<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 22 Jun 2026 19:05:09 +0530</lastBuildDate>
        <atom:link href="https://kannada.asianetnews.com/rss/india-news" rel="self" type="application/rss+xml"/>
        <item>
            <title><![CDATA[ಪರಿಶುದ್ಧ ಗೋಧಿ ಹಿಟ್ಟು, 100% Pure Juice ಎಂದು ಮಾರಾಟಮಾಡ್ತಿದ್ದ 2 ಕಂಪೆನಿಗಳಿಗೆ ಭಾರಿ ದಂಡ]]></title>
            <link>https://kannada.asianetnews.com/india-news/ccpa-fines-storia-foods-english-oven-rs-1-lakh-each-for-misleading-100-percent-claims-suc/articleshow-7qlaoxo</link>
            <guid isPermaLink="true">https://kannada.asianetnews.com/india-news/ccpa-fines-storia-foods-english-oven-rs-1-lakh-each-for-misleading-100-percent-claims-suc/articleshow-7qlaoxo</guid>
            <pubDate>Mon, 22 Jun 2026 19:05:02 +0530</pubDate>
            <description><![CDATA[ಗ್ರಾಹಕರನ್ನು ದಾರಿ ತಪ್ಪಿಸುವ '100% ಪ್ಯೂರ್' ಜಾಹೀರಾತುಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಠಿಣ ಕ್ರಮ ಕೈಗೊಂಡಿದೆ. Storia Foods ಮತ್ತು Mrs. Bectors Food ಕಂಪನಿಗಳಿಗೆ ಕಲಬೆರಕೆ ಉತ್ಪನ್ನಗಳ ಮಾರಾಟಕ್ಕಾಗಿ ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ತೆಂಗಿನ ನೀರು, ಜ್ಯೂಸ್, ಗೋಧಿ ಹಿಟ್ಟಿನಂತಹ ಉತ್ಪನ್ನಗಳಲ್ಲಿ ಕಲಬೆರಕೆ ಪತ್ತೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqrmbxrfxk8e65me5ebcpbx,imgname-ccpa-1782135271352.jpg" type="image/jpeg" height="390" width="690"/>
            <content:encoded><![CDATA[&lt;p&gt;ನಮ್ಮ ಪ್ರಾಡಕ್ಟ್ಸ್​ಗಳೆಲ್ಲವೂ ಪರಿಶುದ್ಧ, 100 ಪರ್ಸೆಂಟ್​ ಪ್ಯೂರ್​ ಎಂದೆಲ್ಲಾ ಎಲ್ಲಾ ಕಂಪೆನಿಗಳು ಹೇಳಿಕೊಳ್ಳುವುದು ಮಾಮೂಲೆ. ಆದರೆ 90ಕ್ಕೂ ಅಧಿಕ ಉತ್ಪನ್ನಗಳಲ್ಲಿ ಕಲಬೆರಕೆಯೇ ಆಗುತ್ತಿದೆ. ಇದೇ ಕಾರಣಕ್ಕೆ ಇಂದು ಮಾರಣಾಂತಿಕ ರೋಗಗಳೂ ಬರುತ್ತಿವೆ. ಆದರೆ ಕೆಲವೊಂದು ಉತ್ಪನ್ನಗಳು ಭಾರಿ ಡೇಂಜರ್​ ಆದ ಬಳಿಕ ಅವು ಗಮನಕ್ಕೆ ಬರುತ್ತಿವೆ. ಇದಾಗಲೇ ಕೆಲವೊಂದು ಪದಾರ್ಥಗಳು, ಕೃತಕ ಬಣ್ಣಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರ ಹೊರತಾಗಿಯೂ ಉತ್ಪನ್ನಗಳ ಕಲಬೆರಕೆ ನಿಂತಿಲ್ಲ. ಇವುಗಳನ್ನು ಪ್ರಮೋಟ್​ ಮಾಡಲು ಕೋಟಿ ಕೋಟಿ ಹಣ ಕೊಟ್ಟು ಸಿನಿಮಾ ತಾರೆಯರನ್ನು ಜಾಹೀರಾತಿಗೆ ಬಳಸಿಕೊಳ್ಳುವ ಕಾರಣದಿಂದ ಅವರ ಅಂಧ ಅಭಿಮಾನಿಗಳು ಅವರನ್ನೇ ಫಾಲೋ ಮಾಡುವುದು ನಡೆದೇ ಇದೆ.&lt;/p&gt;&lt;h2&gt;&lt;strong&gt;ಯಾವೆಲ್ಲಾ ಕಂಪೆನಿಗಳಿಗೆ ದಂಡ?&lt;/strong&gt;&lt;/h2&gt;&lt;p&gt;ಇದೀಗ ಕೇಂದ್ರ ಸರ್ಕಾರವು, ಉತ್ಪನ್ನಗಳ ಪ್ಯಾಕೇಜಿಂಗ್&zwnj; ವೆಬ್&zwnj;ಸೈಟ್&zwnj; ಮತ್ತು ಡಿಜಿಟಲ್&zwnj; ವೇದಿಕೆಗಳಲ್ಲಿ ʼ100 ಪರ್ಸೆಂಟ್&zwnj;ʼ ಎಂದು ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿ ವಂಚಿಸುವ ಕಂಪನಿಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹1 ಲಕ್ಷ ದಂಡ ವಿಧಿಸುವಂಥ ಕಠಿಣ ಕ್ರಮ ಕೈಗೊಳ್ಳುತ್ತಿದೆ. Storia Foods &amp;amp; Beverages ಮತ್ತು Mrs. Bectors Food Specialties Ltd. ಮೇಲೆ CCPA ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ಅಲ್ಲದೇ, ಇಂಥ ಆಕ್ಷೇಪಾರ್ಹ ಜಾಹೀರಾತು, ವಹಿವಾಟು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಲಾಗಿದೆ. ಈ ಕುರಿತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಎಲ್ಲವೂ ಕಲಬೆರಕೆ&lt;/strong&gt;&lt;/h3&gt;&lt;p&gt;ಸ್ಟೋರಿಯಾ ಫುಡ್ಸ್ ಅಂಡ್ ಬೆವರೇಜಸ್ ಪ್ರೈ.ಲಿಮಿಟೆಡ್ ವಿರುದ್ಧ CCPA ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದೆ. ಈ ಕಂಪೆನಿ ಪರಿಶುದ್ಧದತೆ ಹೆಸರಿನಲ್ಲಿ ತೆಂಗಿನ ನೀರು, ದಾಳಿಂಬೆ ಜ್ಯೂಸ್ʼ, ಮಿಕ್ಸ್​​ಡ್ ಹಣ್ಣು ಜ್ಯೂಸ್ʼ, ಮಾವಿನ ಜ್ಯೂಸ್&zwnj;, ಪೇರಲ ಜ್ಯೂಸ್ ಎಂದೆಲ್ಲಾ ಮಾರಾಟ ಮಾಡುತ್ತಿದೆ. ಇದನ್ನು ನಂಬಿ ಹಲವರು ಇದನ್ನು ಖರೀದಿ ಮಾಡಿದ್ದಾರೆ. ಸ್ಟೋರಿಯಾದ ಅಧಿಕೃತ ವೆಬ್&zwnj;ಸೈಟ್ (shop.storiafoods.com), ಉತ್ಪನ್ನ ಪ್ಯಾಕೇಜಿಂಗ್&zwnj;ನಲ್ಲಿ ಮತ್ತು Amazon, Flipkart, BigBasket, Blinkit, JioMart ಮತ್ತು Zepto ಸೇರಿದಂತೆ ಇ-ಕಾಮರ್ಸ್ ವೇದಿಕೆಗಳಲ್ಲಿ ಸಹ ಹೀಗೆ ಜಾಹೀರಾತು ಇರುತ್ತಿತ್ತು.&lt;/p&gt;&lt;p&gt;&amp;nbsp;&lt;/p&gt;&lt;p&gt;ತೆಂಗಿನ ನೀರನ್ನು ಬೇರೆ ನೀರಿನೊಂದಿಗೆ ಬೆರೆಸಿ ತಯಾರಿಸಿರುತ್ತಿತ್ತು. ಆದರೆ, ಈ ಉತ್ಪನ್ನ ವರ್ಗ II ಸಂರಕ್ಷಕ INS 202 ಅನ್ನು ಸಹ ಒಳಗೊಂಡಿರುವುದು ತಿಳಿದುಬಂದಿದೆ. ಅದೇ ರೀತಿ ನೈಸರ್ಗಿಕ ಜ್ಯೂಸ್​ ಎಂದು ಹೇಳಿದ ಉತ್ಪನ್ನಗಳೆಲ್ಲಾ ಕಲಬೆರಕೆಯಿಂದ ಕೂಡಿರುವುದು ಪ್ರಯೋಗಾಲದಲ್ಲಿ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲದೇ ಗೋಧಿ ಹಿಟ್ಟನ್ನು ಬಳಸುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದನ್ನು ಬಂಡವಾಳ ಮಾಡಿಕೊಂಡಿರುವ ಈ ಕಂಪೆನಿ ಶುದ್ಧ ಗೋಧಿ ಹಿಟ್ಟು ಎಂದು ಹೇಳಿ ಮೋಸ ಮಾಡುತ್ತಿರುವುದು ತಿಳಿದಿದೆ. ಬ್ರೆಡ್​ನಲ್ಲಿಯೂ ಕಲಬೆರಕೆ ಕಂಡುಬಂದಿದೆ. ಆದ್ದರಿಂದ ಜನರು ಜಾಹೀರಾತುಗಳಿಗೆ ಮೋಸ ಹೋಗಿ ಖರೀದಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/ccpa-fines-storia-foods-english-oven-rs-1-lakh-each-for-misleading-100-percent-claims-suc/articleshow-7qlaoxo"/>
        </item>
        <item>
            <title><![CDATA[ಮುಂಗಾರು ಮಾಯವಾಗಿ ಜೂನ್ ನಲ್ಲಿ ದಾಖಲೆಯ ಮಳೆ ಕೊರತೆ, ಇದು 146 ವರ್ಷಗಳಲ್ಲೇ ಅತ್ಯಂತ ಒಣ ತಿಂಗಳು!]]></title>
            <link>https://kannada.asianetnews.com/gallery/india-news/india-monsoon-deficit-2026-june-driest-in-146-years-rainfall-record-gdp-fgi7i82</link>
            <guid isPermaLink="true">https://kannada.asianetnews.com/gallery/india-news/india-monsoon-deficit-2026-june-driest-in-146-years-rainfall-record-gdp-fgi7i82</guid>
            <pubDate>Mon, 22 Jun 2026 18:26:30 +0530</pubDate>
            <description><![CDATA[&lt;p&gt;ಭಾರತದಲ್ಲಿ 146 ವರ್ಷಗಳಲ್ಲೇ ಅತ್ಯಂತ ಒಣ ಜೂನ್ ತಿಂಗಳು ದಾಖಲಾಗಿದ್ದು, ದೇಶಾದ್ಯಂತ ಶೇ. 46ರಷ್ಟು ಮಳೆ ಕೊರತೆ ಉಂಟಾಗಿದೆ. 'ಎಲ್ ನಿನೋ' ಪ್ರಭಾವದಿಂದಾಗಿ ಮುಂಗಾರು ವಿಳಂಬವಾಗಿದ್ದು, ಮಹಾರಾಷ್ಟ್ರದಂತಹ ರಾಜ್ಯಗಳು ತೀವ್ರ ಬರಗಾಲವನ್ನು ಎದುರಿಸುತ್ತಿವೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqnfrbh1vj76x9v8j51cm0n,imgname-monsoon--1--1782131974513.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ 146 ವರ್ಷಗಳಲ್ಲೇ ಅತ್ಯಂತ ಒಣ ಜೂನ್ ತಿಂಗಳು ದಾಖಲಾಗಿದ್ದು, ದೇಶಾದ್ಯಂತ ಶೇ. 46ರಷ್ಟು ಮಳೆ ಕೊರತೆ ಉಂಟಾಗಿದೆ. 'ಎಲ್ ನಿನೋ' ಪ್ರಭಾವದಿಂದಾಗಿ ಮುಂಗಾರು ವಿಳಂಬವಾಗಿದ್ದು, ಮಹಾರಾಷ್ಟ್ರದಂತಹ ರಾಜ್ಯಗಳು ತೀವ್ರ ಬರಗಾಲವನ್ನು ಎದುರಿಸುತ್ತಿವೆ. &amp;nbsp;&lt;/p&gt;&lt;img&gt;&lt;p&gt;ಸುಮಾರು ಎರಡು ವಾರಗಳ ಸುದೀರ್ಘ ಬಿಡುವಿನ ನಂತರ, ಭಾರತದ ನೈಋತ್ಯ ಮುಂಗಾರು ಕೊನೆಗೂ ಚುರುಕಾಗುವ ಲಕ್ಷಣಗಳನ್ನು ಗೋಚರಿಸುತ್ತಿದೆ. ಅರೇಬಿಯನ್ ಸಮುದ್ರದಿಂದ ಬೀಸುತ್ತಿರುವ ತೇವಾಂಶಭರಿತ ಗಾಳಿಯು ಮುಂಬೈ, ಅದರ ಉಪನಗರಗಳು ಹಾಗೂ ಆಗ್ನೇಯ ಗುಜರಾತ್&zwnj;ನ ಕೆಲವು ಭಾಗಗಳಿಗೆ ಪ್ರವೇಶಿಸುತ್ತಿದ್ದು, ಮಳೆಯ ಬಗ್ಗೆ ಧನಾತ್ಮಕ ಭರವಸೆಯನ್ನು ಮೂಡಿಸಿದೆ. ಆದಾಗ್ಯೂ, ಜೂನ್ ತಿಂಗಳ ಆರಂಭದಲ್ಲಿ ಉಂಟಾದ ಹಿನ್ನಡೆಯಿಂದಾಗಿ ಆಗಿರುವ ಹಾನಿ ಅಲ್ಪವೇನಲ್ಲ. ಹವಾಮಾನ ತಜ್ಞರ ಪ್ರಕಾರ, ಈ 2026ರ ಜೂನ್ ತಿಂಗಳು ಕಳೆದ ಒಂದು ಶತಮಾನದಲ್ಲೇ ಅತ್ಯಂತ ಒಣ ಹವಾಮಾನದ ತಿಂಗಳುಗಳಲ್ಲಿ ಒಂದಾಗಿ ದಾಖಲಾಗುವ ಸಾಧ್ಯತೆಯಿದೆ. ಜೂನ್ ತಿಂಗಳಲ್ಲಿ ಶೇ. 46ರಷ್ಟು ಮಳೆ ಕೊರತೆ ಆಗಿದ್ದು ಇದು ಕಳೆದ 146 ವರ್ಷಗಳಲ್ಲಿ ದಾಖಲೆಯಾಗಿದೆ.&lt;/p&gt;&lt;img&gt;&lt;p&gt;ಭಾರತೀಯ ಬರ ನಿಗಾ ಸಂಸ್ಥೆಯ (India Drought Monitor) ವರದಿಯ ಪ್ರಕಾರ, ಜೂನ್ 17ರ ವೇಳೆಗೆ ದೇಶದ ಸುಮಾರು ಶೇ. 24.8ರಷ್ಟು ಭೂಭಾಗ ತೀವ್ರ ಶುಷ್ಕತೆ ಅಥವಾ ಬರಗಾಲದ ಸನ್ನಿವೇಶಕ್ಕೆ ಸಿಲುಕಿದೆ. ಇದು ಕೇವಲ ಒಂದೇ ವಾರದಲ್ಲಿ ಶೇ. 6.3 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ (ಶೇ. 15.2) ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಪಶ್ಚಿಮ ಡೆಕ್ಕನ್ ಮತ್ತು ಈಶಾನ್ಯ ಭಾರತದಲ್ಲಿ ಮಣ್ಣಿನ ತೇವಾಂಶ ತಳಮುಟ್ಟಿದೆ.&lt;/p&gt;&lt;p&gt;ಭಾರತೀಯ ಹವಾಮಾನ ಇಲಾಖೆಯ (IMD) ಜೂನ್ 4 ರಿಂದ 22 ರವರೆಗಿನ ಮಾಹಿತಿಯಂತೆ, ದೇಶದಲ್ಲಿ ಆಗಬೇಕಿದ್ದ ವಾಡಿಕೆ ಮಳೆ 97.6 ಮಿ.ಮೀ.ಗೆ ಬದಲಾಗಿ ಕೇವಲ 53.1 ಮಿ.ಮೀ. ಮಳೆಯಾಗಿದೆ. ಇದರ ಮುಖಾಂತರ ದೇಶದಲ್ಲಿ ಒಟ್ಟಾರೆ ಶೇ. 46 ರಷ್ಟು ಮಳೆ ಕೊರತೆ ದಾಖಲಾಗಿದೆ. ಉತ್ತರ, ಮಧ್ಯ ಮತ್ತು ಪರ್ಯಾಯ ದ್ವೀಪದ ಬಹುತೇಕ ಭಾಗಗಳು ಇನ್ನೂ ಮಳೆ ಕೊರತೆ ರೆಡ್&zwnj; ಝೋನ್&zwnj; ವಲಯದಲ್ಲೇ ಇವೆ.&lt;/p&gt;&lt;img&gt;&lt;ul&gt; &lt;li&gt;ಮಹಾರಾಷ್ಟ್ರ ಶೇ. 85&lt;/li&gt; &lt;li&gt;ಗುಜರಾತ್ ಶೇ. 84&lt;/li&gt; &lt;li&gt;ಮೇಘಾಲಯ ಶೇ. 81&lt;/li&gt; &lt;li&gt;ಛತ್ತೀಸ್&zwnj;ಗಢ ಶೇ. 71&lt;/li&gt; &lt;li&gt;ಜಾರ್ಖಂಡ್ ಶೇ. 71&lt;/li&gt; &lt;li&gt;ಮಧ್ಯಪ್ರದೇಶ ಶೇ. 58&lt;/li&gt; &lt;li&gt;ಕರ್ನಾಟಕ ಶೇ.35&lt;/li&gt;&lt;/ul&gt;&lt;h2&gt;ಮುಂಗಾರು ವಿಳಂಬಕ್ಕೆ ಕಾರಣವೇನು?&lt;/h2&gt;&lt;p&gt;ಜೂನ್ 22 ರಂದು ಐಎಂಡಿ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳ ಪ್ರಕಾರ, ಬಂಗಾಳ ಕೊಲ್ಲಿ, ಪೂರ್ವ ಭಾರತ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಮಾತ್ರ ಮೋಡಗಳು ದಟ್ಟವಾಗಿದ್ದವು. ಆದರೆ ಮಧ್ಯ ಮತ್ತು ಪಶ್ಚಿಮ ಭಾರತದ ವಿಶಾಲ ಪ್ರದೇಶಗಳು ಮೋಡಗಳಿಲ್ಲದೆ ಸಂಪೂರ್ಣ ಒಣಗಿದ್ದವು. ಇದರ ಹಿಂದೆ ಪೆಸಿಫಿಕ್ ಮಹಾಸಾಗರದ 'ಎಲ್ ನಿನೋ' (El Nino) ವಿದ್ಯಮಾನದ ಪ್ರಭಾವವಿದೆ. 2026ರಲ್ಲಿ ಸಮಭಾಜಕ ವೃತ್ತದ ಉಷ್ಣವಲಯದ ಪೆಸಿಫಿಕ್ ಸಮುದ್ರದ ಮೇಲ್ಮೈ ತಾಪಮಾನವು ತೀವ್ರವಾಗಿ ಏರಿಕೆಯಾಗಿದ್ದು, ಅಮೆರಿಕದ NOAA ಸಂಸ್ಥೆಯು ಎಲ್ ನಿನೋ ಎಚ್ಚರಿಕೆಯನ್ನು ನೀಡಿದೆ. ಇದರ ಪರಿಣಾಮವಾಗಿಯೇ ಭಾರತದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ (ದೀರ್ಘಾವಧಿ ಸರಾಸರಿಯ ಶೇ. 90 ರಷ್ಟು ಮಾತ್ರ) ಮಳೆಯಾಗಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿತ್ತು.&lt;/p&gt;&lt;img&gt;&lt;p&gt;ಭಾರತದ ಮಾನ್ಸೂನ್ ಕೇಂದ್ರ ವಲಯದ ಹೃದಯಭಾಗವಾದ ಮಧ್ಯಪ್ರದೇಶವು ಶೇ. 58 ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿದ್ದರೆ, ಮಹಾರಾಷ್ಟ್ರವು ಶೇ. 85 ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ದೊಡ್ಡ ರಾಜ್ಯಗಳ ಪೈಕಿ ಮಹಾರಾಷ್ಟ್ರದ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ರಾಜ್ಯದ ಶೇ. 61.7 ರಷ್ಟು ಪ್ರದೇಶವು ಅಸಹಜ ಶುಷ್ಕತೆ ಅಥವಾ ಬರಗಾಲವನ್ನು ಎದುರಿಸುತ್ತಿದೆ.&lt;/p&gt;&lt;h2&gt;ಜಿಲ್ಲಾವಾರು ಗಂಭೀರ ಸ್ಥಿತಿ:&lt;/h2&gt;&lt;p&gt;&lt;strong&gt;ಸತಾರಾ:&lt;/strong&gt; ರಾಜ್ಯದಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿ ಇಲ್ಲಿದ್ದು, ಸಂಪೂರ್ಣ ಜಿಲ್ಲೆ ತೀವ್ರ ಅಥವಾ ಅಸಾಧಾರಣ ಬರಗಾಲದ ಹಿಡಿತದಲ್ಲಿದೆ.&lt;/p&gt;&lt;p&gt;&lt;strong&gt;ರತ್ನಗಿರಿ:&lt;/strong&gt; ಸಂಪೂರ್ಣ ಒಣಗಿದ್ದು, ಐದನೇ ನಾಲ್ಕರಷ್ಟು ಭಾಗ ತೀವ್ರ ಬರದಲ್ಲಿದೆ.&lt;/p&gt;&lt;p&gt;&lt;strong&gt;ಸಾಂಗ್ಲಿ ಮತ್ತು ಸೋಲಾಪುರ&lt;/strong&gt;: ಸಾಂಗ್ಲಿಯಲ್ಲಿ ಶೇ. 83 ಮತ್ತು ಸೋಲಾಪುರದಲ್ಲಿ ಶೇ. 95 ರಷ್ಟು ಭಾಗ ಬರಪೀಡಿತವಾಗಿದೆ.&lt;/p&gt;&lt;p&gt;&lt;strong&gt;ಕೊಂಕಣ ಕರಾವಳಿ: &lt;/strong&gt;ಸಿಂಧುದುರ್ಗ, ರಾಯಗಢ, ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳು ಬಹುತೇಕ ತೇವಾಂಶ ರಹಿತವಾಗಿವೆ.&lt;/p&gt;&lt;img&gt;&lt;p&gt;ಈ ವಿಳಂಬವು ಮುಂಗಾರು (ಖಾರಿಫ್) ಬಿತ್ತನೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶದ ಪ್ರಮುಖ ಸೋಯಾಬೀನ್, ದ್ವಿದಳ ಧಾನ್ಯ ಹಾಗೂ ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ನಾಟಿ ಕಾರ್ಯ ವಿಳಂಬವಾಗುತ್ತಿದೆ. ಜಲಾಶಯಗಳ ಮಟ್ಟ ಕುಸಿದಿರುವುದರಿಂದ ಕುಡಿಯುವ ನೀರಿಗೂ ಆತಂಕ ಶುರುವಾಗಿದೆ.&lt;/p&gt;&lt;p&gt;ಈ ಅಪಾಯವನ್ನು ಮನಗಂಡು, ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ (ICRISAT), ಐಸಿಎಆರ್ (ICAR) ಮತ್ತು ಸರ್ಕಾರದ ಪಾಲುದಾರರು ಜಂಟಿಯಾಗಿ ಮಹಾರಾಷ್ಟ್ರಕ್ಕಾಗಿ ತುರ್ತು ಕ್ರಿಯಾ ಯೋಜನೆಯನ್ನು ರೂಪಿಸಿದ್ದಾರೆ. ರಾಜ್ಯದ 353 ಕೃಷಿ ಬ್ಲಾಕ್&zwnj;ಗಳ ಪೈಕಿ 181 ಬ್ಲಾಕ್&zwnj;ಗಳು ಬರಗಾಲಕ್ಕೆ ತುತ್ತಾಗುವ ಅಪಾಯದಲ್ಲಿದ್ದು, ಹತ್ತಿ, ಮೆಕ್ಕೆಜೋಳ ಮತ್ತು ಸೋಯಾಬೀನ್ ಬೆಳೆಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಲಿವೆ. ಆದ್ದರಿಂದ ರೈತರಿಗೆ ರಾಗಿ ಮತ್ತು ದ್ವಿದಳ ಧಾನ್ಯಗಳಂತಹ ಪರ್ಯಾಯ ಬೆಳೆಗಳಿಗೆ ಬದಲಾಗಲು ಹಾಗೂ ಜುಲೈ ಮೂರನೇ ವಾರದ ನಂತರ ಹತ್ತಿ ಬಿತ್ತನೆ ಮಾಡದಂತೆ ಕೃಷಿ ವಿಶ್ವವಿದ್ಯಾಲಯಗಳು ಸಲಹೆ ನೀಡಿವೆ.&lt;/p&gt;&lt;img&gt;&lt;p&gt;ಹವಾಮಾನ ಸೂಚ್ಯಂಕಗಳ ಪ್ರಕಾರ, ಮಣ್ಣಿನ ತೇವಾಂಶ ಮತ್ತು ನದಿಯ ಹರಿವು ಸುಧಾರಿಸಲು ಕೇವಲ ಒಂದು ದಿನದ ಮಳೆ ಸಾಕಾಗುವುದಿಲ್ಲ; ಅದಕ್ಕೆ ನಿರಂತರ ಮಳೆಯ ಅಗತ್ಯವಿದೆ. ಜೂನ್ ಅಂತ್ಯದಲ್ಲಿ ಬೀಳುವ ಮಳೆಯ ಸಕಾರಾತ್ಮಕ ಪರಿಣಾಮಗಳು ಜುಲೈ ತಿಂಗಳ ನಕ್ಷೆಯಲ್ಲಷ್ಟೇ ಗೋಚರಿಸಲಿವೆ. ಮುಂದಿನ 24 ರಿಂದ 48 ಗಂಟೆಗಳಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯ ಭಾರತದಲ್ಲಿ ಮುಂಗಾರು ಚುರುಕಾಗುವ ಮುನ್ಸೂಚನೆ ಇರುವುದಾದರೂ, ಆರಂಭಿಕ ದಿನಗಳಲ್ಲಿ ಉಂಟಾಗಿರುವ ಭಾರಿ ಕೊರತೆಯನ್ನು ಸರಿದೂಗಿಸುವುದು ಮುಂಬರುವ ಮಳೆಗೆ ಇರುವ ಅತಿ ದೊಡ್ಡ ಸವಾಲಾಗಿದೆ.&lt;/p&gt;&lt;p&gt;https://newsable.asianetnews.com/weather/bengaluru&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/india-news/india-monsoon-deficit-2026-june-driest-in-146-years-rainfall-record-gdp-fgi7i82"/>
        </item>
        <item>
            <title><![CDATA[ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ ಅವಘಡದಲ್ಲಿ 13 ಸಾವು, ಪ್ರಾಣ ಉಳಿಸಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳು]]></title>
            <link>https://kannada.asianetnews.com/india-news/students-leap-from-building-as-massive-fire-engulfs-lucknow-coaching-institute/articleshow-709a5tt</link>
            <guid isPermaLink="true">https://kannada.asianetnews.com/india-news/students-leap-from-building-as-massive-fire-engulfs-lucknow-coaching-institute/articleshow-709a5tt</guid>
            <pubDate>Mon, 22 Jun 2026 17:53:56 +0530</pubDate>
            <description><![CDATA[&lt;p&gt;ಕೋಚಿಂಗ್ ಸೆಂಟರ್&zwnj;ನಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಹೊತ್ತಿ ಉರಿದಿದೆ. ಪರಿಣಾಮ 13 ಮಂದಿ ಮೃತಪಟ್ಟರೆ, ಪ್ರಾಣ ಉಳಿಸಿಕೊಳ್ಳಲು ಕೆಲ ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಜಿಗಿದ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqc9wk06knvjmttvjzh0ykr,imgname-lucknow-purnia-area-fire-news-students-trapped-in-coaching-center-shop-fire-rescue-operation-1782122345056.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಖನೌ (ಜೂ.22) &lt;/strong&gt;ವಾಣಿಜ್ಯ ಕಟ್ಟಡದಲ್ಲಿ ನಡೆಯುತ್ತಿದ್ದ ಕೋಚಿಂಗ್ ಸೆಂಟರ್ ಅಗ್ನಿ ಅವಘಡ ಸಂಭವಿಸಿದೆ. ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆ ಅವರಿಸಿ ಎಲ್ಲವೂ ಭಸ್ಮವಾಗಿದೆ. ಬೆಂಕಿ ಅವಘಡದಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಹಲವು ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದ ಘಟನೆ ಉತ್ತರ ಪದೇಶದ ಲಖನೌದಲ್ಲಿ ನಡೆದಿದೆ. ಇತ್ತ ಸುಟ್ಟ ಗಾಯ, ಜಿಗಿತದಿಂದ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆ ದಾಖಲಿಸಲಾಗಿದೆ.ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಇದೇ ವೇಳೆ 13 ಮೃತೇದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ.&lt;/p&gt;&lt;h2&gt;ಪ್ರಾಣ ಉಳಿಸಿಕೊಳ್ಳಲು ವಿದ್ಯಾರ್ಥಿಗಳ ಪರದಾಟ&lt;/h2&gt;&lt;p&gt;ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಕಾರ್ಯನಿರ್ವಹಿಸುತ್ತಿತ್ತು. ಇದೇ ಕಟ್ಟದಲ್ಲಿ ಇತರ ಸ್ಟೋರ್, ಶಾಪ್&zwnj;ಗಳು ಕಾರ್ಯನಿರ್ವಹಿಸುತ್ತಿತ್ತು. ಒಂದೇ ಸಮನೆ ಬೆಂಕಿ ಜ್ವಾಲೆ ಇಡೀ ಮೊದಲ ಮಹಡಿಗೆ ಹರಡಿದೆ. ಹೀಗಾಗಿ ವಿದ್ಯಾರ್ಥಿಗಳು ತಕ್ಷಣಕ್ಕೆ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಲವರು ಕಿಟಕಿಯಿಂದ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಲಭ್ಯವಾಗಿದೆ. ಪ್ರಾಣ ಉಳಿಸಿಕೊಳ್ಳಲು ಪ್ರಯತ್ನದ ನಡುವೆ ಬೆಂಕಿಯ ಕೆನ್ನಾಲಗೆಯಿಂದ ಹಲವರು ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾರೆ.&lt;/p&gt;&lt;p&gt;ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಇದೇ ವೇಳೆ ರಕ್ಷಣಾ ಕಾರ್ಯಾಚರಣೆಗಳು ನಡೆದಿದೆ. ಗಾಯಗೊಂಡ ಹಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 13 ಮಂದಿ ಸ್ಥಳದಲ್ಲೆ ಸುಟ್ಟು ಕರಕಲಾಗಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.&lt;/p&gt;&lt;h2&gt;ಉಪಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ&lt;/h2&gt;&lt;p&gt;ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಗಾಯಾಳುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಪೊಲೀಸರ ಜೊತೆ ಚರ್ಚಿಸುವ ಬ್ರಿಜೇಶ್ ಪಾಠಕ್, ತನಿಖೆಗೆ ತೀವ್ರಗತಿಯಲ್ಲಿ ನಡೆಸುವಂತೆ ಸೂಚಿಸಿದ್ದಾರೆ. ಘಟನೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಬ್ರಿಜೇಶ್ ಪಾಠಕ್, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಇದೇ ವೇಳೆ ಮೃತರ ಕುಟುಂಬದ ಜೊತೆ ಉತ್ತರ ಪ್ರದೇಶ ಸರ್ಕಾರ ನಿಲ್ಲಲಿದೆ ಎಂದಿದ್ದಾರೆ.&lt;/p&gt;&lt;p&gt;ಮೂರು ಮಹಡಿಗಳ ಕಟ್ಟಡ ಇದಾಗಿದೆ. ಟಾಪ್ ಫ್ಲೋರ್&zwnj;ನಲ್ಲಿ ಕಾಣಿಸಿಕೊಂಡ ಬೆಂಕಿ ಎಲ್ಲೆಡೆ ಹರಡಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ತಕ್ಷಣ ಪ್ರಾಣ ಉಳಿಸಿಕೊಳ್ಳಳು ಸಾಧ್ಯವಾಗಲಿಲ್ಲ. ಇತ್ತ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಮಾಹಿತಿ ತರಿಸಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬದ ಜೊತೆ ಮಾತನಾಡಿ ಎಲ್ಲಾ ಸಹಕಾರ ನೀಡಲು ಸೂಚಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/students-leap-from-building-as-massive-fire-engulfs-lucknow-coaching-institute/articleshow-709a5tt"/>
        </item>
        <item>
            <title><![CDATA[ಶಿಶುಗಳಿಗೆ ಟ್ಯಾಗ್​ ಹಾಕಿ ಮಾರಾಟ: ಬೆಚ್ಚಿ ಬೀಳಿಸೋ 'ಬೇಬಿ ಬಜಾರ್'​ ಮಾರುಕಟ್ಟೆ ಬಯಲಿಗೆ- ಗಂಡಿಗೆ 8, ಹೆಣ್ಣಿಗೆ 4 ಲಕ್ಷ]]></title>
            <link>https://kannada.asianetnews.com/crime/delhis-dark-baby-bazaar-baby-boys-sold-for-rs-8-lakh-girls-half-the-price-suc/articleshow-pfpns3s</link>
            <guid isPermaLink="true">https://kannada.asianetnews.com/crime/delhis-dark-baby-bazaar-baby-boys-sold-for-rs-8-lakh-girls-half-the-price-suc/articleshow-pfpns3s</guid>
            <pubDate>Mon, 22 Jun 2026 15:38:42 +0530</pubDate>
