<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 14 Aug 2026 16:59:01 +0530</lastBuildDate>
        <atom:link href="https://kannada.asianetnews.com/rss/ipl" rel="self" type="application/rss+xml"/>
        <item>
            <title><![CDATA[ಟೀಂ ಇಂಡಿಯಾಗೆ ಗುಡ್‌ಬೈ ಹೇಳಿದ 24 ಗಂಟೆಯಲ್ಲೇ ಗೌತಮ್ ಗಂಭೀರ್ ಆಪ್ತನ ಹೆಗಲೇರಿದ ಹೊಸ ಜವಾಬ್ದಾರಿ!]]></title>
            <link>https://kannada.asianetnews.com/cricket-sports/just-24-hours-after-india-exit-ryan-ten-doeschate-takes-up-new-kkr-role-kvn/articleshow-2464dh6</link>
            <guid isPermaLink="true">https://kannada.asianetnews.com/cricket-sports/just-24-hours-after-india-exit-ryan-ten-doeschate-takes-up-new-kkr-role-kvn/articleshow-2464dh6</guid>
            <pubDate>Wed, 29 Jul 2026 14:36:12 +0530</pubDate>
            <description><![CDATA[ಟೀಂ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ರಯಾನ್ ಟೆನ್ ಡೋಸ್ಕಾಟೆ, ಕೋಲ್ಕತಾ ನೈಟ್ ರೈಡರ್ಸ್ ಮಾಲೀಕತ್ವದ 'ನೈಟ್ ರೈಡರ್ಸ್ ಸ್ಪೋರ್ಟ್ಸ್' ಸಂಸ್ಥೆಯ ಜಾಗತಿಕ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಭಾರತ ತಂಡದಿಂದ ಹೊರನಡೆದ ಅವರು, ನೈಟ್ ರೈಡರ್ಸ್&zwnj;ನ ಜಾಗತಿಕ ಫ್ರಾಂಚೈಸಿಗಳಿಗೂ ಸಹಾಯಕ ಕೋಚ್ ಆಗಿ ಕೆಲಸ ಮಾಡಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxjfgf07zswv3rmskqbyhtxh,imgname-gettyimages-2185501565-1784105417730.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಟೀಂ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ 24 ಗಂಟೆ ಕಳೆಯುವುದರೊಳಗೆ, ನೆದರ್ಲೆಂಡ್ಸ್&zwnj;ನ ಮಾಜಿ ಆಲ್&zwnj;ರೌಂಡರ್ ರಯಾನ್ ಟೆನ್ ಡೋಸ್ಕಾಟೆ ಹೊಸ ಜವಾಬ್ದಾರಿಯೊಂದನ್ನು ವಹಿಸಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಭಾರತ ತಂಡದಿಂದ ಹೊರನಡೆದಿದ್ದ ಅವರು, ಇದೀಗ ಕೋಲ್ಕತಾ ನೈಟ್ ರೈಡರ್ಸ್ (KKR) ಮಾಲೀಕತ್ವದ 'ನೈಟ್ ರೈಡರ್ಸ್ ಸ್ಪೋರ್ಟ್ಸ್' ಸಂಸ್ಥೆಯ ಜಾಗತಿಕ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ (Head of Global Cricket Strategy) ನೇಮಕಗೊಂಡಿದ್ದಾರೆ. 2027ರವರೆಗೆ ಒಪ್ಪಂದವನ್ನು ಮುಂದುವರಿಸುವ ಬಿಸಿಸಿಐ ಆಫರ್ ಅನ್ನು ತಿರಸ್ಕರಿಸಿ ಡೋಸ್ಕಾಟೆ ಟೀಂ ಇಂಡಿಯಾದಿಂದ ಹೊರಬಂದಿದ್ದರು. ಇದರ ಬೆನ್ನಲ್ಲೇ ಅವರು ಕೋಲ್ಕತಾ ತಂಡದಲ್ಲಿ ಹೊಸ ಹುದ್ದೆ ಸ್ವೀಕರಿಸಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.&lt;/p&gt;&lt;p&gt;ಕೋಲ್ಕತಾದ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ, ನೈಟ್ ರೈಡರ್ಸ್&zwnj;ನ ಜಾಗತಿಕ ಫ್ರಾಂಚೈಸಿಗಳಿಗೆ ಪ್ರತಿಭಾನ್ವಿತ ಆಟಗಾರರನ್ನು ಹುಡುಕುವುದು (ಸ್ಕೌಟಿಂಗ್), ನೇಮಕಾತಿ, ತಂಡದ ಯೋಜನೆ ಮತ್ತು ಆಟಗಾರರ ಪ್ರದರ್ಶನವನ್ನು ವಿಶ್ಲೇಷಿಸುವ ಜವಾಬ್ದಾರಿಯನ್ನು ಡೋಸ್ಕಾಟೆ ಹೊತ್ತಿದ್ದಾರೆ. ಇದರ ಜೊತೆಗೆ, ಕೆರಿಬಿಯನ್ ಪ್ರೀಮಿಯರ್ ಲೀಗ್&zwnj;ನಲ್ಲಿ ಟ್ರಿನ್&zwnj;ಬಾಗೊ ನೈಟ್ ರೈಡರ್ಸ್, ಐಎಲ್&zwnj;ಟಿ20ಯಲ್ಲಿ ಅಬುದಾಬಿ ನೈಟ್ ರೈಡರ್ಸ್ ಮತ್ತು ಮೇಜರ್ ಲೀಗ್ ಕ್ರಿಕೆಟ್&zwnj;ನಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಗಳ ಸಹಾಯಕ ಕೋಚ್ ಆಗಿಯೂ ಅವರು ಕೆಲಸ ಮಾಡಲಿದ್ದಾರೆ.&lt;/p&gt;&lt;h2&gt;&lt;strong&gt;ಡೋಸ್ಕಾಟೆಯನ್ನು ಆತ್ಮೀಯವಾಗಿ ಸ್ವಾಗತಿಸಿದ ಕೆಕೆಆರ್ ಫ್ರಾಂಚೈಸಿ&lt;/strong&gt;&lt;/h2&gt;&lt;p&gt;&quot;ಡೋಸ್ಕಾಟೆಯವರನ್ನು ಮತ್ತೆ ನೈಟ್ ರೈಡರ್ಸ್ ಕುಟುಂಬಕ್ಕೆ ಸ್ವಾಗತಿಸಲು ನಮಗೆ ಬಹಳ ಸಂತೋಷವಿದೆ. ನಮ್ಮ ತಂಡದ ಗುರಿ ಮತ್ತು ಶೈಲಿಯ ಬಗ್ಗೆ ಅವರಿಗೆ ಸ್ಪಷ್ಟವಾದ ತಿಳುವಳಿಕೆ ಇದೆ. ಅವರ ಅನುಭವ ಈ ಜವಾಬ್ದಾರಿಗೆ ಸೂಕ್ತವಾಗಿದೆ,&quot; ಎಂದು ನೈಟ್ ರೈಡರ್ಸ್ ಸ್ಪೋರ್ಟ್ಸ್ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ 45 ವರ್ಷದ ಡೋಸ್ಕಾಟೆ, &quot;ನೈಟ್ ರೈಡರ್ಸ್ ಬಳಗಕ್ಕೆ ಮರಳಿರುವುದು ಖುಷಿ ತಂದಿದೆ. ಜಾಗತಿಕ ಮಟ್ಟದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸುವುದು ಮತ್ತು ದೀರ್ಘಾವಧಿಯ ಕ್ರಿಕೆಟ್ ತಂತ್ರಗಳನ್ನು ರೂಪಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ,&quot; ಎಂದರು.&lt;/p&gt;&lt;p&gt;ಡೋಸ್ಕಾಟೆ ಮತ್ತು ಕೋಲ್ಕತಾ ತಂಡಕ್ಕೆ ದಶಕಗಳ ಸಂಬಂಧವಿದೆ. 2011ರಲ್ಲಿ ಆಟಗಾರನಾಗಿ ತಂಡ ಸೇರಿದ್ದ ಅವರು, 2012 ಮತ್ತು 2014ರಲ್ಲಿ ತಂಡ ಚಾಂಪಿಯನ್ ಆದಾಗ ಪ್ರಮುಖ ಪಾತ್ರ ವಹಿಸಿದ್ದರು. 2022ರಲ್ಲಿ ನಿವೃತ್ತಿ ನಂತರ ಕೋಚಿಂಗ್ ಸಿಬ್ಬಂದಿಯಾಗಿ ತಂಡಕ್ಕೆ ಮರಳಿದ್ದರು. ಗೌತಮ್ ಗಂಭೀರ್ ಮೆಂಟರ್&zwnj;ಶಿಪ್&zwnj;ನಲ್ಲಿ ಕೋಲ್ಕತಾ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಾಗ, ಡೋಸ್ಕಾಟೆ ಸಹಾಯಕ ಸಿಬ್ಬಂದಿಯ ಪ್ರಮುಖ ಭಾಗವಾಗಿದ್ದರು.&lt;/p&gt;&lt;h3&gt;&lt;strong&gt;ಟೀಂ ಇಂಡಿಯಾ ಸಹಾಯಕ ಕೋಚ್ ಹುದ್ದೆಗೆ ಗುಡ್&zwnj;ಬೈ&lt;/strong&gt;&lt;/h3&gt;&lt;p&gt;2024ರ ಜುಲೈನಲ್ಲಿ ಗೌತಮ್ ಗಂಭೀರ್ ಭಾರತ ತಂಡದ ಹೆಡ್ ಕೋಚ್ ಆದಾಗ, ಡೋಸ್ಕಾಟೆ ಸಹಾಯಕ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅವಧಿಯಲ್ಲಿ ಭಾರತ ತಂಡ 2025ರ ಏಷ್ಯಾ ಕಪ್ ಮತ್ತು 2026ರ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. 2027ರವರೆಗೆ ಒಪ್ಪಂದ ಮುಂದುವರಿಸಲು ಬಿಸಿಸಿಐ ಕೇಳಿಕೊಂಡರೂ, ನಿರಂತರ ಪ್ರಯಾಣವನ್ನು ತಪ್ಪಿಸಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವರು ಒಪ್ಪಂದವನ್ನು ನವೀಕರಿಸಲಿಲ್ಲ. ಸದ್ಯ ಅವರು ಅಂತರರಾಷ್ಟ್ರೀಯ ಪ್ರವಾಸಗಳ ಬದಲು ಫ್ರಾಂಚೈಸಿ ಲೀಗ್&zwnj;ಗಳ ಮೇಲೆ ಗಮನ ಹರಿಸಲು ನಿರ್ಧರಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/just-24-hours-after-india-exit-ryan-ten-doeschate-takes-up-new-kkr-role-kvn/articleshow-2464dh6"/>
        </item>
        <item>
            <title><![CDATA[ಮೊದಲು ಕೆಣಕಿದ್ದೇ Virat Kohli; ರೇಷ್ಮೆ ಶಾಲಿನಲ್ಲಿ ಸುತ್ತಿ ಹೊಡೆದಿದ್ದ Travis Head ಈಗ ಹೇಳೋದು ಬೇರೆ ಕಥೆ!]]></title>
            <link>https://kannada.asianetnews.com/gallery/cricket-sports/srh-vs-rcb-match-dispute-cricketer-travis-head-on-virat-kohli-whats-app-chat-2bcei6g</link>
            <guid isPermaLink="true">https://kannada.asianetnews.com/gallery/cricket-sports/srh-vs-rcb-match-dispute-cricketer-travis-head-on-virat-kohli-whats-app-chat-2bcei6g</guid>
            <pubDate>Mon, 22 Jun 2026 16:38:48 +0530</pubDate>
            <description><![CDATA[&lt;p&gt;Travis Head statement on Virat Kohli: ಐಪಿಎಲ್ 2026ರ ಸನ್&zwnj;ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಮ್ಯಾಚ್&zwnj;ನಲ್ಲಿ ವಿರಾಟ್&zwnj; ಕೊಹ್ಲಿ ವಾಗ್ವಾದಕ್ಕೆ ಇಳಿದಿದ್ದು ಭಾರೀ ಸುದ್ದಿ ಆಗಿತ್ತು. ಈ ಬಗ್ಗೆ ಈಗ ಟ್ರಾವಿಸ್&zwnj; ಹೆಡ್&zwnj; ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqg0359bkpe35hyxj66xjay,imgname-new-project---2026-06-22t162856.523-1782126218408.jpg" type="image/jpeg" height="390" width="690"/>
            <content:encoded><![CDATA[&lt;p&gt;Travis Head statement on Virat Kohli: ಐಪಿಎಲ್ 2026ರ ಸನ್&zwnj;ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಮ್ಯಾಚ್&zwnj;ನಲ್ಲಿ ವಿರಾಟ್&zwnj; ಕೊಹ್ಲಿ ವಾಗ್ವಾದಕ್ಕೆ ಇಳಿದಿದ್ದು ಭಾರೀ ಸುದ್ದಿ ಆಗಿತ್ತು. ಈ ಬಗ್ಗೆ ಈಗ ಟ್ರಾವಿಸ್&zwnj; ಹೆಡ್&zwnj; ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಆರ್&zwnj;ಸಿಬಿ ದಿಗ್ಗಜ ವಿರಾಟ್ ಕೊಹ್ಲಿ, ಎಸ್&zwnj;ಆರ್&zwnj;ಹೆಚ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿ ಆಯ್ತು, ಆಮೇಲೆ ಟ್ರಾವಿಸ್&zwnj; ಪತ್ನಿಯನ್ನು ಕೆಲವರು ಟ್ರೋಲ್&zwnj; ಮಾಡಿದರು. ಅಷ್ಟೇ ಅಲ್ಲದೆ ಕೊನೆಯಲ್ಲಿ ಕೊಹ್ಲಿ ಹ್ಯಾಂಡ್&zwnj;ಶೇಕ್&zwnj; ಕೂಡ ಕೊಡಲಿಲ್ಲ. ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;&amp;nbsp;ಪಂದ್ಯದಲ್ಲಿ ಎಸ್&zwnj;ಆರ್&zwnj;ಹೆಚ್ ನೀಡಿದ್ದ 256 ರನ್&zwnj;ಗಳ ಗುರಿಯನ್ನು ಬೆನ್ನಟ್ಟುವಾಗ ಈ ಘಟನೆ ಆಯ್ತು. ಆರಂಭದಲ್ಲಿ ವಿರಾಟ್ ಕೊಹ್ಲಿ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದ ಟ್ರಾವಿಸ್ ಹೆಡ್ ಅವರನ್ನು ಕೆಣಕಲು ಅಂಪೈರ್ ಮಾದರಿಯಲ್ಲಿ ಕೈ ಸನ್ನೆ ಮಾಡಿ, &quot;ಮೈದಾನಕ್ಕೆ ಬಂದು ಬೌಲಿಂಗ್ ಮಾಡುವಂತೆ&quot; ಸವಾಲು ಹಾಕಿದ್ದರು. ಇದು ಆರಂಭದಲ್ಲಿ ತಮಾಷೆಯಾಗಿ ಕಂಡರೂ, ಕೊಹ್ಲಿ 15 ರನ್&zwnj;ಗಳಿಗೆ ಔಟಾಗಿ ಪೆವಿಲಿಯನ್&zwnj;ಗೆ ಮರಳುವಾಗ ಹೆಡ್, &quot;ಕೊಹ್ಲಿ ನೀನು ನಾನು ಬೌಲಿಂಗ್ ಮಾಡಲು ಬರುವ ಮುನ್ನವೇ ಔಟ್ ಆಗಿದ್ದೀಯ&quot; ಎಂದು ಟಾಂಗ್ ನೀಡಿದ್ದರು. ಈ ಮಾತಿನಿಂದ ಕೊಹ್ಲಿ ತೀವ್ರ ಸಿಟ್ಟು ಮಾಡಿಕೊಂಡಿದ್ದರು ಎನ್ನಲಾಗಿದೆ. ಗೇಮ್&zwnj; ಮುಗಿದಮೇಲೆ ವಾಡಿಕೆಯಂತೆ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಳ್ಳಬೇಕು. ಆದರೆ ಕೊಹ್ಲಿ ಹ್ಯಾಂಡ್&zwnj;ಶೇಕ್&zwnj; ಮಾಡಲು ರೆಡಿ ಆಗಿಲ್ಲ.&lt;/p&gt;&lt;img&gt;&lt;p&gt;ಹೆಡ್&zwnj; ಮಾತನಾಡಿ, &quot;ಅದೆಲ್ಲಾ ಆಟದ ಒಂದು ಭಾಗ ಅಷ್ಟೇ. ಮೈದಾನದಲ್ಲಿ ಸ್ವಲ್ಪ ಮಟ್ಟಿನ ಸ್ಲೆಡ್ಜಿಂಗ್ ಯಾವಾಗಲೂ ನಡೆಯುತ್ತಿರುತ್ತದೆ. ಇದರಲ್ಲಿ ವೈಯಕ್ತಿಕ ದ್ವೇಷವಾಗಲಿ ಅಥವಾ ಗಂಭೀರವಾದದ್ದು ಏನೂ ಇಲ್ಲ. ನನಗೂ, ವಿರಾಟ್ ಕೊಹ್ಲಿಗೂ ಪರಸ್ಪರ ಅಪಾರ ಗೌರವವಿದೆ. ನಾವು ಮೈದಾನದ ಹೊರಗೆ ನಿಜಕ್ಕೂ ಒಳ್ಳೆಯ ಸ್ನೇಹಿತರು. ಹೌದು, ನಾವು ಕೆಲವೊಮ್ಮೆ ವಾಟ್ಸಾಪ್&zwnj;ನಲ್ಲೂ ಮಾತನಾಡುತ್ತೇವೆ&quot; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;&quot;ಇಂತಹ ಸಣ್ಣ ಕ್ಷಣಗಳನ್ನು ಒಮ್ಮೊಮ್ಮೆ ದೊಡ್ದಾಗಿ ಬಿಂಬಿಸೋದುಂಟು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮ್ಮ ಮನಸ್ಸಿನಲ್ಲಿ ಅಂತಹ ಯಾವುದೇ ಕಹಿ ಭಾವನೆಗಳಿಲ್ಲ. ಮೈದಾನದಲ್ಲಿ ನಡೆದದ್ದು ಮೈದಾನದಲ್ಲೇ ಉಳಿಯುತ್ತದೆ. ಪಂದ್ಯ ಮುಗಿದ ಮೇಲೆ ಪರಸ್ಪರ ಗೌರವ ಇದ್ದೇ ಇರುತ್ತದೆ&quot; ಎಂದು ಹೇಳುವ ಮೂಲಕ ವಿವಾದಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ.&lt;/p&gt;&lt;img&gt;&lt;p&gt;ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸೇರಿದಂತೆ ಹಲವು ವಿಶ್ಲೇಷಕರು ಕೂಡ ಕೊಹ್ಲಿ ಅವರ ಈ ಆಕ್ರಮಣಕಾರಿ ಶೈಲಿಯನ್ನು ಬೆಂಬಲಿಸಿದ್ದು, ಉನ್ನತ ಮಟ್ಟದ ಕ್ರಿಕೆಟ್&zwnj;ನಲ್ಲಿ ಇಂತಹ ಪೈಪೋಟಿ ಮತ್ತು ಭಾವನೆಗಳು ಸಹಜ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/srh-vs-rcb-match-dispute-cricketer-travis-head-on-virat-kohli-whats-app-chat-2bcei6g"/>
        </item>
        <item>
            <title><![CDATA[CSKನೂ ಅಲ್ಲ, KKR ಕೂಡಾ ಅಲ್ಲ ಎರಡೂ ತಂಡ ಬಿಟ್ಟು ಹಾರ್ದಿಕ್ ಪಾಂಡ್ಯ ಈ ತಂಡ ಸೇರಬಹುದು! ಅಚ್ಚರಿ ಭವಿಷ್ಯ ನುಡಿದ ರವಿಚಂದ್ರನ್ ಅಶ್ವಿನ್]]></title>
            <link>https://kannada.asianetnews.com/cricket-sports/hardik-pandya-to-return-to-gujarat-titans-r-ashwin-makes-big-ipl-2027-prediction-kvn/articleshow-419kem2</link>
            <guid isPermaLink="true">https://kannada.asianetnews.com/cricket-sports/hardik-pandya-to-return-to-gujarat-titans-r-ashwin-makes-big-ipl-2027-prediction-kvn/articleshow-419kem2</guid>
            <pubDate>Fri, 14 Aug 2026 16:58:55 +0530</pubDate>
