<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 24 Aug 2026 09:15:01 +0530</lastBuildDate>
        <atom:link href="https://kannada.asianetnews.com/rss/india-news" rel="self" type="application/rss+xml"/>
        <item>
            <title><![CDATA[ಗುರುವಾಯೂರು ದೇಗುಲದಲ್ಲಿ ಐತಿಹಾಸಿಕ ದಾಖಲೆ: ಚಿಂಗಂ ಮಾಸದ ಶುಭ ಮುಹೂರ್ತ, 7 ಗಂಟೆಯಲ್ಲಿ  ಹಸೆಮಣೆ ಏರಿದ 416 ಜೋಡಿ!]]></title>
            <link>https://kannada.asianetnews.com/india-news/kerala-guruvayur-temple-creates-history-over-400-marriages-conducted-on-auspicious-chingam-sunday-gdp/articleshow-3qvq164</link>
            <guid isPermaLink="true">https://kannada.asianetnews.com/india-news/kerala-guruvayur-temple-creates-history-over-400-marriages-conducted-on-auspicious-chingam-sunday-gdp/articleshow-3qvq164</guid>
            <pubDate>Mon, 24 Aug 2026 09:14:55 +0530</pubDate>
            <description><![CDATA[ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ, ಮಲಯಾಳಂ ಪಂಚಾಂಗದ ಚಿಂಗಂ ಮಾಸದ ಶುಭ ದಿನದಂದು ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ವಿವಾಹಗಳು ನಡೆದು ಹೊಸ ದಾಖಲೆ ಸೃಷ್ಟಿಯಾಗಿದೆ. ಈ ಐತಿಹಾಸಿಕ ಸಂದರ್ಭಕ್ಕಾಗಿ ದೇವಸ್ಥಾನದಲ್ಲಿ 6 ಮಂಟಪಗಳನ್ನು ನಿರ್ಮಿಸಿ, ಕಟ್ಟುನಿಟ್ಟಿನ ಜನಸಂದಣಿ ನಿರ್ವಹಣೆಯೊಂದಿಗೆ ವಿವಾಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m0rx13mzrmd8dzmt0v40fbrf,imgname-guruvayur-temple-wedding-1787542146719.jpg" type="image/jpeg" height="390" width="690"/>
            <content:encoded><![CDATA[&lt;p&gt;ಗುರುವಾಯೂರು: ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಭಾನುವಾರ ದಾಖಲೆ ಮಟ್ಟದ ಮದುವೆಗಳು ನೆರವೇರುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮಲಯಾಳಂ ಪಂಚಾಂಗದ ಚಿಂಗಂ ಮಾಸದ ಮೊದಲ ಭಾನುವಾರವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುವ ಕಾರಣ ದಿನವೊಂದರಲ್ಲೇ 400ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 6 ಮಂಟಪಗಳನ್ನು ಹಾಕಲಾಗಿದ್ದು, ಬೆಳಗ್ಗೆ 4.10ಕ್ಕೆ ವಿಧಿವಿಧಾನಗಳು ಆರಂಭವಾದವು. 2 ತಾಸಿನಲ್ಲಿ 137 ಮದುವೆಗಳಾದವು. ಪ್ರತಿ ಗಂಟೆಗೆ 60 ಮದುವೆಗಳಾದವು&rsquo; ಎಂದು ವರದಿ ತಿಳಿಸಿದೆ.&lt;/p&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಗುರುವಾಯೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಎ.ವಿ. ಗೋಪಿನಾಥ್, &quot;ದೇಗುಲದ ಇತಿಹಾಸದಲ್ಲೇ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ವಿವಾಹಗಳು ನೆರವೇರಿರುವುದು ಇದೇ ಮೊದಲು. ಈ ಹಿಂದೆ 2024ರ ಸೆಪ್ಟೆಂಬರ್ 8ರಂದು 334 ವಿವಾಹಗಳು ನಡೆದದ್ದು ಇದುವರೆಗಿನ ದಾಖಲೆಯಾಗಿತ್ತು. ಈ ಬಾರಿ ಸ್ಪಾಟ್ ಬುಕಿಂಗ್ ಸೇರಿದಂತೆ ಒಟ್ಟು 442 ವಿವಾಹಗಳು ನೋಂದಣಿಯಾಗಿದ್ದು, ಅದರಲ್ಲಿ 400ಕ್ಕೂ ಹೆಚ್ಚು ಮದುವೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಸುಸೂತ್ರವಾಗಿ ಜರುಗಿದ ಸಾಂಪ್ರದಾಯಿಕ ವಿಧಿವಿಧಾನಗಳು&lt;/h2&gt;&lt;p&gt;ದೇವಸ್ಥಾನದ ಪೂರ್ವ ದ್ವಾರದಲ್ಲಿರುವ ಮೊದಲ ಮಂಟಪದಲ್ಲಿ ಬೆಳಗಿನ ಜಾವ ದೇವಸ್ವಂ ಮಂಡಳಿಯ ಅಧ್ಯಕ್ಷ ಎ.ವಿ. ಗೋಪಿನಾಥ್ ಅವರು ದೀಪ ಬೆಳಗಿಸುವುದರೊಂದಿಗೆ ಮದುವೆ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿತು. ಸಾಂಪ್ರದಾಯಿಕ ಮಂಗಲವಾದ್ಯಗಳ ನಡುವೆ, ತಲಶ್ಶೇರಿ ಮೂಲದ ಅರ್ಣವ್ ಮೋಹನ್ ಕುಮಾರ್ ಅವರು ಪಝಾಯಂಗಡಿ ಮೂಲದ ವಿದ್ಯಾ ಆನಂದ್ ರಾಜ್ ಅವರಿಗೆ ಮಂಗಳಸೂತ್ರ ಧರಿಸುವ ಮೂಲಕ ದಿನದ ಮೊದಲ ವಿವಾಹ ನೆರವೇರಿತು. ಉಷಾಪೂಜೆ ಮತ್ತು ಪಂತೀರದಿ ಪೂಜೆಯ ಅಲ್ಪಾವಧಿಯ ಸಮಯವನ್ನು ಹೊರತುಪಡಿಸಿ, ಬೆಳಗಿನ ಜಾವ 4.10ಕ್ಕೆ ಆರಂಭಗೊಂಡ ವಿವಾಹ ವಿಧಿವಿಧಾನಗಳು ಮಧ್ಯಾಹ್ನ 12.45ರವರೆಗೆ ನಿರಂತರವಾಗಿ ಜರುಗಿದವು.&lt;/p&gt;&lt;h2&gt;6 ಮಂಟಪಗಳು, ಕಟ್ಟುನಿಟ್ಟಿನ ಜನಸಂದಣಿ ನಿರ್ವಹಣೆ&lt;/h2&gt;&lt;p&gt;ವಿವಾಹಗಳ ಸುಲಭ ನಿರ್ವಹಣೆಗಾಗಿ ದೇವಾಲಯದ ಅಂಗಳದಲ್ಲಿ 6 ವಿಶೇಷ ಮಂಟಪಗಳನ್ನು ನಿರ್ಮಿಸಲಾಗಿತ್ತು. ಜನದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಪ್ರಕ್ರಿಯೆಯನ್ನು ಸುಸೂತ್ರಗೊಳಿಸಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.&lt;/p&gt;&lt;p&gt;ಪ್ರತ್ಯೇಕ ಟೋಕನ್ ಹಾಗೂ ಪ್ರವೇಶ ಮಿತಿ: ಪ್ರತಿಯೊಂದು ಮದುವೆ ತಂಡಕ್ಕೂ ಪ್ರತ್ಯೇಕ ಟೋಕನ್ ನೀಡಲಾಗಿತ್ತು. ಮಂಟಪದ ಬಳಿ ನೂಕುನುಗ್ಗಲು ತಡೆಯಲು ವಧು-ವರರೊಂದಿಗೆ ಕೇವಲ 24 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆರು ಮಂಟಪಗಳಲ್ಲಿ ಸೇರಿ ಪ್ರತಿ ಗಂಟೆಗೆ ಸರಾಸರಿ 60ಕ್ಕೂ ಹೆಚ್ಚು ವಿವಾಹಗಳನ್ನು ನಡೆಸಲಾಯಿತು. ಆರಂಭಿಕ 2 ತಾಸುಗಳಲ್ಲೇ ಬರೋಬ್ಬರಿ 137 ಮದುವೆಗಳು ಪೂರ್ಣಗೊಂಡಿದ್ದವು. ಶುಭ ಮುಹೂರ್ತದಲ್ಲಿ ಮದುವೆ ಕಾರ್ಯಕ್ರಮಗಳು ಸುಲಭವಾಗಿ ನಡೆಯಲು ಅನುಕೂಲವಾಗುವಂತೆ ಸಾಮಾನ್ಯ ಭಕ್ತಾದಿಗಳ ದರ್ಶನದ ಮೇಲೆ ತಾತ್ಕಾಲಿಕ ರದ್ದು ಮಾಡಲಾಗಿತ್ತು.&lt;/p&gt;&lt;h2&gt;ಸುರಕ್ಷತೆ ಮತ್ತು ತುರ್ತು ಸೇವೆಗಳು&lt;/h2&gt;&lt;p&gt;ಬೃಹತ್ ಪ್ರಮಾಣದ ಜನಸಂದಣಿಯನ್ನು ನಿರ್ವಹಿಸಲು ಪೊಲೀಸ್ ಇಲಾಖೆಯಿಂದ 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಸ್ವಸ್ಥರಾಗುವ ಭಕ್ತರ ನೆರವಿಗೆ ಆಂಬ್ಯುಲೆನ್ಸ್ ಸೇವೆಗಳು ಮತ್ತು ವೈದ್ಯರ ತಂಡವನ್ನು ಸ್ಥಳದಲ್ಲೇ ಸಜ್ಜಾಗಿರಿಸಲಾಗಿತ್ತು. ಯಾವುದೇ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿಯನ್ನು ದೇವಾಲಯದ ಒಳಗಿನ ರಿಂಗ್ ರಸ್ತೆಯ ಬಳಿ ನಿಯೋಜಿಸಲಾಗಿತ್ತು.&lt;/p&gt;&lt;p&gt;ಸ್ಥಳೀಯ ಸಾರ್ವಜನಿಕರ ಸಂಪೂರ್ಣ ಸಹಕಾರದಿಂದಾಗಿ ಈ ಐತಿಹಾಸಿಕ ಘಟನೆ ಯಾವುದೇ ಅಡಚಣೆಯಿಲ್ಲದೆ ನೆರವೇರಿದೆ. ದೇವಸ್ವಂ ಮಂಡಳಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ನವಜೋಡಿಗಳು ದೇವಾಲಯದ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೋಗಳನ್ನು ಹಂಚಿಕೊಂಡಿದೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/kerala-guruvayur-temple-creates-history-over-400-marriages-conducted-on-auspicious-chingam-sunday-gdp/articleshow-3qvq164"/>
        </item>
        <item>
            <title><![CDATA[ಪ್ರಿಯತಮೆಗೆ ಮಾಡಿದ ಒಂದು ಪ್ರಾಂಕ್ ಮೆಸೇಜ್ ತಂತು ಸಂಕಷ್ಟ.. 30 ಲಕ್ಷ ಹವಾಲಾ ಹಣದ ದಂಧೆ ಬಯಲು]]></title>
            <link>https://kannada.asianetnews.com/india-news/a-prank-message-sent-to-a-girlfriend-led-to-trouble-rs-30-lakh-hawala-racket-was-exposed-in-gydarabad-kphb-gkn/articleshow-2w0hhqq</link>
            <guid isPermaLink="true">https://kannada.asianetnews.com/india-news/a-prank-message-sent-to-a-girlfriend-led-to-trouble-rs-30-lakh-hawala-racket-was-exposed-in-gydarabad-kphb-gkn/articleshow-2w0hhqq</guid>
            <pubDate>Mon, 24 Aug 2026 08:31:19 +0530</pubDate>
            <description><![CDATA[&lt;p&gt;ಹೈದರಾಬಾದ್&zwnj;ನಲ್ಲಿ ಯುವಕನೊಬ್ಬ ಪ್ರಿಯತಮೆಗೆ ಮಾಡಿದ ಕಿಡ್ನಾಪ್ ಪ್ರಾಂಕ್ ಮೆಸೇಜ್&zwnj;ನಿಂದಾಗಿ 30 ಲಕ್ಷ ರೂ. ಹವಾಲಾ ಹಣ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಕಿಡ್ನಾಪ್ ದೂರಿನ ಹಿನ್ನೆಲೆಯಲ್ಲಿ ಅಪಾರ್ಟ್&zwnj;ಮೆಂಟ್&zwnj;ಗೆ ತೆರಳಿದ ಪೊಲೀಸರಿಗೆ ಕ್ರಿಕೆಟ್ ಬೆಟ್ಟಿಂಗ್&zwnj;ಗೆ ಸಂಬಂಧಿಸಿದ ಅಕ್ರಮ ಹಣ ಪತ್ತೆಯಾಗಿದ್ದು, ಮೂವರು ಯುವಕರನ್ನು ವಶಕ್ಕೆ ಪಡೆಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qdq99pz1a9epqv54s98422,imgname-80-20-rule-for-money-a-simple-way-to-control-expenses-and-save-more-from-your-salary-1787492541750.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್: &lt;/strong&gt;ತಮಾಷೆಗಾಗಿ ಪ್ರಿಯತಮೆಗೆ ಕಳುಹಿಸಿದ ಒಂದು ಕಿಡ್ನಾಪ್ ಸಂದೇಶವು ಹವಾಲಾ ದಂಧೆಯನ್ನು ಬಯಲಿಗೆಳೆದಿದೆ. ಗೆಳತಿಯನ್ನು ಹೆದರಿಸಲು ಹೋಗಿ ಯುವಕರು ಈಗ ಪೊಲೀಸರ ಅತಿಥಿಗಳಾಗಿರುವ ಘಟನೆ ಹೈದರಾಬಾದ್&zwnj;ನ ಕೆಪಿಎಚ್&zwnj;ಬಿ (KPHB) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಕೆಪಿಎಚ್&zwnj;ಬಿಯ 'ಇಂಡೀಸ್ ಒನ್' ಅಪಾರ್ಟ್&zwnj;ಮೆಂಟ್&zwnj;ನಲ್ಲಿ ವಾಸವಿದ್ದ ಸುಮಂತ್, ಮನೋಜ್ ಮತ್ತು ಗೌತಮ್ ಎಂಬ ಮೂವರು ಯುವಕರು ಮದ್ಯ ಸೇವಿಸಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಸುಮಂತ್ ತನ್ನ ಪ್ರಿಯತಮೆಗೆ ಪ್ರಾಂಕ್ (ತಮಾಷೆ) ಮಾಡಲು ನಿರ್ಧರಿಸಿ, ನನ್ನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಮೆಸೇಜ್ ಕಳುಹಿಸಿದ್ದಾನೆ.&lt;/p&gt;&lt;h2&gt;&lt;strong&gt;ಪೊಲೀಸರ ಎಂಟ್ರಿ, ಶಾಕಿಂಗ್ ಸತ್ಯ&lt;/strong&gt;&lt;/h2&gt;&lt;p&gt;ಸಂದೇಶ ನೋಡಿ ತೀವ್ರ ಗಾಬರಿಗೊಂಡ ಯುವತಿ ವಿಳಂಬ ಮಾಡದೆ ಕೆಪಿಎಚ್&zwnj;ಬಿ ಪೊಲೀಸರಿಗೆ ದೂರು ನೀಡಿದ್ದಾಳೆ. ಕಿಡ್ನಾಪ್ ಕೇಸ್ ಎಂದು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣ ಲೊಕೇಶನ್ ಆಧರಿಸಿ ಅಪಾರ್ಟ್&zwnj;ಮೆಂಟ್&zwnj;ನ ಫ್ಲ್ಯಾಟ್&zwnj;ಗೆ ಧಾವಿಸಿದ್ದಾರೆ. ಅಲ್ಲಿ ಯುವಕರು ಸುಖವಾಗಿರುವುದನ್ನು ನೋಡಿ ಪೊಲೀಸರು ಸಮಾಧಾನಗೊಂಡರು. ಆದರೆ, ಅನುಮಾನಗೊಂಡು ಇಡೀ ಮನೆಯನ್ನು ತಪಾಸಣೆ ನಡೆಸಿದಾಗ ಪೊಲೀಸರಿಗೆ ದೊಡ್ಡ ಶಾಕ್ ಕಾದಿತ್ತು.&lt;/p&gt;&lt;p&gt;ಅಲ್ಲಿನ ಒಂದು ಬ್ಯಾಗ್&zwnj;ನಲ್ಲಿ ಅಕ್ಷರಶಃ 30 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಈ ಭಾರಿ ಮೊತ್ತದ ಹಣದ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ ಯುವಕರು ತಡಬಡಾಯಿಸಿದ್ದಾರೆ. ತಮಗೆ ಈ ಬಗ್ಗೆ ಏನೂ ತಿಳಿದಿಲ್ಲ ಎಂದು ಸುಳ್ಳು ಹೇಳಲು ಪ್ರಯತ್ನಿಸಿದ್ದಾರೆ. ಯುವಕರ ಹಾರಿಕೆ ಉತ್ತರದಿಂದ ಅನುಮಾನಗೊಂಡ ಪೊಲೀಸರು ಹಣದ ಸಮೇತ ಮೂವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಈ ಹಣವು ಕ್ರಿಕೆಟ್ ಬೆಟ್ಟಿಂಗ್&zwnj; ಅಥವಾ ಹವಾಲಾ ದಂಧೆಗೆ ಸಂಬಂಧಿಸಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಣದ ಮೂಲ ಯಾವುದು ಮತ್ತು ಇದನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/a-prank-message-sent-to-a-girlfriend-led-to-trouble-rs-30-lakh-hawala-racket-was-exposed-in-gydarabad-kphb-gkn/articleshow-2w0hhqq"/>
        </item>
        <item>
            <title><![CDATA[ಮಂಗಳೂರಿಗಾಗಿ ಕೇರಳಂ ಸಂಸದರಿಂದ ಓಣಂ ಉಪವಾಸ; ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಆಕ್ರೋಶ]]></title>