            <description><![CDATA[ದೆಹಲಿಯಲ್ಲಿ ಅಕ್ರಮವಾಗಿ ಮಕ್ಕಳನ್ನು ಮಾರಾಟ ಮಾಡುವ 'ಬೇಬಿ ಬಜಾರ್' ಎಂಬ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಇಲ್ಲಿ ಸ್ವಂತ ಮಕ್ಕಳನ್ನು ಹಾಗೂ ಕದ್ದ ತಂದ ಶಿಶುಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಪೊಲೀಸ್ ಕಾರ್ಯಾಚರಣೆಯ ಮೂಲಕ ಈ ಬಹು-ರಾಜ್ಯ ದಂಧೆಯನ್ನು ಭೇದಿಸಿ, ಹಲವರನ್ನು ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqcsz7rccavdqrfr052jynd,imgname-baby-bazaar-1782122872056.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾವು ನೋಡುತ್ತಿರುವ ಪ್ರಪಂಚವೇ ಬೇರೆ. ಒಳಗಡೆ ನಡೆಯುತ್ತಿರುವ ಪ್ರಪಂಚವೇ ಬೇರೆ ಎನ್ನುವುದು ಎಷ್ಟೋ ಬಾರಿ ಸಾಬೀತಾಗುತ್ತಲೇ ಇರುತ್ತದೆ. ಅದರಲ್ಲಿಯೂ ಅಕ್ರಮ ದಂಧೆಯ ಕರಾಳ ಪ್ರಪಂಚವನ್ನು ಅಗೆದು ಬಗೆದಷ್ಟೂ ವಿಚಿತ್ರವೇ ಆಗಿರುತ್ತದೆ. ಅಂಥವುಗಳಲ್ಲಿ ಒಂದು ಬೇಬಿ ಬಜಾರ್​. ಸಾಮಾನ್ಯವಾಗಿ ಈ ಹೆಸರು ಕೇಳಿದರೆ, ಚಿಕ್ಕ ಮಕ್ಕಳಿಗಾಗಿ ಇರುವ ಮಾರುಕಟ್ಟೆ ಎನ್ನಿಸಬಹುದು. ಬಟ್ಟೆ, ಆಟಿಕೆ ಇನ್ನು ಏನೇನೋ ಸಿಗುವ ಮಾರುಕಟ್ಟೆ ಎನ್ನಿಸುವುದು ಉಂಟು. ಆದರೆ ಈ ಮಾರುಕಟ್ಟೆ ಅಂಥದ್ದಲ್ಲ. ಇದು ಬೆಚ್ಚಿಬೀಳುವ ಸ್ಟೋರಿ. ಏಕೆಂದರೆ ಇದು ಮಕ್ಕಳನ್ನು ಮಾರಾಟ ಮಾಡುವ ಮಾರುಕಟ್ಟೆ. ಅದೂ ಸ್ವಂತ ಮಕ್ಕಳನ್ನೇ ಮಾರುವ ಮಾರುಕಟ್ಟೆಯೂ ಹೌದು!&lt;/p&gt;&lt;p&gt;ದೆಹಲಿಯಲ್ಲಿ ಇರುವ ಈ ಮಾರುಕಟ್ಟೆ ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಇದೀಗ ಅದು ಬಯಲಿಗೆ ಬಂದಿದೆ. ಇಲ್ಲಿ ಹಣದ ಆಸೆಗೆ ಸ್ವಂತ ಮಕ್ಕಳನ್ನೇ ಮಾರಾಟ ಮಾಡುವ ಜಾಲವಾಗಿದೆ. ಕೆಲವೊಂದು ಮಕ್ಕಳನ್ನು ಬೇರೆ ಕಡೆಗಳಿಂದ ಕದ್ದು ತಂದಿದ್ದರೆ, ಮತ್ತೆ ಹಲವರು ಮಕ್ಕಳು ಹೆರವುದನ್ನೇ ದಂಧೆ ಮಾಡಿಕೊಂಡಿದ್ದು, ಅದನ್ನು ಇಲ್ಲಿ ಮಾರಾಟ ಮಾಡುತ್ತಾರೆ. ಗಂಡು ಮಕ್ಕಳನ್ನು 8 ಲಕ್ಷಕ್ಕೆ, ಹೆಣ್ಣು ಮಕ್ಕಳನ್ನು ನಾಲ್ಕು ಲಕ್ಷಕ್ಕೆ ಮಾರಾಟ ಮಾಡುತ್ತಾರೆ.&lt;/p&gt;&lt;h2&gt;&lt;strong&gt;ಮಕ್ಕಳಿಲ್ಲದವರಿಗೆ ಮಾರಾಟ&lt;/strong&gt;&lt;/h2&gt;&lt;p&gt;ಎಷ್ಟೋ ಜನರು ಮಕ್ಕಳಿಲ್ಲದೇ ಕೊರಗುವುದು ಇದೆ. ಆದರೆ, ಕಾನೂನುಬದ್ಧವಾಗಿ ಮಕ್ಕಳನ್ನು ಪಡೆಯುವುದಕ್ಕೆ ವರ್ಷಗಟ್ಟಲೆ ಹೋಗುತ್ತದೆ. ಅಂಥವರು ಇಲ್ಲಿ ಮಕ್ಕಳನ್ನು ಖರೀದಿ ಮಾಡುವುದು ಇದ್ದರೆ, ಹೆಣ್ಣು ಮಕ್ಕಳನ್ನು ಬೇರೆಯ ಉದ್ದೇಶಕ್ಕೇ ಖರೀದಿ ಮಾಡುವ ಆತಂಕಕಾರಿ ಘಟನೆಯೂ ಇಲ್ಲಿ ನಡೆಯುತ್ತದೆ. ಈಚೆಗೆ ನಡೆದ ಘಟನೆಯೊಂದರಿಂದ ಇದು ಬೆಳಕಿಗೆ ಬಂದಿದೆ. ರಾಜಸ್ಥಾನದಲ್ಲಿ ಜನಿಸಿದ ಮಗುವನ್ನು ದೆಹಲಿಗೆ ಕಳ್ಳಸಾಗಣೆ ಮಾಡಿ ಹರಿಯಾಣದ ಇನ್ನೊಂದು ದಂಪತಿಗೆ ಕೆಲವು ಲಕ್ಷಗಳಿಗೆ ಮಾರಾಟ ಮಾಡುವುದನ್ನು ಕಲ್ಪಿಸಿಕೊಳ್ಳಿ. ಅಂಥದ್ದೊಂದು ಘಟನೆ ನಡೆದ ಹಿನ್ನೆಲೆಯಲ್ಲಿ, ಇದೀಗ ಬೇಬಿ ಬಜಾರ್​ನ ಕರಾಳ ಮಾರುಕಟ್ಟೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ಇಷ್ಟು ವರ್ಷಗಳವರೆಗೆ ತಣ್ಣಗೆ ನಡೆದುಕೊಂಡು ಹೋಗುತ್ತಿದ್ದ ಈ ದಂಧೆಯನ್ನು ಪೊಲೀಸರು ಈಗ ಪತ್ತೆ ಹಚ್ಚಿದ್ದಾರೆ. ಮಕ್ಕಳಿಲ್ಲದ ದಂಪತಿಗಳಿಗೆ ಕೆಲವು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ ಕಳ್ಳಸಾಗಣೆದಾರರ ಗುಂಪನ್ನು ಪತ್ತೆಹಚ್ಚಿದ್ದಾರೆ. ಮಕ್ಕಳು ಇಲ್ಲದವರು ಪಡೆದುಕೊಳ್ಳುವುದು ಒಂದೆಡೆಯಾದರೆ, ಹೆಣ್ಣು ಮಕ್ಕಳನ್ನು ಖರೀದಿ ಮಾಡುವವರು ಅವರನ್ನು ಬೇರೆಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದೂ ಪತ್ತೆಯಾಗಿದೆ. ಶಿಶುಗಳ ಬೆಲೆ ಟ್ಯಾಗ್ ಹಾಕಿ ಮಾರಾಟ ಮಾಡುತ್ತಿರುವುದು ಕಂಡು ಪೊಲೀಸರು ದಂಗಾಗಿ ಹೋಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ದರೋಡೆಕೋರರನ್ನು ಹೇಗೆ ಬಂಧಿಸಲಾಯಿತು&lt;/strong&gt;&lt;/h3&gt;&lt;p&gt;ಮಧ್ಯ ದೆಹಲಿಯ ಪಹರ್&zwnj;ಗಂಜ್ ನಿವಾಸಿಯೊಬ್ಬರು ನೀಡಿದ ಸುಳಿವು, ಆ ಪ್ರದೇಶದಲ್ಲಿ ನಿಯಮಿತವಾಗಿ ವಿಭಿನ್ನ ಶಿಶುಗಳೊಂದಿಗೆ ಕಾಣಿಸಿಕೊಂಡ ಮಹಿಳೆಯ ಬಗ್ಗೆ ದೆಹಲಿಯ ಪೊಲೀಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪೊಲೀಸರು ಆ ಪ್ರದೇಶದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದರು ಮತ್ತು ಮಾನವ ಗುಪ್ತಚರವನ್ನು ಸಕ್ರಿಯಗೊಳಿಸಿದರು. ದಿನಗಟ್ಟಲೆ ಬೆನ್ನಟ್ಟಿದ ನಂತರ, ಪೊಲೀಸರು ಆ ಮಹಿಳೆಯನ್ನು ಪತ್ತೆ ಹಚ್ಚಿ, ಪ್ರಕರಣ ಭೇದಿಸಲು ಶುರು ಮಾಡಿದರು. ಪೊಲೀಸ್ ಗುಪ್ತಚರ ಮಾಹಿತಿಯಿಂದ ಜ್ಯೋತಿ ಅಲಿಯಾಸ್ ಕಮಲೇಶ್ ಎಂಬ ಮಹಿಳೆ ಮಕ್ಕಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾಳೆಂದು ಸ್ಪಷ್ಟವಾಯಿತು.&lt;/p&gt;&lt;h3&gt;&lt;strong&gt;ವಂಚನೆ ಒಪ್ಪಂದ&lt;/strong&gt;&lt;/h3&gt;&lt;p&gt;ಒಪ್ಪಂದದ ನೆಪದಲ್ಲಿ ಪೊಲೀಸರು ಕಮಲೇಶ್ ಜೊತೆ ಸಂಪರ್ಕ ಸಾಧಿಸಿದರು. ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಮಗುವನ್ನು ಖರೀದಿಸಲು ಹುಡುಕುತ್ತಿರುವ ವಂಚನೆ ಗ್ರಾಹಕನಂತೆ ನಟಿಸಿದರು. ಸಭೆಯನ್ನು ನಿಗದಿಪಡಿಸಲಾಯಿತು ಮತ್ತು ಮಗುವಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. 20,000 ರೂ.ಗಳ ಟೋಕನ್ ಮೊತ್ತವನ್ನು ಒಪ್ಪಿಕೊಳ್ಳಲಾಯಿತು. ಕಮಲೇಶ್ ಪೊಲೀಸ್ ವಂಚನೆಗೆ ಮಗುವನ್ನು ತಲುಪಿಸಿದರು, ಮತ್ತು ಜೂನ್ 5 ರಂದು ಸ್ಥಳದಲ್ಲೇ ಬಂಧಿಸಲಾಯಿತು. ಆಕೆಯ ವಿಚಾರಣೆಯು ಪೊಲೀಸರನ್ನು ದಿಗ್ಭ್ರಮೆಗೊಳಿಸಿತು ಮತ್ತು ತನಿಖೆಗೆ ಅವಕಾಶ ಮಾಡಿಕೊಟ್ಟಿತು, ಇದು ರಾಜಸ್ಥಾನ ಮತ್ತು ಗುಜರಾತ್&zwnj;ನ ಬಡ ದಂಪತಿಗಳಿಂದ ಶಿಶುಗಳನ್ನು ಖರೀದಿಸಿ/ಕದ್ದೊಯ್ದು ಮಧ್ಯಪ್ರದೇಶ ಮತ್ತು ಹರಿಯಾಣದಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡಲಾಗುತ್ತಿದ್ದ ಬಹು-ರಾಜ್ಯ ದಂಧೆಯನ್ನು ಬಯಲು ಮಾಡಿತು.&lt;/p&gt;&lt;p&gt;ಕಮಲೇಶ್&zwnj;ನ ನಿರಂತರ ವಿಚಾರಣೆಯ ನಂತರ ಪೊಲೀಸರು ಆಕೆಯ ಇಬ್ಬರು ಸಹಚರರಾದ ಶಾಲು ಮತ್ತು ಲಲಿತ್ ಅವರನ್ನು ಪತ್ತೆಹಚ್ಚಿದರು, ಮತ್ತು ನಂತರ ಶಿಶುಗಳ ಖರೀದಿ ಮತ್ತು ಮಾರಾಟಕ್ಕಾಗಿ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ಭಾಗಿಯಾಗಿದ್ದ ಪ್ರತಿಭಾ ಮತ್ತು ವಿಪಿನ್&zwnj;ರನ್ನು ಪತ್ತೆಹಚ್ಚಿದರು. ಪ್ರತಿಭಾ ಮತ್ತು ವಿಪಿನ್ ಮಾರುಕಟ್ಟೆಯಲ್ಲಿ ಇಡಲು ಶಿಶುಗಳನ್ನು ಖರೀದಿಸಿದ ವ್ಯಕ್ತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಗ ಸಿಕ್ಕಿಬಿದ್ದರು. ಪ್ರತಿಭಾ ಮತ್ತು ವಿಪಿನ್ ಅವರ ಬಳಿ ಪೊಲೀಸರು ಸುಮಾರು 3 ಲಕ್ಷ ರೂಪಾಯಿಗಳನ್ನು ಪತ್ತೆಹಚ್ಚಿದರು. ಎರಡು ವಾರಗಳ ನಂತರ ನಿರಂತರ ವಿಚಾರಣೆಯ ನಂತರ, ಪೊಲೀಸರು ಒಂದು ತಿಂಗಳೊಳಗಿನ 5 ಶಿಶುಗಳನ್ನು ವಶಪಡಿಸಿಕೊಂಡರು.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/delhis-dark-baby-bazaar-baby-boys-sold-for-rs-8-lakh-girls-half-the-price-suc/articleshow-pfpns3s"/>
        </item>
        <item>
            <title><![CDATA[Shocking - Allu Arjun: : ಅಲ್ಲು ಅರ್ಜುನ್‌ಗೆ ಬಿಗ್ ಶಾಕ್ ನೀಡಿದ ಕೋರ್ಟ್! ಕಾನೂನು ಸಂಕಷ್ಟದ ಸರಪಳಿಯಲ್ಲಿ 'ಪುಷ್ಪ'ರಾಜ್!]]></title>
            <link>https://kannada.asianetnews.com/news-entertainment/the-court-has-warned-actor-allu-arjun-who-is-an-accused-in-the-stampede-case-that-he-must-not-miss-the-next-hearing/articleshow-52dgxwk</link>
            <guid isPermaLink="true">https://kannada.asianetnews.com/news-entertainment/the-court-has-warned-actor-allu-arjun-who-is-an-accused-in-the-stampede-case-that-he-must-not-miss-the-next-hearing/articleshow-52dgxwk</guid>
            <pubDate>Mon, 22 Jun 2026 15:38:20 +0530</pubDate>
            <description><![CDATA[&lt;p&gt;ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ಅಲ್ಲು ಅವರಿಗೆ ನ್ಯಾಯಾಲಯವು ಶಾಕ್ ಕೊಟ್ಟಿದೆ. &quot;ಇಲ್ಲಿ ಸಿನಿಮಾ ಡೈಲಾಗ್ ನಡೆಯಲ್ಲ, ಕಾನೂನು ಎಲ್ಲರಿಗೂ ಒಂದೇ. ಪ್ರಕರಣದ ಗಂಭೀರತೆ ನಮಗೊತ್ತು, ನೀವು ಖುದ್ದಾಗಿ ನ್ಯಾಯಾಲಯಕ್ಕೆ ಬರಲೇಬೇಕು&quot; ಎಂದು ಖಡಕ್ ಆಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkndgbnxgbw9qmfvz5f571d,imgname-allu-arjun-atlee-upcoming-film-aa22xa6-title-1775555232117.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುಷ್ಪಾ ನಟ ಅಲ್ಲು ಅರ್ಜುನ್&zwnj;ಗೆ ಶಾಕ್ ಕೊಟ್ಟ ಕೋರ್ಟ್!&lt;/strong&gt;&lt;/p&gt;&lt;p&gt;ತೆಲುಗು ಚಿತ್ರರಂಗದ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ (Allu Arjun) ಅವರಿಗೆ ಸದ್ಯ ಕಾಲ ಅಷ್ಟೇನೂ ಚೆನ್ನಾಗಿಲ್ಲ ಅನ್ನಿಸುತ್ತಿದೆ. ಒಂದೆಡೆ 'ಪುಷ್ಪ 2' ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಧೂಳೆಬ್ಬಿಸುತ್ತಿದ್ದರೆ, ಇನ್ನೊಂದೆಡೆ ನಿಜ ಜೀವನದಲ್ಲಿ 'ಬನ್ನಿ' ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ಹೈದರಾಬಾದ್&zwnj;ನ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರಿಗೆ ಈಗ ಸುಪ್ರೀಂ ಶಾಕ್ ಸಿಕ್ಕಿದೆ!&lt;/p&gt;&lt;p&gt;ಏನಿದು 'ಪುಷ್ಪ'ನಿಗೆ ಎದುರಾದ ವಿಘ್ನ?&lt;/p&gt;&lt;p&gt;2024ರ ಡಿಸೆಂಬರ್ 4ರಂದು ಹೈದರಾಬಾದ್&zwnj;ನ ಆರ್&zwnj;ಟಿಸಿ ಕ್ರಾಸ್ ರಸ್ತೆಯ ಸಂಧ್ಯಾ ಥಿಯೇಟರ್&zwnj;ನಲ್ಲಿ 'ಪುಷ್ಪ 2' ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ನೂಕುನುಗ್ಗಲಿನಲ್ಲಿ ರೇವತಿ ಎಂಬ 39 ವರ್ಷದ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿದರೆ, ಅವರ ಎಂಟು ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿದ್ದನು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪೊಲೀಸರು ತನಿಖೆ ನಡೆಸಿ ಅಲ್ಲು ಅರ್ಜುನ್ ಅವರನ್ನು ಎ-11 (A11) ಆರೋಪಿಯನ್ನಾಗಿ ಮಾಡಿ ಚಾರ್ಜ್&zwnj;ಶೀಟ್ ಸಲ್ಲಿಸಿದ್ದರು.&lt;/p&gt;&lt;h2&gt;ಕೋರ್ಟ್&zwnj;ನಲ್ಲಿ ನಡೆದಿದ್ದೇನು?&lt;/h2&gt;&lt;p&gt;ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಹೈದರಾಬಾದ್&zwnj;ನ ನಾಂಪಲ್ಲಿ ನ್ಯಾಯಾಲಯವು ಅಲ್ಲು ಅರ್ಜುನ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ಸ್ಟಾರ್ ನಟ ಅಲ್ಲು ಅರ್ಜುನ್ ಅವರು ಸದ್ಯ ಮುಂಬೈನಲ್ಲಿ ನಿರ್ದೇಶಕ ಅಟ್ಲಿ ಅವರ 'ರಾಕಾ' ಎಂಬ ಹೊಸ ಚಿತ್ರದ ಶೂಟಿಂಗ್&zwnj;ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ, ಅವರ ಪರ ವಕೀಲರು &quot;ಶೂಟಿಂಗ್ ಇರುವುದರಿಂದ ಕೋರ್ಟ್&zwnj;ಗೆ ಬರಲು ಸಾಧ್ಯವಾಗುತ್ತಿಲ್ಲ, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅನುಮತಿ ನೀಡಿ&quot; ಎಂದು ಮನವಿ ಮಾಡಿದ್ದರು.&lt;/p&gt;&lt;p&gt;ಆದರೆ, ನ್ಯಾಯಾಧೀಶರು ಈ ಮನವಿಯನ್ನು ಕಡ್ಡಿ ಮುರಿದಂತೆ ತಿರಸ್ಕರಿಸಿದ್ದಾರೆ! &quot;ಇಲ್ಲಿ ಸಿನಿಮಾ ಡೈಲಾಗ್ ನಡೆಯಲ್ಲ, ಕಾನೂನು ಎಲ್ಲರಿಗೂ ಒಂದೇ. ಪ್ರಕರಣದ ಗಂಭೀರತೆ ನಮಗೊತ್ತು, ನೀವು ಖುದ್ದಾಗಿ ನ್ಯಾಯಾಲಯಕ್ಕೆ ಬರಲೇಬೇಕು&quot; ಎಂದು ಖಡಕ್ ಆಗಿ ಹೇಳಿದ್ದಾರೆ. ಇದು ನಟ ಅಲ್ಲು ಅರ್ಜುನ್ ಮತ್ತು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ತಂದಿದೆ.&lt;/p&gt;&lt;h3&gt;ಜುಲೈ 6ಕ್ಕೆ ಡೇಟ್ ಫಿಕ್ಸ್!&lt;/h3&gt;&lt;p&gt;ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದೆ. ಅಂದು ಅಲ್ಲು ಅರ್ಜುನ್ ಯಾವುದೇ ಕಾರಣಕ್ಕೂ ಗೈರಾಗುವಂತಿಲ್ಲ. ಶೂಟಿಂಗ್ ಎಷ್ಟೇ ಇರಲಿ, ಅದನ್ನು ಬದಿಗಿಟ್ಟು ಕೋರ್ಟ್ ಮೆಟ್ಟಿಲು ಏರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯಲ್ಲಿ ಸರಿಯಾದ ಭದ್ರತೆ ಇಲ್ಲದಿರುವುದು ಮತ್ತು ಪೊಲೀಸ್ ಎಚ್ಚರಿಕೆಗಳನ್ನು ನಿರ್ಲಕ್ಷಿಸಿರುವುದು ಅಲ್ಲು ಅರ್ಜುನ್ ಅವರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;ಒಟ್ಟಿನಲ್ಲಿ, &quot;ಪುಷ್ಪಾ ಅಂದ್ರೆ ಫ್ಲವರ್ ಅನ್ಕೊಂಡ್ರಾ.. ಫೈಯರ್&quot; ಅಂತ ಡೈಲಾಗ್ ಹೊಡೆಯುತ್ತಿದ್ದ ನಟನಿಗೆ ಈಗ ಕಾನೂನಿನ ಕಿಚ್ಚು ತಗುಲಿದೆ. ಜುಲೈ 6ರಂದು ಅಲ್ಲು ಅರ್ಜುನ್ ಕೋರ್ಟ್&zwnj;ನಲ್ಲಿ ಏನು ಹೇಳಲಿದ್ದಾರೆ? ಈ ಕೇಸ್&zwnj;ನಿಂದ ಅವರು ಪಾರಾಗ್ತಾರಾ? ಕಾದು ನೋಡಬೇಕು.&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/the-court-has-warned-actor-allu-arjun-who-is-an-accused-in-the-stampede-case-that-he-must-not-miss-the-next-hearing/articleshow-52dgxwk"/>
        </item>
        <item>
            <title><![CDATA[ಒಂದಂಗಡಿಯಲ್ಲಿ ಅಕ್ಕಿ, ಇನ್ನೊಂದಗಡಿಯಲ್ಲಿ ಗೋಧಿ - ರೇಷನ್‌ಕಾರ್ಡ್‌ದಾರರಿಗೆ ಖುಷಿ ಸುದ್ದಿ]]></title>
            <link>https://kannada.asianetnews.com/india-news/one-nation-one-ration-new-rules-ration-from-any-shop-india/articleshow-ftl9v3b</link>
            <guid isPermaLink="true">https://kannada.asianetnews.com/india-news/one-nation-one-ration-new-rules-ration-from-any-shop-india/articleshow-ftl9v3b</guid>
            <pubDate>Mon, 22 Jun 2026 13:38:26 +0530</pubDate>
            <description><![CDATA[&lt;p&gt;one nation one ration : ರೇಷನ್ ಕಾರ್ಡ್&zwnj;ದಾರರಿಗೆ ಸರ್ಕಾರ ಖುಷಿ ಸುದ್ದಿ ನೀಡಿದೆ. ಧಾನ್ಯ ಖರೀದಿ ವ್ಯವಸ್ಥೆಯನ್ನು ಬದಲಾಯಿಸ್ತಿದೆ. ಇನ್ಮುಂದೆ ಒಂದೇ ಪಡಿತರ ಅಂಗಡಿಯಲ್ಲಿ ನೀವು ಗಂಟೆಗಟ್ಟಲೆ ನಿಲ್ಬೇಕಾಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvq5vtz7vqe9d237s5q727m5,imgname-ration-card-1782115593191.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದ ಪಡಿತರ ವ್ಯವಸ್ಥೆಯನ್ನು ಸರ್ಕಾರ ಸರಳಗೊಳಿಸ್ತಿದೆ. ಜನರಿಗೆ ಸುಲಭವಾಗಿ ರೇಷನ್ ಸಿಗಲು ಒನ್ ನೇಷನ್ ಒನ್ ರೇಷನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಡಿಜಿಟಲ್ ಸೌಲಭ್ಯಗಳನ್ನು ಸುಲಭಗೊಳಿಸಲು ಸರ್ಕಾರ ನಿರಂತರ ಕೆಲ್ಸ ಮಾಡ್ತಿದೆ. ಇನ್ಮುಂದೆ ನೀವು ಒಂದೇ ರೇಷನ್ ಅಂಗಡಿಯಲ್ಲಿ ಎಲ್ಲ ರೇಷನ್ ಖರೀದಿ ಮಾಡುವ ಅಗತ್ಯವಿಲ್ಲ. ನೀವು ಪಡಿತರ ಅಂಗಡಿ ಬದಲಿಸಬಹುದು. ಅಂದ್ರೆ ಒಂದು ಅಂಗಡಿಯಲ್ಲಿ ಗೋಧಿ, ಇನ್ನೊಂದು ಅಂಗಡಿಯಲ್ಲಿ ಅಕ್ಕಿ ಖರೀದಿ ಮಾಡ್ಬಹುದು.&lt;/p&gt;&lt;h2&gt;ರೇಷನ್ ಪಡೆಯೋದು ಮತ್ತಷ್ಟು ಸುಲಭ&amp;nbsp;&lt;/h2&gt;&lt;p&gt;ಈ ಬದಲಾವಣೆಯಿಂದ ಜನಸಾಮಾನ್ಯರ ಕೆಲಸ ಸುಲಭವಾಗಲಿದೆ. ನೀವು ರೇಷನ್ ಸಂಗ್ರಹಿಸಲು ಒಂದೇ ಅಂಗಡಿಯಲ್ಲಿ ಗಂಟೆಗಟ್ಟಲೆ ಕಾಯಬೇಕಾಗೋದಿಲ್ಲ. ಯಾವುದಾದ್ರೂ ತಾಂತ್ರಿಕ ದೋಷವಾದಾಗ ರೇಷನ್ ಪಡೆಯದೆ ಹಿಂದೆ ಹೋಗುವ ಪರಿಸ್ಥಿತಿ ಬರೋದಿಲ್ಲ. ಅಂಗಡಿಯಲ್ಲಿ ಧಾನ್ಯದ ಕೊರತೆಯಂತ ಸಮಸ್ಯೆ ಇದ್ರೂ ಅದು ಜನಸಾಮಾನ್ಯರ ಮೇಲೆ ಪರಿಣಾಮ ಬೀರೋದಿಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಅಂಗಡಿ ಬದಲಿಸಬಹುದು. ಒಂದು ರೇನಷ್ ಅಂಗಡಿಯಲ್ಲಿ ಗೋಧಿ ಖರೀದಿ ಮಾಡಿ ಇನ್ನೊಂದರಲ್ಲಿ ಅಕ್ಕಿ ಪಡೆಯಬಹುದು. ಈ ಬಗ್ಗೆ ಕೇಂದ್ರ ರಾಜ್ಯ ಸಚಿವ ಬಿ.ಎಲ್. ವರ್ಮಾ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಕಡಿಮೆ ಬೆಲೆಗೆ, ಸಖತ್&zwnj; ಸೇಫ್ಟಿ ಕಾರ್&zwnj;ಗಳ್&zwnj; ಸಿಕ್ಕಾಪಟ್ಟೆ ಆಪ್ಶನ್&zwnj; ಕೊಟ್ಟ Mahindra Cars! ಎಲೆಕ್ಟ್ರಿಕ್&zwnj;&lt;/p&gt;&lt;h3&gt;ಒಂದು ರಾಷ್ಟ್ರ ಒಂದು ಪಡಿತರ ಚೀಟಿ&amp;nbsp;&lt;/h3&gt;&lt;p&gt;ಕೇಂದ್ರ ರಾಜ್ಯ ಸಚಿವ ಬಿ.ಎಲ್. ವರ್ಮಾ ತಮ್ಮ ಪೋಸ್ಟ್ನಲ್ಲಿ, ಸರ್ಕಾರವು ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ONORC) ಯೋಜನೆಯಡಿ ಪಡಿತರ ವಿತರಣೆಯನ್ನು ಸರಳಗೊಳಿಸುವ ಕೆಲಸ ಮಾಡ್ತಿದೆ ಎಂದಿದ್ದಾರೆ. ಪಡಿತರ ಚೀಟಿ ಹೊಂದಿರುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ಸ್ಥಳಗಳಿಂದ ತಮ್ಮ ಪಡಿತರವನ್ನು ಪಡೆಯಬಹುದು. ನೀವು ದೇಶದ ಯಾವುದೇ ಭಾಗದಿಂದ ಈ ಸೌಲಭ್ಯವನ್ನು ಪಡೆಯಬಹುದು ಎಂದಿದ್ದಾರೆ.&lt;/p&gt;&lt;p&gt;Aprilia SR 175: ಇಂಡಿಯನ್&zwnj; ಮಿಲಿಟರಿಯನ್ನು ಗೌರವಿಸೋ ಏಪ್ರಿಲಿಯಾ S&lt;/p&gt;&lt;p&gt;ಈ ಸೌಲಭ್ಯ ಎಟಿಎಂನಂತೆ ಕೆಲಸ ಮಾಡಲಿದೆ. ನೀವು ಎಲ್ಲಿ ಬೇಕಾದ್ರೂ ರೇಷನ್ ಪಡೆಯಬಹುದಾಗಿದೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಿಂದ ವಲಸೆ ಕಾರ್ಮಿಕರ ಕುಟುಂಬಗಳಿಗೆ ದೊಡ್ಡ ಲಾಭವಾಗಿದೆ. ಅವರು ರೇಷನ್ ಪಡೆಯಲು ದೂರದ ತಮ್ಮ ಹಳ್ಳಿಗೆ ಹೋಗ್ಬೇಕಾಗಿಲ್ಲ. ತಾವು ಸದ್ಯ ವಾಸವಾಗಿರುವ ಪ್ರದೇಶದಲ್ಲಿಯೇ ರೇಷನ್ ಪಡೆಯಬಹುದು. ಆಧಾರ್ ಮತ್ತು ಬಯೋಮೆಟ್ರಿಕ್ಸ್ ಮೂಲಕ ದೇಶದ ಜನರ ಕೆಲಸವನ್ನು ಸುಲಭಗೊಳಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Roopa Hegde</dc:creator>
            <atom:link href="https://kannada.asianetnews.com/india-news/one-nation-one-ration-new-rules-ration-from-any-shop-india/articleshow-ftl9v3b"/>
        </item>
        <item>
            <title><![CDATA[Western Ghats ಸಂರಕ್ಷಣೆಗೆ ಕೇಂದ್ರದ ಬಿಗ್ ಪ್ಲಾನ್; ಶೀಘ್ರದಲ್ಲೇ ಅಂತಿಮ ESA ಜಾರಿ: ಕರ್ನಾಟಕ, ಕೇರಳಕ್ಕೆ ತಪ್ಪದ ಇಕ್ಕಟ್ಟು!]]></title>
            <link>https://kannada.asianetnews.com/india-news/centre-final-notification-western-ghats-esa-karnataka-kerala-phased-manner-san/articleshow-psigizv</link>
            <guid isPermaLink="true">https://kannada.asianetnews.com/india-news/centre-final-notification-western-ghats-esa-karnataka-kerala-phased-manner-san/articleshow-psigizv</guid>
            <pubDate>Mon, 22 Jun 2026 13:39:25 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರವು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ (ESA) ಅಂತಿಮ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ. ಗುಜರಾತ್, ಮಹಾರಾಷ್ಟ್ರದಂತಹ ರಾಜ್ಯಗಳು ಒಪ್ಪಿಗೆಯ ಅಂಚಿನಲ್ಲಿದ್ದರೆ, ಕರ್ನಾಟಕ ಮತ್ತು ಕೇರಳದ ವಿರೋಧ ಮುಂದುವರಿದಿದ್ದು, ಹಂತ-ಹಂತದ ಜಾರಿಗೆ ಕೇಂದ್ರ ಚಿಂತನೆ ನಡೆಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvq5nvn2panrt9ehn2w9hd64,imgname-western-ghats-esa-1782115397282.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜೂ.22): &lt;/strong&gt;ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಪ್ರಕ್ರಿಯೆ ಆರಂಭವಾಗಿ ಹತ್ತು ವರ್ಷಗಳೇ ಕಳೆದರೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಕೇಂದ್ರ ಪರಿಸರ ಸಚಿವಾಲಯವು ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶಗಳ (ESA - Ecologically Sensitive Areas) ಅಂತಿಮ ಅಧಿಸೂಚನೆಯನ್ನು ಹೊರಡಿಸಲು ಭರದಿಂದ ಸಿದ್ಧತೆ ನಡೆಸುತ್ತಿದೆ. ಈ ಕ್ರಮವು ಭಾರತದ ಅತ್ಯಂತ ಶ್ರೀಮಂತ ಜೀವವೈವಿಧ್ಯತೆ ಮತ್ತು ಪರಿಸರ ಸೂಕ್ಷ್ಮ ವಲಯಕ್ಕೆ ಬಲವಾದ ಕಾನೂನು ರಕ್ಷಣೆಯನ್ನು ನೀಡಲಿದೆಯಾದರೂ, ಇತ್ತ ಅಭಿವೃದ್ಧಿ ಮತ್ತು ಅತ್ತ ಪರಿಸರ ಸಂರಕ್ಷಣೆಯ ನಡುವಿನ ಹಳೆಯ ವಿವಾದವನ್ನು ಮತ್ತೊಮ್ಮೆ ಮುಂಚೂಣಿಗೆ ತಂದಿದೆ.&lt;/p&gt;&lt;p&gt;ಇಂಡಿಯನ್ ಎಕ್ಸ್&zwnj;ಪ್ರೆಸ್ ವರದಿಯ ಪ್ರಕಾರ, ಕೇಂದ್ರ ಸರ್ಕಾರವು ಈ ಹಿಂದೆ ಎಲ್ಲಾ ಆರು ರಾಜ್ಯಗಳಲ್ಲಿ ಏಕಕಾಲಕ್ಕೆ ಇಎಸ್&zwnj;ಎ ಜಾರಿಗೊಳಿಸಲು ಪ್ರಯತ್ನಿಸಿ ವಿಫಲವಾಗಿತ್ತು. ಆದರೆ ಈ ಬಾರಿ ತನ್ನ ಹಳೇ ಹಠವನ್ನು ಕೈಬಿಟ್ಟಿದ್ದು, ಯಾವ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯಗಳು ಬಹುತೇಕ ಬಗೆಹರಿದಿವೆಯೋ ಅಲ್ಲಿ ಮೊದಲ ಹಂತದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲು ಮುಂದಾಗಿದೆ.&lt;/p&gt;&lt;p&gt;ಅಧಿಕಾರಿಗಳ ಮಾಹಿತಿಯ ಪ್ರಕಾರ, ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಕೇಂದ್ರದೊಂದಿಗೆ ಒಮ್ಮತಕ್ಕೆ ತೀರಾ ಹತ್ತಿರದಲ್ಲಿವೆ. ತಮಿಳುನಾಡು ಕೇವಲ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಮಾತ್ರ ಹೊಂದಿದೆ. ಆದರೆ, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾದ ಭೂಮಿಯ ವ್ಯಾಪ್ತಿ ಮತ್ತು ಅದರ ನಂತರ ಜಾರಿಯಾಗಲಿರುವ ಕಠಿಣ ನಿರ್ಬಂಧಗಳ ಬಗ್ಗೆ ತಮ್ಮ ತೀವ್ರ ವಿರೋಧವನ್ನು ಮುಂದುವರಿಸಿವೆ.&lt;/p&gt;&lt;h2&gt;&lt;strong&gt;ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದರೇನು?&lt;/strong&gt;&lt;/h2&gt;&lt;p&gt;1986 ರ ಪರಿಸರ (ಸಂರಕ್ಷಣೆ) ಕಾಯ್ದೆಯಡಿ ವಿಶೇಷ ಪರಿಸರ ರಕ್ಷಣೆಗಾಗಿ ಗುರುತಿಸಲಾದ ಪ್ರದೇಶಗಳನ್ನು &lsquo;ಪರಿಸರ ಸೂಕ್ಷ್ಮ ಪ್ರದೇಶ&rsquo; (ಇಎಸ್&zwnj;ಎ) ಎನ್ನಲಾಗುತ್ತದೆ. ಇದರ ಉದ್ದೇಶ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದಲ್ಲ. ಬದಲಿಗೆ, ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿ ಮಾಡುವ ನಿರ್ದಿಷ್ಟ ಚಟುವಟಿಕೆಗಳನ್ನು ನಿಯಂತ್ರಿಸುವುದಾಗಿದೆ. ಒಮ್ಮೆ ಈ ಅಧಿಸೂಚನೆ ಜಾರಿಯಾದರೆ, ಕೆಲವು ಕೈಗಾರಿಕೆಗಳು ಮತ್ತು ಯೋಜನೆಗಳು ಕಠಿಣ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ.&lt;/p&gt;&lt;h2&gt;&lt;strong&gt;ಪಶ್ಚಿಮ ಘಟ್ಟಗಳು ಏಕೆ ಅಷ್ಟು ಮುಖ್ಯ?&lt;/strong&gt;&lt;/h2&gt;&lt;p&gt;ಭಾರತದ ಪಶ್ಚಿಮ ಕರಾವಳಿಯುದ್ದಕ್ಕೂ ಸುಮಾರು 1,600 ಕಿಲೋಮೀಟರ್&zwnj;ಗಳಷ್ಟು ಉದ್ದಕ್ಕೆ ಹರಡಿರುವ ಪಶ್ಚಿಮ ಘಟ್ಟಗಳು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹರಡಿಕೊಂಡಿವೆ. ಇದು ವಿಶ್ವದ ಎಂಟು ಅತ್ಯಂತ ಶ್ರೀಮಂತ ಜೀವವೈವಿಧ್ಯತೆಯ ತಾಣಗಳಲ್ಲಿ (Hottest Biodiversity Hotspots) ಒಂದಾಗಿದೆ ಮತ್ತು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನೂರಾರು ಅಪರೂಪದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆವಾಸಸ್ಥಾನವಾಗಿದೆ. ಭಾರತದ ಮಾನ್ಸೂನ್ (ಮಳೆ) ವ್ಯವಸ್ಥೆಯ ಮೇಲೆ ಇದು ಭಾರಿ ಪ್ರಭಾವ ಬೀರುತ್ತದೆ. ದಕ್ಷಿಣ ಭಾರತದ ಪ್ರಮುಖ ನದಿಗಳಾದ ಕೃಷ್ಣಾ, ಗೋದಾವರಿ, ಕಾವೇರಿ, ಪೆರಿಯಾರ್, ಮಾಂಡೋವಿ ಮತ್ತು ಶರಾವತಿ ನದಿಗಳ ಉಗಮ ಸ್ಥಾನ ಇದಾಗಿದ್ದು, ಇದನ್ನು ದಕ್ಷಿಣ ಭಾರತದ &lsquo;ವಾಟರ್ ಟವರ್&rsquo; (ನೀರಿನ ತೊಟ್ಟಿ) ಎಂದೂ ಕರೆಯಲಾಗುತ್ತದೆ.&lt;/p&gt;&lt;h2&gt;&lt;strong&gt;ಎಷ್ಟು ಪ್ರದೇಶವನ್ನು ಘೋಷಿಸಲು ಪ್ರಸ್ತಾಪಿಸಲಾಗಿದೆ?