<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 02 Jun 2026 07:52:37 +0530</lastBuildDate>
        <atom:link href="https://kannada.asianetnews.com/rss/india-news" rel="self" type="application/rss+xml"/>
        <item>
            <title><![CDATA[ಆನ್‌ಲೈನ್‌ನಲ್ಲಿ ಕಿಡಿ ಹಚ್ಚಿದ್ದ ಜಿರಳೆ ಪಕ್ಷ ಈಗ ಬೀದಿಗಿಳಿದಿದೆ! ನೀಟ್ ಸೋರಿಕೆ ವಿರುದ್ಧ ನೇರ ಹೋರಾಟ, ಜೂ.6ಕ್ಕೆ ಬಿಗ್ ಆಕ್ಷನ್]]></title>
            <link>https://kannada.asianetnews.com/india-news/online-outrage-hits-the-streets-cockroach-party-plans-mega-protest-against-neet-paper-leak-on-june-6-rav/articleshow-d8nm8xs</link>
            <guid isPermaLink="true">https://kannada.asianetnews.com/india-news/online-outrage-hits-the-streets-cockroach-party-plans-mega-protest-against-neet-paper-leak-on-june-6-rav/articleshow-d8nm8xs</guid>
            <pubDate>Tue, 02 Jun 2026 07:52:33 +0530</pubDate>
            <description><![CDATA[&lt;p&gt;ಆನ್&zwnj;ಲೈನ್&zwnj;ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಿಸಿ ಸಂಚಲನ ಮೂಡಿಸಿದ್ದ ಅಮೆರಿಕ ವಾಸಿ ಅಭಿಜಿತ್ ದೀಪ್ಕೆ, ಇದೀಗ ಭಾರತಕ್ಕೆ ಆಗಮಿಸುತ್ತಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್&zwnj;ನಲ್ಲಿ ಅವರು ಪ್ರತಿಭಟನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt31nq1frbf4qxjyxey6rcm5,imgname-----------------------2026-06-02t074209.452-1780366367791.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಮೊದಲ ಹೋರಾಟಕ್ಕೆ ಸಜ್ಜು&lt;/li&gt; &lt;li&gt;ತಮಿಳ್ನಾಡಲ್ಲಿ ಇದೀಗ ವಿಜಯ್&zwnj;ಗೆ ಸೂಕ್ತ ಪ್ರತಿಸ್ಪರ್ಧಿಗಳಿಲ್ಲ. ಈ ಸ್ಥಾನ ತುಂಬುವ ಇರಾದೆ&lt;/li&gt; &lt;li&gt;ನಿರುದ್ಯೋಗಿಗಳು ಜಿರಳೆ ಎಂಬ ಇತ್ತೀಚಿನ ಸುಪ್ರೀಂ ಜಡ್ಜ್&zwnj; ಹೇಳಿಕೆಯಿಂದ ಭಾರೀ ವಿವಾದ&lt;/li&gt; &lt;li&gt;ಅದರ ಬೆನ್ನಲ್ಲೇ ಆನ್&zwnj;ಲೈನಲ್ಲಿ ಕಾಕ್ರೋಚ್&zwnj; ಜನತಾ ಪಕ್ಷ ಸ್ಥಾಪಿಸಿದ್ದ ಅಮೆರಿಕ ವಾಸಿ ದೀಪ್ಕೆ&lt;/li&gt; &lt;li&gt;ಇದಕ್ಕೆ ಜನ ಬೆಂಬಲ. ಈ ಹಿನ್ನೆಲೆಯಲ್ಲಿ ಜೂ.6ಕ್ಕೆ ದಿಲ್ಲಿಗೆ ಆಗಮನ.&amp;nbsp;&lt;/li&gt; &lt;li&gt;ಜಂತರ್&zwnj;ಮಂತರ್&zwnj;ನಲ್ಲಿ ನೀಟ್&zwnj; ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸಮರ&lt;/li&gt;&lt;/ul&gt;&lt;p&gt;&lt;strong&gt;ನವದೆಹಲಿ (ಜೂ.2):&lt;/strong&gt; ಆನ್&zwnj;ಲೈನ್&zwnj;ನಲ್ಲಿ ಕಾಕ್ರೋಚ್&zwnj; ಜನತಾ ಪಾರ್ಟಿ (CJP) ಸ್ಥಾಪಿಸುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದ ಅಭಿಜಿತ್&zwnj; ದೀಪ್ಕೆ, ಇದೀಗ ನೇರವಾಗಿ ಬೀದಿಗಿಳಿದು ಹೋರಾಟದ ಘೋಷಣೆ ಮಾಡಿದ್ದಾರೆ. ಸದ್ಯ ಅಮೆರಿಕ ವಾಸಿಯಾಗಿರುವ ದೀಪ್ಕೆ ಜೂ.6ರಂದು ಭಾರತಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್&zwnj;ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿಯೂ ಘೋಷಿಸಿದ್ದಾರೆ.&lt;/p&gt;&lt;p&gt;ದೀಪ್ಕೆ ಸದ್ಯ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಿಜೆಪಿ ಸ್ಥಾಪನೆಯ ಬಳಿಕ ಇದು ಅವರ ಮೊದಲ ಭಾರತ ಭೇಟಿ. ಈ ಬಗ್ಗೆ ಎಕ್ಸ್&zwnj;ನಲ್ಲಿ ಮಾಹಿತಿ ನೀಡಿರುವ ಅವರು, &lsquo;ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮ ವ್ಯರ್ಥವಾಯಿತು. ಹೀಗಾಗಿ ಶಿಕ್ಷಣ ಸಚಿವ ಪ್ರಧಾನ್&zwnj; ಅವರ ರಾಜೀನಾಮೆ ಕೇಳಲು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ. ಶನಿವಾರ ಬೆಳಿಗ್ಗೆ ನೀವೆಲ್ಲರೂ ನನ್ನನ್ನು ಏರ್ಪೋರ್ಟ್&zwnj;ನಲ್ಲಿ ಭೇಟಿಯಾಗಿ. ನಾವೆಲ್ಲ ಸಂಸತ್&zwnj; ಮಾರ್ಗದ ಪೊಲೀಸ್&zwnj; ಠಾಣೆಗೆ ತೆರಳಿ, ಜಂತರ್&zwnj; ಮಂತರ್&zwnj;ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೇಳೋಣ&rsquo; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ನಾನು ಗಾಂಧಿ ಅನುಯಾಯಿ:&lt;/h2&gt;&lt;p&gt;&lsquo;ಈ ದೇಶ ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಇದು ನಮ್ಮೆಲ್ಲರಿಗೂ ಸೇರಿದ್ದು. ಇದು ನಮ್ಮ ಭವಿಷ್ಯದ ಪ್ರಶ್ನೆ. ನಮ್ಮದು ಪ್ರಜಾಪ್ರಭುತ್ವದ ದೇಶ ಎಂಬುದನ್ನು ನಾನಿಂದೂ ನಂಬುತ್ತೇನೆ. ನಮಗೆ ಪ್ರತಿಭಟನೆ ನಡೆಸಲು ಅನುಮತಿ ಸಿಗುತ್ತದೆ ಎಂಬ ವಿಶ್ವಾಸವಿದೆ. ನಾನೊಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನಾನು ಗಾಂಧಿ, ಅಂಬೇಡ್ಕರ್&zwnj;, ಭಗತ್&zwnj; ಸಿಂಗ್&zwnj; ಹಾಗೂ ನೆಹರೂ ಅವರ ದೊಡ್ಡ ಅನುಯಾಯಿ. ಪ್ರಜಾಪ್ರಭುತ್ವದಲ್ಲಿ ನಮಗೆ ಧ್ವನಿಯೆತ್ತುವ ಹಕ್ಕು ನೀಡಿದ ಸಂವಿಧಾನದ ಮೇಲೆ ನನಗೆ ಎಲ್ಲಕ್ಕಿಂತ ಹೆಚ್ಚು ನಂಬಿಕೆಯಿದೆ&rsquo; ಎಂದಿದ್ದಾರೆ.&lt;/p&gt;&lt;p&gt;ಸುಪ್ರೀಂ ಕೋರ್ಟ್&zwnj; ಮುಖ್ಯ ನ್ಯಾಯಮೂರ್ತಿ ಹೇಳಿಕೆ ಹಾಗೂ ದೇಶದ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಲು ಹುಟ್ಟಿಕೊಂಡ ಸಿಜೆಪಿ, ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ವಿಚಾರಗಳ ವಿರುದ್ಧ ಧ್ವನಿಯೆತ್ತುತ್ತಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/online-outrage-hits-the-streets-cockroach-party-plans-mega-protest-against-neet-paper-leak-on-june-6-rav/articleshow-d8nm8xs"/>
        </item>
        <item>
            <title><![CDATA[West Bengal Kalita Majhi: ಮನೆ ಮನೆ ಮುಸುರೆ ತಿಕ್ಕುತ್ತಿದ್ದ ಕಲಿತಾ ಮಾಝಿ ಈಗ ಬಂಗಾಳ ಸಚಿವೆ!]]></title>
            <link>https://kannada.asianetnews.com/india-news/from-domestic-worker-to-bengal-minister-the-inspiring-journey-of-kalita-majhi-rav/articleshow-pwl15lz</link>
            <guid isPermaLink="true">https://kannada.asianetnews.com/india-news/from-domestic-worker-to-bengal-minister-the-inspiring-journey-of-kalita-majhi-rav/articleshow-pwl15lz</guid>
            <pubDate>Tue, 02 Jun 2026 07:26:30 +0530</pubDate>
            <description><![CDATA[ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಂಪುಟ ವಿಸ್ತರಣೆಯಾಗಿದ್ದು, 35 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಾಜಿ ಕ್ರಿಕೆಟಿಗ ಅಶೋಕ್&zwnj; ದಿಂಡಾ ಹಾಗೂ ಈ ಹಿಂದೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಅವರು ಸಚಿವರಾಗಿರುವುದು ವಿಶೇಷ.]]></description>
            <media:content url="https://static.asianetnews.com/images/w-1280,h-720,format-jpg,imgid-01kqw0thbanbcgtzw4k72yezfh,imgname-----------------------2026-05-05t171538.510-1777983112554.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಸುವೇಂದು ಸಂಪುಟ ವಿಸ್ತರಣೆ: 35 ಸಚಿವರ ಶಪಥ&lt;/li&gt; &lt;li&gt;ಮಾಜಿ ಕ್ರಿಕೆಟಿಗ ಅಶೋಕ್&zwnj; ದಿಂಡಾಗೂ ಮಂತ್ರಿಗಿರಿ&lt;/li&gt;&lt;/ul&gt;&lt;p&gt;&lt;strong&gt;ಕೋಲ್ಕತಾ (ಜೂ.2): &lt;/strong&gt;ಪಶ್ಚಿಮ ಬಂಗಾಳ(West Bengal)ದ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ(Suvendu adhikari) ಅಧಿಕಾರ ವಹಿಸಿಕೊಂಡ 3 ವಾರ ಬಳಿಕ ಇದೀಗ ಸಂಪುಟ ವಿಸ್ತರಣೆ ಆಗಿದ್ದು, ಪಕ್ಷದ 35 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.&lt;/p&gt;&lt;p&gt;ಇವರಲ್ಲಿ ಈ ಹಿಂದೆ ಅನ್ಯರ ಮನೆಗಳ ಮುಸುರೆ ತಿಕ್ಕಿ ಜೀವನ ನಡೆಸುತ್ತಿದ್ದ ಹಾಗೂ ಇತ್ತೀಚೆಗೆ ಶಾಸಕಿ ಆಗಿ ಆಯ್ಕೆ ಆಗಿದ್ದ ಕಲಿತಾ ಮಾಝಿ(Kalita majhi) ಅವರೂ ಇದ್ದಾರೆ. ಮಾಜಿ ಕ್ರಿಕೆಟಿಗ ಅಶೋಕ್&zwnj; ದಿಂಡಾ ಕೂಡ ಸಚಿವ ಸ್ಥಾನ ಪಡೆದಿದ್ದಾರೆ.&lt;/p&gt;&lt;p&gt;ಕೋಲ್ಕತಾದ ಲೋಕಭವನದಲ್ಲಿಯ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್&zwnj;.ಎನ್&zwnj;.ರವಿ ಪ್ರಮಾಣ ಬೋಧಿಸಿದರು. ಕೆಲವರು ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕರಿಸಿದರೆ ಇನ್ನು ಕೆಲವರು ರಾಜ್ಯ ಸಚಿವರಾಗಿ ಪ್ರಮಾಣ ಪಡೆದರು. ಈ ಮೂಲಕ ಮಂತ್ರಿಮಂಡಲ ಸಾಮರ್ಥ್ಯ 41ಕ್ಕೆ ಏರಿಕೆಯಾಗಿದೆ. ಈಗ ಸುವೇಂದು ಸರ್ಕಾರ ವಿಧಾನಸಭೆಯಲ್ಲಿ 294 ಸದಸ್ಯ ಬಲ ಹೊಂದಿದೆ.&lt;/p&gt;&lt;p&gt;ಇತ್ತೀಚಿನ ಚುನಾವಣೆಯಲ್ಲಿ ಬಜೆಪಿ ಗೆಲುವಿನ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಸುವೇಂದು ಮೇ 3ಕ್ಕೆ ಪ್ರಮಾಣ ಸ್ವೀಕರಿಸಿದ್ದರು.&lt;/p&gt;&lt;h2&gt;2021ರಲ್ಲೂ ಸ್ಪರ್ಧಿಸಿದ್ದ ಕಲಿತಾ:&lt;/h2&gt;&lt;p&gt;ರಾಜಕೀಯ ಪ್ರವೇಶಕ್ಕೂ ಮುನ್ನ ಮುಸುರೆ ತಿಕ್ಕುತ್ತಿದ್ದ ಕಲಿತಾ, ಈ ಹಿಂದಿನ 2021ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ ಪೂರ್ವ ಬರ್ಧಮಾನ್&zwnj; ಜಿಲ್ಲೆಯ ಆಸುಗ್ರಾಮ ಕ್ಷೇತ್ರದಿಂದ ಪಕ್ಷದ ಟಿಕೆಟ್&zwnj; ಪಡೆದು ಗೆದ್ದಿದ್ದರು. ಅವರ ಪತಿ ಪ್ಲಂಬರ್&zwnj; ಆಗಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/from-domestic-worker-to-bengal-minister-the-inspiring-journey-of-kalita-majhi-rav/articleshow-pwl15lz"/>
        </item>
        <item>
            <title><![CDATA[ಅಭಿಷೇಕ್ ಬಳಿಕ ಮತ್ತೋರ್ವ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ, ಬಂಧಿತರಲ್ಲಿ ಟಿಎಂಸಿ ಬೆಂಬಲಿಗರೇ!]]></title>
            <link>https://kannada.asianetnews.com/india-news/after-abhishek-tmc-mp-kalyan-banerjee-attack-in-west-bengal-rav/articleshow-rkd0drg</link>
            <guid isPermaLink="true">https://kannada.asianetnews.com/india-news/after-abhishek-tmc-mp-kalyan-banerjee-attack-in-west-bengal-rav/articleshow-rkd0drg</guid>
            <pubDate>Tue, 02 Jun 2026 05:23:25 +0530</pubDate>
            <description><![CDATA[&lt;p&gt;ಟಿಎಂಸಿ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಕಲ್ಯಾಣ್ ಬ್ಯಾನರ್ಜಿ ಮೇಲೆ ನಡೆದ ಹಲ್ಲೆಯ ನಂತರ, ಮಮತಾ ಬ್ಯಾನರ್ಜಿ ಕರೆದಿದ್ದ ಶಾಸಕರ ಸಭೆಗೆ 80 ಶಾಸಕರಲ್ಲಿ ಕೇವಲ 20 ಮಂದಿ ಹಾಜರಾಗಿದ್ದಾರೆ. ಈ ಬೆಳವಣಿಗೆಯು ಟಿಎಂಸಿಯಲ್ಲಿ ಆಂತರಿಕ ಒಡಕು ಮೂಡಿರುವ ಶಂಕೆಯನ್ನು ಬಲಪಡಿಸಿದ್ದು, ಪಕ್ಷದಲ್ಲಿ ತೀವ್ರ ಕಳವಳ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt2sgdxksafgxxq3s4djyzst,imgname-----------------------2026-06-02t051937.795-1780357806003.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ (ಜೂ.2):&lt;/strong&gt; ಇತ್ತೀಚಿನ ವಿಧಾನಸಭಾ ಚುನಾವಣೆಯ ಆಘಾತಕಾರಿ ಸೋಲಿನಿಂದ ಚೇತರಿಸಿಕೊಳ್ಳುವ ಮೊದಲೇ ಪಶ್ಚಿಮ ಬಂಗಾಳ(West bengal)ದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(mamata banerjee)ಗೆ ಮತ್ತಷ್ಟು ಆಘಾತ ಎದುರಾಗಿದೆ. ಶನಿವಾರ ಮಮತಾರ ಸೋದರಳಿಯ ಅಭಿಷೇಕ್&zwnj; ಬ್ಯಾನರ್ಜಿ(Abhishek banerjee) ಮೇಲಿನ ಹಲ್ಲೆಯ ಬೆನ್ನಲ್ಲೇ ಟಿಎಂಸಿ(TMC)ಯ ಮತ್ತೋರ್ವ ಸಂಸದ ಕಲ್ಯಾಣ್&zwnj; ಬ್ಯಾನರ್ಜಿ(MP Kalyan banerjee) ಮೇಲೆ ಭಾನುವಾರ ಗುಂಪೊಂದು ಕೋಲ್ಕತಾದಲ್ಲಿ ಹಲ್ಲೆ ನಡೆಸಿದೆ. ಇದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಭಾರೀ ಕಳವಳ ಹುಟ್ಟಿಸಿದೆ.&lt;/p&gt;&lt;p&gt;ಈ ಬೆಳವಣಿಗೆ ನಡುವೆಯೇ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾನುವಾರ ಇಲ್ಲಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ. ಮಮತಾ ಅವರ ಕಾಳಿಘಾಟ್&zwnj; ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.&lt;/p&gt;&lt;p&gt;ಇಬ್ಬರು ನಾಯಕರ ಮೇಲಿನ ದಾಳಿಯಿಂದ ಭೀತಿಗೊಳಗಾಗಿ ಶಾಸಕರು ಸಭೆಗೆ ಗೈರಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದ್ದರೆ, ಚುನಾವಣಾ ಫಲಿತಾಂಶದ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿರುವುದೇ ಶಾಸಕರು ಸಭೆಗೆ ಗೈರಾಗಲು ಕಾರಣ ಎಂದು ವರದಿಗಳು ಹೇಳಿವೆ.&lt;/p&gt;&lt;h2&gt;ಅಭಿಷೇಕ್&zwnj;ರನ್ನು ದಾಖಲಿಸದ್ದಕ್ಕೆ ಮಮತಾ ಕೂಗಾಟ: ವಿಡಿಯೋ&lt;/h2&gt;&lt;p&gt;ಕೋಲ್ಕತಾ: ಟಿಎಂಸಿ ಸಂಸದ ಅಭಿಷೇಕ್&zwnj; ಬ್ಯಾನರ್ಜಿ ಮೇಲೆ ಹಲ್ಲೆ ಸಂಬಂಧ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಆಸ್ಪತ್ರೆ ಸಿಇಒ ಮೇಲೆಯೇ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಕೂಗಾಟ ನಡೆಸಿದ್ದಾರೆ. ಇದರ ವಿಡಿಯೋ ಹಂಚಿಕೊಂಡು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.&lt;/p&gt;&lt;p&gt;ಹಲ್ಲೆ ಬಳಿಕ ಅಭಿಷೇಕ್&zwnj; ಅವರನ್ನು ಕೋಲ್ಕತ್ತಾದ ಬೆಲ್ಲೆ ವ್ಯೂ ಆಸ್ಪತ್ರೆ(Bellevue Hospital, Kolkata)ಗೆ ಕರೆದೊಯ್ಯಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿದ್ದ ವೈದ್ಯರು, ಅವರನ್ನು ದಾಖಲಿಸಿಕೊಳ್ಳುವ ಅಗತ್ಯವಿರಲಿಲ್ಲ ಎಂದಿದ್ದರು. ಇಷ್ಟಕ್ಕೆ ಸಿಟ್ಟಾದ ಮಮತಾ ಆಸ್ಪತ್ರೆ ಸಿಇಒ ಪ್ರದೀಪ್&zwnj; ಟಂಡನ್&zwnj; ವಿರುದ್ಧ ಕಿಡಿಕಾರಿದ್ದಾರೆ. &lsquo;ನೀವು ತಪ್ಪು ಮಾಡುತ್ತಿದ್ದೀರಿ. ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ನಾಚಿಕೆ ಪಡಬೇಕು. ಬಿಜೆಪಿ ಅಧಿಕಾರದಲ್ಲಿರುವುದರಿಂದ ನೀವು ಆಸ್ಪತ್ರೆ ನಡೆಸುತ್ತಿದ್ದೀರಿ. ವೈದ್ಯರನ್ನು ಬೆದರಿಸುತ್ತಿದ್ದೀರಿ. ಒಂದು ವೇಳೆ ನಾಳೆ ಕೇಂದ್ರ ಅಧಿಕಾರದಲ್ಲಿರದಿದ್ದರೆ ನಾವು ಇದನ್ನು ನೋಡಿಕೊಳ್ಳುತ್ತೇವೆ&rsquo; ಎಂದು ಬೆದರಿಸಿದ್ದಾರೆ.&lt;/p&gt;&lt;p&gt;ಬಿಜೆಪಿ ರಾಜ್ಯ ವಕ್ತಾರ ದೇವಜಿತ್&zwnj; ಸರ್ಕಾರ್ ಈ ವಿಡಿಯೋ ಎಕ್ಸ್&zwnj;ನಲ್ಲಿ ಹಂಚಿಕೊಂಡಿದ್ದು, &lsquo;ಗಂಭೀರ ಗಾಯಗಳಾಗದಿದ್ದರೂ ತಮ್ಮ ಸೋದರಳಿಯನನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಮಮತಾ ಬ್ಯಾನರ್ಜಿ ಆಸ್ಪತ್ರೆಯವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಸಿಐಡಿ ಸಮನ್ಸ್&zwnj;ನಿಂದ ತಪ್ಪಿಸಿಕೊಳ್ಳುವ ಪ್ರಯತ್ನವೇ? &rsquo; ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;ಟಿಎಂಸಿಯಲ್ಲಿ ಒಡಕು?: ಸಭೆಗೆ 20 ಶಾಸಕರಷ್ಟೆ ಭಾಗಿ&lt;/h3&gt;&lt;p&gt;ಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣಾ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿದೆ ಎನ್ನುವ ವದಂತಿ ನಡುವೆ ಅದನ್ನು ಪುಷ್ಟೀಕರಿಸುವಂತೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ.&lt;/p&gt;&lt;p&gt;ಮಮತಾ ಅವರ ಕಾಳಿಘಾಟ್&zwnj; ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.&lt;/p&gt;&lt;p&gt;ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಟಿಎಂಸಿ ವಕ್ತಾರ ಕುನಾಲ್&zwnj; ಘೋಷ್&zwnj;, &lsquo;ನಮ್ಮ ನಾಯಕ ಅಭಿಷೇಕ್&zwnj; ಬ್ಯಾನರ್ಜಿ ಮತ್ತು ಸಂಸದ ಕಲ್ಯಾಣ್&zwnj; ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಕಾರಣದಿಂದ ಆತಂಕಗೊಂಡಿರುವ ಶಾಸಕರು ಸಭೆಗೆ ಬಂದಿಲ್ಲ. ಗೈರಾದ ಶಾಸಕರ ವಿನಂತಿ ಮೇರೆಗೆ ಸಭೆ ಮುಂದೂಡಲಾಗಿದೆ. ಶೀಘ್ರದಲ್ಲಿ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು&rsquo; ಎಂದರು.&lt;/p&gt;&lt;p&gt;&lt;strong&gt;ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣ: 6 ಜನರ ಬಂಧನ&lt;/strong&gt;&lt;/p&gt;&lt;p&gt;ಇನ್ನು ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ್&zwnj; ಬ್ಯಾನರ್ಜಿ ಮೇಲೆ ಶನಿವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ 6 ಜನರನ್ನು ಬಂಧಿಸಿದ್ದಾರೆ.&lt;/p&gt;&lt;p&gt;ಶನಿವಾರ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್&zwnj; ಬ್ಯಾನರ್ಜಿ ಆಗಲಿ ಅಥವಾ ತೃಣಮೂಲ ಕಾಂಗ್ರೆಸ್&zwnj; ಯಾವುದೇ ದೂರು ನೀಡಿರಲಿಲ್ಲ. ಹೀಗಾಗಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅದರಂತೆ ಸೋನಾರ್ಪುರ್ ದಕ್ಷಿಣದಲ್ಲಿ ಶನಿವಾರ ನಡೆದಿದ್ದ ಹಲ್ಲೆ ಸಂದರ್ಭದಲ್ಲಿನ ಸಿಸಿಟೀವಿ ದೃಶ್ಯಗಳ ಪರಿಶೀಲಿಸಿ ಪೊಲೀಸರು ರಾತ್ರಿಯಿಡೀ ಶೋಧ ನಡೆಸಿ 6 ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಚುನಾವಣೋತ್ತರ ಹಿಂಸಾಚಾರಕ್ಕೆ ತುತ್ತಾಗಿದ್ದ ಪಕ್ಷದ ಕಾರ್ಯಕರ್ತರ ಮನೆಗೆ ತೆರಳಿದ್ದ ಟಿಎಂಸಿ ನಂ.2 ನಾಯಕನ ಮೇಲೆ ಶನಿವಾರ ಗುಂಪೊಂದು ಕಲ್ಲು, ಚಪ್ಪಲಿ, ಮೊಟ್ಟೆಯಿಂದ ದಾಳಿ ಮಾಡಿತ್ತು. ಆಗ ಪೊಲೀಸರು ಹೆಲ್ಮೆಟ್&zwnj; ಹಾಕಿ ರಕ್ಷಣೆ ಮಾಡಿದ್ದರು.&lt;/p&gt;&lt;p&gt;&lt;strong&gt;ಬಂಧಿತರಲ್ಲಿ ಹಲವರು ಟಿಎಂಸಿಯವರೇ?&lt;/strong&gt;&lt;/p&gt;&lt;p&gt;ಬಂಧಿತರಲ್ಲಿ ತಪನ್ ಮೈಟಿ, ಆಕಾಶ್, ನಿರ್ಮಾಲ್ಯ ಸೇನ್&zwnj;ಗುಪ್ತಾ, ಕಾಜಲ್ ದಾಸ್ ಮತ್ತು ದೇಬಾಶಿಶ್ ದತ್ತಾ ಎಂಬುವರು ಇದ್ದಾರೆ. ಇವರಲ್ಲಿ ದಾಸ್&zwnj;, ನಿರ್ಮಾಲ್ಯ ಹಾಗೂ ದತ್ತಾ ಟಿಎಂಸಿಯ ಮಾಜಿ ಶಾಸಕಿ ಲವ್ಲಿ ಮೈತ್ರಾ ಅವರ ಆಪ್ತರಾಗಿದ್ದರು. ಬಹುಶಃ ಪಕ್ಷದಲ್ಲಿನ ಒಳಜಗಳ ಘಟನೆಗೆ ಕಾರಣವಾಗಿರಬಹುದೆ ಎಂದು ಪ್ರಶ್ನೆ ಉದ್ಭವಿಸಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/after-abhishek-tmc-mp-kalyan-banerjee-attack-in-west-bengal-rav/articleshow-rkd0drg"/>
        </item>
        <item>
            <title><![CDATA[Shocking: ಭಾರತೀಯ ಪ್ರವಾಸಿಗರ ಅಸಭ್ಯ ವರ್ತನೆ; ಚೀನಾದ ಮಹಾಗೋಡೆಯ ಮೇಲೆ ನಿಂತು ಮಾಡಿದ್ದೇನು ಗೊತ್ತಾ?]]></title>
            <link>https://kannada.asianetnews.com/viral/netizens-are-furious-over-the-behavior-of-indian-tourists-who-performed-garba-on-the-great-wall-of-china/articleshow-btk6r9i</link>
            <guid isPermaLink="true">https://kannada.asianetnews.com/viral/netizens-are-furious-over-the-behavior-of-indian-tourists-who-performed-garba-on-the-great-wall-of-china/articleshow-btk6r9i</guid>
            <pubDate>Mon, 01 Jun 2026 21:20:52 +0530</pubDate>
            <description><![CDATA[&lt;p&gt;ವಿದೇಶ ಪ್ರವಾಸ ಮಾಡುವುದು ಸಂತೋಷದ ವಿಷಯ, ಆದರೆ ನಾವು ಹೋಗುವ ಪ್ರತಿ ಜಾಗದಲ್ಲೂ ನಾವು ನಮ್ಮ ದೇಶದ ರಾಯಭಾರಿಗಳಾಗಿರುತ್ತೇವೆ ಎಂಬುದು ನೆನಪಿರಲಿ. ಅತಿಯಾದ ಪ್ರಚಾರಕ್ಕಾಗಿ ಅಥವಾ ರೀಲ್ಸ್ ಮಾಡುವ ಹುಚ್ಚಿಗಾಗಿ ದೇಶದ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವುದು ಎಷ್ಟು ಸರಿ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1y165v3wqbv9qdqv1e7xmk,imgname-indians-bad-behaviour-1780328995002.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀಜಿಂಗ್/ಟೋಕಿಯೋ: ಭಾರತೀಯರೆಂದರೆ ಇಡೀ ಜಗತ್ತಿನಲ್ಲಿ ಒಂದು ವಿಶಿಷ್ಟ ಗೌರವವಿದೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಜಗತ್ತು ಮೆಚ್ಚುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸಕ್ಕೆ ಹೋಗುವ ಕೆಲವು ಭಾರತೀಯರು ತೋರುತ್ತಿರುವ 'ನಾಗರಿಕ ಪ್ರಜ್ಞೆ' ಇಲ್ಲದ ವರ್ತನೆಗಳು ಈಗ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಚೀನಾದ ಮಹಾಗೋಡೆಯಿಂದ ಹಿಡಿದು ಜಪಾನ್&zwnj;ನ ಶಿಸ್ತಿನ ಬೀದಿಗಳವರೆಗೆ ಭಾರತೀಯ ಪ್ರವಾಸಿಗರ ಹುಚ್ಚಾಟದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿವೆ!&lt;/p&gt;&lt;p&gt;&lt;strong&gt;1. ಚೀನಾದ ಮಹಾಗೋಡೆಯ ಮೇಲೆ ಗರ್ಬಾ ಸ್ಟೆಪ್ಸ್!&lt;/strong&gt;&lt;/p&gt;&lt;p&gt;ಹೌದು, ನೀವು ಓದುತ್ತಿರುವುದು ನಿಜ. ಚೀನಾದ ಐತಿಹಾಸಿಕ 'ಗ್ರೇಟ್ ವಾಲ್' ಮೇಲೆ ನಿಂತು ಭಾರತೀಯರ ಗುಂಪೊಂದು ಮೈಮರೆತು ನೃತ್ಯ ಮಾಡಿದೆ. ಬಾಲಿವುಡ್&zwnj;ನ ಪ್ರಸಿದ್ಧ 'ಚೋಗಾಡಾ' ಹಾಡಿಗೆ ಈ ಗುಂಪು ಹಬ್ಬದ ಉಡುಪುಗಳನ್ನು ಧರಿಸಿ ಗರ್ಬಾ ನೃತ್ಯ ಮಾಡಿದೆ. ಒಂದು ಐತಿಹಾಸಿಕ ಸ್ಮಾರಕದ ಮೇಲೆ ಅದರ ಗಾಂಭೀರ್ಯವನ್ನು ಅರಿಯದೆ ನೃತ್ಯ ಮಾಡಿದ್ದನ್ನು ಕಂಡ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. &quot;ಇದು ಹೆಮ್ಮೆಯ ವಿಷಯವಲ್ಲ, ಬದಲಿಗೆ ಅತ್ಯಂತ ಮುಜುಗುರದ ಸಂಗತಿ. ವಿದೇಶಕ್ಕೆ ಹೋಗಿ ದೇಶದ ಮರ್ಯಾದೆ ಕಳೆಯುವ ಬದಲು ಮನೆಯಲ್ಲೇ ಇರಿ&quot; ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.&lt;/p&gt;&lt;h2&gt;2. ಶಿಸ್ತಿನ ಜಪಾನ್&zwnj;ನಲ್ಲಿ ಭಾರತೀಯರ ಅಶಿಸ್ತು!&lt;/h2&gt;&lt;p&gt;ಜಪಾನ್ ಎಂದರೆ ಅದು ಶಿಸ್ತಿಗೆ ಇನ್ನೊಂದು ಹೆಸರು. ಆದರೆ ಅಲ್ಲಿಗೂ ಹೋದ ನಮ್ಮವರು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಜಪಾನ್&zwnj;ನ ಪ್ರಸಿದ್ಧ 'ಹಾಚಿಕೊ' ಶ್ವಾನದ ಪ್ರತಿಮೆಯ ಮುಂದೆ ಫೋಟೋ ತೆಗೆದುಕೊಳ್ಳಲು ಪ್ರವಾಸಿಗರು ಸಾಲಿನಲ್ಲಿ ನಿಂತಿದ್ದರು. ಆದರೆ ಭಾರತೀಯ ಮೂಲದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ, ಇಡೀ ಸಾಲನ್ನು ಧಿಕ್ಕರಿಸಿ ನೇರವಾಗಿ ಪ್ರತಿಮೆಯ ಮುಂದೆ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ. ಇದನ್ನು ಕಂಡ ಅಲ್ಲಿನ ಸ್ಥಳೀಯರು ಮತ್ತು ಇತರ ಪ್ರವಾಸಿಗರು ಭಾರತೀಯರ ಅಸಭ್ಯ ವರ್ತನೆಯನ್ನು ಕಂಡು ವಾಕರಿಸಿದ್ದಾರೆ.&lt;/p&gt;&lt;p&gt;3. ವಿಮಾನ ನಿಲ್ದಾಣದ ರನ್-ವೇ ಮೇಲೆ ಡಾನ್ಸ್!&lt;/p&gt;&lt;p&gt;ಹುಚ್ಚಾಟ ಇಲ್ಲಿಗೆ ನಿಂತಿಲ್ಲ, ವಿಯೆಟ್ನಾಂನಲ್ಲಿ ವಿಮಾನ ನಿಲ್ದಾಣದ ರನ್-ವೇ ಮೇಲೆಯೇ ಪ್ರವಾಸಿಗರು ನೃತ್ಯ ಮಾಡಿದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ವಿಮಾನ ನಿಲ್ದಾಣದಂತಹ ಅತೀ ಭದ್ರತೆಯ ಜಾಗದಲ್ಲಿ ಈ ರೀತಿ ವರ್ತಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ಈಗ ಜಾಗತಿಕ ಮಟ್ಟದಲ್ಲಿ ಎದ್ದಿದೆ.&lt;/p&gt;&lt;h3&gt;ನೆಟ್ಟಿಗರ ಆಕ್ರೋಶದ ಅಲೆ:&lt;/h3&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಕಮೆಂಟ್&zwnj;ಗಳ ಸುರಿಮಳೆಯೇ ಆಗುತ್ತಿದೆ. ಒಬ್ಬ ನೆಟ್ಟಿಗ, &quot;ನಮ್ಮ ಮಕ್ಕಳಿಗೆ ಪುಸ್ತಕದ ಪಾಠಕ್ಕಿಂತ ಮೊದಲು ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂಬ ನಾಗರಿಕ ಪ್ರಜ್ಞೆಯನ್ನು ಕಲಿಸಿಕೊಡಬೇಕಿದೆ&quot; ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, &quot;ಇಂತಹ ಜನರ ವರ್ತನೆಯಿಂದಾಗಿ ಒಳ್ಳೆಯ ಪ್ರವಾಸಿಗರಿಗೂ ವಿದೇಶಗಳಲ್ಲಿ ಕೆಟ್ಟ ಹೆಸರು ಬರುತ್ತಿದೆ&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಕೊನೆಯ ಮಾತು:&lt;/p&gt;&lt;p&gt;ವಿದೇಶ ಪ್ರವಾಸ ಮಾಡುವುದು ಸಂತೋಷದ ವಿಷಯ, ಆದರೆ ನಾವು ಹೋಗುವ ಪ್ರತಿ ಜಾಗದಲ್ಲೂ ನಾವು ನಮ್ಮ ದೇಶದ ರಾಯಭಾರಿಗಳಾಗಿರುತ್ತೇವೆ ಎಂಬುದು ನೆನಪಿರಲಿ. ಅತಿಯಾದ ಪ್ರಚಾರಕ್ಕಾಗಿ ಅಥವಾ ರೀಲ್ಸ್ ಮಾಡುವ ಹುಚ್ಚಿಗಾಗಿ ದೇಶದ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವುದು ಎಷ್ಟು ಸರಿ?&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/viral/netizens-are-furious-over-the-behavior-of-indian-tourists-who-performed-garba-on-the-great-wall-of-china/articleshow-btk6r9i"/>
        </item>
        <item>
            <title><![CDATA[ಹೆಂಡತಿಯನ್ನೇ ₹50,000ಕ್ಕೆ ಮಾರಿದ ಗಂಡ; ಮಹಿಳೆ ಸಿಗುವಷ್ಟರಲ್ಲಿ ಪೊಲೀಸರೇ ಬೆಚ್ಚಿ ಬೀಳುವ ಘಟನೆ ನಡೆದುಹೋಗಿತ್ತು!]]></title>
            <link>https://kannada.asianetnews.com/relationship/gujarat-palanpur-husband-sells-wife-only-rs-50000-human-trafficking-assault-arrest-sat/articleshow-u70fl95</link>
            <guid isPermaLink="true">https://kannada.asianetnews.com/relationship/gujarat-palanpur-husband-sells-wife-only-rs-50000-human-trafficking-assault-arrest-sat/articleshow-u70fl95</guid>
            <pubDate>Mon, 01 Jun 2026 21:17:18 +0530</pubDate>