            <link>https://kannada.asianetnews.com/india-news/keralam-mp-goes-fast-to-condemn-inclusion-of-mangalore-railway-station-in-mysore-division-of-south-western-railway-mrq/articleshow-b66bhmi</link>
            <guid isPermaLink="true">https://kannada.asianetnews.com/india-news/keralam-mp-goes-fast-to-condemn-inclusion-of-mangalore-railway-station-in-mysore-division-of-south-western-railway-mrq/articleshow-b66bhmi</guid>
            <pubDate>Mon, 24 Aug 2026 08:06:31 +0530</pubDate>
            <description><![CDATA[ಮಂಗಳೂರು ರೈಲು ನಿಲ್ದಾಣವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ಕೇರಳದ ಸಂಸದರು ಪ್ರತಿಭಟನೆಗೆ ಮುಂದಾಗಿದ್ದಾರೆ. ಓಣಂ ಹಬ್ಬದ ದಿನದಂದೇ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ, ಈ ನಿರ್ಧಾರದಿಂದ ಪಾಲಕ್ಕಾಡ್ ವಿಭಾಗಕ್ಕೆ ಆಗುವ ಆದಾಯ ನಷ್ಟದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0jbqmb8nwkgcpxvc71e1jz1,imgname-mangalore-railway-1787322683752.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ: &lt;/strong&gt;ಮಂಗಳೂರು ನಿಲ್ದಾಣವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಬಿಜೆಪಿ ಹಿರಿಯ ನಾಯಕ ಪಿ.ಕೆ. ಕೃಷ್ಣದಾಸ್ ಸಮರ್ಥಿಸಿಕೊಂಡಿದ್ದಾರೆ. &lsquo;ಮೈಸೂರು ವಿಭಾಗವೇನು ಅಮೆರಿಕದಲ್ಲಿದೆಯೇ? ಅದೂ ಕೂಡ ಭಾರತೀಯ ರೈಲ್ವೆಯ ಭಾಗವೇ ಅಲ್ಲವೇ?&rsquo; ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಪಾಲಕ್ಕಾಡ್ ರೈಲ್ವೆ ವಿಭಾಗವನ್ನು ವಿಭಜಿಸಿ, ಮಂಗಳೂರು ಸೇರಿದಂತೆ ಕೆಲ ರೈಲು ನಿಲ್ದಾಣಗಳನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕೇರಳದ ಸಂಸದರು ಓಣಂ ಹಬ್ಬದ ದಿನದಂದು (ಆ.26ರಂದು) ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.&lt;/p&gt;&lt;p&gt;ಕಾಸರಗೋಡು ಸಂಸದ ರಾಜ್&zwnj;ಮೋಹನ್ ಉಣ್ಣಿಥಾನ್ ಮತ್ತು ಪಾಲಕ್ಕಾಡ್ ಸಂಸದ ವಿ.ಕೆ. ಶ್ರೀಕಂಠನ್ ಈ ಕುರಿತು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಕೇರಳಂ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯ&lt;/strong&gt;&lt;/h2&gt;&lt;p&gt;&lsquo;ಓಣಂ ಹಬ್ಬವು ಕೇರಳದ ಜನರಿಗೆ ವಿಶೇಷ. ಅಂದು ತಮ್ಮ ಆಸ್ತಿ ಮಾರಿಯಾದರೂ ಓಣಂ ಹಬ್ಬ ಆಚರಿಸಿ ಭೋಜನ ಸವಿಯಬೇಕು ಎಂಬುದು ಸಂಪ್ರದಾಯ. ಆದರೆ ಆ ದಿನದಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಪಾಲಕ್ಕಾಡ್ ರೈಲ್ವೆ ವಿಭಾಗೀಯ ವಾಣಿಜ್ಯ ಸೂಪರಿಂಟೆಂಡೆಂಟ್ ಕಚೇರಿಯ ಮುಂಭಾಗದಲ್ಲಿ ನಾವು ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಮಲಬಾರ್ (ಉತ್ತರ ಕೇರಳ), ಕಾಸರಗೋಡು ಹಾಗೂ ಇಡೀ ಕೇರಳ ರಾಜ್ಯಕ್ಕೆ ಕೇಂದ್ರ ಮಾಡುತ್ತಿರುವ ಅನ್ಯಾಯದ ವಿರುದ್ಧ ಇದು ಮೊದಲ ಹಂತದ ಪ್ರತಿಭಟನೆಯಾಗಿದೆ&rsquo; ಎಂದು ಅವರು ತಿಳಿಸಿದರು.&lt;/p&gt;&lt;h3&gt;&lt;strong&gt;ಪಾಲಕ್ಕಾಡ್ ಆದಾಯಕ್ಕೆ ಹೊಡೆತ&lt;/strong&gt;&lt;/h3&gt;&lt;p&gt;&lsquo;ಈ ವಿಭಜನೆಯಿಂದಾಗಿ ಕಾಸರಗೋಡಿನ ಜನರು ತೀವ್ರ ತೊಂದರೆಗೆ ಒಳಗಾಗಲಿದ್ದಾರೆ. 2007ರಲ್ಲಿ ಸೇಲಂ ವಿಭಾಗವನ್ನು ರಚಿಸಿದಾಗಲೇ ಪಾಲಕ್ಕಾಡ್ ವಿಭಾಗದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ನಂತರ ಮಂಗಳೂರು ಬಂದರಿನ ಮೂಲಕ ನಡೆಯುತ್ತಿದ್ದ ತೈಲ, ಕಲ್ಲಿದ್ದಲು ಮತ್ತು ರಾಸಾಯನಿಕ ರಸಗೊಬ್ಬರಗಳ ಸಾಗಣೆಯಿಂದ ಬರುವ ಸುಮಾರು 600 ಕೋಟಿ ರು. ಆದಾಯವೇ ಪಾಲಕ್ಕಾಡ್ ವಿಭಾಗಕ್ಕೆ ಮುಖ್ಯ ಆಧಾರವಾಗಿತ್ತು. ಈಗ ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸಿದರೆ ಈ ಆದಾಯ ಸಂಪೂರ್ಣವಾಗಿ ಕೈತಪ್ಪಿ ಹೋಗಲಿದೆ&rsquo; ಎಂದು ಸಂಸದರು ಆತಂಕ ವ್ಯಕ್ತಪಡಿಸಿದರು.&lt;/p&gt;&lt;p&gt;ಕೇಂದ್ರ ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ದೆಹಲಿಗೆ ತೆರಳಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಸದರು ಎಚ್ಚರಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಕೇರಳಂ ಸಿಎಂ ಕಿರಿಕ್; ಯಾಕೆ ಈ ವಿರೋಧ?&lt;/strong&gt;&lt;/p&gt;&lt;p&gt;ಭಾರತೀಯ ರೈಲ್ವೆಯ ಪ್ರಯಾಣಿಕರ ಸೌಲಭ್ಯ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಕೃಷ್ಣದಾಸ್ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದರು.&lt;/p&gt;&lt;p&gt;ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೃಷ್ಣದಾಸ್, &lsquo;ಮೈಸೂರು ವಿಭಾಗವೇನು ಅಮೆರಿಕದಲ್ಲಿದೆಯೇ? ಅದೂ ಕೂಡ ಭಾರತೀಯ ರೈಲ್ವೆಯ ಭಾಗವೇ ಅಲ್ಲವೇ? ಭಾರತೀಯ ರೈಲ್ವೆ ಒಂದೇ ಹಣಕಾಸು ಖಾತೆಯನ್ನು ನಿರ್ವಹಿಸುತ್ತದೆ. ಇಲ್ಲಿ ಏನಾದರೂ ಆದಾಯದ ಕೊರತೆಯಾದರೆ, ಅದು ಇನ್ನೊಂದು ಬದಿಯಲ್ಲಿ (ಮೈಸೂರು ವಿಭಾಗದಲ್ಲಿ) ಆದಾಯವಾಗಿ ಹೆಚ್ಚಾಗುತ್ತದೆ. ಅಂತಿಮವಾಗಿ ಇಡೀ ಆದಾಯವು ಭಾರತೀಯ ರೈಲ್ವೆಗೇ ಸೇರುತ್ತದೆ&rsquo; ಎಂದು ತಿರುಗೇಟು ನೀಡಿದರು.&lt;/p&gt;]]></content:encoded>
            <category>india-news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/india-news/keralam-mp-goes-fast-to-condemn-inclusion-of-mangalore-railway-station-in-mysore-division-of-south-western-railway-mrq/articleshow-b66bhmi"/>
        </item>
        <item>
            <title><![CDATA[Jobs: ಕೇಂದ್ರ ಸರ್ಕಾರದ 8 ಲಕ್ಷ ಹುದ್ದೆ ಖಾಲಿ! ಆರ್‌ಟಿಐ ಅರ್ಜಿಯಲ್ಲಿ ಮಾಹಿತಿ ಬಯಲು]]></title>
            <link>https://kannada.asianetnews.com/india-news/jobs-8-lakh-posts-vacant-in-the-central-government-information-revealed-in-rti-application-mrq/articleshow-bunwu5y</link>
            <guid isPermaLink="true">https://kannada.asianetnews.com/india-news/jobs-8-lakh-posts-vacant-in-the-central-government-information-revealed-in-rti-application-mrq/articleshow-bunwu5y</guid>
            <pubDate>Mon, 24 Aug 2026 06:46:47 +0530</pubDate>
            <description><![CDATA[ಆರ್&zwnj;ಟಿಐ ಅರ್ಜಿಯೊಂದರ ಪ್ರಕಾರ, ಕೇಂದ್ರ ಸರ್ಕಾರದಲ್ಲಿ 8.23 ಲಕ್ಷಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳು ಖಾಲಿ ಇವೆ. ಸುಮಾರು 39 ಲಕ್ಷ ಹುದ್ದೆಗಳಲ್ಲಿ ಕೇವಲ 31 ಲಕ್ಷ ಮಾತ್ರ ಭರ್ತಿಯಾಗಿದ್ದು, ರೈಲ್ವೆ, ರಕ್ಷಣೆ ಮತ್ತು ಗೃಹ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಪ್ರತಿ 5 ಹುದ್ದೆಗಳಲ್ಲಿ 1 ಹುದ್ದೆ ಖಾಲಿ ಉಳಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn6fhfjd3sszr53mseecgyz5,imgname-screenshot--859--1775112863308.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೋಪಾಲ್: &lt;/strong&gt;ದೇಶದಲ್ಲಿ ಎಷ್ಟೇ ನೇಮಕಾತಿ ಪರ್ವಗಳನ್ನು ನಡೆಸಿದರೂ ಕೇಂದ್ರ ಸರ್ಕಾರದಲ್ಲಿ 8.23 ​​ಲಕ್ಷಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳು ಖಾಲಿ ಇವೆ ಎಂಬ ಉತ್ತರ ಮಾಹಿತಿ ಹಕ್ಕಿನ ಅಡಿ ಕೇಳಲಾದ ಪ್ರಶ್ನೆಯಿಂದ ಲಭಿಸಿದೆ. ರೈಲ್ವೆ, ರಕ್ಷಣಾ ಮತ್ತು ಗೃಹ ಇಲಾಖೆಯಿಂದ ಹಿಡಿದು ರಾಷ್ಟ್ರಪತಿಗಳ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಯವರೆಗೆ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳವರೆಗೆ ಇಷ್ಟು ಹುದ್ದೆಗಳು ಖಾಲಿ ಇವೆ. ಆದರೆ ಈ ಅಂಕಿ ಅಂಶವು ಸಾರ್ವಜನಿಕ ವಲಯದ ಬ್ಯಾಂಕುಗಳು ಅಥವಾ ಸಾರ್ವಜನಿಕ ವಲಯದ ಸಂಸ್ಥೆಗಳ (ಪಿಎಸ್&zwnj;ಯು) ಖಾಲಿ ಹುದ್ದೆಗಳನ್ನು ಒಳಗೊಂಡಿಲ್ಲ.&lt;/p&gt;&lt;h2&gt;&lt;strong&gt;ಶೇ.21ರಷ್ಟು ಹುದ್ದೆಗಳು ಖಾಲಿ&lt;/strong&gt;&lt;/h2&gt;&lt;p&gt;ಮಾರ್ಚ್ 1, 2024ರ ವೇಳೆಗೆ ಒಟ್ಟು 39,23,212 ಮಂಜೂರಾದ ಹುದ್ದೆಗಳಿದ್ದವು. ಇದಕ್ಕೆ ಪ್ರತಿಯಾಗಿ ಕೇವಲ 30,99,556 ಉದ್ಯೋಗಿಗಳು ಮಾತ್ರ ಕೆಲಸದಲ್ಲಿ ಇದ್ದರು. ಅಂದರೆ, 8,23,656 ಹುದ್ದೆಗಳು ಅಥವಾ ಶೇ.21ರಷ್ಟು ಹುದ್ದೆಗಳು ಖಾಲಿಯಾಗಿ ಉಳಿದಿವೆ ಎಂದು ಮಧ್ಯಪ್ರದೇಶದ ನೀಮಚ್ ಮೂಲದ ಕಾರ್ಯಕರ್ತ ಚಂದ್ರ ಶೇಖರ್ ಗೌರ್ ಸಲ್ಲಿಸಿದ ಆರ್&zwnj;ಟಿಐ ಅರ್ಜಿಯಿಂದ ಗೊತ್ತಾಗಿದೆ,&lt;/p&gt;&lt;p&gt;ಅರ್ಥಾತ್&zwnj; ಸರ್ಕಾರ ಮಂಜೂರು ಮಾಡಿದ ಪ್ರತಿ 5 ಹುದ್ದೆಗಳಲ್ಲಿ 1 ಹುದ್ದೆ ಖಾಲಿ ಇದೆ.&lt;/p&gt;&lt;p&gt;ಆರ್&zwnj;ಟಿಐ ಮಾಹಿತಿಯ ಪ್ರಕಾರ, ರಾಷ್ಟ್ರಪತಿಗಳ ಸಚಿವಾಲಯ 803 ಅನುಮೋದಿತ ಹುದ್ದೆ ಹೊಂದಿತ್ತು ಆದರೆ ಕೇವಲ 516 ಜನರು ಮಾತ್ರ ಹುದ್ದೆಯಲ್ಲಿದ್ದರು, ಇದರಿಂದಾಗಿ 287 ಹುದ್ದೆಗಳು ಖಾಲಿಯಾಗಿವೆ. ಪ್ರಧಾನ ಮಂತ್ರಿ ಕಚೇರಿಯ 315 ಹುದ್ದೆಗಳಲ್ಲಿ 126 ಖಾಲಿ ಇದ್ದವು.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/jobs-8-lakh-posts-vacant-in-the-central-government-information-revealed-in-rti-application-mrq/articleshow-bunwu5y"/>
        </item>
        <item>
            <title><![CDATA[ಜಿರಳೆ ಹೋರಾಟದಿಂದ  ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದ ಶಾಲೆಗೆ ಸಿಕ್ತು ಹೊಸ ಕಟ್ಟಡ]]></title>
            <link>https://kannada.asianetnews.com/india-news/cockroach-janata-party-protest-against-poor-condition-of-government-school-in-rampur-rajasthan-has-been-successful-mrq/articleshow-xggguzd</link>
            <guid isPermaLink="true">https://kannada.asianetnews.com/india-news/cockroach-janata-party-protest-against-poor-condition-of-government-school-in-rampur-rajasthan-has-been-successful-mrq/articleshow-xggguzd</guid>
            <pubDate>Mon, 24 Aug 2026 06:11:18 +0530</pubDate>