&lt;/strong&gt;&lt;/h2&gt;&lt;p&gt;ಜುಲೈ 2024 ರಲ್ಲಿ ಹೊರಡಿಸಲಾದ ಕೊನೆಯ ಕರಡು ಅಧಿಸೂಚನೆಯಲ್ಲಿ, ಆರು ರಾಜ್ಯಗಳ ಒಟ್ಟು 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಇಎಸ್&zwnj;ಎ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದೆ. ಇದು 2013 ರ ಕಸ್ತೂರಿರಂಗನ್ ಸಮಿತಿಯು ಶಿಫಾರಸು ಮಾಡಿದ್ದ ಸುಮಾರು 60,000 ಚದರ ಕಿಲೋಮೀಟರ್&zwnj;ಗಿಂತ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, 2011 ರಲ್ಲಿ ಮಾಧವ್ ಗಾಡ್ಗೀಳ್ ಸಮಿತಿಯು ರಕ್ಷಣೆಗಾಗಿ ಪ್ರಸ್ತಾಪಿಸಿದ್ದ ಬೃಹತ್ 1,29,037 ಚದರ ಕಿಲೋಮೀಟರ್ ಪ್ರದೇಶಕ್ಕಿಂತ ಅತ್ಯಂತ ಕಡಿಮೆಯಾಗಿದೆ.&lt;/p&gt;&lt;h2&gt;&lt;strong&gt;ಯಾವ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ?&lt;/strong&gt;&lt;/h2&gt;&lt;p&gt;ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡುವ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಅಥವಾ ಕಟ್ಟುನಿಟ್ಟಾಗಿ ನಿಯಂತ್ರಿಸಲು ಪ್ರಸ್ತಾಪಿಸಲಾಗಿದೆ. ಹೊಸ ಗಣಿಗಾರಿಕೆ (Mining) ಮತ್ತು ಕಲ್ಲು ಗಣಿಗಾರಿಕೆ (Quarrying) ಯೋಜನೆಗಳು, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು (Thermal Power Plants), ಪ್ರಸ್ತುತ ಚಾಲ್ತಿಯಲ್ಲಿರುವ ಗಣಿಗಾರಿಕೆಗಳ ವಿಸ್ತರಣೆ, ತೀವ್ರ ಮಾಲಿನ್ಯಕಾರಕ &lsquo;ರೆಡ್-ಕ್ಯಾಟಗರಿ&rsquo; (Red-Category) ಕೈಗಾರಿಕೆಗಳು ಹಾಗೂ 20,000 ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ದೊಡ್ಡ ನಿರ್ಮಾಣ ಮತ್ತು ಟೌನ್&zwnj;ಶಿಪ್ ಯೋಜನೆಗಳನ್ನ ನಿಯಂತ್ರಿಸಲಾಗುತ್ತದೆ,&lt;/p&gt;&lt;p&gt;ಪರಿಸರವಾದಿಗಳ ಪ್ರಕಾರ, ಈ ಭಾಗದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕುಸಿತ, ಅರಣ್ಯ ನಾಶ ಮತ್ತು ನೀರಿನ ಅಭಾವವನ್ನು ತಡೆಯಲು ಈ ಕಠಿಣ ನಿಯಮಗಳು ಅತ್ಯಗತ್ಯವಾಗಿವೆ.&lt;/p&gt;&lt;h2&gt;&lt;strong&gt;ಇಷ್ಟು ವರ್ಷಗಳ ವಿಳಂಬಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಸ್ಥಳೀಯ ಸಮುದಾಯಗಳು, ತೋಟಗಳ ಮಾಲೀಕರು, ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಈ ಇಎಸ್&zwnj;ಎ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿವೆ. ಇದರಿಂದ ತಮ್ಮ ಜೀವನೋಪಾಯ, ಮೂಲಸೌಕರ್ಯ ಯೋಜನೆಗಳು ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ ಎಂಬುದು ಅವರ ಆತಂಕವಾಗಿದೆ.&lt;/p&gt;&lt;p&gt;&lt;strong&gt;ಗಾಡ್ಗೀಳ್ ವರದಿ (2010):&lt;/strong&gt; ಪ್ರಸಿದ್ಧ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು ಇಡೀ ಪಶ್ಚಿಮ ಘಟ್ಟ ಪ್ರದೇಶವನ್ನೇ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಶಿಫಾರಸು ಮಾಡಿತ್ತು. ಆದರೆ ರಾಜ್ಯಗಳು ಇದನ್ನು ತೀವ್ರವಾಗಿ ವಿರೋಧಿಸಿದವು.&lt;/p&gt;&lt;p&gt;&lt;strong&gt;ಕಸ್ತೂರಿರಂಗನ್ ವರದಿ (2012): &lt;/strong&gt;ವಿರೋಧದ ಬೆನ್ನಲ್ಲೇ ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಲಾಯಿತು. ಈ ಸಮಿತಿಯು ಮಧ್ಯಮ ಮಾರ್ಗವನ್ನು ಅನುಸರಿಸಿತು. ಇಡೀ ಪಶ್ಚಿಮ ಘಟ್ಟಗಳ ಬದಲಿಗೆ, ಕೇವಲ ದಟ್ಟ ಅರಣ್ಯ ಮತ್ತು ನೈಸರ್ಗಿಕ ಪ್ರದೇಶಗಳನ್ನು ಮಾತ್ರ (Natural Landscapes) ರಕ್ಷಿಸಲು ಮತ್ತು ಮಾನವ ವಸಾಹತು, ಕೃಷಿ ಭೂಮಿಯನ್ನು (Cultural Landscapes) ಇದರಿಂದ ಹೊರಗಿಡಲು ಶಿಫಾರಸು ಮಾಡಿತು. ಆದರೆ, ಈ ಪರಿಷ್ಕೃತ ವರದಿಗೂ ವಿರೋಧ ವ್ಯಕ್ತವಾದ ಕಾರಣ 2014 ರಿಂದೀಚೆಗೆ ಕೇಂದ್ರ ಸರ್ಕಾರ ಆರು ಬಾರಿ ಕರಡು ಅಧಿಸೂಚನೆಗಳನ್ನು ಹೊರಡಿಸಬೇಕಾಯಿತು.&lt;/p&gt;&lt;h2&gt;&lt;strong&gt;ಯಾವ ರಾಜ್ಯಗಳ ಆಕ್ಷೇಪಣೆ ಏನು?&lt;/strong&gt;&lt;/h2&gt;&lt;p&gt;&lt;strong&gt;ಕರ್ನಾಟಕ: &lt;/strong&gt;ಕಸ್ತೂರಿರಂಗನ್ ವರದಿಯನ್ನು ಪ್ರಸ್ತುತ ರೂಪದಲ್ಲಿ ಜಾರಿಗೊಳಿಸುವುದನ್ನು ಕರ್ನಾಟಕ ಮೊದಲಿನಿಂದಲೂ ಅತ್ಯಂತ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ಒಂದು ವೇಳೆ ಈ ಶಿಫಾರಸುಗಳಿಗೆ ಒಪ್ಪಿಗೆ ಇಲ್ಲದಿದ್ದರೆ, ಪರಿಸರ ರಕ್ಷಣೆಗೆ ಪರ್ಯಾಯ ಮಾದರಿಯನ್ನು (Alternative Framework) ಪ್ರಸ್ತಾಪಿಸುವಂತೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಸೂಚಿಸಿದೆ ಎಂದು ವರದಿಯಾಗಿದೆ.&lt;/p&gt;&lt;p&gt;&lt;strong&gt;ಕೇರಳ: &lt;/strong&gt;ತನ್ನ ವ್ಯಾಪ್ತಿಯ ಇಎಸ್&zwnj;ಎ ಪ್ರದೇಶವನ್ನು ಮತ್ತಷ್ಟು ಕಡಿಮೆ ಮಾಡಲು ಕೇರಳ ಒತ್ತಾಯಿಸುತ್ತಿದೆ. 2024 ರ ಕರಡಿನಲ್ಲಿ 9,993.7 ಚದರ ಕಿಲೋಮೀಟರ್ ಪ್ರಸ್ತಾಪಿಸಲಾಗಿದ್ದರೂ, ಇಡುಕ್ಕಿ ಮತ್ತು ವಯನಾಡು ಜಿಲ್ಲೆಗಳ ಸುಮಾರು 31 ಹಳ್ಳಿಗಳನ್ನು ಹೊರಗಿಟ್ಟು, ಇದನ್ನು 8,805 ಚದರ ಕಿಲೋಮೀಟರ್&zwnj;ಗೆ ಇಳಿಸಬೇಕು ಎಂದು ಕೇರಳ ಕೋರಿದೆ. ಆದರೆ ಕೇಂದ್ರದ ತಜ್ಞರ ಸಮಿತಿ ಇದನ್ನು ಒಪ್ಪಿಲ್ಲ.&lt;/p&gt;&lt;p&gt;&lt;strong&gt;ಗೋವಾ: &lt;/strong&gt;ಸತ್ತರಿ ತಾಲೂಕಿನ 21 ಹಳ್ಳಿಗಳನ್ನು ಇಎಸ್&zwnj;ಎ ಪಟ್ಟಿಯಿಂದ ಕೈಬಿಡಬೇಕು ಎಂದು ಗೋವಾ ಸರ್ಕಾರ ಕೇಳಿದೆ.&lt;/p&gt;&lt;h2&gt;&lt;strong&gt;ಯಾವ ರಾಜ್ಯಗಳು ಒಪ್ಪಿಗೆಯ ಅಂಚಿನಲ್ಲಿವೆ?&lt;/strong&gt;&lt;/h2&gt;&lt;p&gt;&lt;strong&gt;ಗುಜರಾತ್:&lt;/strong&gt; ಸಣ್ಣ ಖನಿಜಗಳ ಗಣಿಗಾರಿಕೆ ಮತ್ತು ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಧಕ್ಕೆಯಾಗದಂತೆ ಕೆಲವು ಷರತ್ತುಗಳೊಂದಿಗೆ ತನ್ನ ಅಂತಿಮ ಒಪ್ಪಿಗೆಯನ್ನು ನೀಡಿದೆ.&lt;/p&gt;&lt;p&gt;&lt;strong&gt;ಮಹಾರಾಷ್ಟ್ರ ಮತ್ತು ಗೋವಾ: &lt;/strong&gt;ಕೇಂದ್ರದೊಂದಿಗಿನ ಬಹುತೇಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿವೆ.&lt;/p&gt;&lt;p&gt;&lt;strong&gt;ತಮಿಳುನಾಡು: &lt;/strong&gt;ಕೇವಲ ಕೆಲವು ಸಣ್ಣ ಸಮಸ್ಯೆಗಳನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ.&lt;/p&gt;&lt;h2&gt;&lt;strong&gt;ಮುಂದಿನ ಹಾದಿ ಏನು?&lt;/strong&gt;&lt;/h2&gt;&lt;p&gt;ಸದ್ಯ ಜಾರಿಯಲ್ಲಿರುವ ಕರಡು ಅಧಿಸೂಚನೆಯ ಅವಧಿ ಮತ್ತು ಕೇಂದ್ರದ ತಜ್ಞರ ಸಮಿತಿಯ ಅವಧಿಯು ಈ ಜುಲೈ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದೆ. ಕರ್ನಾಟಕ ಮತ್ತು ಕೇರಳದೊಂದಿಗೆ ಮಾತುಕತೆ ಇನ್ನೂ ಮುಂದುವರಿದಿರುವುದರಿಂದ, ಕೇಂದ್ರ ಸರ್ಕಾರವು ಹಂತ-ಹಂತವಾಗಿ (Phased Approach) ಇದನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಅಂದರೆ, ಒಮ್ಮತ ಮೂಡಿರುವ ರಾಜ್ಯಗಳಲ್ಲಿ ಮೊದಲು ಇಎಸ್&zwnj;ಎ ಜಾರಿಗೊಳಿಸಿ ಅಂತಿಮ ಅಧಿಸೂಚನೆ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಇದು ಜಾರಿಯಾದರೆ ಭಾರತದ ಅತ್ಯಂತ ದೀರ್ಘಾವಧಿಯ ಪರಿಸರ ವಿವಾದವೊಂದು ಅಂತಿಮ ತಾರ್ಕಿಕ ಅಂತ್ಯ ಕಾಣಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/centre-final-notification-western-ghats-esa-karnataka-kerala-phased-manner-san/articleshow-psigizv"/>
        </item>
        <item>
            <title><![CDATA[Mahindra: SUV ಮಾರುಕಟ್ಟೆಯಲ್ಲಿ ಮಹೀಂದ್ರಾ ಸುನಾಮಿ! ಥಾರ್ ನ್ಯೂ ವರ್ಷನ್ ಸೇರಿ 8 ಹೊಸ ಕಾರುಗಳ ಎಂಟ್ರಿ]]></title>
            <link>https://kannada.asianetnews.com/gallery/automobile/car-thars-mahindra-ice-and-electric-and-hybrid-suvs-lined-up-for-launch-india-8gcpfor</link>
            <guid isPermaLink="true">https://kannada.asianetnews.com/gallery/automobile/car-thars-mahindra-ice-and-electric-and-hybrid-suvs-lined-up-for-launch-india-8gcpfor</guid>
            <pubDate>Mon, 22 Jun 2026 12:44:35 +0530</pubDate>
            <description><![CDATA[&lt;p&gt;Mahindra New Cars 2026 List Photo: ಮಹೀಂದ್ರಾ ಪ್ರಿಯರಿಗೆ ಭರ್ಜರಿ ಸುದ್ದಿ ಇಲ್ಲಿದೆ! ಮುಂಬರುವ ದಿನಗಳಲ್ಲಿ ಮಹೀಂದ್ರಾ ಆಟೋಮೋಟಿವ್ ಸಂಸ್ಥೆಯು ಸದ್ದಿಲ್ಲದೆ ಬರೋಬ್ಬರಿ 15ಕ್ಕೂ ಹೆಚ್ಚು ಹೊಸ ಎಸ್&zwnj;ಯುವಿಗಳನ್ನು (SUV) ಸಿದ್ಧಪಡಿಸುತ್ತಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jh294cvf88jqr28vz1bz9tzx,imgname-whatsapp-image-2025-01-08-at-11.42.28.jpeg" type="image/jpeg" height="390" width="690"/>
            <content:encoded><![CDATA[&lt;p&gt;Mahindra New Cars 2026 List Photo: ಮಹೀಂದ್ರಾ ಪ್ರಿಯರಿಗೆ ಭರ್ಜರಿ ಸುದ್ದಿ ಇಲ್ಲಿದೆ! ಮುಂಬರುವ ದಿನಗಳಲ್ಲಿ ಮಹೀಂದ್ರಾ ಆಟೋಮೋಟಿವ್ ಸಂಸ್ಥೆಯು ಸದ್ದಿಲ್ಲದೆ ಬರೋಬ್ಬರಿ 15ಕ್ಕೂ ಹೆಚ್ಚು ಹೊಸ ಎಸ್&zwnj;ಯುವಿಗಳನ್ನು (SUV) ಸಿದ್ಧಪಡಿಸುತ್ತಿದೆ.&amp;nbsp;&lt;/p&gt;&lt;img&gt;&lt;p&gt;ಇದರಲ್ಲಿ ಇಂಟರ್ನಲ್ ಕಂಬಶ್ಚನ್ ಇಂಜಿನ್ (ICE), ಸಂಪೂರ್ಣ ಎಲೆಕ್ಟ್ರಿಕ್ (EV) ಮತ್ತು ಹೈಬ್ರಿಡ್ ತಂತ್ರಜ್ಞಾನದ ಕಾರುಗಳು ಇವೆಯಂತೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ತನ್ನ ಹಳೆಯ ಮಾಡೆಲ್&zwnj;ಗಳಿಗೆ ಮಹೀಂದ್ರಾ ಹೊಸ ಲುಕ್ ಮತ್ತು ಹೈಟೆಕ್ ಫೀಚರ್&zwnj;ಗಳನ್ನು ನೀಡುತ್ತಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಭಾರೀ ಕ್ರೇಜ್ ಹೊಂದಿರುವ ಈ 7-ಸೀಟರ್ ಎಸ್&zwnj;ಯುವಿ ಈಗ ಮತ್ತಷ್ಟು ಬಲಿಷ್ಠವಾಗಿ ಬರಲಿದೆ. ಹೊಸ ಮುಂಭಾಗದ ಗ್ರಿಲ್, ಎಲ್&zwnj;ಇಡಿ ಹೆಡ್&zwnj;ಲ್ಯಾಂಪ್, ಹೊಸ ಅಲಾಯ್ ವೀಲ್&zwnj;ಗಳು ಇದರ ಹೊರಭಾಗದ ಉತ್ತಮ ಆಕರ್ಷಣೆ ಆಗಿರಲಿದೆ. ಒಳಾಂಗಣದಲ್ಲಿ 10.25-ಇಂಚಿನ ಟಚ್&zwnj;ಸ್ಕ್ರೀನ್, ಪನೋರಮಿಕ್ ಸನ್&zwnj;ರೂಫ್, 360-ಡಿಗ್ರಿ ಕ್ಯಾಮೆರಾ, ಲೆವೆಲ್ 2 ADAS ಸುರಕ್ಷತೆ ಇರಲಿದೆ. 2.0L ಪೆಟ್ರೋಲ್ ಮತ್ತು 2.2L ಡೀಸೆಲ್ ಇಂಜಿನ್ ಹೊಂದಿರುವ ಈ ಕಾರು ಆಗಸ್ಟ್ ಆಸುಪಾಸಿನಲ್ಲಿ ಬಿಡುಗಡೆಯಾಗಲಿದೆ.&lt;/p&gt;&lt;img&gt;&lt;p&gt;ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ನವೀಕರಿಸಲಾಗುತ್ತಿದೆ. ಹೊಸ ಗ್ರಿಲ್, ಬಂಪರ್, ದೊಡ್ಡ ಇನ್ಫೋಟೈನ್&zwnj;ಮೆಂಟ್ ಸಿಸ್ಟಮ್ ಹೊಂದಿರಲಿದ್ದು, 2.2-ಲೀಟರ್ mHawk ಡೀಸೆಲ್ ಇಂಜಿನ್, ಮ್ಯಾನುವಲ್ ಗೇರ್&zwnj;ಬಾಕ್ ಇರಲಿದೆ.&lt;/p&gt;&lt;img&gt;&lt;p&gt;ಆಫ್-ರೋಡ್ ಪ್ರೇಮಿಗಳ ನೆಚ್ಚಿನ ಥಾರ್ 3-ಡೋರ್ ಆವೃತ್ತಿ ಈಗ ಥಾರ್ ರಾಕ್ಸ್ (Thar ROXX) ಮಾದರಿಯಿಂದ ಪ್ರೇರಿತವಾದ ಸಿ-ಆಕಾರದ (C-shaped) ಎಲ್&zwnj;ಇಡಿ ಹೆಡ್&zwnj;ಲೈಟ್&zwnj;ಗಳು, LED ಡಿಆರ್&zwnj;ಎಲ್&zwnj;ಗಳು, ಹೊಸ ಬಂಪರ್ ಪಡೆಯಲಿದೆ. ತಾಂತ್ರಿಕವಾಗಿಯೂ ಇದು ಅಪ್&zwnj;ಗ್ರೇಡ್ ಆಗಲಿದೆ.&lt;/p&gt;&lt;p&gt;&lt;strong&gt;'ಥಾರ್ ರಾಕ್ಸ್'&lt;/strong&gt;&lt;/p&gt;&lt;p&gt;5-ಡೋರ್ ಥಾರ್ ರಾಕ್ಸ್ ಕಾರ್&zwnj; ಕಡಿಮೆ ಬೆಲೆಗೆ ಸಿಗಲು ಮಹೀಂದ್ರಾ ಮಾಸ್ಟರ್ ಪ್ಲಾನ್ ಮಾಡಿದೆ. ಇದರಲ್ಲಿ 3-ಡೋರ್ ಥಾರ್&zwnj;ನಲ್ಲಿರುವ ಸಣ್ಣದಾದ 1.5-ಲೀಟರ್ ಡೀಸೆಲ್ ಇಂಜಿನ್ ಅಳವಡಿಸಲಾಗುತ್ತಿದೆ. ಇದರಿಂದ ಕಾರಿನ ಆರಂಭಿಕ ಬೆಲೆ ಗಣನೀಯವಾಗಿ ಕಡಿಮೆಯಾಗಲಿದ್ದು, ಬಜೆಟ್&zwnj;ನಲ್ಲಿ ಕೊಳ್ಳುವವರಿಗೆ ಇದು ಬೆಸ್ಟ್ ಆಪ್ಷನ್.&lt;/p&gt;&lt;img&gt;&lt;p&gt;ಇದು ಸ್ಕಾರ್ಪಿಯೋ-ಎನ್&zwnj;ಗಿಂತ ಕೆಳಗಿನ ಶ್ರೇಣಿಯಲ್ಲಿರಲಿದ್ದು, ಫೋರ್ಡ್ ಬ್ರಾಂಕೋ, ಲ್ಯಾಂಡ್ ರೋವರ್ ಡಿಫೆಂಡರ್ ಕಾರುಗಳಂತೆ ಕಠಿಣವಾದ, ಬಾಕ್ಸಿ (ಬಾಕ್ಸ್ ಆಕಾರದ) ವಿನ್ಯಾಸ ಇರಲಿದೆ. ಪೆಟ್ರೋಲ್, ಡೀಸೆಲ್, ಹೈಬ್ರಿಡ್, ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಬರಲಿರುವ ಇದು ಟಾಟಾ ಸಿಯೆರಾ ಹಾಗೂ ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲಿದೆ.&lt;/p&gt;&lt;p&gt;&lt;strong&gt;ಮಹೀಂದ್ರಾ ವಿಷನ್ ಎಕ್ಸ್ (Vision X)&lt;/strong&gt;&lt;/p&gt;&lt;p&gt;ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್&zwnj;ಯುವಿ 3ಎಕ್ಸ್&zwnj;ಒ (XUV 3XO) ಬದಲಾಗಿ ಈ ಅತ್ಯಂತ ಸುಧಾರಿತ, ಫ್ಯೂಚರಿಸ್ಟಿಕ್ ವಿನ್ಯಾಸದ ಕಾರು ರೆಡಿಯಾಗುತ್ತಿದೆ.&lt;/p&gt;&lt;p&gt;&lt;strong&gt;ಮಹೀಂದ್ರಾ ವಿಷನ್ ಟಿ (Vision T)&lt;/strong&gt;&lt;/p&gt;&lt;p&gt;ಪ್ರಬಲವಾದ ಆಫ್-ರೋಡಿಂಗ್ ಸಾಮರ್ಥ್ಯ ಹೊಂದಿರುವ ಲೈಫ್&zwnj;ಸ್ಟೈಲ್ ಎಸ್&zwnj;ಯುವಿ ಇದಾಗಿದ್ದು, 2027-28ರ ವೇಳೆಗೆ ಸಿಇ, ಎಲೆಕ್ಟ್ರಿಕ್ ಎರಡೂ ಸಿಗಲಿದೆ.&lt;/p&gt;&lt;p&gt;&lt;strong&gt;ಮಹೀಂದ್ರಾ ವಿಷನ್ ಎಸ್&zwnj;ಎಕ್ಸ್&zwnj;ಟಿ (Vision SXT)&lt;/strong&gt;&lt;/p&gt;&lt;p&gt;ಲೈಫ್&zwnj;ಸ್ಟೈಲ್ ಪಿಕಪ್ ಟ್ರಕ್ ಮಾರುಕಟ್ಟೆಯಲ್ಲಿ ಟೊಯೋಟಾ ಹಿಲಕ್ಸ್, ಇಸುಜು ವಿ-ಕ್ರಾಸ್ ಕಾರುಗಳಿಗೆ ಟಕ್ಕರ್ ಕೊಡಲು ಇದು ಸಿದ್ಧವಾಗುತ್ತಿದೆ. ಆಧುನಿಕ ವಿನ್ಯಾಸ, ಆಲ್-ವೀಲ್ ಡ್ರೈವ್ (AWD) ಸಿಸ್ಟಮ್ ಹಾಗೂ ಮಲ್ಟಿಪಲ್ ಪವರ್&zwnj;ಟ್ರೇನ್ ಆಯ್ಕೆಗಳೊಂದಿಗೆ ಇದು 2027-28 ರ ವೇಳೆಗೆ ಬರಬಹುದು.&lt;/p&gt;&lt;img&gt;&lt;p&gt;&lt;strong&gt;ಮಹೀಂದ್ರಾ ಬಿಇ 07 (BE 07)&lt;/strong&gt;&lt;/p&gt;&lt;p&gt;ಕಂಪನಿಯ 'ಬಾರ್ನ್ ಎಲೆಕ್ಟ್ರಿಕ್' ಸರಣಿಯ ಈ ಕಾರಿನ ರಸ್ತೆ ಪರೀಕ್ಷೆ ಈಗಾಗಲೇ ನಡೆಯುತ್ತಿದೆ. INGLO ಆರ್ಕಿಟೆಕ್ಚರ್ ಆಧಾರಿತ ಈ ಕಾರಿನಲ್ಲಿ 59 kWh ನಿಂದ 79 kWh ವರೆಗಿನ ಬ್ಯಾಟರಿ ಪ್ಯಾಕ್ ಇರಲಿದ್ದು, ಸಿಂಗಲ್ ಚಾರ್ಜ್&zwnj;ನಲ್ಲಿ ಬರೋಬ್ಬರಿ 500 ಕಿಮೀ ಮೈಲೇಜ್ (ರೇಂಜ್) ನೀಡುವ ನಿರೀಕ್ಷೆಯಿದೆ. ಇದು ಹ್ಯುಂಡೈ ಕ್ರೆಟಾ ಇವಿ ಮತ್ತು ಟಾಟಾ ಹ್ಯಾರಿಯರ್ ಇವಿಗೆ ಸ್ಪರ್ಧೆ ಒಡ್ಡಲಿದೆ.&lt;/p&gt;&lt;p&gt;&lt;strong&gt;ಮಹೀಂದ್ರಾ ಥಾರ್ ಇ (Thar.e)&lt;/strong&gt;&lt;/p&gt;&lt;p&gt;ಆಫ್-ರೋಡ್ ಪ್ರಿಯರು ಕಾತರದಿಂದ ಕಾಯುತ್ತಿರುವ ಸಂಪೂರ್ಣ ಎಲೆಕ್ಟ್ರಿಕ್ ಥಾರ್ ಇದಾಗಿದೆ. INGLO P1 ಪ್ಲಾಟ್&zwnj;ಫಾರ್ಮ್ ಆಧಾರಿತ ಈ 5-ಡೋರ್ ಎಲೆಕ್ಟ್ರಿಕ್ ಎಸ್&zwnj;ಯುವಿ 2028ರ ವೇಳೆಗೆ ಭಾರತೀಯ ರಸ್ತೆಗಿಳಿಯುವ ನಿರೀಕ್ಷೆಯಿದೆ.&lt;/p&gt;&lt;p&gt;ಬೊಲೆರೊ (Bolero)ವನ್ನು ಮಾತ್ರ ಮಹೀಂದ್ರಾ ಕೈಬಿಡುತ್ತಿಲ್ಲ. ಮುಂದಿನ ಪೀಳಿಗೆಯ (Next-Gen) ಬೊಲೆರೊ, ನವೀಕರಿಸಿದ ಬೊಲೆರೊ ನಿಯೋ (Bolero Neo) ಕಾರುಗಳು ಹೊಸ ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ಬರಲಿವೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/automobile/car-thars-mahindra-ice-and-electric-and-hybrid-suvs-lined-up-for-launch-india-8gcpfor"/>
        </item>
        <item>
            <title><![CDATA[Indians Use This Most Online: ಭಾರತೀಯರು ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಬಳಸುವ 10 ವಿಷಯಗಳಿವು!]]></title>
            <link>https://kannada.asianetnews.com/gallery/technology/top-10-websites-and-apps-list-indians-use-most-online-g9m61qy</link>
            <guid isPermaLink="true">https://kannada.asianetnews.com/gallery/technology/top-10-websites-and-apps-list-indians-use-most-online-g9m61qy</guid>
            <pubDate>Sun, 21 Jun 2026 12:06:28 +0530</pubDate>
            <description><![CDATA[&lt;p&gt;Top 100 most visited websites in India: ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೋಟ್ಯಂತರ ಜನರು ಪ್ರತಿದಿನ ಆನ್&zwnj;ಲೈನ್&zwnj;ನಲ್ಲಿ ಸಮಯ ಕಳೆಯುತ್ತಾರೆ. ಭಾರತೀಯರು ಇಂಟರ್ನೆಟ್&zwnj;ನಲ್ಲಿ ಅತಿ ಹೆಚ್ಚು ಏನು ನೋಡುತ್ತಾರೆ, ಏನು ಹುಡುಕುತ್ತಾರೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva9fjd5749ppyam4wvgpgrv,imgname-newly-married-women-google-searches--9--1781683177893.png" type="image/jpeg" height="390" width="690"/>
            <content:encoded><![CDATA[&lt;p&gt;Top 100 most visited websites in India: ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೋಟ್ಯಂತರ ಜನರು ಪ್ರತಿದಿನ ಆನ್&zwnj;ಲೈನ್&zwnj;ನಲ್ಲಿ ಸಮಯ ಕಳೆಯುತ್ತಾರೆ. ಭಾರತೀಯರು ಇಂಟರ್ನೆಟ್&zwnj;ನಲ್ಲಿ ಅತಿ ಹೆಚ್ಚು ಏನು ನೋಡುತ್ತಾರೆ, ಏನು ಹುಡುಕುತ್ತಾರೆ?&lt;/p&gt;&lt;img&gt;&lt;p&gt;ಇಂಟರ್ನೆಟ್ ಎಂದರೆ ಗೂಗಲ್ ಎನ್ನುವ ಮಟ್ಟಿಗೆ ಭಾರತೀಯರ ಅಭ್ಯಾಸ ಮುಂದುವರಿದಿದೆ. ಯಾವುದೇ ಮಾಹಿತಿ ಬೇಕಿದ್ದರೂ, ಹೊಸ ವಿಷಯ ತಿಳಿಯಬೇಕಿದ್ದರೂ ಎಲ್ಲರ ಮೊದಲ ಆಯ್ಕೆ ಗೂಗಲ್ ಆಗಿದೆ. ಹೀಗಾಗಿಯೇ, ಭಾರತೀಯರು ಅತಿ ಹೆಚ್ಚು ಭೇಟಿ ನೀಡುವ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಗೂಗಲ್ ಅಗ್ರಸ್ಥಾನದಲ್ಲಿದೆ.&lt;/p&gt;&lt;img&gt;&lt;p&gt;ನಾಲ್ಕನೇ ಸ್ಥಾನದಲ್ಲಿರುವ ವಾಟ್ಸಾಪ್ ಈಗ ಕೇವಲ ಮೆಸೇಜಿಂಗ್ ಆ್ಯಪ್ ಆಗಿ ಉಳಿದಿಲ್ಲ. ಕುಟುಂಬ, ಸ್ನೇಹಿತರು ಮತ್ತು ಕಚೇರಿ ಕೆಲಸದ ಸಂವಹನ ಎಲ್ಲವೂ ಇದರ ಮೇಲೆ ಅವಲಂಬಿತವಾಗಿದೆ. ಬೆಳಗಿನ ಶುಭಾಶಯದಿಂದ ಹಿಡಿದು ಆಫೀಸ್ ಮೀಟಿಂಗ್&zwnj;ಗಳವರೆಗೆ, ವಾಟ್ಸಾಪ್ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿದೆ.&lt;/p&gt;&lt;img&gt;&lt;p&gt;ಭಾರತೀಯರಿಗೆ ವಿಡಿಯೋ ಕಂಟೆಂಟ್ ಎಂದರೆ ಎಷ್ಟು ಇಷ್ಟ ಎಂಬುದನ್ನು ಈ ಪಟ್ಟಿ ಮತ್ತೊಮ್ಮೆ ಸಾಬೀತುಪಡಿಸಿದೆ. ಯೂಟ್ಯೂಬ್ ಎರಡನೇ ಸ್ಥಾನದಲ್ಲಿದ್ದರೆ, ಇನ್&zwnj;ಸ್ಟಾಗ್ರಾಮ್ ಮೂರನೇ ಸ್ಥಾನದಲ್ಲಿದೆ. ಮನರಂಜನೆ, ಶಿಕ್ಷಣ, ಸುದ್ದಿ, ಶಾರ್ಟ್ ವಿಡಿಯೋಗಳಿಗಾಗಿ ಜನರು ಈ ಪ್ಲಾಟ್&zwnj;ಫಾರ್ಮ್&zwnj;ಗಳನ್ನು ಬಳಸುತ್ತಾರೆ. ಅದರಲ್ಲೂ ಯುವಕರು ಹೆಚ್ಚು ಸಮಯವನ್ನು ಇನ್&zwnj;ಸ್ಟಾಗ್ರಾಮ್ ಮತ್ತು ಯೂಟ್ಯೂಬ್&zwnj;ನಲ್ಲಿ ಕಳೆಯುತ್ತಾರೆ.&lt;/p&gt;&lt;img&gt;&lt;p&gt;ಈ ಪಟ್ಟಿಯಲ್ಲಿ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಚಾಟ್&zwnj;ಜಿಪಿಟಿ ಐದನೇ ಸ್ಥಾನದಲ್ಲಿರುವುದು. ಕಡಿಮೆ ಸಮಯದಲ್ಲಿಯೇ ಈ AI ಟೂಲ್ ಭಾರತೀಯರಲ್ಲಿ ಜನಪ್ರಿಯತೆ ಗಳಿಸಿದೆ. ಶಿಕ್ಷಣ, ಉದ್ಯೋಗ, ಕಂಟೆಂಟ್ ಬರವಣಿಗೆ, ಕೋಡಿಂಗ್&zwnj;ನಂತಹ ಹಲವು ಕ್ಷೇತ್ರಗಳಲ್ಲಿ ಜನರು ಚಾಟ್&zwnj;ಜಿಪಿಟಿಯನ್ನು ಬಳಸುತ್ತಿದ್ದಾರೆ. ಭಾರತೀಯರು ಹೊಸ ತಂತ್ರಜ್ಞಾನವನ್ನು ಎಷ್ಟು ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಕ್ರಿಕೆಟ್&zwnj;ಗೆ ಇರುವ ಕ್ರೇಜ್ ಅನ್ನು ಕ್ರಿಕ್&zwnj;ಬಜ್&zwnj;ನ ಸ್ಥಾನ ಮತ್ತೊಮ್ಮೆ ಸಾಬೀತುಪಡಿಸಿದೆ. ಲೈವ್ ಸ್ಕೋರ್, ಮ್ಯಾಚ್ ಅಪ್&zwnj;ಡೇಟ್&zwnj;ಗಳಿಗಾಗಿ ಲಕ್ಷಾಂತರ ಜನರು ಈ ಪ್ಲಾಟ್&zwnj;ಫಾರ್ಮ್ ಬಳಸುತ್ತಾರೆ. ಹಾಗೆಯೇ, ಅಮೆಜಾನ್ ಇಂಡಿಯಾ, ಫ್ಲಿಪ್&zwnj;ಕಾರ್ಟ್&zwnj;ನಂತಹ ಇ-ಕಾಮರ್ಸ್ ಸೈಟ್&zwnj;ಗಳೂ ಟಾಪ್ ಲಿಸ್ಟ್&zwnj;ನಲ್ಲಿವೆ. ಫೇಸ್&zwnj;ಬುಕ್, ಎಕ್ಸ್ (ಟ್ವಿಟರ್), ಲಿಂಕ್ಡ್&zwnj;ಇನ್ ಕೂಡ ಜನಪ್ರಿಯತೆ ಉಳಿಸಿಕೊಂಡಿವೆ. ಮನರಂಜನೆ ಜೊತೆಗೆ ಕೆರಿಯರ್, ವ್ಯಾಪಾರ, ಸಾಮಾಜಿಕ ವಿಷಯಗಳ ಬಗ್ಗೆಯೂ ಭಾರತೀಯರು ಆಸಕ್ತಿ ಹೊಂದಿದ್ದಾರೆಂದು ಈ ಪಟ್ಟಿ ಹೇಳುತ್ತದೆ.&lt;/p&gt;&lt;img&gt;&lt;p&gt;ಈ ಟಾಪ್-10 ಪಟ್ಟಿಯನ್ನು ನೋಡಿದರೆ, ಭಾರತೀಯರು ಈಗ ಕೇವಲ ಮನರಂಜನೆಗೆ ಮಾತ್ರ ಇಂಟರ್ನೆಟ್ ಬಳಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.&amp;nbsp;&lt;/p&gt;&lt;p&gt;AI, ತಂತ್ರಜ್ಞಾನ, ಆನ್&zwnj;ಲೈನ್ ಶಾಪಿಂಗ್, ಕೆರಿಯರ್, ಮಾಹಿತಿ ಸಂಗ್ರಹದಂತಹ ಹಲವು ಅಗತ್ಯಗಳಿಗಾಗಿ ಇಂಟರ್ನೆಟ್ ಅನ್ನು ಬಳಸುತ್ತಿದ್ದಾರೆ. ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಭಾರತದ ಚಿತ್ರಣ ಈ ಪಟ್ಟಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/technology/top-10-websites-and-apps-list-indians-use-most-online-g9m61qy"/>
        </item>
        <item>
            <title><![CDATA[ಅಲೋವಿರಾ ಸೇರಿ ಈ ಎಲ್ಲ ಔಷಧಗಳು, ಚಿಕಿತ್ಸಕಗಳು ಬ್ಯಾನ್​- ಬಳಸಿದ್ರೆ ಅಪಾಯ ಕಟ್ಟಿಟ್ಟದ್ದು: ಲಿಸ್ಟ್​ ಇಲ್ಲಿದೆ]]></title>
            <link>https://kannada.asianetnews.com/health-life/health-ministry-bans-16-fixed-dose-combination-drugs-across-india-with-immediate-effect-suc/articleshow-ks8q4m2</link>
            <guid isPermaLink="true">https://kannada.asianetnews.com/health-life/health-ministry-bans-16-fixed-dose-combination-drugs-across-india-with-immediate-effect-suc/articleshow-ks8q4m2</guid>
            <pubDate>Sun, 21 Jun 2026 13:28:01 +0530</pubDate>