            <description><![CDATA[&lt;p&gt;ನನಗೆ ಈ ಹೆಂಡತಿಯೊಂದಿಗೆ ಸಂಸಾರ ಮಾಡುವುದಕ್ಕೆ ಸಾಕಾಗಿದೆ. ಮತ್ತೊಂದು ಮದುವೆಯಾಗುವ ದುರಾಸೆಯಿಂದ ಪತಿಯೊಬ್ಬ ತನ್ನ ಪತ್ನಿಯನ್ನೇ 50,000 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಈ ಅಮಾನವೀಯ ಕೃತ್ಯದಲ್ಲಿ, ಮಹಿಳೆ 10 ದಿನಗಳ ಕಾಲ ನರಕ ಅನುಭವಿಸಿದ್ದು, ಕೃತ್ಯ ಬೇಧಿಸಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1xv2gvteks8k9a066jr5gd,imgname-husband-sell-wife-only-50000-1780328794651.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆಯಾಗಿ 12 ವರ್ಷಗಳ ಕಾಲ ಜೊತೆಯಾಗಿದ್ದ ಪತ್ನಿಯನ್ನೇ ಪತಿಯೊಬ್ಬ ಕೇವಲ 50,000 ರೂಪಾಯಿಗೆ ಮಾರಾಟ ಮಾಡಿದ ಅಮಾನವೀಯ ಮತ್ತು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮತ್ತೊಂದು ಮದುವೆಯಾಗುವ ಆಸೆಗೆ ಬಿದ್ದ ಪತಿ, ಸ್ನೇಹಿತರೊಂದಿಗೆ ಸೇರಿ ಪತ್ನಿಯನ್ನೇ ಮಾನವ ಕಳ್ಳಸಾಗಣೆಗೆ ದೂಡಿದ್ದಾನೆ. ಇಷ್ಟೇ ಅಲ್ಲದೆ, ಮಾರಾಟವಾದ ಬಳಿಕ ಆ ಮಹಿಳೆ ಸತತ 10 ದಿನಗಳ ಕಾಲ ಸಾಮೂಹಿಕ ಅತ್ಯಾ*ಚಾರ ಹಾಗೂ ನರಕಯಾತನೆಗೆ ಒಳಗಾಗಿದ್ದಾಳೆ. ಸದ್ಯ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದು, ಪತಿ ಸೇರಿದಂತೆ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;&lt;h3&gt;&lt;strong&gt;ನಾಪತ್ತೆ ಕೇಸ್ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಶಾಕ್!&lt;/strong&gt;&lt;/h3&gt;&lt;p&gt;ಈ ಘಟನೆ ಗುಜರಾತ್&zwnj;ನ ಪಾಲನ್&zwnj;ಪುರದಲ್ಲಿ ನಡೆದಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಮಹಿಳೆ ನಾಪತ್ತೆ ಪ್ರಕರಣದಂತೆ ಕಂಡುಬಂದಿತ್ತು. ಮೇ 11 ರಂದು ಪಾಲನ್&zwnj;ಪುರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪತಿಯೇ ಬಂದು, 'ನನ್ನ ಪತ್ನಿ ಮೇ 10 ರಿಂದ ಯಾರಿಗೂ ಹೇಳದೆ ಕಾಣೆಯಾಗಿದ್ದಾಳೆ' ಎಂದು ದೂರು ನೀಡಿದ್ದನು. ಆದರೆ, ಮಹಿಳೆಯ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ ಪೊಲೀಸರಿಗೆ ಪತಿಯ ನಡವಳಿಕೆಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ಪೊಲೀಸರು ತೀವ್ರ ವಿಚಾರಣೆ ಆರಂಭಿಸುತ್ತಿದ್ದಂತೆ ಹೆದರಿದ ಪತಿ ಅಲ್ಲಿಂದ ಪರಾರಿಯಾಗಿದ್ದನು. ತದನಂತರ ಪೊಲೀಸರು ತಾಂತ್ರಿಕ ಕಣ್ಗಾವಲು (Technical Surveillance) ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಕರಾಳ ಕಥೆ ಬಯಲಾಗಿದೆ.&lt;/p&gt;&lt;h2&gt;&lt;strong&gt;ಪತ್ನಿಯಿಂದ ಮುಕ್ತಿ ಪಡೆಯಲು ಸ್ನೇಹಿತರೊಂದಿಗೆ ಪ್ಲಾನ್!&lt;/strong&gt;&lt;/h2&gt;&lt;p&gt;ಪೊಲೀಸ್ ತನಿಖೆಯ ಪ್ರಕಾರ, 30 ವರ್ಷದ ಆರೋಪಿ ಪತಿಗೆ ತನ್ನ 26 ವರ್ಷದ ಪತ್ನಿಯ ಮೇಲೆ ಜಿಗುಪ್ಸೆ ಉಂಟಾಗಿತ್ತು. ಅವಳನ್ನು ಮನೆಯಿಂದ ಹೊರಹಾಕಿ, ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತರಲು ಸಂಚು ರೂಪಿಸಿದ್ದನು. ಇದಕ್ಕಾಗಿ ತನ್ನ ಇಬ್ಬರು ಸ್ನೇಹಿತರ ಸಹಾಯ ಪಡೆದ ಆತ, ಮದುವೆಯ ವ್ಯವಸ್ಥೆ ಮಾಡುವ ನೆಪದಲ್ಲಿ ಪತ್ನಿಯನ್ನು ಬೇರೆ ಕಡೆಗೆ ಸಾಗಿಸಲು ಯೋಚಿಸಿದ್ದನು. ಮೇ 10 ರಂದು ಸ್ನೇಹಿತರು ಮಹಿಳೆಯನ್ನು ರಿಕ್ಷಾದಲ್ಲಿ ಫ್ಲಾಟ್&zwnj;ವೊಂದಕ್ಕೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಮೊದಲ ಬಾರಿಗೆ ಸಾಮೂಹಿಕವಾಗಿ ಅತ್ಯಾ*ಚಾರ ಎಸಗಿದ್ದಾರೆ.&lt;/p&gt;&lt;h3&gt;&lt;strong&gt;1.5 ಲಕ್ಷಕ್ಕೆ ಡೀಲ್, 10 ದಿನಗಳ ಕಾಲ ಸತತ ಅತ್ಯಾ*ಚಾರ&lt;/strong&gt;&lt;/h3&gt;&lt;p&gt;ಅಲ್ಲಿಂದ ಮಹಿಳೆಯನ್ನು ಥರಾದ್ ಎಂಬ ಹಳ್ಳಿಯ ಒಂದು ಕುಟುಂಬಕ್ಕೆ ಮಾರಾಟ ಮಾಡಲು ಡೀಲ್ ಕುದುರಿಸಲಾಗಿತ್ತು. ಒಟ್ಟು 1.5 ಲಕ್ಷ ರೂಪಾಯಿಗೆ ಡೀಲ್ ಫಿಕ್ಸ್ ಆಗಿದ್ದು, ಅದರಲ್ಲಿ 50,000 ರೂಪಾಯಿ ಮುಂಗಡವನ್ನು ಪತಿ ಪಡೆದುಕೊಂಡಿದ್ದನು. ಥರಾದ್&zwnj;ಗೆ ಕರೆದೊಯ್ದ ಬಳಿಕ ಮಹಿಳೆಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ, ಅಲ್ಲಿನ ಆರೋಪಿಗಳು ಸತತ ಒಂದು ವಾರಕ್ಕೂ ಹೆಚ್ಚು ಕಾಲ ಆಕೆಯ ಮೇಲೆ ನಿರಂತರವಾಗಿ ಅತ್ಯಾ*ಚಾರ ನಡೆಸಿದ್ದಾರೆ. ಈ ಇಡೀ ಘಟನೆಯಲ್ಲಿ ಮಹಿಳೆ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ನರಕಯಾತನೆ ಅನುಭವಿಸಿದ್ದಾಳೆ.&lt;/p&gt;&lt;h3&gt;&lt;strong&gt;ಆರೋಪಿಯ ಹಳೇ ಚಾಳಿ ಬಿಚ್ಚಿಟ್ಟ ಪೊಲೀಸರು!&lt;/strong&gt;&lt;/h3&gt;&lt;p&gt;ಮೇ 21 ರಂದು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಇಷ್ಟೇ ಅಲ್ಲದೆ, ಆರೋಪಿ ಪತಿ ಮಹಿಳೆಯ 15,000 ರೂ. ಮೌಲ್ಯದ ಚಿನ್ನದ ಓಲೆಯನ್ನು ಕದ್ದು ದೀಸಾದಲ್ಲಿ ಮಾರಾಟ ಮಾಡಿದ್ದನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಪತಿಗೆ ಈ ಹಿಂದೆಯೂ ಇಂತಹ ಚಾಳಿ ಇತ್ತು ಎನ್ನಲಾಗಿದ್ದು, ಈ ಮುಂಚೆ ಇಬ್ಬರು ವಿವಾಹಿತ ಮಹಿಳೆಯರನ್ನು ಪುಸಲಾಯಿಸಿ ಓಡಿಸಿಕೊಂಡು ಹೋಗಿದ್ದನು. ಸದ್ಯ ಸಂತ್ರಸ್ತ ಮಹಿಳೆಗೆ ಸೂಕ್ತ ಆಪ್ತಸಮಾಲೋಚನೆ (Counselling) ನಡೆಸಲಾಗಿದ್ದು, ನ್ಯಾಯಾಲಯಕ್ಕೆ ಅಗತ್ಯವಿರುವ ಎಲ್ಲಾ ಸಿಸಿಟಿವಿ ಮತ್ತು ಕಾಲ್ ರೆಕಾರ್ಡ್ಸ್ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/gujarat-palanpur-husband-sells-wife-only-rs-50000-human-trafficking-assault-arrest-sat/articleshow-u70fl95"/>
        </item>
        <item>
            <title><![CDATA[CM Vijay :ಮೊದಲ ಪಬ್ಲಿಕ್ ಬಾಷಣದಲ್ಲೇ 'MGR' ಬಗ್ಗೆ ಹೀಗೆ ಹೇಳಿದ ಸಿಎಂ ಪವರ್‌ಫುಲ್ 'ಗೂಗ್ಲಿ' ವೈರಲ್!]]></title>
            <link>https://kannada.asianetnews.com/cine-world/cm-vijay-direct-statement-that-even-mgr-did-not-secure-this-many-votes-in-his-first-election-has-now-gone-viral/articleshow-ksvuxut</link>
            <guid isPermaLink="true">https://kannada.asianetnews.com/cine-world/cm-vijay-direct-statement-that-even-mgr-did-not-secure-this-many-votes-in-his-first-election-has-now-gone-viral/articleshow-ksvuxut</guid>
            <pubDate>Mon, 01 Jun 2026 20:31:06 +0530</pubDate>
            <description><![CDATA[&lt;p&gt;'ಇಷ್ಟು ವರ್ಷಗಳಿಂದ ನಿಮ್ಮನ್ನು ಸರದಿಯಲ್ಲಿ ನಿಲ್ಲಿಸಿ ಮೋಸ ಮಾಡುತ್ತಿದ್ದ ಇಬ್ಬರನ್ನು ನೀವು ತಿರಸ್ಕರಿಸಿದ್ದೀರಿ. ನೀವು ನನ್ನನ್ನು ಕೇವಲ ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ, ಬದಲಿಗೆ ನಿಮ್ಮ 'ಮೊದಲ ಸೇವಕ'ನನ್ನಾಗಿ ಆರಿಸಿದ್ದೀರಿ' ಎಂದಿದ್ದಾರೆ ವಿಜಯ್.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kszhvptk8qpycxdg86g00dax,imgname-vijay-joseph-1780249123667.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಳಪತಿಯಿಂದ ಅಧಿಪತಿಯವರೆಗೆ: &quot;ಎಂಜಿಆರ್ ಕೂಡ ಮೊದಲ ಬಾರಿ ಇಷ್ಟೊಂದು ಮತ ಗಳಿಸಿರಲಿಲ್ಲ!&quot; - ಸಿಎಂ ವಿಜಯ್ ಸಿಂಹಗರ್ಜನೆ!&lt;/strong&gt;&lt;/p&gt;&lt;p&gt;ತಮಿಳುನಾಡು ರಾಜಕಾರಣದಲ್ಲಿ ಈಗ ಹೊಸ ಶಕೆಯ ಆರಂಭವಾಗಿದೆ. ಬೆಳ್ಳಿಪರದೆಯ ಮೇಲೆ ಬೌನ್ಸರ್&zwnj;ಗಳನ್ನು ಹೊಡೆದುರುಳಿಸುತ್ತಿದ್ದ 'ದಳಪತಿ' ವಿಜಯ್, ಈಗ ರಾಜಕೀಯದ ಅಖಾಡದಲ್ಲಿ ವಿರೋಧಿಗಳ ಕೋಟೆಯನ್ನು ಧೂಳೀಪಟ ಮಾಡಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಿಎಂ ಆದ ಬಳಿಕ ತಿರುಚಿರಾಪಳ್ಳಿಯಲ್ಲಿ ನಡೆದ ತಮ್ಮ ಚೊಚ್ಚಲ ಬೃಹತ್ ರ್ಯಾಲಿಯಲ್ಲಿ ವಿಜಯ್ (Thalapathy Vijay) ಮಾತನಾಡಿದ ರೀತಿ ಈಗ ಇಡೀ ದಕ್ಷಿಣ ಭಾರತದಲ್ಲೇ ಸಂಚಲನ ಮೂಡಿಸಿದೆ. ಇದು ಬರೀ ಭಾಷಣವಾಗಿರಲಿಲ್ಲ, ಬದಲಿಗೆ ಎದುರಾಳಿಗಳಿಗೆ ನೀಡಿದ ಖಡಕ್ ವಾರ್ನಿಂಗ್ ಆಗಿತ್ತು!&lt;/p&gt;&lt;p&gt;&lt;img&gt;&lt;/p&gt;&lt;p&gt;ಎಂಜಿಆರ್ ದಾಖಲೆ ಮತ್ತು ವಿಜಯ್ ವಿನಯ:&lt;/p&gt;&lt;p&gt;ರ್ಯಾಲಿಯಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿ ಸಾಗರವನ್ನು ನೋಡಿ ಭಾವುಕರಾದ ವಿಜಯ್, ಒಂದು ಸಂಚಲನಕಾರಿ ಹೇಳಿಕೆ ನೀಡಿದರು. &quot;ತಮಿಳುನಾಡಿನ ಆರಾಧ್ಯ ದೈವ, ದಿವಂಗತ ಸಿಎಂ ಎಂಜಿಆರ್ (MGR) ಅವರು ಕೂಡ ತಮ್ಮ ಮೊದಲ ಚುನಾವಣೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಮತಗಳನ್ನು ಗಳಿಸಿರಲಿಲ್ಲ. ಅಂತಹ ಅಭೂತಪೂರ್ವ ಬೆಂಬಲವನ್ನು ನೀವು ನನಗೆ ಮತ್ತು ನಮ್ಮ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷಕ್ಕೆ ನೀಡಿದ್ದೀರಿ&quot; ಎಂದು ಗುಡುಗಿದರು. ಆದರೆ, ತಕ್ಷಣವೇ &quot;ನಾನು ನನ್ನನ್ನು ಎಂಜಿಆರ್ ಅವರಿಗೆ ಹೋಲಿಸಿಕೊಳ್ಳುತ್ತಿಲ್ಲ. ಅವರು ಮಹಾನ್ ನಾಯಕರು. ನಾನು ಕೇವಲ ಎಂಜಿಆರ್, ಅಣ್ಣಾ ಮತ್ತು ಪೆರಿಯಾರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಲು ಬಂದಿರುವ ನಿಮ್ಮ ಮನೆಯ ಮಗ&quot; ಎಂದು ಹೇಳುವ ಮೂಲಕ ಜನರ ಹೃದಯ ಗೆದ್ದರು.&lt;/p&gt;&lt;p&gt;&lt;img&gt;&lt;/p&gt;&lt;h2&gt;ಡಿಎಂಕೆ-ಎಐಎಡಿಎಂಕೆ ದ್ವಿಪಕ್ಷೀಯತೆಗೆ ಬ್ರೇಕ್!&lt;/h2&gt;&lt;p&gt;ದಶಕಗಳಿಂದ ತಮಿಳುನಾಡನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದೈತ್ಯ ಪಕ್ಷಗಳ ಅಧಿಪತ್ಯಕ್ಕೆ ವಿಜಯ್ ಅಂತ್ಯ ಹಾಡಿದ್ದಾರೆ. &quot;ಇಷ್ಟು ವರ್ಷಗಳಿಂದ ನಿಮ್ಮನ್ನು ಸರದಿಯಲ್ಲಿ ನಿಲ್ಲಿಸಿ ಮೋಸ ಮಾಡುತ್ತಿದ್ದ ಇಬ್ಬರನ್ನು ನೀವು ತಿರಸ್ಕರಿಸಿದ್ದೀರಿ. ಆರು ತಿಂಗಳು ಮೌನವಾಗಿರುತ್ತಾನೆ ಎಂದು ನನ್ನ ಬಗ್ಗೆ ಹೇಳುತ್ತಿದ್ದವರಿಗೆ, ಆರು ದಿನಗಳೂ ಮೌನವಾಗಿರಲು ಸಾಧ್ಯವಾಗಲಿಲ್ಲ. ನೀವು ನನ್ನನ್ನು ಕೇವಲ ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ, ಬದಲಿಗೆ ನಿಮ್ಮ 'ಮೊದಲ ಸೇವಕ'ನನ್ನಾಗಿ ಆರಿಸಿದ್ದೀರಿ&quot; ಎಂದು ವಿಜಯ್ ಭಾವನಾತ್ಮಕವಾಗಿ ನುಡಿದರು.&lt;/p&gt;&lt;p&gt;ಸಂಖ್ಯೆಗಳಲ್ಲಿ ವಿಜಯ್ ಹವಾ!&lt;/p&gt;&lt;p&gt;ಏಪ್ರಿಲ್ 23 ರಂದು ನಡೆದ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಬರೋಬ್ಬರಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸ್ವತಃ ವಿಜಯ್ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಭರ್ಜರಿ ಜಯ ದಾಖಲಿಸಿದ್ದಾರೆ.&lt;/p&gt;&lt;p&gt;ಚೆನ್ನೈ ಪೆರಂಬೂರು: ಇಲ್ಲಿ ವಿಜಯ್ 1,19,454 ಮತಗಳನ್ನು ಪಡೆದು, 53,532 ಮತಗಳ ಬೃಹತ್ ಅಂತರದಿಂದ ಗೆದ್ದರು.&lt;/p&gt;&lt;p&gt;ತಿರುಚಿರಾಪಳ್ಳಿ ಪೂರ್ವ: ಇಲ್ಲಿ 91,381 ಮತಗಳನ್ನು ಪಡೆದು 27,416 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು.&lt;/p&gt;&lt;p&gt;ಸದ್ಯ ವಿಜಯ್ ಅವರು ತಿರುಚಿರಾಪಳ್ಳಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು, ಚೆನ್ನೈ ಪೆರಂಬೂರು ಕ್ಷೇತ್ರದ ಶಾಸಕರಾಗಿ ಮುಂದುವರಿಯಲಿದ್ದಾರೆ.&lt;/p&gt;&lt;h3&gt;ಸಿನಿಮಾ ಸ್ಟೈಲ್ ಪೊಲಿಟಿಕ್ಸ್:&lt;/h3&gt;&lt;p&gt;ಬೆಳ್ಳಿಪರದೆಯ ಮೇಲೆ 'ತಮಿಳಗಂ' ಪ್ರೇಕ್ಷಕರನ್ನು ರಂಜಿಸುತ್ತಿದ್ದ ವಿಜಯ್, ಈಗ ಮೈದಾನಕ್ಕಿಳಿದು ಜನರ ಸೇವೆಗೆ ನಿಂತಿದ್ದಾರೆ. 1977 ರಿಂದ 1987 ರವರೆಗೆ ತಮಿಳುನಾಡನ್ನು ಆಳಿದ ಮೊದಲ ನಟ-ಸಿಎಂ ಎಂಜಿಆರ್ ಅವರ ಹಾದಿಯಲ್ಲೇ ವಿಜಯ್ ಸಾಗುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಒಟ್ಟಿನಲ್ಲಿ, ದಳಪತಿಯ ಈ ರಾಜಕೀಯ ಜರ್ನಿ ಮುಂದಿನ ದಿನಗಳಲ್ಲಿ ಇನ್ನೆಷ್ಟು ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ!&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/cm-vijay-direct-statement-that-even-mgr-did-not-secure-this-many-votes-in-his-first-election-has-now-gone-viral/articleshow-ksvuxut"/>
        </item>
        <item>
            <title><![CDATA[ಎರಡು ದಿನ ಕಾಯಿರಿ, ಬಿಜೆಪಿ ತೊರೆಯುವ ಪ್ರಶ್ನೆಗೆ ಅಣ್ಣಾಮಲೈ ಉತ್ತರ, ಹುಟ್ಟಹಬ್ಬಕ್ಕೆ ಹೊಸ ಪಾರ್ಟಿ?]]></title>
            <link>https://kannada.asianetnews.com/india-news/annamalai-breaks-silence-on-bjp-exit-rumours-says-wait-for-two-days/articleshow-kixzqvc</link>
            <guid isPermaLink="true">https://kannada.asianetnews.com/india-news/annamalai-breaks-silence-on-bjp-exit-rumours-says-wait-for-two-days/articleshow-kixzqvc</guid>
            <pubDate>Mon, 01 Jun 2026 20:16:43 +0530</pubDate>
            <description><![CDATA[&lt;p&gt;ಬಿಜೆಪಿಯಲ್ಲಿ ಮೂಲೆಗುಂಪಾದ ಅಣ್ಣಾಮಲೈ ಪಕ್ಷ ತೊರೆಯುತ್ತಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ದೆಹಲಿ ಭೇಟಿ ಬಳಿಕ ಈ ಪ್ರಶ್ನೆಗೆ ಅಣ್ಣಾಮಲೈ ನೀಡಿದ ಉತ್ತರ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kerqkk33g8cszb61yqnrt4ha,imgname-annamalai2-1768209108067.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಜೂ.01)&lt;/strong&gt; ಪೊಲೀಸ್ ಕರ್ತವ್ಯಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡ ಅಣ್ಣಾಮಲೈ ತಮಿಳುನಾಡಿನಲ್ಲಿ ಹೊಸ ಅಲೆ ಸೃಷ್ಟಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಹಾಕಿದ ಬ್ರೇಕ್, ಬಳಿಕ ಹಿರಿಯ ನಾಯಕರ ನಿರ್ಲಕ್ಷ್ಯದಿಂದ ತಮಿಳುನಾಡಿನಲ್ಲಿ ಅಣ್ಣಾಮಲೈ ಮಾತ್ರವಲ್ಲ ಬಿಜೆಪಿ ಮೂಲೆಗುಂಪಾಯಿತು. ದಿಢೀರ್ ದೆಹಲಿಗೆ ತೆರಳಿ ವರಿಷ್ಠರ ಭೇಟಿಯಾದ ಅಣ್ಣಾಮಲೈ ಬಿಜೆಪಿ ತೊರೆಯುತ್ತಿದ್ದಾರೆ. ಹೊಸ ಪಕ್ಷ ಕಟ್ಟುತ್ತಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಅಣ್ಣಾಮಲೈ ನೀಡಿದ ಉತ್ತರ ಇದೀಗ ತಮಿಳುನಾಡು ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಎರಡು ದಿನ ಕಾಯಿರಿ, ಎಲ್ಲಾ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಇನ್ನೆರಡು ದಿನದಲ್ಲಿ ಅಣ್ಣಾಮೈಲೆ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ಇದೇ ದಿನ ಹೊಸ ಪಕ್ಷ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ದೆಹಲಿ ಭೇಟಿ ಬಳಿಕ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಣ್ಣಾಮಲೈಗೆ ಮಾಧ್ಯಮಗಳು ನೇರ ಪ್ರಶ್ನೆ ಕೇಳಿತ್ತು. ಅಣ್ಣಾಮಲೈ ಬಿಜೆಪಿ ತೊರೆಯುತ್ತಿದ್ದಾರೆ, ಹೊಸ ಪಕ್ಷ ಆರಂಭಿಸುತ್ತಿದ್ದಾರೆ, ತಮಿಳುನಾಡಿನಲ್ಲಿ ಅಣ್ಣಾಮಲೈ ನೇತೃತ್ವದಲ್ಲಿ ಹೊಸ ಆಂದೋಲನ ಶುರುವಾಗಲಿದೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ ಎಂದು ಪ್ರಶ್ನಿಸಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ ಇನ್ನೆರಡು ದಿನ ಕಾಯಬೇಕು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದಿದ್ದಾರೆ.&lt;/p&gt;&lt;h2&gt;ಜೂನ್ 4ಕ್ಕೆ ಹುಟ್ಟುಹಬ್ಬ, ಇದೇ ದಿನ ನಿರ್ಧಾರ ಘೋಷಣೆ&lt;/h2&gt;&lt;p&gt;ಅಣ್ಣಾಮಲೈ ಇನ್ನೆರಡು ದಿನ ಕಾಯಬೇಕು ಎಂದಿದ್ದಾರೆ. ಇನ್ನೆರಡು ದಿನ ಅಂದರೆ ಜೂನ್ ನಾಲ್ಕರಂದು ಅಣ್ಣಾಮಲೈ 42ನೇ ವರ್ಷದ ಹುಟ್ಟುಹಬ್ಬ ಆಚರಿಸಲಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನವೇ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ ಎಂದು ರಾಜಕೀಯ ತಜ್ಞರು ವ್ಯಾಖ್ಯಾನಿಸಿದ್ದಾರೆ. ಅಣ್ಣಾಮಲೈ ಹುಟ್ಟುಹಬ್ಬ ದಿನವೇ ಹೊಸ ಪಕ್ಷದ ಉದಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.&lt;/p&gt;&lt;h2&gt;ಕೊಯಂಬತ್ತೂರಿನ ಹಲೆವೆಡೆ ಪೋಸ್ಟರ್&lt;/h2&gt;&lt;p&gt;ಅಣ್ಣಾಮಲೈ ಹುಟ್ಟುಹಬ್ಬ ಹಿನ್ನಲೆಯಲ್ಲಿ ಕೊಯಂಬತ್ತೂರಿನ ಹಲವೆಡೆ ಹೊಸ ಪೋಸ್ಟರ್ ಅಂಟಿಸಲಾಗಿದೆ. ನಮ್ಮ ನಾಯಕ ನಮ್ಮ ಆಡಳಿತ ನಡೆಸುತ್ತಾರೆ. ದೂರದೃಷ್ಠಿಯುಳ್ಳ ನಾಯಕನಿಗೆ ಮಿತಿಗಳಿಲ್ಲ ಎಂಬೆಲ್ಲಾ ಬರಹ ಹಾಗೂ ಅಣ್ಣಾಮಲೈ ಫೋಟೋ ಇರುವ ಪೋಸ್ಟರ್ ಕಾಣಿಸಿಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳು ಅಣ್ಣಾಮಲೈ ಬಿಜೆಪಿ ತೊರೆದು ಹೊಸ ಪಾರ್ಟಿ ಆರಂಭಿಸುತ್ತಿರುವ ಸೂಚನೆಗಳು ನೀಡುತ್ತಿದೆ.&lt;/p&gt;&lt;h3&gt;ವಿಜಯ್ ಟಿವಿಕೆ ಪಾರ್ಟಿ ಸ್ಪೂರ್ತಿ?&lt;/h3&gt;&lt;p&gt;ನಟ ವಿಜಯ್ ಟಿವಿಕೆ ಪಕ್ಷ ಕಟ್ಟಿ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದು ಮಾತ್ರವಲ್ಲ, ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿಯೊಂದಿಗೆ ಹೊಸ ಅಲೆ ಸೃಷ್ಟಿಸಿದ ಅಣ್ಣಾಮಲೈ, ಮೈತ್ರಿ ರಾಜಕೀಯಕ್ಕೆ ತಲೆಬಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನ ಗೆದ್ದುಕೊಂಡಿದೆ. ಟಿವಿಕೆ ರೀತಿ ಹೊಸ ಪಕ್ಷ ಸ್ಥಾಪಿಸಿ ಮುಂಬರುವ ಲೋಕಸಭೆ ಚುನಾವಣೆಗೆ ಶಕ್ತಿ ಸಾಮರ್ಥ್ಯ ತೋರಿಸಲು ಅಣ್ಣಾಮಲೈ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡು ಜನ, ರಾಜಕೀಯ ಪ್ರಾದೇಶಿಕ ಪಕ್ಷಕ್ಕೆ ನೀಡಿದ ಸ್ಥಾನಮಾನ, ರಾಷ್ಟ್ರೀಯ ಪಕ್ಷಗಳಿಗೆ ನೀಡುತ್ತಿಲ್ಲ ಅನ್ನೋ ಸ್ಪಷ್ಟ ಅರಿವು ಅಣ್ಣಾಮಲೈಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;#WATCH | Tamil Nadu | BJP leader K. Annamalai leaves for Delhi from Chennai.When asked on speculations about him expected to launch a new party, he says, &quot;Please wait. We will sit down and talk in two days&quot; pic.twitter.com/5qOZfp7OHD&lt;/p&gt;&lt;p&gt;&mdash; ANI (@ANI) June 1, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/annamalai-breaks-silence-on-bjp-exit-rumours-says-wait-for-two-days/articleshow-kixzqvc"/>
        </item>
        <item>
            <title><![CDATA[ನಿವೃತ್ತಿಗೆ ಕೊನೆಯ ದಿನ: ಮನೆ ಹರಾಜು ಹಾಕುವ ಬದಲು, ಬಡವರ ಸಾಲ ತೀರಿಸಿದ ಪತ್ರ ವಾಪಸ್ ಕೊಟ್ಟ ಬ್ಯಾಂಕ್ ಅಧಿಕಾರಿ!]]></title>
            <link>https://kannada.asianetnews.com/viral/kerala-bank-officer-mercy-cherian-pays-poor-family-loan-on-retirement-day-save-home-sat/articleshow-oxfw18b</link>
            <guid isPermaLink="true">https://kannada.asianetnews.com/viral/kerala-bank-officer-mercy-cherian-pays-poor-family-loan-on-retirement-day-save-home-sat/articleshow-oxfw18b</guid>
            <pubDate>Mon, 01 Jun 2026 20:03:35 +0530</pubDate>
            <description><![CDATA[&lt;p&gt;ಸಾಲ ವಸೂಲಾತಿಗಾಗಿ ಬಡ ಕುಟುಂಬದ ಮನೆ ಜಪ್ತಿ ಮಾಡಲು ಹೋದ ಬ್ಯಾಂಕ್ ಅಧಿಕಾರಿಯೊಬ್ಬರು, ಅವರ ಬಡತನ ಕಂಡು ಮನಕರಗಿ, ತಾವೇ ಸಂಪೂರ್ಣ ಸಾಲವನ್ನು ತೀರಿಸಿದ್ದಾರೆ. ತಮ್ಮ ನಿವೃತ್ತಿಯ ದಿನದಂದು ಆ ಕುಟುಂಬಕ್ಕೆ ಮನೆಯ ಮೂಲ ಪತ್ರಗಳನ್ನು ಹಸ್ತಾಂತರಿಸಿ, ಮಾನವೀಯತೆ ಮೆರೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz4c4w5jfv9z6apk44fsmey,imgname-recovery-officer-repays-debt-1780234982277.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಧಿಕಾರ, ಕಾನೂನು, ನಿಯಮಗಳ ನಡುವೆ ಇಂದಿನ ಜಗತ್ತಿನಲ್ಲಿ ಮಾನವೀಯತೆ ಎಂಬುದು ಮರೆಯಾಗುತ್ತಿದೆ ಎನ್ನುವವರೇ ಹೆಚ್ಚು. ಆದರೆ, ಇಲಾಖೆಯ ನಿಯಮಗಳ ಆಚೆಗೂ ಕರುಣೆಯುಳ್ಳ ಹೃದಯಗಳು ಇರುತ್ತವೆ ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ಸಾಲ ವಸೂಲಾತಿಗಾಗಿ ಬಡ ಕುಟುಂಬವೊಂದರ ಮನೆಗೆ ಜಪ್ತಿ ಮಾಡಲು ಹೋದ ಸರ್ಕಾರಿ ಬ್ಯಾಂಕ್ ಅಧಿಕಾರಿಯೊಬ್ಬರು, ಅಲ್ಲಿನ ಕಡು ಬಡತನವನ್ನು ಕಂಡು ಕರಗಿದ್ದಾರೆ. ಕಾನೂನು ಪ್ರಕಾರ ಮನೆಯನ್ನು ಹರಾಜು ಹಾಕುವ ಬದಲು, ಆ ಬಡ ಕುಟುಂಬದ ಸಂಪೂರ್ಣ ಸಾಲವನ್ನು ತಾವೇ ತೀರಿಸಿ, ಅವರ ಮುಖದಲ್ಲಿ ನಗು ಮೂಡಿಸಿದ್ದಾರೆ. ತಮ್ಮ ನಿವೃತ್ತಿಯ ದಿನದಂದೇ ಆ ಕುಟುಂಬಕ್ಕೆ ಮನೆಯ ಮೂಲ ಪತ್ರಗಳನ್ನು ಹಸ್ತಾಂತರಿಸಿ ಎಲ್ಲರ ಮನ ಗೆದ್ದಿದ್ದಾರೆ.&lt;/p&gt;&lt;h2&gt;&lt;strong&gt;ಮನೆ ಹರಾಜು ಹಾಕಲು ಬಂದಿತ್ತು ಆದೇಶ!&lt;/strong&gt;&lt;/h2&gt;&lt;p&gt;ಈ ಮನ ಮಿಡಿಯುವ ಘಟನೆ ನಡೆದಿರುವುದು ನೆರೆರಾಜ್ಯ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ. ಕೊಯಿಲಾಂಡಿ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ技 ಬ್ಯಾಂಕ್&zwnj;ನ ರಿಕवरी ಆಫೀಸರ್ ಆಗಿದ್ದ ಮರ್ಸಿ ಚೆರಿಯಾನ್ ಅವರೇ ಈ ಕಥೆಯ ರಿಯಲ್ ಹೀರೋಯಿನ್. ಬಾಲುശ്ശೇರಿ ಪಂಚಾಯತ್&zwnj;ನ ಪುತ್ತೂರ್&zwnj;ವಟ್ಟಂ ನಿವಾಸಿ ಜಾನು ಮತ್ತು ಅವರ ಮಗಳು ಪ್ರಮೀಳಾ ಎಂಬುವವರೇ ಈ ಮಾನವೀಯತೆಯ ಲಾಭ ಪಡೆದ ದುರ್ದೈವಿಗಳು. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಈ ತಾಯಿ-ಮಗಳು ಅನಿವಾರ್ಯವಾಗಿ ತಮ್ಮ ಪುಟ್ಟ ಮನೆಯನ್ನು ಅಡವಿಟ್ಟು 75,000 ರೂಪಾಯಿ ಸಾಲ ಪಡೆದಿದ್ದರು. ಆದರೆ, ಬಡತನದ ಕಾರಣದಿಂದ ಅವರಿಗೆ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗಲೇ ಇಲ್ಲ.&lt;/p&gt;&lt;h2&gt;&lt;strong&gt;ಜಪ್ತಿ ಮಾಡಲು ಹೋದ ಅಧಿಕಾರಿಯ ಮನ ಕರಗಿದ ಕ್ಷಣ&lt;/strong&gt;&lt;/h2&gt;&lt;p&gt;ನಿಯಮಗಳ ಪ್ರಕಾರ ಬ್ಯಾಂಕ್, ಸಾಲ ವಸೂಲಾತಿಗಾಗಿ ಕಾನೂನು ಕ್ರಮಕ್ಕೆ ಮುಂದಾಗಿ ಮನೆಯನ್ನು ಹರಾಜು ಹಾಕಲು ನಿರ್ಧರಿಸಿತು. ಈ ಜಾಗವನ್ನು ಅಳತೆ ಮಾಡಿ, ಜಪ್ತಿ ಪ್ರಕ್ರಿಯೆ ನಡೆಸುವ ಜವಾಬ್ದಾರಿಯನ್ನು ಬ್ಯಾಂಕ್ ಅಧಿಕಾರಿ ಮರ್ಸಿ ಚೆರಿಯಾನ್ ಅವರಿಗೆ ವಹಿಸಲಾಗಿತ್ತು. ಕರ್ತವ್ಯದ ಭಾಗವಾಗಿ ಜಾನು ಅವರ ಮನೆಗೆ ಭೇಟಿ ನೀಡಿದ ಮರ್ಸಿಗೆ, ಅಲ್ಲಿನ ಕಷ್ಟದ ಪರಿಸ್ಥಿತಿ ಕಂಡು ಕಣ್ಣಾಲಿಗಳು ತುಂಬಿ ಬಂದವು. ಆ ಬಡ ಕುಟುಂಬವನ್ನು ಬೀದಿಗೆ ತಳ್ಳಲು ಅವರ ಮನಸ್ಸು ಒಪ್ಪಲಿಲ್ಲ. ತಕ್ಷಣವೇ ಅವರು ಒಂದು ಧೈರ್ಯದ ನಿರ್ಧಾರ ಮಾಡಿದರು; ಆ ಸಾಲದ ಜವಾಬ್ದಾರಿಯನ್ನು ತಾವೇ ಹೊತ್ತುಕೊಳ್ಳಲು ನಿರ್ಧರಿಸಿದರು.&lt;/p&gt;&lt;h2&gt;&lt;strong&gt;ಸ್ವಂತ ಹಣದಲ್ಲೇ 4 ವರ್ಷ ಸಾಲ ಕಟ್ಟಿದ 'ಮರ್ಸಿ'&lt;/strong&gt;&lt;/h2&gt;&lt;p&gt;ಕಳೆದ 2022ರಲ್ಲಿ, 80,000 ರೂಪಾಯಿಗೆ ಆ ಸಾಲವನ್ನು ನವೀಕರಿಸಿದ ಮರ್ಸಿ ಚೆರಿಯಾನ್, ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು ತಮ್ಮ ಸ್ವಂತ ಹಣದಿಂದ 1500 ರೂಪಾಯಿಗಳ ಕಂತನ್ನು ಬ್ಯಾಂಕ್&zwnj;ಗೆ ಪಾವತಿಸುತ್ತಾ ಬಂದರು. ಇತ್ತೀಚೆಗೆ ಅವರ ನಿವೃತ್ತಿಯ ದಿನ ಹತ್ತಿರ ಬಂದಾಗ, ಇನ್ನು ಮುಂದೆ ಕಂತು ಪಾವತಿ ವಿಳಂಬವಾಗಬಾರದು ಎಂದು ಯೋಚಿಸಿದ ಮರ್ಸಿ, ಬಾಕಿ ಉಳಿದಿದ್ದ ಇಡೀ 41,000 ರೂಪಾಯಿಗಳನ್ನು ಒಂದೇ ಬಾರಿಗೆ ಪಾವತಿಸಿ ಸಾಲವನ್ನು ಸಂಪೂರ್ಣವಾಗಿ ಚುಕ್ತಾ ಮಾಡಿದರು.&lt;/p&gt;&lt;h3&gt;&lt;strong&gt;ನಿವೃತ್ತಿಯ ದಿನದಂದು ಕಣ್ಣೀರು ತರಿಸಿದ ಆ ಒಂದು ಗಿಫ್ಟ್!&lt;/strong&gt;&lt;/h3&gt;&lt;p&gt;ಬಾಕಿ ಹಣವನ್ನೆಲ್ಲಾ ಪಾವತಿಸಿದ ಮರ್ಸಿ, ಆ ಕುಟುಂಬದ ಮನೆಯ ಮೂಲ ಪತ್ರಗಳನ್ನು (ರಜಿಸ್ಟರ್ಡ್ ಡಾಕ್ಯುಮೆಂಟ್ಸ್) ಬ್ಯಾಂಕ್&zwnj;ನಿಂದ ಬಿಡಿಸಿ ತಂದು ಅವರಿಗೆ ಹಿಂದಿರುಗಿಸಿದರು. ತಮ್ಮ ಅಧಿಕೃತ ಸೇವೆಯ ಕೊನೆಯ ದಿನ, ಮರ್ಸಿ ಚೆರಿಯಾನ್ ಅವರು ಬ್ಯಾಂಕ್&zwnj;ನಿಂದ ಬೀಳ್ಕೊಡುಗೆ ಪಡೆಯುವಾಗ ಜಾನು ಮತ್ತು ಪ್ರಮೀಳಾ ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದರು. ಕೇವಲ ಕಾನೂನು ಪಾಲಿಸದೆ, ಮಾನವೀಯತೆಯನ್ನು ಎತ್ತಿಹಿಡಿದ ಮರ್ಸಿ ಅವರ ಕಾರ್ಯಕ್ಕೆ ಈಗ ಇಡೀ ದೇಶವೇ ಸಲಾಂ ಎನ್ನುತ್ತಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/kerala-bank-officer-mercy-cherian-pays-poor-family-loan-on-retirement-day-save-home-sat/articleshow-oxfw18b"/>
        </item>
        <item>
            <title><![CDATA[ಸೈಕಲ್‌ ವೇಗದಲ್ಲಿ ಹೋಗುವ ಭಾರತದ ಈ Train ;‌ ಆದರೂ 2-3 ತಿಂಗಳು ಮುಂಚೆ ಟಿಕೆಟ್ ಬುಕ್‌ ಮಾಡಬೇಕು!]]></title>
            <link>https://kannada.asianetnews.com/gallery/india-news/unesco-world-heritage-slowest-train-nilgiri-mountain-railway-ooty-toy-train-facts-m6alzys</link>
            <guid isPermaLink="true">https://kannada.asianetnews.com/gallery/india-news/unesco-world-heritage-slowest-train-nilgiri-mountain-railway-ooty-toy-train-facts-m6alzys</guid>
            <pubDate>Mon, 01 Jun 2026 18:15:07 +0530</pubDate>
            <description><![CDATA[&lt;p&gt;UNESCO World Heritage slow Train: ಭಾರತದ ಅತಿ ನಿಧಾನದ ರೈಲು ಎಂಬ ಖ್ಯಾತಿ ನೀಲಗಿರಿ ಮೌಂಟೇನ್ ರೈಲ್ವೆಗೆ ಇದೆ. ಯುನೆಸ್ಕೋ ಮಾನ್ಯತೆ ಪಡೆದ ಈ ಊಟಿ ಟಾಯ್ ಟ್ರೈನ್, ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ. ನಿಧಾನವಾಗಿ ಹೋದರೂ ಇದು ಯಾಕೆ ಇಷ್ಟು ಸ್ಪೆಷಲ್?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjhzk33wghe7d3vkgtfc30km,imgname-nilgiri-mountain-railway--3--1772277566588.jpg" type="image/jpeg" height="390" width="690"/>
            <content:encoded><![CDATA[&lt;p&gt;UNESCO World Heritage slow Train: ಭಾರತದ ಅತಿ ನಿಧಾನದ ರೈಲು ಎಂಬ ಖ್ಯಾತಿ ನೀಲಗಿರಿ ಮೌಂಟೇನ್ ರೈಲ್ವೆಗೆ ಇದೆ. ಯುನೆಸ್ಕೋ ಮಾನ್ಯತೆ ಪಡೆದ ಈ ಊಟಿ ಟಾಯ್ ಟ್ರೈನ್, ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ. ನಿಧಾನವಾಗಿ ಹೋದರೂ ಇದು ಯಾಕೆ ಇಷ್ಟು ಸ್ಪೆಷಲ್?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈ ಸ್ಪೀಡ್ ಯುಗದಲ್ಲಿ, ಸೈಕಲ್ ವೇಗದಲ್ಲಿ, ಅಂದರೆ ಗಂಟೆಗೆ ಕೇವಲ 9 ರಿಂದ 12 ಕಿ.ಮೀ. ವೇಗದಲ್ಲಿ ಚಲಿಸುವ ಒಂದು ವಿಚಿತ್ರ ರೈಲು ನಮ್ಮ ದೇಶದಲ್ಲಿದೆ. ಆದರೆ, ಈ ನಿಧಾನವೇ ಇದರ ನಿಜವಾದ ಸೌಂದರ್ಯ. ಈ ರೈಲು ಹತ್ತಲು ಜನರು ತಿಂಗಳುಗಳ ಮೊದಲೇ ಟಿಕೆಟ್ ಬುಕ್ ಮಾಡಿ ಸರದಿಯಲ್ಲಿ ನಿಲ್ಲುತ್ತಾರೆ. ಅದೇ ತಮಿಳುನಾಡಿನ ನೀಲಗಿರಿ ಮೌಂಟೇನ್ ರೈಲ್ವೆ, ನಮ್ಮೆಲ್ಲರ ಪ್ರೀತಿಯ 'ಊಟಿ ಟಾಯ್ ಟ್ರೈನ್'.&lt;/p&gt;&lt;img&gt;&lt;p&gt;ಈ ರೈಲು ಕೇವಲ ಬೊಂಬೆ ರೈಲಲ್ಲ, ಇದರ ಹಿಂದೆ ಒಂದು ಶತಮಾನದ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ, ಅಂದರೆ 1908ರಲ್ಲಿ ನಿರ್ಮಿಸಿದ ಈ ರೈಲ್ವೆ ಮಾರ್ಗದ ಮಹತ್ವವನ್ನು ಗುರುತಿಸಿ 2005ರಲ್ಲಿ 'ಯುನೆಸ್ಕೋ' ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು. ಕೇವಲ 46 ಕಿ.ಮೀ. ದೂರವನ್ನು ಕ್ರಮಿಸಲು ಈ ರೈಲಿಗೆ ಸುಮಾರು 5 ಗಂಟೆ ಬೇಕಾಗುತ್ತದೆ.&lt;/p&gt;&lt;img&gt;&lt;p&gt;ಮೆಟ್ಟುಪಾಳಯಂನಿಂದ ಊಟಿಯವರೆಗಿನ 5 ಗಂಟೆಗಳ ಪ್ರಯಾಣದಲ್ಲಿ, ರೈಲು 208 ತಿರುವುಗಳು, 16 ಸುರಂಗಗಳು ಮತ್ತು 250ಕ್ಕೂ ಹೆಚ್ಚು ಸೇತುವೆಗಳ ಮೇಲೆ ಸಾಗುತ್ತದೆ. ಕಿಟಕಿಯಿಂದ ಹೊರಗೆ ನೋಡಿದರೆ ದಟ್ಟವಾದ ಕಣಿವೆಗಳು, ಹಸಿರು ಚಹಾ ತೋಟಗಳು ಮತ್ತು ಜಲಪಾತಗಳ ಸುಂದರ ದೃಶ್ಯಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.&lt;/p&gt;&lt;img&gt;&lt;p&gt;ಈ ರೈಲು ಇಷ್ಟು ನಿಧಾನವಾಗಿ ಹೋಗಲು 'ರ್ಯಾಕ್ ಮತ್ತು ಪಿನಿಯನ್' ಎಂಬ ವಿಶಿಷ್ಟ ತಂತ್ರಜ್ಞಾನವೇ ಕಾರಣ. ಮೆಟ್ಟುಪಾಳಯಂನಲ್ಲಿ 326 ಮೀಟರ್ ಎತ್ತರದಲ್ಲಿ ಪ್ರಾರಂಭವಾಗುವ ಹಳಿ, ಊಟಿ ತಲುಪುವಷ್ಟರಲ್ಲಿ 2,203 ಮೀಟರ್ ಎತ್ತರಕ್ಕೆ ಏರುತ್ತದೆ. ಈ ಕಡಿದಾದ ಹಾದಿಯಲ್ಲಿ ರೈಲು ಹಿಂದಕ್ಕೆ ಜಾರದಂತೆ ಈ ತಂತ್ರಜ್ಞಾನ ಸಹಾಯ ಮಾಡುತ್ತದೆ. ಭಾರತದಲ್ಲಿ ಈ ತಂತ್ರಜ್ಞಾನವಿರುವ ಏಕೈಕ ರೈಲು ಮಾರ್ಗ ಇದಾಗಿದೆ.&lt;/p&gt;&lt;img&gt;&lt;p&gt;ಈ ರೈಲು ಪ್ರತಿದಿನ ಬೆಳಗ್ಗೆ 07:10ಕ್ಕೆ ಮೆಟ್ಟುಪಾಳಯಂನಿಂದ ಹೊರಟು ಮಧ್ಯಾಹ್ನ 12:00ಕ್ಕೆ ಊಟಿ ತಲುಪುತ್ತದೆ. ಮರಳಿ ಮಧ್ಯಾಹ್ನ 02:00ಕ್ಕೆ ಊಟಿಯಿಂದ ಹೊರಟು ಸಂಜೆ 05:30ಕ್ಕೆ ಮೆಟ್ಟುಪಾಳಯಂಗೆ ಬರುತ್ತದೆ. ಕೂನೂರ್&zwnj;ವರೆಗೆ ಹಬೆಯಂತ್ರದಿಂದ, ನಂತರ ಡೀಸೆಲ್ ಇಂಜಿನ್&zwnj;ನಿಂದ ಈ ರೈಲು ಚಲಿಸುತ್ತದೆ.&lt;/p&gt;&lt;p&gt;ಈ ಟಾಯ್ ಟ್ರೈನ್&zwnj;ಗೆ ವಿಶ್ವಾದ್ಯಂತ ಬೇಡಿಕೆಯಿರುವುದರಿಂದ, ಕನಿಷ್ಠ 2-3 ತಿಂಗಳು ಮುಂಚಿತವಾಗಿ ಐಆರ್&zwnj;ಸಿಟಿಸಿ (IRCTC) ವೆಬ್&zwnj;ಸೈಟ್&zwnj;ನಲ್ಲಿ ಟಿಕೆಟ್ ಬುಕ್ ಮಾಡುವುದು ಉತ್ತಮ. ಬೆಟ್ಟದ ಮೇಲೆ ಚಳಿ ಇರುವುದರಿಂದ ಸ್ವೆಟರ್ ಅಥವಾ ಜಾಕೆಟ್ ಇಟ್ಟುಕೊಳ್ಳಿ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಮುಂಗಡ ಬುಕ್ಕಿಂಗ್ ಅತ್ಯಗತ್ಯ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/unesco-world-heritage-slowest-train-nilgiri-mountain-railway-ooty-toy-train-facts-m6alzys"/>