            <description><![CDATA[ರಾಜಸ್ಥಾನದ ರಾಂಪುರದಲ್ಲಿ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದ ಸರ್ಕಾರಿ ಶಾಲೆಯ ದುಸ್ಥಿತಿಯ ವಿರುದ್ಧ 'ಜಿರಳೆ ಜನತಾ ಪಕ್ಷ' ನಡೆಸಿದ ಹೋರಾಟ ಯಶಸ್ವಿಯಾಗಿದೆ. 'ಸ್ಕೂಲ್&zwnj; ಠೀಕ್&zwnj; ಕರೋ' ಅಭಿಯಾನದ ಭಾಗವಾಗಿ ನಡೆದ ಈ ಪ್ರತಿಭಟನೆಯ ನಂತರ, ರಾಜಸ್ಥಾನ ಸರ್ಕಾರವು ಅದೇ ಗ್ರಾಮದಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಿಸುವುದಾಗಿ ಘೋಷಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky784zy4wqz79q4z4w96nxf0,imgname-whatsapp-image-2026-07-23-at-3.53.10-pm-1784802344900.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜೈಪುರ: &lt;/strong&gt;ಜೈಪುರ ಬಳಿಯ ರಾಂಪುರದ ದನದ ಕೊಟ್ಟಿಗೆಯೊಂದರಲ್ಲಿ ನಡೆಸಲಾಗುತ್ತಿದ್ದ ಸರ್ಕಾರಿ ಶಾಲೆಯೊಂದರ ದುಃಸ್ಥಿತಿಯನ್ನು &lsquo;ಸ್ಕೂಲ್&zwnj; ಠೀಕ್&zwnj; ಕರೋ&rsquo; ಅಭಿಯಾನದ ಅಂಗವಾಗಿ ಕಾಕ್ರೋಚ್&zwnj; ಜನತಾ ಪಾರ್ಟಿ (ಸಿಜೆಪಿ) ಬಿಚ್ಚಿಟ್ಟಿತ್ತು. ಅದರ ಬೆನ್ನಲ್ಲೇ, ಅಲ್ಲಿ 18 ಲಕ್ಷ ರು. ವೆಚ್ಚದಲ್ಲಿ ಹೊಸ ಶಾಲೆ ಕಟ್ಟಡ ನಿರ್ಮಿಸುವುದಾಗಿ ರಾಜಸ್ಥಾನ ಸರ್ಕಾರ ಘೋಷಿಸಿದೆ.&lt;/p&gt;&lt;p&gt;ಶುಕ್ರವಾರ ಈ ಹಳ್ಳಿಗೆ ಭೇಟಿ ನೀಡಿದ್ದ ಸಿಜೆಪಿ ಕಾರ್ಯಕರ್ತರನ್ನು ಕೆಲವರು ತಡೆದು ಥಳಿಸಿದ್ದರು. &lsquo;ಥಳಿಸಿದವರು ಬಿಜೆಪಿಗರು&rsquo; ಎಂದು ಸಿಜೆಪಿಗರು ದೂರಿದ್ದರು. ಅದಾದ ಮರುದಿನವೇ ಹೊಸ ಶಾಲೆ ನಿರ್ಮಾಣದ ಘೋಷಣೆಯಾಗಿದೆ.&lt;/p&gt;&lt;p&gt;ಇದಕ್ಕೆ ಸಿಜೆಪಿ ವಕ್ತಾರ ಆಶುತೋಷ್&zwnj; ರಾಂಕಾ ಹರ್ಷ ವ್ಯಕ್ತಪಡಿಸಿದ್ದಾರೆ. &lsquo;ನಾವು ಮತ ಕೇಳಲು ಹೋಗಿರಲಿಲ್ಲ. ಬದಲಿಗೆ ಶಾಲೆಯನ್ನು ಸರಿ ಮಾಡುವಂತೆ ಆಗ್ರಹಿಸಲು ಹೋಗಿದ್ದೆವು. ಇದೀಗ ನಾವು ನೀಡಿದ್ದ 2 ದಿನಗಳ ಸಮಯಾವಕಾಶದೊಳಗೆ ಸೆ.1ರಿಂದ ಕೆಲಸ ಆರಂಭಿಸುವುದಾಗಿ ಸರ್ಕಾರ ಹೇಳಿದೆ&rsquo; ಎಂದಿದ್ದಾರೆ.&lt;/p&gt;&lt;p&gt;ಜತೆಗೆ, &lsquo;ಸರ್ಕಾರಕ್ಕೆ ಮಕ್ಕಳ ಭವಿಷ್ಯದ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಶಾಲೆಗಳನ್ನು ದುರಸ್ತಿ ಮಾಡಿಸಲಿ&rsquo; ಎಂದಿದ್ದು, ಶಾಲೆಗಳಿಗೆ ಭೇಟಿ ನೀಡಿ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.&lt;/p&gt;&lt;p&gt;ಅಂತೆಯೇ, ಸುಮಾರು 3 ಸಾವಿರ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, 611 ಶಾಲೆಗಳು ಕಟ್ಟಡಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರ ಹೇಳಿದ್ದೇನು?&lt;/strong&gt;&lt;/h2&gt;&lt;p&gt;2025ರ ಸೆಪ್ಟೆಂಬರ್&zwnj;ನಲ್ಲಿ ನಡೆಸಲಾದ ಸಮೀಕ್ಷೆಯ ವೇಳೆ ರಾಂಪುರ ಶಾಲಾ ಕಟ್ಟಡ ಶಿಥಿಲಗೊಂಡಿದ್ದು ಪತ್ತೆಯಾದ ಕಾರಣ ಆ ಕಟ್ಟಡದ ಬಳಕೆ ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ವಿದ್ಯಾರ್ಥಿಗಳಿಗೆ ಆ ಶಾಲೆ ದೂರವಾಗುತ್ತದೆ ಎಂಬ ಕಾರಣ ನೀಡಿ ಗ್ರಾಮಸ್ಥರು ಅದನ್ನು ವಿರೋಧಿಸಿದ್ದರು. ಹೀಗಾಗಿ ದನದ ಕೊಟ್ಟಿಗೆಯಲ್ಲಿ ಶಾಲೆ ನಡೆಸಲಾಗುತ್ತಿತ್ತು.&lt;/p&gt;&lt;h3&gt;&lt;strong&gt;ಇಂದು ಜಿರಳೆ ಪಾರ್ಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ&lt;/strong&gt;&lt;/h3&gt;&lt;p&gt;ಜು.25ರಂದು ತಮ್ಮ ದೇಶವ್ಯಾಪಿ ಪ್ರತಿಭಟನೆಯನ್ನು ಹಿಂಪಡೆಯುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳ ಪ್ರಸ್ತುತ ಸ್ಥಿತಿಗತಿಯನ್ನು ಪರಾಮರ್ಶಿಸಲು ಕಾಕ್ರೋಚ್&zwnj; ಜನತಾ ಪಾರ್ಟಿ (ಸಿಜೆಪಿ) ಸೋಮವಾರ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದೆ. ಭರವಸೆಗಳನ್ನು ಈಡೇರಿಸುವ ಕುರಿತು ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಅದು ಆಕ್ಷೇಪಿಸಿದೆ.&lt;/p&gt;&lt;p&gt;&lsquo;ಸಭೆಯಲ್ಲಿ ಕೇಂದ್ರದ ಭರವಸೆಗಳ ಈಡೇರಿಕೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಚರ್ಚಿಸಲಾಗುವುದು. ಅಗತ್ಯಬಿದ್ದರೆ ದೇಶವ್ಯಾಪಿ ಮತ್ತೊಂದು ಶಾಂತಿಯುತ ಹೋರಾಟವನ್ನು ಆರಂಭಿಸುವ ಸಾಧ್ಯತೆಯನ್ನೂ ಮುಕ್ತವಾಗಿಡಲಾಗಿದೆ. ದೇಶದ ಯುವಜನತೆಗೆ ಸರ್ಕಾರ ಕೊಟ್ಟ ಮಾತನ್ನು ನಂಬಿ ಸೌಹಾರ್ದಯುತವಾಗಿ ಹೋರಾಟವನ್ನು ಹಿಂಪಡೆಯಲಾಗಿತ್ತು. ಆದರೆ ಈ ನಂಬಿಕೆಯನ್ನು ಸರ್ಕಾರ ದೌರ್ಬಲ್ಯವೆಂದು ಪರಿಗಣಿಸಲು ಬಿಡುವುದಿಲ್ಲ. ಸಭೆಯ ನಂತರ ಹೊರಬೀಳಲಿರುವ ನಿರ್ಧಾರಕ್ಕೆ ವಿದ್ಯಾರ್ಥಿಗಳು ಹಾಗೂ ಯುವಕರು ಸಿದ್ಧರಾಗಿರಬೇಕು&rsquo; ಎಂದು ಸಂಘಟನೆ ಕರೆ ನೀಡಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/cockroach-janata-party-protest-against-poor-condition-of-government-school-in-rampur-rajasthan-has-been-successful-mrq/articleshow-xggguzd"/>
        </item>
        <item>
            <title><![CDATA[2027ರ ಸಪ್ತರಾಜ್ಯ ಸಮರ: ಬಿಜೆಪಿಯಿಂದ ರಹಸ್ಯ ರಣತಂತ್ರ! ಜೆನ್‌ ಝೀ ಸೆಳೆಯುವತ್ತ ಚರ್ಚೆ]]></title>
            <link>https://kannada.asianetnews.com/india-news/bjp-has-already-started-preparations-for-the-assembly-elections-in-7-states-to-be-held-in-2027-mrq/articleshow-1py7oml</link>
            <guid isPermaLink="true">https://kannada.asianetnews.com/india-news/bjp-has-already-started-preparations-for-the-assembly-elections-in-7-states-to-be-held-in-2027-mrq/articleshow-1py7oml</guid>
            <pubDate>Mon, 24 Aug 2026 06:05:00 +0530</pubDate>
            <description><![CDATA[2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ 7 ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ನಿತಿನ್&zwnj; ನವೀನ್&zwnj; ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಮತ್ತು ಯುವಕರನ್ನು ಸೆಳೆಯುವ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ma29tc8spszhy9b5fqfpfh,imgname-untitled-design---2026-08-22t141021.916-1787388045132.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಮುಂದಿನ ವರ್ಷ ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ 7 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಎದುರಿಸಲು ಬಿಜೆಪಿ ಭರ್ಜರಿ ತಂತ್ರಗಾರಿಕೆ ರೂಪಿಸುತ್ತಿದೆ. ಇದರ ಭಾಗವಾಗಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್&zwnj; ಅಧ್ಯಕ್ಷತೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಂಘಟನಾ ಸಭೆ ನಡೆಸಲಾಗಿದೆ.&lt;/p&gt;&lt;p&gt;ಈ ಪ್ರಮುಖ ಸಭೆಯಲ್ಲಿ ನೂತನವಾಗಿ ಆಯ್ಕೆಗೊಂಡ ಪಕ್ಷದ ಪದಾಧಿಕಾರಿಗಳು, ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರು ಹಾಗೂ ಸಂಘಟನಾ ಉಸ್ತುವಾರಿಗಳು ಭಾಗವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್&zwnj;. ಸಂತೋಷ್&zwnj; ಉಪಸ್ಥಿತರಿದ್ದರು. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವುದು ಹಾಗೂ ಯುವಜನತೆಯನ್ನು ಪಕ್ಷದತ್ತ ಸೆಳೆಯುವ ಕುರಿತು ವಿವರವಾದ ಚರ್ಚೆ ನಡೆಸಲಾಯಿತು.&lt;/p&gt;&lt;h2&gt;&lt;strong&gt;7 ರಾಜ್ಯ ಚುನಾವಣೆ ಗುರಿ&lt;/strong&gt;&lt;/h2&gt;&lt;p&gt;2027ರಲ್ಲಿ ಪಂಜಾಬ್&zwnj;, ಉತ್ತರ ಪ್ರದೇಶ, ಗುಜರಾತ್&zwnj;, ಉತ್ತರಾಖಂಡ, ಗೋವಾ, ಹಿಮಾಚಲ ಪ್ರದೇಶ ಹಾಗೂ ಮಣಿಪುರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಪೈಕಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳನ್ನು ಹೊರತುಪಡಿಸಿ ಉಳಿದ 5 ರಾಜ್ಯಗಳಲ್ಲಿ ಬಿಜೆಪಿ ಪ್ರಸ್ತುತ ಅಧಿಕಾರದಲ್ಲಿದೆ. ಮುಂದಿನ ಸಾಲಿನಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವುದು ಮತ್ತು ಚುನಾವಣಾ ತಂತ್ರಗಳನ್ನು ರೂಪಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಸತತ 2ನೇ ಸಭೆ&amp;nbsp;&lt;/strong&gt;&lt;/h3&gt;&lt;p&gt;ಇದಕ್ಕೂ ಮುನ್ನ ಶನಿವಾರ, ನಿತಿನ್&zwnj; ನವೀನ್&zwnj; ಪಕ್ಷದ ನೂತನ ಪದಾಧಿಕಾರಿಗಳ ಜತೆ ದಿನಪೂರ್ತಿ ಸಭೆ ನಡೆಸಿದ್ದರು. ಈ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಕೂಡ ಇವರನ್ನು ಭೇಟಿಯಾಗಿದ್ದರು.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/bjp-has-already-started-preparations-for-the-assembly-elections-in-7-states-to-be-held-in-2027-mrq/articleshow-1py7oml"/>
        </item>
        <item>
            <title><![CDATA[ದೇಶಕ್ಕೆ 2 ತಿಂಗಳು ಶುಗರ್‌ ಪ್ರಾಬ್ಲಂ ಸಾಧ್ಯತೆ: ಕರ್ನಾಟಕದಲ್ಲಿ ಬೆಲೆ ಇಳಿಕೆ ಯಾವಾಗ?]]></title>
            <link>https://kannada.asianetnews.com/india-news/sugar-prices-have-risen-and-the-government-is-importing-1-million-tonnes-of-raw-sugar-from-brazil-to-deal-with-this-mrq/articleshow-tqmhg7s</link>
            <guid isPermaLink="true">https://kannada.asianetnews.com/india-news/sugar-prices-have-risen-and-the-government-is-importing-1-million-tonnes-of-raw-sugar-from-brazil-to-deal-with-this-mrq/articleshow-tqmhg7s</guid>
            <pubDate>Mon, 24 Aug 2026 05:57:55 +0530</pubDate>
            <description><![CDATA[ದೇಶದಲ್ಲಿ ಸಕ್ಕರೆ ಬೆಲೆ ಏರಿಕೆಯಾಗಿದ್ದು, ಇದನ್ನು ನಿಭಾಯಿಸಲು ಸರ್ಕಾರ ಬ್ರೆಜಿಲ್&zwnj;ನಿಂದ 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಸಕ್ಕರೆ ಅಕ್ಟೋಬರ್ 15ರ ವೇಳೆಗೆ ಭಾರತ ತಲುಪಲಿದ್ದು, ಅಲ್ಲಿಯವರೆಗೆ ದರ ಏರಿಕೆಯ ಬಿಸಿ ಮುಂದುವರೆಯುವ ಸಾಧ್ಯತೆಯಿದೆ. ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಿಗೆ ಮೊದಲು ಸಕ್ಕರೆ ಪೂರೈಕೆಯಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0m53bk1q1dryj6vv0nr4r2p,imgname-gemini-generated-image-8grcvz8grcvz8grc-1787382836833.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: ದೇಶದಲ್ಲಿ ಸಕ್ಕರೆ ಅಭಾವದಿಂದ ಬೆಲೆ ಗಗನಕ್ಕೇರಿರುವ ನಡುವೆಯೇ, ವಿದೇಶಗಳಿಂದ ಆಮದಾಗುತ್ತಿರುವ ಕಚ್ಚಾ ಸಕ್ಕರೆಯ ಕಂಟೇನರ್&zwnj;ಗಳು ಅಕ್ಟೋಬರ್&zwnj; 15ರ ವೇಳೆಗೆ ಭಾರತವನ್ನು ತಲುಪುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ (ಎನ್&zwnj;ಎಫ್&zwnj;ಸಿಎಸ್&zwnj;ಎಫ್&zwnj;) ಅಧ್ಯಕ್ಷ ಪ್ರಕಾಶ್&zwnj; ನಾಯಕ್&zwnj;ನವಾರೆ ತಿಳಿಸಿದ್ದಾರೆ. ಹೀಗಾಗಿ ಇನ್ನೂ ಸುಮಾರು 50 ದಿನಗಳು ಸಕ್ಕರೆ ದರ ಏರಿಕೆಯ ಬಿಸಿ ಗ್ರಾಹಕರನ್ನು ಬಾಧಿಸಲಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;ಸದ್ಯದ ಪರಿಸ್ಥಿತಿಯಲ್ಲಿ ಬ್ರೆಜಿಲ್&zwnj; ಒಂದೇ ಭಾರತಕ್ಕೆ ಸಕ್ಕರೆ ಪೂರೈಸುವ ಪ್ರಮುಖ ದೇಶವಾಗಿದೆ. ಸಾಂಪ್ರದಾಯಿಕ ಪೂರೈಕೆ ದೇಶವಾದ ಥಾಯ್ಲೆಂಡ್&zwnj; ಸ್ವತಃ ಸಕ್ಕರೆ ಕೊರತೆಯನ್ನು ಎದುರಿಸುತ್ತಿರುವುದರಿಂದ, ಅಲ್ಲಿಂದ ಆಮದು ಸಾಧ್ಯವಿಲ್ಲ. ಸಕ್ಕರೆಯು ಬ್ರೆಜಿಲ್&zwnj;ನಿಂದ ಭಾರತದ ಬಂದರು ತಲುಪಲು ಸರಾಸರಿ 40-45 ದಿನ ಬೇಕಾಗುತ್ತದೆ. ಆ ಬಳಿಕ ಬಂದರಿನಿಂದ ಸಕ್ಕರೆ ಮಿಲ್&zwnj;ಗಳಿಗೆ ರವಾನಿಸಲು ಹೆಚ್ಚುವರಿ ಸಮಯ ಅಗತ್ಯವಿದೆ. ಹೀಗಾಗಿ ಅ.15ರ ಒಳಗಾಗಿ ಎಷ್ಟು ಪ್ರಮಾಣದ ಸಕ್ಕರೆ ಬರಲಿದೆ ಎಂದು ನಿಖರವಾಗಿ ಅಂದಾಜಿಸುವುದು ಕಷ್ಟ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಕರ್ನಾಟಕಕ್ಕೆ ಶೀಘ್ರ&lt;/strong&gt;&lt;/h2&gt;&lt;p&gt;ಆಮದಾಗುವ ಕಚ್ಚಾ ಸಕ್ಕರೆಯು ಬಂದರು ಸೌಲಭ್ಯ ಹೊಂದಿರುವ ಕರಾವಳಿ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಮತ್ತು ಆಂಧ್ರಪ್ರದೇಶಗಳಿಗೆ ಮೊದಲು ತಲುಪಲಿದೆ. ಅಲ್ಲಿಂದ ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಉತ್ತರ ಭಾರತದ ರಾಜ್ಯಗಳಿಗೆ ಪೂರೈಕೆಯಾಗಲಿದೆ.