<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Apr 2026 22:56:38 +0530</lastBuildDate>
        <atom:link href="https://kannada.asianetnews.com/rss/ipl" rel="self" type="application/rss+xml"/>
        <item>
            <title><![CDATA[IPL 2026: ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ - ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?]]></title>
            <link>https://kannada.asianetnews.com/cricket-sports/who-won-yesterday-chennai-super-kings-vs-kolkata-knight-riders-ipl-match-kvn/articleshow-0hsi6qy</link>
            <guid isPermaLink="true">https://kannada.asianetnews.com/cricket-sports/who-won-yesterday-chennai-super-kings-vs-kolkata-knight-riders-ipl-match-kvn/articleshow-0hsi6qy</guid>
            <pubDate>Wed, 15 Apr 2026 08:20:46 +0530</pubDate>
            <description><![CDATA[ಕೋಲ್ಕತಾ ನೈಟ್&zwnj; ರೈಡರ್ಸ್ ವಿರುದ್ಧ ಚೆನ್ನೈ ಸೂಪರ್&zwnj; ಕಿಂಗ್ಸ್&zwnj; 32 ರನ್&zwnj;ಗಳ ಜಯ ಸಾಧಿಸಿದೆ. ಆದರೆ, ನಾಯಕ ಋತುರಾಜ್ ಗಾಯಕ್ವಾಡ್ ಅವರ ಕಳಪೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ಮುಂದುವರಿದಿದ್ದು, ಅಭಿಮಾನಿಗಳ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp6n2few42n6szqt9gvfjyxk,imgname-csk-vs-kkr-match-results-1776192404956.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಈ ಬಾರಿ ಐಪಿಎಲ್&zwnj;ನಲ್ಲಿ ಕೋಲ್ಕತಾ ನೈಟ್&zwnj; ರೈಡರ್ಸ್ ಸತತ 5ನೇ ಪಂದ್ಯದಲ್ಲೂ ಗೆಲುವಿನಿಂದ ವಂಚಿತವಾಗಿದೆ. ಮಂಗಳವಾರ ಚೆನ್ನೈ ಸೂಪರ್&zwnj; ಕಿಂಗ್ಸ್&zwnj; ವಿರುದ್ಧ ಕೆಕೆಆರ್&zwnj; 32 ರನ್&zwnj;ಗಳಿಂದ ಪರಾಭವಗೊಂಡಿತು. ಹ್ಯಾಟ್ರಿಕ್&zwnj; ಸೋಲು ಕಂಡಿದ್ದ ಸಿಎಸ್&zwnj;ಕೆ ಈಗ ಸತತ 2ನೇ ಗೆಲುವು ದಾಖಲಿಸಿದೆ.&lt;/p&gt;&lt;p&gt;ಮೊದಲು ಬ್ಯಾಟ್&zwnj; ಮಾಡಿದ ಸಿಎಸ್&zwnj;ಕೆ 5 ವಿಕೆಟ್&zwnj; ನಷ್ಟದಲ್ಲಿ 192 ರನ್&zwnj; ಕಲೆಹಾಕಿತು. ಸಂಜು ಸ್ಯಾಮ್ಸನ್&zwnj; 48, ಡೆವಾಲ್ಡ್&zwnj; ಬ್ರೆವಿಸ್&zwnj; 41, ಆಯುಶ್&zwnj; ಮ್ಹಾತ್ರೆ 17 ಎಸೆತಕ್ಕೆ 38, ಸರ್ಫರಾಜ್&zwnj; ಖಾನ್&zwnj; 23 ರನ್&zwnj; ಕೊಡುಗೆ ನೀಡಿದರು. ದೊಡ್ಡ ಗುರಿ ಬೆನ್ನತ್ತಿದ ಕೋಲ್ಕತಾ ಮತ್ತೆ ಬ್ಯಾಟಿಂಗ್&zwnj; ವೈಫಲ್ಯ ಅನುಭವಿಸಿತು. ತಂಡ 20 ಓವರ್&zwnj;ಗಳಲ್ಲಿ 7 ವಿಕೆಟ್&zwnj;ಗೆ 160 ರನ್&zwnj; ಗಳಿಸಿ ಸೋಲೊಪ್ಪಿಕೊಂಡಿತು. ಪವರ್&zwnj;ಪ್ಲೇನಲ್ಲಿ ಕೇವಲ 36 ರನ್&zwnj; ಗಳಿಸಿದ್ದ ತಂಡ, 100 ರನ್&zwnj;ಗೂ ಮುನ್ನವೇ 6 ವಿಕೆಟ್&zwnj; ಕಳೆದುಕೊಂಡಿತ್ತು. ಕೊನೆಯಲ್ಲಿ ರಮನ್&zwnj;ದೀಪ್&zwnj;(35), ಪೊವೆಲ್&zwnj;(31) ಹೋರಾಡಿದರೂ ತಂಡಕ್ಕೆ ಗೆಲ್ಲಲಾಗಲಿಲ್ಲ.&lt;/p&gt;&lt;p&gt;ಸ್ಕೋರ್: ಸಿಎಸ್&zwnj;ಕೆ 192/5 (ಸಂಜು 48, ಬ್ರೆವಿಸ್&zwnj; 41, ಆಯುಶ್&zwnj; 38, ಕಾರ್ತಿಕ್&zwnj; 2-35), ಕೋಲ್ಕತಾ 160/7 (ರಮನ್&zwnj;ದೀಪ್&zwnj; 35, ಪೊವೆಲ್&zwnj; 31, ನೂರ್&zwnj; ಅಹ್ಮದ್&zwnj; 3-21)&lt;/p&gt;&lt;h2&gt;&lt;strong&gt;ಸತತ 5 ಪಂದ್ಯದಲ್ಲೂ ಋತುರಾಜ್&zwnj; ಫೇಲ್&zwnj;&lt;/strong&gt;&lt;/h2&gt;&lt;p&gt;ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್&zwnj; ನಾಯಕ ಋತುರಾಜ್&zwnj; ಗಾಯಕ್ವಾಡ್&zwnj; ಮತ್ತೆ ವಿಫಲರಾಗಿದ್ದಾರೆ. ಈ ಬಾರಿ ಐಪಿಎಲ್&zwnj;ನಲ್ಲಿ 5 ಪಂದ್ಯಗಳನ್ನಾಡಿರುವ ಅವರು, ಒಂದರಲ್ಲೂ ದೊಡ್ಡ ಇನ್ನಿಂಗ್ಸ್&zwnj; ಕಟ್ಟಿಲ್ಲ. ಕೇವಲ 63 ರನ್&zwnj; ಕಲೆಹಾಕಿದ್ದಾರೆ.&lt;/p&gt;&lt;p&gt;ಹ್ಯಾಟ್ರಿಕ್&zwnj; ಸೋಲಿನಿಂದ ಕಂಗೆಟ್ಟಿದ್ದ ಸಿಎಸ್&zwnj;ಕೆ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದಿತ್ತು. ಇತರ ಬ್ಯಾಟರ್&zwnj;ಗಳು ಲಯಕ್ಕೆ ಮರಳಿದ್ದರೂ ಋತುರಾಜ್&zwnj; ಮಾತ್ರ ರನ್&zwnj; ಗಳಿಸಲು ಪರದಾಟುತ್ತಿದ್ದಾರೆ. ರಾಜಸ್ಥಾನ ವಿರುದ್ಧ ಕೇವಲ 6 ರನ್&zwnj; ಗಳಿಸಿದ್ದ ಅವರು, ಪಂಜಾಬ್&zwnj; ವಿರುದ್ಧ 28 ರನ್&zwnj; ಸಿಡಿಸಿತ್ತು. ಬಳಿಕ ಆರ್&zwnj;ಸಿಬಿ ವಿರುದ್ಧ 7, ಡೆಲ್ಲಿ ವಿರುದ್ಧ 15 ರನ್&zwnj; ಬಾರಿಸಿದ್ದರು. ಮಂಗಳವಾರ ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ಅವರಿಂದ ದೊಡ್ಡ ಮೊತ್ತ ನಿರೀಕ್ಷೆ ಇತ್ತಾದರೂ ಕೇವಲ 7 ರನ್&zwnj;ಗೆ ವಿಕೆಟ್&zwnj; ಒಪ್ಪಿಸಿದರು. ಟೂರ್ನಿಯಲ್ಲಿ ಅವರ ಸರಾಸರಿ ಕೇವಲ 12.6 ಇದ್ದು, ನಾಯಕನಾಗಿ ಮುಂಚೂಣಿಯಲ್ಲಿದ್ದು ತಂಡವನ್ನು ಮೇಲೆತ್ತುವ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.&lt;/p&gt;&lt;h3&gt;&lt;strong&gt;ಕ್ಯಾಚ್&zwnj; ಡ್ರಾಪ್:&lt;/strong&gt;&lt;/h3&gt;&lt;p&gt;ಋತುರಾಜ್&zwnj; ಕಳಪೆ ಪ್ರದರ್ಶನ ಬ್ಯಾಟಿಂಗ್&zwnj; ಮಾತ್ರವಲ್ಲದೆ ಫೀಲ್ಡಿಂಗ್&zwnj;ನಲ್ಲೂ ಮುಂದುವರಿದಿದೆ. ಕೋಲ್ಕತಾ ಬ್ಯಾಟರ್&zwnj; ಸುನಿಲ್&zwnj; ನರೈನ್&zwnj; ನೀಡಿದ್ದ ಸುಲಭ ಕ್ಯಾಚ್&zwnj; ಪಡೆಯಲು ಋತುರಾಜ್&zwnj; ವಿಫಲರಾದರು.&lt;/p&gt;&lt;h3&gt;&lt;strong&gt;ಫ್ಯಾನ್ಸ್&zwnj; ಕಿಡಿ&lt;/strong&gt;&lt;/h3&gt;&lt;p&gt;ಸಿಎಸ್&zwnj;ಕೆ ನಾಯಕನ ಕಳಪೆ ಆಟಕ್ಕೆ ತಂಡದ ಅಭಿಮಾನಿಗಳೇ ಭಾರೀ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಕಿಡಿಕಾರುತ್ತಿರುವ ಅಭಿಮಾನಿಗಳು, ನಾಯಕತ್ವ ತ್ಯಜಿಸುವಂತೆಯೂ ಒತ್ತಾಯಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;5 ಪಂದ್ಯ, ಚೆನ್ನೈ 8 ಕ್ಯಾಚ್&zwnj; ಡ್ರಾಪ್&zwnj;&lt;/strong&gt;&lt;/h3&gt;&lt;p&gt;ಈ ಬಾರಿ ಆಡಿರುವ 5 ಪಂದ್ಯಗಳಲ್ಲಿ ಸಿಎಸ್&zwnj;ಕೆ 8 ಕ್ಯಾಚ್&zwnj; ಕೈಚೆಲ್ಲಿದೆ. ಇದು ಜಂಟಿ ಗರಿಷ್ಠ. ತಂಡದ ಕ್ಯಾಚ್&zwnj; ಸಾಧನೆ ಕೇವಲ 68 ಶೇಕಡಾ ಇದೆ. ಸನ್&zwnj;ರೈಸರ್ಸ್&zwnj; ಹೈದರಾಬಾದ್&zwnj; ಕೂಡಾ ಈ ಬಾರಿ ಟೂರ್ನಿಯಲ್ಲಿ 8 ಕ್ಯಾಚ್&zwnj; ಕೈಚೆಲ್ಲಿವೆ.&lt;/p&gt;]]></content:encoded>
            <category>ipl</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/who-won-yesterday-chennai-super-kings-vs-kolkata-knight-riders-ipl-match-kvn/articleshow-0hsi6qy"/>
        </item>
        <item>
            <title><![CDATA[IPL 2026: ನಿನ್ನೆ ನಡೆದ ಮುಂಬೈ ಇಂಡಿಯನ್ಸ್-ಪಂಜಾಬ್ ಕಿಂಗ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?]]></title>
            <link>https://kannada.asianetnews.com/cricket-sports/who-won-yesterday-mumbai-indians-vs-punjab-kings-ipl-match-kvn/articleshow-0xru8xf</link>
            <guid isPermaLink="true">https://kannada.asianetnews.com/cricket-sports/who-won-yesterday-mumbai-indians-vs-punjab-kings-ipl-match-kvn/articleshow-0xru8xf</guid>
            <pubDate>Fri, 17 Apr 2026 08:24:08 +0530</pubDate>
            <description><![CDATA[ಐಪಿಎಲ್&zwnj;ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್&zwnj;ಗಳ ಸೋಲು ಅನುಭವಿಸಿತು. ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕದ ಹೊರತಾಗಿಯೂ, ಪ್ರಭ್&zwnj;ಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಅದ್ಭುತ ಜೊತೆಯಾಟದಿಂದ ಪಂಜಾಬ್ ಸುಲಭವಾಗಿ ಗುರಿ ತಲುಪಿತು. ಈ ಸೋಲಿನೊಂದಿಗೆ ಮುಂಬೈ ಸತತ 4ನೇ ಸೋಲನ್ನು ಕಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbsc4xq8tvd2z9x4d0dkhy4,imgname-mi-vs-pbks-match-results-1776364688310.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: 5 ಬಾರಿ ಚಾಂಪಿಯನ್&zwnj; ಮುಂಬೈ ಇಂಡಿಯನ್ಸ್&zwnj; ಈ ಬಾರಿ ಐಪಿಎಲ್&zwnj;ನಲ್ಲಿ ಸತತ 4ನೇ ಸೋಲನುಭವಿಸಿದೆ. ಗುರುವಾರ ಪಂಜಾಬ್&zwnj; ಕಿಂಗ್ಸ್&zwnj; ವಿರುದ್ಧ ಮುಂಬೈಗೆ 7 ವಿಕೆಟ್&zwnj; ಸೋಲು ಎದುರಾಯಿತು. 5 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿದ ಪಂಜಾಬ್&zwnj; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.&lt;/p&gt;&lt;h2&gt;&lt;strong&gt;ಭರ್ಜರಿ ಶತಕ ಸಿಡಿಸಿದ ಕ್ವಿಂಟನ್ ಡಿ ಕಾಕ್&lt;/strong&gt;&lt;/h2&gt;&lt;p&gt;ಮೊದಲು ಬ್ಯಾಟ್&zwnj; ಮಾಡಿದ ಮುಂಬೈ ತಂಡ, ಕ್ವಿಂಟನ್&zwnj; ಡಿ ಕಾಕ್&zwnj; ಭರ್ಜರಿ ಶತಕದ ನೆರವಿನಿಂದ 20 ಓವರ್&zwnj;ಗಳಲ್ಲಿ 6 ವಿಕೆಟ್&zwnj;ಗೆ 195 ರನ್&zwnj; ಗಳಿಸಿತು. ಡಿ ಕಾಕ್&zwnj;, ನಮನ್&zwnj;ಧೀರ್&zwnj; ಹೊರತುಪಡಿಸಿ ಇತರ ಬ್ಯಾಟರ್&zwnj;ಗಳ ಕಳಪೆ ಪ್ರದರ್ಶನ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಹೀಗಾಗಿ ತಂಡ 200ರ ಗಡಿ ದಾಟಲಿಲ್ಲ. ಡಿ ಕಾಕ್&zwnj; 60 ಎಸೆತಕ್ಕೆ 112 ರನ್&zwnj; ಸಿಡಿಸಿದರೆ, ನಮನ್&zwnj;ಧೀರ್&zwnj; 31 ಎಸೆತಗಳಲ್ಲಿ 50 ರನ್&zwnj; ಬಾರಿಸಿದರು. ಅರ್ಶ್&zwnj;ದೀಪ್&zwnj; ಸಿಂಗ್&zwnj; 3 ವಿಕೆಟ್&zwnj; ಕಿತ್ತರು.&lt;/p&gt;&lt;h3&gt;&lt;strong&gt;ಅನಾಯಾಸವಾಗಿ ಗೆಲುವು ದಾಖಲಿಸಿದ ಪಂಜಾಬ್&lt;/strong&gt;&lt;/h3&gt;&lt;p&gt;ಮುಂಬೈ ನೀಡಿದ 196ರ ಗುರಿ ಪಂಜಾಬ್&zwnj;ಗೆ ಕಷ್ಟವಾಗಲಿಲ್ಲ. ಪ್ರಭ್&zwnj;ಸಿಮ್ರನ್&zwnj; ಸಿಂಗ್&zwnj; ಹಾಗೂ ನಾಯಕ ಶ್ರೇಯಸ್&zwnj; ಅಯ್ಯರ್&zwnj; ಮತ್ತೆ ತಂಡಕ್ಕೆ ಆಸರೆಯಾದರು. ಈ ಜೋಡಿ 3ನೇ ವಿಕೆಟ್&zwnj;ಗೆ 66 ಎಸೆತಗಳಲ್ಲಿ 139 ರನ್&zwnj; ಜೊತೆಯಾಟವಾಡಿತು. ಶ್ರೇಯಸ್&zwnj; 35 ಎಸೆತಕ್ಕೆ 66 ರನ್&zwnj; ಸಿಡಿಸಿ ಔಟಾದರೂ ಪ್ರಭ್&zwnj;ಸಿಮ್ರನ್&zwnj; 39 ಎಸೆತಗಳಲ್ಲಿ ಔಟಾಗದೆ 80 ರನ್&zwnj; ಗಳಿಸಿ, ತಂಡವನ್ನು 16.3 ಓವರ್&zwnj;ಗಳಲ್ಲಿ ಗೆಲುವಿನ ದಡ ಸೇರಿಸಿದರು.&lt;/p&gt;&lt;p&gt;ಸ್ಕೋರ್&zwnj;: ಮುಂಬೈ 20 ಓವರ್&zwnj;ಗಳಲ್ಲಿ 195/6 (ಡಿ ಕಾಕ್&zwnj; ಔಟಾಗದೆ 112, ನಮನ್&zwnj;ಧೀರ್&zwnj; 50, ಅರ್ಶ್&zwnj;ದೀಪ್&zwnj; 3-22), ಪಂಜಾಬ್&zwnj; 16.3 ಓವರ್&zwnj;ಗಳಲ್ಲಿ 198/3 (ಪ್ರಭ್&zwnj;ಸಿಮ್ರನ್ ಔಟಾಗದೆ 80, ಶ್ರೇಯಸ್&zwnj; 66, ಘಜಾನ್ಫರ್&zwnj; 2-31)&lt;/p&gt;&lt;p&gt;&lt;strong&gt;18 ಗೆಲುವು: &lt;/strong&gt;ಐಪಿಎಲ್&zwnj;ನಲ್ಲಿ ಮುಂಬೈ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಪಂಜಾಬ್&zwnj; ಜಂಟಿ ಅಗ್ರಸ್ಥಾನಕ್ಕೇರಿಕೆ. ಸಿಎಸ್&zwnj;ಕೆ, ಪಂಜಾಬ್ ತಲಾ 18ರಲ್ಲಿ ಗೆದ್ದಿವೆ.&lt;/p&gt;&lt;p&gt;&lt;strong&gt;ಮುಂಬೈ ಆಟಗಾರರಿಗೆ ಇನ್ನು ವಾರ್ಷಿಕ ವೇತನ&lt;/strong&gt;&lt;/p&gt;&lt;p&gt;ಮುಂಬೈ: ಮುಂಬೈ ಕ್ರಿಕೆಟ್&zwnj; ಅಸೋಸಿಯೇಷನ್&zwnj;(ಎಂಸಿಎ) ತನ್ನ ಆಟಗಾರರಿಗೆ ವಾರ್ಷಿಕ ಸಂಭಾವನೆ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದು, ಈ ಕ್ರಮ ಕೈಗೊಂಡ ಮೊದಲ ರಾಜ್ಯ ಕ್ರಿಕೆಟ್&zwnj; ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ಎಂಸಿಎ ತನ್ನ &lsquo;ಎ&rsquo; ದರ್ಜೆ ಆಟಗಾರರಿಗೆ ವಾರ್ಷಿಕ ₹12 ಲಕ್ಷದಿಂದ ₹20 ಲಕ್ಷ, &lsquo;ಬಿ&rsquo; ದರ್ಜೆ ಆಟಗಾರರಿಗೆ ₹8 ಲಕ್ಷದಿಂದ ₹12 ಲಕ್ಷ ಹಾಗೂ &lsquo;ಸಿ&rsquo; ದರ್ಜೆ ಆಟಗಾರರಿಗೆ ₹8 ಲಕ್ಷದವರೆಗೆ ವೇತನ ನೀಡುವುದಾಗಿ ಘೋಷಿಸಿದೆ. ಕಳೆದ 2 ಋತುಗಳಲ್ಲಿ ಟೀಂ ಇಂಡಿಯಾ ಪರ ಆಡದ, ಐಪಿಎಲ್&zwnj;ನಲ್ಲಿ ಯಾವುದೇ ತಂಡಕ್ಕೆ ಆಯ್ಕೆಯಾಗದ ಮುಂಬೈ ಆಟಗಾರರು ಈ ಸೌಲಭ್ಯಕ್ಕೆ ಅರ್ಹತೆ ಪಡೆಯಲಿದ್ದಾರೆ. ಆಟಗಾರರು ಎಂಸಿಎಯಲ್ಲಿ ನೋಂದಣಿ ಮಾಡಿಕೊಂಡಿರಬೇಕು, ಕನಿಷ್ಠ ಫಿಟ್&zwnj;ನೆಸ್ ಮಾನದಂಡವನ್ನು ಪೂರೈಸಿರಬೇಕು ಎಂದು ಎಂಸಿಎ ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>ipl</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/who-won-yesterday-mumbai-indians-vs-punjab-kings-ipl-match-kvn/articleshow-0xru8xf"/>
        </item>
        <item>
            <title><![CDATA[ವಿರಾಟ್ ಕೊಹ್ಲಿಯಲ್ಲ, ಬೆಂಗಳೂರಿಗೆ ಬಂದ ಹೊಸ ಕಿಂಗ್! ಮ್ಯಾಚ್‌ಗೂ ಮೊದಲೇ ಲಖನೌಗೆ ಶುರುವಾಯ್ತು ನಡುಕ!]]></title>
            <link>https://kannada.asianetnews.com/gallery/cricket-sports/rajat-patidar-eyes-orange-cap-in-rcb-vs-lsg-clash-at-m-chinnaswamy-kvn-19gt8yr</link>
            <guid isPermaLink="true">https://kannada.asianetnews.com/gallery/cricket-sports/rajat-patidar-eyes-orange-cap-in-rcb-vs-lsg-clash-at-m-chinnaswamy-kvn-19gt8yr</guid>
            <pubDate>Wed, 15 Apr 2026 16:37:42 +0530</pubDate>
