<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 16 Sep 2026 15:22:06 +0530</lastBuildDate>
        <atom:link href="https://kannada.asianetnews.com/rss/ipl" rel="self" type="application/rss+xml"/>
        <item>
            <title><![CDATA[ಟೀಂ ಇಂಡಿಯಾಗೆ ಗುಡ್‌ಬೈ ಹೇಳಿದ 24 ಗಂಟೆಯಲ್ಲೇ ಗೌತಮ್ ಗಂಭೀರ್ ಆಪ್ತನ ಹೆಗಲೇರಿದ ಹೊಸ ಜವಾಬ್ದಾರಿ!]]></title>
            <link>https://kannada.asianetnews.com/cricket-sports/just-24-hours-after-india-exit-ryan-ten-doeschate-takes-up-new-kkr-role-kvn/articleshow-2464dh6</link>
            <guid isPermaLink="true">https://kannada.asianetnews.com/cricket-sports/just-24-hours-after-india-exit-ryan-ten-doeschate-takes-up-new-kkr-role-kvn/articleshow-2464dh6</guid>
            <pubDate>Wed, 29 Jul 2026 14:36:12 +0530</pubDate>
            <description><![CDATA[ಟೀಂ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ರಯಾನ್ ಟೆನ್ ಡೋಸ್ಕಾಟೆ, ಕೋಲ್ಕತಾ ನೈಟ್ ರೈಡರ್ಸ್ ಮಾಲೀಕತ್ವದ 'ನೈಟ್ ರೈಡರ್ಸ್ ಸ್ಪೋರ್ಟ್ಸ್' ಸಂಸ್ಥೆಯ ಜಾಗತಿಕ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಭಾರತ ತಂಡದಿಂದ ಹೊರನಡೆದ ಅವರು, ನೈಟ್ ರೈಡರ್ಸ್&zwnj;ನ ಜಾಗತಿಕ ಫ್ರಾಂಚೈಸಿಗಳಿಗೂ ಸಹಾಯಕ ಕೋಚ್ ಆಗಿ ಕೆಲಸ ಮಾಡಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxjfgf07zswv3rmskqbyhtxh,imgname-gettyimages-2185501565-1784105417730.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಟೀಂ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ 24 ಗಂಟೆ ಕಳೆಯುವುದರೊಳಗೆ, ನೆದರ್ಲೆಂಡ್ಸ್&zwnj;ನ ಮಾಜಿ ಆಲ್&zwnj;ರೌಂಡರ್ ರಯಾನ್ ಟೆನ್ ಡೋಸ್ಕಾಟೆ ಹೊಸ ಜವಾಬ್ದಾರಿಯೊಂದನ್ನು ವಹಿಸಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಭಾರತ ತಂಡದಿಂದ ಹೊರನಡೆದಿದ್ದ ಅವರು, ಇದೀಗ ಕೋಲ್ಕತಾ ನೈಟ್ ರೈಡರ್ಸ್ (KKR) ಮಾಲೀಕತ್ವದ 'ನೈಟ್ ರೈಡರ್ಸ್ ಸ್ಪೋರ್ಟ್ಸ್' ಸಂಸ್ಥೆಯ ಜಾಗತಿಕ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ (Head of Global Cricket Strategy) ನೇಮಕಗೊಂಡಿದ್ದಾರೆ. 2027ರವರೆಗೆ ಒಪ್ಪಂದವನ್ನು ಮುಂದುವರಿಸುವ ಬಿಸಿಸಿಐ ಆಫರ್ ಅನ್ನು ತಿರಸ್ಕರಿಸಿ ಡೋಸ್ಕಾಟೆ ಟೀಂ ಇಂಡಿಯಾದಿಂದ ಹೊರಬಂದಿದ್ದರು. ಇದರ ಬೆನ್ನಲ್ಲೇ ಅವರು ಕೋಲ್ಕತಾ ತಂಡದಲ್ಲಿ ಹೊಸ ಹುದ್ದೆ ಸ್ವೀಕರಿಸಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.&lt;/p&gt;&lt;p&gt;ಕೋಲ್ಕತಾದ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ, ನೈಟ್ ರೈಡರ್ಸ್&zwnj;ನ ಜಾಗತಿಕ ಫ್ರಾಂಚೈಸಿಗಳಿಗೆ ಪ್ರತಿಭಾನ್ವಿತ ಆಟಗಾರರನ್ನು ಹುಡುಕುವುದು (ಸ್ಕೌಟಿಂಗ್), ನೇಮಕಾತಿ, ತಂಡದ ಯೋಜನೆ ಮತ್ತು ಆಟಗಾರರ ಪ್ರದರ್ಶನವನ್ನು ವಿಶ್ಲೇಷಿಸುವ ಜವಾಬ್ದಾರಿಯನ್ನು ಡೋಸ್ಕಾಟೆ ಹೊತ್ತಿದ್ದಾರೆ. ಇದರ ಜೊತೆಗೆ, ಕೆರಿಬಿಯನ್ ಪ್ರೀಮಿಯರ್ ಲೀಗ್&zwnj;ನಲ್ಲಿ ಟ್ರಿನ್&zwnj;ಬಾಗೊ ನೈಟ್ ರೈಡರ್ಸ್, ಐಎಲ್&zwnj;ಟಿ20ಯಲ್ಲಿ ಅಬುದಾಬಿ ನೈಟ್ ರೈಡರ್ಸ್ ಮತ್ತು ಮೇಜರ್ ಲೀಗ್ ಕ್ರಿಕೆಟ್&zwnj;ನಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಗಳ ಸಹಾಯಕ ಕೋಚ್ ಆಗಿಯೂ ಅವರು ಕೆಲಸ ಮಾಡಲಿದ್ದಾರೆ.&lt;/p&gt;&lt;h2&gt;&lt;strong&gt;ಡೋಸ್ಕಾಟೆಯನ್ನು ಆತ್ಮೀಯವಾಗಿ ಸ್ವಾಗತಿಸಿದ ಕೆಕೆಆರ್ ಫ್ರಾಂಚೈಸಿ&lt;/strong&gt;&lt;/h2&gt;&lt;p&gt;&quot;ಡೋಸ್ಕಾಟೆಯವರನ್ನು ಮತ್ತೆ ನೈಟ್ ರೈಡರ್ಸ್ ಕುಟುಂಬಕ್ಕೆ ಸ್ವಾಗತಿಸಲು ನಮಗೆ ಬಹಳ ಸಂತೋಷವಿದೆ. ನಮ್ಮ ತಂಡದ ಗುರಿ ಮತ್ತು ಶೈಲಿಯ ಬಗ್ಗೆ ಅವರಿಗೆ ಸ್ಪಷ್ಟವಾದ ತಿಳುವಳಿಕೆ ಇದೆ. ಅವರ ಅನುಭವ ಈ ಜವಾಬ್ದಾರಿಗೆ ಸೂಕ್ತವಾಗಿದೆ,&quot; ಎಂದು ನೈಟ್ ರೈಡರ್ಸ್ ಸ್ಪೋರ್ಟ್ಸ್ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ 45 ವರ್ಷದ ಡೋಸ್ಕಾಟೆ, &quot;ನೈಟ್ ರೈಡರ್ಸ್ ಬಳಗಕ್ಕೆ ಮರಳಿರುವುದು ಖುಷಿ ತಂದಿದೆ. ಜಾಗತಿಕ ಮಟ್ಟದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸುವುದು ಮತ್ತು ದೀರ್ಘಾವಧಿಯ ಕ್ರಿಕೆಟ್ ತಂತ್ರಗಳನ್ನು ರೂಪಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ,&quot; ಎಂದರು.&lt;/p&gt;&lt;p&gt;ಡೋಸ್ಕಾಟೆ ಮತ್ತು ಕೋಲ್ಕತಾ ತಂಡಕ್ಕೆ ದಶಕಗಳ ಸಂಬಂಧವಿದೆ. 2011ರಲ್ಲಿ ಆಟಗಾರನಾಗಿ ತಂಡ ಸೇರಿದ್ದ ಅವರು, 2012 ಮತ್ತು 2014ರಲ್ಲಿ ತಂಡ ಚಾಂಪಿಯನ್ ಆದಾಗ ಪ್ರಮುಖ ಪಾತ್ರ ವಹಿಸಿದ್ದರು. 2022ರಲ್ಲಿ ನಿವೃತ್ತಿ ನಂತರ ಕೋಚಿಂಗ್ ಸಿಬ್ಬಂದಿಯಾಗಿ ತಂಡಕ್ಕೆ ಮರಳಿದ್ದರು. ಗೌತಮ್ ಗಂಭೀರ್ ಮೆಂಟರ್&zwnj;ಶಿಪ್&zwnj;ನಲ್ಲಿ ಕೋಲ್ಕತಾ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಾಗ, ಡೋಸ್ಕಾಟೆ ಸಹಾಯಕ ಸಿಬ್ಬಂದಿಯ ಪ್ರಮುಖ ಭಾಗವಾಗಿದ್ದರು.&lt;/p&gt;&lt;h3&gt;&lt;strong&gt;ಟೀಂ ಇಂಡಿಯಾ ಸಹಾಯಕ ಕೋಚ್ ಹುದ್ದೆಗೆ ಗುಡ್&zwnj;ಬೈ&lt;/strong&gt;&lt;/h3&gt;&lt;p&gt;2024ರ ಜುಲೈನಲ್ಲಿ ಗೌತಮ್ ಗಂಭೀರ್ ಭಾರತ ತಂಡದ ಹೆಡ್ ಕೋಚ್ ಆದಾಗ, ಡೋಸ್ಕಾಟೆ ಸಹಾಯಕ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅವಧಿಯಲ್ಲಿ ಭಾರತ ತಂಡ 2025ರ ಏಷ್ಯಾ ಕಪ್ ಮತ್ತು 2026ರ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. 2027ರವರೆಗೆ ಒಪ್ಪಂದ ಮುಂದುವರಿಸಲು ಬಿಸಿಸಿಐ ಕೇಳಿಕೊಂಡರೂ, ನಿರಂತರ ಪ್ರಯಾಣವನ್ನು ತಪ್ಪಿಸಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವರು ಒಪ್ಪಂದವನ್ನು ನವೀಕರಿಸಲಿಲ್ಲ. ಸದ್ಯ ಅವರು ಅಂತರರಾಷ್ಟ್ರೀಯ ಪ್ರವಾಸಗಳ ಬದಲು ಫ್ರಾಂಚೈಸಿ ಲೀಗ್&zwnj;ಗಳ ಮೇಲೆ ಗಮನ ಹರಿಸಲು ನಿರ್ಧರಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/just-24-hours-after-india-exit-ryan-ten-doeschate-takes-up-new-kkr-role-kvn/articleshow-2464dh6"/>
        </item>
        <item>
            <title><![CDATA[CSKನೂ ಅಲ್ಲ, KKR ಕೂಡಾ ಅಲ್ಲ ಎರಡೂ ತಂಡ ಬಿಟ್ಟು ಹಾರ್ದಿಕ್ ಪಾಂಡ್ಯ ಈ ತಂಡ ಸೇರಬಹುದು! ಅಚ್ಚರಿ ಭವಿಷ್ಯ ನುಡಿದ ರವಿಚಂದ್ರನ್ ಅಶ್ವಿನ್]]></title>
            <link>https://kannada.asianetnews.com/cricket-sports/hardik-pandya-to-return-to-gujarat-titans-r-ashwin-makes-big-ipl-2027-prediction-kvn/articleshow-419kem2</link>
            <guid isPermaLink="true">https://kannada.asianetnews.com/cricket-sports/hardik-pandya-to-return-to-gujarat-titans-r-ashwin-makes-big-ipl-2027-prediction-kvn/articleshow-419kem2</guid>
            <pubDate>Fri, 14 Aug 2026 16:58:55 +0530</pubDate>
            <description><![CDATA[&lt;p&gt;2027ರ ಐಪಿಎಲ್&zwnj;ನಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಕೆಕೆಆರ್ ಮತ್ತು ಸಿಎಸ್&zwnj;ಕೆ ಹೆಸರುಗಳು ಕೇಳಿಬರುತ್ತಿರುವ ಮಧ್ಯೆ, ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಪಾಂಡ್ಯ ತಮ್ಮ ಹಳೆಯ ತಂಡವಾದ ಗುಜರಾತ್ ಟೈಟಾನ್ಸ್&zwnj;ಗೆ ಮರಳಲಿದ್ದಾರೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyewk2kmeyrpabf0ce38jzfg,imgname-hardik-pandya-trade-rumours-intensify-1785058658932.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2027ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಎನ್ನುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈಗಾಗಲೇ ಮುಂಬೈ ಇಂಡಿಯನ್ಸ್&zwnj; ತಂಡದಿಂದ ಒಂದು ಕಾಲು ಹೊರಗಿಟ್ಟಿರುವ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಮಾಜಿ ಚಾಂಪಿಯನ್ನರಾದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪೈಪೋಟಿ ನಡೆಸುತ್ತಿವೆ ಎನ್ನುವ ಸುದ್ದಿ ಗುಟ್ಟಾಗಿಯೇನು ಉಳಿದಿಲ್ಲ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಈ ಎರಡೂ ತಂಡಗಳನ್ನು ಬಿಟ್ಟು ಬೇರೆಯದ್ದೇ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.&lt;/p&gt;&lt;p&gt;ಕೆಲದಿನಗಳ ಹಿಂದಷ್ಟೇ ಮುಂಬೈ ಇಂಡಿಯನ್ಸ್ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ, ತಮ್ಮ ಮಾಜಿ ತಂಡವಾಗಿರುವ ಗುಜರಾತ್ ಟೈಟಾನ್ಸ್ ಸೇರಲು ಒಲವು ತೋರಿದ್ದರು ಎಂದು ವರದಿಯಾಗಿತ್ತು. ಆದರೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಬಳಿ ಪಾಂಡ್ಯ ನಾಯಕತ್ವ ಬೇಡಿಕೆಯಿಟ್ಟಿದ್ದರು, ಗುಜರಾತ್ ಫ್ರಾಂಚೈಸಿ ಪಾಂಡ್ಯ ಬೇಡಿಕೆಯನ್ನು ತಿರಸ್ಕರಿಸಿತ್ತು ಎಂದೆಲ್ಲಾ ವರದಿಯಾಗಿತ್ತು. ಸದ್ಯ ಗುಜರಾತ್ ಟೈಟಾನ್ಸ್ ತಂಡವನ್ನು ಶುಭ್&zwnj;ಮನ್ ಮುನ್ನಡೆಸುತ್ತಿದ್ದು, ಕಳೆದ ಸೀಸನ್ ಐಪಿಎಲ್&zwnj;ನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿ, ಆರ್&zwnj;ಸಿಬಿ ಎದುರು ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಅಶ್ವಿನ್ ಪ್ರಕಾರ, ಹಾರ್ದಿಕ್ ಪಾಂಡ್ಯ ಮತ್ತೆ ಗುಜರಾತ್ ಟೈಟಾನ್ಸ್ ತೆಕ್ಕೆಗೆ ಜಾರಲಿದ್ದಾರೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.&lt;/p&gt;&lt;h2&gt;&lt;strong&gt;ಪಾಂಡ್ಯ, ಗುಜರಾತ್ ಟೈಟಾನ್ಸ್ ಮಾತುಕತೆ ನಡೆಸಿದ್ದರೇ ತಪ್ಪಲ್ಲ&lt;/strong&gt;&lt;/h2&gt;&lt;p&gt;'ಗುಜರಾತ್ ಟೈಟಾನ್ಸ್ ತಂಡವನ್ನು ಭೇಟಿ ಮಾಡಿ ಹಾರ್ದಿಕ್ ಪಾಂಡ್ಯ ಮಾತುಕತೆ ನಡೆಸಿದ್ದರೇ ಅದು ತಪ್ಪೇನು ಅಲ್ಲ. ಅವರು ಆ ತಂಡದ ಜತೆಗೆ ನಿಜಕ್ಕೂ ಎಂಜಾಯ್ ಮಾಡಿಕೊಂಡು ಆಡಿದ್ದಾರೆ. ಅದು ನಾಯಕತ್ವವೇ ಇರಲಿ ಅಥವಾ ಬ್ಯಾಟಿಂಗ್ ವಿಚಾರವೇ ಇರಲಿ, ಅವರಿಂದ ಶ್ರೇಷ್ಠ ಪ್ರದರ್ಶನ ಮೂಡಿಬಂದಿದ್ದೇ ಅವರು ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾಗ. ನನಗೆ ಈಗಲೂ ಅನಿಸ್ತಿದೆ ಅವರು ಮತ್ತೆ ಗುಜರಾತ್ ಟೈಟಾನ್ಸ್ ತೆಕ್ಕೆಗೆ ಜಾರುತ್ತಾರೆಂದು' ಎಂದು ಅಶ್ವಿನ್ ತಮ್ಮದೇ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಹೇಳಿದ್ದಾರೆ.&lt;/p&gt;&lt;p&gt;ಹಾರ್ದಿಕ್ ಪಾಂಡ್ಯ ಎರಡು ಸೀಸನ್&zwnj; ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. 2022ರಲ್ಲಿ ನಾಯಕರಾಗಿ ಮೊದಲ ಸೀಸನ್&zwnj;ನಲ್ಲಿಯೇ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್&zwnj; ಪಟ್ಟಕ್ಕೇರಿಸಿದ್ದರು. ಇದಾದ ಮರು ವರ್ಷ ಅಂದರೆ 2023ರ ಐಪಿಎಲ್ ಟೂರ್ನಿಯಲ್ಲೂ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಚನ್ನೈ ಸೂಪರ್ ಕಿಂಗ್ಸ್ ಎದುರು ವಿರೋಚಿತ ಸೋಲು ಅನುಭವಿಸುವ ಮೂಲಕ ರನ್ನರ್&zwnj;ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದಾದ ಬಳಿಕ 2024ರ ಐಪಿಎಲ್ ಟೂರ್ನಿಗೂ ಮುನ್ನ ಗುಜರಾತ್ ಟೈಟಾನ್ಸ್ ತೊರೆದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿದ್ದರು.&lt;/p&gt;&lt;p&gt;&lt;strong&gt;ಹಾರ್ದಿಕ್ ಪಾಂಡ್ಯ ಯಾಕೆ ಗುಜರಾತ್ ಟೈಟಾನ್ಸ್&zwnj;ಗೆ ವಾಪಾಸ್ಸಾಗಬೇಕು?&lt;/strong&gt;&lt;/p&gt;&lt;p&gt;ಗುಜರಾತ್ ಟೈಟಾನ್ಸ್ ಹಾರ್ದಿಕ್ ಪಾಂಡ್ಯ ಪಾಲಿಗೆ ನಿಜಕ್ಕೂ ಒಳ್ಳೆಯ ವೇದಿಕೆ. ಗುಜರಾತ್ ಟೈಟಾನ್ಸ್ ಕೂಡಾ ಒಳ್ಳೆಯ ತಂಡ. ಕಳೆದ ಎರಡು ವರ್ಷಗಳಿಂದ ಶುಭ್&zwnj;ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಚೆನ್ನಾಗಿ ಆಡುತ್ತಾ ಬಂದಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್&zwnj;ಗೆ ವಾಪಾಸ್ಸಾದರೂ ನಾಯಕತ್ವ ಸಿಗುವುದು ಅನುಮಾನ. ಆದರೆ ಆಟಗಾರನಾಗಿ ಪಾಂಡ್ಯ ಮತ್ತೆ ಗುಜರಾತ್ ಟೈಟಾನ್ಸ್ ತಂಡದಲ್ಲಿ ಮಿಂಚಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/hardik-pandya-to-return-to-gujarat-titans-r-ashwin-makes-big-ipl-2027-prediction-kvn/articleshow-419kem2"/>
        </item>
        <item>
            <title><![CDATA[ಆ ಒಂದು ಶತಕ ನನ್ನ ವೃತ್ತಿಜೀವನವನ್ನೇ ರೂಪಿಸಿತು; ಆರ್‌ಸಿಬಿ ವಿರುದ್ಧದ ಆಟ ನೆನೆದ 'ಕಿಲ್ಲರ್' ಮಿಲ್ಲರ್]]></title>
            <link>https://kannada.asianetnews.com/cricket-sports/david-miller-reveals-how-century-against-rcb-in-ipl-2013-shaped-his-cricket-career/articleshow-9qzxcve</link>
            <guid isPermaLink="true">https://kannada.asianetnews.com/cricket-sports/david-miller-reveals-how-century-against-rcb-in-ipl-2013-shaped-his-cricket-career/articleshow-9qzxcve</guid>
            <pubDate>Thu, 13 Aug 2026 16:02:30 +0530</pubDate>