&lt;/p&gt;&lt;h3&gt;&lt;strong&gt;ಅಭಾವವಿಲ್ಲ, ಆತಂಕ ಬೇಡ&lt;/strong&gt;&lt;/h3&gt;&lt;p&gt;ದೇಶದಲ್ಲಿ ಸಕ್ಕರೆ ಅಭಾವ ಉಂಟಾಗುವ ಯಾವುದೇ ಭೀತಿಯಿಲ್ಲ. 2025-26ರ ಹಂಗಾಮಿನಲ್ಲಿ 279 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುವ ಅಂದಾಜಿತ್ತು. ಅ.1ರಿಂದ ಆರಂಭವಾಗುವ 2026-27ರ ಹೊಸ ಹಂಗಾಮಿಗೆ 35 ಲಕ್ಷ ಟನ್ ಆರಂಭಿಕ ದಾಸ್ತಾನು ಇರಲಿದ್ದು, ಇದು ದೇಶದ ಮಾಸಿಕ 22 ಲಕ್ಷ ಟನ್ ಅಗತ್ಯವನ್ನು ಸುಲಭವಾಗಿ ಪೂರೈಸಲಿದೆ. ನವೆಂಬರ್ ವೇಳೆಗೆ ಮಾರುಕಟ್ಟೆಗೆ ಹೊಸ ಸಕ್ಕರೆ ಬರಲಿದೆ ಎಂದು ಎನ್&zwnj;ಎಫ್&zwnj;ಸಿಎಸ್&zwnj;ಎಫ್&zwnj; ಸಷ್ಟಪಡಿಸಿದೆ.&lt;/p&gt;&lt;h3&gt;&lt;strong&gt;ದಾಸ್ತಾನು ಮೇಲೆ ಕ್ರಮ&lt;/strong&gt;&lt;/h3&gt;&lt;p&gt;ಕಳೆದ ತಿಂಗಳಿಂದ ಸಕ್ಕರೆ ಬೆಲೆ ಶೇ.24ರಷ್ಟು ಏರಿಕೆಯಾಗಿ ಕೆಜಿಗೆ 70 ರು.ವರೆಗೆ ತಲುಪಿದೆ. ಇದನ್ನು ತಡೆಯಲು ಆ.20ರಂದು ಸರ್ಕಾರ 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಕೃತಕ ಅಭಾವ ಸೃಷ್ಟಿ ಹಾಗೂ ಅಕ್ರಮ ದಾಸ್ತಾನಿನ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ವರ್ತಕರಿಗೆ 200 ಟನ್&zwnj;ಗಳ ದಾಸ್ತಾನು ಮಿತಿ, ಸೌಲಭ್ಯಗಳ ಪರಿಶೀಲನೆ ಹಾಗೂ ರಾಜ್ಯಮಟ್ಟದಲ್ಲಿ &lsquo;ಫ್ಲೈಯಿಂಗ್ ಸ್ಕ್ವಾಡ್&rsquo;ಗಳ ತಪಾಸಣೆಯಿಂದಾಗಿ, ಶನಿವಾರದ ಟೆಂಡರ್&zwnj;ಗಳಲ್ಲಿ ಎಕ್ಸ್-ಮಿಲ್ ದರ ಕೆಜಿಗೆ 5 ರು.ನಷ್ಟು ಇಳಿಕೆಯಾಗಿದೆ.&lt;/p&gt;&lt;p&gt;&lt;strong&gt;2 ತಿಂಗಳು ಏಕೆ?&lt;/strong&gt;&lt;/p&gt;&lt;p&gt;- ದೇಶದಲ್ಲಿ ಸಕ್ಕರೆ ಬೆಲೆ ಕೆ.ಜಿ.ಗೆ 70 ರು.ವರೆಗೆ ತಲುಪಿದ ಹಿನ್ನೆಲೆ. 10 ಲಕ್ಷ ಟನ್&zwnj; ಕಚ್ಚಾ ಸಕ್ಕರೆ ಆಮದಿಗೆ ಸರ್ಕಾರ ನಿರ್ಧಾರ&lt;/p&gt;&lt;p&gt;- ತನ್ನಲ್ಲೇ ಕೊರತೆಯಿದೆ, ಭಾರತಕ್ಕೆ ಪೂರೈಸಲು ಆಗುವುದಿಲ್ಲ ಎಂದು ಹೇಳಿದ ಥಾಯ್ಲೆಂಡ್&zwnj;. ಹೀಗಾಗಿ ಬ್ರೆಜಿಲ್&zwnj; ದೇಶಕ್ಕೆ ಮೊರೆ&lt;/p&gt;&lt;p&gt;- ಅಲ್ಲಿಂದ ಸಕ್ಕರೆ ಭಾರತಕ್ಕೆ ತರಲು 45 ದಿನ ಬೇಕು. ಬಳಿಕ ಸಕ್ಕರೆ ಮಿಲ್&zwnj;ಗಳಿಗೆ ರವಾನಿಸಲು ಮತ್ತಷ್ಟು ಸಮಯ ಬೇಕು&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/sugar-prices-have-risen-and-the-government-is-importing-1-million-tonnes-of-raw-sugar-from-brazil-to-deal-with-this-mrq/articleshow-tqmhg7s"/>
        </item>
        <item>
            <title><![CDATA[ದಿಲ್ಲಿಯಲ್ಲಿ ಕಾರು ಅಪಘಾತ: ಶಾಸಕ ಅಭಯ್ ಪಾಟೀಲ್ ಪ್ರಾಣಾಪಾಯದಿಂದ ಪಾರು]]></title>
            <link>https://kannada.asianetnews.com/india-news/car-accident-in-delhi-belagavi-south-bjp-mla-abhay-patil-escapes-with-life-mrq/articleshow-t2c2h4q</link>
            <guid isPermaLink="true">https://kannada.asianetnews.com/india-news/car-accident-in-delhi-belagavi-south-bjp-mla-abhay-patil-escapes-with-life-mrq/articleshow-t2c2h4q</guid>
            <pubDate>Mon, 24 Aug 2026 05:38:38 +0530</pubDate>
            <description><![CDATA[&lt;p&gt;ಶನಿವಾರ ರಾತ್ರಿ 9:30ರ ವೇಳೆಗೆ ಲಕ್ಷ್ಮೀ ನಗರದಿಂದ ಐಟಿಒ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ಎದುರಿನಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ. ಇನ್ನೋವಾ ಕಾರಿನಲ್ಲಿ ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಹಾಗೂ ಕಿರಾರಿ ಶಾಸಕ ಅನಿಲ್ ಝಾ ಪ್ರಯಾಣಿಸುತ್ತಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0rhe9bvstygbycryqtcbsr1,imgname-abhay-patil-1787529995643.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ದೆಹಲಿಯ ಪಿಡಬ್ಲ್ಯೂಡಿ ಕಚೇರಿ ಬಳಿ ಶನಿವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ (MLA Abhay Patil) ಹಾಗೂ ದೆಹಲಿಯ ಕಿರಾರಿ ಕ್ಷೇತ್ರದ ಶಾಸಕ ಅನಿಲ್ ಝಾ ಸೇರಿ ಒಟ್ಟು 6 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;h2&gt;&lt;strong&gt;ಮತ್ತೊಂದು ಕಾರ್&zwnj;ಗೆ ಡಿಕ್ಕಿ&lt;/strong&gt;&lt;/h2&gt;&lt;p&gt;ಶನಿವಾರ ರಾತ್ರಿ 9:30ರ ವೇಳೆಗೆ ಲಕ್ಷ್ಮೀ ನಗರದಿಂದ ಐಟಿಒ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ಎದುರಿನಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ.&lt;/p&gt;&lt;h3&gt;&lt;strong&gt;ಎರಡೂ ಕಾರಿನಲ್ಲಿದ್ದ 6 ಜನರಿಗೆ ಸಣ್ಣಪುಟ್ಟ ಗಾಯ&lt;/strong&gt;&lt;/h3&gt;&lt;p&gt;ಇನ್ನೋವಾ ಕಾರಿನಲ್ಲಿ ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಹಾಗೂ ಕಿರಾರಿ ಶಾಸಕ ಅನಿಲ್ ಝಾ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಎರಡೂ ಕಾರಿನಲ್ಲಿದ್ದ ಎಲ್ಲಾ 6 ಜನರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/car-accident-in-delhi-belagavi-south-bjp-mla-abhay-patil-escapes-with-life-mrq/articleshow-t2c2h4q"/>
        </item>
        <item>
            <title><![CDATA[ಆಘಾತ..! ಅಪಘಾತಕ್ಕೆ ಈಡಾದ ಸ್ಟಾರ್ ನಟ ಅಜಿತ್‌ ಕುಮಾರ್‌ ಕಾರು; ಈಗ ಹೇಗಿದೆ 'ತಲಾ'ರ ಆರೋಗ್ಯ?]]></title>
            <link>https://kannada.asianetnews.com/news-entertainment/actor-ajith-kumar-is-safe-after-his-car-crashed-during-the-michelin-le-mans-cup-racing-event-in-europe/articleshow-4m2vs38</link>
            <guid isPermaLink="true">https://kannada.asianetnews.com/news-entertainment/actor-ajith-kumar-is-safe-after-his-car-crashed-during-the-michelin-le-mans-cup-racing-event-in-europe/articleshow-4m2vs38</guid>
            <pubDate>Sun, 23 Aug 2026 21:17:08 +0530</pubDate>
            <description><![CDATA[&lt;p&gt;ಅಜಿತ್ ಅವರ ಕಾರು ನಿಯಂತ್ರಣ ತಪ್ಪಿ ನಿಂತಾಗ, ಅದರ ಬೆನ್ನ ಹಿಂದೆಯೇ ಇತರ ರೇಸಿಂಗ್ ಕಾರುಗಳು ಅತಿ ವೇಗವಾಗಿ ಧಾವಿಸಿ ಬರುತ್ತಿದ್ದವು. ಒಂದು ವೇಳೆ ಹಿಂಬದಿಯಿಂದ ಯಾವುದಾದರೂ ಕಾರ್ ಅಜಿತ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದರೆ ಇಂದು ಪರಿಸ್ಥಿತಿ ಏನಾಗುತ್ತಿತ್ತು? ಈಗ ಹೇಗಿದ್ದಾರೆ ಅಜಿತ್?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qmvapyg5aey6s76em87cd4,imgname-ajith-kumar-1787500014301.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Ajith Car Accident-Ajith Kumar Racing-Europe Racing Event-Ajith Kumar Safe. ರೇಸಿಂಗ್ ಟ್ರ್ಯಾಕ್&zwnj;ನಲ್ಲಿ ಅಜಿತ್ ಕುಮಾರ್&zwnj;ಗೆ ಭೀಕರ ಅಪಘಾತ: ಮೃತ್ಯುವನ್ನೇ ಗೆದ್ದು ಬಂದ 'ತಲಾ'! ಅಭಿಮಾನಿಗಳ ಎದೆಯಲ್ಲಿ ನಡುಕ!&lt;/strong&gt;&lt;/p&gt;&lt;p&gt;ತಮಿಳು ಚಿತ್ರರಂಗದ 'ಅಲ್ಟಿಮೇಟ್ ಸ್ಟಾರ್', ನಮ್ಮೆಲ್ಲರ ಪ್ರೀತಿಯ 'ತಲಾ' ಅಜಿತ್ ಕುಮಾರ್ ಎಂದರೆ ಕೇವಲ ಬೆಳ್ಳಿತೆರೆಯ ನಾಯಕನಲ್ಲ; ಅವರು ರಿಯಲ್ ಲೈಫ್&zwnj;ನಲ್ಲೂ ಒಬ್ಬ ಸಾಹಸಿ, ವೇಗದ ಸರದಾರ. ಸಿನಿಮಾಗಳ ಅಬ್ಬರದ ನಡುವೆಯೂ ಬೈಕ್ ರೈಡಿಂಗ್ ಮತ್ತು ಕಾರ್ ರೇಸಿಂಗ್ ಅಂದರೆ ಅಜಿತ್&zwnj;ಗೆ ಪಂಚಪ್ರಾಣ. ಆದರೆ, ಇದೇ ಪ್ಯಾಷನ್ ಇದೀಗ ಅವರ ಅಭಿಮಾನಿಗಳನ್ನು ಸಂಕಷ್ಟದ ಸುಳಿಗೆ ತಳ್ಳುವಂತಹ ಒಂದು ದೊಡ್ಡ ಆಘಾತಕಾರಿ ಸುದ್ದಿಯನ್ನು ಹೊತ್ತು ತಂದಿದೆ.&lt;/p&gt;&lt;h2&gt;ಯುರೋಪ್ ಟ್ರ್ಯಾಕ್&zwnj;ನಲ್ಲಿ ನಡೆದಿದ್ದೇನು?&lt;/h2&gt;&lt;p&gt;ಸದ್ಯ ಅಜಿತ್ ಕುಮಾರ್ ಯುರೋಪ್&zwnj;ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ &lsquo;ಮೈಕೆಲಿನ್ ಲೆ ಮ್ಯಾನ್ಸ್ ಕಪ್&rsquo; (Michelin Le Mans Cup) ರೇಸಿಂಗ್ ಸ್ಪರ್ಧೆಯಲ್ಲಿ ಅತ್ಯಂತ ಬ್ಯುಸಿಯಾಗಿದ್ದಾರೆ. ರೇಸಿಂಗ್ ಟ್ರ್ಯಾಕ್&zwnj;ನಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಹೈ-ಸ್ಪೀಡ್ ರೇಸಿಂಗ್ ಕಾರಿನಲ್ಲಿ ಅಜಿತ್ ಮಿಂಚಿನ ವೇಗದಲ್ಲಿ ಸಾಗುತ್ತಿದ್ದರು. ನೂರಾರು ಕಿಲೋಮೀಟರ್ ವೇಗದಲ್ಲಿ ಅಜಿತ್ ಕಾರು ಚಲಾಯಿಸುತ್ತಿದ್ದಾಗ, ಟ್ರ್ಯಾಕ್&zwnj;ನ ಒಂದು ಕಠಿಣವಾದ ತಿರುವಿನಲ್ಲಿ (Sharp Turn) ಅನಿರೀಕ್ಷಿತವಾಗಿ ಕಾರಿನ ನಿಯಂತ್ರಣ ತಪ್ಪಿದೆ.&lt;/p&gt;&lt;p&gt;ಕಾರು ಹತೋಟಿ ಮೀರಿದ ಆ ಕ್ಷಣ ನಿಜಕ್ಕೂ ಭಯಾನಕವಾಗಿತ್ತು. ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆಯ ಮೇಲೆ ಸ್ಕಿಡ್ ಆಗಿ ಚಕ್ರ ತಿರುಗುತ್ತಿದ್ದಂತೆ ಸುತ್ತಲೂ ದಟ್ಟವಾದ ಬಿಳಿ ಹೊಗೆ ಆವರಿಸಿಕೊಂಡಿತು. ಕಾರು ಟ್ರ್ಯಾಕ್&zwnj;ನ ಬದಿಗೆ ಜಾರಿ ಸಿಲುಕಿಕೊಂಡಾಗ, ಅಲ್ಲಿದ್ದ ಪ್ರೇಕ್ಷಕರು ಮತ್ತು ರೇಸಿಂಗ್ ಸಿಬ್ಬಂದಿ ಕ್ಷಣಕಾಲ ಸ್ತಬ್ಧರಾಗಿಬಿಟ್ಟರು. ಇದು ಕೇವಲ ಸಿನಿಮಾದ ಸ್ಟಂಟ್ ಆಗಿರಲಿಲ್ಲ, ಬದಲಾಗಿ ಸಾವಿನ ಜೊತೆಗಿನ ನೇರ ಮುಖಾಮುಖಿಯಾಗಿತ್ತು.&lt;/p&gt;&lt;h3&gt;ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದ್ದೇಗೆ?&lt;/h3&gt;&lt;p&gt;ಅಜಿತ್ ಅವರ ಕಾರು ನಿಯಂತ್ರಣ ತಪ್ಪಿ ನಿಂತಾಗ, ಅದರ ಬೆನ್ನ ಹಿಂದೆಯೇ ಇತರ ರೇಸಿಂಗ್ ಕಾರುಗಳು ಅತಿ ವೇಗವಾಗಿ ಧಾವಿಸಿ ಬರುತ್ತಿದ್ದವು. ಒಂದು ವೇಳೆ ಹಿಂಬದಿಯಿಂದ ಯಾವುದಾದರೂ ಕಾರ್ ಅಜಿತ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದರೆ ಇಂದು ಪರಿಸ್ಥಿತಿ ಏನಾಗುತ್ತಿತ್ತು ಎಂದು ನೆನೆದರೆ ಮೈ ಜುಂ ಎನ್ನುತ್ತದೆ. ಆದರೆ, 'ದೈವಬಲ' ಎನ್ನುವಂತೆ ಹಿಂಬದಿಯ ವಾಹನಗಳು ಅಜಿತ್ ಅವರ ಕಾರಿನಿಂದ ಸ್ವಲ್ಪದರಲ್ಲೇ ಪಾರಾದವು. ಅಂತಿಮವಾಗಿ ಯಾವುದೇ ಗಾಯಗಳಿಲ್ಲದೆ ಅಜಿತ್ ಕಾರಿನಿಂದ ಸುರಕ್ಷಿತವಾಗಿ ಹೊರಬಂದಾಗ ಎಲ್ಲರೂ ನಿಟ್ಟುಸಿರು ಬಿಟ್ಟರು.&lt;/p&gt;&lt;p&gt;ಅಜಿತ್: ಕೇವಲ ನಟನಲ್ಲ, ಒಬ್ಬ ಅಪ್ಪಟ ರೇಸರ್!&lt;/p&gt;&lt;p&gt;ಅಜಿತ್ ಕುಮಾರ್ ಅವರು ಕೇವಲ ಹವ್ಯಾಸಕ್ಕಾಗಿ ರೇಸಿಂಗ್ ಮಾಡುವುದಿಲ್ಲ. ಅವರು ತಮ್ಮದೇ ಆದ ಓದು ರೇಸಿಂಗ್ ತಂಡವನ್ನು (Ajith Kumar Racing) ಕಟ್ಟಿಕೊಂಡಿದ್ದಾರೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ಹೊಂದಿದ್ದಾರೆ. ಅಧಿಕ್ ರವಿಚಂದ್ರನ್ ನಿರ್ದೇಶನದ 'ಗುಡ್ ಬ್ಯಾಡ್ ಅಗ್ಲಿ' (Good Bad Ugly) ಸಿನಿಮಾದ ಶೂಟಿಂಗ್ ಮುಗಿದ ಬೆನ್ನಲ್ಲೇ ಅವರು ಈ ರೇಸಿಂಗ್ ಸರಣಿಯಲ್ಲಿ ಭಾಗಿಯಾಗಲು ತೆರಳಿದ್ದರು.&lt;/p&gt;&lt;p&gt;ಸದ್ಯ ಅಜಿತ್ ಕುಮಾರ್ ಸಂಪೂರ್ಣ ಸುರಕ್ಷಿತವಾಗಿದ್ದು, ಈ ಸುದ್ದಿಯನ್ನು ಕೇಳಿದ ಅವರ ಕೋಟ್ಯಂತರ ಅಭಿಮಾನಿಗಳು &quot;ನಮ್ಮ ತಲಾಗೆ ಏನೂ ಆಗಲ್ಲ&quot; ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ಈ ಅಪಘಾತದ ದೃಶ್ಯಗಳು ವೈರಲ್ ಆಗುತ್ತಿದ್ದು, ಸಿನಿಮಾ ರಂಗದ ಗಣ್ಯರು ಅಜಿತ್ ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ನಿಜಕ್ಕೂ ಅಜಿತ್ ಕುಮಾರ್ ಅವರು ಈ ಘಟನೆಯ ಮೂಲಕ ಮತ್ತೊಮ್ಮೆ ತಾನು 'ಮೃತ್ಯುಂಜಯ' ಎಂಬುದನ್ನು ಸಾಬೀತುಪಡಿಸಿದ್ದಾರೆ!&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/actor-ajith-kumar-is-safe-after-his-car-crashed-during-the-michelin-le-mans-cup-racing-event-in-europe/articleshow-4m2vs38"/>
        </item>
        <item>