            <description><![CDATA[&lt;p&gt;2027ರ ಐಪಿಎಲ್&zwnj;ನಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಕೆಕೆಆರ್ ಮತ್ತು ಸಿಎಸ್&zwnj;ಕೆ ಹೆಸರುಗಳು ಕೇಳಿಬರುತ್ತಿರುವ ಮಧ್ಯೆ, ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಪಾಂಡ್ಯ ತಮ್ಮ ಹಳೆಯ ತಂಡವಾದ ಗುಜರಾತ್ ಟೈಟಾನ್ಸ್&zwnj;ಗೆ ಮರಳಲಿದ್ದಾರೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyewk2kmeyrpabf0ce38jzfg,imgname-hardik-pandya-trade-rumours-intensify-1785058658932.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2027ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಎನ್ನುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈಗಾಗಲೇ ಮುಂಬೈ ಇಂಡಿಯನ್ಸ್&zwnj; ತಂಡದಿಂದ ಒಂದು ಕಾಲು ಹೊರಗಿಟ್ಟಿರುವ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಮಾಜಿ ಚಾಂಪಿಯನ್ನರಾದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪೈಪೋಟಿ ನಡೆಸುತ್ತಿವೆ ಎನ್ನುವ ಸುದ್ದಿ ಗುಟ್ಟಾಗಿಯೇನು ಉಳಿದಿಲ್ಲ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಈ ಎರಡೂ ತಂಡಗಳನ್ನು ಬಿಟ್ಟು ಬೇರೆಯದ್ದೇ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.&lt;/p&gt;&lt;p&gt;ಕೆಲದಿನಗಳ ಹಿಂದಷ್ಟೇ ಮುಂಬೈ ಇಂಡಿಯನ್ಸ್ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ, ತಮ್ಮ ಮಾಜಿ ತಂಡವಾಗಿರುವ ಗುಜರಾತ್ ಟೈಟಾನ್ಸ್ ಸೇರಲು ಒಲವು ತೋರಿದ್ದರು ಎಂದು ವರದಿಯಾಗಿತ್ತು. ಆದರೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಬಳಿ ಪಾಂಡ್ಯ ನಾಯಕತ್ವ ಬೇಡಿಕೆಯಿಟ್ಟಿದ್ದರು, ಗುಜರಾತ್ ಫ್ರಾಂಚೈಸಿ ಪಾಂಡ್ಯ ಬೇಡಿಕೆಯನ್ನು ತಿರಸ್ಕರಿಸಿತ್ತು ಎಂದೆಲ್ಲಾ ವರದಿಯಾಗಿತ್ತು. ಸದ್ಯ ಗುಜರಾತ್ ಟೈಟಾನ್ಸ್ ತಂಡವನ್ನು ಶುಭ್&zwnj;ಮನ್ ಮುನ್ನಡೆಸುತ್ತಿದ್ದು, ಕಳೆದ ಸೀಸನ್ ಐಪಿಎಲ್&zwnj;ನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿ, ಆರ್&zwnj;ಸಿಬಿ ಎದುರು ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಅಶ್ವಿನ್ ಪ್ರಕಾರ, ಹಾರ್ದಿಕ್ ಪಾಂಡ್ಯ ಮತ್ತೆ ಗುಜರಾತ್ ಟೈಟಾನ್ಸ್ ತೆಕ್ಕೆಗೆ ಜಾರಲಿದ್ದಾರೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.&lt;/p&gt;&lt;h2&gt;&lt;strong&gt;ಪಾಂಡ್ಯ, ಗುಜರಾತ್ ಟೈಟಾನ್ಸ್ ಮಾತುಕತೆ ನಡೆಸಿದ್ದರೇ ತಪ್ಪಲ್ಲ&lt;/strong&gt;&lt;/h2&gt;&lt;p&gt;'ಗುಜರಾತ್ ಟೈಟಾನ್ಸ್ ತಂಡವನ್ನು ಭೇಟಿ ಮಾಡಿ ಹಾರ್ದಿಕ್ ಪಾಂಡ್ಯ ಮಾತುಕತೆ ನಡೆಸಿದ್ದರೇ ಅದು ತಪ್ಪೇನು ಅಲ್ಲ. ಅವರು ಆ ತಂಡದ ಜತೆಗೆ ನಿಜಕ್ಕೂ ಎಂಜಾಯ್ ಮಾಡಿಕೊಂಡು ಆಡಿದ್ದಾರೆ. ಅದು ನಾಯಕತ್ವವೇ ಇರಲಿ ಅಥವಾ ಬ್ಯಾಟಿಂಗ್ ವಿಚಾರವೇ ಇರಲಿ, ಅವರಿಂದ ಶ್ರೇಷ್ಠ ಪ್ರದರ್ಶನ ಮೂಡಿಬಂದಿದ್ದೇ ಅವರು ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾಗ. ನನಗೆ ಈಗಲೂ ಅನಿಸ್ತಿದೆ ಅವರು ಮತ್ತೆ ಗುಜರಾತ್ ಟೈಟಾನ್ಸ್ ತೆಕ್ಕೆಗೆ ಜಾರುತ್ತಾರೆಂದು' ಎಂದು ಅಶ್ವಿನ್ ತಮ್ಮದೇ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಹೇಳಿದ್ದಾರೆ.&lt;/p&gt;&lt;p&gt;ಹಾರ್ದಿಕ್ ಪಾಂಡ್ಯ ಎರಡು ಸೀಸನ್&zwnj; ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. 2022ರಲ್ಲಿ ನಾಯಕರಾಗಿ ಮೊದಲ ಸೀಸನ್&zwnj;ನಲ್ಲಿಯೇ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್&zwnj; ಪಟ್ಟಕ್ಕೇರಿಸಿದ್ದರು. ಇದಾದ ಮರು ವರ್ಷ ಅಂದರೆ 2023ರ ಐಪಿಎಲ್ ಟೂರ್ನಿಯಲ್ಲೂ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಚನ್ನೈ ಸೂಪರ್ ಕಿಂಗ್ಸ್ ಎದುರು ವಿರೋಚಿತ ಸೋಲು ಅನುಭವಿಸುವ ಮೂಲಕ ರನ್ನರ್&zwnj;ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದಾದ ಬಳಿಕ 2024ರ ಐಪಿಎಲ್ ಟೂರ್ನಿಗೂ ಮುನ್ನ ಗುಜರಾತ್ ಟೈಟಾನ್ಸ್ ತೊರೆದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿದ್ದರು.&lt;/p&gt;&lt;p&gt;&lt;strong&gt;ಹಾರ್ದಿಕ್ ಪಾಂಡ್ಯ ಯಾಕೆ ಗುಜರಾತ್ ಟೈಟಾನ್ಸ್&zwnj;ಗೆ ವಾಪಾಸ್ಸಾಗಬೇಕು?&lt;/strong&gt;&lt;/p&gt;&lt;p&gt;ಗುಜರಾತ್ ಟೈಟಾನ್ಸ್ ಹಾರ್ದಿಕ್ ಪಾಂಡ್ಯ ಪಾಲಿಗೆ ನಿಜಕ್ಕೂ ಒಳ್ಳೆಯ ವೇದಿಕೆ. ಗುಜರಾತ್ ಟೈಟಾನ್ಸ್ ಕೂಡಾ ಒಳ್ಳೆಯ ತಂಡ. ಕಳೆದ ಎರಡು ವರ್ಷಗಳಿಂದ ಶುಭ್&zwnj;ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಚೆನ್ನಾಗಿ ಆಡುತ್ತಾ ಬಂದಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್&zwnj;ಗೆ ವಾಪಾಸ್ಸಾದರೂ ನಾಯಕತ್ವ ಸಿಗುವುದು ಅನುಮಾನ. ಆದರೆ ಆಟಗಾರನಾಗಿ ಪಾಂಡ್ಯ ಮತ್ತೆ ಗುಜರಾತ್ ಟೈಟಾನ್ಸ್ ತಂಡದಲ್ಲಿ ಮಿಂಚಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/hardik-pandya-to-return-to-gujarat-titans-r-ashwin-makes-big-ipl-2027-prediction-kvn/articleshow-419kem2"/>
        </item>
        <item>
            <title><![CDATA[ಆ ಒಂದು ಶತಕ ನನ್ನ ವೃತ್ತಿಜೀವನವನ್ನೇ ರೂಪಿಸಿತು; ಆರ್‌ಸಿಬಿ ವಿರುದ್ಧದ ಆಟ ನೆನೆದ 'ಕಿಲ್ಲರ್' ಮಿಲ್ಲರ್]]></title>
            <link>https://kannada.asianetnews.com/cricket-sports/david-miller-reveals-how-century-against-rcb-in-ipl-2013-shaped-his-cricket-career/articleshow-9qzxcve</link>
            <guid isPermaLink="true">https://kannada.asianetnews.com/cricket-sports/david-miller-reveals-how-century-against-rcb-in-ipl-2013-shaped-his-cricket-career/articleshow-9qzxcve</guid>
            <pubDate>Thu, 13 Aug 2026 16:02:30 +0530</pubDate>
            <description><![CDATA[2013ರ ಐಪಿಎಲ್&zwnj;ನಲ್ಲಿ ಆರ್&zwnj;ಸಿಬಿ ವಿರುದ್ಧ ಸಿಡಿಸಿದ ಅಜೇಯ 101 ರನ್&zwnj;ಗಳೇ ತಮ್ಮ ವೃತ್ತಿಜೀವನದ ಅತ್ಯಂತ ಮಹತ್ವದ ಇನ್ನಿಂಗ್ಸ್ ಎಂದು ಡೇವಿಡ್ ಮಿಲ್ಲರ್ ಹೇಳಿದ್ದಾರೆ. ಆ ಒತ್ತಡದ ಚೇಸಿಂಗ್ ತನ್ನ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು ಎಂದಿದ್ದಾರೆ. ಜೊತೆಗೆ, 2022ರಲ್ಲಿ ಗುಜರಾತ್ ಟೈಟಾನ್ಸ್ ಜೊತೆ ಐಪಿಎಲ್ ಟ್ರೋಫಿ ಗೆದ್ದಿದ್ದು ತಮ್ಮ ನೆಚ್ಚಿನ ಕ್ಷಣ ಎಂದು ಅವರು ನೆನಪಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx09qqjc5488tpsafy5ccq9,imgname-david-miller---ipl-2013-1786606050976.jpg" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್, 2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ತಾವು ಬಾರಿಸಿದ್ದ ಅಜೇಯ 101 ರನ್&zwnj;ಗಳ ಇನ್ನಿಂಗ್ಸ್ ಅನ್ನು ತಮ್ಮ ವೃತ್ತಿಜೀವನದಲ್ಲಿಯೇ ಅತ್ಯಂತ ಹೆಮ್ಮೆಯ ಆಟ ಎಂದು ಬಣ್ಣಿಸಿದ್ದಾರೆ. ಆ ಒತ್ತಡದ ಚೇಸಿಂಗ್ ತಮ್ಮ ವೃತ್ತಿಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಅವರು ಹೇಳಿದ್ದಾರೆ. ಸದ್ಯ 'ದಿ ಹಂಡ್ರೆಡ್ 2026' ಟೂರ್ನಿಯಲ್ಲಿ ಸದರ್ನ್ ಬ್ರೇವ್ ತಂಡವನ್ನು ಪ್ರತಿನಿಧಿಸುತ್ತಿರುವ ಮಿಲ್ಲರ್, ಜಿಯೋಸ್ಟಾರ್ ಜೊತೆ ಮಾತನಾಡುತ್ತಾ ತಮ್ಮ ವೃತ್ತಿಜೀವನ ಮತ್ತು ಐಪಿಎಲ್&zwnj;ನ ಸ್ಮರಣೀಯ ಪ್ರದರ್ಶನಗಳನ್ನು ನೆನಪಿಸಿಕೊಂಡರು.&lt;/p&gt;&lt;h2&gt;&lt;strong&gt;'ಅದು ನನ್ನ ವೃತ್ತಿಜೀವನಕ್ಕೆ ಅಡಿಪಾಯ ಹಾಕಿತು': ಮಿಲ್ಲರ್ ಮಾತು&lt;/strong&gt;&lt;/h2&gt;&lt;p&gt;ಒಂದು ದಶಕಕ್ಕೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ, ಈ ಎಡಗೈ ಬ್ಯಾಟರ್ ಟಿ20 ಕ್ರಿಕೆಟ್&zwnj;ನ ಅತ್ಯಂತ ನಂಬಿಕಸ್ಥ ಮಿಡಲ್-ಆರ್ಡರ್ ಫಿನಿಶರ್&zwnj;ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. &quot;ನನ್ನ ಪ್ರಕಾರ, ಆರ್&zwnj;ಸಿಬಿ ವಿರುದ್ಧ ನಾನು ಗಳಿಸಿದ 101 ರನ್&zwnj;ಗಳ ಆ ಇನ್ನಿಂಗ್ಸ್ ಇದೆಯಲ್ಲ, ಅದು ನನ್ನ ಪಾಲಿಗೆ ತುಂಬಾನೇ ಸ್ಪೆಷಲ್. ಅದೊಂದು ಚೇಸಿಂಗ್ ಆಗಿತ್ತು, ಗುರಿ ಬೆನ್ನಟ್ಟಿ ಶತಕ ಬಾರಿಸಿದ್ದು, ಐಪಿಎಲ್&zwnj;ನಲ್ಲಿ ನನ್ನ ಮೊದಲ ಶತಕ, ನನ್ನ ಮೊದಲ ಟಿ20 ಶತಕ ಕೂಡ ಅದೇ ಆಗಿತ್ತು. ಈಗ ಹಿಂತಿರುಗಿ ನೋಡಿದರೆ, ಆ ಒಂದು ಇನ್ನಿಂಗ್ಸ್ ನನ್ನ ವೃತ್ತಿಜೀವನಕ್ಕೆ ಅಡಿಪಾಯ ಹಾಕಿತು ಅನ್ನಿಸುತ್ತೆ. ಹಾಗೆಯೇ, ಡರ್ಬನ್&zwnj;ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಇನ್ನೊಂದು ಇನ್ನಿಂಗ್ಸ್ ಕೂಡ ನನಗೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತೆ. ಅಲ್ಲೂ ನಾವು ಗುರಿ ಬೆನ್ನಟ್ಟಿದ್ದೆವು, ನಾನು 118 ರನ್ ಗಳಿಸಿ ಅಜೇಯನಾಗಿ ಉಳಿದಿದ್ದೆ. ಹೀಗೆ ಒತ್ತಡದಲ್ಲಿ ಶತಕ ಬಾರಿಸಿದ ಈ ಎರಡು ಇನ್ನಿಂಗ್ಸ್&zwnj;ಗಳು ಯಾವಾಗಲೂ ವಿಶೇಷವಾಗಿ ನಿಲ್ಲುತ್ತವೆ,&quot; ಎಂದು ಮಿಲ್ಲರ್ ಹೇಳಿದರು.&lt;/p&gt;&lt;p&gt;2013ರ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಪರ ಆಡುತ್ತಿದ್ದ ಮಿಲ್ಲರ್, ಆರ್&zwnj;ಸಿಬಿ ವಿರುದ್ಧ ಕೇವಲ 38 ಎಸೆತಗಳಲ್ಲಿ 101 ರನ್ ಚಚ್ಚಿದ್ದರು. ಇದು ಅವರ ಐಪಿಎಲ್ ವೃತ್ತಿಜೀವನದ ಅತ್ಯಂತ ಸ್ಮರಣೀಯ ಇನ್ನಿಂಗ್ಸ್&zwnj;ಗಳಲ್ಲಿ ಒಂದಾಗಿ ಉಳಿದಿದೆ. ಈ ಪ್ರದರ್ಶನವು ಅವರನ್ನು ಮಿಡಲ್ ಆರ್ಡರ್&zwnj;ನಲ್ಲಿ ವಿನಾಶಕಾರಿ ಬ್ಯಾಟರ್ ಆಗಿ ಜಗತ್ತಿಗೆ ಪರಿಚಯಿಸಿತು ಮತ್ತು 'ಫಿನಿಶರ್' ಎಂಬ ಅವರ ಖ್ಯಾತಿಗೆ ಬುನಾದಿ ಹಾಕಿತು.&lt;/p&gt;&lt;h2&gt;&lt;strong&gt;ಫಿನಿಶಿಂಗ್ ಕಲೆಯ ಮಾಸ್ಟರ್!&lt;/strong&gt;&lt;/h2&gt;&lt;p&gt;ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಇನ್ನಿಂಗ್ಸ್&zwnj;ಗಳನ್ನು ಮುಗಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವುದೇ ತಮಗೆ ಅತ್ಯಂತ ತೃಪ್ತಿ ನೀಡಿದ ವಿಷಯ ಎಂದು ಈ ದಕ್ಷಿಣ ಆಫ್ರಿಕಾದ ಆಟಗಾರ ಹೇಳಿದ್ದಾರೆ. &quot;ನಾನು ಮಿಡಲ್ ಆರ್ಡರ್&zwnj;ನಲ್ಲಿ ಬ್ಯಾಟಿಂಗ್ ಮಾಡಿ ಪಂದ್ಯಗಳನ್ನು ಫಿನಿಶ್ ಮಾಡುವ ಮೂಲಕವೇ ನನ್ನ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದೇನೆ. ಇದಕ್ಕಾಗಿ ನಾನು ಹೆಚ್ಚು ಹೆಮ್ಮೆಪಡುತ್ತೇನೆ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ನಾನಿನ್ನೂ ಕಲಿಯುತ್ತಲೇ ಇದ್ದೇನೆ, ಆದರೆ ಈ ವಿಭಾಗದಲ್ಲಿ ನಾನು ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದೇನೆ ಮತ್ತು ವಿಶೇಷವಾಗಿ ಚೇಸಿಂಗ್ ಇನ್ನಿಂಗ್ಸ್&zwnj;ಗಳನ್ನು ನಾನು ನಿಜವಾಗಿಯೂ ಆನಂದಿಸಿದ್ದೇನೆ,&quot; ಎಂದರು.&lt;/p&gt;&lt;h2&gt;&lt;strong&gt;ಐಪಿಎಲ್ ಪಯಣ ಮತ್ತು ನೆಚ್ಚಿನ ಕ್ಷಣ!&lt;/strong&gt;&lt;/h2&gt;&lt;p&gt;2012ರಲ್ಲಿ ಪಾದಾರ್ಪಣೆ ಮಾಡಿದ ನಂತರ ಮಿಲ್ಲರ್ 15 ಐಪಿಎಲ್ ಸೀಸನ್&zwnj;ಗಳಲ್ಲಿ ಆಡಿದ್ದಾರೆ. ಅವರು ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರರ ಪೈಕಿ ಅತಿ ಹೆಚ್ಚು ಐಪಿಎಲ್ ಸೀಸನ್&zwnj;ಗಳಲ್ಲಿ ಆಡಿದ ದಾಖಲೆ ಅವರ ಹೆಸರಿನಲ್ಲಿದೆ. 2022ರಲ್ಲಿ ಗುಜರಾತ್ ಟೈಟಾನ್ಸ್ ಜೊತೆಗಿನ ಆವೃತ್ತಿ ಅವರ ಪಾಲಿಗೆ ಅತ್ಯಂತ ಯಶಸ್ವಿಯಾಗಿತ್ತು. ಚೊಚ್ಚಲ ಸೀಸನ್&zwnj;ನಲ್ಲೇ ಫ್ರಾಂಚೈಸಿ ಪ್ರಶಸ್ತಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಜಿಟಿಯ ಮಿಡಲ್ ಆರ್ಡರ್&zwnj;ನ ಬೆನ್ನೆಲುಬಾಗಿದ್ದ ಮಿಲ್ಲರ್, ಆ ಐತಿಹಾಸಿಕ ಓಟದಲ್ಲಿ ಹಲವಾರು ಪಂದ್ಯ-ಗೆಲ್ಲುವ ಪ್ರದರ್ಶನಗಳನ್ನು ನೀಡಿದ್ದರು.&lt;/p&gt;&lt;p&gt;ತಮ್ಮ ನೆಚ್ಚಿನ ಐಪಿಎಲ್ ಕ್ಷಣದ ಬಗ್ಗೆ ಮಾತನಾಡಿದ ಮಿಲ್ಲರ್, ಗುಜರಾತ್ ಟೈಟಾನ್ಸ್ ಜೊತೆಗಿನ ಆ ಗೆಲುವನ್ನು ಆಯ್ಕೆ ಮಾಡಿಕೊಂಡರು. &quot;ಐಪಿಎಲ್&zwnj;ನಲ್ಲಿ ನನ್ನ ನೆಚ್ಚಿನ ಕ್ಷಣ... ಹಲವಾರು ಇವೆ, ಆದರೆ ನಾವು ಆಡುವುದೇ ಗೆಲ್ಲಲು. ಹಾಗಾಗಿ, ಗುಜರಾತ್ ಟೈಟಾನ್ಸ್&zwnj;ಗಾಗಿ 2022ರಲ್ಲಿ ಐಪಿಎಲ್ ಗೆದ್ದಿದ್ದು ಖಂಡಿತವಾಗಿಯೂ ನನ್ನ ನೆಚ್ಚಿನ ಕ್ಷಣ,&quot; ಎಂದು ಅವರು ಹೇಳಿದರು.&lt;/p&gt;&lt;h2&gt;&lt;strong&gt;ಯಶಸ್ವಿ ಟಿ20 ವೃತ್ತಿಜೀವನ&lt;/strong&gt;&lt;/h2&gt;&lt;p&gt;ಮಿಲ್ಲರ್ ತಮ್ಮ ವೃತ್ತಿಜೀವನದಲ್ಲಿ 152 ಐಪಿಎಲ್ ಪಂದ್ಯಗಳಿಂದ 3,288 ರನ್ ಗಳಿಸಿದ್ದಾರೆ. ಅವರು ಕೊನೆಯ ಓವರ್&zwnj;ಗಳ ಸ್ಫೋಟಕ ಬ್ಯಾಟಿಂಗ್ ಮತ್ತು ಯಶಸ್ವಿ ಚೇಸಿಂಗ್&zwnj;ಗಳಿಗೆ ಹೆಸರುವಾಸಿಯಾಗಿದ್ದಾರೆ. 'ದಿ ಹಂಡ್ರೆಡ್ 2026' ಟೂರ್ನಿಯಲ್ಲಿ, ಸದರ್ನ್ ಬ್ರೇವ್ ಪರ 8 ಪಂದ್ಯಗಳಲ್ಲಿ 166 ರನ್ ಗಳಿಸಿದ್ದಾರೆ, ಆದರೆ ಅವರ ಫ್ರಾಂಚೈಸಿ ನಾಕೌಟ್ ಹಂತಕ್ಕೆ ಪ್ರವೇಶಿಸಲು ವಿಫಲವಾಯಿತು. 37 ವರ್ಷದ ಈ ಆಟಗಾರ, ವಿಶ್ವಾದ್ಯಂತ ಟಿ20 ಲೀಗ್&zwnj;ಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ತಮ್ಮ ಯಶಸ್ವಿ ವೃತ್ತಿಜೀವನವನ್ನು ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/david-miller-reveals-how-century-against-rcb-in-ipl-2013-shaped-his-cricket-career/articleshow-9qzxcve"/>
        </item>
        <item>
            <title><![CDATA[IPL ಹರಾಜಿನಿಂದ ಒಂದು ಹೆಜ್ಜೆ ದೂರದಲ್ಲಿ ವಿರಾಟ್ ಕೊಹ್ಲಿ ಅಳಿಯ, ಸೆಹ್ವಾಗ್ ಕಿರಿಮಗ]]></title>
            <link>https://kannada.asianetnews.com/gallery/cricket-sports/ipl-auction-virat-kohli-nephew-aryaveer-vedant-sehwag-dpl-auction-suh-bwnl4mn</link>
            <guid isPermaLink="true">https://kannada.asianetnews.com/gallery/cricket-sports/ipl-auction-virat-kohli-nephew-aryaveer-vedant-sehwag-dpl-auction-suh-bwnl4mn</guid>
            <pubDate>Fri, 03 Jul 2026 11:50:14 +0530</pubDate>