        </item>
        <item>
            <title><![CDATA[Blinkit vs Supermarket: ಬ್ಲಿಂಕಿಟ್‌, ಸೂಪರ್‌ಮಾರ್ಕೆಟ್‌ ಮಧ್ಯೆ ಕಡಿಮೆ ಬೆಲೆಗೆ ದಿನಸಿ ವಸ್ತು ಸಿಗೋದೆಲ್ಲಿ?]]></title>
            <link>https://kannada.asianetnews.com/gallery/india-news/blinkit-delivery-app-vs-supermarket-which-is-better-in-price-difference-s3gvnpo</link>
            <guid isPermaLink="true">https://kannada.asianetnews.com/gallery/india-news/blinkit-delivery-app-vs-supermarket-which-is-better-in-price-difference-s3gvnpo</guid>
            <pubDate>Mon, 01 Jun 2026 17:35:05 +0530</pubDate>
            <description><![CDATA[&lt;p&gt;Blinkit, ಸೂಪರ್&zwnj;ಮಾರ್ಕೆಟ್&zwnj;ಗಳ ನಡುವಿನ ದಿನಸಿ ವೆಚ್ಚವನ್ನು ಹೋಲಿಸಿದ ಪೋಸ್ಟ್ ವೈರಲ್ ಆಗಿದೆ. 1 ತಿಂಗಳ ಖರ್ಚಿನಲ್ಲಿ ಒಟ್ಟಾರೆ ಬೆಲೆ ವ್ಯತ್ಯಾಸವು ನಿರೀಕ್ಷೆಗಿಂತ ಕಡಿಮೆ ಇತ್ತು. ಬ್ಲಿಂಕಿಟ್&zwnj;ನಲ್ಲಿ ಕೆಲವು ವಸ್ತುಗಳು ದುಬಾರಿ, ಇನ್ನು ಕೆಲವು ವಸ್ತುಗಳ ಬೆಲೆ ಒಂದೇ ರೀತಿ, ರಿಯಾಯಿತಿಯಲ್ಲಿ ಲಭ್ಯವಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1gtrr53sqbtsfxeeqd9cd0,imgname-new-project---2026-06-01t172406.379-1780315153157.jpg" type="image/jpeg" height="390" width="690"/>
            <content:encoded><![CDATA[&lt;p&gt;Blinkit, ಸೂಪರ್&zwnj;ಮಾರ್ಕೆಟ್&zwnj;ಗಳ ನಡುವಿನ ದಿನಸಿ ವೆಚ್ಚವನ್ನು ಹೋಲಿಸಿದ ಪೋಸ್ಟ್ ವೈರಲ್ ಆಗಿದೆ. 1 ತಿಂಗಳ ಖರ್ಚಿನಲ್ಲಿ ಒಟ್ಟಾರೆ ಬೆಲೆ ವ್ಯತ್ಯಾಸವು ನಿರೀಕ್ಷೆಗಿಂತ ಕಡಿಮೆ ಇತ್ತು. ಬ್ಲಿಂಕಿಟ್&zwnj;ನಲ್ಲಿ ಕೆಲವು ವಸ್ತುಗಳು ದುಬಾರಿ, ಇನ್ನು ಕೆಲವು ವಸ್ತುಗಳ ಬೆಲೆ ಒಂದೇ ರೀತಿ, ರಿಯಾಯಿತಿಯಲ್ಲಿ ಲಭ್ಯವಿತ್ತು.&lt;/p&gt;&lt;img&gt;&lt;p&gt;ಕ್ವಿಕ್-ಕಾಮರ್ಸ್ ಪ್ಲಾಟ್&zwnj;ಫಾರ್ಮ್ ಬ್ಲಿಂಕಿಟ್, ಸ್ಥಳೀಯ ಸೂಪರ್&zwnj;ಮಾರ್ಕೆಟ್&zwnj;ಗಳಲ್ಲಿನ ದಿನಸಿ ಖರ್ಚಿನ ಬಗ್ಗೆ ದಂಪತಿಯೊಬ್ಬರು ಮಾಡಿದ ವಿವರವಾದ ಹೋಲಿಕೆಯ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೇಗದ ಡೆಲಿವರಿ ಕೊಡುವ ಆ್ಯಪ್&zwnj;ಗಳು ಹೆಚ್ಚು ದುಬಾರಿಯೇ ಎಂಬ ಚರ್ಚೆಯನ್ನು ಇದು ಮತ್ತೆ ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ಈ ದಂಪತಿ ಒಂದು ತಿಂಗಳಲ್ಲಿ ಬ್ಲಿಂಕಿಟ್ ಮೂಲಕ ಸುಮಾರು ₹20,000 ಮೌಲ್ಯದ ದಿನಸಿ ವಸ್ತುಗಳನ್ನು ಖರೀದಿಸಿದ್ದರು. ಈ ಪ್ರಯೋಗವು, ಅನುಕೂಲ, ಮನೆ ಬಜೆಟ್ ನಡುವೆ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತಿರುವ ಗ್ರಾಹಕರಿಂದ ವ್ಯಾಪಕ ಗಮನ ಸೆಳೆದಿದೆ. ತಮ್ಮ ತಿಂಗಳ ದಿನಸಿ ಬಜೆಟ್&zwnj;ನ ದೊಡ್ಡ ಪಾಲು ಕ್ವಿಕ್-ಡೆಲಿವರಿ ಪ್ಲಾಟ್&zwnj;ಫಾರ್ಮ್&zwnj;ಗೆ ಹೋಗುತ್ತಿರುವುದನ್ನು ಗಮನಿಸಿದ ನಂತರ, ಈ ದಂಪತಿ ತಮ್ಮ ಖರ್ಚಿನ ಬಗ್ಗೆ ವಿಶ್ಲೇಷಿಸಲು ನಿರ್ಧರಿಸಿದರು. ಈ ಅನುಕೂಲಕ್ಕಾಗಿ ತಾವು ಹೆಚ್ಚು ಹಣ ಪಾವತಿಸುತ್ತಿದ್ದೇವೆಯೇ ಎಂದು ತಿಳಿಯಲು, ಅವರು ಬ್ಲಿಂಕಿಟ್&zwnj;ನಲ್ಲಿ ಖರೀದಿಸಿದ ವಸ್ತುಗಳ ಬೆಲೆಗಳನ್ನು ಹತ್ತಿರದ ಸೂಪರ್&zwnj;ಮಾರ್ಕೆಟ್&zwnj;ಗಳಲ್ಲಿ ಲಭ್ಯವಿರುವ ಬೆಲೆಗಳೊಂದಿಗೆ ಹೋಲಿಕೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಸಂಶೋಧನೆಯನ್ನು ಆನ್&zwnj;ಲೈನ್&zwnj;ನಲ್ಲಿ ಹಂಚಿಕೊಂಡ ಅವರು, ತಾವು ಅಂದುಕೊಂಡಿದ್ದಕ್ಕಿಂತ ಈ ಎರಡು ಶಾಪಿಂಗ್ ವಿಧಾನಗಳ ನಡುವಿನ ಒಟ್ಟಾರೆ ವ್ಯತ್ಯಾಸವು ತುಂಬಾ ಕಡಿಮೆ ಎಂದು ಬಹಿರಂಗಪಡಿಸಿದ್ದಾರೆ. ಬ್ಲಿಂಕಿಟ್&zwnj;ನಲ್ಲಿ ಕೆಲವು ಉತ್ಪನ್ನಗಳು ಹೆಚ್ಚು ದುಬಾರಿಯಾಗಿದ್ದರೂ, ಇತರ ವಸ್ತುಗಳ ಬೆಲೆಗಳು ಒಂದೇ ರೀತಿ ಇದ್ದವು ಅಥವಾ ಪ್ರೊಮೋಷನ್&zwnj; ಮತ್ತು ಆಫರ್&zwnj;ಗಳ ಮೂಲಕ ರಿಯಾಯಿತಿಯಲ್ಲಿ ಸಿಕ್ಕಿದ್ದವು. ಕ್ವಿಕ್-ಕಾಮರ್ಸ್&zwnj;ನಲ್ಲಿ ಮಾಡುವ ಎಲ್ಲ ಖರೀದಿಗಳು ಹೆಚ್ಚು ದುಬಾರಿ ಎಂಬ ಸಾಮಾನ್ಯ ನಂಬಿಕೆಗೆ ಈ ಹೋಲಿಕೆಯು ಸವಾಲು ಹಾಕಿದೆ.&lt;/p&gt;&lt;img&gt;&lt;p&gt;ವೈರಲ್ ಪೋಸ್ಟ್ ಪ್ರಕಾರ, ಅನುಕೂಲವೇ ಅವರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ತ್ವರಿತ ಡೆಲಿವರಿ ಸೇವೆಗಳು ಸಮಯವನ್ನು ಉಳಿಸುತ್ತವೆ, ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡುತ್ತವೆ, ಪದೇ ಪದೇ ಸೂಪರ್&zwnj;ಮಾರ್ಕೆಟ್&zwnj;ಗೆ ಹೋಗುವುದನ್ನು ತಪ್ಪಿಸುತ್ತವೆ ಎಂದು ದಂಪತಿ ಹೇಳಿದ್ದಾರೆ. ಆದರೆ, ಬಳಕೆದಾರರು ಜಾಗರೂಕರಾಗಿರದಿದ್ದರೆ, ಸಣ್ಣ ಸಣ್ಣ ಆರ್ಡರ್&zwnj;ಗಳು ಮತ್ತು ಇಂಪಲ್ಸ್ ಖರೀದಿಗಳು ತಿಂಗಳ ಖರ್ಚನ್ನು ಹೆಚ್ಚಿಸಬಹುದು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಪೋಸ್ಟ್&zwnj;ಗೆ ಆನ್&zwnj;ಲೈನ್&zwnj;ನಲ್ಲಿ ಸಾವಿರಾರು ಪ್ರತಿಕ್ರಿಯೆಗಳು ಬಂದಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರು ಕ್ವಿಕ್-ಕಾಮರ್ಸ್ ಪ್ಲಾಟ್&zwnj;ಫಾರ್ಮ್&zwnj;ಗಳೊಂದಿಗೆ ತಮ್ಮದೇ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು, ವಿಶೇಷವಾಗಿ ನಗರಗಳಲ್ಲಿನ ಉದ್ಯೋಗಿಗಳಿಗೆ, ಈ ಸಣ್ಣ ಬೆಲೆ ವ್ಯತ್ಯಾಸವು ಅನುಕೂಲಕ್ಕೆ ತಕ್ಕ ಬೆಲೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು, ದೊಡ್ಡ ಪ್ರಮಾಣದ ಖರೀದಿ ಮತ್ತು ಯೋಜಿತ ಮಾಸಿಕ ಶಾಪಿಂಗ್&zwnj;ಗೆ ಸಾಂಪ್ರದಾಯಿಕ ಸೂಪರ್&zwnj;ಮಾರ್ಕೆಟ್&zwnj;ಗಳೇ ಹೆಚ್ಚು ಆರ್ಥಿಕ ಎಂದು ವಾದಿಸಿದ್ದಾರೆ.&lt;/p&gt;&lt;img&gt;&lt;p&gt;ಶಾಪಿಂಗ್ ವೆಚ್ಚಗಳನ್ನು ಹೋಲಿಸುವಾಗ ಇಂಧನ, ಸಾರಿಗೆ, ಪಾರ್ಕಿಂಗ್ ಶುಲ್ಕ ಮತ್ತು ವೈಯಕ್ತಿಕ ಸಮಯದ ಮೌಲ್ಯದಂತಹ ಅಂಶಗಳನ್ನು ಸಹ ಪರಿಗಣಿಸಬೇಕು ಎಂದು ಹಲವಾರು ಮಂದಿ ಕಮೆಂಟ್&zwnj;ಗಳಲ್ಲಿ ಹೇಳಿದ್ದಾರೆ. ಈ ಚರ್ಚೆಯು ಭಾರತೀಯ ನಗರಗಳಲ್ಲಿ ಬದಲಾಗುತ್ತಿರುವ ಗ್ರಾಹಕರ ನಡವಳಿಕೆ ಮತ್ತು ತ್ವರಿತ-ಡೆಲಿವರಿ ಸೇವೆಗಳ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ದೊಡ್ಡ ಸಂಭಾಷಣೆಯಾಗಿ ಬದಲಾಗಿದೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/blinkit-delivery-app-vs-supermarket-which-is-better-in-price-difference-s3gvnpo"/>
        </item>
        <item>
            <title><![CDATA[ಆರ್‌ಸಿಬಿ ಮಾಜಿ ವೇಗಿ ಈಗ ಮಿನಿಸ್ಟರ್, ಪ್ರಮಾಣವಚನ ಸ್ವೀಕರಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/gallery/cricket-sports/former-rcb-pacer-ashok-dinda-takes-oath-as-minister-in-west-bengal-meci3ql</link>
            <guid isPermaLink="true">https://kannada.asianetnews.com/gallery/cricket-sports/former-rcb-pacer-ashok-dinda-takes-oath-as-minister-in-west-bengal-meci3ql</guid>
            <pubDate>Mon, 01 Jun 2026 17:09:08 +0530</pubDate>
            <description><![CDATA[&lt;p&gt;ಟೀಂ ಇಂಡಿಯಾ, ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಆಂದರೆ ಈ ವೇಗಿ ಆರ್&zwnj;ಸಿಬಿ ಪರವೂ ಆಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1f8z11362xm0875swdpfrk,imgname-ashok-dinda-sworn-in-as-west-bengal-minister-1780313521182.png" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾ, ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಆಂದರೆ ಈ ವೇಗಿ ಆರ್&zwnj;ಸಿಬಿ ಪರವೂ ಆಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು , ಕೆಕೆಆರ್, ಪುಣೆ ಸೂಪರ್&zwnj;ಜೈಂಟ್ಸ್ ಸೇರಿದಂತೆ ಪ್ರಮುಖ ಐಪಿಎಲ್ ತಂಡಗಳಲ್ಲಿ ಆಡಿದ ವೇಗಿ, ಟೀಂ ಇಂಡಿಯಾದಲ್ಲೂ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದಲ್ಲಿ ಸಚಿವನಾಗಿ ಪ್ರಮಾಣಚನ ಸ್ವೀಕರಿಸಿದ್ದಾರೆ. ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾದ ಮಾಜಿ ವೇಗಿ ಬೇರೆ ಯಾರು ಅಲ್ಲ, ಅಶೋಕ್ ದಿಂಡಾ.&lt;/p&gt;&lt;img&gt;&lt;p&gt;ಸುವೇಂದು ಅಧಿಕಾರಿ ಕ್ಯಾಬಿನೆಟ್ ವಿಸ್ತರಣೆಯಾಗಿದೆ. 35 ಶಾಸಕರು ಪ್ರಮಾಣವಚನ ಸ್ವೀಕರಿಸಿ ಸಚಿವರಾಗಿದ್ದಾರೆ. ಈ ಪೈಕಿ ಅಶೋಕ್ ದಿಂಡಾ ಕೂಡ ಸೇರಿದ್ದಾರೆ. ರಾಜ್ಯಪಾಲ ಆರ್&zwnj;ಎನ್ ರವಿ ಪ್ರತಿಜ್ಞಾವಿಧಿ ಭೋಧಿಸಿದ್ದಾರೆ. ಟೀಂ ಇಂಡಿಯಾ ಮಾಜಿ ವೇಗಿ ಎಂದು ಕರೆಯಿಸಿಕೊಳ್ಳುತ್ತಿದ್ದ ದಿಂಡಾ ಇದೀಗ ಬಂಗಾಳದ ಸಚಿವನಾಗಿ ಬಡ್ತಿ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಹಾಗೂ ಐಪಿಎಲ್ ಟೂರ್ನಿಗೆ ವಿದಾಯ ಹೇಳಿದ ಬಳಿಕ ವೇಗಿ ಅಶೋಕ್ ದಿಂಡಾ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ಸೇರಿಕೊಂಡರು. ಈ ವೇಳೆ ಬಂಗಾಳದಲ್ಲಿ ಬಿಜೆಪಿ ಮೂರನೇ ಪಾರ್ಟಿಯಾಗಿತ್ತು. ಬೆದರಿಕೆ, ಬಿಜೆಪಿ ನಾಯಕರ ಮೇಲೆ ಸತತ ದಾಳಿಗಳ ನಡುವೆಯೂ ದಿಂಡಾ ಬಿಜೆಪಿಯಲ್ಲೇ ಉಳಿದಿಕೊಂಡು ಜನ ನಾಯಕನಾಗಿ ಬೆಳೆದರು.&lt;/p&gt;&lt;img&gt;&lt;p&gt;ಮೊಯ್ನಾ ವಿಧಾನಸಭ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ ಅಶೋಕ್ ದಿಂಡಾ ತೃಣಮೂಲ ಕಾಂಗ್ರೆಸ್ ನಾಯಕ ಚಂದನ್ ಮಂಡಲ್ ವಿರುದ್ದ 16,241 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ವಿಶೇಷ ಅಂದರೆ ದಿಂಡಾ ಸ್ಪರ್ಧಿಸಿದ ಎರಡು ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಅಶೋಕ್ ದಿಂಡಾ ಬಿಜೆಪಿ ಸೇರಿಕೊಂಡ ಕೆಲ ವರ್ಷಗ ಬಳಿಕ ಅಂದರೆ 2021ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲಿ ದಿಂಡಾ ಟಿಎಂಸಿಯ ಸಂಗ್ರಾಮ್ ದುಲೈ ವಿರುದ್ದ 1,260 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.&lt;/p&gt;&lt;img&gt;&lt;p&gt;ಅಶೋಕ್ ದಿಂಡಾ ಆರ್&zwnj;ಸಿಬಿ, ಪುಣೆ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪುಣೆ ಸೂಪರ್&zwnj;ಜೈಂಟ್ಸ್ ತಂಡ ಸೇರಿದಂತೆ ಒಟ್ಟು ಐದು ತಂಡ ಪ್ರತಿನಿಧಿಸಿದ್ದಾರೆ. ಈ ಪೈಕಿ ಪುಣೆ ವಾರಿಯರ್ಸ್ ತಂಡದ ಪರ ಬಲು ದುಬಾರಿಯಾಗಿದ್ದ ಅಶೋಕ್ ದಿಂಡಾ ಟೀಕೆಗೆ ಗುರಿಯಾಗಿದ್ದರು. 78 ಐಪಿಎಲ್ ಪಂದ್ಯದಿಂದ 69 ವಿಕೆಟ್ ಕಬಳಿಸಿದ್ದಾರೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಪರ 2009ರಲ್ಲಿ ಡೆಬ್ಯೂ ಮಾಡಿದ ಅಶೋಕ್ ದಿಂಡಾ 13 ಎಕದಿನ ಪಂದ್ಯ ಆಡಿದ್ದಾರೆ. ಏಕದಿನದಲ್ಲಿ 12 ವಿಕೆಟ್ ಹಾಗೂ 9 ಟಿ20 ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದಾರೆ. ತಲೆಗೆ ಬ್ಯಾಂಡ್ ಹಾಕಿ ತಮ್ಮ ವಿಶೇಷ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಅಶೋಕ್ ದಿಂಡಾ ಇದೀಗ ಪಶ್ಚಿಮ ಬಂಗಾಳದ ಸಚಿವನಾಗಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/former-rcb-pacer-ashok-dinda-takes-oath-as-minister-in-west-bengal-meci3ql"/>
        </item>
        <item>
            <title><![CDATA[ಐಆರ್‌ಸಿಟಿಸಿ ಬಿಗ್ ಆಫರ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ! ಕರ್ನಾಟಕದ ಭಕ್ತರಿಗೂ ಸುವರ್ಣಾವಕಾಶ]]></title>
            <link>https://kannada.asianetnews.com/gallery/life/irctc-ayodhya-kashi-tour-package-bharat-gaurav-train-10-day-pilgrimage-gdp-iixr03y</link>
            <guid isPermaLink="true">https://kannada.asianetnews.com/gallery/life/irctc-ayodhya-kashi-tour-package-bharat-gaurav-train-10-day-pilgrimage-gdp-iixr03y</guid>
            <pubDate>Mon, 01 Jun 2026 16:44:56 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆಯ ಐಆರ್&zwnj;ಸಿಟಿಸಿ ಸಂಸ್ಥೆಯು ಪುಣ್ಯಕ್ಷೇತ್ರ ಯಾತ್ರೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. 9 ರಾತ್ರಿ ಮತ್ತು 10 ದಿನಗಳ ಈ ಯಾತ್ರೆಯು ಭಾರತ್ ಗೌರವ್ ವಿಶೇಷ ರೈಲಿನ ಮೂಲಕ ಅಯೋಧ್ಯೆ, ಕಾಶಿ, ಪುರಿ, ಗಯಾ , ಪ್ರಯಾಗ್&zwnj;ರಾಜ್&zwnj;ನಂತಹ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಕೈಗೆಟುಕುವ ದರದಲ್ಲಿ ಭೇಟಿ ನೀಡಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz1n8v82s9c33xyvnzh81v9,imgname-2-1780232135528.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರೈಲ್ವೆಯ ಐಆರ್&zwnj;ಸಿಟಿಸಿ ಸಂಸ್ಥೆಯು ಪುಣ್ಯಕ್ಷೇತ್ರ ಯಾತ್ರೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. 9 ರಾತ್ರಿ ಮತ್ತು 10 ದಿನಗಳ ಈ ಯಾತ್ರೆಯು ಭಾರತ್ ಗೌರವ್ ವಿಶೇಷ ರೈಲಿನ ಮೂಲಕ ಅಯೋಧ್ಯೆ, ಕಾಶಿ, ಪುರಿ, ಗಯಾ , ಪ್ರಯಾಗ್&zwnj;ರಾಜ್&zwnj;ನಂತಹ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಕೈಗೆಟುಕುವ ದರದಲ್ಲಿ ಭೇಟಿ ನೀಡಿ&lt;/p&gt;&lt;img&gt;&lt;p&gt;ಬೆಂಗಳೂರು: ಭಾರತದ ಅತ್ಯಂತ ಪವಿತ್ರ ಪುಣ್ಯಕ್ಷೇತ್ರಗಳ ದರ್ಶನ ಮಾಡಲು ಬಯಸುವ ಭಕ್ತಾದಿಗಳಿಗೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಅವಕಾಶ ನೀಡುತ್ತಿದೆ. ಐಆರ್&zwnj;ಸಿಟಿಸಿ ಸಂಸ್ಥೆಯು ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸುತ್ತಿರುವ 'ಅಯೋಧ್ಯೆ ಮತ್ತು ಕಾಶಿ ಪುಣ್ಯಕ್ಷೇತ್ರ ಯಾತ್ರೆ' ಹೆಸರಿನ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಒಟ್ಟು 9 ರಾತ್ರಿಗಳು ಮತ್ತು 10 ದಿನಗಳ ಕಾಲ ನಡೆಯುವ ಈ ಸುದೀರ್ಘ ಹಾಗೂ ದಿವ್ಯ ಯಾತ್ರೆಯು ಭಕ್ತರಿಗೆ ಅತ್ಯದ್ಭುತ ಆಧ್ಯಾತ್ಮಿಕ ಅನುಭೂತಿ ಸಿಗಲಿದೆ. ಈ ವಿಶೇಷ ಪ್ರವಾಸಕ್ಕಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಭಾರತ್ ಗೌರವ ಸ್ಪೆಷಲ್ ಟೂರಿಸ್ಟ್ ರೈಲು' ಅನ್ನು ಬಳಸಲಾಗುತ್ತಿದ್ದು, ಈ ರೈಲು ಆಗಸ್ಟ್ 4, 2026ರಂದು ಸಿಕಂದರಾಬಾದ್ ನಿಲ್ದಾಣದಿಂದ ತನ್ನ ಪವಿತ್ರ ಪ್ರಯಾಣವನ್ನು ಆರಂಭಿಸಲಿದೆ.&lt;/p&gt;&lt;img&gt;&lt;p&gt;ಈ ಪವಿತ್ರ ಯಾತ್ರೆಯು ನೆರೆರಾಜ್ಯದ ಸಿಕಂದರಾಬಾದ್&zwnj;ನಿಂದ ಅಧಿಕೃತವಾಗಿ ಆರಂಭವಾಗಲಿದ್ದರೂ, ಕರ್ನಾಟಕದ ಭಕ್ತರು ಕೂಡ ಸುಲಭವಾಗಿ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ನಗರಗಳಿಂದ ಸಿಕಂದರಾಬಾದ್&zwnj;ಗೆ ಅತ್ಯುತ್ತಮ ರೈಲು ಹಾಗೂ ಬಸ್ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ. ಹೀಗಾಗಿ, ಕರ್ನಾಟಕದ ಯಾತ್ರಾರ್ಥಿಗಳು ಆರಾಮವಾಗಿ ಸಿಕಂದರಾಬಾದ್&zwnj; ತಲುಪಿ ಅಲ್ಲಿಂದ ಈ ವಿಶೇಷ ರೈಲನ್ನು ಹತ್ತಬಹುದು. ಅಯೋಧ್ಯೆ, ಕಾಶಿ, ಪುರಿ ಮತ್ತು ಪ್ರಯಾಗ್&zwnj;ರಾಜ್&zwnj;ನಂತಹ ದೇಶದ ಶ್ರೇಷ್ಠ ಪುಣ್ಯಕ್ಷೇತ್ರಗಳನ್ನು ಒಂದೇ ಪ್ಯಾಕೇಜ್&zwnj;ನಲ್ಲಿ ದರ್ಶನ ಮಾಡುವ ಅಪರೂಪದ ಅವಕಾಶ ಇದಾಗಿರುವುದರಿಂದ, ರಾಜ್ಯದ ಭಕ್ತರಲ್ಲಿ ಈ ಪ್ರವಾಸದ ಕುರಿತು ಭಾರಿ ಆಸಕ್ತಿ ಮೂಡಿದೆ.&lt;/p&gt;&lt;img&gt;&lt;p&gt;ಈ ಹತ್ತು ದಿನಗಳ ಸುದೀರ್ಘ ಆಧ್ಯಾತ್ಮಿಕ ಪ್ರವಾಸದಲ್ಲಿ ಭಕ್ತರು ಭಾರತದ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಪುರಿ, ಕೋಣಾರ್ಕ್, ಗಯಾ, ಕಾಶಿ (ವಾರಣಾಸಿ), ಅಯೋಧ್ಯೆ ಹಾಗೂ ಪ್ರಯಾಗ್&zwnj;ರಾಜ್ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಯಾತ್ರೆಯ ಮೊದಲ ಹಂತದಲ್ಲಿ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ದರ್ಶನ ಭಾಗ್ಯ ಸಿಗಲಿದ್ದು, ಅದರ ಜೊತೆಗೆ ಕೋಣಾರ್ಕದ ಅದ್ಭುತ ಸೂರ್ಯ ದೇವಾಲಯ ವೀಕ್ಷಣೆಗೆ ಅವಕಾಶ ಇರಲಿದೆ. ತದನಂತರ ಪಿತೃಕಾರ್ಯಗಳಿಗೆ ಜಗತ್ಪ್ರಸಿದ್ಧವಾಗಿರುವ ಗಯಾದ ಪವಿತ್ರ ವಿಷ್ಣುಪಾದ ದೇವಾಲಯದ ದರ್ಶನವನ್ನು ಭಕ್ತರು ಪಡೆಯಲಿದ್ದಾರೆ.&lt;/p&gt;&lt;p&gt;ಯಾತ್ರೆಯ ಪ್ರಮುಖ ಆಕರ್ಷಣೆಯಾಗಿ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯ, ನೂತನವಾಗಿ ನಿರ್ಮಾಣಗೊಂಡಿರುವ ಭವ್ಯ ವಿಶ್ವನಾಥ ಕಾರಿಡಾರ್, ವಿಶಾಲಾಕ್ಷಿ ದೇವಸ್ಥಾನ ಮತ್ತು ಅನ್ನಪೂರ್ಣೇಶ್ವರಿ ದೇವಸ್ಥಾನಗಳ ದರ್ಶನ ಲಭ್ಯವಾಗಲಿದೆ. ಇದರ ಜೊತೆಗೆ ಸಂಜೆಯ ಸಮಯದಲ್ಲಿ ಮನಸೆಳೆಯುವ ಪವಿತ್ರ ಗಂಗಾ ಆರತಿಯ ದಿವ್ಯ ವೀಕ್ಷಣೆಯನ್ನು ಕಣ್ಣುಂಬಿಕೊಳ್ಳಬಹುದು. ಮುಂದೆ ಸಾಗುವ ರೈಲು ಇತ್ತೀಚೆಗಷ್ಟೇ ಭವ್ಯವಾಗಿ ಲೋಕಾರ್ಪಣೆಗೊಂಡ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ, ಹನುಮಾನ್ ಗಢಿ ದರ್ಶನ ಮತ್ತು ಸರಯೂ ನದಿಯ ಭವ್ಯ ಆರತಿ ವೀಕ್ಷಣೆಗೆ ದಾರಿ ಮಾಡಿಕೊಡಲಿದೆ. ಕೊನೆಯದಾಗಿ ಪವಿತ್ರ ನದಿಗಳ ಸಂಗಮ ಸ್ಥಾನವಾದ ಪ್ರಯಾಗ್&zwnj;ರಾಜ್&zwnj;ನ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮತ್ತು ದರ್ಶನ ಮಾಡಲು ವ್ಯವಸ್ಥೆ ಇರಲಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರು ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ವರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಒಟ್ಟು ಮೂರು ವಿಭಾಗಗಳಲ್ಲಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಸ್ಲೀಪರ್ ಕ್ಲಾಸ್ ಒಳಗೊಂಡಿರುವ ಎಕಾನಮಿ ವರ್ಗಕ್ಕೆ ಪ್ರತಿ ವ್ಯಕ್ತಿಗೆ 16,500 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇನ್ನು ತೃತೀಯ ಎಸಿ ಅಂದರೆ ಸ್ಟ್ಯಾಂಡರ್ಡ್ ವರ್ಗದಲ್ಲಿ ಪ್ರಯಾಣಿಸಲು ಬಯಸುವವರಿಗೆ ಪ್ರತಿ ವ್ಯಕ್ತಿಗೆ 25,600 ರೂಪಾಯಿಗಳ ದರ ಇರಲಿದೆ. ಅತ್ಯಂತ ಆರಾಮದಾಯಕ ಪ್ರಯಾಣವನ್ನು ಬಯಸುವವರಿಗಾಗಿ ದ್ವಿತೀಯ ಎಸಿ ಕಂಫರ್ಟ್ ವರ್ಗವನ್ನು ಮೀಸಲಿಡಲಾಗಿದ್ದು, ಇದಕ್ಕೆ ಪ್ರತಿ ವ್ಯಕ್ತಿಗೆ 33,400 ರೂಪಾಯಿಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.&lt;/p&gt;&lt;img&gt;&lt;p&gt;ಐಆರ್&zwnj;ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಸಂಪೂರ್ಣವಾಗಿ 'ಆಲ್-ಇನ್&zwnj;ಕ್ಲೂಸಿವ್' ಯೋಜನೆಯಾಗಿದೆ. ಅಂದರೆ, ನೀವು ಒಮ್ಮೆ ಟಿಕೆಟ್ ಬುಕ್ ಮಾಡಿದರೆ ಪ್ರಯಾಣದ ಅವಧಿಯಲ್ಲಿ ನಿಮ್ಮ ಇತರೆ ಯಾವುದೇ ಪ್ರಮುಖ ವೆಚ್ಚಗಳು ಇರುವುದಿಲ್ಲ. ಇದರಲ್ಲಿ ಭಾರತ್ ಗೌರವ ರೈಲಿನಲ್ಲಿ ಆಯ್ದ ವರ್ಗದ ಉನ್ನತ ಪ್ರಯಾಣ ವ್ಯವಸ್ಥೆ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಸ್ಥಳೀಯವಾಗಿ ಬಸ್ಸುಗಳು ಅಥವಾ ವಾಹನಗಳ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ರಾತ್ರಿ ತಂಗಲು ಸುಸಜ್ಜಿತ ಹೋಟೆಲ್ ಅಥವಾ ಧರ್ಮಶಾಲೆಗಳಲ್ಲಿ ವಸತಿ ಸೌಕರ್ಯ ಒದಗಿಸುವುದರ ಜೊತೆಗೆ, ಪ್ರತಿದಿನ ಬೆಳಗಿನ ಶುದ್ಧ ಸಸ್ಯಹಾರಿ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ರೈಲ್ವೆ ಇಲಾಖೆಯೇ ನಿರ್ವಹಿಸಲಿದೆ. ಇದರೊಂದಿಗೆ ಪ್ರವಾಸದ ಉದ್ದಕ್ಕೂ ಮಾಹಿತಿ ನೀಡಲು ಅನುಭವಿ ಪ್ರವಾಸ ಮಾರ್ಗದರ್ಶಕರ ಸೇವೆ ಇರಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಉಚಿತ ಪ್ರಯಾಣ ವಿಮೆ ಮತ್ತು ವಿಶೇಷ ಭದ್ರತಾ ಸಿಬ್ಬಂದಿಯ ಸೌಲಭ್ಯವೂ ಲಭ್ಯವಿರಲಿದೆ.&lt;/p&gt;&lt;img&gt;&lt;p&gt;ಈ ಪ್ರವಾಸದ ರೈಲು ಸಿಕಂದರಾಬಾದ್&zwnj;ನಿಂದ ಹೊರಟು ಚರ್ಲಪಳ್ಳಿ, ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ಗುಡಿವಾಡ, ಭೀಮಾವರಂ, ತನೂಕು, ನಿಡದವೋಲು, ರಾಜಮಹೇಂದ್ರವರಂ, ಸಮಲ್ಕೋಟ್, ತುಣಿ, ದುವ್ವಾಡ, ಪೆಂಡುರ್ತಿ ಹಾಗೂ ವಿಜಯನಗರಂ ಜಂಕ್ಷನ್ ಸೇರಿದಂತೆ ಹಲವು ನಿಗದಿತ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ಎಲ್ಲಾ ನಿಲ್ದಾಣಗಳ ಮಾರ್ಗವಾಗಿ ರೈಲು ಸಾಗುವುದರಿಂದ ಪ್ರಯಾಣಿಕರು ತಮಗೆ ಅತ್ಯಂತ ಹತ್ತಿರವಿರುವ ಅಥವಾ ಅನುಕೂಲಕರವಾದ ನಿಲ್ದಾಣಗಳಲ್ಲಿ ರೈಲು ಹತ್ತಲು ಮತ್ತು ಇಳಿಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;img&gt;&lt;p&gt;ಈ ಪವಿತ್ರ ಮತ್ತು ಐತಿಹಾಸಿಕ ಯಾತ್ರೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಕ್ತಾದಿಗಳು ಐಆರ್&zwnj;ಸಿಟಿಸಿ ಪ್ರವಾಸೋದ್ಯಮದ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ ಆನ್&zwnj;ಲೈನ್ ಮೂಲಕ ಅತ್ಯಂತ ಸುಲಭವಾಗಿ ತಮ್ಮ ಆಸನಗಳನ್ನು ಬುಕ್ ಮಾಡಿಕೊಳ್ಳಬಹುದು. ಈ ವಿಶೇಷ ರೈಲಿನಲ್ಲಿ ಒಟ್ಟು 702 ಆಸನಗಳ ಮಿತಿ ಇದ್ದು, ಅದರಲ್ಲಿ 160 ಸ್ಲೀಪರ್ ಕ್ಲಾಸ್ ಆಸನಗಳು, 490 ತೃತೀಯ ಎಸಿ ಆಸನಗಳು ಹಾಗೂ ಕೇವಲ 52 ದ್ವಿತೀಯ ಎಸಿ ಆಸನಗಳು ಮಾತ್ರ ಲಭ್ಯವಿವೆ. ರೈಲಿನಲ್ಲಿ ಆಸನಗಳ ಸಂಖ್ಯೆ ಸೀಮಿತವಾಗಿರುವುದರಿಂದ ಮತ್ತು ಬೇಡಿಕೆ ಹೆಚ್ಚಿರುವುದರಿಂದ ಭಕ್ತರು ಆದಷ್ಟು ಬೇಗ ಬುಕ್ಕಿಂಗ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದೇಶದ ಅತ್ಯಂತ ಪವಿತ್ರ ಧರ್ಮಕ್ಷೇತ್ರಗಳನ್ನು ಸಂದರ್ಶಿಸಲು ಬಯಸುವ ಮಧ್ಯಮ ವರ್ಗದ ಜನರಿಗೆ ಇದೊಂದು ಅತ್ಯುತ್ತಮ, ನಂಬಿಕಸ್ಥ ಮತ್ತು ಸುರಕ್ಷಿತ ಅವಕಾಶವಾಗಿದೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/life/irctc-ayodhya-kashi-tour-package-bharat-gaurav-train-10-day-pilgrimage-gdp-iixr03y"/>
        </item>
        <item>
            <title><![CDATA[2028ರಿಂದ ಡಿಕೆಶಿಗೆ ಡೇಂಜರ್​: ವಿಜಯ್​ ಪಿಎಂ ಆಗೋ ಮೊದಲು ಜೈಲಿಗೆ- ತ್ರಿಷಾ ಸಿಎಂ;  ಗುರೂಜಿ ಭವಿಷ್ಯವಾಣಿ ಏನಿದೆ]]></title>
            <link>https://kannada.asianetnews.com/gallery/astrology/aryavardhan-guruji-about-dkshivakumar-and-joseph-vijays-political-prediction-suc-wc2eu8o</link>
            <guid isPermaLink="true">https://kannada.asianetnews.com/gallery/astrology/aryavardhan-guruji-about-dkshivakumar-and-joseph-vijays-political-prediction-suc-wc2eu8o</guid>
            <pubDate>Sun, 31 May 2026 11:51:40 +0530</pubDate>
            <description><![CDATA[&lt;p&gt;ಆರ್ಯವರ್ಧನ್ ಗುರೂಜಿ ಅವರು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದು, 2028 ರಿಂದ ಅವರಿಗೆ ಅಪಾಯದ ಅವಧಿ ಎಂದು ಹೇಳಿದ್ದಾರೆ. ಹಾಗೆಯೇ, ವಿಜಯ್ ಎರಡು ಬಾರಿ ಸಿಎಂ ಆಗಲಿದ್ದು, ನಂತರ ಜೈಲಿಗೆ ಹೋಗುವ ಸಾಧ್ಯತೆಯಿದ್ದು, ಆ ವೇಳೆ ತ್ರಿಷಾ ಸಿಎಂ ಆಗ್ರಾರೆ ಎಂದು ಭವಿಷ್ಯ ನುಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyav0esa5xjrqv48xtdj9z4,imgname-political-prediction-1780208206297.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರ್ಯವರ್ಧನ್ ಗುರೂಜಿ ಅವರು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದು, 2028 ರಿಂದ ಅವರಿಗೆ ಅಪಾಯದ ಅವಧಿ ಎಂದು ಹೇಳಿದ್ದಾರೆ. ಹಾಗೆಯೇ, ವಿಜಯ್ ಎರಡು ಬಾರಿ ಸಿಎಂ ಆಗಲಿದ್ದು, ನಂತರ ಜೈಲಿಗೆ ಹೋಗುವ ಸಾಧ್ಯತೆಯಿದ್ದು, ಆ ವೇಳೆ ತ್ರಿಷಾ ಸಿಎಂ ಆಗ್ರಾರೆ ಎಂದು ಭವಿಷ್ಯ ನುಡಿದಿದ್ದಾರೆ.&lt;/p&gt;&lt;img&gt;&lt;p&gt;ಕೊನೆಗೂ ಡಿ.ಕೆ.ಶಿವಕುಮಾರ್​ ಅವರು ಮುಖ್ಯಮಂತ್ರಿಯಾಗುವ ಹಾದಿಯಲ್ಲಿ ಇದ್ದಾರೆ. ಇವರು ಸಿಎಂ ಆಗಲಿದ್ದಾರೆ ಎಂದು ಆರ್ಯವರ್ಧನ್​ ಗುರೂಜಿ ಈ ಹಿಂದೆ ಭವಿಷ್ಯ ನುಡಿದಿದ್ದರು. ಅದೇ ರೀತಿ ತಮಿಳುನಾಡಿನಲ್ಲಿ ಜೋಸೆಫ್​ ವಿಜಯ್​ ಅವರ ಗೆಲುವಿನ ಬಗ್ಗೆಯೂ ಸೂಚನೆ ಕೊಟ್ಟಿದ್ದರು.&lt;/p&gt;&lt;img&gt;&lt;p&gt;ಇದೀಗ ಅವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಬಾಸ್​ಟಿವಿಗೆ ನೀಡಿರುವ ಸಂದರ್ಶನದಲ್ಲಿ ಆರ್ಯವರ್ಧನ್​ ಗುರೂಜಿ, 2028ರಿಂದ ಸೆಪ್ಟೆಂಬರ್​ನಿಂದ ರಾಹುಭುಕ್ತಿ ಬರಲಿದೆ. 2031ರವರೆಗೆ ಡಿ.ಕೆ.ಶಿವಕುಮಾರ್​ ಅವರ ಜಾತಕದ ಪ್ರಕಾರ ಸ್ವಲ್ಪ ಅಪಾಯವಿದೆ. ಇದು ಅವರಿಗೆ ಡೇಂಜರಸ್​ ಅವಧಿಯಾಗಿದೆ. ಆದರೆ ಅದಕ್ಕೆ ಸರಿಯಾದ ಪರಿಹಾರ ಮಾಡಿಕೊಂಡರೆ ಮುಂದೆ ಅವರಿಗೆ ಯಾವುದೇ ಕಂಟಕ ಇರುವುದಿಲ್ಲ. ರಾಜಯೋಗವಿದ್ದು, ತುಂಬಾ ಒಳ್ಳೆಯದಾಗಲಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಕಾಂಗ್ರೆಸ್​ನಲ್ಲಿ ಸದ್ಯ ಯಾವುದೇ ಒಡಕು ಬರುವುದಿಲ್ಲ. ಡಿ.ಕೆ.ಶಿವಕುಮಾರ್​ ಅವರು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆ. 2028ರಲ್ಲಿ ಸ್ವಲ್ಪ ಜರಕ್​ ಹೊಡೆಯಲಿದೆ. ಅದನ್ನು ಸರಿ ಮಾಡಿಕೊಳ್ಳಬೇಕಿದೆ ಅಷ್ಟೇ ಎಂದಿದ್ದಾರೆ ಗುರೂಜಿ.&lt;/p&gt;&lt;img&gt;&lt;p&gt;ಇದೇ ವೇಳೆ ತಮಿಳುನಾಡಿನ ಸಿಎಂ ದಳಪತಿ ಜೋಸೆಫ್​ ವಿಜಯ್​ ಅವರ ಭವಿಷ್ಯದ ಬಗ್ಗೆಯೂ ಮಾತನಾಡಿರುವ ಆರ್ಯವರ್ಧನ್​ ಗುರೂಜಿ, ಕಟಕ ರಾಶಿ, ಕಟಕ ಲಗ್ನದ ವಿಜಯ್​ ಅವರಿಗೆ ಪ್ರಧಾನಿಯಾಗುವ ಎಲ್ಲಾ ಯೋಗವೂ ಇದೆ. ಆದರೆ ಇನ್ನು 10 ವರ್ಷದಲ್ಲಿ ಅವರಿಗೆ ಒಂದು ಅಪಾಯವೂ ಇದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ವಿಜಯ್​ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ, ಇದೇ ವೇಳೆ ಅವರಿಗೆ ಜೈಲಿಗೆ ಹೋಗುವ ಯೋಗವಿದೆ. ಆ ಸಮಯದಲ್ಲಿ ತ್ರಿಷಾ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಗುರೂಜಿ ಹೇಳಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/astrology/aryavardhan-guruji-about-dkshivakumar-and-joseph-vijays-political-prediction-suc-wc2eu8o"/>
        </item>
        <item>
            <title><![CDATA[ಮರ ಏರಿದ್ದಾಗಲೇ ವ್ಯಕ್ತಿ ಮೈಮೇಲೆ ಹತ್ತಿದ ಹಾವು; ಕೆಳಗಡೆ ಬಿದ್ರೂ ಸಾವು, ಹಾವು ಕಚ್ಚಿದ್ರೂ ಸಾವು! ಆಮೇಲೆ ಆಗಿದ್ದೇನು?]]></title>
            <link>https://kannada.asianetnews.com/viral/trending-video-kannada-snake-climbs-on-man-viral-video/articleshow-ic0ok8i</link>
            <guid isPermaLink="true">https://kannada.asianetnews.com/viral/trending-video-kannada-snake-climbs-on-man-viral-video/articleshow-ic0ok8i</guid>
            <pubDate>Sun, 31 May 2026 12:14:52 +0530</pubDate>
            <description><![CDATA[&lt;p&gt;Snake climbs on man viral video: ಯಾರ ಜೊತೆ ದ್ವೇಷ ಕಟ್ಟಿಕೊಂಡರೂ ಹಾವಿನ ಜೊತೆ ದ್ವೇಷ ಕಟ್ಟಿಕೊಳ್ಳೋದಿಲ್ಲ. ಆದರೆ ಈಗ ವ್ಯಕ್ತಿಯೊಬ್ಬ ಮರ ಏರಿದಾಗಲೇ, ಹಾವೊಂದು ಅವನ ಮೈಮೇಲೆ ಏರಿದೆ. ಈ ವಿಡಿಯೋ ಈಗ ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗ್ತಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksycaqb6yebz407adj343cc2,imgname-new-project---2026-05-31t120704.813-1780209769830.jpg" type="image/jpeg" height="390" width="690"/>