            <description><![CDATA[&lt;p&gt;ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್&zwnj; ತಂಡಗಳು ಮುಖಾಮುಖಿಯಾಗಲಿವೆ. ಎಲ್ಲರ ಕಣ್ಣು ಕೊಹ್ಲಿ ಮೇಲೆ ಮಾತ್ರವಲ್ಲ, ಇನ್ನು ಕೆಲವೇ ರನ್ ಗಳಿಸಿದರೆ ನಂಬರ್ 1 ಪಟ್ಟಕ್ಕೇರುವ ಆಟಗಾರನ ಮೇಲೂ ಇದೆ. ಆ ಆಟಗಾರ ಯಾರು? ಯಾಕೆ ನಂಬರ್ 1 ಆಗ್ತಾರೆ? ಇಲ್ಲಿದೆ ವಿವರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hwaz55pkz78srmjw8nhwxc99,imgname-virat-kohli-rajat-patidar.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್&zwnj; ತಂಡಗಳು ಮುಖಾಮುಖಿಯಾಗಲಿವೆ. ಎಲ್ಲರ ಕಣ್ಣು ಕೊಹ್ಲಿ ಮೇಲೆ ಮಾತ್ರವಲ್ಲ, ಇನ್ನು ಕೆಲವೇ ರನ್ ಗಳಿಸಿದರೆ ನಂಬರ್ 1 ಪಟ್ಟಕ್ಕೇರುವ ಆಟಗಾರನ ಮೇಲೂ ಇದೆ. ಆ ಆಟಗಾರ ಯಾರು? ಯಾಕೆ ನಂಬರ್ 1 ಆಗ್ತಾರೆ? ಇಲ್ಲಿದೆ ವಿವರ.&lt;/p&gt;&lt;img&gt;&lt;p&gt;ಇಂದಿನ ಐಪಿಎಲ್ ಪಂದ್ಯದಲ್ಲಿ ಎಲ್ಲರ ಗಮನ ವಿರಾಟ್ &amp;nbsp;ಕೊಹ್ಲಿ ಮೇಲೆ ಮಾತ್ರವಲ್ಲ, ಇನ್ನೊಬ್ಬ ಆಟಗಾರನ ಮೇಲೂ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್ ಸೆಣಸಾಡಲಿವೆ. ಈ ಸೀಸನ್&zwnj;ನಲ್ಲಿ ಆರ್&zwnj;ಸಿಬಿ ನಾಯಕ ರಜತ್ ಪಾಟಿದಾರ್ ಅದ್ಭುತ ಫಾರ್ಮ್&zwnj;ನಲ್ಲಿದ್ದಾರೆ. ಟೂರ್ನಿಯಲ್ಲಿ ಈವರೆಗೆ 195 ರನ್ ಗಳಿಸಿ, ಅತಿ ಹೆಚ್ಚು ಸ್ಕೋರರ್&zwnj;ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಂದು ಇನ್ನೊಂದು 30 ರನ್ ಗಳಿಸಿದರೆ, ಅವರು ಆರೆಂಜ್ ಕ್ಯಾಪ್ ಪಡೆಯುತ್ತಾರೆ. ಈ ಮೂಲಕ ಐಪಿಎಲ್ 2026ರ ಹೊಸ 'ಕಿಂಗ್' ಆಗಲಿದ್ದಾರೆ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿ ಫಿಟ್&zwnj;ನೆಸ್ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಟೆನ್ಶನ್ ಶುರುವಾಗಿದೆ. ಕಳೆದ ಪಂದ್ಯದಲ್ಲಿ ಪಾದದ ಗಾಯದಿಂದಾಗಿ ಅವರು ಫೀಲ್ಡಿಂಗ್&zwnj;ಗೆ ಬಂದಿರಲಿಲ್ಲ. ಅಭ್ಯಾಸದ ವೇಳೆ &amp;nbsp;ಕೊಹ್ಲಿ ಎಡ ಮೊಣಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಕಾಣಿಸಿಕೊಂಡಿದ್ದರು. ಅವರು ರಿಷಭ್ ಪಂತ್ ಮತ್ತು ಕೇನ್ ವಿಲಿಯಮ್ಸನ್&zwnj; ಜೊತೆ ತಮಾಷೆಯಾಗಿ ಮಾತನಾಡುತ್ತಿದ್ದರೂ, ಅವರು ಆಡುತ್ತಾರೋ ಇಲ್ಲವೋ ಎಂಬುದು ಸಂಜೆ 7 ಗಂಟೆಗೆ ಟಾಸ್ ಸಮಯದಲ್ಲಿ ಸ್ಪಷ್ಟವಾಗಲಿದೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ಮತ್ತು ಲಖನೌ ನಡುವೆ ಈವರೆಗೆ 6 ಪಂದ್ಯಗಳು ನಡೆದಿವೆ. ಇದರಲ್ಲಿ 4 ಪಂದ್ಯಗಳನ್ನು ಬೆಂಗಳೂರು ಗೆದ್ದಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಲಖನೌ ಗೆದ್ದಿರುವ ಎರಡೂ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆದಿವೆ. ಅಂದರೆ, ಆರ್&zwnj;ಸಿಬಿ ತನ್ನ ತವರಿನಲ್ಲಿ ಲಖನೌವನ್ನು ಒಮ್ಮೆಯೂ ಸೋಲಿಸಿಲ್ಲ. ಈ ಕೆಟ್ಟ ದಾಖಲೆಯನ್ನು ಹಾಲಿ ಚಾಂಪಿಯನ್ (RCB) ಇಂದು ಮುರಿಯುತ್ತದೆಯೇ ಎಂದು ಕಾದು ನೋಡಬೇಕು.&lt;/p&gt;&lt;img&gt;&lt;p&gt;ಬೆಂಗಳೂರು ತಂಡ ಈ ಐಪಿಎಲ್&zwnj;ನಲ್ಲಿ ಈವರೆಗೆ ಆಡಿದ 4 ಪಂದ್ಯಗಳಲ್ಲಿ 3 ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದು ಪಾಟಿದಾರ್ ಪಡೆ ಗೆದ್ದರೆ, ಅವರಿಗೆ 8 ಅಂಕಗಳು ಸಿಗುತ್ತವೆ. ಉತ್ತಮ ರನ್ ರೇಟ್&zwnj;ನಿಂದಾಗಿ ರಾಜಸ್ಥಾನ ರಾಯಲ್ಸ್ ತಂಡವನ್ನು ಹಿಂದಿಕ್ಕಿ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್-1 ಸ್ಥಾನಕ್ಕೇರಲಿದೆ. ಪಾಟಿದಾರ್, &amp;nbsp;ಕೊಹ್ಲಿ, ಫಿಲ್ ಸಾಲ್ಟ್ ಫಾರ್ಮ್&zwnj;ನಲ್ಲಿರುವುದು ಆರ್&zwnj;ಸಿಬಿಗೆ ಪ್ಲಸ್ ಪಾಯಿಂಟ್. ಜಾಕೋಬ್ ಡಫಿ ಬೌಲಿಂಗ್ ಕೂಡ ಎದುರಾಳಿಗಳಿಗೆ ಕಂಟಕವಾಗಿದೆ. ಆದರೆ, ಕೊಹ್ಲಿ ಗಾಯ ಮತ್ತು ತವರಿನಲ್ಲಿ ಲಖನೌ ವಿರುದ್ಧದ ಕಳಪೆ ದಾಖಲೆ ತಂಡಕ್ಕೆ ಚಿಂತೆ ತಂದಿದೆ.&lt;/p&gt;&lt;img&gt;ಚಿನ್ನಸ್ವಾಮಿ ಪಿಚ್ ಬ್ಯಾಟರ್&zwnj;ಗಳ ಪಾಲಿಗೆ ಸ್ವರ್ಗ. ಈ ಸೀಸನ್&zwnj;ನಲ್ಲಿ ಇಲ್ಲಿ ನಡೆದ ಪ್ರತಿ ಇನ್ನಿಂಗ್ಸ್&zwnj;ನಲ್ಲೂ 200ಕ್ಕೂ ಹೆಚ್ಚು ರನ್ ದಾಖಲಾಗಿದೆ. ಇಂದೂ ಕೂಡ ಫೋರ್, ಸಿಕ್ಸರ್&zwnj;ಗಳ ಮಳೆ ಸುರಿಯುವ ಸಾಧ್ಯತೆ ಇದೆ. ಪಂದ್ಯಕ್ಕೆ ಮಳೆಯ ಕಾಟ ಇಲ್ಲ. ಸಂಜೆ ಇಬ್ಬನಿ ಬೀಳುವ ಸಾಧ್ಯತೆ ಇರುವುದರಿಂದ, ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದು.&lt;img&gt;&lt;p&gt;RCB ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಸಿಖ್ ಸಲಾಂ, ಜಾಕೋಬ್ ಡಫಿ, ಸುಯಾಶ್ ಶರ್ಮಾ.&amp;nbsp;&lt;/p&gt;&lt;p&gt;LSG ತಂಡ: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ), ಆಯುಷ್ ಬದೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ದಿಗ್ವೇಶ್ ರಾಠಿ, ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್, ಅವೇಶ್ ಖಾನ್, ಜಾರ್ಜ್ ಲಿಂಡೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/rajat-patidar-eyes-orange-cap-in-rcb-vs-lsg-clash-at-m-chinnaswamy-kvn-19gt8yr"/>
        </item>
        <item>
            <title><![CDATA[ಮುಂಬೈ ಎದುರು ಶತಕ ಸಿಡಿಸಿ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಸರಿಗಟ್ಟಿದ ಕ್ವಿಂಟನ್ ಡಿ ಕಾಕ್!]]></title>
            <link>https://kannada.asianetnews.com/cricket-sports/ipl-2026-quinton-de-kock-stunning-century-scripts-multiple-ipl-records-kvn/articleshow-4b5wyml</link>
            <guid isPermaLink="true">https://kannada.asianetnews.com/cricket-sports/ipl-2026-quinton-de-kock-stunning-century-scripts-multiple-ipl-records-kvn/articleshow-4b5wyml</guid>
            <pubDate>Fri, 17 Apr 2026 09:12:24 +0530</pubDate>
            <description><![CDATA[ಪಂಜಾಬ್&zwnj; ಕಿಂಗ್ಸ್&zwnj; ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್&zwnj;ನ ಕ್ವಿಂಟನ್&zwnj; ಡಿ ಕಾಕ್&zwnj; ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ಮೂಲಕ ಅವರು ಐಪಿಎಲ್&zwnj;ನಲ್ಲಿ 3 ತಂಡಗಳ ಪರ ಶತಕ ಬಾರಿಸಿದ 3ನೇ ಆಟಗಾರ ಎನಿಸಿಕೊಂಡಿದ್ದು, ಟಿ20 ಕ್ರಿಕೆಟ್&zwnj;ನಲ್ಲಿ ವಿರಾಟ್&zwnj; ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbkr9g50b21fq48cqk3ncmj,imgname-quinton-de-kock--5--1776358794757.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಪಂಜಾಬ್&zwnj; ಕಿಂಗ್ಸ್&zwnj; ಪಂದ್ಯದಲ್ಲಿ ಗುರುವಾರ ಮುಂಬೈ ಇಂಡಿಯನ್ಸ್&zwnj;ನ ಆರಂಭಿಕ ಆಟಗಾರ ಕ್ವಿಂಟನ್&zwnj; ಡಿ ಕಾಕ್&zwnj; ಭರ್ಜರಿ ಶತಕ ಬಾರಿಸಿದ್ದು, ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದು ಡಿ ಕಾಕ್&zwnj; ಈ ಐಪಿಎಲ್&zwnj;ನಲ್ಲಿ ಆಡಿದ ಮೊದಲ ಪಂದ್ಯವಾಗಿದ್ದು, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.&lt;/p&gt;&lt;p&gt;12 ರನ್&zwnj;ಗೆ 2 ವಿಕೆಟ್&zwnj; ಕಳೆದುಕೊಂಡ ಮುಂಬೈಗೆ ನೆರವಾಗಿದ್ದು ಡಿ ಕಾಕ್&zwnj;. ಅವರು 17ನೇ ಓವರ್&zwnj;ನಲ್ಲಿ ಬಾರ್ಟ್&zwnj;ಲೆಟ್&zwnj; ಎಸೆತದಲ್ಲಿ ಬೌಂಡರಿ ಬಾರಿಸಿ, 53 ಎಸೆತಗಳಲ್ಲಿ ಶತಕ ಪೂರೈಸಿದರು. ಪಂದ್ಯದಲ್ಲಿ ಅವರು 60 ಎಸೆತಗಳನ್ನು ಎದುರಿಸಿ 8 ಬೌಂಡರಿ, 7 ಸಿಕ್ಸರ್&zwnj;ನೊಂದಿಗೆ ಔಟಾಗದೆ 112 ರನ್&zwnj; ಗಳಿಸಿದರು.&lt;/p&gt;&lt;p&gt;ಈ ಮೂಲಕ ಐಪಿಎಲ್&zwnj;ನಲ್ಲಿ 3 ತಂಡಗಳ ಪರ ಶತಕ ಸಿಡಿಸಿದ 3ನೇ ಆಟಗಾರ ಎನಿಸಿಕೊಂಡರು. ಡಿ ಕಾಕ್&zwnj; ಈ ಮೊದಲು ಡೆಲ್ಲಿ, ಲಖನೌ ಪರವೂ ಶತಕ ಸಿಡಿಸಿದ್ದಾರೆ. ಉಳಿದಂತೆ ಕೆ.ಎಲ್&zwnj;.ರಾಹುಲ್&zwnj; ಪಂಜಾಬ್&zwnj;, ಲಖನೌ, ಡೆಲ್ಲಿ, ಸಂಜು ಸ್ಯಾಮ್ಸನ್&zwnj; ಡೆಲ್ಲಿ, ರಾಜಸ್ಥಾನ, ಚೆನ್ನೈ ತಂಡಗಳ ಪರ ಸೆಂಚುರಿ ಬಾರಿಸಿದ್ದಾರೆ. ಇನ್ನು, ಐಪಿಎಲ್&zwnj;ನಲ್ಲಿ 3 ಸೆಂಚುರಿ ಸಿಡಿಸಿದ ಮೊದಲ ವಿಕೆಟ್&zwnj; ಕೀಪರ್&zwnj; ಬ್ಯಾಟರ್&zwnj; ಎಂಬ ಹೆಗ್ಗಳಿಕೆಗೂ ಡಿ ಕಾಕ್&zwnj; ಪಾತ್ರರಾಗಿದ್ದಾರೆ.&lt;/p&gt;&lt;h2&gt;&lt;strong&gt;02ನೇ ಗರಿಷ್ಠ&lt;/strong&gt;&lt;/h2&gt;&lt;p&gt;ಡಿ ಕಾಕ್&zwnj;ರ 112 ರನ್&zwnj; ಐಪಿಎಲ್&zwnj;ನಲ್ಲಿ ಮುಂಬೈ ಪರ 2ನೇ ಗರಿಷ್ಠ. 2008ರಲ್ಲಿ ಸಿಎಸ್&zwnj;ಕೆ ವಿರುದ್ಧ ಜಯಸೂರ್ಯ ಔಟಾಗದೆ 114 ರನ್&zwnj; ಗಳಿಸಿದ್ದು ಈಗಲೂ ದಾಖಲೆ.&lt;/p&gt;&lt;h3&gt;&lt;strong&gt;ಕೊಹ್ಲಿಯ ದಾಖಲೆ &amp;nbsp;ಸರಿಗಟ್ಟಿದ ಡಿಕಾಕ್&lt;/strong&gt;&lt;/h3&gt;&lt;p&gt;ಡಿ ಕಾಕ್&zwnj; ಟಿ20 ಕ್ರಿಕೆಟ್&zwnj;ನಲ್ಲಿ 9 ಶತಕ ಬಾರಿಸಿದ್ದು, ವಿರಾಟ್&zwnj; ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿ ಕೂಡಾ 9 ಶತಕ ಬಾರಿಸಿದ್ದಾರೆ. ಗರಿಷ್ಠ ಟಿ20 ಶತಕದ ಪಟ್ಟಿಯಲ್ಲಿ ಇವರಿಬ್ಬರು ಜಂಟಿ 4ನೇ ಸ್ಥಾನದಲ್ಲಿದ್ದಾರೆ. ಕ್ರಿಸ್&zwnj; ಗೇಲ್&zwnj; 22 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಬಾಬರ್&zwnj; ಆಜಂ 11, ಡೇವಿಡ್&zwnj; ವಾರ್ನರ್ 10 ಶತಕ ಸಿಡಿಸಿದ್ದಾರೆ.&lt;/p&gt;&lt;p&gt;&lt;strong&gt;ಅರ್ಶ್&zwnj;ಗೆ 100 ವಿಕೆಟ್&zwnj;&lt;/strong&gt;&lt;/p&gt;&lt;p&gt;ಎಡಗೈ ವೇಗದ ಬೌಲರ್ ಅರ್ಶ್&zwnj;ದೀಪ್&zwnj; ಸಿಂಗ್ ಐಪಿಎಲ್&zwnj;ನಲ್ಲಿ 100 ವಿಕೆಟ್&zwnj; ಪೂರೈಸಿದ್ದಾರೆ. ಮುಂಬೈನ ರಿಕೆಲ್ಟನ್&zwnj; ವಿಕೆಟ್ ಪಡೆಯುವ ಮೂಲಕ ಅರ್ಶ್&zwnj;ದೀಪ್&zwnj; ಈ ಮೈಲುಗಲ್ಲು ಸಾಧಿಸಿದ್ದಾರೆ. ಅವರು ಐಪಿಎಲ್&zwnj;ನಲ್ಲಿ ಈ ಸಾಧನೆ ಮಾಡಿದ 5ನೇ ಎಡಗೈ ವೇಗಿ.&lt;/p&gt;]]></content:encoded>
            <category>ipl</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/ipl-2026-quinton-de-kock-stunning-century-scripts-multiple-ipl-records-kvn/articleshow-4b5wyml"/>
        </item>
        <item>
            <title><![CDATA[ಈ ಸೀಸನ್‌ ಐಪಿಎಲ್‌ನ ಅತ್ಯುತ್ತಮ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್! ಪಂದ್ಯದ ದಿಕ್ಕನ್ನೇ ಬದಲಿಸಿದ ಕ್ಯಾಚ್ ಬಗ್ಗೆ ಅಯ್ಯರ್ ಹೇಳಿದ್ದೇನು?]]></title>
            <link>https://kannada.asianetnews.com/cricket-sports/shreyas-iyer-pulls-off-stunning-relay-catch-to-dismiss-hardik-pandya-kvn/articleshow-a4xhd3q</link>
            <guid isPermaLink="true">https://kannada.asianetnews.com/cricket-sports/shreyas-iyer-pulls-off-stunning-relay-catch-to-dismiss-hardik-pandya-kvn/articleshow-a4xhd3q</guid>
            <pubDate>Fri, 17 Apr 2026 15:13:05 +0530</pubDate>
            <description><![CDATA[ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ಹಾರ್ದಿಕ್ ಪಾಂಡ್ಯರನ್ನು ಔಟ್ ಮಾಡಲು ಅದ್ಭುತ ರಿಲೇ ಕ್ಯಾಚ್ ಹಿಡಿದರು. ಗಾಳಿಯಲ್ಲಿ ಜಿಗಿದು ಚೆಂಡನ್ನು ಹಿಡಿದ ಅವರು, ಬೌಂಡರಿ ಲೈನ್ ದಾಟುವ ಮುನ್ನ ಸಹ ಆಟಗಾರನಿಗೆ ಎಸೆದು ವಿಕೆಟ್ ಪತನಕ್ಕೆ ಕಾರಣರಾದರು. ಈ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತು ಎಂದು ಸ್ವತಃ ಅಯ್ಯರ್ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbn3ss8cqyh1vz8bdf86rtt,imgname-shreyas-1776360220456.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಐಪಿಎಲ್ ಇತಿಹಾಸದಲ್ಲೇ ಇದು ಅತ್ಯುತ್ತಮ ಕ್ಯಾಚ್&zwnj;ಗಳಲ್ಲೊಂದು. ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ವಾಂಖೆಡೆ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ತಮ್ಮ ಫೀಲ್ಡಿಂಗ್ ಮೂಲಕ ದಂಗುಬಡಿಸಿದ್ದಾರೆ. ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರನ್ನು ಔಟ್ ಮಾಡಲು ಶ್ರೇಯಸ್ ಮಾಡಿದ ಈ ಫೀಲ್ಡಿಂಗ್ ಸಾಹಸದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಮುಂಬೈ ಇನ್ನಿಂಗ್ಸ್&zwnj;ನ 18ನೇ ಓವರ್&zwnj;ನಲ್ಲಿ ಈ ಘಟನೆ ನಡೆಯಿತು.&lt;/p&gt;&lt;p&gt;ಮಾರ್ಕೊ ಯಾನ್ಸೆನ್ ಎಸೆದ ಬಾಲ್&zwnj;ಗೆ ಹಾರ್ದಿಕ್ ಪಾಂಡ್ಯ ದೊಡ್ಡ ಹೊಡೆತಕ್ಕೆ ಕೈಹಾಕಿದರು, ಆದರೆ ಟೈಮಿಂಗ್ ಮಿಸ್ ಆಯ್ತು. ಲಾಂಗ್ ಆನ್ ಕಡೆಗೆ ಹಾರಿದ ಚೆಂಡನ್ನು ಹಿಡಿಯಲು ಶ್ರೇಯಸ್ ಅಯ್ಯರ್ ಓಡಿಬಂದರು. ಗಾಳಿಯಲ್ಲಿ ಹಿಂದಕ್ಕೆ ಜಿಗಿದು ಚೆಂಡನ್ನು ಹಿಡಿದರು. ಆದರೆ, ಬ್ಯಾಲೆನ್ಸ್ ತಪ್ಪಿ ಬೌಂಡರಿ ಲೈನ್&zwnj;ನಿಂದ ಹೊರಗೆ ಬೀಳುತ್ತೇನೆ ಎನ್ನುವುದು ಖಚಿತವಾದಾಗ, ಲಾಂಗ್ ಆಫ್&zwnj;ನಿಂದ ಓಡಿಬರುತ್ತಿದ್ದ ಕ್ಸೇವಿಯರ್ ಬಾರ್ಟ್&zwnj;ಲೆಟ್&zwnj;ಗೆ ಚೆಂಡನ್ನು ಎಸೆದರು. ಬಾರ್ಟ್&zwnj;ಲೆಟ್ ಅದನ್ನು ಸೇಫ್ ಆಗಿ ಕ್ಯಾಚ್ ಹಿಡಿದರು.&lt;/p&gt;&lt;h2&gt;&lt;strong&gt;ವಿಡಿಯೋ ಹೀಗಿತ್ತು ನೋಡಿ.&lt;/strong&gt;&lt;/h2&gt;&lt;p&gt;&amp;nbsp;&lt;/p&gt;&lt;p&gt;SHREYAS IYER&hellip;.. YOU ABSOLUTELY FREAK. - The reaction of Rohit and Surya and an ice cold Celebration by Sarpanch Saab.  pic.twitter.com/dMOYLL7Phl&lt;/p&gt;&lt;p&gt;&mdash; Mufaddal Vohra (@mufaddal_vohra) April 16, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಶ್ರೇಯಸ್ ಅಯ್ಯರ್ ಅವರ ಈ ಅದ್ಭುತ ಫೀಲ್ಡಿಂಗ್&zwnj;ಗೆ ಕಾಮೆಂಟರಿ ಬಾಕ್ಸ್&zwnj;ನಲ್ಲಿದ್ದ ರವಿಶಾಸ್ತ್ರಿ ಫುಲ್ ಫಿದಾ ಆದ್ರು. ಕ್ಯಾಚ್ ಹಿಡಿದ ನಂತರ ಶ್ರೇಯಸ್ ಅಯ್ಯರ್ ಗ್ಯಾಲರಿ ಕಡೆ ನೋಡಿ, 'ಯಾಕೆ ಎಲ್ಲರೂ ಸೈಲೆಂಟ್ ಆದ್ರಿ?' ಎನ್ನುವಂತೆ ಎರಡೂ ಕೈಗಳನ್ನು ಕಿವಿಯ ಬಳಿ ಇಟ್ಟುಕೊಂಡು ಸನ್ನೆ ಮಾಡಿದ್ದು ಕೂಡಾ ಗಮನ ಸೆಳೆಯಿತು. ಶ್ರೇಯಸ್ ಫೀಲ್ಡಿಂಗ್ ನೋಡಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್&zwnj;ಗೆ ನಂಬೋಕೆ ಆಗ್ಲಿಲ್ಲ. 'ಇದನ್ನು ಹೇಗೆ ಸಾಧ್ಯ?' ಎನ್ನುವಂತೆ ರೋಹಿತ್ ಎರಡೂ ಕೈಗಳನ್ನು ಗಾಳಿಯಲ್ಲಿ ಎತ್ತಿ ಅಚ್ಚರಿ ವ್ಯಕ್ತಪಡಿಸಿದರು. 12 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿ ಹಾರ್ದಿಕ್ ಔಟಾದ ಬಳಿಕ ಮುಂಬೈ ಸ್ಕೋರಿಂಗ್ ವೇಗಕ್ಕೆ ಬ್ರೇಕ್ ಬಿತ್ತು.&lt;/p&gt;&lt;h3&gt;&lt;strong&gt;ಪಂದ್ಯದ ದಿಕ್ಕನ್ನೇ ಬದಲಿಸಿದ ಕ್ಯಾಚ್ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಇನ್ನು ಪಂದ್ಯದ ಮುಕ್ತಾಯದ ಬಳಿಕ ಮ್ಯಾಚ್ ಪ್ರೆಸೆಂಟರ್ ಇಯಾನ್ ಬಿಷಪ್, ಒಂದು ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡವು 200+ ರನ್ ದಾಖಲಿಸುವತ್ತ ಮುನ್ನುಗ್ಗುತ್ತಿತ್ತು. ಹೀಗಿರುವಾಗ ಮುಂಬೈ ಕಟ್ಟಿಹಾಕಿದ್ದು ಹೇಗೆ ಎಂದು ಶ್ರೇಯಸ್ ಅಯ್ಯರ್ ಅವರನ್ನು ಕೇಳುತ್ತಾರೆ. ಆಗ ಶ್ರೇಯಸ್ ನಾನು ಹಿಡಿದ ಆ ಕ್ಯಾಚ್ ಎನ್ನುತ್ತಾರೆ. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;Pulled back the catch ✅Pulled back the game ✅Shreyas Iyer, take a bow #TATAIPL | #KhelBindaas | #MIvPBKS | @PunjabKingsIPL | @ShreyasIyer15 pic.twitter.com/dTwAOs7fga&lt;/p&gt;&lt;p&gt;&mdash; IndianPremierLeague (@IPL) April 16, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಮುಂಬೈ 195 ರನ್&zwnj;ಗಳಿಗೆ ಸೀಮಿತ&lt;/strong&gt;&lt;/p&gt;&lt;p&gt;ಓಪನರ್ ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕದ (112*) ನೆರವಿದ್ದರೂ, ಮುಂಬೈ ತಂಡ ನಿಗದಿತ 20 ಓವರ್&zwnj;ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯಲ್ಲಿ ಹಾರ್ದಿಕ್ ಅಬ್ಬರಿಸಲು ವಿಫಲವಾಗಿದ್ದೇ ಮುಂಬೈ 200ರ ಗಡಿ ದಾಟದಿರಲು ಮುಖ್ಯ ಕಾರಣವಾಯಿತು. ಗಾಯದ ಕಾರಣ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡಿರಲಿಲ್ಲ. ಸೂರ್ಯಕುಮಾರ್ ಯಾದವ್ ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿದ್ದರು.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/shreyas-iyer-pulls-off-stunning-relay-catch-to-dismiss-hardik-pandya-kvn/articleshow-a4xhd3q"/>