            <description><![CDATA[2013ರ ಐಪಿಎಲ್&zwnj;ನಲ್ಲಿ ಆರ್&zwnj;ಸಿಬಿ ವಿರುದ್ಧ ಸಿಡಿಸಿದ ಅಜೇಯ 101 ರನ್&zwnj;ಗಳೇ ತಮ್ಮ ವೃತ್ತಿಜೀವನದ ಅತ್ಯಂತ ಮಹತ್ವದ ಇನ್ನಿಂಗ್ಸ್ ಎಂದು ಡೇವಿಡ್ ಮಿಲ್ಲರ್ ಹೇಳಿದ್ದಾರೆ. ಆ ಒತ್ತಡದ ಚೇಸಿಂಗ್ ತನ್ನ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು ಎಂದಿದ್ದಾರೆ. ಜೊತೆಗೆ, 2022ರಲ್ಲಿ ಗುಜರಾತ್ ಟೈಟಾನ್ಸ್ ಜೊತೆ ಐಪಿಎಲ್ ಟ್ರೋಫಿ ಗೆದ್ದಿದ್ದು ತಮ್ಮ ನೆಚ್ಚಿನ ಕ್ಷಣ ಎಂದು ಅವರು ನೆನಪಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx09qqjc5488tpsafy5ccq9,imgname-david-miller---ipl-2013-1786606050976.jpg" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್, 2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ತಾವು ಬಾರಿಸಿದ್ದ ಅಜೇಯ 101 ರನ್&zwnj;ಗಳ ಇನ್ನಿಂಗ್ಸ್ ಅನ್ನು ತಮ್ಮ ವೃತ್ತಿಜೀವನದಲ್ಲಿಯೇ ಅತ್ಯಂತ ಹೆಮ್ಮೆಯ ಆಟ ಎಂದು ಬಣ್ಣಿಸಿದ್ದಾರೆ. ಆ ಒತ್ತಡದ ಚೇಸಿಂಗ್ ತಮ್ಮ ವೃತ್ತಿಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಅವರು ಹೇಳಿದ್ದಾರೆ. ಸದ್ಯ 'ದಿ ಹಂಡ್ರೆಡ್ 2026' ಟೂರ್ನಿಯಲ್ಲಿ ಸದರ್ನ್ ಬ್ರೇವ್ ತಂಡವನ್ನು ಪ್ರತಿನಿಧಿಸುತ್ತಿರುವ ಮಿಲ್ಲರ್, ಜಿಯೋಸ್ಟಾರ್ ಜೊತೆ ಮಾತನಾಡುತ್ತಾ ತಮ್ಮ ವೃತ್ತಿಜೀವನ ಮತ್ತು ಐಪಿಎಲ್&zwnj;ನ ಸ್ಮರಣೀಯ ಪ್ರದರ್ಶನಗಳನ್ನು ನೆನಪಿಸಿಕೊಂಡರು.&lt;/p&gt;&lt;h2&gt;&lt;strong&gt;'ಅದು ನನ್ನ ವೃತ್ತಿಜೀವನಕ್ಕೆ ಅಡಿಪಾಯ ಹಾಕಿತು': ಮಿಲ್ಲರ್ ಮಾತು&lt;/strong&gt;&lt;/h2&gt;&lt;p&gt;ಒಂದು ದಶಕಕ್ಕೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ, ಈ ಎಡಗೈ ಬ್ಯಾಟರ್ ಟಿ20 ಕ್ರಿಕೆಟ್&zwnj;ನ ಅತ್ಯಂತ ನಂಬಿಕಸ್ಥ ಮಿಡಲ್-ಆರ್ಡರ್ ಫಿನಿಶರ್&zwnj;ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. &quot;ನನ್ನ ಪ್ರಕಾರ, ಆರ್&zwnj;ಸಿಬಿ ವಿರುದ್ಧ ನಾನು ಗಳಿಸಿದ 101 ರನ್&zwnj;ಗಳ ಆ ಇನ್ನಿಂಗ್ಸ್ ಇದೆಯಲ್ಲ, ಅದು ನನ್ನ ಪಾಲಿಗೆ ತುಂಬಾನೇ ಸ್ಪೆಷಲ್. ಅದೊಂದು ಚೇಸಿಂಗ್ ಆಗಿತ್ತು, ಗುರಿ ಬೆನ್ನಟ್ಟಿ ಶತಕ ಬಾರಿಸಿದ್ದು, ಐಪಿಎಲ್&zwnj;ನಲ್ಲಿ ನನ್ನ ಮೊದಲ ಶತಕ, ನನ್ನ ಮೊದಲ ಟಿ20 ಶತಕ ಕೂಡ ಅದೇ ಆಗಿತ್ತು. ಈಗ ಹಿಂತಿರುಗಿ ನೋಡಿದರೆ, ಆ ಒಂದು ಇನ್ನಿಂಗ್ಸ್ ನನ್ನ ವೃತ್ತಿಜೀವನಕ್ಕೆ ಅಡಿಪಾಯ ಹಾಕಿತು ಅನ್ನಿಸುತ್ತೆ. ಹಾಗೆಯೇ, ಡರ್ಬನ್&zwnj;ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಇನ್ನೊಂದು ಇನ್ನಿಂಗ್ಸ್ ಕೂಡ ನನಗೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತೆ. ಅಲ್ಲೂ ನಾವು ಗುರಿ ಬೆನ್ನಟ್ಟಿದ್ದೆವು, ನಾನು 118 ರನ್ ಗಳಿಸಿ ಅಜೇಯನಾಗಿ ಉಳಿದಿದ್ದೆ. ಹೀಗೆ ಒತ್ತಡದಲ್ಲಿ ಶತಕ ಬಾರಿಸಿದ ಈ ಎರಡು ಇನ್ನಿಂಗ್ಸ್&zwnj;ಗಳು ಯಾವಾಗಲೂ ವಿಶೇಷವಾಗಿ ನಿಲ್ಲುತ್ತವೆ,&quot; ಎಂದು ಮಿಲ್ಲರ್ ಹೇಳಿದರು.&lt;/p&gt;&lt;p&gt;2013ರ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಪರ ಆಡುತ್ತಿದ್ದ ಮಿಲ್ಲರ್, ಆರ್&zwnj;ಸಿಬಿ ವಿರುದ್ಧ ಕೇವಲ 38 ಎಸೆತಗಳಲ್ಲಿ 101 ರನ್ ಚಚ್ಚಿದ್ದರು. ಇದು ಅವರ ಐಪಿಎಲ್ ವೃತ್ತಿಜೀವನದ ಅತ್ಯಂತ ಸ್ಮರಣೀಯ ಇನ್ನಿಂಗ್ಸ್&zwnj;ಗಳಲ್ಲಿ ಒಂದಾಗಿ ಉಳಿದಿದೆ. ಈ ಪ್ರದರ್ಶನವು ಅವರನ್ನು ಮಿಡಲ್ ಆರ್ಡರ್&zwnj;ನಲ್ಲಿ ವಿನಾಶಕಾರಿ ಬ್ಯಾಟರ್ ಆಗಿ ಜಗತ್ತಿಗೆ ಪರಿಚಯಿಸಿತು ಮತ್ತು 'ಫಿನಿಶರ್' ಎಂಬ ಅವರ ಖ್ಯಾತಿಗೆ ಬುನಾದಿ ಹಾಕಿತು.&lt;/p&gt;&lt;h2&gt;&lt;strong&gt;ಫಿನಿಶಿಂಗ್ ಕಲೆಯ ಮಾಸ್ಟರ್!&lt;/strong&gt;&lt;/h2&gt;&lt;p&gt;ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಇನ್ನಿಂಗ್ಸ್&zwnj;ಗಳನ್ನು ಮುಗಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವುದೇ ತಮಗೆ ಅತ್ಯಂತ ತೃಪ್ತಿ ನೀಡಿದ ವಿಷಯ ಎಂದು ಈ ದಕ್ಷಿಣ ಆಫ್ರಿಕಾದ ಆಟಗಾರ ಹೇಳಿದ್ದಾರೆ. &quot;ನಾನು ಮಿಡಲ್ ಆರ್ಡರ್&zwnj;ನಲ್ಲಿ ಬ್ಯಾಟಿಂಗ್ ಮಾಡಿ ಪಂದ್ಯಗಳನ್ನು ಫಿನಿಶ್ ಮಾಡುವ ಮೂಲಕವೇ ನನ್ನ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದೇನೆ. ಇದಕ್ಕಾಗಿ ನಾನು ಹೆಚ್ಚು ಹೆಮ್ಮೆಪಡುತ್ತೇನೆ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ನಾನಿನ್ನೂ ಕಲಿಯುತ್ತಲೇ ಇದ್ದೇನೆ, ಆದರೆ ಈ ವಿಭಾಗದಲ್ಲಿ ನಾನು ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದೇನೆ ಮತ್ತು ವಿಶೇಷವಾಗಿ ಚೇಸಿಂಗ್ ಇನ್ನಿಂಗ್ಸ್&zwnj;ಗಳನ್ನು ನಾನು ನಿಜವಾಗಿಯೂ ಆನಂದಿಸಿದ್ದೇನೆ,&quot; ಎಂದರು.&lt;/p&gt;&lt;h2&gt;&lt;strong&gt;ಐಪಿಎಲ್ ಪಯಣ ಮತ್ತು ನೆಚ್ಚಿನ ಕ್ಷಣ!&lt;/strong&gt;&lt;/h2&gt;&lt;p&gt;2012ರಲ್ಲಿ ಪಾದಾರ್ಪಣೆ ಮಾಡಿದ ನಂತರ ಮಿಲ್ಲರ್ 15 ಐಪಿಎಲ್ ಸೀಸನ್&zwnj;ಗಳಲ್ಲಿ ಆಡಿದ್ದಾರೆ. ಅವರು ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರರ ಪೈಕಿ ಅತಿ ಹೆಚ್ಚು ಐಪಿಎಲ್ ಸೀಸನ್&zwnj;ಗಳಲ್ಲಿ ಆಡಿದ ದಾಖಲೆ ಅವರ ಹೆಸರಿನಲ್ಲಿದೆ. 2022ರಲ್ಲಿ ಗುಜರಾತ್ ಟೈಟಾನ್ಸ್ ಜೊತೆಗಿನ ಆವೃತ್ತಿ ಅವರ ಪಾಲಿಗೆ ಅತ್ಯಂತ ಯಶಸ್ವಿಯಾಗಿತ್ತು. ಚೊಚ್ಚಲ ಸೀಸನ್&zwnj;ನಲ್ಲೇ ಫ್ರಾಂಚೈಸಿ ಪ್ರಶಸ್ತಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಜಿಟಿಯ ಮಿಡಲ್ ಆರ್ಡರ್&zwnj;ನ ಬೆನ್ನೆಲುಬಾಗಿದ್ದ ಮಿಲ್ಲರ್, ಆ ಐತಿಹಾಸಿಕ ಓಟದಲ್ಲಿ ಹಲವಾರು ಪಂದ್ಯ-ಗೆಲ್ಲುವ ಪ್ರದರ್ಶನಗಳನ್ನು ನೀಡಿದ್ದರು.&lt;/p&gt;&lt;p&gt;ತಮ್ಮ ನೆಚ್ಚಿನ ಐಪಿಎಲ್ ಕ್ಷಣದ ಬಗ್ಗೆ ಮಾತನಾಡಿದ ಮಿಲ್ಲರ್, ಗುಜರಾತ್ ಟೈಟಾನ್ಸ್ ಜೊತೆಗಿನ ಆ ಗೆಲುವನ್ನು ಆಯ್ಕೆ ಮಾಡಿಕೊಂಡರು. &quot;ಐಪಿಎಲ್&zwnj;ನಲ್ಲಿ ನನ್ನ ನೆಚ್ಚಿನ ಕ್ಷಣ... ಹಲವಾರು ಇವೆ, ಆದರೆ ನಾವು ಆಡುವುದೇ ಗೆಲ್ಲಲು. ಹಾಗಾಗಿ, ಗುಜರಾತ್ ಟೈಟಾನ್ಸ್&zwnj;ಗಾಗಿ 2022ರಲ್ಲಿ ಐಪಿಎಲ್ ಗೆದ್ದಿದ್ದು ಖಂಡಿತವಾಗಿಯೂ ನನ್ನ ನೆಚ್ಚಿನ ಕ್ಷಣ,&quot; ಎಂದು ಅವರು ಹೇಳಿದರು.&lt;/p&gt;&lt;h2&gt;&lt;strong&gt;ಯಶಸ್ವಿ ಟಿ20 ವೃತ್ತಿಜೀವನ&lt;/strong&gt;&lt;/h2&gt;&lt;p&gt;ಮಿಲ್ಲರ್ ತಮ್ಮ ವೃತ್ತಿಜೀವನದಲ್ಲಿ 152 ಐಪಿಎಲ್ ಪಂದ್ಯಗಳಿಂದ 3,288 ರನ್ ಗಳಿಸಿದ್ದಾರೆ. ಅವರು ಕೊನೆಯ ಓವರ್&zwnj;ಗಳ ಸ್ಫೋಟಕ ಬ್ಯಾಟಿಂಗ್ ಮತ್ತು ಯಶಸ್ವಿ ಚೇಸಿಂಗ್&zwnj;ಗಳಿಗೆ ಹೆಸರುವಾಸಿಯಾಗಿದ್ದಾರೆ. 'ದಿ ಹಂಡ್ರೆಡ್ 2026' ಟೂರ್ನಿಯಲ್ಲಿ, ಸದರ್ನ್ ಬ್ರೇವ್ ಪರ 8 ಪಂದ್ಯಗಳಲ್ಲಿ 166 ರನ್ ಗಳಿಸಿದ್ದಾರೆ, ಆದರೆ ಅವರ ಫ್ರಾಂಚೈಸಿ ನಾಕೌಟ್ ಹಂತಕ್ಕೆ ಪ್ರವೇಶಿಸಲು ವಿಫಲವಾಯಿತು. 37 ವರ್ಷದ ಈ ಆಟಗಾರ, ವಿಶ್ವಾದ್ಯಂತ ಟಿ20 ಲೀಗ್&zwnj;ಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ತಮ್ಮ ಯಶಸ್ವಿ ವೃತ್ತಿಜೀವನವನ್ನು ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/david-miller-reveals-how-century-against-rcb-in-ipl-2013-shaped-his-cricket-career/articleshow-9qzxcve"/>
        </item>
        <item>
            <title><![CDATA[ಐಪಿಎಲ್‌ನಲ್ಲಿ ನೆಲಕಚ್ಚಿದ ಚೆನ್ನೈ: ಹಳೆ ಕುದುರೆಗಳಿಗೆ ಗೇಟ್‌ಪಾಸ್ ನೀಡಲು ಶುರು ಮಾಡಿದ ಸಿಎಸ್‌ಕೆ ಫ್ರಾಂಚೈಸಿ!]]></title>
            <link>https://kannada.asianetnews.com/cricket-sports/stephen-fleming-parts-ways-with-chennai-super-kings-after-17-glorious-years-kvn/articleshow-c9xf5wg</link>
            <guid isPermaLink="true">https://kannada.asianetnews.com/cricket-sports/stephen-fleming-parts-ways-with-chennai-super-kings-after-17-glorious-years-kvn/articleshow-c9xf5wg</guid>
            <pubDate>Mon, 13 Jul 2026 14:29:36 +0530</pubDate>
            <description><![CDATA[ಕಳೆದ 17 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್&zwnj;ಕೋಚ್ ಆಗಿದ್ದ ಸ್ಟಿಫನ್ ಫ್ಲೆಮಿಂಗ್ ತಂಡಕ್ಕೆ ವಿದಾಯ ಹೇಳಿದ್ದಾರೆ. ಕಳೆದ ಮೂರು ಸೀಸನ್&zwnj;ಗಳಲ್ಲಿ ತಂಡದ ನೀರಸ ಪ್ರದರ್ಶನದ ನಂತರ, ಫ್ಲೆಮಿಂಗ್ ಮತ್ತು ಸಿಎಸ್&zwnj;ಕೆ ಆಡಳಿತ ಮಂಡಳಿ ಪರಸ್ಪರ ಸಮ್ಮತಿಯೊಂದಿಗೆ ಈ ನಿರ್ಧಾರಕ್ಕೆ ಬಂದಿವೆ ಎಂದು ಫ್ರಾಂಚೈಸಿ ಖಚಿತಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxd4xr7aasjdfffpka7z7k29,imgname-21dhoni-fleming-1783926546666.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಳೆದ ಮೂರು ಸೀಸನ್ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಾ ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್&zwnj; ಮ್ಯಾನೇಜ್&zwnj;ಮೆಂಟ್ ಇದೀಗ ಹಳೆಯ ಕುದುರೆಗಳಿಗೆ ಗೇಟ್&zwnj;ಪಾಸ್ ನೀಡಲು ಶುರು ಮಾಡಿದೆ. ಇದರ ಭಾಗವಾಗಿ ಕಳೆದ 17 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚಿಂಗ್ ಸ್ಟಾಫ್ ಆಗಿ ಕಾರ್ಯನಿರ್ವಹಿಸಿದ್ದ ದಿಗ್ಗಜ ಕ್ರಿಕೆಟಿಗ ಸ್ಟಿಫನ್ ಫ್ಲೆಮಿಂಗ್, ಸಿಎಸ್&zwnj;ಕೆ ತಂಡಕ್ಕೆ ಗುಡ್&zwnj; ಬೈ ಹೇಳಿದ್ದಾರೆ. ಈ ವಿಷಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡಾ ಖಚಿತಪಡಿಸಿದೆ.&lt;/p&gt;&lt;p&gt;ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 2023ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಇದಾದ ಬಳಿಕ 2024,2025 ಹಾಗೂ 2026ರಲ್ಲಿ ಚೆನ್ನೈ ತಂಡವು ಪ್ರಶಸ್ತಿ ಗೆಲ್ಲುವುದು ಬದಿಗಿರಲಿ, ಪ್ಲೇ ಆಫ್&zwnj;ಗೇರಲು ಕೂಡಾ ಸಾಧ್ಯವಾಗಿರಲಿಲ್ಲ. ಸತತ ಮೂರು ವರ್ಷಗಳಿಂದ ಸಿಎಸ್&zwnj;ಕೆ ತಂಡದ ನೀರಸ ಪ್ರದರ್ಶನಕ್ಕೆ ಇದೀಗ ತಂಡದ ಹೆಡ್&zwnj;ಕೋಚ್ ತಲೆದಂಡವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ಐಪಿಎಲ್&zwnj;ನ ಯಶಸ್ವಿ ಕೋಚ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗುಡ್ ಬೈ&lt;/strong&gt;&lt;/h2&gt;&lt;p&gt;'ಸೂಪರ್ ಕಿಂಗ್ಸ್ ಮತ್ತು ಸ್ಟೀಫನ್ ಫ್ಲೆಮಿಂಗ್ ಪರಸ್ಪರ ಬೇರ್ಪಡಲು ನಿರ್ಧರಿಸಿದ್ದಾರೆ, ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಶಾಶ್ವತ ಪಾಲುದಾರಿಕೆಗಳಲ್ಲಿ ಒಂದನ್ನು ಮುಕ್ತಾಯಗೊಳಿಸಿದೆ. ಫ್ಲೆಮಿಂಗ್ ಮತ್ತು ಸೂಪರ್ ಕಿಂಗ್ಸ್ ಆಡಳಿತ ಮಂಡಳಿಯ ನಡುವೆ ನಡೆದ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಗಳ ಸರಣಿಯ ನಂತರ, ಗೌರವ ಮತ್ತು ಕೃತಜ್ಞತೆಯಿಂದ ಈ ನಿರ್ಧಾರಕ್ಕೆ ಬರಲಾಯಿತು' ಎಂದು ಸಿಎಸ್&zwnj;ಕೆ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;OFFICIAL ANNOUNCEMENTThe Super Kings and Head Coach Stephen Fleming have mutually decided to part ways.Together, we shared one of the most successful and enduring partnerships in IPL history. The legacy you've built will continue to inspire us.With immense respect and&hellip; pic.twitter.com/qjvb4oZUuU&lt;/p&gt;&lt;p&gt;&mdash; Chennai Super Kings (@ChennaiIPL) July 13, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ನ್ಯೂಜಿಲೆಂಡ್ ಮೂಲದ ದಿಗ್ಗಜ ಕ್ರಿಕೆಟಿಗ ಸ್ಟಿಫನ್ ಫ್ಲೆಮಿಂಗ್, 2008ರ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಟಗಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಮರುವರ್ಷ ಅಂದರೆ 2009ರಿಂದ ಸಿಎಸ್&zwnj;ಕೆ ತಂಡದ ಹೆಡ್&zwnj;ಕೋಚ್ ಆಗಿ ನೇಮಕಗೊಂಡರು. ಇದಾದ 17 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್&zwnj; ಇಂದು ಐಪಿಎಲ್&zwnj;ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಮಾಡುವಲ್ಲಿ ಫ್ಲೆಮಿಂಗ್ ಪಾತ್ರ ದೊಡ್ಡದಿದೆ.&lt;/p&gt;&lt;p&gt;ಸ್ಟಿಫನ್ ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಐದು ಐಪಿಎಲ್ ಟ್ರೋಫಿ ಹಾಗೂ ಎರಡು ಚಾಂಪಿಯನ್ಸ್ ಲೀಗ್ ಟಿ20 ಟೂರ್ನಮೆಂಟ್&zwnj;ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಷ್ಟೇ ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು 10 ಬಾರಿ ಫೈನಲ್ ಸೇರಿದಂತೆ ಒಟ್ಟು 12 ಬಾರಿ ಪ್ಲೇ ಆಫ್&zwnj; ಪ್ರವೇಶಿಸಿದೆ.&lt;/p&gt;&lt;h3&gt;&lt;strong&gt;ಹೊಸ ತಂಡ ಕಟ್ಟಲು ತಯಾರಿ?&lt;/strong&gt;&lt;/h3&gt;&lt;p&gt;ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ತಂಡ ಎನ್ನುವ ಹೆಗ್ಗಳಿಕೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿದೆ. ಈ ಎರಡು ತಂಡಗಳು ತಲಾ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿವೆ. ಆದರೆ ಕಳೆದ ಮೂರ್ನಾಲ್ಕು ಸೀಸನ್&zwnj;ನಿಂದಲೂ ಈ ಎರಡು ತಂಡಗಳು ಪ್ಲೇ ಆಫ್&zwnj;ಗೇರಲು ಪರದಾಡುತ್ತಿವೆ. ಹೀಗಾಗಿ ಮುಂಬರುವ ಐಪಿಎಲ್ ಸೀಸನ್&zwnj;ಗೂ ಮುನ್ನ ಎರಡೂ ಫ್ರಾಂಚೈಸಿಗಳು ತಂಡದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದ್ದು, ಹೊಸ ತಂಡ ಕಟ್ಟಲು ತಯಾರಿ ನಡೆಸುತ್ತಿವೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/stephen-fleming-parts-ways-with-chennai-super-kings-after-17-glorious-years-kvn/articleshow-c9xf5wg"/>
        </item>
        <item>
            <title><![CDATA[ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿತು: ಕರುನಾಡನ್ನು ಕೊಂಡಾಡಿದ ಎಬಿ ಡಿವಿಲಿಯರ್ಸ್]]></title>
            <link>https://kannada.asianetnews.com/gallery/cricket-sports/bengaluru-changed-my-life-ab-de-villiers-emotional-tribute-to-rcb-fans-kvn-eqz8rl2</link>
            <guid isPermaLink="true">https://kannada.asianetnews.com/gallery/cricket-sports/bengaluru-changed-my-life-ab-de-villiers-emotional-tribute-to-rcb-fans-kvn-eqz8rl2</guid>
            <pubDate>Fri, 10 Jul 2026 17:46:24 +0530</pubDate>
