<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 19 Apr 2026 22:04:46 +0530</lastBuildDate>
        <atom:link href="https://kannada.asianetnews.com/rss/india-news" rel="self" type="application/rss+xml"/>
        <item>
            <title><![CDATA[ಭಾರತದ ಪೌರತ್ವ ಆಫರ್ ತಿರಸ್ಕರಿಸಿದ್ದೇಕೆ? ಕಾರಣ ಬಿಚ್ಚಿಟ್ಟ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್]]></title>
            <link>https://kannada.asianetnews.com/gallery/cricket-sports/afghan-star-rashid-khan-opens-up-on-turning-down-indian-citizenship-offer-0pie0fh</link>
            <guid isPermaLink="true">https://kannada.asianetnews.com/gallery/cricket-sports/afghan-star-rashid-khan-opens-up-on-turning-down-indian-citizenship-offer-0pie0fh</guid>
            <pubDate>Sun, 19 Apr 2026 22:04:42 +0530</pubDate>
            <description><![CDATA[&lt;p&gt;ಭಾರತದ ಪೌರತ್ವ ಆಫರ್ ತಿರಸ್ಕರಿಸಿದ್ದೇಕೆ? ಕಾರಣ ಬಿಚ್ಚಿಟ್ಟ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್, ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ಕುತೂಹಲ ಮಾಹಿತಿಯನ್ನು ರಶೀದ್ ಖಾನ್ ಬಹಿರಂಗಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gx67kq7dnmyz4qkr2xk1rv4f,imgname-Rashid-Khan-1680615267562.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಪೌರತ್ವ ಆಫರ್ ತಿರಸ್ಕರಿಸಿದ್ದೇಕೆ? ಕಾರಣ ಬಿಚ್ಚಿಟ್ಟ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್, ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ಕುತೂಹಲ ಮಾಹಿತಿಯನ್ನು ರಶೀದ್ ಖಾನ್ ಬಹಿರಂಗಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಆಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್, ಐಪಿಎಲ್ ಮೂಲಕ ಭಾರತೀಯರ ನೆಚ್ಚಿನ ಕ್ರಿಕೆಟಿಗರಾಗಿ ಹೊರಹೊಮ್ಮಿದ್ದಾರೆ. ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ರಶೀದ್ ಖಾನ್ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ರಶೀದ್ ಖಾನ್&zwnj;ಗೆ ಭಾರತದ ಪೌರತ್ವ ನೀಡಬೇಕು ಅನ್ನೋ ಕೂಗು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಕೇಳಿಬಂದಿತ್ತು. ಇದರ ನಡುವೆ ಈ ಪ್ರಯತ್ನವೂ ನಡೆದಿತ್ತು ಅನ್ನೋ ಮಾಹಿತಿ ಬಯಲಾಗಿದೆ.&lt;/p&gt;&lt;img&gt;&lt;p&gt;ಭಾರತ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ತಮಗೆ ಪೌರತ್ವದ ಆಫರ್ ನೀಡಿದ್ದವು, ಆದರೆ ತಾನು ಅದನ್ನು ನಿರಾಕರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರ ಈಗ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ತಮ್ಮ ಹೊಸ ಪುಸ್ತಕ 'ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್&zwnj;ಡಮ್ ಪುಸ್ತಕದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;2023ರ ಐಪಿಎಲ್ ಸೀಸನ್ ವೇಳೆ ಭಾರತೀಯ ಕ್ರಿಕೆಟ್ ಬೋರ್ಡ್&zwnj;ನ ಹಿರಿಯ ಅಧಿಕಾರಿಯೊಬ್ಬರು ನನ್ನನ್ನು ಭೇಟಿಯಾಗಿದ್ದರು ಎಂದು ರಶೀದ್ ಹೇಳಿದ್ದಾರೆ. &quot;'ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ಹಾಗಾಗಿ ನೀವೇಕೆ ಭಾರತದಲ್ಲೇ ಉಳಿದು ಇಲ್ಲಿ ಆಡಬಾರದು?' ಅಂತ ಅವರು ಕೇಳಿದರು. ಭಾರತದ ಪೌರತ್ವ ದಾಖಲೆಗಳನ್ನು ನೀಡುವುದಾಗಿಯೂ ಭರವಸೆ ನೀಡಿದರು,&quot; ಎಂದು ರಶೀದ್ ವಿವರಿಸಿದ್ದಾರೆ. &quot;ಆದರೆ, ನಾನು ನಗುತ್ತಲೇ ಆ ಆಹ್ವಾನವನ್ನು ನಿರಾಕರಿಸಿದೆ. ನನ್ನ ದೇಶ ಅಫ್ಘಾನಿಸ್ತಾನ ಎಂದು ಸ್ಪಷ್ಟಪಡಿಸಿದೆ,&quot; ಎಂದು ರಶೀದ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇದೇ ರೀತಿ ಆಸ್ಟ್ರೇಲಿಯಾದಿಂದಲೂ ತಮಗೆ ಆಫರ್&zwnj;ಗಳು ಬಂದಿದ್ದವು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಇದಕ್ಕೂ ಮುನ್ನ 2018ರಲ್ಲಿ, ರಶೀದ್ ಖಾನ್ ಸನ್&zwnj;ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾಗ, ಅವರ ಅದ್ಭುತ ಪ್ರದರ್ಶನಕ್ಕೆ ಮನಸೋತಿದ್ದ ಭಾರತೀಯ ಅಭಿಮಾನಿಗಳು, ಅವರಿಗೆ ಭಾರತೀಯ ಪೌರತ್ವ ನೀಡಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಅಭಿಮಾನಿಗಳು ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟ್ಯಾಗ್ ಮಾಡಿ ಪೋಸ್ಟ್&zwnj;ಗಳನ್ನು ಹಾಕಿದ್ದರು. ಈ ವಿಚಾರ ದೊಡ್ಡದಾಗುತ್ತಿದ್ದಂತೆ, ಅಫ್ಘಾನಿಸ್ತಾನದ ಅಂದಿನ ಅಧ್ಯಕ್ಷ ಅಶ್ರಫ್ ಘನಿ ಅವರೇ ಮಧ್ಯಪ್ರವೇಶಿಸಿದ್ದರು. ರಶೀದ್ ಖಾನ್ ನಮ್ಮ ದೇಶದ ಹೆಮ್ಮೆ, ಅವರನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.&lt;/p&gt;&lt;img&gt;&lt;p&gt;ನಂಗರ್&zwnj;ಹಾರ್&zwnj;ನ ಧೂಳು ತುಂಬಿದ ಬೀದಿಗಳಿಂದ ವಿಶ್ವಮಟ್ಟದ ಕ್ರಿಕೆಟಿಗನಾಗಿ ಬೆಳೆದ ರಶೀದ್ ಖಾನ್ ಅವರ ಜೀವನ, ಇಂದು ಅಫ್ಘಾನಿಸ್ತಾನ ಕ್ರಿಕೆಟ್&zwnj;ನ ಬೆಳವಣಿಗೆಯ ಸಂಕೇತವಾಗಿದೆ. 2020ರಲ್ಲಿ ಐಸಿಸಿಯ ದಶಕದ ಆಟಗಾರ ಪ್ರಶಸ್ತಿ ಗೆದ್ದಿರುವ ರಶೀದ್, ಎಷ್ಟೇ ದೊಡ್ಡ ಆಫರ್&zwnj;ಗಳು ಬಂದರೂ ಅಫ್ಘಾನಿಸ್ತಾನದ ಜೆರ್ಸಿಯಲ್ಲೇ ಆಡುವುದಾಗಿ ದೃಢ ನಿಲುವು ತಳೆದಿದ್ದಾರೆ.&lt;/p&gt;&lt;h2&gt;ರಶೀದ್ ಖಾನ್ ಮುಳ್ಳು ಹಾದಿಯ ಪಯಣ&lt;/h2&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/afghan-star-rashid-khan-opens-up-on-turning-down-indian-citizenship-offer-0pie0fh"/>
        </item>
        <item>
            <title><![CDATA[ನ್ಯಾಯ ಕೋರಿ ಬೀದಿಗಿಳಿದ ಮುಸ್ಲಿಂ ವಿದ್ಯಾರ್ಥಿನಿಯರು- ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ- ಕಾಶ್ಮೀರದಲ್ಲಿ ಘಟನೆ]]></title>
            <link>https://kannada.asianetnews.com/crime/lecturer-suspended-in-sopore-over-alleged-harassment-class-work-halted-suc/articleshow-6shzarv</link>
            <guid isPermaLink="true">https://kannada.asianetnews.com/crime/lecturer-suspended-in-sopore-over-alleged-harassment-class-work-halted-suc/articleshow-6shzarv</guid>
            <pubDate>Sun, 19 Apr 2026 18:18:54 +0530</pubDate>
            <description><![CDATA[ಜಮ್ಮು ಮತ್ತು ಕಾಶ್ಮೀರದ ಸೋಪೋರ್&zwnj;ನಲ್ಲಿ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶಿಕ್ಷಕನೊಬ್ಬನ ಲೈಂಗಿಕ ದೌರ್ಜನ್ಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಹೋರಾಟ ತೀವ್ರಗೊಂಡ ಬಳಿಕ, ಆರೋಪಿ ಶಿಕ್ಷಕನನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpjwjehzf449fsd4jwr319j7,imgname-students-protest-1776602921534.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರ ಉದ್ವಿಗ್ನ ಸ್ಥಿತಿ ತಲುಪಿದೆ. ಪ್ರತಿಬಾರಿಯೂ ಕಲ್ಲು ತೂರಾಟದಂಥ ಘಟನೆಗಳಿಂದ ಸುದ್ದಿ ಮಾಡುತ್ತಿದ್ದ ಜಮ್ಮು -ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅದೂ ತಮ್ಮ ಹಕ್ಕಿಗಾಗಿ, ತಮ್ಮ ವಿರುದ್ಧ ನಡೆದಿರುವ ಅನ್ಯಾಯಕ್ಕಾಗಿ. ಅಷ್ಟಕ್ಕೂ ಇವರೆಲ್ಲರೂ ಪ್ರತಿಭಟನೆ ಮಾಡುತ್ತಿರುವುದು ಕಾಮುಕ ಶಿಕ್ಷಕನೊಬ್ಬನ ವಿರುದ್ಧ. ಪದವಿಪೂರ್ವ ಕಾಲೇಜಿನಲ್ಲಿನ ಶಿಕ್ಷಕನೊಬ್ಬ ಹೆಣ್ಣುಮಕ್ಕಳ ಮೇಲೆ ನಡೆಸುತ್ತಿರುವ ಲೈಂ*ಗಿಕ ದೌರ್ಜನ್ಯದ ವಿರುದ್ಧ ಈ ಹೆಣ್ಣುಮಕ್ಕಳು ದನಿ ಎತ್ತಿದ್ದಾರೆ. ಆತನಿಗೆ ಶಿಕ್ಷೆ ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದ ಜಮ್ಮು ಕಾಶ್ಮೀರ ಉದ್ವಿಗ್ನವಾಗಿದೆ.&lt;/p&gt;&lt;h2&gt;&lt;strong&gt;ಲೈಂ*ಗಿಕ ಕಿರುಕುಳ ಪ್ರಕರಣ&lt;/strong&gt;&lt;/h2&gt;&lt;p&gt;ಇಲ್ಲಿಯ ಸೋಪೋರ್ನ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂ*ಗಿಕ ಕಿರುಕುಳ ಪ್ರಕರಣ ಇದಾಗಿದೆ. ಇದು ಇಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲು ಕಾರಣವೇನೆಂದರೆ, ವಿದ್ಯಾರ್ಥಿನಿಯರು ಈ ಬಗ್ಗೆ ಎಷ್ಟೇ ದೂರಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ಒಬ್ಬಳೇ ಒಬ್ಬಳು ವಿದ್ಯಾರ್ಥಿನಿಯ ಮೇಲೆ ಈ ರೀತಿ ಆಗಿದೆ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡಲಾಯಿತು. ಆದರೆ ಯಾವಾಗ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟನೆ ಮಾಡಿದರೋ ಆಗ ಪೊಲೀಸರೇ ಅವರಿಗೆ ತಲೆಬಾಗಬೇಕಾಯ್ತು.&lt;/p&gt;&lt;h3&gt;&lt;strong&gt;ಶಿಕ್ಷಕನ ಅಮಾನತು&lt;/strong&gt;&lt;/h3&gt;&lt;p&gt;ಸದ್ಯ ಕಾಮುಕ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಕೆಲವು ದಿನಗಳ ಮಟ್ಟಿಗೆ ಈ ಕಾಲೇಜನ್ನು ಮುಚ್ಚಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಉಪನ್ಯಾಸಕರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಉಪ ಆಯುಕ್ತ (ಎಡಿಸಿ) ಹೇಳಿದ್ದಾರೆ. ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶನಾಲಯ (ಡಿಎಸ್&zwnj;ಇಕೆ) ಜಿಎಚ್&zwnj;ಎಸ್&zwnj;ಎಸ್ ಸೋಪೋರ್&zwnj;ನಲ್ಲಿ ಉರ್ದುವಿನ ಹಿರಿಯ ಉಪನ್ಯಾಸಕ ಗುಲಾಮ್ ಹಸನ್ ಮಿರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ತನಿಖಾಧಿಕಾರಿ ನೇಮಕ&lt;/strong&gt;&lt;/h3&gt;&lt;p&gt;ಈ ಬಗ್ಗೆ ವಿದ್ಯಾರ್ಥಿನಿಯರು ನ್ಯಾಯಕ್ಕಾಗಿ ಪಟ್ಟು ಹಿಡಿದ ಕಾರಣ, ಪೊಲೀಸರು ಜಂಟಿ ನಿರ್ದೇಶಕರು (ಉತ್ತರ ಕಾಶ್ಮೀರ) ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಿದ್ದು, 15 ದಿನಗಳಲ್ಲಿ ವರದಿ ನೀಡುವಂತೆ ತಿಳಿಸಿದ್ದಾರೆ. ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಅದು ಹಿಂಸಾಚಾರಕ್ಕೂ ತಿರುಗಿತು. ಕೆಲವರು ಇದನ್ನೇ ನೆಪ ಮಾಡಿಕೊಂಡು ಅಲ್ಲಿ ಅಶಾಂತಿ ಸೃಷ್ಟಿಸಲು ಮುಂದಾದರು. ಅವರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/lecturer-suspended-in-sopore-over-alleged-harassment-class-work-halted-suc/articleshow-6shzarv"/>
        </item>
        <item>
            <title><![CDATA[ಅಮ್ಮಾ ನಾನು ಪಾಸ್ ಆದೆ..! ಈ ವೈರಲ್ ವಿಡಿಯೋಗೆ ದೇಶ ಭಾವುಕವಾಗುತ್ತಿರುವುದೇಕೆ? ಬಡ ವಿದ್ಯಾರ್ಥಿನಿ ಸಾಧನೆ ನೀವೂ ನೋಡಿ!]]></title>
            <link>https://kannada.asianetnews.com/india-news/emotional-video-girl-sakshi-passes-10th-grade-calls-mother-than-singh-constable-sat/articleshow-0pgecgb</link>
            <guid isPermaLink="true">https://kannada.asianetnews.com/india-news/emotional-video-girl-sakshi-passes-10th-grade-calls-mother-than-singh-constable-sat/articleshow-0pgecgb</guid>
            <pubDate>Sun, 19 Apr 2026 17:45:36 +0530</pubDate>
            <description><![CDATA[ಪೊಲೀಸ್ ಕಾನ್ ಸ್ಟೆಬಲ್ ತನ್ ಸಿಂಗ್ ನಡೆಸುವ ಉಚಿತ ಪಾಠಶಾಲೆಯ ವಿದ್ಯಾರ್ಥಿನಿ ಸಾಕ್ಷಿ, ತನ್ನ 10ನೇ ತರಗತಿ ಫಲಿತಾಂಶ ಬಂದಾಗ ಅಮ್ಮನಿಗೆ ಕರೆ ಮಾಡಿ ಸಂತೋಷದಿಂದ ಅತ್ತಿದ್ದಾಳೆ. ಈ ಭಾವುಕ ಕ್ಷಣದ ವಿಡಿಯೋ ವೈರಲ್ ಆಗಿದ್ದು, ಬಡತನದ ನಡುವೆಯೂ ಶಿಕ್ಷಣದಿಂದ ಯಶಸ್ಸು ಸಾಧಿಸಬಹುದೆಂಬುದಕ್ಕೆ ಸಾಕ್ಷಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpj2f4vcxjg0yedwc9br1hy7,imgname-new-project---2026-04-19t104126.353-1776575550316.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿಕ್ಷಣ ಎಂಬುದು ಬಡತನದ ಸಂಕೋಲೆಯನ್ನು ಕತ್ತರಿಸುವ ಅತಿದೊಡ್ಡ ಅಸ್ತ್ರ. ಪೋಷಕರು ತಮ್ಮ ಹೊಟ್ಟೆ ಕಟ್ಟಿ ಮಕ್ಕಳನ್ನು ಓದಿಸುವುದು ಅವರ ಭವಿಷ್ಯ ಉಜ್ವಲವಾಗಲಿ ಎಂಬ ಒಂದೇ ಒಂದು ಆಸೆಯಿಂದ. ಮಕ್ಕಳು ತಮ್ಮ ಹೆತ್ತವರ ಕನಸನ್ನು ನನಸು ಮಾಡಿದಾಗ ಸಿಗುವ ಆನಂದಕ್ಕೆ ಬೆಲೆಯೇ ಕಟ್ಟಲಾಗದು. ಅಂತಹದ್ದೇ ಒಂದು ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿರುವ ವಿಡಿಯೋವೊಂದು ಇದೀಗ ಇಂಟರ್ನೆಟ್&zwnj;ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಲಕ್ಷಾಂತರ ಜನರ ಕಣ್ಣಂಚನ್ನು ಒದ್ದೆ ಮಾಡಿದೆ.&lt;/p&gt;&lt;h2&gt;&lt;strong&gt;ಅಮ್ಮನಿಗೆ ಫೋನ್ ಮಾಡಿ ಅತ್ತ ವಿದ್ಯಾರ್ಥಿನಿ!&lt;/strong&gt;&lt;/h2&gt;&lt;p&gt;ವೈರಲ್ ಆಗಿರುವ ವಿಡಿಯೋದಲ್ಲಿ ಸಾಕ್ಷಿ ಎಂಬ ವಿದ್ಯಾರ್ಥಿನಿ ತನ್ನ 10ನೇ ತರಗತಿಯ ಫಲಿತಾಂಶ ಬಂದ ನಂತರ ಪಕ್ಕದಲ್ಲಿದ್ದವರ ಫೋನ್&zwnj;ನಿಂದ ತನ್ನ ಅಮ್ಮನಿಗೆ ಕರೆ ಮಾಡುತ್ತಾಳೆ. 'ಅಮ್ಮಾ... ನಾನು ಪಾಸ್ ಆದೆ' ಎಂದು ಹೇಳುತ್ತಿದ್ದಂತೆಯೇ ಅವಳ ಗಂಟಲು ಗದ್ಗದಿತವಾಗುತ್ತದೆ. ಸಂತೋಷದ ಕಣ್ಣೀರು ಅವಳ ಕೆನ್ನೆಯ ಮೇಲೆ ಹರಿಯುತ್ತಿರುತ್ತದೆ. ಕೇವಲ 'ನಾನು ಪಾಸ್ ಆದೆ' ಎಂಬ ಮೂರು ಪದಗಳ ಹಿಂದೆ ಅವಳ ವರ್ಷಗಳ ಪರಿಶ್ರಮ, ಬಡತನದ ನಡುವಿನ ಹೋರಾಟ ಮತ್ತು ಅವಳ ಅಮ್ಮನ ಕನಸು ಅಡಗಿತ್ತು ಎಂಬುದು ಆಕೆಯ ಕಣ್ಣೀರಿನಲ್ಲೇ ಸ್ಪಷ್ಟವಾಗುತ್ತಿತ್ತು.&lt;/p&gt;&lt;h3&gt;&lt;strong&gt;ದೇವದೂತನಂತೆ ಬಂದ ಪೊಲೀಸ್ ಕಾನ್ ಸ್ಟೆಬಲ್ ತನ್ ಸಿಂಗ್!&lt;/strong&gt;&lt;/h3&gt;&lt;p&gt;ಸಾಕ್ಷಿಯ ಈ ಯಶಸ್ಸಿನ ಹಿಂದೆ ಒಬ್ಬ ದೇವದೂತನ ಕೈವಾಡವಿದೆ. ಆತನೇ ದೆಹಲಿ ಪೊಲೀಸ್ ಪಡೆಯ ಹೆಡ್ ಕಾನ್ ಸ್ಟೆಬಲ್ ತನ್ ಸಿಂಗ್. ತನ್ ಸಿಂಗ್ ಅವರು ಕೇವಲ ಖಾಕಿ ಧರಿಸಿ ಕಾನೂನು ಪಾಲನೆ ಮಾಡುವುದಷ್ಟೇ ಅಲ್ಲದೆ, 'ತನ್ ಸಿಂಗ್ ಕಿ ಪಾಠಶಾಲಾ' ಎಂಬ ಹೆಸರಿನಲ್ಲಿ ಸರಿಯಾದ ಶಿಕ್ಷಣ ಸೌಲಭ್ಯವಿಲ್ಲದ ಬಡ ಮಕ್ಕಳಿಗಾಗಿ ಉಚಿತ ಕೋಚಿಂಗ್ ಸೆಂಟರ್ ನಡೆಸುತ್ತಿದ್ದಾರೆ. ಸಾಕ್ಷಿ ಕೂಡ ಇದೇ ಪಾಠಶಾಲೆಯ ವಿದ್ಯಾರ್ಥಿನಿ. ಈ ವಿಡಿಯೋದಲ್ಲಿ ಮೊದಲು ತನ್ ಸಿಂಗ್ ಅವರೇ ಸಾಕ್ಷಿಯ ಅಮ್ಮನಿಗೆ ಫೋನ್ ಮಾಡಿ, 'ನಿಮ್ಮ ಮಗಳು ಪಾಸ್ ಆಗಿದ್ದಾಳೆ' ಎಂದು ಖುಷಿ ಸುದ್ದಿ ನೀಡುತ್ತಾರೆ. ನಂತರ ಫೋನ್ ಅನ್ನು ಸಾಕ್ಷಿಗೆ ನೀಡಿದಾಗ, ಅವಳು ಅಮ್ಮನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಫೋನ್ ಸಂಭಾಷಣೆಯ ನಂತರ ಸಾಕ್ಷಿ ಓಡಿ ಬಂದು ತನ್ನ ಗುರುಗಳಾದ ತನ್ ಸಿಂಗ್ ಅವರನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತಾಳೆ. ಈ ದೃಶ್ಯವಂತೂ ಎಂತಹ ಗಟ್ಟಿ ಹೃದಯವನ್ನೂ ಕರಗಿಸುವಂತಿದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Than Singh (@thansinghkipathshala)&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ವೈರಲ್ ಆದ ವಿಡಿಯೋಗೆ ಹರಿದುಬಂದ ಮೆಚ್ಚುಗೆ&lt;/strong&gt;&lt;/h2&gt;&lt;p&gt;ತನ್ ಸಿಂಗ್ ಅವರು ಈ ವಿಡಿಯೋವನ್ನು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ನಮ್ಮ ಪಾಠಶಾಲೆಯ ಹಿರಿಯ ವಿದ್ಯಾರ್ಥಿನಿ ಸಾಕ್ಷಿ 10ನೇ ತರಗತಿಯಲ್ಲಿ ಉತ್ತೀರ್ಣಳಾಗಿದ್ದಾಳೆ' ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್&zwnj;ಗಳು ಹರಿದುಬರುತ್ತಿವೆ. 'ಪೊಲೀಸ್ ಅಂದರೆ ಕೇವಲ ಲಾಠಿ ಹಿಡಿಯುವವರಲ್ಲ, ಸಮಾಜವನ್ನು ತಿದ್ದುವ ಗುರುಗಳೂ ಹೌದು' ಎಂದು ನೆಟ್ಟಿಗರು ತನ್ ಸಿಂಗ್ ಅವರನ್ನು ಶ್ಲಾಘಿಸುತ್ತಿದ್ದಾರೆ. ಸಾಕ್ಷಿಯ ಸಾಧನೆಗೆ ಮತ್ತು ಅವಳ ಮುಗ್ಧ ಸಂತೋಷಕ್ಕೆ ಇಡೀ ದೇಶವೇ ಹಾರೈಸುತ್ತಿದೆ.&lt;/p&gt;&lt;p&gt;ಈ ವಿಡಿಯೋ ನಮಗೆ ಕಲಿಸುವ ಪಾಠವೊಂದೇ - ಸಹಾಯ ಮಾಡುವ ಮನಸ್ಸು ಮತ್ತು ಸಾಧಿಸುವ ಹಠವಿದ್ದರೆ ಬಡತನ ಎಂದಿಗೂ ಅಡ್ಡಿಯಾಗದು. ಸಾಕ್ಷಿಯ ಈ ಯಶಸ್ಸು ಅವಳ ಕುಟುಂಬಕ್ಕೆ ಹೊಸ ಭರವಸೆ ನೀಡಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/emotional-video-girl-sakshi-passes-10th-grade-calls-mother-than-singh-constable-sat/articleshow-0pgecgb"/>
        </item>
        <item>
            <title><![CDATA[ಗ್ಯಾರೆಂಟಿಯಿಂದ ಕಂಗೆಟ್ಟ ಸರ್ಕಾರ, ಹಿಮಾಚಲ ಅಧಿಕಾರಿಗಳ ಶೇ.30ರಷ್ಟು ವೇತನ 6 ತಿಂಗಳು ಮುಂದೂಡಿಕೆ]]></title>
            <link>https://kannada.asianetnews.com/india-news/free-guarantee-scheme-hits-himachal-30-percent-salary-of-officials-deferred-for-6-months/articleshow-kl4ftgm</link>
            <guid isPermaLink="true">https://kannada.asianetnews.com/india-news/free-guarantee-scheme-hits-himachal-30-percent-salary-of-officials-deferred-for-6-months/articleshow-kl4ftgm</guid>
            <pubDate>Sun, 19 Apr 2026 16:39:54 +0530</pubDate>
            <description><![CDATA[&lt;p&gt;ಗ್ಯಾರೆಂಟಿಯಿಂದ ಕಂಗೆಟ್ಟ ಸರ್ಕಾರ, ಹಿಮಾಚಲ ಅಧಿಕಾರಿಗಳ ಶೇ.30ರಷ್ಟು ವೇತನ 6 ತಿಂಗಳು ಮುಂದೂಡಿಕೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಾಗಿದೆ. ಇದು ಭಾರಿ ವಿರೋಧಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250531122301,imgname-image-864965c9-dfac-41a7-9fb0-fb820e0e131f.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿಮ್ಲಾ (ಏ.19)&lt;/strong&gt; ಕರ್ನಾಟಕದಲ್ಲಿ ಕಾಂಗ್ರೆಸ್ ಐದು ಗ್ಯಾರೆಂಟಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹಿಮಾಚಲ ಪ್ರದೇಶ ಚುನಾವಣೆಯಲ್ಲೂ ಇದೇ ತಂತ್ರ ರೂಪಿಸಲಾಗಿತ್ತು. ಇಷ್ಟೇ ಅಲ್ಲ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ಮೂಲಕ ಅಧಿಕಾರಕ್ಕೆ ಬಂದಿದೆ. ಸುಖ್ವಿಂದರ್ ಸಿಂಗ್ ಸುಖು ಈಗಾಗಲೇ ಹಿಮಾಚಲ ಪ್ರದೇಶ ಜನರಿಗೆ ಉಚಿತ ಗ್ಯಾರೆಂಟಿ ನೀಡುತ್ತಿದ್ದಾರೆ. ಆದರೆ ಸದ್ಯ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದ ಖರ್ಚು ವೆಚ್ಚ, ವೇತನ ನೀಡಲು ಹಿಮಾಚಲ ಪ್ರದೇಶ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಹೀಗಾಗಿ ಉನ್ನತ ಅಧಿಕಾರಿಗಳ ವೇತವನ್ನು ಕನಿಷ್ಠ 6 ತಿಂಗಳ ಮುಂದೂಡಲಾಗುತ್ತಿದೆ. ಇವರ ಶೇಕಡಾ 30ರಿಂದ 50 ರಷ್ಟು ವೇತನವನ್ನು 6 ತಿಂಗಳ ಕಾಲ ಮುಂದೂಡಲಾಗುತ್ತಿದೆ. ಈ ಕುರಿತು ಹಿಮಾಚಲ ಪ್ರದೇಶ ಫಿನಾನ್ಸ್ ವಿಭಾಗ ಅಧಿಸೂಚನೆ ಹೊರಡಿಸಿದೆ ಎಂದು ವರದಿಯಾಗಿದೆ.&lt;/p&gt;&lt;h2&gt;ಮೇ 2026ರ ತಿಂಗಳಿನಿಂದಲೇ ವೇತನ ಮುಂದೂಡಿಕೆ ಜಾರಿ&lt;/h2&gt;&lt;p&gt;ಹಿಮಾಚಲ ಪ್ರದೇಶದ ಉನ್ನತ ಅಧಿಕಾರಿಗಳ ಶೇಕಡಾ 30 ರಿಂದ 50 ರಷ್ಟು ವೇತನವನ್ನು ಕನಿಷ್ಠ 6 ತಿಂಗಳ ಕಾಲ ಮುಂದೂಡಿಕೆ ಮಾಡುವ ಅಧಿಸೂಚನೆಯಲ್ಲಿ ಕೆಲ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಮೇ 2026ರಿಂದಲೇ ಈ ಪ್ರಕ್ರಿಯೆ ಜಾರಿಯಾಗುತ್ತಿದೆ. ಇದು ತಾತ್ಕಾಲಿಕ ಪ್ರಕ್ರಿಯೆ ಆಗಿದೆ ಎಂದಿದೆ.&lt;/p&gt;&lt;h2&gt;ಯಾರಿಗೆಲ್ಲಾ ಸ್ಯಾಲರಿ ಮುಂದೂಡಿಕೆ&lt;/h2&gt;&lt;p&gt;ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಸರಿಯಾಗಿ ವೇತನ ನೀಡಲು, ರಾಜ್ಯದ ಖರ್ಚು ವೆಚ್ಚ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪಿಂಚಣಿ ಸಮಸ್ಯೆಗಳು ತೀವ್ರಗೊಂಡಿದೆ. ಅಧಿಸೂಚನೆಯಲ್ಲಿ ಯಾರಿಗೆಲ್ಲಾ ವೇತನ ಮುಂದೂಡಿಕೆಯಾಗಲಿದೆ ಅನ್ನೋ ಮಾಹಿತಿಯನ್ನು ನೀಡಲಾಗಿದೆ. ಹಿಮಾಚಲ ಪ್ರದೇಶದ ಐಎಎಸ್, ಐಪಿಎಲ್, ಐಎಫ್ಎಸ್ ಅಧಿಕಾರಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸರ್ಕಾರದ ಕಾರ್ಯದರ್ಶಿಗಳು, ಡಿಜಿಪಿ ಪೊಲೀಸ್ ಸೇರಿದಂತೆ ಪ್ರಮುಖ ಹಾಗೂ ಉನ್ನತ ಅಧಿಕಾರಿಗಳ ವೇತನ ಮುಂದೂಡಿಕೆಯಾಗುತ್ತಿದೆ.&lt;/p&gt;&lt;h2&gt;ಕ್ಯಾಬಿನೆಟ್ ಸಚಿವರ ವೇತನದಲ್ಲೂ ವ್ಯತ್ಯಯ&lt;/h2&gt;&lt;p&gt;ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ. ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ, ಮುಖ್ಯಮಂತ್ರಿ, ಕ್ಯಾಬಿನೆಟ್ ಸಚಿವರು, ಶಾಸಕರ ವೇತನ ಹಾಗೂ ಭತ್ಯೆ ಮುಂದೂಡಲು ಒಪ್ಪಿಕೊಂಡಿದ್ದಾರೆ. ನಾವು ರಾಜ್ಯದ ಆರ್ಥಿಕ ಪರಿಸ್ಥಿತಿ ಅರ್ಥೈಸಿಕೊಂಡು ಹೋರಾಟದಲ್ಲಿ ಒಗ್ಗಟ್ಟಾಗಿದ್ದೇವೆ ಎಂದು ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/free-guarantee-scheme-hits-himachal-30-percent-salary-of-officials-deferred-for-6-months/articleshow-kl4ftgm"/>
        </item>
        <item>
            <title><![CDATA[ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ]]></title>
            <link>https://kannada.asianetnews.com/gallery/india-news/wildlife-protection-boost-madhya-pradesh-red-road-highway-with-auto-speed-reduction-trends-4ii9d00</link>
            <guid isPermaLink="true">https://kannada.asianetnews.com/gallery/india-news/wildlife-protection-boost-madhya-pradesh-red-road-highway-with-auto-speed-reduction-trends-4ii9d00</guid>
            <pubDate>Sun, 19 Apr 2026 15:16:10 +0530</pubDate>
            <description><![CDATA[&lt;p&gt;ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ, ವನ್ಯಜೀವಿಗಳು ರಸ್ತೆ ದಾಟುವಾಗ ಅಪಘಾತಕ್ಕೀಡಾಗಿ ಸಾಯುವ ಪ್ರಮಾಣ ತಗ್ಗಿಸಲು ಈ ಹೆದ್ದಾರಿ ನಿರ್ಮಾಣ ಮಾಡಿದ NHAI ಬಹೇತಕ ಯಶಸ್ವಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpjhv5h19s0jcdxfw9a3f4hz,imgname-red-road-in-madhya-pradesh-1776591672865.png" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ, ವನ್ಯಜೀವಿಗಳು ರಸ್ತೆ ದಾಟುವಾಗ ಅಪಘಾತಕ್ಕೀಡಾಗಿ ಸಾಯುವ ಪ್ರಮಾಣ ತಗ್ಗಿಸಲು ಈ ಹೆದ್ದಾರಿ ನಿರ್ಮಾಣ ಮಾಡಿದ NHAI ಬಹೇತಕ ಯಶಸ್ವಿಯಾಗಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಅತ್ಯಂತ ವೇಗವಾಗಿ ಹೆದ್ದಾರಿ ರಸ್ತೆಗಳು ನಿರ್ಮಾಣವಾಗುತ್ತಿದೆ. ಇರುವ ಹೆದ್ದಾರಿ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಸಚಿವ ನಿತಿನ್ ಗಡ್ಕರಿ ಕೆಲಸ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಧ್ಯಪ್ರದೇಶದ ವೀರಾಂಗಣ ದುರ್ಗವತಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ ರೆಡ್ ರೋಡ್ ಇದೀಗ ಭಾರಿ ಟ್ರೆಂಡ್ ಆಗುತ್ತಿದೆ. 2025ರ ಡಿಸೆಂಬರ್ ತಿಂಗಳಲ್ಲಿ ಈ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ವನ್ಯಜೀವಿಗಳ ವಿಚಾರದಲ್ಲಿ ಹೆದ್ದಾರಿ ಪ್ರಾಧಿಕಾರದ ಪ್ರಯೋಗ ಯಶಸ್ವಿಯಾಗಿದೆ. ಇದೀಗ ಅತ್ಯಂತ ಸುಂದರ ರೆಡ್ ರೋಡ್ ಇದೀಗ ಭಾರಿ ಟ್ರೆಂಡ್ ಆಗಿದೆ.&lt;/p&gt;&lt;img&gt;&lt;p&gt;ಮಧ್ಯಪ್ರದೇಶದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 45ರಲ್ಲಿ ಹೊಸ ತಂತ್ರಜ್ಞಾನ ಬಳಸಲಾಗಿದೆ. 11.96 ಕಿಲೋಮೀಟರ್ ಉದ್ದದ ಈ ರಸ್ತೆಯಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ವನ್ಯಜೀವಿಗಳ ಸುರಕ್ಷತೆಗೆ ಕೈಗೊಂಡ ಹೊಸ ಯೋಜನೆ ಇದೀಗ ಯಶಸ್ವಿಯಾಗಿದೆ. ಈ ಪೈಕಿ 2 ಕಿಲೋಮೀಟರ್ ರಸ್ತೆ ಕಡು ಕೆಂಪು ರಸ್ತೆ ನಿರ್ಮಾಣ ಮಾಡಲಾಗಿದೆ.&lt;/p&gt;&lt;img&gt;&lt;p&gt;ಸ್ಪೀಡ್ ಬ್ರೇಕರ್, ಕ್ಯಾಮೆರಾ ಬಳಕೆ ಬದಲು ಟೇಬಲ್ ಟಾಪ್ ರೆಡ್ ಮಾರ್ಕಿಂಗ್ ತಂತ್ರಜ್ಞಾನ ಬಳಸಲಾಗಿದೆ. ಈ ತಂತ್ರಜ್ಞಾನದ ಮೂಲಕ ರಸ್ತೆ ಮೇಲೆ 5 ಮೀಟರ್ ದಪ್ಪದ ರೆಡ್ ಥರ್ಮೋಪ್ಲಾಸ್ಟಿಕ್ ಪದರ ಹಾಕಲಾಗಿದೆ. ಮೊದಲೇ ಕಡು ಕೆಂಪು ಬಣ್ಣದ ಕಾರಣ ಚಾಲಕ ಕೊಂಚ ಜಾಗರೂಕರಾಗುತ್ತಾರೆ. ಇನ್ನು ಈ ಥರ್ಮೋಪ್ಲಾಸ್ಟಿಕ್ ಪದರ ವಾಹನದ ವೇಗ ಕಡಿತಕಗೊಳಿಸುತ್ತದೆ. ಸಣ್ಣ ಕಂಪನ ಈ ರಸ್ತೆ ಮೇಲೆ ಹೋಗುವಂತೆ ಮಾಡಲಿದೆ.&lt;/p&gt;&lt;img&gt;&lt;p&gt;ಹುಲಿ ಸರಂಕ್ಷಿತ ಪ್ರದೇಶದಲ್ಲಿ ಸುಮಾರು 25 ಅಂಡರ್ ಪಾಸ್ ನೀಡಲಾಗಿದೆ. ಇದು ಪ್ರಾಣಿಗಳು ಸರಾಗವಾಗಿ ಓಡಾಡಲು ಸಾಧ್ಯವಾಗಲಿದೆ. ಇದರ ಜೊತೆಗೆ ಪ್ರಾಣಿಗಳು ರಸ್ತೇ ಮೇಲಿಂದ ದಾಟುವ ಸಾಹಸ ಮಾಡಿದಾಗ ವಾಹನ ಅಪಘಾತವಾಗಿ ಸಾವನ್ನಪ್ಪು ಸಾಧ್ಯತೆ ಹೆಚ್ಚು. ಹೀಗಾಗಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ರೆಡ್ ರಸ್ತೆಯಲ್ಲಿ ವಾಹನಗಳು ಸಹಜವಾಗಿ ನಿಧಾನವಾಗಿ ಸಾಗಲಿದೆ. ಇದರಿಂದ ಪ್ರಾಣಿಗಳು ಸಾವನ್ನಪ್ಪುವ ಪ್ರಮಾಣ ತಗ್ಗಲಿದೆ.&lt;/p&gt;&lt;img&gt;&lt;p&gt;ರೆಡ್ ರೋಡ್ ತಂತ್ರಜ್ಞಾನ ಸ್ಪೀಡ್ ಬ್ರೇಕರ್&zwnj;ಗಿಂತ ಹೆಚ್ಚು ಉಪಯುಕ್ತವಾಗಿದೆ. ಜೊತೆಗೆ ಪ್ರಾಣಿಗಳು ನೇರವಾಗಿ ರಸ್ತೆಗೆ ಬರದಂತೆ ತಡೆಗೋಡೆ ನಿರ್ಮಿಸಲಾಗಿದೆ. ಸೌರವಿದ್ಯುತ್ ಚಾಲಿತ ದೀಪಗಳು, ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗಿದೆ.&lt;/p&gt;&lt;h2&gt;ಸ್ಪೀಡ್ ಬ್ರೇಕ್ ತಂತ್ರಜ್ಞಾನ&lt;/h2&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/wildlife-protection-boost-madhya-pradesh-red-road-highway-with-auto-speed-reduction-trends-4ii9d00"/>
