-shocking-experience/articleshow-cariyrt</link>
            <guid isPermaLink="true">https://kannada.asianetnews.com/viral/pregnancy-announcement-ends-in-job-loss-woman-shares-shocking-experience/articleshow-cariyrt</guid>
            <pubDate>Fri, 17 Jul 2026 19:00:58 +0530</pubDate>
            <description><![CDATA[&lt;p&gt;ಗರ್ಭಿಣಿಯಾಗಿರುವ ಕಾರಣ ಶಿಫ್ಟ್ ಸಮಯದಲ್ಲಿ ಬಿಸ್ಕತ್ತು ತಿನ್ನಲು ಮ್ಯಾನೇಜರ್ ಬಳಿ ಅನುಮತಿ ಕೇಳಿದ ಮಹಿಳೆಯನ್ನು ಕೇವಲ 3 ಗಂಟೆಗಳಲ್ಲಿ ಕೆಲಸದಿಂದ ವಜಾಗೊಳಿಸಿದ ಆಘಾತಕಾರಿ ಘಟನೆ ಎಕ್ಸ್&zwnj;ನಲ್ಲಿ ವೈರಲ್ ಆಗಿದೆ. ಪ್ರೊಬೇಷನರಿ ಅವಧಿಯ ನೆಪ ಒಡ್ಡಿ ಕಂಪನಿ ನೀಡಿದ ಈ ವಜಾ ಪತ್ರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ನಂಬಿ ಮೋಸಹೋದೆ ಎಂದು ಗರ್ಭಿಣಿ ಮಹಿಳೆ ಕಣ್ಣೀರು ಹಾಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq9zt1de4hh6ab3s1xkz0cs,imgname-the-woman-s-post-alleging-she-was-fired-after-revealing-her-pregnancy-has-sparked-outrage.--representational-image--1784267401261.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್:&lt;/strong&gt; ಉದ್ಯೋಗದ ಅವಧಿಯಲ್ಲಿ ತೀವ್ರವಾದ ವಾಕರಿಕೆ ಮತ್ತು ಸುಸ್ತು ಕಾಣಿಸಿಕೊಂಡಾಗ ಉದ್ಯೋಗದಾತರು ಮಾನವೀಯತೆಯಿಂದ ವರ್ತಿಸುತ್ತಾರೆ ಎಂಬ ನಂಬಿಕೆ ಮಹಿಳೆಯೊಬ್ಬರ ಪಾಲಿಗೆ ಘೋರ ನಂಬಿಕೆ ದ್ರೋಹವಾಗಿ ಪರಿಣಮಿಸಿದೆ. ತಾನು ಗರ್ಭಿಣಿ ಎಂಬ ವಿಷಯವನ್ನು ಮ್ಯಾನೇಜರ್&zwnj;ಗೆ ತಿಳಿಸಿ, ಶಿಫ್ಟ್ ಸಮಯದಲ್ಲಿ ಬಿಸ್ಕತ್ತು/ಕ್ರ್ಯಾಕರ್ಸ್ ತಿನ್ನಲು ಅನುಮತಿ ಕೇಳಿದ ಕೇವಲ 3 ಗಂಟೆಗಳಲ್ಲಿ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;Biscuit ತಿನ್ನಲು ಅನುಮತಿ ಕೇಳಿದ್ದೇ ತಪ್ಪಾಯ್ತು:&lt;/strong&gt;&lt;/p&gt;&lt;p&gt;&quot;ಜಿನ್&quot; ಎಂಬ ಹೆಸರಿನ ಈ ಮಹಿಳೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತನ್ನ ಮ್ಯಾನೇಜರ್&zwnj;ಗೆ ಕಳುಹಿಸಿದ ಸಂದೇಶ ಹಾಗೂ ಕಂಪನಿ ತನಗೆ ನೀಡಿದ ವಜಾ ಪತ್ರದ ಸ್ಕ್ರೀನ್&zwnj;ಶಾಟ್&zwnj;ಗಳನ್ನು ಹಂಚಿಕೊಂಡಿದ್ದಾರೆ. ಸಂದೇಶದಲ್ಲಿ ಆಕೆ, &quot;ನಾಳೆಯ ಶಿಫ್ಟ್&zwnj;ಗಾಗಿ ನಾನು ಕಾಯುತ್ತಿದ್ದೇನೆ. ಆದರೆ ನನ್ನದೊಂದು ಖಾಸಗಿ ವಿಷಯ ಹಂಚಿಕೊಳ್ಳಬೇಕಿದೆ. ನಾನು ಪ್ರಸ್ತುತ ಗರ್ಭಿಣಿಯಾಗಿದ್ದು, ತೀವ್ರವಾಗಿ ಹೊಟ್ಟೆ ತೊಳಸುತ್ತಿದೆ ಮತ್ತು ಹಸಿವಾದಂತೆ ಭಾಸವಾಗುತ್ತಿದೆ. ಆದ್ದರಿಂದ ಶಿಫ್ಟ್ ಸಮಯದಲ್ಲಿ ತಿನ್ನಲು ಕೆಲವು ಕ್ರ್ಯಾಕರ್&zwnj;ಗಳನ್ನು ತರಲು ಅನುಮತಿ ನೀಡುತ್ತೀರಾ?&quot; ಎಂದು ವಿನಂತಿಸಿದ್ದರು.&lt;/p&gt;&lt;p&gt;&lt;strong&gt;ಕಂಪನಿಯಿಂದ ಸಿಕ್ಕಿತು ವಜಾ ಪತ್ರ:&lt;/strong&gt;&lt;/p&gt;&lt;p&gt;ಮ್ಯಾನೇಜರ್&zwnj;ನಿಂದ ಸಹಾನುಭೂತಿಯನ್ನು ನಿರೀಕ್ಷಿಸಿದ್ದ ಮಹಿಳೆಗೆ ಕೇವಲ ಮೂರು ಗಂಟೆಗಳ ಒಳಗೆ &quot;ಉದ್ಯೋಗ ಮುಕ್ತಾಯ&quot; ಎಂಬ ಹೆಡ್ಡಿಂಗ್&zwnj;ನೊಂದಿಗೆ ವಜಾ ಪತ್ರ ಸಿಕ್ಕಿದೆ. ಅದರಲ್ಲಿ, &quot;ನೀವು ಪ್ರೊಬೇಷನರಿ (probationary) ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸದ ಕಾರಣ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲಾಗುತ್ತಿದೆ. ನಿಮ್ಮ ನೋಟಿಸ್ ಅವಧಿಯನ್ನು ನೀವು ಪೂರೈಸಬೇಕಾಗುತ್ತದೆ ಮತ್ತು ಬಾಕಿ ಸಂಬಳವನ್ನು ನೀಡಲಾಗುವುದು&quot; ಎಂದು ಬರೆಯಲಾಗಿತ್ತು.&lt;/p&gt;&lt;p&gt;&lt;strong&gt;ನಂಬಿ ಮೋಸ ಹೋದೆ ಎಂದ ಮಹಿಳೆ:&lt;/strong&gt;&lt;/p&gt;&lt;p&gt;ಮಹಿಳೆ ತನ್ನ ಅಳಲನ್ನು ತೋಡಿಕೊಳ್ಳುತ್ತಾ, &quot;ನಾನು ಈ ಮ್ಯಾನೇಜರ್ ಅನ್ನು ತುಂಬಾ ನಂಬಿದ್ದೆ. ನನ್ನ ಜೀವನದಲ್ಲಿ ಈಗ ಬೆಂಬಲ ನೀಡಲು ಯಾರೂ ಇಲ್ಲ. ಶಿಫ್ಟ್ ಮಧ್ಯೆ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಭಾವಿಸುವಷ್ಟು ನಾನು ಮೂರ್ಖಳಾಗಿದ್ದೆ. ರೆಸ್ಟೋರೆಂಟ್&zwnj;ನಲ್ಲಿ 6 ಗಂಟೆಗಳ ಕೆಲಸದ ನಂತರವಷ್ಟೇ 20 ನಿಮಿಷಗಳ ವಿರಾಮ ಸಿಗುತ್ತಿತ್ತು. ತೀವ್ರವಾಗಿ ವಾಕರಿಕೆ ಬರುತ್ತಿದ್ದ ಕಾರಣ ಹಜಾರಕ್ಕೆ ಹೋಗಿ ಬಿಸ್ಕತ್ತು ತಿನ್ನಲು ಅನುಮತಿ ಕೇಳಿದ್ದೆ. ನಾನು ರಜೆ ಕೇಳಿರಲಿಲ್ಲ, ಕೇವಲ ನನ್ನ ಪರಿಸ್ಥಿತಿ ತಿಳಿಸಿದ್ದೆ&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಂಪನಿಯ ಕಠೋರ ನಿರ್ಧಾರದ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;3 hours after i sent the message to my manager pic.twitter.com/i9eGZmeDUQ&lt;/p&gt;&lt;p&gt;&mdash; jin (@jnsulz) July 16, 2026&lt;/p&gt;&lt;p&gt;&lt;/p&gt;]]></content:encoded>
            <category>it-jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/pregnancy-announcement-ends-in-job-loss-woman-shares-shocking-experience/articleshow-cariyrt"/>
        </item>
        <item>
            <title><![CDATA[‘ಸರ್’ ಅನ್ನಲಿಲ್ಲ, 5 ನಿಮಿಷ ಲೇಟ್ - ಟೆಕ್ಕಿ ಕೆಲಸವೇ ಹೋಯ್ತು!]]></title>
            <link>https://kannada.asianetnews.com/it-jobs/it-companies-work-culture-and-techie-loses-his-job-after-6-months-gkn/articleshow-cghgqh7</link>