            <description><![CDATA[&lt;p&gt;ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತುಗಳನ್ನಾಡಿದ್ದಾರೆ. ಎಬಿಡಿ ಏನಂದ್ರು ಎನ್ನುವುದನ್ನು ನೀವೇ ನೋಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyt7yz7cwyyp2nwh4d0tey9,imgname-ab-de-villiers-prediction-1780224359399.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತುಗಳನ್ನಾಡಿದ್ದಾರೆ. ಎಬಿಡಿ ಏನಂದ್ರು ಎನ್ನುವುದನ್ನು ನೀವೇ ನೋಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾರತೀಯ ಆಟಗಾರರು ಮಾತ್ರವಲ್ಲದೇ ವಿದೇಶಿ ಆಟಗಾರರು ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಐಪಿಎಲ್ ಆಡಲು ಬಂದ ಬಹುತೇಕ ಆಟಗಾರರು ಟೂರ್ನಿ ಮುಗಿದ ಬಳಿಕ, ಭಾರತೀಯರ ಆತಿಥ್ಯ, ಸೌಲಭ್ಯ, ಊಟೋಪಚಾರಗಳನ್ನು ಮರೆತೇ ಬಿಡುತ್ತಾರೆ. ಆದರೆ ಇನ್ನು ಕೆಲವು ವಿದೇಶಿ ಆಟಗಾರರು ಭಾರತವನ್ನು ತಮ್ಮ ಎರಡನೇ ತವರು ಎಂದು ಬಣ್ಣಿಸಿದ್ದೂ ಇದೆ.&lt;/p&gt;&lt;img&gt;&lt;p&gt;ಇನ್ನು ಮಿಸ್ಟರ್ 360 ಎಂದೇ ಖ್ಯಾತಿ ಗಳಿಸುವುದರ ಜತೆಗೆ ವಿಸ್ಪೋಟಕ ಆಟದ ಮೂಲಕ ಭಾರತೀಯರ ಅದರಲ್ಲೂ ಕನ್ನಡಿಗ ಮನಸ್ಸು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವ್ಯಸಾಚಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿಬಿಟ್ಟಿತು ಎಂದು ಕರುನಾಡನ್ನು ಸ್ಮರಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗಿನ ಪಯಣವನ್ನು ಮೆಲುಕು ಹಾಕಿರುವ ಎಬಿಡಿ, 'ಬೆಂಗಳೂರು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾದ ನಗರವಾಗಿಯೇ ಉಳಿಯಲಿದೆ. ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿತು. ಇದೇ ಕಾರಣಕ್ಕೆ ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ' ಎಂದು ಎಬಿಡಿ ಟೈಮ್ ಆಫ್ ಇಂಡಿಯಾಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು ಅತ್ಯಂತ ವಿಶೇಷವಾದ ನಗರ. ಇದು ನನ್ನ ಜೀವನದ ಮೇಲೆ ಅಪಾರ ಪ್ರಭಾವ ಬೀರಿದೆ. 2011ರಲ್ಲಿ ನಾನು ಆರ್&zwnj;ಸಿಬಿ (RCB) ತಂಡವನ್ನು ಸೇರಿದಾಗ, ತಕ್ಷಣವೇ ನನಗೆ ಇಲ್ಲಿನ ವಾತಾವರಣವು ಮನೆಯಂತೆಯೇ ಭಾಸವಾಯಿತು. ಪ್ರೇಕ್ಷಕರು ನನ್ನ ಬೆಂಬಲಕ್ಕೆ ನಿಲ್ಲಲು ಹೆಚ್ಚು ಸಮಯವೇನೂ ಹಿಡಿಯಲಿಲ್ಲ ಎಂದು ಆ ದಿನಗಳನ್ನು ಎಬಿಡಿ ಮೆಲುಕು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಒಂದು ದಶಕಗಳ ಕಾಲ ಆರ್&zwnj;ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್, ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಬೆಂಗಳೂರು ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಎಬಿಡಿ ಐಪಿಎಲ್&zwnj;ಗೆ ವಿದಾಯ ಹೇಳಿ ನಾಲ್ಕೈದು ವರ್ಷ ಕಳೆದರೂ, ಇಂದಿಗೂ ಆರ್&zwnj;ಸಿಬಿ ಪರ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರ ಎನ್ನುವ ದಾಖಲೆ ಎಬಿಡಿ ಹೆಸರಿನಲ್ಲಿಯೇ ಇದೆ.&lt;/p&gt;&lt;img&gt;&lt;p&gt;ನಿಜ ಹೇಳಬೇಕೆಂದರೆ, ನನಗ್ಯಾಕೆ ಇಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿರಲಿಲ್ಲ. ಭಾರತದಲ್ಲಿ ಕ್ರಿಕೆಟ್ ಹಾಗೂ ಸ್ಪರ್ಧೆಗೆ ಜನರು ತುಂಬಾನೆ ಪ್ರೀತಿ ಕೊಡುತ್ತಾರೆ. ಜನರು ಕೆಚ್ಚೆದೆಯಿಂದ ಹೋರಾಡುವ ಆಟಗಾರರಿಗೆ ತುಂಬಾನೆ ಬೆಂಬಲ ಕೊಡುತ್ತಾರೆ ಎಂದೆನಿಸುತ್ತಿದೆ. ಯಾವಾಗಲೂ ಸಕಾರಾತ್ಮಕವಾಗಿರಲು ಪ್ರಯತ್ನಿಸುವ ವ್ಯಕ್ತಿಯನ್ನು ಇಷ್ಟ ಪಡುತ್ತಾರೆ ಎಂದು ಎಬಿಡಿ ಭಾರತೀಯ ಫ್ಯಾನ್ಸ್&zwnj; ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/bengaluru-changed-my-life-ab-de-villiers-emotional-tribute-to-rcb-fans-kvn-eqz8rl2"/>
        </item>
        <item>
            <title><![CDATA[IPL 2027 ಗೂ ಮುನ್ನ ಮುಂಬೈ ಇಂಡಿಯನ್ಸ್ ಈ ಮೂವರು ಬೌಲರ್‌ಗಳಿಗೆ ಗೇಟ್‌ಪಾಸ್ ನೀಡೋದು ಫಿಕ್ಸ್..! ಲಿಸ್ಟ್‌ನಲ್ಲಿದ್ದಾರೆ ₹12.5 ಕೋಟಿಯ ಮಾರಕ ವೇಗಿ]]></title>
            <link>https://kannada.asianetnews.com/cricket-sports/ipl-2027-mumbai-indians-may-release-these-3-bowlers-after-poor-2026-season-kvn/articleshow-f85beug</link>
            <guid isPermaLink="true">https://kannada.asianetnews.com/cricket-sports/ipl-2027-mumbai-indians-may-release-these-3-bowlers-after-poor-2026-season-kvn/articleshow-f85beug</guid>
            <pubDate>Thu, 13 Aug 2026 13:33:15 +0530</pubDate>
            <description><![CDATA[ಕಳೆದ ಐಪಿಎಲ್ ಸೀಸನ್&zwnj;ನಲ್ಲಿ ನೀರಸ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, ಮುಂಬರುವ ಹರಾಜಿಗೂ ಮುನ್ನ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಕಳಪೆ ಪ್ರದರ್ಶನ ತೋರಿದ ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತು ಟ್ರೆಂಟ್ ಬೌಲ್ಟ್ ಸೇರಿದಂತೆ ಮೂವರು ಪ್ರಮುಖ ಬೌಲರ್&zwnj;ಗಳನ್ನು ತಂಡದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3hc87saxnf33ybt2d2e7w0,imgname-mumbai-indians-1778235351289.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐಪಿಎಲ್&zwnj;ನ ಯಶಸ್ವಿ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ. ಆದರೆ 2021ರಿಂದೀಚೆಗೆ ಯಾಕೋ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ಇಂಡಿಯನ್ಸ್ ಅದೃಷ್ಟ ಯಾಕೋ ಕೈಕೊಟ್ಟಂತಿದೆ. ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡವು ನೀರಸ ಪ್ರದರ್ಶನ ತೋರುತ್ತಿದೆ. ಹೀಗಾಗಿ 2027ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೇಜರ್ ಸರ್ಜರಿ ನಡೆಯುವ ಸಾಧ್ಯತೆಯಿದೆ.&lt;/p&gt;&lt;p&gt;ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದರೂ, ಬೌಲಿಂಗ್ ವಿಭಾಗ ಕೈಕೊಡುತ್ತಿರುವುದು ಮುಂಬೈ ಫ್ರಾಂಚೈಸಿಯ ನಿದ್ದೆಗೆಡುವಂತೆ ಮಾಡಿದೆ. 2026ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ 14 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ 9ನೇ ಸ್ಥಾನಿಯಾಗಿ ತನ್ನ ಅಭಿಯಾನ ಮುಗಿಸಿತ್ತು. ಹೀಗಾಗಿ ಮುಂಬೈ ಫ್ರಾಂಚೈಸಿಯು ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ಈ ಮೂರು ಬೌಲರ್&zwnj;ಗಳಿಗೆ ಗೇಟ್&zwnj;ಪಾಸ್ ನೀಡಲು ರೆಡಿಯಾಗಿದೆ. ಈ ಬೌಲರ್&zwnj;ಗಳ ಪೈಕಿ 12.5 ಕೋಟಿ ರುಪಾಯಿಗೆ ಖರೀದಿಸಿದ್ದ ಮಾರಕ ಎಡಗೈ ವೇಗಿಯೂ ಇದ್ದಾರೆ ಎನ್ನುವುದು ವಿಶೇಷ. ಈ ಲಿಸ್ಟ್&zwnj;ನಲ್ಲಿರುವ ಮೂವರು ಬೌಲರ್&zwnj;ಗಳು ಯಾರು ನೋಡೋಣ ಬನ್ನಿ.&lt;/p&gt;&lt;h2&gt;&lt;strong&gt;1. ದೀಪಕ್ ಚಹರ್:&lt;/strong&gt;&lt;/h2&gt;&lt;p&gt;ಭಾರತದ ವೇಗಿ ದೀಪಕ್ ಚಹರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 9.25 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಗಾಯದ ಸಮಸ್ಯೆಯ ಹೊರತಾಗಿಯೂ ದೀಪಕ್ ಚಹರ್ ಮೇಲೆ ಮುಂಬೈ ಫ್ರಾಂಚೈಸಿ ನಂಬಿಕೆಯಿಟ್ಟಿತ್ತು. ಆದರೆ ದೀಪಕ್ ಚಹರ್ ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪರ 3 ಪಂದ್ಯಗಳನ್ನಾಡಿ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಚಹರ್&zwnj;ಗೆ ಮುಂಬೈ ತಂಡದಿಂದ ಗೇಟ್&zwnj;ಪಾಸ್ ಸಿಗೋದು ಬಹುತೇಕ ಖಚಿತ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;2. ಶಾರ್ದೂಲ್ ಠಾಕೂರ್:&lt;/strong&gt;&lt;/h3&gt;&lt;p&gt;2026ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2 ಕೋಟಿ ರುಪಾಯಿ ನೀಡಿ ಲಖನೌ ಸೂಪರ್&zwnj; ಜೈಂಟ್ಸ್ ತಂಡದಿಂದ ಶಾರ್ದೂಲ್ ಠಾಕೂರ್ ಅವರನ್ನು ಕರೆ ತಂದಿತು. ಶಾರ್ದೂಲ್ ಠಾಕೂರ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡು ಮುಂಬೈ ಫ್ರಾಂಚೈಸಿ ಈ ಡೀಲ್&zwnj;ಗೆ ಕೈ ಹಾಕಿತ್ತು. ಆದರೆ ಶಾರ್ದೂಲ್ ಠಾಕೂರ್ ಮುಂಬೈ ಇಂಡಿಯನ್ಸ್ ಪರ 7 ಪಂದ್ಯಗಳನ್ನಾಡಿ ಕೇವಲ ಆರು ವಿಕೆಟ್ ಕಬಳಿಸಿ ನಿರೀಕ್ಷೆ ಹುಸಿಗೊಳಿಸಿದರು. ಹೀಗಾಗಿ ಶಾರ್ದೂಲ್ ಠಾಕೂರ್ ಅವರನ್ನು ಮುಂಬೈ ಫ್ರಾಂಚೈಸಿ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.&lt;/p&gt;&lt;h3&gt;&lt;strong&gt;3. ಟ್ರೆಂಟ್ ಬೌಲ್ಟ್:&lt;/strong&gt;&lt;/h3&gt;&lt;p&gt;ಕಿವೀಸ್ ಮೂಲದ ಅನುಭವಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2026ರ ಐಪಿಎಲ್ ಟೂರ್ನಿಗೂ ಮುನ್ನ ಬರೋಬ್ಬರಿ 12.5 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಪವರ್&zwnj; ಪ್ಲೇ ಹಾಗೂ ಡೆತ್ ಓವರ್&zwnj;ಗಳಲ್ಲಿ ಮಿಂಚಿನ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಬೌಲ್ಟ್, ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದರು. ಬೌಲ್ಟ್ ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿ 11.62ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು ಕೇವಲ ಎರಡು ವಿಕೆಟ್ ಅಷ್ಟೇ ಕಬಳಿಸಿದ್ದರು. ಹೀಗಾಗಿ ಬೌಲ್ಟ್&zwnj; ಅವರಿಗೆ ಮುಂಬೈ ಫ್ರಾಂಚೈಸಿ ಗೇಟ್&zwnj;ಪಾಸ್ ನೀಡಲು ರೆಡಿಯಾಗಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-2027-mumbai-indians-may-release-these-3-bowlers-after-poor-2026-season-kvn/articleshow-f85beug"/>
        </item>
        <item>
            <title><![CDATA[ಆರ್‌ಸಿಬಿಗೆ ಕಪ್ ಗೆಲ್ಲಿಸಲು ಪಣತೊಟ್ಟ ಆ್ಯಂಡಿ ಫ್ಲವರ್..! ಇಂಗ್ಲೆಂಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬೆಂಗಳೂರು ತಂಡದ ಕೋಚ್]]></title>
            <link>https://kannada.asianetnews.com/gallery/cricket-sports/andy-flower-rejects-england-test-coach-offer-after-guiding-rcb-to-back-to-back-ipl-titles-kvn-go2fzxf</link>
            <guid isPermaLink="true">https://kannada.asianetnews.com/gallery/cricket-sports/andy-flower-rejects-england-test-coach-offer-after-guiding-rcb-to-back-to-back-ipl-titles-kvn-go2fzxf</guid>
            <pubDate>Fri, 17 Jul 2026 18:13:33 +0530</pubDate>
            <description><![CDATA[&lt;p&gt;ಬೆಂಗಳೂರು: ಆ್ಯಂಡಿ ಫ್ಲವರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ಬಿಗ್ ಆಫರ್ ನೀಡಿತ್ತು. ಆದರೆ ಫ್ಲವರ್ ಅದನ್ನು ರಿಜೆಕ್ಟ್ ಮಾಡಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250604075017,imgname-image-8f738c9d-8d7c-4ca0-8d94-a93015c59d5c.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಆ್ಯಂಡಿ ಫ್ಲವರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ಬಿಗ್ ಆಫರ್ ನೀಡಿತ್ತು. ಆದರೆ ಫ್ಲವರ್ ಅದನ್ನು ರಿಜೆಕ್ಟ್ ಮಾಡಿದ್ದಾರೆ.&lt;/p&gt;&lt;p&gt;&lt;/p&gt;&lt;img&gt;&lt;p&gt;17 ಸೀಸನ್&zwnj;ಗಳಿಂದ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಟ್ರೋಫಿ ಗೆಲ್ಲಿಸಿ ಕೊಡುವಲ್ಲಿ ಕೋಚ್ ಆ್ಯಂಡಿ ಫ್ಲವರ್ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಸತತ ಎರಡನೇ ಬಾರಿಗೆ ಆರ್&zwnj;ಸಿಬಿ ತಂಡವು ಐಪಿಎಲ್ ಟ್ರೋಫಿ ಗೆಲ್ಲುವಲ್ಲೂ ಫ್ಲವರ್ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;&lt;img&gt;&lt;p&gt;ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗಳಿಸಿದ ಯಶಸ್ಸನ್ನು ಗಮನಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ರಾಷ್ಟ್ರೀಯ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಜಿಂಬಾಬ್ವೆ ಮೂಲದ ಆ್ಯಂಡಿ ಫ್ಲವರ್&zwnj;ಗೆ ಬಿಗ್ ಆಫರ್ ನೀಡಿತ್ತು. ಆದರೆ ಆ್ಯಂಡಿ ಈ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಮೊದಲು ಇಂಗ್ಲೆಂಡ್ ಟೆಸ್ಟ್&zwnj; ತಂಡದ ಹೆಡ್&zwnj; ಕೋಚ್ ಆಗಿ ನ್ಯೂಜಿಲೆಂಡ್ ಮೂಲದ ಬ್ರೆಂಡನ್ ಮೆಕ್ಕಲಂ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಆದರೆ ಮೆಕ್ಕಲಂ ಅವರ ಕಾಂಟ್ರ್ಯಾಕ್ಟ್&zwnj; ಮುಕ್ತಾಯವಾದ ಬೆನ್ನಲ್ಲೇ ಇದೀಗ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೊಸ ಕೋಚ್ ಹುಡುಕಾಟದಲ್ಲಿದೆ. ಇದೀಗ ಆ್ಯಂಡಿ ಫ್ಲವರ್ ಮೇಲೆ ಕಣ್ಣಿಟ್ಟಿದ್ದ ಇಂಗ್ಲೆಂಡ್&zwnj;ಗೆ ನಿರಾಸೆ ಎದುರಾಗಿದೆ.&lt;/p&gt;&lt;img&gt;&lt;p&gt;ಸದ್ಯ ಆ್ಯಂಡಿ ಫ್ಲವರ್ ಐಪಿಎಲ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದಿ ಹಂಡ್ರೆಡ್&zwnj;ನಲ್ಲಿ ಲಂಡನ್ ಸ್ಪಿರಿಟ್ ತಂಡದ ಹೆಡ್&zwnj; ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರ್&zwnj;ಸಿಬಿ ತಂಡಕ್ಕೆ ಹ್ಯಾಟ್ರಿಕ್ ಕಪ್ ಗೆಲ್ಲಿಸಿಕೊಡಲು ಪಣ ತೊಟ್ಟಿರುವ ಫ್ಲವರ್, ಇಂಗ್ಲೆಂಡ್ ಆಫರ್ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಈ ಬಗ್ಗೆ ಮಾತನಾಡಿರುವ ಫ್ಲವರ್, 'ನಿಜ ಹೇಳಬೇಕೆಂದರೆ, ನಾನು ಈಗ ಮಾಡುತ್ತಿರುವ ಕೆಲಸದಲ್ಲಿ ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ನಿಜವಾಗಿಯೂ ಒಂದೆರಡು ಒಳ್ಳೆಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತೇನೆ. ನನ್ನ ಸುತ್ತಲೂ ನಿಜವಾಗಿಯೂ ಒಳ್ಳೆಯ ತಂಡಗಳಿವೆ ಮತ್ತು ನನ್ನ ಸುತ್ತಲೂ ಒಳ್ಳೆಯ ಜನರಿದ್ದಾರೆ ಮತ್ತು ನಾನು ಇಂದು ಏನು ಮಾಡುತ್ತಿದ್ದೇನೋ ಅದರಲ್ಲಿ ಖುಷಿ ಇದೆ' ಎಂದು ತಮಗೆ ಬಂದ ಆಫರ್&zwnj;ಗೆ ನಯವಾಗಿ ತಿರಸ್ಕರಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಮೊದಲು ಆ್ಯಂಡಿ ಫ್ಲವರ್ 2009ರಿಂದ 2014ರ ವರೆಗೆ ಇಂಗ್ಲೆಂಡ್ ತಂಡದ ಹೆಡ್&zwnj; ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವು ತವರು ಹಾಗೂ ತವರಿನಾಚೆ ಆಷಸ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದಷ್ಟೇ ಅಲ್ಲದೇ ಭಾರತದಲ್ಲೂ ಟೆಸ್ಟ್ ಸರಣಿ ಜಯಿಸುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿತ್ತು.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/andy-flower-rejects-england-test-coach-offer-after-guiding-rcb-to-back-to-back-ipl-titles-kvn-go2fzxf"/>
        </item>
        <item>
            <title><![CDATA[ಕೊಹ್ಲಿ-ಗಂಭೀರ್ ಐಪಿಎಲ್ ಕಿರಿಕ್! 13 ವರ್ಷಗಳ ನಂತರ ಶಾಕಿಂಗ್ ಸತ್ಯ ಬಿಚ್ಚಿಟ್ಟ ಅಂಪೈರ್!]]></title>
            <link>https://kannada.asianetnews.com/cricket-sports/former-umpire-anil-chaudhary-breaks-silence-on-virat-kohli-gautam-gambhir-2013-ipl-clash/articleshow-gzupsum</link>