            <description><![CDATA[&lt;p&gt;ಭಾರತೀಯ ಕ್ರಿಕೆಟ್&zwnj;ನಲ್ಲಿ ಹೊಸ ತಲೆಮಾರಿನ ಪ್ರತಿಭೆಗಳು ಗಮನ ಸೆಳೆಯುತ್ತಿವೆ. ಈಗ ವಿರಾಟ್ ಕೊಹ್ಲಿ ಅವರ ಅಳಿಯ ಆರ್ಯವೀರ್ ಕೊಹ್ಲಿ ಹಾಗೂ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್ ಹೆಸರುಗಳು ಮತ್ತೆ ಸುದ್ದಿಯಲ್ಲಿವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwk9mx2j2zh2azhwzzev2jzz,imgname-ipl-auction-virat-kohli-nephew-aryaveer-vedant-sehwag-1783059084370.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕ್ರಿಕೆಟ್&zwnj;ನಲ್ಲಿ ಹೊಸ ತಲೆಮಾರಿನ ಪ್ರತಿಭೆಗಳು ಗಮನ ಸೆಳೆಯುತ್ತಿವೆ. ಈಗ ವಿರಾಟ್ ಕೊಹ್ಲಿ ಅವರ ಅಳಿಯ ಆರ್ಯವೀರ್ ಕೊಹ್ಲಿ ಹಾಗೂ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್ ಹೆಸರುಗಳು ಮತ್ತೆ ಸುದ್ದಿಯಲ್ಲಿವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಬ್ಬರೂ ದೆಹಲಿ ಪ್ರೀಮಿಯರ್ ಲೀಗ್ (DPL) 2026 ಆಟಗಾರರ ಹರಾಜಿನಲ್ಲಿ ಆಯ್ಕೆಯಾಗಿದ್ದು, IPL ಕಡೆಗೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಡೆಲ್ಲಿ ಲೀಗ್&zwnj;ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಮುಂದಿನ ದಿನಗಳಲ್ಲಿ IPL ಫ್ರಾಂಚೈಸಿಗಳ ಗಮನ ಸೆಳೆಯುವ ಅವಕಾಶ ಇವರ ಮುಂದಿದೆ.&lt;/p&gt;&lt;img&gt;&lt;p&gt;ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್ ಅವರನ್ನು ಸೆಂಟ್ರಲ್ ಡೆಲ್ಲಿ ಕಿಂಗ್ಸ್ ₹1 ಲಕ್ಷಕ್ಕೆ ಖರೀದಿಸಿದೆ. ಕೇವಲ 16 ವರ್ಷದ ವೇದಾಂತ್ ಈಗಾಗಲೇ ಡೆಲ್ಲಿ ವಯೋಮಿತಿ ಕ್ರಿಕೆಟ್&zwnj;ನಲ್ಲಿ ತನ್ನ ಪ್ರತಿಭೆ ತೋರಿದ್ದು, ತಂದೆಯಂತೆ ಬ್ಯಾಟರ್ ಅಲ್ಲ; ಆಫ್&zwnj;ಸ್ಪಿನ್ ಬೌಲಿಂಗ್ ಮಾಡುವ ಆಲ್&zwnj;ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ, ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಅವರನ್ನು ವೆಸ್ಟ್ ಡೆಲ್ಲಿ ಲಯನ್ಸ್ ₹3 ಲಕ್ಷಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಅವರು ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪರ ಆಡಿದ್ದು, ಈ ಬಾರಿ ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿಯ ಅಣ್ಣ ವಿಕಾಸ್ ಕೊಹ್ಲಿಯ ಪುತ್ರ ಆರ್ಯವೀರ್ ಕೊಹ್ಲಿ ಕೂಡ ಹರಾಜಿನಲ್ಲಿ ಸ್ಥಾನ ಪಡೆದಿದ್ದಾರೆ. ಲೆಗ್&zwnj;ಸ್ಪಿನ್ನರ್ ಆಗಿರುವ ಆರ್ಯವೀರ್ ಅವರನ್ನು ಸೆಂಟ್ರಲ್ ಡೆಲ್ಲಿ ಕಿಂಗ್ಸ್ ₹1.20 ಲಕ್ಷಕ್ಕೆ ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ ಅವರು ಸೌತ್ ಡೆಲ್ಲಿ ಸೂಪರ್ಸ್ಟಾರ್ಜ್ ಪರ ಆಡಿದ್ದರು.&lt;/p&gt;&lt;img&gt;&lt;p&gt;ಈ ಬಾರಿ DPL ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ ತೇಜಸ್ವಿ ದಹಿಯಾ. ಅವರನ್ನು ಸೌತ್ ಡೆಲ್ಲಿ ಸೂಪರ್ಸ್ಟಾರ್ಜ್ ₹40 ಲಕ್ಷಕ್ಕೆ ತನ್ನ ತಂಡದಲ್ಲೇ ಉಳಿಸಿಕೊಂಡಿದೆ. DPL ಈಗ ಯುವ ಕ್ರಿಕೆಟಿಗರಿಗೆ IPL ಹಾಗೂ ಉನ್ನತ ಮಟ್ಟದ ಕ್ರಿಕೆಟ್&zwnj;ಗೆ ಪ್ರವೇಶಿಸುವ ಪ್ರಮುಖ ವೇದಿಕೆಯಾಗುತ್ತಿದೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ.&lt;/p&gt;]]></content:encoded>
            <category>ipl</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/cricket-sports/ipl-auction-virat-kohli-nephew-aryaveer-vedant-sehwag-dpl-auction-suh-bwnl4mn"/>
        </item>
        <item>
            <title><![CDATA[ಐಪಿಎಲ್‌ನಲ್ಲಿ ನೆಲಕಚ್ಚಿದ ಚೆನ್ನೈ: ಹಳೆ ಕುದುರೆಗಳಿಗೆ ಗೇಟ್‌ಪಾಸ್ ನೀಡಲು ಶುರು ಮಾಡಿದ ಸಿಎಸ್‌ಕೆ ಫ್ರಾಂಚೈಸಿ!]]></title>
            <link>https://kannada.asianetnews.com/cricket-sports/stephen-fleming-parts-ways-with-chennai-super-kings-after-17-glorious-years-kvn/articleshow-c9xf5wg</link>
            <guid isPermaLink="true">https://kannada.asianetnews.com/cricket-sports/stephen-fleming-parts-ways-with-chennai-super-kings-after-17-glorious-years-kvn/articleshow-c9xf5wg</guid>
            <pubDate>Mon, 13 Jul 2026 14:29:36 +0530</pubDate>
            <description><![CDATA[ಕಳೆದ 17 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್&zwnj;ಕೋಚ್ ಆಗಿದ್ದ ಸ್ಟಿಫನ್ ಫ್ಲೆಮಿಂಗ್ ತಂಡಕ್ಕೆ ವಿದಾಯ ಹೇಳಿದ್ದಾರೆ. ಕಳೆದ ಮೂರು ಸೀಸನ್&zwnj;ಗಳಲ್ಲಿ ತಂಡದ ನೀರಸ ಪ್ರದರ್ಶನದ ನಂತರ, ಫ್ಲೆಮಿಂಗ್ ಮತ್ತು ಸಿಎಸ್&zwnj;ಕೆ ಆಡಳಿತ ಮಂಡಳಿ ಪರಸ್ಪರ ಸಮ್ಮತಿಯೊಂದಿಗೆ ಈ ನಿರ್ಧಾರಕ್ಕೆ ಬಂದಿವೆ ಎಂದು ಫ್ರಾಂಚೈಸಿ ಖಚಿತಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxd4xr7aasjdfffpka7z7k29,imgname-21dhoni-fleming-1783926546666.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಳೆದ ಮೂರು ಸೀಸನ್ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಾ ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್&zwnj; ಮ್ಯಾನೇಜ್&zwnj;ಮೆಂಟ್ ಇದೀಗ ಹಳೆಯ ಕುದುರೆಗಳಿಗೆ ಗೇಟ್&zwnj;ಪಾಸ್ ನೀಡಲು ಶುರು ಮಾಡಿದೆ. ಇದರ ಭಾಗವಾಗಿ ಕಳೆದ 17 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚಿಂಗ್ ಸ್ಟಾಫ್ ಆಗಿ ಕಾರ್ಯನಿರ್ವಹಿಸಿದ್ದ ದಿಗ್ಗಜ ಕ್ರಿಕೆಟಿಗ ಸ್ಟಿಫನ್ ಫ್ಲೆಮಿಂಗ್, ಸಿಎಸ್&zwnj;ಕೆ ತಂಡಕ್ಕೆ ಗುಡ್&zwnj; ಬೈ ಹೇಳಿದ್ದಾರೆ. ಈ ವಿಷಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡಾ ಖಚಿತಪಡಿಸಿದೆ.&lt;/p&gt;&lt;p&gt;ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 2023ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಇದಾದ ಬಳಿಕ 2024,2025 ಹಾಗೂ 2026ರಲ್ಲಿ ಚೆನ್ನೈ ತಂಡವು ಪ್ರಶಸ್ತಿ ಗೆಲ್ಲುವುದು ಬದಿಗಿರಲಿ, ಪ್ಲೇ ಆಫ್&zwnj;ಗೇರಲು ಕೂಡಾ ಸಾಧ್ಯವಾಗಿರಲಿಲ್ಲ. ಸತತ ಮೂರು ವರ್ಷಗಳಿಂದ ಸಿಎಸ್&zwnj;ಕೆ ತಂಡದ ನೀರಸ ಪ್ರದರ್ಶನಕ್ಕೆ ಇದೀಗ ತಂಡದ ಹೆಡ್&zwnj;ಕೋಚ್ ತಲೆದಂಡವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ಐಪಿಎಲ್&zwnj;ನ ಯಶಸ್ವಿ ಕೋಚ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗುಡ್ ಬೈ&lt;/strong&gt;&lt;/h2&gt;&lt;p&gt;'ಸೂಪರ್ ಕಿಂಗ್ಸ್ ಮತ್ತು ಸ್ಟೀಫನ್ ಫ್ಲೆಮಿಂಗ್ ಪರಸ್ಪರ ಬೇರ್ಪಡಲು ನಿರ್ಧರಿಸಿದ್ದಾರೆ, ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಶಾಶ್ವತ ಪಾಲುದಾರಿಕೆಗಳಲ್ಲಿ ಒಂದನ್ನು ಮುಕ್ತಾಯಗೊಳಿಸಿದೆ. ಫ್ಲೆಮಿಂಗ್ ಮತ್ತು ಸೂಪರ್ ಕಿಂಗ್ಸ್ ಆಡಳಿತ ಮಂಡಳಿಯ ನಡುವೆ ನಡೆದ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಗಳ ಸರಣಿಯ ನಂತರ, ಗೌರವ ಮತ್ತು ಕೃತಜ್ಞತೆಯಿಂದ ಈ ನಿರ್ಧಾರಕ್ಕೆ ಬರಲಾಯಿತು' ಎಂದು ಸಿಎಸ್&zwnj;ಕೆ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;OFFICIAL ANNOUNCEMENTThe Super Kings and Head Coach Stephen Fleming have mutually decided to part ways.Together, we shared one of the most successful and enduring partnerships in IPL history. The legacy you've built will continue to inspire us.With immense respect and&hellip; pic.twitter.com/qjvb4oZUuU&lt;/p&gt;&lt;p&gt;&mdash; Chennai Super Kings (@ChennaiIPL) July 13, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ನ್ಯೂಜಿಲೆಂಡ್ ಮೂಲದ ದಿಗ್ಗಜ ಕ್ರಿಕೆಟಿಗ ಸ್ಟಿಫನ್ ಫ್ಲೆಮಿಂಗ್, 2008ರ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಟಗಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಮರುವರ್ಷ ಅಂದರೆ 2009ರಿಂದ ಸಿಎಸ್&zwnj;ಕೆ ತಂಡದ ಹೆಡ್&zwnj;ಕೋಚ್ ಆಗಿ ನೇಮಕಗೊಂಡರು. ಇದಾದ 17 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್&zwnj; ಇಂದು ಐಪಿಎಲ್&zwnj;ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಮಾಡುವಲ್ಲಿ ಫ್ಲೆಮಿಂಗ್ ಪಾತ್ರ ದೊಡ್ಡದಿದೆ.&lt;/p&gt;&lt;p&gt;ಸ್ಟಿಫನ್ ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಐದು ಐಪಿಎಲ್ ಟ್ರೋಫಿ ಹಾಗೂ ಎರಡು ಚಾಂಪಿಯನ್ಸ್ ಲೀಗ್ ಟಿ20 ಟೂರ್ನಮೆಂಟ್&zwnj;ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಷ್ಟೇ ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು 10 ಬಾರಿ ಫೈನಲ್ ಸೇರಿದಂತೆ ಒಟ್ಟು 12 ಬಾರಿ ಪ್ಲೇ ಆಫ್&zwnj; ಪ್ರವೇಶಿಸಿದೆ.&lt;/p&gt;&lt;h3&gt;&lt;strong&gt;ಹೊಸ ತಂಡ ಕಟ್ಟಲು ತಯಾರಿ?&lt;/strong&gt;&lt;/h3&gt;&lt;p&gt;ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ತಂಡ ಎನ್ನುವ ಹೆಗ್ಗಳಿಕೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿದೆ. ಈ ಎರಡು ತಂಡಗಳು ತಲಾ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿವೆ. ಆದರೆ ಕಳೆದ ಮೂರ್ನಾಲ್ಕು ಸೀಸನ್&zwnj;ನಿಂದಲೂ ಈ ಎರಡು ತಂಡಗಳು ಪ್ಲೇ ಆಫ್&zwnj;ಗೇರಲು ಪರದಾಡುತ್ತಿವೆ. ಹೀಗಾಗಿ ಮುಂಬರುವ ಐಪಿಎಲ್ ಸೀಸನ್&zwnj;ಗೂ ಮುನ್ನ ಎರಡೂ ಫ್ರಾಂಚೈಸಿಗಳು ತಂಡದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದ್ದು, ಹೊಸ ತಂಡ ಕಟ್ಟಲು ತಯಾರಿ ನಡೆಸುತ್ತಿವೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/stephen-fleming-parts-ways-with-chennai-super-kings-after-17-glorious-years-kvn/articleshow-c9xf5wg"/>
        </item>
        <item>
            <title><![CDATA[ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿತು: ಕರುನಾಡನ್ನು ಕೊಂಡಾಡಿದ ಎಬಿ ಡಿವಿಲಿಯರ್ಸ್]]></title>
            <link>https://kannada.asianetnews.com/gallery/cricket-sports/bengaluru-changed-my-life-ab-de-villiers-emotional-tribute-to-rcb-fans-kvn-eqz8rl2</link>
            <guid isPermaLink="true">https://kannada.asianetnews.com/gallery/cricket-sports/bengaluru-changed-my-life-ab-de-villiers-emotional-tribute-to-rcb-fans-kvn-eqz8rl2</guid>
            <pubDate>Fri, 10 Jul 2026 17:46:24 +0530</pubDate>
            <description><![CDATA[&lt;p&gt;ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತುಗಳನ್ನಾಡಿದ್ದಾರೆ. ಎಬಿಡಿ ಏನಂದ್ರು ಎನ್ನುವುದನ್ನು ನೀವೇ ನೋಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyt7yz7cwyyp2nwh4d0tey9,imgname-ab-de-villiers-prediction-1780224359399.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತುಗಳನ್ನಾಡಿದ್ದಾರೆ. ಎಬಿಡಿ ಏನಂದ್ರು ಎನ್ನುವುದನ್ನು ನೀವೇ ನೋಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾರತೀಯ ಆಟಗಾರರು ಮಾತ್ರವಲ್ಲದೇ ವಿದೇಶಿ ಆಟಗಾರರು ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಐಪಿಎಲ್ ಆಡಲು ಬಂದ ಬಹುತೇಕ ಆಟಗಾರರು ಟೂರ್ನಿ ಮುಗಿದ ಬಳಿಕ, ಭಾರತೀಯರ ಆತಿಥ್ಯ, ಸೌಲಭ್ಯ, ಊಟೋಪಚಾರಗಳನ್ನು ಮರೆತೇ ಬಿಡುತ್ತಾರೆ. ಆದರೆ ಇನ್ನು ಕೆಲವು ವಿದೇಶಿ ಆಟಗಾರರು ಭಾರತವನ್ನು ತಮ್ಮ ಎರಡನೇ ತವರು ಎಂದು ಬಣ್ಣಿಸಿದ್ದೂ ಇದೆ.&lt;/p&gt;&lt;img&gt;&lt;p&gt;ಇನ್ನು ಮಿಸ್ಟರ್ 360 ಎಂದೇ ಖ್ಯಾತಿ ಗಳಿಸುವುದರ ಜತೆಗೆ ವಿಸ್ಪೋಟಕ ಆಟದ ಮೂಲಕ ಭಾರತೀಯರ ಅದರಲ್ಲೂ ಕನ್ನಡಿಗ ಮನಸ್ಸು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವ್ಯಸಾಚಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿಬಿಟ್ಟಿತು ಎಂದು ಕರುನಾಡನ್ನು ಸ್ಮರಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗಿನ ಪಯಣವನ್ನು ಮೆಲುಕು ಹಾಕಿರುವ ಎಬಿಡಿ, 'ಬೆಂಗಳೂರು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾದ ನಗರವಾಗಿಯೇ ಉಳಿಯಲಿದೆ. ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿತು. ಇದೇ ಕಾರಣಕ್ಕೆ ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ' ಎಂದು ಎಬಿಡಿ ಟೈಮ್ ಆಫ್ ಇಂಡಿಯಾಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು ಅತ್ಯಂತ ವಿಶೇಷವಾದ ನಗರ. ಇದು ನನ್ನ ಜೀವನದ ಮೇಲೆ ಅಪಾರ ಪ್ರಭಾವ ಬೀರಿದೆ. 2011ರಲ್ಲಿ ನಾನು ಆರ್&zwnj;ಸಿಬಿ (RCB) ತಂಡವನ್ನು ಸೇರಿದಾಗ, ತಕ್ಷಣವೇ ನನಗೆ ಇಲ್ಲಿನ ವಾತಾವರಣವು ಮನೆಯಂತೆಯೇ ಭಾಸವಾಯಿತು. ಪ್ರೇಕ್ಷಕರು ನನ್ನ ಬೆಂಬಲಕ್ಕೆ ನಿಲ್ಲಲು ಹೆಚ್ಚು ಸಮಯವೇನೂ ಹಿಡಿಯಲಿಲ್ಲ ಎಂದು ಆ ದಿನಗಳನ್ನು ಎಬಿಡಿ ಮೆಲುಕು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಒಂದು ದಶಕಗಳ ಕಾಲ ಆರ್&zwnj;ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್, ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಬೆಂಗಳೂರು ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಎಬಿಡಿ ಐಪಿಎಲ್&zwnj;ಗೆ ವಿದಾಯ ಹೇಳಿ ನಾಲ್ಕೈದು ವರ್ಷ ಕಳೆದರೂ, ಇಂದಿಗೂ ಆರ್&zwnj;ಸಿಬಿ ಪರ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರ ಎನ್ನುವ ದಾಖಲೆ ಎಬಿಡಿ ಹೆಸರಿನಲ್ಲಿಯೇ ಇದೆ.&lt;/p&gt;&lt;img&gt;&lt;p&gt;ನಿಜ ಹೇಳಬೇಕೆಂದರೆ, ನನಗ್ಯಾಕೆ ಇಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿರಲಿಲ್ಲ. ಭಾರತದಲ್ಲಿ ಕ್ರಿಕೆಟ್ ಹಾಗೂ ಸ್ಪರ್ಧೆಗೆ ಜನರು ತುಂಬಾನೆ ಪ್ರೀತಿ ಕೊಡುತ್ತಾರೆ. ಜನರು ಕೆಚ್ಚೆದೆಯಿಂದ ಹೋರಾಡುವ ಆಟಗಾರರಿಗೆ ತುಂಬಾನೆ ಬೆಂಬಲ ಕೊಡುತ್ತಾರೆ ಎಂದೆನಿಸುತ್ತಿದೆ. ಯಾವಾಗಲೂ ಸಕಾರಾತ್ಮಕವಾಗಿರಲು ಪ್ರಯತ್ನಿಸುವ ವ್ಯಕ್ತಿಯನ್ನು ಇಷ್ಟ ಪಡುತ್ತಾರೆ ಎಂದು ಎಬಿಡಿ ಭಾರತೀಯ ಫ್ಯಾನ್ಸ್&zwnj; ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/bengaluru-changed-my-life-ab-de-villiers-emotional-tribute-to-rcb-fans-kvn-eqz8rl2"/>