        </item>
        <item>
            <title><![CDATA[ಜಪ್ತಿ ಮಾಡಿದ್ದ ಟ್ರಕ್ ರಿಲೀಸ್‌ಗೆ 55 ಲಕ್ಷಕ್ಕೆ ಬೇಡಿಕೆ : 10 ಲಕ್ಷ ಲಂಚ ಸ್ವೀಕರಿಸುತ್ತಿದ್ದ GST ಅಧಿಕಾರಿಗಳು ಎಸಿಬಿ ಬಲೆಗೆ]]></title>
            <link>https://kannada.asianetnews.com/business/50-lakh-bribe-deal-gujarat-gst-officers-arrested-while-taking-10-lakh/articleshow-o6we0o0</link>
            <guid isPermaLink="true">https://kannada.asianetnews.com/business/50-lakh-bribe-deal-gujarat-gst-officers-arrested-while-taking-10-lakh/articleshow-o6we0o0</guid>
            <pubDate>Sun, 19 Apr 2026 14:38:42 +0530</pubDate>
            <description><![CDATA[&lt;p&gt;ಜಪ್ತಿಯಾದ ವಾಹನ ಬಿಡುಗಡೆಗೆ 55 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಕೇಂದ್ರ ಜಿಎಸ್&zwnj;ಟಿ ಅಧಿಕಾರಿಗಳನ್ನು ಗುಜರಾತ್ ಭ್ರಷ್ಟಾಚಾರ ನಿಗ್ರಹದಳ ಬಂಧಿಸಿದೆ. ಮೊದಲ ಕಂತಿನ 10 ಲಕ್ಷ ರೂಪಾಯಿ ಸ್ವೀಕರಿಸುತ್ತಿದ್ದಾಗ ಕಚೇರಿಯಲ್ಲೇ ಅಧಿಕಾರಿಗಳು ರೆಡ್&zwnj;ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpjfjp5j3hq3qtw64e0ft33q,imgname-gst-officers-arrested-for-taking-bribe-1776589297840.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಜಿಎಸ್&zwnj;ಟಿ ಅಧಿಕಾರಿಗಳು ಎಸಿಬಿ ಬಲೆಗೆ&lt;/strong&gt;&lt;/h2&gt;&lt;p&gt;ನಾಡಿಯಾಡ್&zwnj;: ಜಪ್ತಿಯಾಗಿದ್ದ ಟ್ರಾನ್ಸ್&zwnj;ಪೋರ್ಟ್&zwnj; ವಾಹನವನ್ನು ಬಿಡುಗಡೆ ಮಾಡುವುದಕ್ಕೆ 55 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಕೇಂದ್ರ ಸರಕು ಹಾಗೂ ಸೇವಾ ತೆರಿಗೆ ಇಲಾಖೆಯ ಇಬ್ಬರು ಉನ್ನತಮಟ್ಟದ ಅಧಿಕಾರಿಗಳನ್ನು ಗುಜರಾತ್ ರಾಜ್ಯ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಬಂಧಿಸಿದ್ದಾರೆ. ಬೇಡಿಕೆ ಇರಿಸಿದ 55 ಲಕ್ಷ ಮೊತ್ತದ ಲಂಚದಲ್ಲಿ ಮೊದಲ ಕಂತನ್ನು ಸ್ವೀಕರಿಸುತ್ತಿದ್ದಾಗ ಕಚೇರಿಯಲ್ಲೇ ಅವರನ್ನು ರೆಡ್&zwnj;ಹ್ಯಾಂಡ್ ಆಗಿ ಸೆರೆಹಿಡಿಯಲಾಗಿದೆ.&lt;/p&gt;&lt;p&gt;&lt;strong&gt;50ಲಕ್ಷಕ್ಕೆ ಡೀಲ್: 10 ಲಕ್ಷದ ಮೊದಲ ಕಂತ ಸ್ವೀಕರಿಸುವಾಗ ಅರೆಸ್ಟ್&lt;/strong&gt;&lt;/p&gt;&lt;p&gt;ಬಂಧಿತ ಜಿಎಸ್&zwnj;ಟಿ ಅಧಿಕಾರಿಗಳನ್ನು ಕ್ಲಾಸ್&zwnj; ಸೆಕೆಂಡ್ ಸೂಪರಿಟೆಂಡೆಂಟ್ ಅಮರ್&zwnj;ನಾಥ್ ಗೋವರ್ಧನ್ ಸರೋಜ್ ಹಾಗೂ ಕ್ಲಾಸ್ ಸೆಕೆಂಡ್ ಜಿಎಸ್&zwnj;ಟಿ ಇನ್ಸ್&zwnj;ಪೆಕ್ಟರ್ ಸುಭೋದ್ ಸುಭಾಷ್ ಚೌಹಾಣ್ ಎಂಬುವರನ್ನು ಬಂಧಿಸಲಾಗಿದೆ. ಇಬ್ಬರು ನಡಿಯಾಡ್&zwnj;ನ ಕೇಂದ್ರ ಜಿಎಸ್&zwnj;ಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ವಿರುದ್ಧ ದೂರು ನೀಡಿದವರು ಸಾರಿಗೆ ಉದ್ಯಮವನ್ನು ನಡೆಸುತ್ತಿದ್ದು, ಅವರಿಗೆ ಸಂಬಂಧಿಸಿದ ಒಂದು ಸರಕು ಸಾಗಣೆ ಟ್ರಕ್&zwnj; ವಾಹನವನ್ನು ಕೇಂದ್ರ ಜಿಎಸ್&zwnj;ಟಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಹೀಗೆ ಜಪ್ತಿ ಮಾಡಿದ ಟ್ರಕ್&zwnj; ಅನ್ನು ನಾಡಿಯಾಡ್&zwnj;ನ ಜಿಎಸ್&zwnj;ಟಿ ಕಚೇರಿಗೆ ತಪಾಸಣೆಗೆ ಕರೆತರಲಾಗಿತ್ತು.&lt;/p&gt;&lt;p&gt;ಈ ವೇಳೆ ದೂರುದಾರರು ವಾಹನ ಬಿಡುಗಡೆ ಮಾಡುವಂತೆ ಜಿಎಸ್&zwnj;ಟಿ ಅಧಿಕಾರಿಗಳಾದ ಇನ್ಸ್&zwnj;ಪೆಕ್ಟರ್ ಸುಬೋಧ್ ಚೌಹಾಣ್ ಹಾಗೂ ಸೂಪರಿಟೆಂಡೆಂಟ್ ಅಮರ್&zwnj;ನಾಥ್ ಸರೋಜ್ ಅವರು ವಾಹನದ ಜಿಎಸ್&zwnj;ಟಿ ದಾಖಲೀಕರಣದಲ್ಲಿನ ಕೊರತೆಗಳನ್ನು ಉಲ್ಲೇಖಿಸಿ ಅದನ್ನು ಸೆಟಲ್&zwnj;ಮೆಂಟ್ ಮಾಡಿ ಬೇರೆ ಯಾವುದೇ ಕಾನೂನು ದಂಡ ಪಾವತಿ ಇಲ್ಲದೇ ಈ ವಾಹನವನ್ನು ರಿಲೀಸ್ ಮಾಡುವುದಕ್ಕೆ 55 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇರಿಸಿದ್ದರು. ಹಾಗೂ ಈ ಪ್ರಕ್ರಿಯೆಯನ್ನು ಆರಂಭಿಸುವುದಕ್ಕೆ ಲಂಚದ ಮೊದಲ ಕಂತಾಗಿ 10 ಲಕ್ಷ ರೂಪಾಯಿಗಳನ್ನು ಕೂಡಲೇ ಪಾವತಿಸುವಂತೆ ಕೇಳಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಟ್ರಂಪ್ ಜತೆ ವಾಗ್ವಾದ ಇಷ್ಟವಿಲ್ಲ ಎಂದ ಪೋಪ್&lt;/strong&gt;&lt;/p&gt;&lt;p&gt;ಆದರೆ ಇಷ್ಟೊಂದು ದುಬಾರಿ ಮೊತ್ತದ ಲಂಚವನ್ನು ಪಾವತಿಸಲಾಗದೇ ಈ ಟ್ರಾನ್ಸ್&zwnj;ಪೋರ್ಟ್ ಉದ್ಯಮ ನಡೆಸುತ್ತಿದ್ದ ದೂರುದಾರರು ಭ್ರಷ್ಟಾಚಾರ ನಿಗ್ರಹದಳದ ಟೋಲ್ ಫ್ರೀ ಹೆಲ್ಫ್&zwnj;ಲೈನ್&zwnj; 1064ಗೆ ಕರೆ ಮಾಡಿ ದೂರು ನೀಡಿದ್ದರು. ನಂತರ ಗಾಂಧಿನಗರ ಎಸಿಬಿ ಘಟಕದ ಅಧಿಕಾರಿಗಳು ಈ ಇಬ್ಬರು ಲಂಚಬಾಕ ಅಧಿಕಾರಿಗಳ ಬಲೆಗೆ ಬೀಳಿಸುವುದಕ್ಕೆ ಬಲೆ ಹೆಣೆದಿದ್ದಾರೆ.&lt;/p&gt;&lt;p&gt;ನಾಡಿಯಾದ್&zwnj;ನ ಕೇಂದ್ರ ಜಿಎಸ್&zwnj;ಟಿ ಕಚೇರಿ ಆವರಣದಲ್ಲಿಯೇ ಈ ಲಂಚ ವಿನಿಮಯ ನಡೆದಿದ್ದು, ಕಾರ್ಯಾಚರಣೆಯ ಸಮಯದಲ್ಲಿ, ಆರೋಪಿಗಳು ಲಂಚದ ಅಗತ್ಯವನ್ನು ದೃಢೀಕರಿಸುವ ರೆಕಾರ್ಡ್ ಮಾಡಿದ ಉದ್ದೇಶಪೂರ್ವಕ ಸಂಭಾಷಣೆಯಲ್ಲಿ ತೊಡಗಿದ್ದರು. ಇದಾದ ನಂತರ ದೂರುದಾರರಿಂದ 10 ಲಕ್ಷ ರೂ. ನಗದು ಸ್ವೀಕರಿಸಿದ ತಕ್ಷಣ, ಪಿಐ ಡಿ.ಎ. ಚೌಧರಿ ನೇತೃತ್ವದ ಎಸಿಬಿ ತಂಡವು ಸ್ಥಳದಲ್ಲೇ ಇಬ್ಬರೂ ಅಧಿಕಾರಿಗಳನ್ನು ಬಂಧಿಸಿದೆ. ಕಚೇರಿಯಲ್ಲಿ 10 ಲಂಚಬಾಕ ಅಧಿಕಾರಿಗಳಿಂದ 10 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಒಂದೇ ಗಂಟೆಯಲ್ಲಿ 7 ಸುಳ್ಳು: ಟ್ರಂಪ್ ವಿರುದ್ದ ಇಸ್ರೇಲ್ ಇರಾನ್ ಎರಡೂ ದೇಶಗಳ ಆಕ್ರೋಶ&lt;/strong&gt;&lt;/p&gt;&lt;p&gt;ಲಂಚ ಕೇಳಿ ಸ್ವೀಕರಿಸಿ ಸಿಕ್ಕಿಬಿದ್ದ ಇಬ್ಬರು ಉನ್ನತಮಟ್ಟದ ಅಧಿಕಾರಿಗಳಿಬ್ಬರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಕ್ರಿಮಿನಲ್ ದುಷ್ಕೃತ್ಯಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಈ ಉನ್ನತ ಮಟ್ಟದ ಬಂಧನವು ಜಿಎಸ್&zwnj;ಟಿ ಇಲಾಖೆಯಲ್ಲಿ ಅಡಗಿರುವ ಭ್ರಷ್ಟಾಚಾರವನ್ನು ಬಯಲು ಮಾಡಿದ್ದು, ತೀವ್ರ ಸಂಚಲನ ಮೂಡಿಸಿದೆ, ಏಕೆಂದರೆ ಈ ಅಧಿಕಾರಿಗಳು ಈ ಪ್ರದೇಶದಲ್ಲಿ ಸಾಗಣೆದಾರರನ್ನು ಗುರಿಯಾಗಿಸಿಕೊಂಡು ದೊಡ್ಡ ಸುಲಿಗೆ ಜಾಲದ ಭಾಗವಾಗಿ ಕೆಲಸ ಮಾಡುತ್ತಿದ್ದರಾ ಎಂದು ಎಸಿಬಿ ತನಿಖೆ ನಡೆಸುತ್ತಿದೆ.&lt;/p&gt;]]></content:encoded>
            <category>india-news</category>
            <dc:creator>Anusha Kb</dc:creator>
            <atom:link href="https://kannada.asianetnews.com/business/50-lakh-bribe-deal-gujarat-gst-officers-arrested-while-taking-10-lakh/articleshow-o6we0o0"/>
        </item>
        <item>
            <title><![CDATA[ಟ್ರಂಪ್ ಜತೆ ವಾಗ್ವಾದ ಇಷ್ಟವಿಲ್ಲ ಎಂದ ಪೋಪ್]]></title>
            <link>https://kannada.asianetnews.com/world-news/pope-says-he-doesnt-want-to-argue-with-trump/articleshow-3zwogio</link>
            <guid isPermaLink="true">https://kannada.asianetnews.com/world-news/pope-says-he-doesnt-want-to-argue-with-trump/articleshow-3zwogio</guid>
            <pubDate>Sun, 19 Apr 2026 13:06:42 +0530</pubDate>
            <description><![CDATA[ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ವಾಗ್ವಾದಕ್ಕೆ ತಮಗೆ ಆಸಕ್ತಿಯಿಲ್ಲ ಎಂದು ಪೋಪ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.2ರಷ್ಟು ಹೆಚ್ಚಿಸಲಾಗಿದ್ದು, ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ವಿನಾಯಿತಿ ವಿಸ್ತರಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ ಭಾರೀ ಏರಿಕೆ ಕಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp2y36qgyn79tdeezs9ydyyt,imgname-pope-leo-xiv-and-donald-trump-1776067648239.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಟ್ರಂಪ್ ಜತೆ ವಾಗ್ವಾದ ಇಷ್ಟವಿಲ್ಲ ಎಂದ ಪೋಪ್&lt;/strong&gt;&lt;/h2&gt;&lt;p&gt;ಅಂಗೋಲಾ: ಕ್ರೈಸ್ತರ ಪರಮೋಚ್ಚ ಗುರು ಪೋಪ್ ಲಿಯೋ14, ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಇರಾನ್ ಯುದ್ಧದ ಬಗ್ಗೆ ವಾದ-ಪ್ರತಿವಾದಕ್ಕೆ ತೊಡಗುವುದಕ್ಕೆ ತಮಗೆ ಆಸಕ್ತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಶಾಂತಿಯ ಸಂದೇಶ ಪ್ರಚಾರ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಪೋಪ್ ಮತ್ತು ಟ್ರಂಪ್ ನಡುವೆ ಭಾರೀ ವಾಕ್ಸಮರ ನಡೆದಿತ್ತು. ತಮ್ಮಿಂದಲೇ ಪೋಪ್ ಲಿಯೋ14 ಪೋಪ್ ಆಗಿ ಆಯ್ಕೆಯಾಗಿದ್ದಾರೆ ಎಂದು ಟ್ರಂಪ್ ದೂರಿದ್ದರು. ಶನಿವಾರ ಇದಕ್ಕೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪೋಪ್, ನನ್ನ ಶಾಂತಿ ಸಂದೇಶವು ಟ್ರಂಪ್&zwnj;ರನ್ನು ಗುರಿಯಾಗಿಟ್ಟುಕೊಂಡಿಲ್ಲ. ಇದು ಸಾರ್ವತ್ರಿಕ ಸುವಾರ್ತೆಯ ಸಂದೇಶವಾಗಿದೆ. ಭೂಮಿಯಲ್ಲಿ ನಡೆಯುತ್ತಿರುವ ಎಲ್ಲಾ ಯುದ್ಧಗಳಿಗೆ ಅನ್ವಯವಾಗುತ್ತದೆ. ನಾನು ಟ್ರಂಪ್ ಅವರೊಂದಿಗೆ ವಿವಾದಕ್ಕೆ ತೊಡಗುತ್ತಿದ್ದೇನೆ ಎಂದು ಭಾವಿಸಲಾಗುತ್ತಿದೆ. ಆದರೆ ಆ ವಿಚಾರದಲ್ಲಿ ನನಗೆ ಆಸಕ್ತಿಯಲ್ಲ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ರಷ್ಯಾ ತೈಲ ಖರೀದಿಗೆ ಮತ್ತೆ ಒಂದು ತಿಂಗಳ ಅವಧಿ ವಿಸ್ತರಿಸಿದ ಅಮೆರಿಕ&lt;/strong&gt;&lt;/h3&gt;&lt;p&gt;ವಾಷಿಂಗ್ಟನ್: ರಷ್ಯಾದಿಂದ ಕಚ್ಚಾತೈಲ ಖರೀದಿಗೆ ನೀಡಿದ್ದವಿನಾಯಿತಿಯನ್ನು ಮತ್ತೆ ಒಂದು ತಿಂಗಳ ಕಾಲ ಅಮೆರಿಕ ವಿಸ್ತರಿಸಿದೆ. ಹೀಗಾಗಿ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ಭಾರತ ಸೇರಿ ಹಲವು ದೇಶಗಳಿಗೆ ಲಾಭವಾಗಲಿದೆ. ಉಕ್ರೇನ್ ಮೇಲಿನ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದಿಂದ ತೈಲ ಖರೀದಿ ಮಾಡದಂತೆ ಜಗತ್ತಿನ ಎಲ್ಲಾ ದೇಶಗಳ ಮೇಲೂ ಅಮೆರಿಕ ನಿರ್ಬಂಧ ಹೇರಿತ್ತು. ಆದರೆ ಇತ್ತೀಚಿನ ಅಮೆರಿಕ-ಇರಾನ್ ಯುದ್ಧಾರಂಭದ ಬಳಿಕ ಕಚ್ಚಾತೈಲ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ನಿರ್ಬಂಧದಿಂದ 1 ತಿಂಗಳ ವಿನಾಯ್ತಿ ನೀಡಲಾಗಿತ್ತು. ಇದರಿಂದ ರಷ್ಯಾದ 14 ಕೋಟಿ ಬ್ಯಾರೆಲ್ ತೈಲ ಮಾರುಕಟ್ಟೆಗೆ ಲಭ್ಯವಾಗಿತ್ತು. ಈ ಗಡುವು ಇತ್ತೀಚೆಗೆ ಮುಗಿದಿದದು ಅದನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿತ್ತು. ಅದರ ಬೆನ್ನಲ್ಲೇ ಮತ್ತೆ ತನ್ನ ನಿರ್ಧಾರ ಬದಲಿಸಿಕೊಂಡಿರುವ ಅಮೆರಿಕ ಏ.17ರಿಂದ ಮೇ 16ರವರೆಗೂ ಮತ್ತೆ ವಿನಾಯ್ತಿ ನೀಡಲಾಗುವುದು ಎಂದು ಪ್ರಕಟಿಸಿದೆ.&lt;/p&gt;&lt;h3&gt;&lt;strong&gt;ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.2 ಹೆಚ್ಚಳ&lt;/strong&gt;&lt;/h3&gt;&lt;p&gt;ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.2ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧ ರಿಸಿದೆ. ಹೀಗಾಗಿ ಇದುವರೆಗೆ ಮೂಲವೇತನದ ಶೇ.58ರಷ್ಟಿದ್ದ ತುಟ್ಟಿಭತ್ಯೆ ಇನ್ನು ಶೇ.60ಕ್ಕೆ ತಲುಪಲಿದೆ. 2026ರ ಜನವರಿ 1ರಿಂದಲೇ ಈ ಏರಿಕೆ ಪೂರ್ವಾ ನ್ವಯವಾಗಿ ಜಾರಿಯಾಗಲಿದೆ. ಈ ಏರಿಕೆಯ ಲಾಭ 50.46 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.27 ಲಕ್ಷ ನಿವೃತ್ತ ಉದ್ಯೋಗಿಗಳಿಗೆ ಲಾಭ ತರಲಿದೆ. ಜೊತೆಗೆ ಸರ್ಕಾರಕ್ಕೆ 6791 ಕೋಟಿ ರು. ಹೊರೆ ಬೀಳಲಿದೆ. ಬೆಲೆ ಏರಿಕೆ ಸೂಚ್ಯಂಕವನ್ನು ಆಧರಿಸಿ ಕೇಂದ್ರ ಸರ್ಕಾರ ಪ್ರತಿ ವರ್ಷ ಎರಡು ಬಾರಿ ತುಟ್ಟಿ ಭತ್ಯೆ ಪ್ರಕಟಿಸುತ್ತದೆ.&lt;/p&gt;&lt;p&gt;ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು ಸಾಮಾನ್ಯ ಜನಜೀವನದಲ್ಲಿ ಏರುಪೇರು ಕಂಡುಬಂದಿದೆ. ಯುಪಿಯಲ್ಲಿ 45 ಡಿ.ಸೆ. ದಾಖಲಾಗಿದ್ದರೆ, ರಾಜಸ್ಥಾನದ ಚುರುವಿನಲ್ಲಿ 42.8 ಡಿ.ಸೆ. ತಾಪಮಾನ ದಾಖಲಾಗಿದೆ. ರಾಜಸ್ಥಾನದ ಚಿತ್ತೋರ್&zwnj;ಗಢದಲ್ಲಿ 42.6 ಡಿ.ಸೆ, ಬಾರ್ಮೇಡ್ ಮತ್ತು ಕೋಟಾದಲ್ಲಿ ತಲಾ 42.2 ಡಿ.ಸೆ, ತಾಪಮಾನ ದಾಖಲಾಗಿದೆ. ಇನ್ನು ಉತ್ತರಪ್ರದೇಶದ ಬಂಡಾದಲ್ಲಿ ರಾಜ್ಯದಲ್ಲೇ ಅತಿಹೆಚ್ಚು 44.6 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಇನ್ನು ಪ್ರಯಾಗ್&zwnj;ರಾಜ್&zwnj;ನಲ್ಲಿ 43.2 ಡಿ.ಸೆ, ವಾರಣಾಸಿಯಲ್ಲಿ 43 ಡಿ.ಸೆ, ಒಡಿಶಾದಲ್ಲಿಯೂ ರಾಜ್ಯದ 15 ಸ್ಥಳಗಳಲ್ಲಿ 40 ಡಿ.ಸೆ. ದಾಟಿ ತಾಪಮಾನ ದಾಖಲಾಗಿದೆ. ತಿತ್ತಾಗಢದಲ್ಲಿ 42.7 ಡಿ. ಸೆ. ಜಾರ್ಸುಗುಡದಲ್ಲಿ 42.6 ಡಿ. ಸೆ, ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಒಂದೇ ಗಂಟೆಯಲ್ಲಿ 7 ಸುಳ್ಳು: ಟ್ರಂಪ್ ವಿರುದ್ದ ಇಸ್ರೇಲ್ ಇರಾನ್ ಎರಡೂ ದೇಶಗಳ ಆಕ್ರೋಶ&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/pope-says-he-doesnt-want-to-argue-with-trump/articleshow-3zwogio"/>
        </item>
        <item>
            <title><![CDATA[Modi in Bengal: ಟಿಎಂಸಿಯ 'ಮಹಾ ಜಂಗಲ್ ರಾಜ್'ಗೆ ಮಹಿಳೆಯರೇ ಸವಾಲು: ಮಮತಾ, ಕಾಂಗ್ರೆಸ್ ವಿರುದ್ಧ ಮೋದಿ ಗುಡುಗು]]></title>
            <link>https://kannada.asianetnews.com/india-news/pm-modi-accuses-tmc-of-betraying-bengal-women-over-reservation-bil-rav/articleshow-8z1gofv</link>
            <guid isPermaLink="true">https://kannada.asianetnews.com/india-news/pm-modi-accuses-tmc-of-betraying-bengal-women-over-reservation-bil-rav/articleshow-8z1gofv</guid>
            <pubDate>Sun, 19 Apr 2026 12:56:51 +0530</pubDate>
            <description><![CDATA[&lt;p&gt;ಪಶ್ಚಿಮ ಬಂಗಾಳದ ಬಿಷ್ಣುಪುರದಲ್ಲಿ ಪ್ರಧಾನಿ ಮೋದಿ ಅವರು ಟಿಎಂಸಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ಈ ಪಕ್ಷಗಳು 'ಷಡ್ಯಂತ್ರ' ಮಾಡಿವೆ ಎಂದು ಆರೋಪಿಸಿದ&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-927ca7a5-9604-4962-8651-cc72ad5b1f9c.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು, ಸಂವಿಧಾನ (131ನೇ ತಿದ್ದುಪಡಿ) ಮಸೂದೆಗೆ ವಿರೋಧ ಪಕ್ಷಗಳು ಮತ ಹಾಕಿದ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು ಟಿಎಂಸಿಯ 'ಮಹಾ ಜಂಗಲ್ ರಾಜ್'ಗೆ ಸವಾಲು ಹಾಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಮಹಿಳಾ ಮೀಸಲಾತಿ ಮಸೂದೆ: ಟಿಎಂಸಿ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ&lt;/h2&gt;&lt;p&gt;ಬಿಷ್ಣುಪುರದಲ್ಲಿ ಬಿಜೆಪಿ ಚುನಾವಣಾ ರ&zwj;್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾರಿ ಶಕ್ತಿ ವಂದನ್ ಅಧಿನಿಯಮದ ತಿದ್ದುಪಡಿಗಳು ವಿಫಲವಾಗಿದ್ದನ್ನು ಟಿಎಂಸಿ ಮತ್ತು ಕಾಂಗ್ರೆಸ್&zwnj;ನ 'ಷಡ್ಯಂತ್ರ' ಎಂದು ಕರೆದರು. ಟಿಎಂಸಿ ಪಶ್ಚಿಮ ಬಂಗಾಳದ ಮಹಿಳೆಯರಿಗೆ ದ್ರೋಹ ಬಗೆದಿದೆ ಎಂದು ಅವರು ಆರೋಪಿಸಿದರು.&lt;/p&gt;&lt;p&gt;ಮಮತಾ ಬ್ಯಾನರ್ಜಿ ಸರ್ಕಾರವನ್ನು 'ನಿರ್ಮಮ್ ಸರ್ಕಾರ್' (ruthless government) ಎಂದು ಉಲ್ಲೇಖಿಸಿದ ಪ್ರಧಾನಿ, 'ಈ ವಾತಾವರಣ, ಉತ್ಸಾಹ, ಪ್ರೀತಿ ಮತ್ತು ಸಂಭ್ರಮವು 'ನಿರ್ಮಮ್ ಸರ್ಕಾರ್' ವಿರುದ್ಧದ ಕೋಪದ ಸಂಕೇತವಾಗಿದೆ. ಇದು ಮಾ ಶಾರದೆಯ ಪವಿತ್ರ ಭೂಮಿ, ಮತ್ತು ಇಲ್ಲಿ ಅನೇಕ ಮಹಿಳೆಯರು ಉಪಸ್ಥಿತರಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಗೆ ಬಿಜೆಪಿ ಹೆಸರುವಾಸಿಯಾಗಿದೆ, ಅದಕ್ಕಾಗಿಯೇ ಮಹಿಳೆಯರು ಬಿಜೆಪಿಯನ್ನು ಹೆಚ್ಚು ಆಶೀರ್ವದಿಸುತ್ತಾರೆ. ವಿಕಸಿತ ಭಾರತ ನಿರ್ಮಾಣದಲ್ಲಿ ಹೆಣ್ಣುಮಕ್ಕಳ ಪಾತ್ರವನ್ನು ವಿಸ್ತರಿಸಲು ನಾವು ಬಯಸುತ್ತೇವೆ. ರಾಜಕೀಯದಲ್ಲಿ ಹೆಚ್ಚು ಮಹಿಳೆಯರು ಭಾಗವಹಿಸಬೇಕೆಂದು ನಾವು ಬಯಸುತ್ತೇವೆ. ಆದರೆ, ಸಂಸತ್ತಿನಲ್ಲಿ ಏನಾಯಿತು ಎಂದು ನೀವು ನೋಡಿದ್ದೀರಿ. ಟಿಎಂಸಿ ಮತ್ತೊಮ್ಮೆ ಬಂಗಾಳದ ಸಹೋದರಿಯರಿಗೆ ದ್ರೋಹ ಬಗೆದಿದೆ. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಬೇಕಿತ್ತು, ಮೋದಿ ಅದನ್ನು ಖಚಿತಪಡಿಸಿದರು. ಬಂಗಾಳದಲ್ಲಿ ಇದನ್ನು 2029 ರಿಂದ ಜಾರಿಗೆ ತರಲು ಬಯಸಿತ್ತು. ಆದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಮತ್ತು ಸಂಸದರಾಗುವುದನ್ನು ಟಿಎಂಸಿ ಬಯಸಲಿಲ್ಲ, ಅದು'ಮಹಾ ಜಂಗಲ್ ರಾಜ್' ಟಿಎಂಸಿ, ಕಾಂಗ್ರೆಸ್ ಜೊತೆ ಸೇರಿ ಷಡ್ಯಂತ್ರ ಮಾಡಿತು, ಮತ್ತು ಅವರು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಲು ಬಿಡಲಿಲ್ಲ' ಎಂದು ಅವರು ಕಿಡಿಕಾರಿದರು.&lt;/p&gt;&lt;h3&gt;'ನುಸುಳುಕೋರರಿಗಾಗಿ ಟಿಎಂಸಿ ಕಾನೂನು ಉಲ್ಲಂಘಿಸುತ್ತೆ'&lt;/h3&gt;&lt;p&gt;ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಅಂಶವನ್ನು ಪ್ರಸ್ತಾಪಿಸಿದ ಅವರು, ಅಕ್ರಮ ವಲಸಿಗರಿಗೆ ಅನುಕೂಲ ಮಾಡಿಕೊಡಲು ಟಿಎಂಸಿ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು. 'ನುಸುಳುಕೋರರಿಗೆ ಲಾಭ ಮಾಡಿಕೊಡಲು ಟಿಎಂಸಿ ಎಲ್ಲಾ ಕಾನೂನುಗಳನ್ನು ಉಲ್ಲಂಘಿಸುತ್ತಿದೆ. ಟಿಎಂಸಿ ಸಂವಿಧಾನದ ಆಶಯಕ್ಕೆ ಧಕ್ಕೆ ತಂದು, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುತ್ತಿದೆ ಎಂದು ಮೋದಿ ಹೇಳಿದರು.&lt;/p&gt;&lt;p&gt;&lt;strong&gt;'ಟಿಎಂಸಿ ರಾಷ್ಟ್ರಪತಿ ಮುರ್ಮು ಅವರಿಗೆ ಅವಮಾನ ಮಾಡಿದೆ'&lt;/strong&gt;&lt;/p&gt;&lt;p&gt;9ನೇ ಅಂತರರಾಷ್ಟ್ರೀಯ ಸಂತಾಲ್ ಸಮ್ಮೇಳನಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಸಂದರ್ಭದ ವಿವಾದವನ್ನು ನೆನಪಿಸಿಕೊಂಡ ಮೋದಿ, 'ಇಂದು ಇಡೀ ಜಗತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಜೀ ಅವರನ್ನು ಗೌರವಿಸುತ್ತದೆ, ಆದರೆ ಬುಡಕಟ್ಟು ವಿರೋಧಿ ಟಿಎಂಸಿ ಅವರಿಗೆ ಅವಮಾನ ಮಾಡುತ್ತದೆ. ಇಲ್ಲಿ ಬಂಗಾಳದಲ್ಲಿ, ರಾಷ್ಟ್ರಪತಿಗಳು ಬಂದಾಗ, ಟಿಎಂಸಿ ಅವರಿಗೆ ಹೇಗೆ ಅವಮಾನ ಮಾಡಿತು ಎಂಬುದನ್ನು ಇಡೀ ದೇಶವೇ ನೋಡಿದೆ. ರಾಷ್ಟ್ರಪತಿಗೆ ಮಾಡಿದ ಅವಮಾನವನ್ನು ಬಂಗಾಳದ ಸಹೋದರಿಯರು ಎಂದಿಗೂ ಮರೆಯುವುದಿಲ್ಲ' ಎಂದರು.&lt;/p&gt;&lt;p&gt;&lt;strong&gt;ಪಶ್ಚಿಮ ಬಂಗಾಳ ಚುನಾವಣಾ ಸಂದರ್ಭ&lt;/strong&gt;&lt;/p&gt;&lt;p&gt;ಶುಕ್ರವಾರ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸಂವಿಧಾನ ತಿದ್ದುಪಡಿ ಮಸೂದೆಯ ವಿರುದ್ಧ ಮತ ಚಲಾಯಿಸಿದ ನಂತರ ಪ್ರಧಾನಿ ಮೋದಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಲೋಕಸಭೆಯು ಸಂವಿಧಾನ (ನೂರಾ ಮೂವತ್ತೊಂದನೇ ತಿದ್ದುಪಡಿ) ಮಸೂದೆ, ಡಿಲಿಮಿಟೇಶನ್ ಮಸೂದೆ, ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಒಟ್ಟಿಗೆ ಅಂಗೀಕಾರಕ್ಕಾಗಿ ಕೈಗೆತ್ತಿಕೊಂಡಿತ್ತು. ಮೂರು ಮಸೂದೆಗಳ ಮೇಲಿನ ಚರ್ಚೆಯ ನಂತರ ನಡೆದ ಮತ ವಿಭಜನೆಯಲ್ಲಿ, ಸಂವಿಧಾನ ತಿದ್ದುಪಡಿ ಮಸೂದೆಯ ಪರವಾಗಿ 298 ಸದಸ್ಯರು ಮತ್ತು ವಿರುದ್ಧವಾಗಿ 230 ಸದಸ್ಯರು ಮತ ಚಲಾಯಿಸಿದರು.&lt;/p&gt;&lt;p&gt;ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಟಿಎಂಸಿಗೆ ಮಹಿಳೆಯರು ದೊಡ್ಡ ಮತಬ್ಯಾಂಕ್ ಆಗಿದ್ದಾರೆ. 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಟಿಎಂಸಿ ಎರಡೂ ಮಹಿಳಾ ಮತದಾರರನ್ನು ಸೆಳೆಯಲು ಯತ್ನಿಸುತ್ತಿವೆ. ಟಿಎಂಸಿ ಲಕ್ಷ್ಮಿ ಭಂಡಾರ್ ಯೋಜನೆಯನ್ನು ಘೋಷಿಸಿದ್ದು, ಸಾಮಾನ್ಯ ವರ್ಗದ ಮಹಿಳೆಯರಿಗೆ ತಿಂಗಳಿಗೆ ₹1,500, ಎಸ್&zwnj;ಸಿ/ಎಸ್&zwnj;ಟಿ ಮಹಿಳೆಯರಿಗೆ ₹1,700 ಮತ್ತು ನಿರುದ್ಯೋಗಿ ಯುವಕರಿಗೆ ಪಾಕೆಟ್ ಮನಿಯಾಗಿ ₹1,500 ನೀಡುವುದಾಗಿ ಹೇಳಿದೆ.&lt;/p&gt;&lt;p&gt;ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಮಮತಾ ಬ್ಯಾನರ್ಜಿ ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದ್ದರೆ, ಕಳೆದ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ಗೆಲುವು ಸಾಧಿಸಲು ಯತ್ನಿಸುತ್ತಿದೆ. (ANI)&lt;/p&gt;&lt;p&gt;(ಶೀರ್ಷಿಕೆ ಹೊರತುಪಡಿಸಿ, ಈ ವರದಿಯನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.).&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/pm-modi-accuses-tmc-of-betraying-bengal-women-over-reservation-bil-rav/articleshow-8z1gofv"/>
        </item>
        <item>
            <title><![CDATA[ಸಿಕ್ಕಿಂ ಟೆಮಿ ಚಹಾ ಪುಡಿ ದಾಖಲೆಯ ಬೆಲೆಗೆ ಸೇಲ್: 1 ಕೇಜಿಗೆ ಬರೋಬ್ಬರಿ 27,000 ರೂ.ಗೆ ಸೇಲ್]]></title>
            <link>https://kannada.asianetnews.com/business/sikkim-temi-tea-powder-sold-at-record-price-1-kg-sold-for-rs-27000/articleshow-l5cl3cg</link>
            <guid isPermaLink="true">https://kannada.asianetnews.com/business/sikkim-temi-tea-powder-sold-at-record-price-1-kg-sold-for-rs-27000/articleshow-l5cl3cg</guid>
            <pubDate>Sun, 19 Apr 2026 11:05:03 +0530</pubDate>
            <description><![CDATA[ಸಿಕ್ಕಿಂನ ಟೆಮಿ ಚಹಾ ಪುಡಿ ದಾಖಲೆಯ ₹27,000ಕ್ಕೆ ಮಾರಾಟವಾಗಿದೆ. ಬಿಜೆಪಿ ಹಿರಿಯ ನಾಯಕ ಬಲ್ಬೀರ್ ಪುಂಜ್ ನಿಧನರಾಗಿದ್ದು, ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ವಿಪಕ್ಷಗಳು ಮತ್ತೆ ಯತ್ನಿಸುತ್ತಿವೆ. ದೇಶದಲ್ಲಿ ಎಲ್&zwnj;ಪಿಜಿ ಬೇಡಿಕೆ ಸಹಜ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k27eqzzbn1s3hnezvj2pqza2,imgname-thumbnail---2025-08-09t183119.231-1754744487915.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸಿಕ್ಕಿಂ ಟೆಮಿ ಚಹಾ ಪುಡಿ ಕೇಜಿಗೆ ದಾಖಲೆಯ ₹27000ಕ್ಕೆ ಮಾರಾಟ&lt;/strong&gt;&lt;/h2&gt;&lt;p&gt;ಗ್ಯಾಂಗ್ಟಕ್&zwnj;: ಅಸ್ಸಾಂನ ಸರ್ಕಾರಿ ಸ್ವಾಮ್ಯದ ಟೆಮಿ ಚಹಾ ಎಸ್ಟೇಟ್&zwnj;ನಲ್ಲಿ ಬೆಳೆದ ಸಾವಯುವ ಚಹಾ ಪುಡಿ ಪ್ರಸ್ತುತ ಋತುವಿನಲ್ಲಿ ಕೇಜಿಗೆ 27,000 ರು.ಗೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ. ಋತುವಿನ ಮೊದಲ ಬೆಳೆಯು ಸುವಾಸನೆ ಮತ್ತು ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿ. ಆದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೇಡಿಕೆ ಜಾಸ್ತಿ. ಹೀಗಾಗಿ ಖರೀದಾರರು ಖರೀದಿಗೆ ಮುಗಿ ಬಿದ್ದಿದ್ದಾರೆ. ಮುಕ್ತ ಬಿಡ್ಡಿಂಗ್&zwnj; ಮೂಲಕ ನೀಡಲಾಗುವ ಆರಂಭಿಕ ಲಾಟ್&zwnj;ಗಳು ಖರೀದಿದಾರರು ದುಬಾರಿ ಬೆಲೆಗೆ ಖರೀದಿಸಿದ್ದಾರೆ.&lt;/p&gt;&lt;h3&gt;&lt;strong&gt;ಬಿಜೆಪಿ ಹಿರಿಯ ನಾಯಕ ಬಲ್ಬೀರ್&zwnj; ನಿಧನ&lt;/strong&gt;&lt;/h3&gt;&lt;p&gt;ನವದೆಹಲಿ: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ಮಾಜಿ ಉಪಾಧ್ಯಕ್ಷ ಬಲ್ಬೀರ್&zwnj; ಸಿಂಗ್&zwnj; (76) ಅವರು ಶನಿವಾರ ನಿಧನರಾಗಿದ್ದಾರೆ. ಪಂಜಾಬಿನ ಲಲೋವಾಲ್&zwnj;ನಲ್ಲಿ ಜನಿಸಿದ ಪುಂಜ್&zwnj; ರಾಜಕಾರಣ ಪ್ರವೇಶಿಸುವ ಮುನ್ನ ಪತ್ರಕರ್ತರಾಗಿದ್ದರು. 1971ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ್ದರು. ಆ ಬಳಿಕ ಬಿಜೆಪಿ ಸೇರಿದ ಅವರು ಎರಡು ಸಲ ರಾಜ್ಯಸಭಾ ಸಂಸದರಾಗಿದ್ದರು.2000ರಿಂದ 2006ರವರೆಗೆ ಉತ್ತರ ಪ್ರದೇಶದಿಂದ ಹಾಗೂ 2008ರಿಂದ 2014ರವರೆಗೆ ಒಡಿಶಾದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಪುಂಜ್ ಅವರು ಕೇವಲ ರಾಜಕಾರಣಿಯಲ್ಲದೆ, ಚಿಂತಕರಾಗಿಯೂ ಗುರುತಿಸಿಕೊಂಡಿದ್ದರು. ಬಿಜೆಪಿ ಪಕ್ಷದ ಬೌದ್ಧಿಕ ಘಟಕದ ಸಂಚಾಲಕರಾಗಿ ಕೆಲಸ ಮಾಡಿ, ಪಕ್ಷದ ವಿಚಾರಧಾರೆ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಾಷ್ಟ್ರೀಯ ಯುವ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ಯುವಜನತೆಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾರ್ಯಗಳನ್ನು ಮುನ್ನಡೆಸಿದರು.&lt;/p&gt;&lt;h3&gt;&lt;strong&gt;ಸಿಇಸಿ ಜ್ಞಾನೇಶ್&zwnj; ಪದಚ್ಯುತಿಗೆ ಮತ್ತೆ ವಿಪಕ್ಷಗಳ ಪ್ರಯತ್ನ&lt;/strong&gt;&lt;/h3&gt;&lt;p&gt;ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಲು ವಿಪಕ್ಷಗಳು ಸಲ್ಲಿಸಿದ್ದ ನೋಟಿಸ್&zwnj; ಈ ಹಿಂದೆ ಸಂಸತ್&zwnj;ನಲ್ಲಿ ತಿರಸ್ಕೃತಗೊಂಡಿದ್ದರೂ ಪ್ರತಿಪಕ್ಷಗಳು ಮತ್ತೊಮ್ಮೆ ಹಕ್ಕು ಮಂಡಿಸಲು ಮುಂದಾಗಿವೆ ಎನ್ನಲಾಗಿದೆ. ಮೂಲಗಳ ಪ್ರಕಾರ ಕಾಂಗ್ರೆಸ್&zwnj;, ತೃಣಮೂಲ ಕಾಂಗ್ರೆಸ್&zwnj;, ಎಸ್ಪಿ, ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಹೊಸ ನೋಟಿಸ್&zwnj; ನೀಡಲು ಸಿದ್ಧತೆ ನಡೆಸಿವೆ ಎಂದು ತಿಳಿದು ಬಂದಿದೆ. ಆದರೆ ಯಾವಾಗ ಮಂಡಿಸಲಾಗುತ್ತದೆ. ಎರಡೂ ಸದನಗಳಲ್ಲಿಯೂ ಮಂಡಿಸಲಾಗುತ್ತದೆಯೋ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಜ್ಞಾನೇಶ್&zwnj; ವಿಶೇಷ ಮತಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್&zwnj; ಆದೇಶಗಳನ್ನು ಧಿಕ್ಕರಿಸಿದ್ದಾರೆ ಎನ್ನುವುದು ವಿಪಕ್ಷಗಳ ಆರೋಪ.&lt;/p&gt;&lt;p&gt;&lt;strong&gt;ದೇಶದಲ್ಲಿ ಎಲ್&zwnj;ಪಿಜಿ ಬೇಡಿಕೆ ಸಹಜ ಸ್ಥಿತಿಯತ್ತ: ಕೇಂದ್ರ&lt;/strong&gt;&lt;/p&gt;&lt;p&gt;ನವದೆಹಲಿ: 'ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಸೃಷ್ಟಿಯಾಗಿದ್ದ ಎಲ್&zwnj;ಪಿಜಿ ಆತಂಕ ನಿವಾರಣೆಯಾಗಿದ್ದು, ಬೇಡಿಕೆ ಯುದ್ಧ ಪೂರ್ವ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಪ್ರಸ್ತುತ ದೈನಂದಿನ ಬುಕಿಂಗ್&zwnj;ಗಳು 40-50 ಲಕ್ಷ ವ್ಯಾಪ್ತಿಯಲ್ಲಿವೆ. ಸರಬರಾಜು ಸಾಮಾನ್ಯವಾಗಿದೆ. ಏ.16ರಂದು ಸುಮಾರು 50 ಲಕ್ಷ ರೀಫಿಲ್ ಸಿಲಿಂಡರ್&zwnj;ಗಳನ್ನು ಬಳಕೆದಾರರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಇದು ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿದೆ ಎಂಬುದನ್ನು ತೋರಿಸುತ್ತದೆ' ಎಂದಿದ್ದಾರೆ. ಕಳೆದ ತಿಂಗಳು ದೈನಂದಿನ ಬುಕಿಂಗ್&zwnj;ಗಳು ಗರಿಷ್ಠ 80 ಲಕ್ಷವನ್ನು ಮೀರಿದ್ದವು. ಯುದ್ದಕ್ಕೂ ಮುನ್ನ ಎಲ್&zwnj;ಪಿಜಿ ಬುಕಿಂಗ್ ಪ್ರಮಾಣ 45 ಲಕ್ಷದಷ್ಟಿದ್ದವು.&lt;/p&gt;&lt;p&gt;&lt;strong&gt;ಬಜೆಟ್ ಅಧಿವೇಶನ ಅಂತ್ಯ: ಲೋಕಸಭೆ 93%, ರಾಜ್ಯಸಭೆ110% ಫಲಪ್ರದ&lt;/strong&gt;&lt;/p&gt;&lt;p&gt;ನವದೆಹಲಿ: ಜ.28ರಿಂದ ಆರಂಭವಾಗಿದ್ದ ಲೋಕಸಭೆ ಮತ್ತು ರಾಜ್ಯಸಭೆಯ ಬಜೆಟ್ ಅಧಿವೇಶನಗಳು ಶುಕ್ರವಾರ ಮುಕ್ತಾಯಗೊಂಡಿದ್ದು, ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಶನಿವಾರ ಬೆಳಿಗ್ಗೆ 11 ಗಂಟೆಗೆ ಸಮಾರೋಪದ ಮಾತು ಗಳನ್ನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, 'ಒಟ್ಟು 31 ಕಲಾಪಗಳು ನಡೆದವು. 151 ಗಂಟೆ 42 ನಿಮಿಷಗಳ ಕಾಲ ಚರ್ಚೆ ನಡೆಯಿತು. ಅಧಿವೇಶನದ ಉತ್ಪಾದಕತೆ ಶೇ.93' ಎಂದು ತಿಳಿಸಿದರು. ಇತ್ತ ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಮಾತನಾಡಿ, 'ಅಧಿವೇಶನವು ಒಟ್ಟು 157 ಗಂಟೆ 40 ನಿಮಿಷಗಳ ಕಾಲ ನಡೆಯಿತು. ಶೇ.109.87ರಷ್ಟು ಉತ್ಪಾದಕತೆ ತೋರಿತು' ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವಿದೇಶಿ ದೇಣಿಗೆಗೆ ಕಡಿವಾಣಕ್ಕೆ ಫಾದರ್ ಕಿಡಿ: ದೇಗುಲದ ಚಿನ್ನ ಸಮಾಜ ಸೇವೆಗೆ ಬಳಸಲಿ ಎಂದ ಫಾದರ್ ಪೌಲ್&lt;/strong&gt;&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/business/sikkim-temi-tea-powder-sold-at-record-price-1-kg-sold-for-rs-27000/articleshow-l5cl3cg"/>