            <guid isPermaLink="true">https://kannada.asianetnews.com/cricket-sports/former-umpire-anil-chaudhary-breaks-silence-on-virat-kohli-gautam-gambhir-2013-ipl-clash/articleshow-gzupsum</guid>
            <pubDate>Tue, 04 Aug 2026 21:23:08 +0530</pubDate>
            <description><![CDATA[&lt;p&gt;2013ರ ಐಪಿಎಲ್&zwnj;ನಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಪ್ರಸಿದ್ಧ ಘರ್ಷಣೆ ಬಗ್ಗೆ ಮಾಜಿ ಅಂಪೈರ್ ಅನಿಲ್ ಚೌಧರಿ ಮೌನ ಮುರಿದಿದ್ದಾರೆ. ಇಬ್ಬರ ಆಕ್ರಮಣಕಾರಿ ಸ್ವಭಾವದಿಂದಲೇ ಆ ಘಟನೆ ನಡೆದಿತ್ತು ಎಂದು ಹೇಳಿದ ಅವರು, ಕೊಹ್ಲಿಗೆ ಯಾವುದೇ ದುರುದ್ದೇಶ ಇಲ್ಲ, ಅವರ ಉತ್ಸಾಹವೇ ಆಟದ ಬಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz6qmf4nqz9fztts9q1vddjy,imgname-virat-kohli-gautam-gambhir-ipl-2013--1--1785858768021.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;2013ರ ಐಪಿಎಲ್&zwnj;ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಘಟನೆ!&lt;/strong&gt;&lt;/p&gt;&lt;p&gt;ಐಪಿಎಲ್ ಇತಿಹಾಸದಲ್ಲಿ ಅಭಿಮಾನಿಗಳು ಎಂದಿಗೂ ಮರೆಯದ ಕ್ಷಣಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ 2013ರ ಮಾತಿನ ಚಕಮಕಿ ಪ್ರಮುಖವಾಗಿದೆ. ಈಗ ಆ ಪಂದ್ಯಕ್ಕೆ ಅಂಪೈರ್ ಆಗಿದ್ದ ಮಾಜಿ ಅಂತರರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ, ಆ ಘಟನೆಯ ಕುರಿತು ಮೊದಲ ಬಾರಿಗೆ ವಿವರವಾಗಿ ಮಾತನಾಡಿದ್ದಾರೆ. ಇಬ್ಬರ ಸ್ವಭಾವವನ್ನು ಗಮನಿಸಿದರೆ ಅಂಥ ಘರ್ಷಣೆ ಸಂಭವಿಸುವ ಸಾಧ್ಯತೆ ಮೊದಲೇ ಗೊತ್ತಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಆಕ್ರಮಣಶೀಲತೆಯೇ ಇಬ್ಬರ ಶಕ್ತಿ!&lt;/strong&gt;&lt;/p&gt;&lt;p&gt;ಜಿಯೋಸ್ಟಾರ್&zwnj;ನ Cheeky Singles ಕಾರ್ಯಕ್ರಮದಲ್ಲಿ ಮಾತನಾಡಿದ ಅನಿಲ್ ಚೌಧರಿ, ಉತ್ತರ ಭಾರತದ ಕ್ರಿಕೆಟಿಗರು ಮೈದಾನದಲ್ಲಿ ಆಕ್ರಮಣಕಾರಿ ಮನೋಭಾವದಿಂದಲೇ ಆಡುತ್ತಾರೆ ಎಂದು ಹೇಳಿದರು.&lt;/p&gt;&lt;p&gt;ಅವರ ಪ್ರಕಾರ, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರೂ ಗೆಲುವಿಗಾಗಿ ತೀವ್ರವಾಗಿ ಹೋರಾಡುವ ಆಟಗಾರರು. ಇದೇ ಮನೋಭಾವದಿಂದ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಆದರೆ ಆಕ್ರಮಣಶೀಲತೆ ಎಂದಿಗೂ ಮಿತಿಯನ್ನು ಮೀರಿ ವೈಯಕ್ತಿಕ ದ್ವೇಷವಾಗಿ ಬದಲಾಗಬಾರದು ಎಂಬುದು ಅವರ ಅಭಿಪ್ರಾಯ.&lt;/p&gt;&lt;p&gt;&lt;strong&gt;ವಿರಾಟ್&zwnj;ಗೆ ದುರುದ್ದೇಶವೇ ಇಲ್ಲ!&lt;/strong&gt;&lt;/p&gt;&lt;p&gt;ವಿರಾಟ್ ಕೊಹ್ಲಿಯನ್ನು ಬಾಲ್ಯದಿಂದಲೇ ನೋಡಿರುವುದಾಗಿ ಹೇಳಿದ ಅನಿಲ್ ಚೌಧರಿ, ಮೈದಾನದಲ್ಲಿ ಕೊಹ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದರೂ ಅವರ ಮನಸ್ಸಿನಲ್ಲಿ ಯಾರ ಮೇಲೂ ದ್ವೇಷ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;&quot;ವಿರಾಟ್ ಕೆಲವೊಮ್ಮೆ ಭಾವೋದ್ವೇಗದಿಂದ ಪ್ರತಿಕ್ರಿಯಿಸುತ್ತಾರೆ. ಆದರೆ ಪರಿಸ್ಥಿತಿ ಶಾಂತವಾದ ಬಳಿಕ ಅವರು ಅಧಿಕಾರಿಗಳ ಜೊತೆಗೂ, ಎದುರಾಳಿ ಆಟಗಾರರ ಜೊತೆಗೂ ಸ್ನೇಹಪರವಾಗಿ ವರ್ತಿಸುತ್ತಾರೆ. ಅವರ ಉತ್ಸಾಹವೇ ಅವರ ಆಟದ ಪ್ರಮುಖ ಬಲ,&quot; ಎಂದು ಚೌಧರಿ ಹೇಳಿದರು.&lt;/p&gt;&lt;p&gt;&lt;strong&gt;ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆ ಐತಿಹಾಸಿಕ ಕ್ಷಣ!&lt;/strong&gt;&lt;/p&gt;&lt;p&gt;2013ರ ಏಪ್ರಿಲ್ 11ರಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್&zwnj;ಸಿಬಿ-ಕೆಕೆಆರ್ ಪಂದ್ಯದಲ್ಲಿ ವಿರಾಟ್ ಔಟಾದ ಬಳಿಕ ಗಂಭೀರ್ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಸಹ ಆಟಗಾರರು ಹಾಗೂ ಅಂಪೈರ್&zwnj;ಗಳು ಮಧ್ಯಪ್ರವೇಶಿಸಿ ಇಬ್ಬರನ್ನೂ ದೂರ ಮಾಡಿದ್ದರು.&lt;/p&gt;&lt;p&gt;ಈ ಘಟನೆ ಐಪಿಎಲ್&zwnj;ನ ಅತ್ಯಂತ ಚರ್ಚಿತ ವಿವಾದಗಳಲ್ಲಿ ಒಂದಾಗಿ ದಾಖಲಾಗಿತ್ತು.&lt;/p&gt;&lt;p&gt;&lt;strong&gt;ಈಗ ಇಬ್ಬರೂ ಒಂದೇ ಗುರಿಗಾಗಿ!&lt;/strong&gt;&lt;/p&gt;&lt;p&gt;2013ರ ಬಳಿಕ 2023ರಲ್ಲೂ ಇಬ್ಬರ ನಡುವೆ ಮತ್ತೊಮ್ಮೆ ಮಾತಿನ ಚಕಮಕಿ ನಡೆದಿದ್ದರೂ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿರುವ ಹಿನ್ನೆಲೆಯಲ್ಲಿ, ಇಬ್ಬರೂ ರಾಷ್ಟ್ರೀಯ ತಂಡದ ಯಶಸ್ಸಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರ ಸ್ನೇಹಪರ ಕ್ಷಣಗಳು ಅಭಿಮಾನಿಗಳ ಮೆಚ್ಚುಗೆಯನ್ನೂ ಗಳಿಸಿವೆ.&lt;/p&gt;&lt;p&gt;&lt;strong&gt;ಮಾಜಿ ಅಂಪೈರ್ ಸಂದೇಶವೇನು?&lt;/strong&gt;&lt;/p&gt;&lt;p&gt;ಅನಿಲ್ ಚೌಧರಿ ಅಭಿಪ್ರಾಯದ ಪ್ರಕಾರ, ಕ್ರಿಕೆಟ್&zwnj;ನಲ್ಲಿ ಭಾವನೆಗಳು ಮತ್ತು ಆಕ್ರಮಣಶೀಲತೆ ಆಟದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಆ ಭಾವನೆಗಳು ಮಿತಿಯೊಳಗೆ ಉಳಿದರೆ ಮಾತ್ರ ಕ್ರೀಡಾಸ್ಫೂರ್ತಿ ಉಳಿಯುತ್ತದೆ. ಕೊಹ್ಲಿ ಮತ್ತು ಗಂಭೀರ್ ನಡುವಿನ ಹಳೆಯ ಘಟನೆ ಇಂದು ಕ್ರಿಕೆಟ್ ಅಭಿಮಾನಿಗಳಿಗೆ ಸ್ಪರ್ಧೆಯ ಉತ್ಸಾಹವನ್ನು ನೆನಪಿಸುವ ನೆನಪಾಗಿ ಉಳಿದಿದೆ.&lt;/p&gt;]]></content:encoded>
            <category>ipl</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/former-umpire-anil-chaudhary-breaks-silence-on-virat-kohli-gautam-gambhir-2013-ipl-clash/articleshow-gzupsum"/>
        </item>
        <item>
            <title><![CDATA[ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ ರಜತ್‌ ಪಾಟೀದಾರ್..! ಆರ್‌ಸಿಬಿಯಿಂದ 5, CSK 2 ಆಟಗಾರರಿಗೆ ಸ್ಥಾನ..!]]></title>
            <link>https://kannada.asianetnews.com/gallery/cricket-sports/rajat-patidar-picks-all-time-ipl-xi-virat-kohli-chris-gayle-dhoni-and-bumrah-make-the-cut-kvn-ibegn10</link>
            <guid isPermaLink="true">https://kannada.asianetnews.com/gallery/cricket-sports/rajat-patidar-picks-all-time-ipl-xi-virat-kohli-chris-gayle-dhoni-and-bumrah-make-the-cut-kvn-ibegn10</guid>
            <pubDate>Wed, 26 Aug 2026 12:27:52 +0530</pubDate>
            <description><![CDATA[&lt;p&gt;ಬೆಂಗಳೂರು: ರಾಯಲ್ ಚಾಲೆಂಜರ್ಸ್&zwnj; ಬೆಂಗಳೂರು ತಂಡಕ್ಕೆ ಸತತ ಎರಡು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ರಜತ್ ಪಾಟೀದಾರ್, ಇದೀಗ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt756tpfy184v1sm76ssy29f,imgname-rajat-patidar-earns-t20-captaincy-1780504292047.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ರಾಯಲ್ ಚಾಲೆಂಜರ್ಸ್&zwnj; ಬೆಂಗಳೂರು ತಂಡಕ್ಕೆ ಸತತ ಎರಡು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ರಜತ್ ಪಾಟೀದಾರ್, ಇದೀಗ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಸತತ 17 ಸೀಸನ್&zwnj;ನಿಂದಲೂ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಜತ್ ಪಾಟೀದಾರ್ ನಾಯಕರಾಗುತ್ತಿದ್ದಂತೆಯೇ ಸತತ ಎರಡು ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ರಜತ್ ಪಾಟೀದಾರ್ ನೇತೃತ್ವದ ಆರ್&zwnj;ಸಿಬಿ ತಂಡವು ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೆಲ್ಲದರ ನಡುವೆ ಆರ್&zwnj;ಸಿಬಿ ನಾಯಕ ರಜತ್ ಪಾಟೀದಾರ್ 11 ಆಟಗಾರರನ್ನೊಳಗೊಂಡ ಬಲಿಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಪಾಟೀದಾರ್ ಆಯ್ಕೆ ಮಾಡಿದ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ರಜತ್ ಪಾಟೀದಾರ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡದಲ್ಲಿ ಆರಂಭಿಕರನ್ನಾಗಿ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಕೊಹ್ಲಿ ಆರ್&zwnj;ಸಿಬಿಯ ರನ್ ಮಷೀನ್ ಆಗಿ ಗುರುತಿಸಿಕೊಂಡಿದ್ದು, ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದಾರೆ. ಇನ್ನು ಯೂನಿವರ್ಸಲ್ ಬಾಸ್ ಖ್ಯಾತಿಯ ಗೇಲ್ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಏಕಾಂಗಿಯಾಗಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂದಿಗೂ ಐಪಿಎಲ್&zwnj;ನ ವೈಯುಕ್ತಿಕ ಗರಿಷ್ಠ ಸ್ಕೋರ್ ಗೇಲ್ ಹೆಸರಿನಲ್ಲಿದೆ.&lt;/p&gt;&lt;img&gt;&lt;p&gt;ಪಾಟೀದಾರ್ ಮಧ್ಯಮ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್&zwnj;ಗೆ ಮೂರನೇ ಸ್ಥಾನ ನೀಡಿದ್ದರೇ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾಗೆ ನಾಲ್ಕನೇ ಹಾಗೂ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರಿಗೆ ಐದನೇ ಸ್ಥಾನ ನೀಡಿದ್ದಾರೆ. ಈ ಮೂವರು ಬ್ಯಾಟರ್&zwnj;ಗಳು ದಶಕಗಳ ಕಾಲ ಐಪಿಎಲ್ ಆಳಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.&lt;/p&gt;&lt;img&gt;&lt;p&gt;ಇನ್ನು ಆಲ್ರೌಂಡರ್ ಹಾಗೂ ಮ್ಯಾಚ್ ಫಿನಿಶರ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದರೇ, ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಜತ್ ಪಾಟೀದಾರ್ ಆಯ್ಕೆ ಮಾಡಿದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲಿಗೆ ಏಳು ಬಲಿಷ್ಠ ಬ್ಯಾಟರ್&zwnj;ಗಳನ್ನೊಳಗೊಂಡ ತಂಡವನ್ನು ಆರ್&zwnj;ಸಿಬಿ ನಾಯಕ ಆಯ್ಕೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನುಳಿದಂತೆ ಆರ್&zwnj;ಸಿಬಿ ಮಾಜಿ ವೇಗಿ ಡೇಲ್ ಸ್ಟೇನ್ ಹಾಗೂ ಮುಂಬೈ ಇಂಡಿಯನ್ಸ್ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ತಜ್ಞ ವೇಗಿಗಳ ರೂಪದಲ್ಲಿ ಸ್ಥಾನ ಪಡೆದುಕೊಂಡರೆ, ಆರ್&zwnj;ಸಿಬಿ ಮಾಜಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಕೆಕೆಆರ್ ಮಾಂತ್ರಿಕ ಸ್ಪಿನ್ನರ್ ಸುನಿಲ್ ನರೇನ್ ಕೂಡಾ ಪಾಟೀದಾರ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸುರೇಶ್ ರೈನಾ, ಎಬಿ ಡಿವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಎಂ ಎಸ್ ಧೋನಿ(ವಿಕೆಟ್ ಕೀಪರ್), ಸುನಿಲ್ ನರೈನ್, ಡೇಲ್ ಸ್ಟೇನ್, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/rajat-patidar-picks-all-time-ipl-xi-virat-kohli-chris-gayle-dhoni-and-bumrah-make-the-cut-kvn-ibegn10"/>
        </item>
        <item>
            <title><![CDATA[₹1.9 ಕೋಟಿ ಹೂಡಿಕೆ, ₹17 ಕೋಟಿ ರಿಟರ್ನ್! ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ‘ಬಿಸಿನೆಸ್’ ಕಥೆ!]]></title>
            <link>https://kannada.asianetnews.com/cricket-sports/the-ipl-season-where-yusuf-pathan-was-worth-far-more-than-his-numbers-suggested/articleshow-klko23u</link>
            <guid isPermaLink="true">https://kannada.asianetnews.com/cricket-sports/the-ipl-season-where-yusuf-pathan-was-worth-far-more-than-his-numbers-suggested/articleshow-klko23u</guid>
            <pubDate>Wed, 16 Sep 2026 15:21:59 +0530</pubDate>
            <description><![CDATA[&lt;p&gt;2009ರ IPLನಲ್ಲಿ ರಾಜಸ್ಥಾನ್ ರಾಯಲ್ಸ್ ಯೂಸುಫ್ ಪಠಾಣ್&zwnj;ಗಾಗಿ ಸುಮಾರು ₹1.9 ಕೋಟಿ ಖರ್ಚು ಮಾಡಿತ್ತು. ಅವರು 243 ರನ್ ಹಾಗೂ 7 ವಿಕೆಟ್ ಪಡೆದರೂ, ಬಾಲ್-ಬೈ-ಬಾಲ್ ಮೌಲ್ಯಮಾಪನದ ಪ್ರಕಾರ ಅವರ ಒಟ್ಟಾರೆ ಕ್ರಿಕೆಟ್ ಮೌಲ್ಯ ₹16.83 ಕೋಟಿಯಷ್ಟಿತ್ತು. ಕೇವಲ ಮೂರು ಪಂದ್ಯಗಳಲ್ಲೇ ಅವರ ಸಂದರ್ಭೋಚಿತ ಪ್ರದರ್ಶನದ ಮೌಲ್ಯ ತಂಡದ ಹೂಡಿಕೆಗೆ ಸಮನಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2mda77bcyjpmxgyks2s9b5c,imgname-yusuf-pathan-ipl-2009-1789538933994.jpg" type="image/jpeg" height="390" width="690"/>