            <guid isPermaLink="true">https://kannada.asianetnews.com/it-jobs/it-companies-work-culture-and-techie-loses-his-job-after-6-months-gkn/articleshow-cghgqh7</guid>
            <pubDate>Sat, 25 Jul 2026 21:08:54 +0530</pubDate>
            <description><![CDATA[ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ, 'ಸರ್' ಎಂದು ಕರೆಯಲಿಲ್ಲ ಮತ್ತು ಸಭೆಗೆ 5 ನಿಮಿಷ ತಡವಾದಂತಹ ಕ್ಷುಲ್ಲಕ ಕಾರಣಗಳಿಗಾಗಿ ಭಾರತೀಯ ಐಟಿ ಕಂಪನಿಯೊಂದು ಟೆಕ್ಕಿಯನ್ನು ವಜಾಗೊಳಿಸಿದೆ. ತನ್ನ ಕಹಿ ಅನುಭವವನ್ನು ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡಿದ್ದು, ಇದು ಐಟಿ ಕಂಪನಿಗಳಲ್ಲಿನ ಆಂತರಿಕ ರಾಜಕೀಯ ಮತ್ತು ಅತಿಯಾದ ನಿಗಾ ಕುರಿತ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxdwdqk20wfvw3k6w5yhxesz,imgname-new-project--28--1783951187553.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಟಿ ಕಂಪನಿಗಳಲ್ಲಿನ Work Culture ಮತ್ತು ಉದ್ಯೋಗಿಗಳ ಮೇಲಿನ ಅತಿಯಾದ ನಿಗಾ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಟೆಕ್ಕಿಯೊಬ್ಬರು ತಮಗೆ ಎದುರಾದ ಕಹಿ ಅನುಭವವನ್ನು ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ. ಆರು ತಿಂಗಳ ಕಾಲ ಉತ್ತಮವಾಗಿ ಕೆಲಸ ಮಾಡಿದರೂ ಸಹ ಕಂಪನಿಯು ತನ್ನ ಆಂತರಿಕ ರಾಜಕೀಯ ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ಅವರನ್ನು ಕೆಲಸದಿಂದ ವಜಾ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಈ ಟೆಕ್ಕಿ ಭಾರತೀಯ ಮೂಲದ ಐಟಿ ಕಂಪನಿಯೊಂದರಲ್ಲಿ 'ಕಾಂಟ್ರಾಕ್ಟ್' ಉದ್ಯೋಗಿಯಾಗಿ ಸೇರಿದ್ದರು. ಅಮೆರಿಕ ಮೂಲದ ಕ್ಲೈಂಟ್ ತಂಡದೊಂದಿಗೆ ಮನೆಯಿಂದಲೇ (Remote Work) ಕೆಲಸ ಮಾಡುತ್ತಿದ್ದರು. ಏಳು ಜನರಿದ್ದ ತಂಡದಲ್ಲಿ ಇವರು ಒಬ್ಬರೇ ಒಟ್ಟು 90 ಕೆಲಸಗಳ (Stories) ಪೈಕಿ 40 ಕೆಲಸಗಳನ್ನು ಪೂರ್ಣಗೊಳಿಸಿದ್ದರು. ಇಷ್ಟೊಂದು ಕೆಲಸ ಮಾಡಿದ್ದರೂ ಸಹ ಕಂಪನಿಯು ಅವರಿಗೆ ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ತೆಗೆದುಹಾಕಿದೆ.&lt;/p&gt;&lt;h2&gt;&lt;strong&gt;ವಜಾ ಮಾಡಲು ನೀಡಿದ ವಿಚಿತ್ರ ಕಾರಣಗಳು&lt;/strong&gt;&lt;/h2&gt;&lt;p&gt;ಕಂಪನಿಯು ಇವರನ್ನು ವಜಾ ಮಾಡಲು ನೀಡಿದ ಕಾರಣಗಳು ನಿಜಕ್ಕೂ ಆಶ್ಚರ್ಯಕರವಾಗಿವೆ. ಈ ಹಿಂದೆ ಅಮೆರಿಕದ ಕಂಪನಿಯಲ್ಲಿ ಕೆಲಸ ಮಾಡಿದ್ದ ಈ ಟೆಕ್ಕಿ, ಮ್ಯಾನೇಜರ್&zwnj;ಗಳನ್ನು ಹೆಸರಿಡಿದು ಕರೆಯುತ್ತಿದ್ದರು. ಆದರೆ ಈ ಭಾರತೀಯ ಕಂಪನಿಯಲ್ಲಿ &quot;ಸರ್&quot; ಅಥವಾ &quot;ಮೇಡಂ&quot; ಎಂದು ಕರೆಯದಿದ್ದಕ್ಕೆ ಮ್ಯಾನೇಜರ್&zwnj;ಗಳು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ವೈದ್ಯಕೀಯ ಕಾರಣಗಳಿಗಾಗಿ ಇವರು ಕಳೆದ ಎರಡು-ಮೂರು ತಿಂಗಳಿನಿಂದ ಬೆಳಗಿನ ಸಭೆಗೆ (Standup meeting) ಕೇವಲ 5 ನಿಮಿಷ ತಡವಾಗಿ ಸೇರುತ್ತಿದ್ದರು. ಇದಕ್ಕೆ ಕ್ಲೈಂಟ್ ತಂಡದ ಮ್ಯಾನೇಜರ್ ಒಪ್ಪಿಗೆ ನೀಡಿದ್ದರೂ, ಭಾರತೀಯ ಐಟಿ ಕಂಪನಿ ಇದನ್ನು ಕಾರ್ಯಕ್ಷಮತೆಯ ಸಮಸ್ಯೆ ಎಂದು ಪರಿಗಣಿಸಿದೆ.&lt;/p&gt;&lt;p&gt;ಮನೆಯಿಂದ ಕೆಲಸ ಮಾಡುವಾಗ ಸ್ಲಾಕ್ (Slack) ಅಥವಾ ಟೀಮ್ಸ್ (Teams) ಆ್ಯಪ್&zwnj;ಗಳಲ್ಲಿ ಉದ್ಯೋಗಿಗಳು ಸದಾ 'ಆಕ್ಟಿವ್' ಆಗಿರಬೇಕು ಮತ್ತು ತಕ್ಷಣ ಪ್ರತಿಕ್ರಿಯಿಸಬೇಕು ಎಂದು ಕಂಪನಿ ಒತ್ತಾಯಿಸುತ್ತಿತ್ತು. ಉದ್ಯೋಗಿಗಳು ಒಬ್ಬರ ಮೇಲೊಬ್ಬರು ನಿಗಾ ಇಡುವಂತೆ ಪ್ರೇರೇಪಿಸುತ್ತಿತ್ತು ಎಂದು ಟೆಕ್ಕಿ ಆರೋಪಿಸಿದ್ದಾರೆ. ಕಂಪನಿಯು 10% ಬಗ್ ರೇಟ್ ನಿರೀಕ್ಷಿಸಿತ್ತು, ಆದರೆ ಇವರ ಕೆಲಸದಲ್ಲಿ 14% ಇತ್ತು ಎಂಬ ಕಾರಣ ನೀಡಲಾಗಿದೆ. ಆದರೆ ಪ್ರೊಡಕ್ಷನ್ ಸಮಸ್ಯೆಗಳನ್ನು ಬಗೆಹರಿಸುವಾಗ ಬಗ್ ರೇಟ್ ಸ್ವಲ್ಪ ಹೆಚ್ಚಾಗುವುದು ಸಹಜ ಎಂದು ಟೆಕ್ಕಿ ವಾದಿಸಿದ್ದಾರೆ.&lt;/p&gt;&lt;h2&gt;&lt;strong&gt;ಪಾರದರ್ಶಕತೆಯ ಕೊರತೆ&lt;/strong&gt;&lt;/h2&gt;&lt;p&gt;ತಮ್ಮನ್ನು ಕೆಲಸದಿಂದ ತೆಗೆಯುವ ಮೊದಲು ಯಾವುದೇ ಕಾರ್ಯಕ್ಷಮತೆಯ ವಿಮರ್ಶೆ (Performance Review) ಅಥವಾ ಫೀಡ್&zwnj;ಬ್ಯಾಕ್ ನೀಡಿರಲಿಲ್ಲ. ಅಷ್ಟೇ ಅಲ್ಲದೆ, ಇವರ ಜೊತೆ ಪ್ರತಿದಿನ ಕೆಲಸ ಮಾಡುತ್ತಿದ್ದ ಕ್ಲೈಂಟ್ ತಂಡದ ಅಭಿಪ್ರಾಯವನ್ನೂ ಕಂಪನಿ ಪಡೆದುಕೊಂಡಿಲ್ಲ ಎಂದು ಇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೆಡ್ಡಿಟ್&zwnj;ನಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕರು ಭಾರತೀಯ ಐಟಿ ಕಂಪನಿಗಳ ಹಳೆಯ ಶೈಲಿಯ ಮ್ಯಾನೇಜ್&zwnj;ಮೆಂಟ್ ಬಗ್ಗೆ ಕಿಡಿಕಾರಿದ್ದಾರೆ. ಕೆಲಸಕ್ಕಿಂತಲೂ ಬೂಟಾಟಿಕೆಗೆ ಇಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.&lt;/p&gt;]]></content:encoded>
            <category>it-jobs</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/it-jobs/it-companies-work-culture-and-techie-loses-his-job-after-6-months-gkn/articleshow-cghgqh7"/>
        </item>
        <item>
            <title><![CDATA[ಪ್ರಮೋಷನ್ ಸಿಕ್ಕರೂ ನೆಮ್ಮದಿ ಇಲ್ಲ! ಸಹೋದ್ಯೋಗಿಗಳ ಗೇಲಿ, ಮ್ಯಾನೇಜರ್‌ನ ನಿರ್ಲಕ್ಷ್ಯದಿಂದ ಉದ್ಯೋಗಿಗೆ ಸಂಕಷ್ಟ]]></title>
            <link>https://kannada.asianetnews.com/jobs/promotion-turned-into-a-nightmare-employee-claims-colleagues-wanted-them-to-fail/articleshow-cq2s8gx</link>