            <content:encoded><![CDATA[&lt;p&gt;Snake climbs on man viral video: ಹಾವು ಎಂದರೆ ಎಂಥವ್ರು ಓಡಿ ಹೋಗ್ತಾರೆ. ಇತ್ತೀಚೆಗೆ ಕೆಲ ಜೂಗಳಲ್ಲಿ ಹಾವು ಇಡಲಾಗುತ್ತದೆ, ಅಲ್ಲಿ ಕೆಲವರು ಹೋಗಿ ದೈತ್ಯಾಕಾರದ ಹಾವನ್ನು ಮುಟ್ಟೋದುಂಟು. ಆದರೆ ಇಲ್ಲೋರ್ವ ವ್ಯಕ್ತಿ ಮರ ಹತ್ತಿದ್ದಾಗಲೇ, ಅವನ ಮೈಮೇಲೆ ಹಾವು ಏರಿದೆ.&lt;/p&gt;&lt;h2&gt;ವಿಡಿಯೋ ವೈರಲ್!&lt;/h2&gt;&lt;p&gt;ಹೌದು, ಓರ್ವ ವ್ಯಕ್ತಿ ತನ್ನ ತೋಟದಲ್ಲಿದ್ದ ಮರ ಏರಿದ್ದಾನೆ. ಆಗ ಎಲ್ಲಿಂದಲೋ ಒಂದು ಹಾವು ಬಂದು, ಅವನ ಮೈಮೇಲೆ ಕುಳಿತಿದೆ. ಶರ್ಟ್&zwnj;, ಶಾರ್ಟ್ಸ್&zwnj; ಹಾಕಿಕೊಂಡಿದ್ದ ಆ ವ್ಯಕ್ತಿ ಮೈಮೇಲೆ ಆ ಹಾವು ಓಡಾಡಿದೆ. ಒಂದು ಕಡೆ ಮರ ಏರಿದ್ದಾನೆ, ಇನ್ನೊಂದು ಕಡೆ ಹಾವು ಇದೆ. ಒಟ್ಟಿನಲ್ಲಿ ಏನೂ ಮಾಡಲಾಗದ ಪರಿಸ್ಥಿತಿ. ಇಂಥ ಸಮಯದಲ್ಲಿ ಆ ವ್ಯಕ್ತಿ ವಿಡಿಯೋ ಕೂಡ ಮಾಡಿದ್ದಾನೆ.&lt;/p&gt;&lt;p&gt;ಆ ವ್ಯಕ್ತಿ ಏನಾದರೂ ಚಲನೆ ಮಾಡಿದರೆ ಹಾವು ಕಚ್ಚುವ ಸಾಧ್ಯತೆ ಇತ್ತು. ಆದ್ದರಿಂದ ಅವನು ಯಾವುದೇ ಆತುರ ತೋರಿಸದೆ ನಿಧಾನವಾಗಿ ಅಲ್ಲಿಯೇ ನಿಂತಿದ್ದಾನೆ, ಆ ಬಳಿಕ ಆ ಹಾವು ಎಲ್ಲಿ ಹೋಯ್ತು? ಆ ವ್ಯಕ್ತಿ ಯಾರು? ಆ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಉತ್ತರವಿಲ್ಲ. ಸದ್ಯ ಈ ವಿಡಿಯೋ ಮಾತ್ರ ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗ್ತಿದೆ. ಆ ಹಾವು ಎಲ್ಲಿ ಹೋಯ್ತು? ಆಮೇಲೆ ಆ ವ್ಯಕ್ತಿ ಮರದಿಂದ ಇಳಿದಿದ್ದಾನಾ? ಅವರು ಆರಾಮಾಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.&lt;/p&gt;&lt;p&gt;ಸ್ವಲ್ಪ ಟೈಮ್&zwnj; ಆದಬಳಿಕ ಆ ಹಾವು ತನ್ನಷ್ಟಕ್ಕೆ ತಾನೇ ಇಳಿದು ಹೋಯ್ತಾ ಎಂಬ ಪ್ರಶ್ನೆಯೂ ಇದೆ. ಒಟ್ಟಿನಲ್ಲಿ ಆ ವ್ಯಕ್ತಿ ಅಪಾಯದಿಂದ ಪಾರಾದರೆ ಸಾಕು. ಒಟ್ಟಿನಲ್ಲಿ ಈ ಘಟನೆ ನೋಡಿ ಅನೇಕರು ಕಂಗಾಲಾಗಿದ್ದಾರೆ. ಈ ವಿಡಿಯೋಗೆ ಅನೇಕರು ಮನಬಂದಂತೆ ಕಾಮೆಂಟ್&zwnj; ಮಾಡಿದ್ದಾರೆ.&lt;/p&gt;&lt;h2&gt;ಸೋಶಿಯಲ್&zwnj; ಮೀಡಿಯಾದಲ್ಲಿ ಕಾಮೆಂಟ್&zwnj; ಮಾಡಿದ ವೀಕ್ಷಕರು!&lt;/h2&gt;&lt;p&gt;ಇದನ್ನೆಲ್ಲ ತಿಳಿದಿದ್ದರೂ ನೀವು ಇನ್ನೂ ವಿಡಿಯೋ ತೆಗೆದುಕೊಳ್ಳುತ್ತಿದ್ದೀರಿ. ನಿಮ್ಮ ಧೈರ್ಯ ನಿಜವಾಗಿಯೂ ಶ್ಲಾಘನೀಯ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ&lt;/p&gt;&lt;p&gt;ಡಬಲ್ ಗುಂಡಿಗೆ ಇದೆ ಗುರು ನಿನಗೆ, ನೋಡೋಕೆ ಭಯ ಆಗುತ್ತೆ, ಸೂಪರ್ ಗುರು, ಮೆಚ್ಚಿದ ನಿನ್ನ ಧೈರ್ಯ&lt;/p&gt;&lt;p&gt;ಅದು ವಿಷ ರಹಿತ ಹಾವು ಆಗಿದ್ದರೂ, ಒಬ್ಬ ಮನುಷ್ಯ ಹಾವು ಅಂದ್ರೆ ಭಯ ಪಡ್ತಾನೆ.&lt;/p&gt;&lt;p&gt;ನಮಗೆ ಯಾವುದೇ ಸಂಕಷ್ಟದ ಸಂದರ್ಭದಲ್ಲಿಯೂ ಗಾಬರಿಯಾಗದೆ ಧೈರ್ಯ, ತಾಳ್ಮೆಯಿಂದ ವರ್ತಿಸಿದರೆ ಯಾವುದೇ ಸಮಸ್ಯೆಯನ್ನಾದರೂ ಕೂಡ, ಯಶಸ್ವಿಯಾಗಿ ಎದುರಿಸಬಹುದು ಎಂಬ ಪಾಠವನ್ನು ಕಲಿಸುತ್ತದೆ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/viral/trending-video-kannada-snake-climbs-on-man-viral-video/articleshow-ic0ok8i"/>
        </item>
        <item>
            <title><![CDATA[Bachelors Village: ಭಾರತದ ಈ ಹಳ್ಳಿಯಲ್ಲಿ ಮದುವೆಯೇ ಇಲ್ಲದೆ ಮುದುಕರಾದ 120 ಯುವಕರು! ಇದು ಸರ್ಕಾರದ ಶಾಪವಂತೆ!]]></title>
            <link>https://kannada.asianetnews.com/gallery/relationship/barwan-kala-bihar-bachelors-village-no-marriage-no-road-2nssct7</link>
            <guid isPermaLink="true">https://kannada.asianetnews.com/gallery/relationship/barwan-kala-bihar-bachelors-village-no-marriage-no-road-2nssct7</guid>
            <pubDate>Sun, 31 May 2026 15:32:12 +0530</pubDate>
            <description><![CDATA[&lt;p&gt;Barwan Kala Bihar bachelors village: ಹೆಣ್ಣೇ ಸಿಗುತ್ತಿಲ್ಲ, ಎಲ್ಲಿಂದ ಮದುವೆ ಆಗೋದು ಎಂದು ಅನೇಕರು ಬೇಸರದಲ್ಲಿದ್ದಾರೆ. ಹೀಗಿರುವಾಗ ಭಾರತದ ಹಳ್ಳಿಯೊಂದರಲ್ಲಿ 120 ಯುವಕರಿಗೆ ಮದುವೆಯೇ ಆಗಿಲ್ಲ. ಹೌದು, ಹಾಗಿದ್ರೆ ಅದು ಯಾವ ಊರು?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyqe8skjqhezb2cj7vaz7zf,imgname-new-project---2026-05-31t152334.699-1780221420339.jpg" type="image/jpeg" height="390" width="690"/>
            <content:encoded><![CDATA[&lt;p&gt;Barwan Kala Bihar bachelors village: ಹೆಣ್ಣೇ ಸಿಗುತ್ತಿಲ್ಲ, ಎಲ್ಲಿಂದ ಮದುವೆ ಆಗೋದು ಎಂದು ಅನೇಕರು ಬೇಸರದಲ್ಲಿದ್ದಾರೆ. ಹೀಗಿರುವಾಗ ಭಾರತದ ಹಳ್ಳಿಯೊಂದರಲ್ಲಿ 120 ಯುವಕರಿಗೆ ಮದುವೆಯೇ ಆಗಿಲ್ಲ. ಹೌದು, ಹಾಗಿದ್ರೆ ಅದು ಯಾವ ಊರು?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬಿಹಾರದಲ್ಲಿರುವ ಕೈಮೂರ್ ಜಿಲ್ಲೆಯ ಬರ್ವಾನ್ ಕಲಾ ಹಳ್ಳಿಯನ್ನು ಬ್ರಹ್ಮಚಾರಿಗಳ ಹಳ್ಳಿ ಎಂದು ಕರೆಯುತ್ತಾರೆ. ಈ ಹಳ್ಳಿಯಲ್ಲಿರುವ ನೂರಾರು ಯುವಕರಿಗೆ ಮದುವೆಯೇ ಆಗುತ್ತಿಲ್ಲ, ಹೀಗೆಯೇ ವಯಸ್ಸು ಕೂಡ ಮುಗಿದಿದೆ.&amp;nbsp;&lt;/p&gt;&lt;p&gt;ಬಿಹಾರದ ಕೈಮೂರ್ ಬೆಟ್ಟಗಳ ತಪ್ಪಲಿನಲ್ಲಿ ಬರ್ವಾನ್ ಕಲಾ ಗ್ರಾಮದಲ್ಲಿದೆ. ಈ ಹಳ್ಳಿಯಲ್ಲಿರುವ ಹುಡುಗರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಇದಕ್ಕಾಗಿ ಈ ಊರು ಬ್ರಹ್ಮಚಾರಿಗಳ ಗ್ರಾಮ ಎಂದು ಕರೆಸಿಕೊಂಡಿದೆ.&lt;/p&gt;&lt;img&gt;&lt;p&gt;ಈ ಹಳ್ಳಿಯಲ್ಲಿರುವ ಹುಡುಗರೆಲ್ಲರೂ ತುಂಬ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಈ ಹಳ್ಳಿಗೆ ಸರಿಯಾದ ರಸ್ತೆ ಇಲ್ಲ. ಅಷ್ಟೇ ಅಲ್ಲದೆ ಮೂಲಸೌಕರ್ಯಗಳ ಅಭಾವ ಕೂಡ ಇದೆ. ದಶಕಗಳಿಂದಲೂ ಈ ಹಳ್ಳಿಗೆ ರಸ್ತೆಯೇ ಇಲ್ಲ. ಈ ಹಳ್ಳಿಗೆ ಹೋಗಲು 8-10 ಕಿಮೀ ನಡೆದುಕೊಂಡೇ ಹೋಗಬೇಕು.&lt;/p&gt;&lt;img&gt;&lt;p&gt;ಇಂಥ ಹಳ್ಳಿಯಲ್ಲಿ ನೀರು, ಆರೋಗ್ಯ, ಸಾರಿಗೆ ಸಮಸ್ಯೆ ಇದೆ. ಹೀಗೆಲ್ಲ ಇರುವಾಗ ನಮ್ಮ ಹೆಣ್ಣು ಮಕ್ಕಳನ್ನು ಹೇಗೆ ಈ ಊರಿನ ಹುಡುಗರಿಗೆ ಮದುವೆ ಮಾಡಿಕೊಡೋದು ಎಂದು ಹೆಣ್ಣು ಹೆತ್ತವರು ಭಯಪಡುತ್ತಾರೆ, ಹೀಗಾಗಿ ಇಲ್ಲಿನ ಹುಡುಗರಿಗೆ ಮದುವೆಯೇ ಆಗಿಲ್ಲ.&lt;/p&gt;&lt;img&gt;&lt;p&gt;ಈ ಹಳ್ಳಿಯಲ್ಲಿ 16 ರಿಂದ 45 ವರ್ಷ ವಯಸ್ಸಿನ ನೂರಕ್ಕೂ ಹೆಚ್ಚು ಮದುವೆ ಆಗದಿರೋ ಹುಡುಗರಿದ್ದಾರೆ. ವಯಸ್ಸಾಗುತ್ತಿದ್ದರೂ ಕೂಡ ಮದುವೆಯೇ ಆಗುತ್ತಿಲ್ಲ ಎಂದು ಇಲ್ಲಿನ ಹುಡುಗರು ಬೇಸರಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೆಲವು ವರ್ಷಗಳ ಹಿಂದೆ ಇಲ್ಲಿನವರೇ, ಬೆಟ್ಟವನ್ನು ಕೊರೆದು ರಸ್ತೆ ಮಾಡಲು ರೆಡಿ ಆಗಿದ್ದರು. ಇಲ್ಲಿನ ರಸ್ತೆ ಸ್ವಲ್ಪ ಮಟ್ಟಿಗೆ ರಸ್ತೆ ಸುಧಾರಿಸಿದೆ, ಆದರೂ ಮದುವೆ ಮಾತ್ರ ಆಗುತ್ತಿಲ್ಲ. ಸರ್ಕಾರ ಯಾವಾಗ ಈ ಹಳ್ಳಿಗೆ ರಸ್ತೆ ಮಾಡಿಕೊಡುತ್ತದೆ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/relationship/barwan-kala-bihar-bachelors-village-no-marriage-no-road-2nssct7"/>
        </item>
        <item>
            <title><![CDATA[ಅಮೆರಿಕಾದ ಕಾನೂನು ಸವಾಲುಗಳನ್ನು ಗೆದ್ದ ಅದಾನಿ , ಎಐ ಕ್ರಾಂತಿ ಹಾಗೂ ಜಾಗತಿಕ ಮೂಲಸೌಕರ್ಯ ವಿಸ್ತರಣೆಗೆ ಭರ್ಜರಿ ಯೋಜನೆ]]></title>
            <link>https://kannada.asianetnews.com/gallery/business/adani-group-clears-us-legal-hurdles-net-profit-jumps-13-9-gdp-7k8gusu</link>
            <guid isPermaLink="true">https://kannada.asianetnews.com/gallery/business/adani-group-clears-us-legal-hurdles-net-profit-jumps-13-9-gdp-7k8gusu</guid>
            <pubDate>Mon, 01 Jun 2026 15:26:20 +0530</pubDate>
            <description><![CDATA[&lt;p&gt;ಅಮೆರಿಕಾದಲ್ಲಿನ ಕಾನೂನು ಸವಾಲುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅದಾನಿ ಸಮೂಹ, ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಬೇಡಿಕೆ ಪೂರೈಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಇಂಧನ, ಸಾರಿಗೆ, ಮತ್ತು ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಬೃಹತ್ ಹೂಡಿಕೆಗಳನ್ನು ವೇಗಗೊಳಿಸುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5egz62v2dnpsdwgkyck677x,imgname-gettyimages-2187149052-1758202927195.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕಾದಲ್ಲಿನ ಕಾನೂನು ಸವಾಲುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅದಾನಿ ಸಮೂಹ, ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಬೇಡಿಕೆ ಪೂರೈಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಇಂಧನ, ಸಾರಿಗೆ, ಮತ್ತು ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಬೃಹತ್ ಹೂಡಿಕೆಗಳನ್ನು ವೇಗಗೊಳಿಸುತ್ತಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಭಾರತದ ಮುಂಚೂಣಿ ಉದ್ಯಮ ಸಂಸ್ಥೆಯಾದ ಅದಾನಿ ಸಮೂಹವು ಅಮೆರಿಕಾದಲ್ಲಿದ್ದ ತನ್ನೆಲ್ಲಾ ಕಾನೂನು ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಮುನ್ನಡೆದಿದೆ ಎಂದು ಸಮೂಹದ ಮುಖ್ಯಸ್ಥ ಮತ್ತು ಬಿಲಿಯನೇರ್ ಗೌತಮ್ ಅದಾನಿ ಘೋಷಿಸಿದ್ದಾರೆ. ಪ್ರಸ್ತುತ ಜಗತ್ತಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದ ಸೃಷ್ಟಿಯಾಗುತ್ತಿರುವ ಭಾರಿ ಬೇಡಿಕೆಯ ಸಂಪೂರ್ಣ ಲಾಭವನ್ನು ಪಡೆಯಲು ತಮ್ಮ ಸಂಸ್ಥೆಯು ಸರ್ವಸನ್ನದ್ಧವಾಗಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಇಂಧನ, ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಮೇಲಿನ ಹೂಡಿಕೆಯನ್ನು ಮತ್ತಷ್ಟು ವೇಗಗೊಳಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಷೇರುದಾರರಿಗೆ ಬರೆದಿರುವ ತಮ್ಮ ವಾರ್ಷಿಕ ಪತ್ರದಲ್ಲಿ ಈ ಆಶಾವಾದಿ ವಿಷಯಗಳನ್ನು ಹಂಚಿಕೊಂಡಿರುವ ಗೌತಮ್ ಅದಾನಿ, ಕಳೆದ ವರ್ಷ ತಮ್ಮ ಸಮೂಹವು ಜಾಗತಿಕ ಮಟ್ಟದಲ್ಲಿ ತೀವ್ರ ತಪಾಸಣೆ ಮತ್ತು ಬಿಗಿಯಾದ ನಿಗಾಕ್ಕೆ ಒಳಗಾಗಿದ್ದರೂ, ವ್ಯವಹಾರ ವಿಸ್ತರಣೆಯ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ. ಅಮೆರಿಕಾದಲ್ಲಿ ಗ್ರೂಪ್ ಎದುರಿಸುತ್ತಿದ್ದ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದ ಎಲ್ಲ ಕ್ಲಿಷ್ಟಕರ ವಿಷಯಗಳು ಈಗ ಸಂಪೂರ್ಣವಾಗಿ ಇತ್ಯರ್ಥಗೊಂಡಿರುವುದರಿಂದ, ಸಂಸ್ಥೆಯು ತನ್ನ ಮುಂದಿನ ಹಂತದ ಮಹತ್ವಾಕಾಂಕ್ಷಿ ಬೆಳವಣಿಗೆಯ ಕಡೆಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕಳೆದ 2024ರ ಕೊನೆಯಿಂದಲೂ ಅದಾನಿ ಸಮೂಹಕ್ಕೆ ತೀವ್ರ ತಲೆನೋವಾಗಿದ್ದ ಅಮೆರಿಕಾದ ಕಾನೂನು ಮತ್ತು ನಿಯಂತ್ರಕ ಸವಾಲುಗಳಿಗೆ ಈಗ ಅಧಿಕೃತವಾಗಿ ತೆರೆ ಬಿದ್ದಿದೆ. ತಮ್ಮ ನವೀಕರಿಸಬಹುದಾದ ಇಂಧನ ವ್ಯವಹಾರಕ್ಕೆ ಸಂಬಂಧಿಸಿದಂತೆ ಲಂಚದ ಆರೋಪಗಳ ಮೇಲೆ ಅಮೆರಿಕಾ ಅಧಿಕಾರಿಗಳಿಂದ ಅದಾನಿ ಗ್ರೂಪ್ ತನಿಖೆಯನ್ನು ಎದುರಿಸಬೇಕಾಗಿ ಬಂದಿತ್ತು. ಆದರೆ ಈ ಆರೋಪಗಳನ್ನು ಮೊದಲಿನಿಂದಲೂ ಅದಾನಿ ಸಮೂಹವು ಅತ್ಯಂತ ದೃಢವಾಗಿ ನಿರಾಕರಿಸುತ್ತಲೇ ಬಂದಿತ್ತು.&lt;/p&gt;&lt;p&gt;ಸದ್ಯ ಲಭ್ಯವಾಗಿರುವ ದೊಡ್ಡ ಸಮಾಧಾನದ ಸಂಗತಿಯೆಂದರೆ, ಅಮೆರಿಕಾದ ಸೆಕ್ಯುರಿಟೀಸ್ ಎಕ್ಸ್&zwnj;ಚೇಂಜ್ ಕಮಿಷನ್ ಈ ಇಡೀ ವಿಷಯದಲ್ಲಿ ಅದಾನಿ ಗ್ರೂಪ್ ಜೊತೆ ಒಂದು ಸೌಹಾರ್ದಯುತ ಇತ್ಯರ್ಥಕ್ಕೆ ಬಂದಿದೆ. ಇದರ ಜೊತೆಗೆ, ಅತ್ತ ಅಮೆರಿಕಾದ ನ್ಯಾಯಾಂಗ ಇಲಾಖೆಯು ಸಂಸ್ಥೆಯ ಸಂಸ್ಥಾಪಕರು ಮತ್ತು ಇತರರ ಮೇಲಿನ ಎಲ್ಲಾ ಗಂಭೀರ ಆರೋಪಗಳನ್ನು ಅಧಿಕೃತವಾಗಿ ಕೈಬಿಡಲು ಮುಂದಾಗಿದೆ. ಈ ನಿರ್ಧಾರವು ಅದಾನಿ ಸಮೂಹಕ್ಕೆ ತನ್ನ ಮುಂದಿನ ಹಂತದ ಮುನ್ನಡೆಗೆ ಹೊಸ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ನೀಡಿದೆ.&lt;/p&gt;&lt;img&gt;&lt;p&gt;ಸಂಸ್ಥೆಯು ಕಾರ್ಪೊರೇಟ್ ಆಡಳಿತ ಮತ್ತು ನಿಯಂತ್ರಕ ನಿಯಮಗಳ ಕುರಿತು ಹಲವು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದ ಅತ್ಯಂತ ಕಷ್ಟದ ಸಮಯದಲ್ಲಿ, ಅದರ ಪ್ರಮುಖ ಕಂಪನಿಯಾದ ಅದಾನಿ ಎಂಟರ್&zwnj;ಪ್ರೈಸಸ್ ಇತ್ತೀಚೆಗೆ ಹಮ್ಮಿಕೊಂಡಿದ್ದ 24,930 ಕೋಟಿ ರೂಪಾಯಿ ಮೌಲ್ಯದ ರೈಟ್ಸ್ ಇಶ್ಯೂ ಭಾರಿ ಯಶಸ್ಸನ್ನು ಕಂಡಿದೆ. ಇದು ದೇಶ ಹಾಗೂ ವಿದೇಶಿ ಹೂಡಿಕೆದಾರರು ಅದಾನಿ ಸಮೂಹದ ಮೇಲೆ ಇಟ್ಟಿರುವ ದೃಢವಾದ ಭರವಸೆಗೆ ಅತ್ಯುತ್ತಮ ಸಾಕ್ಷಿಯಾಗಿದೆ ಎಂದು ಗೌತಮ್ ಅದಾನಿ ಹೆಮ್ಮೆಯಿಂದ ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಜಗತ್ತು ಮತ್ತಷ್ಟು ಛಿದ್ರಗೊಂಡ, ಸಂಕೀರ್ಣವಾದ ಇಂಧನ ಭದ್ರತಾ ಮಾದರಿಗಳು ದೇಶದ ಪ್ರಮುಖ ಕಾರ್ಯತಂತ್ರಗಳ ಕೇಂದ್ರಬಿಂದುವಾದ ಮತ್ತು ತಂತ್ರಜ್ಞಾನ ಹಾಗೂ ರಾಷ್ಟ್ರದ ಸಾರ್ವಭೌಮತ್ವ ಒಂದಕ್ಕೊಂದು ಬೇರ್ಪಡಿಸಲಾಗದಂತೆ ಬೆಸೆದುಕೊಂಡ ವರ್ಷವದು. ಇಂತಹ ಸಂದರ್ಭದಲ್ಲೂ ಅದಾನಿ ಗ್ರೂಪ್ ಒಂದು ಅಚಲವಾದ ನಂಬಿಕೆಗೆ ಕಟ್ಟುಬಿದ್ದಿತ್ತು, ಅದೇನೆಂದರೆ, ಭಾರತದ ಭವಿಷ್ಯ ಕಾಯಲು ಸಾಧ್ಯವಿಲ್ಲ ಎಂಬುದಾಗಿತ್ತು. ಉಳಿದವರು ಕೇವಲ ಚರ್ಚೆಗಳಲ್ಲಿ ಮತ್ತು ಟೀಕೆಗಳಲ್ಲಿ ಮುಳುಗಿದ್ದಾಗ, ಅದಾನಿ ಗ್ರೂಪ್ ಮಾತ್ರ ಗ್ರೌಂಡ್ ಮಟ್ಟದಲ್ಲಿ ನಿರಂತರವಾಗಿ ದೇಶದ ಬಲಿಷ್ಠ ನಿರ್ಮಾಣ ಕಾರ್ಯದಲ್ಲಿ ತೊಡಗಿತ್ತು.&lt;/p&gt;&lt;img&gt;&lt;p&gt;ಬಂದರು ವಲಯದಿಂದ ಇಂಧನ ವಲಯದವರೆಗೆ ಹರಡಿರುವ ಈ ಬೃಹತ್ ಸಮೂಹಕ್ಕೆ ಈ ಪ್ರಗತಿಯು ಅಷ್ಟು ಸುಲಭವಾಗಿ ಸಿಗಲಿಲ್ಲ. ಇದು ಅಸಾಮಾನ್ಯವಾದ ತಪಾಸಣೆ ಮತ್ತು ತೀವ್ರ ನಿಗಾದ ಮಧ್ಯೆಯೇ ಸಾಧ್ಯವಾಯಿತು. ಆದರೂ ತಾವು ಬಗ್ಗಲಿಲ್ಲ ಮತ್ತು ತಮ್ಮ ಕೆಲಸವನ್ನು ಎಲ್ಲೂ ನಿಲ್ಲಿಸಲಿಲ್ಲ ಎಂದು ಅದಾನಿ ಹೇಳಿದ್ದಾರೆ. ಏಕೆಂದರೆ ತಮ್ಮನ್ನು ಯಾವಾಗಲೂ ಗುರುತಿಸುವುದು ಸುತ್ತಲಿರುವ ಅನಗತ್ಯ ಗದ್ದಲದಿಂದಲ್ಲ, ಬದಲಿಗೆ ಆ ಗದ್ದಲಕ್ಕೆ ತಾವು ನೀಡುವ ಗಟ್ಟಿಯಾದ ಮತ್ತು ಯಶಸ್ವಿ ಪ್ರತಿಕ್ರಿಯೆಯಿಂದ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸವಾಲಿನ ತೀವ್ರತೆಯಿಂದಲ್ಲ, ತಮ್ಮ ಉದ್ದೇಶದ ಸ್ಪಷ್ಟತೆಯಿಂದ ಮತ್ತು ಟೀಕೆಗಳಿಂದಲ್ಲ, ತಾವು ನಿರಂತರವಾಗಿ ನಂಬಿಕೊಂಡು ಬಂದಿರುವ ರಾಷ್ಟ್ರ ನಿರ್ಮಾಣದ ಕೆಲಸದಿಂದ ಸಂಸ್ಥೆ ಮುನ್ನಡೆಯುತ್ತಿದೆ ಎಂದು ಅವರು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.&lt;/p&gt;&lt;p&gt;ಸಂಸ್ಥೆಯ ಮುಂದಿನ ದಾರಿಯನ್ನು ವಿವರಿಸಿದ ಅದಾನಿ, ತಾವು ನಂಬಿರುವ ಎರಡು ಪ್ರಮುಖ ಬೆಳವಣಿಗೆಯ ಅಂಶಗಳಾದ ಮೂಲಸೌಕರ್ಯ ಮತ್ತು ಕೃತಕ ಬುದ್ಧಿಮತ್ತೆಯನ್ನು ಕೇಂದ್ರೀಕರಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ವೇಗದ ಅಳವಡಿಕೆಗೆ ಭಾರಿ ಪ್ರಮಾಣದ ವಿದ್ಯುತ್ ಉತ್ಪಾದನೆ, ಬಲಿಷ್ಠ ಪ್ರಸರಣ ಜಾಲಗಳು, ಬೃಹತ್ ಡೇಟಾ ಸೆಂಟರ್&zwnj;ಗಳು ಮತ್ತು ಸುಧಾರಿತ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳ ಹೂಡಿಕೆಯ ಅಗತ್ಯವಿದೆ ಎಂದು ಅವರು ವಾದಿಸಿದ್ದಾರೆ. ಎಐ ಯೋಚಿಸುವುದಕ್ಕಿಂತ ಮುಂಚೆ ಅಲ್ಲಿ ಇಂಧನ ಹರಿಯಬೇಕು ಎಂದು ಮಾರ್ಮಿಕವಾಗಿ ಹೇಳಿರುವ ಅದಾನಿ, ಭವಿಷ್ಯದ ತಂತ್ರಜ್ಞಾನದ ನಾಯಕತ್ವವು ಕೇವಲ ಸಾಫ್ಟ್&zwnj;ವೇರ್ ಆವಿಷ್ಕಾರಗಳ ಮೇಲಷ್ಟೇ ಅಲ್ಲದೆ, ಭೌತಿಕ ಮೂಲಸೌಕರ್ಯಗಳ ಮೇಲೂ ಅಷ್ಟೇ ಪ್ರಮಾಣದಲ್ಲಿ ನಿರ್ಧರಿತವಾಗಿರುತ್ತದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಕಳೆದ 2025-26ರ ಹಣಕಾಸು ವರ್ಷದಲ್ಲಿ ಅದಾನಿ ಸಮೂಹವು ಬರೊಬ್ಬರಿ 1.5 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಹೂಡಿಕೆ ಮಾಡಿದೆ. ಇದು ಇಂಧನ, ಬಂದರುಗಳು, ವಿಮಾನ ನಿಲ್ದಾಣಗಳು, ಡೇಟಾ ಸೆಂಟರ್&zwnj;ಗಳು ಮತ್ತು ಉತ್ಪಾದನಾ ಚಟುವಟಿಕೆಗಳನ್ನು ವಿಸ್ತರಿಸಲು ಸಂಸ್ಥೆಯು ಕೈಗೊಂಡ ಅತ್ಯಂತ ದೊಡ್ಡ ವಾರ್ಷಿಕ ಬಂಡವಾಳ ಹೂಡಿಕೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇಂಧನ ವಲಯದಲ್ಲಿ ಅದಾನಿ ಗ್ರೀನ್ ಕಂಪನಿಯು ಈ ವರ್ಷ 5.1 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ತನ್ನ ನೆಟ್&zwnj;ವರ್ಕ್&zwnj;ಗೆ ಹೆಚ್ಚಿಸಿಕೊಂಡಿದ್ದು, ಇದರ ಒಟ್ಟು ಕಾರ್ಯಾಚರಣಾ ಸಾಮರ್ಥ್ಯ 19 ಗಿಗಾವ್ಯಾಟ್&zwnj;ಗಿಂತಲೂ ಅಧಿಕವಾಗಿದೆ. ಇದೇ ವೇಳೆ ಅದಾನಿ ನ್ಯೂ ಇಂಡಸ್ಟ್ರೀಸ್ ಸಂಸ್ಥೆಯು 5 ಮೆಗಾವ್ಯಾಟ್&zwnj;ನ ಗ್ರೀನ್ ಹೈಡ್ರೋಜನ್ ಪ್ರಾಯೋಗಿಕ ಯೋಜನೆಯನ್ನು ಯಶಸ್ವಿಯಾಗಿ ಆರಂಭಿಸಿದೆ.&lt;/p&gt;&lt;p&gt;ಮೂಲಸೌಕರ್ಯ ವಲಯದಲ್ಲಿ ಅದಾನಿ ಎನರ್ಜಿ ಸೊಲ್ಯೂಷನ್ಸ್ ತನ್ನ ವಿದ್ಯುತ್ ಪ್ರಸರಣದ ಆರ್ಡರ್ ಬುಕ್ ಅನ್ನು ಭಾರಿ ಪ್ರಮಾಣದ ಅಂದರೆ 71,779 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದೆ. ಮತ್ತೊಂದೆಡೆ ಅದಾನಿ ಪವರ್ ಕಂಪನಿಯು 2032ರ ಹಣಕಾಸು ವರ್ಷದ ವೇಳೆಗೆ ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 42 ಗಿಗಾವ್ಯಾಟ್&zwnj;ಗೆ ಏರಿಸುವ ದೃಢ ಗುರಿ ಹೊಂದಿದ್ದು, ಇದಕ್ಕಾಗಿ 2 ಲಕ್ಷ ಕೋಟಿಗಿಂತಲೂ ಹೆಚ್ಚಿನ ವಿಸ್ತರಣಾ ಯೋಜನೆಯ ಕೆಲಸಗಳನ್ನು ಮುಂದುವರಿಸಿದೆ.&lt;/p&gt;&lt;img&gt;&lt;p&gt;ಡಿಜಿಟಲ್ ಮೂಲಸೌಕರ್ಯಕ್ಕೆ ಒತ್ತು ನೀಡಿರುವ ಸಮೂಹವು 2030ರ ವೇಳೆಗೆ 2 ಗಿಗಾವ್ಯಾಟ್ ಸಾಮರ್ಥ್ಯದ ಬೃಹತ್ ಡೇಟಾ ಸೆಂಟರ್ ಪ್ಲಾಟ್&zwnj;ಫಾರ್ಮ್ ನಿರ್ಮಿಸುವ ಯೋಜನೆಯನ್ನು ಹೊಂದಿದೆ. ಇದಲ್ಲದೆ, ವಿಶಾಖಪಟ್ಟಣದಲ್ಲಿ ಅತ್ಯಾಧುನಿಕ ಡೇಟಾ ಸೆಂಟರ್ ಯೋಜನೆಗಾಗಿ ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.&lt;/p&gt;&lt;p&gt;ಸಾರಿಗೆ ವಲಯಕ್ಕೆ ಬರುವುದಾದರೆ, ಅದಾನಿ ಬಂದರುಗಳು ಈ ವರ್ಷ 500 ಮಿಲಿಯನ್ ಟನ್&zwnj;ಗಿಂತಲೂ ಹೆಚ್ಚು ಸರಕುಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಹೊಸ ದಾಖಲೆ ಬರೆದಿವೆ. ಇತ್ತ ವಿಮಾನ ನಿಲ್ದಾಣ ವಿಭಾಗವು ಬಹುನಿರೀಕ್ಷಿತ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಗುವಾಹಟಿ ವಿಮಾನ ನಿಲ್ದಾಣದಲ್ಲಿ ಹೊಸ ಆಧುನಿಕ ಟರ್ಮಿನಲ್&zwnj;ಗಳನ್ನು ಸಾರ್ವಜನಿಕ ಕಾರ್ಯಾಚರಣೆಗೆ ತರುವ ಮೂಲಕ ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದೆ.&lt;/p&gt;&lt;img&gt;&lt;p&gt;ಕಳೆದ 2025-26ರ ಹಣಕಾಸು ವರ್ಷದಲ್ಲಿ ಅದಾನಿ ಸಮೂಹದ ಎಲ್ಲಾ ಕಂಪನಿಗಳ ಒಟ್ಟು ಆದಾಯವು 2.92 ಲಕ್ಷ ಕೋಟಿ ರೂಪಾಯಿಗೆ ತಲುಪಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇಕಡಾ 7.4 ರಷ್ಟು ಹೆಚ್ಚಾಗಿದೆ. ಹಾಗೆಯೇ ಸಂಸ್ಥೆಯ ನಿವ್ವಳ ಲಾಭವು ಶೇಕಡಾ 13.9 ರಷ್ಟು ಭಾರಿ ಏರಿಕೆಯಾಗಿ 46,377 ಕೋಟಿ ರೂಪಾಯಿಗಳಿಗೆ ತಲುಪುವ ಮೂಲಕ ಆರ್ಥಿಕವಾಗಿ ಮತ್ತಷ್ಟು ಬಲಿಷ್ಠವಾಗಿದೆ.&lt;/p&gt;&lt;p&gt;ಭವಿಷ್ಯದ ದಿನಗಳನ್ನು ಅತ್ಯಂತ ವ್ಯವಹಾರಿಕವಾಗಿ ಅವಲೋಕಿಸಿರುವ ಗೌತಮ್ ಅದಾನಿ, ತಮ್ಮ ಗ್ರೂಪ್&zwnj;ಗೆ ಈಗ ಬಂಡವಾಳದ ಕೊರತೆಯ ಸವಾಲಾಗಿ ಉಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬದಲಿಗೆ, ಭಾರತದ ಮೂಲಸೌಕರ್ಯ ಮತ್ತು ಇಂಧನ ಅಗತ್ಯಗಳನ್ನು ಪೂರೈಸಲು ನಮ್ಮ ಮುಂದಿರುವ ಬೃಹತ್ ಯೋಜನೆಗಳನ್ನು ಎಷ್ಟು ವೇಗವಾಗಿ ಮತ್ತು ಗುಣಮಟ್ಟದಿಂದ ಜಾರಿಗೊಳಿಸುತ್ತೇವೆ ಎಂಬುದೇ ನಿಜವಾದ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಭಾರಿ ಪ್ರಮಾಣದ ವಿದ್ಯುತ್ ಬಯಸುವುದರಿಂದ, ಮುಂಬರುವ ದಿನಗಳಲ್ಲಿ ಡಿಜಿಟಲ್ ಮೂಲಸೌಕರ್ಯಗಳ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದ್ದು, ಅದಾನಿ ಸಮೂಹವು ಈ ತಾಂತ್ರಿಕ ಕ್ರಾಂತಿಯ ನೇತೃತ್ವ ವಹಿಸಲು ಸಂಪೂರ್ಣವಾಗಿ ಸಜ್ಜಾಗಿದೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/adani-group-clears-us-legal-hurdles-net-profit-jumps-13-9-gdp-7k8gusu"/>
        </item>
        <item>
            <title><![CDATA[Virat Kohli ತಿಂದಿದ್ದು ಚಿಪ್ಸ್‌ ಅಲ್ಲ, ಕುರ್‌ ಕುರೆಯೂ ಅಲ್ಲ, ದೇಶಿ ಫುಡ್‌ Birista; 2 ಸ್ಟೆಪ್‌ನಲ್ಲಿ ಮಾಡೋ ವಿಧಾನ]]></title>
            <link>https://kannada.asianetnews.com/gallery/food/indian-cricketer-virat-kohli-eat-birista-recipe-in-kannada-r9gf05n</link>
            <guid isPermaLink="true">https://kannada.asianetnews.com/gallery/food/indian-cricketer-virat-kohli-eat-birista-recipe-in-kannada-r9gf05n</guid>
            <pubDate>Sun, 31 May 2026 17:37:50 +0530</pubDate>
            <description><![CDATA[&lt;p&gt;Cricketer Virat Kohli eat birista: ಇತ್ತೀಚೆಗೆ ಕ್ರಿಕೆಟರ್&zwnj; ವಿರಾಟ್&zwnj; ಕೊಹ್ಲಿ ಅವರು ಫೀಲ್ಡ್&zwnj;ನಲ್ಲಿಯೇ ಒಂದು ಡಬ್ಬ ಹಿಡಿದುಕೊಂಡು ಬಂದಿದ್ದರು. ಅಲ್ಲಿ ಅವರು Snack ತಿನ್ನುತ್ತಿದ್ದರು, ಅದನ್ನು ನೋಡಿದ ಅನೇಕರಿಗೆ ಇದು ಬಾಳೆಕಾಯಿ ಚಿಪ್ಸ್&zwnj; ಅಥವಾ ಕುರ್&zwnj;ಕುರೆ ಎಂದು ಡೌಟ್&zwnj; ಬಂದಿದೆ. ಆದರೆ ಇದು ಬೇರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyytd5ekjqeeyh0aakf55ex,imgname-new-project---2026-05-31t172940.483-1780229158062.jpg" type="image/jpeg" height="390" width="690"/>
            <content:encoded><![CDATA[&lt;p&gt;Cricketer Virat Kohli eat birista: ಇತ್ತೀಚೆಗೆ ಕ್ರಿಕೆಟರ್&zwnj; ವಿರಾಟ್&zwnj; ಕೊಹ್ಲಿ ಅವರು ಫೀಲ್ಡ್&zwnj;ನಲ್ಲಿಯೇ ಒಂದು ಡಬ್ಬ ಹಿಡಿದುಕೊಂಡು ಬಂದಿದ್ದರು. ಅಲ್ಲಿ ಅವರು Snack ತಿನ್ನುತ್ತಿದ್ದರು, ಅದನ್ನು ನೋಡಿದ ಅನೇಕರಿಗೆ ಇದು ಬಾಳೆಕಾಯಿ ಚಿಪ್ಸ್&zwnj; ಅಥವಾ ಕುರ್&zwnj;ಕುರೆ ಎಂದು ಡೌಟ್&zwnj; ಬಂದಿದೆ. ಆದರೆ ಇದು ಬೇರೆ.&amp;nbsp;&lt;/p&gt;&lt;img&gt;&lt;p&gt;ಬಿರಿಯಾನಿ, ಕುರ್ಮಾ, ಪಲಾವ್ ಮಾಡುವಾಗ 'ಬಿರಿಸ್ತಾ' ಬೇಕೇ ಬೇಕು. ಈರುಳ್ಳಿಯನ್ನು ಚಿನ್ನದ ಬಣ್ಣ ಬರುವವರೆಗೆ ಗರಿಗರಿಯಾಗಿ ಕರಿಯುವುದಕ್ಕೆ ಬಿರಿಸ್ತಾ ಎನ್ನುತ್ತಾರೆ. ಇದರಿಂದ ಅಡುಗೆ ರುಚಿ ಹೆಚ್ಚುವುದು.&lt;/p&gt;&lt;img&gt;&lt;p&gt;4 ಈರುಳ್ಳಿ- ದೊಡ್ಡದು ( ಉದ್ದಕ್ಕೆ ಸಣ್ಣದಾಗಿ ಹೆಚ್ಚಿಕೊಳ್ಳಬೇಕು)&lt;/p&gt;&lt;p&gt;ಕರಿಯಲು ಎಣ್ಣೆ ಬೇಕು&lt;/p&gt;&lt;p&gt;ಅಗತ್ಯ ಇದ್ದಷ್ಟು ಉಪ್ಪು ಬೇಕು&lt;/p&gt;&lt;p&gt;&lt;strong&gt;ಹೇಗೆ ಮಾಡುವುದು?&lt;/strong&gt;&lt;/p&gt;&lt;p&gt;ಈರುಳ್ಳಿಯನ್ನು ತೆಳ್ಳಗೆ ಉದ್ದುದ್ದ ಕಟ್&zwnj; ಮಾಡಿಕೊಳ್ಳಬೇಕು, ಅದನ್ನು ಕೈಯಲ್ಲಿ ಹಿಸುಕಿ ಪದರಗಳನ್ನು ಬಿಡಿಸಿಕೊಳ್ಳಿ. ಬಾಣೆಲೆ ತಗೊಂಡು ಮಧ್ಯಮ ಉರಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಕಾದ ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಬೇಕು.&lt;/p&gt;&lt;img&gt;&lt;p&gt;ಈರುಳ್ಳಿಯ ಬಣ್ಣವು ತಿಳಿ ಹಳದಿಗೆ ತಿರುಗಬೇಕು. ಎಣ್ಣೆಯಿಂದ ತೆಗೆದಮೇಲೆ ಕಪ್ಪಗಾಗುತ್ತದೆ, ಹೀಗಾಗಿ ಜಾಸ್ತಿ ಫ್ರೈ ಮಾಡೋದು ಬೇಡ. ಆಮೇಲೆ ಒಂದು ಟಿಶ್ಯೂ ಪೇಪರ್&zwnj;ಗೆ ಹಾಕಿದಾಗ, ಹೆಚ್ಚಿರುವ ಎಣ್ಣೆ ಹೀರುತ್ತದೆ, ಈರುಳ್ಳಿ ಗರಿಗರಿ ಆಗುತ್ತದೆ.&lt;/p&gt;&lt;p&gt;ಈರುಳ್ಳಿ ಕರಿದ ಬಳಿಕ ಉಳಿದ ಎಣ್ಣೆಯಲ್ಲಿ ಉತ್ತಮ ಸುಗಂಧವಿರುತ್ತದೆ. ಇದನ್ನು ಬಿರಿಯಾನಿ ಅಥವಾ ಗ್ರೇವಿ ಮಾಡಲು ಬಳಸಬಹುದು.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/food/indian-cricketer-virat-kohli-eat-birista-recipe-in-kannada-r9gf05n"/>
        </item>
        <item>
            <title><![CDATA[2 ಲಕ್ಷ ರೂ ಇದ್ದ ವಕೀಲರ ಬ್ಯಾಗ್ ಎಳೆದೊಯ್ದು ಮರದ ಮೇಲಿನಿಂದ ನೋಟಿನ ಮಳೆ ಸುರಿಸಿದ ಕೋತಿ]]></title>
            <link>https://kannada.asianetnews.com/viral/monkey-snatches-lawyer-bag-with-rs-2-lakh-showers-currency-notes-from-tree-in-up/articleshow-c0wpgr5</link>
            <guid isPermaLink="true">https://kannada.asianetnews.com/viral/monkey-snatches-lawyer-bag-with-rs-2-lakh-showers-currency-notes-from-tree-in-up/articleshow-c0wpgr5</guid>
            <pubDate>Mon, 01 Jun 2026 15:02:55 +0530</pubDate>
            <description><![CDATA[&lt;p&gt;ಕೋರ್ಟ್ ಆವರಣಕ್ಕೆ 2 ಲಕ್ಷ ರೂಪಾಯಿ ಬ್ಯಾಗ್ ಹಿಡಿದು ಬಂದ ಲಾಯರ್ ಮೇಲೆ ಕೋತಿ ದಾಳಿ ಮಾಡಿದೆ. ಹಣವಿದ್ದ ಬ್ಯಾಗ್ ಎತ್ತಿ ಮರದ ಮೇಲೆಕ್ಕೆ ಹೋದ ಕೋತಿ ಬಳಿಕ ಬ್ಯಾಗ್ ತೆರೆದು ಕಂತೆ ಕಂತೆ ನೋಟುಗಳ ಮಳೆ ಸುರಿಸಿದ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt18ctysekf613cedr2nvejj,imgname-money-rain-from-monkey-1780306308057.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬುಲಂದ್&zwnj;ಶಹರ್ (ಜೂ.01) &lt;/strong&gt;ಶಿಸ್ತು ಪಾಲಿಸುವ ಸ್ಥಳಗಳ ಪೈಕಿ ಕೋರ್ಟ್ ಆವರಣ ಮುಂಚೂಣಿಯಲ್ಲಿದೆ. ಇಲ್ಲಿ ಜನಸಾಮಾನ್ಯರಿಂದ ಹಿಡಿದು, ಪೊಲೀಸರು, ಅಧಿಕಾರಿಗಳು ಎಲ್ಲರೂ ಶಿಸ್ತು ಪಾಲಿಸುತ್ತಾರೆ. ಇದೇ ಕೋರ್ಟ್ ಆವರಣದಲ್ಲಿ ಕೋತಿಯ ಮಂಗನಾಟಕ್ಕೆ ವಕೀರಲೊಬ್ಬರು ಸುಸ್ತಾಗಿದ್ದು ಮಾತ್ರವಲ್ಲ ಆತಂಕ ಎದುರಿಸಿದ ಘಟನೆ ನಡೆದಿದೆ. ವಕೀರಲು ತಮ್ಮ ಬ್ಯಾಗ್&zwnj;ನಲ್ಲಿ 2 ಲಕ್ಷ ರೂಪಾಯಿ ನಗದು ಹಣ ಇಟ್ಟು ಆಗಮಿಸಿದ್ದರು. ಆದರೆ ಕೋತಿ ದಾಳಿ ಮಾಡಿ ಲಾಯರ್ ಕೈಯಲ್ಲಿದ್ದ ಬ್ಯಾಗ್ ಎಳೆದೊಯ್ದಿದೆ. ಮರದ ಮೇಲಕ್ಕೆ ತೆರಳಿದ ಕೋತಿ ಬ್ಯಾಗ್&zwnj;ನಲ್ಲಿದ್ದ ನೋಟುಗಳನ್ನು ಮಳೆ ರೀತಿ ಸುರಿಸಿದ ಘಟನೆ ಉತ್ತರ ಪ್ರದೇಶದ ಬುಲಂದ್&zwnj;ಶಹರ್ ಕೋರ್ಟ್ ಆವರಣದಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.&lt;/p&gt;&lt;h2&gt;ಭಾರಿ ಚರ್ಚೆಯಾಗುತ್ತಿರುವ ಘಟನೆ&lt;/h2&gt;&lt;p&gt;ವಕೀಲರೊಬ್ಬರು ತಮ್ಮ ಕ್ಲೈಂಟ್&zwnj;ನ ಆಸ್ತಿ ನೋಂದಣಿ ಹಾಗೂ ಸ್ಟಾಂಪ್ ಪೇಪರ್ ಡ್ಯೂಟಿ ಪ್ರಕ್ರಿಯೆ ಪೂರ್ಣಗೊಳಿಸಲು 2 ಲಕ್ಷ ರೂಪಾಯಿ ನಗದು ಹಣವನ್ನು ಬ್ಯಾಗ್&zwnj;ನಲ್ಲಿಟ್ಟುಕೊಂಡು ತಂದಿದ್ದರು. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಛೇಂಬರ್ ಪಕ್ಕ ಕಾಯುತ್ತಾ ನಿಂತಿದ್ದರು. ಈ ವೇಳೆ ಕೋತಿಯೊಂದು ದಾಳಿ ಮಾಡಿದೆ.&lt;/p&gt;&lt;h2&gt;ನೋಟಿನ ಮಳೆ ಸುರಿಸಿದು ಕೋತಿ&lt;/h2&gt;&lt;p&gt;ಕೋತಿ ದಾಳಿಗೆ ಬೆದರಿದ ಲಾಯರ್ ದೂರ ಸರಿಯುವಷ್ಟರಲ್ಲೇ ಕೈಯಲ್ಲಿದ್ದ ಹಣದ ಬ್ಯಾಗ್&zwnj;ನ್ನು ಕೋತಿ ಎಗರಿಸಿಕೊಂಡು ಜಿಗಿದಿದೆ. ಕೋರ್ಟ್ ಚೇಂಬರ್ ಬಳಿಯಿಂದ ಪಕ್ಕದಲ್ಲಿದ್ದ ಮರದ ಮೇಲಕ್ಕೆ ಕೋತಿ ಜಿಗಿದು ತೆರಳಿದೆ. ಮರದ ಮೇಲಕ್ಕೆ ತೆರಳಿದ ಕೋತಿ ಬ್ಯಾಗ್&zwnj;ನಲ್ಲಿ ತಿನ್ನುವ ವಸ್ತು ಇರಬಹುದು ಎಂದು ತೆರೆಯುವ ಪ್ರಯತ್ನ ಮಾಡಿದೆ. ಆದರೆ ಜಿಪ್ ಹಾಕಿದ್ದ ಕಾರಣ ತೆರೆಯಲು ಸಾಧ್ಯವಾಗಲಿಲ್ಲ. ಬಳಿಕ ಕೋತಿ ಬ್ಯಾಗ್ ಹರಿದಿದೆ. ಅದರೊಳಗಿದ್ದ ಕಂತೆ ಕಂತೆ ನೋಟುಗಳನ್ನು ನೋಡಿ ಕೋತಿ ನಿರಾಸೆಯಾಗಿದೆ. ತಿನ್ನುವ ವಸ್ತು ಹುಡುಕಿದ ಕೋತಿಗೆ ಕಾಗದಗಳು ಕಂಡಿದೆ. ಹೀಗಾಗಿ ಈ ಕಂತೆ ಕಂತೆ ನೋಟುಗಳನ್ನು ಮೇಲಿನಿಂದ ಕೆಲಕ್ಕೆ ಹಾಕಿದೆ.&lt;/p&gt;&lt;h2&gt;ನೋಟು ಹೆಕ್ಕಿದ ಹಲವರು&lt;/h2&gt;&lt;p&gt;500 ರೂಪಾಯಿ ನೋಟಗಳು ಕೋರ್ಟ್ ಆವರಣದ ಒಳಗಿದ್ದ ಮರದ ಮೇಲಿನಿಂದ ಮಳೆಯಂತೆ ಕೆಳಕ್ಕೆ ಬಂದಿದೆ. ಇತ್ತ ಹಲವು ನೋಟುಗಳು ಕೋರ್ಟ್ ಆವರಣದಿಂದ ಹೊರಕ್ಕೆ ಬಿದ್ದಿದೆ. ಹಲವರು ಈ ನೋಟುಗಳನ್ನು ಹೆಕ್ಕಿದ್ದಾರೆ. ಕೆಲವರು ಮಾತ್ರ ವಕೀಲರಿಗೆ ಹಿಂದುರುಗಿಸಿದರೆ ಬಹುತೇಕರು ಕೋರ್ಟ್ ಆವರಣದ ಹೊರಬಿದ್ದ ನೋಟುಗಳನ್ನು ಹೆಕ್ಕಿ ತಮ್ಮ ಜೇಬಿಗೆ ಇಳಿಸಿದ್ದಾರೆ. ಇದರ ನಡುವೆ ವಕೀಲ ಕೈಮುಗಿದು ಹಣ ಹಿಂದಿರುಗಿಸುವಂತೆ ಮನವಿ ಮಾಡಿದರೂ ಯಾರು ಕೇಳದಂತೆ ಹೊರಟು ಹೋಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;#UttarPradesh: Monkey snatches bag full of currency notes, people shocked when notes fall from treeThis shocking incident occurred in #Bulandshahr district of Uttar Pradesh, where a man arrived at the court chambers of advocates Sohanpal and Aamir with two lakh rupees in a bag&hellip; pic.twitter.com/P0BsGRAksi&lt;/p&gt;&lt;p&gt;&mdash; Siraj Noorani (@sirajnoorani) May 31, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;2 ಲಕ್ಷ ಪೈಕಿ ಸಿಕ್ಕಿದ್ದು 1.95 ಲಕ್ಷ ರೂ ಮಾತ್ರ&lt;/h2&gt;&lt;p&gt;ಮರದ ಮೇಲೆ ಕುಳಿತ ಕೋತಿ ತಿನ್ನುವ ವಸ್ತು ಸಿಗಬಹುಹುದು ಎಂದು ಕಂತೆ ಕಂತೆ ನೋಟುಗಳನ್ನು ತೆಗೆದು ಹೊರಕ್ಕೆ ಹಾಕುತ್ತಾ ಹೋಗಿದೆ. ಈ ನೋಟುಗಳು ಮಳೆಯಂತೆ ಸುರಿದಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಹೀಗೆ ಲಾಯರ್ ಹಾಗೂ ಇತರರ ನೋಟು ಹೆಕ್ಕಿದ್ದಾರೆ. 2 ಲಕ್ಷ ರೂಪಾಯಿ ಇದ್ದ ಬ್ಯಾಗ್&zwnj;ನಿಂದ ನೋಟುಗಳನ್ನು ಕೋತಿ ಸಂಪೂರ್ಣ ಕೆಳಕ್ಕೆ ಹಾಕಿದೆ. ಆದರೆ ಹಲವು ಹೆಕ್ಕಿದ ಕಾರಣ ಕೊನೆಗೆ ಲೆಕ್ಕ ಹಾಕಿದಾಗ 1.95 ಲಕ್ಷ ರೂಪಾಯಿ ಮಾತ್ರ ಸಿಕ್ಕಿದೆ. 5000 ರೂಪಾಯಿ ಮೌಲ್ಯದ ನೋಟುಗಳು ಸಿಗಲೇ ಇಲ್ಲ. ಈ ಪೈಕಿ ಹಲವು ನೋಟುಗಳು ಹಲವರು ಜೇಬು ಸೇರಿದರೆ ಮತ್ತೆ ಕೆಲ ನೋಟುಗಳು ಮರದ ಮೇಲೆ ಎಲೆಗಳ ನಡುವೆ, ಕೊಂಬೆಗಳ ಮೇಲೆ ಉಳಿದುಕೊಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/monkey-snatches-lawyer-bag-with-rs-2-lakh-showers-currency-notes-from-tree-in-up/articleshow-c0wpgr5"/>