            <description><![CDATA[ಜನರ ಸುರಕ್ಷತೆಗಾಗಿ, ಆರೋಗ್ಯ ಸಚಿವಾಲಯವು 16 ಸ್ಥಿರ ಡೋಸ್ ಸಂಯೋಜನೆ (FDC) ಔಷಧಿಗಳನ್ನು ನಿಷೇಧಿಸಿದೆ. ತಜ್ಞರ ಸಮಿತಿಯ ವರದಿಯ ಪ್ರಕಾರ, ಈ ಔಷಧಿಗಳು ಚಿಕಿತ್ಸಕ ಸಮರ್ಥನೆ ಹೊಂದಿಲ್ಲ ಮತ್ತು ಆರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvmjykhmfzhckaw9te1n1xyf,imgname-banned-medicines-1782028652071.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಜನರ ಸುರಕ್ಷತೆಯನ್ನು ಬಲಪಡಿಸುವ ಮತ್ತು ಔಷಧಿಗಳ ತರ್ಕಬದ್ಧ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಪ್ರಮುಖ ಕ್ರಮದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೇಶಾದ್ಯಂತ ಮಾನವ ಬಳಕೆಗಾಗಿ 16 ಸ್ಥಿರ ಡೋಸ್ ಸಂಯೋಜನೆ (Fixed Dose Combination- FDC) ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿದೆ. 1940 ರ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯ ಸೆಕ್ಷನ್ 26A ಅಡಿಯಲ್ಲಿ ನಿಷೇಧವನ್ನು ವಿಧಿಸಲಾಗಿದೆ ಮತ್ತು ತಕ್ಷಣವೇ ಜಾರಿಗೆ ಬಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಥಿರ ಡೋಸ್ ಸಂಯೋಜನೆಗಳ ಸಮಗ್ರ ಪರಿಶೀಲನೆಗೆ ಕರೆ ನೀಡಿದ್ದ ಸುಪ್ರೀಂ ಕೋರ್ಟ್ ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.&lt;/p&gt;&lt;p&gt;ಅಲೋವಿರಾದ ಹೆಸರಿನಲ್ಲಿ ನಡೆಯುತ್ತಿರುವ ಔಷಧಗಳು ಸೇರಿದಂತೆ ಹಲವಾರು ಔಷಧಗಳು ಸದ್ಯ ಬ್ಯಾನ್​ ಆಗಿವೆ. ಅಪಾಯಕಾರಿ ಗುಣಮಟ್ಟವನ್ನು ದೃಢೀಕರಿಸಿದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ನಿರ್ದೇಶನಗಳ ಮೇರೆಗೆ, ಔಷಧಗಳ ತಾಂತ್ರಿಕ ಸಲಹಾ ಮಂಡಳಿ (DTAB) ವಿವಿಧ FDC ಗಳನ್ನು ಪರೀಕ್ಷಿಸಲು ಮತ್ತು ಅವುಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಚಿಕಿತ್ಸಕ ಮೌಲ್ಯವನ್ನು ನಿರ್ಣಯಿಸಲು ತಜ್ಞರ ಸಮಿತಿಯನ್ನು ರಚಿಸಿತು. ವಿವರವಾದ ವೈಜ್ಞಾನಿಕ ಮೌಲ್ಯಮಾಪನವನ್ನು ನಡೆಸಿದ ನಂತರ, ತಜ್ಞರ ಸಮಿತಿಯು 16 FDC ಗಳು ಸಾಕಷ್ಟು ಚಿಕಿತ್ಸಕ ಸಮರ್ಥನೆಯನ್ನು ಹೊಂದಿಲ್ಲ ಮತ್ತು ಅವುಗಳ ನಿರಂತರ ಬಳಕೆಯು ಸಂಭಾವ್ಯ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು ಎಂದು ತೀರ್ಮಾನಿಸಿತು. ಈ ಸಂಶೋಧನೆಗಳ ಆಧಾರದ ಮೇಲೆ, ಸರ್ಕಾರವು ಈ ಸಂಯೋಜನೆಗಳನ್ನು ನಿಷೇಧಿಸಲು ನಿರ್ಧರಿಸಿತು, ಅವುಗಳ ಬಳಕೆಗೆ ಸಂಬಂಧಿಸಿದ ಅಪಾಯಗಳು ಯಾವುದೇ ಸಂಭಾವ್ಯ ಪ್ರಯೋಜನಗಳನ್ನು ಮೀರಿಸುತ್ತದೆ ಎಂದು ಹೇಳಿದೆ.&lt;/p&gt;&lt;h2&gt;&lt;strong&gt;ಸರ್ಕಾರ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ನಿಷೇಧಿತ ಔಷಧಿಗಳು ಕೆಲವು ಚರ್ಮರೋಗ ಉತ್ಪನ್ನಗಳು, ನೋವು ನಿವಾರಕ ಮತ್ತು ಆಂಟಿಸ್ಪಾಸ್ಮೊಡಿಕ್ ಔಷಧಗಳು, ಹಾಗೆಯೇ ಕೆಲವು ಪ್ರತಿಜೀವಕ ಆಧಾರಿತ ಸೂತ್ರೀಕರಣಗಳು ಸೇರಿದಂತೆ ವಿವಿಧ ಚಿಕಿತ್ಸಕ ವರ್ಗಗಳಿಗೆ ಸೇರಿವೆ. ಈ ಸಂಯೋಜನೆಗಳು ಅಭಾಗಲಬ್ಧವೆಂದು ಕಂಡುಬಂದಿವೆ ಮತ್ತು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾಗಿಲ್ಲ ಎಂದು ಸಚಿವಾಲಯ ಹೇಳಿದೆ.&lt;/p&gt;&lt;p&gt;ಸುರಕ್ಷಿತ, ಪರಿಣಾಮಕಾರಿ ಮತ್ತು ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಔಷಧಿಗಳು ಮಾತ್ರ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಸರ್ಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ವ್ಯಾಪಕವಾದ ವೈಜ್ಞಾನಿಕ ವಿಮರ್ಶೆಗಳ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಮಾನವ ಬಳಕೆಗಾಗಿ ಗುರುತಿಸಲಾದ 16 FDC ಗಳ ಮಾರಾಟ, ಮಾರಾಟ, ವಿತರಣೆ ಮತ್ತು ಪೂರೈಕೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ದೇಶಾದ್ಯಂತ ನಿಷೇಧಿಸಲಾಗಿದೆ. ಸಚಿವಾಲಯವು ಎಲ್ಲಾ ರಾಜ್ಯ ಔಷಧ ನಿಯಂತ್ರಕರು, ನಿಯಂತ್ರಕ ಅಧಿಕಾರಿಗಳು ಮತ್ತು ಜಾರಿ ಸಂಸ್ಥೆಗಳಿಗೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮತ್ತು ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶಿಸಿದೆ. ತಯಾರಕರು, ಆಮದುದಾರರು, ವಿತರಕರು ಮತ್ತು ಇತರ ಪಾಲುದಾರರು ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಪರಿಣಾಮ ಬೀರುವ ಉತ್ಪನ್ನಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.&lt;/p&gt;&lt;h3&gt;&lt;strong&gt;ಬ್ಯಾನ್​ ಆಗಿರುವ ಔಷಧಗಳ ಪಟ್ಟಿ ಇಲ್ಲಿದೆ.&lt;/strong&gt;&lt;/h3&gt;&lt;p&gt;ಅಸಿಟೈಲ್ ಸ್ಯಾಲಿಸಿಲಿಕ್ ಆಮ್ಲ + ಎಥೋಹೆಪ್ಟಜಿನ್ (Acetyl Salicylic acid + Ethoheptazine)&lt;/p&gt;&lt;p&gt;ಅಲೋ ಸಾರ + ಅಲಾಂಟೊಯಿನ್ + ಆಲ್ಫಾಟೊಕೊಫೆರಾಲ್ ಅಸಿಟೇಟ್ + ಡಿ-ಪೆಂಥೆನಾಲ್ + ವಿಟಮಿನ್ ಎ (Aloe Extract + Allantoin + Alphatocopherol Acetate +D-Penthenol + Vitamin A)&lt;/p&gt;&lt;p&gt;ಅಲೋ ಸಾರ +ವಿಟಮಿನ್ ಇ + ಡೈಮೆಥಿಕೋನ್ + ಗ್ಲಿಸರಿನ್ (Aloe Extract +Vitamin E + Dimethicone + Glycerine)&lt;/p&gt;&lt;p&gt;ಅಲೋ ವೆರಾ + ಜೊಜೊಬಾ ಎಣ್ಣೆ +ವಿಟಮಿನ್ ಇ (Aloe Vera +Jojoba Oil +Vitamin E)&lt;/p&gt;&lt;p&gt;ಅಲೋ ವೆರಾ + ಕಿತ್ತಳೆ ಎಣ್ಣೆ (Aloe vera + Orange oil)&lt;/p&gt;&lt;p&gt;ಅಲೋ ವೆರಾ + ಜೊಜೊಬಾ ಎಣ್ಣೆ + ಗೋಧಿ ಸೂಕ್ಷ್ಮಾಣು ಎಣ್ಣೆ + ಚಹಾ ಮರದ ಎಣ್ಣೆ (Aloe vera + Jojoba oil + Wheat germ oil + Tea tree oil)&lt;/p&gt;&lt;p&gt;ಅಲೋ ವೆರಾ + ವಿಟಮಿನ್ ಇ + ಗಿಡಮೂಲಿಕೆ (Aloe vera + Vitamin E + Herbal)&lt;/p&gt;&lt;p&gt;ಡೈಸೈಕ್ಲೋಮೈನ್ + ಪ್ಯಾರಸಿಟಮಾಲ್ + ಕ್ಲಿಡಿನಿಯಮ್ ಬ್ರೋಮೈಡ್ (Dicyclomine + Paracetamol + Clidinium Bromide)&lt;/p&gt;&lt;p&gt;ಡೈಸೈಕ್ಲೋಮೈನ್ + ಪ್ಯಾರಸಿಟಮಾಲ್ + ಕ್ಲಿಡಿನಿಯಮ್ ಬ್ರೋಮೈಡ್ + ಕ್ಲೋರ್ಡಿಯಾಜೆಪಾಕ್ಸೈಡ್ (Dicyclomine +Paracetamol + Clidinium Bromide + Chlordiazepoxide )&lt;/p&gt;&lt;p&gt;ಗ್ಲಿಕ್ಲಾಜೈಡ್ + ಕ್ರೋಮಿಯಂ ಪಿಕೋಲಿನೇಟ್ (Gliclazide + Chromium Picolinate)&lt;/p&gt;&lt;p&gt;ಪ್ಯಾರಸಿಟಮಾಲ್ + ಲಿಗ್ನೋಕೇನ್ (Paracetamol + Lignocaine)&lt;/p&gt;&lt;p&gt;ಅಮೋಕ್ಸಿಸಿಲಿನ್ + ಸೆರಾಟಿಯೋಪೆಪ್ಟಿಡೇಸ್ + ಲ್ಯಾಕ್ಟೋಬಾಸಿಲಸ್ ಸ್ಪೋರೋಜೆನ್ಸ್ (Amoxicillin + Serratiopeptidase+ Lactobacillus Sporogenes)&lt;/p&gt;&lt;p&gt;ಅಮೋಕ್ಸಿಸಿಲಿನ್ + ಕ್ಲೋಕ್ಸಾಸಿಲಿನ್ + ಲ್ಯಾಕ್ಟಿಕ್ ಆಮ್ಲ ಬ್ಯಾಸಿಲಸ್ + ಸೆರಾಟಿಯೋಪೆಪ್ಟಿಡೇಸ್ (Amoxicillin + Cloxacillin + Lactic acid bacillus + Serratiopeptidase)&lt;/p&gt;&lt;p&gt;ಅಮೋಕ್ಸಿಸಿಲಿನ್ + ಸೆರಾಟಿಯೋಪೆಪ್ಟಿಡೇಸ್ (Amoxicillin + Serratiopeptidase)&lt;/p&gt;&lt;p&gt;ಸೆಫಾಡ್ರಾಕ್ಸಿಲ್ + ಪ್ರೊಬೆನೆಸಿಡ್ (Cefadroxyl + Probenecid)&lt;/p&gt;&lt;p&gt;ಸೆಫುರಾಕ್ಸಿಮ್ + ಸೆರಾಟಿಯೋಪೆಪ್ಟಿಡೇಸ್ (Cefuroxime + Serratiopeptidase)&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/health-life/health-ministry-bans-16-fixed-dose-combination-drugs-across-india-with-immediate-effect-suc/articleshow-ks8q4m2"/>
        </item>
        <item>
            <title><![CDATA[ಖ್ಯಾತ ಪತ್ರಕರ್ತನ ಪತ್ನಿಯ ಹತ್ಯೆ: ಗಿಳಿ ಹೇಳಿದ  ಸಾಕ್ಷಿಯಿಂದ ಕೊಲೆಗಾರ ಸಿಕ್ಕಿಬಿದ್ದ ರೋಚಕ ಸ್ಟೋರಿ]]></title>
            <link>https://kannada.asianetnews.com/crime/man-convicted-of-2014-murder-with-parrots-testimony-gets-life-in-jail-suc/articleshow-egy8fdu</link>
            <guid isPermaLink="true">https://kannada.asianetnews.com/crime/man-convicted-of-2014-murder-with-parrots-testimony-gets-life-in-jail-suc/articleshow-egy8fdu</guid>
            <pubDate>Sun, 21 Jun 2026 14:38:27 +0530</pubDate>
            <description><![CDATA[2014ರಲ್ಲಿ ಆಗ್ರಾದಲ್ಲಿ ನಡೆದ ಪತ್ರಕರ್ತನ ಪತ್ನಿ ನೀಲಂ ಶರ್ಮಾ ಕೊಲೆ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಮನೆಯಲ್ಲಿ ಸಾಕಿದ್ದ ಗಿಳಿಯು ಸೋದರಳಿಯ 'ಆಶು' ಹೆಸರನ್ನು ಕೂಗುವ ಮೂಲಕ ಪೊಲೀಸರಿಗೆ ಮಹತ್ವದ ಸುಳಿವು ನೀಡಿತು. ಇದೇ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kvmpzz7y1pvn5q7srjz3sjf5,imgname-crime-1782032891134.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಪರಾಧಿ ಸದಾ ಚಿಕ್ಕದೊಂದು ಸುಳಿವನ್ನಾದರೂ ಬಿಟ್ಟು ಹೋಗಿರುತ್ತಾನೆ ಎನ್ನುವ ಮಾತಿದೆ. ಈಗ ಟೆಕ್ನಾಲಾಜಿ ಎಷ್ಟು ಮುಂದುವರೆದಿದೆ ಎಂದರೆ, ಕೊಲೆಯಂಥ ಪ್ರಕರಣಗಳಲ್ಲಿ ಸಾಕ್ಷಿನಾಶ ಮಾಡಲು ಏನೆಲ್ಲಾ ಬೇಕೋ ಎಲ್ಲವನ್ನೂ ಮಾಡಿ ಹೋಗುತ್ತಾರೆ. ಇದರ ಹೊರತಾಗಿಯೂ ಚಿಕ್ಕ ಸುಳಿವು ಸಿಕ್ಕರೆ, ಟ್ಯಾಲೆಂಡೆಟ್​ ಪೊಲೀಸರಿಗೆ ಅದೇ ಸಾಕಾಗುತ್ತದೆ ಅಪರಾಧಿಯತ್ತ ಹೋಗಲು. ಆದರೆ ಇಲ್ಲೊಂದು ಕುತೂಹಲದ ಘಟನೆಯಲ್ಲಿ, ಮನೆಯಲ್ಲಿ ಸಾಕಿದ್ದ ಗಿಳಿಯಿಂದಲೇ ಅಪರಾಧಿ ಸಿಕ್ಕಿದ್ದಾನೆ. ಕೊಲೆಗಾರನ ಸುಳಿವು ಸಾಧ್ಯವೇ ಇಲ್ಲ ಎನ್ನುವ ಹಂತದಲ್ಲಿ ಈ ಗಿಳಿ ಕೊಟ್ಟ ಕ್ಲೂ, ಇಡೀ ಪ್ರಕರಣವನ್ನೇ ರೋಚಕ ಘಟ್ಟಕ್ಕೆ ಕರೆದೊಯ್ದು ಕೊನೆಗೂ ಕೊಲೆಗಾರ ಸಿಕ್ಕಿಬಿದಿದ್ದಾನೆ.&lt;/p&gt;&lt;h2&gt;&lt;strong&gt;ಪತ್ರಕರ್ತನ ಪತ್ನಿ ಕೊಲೆ&lt;/strong&gt;&lt;/h2&gt;&lt;p&gt;ಅಂದಹಾಗೆ ಇದು 2014ರಲ್ಲಿ ನಡೆದಿರುವ ಘಟನೆ. ಉತ್ತರ ಪ್ರದೇಶದ ಆಗ್ರಾದ ಪ್ರಮುಖ ಪತ್ರಿಕೆಯ ಪ್ರಧಾನ ಸಂಪಾದಕ ವಿಜಯ್ ಶರ್ಮಾ ಅವರ ಪತ್ನಿ ನೀಲಂ ಶರ್ಮಾ ಅವರ ಕೊಲೆ ಪ್ರಕರಣ ಇದಾಗಿದೆ. ಫೆಬ್ರವರಿ 20, 2014 ರಂದು ನೀಲಂ ಶರ್ಮಾ ಅವರನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಲಾಗಿತ್ತು. ಕೊಲೆಯ ನಂತರ, ಅವರ ಮನೆಯನ್ನು ದರೋಡೆ ಮಾಡಲಾಗಿತ್ತು. ಆದರೆ ಯಾವುದೇ ರೀತಿಯಲ್ಲಿ ಕೊಲೆಗಾರ ತನ್ನ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಪೊಲೀಸರಿಗೆ ಇದು ದೊಡ್ಡ ತಲೆನೋವಾಗಿತ್ತು. ಆದರೆ, ಅವರ ಮನೆಯಲ್ಲಿ ಸಾಕಿದ್ದ ಗಿಳಿಯಿಂದ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಮನೆಯನ್ನು ಶೋಧಿಸುತ್ತಿದ್ದಾಗ, ಅವರಿಗೆ ಯಾವ ಸುಳಿವೂ ಸಿಗದ್ದನ್ನು ನೋಡಿದ್ದ ಗಿಳಿ, ಶರ್ಮಾ ಅವರ ಸೋದರಳಿಯನ ಹೆಸರನ್ನು ಕಿರುಚಲು ಪ್ರಾರಂಭಿತ್ತು. ಆದರೆ, ಅದರ ಮಾತು ಪೊಲೀಸರಿಗೆ ಅರ್ಥವೇ ಆಗಿರಲಿಲ್ಲ. ಬಳಿಕ ಗಿಳಿ ಒಂದೇ ಸಮನೆ ಒಂದು ಹೆಸರನ್ನು ಕಿರುಚಲು ಆರಂಭಿಸಿದಾಗ ವಿಜಯ್ ಶರ್ಮಾ ಅವರಿಗೆ ಡೌಟ್​ ಬಂತು.&lt;/p&gt;&lt;p&gt;ಬಳಿಕ ವಿಜಯ್ ಶರ್ಮಾ ಅನುಮಾನಗೊಂಡು ಸೋದರಳಿಯನನ್ನು ಪ್ರಶ್ನಿಸಲು ಪೊಲೀಸರನ್ನು ವಿನಂತಿಸಿದರು. ಆ ಬಳಿಕ ಸೋದರಳಿಯ ಆಶುವನ್ನು ಪೊಲೀಸರು ತಮ್ಮದೇ ರೀತಿಯಲ್ಲಿ ಪ್ರಶ್ನಿಸಿದಾಗ, ತನ್ನ ಸ್ನೇಹಿತ ರೋನಿ ಮ್ಯಾಸ್ಸಿಯ ಸಹಾಯದಿಂದ ನೀಲಂ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ. ಕೊಲೆಯಾದ ಒಂಬತ್ತು ವರ್ಷಗಳ ನಂತರ ವಿಶೇಷ ನ್ಯಾಯಾಧೀಶ ಮೊಹಮ್ಮದ್ ರಶೀದ್ ಆರೋಪಿಗಳಾದ ಆಶು ಮತ್ತು ರೋನಿ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದರು ಮತ್ತು ಆಶು ಅವರ ತಪ್ಪೊಪ್ಪಿಗೆ ಮತ್ತು ನಂತರದ ಸಾಕ್ಷ್ಯಗಳ ಆಧಾರದ ಮೇಲೆ 72,000 ರೂ. ದಂಡ ವಿಧಿಸಿದರು.&lt;/p&gt;&lt;h3&gt;&lt;strong&gt;ನಾಯಿಯನ್ನೂ ಕೊಂದಿದ್ದ ಪಾಪಿಗಳು&lt;/strong&gt;&lt;/h3&gt;&lt;p&gt;ವಿಜಯ್ ಶರ್ಮಾ ಫೆಬ್ರವರಿ 20, 2014 ರಂದು ಫಿರೋಜಾಬಾದ್&zwnj;ನಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಲು ತನ್ನ ಮಗ ರಾಜೇಶ್ ಮತ್ತು ಮಗಳು ನಿವೇದಿತಾ ಜೊತೆ ಮನೆಯಿಂದ ಹೊರಟಿದ್ದರು. ನೀಲಂ ಮನೆಯಲ್ಲಿಯೇ ಇದ್ದರು. ವಿಜಯ್ ತಡರಾತ್ರಿ ಹಿಂತಿರುಗಿದಾಗ, ಅವರ ಪತ್ನಿ ಮತ್ತು ಸಾಕು ನಾಯಿಯ ಶವಗಳನ್ನು ಕಂಡು ಆಶ್ಚರ್ಯಚಕಿತರಾದರು. ಇಬ್ಬರನ್ನೂ ಹರಿತವಾದ ವಸ್ತುವಿನಿಂದ ಕೊಲ್ಲಲಾಯಿತು. ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಕೆಲವು ಶಂಕಿತರನ್ನು ಹಿಡಿಯಲಾಯಿತು.&lt;/p&gt;&lt;p&gt;ಮತ್ತೊಂದೆಡೆ, ವಿಜಯ್ ಶರ್ಮಾ ಅವರ ಸಾಕು ಗಿಳಿ ತಿನ್ನುವುದು ಮತ್ತು ಕುಡಿಯುವುದನ್ನು ನಿಲ್ಲಿಸಿ ಮೌನವಾಯಿತು. ಶರ್ಮಾಗೆ ಗಿಣಿಯೇ ಕೊಲೆಗೆ ಸಾಕ್ಷಿಯಾಗಿರಬಹುದೆಂದು ಅನುಮಾನವಿತ್ತು. ಗಿಣಿಯ ಮುಂದೆ ಶಂಕಿತರನ್ನು ಒಬ್ಬೊಬ್ಬರಾಗಿ ಹೆಸರಿಸಲು ಪ್ರಾರಂಭಿಸಿದಾಗ, ಆಶುವಿನ ಹೆಸರಿನಿಂದ ಪಕ್ಷಿ ಗಾಬರಿಗೊಂಡು &quot;ಆಶು-ಆಶು&quot; ಎಂದು ಕಿರುಚಲು ಪ್ರಾರಂಭಿಸಿತು. ಪೊಲೀಸರ ಮುಂದೆಯೂ ಸಹ, ಆಶು ಹೆಸರಿಗೆ ಗಿಣಿ ಅದೇ ಪ್ರತಿಕ್ರಿಯೆಯನ್ನು ನೀಡಿದಾಗ, ಅವನನ್ನು ಬಂಧಿಸಲಾಯಿತು. ಪೊಲೀಸರು ತಮ್ಮ ತನಿಖೆಯ ಸಮಯದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಹಾಯ ಪಡೆದವನೇ ಕೊಲೆ ಮಾಡಿದ&lt;/strong&gt;&lt;/h3&gt;&lt;p&gt;ಎಂಬಿಎ ಪದವಿ ಪಡೆಯಲು ನೀಲಂ ತಂದೆ ಸೋದರಳಿಯನಿಗೆ 80,000 ರೂ.ಗಳನ್ನು ಸಹ ನೀಡಿದ್ದರು. ಮನೆಯಲ್ಲಿ ಆಭರಣ ಮತ್ತು ನಗದು ಎಲ್ಲಿ ಇಡಲಾಗಿದೆ ಎಂದು ಆಶುಗೆ ತಿಳಿದಿತ್ತು ಮತ್ತು ಅವನು ದರೋಡೆಗೆ ಯೋಜಿಸಿದ್ದನು ಎಂದು ತಿಳಿದುಬಂತು. ಅವನು ಸಾಕು ನಾಯಿಯನ್ನು ಒಂಬತ್ತು ಬಾರಿ ಮತ್ತು ನೀಲಂ ಅವರನ್ನು 14 ಬಾರಿ ಚಾಕುವಿನಿಂದ ಇರಿದನು, ಇದು ಅವನ ಏಕೈಕ ಉದ್ದೇಶ ಕೊಲ್ಲುವುದು ಮತ್ತು ಲೂಟಿ ಮಾಡುವುದು ಎಂದು ಸೂಚಿಸುತ್ತದೆ ಎಂದು ಅವರು ಹೇಳಿದರು. ಪ್ರಕರಣದ ಉದ್ದಕ್ಕೂ ಗಿಳಿಯ ಬಗ್ಗೆ ಉಲ್ಲೇಖಿಸಲಾಗಿದೆ, ಆದರೆ ಸಾಕ್ಷ್ಯವಾಗಿ ಹಾಜರುಪಡಿಸಲಾಗಿಲ್ಲ ಏಕೆಂದರೆ ಸಾಕ್ಷ್ಯ ಕಾಯ್ದೆಯಲ್ಲಿ ಅಂತಹ ಯಾವುದೇ ನಿಬಂಧನೆ ಇಲ್ಲ. ಘಟನೆಯ ಆರು ತಿಂಗಳ ನಂತರ ಪಕ್ಷಿ ಸತ್ತುಹೋಯಿತು. ವಿಜಯ್ ಶರ್ಮಾ ನವೆಂಬರ್ 14, 2020 ರಂದು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿಧನರಾದರು. ಸದ್ಯ ಆಶುವನ್ನು ಗಲ್ಲಿಗೇರಿಸಬೇಕು ಎಂದು ನೀಲಂ ಅವರ ಪೋಷಕರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/man-convicted-of-2014-murder-with-parrots-testimony-gets-life-in-jail-suc/articleshow-egy8fdu"/>
        </item>
        <item>
            <title><![CDATA[ವಿರಾಟ್‌ ಕೊಹ್ಲಿ, ಸಚಿನ್‌ ಆಟ ಗೊತ್ತು; Vaibhav Suryavanshi ಮುಂದೆ ಹಾಗೆ ಆಗ್ತಾನೆ, ನೋಡ್ತಿರಿ: ಪಾಕ್ ಆಟಗಾರ]]></title>
            <link>https://kannada.asianetnews.com/gallery/cricket-sports/pakistan-player-shoaib-akhtar-on-indian-cricketer-vaibhav-suryavanshi-g0vp73g</link>
            <guid isPermaLink="true">https://kannada.asianetnews.com/gallery/cricket-sports/pakistan-player-shoaib-akhtar-on-indian-cricketer-vaibhav-suryavanshi-g0vp73g</guid>
            <pubDate>Sun, 21 Jun 2026 18:41:58 +0530</pubDate>
            <description><![CDATA[&lt;p&gt;ಇಷ್ಟು ವರ್ಷಗಳ ಕಾಲ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿಯ ಆಟ ನೋಡಿದ್ದ ವೀಕ್ಷಕರಿಗೆ ಈಗ ವೈಭವ್&zwnj; ಸೂರ್ಯವಂಶಿ ಆರ್ಭಟ ನೋಡುವ ಸಮಯ ಸಿಕ್ಕಿದೆ. ಕೇವಲ 15 ವರ್ಷದ ಹುಡುಗನೊಬ್ಬ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್&zwnj;ನ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಸಾಮಾನ್ಯ ಪ್ರತಿಭೆ ಅಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvn4p1vys5jpjqwtkma5jjh8,imgname-new-project---2026-06-21t183437.278-1782047246206.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಷ್ಟು ವರ್ಷಗಳ ಕಾಲ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿಯ ಆಟ ನೋಡಿದ್ದ ವೀಕ್ಷಕರಿಗೆ ಈಗ ವೈಭವ್&zwnj; ಸೂರ್ಯವಂಶಿ ಆರ್ಭಟ ನೋಡುವ ಸಮಯ ಸಿಕ್ಕಿದೆ. ಕೇವಲ 15 ವರ್ಷದ ಹುಡುಗನೊಬ್ಬ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್&zwnj;ನ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಸಾಮಾನ್ಯ ಪ್ರತಿಭೆ ಅಲ್ಲ.&lt;/p&gt;&lt;img&gt;&lt;p&gt;ಕೇವಲ ಐದೇ ಓವರ್&zwnj;ಗಳಲ್ಲಿ ಗೇಮ್&zwnj; ಚೇಂಜರ್&zwnj; ಮಾಡಿದ್ದರು. ಎಡಗೈ ಬ್ಯಾಟರ್&zwnj;ನ ಆಟ ಈ ಪರಿಯ ಆಟ ನೋಡಿದಾಗ, ಕ್ರಿಕೆಟ್ ಜಗತ್ತಿನ ಭವಿಷ್ಯದ ಸೂಪರ್&zwnj;ಸ್ಟಾರ್ ಎಂಬ ಭಾವನೆ ಬರುತ್ತದೆ.&lt;/p&gt;&lt;img&gt;&lt;p&gt;ವೈಭವ್ ಸೂರ್ಯವಂಶಿ ಬ್ಯಾಟಿಂಗ್&zwnj;ನಲ್ಲಿ ವಿಭಿನ್ನವಾದ ತೇಜಸ್ಸಿದೆ. ಕ್ರೀಸ್&zwnj;ಗೆ ಬಂದ ತಕ್ಷಣ, ಬೌಲಿಂಗ್&zwnj; ಮಾಡೋರು ಯಾರೇ ಇರಲಿ, ಹಿಂದೆ ಮುಂದೆ ನೋಡದೆ ಸಿಕ್ಸ್&zwnj;, ಫೋರ್&zwnj; ಬಾರಿಸಿದ್ದಾರೆ.&lt;/p&gt;&lt;img&gt;&lt;p&gt;ಅಂಡರ್-19 ಕ್ರಿಕೆಟ್&zwnj;ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ್ದರು, ಇತ್ತೀಚೆಗೆ ಐಪಿಎಲ್ (IPL) ಹರಾಜಿನಲ್ಲಿ ಕೋಟಿ ಮೊತ್ತಕ್ಕೆ ಹರಾಜು ಆಗಿದ್ದರು. ಇದು ನಿಜಕ್ಕೂ ದೊಡ್ಡ ದಾಖಲೆ ಎನ್ನಬಹುದು.&lt;/p&gt;&lt;img&gt;&lt;p&gt;ಈ ಬಗ್ಗೆ ಪಾಕಿಸ್ತಾನಿ ಮಾಜಿ ಆಟಗಾರ ಶೋಯೆಬ್&zwnj; ಅಖ್ತರ್&zwnj; ಮಾತನಾಡಿದ್ದು, &ldquo;ವೈಭವ್ ಸೂರ್ಯವಂಶಿ ವಿಶ್ವದ ಎಂಟನೇ ಅದ್ಭುತ. ನಾನು ಸಚಿನ್ ತೆಂಡೂಲ್ಕರ್ ಅವರ ಆಟವನ್ನೂ ನೋಡಿದ್ದೇನೆ ಮತ್ತು ವಿರಾಟ್ ಕೊಹ್ಲಿ ಅವರ ಆಟವನ್ನೂ ನೋಡಿದ್ದೇನೆ, ಆದರೆ ವೈಭವ್ ಸೂರ್ಯವಂಶಿ ಬೇರೆಯದೇ ಆದ ಸಾಮರ್ಥ್ಯವಿರುವ ಆಟಗಾರ. ಅವರು ಕೇವಲ ಐದು ಓವರ್&zwnj;ಗಳಲ್ಲಿ ಪಂದ್ಯದ ದಿಕ್ಕನ್ನೇ ಏಕಾಂಗಿಯಾಗಿ ಬದಲಾಯಿಸಬಲ್ಲರು. ಕೇವಲ 15 ವರ್ಷದ ವಯಸ್ಸಿನಲ್ಲಿ ಯಾರಾದರೂ ಈ ರೀತಿ ಬ್ಯಾಟಿಂಗ್ ಮಾಡಬಹುದು ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ವಿಶ್ವ ಕ್ರಿಕೆಟ್&zwnj;ನ ಅತಿ ದೊಡ್ಡ ತಾರೆಯಾಗಲಿದ್ದಾರೆ ಮತ್ತು ಅವರು ಪ್ರತಿಯೊಂದು ದಾಖಲೆಯನ್ನು ಮುರಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ&rdquo; ಎಂದಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/pakistan-player-shoaib-akhtar-on-indian-cricketer-vaibhav-suryavanshi-g0vp73g"/>
        </item>
        <item>
            <title><![CDATA[ಮಿಸಸ್​ ಇಂಡಿಯಾ 2026ನಲ್ಲಿ ನೀವೂ ಪಾಲ್ಗೊಳ್ಬೋದು- ಅಪ್ಲೈ ಮಾಡೋದು ಹೇಗೆ, ಅರ್ಹತೆ ಏನು? ಫುಲ್​ ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/gallery/fashion/mrs-india-2026-pageant-application-invited-how-to-apply-and-last-date-suc-6uxw0an</link>
            <guid isPermaLink="true">https://kannada.asianetnews.com/gallery/fashion/mrs-india-2026-pageant-application-invited-how-to-apply-and-last-date-suc-6uxw0an</guid>
            <pubDate>Sun, 21 Jun 2026 20:06:32 +0530</pubDate>
            <description><![CDATA[ಮಿಸೆಸ್ ಇಂಡಿಯಾ ಪೇಜೆಂಟ್ಸ್ ಪ್ರೈವೇಟ್ ಲಿಮಿಟೆಡ್ ವಿವಾಹಿತ ಮಹಿಳೆಯರಿಗಾಗಿ ಮಿಸೆಸ್ ಇಂಡಿಯಾ ಸ್ಪರ್ಧೆಯನ್ನು ಆಯೋಜಿಸಿದೆ. ವಯಸ್ಸು, ಎತ್ತರ ಅಥವಾ ತೂಕದ ಯಾವುದೇ ನಿರ್ಬಂಧಗಳಿಲ್ಲದೆ, ವಿವಾಹಿತ, ವಿಚ್ಛೇದಿತ, ಅಥವಾ ವಿಧವೆಯರು ಭಾಗವಹಿಸಬಹುದು. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvn9jd0vns2d7ebnyx4gnnpz,imgname-mrs-india-1782052369435.jpg" type="image/jpeg" height="390" width="690"/>
            <content:encoded><![CDATA[ಮಿಸೆಸ್ ಇಂಡಿಯಾ ಪೇಜೆಂಟ್ಸ್ ಪ್ರೈವೇಟ್ ಲಿಮಿಟೆಡ್ ವಿವಾಹಿತ ಮಹಿಳೆಯರಿಗಾಗಿ ಮಿಸೆಸ್ ಇಂಡಿಯಾ ಸ್ಪರ್ಧೆಯನ್ನು ಆಯೋಜಿಸಿದೆ. ವಯಸ್ಸು, ಎತ್ತರ ಅಥವಾ ತೂಕದ ಯಾವುದೇ ನಿರ್ಬಂಧಗಳಿಲ್ಲದೆ, ವಿವಾಹಿತ, ವಿಚ್ಛೇದಿತ, ಅಥವಾ ವಿಧವೆಯರು ಭಾಗವಹಿಸಬಹುದು. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ.&lt;img&gt;&lt;p&gt;ಮಿಸೆಸ್ ಇಂಡಿಯಾ ಪೇಜೆಂಟ್ಸ್ ಅಂಡ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ವಿವಾಹಿತೆಯರಿಗಾಗಿ ಪ್ರತಿವರ್ಷ ನಡೆಸುವ ಮಿಸೆಸ್​ ಇಂಡಿಯಾದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;img&gt;&lt;p&gt;ಭಾರತದ ನಾಗರಿಕರು ಯಾರೇ ಆದರೂ ಇದರಲ್ಲಿ ಪಾಲ್ಗೊಳ್ಳಬಹುದು. ಮದುವೆಯಾದವರು, ವಿಚ್ಛೇದಿತರು, ವಿಧವೆಯರು ಸೇರಿದಂತೆ ಯಾವುದೇ ಮಹಿಳೆ ಇದರಲ್ಲಿ ಪಾಲ್ಗೊಳ್ಳಬಹುದು. ಇದಕ್ಕೆ ಯಾವುದೇ ವಯೋಮಿತಿ ನಿಗದಿ ಪಡಿಸಲಾಗಿಲ್ಲ. ಸಾಮಾನ್ಯವಾಗಿ 18 ರಿಂದ 65+ ವರ್ಷ ವಯಸ್ಸಿನವರಿಗೆ ಇಲ್ಲಿ ಅವಕಾಶ ಇದ್ದು, ಉಪ-ವರ್ಗಗಳಾಗಿ ವಿಂಗಡಿಸಲಾಗಿದೆ (ಉದಾ., 18-35 ವರ್ಷ ವಯಸ್ಸಿನವರಿಗೆ G-1 ಮತ್ತು 36+ ವರ್ಷ ವಯಸ್ಸಿನವರಿಗೆ G-2 ಅಥವಾ ಕ್ಲಾಸಿಕ್) ಹೀಗೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಸೌಂದರ್ಯ ಸ್ಪರ್ಧೆಗಳಿಗೆ ಹೈಟು, ವೇಟು ಇಂತಿಷ್ಟೇ ಎಂದು ಇರುತ್ತದೆ. ಆದರೆ ಮಿಸಸ್​ ಇಂಡಿಯಾದಲ್ಲಿ ಪಾಲ್ಗೊಳ್ಳಲು ಇದ್ಯಾವುದೇ ಕಂಡೀಷನ್ಸ್​ ಇಲ್ಲ. ಯಾರು ಬೇಕಾದರೂ, ಹೇಗೆ ಇದ್ದರೂ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.&lt;/p&gt;&lt;img&gt;&lt;p&gt;ಇದೇ ಜೂನ್​ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. . ವೈವಾಹಿಕ ಸ್ಥಿತಿ: ವಿವಾಹಿತ, ಬೇರ್ಪಟ್ಟ, ವಿಚ್ಛೇದಿತ ಮತ್ತು ವಿಧವೆ ಮಹಿಳೆಯರಿಗೆ ಮುಕ್ತವಾಗಿದೆ.&lt;/p&gt;&lt;img&gt;&lt;p&gt;ಅರ್ಜಿ ಸಲ್ಲಿಸಲು ಪ್ರಮಾಣಿತ ಸಂಸ್ಕರಣೆ/ನೋಂದಣಿ ಶುಲ್ಕ ಸಾಮಾನ್ಯವಾಗಿ ನಿರ್ದಿಷ್ಟ ಆವೃತ್ತಿಯನ್ನು ಅವಲಂಬಿಸಿ 2,000 ರಿಂದ 3,000 ರೂಪಾಯಿಯವರೆಗೆ+ GST ಸೇರಿ ಇರುತ್ತದೆ.&lt;/p&gt;&lt;img&gt;&lt;p&gt;ಅರ್ಜಿಯನ್ನು ಪರಿಶೀಲಿಸಿ ಶಾರ್ಟ್&zwnj;ಲಿಸ್ಟ್ ಮಾಡಿದ ನಂತರ, ನೀವು ಆಡಿಷನ್&zwnj;ನಲ್ಲಿ ಭಾಗವಹಿಸಬೇಕಾಗುತ್ತದೆ. ಇದನ್ನು ಜೂಮ್ ಮೂಲಕ ವರ್ಚುವಲ್ ಆಗಿ ಅಥವಾ ಗೊತ್ತುಪಡಿಸಿದ ನಗರಗಳಲ್ಲಿ ವೈಯಕ್ತಿಕವಾಗಿ ನಡೆಸಲಾಗುತ್ತದೆ. ಫೈನಲಿಸ್ಟ್ ಆಗಿ ಆಯ್ಕೆಯಾದರೆ, ಗ್ರ್ಯಾಂಡ್ ಫಿನಾಲೆಗೆ ಮೊದಲು ನೀವು ವೃತ್ತಿಪರ ತರಬೇತಿ, ಗ್ರೂಮಿಂಗ್ ಮತ್ತು ಮಾರ್ಗದರ್ಶನಕ್ಕೆ ಒಳಗಾಗಬೇಕಾಗುತ್ತದೆ. ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್​ ಮಾಡಿ. https://www.mrsindiainc.in/register&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/fashion/mrs-india-2026-pageant-application-invited-how-to-apply-and-last-date-suc-6uxw0an"/>
        </item>
        <item>
            <title><![CDATA[Aprilia SR 175: ಇಂಡಿಯನ್‌ ಮಿಲಿಟರಿಯನ್ನು ಗೌರವಿಸೋ ಏಪ್ರಿಲಿಯಾ SR 175 ಲಾಂಚ್; ಕಡಿಮೆ ಬೆಲೆಗೆ ಸ್ಕೂಟಿ!]]></title>
            <link>https://kannada.asianetnews.com/gallery/automobile/aprilia-sr-175-tribute-edition-new-scooty-2026-launch-uprvvcf</link>