            <guid isPermaLink="true">https://kannada.asianetnews.com/jobs/promotion-turned-into-a-nightmare-employee-claims-colleagues-wanted-them-to-fail/articleshow-cq2s8gx</guid>
            <pubDate>Sun, 19 Jul 2026 10:26:43 +0530</pubDate>
            <description><![CDATA[&lt;p&gt;ಕಾರ್ಪೊರೇಟ್ ವಲಯದಲ್ಲಿ ತ್ವರಿತ ಬಡ್ತಿ ಸಿಕ್ಕಾಗ ಎದುರಾಗುವ ಅಸೂಯೆ ಹಾಗೂ ರಾಜಕೀಯವನ್ನು ಈ ಪೋಸ್ಟ್ ಬಿಂಬಿಸುತ್ತದೆ. ಹೊಸ ಮ್ಯಾನೇಜರ್&zwnj;ಗೆ ಹಿರಿಯ ಸಿಬ್ಬಂದಿ ಸಹಕರಿಸದೆ ಮಾನಸಿಕ ಒತ್ತಡ ಹೇರುತ್ತಿರುವ ತಂತ್ರಗಳು ಇಲ್ಲಿವೆ. ಈ ಪರಿಸ್ಥಿತಿಯಲ್ಲಿ ತನ್ನ ರಕ್ಷಣೆಗಾಗಿ ಉದ್ಯೋಗಿ ತಳೆದ ದಾಖಲಾತಿಯ (Documentation) ನಿರ್ಧಾರವನ್ನು ಕೆಲವರು ಶ್ಲಾಘಿಸಿದರೆ, ಇನ್ನು ಕೆಲವರು ನಾಯಕತ್ವದ ಜವಾಬ್ದಾರಿ ಹೊರಲು ಸಲಹೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwb8jwwj0x15yezy6bdd7n2,imgname-i-feel-like-they-want-me-to-fail-employee-s-post-sparks-debate-1784436509596.jpg" type="image/jpeg" height="390" width="690"/>
            <content:encoded><![CDATA[&lt;p&gt;ಉದ್ಯೋಗದಲ್ಲಿ ಬಡ್ತಿ (Promotion) ಎನ್ನುವುದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಖುಷಿ ಮತ್ತು ಸಂಭ್ರಮದ ಕ್ಷಣ. ಆದರೆ, ಎಲ್ಲರಿಗೂ ಅದು ನೆಮ್ಮದಿ ತರುತ್ತದೆ ಎಂದೇನಿಲ್ಲ. ಇಲ್ಲೊಬ್ಬ ಉದ್ಯೋಗಿಗೆ ಕಂಪನಿಯಲ್ಲಿ ಸಿಕ್ಕ ತ್ವರಿತ ಬಡ್ತಿಯು ಸಂಭ್ರಮದ ಬದಲು, ಸಹೋದ್ಯೋಗಿಗಳಿಂದ ತೀವ್ರ ಹಗೆತನ, ಅಸಮಾಧಾನ ಮತ್ತು &quot;ರಚನಾತ್ಮಕ ವಿಧ್ವಂಸಕತೆ&quot;ಯನ್ನು (Structural Sabotage) ತಂದಿಟ್ಟಿದೆ. ಈ ಕಹಿ ಅನುಭವದ ಕುರಿತು ಉದ್ಯೋಗಿ ರೆಡ್ಡಿಟ್&zwnj;ನಲ್ಲಿ ಮಾಡಿರುವ ಪೋಸ್ಟ್ ಸದ್ಯ ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.&lt;/p&gt;&lt;p&gt;&lt;strong&gt;ಐದೇ ನಿಮಿಷದ ತರಬೇತಿ, ಕಾಲೆಳೆದ ಹಿರಿಯ ಸಿಬ್ಬಂದಿ:&lt;/strong&gt;&lt;/p&gt;&lt;p&gt;ಪೋಸ್ಟ್ ಪ್ರಕಾರ, ಈ ಉದ್ಯೋಗಿಗೆ ಇತ್ತೀಚೆಗೆ ಮತ್ತೊಂದು ಶಾಖೆಯ ಶಿಫ್ಟ್ ನಿರ್ವಹಣೆಯ ಜವಾಬ್ದಾರಿ ನೀಡಿ ಬಡ್ತಿ ನೀಡಲಾಗಿತ್ತು. ಆದರೆ, ಕಂಪನಿಯಲ್ಲಿ ದೀರ್ಘಕಾಲದಿಂದ ಇದ್ದ ಹಿರಿಯ ಸಹೋದ್ಯೋಗಿಗಳಿಗೆ ಈ ತ್ವರಿತ ಬೆಳವಣಿಗೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೊಸ ಜವಾಬ್ದಾರಿಯ ಆನ್&zwnj;ಬೋರ್ಡಿಂಗ್ ಅಥವಾ ಸಾಫ್ಟ್&zwnj;ವೇರ್ ತರಬೇತಿ ನೀಡುವ ಬದಲು, ಕೇವಲ ಐದು ನಿಮಿಷದ ಅರೆಬರೆ ಮಾಹಿತಿ ನೀಡಿ ಕೈತೊಳೆದುಕೊಳ್ಳಲಾಯಿತು. ಕೆಲಸದ ಮೊದಲ ದಿನದ ಮುನ್ನಾದಿನ ಕೇವಲ &quot;ಕೀಲಿಗಳನ್ನು ಸಂಗ್ರಹಿಸಿ, ಲೈಟ್ ಆನ್ ಮಾಡಿ&quot; ಎಂಬ ಅಲ್ಪ ಸಂದೇಶವಷ್ಟೇ ಸಿಕ್ಕಿತ್ತು. ಹೊಸ ರೂಲ್ಸ್ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಸಹೋದ್ಯೋಗಿಗಳು ಲೇವಡಿ ಮಾಡಲಾರಂಭಿಸಿದರು.&lt;/p&gt;&lt;p&gt;&lt;strong&gt;ಸ್ನೇಹಿತರೇ ಆದರು ಶತ್ರುಗಳು:&lt;/strong&gt;&lt;/p&gt;&lt;p&gt;ಅಧಿಕಾರ ವಹಿಸಿಕೊಂಡ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಹಿಂದೆ ಸ್ನೇಹಪರರಾಗಿದ್ದ ಸಹೋದ್ಯೋಗಿಯೊಬ್ಬರು ಇದ್ದಕ್ಕಿದ್ದಂತೆ, &quot;ನೀನು ಯಾಕೆ ಇಷ್ಟೊಂದು ಪ್ರಶ್ನೆ ಕೇಳುತ್ತೀಯಾ ಎಂದು ಬೇರೆಯವರು ದೂರುತ್ತಿದ್ದಾರೆ&quot; ಎಂದು ಅಸ್ಪಷ್ಟವಾಗಿ ಚುಚ್ಚಿ ಮಾತನಾಡತೊಡಗಿದರು. ಮತ್ತೊಬ್ಬರು ಈತನ ನಿರ್ಧಾರಗಳನ್ನು ತಳ್ಳಿಹಾಕಿ, ಪ್ರಜ್ಞಾಪೂರ್ವಕವಾಗಿ ತರಬೇತಿಯ ಕೊರತೆಯನ್ನೇ ದೊಡ್ಡ ಸಮಸ್ಯೆಯಾಗಿ ಬಿಂಬಿಸಲು ಯತ್ನಿಸಿದರು. ಈ ಎಲ್ಲಾ ಕುತಂತ್ರಗಳ ನಡುವೆಯೂ ಉದ್ಯೋಗಿ ಧೃತಿಗೆಡದೆ, ತನಗೆ ಸಿಕ್ಕ ಸಂದೇಶಗಳು, ಇಮೇಲ್&zwnj;ಗಳು ಮತ್ತು ಸಂಭಾಷಣೆಗಳ ಪ್ರತಿಯೊಂದು ವಿವರವನ್ನು ಲಿಖಿತ ರೂಪದಲ್ಲಿ ದಾಖಲಿಸಿಟ್ಟುಕೊಂಡು (Documentation) ಶಾಂತವಾಗಿ ಹೋರಾಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ರೆಡ್ಡಿಟ್&zwnj;ನಲ್ಲಿ ಪರ-ವಿರೋಧದ ಚರ್ಚೆ:&lt;/strong&gt;&lt;/p&gt;&lt;p&gt;ಈ ಪೋಸ್ಟ್ ರೆಡ್ಡಿಟ್ ಬಳಕೆದಾರರನ್ನು ಎರಡು ಬಣಗಳನ್ನಾಗಿ ವಿಭಜಿಸಿದೆ. ಕೆಲವರು ಉದ್ಯೋಗಿಯ ಬೆಂಬಲಕ್ಕೆ ನಿಂತು, &quot;ವೇಗದ ಬಡ್ತಿ ಸಿಕ್ಕಾಗ ಕಡೆಗಣಿಸಲ್ಪಟ್ಟ ಜನರಿಂದ ಇಂತಹ ಪ್ರತಿಕ್ರಿಯೆ ಸಹಜ. ನಿಮ್ಮ ಲಿಖಿತ ದಾಖಲೆಗಳೇ (Paper Trail) ನಿಮ್ಮ ದೊಡ್ಡ ಆಸ್ತಿ, ಶಾಂತವಾಗಿರಿ&quot; ಎಂದು ಧೈರ್ಯ ತುಂಬಿದ್ದಾರೆ. ಆದರೆ ಇನ್ನು ಕೆಲವರು ಉದ್ಯೋಗಿಯನ್ನೇ ಟೀಕಿಸಿದ್ದು, &quot;ನೀವು ಬಲಿಪಶುವಿನಂತೆ ನಟಿಸುವುದನ್ನು ನಿಲ್ಲಿಸಿ. ನೀವು ಈಗಾಗಲೇ ಉನ್ನತ ಸ್ಥಾನದಲ್ಲಿದ್ದೀರಿ, ದ್ವೇಷಿಸುವವರನ್ನು ದೂಷಿಸುವ ಬದಲು ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಮುನ್ನಡೆಯಿರಿ&quot; ಎಂದು ಕಟುವಾಗಿ ಸಲಹೆ ನೀಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Promoted quickly at work, now dealing with severe...&lt;/p&gt;&lt;p&gt;&lt;/p&gt;]]></content:encoded>
            <category>it-jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/jobs/promotion-turned-into-a-nightmare-employee-claims-colleagues-wanted-them-to-fail/articleshow-cq2s8gx"/>
        </item>
        <item>
            <title><![CDATA[ಇಂದು ಅವರು.... ನಾಳೆ ನಾನು? ಕಂಪನಿಯ ಲೇಆಫ್ ಕರಾಳ ಸತ್ಯ ಬಿಚ್ಚಿಟ್ಟ ಐಟಿ ಉದ್ಯೋಗಿ!]]></title>