        </item>
        <item>
            <title><![CDATA[ವಿದೇಶಿ ದೇಣಿಗೆಗೆ ಕಡಿವಾಣಕ್ಕೆ ಫಾದರ್ ಕಿಡಿ: ದೇಗುಲದ ಚಿನ್ನ ಸಮಾಜ ಸೇವೆಗೆ ಬಳಸಲಿ ಎಂದ ಫಾದರ್ ಪೌಲ್]]></title>
            <link>https://kannada.asianetnews.com/india-news/let-temple-gold-used-for-social-service-kerala-church-father-angry-for-banning-foreign-donations/articleshow-obhzwpz</link>
            <guid isPermaLink="true">https://kannada.asianetnews.com/india-news/let-temple-gold-used-for-social-service-kerala-church-father-angry-for-banning-foreign-donations/articleshow-obhzwpz</guid>
            <pubDate>Sun, 19 Apr 2026 10:25:02 +0530</pubDate>
            <description><![CDATA[&lt;p&gt;ಕೇಂದ್ರದ ಎಫ್&zwnj;ಸಿಆರ್&zwnj;ಎ ತಿದ್ದುಪಡಿ ವಿಧೇಯಕದ ಹಿನ್ನೆಲೆಯಲ್ಲಿ, ದೇವಸ್ಥಾನಗಳಲ್ಲಿರುವ ಚಿನ್ನವನ್ನು ಜನರ ಸೇವೆಗೆ ಬಳಸಬೇಕು ಎಂದು ಕೇರಳದ ಫಾದರ್ ಪೌಲ್ ಥಲೈಕಾಡ್ ಹೇಳಿದ್ದಾರೆ. ಚರ್ಚ್ ಹಣವನ್ನು ಸಮಾಜ ಸೇವೆಗೆ ಬಳಸುವಂತೆ ದೇಗುಲದ ಸಂಪತ್ತನ್ನೂ ಬಳಸಬೇಕು ಎಂಬ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpj13mzwwkhvy8tkse5k8x3c,imgname-father-paul-thalaikad-1776574125052.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ದೇವಸ್ಥಾನದ ಚಿನ್ನ ಜನಸೇವೆಗೆ ಬಳಕೆಯಾಗಲಿ ಎಂದ ಕೇರಳ ಚರ್ಚ್ ಫಾದರ್:&lt;/strong&gt;&lt;/h2&gt;&lt;p&gt;ಕೊಚ್ಚಿ: ವಿದೇಶಿ ದೇಣಿಗೆ(ನಿಯಂತ್ರಣ)ಗೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಎಫ್&zwnj;ಸಿಆರ್&zwnj;ಎ (ತಿದ್ದುಪಡಿ) ವಿಧೇಯಕಕ್ಕೆ ಕೇರಳದ ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್&zwnj;ನ ಫಾದರ್ ಪೌಲ್ ಥಲೈಕಾಡ್ ತೀವ್ರ ಕಿಡಿಕಾರಿದ್ದಾರೆ. ನಾವು ಚರ್ಚ್ ಹಣವನ್ನು ಸಮಾಜ ಸೇವೆಗೆ ಬಳಸುತ್ತೇವೆಯೇ ಹೊರತು ಕೂಡಿಡುವುದಿಲ್ಲ. ದೇವಸ್ಥಾನ ಗಳಲ್ಲಿರುವ ಚಿನ್ನವನ್ನು ಲಾಕರ್&zwnj;ನಲ್ಲಿಡುವ ಬದಲು ಜನ ಸೇವೆಗಾಗಿ ಬಳಸಬೇಕು ಎಂದು ಹೇಳಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಫಾದರ್ ಪೌಲ್ ಅವರ ಈ ಹೇಳಿಕೆ ಇದೀಗ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.&lt;/p&gt;&lt;p&gt;ಫಾದರ್ ಹೇಳಿದ್ದೇನು?: ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಚರ್ಚ್&zwnj;ಗಳಿಗೆ ಹರಿದು ಬರುವ ಹಣವನ್ನು ನಾವು ಕೂಡಿಡುವುದಿಲ್ಲ, ಬದಲಾಗಿ ಜನ ಸೇವೆಗಾಗಿ ಬಳಸುತ್ತೇವೆ. ಸಾಯಿಬಾಬಾ ಮತ್ತು ಮಾತಾ ಅಮೃತಾನಂದಮಯಿಯಂಥ ಧಾರ್ಮಿಕ ಚಳವಳಿಗಳು ಕೂಡ ಇದೇ ರೀತಿಯ ಸಾರ್ವಜನಿಕ ಸೇವೆಯ ಧ್ಯೇಯ ಹೊಂದಿವೆ. ಅದೇ ರೀತಿ ದೇವಸ್ಥಾನಗಳಲ್ಲಿರುವ ಚಿನ್ನ ಜನ ಕಲ್ಯಾಣಕ್ಕಾಗಿ ಬಳಕೆಯಾಗಬೇಕು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೆಂಪುಕೋಟೆ, ಸಂಸತ್ ಟಾರ್ಗೆಟ್: ಆಟಿಕೆ ಕಾರಿಗೆ ಐಇಡಿ ಜೋಡಿಸುತ್ತಿದ್ದಾಗಲೇ ಶಂಕಿತರು ಅಂದರ್&lt;/strong&gt;&lt;/p&gt;&lt;p&gt;ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, ಕೆಲ ದೇವಸ್ಥಾನಗಳಲ್ಲಿ ಸಂಪತ್ತಿನ ಸಂಗ್ರಹ ಹಾಗೂ ಹಲವು ಕ್ರಿಶ್ಚಿಯನ್ ಸಂಸ್ಥೆಗಳ ಸೇವಾ ಕಾರ್ಯಗಳ ನಡುವೆ ತುಲನೆ ಮಾಡಿ ನಾನು ಈ ಹೇಳಿಕೆ ನೀಡಿದ್ದೇನಷ್ಟೆ. ಹಿಂದಿನಿಂದಲೂ ಚರ್ಚ್&zwnj;ಗಳು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸ್ಥಿತಿಗತಿ ಸುಧಾರಣೆಗೆ ಹೆಚ್ಚಿನ ಹೂಡಿಕೆ ಮಾಡುತ್ತಿವೆ. ಇದು ಸರ್ವ ಧರ್ಮೀಯರು, ಭಾರತೀಯರಿಗಾಗಿ ಮಾಡುವ ಸೇವೆ. ಮಾನವಕುಲದ ಕಲ್ಯಾಣವೇ ಕೆಲಸ ದೇವರ ಕೆಲಸ ಎಂಬುದು ಎಲ್ಲಾ ಧರ್ಮಗಳ ಸಾರ್ವಕಾಲಿಕ ಆಧ್ಯಾತ್ಮಿಕ ತತ್ವವಾಗಿದೆ. ದೇವಸ್ಥಾನಗಳಾಗಲಿ, ಚಚ್ ೯ಗಳಾಗಲಿ ಸಂಪತ್ತು ಹೊಂದಿವೆಯೇ, ಇಲ್ಲವೇ ಎಂಬುದಕ್ಕಿಂತ ಆ ಸಂಪತ್ತನ್ನು ಯಾವ ರೀತಿ ಸಮಾಜದ ಒಳಿತಿಗೆ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ ಎಂಬುದು ಮುಖ್ಯ. ನಮ್ಮದು ಜನಸೇವೆಯೇ ಜನಾರ್ದನ ಸೇವೆ ಎಂಬುದು ಧ್ಯೇಯ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಫಾದರ್ ಪೌಲ್ ಹೇಳಿಕೆಗೆ ಹಿಂದೂ ಸಂಘಟನೆಗಳ ಕೆಂಪುಗಣ್ಣು&lt;/strong&gt;&lt;/h3&gt;&lt;p&gt;ಫಾದರ್ ಅವರ ಈ ಹೇಳಿಕೆಗೆ ಹಿಂದೂ ಐಕ್ಯ ವೇದಿಕೆ ಸೇರಿ ಹಲವು ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ದೇವಸ್ಥಾನದ ಆಸ್ತಿ ಭಕ್ತರು ನೀಡಿದ್ದೇ ಹೊರತು ಬಡವರ ಫೋಟೋ ತೋರಿಸಿ ವಿದೇಶದಿಂದ ಸ್ಮಗ್ಲಿಂಗ್ ಮಾಡಿದ್ದಲ್ಲ ಎಂದು ಆರೋಪಿಸಿದೆ. ಕೆಲ ಹಿಂದೂ ಸಂಘಟನೆಗಳು ಕ್ರಿಶ್ಚಿಯನ್ ತೀವ್ರಗಾಮಿಗಳು ಮತ್ತು ಜಿಹಾದಿಗಳು ದೇವಸ್ಥಾನದ ಆಸ್ತಿ ಮೇಲೆ ಕಣ್ಣುಹಾಕುತ್ತಿದ್ದಾರೆ ಎಂದೂ ಆರೋಪಿಸಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ&lt;/strong&gt;&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/let-temple-gold-used-for-social-service-kerala-church-father-angry-for-banning-foreign-donations/articleshow-obhzwpz"/>
        </item>
        <item>
            <title><![CDATA[ಟಾಯ್ ಕಾರ್ ಟೆರರ್ ಗ್ಯಾಂಗ್ ದೆಹಲಿ ಪೊಲೀಸರ ಬಲೆಗೆ: ಆಟಿಕೆ ಕಾರಿಗೆ IED ಜೋಡಿಸುತ್ತಿದ್ದಾಗಲೇ 4 ಶಂಕಿತ ಉಗ್ರರು ಅರೆಸ್ಟ್]]></title>
            <link>https://kannada.asianetnews.com/india-news/toy-car-terror-gang-caught-by-delhi-police-4-suspected-terrorists-arrested/articleshow-lum36hr</link>
            <guid isPermaLink="true">https://kannada.asianetnews.com/india-news/toy-car-terror-gang-caught-by-delhi-police-4-suspected-terrorists-arrested/articleshow-lum36hr</guid>
            <pubDate>Sun, 19 Apr 2026 09:54:53 +0530</pubDate>
            <description><![CDATA[&lt;p&gt;ದೆಹಲಿ ಪೊಲೀಸರು ನಾಲ್ವರು ಮೂಲಭೂತವಾದಿಗಳನ್ನು ಬಂಧಿಸುವ ಮೂಲಕ ಭಾರೀ ಉಗ್ರ ದಾಳಿಯ ಸಂಚನ್ನು ವಿಫಲಗೊಳಿಸಿದ್ದಾರೆ. ಆರೋಪಿಗಳು ರಿಮೋಟ್ ಕಂಟ್ರೋಲ್ಡ್ ಆಟಿಕೆ ಕಾರು ಬಳಸಿ ಸ್ಫೋಟ ನಡೆಸಲು ಯೋಜಿಸಿದ್ದರು ಮತ್ತು ದೇಶದಲ್ಲಿ ಖಲೀಫತ್ ಸ್ಥಾಪಿಸುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01c7wfmzkey8eh8ef7cr13txgx,imgname-image.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಕೆಂಪುಕೋಟೆ, ಸಂಸತ್ ಟಾರ್ಗೆಟ್: ಟಾಯ್ ಕಾರ್ ಟೆರರ್ ಗ್ಯಾಂಗ್ ದೆಹಲಿ ಪೊಲೀಸರ ಬಲೆಗೆ&lt;/strong&gt;&lt;/h2&gt;&lt;p&gt;ನವದೆಹಲಿ: ರಿಮೋಟ್ ಕಂಟ್ರೋಲ್ಡ್ ಆಟಿಕೆ ಕಾರು ಬಳಸಿ ಸ್ಪೋಟಕ್ಕೆ ಸಂಚು ರೂಪಿಸುತ್ತಿದ್ದ ಮಹಾರಾಷ್ಟ್ರ, ಓಡಿಶಾ ಮತ್ತು ಬಿಹಾರ ಮೂಲದ 4 ಮೂಲಭೂತವಾದಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಭಾರೀ ಉಗ್ರ ದಾಳಿಯೊಂದನ್ನು ತಪ್ಪಿಸಿದ್ದಾರೆ.&lt;/p&gt;&lt;p&gt;ಉತ್ತರಪ್ರದೇಶದ ಮೊಸೈಬ್ ಅಹ್ಮದ್, ಮಹಾರಾಷ್ಟ್ರದ ಮೊಹಮ್ಮದ್ ಹಮ್ಮಾದ್, ಬಿಹಾರದ ಮೊಹಮ್ಮದ್ ಸೊಹೈಲ್ ಮತ್ತು ಭುವನೇಶ್ವರದ ಶೇಖ್ ಇಮ್ರಾನ್ ಬಂಧಿತರು. ಆರೋಪಿಗಳು ಸೂಕ್ಷ್ಮ ಪ್ರದೇಶಗಳ ಪರಿಶೀಲನೆ ನಡೆಸಿದ್ದಲ್ಲದೆ, ಎನ್&zwnj;ಸ್ಕ್ರಿಪ್ಟೆಡ್ ಜಾಲತಾಣಗಳಲ್ಲಿ ಭಯೋತ್ಪಾದನಾ ಕಾರ್ಯಕ್ಕಾಗಿ ನೇಮಕಾತಿ ನಡೆಸಲೂ ಯತ್ನಿಸುತ್ತಿದ್ದರು. ಇಬ್ಬರು ಬಂಧಿತರು ಜನನಿಬಿಡ ಪ್ರದೇಶದಲ್ಲಿ ಸ್ಫೋಟಿಸಲು ಐಇಡಿ ಇರಿಸಿದ ರಿಮೋಟ್ ಕಂಟ್ರೋಲ್ ಆಟಿಕೆ ಕಾರು ಜೋಡಿಸುವ ಪ್ರಯತ್ನದಲ್ಲಿದಾಗಲೇ ಪೊಲೀಸರ ಅತಿಥಿಯಾಗಿದ್ದಾರೆ. ಐಇಡಿ, ಇತರೆ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.&lt;/p&gt;&lt;h3&gt;&lt;strong&gt;ರಿಮೋಟ್ ಕಂಟ್ರೋಲ್ಡ್ ಕಾರ್ + IED = ಉಗ್ರರ ಭಯಾನಕ ಸಂಚು ಭಗ್ನಗೊಳಿಸಿದ ಪೊಲೀಸರು&lt;/strong&gt;&lt;/h3&gt;&lt;p&gt;ಗುಪ್ತಚರ ದಳದಿಂದ ಮಾಹಿತಿ: ಗುಪ್ತಚರ ದಳದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ಒಡಿಶಾ, ಬಿಹಾರದಲ್ಲಿ ತಲಾ ಒಬ್ಬರನ್ನು ಬಂಧಿಸಿದ್ದಾರೆ. ಇವರು ದೇಶದಲ್ಲಿ ಖಲೀಫತ್ ಹಾಗೂ ಘಾಝಾ-ಎ-ಹಿಂದ್ ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಲಷ್ಕರ್ ಖುರಾಸಾನ್ ನಿಂದ ಪ್ರೇರೇಪಿತರಾಗಿ ಕಪ್ಪು ಧ್ವಜವನ್ನು ತಮ್ಮ ಜತೆಗೇ ಇಟ್ಟುಕೊಳ್ಳುತ್ತಿದ್ದರು.&lt;/p&gt;&lt;p&gt;ಬಂಧಿತರಲ್ಲಿ ಒಬ್ಬಾತ ಕಳೆದ ಡಿಸೆಂಬರ್ ನಲ್ಲಿ ದೆಹಲಿಗೆ ಭೇಟಿ ನೀಡಿದ್ದು ಕೆಂಪುಕೋಟೆ, ಇಂಡಿಯಾ ಗೇಟ್ ಸೇರಿ ಸೂಕ್ಷ್ಮ ಪ್ರದೇಶಗಳ ಪರಿಶೀಲನೆ ನಡೆಸಿದ್ದ. ರಾಮಮಂದಿರ, ಸಂಸತ್ ಹಾಗೂ ಪ್ರಮುಖ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಕುರಿತೂ ಚರ್ಚೆ ನಡೆಸಿದ್ದ. ಎಂದು ಪೊಲೀಸರು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಗಲ್ಫ್&zwnj;ನಲ್ಲಿದ್ದ ಮೊಸೈಬ್&lt;/strong&gt;&lt;/p&gt;&lt;p&gt;ಬಂಧಿತರಲ್ಲೊಬ್ಬನಾದ ಮೊಸೈಬ್ ಅಹಮದ್ ಉತ್ತರ ಪ್ರದೇಶ ಮೂಲದವನಾಗಿದ್ದು, ಈ ಹಿಂದೆ ಗಲ್ಫ್ ರಾಷ್ಟ್ರಗಳಲ್ಲಿ ಆಟೋ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸಿದ್ದ. ಈತ ಐಇಡಿ ಜೋಡಿಸಿದ ರಿಮೋಟ್ ಕಂಟ್ರೋಲ್ಡ್ ಕಾರುಗಳನ್ನು ವಿನ್ಯಾಸಗೊಳಿಸಲು ತನ್ನ ತಾಂತ್ರಿಕ ಕೌಶಲ್ಯ ಬಳಸಿದ್ದ. ಇನ್ನು ಶೇಖ್ ಇಮ್ರಾನ್ ಭುವನೇಶ್ವರ ಮೂಲದವನಾಗಿದ್ದು ಸೆಕ್ಯುರಿಟಿ ಗಾರ್ಡ್, ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಝಾಕಿರ್ ನಾಯ್ಕ ಮತ್ತಿತರರ ಭಾಷಣಗಳಿಂದ ಪ್ರಭಾವಿತನಾಗಿ ಮೂಲಭೂತವಾದದತ್ತ ಸೆಳೆಯಲ್ಪಟ್ಟಿದ್ದ. 2025ರಲ್ಲಿ ಕೆಂಪುಕೋಟೆಗೆ ಭೇಟಿ ನೀಡಿದ್ದ ಈತ ಇತರರಿಗೆ ಒಡಿಶಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಮತ್ತು ದೈಹಿಕ ತರಬೇತಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ&lt;/strong&gt;&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/toy-car-terror-gang-caught-by-delhi-police-4-suspected-terrorists-arrested/articleshow-lum36hr"/>
        </item>
        <item>
            <title><![CDATA[ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ಕನ್ನಡಿಗ ಸೋಮಶೇಖರ್ ನೇಮಕ]]></title>
            <link>https://kannada.asianetnews.com/india-news/kannadiga-somashekhar-appointed-as-rajya-sabha-secretary-rav/articleshow-3x6oz0y</link>
            <guid isPermaLink="true">https://kannada.asianetnews.com/india-news/kannadiga-somashekhar-appointed-as-rajya-sabha-secretary-rav/articleshow-3x6oz0y</guid>
            <pubDate>Sun, 19 Apr 2026 10:09:41 +0530</pubDate>
            <description><![CDATA[ಕೋಲಾರ ಮೂಲದ ಡಾ. ಕೆ.ಎಸ್. ಸೋಮಶೇಖರ್ ಅವರು ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕಳೆದ ಮೂರು ದಶಕಗಳಿಂದ ಸಂಸದೀಯ ಸೇವೆಯಲ್ಲಿರುವ ಇವರು, ಭಾಷಾಂತರಕಾರರಾಗಿ ವೃತ್ತಿ ಆರಂಭಿಸಿ ಇದೀಗ ಉನ್ನತ ಹುದ್ದೆಗೇರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpj0bjm2y6ya7fmc62gxh39t,imgname-----------------------2026-04-19t100519.945-1776573336194.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ಕೋಲಾರ ಮೂಲದ ಡಾ। ಕೆ.ಎಸ್&zwnj;.ಸೋಮಶೇಖರ್&zwnj; ಅವರನ್ನು ನೇಮಕ ಮಾಡಿ ರಾಜ್ಯಸಭೆಯ ಸಭಾಧ್ಯಕ್ಷ, ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್&zwnj; ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆ ಮತ್ತು ಕಳೆದ 3 ದಶಕಗಳಿಂದ ವಿವಿಧ ಸಂಸದೀಯ ಹುದ್ದೆ ನಿರ್ವಹಿಸಿದ್ದ ಹಿರಿಯ ಅಧಿಕಾರಿಗೆ ಮತ್ತೊಂದು ಮಹತ್ವದ ಹುದ್ದೆ ಸಿಕ್ಕಂತಾಗಿದೆ.&lt;/p&gt;&lt;p&gt;ಹಿನ್ನೆಲೆ: ಕರ್ನಾಟಕದ ಕೋಲಾರ ಮೂಲದ ಡಾ। ಕೆ.ಎಸ್&zwnj;.ಸೋಮಶೇಖರ್&zwnj;, ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆ ನಿರ್ವಹಿಸಿ ಬಳಿಕ ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದರು. 1993ರಲ್ಲಿ ರಾಜ್ಯಸಭೆಯ ಸಚಿವಾಲಯಕ್ಕೆ ನೇಮಕಗೊಂಡಿದ್ದ ಸೋಮಶೇಖರ್&zwnj; ನಂತರದ 33 ವರ್ಷಗಳಲ್ಲಿ ಸಂಸದೀಯ ನಡವಳಿಕೆಗಳು, ಶಾಸಕಾಂಗದ ಆಡಳಿತ, ಸಮಿತಿ ನಿರ್ವಹಣೆ, ಭಾಷಾಂತರ ಸೇವೆ ಸೇರಿದ ವಿವಿಧ ವಿಷಯಗಳಲ್ಲಿ ಅತ್ಯಂತ ಪರಿಣಿತ ಸೇವೆ ನೀಡಿದ ಅಪಾರ ಅನುಭವ ಹೊಂದಿದ್ದಾರೆ.&lt;/p&gt;&lt;p&gt;ರಾಜ್ಯಸಭೆಯಲ್ಲಿ ಭಾಷಾಂತರಕಾರರಾಗಿ ಸೇವೆ ಆರಂಭಿಸಿದ್ದ ಡಾ. ಸೋಮಶೇಖರ್&zwnj; ನಂತರ 33 ವರ್ಷಗಳಲ್ಲಿ ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ನಿರ್ದೇಶಕ, ಜಂಟಿ ನಿರ್ದೇಶಕರಾಗಿ, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಕುರಿತ ಸಂಸದೀಯ ಸಮಿತಿ ಸದಸ್ಯರಾಗಿ, ವಿವಿಧ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/kannadiga-somashekhar-appointed-as-rajya-sabha-secretary-rav/articleshow-3x6oz0y"/>
        </item>
        <item>
            <title><![CDATA[Kedarnath Yatra: ಕೇದಾರನಾಥ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಶುರು, ಈ ಬಾರಿ ನಿಯಮಗಳು ಫುಲ್ ಸ್ಟ್ರಿಕ್ಟ್!]]></title>
            <link>https://kannada.asianetnews.com/india-news/kedarnath-yatra-2026-helicopter-services-begin-april-22-with-strict-new-rules-rav/articleshow-2sfy0yh</link>
            <guid isPermaLink="true">https://kannada.asianetnews.com/india-news/kedarnath-yatra-2026-helicopter-services-begin-april-22-with-strict-new-rules-rav/articleshow-2sfy0yh</guid>
            <pubDate>Sun, 19 Apr 2026 07:24:16 +0530</pubDate>
            <description><![CDATA[&lt;p&gt;ಕೇದಾರನಾಥ ಯಾತ್ರೆಗೆ ಈ ಬಾರಿ ಹೆಲಿಕಾಪ್ಟರ್ ಸೇವೆಗಳನ್ನು ಕಟ್ಟುನಿಟ್ಟಾಗಿಸಲಾಗಿದೆ, ಏಪ್ರಿಲ್ 22 ರಿಂದ ಎಂಟು ಕಂಪನಿಗಳು ಸೀಮಿತ ಹಾರಾಟ ನಡೆಸಲಿವೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ, ಪೈನ್ ಸೂಜಿ ಮತ್ತು ಹೇಸರಗತ್ತೆ ಲದ್ದಿಯಿಂದ ತಯಾರಿಸಿದ ಬಯೋಮಾಸ್ ಬಳಸಿ 24 ಗಂಟೆಯೂ ಬಿಸಿ ನೀರಿನ ಸೌಲಭ್ಯ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-381a3b93-128b-42a6-9dcc-e0b70850fba7.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾತ್ರಾರ್ಥಿಗಳಿಗೆ ಈ ಬಾರಿ ಕಠಿಣ ಹೆಲಿಕಾಪ್ಟರ್ ಸೇವೆ&lt;/p&gt;&lt;p&gt;ಕೇದಾರನಾಥ ಧಾಮ ಯಾತ್ರೆಗೆ ಹೆಲಿಕಾಪ್ಟರ್ ಸೇವೆಗಳ ಸಿದ್ಧತೆಗಳು ಪೂರ್ಣಗೊಂಡಿವೆ. ಈ ವರ್ಷ ಭಕ್ತರ ಅನುಕೂಲ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ವ್ಯವಸ್ಥೆಗಳನ್ನು ಇನ್ನಷ್ಟು ಕಟ್ಟುನಿಟ್ಟು ಹಾಗೂ ಸುಸಂಘಟಿತವಾಗಿ ಮಾಡಲಾಗಿದೆ. ಕೇದಾರನಾಥ ಕಣಿವೆಯಲ್ಲಿರುವ ಗುಪ್ತಕಾಶಿ, ಫಾಟಾ ಮತ್ತು ಸೆರ್ಸಿ ಹೆಲಿಪ್ಯಾಡ್&zwnj;ಗಳಿಂದ ಏಪ್ರಿಲ್ 22 ರಿಂದ ಹೆಲಿಕಾಪ್ಟರ್ ಸೇವೆಗಳು ಆರಂಭವಾಗಲಿವೆ.&lt;/p&gt;&lt;p&gt;ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ಒಟ್ಟು ಎಂಟು ಹೆಲಿಕಾಪ್ಟರ್ ಕಂಪನಿಗಳಿಗೆ ಹಾರಾಟ ನಡೆಸಲು ಅನುಮತಿ ನೀಡಿದೆ. ಅನಿಯಂತ್ರಿತ ಹಾರಾಟಗಳನ್ನು ತಡೆಯಲು, ಈ ಬಾರಿ ಶಟಲ್ ಸೇವೆಗಳನ್ನು ಸೀಮಿತಗೊಳಿಸಲಾಗಿದೆ. ಇದರಿಂದ ಕಂಪನಿಗಳು ನಿಗದಿತ ಸಂಖ್ಯೆಯ ಹಾರಾಟಗಳನ್ನು ಮಾತ್ರ ನಡೆಸಲಿವೆ. ಸೋನ್&zwnj;ಪ್ರಯಾಗ್ ಮತ್ತು ಕೇದಾರನಾಥದಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಎಟಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಈ ಅಧಿಕಾರಿಗಳು ಹೆಲಿಕಾಪ್ಟರ್ ಪೈಲಟ್&zwnj;ಗಳಿಗೆ ಲೈವ್ ಅಪ್&zwnj;ಡೇಟ್&zwnj;ಗಳು ಮತ್ತು ಹವಾಮಾನದ ಬಗ್ಗೆ ಮಾಹಿತಿ ನೀಡುತ್ತಾರೆ. ಇದರ ಜೊತೆಗೆ, ಹೆಲಿಕಾಪ್ಟರ್ ಕಂಪನಿಗಳು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೇ ಎಂದು UCADA ಸೂಕ್ಷ್ಮವಾಗಿ ಗಮನಿಸಲಿದೆ. ಒಟ್ಟಾರೆಯಾಗಿ, ಈ ವರ್ಷ ಹೆಲಿಕಾಪ್ಟರ್ ಸೇವೆಗಳನ್ನು ಹೆಚ್ಚು ಸುರಕ್ಷಿತ, ನಿಯಂತ್ರಿತ ಮತ್ತು ಪಾರದರ್ಶಕವಾಗಿಸಲು ವಿಶೇಷ ಗಮನ ಹರಿಸಲಾಗಿದೆ. ಇದರಿಂದ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳು ಸಿಗಲಿವೆ.&lt;/p&gt;&lt;h2&gt;ಹಾರಾಟದ ವಿವರಗಳು ಮತ್ತು ಮಿತಿಗಳು&lt;/h2&gt;&lt;p&gt;ಈ ಬಗ್ಗೆ ಎಎನ್&zwnj;ಐ ಜೊತೆ ಮಾತನಾಡಿದ ಜಿಲ್ಲಾ ಪ್ರವಾಸೋದ್ಯಮ ಮತ್ತು ಹೆಲಿ ಸೇವಾ ನೋಡಲ್ ಅಧಿಕಾರಿ ರಾಹುಲ್ ಚೌಬೆ, 'ಏಪ್ರಿಲ್ 22 ರಿಂದ ಹೆಲಿಕಾಪ್ಟರ್ ಸೇವೆಗಳು ಆರಂಭವಾಗಲಿವೆ. ಗುಪ್ತಕಾಶಿ, ಫಾಟಾ ಮತ್ತು ಸೆರ್ಸಿಯಿಂದ ಎಂಟು ಕಂಪನಿಗಳ ಹೆಲಿಕಾಪ್ಟರ್&zwnj;ಗಳು ಹಾರಾಟ ನಡೆಸಲಿವೆ. ಸೋನ್&zwnj;ಪ್ರಯಾಗ್ ಮತ್ತು ಕೇದಾರನಾಥದಲ್ಲಿರುವ ಎಟಿಸಿ ಅಧಿಕಾರಿಗಳು ಪೈಲಟ್&zwnj;ಗಳಿಗೆ ಲೈವ್ ಅಪ್&zwnj;ಡೇಟ್&zwnj;ಗಳನ್ನು ನೀಡುತ್ತಾರೆ. ಗುಪ್ತಕಾಶಿ ಮತ್ತು ಫಾಟಾದಿಂದ ತಲಾ 24 ಶಟಲ್ ಹಾರಾಟಗಳಿಗೆ ಹಾಗೂ ಸೆರ್ಸಿಯಿಂದ 32 ಶಟಲ್ ಹಾರಾಟಗಳಿಗೆ ಅನುಮತಿ ನೀಡಲಾಗಿದೆ. ಯಾವುದೇ ಅಕ್ರಮಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.&lt;/p&gt;&lt;h3&gt;ಭಕ್ತರಿಗಾಗಿ ವಿನೂತನ ಬಿಸಿ ನೀರಿನ ಸೌಲಭ್ಯ&lt;/h3&gt;&lt;p&gt;ಇದಕ್ಕೂ ಮುನ್ನ ಶನಿವಾರ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಇನ್ನು ಮುಂದೆ ತಣ್ಣೀರಿನ ಬದಲು 24 ಗಂಟೆಯೂ ಬಿಸಿ ನೀರು ಒದಗಿಸಲಾಗುವುದು ಎಂದು ಘೋಷಿಸಿದ್ದರು. ಪೈನ್ ಮರದ ಸೂಜಿಗಳು (ಪಿರುಲ್) ಮತ್ತು ಹೇಸರಗತ್ತೆಯ ಲದ್ದಿಯಿಂದ ತಯಾರಿಸಿದ ಬಯೋಮಾಸ್ ಪೆಲ್ಲೆಟ್&zwnj;ಗಳನ್ನು ಬಳಸಿ ಕಾರ್ಯನಿರ್ವಹಿಸುವ ಗೀಸರ್&zwnj;ಗಳ ಮೂಲಕ ಈ ಸೌಲಭ್ಯವನ್ನು ಒದಗಿಸಲಾಗುತ್ತದೆ.&lt;/p&gt;&lt;p&gt;ದೇಶದಲ್ಲಿಯೇ ಮೊದಲ ಬಾರಿಗೆ ಇಷ್ಟು ಎತ್ತರದ ಪ್ರದೇಶದಲ್ಲಿ ದಿನದ 24 ಗಂಟೆಯೂ ಬಿಸಿ ನೀರು ಲಭ್ಯವಾಗುವಂತೆ ಮಾಡುವ ಪ್ರಯತ್ನ ಇದಾಗಿದೆ. ಗಢವಾಲ್ ಮಂಡಲ್ ವಿಕಾಸ್ ನಿಗಮ್ (GMVN) ಕೇದಾರನಾಥ ಮತ್ತು ಲಿಂಚೋಲಿಯಲ್ಲಿ ಈ ಗೀಸರ್&zwnj;ಗಳನ್ನು ಅಳವಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ವಿನೂತನ ಉಪಕ್ರಮವು ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಹೇಸರಗತ್ತೆಯ ತ್ಯಾಜ್ಯದ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಜೊತೆಗೆ, ಪೈನ್ ಸೂಜಿಗಳಿಂದ ಉಂಟಾಗುವ ಕಾಡ್ಗಿಚ್ಚಿನ ಅಪಾಯವನ್ನು ಕಡಿಮೆ ಮಾಡುತ್ತದೆ.&lt;/p&gt;&lt;p&gt;&lt;strong&gt;ಕೇದಾರನಾಥ ದೇಗುಲದ ಬಾಗಿಲು ಯಾವಾಗ ತೆರೆಯುತ್ತೆ?&lt;/strong&gt;&lt;/p&gt;&lt;p&gt;ನಂಬಿಕೆ ಮತ್ತು ಭಕ್ತಿಯ ಪವಿತ್ರ ಸಂಕೇತವಾಗಿರುವ ಕೇದಾರನಾಥ ಧಾಮದ ಬಾಗಿಲುಗಳನ್ನು 2026ರ ಯಾತ್ರೆಗಾಗಿ ಏಪ್ರಿಲ್ 22 ರಂದು ಬೆಳಿಗ್ಗೆ 8:00 ಗಂಟೆಗೆ ಯಾತ್ರಾರ್ಥಿಗಳಿಗಾಗಿ ತೆರೆಯಲಾಗುತ್ತದೆ. ವೈದಿಕ ವಿಧಿವಿಧಾನಗಳು, ಸಾಂಪ್ರದಾಯಿಕ ಪದ್ಧತಿಗಳು ಮತ್ತು ಸನಾತನ ಸಂಪ್ರದಾಯಗಳ ಪ್ರಕಾರ ಬಾಗಿಲು ತೆರೆಯುವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜನರಲ್ಲಿ ಭಾರೀ ಉತ್ಸಾಹ ಮನೆಮಾಡಿದೆ. ಹಾಗೂ ಆಡಳಿತವು ಈ ಸಂದರ್ಭಕ್ಕಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸುವ ಅಂತಿಮ ಹಂತದಲ್ಲಿದೆ. (ANI)&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/kedarnath-yatra-2026-helicopter-services-begin-april-22-with-strict-new-rules-rav/articleshow-2sfy0yh"/>
        </item>
        <item>
            <title><![CDATA[ಮರಾಠಿ ಕಲಿಸದ ಶಾಲೆಗಳಿಗೆ ಮಾನ್ಯತೆ ರದ್ದು, ನಿಯಮ ಉಲ್ಲಂಘಿಸಿದರೆ 1 ಲಕ್ಷ ರೂ. ದಂಡ, CBSE ICSE ಶಾಲೆಗಳಿಗೂ ಫಡ್ನವೀಸ್‌ ಸರ್ಕಾರ ಎಚ್ಚರಿಕೆ!]]></title>
            <link>https://kannada.asianetnews.com/india-news/maharashtra-mandates-marathi-rs-1-lakh-fine-and-derecognition-warning-for-cbse-icse-schools-rav/articleshow-ayy4p9i</link>
            <guid isPermaLink="true">https://kannada.asianetnews.com/india-news/maharashtra-mandates-marathi-rs-1-lakh-fine-and-derecognition-warning-for-cbse-icse-schools-rav/articleshow-ayy4p9i</guid>
            <pubDate>Sun, 19 Apr 2026 06:58:48 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಮರಾಠಿ ಭಾಷೆಯನ್ನು ಕಡ್ಡಾಯವಾಗಿ ಬೋಧಿಸದಿದ್ದರೆ 1 ಲಕ್ಷ ರೂ. ದಂಡ ಹಾಗೂ ಮಾನ್ಯತೆ ರದ್ದುಗೊಳಿಸುವುದಾಗಿ ಶಾಲಾ ಶಿಕ್ಷಣ ಇಲಾಖೆ ಎಚ್ಚರಿಸಿದೆ. 2020ರ ಕಾಯಿದೆಯ ಅನ್ವಯ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kphn96yvkzjn04dsb6vt16vh,imgname-----------------------2026-04-19t065141.188-1776561724378.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಿಟಿಐ ಮುಂಬೈ (ಏ.19): &lt;/strong&gt;ಮಹಾರಾಷ್ಟ್ರದ ಶಾಲೆಗಳು ಕಡ್ಡಾಯ ಮರಾಠಿ ಬೋಧನೆಯ ನಿಯಮವನ್ನು ಪಾಲಿಸದಿದ್ದರೆ 1 ಲಕ್ಷ ರು.ವರೆಗೆ ದಂಡ ವಿಧಿಸಲಾಗುವುದು ಮತ್ತು ಮಾನ್ಯತೆಯನ್ನು ರದ್ದುಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಸಿದೆ.&lt;/p&gt;&lt;p&gt;ರಾಜ್ಯದ ಎಲ್ಲಾ ಆಟೋ ಮತ್ತು ಕ್ಯಾಬ್&zwnj; ಚಾಲಕರು ಕಡ್ಡಾಯವಾಗಿ ಮರಾಠಿ ಕಲಿತಿರಬೇಕು ಎಂದು ಇತ್ತೀಚೆಗೆ ಸರ್ಕಾರ ಎಚ್ಚರಿಸಿತ್ತು. ಅದರ ಬೆನ್ನಲ್ಲೇ ಶಾಲೆಗಳಿಗೂ ಕಠಿಣ ಸೂಚನೆ ರವಾನಿಸಿದೆ.&lt;/p&gt;&lt;p&gt;2020ರ ಮಹಾರಾಷ್ಟ್ರ ಕಡ್ಡಾಯ ಮರಾಠಿ ಬೋಧನೆ ಕಾಯಿದೆ ಪ್ರಕಾರ, 1ರಿಂದ 10ನೇ ತರಗತಿವರೆಗೆ ಮರಾಠಿಯನ್ನು ಒಂದು ಭಾಷೆಯಾಗಿ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಶುಕ್ರವಾರ ಠರಾವು ಹೊರಡಿಸಿದ್ದು ಅದರಲ್ಲಿ &lsquo;ಎಲ್ಲಾ ಶಾಲೆಗಳಲ್ಲಿ ಮರಾಠಿ ಕಡ್ಡಾಯವಾಗಿ ಬೋಧಿಸಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಘೋಷಿಸಿದೆ. ವಿಶೇಷವಾಗಿ ಕೇಂದ್ರೀಯ ಬೋರ್ಡ್&zwnj;ಗಳಿಗೆ (ಸಿಬಿಎಸ್&zwnj;ಇ/ಐಸಿಎಸ್&zwnj;ಇ) ಸಂಬಂಧಿಸಿದ ಅನೇಕ ಶಾಲೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;ಮುಂದಿನ 2 ತಿಂಗಳ ಅವಧಿಯಲ್ಲಿ ಶಾಲೆಗಳಲ್ಲಿ ಮರಾಠಿ ಕಲಿಕೆ ನಿಯಮ ಪಾಲನೆ ಕುರಿತು ತಪಾಸಣೆ ನಡೆಸಲಾಗುವುದು. ನಿಯಮ ಉಲ್ಲಂಘಿಸಿದ ಶಾಲೆಗಳಿಗೆ ಈ ಬಗ್ಗೆ ಉತ್ತರಿಸಲು 15 ದಿನಗಳ ಗಡುವು ನೀಡಲಾಗುವುದು. ಬಳಿಕ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/maharashtra-mandates-marathi-rs-1-lakh-fine-and-derecognition-warning-for-cbse-icse-schools-rav/articleshow-ayy4p9i"/>