            <guid isPermaLink="true">https://kannada.asianetnews.com/gallery/automobile/aprilia-sr-175-tribute-edition-new-scooty-2026-launch-uprvvcf</guid>
            <pubDate>Mon, 22 Jun 2026 10:50:18 +0530</pubDate>
            <description><![CDATA[&lt;p&gt;ಭಾರತೀಯ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ವಿಶೇಷ ಆವೃತ್ತಿಯ ಏಪ್ರಿಲಿಯಾ SR 175 ಟ್ರಿಬ್ಯೂಟ್ ಎಡಿಷನ್ (Aprilia SR 175 Tribute Edition) ಸ್ಕೂಟರ್ ಈಗ ಭಾರತದಲ್ಲಿ 1.21 ಲಕ್ಷ ರೂಪಾಯಿಗೆ ಬಿಡುಗಡೆಯಾಗಿದೆ. ಇದು ಮಿಲಿಟರಿ ಸಮವಸ್ತ್ರದಿಂದ ಪ್ರೇರಿತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvpw3x4pzk2nwkmznrmafnad,imgname-new-project---2026-06-22t104316.512-1782105371798.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ವಿಶೇಷ ಆವೃತ್ತಿಯ ಏಪ್ರಿಲಿಯಾ SR 175 ಟ್ರಿಬ್ಯೂಟ್ ಎಡಿಷನ್ (Aprilia SR 175 Tribute Edition) ಸ್ಕೂಟರ್ ಈಗ ಭಾರತದಲ್ಲಿ 1.21 ಲಕ್ಷ ರೂಪಾಯಿಗೆ ಬಿಡುಗಡೆಯಾಗಿದೆ. ಇದು ಮಿಲಿಟರಿ ಸಮವಸ್ತ್ರದಿಂದ ಪ್ರೇರಿತವಾಗಿದೆ.&lt;/p&gt;&lt;img&gt;&lt;p&gt;ಕ್ಯಾಮೊ ಗ್ರೀನ್ ಹಾಗೂ ಕೇಸರಿ- ಹಳದಿ ಬಣ್ಣ ಹೊಂದಿದೆ.&lt;/p&gt;&lt;p&gt;ಈ ಸ್ಕೂಟಿ ಎಡಿಷನ್ ಉಳಿದ SR 175 ತರವೇ ಇದೆ.&lt;/p&gt;&lt;img&gt;&lt;p&gt;ಈ ಸ್ಕೂಟರ್&zwnj;ನಲ್ಲಿ 174.4cc, ಸಿಂಗಲ್-ಸಿಲಿಂಡರ್ ಎಂಜಿನ್ ನೀಡಲಾಗಿದ್ದು, ಇದು 7,200rpm ನಲ್ಲಿ 13.08bhp ಪವರ್, 6,000rpm ನಲ್ಲಿ 14.14Nm ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು CVT ಆಟೋಮ್ಯಾಟಿಕ್ ಗೇರ್&zwnj;ಬಾಕ್ಸ್&zwnj;ನೊಂದಿಗೆ ಜೋಡಿಸಲಾಗಿದೆ, ಅಷ್ಟೇ ಅಲ್ಲದೆ ಒಳ್ಳೆಯ ಕಾರ್ಯಕ್ಷಮತೆ ಹೊಂದಿದೆ. ಇದು ಗಂಟೆಗೆ ಗರಿಷ್ಠ 95 ಕಿಲೋಮೀಟರ್ ವೇಗದಲ್ಲಿ ಹೋಗುವುದು.&lt;/p&gt;&lt;img&gt;&lt;p&gt;ಈ ಸ್ಕೂಟರ್&zwnj;ನಲ್ಲಿ ಎಲ್&zwnj;ಇಡಿ ಹೆಡ್&zwnj;ಲೈಟ್, ಟೇಲ್ ಲೈಟ್, ಬ್ಲೂಟೂತ್ ಕನೆಕ್ಟಿವಿಟಿ ಇದೆ. ಕಲರ್ TFT ಡಿಸ್&zwnj;ಪ್ಲೇ, ಬ್ರೇಕ್&zwnj; ಹಾಕಲು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಕೊಡಲಾಗಿದೆ. ಸ್ಟೀಲ್ ಫ್ರೇಮ್&zwnj; ಹಾಕಿ ಸ್ಕೂಟಿ ಮಾಡಲಾಗಿದೆ. ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಮೋನೋಶಾಕ್ ಸಸ್ಪೆನ್ಷನ್ ಕೊಡಲಾಗಿದೆ.&lt;/p&gt;&lt;img&gt;&lt;p&gt;ಇದು ಟ್ಯೂಬ್&zwnj;ಲೆಸ್ ಟೈರ್&zwnj; ಹೊಂದಿದೆ. 14-ಇಂಚಿನ ಅಲಾಯ್ ಚಕ್ರಗಳಿವೆ. ಇದರಿಂದ ಫಾಸ್ಟ್&zwnj; ಆಗಿ ಹೊಡೆಯಲು, ತಿರುವುಗಳಲ್ಲಿ ಆರಾಮಾಗಿಹೋಗಲು ಸಹಾಯ ಮಾಡುತ್ತದೆ. ಈ ಸ್ಕೂಟಿ ಬುಕಿಂಗ್&zwnj; ಮುಕ್ತಾಯ ಆಗಿದೆ, ಆದಷ್ಟು ಬೇಗ ಜನರಿಗೆ ಸಿಗಲಿದೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/automobile/aprilia-sr-175-tribute-edition-new-scooty-2026-launch-uprvvcf"/>
        </item>
        <item>
            <title><![CDATA[ಮೇಕೆದಾಟುಗೆ ನ್ಯಾಯಾಧಿಕರಣ:  ಸಿಎಂ ವಿಜಯ್ ಸರ್ಕಾರದ ನಿರ್ಣಯಕ್ಕೆ ತಮಿಳುನಾಡಿನಲ್ಲೇ ವಿರೋಧ]]></title>
            <link>https://kannada.asianetnews.com/india-news/tribunal-for-mekedatu-project-opposition-to-cm-vijay-government-s-decision-in-tamil-nadu-mrq/articleshow-190mq5n</link>
            <guid isPermaLink="true">https://kannada.asianetnews.com/india-news/tribunal-for-mekedatu-project-opposition-to-cm-vijay-government-s-decision-in-tamil-nadu-mrq/articleshow-190mq5n</guid>
            <pubDate>Mon, 22 Jun 2026 07:30:41 +0530</pubDate>
            <description><![CDATA[ಮೇಕೆದಾಟು ಅಣೆಕಟ್ಟು ವಿವಾದಕ್ಕೆ ಸಂಬಂಧಿಸಿದಂತೆ ಹೊಸ ನ್ಯಾಯಮಂಡಳಿ ರಚಿಸಬೇಕೆಂಬ ತಮಿಳುನಾಡು ಸರ್ಕಾರದ ನಿರ್ಣಯವನ್ನು ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ವಿರೋಧಿಸಿದ್ದಾರೆ. ಈ ನಿರ್ಧಾರವು ಕರ್ನಾಟಕಕ್ಕೆ ಅನುಕೂಲ ಮಾಡಿಕೊಡಲಿದ್ದು, ತಮಿಳುನಾಡಿನ ಹಿತಾಸಕ್ತಿಗೆ ಧಕ್ಕೆ ತರಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಕಾನೂನು ಹೋರಾಟ ಮತ್ತು ರಾಜಕೀಯ ಒತ್ತಡದ ಮೂಲಕವೇ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksgxcn0vvsg29waqdeydwsxk,imgname-----------------------2026-05-26t064105.161-1779757896730.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: &amp;nbsp;ಮೇಕೆದಾಟು ಡ್ಯಾಂ ವಿವಾದ ಇತ್ಯರ್ಥಕ್ಕೆ ನ್ಯಾಯಾಧಿಕರಣ ರಚನೆ ಆಗಬೇಕು ಎಂಬ ತಮಿಳುನಾಡು ವಿಧಾನಸಭೆಯ ನಿರ್ಣಯಕ್ಕೆ ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್&zwnj; ತೀವ್ರ ವಿರೋಧ ವ್ಯಕ್ತತಪಡಿಸಿದ್ದಾರೆ. ಈ ರೀತಿಯ ನಿರ್ಧಾರ ರಾಜ್ಯದ ಕಾನೂನುಬದ್ಧ ಹಕ್ಕಿನ ಜತೆ ರಾಜಿ ಮಾಡಿಕೊಳ್ಳಲಿದೆ ಮತ್ತು ಕರ್ನಾಟಕಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಿರ್ಣಯವನ್ನು ಕಳುಹಿಸಿಕೊಡುವ ಮೊದಲು ಹೊಸ ನ್ಯಾಯಮಂಡಳಿ ರಚನೆಯ ಆಗ್ರಹದ ಸಾಲುಗಳನ್ನು ತೆಗೆದುಹಾಕುವಂತೆ ಮುಖ್ಯಮಂತ್ರಿ ಸಿ.ಜೋಸೆಫ್&zwnj; ವಿಜಯ್&zwnj; ಅವರಿಗೆ ಆಗ್ರಹಿಸಿದ್ದಾರೆ.&amp;nbsp;&lt;/p&gt;&lt;p&gt;ಕಾವೇರಿ ನದಿ ವ್ಯಾಪ್ತಿಯಲ್ಲಿ ಯಾವುದೇ ಹೊಸ ನಿರ್ಮಾಣ ಯೋಜನೆಗಳನ್ನು ಕೈಗೆತ್ತುಕೊಳ್ಳುವ ಮೊದಲು ಕಾವೇರಿ ಕಣಿವೆಯ ಮೇಲ್ಭಾಗದ ರಾಜ್ಯಗಳು ಕೆಳಭಾಗದ ರಾಜ್ಯದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನ್ಯಾಯಮಂಡಳಿ ಸ್ಪಷ್ಟವಾಗಿ ಹೇಳಿದೆ. ಇಷ್ಟಿದ್ದರೂ ತಮಿಳುನಾಡು ಹೊಸ ನ್ಯಾಯಮಂಡಳಿಗೆ ಬೇಡಿಕೆ ಇಡುವುದು ಅನಗತ್ಯ ಬಿಕ್ಕಟ್ಟಿಗೆ ದಾರಿ ಮಾಡಿಕೊಟ್ಟಂತೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಸ್ತಾಪ ಅನಗತ್ಯ ಹಾಗೂ ವಿರೋಧಾತ್ಮಕ&lt;/strong&gt;&lt;/h2&gt;&lt;p&gt;ತಮಿಳುನಾಡು ಶಾಸನ ಸಭೆಯ ಪ್ರಸ್ತಾಪವು ಅನಗತ್ಯ ಹಾಗೂ ವಿರೋಧಾತ್ಮಕ ಎಂದು ಕರೆದಿರುವ ಅನ್ಬುಮಣಿ ಅವರು, . ನ್ಯಾಯಮಂಡಳಿ ರಚನೆಯಾದರೆ ಕರ್ನಾಟಕಕ್ಕೆ ಹೊಸ ವಾದ ಮಾಡಲು ಅವಕಾಶ ಸಿಗುತ್ತದೆ ಹಾಗೂ ತೀರ್ಪು ನಮ್ಮ ವಿರುದ್ಧವೇ ಬರಬಹುದು. ಇದು ಒಂದು ರೀತಿಯಲ್ಲಿ ನಮ್ಮ ತಲೆಯನ್ನು ನಾವೇ ಮೊಸಳೆಯ ಬಾಯಿಗಿಟ್ಟಂತೆ ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಹೊಸ ನ್ಯಾಯಮಂಡಳಿ&lt;/strong&gt;&lt;/p&gt;&lt;p&gt;ಪ್ರತ್ಯೇಕ ನ್ಯಾಯಮಂಡಳಿ ರಚಿಸುವ ನಿರ್ಣಯವನ್ನು ಈಗಾಗಲೇ ರೈತರು ವಿರೋಧಿಸಿದ್ದಾರೆ ಎಂದಿರುವ ಅವರು, ಮೇಕೆದಾಟು ವಿಚಾರದಲ್ಲಿ ನ್ಯಾಯವು ಸ್ಪಷ್ಟವಾಗಿ ತಮಿಳುನಾಡು ಪರ ಇರುವಾಗ ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಬದಲು ಹೊಸ ನ್ಯಾಯಮಂಡಳಿ ಮೂಲಕ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಕೋರುವುದು ನಮ್ಮ ರಾಜ್ಯದ ಹಿತಾಸಕ್ತಿ ಅಡವಿಟ್ಟಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಮೇಕೆದಾಟುಗೆ ಸಂಬಂಧಿಸಿ ತಮಿಳುನಾಡಿನ ಹಕ್ಕುಗಳನ್ನು ನಿಯಮಿತ ಕಾನೂನು ಹೋರಾಟದಿಂದ ಮತ್ತು ರಾಜಕೀಯ ಒತ್ತಡದಿಂದ ಮಾತ್ರ ರಕ್ಷಿಸಲು ಸಾಧ್ಯ. ಪಿಎಂಕೆ ಸೇರಿ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ತಮಿಳುನಾಡು ಸರ್ಕಾರದ ಪ್ರಯತ್ನದ ಬೆನ್ನಿಗೆ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Mekedatu ಯೋಜನೆಯಿಂದ ಒಂದು ಬಕೆಟ್&zwnj; ನೀರೂ ನೀರಾವರಿಗೆ ಬಳಸಲ್ಲ: ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟ&lt;/strong&gt;&lt;strong&gt;ನೆ&lt;/strong&gt;&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/tribunal-for-mekedatu-project-opposition-to-cm-vijay-government-s-decision-in-tamil-nadu-mrq/articleshow-190mq5n"/>
        </item>
        <item>
            <title><![CDATA[ನೀಟ್‌ ವಿದ್ಯಾರ್ಥಿಗಳ ಅನುಕೂಲಕ್ಕೆ ಏರ್‌ಪೋರ್ಟನಲ್ಲೇ 45 ನಿಮಿಷ ಕಾದ ಪ್ರಧಾನಿ ಮೋದಿ]]></title>
            <link>https://kannada.asianetnews.com/india-news/pm-narendra-modi-waited-for-45-minutes-at-the-airport-for-the-benefit-of-neet-students-mrq/articleshow-rs8lvhi</link>
            <guid isPermaLink="true">https://kannada.asianetnews.com/india-news/pm-narendra-modi-waited-for-45-minutes-at-the-airport-for-the-benefit-of-neet-students-mrq/articleshow-rs8lvhi</guid>
            <pubDate>Mon, 22 Jun 2026 07:10:40 +0530</pubDate>
            <description><![CDATA[ಪ್ರಧಾನಿ ನರೇಂದ್ರ ಮೋದಿ ಅವರು, ನೀಟ್ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಟ್ರಾಫಿಕ್ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ 45 ನಿಮಿಷಗಳ ಕಾಲ ಕಾದರು. ಪರೀಕ್ಷೆ ಆರಂಭವಾದ ನಂತರವೇ ಅವರು ತಮ್ಮ ನಿವಾಸಕ್ಕೆ ತೆರಳುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟರು.]]></description>
            <media:content url="https://static.asianetnews.com/images/w-1280,h-720,format-jpg,imgid-01kqc4k0psf7knbf2xjfbdpkdc,imgname-asianet-news-bangla-images-size---2026-04-29t133911.724-1777450189529.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೋಲ್ಕತ್ತಾದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ತಕ್ಷಣವೇ ತಮ್ಮ ಮನೆಗೆ ಹೋಗದೇ 45 ನಿಮಿಷ ಏರ್&zwnj;ಪೋರ್ಟಲ್ಲೇ ಕಾದ ಪ್ರಸಂಗ ನಡೆದಿದೆ. ಇದಕ್ಕೆ ಕಾರಣ ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ ನೀಟ್&zwnj; ಪರೀಕ್ಷೆ.&lt;/p&gt;&lt;p&gt;ಕೋಲ್ಕತಾದಿಂದ ಮಧ್ಯಾಹ್ನ 1:15ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ ಮೋದಿ ತಕ್ಷಣ ಅಲ್ಲಿಂದ ತಮ್ಮ ನಿವಾಸದತ್ತ ಹೊರಡಲಿಲ್ಲ. ಏಕೆಂದರೆ ನೀಟ್ ಪರೀಕ್ಷೆ 2 ಗಂಟೆಗೆ ಆರಂಭವಾಗಬೇಕಿತ್ತು. ನೀಟ್&zwnj; ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಅಷ್ಟರೊಳಗೆ ಪರೀಕ್ಷಾ ಕೇಂದ್ರಕ್ಕೆ ತಲುಪುವ ಧಾವಂತದಲ್ಲಿದ್ದರು.&lt;/p&gt;&lt;p&gt;&lsquo;ಹೀಗಿರುವಾಗ ತಾವು ಬೆಂಗಾವಲು ವಾಹನಗಳೊಂದಿಗೆ ಝೀರೋ ಟ್ರಾಫಿಕ್&zwnj;ನಲ್ಲಿ ರಸ್ತೆಗಿಳಿದರೆ ಟ್ರಾಫಿಕ್&zwnj; ಸಮಸ್ಯೆಯಾಗಿ, ವಿದ್ಯಾರ್ಥಿಗಳಿಗೆ ತಡವಾಗುವ ಸಂಭವವಿರುತ್ತದೆ ಎಂದು ಮೋದಿ ಮನಗಂಡರು ಹಾಗೂ ಕಾಯುವ ನಿರ್ಧಾರ ಮಾಡಿದರು. ಪರೀಕ್ಷೆ ಶುರುವಾದ ಬಳಿಕ ವಿಮಾನ ನಿಲ್ದಾಣದಿಂದ ಹೊರಟರು&rsquo; ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಬುರ್ಖಾ ತೆಗೆಯಲು ಒತ್ತಾಯ&lt;/strong&gt;&lt;/h2&gt;&lt;p&gt;ಅಜ್ಮೇರ್&zwnj;ನ ಪರೀಕ್ಷಾ ಕೇಂದ್ರವೊಂದಕ್ಕೆ ಬುರ್ಖಾ ಧರಿಸಿ ನೀಟ್&zwnj; ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಅದನ್ನು ತೆಗೆಯುವಂತೆ ಸೂಚಿಸಿದ ಹಾಗೂ ಅದಕ್ಕೆ ಆಕೆ ಹಾಗೂ ಕೆಲವು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.&lt;/p&gt;&lt;p&gt;ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿ ಕುಲ್ಸುಂ ಬಾನೋ, &lsquo;ಮೇ 3ರಂದು ನಡೆದಿದ್ದ ಪರೀಕ್ಷೆಗೂ ಇಂತಹ ಬಟ್ಟೆಯನ್ನೇ ಧರಿಸಿದ್ದೆ. ಆಗ ಯಾರೂ ತಡೆದಿರಲಿಲ್ಲ. ಎನ್&zwnj;ಟಿಎ ಅನುಮತಿಸಿರುವಾಗ ಇವರು ನಮ್ಮನ್ನು ತಡೆಯಲಾಗದು. ನನಗೆ ಪರೀಕ್ಷೆಗಿಂತ ಬುರ್ಖಾ ಹಾಗೂ ನನ್ನ ಗುರುತೇ ಮುಖ್ಯ&rsquo; ಎಂದಳು.&lt;/p&gt;&lt;h3&gt;&lt;strong&gt;ಪವಿತ್ರ ದಾರಕ್ಕೂ ಆಕ್ಷೇಪ&lt;/strong&gt;&lt;/h3&gt;&lt;p&gt;ಅಹಮದಾಬಾದ್&zwnj;ನ ವಸ್ತ್ರಾಪುರವೆಂಬಲ್ಲಿ ಹಿಂದೂ ವಿದ್ಯಾರ್ಥಿಗಳು ಕೈಗೆ ಕಟ್ಟಿಕೊಂಡು ಬಂದಿದ್ದ ಪವಿತ್ರ ದಾರವನ್ನು ಕತ್ತರಿಸಿದ ಹಾಗೂ ಮುಸಲ್ಮಾನ ವಿದ್ಯಾರ್ಥಿನಿಯರ ಬುರ್ಖಾ ತೆಗೆಸಿದ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಪೋಷಕರು ಪ್ರತಿಭಟಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು, ಬುರ್ಕಾ ಮತ್ತು ದಾರ ಧರಿಸಿ ಪರೀಕ್ಷೆ ಬರೆಯಲು ಅನುಮತಿಸಿದರು.&lt;/p&gt;&lt;h3&gt;&lt;strong&gt;ಹಳೆ ಪ್ರವೇಶಪತ್ರ ಹಿಡಿದು ಬಂದ ವಿದ್ಯಾರ್ಥಿ: ಗೊಂದಲ&lt;/strong&gt;&lt;/h3&gt;&lt;p&gt;ಮರುಪರೀಕ್ಷೆ ಬರೆಯಲೆಂದು ವಿದ್ಯಾರ್ಥಿನಿಯೊಬ್ಬರು ಮೇನಲ್ಲಿ ನಡೆದ ಎಕ್ಸಾಂನ ಪ್ರವೇಶಪತ್ರವನ್ನು ಹಿಡಿದು, ಹಳೆಯ ಕೇಂದ್ರಕ್ಕೆ ಬಂದ ಘಟನೆ ಅಜ್ಮೇರ್&zwnj;ನಲ್ಲಿ ನಡೆದಿದೆ. ಪರಿಶೀಲನೆ ವೇಳೆ ಈ ವಿಷಯ ಗಮನಕ್ಕೆ ಬಂದಿದ್ದು, ಆನ್&zwnj;ಲೈನ್&zwnj;ನಲ್ಲಿ ಚೆಕ್&zwnj; ಮಾಡಿದಾಗ 40 ಕಿ.ಮೀ. ದೂರದೂರಿನಲ್ಲಿ ಪರೀಕ್ಷೆ ಬರೆಯಬೇಕಿದೆ ಎಂಬುದು ತಿಳಿದುಬಂದಿದೆ. ಬಳಿಕ ಶಾಲೆಯ ಕಡೆಯಿಂದಲೇ ವಾಹನದ ವ್ಯವಸ್ಥೆ ಮಾಡಿ ವಿದ್ಯಾರ್ಥಿನಿಯನ್ನು ಸರಿಯಾದ ಕೇಂದ್ರಕ್ಕೆ ಸಕಾಲದಲ್ಲಿ ತಲುಪಿಸಲಾಗಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/pm-narendra-modi-waited-for-45-minutes-at-the-airport-for-the-benefit-of-neet-students-mrq/articleshow-rs8lvhi"/>
        </item>
        <item>
            <title><![CDATA[ಠಾಕ್ರೆ ಪಾಳಯದಲ್ಲಿ ಕಂಪನ: ಆಪರೇಷನ್‌ ಸಕ್ಸಸ್‌, ಪೇಷಂಟ್‌ ಹೆಲ್ದಿ ಎಂದ CM ಫಡ್ನವೀಸ್‌]]></title>
            <link>https://kannada.asianetnews.com/india-news/two-shiv-sena-mps-from-uddhav-thackeray-s-faction-have-announced-that-they-will-join-eknath-shinde-s-faction-mrq/articleshow-oh6fmyh</link>
            <guid isPermaLink="true">https://kannada.asianetnews.com/india-news/two-shiv-sena-mps-from-uddhav-thackeray-s-faction-have-announced-that-they-will-join-eknath-shinde-s-faction-mrq/articleshow-oh6fmyh</guid>
            <pubDate>Mon, 22 Jun 2026 06:08:45 +0530</pubDate>
            <description><![CDATA[ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಇಬ್ಬರು ಸಂಸದರಾದ ಓಂ ರಾಜೆ ನಿಂಬಾಳ್ಕರ್ ಮತ್ತು ನಾಗೇಶ್ ಪಾಟೀಲ್ ಅಷ್ಟಿಕರ್, ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಅವಾಚ್ಯ ನಿಂದನೆ ಮತ್ತು ಅಭಿವೃದ್ಧಿ ಅನುದಾನದ ಕೊರತೆಯೇ ಪಕ್ಷಾಂತರಕ್ಕೆ ಕಾರಣ ಎಂದು ಅಷ್ಟಿಕರ್ ಸ್ಪಷ್ಟಪಡಿಸಿದ್ದು, ಈ ಬೆಳವಣಿಗೆಯನ್ನು ಫಡ್ನವೀಸ್ 'ಆಪರೇಷನ್ ಸಕ್ಸಸ್' ಎಂದು ಬಣ್ಣಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jzjhnt1cnxdnv0v101cd53cj,imgname-shiv-sena--ubt--chief-uddhav-thackeray--photoani--1751895435308.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಛತ್ರಪತಿ ಸಂಭಾಜಿನಗರ:&lt;/strong&gt; ಠಾಕ್ರೆ ಬಣದ 6 ಶಿವಸೇನಾ (ಯುಬಿಟಿ) ಸಂಸದರು ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇಬ್ಬರು ಸಂಸದರು ಭಾನುವಾರ ಬಹಿರಂಗವಾಗಿ ಶಿಂಧೆ ಬಣದ ಶಿವಸೇನೆ ಸೇರ್ಪಡೆ ಘೋಷಣೆ ಮಾಡಿದ್ದಾರೆ. ಓಂ ರಾಜೆ ನಿಂಬಾಳ್ಕರ್&zwnj; ಹಾಗೂ ನಾಗೇಶ್ ಪಾಟೀಲ್ ಅಷ್ಟಿಕರ್ ಅವರೇ ಆ ಸಂಸದರು.&lt;/p&gt;&lt;p&gt;ಇದರ ನಡುವೆಯೇ, &lsquo;ಆಪರೇಷನ್&zwnj; ಸಕ್ಸಸ್&zwnj;. ಪೇಷಂಟ್&zwnj; ಹೆಲ್ದಿ&rsquo; (ಸಂಸದರ ಸೆಳೆವ ಕಾರ್ಯಾಚರಣೆ ಯಶಸ್ವಿ ಆಗಿದೆ) ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್&zwnj; ಸೂಚ್ಯವಾಗಿ ಹೇಳಿದ್ದಾರೆ. ಶಿಂಧೆ ಶಿವಸೇನೆ ಮುಖ್ಯಸ್ಥ, ಡಿಸಿಎಂ ಏಕನಾಥ ಶಿಂಧೆ ಕೂಡ ಈ ಮಾತು ಅನುಮೋದಿಸಿದ್ದಾರೆ.&lt;/p&gt;&lt;h2&gt;&lt;strong&gt;ಅವಾಚ್ಯ ಶಬ್ದ ಬಳಸಿ ನಿಂದನೆ&lt;/strong&gt;&lt;/h2&gt;&lt;p&gt;ಭಾನುವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅಷ್ಟಿಕರ್&zwnj;, &lsquo;ಜೂನ್ 18 ರವರೆಗೆ ಪಕ್ಷಾಂತರ ನಿರ್ಧಾರ ಮಾಡಿರಲಿಲ್ಲ. ಆದರೆ ನನ್ನ ವಿರುದ್ಧ ಅವಾಚ್ಯ ಬೈಗುಳ ಅಂದು ಕೇಳಿಬಂತು. ಆಗಲೇ ಪಕ್ಷ ಬಿಡಲು ನಿರ್ಧರಿಸಿದೆವು&rsquo; ಎಂದರು. ಈ ಮೂಲಕ ತಮ್ಮನ್ನು &lsquo;ಗಾಂ**&rsquo; ಎಂದು ಅವಾಚ್ಯ ಶಬ್ದದಿಂದ ಬೈದ ಉದ್ಧವ್&zwnj; ಠಾಕ್ರೆ ಆಪ್ತ ಸಂಜಯ ರಾವುತ್&zwnj; ಬಗ್ಗೆ ಕಿಡಿಕಾರಿದರು.&lt;/p&gt;&lt;p&gt;&lsquo;ನಾನು ಸಿದ್ಧಾಂತದಲ್ಲಿ ರಾಜಿ ಆಗಿಲ್ಲ/ ಒಂದು ಶಿವಸೇನೆಯಿಂದ ಇನ್ನೊಂದಕ್ಕೆ ಹೋಗುತ್ತಿದ್ದೇನೆ ಅಷ್ಟೆ. ವಿಪಕ್ಷದಲ್ಲಿ ಇದ್ದ ಕಾರಣ 5 ಕೋಟಿ ರು. ಸಂಸದೀಯ ಅನುದಾನ ಬಿಟ್ಟು ಬೇರೇನೂ ಬರುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯ ಕೈಗೊಳ್ಳುವುದೇ ಕಷ್ಟವಾಗಿತ್ತು. ಹೀಗಾಗಿ ಶಿಂಧೆ ಬಣದ ಶಿವಸೇನೆ ಸೇರುತ್ತಿದ್ದೇನೆ&rsquo; ಎಂದು ಸ್ಪಷ್ಟಪಡಿಸಿದರು.&lt;/p&gt;&lt;h3&gt;&lt;strong&gt;ನಿಂಬಾಳ್ಕರ್&zwnj; ಕೂಡ ಗುಡ್&zwnj;ಬೈ:&lt;/strong&gt;&lt;/h3&gt;&lt;p&gt;ಈ ನಡುವೆ, 6 ಬಂಡಾಯ ಯುಬಿಟಿ ಶಿವಸೇನೆ ಸಂಸದರಲ್ಲಿದ್ದಾರೆ ಎನ್ನಲಾಗಿದ್ದ ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ ಕ್ಷೇತ್ರದ ಜನಸಂಪರ್ಕ ಸಭೆ ಬಳಿಕ ಮಾತಾಡಿ, ಶಿಂಧೆ ಸೇನೆ ಸೇರುವ ಘೋಷಣೆ ಮಾಡಿದರು.&lt;/p&gt;&lt;p&gt;&lt;strong&gt;ಬಂಡಾಯ ಸಂಸದರು ಸಂಪರ್ಕದಲ್ಲಿ:&lt;/strong&gt;&lt;/p&gt;&lt;p&gt;&lsquo;ಈ ನಡುವೆ ಅತೃಪ್ತ ಸಂಸದರು ತಮ್ಮ ಕ್ಷೇತ್ರದಲ್ಲಿ ಜನರ ಆಕ್ರೋಶಕ್ಕೆ ಹೆದರಿದ್ದಾರೆ. ಇನ್ನೂ ಕೆಲವರು ಶಿವಸೇನೆ ಜತೆಗೆ ಸಂಪರ್ಕದಲ್ಲಿದ್ದಾರೆ&rsquo; ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್&zwnj; ರಾವುತ್&zwnj; ಹೇಳಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/two-shiv-sena-mps-from-uddhav-thackeray-s-faction-have-announced-that-they-will-join-eknath-shinde-s-faction-mrq/articleshow-oh6fmyh"/>
        </item>
        <item>
            <title><![CDATA[Medical miracle: ಹಸುವಿನ ಹೊಟ್ಟೆಯಲ್ಲಿದ್ದ ಲೋಹದ ಮೊಳೆ ತೆಗೆಯಲು ಮೆಕ್ಯಾನಿಕಲ್ ಉಪಕರಣ ಬಳಿಸಿದ ದನದ ಡಾಕ್ಟರ್!]]></title>
            <link>https://kannada.asianetnews.com/viral/veterinary-team-removes-metal-nail-from-indian-breed-cow-stomach-using-magnet-viral-video/articleshow-et1x187</link>
            <guid isPermaLink="true">https://kannada.asianetnews.com/viral/veterinary-team-removes-metal-nail-from-indian-breed-cow-stomach-using-magnet-viral-video/articleshow-et1x187</guid>
            <pubDate>Sun, 21 Jun 2026 19:17:29 +0530</pubDate>
            <description><![CDATA[ಪಶುವೈದ್ಯರ ತಂಡವೊಂದು, ಅಕಸ್ಮಾತ್ತಾಗಿ ಮೊಳೆ ನುಂಗಿದ್ದ ಹಸುವಿನ ಜೀವವನ್ನು ವಿಶೇಷ ಅಯಸ್ಕಾಂತೀಯ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿ ಉಳಿಸಿದ್ದಾರೆ. ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ನಡೆದ ಈ ಚಿಕಿತ್ಸೆಯು, ಪ್ರಾಣಿಗಳು ಮೇಯುವ ಜಾಗದಲ್ಲಿ ಕಸ ಎಸೆಯದಂತೆ ಸಮಾಜಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvn6z5s211f4ex6q0d6kqgpe,imgname-medical-miracle-cow-metal-nail-1782049642274.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: ಪ್ರಾ&lt;/strong&gt;ಣಿ ಲೋಕದಲ್ಲಿ ಪಶುವೈದ್ಯರ ಸಮಯಪ್ರಜ್ಞೆ ಮತ್ತು ಚಿಕಿತ್ಸಾ ವಿಧಾನಗಳು ಹಲವು ಬಾರಿ ನಮಗೆ ಅಚ್ಚರಿ ಮೂಡಿಸುತ್ತವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಅಂತಹದ್ದೇ ಒಂದು ವೈದ್ಯಕೀಯ ಅದ್ಭುತಕ್ಕೆ ಸಾಕ್ಷಿಯಾಗಿದೆ. ಪಶುವೈದ್ಯರ ತಂಡವೊಂದು ವಿಶೇಷವಾದ ಅಯಸ್ಕಾಂತೀಯ ತಂತ್ರಜ್ಞಾನವನ್ನು (Magnetic Procedure) ಬಳಸಿ ಹಸುವಿನ ಹೊಟ್ಟೆಯಲ್ಲಿದ್ದ ಮೊಳೆಯನ್ನು ಅತ್ಯಂತ ಯಶಸ್ವಿಯಾಗಿ ಹೊರತೆಗೆದಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಹಸುಗಳು ಹುಲ್ಲು ಮೇಯುವಾಗ ಅಥವಾ ರಸ್ತೆ ಬದಿಯಲ್ಲಿ ಸಿಗುವ ಆಹಾರ ಸೇವಿಸುವಾಗ ಅಜಾಗರೂಕತೆಯಿಂದ ಲೋಹದ ವಸ್ತುಗಳನ್ನು ನುಂಗಿಬಿಡುತ್ತವೆ. ಈ ಹಸುವಿನ ವಿಷಯದಲ್ಲೂ ಅದೇ ಆಗಿತ್ತು. ಹಸು ಅಕಸ್ಮಾತ್ತಾಗಿ ಕಬ್ಬಿಣದ ಮೊಳೆಯೊಂದನ್ನು ನುಂಗಿತ್ತು. ಈ ಮೊಳೆ ಹಸುವಿನ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ ಉಂಟುಮಾಡಿ, ಪ್ರಾಣಿಯ ಜೀವಕ್ಕೆ ಅಪಾಯ ತರುವ ಸಾಧ್ಯತೆಯಿತ್ತು. ಇದನ್ನು ಪತ್ತೆಹಚ್ಚಿದ ಪಶುವೈದ್ಯರು ಕೂಡಲೇ ಕಾರ್ಯಾಚರಣೆಗೆ ಇಳಿದಿದ್ದಾರೆ.&lt;/p&gt;&lt;h2&gt;&lt;strong&gt;ಅಯಸ್ಕಾಂತದ ಮೂಲಕ ಚಿಕಿತ್ಸೆ:&lt;/strong&gt;&lt;/h2&gt;&lt;p&gt;ವೈರಲ್ ವಿಡಿಯೋದಲ್ಲಿ ಪಶುವೈದ್ಯರು ವಿಶೇಷವಾದ ಅಯಸ್ಕಾಂತೀಯ ಸಾಧನವನ್ನು ಹಸುವಿನ ದೇಹದೊಳಗೆ ಕಳುಹಿಸಿ, ಆ ಕಬ್ಬಿಣದ ಮೊಳೆಯು ಅಯಸ್ಕಾಂತಕ್ಕೆ ಅಂಟಿಕೊಳ್ಳುವಂತೆ ಮಾಡಿ ಅತ್ಯಂತ ಜಾಗರೂಕತೆಯಿಂದ ಹೊರತೆಗೆದಿದ್ದಾರೆ. ಯಾವುದೇ ಗಂಭೀರ ಶಸ್ತ್ರಚಿಕಿತ್ಸೆ ಇಲ್ಲದೆ, ಅಯಸ್ಕಾಂತದ ಮೂಲಕ ವಿದೇಶಿ ವಸ್ತುವನ್ನು ಹೊರತೆಗೆದ ಈ ವಿಧಾನವು ನೆಟ್ಟಿಗರನ್ನು ಬೆರಗುಗೊಳಿಸಿದೆ.&lt;/p&gt;&lt;h2&gt;&lt;strong&gt;ನೆಟ್ಟಿಗರ ಪ್ರತಿಕ್ರಿಯೆ:&lt;/strong&gt;&lt;/h2&gt;&lt;ul&gt; &lt;li&gt;ಈ ವಿಡಿಯೋ ಹರಿದಾಡುತ್ತಿದ್ದಂತೆ ಪಶುವೈದ್ಯರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.&lt;/li&gt; &lt;li&gt;ಅನೇಕರು ಪಶುವೈದ್ಯರ ಕೌಶಲ್ಯ ಮತ್ತು ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ.&lt;/li&gt; &lt;li&gt;ಇನ್ನೂ ಕೆಲವರು ಪ್ರಾಣಿಗಳ ಚಿಕಿತ್ಸೆಯಲ್ಲಿ ಅಯಸ್ಕಾಂತವನ್ನು ಹೀಗೂ ಬಳಸಬಹುದೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.&lt;/li&gt; &lt;li&gt;ಪ್ರಾಣಿಗಳು ಮೇಯುವ ಜಾಗಗಳಲ್ಲಿ ಕಬ್ಬಿಣದ ವಸ್ತುಗಳನ್ನು ಎಸೆಯುವ ಜನರ ಬೇಜವಾಬ್ದಾರಿಯ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.&lt;/li&gt;&lt;/ul&gt;&lt;h3&gt;&lt;strong&gt;ಎಚ್ಚರಿಕೆ ಸಂದೇಶ:&lt;/strong&gt;&lt;/h3&gt;&lt;p&gt;ಈ ಘಟನೆಯು ಕೇವಲ ಒಂದು ಚಿಕಿತ್ಸೆಯ ವಿಡಿಯೋ ಆಗಿರದೆ, ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನೂ ನೀಡಿದೆ. ಪ್ರಾಣಿಗಳು ಮೇಯುವ ಜಾಗಗಳಲ್ಲಿ ಅಥವಾ ರಸ್ತೆ ಬದಿಗಳಲ್ಲಿ ಲೋಹದ ವಸ್ತುಗಳು, ಮೊಳೆಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವುದು ಮೂಕ ಪ್ರಾಣಿಗಳ ಜೀವಕ್ಕೆ ಕಂಟಕವಾಗಬಹುದು. ಪ್ರಾಣಿ ಕಲ್ಯಾಣದ ದೃಷ್ಟಿಯಿಂದ ನಾವು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.&lt;/p&gt;&lt;p&gt;ವಿಡಿಯೋ ನೋಡಲು &lt;strong&gt;ಈ ಲಿಂಕ್ ಕ್ಲಿಕ್ ಮಾಡಿ&lt;/strong&gt;&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/veterinary-team-removes-metal-nail-from-indian-breed-cow-stomach-using-magnet-viral-video/articleshow-et1x187"/>