            <link>https://kannada.asianetnews.com/viral/surviving-layoffs-losing-peace-employees-honest-reflection-goes-viral/articleshow-dwfnuz8</link>
            <guid isPermaLink="true">https://kannada.asianetnews.com/viral/surviving-layoffs-losing-peace-employees-honest-reflection-goes-viral/articleshow-dwfnuz8</guid>
            <pubDate>Sun, 02 Aug 2026 10:44:50 +0530</pubDate>
            <description><![CDATA[&lt;p&gt;ತಮ್ಮ ಸಂಸ್ಥೆಯಲ್ಲಿ ಇಬ್ಬರು ಸಹೋದ್ಯೋಗಿಗಳು ಲೇಆಫ್&zwnj;ಗೆ ಒಳಗಾದ ಬಳಿಕ ಉದ್ಯೋಗಿಯೊಬ್ಬರು ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡ ಭಾವನಾತ್ಮಕ ಪೋಸ್ಟ್ ವೈರಲ್ ಆಗಿದೆ. ಉದ್ಯೋಗ ಉಳಿದಿದ್ದರೂ ಭಯ, ಅಪರಾಧಿ ಭಾವನೆ ಮತ್ತು ಅನಿಶ್ಚಿತತೆ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆ ಉದ್ಯೋಗ ಭದ್ರತೆ, AI ಪರಿಣಾಮ ಹಾಗೂ ಕಾರ್ಪೊರೇಟ್ ಲೇಆಫ್ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyypmqsegh9dercjw2vb05ww,imgname-one-layoff--countless-questions-employee-s-honest-reflection-wins-hearts-1785589292846.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾರ್ಪೊರೇಟ್ ಕ್ಷೇತ್ರದಲ್ಲಿ ಉದ್ಯೋಗ ಕಡಿತ (Layoff) ಈಗ ಹೊಸ ವಿಷಯವಲ್ಲ. ಆದರೆ, ಅದರ ನಿಜವಾದ ಪರಿಣಾಮ ಕೇವಲ ಕೆಲಸ ಕಳೆದುಕೊಂಡವರಿಗಷ್ಟೇ ಸೀಮಿತವಾಗುವುದಿಲ್ಲ. ಕೆಲಸ ಉಳಿಸಿಕೊಂಡವರ ಮನಸ್ಸಿನಲ್ಲೂ ಭಯ, ಆತಂಕ ಮತ್ತು ಅನಿಶ್ಚಿತತೆಯ ಭಾವನೆ ಮನೆ ಮಾಡುತ್ತದೆ. ಇಂತಹ ಅನುಭವವನ್ನೇ ಉದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣ ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡಿದ್ದು, ಸಾವಿರಾರು ಮಂದಿಯ ಗಮನ ಸೆಳೆದಿದೆ.&lt;/p&gt;&lt;p&gt;&lt;strong&gt;ಕೆಲಸ ಉಳಿದರೂ ಮನಸ್ಸಿನಲ್ಲಿ ಆತಂಕ..!&lt;/strong&gt;&lt;/p&gt;&lt;p&gt;ತಮ್ಮ ಸಂಸ್ಥೆಯಲ್ಲಿ ನಡೆದ ಇತ್ತೀಚಿನ ಲೇಆಫ್ ವೇಳೆ ಇಬ್ಬರು ತಂಡದ ಸದಸ್ಯರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಉದ್ಯೋಗಿ ತಿಳಿಸಿದ್ದಾರೆ. ತಾವು ಕೆಲಸ ಉಳಿಸಿಕೊಂಡಿದ್ದರೂ, ಸಹೋದ್ಯೋಗಿಗಳು ಸಂಸ್ಥೆ ತೊರೆಯಬೇಕಾದ ದೃಶ್ಯ ಮನಸ್ಸಿಗೆ ಆಘಾತ ನೀಡಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&quot;ಅವರು ಹೊರಟಾಗ ನಾನು ಉಳಿದಿದ್ದೇನೆ ಎಂಬ ಕಾರಣಕ್ಕೆ ವಿಚಿತ್ರ ಭಾವನೆ, ದುಃಖ, ಭಯ ಮತ್ತು ಅಪರಾಧಿ ಮನೋಭಾವ ನನ್ನನ್ನು ಕಾಡುತ್ತಿದೆ. ಒಂದು ವೇಳೆ ಮುಂದಿನ ಬಾರಿ ನನ್ನ ಸರದಿ ಬಂದರೆ ಏನು ಮಾಡಬೇಕು ಎಂಬ ಪ್ರಶ್ನೆ ನಿರಂತರವಾಗಿ ಕಾಡುತ್ತಿದೆ&quot; ಎಂದು ಅವರು ಬರೆದಿದ್ದಾರೆ.&lt;/p&gt;&lt;p&gt;&lt;strong&gt;ಉದ್ಯೋಗ ಭದ್ರತೆಗೆ ಸವಾಲಾದ ಲೇಆಫ್..!&lt;/strong&gt;&lt;/p&gt;&lt;p&gt;ಈ ಘಟನೆ ಬಳಿಕ ಯಾವುದೇ ಉದ್ಯೋಗವೂ ಶಾಶ್ವತವಲ್ಲ ಎಂಬ ಅರಿವು ಮೂಡಿದೆ ಎಂದು ಉದ್ಯೋಗಿ ಹೇಳಿದ್ದಾರೆ. ಇಂದಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಕ್ಷಣಾರ್ಧದಲ್ಲೇ ಪರಿಸ್ಥಿತಿ ಬದಲಾಗಬಹುದು. ಕೃತಕ ಬುದ್ಧಿಮತ್ತೆ (AI), ಆರ್ಥಿಕ ಒತ್ತಡ, ವೆಚ್ಚ ಕಡಿತದ ನೀತಿಗಳು ಮತ್ತು ಸಂಸ್ಥೆಗಳ ಪುನರ್&zwnj;ರಚನೆ ಉದ್ಯೋಗ ಭದ್ರತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿವೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಉದ್ಯೋಗ ಭದ್ರತೆ ಕುರಿತು ನೆಟ್ಟಿಗರ ಅಭಿಪ್ರಾಯ..!&lt;/strong&gt;&lt;/p&gt;&lt;p&gt;ಈ ಪೋಸ್ಟ್&zwnj;ಗೆ ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವರು ತಾವು ಸಹ ಇದೇ ಪರಿಸ್ಥಿತಿಯನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಕೆಲವರು ಲೇಆಫ್ ಬಳಿಕ ಹಲವು ತಿಂಗಳು ಉದ್ಯೋಗಕ್ಕಾಗಿ ಅಲೆದ ಅನುಭವವನ್ನು ಹಂಚಿಕೊಂಡರೆ, ಇನ್ನೂ ಕೆಲವರು ಕಚೇರಿ ರಾಜಕೀಯ, ವೆಚ್ಚ ಕಡಿತ ಮತ್ತು ಕಾರ್ಯಕ್ಷಮತೆ ಹೊರತಾದ ಕಾರಣಗಳಿಂದಲೂ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಕಾರ್ಪೊರೇಟ್ ಕ್ಷೇತ್ರದ ಕಹಿ ವಾಸ್ತವ..!&lt;/strong&gt;&lt;/p&gt;&lt;p&gt;ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಕಡಿತವು ಉದ್ಯೋಗ ಕಳೆದುಕೊಂಡವರಷ್ಟೇ ಅಲ್ಲ, ಉಳಿದ ಸಿಬ್ಬಂದಿಯ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಹೊಸ ಕೌಶಲ್ಯಗಳನ್ನು ಕಲಿಯುವುದು, ವೃತ್ತಿಪರ ಸಂಪರ್ಕ ವಿಸ್ತರಿಸುವುದು ಹಾಗೂ ಆರ್ಥಿಕ ಯೋಜನೆ ರೂಪಿಸಿಕೊಳ್ಳುವುದು ಅಗತ್ಯ ಎಂದು ವೃತ್ತಿ ತಜ್ಞರು ಸಲಹೆ ನೀಡುತ್ತಿದ್ದಾರೆ. ಈ ವೈರಲ್ ಪೋಸ್ಟ್ ಕೂಡ ಉದ್ಯೋಗ ಭದ್ರತೆಗಿಂತ ನಿರಂತರ ಕೌಶಲ್ಯ ವೃದ್ಧಿಯೇ ಇಂದಿನ ಕಾಲದ ದೊಡ್ಡ ಭದ್ರತೆ ಎಂಬ ಸಂದೇಶವನ್ನು ಮತ್ತೊಮ್ಮೆ ನೆನಪಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Today completely changed how I look at job security&amp;nbsp;by u/OPusername in r/IndianWorkplace&lt;/p&gt;&lt;p&gt;&lt;/p&gt;]]></content:encoded>
            <category>it-jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/surviving-layoffs-losing-peace-employees-honest-reflection-goes-viral/articleshow-dwfnuz8"/>