        </item>
        <item>
            <title><![CDATA[ಬಾವಿಯಲ್ಲಿ ಬ್ರಿಟಿಷರ ಶವಗಳು, ಆಸ್ಪತ್ರೆಯಲ್ಲಿ ವಿಚಿತ್ರ ಶಬ್ದಗಳು! ಲಕ್ನೋದ 6 ಭಯಾನಕ ಸ್ಥಳಗಳ ಕಥೆ]]></title>
            <link>https://kannada.asianetnews.com/gallery/travel/scariest-and-creepiest-haunted-places-of-lucknow-suh-yoagcai</link>
            <guid isPermaLink="true">https://kannada.asianetnews.com/gallery/travel/scariest-and-creepiest-haunted-places-of-lucknow-suh-yoagcai</guid>
            <pubDate>Mon, 01 Jun 2026 14:52:27 +0530</pubDate>
            <description><![CDATA[&lt;p&gt;ಲಕ್ನೋ ತನ್ನ ಸಂಸ್ಕೃತಿ ಮತ್ತು ಗಂಗಾ-ಜಮುನಿ ಸಂಸ್ಕೃತಿಗೆ ಹೆಸರುವಾಸಿಯಾಗಿದೆ, ಜೊತೆಗೆ ಅನೇಕ ಸುಂದರವಾದ ಪ್ರವಾಸಿ ತಾಣಗಳಿಗೂ ಹೆಸರುವಾಸಿಯಾಗಿದೆ. ಆದಾಗ್ಯೂ, ನಗರವು ಹಲವಾರು ದೆವ್ವ ಮತ್ತು ಭಯಾನಕ ಸ್ಥಳಗಳನ್ನು ಹೊಂದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp7vr3z9yepr58t3w6ac6nxv,imgname-scariest-place-in-bhilai-1776232959977.jpeg" type="image/jpeg" height="390" width="690"/>
            <content:encoded><![CDATA[&lt;p&gt;ಲಕ್ನೋ ತನ್ನ ಸಂಸ್ಕೃತಿ ಮತ್ತು ಗಂಗಾ-ಜಮುನಿ ಸಂಸ್ಕೃತಿಗೆ ಹೆಸರುವಾಸಿಯಾಗಿದೆ, ಜೊತೆಗೆ ಅನೇಕ ಸುಂದರವಾದ ಪ್ರವಾಸಿ ತಾಣಗಳಿಗೂ ಹೆಸರುವಾಸಿಯಾಗಿದೆ. ಆದಾಗ್ಯೂ, ನಗರವು ಹಲವಾರು ದೆವ್ವ ಮತ್ತು ಭಯಾನಕ ಸ್ಥಳಗಳನ್ನು ಹೊಂದಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈ ಸುಂದರ ಉದ್ಯಾನವು ಭಯದ ವಿಶಿಷ್ಟ ಇತಿಹಾಸವನ್ನು ಹೊಂದಿದೆ. ರಾತ್ರಿಯಲ್ಲಿ ಇಲ್ಲಿ ಗೋಳಾಟದ ಮಾತುಗಳು ಕೇಳಿಬರುತ್ತವೆ, ಆದ್ದರಿಂದ ಜನರು ತಡರಾತ್ರಿ ಈ ಮಾರ್ಗದ ಮೂಲಕ ಹಾದುಹೋಗುವುದನ್ನು ತಪ್ಪಿಸುತ್ತಾರೆ.&lt;/p&gt;&lt;img&gt;&lt;p&gt;ಲಕ್ನೋ ವಿಶ್ವವಿದ್ಯಾಲಯದ ಉಪಕುಲಪತಿಗಳ ಅಧಿಕೃತ ನಿವಾಸವಾಗಿದ್ದ ಇದು ಒಂದು ಕಾಲದಲ್ಲಿ ನವಾಬ್ ವಾಜಿದ್ ಅಲಿ ಶಾ ಅವರ ನಿವಾಸವಾಗಿತ್ತು. ದಂತಕಥೆಯ ಪ್ರಕಾರ, ಸತ್ತ ಬ್ರಿಟಿಷ್ ಸೈನಿಕರ ಶವಗಳನ್ನು ಇಲ್ಲಿ ಬಾವಿಗೆ ಎಸೆಯಲಾಗುತ್ತಿತ್ತು ಮತ್ತು ಅಂದಿನಿಂದ ಅಲ್ಲಿ ಆತ್ಮಗಳನ್ನು ಅನುಭವಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ಸ್ಮಶಾನದ ಮೇಲೆ ನಿರ್ಮಿಸಲಾದ ಈ ಆಸ್ಪತ್ರೆಯು ರೋಗಿಗಳ ಕಿರುಚಾಟ ಮತ್ತು ರಾತ್ರಿಯಲ್ಲಿ ಬಾಗಿಲು ಬಡಿಯುವ ಶಬ್ದಕ್ಕೆ ಕುಖ್ಯಾತವಾಗಿದೆ. ಕೆಲವರು ಆತ್ಮಗಳ ಗುಣಪಡಿಸುವ ಶಕ್ತಿಯ ಬಗ್ಗೆಯೂ ತಮಾಷೆ ಮಾಡುತ್ತಾರೆ.&lt;/p&gt;&lt;img&gt;&lt;p&gt;ಈ ಐತಿಹಾಸಿಕ ಸ್ಥಳವು ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ತನ್ನ ನೆಲಮಾಳಿಗೆಯಲ್ಲಿ ಇರಿಸಿತ್ತು, ಅಲ್ಲಿ ಬ್ರಿಟಿಷರು ಅವರನ್ನು ಬಂಧಿಸಿದ್ದರು. ದಂತಕಥೆಯ ಪ್ರಕಾರ, ಮಾರ್ಗದರ್ಶಿ ಇಲ್ಲದೆ ಚಕ್ರವ್ಯೂಹದ ಕಟ್ಟಡಕ್ಕೆ ಪ್ರವೇಶಿಸುವವರು ದಾರಿ ತಪ್ಪಿ ವಿಚಿತ್ರ ಘಟನೆಗಳನ್ನು ಅನುಭವಿಸಬಹುದು.&lt;/p&gt;&lt;img&gt;&lt;p&gt;ಈ ಪ್ರದೇಶವು ಸಂಪೂರ್ಣವಾಗಿ ಜನವಸತಿಯಿಂದ ಕೂಡಿದ್ದರೂ, ಒಳಗಿನ ಏಕಾಂತ ಮೂಲೆಗಳು ಬೇರೆಯದೇ ಕಥೆಯನ್ನು ಹೇಳುತ್ತವೆ. ರಾತ್ರಿಯಲ್ಲಿ ಮಕ್ಕಳು ಅಳುವುದು ಮತ್ತು ವಿಚಿತ್ರ ದೃಶ್ಯಗಳು ಕಂಡುಬಂದಿರುವ ವರದಿಗಳಿವೆ.&lt;/p&gt;&lt;p&gt;ರೈಲ್ವೆ ಕ್ವಾರ್ಟರ್ಸ್, ಲಕ್ನೋ&lt;/p&gt;&lt;p&gt;ಹಳೆಯ ರೈಲ್ವೆ ವಸಾಹತುಗಳಲ್ಲಿ ಒಂದಾದ ಈ ಸ್ಥಳವು ಹಗಲಿನ ವೇಳೆಯಲ್ಲಿಯೂ ಸಹ ನಿರ್ಜನ ಮತ್ತು ಭಯಾನಕವಾಗಿ ಕಾಣುತ್ತದೆ. ಜನರು ವಿಚಿತ್ರ ನೆರಳುಗಳನ್ನು ನೋಡುತ್ತಿದ್ದಾರೆ ಮತ್ತು ವಿವರಿಸಲಾಗದ ಧ್ವನಿಗಳನ್ನು ಕೇಳುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/travel/scariest-and-creepiest-haunted-places-of-lucknow-suh-yoagcai"/>
        </item>
        <item>
            <title><![CDATA[Vaibhav Suryavanshi... ಸಿಕ್ಸ್‌ ಮಳೆ ಸುರಿಸೋದು ಓಕೆ! ಹುಡುಗಿಯರಿಗೆ ಹೀಗೆ ಮಾಡೋದು ನಾಟ್‌ ಓಕೆ ಬೇಬಿ!]]></title>
            <link>https://kannada.asianetnews.com/gallery/cricket-sports/cricketer-vaibhav-suryavanshi-do-not-follow-single-women-girl-in-instagram-wiqfi6v</link>
            <guid isPermaLink="true">https://kannada.asianetnews.com/gallery/cricket-sports/cricketer-vaibhav-suryavanshi-do-not-follow-single-women-girl-in-instagram-wiqfi6v</guid>
            <pubDate>Sun, 31 May 2026 18:04:24 +0530</pubDate>
            <description><![CDATA[&lt;p&gt;Vaibhav Suryavanshi Instagram: ಈಗ IPL ಮ್ಯಾಚ್&zwnj; ನಡೆಯುತ್ತಿದೆ. ಸದ್ಯ ಕ್ರಿಕೆಟ್&zwnj; ಲೋಕದಲ್ಲಿ 15 ವರ್ಷದ ವೈಭವ್&zwnj; ಸೂರ್ಯವಂಶಿ ಹೆಸರು ಭಾರೀ ಸೌಂಡ್&zwnj; ಮಾಡ್ತಿದೆ. ಜಸ್ಪ್ರೀತ್&zwnj; ಬೂಮ್ರಾ ಬೌಲಿಂಗ್&zwnj; ಹಾಕಿದರೂ, ಈ ಹುಡುಗ ಸಿಕ್ಸ್&zwnj; ಬಾರಿಸಿಯೇ ಬಾರಿಸುತ್ತಾನೆ. ಈಗ ಇವನ ಒಂದು ನಡೆ ಚರ್ಚೆ ಹುಟ್ಟು ಹಾಕಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz08rcj5pqpw70s618aqakc,imgname-new-project---2026-05-31t180034.867-1780230676880.jpg" type="image/jpeg" height="390" width="690"/>
            <content:encoded><![CDATA[&lt;p&gt;Vaibhav Suryavanshi Instagram: ಈಗ IPL ಮ್ಯಾಚ್&zwnj; ನಡೆಯುತ್ತಿದೆ. ಸದ್ಯ ಕ್ರಿಕೆಟ್&zwnj; ಲೋಕದಲ್ಲಿ 15 ವರ್ಷದ ವೈಭವ್&zwnj; ಸೂರ್ಯವಂಶಿ ಹೆಸರು ಭಾರೀ ಸೌಂಡ್&zwnj; ಮಾಡ್ತಿದೆ. ಜಸ್ಪ್ರೀತ್&zwnj; ಬೂಮ್ರಾ ಬೌಲಿಂಗ್&zwnj; ಹಾಕಿದರೂ, ಈ ಹುಡುಗ ಸಿಕ್ಸ್&zwnj; ಬಾರಿಸಿಯೇ ಬಾರಿಸುತ್ತಾನೆ. ಈಗ ಇವನ ಒಂದು ನಡೆ ಚರ್ಚೆ ಹುಟ್ಟು ಹಾಕಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;Vaibhav Suryavanshi: ಐಪಿಎಲ್ (IPL) ಇತಿಹಾಸದಲ್ಲೇ ಕಿರಿಯ ವಯಸ್ಸಿಗೆ ಈ ಹುಡುಗ ಕೋಟಿ ರೂಪಾಯಿಗೆ ಈ ಹುಡುಗ ಹರಾಜಾಗಿದ್ದಾನೆ, ಅಷ್ಟೇ ಅಲ್ಲದೆ 40-50 ಬಾಲ್&zwnj;ಗೆ 97 ರನ್&zwnj; ಹೊಡೆದು ಇತಿಹಾಸ ನಿರ್ಮಿಸಿದ್ದಾನೆ. ಇನ್ನೂ ಈ ಹುಡುಗ 100 ರನ್&zwnj; ಗಳಿಸಲು ಮಾತ್ರ ಆಗಿಲ್ಲ, ಆದರೆ ಈ ವಯಸ್ಸಿಗೆ ಮಾತ್ರ ಅವನು 100ರ ಹತ್ತಿರ ಹೋಗಿ ಔಟ್&zwnj; ಆಗುತ್ತಿರೋದು ಸಣ್ಣ ವಿಷಯವಲ್ಲ.&lt;/p&gt;&lt;img&gt;&lt;p&gt;ಬಿಹಾರದ ಹುಡುಗನ ಕ್ರಿಕೆಟ್&zwnj; ಒಂದೇ ಅಲ್ಲದೆ, ಇನ್&zwnj;ಸ್ಟಾಗ್ರಾಮ್&zwnj; ಕೂಡ ಚರ್ಚೆಯಲ್ಲಿದೆ. ಇವನಿಗೆ ಆರು ಮಿಲಿಯನ್&zwnj; ಫಾಲೋವರ್ಸ್&zwnj; ಇದ್ದಾರೆ. ಈ ಹುಡುಗ 335 ಜನರನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಫಾಲೋ ಮಾಡುತ್ತಿದ್ದಾನೆ. ಆದರೆ ಅಲ್ಲೊಂದು ಅಚ್ಚರಿಯ ನಡೆ ಮಾತ್ರ ಎದ್ದು ಕಾಣುತ್ತಿದೆ.&lt;/p&gt;&lt;img&gt;&lt;p&gt;ವೈಭವ್ ಸೂರ್ಯವಂಶಿ ಇನ್&zwnj;ಸ್ಟಾಗ್ರಾಮ್ ಖಾತೆಯನ್ನು ಅನೇಕರು ಗಮನಿಸಿದ್ದು, ಅಲ್ಲಿ ಸ್ವಾರಸ್ಯಕರ ವಿಷಯವೊಂದು ಬಯಲಾಗಿದೆ. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವೈಭವ್ ಸೂರ್ಯವಂಶಿ ಒಂದೇ ಒಂದು ಹುಡುಗಿ ಅಥವಾ ಮಹಿಳೆಯನ್ನು ಫಾಲೋ ಮಾಡುತ್ತಿಲ್ಲ!&lt;/p&gt;&lt;img&gt;&lt;p&gt;ವೈಭವ್&zwnj; ಸೂರ್ಯವಂಶಿ ಈಗಲೂ ಮಗು, ನನ್ನ ಮನೆಗೆ ಬಂದು ಐಸ್&zwnj;ಕ್ರೀಂ ತಿನ್ನುತ್ತಾನೆ, ಸಿನಿಮಾ ನೋಡುತ್ತಾನೆ, ಅವನು ಪ್ರೊಫೆಶನಲ್&zwnj; ಅಲ್ಲ ಎಂದು ಕ್ರಿಕೆಟರ್&zwnj; ಜಿತೇಶ್&zwnj; ಶರ್ಮಾ ಅವರೇ ಹೇಳಿದ್ದರು. ಅಂದಹಾಗೆ ಈಗ ಇನ್ನೂ ಕಿಡ್&zwnj; ಎಂದು ಹೇಳುವ ನಡೆ ಕೂಡ ಸೋಶಿಯಲ್&zwnj; ಮೀಡಿಯಾದಲ್ಲಿ ಆಗಾಗ ವೈರಲ್&zwnj; ಆಗುತ್ತಿರುತ್ತದೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/cricketer-vaibhav-suryavanshi-do-not-follow-single-women-girl-in-instagram-wiqfi6v"/>
        </item>
        <item>
            <title><![CDATA[ದೇಶದ ನಂಬರ್​ 1 ಶ್ರೀಮಂತ ಸಿಎಂ ಆಗ್ತಿರೋ ಡಿಕೆಶಿಗೇ ಸೆಡ್ಡು ಹೊಡೆದ ಲೇಡಿ MLA- ಯಾರಿವರು]]></title>
            <link>https://kannada.asianetnews.com/gallery/politics/richest-cheif-minister-of-india-will-be-dk-shivakumar-and-3rd-richest-mla-suc-tzhcwal</link>
            <guid isPermaLink="true">https://kannada.asianetnews.com/gallery/politics/richest-cheif-minister-of-india-will-be-dk-shivakumar-and-3rd-richest-mla-suc-tzhcwal</guid>
            <pubDate>Mon, 01 Jun 2026 13:53:09 +0530</pubDate>
            <description><![CDATA[&lt;p&gt;ಡಿ.ಕೆ.ಶಿವಕುಮಾರ್ ರಾಜ್ಯದ ನೂತನ ಹಾಗೂ ದೇಶದ ನಂಬರ್ 1 ಶ್ರೀಮಂತ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ. ಆದರೆ, ಶಾಸಕರ ಪಟ್ಟಿಯಲ್ಲಿ ಇವರಿಗಿಂತ ಇಬ್ಬರು ಶ್ರೀಮಂತರಿದ್ದು, ಇವರು 3ನೇ ಸ್ಥಾನದಲ್ಲಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt146fq6a91pjd8gq9t6t6xa,imgname-richest-mla-01-1780301905638.jpg" type="image/jpeg" height="390" width="690"/>
            <content:encoded><![CDATA[&lt;p&gt;ಡಿ.ಕೆ.ಶಿವಕುಮಾರ್ ರಾಜ್ಯದ ನೂತನ ಹಾಗೂ ದೇಶದ ನಂಬರ್ 1 ಶ್ರೀಮಂತ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ. ಆದರೆ, ಶಾಸಕರ ಪಟ್ಟಿಯಲ್ಲಿ ಇವರಿಗಿಂತ ಇಬ್ಬರು ಶ್ರೀಮಂತರಿದ್ದು, ಇವರು 3ನೇ ಸ್ಥಾನದಲ್ಲಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್​ ಅವರ ಪಟ್ಟಾಭಿಷೇಕಕ್ಕೆ ಇನ್ನೇನು ದಿನಗಳು ಹತ್ತಿರವಾಗಿದೆ. ನಾಡಿದ್ದು ಅರ್ಥಾತ್​ ಜೂನ್​ 3ರಂದು ಶಿವಕುಮಾರ್​ ಅವರ ಬಹುವರ್ಷಗಳ ಕನಸು ನನಸಾಗಲಿದ್ದು, ಕರ್ನಾಟಕದ ಸಾರಥ್ಯ ವಹಿಸಲಿದ್ದಾರೆ.&lt;/p&gt;&lt;img&gt;&lt;p&gt;ಈ ಮೂಲಕ ಡಿ.ಕೆ.ಶಿವಕುಮಾರ್​ ಅವರು ದೇಶದ ನಂಬರ್​ 1 ಶ್ರೀಮಂತ ಮುಖ್ಯಮಂತ್ರಿ ಎನ್ನಿಸಿಕೊಳ್ಳಲಿದ್ದಾರೆ. ಇವರ ನಿವ್ವಳ ಮೌಲ್ಯವು 1,140 ಕೋಟಿ ರೂ. ಮೌಲ್ಯದ ಚರ ಆಸ್ತಿಗಳು ಮತ್ತು 273 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಒಳಗೊಂಡಿದೆ, ಅವರಿಗೆ 265 ಕೋಟಿ ರೂ. ಸಾಲ ಇವೆ.&lt;/p&gt;&lt;img&gt;&lt;p&gt;ಆದರೆ ಕುತೂಹಲದ ವಿಷ್ಯ ಏನೆಂದರೆ, ಇಬ್ಬರು ಶಾಸಕರು ಶ್ರೀಮಂತಿಕೆಯಲ್ಲಿ ಡಿ.ಕೆ.ಶಿವಕುಮಾರ್​ ಅವರನ್ನು ಸೆಡ್ಡು ಹೊಡದಿದ್ದಾರೆ. ಮುಖ್ಯಮಂತ್ರಿಯಾಗಿ ನಂಬರ್​ 1 ಶ್ರೀಮಂತ ಡಿಕೆಶಿ ಆದರೂ, ಶಾಸಕರಾಗಿ ಡಿಕೆಶಿ 3ನೇ ಸ್ಥಾನದಲ್ಲಿ ಇದ್ದಾರೆ.&lt;/p&gt;&lt;img&gt;&lt;p&gt;ಇದಕ್ಕೆ ಕಾರಣ, ನಂಬರ್​ 1 ಸ್ಥಾನದಲ್ಲಿ ಇರುವವರು ತಮಿಳುನಾಡಿನ ಎಐಎಡಿಎಂಕೆ ಶಾಸಕಿ ಲೀಮಾ ರೋಸ್ ಮಾರ್ಟಿನ್. 2026 ರಲ್ಲಿ ಲಾಲ್ಗುಡಿ ಕ್ಷೇತ್ರದಿಂದ ಆಯ್ಕೆಯಾದ ಅವರು, ಕುಟುಂಬದ ಆಸ್ತಿ 5,863 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಮಹಾರಾಷ್ಟ್ರದ ಬಿಜೆಪಿಯ ಶಾಸಕ ಪರಾಗ್ ಶಾ. ಇವರು ಚುನಾವಣೆಯಲ್ಲಿ ಘೋಷಿಸಿರುವಂತೆ ಇವರ ಒಟ್ಟೂ ಆಸ್ತಿ 3383.06 ಕೋಟಿ ರೂಪಾಯಿ.&lt;/p&gt;&lt;img&gt;&lt;p&gt;ಡಿ.ಕೆ.ಶಿವಕುಮಾರ್ ಅವರ ಚುನಾವಣಾ ಅಫಿಡವಿಟ್ ಪ್ರಕಾರ, ಅವರ ಹೆಸರಿನಲ್ಲಿ ಕೇವಲ ಒಂದು ಕಾರು ಮಾತ್ರ ನೋಂದಾಯಿಸಲಾಗಿದೆ. ಇದಲ್ಲದೆ ಇದು ಈ ಯುಗದ ಆಧುನಿಕ ಐಷಾರಾಮಿ ಕಾರಲ್ಲ. ಉದಾಹರಣೆಗೆ ಬೆಂಜ್, ಆಡಿ ಅಥವಾ ಫೆರಾರಿ ಅಲ್ಲ. ಬದಲಿಗೆ ಸುಮಾರು 24 ವರ್ಷಗಳ ಹಿಂದೆ ಅಂದ್ರೆ 2002ರಲ್ಲಿ ಖರೀದಿಸಿದ ಹಳೆಯ ಟೊಯೋಟಾ ಕ್ವಾಲಿಸ್ ಕಾರು.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ, ಭಾರತದಲ್ಲಿನ ನಿಯಮಗಳು ಯಾವುದೇ ಕಾರನ್ನು ಸಾರ್ವಜನಿಕ ರಸ್ತೆಗಳಲ್ಲಿ 15 ವರ್ಷಗಳಿಗಿಂತ ಹೆಚ್ಚು ಕಾಲ ಓಡಿಸಲು ಅನುಮತಿಸುವುದಿಲ್ಲ. ಆದ್ದರಿಂದ ಶಿವಕುಮಾರ್ ಪ್ರಸ್ತುತ ಈ ವಾಹನವನ್ನು ಬಳಸುತ್ತಿರಲು ಅವಕಾಶವಿಲ್ಲ. ಆದರೆ, ಅವರು ತಮ್ಮ ಜೀವನದಲ್ಲಿ ಅಪಾರ ಭಾವನಾತ್ಮಕ ಮೌಲ್ಯವನ್ನು ಹೊಂದಿರುವ ಈ ಮೊದಲ ಕಾರನ್ನು ಇಂದಿಗೂ ತಮ್ಮ ಗ್ಯಾರೇಜ್&zwnj;ನಲ್ಲಿ ಹೆಚ್ಚಿನ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/politics/richest-cheif-minister-of-india-will-be-dk-shivakumar-and-3rd-richest-mla-suc-tzhcwal"/>
        </item>
        <item>
            <title><![CDATA[ಪಿಎಂ-ಸೇತು: ದೇಶದಲ್ಲೇ ಮೊದಲ ಬಾರಿಗೆ  'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್' ನಡುವೆ ಐತಿಹಾಸಿಕ ಒಪ್ಪಂದ!]]></title>
            <link>https://kannada.asianetnews.com/business/pm-setu-arcelormittal-nippon-steel-to-upgrade-vizag-iti-cluster-gdp/articleshow-8ta9z1y</link>
            <guid isPermaLink="true">https://kannada.asianetnews.com/business/pm-setu-arcelormittal-nippon-steel-to-upgrade-vizag-iti-cluster-gdp/articleshow-8ta9z1y</guid>
            <pubDate>Mon, 01 Jun 2026 13:55:56 +0530</pubDate>
            <description><![CDATA[&lt;p&gt;ಕೇಂದ್ರದ 'ಪಿಎಂ-ಸೇತು' ಯೋಜನೆಯಡಿ, ವಿಶಾಖಪಟ್ಟಣಂನ ಐಟಿಐ ಕ್ಲಸ್ಟರ್ ಅನ್ನು ಉನ್ನತೀಕರಿಸಲು 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್' ಸಂಸ್ಥೆಗೆ ಅನುಮೋದನೆ ದೊರೆತಿದೆ. ಈ ಮೂಲಕ, ಖಾಸಗಿ ಸಹಭಾಗಿತ್ವದಲ್ಲಿ ಐಟಿಐ ಅಭಿವೃದ್ಧಿಪಡಿಸುವ ದೇಶದ ಮೊದಲ ಸಂಸ್ಥೆ ಮತ್ತು ರಾಜ್ಯ ಎಂಬ ಹೆಗ್ಗಳಿಕೆಗೆ ಕ್ರಮವಾಗಿ ಆರ್ಸೆಲರ್ ಮಿತ್ತಲ್ ಮತ್ತು ಆಂಧ್ರಪ್ರದೇಶ ಪಾತ್ರವಾಗಿವೆ. &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt14aaw77cdrqmvs8ztradd8,imgname-pm-setu-arcelormittal-nippon-steel-1780302031738.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಯುವಜನರಿಗೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ಪಿಎಂ-ಸೇತು' ಯೋಜನೆಯಡಿ ಹೊಸ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ 'ಐಟಿಐ ಕ್ಲಸ್ಟರ್' ಅನ್ನು ಉನ್ನತೀಕರಿಸಲು ಪ್ರಖ್ಯಾತ ಉಕ್ಕು ಕಂಪನಿ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ' ಮಂಡಿಸಿದ್ದ ಸ್ಟ್ರಾಟೆಜಿಕ್ ಇನ್ವೆಸ್ಟ್&zwnj;ಮೆಂಟ್ ಪ್ಲ್ಯಾನ್ʼಗೆ ಕೇಂದ್ರದ ಸಮಿತಿ ಅಧಿಕೃತ ಅನುಮೋದನೆ ನೀಡಿದೆ.&lt;/p&gt;&lt;p&gt;ಈ ಮೂಲಕ 'ಪಿಎಂ-ಸೇತು' ಯೋಜನೆಯಡಿ ಅನುಮೋದನೆ ಪಡೆದ ದೇಶದ ಮೊಟ್ಟಮೊದಲ ಖಾಸಗಿ ಕೈಗಾರಿಕಾ ಸಂಸ್ಥೆಯಾಗಿ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್' ಹೊರಹೊಮ್ಮಿದೆ. ಅಲ್ಲದೆ, ಖಾಸಗಿ ಕೈಗಾರಿಕೆಗಳ ಜೊತೆ ಒಪ್ಪಂದ ಮಾಡಿಕೊಂಡು ಈ ಯೋಜನೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿ ಆಂಧ್ರಪ್ರದೇಶ ಇತಿಹಾಸ ಬರೆದಿದೆ.&lt;/p&gt;&lt;p&gt;ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ತನ್ನ ಶೈಕ್ಷಣಿಕ ಪಾಲುದಾರ ಸಂಸ್ಥೆಯಾದ NAMTECH ಜೊತೆಗೂಡಿ ಈ ಐಟಿಐ ಕ್ಲಸ್ಟರ್ ಅನ್ನು ಅಭಿವೃದ್ಧಿಪಡಿಸಲಿದೆ.&lt;/p&gt;&lt;h2&gt;ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಅನುಮೋದನೆ&lt;/h2&gt;&lt;p&gt;ನವದೆಹಲಿಯ ಕೌಶಲ್ ಭವನದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (ಎಂಎಸ್&zwnj;ಡಿಇ) ಮೂರನೇ ರಾಷ್ಟ್ರೀಯ ಸಂಚಾಲನಾ ಸಮಿತಿ ಸಭೆಯಲ್ಲಿ ಈ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ನೀಡಲಾಯಿತು.&lt;/p&gt;&lt;p&gt;ಸಚಿವಾಲಯದ ಕಾರ್ಯದರ್ಶಿ ದೇಬಾಶ್ರೀ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಡಿಜಿಟಿ ಮಹಾನಿರ್ದೇಶಕ ದಿಲೀಪ್ ಕುಮಾರ್, ಕಾರ್ಮಿಕ ಸಚಿವಾಲಯ, ವಾಣಿಜ್ಯ ಸಚಿವಾಲಯದ ಅಧಿಕಾರಿಗಳು, ಎಚ್&zwnj;ಎಎಲ್&zwnj;, ಹೀರೋ ಮೋಟೊಕಾರ್ಪ್, ಬಜಾಜ್ ಆಟೋ, ಐಟಿಸಿ ಸೇರಿದಂತೆ ಹಲವು ಪ್ರಮುಖ ಕೈಗಾರಿಕೆಗಳ ಪ್ರತಿನಿಧಿಗಳು ಹಾಗೂ ವಿಶ್ವಬ್ಯಾಂಕ್ ಪ್ರತಿನಿಧಿಗಳು ಭಾಗವಹಿಸಿದ್ದರು.&lt;/p&gt;&lt;h2&gt;ಐಟಿಐ ಅಭಿವೃದ್ಧಿಗೆ ಯಾಕೆ ಈ ಒಪ್ಪಂದ?&lt;/h2&gt;&lt;p&gt;ಸಾಮಾನ್ಯವಾಗಿ ಸರ್ಕಾರಿ ಐಟಿಐಗಳಲ್ಲಿ ಹಳೆಯ ಪಠ್ಯಕ್ರಮಗಳಿರುತ್ತವೆ. ಆದರೆ ಪ್ರಸ್ತುತ ಕೈಗಾರಿಕೆಗಳಿಗೆ ಹೊಸ ತಂತ್ರಜ್ಞಾನ ತಿಳಿದಿರುವ ಕಾರ್ಮಿಕರ ಅಗತ್ಯವಿದೆ. ಈ ಕೊರತೆಯನ್ನು ನೀಗಿಸಲು, ಐಟಿಐಗಳನ್ನು ಖಾಸಗಿ ಕೈಗಾರಿಕೆಗಳೇ ನಿರ್ವಹಿಸುವಂತೆ ಮಾಡಲು ಈ ಯೋಜನೆ ರೂಪಿಸಲಾಗಿದೆ. ವಿಶಾಖಪಟ್ಟಣಂ ಐಟಿಐ ಕ್ಲಸ್ಟರ್&zwnj;ನ ಈ ಹೊಸ ಒಪ್ಪಂದವು ದೇಶದ ಉಳಿದ ರಾಜ್ಯಗಳಿಗೂ ಇದೀಗ ಮಾದರಿಯಾಗಿದೆ.&lt;/p&gt;&lt;h2&gt;ಏನಿದು ಪಿಎಂ-ಸೇತು ಯೋಜನೆ?&lt;/h2&gt;&lt;p&gt;'ಪ್ರಧಾನ ಮಂತ್ರಿ ಸ್ಕಿಲ್ಲಿಂಗ್ ಆಂಡ್ ಎಂಪ್ಲಾಯಬಿಲಿಟಿ ಟ್ರಾನ್ಸ್&zwnj;ಫಾರ್ಮೇಶನ್ ತ್ರೂ ಅಪ್&zwnj;ಗ್ರೇಡೆಡ್ ಐಟಿಐಸ್' ಎನ್ನುವುದು ಪಿಎಂ ಸೇತುವಿನ ಪೂರ್ಣ ರೂಪ. ಬರೋಬ್ಬರಿ 60,000 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಇದರ ಮೂಲಕ ದೇಶದ 1,000 ಸರ್ಕಾರಿ ಐಟಿಐಗಳನ್ನು ಆಧುನೀಕರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.&lt;/p&gt;&lt;p&gt;ಖಾಸಗಿ ಕೈಗಾರಿಕೆಗಳ ಪಾಲುದಾರಿಕೆಯೊಂದಿಗೆ, ಐಟಿಐಗಳಲ್ಲಿ ಹೊಸ ತಂತ್ರಜ್ಞಾನದ ಮೂಲಸೌಕರ್ಯ ಅಭಿವೃದ್ಧಿಪಡಿಸಿ, ಭವಿಷ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗವಕಾಶಗಳನ್ನು ಹೆಚ್ಚಿಸುವುದು ಇದರ ಮೂಲ ಉದ್ದೇಶವಾಗಿದೆ.&lt;/p&gt;&lt;p&gt;ಈಗಾಗಲೇ ದೇಶದ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. 12 ರಾಜ್ಯಗಳು ಖಾಸಗಿ ಕಂಪನಿಗಳನ್ನು ಆಹ್ವಾನಿಸಲು ಟೆಂಡರ್ (ಆರ್&zwnj;ಎಫ್&zwnj;ಪಿ) ಅನ್ನೂ ಕರೆದಿವೆ. ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ರಾಜ್ಯಗಳು ಹಾಗೂ ಕೈಗಾರಿಕೆಗಳ ನಡುವೆ ಇದೇ ರೀತಿಯ ಒಪ್ಪಂದಗಳು ನಡೆಯಲಿದ್ದು, 'ವಿಕಸಿತ್ ಭಾರತ್ 2047' ಕನಸನ್ನು ನನಸು ಮಾಡಲು ಕೌಶಲ್ಯಪೂರ್ಣ ಯುವಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ.&lt;/p&gt;&lt;p&gt;ಈ ಯೋಜನೆಗೆ ಈಗ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಕೈ ಜೋಡಿಸಿದೆ. ಇದು ಜಗತ್ತಿನ ಮುಂಚೂಣಿ ಸ್ಟೀಲ್ ಉತ್ಪಾದನಾ ಸಂಸ್ಥೆಗಳಾದ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ ನಡುವಿನ ಜಂಟಿ ಉದ್ಯಮವಾಗಿದೆ. ಇದು ವರ್ಷಕ್ಕೆ 90 ಲಕ್ಷ ಟನ್ ಕಚ್ಚಾ ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಸಂಸ್ಥೆಯು ಮೌಲ್ಯವರ್ಧಿತ ಉಕ್ಕು ಸೇರಿದಂತೆ ಹಲವು ವಿಧದ ಫ್ಲಾಟ್ ಸ್ಟೀಲ್ ಉತ್ಪನ್ನಗಳನ್ನು ತಯಾರಿಸುತ್ತದೆ.&lt;/p&gt;&lt;p&gt;ಆಂಧ್ರಪ್ರದೇಶದಲ್ಲಿ 82 ಲಕ್ಷ ಟನ್ ಸಾಮರ್ಥ್ಯದ ಹೊಸ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಅನ್ನು ಸಹ ಇದು ಸ್ಥಾಪಿಸುತ್ತಿದೆ. ಉಕ್ಕು ಸಚಿವಾಲಯದಿಂದ 'ಗ್ರೀನ್ ಸ್ಟೀಲ್ ಪ್ರಮಾಣಪತ್ರ' ಪಡೆದ ಭಾರತದ ಏಕೈಕ ಇಂಟಿಗ್ರೇಟೆಡ್ ಸ್ಟೀಲ್ ಕಂಪನಿ ಇದಾಗಿದೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/business/pm-setu-arcelormittal-nippon-steel-to-upgrade-vizag-iti-cluster-gdp/articleshow-8ta9z1y"/>
        </item>
        <item>
            <title><![CDATA[ರೈಲಿನ ಟಿಕೆಟ್, ತತ್ಕಾಲ್​​ ಫಟಾಫಟ್​ ಬುಕ್​ ಮಾಡಲು ಯಾವ ಆ್ಯಪ್​ ಬೆಸ್ಟ್​: ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/gallery/india-news/difference-between-irctc-vs-railone-app-features-which-one-is-better-for-reservation-tatkal-ticket-suc-0sgod59</link>
            <guid isPermaLink="true">https://kannada.asianetnews.com/gallery/india-news/difference-between-irctc-vs-railone-app-features-which-one-is-better-for-reservation-tatkal-ticket-suc-0sgod59</guid>
            <pubDate>Mon, 01 Jun 2026 13:08:47 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆಯು IRCTC ಜೊತೆಗೆ RailOne ಎಂಬ ಹೊಸ 'ಸೂಪರ್ ಅಪ್ಲಿಕೇಶನ್' ಅನ್ನು ಪರಿಚಯಿಸಿದೆ. ಈ ಲೇಖನವು ಎರಡೂ ಅಪ್ಲಿಕೇಶನ್&zwnj;ಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರಿಸುತ್ತದೆ, ಇದರಲ್ಲಿ ಟಿಕೆಟ್ ಬುಕಿಂಗ್, ವೇಗ, ವಿಶ್ವಾಸಾರ್ಹತೆ ಮತ್ತು ಇತರ ಸೇವೆಗಳನ್ನು ಹೋಲಿಸಲಾಗುತ್ತದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt11wqp1wka5chtx24zsxsy4,imgname-railway-ticket-booking-app-1780299488961.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರೈಲ್ವೆಯು IRCTC ಜೊತೆಗೆ RailOne ಎಂಬ ಹೊಸ 'ಸೂಪರ್ ಅಪ್ಲಿಕೇಶನ್' ಅನ್ನು ಪರಿಚಯಿಸಿದೆ. ಈ ಲೇಖನವು ಎರಡೂ ಅಪ್ಲಿಕೇಶನ್&zwnj;ಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರಿಸುತ್ತದೆ, ಇದರಲ್ಲಿ ಟಿಕೆಟ್ ಬುಕಿಂಗ್, ವೇಗ, ವಿಶ್ವಾಸಾರ್ಹತೆ ಮತ್ತು ಇತರ ಸೇವೆಗಳನ್ನು ಹೋಲಿಸಲಾಗುತ್ತದೆ.&amp;nbsp;&lt;/p&gt;&lt;img&gt;&lt;p&gt;ನೀವು ರೈಲು ಟಿಕೆಟ್&zwnj;ಗಳನ್ನು ಬುಕ್ ಮಾಡಲು ಅಧಿಕೃತ IRCTC ಅಪ್ಲಿಕೇಶನ್ ಅನ್ನು ಬಳಸಿರಬಹುದು. ಆದರೆ ಭಾರತೀಯ ರೈಲ್ವೆಯ ಹೊಸ RailOne ಅಪ್ಲಿಕೇಶನ್ ಬಗ್ಗೆ ನಿಮಗೆ ತಿಳಿದಿದೆಯೇ? ಈ ಅಪ್ಲಿಕೇಶನ್ ಸಾರ್ವಜನಿಕರಲ್ಲಿ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಇದನ್ನು ರೈಲ್ವೆಯ ಸೂಪರ್ ಅಪ್ಲಿಕೇಶನ್ ಎಂದೂ ಕರೆಯುತ್ತಾರೆ. ಆದರೆ ಅನೇಕ ಜನರ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಯೆಂದರೆ: ಎರಡೂ ಅಪ್ಲಿಕೇಶನ್&zwnj;ಗಳು ಭಾರತೀಯ ರೈಲ್ವೆಗೆ ಆಗಿರುವುದರಿಂದ, RailOne ಮತ್ತು IRCTC ನಡುವಿನ ವ್ಯತ್ಯಾಸವೇನು? ಯಾವ ಅಪ್ಲಿಕೇಶನ್ ಹೆಚ್ಚು ಪ್ರಸ್ತುತವಾಗಿದೆ? ಯಾವುದು ಹೆಚ್ಚು ಉಪಯುಕ್ತವಾಗಿದೆ? ನೀವು ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಮುಂದಿನ ಬಾರಿ ನೀವು ದೃಢಪಡಿಸಿದ ಟಿಕೆಟ್ ಅನ್ನು ಸುಲಭವಾಗಿ ಬುಕ್ ಮಾಡಲು ಈ ಎರಡು ಅಪ್ಲಿಕೇಶನ್&zwnj;ಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯಿರಿ.&lt;/p&gt;&lt;img&gt;&lt;p&gt;ಮೊದಲು, RailOne ಅಪ್ಲಿಕೇಶನ್ ಏನೆಂದು ಅರ್ಥಮಾಡಿಕೊಳ್ಳೋಣ. ವಾಸ್ತವವಾಗಿ, RailOne ಅಪ್ಲಿಕೇಶನ್ ಭಾರತೀಯ ರೈಲ್ವೆಯ ಆಲ್-ಇನ್-ಒನ್ ಸೂಪರ್ ಅಪ್ಲಿಕೇಶನ್ ಆಗಿದೆ. ಇದನ್ನು CRIS (ಸೆಂಟರ್ ಫಾರ್ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್) ಅಭಿವೃದ್ಧಿಪಡಿಸಿದೆ. ಇದರ ಉದ್ದೇಶ ಭಾರತೀಯ ರೈಲ್ವೆಯ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಗೆ ತರುವುದು. ಇದರ ಮೂಲಕ, ನೀವು ಟಿಕೆಟ್&zwnj;ಗಳನ್ನು ಬುಕ್ ಮಾಡಬಹುದು, ರೈಲುಗಳನ್ನು ಟ್ರ್ಯಾಕ್ ಮಾಡಬಹುದು, ಆಹಾರವನ್ನು ಆರ್ಡರ್ ಮಾಡಬಹುದು ಮತ್ತು ದೂರುಗಳನ್ನು ಸಹ ಸಲ್ಲಿಸಬಹುದು.&lt;/p&gt;&lt;img&gt;&lt;p&gt;ಈಗ, IRCTC ಬಗ್ಗೆ ಹೇಳುವುದಾದರೆ, ಟಿಕೆಟ್ ಬುಕಿಂಗ್&zwnj;ಗೆ IRCTC ಅಪ್ಲಿಕೇಶನ್ ಇನ್ನೂ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಅಪ್ಲಿಕೇಶನ್ ಆಗಿದೆ. ತತ್ಕಾಲ್ ಅಥವಾ ಸ್ಲೀಪರ್ ಟಿಕೆಟ್&zwnj;ಗಳನ್ನು ಬುಕ್ ಮಾಡುವುದಾಗಲಿ, ಹೆಚ್ಚಿನ ಜನರು IRCTC ಅನ್ನು ಅವಲಂಬಿಸಿದ್ದಾರೆ. ಆದರೆ RailOne ನ ಗಮನವು ಕಾಯ್ದಿರಿಸಿದ ಟಿಕೆಟ್&zwnj;ಗಳಿಗೆ ಸೀಮಿತವಾಗಿಲ್ಲ. ನೀವು RailOne ಅಪ್ಲಿಕೇಶನ್ ಮೂಲಕ ಸಾಮಾನ್ಯ ಕೋಚ್ ಟಿಕೆಟ್&zwnj;ಗಳು, ಪ್ಲಾಟ್&zwnj;ಫಾರ್ಮ್ ಟಿಕೆಟ್&zwnj;ಗಳು ಮತ್ತು ಸ್ಥಳೀಯ ಟಿಕೆಟ್&zwnj;ಗಳನ್ನು ಒಳಗೊಂಡಂತೆ ಕಾಯ್ದಿರಿಸದ ಟಿಕೆಟ್&zwnj;ಗಳನ್ನು ಸಹ ಖರೀದಿಸಬಹುದು.&lt;/p&gt;&lt;img&gt;&lt;p&gt;ಅಪ್ಲಿಕೇಶನ್&zwnj;ನ ಅನುಕೂಲಗಳ ಕುರಿತು ಹೇಳುವುದಾದರೆ, RailOne ಅಪ್ಲಿಕೇಶನ್ IRCTC ಗಿಂತ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ಸಾಮಾನ್ಯ ಬುಕಿಂಗ್ ಮತ್ತು ಸಾಮಾನ್ಯ ಟಿಕೆಟಿಂಗ್&zwnj;ನಂತಹ ವೈಶಿಷ್ಟ್ಯಗಳನ್ನು ಬಳಸುವಾಗ. ಆದಾಗ್ಯೂ, ಗರಿಷ್ಠ ರಶ್ ಮತ್ತು ತತ್ಕಾಲ್ ಸಮಯದಲ್ಲಿ, IRCTC ಅನ್ನು ಇನ್ನೂ ಹೆಚ್ಚು ವಿಶ್ವಾಸಾರ್ಹವೆಂದು ಪರಿಗಣಿಸಲಾಗುತ್ತದೆ. ಅನೇಕ ಬಳಕೆದಾರರು RailOne ಸ್ವಲ್ಪ ವೇಗವಾಗಿರುತ್ತದೆ ಎಂದು ಹೇಳುತ್ತಾರೆ. IRCTC ಇನ್ನೂ ಬಲವಾದ ಸ್ಥಿರತೆಯನ್ನು ಹೊಂದಿದೆ.&lt;/p&gt;&lt;img&gt;&lt;p&gt;RailOne ನ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ನೀವು ನಿಲ್ದಾಣದಿಂದ ಸಾಮಾನ್ಯ ಟಿಕೆಟಿಂಗ್&zwnj;ನಂತಹ ವಿವಿಧ ಸೇವೆಗಳನ್ನು ಬುಕ್ ಮಾಡಬಹುದು. ಇದು ಜನರು ನಿಲ್ದಾಣದಲ್ಲಿ ಸಾಲಿನಲ್ಲಿ ನಿಲ್ಲುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಇದು ದಿನನಿತ್ಯದ ಪ್ರಯಾಣಿಕರಿಗೆ ವಿಶೇಷವಾಗಿ ಉಪಯುಕ್ತವಾಗಿದೆ. ನೀವು ನಿಮ್ಮ ಸಂಪೂರ್ಣ ಪ್ರೊಫೈಲ್ ಅನ್ನು ರೈಲ್&zwnj;ಒನ್ ಅಪ್ಲಿಕೇಶನ್&zwnj;ನಲ್ಲಿ ಮುಂಚಿತವಾಗಿ ಉಳಿಸಬಹುದು, ಪ್ರಯಾಣಿಕರ ವಿವರಗಳನ್ನು ಪದೇ ಪದೇ ನಮೂದಿಸುವ ಅಗತ್ಯವನ್ನು ನಿವಾರಿಸುತ್ತದೆ. ಇದು ಒಂದೇ ಸೈನ್-ಆನ್ ವ್ಯವಸ್ಥೆಯನ್ನು ಸಹ ನೀಡುತ್ತದೆ, ಇದು ನಿಮಗೆ IRCTC ಮತ್ತು UTS ಮೂಲಕ ಲಾಗಿನ್ ಆಗಲು ಅನುವು ಮಾಡಿಕೊಡುತ್ತದೆ.&lt;/p&gt;&lt;img&gt;&lt;ul&gt; &lt;li&gt;ರೈಲ್&zwnj;ಒನ್ ಆನ್&zwnj;ಲೈನ್ ರೈಲು ಟ್ರ್ಯಾಕಿಂಗ್, PNR ಸ್ಥಿತಿ, ಕೋಚ್ ಸ್ಥಾನ ಮತ್ತು ಆಹಾರ ಆದೇಶವನ್ನು ಸಹ ನೀಡುತ್ತದೆ.&lt;/li&gt;&lt;/ul&gt;&lt;p&gt;ಇದಕ್ಕಾಗಿಯೇ ಭಾರತೀಯ ರೈಲ್ವೆ ಇದನ್ನು ಒಂದು-ನಿಲುಗಡೆ ರೈಲ್ವೆ ವೇದಿಕೆಯಾಗಿ ಪ್ರಚಾರ ಮಾಡುತ್ತಿದೆ.&lt;/p&gt;&lt;ul&gt; &lt;li&gt;ಆದಾಗ್ಯೂ, ಈ ಅಪ್ಲಿಕೇಶನ್ ಹಲವಾರು ದೋಷಗಳು ಮತ್ತು ಪಾವತಿ ಸಮಸ್ಯೆಗಳನ್ನು ಹೊಂದಿದೆ. ಕಾಯ್ದಿರಿಸಿದ ಮತ್ತು ತತ್ಕಾಲ್ ಟಿಕೆಟ್&zwnj;ಗಳಿಗೆ IRCTC ಅನ್ನು ಇನ್ನೂ ವಿಶ್ವಾಸಾರ್ಹ ವೇದಿಕೆ ಎಂದು ಪರಿಗಣಿಸಲಾಗಿದೆ.&amp;nbsp;&lt;/li&gt; &lt;li&gt;ಆದರೆ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್&zwnj;ಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಒದಗಿಸುವ ಅಪ್ಲಿಕೇಶನ್ ನಿಮಗೆ ಬೇಕಾದರೆ, ಈ ಅಪ್ಲಿಕೇಶನ್ ಉತ್ತಮ ಆಯ್ಕೆಯಾಗಿದೆ.&lt;/li&gt;&lt;/ul&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/india-news/difference-between-irctc-vs-railone-app-features-which-one-is-better-for-reservation-tatkal-ticket-suc-0sgod59"/>