        </item>
        <item>
            <title><![CDATA[IPL 2027 ಗೂ ಮುನ್ನ ಮುಂಬೈ ಇಂಡಿಯನ್ಸ್ ಈ ಮೂವರು ಬೌಲರ್‌ಗಳಿಗೆ ಗೇಟ್‌ಪಾಸ್ ನೀಡೋದು ಫಿಕ್ಸ್..! ಲಿಸ್ಟ್‌ನಲ್ಲಿದ್ದಾರೆ ₹12.5 ಕೋಟಿಯ ಮಾರಕ ವೇಗಿ]]></title>
            <link>https://kannada.asianetnews.com/cricket-sports/ipl-2027-mumbai-indians-may-release-these-3-bowlers-after-poor-2026-season-kvn/articleshow-f85beug</link>
            <guid isPermaLink="true">https://kannada.asianetnews.com/cricket-sports/ipl-2027-mumbai-indians-may-release-these-3-bowlers-after-poor-2026-season-kvn/articleshow-f85beug</guid>
            <pubDate>Thu, 13 Aug 2026 13:33:15 +0530</pubDate>
            <description><![CDATA[ಕಳೆದ ಐಪಿಎಲ್ ಸೀಸನ್&zwnj;ನಲ್ಲಿ ನೀರಸ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, ಮುಂಬರುವ ಹರಾಜಿಗೂ ಮುನ್ನ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಕಳಪೆ ಪ್ರದರ್ಶನ ತೋರಿದ ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತು ಟ್ರೆಂಟ್ ಬೌಲ್ಟ್ ಸೇರಿದಂತೆ ಮೂವರು ಪ್ರಮುಖ ಬೌಲರ್&zwnj;ಗಳನ್ನು ತಂಡದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3hc87saxnf33ybt2d2e7w0,imgname-mumbai-indians-1778235351289.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐಪಿಎಲ್&zwnj;ನ ಯಶಸ್ವಿ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ. ಆದರೆ 2021ರಿಂದೀಚೆಗೆ ಯಾಕೋ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ಇಂಡಿಯನ್ಸ್ ಅದೃಷ್ಟ ಯಾಕೋ ಕೈಕೊಟ್ಟಂತಿದೆ. ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡವು ನೀರಸ ಪ್ರದರ್ಶನ ತೋರುತ್ತಿದೆ. ಹೀಗಾಗಿ 2027ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೇಜರ್ ಸರ್ಜರಿ ನಡೆಯುವ ಸಾಧ್ಯತೆಯಿದೆ.&lt;/p&gt;&lt;p&gt;ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದರೂ, ಬೌಲಿಂಗ್ ವಿಭಾಗ ಕೈಕೊಡುತ್ತಿರುವುದು ಮುಂಬೈ ಫ್ರಾಂಚೈಸಿಯ ನಿದ್ದೆಗೆಡುವಂತೆ ಮಾಡಿದೆ. 2026ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ 14 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ 9ನೇ ಸ್ಥಾನಿಯಾಗಿ ತನ್ನ ಅಭಿಯಾನ ಮುಗಿಸಿತ್ತು. ಹೀಗಾಗಿ ಮುಂಬೈ ಫ್ರಾಂಚೈಸಿಯು ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ಈ ಮೂರು ಬೌಲರ್&zwnj;ಗಳಿಗೆ ಗೇಟ್&zwnj;ಪಾಸ್ ನೀಡಲು ರೆಡಿಯಾಗಿದೆ. ಈ ಬೌಲರ್&zwnj;ಗಳ ಪೈಕಿ 12.5 ಕೋಟಿ ರುಪಾಯಿಗೆ ಖರೀದಿಸಿದ್ದ ಮಾರಕ ಎಡಗೈ ವೇಗಿಯೂ ಇದ್ದಾರೆ ಎನ್ನುವುದು ವಿಶೇಷ. ಈ ಲಿಸ್ಟ್&zwnj;ನಲ್ಲಿರುವ ಮೂವರು ಬೌಲರ್&zwnj;ಗಳು ಯಾರು ನೋಡೋಣ ಬನ್ನಿ.&lt;/p&gt;&lt;h2&gt;&lt;strong&gt;1. ದೀಪಕ್ ಚಹರ್:&lt;/strong&gt;&lt;/h2&gt;&lt;p&gt;ಭಾರತದ ವೇಗಿ ದೀಪಕ್ ಚಹರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 9.25 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಗಾಯದ ಸಮಸ್ಯೆಯ ಹೊರತಾಗಿಯೂ ದೀಪಕ್ ಚಹರ್ ಮೇಲೆ ಮುಂಬೈ ಫ್ರಾಂಚೈಸಿ ನಂಬಿಕೆಯಿಟ್ಟಿತ್ತು. ಆದರೆ ದೀಪಕ್ ಚಹರ್ ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪರ 3 ಪಂದ್ಯಗಳನ್ನಾಡಿ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಚಹರ್&zwnj;ಗೆ ಮುಂಬೈ ತಂಡದಿಂದ ಗೇಟ್&zwnj;ಪಾಸ್ ಸಿಗೋದು ಬಹುತೇಕ ಖಚಿತ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;2. ಶಾರ್ದೂಲ್ ಠಾಕೂರ್:&lt;/strong&gt;&lt;/h3&gt;&lt;p&gt;2026ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2 ಕೋಟಿ ರುಪಾಯಿ ನೀಡಿ ಲಖನೌ ಸೂಪರ್&zwnj; ಜೈಂಟ್ಸ್ ತಂಡದಿಂದ ಶಾರ್ದೂಲ್ ಠಾಕೂರ್ ಅವರನ್ನು ಕರೆ ತಂದಿತು. ಶಾರ್ದೂಲ್ ಠಾಕೂರ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡು ಮುಂಬೈ ಫ್ರಾಂಚೈಸಿ ಈ ಡೀಲ್&zwnj;ಗೆ ಕೈ ಹಾಕಿತ್ತು. ಆದರೆ ಶಾರ್ದೂಲ್ ಠಾಕೂರ್ ಮುಂಬೈ ಇಂಡಿಯನ್ಸ್ ಪರ 7 ಪಂದ್ಯಗಳನ್ನಾಡಿ ಕೇವಲ ಆರು ವಿಕೆಟ್ ಕಬಳಿಸಿ ನಿರೀಕ್ಷೆ ಹುಸಿಗೊಳಿಸಿದರು. ಹೀಗಾಗಿ ಶಾರ್ದೂಲ್ ಠಾಕೂರ್ ಅವರನ್ನು ಮುಂಬೈ ಫ್ರಾಂಚೈಸಿ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.&lt;/p&gt;&lt;h3&gt;&lt;strong&gt;3. ಟ್ರೆಂಟ್ ಬೌಲ್ಟ್:&lt;/strong&gt;&lt;/h3&gt;&lt;p&gt;ಕಿವೀಸ್ ಮೂಲದ ಅನುಭವಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2026ರ ಐಪಿಎಲ್ ಟೂರ್ನಿಗೂ ಮುನ್ನ ಬರೋಬ್ಬರಿ 12.5 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಪವರ್&zwnj; ಪ್ಲೇ ಹಾಗೂ ಡೆತ್ ಓವರ್&zwnj;ಗಳಲ್ಲಿ ಮಿಂಚಿನ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಬೌಲ್ಟ್, ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದರು. ಬೌಲ್ಟ್ ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿ 11.62ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು ಕೇವಲ ಎರಡು ವಿಕೆಟ್ ಅಷ್ಟೇ ಕಬಳಿಸಿದ್ದರು. ಹೀಗಾಗಿ ಬೌಲ್ಟ್&zwnj; ಅವರಿಗೆ ಮುಂಬೈ ಫ್ರಾಂಚೈಸಿ ಗೇಟ್&zwnj;ಪಾಸ್ ನೀಡಲು ರೆಡಿಯಾಗಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-2027-mumbai-indians-may-release-these-3-bowlers-after-poor-2026-season-kvn/articleshow-f85beug"/>
        </item>
        <item>
            <title><![CDATA[ಲಖನೌ ಸೂಪರ್ ಜೈಂಟ್ಸ್ ತೊರೆದ ಬೆನ್ನಲ್ಲೇ ಮೌನ ಮುರಿದ ರಿಷಭ್ ಪಂತ್..! 3 ಪದಗಳ ಭಾವನಾತ್ಮಕ ಸಂದೇಶ ರವಾನಿಸಿದ LSG ಮಾಜಿ ನಾಯಕ]]></title>
            <link>https://kannada.asianetnews.com/cricket-sports/thank-you-team-rishabh-pant-emotional-message-after-lsg-exit-kvn/articleshow-fwd0lbk</link>
            <guid isPermaLink="true">https://kannada.asianetnews.com/cricket-sports/thank-you-team-rishabh-pant-emotional-message-after-lsg-exit-kvn/articleshow-fwd0lbk</guid>
            <pubDate>Wed, 24 Jun 2026 14:54:02 +0530</pubDate>
            <description><![CDATA[ಎರಡು ವರ್ಷಗಳ ಬಳಿಕ ಲಖನೌ ಸೂಪರ್ ಜೈಂಟ್ಸ್&zwnj; ತಂಡವನ್ನು ತೊರೆದಿರುವ ರಿಷಭ್ ಪಂತ್, ಐಪಿಎಲ್ ಟ್ರೇಡ್ ಮೂಲಕ ತಮ್ಮ ಹಳೆಯ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್&zwnj;ಗೆ ಮರಳಿದ್ದಾರೆ. ಈ ಒಪ್ಪಂದದ ಭಾಗವಾಗಿ ಡೆಲ್ಲಿ ಕ್ಯಾಪಿಟಲ್ಸ್, ಕುಲ್ದೀಪ್ ಯಾದವ್ ಅವರನ್ನು ಲಖನೌ ತಂಡಕ್ಕೆ ನೀಡಿದ್ದು, 27 ಕೋಟಿಗೆ ಖರೀದಿಯಾಗಿದ್ದ ಪಂತ್ ಇದೀಗ ಕಡಿಮೆ ಮೊತ್ತಕ್ಕೆ ಡೆಲ್ಲಿ ಪಾಲಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvg6jnnympvytve4thcx5yrv,imgname-20260409501l-1781881460413.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಕೊನೆಗೂ ಎರಡು ವರ್ಷಗಳ ಬಳಿಕ ಲಖನೌ ಸೂಪರ್ ಜೈಂಟ್ಸ್&zwnj; ತಂಡಕ್ಕೆ ಗುಡ್ ಬೈ ಹೇಳಿದ್ದಾರೆ. ಇದೀಗ ಐಪಿಎಲ್ ಟ್ರೇಡ್ ಮೂಲಕ ರಿಷಭ್ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕುಲ್ದೀಪ್ ಯಾದವ್ ಅವರನ್ನು ಲಖನೌ ಸೂಪರ್ ಜೈಂಟ್ಸ್&zwnj;ಗೆ ನೀಡಿ, ಲಖನೌ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.&lt;/p&gt;&lt;p&gt;2025ರ ಐಪಿಎಲ್ ಹರಾಜಿನಲ್ಲಿ ಸಂಜೀವ್ ಗೋಯೆಂಕಾ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಬರೋಬ್ಬರಿ 27 ಕೋಟಿ ರುಪಾಯಿ ನೀಡಿ ರಿಷಭ್ ಪಂತ್ ಅವರನ್ನು ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೆ ರಿಷಭ್ ಪಂತ್ ಪಾತ್ರರಾಗಿದ್ದರು.&lt;/p&gt;&lt;h2&gt;&lt;strong&gt;12 ಲಕ್ಷ ಕಳೆದುಕೊಂಡು ಡೆಲ್ಲಿ ಪಾಲಾದ ರಿಷಭ್ ಪಂತ್:&lt;/strong&gt;&lt;/h2&gt;&lt;p&gt;ಭಾರೀ ನಿರೀಕ್ಷೆಯೊಂದಿಗೆ ಲಖನೌ ಸೂಪರ್ ಜೈಂಟ್ಸ್ ತಂಡ ಕೂಡಿಕೊಂಡಿದ್ದ ರಿಷಭ್ ಪಂತ್ ಅವರಿಗೆ ನಾಯಕ ಪಟ್ಟ ಕಟ್ಟಲಾಯಿತು. ಆದರೆ ರಿಷಭ್ ಪಂತ್ ಓರ್ವ ಬ್ಯಾಟರ್ ಆಗಿ ಹಾಗೂ ನಾಯಕನಾಗಿ ನಿರೀಕ್ಷೆ ಉಳಿಸಿಕೊಳ್ಳಲು ವಿಫಲವಾದರು. 2026ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು 14 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳನ್ನು ಗೆದ್ದು 10 ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದರ ಬೆನ್ನಲ್ಲೇ ಟೂರ್ನಿ ಮುಗಿಯುತ್ತಿದ್ದಂತೆಯೇ ಪಂತ್, ಲಖನೌ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಐಪಿಎಲ್ ಟ್ರೇಡ್ ವೇಳೆ 27 ಕೋಟಿಯ ಬೆಲೆಯನ್ನು 15 ಕೋಟಿಗೆ ಇಳಿಸಿಕೊಂಡು ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 13.5 ಕೋಟಿ ರುಪಾಯಿಗೆ ಕುಲ್ದೀಪ್ ಯಾದವ್ ಅವರನ್ನು ಲಖನೌ ಸೂಪರ್ ಜೈಂಟ್ಸ್&zwnj;ಗೆ ಮಾರಾಟ ಮಾಡಿದೆ.&lt;/p&gt;&lt;h3&gt;&lt;strong&gt;ಮೂರು ಪದಗಳ ಭಾವನಾತ್ಮಕ ಸಂದೇಶ ರವಾನಿಸಿದ ರಿಷಭ್ ಪಂತ್!&lt;/strong&gt;&lt;/h3&gt;&lt;p&gt;'Thank You Team' ಇದು ಲಖನೌ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ರಿಷಭ್ ಪಂತ್ ಅವರ ಭಾವನಾತ್ಮಕ ಪೋಸ್ಟ್. ರಿಷಭ್ ಪಂತ್ 2016ರಿಂದ 2024ರವರೆಗೆ 111 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಈ ಮೂಲಕ ಡೆಲ್ಲಿ ಪರ ಅತಿಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದರು. ಇನ್ನು ಇದಷ್ಟೇ ಅಲ್ಲದೇ 2021ರಿಂದ 2024ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 43 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಇದೀಗ ಮತ್ತೆ ಪಂತ್ ತಮ್ಮ ನೆಚ್ಚಿನ ತಂಡಕ್ಕೆ ವಾಪಾಸ್ಸಾಗಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/thank-you-team-rishabh-pant-emotional-message-after-lsg-exit-kvn/articleshow-fwd0lbk"/>
        </item>
        <item>
            <title><![CDATA[ಆರ್‌ಸಿಬಿಗೆ ಕಪ್ ಗೆಲ್ಲಿಸಲು ಪಣತೊಟ್ಟ ಆ್ಯಂಡಿ ಫ್ಲವರ್..! ಇಂಗ್ಲೆಂಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬೆಂಗಳೂರು ತಂಡದ ಕೋಚ್]]></title>
            <link>https://kannada.asianetnews.com/gallery/cricket-sports/andy-flower-rejects-england-test-coach-offer-after-guiding-rcb-to-back-to-back-ipl-titles-kvn-go2fzxf</link>
            <guid isPermaLink="true">https://kannada.asianetnews.com/gallery/cricket-sports/andy-flower-rejects-england-test-coach-offer-after-guiding-rcb-to-back-to-back-ipl-titles-kvn-go2fzxf</guid>
            <pubDate>Fri, 17 Jul 2026 18:13:33 +0530</pubDate>