        </item>
        <item>
            <title><![CDATA[ದಕ್ಷಿಣ ಭಾರತದ ಈ ನಗರದಲ್ಲಿ ಜೋರಾಗಿದೆ 'ರಹಸ್ಯ ಡೇಟಿಂಗ್'; ಜಾಗತಿಕ ಮಟ್ಟದಲ್ಲೂ ದೇಶಕ್ಕೆ ಈಗ 3ನೇ ಸ್ಥಾನ!]]></title>
            <link>https://kannada.asianetnews.com/gallery/relationship/india-ranks-3rd-globally-in-secret-dating-app-membership-as-a-traditional-city-grabs-top-spot-uznf2et</link>
            <guid isPermaLink="true">https://kannada.asianetnews.com/gallery/relationship/india-ranks-3rd-globally-in-secret-dating-app-membership-as-a-traditional-city-grabs-top-spot-uznf2et</guid>
            <pubDate>Sun, 21 Jun 2026 15:35:48 +0530</pubDate>
            <description><![CDATA[&lt;p&gt;Extramarital relationships India tier 2 cities: ಮದುವೆಯ ನಂತರ ರಹಸ್ಯ ಸಂಬಂಧ ಹೊಂದಲು ಇರುವ ಜಾಗತಿಕ ಡೇಟಿಂಗ್ ಆಪ್&zwnj;ನಲ್ಲಿ ಅತಿ ಹೆಚ್ಚು ಜನರು ನೋಂದಾಯಿಸಿಕೊಳ್ಳುವ ಮೂಲಕ ಈ ನಗರ ಇಡೀ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಹಾಗಾದರೆ ಆ ನಗರ ಯಾವುದು?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmswn78j1brasvbhqsg2c3k,imgname-thumbnail---2026-06-21t152822.083-1782035928296.jpg" type="image/jpeg" height="390" width="690"/>
            <content:encoded><![CDATA[&lt;p&gt;Extramarital relationships India tier 2 cities: ಮದುವೆಯ ನಂತರ ರಹಸ್ಯ ಸಂಬಂಧ ಹೊಂದಲು ಇರುವ ಜಾಗತಿಕ ಡೇಟಿಂಗ್ ಆಪ್&zwnj;ನಲ್ಲಿ ಅತಿ ಹೆಚ್ಚು ಜನರು ನೋಂದಾಯಿಸಿಕೊಳ್ಳುವ ಮೂಲಕ ಈ ನಗರ ಇಡೀ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಹಾಗಾದರೆ ಆ ನಗರ ಯಾವುದು?&amp;nbsp;&lt;/p&gt;&lt;img&gt;&lt;p&gt;&lt;strong&gt;ಬದಲಾಗುತ್ತಿವೆ ಭಾರತೀಯರ ಆಲೋಚನೆಗಳು&lt;/strong&gt;ರೇಷ್ಮೆ ಮತ್ತು ದೇವಸ್ಥಾನಗಳಿಗೆ ಹೆಸರಾದ ಕಾಂಚೀಪುರಂ ಈಗ ಭಾರತದ 'ರಹಸ್ಯ ಸಂಬಂಧ' (Extramarital relationship) ಪಟ್ಟಿಯಲ್ಲಿ ಮುಂಚೂಣಿಗೆ ಬಂದಿದೆ! ಹೌದು, ಮದುವೆ ಮತ್ತು ಸಂಬಂಧಗಳ ಕುರಿತು ಭಾರತೀಯರ ಆಲೋಚನೆಗಳು ಹೇಗೆ ಬದಲಾಗುತ್ತಿವೆ ಎಂಬುದಕ್ಕೆ ಈ ಸಾಂಪ್ರದಾಯಿಕ ನಗರವೇ ಸಾಕ್ಷಿ. ರಹಸ್ಯ ಡೇಟಿಂಗ್&zwnj;ಗಾಗಿ ಇರುವ 'ಆಶ್ಲೇ ಮ್ಯಾಡಿಸನ್' ಆಪ್ ಬಳಕೆಯಲ್ಲಿ ಕಾಂಚೀಪುರಂ ಇಡೀ ಭಾರತದಲ್ಲೇ ನಂಬರ್ ಒನ್ ಸ್ಥಾನದಲ್ಲಿದ್ದು, ಭಾರತೀಯರ ಬದಲಾಗುತ್ತಿರುವ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಹಾಗಾದರೆ ಎರಡನೇ ಸ್ಥಾನದಲ್ಲಿರುವ ನಗರ ಯಾವುದು? ಸಮೀಕ್ಷೆ ಹೇಳುವುದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಸತತ ಎರಡನೇ ಬಾರಿಗೆ ಅಗ್ರಸ್ಥಾನ&lt;/strong&gt;ಆಶ್ಲೇ ಮ್ಯಾಡಿಸನ್ ಸಂಸ್ಥೆ ಬಿಡುಗಡೆ ಮಾಡಿರುವ ಮೇ 2026ರ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕಾಂಚೀಪುರಂ ನಗರದಿಂದಲೇ ಅತಿ ಹೆಚ್ಚು ಜನರು ಈ ಆಪ್&zwnj;ಗೆ ಸೈನ್-ಅಪ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಕಾಂಚೀಪುರಂ ಮೊದಲ ಸ್ಥಾನ ಪಡೆಯುತ್ತಿರುವುದು ಇದು ಸತತ ಎರಡನೇ ಬಾರಿಯಾಗಿದೆ. ಕಳೆದ ವರ್ಷದ ಬೇಸಿಗೆಯಲ್ಲೂ ಸಹ ಈ ನಗರವೇ ಮೊದಲ ಸ್ಥಾನದಲ್ಲಿತ್ತು.&lt;/p&gt;&lt;img&gt;&lt;p&gt;&lt;strong&gt;ದಕ್ಷಿಣ ಭಾರತದ ನಗರಗಳೇ ಮುಂಚೂಣಿಯಲ್ಲಿವೆ&lt;/strong&gt;ಈ ವರ್ಷದ ಪಟ್ಟಿಯಲ್ಲಿ ಕಾಂಚೀಪುರಂ ನಂತರದ ಸ್ಥಾನಗಳಲ್ಲಿ ಕೊಯಮತ್ತೂರು, ತಿರುವಳ್ಳೂರು ಮತ್ತು ಚೆನ್ನೈ ನಗರಗಳಿದ್ದು, ಈ ಡೇಟಿಂಗ್ ಆಪ್ ಬಳಕೆಯಲ್ಲಿ ದಕ್ಷಿಣ ಭಾರತದ ನಗರಗಳೇ ಮುಂಚೂಣಿಯಲ್ಲಿರುವುದು ಎದ್ದು ಕಾಣುತ್ತಿದೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 3ನೇ ಸ್ಥಾನ&lt;/strong&gt;ಮತ್ತೊಂದು ಪ್ರಮುಖ ವಿಷಯವೆಂದರೆ, ಈ ಆಪ್ ಬಳಸುವ ವಿಶ್ವದ 20 ದೇಶಗಳ ಪಟ್ಟಿಯಲ್ಲಿ ಭಾರತವು ಈಗ 3ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ವರ್ಷ ಭಾರತವು 8ನೇ ಸ್ಥಾನದಲ್ಲಿತ್ತು.&lt;/p&gt;&lt;p&gt;ಭಾರತೀಯರಲ್ಲಿ ಇಂತಹ ರಹಸ್ಯ ಡೇಟಿಂಗ್ ಮೇಲಿನ ಆಸಕ್ತಿ ಹೆಚ್ಚುತ್ತಿರುವುದಕ್ಕೆ ಇದು ಮಾತ್ರ ಸಾಕ್ಷಿಯಲ್ಲ. ಇದೇ ವರ್ಷದ ಆರಂಭದಲ್ಲಿ, ಮದುವೆಯಾಚೆಗಿನ ಸಂಬಂಧಗಳಿಗಾಗಿಯೇ ಇರುವ ಮತ್ತೊಂದು ಪ್ರಸಿದ್ಧ ಡೇಟಿಂಗ್ ಆಪ್ 'ಗ್ಲೀಡನ್' (Gleeden), ಭಾರತದಲ್ಲಿ ತನ್ನ ಚಂದಾದಾರರ (Subscribers) ಸಂಖ್ಯೆ 40 ಲಕ್ಷ ದಾಟಿದೆ ಎಂದು ಘೋಷಿಸಿತ್ತು.&lt;/p&gt;&lt;img&gt;&lt;p&gt;&lt;strong&gt;ಬದಲಾಗುತ್ತಿರುವ ಭಾರತೀಯರ ಮನಸ್ಥಿತಿ&lt;/strong&gt;ಈ ಅಂಕಿ-ಅಂಶಗಳು ಭಾರತದಲ್ಲಿ ಮದುವೆ ಮತ್ತು ಸಂಬಂಧಗಳ ಬಗ್ಗೆ ಜನರ ದೃಷ್ಟಿಕೋನ ಬದಲಾಗುತ್ತಿರುವುದನ್ನು ತೋರಿಸುತ್ತವೆ. ವಿಶೇಷವೆಂದರೆ ಈ ಬದಲಾವಣೆ ಕೇವಲ ದೊಡ್ಡ ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ.&lt;/p&gt;&lt;p&gt;&quot;ಜಾಗತಿಕವಾಗಿ ಭಾರತವು 8ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿರುವುದು, ಇಲ್ಲಿನ ವಯಸ್ಕರು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಗೌಪ್ಯತೆಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಕೇವಲ ಮೆಟ್ರೋ ನಗರಗಳಷ್ಟೇ ಅಲ್ಲದೆ, ಬೇರೆ ಬೇರೆ ಪ್ರದೇಶಗಳ ನಗರಗಳೂ ಇದರಲ್ಲಿ ಭಾಗಿಯಾಗುತ್ತಿರುವುದು ಕುತೂಹಲಕಾರಿಯಾಗಿದೆ&quot; ಎಂದು ಆಶ್ಲೇ ಮ್ಯಾಡಿಸನ್ ಸಂಸ್ಥೆಯ ಮುಖ್ಯ ಕಾರ್ಯತಂತ್ರ ಅಧಿಕಾರಿ ಪಾಲ್ ಕೀಬಲ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸಮೀಕ್ಷೆ ಏನು ಹೇಳುತ್ತದೆ?2024 ರಲ್ಲಿ 'ಗ್ಲೀಡನ್' ಸಂಸ್ಥೆಯು ಭಾರತದ ಪ್ರಮುಖ ನಗರಗಳಲ್ಲಿ 25 ರಿಂದ 50 ವರ್ಷದೊಳಗಿನ 1,503 ವಿವಾಹಿತ ಭಾರತೀಯರನ್ನು ಸಮೀಕ್ಷೆ ನಡೆಸಿತ್ತು. ಈ ಅಧ್ಯಯನದಲ್ಲಿ ಶೇಕಡ 60 ಕ್ಕಿಂತ ಹೆಚ್ಚು ಜನರು ಸಾಂಪ್ರದಾಯಿಕವಲ್ಲದ ಮುಕ್ತ ಸಂಬಂಧಗಳಿಗೆ (Non-traditional relationships) ಒಲವು ತೋರಿದ್ದಾರೆ. ಇದರಲ್ಲಿ ಪರಸ್ಪರ ಒಪ್ಪಿಗೆಯಿಂದ ಇತರರೊಂದಿಗೆ ಲೈಂಗಿಕ ಅನುಭವ ಹಂಚಿಕೊಳ್ಳುವ 'ಸ್ವಿಂಗಿಂಗ್' (Swinging) ಪ್ರವೃತ್ತಿಯೂ ಸೇರಿದೆ.&lt;/p&gt;&lt;img&gt;&lt;p&gt;&lt;strong&gt;ಕಾಂಚೀಪುರಂ ಮೊದಲ ಸ್ಥಾನದಲ್ಲಿರಲು ಕಾರಣವೇನು?&lt;/strong&gt;ದೊಡ್ಡ ಮೆಟ್ರೋ ನಗರಗಳಲ್ಲಿ ಇಂತಹ ಆಪ್&zwnj;ಗಳ ಬಳಕೆ ಸಾಮಾನ್ಯ ಎನಿಸಿದರೂ, ಸಂಪ್ರದಾಯ ಹಾಗೂ ಧಾರ್ಮಿಕತೆಗೆ ಹೆಸರಾದ ಕಾಂಚೀಪುರಂ ಮೊದಲ ಸ್ಥಾನದಲ್ಲಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆದರೆ ಸಂಬಂಧಗಳ ತಜ್ಞರಾದ (Relationship expert) ರುಚಿ ರೂಹ್ ಅವರ ಪ್ರಕಾರ, ಇದಕ್ಕೊಂದು ಕಾರಣವಿದೆ.&lt;/p&gt;&lt;p&gt;&quot;ಕಾಂಚೀಪುರಂನಂತಹ ಸಾಂಪ್ರದಾಯಿಕ ಮತ್ತು ಶ್ರೀಮಂತ ಸಮುದಾಯಗಳಲ್ಲಿ ಜನರು ತಮ್ಮ ರಹಸ್ಯಗಳನ್ನು ಗೌಪ್ಯವಾಗಿಡಲು ಬಯಸುತ್ತಾರೆ. ಇಂತಹ ಆಪ್&zwnj;ಗಳು ಅವರಿಗೆ ಗುರುತು ಸಿಗದಂತೆ ಗೌಪ್ಯತೆಯನ್ನು ನೀಡುತ್ತವೆ&quot; ಎನ್ನುತ್ತಾರೆ ಅವರು. ಇದರೊಂದಿಗೆ, ತಂತ್ರಜ್ಞಾನದ ಬೆಳವಣಿಗೆ ಹಾಗೂ ಇಂತಹ ಆಪ್&zwnj;ಗಳ ಬಳಕೆಯಲ್ಲಿ ಸದಾ ಮುಂದಿರುವ ಚೆನ್ನೈ ನಗರಕ್ಕೆ ಕಾಂಚೀಪುರಂ ಹತ್ತಿರದಲ್ಲಿರುವುದು ಸಹ ಒಂದು ಪ್ರಮುಖ ಕಾರಣವಾಗಿರಬಹುದು.&amp;nbsp;&lt;/p&gt;]]></content:encoded>
            <category>india-news</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/relationship/india-ranks-3rd-globally-in-secret-dating-app-membership-as-a-traditional-city-grabs-top-spot-uznf2et"/>
        </item>
        <item>
            <title><![CDATA[ರಿಲಯನ್ಸ್ ಉತ್ತರಾಧಿಕಾರಿ ಪ್ರಕ್ರಿಯೆ ಬಹುತೇಕ ಪೂರ್ಣ, ಮಕ್ಕಳಿಗೆ ನಾಯಕತ್ವ ಪಟ್ಟ ಕಟ್ಟಿದ ಮುಕೇಶ್ ಅಂಬಾನಿ]]></title>
            <link>https://kannada.asianetnews.com/gallery/business/mukesh-ambani-nears-completion-of-reliance-succession-plan-children-take-key-roles-o0uqrts</link>
            <guid isPermaLink="true">https://kannada.asianetnews.com/gallery/business/mukesh-ambani-nears-completion-of-reliance-succession-plan-children-take-key-roles-o0uqrts</guid>
            <pubDate>Sun, 21 Jun 2026 15:08:30 +0530</pubDate>
            <description><![CDATA[&lt;p&gt;ಮುಕೇಶ್ ಅಂಬಾನಿ ಮಕ್ಕಳಾದ ಇಶಾ, ಆಕಾಶ್ ಹಾಗೂ ಅನಂತ್ ಅಂಬಾನಿ ಇನ್ನು ರಿಲಯನ್ಸ್ ಇಂಡಸ್ಟ್ರಿ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ನಿರ್ವಹಣೆಗಳ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmrac8yqc6ghz7re96gr6ka,imgname-reliance-succession-plan-reaches-final-stage-1782034280733.png" type="image/jpeg" height="390" width="690"/>
            <content:encoded><![CDATA[&lt;p&gt;ಮುಕೇಶ್ ಅಂಬಾನಿ ಮಕ್ಕಳಾದ ಇಶಾ, ಆಕಾಶ್ ಹಾಗೂ ಅನಂತ್ ಅಂಬಾನಿ ಇನ್ನು ರಿಲಯನ್ಸ್ ಇಂಡಸ್ಟ್ರಿ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ನಿರ್ವಹಣೆಗಳ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ.&lt;/p&gt;&lt;img&gt;&lt;p&gt;ರಿಲಯನ್ಸ್ ಇಂಡಸ್ಟ್ರೀಸ್&zwnj;ನಲ್ಲಿ ಮುಂದಿನ ನಾಯಕತ್ವದ ಸ್ವರೂಪ ಸ್ಪಷ್ಟ ರೂಪ ಪಡೆದುಕೊಳ್ಳುತ್ತಿದೆ. ಸಮೂಹದ ನಿರ್ವಹಣೆಗಳ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆಯು ಬಹುತೇಕ ಪೂರ್ಣವಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್&zwnj;ನ 49ನೇ ವಾರ್ಷಿಕ ಮಹಾಸಭೆಯಲ್ಲಿ (AGM) ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರು ಘೋಷಿಸಿದ್ದಾರೆ. ಜಿಯೋ ಐಪಿಒ (Jio IPO), ರಿಲಯನ್ಸ್ ಇಂಟೆಲಿಜೆನ್ಸ್, ನ್ಯೂ ಎನರ್ಜಿ, ಎಫ್&zwnj;ಎಂಸಿಜಿ (FMCG) ಮತ್ತು ಜಾಗತಿಕ ರಫ್ತಿನಂತಹ ಹಲವು ದೊಡ್ಡ ಬೆಳವಣಿಗೆಯ ಗುರಿಗಳೊಂದಿಗೆ ಕಂಪನಿಯು ಕೆಲಸ ಮಾಡುತ್ತಿರುವ ಸಮಯದಲ್ಲಿಯೇ ರಿಲಯನ್ಸ್&zwnj;ನ ಈ ನಾಯಕತ್ವದ ಮುನ್ಸೂಚನೆ ಹೊರಬಿದ್ದಿದೆ.&lt;/p&gt;&lt;img&gt;&lt;p&gt;ಇಶಾ, ಆಕಾಶ್ ಮತ್ತು ಅನಂತ್ ಅವರು ರಿಲಯನ್ಸ್ ಆಡಳಿತ ಮಂಡಳಿಯಲ್ಲಿ (Board) ಮೂರು ವರ್ಷಗಳನ್ನು ಪೂರೈಸಿದ್ದಾರೆ. ಇಶಾ ಗ್ರಾಹಕ ವ್ಯವಹಾರಗಳ (Consumer Business) ನೇತೃತ್ವ ವಹಿಸಿದ್ದರೆ, ಆಕಾಶ್ ತಂತ್ರಜ್ಞಾನ ವ್ಯವಹಾರವನ್ನು (Technology Business) ಮುನ್ನಡೆಸುತ್ತಿದ್ದಾರೆ ಮತ್ತು ಅನಂತ್ ಇಂಧನ ವ್ಯವಹಾರದ (Energy Business) ಜವಾಬ್ದಾರಿಯನ್ನು ವಹಿಸಿದ್ದಾರೆ. ಇಶಾ, ಆಕಾಶ್ ಮತ್ತು ಅನಂತ್ ವಿಭಿನ್ನ ವ್ಯವಹಾರ ವಿಭಾಗಗಳನ್ನು ಮುನ್ನಡೆಸುತ್ತಿರಬಹುದು, ಆದರೆ ಅವರು ರಿಲಯನ್ಸ್ ಸಮೂಹದ ಒಟ್ಟಾರೆ ಬೆಳವಣಿಗೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.&lt;/p&gt;&lt;img&gt;&lt;p&gt;ಹೂಡಿಕೆದಾರರು, ಮಾರುಕಟ್ಟೆ ಮತ್ತು ಉದ್ಯಮ ರಂಗವು ದೀರ್ಘಕಾಲದಿಂದ ರಿಲಯನ್ಸ್&zwnj;ನ ಉತ್ತರಾಧಿಕಾರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ಎಜಿಎಂನಲ್ಲಿ ಮುಖೇಶ್ ಅಂಬಾನಿ ಇದನ್ನು ಕೇವಲ ಒಂದು ಕುಟುಂಬದ ನಾಯಕತ್ವ ಬದಲಾವಣೆ ಎಂದು ಬಿಂಬಿಸದೆ, ರಿಲಯನ್ಸ್ ದೀರ್ಘಕಾಲದವರೆಗೆ ಬಲಿಷ್ಠ ಸಂಸ್ಥೆಯಾಗಿ ಉಳಿಸುವ ಪ್ರಕ್ರಿಯೆಯಾಗಿ ಮಾರ್ಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಮಕ್ಕಳಿಗೆ ಜವಾಬ್ದಾರಿ ನೀಡಿದರೂ ತಾವು ರಿಲಯನ್ಸ್&zwnj;ಗೆ ಸಕ್ರಿಯ ನಾಯಕತ್ವವನ್ನು ನೀಡುವುದನ್ನು ಮುಂದುವರಿಸುವುದಾಗಿ ಮುಖೇಶ್ ಅಂಬಾನಿ ಸ್ಪಷ್ಟಪಡಿಸಿದರು. ಇದರೊಂದಿಗೆ, ಕಂಪನಿಯ ಭವಿಷ್ಯವು ಕೇವಲ ಸುರಕ್ಷಿತ ಕೈಗಳಲ್ಲಿಲ್ಲ, ಬದಲಿಗೆ ರಿಲಯನ್ಸ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೈಗಳಲ್ಲಿದೆ ಎಂದು ಷೇರುದಾರರಿಗೆ ಭರವಸೆ ನೀಡಿದರು.&lt;/p&gt;&lt;img&gt;&lt;p&gt;ತಾವು 25 ವರ್ಷಗಳ ಹಿಂದೆ ಮಾಡಿದ್ದನ್ನೇ ಇಶಾ, ಆಕಾಶ್ ಮತ್ತು ಅನಂತ್ ಈಗ ಮಾಡುತ್ತಿದ್ದಾರೆ, ಆದರೆ ಅವರು ಅದಕ್ಕಿಂತ ಹೆಚ್ಚಿನ ಮಹತ್ವಾಕಾಂಕ್ಷೆ ಮತ್ತು ಬೃಹತ್ ಹಣಕಾಸು ಹಾಗೂ ವೃತ್ತಿಪರ ಅಡಿಪಾಯದೊಂದಿಗೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ ಈ ಪ್ರತಿಯೊಂದು ಉದ್ಯಮವೂ ಇಂದಿನ ರಿಲಯನ್ಸ್&zwnj;ನಷ್ಟೇ ದೊಡ್ಡದಾಗಿ ಬೆಳೆಯಬಲ್ಲದು ಎಂಬುದನ್ನು ತಾವು ಕಾಣುತ್ತಿರುವುದಾಗಿ ಮುಖೇಶ್ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ಐದು ವರ್ಷಗಳಲ್ಲಿ ಕಂಪನಿಯ ಒಟ್ಟು ಎಬಿಟಾ (EBITDA) ಅನ್ನು ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಮಾಡುವ ವಿಶ್ವಾಸವನ್ನು ಮುಖೇಶ್ ಅಂಬಾನಿ ಎಜಿಎಂನಲ್ಲಿ ವ್ಯಕ್ತಪಡಿಸಿದ್ದಾರೆ. &ldquo;ಕಳೆದ ಐದು ವರ್ಷಗಳಲ್ಲಿ ನಾವು ನಮ್ಮ ಎಬಿಟಾವನ್ನು ದುಪ್ಪಟ್ಟುಗೊಳಿಸಿದ್ದೇವೆ.&lt;/p&gt;&lt;img&gt;&lt;p&gt;ಭವಿಷ್ಯದ ಕಡೆಗೆ ನೋಡುತ್ತಾ, ಮುಂದಿನ ಐದು ವರ್ಷಗಳಲ್ಲಿ ನಮ್ಮ ಒಟ್ಟುಗೂಡಿಸಿದ ಎಬಿಟಾವನ್ನು (Consolidated EBITDA) ದುಪ್ಪಟ್ಟು, ಅಥವಾ ಅದಕ್ಕಿಂತಲೂ ಹೆಚ್ಚು ಮಾಡುವ ಸಾಮರ್ಥ್ಯ ನಮಗಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ,&rdquo; ಎಂದರು. ರಿಲಯನ್ಸ್ ಸಂಸ್ಥೆಯು ಮೌಲ್ಯ ವರ್ಧನೆಗಾಗಿ ಐದು ಮಾರ್ಗಗಳನ್ನು ಮುಂದಿಟ್ಟಿದೆ. ಅವುಗಳೆಂದರೆ: ಓಟುಸಿ (O2C) ವ್ಯವಹಾರವನ್ನು ಆಯಿಲ್-ಟು-ಕೆಮಿಕಲ್ಸ್-ಅಂಡ್-ನ್ಯೂ ಮೆಟೀರಿಯಲ್ಸ್ ಆಗಿ ಪರಿವರ್ತಿಸುವುದು. ನ್ಯೂ ಎನರ್ಜಿ (ಹಸಿರು ಇಂಧನ) ಯೋಜನೆಗಳನ್ನು ಶೀಘ್ರವಾಗಿ ಮತ್ತು ವೇಗವಾಗಿ ಕಾರ್ಯಗತಗೊಳಿಸುವುದು. 'ರಿಲಯನ್ಸ್ ಇಂಟೆಲಿಜೆನ್ಸ್' ಅನ್ನು ಪ್ರತಿಯೊಬ್ಬ ಭಾರತೀಯನಿಗಾಗಿ ಎಐ (AI) ಆಗಿ ಅಭಿವೃದ್ಧಿಪಡಿಸುವುದು. ಎಫ್&zwnj;ಎಂಸಿಜಿ (FMCG) ವ್ಯವಹಾರವನ್ನು ಭಾರತದ ಅತಿ ದೊಡ್ಡ ಎಫ್&zwnj;ಎಂಸಿಜಿ ಕಂಪನಿಗಳಲ್ಲಿ ಒಂದನ್ನಾಗಿ ಬೆಳೆಸುವುದು. 2032ರ ವೇಳೆಗೆ 125 ರಿಂದ 150 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಗುರಿ ತಲುಪಲಿದೆ ಎಂದು ಮುಕೇಶ್ ಅೆಂಬಾನಿ ಹೇಳಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/mukesh-ambani-nears-completion-of-reliance-succession-plan-children-take-key-roles-o0uqrts"/>
        </item>
        <item>
            <title><![CDATA[CM Vijay: ದಳಪತಿ ವಿಜಯ್ ರಾಜಕೀಯ ಗೆಲುವು ದಿಢೀರ್ ಆಗಿದ್ದಲ್ಲ; ಅದಕ್ಕೂ ಮೊದಲು ಏನೆಲ್ಲಾ ಮಾಡಿದ್ರು ಗೊತ್ತಾ?]]></title>
            <link>https://kannada.asianetnews.com/gallery/entertainment/political-success-of-current-cm-vijay-was-not-an-overnight-occurrence-and-it-has-backedup-with-protests-and-social-work-io1a9t5</link>
            <guid isPermaLink="true">https://kannada.asianetnews.com/gallery/entertainment/political-success-of-current-cm-vijay-was-not-an-overnight-occurrence-and-it-has-backedup-with-protests-and-social-work-io1a9t5</guid>
            <pubDate>Sun, 21 Jun 2026 14:45:59 +0530</pubDate>
            <description><![CDATA[&lt;p&gt;ವಿಜಯ್ ಅವರ ವ್ಯಾಪ್ತಿ ಕೇವಲ ತಮಿಳುನಾಡಿಗೆ ಸೀಮಿತವಾಗಿರಲಿಲ್ಲ. 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ದೆಹಲಿಯಲ್ಲಿ ನಡೆಸಿದ ಹೋರಾಟಕ್ಕೆ ವಿಜಯ್ ಖುದ್ದಾಗಿ ಹೋಗಿ ಬೆಂಬಲ ನೀಡಿದ್ದರು. ಇಷ್ಟೇ ಅಲ್ಲ, ಇನ್ನೂ ಏನೇನೋ ಇದೆ, ನೋಡಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmqdw4g0b5wgpzn78fy3vw1,imgname-thalapathy-vijay-1782033346703.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯ್ ಅವರ ವ್ಯಾಪ್ತಿ ಕೇವಲ ತಮಿಳುನಾಡಿಗೆ ಸೀಮಿತವಾಗಿರಲಿಲ್ಲ. 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ದೆಹಲಿಯಲ್ಲಿ ನಡೆಸಿದ ಹೋರಾಟಕ್ಕೆ ವಿಜಯ್ ಖುದ್ದಾಗಿ ಹೋಗಿ ಬೆಂಬಲ ನೀಡಿದ್ದರು. ಇಷ್ಟೇ ಅಲ್ಲ, ಇನ್ನೂ ಏನೇನೋ ಇದೆ, ನೋಡಿ..&amp;nbsp;&lt;/p&gt;&lt;img&gt;&lt;p&gt;ರೀಲ್ ಹೀರೋ ಟು ರಿಯಲ್ ಸಿಎಂ: ವಿಜಯ್ ಅವರ ಈ ಐತಿಹಾಸಿಕ ಗೆಲುವಿನ ಹಿಂದೆ 15 ವರ್ಷಗಳ ಬಿಗ್ ಪ್ಲಾನ್ ಇದೆ!&lt;/p&gt;&lt;p&gt;ತಮಿಳುನಾಡಿನ ಇತಿಹಾಸದಲ್ಲಿ ಇದೀಗ ಹೊಸ ಅಧ್ಯಾಯ ಶುರುವಾಗಿದೆ. ಚಿತ್ರಮಂದಿರಗಳಲ್ಲಿ ಸೀಟಿ ಹೊಡೆಸುತ್ತಿದ್ದ 'ಬಾಕ್ಸ್ ಆಫೀಸ್ ಸುಲ್ತಾನ್' ದಳಪತಿ ವಿಜಯ್ (Thalapathy Vijay) ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜಸಿಂಹಾಸನವನ್ನೇರಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಬೆಳ್ಳಿತೆರೆಯಿಂದ ಹಿಡಿದು ಮುಖ್ಯಮಂತ್ರಿ ಗದ್ದುಗೆಯವರೆಗಿನ ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ. ವಿಜಯ್ ಅವರ ಈ ರಾಜಕೀಯ ಗೆಲುವು ದಿಢೀರ್ ಆಗಿ ಸಂಭವಿಸಿದ್ದಲ್ಲ; ಇದರ ಹಿಂದೆ ಹದಿನೈದು ವರ್ಷಗಳ ಸುದೀರ್ಘ ಹೋರಾಟ, ಬೆವರು ಮತ್ತು ಜನರೊಂದಿಗಿನ ಗಾಢ ಬಾಂಧವ್ಯವಿದೆ.&lt;/p&gt;&lt;img&gt;&lt;p&gt;ಹೋರಾಟದ ಕಿಡಿ ಹೊತ್ತಿದ್ದು 2008ರಲ್ಲಿ!&lt;/p&gt;&lt;p&gt;ಸಿನಿಮಾಗಳಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ವಿಜಯ್, ನಿಜ ಜೀವನದಲ್ಲಿಯೂ ಸಮಾಜಕ್ಕಾಗಿ ಬೀದಿಗಿಳಿಯಲು ಆರಂಭಿಸಿದ್ದು 2008ರಲ್ಲಿ. ಶ್ರೀಲಂಕಾದ ಅಂತರ್ಯುದ್ಧ ತಾರಕಕ್ಕೇರಿದ್ದಾಗ, ತಮಿಳು ಬಾಂಧವರ ಪರವಾಗಿ ವಿಜಯ್ ಚೆನ್ನೈನಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ ನಡೆಸಿದ್ದರು.&lt;/p&gt;&lt;img&gt;&lt;p&gt;ಸಾವಿರಾರು ಅಭಿಮಾನಿಗಳು ಅಂದು ಅವರ ಜೊತೆ ಕೈಜೋಡಿಸಿದ್ದರು. ಇದು ಅವರ ರಾಜಕೀಯ ಆಸಕ್ತಿಯ ಮೊದಲ ಮುನ್ಸೂಚನೆಯಾಗಿತ್ತು. ನಂತರ 2009ರಲ್ಲಿ 'ವಿಜಯ್ ಮಕ್ಕಳ್ ಇಯಕಮ್' (VMI) ಸಂಘಟನೆಯನ್ನು ಸ್ಥಾಪಿಸುವ ಮೂಲಕ ಕೇವಲ ಫ್ಯಾನ್ ಕ್ಲಬ್ ಆಗಿದ್ದ ಸಂಘವನ್ನು ಸಮಾಜಸೇವಾ ಪಡೆಯನ್ನಾಗಿ ಬದಲಿಸಿದರು.&lt;/p&gt;&lt;img&gt;&lt;p&gt;ಅಣ್ಣಾ ಹಜಾರೆ ಹೋರಾಟದಿಂದ ಮೀನುಗಾರರ ಪ್ರತಿಭಟನೆವರೆಗೆ:&lt;/p&gt;&lt;p&gt;ವಿಜಯ್ ಅವರ ವ್ಯಾಪ್ತಿ ಕೇವಲ ತಮಿಳುನಾಡಿಗೆ ಸೀಮಿತವಾಗಿರಲಿಲ್ಲ. 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ದೆಹಲಿಯಲ್ಲಿ ನಡೆಸಿದ ಹೋರಾಟಕ್ಕೆ ವಿಜಯ್ ಖುದ್ದಾಗಿ ಹೋಗಿ ಬೆಂಬಲ ನೀಡಿದ್ದರು. 2012ರಲ್ಲಿ ನಾಗಪಟ್ಟಣಂನಲ್ಲಿ ಮೀನುಗಾರರ ಬಂಧನದ ವಿರುದ್ಧ ಧ್ವನಿ ಎತ್ತಿದರು. ಸಿನಿಮಾ ಶೂಟಿಂಗ್ ನಡುವೆಯೂ ಸಮಾಜದ ಪ್ರತಿಯೊಂದು ಸಮಸ್ಯೆಗೆ ಅವರು ಸ್ಪಂದಿಸುತ್ತಲೇ ಬಂದಿದ್ದರು.&lt;/p&gt;&lt;img&gt;&lt;p&gt;ಜನರ ಮನ ಗೆದ್ದ 'ಮಧ್ಯರಾತ್ರಿ'ಯ ಭೇಟಿಗಳು:&lt;/p&gt;&lt;p&gt;ವಿಜಯ್ ಅವರಲ್ಲಿರುವ ಮಾನವೀಯತೆ ಜನರಿಗೆ ಹತ್ತಿರವಾಗಿದ್ದು 2017 ಮತ್ತು 2018ರ ಘಟನೆಗಳ ಮೂಲಕ. ನೀಟ್ ವಿರೋಧಿ ಹೋರಾಟದಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಅನಿತಾ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾಗಲಿ ಅಥವಾ ಜಲ್ಲಿಕಟ್ಟು ಪ್ರತಿಭಟನೆಯಲ್ಲಿ ಸಾಮಾನ್ಯರಂತೆ ಮುಖ ಮುಚ್ಚಿಕೊಂಡು ಮರೀನಾ ಬೀಚ್&zwnj;ನಲ್ಲಿ ಕುಳಿತಿದ್ದಾಗಲಿ&mdash;ವಿಜಯ್ ಜನರ ಪಲ್ಸ್ ಅರಿತಿದ್ದರು. ವಿಶೇಷವೆಂದರೆ, ತೂತುಕುಡಿ ಗುಂಡಿನ ದಾಳಿಯ ಸಂತ್ರಸ್ತರನ್ನು ಭೇಟಿಯಾಗಲು ಅವರು ಮಧ್ಯರಾತ್ರಿ ಬೈಕ್&zwnj;ನಲ್ಲಿ ಹೋಗಿ ಯಾರಿಗೂ ತಿಳಿಯದಂತೆ ಆರ್ಥಿಕ ನೆರವು ನೀಡಿದ್ದರು. ಈ 'ಸೈಲೆಂಟ್' ಕೆಲಸಗಳೇ ಇಂದು ಅವರನ್ನು 'ವಾಯ್ಸ್ ಆಫ್ ತಮಿಳುನಾಡು' ಮಾಡಿದೆ.&lt;/p&gt;&lt;img&gt;&lt;p&gt;ವ್ಯವಸ್ಥಿತ ತಯಾರಿ ಮತ್ತು ಟಿವಿಕೆ ಉದಯ:&lt;/p&gt;&lt;p&gt;ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲದೆ, ಬೌದ್ಧಿಕವಾಗಿಯೂ ವಿಜಯ್ ಸಿದ್ಧರಾಗಿದ್ದರು. ಅಂಬೇಡ್ಕರ್, ಪೆರಿಯಾರ್ ಮತ್ತು ಕಾಮರಾಜ್ ಅವರ ವಿಚಾರಧಾರೆಗಳನ್ನು ಓದುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದು ಅವರ ರಾಜಕೀಯ ಸಿದ್ಧಾಂತಕ್ಕೆ ಸಾಕ್ಷಿ. 2019ರ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸುವ ಮೂಲಕ ಭದ್ರ ಬುನಾದಿ ಹಾಕಿದ ವಿಜಯ್, ಫೆಬ್ರವರಿ 2, 2024 ರಂದು 'ತಮಿಳುನಾಡು ವೆಟ್ರಿ ಕಳಗಂ' (TVK) ಪಕ್ಷವನ್ನು ಘೋಷಿಸಿದರು.&lt;/p&gt;&lt;img&gt;&lt;p&gt;ಪಕ್ಷ ಘೋಷಣೆಯಾದ ನಂತರವೂ ಅವರು ಸುಮ್ಮನೆ ಕೂರಲಿಲ್ಲ. ಕಲ್ಲಕುರಿಚಿ ವಿಷಪೂರಿತ ಮದ್ಯ ದುರಂತದ ಸಂತ್ರಸ್ತರನ್ನು ಭೇಟಿಯಾದರು, ವಿಮಾನ ನಿಲ್ದಾಣ ಯೋಜನೆಯ ವಿರುದ್ಧ ಹೋರಾಡುತ್ತಿದ್ದ ರೈತರ ಪರ ನಿಂತರು. ಇದರ ಫಲವೇ ಇಂದಿನ ಈ ಭರ್ಜರಿ ಗೆಲುವು. ಅಂದು ಪ್ರತಿಭಟನಾಕಾರನಾಗಿ ಬೀದಿಯಲ್ಲಿದ್ದ ವಿಜಯ್, ಇಂದು ಆಡಳಿತಗಾರನಾಗಿ ವಿಧಾನಸೌಧದಲ್ಲಿದ್ದಾರೆ. ಇದು ದಳಪತಿಯ ಕಠಿಣ ಪರಿಶ್ರಮ ಮತ್ತು ಜನರ ನಂಬಿಕೆಗೆ ಸಿಕ್ಕ ಮಹಾ ಗೆಲುವು! ಅಂದು ಅವರು ಮಾಡಿದ್ದ ಪ್ರತಿಭಟನೆಗಳು, ಸಾಮಾಜಿಕ ಕಳಕಳಿಯೇ ಇವತ್ತು ಪವರ್ ಕೊಟ್ಟಿದ್ದು..&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/entertainment/political-success-of-current-cm-vijay-was-not-an-overnight-occurrence-and-it-has-backedup-with-protests-and-social-work-io1a9t5"/>