        </item>
        <item>
            <title><![CDATA[IPL 2026 Winner Money: ಐಪಿಎಲ್‌ನಲ್ಲಿ ಟ್ರೋಫಿ ಪಡೆದವ್ರಿಗೆ, ಉಳಿದವ್ರಿಗೆ ಸಿಗಲಿದೆ ಭರ್ಜರಿ ಹಣ! ಎಷ್ಟು?]]></title>
            <link>https://kannada.asianetnews.com/gallery/cricket-sports/ipl-2026-rcb-vs-gujarat-titans-trophy-winner-prize-money-in-rupees-es5ps1w</link>
            <guid isPermaLink="true">https://kannada.asianetnews.com/gallery/cricket-sports/ipl-2026-rcb-vs-gujarat-titans-trophy-winner-prize-money-in-rupees-es5ps1w</guid>
            <pubDate>Sun, 31 May 2026 21:26:56 +0530</pubDate>
            <description><![CDATA[&lt;p&gt;IPL 2026 Winner: ಅಹಮದಾಬಾದ್&zwnj;ನಲ್ಲಿ ಗುಜರಾತ್&zwnj; ಟೈಟನ್ಸ್&zwnj;, ಆರ್&zwnj;ಸಿಬಿ ನಡುವೆ ಮ್ಯಾಚ್&zwnj; ನಡೆಯಲಿದೆ. ಗೆದ್ದವರಿಗೆ ಏನು ಸಿಗಲಿದೆ? ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರೈಜ್&zwnj; ಮನಿ ಕೂಡ ಹೆಚ್ಚಾಗಿದೆ. ಈ ಬಾರಿ ಟ್ರೋಫಿ ಗೆದ್ದವರಿಗೆ, ರನ್ನರ್&zwnj; ಅಪ್, ಉಳಿದವರಿಗೆ ಎಷ್ಟು ಪ್ರೈಜ್&zwnj; ಸಿಗುತ್ತೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyxq0hdb3msmyg19tpaxp5w,imgname-red-and-black-retro-landscape-youtube-thumbnail-background--5--1780227998253.jpg" type="image/jpeg" height="390" width="690"/>
            <content:encoded><![CDATA[&lt;p&gt;IPL 2026 Winner: ಅಹಮದಾಬಾದ್&zwnj;ನಲ್ಲಿ ಗುಜರಾತ್&zwnj; ಟೈಟನ್ಸ್&zwnj;, ಆರ್&zwnj;ಸಿಬಿ ನಡುವೆ ಮ್ಯಾಚ್&zwnj; ನಡೆಯಲಿದೆ. ಗೆದ್ದವರಿಗೆ ಏನು ಸಿಗಲಿದೆ? ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರೈಜ್&zwnj; ಮನಿ ಕೂಡ ಹೆಚ್ಚಾಗಿದೆ. ಈ ಬಾರಿ ಟ್ರೋಫಿ ಗೆದ್ದವರಿಗೆ, ರನ್ನರ್&zwnj; ಅಪ್, ಉಳಿದವರಿಗೆ ಎಷ್ಟು ಪ್ರೈಜ್&zwnj; ಸಿಗುತ್ತೆ?&lt;/p&gt;&lt;img&gt;&lt;p&gt;ಕಳೆದ ವರ್ಷ ಆರ್&zwnj;ಸಿಬಿ ತಂಡವು ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು. 2022ರ ಬಳಿಕ ಗುಜರಾತ್ ಟೈಟಾನ್ಸ್ ಟ್ರೋಫಿ ಗೆದ್ದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ನೆಟ್ ರನ್ ರೇಟ್ ಹೊಂದಿತ್ತು, ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು.&lt;/p&gt;&lt;img&gt;&lt;p&gt;2008 ರಲ್ಲಿ IPL ಶುರು ಆದಾಗ, ವಿಜೇತರಿಗೆ 4.8 ಕೋಟಿ ರೂಪಾಯಿ ಸಿಗುತ್ತಿತ್ತು. 2014-15ರಲ್ಲಿ 15 ಕೋಟಿ ರೂಪಾಯಿ ಸಿಕ್ಕಿತು. ಈಗ 20 ಕೋಟಿ ರೂಪಾಯಿ ಆಗಿದೆ.&lt;/p&gt;&lt;p&gt;ಬಿಸಿಸಿಐ (BCCI) ಐಪಿಎಲ್ 2026ರಲ್ಲಿ ಒಟ್ಟು ₹46.5 ಕೋಟಿಗಿಂತಲೂ ಹೆಚ್ಚಿನ ಹಣವನ್ನು ನೀಡಲಿದೆಯಂತೆ.&lt;/p&gt;&lt;img&gt;&lt;p&gt;ಐಪಿಎಲ್ 2026 ಟ್ರೋಫಿ ಗೆಲ್ಲುವ ತಂಡಕ್ಕೆ 20 ಕೋಟಿ ರೂಪಾಯಿ ನೀಡಲಾಗುವುದು&lt;/p&gt;&lt;p&gt;ರನ್ನರ್ಸ್-ಅಪ್ (ದ್ವಿತೀಯ ಸ್ಥಾನ) ಪಡೆದವರಿಗೆ 13 ಕೋಟಿ ರೂಪಾಯಿ ಸಿಗುವುದು&lt;/p&gt;&lt;p&gt;ಕ್ವಾಲಿಫೈಯರ್ 2 ರಲ್ಲಿ ಸೋಲುವ ತಂಡಕ್ಕೆ (ಮೂರನೇ ಸ್ಥಾನ) ಕೋಟಿ ರೂಪಾಯಿ ಸಿಗುತ್ತದೆ&lt;/p&gt;&lt;p&gt;ಎಲಿಮಿನೇಟರ್&zwnj;ನಲ್ಲಿ ಹೊರಬೀಳುವ ತಂಡ (ನಾಲ್ಕನೇ ಸ್ಥಾನ 6.5 ಕೋಟಿ ರೂಪಾಯಿ ಸಿಗುವುದು&lt;/p&gt;&lt;img&gt;&lt;p&gt;5 ರಿಂದ 10 ನೇ ಸ್ಥಾನ ಪಡೆಯುವ ತಂಡಕ್ಕೆ ಯಾವುದೇ ಹಣ ಸಿಗೋದಿಲ. ಆದರೆ ಅವರು Broadcasting deals, Sponsorship, ಟಿಕೆಟ್ ಮಾರಾಟದ ಮೂಲಕ ಒಂದಿಷ್ಟು ಹಣ ಪಡೆಯುತ್ತಾರೆ.&lt;/p&gt;&lt;img&gt;&lt;p&gt;ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಗೆದ್ದವರಿಗೆ ತಲಾ ₹10 ಲಕ್ಷ ಸಿಗುತ್ತದೆ,&lt;/p&gt;&lt;p&gt;ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ (MVP) ಅವರಿಗೆ ₹10 ಲಕ್ಷ ರೂಪಾಯಿ ಸಿಗುತ್ತದೆ&lt;/p&gt;&lt;p&gt;ಉದಯೋನ್ಮುಖ ಆಟಗಾರ ಎಂಬ ಪಟ್ಟ ಪಡೆದವರಿಗೆ ₹20 ಲಕ್ಷ ರೂಪಾಯಿ ಸಿಗುತ್ತದೆ&lt;/p&gt;&lt;p&gt;ರಾಜಸ್ಥಾನ್ ರಾಯಲ್ಸ್ ಟೀಂ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರೆ, ಗುಜರಾತ್ ಟೈಟಾನ್ಸ್ ಟೀಂನ ವೇಗಿ ಕಗಿಸೊ ರಬಾಡ 28 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/ipl-2026-rcb-vs-gujarat-titans-trophy-winner-prize-money-in-rupees-es5ps1w"/>
        </item>
        <item>
            <title><![CDATA[RCB ಪರ ಇಷ್ಟೆಲ್ಲ ಹೋರಾಡಿದ್ರೂ ರಜತ್‌ ಪಾಟಿದಾರ್‌ಗೆ ಮಾತ್ರ ವಿಲನ್‌ ಆದ ವಿಧಿ; ಕೊನೆಗೂ ಸತ್ಯ ಹೊರಬಂತು!]]></title>
            <link>https://kannada.asianetnews.com/gallery/cricket-sports/why-rcb-captain-rajat-patidar-not-playing-in-indian-team-t20i-ogt35uk</link>
            <guid isPermaLink="true">https://kannada.asianetnews.com/gallery/cricket-sports/why-rcb-captain-rajat-patidar-not-playing-in-indian-team-t20i-ogt35uk</guid>
            <pubDate>Sun, 31 May 2026 22:19:12 +0530</pubDate>
            <description><![CDATA[&lt;p&gt;Rcb Captain Rajat Patidar: ಕಳೆದ ಎರಡು ವರ್ಷಗಳಿಂದ ಕ್ಯಾಪ್ಟನ್&zwnj; ಆಗಿ ಆರ್&zwnj;ಸಿಬಿ ತಂಡವನ್ನು ಮುನ್ನಡೆಸುತ್ತಿರುವ ರಜತ್&zwnj; ಪಾಟಿದಾರ್&zwnj;ಗೆ ಮಾತ್ರ ಸುವರ್ಣಾವಕಾಶ ಮಾತ್&zwnj; ಸಿಕ್ಕಿಲ್ಲ. ಹೌದು, ಇಂಡಿಯಾ T20I ತಂಡಕ್ಕೆ ಅವರಿನ್ನೂ ಆಯ್ಕೆಯೇ ಆಗಿಲ್ಲ. ಈ ಬಗ್ಗೆ ರಜತ್ ಪಾಟೀದಾರ್ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksvwy5xz46tjm2kzhyp2y421,imgname-rajat-patidar-1780126521279.jpg" type="image/jpeg" height="390" width="690"/>
            <content:encoded><![CDATA[&lt;p&gt;Rcb Captain Rajat Patidar: ಕಳೆದ ಎರಡು ವರ್ಷಗಳಿಂದ ಕ್ಯಾಪ್ಟನ್&zwnj; ಆಗಿ ಆರ್&zwnj;ಸಿಬಿ ತಂಡವನ್ನು ಮುನ್ನಡೆಸುತ್ತಿರುವ ರಜತ್&zwnj; ಪಾಟಿದಾರ್&zwnj;ಗೆ ಮಾತ್ರ ಸುವರ್ಣಾವಕಾಶ ಮಾತ್&zwnj; ಸಿಕ್ಕಿಲ್ಲ. ಹೌದು, ಇಂಡಿಯಾ T20I ತಂಡಕ್ಕೆ ಅವರಿನ್ನೂ ಆಯ್ಕೆಯೇ ಆಗಿಲ್ಲ. ಈ ಬಗ್ಗೆ ರಜತ್ ಪಾಟೀದಾರ್ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂಡಿಯನ್ ಪ್ರೀಮಿಯರ್ ಲೀಗ್&zwnj;ನಲ್ಲಿ (IPL) ಸಿಕ್ಕಾಪಟ್ಟೆ ರನ್&zwnj; ತಂದುಕೊಟ್ಟು, ವಿಕೆಟ್&zwnj; ಪಡೆದಿರುವ ರಜತ್&zwnj; ನಿಜಕ್ಕೂ ತುಂಬ ಪ್ರೌಢಿಮೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ ನೀಟ್&zwnj; ಆಗಿ ತಂಡವನ್ನು ಕೂಡ ಮುನ್ನಡೆಸುತತಿದ್ದಾರೆ. 2025 ರ ಆರಂಭ ಆಗೋ ಮುನ್ನ ಕ್ಯಾಪ್ಟನ್&zwnj; ಪಟ್ಟ ಪಡೆದಿದ್ದ ರಜತ್&zwnj; ಅವರು ಕೊನೆಗೂ ಟ್ರೋಫಿ ಪಡೆಯುವಲ್ಲಿ ಯಶಸ್ವಿಯಾದರು. 18 ವರ್ಷಗಳ ಬಳಿಕ ಟ್ರೋಫಿ ಸಿಕ್ಕಿತ್ತು.&lt;/p&gt;&lt;img&gt;&lt;p&gt;ರಜತ್&zwnj; ಅವರು ಈ ಬಾರಿ ಕೂಡ 14 ಪಂದ್ಯಗಳಲ್ಲಿ 44.18 ರ ಸರಾಸರಿ, 196.76 ರ ಸ್ಟ್ರೈಕ್ ರೇಟ್&zwnj;ನಲ್ಲಿ 486 ರನ್&zwnj;ಗಳನ್ನು ಗಳಿಸಿದ್ದಾರೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 33 ಎಸೆತಗಳಲ್ಲಿ 93 ರನ್&zwnj; ಚಚ್ಚಿದ್ದರು. ಆಗ ವಿರಾಟ್&zwnj; ಕೊಹ್ಲಿ ಅವ್ರೇ ದಂಗಾಗಿ ಈ ಹೊಡಿಬಡಿ ಆಟವನ್ನು ನೋಡಿದ್ದರು.&lt;/p&gt;&lt;img&gt;&lt;p&gt;&ldquo;ನಾನು ಸದ್ಯಕ್ಕೆ ಇಂಡಿಯನ್&zwnj; ಟೀಂಗೆ ಆಯ್ಕೆ ಆಗುವ ಆಲೋಚನೆಯಲ್ಲಿ ಇಲ್ಲ. ಹೀಗಾಗಿ ಇದರ ಬಗ್ಗೆ ಯೋಚನೆ ಮಾಡಿಲ್ಲ&quot; ಎಂದು ರಜತ್&zwnj; ಅವರು ನೇರವಾಗಿ ಹೇಳಿದ್ದಾರೆ.&lt;/p&gt;&lt;p&gt;ಆರ್&zwnj;ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಟಿಮ್ ಡೇವಿಡ್,ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ವೆಂಕಟೇಶ್ ಅಯ್ಯರ್ ಅವರಂತಹ ಟೀಂ ಹೊಂದಿದೆ. ಇಂಥ ತಂಡವನ್ನು ನಾಯಕ ರಜತ್ ಪಾಟಿದಾರ್&zwnj; ಮುನ್ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಈ ಬಾರಿಯಂತೂ ಆರ್&zwnj;ಸಿಬಿ ತಂಡದಷ್ಟು ಬೇರೆ ಯಾವುದೇ ಟೀಂ ಕೂಡ 200 ಕ್ಕೂ ಹೆಚ್ಚು ರನ್&zwnj;ಗಳನ್ನು ಪಡೆದಿಲ್ಲ. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಪಾಟಿದಾರ್ ಮಾತ್ರ ಕೂಲ್&zwnj; ಆಗಿ ಕ್ಯಾಪ್ಟನ್ಸಿ ಮಢುತ್ತಿದ್ದಾರೆ. ಒಟ್ಟಿನಲ್ಲಿ BCCI ಪಾಟಿದಾರ್&zwnj;ಗೆ ಚಾನ್ಸ್&zwnj; ಕೊಡುತ್ತಿಲ್ಲವಾ? ಇವರು ಮನಸ್ಸು ಮಾಡುತ್ತಿಲ್ಲವಾ ಎನ್ನೋದು ಅರ್ಥ ಆಗ್ತಿಲ್ಲ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/why-rcb-captain-rajat-patidar-not-playing-in-indian-team-t20i-ogt35uk"/>
        </item>
        <item>
            <title><![CDATA[ಮಗನ ಚಿತೆಗೆ ಬೆಂಕಿ ಇಡೋ ಮೊದ್ಲು ಆ ಮುಸ್ಲಿಂ ಯುವಕನ ಹೆಣ ಬೀಳ್ಬೇಕು ಎಂದ ಅಮ್ಮ: ಎನ್​ಕೌಂಟರ್​ನಲ್ಲಿ ಫಿನಿಷ್]]></title>
            <link>https://kannada.asianetnews.com/india-news/gaziabad-man-who-stabbed-friend-after-bakrid-invite-killed-in-encounter-suc/articleshow-mug9oug</link>
            <guid isPermaLink="true">https://kannada.asianetnews.com/india-news/gaziabad-man-who-stabbed-friend-after-bakrid-invite-killed-in-encounter-suc/articleshow-mug9oug</guid>
            <pubDate>Mon, 01 Jun 2026 11:45:47 +0530</pubDate>
            <description><![CDATA[ಗಾಜಿಯಾಬಾದ್&zwnj;ನಲ್ಲಿ ಬಕ್ರೀದ್ ದಿನ 17 ವರ್ಷದ ಸೂರ್ಯ ಪ್ರತಾಪ್ ಚೌಹಾಣ್&zwnj;ನನ್ನು ಆತನ ಸ್ನೇಹಿತರೇ ಕೊಲೆ ಮಾಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಅಸಾದ್&zwnj;ನನ್ನು ಉತ್ತರ ಪ್ರದೇಶ ಪೊಲೀಸರು ಎನ್&zwnj;ಕೌಂಟರ್&zwnj;ನಲ್ಲಿ ಹತ್ಯೆ ಮಾಡಿದ್ದಾರೆ. ಉಳಿದ ಆರೋಪಿಗಳಿಗೂ ಇದೇ ಶಿಕ್ಷೆ ವಿಧಿಸಬೇಕೆಂದು ಮೃತನ ಕುಟುಂಬ ಆಗ್ರಹಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt0x3z3qr1vafgadgbyk5h9s,imgname-gaziabad-incident-1780294483062.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಪ್ರದೇಶದ ಗಾಜಿಯಾಬಾದ್&zwnj;ನಲ್ಲಿ 17 ವರ್ಷದ ಸೂರ್ಯ ಪ್ರತಾಪ್ ಚೌಹಾಣ್&zwnj;ನನ್ನು ಬಕ್ರೀದ್​ ದಿನ ಆತನ ನಾಲ್ವರು ಸ್ನೇಹಿತರೇ ಇರಿದು ಕೊಂದ ಘಟನೆ ನಡೆದಿದೆ. ಇದರಲ್ಲಿ ಪ್ರಮುಖ ಆರೋಪಿ ಅಸಾದ್​ನ ಅಪ್ಪನೇ ಕೊಲೆಗೆ ಪ್ರೇರೇಪಣೆ ನೀಡಿರುವುದು ತಿಳಿದುಬಂದಿದೆ. ಘಟನೆ ಬಳಿಕ ಅಸಾದ್​ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಕೊನೆಗೂ ಆತ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಾಗ ಉತ್ತರಪ್ರದೇಶದ ಪೊಲೀಸರು ಎನ್​ಕೌಂಟರ್​ನಲ್ಲಿ ಆತನನ್ನು ಸಾಯಿಸಿದ್ದಾರೆ. ಉಳಿದ ಮೂವರಿಗೂ ಇದೇ ರೀತಿಯ ಶಿಕ್ಷೆ ಆಗಬೇಕು ಎಂದು ಪ್ರತಿಭಟನೆಗಳು ಜೋರಾಗಿ ನಡೆಯುತ್ತಿದೆ. ಇದರ ಮಧ್ಯೆಯೇ, ಕೊಲೆ ನಡೆದ ಜಾಗದಲ್ಲಿ ಇದ್ದ ಅಕ್ಕ-ಪಕ್ಕದ ಅವರದ್ದೇ ಸಮುದಾಯದ ಜನರನ್ನು ಮಾಧ್ಯಮಗಳು ಮಾತನಾಡಿಸಿದಾಗ, ತಮಗೆ ವಿಷಯವೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ಒಬ್ಬಾತ ತನಗೆ ಕಿವಿ ಕೇಳಿಸುವುದಿಲ್ಲ, ಮಾತು ಬರುವುದಿಲ್ಲ ಎಂದು ನಾಟಕವಾಡಿದರೆ, ಕೊಲೆ ನಡೆದಿರುವ ಪ್ರತ್ಯಕ್ಷ ಸಾಕ್ಷಿಗಳು ಏನೂ ಆಗಿಲ್ಲ, ನಮಗೆ ಗೊತ್ತೇ ಇಲ್ಲ ಎಂದಿದ್ದಾರೆ. ಎನ್​ಕೌಂಟರ್​ ಆದ ಬಳಿಕ ಮಾತ್ರ ಮಾತು ಬರಲ್ಲ ಎಂದು ಹೇಳಿದ ಆಸಾಮಿ ರೊಚ್ಚಿಗೆದ್ದು ಎನ್​ಕೌಂಟರ್​ ಮಾಡಿದ್ದು ತಪ್ಪು ಎಂದು ಮಾತನಾಡಿದ್ದಾರೆ!&lt;/p&gt;&lt;h2&gt;&lt;strong&gt;ಎನ್​ಕೌಂಟರ್​ ಹೇಗೆ?&lt;/strong&gt;&lt;/h2&gt;&lt;p&gt;ಸೂರ್ಯ ಪ್ರತಾಪ್​ನನ್ನು ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದ ಅಸಾದ್​ನ ಶೋಧಕ್ಕೆ ಉತ್ತರ ಪ್ರದೇಶದ ಖೋಡಾ ಮತ್ತು ಇಂದಿರಾಪುರಂ ಪೊಲೀಸ್ ತಂಡಗಳು ಕಾರ್ಯಾರಣೆ ನಡೆಸಿದ್ದರು. ಈ ಬಗ್ಗೆ ಉಪ ಪೊಲೀಸ್ ಆಯುಕ್ತ (ನಗರ/ಟ್ರಾನ್ಸ್-ಹಿಂಡನ್) ಧವಾಲ್ ಜೈಸ್ವಾಲ್ ಕೊಟ್ಟ ಮಾಹಿತಿ ಹೀಗಿದೆ; &quot;ಮೇ 28 ರಂದು, ಖೋಡಾ ಪ್ರದೇಶದಲ್ಲಿ ಅಸಾದ್ ಮತ್ತು ಅವರ ಸಹಚರರು ಸೂರ್ಯ ಪ್ರತಾಪ್ ಚೌಹಾಣ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದರು. ಗಂಭೀರವಾಗಿ ಗಾಯಗೊಂಡ ಸೂರ್ಯನನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಆತ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ. ಈ ಪ್ರಕರಣದಲ್ಲಿ ಐದು ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಲಾಯಿತು. ಘಟನೆಯ ನಂತರ, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದರು, ಆದರೆ ಪ್ರಮುಖ ಆರೋಪಿ ಅಸಾದ್ ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಯಿತು ಮತ್ತು ಆತನ ಬಂಧನಕ್ಕಾಗಿ ₹50,000 ಬಹುಮಾನವನ್ನು ಘೋಷಿಸಲಾಯಿತು ಎಂದರು.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಪಲಾಯನಕ್ಕೆ ಸಿದ್ಧತೆ&lt;/strong&gt;&lt;/h3&gt;&lt;p&gt;ಅಸಾದ್ ತನ್ನ ಸಹಚರರಿಂದ ಹಣ ಸಂಗ್ರಹಿಸಿದ ನಂತರ ಉತ್ತರ ಪ್ರದೇಶದಿಂದ ಪಲಾಯನ ಮಾಡಲು ಸಿದ್ಧತೆ ನಡೆಸುತ್ತಿದ್ದಾನೆ ಎಂಬ ಗುಪ್ತಚರ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಈ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಹಲವಾರು ಸ್ಥಳಗಳಲ್ಲಿ ಬ್ಯಾರಿಕೇಡ್&zwnj;ಗಳನ್ನು ಸ್ಥಾಪಿಸಿ ತೀವ್ರ ತಪಾಸಣೆ ನಡೆಸಿದರು. ಈ ಕಾರ್ಯಾಚರಣೆಯ ಸಮಯದಲ್ಲಿ, ಅಸಾದ್ ಸಹಚರನೊಂದಿಗೆ ಮೋಟಾರ್ ಸೈಕಲ್&zwnj;ನಲ್ಲಿ ಬರುತ್ತಿರುವುದು ಕಂಡುಬಂದಿತು. ಪೊಲೀಸರು ಅವನನ್ನು ತಡೆಯಲು ಪ್ರಯತ್ನಿಸಿದಾಗ, ಅವನು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದನು. ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದರು, ಅಸದ್ ಗಂಭೀರವಾಗಿ ಗಾಯಗೊಂಡನು. ಗಾಯಗೊಂಡ ಅಸದ್&zwnj;ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವನನ್ನು ಸತ್ತನೆಂದು ಘೋಷಿಸಿದರು. ಎನ್&zwnj;ಕೌಂಟರ್ ಸ್ಥಳದಿಂದ ಮೋಟಾರ್ ಸೈಕಲ್ ಮತ್ತು ಅಸದ್ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಎನ್&zwnj;ಕೌಂಟರ್ ಸಮಯದಲ್ಲಿ ಅಸದ್&zwnj;ನ ಸಹಚರನು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹಚರನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಮತ್ತಷ್ಟು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಎನ್&zwnj;ಕೌಂಟರ್ ನಂತರ, ಕೊಲೆಯಲ್ಲಿ ಭಾಗಿಯಾಗಿರುವ ಇತರರ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಬೇಕೆಂದು ಚೌಹಾಣ್&zwnj;ನ ತಾಯಿ ಒತ್ತಾಯಿಸಿದರು. ನಾನು ಒಬ್ಬ ವ್ಯಕ್ತಿಯ ಎನ್ಕೌಂಟರ್ ಅನ್ನು ಮಾತ್ರ ನೋಡಿದ್ದೇನೆ... ಆದರೆ ನನಗೆ ಅಸಾದ್ ಅವರ ಚಿತ್ರವನ್ನು ನೋಡಲು ಬಯಸುತ್ತೇನೆ. ಚಿತ್ರವನ್ನು ನೋಡಿದ ನಂತರವೇ ನನಗೆ ಶಾಂತಿ ಸಿಗುತ್ತದೆ. ಉಳಿದ ಜನರನ್ನು ಸಹ ಅದೇ ರೀತಿಯಲ್ಲಿ ಎದುರಿಸಬೇಕು. ನನ್ನ ಮಗನಿಗೆ ಏಳು ಜನರು ಹೀಗೆ ಮಾಡಿದ್ದಾರೆ. ಎಲ್ಲರ ಮನೆಗಳನ್ನು ಬುಲ್ಡೋಜರ್&zwnj;ಗಳಿಂದ ಕೆಡವಬೇಕು ಎಂದು ಅವರು ಹೇಳಿದರು.&lt;/p&gt;&lt;p&gt;ಚೌಹಾಣ್ ಅವರ ಮರಣದ ನಂತರ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಹಂತಕರನ್ನು ಬಿಡಲಾಗುವುದಿಲ್ಲ ಮತ್ತು ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಿದರು. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಈ ಘಟನೆಯನ್ನು &quot;ಅತ್ಯಂತ ದುಃಖಕರ ಮತ್ತು ಚಿಂತಾಜನಕ&quot; ಎಂದು ಕರೆದರು ಮತ್ತು ಹೊಣೆಗಾರರ ​​ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/gaziabad-man-who-stabbed-friend-after-bakrid-invite-killed-in-encounter-suc/articleshow-mug9oug"/>
        </item>
        <item>
            <title><![CDATA[ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ನಡೆ; ಬಿಜೆಪಿಗೆ ಶುರುವಾಯ್ತು ಢವ ಢವ!]]></title>
            <link>https://kannada.asianetnews.com/gallery/india-news/tamilnadu-politics-update-reports-that-annamalai-will-leave-the-bjp-and-start-a-new-movement-have-created-a-stir-mrq-nb3fbwd</link>
            <guid isPermaLink="true">https://kannada.asianetnews.com/gallery/india-news/tamilnadu-politics-update-reports-that-annamalai-will-leave-the-bjp-and-start-a-new-movement-have-created-a-stir-mrq-nb3fbwd</guid>
            <pubDate>Mon, 01 Jun 2026 09:11:24 +0530</pubDate>
            <description><![CDATA[&lt;p&gt;ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ತೊರೆದು 'ಹೊಸ ಆಂದೋಲನ' ಆರಂಭಿಸಲಿದ್ದಾರೆ ಎಂಬ ವರದಿಗಳು ಸಂಚಲನ ಸೃಷ್ಟಿಸಿವೆ. ಈಗಾಗಲೇ 'ನಾವು ನಾಯಕರು' ಎಂಬ ಸಂಘಟನೆ ಹೊಂದಿರುವ ಅವರು, ತಮ್ಮದೇ ಆದ ರಾಜಕೀಯ ಹಾದಿ ಹಿಡಿಯುವ ಸಾಧ್ಯತೆಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt0kw121xw48g3swem90945w,imgname-annamalai-1780284785729.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ತೊರೆದು 'ಹೊಸ ಆಂದೋಲನ' ಆರಂಭಿಸಲಿದ್ದಾರೆ ಎಂಬ ವರದಿಗಳು ಸಂಚಲನ ಸೃಷ್ಟಿಸಿವೆ. ಈಗಾಗಲೇ 'ನಾವು ನಾಯಕರು' ಎಂಬ ಸಂಘಟನೆ ಹೊಂದಿರುವ ಅವರು, ತಮ್ಮದೇ ಆದ ರಾಜಕೀಯ ಹಾದಿ ಹಿಡಿಯುವ ಸಾಧ್ಯತೆಗಳಿವೆ.&lt;/p&gt;&lt;img&gt;&lt;p&gt;ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ತೊರೆದು ರಾಜ್ಯದಲ್ಲಿ &lsquo;ಹೊಸ ಆಂದೋಲನ&rsquo; ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಎನ್&zwnj;ಡಿಟೀವಿ ವರದಿ ಮಾಡಿದೆ. ತಮಿಳುನಾಡು ವಿಧಾನಸಭಾ ಚುನಾವಣೆ ಬಳಿಕ ಈ ಸುದ್ದಿ ಸಂಚಲನ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ಅಣ್ಣಾಮಲೈ ಈಗಾಗಲೇ ಲಾಭರಹಿತ &lsquo;ನಾವು ನಾಯಕರು&rsquo; ಎಂಬ ಸಂಘಟನೆಯನ್ನು ಹೊಂದಿದ್ದಾರೆ. ಮುಂದಿನ 6 ತಿಂಗಳವರೆಗೆ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಯಾವುದೇ ಯೋಜನೆ ಇಲ್ಲ. ಆದರೆ ಸಮಾನ ಮನಸ್ಕ ಜನರನ್ನು ಸೇರಿಸಿಕೊಳ್ಳುವುದು, ಬಲವಾದ ಸ್ವಯಂಸೇವಕ ನೆಲೆಯನ್ನು ನಿರ್ಮಿಸುವುದು ಮತ್ತು ಅವರನ್ನು ರಾಜಕೀಯವಾಗಿ ಬೆಳೆಸುವುದು ಅವರ ಗುರಿಯಾಗಿದೆ ಎಂದು ಮೂಲಗಳು ತಿಳಿಸಿವೆ, ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿ ಅಣ್ಣಾಮಲೈ ಅವರಿಗೆ ಸ್ಫೂರ್ತಿಯಾಗಿ ಮುಂದುವರೆದಿದ್ದಾರೆ ಎಂದು ಅವು ತಿಳಿಸಿವೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಸಿಬಿಎಸ್&zwnj;ಇ ತ್ರಿಭಾಷಾ ನೀತಿ ಸೇರಿ ಕೇಂದ್ರ ಸರ್ಕಾರದ ನಿಲುವನ್ನು ಅಣ್ಣಾಮಲೈ ವಿರೋಧಿಸಿದ್ದರು. ಅಲ್ಲದೆ, ತಮಿಳ್ನಾಡು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಆಗಿಂದಲೇ ಅವರ ಮುಂದಿನ ನಿಲುವು ಏನು ಎಂಬ ಪ್ರಶ್ನೆ ಉದ್ಭವಿಸಿದ್ದವು. ಬಿಜೆಪಿಯಲ್ಲಿ ಅಣ್ಣಾಮಲೈ ಅವರನ್ನು ಕಡಗಣನೆ ಮಾಡಲಾಗ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.&lt;/p&gt;&lt;img&gt;&lt;p&gt;ಈಗ ತಮ್ಮ ಹೊಸ ಆಂದೋಲನದ ಮೂಲಕ ಬಿಜೆಪಿಗೆ ಶಾಕ್ ಕೊಡಲು ಅಣ್ಣಾಮಲೈ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳುನಾಡಿನ ಸಿಎಂ ವಿಜಯ್, ಎರಡು ವರ್ಷದ ಹಿಂದೆಯಷ್ಟೇ ಹೊಸ ಪಕ್ಷ ರಚನೆ ಮಾಡಿದ್ದರು. ಎರಡು ವರ್ಷ ಪ್ರಚಾರ ನಡೆಸಿ ಸರ್ಕಾರ ರಚನೆ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಇದೀಗ ಅದೇ ರೀತಿ ಅಣ್ಣಾಮಲೈ ಮುಂದಾದ್ರಾ ಎಂಬ ಚರ್ಚೆಗಳು ತಮಿಳುನಾಡು ರಾಜಕೀಯ ವಲಯದಲ್ಲಿ ಶುರುವಾಗಿವೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/india-news/tamilnadu-politics-update-reports-that-annamalai-will-leave-the-bjp-and-start-a-new-movement-have-created-a-stir-mrq-nb3fbwd"/>
        </item>
        <item>
            <title><![CDATA[ಪಾಕಿಸ್ತಾನದಿಂದ ಭಾರತ ವಿರುದ್ದ ಉಲ್ಟಾ ಧುರಂಧರ್ ತಂತ್ರ! ಹಳೆಯ ಉಗ್ರರಿಗೆ ಮರು ಜೀವ?]]></title>
            <link>https://kannada.asianetnews.com/world-news/pakistan-isi-tells-terror-operatives-to-join-mainstream-political-parties-in-kashmir-report-kvn/articleshow-7uuh5st</link>
            <guid isPermaLink="true">https://kannada.asianetnews.com/world-news/pakistan-isi-tells-terror-operatives-to-join-mainstream-political-parties-in-kashmir-report-kvn/articleshow-7uuh5st</guid>
            <pubDate>Mon, 01 Jun 2026 07:58:27 +0530</pubDate>
            <description><![CDATA[ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್&zwnj;ಐ, ತನಿಖೆಯಿಂದ ತಪ್ಪಿಸಿಕೊಳ್ಳಲು ಕಾಶ್ಮೀರದಲ್ಲಿರುವ ತನ್ನ ಉಗ್ರ ಸಹಾಯಕರಿಗೆ (ಓವರ್&zwnj; ಗ್ರೌಂಡ್&zwnj; ವರ್ಕರ್ಸ್&zwnj;) ರಾಷ್ಟ್ರೀಯ ಪಕ್ಷಗಳಿಗೆ ಸೇರುವಂತೆ ಸೂಚಿಸಿದೆ. 90ರ ದಶಕದ ನಿಷ್ಕ್ರಿಯ ಉಗ್ರ ಸಂಘಟನೆಗಳಿಗೆ ಮರುಜೀವ ನೀಡಿ, ಭಯೋತ್ಪಾದನೆಗೆ 'ಸ್ಥಳೀಯ' ಬಣ್ಣ ಬಳಿಯುವ ಕುತಂತ್ರವನ್ನೂ ಪಾಕಿಸ್ತಾನ ಮಾಡುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kf7mtm0vq7p9q2x3pj2shjn2,imgname-india-pakistan-border-ak47-pistol-ammunition-seized-isi-rinda-punjab-police-05-1768709509147.jpg" type="image/jpeg" height="390" width="690"/>
            <content:encoded><![CDATA[&lt;p&gt;ಶ್ರೀನಗರ: ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿದ ತನಿಖೆಯಿಂದ ತಪ್ಪಿಸಿಕೊಳ್ಳಲು ಕಾಶ್ಮೀರದಲ್ಲಿರುವ ತನ್ನ ಓವರ್&zwnj; ಗ್ರೌಂಡ್&zwnj; ವರ್ಕರ್ಸ್&zwnj;ಗಳಿಗೆ (ಉಗ್ರರಿಗೆ ನೆರವು ನೀಡುವವರು) ಮುಖ್ಯವಾಹಿನಿಯ ರಾಷ್ಟ್ರೀಯ ಪಕ್ಷಗಳಿಗೆ ಸೇರ್ಪಡೆಯಾಗುವಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್&zwnj;ಐ ಸ್ಪಷ್ಟ ಸೂಚನೆ ನೀಡಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಪಾಕಿಸ್ತಾನವು &lsquo;ಉಲ್ಟಾ ಧುರಂಧರ್&rsquo; ತಂತ್ರ ಅನುಸರಿಸುತ್ತಿರುವುದು ಬಯಲಾಗಿದೆ.&lt;/p&gt;&lt;h2&gt;&lt;strong&gt;90ರ ದಶಕದಲ್ಲಿ ಸಕ್ರಿಯರಾಗಿದ್ದ ಉಗ್ರರಿಗೆ ಮರುಜೀವ&lt;/strong&gt;&lt;/h2&gt;&lt;p&gt;ಪಾಕಿಸ್ತಾನವು 1990ರಲ್ಲಿ ಸ್ಥಳೀಯವಾಗಿ ಸಕ್ರಿಯವಾಗಿದ್ದ ಆದರೆ ಈಗ ನಿಷ್ಕ್ರಿಯವಾಗಿರುವ ಸ್ಥಳೀಯ ಉಗ್ರ ಸಂಘಟನೆಗಳಿಗೆ ಮರುಜೀವನ ನೀಡಲು ಶತಾಯಗತಾಯ ಯತ್ನಿಸುತ್ತಿದೆ. ಈ ಮೂಲಕ ಕಾಶ್ಮೀರದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯಕ್ಕೆ &lsquo;ಸ್ಥಳೀಯರ ಕೃತ್ಯ&rsquo;ದ ಬಣ್ಣ ಬಳಿಯುವ ಹಾಗೂ ತನ್ನ ನೇರ ಪಾತ್ರ ಮರೆಮಾಚುವ ಯೋಜನೆ ಹಾಕಿಕೊಂಡಿದೆ. ಇತ್ತೀಚೆಗೆ ಬಂಧಿತ ಓವರ್&zwnj; ಗ್ರೌಂಡ್&zwnj; ವರ್ಕರ್&zwnj;ವೊಬ್ಬನ ವಿಚಾರಣೆ ವೇಳೆ ಪಾಕ್&zwnj;ನ ಈ ಮುಖ ಬಹಿರಂಗವಾಗಿದೆ.&lt;/p&gt;&lt;p&gt;ಆತನನ್ನು ವಶಕ್ಕೆ ಪಡೆಯಲೆತ್ನಿಸಿದಾಗ ಭದ್ರತಾ ಸಿಬ್ಬಂದಿಗೆ ಆತ ರಾಷ್ಟ್ರೀಯ ಪಕ್ಷದ ಸದಸ್ಯತ್ವದ ಕಾರ್ಡ್&zwnj; ತೋರಿಸಿದ್ದಾನೆ. ಈ ಮೂಲಕ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲೆತ್ನಿಸಿದ್ದಾನೆ.&lt;/p&gt;&lt;h3&gt;&lt;strong&gt;ಹತಾಶೆಯಿಂದ ಈ ಕ್ರಮ:&lt;/strong&gt;&lt;/h3&gt;&lt;p&gt;ಉಗ್ರ ಸಂಘಟನೆಗಳಿಗೆ ಲಾಜಿಸ್ಟಿಕ್&zwnj; ಬೆಂಬಲ ನೀಡುವವರು, ನೇಮಕಾತಿ ಮತ್ತು ಹಣಕಾಸು ನೆರವು ಒದಗಿಸುವವರನ್ನು ರಾಷ್ಟ್ರೀಯ ಪಕ್ಷಗಳಿಗೆ ಸೇರ್ಪಡೆ ಮಾಡುವ ಮೂಲಕ ಭದ್ರತಾ ಸಿಬ್ಬಂದಿ ದಾಳಿಯಿಂದ ಅವರಿಗೆ ರಕ್ಷಣೆ ಒದಗಿಸುವುದು ಪಾಕ್&zwnj; ಆಲೋಚನೆ.&lt;/p&gt;&lt;p&gt;ಈಗಾಗಲೇ ಕೆಲ ಓವರ್&zwnj; ಗ್ರೌಂಡ್&zwnj; ವರ್ಕರ್ಸ್&zwnj;ಗಳು ರಾಷ್ಟ್ರೀಯ ಪಕ್ಷಗಳಿಗೆ ಸೇರ್ಪಡೆಯೂ ಆಗಿದ್ದು, ಉಗ್ರರ ಪರ ಕೆಲಸವನ್ನೂ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಹೊಸ ಉಗ್ರ ಸಂಘಟನೆಗಳಿಗೆ ಸ್ಥಳೀಯರ ಬೆಂಬಲ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಹತಾಶೆಗೊಂಡಿರುವ ಐಎಸ್&zwnj;ಐ, ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದೆ.&lt;/p&gt;&lt;p&gt;1990-2000ನೇ ಇಸ್ವಿ ನಡುವೆ ಚಟುವಟಿಕೆಯಿಂದಿದ್ದ ಅಲ್ ಉಮರ್&zwnj; ಮುಜಾಹಿದೀನ್&zwnj;, ಅಲ್&zwnj; ಬದರ್&zwnj;, ತೆಹ್ರೀಕ್&zwnj; ಉಲ್&zwnj; ಮುಜಾಹಿದೀನ್&zwnj; ಉಗ್ರ ಸಂಘಟನೆಗಳ ಹೆಸರನ್ನು ಮತ್ತೆ ಮುನ್ನೆಲೆಗೆ ತರಲು ಐಎಸ್&zwnj;ಐ ಯತ್ನಿಸುತ್ತಿದೆ. ಹೀಗಾಗಿ ಹಳೆಯ ಓವರ್&zwnj; ಗ್ರೌಂಡ್&zwnj; ವರ್ಕರ್ಸ್&zwnj;ಗಳ ಚಟುವಟಿಕೆ ಇದೀಗ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಚುರುಕುಗೊಂಡಿದೆ. ಭದ್ರತಾ ಸಿಬ್ಬಂದಿ ಇದರ ಮೇಲೆ ಕಣ್ಣಿಟ್ಟಿದ್ದಾರೆ.&lt;/p&gt;&lt;p&gt;ಉಗ್ರರಿಗೆ ಬೆಂಬಲ ನೀಡುತ್ತಿರುವ ಕಾರಣಕ್ಕಾಗಿ ಈಗಾಗಲೇ ಪಾಕಿಸ್ತಾನವು ಎಫ್&zwnj;ಎಟಿಎಫ್&zwnj; ಲಿಸ್ಟ್&zwnj;ನಲ್ಲಿದೆ. ಹೀಗಾಗಿ ಪರೋಕ್ಷ ಬೆಂಬಲ ನೀಡುವ ಉದ್ದೇಶದಿಂದ ಈ ತಂತ್ರಗಾರಿಕೆಗೆ ಮುಂದಾಗಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/pakistan-isi-tells-terror-operatives-to-join-mainstream-political-parties-in-kashmir-report-kvn/articleshow-7uuh5st"/>