        </item>
        <item>
            <title><![CDATA[ಮುಂಬೈ ಇಂಡಿಯನ್ಸ್‌ಗಿಂದು ಪಂಜಾಬ್ ಕಿಂಗ್ಸ್ ಚಾಲೆಂಜ್..! ಇಂದು ಪಾಂಡ್ಯ ಪಡೆ ಸೋತರೇ, ಮುಂದೇನು?]]></title>
            <link>https://kannada.asianetnews.com/gallery/cricket-sports/mumbai-indians-face-must-win-clash-against-punjab-kings-in-ipl-2026-kvn-ar8lfb5</link>
            <guid isPermaLink="true">https://kannada.asianetnews.com/gallery/cricket-sports/mumbai-indians-face-must-win-clash-against-punjab-kings-in-ipl-2026-kvn-ar8lfb5</guid>
            <pubDate>Thu, 16 Apr 2026 13:45:27 +0530</pubDate>
            <description><![CDATA[&lt;p&gt;ಮುಂಬೈ: ಐದು ಬಾರಿಯ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಇಂದು ತವರಿನಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇಂದಿನ ಮ್ಯಾಚ್&zwnj; ಮುಂಬೈ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಇಂದಿನ ಮ್ಯಾಚ್ ಮುಂಬೈ ಸೋತರೇ ಮುಂದೇನು ಎನ್ನುವುದನ್ನು ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp2vg22qetmxn4tycny2sj1h,imgname-mumbai-indians-1776064923734.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಐದು ಬಾರಿಯ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಇಂದು ತವರಿನಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇಂದಿನ ಮ್ಯಾಚ್&zwnj; ಮುಂಬೈ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಇಂದಿನ ಮ್ಯಾಚ್ ಮುಂಬೈ ಸೋತರೇ ಮುಂದೇನು ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;13 ವರ್ಷಗಳಲ್ಲಿ ಮೊದಲ ಬಾರಿಗೆ ಐಪಿಎಲ್&zwnj; ಆವೃತ್ತಿಯ ಮೊದಲ ಪಂದ್ಯವನ್ನು ಗೆದ್ದು 2026ರ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿದ್ದ ಮುಂಬೈ ಇಂಡಿಯನ್ಸ್&zwnj;, ಆ ಬಳಿಕ ಲಯ ಕಳೆದುಕೊಂಡು ಸತತ 3 ಸೋಲು ಅನುಭವಿಸಿ, ಒತ್ತಡಕ್ಕೆ ಸಿಲುಕಿದೆ. ಸದ್ಯ ಮುಂಬೈ ಇಂಡಿಯನ್ಸ್ ಅಂಕಪಟಟ&lt;/p&gt;&lt;img&gt;&lt;p&gt;ಗುರುವಾರ ಅಜೇಯ ಪಂಜಾಬ್&zwnj; ಕಿಂಗ್ಸ್&zwnj; ವಿರುದ್ಧ ವಾಂಖೇಡೆ ಕ್ರೀಡಾಂಗಣದಲ್ಲಿ ಸೆಣಸಲಿರುವ ಮುಂಬೈಗೆ ಗೆಲುವು ಅನಿವಾರ್ಯ ಎನಿಸಿದ್ದು, ಹೋರಾಟಕ್ಕೆ ತಾರಾ ಬ್ಯಾಟರ್&zwnj; ರೋಹಿತ್&zwnj; ಶರ್ಮಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಬೇಕಾಗಬಹುದು. ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ರೋಹಿತ್&zwnj;, ಈ ಪಂದ್ಯದಲ್ಲಿ ಆಡುವುದು ಅನುಮಾನ ಎನಿಸಿದೆ. ಹೀಗಾಗಿ, ಮುಂಬೈ ತನ್ನ ತಂಡ ಸಂಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕಿದೆ.&lt;/p&gt;&lt;img&gt;&lt;p&gt;ಮುಂಬೈಗೆ ಬ್ಯಾಟಿಂಗ್&zwnj;ನಷ್ಟೇ ಬೌಲಿಂಗ್&zwnj;ನಲ್ಲೂ ಸಮಸ್ಯೆ ಇದ್ದು, 4 ಪಂದ್ಯಗಳನ್ನು ಸೇರಿ ಪವರ್&zwnj;-ಪ್ಲೇನಲ್ಲಿ ಕೇವಲ 3 ವಿಕೆಟ್&zwnj; ಕಬಳಿಸಿದೆ. ಇನ್ನು ಬುಮ್ರಾ 4 ಪಂದ್ಯ ಕಳೆದರೂ ಇನ್ನೂ ವಿಕೆಟ್&zwnj; ಖಾತೆ ತೆರೆದಿಲ್ಲ. ಇದು ಮುಂಬೈ ತಂಡದ ಮೇಲೆ ಒತ್ತಡ ಮತ್ತಷ್ಟು ಹೆಚ್ಚುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಒಂದು ವೇಳೆ ಇಂದು ಕೂಡಾ ಮುಂಬೈ ಇಂಡಿಯನ್ಸ್ ತಂಡವು ಸೋಲು ಅನುಭವಿಸಿದರೆ, ಹಾರ್ದಿಕ್ ಪಾಂಡ್ಯ ಪಡೆಯ ಪ್ಲೇ ಆಫ್ ಹಾದಿ ಮತ್ತಷ್ಟು ದುರ್ಗಮವಾಗಲಿದೆ. ಇಂದು ಸೋತರೆ ಮುಂಬೈ ಇನ್ನುಳಿದ 9 ಪಂದ್ಯಗಳ ಪೈಕಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ಪಂಜಾಬ್&zwnj; ಕಿಂಗ್ಸ್&zwnj; ಬಲಿಷ್ಠವಾಗಿದ್ದು, ಪಂದ್ಯ ಗೆಲ್ಲಲು ಬೇಕಿರುವ ಸಂಪನ್ಮೂಲಗಳನ್ನು ಹೊಂದಿದೆ. ಬ್ಯಾಟಿಂಗ್&zwnj; ಕ್ರಮಾಂಕದ ಉದ್ದಕ್ಕೂ ಸ್ಫೋಟಕ ಬ್ಯಾಟರ್&zwnj;ಗಳ ದಂಡೇ ಇದ್ದು, ಅನುಭವಿ ಬೌಲರ್&zwnj;ಗಳ ಬಲವೂ ತಂಡಕ್ಕಿರುವ ಕಾರಣ, ಪಂದ್ಯದಲ್ಲಿ ಗೆಲ್ಲುವ ಫೇವರಿಟ್&zwnj; ಎನಿಸಿದೆ.&lt;/p&gt;&lt;img&gt;&lt;p&gt;ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಮ್ಯಾಚ್ ಮುಂಬೈನ ವಾಂಖೆಡೆ ಮೈದಾನದಲ್ಲಿ ಇಂದು ಸಂಜೆ 7.30ರಿಂದ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ನೇರ ಪ್ರಸಾರವಾಗಲಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/mumbai-indians-face-must-win-clash-against-punjab-kings-in-ipl-2026-kvn-ar8lfb5"/>
        </item>
        <item>
            <title><![CDATA[ಸತತ ಸೋಲಿನ ಸುಳಿಯಲ್ಲಿರುವ ಮುಂಬೈ ಇಂಡಿಯನ್ಸ್‌ನಲ್ಲಿ ಎಲ್ಲವೂ ಸರಿಯಿಲ್ಲ! ಅನುಮಾನ ಇದ್ರೆ ಈ ವಿಡಿಯೋ ನೋಡಿ]]></title>
            <link>https://kannada.asianetnews.com/cricket-sports/hardik-pandya-jasprit-bumrah-clash-viral-video-sparks-mumbai-indians-dressing-room-tension-kvn/articleshow-cpq9mzf</link>
            <guid isPermaLink="true">https://kannada.asianetnews.com/cricket-sports/hardik-pandya-jasprit-bumrah-clash-viral-video-sparks-mumbai-indians-dressing-room-tension-kvn/articleshow-cpq9mzf</guid>
            <pubDate>Fri, 17 Apr 2026 16:47:55 +0530</pubDate>
            <description><![CDATA[ಐಪಿಎಲ್ 2026ರಲ್ಲಿ ಸತತ ನಾಲ್ಕನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಪಂಜಾಬ್ ವಿರುದ್ಧದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದ್ದು, ತಂಡದಲ್ಲಿ ದೊಡ್ಡ ಬದಲಾವಣೆಗಳಾಗುವ ಸುಳಿವನ್ನು ಪಾಂಡ್ಯ ನೀಡಿದ್ದಾರೆ. ಈ ಸೋಲಿನಿಂದಾಗಿ ಮುಂಬೈ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdd9f6871xgzhyze127qaz9,imgname-hardik--2--1776419126471.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಐಪಿಎಲ್ 2026 ಸೀಸನ್&zwnj;ನಲ್ಲಿ ಸತತ ನಾಲ್ಕನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಂತರಿಕ ಕಲಹ ಶುರುವಾದಂತಿದೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ್ರೆ ಎಲ್ಲವೂ ಸರಿಯಿಲ್ವಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.&lt;/p&gt;&lt;p&gt;ಹೌದು, ಪಂಜಾಬ್ ಕಿಂಗ್ಸ್ ವಿರುದ್ಧದ ಹೀನಾಯ ಸೋಲಿನ ಬಳಿಕ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮತ್ತು ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ನಡುವಿನ ವಾಗ್ವಾದದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪಂದ್ಯದಲ್ಲಿ ಮುಂಬೈ ನೀಡಿದ್ದ 196 ರನ್&zwnj;ಗಳ ಗುರಿಯನ್ನು ಪಂಜಾಬ್ ತಂಡ ಕೇವಲ 16.3 ಓವರ್&zwnj;ಗಳಲ್ಲಿ, 3 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿ ಗೆದ್ದಿತ್ತು.&lt;/p&gt;&lt;h2&gt;&lt;strong&gt;ಮುಂಬೈ ಇಂಡಿಯನ್ಸ್&zwnj;ನಲ್ಲಿ ಶುರುವಾಯ್ತಾ ಆಂತರಿಕ ಕಲಹ&lt;/strong&gt;&lt;/h2&gt;&lt;p&gt;ಪಂದ್ಯದ ಒಂದು ನಿರ್ಣಾಯಕ ಹಂತದಲ್ಲಿ, ಬುಮ್ರಾ ಅವರ ಇಷ್ಟಕ್ಕೆ ವಿರುದ್ಧವಾಗಿ ಹಾರ್ದಿಕ್ ಫೀಲ್ಡ್ ಸೆಟ್ ಮಾಡಿದ್ದೇ ಈ ಜಗಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಬುಮ್ರಾ ಕ್ಯಾಪ್ಟನ್ ಜೊತೆ ವಾದಕ್ಕಿಳಿದು, ಕೊನೆಗೆ ಇಷ್ಟವಿಲ್ಲದಿದ್ದರೂ ಬೌಲಿಂಗ್ ಮಾಡಲು ಹೋಗುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಪಂದ್ಯದ ನಂತರ ಮಾತನಾಡಿದ ಹಾರ್ದಿಕ್ ಪಾಂಡ್ಯ, ತಂಡದ ಆಟಗಾರರ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ತಂಡದಲ್ಲಿ ದೊಡ್ಡ ಬದಲಾವಣೆಗಳ ಅವಶ್ಯಕತೆ ಇದೆ ಎಂಬ ಸುಳಿವನ್ನು ಕೂಡ ನೀಡಿದ್ದಾರೆ.&lt;/p&gt;&lt;p&gt;The Legacy built over the years is getting broken brick by brick Wankhede used to be our Fortress but now #IPL #IPL2026 @mipaltan pic.twitter.com/B7YJJO0r3y&lt;/p&gt;&lt;p&gt;&mdash; MI Blud☄️ (@micricket2013) April 17, 2026&lt;/p&gt;&lt;p&gt;&amp;nbsp;&lt;/p&gt;&lt;p&gt;'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸದ್ಯಕ್ಕೆ ನನಗೇನೂ ಹೇಳಲು ತೋಚುತ್ತಿಲ್ಲ. ನಾವು ಎಲ್ಲಿ ತಪ್ಪು ಮಾಡಿದೆವು ಎಂದು ಪರಿಶೀಲಿಸಬೇಕಿದೆ. ಇದು ವೈಯಕ್ತಿಕ ತಪ್ಪೋ ಅಥವಾ ನಮ್ಮ ಪ್ಲಾನಿಂಗ್&zwnj;ನಲ್ಲಿ ಆದ ತಪ್ಪೋ ಎಂದು ಕಂಡುಹಿಡಿಯಬೇಕು. ಮುಂದಿನ ದಿನಗಳಲ್ಲಿ ನಾವು ಇದರ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತೇವೆ.' ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಮತ್ತು ತಂಡವಾಗಿ ನಾವೆಲ್ಲರೂ ಜವಾಬ್ದಾರಿ ಹೊರಬೇಕು' ಎಂದು ಅವರು ಹೇಳಿದರು.&lt;/p&gt;&lt;p&gt;Jasprit Bumrah's frustrated reaction to Hardik Pandya's captaincy call.call was related to field setting.pic.twitter.com/7uPr9fvACX&lt;/p&gt;&lt;p&gt;&mdash;  (@hiit_man45) April 17, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಪಾಯಿಂಟ್ ಪಟ್ಟಿಯಲ್ಲಿ ಕುಸಿತ&lt;/strong&gt;&lt;/h3&gt;&lt;p&gt;ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕ (112*) ಮತ್ತು ನಮನ್ ಧೀರ್ ಅವರ ಅರ್ಧಶತಕ (50) ಮುಂಬೈ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ದರೂ, ಬೌಲಿಂಗ್ ವೈಫಲ್ಯದಿಂದ ತಂಡ ಸೋಲನುಭವಿಸಿತು. ಬುಮ್ರಾ ತಮ್ಮ ನಾಲ್ಕು ಓವರ್&zwnj;ಗಳಲ್ಲಿ 41 ರನ್ ನೀಡಿ ಒಂದೂ ವಿಕೆಟ್ ಪಡೆಯಲಿಲ್ಲ. ಇತ್ತ ಹಾರ್ದಿಕ್ ಬ್ಯಾಟಿಂಗ್&zwnj;ನಲ್ಲಿ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾದರು. ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯ ಮುಂಬೈಗೆ ಅತ್ಯಂತ ನಿರ್ಣಾಯಕವಾಗಿದೆ. ಟೂರ್ನಿಯಲ್ಲಿ ಉಳಿಯಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.&lt;/p&gt;&lt;p&gt;ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿತ್ತು. ಆದರೆ ಇದಾದ ಬಳಿಕ ಸತತ ನಾಲ್ಕನೇ ಸೋಲು ಅನುಭವಿಸಿದೆ ಈ ಮೂಲಕ ಅಂಕಪಟ್ಟಿಯಲ್ಲಿ ಕೇವಲ ಎರಡು ಅಂಕಗಳ ಸಹಿತ ಒಂಬತ್ತನೇ ಸ್ಥಾನಕ್ಕೆ ಜಾರಿದೆ. ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ ಮುಂಬೈ ಇಂಡಿಯನ್ಸ್ ತಂಡವು ಲೀಗ್ ಹಂತದಲ್ಲಿ ಇನ್ನುಳಿದ ಒಂಬತ್ತು ಪಂದ್ಯಗಳ ಪೈಕಿ ಕನಿಷ್ಠ ಆರರಿಂದ ಏಳು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇನ್ನೊಂದೆಡೆ ತಂಡದ ಪ್ರೀಮಿಯರ್ ವೇಗಿ ಕಳೆದ ಐದು ಪಂದ್ಯಗಳಿಂದ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗದೇ ಹೋಗಿರುವುದು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/hardik-pandya-jasprit-bumrah-clash-viral-video-sparks-mumbai-indians-dressing-room-tension-kvn/articleshow-cpq9mzf"/>
        </item>
        <item>
            <title><![CDATA[ಚಿನ್ನಸ್ವಾಮಿಯ ದೋಸೆ, ಇಡ್ಲಿ, ಚಟ್ನಿ ಹಾಡು ವಿವಾದ! ಮೊದಲು ಶುರು ಮಾಡಿದ್ದೇ ಸಿಎಸ್‌ಕೆ! ಈ ಬಗ್ಗೆ ಜಿತೇಶ್ ಹೇಳಿದ್ದೇನು?]]></title>
            <link>https://kannada.asianetnews.com/cricket-sports/csk-files-complaint-over-dosa-idli-song-played-during-rcb-match-kvn/articleshow-g7xutvv</link>