            <content:encoded><![CDATA[&lt;h2&gt;₹1.9 ಕೋಟಿ ಹೂಡಿಕೆ, ₹17 ಕೋಟಿ ಮೌಲ್ಯ! ಯೂಸುಫ್ ಪಠಾಣ್&zwnj;ರ ಅಸಲಿ IPL ಕಥೆ&lt;/h2&gt;&lt;p&gt;ಐಪಿಎಲ್&zwnj;ನಲ್ಲಿ ಆಟಗಾರರ ಸಾಧನೆಯನ್ನು ಸಾಮಾನ್ಯವಾಗಿ ರನ್&zwnj;, ವಿಕೆಟ್&zwnj; ಮತ್ತು ಪ್ರಶಸ್ತಿಗಳ ಮೂಲಕ ಅಳೆಯಲಾಗುತ್ತದೆ. ಆದರೆ ಕೆಲವೊಮ್ಮೆ ಅಂಕಿ-ಅಂಶಗಳ ಹಿಂದೆ ಅಡಗಿರುವ ಆಟದ ಪ್ರಭಾವವೇ ಹೆಚ್ಚು ಕುತೂಹಲ ಮೂಡಿಸುತ್ತದೆ. 2009ರ ಐಪಿಎಲ್&zwnj;ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಯೂಸುಫ್ ಪಠಾಣ್&zwnj; ಅವರ ಕಥೆ ಇದಕ್ಕೆ ಉತ್ತಮ ಉದಾಹರಣೆ.&lt;/p&gt;&lt;h3&gt;₹1.9 ಕೋಟಿಗೆ ಖರೀದಿ, ₹17 ಕೋಟಿಯಷ್ಟು ಮೌಲ್ಯ!&lt;/h3&gt;&lt;p&gt;2008ರ ಉದ್ಘಾಟನಾ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಯೂಸುಫ್ ಪಠಾಣ್&zwnj;ಗಾಗಿ $475,000, ಅಂದಿನ ವಿನಿಮಯ ದರದಲ್ಲಿ ಸುಮಾರು ₹1.9 ಕೋಟಿ ಖರ್ಚು ಮಾಡಿತ್ತು.&lt;/p&gt;&lt;p&gt;2009ರ ಋತುವಿನಲ್ಲಿ ಯೂಸುಫ್ 243 ರನ್&zwnj; ಹಾಗೂ 7 ವಿಕೆಟ್&zwnj; ಪಡೆದಿದ್ದರು. ಹೊರನೋಟಕ್ಕೆ ಇದು ಸಾಮಾನ್ಯ ಅಂಕಿ-ಅಂಶಗಳಂತೆ ಕಾಣಬಹುದು. ಆದರೆ ಬಾಲ್-ಬೈ-ಬಾಲ್ ಪ್ರದರ್ಶನವನ್ನು ಆಧರಿಸಿದ ಮೌಲ್ಯಮಾಪನದ ಪ್ರಕಾರ, ಅವರ ಒಟ್ಟಾರೆ ಕ್ರಿಕೆಟ್ ಮೌಲ್ಯ ಸುಮಾರು ₹16.83 ಕೋಟಿ ಆಗಿತ್ತು.&lt;/p&gt;&lt;h3&gt;ನಾಲ್ಕೇ ಎಸೆತಗಳಲ್ಲಿ ₹5.24 ಕೋಟಿ ಮೌಲ್ಯ!&lt;/h3&gt;&lt;p&gt;ಏಪ್ರಿಲ್ 23ರಂದು ಕೇಪ್&zwnj;ಟೌನ್&zwnj;ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಟೈ ಆಗಿತ್ತು. ಐಪಿಎಲ್ ಇತಿಹಾಸದ ಮೊದಲ ಸೂಪರ್ ಓವರ್&zwnj;ನಲ್ಲಿ ಕೆಕೆಆರ್ 15 ರನ್ ಗಳಿಸಿತು.&lt;/p&gt;&lt;p&gt;ರಾಜಸ್ಥಾನಕ್ಕೆ 16 ರನ್ ಬೇಕಿದ್ದಾಗ ಯೂಸುಫ್ ಪಠಾಣ್ ಸ್ಟ್ರೈಕ್&zwnj;ನಲ್ಲಿದ್ದರು. ಅಜಂತಾ ಮೆಂಡಿಸ್ ಎಸೆದ ಮೊದಲ ನಾಲ್ಕು ಎಸೆತಗಳಲ್ಲಿ ಅವರು 6, 2, 6, 4 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.&lt;/p&gt;&lt;p&gt;ಸೂಪರ್ ಓವರ್&zwnj;ನಲ್ಲಿ ಗಳಿಸಿದ 18 ರನ್&zwnj;ಗಳು ಅವರ ಅಧಿಕೃತ ಋತುವಿನ ರನ್&zwnj;ಗಳ ಲೆಕ್ಕಕ್ಕೆ ಸೇರ್ಪಡೆಯಾಗಲಿಲ್ಲ. ಹೀಗಾಗಿ ದಾಖಲೆಗಳಲ್ಲಿ 243 ರನ್&zwnj;ಗಳೇ ಉಳಿದಿವೆ. ಆದರೆ ಮಾದರಿ ಲೆಕ್ಕಾಚಾರದ ಪ್ರಕಾರ ಆ ನಾಲ್ಕು ಎಸೆತಗಳ ಪ್ರದರ್ಶನದ ಮೌಲ್ಯವೇ ಸುಮಾರು ₹5.24 ಕೋಟಿ!&lt;/p&gt;&lt;p&gt;&lt;strong&gt;ಮತ್ತೆ ಅಬ್ಬರಿಸಿದ್ದ ಯೂಸುಫ್&lt;/strong&gt;&lt;/p&gt;&lt;p&gt;ಇದಾದ ಕೆಲವೇ ದಿನಗಳ ನಂತರ ಡೆಲ್ಲಿ ಡೇರ್&zwnj;ಡೆವಿಲ್ಸ್ ವಿರುದ್ಧವೂ ಯೂಸುಫ್ ಅದ್ಭುತ ಆಟವಾಡಿದರು. 144 ರನ್&zwnj;ಗಳ ಗುರಿ ಬೆನ್ನಟ್ಟುತ್ತಿದ್ದ ರಾಜಸ್ಥಾನ್ 64 ರನ್&zwnj;ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.&lt;/p&gt;&lt;p&gt;ಆಗ ಯೂಸುಫ್ ಕೇವಲ 30 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಗ್ರೇಮ್ ಸ್ಮಿತ್ ಜೊತೆ 83 ರನ್&zwnj;ಗಳ ಮುರಿಯದ ಜೊತೆಯಾಟ ನಡೆಸಿ, 9 ಎಸೆತಗಳು ಬಾಕಿ ಇರುವಂತೆಯೇ ತಂಡ ಗೆದ್ದಿತು. ಈ ಪ್ರದರ್ಶನದ ಅಂದಾಜು ಕ್ರಿಕೆಟ್ ಮೌಲ್ಯ ಸುಮಾರು ₹5.07 ಕೋಟಿ ಎಂದು ಮಾದರಿ ತಿಳಿಸಿದೆ.&lt;/p&gt;&lt;p&gt;&lt;strong&gt;ಮೂರು ಪಂದ್ಯಗಳಲ್ಲೇ ಹೂಡಿಕೆಗೆ ಸಮನಾದ ಮೌಲ್ಯ!&lt;/strong&gt;&lt;/p&gt;&lt;p&gt;ಡೆಕ್ಕನ್ ಚಾರ್ಜರ್ಸ್ ವಿರುದ್ಧವೂ ಯೂಸುಫ್ ಬ್ಯಾಟ್ ಮತ್ತು ಬೌಲಿಂಗ್&zwnj;ನಲ್ಲಿ ಗಮನಾರ್ಹ ಕೊಡುಗೆ ನೀಡಿದ್ದರು. ನಾಲ್ಕು ಓವರ್&zwnj;ಗಳಲ್ಲಿ ಕೇವಲ 19 ರನ್ ನೀಡಿ ವಿಕೆಟ್ ಪಡೆದ ಅವರು, ನಂತರ 14 ಎಸೆತಗಳಲ್ಲಿ 24 ರನ್ ಗಳಿಸಿದರು.&lt;/p&gt;&lt;p&gt;ಈ ಲೆಕ್ಕಾಚಾರಗಳ ಪ್ರಕಾರ, ಮೂರು ಪಂದ್ಯಗಳಲ್ಲಿನ ಅವರ ಸಂದರ್ಭೋಚಿತ ಪ್ರದರ್ಶನಗಳ ಮೌಲ್ಯವೇ ರಾಜಸ್ಥಾನ್ ಖರ್ಚು ಮಾಡಿದ್ದ ಸುಮಾರು ₹1.9 ಕೋಟಿಗೆ ಸಮನಾಗಿತ್ತು ಅಥವಾ ಅದನ್ನು ಮೀರಿತ್ತು.&lt;/p&gt;&lt;p&gt;&lt;strong&gt;₹1 ಹೂಡಿಕೆಗೆ ₹8.8 ಮೌಲ್ಯ!&lt;/strong&gt;&lt;/p&gt;&lt;p&gt;ಒಟ್ಟು 13 ಪಂದ್ಯಗಳ ಪ್ರದರ್ಶನವನ್ನು ಪರಿಗಣಿಸಿದಾಗ, ಯೂಸುಫ್ ಸುಮಾರು 478 ಇಂಪ್ಯಾಕ್ಟ್ ಪಾಯಿಂಟ್&zwnj; ಗಳಿಸಿದ್ದಾರೆ ಎಂದು ಮಾದರಿ ಅಂದಾಜಿಸಿದೆ. ಇದನ್ನು ಹಣಕಾಸಿನ ಮೌಲ್ಯಕ್ಕೆ ಪರಿವರ್ತಿಸಿದಾಗ ಸುಮಾರು ₹16.83 ಕೋಟಿ ಬರುತ್ತದೆ.&lt;/p&gt;&lt;p&gt;ಅಂದರೆ, ಸುಮಾರು ₹1.91 ಕೋಟಿ ಹೂಡಿಕೆಗೆ ಪ್ರತಿಯಾಗಿ ₹8.8ರಷ್ಟು ಕ್ರಿಕೆಟ್ ಮೌಲ್ಯ ಸಿಕ್ಕಿದೆ ಎಂಬ ಅಂದಾಜು. ಇದು ಸುಮಾರು 783% ರಿಟರ್ನ್ಗೆ ಸಮಾನವಾಗಿದೆ.&lt;/p&gt;&lt;p&gt;&lt;strong&gt;2009ರ ₹1.9 ಕೋಟಿ ಇಂದಿನ ₹1.9 ಕೋಟಿಯಲ್ಲ!&lt;/strong&gt;&lt;/p&gt;&lt;p&gt;ಇಲ್ಲಿ ಮತ್ತೊಂದು ಪ್ರಮುಖ ಅಂಶವಿದೆ. 2008ರಲ್ಲಿ ಪ್ರತಿ ಐಪಿಎಲ್ ತಂಡದ ಆಟಗಾರರ ವೇತನ ಮಿತಿ $5 ಮಿಲಿಯನ್ ಆಗಿತ್ತು. ಹೀಗಾಗಿ ಯೂಸುಫ್&zwnj;ಗಾಗಿ ಖರ್ಚು ಮಾಡಿದ $475,000 ಮೊತ್ತವು ರಾಜಸ್ಥಾನದ ಸಂಪೂರ್ಣ ಆಟಗಾರರ ಬಜೆಟ್&zwnj;ನ ಸುಮಾರು 9.5% ಆಗಿತ್ತು.&lt;/p&gt;&lt;p&gt;ಅಂದರೆ ಆ ಕಾಲದಲ್ಲಿ ₹1.9 ಕೋಟಿ ಸಣ್ಣ ಮೊತ್ತವಾಗಿರಲಿಲ್ಲ. ಇಂದಿನ ಐಪಿಎಲ್ ಆರ್ಥಿಕತೆಯೊಂದಿಗೆ ಅದನ್ನು ನೇರವಾಗಿ ಹೋಲಿಸಲು ಸಾಧ್ಯವಿಲ್ಲ.&lt;/p&gt;&lt;p&gt;&lt;strong&gt;ಅಂಕಿ-ಅಂಶಗಳಿಗಿಂತ ದೊಡ್ಡದಾದ ಪ್ರಭಾವ&lt;/strong&gt;&lt;/p&gt;&lt;p&gt;ಯೂಸುಫ್ ಪಠಾಣ್&zwnj;ರ 2009ರ ಋತುವಿನ ವಿಶೇಷತೆ ಅವರ ನಿರಂತರತೆಯಲ್ಲಿರಲಿಲ್ಲ. ಬದಲಿಗೆ, ಪಂದ್ಯ ತಿರುವು ಪಡೆಯಬೇಕಾದ ಸಂದರ್ಭಗಳಲ್ಲಿ ಕೆಲವೇ ಓವರ್&zwnj;ಗಳಲ್ಲಿ ಸ್ಫೋಟಕ ಪ್ರದರ್ಶನ ನೀಡುವ ಸಾಮರ್ಥ್ಯದಲ್ಲಿತ್ತು.&lt;/p&gt;&lt;p&gt;ಅವರ ಅಧಿಕೃತ ದಾಖಲೆ 243 ರನ್ ಮತ್ತು 7 ವಿಕೆಟ್&zwnj; ಎಂದಷ್ಟೇ ಹೇಳುತ್ತದೆ. ಆದರೆ ಆ ಅಂಕಿಗಳ ಹಿಂದೆ ಪಂದ್ಯ ಗೆಲ್ಲಿಸಿದ ಸ್ಫೋಟಕ ಕ್ಷಣಗಳಿದ್ದವು. ಅದಕ್ಕಾಗಿಯೇ ₹1.9 ಕೋಟಿಯ ಹೂಡಿಕೆಗೆ ಸುಮಾರು ₹16.83 ಕೋಟಿ ಮೌಲ್ಯ ಸಿಕ್ಕಿದೆ ಎಂಬ ಈ ಮಾದರಿ ಲೆಕ್ಕಾಚಾರವು ಅವರ 2009ರ IPL ಅಭಿಯಾನವನ್ನು ಮತ್ತೊಂದು ದೃಷ್ಟಿಕೋನದಿಂದ ನೋಡಲು ಅವಕಾಶ ನೀಡುತ್ತದೆ.&lt;/p&gt;]]></content:encoded>
            <category>ipl</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/the-ipl-season-where-yusuf-pathan-was-worth-far-more-than-his-numbers-suggested/articleshow-klko23u"/>
        </item>
        <item>
            <title><![CDATA[IPL 2027 ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್‌ ತಂಡದಿಂದ 5 ಮಹತ್ವದ ಅಪ್‌ಡೇಟ್ಸ್‌..! ರೋಹಿತ್ ಶರ್ಮಾ ಹೆಗಲೇರಿದ ಮಹತ್ವದ ಜವಾಬ್ದಾರಿ]]></title>
            <link>https://kannada.asianetnews.com/gallery/ipl/mumbai-indians-2027-top-5-big-updates-on-rohit-sharma-hardik-pandya-suryakumar-yadav-and-captaincy-kvn-ma1a0ho</link>
            <guid isPermaLink="true">https://kannada.asianetnews.com/gallery/ipl/mumbai-indians-2027-top-5-big-updates-on-rohit-sharma-hardik-pandya-suryakumar-yadav-and-captaincy-kvn-ma1a0ho</guid>
            <pubDate>Tue, 01 Sep 2026 17:32:34 +0530</pubDate>
            <description><![CDATA[&lt;p&gt;ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್&zwnj; ತಂಡದಿಂದ ಐದು ಮಹತ್ವದ ಅಪ್&zwnj;ಡೇಟ್ಸ್&zwnj;ಗಳು ಹೊರಬಿದ್ದಿವೆ. ಈ ಕುರಿತಾದ ಅಪ್&zwnj;ಡೇಟ್ಸ್&zwnj; ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kttpzsmnx16796v4p8gava60,imgname-rohit-sharma--5--1781160470165.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್&zwnj; ತಂಡದಿಂದ ಐದು ಮಹತ್ವದ ಅಪ್&zwnj;ಡೇಟ್ಸ್&zwnj;ಗಳು ಹೊರಬಿದ್ದಿವೆ. ಈ ಕುರಿತಾದ ಅಪ್&zwnj;ಡೇಟ್ಸ್&zwnj; ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಮುಂಬೈ ಇಂಡಿಯನ್ಸ್ ತಂಡವು 2020ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಕಳೆದ ಆರು ಸೀಸನ್&zwnj;ನಿಂದಲೂ ಐಪಿಎಲ್ ಟ್ರೋಫಿ ಗೆಲ್ಲಲು ಪರದಾಡುತ್ತಿದೆ. ಇನ್ನು ಇದೆಲ್ಲದರ ನಡುವೆ ರೋಹಿತ್ ಶರ್ಮಾ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟಿದ ಬಳಿಕವಂತೂ ಮುಂಬೈ ಇಂಡಿಯನ್ಸ್ ಮತ್ತಷ್ಟು ಪಾತಾಳಕ್ಕೆ ಕುಸಿದಿದೆ. ಇದೀಗ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವಕ್ಕೆ ಗುಡ್&zwnj; ಬೈ ಹೇಳಿದ್ದಾರೆ. ಹೀಗಿರುವಾಗಲೇ 2027ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್&zwnj; ತಂಡದಿಂದ ಮಹತ್ವದ ಅಪ್&zwnj;ಡೇಟ್ಸ್&zwnj; ಹೊರಬಿದ್ದಿದೆ.&lt;/p&gt;&lt;img&gt;&lt;p&gt;ಮುಂಬೈ ಇಂಡಿಯನ್ಸ್ ತಂಡವು ಕಳೆದ ಕೆಲವು ವರ್ಷಗಳಿಂದ ನೀರಸ ಪ್ರದರ್ಶನದ ಬೆನ್ನಲ್ಲೇ ಅವರ ತಲೆದಂಡವಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮುಂಬೈ ಫ್ರಾಂಚೈಸಿಯು ಜಯವರ್ಧನೆ ಅವರನ್ನು ಹೆಡ್ ಕೋಚ್ ಆಗಿಯೇ ಮುಂದುವರೆಸಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಮುಂಬೈ ಫ್ರಾಂಚೈಸಿಯು ಜಯವರ್ಧನೆಗೆ ಮತ್ತೊಂದು ಅವಕಾಶ ನೀಡಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಕಳೆದ ಸೀಸನ್ ಐಪಿಎಲ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂದು ವರದಿಯಾಗಿತ್ತು. ಮುಂಬೈ ಇಂಡಿಯನ್ಸ್&zwnj; ನಾಯಕತ್ವದ ಮೇಲೆ ಕಣ್ಣಿಟ್ಟಿದ್ದ ಸೂರ್ಯಗೆ ಫ್ರಾಂಚೈಸಿ ನಿರಾಸೆ ಮೂಡಿಸಿತ್ತು ಎಂದೆಲ್ಲಾ ವರದಿಯಾಗಿತ್ತು. ಆದರೆ ಇದೀಗ ಸೂರ್ಯಕುಮಾರ್ ಯಾದವ್ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಡುವಿನ ಮಾತುಕತೆ ಫಲಪ್ರದವಾಗಿದ್ದು, ಆಟಗಾರನಾಗಿ ಮುಂಬೈ ತಂಡದ ಜತೆಗಿರಲು ಸೂರ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಇನ್ನು ಕಳೆದ ಮೂರು ಸೀಸನ್&zwnj;ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕರಾಗಿ ಮುಂಬೈ ಇಂಡಿಯನ್ಸ್ ತಂಡ ಮುನ್ನಡೆಸಿದ್ದರು. ಆದರೆ ಮುಂಬೈಗೆ ನಾಯಕನಾಗಿ ಕಪ್ ಗೆಲ್ಲಿಸಿಕೊಡಲು ಪಾಂಡ್ಯ ವಿಫಲರಾದರು. ಇದರ ಬೆನ್ನಲ್ಲೇ ಪಾಂಡ್ಯರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಕೆಕೆಆರ್, ಸಿಎಸ್&zwnj;ಕೆ ಫ್ರಾಂಚೈಸಿಗಳು ಪ್ರಯತ್ನಪಡುತ್ತಿವೆ ಎಂದೆಲ್ಲಾ ವರದಿಯಾಗಿತ್ತು. ಆದರೆ ಮುಂಬೈ ಫ್ರಾಂಚೈಸಿ ಪಾಂಡ್ಯರಲ್ಲಿ ಓರ್ವ ಆಟಗಾರನಾಗಿ ಮಾತ್ರ ಉಳಿಸಿಕೊಳ್ಳಲು ಎದುರು ನೋಡುತ್ತಿದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಇನ್ನು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಫ್ರಾಂಚೈಸಿಗೆ ತಪ್ಪು ಎನ್ನುವುದು ಅರಿವಾದಂತಿದೆ. ಹೀಗಾಗಿ ಹಿಟ್&zwnj;ಮ್ಯಾನ್&zwnj;ಗೆ ಮುಂಬೈ ಫ್ರಾಂಚೈಸಿ ಮಹತ್ವದ ಜವಾಬ್ದಾರಿ ನೀಡಿದೆ. ರೋಹಿತ್ ಶರ್ಮಾ ಆಟಗಾರನಾಗಿ ಮಾತ್ರವಲ್ಲದೇ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಇದಷ್ಟೇ ಅಲ್ಲದೇ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನ ನೇಮಕ ವಿಚಾರದಲ್ಲೂ ರೋಹಿತ್ ಶರ್ಮಾ ಮಹತ್ವದ ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಸದ್ಯ ಈಗಿನ ಮಾಧ್ಯಮಗಳ ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ತಂಡದ ನೂತನ ಕ್ಯಾಪ್ಟನ್ ರೇಸ್&zwnj;ನಲ್ಲಿ ತಿಲಕ್ ವರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಮುಂಚೂಣಿಯಲ್ಲಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ತಂಡದ ಪರ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಮುಂಬೈ ಫ್ರಾಂಚೈಸಿಯು ಬುಮ್ರಾಗೆ ನಾಯಕತ್ವ ನೀಡಿ ತಿಲಕ್&zwnj;ಗೆ ಉಪನಾಯಕನನ್ನಾಗಿ ಮಾಡುವ ಚಿಂತನೆಯಲ್ಲಿದೆ ಎನ್ನಲಾಗಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/ipl/mumbai-indians-2027-top-5-big-updates-on-rohit-sharma-hardik-pandya-suryakumar-yadav-and-captaincy-kvn-ma1a0ho"/>
        </item>
        <item>
            <title><![CDATA[ಆರ್‌ಸಿಬಿ ಹ್ಯಾಟ್ರಿಕ್ ಐಪಿಎಲ್ ಕಪ್ ಗೆಲ್ಲಲು ಮಾಸ್ಟರ್ ಪ್ಲಾನ್‌; ಇಂಗ್ಲೆಂಡ್ ಮೂಲದ ಗೇಮ್‌ ಚೇಂಜರ್‌ ಆಟಗಾರನಿಗೆ ಗಾಳ ಹಾಕಿದ ಬೆಂಗಳೂರು ಕೋಚ್]]></title>
            <link>https://kannada.asianetnews.com/gallery/cricket-sports/rcb-target-england-star-sam-curran-ahead-of-ipl-2027-big-transfer-buzz-emerges-kvn-pw7w2wy</link>
            <guid isPermaLink="true">https://kannada.asianetnews.com/gallery/cricket-sports/rcb-target-england-star-sam-curran-ahead-of-ipl-2027-big-transfer-buzz-emerges-kvn-pw7w2wy</guid>
            <pubDate>Tue, 21 Jul 2026 20:26:57 +0530</pubDate>
            <description><![CDATA[&lt;p&gt;ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಈಗಿನಿಂದಲೇ ಸಿದ್ದತೆ ಆರಂಭಿಸಿವೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇಂಗ್ಲೆಂಡ್ ಮೂಲದ ಗೇಮ್ ಚೇಂಜರ್ ಆಟಗಾರನಿಗೆ ಗಾಳ ಹಾಕಿದೆ. ಈ ಕುರಿತಾದ ಅಪ್&zwnj;ಡೇಟ್ಸ್&zwnj; ಇಲ್ಲಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt6cnr57y55aszwaj95wj4m6,imgname-shankar-basu-rcb--3--1780478566567.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಈಗಿನಿಂದಲೇ ಸಿದ್ದತೆ ಆರಂಭಿಸಿವೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇಂಗ್ಲೆಂಡ್ ಮೂಲದ ಗೇಮ್ ಚೇಂಜರ್ ಆಟಗಾರನಿಗೆ ಗಾಳ ಹಾಕಿದೆ. ಈ ಕುರಿತಾದ ಅಪ್&zwnj;ಡೇಟ್ಸ್&zwnj; ಇಲ್ಲಿದೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದ್ದು, ಇದೀಗ ಹ್ಯಾಟ್ರಿಕ್ ಐಪಿಎಲ್ ಟ್ರೋಫಿ ಮೇಲೆ ಆರ್&zwnj;ಸಿಬಿ ತಂಡವು ಕಣ್ಣಿಟ್ಟಿದೆ. ಇದುವರೆಗೂ ಯಾವೊಂದು ತಂಡವು ಐಪಿಎಲ್&zwnj;ನಲ್ಲಿ ಹ್ಯಾಟ್ರಿಕ್ ಐಪಿಎಲ್ ಟ್ರೋಫಿ ಜಯಿಸಿಲ್ಲ. ಹೀಗಾಗಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲು ಬೆಂಗಳೂರು ತಂಡವು ಎದುರು ನೋಡುತ್ತಿದೆ.&lt;/p&gt;&lt;img&gt;&lt;p&gt;ಹೀಗಿರುವಾಗಲೇ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಆರ್&zwnj;ಸಿಬಿ ಫ್ರಾಂಚೈಸಿಯು ತನ್ನ ತಂಡವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಈಗಿನಿಂದಲೇ ರಣತಂತ್ರ ಹೆಣೆಯಲಾರಂಭಿಸಿದೆ. ಇದರ ಭಾಗವಾಗಿ ಆರ್&zwnj;ಸಿಬಿ ತಂಡದ ಡೆರೆಕ್ಟರ್ ಆಫ್&zwnj; ಕ್ರಿಕೆಟ್&zwnj; ಆಗಿ ಮೋ ಬೊಬಟ್(ಮೊಹಮ್ಮದ್ ಬೊಬಟ್) ಇದೀಗ ಇಂಗ್ಲೆಂಡ್&zwnj; ತಂಡದ ಸ್ಟಾರ್ ಆಲ್ರೌಂಡರ್&zwnj;ಗೆ ಗಾಳ ಹಾಕಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಹೌದು, ಇತ್ತೀಚೆಗಷ್ಟೇ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೀಮಿತ ಓವರ್&zwnj;ಗಳ ಸರಣಿಯಲ್ಲಿ ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ ಸ್ಯಾಮ್ ಕರ್ರನ್ ಅವರನ್ನು ಆರ್&zwnj;ಸಿಬಿಗೆ ಕರೆ ತರಲು ಮೊ ಬೊಬಟ್ ಮಾಸ್ಟರ್ ಪ್ಲಾನ್ ಹೆಣೆದಿದ್ದಾರೆ ಎಂದು ವರದಿಯಾಗಿದೆ. ಇದಷ್ಟೇ ಅಲ್ಲದೇ ಈ ವಿಚಾರವಾಗಿ ಸ್ಯಾಮ್ ಕರ್ರನ್ ಅವರ ಜತೆ ಬೊಬಟ್ ಈಗಾಗಲೇ ಲಂಡನ್&zwnj;ನಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕಳೆದ ಸೀಸನ್&zwnj; ಐಪಿಎಲ್ ಟೂರ್ನಿಯಲ್ಲಿ ಕೆರಿಬಿಯನ್ ಮೂಲದ ರೊಮ್ಯಾರಿಯೋ ಶೆಫರ್ಡ್&zwnj; ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಹೀಗಾಗಿ ಶೆಫರ್ಡ್&zwnj; ಬದಲಿಗೆ ಸ್ಯಾಮ್ ಕರ್ರನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್&zwnj;ಸಿಬಿ ಫ್ರಾಂಚೈಸಿ ಉತ್ಸುಕವಾಗಿದೆ ಎಂದು ವರದಿಯಾಗಿದೆ. ಸ್ಯಾಮ್ ಕರ್ರನ್ ಬೌಲಿಂಗ್ ಮಾತ್ರವಲ್ಲದೇ ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್&zwnj;ನಲ್ಲೂ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯವನ್ನು ಇಂಗ್ಲೆಂಡ್ ಆಲ್ರೌಂಡರ್ ಹೊಂದಿದ್ದಾರೆ.&lt;/p&gt;&lt;img&gt;&lt;p&gt;ಭಾರತ ಎದುರಿನ ಸೀಮಿತ ಓವರ್&zwnj;ಗಳ ಸರಣಿಯಲ್ಲಿ(ಏಕದಿನ ಹಾಗೂ ಟಿ20) ಇಂಗ್ಲೆಂಡ್ ಪರ ಒಟ್ಟು ಐದು ಪಂದ್ಯಗಳನ್ನಾಡಿದ ಸ್ಯಾಮ್ ಕರ್ರನ್ ಏಳು ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಲಾರ್ಡ್ಸ್&zwnj;ನಲ್ಲಿ ನಡೆದ ನಿರ್ಣಾಯಕ ಏಕದಿನ ಪಂದ್ಯವೊಂದರಲ್ಲೇ ಕರ್ರನ್ ಪ್ರಮುಖ 4 ವಿಕೆಟ್ ಕಬಳಿಸಿ ಇಂಗ್ಲೆಂಡ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನೂ ಬ್ಯಾಟಿಂಗ್&zwnj;ನಲ್ಲೂ ಕರ್ರನ್ ಭಾರತ ಎದುರಿನ ಸರಣಿಯಲ್ಲಿ 48 ರನ್ ಬಾರಿಸಿ ಮಿಂಚಿದ್ದರು.&lt;/p&gt;&lt;img&gt;&lt;p&gt;ಈಗಾಗಲೇ ಆರ್&zwnj;ಸಿಬಿ ತಂಡದಲ್ಲಿ ಫಿಲ್ ಸಾಲ್ಟ್, ಜೇಕಬ್ ಬೆಥೆಲ್ ಅವರಂತಹ ಇಂಗ್ಲೆಂಡ್ ಮೂಲದ ಸ್ಟಾರ್ ಆಟಗಾರರಿದ್ದು, ಇದೀಗ ಸ್ಯಾಮ್ ಕರ್ರನ್ ಕೂಡಾ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್&zwnj;ಸಿಬಿ ತಂಡ ಕೂಡಿಕೊಂಡರೇ, ಬೆಂಗಳೂರು ತಂಡಕ್ಕೆ ಆನೆ ಬಲ ಬರಲಿದೆ. ಸ್ಯಾಮ್ ಕರ್ರನ್ ಮುಂಬರುವ ದಿನಗಳಲ್ಲಿ ಆರ್&zwnj;ಸಿಬಿ ಪಾಲಾಗ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/rcb-target-england-star-sam-curran-ahead-of-ipl-2027-big-transfer-buzz-emerges-kvn-pw7w2wy"/>