            <title><![CDATA[ಬದನೆಕಾಯಿ ಪಲ್ಯ ತಿಂದು ಮುದ್ದಾದ 3 ಹೆಣ್ಮಕ್ಕಳು ಸಾವು; ಹೂತಿದ್ದ ಮೃತದೇಹ ಹೊರ ತೆಗೆದ ಪೊಲೀಸರು]]></title>
            <link>https://kannada.asianetnews.com/india-news/three-children-died-after-eating-eggplant-in-madhya-pradeshs-chhatarpur-district-gkn/articleshow-73fqy62</link>
            <guid isPermaLink="true">https://kannada.asianetnews.com/india-news/three-children-died-after-eating-eggplant-in-madhya-pradeshs-chhatarpur-district-gkn/articleshow-73fqy62</guid>
            <pubDate>Sun, 23 Aug 2026 21:08:45 +0530</pubDate>
            <description><![CDATA[&lt;p&gt;ಮಧ್ಯಪ್ರದೇಶದ ಛತ್ತರ್&zwnj;ಪುರದಲ್ಲಿ ಬದನೆಕಾಯಿ ಪಲ್ಯ ಮತ್ತು ರೊಟ್ಟಿ ತಿಂದ ಒಂದೇ ಕುಟುಂಬದ ಮೂವರು ಹೆಣ್ಣು ಮಕ್ಕಳು (7 ವರ್ಷ, 3 ವರ್ಷ ಮತ್ತು 9 ತಿಂಗಳು) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರಿಗೆ ತಿಳಿಸದೆ ಮಕ್ಕಳನ್ನು ಹೂತುಹಾಕಿದ್ದ ಪೋಷಕರ ಕ್ರಮ ಅನುಮಾನ ಮೂಡಿಸಿದ್ದು, ಅಧಿಕಾರಿಗಳು ಈಗ ಶವಗಳನ್ನು ಹೊರತೆಗೆದು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qmayx2n8e9pqpzed9pqcvp,imgname-eggplant-bharta-1787499477922.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಛತ್ತರ್&zwnj;ಪುರ (ಮಧ್ಯಪ್ರದೇಶ): &lt;/strong&gt;ಮಧ್ಯಪ್ರದೇಶದ ಛತ್ತರ್&zwnj;ಪುರ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ಕುಟುಂಬದ ಮೂವರು ಪುಟ್ಟ ಮಕ್ಕಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿಗೆ ಅವರು ಸೇವಿಸಿದ ಬದನೆಕಾಯಿ ಪಲ್ಯವೇ ಕಾರಣ ಎಂಬ ಸಂಶಯ ವ್ಯಕ್ತವಾಗಿದ್ದು, ಪ್ರಕರಣ ಈಗ ಹಲವು ತಿರುವುಗಳನ್ನು ಪಡೆದುಕೊಂಡಿದೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಜಿಲ್ಲೆಯ ಇಸಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪೋರಾ ಖುರ್ದ್ ಗ್ರಾಮದಲ್ಲಿ ದುರಂತ ಸಂಭವಿಸಿದೆ. ಮೃತ ಮಕ್ಕಳನ್ನು ಬಾಲಮುಕುಂದ್ ಕುಶ್ವಾಹಾ ಎಂಬುವವರ ಪುತ್ರಿಯರಾದ ಪೂನಮ್ (7 ವರ್ಷ), ಮನಿಷಾ (3 ವರ್ಷ) ಮತ್ತು ಕೇವಲ ಒಂಬತ್ತು ತಿಂಗಳ ಹಸುಗೂಸು ಚಾಹತ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ.. ಗುರುವಾರ ರಾತ್ರಿ ಮೂವರು ಮಕ್ಕಳು ಮನೆಯಲ್ಲಿ ತಯಾರಿಸಿದ್ದ 'ಬದನೆಕಾಯಿ ಭರ್ತಾ' (ಬದನೆಕಾಯಿ ಪಲ್ಯ) ಮತ್ತು ರೊಟ್ಟಿಯನ್ನು ಸೇವಿಸಿದ್ದರು. ಆಹಾರ ಸೇವಿಸಿದ ಕೆಲವೇ ಹೊತ್ತಿನಲ್ಲಿ ಮಕ್ಕಳ ಆರೋಗ್ಯ ಕ್ಷೀಣಿಸಿದ್ದು, ಮೂವರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಹೂತು ಹಾಕಿದ್ದ ಪೋಷಕರು&lt;/strong&gt;&lt;/h2&gt;&lt;p&gt;ಮಕ್ಕಳ ಸಾವಿನ ಬಗ್ಗೆ ಪೋಷಕರು ಪೊಲೀಸರಿಗೆ ಅಥವಾ ಸ್ಥಳೀಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸದೆಯೇ ಮಕ್ಕಳ ಶವಗಳನ್ನು ಗ್ರಾಮದ ಹೊರವಲಯದಲ್ಲಿ ರಹಸ್ಯವಾಗಿ ಹೂತು ಹಾಕಿದ್ದರು. ಈ ವಿಷಯವು ತಡವಾಗಿ ಪೊಲೀಸರ ಗಮನಕ್ಕೆ ಬಂದಿದೆ. ಮಕ್ಕಳ ಸಾವು ಅನುಮಾನಾಸ್ಪದ ಎಂದು ತಿಳಿದ ಕೂಡಲೇ ಛತ್ತರ್&zwnj;ಪುರದ ಮುಖ್ಯ ವೈದ್ಯಾಧಿಕಾರಿ ಆರ್.ಪಿ. ಗುಪ್ತಾ, ಕಂದಾಯ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ತಂಡ ಗ್ರಾಮಕ್ಕೆ ಧಾವಿಸಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ಹೂತು ಹಾಕಲಾಗಿದ್ದ ಮೂವರು ಮಕ್ಕಳ ಶವಗಳನ್ನು ಪೊಲೀಸರು ಮಣ್ಣಿನಿಂದ ಹೊರತೆಗೆದಿದ್ದಾರೆ.&lt;/p&gt;&lt;p&gt;ಮಕ್ಕಳ ಸಾವಿಗೆ ಅವರು ತಿಂದ ಆಹಾರ ವಿಷಪೂರಿತವಾಗಿದ್ದೇ (Food Poisoning) ಕಾರಣವೇ? ಅಥವಾ ಮತ್ಯಾವುದಾದರೂ ಅನಾರೋಗ್ಯ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿನ ಅಸಲಿ ಸತ್ಯ ಬಯಲಾಗಲಿದೆ. ಪೋಷಕರು ಅಂತ್ಯಕ್ರಿಯೆಯನ್ನು ರಹಸ್ಯವಾಗಿ ಮಾಡಿದ್ದೇಕೆ ಎಂಬ ಬಗ್ಗೆಯೂ ಪೊಲೀಸರು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಒಂದು ರಾತ್ರಿಯ ಊಟ ಇಡೀ ಕುಟುಂಬದ ಮೂವರು ಕುಡಿಗಳನ್ನು ಬಲಿಪಡೆದಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/three-children-died-after-eating-eggplant-in-madhya-pradeshs-chhatarpur-district-gkn/articleshow-73fqy62"/>
        </item>
        <item>
            <title><![CDATA[ಯಶ್ 'ಟಾಕ್ಸಿಕ್‌' ಪ್ರೀ-ರಿಲೀಸ್ ಈವೆಂಟ್‌ ಅವಘಡ; ಪೊಲೀಸರು ಕೇಸ್‌ ದಾಖಲಿಸಿದ್ದು ಯಾರ ಮೇಲೆ ಗೊತ್ತಾ?]]></title>
            <link>https://kannada.asianetnews.com/news-entertainment/police-register-a-case-against-event-managers-and-university-officials-over-the-toxic-pre-release-event-accident/articleshow-75ymitl</link>
            <guid isPermaLink="true">https://kannada.asianetnews.com/news-entertainment/police-register-a-case-against-event-managers-and-university-officials-over-the-toxic-pre-release-event-accident/articleshow-75ymitl</guid>
            <pubDate>Sun, 23 Aug 2026 20:32:52 +0530</pubDate>
            <description><![CDATA[&lt;p&gt;ಆ ಕಬ್ಬಿಣದ ಚೌಕಟ್ಟು ಅಷ್ಟು ಜನರ ತೂಕವನ್ನು ತಾಳಲಾರದೆ ಏಕಾಏಕಿ ಧಬಾಬನೆ ನೆಲಕ್ಕುರುಳಿದೆ. ಈ ಭೀಕರ ಅವಘಡದಲ್ಲಿ ಓರ್ವ ವಿದ್ಯಾರ್ಥಿಯ ಕಾಲಿನ ಮೂಳೆ ಮುರಿದಿದ್ದರೆ, ಇನ್ನೂ ಮೂವರು ರಕ್ತಸಿಕ್ತ ಗಾಯಗಳೊಂದಿಗೆ ಆಸ್ಪತ್ರೆ ಪಾಲಾಗಿದ್ದಾರೆ. ಕೇಸ್ ದಾಖಲಿಸಿದ್ದು ಯಾರ ಮೇಲೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qj5d54cp4czmrzb92a04vk,imgname-yash-toxic-1787497198756.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Pre-release Event-Toxic Event Mishap-Police Case against Event Manager: ಟಾಕ್ಸಿಕ್ ಹವಾ ನಡುವೆ ಸಂಭವಿಸಿದ 'ಅನಿರೀಕ್ಷಿತ ಆಘಾತ': ಯಶ್ ಕಾರ್ಯಕ್ರಮದಲ್ಲಿ ಅಭಿಮಾನದ ಅತಿರೇಕಕ್ಕೆ ಸಿಕ್ಕ ಸಾಕ್ಷಿ ಇದು!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಿಂದ ಶುರುವಾಗಿ ಗ್ಲೋಬಲ್ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹೆಸರು 'ರಾಕಿಂಗ್ ಸ್ಟಾರ್' ಯಶ್. ಸದ್ಯ ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್'. ಈ ಚಿತ್ರದ ಪ್ರಚಾರದ ಕಿಚ್ಚು ಹೈದರಾಬಾದ್&zwnj;ನಲ್ಲೂ ಜೋರಾಗಿಯೇ ಇತ್ತು. ಆದರೆ, ಕಳೆದ ಶನಿವಾರ ತೆಲಂಗಾಣದ ಮೇಡ್ಚಲ್&zwnj;ನಲ್ಲಿ ನಡೆದ ಪ್ರೀ-ರಿಲೀಸ್ ಈವೆಂಟ್ ಮಾತ್ರ ಸಂಭ್ರಮದ ನಡುವೆ ಒಂದು ಕರಾಳ ನೆನಪಾಗಿ ಉಳಿದುಬಿಟ್ಟಿದೆ.&lt;/p&gt;&lt;h2&gt;ಅಭಿಮಾನದ ಅತಿರೇಕ, ಕುಸಿದು ಬಿದ್ದ ಸೌಂಡ್ ಬಾಕ್ಸ್!&lt;/h2&gt;&lt;p&gt;ಮೇಡ್ಚಲ್&zwnj;ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಮೈಸಮ್ಮಗುಡ ಕ್ಯಾಂಪಸ್&zwnj;ನಲ್ಲಿ ಅಂದು ಜನಸಾಗರವೇ ಹರಿದುಬಂದಿತ್ತು. ಯಶ್ ಅವರ ಒಂದು ಝಲಕ್ ನೋಡಲು ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಮುಗಿಬಿದ್ದಿದ್ದರು. ಗ್ಯಾಂಗ್&zwnj;ಸ್ಟರ್ 'ರಾಯ'ನ ಅವತಾರದಲ್ಲಿ ಯಶ್ ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳ ಆರ್ಭಟ ಮುಗಿಲು ಮುಟ್ಟಿತ್ತು. ಆದರೆ ಈ ಅತಿಯಾದ ಉತ್ಸಾಹವೇ ಅಚಾತುರ್ಯಕ್ಕೆ ನಾಂದಿ ಹಾಡಿತು. ಯಶ್ ಅವರನ್ನು ಹತ್ತಿರದಿಂದ ಕಾಣಲು ನೂರಾರು ಯುವಕರು ಲೈಟಿಂಗ್ ಕಂಬಗಳು ಮತ್ತು ಬೃಹತ್ ಸೌಂಡ್ ಬಾಕ್ಸ್&zwnj;ಗಳನ್ನು ನಿಲ್ಲಿಸಿದ್ದ ಸ್ಕ್ಯಾಫೋಲ್ಡಿಂಗ್ ಸ್ಟ್ರಕ್ಚರ್ ಮೇಲೆಯೇ ಏರಿ ಕುಳಿತರು.&lt;/p&gt;&lt;p&gt;ಆದರೆ, ಆ ಕಬ್ಬಿಣದ ಚೌಕಟ್ಟು ಅಷ್ಟು ಜನರ ತೂಕವನ್ನು ತಾಳಲಾರದೆ ಏಕಾಏಕಿ ಧಬಾಬನೆ ನೆಲಕ್ಕುರುಳಿದೆ. ಈ ಭೀಕರ ಅವಘಡದಲ್ಲಿ ಓರ್ವ ವಿದ್ಯಾರ್ಥಿಯ ಕಾಲಿನ ಮೂಳೆ ಮುರಿದಿದ್ದರೆ, ಇನ್ನೂ ಮೂವರು ರಕ್ತಸಿಕ್ತ ಗಾಯಗಳೊಂದಿಗೆ ಆಸ್ಪತ್ರೆ ಪಾಲಾಗಿದ್ದಾರೆ. ಅಷ್ಟೇ ಅಲ್ಲದೆ, ಈ ಭೀಕರ ದೃಶ್ಯ ಕಂಡು ಭಯದಿಂದ ಅಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಪ್ರಜ್ಞೆ ತಪ್ಪಿ ಬಿದ್ದ ಪ್ರಸಂಗವೂ ನಡೆಯಿತು.&lt;/p&gt;&lt;h3&gt;ವೇದಿಕೆ ಮೇಲೆಯೇ ಭಾಷಣ ನಿಲ್ಲಿಸಿ ಆತಂಕ ವ್ಯಕ್ತಪಡಿಸಿದ ಯಶ್!&lt;/h3&gt;&lt;p&gt;ಇವೆಂಟ್&zwnj;ನಲ್ಲಿ ಅಬ್ಬರಿಸಬೇಕಿದ್ದ ಯಶ್, ಈ ಅವಘಡ ಕಣ್ಣಮುಂದೆ ನಡೆಯುತ್ತಿದ್ದಂತೆ ತಕ್ಷಣವೇ ಮೈಕ್ ಹಿಡಿದು ಭಾಷಣ ನಿಲ್ಲಿಸಿದರು. &quot;ಅಲ್ಲಿ ಏನಾಯಿತು? ದಯವಿಟ್ಟು ಎಲ್ಲರೂ ಸೇಫ್ ಆಗಿದ್ದೀರಾ? ಮೊದಲು ಅಲ್ಲಿಂದ ಕೆಳಗೆ ಇಳಿಯಿರಿ&quot; ಎಂದು ಪದೇಪದೇ ಕೈಮುಗಿದು ಅಭಿಮಾನಿಗಳಲ್ಲಿ ವಿನಂತಿಸಿದರು. ಸ್ಟಾರ್ ಪಟ್ಟವನ್ನೂ ಮರೆತು, ಅಭಿಮಾನಿಗಳ ಸುರಕ್ಷತೆಗಾಗಿ ಅವರು ತೋರಿದ ಕಾಳಜಿ ಎಲ್ಲರ ಗಮನ ಸೆಳೆಯಿತು. ಪರಿಸ್ಥಿತಿ ಸ್ವಲ್ಪ ಹತೋಟಿಗೆ ಬಂದ ಮೇಲಷ್ಟೇ ಅವರು ಮಾತು ಮುಂದುವರಿಸಿದರು.&lt;/p&gt;&lt;p&gt;ಕಾನೂನಿನ ಸುಳಿಯಲ್ಲಿ ಆಯೋಜಕರು!&lt;/p&gt;&lt;p&gt;ಈ ದುರಂತಕ್ಕೆ ಸಂಘಟಕರ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಲಾಗಿದೆ. ಸರಿಯಾದ ಭದ್ರತೆ ಮತ್ತು ಜನಸಂದಣಿ ನಿಯಂತ್ರಣ ಮಾಡದ ಕಾರಣ, ಮೇಡ್ಚಲ್ ಪೊಲೀಸರು ಈಗ ಈವೆಂಟ್ ಮ್ಯಾನೇಜರ್&zwnj;ಗಳು ಮತ್ತು ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ಎಫ್&zwnj;ಐಆರ್ ದಾಖಲಿಸಿಕೊಂಡಿದ್ದಾರೆ.&lt;/p&gt;&lt;p&gt;ಟಾಕ್ಸಿಕ್ ಕ್ರೇಜ್: ಆಗಸ್ಟ್ 26ಕ್ಕೆ ರಾಯನ ದರ್ಬಾರ್!&lt;/p&gt;&lt;p&gt;ಇಷ್ಟೆಲ್ಲಾ ಸವಾಲುಗಳ ನಡುವೆಯೂ 'ಟಾಕ್ಸಿಕ್' ಮೇಲಿನ ನಿರೀಕ್ಷೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಗೀತು ಮೋಹನ್&zwnj;ದಾಸ್ ನಿರ್ದೇಶನದ ಈ ಚಿತ್ರದಲ್ಲಿ 1940-70ರ ದಶಕದ ಗೋವಾ ಗ್ಯಾಂಗ್&zwnj;ಸ್ಟರ್ ಕಥೆಯಿದೆ. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಇದೆ. ಆಗಸ್ಟ್ 26ರಂದು ಬೆಳ್ಳಿತೆರೆಯ ಮೇಲೆ 'ರಾಯ'ನ ಅಬ್ಬರ ಹೇಗಿರಲಿದೆ ಎಂದು ನೋಡಲು ಇಡೀ ಜಗತ್ತೇ ಕಾಯುತ್ತಿದೆ. ಆದರೆ, ಸಿನಿಮಾ ಹಬ್ಬದ ನಡುವೆ ಇಂತಹ ಅವಘಡಗಳು ನಡೆಯದಿರಲಿ ಎನ್ನುವುದೇ ಚಿತ್ರಪ್ರೇಮಿಗಳ ಆಶಯ.&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/police-register-a-case-against-event-managers-and-university-officials-over-the-toxic-pre-release-event-accident/articleshow-75ymitl"/>
        </item>
        <item>
            <title><![CDATA[ವಿದ್ಯಾರ್ಥಿನಿಯರಿಗೆ ಈಜು ಕಲಿಸುವುದಕ್ಕೆ, ತುಂಡು ಬಟ್ಟೆಯಿಲ್ಲದೇ ನೀರಿಗಿಳಿದ ಪ್ರಿನ್ಸಿಪಾಲ್; ಮುಂದಾಗಿದ್ದೇನು?]]></title>
            <link>https://kannada.asianetnews.com/india-news/rajasthan-alwar-school-principal-suspended-after-video-of-bathing-in-dam-with-girls-goes-viral/articleshow-y7qeyod</link>
            <guid isPermaLink="true">https://kannada.asianetnews.com/india-news/rajasthan-alwar-school-principal-suspended-after-video-of-bathing-in-dam-with-girls-goes-viral/articleshow-y7qeyod</guid>
            <pubDate>Sun, 23 Aug 2026 19:59:12 +0530</pubDate>