            <guid isPermaLink="true">https://kannada.asianetnews.com/cricket-sports/csk-files-complaint-over-dosa-idli-song-played-during-rcb-match-kvn/articleshow-g7xutvv</guid>
            <pubDate>Fri, 17 Apr 2026 14:04:34 +0530</pubDate>
            <description><![CDATA[ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್&zwnj;ಸಿಬಿ-ಸಿಎಸ್&zwnj;ಕೆ ಪಂದ್ಯದ ವೇಳೆ 'ದೋಸೆ, ಇಡ್ಲಿ' ಹಾಡನ್ನು ಪ್ರಸಾರ ಮಾಡಿದ್ದಕ್ಕೆ ಸಿಎಸ್&zwnj;ಕೆ ತಂಡವು ಬಿಸಿಸಿಐಗೆ ದೂರು ನೀಡಿದೆ. ಈ ಹಾಡು ತಮ್ಮ ಆಟಗಾರರನ್ನು ಮತ್ತು ತಮಿಳುನಾಡಿನ ಗುರುತನ್ನು ಅಣಕಿಸುವಂತಿದೆ ಎಂದು ಸಿಎಸ್&zwnj;ಕೆ ಆರೋಪಿಸಿದ್ದು, ಈ ವಿವಾದದ ಹಿನ್ನೆಲೆ ಕಳೆದ ವರ್ಷ ಜಿತೇಶ್ ಶರ್ಮಾ ಅವರ ವಿಡಿಯೋದಿಂದ ಆರಂಭವಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-ani20250523192203,imgname-image-49f1a8bb-00ec-4ef2-86a0-de659554eadb.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್&zwnj;ಸಿಬಿ-ಸಿಎಸ್&zwnj;ಕೆ ಪಂದ್ಯದ ವೇಳೆ ಪ್ರಸಾರ ಮಾಡಲಾದ &lsquo;ದೋಸೆ, ಇಡ್ಲಿ, ಸಾಂಬಾರ್&zwnj;, ಚಟ್ನಿ&rsquo; ಹಾಡಿನ ವಿಚಾರದಲ್ಲಿ ಚೆನ್ನೈ ಸೂಪರ್&zwnj; ಕಿಂಗ್ಸ್&zwnj; ಬಿಸಿಸಿಐಗೆ ದೂರು ಸಲ್ಲಿಸಿದೆ. ಈ ಹಾಡು ತಮ್ಮ ಆಟಗಾರರನ್ನು ವ್ಯಂಗ್ಯ ಮಾಡುವಂತಿದ್ದವು ಎಂದು ಸಿಎಸ್&zwnj;ಕೆ ಸಿಇಒ ಕಾಶಿ ವಿಶ್ವನಾಥನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಗುರುತನ್ನು ಅಣಕಿಸುವಂತೆ ಈ ಹಾಡು ಬಳಸಲಾಗಿದೆ ಎಂಬುದು ಸಿಎಸ್&zwnj;ಕೆ ಆರೋಪ.&lt;/p&gt;&lt;p&gt;ದಕ್ಷಿಣ ಭಾರತವನ್ನು ವ್ಯಂಗ್ಯ ಮಾಡುವ ಕೆಲ ಮೀಮ್&zwnj;ಗಳಲ್ಲಿ ಹೆಚ್ಚಾಗಿ ಬಳಸಲಾಗುವ &lsquo;ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ&rsquo; ಎಂಬ ವೈರಲ್&zwnj; ಹಾಡನ್ನು ಏ.5ರ ಪಂದ್ಯದ ಸಮಯದಲ್ಲಿ ಹಾಕಲಾಗಿತ್ತು. ಆದರೆ ಇದು ಒಳ್ಳೆಯ ಅಭಿರುಚಿಯ ಲಕ್ಷಣ ಅಲ್ಲ ಎಂದು ಸಿಎಸ್&zwnj;ಕೆ ತನ್ನ ದೂರಿನಲ್ಲಿ ತಿಳಿಸಿದೆ. ಐಪಿಎಲ್&zwnj;ನ ಉನ್ನತ ಅಧಿಕಾರಿಯೊಬ್ಬರು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ದೂರಿನ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ.&lt;/p&gt;&lt;p&gt;ಈ ವಿಚಾರವಾಗಿ ವಿಶ್ವನಾಥನ್&zwnj; ಪ್ರತಿಕ್ರಿಯಿಸಿದ್ದು, &lsquo;ಸಾಮಾನ್ಯವಾಗಿ ತವರು ತಂಡವನ್ನು ಬೆಂಬಲಿಸುವ ಸಲುವಾಗಿ ಡಿಜೆಗಳು ಇರುತ್ತಾರೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಎಲ್ಲವೂ ವಿಭಿನ್ನವಾಗಿತ್ತು. ದೊಡ್ಡ ಹೊಡೆತ, ವಿಕೆಟ್&zwnj; ಆದಾಗ ಆಟಗಾರರನ್ನು ಹುರಿದುಂಬಿಸುವುದು ಡಿಜೆ ಕೆಲಸವೇ ಹೊರತು ಎದುರಾಳಿಗಳನ್ನು ದುರ್ಬಲಗೊಳಿಸುವುದು, ಅವಮಾನಿಸುವುದು ಅಲ್ಲ&rsquo; ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸಿಎಸ್&zwnj;ಕೆ-ಆರ್&zwnj;ಸಿಬಿ ವೈರತ್ವ ಹೊಸತಲ್ಲ:&lt;/strong&gt;&lt;/h2&gt;&lt;p&gt;ಉಭಯ ತಂಡಗಳು, ಅಭಿಮಾನಿಗಳ ನಡುವಿನ ವೈರತ್ವ ಹೊಸದೇನಲ್ಲ. ಆರ್&zwnj;ಸಿಬಿ-ಸಿಎಸ್&zwnj;ಕೆ ಪಂದ್ಯವೆಂದರೆ ಅದು ಕೊಹ್ಲಿ ವರ್ಸಸ್&zwnj; ಧೋನಿ, ಕರ್ನಾಟಕ ವರ್ಸಸ್&zwnj; ತಮಿಳುನಾಡು ಎಂಬಂತೆ ಬಿಂಬಿತವಾಗುವುದು ಸಹಜ. ಈಗ ಹಾಡಿನ ವಿಚಾರದಲ್ಲೂ ಉಭಯ ತಂಡಗಳ ಅಭಿಮಾನಿಗಳ ನಡುವೆ ಸಾಮಾಜಿಕ ತಾಣಗಳಲ್ಲಿ ವಾಗ್ವಾದ ನಡೆಯುತ್ತಿದೆ.&lt;/p&gt;&lt;h3&gt;&lt;strong&gt;ವಿವಾದ ಕಳೆದ ವರ್ಷವೇ ಶುರು&lt;/strong&gt;&lt;/h3&gt;&lt;p&gt;ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಹಾಡು 2 ತಂಡಗಳ ಅಭಿಮಾನಿಗಳ ನಡುವೆ ಕಳೆದ ವರ್ಷವೇ ವಿವಾದಕ್ಕೆ ಕಾರಣವಾಗಿತ್ತು. ಸಂಗೀತಗಾರ ಗಾನ ಅಪ್ಪು ಈ ಹಾಡನ್ನು ಸಂಯೋಜಿಸಿರುವ ಈ ಹಾಡನ್ನು ಕಳೆದ ವರ್ಷ ಆರ್&zwnj;ಸಿಬಿಯ ಜಿತೇಶ್&zwnj; ಶರ್ಮಾ ಹಾಡಿದ್ದರು. ಆ ವಿಡಿಯೋವನ್ನು ಆರ್&zwnj;ಸಿಬಿ ಪೋಸ್ಟ್&zwnj; ಮಾಡಿತ್ತು. ಇದು ಸಿಎಸ್&zwnj;ಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಿಕ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಜಿತೇಶ್&zwnj; ಔಟಾಗಿ ಪೆವಿಲಿಯನ್&zwnj;ಗೆ ಮರಳುತ್ತಿದ್ದಾಗ ಕ್ರೀಡಾಂಗಣದಲ್ಲಿ ಈ ಹಾಡನ್ನು ಹಾಕಲಾಗಿತ್ತು. ಅದಕ್ಕೆ ಪ್ರತಿಯಾಗಿ ಈ ಬಾರಿ ಚಿನ್ನಸ್ವಾಮಿಯಲ್ಲಿ ಹಾಡನ್ನು ಪ್ಲೇ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ಇಡ್ಲಿ ದೋಸೆ ಚಟ್ನಿ ಬಗ್ಗೆ ಸ್ಪಷ್ಟನೆ ನೀಡಿದ್ದ ಜಿತೇಶ್ ಶರ್ಮಾ:&lt;/strong&gt;&lt;/h3&gt;&lt;p&gt;ಕಳೆದ ವರ್ಷ ನವೆಂಬರ್&zwnj;ನಲ್ಲಿ ಈ ದೋಸೆ, ಇಡ್ಲಿ ಸಾಂಬಾರ್ ಚಟ್ನಿ ಚಟ್ನಿ ಹಾಡಿದ್ದು ಹೇಗೆ? ಯಾವ ಹಿನ್ನೆಲೆಯಲ್ಲಿ ಹಾಡಿದ್ದು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿದ್ದರು. ಮಾಧ್ಯಮದವರು ಚೆನ್ನೈಗೆ ಬಂದಿಳಿಯುತ್ತಿದ್ದಂತೆಯೇ ನಿಮಗೆ ಏನು ಇಷ್ಟವಾಗುತ್ತದೆ ಎಂದು ಕೇಳಿದರು. ಆಗ ನಾನು ಎಳನೀರು ಇತ್ಯಾದಿ ಎಂದು ಹೇಳಿದೆ. ಇದನ್ನು ಉಳಿದವರು ಎಲ್ಲಾ ಹೇಳಿದ್ದಾರೆ, ಬೇರೇನು ಇಷ್ಟ ಎಂದು ಕೇಳಿದಾಗ, ದಕ್ಷಿಣ ಭಾರತದಲ್ಲಿ ಫೇಮಸ್ ಆಗಿರುವ ದೋಸೆ ಇಡ್ಲಿ ಬಗ್ಗೆ ಹೇಳಿದೆ. ಆಗ ಅಲ್ಲೇ ಇರುವ ಹುಡುಗನೊಬ್ಬ, ಈಗ ದೋಸೆ ಇಡ್ಲಿ ಸಾಂಬರ್ ಚಟ್ನಿ ಚಟ್ನಿ ರೀಲ್ಸ್ ವೈರಲ್ ಆಗುತ್ತಿದೆ. ನೀವು ಒಮ್ಮೆ ಹೇಳಿ ಅಂದ. ಅದರ ಹಿನ್ನೆಲೆ ಗೊತ್ತಿಲ್ಲದೆ ನಾನು ಆ ಹಾಡು ಹಾಡಿದೆ. ಇದಾದ ಮೇಲೆ ಚೆನ್ನೈನಲ್ಲಿ ಔಟಾಗಿ ಪೆವಿಲಿಯನ್&zwnj;ಗೆ ವಾಪಾಸ್ಸಾಗುವ ವೇಳೆಯಲ್ಲಿ ಅದೇ ಹಾಡು ಸ್ಟೇಡಿಯಂನಲ್ಲಿ ಹಾಕಿದರು ಎಂದು ಕಳೆದ ವರ್ಷದ ಘಟನೆಯನ್ನು ಜಿತೇಶ್ ಶರ್ಮಾ ಮೆಲುಕು ಹಾಕಿದ್ದಾರೆ.&lt;/p&gt;&lt;h3&gt;&lt;strong&gt;ಹೀಗಿತ್ತು ನೋಡಿ ಜಿತೇಶ್ ಶರ್ಮಾ ಆಡಿದ ಮಾತು&lt;/strong&gt;&lt;/h3&gt;&lt;p&gt; JITESH SHARMA SPEAK ON CSK DJ CONTROVERSYQ: When you got out DJ played Dosa idly, what is that controversy.A: I don't know the context of that song, some beside guy said that one reel is trending say it. So i said it &amp;amp; DJ played when i got out.pic.twitter.com/qaWVCssdrs&lt;/p&gt;&lt;p&gt;&mdash; Sam (@Cricsam01) April 17, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/csk-files-complaint-over-dosa-idli-song-played-during-rcb-match-kvn/articleshow-g7xutvv"/>
        </item>
        <item>
            <title><![CDATA[ಬೆಂಗಳೂರು ಮ್ಯಾಚ್‌ ದಿನ ಅನುಷ್ಕಾ ಶರ್ಮಾ ಹಾಕಿದ ಡ್ರೆಸ್‌ ಬೆಲೆಗೆ RCB ವಿಐಪಿ ಟಿಕೆಟ್‌ ಎಷ್ಟು ಬರತ್ತೆ ಗೊತ್ತಾ?]]></title>
            <link>https://kannada.asianetnews.com/gallery/cricket-sports/bengaluru-rcb-lsg-match-2026-virat-kohli-wife-anushka-sharma-dress-costume-rate-hhhhgvs</link>
            <guid isPermaLink="true">https://kannada.asianetnews.com/gallery/cricket-sports/bengaluru-rcb-lsg-match-2026-virat-kohli-wife-anushka-sharma-dress-costume-rate-hhhhgvs</guid>
            <pubDate>Fri, 17 Apr 2026 19:22:34 +0530</pubDate>
            <description><![CDATA[&lt;p&gt;Actress Anushka Sharma: ಐಪಿಎಲ್ ಮ್ಯಾಚ್&zwnj;ನಲ್ಲಿ ವಿರಾಟ್&zwnj; ಕೊಹ್ಲಿ ಎಷ್ಟು ಸುದ್ದಿ ಆಗ್ತಾರೋ ಅಷ್ಟೇ ಅವರನ್ನು ಸಪೋರ್ಟ್&zwnj; ಮಾಡಲು ಬರುವ ಅನುಷ್ಕಾ ಕೂಡ ಚರ್ಚೆ ಆಗ್ತಾರೆ. ವಿರಾಟ್&zwnj; ಕೊಹ್ಲಿ ಅವರ ಮ್ಯಾಚ್&zwnj; ಎಲ್ಲೇ ಇದ್ದರೂ ಕೂಡ ಅನುಷ್ಕಾ ಮಾತ್ರ ಮಿಸ್&zwnj; ಮಾಡೋದಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdttz9twaz0qrn41jf50gyj,imgname-new-project--97--1776433331514.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Anushka Sharma: ಐಪಿಎಲ್ ಮ್ಯಾಚ್&zwnj;ನಲ್ಲಿ ವಿರಾಟ್&zwnj; ಕೊಹ್ಲಿ ಎಷ್ಟು ಸುದ್ದಿ ಆಗ್ತಾರೋ ಅಷ್ಟೇ ಅವರನ್ನು ಸಪೋರ್ಟ್&zwnj; ಮಾಡಲು ಬರುವ ಅನುಷ್ಕಾ ಕೂಡ ಚರ್ಚೆ ಆಗ್ತಾರೆ. ವಿರಾಟ್&zwnj; ಕೊಹ್ಲಿ ಅವರ ಮ್ಯಾಚ್&zwnj; ಎಲ್ಲೇ ಇದ್ದರೂ ಕೂಡ ಅನುಷ್ಕಾ ಮಾತ್ರ ಮಿಸ್&zwnj; ಮಾಡೋದಿಲ್ಲ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅನುಷ್ಕಾ ಶರ್ಮಾ ಅವರು ಮೂಲತಃ ಬೆಂಗಳೂರಿನವರು, ಇಲ್ಲೇ ಓದಿದ್ದರು. ಇತ್ತೀಚೆಗೆ RCB ಹಾಗೂ LSG ನಡುವೆ ನಡೆದ ಮ್ಯಾಚ್&zwnj;ನಲ್ಲಿ ಅನುಷ್ಕಾ ಶರ್ಮಾ ಬಂದಿದ್ದರು. ಆಗ ಅವರು ಧರಿಸಿದ್ದ ಉಡುಗೆ ಬಗ್ಗೆ ಚರ್ಚೆ ಆಗಿದೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ (RCB) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫೀಲ್ಡ್&zwnj;ನಲ್ಲಿ ಆಡುತ್ತಿದ್ದರೆ, ಅತ್ತ ಅನುಷ್ಕಾ ಶರ್ಮಾ ಅವರು ಫ್ಲೈಯಿಂಗ್&zwnj; ಕಿಸ್&zwnj; ಮೂಲಕವೋ ಅಥವಾ ಚಪ್ಪಾಳೆ ತಟ್ಟಿ ಗಂಡನನ್ನು ಹುರಿದುಂಬಿಸುತ್ತಾರೆ. ಪಂದ್ಯಗಳಿಗೆ ಸಿಂಪಲ್&zwnj; ಆಗಿ ಬರುವ ಅನುಷ್ಕಾ ಶರ್ಮಾ ಅವರು ಈ ಬಾರಿ ಡ್ರೆಸ್&zwnj; ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ. ಇತ್ತೀಚಿನ ಪಂದ್ಯದಲ್ಲಿ ಅವರು ಧರಿಸಿದ್ದ ಉಡುಪಿನ ಮೌಲ್ಯ ಸಂಚಲನ ಮೂಡಿಸಿದೆ.&lt;/p&gt;&lt;img&gt;&lt;p&gt;ಅನುಷ್ಕಾ ಅವರು 'ಸ್ಯಾಂಡ್ರೋ ಪ್ಯಾರಿಸ್' (Sandro Paris) ಬ್ರ್ಯಾಂಡ್&zwnj;ನ ಸುಂದರ ಡ್ರೆಸ್&zwnj;ನಲ್ಲಿ ಕಾಣಿಸಿಕೊಂಡಿದ್ದರು. ಭಾರತೀಯ ಮೌಲ್ಯದಲ್ಲಿ ರಫಲ್ ಸ್ಟ್ರೈಪ್ಡ್ ಶರ್ಟ್ ₹29 ,750 ರೂಪಾಯಿ, ಮ್ಯಾಕ್ಸಿ ಪಾಪ್ಲಿನ್ ಸ್ಕರ್ಟ್, ₹36,125 ಒಟ್ಟು ₹65,875 ಆಗಿದೆ. ಆರ್&zwnj;ಸಿಬಿ ಮ್ಯಾಚ್&zwnj;ನಲ್ಲಿ ವಿಐಪಿ ಗ್ಯಾಲರಿ ಒಂದು ಟಿಕೆಟ್&zwnj; ದರವು 45000 ರೂಪಾಯಿವರೆಗ ಇರುವುದು.&lt;/p&gt;]]></content:encoded>
            <category>ipl</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/bengaluru-rcb-lsg-match-2026-virat-kohli-wife-anushka-sharma-dress-costume-rate-hhhhgvs"/>
        </item>
        <item>
            <title><![CDATA[ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಆಲೌಟ್ ಆದ ಟಾಪ್-6 ತಂಡಗಳಿವು! ಆರ್‌ಸಿಬಿಗೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/gallery/cricket-sports/top-6-ipl-teams-with-most-all-outs-delhi-capitals-lead-the-list-kvn-hw4luze</link>
            <guid isPermaLink="true">https://kannada.asianetnews.com/gallery/cricket-sports/top-6-ipl-teams-with-most-all-outs-delhi-capitals-lead-the-list-kvn-hw4luze</guid>
            <pubDate>Wed, 15 Apr 2026 14:52:33 +0530</pubDate>
            <description><![CDATA[&lt;p&gt;ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ IPL ಲೀಗ್ ಟೂರ್ನಿಯಲ್ಲಿ ಆಗಾಗ ಬೌಲರ್&zwnj;ಗಳು ಕೈಚಳಕ ತೋರಿಸುವ ಮೂಲಕ ಎದುರಾಳಿ ತಂಡದ ಎಲ್ಲಾ ಬ್ಯಾಟರ್&zwnj;ಗಳನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬನ್ನಿ ನಾವಿಂದು ಐಪಿಎಲ್&zwnj;ನಲ್ಲಿ ಅತಿಹೆಚ್ಚು ಬಾರಿ ಆಲೌಟ್ ಆದ ಟಾಪ್-6 ತಂಡಗಳು ಯಾವುವು ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jwvgfds1jsa631pfpckfj2mp,imgname-ani6653527-1748974941985.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ IPL ಲೀಗ್ ಟೂರ್ನಿಯಲ್ಲಿ ಆಗಾಗ ಬೌಲರ್&zwnj;ಗಳು ಕೈಚಳಕ ತೋರಿಸುವ ಮೂಲಕ ಎದುರಾಳಿ ತಂಡದ ಎಲ್ಲಾ ಬ್ಯಾಟರ್&zwnj;ಗಳನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬನ್ನಿ ನಾವಿಂದು ಐಪಿಎಲ್&zwnj;ನಲ್ಲಿ ಅತಿಹೆಚ್ಚು ಬಾರಿ ಆಲೌಟ್ ಆದ ಟಾಪ್-6 ತಂಡಗಳು ಯಾವುವು ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಬರೋಬ್ಬರಿ 31 ಬಾರಿ ಆಲೌಟ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಆಲೌಟ್ ಆದ ತಂಡ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.&lt;/p&gt;&lt;img&gt;&lt;p&gt;ಕಳೆದ ಬಾರಿಯ ರನ್ನರ್ ಅಪ್ ಹಾಗೂ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ಇನ್ನೊಂದು ತಂಡವಾಗಿರುವ ಪಂಜಾಬ್ ಕಿಂಗ್ಸ್ ಇದುವರೆಗೂ 27 ಬಾರಿ ಆಲೌಟ್ ಆಗುವ ಮೂಲಕ ಎರಡನೇ ಸ್ಥಾನದಲ್ಲಿದೆ.&lt;/p&gt;&lt;img&gt;&lt;p&gt;ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್&zwnj;ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಅದೇ ರೀತಿ ಆಲೌಟ್ ಆಗುವ ವಿಚಾರದಲ್ಲೂ ಆರ್&zwnj;ಸಿಬಿ ಹಿಂದೆ ಬಿದ್ದಿಲ್ಲ. ಬೆಂಗಳೂರು ತಂಡವು ಐಪಿಎಲ್&zwnj;ನಲ್ಲಿ 26 ಬಾರಿ ಆಲೌಟ್ ಆಗುವ ಮೂಲಕ ಮೂರನೇ ಸ್ಥಾನದಲ್ಲಿದೆ.&lt;/p&gt;&lt;img&gt;&lt;p&gt;ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು 25 ಬಾರಿ ಆಲೌಟ್ ಆಗುವ ಮೂಲಕ ಐಪಿಎಲ್&zwnj;ನಲ್ಲಿ ಅತಿಹೆಚ್ಚು ಆಲೌಟ್ ಆದ ತಂಡಗಳ ಪೈಕಿ ಜಂಟಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.&lt;/p&gt;&lt;img&gt;&lt;p&gt;ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವು ಕೂಡಾ 25 ಬಾರಿ ಆಲೌಟ್ ಆಗುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ಜತೆ ಜಂಟಿ ನಾಲ್ಕನೇ ಸ್ಥಾನ ಹಂಚಿಕೊಂಡಿದೆ.&lt;/p&gt;&lt;img&gt;&lt;p&gt;ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಬರೋಬ್ಬರಿ 20 ಬಾರಿ ಆಲೌಟ್ ಆಗುವ ಮೂಲಕ ಆರನೇ ಸ್ಥಾನ ಪಡೆದುಕೊಂಡಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/top-6-ipl-teams-with-most-all-outs-delhi-capitals-lead-the-list-kvn-hw4luze"/>