        </item>
        <item>
            <title><![CDATA[ಧೋನಿಗೆ ನಂಬಿಸಿ ಮೋಸ ಮಾಡಿತಾ ಚೆನ್ನೈ ಸೂಪರ್‌ ಕಿಂಗ್ಸ್ ಫ್ರಾಂಚೈಸಿ..? 5 ಕಪ್ ಗೆಲ್ಲಿಸಿಕೊಟ್ಟ ನಾಯಕನಿಗೆ ಇದೆಂಥಾ ಅನ್ಯಾಯ?]]></title>
            <link>https://kannada.asianetnews.com/cricket-sports/did-csk-cheat-ms-dhoni-stake-dispute-raises-questions-over-his-ipl-2027-future-kvn/articleshow-ql97mnn</link>
            <guid isPermaLink="true">https://kannada.asianetnews.com/cricket-sports/did-csk-cheat-ms-dhoni-stake-dispute-raises-questions-over-his-ipl-2027-future-kvn/articleshow-ql97mnn</guid>
            <pubDate>Wed, 26 Aug 2026 13:34:18 +0530</pubDate>
            <description><![CDATA[ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಮಾಲೀಕರಾಗಲು ಎಂ.ಎಸ್. ಧೋನಿ ಬಯಸಿದ್ದು, ಷೇರುಗಳ ವಿಚಾರವಾಗಿ ಫ್ರಾಂಚೈಸಿ ಜೊತೆ ತಿಕ್ಕಾಟ ನಡೆದಿದೆ ಎಂದು ವರದಿಯಾಗಿದೆ. ನಿವೃತ್ತಿ ನಂತರ ಹೆಚ್ಚಿನ ಷೇರು ನೀಡುವುದಾಗಿ ಸಿಎಸ್&zwnj;ಕೆ ಮಾತು ತಪ್ಪಿತೇ ಮತ್ತು ಇದು ಧೋನಿಯ ಮುಂದಿನ ಆಟದ ಮೇಲೆ ಪರಿಣಾಮ ಬೀರುವುದೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01fynczk5enz9raj0f4mhmwyx5,imgname-ms-dhoni.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗಿನಿಂದ ಹಿಡಿದು ಇಲ್ಲಿಯವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐಕಾನ್ ಆಗಿ ಬೆಳೆದು ನಿಂತಿರುವ ಮಹೇಂದ್ರ ಸಿಂಗ್ ಧೋನಿ, ಸಿಎಸ್&zwnj;ಕೆ ಫ್ರಾಂಚೈಸಿಯ ಸಹ ಮಾಲೀಕರಾಗಲು ಒಲವು ತೋರಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಧೋನಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮೋಸ ಮಾಡಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.&lt;/p&gt;&lt;p&gt;ವಿಕೆಟ್ ಕೀಪರ್ ಬ್ಯಾಟರ್, ಕ್ಯಾಪ್ಟನ್ ಕೂಲ್ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದು ಬೀಗಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮುಂಬೈ ಜತೆ ಜಂಟಿ ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ತಂಡ ಎನ್ನುವ ಖ್ಯಾತಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾತ್ರವಾಗಿದೆ. ಐಪಿಎಲ್&zwnj; ನಿವೃತ್ತಿಯ ಹೊಸ್ತಿಲಲ್ಲಿರುವ ಧೋನಿಯನ್ನು ಕ್ರಿಕೆಟ್ ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಈಗಲೂ ಸಿಎಸ್&zwnj;ಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುವಾಗಲೇ, ಇದೀಗ ಸಿಎಸ್&zwnj;ಕೆ ಫ್ರಾಂಚೈಸಿ ಹಾಗೂ ಧೋನಿ ನಡುವೆ ಷೇರಿನ ವಿಚಾರದಲ್ಲಿ ತಿಕ್ಕಾಟ ಶುರುವಾಗಿದೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಏನಿದು ಧೋನಿ-ಸಿಎಸ್&zwnj;ಕೆ ನಡುವಿನ ತಿಕ್ಕಾಟ&lt;/strong&gt;&lt;/h2&gt;&lt;p&gt;ಚೆನ್ನೈ ಸೂಪರ್&zwnj; ಕಿಂಗ್ಸ್&zwnj; ತಂಡದ ಅವಿಭಾಜ್ಯ ಅಂಗವೆನಿಸಿರುವ ಎಂ.ಎಸ್&zwnj;.ಧೋನಿ, ಫ್ರಾಂಚೈಸಿಯ ಸಹ ಮಾಲಿಕನಾಗಲು ಇಚ್ಛಿಸಿದ್ದು, ತಂಡದಲ್ಲಿ ಶೇ.25ರಷ್ಟು ಪಾಲು ಕೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಧೋನಿಯ ಪ್ರಸ್ತಾಪಕ್ಕೆ ಒಪ್ಪದ ಸಿಎಸ್&zwnj;ಕೆ, ಆರಂಭದಲ್ಲಿ ಶೇ.3ರಷ್ಟು ಪಾಲು ನೀಡುವುದಾಗಿ ತಿಳಿಸಿತು ಎನ್ನಲಾಗಿದೆ. ಬಹಳಷ್ಟು ಮಾತುಕತೆ ಬಳಿಕ ಧೋನಿ ಶೇ.18ರಷ್ಟು ಪಾಲು ನೀಡಿ ಎಂದು ಸಿಎಸ್&zwnj;ಕೆ ಮಾಲಿಕರಾದ ಇಂಡಿಯಾ ಸಿಮೆಂಟ್ಸ್&zwnj; ಸಂಸ್ಥೆಯನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಒಪ್ಪದ ಮಾಲಿಕರು, ಗರಿಷ್ಠ ಶೇ.5ರಷ್ಟು ಪಾಲು ಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಧೋನಿ ಹಾಗೂ ಸಿಎಸ್&zwnj;ಕೆ ನಡುವಿನ ಮಾತುಕತೆ ಫಲ ನೀಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.&lt;/p&gt;&lt;h3&gt;&lt;strong&gt;ನಂಬಿಸಿ ಧೋನಿಗೆ ಮೋಸ ಮಾಡಿತಾ ಸಿಎಸ್&zwnj;ಕೆ ಫ್ರಾಂಚೈಸಿ:&lt;/strong&gt;&lt;/h3&gt;&lt;p&gt;ನೆಟ್ಟಿಗರೊಬ್ಬರ ಸೋಷಿಯಲ್ ಮೀಡಿಯಾ ಪೋಸ್ಟ್ ಪ್ರಕಾರ, ಮಹೇಂದ್ರ ಸಿಂಗ್ ಧೋನಿ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ, ಐಪಿಎಲ್&zwnj;ಗೆ ವಿದಾಯ ಹೇಳಲು ತೀರ್ಮಾನಿಸಿದ್ದರಂತೆ. ಆದರೆ ಸಿಎಸ್&zwnj;ಕೆ ಮ್ಯಾನೇಜ್&zwnj;ಮೆಂಟ್, ಮಾರ್ಕೆಟಿಂಗ್ ಟೀಮ್ ಹಾಗೂ ಮೀಡಿಯಾ ಟೀಮ್&zwnj;, ಧೋನಿಗೆ ಇನ್ನೂ 2-3 ವರ್ಷ ಐಪಿಎಲ್ ಆಡಲು ಒತ್ತಡ ಹೇರಿದರಂತೆ. ಒಂದು ವೇಳೆ ಇನ್ನೂ ಎರಡು ಮೂರು ವರ್ಷ ಸಿಎಸ್&zwnj;ಕೆ ಪರ ಐಪಿಎಲ್ ಆಡಿದರೇ, ನಿವೃತ್ತಿ ಬಳಿಕ ನಿಮಗೆ ಸಿಎಸ್&zwnj;ಕೆ ತಂಡದ 30-35 ಸ್ಟೇಕ್ಸ್&zwnj;(ಷೇರು)ಗಳನ್ನು ನೀಡುವುದಾಗಿ ಮಾತು ಕೊಟ್ಟಿತ್ತಂತೆ. ಆದರೆ ಈ ಸಂಬಂಧ ಯಾವುದೇ ಅಧಿಕೃತ ಒಪ್ಪಂದವಾಗಿರಲಿಲ್ಲವಂತೆ. ಇದೀಗ ಧೋನಿ ಸಿಎಸ್&zwnj;ಕೆ ಪರ ಕಳೆದು ಮೂರು ವರ್ಷ ಐಪಿಎಲ್ ಆಡಿದ ಬಳಿಕವೂ ಧೋನಿ ಬಯಸಿದಷ್ಟು ಸ್ಟೇಕ್ ನೀಡಲು ಸಿಎಸ್&zwnj;ಕೆ ಫ್ರಾಂಚೈಸಿ ಒಪ್ಪುತ್ತಿಲ್ಲ ಎನ್ನಲಾಗಿದ್ದು, ಐದು ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನಿಗೆ ಚೆನ್ನೈ ಫ್ರಾಂಚೈಸಿ ಮೋಸ ಮಾಡಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.&lt;/p&gt;&lt;h3&gt;&lt;strong&gt;2027ರ ಐಪಿಎಲ್ ಆಡ್ತಾರಾ ಎಂ ಎಸ್ ಧೋನಿ?&lt;/strong&gt;&lt;/h3&gt;&lt;p&gt;ಅಂದಹಾಗೆ ಮಹೇಂದ್ರ ಸಿಂಗ್ ಧೋನಿ 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ್ದರೂ, ಐಪಿಎಲ್&zwnj;ನಲ್ಲಿ ಸಿಎಸ್&zwnj;ಕೆ ಪರ ಮೈದಾನಕ್ಕಿಳಿಯುತ್ತಲೇ ಬಂದಿದ್ದಾರೆ. ಸಿಎಸ್&zwnj;ಕೆ ಫ್ರಾಂಚೈಸಿಯು ಧೋನಿಯನ್ನು 2025ರ ಐಪಿಎಲ್ ಹರಾಜಿಗೂ ಮುನ್ನ 4 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ. ಆದರೆ ಇತ್ತೀಚಿಗಿನ ಬೆಳವಣಿಗೆಯನ್ನು ಗಮನಿಸಿದಾಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಧೋನಿ ಸಿಎಸ್&zwnj;ಕೆ ಪರ ಕಣಕ್ಕಿಳಿಯುತ್ತಾರಾ ಎನ್ನುವ ಪ್ರಶ್ನೆ ಇದೀಗ ಕಾಡಲಾರಂಭಿಸಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/did-csk-cheat-ms-dhoni-stake-dispute-raises-questions-over-his-ipl-2027-future-kvn/articleshow-ql97mnn"/>
        </item>
        <item>
            <title><![CDATA[ಮಂಗಳೂರಿನ ನಟಿ ಶಿಲ್ಪಾ ಶೆಟ್ಟಿ ಪತಿಗೆ ಗಜಕೇಸರಿ ಯೋಗ ಕೊಟ್ಟ IPL Team : ₹82 ಕೋಟಿ ರೂ ಈಗ ₹16 ಸಾವಿರ ಕೋಟಿ ಆಯ್ತು]]></title>
            <link>https://kannada.asianetnews.com/gallery/cricket-sports/did-shilpa-shetty-bring-gajakesari-yoga-luck-to-raj-kundra-rajasthan-royals-soar-from-82-crore-to-16000-crore-suh-s01wbw1</link>
            <guid isPermaLink="true">https://kannada.asianetnews.com/gallery/cricket-sports/did-shilpa-shetty-bring-gajakesari-yoga-luck-to-raj-kundra-rajasthan-royals-soar-from-82-crore-to-16000-crore-suh-s01wbw1</guid>
            <pubDate>Thu, 23 Jul 2026 11:25:13 +0530</pubDate>
            <description><![CDATA[&lt;p&gt;ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪತ್ನಿ ಶಿಲ್ಪಾ ಶೆಟ್ಟಿಗೆ ಪ್ರೇಮಿಗಳ ದಿನದಂದು ಉಡುಗೊರೆಯಾಗಿ ಐಪಿಎಲ್ ತಂಡದಲ್ಲಿ ಪಾಲು ಖರೀದಿಸಿದ್ದಾಗಿ ರಾಜ್ ಕುಂದ್ರಾ ಬಹಿರಂಗಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky6r4jjre81fyn0037at17t8,imgname-did-shilpa-shetty-bring-gajakesari-yoga-luck-to-raj-kundra-rajasthan-royals-soar-from-82-crore-to-16-000-crore-1784785554008.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪತ್ನಿ ಶಿಲ್ಪಾ ಶೆಟ್ಟಿಗೆ ಪ್ರೇಮಿಗಳ ದಿನದಂದು ಉಡುಗೊರೆಯಾಗಿ ಐಪಿಎಲ್ ತಂಡದಲ್ಲಿ ಪಾಲು ಖರೀದಿಸಿದ್ದಾಗಿ ರಾಜ್ ಕುಂದ್ರಾ ಬಹಿರಂಗಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಹೇಳಿಕೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ನಿ ಶಿಲ್ಪಾ ಶೆಟ್ಟಿಗೆ ಪ್ರೇಮಿಗಳ ದಿನದಂದು ಉಡುಗೊರೆಯಾಗಿ ಐಪಿಎಲ್ ತಂಡದಲ್ಲಿ ಪಾಲು ಖರೀದಿಸಿದ್ದಾಗಿ ರಾಜ್ ಕುಂದ್ರಾ ಬಹಿರಂಗಪಡಿಸಿದ್ದಾರೆ. ಇದಕ್ಕಾಗಿ ಅವರು ಬರೋಬ್ಬರಿ ₹81.9 ಕೋಟಿ ಖರ್ಚು ಮಾಡಿದ್ದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ 2009ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ದೊಡ್ಡ ಪ್ರಮಾಣದ ಪಾಲನ್ನು ಖರೀದಿಸಿದ್ದರು. ತಂಡದಲ್ಲಿ ತಮ್ಮ ಪಾಲು ಸುಮಾರು 11.7% ಆಗಿತ್ತು ಎಂದು ರಾಜ್ ಹೇಳಿದ್ದಾರೆ. ಆ ಸಮಯದಲ್ಲಿ ತಂಡದ ಮೌಲ್ಯ ಸುಮಾರು ₹700 ಕೋಟಿ ಇದ್ದರೆ, ಈಗ ಅದರ ಮೌಲ್ಯ ₹16,000 ಕೋಟಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಶಿಲ್ಪಾಗೆ ಪ್ರೇಮಿಗಳ ದಿನದ ಉಡುಗೊರೆ!&lt;/strong&gt;&lt;/p&gt;&lt;p&gt;&lsquo;SMTV&rsquo; ಯೂಟ್ಯೂಬ್ ಚಾನೆಲ್&zwnj;ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜ್ ಕುಂದ್ರಾ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಹೂಡಿಕೆ ಮಾಡಿದ್ದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. &ldquo;ನಾನು ಅದನ್ನು ಪ್ರೇಮಿಗಳ ದಿನದ ಉಡುಗೊರೆಯಾಗಿ ಖರೀದಿಸಿದೆ&rdquo; ಎಂದು ರಾಜ್ ಹೇಳಿದ್ದಾರೆ.&lt;/p&gt;&lt;p&gt;ಆ ಸಮಯದಲ್ಲಿ ಭಾರತದಲ್ಲಿ ತಮ್ಮದೇ ಆದ ಯಾವುದೇ ವ್ಯವಹಾರ ಇರಲಿಲ್ಲ. ಭಾರತದಲ್ಲಿ ಉದ್ಯಮ ಆರಂಭಿಸುವ ಉದ್ದೇಶದಿಂದ ಐಪಿಎಲ್ ತಂಡದಲ್ಲಿ ಹೂಡಿಕೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಶಿಲ್ಪಾ ಶೆಟ್ಟಿಯವರ ಬ್ರ್ಯಾಂಡ್ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಈ ಹೂಡಿಕೆ ಮಾಡಿದ್ದಾಗಿ ರಾಜ್ ಹೇಳಿದ್ದಾರೆ. ತಂಡದಲ್ಲಿ ತಮ್ಮ ಪಾಲು ಪಡೆಯಲು ₹81.9 ಕೋಟಿ ಹೂಡಿಕೆ ಮಾಡಿದ್ದು, ಆ ಸಮಯದಲ್ಲಿ ಐಪಿಎಲ್&zwnj;ನಲ್ಲಿ ವ್ಯಕ್ತಿಯೊಬ್ಬರು ಮಾಡಿದ ಅತಿದೊಡ್ಡ ಏಕೈಕ ಚೆಕ್ ಪಾವತಿಗಳಲ್ಲಿ ಇದೂ ಒಂದಾಗಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ರಾಜಸ್ಥಾನ್ ರಾಯಲ್ಸ್ ತಂಡವನ್ನು ಖರೀದಿಸಿದಾಗ ಅದರ ಮೌಲ್ಯ ಸುಮಾರು ₹700 ಕೋಟಿ ಇತ್ತು. ಆದರೆ ಇದೀಗ ತಂಡದ ಮೌಲ್ಯ ಸುಮಾರು ₹16,000 ಕೋಟಿಗೆ ಏರಿಕೆಯಾಗಿದೆ ಎಂದು ರಾಜ್ ಕುಂದ್ರಾ ಹೇಳಿದ್ದಾರೆ. ತಾವು ಐಪಿಎಲ್ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎಂದು ಮೊದಲೇ ನಂಬಿದ್ದೆ. &ldquo;ಇದು ಒಂದು ದೊಡ್ಡ ಘಟನೆಯಾಗಲಿದೆ ಎಂದು ನಂಬಿದ ಮೊದಲ ವ್ಯಕ್ತಿ ನಾನು&rdquo; ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಪ್ರತಿ ಐಪಿಎಲ್ ತಂಡವೂ ₹200-500 ಕೋಟಿ ಲಾಭ ಗಳಿಸುತ್ತಿದೆ&rsquo;&lt;/strong&gt;&lt;/p&gt;&lt;p&gt;ಐಪಿಎಲ್ ತಂಡಗಳ ಆದಾಯದ ಬಗ್ಗೆಯೂ ರಾಜ್ ಕುಂದ್ರಾ ಮಾತನಾಡಿದ್ದಾರೆ. ಆರಂಭದ 5-6 ವರ್ಷಗಳಲ್ಲಿ ತಂಡಗಳು ದೊಡ್ಡ ಪ್ರಮಾಣದ ಲಾಭ ಗಳಿಸಿರಲಿಲ್ಲ. ಕೆಲವೊಮ್ಮೆ ಮಾಲೀಕರು ತಮ್ಮ ಸ್ವಂತ ಹಣವನ್ನೇ ತಂಡಕ್ಕೆ ಖರ್ಚು ಮಾಡಬೇಕಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಐಪಿಎಲ್ ತಂಡಗಳ ಪ್ರಮುಖ ಆದಾಯ ಮೂಲಗಳಲ್ಲಿ ಸುಮಾರು 70% ಟಿವಿ ಪ್ರಸಾರ ಹಕ್ಕುಗಳು, 10-15% ಜೆರ್ಸಿ ಪ್ರಾಯೋಜಕತ್ವ ಮತ್ತು 10-15% ಟಿಕೆಟ್ ಮಾರಾಟದಿಂದ ಬರುತ್ತದೆ ಎಂದು ರಾಜ್ ಹೇಳಿದ್ದಾರೆ.&lt;/p&gt;&lt;p&gt;ಅವರ ಪ್ರಕಾರ, ಪ್ರಸ್ತುತ ಪ್ರಾಯೋಜಕತ್ವ ಮತ್ತು ಇತರ ಆದಾಯದ ಆಧಾರದ ಮೇಲೆ ಐಪಿಎಲ್ ತಂಡಗಳು ವಾರ್ಷಿಕವಾಗಿ ಸುಮಾರು ₹200 ಕೋಟಿಯಿಂದ ₹500 ಕೋಟಿವರೆಗೆ ಲಾಭ ಗಳಿಸುತ್ತಿವೆ.&lt;/p&gt;&lt;img&gt;&lt;p&gt;ರಾಜಸ್ಥಾನ್ ರಾಯಲ್ಸ್ ತಂಡದ ಜೊತೆಗಿನ ತಮ್ಮ ಹಿಂದಿನ ವಿವಾದದ ಬಗ್ಗೆಯೂ ರಾಜ್ ಕುಂದ್ರಾ ಮಾತನಾಡಿದ್ದಾರೆ. ತಮ್ಮ ವಿರುದ್ಧ ಬೆಟ್ಟಿಂಗ್ ಆರೋಪಗಳು ಬಂದಿದ್ದವು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;2013ರ ಐಪಿಎಲ್ ಬೆಟ್ಟಿಂಗ್ ಹಗರಣದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ರಾಜ್ ಕುಂದ್ರಾ ವಿರುದ್ಧವೂ ಕ್ರಮ ಕೈಗೊಳ್ಳಲಾಗಿತ್ತು. ಆದರೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ನಿರಂತರವಾಗಿ ಹೇಳಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ವಿರುದ್ಧದ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್&zwnj;ನಲ್ಲಿ ಬಾಕಿ ಇದೆ ಎಂದು ರಾಜ್ ಹೇಳಿದ್ದಾರೆ. ತಂಡದ ಉಳಿವಿಗಾಗಿ ತಾವು ಆರೋಪದ ಹೊಣೆ ಹೊತ್ತುಕೊಳ್ಳಲು ಸಿದ್ಧರಾಗಿದ್ದೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್&zwnj;ನಲ್ಲಿ ಬೆಟ್ಟಿಂಗ್ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ ಕುಂದ್ರಾ, &ldquo;ಬೆಟ್ಟಿಂಗ್ ಇದೆ. ಇದಕ್ಕೆ ಸಮಾನಾಂತರ ಮಾರುಕಟ್ಟೆ ಇದೆ&rdquo; ಎಂದು ಹೇಳಿದ್ದಾರೆ.&lt;/p&gt;&lt;p&gt;ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲವು ಕಡೆಗಳಲ್ಲಿ ಐಪಿಎಲ್ ಬೆಟ್ಟಿಂಗ್ ಕಾನೂನುಬದ್ಧವಾಗಿದ್ದರೂ, ಭಾರತದಲ್ಲಿ ಅಕ್ರಮ ಬೆಟ್ಟಿಂಗ್ ಮಾರುಕಟ್ಟೆಗಳಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಆದರೆ ಐಪಿಎಲ್ ತಂಡಗಳ ಒಳಗೆ ಅಂತಹ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ ಎಂದು ರಾಜ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;2013ರ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿತ ನ್ಯಾಯಮೂರ್ತಿ ಆರ್.ಎಸ್. ಲೋಧಾ ಸಮಿತಿಯು 2015ರಲ್ಲಿ ರಾಜ್ ಕುಂದ್ರಾ ವಿರುದ್ಧ ಜೀವಾವಧಿ ನಿಷೇಧದ ಶಿಫಾರಸು ಮಾಡಿತ್ತು. ಆದರೆ ರಾಜ್ ಕುಂದ್ರಾ ಇಂದಿಗೂ ತಾವು ನಿರಪರಾಧಿ ಎಂಬ ನಿಲುವನ್ನು ಮುಂದುವರಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಪತ್ನಿ ಶಿಲ್ಪಾ ಶೆಟ್ಟಿಗೆ ಪ್ರೇಮಿಗಳ ದಿನದ ಉಡುಗೊರೆಯಾಗಿ ₹82 ಕೋಟಿಯಷ್ಟು ಹಣ ಖರ್ಚು ಮಾಡಿ ಐಪಿಎಲ್ ತಂಡದಲ್ಲಿ ಪಾಲು ಖರೀದಿಸಿದ್ದ ರಾಜ್ ಕುಂದ್ರಾ ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>ipl</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/cricket-sports/did-shilpa-shetty-bring-gajakesari-yoga-luck-to-raj-kundra-rajasthan-royals-soar-from-82-crore-to-16000-crore-suh-s01wbw1"/>