            <description><![CDATA[&lt;p&gt;ಬೆಂಗಳೂರು: ಆ್ಯಂಡಿ ಫ್ಲವರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ಬಿಗ್ ಆಫರ್ ನೀಡಿತ್ತು. ಆದರೆ ಫ್ಲವರ್ ಅದನ್ನು ರಿಜೆಕ್ಟ್ ಮಾಡಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250604075017,imgname-image-8f738c9d-8d7c-4ca0-8d94-a93015c59d5c.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಆ್ಯಂಡಿ ಫ್ಲವರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ಬಿಗ್ ಆಫರ್ ನೀಡಿತ್ತು. ಆದರೆ ಫ್ಲವರ್ ಅದನ್ನು ರಿಜೆಕ್ಟ್ ಮಾಡಿದ್ದಾರೆ.&lt;/p&gt;&lt;p&gt;&lt;/p&gt;&lt;img&gt;&lt;p&gt;17 ಸೀಸನ್&zwnj;ಗಳಿಂದ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಟ್ರೋಫಿ ಗೆಲ್ಲಿಸಿ ಕೊಡುವಲ್ಲಿ ಕೋಚ್ ಆ್ಯಂಡಿ ಫ್ಲವರ್ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಸತತ ಎರಡನೇ ಬಾರಿಗೆ ಆರ್&zwnj;ಸಿಬಿ ತಂಡವು ಐಪಿಎಲ್ ಟ್ರೋಫಿ ಗೆಲ್ಲುವಲ್ಲೂ ಫ್ಲವರ್ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;&lt;img&gt;&lt;p&gt;ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗಳಿಸಿದ ಯಶಸ್ಸನ್ನು ಗಮನಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ರಾಷ್ಟ್ರೀಯ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಜಿಂಬಾಬ್ವೆ ಮೂಲದ ಆ್ಯಂಡಿ ಫ್ಲವರ್&zwnj;ಗೆ ಬಿಗ್ ಆಫರ್ ನೀಡಿತ್ತು. ಆದರೆ ಆ್ಯಂಡಿ ಈ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಮೊದಲು ಇಂಗ್ಲೆಂಡ್ ಟೆಸ್ಟ್&zwnj; ತಂಡದ ಹೆಡ್&zwnj; ಕೋಚ್ ಆಗಿ ನ್ಯೂಜಿಲೆಂಡ್ ಮೂಲದ ಬ್ರೆಂಡನ್ ಮೆಕ್ಕಲಂ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಆದರೆ ಮೆಕ್ಕಲಂ ಅವರ ಕಾಂಟ್ರ್ಯಾಕ್ಟ್&zwnj; ಮುಕ್ತಾಯವಾದ ಬೆನ್ನಲ್ಲೇ ಇದೀಗ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೊಸ ಕೋಚ್ ಹುಡುಕಾಟದಲ್ಲಿದೆ. ಇದೀಗ ಆ್ಯಂಡಿ ಫ್ಲವರ್ ಮೇಲೆ ಕಣ್ಣಿಟ್ಟಿದ್ದ ಇಂಗ್ಲೆಂಡ್&zwnj;ಗೆ ನಿರಾಸೆ ಎದುರಾಗಿದೆ.&lt;/p&gt;&lt;img&gt;&lt;p&gt;ಸದ್ಯ ಆ್ಯಂಡಿ ಫ್ಲವರ್ ಐಪಿಎಲ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದಿ ಹಂಡ್ರೆಡ್&zwnj;ನಲ್ಲಿ ಲಂಡನ್ ಸ್ಪಿರಿಟ್ ತಂಡದ ಹೆಡ್&zwnj; ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರ್&zwnj;ಸಿಬಿ ತಂಡಕ್ಕೆ ಹ್ಯಾಟ್ರಿಕ್ ಕಪ್ ಗೆಲ್ಲಿಸಿಕೊಡಲು ಪಣ ತೊಟ್ಟಿರುವ ಫ್ಲವರ್, ಇಂಗ್ಲೆಂಡ್ ಆಫರ್ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಈ ಬಗ್ಗೆ ಮಾತನಾಡಿರುವ ಫ್ಲವರ್, 'ನಿಜ ಹೇಳಬೇಕೆಂದರೆ, ನಾನು ಈಗ ಮಾಡುತ್ತಿರುವ ಕೆಲಸದಲ್ಲಿ ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ನಿಜವಾಗಿಯೂ ಒಂದೆರಡು ಒಳ್ಳೆಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತೇನೆ. ನನ್ನ ಸುತ್ತಲೂ ನಿಜವಾಗಿಯೂ ಒಳ್ಳೆಯ ತಂಡಗಳಿವೆ ಮತ್ತು ನನ್ನ ಸುತ್ತಲೂ ಒಳ್ಳೆಯ ಜನರಿದ್ದಾರೆ ಮತ್ತು ನಾನು ಇಂದು ಏನು ಮಾಡುತ್ತಿದ್ದೇನೋ ಅದರಲ್ಲಿ ಖುಷಿ ಇದೆ' ಎಂದು ತಮಗೆ ಬಂದ ಆಫರ್&zwnj;ಗೆ ನಯವಾಗಿ ತಿರಸ್ಕರಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಮೊದಲು ಆ್ಯಂಡಿ ಫ್ಲವರ್ 2009ರಿಂದ 2014ರ ವರೆಗೆ ಇಂಗ್ಲೆಂಡ್ ತಂಡದ ಹೆಡ್&zwnj; ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವು ತವರು ಹಾಗೂ ತವರಿನಾಚೆ ಆಷಸ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದಷ್ಟೇ ಅಲ್ಲದೇ ಭಾರತದಲ್ಲೂ ಟೆಸ್ಟ್ ಸರಣಿ ಜಯಿಸುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿತ್ತು.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/andy-flower-rejects-england-test-coach-offer-after-guiding-rcb-to-back-to-back-ipl-titles-kvn-go2fzxf"/>
        </item>
        <item>
            <title><![CDATA[ಕೊಹ್ಲಿ-ಗಂಭೀರ್ ಐಪಿಎಲ್ ಕಿರಿಕ್! 13 ವರ್ಷಗಳ ನಂತರ ಶಾಕಿಂಗ್ ಸತ್ಯ ಬಿಚ್ಚಿಟ್ಟ ಅಂಪೈರ್!]]></title>
            <link>https://kannada.asianetnews.com/cricket-sports/former-umpire-anil-chaudhary-breaks-silence-on-virat-kohli-gautam-gambhir-2013-ipl-clash/articleshow-gzupsum</link>
            <guid isPermaLink="true">https://kannada.asianetnews.com/cricket-sports/former-umpire-anil-chaudhary-breaks-silence-on-virat-kohli-gautam-gambhir-2013-ipl-clash/articleshow-gzupsum</guid>
            <pubDate>Tue, 04 Aug 2026 21:23:08 +0530</pubDate>
            <description><![CDATA[&lt;p&gt;2013ರ ಐಪಿಎಲ್&zwnj;ನಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಪ್ರಸಿದ್ಧ ಘರ್ಷಣೆ ಬಗ್ಗೆ ಮಾಜಿ ಅಂಪೈರ್ ಅನಿಲ್ ಚೌಧರಿ ಮೌನ ಮುರಿದಿದ್ದಾರೆ. ಇಬ್ಬರ ಆಕ್ರಮಣಕಾರಿ ಸ್ವಭಾವದಿಂದಲೇ ಆ ಘಟನೆ ನಡೆದಿತ್ತು ಎಂದು ಹೇಳಿದ ಅವರು, ಕೊಹ್ಲಿಗೆ ಯಾವುದೇ ದುರುದ್ದೇಶ ಇಲ್ಲ, ಅವರ ಉತ್ಸಾಹವೇ ಆಟದ ಬಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz6qmf4nqz9fztts9q1vddjy,imgname-virat-kohli-gautam-gambhir-ipl-2013--1--1785858768021.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;2013ರ ಐಪಿಎಲ್&zwnj;ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಘಟನೆ!&lt;/strong&gt;&lt;/p&gt;&lt;p&gt;ಐಪಿಎಲ್ ಇತಿಹಾಸದಲ್ಲಿ ಅಭಿಮಾನಿಗಳು ಎಂದಿಗೂ ಮರೆಯದ ಕ್ಷಣಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ 2013ರ ಮಾತಿನ ಚಕಮಕಿ ಪ್ರಮುಖವಾಗಿದೆ. ಈಗ ಆ ಪಂದ್ಯಕ್ಕೆ ಅಂಪೈರ್ ಆಗಿದ್ದ ಮಾಜಿ ಅಂತರರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ, ಆ ಘಟನೆಯ ಕುರಿತು ಮೊದಲ ಬಾರಿಗೆ ವಿವರವಾಗಿ ಮಾತನಾಡಿದ್ದಾರೆ. ಇಬ್ಬರ ಸ್ವಭಾವವನ್ನು ಗಮನಿಸಿದರೆ ಅಂಥ ಘರ್ಷಣೆ ಸಂಭವಿಸುವ ಸಾಧ್ಯತೆ ಮೊದಲೇ ಗೊತ್ತಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಆಕ್ರಮಣಶೀಲತೆಯೇ ಇಬ್ಬರ ಶಕ್ತಿ!&lt;/strong&gt;&lt;/p&gt;&lt;p&gt;ಜಿಯೋಸ್ಟಾರ್&zwnj;ನ Cheeky Singles ಕಾರ್ಯಕ್ರಮದಲ್ಲಿ ಮಾತನಾಡಿದ ಅನಿಲ್ ಚೌಧರಿ, ಉತ್ತರ ಭಾರತದ ಕ್ರಿಕೆಟಿಗರು ಮೈದಾನದಲ್ಲಿ ಆಕ್ರಮಣಕಾರಿ ಮನೋಭಾವದಿಂದಲೇ ಆಡುತ್ತಾರೆ ಎಂದು ಹೇಳಿದರು.&lt;/p&gt;&lt;p&gt;ಅವರ ಪ್ರಕಾರ, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರೂ ಗೆಲುವಿಗಾಗಿ ತೀವ್ರವಾಗಿ ಹೋರಾಡುವ ಆಟಗಾರರು. ಇದೇ ಮನೋಭಾವದಿಂದ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಆದರೆ ಆಕ್ರಮಣಶೀಲತೆ ಎಂದಿಗೂ ಮಿತಿಯನ್ನು ಮೀರಿ ವೈಯಕ್ತಿಕ ದ್ವೇಷವಾಗಿ ಬದಲಾಗಬಾರದು ಎಂಬುದು ಅವರ ಅಭಿಪ್ರಾಯ.&lt;/p&gt;&lt;p&gt;&lt;strong&gt;ವಿರಾಟ್&zwnj;ಗೆ ದುರುದ್ದೇಶವೇ ಇಲ್ಲ!&lt;/strong&gt;&lt;/p&gt;&lt;p&gt;ವಿರಾಟ್ ಕೊಹ್ಲಿಯನ್ನು ಬಾಲ್ಯದಿಂದಲೇ ನೋಡಿರುವುದಾಗಿ ಹೇಳಿದ ಅನಿಲ್ ಚೌಧರಿ, ಮೈದಾನದಲ್ಲಿ ಕೊಹ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದರೂ ಅವರ ಮನಸ್ಸಿನಲ್ಲಿ ಯಾರ ಮೇಲೂ ದ್ವೇಷ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;&quot;ವಿರಾಟ್ ಕೆಲವೊಮ್ಮೆ ಭಾವೋದ್ವೇಗದಿಂದ ಪ್ರತಿಕ್ರಿಯಿಸುತ್ತಾರೆ. ಆದರೆ ಪರಿಸ್ಥಿತಿ ಶಾಂತವಾದ ಬಳಿಕ ಅವರು ಅಧಿಕಾರಿಗಳ ಜೊತೆಗೂ, ಎದುರಾಳಿ ಆಟಗಾರರ ಜೊತೆಗೂ ಸ್ನೇಹಪರವಾಗಿ ವರ್ತಿಸುತ್ತಾರೆ. ಅವರ ಉತ್ಸಾಹವೇ ಅವರ ಆಟದ ಪ್ರಮುಖ ಬಲ,&quot; ಎಂದು ಚೌಧರಿ ಹೇಳಿದರು.&lt;/p&gt;&lt;p&gt;&lt;strong&gt;ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆ ಐತಿಹಾಸಿಕ ಕ್ಷಣ!&lt;/strong&gt;&lt;/p&gt;&lt;p&gt;2013ರ ಏಪ್ರಿಲ್ 11ರಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್&zwnj;ಸಿಬಿ-ಕೆಕೆಆರ್ ಪಂದ್ಯದಲ್ಲಿ ವಿರಾಟ್ ಔಟಾದ ಬಳಿಕ ಗಂಭೀರ್ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಸಹ ಆಟಗಾರರು ಹಾಗೂ ಅಂಪೈರ್&zwnj;ಗಳು ಮಧ್ಯಪ್ರವೇಶಿಸಿ ಇಬ್ಬರನ್ನೂ ದೂರ ಮಾಡಿದ್ದರು.&lt;/p&gt;&lt;p&gt;ಈ ಘಟನೆ ಐಪಿಎಲ್&zwnj;ನ ಅತ್ಯಂತ ಚರ್ಚಿತ ವಿವಾದಗಳಲ್ಲಿ ಒಂದಾಗಿ ದಾಖಲಾಗಿತ್ತು.&lt;/p&gt;&lt;p&gt;&lt;strong&gt;ಈಗ ಇಬ್ಬರೂ ಒಂದೇ ಗುರಿಗಾಗಿ!&lt;/strong&gt;&lt;/p&gt;&lt;p&gt;2013ರ ಬಳಿಕ 2023ರಲ್ಲೂ ಇಬ್ಬರ ನಡುವೆ ಮತ್ತೊಮ್ಮೆ ಮಾತಿನ ಚಕಮಕಿ ನಡೆದಿದ್ದರೂ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿರುವ ಹಿನ್ನೆಲೆಯಲ್ಲಿ, ಇಬ್ಬರೂ ರಾಷ್ಟ್ರೀಯ ತಂಡದ ಯಶಸ್ಸಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರ ಸ್ನೇಹಪರ ಕ್ಷಣಗಳು ಅಭಿಮಾನಿಗಳ ಮೆಚ್ಚುಗೆಯನ್ನೂ ಗಳಿಸಿವೆ.&lt;/p&gt;&lt;p&gt;&lt;strong&gt;ಮಾಜಿ ಅಂಪೈರ್ ಸಂದೇಶವೇನು?&lt;/strong&gt;&lt;/p&gt;&lt;p&gt;ಅನಿಲ್ ಚೌಧರಿ ಅಭಿಪ್ರಾಯದ ಪ್ರಕಾರ, ಕ್ರಿಕೆಟ್&zwnj;ನಲ್ಲಿ ಭಾವನೆಗಳು ಮತ್ತು ಆಕ್ರಮಣಶೀಲತೆ ಆಟದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಆ ಭಾವನೆಗಳು ಮಿತಿಯೊಳಗೆ ಉಳಿದರೆ ಮಾತ್ರ ಕ್ರೀಡಾಸ್ಫೂರ್ತಿ ಉಳಿಯುತ್ತದೆ. ಕೊಹ್ಲಿ ಮತ್ತು ಗಂಭೀರ್ ನಡುವಿನ ಹಳೆಯ ಘಟನೆ ಇಂದು ಕ್ರಿಕೆಟ್ ಅಭಿಮಾನಿಗಳಿಗೆ ಸ್ಪರ್ಧೆಯ ಉತ್ಸಾಹವನ್ನು ನೆನಪಿಸುವ ನೆನಪಾಗಿ ಉಳಿದಿದೆ.&lt;/p&gt;]]></content:encoded>
            <category>ipl</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/former-umpire-anil-chaudhary-breaks-silence-on-virat-kohli-gautam-gambhir-2013-ipl-clash/articleshow-gzupsum"/>
        </item>
        <item>
            <title><![CDATA[IPL 2026 ಫೈನಲ್‌ ಟೈಮ್‌ ಔಟ್ ವೇಳೆ ಡಿಕೆಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ವೈರಲ್ ಆಯ್ತು ಕಿಂಗ್‌ ಕೊಹ್ಲಿ ಆತ್ಮವಿಶ್ವಾಸದ ಮಾತು]]></title>
            <link>https://kannada.asianetnews.com/gallery/cricket-sports/dinesh-karthik-reveals-kohli-match-winning-words-during-ipl-final-kvn-h2gmf8a</link>
            <guid isPermaLink="true">https://kannada.asianetnews.com/gallery/cricket-sports/dinesh-karthik-reveals-kohli-match-winning-words-during-ipl-final-kvn-h2gmf8a</guid>
            <pubDate>Tue, 23 Jun 2026 13:24:12 +0530</pubDate>
            <description><![CDATA[&lt;p&gt;ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಐಪಿಎಲ್ ಫೈನಲ್ ವೇಳೆ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರಿಗೆ ಹೇಳಿದ ಮಾತೊಂದು ಇದೀಗ ವೈರಲ್ ಆಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsq3jnqg9xhcthp2w1f5k2a,imgname-dinesh-karthik-virat-kohli-1782200781495.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಐಪಿಎಲ್ ಫೈನಲ್ ವೇಳೆ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರಿಗೆ ಹೇಳಿದ ಮಾತೊಂದು ಇದೀಗ ವೈರಲ್ ಆಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್&zwnj;ಸಿಬಿ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಆರ್&zwnj;ಸಿಬಿ ಗೆಲುವಿನಲ್ಲಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. 19ನೇ ಸೀಸನ್ ಐಪಿಎಲ್&zwnj;ನಲ್ಲಿ ಕೊಹ್ಲಿ ಆರ್&zwnj;ಸಿಬಿ ಪರ 16 ಪಂದ್ಯಗಳನ್ನಾಡಿ 675 ರನ್ ಸಿಡಿಸಿದ್ದರು.&lt;/p&gt;&lt;img&gt;&lt;p&gt;ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್&zwnj;ನಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 8 ವಿಕೆಟ್ ನಷ್ಟಕ್ಕೆ 155 ರನ್&zwnj;ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಆರ್&zwnj;ಸಿಬಿ ತಂಡವು ಸ್ಪೋಟಕ ಆರಂಭ ಪಡೆಯಿತಾದರೂ, ಒಂದು ಹಂತದಲ್ಲಿ 29 ರನ್&zwnj;ಗಳ ಅಂತರದಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಆತಂಕ್ಕೆ ಒಳಗಾಗಿತ್ತು.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ಟೈಮ್ ಔಟ್ ತೆಗೆದುಕೊಂಡಾಗ ದಿನೇಶ್ ಕಾರ್ತಿಕ್ ಬಳಿ, ಉಳಿದ ಬ್ಯಾಟರ್&zwnj;ಗಳು ಅವರ ಪಾಡಿಗೆ ಅವರು ಬ್ಯಾಟ್ ಮಾಡಲು ಹೇಳಿ. ನಾನು ಕೊನೆಯವರೆಗೂ ನಾಟೌಟ್ ಆಗದೇ ಆಡುತ್ತೇನೆ. ಹೀಗಾಗಿ ಸಹ ಆಟಗಾರರು ತಮ್ಮ ಪಾಡಿಗೆ ತಾವು ನಿರ್ಭಯವಾಗಿ ಆಡಲು ಹೇಳಿ ಎಂದು ವಿರಾಟ್ ಕೊಹ್ಲಿ ಹೇಳಿದ್ದರು ಎಂದು ಆ ಘಟನೆಯನ್ನು ಡಿಕೆ ಮೆಲುಕು ಹಾಕಿದ್ದಾರೆ.&lt;/p&gt;&lt;img&gt;&lt;p&gt;2026ರ ಐಪಿಎಲ್ ಫೈನಲ್&zwnj;ನಲ್ಲಿ ವಿರಾಟ್ ಕೊಹ್ಲಿ ಕೇವಲ 42 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 75 ರನ್ ಸಿಡಿಸಿದರು. ಈ ಮೂಲಕ ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ ಆರ್&zwnj;ಸಿಬಿ ತಂಡವನ್ನು ಅನಾಯಾಸವಾಗಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದರು.&lt;/p&gt;&lt;img&gt;&lt;p&gt;ಇನ್ನು ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದ ವೇಳೆಯಲ್ಲಿಯೂ ಕೊಹ್ಲಿ ಹೀಗೆಯೇ ಹೇಳಿದ್ದರು ಎಂದು ಡಿಕೆ ಸ್ಮರಿಸಿಕೊಂಡಿದ್ದಾರೆ. ನಾವು ಟಾರ್ಗೆಟ್ ಬೆನ್ನತ್ತಿದ್ದೆವು, ಮೊದಲ ಟೈಮ್&zwnj; ಔಟ್ ವೇಳೆ ವಿರಾಟ್ ಕೊಹ್ಲಿ ನನ್ನ ಬಳಿ, 'ಡೋಂಟ್ ವರಿ ಡಿಕೆ, ನಾನು ನನ್ನ ಕೆಲಸವನ್ನು ಮಾಡುತ್ತೇನೆ' ಎಂದು ಹೇಳಿದ್ದರು ಎಂದು ಸಂದರ್ಶನವೊಂದರಲ್ಲಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್&zwnj;ನಲ್ಲಿ ಕೊಹ್ಲಿ ಈ ರೀತಿಯ ಆತ್ಮವಿಶ್ವಾಸವನ್ನು ನಮ್ಮಲ್ಲಿ ತುಂಬುತ್ತಿದ್ದರು. ಅವರ ಮೈಂಡ್&zwnj;ಸೆಟ್ ಹಾಗಿತ್ತು. ಇದಷ್ಟೇ ಅಲ್ಲದೇ ಅವರು ಏನು ಪ್ರಾಮೀಸ್ ಮಾಡುತ್ತಿದ್ದರೋ, ಅದನ್ನು ತಪ್ಪದೇ ಸಾಕಾರ ಮಾಡುತ್ತಿದ್ದರು. ಹೀಗಾಗಿಯೇ ಅವರನ್ನು GOAT ಅನ್ನೋದು ಎಂದು ಡಿಕೆ ಹೇಳಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿ ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ಆರ್&zwnj;ಸಿಬಿ ಪರ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದರು. ಕಳೆದೆರಡು ಸೀಸನ್&zwnj;ನಲ್ಲಿ ಆರ್&zwnj;ಸಿಬಿ ಚಾಂಪಿಯನ್ ಆಗಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/dinesh-karthik-reveals-kohli-match-winning-words-during-ipl-final-kvn-h2gmf8a"/>
        </item>
        <item>
            <title><![CDATA[IPL 2027 ಟೂರ್ನಿಗೂ ಮುನ್ನ ಅಧಿಕೃತವಾಗಿ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ ರಿಷಭ್ ಪಂತ್; LSG ಪಾಲಾದ ಡೆಲ್ಲಿ ಗೇಮ್‌ ಚೇಂಜರ್!]]></title>