        </item>
        <item>
            <title><![CDATA[Rahul Gandhi on Women's Reservation ಮಹಿಳಾ ಮೀಸಲು ವಿಷಯದಲ್ಲಿ  ಮೋದಿ, ಶಾ ಸುಳ್ಳು: ರಾಹುಲ್‌ ಗಾಂಧಿ]]></title>
            <link>https://kannada.asianetnews.com/india-news/rahul-gandhi-says-modi-and-shah-lied-regarding-the-womens-reservation-issue-rav/articleshow-d0qsv0m</link>
            <guid isPermaLink="true">https://kannada.asianetnews.com/india-news/rahul-gandhi-says-modi-and-shah-lied-regarding-the-womens-reservation-issue-rav/articleshow-d0qsv0m</guid>
            <pubDate>Sun, 19 Apr 2026 06:16:21 +0530</pubDate>
            <description><![CDATA[&lt;p&gt;ಮಹಿಳಾ ಮೀಸಲು ಮಸೂದೆಯ ಬಗ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದರ ಹಿಂದಿನ ನಿಜವಾದ ಉದ್ದೇಶ ಕ್ಷೇತ್ರ ಮರುವಿಂಗಡಣೆ ಸಂಚು. ಆದರೆ, ವಿಪಕ್ಷಗಳು ಒಗ್ಗಟ್ಟಾಗಿ ಬಿಜೆಪಿಯ ಈ ದುಷ್ಟ ಯೋಜನೆಯನ್ನು ವಿಫಲಗೊಳಿಸಿವೆ ಎಂದು ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdkadn1gy9w8zatd4xdxjjy,imgname-rahul-gandhi-sparks-uproar-in-lok-sabha-jadugar-exposed-remark-triggers-political-storm-over-womens-bill-1776425449120.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಿಟಿಐ ಚೆನ್ನೈ (ಏ.19): &lt;/strong&gt;&lsquo;ಮಹಿಳಾ ಮೀಸಲು (ತಿದ್ದುಪಡಿ) ಮಸೂದೆ ಅಂಗೀಕರಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರಕ್ಕೆ ಸುಳ್ಳು ಹೇಳಿದ್ದಾರೆ. ಅಂತಹ ಹೇಳಿಕೆಯ ಹಿಂದೆ ದೇಶದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಮತ್ತು ರಾಜ್ಯಗಳನ್ನು ದುರ್ಬಲಗೊಳಿಸುವ ಪೈಶಾಚಿಕ ಕಲ್ಪನೆ ಅಡಗಿತ್ತು. ಇಡೀ ವಿಪಕ್ಷ ಕೂಟವು ಬಂಡೆಯಂತೆ ನಿಂತು ಬಿಜೆಪಿಯ ದುಷ್ಟ ಯೋಜನೆಯನ್ನು ಸೋಲಿಸಿತು&rsquo; ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್&zwnj; ಗಾಂಧಿ ಬಿಜೆಪಿ ನಾಯಕರ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;p&gt;ತಮಿಳುನಾಡಿನ ಪೊನ್ನೇರಿ ಹಾಗೂ ರಾಣಿಪೇಟ್&zwnj;ನಲ್ಲಿ ಚುನಾವಣಾ ರ್&zwj;ಯಾಲಿಯಲ್ಲಿ ಮಾತನಾಡಿದ ರಾಹುಲ್&zwnj;, &lsquo;ಮಹಿಳಾ ಮೀಸಲಿನ ಹಿಂದೆ ಕ್ಷೇತ್ರ ಮರುವಿಂಗಡಣೆಯ ಸಂಚು ಅಡಗಿತ್ತು. ಭಾರತದ ಒಕ್ಕೂಟದಲ್ಲಿ ತಮಿಳುನಾಡಿನ ಪ್ರಾತಿನಿಧ್ಯವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿತ್ತು. ಬಿಜೆಪಿ ನಿನ್ನೆ ಮಾಡಲು ಪ್ರಯತ್ನಿಸಿದ್ದು ರಾಷ್ಟ್ರವಿರೋಧಿ ಕೃತ್ಯ ಮತ್ತು ಅದು ರಾಜ್ಯಗಳ ಒಕ್ಕೂಟಕ್ಕೆ ವಿರುದ್ಧವಾಗಿತ್ತು. ವಿಪಕ್ಷಗಳು ಬಂಡೆಯಂತೆ ನಿಂತು ಅವರ ದುಷ್ಟ ಯೋಚನೆಯನ್ನು ಸೋಲಿಸಿದ್ದೇವೆ&rsquo; ಎಂದರು.&lt;/p&gt;&lt;h2&gt;ತಮಿಳು ಸಂಸ್ಕೃತಿ ನಾಶಕ್ಕೆ ಯತ್ನ:&lt;/h2&gt;&lt;p&gt;&lsquo;ಪ್ರತಿ ರಾಜ್ಯದ ಸ್ಥಾನಗಳ ಸಂಖ್ಯೆಯನ್ನು ಬದಲಾಯಿಸಲು ಬಿಜೆಪಿಗರು ಬಯಸಿದ್ದರು. ದಕ್ಷಿಣ, ಈಶಾನ್ಯ ಮತ್ತು ಸಣ್ಣ ರಾಜ್ಯಗಳನ್ನು ದುರ್ಬಲಗೊಳಿಸಲು ಯೋಚಿಸಿದ್ದರು. ಬಿಜೆಪಿ ಭಾರತದ ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ದಾಳಿ ಮಾಡುತ್ತಿದೆ. ಅವರು ಗಡಿ ನಿರ್ಣಯವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದಾರೆ. ಅಸ್ಸಾಂ ಮತ್ತು ಜಮ್ಮು - ಕಾಶ್ಮೀರದ ಚುನಾವಣಾ ನಕ್ಷೆಯನ್ನು ಈಗಾಗಲೇ ಪರಿವರ್ತಿಸಿದ್ದಾರೆ. ದೇಶದ ಉಳಿದ ಭಾಗಗಳಿಗೂ ಅದನ್ನು ಮಾಡಲು ಬಯಸಿದ್ದರು. ಅವರ ಮುಖ್ಯ ಉದ್ದೇಶವೆಂದರೆ ನಿಮ್ಮ (ತಮಿಳು) ಇತಿಹಾಸ, ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯದ ಮೇಲೆ ದಾಳಿ ಮಾಡುವುದು. ಪ್ರಧಾನಿ ಮೋದಿ ಸಂವಿಧಾನದ ಮೇಲೆ ದಾಳಿ ಮಾಡುವುದನ್ನು ಜನರು ಈಗಾಗಲೇ ನೋಡಿದ್ದಾರೆ&rsquo; ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;&lsquo;ಸಂವಿಧಾನದಲ್ಲಿ, ಭಾರತ ಎಂದರೆ ರಾಜ್ಯಗಳ ಒಕ್ಕೂಟ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಅಂದರೆ ಪ್ರತಿಯೊಂದು ರಾಜ್ಯಕ್ಕೂ ಧ್ವನಿ ಇರಬೇಕು. ತಮಿಳುನಾಡು ವಿಧಾನಸಭಾ ಚುನಾವಣೆಯು ಬಿಜೆಪಿ-ಆರ್&zwnj;ಎಸ್&zwnj;ಎಸ್ ತಮಿಳುನಾಡನ್ನು ವಶಪಡಿಸಿಕೊಳ್ಳುವುದನ್ನು ತಡೆಯುವುದಕ್ಕಾಗಿ ನಡೆಯುತ್ತಿದೆ&rsquo; ಎಂದರು.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/rahul-gandhi-says-modi-and-shah-lied-regarding-the-womens-reservation-issue-rav/articleshow-d0qsv0m"/>
        </item>
        <item>
            <title><![CDATA[Women's Bill: ಲೋಕಸಭೆಯಲ್ಲಿ ಮಸೂದೆ ಸೋಲಿಸಿ ಕಾಂಗ್ರೆಸ್‌ನಿಂದ ಭ್ರೂಣಹತ್ಯೆಯಂಥ ಪಾಪ ಕೃತ್ಯ: ಮೋದಿ ಗರಂ!]]></title>
            <link>https://kannada.asianetnews.com/india-news/by-defeating-women-s-bill-in-lok-sabha-congress-has-committed-a-sin-equivalent-to-foeticide-pm-modi-outraged-rav/articleshow-elav9m6</link>
            <guid isPermaLink="true">https://kannada.asianetnews.com/india-news/by-defeating-women-s-bill-in-lok-sabha-congress-has-committed-a-sin-equivalent-to-foeticide-pm-modi-outraged-rav/articleshow-elav9m6</guid>
            <pubDate>Sun, 19 Apr 2026 05:26:58 +0530</pubDate>
            <description><![CDATA[ಮಹಿಳಾ ಮೀಸಲು ಮಸೂದೆ ವಿಫಲಗೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೊಂದು ಭ್ರೂಣಹತ್ಯೆಗೆ ಸಮಾನವಾದ ಕೃತ್ಯ ಎಂದು ಬಣ್ಣಿಸಿದ ಅವರು, ಮಹಿಳಾ ಸಬಲೀಕರಣದ 'ನಾರಿ ಶಕ್ತಿ' ಮಹಾಯಜ್ಞವನ್ನು ಮುಂದುವರೆಸುವುದಾಗಿ ದೇಶಕ್ಕೆ ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpfxphc1vh2f0w6yqnv27qys,imgname-pm-modi-address-nation-tonight-8-30-pm-india-speech-national-announcement-political-update-news-1776503440769.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಿಟಿಐ ನವದೆಹಲಿ (ಏ.19): &lt;/strong&gt;&lsquo;ಮಹಿಳಾ ಮೀಸಲು (ಸಾಂವಿಧಾನಿಕ ತಿದ್ದುಪಡಿ) ಮಸೂದೆ ಅಂಗೀಕಾರಕ್ಕೆ ಸರ್ಕಾರ ಸಾಧ್ಯವಿರುವ ತನ್ನೆಲ್ಲಾ ಪ್ರಯತ್ನ ನಡೆಸಿದ ಹೊರತಾಗಿಯೂ ವಿಪಕ್ಷಗಳು ಅದನ್ನು ತಡೆಯುವ ಮೂಲಕ ಮಹಿಳೆಯರ ಕನಸುಗಳನ್ನು ಕರುಣೆ ಇಲ್ಲದೇ ಪುಡಿಗಟ್ಟಿದವು. ಇದು ಭ್ರೂಣಹತ್ಯೆಗೆ ಸಮ. ಆದರೆ ಮಹಿಳಾ ಸಬಲೀಕರಣ ಮಾಡಿಯೇ ಸಿದ್ಧ&rsquo; ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಗುಡುಗಿದ್ದಾರೆ.&lt;/p&gt;&lt;p&gt;ಜತೆಗೆ, &lsquo;ಮಹಿಳೆಯರ ಸಬಲೀಕರಣದ ಗುರಿ ಹೊಂದಿರುವ ನಾರಿ ಶಕ್ತಿ ಉಪಕ್ರಮವು ಒಂದು ಮಹಾಯಜ್ಞ. ನಮ್ಮ ಪ್ರಯತ್ನ ನಿಲ್ಲುವುದಿಲ್ಲ, ಕುಗ್ಗುವುದಿಲ್ಲ. ನಮ್ಮ ಆಂತಃಶಕ್ತಿ ಶಕ್ತಿ ಅಜೇಯವಾಗಿದೆ. ಇನ್ನಷ್ಟು ಅವಕಾಶಗಳು ನಮ್ಮ ಮುಂದೆ ಬರಲಿವೆ&rsquo; ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಶುಕ್ರವಾರ ಲೋಕಸಭೆಯಲ್ಲಿ ಮಹಿಳಾ ಮೀಸಲು ತಿದ್ದುಪಡಿ ವಿಧೇಯಕಕ್ಕೆ ಸೋಲಾದ ಬೆನ್ನಲ್ಲೇ ಶನಿವಾರ ರಾತ್ರಿ 8:30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರಮುಖ ವಿಪಕ್ಷಗಳಾದ ಕಾಂಗ್ರೆಸ್&zwnj;, ಡಿಎಂಕೆ, ಟಿಎಂಸಿ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದಕ್ಕೂ ಮುನ್ನ ಸಂಪುಟ ಸಭೆ ಹಾಗೂ ತಮಿಳುನಾಡಿನ ಚುನಾವಣಾ ರ್&zwj;ಯಾಲಿಯಲ್ಲೂ ಪ್ರಹಾರ ಮಾಡಿದರು.&lt;/p&gt;&lt;h2&gt;ಮೋದಿ ಹೇಳಿದ್ದೇನು?:&lt;/h2&gt;&lt;p&gt;ಮಹಿಳಾ ಮೀಸಲು ತಿದ್ದುಪಡಿ ಮಸೂದೆಗೆ ಸೋಲುಣಿಸಿದ ವಿಪಕ್ಷಗಳ ಕ್ರಮವನ್ನು ಭ್ರೂಣಹತ್ಯೆ ಎಂದು ಬಣ್ಣಿಸಿದ ಮೋದಿ, &rsquo;ಈ ವಂಚನೆಗಾಗಿ ಮಹಿಳೆಯರು ವಿಪಕ್ಷಗಳನ್ನು ಕಠಿಣವಾಗಿ ಶಿಕ್ಷಿಸಲಿದ್ದಾರೆ. ಶೇ.66ರಷ್ಟು ಮತ ಪಡೆಯುವಲ್ಲಿ ಸರ್ಕಾರ ವಿಫಲವಾಗಿರಬಹುದು, ಆದರೆ ನಾರಿಶಕ್ತಿಯ ಶೇ.100ರಷ್ಟು ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದೆ&rsquo; ಎಂದು ಹೇಳಿದರು.&lt;/p&gt;&lt;p&gt;&lsquo;ಸ್ವಾರ್ಥದ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್&zwnj;, ಡಿಎಂಕೆ, ಟಿಎಂಸಿ ಮತ್ತು ಸಮಾಜವಾದಿಯಂಥ ಪಕ್ಷಗಳು ದೇಶದ ಮಹಿಳೆಯರ ಹಿತಾಸಕ್ತಿಯನ್ನು ಬಲಿಗೊಟ್ಟು, ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ಸರ್ಕಾರದ ಯತ್ನವನ್ನು ವಿಫಲಗೊಳಿಸಿದವು. ವಿಪಕ್ಷಗಳ ಇಂಥ ಪ್ರಯತ್ನಕ್ಕೆ ನಾನು ದೇಶದ ಎಲ್ಲಾ ಮಹಿಳೆಯರ ಕ್ಷಮೆ ಕೋರುತ್ತೇನೆ&rsquo; ಎಂದು ಹೇಳಿದರು.&lt;/p&gt;&lt;p&gt;&lt;strong&gt;ಮಹಿಳೆಯರ ಕನಸುಗಳು ಭಗ್ನ:&lt;/strong&gt;&lt;/p&gt;&lt;p&gt;&lsquo;ಮಹಿಳೆಯರಿಗೆ ಮೀಸಲು ನೀಡಲು ರೂಪಿಸಲಾಗಿರುವ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ವಿರೋಧಿಸುವ ಮೂಲಕ ವಿಪಕ್ಷಗಳು, ಮಹಿಳೆಯರ ಅಧಿಕಾರವನ್ನು ಲಘುವಾಗಿ ಪರಿಗಣಿಸಿವೆ. ಭಾರತೀಯ ಮಹಿಳೆಯರ ಪ್ರಯಾಣಕ್ಕೆ ಹೇಗೆ ಅಡ್ಡಿ ಮಾಡಲಾಗಿದೆ ಎಂಬುದನ್ನು ಇಂದು ದೇಶದ ಪ್ರತಿಯೊಬ್ಬ ನಾಗರಿಕರೂ ವೀಕ್ಷಿಸಿದ್ದಾರೆ. ದೇಶದ ಮಹಿಳೆಯರ ಕನಸುಗಳನ್ನು ಅತ್ಯಂತ ನಿರ್ದಾಕ್ಷಿಣ್ಯವಾಗಿ ಹೊಸಕಿಹಾಕಲಾಗಿದೆ. ವಿಧೇಯಕ ಅಂಗೀಕಾರದ ವಿಷಯದಲ್ಲಿ ನಾವು ಸಾಕಷ್ಟು ಪ್ರಯತ್ನ ಪಟ್ಟ ಹೊರತಾಗಿಯೂ ಅದರಲ್ಲಿ ಯಶಸ್ಸು ಕಾಣಲಾಗಲಿಲ್ಲ&rsquo; ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ಇದೇ ವೇಳೆ ಶುಕ್ರವಾರ ಲೋಕಸಭೆಯಲ್ಲಿ ವಿಧೇಯಕಕ್ಕೆ ಸೋಲಾದ ಬಳಿಕ ವಿಪಕ್ಷಗಳ ಸಂಭ್ರಮಾಚರಣೆ ಬಗ್ಗೆ ಕಿಡಿಕಾರಿದ ಪ್ರಧಾನಿ ಮೋದಿ, &lsquo;ಕಾಂಗ್ರೆಸ್, ಟಿಎಂಸಿ, ಡಿಎಂಕೆ ಪಕ್ಷಗಳು ತಮ್ಮ ಸ್ವಾರ್ಥದ ರಾಜಕೀಯವನ್ನು ಹೇಗೆ ಸಂಭ್ರಮಿಸಿದವು ಎಂಬುದನ್ನು ಇಡೀ ದೇಶದ ಮಹಿಳೆಯರು ವೀಕ್ಷಿಸಿದ್ದಾರೆ. ಅವರ ಬಣ್ಣ ಇದೀಗ ಬಯಲಾಗಿದೆ. ಮಹಿಳಾ ಮೀಸಲು ವಿರೋಧಿಸುವ ಮೂಲಕ ವಿಪಕ್ಷಗಳು ಅಪರಾಧ ಎಸಗಿವೆ. ಇದಕ್ಕೆ ಅವರು ಖಂಡಿತವಾಗಿಯೂ ಶಿಕ್ಷೆ ಅನುಭವಿಸಲಿದ್ದಾರೆ. ವಿಧೇಯಕಕ್ಕೆ ಸೋಲುಣಿಸುವ ಮೂಲಕ ವಿಪಕ್ಷಗಳು ನಮ್ಮ ಸಂವಿಧಾನವನ್ನು ಅವಮಾನಿಸಿದ್ದಾರೆ&rsquo; ಎಂದು ಗುಡುಗಿದರು.&lt;/p&gt;&lt;p&gt;&lt;strong&gt;ಕುಟುಂಬವಾದಕ್ಕೆ ಕುಟುಕು:&lt;/strong&gt;&lt;/p&gt;&lt;p&gt;&lsquo;ಯಾರಿಂದಲೂ ಏನನ್ನೂ ಕಸಿದುಕೊಳ್ಳದೆಯೇ, ಮಹಿಳೆಯರಿಗೆ ಸಬಲೀಕರಣದ ರೆಕ್ಕೆಗಳನ್ನು ಕಲ್ಪಿಸುವುದು ವಿಧೇಯಕದ ಉದ್ದೇಶವಾಗಿತ್ತು. ಈ ಹಿಂದೆ ತಾನು ಮಾಡಿದ ತಪ್ಪನ್ನು ಕಾಂಗ್ರೆಸ್&zwnj; ತಿದ್ದಿಕೊಳ್ಳುತ್ತದೆ ಎಂದು ನಾನು ಎಣಿಸಿದ್ದೆ. ಆದರೆ ಅವರು ತಮಗೆ ಸಿಕ್ಕ ಅವಕಾಶವನ್ನು ಕೈಚೆಲ್ಲಿದರು. ಕುಟುಂಬಗಳೇ ಮುನ್ನಡೆಸುವ ರಾಜಕೀಯ ಪಕ್ಷಗಳು, ಬೇರೆ ಮಹಿಳೆಯರು ರಾಜಕೀಯದಲ್ಲಿ ಮುಂದೆ ಬರುವುದನ್ನು ಬಯಸುವುದಿಲ್ಲ. ಏಕೆಂದರೆ ಅಂಥ ಬೆಳವಣಿಗೆ ಸ್ವಾರ್ಥದ ರಾಜಕೀಯಕ್ಕೆ ಕೊನೆ ಹಾಡಬಹುದು ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ&rsquo; ಎಂದು ಹೆಸರು ಹೇಳದೆಯೇ ನಾಲ್ಕೂ ಪ್ರಮುಖ ವಿಪಕ್ಷಗಳ ವಿರುದ್ಧ ಹರಿಹಾಯ್ದರು.&lt;/p&gt;&lt;p&gt;ಇದೇ ವೇಳೆ ಕಾಂಗ್ರೆಸ್&zwnj; ವಿಭಜಕ ರಾಜಕೀಯ ನೀತಿ ಅನುಸರಿಸುತ್ತಿದೆ ಎಂದು ದೂರಿದ ಮೋದಿ, &lsquo;ವಿಧೇಯಕವು ಉತ್ತರ- ದಕ್ಷಿಣವನ್ನು ವಿಭಜಿಸುತ್ತದೆ ಎಂಬ ಸುಳ್ಳು ಆರೋಪವನ್ನು ವಿಪಕ್ಷ ಮಾಡಿತು. ಮಹಿಳೆ ಯಾವುದನ್ನು ಬೇಕಾದರೂ ಮರೆಯಬಲ್ಲಳು; ಆದರೆ ತನಗೆ ಆದ ಅವಮಾನವನ್ನು ಎಂದಿಗೂ ಸಹಿಸಲಾರಳು. ಇದೀಗ ಕಾಂಗ್ರೆಸ್&zwnj; ಮತ್ತು ಅದರ ಮಿತ್ರಪಕ್ಷಗಳು ಮಾಡಿದ ಅವಮಾನವು ಎಂದೆಂದಿಗೂ ಮಹಿಳೆಯ ಹೃದಯದಲ್ಲಿ ಹಾಗೆಯೇ ಉಳಿದುಕೊಂಡಿರುತ್ತದೆ&rsquo; ಎಂದು ಚಾಟಿ ಬೀಸಿದರು.&lt;/p&gt;&lt;p&gt;&lt;strong&gt;ನಾರಿ ಶಕ್ತಿ ಉಪಕ್ರಮ ಮಹಾಯಜ್ಞ:&lt;/strong&gt;&lt;/p&gt;&lt;p&gt;&lsquo;21ನೇ ಶತಮಾನದಲ್ಲಿ ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿರುವ ನಾರಿ ಶಕ್ತಿ ಉಪಕ್ರಮವು ಮಹಾಯಜ್ಞ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಯನ್ನು ಹರಡುತ್ತಿವೆ. ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ದಾರಿತಪ್ಪಿಸುವ ನಿರೂಪಣೆಗಳನ್ನು ಬಳಸುತ್ತಿವೆ. ಇಂದು ನನ್ನ ದೇಶದ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳು... ನೀವೆಲ್ಲರೂ ದುಃಖಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಾನು ಕೂಡ ನಿಮ್ಮ ದುಃಖದಲ್ಲಿ ಭಾಗಿಯಾಗಿದ್ದೇನೆ. ಆದರೆ ನಮ್ಮ ಪ್ರಯತ್ನ ನಿಲ್ಲುವುದಿಲ್ಲ, ನಮ್ಮ ಪ್ರಯತ್ನ ಕುಗ್ಗುವುದಿಲ್ಲ, ನಮ್ಮ ಆಂತರಿಕ ಶಕ್ತಿ ಅಜೇಯವಾಗಿದೆ. ಹೆಚ್ಚಿನ ಅವಕಾಶಗಳು ನಮ್ಮ ಮುಂದೆ ಬರಲಿವೆ&rsquo; ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಕಾಂಗ್ರೆಸ್&zwnj; ಸುಧಾರಣಾ ವಿರೋಧಿ:&lt;/strong&gt;&lt;/p&gt;&lt;p&gt;&lsquo;ನಾರಿ ಶಕ್ತಿ ವಂದನಾ ಅಧಿನಿಯಮವು, ಈ ಕಾಲದ ಅಗತ್ಯವಾಗಿತ್ತು. ಜೊತೆಗೆ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ನಡುವೆ ಸಮತೋಲಿತ ಸಬಲೀಕರಣದ ಪ್ರಾಮಾಣಿಕ ಪ್ರಯತ್ನವಾಗಿತ್ತು. ಆದರೆ ದೇಶವನ್ನು ಕಟ್ಟುವ ಮತ್ತು ದೇಶದ ಅಭ್ಯುದಯದ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್&zwnj; ಎಂದೆಂದಿಗೂ ವಿರೋಧಿಸಿಕೊಂಡೇ ಬಂದಿದೆ. ನಮ್ಮೊಂದಿಗೆ ಇತರ ಹಲವಾರು ದೇಶಗಳು ಸ್ವಾತಂತ್ರ್ಯವನ್ನು ಗಳಿಸಿದವು. ಹೆಚ್ಚಿನ ದೇಶಗಳು ನಮಗಿಂತ ಬಹಳ ಮುಂದೆ ಹೋಗಿವೆ. ಇದರ ಹಿಂದಿನ ಕಾರಣವೆಂದರೆ ಕಾಂಗ್ರೆಸ್ ಎಲ್ಲಾ ಸುಧಾರಣೆಗಳನ್ನು ನಿಲ್ಲಿಸಿತು&rsquo; ಎಂದು ಮೋದಿ ಟೀಕಿಸಿದರು.&lt;/p&gt;&lt;p&gt;&lsquo;ಲಟ್ಕಾನಾ, ಭಟ್ಕಾನಾ, ಅಟ್ಕಾನಾ&rsquo; (ತಡೆಗಳು, ಅಡ್ಡಿ, ತೊಂದರೆ) ಎಂಬುದು ಕಾಂಗ್ರೆಸ್ಸಿನ ತತ್ವ ಮತ್ತು ಕಾರ್ಯವಿಧಾನ. ಅದು ನೆರೆಯ ರಾಷ್ಟ್ರಗಳೊಂದಿಗಿನ ಗಡಿ ಸಮಸ್ಯೆಗಳನ್ನು ಸ್ಥಗಿತಗೊಳಿಸಿತು. ಪಾಕಿಸ್ತಾನದೊಂದಿಗಿನ ಜಲ ವಿವಾದಗಳನ್ನು ಸ್ಥಗಿತಗೊಳಿಸಿತು. 40 ವರ್ಷಗಳ ಕಾಲ ಒಬಿಸಿ ಮೀಸಲಾತಿ ನಿರ್ಧಾರವನ್ನು ಸ್ಥಗಿತಗೊಳಿಸಿತು. 40 ವರ್ಷಗಳ ಕಾಲ &lsquo;ಏಕ ಶ್ರೇಣಿ ಏಕ ಪಿಂಚಣಿ&rsquo;ಯನ್ನು ಸ್ಥಗಿತಗೊಳಿಸಿತು. ಕಾಂಗ್ರೆಸ್ಸಿನ ಈ ವರ್ತನೆ ಯಾವಾಗಲೂ ದೇಶಕ್ಕೆ ಹಾನಿ ಮಾಡಿದೆ. ಕಾಂಗ್ರೆಸ್ಸಿನ ಎಲ್ಲಾ ವಿರೋಧ, ನಿರ್ಣಯವಿಲ್ಲದಿರುವಿಕೆ ಮತ್ತು ವಂಚನೆಯಿಂದಾಗಿ ದೇಶವು ಸಂಕಷ್ಟಕ್ಕೆ ಸಿಲುಕಿದೆ. ಇಂದು ದೇಶ ಎದುರಿಸುತ್ತಿರುವ ಎಲ್ಲಾ ದೊಡ್ಡ ಸವಾಲುಗಳು ಕಾಂಗ್ರೆಸ್ಸಿನ ಈ ನಡವಳಿಕೆಯಿಂದ ಹುಟ್ಟಿಕೊಂಡಿವೆ&rsquo; ಎಂದು ಆಕ್ರೋಶಿಸಿದರು.&lt;/p&gt;&lt;p&gt;ಇದನ್ನು ಒಂದು ದೊಡ್ಡ ಸೈದ್ಧಾಂತಿಕ ಯುದ್ಧ ಎಂದು ಕರೆದ ಪ್ರಧಾನಿ, &lsquo;ಈ ಹೋರಾಟವು ಕೇವಲ ಕಾನೂನಿನ ಕುರಿತಾಗಿ ಇರುವಂಥದ್ದಲ್ಲ. ಬದಲಿಗೆ, ಕಾಂಗ್ರೆಸ್ಸಿನ ಸುಧಾರಣಾ ವಿರೋಧಿ ಮನಃಸ್ಥಿತಿಯ ಬಗ್ಗೆ ಇರುವಂಥದ್ದು. ದೇಶದ ಮಹಿಳೆಯರು ಕಾಂಗ್ರೆಸ್ಸಿನ ಈ ಮನಃಸ್ಥಿತಿಗೆ ಸೂಕ್ತ ಉತ್ತರ ನೀಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ&rsquo; ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/by-defeating-women-s-bill-in-lok-sabha-congress-has-committed-a-sin-equivalent-to-foeticide-pm-modi-outraged-rav/articleshow-elav9m6"/>
        </item>
        <item>
            <title><![CDATA[Women's reservation bill 2026: ದೇಶದ ಮಹಿಳೆಯರು ವಿಪಕ್ಷಗಳನ್ನು ಕ್ಷಮಿಸಲ್ಲ : ಹೆಚ್‌ಡಿಕೆ ಕಿಡಿ]]></title>
            <link>https://kannada.asianetnews.com/india-news/womens-reservation-bill-2026-women-will-not-forgive-the-opposition-sparks-hd-kumaraswamy-rav/articleshow-3626s8y</link>
            <guid isPermaLink="true">https://kannada.asianetnews.com/india-news/womens-reservation-bill-2026-women-will-not-forgive-the-opposition-sparks-hd-kumaraswamy-rav/articleshow-3626s8y</guid>
            <pubDate>Sun, 19 Apr 2026 05:11:48 +0530</pubDate>
            <description><![CDATA[&lt;p&gt;ಸಂಸತ್&zwnj;ನಲ್ಲಿ ಮಹಿಳಾ ಮೀಸಲು ಮಸೂದೆ ವಿಫಲಗೊಂಡಿದ್ದಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವೇಗೌಡರ ಕಾಲದಲ್ಲಿ ನಡೆದ ಘಟನೆಯನ್ನು ಸ್ಮರಿಸಿದ ಅವರು, ಕಾಂಗ್ರೆಸ್&zwnj;ನ ಮಹಿಳಾ ವಿರೋಧಿ ಮನಸ್ಥಿತಿಯನ್ನು ಟೀಕಿಸಿದ್ದಾರೆ&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjh4e3cpb1nh2cfx2c6c52gr,imgname-hd-kumaraswamy-1772249091477.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ ಏ(.19) :&lt;/strong&gt; ಸಂಸತ್&zwnj;ನಲ್ಲಿ ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಿದ ವಿಪಕ್ಷ ಕೂಟದ ಶಕ್ತಿಗಳನ್ನು ರಾಷ್ಟ್ರದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ. ಇದು ಮಾತೃಶಕ್ತಿಗೆ ಆಗಿರುವ ಅವಮಾನ. ಇದಕ್ಕೆ ಕಾರಣರಾದ ಎಲ್ಲರೂ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.&lt;/p&gt;&lt;p&gt;ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬೆಂಬಲ ಸಿಗದೆ ಮಹಿಳಾ ಮೀಸಲು ಮಸೂದೆ ಬಿದ್ದುಹೋದ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಎಚ್ಡಿಕೆ, ಕರಾಳ ಇತಿಹಾಸ ಮರುಕಳಿಸಿದೆ. ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ ಕೊಂಚವೂ ಬದಲಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಮತ್ತೊಮ್ಮೆ ಸಾಕ್ಷಿಯಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಅಂದು ಎಚ್.ಡಿ.ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರಕಾರವು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲು ನೀಡುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಸಂಸತ್ತಿನಲ್ಲಿ ಮಸೂದೆ ಮಂಡಿಸಿತ್ತು. ಅಂದು ಇದೇ ಕಾಂಗ್ರೆಸ್ ಮತ್ತು ಅದರ ಸಹಚರ ಶಕ್ತಿಗಳು ಆ ಪ್ರಯತ್ನವನ್ನು ಸಂಘಟಿತವಾಗಿ ವಿಫಲಗೊಳಿಸಿದ್ದವು. ಆವತ್ತು ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟಹೆಜ್ಜೆ ಇರಿಸಿದ್ದರು. ಪುನಾ ಅದೇ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸೇರಿ ಮೋದಿ ಅವರ ಪ್ರಯತ್ನಕ್ಕೆ ತಡೆಯೊಡ್ಡಿವೆ ಎಂದು ಅವರು ಕಿಡಿಕಾರಿದ್ದಾರೆ.&lt;/p&gt;&lt;p&gt;ರಾಷ್ಟ್ರದ ನಾರಿಶಕ್ತಿಗೆ ನನ್ನ ಮನವಿ ಇಷ್ಟೇ, ನಿಮಗೆ ನಿರಾಶೆ ಬೇಕಿಲ್ಲ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂದೊಂದು ದಿನ ನಿಮಗೆ ಅಗ್ರಮನ್ನಣೆ ಸಿಕ್ಕೇ ಸಿಗುತ್ತದೆ. 33% ಮಹಿಳಾ ಮೀಸಲು ಗುರಿ ಸಾಧಿಸುವುದು ಶತಸಿದ್ಧ ಎಂದು ಅವರು ಭರವಸೆ ನೀಡಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/womens-reservation-bill-2026-women-will-not-forgive-the-opposition-sparks-hd-kumaraswamy-rav/articleshow-3626s8y"/>
        </item>
        <item>
            <title><![CDATA[ನಾರಿಶಕ್ತಿ ವಂದನಾ ಮಸೂದೆಗೆ ಸೋಲು: ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ]]></title>
            <link>https://kannada.asianetnews.com/india-news/defeat-of-nari-shakti-vandana-bill-pm-narendra-modi-apologizes-to-women-of-the-country-mrq/articleshow-0ofuns5</link>
            <guid isPermaLink="true">https://kannada.asianetnews.com/india-news/defeat-of-nari-shakti-vandana-bill-pm-narendra-modi-apologizes-to-women-of-the-country-mrq/articleshow-0ofuns5</guid>
            <pubDate>Sat, 18 Apr 2026 21:15:28 +0530</pubDate>
            <description><![CDATA[&lt;p&gt;ಲೋಕಸಭೆಯಲ್ಲಿ ನಾರಿಶಕ್ತಿ ವಂದನಾ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ್ದಾರೆ. ಮಸೂದೆ ವಿಫಲವಾಗಲು ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿಪಕ್ಷಗಳೇ ಕಾರಣ ಎಂದು ಆರೋಪಿಸಿದ ಅವರು, ವಿಪಕ್ಷಗಳು ನಾರಿಶಕ್ತಿಗೆ ಅವಮಾನ ಮಾಡಿವೆ ಎಂದು ವಾಗ್ದಾಳಿ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfxphc1vh2f0w6yqnv27qys,imgname-pm-modi-address-nation-tonight-8-30-pm-india-speech-national-announcement-political-update-news-1776503440769.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ನಾರಿಶಕ್ತಿ ವಂದನಾ ಬಿಲ್ ಮಂಡನೆಯಾಗದ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಆರಂಭದಲ್ಲಿಯೇ ಲೋಕಸಭೆಯಲ್ಲಿ ನಾರಿ ಶಕ್ತಿ ವಂದನಾ ಮಸೂದೆ ಫೇಲ್ ಆಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದರು. ಶನಿವಾರ ಲೋಕಸಭೆಯಲ್ಲಿ ನಡೆದ ಘಟನೆಯನ್ನು ನೋಡಿ ನನಗೆ ವೈಯಕ್ತಿಕವಾಗಿ ದುಃಖವಾಯ್ತು. ಮಸೂದೆ ಅಂಗೀಕಾರವಾಗಕ್ಕೆ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಸೇರಿದಂತೆ ವಿಪಕ್ಷಗಳು ಚಪ್ಪಾಳೆ ತಟ್ಟುವ ಮೂಲಕ ದೇಶದ ಮಹಿಳೆಯರನ್ನು ಅವಮಾನಿಸಿವೆ. ನಾರಿಶಕ್ತಿಗೆ ಕಾಂಗ್ರೆಸ್ ಮತ್ತು ಡಿಎಂಕೆ ಅವಮಾನ ಮಾಡಿವೆ. ನಾರಿಶಕ್ತಿ ಮಸೂದೆ ಮಂಡನೆಯಾಗದ್ದಕ್ಕೆ ವಿಪಕ್ಷಗಳು ಸಂಭ್ರಮಿಸುತ್ತಿವೆ ಎಂದು ಪ್ರಧಾನಿಗಳು ವಾಗ್ದಾಳಿ ನಡೆಸಿದರು&lt;/p&gt;&lt;p&gt;21ನೇ ಶತಮಾನದ ಮಹಿಳೆಯರು ಪ್ರತಿಯೊಂದು ಘಟನೆಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುದನ್ನು ವಿಪಕ್ಷಗಳು ಮರೆಯುತ್ತಿವೆ. ಮಸೂದೆಯನ್ನು ವಿರೋಧಿಸುವ ಮೂಲಕ ವಿಪಕ್ಷಗಳು ಮಹಾ ಪಾಪ ಮಾಡಿವೆ. ಈ ಮಸೂದೆ ಯಾರಿಂದಲೂ ಏನನ್ನು ಕಿತ್ತುಕೊಳ್ಳುತ್ತಿರಲಿಲ್ಲ. ಎಲ್ಲರಿಗೂ ಏನನ್ನಾದ್ರೂ ನೀಡುವ ಮಸೂದೆ ಇದಾಗಿತ್ತು. ವಿಪಕ್ಷಗಳು ಜೊತೆಯಾಗಿ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡು ನಾರಿಶಕ್ತಿಯನ್ನು ಕೊ*ಲೆ ಮಾಡಿವೆ.&lt;/p&gt;&lt;p&gt;2029ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿತ್ತು. ದೇಶದ ಅರ್ಧದಷ್ಟು ಜನಸಂಖ್ಯೆಯ ಹಕ್ಕುಗಳನ್ನು ಖಚಿತಪಡಿಸಲು ನಾವು ಮುಂದಾಗಿದ್ದೆವು. 'ನಾರೀಶಕ್ತಿ ವಂದನ್ ಅಧಿನಿಯಮ್' ಈ ಕಾಲಘಟ್ಟದ ಅವಶ್ಯಕತೆಯಾಗಿದೆ. ಎಲ್ಲಾ ಕ್ಷೇತ್ರಗಳಿಗೂ ಸಮಾನ ಶಕ್ತಿ ನೀಡಲು ನಾವು ಪ್ರಯತ್ನಿಸಿದೆವು ಎಂದು ಮೋದಿ ತಿಳಿಸಿದರು.&lt;/p&gt;&lt;p&gt;&quot;ಎಲ್ಲಾ ರಾಜ್ಯಗಳಿಗೂ ಒಂದೇ ಅನುಪಾತದಲ್ಲಿ ಶಕ್ತಿ ಹೆಚ್ಚಿಸುವ ಪ್ರಯತ್ನ ಇದಾಗಿತ್ತು. ಆದರೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಮಾಡಿದ್ದು ರಾಜಕೀಯ ಭ್ರೂಣಹತ್ಯೆ. ಈ ಭ್ರೂಣಹತ್ಯೆಯಲ್ಲಿ ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಕೂಡಾ ಅಪರಾಧಿಗಳು. ಈ ಮಸೂದೆ ಹಲವು ಬಾರಿ ವಿಫಲವಾಗಲು ಕಾಂಗ್ರೆಸ್ ಪಿತೂರಿ ನಡೆಸಿದೆ. ದೇಶವನ್ನು ದಾರಿ ತಪ್ಪಿಸಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಯತ್ನಿಸುತ್ತಿವೆ. ಕಾಂಗ್ರೆಸ್ ತನ್ನ ಹಳೆಯ ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಮಹಿಳೆಯರ ಪರ ನಿಲ್ಲುವ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಕಾಂಗ್ರೆಸ್ ಇಂದು ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸಿರುವ ಒಂದು ಪರಾವಲಂಬಿ ಜೀವಿ,&quot; ಎಂದು ಮೋದಿ ಟೀಕಿಸಿದರು.&lt;/p&gt;&lt;p&gt;ಕುಟುಂಬ ರಾಜಕಾರಣದ ಪಕ್ಷಗಳು ತಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರು ಬೆಳೆಯುವುದನ್ನು ಬಯಸುವುದಿಲ್ಲ. ದೇಶದ ಸ್ತ್ರೀಶಕ್ತಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳನ್ನು ಕ್ಷಮಿಸುವುದಿಲ್ಲ. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಈಗಾಗಲೇ ಅನೇಕ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ. ಎಲ್ಲಾ ರಾಜ್ಯಗಳ ಸೀಟುಗಳು ಒಂದೇ ಅನುಪಾತದಲ್ಲಿ ಹೆಚ್ಚಾಗಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಜೊತೆ ನಿಂತ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳ ಜನರಿಗೆ ಮೋಸ ಮಾಡಿವೆ ಎಂದು ಮೋದಿ ಆರೋಪಿಸಿದರು.&lt;/p&gt;&lt;p&gt;ತಮಿಳುನಾಡು ಮತ್ತು ಬಂಗಾಳದಲ್ಲಿ ಹೆಚ್ಚಿನ ಸಂಸದರು ಮತ್ತು ಶಾಸಕರನ್ನು ಆಯ್ಕೆ ಮಾಡುವ ಅವಕಾಶವಿತ್ತು. ಸಮಾಜವಾದಿ ಪಕ್ಷವು ಲೋಹಿಯಾವಾದವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ದೇಶದ ಅತಿದೊಡ್ಡ ಸುಧಾರಣಾ ವಿರೋಧಿ ಪಕ್ಷವೆಂದರೆ ಅದು ಕಾಂಗ್ರೆಸ್. 'ಸುಧಾರಣೆ' ಎಂಬ ಮಾತು ಕೇಳಿದ ತಕ್ಷಣ ಕಾಂಗ್ರೆಸ್ ಅಡ್ಡಿಪಡಿಸುತ್ತದೆ. ಮಾವೋವಾದವನ್ನು ಕೊನೆಗಾಣಿಸುವ ಪ್ರಯತ್ನಗಳನ್ನೂ ಕಾಂಗ್ರೆಸ್ ವಿರೋಧಿಸುತ್ತದೆ. ನಮ್ಮ ಈ ಹೋರಾಟ ಕಾಂಗ್ರೆಸ್&zwnj;ನ ನಕಾರಾತ್ಮಕ ರಾಜಕಾರಣದ ವಿರುದ್ಧವಾಗಿದೆ. ದೇಶದ ಎಲ್ಲಾ ಮಹಿಳೆಯರು ದುಃಖಿತರಾಗಿದ್ದಾರೆಂದು ನನಗೆ ತಿಳಿದಿದೆ, ನನಗೂ ದುಃಖವಾಗಿದೆ. ಮಸೂದೆಗೆ ಶೇ. 66ರಷ್ಟು ಮತಗಳು ಸಿಗಲಿಲ್ಲ, ಆದರೆ ಶೇ. 100ರಷ್ಟು ಮಹಿಳೆಯರು ನಮ್ಮೊಂದಿಗಿದ್ದಾರೆ ಎಂಬುದು ನನಗೆ ಗೊತ್ತು. ಮತ್ತೊಮ್ಮೆ ಅವಕಾಶ ಸಿಗಲಿದೆ, ಈ ಪ್ರಯತ್ನವನ್ನು ನಾವು ನಿಲ್ಲಿಸುವುದಿಲ್ಲ ಎಂದು ಮೋದಿ ಭರವಸೆ ನೀಡಿದರು.&lt;/p&gt;&lt;h2&gt;&lt;strong&gt;ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ&lt;/strong&gt;&lt;/h2&gt;&lt;p&gt;ನರೇಂದ್ರ ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯು ನಿನ್ನೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಸಿಗದೆ ಸೋಲು ಕಂಡಿದೆ. ಮಸೂದೆ ಪರವಾಗಿ 298 ಸಂಸದರು ಮತ ಹಾಕಿದರೆ, 230 ಮಂದಿ ವಿರೋಧಿಸಿದರು. ಸರ್ಕಾರದ ಎಲ್ಲಾ ಪ್ರಯತ್ನಗಳ ನಡುವೆಯೂ, ವಿರೋಧ ಪಕ್ಷಗಳು ಒಗ್ಗಟ್ಟಾಗಿ ನಿಂತು ತಿದ್ದುಪಡಿಯನ್ನು ವಿರೋಧಿಸಿದವು. '&lt;/p&gt;&lt;p&gt;&amp;nbsp;&lt;/p&gt;&lt;p&gt;#WATCH | In his address to the nation, Prime Minister Narendra Modi says, &quot;Today I'm here to discuss an important issue, especially for the women of this country. Every citizen of this country is witnessing how women's progress has stalled... Despite our best efforts, we haven't&hellip; pic.twitter.com/Y2s2hBUCz6&lt;/p&gt;&lt;p&gt;&mdash; ANI (@ANI) April 18, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/india-news/defeat-of-nari-shakti-vandana-bill-pm-narendra-modi-apologizes-to-women-of-the-country-mrq/articleshow-0ofuns5"/>