            <description><![CDATA[&lt;p&gt;ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಸ್ವಾತಂತ್ರ್ಯ ದಿನಾಚರಣೆಯ ನಂತರ ವಿದ್ಯಾರ್ಥಿನಿಯರನ್ನು ನಿಷೇಧಿತ ಡ್ಯಾಂಗೆ ಕರೆದೊಯ್ದು ಅವರೊಂದಿಗೆ ಆಕ್ಷೇಪಾರ್ಹವಾಗಿ ಸ್ನಾನ ಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಶಿಕ್ಷಣ ಇಲಾಖೆಯು ಅವರನ್ನು ಅಮಾನತುಗೊಳಿಸಿದ್ದು, ಪೊಲೀಸ್ ಮತ್ತು ಇಲಾಖಾ ತನಿಖೆ ನಡೆಯುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0pngyf4fsjy3dj626x6x3h5,imgname-asianet-bangla-thump---2026-08-23t120735.331-1787467168227.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಶಿಕ್ಷಕರ ನೈತಿಕತೆಯ ಬಗ್ಗೆ ತೀವ್ರ ಆತಂಕ ಹುಟ್ಟಿಸುವ ಘಟನೆಯೊಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಸ್ವಾತಂತ್ರ್ಯ ದಿನಾಚರಣೆಯ ನೆಪದಲ್ಲಿ ವಿದ್ಯಾರ್ಥಿನಿಯರನ್ನು ಡ್ಯಾಂ ಬಳಿ ಕರೆದೊಯ್ದು, ಅವರ ಜೊತೆ ಪ್ರಿನ್ಸಿಪಾಲ್ ಸ್ನಾನ ಮಾಡುತ್ತಿರುವ ಆಕ್ಷೇಪಾರ್ಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಶಿಕ್ಷಣ ಇಲಾಖೆ ಪ್ರಾಂಶುಪಾಲನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.&lt;/p&gt;&lt;h2&gt;&lt;strong&gt;ಈಜು ಕಲಿಸುವ ನೆಪದಲ್ಲಿ ಡ್ಯಾಂಗೆ ಕರೆದೊಯ್ದಿದ್ದ ಪ್ರಿನ್ಸಿಪಾಲ್!&lt;/strong&gt;&lt;/h2&gt;&lt;p&gt;ರಾಜಸ್ಥಾನದ ಅಲ್ವಾರ್&zwnj;ನ ಥಾನಗಾಜಿ ಪ್ರದೇಶದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಗಿದ ಬಳಿಕ ಈ ಕೃತ್ಯ ನಡೆದಿದೆ. ಶಾಲೆಯ ಪ್ರಿನ್ಸಿಪಾಲ್, ಈಜು ಕಲಿಸುವುದು ಮತ್ತು ಟ್ರಿಪ್ ನೆಪವೊಡ್ಡಿ ಸುಮಾರು 20 ರಿಂದ 25 ಹಿರಿಯ ವಿದ್ಯಾರ್ಥಿನಿಯರು ಸೇರಿದಂತೆ ಮಕ್ಕಳನ್ನು ಕಾಡಿನ ಮಾರ್ಗವಾಗಿ ಎರಡು ಕಿಲೋಮೀಟರ್ ದೂರದಲ್ಲಿರುವ &lsquo;ಭದಾಜ್ ಡ್ಯಾಂ&rsquo;ಗೆ ಕರೆದೊಯ್ದಿದ್ದರು.&lt;/p&gt;&lt;p&gt;ಅಲ್ಲಿ ಪ್ರಿನ್ಸಿಪಾಲ್ ವಿದ್ಯಾರ್ಥಿನಿಯರ ಜೊತೆ ನೀರಿಗಿಳಿದು ಆಕ್ಷೇಪಾರ್ಹ ರೀತಿಯಲ್ಲಿ ಸ್ನಾನ ಮಾಡಿದ್ದು, ಇದನ್ನು ಸ್ಥಳದಲ್ಲಿದ್ದ ಯಾರೋ ಮೊಬೈಲ್&zwnj;ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;4 ವರ್ಷಗಳಿಂದ ನಿಷೇಧವಿದ್ದ ಸ್ಥಳ; ಸುರಕ್ಷತೆ ಸಂಪೂರ್ಣ ಗಾಳಿಗೆ!&lt;/strong&gt;&lt;/h2&gt;&lt;p&gt;ಮಕ್ಕಳನ್ನು ಕರೆದೊಯ್ದ ಜಾಗ ಅತ್ಯಂತ ಅಪಾಯಕಾರಿಯಾಗಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ:&lt;/p&gt;&lt;ul&gt; &lt;li&gt;ಭದಾಜ್ ಡ್ಯಾಂನ ದಡ ಕೇವಲ 5 ರಿಂದ 6 ಅಡಿ ಅಗಲವಿದ್ದು, ಈ ಹಿಂದೆ ಹಲವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಇತಿಹಾಸವಿದೆ.&lt;/li&gt; &lt;li&gt;ಅಪಾಯದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವು ಕಳೆದ 4 ವರ್ಷಗಳಿಂದಲೇ ಈ ಡ್ಯಾಂ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.&lt;/li&gt; &lt;li&gt;ನಿಷೇಧವಿದ್ದರೂ ಲೈಫ್ ಜಾಕೆಟ್ ಅಥವಾ ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲದೆ, ಈಜು ಬಾರದ ಮಕ್ಕಳನ್ನೂ ಪ್ರಿನ್ಸಿಪಾಲ್ ನೀರಿಗೆ ಇಳಿಸಿ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ.&lt;/li&gt;&lt;/ul&gt;&lt;h2&gt;&lt;strong&gt;ಗ್ರಾಮಸ್ಥರ ಆಕ್ರೋಶ: ಪ್ರಿನ್ಸಿಪಾಲ್ ಅಮಾನತು&lt;/strong&gt;&lt;/h2&gt;&lt;p&gt;ವಿಡಿಯೋ ವೈರಲ್ ಆಗುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಮತ್ತು ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆಯು, &lsquo;ಪ್ರಾಂಶುಪಾಲರ ಈ ವರ್ತನೆಯು ಶಿಕ್ಷಕರ ನೈತಿಕ ನಡವಳಿಕೆ ಸಂಹಿತೆಗೆ (Code of Conduct) ಸಂಪೂರ್ಣ ವಿರುದ್ಧವಾಗಿದೆ&rsquo; ಎಂದು ತಿಳಿಸಿ, ಪ್ರಿನ್ಸಿಪಾಲ್&zwnj;ನನ್ನು ತಕ್ಷಣವೇ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಮತ್ತು ಇಲಾಖಾ ಮಟ್ಟದ ತನಿಖೆ ಚುರುಕು&lt;/strong&gt;&lt;/h2&gt;&lt;p&gt;ಥಾನಗಾಜಿ ಪೊಲೀಸ್ ಠಾಣಾಧಿಕಾರಿ ರಾಜ್&zwnj;ಕುಮಾರ್ ಮೀನಾ ಮಾತನಾಡಿ, 'ವೈರಲ್ ವಿಡಿಯೋ ಆಧಾರದ ಮೇಲೆ ಪ್ರಿನ್ಸಿಪಾಲ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸದ್ಯಕ್ಕೆ ಯಾವುದೇ ಲಿಖಿತ ದೂರು ಬಂದಿಲ್ಲವಾದರೂ, ಮಕ್ಕಳನ್ನು ಅಲ್ಲಿಗೆ ಕರೆದೊಯ್ದ ಉದ್ದೇಶದ ಕುರಿತು ಕೂಲಂಕಷ ತನಿಖೆ ನಡೆಸಲಾಗುತ್ತಿದೆ' ಎಂದು ತಿಳಿಸಿದ್ದಾರೆ. ಮುಖ್ಯ ಬ್ಲಾಕ್ ಶಿಕ್ಷಣಾಧಿಕಾರಿ (CBEO) ಶಕುಂತಲಾ ಯಾದವ್ ನೇತೃತ್ವದ ವಿಶೇಷ ತನಿಖಾ ತಂಡವು ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಶೀಘ್ರದಲ್ಲೇ ವರದಿ ಸಲ್ಲಿಸಲಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/rajasthan-alwar-school-principal-suspended-after-video-of-bathing-in-dam-with-girls-goes-viral/articleshow-y7qeyod"/>
        </item>
        <item>
            <title><![CDATA[ಐಫೋನ್ ಹುಚ್ಚೋ ಅಥವಾ ಮಾನಸಿಕ ಕಾಯಿಲೆಯೋ? ಕುನಾಲ್‌ನ ಹಳೆಯ ರಹಸ್ಯ ಬಯಲು! ಕಳೆದ ಬಾರಿ ಜೀವ ಉಳಿದಿತ್ತು! ಈ ಬಾರಿ ಕುಟುಂಬವೇ ಬಲಿಯಾಯ್ತು!]]></title>
            <link>https://kannada.asianetnews.com/india-news/kunal-iphone-family-tragedy-previous-year-mountain-incident-parents-death-shocking-viral-news-bmk/articleshow-h1gm5e7</link>
            <guid isPermaLink="true">https://kannada.asianetnews.com/india-news/kunal-iphone-family-tragedy-previous-year-mountain-incident-parents-death-shocking-viral-news-bmk/articleshow-h1gm5e7</guid>
            <pubDate>Sun, 23 Aug 2026 19:56:52 +0530</pubDate>
            <description><![CDATA[&lt;p&gt;ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್ ಇಎಂಐ ವಿಚಾರವಾಗಿ ನಡೆದ ಜಗಳವು ಭೀಕರ ದುರಂತಕ್ಕೆ ಕಾರಣವಾಗಿದೆ. ಖವಾಡ್ಯಾ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಗನನ್ನು ಉಳಿಸಲು ಹೋಗಿ, ತಂದೆ, ತಾಯಿ ಹಾಗೂ ಮಗ ಮೂವರೂ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯು ಇಡೀ ಕುಟುಂಬದ ನಾಶಕ್ಕೆ ಕಾರಣವಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qg8etq7bdczdp0ty2h13z9,imgname-maharashtra-iphone-tragedy-1787495201620.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖವಾಡ್ಯಾ ಬೆಟ್ಟದಲ್ಲಿ ನಡೆದ ಒಂದು ದಾರುಣ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಐಫೋನ್ ಖರೀದಿಯ ಇಎಂಐ (EMI) ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ನಡುವೆ ನಡೆದ ಜಗಳ, ಕೊನೆಗೆ ಒಂದೇ ಕುಟುಂಬದ ಮೂವರ ಸಾವು ಹಾಗೂ ಇಡೀ ಕುಟುಂಬವೇ ನಾಶವಾಗುವಂತಹ ದುರಂತದಲ್ಲಿ ಅಂತ್ಯಗೊಂಡಿದೆ.&lt;/p&gt;&lt;h2&gt;&lt;strong&gt;ಖವಾಡ್ಯಾ ಬೆಟ್ಟದಲ್ಲೇನಾಯಿತು?&lt;/strong&gt;&lt;/h2&gt;&lt;p&gt;ಶುಕ್ರವಾರ ಬೆಳಿಗ್ಗೆ 18 ವರ್ಷದ ಕುನಾಲ್ ಚಂದಗುಡೆ ತನ್ನ ತಂದೆ ಮುರಳೀಧರ್ ಜೊತೆ ತೀವ್ರವಾಗಿ ಜಗಳವಾಡಿದ್ದ. ನಂತರ ಕೋಪದಿಂದ ಮನೆಯಿಂದ ಹೊರಟು, ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಹತ್ತಿರದ ಖವಾಡ್ಯಾ ಬೆಟ್ಟವನ್ನು ತಲುಪಿದ. ಅಲ್ಲಿ ಸುಮಾರು 400 ರಿಂದ 500 ಅಡಿ ಆಳದ ಕಂದಕದ ಅಂಚಿನಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ. ಸುಮಾರು ಮೂರು ಗಂಟೆಗಳ ಕಾಲ ಕುನಾಲ್ ಕಂದಕದ ಅಂಚಿನಲ್ಲೇ ನಿಂತಿದ್ದ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಗ್ರಾಮಸ್ಥರು ಮತ್ತು ಕುಟುಂಬಸ್ಥರು ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲು ನಿರಂತರವಾಗಿ ಪ್ರಯತ್ನಿಸಿದರು.&lt;/p&gt;&lt;h3&gt;&lt;strong&gt;ಮಗನನ್ನು ಬೇಡಿಕೊಂಡ ತಾಯಿ!&lt;/strong&gt;&lt;/h3&gt;&lt;p&gt;ಕುನಾಲ್&zwnj;ನ ತಾಯಿ ಸಂಗೀತಾ ಅವರು ಮಗನನ್ನು ಉಳಿಸಿಕೊಳ್ಳಲು ಕಂದಕದ ಹತ್ತಿರವೇ ನಿಂತು ಕಣ್ಣೀರಿಡುತ್ತಾ ಬೇಡಿಕೊಂಡರು. &quot;ಹಿಂತಿರುಗಿ ಬಾ ಮಗನೇ&quot; ಎಂದು ನಿರಂತರವಾಗಿ ಮನವಿ ಮಾಡಿದರು. ಮತ್ತೊಂದೆಡೆ ರಕ್ಷಣಾ ಸಿಬ್ಬಂದಿ ಆತ ಕೆಳಗೆ ಬಿದ್ದರೆ ರಕ್ಷಿಸಲು ಸುರಕ್ಷತಾ வலைಗಳನ್ನು ಅಳವಡಿಸಲು ಹೆಣಗಾಡುತ್ತಿದ್ದರು. ಆದರೆ, ಕುನಾಲ್ ರಕ್ಷಕರ ಕಣ್ಣು ತಪ್ಪಿಸಲು ಬೆಟ್ಟದ ಮೇಲಿನ ತನ್ನ ಸ್ಥಳವನ್ನು ಪದೇ ಪದೇ ಬದಲಾಯಿಸುತ್ತಿದ್ದ. ಇದರಿಂದ ರಕ್ಷಣಾ ಕಾರ್ಯಾಚರಣೆ ತೀರಾ ಕಷ್ಟಕರವಾಯಿತು.&lt;/p&gt;&lt;h3&gt;&lt;strong&gt;ಒಂದೇ ಕ್ಷಣದಲ್ಲಿ ಸಂಭವಿಸಿದ ಮಹಾ ದುರಂತ!&lt;/strong&gt;&lt;/h3&gt;&lt;p&gt;ಕೊನೆಗೆ ಮಗನನ್ನು ಹೇಗಾದರೂ ಮಾಡಿ ಕಾಪಾಡಲೇಬೇಕೆಂದು ಪೋಷಕರು ಆತನ ಹತ್ತಿರಕ್ಕೆ ಹೋದರು. ಈ ವೇಳೆ ದುರದೃಷ್ಟವಶಾತ್, ತಂದೆ ಮುರಳೀಧರ್ ಅವರು ಕಾಲು ಜಾರಿ ಸಮತೋಲನ ಕಳೆದುಕೊಂಡು ಆಳವಾದ ಕಂದಕಕ್ಕೆ ಬಿದ್ದರು. ಮಗ ಮತ್ತು ಗಂಡ ಇಬ್ಬರನ್ನೂ ಉಳಿಸಲು ಧಾವಿಸಿದ ತಾಯಿ ಸಂಗೀತಾ ಕೂಡ ನಿಯಂತ್ರಣ ಸಿಗದೆ ಕಂದಕಕ್ಕೆ ಬಿದ್ದರು. ಕುನಾಲ್, ತಂದೆ ಮುರಳೀಧರ್ ಮತ್ತು ತಾಯಿ ಸಂಗೀತಾ ಮೂವರೂ ಕ್ಷಣಾರ್ಧದಲ್ಲಿ ಆಳವಾದ ಕಂದರಕ್ಕೆ ಬಿದ್ದು ಪ್ರಾಣ ಕಳೆದುಕೊಂಡರು.&lt;/p&gt;&lt;h3&gt;&lt;strong&gt;2025 ರ ಹಳೆಯ ಘಟನೆ ಬೆಳಕಿಗೆ!&lt;/strong&gt;&lt;/h3&gt;&lt;p&gt;ಈ ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಆಘಾತಕಾರಿ ಸತ್ಯ ತಿಳಿದುಬಂದಿದೆ. ಕುನಾಲ್ 2025 ರಲ್ಲೂ ಇದೇ ಖವಾಡ್ಯಾ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಎಂಬ ವಿಷಯ ಪೊಲೀಸ್ ತನಿಖೆಯಲ್ಲಿ ಹೊರಬಿದ್ದಿದೆ. ಇದರಿಂದಾಗಿ ಈ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಕೇವಲ ಐಫೋನ್ ಇಎಂಐ ವಿಚಾರದ ಜಗಳವೇ ಈ ದುರಂತಕ್ಕೆ ಕಾರಣವೇ? ಅಥವಾ ಕುನಾಲ್ ಅನುಭವಿಸುತ್ತಿದ್ದ ಯಾವುದಾದರೂ ವೈಯಕ್ತಿಕ, ಕೌಟುಂಬಿಕ ಅಥವಾ ಮಾನಸಿಕ ಒತ್ತಡಗಳು ಆತನನ್ನು ಇಂತಹ ಅಪಾಯಕಾರಿ ಹೆಜ್ಜೆಗೆ ತಳ್ಳಿದವೇ? ಎಂಬ ಕೋನದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/india-news/kunal-iphone-family-tragedy-previous-year-mountain-incident-parents-death-shocking-viral-news-bmk/articleshow-h1gm5e7"/>
        </item>
        <item>
            <title><![CDATA[ದೇಶವಿಭಜನೆಯಲ್ಲಿ ಮನೆ ಕಳೆದುಕೊಂಡ ವ್ಯಕ್ತಿ; ದಿನಗೂಲಿಯಿಂದ ₹1.14 ಲಕ್ಷ ಕೋಟಿ ಸಾಮ್ರಾಜ್ಯ ಕಟ್ಟಿದ ರೋಚಕ ಕಥೆ!]]></title>
            <link>https://kannada.asianetnews.com/viral/how-the-munjals-turned-one-word-hero-into-a-global-two-wheeler-brand/articleshow-pgv5net</link>
            <guid isPermaLink="true">https://kannada.asianetnews.com/viral/how-the-munjals-turned-one-word-hero-into-a-global-two-wheeler-brand/articleshow-pgv5net</guid>
            <pubDate>Sun, 23 Aug 2026 15:15:01 +0530</pubDate>