            <link>https://kannada.asianetnews.com/gallery/cricket-sports/rishabh-pant-returns-to-delhi-capitals-kuldeep-yadav-joins-lsg-in-ipl-trade-kvn-kqsl63c</link>
            <guid isPermaLink="true">https://kannada.asianetnews.com/gallery/cricket-sports/rishabh-pant-returns-to-delhi-capitals-kuldeep-yadav-joins-lsg-in-ipl-trade-kvn-kqsl63c</guid>
            <pubDate>Tue, 23 Jun 2026 14:33:10 +0530</pubDate>
            <description><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಕೆಲವೇ ತಿಂಗಳು ಕಳೆದಿವೆ. ಹೀಗಿರುವಾಗಲೇ 20ನೇ ಸೀಸನ್&zwnj; ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ಆರಂಭಿಸಿವೆ. ಇದೀಗ ಲಖನೌ ತಂಡದಿಂದ ರಿಷಭ್ ಪಂತ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಅಧಿಕೃತವಾಗಿ ಜಾರಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvg6jnpcys36bfbp97d3k3te,imgname-20240403372l-1781881460428.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಕೆಲವೇ ತಿಂಗಳು ಕಳೆದಿವೆ. ಹೀಗಿರುವಾಗಲೇ 20ನೇ ಸೀಸನ್&zwnj; ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ಆರಂಭಿಸಿವೆ. ಇದೀಗ ಲಖನೌ ತಂಡದಿಂದ ರಿಷಭ್ ಪಂತ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಅಧಿಕೃತವಾಗಿ ಜಾರಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಳೆದ ಕೆಲವು ಸೀಸನ್&zwnj;ನಲ್ಲಿ ಐಪಿಎಲ್&zwnj;ನ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ಇದೀಗ ಮತ್ತೆ ತನ್ನ ತವರಾದ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ್ದಾರೆ. ಈ ವಿಚಾರವನ್ನು ಐಪಿಎಲ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿಯೇ ಖಚಿತಪಡಿಸಿದೆ. ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಮೂಲಕವೇ ತನ್ನ ಐಪಿಎಲ್ ಪಯಣವನ್ನು ಆರಂಭಿಸಿದ್ದರು.&lt;/p&gt;&lt;img&gt;&lt;p&gt;ಕಳೆದ ಸೀಸನ್&zwnj;ನಲ್ಲಿ ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಇದರ ಬೆನ್ನಲ್ಲೇ ರಿಷಭ್ ಪಂತ್, ಲಖನೌ ತಂಡವನ್ನು ತೊರೆಯಲಿದ್ದಾರೆ ಎನ್ನುವ ಚರ್ಚೆ ಜೋರಾಗಿತ್ತು.&lt;/p&gt;&lt;img&gt;&lt;p&gt;2025ರ ಐಪಿಎಲ್ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಬರೋಬ್ಬರಿ 27 ಕೋಟಿ ರುಪಾಯಿ ನೀಡಿ ರಿಷಭ್ ಪಂತ್ ಅವರನ್ನು ಖರೀದಿಸಿತ್ತು. ಈ ಮೂಲಕ ಐಪಿಎಲ್ ಹರಾಜಿನ ಇತಿಹಾಸದಲ್ಲೇ ಅತಿದೊಡ್ಡ ಮೊತ್ತಕ್ಕೆ ಹರಾಜಾದ ಭಾರತೀಯ ಆಟಗಾರ ಎನ್ನುವ ದಾಖಲೆ ಬರೆದಿದ್ದರು. ಇದೀಗ ರಿಷಭ್ ಪಂತ್ 15 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್&zwnj;ಗೆ ಮಾರಾಟವಾಗಿದ್ದಾರೆ. ಅಲ್ಲಿಗೆ ಕಳೆದ ಸೀಸನ್&zwnj;ಗೆ ಹೋಲಿಸಿದರೆ 12 ಕೋಟಿ ರುಪಾಯಿ ಸಂಬಳ ಕಡಿತದೊಂದಿಗೆ ಮುಂಬರುವ ಸೀಸನ್ ಐಪಿಎಲ್&zwnj;ನಲ್ಲಿ ಡೆಲ್ಲಿ ಪರ ಪಂತ್ ಆಡಲಿದ್ದಾರೆ.&lt;/p&gt;&lt;img&gt;&lt;p&gt;ರಿಷಭ್ ಪಂತ್ 2016ರಿಂದ 2024ರವರೆಗೆ 111 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಈ ಮೂಲಕ ಡೆಲ್ಲಿ ಪರ ಅತಿಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದರು. ಇನ್ನು ಇದಷ್ಟೇ ಅಲ್ಲದೇ 2021ರಿಂದ 2024ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 43 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಇದೀಗ ಮತ್ತೆ ಪಂತ್ ತಮ್ಮ ನೆಚ್ಚಿನ ತಂಡಕ್ಕೆ ವಾಪಾಸ್ಸಾಗಿದ್ದಾರೆ.&lt;/p&gt;&lt;img&gt;&lt;p&gt;ಇನ್ನೊಂದಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೇಮ್&zwnj; ಚೇಂಜರ್ ಆಗಿ ಗುರುತಿಸಿಕೊಂಡಿದ್ದ ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್ ಅವರನ್ನು 13.5 ಕೋಟಿ ರುಪಾಯಿಗೆ ಲಖನೌ ಸೂಪರ್ ಜೈಂಟ್ಸ್&zwnj;ಗೆ ಮಾರಾಟ ಮಾಡಲಾಗಿದೆ. ಹೀಗಾಗಿ ಕುಲ್ದೀಪ್ ಯಾದವ್ 2027ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಐದು ಸೀಸನ್&zwnj;ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್&zwnj;ನ ಯಶಸ್ವಿ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಗುರುತಿಸಿಕೊಂಡಿದ್ದರು. 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡಿಕೊಂಡ ಕುಲ್ದೀಪ್ ಯಾದವ್, 65 ಪಂದ್ಯಗಳನ್ನಾಡಿ 72 ವಿಕೆಟ್ ಕಬಳಿಸಿದ್ದರು. ಸೀಮಿತ ಓವರ್&zwnj;ಗಳ ಕ್ರಿಕೆಟ್&zwnj;ನಲ್ಲಿ ಅಪಾರ ಅನುಭವ ಹೊಂದಿರುವ ಕುಲ್ದೀಪ್ ಯಾದವ್, 13.50 ಕೋಟಿ ರುಪಾಯಿಗೆ ಮುಂಬರುವ ಸೀಸನ್&zwnj;ನಲ್ಲಿ ಲಖನೌ ತಂಡವನ್ನು ಪ್ರತಿನಿಧಿಸಲಿದ್ದಾರೆ.&lt;/p&gt;&lt;p&gt; Announcement Rishabh Pant and Kuldeep Yadav complete high-profile trade between @DelhiCapitals and @LucknowIPL.&amp;nbsp;Rishabh Pant all set to rejoin #DC at INR 15 Crore whereas Kuldeep Yadav will join #LSG at INR 13.5 Crore.&amp;nbsp;More Details ▶️ https://t.co/64HeOX143I&hellip; pic.twitter.com/tIEvj7fgNo&lt;/p&gt;&lt;p&gt;&mdash; IndianPremierLeague (@IPL) June 23, 2026&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/rishabh-pant-returns-to-delhi-capitals-kuldeep-yadav-joins-lsg-in-ipl-trade-kvn-kqsl63c"/>
        </item>
        <item>
            <title><![CDATA[ಮುಂಬೈ ಇಂಡಿಯನ್ಸ್ ಬಿಡ್ತಾರಾ ಹಾರ್ದಿಕ್ ಪಾಂಡ್ಯ? ಕ್ಯಾಪ್ಟನ್ಸಿ ಆಫರ್ ಕೊಟ್ಟ KKR, ಐಪಿಎಲ್‌ನಲ್ಲಿ ದೊಡ್ಡ ಟ್ವಿಸ್ಟ್!]]></title>
            <link>https://kannada.asianetnews.com/cricket-sports/kkr-eyes-hardik-pandya-in-blockbuster-ipl-trade-captaincy-offer-reportedly-on-table-kvn/articleshow-nrb40ux</link>
            <guid isPermaLink="true">https://kannada.asianetnews.com/cricket-sports/kkr-eyes-hardik-pandya-in-blockbuster-ipl-trade-captaincy-offer-reportedly-on-table-kvn/articleshow-nrb40ux</guid>
            <pubDate>Thu, 25 Jun 2026 07:32:14 +0530</pubDate>
            <description><![CDATA[ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೋಲ್ಕತಾ ನೈಟ್ ರೈಡರ್ಸ್ ಭರ್ಜರಿ ಪ್ರಯತ್ನ ನಡೆಸುತ್ತಿದೆ. ನಾಯಕತ್ವದ ಭರವಸೆಯೊಂದಿಗೆ KKR, ಮುಂಬೈ ಇಂಡಿಯನ್ಸ್ ಜೊತೆ ಮಾತುಕತೆ ನಡೆಸುತ್ತಿದ್ದು, ಈ ಮಹಾ ಟ್ರೇಡಿಂಗ್ ಕುರಿತು ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq1z8yx7z7ntteghnhpv1nbm,imgname-harthik-rohit--1777109072807.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಐಪಿಎಲ್ 2027ರ ಸೀಸನ್&zwnj;ಗೂ ಮುನ್ನ ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೊಳಿಸುವಂತಹ ಮತ್ತೊಂದು ದೊಡ್ಡ ಟ್ರೇಡಿಂಗ್&zwnj;ಗೆ ವೇದಿಕೆ ಸಿದ್ಧವಾಗ್ತಿದೆ ಅನ್ನೋ ಸುದ್ದಿ ಹರಿದಾಡ್ತಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕೋಲ್ಕತಾ ನೈಟ್ ರೈಡರ್ಸ್ (KKR) ಭರ್ಜರಿ ಪ್ರಯತ್ನ ಶುರುಮಾಡಿದೆ. ಒಂದು ವೇಳೆ ಹಾರ್ದಿಕ್ ತಂಡಕ್ಕೆ ಬಂದರೆ, ಅವರಿಗೆ ನಾಯಕನ ಪಟ್ಟ ನೀಡುವುದಾಗಿ KKR ಭರವಸೆ ನೀಡಿದೆ. ಈ ವಿಚಾರವಾಗಿ ಕೋಲ್ಕತಾ ಮ್ಯಾನೇಜ್&zwnj;ಮೆಂಟ್, ಮುಂಬೈ ಇಂಡಿಯನ್ಸ್ ಜೊತೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದೆ ಅಂತ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.&lt;/p&gt;&lt;p&gt;ಕಳೆದ ಐಪಿಎಲ್ ಸೀಸನ್&zwnj;ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು. ಹಾರ್ದಿಕ್ ನಾಯಕನಾಗಿ ವಾಪಸ್ ಬಂದ ನಂತರ ಆಡಿದ ಎರಡು ಸೀಸನ್&zwnj;ಗಳಲ್ಲಿ, 2025ರಲ್ಲಿ ಮಾತ್ರ ಮುಂಬೈ ಪ್ಲೇಆಫ್&zwnj;ಗೆ (ಮೂರನೇ ಸ್ಥಾನ) ತಲುಪಿತ್ತು. ಕಳೆದ ಸೀಸನ್&zwnj;ನ ಕಳಪೆ ಪ್ರದರ್ಶನದ ನಂತರ, ಹಾರ್ದಿಕ್ ಮುಂಬೈ ತಂಡವನ್ನು ತೊರೆಯಬಹುದು ಎಂಬ ಸೂಚನೆಗಳು ಅವರ ಸೋಶಿಯಲ್ ಮೀಡಿಯಾ ಪೋಸ್ಟ್&zwnj;ಗಳಿಂದ ಸಿಕ್ಕಿತ್ತು.&lt;/p&gt;&lt;h2&gt;&lt;strong&gt;ಕಳೆದ ವರ್ಷವೇ ಮುಂಬೈ ಫ್ರಾಂಚೈಸಿ ಸಂಪರ್ಕಿಸಿದ್ದ ಕೆಕೆಆರ್&lt;/strong&gt;&lt;/h2&gt;&lt;p&gt;ಕಳೆದ ಐಪಿಎಲ್ ಸೀಸನ್&zwnj;ನಲ್ಲಿ ಕೋಲ್ಕತಾ ತಂಡ, ಅಜಿಂಕ್ಯ ರಹಾನೆಗೆ ತಾತ್ಕಾಲಿಕವಾಗಿ ನಾಯಕತ್ವ ನೀಡಿತ್ತು. ಆದರೆ, ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿ ಎರಡರಲ್ಲೂ ರಹಾನೆ ಸಂಪೂರ್ಣ ವಿಫಲರಾದರು. ಭವಿಷ್ಯದ ನಾಯಕನನ್ನಾಗಿ ಯುವ ಆಟಗಾರ ರಿಂಕು ಸಿಂಗ್&zwnj;ರನ್ನು KKR ಉಪನಾಯಕನನ್ನಾಗಿ ಮಾಡಿ ಬೆಳೆಸುತ್ತಿದೆ. ಆದರೂ, ತಕ್ಷಣವೇ ತಂಡವನ್ನು ಚಾಂಪಿಯನ್ ಮಾಡುವ ಗುರಿಯೊಂದಿಗೆ ಹಾರ್ದಿಕ್&zwnj;ರಂತಹ ಅನುಭವಿ ನಾಯಕ ಬೇಕು ಎಂಬುದು ಕೋಲ್ಕತಾ ಮ್ಯಾನೇಜ್&zwnj;ಮೆಂಟ್&zwnj;ನ ನಿಲುವು. ಕಳೆದ ಸೀಸನ್ ಕೊನೆಯಲ್ಲೇ KKR, ಮುಂಬೈ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಆದರೆ, ಆಗ ರಿಲಯನ್ಸ್&zwnj;ನ ವಾರ್ಷಿಕ ಮಹಾಸಭೆ ಇದ್ದಿದ್ದರಿಂದ ಟ್ರೇಡಿಂಗ್ ಮಾತುಕತೆಗೆ ಹೆಚ್ಚು ಆದ್ಯತೆ ಸಿಕ್ಕಿರಲಿಲ್ಲ. ಇದೀಗ ಕೋಲ್ಕತಾ ಮತ್ತೆ ಮುಂಬೈ ಜೊತೆ ಮಾತುಕತೆಗಳನ್ನು ಚುರುಕುಗೊಳಿಸಿದೆ ಎಂದು ಐಪಿಎಲ್&zwnj;ನ ಆಪ್ತ ಮೂಲಗಳು ಪಿಟಿಐಗೆ ತಿಳಿಸಿವೆ.&lt;/p&gt;&lt;h3&gt;&lt;strong&gt;ಮುಂಬೈ ಅಂಗಳದಲ್ಲಿದೆ ಚೆಂಡು&lt;/strong&gt;&lt;/h3&gt;&lt;p&gt;ಹಾರ್ದಿಕ್&zwnj;ಗಾಗಿ ದೊಡ್ಡ ಮೊತ್ತವನ್ನು ನೇರವಾಗಿ ನೀಡಿ ಟ್ರೇಡ್ ಮಾಡಿಕೊಳ್ಳಲು ಕೋಲ್ಕತಾ ಆಸಕ್ತಿ ಹೊಂದಿದೆ. ಆದರೆ, ಮುಂಬೈ ತಂಡಕ್ಕೆ ಹಣ ಬೇಕೋ ಅಥವಾ ಆಟಗಾರರ ಬದಲಾವಣೆ ಬೇಕೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಸ್ಟ್ರೇಲಿಯಾದ ಆಲ್&zwnj;ರೌಂಡರ್ ಕ್ಯಾಮರೂನ್ ಗ್ರೀನ್&zwnj;ರನ್ನು ಮುಂಬೈಗೆ ನೀಡಿ, ಬದಲಿಗೆ ಹಾರ್ದಿಕ್&zwnj;ರನ್ನು KKRಗೆ ಕೊಡುವ ಒಂದು ಸ್ವಾಪ್ ಡೀಲ್ ಸಾಧ್ಯತೆಯನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಈ ಹಿಂದೆ ಅಂದಾಜಿಸಿದ್ದರು. ಇದೇ ವೇಳೆ, ಹಾರ್ದಿಕ್&zwnj;ಗಾಗಿ ರಾಜಸ್ಥಾನ್ ರಾಯಲ್ಸ್ ಕೂಡ ಮುಂಬೈ ಇಂಡಿಯನ್ಸ್ ಅನ್ನು ಸಂಪರ್ಕಿಸಿತ್ತು. ಸೂಪರ್ ಸ್ಟಾರ್ ಯಶಸ್ವಿ ಜೈಸ್ವಾಲ್&zwnj;ರನ್ನು ಮುಂಬೈಗೆ ನೀಡಿ, ಹಾರ್ದಿಕ್&zwnj;ರನ್ನು ಪಡೆಯುವುದು ರಾಜಸ್ಥಾನ ರಾಯಲ್ಸ್&zwnj; ಯೋಜನೆಯಾಗಿತ್ತು.&lt;/p&gt;&lt;p&gt;ಆದರೆ, ಈ ಮಾತುಕತೆಗಳು ಮೊದಲ ಹಂತದಲ್ಲೇ ಮುರಿದುಬಿದ್ದವು. ಅಷ್ಟೇ ಅಲ್ಲ, ರಾಜಸ್ಥಾನ ರಾಯಲ್ಸ್ ತಮ್ಮ ದೀರ್ಘಕಾಲದ ನಾಯಕನನ್ನಾಗಿ ಅಸ್ಸಾಂ ಆಟಗಾರ ರಿಯಾನ್ ಪರಾಗ್&zwnj;ರನ್ನು ಈಗಾಗಲೇ ಆಯ್ಕೆ ಮಾಡಿದೆ. ಹೀಗಾಗಿ, ಹಾರ್ದಿಕ್&zwnj;ಗೆ ಅಲ್ಲಿ ಕ್ಯಾಪ್ಟನ್ಸಿ ಸಿಗುವ ಸಾಧ್ಯತೆ ಕಡಿಮೆ. ನಾಯಕನಾಗಲು ಬಯಸುವ ಹಾರ್ದಿಕ್&zwnj;ಗೆ ರಾಜಸ್ಥಾನ್&zwnj;ಗಿಂತ ಕೋಲ್ಕತ್ತಾ ನೈಟ್ ರೈಡರ್ಸ್ ಆಫರ್ ಹೆಚ್ಚು ಆಕರ್ಷಕವಾಗಿದೆ. ಐಪಿಎಲ್ ನಿಯಮಗಳ ಪ್ರಕಾರ, ಆಟಗಾರರು ನೇರವಾಗಿ ಫ್ರಾಂಚೈಸಿಗಳೊಂದಿಗೆ ಟ್ರೇಡಿಂಗ್ ಮಾತುಕತೆ ನಡೆಸುವಂತಿಲ್ಲ. ತಂಡಗಳ ನಡುವೆ ಒಪ್ಪಂದವಾದ ನಂತರ, ಆಟಗಾರನ ಒಪ್ಪಿಗೆಯೊಂದಿಗೆ ಮಾತ್ರ ಟ್ರೇಡ್ ಪೂರ್ಣಗೊಳ್ಳುತ್ತದೆ. ಒಂದು ವೇಳೆ ಆಟಗಾರ ನಿರಾಕರಿಸಿದರೆ, ಅವರನ್ನು ಹರಾಜಿಗೆ ಬಿಡಬೇಕಾಗುತ್ತದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/kkr-eyes-hardik-pandya-in-blockbuster-ipl-trade-captaincy-offer-reportedly-on-table-kvn/articleshow-nrb40ux"/>
        </item>
        <item>
            <title><![CDATA[ಆರ್‌ಸಿಬಿ ಹ್ಯಾಟ್ರಿಕ್ ಐಪಿಎಲ್ ಕಪ್ ಗೆಲ್ಲಲು ಮಾಸ್ಟರ್ ಪ್ಲಾನ್‌; ಇಂಗ್ಲೆಂಡ್ ಮೂಲದ ಗೇಮ್‌ ಚೇಂಜರ್‌ ಆಟಗಾರನಿಗೆ ಗಾಳ ಹಾಕಿದ ಬೆಂಗಳೂರು ಕೋಚ್]]></title>
            <link>https://kannada.asianetnews.com/gallery/cricket-sports/rcb-target-england-star-sam-curran-ahead-of-ipl-2027-big-transfer-buzz-emerges-kvn-pw7w2wy</link>
            <guid isPermaLink="true">https://kannada.asianetnews.com/gallery/cricket-sports/rcb-target-england-star-sam-curran-ahead-of-ipl-2027-big-transfer-buzz-emerges-kvn-pw7w2wy</guid>
            <pubDate>Tue, 21 Jul 2026 20:26:57 +0530</pubDate>