        </item>
        <item>
            <title><![CDATA[ಲೆನ್ಸ್‌ಕಾರ್ಟ್ ನಂತರ, ಏರ್ ಇಂಡಿಯಾದ ಡ್ರೆಸ್ ಕೋಡ್ ವೈರಲ್; ಬಿಂದಿ-ಸಿಂದೂರ ಹಚ್ಚುವಂತಿಲ್ಲ]]></title>
            <link>https://kannada.asianetnews.com/gallery/india-news/after-lenskart-air-india-faces-backlash-for-westernized-cabin-crew-guidelines-5uq428q</link>
            <guid isPermaLink="true">https://kannada.asianetnews.com/gallery/india-news/after-lenskart-air-india-faces-backlash-for-westernized-cabin-crew-guidelines-5uq428q</guid>
            <pubDate>Sat, 18 Apr 2026 18:39:59 +0530</pubDate>
            <description><![CDATA[&lt;p&gt;Air India bindi tilak ban: ಏರ್ ಇಂಡಿಯಾದ ಡ್ರೆಸ್ ಪಾಲಿಸಿಯೂ ವೈರಲ್ ಆಗುತ್ತಿದ್ದು, ಇದರಲ್ಲಿ ಸಿಂದೂರ, ಬಿಂದಿ ಮತ್ತು ಕಂಕಣ ದಾರ ಧರಿಸುವುದನ್ನು ನಿಷೇಧಿಸಲಾಗಿದೆ. ಏರ್ ಇಂಡಿಯಾದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpgb0n2c6kq0e76fg778m0s8,imgname-thumbnail---2026-04-18t182857.121-1776517403723.jpg" type="image/jpeg" height="390" width="690"/>
            <content:encoded><![CDATA[&lt;p&gt;Air India bindi tilak ban: ಏರ್ ಇಂಡಿಯಾದ ಡ್ರೆಸ್ ಪಾಲಿಸಿಯೂ ವೈರಲ್ ಆಗುತ್ತಿದ್ದು, ಇದರಲ್ಲಿ ಸಿಂದೂರ, ಬಿಂದಿ ಮತ್ತು ಕಂಕಣ ದಾರ ಧರಿಸುವುದನ್ನು ನಿಷೇಧಿಸಲಾಗಿದೆ. ಏರ್ ಇಂಡಿಯಾದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;img&gt;&lt;p&gt;ಲೆನ್ಸ್&zwnj;ಕಾರ್ಟ್&zwnj;ಗೆ ಸಂಬಂಧಿಸಿದ ಡ್ರೆಸ್ ಕೋಡ್ ವಿವಾದ ಇನ್ನೂ ತಣ್ಣಗಾಗುವ ಮೊದಲೇ, ಈಗ ಏರ್ ಇಂಡಿಯಾದ ಗ್ರೂಮಿಂಗ್ ಪಾಲಿಸಿ (ಅಲಂಕಾರದ ನಿಯಮ) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ. ಐವೇರ್ ಕಂಪನಿಯಾದ ಲೆನ್ಸ್&zwnj;ಕಾರ್ಟ್ ತಿಲಕ ಮತ್ತು ಕಂಕಣ ದಾರ ಧರಿಸುವುದನ್ನು ನಿಷೇಧಿಸಿ, ಹಿಜಾಬ್ ಧರಿಸಲು ಅನುಮತಿ ನೀಡಿತ್ತು.&lt;/p&gt;&lt;img&gt;&lt;p&gt;ಈಗ ಏರ್ ಇಂಡಿಯಾದ ಕ್ಯಾಬಿನ್ ಕ್ರೂಗೆ ಸಂಬಂಧಿಸಿದ ನಿಯಮಗಳು ವೈರಲ್ ಆಗುತ್ತಿದ್ದು, ಇದರಲ್ಲಿ ಡ್ಯೂಟಿಯ ಸಮಯದಲ್ಲಿ ಬಿಂದಿ ಮತ್ತು ಸಿಂದೂರ ಹಚ್ಚದಂತೆ ಸೂಚಿಸಲಾಗಿದೆ. ಈ ವಿಷಯವು ಇಂಟರ್ನೆಟ್&zwnj;ನಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿದೆ. ಕೆಲವು ಜನರು ಇದನ್ನು International Standards ಎಂದು ಕರೆಯುತ್ತಿದ್ದರೆ, ಅನೇಕ ಬಳಕೆದಾರರು ಇದನ್ನು ಸಾಂಸ್ಕೃತಿಕ ಗುರುತಿಗೆ ಧಕ್ಕೆ ಎಂದು ನೋಡುತ್ತಿದ್ದಾರೆ. ಇಂತಹ ಸರಣಿ ಪ್ರಕರಣಗಳು ಕಾರ್ಪೊರೇಟ್ ಡ್ರೆಸ್ ಕೋಡ್ ಮತ್ತು ಧಾರ್ಮಿಕ ಸ್ವಾತಂತ್ರ್ಯದ ನಡುವಿನ ಸಮತೋಲನದ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿವೆ.&lt;/p&gt;&lt;img&gt;&lt;p&gt;ಸೋಷಿಯಲ್ ಮೀಡಿಯಾ ಪ್ಲಾಟ್&zwnj;ಫಾರ್ಮ್ ಎಕ್ಸ್ (X) ನಲ್ಲಿ @pranavmahajan ಹೆಸರಿನ ಬಳಕೆದಾರರೊಬ್ಬರು ಎರಡು ಸ್ಕ್ರೀನ್&zwnj;ಶಾಟ್&zwnj;ಗಳನ್ನು ಪೋಸ್ಟ್ ಮಾಡಿ, &quot;ಈ ಸಮಸ್ಯೆ ತುಂಬಾ ಆಳವಾಗಿರುವಂತೆ ತೋರುತ್ತಿದೆ. ಇಲ್ಲಿ ಏರ್ ಇಂಡಿಯಾದ ಕ್ಯಾಬಿನ್ ಕ್ರೂ ಹ್ಯಾಂಡ್&zwnj;ಬುಕ್&zwnj;ನ ಕೆಲವು ಫೋಟೋಗಳಿವೆ. ಬಿಂದಿ, ಸಿಂದೂರ, ತಿಲಕ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಅವರು ಇಷ್ಟು ನಿರ್ಲಜ್ಜವಾಗಿ ಇದನ್ನು ಏಕೆ ಮಾಡುತ್ತಿದ್ದಾರೆ?&quot; ಎಂದು ಕ್ಯಾಪ್ಶನ್ ಬರೆದಿದ್ದಾರೆ.&lt;/p&gt;&lt;img&gt;&lt;p&gt;ಈ ವಿಷಯ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಕೆಲವು ಜನರು ಇದನ್ನು ಸಾಂಸ್ಕೃತಿಕ ಗುರುತನ್ನು ಹತ್ತಿಕ್ಕುವ ಕ್ರಮ ಎಂದು ಕರೆದರೆ, ಇನ್ನು ಕೆಲವು ಬಳಕೆದಾರರು ಇಂತಹ ನಿಯಮಗಳು ಕಾರ್ಪೊರೇಟ್ ಜಗತ್ತಿನಲ್ಲಿ ಸಾಮಾನ್ಯ ಎಂದು ಹೇಳಿದ್ದಾರೆ. ಮತ್ತೆ ಕೆಲವು ಜನರ ಪ್ರಕಾರ, ಅಂತರಾಷ್ಟ್ರೀಯ ಮಾನದಂಡಗಳ ಹೆಸರಿನಲ್ಲಿ ಭಾರತೀಯ ಸಂಪ್ರದಾಯಗಳನ್ನು ನಿರ್ಲಕ್ಷಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ಏರ್ ಇಂಡಿಯಾ ಈ ಹಿಂದೆಯೇ ತನ್ನ ಗ್ರೂಮಿಂಗ್ ನಿಯಮಗಳನ್ನು 'ಅಂತರಾಷ್ಟ್ರೀಯ ಮಾನದಂಡಗಳ' ಪ್ರಕಾರ ರೂಪಿಸಲಾಗಿದೆ ಎಂದು ಹೇಳಿತ್ತು, ವಿಶೇಷವಾಗಿ ಟಾಟಾ ಗ್ರೂಪ್ ಸಂಸ್ಥೆಯನ್ನು ವಹಿಸಿಕೊಂಡ ನಂತರ ಈ ಬದಲಾವಣೆಗಳನ್ನು ಮಾಡಲಾಗಿದೆ. ಆದಾಗ್ಯೂ, ಸೋಷಿಯಲ್ ಮೀಡಿಯಾದಲ್ಲಿ ಅನೇಕ ಜನರು ಈ ಮಾತನ್ನು ಒಪ್ಪುತ್ತಿಲ್ಲ. ಈ ನಿಯಮಗಳು ಪಾಶ್ಚಾತ್ಯ ಆಲೋಚನೆಗಳಿಂದ ಪ್ರಭಾವಿತವಾಗಿವೆ ಎಂದು ಅವರು ಹೇಳುತ್ತಿದ್ದಾರೆ. ಕೆಲವು ಬಳಕೆದಾರರು ಇತರ ದೇಶಗಳ ಏರ್&zwnj;ಲೈನ್ಸ್&zwnj;ಗಳ ಉದಾಹರಣೆ ನೀಡಿ, ಅಲ್ಲಿ ಸಿಬ್ಬಂದಿಗೆ ತಮ್ಮ ಧಾರ್ಮಿಕ ಅಥವಾ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ಹೆಚ್ಚಿನ ಸ್ವಾತಂತ್ರ್ಯವಿದೆ ಎಂದು ವಾದಿಸಿದ್ದಾರೆ.&lt;/p&gt;&lt;p&gt;It appears that this problem runs much deeper.Here are some pictures from the Air India Cabin Crew Handbook. Bindi, Sindoor, Tilak etc not allowed.Why are they doing this so blatantly?#SocietyFromStreet pic.twitter.com/uqVRbXBwwF&lt;/p&gt;&lt;p&gt;&mdash; Pranav Mahajan (@pranavmahajan) April 18, 2026&lt;/p&gt;]]></content:encoded>
            <category>india-news</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/india-news/after-lenskart-air-india-faces-backlash-for-westernized-cabin-crew-guidelines-5uq428q"/>
        </item>
        <item>
            <title><![CDATA[ಮೂಗಿನೊಳಗೆ ಸಿಲುಕಿದ ಯುವತಿ ಮೂಗುತಿ;  ಅಗ್ನಿಶಾಮಕದಳದ ಸಿಬ್ಬಂದಿಯಿಂದ ಯಶಸ್ವಿ ಆಪರೇಷನ್!]]></title>
            <link>https://kannada.asianetnews.com/india-news/firefighters-rescue-21-year-old-young-woman-after-nose-stud-gets-lodged-inside-her-nose-in-pattimattom-keralam-mrq/articleshow-vyormwa</link>
            <guid isPermaLink="true">https://kannada.asianetnews.com/india-news/firefighters-rescue-21-year-old-young-woman-after-nose-stud-gets-lodged-inside-her-nose-in-pattimattom-keralam-mrq/articleshow-vyormwa</guid>
            <pubDate>Sat, 18 Apr 2026 18:21:23 +0530</pubDate>
            <description><![CDATA[ಪಟ್ಟಮಟ್ಟಂ ನಿವಾಸಿ ಯುವತಿಯೊಬ್ಬರ ಮೂಗುತಿ ಮೂಗಿನೊಳಗೆ ಆಳವಾಗಿ ಸಿಲುಕಿಕೊಂಡು ಆತಂಕ ಸೃಷ್ಟಿಸಿತ್ತು. ಕುಟುಂಬದ ಪ್ರಯತ್ನ ವಿಫಲವಾದಾಗ, ಅಗ್ನಿಶಾಮಕ ದಳದ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಮೂಗುತಿಯನ್ನು ಸುರಕ್ಷಿತವಾಗಿ ಹೊರತೆಗೆದು ಯುವತಿಯನ್ನು ರಕ್ಷಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpga8jkw1jfb4xmy6tk448sk,imgname-fire-force-rescues-21-year-old-woman-after-nose-ring-gets-stuck-inside-her-nose-in-pattimattom-1776441873748-1776516614780.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂಪುರಂ:&lt;/strong&gt; ಯುವತಿಯೊಬ್ಬರು ತಾವು ಹಾಕಿಕೊಂಡಿದ್ದ ಮೂಗುತಿಯನ್ನು ತೆಗೆಯಲು ಹೋಗಿ, ಅದು ಮೂಗಿನ ಒಳಗೆ ಸಿಲುಕಿಕೊಂಡಿತ್ತು. ಆರಂಭದಲ್ಲಿ ಯುವತಿಯೇ ಮೂಗುತಿಯನ್ನು ಹೊರಗೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ತನ್ನಿಂದ ಸಾಧ್ಯವಾಗದಾಗ ಯವತಿ ಕುಟುಂಬಸ್ಥರ ಸಹಾಯ ಕೇಳಿದ್ದಾಳೆ. ಕುಟುಂಬಸ್ಥರಿಂದಲೂ ಮೂಗುತಿ ಹೊರಗೆ ತೆಗೆಯಲು ಸಾಧ್ಯವಾಗಿಲ್. ಇದರಿಂದಾಗಿ ಯುವತಿ ಕುಟುಂಬಸ್ಥರು ಆತಂಕಗೊಂಡಿದ್ದರು. ಪಟ್ಟಮಟ್ಟಂ ನಿವಾಸಿಯಾದ 21 ವರ್ಷದ ಯುವತಿಗೆ ಈ ಸಮಸ್ಯೆ ಎದುರಾಗಿತ್ತು. ಅಗ್ನಿಶಾಮಕ ದಳ ಸಿಬ್ಬಂದಿಯಿಂದಾಗಿ ಯುವತಿ ನಿಟ್ಟುಸಿರು ಬಿಟ್ಟಿದ್ದಾಳೆ.&lt;/p&gt;&lt;p&gt;ಮೂಗುತಿಯ ಹೆಡ್ ಭಾಗವು ಮೂಗಿನ ತೂತಿನೊಳಗೆ ಆಳವಾಗಿ ಇಳಿದು, ಹೊರಗಿನಿಂದ ಕಾಣದಷ್ಟು ಒಳಗೆ ಸೇರಿಕೊಂಡಿತ್ತು. ಮನೆಯವರು ಬಹಳ ಹೊತ್ತು ಪ್ರಯತ್ನಿಸಿದರೂ ಮೂಗುತಿಯನ್ನು ಹೊರತೆಗೆಯಲು ಆಗಲಿಲ್ಲ. ಪ್ರಯತ್ನ ಮುಂದುವರಿಸಿದಂತೆ ಯುವತಿಗೆ ನೋವು ಮತ್ತು ಕಿರಿಕಿರಿ ಹೆಚ್ಚಾಗಿತ್ತು.&lt;/p&gt;&lt;h2&gt;&lt;strong&gt;ಅಗ್ನಿಶಾಮಕ ಠಾಣೆಗೆ ದೌಡು&lt;/strong&gt;&lt;/h2&gt;&lt;p&gt;ಬೇರೆ ದಾರಿ ಕಾಣದೇ, ರಾತ್ರಿ 7:30ರ ಸುಮಾರಿಗೆ ಯುವತಿ ಮತ್ತು ಆಕೆಯ ಕುಟುಂಬಸ್ಥರು ನೇರವಾಗಿ ಪಟ್ಟಮಟ್ಟಂ ಅಗ್ನಿಶಾಮಕ ಠಾಣೆಗೆ ಬಂದು ಸಹಾಯ ಕೇಳಿದ್ದಾರೆ. ತಕ್ಷಣವೇ, ಸ್ಟೇಷನ್ ಆಫೀಸರ್ ಎನ್.ಎಚ್. ಅಸೈನಾರ್ ಮತ್ತು ಸೀನಿಯರ್ ಫೈರ್ &amp;amp; ರೆಸ್ಕ್ಯೂ ಆಫೀಸರ್ ಶ್ರೀ ರಂಜಿತ್ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ಶುರುಮಾಡಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮತ್ತೆ ನೇಪಥ್ಯಕ್ಕೆ, ಕನಸು ಹಳಿ ತಪ್ಪಿತೇ?&lt;/strong&gt;&lt;/p&gt;&lt;h3&gt;&lt;strong&gt;ಟ್ಯೂಸರ್ ಮತ್ತು ಕತ್ತರಿ ಬಳಸಿ ಮೂಗುತಿಯ ಲಾಕ್ ಓಪನ್&lt;/strong&gt;&lt;/h3&gt;&lt;p&gt;ಅಗ್ನಿಶಾಮಕದ ದಳದ ಸಿಬ್ಬಂದಿ ತುಂಬಾನೇ ಜಾಗರೂಕತೆಯಿಂದ ಟ್ಯೂಸರ್ ಮತ್ತು ಕತ್ತರಿ ಬಳಸಿ ಮೂಗುತಿಯ ಲಾಕ್ ತೆಗೆದು, ಅದನ್ನು ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ತಂಡದಲ್ಲಿ ಫೈರ್ &amp;amp; ರೆಸ್ಕ್ಯೂ ಆಫೀಸರ್&zwnj;ಗಳಾದ ವಿಜಿತ್ ಕುಮಾರ್, ಜಯೇಶ್, ಅನು ಹಾಗೂ ಹೋಮ್ ಗಾರ್ಡ್&zwnj;ಗಳಾದ ಪ್ರದೀಪ್ ಮತ್ತು ರಾಮಚಂದ್ರನ್ ಕೂಡ ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮನೇಲಿ ತರಕಾರಿ ಇಲ್ಲದಿರುವಾಗ ಮಾಡಿ ಘಮ ಘಮಿಸುವ ರುಚಿಯಾದ ಜೀರೋ ವೆಜಿಟೇಬಲ್ ಬಿರಿಯಾನಿ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;&quot;ನಾನೇ ಕಾನೂನುಬದ್ಧ ಪತ್ನಿ, ಶವ ನನ್ನ ವಶಕ್ಕೆ ಬೇಕು&quot;ಸತ್ತ ಮೇಲೂ ಮುಗಿಯದ ಪತ್ನಿಯರ ಜಗಳ: ಹನುಮಂತಪ್ಪನ ಶವಕ್ಕಾಗಿ ಎರಡು ದಿನ ನಡೆದ ಹೈಡ್ರಾಮಾ#Shivamogga #Husband #Wife #Relationship https://t.co/A4fwPKr9hQ&lt;/p&gt;&lt;p&gt;&mdash; Asianet Suvarna News (@AsianetNewsSN) April 18, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/india-news/firefighters-rescue-21-year-old-young-woman-after-nose-stud-gets-lodged-inside-her-nose-in-pattimattom-keralam-mrq/articleshow-vyormwa"/>
        </item>
        <item>
            <title><![CDATA[ಆಗ ಬಾಲಿವುಡ್​ ನಟಿ, ಈಗ ಜರ್ಮನ್​ ಬ್ಯೂಟಿ: ವಿರಾಟ್​ ಕೊಹ್ಲಿ ರಾತ್ರಿಯ 'Like' ಸೃಷ್ಟಿಸಿದೆ ಹಲ್​ಚಲ್​]]></title>
            <link>https://kannada.asianetnews.com/sports/german-model-breaks-silence-on-virat-kohli-liking-then-unliking-her-pic-suc/articleshow-imiqqg4</link>
            <guid isPermaLink="true">https://kannada.asianetnews.com/sports/german-model-breaks-silence-on-virat-kohli-liking-then-unliking-her-pic-suc/articleshow-imiqqg4</guid>
            <pubDate>Sat, 18 Apr 2026 17:54:01 +0530</pubDate>
            <description><![CDATA[ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಇನ್&zwnj;ಸ್ಟಾಗ್ರಾಮ್ ಖಾತೆಯು ಜರ್ಮನ್ ಪ್ರಭಾವಿಯೊಬ್ಬರ ಫೋಟೋವನ್ನು ಲೈಕ್ ಮಾಡಿ, ನಂತರ ಅನ್&zwnj;ಲೈಕ್ ಮಾಡಿದ್ದು ರಾತ್ರೋರಾತ್ರಿ ವೈರಲ್ ಆಗಿದೆ. ಈ ಹಿಂದೆ ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದಾಗಲೂ ಇದೇ ರೀತಿ ವಿವಾದ ಸೃಷ್ಟಿಯಾಗಿತ್ತು. ಈ ಘಟನೆಯ ಬಗ್ಗೆ ಸ್ವತಃ ಜರ್ಮನ್ ನಟಿ ಬೇಸರ ವ್ಯಕ್ತಪಡಿಸಿದ್ದು, ನೆಟ್ಟಿಗರು ಕೊಹ್ಲಿಯನ್ನು ಟ್ರೋಲ್ ಮಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpg8qph3vre4fgdc955eb4jj,imgname-virat-kohli-and-german-influencer-lizlaz-1776515013155.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರಿಕೆಟಿಗ ವಿರಾಟ್​ ಕೊಹ್ಲಿ, ಇದೀಗ ಲೈಕ್​ನಿಂದ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಇದೇನು ಉದ್ದೇಶಪೂರ್ವಕವೋ, ಆಕಸ್ಮಿಕವೋ ಗೊತ್ತಿಲ್ಲ, ಒಟ್ಟಿನಲ್ಲಿ ಬ್ಯೂಟಿಗಳ ಫೋಟೋಗೆ ಲೈಕ್​ ಮಾಡಿ, ಕೊನೆಗೆ ಅದು ವೈರಲ್​ ಆಗುತ್ತಲೇ ಸಮಜಾಯಿಷಿ ಕೊಡುವುದು ನಡೆದೇ ಇದೆ. 2025 ರಲ್ಲಿ, ನಟಿ ಮತ್ತು ಪ್ರಭಾವಿ ಅವ್ನೀತ್ ಕೌರ್ ಅವರ ಫೋಟೋವನ್ನು ಅವರ ಖಾತೆಯು ಲೈಕ್ ಮಾಡಿದಾಗಲೂ ಭಾರಿ ಸದ್ದು ಆಗಿತ್ತು. ಇದು ವ್ಯಾಪಕ ಚರ್ಚೆಯನ್ನು ಉಂಟು ಹಾಕಿತ್ತು. ಆ ಸಮಯದಲ್ಲಿ, ಕೊಹ್ಲಿ ಸ್ಪಷ್ಟೀಕರಣವನ್ನು ನೀಡುತ್ತಾ, &quot;ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಾಗಿ ಸಂವಹನವನ್ನು ನೋಂದಾಯಿಸಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡಬಾರದೆಂದು ನಾನು ವಿನಂತಿಸುತ್ತೇನೆ. ನಿಮ್ಮ ತಿಳಿವಳಿಕೆಗೆ ಧನ್ಯವಾದಗಳು ಎಂದಿದ್ದರು.&lt;/p&gt;&lt;h2&gt;&lt;strong&gt;ಜರ್ಮನ್​ ಬ್ಯೂಟಿ&lt;/strong&gt;&lt;/h2&gt;&lt;p&gt;ಆದರೆ ಬಾಲಿವುಡ್​ ನಟಿಯ ಬಳಿಕ, ಈಗ ಸೀದಾ ಲೈಕ್​ ಮಾಡಿದ್ದು ಜರ್ಮನಿಯ ಬ್ಯೂಟಿಗೆ. ಹಾಗೆಂದು ಫೋಟೋ ನೋಡಿ ಲೈಕ್​ ಮಾಡಲೇಬಾರದು ಎಂದೇನಿಲ್ಲ. ಆದರೆ, ಸೆಲೆಬ್ರಿಟಿಗಳು ಇಂಥ ವಿಷ್ಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ರಾತ್ರಿಯ ಸಮಯದಲ್ಲಿ ಮೊಬೈಲ್​ ಸ್ಕ್ರೋಲ್​ ಮಾಡುವಾಗ ಬ್ಯೂಟಿಗಳ ಫೋಟೋ ಕಂಡರೆ ಅಕಸ್ಮಾತ್​ ಲೈಕ್ ಮೇಲೆ ಕೈಹೋಗದಂತೆ ನೋಡಿಕೊಳ್ಳಬೇಕು. ಆದರೆ ಈ ಬಾರಿಯೂ ಒಂದು ಎಡವಟ್ಟೋ, ಉದ್ದೇಶಪೂರ್ವಕವೋ ಗೊತ್ತಿಲ್ಲ. ಜರ್ಮನ್ ಪ್ರಭಾವಿ ಲಿಜ್&zwnj;ಲಾಜ್ ಅವರ ಪೋಸ್ಟ್&zwnj;ಗೆ ವಿರಾಟ್ ಕೊಹ್ಲಿ ಅವರ ಇನ್&zwnj;ಸ್ಟಾಗ್ರಾಮ್ ಪ್ರೊಫೈಲ್&zwnj;ನಿಂದ 'ಲೈಕ್' ಬಂದಿದೆ.&lt;/p&gt;&lt;h3&gt;&lt;strong&gt;ರಾತ್ರೋರಾತ್ರಿ ವೈರಲ್​&lt;/strong&gt;&lt;/h3&gt;&lt;p&gt;ಕೊಹ್ಲಿ ಅಂಥೋರು ಲೈಕ್​ ಮಾಡಿದ್ರೆ ಕೇಳಬೇಕಾ, ಅವರು ಅದನ್ನು ಯಾವಾಗಲಾದ್ರೂ ಡಿಲೀಟ್​ ಮಾಡಬಹುದು ಅರ್ಥಾತ್​ ಅನ್​ಲೈಕ್​ ಮಾಡಬಹುದು ಎಂದುಕೊಂಡೇ, ಜಾಣ ನೆಟ್ಟಿಗರು ಅದರ ಸ್ಕ್ರೀನ್​ಷಾಟ್​ ತೆಗೆದು ಷೇರ್ ಮಾಡಿದ್ದೇ ಮಾಡಿದ್ದು. ಕೊನೆಗೆ ಆಗಿದ್ದೂ ಹಾಗೆ, ರಾತ್ರಿ ಲೈಕ್​ ಮಾಡಿದ ಕೊಹ್ಲಿ, ಬೆಳಿಗ್ಗೆ ಅನ್​ಲೈಕ್​ ಮಾಡಿಬಿಟ್ಟಿದ್ದರು. ಇದರ ಬಗ್ಗೆ ಖುದ್ದು ನಟಿಯೇ ತುಂಬಾ ನೊಂದು ನುಡಿದಿದ್ದಾರೆ. ಕೊಹ್ಲಿ ನನ್ನ ಫೋಟೋ ಲೈಕ್​ ಮಾಡಿದಾಗ ತುಂಬಾ ಖುಷಿಯಾಯಿತು. ಆದರೆ ಆ ಖುಷಿ ಬೆಳಗಾಗುವುದರಲ್ಲಿ ಇರಲಿಲ್ಲ. ಏಕೆಂದರೆ ಅವರು ಅನ್​ಲೈಕ್​ ಮಾಡಿಬಿಟ್ಟಿದ್ದರು ಎಂದು ನೊಂದು ನುಡಿದಿದ್ದಾರೆ.&lt;/p&gt;&lt;h3&gt;&lt;strong&gt;ತುಂಬಾ ಬೇಸರ&lt;/strong&gt;&lt;/h3&gt;&lt;p&gt;ಅದು ಹೇಗೆ ಇಷ್ಟು ದೊಡ್ಡ ಸುದ್ದಿಯಾಯಿತು ಎಂದು ನನಗೆ ತಿಳಿದಿಲ್ಲ. ಏಕೆಂದರೆ ನನಗೆ ಅವರ ಬಗ್ಗೆ ಸ್ವಲ್ಪ ಬೇಸರವಾಯಿತು. ಜನರು ಅದನ್ನು ಇಷ್ಟು ಬೇಗ ಹೇಗೆ ಗಮನಿಸಿದರೋ ಗೊತ್ತಿಲ್ಲ. ಅದನ್ನು ನೋಡಿಯೇ ಬಹುಶಃ ಅವರು unlike ಮಾಡಿರಬಹುದು. ಅದೇನೇ ಇದ್ದರೂ ನನ್ನ ಫೋಟೋಗೆ ಲೈಕ್​ ಮಾಡಿದ್ದಕ್ಕೆ, ಅದಕ್ಕೆ ಕೃತಜ್ಞನಾಗಿದ್ದೇನೆ ಮತ್ತು ಅವರ ಬೆಂಬಲವನ್ನು ಪ್ರಶಂಸಿಸುತ್ತೇನೆ ಎಂದಿದ್ದಾರೆ. ರಾತ್ರಿ ಬೆಳಗಾಗುತ್ತಲೇ ಹಲವಾರು ಸಂದೇಶಗಳು ಬಂದಿದ್ದವು. ನನಗೆ ಶಾಕ್​ ಆಗಿ ಹೋಯ್ತು. ಕೆಲವರು ಕೆಟ್ಟದ್ದಾಗಿ ಮಾತನಾಡಿದ್ದು ನೋಡಿ ಬೇಸರವಾಯ್ತು ಎಂದಿದ್ದಾರೆ ನಟಿ.&lt;/p&gt;&lt;p&gt;ಎರಡು ಮಕ್ಕಳಾದ ಮೇಲೆ ಅನುಷ್ಕಾ ಮೇಲೆ ಬೇಸರ ಆಗಿರಬೇಕು, ಅದಕ್ಕೆ ರಾತ್ರಿಯೆಲ್ಲಾ ಬ್ಯೂಟಿಗಳ ಫೋಟೋ ನೋಡ್ತಾ ಇರ್ತಾರೆ ಎಂದು ಕೆಲವರು ಹೇಳಿದ್ರೆ, ಈ ಬಾರಿ ಹಿಂದಿನದ್ದೇ ಸುಳ್ಳನ್ನು ಹೇಳಬೇಡಿ, ಹೊಸ ಸುಳ್ಳು ಹೇಳಿ. ಇಲ್ಲದಿದ್ದರೆ ಯಾರೂ ನಂಬಲ್ಲ ಎಂದಿದ್ದಾರೆ ನೆಟ್ಟಿಗರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/sports/german-model-breaks-silence-on-virat-kohli-liking-then-unliking-her-pic-suc/articleshow-imiqqg4"/>
        </item>
        <item>
            <title><![CDATA[ಪಾದಯಾತ್ರೆಯಲ್ಲಿ ದೀದೀ ಜೀವ ಬಾಯಿಗೆ ತಂದ ಅಭಿಮಾನಿ: ಹೃದಯ ಅರೆಕ್ಷಣ ಸ್ತಬ್ಧ- Video Viral]]></title>
            <link>https://kannada.asianetnews.com/politics/viral-shocking-reaction-mamata-banerjees-fan-falls-at-her-feet-amid-during-padyatra-suc/articleshow-evzmadt</link>
            <guid isPermaLink="true">https://kannada.asianetnews.com/politics/viral-shocking-reaction-mamata-banerjees-fan-falls-at-her-feet-amid-during-padyatra-suc/articleshow-evzmadt</guid>
            <pubDate>Sat, 18 Apr 2026 16:47:14 +0530</pubDate>
            <description><![CDATA[ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಾದಯಾತ್ರೆಯಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಅಭಿಮಾನಿಯೊಬ್ಬರು ದಿಢೀರನೆ ಅವರ ಕಾಲಿಗೆ ಬೀಳಲು ಬಂದಾಗ ದೀದಿ ಬೆಚ್ಚಿಬಿದ್ದಿದ್ದು, ಈ ಘಟನೆಯು ರಾಜಕೀಯ ನಾಯಕರ ಭದ್ರತೆಯ ಆತಂಕವನ್ನು ನೆನಪಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpg4x8rkbakrj5jpngm125st,imgname-mamata-banerjee-1776511001363.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಬಂಗಾಳದ ಚುನಾವಣೆ ಇದೇ ತಿಂಗಳು 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಇದಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ದೀದಿ ಎಂದೇ ಫೇಮಸ್​ ಆಗಿರೋ ಮಮತಾ ಬ್ಯಾನರ್ಜಿ ಅವರು ಸತತ ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಮೊದಲು ಮೇ 20, 2011 ರಂದು ಅಧಿಕಾರ ವಹಿಸಿಕೊಂಡರು ಮತ್ತು ನಂತರ 2016 ಮತ್ತು 2021 ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಮುನ್ನಡೆಸಿದರು. ಅವರು ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ. ಆದರೆ ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಳವನ್ನು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದೆ.&lt;/p&gt;&lt;h2&gt;&lt;strong&gt;ಕೋಟಿ ಭೇದಿಸ್ತಾರಾ ದೀದಿ&lt;/strong&gt;&lt;/h2&gt;&lt;p&gt;ದೀದಿಯ ಕೋಟೆಯನ್ನು ಭೇದಿಸುವಲ್ಲಿ ಮೋದಿ ಸಕ್ಸಸ್​ ಆಗ್ತಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲ. ಏಕೆಂದರೆ, ಪಶ್ಚಿಮ ಬಂಗಾಳ ಕೆಲವು ವರ್ಷಗಳಿಂದ ಇನ್ನಿಲ್ಲದಂತೆ ಹಿಂಸಾಚಾರ ಕಂಡಿದೆ. ಹಿಂದೂಗಳ ಮೇಲಿನ ದೌರ್ಜನ್ಯವನ್ನು ಅಲ್ಲಿದ್ದವರು ಸಹಿಸುತ್ತಿಲ್ಲ. ನುಸುಳುಕೋರರಿಗೆ ಆಶ್ರಯ ನೀಡಿದ್ದ ಮಮತಾ ಬ್ಯಾನರ್ಜಿಗೆ SIR ಶಾಕ್​ ಕೊಟ್ಟಿದೆ. ಲಕ್ಷಾಂತರ ಮಂದಿ ನುಸುಳುಕೋರರು ಗಡಿಪಾರಾಗಿದ್ದಾರೆ. ಇವರೆಲ್ಲರೂ ಮಮತಾಗೆ ವೋಟರ್ಸ್​ ಆಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಸಾಕಷ್ಟು ರಂಗೇರಿಸುತ್ತಿದೆ.&lt;/p&gt;&lt;h3&gt;&lt;strong&gt;ರೋಷ್​ ಷೋ ವೇಳೆ ಘಟನೆ&lt;/strong&gt;&lt;/h3&gt;&lt;p&gt;ಇದರ ನಡುವೆಯೇ ಮಮತಾ ಬ್ಯಾನರ್ಜಿ ಅವರ ಅಭಿಮಾನಿಯೊಬ್ಬ ರೋಡ್​ ಷೋ ವೇಳೆ ಅವರ ಜೀವವನ್ನೇ ಬಾಯಿಗೆ ತಂದುಬಿಟ್ಟಿದ್ದಾನೆ. ಅವನು ಮಾಡಿದ ಕೃತ್ಯಕ್ಕೆ ದೀದಿ ಹೃದಯ ಅರೆಕ್ಷಣ ಸ್ಟಾಪ್ ಆಗಿಹೋಯಿತು. ಇದರ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಮಮತಾ ಅವರು ಚುನಾವಣೆ ನಿಮಿತ್ತ ಪಾದಯಾತ್ರೆ ಕೈಗೊಂಡಿದ್ದರು. ಆಗ ಇದ್ದಕ್ಕಿಂತೆಯೇ ಅವರ ಅಭಿಮಾನಿಯೊಬ್ಬ ಮಿಂಚಿನ ವೇಗದಲ್ಲಿ ಅವರ ಕಾಲಿಗೆ ಬೀಳಲು ಬಂದಿದ್ದಾನೆ. ಮಮತಾ ಬಾಡಿಗಾರ್ಡ್​ ಆತನನ್ನು ಆಚೆಗೆ ಅಟ್ಟುವಷ್ಟರಲ್ಲಿಯೇ ಅದೆಲ್ಲಿಂದಲೋ ಜಿಗಿದು ಬಂದಿದ್ದಾನೆ ಆ ಅಭಿಮಾನಿ. ಆತ ಮಾಡಿದ ರೀತಿ ನೋಡಿ ಮಮತಾ ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ. ಹೃದಯದ ಮೇಲೆ ಕೈಯಿಟ್ಟು ಶಾಕ್​ ಆಗಿ ಹೋಗಿದ್ದಾರೆ.&lt;/p&gt;&lt;h3&gt;&lt;strong&gt;ಹಲವು ನಾಯಕರ ಸಾವು&lt;/strong&gt;&lt;/h3&gt;&lt;p&gt;ಇದಾಗಲೇ ಕೆಲವು ನಾಯಕರನ್ನು ಇದೇ ರೀತಿ ಬಾಂಬ್​ ಹಾಕಿ ಸಾಯಿಸಿದ್ದು ಬಹುಶಃ ದೀದಿಗೆ ನೆನಪಾಯಿತೋ ಏನೊ. ರಾಜೀವ್​ಗಾಂಧಿ ಅವರಿಗೆ ಹಾರ ಹಾಕುವ ಸಮಯದಲ್ಲಿ, ಇಂದಿರಾಗಾಂಧಿ ಅವರಿಗೆ ಖುದ್ದು ಅವರ ಅಂಗರಕ್ಷಕನೇ, ಗಾಂಧೀಜಿಗೆ ಇದೇ ರೀತಿ ಎದುರಿಗಿನಿಂದ ನಾಥೂರಾಮ್​ ಗೋಡ್ಸೆ ಸೇರಿದಂತೆ ಹಲವು ನಾಯಕರಿಗೆ ಇದೇ ರೀತಿ ಅಚಾನಕ್​ ಆಗಿ ಸಾಯಿಸಲಾಗಿತ್ತು. ಆದ್ದರಿಂದ ರಾಜಕೀಯ ನಾಯಕರು ಎಷ್ಟು ಮೈಯೆಲ್ಲಾ ಕಣ್ಣಾಗಿ ಇದ್ದರೂ ಕಷ್ಟವೇ. ಮೊನ್ನೆಯಷ್ಟೇ ತಮಿಳುನಾಡಿನಲ್ಲಿ ವಿಜಯ್​ ಅವರು ರೋಡ್​ಷೋ ಮಾಡುವಾಗ ಅವರ ಬಳಿ ಬಂದಿದ್ದ ಹೂವಿನ ಚಂಡನ್ನು ಬಾಂಬ್​ ಎಂದು ತಿಳಿದು ಬೆಚ್ಚಿಬಿದ್ದಿದ್ದರು. ಇದೇ ರೀತಿ ಈಗಲೂ ಆಗಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by truth. (@thetruth.india)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/politics/viral-shocking-reaction-mamata-banerjees-fan-falls-at-her-feet-amid-during-padyatra-suc/articleshow-evzmadt"/>
        </item>
        <item>
            <title><![CDATA[ನಾನು ರಾಜಾ ಮಾನ್ಸಿಂಗ್! ಅಕ್ಬರನ ನಿಷ್ಠಾವಂತ ಸೈನಿಕ, ಶೀಲಾ ದೇವಿಯ ರಹಸ್ಯ ಗೊತ್ತು.. ಪುನರ್ಜನ್ಮದ ಕಥೆ ಹೇಳಿದ ಬಾಲಕ!]]></title>
            <link>https://kannada.asianetnews.com/india-news/rebirth-a-10-year-old-boys-shocking-claim-of-being-raja-man-singhs-soul-reborn/articleshow-l0y8xqv</link>
            <guid isPermaLink="true">https://kannada.asianetnews.com/india-news/rebirth-a-10-year-old-boys-shocking-claim-of-being-raja-man-singhs-soul-reborn/articleshow-l0y8xqv</guid>
            <pubDate>Sat, 18 Apr 2026 16:21:16 +0530</pubDate>