        </item>
        <item>
            <title><![CDATA[18 ವರ್ಷ ಅಮೆರಿಕಾದಲ್ಲಿದ್ದ ಟೆಕ್ಕಿ ಕುಟುಂಬ ಸಮೇತ ಬೆಂಗಳೂರಿಗೆ ವಾಪಸ್‌, ಕಾರಣ ಕೇಳಿ ಭೇಷ್‌ ಎಂದ ನೆಟ್ಟಿಗರು]]></title>
            <link>https://kannada.asianetnews.com/it-jobs/after-18-years-in-the-us-meta-executive-returns-to-bengaluru-for-family-over-fortune/articleshow-h4pg8m4</link>
            <guid isPermaLink="true">https://kannada.asianetnews.com/it-jobs/after-18-years-in-the-us-meta-executive-returns-to-bengaluru-for-family-over-fortune/articleshow-h4pg8m4</guid>
            <pubDate>Wed, 15 Jul 2026 13:25:14 +0530</pubDate>
            <description><![CDATA[&lt;p&gt;Quit job : ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗೋದೇ ಕಷ್ಟ. ಹಾಗಿರುವಾಗ ದೇಶ ಬದಲಾವಣೆ ಮಹತ್ವದ ನಿರ್ಧಾರ. 18 ವರ್ಷಗಳ ಕಾಲ ಒಂದು ದೇಶದಲ್ಲಿ ನೆಲೆ ನಿಂತು, ಸಾಕಷ್ಟು ಅನುಭವ, ಹಣ, ಅಧಿಕಾರ ಗಿಟ್ಟಿಸಿಕೊಂಡಿದ್ದ ವ್ಯಕ್ತಿ ಎಲ್ಲವನ್ನೂ ಬಿಟ್ಟು ತವರಿಗೆ ಬರೋದಿಕ್ಕೆ ಕಾರಣ ಯಾರು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjcaty051j9hbxscvm2x8md,imgname-family-management-1784102087616.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕದಲ್ಲಿ ಕೋಟಿ ರೂಪಾಯಿ ಸಂಬಳ, ಪ್ರತಿಷ್ಠಿತ ಉದ್ಯೋಗ, ಐಷಾರಾಮಿ ಜೀವನ... ಇವೆಲ್ಲವನ್ನೂ ಬಿಟ್ಟು ಒಬ್ಬ ಮೆಟಾ ಅಧಿಕಾರಿ ಕುಟುಂಬ ಸಮೇತ ಬೆಂಗಳೂರಿಗೆ ಮರಳಿದ್ದಾರೆ. ಅವರ ಈ ನಿರ್ಧಾರ ಈಗ ಸೋಶಿಯಲ್&zwnj; ಮೀಡಿಯಾದಲ್ಲಿ ಸಾವಿರಾರು ಜನರ ಹೃದಯ ಗೆದ್ದಿದೆ.&lt;/p&gt;&lt;h2&gt;ಕುಟುಂಬ ಸಮೇತ ಬೆಂಗಳೂರಿಗೆ ವಾಪಸ್&amp;nbsp;&lt;/h2&gt;&lt;p&gt;ಮೆಟಾದ ಹಿರಿಯ ಎಂಜಿನಿಯರಿಂಗ್ ಅಧಿಕಾರಿ ಬಾಲಾಜಿ ಗುರುರಾಜನ್ ಸುಮಾರು 18 ವರ್ಷಗಳ ಕಾಲ ಅಮೆರಿಕದಲ್ಲಿ ವಾಸವಿದ್ದರು. ಈ ಅವಧಿಯಲ್ಲಿ ಅವರು ಮೈಕ್ರೋಸಾಫ್ಟ್, ಲಿಂಕ್ಡ್ಇನ್ ಮತ್ತು ಮೆಟಾ ಸೇರಿದಂತೆ ವಿಶ್ವದ ಪ್ರಮುಖ ಟೆಕ್ ಕಂಪನಿಗಳಲ್ಲಿ ಕೆಲಸ ಮಾಡಿ ಯಶಸ್ವಿ ವೃತ್ತಿಜೀವನ ಕಟ್ಟಿಕೊಂಡಿದ್ದರು. ಆದರೆ ಇವೆಲ್ಲವನ್ನು ಬಿಟ್ಟು ಅವರು ಬೆಂಗಳೂರಿಗೆ ವಾಪಸ್&zwnj; ಆಗಿದ್ದಾರೆ. ಅದಕ್ಕೆ ಅವರು ಹೇಳಿದ ಕಾರಣ ಅಚ್ಚರಿಯುಂಟು ಮಾಡ್ತಿದೆ.&lt;/p&gt;&lt;p&gt;ದೊಡ್ಡ ಡಿಗ್ರಿನೂ ಇಲ್ಲ, ಅನುಭವನೂ ಜೀರೋ: ಮೊದಲ ವರ್ಷದ ಪದವಿಯಲ್ಲೇ 50 ಲಕ್ಷ ಆದಾಯ ಗಳಿಸ್ತಿರೋ ಯುವಕನ ಸ್ಟೋರಿ ಕೇಳಿ&lt;/p&gt;&lt;h3&gt;ಈ ಕಾರಣಕ್ಕೆ ಬೆಂಗಳೂರಿಗೆ ವಾಪಸ್&amp;nbsp;&lt;/h3&gt;&lt;p&gt;ಜನರು ಉತ್ತಮ ಸಂಬಳ, ಅಮೆರಿಕಾದಂತ ಶ್ರೀಮಂತ ದೇಶದಲ್ಲಿ ಸಿಗುವ ಸೌಲಭ್ಯ ಬಿಟ್ಟು ಭಾರತಕ್ಕೆ ವಾಪಸ್&zwnj; ಆಗುವ ಮನಸ್ಸು ಮಾಡೋದಿಲ್ಲ. ಅದ್ರಲ್ಲೂ ತಂದೆ- ತಾಯಿ ನೋಡಿಕೊಳ್ಳುವ ಕಾರಣಕ್ಕೆ ಅಲ್ಲಿಂದ ವಾಪಸ್&zwnj; ತವರಿಗೆ ಬರುವವರ ಸಂಖ್ಯೆ ಬಹಳ ಕಡಿಮೆ. ಆದರೆ ಬಾಲಾಜಿ ಗುರುರಾಜನ್, ಹಣ ಮತ್ತು ಹುದ್ದೆ ಮತ್ತೆ ಸಿಗಬಹುದು. ವಯಸ್ಸಾಗುತ್ತಿರುವ ತಂದೆ-ತಾಯಿಯೊಂದಿಗೆ ಕಳೆಯುವ ಸಮಯ ಮತ್ತು ನನ್ನ ಮಕ್ಕಳ ಬೆಳವಣಿಗೆಯನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ ಎಂಬ ಕಾರಣ ಇಟ್ಕೊಂಡು ಭಾರತಕ್ಕೆ ವಾಪಸ್&zwnj; ಆಗಿದ್ದಾರೆ.&lt;/p&gt;&lt;p&gt;ಅಮೆರಿಕದಿಂದ ಬೆಂಗಳೂರಿಗೆ ವಾಪಸ್ ಬರುವಾಗ 12ಕ್ಕೂ ಹೆಚ್ಚು ಸೂಟ್ಕೇಸ್ಗಳೊಂದಿಗೆ ತೆಗೆದ ಅವರ ಫೋಟೋ ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಇನ್ನೂ ಕನಸಿನಂತೆ ಅನಿಸುತ್ತಿದೆ. ಅಮೆರಿಕ ನನಗೆ ವೃತ್ತಿಜೀವನ ಕೊಟ್ಟಿತು. ಆದರೆ ಮನೆ ನನಗೆ ಬದುಕಿನ ನಿಜವಾದ ಅರ್ಥವನ್ನು ನೆನಪಿಸಿತು ಎಂದು ಅವರು ಲಿಂಕ್ಡ್ಇನ್ನಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ತಿಂಗಳಿಗೆ 15,500 ಸಂಬಳ, ಶೇ.15 ಪರ್ಸೆಂಟ್ ಹೈಕ್ ನೀಡಿದ್ರೂ ಮನೆ ಕೆಲ್ಸದಾಕೆ ಕೆಲ್ಸ ಬಿಟ್ಟಿದ್ದೇಕೆ? ಪ್ರತಿಯೊಬ್ಬರೂ ಕಲಿಯಬೇಕು ಪಾಠ&lt;/p&gt;&lt;p&gt;ಬೆಂಗಳೂರುಗೆ ಬಂದ ನಂತರ ಮತ್ತೆ ಹೊಸ ಜೀವನ ಆರಂಭಿಸುವ ಸವಾಲು ಎದುರಾಯಿತು. ಮಕ್ಕಳಿಗೆ ಶಾಲೆ, ಹೊಸ ಮನೆ, ನಗರದ ಸಂಚಾರ, ದೈನಂದಿನ ಜೀವನ ಎಲ್ಲವನ್ನೂ ಮೊದಲಿನಿಂದಲೇ ಕಟ್ಟಿಕೊಳ್ಳಬೇಕಾಯಿತು. ಆದರೂ ಈ ಹೊಸ ಆರಂಭವೇ ನಿಜವಾದ ಸಂತೋಷ ನೀಡಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಅವರು ಭವಿತ್ತ (Bhavitta) ಎಂಬ AI ಆಧಾರಿತ ಅಪ್ಲಿಕೇಶನ್ನ್ನೂ ಅಭಿವೃದ್ಧಿಪಡಿಸಿದ್ದಾರೆ. ಎರಡು ದೇಶಗಳ ಹಣಕಾಸು, ತೆರಿಗೆ ಮತ್ತು ನಿವೃತ್ತಿ ಯೋಜನೆಗಳನ್ನು ಸುಲಭವಾಗಿ ನಿರ್ವಹಿಸಲು ಇದು ಸಹಾಯ ಮಾಡುತ್ತದೆ.&lt;/p&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಜನರು ಹಣ ಹಾಗೂ ಅಧಿಕಾರ ಯಾವಾಗ ಬೇಕಾದ್ರೂ ಬರಬಹುದು. ನಿಮ್ಮ ನಿರ್ಧಾರ ಮೆಚ್ಚುವಂತಹದ್ದು ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>it-jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/it-jobs/after-18-years-in-the-us-meta-executive-returns-to-bengaluru-for-family-over-fortune/articleshow-h4pg8m4"/>
        </item>
        <item>
            <title><![CDATA["ಅವತ್ತು ಕೆಲಸ ಕಳೆದುಕೊಂಡಿದ್ದೇ ನನಗೆ ವರವಾಯ್ತು!" - ಮಹಿಳಾ ಉದ್ಯಮಿಯ ರೋಚಕ ಸಕ್ಸಸ್ ಸ್ಟೋರಿ]]></title>