        </item>
        <item>
            <title><![CDATA[ದಾವಣಗೆರೆ ಬಾಡಿಬಿಲ್ಡರ್ ಸುಶೀಲ್ ಕುಮಾರ್ ಸಾವಿನ ಬೆನ್ನಲ್ಲೇ ವರ್ಕೌಟ್ ವೇಳೆ ಪೊಲೀಸ್ ಅಧಿಕಾರಿ ಗಿರೀಶ್ ಭಟ್ ಹಠಾತ್ ಸಾವು!]]></title>
            <link>https://kannada.asianetnews.com/india-news/after-davanagere-bodybuilder-sushil-kumar-uttarakhand-cop-girish-bhatt-dies-while-working-out-at-gym/articleshow-ptcenw9</link>
            <guid isPermaLink="true">https://kannada.asianetnews.com/india-news/after-davanagere-bodybuilder-sushil-kumar-uttarakhand-cop-girish-bhatt-dies-while-working-out-at-gym/articleshow-ptcenw9</guid>
            <pubDate>Sun, 21 Jun 2026 14:12:24 +0530</pubDate>
            <description><![CDATA[&lt;p&gt;&lt;strong&gt;Girish Bhatt SOG officer death: &lt;/strong&gt;ಜಿಮ್&zwnj;ಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ, ಜಿಮ್ ವರ್ಕೌಟ್ ವೇಳೆ ಸಂಭವಿಸುತ್ತಿರುವ ಹಠಾತ್ ಸಾವುಗಳು ಆತಂಕ ಮೂಡಿಸುತ್ತಿವೆ. ಇತ್ತೀಚೆಗಷ್ಟೇ ದಾವಣಗೆರೆ ಜಿಲ್ಲೆಯ ರಾಷ್ಟ್ರ ಮಟ್ಟದ ಬಾಡಿಬಿಲ್ಡರ್ ಸುಶೀಲ್ ಕುಮಾರ್ ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ, ಈಗ ಜಿಮ್&zwnj;ನಲ್ಲಿ ಕಸರತ್ತು ನಡೆಸುತ್ತಿದ್ದಾಗಲೇ ಪೊಲೀಸ್ ಅಧಿಕಾರಿ ಗಿರೀಶ್ ಭಟ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmn6tffqdtcztygnp3z5dky,imgname-thumbnail---2026-06-21t140153.081-1782031018479.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉ&lt;/strong&gt;ತ್ತರಾಖಂಡದ ಚಂಪಾವತ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಇಲ್ಲಿನ ವಿಶೇಷ ಕಾರ್ಯಾಚರಣೆ ತಂಡದ (SOG) ಅಧಿಕಾರಿಯೊಬ್ಬರು ಜಿಮ್&zwnj;ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆಯು ಇಡೀ ಪೊಲೀಸ್ ಇಲಾಖೆ ಮತ್ತು ಸ್ಥಳೀಯರಲ್ಲಿ ತೀವ್ರ ದಿಗ್ಭ್ರಮೆ ಉಂಟುಮಾಡಿದೆ. ಜೊತೆಗೆ, ಇತ್ತೀಚಿನ ದಿನಗಳಲ್ಲಿ ತೀವ್ರವಾದ ವ್ಯಾಯಾಮದ ಸಮಯದಲ್ಲಿ ಸಂಭವಿಸುತ್ತಿರುವ ಹಠಾತ್ ವೈದ್ಯಕೀಯ ತುರ್ತು ಪರಿಸ್ಥಿತಿಗಳ (ಹೃದಯಾಘಾತ ಇತ್ಯಾದಿ) ಕುರಿತು ಸಾರ್ವಜನಿಕರಲ್ಲಿ ಮತ್ತೊಮ್ಮೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ&lt;/strong&gt;&lt;/h3&gt;&lt;p&gt;ಮೃತ ಪೊಲೀಸ್ ಅಧಿಕಾರಿಯನ್ನು 38 ವರ್ಷದ ಗಿರೀಶ್ ಭಟ್ ಎಂದು ಗುರುತಿಸಲಾಗಿದೆ. ಇವರು ಬನ್&zwnj;ಬಸಾದ ನಿವಾಸಿಯಾಗಿದ್ದು, ಚಂಪಾವತ್ ಎಸ್&zwnj;ಒಜಿ (SOG) ಘಟಕದಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಶುಕ್ರವಾರದಂದು ಗಿರೀಶ್ ಭಟ್ ಅವರು ಎಂದಿನಂತೆ ಸ್ಥಳೀಯ ಜಿಮ್ ಒಂದರಲ್ಲಿ ದೈಹಿಕ ಕಸರತ್ತು ನಡೆಸುತ್ತಿದ್ದರು. ಈ ವೇಳೆ ಅವರಿಗೆ ಇದ್ದಕ್ಕಿದ್ದಂತೆ ಆರೋಗ್ಯದ ಏರುಪೇರಾಗಿ ತೀವ್ರ ಅಸ್ವಸ್ಥತೆ ಕಾಡಿದೆ ಮತ್ತು ಕ್ಷಣಾರ್ಧದಲ್ಲಿ ಅವರು ಜಿಮ್&zwnj;ನ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.&lt;/p&gt;&lt;p&gt;ಅವರು ಕುಸಿದು ಬೀಳುತ್ತಿದ್ದಂತೆ ಜಿಮ್&zwnj;ನಲ್ಲಿದ್ದ ಇತರ ಜನರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಅವರನ್ನು ಹತ್ತಿರದ ಖಾತಿಮಾ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದರು. ಗಿರೀಶ್ ಭಟ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮರಣ ಹೊಂದಿದ್ದಾರೆ ಎಂದು ಘೋಷಿಸಿದರು. ಅವರ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಇನ್ನು ಅಧಿಕೃತವಾಗಿ ತನಿಖೆಯಿಂದ ದೃಢಪಡಬೇಕಿದೆ.&lt;/p&gt;&lt;p&gt;ಮೂಲತಃ ಉತ್ತರಾಖಂಡದ ಪಿಥೋರಗಢ ಜಿಲ್ಲೆಯವರಾದ ಗಿರೀಶ್ ಭಟ್, ನಂತರದ ದಿನಗಳಲ್ಲಿ ಬನ್&zwnj;ಬಸಾದಲ್ಲಿ ನೆಲೆಸಿದ್ದರು. ಅವರು ತಮ್ಮ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಇವರ ಅಕಾಲಿಕ ಮರಣ ಇಡೀ ಕುಟುಂಬವನ್ನು ಶೋಕದಲ್ಲಿ ಮುಳುಗಿಸಿದೆ.&lt;/p&gt;&lt;h3&gt;&lt;strong&gt;ಕರ್ತವ್ಯ ನಿಷ್ಠ ಅಧಿಕಾರಿ&lt;/strong&gt;&lt;/h3&gt;&lt;p&gt;ಗಿರೀಶ್ ಭಟ್ ಅವರು ಚಂಪಾವತ್ ಎಸ್&zwnj;ಒಜಿ ಘಟಕದಲ್ಲಿ ಅತ್ಯಂತ ದಕ್ಷ, ಪ್ರಾಮಾಣಿಕ ಮತ್ತು ಕರ್ತವ್ಯ ನಿಷ್ಠ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದರು. ಕಳೆದ ಹಲವು ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದ ಪ್ರಮುಖ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರ್ಯಾಚರಣೆಗಳಲ್ಲಿ ಹಾಗೂ ವಿಶೇಷ ಪೊಲೀಸ್ ಕಾರ್ಯಾಚರಣೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಹೋದ್ಯೋಗಿಗಳು ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.&lt;/p&gt;&lt;p&gt;ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಬನ್&zwnj;ಬಸಾದ ಶಾರದಾ ಘಾಟ್ ಸ್ಮಶಾನದಲ್ಲಿ ಸಕಲ ಸರ್ಕಾರಿ ಹಾಗೂ ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ನೂರಾರು ಸಾರ್ವಜನಿಕರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು. ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ (SP) ರೇಖಾ ಯಾದವ್ ಸೇರಿದಂತೆ ಹಲವು ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಇವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.&lt;/p&gt;&lt;h2&gt;&lt;strong&gt;ಹೆಚ್ಚುತ್ತಿರುವ ಆತಂಕ&lt;/strong&gt;&lt;/h2&gt;&lt;p&gt;ಕೇವಲ ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲೂ ಇಂತಹುದೇ ಒಂದು ಘಟನೆ ನಡೆದಿತ್ತು. ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿದ್ದ 26 ವರ್ಷದ ರಾಷ್ಟ್ರ ಮಟ್ಟದ ಬಾಡಿಬಿಲ್ಡರ್ ಸುಶೀಲ್ ಕುಮಾರ್ ಅವರು ಜಿಮ್ ಮುಗಿಸಿ ಮನೆಗೆ ಬಂದ ಕೆಲವೇ ಸಮಯದ ನಂತರ ಕುಸಿದು ಬಿದ್ದು ಸಾವನ್ನಪ್ಪಿದ್ದರು.&lt;/p&gt;&lt;p&gt;ಈ ಬೆನ್ನಲ್ಲೇ ಪೊಲೀಸ್ ಅಧಿಕಾರಿ ಗಿರೀಶ್ ಭಟ್ ಅವರ ಸಾವು ಸಂಭವಿಸಿರುವುದು, ಯುವಕರಲ್ಲಿ ಮತ್ತು ಅತಿಯಾದ ದೈಹಿಕ ಕಸರತ್ತು ಮಾಡುವವರಲ್ಲಿ ಕಂಡುಬರುತ್ತಿರುವ ಹಠಾತ್ ಹೃದಯ ವೈಫಲ್ಯಗಳ ಬಗ್ಗೆ ಆತಂಕವನ್ನು ಮೂಡಿಸಿದೆ. ವ್ಯಾಯಾಮದ ವೇಳೆ ದೇಹದ ಸಾಮರ್ಥ್ಯ ಮೀರಿ ಕಸರತ್ತು ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಈಗ ಮೂಡಿದೆ.&lt;/p&gt;&lt;p&gt;&lt;strong&gt;ಇಲ್ಲಿದೆ ನೋಡಿ ವಿಡಿಯೋ&amp;nbsp;&lt;/strong&gt;&lt;/p&gt;&lt;p&gt;In Champawat, Uttarakhand, Uttarakhand Police constable Girish Bhatt (38), who was exercising at the gym, stopped breathing.&amp;nbsp;The cause of de@th is believed to be sudden heart failure. pic.twitter.com/9ECqgS5uRp&lt;/p&gt;&lt;p&gt;&mdash; Ghar Ke Kalesh (@gharkekalesh) June 20, 2026&lt;/p&gt;]]></content:encoded>
            <category>india-news</category>
            <dc:creator>Ashwini HR</dc:creator>
            <atom:link href="https://kannada.asianetnews.com/india-news/after-davanagere-bodybuilder-sushil-kumar-uttarakhand-cop-girish-bhatt-dies-while-working-out-at-gym/articleshow-ptcenw9"/>
        </item>
        <item>
            <title><![CDATA[Toxic Release Date: ಫಾದರ್ಸ್ ಡೇ ದಿನವೇ 'ಟಾಕ್ಸಿಕ್' ರಿಲೀಸ್ ಡೇಟ್ ಘೋಷಣೆ; ಜಗತ್ತಿನಾದ್ಯಂತ ಯಶ್ ಹವಾ ಶುರು!]]></title>
            <link>https://kannada.asianetnews.com/entertainment/the-makers-of-toxic-starring-rocking-star-yash-have-officially-announced-the-release-date-in-august-2026/articleshow-7d3lnxq</link>
            <guid isPermaLink="true">https://kannada.asianetnews.com/entertainment/the-makers-of-toxic-starring-rocking-star-yash-have-officially-announced-the-release-date-in-august-2026/articleshow-7d3lnxq</guid>
            <pubDate>Sun, 21 Jun 2026 12:30:45 +0530</pubDate>
            <description><![CDATA[&lt;p&gt;'ಟಾಕ್ಸಿಕ್' ಕೇವಲ ಸಿನಿಮಾ ಅಲ್ಲ, ಇದು ಕನ್ನಡ ಚಿತ್ರರಂಗದ ಮತ್ತೊಂದು ಹೆಮ್ಮೆಯ ಮೈಲಿಗಲ್ಲು. ಯಶ್ ತಮ್ಮದೇ ಆದ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಮತ್ತು 'ಕೆವಿಎನ್ ಪ್ರೊಡಕ್ಷನ್ಸ್' ಮೂಲಕ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಸಿದ್ಧಪಡಿಸುತ್ತಿದ್ದಾರೆ. ಇದೀಗ ರಿಲೀಸ್ ಡೇಟ್ ಘೋಷಣೆ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktp44g4skzyvtkt8b8ggh7ps,imgname-vkjvk-1781006483609.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಂತು ನೋಡಿ ಬಿಗ್ ಅಪ್&zwnj;ಡೇಟ್: 2026ರ ಆಗಸ್ಟ್&zwnj;ನಲ್ಲಿ 'ಟಾಕ್ಸಿಕ್' ಹವಾ! ಗ್ಯಾಂಗ್&zwnj;ಸ್ಟರ್ ರಾಯನ ಆಗಮನಕ್ಕೆ ಡೇಟ್ ಫಿಕ್ಸ್!&lt;/strong&gt;&lt;/p&gt;&lt;p&gt;ರಾಕಿಂಗ್ ಸ್ಟಾರ್ ಯಶ್ (Yash) ಅವರ ಮುಂದಿನ ಸಿನಿಮಾ ಯಾವುದು? ಆ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ? ಈ ಪ್ರಶ್ನೆಗಳು ಕಳೆದ ಎರಡು ವರ್ಷಗಳಿಂದ ಕೇವಲ ಕನ್ನಡಿಗರನ್ನು ಮಾತ್ರವಲ್ಲ, ಇಡೀ ವಿಶ್ವದ ಸಿನಿಪ್ರೇಮಿಗಳನ್ನು ಕಾಡುತ್ತಿದ್ದವು. 'ಕೆಜಿಎಫ್-2' ಸೃಷ್ಟಿಸಿದ ಸುನಾಮಿಯ ನಂತರ ಯಶ್ ಅವರ ಪ್ರತಿ ಹೆಜ್ಜೆಯೂ ಕುತೂಹಲದ ಕೇಂದ್ರಬಿಂದುವಾಗಿತ್ತು. ಈಗ ಆ ಎಲ್ಲಾ ಕುತೂಹಲಗಳಿಗೆ ತೆರೆ ಬಿದ್ದಿದೆ. ಮೈ ನಡುಗಿಸುವ ಗ್ಯಾಂಗ್&zwnj;ಸ್ಟರ್ ಕಥೆಯೊಂದಿಗೆ 'ಟಾಕ್ಸಿಕ್' (Toxic) ಅಖಾಡಕ್ಕೆ ಇಳಿಯಲು ಸಿದ್ಧವಾಗಿದೆ.&lt;/p&gt;&lt;p&gt;ಫಾದರ್ಸ್ ಡೇ ದಿನವೇ ಸಿಕ್ತು ಬಿಗ್ ಸರ್ಪ್ರೈಸ್!&lt;/p&gt;&lt;p&gt;ವಿಶೇಷ ಅಂದ್ರೆ, ಚಿತ್ರತಂಡ ಈ ಅಪ್&zwnj;ಡೇಟ್ ನೀಡಲು ಆರಿಸಿಕೊಂಡಿದ್ದು ಸುದಿನವನ್ನೇ. ಅಪ್ಪ-ಮಗನ ಬಾಂಧವ್ಯದ ಕಥೆಯ ಹಂದರ ಹೊಂದಿರುವ ಈ ಚಿತ್ರದ ಬಿಗ್ ಅಪ್&zwnj;ಡೇಟ್ 'ಫಾದರ್ಸ್ ಡೇ' ದಿನವೇ ಹೊರಬಿದ್ದಿದೆ. ನಿರ್ದೇಶಕಿ ಗೀತು ಮೋಹನ್&zwnj;ದಾಸ್ ಈ ಚಿತ್ರದ ಮೂಲಕ ಹೊಸದೊಂದು ಮಾಂತ್ರಿಕ ಲೋಕವನ್ನೇ ಸೃಷ್ಟಿಸುತ್ತಿದ್ದಾರೆ. ಇದು ಕೇವಲ ಗನ್ ಹಿಡಿದು ಗುಂಡು ಹಾರಿಸುವ ಮಾಮೂಲಿ ಗ್ಯಾಂಗ್&zwnj;ಸ್ಟರ್ ಕಥೆಯಲ್ಲ, ಬದಲಿಗೆ ಭಾವನೆಗಳ ಅಲೆ ಎಬ್ಬಿಸುವ ಅಪ್ಪ-ಮಗನ ಸೆಂಟಿಮೆಂಟ್ ಜರ್ನಿ ಕೂಡ ಹೌದು. ಈ ಚಿತ್ರದಲ್ಲಿ ಯಶ್ ಅಪ್ಪ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಎದೆಯ ಬಡಿತ ಜಾಸ್ತಿ ಮಾಡಿದೆ.&lt;/p&gt;&lt;h2&gt;ಕ್ಯಾಲೆಂಡರ್&zwnj;ನಲ್ಲಿ ಮಾರ್ಕ್ ಮಾಡಿಟ್ಟುಕೊಳ್ಳಿ ಈ ದಿನಾಂಕ!&lt;/h2&gt;&lt;p&gt;ಎಲ್ಲರೂ ಕಾತರದಿಂದ ಕಾಯುತ್ತಿದ್ದ ಆ 'ಡಿ-ಡೇ' (D-Day) ಈಗ ಅಧಿಕೃತವಾಗಿದೆ. ಆಗಸ್ಟ್ 26, 2026 ರಂದು 'ಟಾಕ್ಸಿಕ್' ವಿಶ್ವದಾದ್ಯಂತ ತೆರೆಕಾಣಲಿದೆ. ಸುಮಾರು ನಾಲ್ಕು ಬಾರಿ ದಿನಾಂಕದ ಬಗ್ಗೆ ಚರ್ಚೆಗಳಾಗಿದ್ದರೂ, ಈಗ ಚಿತ್ರತಂಡ ಅಧಿಕೃತವಾಗಿ ಮುದ್ರೆ ಒತ್ತಿದೆ. ಅಂತರಾಷ್ಟ್ರೀಯ ಯೋಗ ದಿನ ಹಾಗೂ ಫಾದರ್ಸ್ ಡೇ ಸಂಭ್ರಮದ ನಡುವೆಯೇ ಈ ಪಕ್ಕಾ ಅಪ್&zwnj;ಡೇಟ್ ಸಿಕ್ಕಿರುವುದು ಅಭಿಮಾನಿಗಳ ಪಾಲಿಗೆ ಹಬ್ಬದೂಟ ಸಿಕ್ಕಂತಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಗೋವಾದ ಕರಾಳ ಲೋಕದ ಕಥೆ!&lt;/p&gt;&lt;p&gt;ಈ ಚಿತ್ರದ ಕಥೆ ಸುಂದರ ಪ್ರವಾಸಿ ತಾಣ ಗೋವಾದಲ್ಲಿ ನಡೆಯಲಿದೆ. ಆದರೆ ಇದು ಇಂದಿನ ಗೋವಾ ಅಲ್ಲ, ಹಳೆಯ ಕಾಲದ ಕರಾಳ ಗ್ಯಾಂಗ್&zwnj;ಸ್ಟರ್ ಸಾಮ್ರಾಜ್ಯದ ಕಥೆ. ಚಿತ್ರದಲ್ಲಿ ದೊಡ್ಡ ನಟಿಯರ ದಂಡೇ ಇರಲಿದೆ ಎಂಬ ಗುಸುಗುಸು ಕೂಡ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಬಾಲಿವುಡ್&zwnj;ನಿಂದ ಹಿಡಿದು ಮಲಯಾಳಂವರೆಗಿನ ಖ್ಯಾತ ನಟಿಯರು ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ.&lt;/p&gt;&lt;h3&gt;ವಿಶ್ವಮಟ್ಟದಲ್ಲಿ ಕನ್ನಡದ ಕಹಳೆ!&lt;/h3&gt;&lt;p&gt;'ಟಾಕ್ಸಿಕ್' ಕೇವಲ ಸಿನಿಮಾ ಅಲ್ಲ, ಇದು ಕನ್ನಡ ಚಿತ್ರರಂಗದ ಮತ್ತೊಂದು ಹೆಮ್ಮೆಯ ಮೈಲಿಗಲ್ಲು. ಯಶ್ ತಮ್ಮದೇ ಆದ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಮತ್ತು 'ಕೆವಿಎನ್ ಪ್ರೊಡಕ್ಷನ್ಸ್' ಮೂಲಕ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಸಿದ್ಧಪಡಿಸುತ್ತಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಈ ಚಿತ್ರಕ್ಕೆ ಬೆನ್ನೆಲುಬಾಗಿದ್ದು, ಚಿತ್ರದ ಪ್ರತಿಯೊಂದು ಸೀನ್ ಕೂಡ ಇಂಟರ್&zwnj;ನ್ಯಾಷನಲ್ ಲೆವೆಲ್&zwnj;ನಲ್ಲಿ ಮೂಡಿಬರುತ್ತಿದೆ.&lt;/p&gt;&lt;p&gt;ಒಟ್ಟಿನಲ್ಲಿ, 2026ರ ಆಗಸ್ಟ್ ತಿಂಗಳು ಬಾಕ್ಸ್ ಆಫೀಸ್&zwnj;ನಲ್ಲಿ ಸುನಾಮಿ ಏಳುವುದು ಗ್ಯಾರಂಟಿ. ರಾಯನ ಆರ್ಭಟಕ್ಕೆ ತೆರೆ ಸಜ್ಜಾಗಿದೆ, ಅಭಿಮಾನಿಗಳ ಕುತೂಹಲ ಮುಗಿಲುಮುಟ್ಟಿದೆ!&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/the-makers-of-toxic-starring-rocking-star-yash-have-officially-announced-the-release-date-in-august-2026/articleshow-7d3lnxq"/>
        </item>
        <item>
            <title><![CDATA[Prakash Raj in Trouble: ನಟ ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್; ಇದೀಗ ಬಂಧನದ ಭೀತಿ!]]></title>
            <link>https://kannada.asianetnews.com/news/non-bailable-arrest-warrant-issued-against-actor-prakash-raj-risk-of-arrest-now/articleshow-hu0lk1q</link>
            <guid isPermaLink="true">https://kannada.asianetnews.com/news/non-bailable-arrest-warrant-issued-against-actor-prakash-raj-risk-of-arrest-now/articleshow-hu0lk1q</guid>
            <pubDate>Sun, 21 Jun 2026 09:15:34 +0530</pubDate>
            <description><![CDATA[&lt;p&gt;ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್&zwnj;ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಮುಂದೇನು..? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvm4gkh1j1h7d644kgxqypqk,imgname-prakash-raj--1--1782013513249.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿಗಷ್ಟೇ &quot;ಧರ್ಮಸ್ಥಳ' ಕೇಸ್&zwnj;ಗೆ ಸಂಬಂಧಪಟ್ಟು ಸುದ್ದಿಯಾಗಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿರುವ ಆರೋಪದ ಅಡಿಯಲ್ಲಿ, ನಟ ಪ್ರಕಾಶ್​ರಾಜ್ (Prakash Raj) ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.&lt;/p&gt;&lt;p&gt;ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್&zwnj;ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿದ್ದಾರೆ ಎಂದು ಆರೋಪಿಸಿ ದಿಲೀಪ್​ಕುಮಾರ್ ಕೇಸ್ ದಾಖಲು ಮಾಡಿದ್ದಾರೆ. ಆ ಬಳಿಕ, 48ನೇ ಎಸಿಜೆಎಂ ಕೋರ್ಟ್&zwnj;ನಿಂದ ಪ್ರಕಾಶ್​ ರಾಜ್ ವಿರುದ್ಧ NBW ಜಾರಿ ಹಾಗೂ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ನೀಡಲಾಗಿತ್ತು.&lt;/p&gt;&lt;p&gt;2 ಬಾರಿ ಸಮನ್ಸ್​ ಹಾಗೂ 2 ಬಾರಿ NBW ಜಾರಿ ಮಾಡಿದ್ರೂ ಪ್ರಕಾಶ್​ ರಾಜ್ ಹಾಜರಾಗದ ಹಿನ್ನೆಲೆಯಲ್ಲಿ, ಇದೀಗ 3ನೇ ಬಾರಿ ಪ್ರಕಾಶ್ ರಾಜ್ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ.&lt;/p&gt;&lt;p&gt;ನಟ ಪ್ರಕಾಶ್ ರಾಜ್ 2 ಬಾರಿ ಸಮನ್ಸ್ ಹಾಗೂ 2 ಬಾರಿ NBW ಜಾರಿ ಮಾಡಿದ್ರೂ ಕೋರ್ಟ್&zwnj;ಗೆ ಹಾಜರಾಗಿರಲಿಲ್ಲ. 4 ರಾಜ್ಯಗಳಲ್ಲಿ, ಅಂದರೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಅಕ್ರಮ ವೋಟರ್ ಐಡಿ (Voter ID) ಹೊಂದಿರುವ ಗಂಭೀರ ಆರೋಪ ಪ್ರಕಾಶ್ ರಾಜ್ ಮೇಲಿದೆ. ಸಂವಿಧಾನದ ಪ್ರಕಾರ, ಒಬ್ಬ ವ್ಯಕ್ತಿ ದೇಶದ ಯಾವುದೇ ಭಾಗದಲ್ಲಿ ಒಂದೇ ಮತದಾರರ ಗುರುತಿನ ಚೀಟಿ ಹೊಂದಿರಲು ಅವಕಾಶವಿದೆ.&lt;/p&gt;&lt;p&gt;ಆದರೆ ನಟ ಪ್ರಕಾಶ್ ರಾಜ್ ನಾಲ್ಕು ರಾಜ್ಯಗಳಲ್ಲಿ ಮತದಾರ ಗುರುತಿನ ಚೀಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಆಗಿರುವ ಪ್ರಕಾಶ್ ರಾಜ್, ಸಮನ್ಸ್&zwnj;, ವಾರಂಟ್ ಯಾವುದಕ್ಕೂ ಕೇರ್ ಮಾಡದೇ, ಕೋರ್ಟ್&zwnj;ಗೆ ಹಾಜರಾಗದ ಹಿನ್ನೆಲೆಯಲ್ಲಿ ಎಸಿಜೆಎಂ ಕೋರ್ಟ್ ಗರಂ ಆಗಿದೆ ಎನ್ನಲಾಗಿದೆ.&lt;/p&gt;&lt;p&gt;ಹೀಗಾಗಿ, ಇದೀಗ ಮ್ಯಾಜಿಸ್ಟ್ರೇಟ್ ಕೋರ್ಟ್&zwnj;ನಿಂದ ಪ್ರಕಾಶ್ ರಾಜ್&zwnj;ಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಸಮನ್ಸ್, ವಾರಂಟ್ ಯಾವುದಕ್ಕೂ ಹಾಜರಾಗದ ಪ್ರಕಾಶ್ ರಾಜ್ ವಿರುದ್ಧ, ಈಗ ಕಾನೂನು ಉಲ್ಲಂಘನೆ ಆರೋಪವೂ ಸೇರಿಕೊಂಡಿದೆ. ಈ ಎಲ್ಲ ಕಾರಣಗಳಿಂದ ಇದೀಗ ನಟ ಪ್ರಕಾಶ್ ರಾಜ್ ಅವರಿಗೆ ಬಂಧನ ಭೀತಿ ಎದುರಾಗಿದೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/news/non-bailable-arrest-warrant-issued-against-actor-prakash-raj-risk-of-arrest-now/articleshow-hu0lk1q"/>
        </item>
        <item>
            <title><![CDATA[international yoga day 2026: ಇದೇ  ಮೊದಲ ಬಾರಿಗೆ ಕೊಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಪ್ರಧಾನಿ ಮೋದಿ ಭಾಗಿ!]]></title>
            <link>https://kannada.asianetnews.com/gallery/india-news/pm-modi-leads-national-observance-for-12th-international-day-of-yoga-in-kolkata-today-rav-fz0xxvm</link>
            <guid isPermaLink="true">https://kannada.asianetnews.com/gallery/india-news/pm-modi-leads-national-observance-for-12th-international-day-of-yoga-in-kolkata-today-rav-fz0xxvm</guid>
            <pubDate>Sun, 21 Jun 2026 07:26:31 +0530</pubDate>
            <description><![CDATA[&lt;p&gt;Internation Yoga day 2026: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvky64ba6ck6qyv6vrkq6hzc,imgname----------------------38--1782006878570.jpg" type="image/jpeg" height="390" width="690"/>
            <content:encoded><![CDATA[&lt;p&gt;Internation Yoga day 2026: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪ್ರಧಾನಿ ನರೇಂದ್ರ ಮೋದಿ(Prime minister Narendra Modi) ಭಾನುವಾರ ಕೋಲ್ಕತ್ತಾದ ರೆಡ್ ರೋಡ್&zwnj;ನಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನದ ರಾಷ್ಟ್ರೀಯ ಆಚರಣೆಯ ನೇತೃತ್ವ ವಹಿಸಿದ್ದು ವಿಶೇಷ, &amp;nbsp;ವೆಲ್&zwnj;ನೆಸ್, ಆರೋಗ್ಯಕರ ಜೀವನಕ್ಕಾಗಿ ಯೋಗ ಕೇಂದ್ರೀಕರಿಸಿದ ಜಾಗತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.&lt;/p&gt;&lt;p&gt;ಜೀವನದಲ್ಲಿ ಎಲ್ಲ ಹಂತಗಳಲ್ಲೂ ಆರೋಗ್ಯಕರವಾಗಿರಲು ಯೋಗದ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಈ ಬಾರಿ 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ವಿಷಯದ ಅಡಿಯಲ್ಲಿ ಭಾನುವಾರ ದೇಶಾದ್ಯಂತ ಅಷ್ಟೇ ಅಲ್ಲದೆ ವಿಶ್ವಾದ್ಯಂತ 12 ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ.&lt;/p&gt;&lt;img&gt;&lt;p&gt;Internation Yoga day 2026: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು. ಹೊಸ ಹುಮ್ಮಸ್ಸಿನೊಂದಿಗೆ ಸುಮಾರು 1 ಮಿಲಿಯನ್ ಜನರು ಭಾಗವಹಿಸಿದ್ದ ಈ ಯೋಗದಿನದ ಕಾರ್ಯಕ್ರಮದಲ್ಲಿ ಭಾಗಿಯಾದರು.&lt;/p&gt;&lt;img&gt;&lt;p&gt;ಅಂತರರಾಷ್ಟ್ರೀಯ ಯೋಗ ದಿನದ ಮುಖ್ಯ ಕಾರ್ಯಕ್ರಮವನ್ನು ಕೋಲ್ಕತ್ತಾದಲ್ಲಿ ನಡೆಸುತ್ತಿರುವುದು ಇದೇ ಮೊದಲು ಆಯುಷ್ ಸಚಿವಾಲಯ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಹೇಳಿದರು. ಕೋಲ್ಕತ್ತಾದಾದ್ಯಂತ ಪ್ರಧಾನಿ ಮೋದಿ ಅವರೊಂದಿಗೆ ಸುಮಾರು 1 ಮಿಲಿಯನ್ ಜನರು ಯೋಗ ಪ್ರದರ್ಶನದಲ್ಲಿ ಭಾಗಿಯಾದರು. ಸುಮಾರು 700,000 ಜನರು ಸರ್ಕಾರಿ ಪೋರ್ಟಲ್&zwnj;ನಲ್ಲಿ ನೋಂದಾಯಿಸಿಕೊಂಡಿದ್ದರು.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/india-news/pm-modi-leads-national-observance-for-12th-international-day-of-yoga-in-kolkata-today-rav-fz0xxvm"/>