            <description><![CDATA[&lt;p&gt;&lt;strong&gt;Raja Man Singh rebirth: &lt;/strong&gt;ಪುನರ್ಜನ್ಮ ಎನ್ನುವುದು ಕೇವಲ ಕಲ್ಪನೆಯೇ ಅಥವಾ ನಿಜವೇ? ಬಾಲಕನೊಬ್ಬ ಶೀಲಾ ದೇವಿಯ ದೇವಸ್ಥಾನದ ರಹಸ್ಯಗಳನ್ನು ಬಿಚ್ಚಿಡುತ್ತಾ, ತಾನೇ ರಾಜ ಮಾನ್ ಸಿಂಗ್ ಎಂದು ಹೇಳುತ್ತಿರುವುದು ಜನರನ್ನು ದಂಗಾಗಿಸಿದೆ. ಆತನ ಮಾತು ಮತ್ತು ಇತಿಹಾಸದ ನಡುವೆ ಇರುವ ಆ ಬೆಚ್ಚಿಬೀಳಿಸುವ ಸಾಮ್ಯತೆಗಳೇನು? ಮುಂದೆ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpg3146twgg4mshakpgr5qx9,imgname-thumbnail---2026-04-18t161211.160-1776509030616.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪು&lt;/strong&gt;ನರ್ಜನ್ಮ ಎನ್ನುವುದು ಜಗತ್ತಿಗೆ ಇಂದಿಗೂ ಒಂದು ಬಿಡಿಸಲಾಗದ ರಹಸ್ಯ. ಕೆಲವೊಮ್ಮೆ ಸಣ್ಣ ಮಕ್ಕಳು ತಮ್ಮ ಹಿಂದಿನ ಜನ್ಮದ ಬಗ್ಗೆ ನೀಡುವ ಕುತೂಹಲಕಾರಿ ಮಾಹಿತಿಗಳು ವಿಜ್ಞಾನವನ್ನೇ ಬೆರಗುಗೊಳಿಸುತ್ತವೆ. ಇಂತಹದ್ದೇ ಒಂದು ಬೆಚ್ಚಿಬೀಳಿಸುವ ಘಟನೆ ಈಗ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕೇವಲ 10 ವರ್ಷದ ಬಾಲಕನೊಬ್ಬ, ತಾನು ಸುಮಾರು 400 ವರ್ಷಗಳ ಹಿಂದೆ ಆಳ್ವಿಕೆ ನಡೆಸಿದ ಆಮೀರ್&zwnj;ನ ಪ್ರಖ್ಯಾತ ರಾಜ ಮಾನ್ ಸಿಂಗ್ ಎಂದು ಪ್ರತಿಪಾದಿಸುತ್ತಿದ್ದು, ಇಡೀ ರಾಜ್ಯದಾದ್ಯಂತ ಭಾರಿ ಸಂಚಲನ ಮೂಡಿಸಿದ್ದಾನೆ.&lt;/p&gt;&lt;h2&gt;&lt;strong&gt;ಯಾರು ಈ ಬಾಲಕ ಮತ್ತು ಆತನ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಟೋಂಕ್ ಜಿಲ್ಲೆಯ ಜೈಕಮಾಬಾದ್ ಎಂಬ ಪುಟ್ಟ ಗ್ರಾಮದ ಕನ್ಹಾರಾಮ್ ಬೈರ್ವಾ ಎಂಬ 10 ವರ್ಷದ ಬಾಲಕ ಕಳೆದ ಮೂರು ವರ್ಷಗಳಿಂದ ತನ್ನ ಮನೆಯವರಲ್ಲಿ ವಿಚಿತ್ರವಾದ ಬೇಡಿಕೆಗಳನ್ನು ಇಡುತ್ತಿದ್ದಾನೆ. &quot;ನನಗೆ ನನ್ನ ಆಮೀರ್ ಕೋಟೆಗೆ ಹೋಗಬೇಕು, ನಾನು ಅಲ್ಲಿನ ರಾಜ&quot; ಎಂದು ಹಠ ಮಾಡುತ್ತಿದ್ದಾನೆ. ಮೊದಲಿಗೆ ಮನೆಯವರು ಇದನ್ನು ಮಗುವಿನಾಟ ಅಥವಾ ಕಲ್ಪನೆ ಎಂದು ಭಾವಿಸಿ ನಿರ್ಲಕ್ಷಿಸಿದ್ದರು. ಆದರೆ ಕಾಲ ಕಳೆದಂತೆ ಆತ ಹೇಳುತ್ತಿರುವ ಐತಿಹಾಸಿಕ ವಿಷಯಗಳು, ಯುದ್ಧದ ವಿವರಗಳು ಮತ್ತು ಆತನ ನಿಗೂಢ ವರ್ತನೆಯಲ್ಲಿನ ಬದಲಾವಣೆಗಳು ಈಗ ಎಲ್ಲರನ್ನೂ ದಂಗಾಗಿಸಿವೆ. ಈ ಹುಡುಗನ ಮಾತುಗಳು ಬರಿ ಕಥೆಯಲ್ಲ, ಬದಲಾಗಿ ಇತಿಹಾಸದ ಸತ್ಯಗಳೊಂದಿಗೆ ಅಚ್ಚರಿಯ ರೀತಿಯಲ್ಲಿ ತಾಳೆಯಾಗುತ್ತಿವೆ.&lt;/p&gt;&lt;p&gt;&lt;strong&gt;ಬಾಲಕನ ಬೆಚ್ಚಿಬೀಳಿಸುವ ದಾವೆಗಳು&lt;/strong&gt;ಕನ್ಹಾರಾಮ್ ಮಾಧ್ಯಮಗಳ ಮುಂದೆ ಮಾತನಾಡುತ್ತಾ ಅತ್ಯಂತ ಆತ್ಮವಿಶ್ವಾಸದಿಂದ ತನ್ನ ಹಿಂದಿನ ಜನ್ಮದ ಬಗ್ಗೆ ವಿವರಿಸಿದ್ದಾನೆ. &quot;ನನ್ನ ಹೆಸರು ರಾಜ ಮಾನ್ ಸಿಂಗ್, ನನಗೆ ಇಬ್ಬರು ಮುಖ್ಯ ರಾಣಿಯರು ಮತ್ತು ಮೂವರು ಸಹೋದರರಿದ್ದರು. ಅಷ್ಟೇ ಅಲ್ಲ, ಇಂದು ಜೈಪುರದಲ್ಲಿರುವ ವಿಶ್ವಪ್ರಸಿದ್ಧ ಸವಾಯಿ ಮಾನ್ ಸಿಂಗ್ ಆಸ್ಪತ್ರೆ ನನ್ನ ಹೆಸರಿನಲ್ಲೇ ಇದೆ&quot; ಎಂದು ಹೇಳುತ್ತಿದ್ದಾನೆ. 1589 ರಿಂದ 1614 ರವರೆಗೆ ಆಳ್ವಿಕೆ ನಡೆಸಿದ್ದ ರಾಜ ಮಾನ್ ಸಿಂಗ್ ಮೊಘಲ್ ಚಕ್ರವರ್ತಿ ಅಕ್ಬರ್&zwnj;ನ ಅತ್ಯಂತ ನಂಬಿಕಸ್ತ ಸೇನಾಪತಿಯಾಗಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿದೆ. ತಾನು ಹಳದಿಘಾಟಿ ಯುದ್ಧದಲ್ಲಿ ಮಹಾರಾಣಾ ಪ್ರತಾಪ್ ವಿರುದ್ಧ ನೇರವಾಗಿ ಹೋರಾಡಿದ್ದೆ ಎಂದು ಈ ಬಾಲಕ ನೆನಪಿಸಿಕೊಳ್ಳುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.&lt;/p&gt;&lt;h3&gt;&lt;strong&gt;ಶೀಲಾ ದೇವಿಯ ರಹಸ್ಯ ಮತ್ತು ಇತಿಹಾಸ&lt;/strong&gt;&lt;/h3&gt;&lt;p&gt;ಬಾಲಕ ಕನ್ಹಾರಾಮ್ ನೀಡುತ್ತಿರುವ ಮಾಹಿತಿಗಳ ಪೈಕಿ ಆಮೀರ್ ಕೋಟೆಯ ಶೀಲಾ ದೇವಿ ದೇವಸ್ಥಾನದ ವಿವರಗಳು ಅತಿ ಹೆಚ್ಚು ಆಶ್ಚರ್ಯ ಮೂಡಿಸಿವೆ. &quot;ನಾನೇ ಬಂಗಾಳದಿಂದ ಶೀಲಾ ದೇವಿಯ ಮೂರ್ತಿಯನ್ನು ತಂದಿದ್ದು, ಆಮೀರ್&zwnj;ನಲ್ಲಿ ಸ್ಥಾಪಿಸಿದ್ದು. ಅಲ್ಲಿನ ರಹಸ್ಯ ಕೋಣೆಯಲ್ಲಿ ಅಸಲಿ ಮೂರ್ತಿ ಇಂದಿಗೂ ಸುರಕ್ಷಿತವಾಗಿದೆ&quot; ಎಂದು ಆತ ಖಚಿತವಾಗಿ ಹೇಳುತ್ತಿದ್ದಾನೆ. ಇತಿಹಾಸದ ಪ್ರಕಾರವೂ ರಾಜ ಮಾನ್ ಸಿಂಗ್ ಬಂಗಾಳದ ರಾಜ ಕೇದಾರ್&zwnj;ನನ್ನು ಸೋಲಿಸಿ ಶೀಲಾ ದೇವಿಯ ಮೂರ್ತಿಯನ್ನು ತಂದಿದ್ದರು ಎಂಬುದು ಗಮನಾರ್ಹ. ದೇವಿಯ ಕುತ್ತಿಗೆ ಅಲ್ಪ ಓರೆಯಾಗಿರುವುದಕ್ಕೂ ಈ ಬಾಲಕ ಒಂದು ಕುತೂಹಲಕಾರಿ ಐತಿಹಾಸಿಕ ಕಥೆಯನ್ನು ವಿವರಿಸುತ್ತಿದ್ದಾನೆ.&lt;/p&gt;&lt;p&gt;&lt;strong&gt;ರಾಜವಂಶಸ್ಥನಂತೆ ಬಾಲಕನ ಜೀವನ&lt;/strong&gt;ಬಾಲಕನ ಕುಟುಂಬದವರು ಹೇಳುವಂತೆ ಕನ್ಹಾರಾಮ್ ಈಗ ಸಾಮಾನ್ಯ ಮಗುವಿನಂತೆ ಇರುತ್ತಿಲ್ಲ. ಆತನ ಆಹಾರ ಪದ್ಧತಿಯೇ ಬೇರೆಯಾಗಿದೆ. ಊಟದಲ್ಲಿ ಸಾಕಷ್ಟು ಪ್ರಮಾಣದ ತುಪ್ಪವಿಲ್ಲದೆ ಆತ ಆಹಾರ ಮುಟ್ಟುವುದೇ ಇಲ್ಲ. &quot;ನಾನು ರಾಜ, ನೀವು ಸಾಮಾನ್ಯ ಜನರು&quot; ಎಂದು ಹೇಳುತ್ತಾ ಮನೆಯವರ ಜೊತೆ ಕುಳಿತು ಊಟ ಮಾಡುವುದನ್ನೂ ನಿಲ್ಲಿಸಿದ್ದಾನೆ. ಆತನ ಮಾತು ಮತ್ತು ಕ್ರಿಯೆಗಳಲ್ಲಿ ಕ್ಷತ್ರಿಯ ರಾಜರ ಗತ್ತು ಮತ್ತು ಶೌರ್ಯದ ಛಾಯೆ ಕಾಣಿಸುತ್ತಿದೆ ಎಂದು ಆತನ ಮನೆಯವರು ಆತಂಕ ಹಾಗೂ ಅಚ್ಚರಿಯಿಂದ ಹೇಳುತ್ತಾರೆ. ಮಗುವಿನ ಈ ಅತೀಂದ್ರಿಯ ನೆನಪುಗಳು ನಿಜವೇ ಅಥವಾ ಮಾನಸಿಕ ಭ್ರಮೆಯೇ ಎಂಬ ಚರ್ಚೆ ಈಗ ಇತಿಹಾಸಕಾರರು ಮತ್ತು ಜನಸಾಮಾನ್ಯರ ನಡುವೆ ಕಿಡಿ ಹೊತ್ತಿಸಿದೆ.&lt;/p&gt;&lt;p&gt;मुझे आमेर जाना है,मेरा राजपाट संभालना है....:- पुनर्जन्म राजा मानसिंह pic.twitter.com/NSVv6AkbC2&lt;/p&gt;&lt;p&gt;&mdash; Mukesh मारवाड़ी  (@Mukeshbaitu) April 17, 2026&lt;/p&gt;]]></content:encoded>
            <category>india-news</category>
            <dc:creator>Ashwini HR</dc:creator>
            <atom:link href="https://kannada.asianetnews.com/india-news/rebirth-a-10-year-old-boys-shocking-claim-of-being-raja-man-singhs-soul-reborn/articleshow-l0y8xqv"/>
        </item>
        <item>
            <title><![CDATA[ಕೋವಿಡ್​ನಲ್ಲಿ ರೀಲ್ಸ್​ ನೋಡಿದ್ದೇ ಬದಲಾಗೋಯ್ತು ಬದುಕು: 21ನೇ ವಯಸ್ಸಲ್ಲಿ ಕೋಟಿ ಕೋಟಿ ಗಳಿಕೆ]]></title>
            <link>https://kannada.asianetnews.com/business/udaipurs-digvijay-singh-21-yrs-old-is-earning-crores-with-his-chocolate-business-suc/articleshow-dhpu98y</link>
            <guid isPermaLink="true">https://kannada.asianetnews.com/business/udaipurs-digvijay-singh-21-yrs-old-is-earning-crores-with-his-chocolate-business-suc/articleshow-dhpu98y</guid>
            <pubDate>Sat, 18 Apr 2026 15:58:03 +0530</pubDate>
            <description><![CDATA[ಕೋವಿಡ್ ಸಮಯದಲ್ಲಿ ರೀಲ್ಸ್ ನೋಡುತ್ತಾ ಕಾಲ ಕಳೆದ 16 ವರ್ಷದ ದಿಗ್ವಿಜಯ ಸಿಂಗ್, ಮನೆಯಲ್ಲಿಯೇ ಚಾಕಲೇಟ್ ತಯಾರಿಸಲು ಆರಂಭಿಸಿದರು. ಹವ್ಯಾಸವಾಗಿ ಶುರುವಾದ ಈ ಚಾಕಲೇಟ್ ತಯಾರಿಕೆ, ಇಂದು 'ಸಾರಮ್' ಎಂಬ ಬ್ರ್ಯಾಂಡ್&zwnj;ನಡಿಯಲ್ಲಿ ಕೋಟಿ ರೂಪಾಯಿ ವ್ಯವಹಾರವಾಗಿ ಬೆಳೆದು, ಅವರನ್ನು ಯುವ ಉದ್ಯಮಿಯನ್ನಾಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpg23j0j7gc2d21ysanp6zca,imgname-digvijaya-singh-1776508061714.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೋವಿಡ್​ ಎನ್ನೋ ಮಹಾಮಾರಿ 2019ರಿಂದ ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು ಈಗ ಇತಿಹಾಸ. ಆ ಮಹಾಮಾರಿಯಿಂದ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿಯಾದರೆ, ಸಂಪೂರ್ಣ ನಷ್ಟ ಅನುಭವಿಸಿ ಬೀದಿ ಪಾಲಾದವರೂ ಅಷ್ಟೇ ಮಂದಿ. ಐದಾರು ವರ್ಷಗಳ ಬಳಿಕವೂ ಇಂದಿಗೂ ಬಿಜಿನೆಸ್​ನಲ್ಲಿ ಸುಧಾರಿಸಿಕೊಳ್ಳಲು ಆಗದೇ ದಿಕ್ಕೆಟ್ಟವರೂ ಇದ್ದಾರೆ, ಅಂದು ಅನುಭವಿಸಿದ ನಷ್ಟದಿಂದ ಇನ್ನೂ ಚೇತರಿಸಿಕೊಳ್ಳದವರೂ ಇದ್ದಾರೆ. ಆದರೆ ಇದೇ ಮಹಾಮಾರಿ ಅದೆಷ್ಟೋ ಮಂದಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಕೈಯಲ್ಲಿ ಕಾಸಿಲ್ಲದವರನ್ನು ಲಕ್ಷಾಧೀಶ್ವರನ್ನಾಗಿಸಿದೆ, ಮನೆಯಲ್ಲಿ ಕುಳಿತು ಮೊಬೈಲ್​ ನೋಡ್ತಿರೋರಿಗೂ ಉತ್ತಮ ಆದಾಯ ಗಳಿಸಿಕೊಟ್ಟಿದೆ. ಅಂಥವರಲ್ಲಿ ಒಬ್ಬಾತ 16ರ ಬಾಲಕ ದಿಗ್ವಿಜಯ ಸಿಂಗ್​.&lt;/p&gt;&lt;h2&gt;&lt;strong&gt;ಕೋವಿಡ್​ನಲ್ಲಿ ರೀಲ್ಸ್​&lt;/strong&gt;&lt;/h2&gt;&lt;p&gt;16ನೇ ವಯಸ್ಸಿನಲ್ಲಿ ಕೋವಿಡ್​ ವೇಳೆ ರೀಲ್ಸ್ ನೋಡುತ್ತಾ ಕುಳಿತ ಈ ಬಾಲಕ ಈಗ 21ರ ತರುಣ. ಅದೇ ರೀಲ್ಸ್​ ಈತನ ಲೈಫ್​ ಚೇಂಜ್​ ಮಾಡಿದೆ. 21ನೇ ವಯಸ್ಸಿನಲ್ಲಿಯೇ ಕೋಟಿ ಕೋಟಿ ವ್ಯವಹಾರ ನಡೆಸುತ್ತಾ ದೊಡ್ಡ ಬಿಜಿನೆಸ್​ಮ್ಯಾನ್​ ಆಗಿದ್ದಾನೆ ಈ ಯುವಕ. ಇದೇನು ಸಿನಿಮಾನೋ, ಸೀರಿಯಲ್ಲೋ ಅಲ್ಲ, ರಿಯಲ್​ ಲೈಫ್​ನ ರೋಚಕ ಸ್ಟೋರಿ ಇದು. ಕೋವಿಡ್​ನಲ್ಲಿ ಈತನಿಗೆ ಸರಿಸುಮಾರು 16 ವರ್ಷ ವಯಸ್ಸು. ರಾಯಸ್ಥಾನದ ಉದಯಪುರದ ಈ ಬಾಲಕ ದಿಗ್ವಿಜಯ ಸಿಂಗ್​ ಎಲ್ಲರಂತೆ ಕಾಲ ಕಳೆಯಲು ಮೊಬೈಲ್​ ನೋಡುತ್ತಾ ಕುಳಿತ. ಅವನಿಗೆ ಕಂಡದ್ದು ಮನೆಯಲ್ಲಿಯೇ ಚಾಕಲೆಟ್​ ಮಾಡುವ ವಿಡಿಯೋ. ಇದನ್ನು ಬಹುತೇಕ ಎಲ್ಲರೂ ನೋಡಿಯೇ ಇರುತ್ತಾರೆ, ರೀಲ್ಸ್​ ನೋಡುವವರು, ಯುಟ್ಯೂಬ್ ನೋಡುವವರಿಗೆ ಮನೆಯಲ್ಲಿಯೇ ವಿವಿಧ ರೀತಿಯ ಆಹಾರ, ಚಾಕಲೇಟ್​ ತಯಾರಿಸುವ ವಿಡಿಯೋಗಳು ಕಂಡೇ ಇರುತ್ತವೆ. ಹೆಚ್ಚಿನವರು ಎಲ್ಲರೂ ಸ್ಕ್ರೋಲ್​ ಮಾಡಿ ಮುಂದಕ್ಕೆ ಹೋಗ್ತೇವೆ. ಆದರೆ ಬಾಲಕ ದಿಗ್ವಿಜಯ ಸಿಂಗ್​ ತಲೆಯಲ್ಲಿ ಹೊಳೆದದ್ದೇ ಬೇರೆ. ನಾನ್ಯಾಕೆ ಈ ಬಿಡುವಿನ ವೇಳೆಯನ್ನು ಇದಕ್ಕಾಗಿ ಬಳಸಿಕೊಳ್ಳಬಾರದು ಎಂದು ಯೋಚನೆ ಮಾಡಿದ.&lt;/p&gt;&lt;h3&gt;&lt;strong&gt;ಸುಮ್ಮನೇ ಚಾಕಲೆಟ್​ ಮಾಡಿದ&lt;/strong&gt;&lt;/h3&gt;&lt;p&gt;ಸುಮ್ಮನೇ ಮನೆಯಲ್ಲಿ ಆತ ಚಾಕಲೆಟ್​ ತಯಾರಿಕೆ ಆರಂಭಿಸಿದ. ಅದನ್ನೇನು ಆತ ಬಿಜಿನೆಸ್​​ ಸ್ಟಾರ್ಟ್​ ಮಾಡಬೇಕು ಎಂದು ಮಾಡಿದವನಲ್ಲ. ಸುಮ್ಮನೇ ಟ್ರೈ ಮಾಡಿದ ಅಷ್ಟೇ. ಅದನ್ನು ಟೇಸ್ಟ್​ ಮಾಡಿದ ಮನೆಯವರೆಲ್ಲರೂ ವ್ಹಾವ್​ ಸಕತ್​ ಟೇಸ್ಟಿಯಾಗಿದೆ ಅಂದರು. ಅದೇ ಖುಷಿಯಲ್ಲಿ ಆತ ಚಾಕಲೆಟ್​ ತಯಾರಿಸಿ ಫ್ರೆಂಡ್ಸ್​, ಕುಟುಂಬದ ಸದಸ್ಯರು, ನೆಂಟರಿಷ್ಟರು ಕ್ರಮೇಣ ನೆರೆಹೊರೆಯವರಿಗೂ ಕೊಡಲು ಶುರು ಮಾಡಿದಾಗ, ಎಲ್ಲರೂ ಅದನ್ನು ಕೊಂಡಾಡಿದ್ದೇ ಕೊಂಡಾಡಿದ್ದು.&lt;/p&gt;&lt;h3&gt;&lt;strong&gt;ಗಿಫ್ಟ್​ಪ್ಯಾಕ್​ ಮಾಡಿ ಕೊಟ್ಟ&lt;/strong&gt;&lt;/h3&gt;&lt;p&gt;ಈ ಪರಿಯ ಜನಪ್ರಿಯತೆ ಕಂಡ ಆ ಬಾಲಕನಿಗೆ ತಾನ್ಯಾಕೆ ಇದನ್ನು ಗಿಫ್ಟ್​ಪ್ಯಾಕ್​ ಮಾಡಿ ಮಾರಾಟ ಮಾಡಬಾರದು ಎನ್ನಿಸಿತು. ಮನೆಯವರ ಜೊತೆ ಚರ್ಚಿಸಿದ. ಅದು ದೀಪಾವಳಿಯ ಸಮಯ. ಹಾಗೆಯೇ ಚಾಕಲೆಟ್​ ಮಾಡಿ, ಪ್ಯಾಕ್​ ಮಾಡಿದ. ಆದರೆ ಮಾರಾಟ ಮಾಡುವುದು ಹೇಗೆ? ಯಾರಿಗೆ ಕೊಡುವುದು ಎಂದು ತಿಳಿಯಲಿಲ್ಲ. ಕೊನೆಗೆ ಅವನ ಮನೆಯ ಸಮೀಪದ ಕಾರಿನ ಷೋರೂಮ್​ನಲ್ಲಿ ಜನರನ್ನು ಸೆಳೆಯುವುದಕ್ಕಾಗಿ ಆಫರ್​ ಬಿಟ್ಟಿದ್ದರು. ಷೋರೂಮ್​ ಸಂಪರ್ಕಿಸಿದ ಬಾಲಕ, ಆ ಉಡುಗೊರೆ ಜೊತೆ, ಚಾಕೊಲೇಟ್&zwnj; ಪ್ಯಾಕ್​ ಅನ್ನೂ ನೀಡಲು ವಿನಂತಿಸಿ, ಅವರನ್ನು ಒಪ್ಪಿಸಿದ.ಅಷ್ಟೇ.&lt;/p&gt;&lt;h3&gt;&lt;strong&gt;ಕಾರಿನ ಷೋರೂಮ್​ನಲ್ಲಿ ಆರಂಭ&lt;/strong&gt;&lt;/h3&gt;&lt;p&gt;ಷೋರೂಮ್​ನವರು ಚಾಕಲೆಟ್​ ಟೇಸ್ಟ್​ ಮಾಡಿ ಅದಕ್ಕೆ ಮಾರು ಹೋಗಿ 2021 ರಲ್ಲಿ, ಅವರು ಒಂದು ಸಾವಿರ ಚಾಕೊಲೇಟ್&zwnj;ಗಳ ಮೊದಲ ಬೃಹತ್ ಆರ್ಡರ್ ಅನ್ನು ಪಡೆದರು. ಹಾಗೆಯೇ ಕೊಡುವುದು ಬೇಡ, ಒಂದು ಹೆಸರಿಟ್ಟು ಕೊಡೋಣ ಎಂದುಕೊಂಡ ದಿಗ್ವಿಜಯ ಅದಕ್ಕೆ ಸಾರಮ್ ಎಂದು ಹೆಸರಿಸಿ ಆ ಬ್ರ್ಯಾಂಡ್​ನಲ್ಲಿ ಚಾಕಲೇಟ್​ ಕೊಟ್ಟ. ಅಲ್ಲಿಂದ ಆರಂಭವಾದದ್ದು ಇದೀಗ ಬೃಹತ್​ ಉದ್ಯಮವಾಗಿ ಬೆಳೆದಿದೆ. ಇಂದು, ಸಾರಮ್ ಉತ್ತಮವಾದ ಬೀನ್-ಟು-ಬಾರ್ ಚಾಕೊಲೇಟ್&zwnj;ಗಳನ್ನು ಉತ್ಪಾದಿಸುತ್ತದೆ, ದೆಹಲಿ, ಬೆಂಗಳೂರು, ಜೈಪುರ ಮತ್ತು ಉದಯಪುರದಂತಹ ನಗರಗಳಲ್ಲಿ ಎರಡು ಟನ್&zwnj;ಗಳಿಗಿಂತ ಹೆಚ್ಚು ಮಾರಾಟ ಮಾಡುತ್ತದೆ. ಈ ಬಾಲಕನಿಗೆ ಈಗ 21 ವರ್ಷ. ಹವ್ಯಾಸವಾಗಿ ಪ್ರಾರಂಭವಾದದ್ದು ಈಗ 1 ಕೋಟಿ ರೂಪಾಯಿ ಬ್ರ್ಯಾಂಡ್ ಆಗಿದೆ. ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದಾನೆ ಈ ಯುವಕ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/business/udaipurs-digvijay-singh-21-yrs-old-is-earning-crores-with-his-chocolate-business-suc/articleshow-dhpu98y"/>
        </item>
        <item>
            <title><![CDATA[ದೇಶವನ್ನುದ್ದೇಶಿ ಪ್ರಧಾನಿ ಮೋದಿ ಮಾತು ; ಈ ಬಾರಿ ಸಮಯ ರಾತ್ರಿ 8 ಗಂಟೆ ಅಲ್ಲ, 8.30 ಯಾಕೆ?]]></title>
            <link>https://kannada.asianetnews.com/india-news/pm-narendra-modi-to-address-nation-tonight-at-8-point-30-pm-after-women-s-reservation-bill-defeat-mrq/articleshow-4f8vhnp</link>
            <guid isPermaLink="true">https://kannada.asianetnews.com/india-news/pm-narendra-modi-to-address-nation-tonight-at-8-point-30-pm-after-women-s-reservation-bill-defeat-mrq/articleshow-4f8vhnp</guid>
            <pubDate>Sat, 18 Apr 2026 15:55:32 +0530</pubDate>
            <description><![CDATA[&lt;p&gt;ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋತ ನಂತರ, ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ವಿಪಕ್ಷಗಳ ಒಗ್ಗಟ್ಟಿನಿಂದಾಗಿ ಸರ್ಕಾರದ ಪ್ರಯತ್ನ ವಿಫಲವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp7g7sgc1smnpjtc11vpaxyq,imgname-pm-modi-trump-phone-call-india-us-strategic-partnership-hormuz-strait-middle-east-crisis-bilateral-cooperation-update-2-1776220890636.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋತ ಬೆನ್ನಲ್ಲೇ ಈ ಮಹತ್ವದ ಭಾಷಣ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ ಸಭೆ ಹಾಗೂ ಭದ್ರತಾ ಸಮಿತಿ ಸಭೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ, ಮಹಿಳಾ ಮೀಸಲಾತಿ ಜಾರಿ ಬಗ್ಗೆ ಮೋದಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಜೊತೆಗೆ, ವಿಪಕ್ಷಗಳ ನಿಲುವನ್ನು ಟೀಕಿಸುವ ನಿರೀಕ್ಷೆಯೂ ಇದೆ. ಸಾಮಾನ್ಯವಾಗಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಹಲವು ಬಾರಿ ರಾತ್ರಿ 8 ಗಂಟೆಗೆ ಮಾತನಾಡಿದ್ದುಂಟು. ಹಳೆಯ 500 ಮತ್ತು 1000 ರೂಪಾಯಿ ನೋಟ್ ಬ್ಯಾನ್ ಮತ್ತು ಲಾಕ್&zwnj;ಡೌನ್ ಅಂತಹ ಪ್ರಮುಖ ಘೋಷಣೆಯನ್ನು ರಾತ್ರಿ 8 ಗಂಟೆಗೆ ಘೋಷಣೆ ಮಾಡಿದ್ದರು. ಆದರೆ ಇಂದು ಅದೇ ಪ್ರಧಾನಿ ಸಮಯ ಬದಲಾವಣೆ ಮಾಡಿಕೊಂಡಿರೋದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;&lt;strong&gt;ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ&lt;/strong&gt;&lt;/h2&gt;&lt;p&gt;ನರೇಂದ್ರ ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯು ನಿನ್ನೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಸಿಗದೆ ಸೋಲು ಕಂಡಿದೆ. ಮಸೂದೆ ಪರವಾಗಿ 298 ಸಂಸದರು ಮತ ಹಾಕಿದರೆ, 230 ಮಂದಿ ವಿರೋಧಿಸಿದರು. ಸರ್ಕಾರದ ಎಲ್ಲಾ ಪ್ರಯತ್ನಗಳ ನಡುವೆಯೂ, ವಿರೋಧ ಪಕ್ಷಗಳು ಒಗ್ಗಟ್ಟಾಗಿ ನಿಂತು ತಿದ್ದುಪಡಿಯನ್ನು ವಿರೋಧಿಸಿದವು. 'ಇಂಡಿಯಾ' ಮೈತ್ರಿಕೂಟದ ಯಾವುದೇ ಪಕ್ಷ ತನ್ನ ನಿಲುವು ಬದಲಿಸಲಿಲ್ಲ. ಎನ್&zwnj;ಡಿಎ ಹೊರಗಿನ ಪಕ್ಷಗಳಿಂದಲೂ ಸರ್ಕಾರಕ್ಕೆ ಬೆಂಬಲ ಸಿಗಲಿಲ್ಲ. ಒಟ್ಟು ಸೀಟುಗಳನ್ನು 850ಕ್ಕೆ ಏರಿಸುವಾಗ ರಾಜ್ಯಗಳ ಪ್ರಾತಿನಿಧ್ಯ ಎಷ್ಟಿರುತ್ತೆ ಅಂತ ಸ್ಪಷ್ಟಪಡಿಸುವ ತಿದ್ದುಪಡಿ ತರುವುದಾಗಿ ಅಮಿತ್ ಶಾ ಸಲಹೆ ನೀಡಿದರೂ, ವಿಪಕ್ಷಗಳು ಒಪ್ಪಲಿಲ್ಲ. ಕಾಂಗ್ರೆಸ್ ವಿರೋಧಿಸುತ್ತಿರುವುದು ಕ್ಷೇತ್ರ ಪುನರ್ವಿಂಗಡಣೆಗಲ್ಲ, ಬದಲಾಗಿ ಮಹಿಳಾ ಮೀಸಲಾತಿಗೇ ಎಂದು ಅಮಿತ್ ಶಾ ಆರೋಪಿಸಿದರು. ಓಬಿಸಿ ಮೀಸಲಾತಿಯನ್ನು ಯಾವಾಗಲೂ ವಿರೋಧಿಸಿದ ಇತಿಹಾಸ ಕಾಂಗ್ರೆಸ್&zwnj;ಗಿದೆ ಎಂದೂ ಶಾ ಕಿಡಿಕಾರಿದರು.&lt;/p&gt;&lt;p&gt;'ಇಂಡಿಯಾ' ಮೈತ್ರಿಕೂಟದಲ್ಲಿ ಬಿರುಕು ಮೂಡಿಸಬಹುದು ಎಂಬ ಸರ್ಕಾರದ ನಿರೀಕ್ಷೆ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ, ಸಂಸತ್ತಿನ ಹೊರಗೆ ದೊಡ್ಡ ಮಟ್ಟದ ಪ್ರಚಾರಾಂದೋಲನ ಆರಂಭಿಸಲು ಬಿಜೆಪಿ ನಿರ್ಧರಿಸಿದೆ. ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಸಂಸತ್ತಿನಲ್ಲಿ ಒಂದು ಮಸೂದೆ ಸೋಲನುಭವಿಸುತ್ತಿರುವುದು ಇದೇ ಮೊದಲು.&lt;/p&gt;&lt;p&gt;&amp;nbsp;&lt;/p&gt;&lt;p&gt;Prime Minister Narendra Modi will address the nation at 8:30 PM tonight. pic.twitter.com/1lg1catv0A&lt;/p&gt;&lt;p&gt;&mdash; ANI (@ANI) April 18, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/india-news/pm-narendra-modi-to-address-nation-tonight-at-8-point-30-pm-after-women-s-reservation-bill-defeat-mrq/articleshow-4f8vhnp"/>
        </item>
        <item>
            <title><![CDATA[Exclusive Interview: ಜೀವನದ ದಿಕ್ಕೇ ಬದಲಿಸಿ 'ಮಿಸ್​ ಯೂನಿವರ್ಸ್​ ಕರ್ನಾಟಕ' ಪಟ್ಟ ಕೊಟ್ಟ ಆ ಗಾಯ]]></title>
            <link>https://kannada.asianetnews.com/gallery/fashion/miss-universe-karnataka-2026-lekana-hegde-exclusive-interview-in-asianet-suvarna-suc-d4onm6p</link>
            <guid isPermaLink="true">https://kannada.asianetnews.com/gallery/fashion/miss-universe-karnataka-2026-lekana-hegde-exclusive-interview-in-asianet-suvarna-suc-d4onm6p</guid>
            <pubDate>Sat, 18 Apr 2026 14:28:27 +0530</pubDate>
            <description><![CDATA[ಬೆಂಗಳೂರಿನಲ್ಲಿ ನಡೆದ ಮಿಸ್​ ಯೂನಿವರ್ಸ್​ ಕರ್ನಾಟಕ 2026ರ ಸೌಂದರ್ಯ ಸ್ಪರ್ಧೆಯಲ್ಲಿ ಲೇಖನಾ ಹೆಗ್ಡೆ ವಿಜೇತರಾಗಿದ್ದಾರೆ. ಬಾಸ್ಕೆಟ್​ ಬಾಲ್​ ಆಟಗಾರ್ತಿಯಾಗುವ ಕನಸು ಕಂಡಿದ್ದ ಲೇಖನಾ, ಗಾಯದ ಕಾರಣದಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದು ಇದೀಗ ಮಿಸ್​ ಯೂನಿವರ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpfwr1t0wnt5rcevfymh4qnv,imgname-lekana-hegde-05-1776502441792.jpg" type="image/jpeg" height="390" width="690"/>
            <content:encoded><![CDATA[ಬೆಂಗಳೂರಿನಲ್ಲಿ ನಡೆದ ಮಿಸ್​ ಯೂನಿವರ್ಸ್​ ಕರ್ನಾಟಕ 2026ರ ಸೌಂದರ್ಯ ಸ್ಪರ್ಧೆಯಲ್ಲಿ ಲೇಖನಾ ಹೆಗ್ಡೆ ವಿಜೇತರಾಗಿದ್ದಾರೆ. ಬಾಸ್ಕೆಟ್​ ಬಾಲ್​ ಆಟಗಾರ್ತಿಯಾಗುವ ಕನಸು ಕಂಡಿದ್ದ ಲೇಖನಾ, ಗಾಯದ ಕಾರಣದಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದು ಇದೀಗ ಮಿಸ್​ ಯೂನಿವರ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.&lt;img&gt;&lt;p&gt;ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಮಿಸ್​ ಯೂನಿವರ್ಸ್​ ಕರ್ನಾಟಕ 2026ರ ಸೌಂದರ್ಯ ಸ್ಪರ್ಧೆಯಲ್ಲಿ ಲೇಖನಾ ಹೆಗ್ಡೆ ಗೆಲುವು ಸಾಧಿಸಿದ್ದಾರೆ. Miss universe Karnataka 2026 ಕಿರೀಟವನ್ನು ಬಾಚಿಗೊಂಡಿದ್ದಾರೆ. 38 ಬ್ಯೂಟಿಗಳು ಇದರಲ್ಲಿ ಭಾಗವಹಿಸಿದ್ದರು. ಕೊನೆಗೆ ಲೇಖನಾ ಗೆಲುವು ಸಾಧಿಸಿದ್ದು, ಮೊದಲ ರನ್ನರ್&zwnj; ಅಪ್&zwnj; ಸ್ಫೂರ್ತಿ ಶೆಟ್ಟಿ, ಜಾಗೃತಿ ಚೋಪ್ರಾ ಎರಡನೇ ರನ್ನರ್&zwnj; ಅಪ್&zwnj; ಸ್ಥಾನವನ್ನು ಪಡೆದರು. ಮಿಸ್&zwnj; ಟೀನ್&zwnj; ಟೈಟಲ್&zwnj;ಗಾಗಿಯೂ ಸ್ಪರ್ಧೆ ನಡೆಸಲಾಯಿತು. ಸಮೀಕ್ಷಾ ಮಿಸ್&zwnj; ಟೀನ್&zwnj; ಆಗಿ ಆಯ್ಕೆಗೊಂಡು ಕಿರೀಟ ಮುಡಿಗೇರಿಸಿಕೊಂಡರೆ, ವರ್ಷಾ ಹಾಗೂ ಆಯುಷ್ಮಾ ಶಾಂಭವಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದರು.&lt;/p&gt;&lt;img&gt;&lt;p&gt;ಈ ಕುರಿತು ಲೇಖನಾ ಅವರು ಏಷ್ಯಾನೆಟ್​ ಸುವರ್ಣದ ಜೊತೆ ಮಾತನಾಡಿದ್ದಾರೆ. ಲೇಖನಾ ಹೆಗ್ಡೆ ಅವರು ಮಾಡೆಲ್ ಮತ್ತು ಅಥ್ಲೀಟ್ ಆಗಿ ಗುರುತಿಸಿಕೊಂಡವರು. ಲಂಡನ್​ನಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಅಷ್ಟಕ್ಕೂ ತಮಗೆ ಮಾಡೆಲಿಂಗ್​ ಕ್ಷೇತ್ರಕ್ಕೆ ಬರುವ ಆಸೆ ಇರಲಿಲ್ಲ. ಆದರೆ, ಬಾಸ್ಕೆಟ್​ ಬಾಲ್​ನಲ್ಲಿ ದೇಶವನ್ನು ಪ್ರತಿನಿಧಿಸುವ ಆಸೆ ಇತ್ತು. ಆದರೆ ಆಗಿದ್ದೇ ಬೇರೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಲೇಖನಾ.&lt;/p&gt;&lt;img&gt;&lt;p&gt;ಆಗುವುದೆಲ್ಲಾ ಒಳ್ಳೆಯದ್ದೇ ಎನ್ನುವ ಮಾತು ಕೆಲವೊಮ್ಮೆ ಕೆಲವರ ಲೈಫ್​ನಲ್ಲಿ ನಿಜವಾಗಿ ಬಿಡುತ್ತದೆ. ಅಂಥವರಲ್ಲಿ ಒಬ್ಬರು ಲೇಖನಾ. ಬಾಸ್ಕೆಟ್​ ಬಾಲ್​ ಪ್ಲೇಯರ್​ ಆಗಿ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಆಸೆ ಪಟ್ಟಿದ್ದ ಲೇಖನಾ ಅವರಿಗೆ ಬಿದ್ದು ಗಾಯವಾಗಿತ್ತಂತೆ. ಅದಕ್ಕಾಗಿಯೇ ಅವರು ಅಲ್ಲಿ ಕ್ವಾಲಿಫೈ ಆಗಿರಲಿಲ್ಲ. ಹಾಗೆಂದು ಲೇಖನಾ ಕುಗ್ಗಲಿಲ್ಲ. ದೇಶವನ್ನು ಪ್ರತಿನಿಧದಿಸುವ ತಮ್ಮ ಆಸೆಯನ್ನಂತೂ ಈಡೇರಿಸಿಕೊಳ್ಳಲೇಬೇಕು ಎನ್ನುವ ಪಣ ತೊಟ್ಟಾಗಲೇ ಕಂಡದ್ದು ಮಾಡೆಲಿಂಗ್​ ಕ್ಷೇತ್ರ.&lt;/p&gt;&lt;img&gt;&lt;p&gt;ಮಾಡೆಲಿಂಗ್​ ಆಯ್ದುಕೊಂಡ ಲೇಖನಾ, ಬ್ಯೂಟಿ ಸ್ಪರ್ಧೆ ಗೆದ್ದಿರುವ ಲಾರಾ ದತ್ತಾ, ಪ್ರಿಯಾಂಕಾ ಚೋಪ್ರಾ ಅವರ ವಿಡಿಯೋಗಳನ್ನೆಲ್ಲಾ ನೋಡಿ, ಛಲ ಬೆಳೆಸಿಕೊಂಡರಂತೆ, ಮಾತನಾಡುವ ಸ್ಟೈಲ್​ ಕಲಿತರಂತೆ. ಅದನ್ನೆಲ್ಲಾ ಕಲಿತು ಮಾಡೆಲಿಂಗ್​ ಟ್ರೈನಿಂಗ್​ ಪಡೆದು ಅದೃಷ್ಟ ಪರೀಕ್ಷೆಗೆ ಮಿಸ್​ ಯೂನಿವರ್ಸ್​ ಕರ್ನಾಟಕ ಪ್ರತಿನಿಧಿಸಿ, ಕಿರೀಟ ಮುಡಿಲಿಗೇರಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಮಿಸ್​ ಯೂನಿವರ್ಸ್​ನಲ್ಲಿ ಭಾರತವನ್ನು ಇವರು ಪ್ರತಿನಿಧಿಸಲಿದ್ದಾರೆ. ಜೊತೆಗೆ ಕ್ರೀಡೆಯ ಕನಸನ್ನೂ ನನಸು ಮಾಡಿಕೊಳ್ಳಲಿದ್ದೇನೆ ಎನ್ನುತ್ತಾರೆ ಲೇಖನಾ. ಸದ್ಯ ಸಿನಿಮಾಗಳಿಂದಲೂ ಆಫರ್ ಬರುತ್ತಿವೆ, ಆದರೆ ಸದ್ಯ ನನ್ನ ಗಮನ ಮಿಸ್​ ಯೂನಿವರ್ಸ್​ ಕಡೆಗೆ ಎಂದಿದ್ದಾರೆ. ಅಪ್ಪು ಎಂದ್ರೆ ನನಗೆ ತುಂಬಾ ಇಷ್ಟ. ಅವರ ಜೊತೆ ನಟನೆ ಮಾಡುವ ಆಸೆ ಇತ್ತು. ಆದರೆ ಅದು ಸಾಧ್ಯವಾಗುವುದಿಲ್ಲ. ಆದರೆ ಈಚೆಗೆ ಯಶ್​ ಅವರ ಟೀಸರ್​ ನೋಡಿದ ಮೇಲೆ ಅವರ ಜೊತೆ ನಟಿಸುವ ಆಸೆ ಇದೆ. 100 ಪರ್ಸೆಂಟ್​ ಆ ಆಸೆ ಈಡೇರುವ ಭರವಸೆ ಇದೆ ಎನ್ನುತ್ತಾರೆ ಲೇಖನಾ.&lt;/p&gt;&lt;img&gt;&lt;p&gt;ಅಂದಹಾಗೆ ಈ ಬ್ಯೂಟಿ ಸ್ಪರ್ಧೆಯಲ್ಲಿ, ಫ್ಯಾಷನ್&zwnj; ಕ್ಷೇತ್ರದ ದಿಗ್ಗಜರಾದ ನಿಕಿಲ್&zwnj; ಆನಂದ್&zwnj;, ಅಮ್ಜದ್&zwnj; ಖಾನ್&zwnj;, ಮಹಮ್ಮದ್&zwnj; ಸೈಜಲ್&zwnj;, ಮಿಸ್&zwnj; ಯೂನಿವರ್ಸ್ ಇಂಡಿಯಾ 2025 ಮಣಿಕಾ ವಿಶ್ವಕರ್ಮಾ ಹಾಗೂ ಕಳೆದ ಬಾರಿ ಗೆಲುವು ಸಾಧಿಸಿದ್ದ ಮಿಸ್&zwnj; ಯೂನಿವರ್ಸ್ ಕರ್ನಾಟಕ ವಂಶಿ ಉದಯ್&zwnj; ಜ್ಯೂರಿ ಟೀಮ್&zwnj;ನಲ್ಲಿದ್ದರು. ಶೋ ಡೈರೆಕ್ಟರ್&zwnj; ಶ್ರೀಕಾಂತ್&zwnj; ಶೆಟ್ಟರ್&zwnj; ಬ್ಯೂಟಿ ಪೇಜೆಂಟ್&zwnj;ನ ಉಸ್ತುವಾರಿ ವಹಿಸಿದ್ದರು.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Asianet Suvarna News (@asianetsuvarnanews)&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/fashion/miss-universe-karnataka-2026-lekana-hegde-exclusive-interview-in-asianet-suvarna-suc-d4onm6p"/>
        </item>
        <item>
            <title><![CDATA['ನಾನು ಜಾತ್ಯತೀತಳು, ಯಾರನ್ನಾದ್ರೂ ಮದ್ವೆ ಆಗ್ತೇನೆ' ಎಂದ ನಟಿ ಹಿಂದೂ ಧರ್ಮಕ್ಕೆ ವಾಪಸ್​: ಕರಾಳ ದಿನಗಳ ನೆನೆದ ತಾರೆ]]></title>
            <link>https://kannada.asianetnews.com/gallery/relationship/chahatt-khanna-reveals-details-of-her-conversion-during-marriage-and-two-divorces-suc-qf3gl1q</link>
            <guid isPermaLink="true">https://kannada.asianetnews.com/gallery/relationship/chahatt-khanna-reveals-details-of-her-conversion-during-marriage-and-two-divorces-suc-qf3gl1q</guid>
            <pubDate>Sat, 18 Apr 2026 13:31:01 +0530</pubDate>