            <description><![CDATA[&lt;p&gt;ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಈಗಿನಿಂದಲೇ ಸಿದ್ದತೆ ಆರಂಭಿಸಿವೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇಂಗ್ಲೆಂಡ್ ಮೂಲದ ಗೇಮ್ ಚೇಂಜರ್ ಆಟಗಾರನಿಗೆ ಗಾಳ ಹಾಕಿದೆ. ಈ ಕುರಿತಾದ ಅಪ್&zwnj;ಡೇಟ್ಸ್&zwnj; ಇಲ್ಲಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt6cnr57y55aszwaj95wj4m6,imgname-shankar-basu-rcb--3--1780478566567.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಈಗಿನಿಂದಲೇ ಸಿದ್ದತೆ ಆರಂಭಿಸಿವೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇಂಗ್ಲೆಂಡ್ ಮೂಲದ ಗೇಮ್ ಚೇಂಜರ್ ಆಟಗಾರನಿಗೆ ಗಾಳ ಹಾಕಿದೆ. ಈ ಕುರಿತಾದ ಅಪ್&zwnj;ಡೇಟ್ಸ್&zwnj; ಇಲ್ಲಿದೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದ್ದು, ಇದೀಗ ಹ್ಯಾಟ್ರಿಕ್ ಐಪಿಎಲ್ ಟ್ರೋಫಿ ಮೇಲೆ ಆರ್&zwnj;ಸಿಬಿ ತಂಡವು ಕಣ್ಣಿಟ್ಟಿದೆ. ಇದುವರೆಗೂ ಯಾವೊಂದು ತಂಡವು ಐಪಿಎಲ್&zwnj;ನಲ್ಲಿ ಹ್ಯಾಟ್ರಿಕ್ ಐಪಿಎಲ್ ಟ್ರೋಫಿ ಜಯಿಸಿಲ್ಲ. ಹೀಗಾಗಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲು ಬೆಂಗಳೂರು ತಂಡವು ಎದುರು ನೋಡುತ್ತಿದೆ.&lt;/p&gt;&lt;img&gt;&lt;p&gt;ಹೀಗಿರುವಾಗಲೇ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಆರ್&zwnj;ಸಿಬಿ ಫ್ರಾಂಚೈಸಿಯು ತನ್ನ ತಂಡವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಈಗಿನಿಂದಲೇ ರಣತಂತ್ರ ಹೆಣೆಯಲಾರಂಭಿಸಿದೆ. ಇದರ ಭಾಗವಾಗಿ ಆರ್&zwnj;ಸಿಬಿ ತಂಡದ ಡೆರೆಕ್ಟರ್ ಆಫ್&zwnj; ಕ್ರಿಕೆಟ್&zwnj; ಆಗಿ ಮೋ ಬೊಬಟ್(ಮೊಹಮ್ಮದ್ ಬೊಬಟ್) ಇದೀಗ ಇಂಗ್ಲೆಂಡ್&zwnj; ತಂಡದ ಸ್ಟಾರ್ ಆಲ್ರೌಂಡರ್&zwnj;ಗೆ ಗಾಳ ಹಾಕಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಹೌದು, ಇತ್ತೀಚೆಗಷ್ಟೇ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೀಮಿತ ಓವರ್&zwnj;ಗಳ ಸರಣಿಯಲ್ಲಿ ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ ಸ್ಯಾಮ್ ಕರ್ರನ್ ಅವರನ್ನು ಆರ್&zwnj;ಸಿಬಿಗೆ ಕರೆ ತರಲು ಮೊ ಬೊಬಟ್ ಮಾಸ್ಟರ್ ಪ್ಲಾನ್ ಹೆಣೆದಿದ್ದಾರೆ ಎಂದು ವರದಿಯಾಗಿದೆ. ಇದಷ್ಟೇ ಅಲ್ಲದೇ ಈ ವಿಚಾರವಾಗಿ ಸ್ಯಾಮ್ ಕರ್ರನ್ ಅವರ ಜತೆ ಬೊಬಟ್ ಈಗಾಗಲೇ ಲಂಡನ್&zwnj;ನಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕಳೆದ ಸೀಸನ್&zwnj; ಐಪಿಎಲ್ ಟೂರ್ನಿಯಲ್ಲಿ ಕೆರಿಬಿಯನ್ ಮೂಲದ ರೊಮ್ಯಾರಿಯೋ ಶೆಫರ್ಡ್&zwnj; ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಹೀಗಾಗಿ ಶೆಫರ್ಡ್&zwnj; ಬದಲಿಗೆ ಸ್ಯಾಮ್ ಕರ್ರನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್&zwnj;ಸಿಬಿ ಫ್ರಾಂಚೈಸಿ ಉತ್ಸುಕವಾಗಿದೆ ಎಂದು ವರದಿಯಾಗಿದೆ. ಸ್ಯಾಮ್ ಕರ್ರನ್ ಬೌಲಿಂಗ್ ಮಾತ್ರವಲ್ಲದೇ ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್&zwnj;ನಲ್ಲೂ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯವನ್ನು ಇಂಗ್ಲೆಂಡ್ ಆಲ್ರೌಂಡರ್ ಹೊಂದಿದ್ದಾರೆ.&lt;/p&gt;&lt;img&gt;&lt;p&gt;ಭಾರತ ಎದುರಿನ ಸೀಮಿತ ಓವರ್&zwnj;ಗಳ ಸರಣಿಯಲ್ಲಿ(ಏಕದಿನ ಹಾಗೂ ಟಿ20) ಇಂಗ್ಲೆಂಡ್ ಪರ ಒಟ್ಟು ಐದು ಪಂದ್ಯಗಳನ್ನಾಡಿದ ಸ್ಯಾಮ್ ಕರ್ರನ್ ಏಳು ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಲಾರ್ಡ್ಸ್&zwnj;ನಲ್ಲಿ ನಡೆದ ನಿರ್ಣಾಯಕ ಏಕದಿನ ಪಂದ್ಯವೊಂದರಲ್ಲೇ ಕರ್ರನ್ ಪ್ರಮುಖ 4 ವಿಕೆಟ್ ಕಬಳಿಸಿ ಇಂಗ್ಲೆಂಡ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನೂ ಬ್ಯಾಟಿಂಗ್&zwnj;ನಲ್ಲೂ ಕರ್ರನ್ ಭಾರತ ಎದುರಿನ ಸರಣಿಯಲ್ಲಿ 48 ರನ್ ಬಾರಿಸಿ ಮಿಂಚಿದ್ದರು.&lt;/p&gt;&lt;img&gt;&lt;p&gt;ಈಗಾಗಲೇ ಆರ್&zwnj;ಸಿಬಿ ತಂಡದಲ್ಲಿ ಫಿಲ್ ಸಾಲ್ಟ್, ಜೇಕಬ್ ಬೆಥೆಲ್ ಅವರಂತಹ ಇಂಗ್ಲೆಂಡ್ ಮೂಲದ ಸ್ಟಾರ್ ಆಟಗಾರರಿದ್ದು, ಇದೀಗ ಸ್ಯಾಮ್ ಕರ್ರನ್ ಕೂಡಾ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್&zwnj;ಸಿಬಿ ತಂಡ ಕೂಡಿಕೊಂಡರೇ, ಬೆಂಗಳೂರು ತಂಡಕ್ಕೆ ಆನೆ ಬಲ ಬರಲಿದೆ. ಸ್ಯಾಮ್ ಕರ್ರನ್ ಮುಂಬರುವ ದಿನಗಳಲ್ಲಿ ಆರ್&zwnj;ಸಿಬಿ ಪಾಲಾಗ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/rcb-target-england-star-sam-curran-ahead-of-ipl-2027-big-transfer-buzz-emerges-kvn-pw7w2wy"/>
        </item>
        <item>
            <title><![CDATA[ಮಂಗಳೂರಿನ ನಟಿ ಶಿಲ್ಪಾ ಶೆಟ್ಟಿ ಪತಿಗೆ ಗಜಕೇಸರಿ ಯೋಗ ಕೊಟ್ಟ IPL Team : ₹82 ಕೋಟಿ ರೂ ಈಗ ₹16 ಸಾವಿರ ಕೋಟಿ ಆಯ್ತು]]></title>
            <link>https://kannada.asianetnews.com/gallery/cricket-sports/did-shilpa-shetty-bring-gajakesari-yoga-luck-to-raj-kundra-rajasthan-royals-soar-from-82-crore-to-16000-crore-suh-s01wbw1</link>
            <guid isPermaLink="true">https://kannada.asianetnews.com/gallery/cricket-sports/did-shilpa-shetty-bring-gajakesari-yoga-luck-to-raj-kundra-rajasthan-royals-soar-from-82-crore-to-16000-crore-suh-s01wbw1</guid>
            <pubDate>Thu, 23 Jul 2026 11:25:13 +0530</pubDate>
            <description><![CDATA[&lt;p&gt;ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪತ್ನಿ ಶಿಲ್ಪಾ ಶೆಟ್ಟಿಗೆ ಪ್ರೇಮಿಗಳ ದಿನದಂದು ಉಡುಗೊರೆಯಾಗಿ ಐಪಿಎಲ್ ತಂಡದಲ್ಲಿ ಪಾಲು ಖರೀದಿಸಿದ್ದಾಗಿ ರಾಜ್ ಕುಂದ್ರಾ ಬಹಿರಂಗಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky6r4jjre81fyn0037at17t8,imgname-did-shilpa-shetty-bring-gajakesari-yoga-luck-to-raj-kundra-rajasthan-royals-soar-from-82-crore-to-16-000-crore-1784785554008.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪತ್ನಿ ಶಿಲ್ಪಾ ಶೆಟ್ಟಿಗೆ ಪ್ರೇಮಿಗಳ ದಿನದಂದು ಉಡುಗೊರೆಯಾಗಿ ಐಪಿಎಲ್ ತಂಡದಲ್ಲಿ ಪಾಲು ಖರೀದಿಸಿದ್ದಾಗಿ ರಾಜ್ ಕುಂದ್ರಾ ಬಹಿರಂಗಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಹೇಳಿಕೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ನಿ ಶಿಲ್ಪಾ ಶೆಟ್ಟಿಗೆ ಪ್ರೇಮಿಗಳ ದಿನದಂದು ಉಡುಗೊರೆಯಾಗಿ ಐಪಿಎಲ್ ತಂಡದಲ್ಲಿ ಪಾಲು ಖರೀದಿಸಿದ್ದಾಗಿ ರಾಜ್ ಕುಂದ್ರಾ ಬಹಿರಂಗಪಡಿಸಿದ್ದಾರೆ. ಇದಕ್ಕಾಗಿ ಅವರು ಬರೋಬ್ಬರಿ ₹81.9 ಕೋಟಿ ಖರ್ಚು ಮಾಡಿದ್ದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ 2009ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ದೊಡ್ಡ ಪ್ರಮಾಣದ ಪಾಲನ್ನು ಖರೀದಿಸಿದ್ದರು. ತಂಡದಲ್ಲಿ ತಮ್ಮ ಪಾಲು ಸುಮಾರು 11.7% ಆಗಿತ್ತು ಎಂದು ರಾಜ್ ಹೇಳಿದ್ದಾರೆ. ಆ ಸಮಯದಲ್ಲಿ ತಂಡದ ಮೌಲ್ಯ ಸುಮಾರು ₹700 ಕೋಟಿ ಇದ್ದರೆ, ಈಗ ಅದರ ಮೌಲ್ಯ ₹16,000 ಕೋಟಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಶಿಲ್ಪಾಗೆ ಪ್ರೇಮಿಗಳ ದಿನದ ಉಡುಗೊರೆ!&lt;/strong&gt;&lt;/p&gt;&lt;p&gt;&lsquo;SMTV&rsquo; ಯೂಟ್ಯೂಬ್ ಚಾನೆಲ್&zwnj;ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜ್ ಕುಂದ್ರಾ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಹೂಡಿಕೆ ಮಾಡಿದ್ದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. &ldquo;ನಾನು ಅದನ್ನು ಪ್ರೇಮಿಗಳ ದಿನದ ಉಡುಗೊರೆಯಾಗಿ ಖರೀದಿಸಿದೆ&rdquo; ಎಂದು ರಾಜ್ ಹೇಳಿದ್ದಾರೆ.&lt;/p&gt;&lt;p&gt;ಆ ಸಮಯದಲ್ಲಿ ಭಾರತದಲ್ಲಿ ತಮ್ಮದೇ ಆದ ಯಾವುದೇ ವ್ಯವಹಾರ ಇರಲಿಲ್ಲ. ಭಾರತದಲ್ಲಿ ಉದ್ಯಮ ಆರಂಭಿಸುವ ಉದ್ದೇಶದಿಂದ ಐಪಿಎಲ್ ತಂಡದಲ್ಲಿ ಹೂಡಿಕೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಶಿಲ್ಪಾ ಶೆಟ್ಟಿಯವರ ಬ್ರ್ಯಾಂಡ್ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಈ ಹೂಡಿಕೆ ಮಾಡಿದ್ದಾಗಿ ರಾಜ್ ಹೇಳಿದ್ದಾರೆ. ತಂಡದಲ್ಲಿ ತಮ್ಮ ಪಾಲು ಪಡೆಯಲು ₹81.9 ಕೋಟಿ ಹೂಡಿಕೆ ಮಾಡಿದ್ದು, ಆ ಸಮಯದಲ್ಲಿ ಐಪಿಎಲ್&zwnj;ನಲ್ಲಿ ವ್ಯಕ್ತಿಯೊಬ್ಬರು ಮಾಡಿದ ಅತಿದೊಡ್ಡ ಏಕೈಕ ಚೆಕ್ ಪಾವತಿಗಳಲ್ಲಿ ಇದೂ ಒಂದಾಗಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ರಾಜಸ್ಥಾನ್ ರಾಯಲ್ಸ್ ತಂಡವನ್ನು ಖರೀದಿಸಿದಾಗ ಅದರ ಮೌಲ್ಯ ಸುಮಾರು ₹700 ಕೋಟಿ ಇತ್ತು. ಆದರೆ ಇದೀಗ ತಂಡದ ಮೌಲ್ಯ ಸುಮಾರು ₹16,000 ಕೋಟಿಗೆ ಏರಿಕೆಯಾಗಿದೆ ಎಂದು ರಾಜ್ ಕುಂದ್ರಾ ಹೇಳಿದ್ದಾರೆ. ತಾವು ಐಪಿಎಲ್ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎಂದು ಮೊದಲೇ ನಂಬಿದ್ದೆ. &ldquo;ಇದು ಒಂದು ದೊಡ್ಡ ಘಟನೆಯಾಗಲಿದೆ ಎಂದು ನಂಬಿದ ಮೊದಲ ವ್ಯಕ್ತಿ ನಾನು&rdquo; ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಪ್ರತಿ ಐಪಿಎಲ್ ತಂಡವೂ ₹200-500 ಕೋಟಿ ಲಾಭ ಗಳಿಸುತ್ತಿದೆ&rsquo;&lt;/strong&gt;&lt;/p&gt;&lt;p&gt;ಐಪಿಎಲ್ ತಂಡಗಳ ಆದಾಯದ ಬಗ್ಗೆಯೂ ರಾಜ್ ಕುಂದ್ರಾ ಮಾತನಾಡಿದ್ದಾರೆ. ಆರಂಭದ 5-6 ವರ್ಷಗಳಲ್ಲಿ ತಂಡಗಳು ದೊಡ್ಡ ಪ್ರಮಾಣದ ಲಾಭ ಗಳಿಸಿರಲಿಲ್ಲ. ಕೆಲವೊಮ್ಮೆ ಮಾಲೀಕರು ತಮ್ಮ ಸ್ವಂತ ಹಣವನ್ನೇ ತಂಡಕ್ಕೆ ಖರ್ಚು ಮಾಡಬೇಕಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಐಪಿಎಲ್ ತಂಡಗಳ ಪ್ರಮುಖ ಆದಾಯ ಮೂಲಗಳಲ್ಲಿ ಸುಮಾರು 70% ಟಿವಿ ಪ್ರಸಾರ ಹಕ್ಕುಗಳು, 10-15% ಜೆರ್ಸಿ ಪ್ರಾಯೋಜಕತ್ವ ಮತ್ತು 10-15% ಟಿಕೆಟ್ ಮಾರಾಟದಿಂದ ಬರುತ್ತದೆ ಎಂದು ರಾಜ್ ಹೇಳಿದ್ದಾರೆ.&lt;/p&gt;&lt;p&gt;ಅವರ ಪ್ರಕಾರ, ಪ್ರಸ್ತುತ ಪ್ರಾಯೋಜಕತ್ವ ಮತ್ತು ಇತರ ಆದಾಯದ ಆಧಾರದ ಮೇಲೆ ಐಪಿಎಲ್ ತಂಡಗಳು ವಾರ್ಷಿಕವಾಗಿ ಸುಮಾರು ₹200 ಕೋಟಿಯಿಂದ ₹500 ಕೋಟಿವರೆಗೆ ಲಾಭ ಗಳಿಸುತ್ತಿವೆ.&lt;/p&gt;&lt;img&gt;&lt;p&gt;ರಾಜಸ್ಥಾನ್ ರಾಯಲ್ಸ್ ತಂಡದ ಜೊತೆಗಿನ ತಮ್ಮ ಹಿಂದಿನ ವಿವಾದದ ಬಗ್ಗೆಯೂ ರಾಜ್ ಕುಂದ್ರಾ ಮಾತನಾಡಿದ್ದಾರೆ. ತಮ್ಮ ವಿರುದ್ಧ ಬೆಟ್ಟಿಂಗ್ ಆರೋಪಗಳು ಬಂದಿದ್ದವು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;2013ರ ಐಪಿಎಲ್ ಬೆಟ್ಟಿಂಗ್ ಹಗರಣದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ರಾಜ್ ಕುಂದ್ರಾ ವಿರುದ್ಧವೂ ಕ್ರಮ ಕೈಗೊಳ್ಳಲಾಗಿತ್ತು. ಆದರೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ನಿರಂತರವಾಗಿ ಹೇಳಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ವಿರುದ್ಧದ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್&zwnj;ನಲ್ಲಿ ಬಾಕಿ ಇದೆ ಎಂದು ರಾಜ್ ಹೇಳಿದ್ದಾರೆ. ತಂಡದ ಉಳಿವಿಗಾಗಿ ತಾವು ಆರೋಪದ ಹೊಣೆ ಹೊತ್ತುಕೊಳ್ಳಲು ಸಿದ್ಧರಾಗಿದ್ದೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್&zwnj;ನಲ್ಲಿ ಬೆಟ್ಟಿಂಗ್ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ ಕುಂದ್ರಾ, &ldquo;ಬೆಟ್ಟಿಂಗ್ ಇದೆ. ಇದಕ್ಕೆ ಸಮಾನಾಂತರ ಮಾರುಕಟ್ಟೆ ಇದೆ&rdquo; ಎಂದು ಹೇಳಿದ್ದಾರೆ.&lt;/p&gt;&lt;p&gt;ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲವು ಕಡೆಗಳಲ್ಲಿ ಐಪಿಎಲ್ ಬೆಟ್ಟಿಂಗ್ ಕಾನೂನುಬದ್ಧವಾಗಿದ್ದರೂ, ಭಾರತದಲ್ಲಿ ಅಕ್ರಮ ಬೆಟ್ಟಿಂಗ್ ಮಾರುಕಟ್ಟೆಗಳಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಆದರೆ ಐಪಿಎಲ್ ತಂಡಗಳ ಒಳಗೆ ಅಂತಹ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ ಎಂದು ರಾಜ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;2013ರ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿತ ನ್ಯಾಯಮೂರ್ತಿ ಆರ್.ಎಸ್. ಲೋಧಾ ಸಮಿತಿಯು 2015ರಲ್ಲಿ ರಾಜ್ ಕುಂದ್ರಾ ವಿರುದ್ಧ ಜೀವಾವಧಿ ನಿಷೇಧದ ಶಿಫಾರಸು ಮಾಡಿತ್ತು. ಆದರೆ ರಾಜ್ ಕುಂದ್ರಾ ಇಂದಿಗೂ ತಾವು ನಿರಪರಾಧಿ ಎಂಬ ನಿಲುವನ್ನು ಮುಂದುವರಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಪತ್ನಿ ಶಿಲ್ಪಾ ಶೆಟ್ಟಿಗೆ ಪ್ರೇಮಿಗಳ ದಿನದ ಉಡುಗೊರೆಯಾಗಿ ₹82 ಕೋಟಿಯಷ್ಟು ಹಣ ಖರ್ಚು ಮಾಡಿ ಐಪಿಎಲ್ ತಂಡದಲ್ಲಿ ಪಾಲು ಖರೀದಿಸಿದ್ದ ರಾಜ್ ಕುಂದ್ರಾ ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>ipl</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/cricket-sports/did-shilpa-shetty-bring-gajakesari-yoga-luck-to-raj-kundra-rajasthan-royals-soar-from-82-crore-to-16000-crore-suh-s01wbw1"/>
        </item>
        <item>
            <title><![CDATA[ಆರ್‌ಸಿಬಿಯ ಈ ಸ್ಟಾರ್ ಆಲ್ರೌಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ]]></title>
            <link>https://kannada.asianetnews.com/gallery/cricket-sports/former-rcb-all-rounder-moises-henriques-retires-from-domestic-cricket-eyes-t20-world-cup-dream-with-portugal-suh-udeitxn</link>
            <guid isPermaLink="true">https://kannada.asianetnews.com/gallery/cricket-sports/former-rcb-all-rounder-moises-henriques-retires-from-domestic-cricket-eyes-t20-world-cup-dream-with-portugal-suh-udeitxn</guid>
            <pubDate>Thu, 16 Jul 2026 15:48:06 +0530</pubDate>
            <description><![CDATA[&lt;p&gt;RCB ಮಾಜಿ ಆಲ್&zwnj;ರೌಂಡರ್ ಮೊಯ್ಸೆಸ್ ಹೆನ್ರಿಕ್ಸ್ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್&zwnj;ಗೆ ವಿದಾಯ ಹೇಳಿದ್ದು, ಇದೀಗ ಪೋರ್ಚುಗಲ್ ಪರ 2026ರ T20 ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxn5rrqz6tg6gckvf10ebzrr,imgname-former-rcb-all-rounder-moises-henriques-retires-from-domestic-cricket-eyes-t20-world-cup-dream-with-portugal-1784195867391.jpg" type="image/jpeg" height="390" width="690"/>