            <link>https://kannada.asianetnews.com/viral/woman-says-losing-her-job-after-maternity-leave-inspired-her-entrepreneurial-journey/articleshow-pklpl6p</link>
            <guid isPermaLink="true">https://kannada.asianetnews.com/viral/woman-says-losing-her-job-after-maternity-leave-inspired-her-entrepreneurial-journey/articleshow-pklpl6p</guid>
            <pubDate>Thu, 16 Jul 2026 19:00:29 +0530</pubDate>
            <description><![CDATA[&lt;p&gt;ಹೆರಿಗೆ ರಜೆ ಮುಗಿಸಿ ಹಿಂದಿರುಗಿದ ಬೆನ್ನಲ್ಲೇ ಕೆಲಸ ಕಳೆದುಕೊಂಡ ತಾರಿಣಿ ಎಂಬ ಮಹಿಳೆಯ ಸ್ಪೂರ್ತಿದಾಯಕ ಕಥೆ ಇಲ್ಲಿದೆ. ಕಾರ್ಪೊರೇಟ್ ಉದ್ಯೋಗ ಭದ್ರತೆಯ ಭ್ರಮೆಯಿಂದ ಹೊರಬಂದ ಅವರು, ಬೇರೆಯವರ ಕಂಪನಿಗಾಗಿ ದುಡಿಯುವ ಬದಲು ಮೊದಲಿನಿಂದ ತಮ್ಮದೇ ಆದ ಸ್ವಂತ ಬಿಸಿನೆಸ್ ನಿರ್ಮಿಸಲು ನಿರ್ಧರಿಸಿದ್ದಾರೆ. ತಾಯ್ತನ ಹಾಗೂ ನಿರುದ್ಯೋಗದ ಸವಾಲುಗಳನ್ನು ಎದುರಿಸಿ ಅವರು ಇಟ್ಟ ದಿಟ್ಟ ಹೆಜ್ಜೆಗೆ ನೆಟ್ಟಿಗರಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmw8eq4m4caxhgtqyt8chkv,imgname-laid-off-after-maternity-leave-woman-turns-setback-into-a-thriving-business-1784185895651.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಜೀವನದಲ್ಲಿ ಅತ್ಯಂತ ಸ್ಥಿರತೆಯನ್ನು ನಿರೀಕ್ಷಿಸುವ ಸಮಯದಲ್ಲಿ ಉದ್ಯೋಗ ನಷ್ಟದಂತಹ ಆಘಾತ ಎದುರಾದರೆ ಅದನ್ನು ತಡೆದುಕೊಳ್ಳುವುದು ಸುಲಭವಲ್ಲ. ಅದರಲ್ಲೂ ತಾಯಿತನದ ಸುಂದರ ದಿನಗಳನ್ನು ಕಳೆದು, ಹೆರಿಗೆ ರಜೆಯ ನಂತರ ಕಚೇರಿಗೆ ಮರಳಲು ಸಿದ್ಧರಾಗಿದ್ದ ಮಹಿಳೆಯೊಬ್ಬರನ್ನು ಕೆಲಸದಿಂದ ವಜಾಗೊಳಿಸಿದ ಕಾರ್ಪೊರೇಟ್ ಕ್ರೌರ್ಯದ ಕಥೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಆದರೆ, ಈ ಹಿನ್ನಡೆಗೆ ಧೃತಿಗೆಡದ ಆ ದಿಟ್ಟ ಮಹಿಳೆ, ಅದೇ ನಷ್ಟವನ್ನು ಪ್ರೇರಣೆಯಾಗಿ ಪಡೆದು ತನ್ನದೇ ಆದ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.&lt;/p&gt;&lt;p&gt;&lt;strong&gt;ಉದ್ಯೋಗ ಭದ್ರತೆಯ ಭ್ರಮೆ ನಿರಸನ..!&lt;/strong&gt;&lt;/p&gt;&lt;p&gt;ತಾರಿಣಿ ಎಂಬುವವರು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಈ ಸ್ಪೂರ್ತಿದಾಯಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. &quot;ನನ್ನ ಹೆರಿಗೆ ರಜೆಯ ನಂತರ ನನ್ನನ್ನು ಕೆಲಸದಿಂದ ವಜಾಗೊಳಿಸಲಾಯಿತು. ಪ್ರಾಮಾಣಿಕವಾಗಿ ಕಷ್ಟಪಟ್ಟು ಕೆಲಸ ಮಾಡಿದರೆ ಉದ್ಯೋಗ ಭದ್ರತೆ ಇರುತ್ತದೆ ಎಂದು ನಾನು ನಂಬಿದ್ದೆ. ಆದರೆ ನನ್ನ ವೃತ್ತಿಜೀವನದ ಅತ್ಯಂತ ಸೂಕ್ಷ್ಮ ಹಂತದಲ್ಲೇ ನನಗೆ ಲೇ-ಆಫ್ ಶಾಕ್ ನೀಡಲಾಯಿತು. ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಭದ್ರತೆ ಎಂಬುದೇ ಇಲ್ಲ ಎಂಬುದು ನನಗೆ ಆಗ ಅರಿವಾಯಿತು. ನನ್ನ ಇಡೀ ಕಠಿಣ ಪರಿಶ್ರಮ ಮತ್ತು ಸೃಜನಶೀಲತೆಯನ್ನು ಬೇರೆಯವರ ಬಿಸಿನೆಸ್&zwnj;ಗೆ ಸುರಿಯುವ ಬದಲು, ನನ್ನದೇ ಆದ ಸ್ವಂತ ಉದ್ಯಮವನ್ನು ಏಕೆ ಪ್ರಾರಂಭಿಸಬಾರದು ಎಂದು ಯೋಚಿಸಿದೆ. ಕಂಟೆಂಟ್ ಕ್ರಿಯೇಷನ್ ಇರಲಿ ಅಥವಾ ಫ್ರೀಲ್ಯಾನ್ಸ್ ಕೆಲಸವಿರಲಿ, ನಾನು ನನ್ನ ಹೊಸ ಪ್ರಯಾಣವನ್ನು ಆರಂಭಿಸುತ್ತಿದ್ದೇನೆ,&quot; ಎಂದು ತಾರಿಣಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಬೆರೋಜ್&zwnj;ಗಾರ್ ಮತ್ತು ಬಿಲ್ಡಿಂಗ್' ಯುಗಕ್ಕೆ ಸ್ವಾಗತ:&lt;/strong&gt;&lt;/p&gt;&lt;p&gt;ತಮ್ಮ ವೃತ್ತಿಜೀವನದ ಈ ಅನಿರೀಕ್ಷಿತ ತಿರುವಿನ ಬಗ್ಗೆ ತಾರಿಣಿ ಭಾವನಾತ್ಮಕ ಶೀರ್ಷಿಕೆಯನ್ನು ಬರೆದಿದ್ದಾರೆ. &quot;ನನ್ನ ಬೆರೋಜ್&zwnj;ಗಾರ್ (ನಿರುದ್ಯೋಗಿ) ಮತ್ತು ಕಟ್ಟಡ ನಿರ್ಮಾಣ ಯುಗಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ನಾನು ಈ ಅಧ್ಯಾಯವನ್ನು ಎಂದೂ ಯೋಜಿಸಿರಲಿಲ್ಲ. ಕೆಲಸ ಹೋದಾಗ ಎಲ್ಲವೂ ಮುಗಿದುಹೋಯಿತು ಅನಿಸಿತು. ಆದರೆ ಉದ್ಯೋಗದ ಅರ್ಜಿಗಳು, ರಿಜೆಕ್ಷನ್ ಇಮೇಲ್&zwnj;ಗಳು ಮತ್ತು ನನ್ನ ಮಗುವನ್ನು ನೋಡಿಕೊಳ್ಳುವ ನಡುವೆ ನನಗೆ ಹೊಸ ಸತ್ಯದ ಅರಿವಾಯಿತು. ಇದು ನನ್ನ ವೃತ್ತಿಜೀವನದ ಅಂತ್ಯವಲ್ಲ, ಬದಲಿಗೆ ನನ್ನದೇ ಆದ ಹೊಸ ಸಾಮ್ರಾಜ್ಯವನ್ನು ಕಟ್ಟುವ ಆರಂಭ. ಈ ಸರಣಿಯು ಮೊದಲಿನಿಂದ ಬಿಸಿನೆಸ್ ಬೆಳೆಸುವುದು, ತಾಯ್ತನವನ್ನು ನಿಭಾಯಿಸುವುದು ಮತ್ತು ಬೇರೊಬ್ಬರ ತೀರ್ಮಾನದ ಮೇಲೆ ಬದುಕದೆ ನನ್ನದೇ ಆದ ಸ್ವತಂತ್ರ ಜೀವನವನ್ನು ರೂಪಿಸಿಕೊಳ್ಳುವುದರ ಬಗ್ಗೆಯಾಗಿದೆ,&quot; ಎಂದು ಅವರು ಇತರರಿಗೂ ಧೈರ್ಯ ತುಂಬಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Taarini&rsquo;sdayoff (@taarinisdayoff)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>it-jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/woman-says-losing-her-job-after-maternity-leave-inspired-her-entrepreneurial-journey/articleshow-pklpl6p"/>
        </item>
        <item>
            <title><![CDATA[10 ನಿಮಿಷ ಬೇಗ ಹೊರಟಿದ್ದೆ ತಪ್ಪಾ? CEO ಕಳುಹಿಸಿದ ವಾಟ್ಸಾಪ್ ಮೆಸೇಜ್ ನೋಡಿ ಉದ್ಯೋಗಿ ಕಕ್ಕಾಬಿಕ್ಕಿ!]]></title>
            <link>https://kannada.asianetnews.com/viral/ceo-questions-employee-for-leaving-10-minutes-early-sparks-workplace-debate/articleshow-xwe04t1</link>