        </item>
        <item>
            <title><![CDATA[ಕೊಹ್ಲಿ ಪಾಲಾದ ಆರೆಂಜ್ ಕ್ಯಾಪ್, ಆದ್ರೆ ಆರ್‌ಸಿಬಿ ನಾಯಕನಿಂದಲೇ ಪೈಪೋಟಿ! ಟಾಪ್-5 ಪಟ್ಟಿಯಿಂದ ಸಂಜು ಸ್ಯಾಮ್ಸನ್ ಔಟ್]]></title>
            <link>https://kannada.asianetnews.com/cricket-sports/virat-kohli-leads-orange-cap-race-patidar-emerges-as-biggest-challenger-kvn/articleshow-i3gzvm3</link>
            <guid isPermaLink="true">https://kannada.asianetnews.com/cricket-sports/virat-kohli-leads-orange-cap-race-patidar-emerges-as-biggest-challenger-kvn/articleshow-i3gzvm3</guid>
            <pubDate>Thu, 16 Apr 2026 18:25:01 +0530</pubDate>
            <description><![CDATA[ಐಪಿಎಲ್ 19ನೇ ಸೀಸನ್&zwnj;ನಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಆದರೆ, ಅವರದೇ ತಂಡದ ಆಟಗಾರ ರಜತ್ ಪಾಟಿದಾರ್ ಕೇವಲ 6 ರನ್&zwnj;ಗಳ ಅಂತರದಿಂದ ತೀವ್ರ ಪೈಪೋಟಿ ನೀಡುತ್ತಿದ್ದು, ಕೊಹ್ಲಿಯ ಅಗ್ರಸ್ಥಾನಕ್ಕೆ ಸವಾಲು ಹಾಕಿದ್ದಾರೆ. ಇದೇ ವೇಳೆ, ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದು ವಿಶೇಷವಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kp1ay50m5x3vsadpd814ycfw,imgname-20260412393l-1776014005268.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಇನ್ನು ಇದೇ ವೇಳೆ ಆರ್&zwnj;ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ, ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೊಹ್ಲಿಗೆ ಇದೀಗ ತಮ್ಮದೇ ತಂಡದ ನಾಯಕನಿಂದ ದೊಡ್ಡ ಪೈಪೋಟಿ ಶುರವಾಗಿದೆ.&lt;/p&gt;&lt;p&gt;ಹೌದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 15ರಂದು ನಡೆದ ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯದ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಸಿಗುವ ಆರೆಂಜ್ ಕ್ಯಾಪ್ ಅನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ 34 ಎಸೆತಗಳಲ್ಲಿ 49 ರನ್ ಗಳಿಸಿದರು. ಈ ಮೂಲಕ ಅವರು ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 147 ರನ್&zwnj;ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೊಹ್ಲಿಯೇ ಅತಿ ಹೆಚ್ಚು ರನ್ ಗಳಿಸಿದ್ದು. ಈ ಮೂಲಕ ಈ ಸೀಸನ್&zwnj;ನಲ್ಲಿ ಕೊಹ್ಲಿಯ ಒಟ್ಟು ರನ್ ಗಳಿಕೆ 5 ಪಂದ್ಯಗಳಿಂದ 228ಕ್ಕೆ ಏರಿದೆ.&lt;/p&gt;&lt;p&gt;ಸನ್&zwnj;ರೈಸರ್ಸ್ ಹೈದರಾಬಾದ್&zwnj;ನ ಹೆನ್ರಿಚ್ ಕ್ಲಾಸೆನ್ 224 ರನ್&zwnj;ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬುಧವಾರದ ಪ್ರದರ್ಶನದ ನಂತರ ರಜತ್ ಪಾಟಿದಾರ್ ಮೂರನೇ ಸ್ಥಾನಕ್ಕೇರಿದ್ದಾರೆ. ಅವರು 5 ಪಂದ್ಯಗಳಿಂದ 222 ರನ್ ಗಳಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಅವರಿಗಿಂತ ಕೇವಲ 6 ರನ್ ಹಿಂದಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲೂ ರಜತ್ ಪಾಟೀದಾರ್ ಉತ್ತಮ ಪ್ರದರ್ಶನ ತೋರಿದರೆ, ಕೊಹ್ಲಿಯಿಂದ ಆರೆಂಜ್ ಕ್ಯಾಪ್ ರಜತ್ ಪಾಟೀದಾರ್ ಪಾಲಾದರೂ ಅಚ್ಚರಿಯಿಲ್ಲ.&lt;/p&gt;&lt;p&gt;ಇವರಲ್ಲದೆ, ಸನ್&zwnj;ರೈಸರ್ಸ್ ಹೈದರಾಬಾದ್ ತಂಡದ ಇಶಾನ್ ಕಿಶನ್ (213) ಮತ್ತು 15 ವರ್ಷದ ಯುವ ಪ್ರತಿಭೆ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ (200) ಈ ಸೀಸನ್&zwnj;ನಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ ಇತರ ಆಟಗಾರರು. ಇವರ ನಂತರ, ಚೆನ್ನೈ ಸೂಪರ್ ಕಿಂಗ್ಸ್&zwnj;ನ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 6ನೇ ಸ್ಥಾನದಲ್ಲಿದ್ದಾರೆ. ಸಂಜು 5 ಪಂದ್ಯಗಳಿಂದ 185 ರನ್ ಗಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಐಪಿಎಲ್&zwnj;ನಲ್ಲಿ ಮೊದಲ ಸಲ ಇಂಪ್ಯಾಕ್ಟ್ ಪ್ಲೇಯರ್ ಆದ ವಿರಾಟ್&lt;/strong&gt;&lt;/h2&gt;&lt;p&gt;ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಗಾಯಗೊಂಡು ಕೇವಲ ಬ್ಯಾಟಿಂಗ್&zwnj;ನಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ, ಲಖನೌ ಎದುರು ಇಂಪ್ಯಾಕ್ಟ್ ಬ್ಯಾಟರ್ ಆಗಿ ಕಣಕ್ಕಿಳಿಯುವ ಮೂಲಕ ಗಮನ ಸೆಳೆದರು. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದು ಇದೇ ಮೊದಲು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್&zwnj;ಸಿಬಿಯ ಆರಂಭಿಕ ತಂಡದಲ್ಲಿ ಕೊಹ್ಲಿ ಇರಲಿಲ್ಲ. ಆದರೆ ಗುರಿ ಬೆನ್ನತ್ತುವಾಗ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದು, ಈ ಪಂದ್ಯದಲ್ಲಿ ಆರ್&zwnj;ಸಿಬಿ ಪರ ಗರಿಷ್ಠ ವೈಯುಕ್ತಿಕ ಸ್ಕೋರ್ ಗಳಿಸಿದರು.&lt;/p&gt;&lt;h3&gt;&lt;strong&gt;ಪರ್ಪಲ್ ಕ್ಯಾಪ್ ಪೈಪೋಟಿಯಲ್ಲಿ ಬದಲಾವಣೆ ಇಲ್ಲ&lt;/strong&gt;&lt;/h3&gt;&lt;p&gt;ವಿಕೆಟ್ ಬೇಟೆಗಾರರ ಪಟ್ಟಿಯಲ್ಲಿ ಯಾವುದೇ ದೊಡ್ಡ ಬದಲಾವಣೆಗಳಾಗಿಲ್ಲ. ತಲಾ 10 ವಿಕೆಟ್ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್&zwnj;ನ ಅನ್ಸೂಲ್ ಕಂಬೋಜ್ ಮತ್ತು ಗುಜರಾತ್ ಟೈಟಾನ್ಸ್&zwnj;ನ ಪ್ರಸಿದ್ಧ್ ಕೃಷ್ಣ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್&zwnj;ನ ರವಿ ಬಿಷ್ಣೋಯ್ ಮತ್ತು ಲಖನೌ ಸೂಪರ್ ಜೈಂಟ್ಸ್&zwnj;ನ ಪ್ರಿನ್ಸ್ ಯಾದವ್ ತಲಾ 9 ವಿಕೆಟ್&zwnj;ಗಳೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ 5 ಪಂದ್ಯಗಳಿಂದ ತಲಾ 7 ವಿಕೆಟ್ ಪಡೆದಿದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/virat-kohli-leads-orange-cap-race-patidar-emerges-as-biggest-challenger-kvn/articleshow-i3gzvm3"/>
        </item>
        <item>
            <title><![CDATA[ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್‌ನಲ್ಲಿ ದುಪ್ಪಟ್ಟು ಮೊತ್ತಕ್ಕೆ ಐಪಿಎಲ್ ಟಿಕೆಟ್ ಮಾರುತ್ತಿದ್ದ ಖದೀಮ ಅರೆಸ್ಟ್! KSCA ಸದಸ್ಯನ ಕೈವಾಡ ಶಂಕೆ?]]></title>
            <link>https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq</link>
            <guid isPermaLink="true">https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq</guid>
            <pubDate>Fri, 17 Apr 2026 17:25:35 +0530</pubDate>
            <description><![CDATA[ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟಿಕೆಟ್&zwnj;ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಕ್ಯಾಂಟೀನ್ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ 181 ಟಿಕೆಟ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಹಿಂದೆ ಕೆಎಸ್&zwnj;ಸಿಎ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jahtbgdde206k1zz4sghk5hd,imgname-fotojet---2024-10-19t124927.356.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಅದರಲ್ಲೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಹಾಗೆಯೇ ತವರಿನಾಚೆ ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದೆ. ಇನ್ನು ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಬೇಕು ಎಂದು ತುದಿಗಾಲಿನಲ್ಲಿ ಅಭಿಮಾನಿಗಳು ನಿಂತಿರುತ್ತಾರೆ. ಆದರೆ ಟಿಕೆಟ್ ಆನ್&zwnj;ಲೈನ್&zwnj;ನಲ್ಲಿ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್ ಆಗಿ ಬಿಡುತ್ತವೆ. ಆರ್&zwnj;ಸಿಬಿ ಫ್ರಾಂಚೈಸಿ ಹಾಗೂ ಕೆಎಸ್&zwnj;ಸಿಎ ಈ ಬಾರಿ ಐಪಿಎಲ್ ಟಿಕೆಟ್ ಮಾರಾಟದ ವೇಳೆ ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದ್ದು ಈಗ ಯಾಕೋ ಅಭಿಮಾನಿಗಳ ಕಿವಿ ಮೇಲೆ ಹೂವಿಟ್ಟಂತೆ ಅನಿಸಲಾರಂಭಿಸಿದೆ. ಯಾಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕ್ಯಾಂಟೀನ್ ಇಟ್ಟುಕೊಂಡಾತನ ಬಳಿ ರಾಶಿರಾಶಿ ಐಪಿಎಲ್ ಟಿಕೆಟ್&zwnj;ಗಳು ಪತ್ತೆಯಾಗಿದ್ದು, ಬೆಂಗಳೂರು ಸಿಸಿಬಿ ಪೊಲೀಸರು ಈ ಖದೀಮನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಐಪಿಎಲ್ ಕಾಳಸಂತೆಯ ಟಿಕೆಟ್ ದಂಧೆ ಬಯಲಿಗೆಳೆದ ಸಿಸಿಬಿ&lt;/strong&gt;&lt;/h2&gt;&lt;p&gt;ಒಂದು ಕಡೆ ಒಂದು ಐಪಿಎಲ್ ಟಿಕೆಟ್ ಸಿಕ್ಕರೇ ಸಾಕಪ್ಪ ಎಂದು ಕಾದು ಕುಳಿತು, ಆನ್&zwnj;ಲೈನ್&zwnj;ನಲ್ಲಿ ಐಪಿಎಲ್ ಮ್ಯಾಚ್ ಟಿಕೆಟ್ ಖರೀದಿಸಲು ಸಾವಿರಾರು ಮಂದಿ ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗಿರುವಾಗಲೇ ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುವವರ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ, ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್ ನೌಕರನ ಮೂಲಕವೇ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟಕ್ಕೆ ಕೆಎಸ್&zwnj;ಸಿಎ ಸದಸ್ಯನೇ ಮುಂದಾಗಿದ್ದಾರೆ ಎಂದು ವರದಿಯಾಗಿದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Vishnu Prasad (@bangalorebro_)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;h3&gt;&lt;strong&gt;ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ&lt;/strong&gt;&lt;/h3&gt;&lt;p&gt;ಹೌದು, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿರುವ ಶ್ರೀ ಲಕ್ಷ್ಮಿ ಕೇಟರರ್ಸ್&zwnj;ನ 49 ವರ್ಷದ ಚಂದ್ರಶೇಖರ್ ಪಿ ಎಂಬಾತನನ್ನು ಸೆಂಟ್ರಲ್ ಕ್ರೈಮ್ ಬ್ರಾಂಚ್&zwnj;ನ ಪೊಲೀಸರ್ ಐಪಿಎಲ್ ಬ್ಲಾಕ್ ಟಿಕೆಟ್ ಮಾರಾಟ ಮಾಡುವಾಗ ರೆಡ್&zwnj; ಹ್ಯಾಂಡ್&zwnj; ಆಗಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಆರ್&zwnj;ಸಿಬಿ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವೆ ಇತ್ತೀಚೆಗಷ್ಟೇ ನಡೆದ ಪಂದ್ಯದ ಟಿಕೆಟ್&zwnj;ಗಳನ್ನು 15,000 ದಿಂದ 19,000 ರುಪಾಯಿ ವರೆಗೆ ಒಂದು ಟಿಕೆಟ್ ಮಾರಾಟ ಮಾಡಿದ್ದಾರೆ. ಒಟ್ಟಾರೆ ಈತ 181 ಟಿಕೆಟ್&zwnj;ಗಳಿಂದ 17.52 ಲಕ್ಷ ರುಪಾಯಿ ಗಳಿಸಿದ್ದಾನೆ ಎನ್ನಲಾಗುತ್ತಿದೆ.&lt;/p&gt;&lt;p&gt;ಮೇಲ್ನೋಟಕ್ಕೆ ಈಗ ಕ್ಯಾಂಟೀನ್ ನೌಕರ ಸಿಕ್ಕಿಬಿದ್ದಿದ್ದು, ಇದರ ಹಿಂದಿರುವ ಕಾಣದ ಕೈಗಳನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಬೇಕಿದೆ. ಇದಷ್ಟೇ ಅಲ್ಲದೇ ಕೆಎಸ್&zwnj;ಸಿಎ ಚುನಾವಣೆ ವೇಳೆಯಲ್ಲಿ ನಾವು ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದು ಪುನರುಚ್ಚಿಸುತ್ತಲೇ ಬಂದಿರುವ ಕೆಎಸ್&zwnj;ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಈ ಬಗ್ಗೆ ಏನ್ ಹೇಳ್ತಾರೆ ಕಾದು ನೋಡಬೇಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq"/>
        </item>
        <item>
            <title><![CDATA[IPL 2026: ನಿನ್ನೆ ನಡೆದ ಆರ್‌ಸಿಬಿ-ಲಖನೌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?]]></title>
            <link>https://kannada.asianetnews.com/cricket-sports/who-won-yesterday-royal-challengers-bengaluru-vs-lucknow-super-giants-ipl-match-kvn/articleshow-n0ylnzw</link>
            <guid isPermaLink="true">https://kannada.asianetnews.com/cricket-sports/who-won-yesterday-royal-challengers-bengaluru-vs-lucknow-super-giants-ipl-match-kvn/articleshow-n0ylnzw</guid>
            <pubDate>Thu, 16 Apr 2026 09:34:50 +0530</pubDate>