            <description><![CDATA[&lt;p&gt;ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ, ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರಗೊಂಡಿದ್ದರು. ಆರಂಭದಲ್ಲಿ ಜಾತ್ಯತೀತಳು ಎಂದು ಹೇಳಿದ್ದ ಅವರು, ನಂತರ ತಾನು ಅನುಭವಿಸಿದ ಚಿತ್ರಹಿಂಸೆ ಮತ್ತು ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ತಮ್ಮ ತಪ್ಪಿನ ಅರಿವಾಗಿ, ಸನಾತನ ಧರ್ಮಕ್ಕೆ ಮರಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfsnkt7rma0a4kedm2cnfbz,imgname-chahat-khanna-1776499216199.jpg" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ, ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರಗೊಂಡಿದ್ದರು. ಆರಂಭದಲ್ಲಿ ಜಾತ್ಯತೀತಳು ಎಂದು ಹೇಳಿದ್ದ ಅವರು, ನಂತರ ತಾನು ಅನುಭವಿಸಿದ ಚಿತ್ರಹಿಂಸೆ ಮತ್ತು ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ತಮ್ಮ ತಪ್ಪಿನ ಅರಿವಾಗಿ, ಸನಾತನ ಧರ್ಮಕ್ಕೆ ಮರಳಿದ್ದಾರೆ.&lt;/p&gt;&lt;img&gt;&lt;p&gt;ಈಗ ಎಲ್ಲೆಲ್ಲೂ ಲವ್​ ಜಿಹಾದ್​, ಮತಾಂತರದ್ದೇ ಮಾತು. ಅದರಲ್ಲಿಯೂ ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ (TCS) ಲವ್ ಜಿಹಾದ್​ ಪ್ರಕರಣದಿಂದ ಕಾರ್ಪೋರೇಟ್​ ಜಗತ್ತಿಗೂ ಕಾಲಿಟ್ಟ ಜಿಹಾದಿಗಳ ಬಗ್ಗೆ ದೇಶಾದ್ಯಂತ ಹಿಂದೂಗಳಲ್ಲಿ ಆತಂಕ ಎದುರಾಗಿದೆ. ಹಿಂದೂ ಹೆಣ್ಣುಮಕ್ಕಳು ಅದ್ಹೇಗೆ ಮರುಳಾಗುತ್ತಾರೆ, ಅಲ್ಲಿ ಏನು ನಡೆಯುತ್ತದೆ, ಅಸಲಿಗೆ ಆಗೋದೇನು ಎನ್ನುವುದನ್ನು ಅರಿಯದೇ ಬೆಚ್ಚಿಬಿದ್ದಿದ್ದಾರೆ ಪೋಷಕರು. ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳೂ ಎಲ್ಲರನ್ನು ನಡುಗಿಸುವಂತಿದೆ. ಹಾಗೆಂದು ಈ ಲವ್​ ಜಿಹಾದ್​ ಅಥವಾ ಮತಾಂತರ ಈಗಿನ ಮಾತಲ್ಲ, ಬದಲಿಗೆ ಸೋಷಿಯಲ್​ ಮೀಡಿಯಾಗಳಿಂದ ಇವು ಬೆಳಕಿಗೆ ಬರುತ್ತಿವೆ ಅಷ್ಟೇ.&lt;/p&gt;&lt;img&gt;&lt;p&gt;ಅಂಥದ್ದೇ ಒಂದು ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ. ಹಿಂದಿ ಸೀರಿಯಲ್​ ನೋಡುವವರಿಗೆ ಚಾಹತ್​ ಖನ್ನಾ ಪರಿಚಿತ ಮುಖ. ಹಲವಾರು ಫೇಮಸ್​ ಸೀರಿಯಲ್​ಗಳಲ್ಲಿ ನಟಿಸಿದ್ದಾರೆ ಈಕೆ. ಮುಸ್ಲಿಂ ಯುವಕನನ್ನು ನಂಬಿ ಮದುವೆಯಾಗಿ ಕೊನೆಗೆ ಸತ್ಯದ ಅರಿವಾಗಿ ಸನಾತನ ಧರ್ಮಕ್ಕೆ ವಾಪಸಾಗಿರುವ ಈ ನಟಿಯ ಈಗ ತಾನು ಅನುಭವಿಸಿದ ಹಿಂಸೆಗಳ ಬಗ್ಗೆ ಬಿಚ್ಚಿಡುತ್ತಿದ್ದಾಳೆ. ಮದುವೆಯಾಗುವ ಸಂದರ್ಭದಲ್ಲಿ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದ ನಟಿ, ನಾನು ಜಾತ್ಯಾತೀತಳು, ಸ್ವಯಂ ಪ್ರೇರಣೆಯಿಂದ ಈ ಮದುವೆಯಾಗುತ್ತಿದ್ದೇನೆ. ಇದನ್ನು ಪ್ರಶ್ನಿಸುವ ಹಕ್ಕು ಬೇರೆಯವರಿಗೆ ಇಲ್ಲ ಎಂದಿದ್ದಳು!&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟಿಗೆ ಇದಾಗಲೇ ಮದುವೆಯಾಗಿತ್ತು. 2006 ರಲ್ಲಿ ಭರತ್ ನರಸಿಂಘಾನಿ ಎನ್ನುವವರ ಜೊತೆ ಮದುವೆಯಾಗಿತ್ತು. ಆದರೆ ಈ ಮದುವೆ ವರ್ಷದಲ್ಲಿಯೇ ಮುರಿದು ಬಿತ್ತು. ಆಗಲೇ ಪರಿಚಯವಾದದ್ದು ಫರ್ಹಾನ್ ಮಿರ್ಜಾ. 2013 ರಲ್ಲಿ ಫರ್ಹಾನ್ ಮಿರ್ಜಾ ಜೊತೆ ಮದುವೆಯಾಯಿತು. ಮತಾಂತರಗೊಂಡಳು ನಟಿ. ಎರಡು ಮಕ್ಕಳಾಯಿತು. ಅಲ್ಲಿಯವರೆಗೂ ತನಗೆ ಚಿತ್ರಹಿಂಸೆಯನ್ನೇ ನೀಡಲಾಗುತ್ತಿತ್ತು. ಆದರೂ ಸಹಿಸಿಕೊಂಡಿದ್ದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅನಾರೋಗ್ಯ ಇದ್ದರೂ ದೈಹಿಕ ಸಂಪರ್ಕ ಬೆಳೆಸುವಂತೆ ಗಂಡ ಒತ್ತಾಯಿಸುತ್ತಿದ್ದ. ನಾನು ಬಹುದೊಡ್ಡ ತಪ್ಪು ಮಾಡಿದ್ದು ಆಗಲೇ ಗೊತ್ತಾಯಿತು. ಹಿಂದೂ ಧರ್ಮ ಬಿಟ್ಟುಬಂದು ಬಹುದೊಡ್ಡ ತಪ್ಪು ಮಾಡಿದೆ. ಅದರ ಮಹತ್ವ ಕೊನೆಗೆ ತಿಳಿಯಿತು ಎಂದು ನಟಿ ಮಾಧ್ಯಮಗಳ ಮುಂದೆ ಬಂದು ಗೋಳೋ ಎಂದು ಅತ್ತಿದ್ದಾರೆ.&lt;/p&gt;&lt;img&gt;&lt;p&gt;ಕೊನೆಗೆ, ತನ್ನ ತಪ್ಪಿನ ಅರಿವಾಗಿ ಗಂಡನ ವಿರುದ್ಧ ಕೇಸ್​ ಹಾಕಿ ಇದೀಗ ಸನಾತನ ಧರ್ಮಕ್ಕೆ ವಾಪಸಾಗಿದ್ದಾರೆ ನಟಿ. ಇದಕ್ಕೂ ಮೊದಲು ಮತಾಂತರವಾಗಬೇಕಿದ್ದ ಸಂದರ್ಭದಲ್ಲಿ, ನನಗೆ ಯಾರೂ ಒತ್ತಡ ಹಾಕುತ್ತಿಲ್ಲ. ನಾನು ಸ್ವಂತ ಇಚ್ಛೆಯಿಂದ ಮತಾಂತರವಾಗುತ್ತಿದ್ದೇನೆ ಎಂದವರು ಈಗ ತಾವು ಅನುಭವಿಸಿರುವ ಕಷ್ಟಗಳ ಬಗ್ಗೆ ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ನಾನು ಜಾತ್ಯತೀತಳು. ಅವರ ಮನೆಯಲ್ಲಿ ಈದ್ ಮತ್ತು ದೀಪಾವಳಿ ಎರಡನ್ನೂ ಸಮಾನ ಸಂತೋಷದಿಂದ ಆಚರಿಸುತ್ತಾರೆ ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ ಎಂದು ಹೇಳಿದ್ದರು. ನಾನು ಹೀಗೆ ಹೇಳಿದ್ರೆ ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ, ಆದರೆ ಅವರು ತುಂಬಾ ಒಳ್ಳೆಯವರು ಎಂದಾಕೆ ಈಗ ಉಲ್ಟಾ ಹೊಡೆದಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/chahatt-khanna-reveals-details-of-her-conversion-during-marriage-and-two-divorces-suc-qf3gl1q"/>
        </item>
        <item>
            <title><![CDATA[ಆರ್ಥಿಕ ಸಂಕಷ್ಟದ ನಡುವೆ ಮಗನ ಬಹುದಿನಗಳ ಬಿರಿಯಾನಿ ಕನಸು ಈಡೇರಿಸಿದ ತಂದೆ, ಜನ ಭಾವುಕ]]></title>
            <link>https://kannada.asianetnews.com/india-news/father-fulfill-son-biryani-demand-despite-his-financial-dificulties-emotional-video/articleshow-id71mst</link>
            <guid isPermaLink="true">https://kannada.asianetnews.com/india-news/father-fulfill-son-biryani-demand-despite-his-financial-dificulties-emotional-video/articleshow-id71mst</guid>
            <pubDate>Sat, 18 Apr 2026 13:16:01 +0530</pubDate>
            <description><![CDATA[&lt;p&gt;ಆರ್ಥಿಕ ಸಂಕಷ್ಟದ ನಡುವೆ ಮಗನ ಬಹುದಿನಗಳ ಬಿರಿಯಾನಿ ಕನಸು ಈಡೇರಿಸಿದ ತಂದೆ, ಜನ ಭಾವುಕ, ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಬಿರಿಯಾನಿ ಬೆಲೆಯಿಂದ ಖರೀದಿ ಸಾಧ್ಯವಾಗಿರಲಿಲ್ಲ. ಮಗನ ಖುಷಿ, ತಂದೆ ಸಾರ್ಥಕತೆಯ ಭಾವಕ್ಕೆ ಹಲವರು ಕಮೆಂಟ್ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfrsq2jjeswe3xfr4web81k,imgname-father-fulfill-biryani-treat-1776498302034.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ (ಏ.18)&lt;/strong&gt; ಮಕ್ಕಳು ಬಿರಿಯಾನಿ ಸೇರಿದಂತೆ ಏನಾದರು ತಿನ್ನಬೇಕು ಎಂದರೆ ಪೋಷಕರು ಉಪವಾಸ ಕುಳಿತಾದರೂ ಖರೀದಿಸುತ್ತಾರೆ. ಆದರೆ ಇಲ್ಲೊಂದು ಕುಟುಂಬಕ್ಕೆ ಉಪವಾಸ ಕುಳಿತರೂ 200 ರಿಂದ 300 ರೂಪಾಯಿ ಬಿರಿಯಾನಿ ಖರೀದಿಸಲು ಸಾಧ್ಯವಾಗಿರಲಿಲ್ಲ. ಮಗ ಪ್ರತಿ ದಿನ ಬಿರಿಯಾನಿ ತಿನ್ನಬೇಕು ಎಂದರೂ ಖರೀದಿ ಸಾಧ್ಯವಾಗಿರಲಿಲ್ಲ. ಆದರೆ ದಿಢೀರ್ ಆಗಿ ಆಫರ್, ವೀಕ್ ಡೇ ಕಾರಣ ಬಿರಿಯಾನಿ ಬೆಲೆ ಕಡಿಮೆಯಾಗಿತ್ತು. ಹೀಗಾಗಿ ಮಗನ ಆಸೆಯಂತೆ ಖರೀದಿಸಿ ತಂದಿದ್ದಾರೆ. ಮಗನ ಜೊತೆಗೆ ತಂದೆ ಕೂಡ ಬಿರಿಯಾನಿ ಸವಿದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.&lt;/p&gt;&lt;p&gt;ಪಶ್ಚಿಮ ಬಂಗಾಳದ ಬಗುಲಾ ಪಟ್ಟಣದ ನಾರಾಯಣ ಸರ್ಕಾರ್ ಯೂಟ್ಯೂಬರ್ ಆಗಿದ್ದಾರೆ. ಕಾರ್ಮಿಕನಾಗಿ ಇತರ ಸಣ್ಣ ಪುಟ್ಟ ಕೆಲಸ ಮಾಡುತ್ತಿರುವ ನಾರಾಯಣ ಸರ್ಕಾರ್ ಇತರ ಕಮಿಟ್ಮೆಂಟ್, ಸಾಲದ ಇಎಂಐ ಸೇರಿದಂತೆ ಹಲವು ಕಾರಣಗಳಿಂದ ಪ್ರಯಾಸದ ಜೀವನ ಸಾಗಿಸುತ್ತಿದ್ದರು. ಇದರ ನಡುವೆ ನಾರಾಯಣ್ ಸರ್ಕಾರ್ ಮಗ ಬಿರಿಯಾನಿ ತಿನ್ನುವ ಆಸೆ ವ್ಯಕ್ತಪಡಿಸಿದ್ದ. ಆದರೆ ಹೊಟೆಲ್&zwnj;ನಿಂದ ಬಿರಿಯಾನಿ ಖರೀದಿ ನಾರಾಯಣ್&zwnj;ಗೆ ಪ್ರಯಾಸವಾಗಿತ್ತು. ಆರ್ಥಿಕ ಪರಿಸ್ಥಿತಿ ಇದಕ್ಕೆ ಅನುವು ಮಾಡುತ್ತಿರಲಿಲ್ಲ.&lt;/p&gt;&lt;h2&gt;ಮಗನ ಆಸೆ ಈಡೇರಿಸಿದ ತಂದೆ&lt;/h2&gt;&lt;p&gt;ಮಗ ಹಲವು ದಿನಗಳಿಂದ ಬಿರಿಯಾನಿ ತಿನ್ನವ ಆಸೆ ವ್ಯಕ್ತಪಡಿಸಿದ್ದರೂ ಖರೀದಿ ಸಾಧ್ಯವಾಗಿರಲಿಲ್ಲ. ಆದರೆ ಬೇರೆ ಕಾರಣಕ್ಕಾಗಿ ಮಾರುಕಟ್ಟೆಗೆ ತೆರಳಿದ್ದ ನಾರಾಯಣ್ ಸರ್ಕಾರಗೆ ಬಿರಿಯಾನಿ ಆಫರ್ ಕಣ್ಣಿಗೆ ಬಿದ್ದಿದೆ. ವೀಕ್ ಡೇ ಹಾಗೂ ಇಥರ ಕಾರಣಗಳಿಂದ ಆಫರ್ ನೀಡಲಾಗಿತ್ತು. ಬಿರಿಯಾನಿ ಕಡಿಮೆ ಬೆಲೆಯಲ್ಲಿ ಲಭ್ಯವಿತ್ತು. ಹೀಗಾಗಿ ಮೂರು ಪ್ಯಾಕೆಟ್ ಬಿರಿಯಾನಿ ಖರೀದಿಸಿ ಮನೆಗೆ ಬಂದ ತಂದೆ ಮಗನ ಮುಂದಿಟ್ಟಿದ್ದಾರೆ. ಮಗನ ಖುಷಿ, ಸಂಭರಮ ಕಂಡು ತಂದೆ ಕೂಡ ಭಾವುಕರಾಗಿದ್ದಾರೆ.&lt;/p&gt;&lt;p&gt;ಯೂಟ್ಯೂಬರ್ ಆಗಿರುವ ನಾರಾಯಣ ಸರ್ಕಾರ್ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆಯನ್ನು ಬೆಂಗಾಲಿಯಲ್ಲಿ ವಿವರಿಸಿದ್ದಾರೆ. ಬಿರಿಯಾನಿ ತಟ್ಟೆಯಲ್ಲಿ ಹಾಕಿರುವ ಮಗ ಅತ್ಯಂತ ಖುಷಿಯಿಂದ ಸವಿದಿದ್ದಾರೆ. ತಂದೆ ಮಗನ ಪ್ರೀತಿ ಹಾಗೂ ಆರ್ಥಿಕ ಸಂಕಷ್ಟದ ನಡುವೆಯೂ ಮಗನಿಗಾಗಿ ಬಿರಿಯಾನಿ ತಂದ ತಂದೆ ಕುರಿತು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನಾರಾಯಣ್ ಸರ್ಕಾರ್ ಕುಟುಂಬದ ಸಂಕಷ್ಟಗಳು ಬೇಗನೆ ನಿವಾರಣೆಯಾಗಲಿ, ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿ ಎಂದು ಹಲವರು ಶುಭಕೋರಿದ್ದಾರೆ. ಈ ವಿಡಿಯೋ ನಾರಾಯಣ್ ಸರ್ಕಾರಗೆ ಭರ್ಜರಿ ಲೈಕ್ಸ್ ಹಾಗೂ ಕಮೆಂಟ್ಸ್ ನೀಡಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Narayan Sarkar (@naryansarkar8967)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/father-fulfill-son-biryani-demand-despite-his-financial-dificulties-emotional-video/articleshow-id71mst"/>
        </item>
        <item>
            <title><![CDATA[ಉದ್ಘಾಟನೆಗೆ ರಾಷ್ಟ್ರಧ್ವಜದ ರಿಬ್ಬನ್ ಕಟ್ ಮಾಡಲು ನಿರಾಕರಿಸಿದ ಸಿಎಂ ಒಮರ್, ಆಯೋಜಕರ ವಿರುದ್ಧ ಗರಂ]]></title>
            <link>https://kannada.asianetnews.com/india-news/jk-cm-omar-abullah-refuse-to-cut-national-flag-ribbon-at-sringar-event-video/articleshow-qt493ug</link>
            <guid isPermaLink="true">https://kannada.asianetnews.com/india-news/jk-cm-omar-abullah-refuse-to-cut-national-flag-ribbon-at-sringar-event-video/articleshow-qt493ug</guid>
            <pubDate>Sat, 18 Apr 2026 12:40:45 +0530</pubDate>
            <description><![CDATA[&lt;p&gt;ಉದ್ಘಾಟನೆಗೆ ರಾಷ್ಟ್ರಧ್ವಜದ ರಿಬ್ಬನ್ ಕಟ್ ಮಾಡಲು ನಿರಾಕರಿಸಿದ ಸಿಎಂ ಒಮರ್, ಆಯೋಜಕರ ವಿರುದ್ಧ ಬಿಜೆಪಿ ಗರಂ ಆಗಿದೆ. ಕಟ್ಟಿದ ರಿಬ್ಬನ್ ತೆಗಿಸಿ ಸುರಕ್ಷಿತವಾಗಿಡುವಂತೆ ಓಮರ್ ಅಬ್ದುಲ್ಲಾ ಸೂಚಿಸಿದ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8j1fh2n7wv8x2ree577dn7,imgname-thumb-7-1776256335394.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀನಗರ (ಏ.18)&lt;/strong&gt; ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಕಾರ್ಯಕ್ರಮ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಶ್ರೀನಗರದಲ್ಲಿ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಘಟನೆ ನಡೆದಿದೆ. ಇದಕ್ಕೆ ಮುಖ್ಯ ಕಾರಣ ಉದ್ಘಾಟನೆಗೆ ಕಟ್ ಮಾಡಲು ರಾಷ್ಟ್ರಧ್ವಜ ರಿಬ್ಬನ್ ಹಾಕಲಾಗಿತ್ತು. ರಾಷ್ಟ್ರಧ್ವಜದ ರಿಬ್ಬನ್ ಕಟ್ ಮಾಡಲು ಸಾಧ್ಯವಿಲ್ಲ ಎಂದು ಓಮರ್ ಅಬ್ದುಲ್ಲಾ ಹೇಳಿದ್ದು ಮಾತ್ರವಲ್ಲ, ರಿಬ್ಬನ್ ಬಿಚ್ಚಿಸಿದ ಘಟನೆ ಶ್ರೀನಗರದಲ್ಲಿ ನಡೆದಿದೆ.&lt;/p&gt;&lt;h2&gt;ರಿಬ್ಬನ್ ಬಿಚ್ಚಿಸಿ ಸುತ್ತಿಕೊಟ್ಟ ಸಿಎಂ&lt;/h2&gt;&lt;p&gt;ಸ್ಥಳೀಯ ಕರಕುಶಲತೆಯನ್ನು ದೇಶಾದ್ಯಂತ ಪ್ರಚಾರ ಮಾಡಿ ವ್ಯಾಪಾರ ವಹಿವಾಟು ಹೆಚ್ಚಿಸುವುದು ಹಾಗೂ ಕಾಶ್ಮೀರದ ಕರಕುಶಲತೆ ಬೇಡಿಕೆಯನ್ನು ದೇಶವ್ಯಾಪಿ ಹೆಚ್ಚಿಸಿ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಆರಂಭಗೊಂಡ ನೋ ಯುವರ್ ಆರ್ಟಿಸಾನ್ ಉದ್ಘಾಟನೆಗೆ ಭಾರತದ ರಾಷ್ಟ್ರಧ್ವಜದ ರಿಬ್ಬನ್ ಬಳಸಲಾಗಿತ್ತು. ಇದು ಕೇವಲ ಕೇಸರಿ, ಬಿಳಿ, ಹಸಿರು ರಿಬ್ಬನ್ ಆಗಿರಲಿಲ್ಲ. ಅಕ್ಷರಶಃ ರಾಷ್ಟ್ರಧ್ವಜವೇ ಆಗಿತ್ತು, ಅಶೋಕ ಚಕ್ರ ಮುದ್ರಣಗೊಂಡಿತ್ತು. ಉದ್ಘಾಟನೆಗೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಗಮಿಸಿದ್ದರು.&lt;/p&gt;&lt;h2&gt;ರಿಬ್ಬನ್ ಬಿಚ್ಚಿಸಿದ ಸಿಎಂ&lt;/h2&gt;&lt;p&gt;ರಿಬ್ಬನ್ ಕಟ್ ಮಾಡಲು ಆಗಮಿಸುತ್ತಿದ್ದಂತೆ ಓಮರ್ ಅಬ್ದುಲ್ಲಾ ನಿರಾಕರಿಸಿದ್ದಾರೆ. ರಾಷ್ಟ್ರಧ್ವಜದ ರಿಬ್ಬನ್ ಕತ್ತರಿಸುವುದು ಹೇಗೆ? ಯಾಕೆ ಹೀಗೆ? ಇದು ಸಾಧ್ಯವಿಲ್ಲ. ಇದನ್ನು ಬಿಚ್ಚಿ ಎಂದಿದ್ದಾರೆ. ಸಿಎಂ ಸ್ಥಳದಲ್ಲೇ ಸೂಚನೆ ನೀಡಿದ ಕಾರಣ ತಕ್ಷಣವೇ ರಿಬ್ಬನ್ ಬಿಚ್ಚಲಾಗಿದೆ. ಸ್ವತಃ ಸಿಎಂ ಓಮರ್ ಅಬ್ದುಲ್ಲಾ ರಿಬ್ಬನ್ ಬಿಚ್ಚಿಸಿದ್ದಾರೆ. ಬಳಿಕ ರಿಬ್ಬನ್ ಸುತ್ತಿ ಆಯೋಜಕರಿಗೆ ನೀಡಿದ್ದಾರೆ. ಇಷ್ಟೇ ಅಲ್ಲ, ಈ ರಿಬ್ಬನ್ ಗೌರವಯುತವಾಗಿ ಎತ್ತಿಡಿ ಎಂದು ಸೂಚಿಸಿದ್ದಾರೆ.&lt;/p&gt;&lt;h2&gt;ಸಿಎಂ ನಡೆ ಶ್ಲಾಘಿಸಿ ಆಯೋಜಕರ ವಿರುದ್ಧ ಕೆಂಡಕಾರಿದ ಬಿಜೆಪಿ&lt;/h2&gt;&lt;p&gt;ಶ್ರೀಗನರದ ಕಾರ್ಯಕ್ರಮದಲ್ಲಿನ ಘಟನೆ ಕುರಿತು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಪ್ರತಿಕ್ರಿಯಿಸಿದೆ. ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರಧ್ವಜ ರಿಬ್ಬನ್ ಹಾಕಿ ದೇಶದ ಧ್ವಜಕ್ಕೆ ಅವಮಾನ ಮಾಡಲಾಗಿದೆ. ದೇಶದ ಧ್ವಜಕ್ಕೆ ಗೌರವ ನೀಡುವದನ್ನೇ ಮರೆತಿದ್ದಾರೆ, ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇದರ ನಡುವೆ ಓಮರ್ ಅಬ್ದುಲ್ಲಾ ನಡೆಯನ್ನು ಬಿಜೆಪಿ ಶ್ವಾಘಿಸುತ್ತಿದೆ. ರಾಷ್ಟ್ರಧ್ವಜ ರಿಬ್ಬನ್ ಕಟ್ ಮಾಡಲು ನಿರಾಕರಿಸುವ ಮೂಲಕ ದೇಶಪ್ರೇಮ ಮೆರೆದಿದ್ದು ಮಾತ್ರವಲ್ಲ, ಆಯೋಜಕರಿಗೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆದರೆ ಇದು ಅಚನಕ್ಕಾಗಿ ಆಗಿರುವ ತಪ್ಪಲ್ಲ, ಇದರ ಹಿಂದೆ ಷಡ್ಯಂತ್ರ ಇದೆ ಎಂದು ಬಿಜೆಪಿ ಹೇಳಿದೆ. ಹೀಗಾಗಿ ಆಯೋಜಕರ ವಿರುದ್ದ ಆಕ್ರೋಶ ಹೊರಹಾಕಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Flag first, everything else later  #OmarAbdullah pic.twitter.com/5yY7GaHLBV&lt;/p&gt;&lt;p&gt;&mdash; Nation Decoded (@NationDecoded) April 15, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/jk-cm-omar-abullah-refuse-to-cut-national-flag-ribbon-at-sringar-event-video/articleshow-qt493ug"/>
        </item>
        <item>
            <title><![CDATA[ಅಣ್ಣ-ತಮ್ಮನ ಒಟ್ಟಿಗೇ ಮದ್ವೆಯಾದಾಕೆ ಈಗ ಮಗುವಿನ ಅಮ್ಮ- ಒಬ್ಬ ಅಪ್ಪ ಸ್ವದೇಶಿ, ಇನ್ನೊಬ್ಬ ವಿದೇಶಿ]]></title>
            <link>https://kannada.asianetnews.com/relationship/one-wife-two-husbands-and-now-a-baby-himachals-unique-marriage-back-in-spotlight-suc/articleshow-xt4ya7g</link>
            <guid isPermaLink="true">https://kannada.asianetnews.com/relationship/one-wife-two-husbands-and-now-a-baby-himachals-unique-marriage-back-in-spotlight-suc/articleshow-xt4ya7g</guid>
            <pubDate>Sat, 18 Apr 2026 12:47:38 +0530</pubDate>
            <description><![CDATA[ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸುನೀತಾ ಚೌಹಾಣ್, 'ಜೋಡಿದಾರ್' ಪದ್ಧತಿಯಂತೆ ಇಬ್ಬರು ಸಹೋದರರನ್ನು ವಿವಾಹವಾಗಿದ್ದರು. ಇದೀಗ ಅವರು ಮಗುವಿಗೆ ಜನ್ಮ ನೀಡಿದ್ದು, ಸಂಪ್ರದಾಯದ ಪ್ರಕಾರ ಈ ಮಗುವಿಗೆ ಇಬ್ಬರೂ ಅಪ್ಪಂದಿರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpfq686y0wv79rwyr70cfvmp,imgname-marriage-rituals-1776496615646.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದೇ ಮಂಟಪದಲ್ಲಿ ಅಣ್ಣ-ತಮ್ಮ ಇಬ್ಬರನ್ನೂ ಮದುವೆಯಾಗಿ ಸುದ್ದಿಯಾಗಿದ್ದ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸುನೀತಾ ಚೌಹಾಣ್ ಇದೀಗ ಮಗುವಿನ ಅಮ್ಮ ಆಗಿದ್ದಾಳೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಂತೋಷ ಹಂಚಿಕೊಂಡಿದ್ದಾಳೆ. ಹಿಮಾಚಲ ಪ್ರದೇಶದ ಕೆಲವು ಸಮುದಾಯದಲ್ಲಿ ಇರುವ ಜೋಡಿದಾರ್​ ಪದ್ಧತಿ ಅನ್ವಯ ಈ ಮದುವೆ ನಡೆದಿತ್ತು. ಸಿರ್ಮೌರ್ ಜಿಲ್ಲೆಯ ಕುಟುಂಬಸ್ಥರು ಅಲ್ಲಿಯ ಸಂಪ್ರದಾಯದಂತೆ ಸಹೋದರರನ್ನು ಒಬ್ಬಳಿಗೇ ಮದುವೆ ಮಾಡಿಸಿದ್ದರು. ಅದರಂತೆಯೇ ಅತ್ಯಂತ ಸಂಭ್ರಮದಿಂದ ಈ ಮದುವೆ ನಡೆದಿತ್ತು.&lt;/p&gt;&lt;h2&gt;&lt;strong&gt;ಸಂಪ್ರದಾಯವೇ ಹೀಗಿದೆ&lt;/strong&gt;&lt;/h2&gt;&lt;p&gt;ಮಗು ಹುಟ್ಟಿದ್ದರೂ ಅದರ ರಿಯಲ್​ ಅಪ್ಪ ಯಾರು ಎಂದು ಡಿಎನ್​ಎ ಪರೀಕ್ಷೆ ಮಾಡುವ ಸಂಪ್ರದಾಯ ಅಲ್ಲಿಲ್ಲ. ಆದ್ದರಿಂದ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಈ ಮಗುವಿಗೆ ಈಗ ಇಬ್ಬರು ಅಪ್ಪಂದಿರು, ಒಬ್ಬನ ಹೆಸರು ಪ್ರದೀಪ್ ನೇಗಿ ಮತ್ತು ಇನ್ನೊಬ್ಬನ ಹೆಸರು ಕಪಿಲ್ ನೇಗಿ. ಅಷ್ಟಕ್ಕೂ ಹೀಗೆ ಸಹೋದರರನ್ನು ಮದುವೆಯಾಗಿರುವವಳು ಇವಳೊಬ್ಬಳೇ ಏನಲ್ಲ. ಅಲ್ಲಿಯ ಸಂಪ್ರದಾಯದಂತೆ ಇದಾಗಲೇ ಬಹಳ ಮದುವೆಯಾಗಿದ್ದರೂ, ಸೋಷಿಯಲ್​ ಮೀಡಿಯಾದಲ್ಲಿ ಸುನೀತಾ ಆ್ಯಕ್ಟೀವ್​ ಇರುವ ಕಾರಣ, ಈ ಬಗ್ಗೆ ಆಕೆ ಶೇರ್​ ಮಾಡಿದ್ದ ಕಾರಣ ಇದು ಇಷ್ಟೆಲ್ಲಾ ಸದ್ದು ಮಾಡಿತ್ತು. ಹೆಚ್ಚಾಗಿ ಒಬ್ಬ ಗಂಡು 3-4 ಮದುವೆಯಾಗುವ ಸಂಪ್ರದಾಯ ನೋಡಿರುವ ಎಲ್ಲರಿಗೂ ಇಬ್ಬರು ಪುರುಷರನ್ನು ಮದುವೆಯಾಗುವ ಸಂಪ್ರದಾಯ ಕೇಳಿ ಶಾಕ್​ ಆಗಿತ್ತಷ್ಟೇ. ಆದರೆ ಅಲ್ಲಿ ಇದು ಮಾಮೂಲು.&lt;/p&gt;&lt;h3&gt;&lt;strong&gt;ವಿದೇಶದಲ್ಲಿರೋ ಒಬ್ಬ ಅಪ್ಪ&lt;/strong&gt;&lt;/h3&gt;&lt;p&gt;ಸದ್ಯ ಈ ಮಗುವಿನ ಅಪ್ಪಂದಿರಲ್ಲಿ ಒಬ್ಬ ಸ್ವದೇಶಿ ಆಗಿದ್ದರೆ, ಇನ್ನೊಬ್ಬ ವಿದೇಶಿ ಆಗಿದ್ದಾನೆ. ಅರ್ಥಾತ್​ ಒಬ್ಬ ತಂದೆ ಮನೆಯಲ್ಲಿಯೇ ಇದ್ದು, ಇನ್ನೊಬ್ಬ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ. ಅಲ್ಲಿಂದಲೇ ಸೋಷಿಯಲ್​ ಮೀಡಿಯಾದಲ್ಲಿ ಆತ ಶುಭ ಕೋರಿದ್ದಾನೆ. ಆತ, ಮಗು ನಮ್ಮ ಜೀವನವನ್ನು ಪೂರ್ಣಗೊಳಿಸಿತು ಎಂದು ಬರೆದುಕೊಂಡಿದ್ದಾನೆ. ಮಗುವನ್ನು ಎತ್ತಿಕೊಂಡು ಪಿತೃತ್ವದ ಸಂತೋಷವನ್ನು ಅನುಭವಿಸಲು ಶೀಘ್ರದಲ್ಲೇ ಮನೆಗೆ ಮರಳಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಮನೆಗೆ ಮರಳಲು ಉತ್ಸುಕತೆ ಇರಲಿಲ್ಲ. ಆದರೆ ಈಗ ಕುಟುಂಬದೊಂದಿಗೆ ಅಮೂಲ್ಯ ಸಮಯವನ್ನು ಕಳೆಯಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದು, ಇದಕ್ಕೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ.&lt;/p&gt;&lt;h3&gt;&lt;strong&gt;ಏನಿದು ಪದ್ಧತಿ?&lt;/strong&gt;&lt;/h3&gt;&lt;p&gt;ಸಿರ್ಮೌರ್&zwnj;ನ ಕೆಲವು ಭಾಗಗಳಲ್ಲಿ ಇನ್ನೂ ಆಚರಣೆಯಲ್ಲಿರುವ &quot;ಜೋಡಿದಾರ್&quot; ಅಥವಾ ಬಹುಪತ್ನಿತ್ವ ಸಂಪ್ರದಾಯವು ಒಂದೇ ಕುಟುಂಬದ ಇಬ್ಬರು ಅಥವಾ ಹೆಚ್ಚಿನ ಸಹೋದರರು ಒಬ್ಬ ಮಹಿಳೆಯನ್ನು ಮದುವೆಯಾಗಲು ಅನುವು ಮಾಡಿಕೊಡುತ್ತದೆ. ಹಿಂದೆ ಇಂತಹ ಪದ್ಧತಿಗಳು ಹೆಚ್ಚು ಸಾಮಾನ್ಯವಾಗಿದ್ದರೂ, ದಂಪತಿಗಳ ಆಧುನಿಕ ಹಿನ್ನೆಲೆಯಿಂದಾಗಿ ಈ ನಿರ್ದಿಷ್ಟ ವಿವಾಹವು ಕಳೆದ ವರ್ಷ ವ್ಯಾಪಕ ಗಮನ ಸೆಳೆದಿತ್ತು. ಮಗುವಿನ ಜನನದೊಂದಿಗೆ, ಕುಟುಂಬದಲ್ಲಿ ಆಚರಣೆಗಳು ತೀವ್ರಗೊಂಡಿವೆ ಮತ್ತು ಸ್ಥಳೀಯರು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರು ದಂಪತಿಗಳಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/one-wife-two-husbands-and-now-a-baby-himachals-unique-marriage-back-in-spotlight-suc/articleshow-xt4ya7g"/>
        </item>
        <item>
            <title><![CDATA[ರಾಸಲೀಲೆ ಕೇಸ್ ನಾಸಿಕ್ ಗುರೂಜಿ ಆಪ್ತ,ಪತ್ನಿ ಅಪಘಾತದಲ್ಲಿ ಸಾವು, ಅನುಮಾನ ಹೆಚ್ಚಿಸಿದ ಆ್ಯಕ್ಸಿಡೆಂಟ್]]></title>
            <link>https://kannada.asianetnews.com/gallery/india-news/deepens-in-nashik-guruji-scandal-close-aide-wife-dies-in-suspicious-road-accident-wh8ia61</link>
            <guid isPermaLink="true">https://kannada.asianetnews.com/gallery/india-news/deepens-in-nashik-guruji-scandal-close-aide-wife-dies-in-suspicious-road-accident-wh8ia61</guid>
            <pubDate>Sat, 18 Apr 2026 11:50:59 +0530</pubDate>
            <description><![CDATA[&lt;p&gt;ರಾಸಲೀಲೆ ಕೇಸ್ ನಾಸಿಕ್ ಗುರೂಜಿ ಆಪ್ತ, ಪತ್ನಿ ಅಪಘಾತದಲ್ಲಿ ಸಾವು, ಅನುಮಾನ ಹೆಚ್ಚಿಸಿದ ಆ್ಯಕ್ಸಿಡೆಂಟ್, ಗುರೂಜಿ ಜೈಲು ಸೇರಿದ್ದರೂ ಪ್ರಭಾವ ಬಳಸಿ ತನ್ನ ವಿರುದ್ಧ ಸಾಕ್ಷ್ಯ ಸಿಗದಂತೆ ಮಾಡುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knm51jwmageb0r09xf12qsjh,imgname-ashok-kharat-case-1775571618707.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಸಲೀಲೆ ಕೇಸ್ ನಾಸಿಕ್ ಗುರೂಜಿ ಆಪ್ತ, ಪತ್ನಿ ಅಪಘಾತದಲ್ಲಿ ಸಾವು, ಅನುಮಾನ ಹೆಚ್ಚಿಸಿದ ಆ್ಯಕ್ಸಿಡೆಂಟ್, ಗುರೂಜಿ ಜೈಲು ಸೇರಿದ್ದರೂ ಪ್ರಭಾವ ಬಳಸಿ ತನ್ನ ವಿರುದ್ಧ ಸಾಕ್ಷ್ಯ ಸಿಗದಂತೆ ಮಾಡುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;img&gt;&lt;p&gt;ರಾಸಲೀಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಾಸಿಕ್ ಗುರೂಜಿ ಅಶೋಕ್ ಖಾರಟ್ ತನಿಖೆಯಲ್ಲಿ ಹಲವು ಸ್ಪೋಟಕ ಮಾಹಿತಿಗಳು ಹೊರಬಂದಿದೆ. 100ಕ್ಕೂ ಹೆಚ್ಚು ಮಹಿಳೆಯನ್ನು ಆಧಾತ್ಮಿಕ, ಪೂಜೆ ಹೆಸರಿನಲ್ಲಿ ಬಳಸಿಕೊಂಡ ಅಶೋಕ್ ಖಾರಟ್ ಇದೀಗ ಜೈಲಿನಲ್ಲಿದ್ದರೂ ತನ್ನ ವಿರುದ್ದ ಸಾಕ್ಷ್ಯ ಸಿಗದಂತೆ ಮಾಡುವ ಪ್ರಯತ್ನ ಮಾಡುತ್ತಿದ್ದಾರಾ ಅನ್ನೋ ಅನುಮಾನ ಹೆಚ್ಚಿಸಿದೆ. ಅಶೋಕ್ ಖಾರಟ್&zwnj;ನ ಆಪ್ತನಾಗಿದ್ದ ಜಿತೇಂದ್ರ ಶಿಲ್ಕೆ ಹಾಗೂ ಆತನ ಪತ್ನಿ ಅನುರಾಧ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಇವರ ಪುತ್ರ 14 ವರ್ಷದ ಸುಜಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಶೋಕ್ ಖಾರಟ್ ಆಪ್ತ 50 ವರ್ಷದ ಜಿತೇಂದ್ರ ಶಿಲ್ಕೆ, ಪತ್ನಿ 45 ವರ್ಷದ ಅನುರಾಧ ಹಾಗೂ ಪುತ್ರ ಸುಜಿತ್ ಕಾರಿನಲ್ಲಿ ತೆರಳುತ್ತಿದ್ದಾಗ, ಹಿಂಬದಿಯಿಂದ ಬಂದ ಟ್ರಕ್ ಡಿಕ್ಕಿಯಾಗಿದೆ. ತಮ್ಮ ಪಾಡಿಗೆ ಹೋಗುತ್ತಿದ್ದ ಕಾರಿಗೆ ಬಂದು ಟ್ರಕ್ ಡಿಕ್ಕಿಯಾಗಿದೆ. ಅತೀ ವೇಗವಾಗಿ ಬಂದ ಟ್ರಕ್ ಡಿಕ್ಕಿಯಾಗಿ ಶಿಲ್ಕೆ ಹಾಗೂ ಅನುರಾಧ ಸ್ಥಳದಲ್ಲೇ ಮೃತಪಟ್ಟರೆ, ಪುತ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಟ್ರಕ್ ಚಾಲಕ ಪರಾರಿಯಾಗಿದ್ದಾನೆ.&lt;/p&gt;&lt;img&gt;&lt;p&gt;ಛತ್ರಪತಿ ಸಂಭಾಜಿ ನಗರದಿಂದ ಶಿರಡಿಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಅರೆಸ್ಟ್ ಆಗಿರುವ ಅಶೋಕ್ ಗುರೂಜಿಯ ಟ್ರಸ್ಟ್&zwnj;ನಲ್ಲಿ ಉಪಾಧ್ಯಕ್ಷನಾಗಿದ್ದ ಶಿಲ್ಕೆ ದೇವಸ್ಥಾನ ಹಾಗೂ ಇತರ ಟ್ರಸ್ಟ್&zwnj;ಗಳ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು. ಅಶೋಕ್ ಖಾರಟ್ ರಾಸಲೀಲೆ ಪ್ರಕರಣದಲ್ಲಿ ಶಿಲ್ಕೆ ಪಾತ್ರ ಇರಲಿಲ್ಲ. ಆದರೆ ಅಶೋಕ್ ಖಾರಟ್ ವಿರುದ್ಧ ಶಿಲ್ಕೆ ಸಾಕ್ಷ್ಯ ನುಡಿಯುವ ಸಾಧ್ಯತೆ ಇದೆ ಅನ್ನೋ ಆತಂಕ ಕಾಡಿತ್ತು. ಕಾರಣ ಟ್ರಸ್ಟ್&zwnj;ನಲ್ಲಿನ ಹಣ ವರ್ಗಾವಣೆ, ಹಣದ ವ್ಯವಹಾರಗಳ ಕುರಿತು ಅಕ್ರಮಕ್ಕೆ ಶಿಲ್ಕೆ ಅನುಮತಿ ನೀಡುತ್ತಿರಲಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಹಲವು ಈ ಬಾರಿ ಈ ರೀತಿಯ ಪ್ರಯತ್ನಗಳು ನಡೆದಿತ್ತು. ಹೀಗಾಗಿ ಈ ದಾಖಲೆ ಹಾಗೂ ಸಾಕ್ಷ್ಯಗಳು ತನಗೆ ಮತ್ತಷ್ಟು ಮುಳ್ಳಾಗುವ ಸಾಧ್ಯತೆಯಿಂದ ಉದ್ದೇಶಪೂರ್ವಕವಾಗಿ ಅಪಘಾತ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಅಪಘಾತ ಹಾಗೂ ಸೋವು ನೋವಿನ ಕುರಿತು ಎನ್&zwnj;ಸಿಪಿ(ಎಸ್&zwnj;ಪಿ) ಶಾಸಕ ರೋಹಿತ್ ಪವಾರ್ ಧ್ವನಿ ಎತ್ತಿದ್ದಾರೆ. ಶಿಲ್ಕೆ ಹಾಗೂ ಕುಟಂಬದ ಕಾರು ಅಪಘಾತ ಮಾಹಿತಿ ಆಘಾತ ತಂದಿದೆ. ನಿಧಾನವಾಗಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದರೆ, ಮತ್ತೊರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಶಿಲ್ಕೆ ಪುತ್ರ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದಿದ್ದಾರೆ. ಇದೇ ವೇಳೆ ಈ ಅಪಘಾತ ಅನುಮಾನ ಹುಟ್ಟಿಸುವಂತಿದೆ. ಈ ಅಪಘಾತದ ಹಿಂದೆ ಜೈಲು ಸೇರಿರುವ ಅಶೋಕ್ ಖಾರಟ್ ಕೈವಾಡವಿದೆಯಾ ಅನ್ನೋದು ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.&lt;/p&gt;&lt;h2&gt;ಅಪಘಾತದ ಹಿಂದೆ ಷಡ್ಯಂತ್ರ&lt;/h2&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/deepens-in-nashik-guruji-scandal-close-aide-wife-dies-in-suspicious-road-accident-wh8ia61"/>
        </item>
        <item>
            <title><![CDATA[1996 ದೇವೇಗೌಡರು ಮತ್ತು 2026 ಮೋದಿ; ಮಹಿಳಾ ಮೀಸಲಿಗೆ ಕರಾಳ ಇತಿಹಾಸ ಮರುಕಳಿಸಿದೆ!]]></title>
            <link>https://kannada.asianetnews.com/webstories/politics/women-s-reservation-bill-hd-kumaraswamy-slams-congress-s-anti-women-mindset-sat-n78du80</link>
            <guid isPermaLink="true">https://kannada.asianetnews.com/webstories/politics/women-s-reservation-bill-hd-kumaraswamy-slams-congress-s-anti-women-mindset-sat-n78du80</guid>
            <pubDate>Sat, 18 Apr 2026 09:58:59 +0530</pubDate>
            <description><![CDATA[&lt;p&gt;ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಅಂದೂ ಇಂದೂ ಅಡ್ಡಗಾಲು ಹಾಕುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. 1996ರ ಇತಿಹಾಸ ಮರುಕಳಿಸಿದ್ದೇಕೆ? ಪೂರ್ಣ ವಿವರ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfcaspj3kgpwscx4e2nhydp,imgname-devegowda-1776485230290.png" type="image/jpeg" height="390" width="690"/>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/politics/women-s-reservation-bill-hd-kumaraswamy-slams-congress-s-anti-women-mindset-sat-n78du80"/>