            <guid isPermaLink="true">https://kannada.asianetnews.com/viral/ceo-questions-employee-for-leaving-10-minutes-early-sparks-workplace-debate/articleshow-xwe04t1</guid>
            <pubDate>Sun, 26 Jul 2026 09:15:11 +0530</pubDate>
            <description><![CDATA[&lt;p&gt;ಕಚೇರಿ ಸಮಯ ಮುಗಿಯುವ 10 ನಿಮಿಷಗಳ ಮುಂಚೆಯೇ ಹೊರಟಿದ್ದ ಉದ್ಯೋಗಿಗೆ CEO ವಾಟ್ಸಾಪ್&zwnj;ನಲ್ಲಿ ಪ್ರಶ್ನೆ ಕೇಳಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರೆಡ್ಡಿಟ್&zwnj;ನಲ್ಲಿ ವೈರಲ್ ಆದ ಈ ಪೋಸ್ಟ್ ಕೆಲಸದ ಸ್ಥಳದಲ್ಲಿನ ಮೈಕ್ರೋ ಮ್ಯಾನೇಜ್&zwnj;ಮೆಂಟ್, ಸಮಯ ಪಾಲನೆ, ಉದ್ಯೋಗಿಗಳ ಮೇಲಿನ ನಂಬಿಕೆ ಮತ್ತು ಕಾರ್ಪೊರೇಟ್ ಸಂಸ್ಕೃತಿ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kye46qcf7f6jmc58mj686jwe,imgname-left-office-10-minutes-early--ceo-texted-instantly--viral-workplace-story-1785033088398.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;10 ನಿಮಿಷ ಮೊದಲೇ ಕಚೇರಿ ಬಿಟ್ಟಿದ್ದಕ್ಕೆ CEO ಪ್ರಶ್ನೆ&lt;/strong&gt;&lt;/p&gt;&lt;p&gt;ಭಾರತದ ಕಾರ್ಪೊರೇಟ್ ವಲಯದಲ್ಲಿ ಕೆಲಸದ ಸಂಸ್ಕೃತಿ ಕುರಿತು ಮತ್ತೊಮ್ಮೆ ಚರ್ಚೆ ಶುರುವಾಗಿದೆ. ರೆಡ್ಡಿಟ್&zwnj;ನಲ್ಲಿ ಯುವ ಮಾನವ ಸಂಪನ್ಮೂಲ (HR) ಉದ್ಯೋಗಿಯೊಬ್ಬರು ಹಂಚಿಕೊಂಡ ಅನುಭವ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಉದ್ಯೋಗಿಯ ಹೇಳಿಕೆಯ ಪ್ರಕಾರ, ನಿಗದಿತ ಸಮಯಕ್ಕಿಂತ ಸುಮಾರು 10 ನಿಮಿಷ ಮೊದಲೇ ಕಚೇರಿಯಿಂದ ಹೊರಟಿದ್ದಕ್ಕೆ, ಕಂಪನಿಯ CEO ವಾಟ್ಸಾಪ್ ಮೂಲಕ &quot;ಇಂದು ಎಷ್ಟು ಗಂಟೆಗೆ ಹೊರಟಿರಿ?&quot; ಎಂದು ಪ್ರಶ್ನಿಸಿದ್ದಾರೆ. ಈ ಸಂದೇಶದ ಸ್ಕ್ರೀನ್&zwnj;ಶಾಟ್&zwnj;ನ್ನು ಅವರು ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ನಡುವೆ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ರೆಡ್ಡಿಟ್&zwnj;ನಲ್ಲಿ ವೈರಲ್ ಆದ ಪೋಸ್ಟ್&lt;/strong&gt;&lt;/p&gt;&lt;p&gt;ಈ ಘಟನೆ r/IndianWorkplace ಸಮುದಾಯದಲ್ಲಿ ಹಂಚಿಕೊಳ್ಳಲಾಗಿತ್ತು. ಉದ್ಯೋಗಿಯು ಇದು ತಮ್ಮ ಮೊದಲ ಪೂರ್ಣಾವಧಿಯ ಕಾರ್ಪೊರೇಟ್ ಉದ್ಯೋಗವಾಗಿದ್ದು, ಇಂತಹ ಮೇಲ್ವಿಚಾರಣೆ ಸಾಮಾನ್ಯವೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.&lt;/p&gt;&lt;p&gt;ಅವರ ಪ್ರಕಾರ, ಕೆಲಸದ ಸಮಯ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಹೊರಟಿದ್ದರೂ, ಕೆಲವೇ ಕ್ಷಣಗಳಲ್ಲಿ CEO ಅವರಿಂದ ವಾಟ್ಸಾಪ್ ಸಂದೇಶ ಬಂದಿದ್ದು ಅಚ್ಚರಿ ಮೂಡಿಸಿತು.&lt;/p&gt;&lt;p&gt;&amp;nbsp;&lt;/p&gt;&lt;p&gt;My CEO texted me for leaving 10 minutes early&amp;nbsp;byu/username inr/TwentiesIndia&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಕಂಪನಿಯ ಕಾರ್ಯವೈಖರಿಯ ಬಗ್ಗೆ ಉದ್ಯೋಗಿಯ ಆರೋಪ:&lt;/strong&gt;&lt;/p&gt;&lt;p&gt;ಉದ್ಯೋಗಿಯು ಕೇವಲ ಈ ಘಟನೆಯನ್ನಷ್ಟೇ ಅಲ್ಲ, ಕಂಪನಿಯ ಕಾರ್ಯವೈಖರಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಯಂತೆ,&lt;/p&gt;&lt;ul&gt; &lt;li&gt;ಕೆಲಸದ ವೆಚ್ಚದ ಮರುಪಾವತಿಗೆ ಹಲವು ದಿನಗಳು ಕಾಯಬೇಕಾಯಿತು.&lt;/li&gt; &lt;li&gt;ಹಲವು ಬಾರಿ ನೆನಪಿಸಿದ ಬಳಿಕವೂ ಹಣ ತಡವಾಗಿ ಸಿಕ್ಕಿತು.&lt;/li&gt; &lt;li&gt;ಕೆಲ ಹಿರಿಯ ಉದ್ಯೋಗಿಗಳು ದೀರ್ಘ ವಿರಾಮ ತೆಗೆದುಕೊಂಡರೂ ಪ್ರಶ್ನಿಸಲಾಗಲಿಲ್ಲ.&lt;/li&gt; &lt;li&gt;ಆದರೆ ತಾವು ಕೆಲವೇ ನಿಮಿಷ ಮೊದಲೇ ಹೊರಟಿದ್ದಕ್ಕೆ ಪ್ರಶ್ನೆ ಎದುರಿಸಬೇಕಾಯಿತು.&lt;/li&gt;&lt;/ul&gt;&lt;p&gt;ಈ ಅನುಭವದಿಂದ ಕೆಲಸದ ಸ್ಥಳದಲ್ಲಿ ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;'ಕಾರ್ಪೊರೇಟ್ ಜೀವನ ಊಹಿಸಿದ್ದಕ್ಕಿಂತ ಭಿನ್ನ'&lt;/strong&gt;&lt;/p&gt;&lt;p&gt;ತಮ್ಮನ್ನು Gen Z ಉದ್ಯೋಗಿ ಎಂದು ಪರಿಚಯಿಸಿಕೊಂಡಿರುವ ಅವರು, ಈ ಘಟನೆ ಬಳಿಕ ಕಾರ್ಪೊರೇಟ್ ಜೀವನದ ಬಗ್ಗೆ ತಮ್ಮ ದೃಷ್ಟಿಕೋನ ಬದಲಾಗಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಕಚೇರಿ ಸಂಸ್ಕೃತಿ, ಸಮಯ ಪಾಲನೆ ಮತ್ತು ಉದ್ಯೋಗಿಗಳ ಮೇಲಿನ ನಿರೀಕ್ಷೆಗಳ ಬಗ್ಗೆ ಹೊಸ ಪ್ರಶ್ನೆಗಳು ಮೂಡಿವೆ ಎಂದು ಅವರು ಪೋಸ್ಟ್&zwnj;ನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;p&gt;&lt;strong&gt;ನೆಟ್ಟಿಗರ ಪ್ರತಿಕ್ರಿಯೆ ಏನು?&lt;/strong&gt;&lt;/p&gt;&lt;p&gt;ರೆಡ್ಡಿಟ್&zwnj;ನಲ್ಲಿ ಅನೇಕ ಬಳಕೆದಾರರು CEO ಅವರ ನಡೆ ಮೈಕ್ರೋ ಮ್ಯಾನೇಜ್&zwnj;ಮೆಂಟ್&zwnj;ನ ಉದಾಹರಣೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು,&lt;/p&gt;&lt;ul&gt; &lt;li&gt;ಉದ್ಯೋಗಿಗಳ ಸಮಯಕ್ಕಿಂತ ಅವರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಬೇಕು.&lt;/li&gt; &lt;li&gt;ನಂಬಿಕೆ ಆಧಾರಿತ ಕೆಲಸದ ವಾತಾವರಣ ಉತ್ತಮ ಫಲಿತಾಂಶ ನೀಡುತ್ತದೆ.&lt;/li&gt; &lt;li&gt;ವೃತ್ತಿ ಜೀವನದ ಆರಂಭದಲ್ಲಿ ಅನುಭವ ಗಳಿಸಿ, ನಂತರ ಉತ್ತಮ ಕೆಲಸದ ಸಂಸ್ಕೃತಿಯ ಕಂಪನಿಗಳನ್ನು ಆಯ್ಕೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.&lt;/li&gt;&lt;/ul&gt;&lt;p&gt;ಕೆಲವರು ಮಾತ್ರ ಸಂಸ್ಥೆಯ ನಿಯಮಗಳನ್ನು ಪಾಲಿಸುವುದು ಉದ್ಯೋಗಿಯ ಜವಾಬ್ದಾರಿಯೂ ಹೌದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಮುಂದುವರಿದಿದೆ.&lt;/p&gt;&lt;p&gt;&lt;strong&gt;ಮೈಕ್ರೋ ಮ್ಯಾನೇಜ್&zwnj;ಮೆಂಟ್ ಎಂದರೇನು?&lt;/strong&gt;&lt;/p&gt;&lt;p&gt;ಮೈಕ್ರೋ ಮ್ಯಾನೇಜ್&zwnj;ಮೆಂಟ್ ಎಂದರೆ, ಉದ್ಯೋಗಿಗಳ ಪ್ರತಿಯೊಂದು ಸಣ್ಣ ಕೆಲಸ ಅಥವಾ ಚಲನವಲನವನ್ನು ಅತಿಯಾಗಿ ಗಮನಿಸುವ ಮತ್ತು ನಿಯಂತ್ರಿಸುವ ನಿರ್ವಹಣಾ ಶೈಲಿ. ತಜ್ಞರ ಪ್ರಕಾರ, ಇದು ದೀರ್ಘಾವಧಿಯಲ್ಲಿ ಉದ್ಯೋಗಿಗಳ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಕೆಲಸದ ತೃಪ್ತಿಯ ಮೇಲೆ ಪರಿಣಾಮ ಬೀರಬಹುದು. ಆದರೆ ಕೆಲವು ಸಂಸ್ಥೆಗಳು ಶಿಸ್ತು ಮತ್ತು ಸಮಯ ಪಾಲನೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದನ್ನೂ ಸಮರ್ಥಿಸಿಕೊಳ್ಳುತ್ತವೆ.&lt;/p&gt;]]></content:encoded>