        </item>
        <item>
            <title><![CDATA[ರಾಜ್ಯದಲ್ಲಿ ಅನ್ನಕ್ಕೂ ‘ಜಾತಿʼಲಿಂಕ್‌: ಪಡಿತರಕ್ಕೆ ಜಾತಿ ಪ್ರಮಾಣಪತ್ರ ಕಡ್ಡಾಯ ತಪ್ಪು, ಕಾನೂನುಬಾಹಿರ: ಜೋಶಿ ಕಿಡಿ]]></title>
            <link>https://kannada.asianetnews.com/india-news/is-caste-certificate-mandatory-for-ration-in-karnataka-union-minister-pralhad-joshi-outraged-rav/articleshow-ukv4ath</link>
            <guid isPermaLink="true">https://kannada.asianetnews.com/india-news/is-caste-certificate-mandatory-for-ration-in-karnataka-union-minister-pralhad-joshi-outraged-rav/articleshow-ukv4ath</guid>
            <pubDate>Sun, 21 Jun 2026 04:46:23 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಪಡಿತರ ಚೀಟಿಗೆ ಜಾತಿ ಪ್ರಮಾಣಪತ್ರವನ್ನು ಲಿಂಕ್ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದು. ಇದು ಕಾನೂನುಬಾಹಿರ ಎಂದಿದ್ದಾರೆ ಅಲ್ಲದೇ ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಏನಿದು ಜಾತಿ ಲಿಂಕ್ ವಿವಾದ ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke4n1xnvjrzzjtqd1pe35z2a,imgname-----------------------2026-01-04t193146.172-1767535343291.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಏನಿದು ಜಾತಿ ವಿವಾದ?&lt;/strong&gt;&lt;/p&gt;&lt;ul&gt; &lt;li&gt;ಆಹಾರ ಭದ್ರತಾ ಕಾಯ್ದೆಯಡಿ ದೇಶವ್ಯಾಪಿ ಅರ್ಹರಿಗೆ ಸ್ಥಿತಿ ಗಮನಿಸಿ ಪಡಿತರ ಹಂಚಿಕೆ&lt;/li&gt; &lt;li&gt;ಆದರೆ ಕರ್ನಾಟಕ ಸರ್ಕಾರದಿಂದ ಫಲಾನುಭವಿಗಳ ಬಳಿ ಜಾತಿ ಪ್ರಮಾಣ ಪತ್ರ ಲಿಂಕ್&zwnj;&lt;/li&gt; &lt;li&gt;ಆಧಾರ್, ಬಯೋಮೆಟ್ರಿಕ್ ದೃಢೀಕರಣ ಬಳಿಕವೂ ಜಾತಿ ಕೇಳುವ ಉದ್ದೇಶವೇನು?&lt;/li&gt; &lt;li&gt;ಈ ಬಗ್ಗೆ ಸಂಪೂರ್ಣ ವಿವರ ನೀಡಿ: ಅಧಿಕಾರಿಗಳಿಗೆ ಕೇಂದ್ರ ಸಚಿವ ಜೋಶಿ ಆದೇಶ&lt;/li&gt;&lt;/ul&gt;&lt;p&gt;&lt;strong&gt;ನವದೆಹಲಿ )ಜೂ.21): &lt;/strong&gt;ಕರ್ನಾಟಕ ಸರ್ಕಾರ ಪಡಿತರಕ್ಕೆ &lsquo;ಜಾತಿ ಪ್ರಮಾಣ ಪತ್ರ&rsquo; ಲಿಂಕ್&zwnj; ಮಾಡುವುದು ಕಾನೂನು ಬಾಹಿರ ಕ್ರಮವಾಗಿದ್ದು, ಈ ಬಗ್ಗೆ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿರುವುದಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.&lt;/p&gt;&lt;p&gt;ಆಹಾರ ಭದ್ರತೆ ಒದಗಿಸುವಲ್ಲಿ ಯಾವುದೇ ಜಾತಿ ಲಿಂಕ್ ಮಾಡಲು ಸಾಧ್ಯವಿಲ್ಲ ಎಂದಿರುವ ಸಚಿವರು, ಕರ್ನಾಟಕ ಸರ್ಕಾರ ಪಡಿತರಕ್ಕೆ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದಾರೆ.&lt;/p&gt;&lt;p&gt;ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರ ಪಡೆಯುವ ಫಲಾನುಭವಿಗಳಿಂದ ರಾಜ್ಯದಲ್ಲಿ ಜಾತಿ ಪ್ರಮಾಣ ಪತ್ರ ಕೇಳಲಾಗುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸುವಲ್ಲಿ ಬದ್ಧತೆ ತೋರಿದೆ. ಯಾವುದೇ ಜಾತಿ, ಜನಾಂಗವೆಂದೆಣಿಸುತ್ತಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಪಡಿತರ ಪಡೆಯಲು ರಾಜ್ಯ ಸರ್ಕಾರ ಜಾತಿ ಪ್ರಮಾಣ ಪತ್ರ ಕಡ್ಡಾಯಗೊಳಿಸಿರುವುದು ನಿಜಕ್ಕೂ ದುರಂತವೇ ಸರಿ ಎಂದು ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.&lt;/p&gt;&lt;h2&gt;ಸಲ್ಲದ ನೀತಿ-ನಿಯಮ ಹೇರುವುದರ ಉದ್ದೇಶವೇನು?&lt;/h2&gt;&lt;p&gt;ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ಅವರ ಆರ್ಥಿಕ ಸ್ಥಿತಿ ಮತ್ತು ಅರ್ಹತೆ ಆಧಾರದ ಮೇಲೆ ಆಹಾರ ಧಾನ್ಯ ಒದಗಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಆಧಾರ್, ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಗಳ ಯಶಸ್ವಿ ಏಕೀಕರಣದ ಹೊರತಾಗಿಯೂ ಜಾತಿ ಪ್ರಮಾಣ ಪತ್ರ ಕಡ್ಡಾಯಗೊಳಿಸುವುದರ ಹಿಂದಿನ ಉದ್ದೇಶವೇನು? ಎಂದು ಸಚಿವರು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ದೇಶದ ಯಾವುದೇ ಭಾಗದಲ್ಲಿ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ಆಹಾರ ಧಾನ್ಯ ಸುಲಭವಾಗಿ ಲಭ್ಯವಾಗುವಂತೆ ಕೇಂದ್ರ ಸರ್ಕಾರ ಈಗಾಗಲೇ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಉಪಕ್ರಮವನ್ನು ಪರಿಚಯಿಸಿದೆ. ಹೀಗಿರುವಾಗ ಸ್ಥಳೀಯವಾಗಿ ಸಲ್ಲದ ನೀತಿ ನಿಯಮ ಹೇರುವುದು ಕಡುಬಡವರು ಪಡಿತರ ಪಡೆಯುವ ಆಶಯಕ್ಕೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.&lt;/p&gt;&lt;h3&gt;ಆಹಾರಧಾನ್ಯಕ್ಕೆ ಆಡಳಿತಾತ್ಮಕ ಕ್ರಮ ಅಡ್ಡಿಯಾಗಬಾರದು:&lt;/h3&gt;&lt;p&gt;ದೇಶವಾಸಿಗಳಿಗೆ, ಅರ್ಹ ಫಲಾನುಭವಿಗಳಿಗೆ ಯಾವುದೇ ಅಡೆತಡೆ ಇಲ್ಲದಂತೆ ಆಹಾರ ಭದ್ರತೆ ಪ್ರಯೋಜನ ಕಲ್ಪಿಸುವುದು ಎಲ್ಲಾ ಸರ್ಕಾರಗಳ ಪ್ರಥಮ ಆದ್ಯತೆಯಾಗಿರಬೇಕು ಎಂದಿರುವ ಸಚಿವ ಜೋಶಿ, ಸಮಾಜದ ಬಡ ಮತ್ತು ಅರ್ಹ ವರ್ಗಗಳಿಗೆ ಆಹಾರ ಧಾನ್ಯ ತಲುಪುವಲ್ಲಿ ಯಾವುದೇ ಆಡಳಿತಾತ್ಮಕ ಕ್ರಮಗಳು ಅಡ್ಡಿಯಾಗಬಾರದು ಎಂದು ರಾಜ್ಯ ಸರ್ಕಾರಕ್ಕೆ ಸೂಚ್ಯವಾಗಿ ಚಾಟಿ ಬೀಸಿದ್ದಾರೆ.&lt;/p&gt;&lt;p&gt;ಕರ್ನಾಟಕದಲ್ಲಿ ಪಡಿತರ ಯೋಜನೆಗೆ ಜಾತಿ ಲಿಂಕ್&zwnj; ಮಾಡುತ್ತಿರುವ ಬಗ್ಗೆ ಸಂಪೂರ್ಣ ವಿವರ ಪಡೆಯಲು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆಯಲು ಕಚೇರಿ ಉನ್ನತ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಪಿಡಿಎಸ್&zwnj;ನಲ್ಲಿ ಜಾತಿ ಪ್ರಮಾಣಪತ್ರ ಪಡೆಯುವುದು ಕಾನೂನುಬಾಹಿರ. ಮತ್ತಿದು ಸ್ಥಾಪಿತ ಮಾರ್ಗಸೂಚಿಗಳು ಮತ್ತು ಎಸ್&zwnj;ಒಪಿಗಳಿಗೆ ವಿರುದ್ಧವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿಕೆಯಲ್ಲಿ ಆಕ್ಷೇಪಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/is-caste-certificate-mandatory-for-ration-in-karnataka-union-minister-pralhad-joshi-outraged-rav/articleshow-ukv4ath"/>
        </item>
        <item>
            <title><![CDATA[Yash Toxic:ʻಟಾಕ್ಸಿಕ್‌ʼ ತಂಡದಿಂದ ನಾಳೆ 'ಬಿಗ್‌ ಅಪ್‌ಡೇಟ್‌'..? ಯಶ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ?]]></title>
            <link>https://kannada.asianetnews.com/entertainment/is-toxic-release-date-announcement-tomorrow-and-what-is-the-secret-behind-yash-latest-teaser-post/articleshow-7r3cya8</link>
            <guid isPermaLink="true">https://kannada.asianetnews.com/entertainment/is-toxic-release-date-announcement-tomorrow-and-what-is-the-secret-behind-yash-latest-teaser-post/articleshow-7r3cya8</guid>
            <pubDate>Sat, 20 Jun 2026 22:56:02 +0530</pubDate>
            <description><![CDATA[&lt;p&gt;ಕಳೆದ ಕೆಲವು ತಿಂಗಳುಗಳಿಂದ ಸದ್ದಿಲ್ಲದೆ ಶೂಟಿಂಗ್ ಹಂತದಲ್ಲಿರುವ 'ಟಾಕ್ಸಿಕ್' ತಂಡ ನಾಳೆ (ಗುರುವಾರ) ಒಂದು ಮಹತ್ವದ ಘೋಷಣೆ ಮಾಡಲು ಸಜ್ಜಾಗಿದೆ. ಚಿತ್ರದ ಅಧಿಕೃತ ಟ್ವಿಟ್ಟರ್ (X) ಖಾತೆಯಲ್ಲಿ &quot;ನಾಳೆ ಏನಾದರೂ ಪ್ಲ್ಯಾನ್ಸ್ ಇದೆಯೇ?&quot; (Any plans for tomorrow?) ಎಂದು ಕೇಳುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgsgcynvv1ckbbdvp5v562hk,imgname-yash-toxic-movie-1770382588603.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&quot;ಟಾಕ್ಸಿಕ್&quot; ಸುನಾಮಿಗೆ ಮುಹೂರ್ತ ಫಿಕ್ಸ್? ನಾಳೆಯೇ ಹೊರಬೀಳಲಿದೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾದ ಅಸಲಿ 'ಬಿಗ್ ಅಪ್&zwnj;ಡೇಟ್'!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ಸುಲ್ತಾನ್, ಗ್ಲೋಬಲ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ (Yash) ಅವರ ಮುಂದಿನ ನಡೆ ಏನು ಎಂಬುದು ಇಡೀ ಭಾರತೀಯ ಚಿತ್ರರಂಗವನ್ನೇ ದಹಿಸುತ್ತಿರುವ ಕುತೂಹಲ. 'ಕೆಜಿಎಫ್-2' ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ನಂತರ ಯಶ್ ಮೌನಕ್ಕೆ ಶರಣಾಗಿದ್ದರು. ಆದರೆ, ಯಾವಾಗ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-ups) ಎಂಬ ಶೀರ್ಷಿಕೆ ಘೋಷಣೆಯಾಯಿತೋ, ಅಂದಿನಿಂದ ಅಭಿಮಾನಿಗಳ ಎದಬಡಿತ ಜೋರಾಗಿದೆ. ಈಗ ಅದೇ ಕುತೂಹಲಕ್ಕೆ ತುಪ್ಪ ಸುರಿಯುವಂತೆ ಚಿತ್ರತಂಡದಿಂದ ಒಂದು ಬಿಗ್ ನ್ಯೂಸ್ ಹೊರಬಿದ್ದಿದೆ!&lt;/p&gt;&lt;p&gt;ನಾಳೆಯೇ 'ಟಾಕ್ಸಿಕ್' ಹವಾ!&lt;/p&gt;&lt;p&gt;ಹೌದು, ಕಳೆದ ಕೆಲವು ತಿಂಗಳುಗಳಿಂದ ಸದ್ದಿಲ್ಲದೆ ಶೂಟಿಂಗ್ ಹಂತದಲ್ಲಿರುವ 'ಟಾಕ್ಸಿಕ್' ತಂಡ ನಾಳೆ (ಗುರುವಾರ) ಒಂದು ಮಹತ್ವದ ಘೋಷಣೆ ಮಾಡಲು ಸಜ್ಜಾಗಿದೆ. ಚಿತ್ರದ ಅಧಿಕೃತ ಟ್ವಿಟ್ಟರ್ (X) ಖಾತೆಯಲ್ಲಿ &quot;ನಾಳೆ ಏನಾದರೂ ಪ್ಲ್ಯಾನ್ಸ್ ಇದೆಯೇ?&quot; (Any plans for tomorrow?) ಎಂದು ಕೇಳುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಬಹುಶಃ ನಾಳೆ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಅಥವಾ ಒಂದು ಸಣ್ಣ ಗ್ಲಿಂಪ್ಸ್ ಹೊರಬೀಳುವ ಎಲ್ಲಾ ಸಾಧ್ಯತೆಗಳಿವೆ.&lt;/p&gt;&lt;p&gt;ತಾರಾಗಣ ಅಂದ್ರೆ ಹೀಗಿರಬೇಕು!&lt;/p&gt;&lt;p&gt;'ಟಾಕ್ಸಿಕ್' ಕೇವಲ ಸಿನಿಮಾ ಅಲ್ಲ, ಅದೊಂದು ಬಹುತಾರಾಗಣದ ಗ್ಯಾಲರಿ. ಈ ಚಿತ್ರದಲ್ಲಿ ಯಶ್ ಜೊತೆ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ, ಲೇಡಿ ಸೂಪರ್ ಸ್ಟಾರ್ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ನಮ್ಮ ಕನ್ನಡದ ಹೆಮ್ಮೆ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಅವರು 'ದ್ವಿಪಾತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದ್ದು, ಇದು ನಿಜವೇ ಆಗಿದ್ದರೆ ಬಾಕ್ಸ್ ಆಫೀಸ್ ಚಿಂದಿ ಆಗುವುದರಲ್ಲಿ ಸಂಶಯವೇ ಇಲ್ಲ.&lt;/p&gt;&lt;h2&gt;ತಾಂತ್ರಿಕ ದಿಗ್ಗಜರ ಸಮಾಗಮ&lt;/h2&gt;&lt;p&gt;ಸಿನಿಮಾದ ತಾಂತ್ರಿಕ ತಂಡವೂ ಅಷ್ಟೇ ಬಲಿಷ್ಠವಾಗಿದೆ. ರಾಜೀವ್ ರವಿ ಅವರ ಅದ್ಭುತ ಛಾಯಾಗ್ರಹಣ, ಉಜ್ವಲ್ ಕುಲಕರ್ಣಿ ಅವರ ಶಾರ್ಪ್ ಎಡಿಟಿಂಗ್ ಚಿತ್ರಕ್ಕಿದೆ. ಇನ್ನು ಸಂಗೀತದ ವಿಚಾರಕ್ಕೆ ಬಂದರೆ, ರವಿ ಬಸ್ರೂರ್ ಅವರು ಹಿನ್ನೆಲೆ ಸಂಗೀತ ಮತ್ತು ಒಂದು ಹಾಡಿನ ಜವಾಬ್ದಾರಿ ಹೊತ್ತಿದ್ದರೆ, ಬಾಲಿವುಡ್&zwnj;ನ ವಿಶಾಲ್ ಮಿಶ್ರಾ ಮತ್ತು ತನಿಷ್ಕ್ ಬಾಗ್ಚಿ ಉಳಿದ ಹಾಡುಗಳಿಗೆ ಧ್ವನಿಯಾಗುತ್ತಿದ್ದಾರೆ. ಯಶ್ ಅವರ ಸ್ವಂತ ಸಂಸ್ಥೆ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಮತ್ತು 'ಕೆವಿಎನ್ ಪ್ರೊಡಕ್ಷನ್ಸ್' ಅತ್ಯಂತ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.&lt;/p&gt;&lt;p&gt;ಬಿಡುಗಡೆಯ ದಿನಾಂಕ ಯಾವುದು?&lt;/p&gt;&lt;p&gt;ಮೊದಲು ಈ ಚಿತ್ರ 2025ರ ಮಾರ್ಚ್ 19ರಂದು ಬಿಡುಗಡೆಯಾಗಬೇಕಿತ್ತು. ಆದರೆ ಜಾಗತಿಕವಾಗಿ ನಡೆಯುತ್ತಿದ್ದ ಅಸ್ಥಿರತೆ (ಇರಾನ್-ಇಸ್ರೇಲ್ ಸಂಘರ್ಷ) ಹಾಗೂ ಶೂಟಿಂಗ್ ವಿಳಂಬದಿಂದಾಗಿ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತ್ತು. ಈಗ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಜೂನ್ 4ರಂದು ಸಿನಿಮಾ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಬಗ್ಗೆ ನಾಳೆ ಅಧಿಕೃತ ಮುದ್ರೆ ಬೀಳಲಿದೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ವಿಶ್ವಮಟ್ಟದಲ್ಲಿ ವಿತರಣೆಯ ಜಾಲ&lt;/h3&gt;&lt;p&gt;'ಟಾಕ್ಸಿಕ್' ಕೇವಲ ಭಾರತಕ್ಕೆ ಸೀಮಿತವಲ್ಲ. ಉತ್ತರ ಭಾರತದಲ್ಲಿ ಎಎ ಫಿಲ್ಮ್ಸ್, ತೆಲುಗಿನಲ್ಲಿ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ತಮಿಳುನಾಡಿನಲ್ಲಿ ಟ್ರೈಡೆಂಟ್ ಆರ್ಟ್ಸ್ ನಂತಹ ಘಟಾನುಘಟಿಗಳು ವಿತರಣೆಯ ಹಕ್ಕು ಪಡೆದಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬಿಡುಗಡೆಗಾಗಿ ಜಾಗತಿಕ ಸ್ಟುಡಿಯೋಗಳ ಜೊತೆ ಮಾತುಕತೆ ನಡೆಯುತ್ತಿದೆ.&lt;/p&gt;&lt;p&gt;ಒಟ್ಟಿನಲ್ಲಿ, ರಾಕಿಂಗ್ ಸ್ಟಾರ್ ಯಶ್ ಅವರ ಈ 'ಫೇರಿ ಟೇಲ್' ನೋಡಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ನಾಳೆ ಸಿಗುವ ಆ ಅಪ್&zwnj;ಡೇಟ್ ಏನು? ಯಶ್ ಅವತಾರ ಹೇಗಿರಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ. ಗೆಟ್ ರೆಡಿ ಯಶ್ ಫ್ಯಾನ್ಸ್!&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/is-toxic-release-date-announcement-tomorrow-and-what-is-the-secret-behind-yash-latest-teaser-post/articleshow-7r3cya8"/>
        </item>
        <item>
            <title><![CDATA[Temple Funds: ದೇವಸ್ಥಾನದ ದುಡ್ಡಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಬ್ರೇಕ್! ₹246 ಕೋಟಿ ಯೋಜನೆ ರದ್ದು-ಸಿಎಂ ವಿಜಯ್]]></title>
            <link>https://kannada.asianetnews.com/gallery/india-news/tamil-nadu-government-cm-vijay-cancels-temple-fund-commercial-projects-rs-246-crore-y8xvhhl</link>
            <guid isPermaLink="true">https://kannada.asianetnews.com/gallery/india-news/tamil-nadu-government-cm-vijay-cancels-temple-fund-commercial-projects-rs-246-crore-y8xvhhl</guid>
            <pubDate>Sat, 20 Jun 2026 21:55:23 +0530</pubDate>
            <description><![CDATA[&lt;p&gt;ತಮಿಳುನಾಡು ಸರ್ಕಾರವು, ದೇವಸ್ಥಾನಗಳ ಹಣದಲ್ಲಿ ಕಲ್ಯಾಣ ಮಂಟಪಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಹಿಂದಿನ ಡಿಎಂಕೆ ಸರ್ಕಾರ ರೂಪಿಸಿದ್ದ 246 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ರದ್ದುಗೊಳಿಸಿದೆ. ಈ ನಿರ್ಧಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvjwwp51yj1txneqehcvj8sv,imgname-tamil-nadu-cm-vijay-cancel-marriage-hall-fund-1781971966113.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಸರ್ಕಾರವು, ದೇವಸ್ಥಾನಗಳ ಹಣದಲ್ಲಿ ಕಲ್ಯಾಣ ಮಂಟಪಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಹಿಂದಿನ ಡಿಎಂಕೆ ಸರ್ಕಾರ ರೂಪಿಸಿದ್ದ 246 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ರದ್ದುಗೊಳಿಸಿದೆ. ಈ ನಿರ್ಧಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ತಮಿಳುನಾಡಿನಲ್ಲಿ ದೇವಸ್ಥಾನಗಳ ಹಣವನ್ನು ಬಳಸಿ ಕಲ್ಯಾಣ ಮಂಟಪಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಹಿಂದಿನ ಡಿಎಂಕೆ ಸರ್ಕಾರ ರೂಪಿಸಿದ್ದ ಯೋಜನೆಗೆ ಹೊಸ ಸರ್ಕಾರ ತಡೆ ನೀಡಿದೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (HR &amp;amp; CE) ಅಡಿಯಲ್ಲಿ ರಾಜ್ಯದಾದ್ಯಂತ ಜಾರಿಗೊಳಿಸಲು ಉದ್ದೇಶಿಸಿದ್ದ ಸುಮಾರು 246 ಕೋಟಿ ರೂಪಾಯಿ ಮೌಲ್ಯದ 46 ಯೋಜನೆಗಳ ಆಡಳಿತಾತ್ಮಕ ಅನುಮೋದನೆಯನ್ನು ತಮಿಳುನಾಡು ಸರ್ಕಾರ ರದ್ದುಗೊಳಿಸಿದೆ.&lt;/p&gt;&lt;img&gt;&lt;p&gt;ಶುಕ್ರವಾರ ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, 115.77 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 29 ಕಲ್ಯಾಣ ಮಂಟಪಗಳ ಯೋಜನೆಗಳು ಮತ್ತು 130.08 ಕೋಟಿ ರೂಪಾಯಿ ವೆಚ್ಚದ 17 ವಾಣಿಜ್ಯ ಸಂಕೀರ್ಣಗಳ ಯೋಜನೆಗಳನ್ನು ರದ್ದುಪಡಿಸಲಾಗಿದೆ. ಒಟ್ಟು 245.85 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಸರ್ಕಾರ ಕೈಬಿಟ್ಟಿದೆ. ಈ ಯೋಜನೆಗಳನ್ನು ಈ ಹಿಂದೆ ಘೋಷಿಸಲಾಗಿದ್ದರೂ, ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿರಲಿಲ್ಲ.&lt;/p&gt;&lt;img&gt;&lt;p&gt;ಈ ಯೋಜನೆಗಳಲ್ಲಿ ಹಲವು ಕಾನೂನು ತೊಡಕುಗಳನ್ನು ಎದುರಿಸುತ್ತಿವೆ ಮತ್ತು ಇವುಗಳನ್ನು ಮುಂದುವರಿಸಿದರೆ ದೇವಸ್ಥಾನಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ದೇವಸ್ಥಾನದ ನಿಧಿಯನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಹೊಸ ಸರ್ಕಾರವು ತನ್ನ ನೀತಿಯಲ್ಲಿ ಬದಲಾವಣೆ ತಂದಿರುವುದೇ ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. &lsquo;ಕಲ್ಯಾಣ ಮಂಟಪಗಳು ಮತ್ತು ಶಾಪಿಂಗ್ ಕಾಂಪ್ಲೆಕ್ಸ್&zwnj;ಗಳಂತಹ ವಾಣಿಜ್ಯ ಯೋಜನೆಗಳ ಬದಲು, ಈ ಹಣವನ್ನು ಸಂಪೂರ್ಣವಾಗಿ ದೇವಸ್ಥಾನಕ್ಕೆ ಸಂಬಂಧಿಸಿದ ಕೆಲಸಗಳಿಗೆ ಮಾತ್ರ ಬಳಸಬೇಕು ಎಂಬುದು ಹೊಸ ನಿರ್ಧಾರ&rsquo; ಎಂದು ಎಚ್&zwnj;ಆರ್ &amp;amp; ಸಿಇ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಆದಾಯ ತರುವ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವುದಕ್ಕಿಂತ, ದೇವಸ್ಥಾನಗಳ ಸಂರಕ್ಷಣೆ, ಭಕ್ತರಿಗೆ ಸೌಲಭ್ಯ ಒದಗಿಸುವುದು ಮತ್ತು ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಹಣವನ್ನು ವಿನಿಯೋಗಿಸಬೇಕು ಎಂಬುದು ಸರ್ಕಾರದ ನಿಲುವು. ಈ ಯೋಜನೆಗಳನ್ನು ರದ್ದುಗೊಳಿಸಿದ್ದರಿಂದ ಉಳಿಯುವ ಹಣವನ್ನು ಭಕ್ತರು ಮತ್ತು ದೇವಸ್ಥಾನಗಳಿಗೆ ನೇರವಾಗಿ ಪ್ರಯೋಜನವಾಗುವ ಹೊಸ ಯೋಜನೆಗಳಿಗೆ ಬಳಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಲಾಗಿದ್ದ ಯೋಜನೆಗಳನ್ನು ಈಗ ರದ್ದುಗೊಳಿಸಿರುವುದರಿಂದ ಈ ನಿರ್ಧಾರಕ್ಕೆ ರಾಜಕೀಯ ಮಹತ್ವ ಬಂದಿದೆ. ದೇವಸ್ಥಾನದ ಆಡಳಿತದ ಅಡಿಯಲ್ಲಿ ವಾಣಿಜ್ಯ ಆಸ್ತಿಗಳನ್ನು ಅಭಿವೃದ್ಧಿಪಡಿಸುವ ಹಿಂದಿನ ಸರ್ಕಾರದ ನೀತಿಯಿಂದ ಇದು ಸಂಪೂರ್ಣ ಭಿನ್ನವಾಗಿದೆ. ಸರ್ಕಾರದ ಈ ನಿರ್ಧಾರವನ್ನು ಡಿಎಂಕೆ ವಿರೋಧಿಸಿದೆ. ಆಡಳಿತ ಬದಲಾದ ನಂತರ ಎಚ್&zwnj;ಆರ್ &amp;amp; ಸಿಇ ಇಲಾಖೆ ತೆಗೆದುಕೊಂಡಿರುವ ಅತ್ಯಂತ ಮಹತ್ವದ ನಿರ್ಧಾರಗಳಲ್ಲಿ ಇದೂ ಒಂದಾಗಿದ್ದು, ದೇವಸ್ಥಾನದ ಹಣವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಬಹುದೇ ಎಂಬ ಬಗ್ಗೆ ದೊಡ್ಡ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/india-news/tamil-nadu-government-cm-vijay-cancels-temple-fund-commercial-projects-rs-246-crore-y8xvhhl"/>
        </item>
        <item>
            <title><![CDATA['ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?]]></title>
            <link>https://kannada.asianetnews.com/entertainment/annamalai-rajinikanth-and-thala-ajith-are-reportedly-set-against-the-sitting-tamil-nadu-cm-vijay-joseph-videoshow-o9yk98u</link>
            <guid isPermaLink="true">https://kannada.asianetnews.com/entertainment/annamalai-rajinikanth-and-thala-ajith-are-reportedly-set-against-the-sitting-tamil-nadu-cm-vijay-joseph-videoshow-o9yk98u</guid>
            <pubDate>Sat, 20 Jun 2026 20:14:44 +0530</pubDate>
            <description><![CDATA[&lt;p&gt;ತಮಿಳುನಾಡು ರಾಜಕಾರಣ ದಿನದಿನಕ್ಕೂ ಕಲರ್&zwnj;ಫುಲ್ ಆಗ್ತಾ ಇದೆ. ಸಿಎಂ ವಿಜಯ್ ಕೆಲವು ಕ್ರಾಂತಿಕಾರಿ ನಿರ್ಧಾರಗಳನ್ನ ತೆಗೆದುಕೊಂಡು ಜನರ ಗಮನ ಸೆಳಿತಾ ಇದ್ದಾರೆ. ತಮಿಳುನಾಡಿನಾದ್ಯಂತ ಜೋಸೆಪ್ ವಿಜಯ್ ಗಾಳಿ ಜೋರಾಗಿದೆ. ಆದ್ರೆ ಇದೇ ಹೊತ್ತಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ. ಏನದು ನೋಡಿ..&lt;/p&gt;]]></description>
            <media:content url="https://geo.dailymotion.com/player/x1tbu.html?video=xahddf2" medium="video" height="768" width="1024"/>
            <content:encoded><![CDATA[&lt;p&gt;ಸದ್ಯಕ್ಕೆ ತಮಿಳುನಾಡು ರಾಜಕಾರಣದ ಚುಕ್ಕಾಣಿ ಜೋಸೆಪ್ ವಿಜಯ್ ಕೈಯಲ್ಲಿದೆ. ಆದ್ರೆ ಅಲ್ಲಿನ ರಾಜಕೀಯ ಮೇಲಾಟಗಳು ಹೊಸ ರೂಪ ಪಡೀತಾ ಇವೆ. ಬಿಜೆಪಿ ಬಿಟ್ಟು ಹೊರ ಬಂದಿರೋ ಅಣ್ಣಾಮಲೈ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗು ನಟ ತಲಾ ಅಜಿತ್ ಕೈ ಜೋಡಿಸುತ್ತಾರೆ ಅನ್ನೋ ಸುದ್ದಿಯೊಂದು ಹಬ್ಬಿದೆ. ಹಾಗಾದ್ರೆ ಅದು ನಿಜಾನಾ..? ನೋಡೋಣ ಬನ್ನಿ..&lt;/p&gt;&lt;p&gt;ತಮಿಳು ರಾಜಕಾರಣದಲ್ಲಿ ಅಣ್ಣಾ ಮಲೈ ರಜಿನಿ, ಅಜಿತ್ ಸಂಚಲನ; ದಳಪತಿಗೆ ದಾಳ ಉರುಳಿಸಲು ಸಜ್ಜಾಗುತ್ತಿದೆಯಾ ಮಹಾನ್ ವೇದಿಕೆ?ತಮಿಳುನಾಡು ರಾಜಕಾರಣ ದಿನದಿನಕ್ಕೂ ಕಲರ್&zwnj;ಫುಲ್ ಆಗ್ತಾ ಇದೆ. ವಿಧಾನಸಭೆ ಗೆದ್ದು ಗದ್ದುಗೆ ಏರಿರೋ ವಿಜಯ್ ಕೆಲವು ಕ್ರಾಂತಿಕಾರಿ ನಿರ್ಧಾರಗಳನ್ನ ತೆಗೆದುಕೊಂಡು ಜನರ ಗಮನ ಸೆಳಿತಾ ಇದ್ದಾರೆ. ತಮಿಳುನಾಡಿನಾದ್ಯಂತ ಜೋಸೆಪ್ ವಿಜಯ್ ಗಾಳಿ ಜೋರಾಗಿದೆ. ಆದ್ರೆ ಇದೇ ಹೊತ್ತಲ್ಲಿ ಮತ್ತೊಂದು ಬಿರುಗಾಳಿ ಎದ್ದಿರೋದು, ಅಣ್ಣಾಮಲೈ, ರಜನಿಕಾಂತ್, ಅಜಿತ್ ಒಂದಾಗುತ್ತಿದ್ದಾರೆ ಅನ್ನೋ ವಿಚಾರ..ದಳಪತಿ ವಿಜಯ್ ಈಗ ಒಬ್ಬ ಚಿತ್ರನಟನಂತೆ ಕಾಣ್ತಾ ಇಲ್ಲ, ರಾಜಕಾರಣದಲ್ಲಿ ತುಂಬಾ ಪಳಗಿದಂತೆ ಕಾಣ್ತಾ ಇದ್ದಾರೆ. ಆದ್ರೆ ಇದನ್ನ ಒಡೆಯೋಕೆ ಈಗ ಒಂದು ದೊಡ್ಡ ಅಣ್ವಸ್ತ್ರ ನಿಧಾನಕ್ಕೆ ಸಿದ್ಧವಾಗ್ತಿದೆ ಅನ್ನೋದು ಸುದ್ದಿಯೊಂದು ಗುದ್ದುತ್ತಿದೆ. ಅದು ಅಣ್ಣಾ ಮಲೈ, ರಜನಿಕಾಂತ್ ಹಾಗು ಅಜಿತ್​ಕಾಂಬಿನೇಷನ್. ಈ 'ತ್ರಿಮೂರ್ತಿ'ಗಳ ಜೋಡಿ ವಿಜಯ್ ವಿರುದ್ಧ ಸೆಟ್ ಆಗಿದೆ ಅನ್ನೋ ಮಾತುಗಳು ಹುಟ್ಟಿವೆ..&amp;nbsp;ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/annamalai-rajinikanth-and-thala-ajith-are-reportedly-set-against-the-sitting-tamil-nadu-cm-vijay-joseph-videoshow-o9yk98u"/>
        </item>
    </channel>
</rss>