            <description><![CDATA[&lt;p&gt;1947ರಲ್ಲಿ ಕರೀಮ್ ದೀನ್ ಎಂಬ ಉದ್ಯಮಿ ಮುಂಜಾಲ್ ಕುಟುಂಬಕ್ಕೆ ನೀಡಿದ &lsquo;ಹೀರೋ&rsquo; ಎಂಬ ಹೆಸರು ಮುಂದೆ ₹1.14 ಲಕ್ಷ ಕೋಟಿ ಮೌಲ್ಯದ ದ್ವಿಚಕ್ರ ವಾಹನ ಸಾಮ್ರಾಜ್ಯದ ಗುರುತಾಯಿತು. ಸೈಕಲ್ ಬಿಡಿಭಾಗಗಳ ವ್ಯಾಪಾರದಿಂದ ಆರಂಭಿಸಿದ ಮುಂಜಾಲ್&zwnj;ಗಳು ಹೀರೋ ಸೈಕಲ್ಸ್, ಹೀರೋ ಹೋಂಡಾ ಮೂಲಕ ಜಾಗತಿಕ ಆಟೋ ದೈತ್ಯವಾಗಿ ಬೆಳೆದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ptyt5kyn59tsjt2v2fngkv,imgname-from-cycle-parts-to-global-motorcycles---how-the-munjals-built-hero-1787472865459.jpg" type="image/jpeg" height="390" width="690"/>
            <content:encoded><![CDATA[&lt;h2&gt;₹1.14 ಲಕ್ಷ ಕೋಟಿ ಸಾಮ್ರಾಜ್ಯದ ಹಿಂದೆ ಒಂದು &lsquo;ಹೀರೋ&rsquo; ಹೆಸರು: ಮುಂಜಾಲ್ ಕುಟುಂಬದ ಅದ್ಭುತ ಕಥೆ&lt;/h2&gt;&lt;p&gt;1947ರ ವಿಭಜನೆಯ ಗೊಂದಲದಲ್ಲಿ ಪಾಕಿಸ್ತಾನಕ್ಕೆ ತೆರಳಲು ಸಿದ್ಧರಾಗಿದ್ದ ಒಬ್ಬ ಮುಸ್ಲಿಂ ಉದ್ಯಮಿ ತಮ್ಮ ವ್ಯಾಪಾರದ ಹೆಸರನ್ನು ಮತ್ತೊಬ್ಬ ವ್ಯಾಪಾರಿಗೆ ನೀಡಿದರು. ಆ ಹೆಸರು &lsquo;ಹೀರೋ&rsquo;. ದಶಕಗಳ ನಂತರ ಇದೇ ಹೆಸರು ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ಸಾಮ್ರಾಜ್ಯದ ಗುರುತಾಯಿತು.&lt;/p&gt;&lt;p&gt;ಆ ಒಂದು ಹೆಸರಿನ ಹಿಂದೆ ಇದ್ದದ್ದು ಕೇವಲ ವ್ಯವಹಾರದ ಅದೃಷ್ಟವಲ್ಲ; ಧೈರ್ಯ, ಸಂಬಂಧಗಳು, ದೂರದೃಷ್ಟಿ ಮತ್ತು ಅಪಾಯ ತೆಗೆದುಕೊಳ್ಳುವ ಮನೋಭಾವದಿಂದ ಕಟ್ಟಿದ ಮುಂಜಾಲ್ ಕುಟುಂಬದ ಕಥೆ.&lt;/p&gt;&lt;h3&gt;&lsquo;ಹೀರೋ&rsquo; ಎಂಬ ಹೆಸರು ಹೇಗೆ ಸಿಕ್ಕಿತು?&lt;/h3&gt;&lt;p&gt;1947ರ ಹೊತ್ತಿಗೆ ಕರೀಮ್ ದೀನ್ ಎಂಬ ಮುಸ್ಲಿಂ ಉದ್ಯಮಿ ಸಣ್ಣ ವ್ಯಾಪಾರದ ಮೂಲಕ &lsquo;ಹೀರೋ&rsquo; ಎಂಬ ಹೆಸರನ್ನು ಪರಿಚಿತಗೊಳಿಸಿದ್ದರು. ಭಾರತ ವಿಭಜನೆಯ ಸಂದರ್ಭದಲ್ಲಿ ಅವರು ಪಾಕಿಸ್ತಾನಕ್ಕೆ ತೆರಳಲು ಸಿದ್ಧರಾಗಿದ್ದರು.&lt;/p&gt;&lt;p&gt;ಆಗ ಓಂ ಪ್ರಕಾಶ್ ಮುಂಜಾಲ್ ತಮ್ಮ ಹೊಸ ವ್ಯವಹಾರಕ್ಕೆ ಆ ಹೆಸರನ್ನು ಬಳಸಬಹುದೇ ಎಂದು ಕೇಳಿದರು. ಕರೀಮ್ ದೀನ್ ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡರು.&lt;/p&gt;&lt;p&gt;ಅಂದು ಯಾರಿಗೂ ತಿಳಿದಿರಲಿಲ್ಲ&mdash;ಸರಳವಾಗಿ ಹಸ್ತಾಂತರವಾದ ಆ ಹೆಸರು ಮುಂದೆ ಲಕ್ಷಾಂತರ ವಾಹನಗಳ ಟ್ಯಾಂಕ್ ಮೇಲೆ ಕಾಣಿಸಿಕೊಳ್ಳಲಿದೆ ಎಂದು.&lt;/p&gt;&lt;h3&gt;ಶಸ್ತ್ರಾಸ್ತ್ರ ಕಾರ್ಖಾನೆಯಿಂದ ಸೈಕಲ್ ಬಿಡಿಭಾಗಗಳವರೆಗೆ&lt;/h3&gt;&lt;p&gt;1923ರಲ್ಲಿ ಪಂಜಾಬ್&zwnj;ನ ಕಮಲಿಯಾದಲ್ಲಿ ಜನಿಸಿದ ಬ್ರಿಜ್&zwnj;ಮೋಹನ್ ಲಾಲ್ ಮುಂಜಾಲ್ ಅವರಿಗೆ ಔಪಚಾರಿಕ ವ್ಯವಹಾರ ಶಿಕ್ಷಣ ಇರಲಿಲ್ಲ. ಕ್ವೆಟ್ಟಾದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡಿದ ಅನುಭವವೂ ಅವರ ಬದುಕಿನ ಭಾಗವಾಗಿತ್ತು.&lt;/p&gt;&lt;p&gt;1944ರಲ್ಲಿ ಸಹೋದರ ದಯಾನಂದ್ ಅಮೃತಸರದಲ್ಲಿ ಸೈಕಲ್ ಬಿಡಿಭಾಗಗಳ ವ್ಯಾಪಾರ ಆರಂಭಿಸಿದರು. ನಂತರ ಓಂ ಪ್ರಕಾಶ್ ಕೂಡ ಸೇರಿಕೊಂಡರು. ಸಹೋದರರು ಅಂಗಡಿ ಮಾತ್ರ ನಡೆಸಲಿಲ್ಲ; ದೇಶಾದ್ಯಂತ ರೈಲಿನಲ್ಲಿ ಸಂಚರಿಸಿ ಡೀಲರ್&zwnj;ಗಳನ್ನು ಭೇಟಿ ಮಾಡಿ ತಮ್ಮ ಉತ್ಪನ್ನಗಳ ಮೇಲೆ ವಿಶ್ವಾಸ ಮೂಡಿಸಿದರು.&lt;/p&gt;&lt;h3&gt;&ldquo;ಒಂದು ಆರ್ಡರ್ ಕೊಡಿ&rdquo; ಎಂಬ ತಂತ್ರ&lt;/h3&gt;&lt;p&gt;ಹೊಸ ವ್ಯಾಪಾರಿಗಳ ಬಗ್ಗೆ ಅನುಮಾನ ಹೊಂದಿದ್ದ ಡೀಲರ್&zwnj;ಗಳಿಗೆ ಮುಂಜಾಲ್&zwnj;ಗಳು ಒಂದೇ ಭರವಸೆ ನೀಡುತ್ತಿದ್ದರು&mdash;ಮೊದಲು ಒಂದು ಆರ್ಡರ್ ನೀಡಿ, ಸರಕು ಗುಣಮಟ್ಟ ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರದಿದ್ದರೆ ಮತ್ತೆ ಖರೀದಿಸಬೇಡಿ.&lt;/p&gt;&lt;p&gt;ಈ ವಿಶ್ವಾಸವೇ ಮುಂದೆ ಹೀರೋ ಸಾಮ್ರಾಜ್ಯದ ದೊಡ್ಡ ಬಲವಾದ ಡೀಲರ್ ನೆಟ್&zwnj;ವರ್ಕ್&zwnj;ಗೆ ಅಡಿಪಾಯ ಹಾಕಿತು.&lt;/p&gt;&lt;h3&gt;ಸೈಕಲ್&zwnj;ಗಳಿಂದ ಭಾರತದ ಅತಿದೊಡ್ಡ ತಯಾರಕರವರೆಗೆ&lt;/h3&gt;&lt;p&gt;1946ರ ಪ್ರವಾಹದ ಬಳಿಕ ಕುಟುಂಬ ಆಗ್ರಾ ಮೂಲಕ ಲುಧಿಯಾನಾಗೆ ಸ್ಥಳಾಂತರಗೊಂಡಿತು. ಅಲ್ಲಿ ಸೈಕಲ್ ಬಿಡಿಭಾಗಗಳ ವ್ಯಾಪಾರದಿಂದ ಉತ್ಪಾದನೆಯತ್ತ ಹೆಜ್ಜೆಯಿಟ್ಟರು.&lt;/p&gt;&lt;p&gt;1956ರಲ್ಲಿ ಹೀರೋ ಸೈಕಲ್ಸ್ ಅಧಿಕೃತವಾಗಿ ಆರಂಭವಾಯಿತು. ಆರಂಭಿಕ ಉತ್ಪಾದನೆ ಕೇವಲ 639 ಸೈಕಲ್&zwnj;ಗಳು. ಆದರೆ ದೂರದೃಷ್ಟಿಯೊಂದಿಗೆ ದೊಡ್ಡ ಪ್ರಮಾಣದ ಉತ್ಪಾದನೆಗೆ ಮುಂದಾದ ಮುಂಜಾಲ್ ಕುಟುಂಬ, ಕೆಲವೇ ದಶಕಗಳಲ್ಲಿ ವಿಶ್ವದ ಅತಿದೊಡ್ಡ ಸೈಕಲ್ ತಯಾರಕರ ಪಟ್ಟಕ್ಕೇರಿತು.&lt;/p&gt;&lt;h3&gt;ಹೋಂಡಾ ಜೊತೆಗಿನ ಒಪ್ಪಂದ ಬದಲಿಸಿದ ಆಟ&lt;/h3&gt;&lt;p&gt;1980ರ ದಶಕದಲ್ಲಿ ಮುಂಜಾಲ್ ಕುಟುಂಬ ಸೈಕಲ್&zwnj;ಗಳಾಚೆಗಿನ ಅವಕಾಶ ಹುಡುಕುತ್ತಿತ್ತು. ಇದೇ ಸಂದರ್ಭದಲ್ಲಿ ಜಪಾನ್&zwnj;ನ ಹೋಂಡಾ ಭಾರತದಲ್ಲಿ ಮೋಟಾರ್&zwnj;ಸೈಕಲ್ ಪಾಲುದಾರನನ್ನು ಹುಡುಕುತ್ತಿತ್ತು.&lt;/p&gt;&lt;p&gt;1983ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. 1984ರಲ್ಲಿ ಹೀರೋ ಹೋಂಡಾ ಜನ್ಮತಾಳಿತು.&lt;/p&gt;&lt;p&gt;ಅದರ ಮೊದಲ ಪ್ರಮುಖ ಬೈಕ್ CD 100. &ldquo;Fill it, Shut it, Forget it&rdquo; ಎಂಬ ಜಾಹೀರಾತು ಸಾಲು ಮತ್ತು ಇಂಧನ ದಕ್ಷತೆಯು ಭಾರತೀಯ ಗ್ರಾಹಕರ ಮನ ಗೆದ್ದಿತು. ಸ್ಕೂಟರ್&zwnj;ಗಳಿಗೆ ಒಲವು ಹೊಂದಿದ್ದ ಮಾರುಕಟ್ಟೆಯಲ್ಲಿ ಮೋಟಾರ್&zwnj;ಸೈಕಲ್&zwnj;ಗಳ ಹೊಸ ಯುಗ ಆರಂಭವಾಯಿತು.&lt;/p&gt;&lt;h3&gt;ಸೈಕಲ್ ಉದ್ಯಮದಿಂದ ದ್ವಿಚಕ್ರ ವಾಹನ ಸಾಮ್ರಾಜ್ಯದವರೆಗೆ&lt;/h3&gt;&lt;p&gt;2001ರಲ್ಲಿ ಹೀರೋ ಹೋಂಡಾ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಯಿತು. 2000ರಿಂದ 2011ರ ನಡುವೆ ಕಂಪನಿಯ ಆದಾಯ ₹2,118 ಕೋಟಿಯಿಂದ ₹20,787 ಕೋಟಿಗೆ ಏರಿತು.&lt;/p&gt;&lt;p&gt;ಹೋಂಡಾ ಜೊತೆಗಿನ ಜಂಟಿ ಉದ್ಯಮ 2010ರಲ್ಲಿ ಅಂತ್ಯಗೊಂಡರೂ, ಮುಂಜಾಲ್ ಕುಟುಂಬ ಹಿಂದೆ ಸರಿಯಲಿಲ್ಲ. 2011ರಲ್ಲಿ ಹೀರೋ ಹೋಂಡಾ &rarr; ಹೀರೋ ಮೋಟೋಕಾರ್ಪ್ ಎಂಬ ಹೊಸ ಅಧ್ಯಾಯ ಆರಂಭವಾಯಿತು.&lt;/p&gt;&lt;h3&gt;ಮುಂಜಾಲ್&zwnj;ಗಳ ಪರಂಪರೆ ಇನ್ನೂ ಮುಂದುವರಿದಿದೆ&lt;/h3&gt;&lt;p&gt;2013ರಲ್ಲಿ ಹೀರೋ ಮೋಟೋಕಾರ್ಪ್ 5 ಕೋಟಿ ದ್ವಿಚಕ್ರ ವಾಹನಗಳ ಉತ್ಪಾದನೆಯ ಮೈಲಿಗಲ್ಲು ತಲುಪಿತು. ಬ್ರಿಜ್&zwnj;ಮೋಹನ್ ಲಾಲ್ ಮುಂಜಾಲ್ 90ರ ಹರೆಯದಲ್ಲಿಯೂ ಕೆಲಸ ಮುಂದುವರಿಸಿದ್ದರು.&lt;/p&gt;&lt;p&gt;ಅವರಿಗೆ 2005ರಲ್ಲಿ ಪದ್ಮಭೂಷಣ ಸೇರಿದಂತೆ ಹಲವು ಗೌರವಗಳು ದೊರೆತವು. ಶಿಕ್ಷಣದ ಮೇಲಿನ ಅವರ ನಂಬಿಕೆ BML Munjal University ಸ್ಥಾಪನೆಯಲ್ಲೂ ಪ್ರತಿಫಲಿಸಿತು.&lt;/p&gt;&lt;p&gt;ಇಂದು ಹೀರೋ ಮೋಟೋಕಾರ್ಪ್&zwnj;ನ ಮೌಲ್ಯ ₹1.14 ಲಕ್ಷ ಕೋಟಿಯ ಮಟ್ಟದಲ್ಲಿದೆ. ಆದರೆ ಈ ಸಾಮ್ರಾಜ್ಯದ ಆರಂಭವನ್ನು ನೆನಪಿಸಿಕೊಂಡರೆ, ಅದರ ಮೂಲದಲ್ಲಿ ಕೋಟ್ಯಂತರ ರೂಪಾಯಿಗಳ ಬಂಡವಾಳವಿರಲಿಲ್ಲ&mdash;ಒಂದು ಸಣ್ಣ ಸೈಕಲ್ ಬಿಡಿಭಾಗಗಳ ವ್ಯಾಪಾರ, ರೈಲಿನಲ್ಲಿ ಮಾಡಿದ ಪ್ರಯಾಣಗಳು, ಡೀಲರ್&zwnj;ಗಳ ವಿಶ್ವಾಸ ಮತ್ತು ಮತ್ತೊಬ್ಬ ಉದ್ಯಮಿಯಿಂದ ಪ್ರೀತಿಯಿಂದ ಪಡೆದ &lsquo;ಹೀರೋ&rsquo; ಎಂಬ ಒಂದು ಹೆಸರು ಇತ್ತು.&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/how-the-munjals-turned-one-word-hero-into-a-global-two-wheeler-brand/articleshow-pgv5net"/>
        </item>
        <item>
            <title><![CDATA[ಭಾರತ ಆಪರೇಷನ್ ಸಿಂಧೂರ್‌ನಲ್ಲಿ ಹೊಡೆದುರುಳಿಸಿದ ಉಗ್ರರ ಶಿಬಿರ ಪುನರ್ ನಿರ್ಮಾಣ; ಪಾಕ್ ಸರ್ಕಾರದ ₹25 ಕೋಟಿ ಫಂಡ್!]]></title>
            <link>https://kannada.asianetnews.com/world-news/jaish-e-mohammed-rebuilds-bahawalpur-base-operation-sindoor-pakistan-funding/articleshow-46padsg</link>
            <guid isPermaLink="true">https://kannada.asianetnews.com/world-news/jaish-e-mohammed-rebuilds-bahawalpur-base-operation-sindoor-pakistan-funding/articleshow-46padsg</guid>
            <pubDate>Sun, 23 Aug 2026 17:52:08 +0530</pubDate>
            <description><![CDATA[ಭಾರತೀಯ ಸೇನೆಯ 'ಆಪರೇಷನ್ ಸಿಂಧೂರ್' ದಾಳಿಯಲ್ಲಿ ನಾಶವಾಗಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಬಹಾವಲ್&zwnj;ಪುರ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ಮರುನಿರ್ಮಿಸಲಾಗಿದೆ. ಪಾಕಿಸ್ತಾನ ಸರ್ಕಾರವೇ ಈ ಪುನರ್ನಿರ್ಮಾಣಕ್ಕೆ ಸುಮಾರು 25 ಕೋಟಿ ರೂಪಾಯಿ ಅನುದಾನ ನೀಡಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಈ ಉಗ್ರರ ಅಡ್ಡೆಯು ಪಾಕ್ ಸೇನೆಯ ರಕ್ಷಣೆಯಲ್ಲಿಯೇ ಭಾರತದ ವಿರುದ್ಧದ ಹಲವು ದಾಳಿಗಳಿಗೆ ಸಂಚು ರೂಪಿಸಿದ ಸ್ಥಳವಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01m0q7kd1j7mm3r3dxqbpdr8x7,imgname-jaish-e-mohammed-1787486123058.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: ಭಾ&lt;/strong&gt;ರತೀಯ ಸೇನಾ ಪಡೆಗಳು ನಡೆಸಿದ ಪ್ರಚಂಡ 'ಆಪರೇಷನ್ ಸಿಂಧೂರ್' (Operation Sindoor) ಕ್ಷಿಪಣಿ ದಾಳಿಯಲ್ಲಿ ನೆಲಸಮವಾಗಿದ್ದ ಕುಖ್ಯಾತ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಬಹಾವಲ್&zwnj;ಪುರ ಪ್ರಧಾನ ಕಚೇರಿ ಇದೀಗ ಸಂಪೂರ್ಣವಾಗಿ ಮರುನಿರ್ಮಾಣಗೊಂಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಈ 'ಮರ್ಕಜ್ ಸುಭಾನ್ ಅಲ್ಲಾ' (Markaz Subhan Allah) ಉಗ್ರ ನೆಲೆಯನ್ನು ಅತ್ಯಾಧುನಿಕವಾಗಿ ನವೀಕರಿಸಲಾಗಿದ್ದು, ಇದಕ್ಕೆ ಪಾಕಿಸ್ತಾನ ಸರ್ಕಾರವೇ ಕೋಟ್ಯಂತರ ರೂಪಾಯಿ ಹಣಕಾಸು ನೆರವು ನೀಡಿದೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.&lt;/p&gt;&lt;h3&gt;&lt;strong&gt;ಹೊಸ ಮಾರ್ಬಲ್, ಎತ್ತರದ ಗುಮ್ಮಟಗಳು: ದಾಳಿಯ ಗುರುತೇ ನಾಶ!&lt;/strong&gt;&lt;/h3&gt;&lt;p&gt;ಭಾರತದ ದಾಳಿ ನಡೆದು 15 ತಿಂಗಳ ಬಳಿಕ ಈ ನೆಲೆಯು ಪುನಶ್ಚೇತನಗೊಂಡಿರುವುದನ್ನು ವಿಶೇಷ ಉಪಗ್ರಹ ಚಿತ್ರಗಳು ಹಾಗೂ ದೃಶ್ಯಾವಳಿಗಳು ಖಚಿತಪಡಿಸಿವೆ. ಭಾರತೀಯ ಪಡೆಗಳು ಹೊಡೆದುರುಳಿಸಿದ್ದ ಬೃಹತ್ ಗುಮ್ಮಟಗಳನ್ನು (Domes) ಪುನಃ ನಿರ್ಮಿಸಲಾಗಿದೆ. ಕೇಂದ್ರ ಸಭಾಂಗಣದಲ್ಲಿದ್ದ (Central Hall) ಬಾಂಬ್ ದಾಳಿಯ ಕಂದಕಗಳನ್ನು ಮುಚ್ಚಿ, ಹೊಸ ಮಾರ್ಬಲ್, ಪ್ಲಾಸ್ಟರ್ ಮತ್ತು ಪೇಂಟ್ ಮೂಲಕ ಭಾರತದ ದಾಳಿಯ ಯಾವುದೇ ಕಲೆಗಳು ಕಾಣದಂತೆ ಮರೆಮಾಚಲಾಗಿದೆ. ಮದ್ರಸಾ ಅಲ್-ಸಾಬೀರ್ ಹಾಗೂ ಉಗ್ರ ಕಮಾಂಡರ್&zwnj;ಗಳು ನೆಲೆಸಿದ್ದ ವಸತಿ ಸಂಕೀರ್ಣಗಳನ್ನು ಹೊಸದಾಗಿ ಕಟ್ಟಿ ನಿಲ್ಲಿಸಲಾಗಿದೆ.&lt;/p&gt;&lt;h2&gt;&lt;strong&gt;ಪಾಕಿಸ್ತಾನ ಸರ್ಕಾರದಿಂದ ₹25 ಕೋಟಿ ಅನುದಾನ!&lt;/strong&gt;&lt;/h2&gt;&lt;p&gt;ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ, ನಿಷೇಧಿತ ಜೈಶ್ ಸಂಘಟನೆಯ ಈ ಅಡ್ಡಯನ್ನು ಮರುನಿರ್ಮಾಣ ಮಾಡಲು ಪಾಕಿಸ್ತಾನ ಸರ್ಕಾರವೇ ನಗದು ರೂಪದಲ್ಲಿ ಕಂತುಗಳಲ್ಲಿ ಬರೋಬ್ಬರಿ 25 ಕೋಟಿ ಪಾಕಿಸ್ತಾನಿ ರೂಪಾಯಿ (PKR 25 Crore) ನೀಡಿದೆ. ಇದರಲ್ಲಿ ಕೇವಲ ಕೇಂದ್ರ ಸಭಾಂಗಣದ ನವೀಕರಣಕ್ಕಾಗಿಯೇ ಸುಮಾರು 11 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.&lt;/p&gt;&lt;h3&gt;&lt;strong&gt;ಏನಿದು 'ಆಪರೇಷನ್ ಸಿಂಧೂರ್'?