            <description><![CDATA[ಐಪಿಎಲ್&zwnj; 2026ರಲ್ಲಿ ಲಖನೌ ಸೂಪರ್&zwnj; ಜೈಂಟ್ಸ್&zwnj; ವಿರುದ್ಧ 5 ವಿಕೆಟ್&zwnj;ಗಳ ಜಯ ಸಾಧಿಸಿದ ಆರ್&zwnj;ಸಿಬಿ, ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಪವರ್-ಪ್ಲೇನಲ್ಲಿ ತೋರಿದ ಅದ್ಭುತ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಯಿತು, ವಿರಾಟ್ ಕೊಹ್ಲಿ 49 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kp995j2bvtn5ssa7hnfp151c,imgname-rcb-vs-lsg-match-results-1776280586315.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ಬೆಂಗಳೂರು: ಐಪಿಎಲ್&zwnj; 2026ರಲ್ಲಿ ಹಾಲಿ ಚಾಂಪಿಯನ್&zwnj; ಆರ್&zwnj;ಸಿಬಿ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಲಖನೌ ಸೂಪರ್&zwnj; ಜೈಂಟ್ಸ್&zwnj; ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 5 ವಿಕೆಟ್&zwnj; ಗೆಲುವು ಸಾಧಿಸಿದ ಆರ್&zwnj;ಸಿಬಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್&zwnj; ಜಯ ದಾಖಲಿಸಿತು.&lt;/p&gt;&lt;p&gt;ಎರಡೂ ಇನ್ನಿಂಗ್ಸ್&zwnj;ಗಳ ಪವರ್&zwnj;-ಪ್ಲೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿತು. ಬೌಲಿಂಗ್&zwnj;, ಬ್ಯಾಟಿಂಗ್&zwnj; ಎರಡರಲ್ಲೂ ತಾನೇಕೆ ಚಾಂಪಿಯನ್&zwnj; ತಂಡ ಎನ್ನುವುದನ್ನು ಆರ್&zwnj;ಸಿಬಿ ಪ್ರದರ್ಶಿಸಿತು.&lt;/p&gt;&lt;p&gt;ಟಾಸ್&zwnj; ಗೆದ್ದು ಫೀಲ್ಡಿಂಗ್&zwnj; ಆಯ್ಕೆ ಮಾಡಿಕೊಂಡ ಆರ್&zwnj;ಸಿಬಿ, ಪವರ್&zwnj;-ಪ್ಲೇನಲ್ಲೇ ಲಖನೌ ತಂಡವನ್ನು ಕಟ್ಟಿಹಾಕಿತು. 6 ಓವರಲ್ಲಿ ಕೇವಲ 35 ರನ್&zwnj; ಗಳಿಸಿದ ಲಖನೌ, ನಿರಂತರವಾಗಿ ವಿಕೆಟ್&zwnj;ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಆರ್&zwnj;ಸಿಬಿಯ ಐದೂ ಬೌಲರ್&zwnj;ಗಳು ಎದುರಾಳಿ ಮೇಲೆ ಸವಾರಿ ಮಾಡಿದರು. 20 ಓವರಲ್ಲಿ ಕೇವಲ 146 ರನ್&zwnj;ಗೆ ಆಲೌಟ್&zwnj; ಆಯಿತು.&lt;/p&gt;&lt;p&gt;ಕೊಹ್ಲಿ ಮಿಂಚು: ಸುಲಭ ಗುರಿ ಬೆನ್ನತ್ತಲು ಇಳಿದ ಆರ್&zwnj;ಸಿಬಿ 2ನೇ ಓವರಲ್ಲೇ ಫಿಲ್&zwnj; ಸಾಲ್ಟ್&zwnj; ವಿಕೆಟ್&zwnj; ಕಳೆದುಕೊಂಡರೂ, ವಿರಾಟ್&zwnj; ಕೊಹ್ಲಿಯ ಎಚ್ಚರಿಕೆಯ ಆಟ ತಂಡಕ್ಕೆ ಪವರ್&zwnj;-ಪ್ಲೇನಲ್ಲಿ ಉತ್ತಮ ಸ್ಕೋರ್&zwnj; ತಂದುಕೊಟ್ಟಿತು. 6 ಓವರ್&zwnj; ಅಂತ್ಯಕ್ಕೆ ಆರ್&zwnj;ಸಿಬಿ 1 ವಿಕೆಟ್&zwnj;ಗೆ 60 ರನ್&zwnj; ದಾಖಲಿಸಿ, ಮೇಲುಗೈ ಸಾಧಿಸಿತು. ಪಡಿಕ್ಕಲ್&zwnj;(10) ಔಟಾದ ಮೇಲೆ ಕ್ರೀಸ್&zwnj;ಗಿಳಿದ ರಜತ್&zwnj; ಪಾಟೀದಾರ್&zwnj; ಎಂದಿನಂತೆ ಆಕ್ರಮಣಕಾರಿ ಆಟವಾಡಿದರು. ಕೊಹ್ಲಿ 49 ರನ್&zwnj;ಗೆ ಔಟಾಗಿ ಹೊರನಡೆದ ಬಳಿಕ, ಜಿತೇಶ್&zwnj; ಶರ್ಮಾ 9 ಎಸೆತದಲ್ಲಿ 23 ರನ್&zwnj; ಚಚ್ಚಿದರು. ರಜತ್&zwnj; 27 ರನ್&zwnj;ಗೆ ಔಟಾದರು. ಕೊನೆಯಲ್ಲಿ ಡೇವಿಡ್&zwnj;, ಶೆಫರ್ಡ್&zwnj; 27 ರನ್&zwnj; ಜೊತೆಯಾಟವಾಡಿ ತಂಡವನ್ನು 15.1 ಓವರಲ್ಲಿ ಜಯದ ದಡ ಸೇರಿಸಿದರು.&lt;/p&gt;&lt;p&gt;ಸ್ಕೋರ್&zwnj;: ಲಖನೌ 20 ಓವರಲ್ಲಿ 146/10 (ಮಾರ್ಷ್&zwnj; 40, ಮುಕುಲ್&zwnj; 39, ಆಯುಷ್&zwnj; 38, ರಸಿಖ್&zwnj; 4-24, ಭುವನೇಶ್ವರ್&zwnj; 3-27), ಆರ್&zwnj;ಸಿಬಿ 15.1 ಓವರಲ್ಲಿ 149/5 (ವಿರಾಟ್&zwnj; 49, ರಜತ್&zwnj; 27, ಪ್ರಿನ್ಸ್&zwnj; 3-32, ಆವೇಶ್&zwnj; 2-23) ಪಂದ್ಯಶ್ರೇಷ್ಠ: ರಸಿಖ್&zwnj; ಸಲಾಂ&lt;/p&gt;&lt;h2&gt;&lt;strong&gt;ಟರ್ನಿಂಗ್&zwnj; ಪಾಯಿಂಟ್&zwnj;&lt;/strong&gt;&lt;/h2&gt;&lt;p&gt;ಲೋ ಸ್ಕೋರಿಂಗ್&zwnj; ಪಂದ್ಯಗಳಲ್ಲಿ ಪವರ್&zwnj;-ಪ್ಲೇ ಬಹಳ ಮುಖ್ಯ. ಆರ್&zwnj;ಸಿಬಿ ಮೊದಲ 6 ಓವರಲ್ಲಿ 60 ರನ್&zwnj; ಕಲೆಹಾಕಿದ್ದು, ಮಧ್ಯ ಓವರ್&zwnj;ಗಳಲ್ಲಿ ವಿಕೆಟ್&zwnj; ಬಿದ್ದರೂ ತಂಡಕ್ಕೆ ಗುರಿ ತಲುಪಲು ಕಷ್ಟವಾಗಲಿಲ್ಲ.&lt;/p&gt;&lt;h3&gt;&lt;strong&gt;ಮೊದಲ ಬಾರಿಗೆ ಇಂಪ್ಯಾಕ್ಟ್&zwnj; ಆಟಗಾರನಾಗಿ ಆಡಿದ ಕೊಹ್ಲಿ!&lt;/strong&gt;&lt;/h3&gt;&lt;p&gt;ವಿರಾಟ್&zwnj; ಕೊಹ್ಲಿ ಐಪಿಎಲ್&zwnj;ನಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್&zwnj; ಆಟಗಾರನಾಗಿ ಆಡಿದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊಣಕಾಲು ನೋವಿಗೆ ತುತ್ತಾಗಿದ್ದ ವಿರಾಟ್&zwnj;, ಬುಧವಾರದ ಪಂದ್ಯದಲ್ಲಿ ಫೀಲ್ಡಿಂಗ್&zwnj; ಮಾಡಲಿಲ್ಲ. ಬ್ಯಾಟಿಂಗ್&zwnj; ವೇಳೆ ಸ್ಪಿನ್ನರ್&zwnj; ಸುಯಶ್&zwnj; ಶರ್ಮಾ ಬದಲಿಗೆ ಕೊಹ್ಲಿ ಮೈದಾನಕ್ಕಿಳಿದು, ಇನ್ನಿಂಗ್ಸ್&zwnj; ಆರಂಭಿಸಿದರು.&lt;/p&gt;&lt;h3&gt;&lt;strong&gt;ಲಖನೌ ಇನ್ನಿಂಗ್ಸ್&zwnj;ನಲ್ಲಿ 51 ಡಾಟ್&zwnj;ಬಾಲ್&zwnj;!&lt;/strong&gt;&lt;/h3&gt;&lt;p&gt;ಆರ್&zwnj;ಸಿಬಿ ಬೌಲರ್&zwnj;ಗಳ ವಿರುದ್ಧ ರನ್&zwnj; ಗಳಿಸಲು ಲಖನೌ ಬ್ಯಾಟರ್&zwnj;ಗಳು ತಿಣುಕಾಡಿದರು. ತಂಡದ ಇನ್ನಿಂಗ್ಸಲ್ಲಿ ಬರೋಬ್ಬರಿ 51 ಡಾಟ್&zwnj;ಬಾಲ್&zwnj;ಗಳಿದ್ದವು. ಭುವನೇಶ್ವರ್&zwnj; 8, ಹೇಜಲ್&zwnj;ವುಡ್&zwnj; ಹಾಗೂ ರಸಿಖ್&zwnj; ತಲಾ 13, ಕೃನಾಲ್&zwnj; 10, ಸುಯಶ್&zwnj; 7 ಡಾಟ್&zwnj;ಬಾಲ್&zwnj;ಗಳನ್ನು ಹಾಕಿದರು.&lt;/p&gt;&lt;h3&gt;&lt;strong&gt;ಐಪಿಎಲ್&zwnj;ನಲ್ಲಿ 1000 ರನ್&zwnj;, 100 ವಿಕೆಟ್&zwnj;: ಕೃನಾಲ್&zwnj; 3ನೇ ಭಾರತೀಯ ಆಟಗಾರ&lt;/strong&gt;&lt;/h3&gt;&lt;p&gt;ಐಪಿಎಲ್&zwnj;ನಲ್ಲಿ 1000 ರನ್&zwnj; ಪೂರೈಸಿರುವ ಹಾಗೂ 100 ವಿಕೆಟ್&zwnj; ಕಬಳಿಸಿರುವ ಭಾರತದ 3ನೇ ಆಟಗಾರ ಎನ್ನುವ ಹಿರಿಮೆಗೆ ಆರ್&zwnj;ಸಿಬಿಯ ಕೃನಾಲ್&zwnj; ಪಾಂಡ್ಯ ಪಾತ್ರರಾಗಿದ್ದಾರೆ. ಲಖನೌ ವಿರುದ್ಧದ ಪಂದ್ಯದಲ್ಲಿ ಕೃನಾಲ್&zwnj; 100 ವಿಕೆಟ್&zwnj; ಮೈಲುಗಲ್ಲು ತಲುಪಿದರು. ಅವರು ಐಪಿಎಲ್&zwnj;ನಲ್ಲಿ ಮುಂಬೈ ಪರ 51, ಲಖನೌ ಪರ 25 ಹಾಗೂ ಆರ್&zwnj;ಸಿಬಿ ಪರ 24 ವಿಕೆಟ್&zwnj; ಕಿತ್ತಿದ್ದಾರೆ. 1000 ರನ್&zwnj;, 100 ವಿಕೆಟ್&zwnj; ಸಾಧನೆ ಮಾಡಿದವರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಹಾಗೂ ಅಕ್ಷರ್&zwnj; ಪಟೇಲ್&zwnj; ಕೂಡ ಇದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/who-won-yesterday-royal-challengers-bengaluru-vs-lucknow-super-giants-ipl-match-kvn/articleshow-n0ylnzw"/>
        </item>
        <item>
            <title><![CDATA[ಸತತ ನಾಲ್ಕನೇ ಸೋಲು ಕಂಡ ಬೆನ್ನಲ್ಲೇ ಬಿಸಿಸಿಐನಿಂದ ಶಿಕ್ಷೆಗೆ ಗುರಿಯಾದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ!]]></title>
            <link>https://kannada.asianetnews.com/cricket-sports/ajinkya-rahane-fined-12-lakh-as-kkr-penalised-for-slow-over-rate-in-ipl-2026-kvn/articleshow-n1tohvw</link>
            <guid isPermaLink="true">https://kannada.asianetnews.com/cricket-sports/ajinkya-rahane-fined-12-lakh-as-kkr-penalised-for-slow-over-rate-in-ipl-2026-kvn/articleshow-n1tohvw</guid>
            <pubDate>Wed, 15 Apr 2026 12:13:06 +0530</pubDate>
            <description><![CDATA[ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ನಡೆಸಿದ್ದಕ್ಕಾಗಿ ಕೆಕೆಆರ್ ನಾಯಕ ಅಜಿಂಕ್ಯ ರಹಾನೆಗೆ ಬಿಸಿಸಿಐ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಆವೃತ್ತಿಯಲ್ಲಿ ಈ ರೀತಿ ದಂಡಕ್ಕೆ ಗುರಿಯಾದ ನಾಲ್ಕನೇ ತಂಡ ಕೆಕೆಆರ್ ಆಗಿದ್ದು, ಈ ಹಿಂದೆ ಶ್ರೇಯಸ್ ಅಯ್ಯರ್, ಶುಭ್&zwnj;ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ದಂಡ ತೆತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knhxgc5vk7wjcxq8ntry002c,imgname-ajinkya-rahane-kkr-1775496605883.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಪರದಾಡುತ್ತಿದೆ. ಆಡಿದ ಐದು ಪಂದ್ಯಗಳ ಪೈಕಿ ರಹಾನೆ ನೇತೃತ್ವದ ಕೆಕೆಆರ್ ತಂಡವು ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿದೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲೂ ಕೆಕೆಆರ್ ತಂಡ ಹೀನಾಯ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐ, ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆಗೆ ಬರೋಬ್ಬರಿ 12 ಲಕ್ಷ ರುಪಾಯಿ ದಂಡ ವಿಧಿಸಿದೆ.&lt;/p&gt;&lt;p&gt;ಮಂಗಳವಾರ ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ತಂಡವು ನಿಧಾನಗತಿಯ ಬೌಲಿಂಗ್ ನಡೆಸುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿತ್ತು. ಹೀಗಾಗಿ ಬಿಸಿಸಿಐ ಕೆಕೆಆರ್ ತಂಡದ ನಾಯಕನಿಗೆ ದಂಡದ ಶಿಕ್ಷೆ ವಿಧಿಸಿದೆ.&lt;/p&gt;&lt;p&gt;ಮೂರು ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಕೋಲ್ಕತಾ ನೈಟ್ ರೈಡರ್ಸ್, ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ನಿಯಮ ಉಲ್ಲಂಘನೆ ಮಾಡಿದೆ. ಇದು 19ನೇ ಸೀಸನ್&zwnj;ನಲ್ಲಿ ಕೆಕೆಆರ್ ತಂಡವು ಮಾಡುತ್ತಿರುವ ಮೊದಲ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದರಿಂದ ನಾಯಕನಿಗೆ ಮಾತ್ರ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.&lt;/p&gt;&lt;h2&gt;&lt;strong&gt;ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ನಾಲ್ಕನೇ ತಂಡ ಕೆಕೆಆರ್!&lt;/strong&gt;&lt;/h2&gt;&lt;p&gt;19ನೇ ಆವೃತ್ತಿಯ ಐಪಿಎಲ್&zwnj;ನಲ್ಲಿ ಇದುವರೆಗೂ ಯಶಸ್ವಿಯಾಗಿ 22 ಪಂದ್ಯಗಳು ಮುಕ್ತಾಯವಾಗಿವೆ. ಈ ಪೈಕಿ ನಿಧಾನಗತಿಯ ಬೌಲಿಂಗ್&zwnj; ನಡೆಸಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ನಾಲ್ಕನೇ ತಂಡ ಎನ್ನುವ ಕುಖ್ಯಾತಿಗೆ ಇದೀಗ ಕೆಕೆಆರ್ ತಂಡ ಪಾತ್ರವಾಗಿದೆ. ಈಗಾಗಲೇ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಎರಡು ಬಾರಿ ನಿಧಾನಗತಿಯ ಬೌಲಿಂಗ್ ನಡೆಸಿ ದಂಡ ತೆತ್ತಿದೆ. ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್&zwnj;ಮನ್ ಗಿಲ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ಬಾರಿ ನಿಧಾನಗತಿಯ ಬೌಲಿಂಗ್ ನಡೆಸಿದ ತಪ್ಪಿಗೆ ದಂಡ ತೆತ್ತಿದ್ದಾರೆ.&lt;/p&gt;&lt;h3&gt;&lt;strong&gt;ಐಪಿಎಲ್&zwnj; ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆ:&lt;/strong&gt;&lt;/h3&gt;&lt;p&gt;ಅಂದಹಾಗೆ ಈ ಮೊದಲು ಮೂರು ಬಾರಿ ತಂಡವೊಂದು ಮಂಧಗತಿಯಲ್ಲಿ ಬೌಲಿಂಗ್ ನಡೆಸುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದರೆ ಮುಂದಿನ ಒಂದು ಪಂದ್ಯದ ಮಟ್ಟಿಗೆ ನಾಯಕ ಆ ಪಂದ್ಯದಿಂದ ಹೊರಗುಳಿಯಬೇಕಾಗುತ್ತಿತ್ತು. ಆದರೆ ಹೊಸದಾಗಿ ಐಪಿಎಲ್ ನಿಯಮಾವಳಿಗಳನ್ನು ಪರಿಷ್ಕರಿಸಲಾಗಿದ್ದು, ನಾಯಕ ಬ್ಯಾನ್ ಆಗುವ ನಿಯಮವನ್ನು ತೆಗೆದು ಹಾಕಲಾಗಿದೆ.&lt;/p&gt;&lt;h3&gt;&lt;strong&gt;ಅಭಿಷೇಕ್ ಶರ್ಮಾಗೂ ಬಿಸಿ ಮುಟ್ಟಿಸಿದ ಬಿಸಿಸಿಐ!&lt;/strong&gt;&lt;/h3&gt;&lt;p&gt;ಇನ್ನು ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಅಭಿಷೇಕ್ ಶರ್ಮಾ ಅನುಚಿತ ವರ್ತನೆ ಮಾಡಿದ ತಪ್ಪಿಗೆ ಪಂದ್ಯದ ಸಂಭಾವನೆಯ 25% ದಂಡವನ್ನು ಬಿಸಿಸಿಐ ವಿಧಿಸಿದೆ. ಆದರೆ ಯಾವ ಪ್ರಕರಣಕ್ಕೆ ದಂಡ ವಿಧಿಸಿದೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.&lt;/p&gt;&lt;h3&gt;&lt;strong&gt;ಚೆನ್ನೈ-ಕೆಕೆಆರ್ ನಡುವಿನ ಮ್ಯಾಚ್ ಹೇಗಿತ್ತು?&lt;/strong&gt;&lt;/h3&gt;&lt;p&gt;2024ರ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಪಾತಾಳಕ್ಕೆ ಕುಸಿದಿದ್ದು, ಸಿಎಸ್&zwnj;ಕೆ ಎದುರು ಗೆಲುವಿನ ಖಾತೆ ತೆರೆಯಬಹುದು ಎನ್ನುವ ನಿರೀಕ್ಷೆ ಕೂಡಾ ಹುಸಿಯಾಗಿದೆ. ಕೆಕೆಆರ್ ಎದುರು ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್&zwnj;ಕೆ ತಂಡವು 32 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಸಿಎಸ್&zwnj;ಕೆ ತಂಡವು 5 ವಿಕೆಟ್ ಕಳೆದುಕೊಂಡು 192 ರನ್ ಕಲೆ ಹಾಕಿತು. ಇನ್ನು ಗುರಿ ಬೆನ್ನತ್ತಿದ ಕೆಕೆಆರ್ ತಂಡವು 7 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ಶಕ್ತವಾಯಿತು.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ajinkya-rahane-fined-12-lakh-as-kkr-penalised-for-slow-over-rate-in-ipl-2026-kvn/articleshow-n1tohvw"/>
        </item>
        <item>
            <title><![CDATA[IPL 2026 Winner: ಈ ಬಾರಿ RCB ಕಪ್‌ ಗೆಲ್ಲತ್ತಾ?: ಟ್ಯಾರೋ ರೀಡರ್‌ ಭವಿಷ್ಯ ಕೇಳಿ ದಿಗ್ಭ್ರಮೆಗೊಂಡ ಕನ್ನಡಿಗರು!]]></title>
            <link>https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru</link>
            <guid isPermaLink="true">https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru</guid>
            <pubDate>Fri, 17 Apr 2026 22:56:33 +0530</pubDate>
            <description><![CDATA[&lt;p&gt;IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್&zwnj; ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್&zwnj;ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್&zwnj; ನಮ್ದಾಗತ್ತಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe7azck0dp1n9zbczbzbkpw,imgname-new-project--98--1776446438803.jpg" type="image/jpeg" height="390" width="690"/>
            <content:encoded><![CDATA[&lt;p&gt;IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್&zwnj; ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್&zwnj;ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್&zwnj; ನಮ್ದಾಗತ್ತಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;RCB ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದು ಕೋಟ್ಯಂತರ ಕನ್ನಡಿಗರ, ಕ್ರಿಕೆಟ್ ಪ್ರೇಮಿಗಳ ಭಾವನೆ. ಟ್ರೋಫಿ ಇರಲಿ ಬಿಡಲಿ, ಅವರ ಆಕ್ರಮಣಕಾರಿ ಆಟ ಎಂದಿಗೂ ಜನಮಾನಸದಲ್ಲಿ ಉಳಿಯುತ್ತದೆ. ಈ ಬಾರಿ ಟ್ರೋಫಿ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ. ಈ ತಂಡಕ್ಕೆ ಇದ್ದಷ್ಟು ಅಭಿಮಾನಿ ಬಳಗ ಯಾವ ಟೀಂಗೂ ಇಲ್ಲ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿ ಈಗ ತುಂಬ ಆಧ್ಯಾತ್ಮಿಕವಾಗಿದ್ದಾರೆ. ಅವರು ಮೈದಾನದಲ್ಲಿ ಶತಕಗಳನ್ನು ಸಿಡಿಸಲಿದ್ದಾರೆ. ಅವರ ಏಕದಿನ (ODI) ವೃತ್ತಿಜೀವನವು 2028 ಸುಮಾರಿಗೆ ಇದ್ದಕ್ಕಿದ್ದಂತೆ ಕೊನೆಗೊಳ್ಳಬಹುದು.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ಕಪ್&zwnj; ಗೆಲ್ಲಲಿದೆಯಾ ಎಂದು ಪ್ರಶ್ನೆ ಇದೆ. ಟ್ಯಾರೋ ಕಾರ್ಡ್ ರೀಡರ್ ಅಮಾಯ್ರಾ ಅವರು ಆರ್&zwnj;ಸಿಬಿ ಗೆಲ್ಲಲಿದೆಯಾ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ಟೀಂ ಚೆನ್ನಾಗಿ ಆಡುತ್ತಾರೆ, ಆದರೆ ಫೈನಲ್ ಗೆಲ್ಲುವ ಸಾಧ್ಯತೆ ಕಡಿಮೆ ಇದೆ. RCB ತಂಡವು ಕೊನೇವರೆಗೂ ಹೋದರೂ ಕೂಡ ಟ್ರೋಫಿ ಗೆಲ್ಲುವುದು ಕಷ್ಟ ಎಂದು ಅಮಾಯ್ರಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಗುಜರಾತ್ ಟೈಟನ್ಸ್ ಮತ್ತು ಕೆಕೆಆರ್ ಟೀಂ ನಡುವೆ ತೀವ್ರ ಪೈಪೋಟಿ ಇರಲಿದೆ. ಶುಭ್&zwnj;ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾರತವು 2027 ರ ವಿಶ್ವಕಪ್ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru"/>