        </item>
        <item>
            <title><![CDATA[ಸಿಎಸ್‌ಕೆ ತಂಡದಲ್ಲಿ ನಾನು ಈ ರೋಲ್ ಮಾಡೊಲ್ಲವೆಂದ ಧೋನಿ..! ಹೊಸ ಬಾಂಬ್ ಸಿಡಿಸಿದ ಚೆನ್ನೈ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/gallery/cricket-sports/ms-dhoni-ipl-role-in-doubt-csk-legend-wants-full-time-wicketkeeper-role-says-s-badrinath-kvn-snok9k4</link>
            <guid isPermaLink="true">https://kannada.asianetnews.com/gallery/cricket-sports/ms-dhoni-ipl-role-in-doubt-csk-legend-wants-full-time-wicketkeeper-role-says-s-badrinath-kvn-snok9k4</guid>
            <pubDate>Thu, 03 Sep 2026 16:48:02 +0530</pubDate>
            <description><![CDATA[&lt;p&gt;ಬೆಂಗಳೂರು: ಚೆನ್ನೈ ಸೂಪರ್&zwnj; ಕಿಂಗ್ಸ್ ತಂಡಕ್ಕೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿಯ ರೋಲ್ ಬಗ್ಗೆ ಸದ್ಯ ಚರ್ಚೆಯಲ್ಲಿದೆ. ಹೀಗಿರುವಾಗಲೇ ಧೋನಿ ಕುರಿತಂತೆ ಮಾಜಿ ಐಪಿಎಲ್ ಕ್ರಿಕೆಟಿಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಏನದು? ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kryn21bz1g3ycse250s80pma,imgname-ms-dhoni-1779145180543.jpeg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಚೆನ್ನೈ ಸೂಪರ್&zwnj; ಕಿಂಗ್ಸ್ ತಂಡಕ್ಕೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿಯ ರೋಲ್ ಬಗ್ಗೆ ಸದ್ಯ ಚರ್ಚೆಯಲ್ಲಿದೆ. ಹೀಗಿರುವಾಗಲೇ ಧೋನಿ ಕುರಿತಂತೆ ಮಾಜಿ ಐಪಿಎಲ್ ಕ್ರಿಕೆಟಿಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಏನದು? ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು, ಧೋನಿಯನ್ನು ಅನ್&zwnj;ಕ್ಯಾಪ್ಡ್&zwnj; ರೂಲ್ಸ್ ಬಳಸಿಕೊಂಡು ಕೇವಲ 4 ಕೋಟಿ ರುಪಾಯಿಗೆ ರೀಟೈನ್ ಮಾಡಿಕೊಂಡಿತ್ತು. ಆದರೆ ಗಾಯದ ಸಮಸ್ಯೆಯಿಂದ ಧೋನಿ ಮೈದಾನಕ್ಕಿಳಿದಿರಲಿಲ್ಲ. ಇದೀಗ ಮುಂಬರುವ ಐಪಿಎಲ್ ಸೀಸನ್&zwnj;ನಲ್ಲೂ ಧೋನಿ ಆಡುವ ಬಗ್ಗೆ ಇನ್ನು ಯಾವುದೇ ಖಚಿತತೆ ಇಲ್ಲ.&lt;/p&gt;&lt;img&gt;&lt;p&gt;ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಧೋನಿಯನ್ನು ಕೇವಲ ಇಂಪ್ಯಾಕ್ಟ್ ಆಟಗಾರನ ರೂಪದಲ್ಲಿ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ ಧೋನಿಗೆ ಇಂಪ್ಯಾಕ್ಟ್ ಆಟಗಾರನ ರೋಲ್ ನಿಭಾಯಿಸುವುದು ಇಷ್ಟವಿಲ್ಲವೆಂದು ಸಿಎಸ್&zwnj;ಕೆ ತಂಡದ ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೈದಾನಕ್ಕಿಳಿದಾಗ ಧೋನಿ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಬಯಸುತ್ತಾರೆ. ಕೇವಲ ಬ್ಯಾಟಿಂಗ್&zwnj;ಗಾಗಿ ಮಾತ್ರ ಆಟದಲ್ಲಿ ಭಾಗವಹಿಸುವ ಬದಲು, 20 ಓವರ್&zwnj;ಗಳ ಇನಿಂಗ್ಸ್&zwnj;ನಾದ್ಯಂತ ಮೈದಾನದಲ್ಲಿಯೇ ಇರುವುದು ಇದಕ್ಕೆ ಅಗತ್ಯವಾಗಿರುತ್ತದೆ. ಅದನ್ನೇ ಧೋನಿ ಹೆಚ್ಚು ಇಷ್ಟಪಡುತ್ತಾರೆ ಎಂದು ಬದ್ರಿನಾಥ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ತಾನು 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವುದಿಲ್ಲ ಎಂದು ಅವರು ಸ್ವತಃ ನನಗೆ ಹೇಳಿದ್ದಾರೆ. ಅವರು ತಮ್ಮನ್ನು ಪೂರ್ಣಾವಧಿಯ ವಿಕೆಟ್-ಕೀಪರ್ ಆಗಿ ಪರಿಗಣಿಸುತ್ತಾರೆ; ಅಂದರೆ, ಅವರು ಪಂದ್ಯದ ಪೂರ್ತಿ 20 ಓವರ್&zwnj;ಗಳ ಕಾಲ ಮೈದಾನದಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅವರು ಇಂಪ್ಯಾಕ್ಟ್ ಆಟಗಾರನ ಪಾತ್ರ ನಿಭಾಯಿಸಲು ಬಯಸುತ್ತಿಲ್ಲ. ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಮೈದಾನದಲ್ಲಿದ್ರೆ ಸಿಎಸ್&zwnj;ಕೆ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅವರ ದೇಹವು ದೀರ್ಘಕಾಲದ ಆಟದ ಒತ್ತಡವನ್ನು ತಡೆದುಕೊಳ್ಳಲಾರದು ಎಂದು ಸ್ವತಃ ಫ್ಲೆಮಿಂಗ್ ಕೂಡ ಹೇಳಿದ್ದಾರೆ. ಅವರು ಕೇವಲ 16ನೇ ಓವರ್&zwnj;ನ ನಂತರ ಬ್ಯಾಟಿಂಗ್&zwnj;ಗೆ ಇಳಿಯಲಿದ್ದಾರೆ ಮತ್ತು ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಹೀಗೆ ಅವರ ಪಾತ್ರ ಸೀಮಿತವಾಗಿರುವುದರಿಂದ, 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಅವರು ಅತ್ಯುತ್ತಮ ಆಯ್ಕೆಯಾಗಲಿದ್ದಾರೆ ಎಂದು ಬದ್ರಿನಾಥ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಒಂದು ಕಡೆ ಸಿಎಸ್&zwnj;ಕೆ ತಂಡದಲ್ಲಿ ಧೋನಿ ಪಾಲು ಕೇಳಿದ್ದಾರೆ. ಸಿಎಸ್&zwnj;ಕೆ ಹಾಗೂ ಧೋನಿ ನಡುವಿನ ಬಾಂಧವ್ಯ ಹಳಸಿದೆ ಎನ್ನುವ ಚರ್ಚೆ ಜೋರಾಗಿರುವ ಬೆನ್ನಲ್ಲೇ ಬದ್ರಿನಾಥ್ ಅವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಧೋನಿ ಮುಂದಿನ ಸೀಸನ್ ಐಪಿಎಲ್&zwnj;ನಲ್ಲಿ ಪೂರ್ಣ ಪ್ರಮಾಣದ ಆಟಗಾರನಾಗಿ ಕಣಕ್ಕಿಳಿಯುತ್ತಾರೋ ಅಥವಾ ಇಂಪ್ಯಾಕ್ಟ್ ಆಟಗಾರನಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/ms-dhoni-ipl-role-in-doubt-csk-legend-wants-full-time-wicketkeeper-role-says-s-badrinath-kvn-snok9k4"/>
        </item>
        <item>
            <title><![CDATA[ಸಿಎಸ್‌ಕೆ ತಂಡದ ಜತೆಗಿರಲು ದೊಡ್ಡ ಬೇಡಿಕೆಯಿಟ್ಟ ಮಹೇಂದ್ರ ಸಿಂಗ್ ಧೋನಿ..! ಆದ್ರೆ ಚೆನ್ನೈ ಫ್ರಾಂಚೈಸಿ ಜತೆಗಿನ ಮಹಿ ಮಾತುಕತೆ ಫೇಲ್]]></title>
            <link>https://kannada.asianetnews.com/gallery/ipl/csk-ms-dhoni-rift-mahi-seeks-ownership-stake-talks-with-franchise-hit-roadblock-kvn-u0p9fzp</link>
            <guid isPermaLink="true">https://kannada.asianetnews.com/gallery/ipl/csk-ms-dhoni-rift-mahi-seeks-ownership-stake-talks-with-franchise-hit-roadblock-kvn-u0p9fzp</guid>
            <pubDate>Wed, 26 Aug 2026 10:26:11 +0530</pubDate>
            <description><![CDATA[&lt;p&gt;ನವದೆಹಲಿ: ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್&zwnj;ಗೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ. ಆದರೆ ಮುಂದಿನ ಸೀಸನ್&zwnj; ಟೂರ್ನಿಗೂ ಮುನ್ನ ಧೋನಿ ಹಾಗೂ ಸಿಎಸ್&zwnj;ಕೆ ಫ್ರಾಂಚೈಸಿ ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಯಾಗಿದೆ. ಈ ಕುರಿತಾದ ಅಪ್&zwnj;ಡೇಟ್ಸ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kryn21bz1g3ycse250s80pma,imgname-ms-dhoni-1779145180543.jpeg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್&zwnj;ಗೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ. ಆದರೆ ಮುಂದಿನ ಸೀಸನ್&zwnj; ಟೂರ್ನಿಗೂ ಮುನ್ನ ಧೋನಿ ಹಾಗೂ ಸಿಎಸ್&zwnj;ಕೆ ಫ್ರಾಂಚೈಸಿ ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಯಾಗಿದೆ. ಈ ಕುರಿತಾದ ಅಪ್&zwnj;ಡೇಟ್ಸ್ ಇಲ್ಲಿದೆ.&lt;/p&gt;&lt;img&gt;&lt;p&gt;ಚೆನ್ನೈ ಸೂಪರ್&zwnj; ಕಿಂಗ್ಸ್&zwnj; ತಂಡದ ಅವಿಭಾಜ್ಯ ಅಂಗವೆನಿಸಿರುವ ಎಂ.ಎಸ್&zwnj;.ಧೋನಿ, ಫ್ರಾಂಚೈಸಿಯ ಸಹ ಮಾಲಿಕನಾಗಲು ಇಚ್ಛಿಸಿದ್ದು, ತಂಡದಲ್ಲಿ ಶೇ.25ರಷ್ಟು ಪಾಲು ಕೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.&lt;/p&gt;&lt;img&gt;&lt;p&gt;ಆದರೆ ಧೋನಿಯ ಪ್ರಸ್ತಾಪಕ್ಕೆ ಒಪ್ಪದ ಸಿಎಸ್&zwnj;ಕೆ, ಆರಂಭದಲ್ಲಿ ಶೇ.3ರಷ್ಟು ಪಾಲು ನೀಡುವುದಾಗಿ ತಿಳಿಸಿತು ಎನ್ನಲಾಗಿದೆ. ಬಹಳಷ್ಟು ಮಾತುಕತೆ ಬಳಿಕ ಧೋನಿ ಶೇ.18ರಷ್ಟು ಪಾಲು ನೀಡಿ ಎಂದು ಸಿಎಸ್&zwnj;ಕೆ ಮಾಲಿಕರಾದ ಇಂಡಿಯಾ ಸಿಮೆಂಟ್ಸ್&zwnj; ಸಂಸ್ಥೆಯನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಆದರೆ ಇದಕ್ಕೆ ಒಪ್ಪದ ಮಾಲಿಕರು, ಗರಿಷ್ಠ ಶೇ.5ರಷ್ಟು ಪಾಲು ಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಧೋನಿ ಹಾಗೂ ಸಿಎಸ್&zwnj;ಕೆ ನಡುವಿನ ಮಾತುಕತೆ ಫಲ ನೀಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಇದು ಧೋನಿ ಮುಂದಿನ ಸೀಸನ್&zwnj;ನಲ್ಲಿ ಸಿಎಸ್&zwnj;ಕೆ ಜತೆ ಇರುತ್ತಾರೋ ಅಥವಾ ಇಲ್ಲವೇ ಎನ್ನುವ ಕುತೂಹಲವನ್ನು ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ಐಪಿಎಲ್&zwnj;ನ ಅತ್ಯಂತ ಯಶಸ್ವಿ ತಂಡಗಳ ಪೈಕಿ ಸಿಎಸ್&zwnj;ಕೆ ಫ್ರಾಂಚೈಸಿ ಅಗ್ರಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ. 2026ರ ಐಪಿಎಲ್&zwnj; ಮುಕ್ತಾಯದ ಬಳಿಕ ಚೆನ್ನೈ ಸೂಪರ್&zwnj; ಕಿಂಗ್ಸ್&zwnj; ಬ್ರ್ಯಾಂಡ್&zwnj; ಮೌಲ್ಯ ಅಂದಾಜು ₹11000 ಕೋಟಿಯಿಂದ ₹13000 ಕೋಟಿ ಇದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಧೋನಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಸಿಎಸ್&zwnj;ಕೆ ಫ್ರಾಂಚೈಸಿ, ಕಳೆದ ಮೂರು ಸೀಸನ್&zwnj;ನಿಂದ ದಯನೀಯ ವೈಫಲ್ಯ ಅನುಭವಿಸುತ್ತಾ ಬಂದಿದೆ.&lt;/p&gt;&lt;img&gt;&lt;p&gt;ಹೀಗಿರುವಾಗಲೇ ಧೋನಿ-ಸಿಎಸ್&zwnj;ಕೆ ಫ್ರಾಂಚೈಸಿ ನಡುವಿನ ತಿಕ್ಕಾಟ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತೆ ಮಾಡುವಂತೆ ಮಾಡಿರುವುದಂತೂ ಸುಳ್ಳಲ್ಲ. ಮುಂದಿನ ಸೀಸನ್&zwnj;ನಲ್ಲಿ ಧೋನಿ ಸಿಎಸ್&zwnj;ಕೆ ಪರ ಆಡ್ತಾರಾ ಕಾದು ನೋಡಬೇಕಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/ipl/csk-ms-dhoni-rift-mahi-seeks-ownership-stake-talks-with-franchise-hit-roadblock-kvn-u0p9fzp"/>
        </item>
        <item>
            <title><![CDATA[ಆರ್‌ಸಿಬಿಯ ಈ ಸ್ಟಾರ್ ಆಲ್ರೌಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ]]></title>
            <link>https://kannada.asianetnews.com/gallery/cricket-sports/former-rcb-all-rounder-moises-henriques-retires-from-domestic-cricket-eyes-t20-world-cup-dream-with-portugal-suh-udeitxn</link>
            <guid isPermaLink="true">https://kannada.asianetnews.com/gallery/cricket-sports/former-rcb-all-rounder-moises-henriques-retires-from-domestic-cricket-eyes-t20-world-cup-dream-with-portugal-suh-udeitxn</guid>
            <pubDate>Thu, 16 Jul 2026 15:48:06 +0530</pubDate>
            <description><![CDATA[&lt;p&gt;RCB ಮಾಜಿ ಆಲ್&zwnj;ರೌಂಡರ್ ಮೊಯ್ಸೆಸ್ ಹೆನ್ರಿಕ್ಸ್ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್&zwnj;ಗೆ ವಿದಾಯ ಹೇಳಿದ್ದು, ಇದೀಗ ಪೋರ್ಚುಗಲ್ ಪರ 2026ರ T20 ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxn5rrqz6tg6gckvf10ebzrr,imgname-former-rcb-all-rounder-moises-henriques-retires-from-domestic-cricket-eyes-t20-world-cup-dream-with-portugal-1784195867391.jpg" type="image/jpeg" height="390" width="690"/>