            <content:encoded><![CDATA[&lt;p&gt;RCB ಮಾಜಿ ಆಲ್&zwnj;ರೌಂಡರ್ ಮೊಯ್ಸೆಸ್ ಹೆನ್ರಿಕ್ಸ್ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್&zwnj;ಗೆ ವಿದಾಯ ಹೇಳಿದ್ದು, ಇದೀಗ ಪೋರ್ಚುಗಲ್ ಪರ 2026ರ T20 ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಆಸ್ಟ್ರೇಲಿಯಾದ ಅನುಭವಿ ಆಲ್&zwnj;ರೌಂಡರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾಜಿ ಆಟಗಾರ ಮೊಯ್ಸೆಸ್ ಹೆನ್ರಿಕ್ಸ್ ತಮ್ಮ 18 ವರ್ಷಗಳ ಸುದೀರ್ಘ ದೇಶೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಆದರೆ ಕ್ರಿಕೆಟ್&zwnj;ಗೆ ನಿವೃತ್ತಿ ಘೋಷಿಸದೇ, ಹೊಸ ದೇಶದ ಪರ ಅಂತರರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಮತ್ತೊಂದು ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ.&lt;/p&gt;&lt;p&gt;38 ವರ್ಷದ ಹೆನ್ರಿಕ್ಸ್, ನ್ಯೂ ಸೌತ್ ವೇಲ್ಸ್ ಪರ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್&zwnj;ನಲ್ಲಿ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿದ್ದರು. ಶೆಫೀಲ್ಡ್ ಶೀಲ್ಡ್, ಮಾರ್ಷ್ ಒನ್-ಡೇ ಕಪ್ ಮತ್ತು ಬಿಗ್ ಬ್ಯಾಶ್ ಲೀಗ್&zwnj;ನಲ್ಲಿ (BBL) ಅವರು ತಮ್ಮ ಛಾಪು ಮೂಡಿಸಿದ್ದಾರೆ. ಸಿಡ್ನಿ ಸಿಕ್ಸರ್ಸ್ ತಂಡದ ಪ್ರಮುಖ ಆಟಗಾರರಾಗಿ ಎರಡು BBL ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;&lt;img&gt;&lt;p&gt;ಮೊಯ್ಸೆಸ್ ಹೆನ್ರಿಕ್ಸ್ ಐಪಿಎಲ್&zwnj;ನಲ್ಲಿ RCB ಸೇರಿದಂತೆ ಹಲವು ತಂಡಗಳ ಪರ ಆಡಿದ್ದಾರೆ. 2009ರಲ್ಲಿ RCB ಪರ ಆಡಿದ್ದ ಅವರು, ಬಳಿಕ ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್&zwnj;ಡೆವಿಲ್ಸ್, ಸನ್&zwnj;ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೊನೆಯದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವೂ ಕಣಕ್ಕಿಳಿದಿದ್ದರು. ಮಧ್ಯಮ ವೇಗದ ಬೌಲಿಂಗ್ ಮತ್ತು ಸ್ಪೋಟಕ ಬ್ಯಾಟಿಂಗ್&zwnj;ನಿಂದ ಹಲವು ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿದ್ದರು.&lt;/p&gt;&lt;img&gt;&lt;p&gt;ಹೆನ್ರಿಕ್ಸ್ ಅವರ ಕುಟುಂಬದ ಮೂಲ ಪೋರ್ಚುಗಲ್&zwnj;ಗೆ ಸಂಬಂಧಿಸಿದ್ದು, ಅದರಿಂದಾಗಿ ಅವರು ಈಗ ಪೋರ್ಚುಗಲ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ. ಮುಂಬರುವ 2026 ICC T20 World Cup Europe Qualifiersನಲ್ಲಿ ಪೋರ್ಚುಗಲ್ ಪರ ಕಣಕ್ಕಿಳಿಯಲಿದ್ದಾರೆ.&lt;/p&gt;&lt;p&gt;ಅನುಭವಿ ಆಟಗಾರನ ಸೇರ್ಪಡೆಯಿಂದ ಪೋರ್ಚುಗಲ್ ತಂಡದ ಬಲ ಹೆಚ್ಚಲಿದ್ದು, ಮೊದಲ ಬಾರಿಗೆ T20 ವಿಶ್ವಕಪ್&zwnj;ಗೆ ಅರ್ಹತೆ ಪಡೆಯುವ ಕನಸಿಗೆ ಮತ್ತಷ್ಟು ಬಲ ಸಿಕ್ಕಿದೆ.&lt;/p&gt;&lt;img&gt;&lt;p&gt;ಆಸ್ಟ್ರೇಲಿಯಾ ಪರ 4 ಟೆಸ್ಟ್ ಪಂದ್ಯಗಳು&lt;/p&gt;&lt;p&gt;11 ಏಕದಿನ ಪಂದ್ಯಗಳು&lt;/p&gt;&lt;p&gt;24 T20 ಅಂತರರಾಷ್ಟ್ರೀಯ ಪಂದ್ಯಗಳು&lt;/p&gt;&lt;p&gt;100ಕ್ಕೂ ಹೆಚ್ಚು ಫಸ್ಟ್ ಕ್ಲಾಸ್ ಪಂದ್ಯಗಳ ಅನುಭವ&lt;/p&gt;&lt;p&gt;300ಕ್ಕೂ ಹೆಚ್ಚು ಟಿ20 ಪಂದ್ಯಗಳಲ್ಲಿ ಭಾಗವಹಿಸಿದ ಅನುಭವಿ ಕ್ರಿಕೆಟಿಗ&lt;/p&gt;&lt;img&gt;&lt;p&gt;ದೇಶೀಯ ಕ್ರಿಕೆಟ್&zwnj;ಗೆ ವಿದಾಯ ಹೇಳಿರುವ ಹೆನ್ರಿಕ್ಸ್, ತಮ್ಮ ಅನುಭವವನ್ನು ಹೊಸ ತಂಡದೊಂದಿಗೆ ಹಂಚಿಕೊಳ್ಳಲು ಬಯಸಿದ್ದಾರೆ. ಬೆಳೆಯುತ್ತಿರುವ ಕ್ರಿಕೆಟ್ ರಾಷ್ಟ್ರವಾದ ಪೋರ್ಚುಗಲ್&zwnj;ಗೆ ನೆರವಾಗಿ ವಿಶ್ವಕಪ್&zwnj;ಗೆ ಕೊಂಡೊಯ್ಯುವುದು ಅವರ ಗುರಿಯಾಗಿದೆ.&lt;/p&gt;]]></content:encoded>
            <category>ipl</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/cricket-sports/former-rcb-all-rounder-moises-henriques-retires-from-domestic-cricket-eyes-t20-world-cup-dream-with-portugal-suh-udeitxn"/>
        </item>
        <item>
            <title><![CDATA[ಮುಂಬೈ ಇಂಡಿಯನ್ಸ್‌ಗೆ ಬರ್ತೀನಿ, ಆದರೆ ಒಂದು ಕಂಡೀಷನ್! ಯಶಸ್ವಿ ಜೈಸ್ವಾಲ್ ಬೇಡಿಕೆಯಿಂದ ನೀತಾ ಅಂಬಾನಿಗೆ ಹೊಸ ತಲೆನೋವು]]></title>
            <link>https://kannada.asianetnews.com/gallery/cricket-sports/yashasvi-jaiswal-ready-for-mumbai-indians-move-but-with-one-major-condition-reports-suggest-kvn-w8eew4u</link>
            <guid isPermaLink="true">https://kannada.asianetnews.com/gallery/cricket-sports/yashasvi-jaiswal-ready-for-mumbai-indians-move-but-with-one-major-condition-reports-suggest-kvn-w8eew4u</guid>
            <pubDate>Mon, 22 Jun 2026 14:33:13 +0530</pubDate>
            <description><![CDATA[&lt;p&gt;ಬೆಂಗಳೂರು: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಟ್ರೇಡಿಂಗ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಮುಂಬೈ ಫ್ರಾಂಚೈಸಿ ಯಶಸ್ವಿ ಜೈಸ್ವಾಲ್&zwnj;ಗೆ ಗಾಳ ಹಾಕಿದೆ ಎಂದು ವರದಿಯಾದ ಬೆನ್ನಲ್ಲೇ ಜೈಸ್ವಾಲ್ ಮುಂಬೈ ಬಳಿಕ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ವರದಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvq8kww2sr195d9ypr5pq6aa,imgname-yashasvi-jaiswal-nita-ambani-1782118478722.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಟ್ರೇಡಿಂಗ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಮುಂಬೈ ಫ್ರಾಂಚೈಸಿ ಯಶಸ್ವಿ ಜೈಸ್ವಾಲ್&zwnj;ಗೆ ಗಾಳ ಹಾಕಿದೆ ಎಂದು ವರದಿಯಾದ ಬೆನ್ನಲ್ಲೇ ಜೈಸ್ವಾಲ್ ಮುಂಬೈ ಬಳಿಕ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಿದ 14 ಪಂದ್ಯಗಳ ಪೈಕಿ ಕೇವಲ 4 ಗೆಲುವು ಹಾಗೂ 10 ಸೋಲು ಸಹಿತ ಕೇವಲ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆಯುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು ತನ್ನ ಅಭಿಯಾನ ಮುಗಿಸಿತ್ತು.&lt;/p&gt;&lt;img&gt;&lt;p&gt;ಹಾರ್ದಿಕ್ ಪಾಂಡ್ಯ ಈಗಾಗಲೇ ಮುಂಬೈ ಇಂಡಿಯನ್ಸ್ ತಂಡದಿಂದ ದೂರವಾಗಲು ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ. ಹಾರ್ದಿಕ್ ಪಾಂಡ್ಯ ತಂಡ ತೊರೆದರೆ ತಮಗೆ ನಾಯಕತ್ವ ಸಿಗಲಿದೆ ಎಂದು ಕನಸು ಕಾಣುತ್ತಿದ್ದ ಸೂರ್ಯಕುಮಾರ್ ಯಾದವ್&zwnj;ಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಶಾಕ್ ನೀಡಲು ರೆಡಿಯಾಗಿದೆ. ಯಾಕೆಂದರೆ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಭಾರತ ಟಿ20 ತಂಡದ ಉಪನಾಯಕ ತಿಲಕ್ ವರ್ಮಾಗೆ ನಾಯಕತ್ವ ಪಟ್ಟ ಕಟ್ಟಲು ಮುಂಬೈ ಇಂಡಿಯನ್ಸ್ ಓನರ್ ನೀತಾ ಅಂಬಾನಿ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಕೂಡಾ ಮುಂಬೈ ಇಂಡಿಯನ್ಸ್&zwnj;ಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಇನ್ನು ಇದೆಲ್ಲದರ ನಡುವೆ ಕಳೆದ ವರ್ಷವೇ ಮುಂಬೈ ಇಂಡಿಯನ್ಸ್ ಮ್ಯಾನೇಜ್&zwnj;ಮೆಂಟ್, ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಕರೆತರಲು ಮುಂದಾಗಿತ್ತು. ಆದರೆ ಯಶಸ್ವಿ ಜೈಸ್ವಾಲ್, ಮುಂಬೈ ಇಂಡಿಯನ್ಸ್ ಟ್ರೇಡ್&zwnj; ಡೀಲ್ ಅನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಹೌದು, ಯಾಕೆಂದರೆ ಸಂಜು ಸ್ಯಾಮ್ಸನ್, ರಾಜಸ್ಥಾನ ರಾಯಲ್ಸ್ ತಂಡ ತೊರೆಯುವುದು ಬಹುತೇಕ ಕನ್ಫರ್ಮ್ ಆಗಿರುವುದರಿಂದ ಜೈಸ್ವಾಲ್, ತಮಗೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ಸಿಗಬಹುದು ಎಂದುಕೊಂಡಿದ್ದರು. ಆದರೆ 19ನೇ ಸೀಸನ್&zwnj; ಐಪಿಎಲ್ ಟೂರ್ನಿಗೂ ಮುನ್ನ ರಾಜಸ್ಥಾನ ರಾಯಲ್ಸ್ ಮ್ಯಾನೇಜ್&zwnj;ಮೆಂಟ್, ರಿಯಾನ್ ಪರಾಗ್&zwnj;ಗೆ ನಾಯಕತ್ವ ಪಟ್ಟ ಕಟ್ಟಿತು. ಹೀಗಾಗಿ ಜೈಸ್ವಾಲ್&zwnj;ಗೆ ದೊಡ್ಡ ಮುಖಭಂಗವಾಗಿತ್ತು.&lt;/p&gt;&lt;img&gt;&lt;p&gt;ಇದೀಗ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ತಂಡ ಕೂಡಿಕೊಳ್ಳಲು ರೆಡಿಯಿರುವುದಾಗಿ ಹೇಳಿದ್ದಾರೆ. ಆದರೆ ತಾವು ಮುಂಬೈ ಇಂಡಿಯನ್ಸ್ ತಂಡಕ್ಕೆ ಬರಬೇಕಿದ್ದರೇ ನನಗೆ ನಾಯಕತ್ವ ಕೊಡಬೇಕು ಎನ್ನುವ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಈಗಾಗಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಭವಿಷ್ಯದ ತಂಡವನ್ನು ಗಮನದಲ್ಲಿಟ್ಟುಕೊಂಡು ತಿಲಕ್ ವರ್ಮಾಗೆ ನಾಯಕತ್ವ ನೀಡಲು ಮುಂದಾಗಿತ್ತು. ಜೈಸ್ವಾಲ್ ಅವರ ಈ ಕಂಡೀಷನ್, ನೀತಾ ಅಂಬಾನಿಯನ್ನು ಇಕ್ಕಟ್ಟಿಗೆ ಸಿಲುಕಿಸಿರುವುದಂತೂ ಸುಳ್ಳಲ್ಲ. ಮುಂಬರುವ ದಿನಗಳಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/yashasvi-jaiswal-ready-for-mumbai-indians-move-but-with-one-major-condition-reports-suggest-kvn-w8eew4u"/>
        </item>
        <item>
            <title><![CDATA[ಹಾರ್ದಿಕ್ ಪಾಂಡ್ಯ ತಂಡಕ್ಕೆ ಕರೆತರಲು ಈ ಬಿಗ್ ಹಿಟ್ಟರ್‌ನನ್ನು ಬಿಟ್ಟು ಕೊಡುತ್ತಾ ಆರ್‌ಸಿಬಿ?]]></title>
            <link>https://kannada.asianetnews.com/gallery/cricket-sports/will-hardik-pandya-join-royal-challengers-bengaluru-here-is-the-latest-update-kvn-z536agd</link>
            <guid isPermaLink="true">https://kannada.asianetnews.com/gallery/cricket-sports/will-hardik-pandya-join-royal-challengers-bengaluru-here-is-the-latest-update-kvn-z536agd</guid>
            <pubDate>Wed, 24 Jun 2026 15:58:55 +0530</pubDate>
            <description><![CDATA[&lt;p&gt;ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರ್ತಾರಾ? ಹೀಗೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್&zwnj; ಇಲ್ಲಿದೆ ನೋಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd66rza437bg7hfwpcmtprd,imgname-hardik-pandya-1776411698154.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರ್ತಾರಾ? ಹೀಗೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್&zwnj; ಇಲ್ಲಿದೆ ನೋಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈಗಾಗಲೇ ಒಂದು ಕಾಲು ಮುಂಬೈ ತಂಡದಿಂದ ಹೊರಗಿಟ್ಟಾಗಿದೆ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲವಾಗಿದೆ.&lt;/p&gt;&lt;img&gt;&lt;p&gt;ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್ ಸೀಸನ್&zwnj;ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಅಥವಾ ರಾಜಸ್ಥಾನ ರಾಯಲ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಯಾಕೆಂದರೆ ಈ ಎರಡೂ ತಂಡಗಳು ನಾಯಕ ಹಾಗೂ ಒಳ್ಳೆಯ ಆಲ್ರೌಂಡರ್ ಹುಡುಕಾಟದಲ್ಲಿವೆ. ಹೀಗಾಗಿ ಈ ಎರಡೂ ಫ್ರಾಂಚೈಸಿಗಳು ಪಾಂಡ್ಯ ಮೇಲೆ ಕಣ್ಣಿಟ್ಟಿವೆ.&lt;/p&gt;&lt;img&gt;&lt;p&gt;ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಮುಂಬೈ ಇಂಡಿಯನ್ಸ್ ಬಳಿ ಆಲ್ ಕ್ಯಾಶ್ ಡೀಲ್(ಹಣ ಪಾವತಿ ಮೂಲಕ ಆಟಗಾರನ ಖರೀದಿ) ಟ್ರೇಡ್&zwnj;ಗೆ ಮುಂದಾಗಿದ್ದವು. ಈ ಡೀಲ್&zwnj;ಗೆ ಮುಂಬೈ ಒಪ್ಪಿಲ್ಲ. ಆದರೆ ಮುಂಬೈ ಮ್ಯಾನೇಜ್&zwnj;ಮೆಂಟ್ ರಾಜಸ್ಥಾನ ರಾಯಲ್ಸ್ ಬಳಿ ಯಶಸ್ವಿ ಜೈಸ್ವಾಲ್ ನಮಗೆ ಕೊಡಿ ಎಂದು ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಇನ್ನು ಇದೆಲ್ಲದರ ನಡುವೆ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ನಡುವೆ ಮತ್ತೆ ಸಹೋದರರ ಬಾಂಧವ್ಯ ಚಿಗುರೊಡೆದಿದ್ದು, ಒಬ್ಬರನ್ನೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಲಾರಂಭಿಸಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟ್ಯಾಂಕೋವಿಚ್ ಅವರನ್ನು ಕೃನಾಲ್ ಪಾಂಡ್ಯ ಹಾಗೂ ಅವರ ಪತ್ನಿ ಅನ್&zwnj;ಫಾಲೋ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಕೃನಾಲ್ ಪಾಂಡ್ಯ ತಮ್ಮ ಸಹೋದರ ಆರ್&zwnj;ಸಿಬಿ ತಂಡಕ್ಕೆ ಬರಲಿ ಎನ್ನುವ ಒಲವು ಹೊಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಂಬೈ ಇಂಡಿಯನ್ಸ್, ಆರ್&zwnj;ಸಿಬಿಯ ಬಿಗ್&zwnj; ಹಿಟ್ಟರ್ ಟಿಮ್ ಡೇವಿಡ್ ಹಾಗೂ ಮತ್ತೋರ್ವ ಸ್ಟಾರ್ ಆಟಗಾರನಿಗೆ ಬೇಡಿಕೆಯಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಇದೀಗ ಚೆಂಡು ಆರ್&zwnj;ಸಿಬಿ ಅಂಗಳದಲ್ಲಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ಕರೆ ತರಲು, ಟಿಮ್ ಡೇವಿಡ್ ಅವರನ್ನು ಕಳೆದುಕೊಳ್ಳಲಿದೆಯೇ? ಅಥವಾ ಒಂದು ವೇಳೆ ಇಂತ ಆಫರ್ ಬಂದರೆ ಆರ್&zwnj;ಸಿಬಿ ರಿಜೆಕ್ಟ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>ipl</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/will-hardik-pandya-join-royal-challengers-bengaluru-here-is-the-latest-update-kvn-z536agd"/>
        </item>
    </channel>
</rss>