        </item>
        <item>
            <title><![CDATA[ವೈಭವ್ ಸೂರ್ಯವಂಶಿ ಎಂಬ ಬಿರುಗಾಳಿಗೆ ಬ್ರೇಕ್ ಹಾಕಿದ Praful Hinge ಯಾರು?; SRH ಹುಡುಕಿದ ರಿಯಲ್ ಡೈಮಂಡ್ ಹಿನ್ನಲೆ ಏನು?]]></title>
            <link>https://kannada.asianetnews.com/gallery/cricket-sports/ipl-match-2026-who-is-praful-hinge-family-background-tkhkazv</link>
            <guid isPermaLink="true">https://kannada.asianetnews.com/gallery/cricket-sports/ipl-match-2026-who-is-praful-hinge-family-background-tkhkazv</guid>
            <pubDate>Tue, 14 Apr 2026 13:45:25 +0530</pubDate>
            <description><![CDATA[&lt;p&gt;Who is Praful Hinge: ಇತ್ತೀಚೆಗೆ ಮ್ಯಾನಿಫೆಸ್ಟೇಶನ್&zwnj; ಬಗ್ಗೆ ಸಿಕ್ಕಾಪಟ್ಟೆ ಮಾತು ಕೇಳಿ ಬರುತ್ತಿದೆ. ಐಪಿಎಲ್&zwnj;ನಲ್ಲಿ ರಾಜಸ್ಥಾನ್&zwnj; ರಾಯಲ್ಸ್&zwnj; ಟೀಂನ ವೈಭವ್&zwnj; ಸೂರ್ಯವಂಶಿಯನ್ನು ಮೊದಲ ಬಾಲ್&zwnj;ನಲ್ಲೇ ಔಟ್&zwnj; ಮಾಡ್ತೀನಿ ಎಂದು ಹೇಳಿದ್ದ ಪ್ರಫುಲ್&zwnj; ಹಿಂಗೆ ಅವರು ಅದೇ ಥರ ನಡೆದುಕೊಂಡರು.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp5g9b4kxvzaa26pvak5y2gz,imgname-new-project--85--1776153832595.jpg" type="image/jpeg" height="390" width="690"/>
            <content:encoded><![CDATA[&lt;p&gt;Who is Praful Hinge: ಇತ್ತೀಚೆಗೆ ಮ್ಯಾನಿಫೆಸ್ಟೇಶನ್&zwnj; ಬಗ್ಗೆ ಸಿಕ್ಕಾಪಟ್ಟೆ ಮಾತು ಕೇಳಿ ಬರುತ್ತಿದೆ. ಐಪಿಎಲ್&zwnj;ನಲ್ಲಿ ರಾಜಸ್ಥಾನ್&zwnj; ರಾಯಲ್ಸ್&zwnj; ಟೀಂನ ವೈಭವ್&zwnj; ಸೂರ್ಯವಂಶಿಯನ್ನು ಮೊದಲ ಬಾಲ್&zwnj;ನಲ್ಲೇ ಔಟ್&zwnj; ಮಾಡ್ತೀನಿ ಎಂದು ಹೇಳಿದ್ದ ಪ್ರಫುಲ್&zwnj; ಹಿಂಗೆ ಅವರು ಅದೇ ಥರ ನಡೆದುಕೊಂಡರು.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಐಪಿಎಲ್ ಪಂದ್ಯ ಆರಂಭವಾಗುವ ಮುನ್ನ ಪ್ರಫುಲ್ ಹಿಂಗೆ ಅವರು ತಮ್ಮ ಸಹ ಆಟಗಾರ ಅಥರ್ವ ತೈಡೆ ಅವರ ಮುಂದೆ, &quot;ನಾನು ವೈಭವ್ ಸೂರ್ಯವಂಶಿಗೆ ಹಾಕೋ ಫಸ್ಟ್&zwnj; ಬಾಲ್&zwnj;ನಲ್ಲಿ ಔಟ್&zwnj; ಮಾಡ್ತೀನಿ&rdquo; ಎಂದು ಹೇಳಿದ್ದರು. ಈ ಮಾತನ್ನು ನಿಜ ಮಾಡಿದ್ದಾರೆ.&amp;nbsp;&lt;/p&gt;&lt;p&gt;ಐಪಿಎಲ್&zwnj;ನಲ್ಲಿ ಸಿಕ್ಸರ್&zwnj;, ಫೋರ್&zwnj; ಬಾರಿಸಿದ್ದ ಯು ಆಟಗಾರ ವೈಭವ್&zwnj;ಗೆ ಇದು ದೊಡ್ಡ ಪಾಠವಾದರೆ, ಪ್ರಫುಲ್ ಅವರಿಗೆ ಇದು ಮರೆಯಲಾಗದ ಕ್ಷಣವಾಗಿದೆ.&lt;/p&gt;&lt;img&gt;&lt;p&gt;ಪ್ರಫುಲ್&zwnj; ಹಿಂಗೆ ಅವರು ಮಹಾರಾಷ್ಟ್ರದ ನಾಗಪುರದವರು. ಕಳೆದ ಹನ್ನೊಂದು ವರ್ಷದಿಂದ ಅವರು ಕ್ರಿಕೆಟ್&zwnj; ಆಡುತ್ತಿದ್ದಾರೆ. ಐಪಿಎಲ್&zwnj;ನಲ್ಲಿ ಇದು ಅವರ ಮೊದಲ ಆಟವಾಗಿತ್ತು. ಸನ್&zwnj;ರೈಸರ್ಸ್&zwnj; ಹೈದರಾಬಾದ್&zwnj; ಟೀಂ ಇವರನ್ನು 30 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ.&lt;/p&gt;&lt;img&gt;&lt;p&gt;ಪ್ರಫುಲ್&zwnj; ಅವರ ತಂದೆ-ತಾಯಿಗೆ ಕ್ರಿಕೆಟ್&zwnj; ಜರ್ನಿಗೆ ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲದೆ ಅಕ್ಕ ಸಿಎ ಮಾಡಿದ್ದು, ಶಾಲೆಯಲ್ಲಿ ರ್ಯಾಂಕ್&zwnj; ಪಡೆದಿದ್ದಾರೆ. ಆದರೆ ಪ್ರಫುಲ್&zwnj; ಮಾತ್ರ ಓದಿನಲ್ಲಿ ಹಿಂದೆ ಆಗಿದ್ದರು.&lt;/p&gt;]]></content:encoded>
            <category>ipl</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/ipl-match-2026-who-is-praful-hinge-family-background-tkhkazv"/>
        </item>
        <item>
            <title><![CDATA[ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ದೊಡ್ಡ ಶಾಕ್; ಲಖನೌ ಎದುರಿನ ಇಂದಿನ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಶುರುವಾಯ್ತು ಹೊಸ ತಲೆನೋವು!]]></title>
            <link>https://kannada.asianetnews.com/cricket-sports/ipl-2026-virat-kohli-injury-concern-for-rcb-ahead-of-lsg-clash-star-batter-likely-to-miss-match-kvn/articleshow-txazoh4</link>
            <guid isPermaLink="true">https://kannada.asianetnews.com/cricket-sports/ipl-2026-virat-kohli-injury-concern-for-rcb-ahead-of-lsg-clash-star-batter-likely-to-miss-match-kvn/articleshow-txazoh4</guid>
            <pubDate>Wed, 15 Apr 2026 10:12:55 +0530</pubDate>
            <description><![CDATA[ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ವಿರಾಟ್ ಕೊಹ್ಲಿ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಇಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಅಭ್ಯಾಸದ ವೇಳೆ ಕಾಲಿಗೆ ಪಟ್ಟಿ ಕಟ್ಟಿಕೊಂಡು ಕಾಣಿಸಿಕೊಂಡಿದ್ದು, ಅವರು ಸಂಪೂರ್ಣ ಫಿಟ್ ಆಗದಿದ್ದರೆ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp1ay50m5x3vsadpd814ycfw,imgname-20260412393l-1776014005268.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನದ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡಲು ಇಳಿದಿರಲಿಲ್ಲ. ಇದೀಗ ವಿರಾಟ್ ಕೊಹ್ಲಿಯ ಗಾಯದ ಸಮಸ್ಯೆಯೇ ಹಾಲಿ ಚಾಂಪಿಯನ್ ಆರ್&zwnj;ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.&lt;/p&gt;&lt;p&gt;ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ತವರಿನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲು ರೆಡಿಯಾಗಿದೆ. ಇಂದು ಸಂಜೆ 7.30ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಖನೌ-ಆರ್&zwnj;ಸಿಬಿ ಹೈವೋಲ್ಟೇಜ್ ಮ್ಯಾಚ್ ಆರಂಭವಾಗಲಿದೆ. ಆದರೆ ಇಂದಿನ ಪಂದ್ಯದಲ್ಲಿ ಆರ್&zwnj;ಸಿಬಿ ರನ್ ವಿರಾಟ್ ಕೊಹ್ಲಿ ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.&lt;/p&gt;&lt;h2&gt;&lt;strong&gt;ಸಂಪೂರ್ಣವಾಗಿ ಫಿಟ್ ಆಗಿಲ್ಲ ವಿರಾಟ್ ಕೊಹ್ಲಿ!&lt;/strong&gt;&lt;/h2&gt;&lt;p&gt;ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದ ವೇಳೆ ಗಾಯಗೊಂಡಿದ್ದ ವಿರಾಟ್ ಕೊಹ್ಲಿ, ನಿನ್ನೆ ಅಭ್ಯಾಸ ನಡೆಸಲು ಮೈದಾನಕ್ಕೆ ಬಂದಿದ್ದರು. ಇದನ್ನು ನೋಡಿದ ಫ್ಯಾನ್ಸ್, ಮುಂದಿನ ಪಂದ್ಯದಲ್ಲಿ ವಿರಾಟ್&zwnj; ಕೊಹ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಭಾವಿಸಿದ್ದರು. ಆದರೆ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಆ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಭ್ಯಾಸದ ವೇಳೆಯಲ್ಲಿಯೂ ಕೊಹ್ಲಿ ಎಡಗಾಲಿಗೆ ಪಟ್ಟಿ ಕಟ್ಟಿಕೊಂಡೇ ಮೈದಾನಕ್ಕಿಳಿದಿರುವುದು ಕಂಡು ಬಂದಿದೆ. ಕೊಹ್ಲಿ ಅಭ್ಯಾಸ ನಡೆಸಿದ ರೀತಿಯನ್ನು ಗಮನಿಸಿದರೆ, ಅವರು ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿಲ್ಲ ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಅದರಲ್ಲೂ ತಂಡದ ಅತ್ಯಂತ ಮಹತ್ವದ ಆಟಗಾರರಾಗಿರುವ ಕೊಹ್ಲಿ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಆರ್&zwnj;ಸಿಬಿ ಮ್ಯಾನೇಜ್&zwnj;ಮೆಂಟ್ ತಯಾರಿಲ್ಲ. ನಾಯಕ ರಜತ್ ಪಾಟೀದಾರ್ ಕೂಡಾ, ಕೊಹ್ಲಿ ಸಂಪೂರ್ಣ ಫಿಟ್ ಆದ ಬಳಿಕವಷ್ಟೇ ಮೈದಾನಕ್ಕಿಳಿಯಲಿ ಎಂದು ಬಯಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.&lt;/p&gt;&lt;p&gt;Yaari dosti  pic.twitter.com/lgdcrCTITI&lt;/p&gt;&lt;p&gt;&mdash; Lucknow Super Giants (@LucknowIPL) April 14, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಆರ್&zwnj;ಸಿಬಿ-ಲಖನೌ ನಡುವಿನ ಹೈವೋಲ್ಟೇಜ್ ಮ್ಯಾಚ್&zwnj;ಗೆ ಕ್ಷಣಗಣನೆ:&lt;/strong&gt;&lt;/h3&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಇಂದು ಸಂಜೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾದಾಡಲಿವೆ. ಒಂದು ವೇಳೆ ಈ ಮ್ಯಾಚ್&zwnj;ಗೂ ಮುನ್ನ ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್ ಆಗಿಲ್ಲವಾದರೇ, ಅವರ ಸ್ಥಾನಕ್ಕೆ ವೆಂಕಟೇಶ್ ಅಯ್ಯರ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ವೆಂಕಟೇಶ್ ಅಯ್ಯರ್ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ವೇಳೆಯಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದು ಗಮನ ಸೆಳೆದಿದ್ದರು. ಇಂದು ವಿರಾಟ್ ಕೊಹ್ಲಿ ಮೈದಾನಕ್ಕಿಳಿಯುತ್ತಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಇಂದು ಸಂಜೆ ನಡೆಯುವ ಟಾಸ್ ವರೆಗೂ ಕಾಯಲೇಬೇಕಾಗುತ್ತದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-2026-virat-kohli-injury-concern-for-rcb-ahead-of-lsg-clash-star-batter-likely-to-miss-match-kvn/articleshow-txazoh4"/>
        </item>
        <item>
            <title><![CDATA[ಭಾರತಕ್ಕೆ ಆಯ್ಕೆಯಾಗಿ ಸಚಿನ್‌ ದಾಖಲೆ ಮುರೀತಾರ ವೈಭವ್‌ ಸೂರ್ಯವಂಶಿ? ಟೀಂ ಇಂಡಿಯಾ ಶಾರ್ಟ್‌ಲಿಸ್ಟ್‌ನಲ್ಲಿ ವೈಭವ್ ಹೆಸರು?]]></title>
            <link>https://kannada.asianetnews.com/cricket-sports/15-year-old-vaibhav-suryavanshi-likely-for-india-squad-eyes-record-as-youngest-debutant-kvn/articleshow-x1r9ueh</link>
            <guid isPermaLink="true">https://kannada.asianetnews.com/cricket-sports/15-year-old-vaibhav-suryavanshi-likely-for-india-squad-eyes-record-as-youngest-debutant-kvn/articleshow-x1r9ueh</guid>
            <pubDate>Wed, 15 Apr 2026 08:58:36 +0530</pubDate>
            <description><![CDATA[ಐಪಿಎಲ್&zwnj;ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ 15 ವರ್ಷದ ವೈಭವ್&zwnj; ಸೂರ್ಯವಂಶಿಯನ್ನು ಐರ್ಲೆಂಡ್&zwnj; ಪ್ರವಾಸಕ್ಕೆ ಬಿಸಿಸಿಐ ಪರಿಗಣಿಸುತ್ತಿದೆ. ಒಂದು ವೇಳೆ ಅವರು ಆಯ್ಕೆಯಾದರೆ, ಸಚಿನ್&zwnj; ತೆಂಡುಲ್ಕರ್ ಮತ್ತು ಶಫಾಲಿ ವರ್ಮಾ ಅವರ ದಾಖಲೆ ಮುರಿದು ಭಾರತ ತಂಡಕ್ಕೆ ಆಡಿದ ಅತಿಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knrzr83vh97ewmcn9pkgynzq,imgname-vaibhav-suryavanshi-ank-jyotish-04-1775733842043.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಈ ಬಾರಿ ಐಪಿಎಲ್&zwnj;ನಲ್ಲಿ ಅಬ್ಬರದ ಆಟವಾಡುತ್ತಿರುವ 15 ವರ್ಷದ ವೈಭವ್&zwnj; ಸೂರ್ಯವಂಶಿಯನ್ನು ಐರ್ಲೆಂಡ್&zwnj; ಪ್ರವಾಸಕ್ಕೆ ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಆಯ್ಕೆ ಸಮಿತಿಯು ವೈಭವ್&zwnj;ರ ಹೆಸರನ್ನು 35 ಮಂದಿಯ ಶಾರ್ಟ್&zwnj;ಲಿಸ್ಟ್&zwnj;ಗೆ ಸೇರಿಸಿದ್ದು, ಪ್ರವಾಸ ಕೈಗೊಳ್ಳುವ 15 ಮಂದಿಯ ತಂಡದಲ್ಲಿ ಸ್ಥಾನ ನೀಡುವ ನಿರೀಕ್ಷೆಯಿದೆ. ಹೀಗಾದರೆ ಅವರು ಭಾರತ ತಂಡಕ್ಕೆ ಆಯ್ಕೆಯಾದ ಅತಿಕಿರಿಯ ಆಟಗಾರ ಎನ್ನುವ ಖ್ಯಾತಿ ಗಳಿಸಲಿದ್ದಾರೆ.&lt;/p&gt;&lt;p&gt;ವೈಭವ್&zwnj; ಸೂರ್ಯವಂಶಿ ಈಗಾಗಲೇ ಅಂಡರ್&zwnj;-19 ತಂಡದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಈ ಐಪಿಎಲ್&zwnj;ನಲ್ಲಿ ಬುಮ್ರಾ, ಹೇಜಲ್&zwnj;ವುಡ್&zwnj; ಸೇರಿ ಪ್ರಮುಖ ಅಂತಾರಾಷ್ಟ್ರೀಯ ಬೌಲರ್&zwnj;ಗಳ ವಿರುದ್ಧ ವೈಭವ್&zwnj;ರ ಆಟ ಆಯ್ಕೆ ಸಮಿತಿಯ ಗಮನ ಸೆಳೆದಿದೆ. ಹೀಗಾಗಿ ಅವರ ಪ್ರತಿಭೆಗೆ ತಕ್ಕಂತೆ ಭಾರತ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಶಫಾಲಿ ವರ್ಮಾ, ಸಚಿನ್&zwnj; ತೆಂಡೂಲ್ಕರ್ ಕಿರಿಯ ಕ್ರಿಕೆಟರ್ಸ್&zwnj;&lt;/strong&gt;&lt;/h2&gt;&lt;p&gt;ಭಾರತಕ್ಕೆ ಆಡಿದ ಅತಿ ಕಿರಿಯ ಪುರುಷ ಕ್ರಿಕೆಟಿಗ ಸಚಿನ್&zwnj; ತೆಂಡುಲ್ಕರ್&zwnj;. 1989ರಲ್ಲಿ ಸಚಿನ್&zwnj;ಗೆ 16 ವರ್ಷ 205 ದಿನಗಳಾಗಿದ್ದಾಗ ಭಾರತ ತಂಡದ ಪರ ಆಡಿದ್ದರು. ಒಟ್ಟಾರೆ, ಶಫಾಲಿ ವರ್ಮಾ ಭಾರತ ಪ್ರತಿನಿಧಿಸಿದ ಅತಿ ಕಿರಿಯ ಕ್ರಿಕೆಟರ್&zwnj;. ಅವರು 15 ವರ್ಷ, 8 ತಿಂಗಳಾಗಿದ್ದಾಗಲೇ ಭಾರತಕ್ಕೆ ಆಡಿದ್ದರು. ವೈಭವ್&zwnj; ಆಡಿದರೆ ಸಚಿನ್&zwnj;, ಶಫಾಲಿ ದಾಖಲೆ ಮುರಿಯಲಿದ್ದಾರೆ.&lt;/p&gt;&lt;h3&gt;&lt;strong&gt;ಐರ್ಲೆಂಡ್&zwnj;, ಇಂಗ್ಲೆಂಡ್&zwnj; ಪ್ರವಾಸ ಬಳಿಕ ಸೂರ್ಯಕುಮಾರ್ ಯಾದವ್ ಭವಿಷ್ಯ ನಿರ್ಧಾರ&lt;/strong&gt;&lt;/h3&gt;&lt;p&gt;ನವದೆಹಲಿ: ಇತ್ತೀಚೆಗೆ ಭಾರತಕ್ಕೆ ಸೂರ್ಯಕುಮಾರ್&zwnj; ಯಾವದ್&zwnj; ತಮ್ಮ ನಾಯಕತ್ವದಲ್ಲೇ ಟಿ20 ವಿಶ್ವಕಪ್&zwnj; ಗೆಲ್ಲಿಸಿಕೊಟ್ಟಿರಬಹುದು. ಆದರೆ ಅವರ ಬ್ಯಾಟಿಂಗ್&zwnj; ಫಾರ್ಮ್&zwnj; ನೋಡಿದರೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಹಾಗೂ ಟಿ20 ವಿಶ್ವಕಪ್&zwnj;ವರೆಗೂ ತಂಡದಲ್ಲಿ ಉಳಿಯಲಿದ್ದಾರೆಯೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.&lt;/p&gt;&lt;p&gt;ಜೂನ್-ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಸರಣಿಯು ನಾಯಕ ಸೂರ್ಯಕುಮಾರ್&zwnj;ಗೆ ನಿರ್ಣಾಯಕವಾಗಿರಲಿದೆ. ಏಕೆಂದರೆ ನಾಯಕತ್ವಕ್ಕಿಂತ ಹೆಚ್ಚಾಗಿ ಅವರ ಬ್ಯಾಟಿಂಗ್ ಪರಿಶೀಲನೆಗೆ ಒಳಪಡಲಿದೆ. ಈ 2 ಸರಣಿಗಳಲ್ಲಿ ಅವರು ನೀಡುವ ಪ್ರದರ್ಶನದ ಮೇಲೆ ಭವಿಷ್ಯ ನಿರ್ಧಾರವಾಗಲಿದೆ. ಕಳಪೆ ಪ್ರದರ್ಶನ ನೀಡಿದರೆ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ನಿವೃತ್ತಿಗೂ ಸೂಚಿಸಬಹುದು ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ಸೂರ್ಯಕುಮಾರ್&zwnj;ಗೆ ಸೆಪ್ಟೆಂಬರ್&zwnj;ನಲ್ಲಿ 36 ವರ್ಷ ತುಂಬುತ್ತದೆ. ಒಲಿಂಪಿಕ್ಸ್&zwnj;, 2028ರ ವಿಶ್ವಕಪ್&zwnj; ವೇಳೆಗೆ ಅವರ ವಯಸ್ಸು 38 ಆಗಲಿದೆ. ಹೀಗಾಗಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಿದ್ದರೆ ಬ್ಯಾಟಿಂಗ್&zwnj;ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದೇ ಪ್ರಮುಖ ಮಾನದಂಡವಾಗಿರಲಿದೆ.&lt;/p&gt;]]></content:encoded>