        </item>
        <item>
            <title><![CDATA[ಕ್ರಿಕೆಟ್‌ ಆಡುವಾಗ ಫಾಸ್ಟ್‌ ಬೌಲರ್‌ಗಳು ಯಾಕೆ ಬ್ರ್ಯಾಂಡ್‌ ಶೂ ಮುಂಭಾಗವನ್ನೂ ಯಾಕೆ ತೂತು ಮಾಡ್ತಾರೆ?]]></title>
            <link>https://kannada.asianetnews.com/gallery/cricket-sports/why-do-fast-bowlers-cut-their-landing-running-shoes-in-cricket-field-xncpadb</link>
            <guid isPermaLink="true">https://kannada.asianetnews.com/gallery/cricket-sports/why-do-fast-bowlers-cut-their-landing-running-shoes-in-cricket-field-xncpadb</guid>
            <pubDate>Sat, 18 Apr 2026 07:30:23 +0530</pubDate>
            <description><![CDATA[&lt;p&gt;Why do fast bowlers cut their shoes: ಕ್ರಿಕೆಟ್&zwnj; ಲೋಕದಲ್ಲಿ ವೇಗದ ಬೌಲರ್&zwnj;ಗಳು ತಮ್ಮ ಶೂಗಳ ಮುಂಭಾಗವನ್ನು ಏಕೆ ಕತ್ತರಿಸುತ್ತಾರೆ. ಇದನ್ನು ಕೆಲವರು ಗಮನಿಸಿರಬಹುದು, ಕಾರಣವಿದೆ. ಫಾಸ್ಟ್ ಬೌಲರ್&zwnj;ಗಳು ತಮ್ಮ ಬೌಲಿಂಗ್ ಶೂಗಳ ಮುಂಭಾಗದ (ಬೆರಳಿನ ಭಾಗ) ಕತ್ತರಿಸುತ್ತಾರೆ. ಇದಕ್ಕೆ ಕಾರಣ ಇದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe8qx0k2gp3p1w1dq6q1k62,imgname-new-project--99--1776447910931.jpg" type="image/jpeg" height="390" width="690"/>
            <content:encoded><![CDATA[&lt;p&gt;Why do fast bowlers cut their shoes: ಕ್ರಿಕೆಟ್&zwnj; ಲೋಕದಲ್ಲಿ ವೇಗದ ಬೌಲರ್&zwnj;ಗಳು ತಮ್ಮ ಶೂಗಳ ಮುಂಭಾಗವನ್ನು ಏಕೆ ಕತ್ತರಿಸುತ್ತಾರೆ. ಇದನ್ನು ಕೆಲವರು ಗಮನಿಸಿರಬಹುದು, ಕಾರಣವಿದೆ. ಫಾಸ್ಟ್ ಬೌಲರ್&zwnj;ಗಳು ತಮ್ಮ ಬೌಲಿಂಗ್ ಶೂಗಳ ಮುಂಭಾಗದ (ಬೆರಳಿನ ಭಾಗ) ಕತ್ತರಿಸುತ್ತಾರೆ. ಇದಕ್ಕೆ ಕಾರಣ ಇದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬೌಲಿಂಗ್ ಮಾಡುವಾಗ ಮುಂಗಾಲು ನೆಲಕ್ಕೆ ಅಪ್ಪಳಿಸಿದಾಗ, ಹೆಬ್ಬೆರಳು ಸಹಜವಾಗಿಯೇ ಶೂನ ಒಳಗೆ ಮುಂದಕ್ಕೆ ನೂಕಲ್ಪಡುತ್ತದೆ. ಅತಿ ವೇಗದಲ್ಲಿ ಓಡಿ ಬಂದು ಪದೇ ಪದೇ ಹೀಗೆ ಮಾಡಿದಾಗ, ಬೆರಳು ಶೂನ ಮುಂಭಾಗಕ್ಕೆ ಹೋಗಿ ಬಡಿಯುತ್ತಲೇ ಇರುತ್ತದೆ.&lt;/p&gt;&lt;img&gt;&lt;p&gt;ಒಂದಿಷ್ಟು ಟೈಮ್&zwnj; ಆದ್ಮೇಲೆ ಆ ಒತ್ತಡವು ಹೆಚ್ಚಾಗಿ ವಿಪರೀತ ನೋವು ಆಗುವುದು, ಉಗುರು ಕಟ್&zwnj; ಆಗುವುದು. ಕೆಲವು ಸಂದರ್ಭಗಳಲ್ಲಿ ಸೋಂಕಿ ಆಗಬಹುದು.&lt;/p&gt;&lt;img&gt;&lt;p&gt;ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬೌಲರ್&zwnj;ಗಳು ಶೂನ ಮುಂಭಾಗವನ್ನು ಕತ್ತರಿಸುತ್ತಾರೆ. ಇದು ಹೆಬ್ಬೆರಳು ಆರಾಮಾಗಿ ಚಲಿಸಲು ಜಾಗ ಕೊಡುವುದು. ಇದರಿಂದ ಪದೇ ಪದೇ ಕಾಲಿಗೆ ಸಮಸ್ಯೆ ಆಗೋದಿಲ್ಲ. ಮುಕ್ತವಾಗಿ ಚಲಿಸಲು ಜಾಗ ಸಿಗುವುದು. ಕಾಲು ನೆಲಕ್ಕೆ ತಾಕುವ ಪ್ರಕ್ರಿಯೆ ಕೂಡ ಆರಾಮದಾಯಕ ಆಗಿರುವುದು.&lt;/p&gt;&lt;img&gt;&lt;p&gt;ಇದು ನೋಡಲು ವಿಚಿತ್ರವಾಗಿ ಕಂಡರೂ, ಕ್ರಿಕೆಟಿಗರು ಎದುರಿಸುವ ಒಂದು ಗಂಭೀರ ಸಮಸ್ಯೆಗೆ ಇದೊಂದು ನಿಜಕ್ಕೂ ಜಾಣ್ಮೆಯ ಪರಿಹಾರವಾಗಿದೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/why-do-fast-bowlers-cut-their-landing-running-shoes-in-cricket-field-xncpadb"/>
        </item>
        <item>
            <title><![CDATA[Women s Reservation Defeat: ವಿಪಕ್ಷಗಳಿಗೆ ಮಹಿಳಾ ವಿರೋಧಿ ಹಣೆಪಟ್ಟಿ, ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಗೆ ರಾಜಕೀಯ ಅಸ್ತ್ರ?]]></title>
            <link>https://kannada.asianetnews.com/india-news/women-s-reservation-defeat-opposition-branded-anti-women-a-political-weapon-for-bjp-to-corner-congress-rav/articleshow-0w55xv8</link>
            <guid isPermaLink="true">https://kannada.asianetnews.com/india-news/women-s-reservation-defeat-opposition-branded-anti-women-a-political-weapon-for-bjp-to-corner-congress-rav/articleshow-0w55xv8</guid>
            <pubDate>Sat, 18 Apr 2026 06:22:42 +0530</pubDate>
            <description><![CDATA[&lt;p&gt;ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಯು ಸೋಲು ಕಂಡಿದೆ. ಈ ಸೋಲನ್ನು ಮುಂಬರುವ ಚುನಾವಣೆಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಲು ಬಿಜೆಪಿ ಸಜ್ಜಾಗಿದ್ದರೆ, ವಿಪಕ್ಷಗಳು ಇದನ್ನು ಸಂವಿಧಾನಕ್ಕೆ ಸಂದ ಜಯವೆಂದು ಸಂಭ್ರಮಿಸುತ್ತಿವೆ. ಈ ಬೆಳವಣಿಗೆಯ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ &amp;nbsp;ವಾಕ್ಸಮರಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpezhsrxbwqye8861wb4xy6r,imgname-----------------------2026-04-18t055327.403-1776471828253.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.18)&lt;/strong&gt;: ಮಹಿಳಾ ಮೀಸಲು ಮಸೂದೆಯ ಸೋಲನ್ನು ಬಿಜೆಪಿ, ಪ್ರತಿಪಕ್ಷಗಳ ವಿರುದ್ಧ ಮುಂಬರುವ 2 ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.&lt;/p&gt;&lt;p&gt;ಸರ್ಕಾರಕ್ಕೆ ಈ ಸೋಲು ಪೂರ್ಣವಾಗಿ ಅಂದಾಜಿತ್ತು. ಎನ್&zwnj;ಡಿಎ ಬಳಿ ಸುಮಾರು 293 ಸಂಸದರಿದ್ದರೂ, ಸಂವಿಧಾನ ತಿದ್ದುಪಡಿ ಮಸೂದೆಗೆ ಬೇಕಾದ 2/3ರಷ್ಟು ಬಹುಮತ (ಸುಮಾರು 360 ಮತಗಳು) ಸಿಗುವುದು ಕಷ್ಟ ಎಂದು ಸರ್ಕಾರಕ್ಕೆ ಗೊತ್ತಿತ್ತು. ವಿರೋಧ ಪಕ್ಷಗಳು ಕ್ಷೇತ್ರ ಮರುವಿಂಗಡಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದುದರಿಂದ ಮಸೂದೆ ಸೋಲುತ್ತದೆ ಎಂದು ಮುಂಚಿತವಾಗಿಯೇ ಲೆಕ್ಕ ಹಾಕಲಾಗಿತ್ತು. ಆದರೆ ಸರ್ಕಾರ ಉದ್ದೇಶಪೂರ್ವಕವಾಗಿ ಈ ಮಸೂದೆಯನ್ನು ಮುಂದುವರಿಸಿತು. ಈ ಸೋಲನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿಬರುತ್ತಿವೆ.&lt;/p&gt;&lt;p&gt;ಇದೇ ಏ.23ಕ್ಕೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಇದೇ ವೇಳೆ ಸರ್ಕಾರದ ಮಹತ್ವದ ನಿರ್ಣಯಕ್ಕೆ ಸೋಲಾಗಿರುವುದರಿಂದ, &lsquo;ನಾವು ಮಹಿಳೆಯರಿಗೆ ಶೇ.33 ಮೀಸಲು ನೀಡಲು ಸಿದ್ಧರಾಗಿದ್ದೆವು. ಆದರೆ ವಿಪಕ್ಷಗಳು ಮಹಿಳಾ ಸಬಲೀಕರಣಕ್ಕೆ ತಡೆ ಹಾಕಿದರು&rsquo; ಎಂದು ಎನ್&zwnj;ಡಿಎ ವ್ಯಾಪಕ ಪ್ರಚಾರ ನಡೆಸುವ ನಿರೀಕ್ಷೆಯಿದೆ. ವಿಪಕ್ಷಗಳನ್ನು &lsquo;ಮಹಿಳಾ ವಿರೋಧಿ&rsquo; ಎಂದು ಚಿತ್ರಿಸಿ, ಮಹಿಳಾ ಮತದಾರರ ಮನ ಗೆಲ್ಲುವ ತಂತ್ರಗಾರಿಕೆ ಕಾಣುತ್ತಿದೆ.&lt;/p&gt;&lt;h2&gt;ವಿಪಕ್ಷಗಳ ವಿರುದ್ಧ ಬಿಜೆಪಿಗರ ಪ್ರತಿಭಟನೆ&lt;/h2&gt;&lt;p&gt;ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಗೆ ಸೋಲುಂಟಾದ ಬೆನ್ನಲ್ಲೇ ಎನ್&zwnj;ಡಿಎ ಸಂಸದರು ಸಂಸತ್&zwnj;ನ ಹೊರಗೆ ಮತ್ತು ಸದನದ ಒಳಗೆ ತೀವ್ರ ಪ್ರತಿಭಟನೆ ನಡೆಸಿದರು. ಬಿಜೆಪಿ ಮಹಿಳಾ ಸಂಸದರು &lsquo;ವಿಪಕ್ಷಗಳು ಮಹಿಳೆಯರನ್ನು ಮತ್ತೆ ವಂಚಿಸಿವೆ&rsquo;, &lsquo;ನಾವು ಮಹಿಳೆಯರ ಹಕ್ಕಿಗಾಗಿ ಹೋರಾಡುತ್ತೇವೆ&rsquo; ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯಲ್ಲಿ ಭಾಗವಹಿಸಿದರು.&lt;/p&gt;&lt;p&gt;ಇದೇ ವೇಳೆ, ಕೇಂದ್ರ ಸಚಿವ ಅಮಿತ್&zwnj; ಶಾ ಹಾಗೂ ಕಿರಣ್&zwnj; ರಿಜಿಜು ಪ್ರತಿಪಕ್ಷಗಳ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h3&gt;ಶಾ ಹೇಳಿದ್ದೇನು?:&lt;/h3&gt;&lt;p&gt;&lsquo;ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ನೀಡುವ ಮಸೂದೆಯ ಸೋಲನ್ನು ವಿಪಕ್ಷಗಳು ಆಚರಿಸುವುದು ಖಂಡನೀಯ, ಕಲ್ಪನೆಗೂ ಮೀರಿದ ಕೃತ್ಯ. ಲೋಕಸಭೆಯಲ್ಲಿ ಮಹಿಳಾ ಕೋಟಾ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಎಸ್&zwnj;ಪಿ ಅವಕಾಶ ನೀಡಲಿಲ್ಲ. ಈಗ ಮಹಿಳೆಯರಿಗೆ ಶಾಸಕಾಂಗಗಳಲ್ಲಿ ಶೇ. 33 ರಷ್ಟು ಮೀಸಲಾತಿ ಸಿಗುವುದಿಲ್ಲ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇದನ್ನು ಮೊದಲ ಬಾರಿಗೆ ಅಲ್ಲ, ಪದೇ ಪದೇ ಮಾಡಿವೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಮನಃಸ್ಥಿತಿ ಮಹಿಳೆಯರ ಹಿತಾಸಕ್ತಿ ಅಥವಾ ದೇಶದ ಹಿತಾಸಕ್ತಿಯ ಪರ ಇಲ್ಲ ಎಂದು ಅಮಿತ್&zwnj; ಶಾ ಕಿಡಿಕಾರಿದ್ದಾರೆ.&lt;/p&gt;&lt;p&gt;&lt;strong&gt;ಹೋರಾಟ ಮುಂದುವರಿಯುತ್ತದೆ- ರಿಜಿಜು:&lt;/strong&gt;&lt;/p&gt;&lt;p&gt;ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್&zwnj; ರಿಜಿಜು, &lsquo;ವಿಪಕ್ಷಗಳು ಮಹಿಳೆಯರನ್ನು ಗೌರವಿಸುವ ಐತಿಹಾಸಿಕ ಅವಕಾಶವನ್ನು ಕಳೆದುಕೊಂಡಿವೆ. ಮೋದಿ ಸರ್ಕಾರ ಮಹಿಳೆಯರಿಗೆ ಹಕ್ಕು ನೀಡುವ ಹೋರಾಟವನ್ನು ಮುಂದುವರಿಸುತ್ತದೆ. ಮಹಿಳಾ ಮೀಸಲಾತಿಯನ್ನು ಖಂಡಿತ ಜಾರಿಗೆ ತರುತ್ತೇವೆ&rsquo; ಎಂದಿದ್ದಾರೆ.&lt;/p&gt;&lt;p&gt;&lt;strong&gt;ಶಿವಸೇನೆ ನಾಯಕಿ ಚತುರ್ವೇದಿ ವಿಭಿನ್ನ ನಿಲುವು:&lt;/strong&gt;&lt;/p&gt;&lt;p&gt;ಮಹಿಳಾ ಮೀಸಲಾತಿ ಮಸೂದೆ ಸೋಲು ಕಂಡಿದ್ದಕ್ಕೆ ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ತಮ್ಮ ಪಕ್ಷದ ನಿಲುವಿಗಿಂತ ಭಿನ್ನವಾದ ಪ್ರತಿಕ್ರಿಯೆ ನೀಡಿದ್ದಾರೆ. &lsquo;ಇಂದು ಭಾರತದ ಮಹಿಳೆಯರಿಗೆ ದುಃಖದ ದಿನ. ಸಂಸತ್ ಅಥವಾ ಶಾಸನಸಭೆಯಲ್ಲಿ ತಮ್ಮನ್ನು ಕಾಣುವ ಕನಸು ಹೊಂದಿದ್ದ ಮಹಿಳೆಯರಿಗೆ ಇದು ದುಃಖಕರ&rsquo; ಎಂದು ಟ್ವೀಟ್&zwnj; ಮಾಡಿದ್ದಾರೆ. ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮಸೂದೆಯನ್ನು ವಿರೋಧಿಸಿದ್ದರು.&lt;/p&gt;&lt;p&gt;&lt;strong&gt;ಮಹಿಳಾ ಮೀಸಲಾತಿ ಸೋಲಿಗೆ ವಿಪಕ್ಷಗಳ ಸಂಭ್ರಮ&lt;/strong&gt;&lt;/p&gt;&lt;p&gt;ಸಂಸತ್&zwnj;ನಲ್ಲಿ ಬಹು ನಿರೀಕ್ಷಿತ ಮಹಿಳಾ ಮೀಸಲಾತಿಗೆ ಸೋಲಾಗಿರುವುದನ್ನು ವಿಪಕ್ಷಗಳು ಸಂಭ್ರಮಿಸಿವೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್&zwnj; ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್&zwnj; ಸೇರಿ ಹಲವರು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದು &lsquo;ಇದು ವಿಪಕ್ಷಗಳಿಗೆ ಸಂದ ಜಯ&rsquo; ಎಂದಿದ್ದಾರೆ.&lt;/p&gt;&lt;p&gt;ಮಸೂದೆಗೆ ಸೋಲಾದ ಬಳಿಕ ಸಂಸತ್&zwnj; ಆವರಣದಲ್ಲಿ ಈ ಬಗ್ಗೆ ಮಾತನಾಡಿದ ರಾಹುಲ್&zwnj; ಗಾಂಧಿ, &lsquo;ನಾನು ಹೇಳಿದಂತೆ ಈ ಮಸೂದೆ ಸಂವಿಧಾನದ ಮೇಲಿನ ದಾಳಿ ಮತ್ತು ನಾವು ಅದನ್ನು ಸೋಲಿಸಿದ್ದೇವೆ. ಇದು ಮಹಿಳಾ ಮೀಸಲಾತಿ ಬಿಲ್ ಅಲ್ಲ. ಬದಲಾಗಿ ಭಾರತದ ಚುನಾವಣಾ ವ್ಯವಸ್ಥೆ ಎಂದು ಹೇಳಿದ್ದೆವು. ಅದನ್ನು ನಾವು ನಿಲ್ಲಿಸಿದ್ದೇವೆ. ಇಡೀ ವಿಪಕ್ಷಗಳು ಇದಕ್ಕೆ ಬೆಂಬಲಿಸಿವೆ&rsquo; ಎಂದಿದ್ದಾರೆ.&lt;/p&gt;&lt;p&gt;ಇದರ ಜತೆಗೆ &lsquo;ತಿದ್ದುಪಡಿ ಬಿಲ್&zwnj; ಮುರಿದು ಬಿದ್ದಿದೆ. ಆದರೆ ಮಹಿಳೆಯರ ಹೆಸರಿನಲ್ಲಿ ಸಂವಿಧಾನ ಮುರಿಯಲು ಅಸಂವಿಧಾನಿಕ ತಂತ್ರ ಬಳಸಿದರು. ಭಾರತ ಅದನ್ನು ನೋಡಿದೆ. ಇಂಡಿಯಾ ಕೂಡ ಅದನ್ನು ನಿಲ್ಲಿಸಿದೆ&rsquo; ಎಂದು ಎಕ್ಸ್&zwnj;ನಲ್ಲಿ ಪೋಸ್ಟ್&zwnj; ಮಾಡಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್&zwnj; ಸಂಸದೆ ಪ್ರಿಯಾಂಕಾ ಗಾಂಧಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, &lsquo; ಮೋದಿ ಸರ್ಕಾರ ಮಹಿಳಾ ಮೀಸಲಾತಿಯನ್ನು ಮಂಡಿಸಿದ ರೀತಿ ಅದನ್ನು ಅಂಗೀಕರಿಸಲು ಅಸಾಧ್ಯವಾಗಿತ್ತು. ನಾವು ಇದನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಇದು ದೇಶದ ಪ್ರಜಾಪ್ರಭುತ್ವ ಮತ್ತು ಅದರ ಸಮಗ್ರತೆಗೆ ಸಿಕ್ಕ ದೊಡ್ಡ ಗೆಲುವು&rsquo; ಎಂದಿದ್ದಾರೆ.&lt;/p&gt;&lt;p&gt;&lt;strong&gt;ಸ್ಟಾಲಿನ್&zwnj; ಸಂತಸ:&lt;/strong&gt;&lt;/p&gt;&lt;p&gt;ಮಹಿಳಾ ಮೀಸಲಾತಿ ಮಸೂದೆ ಸೋಲಿನ ಜತೆಗೆ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಕೇಂದ್ರ ಹಿಂದಕ್ಕೆ ಪಡೆದಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್&zwnj; ಸಂತಸ ವ್ಯಕ್ತಪಡಿಸಿದ್ದಾರೆ. ಮರುವಿಂಗಡಣೆ ಮಸೂದೆ ಪ್ರತಿಯನ್ನು ಸುಡುತ್ತಿರುವ ಫೋಟೋವನ್ನು ಜಾಲತಾಣದಲ್ಲಿ ಪೋಸ್ಟ್&zwnj; ಮಾಡಿರುವ ಅವರು &lsquo;ತಮಿಳುನಾಡು ದೆಹಲಿಯನ್ನು ಸೋಲಿಸಿದೆ&rsquo; ಎಂದು ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/women-s-reservation-defeat-opposition-branded-anti-women-a-political-weapon-for-bjp-to-corner-congress-rav/articleshow-0w55xv8"/>
        </item>
        <item>
            <title><![CDATA['ನಂಗೂ ಮೋದಿಗೂ ಹೆಂಡತಿ ಸಮಸ್ಯೆ ಇಲ್ಲ': ರಾಹುಲ್ ಗಾಂಧಿ | ಪ್ರಿಯಾಂಕಾ ನೋಡಿ ಕಲಿಯಿರಿ ಎಂದ ಶಾ]]></title>
            <link>https://kannada.asianetnews.com/india-news/both-the-prime-minister-and-i-do-not-have-wife-issues-says-lop-rahul-gandhi-in-lok-sabha-rav/articleshow-0lvr9lw</link>
            <guid isPermaLink="true">https://kannada.asianetnews.com/india-news/both-the-prime-minister-and-i-do-not-have-wife-issues-says-lop-rahul-gandhi-in-lok-sabha-rav/articleshow-0lvr9lw</guid>
            <pubDate>Sat, 18 Apr 2026 05:59:00 +0530</pubDate>
            <description><![CDATA[ಮಹಿಳಾ ಮೀಸಲು ಮಸೂದೆ ಚರ್ಚೆಯ ವೇಳೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮಗೂ ಮತ್ತು ಪ್ರಧಾನಿ ಮೋದಿಗೂ 'ಪತ್ನಿ ಸಮಸ್ಯೆ' ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದನದಲ್ಲಿ ನಗೆಗಡಲು ಉಂಟಾಯಿತು, ಇದಕ್ಕೆ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpezhsrxbwqye8861wb4xy6r,imgname-----------------------2026-04-18t055327.403-1776471828253.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಿಟಿಐ ನವದೆಹಲಿ (ಏ.18): &lt;/strong&gt;ಸದನದಲ್ಲಿರುವ ನಾವೆಲ್ಲರೂ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ. ತಾಯಂದಿರು, ಸೋದರಿಯರು, ಪತ್ನಿಯರು, ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇವೆ. ಆದರೆ ಪ್ರಧಾನಿ ಮೋದಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ ಎಂದು ವಿಪಕ್ಷ ನಾಯಕ ರಾಹುಲ್&zwnj; ಗಾಂಧಿ ಶುಕ್ರವಾರ ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದನದಲ್ಲಿ ನಗುವಿನ ಅಲೆ ಎದ್ದಿತು.&lt;/p&gt;&lt;h2&gt;ನಮಗೆ ಆ ಅನುಭವ ಸಿಗುವುದಿಲ್ಲ:&lt;/h2&gt;&lt;p&gt;ಮಹಿಳಾ ಮೀಸಲು ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, &lsquo;ಈ ಸದನದಲ್ಲಿರುವ ನಾವೆಲ್ಲರೂ ನಮ್ಮ ಜೀವನದಲ್ಲಿ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ ಮತ್ತು ಕಲಿತಿದ್ದೇವೆ. ನಮ್ಮ ತಾಯಂದಿರು, ಸೋದರಿಯರು, ಪತ್ನಿಯರಿಂದ ಬಹಳಷ್ಟು ತಿಳಿದುಕೊಂಡಿದ್ದೇವೆ. ಆದರೆ ಪ್ರಧಾನಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ. ಆದ್ದರಿಂದ ಆ ಇನ್&zwnj;ಪುಟ್ (ಅನುಭವ) ನಮಗೆ ಸಿಗುವುದಿಲ್ಲ. ಆದರೆ ನಮಗೆ ತಾಯಂದಿರು ಮತ್ತು ಸೋದರಿಯರು ಇದ್ದಾರೆ&rsquo; ಹಾಸ್ಯ ಮಾಡಿದರು.&lt;/p&gt;&lt;h3&gt;ಪ್ರಿಯಾಂಕಾ ನೋಡಿ ಕಲಿಯಿರಿ: ರಾಹುಲ್&zwnj;ಗೆ ತಿವಿದ ಅಮಿತ್ ಶಾ&lt;/h3&gt;&lt;p&gt;ಸದನದಲ್ಲಿ ಮಾತನಾಡುವಾಗ ಎಂಥ ಭಾಷೆ ಬಳಸುತ್ತೀರಿ. ಆಡಳಿತ ಸದಸ್ಯರನ್ನು ಹೇಡಿ ಎನ್ನುತ್ತೀರಿ. ಇಂಥ ಪದ ಬಳಕೆ ಸರಿಯೇ? ಪ್ರಿಯಾಂಕಾರನ್ನು ನೋಡಿ ಕಲಿಯಿರಿ ಎಂದು ಅಮಿತ್ ಶಾ ರಾಹುಲ್ ಗಾಂಧಿಗೆ ತಿವಿದರು.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/both-the-prime-minister-and-i-do-not-have-wife-issues-says-lop-rahul-gandhi-in-lok-sabha-rav/articleshow-0lvr9lw"/>
        </item>
        <item>
            <title><![CDATA[IPL 2026 Winner: ಈ ಬಾರಿ RCB ಕಪ್‌ ಗೆಲ್ಲತ್ತಾ?: ಟ್ಯಾರೋ ರೀಡರ್‌ ಭವಿಷ್ಯ ಕೇಳಿ ದಿಗ್ಭ್ರಮೆಗೊಂಡ ಕನ್ನಡಿಗರು!]]></title>
            <link>https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru</link>
            <guid isPermaLink="true">https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru</guid>
            <pubDate>Fri, 17 Apr 2026 22:56:33 +0530</pubDate>
            <description><![CDATA[&lt;p&gt;IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್&zwnj; ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್&zwnj;ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್&zwnj; ನಮ್ದಾಗತ್ತಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe7azck0dp1n9zbczbzbkpw,imgname-new-project--98--1776446438803.jpg" type="image/jpeg" height="390" width="690"/>
            <content:encoded><![CDATA[&lt;p&gt;IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್&zwnj; ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್&zwnj;ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್&zwnj; ನಮ್ದಾಗತ್ತಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;RCB ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದು ಕೋಟ್ಯಂತರ ಕನ್ನಡಿಗರ, ಕ್ರಿಕೆಟ್ ಪ್ರೇಮಿಗಳ ಭಾವನೆ. ಟ್ರೋಫಿ ಇರಲಿ ಬಿಡಲಿ, ಅವರ ಆಕ್ರಮಣಕಾರಿ ಆಟ ಎಂದಿಗೂ ಜನಮಾನಸದಲ್ಲಿ ಉಳಿಯುತ್ತದೆ. ಈ ಬಾರಿ ಟ್ರೋಫಿ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ. ಈ ತಂಡಕ್ಕೆ ಇದ್ದಷ್ಟು ಅಭಿಮಾನಿ ಬಳಗ ಯಾವ ಟೀಂಗೂ ಇಲ್ಲ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿ ಈಗ ತುಂಬ ಆಧ್ಯಾತ್ಮಿಕವಾಗಿದ್ದಾರೆ. ಅವರು ಮೈದಾನದಲ್ಲಿ ಶತಕಗಳನ್ನು ಸಿಡಿಸಲಿದ್ದಾರೆ. ಅವರ ಏಕದಿನ (ODI) ವೃತ್ತಿಜೀವನವು 2028 ಸುಮಾರಿಗೆ ಇದ್ದಕ್ಕಿದ್ದಂತೆ ಕೊನೆಗೊಳ್ಳಬಹುದು.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ಕಪ್&zwnj; ಗೆಲ್ಲಲಿದೆಯಾ ಎಂದು ಪ್ರಶ್ನೆ ಇದೆ. ಟ್ಯಾರೋ ಕಾರ್ಡ್ ರೀಡರ್ ಅಮಾಯ್ರಾ ಅವರು ಆರ್&zwnj;ಸಿಬಿ ಗೆಲ್ಲಲಿದೆಯಾ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ಟೀಂ ಚೆನ್ನಾಗಿ ಆಡುತ್ತಾರೆ, ಆದರೆ ಫೈನಲ್ ಗೆಲ್ಲುವ ಸಾಧ್ಯತೆ ಕಡಿಮೆ ಇದೆ. RCB ತಂಡವು ಕೊನೇವರೆಗೂ ಹೋದರೂ ಕೂಡ ಟ್ರೋಫಿ ಗೆಲ್ಲುವುದು ಕಷ್ಟ ಎಂದು ಅಮಾಯ್ರಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಗುಜರಾತ್ ಟೈಟನ್ಸ್ ಮತ್ತು ಕೆಕೆಆರ್ ಟೀಂ ನಡುವೆ ತೀವ್ರ ಪೈಪೋಟಿ ಇರಲಿದೆ. ಶುಭ್&zwnj;ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾರತವು 2027 ರ ವಿಶ್ವಕಪ್ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru"/>
        </item>
        <item>
            <title><![CDATA[ನೂರಾರು ಮಹಿಳೆಯರ ಅನುಭವಿಸಿದ ಕಾಮಿ ಜ್ಯೋತಿಷಿ ಅಶೋಕ್‌ ಖರಾತ್‌ ಆಪ್ತ ಸಹಚರ ಆಕ್ಸಿಡೆಂಟ್‌ನಲ್ಲಿ ಸಾವು!]]></title>
            <link>https://kannada.asianetnews.com/india-news/jitendra-shelke-death-mystery-ashok-kharat-case-witness-accident-or-murder-san/articleshow-00rrip8</link>
            <guid isPermaLink="true">https://kannada.asianetnews.com/india-news/jitendra-shelke-death-mystery-ashok-kharat-case-witness-accident-or-murder-san/articleshow-00rrip8</guid>
            <pubDate>Fri, 17 Apr 2026 22:45:50 +0530</pubDate>
            <description><![CDATA[&lt;p&gt;ಕಾಮಿ ಬಾಬಾ ಅಶೋಕ್ ಖರಾತ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ, ಆತನ ಆಪ್ತ ಜಿತೇಂದ್ರ ಶೆಲ್ಕೆ ರಸ್ತೆ ಅಪಘಾತದಲ್ಲಿ ಪತ್ನಿ ಸಮೇತ ಸಾವನ್ನಪ್ಪಿದ್ದಾರೆ. ಛತ್ರಪತಿ ಸಂಭಾಜಿನಗರ-ಶಿರಡಿ ರಸ್ತೆಯಲ್ಲಿ ನಿಂತಿದ್ದ ಕಂಟೇನರ್&zwnj;ಗೆ ಇವರ ಕಾರು ಡಿಕ್ಕಿ ಹೊಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe6qprmjq51wr2w1pqpr0cy,imgname-ashok-kharat-1776445807380.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಛತ್ರಪತಿ ಸಂಭಾಜಿನಗರ (ಏ.17): &lt;/strong&gt;ಮಹಾರಾಷ್ಟ್ರದಾದ್ಯಂತ ಸದ್ಯ ಚರ್ಚೆಯಲ್ಲಿರುವ ಕಾಮಿ ಬಾಬಾ ಅಶೋಕ್ ಖರಾತ್ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಅಶೋಕ್ ಖರಾತನ ಅತ್ಯಂತ ಆಪ್ತ ಸಹಚರ ಹಾಗೂ ಶಿವಾನಿಕಾ ಟ್ರಸ್ಟ್&zwnj;ನ ನಿರ್ದೇಶಕ ಮತ್ತು ಉಪಾಧ್ಯಕ್ಷರಾಗಿದ್ದ ಜಿತೇಂದ್ರ ಶೆಲ್ಕೆ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಇದು ಕೇವಲ ಅಪಘಾತವಲ್ಲ, ಸಾಕ್ಷ್ಯ ನಾಶಪಡಿಸಲು ಮಾಡಿದ ಸಂಚು ಎಂಬ ಸಂಶಯ ವ್ಯಕ್ತವಾಗಿದೆ.&lt;/p&gt;&lt;p&gt;ಛತ್ರಪತಿ ಸಂಭಾಜಿನಗರದಿಂದ ಶಿರಡಿಗೆ ಹೋಗುವ ರಸ್ತೆಯ 'ಧೋತ್ರೆ' ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಜಿತೇಂದ್ರ ಶೆಲ್ಕೆ ಮತ್ತು ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಮಗನನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಕಾರು ನಿಂತಿದ್ದ ಕಂಟೇನರ್&zwnj;ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಜಿತೇಂದ್ರ ಶೆಲ್ಕೆಯವರನ್ನು ಸಾಯಿಸಲಾಗಿದೆ: ತೃಪ್ತಿ ದೇಸಾಯಿ ಗಂಭೀರ ಆರೋಪ&lt;/strong&gt;&lt;/h2&gt;&lt;p&gt;ಈ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ, &quot;ಶೆಲ್ಕೆ ಅವರ ಸಾವು ಅತ್ಯಂತ ಶಂಕಾಸ್ಪದವಾಗಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ಮುಗಿಸುವ ಸಂಚು ರೂಪಿಸಲಾಗಿದೆ. ಮಾರ್ಚ್ 17 ರಂದು ಖರಾತ್ ವಿರುದ್ಧ ಪ್ರಕರಣ ದಾಖಲಾಗಿತ್ತು, ಇಂದು ಸರಿಯಾಗಿ ಒಂದು ತಿಂಗಳು ಪೂರೈಸುವಷ್ಟರಲ್ಲಿ ಶೆಲ್ಕೆ ಸಾವನ್ನಪ್ಪಿದ್ದಾರೆ. ಉಪಾಧ್ಯಕ್ಷರಾಗಿ ಟ್ರಸ್ಟ್&zwnj;ನ ಒಳಗಿನ ಎಲ್ಲಾ ವಿಚಾರಗಳು ಅವರಿಗೆ ತಿಳಿದಿತ್ತು. ಈ ಪ್ರಕರಣದಲ್ಲಿ ಇನ್ನೂ ಅನೇಕ ಸಾಕ್ಷಿಗಳಿದ್ದು, ಪೊಲೀಸರು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು&quot; ಎಂದು ಆಗ್ರಹಿಸಿದ್ದಾರೆ.&lt;/p&gt;&lt;p&gt;ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಈ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. 'ಇವರ ಕಾರು ಹೋಗಿ ಕಂಟೇನರ್&zwnj;ಗೆ ಡಿಕ್ಕಿ ಹೊಡೆದಿದೆಯೇ ಅಥವಾ ಕಂಟೇನರ್ ರಿವರ್ಸ್ ಬಂದು ಇವರಿಗೆ ಗುದ್ದಿದೆಯೇ? ಎಂಬುದು ತನಿಖೆಯಾಗಬೇಕು. ಶಿವಾನಿಕಾ ಸಂಸ್ಥೆಯಲ್ಲಿ ಏನು ನಡೆಯುತ್ತಿತ್ತು ಎಂಬ ಪೂರ್ಣ ಮಾಹಿತಿ ಶೆಲ್ಕೆ ಅವರಿಗಿತ್ತು. ಸಂಸ್ಥೆಯಲ್ಲಿ ಅವರು ಖರಾತ್ ಪತ್ನಿಗಿಂತಲೂ ಉನ್ನತ ಹುದ್ದೆಯಲ್ಲಿದ್ದರು. ಅಪಘಾತವಾದ ತಕ್ಷಣ ಕಂಟೇನರ್ ಚಾಲಕ ಮತ್ತು ಕ್ಲೀನರ್ ನಾಪತ್ತೆಯಾಗಿದ್ದು ಏಕೆ? ಶೆಲ್ಕೆ ಅವರೇ ಬಂದು ಡಿಕ್ಕಿ ಹೊಡೆದಿದ್ದರೆ ಇವರು ಓಡಿಹೋಗುವ ಅಗತ್ಯವಿರಲಿಲ್ಲ. ಇದು ಸಂಚು ಎಂಬ ಸಂಶಯವನ್ನು ದಟ್ಟವಾಗಿಸಿದೆ' ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸ್ಥಳೀಯರು ನೀಡಿದ ಮಾಹಿತಿ&lt;/strong&gt;&lt;/h2&gt;&lt;p&gt;ಧೋತ್ರೆ ಗ್ರಾಮದ ಸರ್ಪಂಚ್ ಪ್ರದೀಪ್ ಚೌಹಾಣ್ ಮಾತನಾಡಿ, &quot;ಮಧ್ಯಾಹ್ನ 12.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಗ್ರಾಮಸ್ಥರು ಫೋನ್ ಮಾಡಿದ ತಕ್ಷಣ ನಾವು ಸ್ಥಳಕ್ಕೆ ಬಂದೆವು. ಮಹಿಳೆಯೊಬ್ಬರು (ಶೆಲ್ಕೆ ಪತ್ನಿ) ನೋವಿನಿಂದ ಕಿರುಚುತ್ತಿದ್ದರು. ಮಗನನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ಕಳುಹಿಸಿದೆವು. ಕಂಟೇನರ್ ಒಳಗೆ ಕಾರು ನುಗ್ಗಿತ್ತು. ಕ್ರೇನ್ ಬರುವುದು ತಡವಾದ ಕಾರಣ ಮಹಿಳೆಯನ್ನು ಬೇಗ ಹೊರತೆಗೆಯಲು ಸಾಧ್ಯವಾಗಲಿಲ್ಲ, ಅವರು ಸ್ಥಳದಲ್ಲೇ ಮೃತಪಟ್ಟರು&quot; ಎಂದು ವಿವರಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/jitendra-shelke-death-mystery-ashok-kharat-case-witness-accident-or-murder-san/articleshow-00rrip8"/>
        </item>
    </channel>
</rss>