            <category>it-jobs</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/ceo-questions-employee-for-leaving-10-minutes-early-sparks-workplace-debate/articleshow-xwe04t1"/>
        </item>
        <item>
            <title><![CDATA[20,000 ನೇಮಕಾತಿ..ಭರ್ಜರಿ ಗುಡ್‌ ನ್ಯೂಸ್ ಕೊಟ್ಟ ಇನ್ಫೋಸಿಸ್..!]]></title>
            <link>https://kannada.asianetnews.com/jobs/reat-news-for-infosys-employees-salary-hike-announced-company-plans-to-recruit-20000-freshers-gkn/articleshow-zhn1xvo</link>
            <guid isPermaLink="true">https://kannada.asianetnews.com/jobs/reat-news-for-infosys-employees-salary-hike-announced-company-plans-to-recruit-20000-freshers-gkn/articleshow-zhn1xvo</guid>
            <pubDate>Sun, 26 Jul 2026 21:08:50 +0530</pubDate>
            <description><![CDATA[&lt;p&gt;ವೇತನ ಹೆಚ್ಚಳಕ್ಕೆ ಇನ್ಫೋಸಿಸ್ ಮುಹೂರ್ತ ಫಿಕ್ಸ್ ಮಾಡಿದೆ. ಇದರ ಜೊತೆಗೆ 20 ಸಾವಿರ ಹೊಸಬರಿಗೆ ಉದ್ಯೋಗ ನೀಡಲು ಕಂಪನಿ ಮುಂದಾಗಿದೆ. ಇನ್ಫೋಸಿಸ್&zwnj;ನ ಮುಂದಿನ ಸಿಇಒ ಕೂಡ ಈಗ ಫಿಕ್ಸ್ ಆಗಿದ್ದಾರೆ! ಪೂರ್ಣ ವಿವರಗಳಿಗಾಗಿ ಲೇಖನ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmmeb6j4qanj42tdm2f02517,imgname-infosys-1774507629124.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಇನ್ಫೋಸಿಸ್ ಕಂಪನಿಯು ತನ್ನ ಮೊದಲ ತ್ರೈಮಾಸಿಕ (Q1) ಫಲಿತಾಂಶಗಳನ್ನು ಪ್ರಕಟಿಸಿದ್ದು, ಇದರ ಬೆನ್ನಲ್ಲೇ ಉದ್ಯೋಗಿಗಳಿಗೆ ವೇತನ ಹೆಚ್ಚಳದ ಸಿಹಿಸುದ್ದಿ ನೀಡಿದೆ. ಕಂಪನಿಯ ಸಿಇಒ ಸಲಿಲ್ ಪರೇಖ್ ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೂರು ಹಂತಗಳಲ್ಲಿ ಸ್ಯಾಲರಿ ಹೈಕ್&lt;/strong&gt;&lt;/h2&gt;&lt;p&gt;ಇನ್ಫೋಸಿಸ್ ಈ ವರ್ಷದ ವೇತನ ಹೆಚ್ಚಳವನ್ನು ಒಟ್ಟು ಮೂರು ಹಂತಗಳಲ್ಲಿ ಜಾರಿಗೆ ತರಲು ನಿರ್ಧರಿಸಿದೆ. ಅಕ್ಟೋಬರ್&zwnj;ನಿಂದ ಈ ಪ್ರಕ್ರಿಯೆ ಆರಂಭವಾಗಲಿದ್ದು, ಜನವರಿವರೆಗೆ ಮುಂದುವರಿಯಲಿದೆ. ಹೆಚ್ಚಿನ ಉದ್ಯೋಗಿಗಳಿಗೆ ಅಕ್ಟೋಬರ್&zwnj;ನಲ್ಲಿ ವೇತನ ಹೆಚ್ಚಳದ ಲಾಭ ಸಿಗಲಿದೆ.&lt;/p&gt;&lt;p&gt;ಹಿರಿಯ ಅಧಿಕಾರಿಗಳು ಮತ್ತು ಸೀನಿಯರ್ ಉದ್ಯೋಗಿಗಳಿಗೆ ಜನವರಿಯಲ್ಲಿ ವೇತನ ಪರಿಷ್ಕರಣೆಯಾಗಲಿದೆ. ಆದರೆ ಎಷ್ಟು ಶೇಕಡಾವಾರು ಹೆಚ್ಚಳವಾಗಲಿದೆ ಎಂಬ ಮಾಹಿತಿಯನ್ನು ಕಂಪನಿ ಸದ್ಯಕ್ಕೆ ಗೌಪ್ಯವಾಗಿಟ್ಟಿದೆ.&lt;/p&gt;&lt;h2&gt;&lt;strong&gt;20,000 ಫ್ರೆಶರ್&zwnj;ಗಳ ನೇಮಕಾತಿ&lt;/strong&gt;&lt;/h2&gt;&lt;p&gt;ಐಟಿ ವಲಯದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇನ್ಫೋಸಿಸ್ ದೊಡ್ಡ ಅವಕಾಶ ನೀಡಿದೆ. ಈ ಹಣಕಾಸು ವರ್ಷದಲ್ಲಿ ಒಟ್ಟು 20,000 ಫ್ರೆಶರ್&zwnj;ಗಳನ್ನು (Freshers) ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ಘೋಷಿಸಿದೆ. ಈಗಾಗಲೇ ಏಪ್ರಿಲ್-ಜೂನ್ ಅವಧಿಯಲ್ಲಿ 4,000ಕ್ಕೂ ಹೆಚ್ಚು ಮಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.&lt;/p&gt;&lt;h2&gt;&lt;strong&gt;ಅಶೀಶ್ ಕುಮಾರ್ ದಾಶ್ ಮುಂದಿನ ಸಿಇಒ&lt;/strong&gt;&lt;/h2&gt;&lt;p&gt;ಕಂಪನಿಯ ನಾಯಕತ್ವದಲ್ಲೂ ಮಹತ್ವದ ಬದಲಾವಣೆಯಾಗಿದೆ. ಪ್ರಸ್ತುತ ಸಿಇಒ ಸಲಿಲ್ ಪರೇಖ್ ಅವರ ಅವಧಿ 2027ರ ಮಾರ್ಚ್&zwnj;ಗೆ ಕೊನೆಗೊಳ್ಳಲಿದ್ದು, ಅವರ ನಂತರ ಕಂಪನಿಯನ್ನು ಮುನ್ನಡೆಸಲು ಅಶೀಶ್ ಕುಮಾರ್ ದಾಶ್ (Ashiss Kumar Dash) ಅವರನ್ನು 'ಸಿಇಒ-ಡಿಸಿನೇಟ್' ಆಗಿ ಮಂಡಳಿ ನೇಮಿಸಿದೆ. ಇವರು ಏಪ್ರಿಲ್ 2027 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಂಪನಿಯ ಒಟ್ಟು ಆದಾಯದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಸೇವೆಗಳ ಪಾಲು ಹೆಚ್ಚುತ್ತಿದೆ. ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ. 5.5 ರಷ್ಟಿದ್ದ ಎಐ ಕೊಡುಗೆ, ಈ ತ್ರೈಮಾಸಿಕದಲ್ಲಿ ಶೇ. 8.2 ಕ್ಕೆ ಏರಿಕೆಯಾಗಿದೆ. ಇದಲ್ಲದೆ, 3.6 ಬಿಲಿಯನ್ ಡಾಲರ್ ಮೌಲ್ಯದ ಬೃಹತ್ ಡೀಲ್&zwnj;ಗಳನ್ನು ಕಂಪನಿ ತನ್ನದಾಗಿಸಿಕೊಂಡಿದೆ.&lt;/p&gt;]]></content:encoded>
            <category>it-jobs</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/jobs/reat-news-for-infosys-employees-salary-hike-announced-company-plans-to-recruit-20000-freshers-gkn/articleshow-zhn1xvo"/>
        </item>
    </channel>
</rss>