        </item>
        <item>
            <title><![CDATA[500 ಮೀ ಆಳದ ಪ್ರಪಾತಕ್ಕೆ ಉರುಳಿದ ಪ್ರವಾಸಿಗರ ಟ್ಯಾಕ್ಸಿ: 7 ಕನ್ನಡಿಗರು ಸೇರಿ 8 ಸಾವು]]></title>
            <link>https://kannada.asianetnews.com/gallery/india-news/tourist-taxi-falls-into-500m-deep-gorge-8-dead-including-7-kannadigas-pangi-chamba-district-himachal-pradesh-mrq-w53n79x</link>
            <guid isPermaLink="true">https://kannada.asianetnews.com/gallery/india-news/tourist-taxi-falls-into-500m-deep-gorge-8-dead-including-7-kannadigas-pangi-chamba-district-himachal-pradesh-mrq-w53n79x</guid>
            <pubDate>Mon, 01 Jun 2026 05:56:55 +0530</pubDate>
            <description><![CDATA[&lt;p&gt;ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಪ್ರವಾಸಿಗರ ಟ್ಯಾಕ್ಸಿಯೊಂದು 500 ಮೀಟರ್ ಆಳದ ಪ್ರಪಾತಕ್ಕೆ ಉರುಳಿ, ಬೆಂಗಳೂರಿನ ಎರಡು ಕುಟುಂಬಗಳಿಗೆ ಸೇರಿದ 7 ಕನ್ನಡಿಗರು ಸೇರಿದಂತೆ 8 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt08yw6975gafqkrsmhfvjgk,imgname-accident--2--1780273344713.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಪ್ರವಾಸಿಗರ ಟ್ಯಾಕ್ಸಿಯೊಂದು 500 ಮೀಟರ್ ಆಳದ ಪ್ರಪಾತಕ್ಕೆ ಉರುಳಿ, ಬೆಂಗಳೂರಿನ ಎರಡು ಕುಟುಂಬಗಳಿಗೆ ಸೇರಿದ 7 ಕನ್ನಡಿಗರು ಸೇರಿದಂತೆ 8 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.&lt;/p&gt;&lt;img&gt;&lt;p&gt;ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಸಿಯೊಂದು 500 ಮೀ. ಆಳದ ಪ್ರಪಾತಕ್ಕೆ ಬಿದ್ದು 7 ಕನ್ನಡಿಗರು ಸೇರಿದಂತೆ 8 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಂಬಾ ಜಿಲ್ಲೆಯ ಪಂಗಿ ಪ್ರದೇಶದ ಬೈರಾಗಢ-ಪಂಗಿ-ಸಚ್ ಪಾಸ್ ರಸ್ತೆಯ ಕಲಾವನ್ ಬಳಿ ಈ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಸಿ ಉರುಳಿ ಬಿದ್ದು ಅಪಘಾತ ಸಂಭವಿಸಿದೆ.&lt;/p&gt;&lt;img&gt;&lt;p&gt;ದುರಂತದಲ್ಲಿ ಕರ್ನಾಟಕದ 2 ಕುಟುಂಬದ 7 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಡಾಲ್&zwnj;ಹೌಸಿಗೆ ಶೇರಿಂಗ್&zwnj; ಟ್ಯಾಕ್ಸಿಯಲ್ಲಿ ತೆರಳುತ್ತಿದ್ದರು. ಮೃತರನ್ನು ಬೆಂಗಳೂರಿನ ನಿವಾಸಿಗಳಾದ ಅರವಿಂದ್&zwnj; ಚಂದ್ರಾಕರ್, ಪತ್ನಿ ಪ್ರಾಚಿ, ಮಕ್ಕಳಾದ ದರ್ಶ್&zwnj;, ಅಕ್ಷದ್&zwnj;, ಕರ್ನಾಟಕದ ಕಾರ್ತಿಕೇಯನ್&zwnj;, ಪತ್ನಿ ಮಣಿಮಾಲಾ, ಅವರ ಪುತ್ರ ನಂದನ್&zwnj; ಎಂದು ಗುರುತಿಸಲಾಗಿದೆ. ಇನ್ನು ಟ್ಯಾಕ್ಸಿ ಚಾಲಕನಾಗಿದ್ದ ಸ್ಥಳೀಯ ನಿವಾಸಿ ವಿಶ್ವಾಸ್&zwnj; ಕೂಡ ಅಸುನೀಗಿದ್ದಾನೆ.&lt;/p&gt;&lt;img&gt;&lt;p&gt;ಶುಕ್ರವಾರ ತಡರಾತ್ರಿಯೇ ಈ ಅಪಘಾತ ನಡೆದಿದೆ. ಶನಿವಾರ ಮಧ್ಯಾಹ್ನ ವಾಹನದ ಮಾಲೀಕರು, ಅದರ ಜಿಪಿಎಸ್&zwnj; ಲೊಕೇಶನ್&zwnj; ಗಮನಿಸಿದಾಗ 1 ದಿನದಿಂದ ಅದೇ ಲೊಕೇಶನ್&zwnj;ನಲ್ಲಿ ಟ್ಯಾಕ್ಸಿ ಇದ್ದದ್ದು ಕಂಡುಬಂದಿದೆ. ಆಗ ಸ್ಥಳ ಪರಿಶೀಲಿಸಿದಾಗ ಅಪಘಾತ ಆಗಿದ್ದು ಗೊತ್ತಾಗಿದೆ. ಆದರೆ ಭಾನುವಾರದವರೆಗೂ ಮೃತರ ಶವ ಪತ್ತೆಯಾಗಿಲ್ಲ. ಸದ್ಯ ಸ್ಥಳದಲ್ಲಿ ಶವಗಳ ಶೋಧ ಕಾರ್ಯ ನಡೆಯುತ್ತಿದೆ. ಆದರೆ ಇದು ಅತ್ಯಂತ ದುರ್ಗಮ ಹಾದಿ ಹಾಗೂ ಹವಾಮಾನ ವೈಪರೀತ್ಯದಿಂದ ಶೋಧ ಕಾರ್ಯಕ್ಕೆ ತೊಡಕಾಗಿದೆ.&lt;/p&gt;&lt;p&gt;#WATCH | Himachal Pradesh: Vijay Saklani, Superintendent of Police, Chamba, says, &quot;3 bodies have been recovered. There were 8 people. 2 families, one from Bangalore and the other from Chhattisgarh, and the driver is a local.&quot; https://t.co/BJ2ZZelS5r pic.twitter.com/n0jmroepbZ&lt;/p&gt;&lt;p&gt;&mdash; ANI (@ANI) May 31, 2026&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/india-news/tourist-taxi-falls-into-500m-deep-gorge-8-dead-including-7-kannadigas-pangi-chamba-district-himachal-pradesh-mrq-w53n79x"/>
        </item>
        <item>
            <title><![CDATA[Viral: ಮರ ಹತ್ತಿ ಮಂಗನಿಂದ ನೋಟುಗಳ ಮಳೆ, 500ರ ನೋಟು ಹೆಕ್ಕಲು ಮುಗಿಬಿದ್ದ ಜನ!]]></title>
            <link>https://kannada.asianetnews.com/viral/monkey-money-rain-bulandshahr-court-viral-video-rs-2-lakh-cash-stolen-san/articleshow-hqg530h</link>
            <guid isPermaLink="true">https://kannada.asianetnews.com/viral/monkey-money-rain-bulandshahr-court-viral-video-rs-2-lakh-cash-stolen-san/articleshow-hqg530h</guid>
            <pubDate>Sun, 31 May 2026 22:21:46 +0530</pubDate>
            <description><![CDATA[ಬುಲಂದ್&zwnj;ಶಹರ್ ಜಿಲ್ಲಾ ನ್ಯಾಯಾಲಯದ ಬಳಿ, ಮಂಗವೊಂದು ವ್ಯಕ್ತಿಯೊಬ್ಬರಿಂದ 2 ಲಕ್ಷ ರೂಪಾಯಿ ಇದ್ದ ಬ್ಯಾಗ್&zwnj; ಕಸಿದು ಮರವೇರಿದೆ. ನಂತರ ಬ್ಯಾಗ್&zwnj;ನಲ್ಲಿದ್ದ ನೋಟುಗಳನ್ನು ಹರಿದು ಕೆಳಗೆ ಎಸೆದಿದ್ದು, ಸ್ಥಳೀಯರ ಸಹಾಯದಿಂದ ಮಾಲೀಕರು ಸುಮಾರು ₹1.98 ಲಕ್ಷ ಹಣವನ್ನು ಮರಳಿ ಪಡೆದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kszezpdedcjsb72fjy63f391,imgname-monkey-money-1780246108590.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬುಲಂದ್&zwnj;ಶಹರ್ (ಮೇ.31): &lt;/strong&gt;ಉತ್ತರ ಪ್ರದೇಶದ ಬುಲಂದ್&zwnj;ಶಹರ್ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಬಳಿ ಶನಿವಾರ ಆಶ್ಚರ್ಯಕರ ಘಟನೆ ನಡೆದಿದೆ. ಕೋರ್ಟ್&zwnj; ಆವರಣದಲ್ಲಿದ್ದ ಮಂಗ, ವ್ಯಕ್ತಿಯೊಬ್ಬರ ಕೈಯಲ್ಲಿದ್ದ ಬರೋಬ್ಬರಿ 2 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗ್&zwnj;ಅನ್ನು ಕಸಿದುಕೊಂಡು, ಮರ ಹತ್ತಿ ಆಕಾಶದಿಂದ ನೋಟುಗಳ ಮಳೆ ಸುರಿಸಿದ ಪ್ರಸಂಗ ಜರುಗಿದೆ. ಮರದಿಂದ ನೋಟುಗಳು ಬೀಳುತ್ತಿದ್ದಂತೆ ಕೆಳಗಿದ್ದ ಸಾರ್ವಜನಿಕರು ಹಣವನ್ನು ಆಯ್ದುಕೊಳ್ಳಲು ಮುಗಿಬಿದ್ದಿದ್ದು, ಇಡೀ ಪ್ರದೇಶದಲ್ಲಿ ಕೆಲಕಾಲ ಭಾರಿ ಗದ್ದಲ ಸೃಷ್ಟಿಯಾಯಿತು.&lt;/p&gt;&lt;p&gt;ಸ್ಥಳೀಯ ವರದಿಗಳ ಪ್ರಕಾರ, ವ್ಯಕ್ತಿಯೊಬ್ಬರು ಆಸ್ತಿ ಖರೀದಿ ಸಂಬಂಧಿಸಿದ ದಾಖಲೆ ಪತ್ರಗಳ ಕೆಲಸವನ್ನು ಪೂರ್ಣಗೊಳಿಸಲು ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಬಳಿ ಇರುವ ವಕೀಲರ ಚೇಂಬರ್&zwnj;ಗೆ ಆಗಮಿಸಿದ್ದರು. ಅವರ ಕೈಯಲ್ಲಿ ಸುಮಾರು 2 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗ್ ಇತ್ತು. ಅವರು ವಕೀಲರ ಕಚೇರಿಯ ಬಳಿ ನಿಂತಿದ್ದಾಗ, ಅಲ್ಲಿಗೆ ಹಠಾತ್ ಆಗಿ ನುಗ್ಗಿದ ಮಂಗ ಕೈಯಲ್ಲಿದ್ದ ಹಣದ ಬ್ಯಾಗ್&zwnj;ಅನ್ನು ಕಸಿದುಕೊಂಡು ಮಿಂಚಿನಂತೆ ಮರ ಹತ್ತಿದೆ.&lt;/p&gt;&lt;h2&gt;&lt;strong&gt;ತಿಂಡಿ ಅಂದುಕೊಂಡು ನೋಟಿನ ಕಂತೆಗಳನ್ನು ಹರಿದು ಹಾಕಿದ ಕೋತಿ!&lt;/strong&gt;&lt;/h2&gt;&lt;p&gt;ಬ್ಯಾಗ್ ಕಸಿದುಕೊಂಡ ಮಂಗ ಮರಹತ್ತಿ, ಬ್ಯಾಗ್ ಒಳಗಡೆ ತಿನ್ನಲು ಏನಾದರೂ ಆಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅದನ್ನು ಜಾಲಾಡಲು ಆರಂಭಿಸಿದೆ. ಆದರೆ ಅದಕ್ಕೆ ಸಿಕ್ಕಿದ್ದು ಆಹಾರದ ಬದಲಾಗಿ ₹500 ಮುಖಬೆಲೆಯ ನೋಟಿನ ಕಂತೆಗಳು.&lt;/p&gt;&lt;p&gt;ಬ್ಯಾಗ್&zwnj;ನಲ್ಲಿ ತಿಂಡಿ ಇಲ್ಲದಿರುವುದನ್ನು ಕಂಡು ಆಕ್ರೋಶಗೊಂಡಿತೋ ಅಥವಾ ಕುತೂಹಲದಿಂದಲೋ ಗೊತ್ತಿಲ್ಲ, ಆ ಮಂಗ ₹500 ನೋಟುಗಳ ಕಂತೆಗಳನ್ನು ಒಂದೊಂದಾಗಿ ಹರಿದು ಗಾಳಿಯಲ್ಲಿ ತೂರಲು ಪ್ರಾರಂಭಿಸಿತು. ಮರದಿಂದ ನೋಟುಗಳು ಕೆಳಗೆ ಬೀಳುತ್ತಿದ್ದ ದೃಶ್ಯವು ಆಕಾಶದಿಂದ ಹಣದ ಮಳೆಯೇ ಸುರಿಯುತ್ತಿರುವಂತೆ ಭಾಸವಾಗುತ್ತಿತ್ತು. ಕೆಲವೇ ನಿಮಿಷಗಳಲ್ಲಿ, ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದ ತುಂಬಾ ಕರೆನ್ಸಿ ನೋಟುಗಳು ಹಾರಾಡುತ್ತಿರುವುದನ್ನು ಕಂಡು ಕೋರ್ಟ್ ಆವರಣದಲ್ಲಿದ್ದ ನೂರಾರು ಜನರ ದಂಡೇ ಮರದ ಕೆಳಗೆ ಜಮಾಯಿಸಿತು.&lt;/p&gt;&lt;p&gt;ಮಂಗನ ಈ ವಿಶಿಷ್ಟ 'ಹಣದ ಮಳೆ'ಯ ಇಡೀ ದೃಶ್ಯವನ್ನು ಅಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ಘಟನೆಯ 53 ಸೆಕೆಂಡುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು (Views) ಗಳಿಸುತ್ತಿದೆ.&lt;/p&gt;&lt;h2&gt;&lt;strong&gt;ಸ್ಥಳೀಯರ ಪ್ರಾಮಾಣಿಕತೆ: ಮರಳಿ ಸಿಕ್ಕಿತು ₹1.98 ಲಕ್ಷ ಹಣ!&lt;/strong&gt;&lt;/h2&gt;&lt;p&gt;ತಮ್ಮ ಕಣ್ಣೆದುರೇ ಕಷ್ಟದ ಹಣ ಗಾಳಿಯಲ್ಲಿ ತೇಲಿ ಹೋಗುತ್ತಿರುವುದನ್ನು ಕಂಡು ಬ್ಯಾಗ್ ಮಾಲೀಕರು ಜೋರಾಗಿ ಕೂಗಾಡಿ ನೆರವಿಗಾಗಿ ಚೀರಾಡಿದರು. ಇದನ್ನು ಗಮನಿಸಿದ ನೋಂದಣಿ ಕಚೇರಿಯ ಆವರಣದಲ್ಲಿದ್ದ ಇತರ ವಕೀಲರು, ಮುನ್ಸಿಪಾಲಿಟಿ ಸಿಬ್ಬಂದಿ ಹಾಗೂ ದಾರಿಹೋಕರು ತಕ್ಷಣವೇ ಕಾರ್ಯಪ್ರವೃತ್ತರಾದರು. ರಸ್ತೆಯುದ್ದಕ್ಕೂ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ನೋಟುಗಳನ್ನು ಆಯ್ದುಕೊಳ್ಳಲು ಜನ ಮುಗಿಬಿದ್ದರಾದರೂ, ಕೊನೆಯಲ್ಲಿ ಸ್ಥಳೀಯರ ಸಹಾಯದಿಂದ ಬ್ಯಾಗ್ ಮಾಲೀಕರು ನಿರಾಳರಾಗಿದ್ದಾರೆ.&lt;/p&gt;&lt;p&gt;ಹಣದ ಮಾಲೀಕನ ಆಕ್ರಂದನಕ್ಕೆ ಕರಗಿದ ಸ್ಥಳೀಯರು ತಾವು ಆಯ್ದುಕೊಂಡ ಹಣವನ್ನೆಲ್ಲಾ ಅವರಿಗೆ ಮರಳಿ ಒಪ್ಪಿಸಿದ್ದಾರೆ. ಮಂಗ ರಸ್ತೆಗೆ ಎಸೆದಿದ್ದ ₹2 ಲಕ್ಷ ಒಟ್ಟು ಹಣದಲ್ಲಿ ಬರೋಬ್ಬರಿ ₹1.98 ಲಕ್ಷ ಹಣ ಯಶಸ್ವಿಯಾಗಿ ಮಾಲೀಕನ ಕೈ ಸೇರಿದ್ದು, ಕೇವಲ 2 ಸಾವಿರ ರೂಪಾಯಿಗಳಷ್ಟೇ ಕೈತಪ್ಪಿ ಹೋಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Rain of money  pic.twitter.com/iK2jCmqu0Q&lt;/p&gt;&lt;p&gt;&mdash;  (@ashishkm123) May 31, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/viral/monkey-money-rain-bulandshahr-court-viral-video-rs-2-lakh-cash-stolen-san/articleshow-hqg530h"/>
        </item>
        <item>
            <title><![CDATA[ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ ಸುತ್ತಿಕೊಂಡ ವಿಷಸರ್ಪ; ಸಾವಿನೊಂದಿಗೆ ಹೋರಾಡಿದ ಆ 4 ಗಂಟೆಗಳು!]]></title>
            <link>https://kannada.asianetnews.com/viral/odisha-elderly-paralyzed-man-survives-venomous-snake-coiled-arm-four-hours-sat/articleshow-iz6wikd</link>
            <guid isPermaLink="true">https://kannada.asianetnews.com/viral/odisha-elderly-paralyzed-man-survives-venomous-snake-coiled-arm-four-hours-sat/articleshow-iz6wikd</guid>
            <pubDate>Sun, 31 May 2026 22:22:37 +0530</pubDate>
            <description><![CDATA[&lt;p&gt;ಪಾರ್ಶ್ವವಾಯು ಪೀಡಿತ ವೃದ್ಧರೊಬ್ಬರು ಸುಮಾರು ನಾಲ್ಕು ಗಂಟೆಗಳ ಕಾಲ ತಮ್ಮ ಕೈಗೆ ಸುತ್ತಿಕೊಂಡಿದ್ದ ವಿಷಕಾರಿ ಹಾವಿನೊಂದಿಗೆ ಸಾವಿನ ಮನೆಯಲ್ಲಿದ್ದರು. ಪಾರ್ಶ್ವವಾಯುವಿನಿಂದಾಗಿ ನಿಶ್ಚಲರಾಗಿದ್ದೇ ಅವರ ಪ್ರಾಣ ಉಳಿಯಿತೇ, ಇಲ್ಲವೇ ಎಂಬುದನ್ನು ನೀವೇ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kszc5m7gsy5wt0m81z9t9pgh,imgname-paralyzed-man-venomous-snake--1780243157232.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾವು ಯಾವಾಗ, ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗದು. ಆದರೆ, ಸಾವು ಕಣ್ಣೆದುರೇ ಇದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆಗಳು ವಿರಳ. ಅಂತಹದ್ದೇ ಒಂದು ಅಸಾಮಾನ್ಯ ಮತ್ತು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಪಾರ್ಶ್ವವಾಯು ಪೀಡಿತ ವೃದ್ಧರೊಬ್ಬರು ಸುಮಾರು ನಾಲ್ಕು ಗಂಟೆಗಳ ಕಾಲ ವಿಷಕಾರಿ ಹಾವಿನೊಂದಿಗೆ ಸಾವಿನ ಮನೆಯ ಬಾಗಿಲಲ್ಲಿದ್ದು, ಪವಾಡಸದೃಶವಾಗಿ ಪಾರಾಗಿದ್ದಾರೆ.&lt;/p&gt;&lt;h3&gt;&lt;strong&gt;ಕಿಟಕಿ ಮೂಲಕ ನುಗ್ಗಿದ ಸಾವು:&lt;/strong&gt;&lt;/h3&gt;&lt;p&gt;ಒಡಿಶಾದ ಬೌಧ್ ಜಿಲ್ಲೆಯ ಅಡೇನಿಗಡ್ ಗ್ರಾಮದ ಕೃಷ್ಣ ಚಂದ್ರ ಸಾಹು ಎಂಬ ವೃದ್ಧರು ಕಳೆದ ರಾತ್ರಿ ತಮ್ಮ ಕೋಣೆಯಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಕೋಣೆಯ ಕಿಟಕಿ ತೆರೆದಿದ್ದರಿಂದ ಅದರ ಮೂಲಕ ನುಗ್ಗಿದ ವಿಷಕಾರಿ ಹಾವೊಂದು ನೇರವಾಗಿ ಸಾಹು ಅವರ ಹಾಸಿಗೆಗೆ ಬಂದಿದೆ. ನಿದ್ದೆಯಲ್ಲಿದ್ದ ಅವರಿಗೆ ತಮ್ಮ ದೇಹದ ಮೇಲೆ ಯಾವುದೋ ವಸ್ತು ಹರಿದಾಡಿದ ಅನುಭವವಾಗಿದೆ. ಕಣ್ಣು ಬಿಟ್ಟು ನೋಡಿದಾಗ ಕಂಡ ದೃಶ್ಯ ಅವರ ಎದೆಯನ್ನು ನಡುಗಿಸಿದೆ.&lt;/p&gt;&lt;p&gt;ಚಲಿಸಲಾಗದ ಅಸಹಾಯಕತೆ, ಕೈಗೆ ಸುತ್ತಿದ ಹಾವು:&lt;/p&gt;&lt;p&gt;ಕೃಷ್ಣ ಚಂದ್ರ ಅವರಿಗೆ ಕೆಲ ಕಾಲದ ಹಿಂದೆ ಪಾರ್ಶ್ವವಾಯು (Paralysis) ತಗುಲಿದ್ದರಿಂದ ಅವರಿಗೆ ಸರಿಯಾಗಿ ಕೈಕಾಲು ಅಲುಗಾಡಿಸಲು ಅಥವಾ ಸಹಾಯಕ್ಕಾಗಿ ಜೋರಾಗಿ ಕೂಗಲು ಸಾಧ್ಯವಾಗಲಿಲ್ಲ. ಅವರು ಭಯದಿಂದ ಸ್ವಲ್ಪ ಪಕ್ಕಕ್ಕೆ ಸರಿಯಲು ಯತ್ನಿಸಿದಾಗ, ಹಾವು ಅವರ ಒಂದು ಕೈಗೆ ಬಿಗಿಯಾಗಿ ಸುತ್ತಿಕೊಂಡಿದೆ. ಹಾವಿನ ಉಳಿದ ಭಾಗ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಇತ್ತು. ಒಂದು ವೇಳೆ ಅವರು ಜೋರಾಗಿ ಅಲುಗಾಡಿದ್ದರೆ ಅಥವಾ ಕೂಗಿದ್ದರೆ ಹಾವು ಕಚ್ಚುವುದು ಖಚಿತವಾಗಿತ್ತು. ಆದರೆ ಸಾಹು ಅವರು ಸಾವನ್ನು ಹತ್ತಿರದಿಂದ ಕಂಡರೂ ಧೈರ್ಯಗುಂದದೆ, ಉಸಿರು ಬಿಗಿಹಿಡಿದು ನಾಲ್ಕು ಗಂಟೆಗಳ ಕಾಲ ಮೂರ್ತಿಯಂತೆ ನಿಶ್ಚಲವಾಗಿ ಮಲಗಿದ್ದರು.&lt;/p&gt;&lt;h2&gt;&lt;strong&gt;ಬೆಳ್ಳಂಬೆಳಿಗ್ಗೆ ಬೆಚ್ಚಿಬಿದ್ದ ಮನೆಯವರು:&lt;/strong&gt;&lt;/h2&gt;&lt;p&gt;ಬೆಳಗ್ಗೆ ಮನೆಯವರು ಕೋಣೆಗೆ ಬಂದಾಗ ಕಂಡ ದೃಶ್ಯ ಅವರನ್ನು ದಂಗಾಗಿಸಿದೆ. ಸಾಹು ಅವರ ಕೈಗೆ ಮತ್ತು ಕುರ್ಚಿಗೆ ಹಾವು ಸುತ್ತಿಕೊಂಡಿರುವುದನ್ನು ಕಂಡು ಅವರು ಕಿರುಚುವ ಬದಲು ಸಂಯಮದಿಂದ ವರ್ತಿಸಿದರು. ಹಾವನ್ನು ಕೆಣಕಿದರೆ ಸಾಹು ಅವರಿಗೆ ಕಚ್ಚಬಹುದು ಎಂದು ಅರಿತ ಮನೆಯವರು, ಅತ್ಯಂತ ಜಾಗರೂಕತೆಯಿಂದ ಹಾವಿಗೆ ಯಾವುದೇ ತೊಂದರೆಯಾಗದಂತೆ ಅದನ್ನು ಸಾಹು ಅವರಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾದರು.&lt;/p&gt;&lt;h2&gt;&lt;strong&gt;ಒಂದೇ ಒಂದು ಕಡಿತವಿಲ್ಲದೆ ಪ್ರಾಣಾಪಾಯದಿಂದ ಮುಕ್ತಿ:&lt;/strong&gt;&lt;/h2&gt;&lt;p&gt;ಗಂಟೆಗಟ್ಟಲೆ ವಿಷಕಾರಿ ಹಾವಿನ ಹಿಡಿತದಲ್ಲಿದ್ದರೂ, ವೃದ್ಧರಿಗೆ ಒಂದೇ ಒಂದು ಕಡಿತವೂ ಆಗಿಲ್ಲ ಎಂಬುದು ವೈದ್ಯಲೋಕವನ್ನೇ ಬೆರಗುಗೊಳಿಸಿದೆ. ಸಾಮಾನ್ಯವಾಗಿ ಹಾವುಗಳು ಅಲುಗಾಡುವ ವಸ್ತುಗಳ ಮೇಲೆ ಆಕ್ರಮಣ ಮಾಡುತ್ತವೆ. ಆದರೆ ಸಾಹು ಅವರು ಪಾರ್ಶ್ವವಾಯುವಿನಿಂದಾಗಿ ನಿಶ್ಚಲವಾಗಿದ್ದೇ ಅವರ ಪ್ರಾಣ ಉಳಿಸಲು ಕಾರಣವಾಯಿತು ಎಂದು ಶಂಕಿಸಲಾಗಿದೆ. ಸದ್ಯ ಸಾಹು ಅವರು ದೈಹಿಕವಾಗಿ ಆರೋಗ್ಯವಾಗಿದ್ದರೂ, ಕಳೆದ ಆ ನಾಲ್ಕು ಗಂಟೆಗಳ ಭಯಾನಕ ನೆನಪಿನಿಂದ ಇನ್ನೂ ಹೊರಬಂದಿಲ್ಲ. ಈ ಪವಾಡದ ಘಟನೆ ಈಗ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/odisha-elderly-paralyzed-man-survives-venomous-snake-coiled-arm-four-hours-sat/articleshow-iz6wikd"/>
        </item>
        <item>
            <title><![CDATA[ಹಾಸಿಗೆ ಹಿಡಿದ ಹೆಂಡತಿ: ಲೈಂಗಿಕ ಆಸೆ ಹತ್ತಿಕ್ಕಲು ಕೊಡಲಿಯಿಂದ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡ ವ್ಯಕ್ತಿ!]]></title>
            <link>https://kannada.asianetnews.com/viral/madhya-pradesh-man-cuts-their-genitals-to-end-lust-chhatarpur-shocking-news-sat/articleshow-x8oizmu</link>
            <guid isPermaLink="true">https://kannada.asianetnews.com/viral/madhya-pradesh-man-cuts-their-genitals-to-end-lust-chhatarpur-shocking-news-sat/articleshow-x8oizmu</guid>
            <pubDate>Sun, 31 May 2026 21:54:01 +0530</pubDate>
            <description><![CDATA[&lt;p&gt;ಮನೆಯಲ್ಲಿ ಹೆಂಡತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ತನ್ನ ಲೈಂಗಿಕ ಆಸೆಗಳನ್ನು ಈಡೇರಿಸಿಕೊಳ್ಳಲಾಗದೇ ವ್ಯಕ್ತಿಯೊಬ್ಬ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ನಂತರ ಮುಂದೇನಾಯ್ತು ನೀವೇ ಓದಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kszdhba2653gr92mays8fb2v,imgname-madhya-pradesh-man-cuts-their-genitals--1--1780244589890.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನುಷ್ಯನ ಮನಸ್ಸು ಮತ್ತು ಒತ್ತಡ ಯಾವ ಹಂತಕ್ಕೆ ತಲುಪಬಹುದು ಎಂಬುದಕ್ಕೆ ಸಾಕ್ಷಿಯಾಗಿ ಅತ್ಯಂತ ಭಯಾನಕ ಮತ್ತು ಶಾಕಿಂಗ್ ಘಟನೆಯೊಂದು ನಡೆದಿದೆ. 42 ವರ್ಷದ ವ್ಯಕ್ತಿಯೊಬ್ಬ ತನ್ನ ಲೈಂಗಿಕ ಆಸೆಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಕೊಡಲಿಯಿಂದ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡಿರುವ ಘಟನೆ ಶನಿವಾರ ಮಹಾರಾಜ್&zwnj;ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;h3&gt;&lt;strong&gt;ನಡೆದಿದ್ದೇನು?&lt;/strong&gt;&lt;/h3&gt;&lt;p&gt;ಮಧ್ಯಪ್ರದೇಶದ ಛತ್ತರ್&zwnj;ಪುರ ಜಿಲ್ಲೆಯ ರಾಮ್&zwnj;ಮಿಲನ್ ಯಾದವ್ ಎಂಬ 42 ವರ್ಷದ ವ್ಯಕ್ತಿ ಈ ಘೋರ ಕೃತ್ಯ ಎಸಗಿದವರು. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದ ರಾಮ್&zwnj;ಮಿಲನ್, ಶನಿವಾರ ತನ್ನ ಜಮೀನಿನ ಸಮೀಪವಿದ್ದ ಬಾವಿಯ ಬಳಿ ಹೋಗಿ ಕೊಡಲಿಯಿಂದ ಈ ಕೃತ್ಯ ಎಸಗಿದ್ದಾನೆ. ತೀವ್ರ ರಕ್ತಸ್ರಾವವಾಗಿ ನೋವಿನಿಂದ ನರಳುತ್ತಿದ್ದಾಗ ಆತನೇ ತನ್ನ ಸಂಬಂಧಿಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ರಾಮ್&zwnj;ಮಿಲನ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ದಿಗಿಲುಗೊಂಡಿದ್ದಾರೆ.&lt;/p&gt;&lt;p&gt;ತಕ್ಷಣವೇ ಆತನನ್ನು ಮಹಾರಾಜ್&zwnj;ಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಗಾಯ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯಂತೆ ಛತ್ತರ್&zwnj;ಪುರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಡಲಿ ಏಟಿನಿಂದ ಜನನಾಂಗದ ಭಾಗ ಸಂಪೂರ್ಣವಾಗಿ ತುಂಡಾಗಿದ್ದು, ಆತ ಸದ್ಯ ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾನೆ.&lt;/p&gt;&lt;h2&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್:&lt;/strong&gt;&lt;/h2&gt;&lt;p&gt;ಈ ಕೃತ್ಯ ಎಸಗುವ ಮೊದಲು ಅಥವಾ ನಂತರ ರಾಮ್&zwnj;ಮಿಲನ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾನೆ. ಅದರಲ್ಲಿ 'ನನ್ನ ಲೈಂಗಿಕ ಆಸೆಗಳನ್ನು ಕೊನೆಗಾಣಿಸಲು ಈ ರೀತಿ ಮಾಡಿಕೊಂಡಿದ್ದೇನೆ. ಇನ್ನು ಮುಂದಿನ ಜೀವನವನ್ನು ಕೇವಲ ಪ್ರಾರ್ಥನೆ ಮತ್ತು ದೇಶ ಸೇವೆಗೆ ಮೀಸಲಿಡುತ್ತೇನೆ' ಎಂದು ಹೇಳಿಕೊಂಡಿರುವುದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. ಈತ 'ರಾಮಲೀಲಾ' ಎಂಬ ನಾಟಕ ತಂಡವನ್ನು ನಡೆಸುತ್ತಿದ್ದ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಕುಟುಂಬದ ಆರ್ಥಿಕ ಸಂಕಷ್ಟ:&lt;/strong&gt;&lt;/h3&gt;&lt;p&gt;ರಾಮ್&zwnj;ಮಿಲನ್ ಜೀವನದ ಹಿನ್ನೆಲೆ ಕರುಣಾಜನಕವಾಗಿದೆ. ಆತನ ಪತ್ನಿ ಕಳೆದ ಕೆಲವು ವರ್ಷಗಳಿಂದ ಪಾರ್ಶ್ವವಾಯುವಿನಿಂದ (Paralysis) ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದು, ಓರ್ವ ಮಗಳ ಮದುವೆ ಇದೇ ಜೂನ್ 25ಕ್ಕೆ ನಿಶ್ಚಯವಾಗಿದೆ. ಮನೆಯ ಜವಾಬ್ದಾರಿ ಮತ್ತು ಆರ್ಥಿಕ ಸಂಕಷ್ಟದ ನಡುವೆ ಈತ ಈ ರೀತಿ ಮಾಡಿಕೊಂಡಿರುವುದು ಕುಟುಂಬವನ್ನು ಬೀದಿಗೆ ತಳ್ಳಿದೆ. ಈ ಪ್ರಕರಣದ ಕುರಿತು ಪೊಲೀಸರಿಗೆ ಯಾವುದೇ ಲಿಖಿತ ದೂರು ಸಲ್ಲಿಕೆಯಾಗಿಲ್ಲ. ದೂರು ಬಂದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥತೆ ಅಥವಾ ತೀವ್ರ ವೈರಾಗ್ಯದ ಹಾದಿ ಹಿಡಿದು ಈತ ಇಂತಹ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/madhya-pradesh-man-cuts-their-genitals-to-end-lust-chhatarpur-shocking-news-sat/articleshow-x8oizmu"/>
        </item>
        <item>
            <title><![CDATA[ಅಭಿಷೇಕ್ ಬ್ಯಾನರ್ಜಿ ದಾಳಿ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್, ಬಂಧಿತ ಆರೋಪಿ ಟಿಎಂಸಿ ಮಾಜಿ ಶಾಸಕಿ ಆಪ್ತ]]></title>
            <link>https://kannada.asianetnews.com/india-news/big-twist-in-abhishek-banerjee-attack-case-arrested-accused-linked-to-tmc-party-report/articleshow-22pof8q</link>
            <guid isPermaLink="true">https://kannada.asianetnews.com/india-news/big-twist-in-abhishek-banerjee-attack-case-arrested-accused-linked-to-tmc-party-report/articleshow-22pof8q</guid>
            <pubDate>Sun, 31 May 2026 20:32:58 +0530</pubDate>
            <description><![CDATA[&lt;p&gt;ಮಮತಾ ಬ್ಯಾನರ್ಜಿ ಆಪ್ತ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ ಹಾಗೂ ಹಲ್ಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಎದುರಾಗಿದೆ. ಇಡೀ ಪ್ರಕರಣ ಪೂರ್ವನಿಯೋಜಿತ ಅನ್ನೋ ಆರೋಪಕ್ಕೆ ಇದೀಗ ಬಲವಾದ ಸಾಕ್ಷ್ಯ ಲಭ್ಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswyp0b9av8dqx2rmbv1mq25,imgname-red-and-black-retro-landscape-youtube-thumbnail-background--3--1780161905001.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ (ಮೇ.31) &lt;/strong&gt;ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡಿರುವ ಟಿಎಂಸಿ ಹೇಗಾದರೂ ಮಾಡಿ ಸರ್ಕಾರ ಉರುಳಿಸಲು ಪ್ಲಾನ್ ಮಾಡುತ್ತಿದೆಯಾ? ಜನರನ್ನು ಭಾವನಾತ್ಮಕವಾಗಿ ಬೆಸೆದು ಬೀದಿ ಬೀದಿಯಲ್ಲಿ ಹೋರಾಟ ಮಾಡುವ ಹುನ್ನಾರ ನಡೆಯುತ್ತಿದೆಯಾ ಅನ್ನೋ ಚರ್ಚೆಗಳ ನಡುವೆ ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿ ಪ್ರಕರಣ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಚುನಾವಣೋತ್ತರ ಹಿಂಸಾಚಾರದಲ್ಲಿ ಮೃತಪಟ್ಟ ಯುವಕನ ಮನೆಗೆ ಭೇಟಿ ವೇಳೆ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ ನಡೆದಿತ್ತು. ಮೊಟ್ಟೆ ಎಸೆದು, ಕಾಲಿನಿಂದ ಒದ್ದು ಹಲ್ಲೆ ಮಾಡಲಾಗಿತ್ತು. ಈ ಘಟನೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಟಿಎಂಸಿ ಆರೋಪಿಸಿತ್ತು. ಆದರೆ ಇದೀಗ ಪ್ರಕರಣದಲ್ಲಿ ಭಾರಿ ತಿರುವು ಸಿಕ್ಕಿದೆ. ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ಮಾಡಿದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಈತ ಟಿಎಂಸಿ ಮಾಜಿ ಶಾಸಕಿ ಲವ್ಲಿ ಮಿತ್ರಾ ಆಪ್ತ ಅನ್ನೋದು ಬೆಳೆಕಿಗೆ ಬಂದಿದೆ.&lt;/p&gt;&lt;h2&gt;ಟಿಎಂಸಿ ಮಾಡಿತಾ ಬಿಗ್ ಪ್ಲಾನ್&lt;/h2&gt;&lt;p&gt;ಅಭಿಷೇಕ್ ಬ್ಯಾನರ್ಜಿ ಮೇಲೆ ತಾವೇ ಪ್ಲಾನ್ ಮಾಡಿ ಹಲ್ಲೆ ಮಾಡಿ ಬಿಜೆಪಿ ಮೇಲೆ ಹೊರಿಸಿ ಜನರ ವಿಶ್ವಾಸಗಳಿಸಲು ಟಿಎಂಸಿ ಯತ್ನಿಸಿತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಕಾರಣ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪೈಕಿ ಐವರನ್ನು ಅರೆಸ್ಟ್ ಮಾಡಲಾಗಿದೆ. ಈ ಪೈಕಿ ವಿಡಿಯೋದಲ್ಲಿ ಸ್ಪಷ್ಟವಾಗಿ ಬ್ಯಾನರ್ಜಿ ಮೇಲೆ ಹಲ್ಲೆ ಮಾಡುತ್ತಿರುವ ಇಬ್ಬರಾದ ತಪನ್ ಮೈಟಿ ಹಾಗೂ ನಿರ್ಮಲಾ ಸೆನಗುಪ್ತ. ಈ ಇಬ್ಬರು ಟಿಎಂಸಿ ಮಾಜಿ ಶಾಸಕಿ ಲವ್ಲಿ ಮಿತ್ರಾ ಜೊತೆಗೆ ಲಿಂಕ್ ಇರುವುದು ತನಿಖೆಯಲ್ಲಿ ಬಹಿರಂಗವಾಗಿದೆ.&lt;/p&gt;&lt;p&gt;ಇನ್ನು ಅರೆಸ್ಟ್ ಆಗಿರುವ ಕಾಜಲ್ ದಾಸ್ ಹಾಗೂ ದೇಬಶಿಶ್ ದತ್ತಾ ಇಬ್ಬರು ಟಿಎಂಸಿ ಮಾಜಿ ಕಾರ್ಪೋರೇಟರ್ ಜೊತೆ ಲಿಂಕ್ ಇರುವುದು ಪತ್ತೆಯಾಗಿದೆ. ಐದನೇ ಆರೋಪಿ ಅಕಾಶ್ ಗಯೆನ್ ಟಿಎಂಸಿ ಕಾರ್ಯಕರ್ತ ಅನ್ನೋದು ಬಹಿರಂಗವಾಗಿದೆ. ಅರೆಸ್ಟ್ ಆಗಿರುವ ಐದೂ ಆರೋಪಿಗಳು ಟಿಎಂಸಿ ಪಾರ್ಟಿ ಜೊತೆ ಲಿಂಕ್ ಇರುವುದು ಬಹಿರಂಗವಾಗಿದೆ.ಅಕಾಶ್ ಗಯೆನ್ ತಾಯಿ ಈ ಕುರಿತು ಮಾತನಾಡಿದ್ದಾರೆ. ಚುನಾವಣೆ ವೇಳೆ ಬೂತ್&zwnj;ನಲ್ಲಿ ಕೆಲಸ ಮಾಡುತ್ತಾನೆ. ಟಿಎಂಸಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಆಕಾಶ್ ಗಯೆನ್ ತಾಯಿ ಹೇಳಿದ್ದಾರೆ.&lt;/p&gt;&lt;p&gt;ಅರೆಸ್ಟ್ ಆಗಿರುವ ಮತ್ತೊರ್ವ ಆರೋಪಿ ಜೊಯ್ ಸೆನಾಗುಪ್ತ 1999ರಿಂದ ಟಿಎಂಸಿ ಕಾರ್ಯಕರ್ತನಾಗಿ, ಸ್ಥಳೀಯ ಮುಖಂಡನಾಗಿ ಗುರುತಿಸಿಕೊಂಡಿದ್ದಾನೆ. ಜೊಯ್ ಪೋಷಕರು ಬಂಧನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಜೊಯ್ ಟಿಎಂಸಿ ಮುಖಂಡ ಅನ್ನೋದು ನಿಜ. ಆದರೆ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೊಯ್ ಇಲ್ಲ. ಪೊಲೀಸರು ಸುಮ್ಮನೆ ಅರೆಸ್ಟ್ ಮಾಡಿದ್ದಾರೆ. ಪೊಲೀಸರ ನಡೆ ಅನುಮಾನ ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/big-twist-in-abhishek-banerjee-attack-case-arrested-accused-linked-to-tmc-party-report/articleshow-22pof8q"/>