            <category>ipl</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/15-year-old-vaibhav-suryavanshi-likely-for-india-squad-eyes-record-as-youngest-debutant-kvn/articleshow-x1r9ueh"/>
        </item>
        <item>
            <title><![CDATA[ಆರ್‌ಸಿಬಿ ಈಗಿನ ಸಕ್ಸಸ್‌ಗೆ ಮುಂಬೈ ಇಂಡಿಯನ್ಸ್ ನೇರ ಕಾರಣ! 4 ಮಹಾ ಎಡವಟ್ಟು ಮಾಡಿದ 5 ಬಾರಿಯ ಚಾಂಪಿಯನ್]]></title>
            <link>https://kannada.asianetnews.com/cricket-sports/top-4-big-mistakes-by-mumbai-indians-that-helped-rcb-dominate-ipl-2026-kvn/articleshow-ynkma3r</link>
            <guid isPermaLink="true">https://kannada.asianetnews.com/cricket-sports/top-4-big-mistakes-by-mumbai-indians-that-helped-rcb-dominate-ipl-2026-kvn/articleshow-ynkma3r</guid>
            <pubDate>Thu, 16 Apr 2026 11:29:13 +0530</pubDate>
            <description><![CDATA[&lt;p&gt;19ನೇ ಸೀಸನ್ ಐಪಿಎಲ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಗ್ರಸ್ಥಾನಕ್ಕೇರಲು ಮುಂಬೈ ಇಂಡಿಯನ್ಸ್ ತಂಡವು ಹರಾಜಿನಲ್ಲಿ ಮಾಡಿದ ನಾಲ್ಕು ಪ್ರಮುಖ ತಪ್ಪುಗಳೇ ಕಾರಣವಾಗಿವೆ. ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್&zwnj;ರಂತಹ ಆಟಗಾರರನ್ನು ಕೈಬಿಟ್ಟು, ದುಬಾರಿ ಮತ್ತು ವಿಫಲ ಬೌಲರ್&zwnj;ಗಳನ್ನು ಖರೀದಿಸಿದ ಮುಂಬೈನ ಎಡವಟ್ಟುಗಳು ಆರ್&zwnj;ಸಿಬಿ ತಂಡವನ್ನು ಬಲಿಷ್ಠಗೊಳಿಸಿವೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp1gkt11yf9dqwtg8ar5vpek,imgname-who-won-yesterdays-ipl-match-kal-ka-match-kon-jeeta-mi-vs-rcb-ipl-2026-20th-match-result-highlights-awards-and-winner-1776019957793.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲೂ ತನ್ನ ಚಾಂಪಿಯನ್ ಆಟವನ್ನು ಮುಂದುವರೆಸಿದ್ದು, ತಾನಾಡಿದ ಮೊದಲ 5 ಪಂದ್ಯಗಳ ಬಳಿಕ 4 ಭರ್ಜರಿ ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಇಂದು ಆರ್&zwnj;ಸಿಬಿ ತಂಡ ಈ ಮಟ್ಟಿಗೆ ಡಾಮಿನೇಟ್ ಪ್ರದರ್ಶನ ನೀಡಲು, ಬಲವಾದ ತಂಡವಾಗಿ ರೂಪುಗೊಳ್ಳಲು ಮುಂಬೈ ಇಂಡಿಯನ್ಸ್ ತಂಡ ಮಾಡಿದ 4 ಮಹಾ ಎಡವಟ್ಟುಗಳು ಕಾರಣ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಅದು ಸತ್ಯ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.&lt;/p&gt;&lt;h2&gt;&lt;strong&gt;1. ಟಿಮ್ ಡೇವಿಡ್ ಕೈಬಿಟ್ಟು ವಿಲ್ ಜ್ಯಾಕ್ಸ್ ಖರೀದಿಸಿದ್ದು!&lt;/strong&gt;&lt;/h2&gt;&lt;p&gt;2025ರ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಐಪಿಎಲ್ ಹರಾಜಿನಲ್ಲಿ ಬಿಗ್ ಹಿಟ್ಟರ್ ಟಿಮ್ ಡೇವಿಡ್ ಅವರನ್ನು ಕೇವಲ 3 ಕೋಟಿಗೆ ಆರ್&zwnj;ಸಿಬಿಗೆ ಬಿಟ್ಟುಕೊಟ್ಟು ವಿಲ್ ಜ್ಯಾಕ್ಸ್ ಅವರನ್ನು 5.25 ಕೋಟಿ ರುಪಾಯಿ ನೀಡಿ ಖರೀದಿಸಿದ್ದು ಮುಂಬೈ ಮಾಡಿದ ಮಹಾ ತಪ್ಪು. ಕೀರನ್ ಪೊಲ್ಲಾರ್ಡ್ ಬಳಿಕ ಒಳ್ಳೆಯ ಮ್ಯಾಚ್ ಫಿನಿಶರ್ ಆಗಿ ಟಿಮ್ ಡೇವಿಡ್ ರೆಡಿಯಾಗುತ್ತಿದ್ದರು. ಆದರೆ ಮೂರ್ನಾಲ್ಕು ಕೆಟ್ಟ ಇನ್ನಿಂಗ್ಸ್ ಗಮನದಲ್ಲಿಟ್ಟುಕೊಂಡು ಟಿಮ್ ಡೇವಿಡ್ ಅವರನ್ನು 3 ಕೋಟಿಗೆ ಖರೀದಿಸಲು ಮನಸ್ಸು ಮಾಡಲಿಲ್ಲ. ಈಗ ಅದೇ ಟಿಮ್ ಡೇವಿಡ್ ಕಳೆದೆರಡು ಸೀಸನ್ ಐಪಿಎಲ್&zwnj;ನಲ್ಲಿ ಎದುರಾಳಿ ಬೌಲರ್&zwnj;ಗಳನ್ನು ಚೆಂಡಾಡುವ ಮೂಲಕ ಬೆಸ್ಟ್ ಮ್ಯಾಚ್ ಫಿನಿಶರ್ ಎನಿಸಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;2. ರೊಮ್ಯಾರಿಯೋ ಶೆಫರ್ಡ್ ಕೈಬಿಟ್ಟ ಮುಂಬೈ:&lt;/strong&gt;&lt;/h3&gt;&lt;p&gt;ಟಿಮ್ ಡೇವಿಡ್ ಅವರಂತೆ ಮುಂಬೈ ಫ್ರಾಂಚೈಸಿಯು ವೆಸ್ಟ್ ಇಂಡೀಸ್ ಸ್ಟಾರ್ ಆಲ್ರೌಂಡರ್ ರೊಮ್ಯಾರಿಯೋ ಶೆಫರ್ಡ್ ಅವರನ್ನು ಕೈಬಿಟ್ಟಿದ್ದು ಕೂಡಾ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 2024ರ ಐಪಿಎಲ್&zwnj;ನಲ್ಲಿ 50 ಲಕ್ಷಕ್ಕೆ ಶೆಫರ್ಡ್ ಮುಂಬೈ ತಂಡದಲ್ಲಿದ್ರು. ಆ ಸೀಸನ್&zwnj;ನಲ್ಲಿ 291.67ರ ಸ್ಟ್ರೈಕ್&zwnj;ರೇಟ್&zwnj;ನಲ್ಲಿ ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರು. ಹೀಗಿದ್ದೂ 2025ರ ಐಪಿಎಲ್ ಹರಾಜಿಗೂ ಮುನ್ನ 1.5 ಕೋಟಿಗೂ ಖರೀದಿಸಲು ಮುಂಬೈ ಒಲವು ತೋರಲಿಲ್ಲ. ಆದರೆ ಆರ್&zwnj;ಸಿಬಿ ಫ್ರಾಂಚೈಸಿ ಶೆಫರ್ಡ್&zwnj; ಅವರನ್ನು 1.5 ಕೋಟಿ ಮೂಲ ಬೆಲೆಗೆ ಖರೀದಿಸಿತು. ಆಮೇಲೆ ಶೆಫರ್ಡ್ ಕೈಬಿಟ್ಟು ಎಂತ ತಪ್ಪು ಮಾಡಿದೆವು ಎನ್ನುವುದು ಐದು ಬಾರಿಯ ಚಾಂಪಿಯನ್ನರಿಗೆ ಈಗಲೂ ಕಾಡುತ್ತಿದೆ.&lt;/p&gt;&lt;h3&gt;&lt;strong&gt;3. ಭುವನೇಶ್ವರ್ ಕುಮಾರ್ ಇದ್ದರೂ ಗಾಯಾಳು ದೀಪಕ್ ಚಹರ್ ಖರೀದಿಸಿದ್ದು!&lt;/strong&gt;&lt;/h3&gt;&lt;p&gt;2025ರ ಐಪಿಎಲ್ ಹರಾಜಿಗೂ ಮುನ್ನ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹರಾಜಿನಲ್ಲಿ ಇದ್ದರು. ಆರಂಭದಿಂದಲೂ ಭುವಿ ಖರೀದಿಸಲು ಮುಂಬೈ ಹಾಗೂ ಆರ್&zwnj;ಸಿಬಿ ಫ್ರಾಂಚೈಸಿಗಳು ಪೈಪೋಟಿ ನಡೆಸಿದವು. ಆದರೆ 10.50 ಕೋಟಿ ಮೇಲೆ ಬಿಡ್ ಮಾಡಲು ಮುಂಬೈ ಮನಸ್ಸು ಮಾಡಲಿಲ್ಲ. ಬಳಿಕ ಆರ್&zwnj;ಸಿಬಿ 10.75 ಕೋಟಿಗೆ ಭುವಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಇನ್ನು ಗಾಯಾಳು ದೀಪಕ್ ಚಹರ್&zwnj;ಗೆ ಮುಂಬೈ 9.25 ಕೋಟಿ ರುಪಾಯಿ ಖರ್ಚು ಮಾಡಿತು. ಕಳೆದ ಸೀಸನ್&zwnj;ನಲ್ಲಿ ಭುವಿ 17 ವಿಕೆಟ್ ಕಬಳಿಸಿ ಆರ್&zwnj;ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ದೀಪಕ್ ಚಹರ್ ಟಾಪ್ 15 ವಿಕೆಟ್ ಟೇಕರ್ ಪಟ್ಟಿಯಲ್ಲೂ ಸ್ಥಾನ ಪಡೆಯಲಿಲ್ಲ.&lt;/p&gt;&lt;h3&gt;&lt;strong&gt;4. ಜೋಶ್ ಹೇಜಲ್&zwnj;ವುಡ್ ಇದ್ದರೂ ಟ್ರೆಂಟ್ ಬೌಲ್ಟ್ ಖರೀದಿಸಿದ್ದ ಮುಂಬೈ ಇಂಡಿಯನ್ಸ್&lt;/strong&gt;&lt;/h3&gt;&lt;p&gt;ಆಸೀಸ್&zwnj; ನೀಳಕಾಯದ ವೇಗಿ ಜೋಶ್ ಹೇಜಲ್&zwnj;ವುಡ್ ಹಾಗೂ ನ್ಯೂಜಿಲೆಂಡ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಇಬ್ಬರೂ ಇದ್ದರು. ಆದರೆ ಆರ್&zwnj;ಸಿಬಿ ಫ್ರಾಂಚೈಸಿ 12.50 ಕೋಟಿಗೆ ಖರೀದಿಸಿತು. ಮುಂಬೈ ಫ್ರಾಂಚೈಸಿ 12.75 ಕೋಟಿಗೆ ಬೌಲ್ಟ್&zwnj;ರನ್ನು ಖರೀಸಿದಿತು. ಕಳೆದ ಸೀಸನ್&zwnj;ನಲ್ಲಿ ಇಬ್ಬರು ವೇಗಿಗಳು 22 ವಿಕೆಟ್ ಕಬಳಿಸಿದ್ದರು. ಆದರೆ ಈ ಸೀಸನ್&zwnj;ನಲ್ಲಿ ಆರ್&zwnj;ಸಿಬಿ ವೇಗಿ ಹೇಜಲ್&zwnj;ವುಡ್ ಕರಾರುವಕ್ಕಾದ ದಾಳಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇನ್ನು ಬೌಲ್ಟ್ ಸಾಕಷ್ಟು ದುಬಾರಿಯಾಗುತ್ತಿದ್ದು, ವಿಕೆಟ್ ಕಬಳಿಸಲು ಪರದಾಡುತ್ತಿದ್ದಾರೆ.&lt;/p&gt;&lt;p&gt;ಮುಂಬೈ ಇಂಡಿಯನ್ಸ್ ಮಾಡಿದ ಈ ನಾಲ್ಕು ಮಹಾ ಎಡವಟ್ಟುಗಳು ಆರ್&zwnj;ಸಿಬಿ ತಂಡದ ಪಾಲಿಗೆ ಅದೃಷ್ಟದ ಬಾಗಿಲನ್ನೇ ತೆರೆದಿದೆ. ಸದ್ಯ ಆರ್&zwnj;ಸಿಬಿ ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 4 ಪಂದ್ಯಗಳಲ್ಲಿ ಮೂರು ಸೋಲು ಹಾಗೂ ಒಂದು ಗೆಲುವು ಸಹಿತ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/top-4-big-mistakes-by-mumbai-indians-that-helped-rcb-dominate-ipl-2026-kvn/articleshow-ynkma3r"/>
        </item>
        <item>
            <title><![CDATA[CSK ತಂಡಕ್ಕೆ ಬಡಿದ 440 ವೋಲ್ಟ್ ಶಾಕ್! ಸತತ ಎರಡು ಗೆಲುವಿನ ಬೆನ್ನಲ್ಲೇ ಪ್ರಮುಖ ವೇಗಿ ಟೂರ್ನಿಯಿಂದಲೇ ಔಟ್]]></title>
            <link>https://kannada.asianetnews.com/cricket-sports/csk-suffer-major-blow-as-khaleel-ahmed-ruled-out-of-ipl-2026-kvn/articleshow-zropeie</link>
            <guid isPermaLink="true">https://kannada.asianetnews.com/cricket-sports/csk-suffer-major-blow-as-khaleel-ahmed-ruled-out-of-ipl-2026-kvn/articleshow-zropeie</guid>
            <pubDate>Thu, 16 Apr 2026 17:06:58 +0530</pubDate>
            <description><![CDATA[ಹ್ಯಾಟ್ರಿಕ್ ಸೋಲಿನ ಬಳಿಕ ಸತತ ಎರಡು ಪಂದ್ಯ ಗೆದ್ದು ಚೇತರಿಸಿಕೊಳ್ಳುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಎಡಗೈ ವೇಗಿ ಖಲೀಲ್ ಅಹಮದ್, ತೊಡೆಸಂದು ಗಾಯದ ಸಮಸ್ಯೆಯಿಂದಾಗಿ 19ನೇ ಸೀಸನ್ ಐಪಿಎಲ್&zwnj;ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knaeq8hpbhnvesg6774amnm3,imgname-csk--1--1775246221878.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹ್ಯಾಟ್ರಿಕ್ ಸೋಲಿನ ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿತ್ತು. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಸಿಎಸ್&zwnj;ಕೆಗೆ 440 ವೋಲ್ಟ್ ಶಾಕ್ ಬಡಿದಿದ್ದು, ತಂಡದ ಪ್ರಮುಖ ವೇಗಿ ಖಲೀಲ್ ಅಹಮದ್ ತೊಡೆಸಂದು ಗಾಯದ ಸಮಸ್ಯೆಯಿಂದಾಗಿ 19ನೇ ಸೀಸನ್ ಐಪಿಎಲ್&zwnj;ನಿಂದಲೇ ಹೊರಬಿದ್ದಿದ್ದಾರೆ. ಇದು ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.&lt;/p&gt;&lt;p&gt;ಖಲೀಲ್ ಅಹಮದ್ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಎಲ್ಲಾ ಐದು ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು. ಆದರೆ ಕಳೆದ ಏಪ್ರಿಲ್ 14ರಂದು ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದ ವೇಳೆಯಲ್ಲಿ ತೊಡೆಸಂದಿನ ನೋವಿಗೆ ಒಳಗಾಗಿದ್ದರು. ಹೀಗಾಗಿ ಖಲೀಲ್ ಅಹಮದ್, ತಮ್ಮ ಪಾಲಿನ ಕೊನೆಯ ಓವರ್ ಬೌಲಿಂಗ್ ಮಾಡದಿರಲು ತೀರ್ಮಾನಿಸಿದ್ದರು.&lt;/p&gt;&lt;h2&gt;&lt;strong&gt;ಸಿಎಸ್&zwnj;ಕೆ ಪರ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಖಲೀಲ್ ಅಹಮದ್:&lt;/strong&gt;&lt;/h2&gt;&lt;p&gt;ಮೊದಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಯುವ ಎಡಗೈ ವೇಗಿ ಖಲೀಲ್ ಅಹಮದ್ ಭರವಸೆಯ ಆಶಾಕಿರಣ ಎನಿಸಿಕೊಂಡಿದ್ದರು. ಆದರೆ ಇದೀಗ ಗ್ರೇಡ್-2 ಹಂತದ ಗಾಯಕ್ಕೊಳಗಾಗಿರುವುದರಿಂದಾಗಿ ಗಾಯದಿಂದ ಚೇತರಿಸಿಕೊಳ್ಳಲು ಖಲೀಲ್ ಅಹಮದ್ ಅವರಿಗೆ ಕನಿಷ್ಠ 10ರಿಂದ 12 ವಾರಗಳ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಖಲೀಲ್ ಅಹಮದ್ 2026ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಖಲೀಲ್ ಅಹಮದ್ ಸಿಎಸ್&zwnj;ಕೆ ಪರ ಐದು ಪಂದ್ಯಗಳನ್ನಾಡಿ ಎರಡು ಪ್ರಮುಖ ಎರಡು ವಿಕೆಟ್ ಪಡೆದಿದ್ದರು.&lt;/p&gt;&lt;p&gt; BIG BLOW FOR CHENNAI SUPER KINGS - Khaleel Ahmed has been ruled out of the IPL 2026 due to an injury. [Bharat Sharma from PTI] pic.twitter.com/NJOs4VJcon&lt;/p&gt;&lt;p&gt;&mdash; Johns. (@CricCrazyJohns) April 16, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಭಾರತ ತಂಡವನ್ನು ಪ್ರತಿನಿಧಿಸಿರುವ ಖಲೀಲ್ ಅಹಮದ್;&lt;/strong&gt;&lt;/h3&gt;&lt;p&gt;ಪ್ರತಿಭಾನ್ವಿತ ಎಡಗೈ ವೇಗಿಯಾಗಿರುವ ಖಲೀಲ್ ಅಹಮದ್ ಈಗಾಗಲೇ ಭಾರತ ಪರ 11 ಏಕದಿನ ಹಾಗೂ 18 ಟಿ20 ಪಂದ್ಯಗಳನ್ನಾಡಿ ಮಿಂಚಿದ್ದಾರೆ. ಖಲೀಲ್ ಭಾರತ 11 ಏಕದಿನ ಪಂದ್ಯಗಳಿಂದ 15 ವಿಕೆಟ್ ಹಾಗೂ 18 ಟಿ20 ಪಂದ್ಯಗಳಿಂದ 16 ವಿಕೆಟ್ ಕಬಳಿಸಿದ್ದಾರೆ. ಖಲೀಲ್ ಅಹಮದ್ ಭಾರತ ಪರ 2024ರ ಜುಲೈನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.&lt;/p&gt;&lt;h3&gt;&lt;strong&gt;19ನೇ ಸೀಸನ್&zwnj;ನಲ್ಲಿ ಸಿಎಸ್&zwnj;ಕೆ ಪ್ರದರ್ಶನ:&lt;/strong&gt;&lt;/h3&gt;&lt;p&gt;ಐದು ಬಾರಿಯ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಗಿತ್ತು. ಧೋನಿ ಅನುಪಸ್ಥಿತಿಯಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಮೂರು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಹೀನಾಯ ಸೋಲು ಕಂಡಿತ್ತು. ಇದಾದ ಬಳಿಕ &amp;nbsp;ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ್ದು, ಸದ್ಯ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/csk-suffer-major-blow-as-khaleel-ahmed-ruled-out-of-ipl-2026-kvn/articleshow-zropeie"/>
        </item>
    </channel>
</rss>