            <content:encoded><![CDATA[&lt;p&gt;RCB ಮಾಜಿ ಆಲ್&zwnj;ರೌಂಡರ್ ಮೊಯ್ಸೆಸ್ ಹೆನ್ರಿಕ್ಸ್ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್&zwnj;ಗೆ ವಿದಾಯ ಹೇಳಿದ್ದು, ಇದೀಗ ಪೋರ್ಚುಗಲ್ ಪರ 2026ರ T20 ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಆಸ್ಟ್ರೇಲಿಯಾದ ಅನುಭವಿ ಆಲ್&zwnj;ರೌಂಡರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾಜಿ ಆಟಗಾರ ಮೊಯ್ಸೆಸ್ ಹೆನ್ರಿಕ್ಸ್ ತಮ್ಮ 18 ವರ್ಷಗಳ ಸುದೀರ್ಘ ದೇಶೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಆದರೆ ಕ್ರಿಕೆಟ್&zwnj;ಗೆ ನಿವೃತ್ತಿ ಘೋಷಿಸದೇ, ಹೊಸ ದೇಶದ ಪರ ಅಂತರರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಮತ್ತೊಂದು ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ.&lt;/p&gt;&lt;p&gt;38 ವರ್ಷದ ಹೆನ್ರಿಕ್ಸ್, ನ್ಯೂ ಸೌತ್ ವೇಲ್ಸ್ ಪರ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್&zwnj;ನಲ್ಲಿ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿದ್ದರು. ಶೆಫೀಲ್ಡ್ ಶೀಲ್ಡ್, ಮಾರ್ಷ್ ಒನ್-ಡೇ ಕಪ್ ಮತ್ತು ಬಿಗ್ ಬ್ಯಾಶ್ ಲೀಗ್&zwnj;ನಲ್ಲಿ (BBL) ಅವರು ತಮ್ಮ ಛಾಪು ಮೂಡಿಸಿದ್ದಾರೆ. ಸಿಡ್ನಿ ಸಿಕ್ಸರ್ಸ್ ತಂಡದ ಪ್ರಮುಖ ಆಟಗಾರರಾಗಿ ಎರಡು BBL ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;&lt;img&gt;&lt;p&gt;ಮೊಯ್ಸೆಸ್ ಹೆನ್ರಿಕ್ಸ್ ಐಪಿಎಲ್&zwnj;ನಲ್ಲಿ RCB ಸೇರಿದಂತೆ ಹಲವು ತಂಡಗಳ ಪರ ಆಡಿದ್ದಾರೆ. 2009ರಲ್ಲಿ RCB ಪರ ಆಡಿದ್ದ ಅವರು, ಬಳಿಕ ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್&zwnj;ಡೆವಿಲ್ಸ್, ಸನ್&zwnj;ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೊನೆಯದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವೂ ಕಣಕ್ಕಿಳಿದಿದ್ದರು. ಮಧ್ಯಮ ವೇಗದ ಬೌಲಿಂಗ್ ಮತ್ತು ಸ್ಪೋಟಕ ಬ್ಯಾಟಿಂಗ್&zwnj;ನಿಂದ ಹಲವು ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿದ್ದರು.&lt;/p&gt;&lt;img&gt;&lt;p&gt;ಹೆನ್ರಿಕ್ಸ್ ಅವರ ಕುಟುಂಬದ ಮೂಲ ಪೋರ್ಚುಗಲ್&zwnj;ಗೆ ಸಂಬಂಧಿಸಿದ್ದು, ಅದರಿಂದಾಗಿ ಅವರು ಈಗ ಪೋರ್ಚುಗಲ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ. ಮುಂಬರುವ 2026 ICC T20 World Cup Europe Qualifiersನಲ್ಲಿ ಪೋರ್ಚುಗಲ್ ಪರ ಕಣಕ್ಕಿಳಿಯಲಿದ್ದಾರೆ.&lt;/p&gt;&lt;p&gt;ಅನುಭವಿ ಆಟಗಾರನ ಸೇರ್ಪಡೆಯಿಂದ ಪೋರ್ಚುಗಲ್ ತಂಡದ ಬಲ ಹೆಚ್ಚಲಿದ್ದು, ಮೊದಲ ಬಾರಿಗೆ T20 ವಿಶ್ವಕಪ್&zwnj;ಗೆ ಅರ್ಹತೆ ಪಡೆಯುವ ಕನಸಿಗೆ ಮತ್ತಷ್ಟು ಬಲ ಸಿಕ್ಕಿದೆ.&lt;/p&gt;&lt;img&gt;&lt;p&gt;ಆಸ್ಟ್ರೇಲಿಯಾ ಪರ 4 ಟೆಸ್ಟ್ ಪಂದ್ಯಗಳು&lt;/p&gt;&lt;p&gt;11 ಏಕದಿನ ಪಂದ್ಯಗಳು&lt;/p&gt;&lt;p&gt;24 T20 ಅಂತರರಾಷ್ಟ್ರೀಯ ಪಂದ್ಯಗಳು&lt;/p&gt;&lt;p&gt;100ಕ್ಕೂ ಹೆಚ್ಚು ಫಸ್ಟ್ ಕ್ಲಾಸ್ ಪಂದ್ಯಗಳ ಅನುಭವ&lt;/p&gt;&lt;p&gt;300ಕ್ಕೂ ಹೆಚ್ಚು ಟಿ20 ಪಂದ್ಯಗಳಲ್ಲಿ ಭಾಗವಹಿಸಿದ ಅನುಭವಿ ಕ್ರಿಕೆಟಿಗ&lt;/p&gt;&lt;img&gt;&lt;p&gt;ದೇಶೀಯ ಕ್ರಿಕೆಟ್&zwnj;ಗೆ ವಿದಾಯ ಹೇಳಿರುವ ಹೆನ್ರಿಕ್ಸ್, ತಮ್ಮ ಅನುಭವವನ್ನು ಹೊಸ ತಂಡದೊಂದಿಗೆ ಹಂಚಿಕೊಳ್ಳಲು ಬಯಸಿದ್ದಾರೆ. ಬೆಳೆಯುತ್ತಿರುವ ಕ್ರಿಕೆಟ್ ರಾಷ್ಟ್ರವಾದ ಪೋರ್ಚುಗಲ್&zwnj;ಗೆ ನೆರವಾಗಿ ವಿಶ್ವಕಪ್&zwnj;ಗೆ ಕೊಂಡೊಯ್ಯುವುದು ಅವರ ಗುರಿಯಾಗಿದೆ.&lt;/p&gt;]]></content:encoded>
            <category>ipl</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/cricket-sports/former-rcb-all-rounder-moises-henriques-retires-from-domestic-cricket-eyes-t20-world-cup-dream-with-portugal-suh-udeitxn"/>
        </item>
        <item>
            <title><![CDATA[CSK ತಂಡದಲ್ಲಿ ಧೋನಿಯ ಷೇರುಗಳು ಇದೆಯಾ? ಕೊನೆಗೂ ಅಸಲಿ ಕಥೆ ಬಿಚ್ಚಿಟ್ಟ ಚೆನ್ನೈ ಟೀಮ್‌ ಮ್ಯಾನೇಜ್‌ಮೆಂಟ್!]]></title>
            <link>https://kannada.asianetnews.com/cricket-sports/ms-dhoni-csk-stake-worth-crores-team-reveals-the-truth-behind-rumours-kvn/articleshow-yzuw0oo</link>
            <guid isPermaLink="true">https://kannada.asianetnews.com/cricket-sports/ms-dhoni-csk-stake-worth-crores-team-reveals-the-truth-behind-rumours-kvn/articleshow-yzuw0oo</guid>
            <pubDate>Sat, 12 Sep 2026 12:21:24 +0530</pubDate>
            <description><![CDATA[ಚೆನ್ನೈ ಸೂಪರ್ ಕಿಂಗ್ಸ್&zwnj;ನಲ್ಲಿ (CSK) ಎಂ.ಎಸ್. ಧೋನಿ ಶೇ.15-20ರಷ್ಟು ಷೇರುಗಳನ್ನು ಖರೀದಿಸುತ್ತಿದ್ದಾರೆ ಎಂಬ ವದಂತಿಯನ್ನು ತಂಡದ ಮ್ಯಾನೇಜ್&zwnj;ಮೆಂಟ್ ತಳ್ಳಿಹಾಕಿದೆ. ಆದರೆ, ಧೋನಿ ತಂಡದಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು ಹೊಂದಿದ್ದು, ತಂಡದ ಪ್ರಮುಖ ನಿರ್ಧಾರಗಳಲ್ಲಿ ಅವರ ಪ್ರಭಾವ ಈಗಲೂ ಮಹತ್ವದ್ದಾಗಿದೆ. ಮುಂಬರುವ ಸೀಸನ್&zwnj;ನಲ್ಲಿ ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kryn21bz1g3ycse250s80pma,imgname-ms-dhoni-1779145180543.jpeg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್&zwnj;ನ (CSK) ಶೇ.15 ರಿಂದ 20ರಷ್ಟು ಷೇರುಗಳನ್ನು ಮಾಜಿ ನಾಯಕ ಎಂ.ಎಸ್. ಧೋನಿ ಖರೀದಿಸಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳನ್ನು ಸಿಎಸ್&zwnj;ಕೆ ಟೀಮ್ ಮ್ಯಾನೇಜ್&zwnj;ಮೆಂಟ್ ತಳ್ಳಿಹಾಕಿದೆ. ಆದರೆ, ಫ್ರಾಂಚೈಸಿಯಲ್ಲಿ ಧೋನಿ ಸಣ್ಣ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ಕ್ರಿಕ್&zwnj;ಬಝ್ ವರದಿ ಪ್ರಕಾರ, ಧೋನಿ ಈ ಹಿಂದೆ ಖಾಸಗಿ ವಹಿವಾಟಿನ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಖರೀದಿಸಿದ್ದಾರೆ.&lt;/p&gt;&lt;h2&gt;&lt;strong&gt;ಧೋನಿ ಬಳಿಯಿದೆ ಒಂದು ಲಕ್ಷ ಸಿಎಸ್&zwnj;ಕೆ ಷೇರುಗಳು!&lt;/strong&gt;&lt;/h2&gt;&lt;p&gt;ಧೋನಿ ಬಳಿ ಒಂದು ಲಕ್ಷ ಷೇರುಗಳಿದ್ದರೂ, ಕಂಪನಿಯ ಒಟ್ಟು ಷೇರುಗಳಿಗೆ ಹೋಲಿಸಿದರೆ ಇದು ಕೇವಲ 0.01% ರಿಂದ 0.02% ಮಾತ್ರ. ಐಪಿಎಲ್ ಫ್ರಾಂಚೈಸಿಗಳ ಸದ್ಯದ ಮಾರುಕಟ್ಟೆ ಮೌಲ್ಯದ ಪ್ರಕಾರ, ಧೋನಿ ಹೊಂದಿರುವ ಷೇರುಗಳ ಬೆಲೆ ಸುಮಾರು 2.6 ಕೋಟಿಯಿಂದ 3 ಕೋಟಿ ರೂಪಾಯಿ ಅಷ್ಟೇ. ತಂಡದ ಮಾಲೀಕ ಎನ್. ಶ್ರೀನಿವಾಸನ್ ಅವರ ಕುಟುಂಬವು ತಂಡದಲ್ಲಿ ಶೇ. 55ಕ್ಕಿಂತ ಹೆಚ್ಚು ಷೇರುಗಳನ್ನು ಮತ್ತು ನಿಯಂತ್ರಣವನ್ನು ಹೊಂದಿದೆ. ಅಲ್ಲದೆ, 30 ಕೋಟಿಗೂ ಹೆಚ್ಚು ಸಾರ್ವಜನಿಕ ಷೇರುದಾರರಿದ್ದಾರೆ.&lt;/p&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ, ಸಿಎಸ್&zwnj;ಕೆಯ ಶೇ.15-20ರಷ್ಟು ದೊಡ್ಡ ಪಾಲುದಾರಿಕೆಯನ್ನು ಪಡೆಯಲು ಧೋನಿ ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ, ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ತಂಡದ ಮ್ಯಾನೇಜ್&zwnj;ಮೆಂಟ್ ಸ್ಪಷ್ಟಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಸಾರ್ವಜನಿಕ ಮಾರುಕಟ್ಟೆಯಲ್ಲಿಲ್ಲದ (unlisted) ಕಂಪನಿಯಾಗಿದೆ. ಷೇರು ಪಾಲುದಾರಿಕೆ ಕಡಿಮೆ ಇದ್ದರೂ, ತಂಡದ ಪ್ರಮುಖ ನಿರ್ಧಾರಗಳಲ್ಲಿ ಧೋನಿಯ ಪ್ರಭಾವ ದೊಡ್ಡದಿದೆ. ಮಾಜಿ ಕೋಚ್ ಸ್ಟೀಫನ್ ಫ್ಲೆಮಿಂಗ್ ಸ್ಥಾನ ತೊರೆದ ನಂತರ ಹೊಸ ಕೋಚ್ ಆಯ್ಕೆ ಹಾಗೂ ಮೆಗಾ ಹರಾಜಿಗೆ ಮುನ್ನ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಯಲ್ಲಿ ಧೋನಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಗಾಯದ ಕಾರಣ ಕಳೆದ ಸೀಸನ್&zwnj;ನಲ್ಲಿ ಆಡದಿದ್ದ ಧೋನಿ, ಮುಂಬರುವ ಸೀಸನ್&zwnj;ನಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಹೊಸ ಕೋಚ್ ಜೊತೆ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಐದು ಬಾರಿಯ ಚಾಂಪಿಯನ್&zwnj; ತಂಡದಿಂದ ನೀರಸ ಪ್ರದರ್ಶನ:&lt;/strong&gt;&lt;/h3&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ ಐದು ಟ್ರೋಫಿ ಗೆಲ್ಲುವ ಮೂಲಕ ಐಪಿಎಲ್&zwnj;ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಇತ್ತೀಚಿಗಿನ ವರ್ಷಗಳಲ್ಲಿ ನೀರಸ ಪ್ರದರ್ಶನ ತೋರುತ್ತಿದೆ. 2023ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಆಗಿದ್ದ ಸಿಎಸ್&zwnj;ಕೆ ತಂಡವು ಆ ಬಳಿಕ ಪ್ಲೇ ಆಫ್&zwnj;ಗೇರಲು ಪದೇ ಪದೇ ವಿಫಲವಾಗುತ್ತಾ ಬಂದಿದೆ. ಮುಂದಿನ ಸೀಸನ್&zwnj;ನಲ್ಲಾದರೂ ಸಿಎಸ್&zwnj;ಕೆ ಕಮ್&zwnj;ಬ್ಯಾಕ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ms-dhoni-csk-stake-worth-crores-team-reveals-the-truth-behind-rumours-kvn/articleshow-yzuw0oo"/>
        </item>
        <item>
            <title><![CDATA[ಕರಣ್ ಶರ್ಮಾ ಹೆಸರಿನಲ್ಲಿದೆ ಅಪರೂಪದಲ್ಲೇ ಅಪರೂಪದ ಐಪಿಎಲ್ ರೆಕಾರ್ಡ್..!]]></title>
            <link>https://kannada.asianetnews.com/cricket-sports/karn-sharma-retires-from-cricket-with-rare-ipl-record-to-his-name-kvn/articleshow-z9720hu</link>
            <guid isPermaLink="true">https://kannada.asianetnews.com/cricket-sports/karn-sharma-retires-from-cricket-with-rare-ipl-record-to-his-name-kvn/articleshow-z9720hu</guid>
            <pubDate>Mon, 24 Aug 2026 12:35:06 +0530</pubDate>
            <description><![CDATA[ಟೀಂ ಇಂಡಿಯಾ ಕ್ರಿಕೆಟಿಗ ಕರಣ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್&zwnj;ಗೆ ನಿವೃತ್ತಿ ಘೋಷಿಸಿದ್ದಾರೆ. ಸತತ ಮೂರು ಸೀಸನ್&zwnj;ಗಳಲ್ಲಿ ಮೂರು ವಿಭಿನ್ನ ತಂಡಗಳ ಪರ ಐಪಿಎಲ್ ಟ್ರೋಫಿ ಗೆದ್ದಿರುವ ಅಪರೂಪದ ದಾಖಲೆಯನ್ನು ಅವರು ಹೊಂದಿದ್ದಾರೆ. ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನು ಯುಪಿ ಟಿ20 ಲೀಗ್&zwnj;ನಲ್ಲಿ ಆಡಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kc9dm33tgpgtybethfxzyek5,imgname-3-1765547838586.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಮತ್ತು ರೈಲ್ವೇಸ್ ಆಟಗಾರ ಕರಣ್ ಶರ್ಮಾ, ವೃತ್ತಿಪರ ಕ್ರಿಕೆಟ್&zwnj;ನ ಎಲ್ಲಾ ಮಾದರಿಗಳಿಗೂ ನಿವೃತ್ತಿ ಘೋಷಿಸಿದ್ದಾರೆ. ಯುಪಿ ಟಿ20 ಲೀಗ್&zwnj;ನಲ್ಲಿ ಕಾನ್ಪುರ್ ಸೂಪರ್ ಸ್ಟಾರ್ಸ್ ಪರವಾಗಿ ಆಡುತ್ತಿರುವ ಅವರು, ಆಗಸ್ಟ್ 25 ರಂದು ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೀರತ್ ಮ್ಯಾವೆರಿಕ್ಸ್ ವಿರುದ್ಧ ನಡೆಯಲಿರುವ ಪಂದ್ಯವೇ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಕ್ರಿಕೆಟ್&zwnj;ನಿಂದ ನಿವೃತ್ತಿ ಆದ ನಂತರ ಕೋಚಿಂಗ್ ಅಥವಾ ಕ್ರಿಕೆಟ್&zwnj;ಗೆ ಸಂಬಂಧಿಸಿದ ಬೇರೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಯೋಚನೆ ಇದೆ ಅಂತ ಕರಣ್ ಶರ್ಮಾ ಹೇಳಿದ್ದಾರೆ.&lt;/p&gt;&lt;p&gt;ತಮ್ಮ ವೃತ್ತಿಜೀವನದುದ್ದಕ್ಕೂ ಬೆಂಬಲ ನೀಡಿದ ಕುಟುಂಬ, ಬಿಸಿಸಿಐ, ರೈಲ್ವೇಸ್, ಯುಪಿಸಿಎ, ಆಂಧ್ರ ಮತ್ತು ವಿದರ್ಭ ಕ್ರಿಕೆಟ್ ಅಸೋಸಿಯೇಷನ್&zwnj;ಗಳಿಗೆ ಹಾಗೂ ಅಭಿಮಾನಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್&zwnj;ನಲ್ಲಿ (ಐಪಿಎಲ್) ಕರಣ್ ಶರ್ಮಾ ಒಂದು ಅಪರೂಪದ ದಾಖಲೆಯೊಂದಿಗೆ ತಮ್ಮ ವೃತ್ತಿಜೀವನ ಮುಗಿಸುತ್ತಿದ್ದಾರೆ. ಸತತ ಮೂರು ಸೀಸನ್&zwnj;ಗಳಲ್ಲಿ, ಮೂರು ಬೇರೆ ಬೇರೆ ತಂಡಗಳ ಪರ ಆಡಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಇವರದ್ದು.&lt;/p&gt;&lt;p&gt;ಸನ್&zwnj;ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗಾಗಿ ಆಡಿರುವ ಕರಣ್, ಐಪಿಎಲ್&zwnj;ನಲ್ಲಿ ಒಟ್ಟು 90 ಪಂದ್ಯಗಳಿಂದ 26.68ರ ಸರಾಸರಿ ಮತ್ತು 8.38ರ ಎಕಾನಮಿ ರೇಟ್&zwnj;ನಲ್ಲಿ 83 ವಿಕೆಟ್&zwnj;ಗಳನ್ನು ಪಡೆದಿದ್ದಾರೆ.&lt;/p&gt;&lt;h2&gt;&lt;strong&gt;ಮೂರು ಬೇರೆ ಬೇರೆ ತಂಡಗಳ ಪರ ಐಪಿಎಲ್ ಟ್ರೋಫಿ ಗೆದ್ದಿರುವ ಏಕೈಕ ಕ್ರಿಕೆಟಿಗ:&lt;/strong&gt;&lt;/h2&gt;&lt;p&gt;ಕರಣ್ ಶರ್ಮಾ ಸನ್&zwnj;ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಟ್ರೋಫಿ ಜಯಿಸುವ ಮೂಲಕ ವಿವಿಧ ತಂಡಗಳ ಪರ 3 ಐಪಿಎಲ್ ಟ್ರೋಫಿ ಗೆದ್ದ ಏಕೈಕ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆಗೆ ಕರಣ್ ಶರ್ಮಾ ಪಾತ್ರರಾಗಿದ್ದಾರೆ. ಅಂದಹಾಗೆ 2015ರಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್ ತಂಡ ಸೇರಿದ್ದ ಕರಣ್ ಶರ್ಮಾ, 2016ರಲ್ಲಿ ಆರೆಂಜ್ ಆರ್ಮಿ ಪರ ಮೊದಲ ಸಲ ಐಪಿಎಲ್ ಟ್ರೋಫಿ ಜಯಿಸಿದ್ದರು. ಇದಾದ ಬಳಿಕ 2017ರಲ್ಲಿ ಕರಣ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತ್ತು. 2017ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಮೂಲಕ ಕರಣ್ ಶರ್ಮಾ ಎರಡನೇ ಟ್ರೋಫಿ ಜಯಿಸಿದ್ದರು. ಇದಾದ ಬಳಿಕ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತೆಕ್ಕೆಗೆ ಜಾರಿದ್ದ ಕರಣ್ ಶರ್ಮಾ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು.&lt;/p&gt;&lt;h3&gt;&lt;strong&gt;ಟೀಂ ಇಂಡಿಯಾ ಪರ 4 ಪಂದ್ಯಗಳನ್ನು ಆಡಿದ ಕರಣ್ ಶರ್ಮಾ&lt;/strong&gt;&lt;/h3&gt;&lt;p&gt;ಇನ್ನು ಭಾರತ ತಂಡದ ಪರ ಕರಣ್ ಶರ್ಮಾ ಆಡಿದ್ದು ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ. ಒಂದು ಟೆಸ್ಟ್, ಎರಡು ಏಕದಿನ ಮತ್ತು ಒಂದು ಟಿ20 ಪಂದ್ಯಗಳಲ್ಲಿ ಅವರು ಒಟ್ಟು ಐದು ವಿಕೆಟ್ ಪಡೆದಿದ್ದಾರೆ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್&zwnj;ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅನಿರೀಕ್ಷಿತವಾಗಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಅವರು, ಆ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದಿದ್ದರು. ಅದೇ ವರ್ಷ ಸೀಮಿತ ಓವರ್&zwnj;ಗಳ ಪಂದ್ಯಗಳಲ್ಲೂ ಆಡಿದ್ದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ತಂಡದ ಖಾಯಂ ಸದಸ್ಯರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಆದರೂ, ದೇಶೀಯ ಕ್ರಿಕೆಟ್ ಮತ್ತು ಐಪಿಎಲ್&zwnj;ನಲ್ಲಿ ಒಬ್ಬ ನಂಬಿಕಸ್ಥ ಮ್ಯಾಚ್ ವಿನ್ನರ್ ಆಗಿ ಕರಣ್ ಶರ್ಮಾ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುತ್ತಿದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/karn-sharma-retires-from-cricket-with-rare-ipl-record-to-his-name-kvn/articleshow-z9720hu"/>
        </item>
    </channel>
</rss>