        </item>
        <item>
            <title><![CDATA[ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿ ಮುನ್ನ ಹೈ-ಅಲರ್ಟ್: ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ]]></title>
            <link>https://kannada.asianetnews.com/gallery/india-news/cm-vijay-trichy-visit-bomb-threat-email-collectorate-office-high-alert-san-o4t0cwt</link>
            <guid isPermaLink="true">https://kannada.asianetnews.com/gallery/india-news/cm-vijay-trichy-visit-bomb-threat-email-collectorate-office-high-alert-san-o4t0cwt</guid>
            <pubDate>Sun, 31 May 2026 19:36:53 +0530</pubDate>
            <description><![CDATA[&lt;p&gt;ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಆಗಮಿಸುವ ಮುನ್ನಾದಿನ, ಜಿಲ್ಲಾಧಿಕಾರಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krg2rcvxtbkcm9pfqqf8bjxh,imgname-tamil-nadu-vijay-government-floor-test-tvk-trust-vote-aiadmk-dmk-assembly-1--2--1778656228221.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಆಗಮಿಸುವ ಮುನ್ನಾದಿನ, ಜಿಲ್ಲಾಧಿಕಾರಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (ನಟ ದಳಪತಿ ವಿಜಯ್) ಅವರು ಸೋಮವಾರ (ನಾಳೆ) ತಿರುಚಿರಾಪಳ್ಳಿ (ತಿರುಚಿ) ಪೂರ್ವ ಕ್ಷೇತ್ರಕ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬರಲಿರುವ ಹಿನ್ನೆಲೆಯಲ್ಲಿ, ಇಂದು ತಿರುಚಿರಾಪಳ್ಳಿ ಜಿಲ್ಲಾಧಿಕಾರಿ ಕಚೇರಿಗೆ (Collectorate Office) ಬಂದಿರುವ ಬಾಂಬ್ ಬೆದರಿಕೆ ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಮತ್ತು ಆತಂಕ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ಇಂದು ತಿರುಚಿರಾಪಳ್ಳಿ ಜಿಲ್ಲಾಧಿಕಾರಿ ಕಚೇರಿಗೆ ಅಪರಿಚಿತರಿಂದ ಇ-ಮೇಲ್ (Email) ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮುಖ್ಯಮಂತ್ರಿಗಳ ಭೇಟಿಯ ಮುನ್ನಾದಿನವೇ ಇಂತಹ ಬೆದರಿಕೆ ಬಂದಿರುವುದರಿಂದ ತಕ್ಷಣವೇ ಎಚ್ಚೆತ್ತುಕೊಂಡಿರುವ ಭದ್ರತಾ ಸಿಬ್ಬಂದಿ, ಬಾಂಬ್ ಪತ್ತೆ ಹಚ್ಚುವ ತಜ್ಞರು (BDDS) ಹಾಗೂ ಶ್ವಾನ ದಳದ (Dog Squad) ಸಹಾಯದೊಂದಿಗೆ ಜಿಲ್ಲಾಧಿಕಾರಿ ಕಚೇರಿಯ ಪ್ರತಿಯೊಂದು ಮೂಲೆ ಮೂಲೆಯಲ್ಲೂ ತೀವ್ರ ತಪಾಸಣೆ ಮತ್ತು ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ &lsquo;ತಮಿಳಗ ವೆಟ್ರಿ ಕಳಗಂ&rsquo; (TVK) ಪಕ್ಷದ ಅಧ್ಯಕ್ಷರಾದ ಜೋಸೆಫ್ ವಿಜಯ್ ಅವರು &lsquo;ಪೆರಂಬೂರ್&rsquo; ಮತ್ತು &lsquo;ತಿರುಚಿರಾಪಳ್ಳಿ ಪೂರ್ವ&rsquo; (ತಿರುಚಿ ಈಸ್ಟ್) ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡರಲ್ಲೂ ಭರ್ಜರಿ ಜಯ ದಾಖಲಿಸಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ನಿಯಮಾವಳಿಗಳ ಪ್ರಕಾರ ಪೆರಂಬೂರ್ ಕ್ಷೇತ್ರವನ್ನು ತಮ್ಮ ಬಳಿಯೇ ಉಳಿಸಿಕೊಂಡು, ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದರು.&lt;/p&gt;&lt;img&gt;&lt;p&gt;ತಮ್ಮನ್ನು ಭಾರಿ ಬಹುಮತದಿಂದ ಗೆಲ್ಲಿಸಿದ ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಜನತೆಗೆ ಹಾಗೂ ಮತದಾರರಿಗೆ ನೇರವಾಗಿ ಧನ್ಯವಾದ ಮತ್ತು ಕೃತಜ್ಞತೆ ಸಲ್ಲಿಸುವ ಸಲುವಾಗಿ ಮುಖ್ಯಮಂತ್ರಿ ವಿಜಯ್ ಅವರು ಸೋಮವಾರ ಸಂಜೆ ತಿರುಚಿರಾಪಳ್ಳಿಗೆ ಆಗಮಿಸುತ್ತಿದ್ದಾರೆ. ಇದಕ್ಕಾಗಿ ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ತಿರುಚಿರಾಪಳ್ಳಿ ವಿಮಾನ ನಿಲ್ದಾಣಕ್ಕೆ ಬರಲಿರುವ ಮುಖ್ಯಮಂತ್ರಿಗಳು, ಅಲ್ಲಿಂದ ಅಲ್ಲಿನ ಪ್ರಸಿದ್ಧ &lsquo;ಸೇಂಟ್ ಜೋಸೆಫ್ ಕಾಲೇಜು&rsquo; (St. Joseph's College) ಮೈದಾನದಲ್ಲಿ ಆಯೋಜಿಸಲಾಗಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.&lt;/p&gt;&lt;img&gt;&lt;p&gt;ವಿಮಾನ ನಿಲ್ದಾಣದಿಂದ ಸುಮಾರು 7 ಕಿಲೋ ಮೀಟರ್ ದೂರದಲ್ಲಿರುವ ಸೇಂಟ್ ಜೋಸೆಫ್ ಕಾಲೇಜು ಮೈದಾನಕ್ಕೆ ತೆರಳುವ ಮಾರ್ಗಮಧ್ಯೆ ಮುಖ್ಯಮಂತ್ರಿ ವಿಜಯ್ ಅವರು ಸಾರ್ವಜನಿಕರು ಹಾಗೂ ಅಭಿಮಾನಿಗಳಿಂದ ಭವ್ಯ ಸ್ವಾಗತ ಮತ್ತು ಗೌರವವನ್ನು ಸ್ವೀಕರಿಸಲಿದ್ದಾರೆ. ತದನಂತರ ಕಾಲೇಜು ಆವರಣದಲ್ಲಿ ಸಂಜೆ 4 ಗಂಟೆಗೆ ಆರಂಭವಾಗಲಿರುವ ಬೃಹತ್ &lsquo;ಜನಸಂಪರ್ಕ ಸಭೆ&rsquo;ಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರು ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗಾಗಿ ಮೈದಾನದಲ್ಲಿ ಬೃಹತ್ ವೇದಿಕೆ ಹಾಗೂ ಪೆಂಡಾಲ್ ನಿರ್ಮಾಣ ಕಾರ್ಯಗಳು ಪೂರ್ಣಗೊಳ್ಳುತ್ತಿದ್ದು, ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಇಡೀ ನಗರದಾದ್ಯಂತ ಪೊಲೀಸ್ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/cm-vijay-trichy-visit-bomb-threat-email-collectorate-office-high-alert-san-o4t0cwt"/>
        </item>
        <item>
            <title><![CDATA[ಬಕ್ರೀದ್ ದಿನ ಸೂರ್ಯ ಪ್ರತಾಪ್ ಹತ್ಯೆ ಮಾಡಿದ ಆರೋಪಿ ಅಸಾದ್ ಯುಪಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿ]]></title>
            <link>https://kannada.asianetnews.com/india-news/up-surya-pratap-murder-case-takes-dramatic-turn-as-accused-asad-dies-in-encounter/articleshow-78n3iau</link>
            <guid isPermaLink="true">https://kannada.asianetnews.com/india-news/up-surya-pratap-murder-case-takes-dramatic-turn-as-accused-asad-dies-in-encounter/articleshow-78n3iau</guid>
            <pubDate>Sun, 31 May 2026 18:15:20 +0530</pubDate>
            <description><![CDATA[&lt;p&gt;ಬಕ್ರೀದ್ ಹಬ್ಬದ ದಿನ 17ರ ಬಾಲಕ ಸೂರ್ಯ ಪ್ರತಾಪ್ ಚವ್ಹಾಣ್ ಮೇಲೆ ಅಸಾದ್ ಹಾಗೂ ಆತನ ಸಂಗಡಿಗರು ದಾಳಿ ಮಾಡಿ ಹತ್ಯೆ ಮಾಡಿದ್ದರು. ಇತ್ತ ಆರೋಪಿ ಅಸಾದ್&zwnj;ನ ಉತ್ತರ ಪ್ರದೇಶ ಪೊಲೀಸರು ಎನ್&zwnj;ಕೌಂಟರ್ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz0zs85wfq0m4tmmy0d7b6r,imgname-up-police-1780231431429.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಘಾಜಿಯಾಬಾದ್ (ಮೇ.31)&lt;/strong&gt; ಉತ್ತರ ಪ್ರದೇಶದಲ್ಲಿ ಕಾನೂನು ಕೈಗೆ ಎತ್ತಿಕೊಂಡರೆ ಪರಿಣಾಮ ಎನ್&zwnj;ಕೌಂಟರ್ ಅಥವಾ ಮನೆ ಮೇಲೆ ಬುಲ್ಡೋಜರ್ ಪ್ರಹಾರ ಮಾಡುತ್ತೆ. ಇಷ್ಟಿದ್ದರೂ ಇದರ ನಡುವೆ ಬಾಲಬಿಚ್ಚಿದ ಕೆಲ ಪುಂಡರ ವಿರುದ್ಧ ಯುಪಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಬಕ್ರೀದ್ ಹಬ್ಬದ ದಿನ 17ರ ಬಾಲಕ ಸೂರ್ಯ ಪ್ರತಾಪ್ ಚವ್ಹಾಣ್ ಮೇಲೆ ಅಸಾದ್ ಹಾಗೂ ಆತನ ಸಂಗಡಿಗರು ದಾಳಿ ಮಾಡಿದ್ದರು. ಚಾಕು ಇರಿದು ಕೊಂದಿದ್ದರು. ಹಬ್ಬದ ಆಚರಣೆಗೆ ಸೂರ್ಯ ಪ್ರತಾಪ್&zwnj;ಗೆ ಇದೇ ಅಸಾದ್ ಆಹ್ವಾನ ನೀಡಿದ್ದ ಎನ್ನಲಾಗಿದೆ. ಆದರೆ ಸಂಚು ರೂಪಿಸಿ ಆಹ್ವಾನ ನೀಡಿದ್ದ ಅಸಾದ್, ಬಳಿಕ ಸೂರ್ಯ ಪ್ರತಾಪ್ ಚವ್ಹಾಣ್ ಹತ್ಯೆ ಮಾಡಿದ್ದ. ಹತ್ಯೆ ಬಳಿಕ ನಾಪತ್ತೆಯಾಗಿದ್ದ ಅಸಾದ್ ಯುಪಿ ಪೊಲೀಸರ ಎನ್&zwnj;ಕೌಂಟರ್&zwnj;ನಲ್ಲಿ ಬಲಿಯಾಗಿದ್ದಾನೆ.&lt;/p&gt;&lt;h2&gt;ಮಗನಿಗೆ ಆದ ನೋವು ಎಲ್ಲಾ ಆರೋಪಿಗಳಿಗೆ ಆಗಬೇಕು&lt;/h2&gt;&lt;p&gt;ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಅಸಾದ್ ಹಾಗೂ ಆತನ ಸಂಗಡಿಗರ ಪತ್ತೆ ಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಇತ್ತ ಸೂರ್ಯ ಪ್ರತಾಪ್ ಚವ್ಹಾಣ್ ಕುಟುಂಬಸ್ಥರು, ಸ್ಥಳೀಯರು ಪ್ರತಿಭಟನೆ ತೀವ್ರಗೊಳಿಸಿದ್ದರು. ತನ್ನ ಪಾಡಿಗೆ ಇದ್ದ ಸೂರ್ಯ ಪ್ರತಾಪ್ ಚವ್ಹಾಣ್&zwnj;ಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಯಾರ ತಂಟೆ ಹೋಗಿಲ್ಲ, ಯಾರಿಗೂ ಅನ್ಯಾಯ ಮಾಡಿಲ್ಲ. ಆದರೂ ಧರ್ಮ, ದ್ವೇಷದ ಹೆಸರಲ್ಲಿ ಕೊಲೆ ಮಾಡಿದ್ದಾರೆ. ತನ್ನ ಮಗನಿಗೆ ಆದ ನೋವು ಆರೋಪಿಗಳಿಗೂ ಆಗಬೇಕು. ಅವರ ಮನೆ ಮೇಲೆ ಬುಲ್ಡೋಜರ್ ಸವಾರಿ ಮಾಡಬೇಕು ಎಂದು ಸೂರ್ಯ ಪ್ರತಾಪ್ ತಾಯಿ ಕಣ್ಣೀರಿಟ್ಟು ಹೇಳಿದ್ದರು.&lt;/p&gt;&lt;p&gt;ಖೋಡಾ ಹಾಗೂ ಇಂದಿರಾಪುರ ಠಾಣಾ ಪೊಲೀಸರು ಅಸಾದ್ ಹಾಗೂ ಇತರ ಆರೋಪಿಗಳ ಪತ್ತೆ ಹಚ್ಚಲು ತನಿಖೆ ತೀವ್ರಗೊಳಿಸಿದ್ದರು. ಇದೇ ವೇಳೆ ಅಸಾದ್ ತನ್ನ ಸಹಚರರ ಭೇಟಿಯಾಗಿ ಹಣ ಪಡೆದು ಉತ್ತರ ಪ್ರದೇಶ ತೊರೆಯಲು ನಿರ್ಧರಿಸಿದ್ದ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ನಾಕಾಬಂದಿ ಹಾಕಿ ಪೊಲೀಸರು ಎಲ್ಲಾ ವಾಹನಗಳ ಪರಿಶೀಲನೆ ಆರಂಭಿಸಿದ್ದರು. ನಿನ್ನೆ ಸಂಜೆಯಿಂದಲೇ ತಪಾಸಣೆ ಆರಂಭಗೊಂಡಿತ್ತು.&lt;/p&gt;&lt;h2&gt;ಪೊಲೀಸರಿಂದ ಎನ್&zwnj;ಕೌಂಟರ್&lt;/h2&gt;&lt;p&gt;ತಡ ರಾತ್ರಿ ಇದೇ ರಸ್ತೆ ಮೂಲಕ ಬೈಕ್&zwnj;ನಲ್ಲಿ ಆಗಮಿಸಿದ ಅಸಾದ್ ಹಾಗೂ ಆತನ ಕೆಲ ಸಹಚರರಿಗೆ ಪೊಲೀಸರು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ. ಇತ್ತ ಅಸಾದ್ ಹಾಗೂ ಆತನ ಸಂಗಡಿಗರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ. ಇತ್ತ ಪ್ರತಿ ದಾಳಿಯಲ್ಲಿ ಅಸಾದ್ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಪೊಲೀಸರು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಅಸಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.&lt;/p&gt;&lt;h2&gt;ಎಲ್ಲಾ ಆರೋಪಿಗಳ ಮೇಲೆ ಕ್ರಮಕ್ಕೆ ಸೂರ್ಯ ತಾಯಿ ಆಗ್ರಹ&lt;/h2&gt;&lt;p&gt;ನನ್ನ ಮಗನ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ ಅಸಾದ್ ಎನ್&zwnj;ಕೌಂಟರ್ ಫೋಟೋ ನನಗೆ ತೋರಿಸಿ. ಅಸಾದ್ ಮಾತ್ರವಲ್ಲ, ಇತರ ಆರೋಪಿಗಳಿಗೂ ಇದೇ ಗತಿಯಾಗಬೇಕು. ಅವರ ಮನೆ ಮೇಲೆ ಬುಲ್ಡೋಜರ್ ನುಗ್ಗಬೇಕು ಎಂದು ಮೃತ ಸೂರ್ಯ ತಾಯಿ ಆಗ್ರಹಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/up-surya-pratap-murder-case-takes-dramatic-turn-as-accused-asad-dies-in-encounter/articleshow-78n3iau"/>
        </item>
        <item>
            <title><![CDATA[ಭಾರಿ ಗಾಳಿ ಮಳೆ ಮುನ್ಸೂಚನೆಯಿಂದ ಹಲವೆಡೆ ಆರೇಂಜ್ ಅಲರ್ಟ್, ಕೇದಾರನಾಥ ಯಾತ್ರೆ ರದ್ದು]]></title>
            <link>https://kannada.asianetnews.com/gallery/india-news/heavy-rain-forecast-triggers-orange-alert-multiple-areas-kedarnath-yatra-called-off-nwv1vvi</link>
            <guid isPermaLink="true">https://kannada.asianetnews.com/gallery/india-news/heavy-rain-forecast-triggers-orange-alert-multiple-areas-kedarnath-yatra-called-off-nwv1vvi</guid>
            <pubDate>Sun, 31 May 2026 17:00:26 +0530</pubDate>
            <description><![CDATA[&lt;p&gt;ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಭಾರಿ ಗಾಳಿ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಇದೀಗ ಹವಾಮಾನ ಇಲಾಖೆ ಮಹತ್ವದ ಸೂಚನೆ ನೀಡಿದೆ. ಕೆಲೆವೆಡೆ ಆರೇಂಜ್ ಅಲರ್ಟ್ ನೀಡಲಾಗಿದೆ. ಇತ್ತ ಕೇದಾರನಾಥ ಯಾತ್ರೆ ತಾತ್ಕಾಲಿಕ ರದ್ದು ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksywhp0phb7pfm9nnzc1dwjs,imgname-kedarnath-yatra-temporarily-suspended-1780226775062.png" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಭಾರಿ ಗಾಳಿ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಇದೀಗ ಹವಾಮಾನ ಇಲಾಖೆ ಮಹತ್ವದ ಸೂಚನೆ ನೀಡಿದೆ. ಕೆಲೆವೆಡೆ ಆರೇಂಜ್ ಅಲರ್ಟ್ ನೀಡಲಾಗಿದೆ. ಇತ್ತ ಕೇದಾರನಾಥ ಯಾತ್ರೆ ತಾತ್ಕಾಲಿಕ ರದ್ದು ಮಾಡಲಾಗಿದೆ.&lt;/p&gt;&lt;img&gt;&lt;p&gt;ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನು ಕೆಲ ರಾಜ್ಯಗಳಲ್ಲಿ ಭಾರಿ ಗಾಳಿ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟ ದೆಹಲಿಯಲ್ಲಿ ನಿನ್ನೆ ಮಳೆಯಾಗಿದೆ. ಕೇರಳಕ್ಕೆ ಮುಂಗಾರು ಪ್ರವೇಶ ನಿಗದಿಗಿಂತ ವಿಳಂಬವಾಗಿದೆ. ಇತ್ತ ಎಲ್ ನಿನೋ ಭೀತಿ ಸೇರಿದಂತೆ ಹಲವು ಅಡ್ಡಿ ಆತಂಕದ ನಡುವೆ ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಎಚ್ಚರಿಕೆ ನೀಡಿದೆ.&lt;/p&gt;&lt;img&gt;&lt;p&gt;ಉತ್ತರಖಂಡದಲ್ಲಿ ಭಾರಿ ಮಳೆ ಮುನ್ಸೂಚನೆ ಇದೆ. ಈಗಾಗಲೇ ಉತ್ತರ ಖಂಡದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಿಮಾಲಯನ ತಪ್ಪಲು, ಹಿಮಾಲಯನ ಪರ್ವತ ಶಿಖರಗಳ ವಲಯದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಉತ್ತರಖಂಡದಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಮುನ್ನಚ್ಚೆರಿಕಾ ಕ್ರಮವಾಗಿ ಸರ್ಕಾರ ಕೇದಾರನಾಥ ಯಾತ್ರೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.&lt;/p&gt;&lt;img&gt;&lt;p&gt;ಉತ್ತರಖಂಡದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಮೆಘಸ್ಫೋಟ ಸೇರಿದಂತೆ ಪ್ರವಾಹ ಪರಿಸ್ಥಿತಿಯಿಂದ ಸಾಕಷ್ಟು ಸಾವು ನೋವು ಸಂಭವಿಸಿದೆ. ಹೀಗಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡುತ್ತಿದ್ದಂತೆ ಇದೀಗ ಸರ್ಕಾರ ಕೇದಾರನಾಥ ಭಕ್ತರಿಗೆ ಸೂಚನೆ ನೀಡಿದೆ. ದರ್ಶನಕ್ಕೆ ಬೆಟ್ಟದ ಮೂಲಕ ತೆರಳುತ್ತಿರುವ ಭಕ್ತರು ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ರಕ್ಷಣೆ ಪಡೆಯುವಂತೆ ಸೂಚನೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಮೇ.30ರ ಸಂಜೆ ದೆಹಲಿಯಲ್ಲಿ ಭಾರಿ ಮಳೆ ಸುರಿದಿದೆ. ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ ಜನತೆ ನಿರಾಳರಾಗಿದ್ದಾರೆ. ಇತ್ತ ಇನ್ನು ಕೆಲ ದಿನಗಳ ಕಾಲ ದೆಹಲಿಯಲ್ಲಿ ಮಳೆ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂಚಿಸಿದೆ. ನಿನ್ನೆ ಸುರಿದು ಮಳೆ ಹಾಗೂ ಭಾರಿ ಗಾಳಿಗೆ ದೆಹಲಿಯಲ್ಲಿ ಕಟ್ಟಡ ಕುಸಿದು ನಾಲ್ವರು ಮೃತಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಬೆಂಗೆಳೂರಿನಲ್ಲಿ ಕಳೆದ ಎರಡು ದಿನ ಸತತ ಮಳೆಯಾಗಿದೆ. ಭಾರಿ ಮಳೆಯಿಂದ ಬೆಂಗಳೂರಿನ ಹಲವು ರಸ್ತೆಗಳು ನೀರಿನಿಂದ ಜಲಾವೃತಗೊಂಡಿತ್ತು. ಬೆಂಗಳೂರಿನಲ್ಲಿ ಕೆಲ ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.&lt;/p&gt;&lt;img&gt;&lt;p&gt;ಈ ಬಾರಿ ಮುಂಗಾರು ಕ್ಷೀಣಗೊಂಡಿದೆ. ಜೊತೆಗೆ ಎಲ್ ನಿನೋ ರೂಪುಗೊಂಡಿರುವ ಕಾರಣ ತೀವ್ರ ಮಳೆ ಕೊರತೆ ಕಾಣಲಿದೆ. ದಕ್ಷಿಣದಲ್ಲಿ ಭಾರಿ ಮಳೆ ಹಾಗೂ ಉತ್ತರದತ್ತ ಬರಗಾಲ ಪರಿಸ್ಥಿತಿಗೆ ಕಾರಣಾಗುವ ಸಾಧ್ಯತೆ ಹೆಚ್ಚಿದೆ. ಮುಂಗಾರು ಕ್ಷೀಣಗೊಂಡಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/heavy-rain-forecast-triggers-orange-alert-multiple-areas-kedarnath-yatra-called-off-nwv1vvi"/>
        </item>
        <item>
            <title><![CDATA[ಸ್ಯಾಲರಿ ₹90,000 ಇದ್ರೂ ಖರ್ಚು ಮಾತ್ರ ₹25,000! ಈ ಸರ್ಕಾರಿ ಅಧಿಕಾರಿ ಮಾಡೋ ಸೇವಿಂಗ್ಸ್ ಪ್ಲಾನ್ ಇಲ್ಲಿದೆ]]></title>
            <link>https://kannada.asianetnews.com/life/viral-video-government-officer-shares-tips-to-manage-monthly-expenses-within-25krs/articleshow-eevgq4e</link>
            <guid isPermaLink="true">https://kannada.asianetnews.com/life/viral-video-government-officer-shares-tips-to-manage-monthly-expenses-within-25krs/articleshow-eevgq4e</guid>
            <pubDate>Sun, 31 May 2026 16:43:49 +0530</pubDate>
            <description><![CDATA[&lt;p&gt;&lt;strong&gt;Financial management tips: &lt;/strong&gt;ಇಂದಿನ ದುಬಾರಿ ಕಾಲದಲ್ಲಿ ಲಕ್ಷ ರೂಪಾಯಿ ಸಂಬಳವಿದ್ದರೂ ಸಾಲದು ಎಂಬುವವರ ಮಧ್ಯೆ, ದೆಹಲಿಯ ಈ ಯುವ ಸರ್ಕಾರಿ ಅಧಿಕಾರಿ ಮಿತವಾಗಿ ಖರ್ಚು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಿಂಗಳಿಗೆ 90 ಸಾವಿರ ರೂ.ಸಂಪಾದಿಸಿದರೂ, ಕೇವಲ 25 ಸಾವಿರ ರೂಪಾಯಿಯಲ್ಲಿ ಹೇಗೆ ಅಚ್ಚುಕಟ್ಟಾಗಿ ಸಂಸಾರ ನಿಭಾಯಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyvmyby38gqtp6tyjj8ptjx,imgname-thumbnail---2026-05-31t163619.916-1780225833342.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಂ&lt;/strong&gt;ದಿನ ಅತ್ಯಂತ ದುಬಾರಿ ಕಾಲದಲ್ಲಿ, ಅದರಲ್ಲೂ ಬೆಂಗಳೂರು, ಮುಂಬೈ, ದೆಹಲಿಯಂತಹ ಮಹಾನಗರದಲ್ಲಿ ತಿಂಗಳಿಗೆ ಕೇವಲ 25,000 ರೂಪಾಯಿಗಳಲ್ಲಿ ಬದುಕುವುದು ಅಸಾಧ್ಯವೆಂದು ಅನೇಕರು ಭಾವಿಸುತ್ತಾರೆ. ಆದರೆ 28 ವರ್ಷದ ಸಹಾಯಕ ಸೆಕ್ಷನ್ ಆಫೀಸರ್ (ASO) ಕೃತಿಕಾ ಎಂಬುವವರು ಇದು ಸಾಧ್ಯ ಎಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ. 90,000 ರೂಪಾಯಿಗಳ ಬೃಹತ್ ಮಾಸಿಕ ವೇತನ ಪಡೆಯುತ್ತಿದ್ದರೂ, ಅವರು ಕೇವಲ 25,000 ರೂಪಾಯಿಗಳಲ್ಲಿ ತಮ್ಮ ಬಾಡಿಗೆ, ದಿನಸಿ ಮತ್ತು ಇತರ ಖರ್ಚುಗಳನ್ನು ಹೇಗೆ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಎಂಬುದನ್ನು ಇನ್&zwnj;ಸ್ಟಾಗ್ರಾಮ್ ವಿಡಿಯೋ ಮೂಲಕ ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ಖರ್ಚುಗಳ ವಿವರವಾದ ಬಜೆಟ್ ಪಟ್ಟಿ ಇಲ್ಲಿದೆ&lt;/strong&gt;&lt;/h2&gt;&lt;p&gt;ಇನ್&zwnj;ಸ್ಟಾಗ್ರಾಮ್&zwnj;ನ @tweetikaa ಹ್ಯಾಂಡಲ್&zwnj;ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೃತಿಕಾ ತಮ್ಮ ಹಣಕಾಸು ನಿರ್ವಹಣೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅವರು 2022ರಲ್ಲಿ ಎಸ್&zwnj;ಎಸ್&zwnj;ಸಿ ಸಿಜಿಎಲ್ (SSC CGL) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರತಿಷ್ಠಿತ ಸರ್ಕಾರಿ ಉದ್ಯೋಗ ಪಡೆದವರು. ಪ್ರಸ್ತುತ ಅವರು ದೆಹಲಿಯಲ್ಲಿ ತನ್ನ ಸ್ನೇಹಿತೆಯೊಂದಿಗೆ (Flatmate) 2BHK ಫ್ಲಾಟ್&zwnj;ನಲ್ಲಿ ವಾಸಿಸುತ್ತಿದ್ದಾರೆ. ಹೀಗೆ ಮನೆಯನ್ನು ಹಂಚಿಕೊಳ್ಳುವುದರಿಂದ ಬಾಡಿಗೆ ಮತ್ತು ಮನೆ ನಿರ್ವಹಣೆಯ ವೆಚ್ಚಗಳು ಗಣನೀಯವಾಗಿ ಕಡಿಮೆಯಾಗುತ್ತವೆ ಎಂಬುದು ಅವರ ಮೊದಲ ಯಶಸ್ವಿ ಸೂತ್ರವಾಗಿದೆ.&lt;/p&gt;&lt;p&gt;ಬಾಡಿಗೆ ಮತ್ತು ಅಡುಗೆದೆಹಲಿಯಂತಹ ನಗರದಲ್ಲಿ ಒಬ್ಬರೇ ಫ್ಲಾಟ್ ಪಡೆಯುವುದು ದುಬಾರಿ. ಹೀಗಾಗಿ ಇವರು ಫ್ಲಾಟ್ ಹಂಚಿಕೊಂಡಿದ್ದು, ಇವರ ಪಾಲು ಸುಮಾರು 11,500 ರೂಪಾಯಿಗಳು. ಅಡುಗೆ ಮಾಡಲು ಅವರು ಒಬ್ಬ ಕೆಲಸದವರನ್ನು ನೇಮಿಸಿಕೊಂಡಿದ್ದು, ಅವರ ವೇತನದಲ್ಲಿ ಕೃತಿಕಾ ನೀಡುವ ಪಾಲು ಕೇವಲ 2,500 ರೂಪಾಯಿ. ಹೊರಗಿನ ಹೋಟೆಲ್ ಊಟಕ್ಕಿಂತ ಮನೆ ಊಟವೇ ಆರೋಗ್ಯಕರ ಮತ್ತು ಮಿತವ್ಯಯಕಾರಿ ಎಂಬುದು ಇವರ ವಾದ.&lt;/p&gt;&lt;p&gt;ದಿನಸಿ ಮತ್ತು ಸಾರಿಗೆದಿನಸಿ ವಸ್ತುಗಳಿಗಾಗಿ ಅವರು ಜೆಪ್ಟೋ ಅಥವಾ ಬ್ಲಿಂಕಿಟ್&zwnj;ನಂತಹ ಆಪ್&zwnj;ಗಳ ಮೂಲಕ ತಿಂಗಳಿಗೆ 4-5 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಇನ್ನು ಸಾರಿಗೆಯ ವಿಷಯಕ್ಕೆ ಬಂದರೆ, ಇಂದಿನ ಕ್ಯಾಬ್ ಅಥವಾ ಆಟೋಗಳ ದುಬಾರಿ ದರದ ಬದಲಿಗೆ ಅವರು ಸ್ವಂತ ಸ್ಕೂಟಿ ಬಳಸುತ್ತಾರೆ. ಇದರಿಂದ ಅವರ ಮಾಸಿಕ ಪೆಟ್ರೋಲ್ ವೆಚ್ಚ ಕೇವಲ 1,500 ರೂಪಾಯಿ ಮಾತ್ರ.&lt;/p&gt;&lt;p&gt;ಮನೋರಂಜನೆ ಮತ್ತು ಶಾಪಿಂಗ್ಒಟಿಟಿ (OTT) ಚಂದಾದಾರಿಕೆಗಾಗಿ ಅವರು ಹಣ ವ್ಯಯಿಸುವುದಿಲ್ಲ, ಬದಲಿಗೆ ಕುಟುಂಬದವರೊಂದಿಗೆ ಅಕೌಂಟ್ ಹಂಚಿಕೊಳ್ಳುತ್ತಾರೆ. ಹೊರಗಿನ ಆಹಾರಕ್ಕಾಗಿ ಗರಿಷ್ಠ 2,000 ರೂಪಾಯಿ ಮತ್ತು ಬ್ಯೂಟಿ ಅಥವಾ ಆನ್&zwnj;ಲೈನ್ ಶಾಪಿಂಗ್&zwnj;ಗಾಗಿ 3-4 ಸಾವಿರ ರೂಪಾಯಿ ವ್ಯಯಿಸುತ್ತಾರೆ.&lt;/p&gt;&lt;p&gt;&quot;ನಾನು ಮನೆಯ ಅಡುಗೆಯನ್ನೇ ಹೆಚ್ಚು ಇಷ್ಟಪಡುವ ಶಿಸ್ತಿನ ಹುಡುಗಿ, ಹಾಗಾಗಿ ಅನಗತ್ಯ ಖರ್ಚುಗಳು ಕಡಿಮೆ&quot; ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಕೇವಲ ಹಣ ಉಳಿಸುವುದಷ್ಟೇ ಅಲ್ಲದೆ, ಉಳಿದ ಹಣವನ್ನು ಉಳಿತಾಯ ಅಥವಾ ಹೂಡಿಕೆಗೆ ಬಳಸುವುದು ಎಷ್ಟು ಮುಖ್ಯ ಎಂಬುದನ್ನು ಈ ವಿಡಿಯೋ ಸಾರುತ್ತದೆ.&lt;/p&gt;&lt;h3&gt;&lt;strong&gt;ನೆಟ್ಟಿಗರ ಪ್ರತಿಕ್ರಿಯೆ&lt;/strong&gt;&lt;/h3&gt;&lt;p&gt;ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕೆಲವರು ಅವರ ಹಣಕಾಸು ಶಿಸ್ತನ್ನು ನೋಡಿ &quot;ಬ್ಯೂಟಿ ವಿತ್ ಬ್ರೈನ್&quot; ಎಂದು ಶ್ಲಾಘಿಸಿದರೆ, ಇನ್ನು ಕೆಲವರು &quot;ಇಷ್ಟು ಕಡಿಮೆ ಖರ್ಚು ಮಾಡುವ ನೀವು ಎಷ್ಟು ಕಂಜೂಸ್ ಇರಬಹುದು?&quot; ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವು ಬಳಕೆದಾರರು &quot;ನಮಗೆ ಅಷ್ಟು ಸಂಬಳವೇ ಸಿಗುವುದಿಲ್ಲ, ನಿಮ್ಮ ಬಜೆಟ್ ನಮಗೆ ದೊಡ್ಡ ಮೊತ್ತ&quot; ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ, ಅಧಿಕ ವೇತನವಿದ್ದರೂ ಆಡಂಬರವಿಲ್ಲದೆ ಮಿತವ್ಯಯದ ಜೀವನ ನಡೆಸುವುದು ಹೇಗೆ ಎಂಬ ಕೃತಿಕಾ ಅವರ ಐಡಿಯಾ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Kritika (@tweetikaa)&lt;/p&gt;]]></content:encoded>
            <category>india-news</category>
            <dc:creator>Ashwini HR</dc:creator>
            <atom:link href="https://kannada.asianetnews.com/life/viral-video-government-officer-shares-tips-to-manage-monthly-expenses-within-25krs/articleshow-eevgq4e"/>
        </item>
        <item>
            <title><![CDATA[ಜಿರಳೆ ಪಕ್ಷದದಿಂದ ‘ಲೈಫ್‌ ಆಫ್‌ ಕಾಕ್ರೋಚ್‌’ ಅಭಿಯಾನ ಆರಂಭ!]]></title>
            <link>https://kannada.asianetnews.com/india-news/life-of-a-cockroach-campaign-launched-by-cjp-urges-youth-to-expose-civic-and-governance-issues-kvn/articleshow-87bfa17</link>
            <guid isPermaLink="true">https://kannada.asianetnews.com/india-news/life-of-a-cockroach-campaign-launched-by-cjp-urges-youth-to-expose-civic-and-governance-issues-kvn/articleshow-87bfa17</guid>
            <pubDate>Sun, 31 May 2026 08:14:53 +0530</pubDate>
            <description><![CDATA[ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಜಿರಳೆ ಪಕ್ಷವು (ಸಿಜೆಪಿ) 'ಜಿರಳೆಯ ಜೀವನ' ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಮೂಲಕ, ಸರ್ಕಾರಿ ವೈಫಲ್ಯಗಳು, ಭ್ರಷ್ಟಾಚಾರ, ಮತ್ತು ಮೂಲಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳನ್ನು ಫೋಟೋ/ವಿಡಿಯೋ ಮೂಲಕ ಹಂಚಿಕೊಳ್ಳಲು ಯುವಕರಿಗೆ ಕರೆ ನೀಡಲಾಗಿದೆ. ಈ ಮೂಲಕ ನಾಯಕರ ಮೇಲೆ ಒತ್ತಡ ಹೇರಿ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kscbd43pwrtpxxpf56pv9bz4,imgname-kiren-rijiju-cockroach-janta-party-pakistani-youth-jorg-soros-india-debate-social-media-1779604820086.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಸಿಜೆಐ ಅವರು ನಿರುದ್ಯೋಗಿ ಯುವಕರ ಬಗ್ಗೆ ನೀಡಿದ ಹೇಳಿಕೆಯಿಂದ ಹುಟ್ಟಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿರುವ ಜಿರಳೆ ಪಕ್ಷ(ಸಿಜೆಪಿ) ತನ್ನ ಅಭಿಯಾನವನ್ನು ಅಧಿಕೃತವಾಗಿ ಆರಂಭ ಮಾಡಿದ್ದು, ಅದಕ್ಕೆ &lsquo;ಜಿರಳೆಯ ಜೀವನ&rsquo; (ಲೈಫ್&zwnj; ಆಫ್&zwnj; ಕಾಕ್ರೋಚ್&zwnj;) ಎಂದು ಹೆಸರಿಟ್ಟಿದೆ.&lt;/p&gt;&lt;h2&gt;&lt;strong&gt;ಜಿರಳೆ ಪಕ್ಷದಿಂದಹೊಸ ಅಭಿಯಾನ&lt;/strong&gt;&lt;/h2&gt;&lt;p&gt;ಈ ಬಗ್ಗೆ ಪಕ್ಷದ ಎಕ್ಸ್&zwnj; ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ, &lsquo;ಸರ್ಕಾರದ ದುಃಸ್ಥಿತಿಯಿಂದ ಬೇಸತ್ತಿದ್ದರೂ ಅದರ ವಿರುದ್ಧ ಧ್ವನಿ ಎತ್ತಲಾಗದ ಅಥವಾ ಆ ಕೂಗನ್ನು ಸರಿಯಾದವರಿಗೆ ತಲುಪಿಸಲಾಗದ ಈ ಅಭಿಯಾನವನ್ನು ಆರಂಭ ಮಾಡಲಾಗುತ್ತಿದೆ. ಇದು, ಯುವಕರ ಸ್ಥಿತಿಯನ್ನು ನಾಯಕರಿಗೆ ತೋರಿಸುತ್ತದೆ ಹಾಗೂ ಕಾರ್ಯಪ್ರವೃತ್ತರಾಗುವಂತೆ ಅವರ ಮೇಲೆ ಒತ್ತಡ ಹೇರುತ್ತದೆ&rsquo; ಎಂದು ಜಿರಳೆಯೊಂದು ಹೇಳುತ್ತಿರುವಂತೆ ತೋರಿಸಲಾಗಿದೆ.&lt;/p&gt;&lt;h3&gt;&lt;strong&gt;#LifeOfACockroach ಹ್ಯಾಷ್&zwnj;ಟ್ಯಾಗ್&zwnj; ಬಳಸಿ ಪೋಸ್ಟ್&zwnj;&lt;/strong&gt;&lt;/h3&gt;&lt;p&gt;ಅಭಿಯಾನದ ಭಾಗವಾಗಿ, ಸರ್ಕಾರಿ ಶಾಲೆ, ಆಸ್ಪತ್ರೆಗಳ ದುಸ್ಥಿತಿ, ಕಚೇರಿಗಳಲ್ಲಾಗುತ್ತಿರುವ ಭ್ರಷ್ಟಾಚಾರ, ರಸ್ತೆಯಲ್ಲಿರುವ ಕಸದ ರಾಶಿ, ಗುಂಡಿಬಿದ್ದ ರಸ್ತೆ, ಕುಡಿವ ನೀರು, ಹಿಂದುಳಿದ ವರ್ಗದವರು ಅಥವಾ ಮಹಿಳೆಯರ ಮೇಲೆ ವ್ಯವಸ್ಥೆಯ ದಬ್ಬಾಳಿಕೆ ಇತ್ಯಾದಿಗಳ ಫೋಟೋ/ವಿಡಿಯೋ ಮಾಡಿ, ಸಿಜೆಪಿಯನ್ನು ಟ್ಯಾಗ್&zwnj; ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ #LifeOfACockroach ಹ್ಯಾಷ್&zwnj;ಟ್ಯಾಗ್&zwnj; ಬಳಸಿ ಪೋಸ್ಟ್&zwnj; ಮಾಡಲು ಯುವಕರಲ್ಲಿ ವಿನಂತಿಸಲಾಗಿದೆ. ಜತೆಗೆ ಇಂತಹ ಸಮಸ್ಯೆಗಳನ್ನು ಮುನ್ನೆಲೆಗೆ ತಂದು, ಆರ್&zwnj;ಟಿಐ ಅರ್ಜಿ ಸಲ್ಲಿಸಿ, ಮಾಧ್ಯಮಗಳ ಗಮನಕ್ಕೆ ತಂದು ನಾಯಕರ ಮೇಲೆ ಒತ್ತಡ ಹೇರಲಾಗುವುದು ಎನ್ನಲಾಗಿದೆ.&lt;/p&gt;&lt;p&gt;ಸಾಮಾಜಿಕ ಮಾಧ್ಯಮ ಖಾತೆಗಳು ಬ್ಯಾನ್&zwnj; ಆದರೂ ಹೊಸ ಖಾತೆಗಳ ಮೂಲಕ ಮತ್ತೆ ಪುಟಿದೆದ್ದಿರುವ ಪಕ್ಷವು ದಿನೇದಿನೇ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/life-of-a-cockroach-campaign-launched-by-cjp-urges-youth-to-expose-civic-and-governance-issues-kvn/articleshow-87bfa17"/>
        </item>
    </channel>
</rss>