&lt;/strong&gt;&lt;/h3&gt;&lt;p&gt;ಕಾಶ್ಮೀರದ ಪಹಲ್ಗಾಮ್&zwnj;ನಲ್ಲಿ 26 ಜನರನ್ನು ಬಲಿಪಡೆದ ಉಗ್ರ ದಾಳಿಗೆ ಪ್ರತಿಯಾಗಿ, ಭಾರತೀಯ ಸಶಸ್ತ್ರ ಪಡೆಗಳು 2025ರ ಮೇ 7ರಂದು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ (PoK) ಪ್ರಮುಖ ಉಗ್ರ ನೆಲೆಗಳ ಮೇಲೆ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಸರ್ಜಿಕಲ್ ಏರ್&zwnj;ಸ್ಟ್ರೈಕ್ ನಡೆಸಿದ್ದವು. ಈ ನಿರ್ಣಾಯಕ ದಾಳಿಯಲ್ಲಿ ಜೈಶ್ ಸಂಸ್ಥಾಪಕ ಮಸೂದ್ ಅಜರ್&zwnj;ನ 10 ಮಂದಿ ಆಪ್ತ ಸಂಬಂಧಿಕರು ಸೇರಿದಂತೆ 13 ಮಂದಿ ಉಗ್ರರು ಹತರಾಗಿದ್ದರು.&lt;/p&gt;&lt;h2&gt;&lt;strong&gt;ಭಾರತದ ಮೇಲಿನ ಪ್ರಮುಖ ದಾಳಿಗಳ ರುವಾರಿ ಈ ಅಡ್ಡೆ!&lt;/strong&gt;&lt;/h2&gt;&lt;p&gt;ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 100 ಕಿ.ಮೀ ದೂರದಲ್ಲಿರುವ 18 ಎಕರೆ ವಿಸ್ತೀರ್ಣದ ಈ &lsquo;ಉಸ್ಮಾನ್-ಒ-ಅಲಿ&rsquo; (ಮರ್ಕಜ್ ಸುಭಾನ್ ಅಲ್ಲಾ) ಕ್ಯಾಂಪಸ್ ಭಾರತದ ಮೇಲಿನ ಹಲವು ರಕ್ತಸಿಕ್ತ ದಾಳಿಗಳಿಗೆ ಸಂಚು ರೂಪಿಸಿದ ಸ್ಥಳವಾಗಿದೆ:&lt;/p&gt;&lt;ul&gt; &lt;li&gt;2001ರ ಸಂಸತ್ ಭವನದ ಮೇಲಿನ ದಾಳಿ&lt;/li&gt; &lt;li&gt;2016ರ ಪಠಾಣ್&zwnj;ಕೋಟ್ ವಾಯುನೆಲೆ ದಾಳಿ&lt;/li&gt; &lt;li&gt;2019ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ (ಇದರ ಮಾಸ್ಟರ್ ಪ್ಲಾನ್ ಇಲ್ಲೇ ಸಿದ್ಧವಾಗಿತ್ತು).&lt;/li&gt;&lt;/ul&gt;&lt;h2&gt;&lt;strong&gt;ಪಾಕ್ ಸೇನೆಯ ಸರ್ಪಗಾವಲಿನಲ್ಲಿ ಉಗ್ರರ ಸಾಮ್ರಾಜ್ಯ!&lt;/strong&gt;&lt;/h2&gt;&lt;p&gt;ವಿಶೇಷವೆಂದರೆ, ಈ ಭಯೋತ್ಪಾದಕ ಕ್ಯಾಂಪಸ್ ಲಾಹೋರ್&zwnj;ನಿಂದ 400 ಕಿ.ಮೀ ದೂರದಲ್ಲಿದ್ದು, ಪಾಕಿಸ್ತಾನ ಸೇನೆಯ &lsquo;31 ಕಾರ್ಪ್ಸ್&rsquo; (Pakistan Army 31 Corps) ಕಂಟೋನ್ಮೆಂಟ್&zwnj;ನ ಪಕ್ಕದಲ್ಲೇ ಇದೆ. ಜೈಶ್ ಸಂಘಟನೆಯನ್ನು ಪಾಕಿಸ್ತಾನ 2002ರಲ್ಲೇ ಕಾಗದದ ಮೇಲೆ ನಿಷೇಧಿಸಿದ್ದರೂ, ಮಸೂದ್ ಅಜರ್ ಹಾಗೂ ಆತನ ಉಗ್ರ ಜಾಲ ಪಾಕ್ ಸೇನೆ ಮತ್ತು ಸರ್ಕಾರದ ಸಂಪೂರ್ಣ ರಕ್ಷಣೆಯಲ್ಲಿಯೇ ರಾಜಾರೋಷವಾಗಿ ಕಾರ್ಯಾಚರಿಸುತ್ತಿರುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/jaish-e-mohammed-rebuilds-bahawalpur-base-operation-sindoor-pakistan-funding/articleshow-46padsg"/>
        </item>
        <item>
            <title><![CDATA[Atal Bihari Vajpayee: ಸಕ್ಕರೆ ಬೆಲೆ ₹20ಕ್ಕೆ ಹೆಚ್ಚಳವಾದಾಗ ಸಂಸತ್ತಿನಲ್ಲಿ ಗುಡುಗಿದ್ದ ವಾಜಪೇಯಿ! ಅಂದು ಅವರು ಹೇಳಿದ್ದ ಮಾತು ಈಗ ವೈರಲ್!]]></title>
            <link>https://kannada.asianetnews.com/india-news/atal-bihari-vajpayee-sugar-price-20-rupees-sugar-price-hike-old-speech-government-question-viral-news-bmk/articleshow-5e886kq</link>
            <guid isPermaLink="true">https://kannada.asianetnews.com/india-news/atal-bihari-vajpayee-sugar-price-20-rupees-sugar-price-hike-old-speech-government-question-viral-news-bmk/articleshow-5e886kq</guid>
            <pubDate>Sun, 23 Aug 2026 17:40:57 +0530</pubDate>
            <description><![CDATA[&lt;p&gt;ದೇಶದಲ್ಲಿ ಸಕ್ಕರೆ ಬೆಲೆ ಕೆಜಿಗೆ ₹60 ದಾಟಿ ಏರಿಕೆಯಾಗುತ್ತಿದ್ದು, ಗ್ರಾಹಕರ ಬಜೆಟ್ ಮೇಲೆ ಪರಿಣಾಮ ಬೀರಿದೆ. ಈ ಹಿಂದೆ ಇದೇ ರೀತಿ ಬೆಲೆ ಏರಿಕೆ ಖಂಡಿಸಿದ್ದ ವಾಜಪೇಯಿಯವರ ಹಳೆಯ ಭಾಷಣ ವೈರಲ್ ಆಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kd8sx0g6v8tmvyzbtctga3m6,imgname-atal-bihari-vajpayee-1766600901126.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದಲ್ಲಿ ಸಕ್ಕರೆ ಬೆಲೆ ತೀವ್ರವಾಗಿ ಏರುತ್ತಿದ್ದು, ಗ್ರಾಹಕರ ಅಡುಗೆ ಬಜೆಟ್ ತಲೆಕೆಳಗಾಗಿದೆ. ಅನೇಕ ರಾಜ್ಯಗಳಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ ₹60 ದಾಟಿದೆ. ಈ ಬೆಲೆ ಏರಿಕೆಯ ನಡುವೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ಮಾಡಿದ್ದ ಹಳೆಯ ಭಾಷಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆ ಕಾಲದಲ್ಲಿ ಸಕ್ಕರೆ ಬೆಲೆ ಕೆಜಿಗೆ ₹20 ತಲುಪಿದಾಗ, ವಿರೋಧ ಪಕ್ಷದ ನಾಯಕರಾಗಿದ್ದ ವಾಜಪೇಯಿ ಅವರು ಅಂದಿನ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದರು.&lt;/p&gt;&lt;h2&gt;&lt;strong&gt;ಸಂಸತ್ತಿನಲ್ಲಿ ವಾಜಪೇಯಿ ಎತ್ತಿದ್ದ ಪ್ರಶ್ನೆಗಳು!&lt;/strong&gt;&lt;/h2&gt;&lt;p&gt;ಸಕ್ಕರೆ ಬೆಲೆ ಏರಿಕೆಯ ವಿಚಾರವಾಗಿ ಸರ್ಕಾರವನ್ನು ತೀವ್ರವಾಗಿ ತಳೆದಿದ್ದ ವಾಜಪೇಯಿ, ಕಬ್ಬಿನ ಉತ್ಪಾದನೆ ಕಡಿಮೆಯಾಗುವ ಮುನ್ಸೂಚನೆ ಇದ್ದರೂ ಸರ್ಕಾರ ಏಕೆ ಮುನ್ನೆಚ್ಚರಿಕೆ ವಹಿಸಲಿಲ್ಲ ಎಂದು ಪ್ರಶ್ನಿಸಿದ್ದರು.&lt;/p&gt;&lt;p&gt;&lt;strong&gt;ಪೂರ್ವ ಸಿದ್ಧತೆಯ ಕೊರತೆ; &lt;/strong&gt;ದೇಶದಲ್ಲಿ ಸಕ್ಕರೆ ಅಭಾವ ಉಂಟಾಗುವ ಸಾಧ್ಯತೆ ಇದ್ದಾಗ, ವಿದೇಶದಿಂದ ಆಮದು ಮಾಡಿಕೊಳ್ಳಲು ಸರ್ಕಾರ ಮುಂಚಿತವಾಗಿ ಕ್ರಮ ಕೈಗೊಳ್ಳಲಿಲ್ಲವೇಕೆ ಎಂದು ಪ್ರಶ್ನಿಸಿದರು.&lt;/p&gt;&lt;p&gt;&lt;strong&gt;ಸಚಿವಾಲಯಗಳ ನಡುವಿನ ಸಮನ್ವಯದ ಕೊರತೆ;&lt;/strong&gt; ಸಕ್ಕರೆ ಆಮದಿನ ನಿರ್ಧಾರ ಯಾರು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದೆ, ಒಂದು ಸಚಿವಾಲಯ ಇನ್ನೊಂದರ ಮೇಲೆ ಗೂಬೆ ಕೂರಿಸುತ್ತಿತ್ತು.&lt;/p&gt;&lt;p&gt;&lt;strong&gt;ಪ್ರಧಾನಿ ಕಚೇರಿಯ ಮೌನ;&lt;/strong&gt; ಸಚಿವರೊಬ್ಬರು ತಮ್ಮ ಕಾರ್ಯದರ್ಶಿಯನ್ನೇ ಸಾರ್ವಜನಿಕವಾಗಿ ನಿಂದಿಸುತ್ತಿರುವಾಗ, &quot;ಪ್ರಧಾನಮಂತ್ರಿಗಳ ಸಚಿವಾಲಯ (PMO) ಏನು ಮಾಡುತ್ತಿದೆ? ಎಂದು ವಾಜಪೇಯಿ ನೇರವಾಗಿ ಚಾಟಿ ಬೀಸಿದ್ದರು.&lt;/p&gt;&lt;p&gt;&lt;strong&gt;ಲಾಭಕೋರತನ ಮತ್ತು ತನಿಖೆ;&lt;/strong&gt; ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಸಿ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ಕೋಟಿಗಟ್ಟಲೆ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಕ್ಕರೆ ಆಮದು ಪ್ರಕ್ರಿಯೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು.&lt;/p&gt;&lt;h3&gt;&lt;strong&gt;ಈ ಹಳೆಯ ವೀಡಿಯೊ ಈಗ ವೈರಲ್ ಆಗುತ್ತಿರುವುದೇಕೆ?&lt;/strong&gt;&lt;/h3&gt;&lt;p&gt;ಪ್ರಸ್ತುತ ದೇಶದಲ್ಲಿ ಸಕ್ಕರೆ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದೇ ಈ ವೀಡಿಯೊ ವೈರಲ್ ಆಗಲು ಕಾರಣ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ಜುಲೈನಲ್ಲಿ ರಾಷ್ಟ್ರೀಯ ಸರಾಸರಿ ಬೆಲೆ ಕೆಜಿಗೆ ₹48.18 ರಷ್ಟಿತ್ತು, ಅದು ಆಗಸ್ಟ್ ವೇಳೆಗೆ ₹58.23 ಕ್ಕೆ ಏರಿಕೆಯಾಯಿತು.&lt;/p&gt;&lt;h3&gt;&lt;strong&gt;ರಾಜ್ಯಗಳಲ್ಲಿ ಬೆಲೆ ಏರಿಕೆಯ ಬಿಸಿ;&lt;/strong&gt; ಒಡಿಶಾದಲ್ಲಿ ಸಕ್ಕರೆ ಬೆಲೆ ಕೆಜಿಗೆ ₹64.72 ಕ್ಕೆ ತಲುಪಿದ್ದು, ಒಂದೇ ವರ್ಷದಲ್ಲಿ ₹17.80 ರಷ್ಟು ಏರಿಕೆಯಾಗಿದೆ. ದೆಹಲಿ, ಪಂಜಾಬ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಗೋವಾ, ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಸಕ್ಕರೆ ಬೆಲೆ ಕೆಜಿಗೆ ₹60 ರ ಗಡಿ ದಾಟಿದೆ.&lt;/h3&gt;&lt;h3&gt;&lt;strong&gt;ಸರಾಸರಿಗಿಂತ ಹೆಚ್ಚಿನ ಏರಿಕೆ;&lt;/strong&gt; ಮಧ್ಯಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಲ್ಲಿ ₹15.70 ಹಾಗೂ ಪಂಜಾಬ್&zwnj;ನಲ್ಲಿ ₹14.67 ರಷ್ಟು ಬೆಲೆ ಹೆಚ್ಚಾಗಿದೆ.&lt;/h3&gt;&lt;h3&gt;&lt;strong&gt;ಬೆಲೆ ಏರಿಕೆಗೆ ಸರ್ಕಾರ ನೀಡುತ್ತಿರುವ ಕಾರಣಗಳು!&lt;/strong&gt;&lt;/h3&gt;&lt;p&gt;ಪ್ರಸ್ತುತ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಹಲವು ಕಾರಣಗಳನ್ನು ನೀಡಿದೆ:&lt;/p&gt;&lt;h3&gt;&lt;strong&gt;1. ಉತ್ಪಾದನೆಯಲ್ಲಿ ಕುಸಿತ;&lt;/strong&gt; ಈ ಋತುವಿನಲ್ಲಿ 343 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗಬಹುದು ಎಂದು ಅಂದಾಜಿಸಲಾಗಿತ್ತು, ಆದರೆ ಹವಾಮಾನ ವೈಪರೀತ್ಯದಿಂದಾಗಿ ಉತ್ಪಾದನೆ 306 ಲಕ್ಷ ಮೆಟ್ರಿಕ್ ಟನ್&zwnj;ಗೆ ಕುಸಿದಿದೆ.&lt;/h3&gt;&lt;h3&gt;&lt;strong&gt;2. ಬೇಡಿಕೆ ಹೆಚ್ಚಳ; &lt;/strong&gt;ಹಬ್ಬದ ಋತು ಆರಂಭವಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಸಕ್ಕರೆಯ ಬೇಡಿಕೆ ದಿಢೀರ್ ಏರಿಕೆಯಾಗಿದೆ.&lt;/h3&gt;&lt;h3&gt;&lt;strong&gt;3. ಎಥೆನಾಲ್ ಉತ್ಪಾದನೆ;&lt;/strong&gt; ಹೆಚ್ಚುವರಿ ಸಕ್ಕರೆಯನ್ನು ಎಥೆನಾಲ್ ತಯಾರಿಕೆಗೆ ಬಳಸುತ್ತಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿರುವುದು ಸಹ ಕಾರಣವಾಗಿದೆ.&lt;/h3&gt;&lt;h3&gt;&lt;strong&gt;ಬೆಲೆ ನಿಯಂತ್ರಣಕ್ಕೆ ಸರ್ಕಾರದ ಹೊಸ ಕ್ರಮಗಳು!&lt;/strong&gt;&lt;/h3&gt;&lt;p&gt;ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಲು ಮತ್ತು ಬೆಲೆ ಸ್ಥಿರಗೊಳಿಸಲು ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ:&lt;/p&gt;&lt;p&gt;&lt;strong&gt;ದಾಸ್ತಾನು ಮಿತಿ;&lt;/strong&gt; ಸಕ್ಕರೆ ವಿತರಕರು ಗರಿಷ್ಠ 400 ಟನ್ ಸಕ್ಕರೆಯನ್ನು ಮಾತ್ರ ದಾಸ್ತಾನು ಇಟ್ಟುಕೊಳ್ಳಲು ಆಗಸ್ಟ್&zwnj;ನಿಂದ ನವೆಂಬರ್&zwnj;ವರೆಗೆ ಮಿತಿ ಹೇರಲಾಗಿದೆ.&lt;/p&gt;&lt;p&gt;&lt;strong&gt;ಸಗಟು ಗ್ರಾಹಕರಿಗೆ ಕಟ್ಟುಪಾಡು;&lt;/strong&gt; ಸೆಪ್ಟೆಂಬರ್ 1 ರಿಂದ ಸಗಟು ಗ್ರಾಹಕರು 15 ದಿನಗಳಿಗೆ ಬೇಕಾಗುವಷ್ಟು ಸಕ್ಕರೆಯನ್ನು ಮಾತ್ರ ಸಂಗ್ರಹಿಸಿಡಬಹುದು.&lt;/p&gt;&lt;p&gt;&lt;strong&gt;ಸುಂಕ ರಹಿತ ಆಮದು;&lt;/strong&gt; ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲು 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ (Duty-free) ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಅಂದು ವಾಜಪೇಯಿ ಅವರು ಎತ್ತಿದ್ದ ಸಾರ್ವಜನಿಕ ಕಾಳಜಿಯ ಪ್ರಶ್ನೆಗಳು, ಇಂದಿನ ಸಕ್ಕರೆ ಅಭಾವ ಮತ್ತು ಬೆಲೆ ಏರಿಕೆಯ ಪರಿಸ್ಥಿತಿಗೂ ಹತ್ತಿರವಾಗಿರುವುದರಿಂದ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.&lt;/p&gt;]]></content:encoded>
            <category>india-news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/india-news/atal-bihari-vajpayee-sugar-price-20-rupees-sugar-price-hike-old-speech-government-question-viral-news-bmk/articleshow-5e886kq"/>
        </item>
        <item>
            <title><![CDATA[Sangita Video: ಭಯಾನಕ ಘಟನೆಗೆ ಬಿಗ್‌ ಟ್ವಿಸ್ಟ್ ಕೊಟ್ಟ ತಾಯಿಯ ಕೊನೆಯ ವಿಡಿಯೋ; ರಿವೀಲ್ ಆಯ್ತು ಶಾಕಿಂಗ್ ವಿಚಾರಗಳು!]]></title>
            <link>https://kannada.asianetnews.com/india-news/mother-sangita-s-video-adds-major-twist-to-horrifying-incident-shocking-details-revealed-kunal-chandgude-sns/articleshow-3xgrcoz</link>
            <guid isPermaLink="true">https://kannada.asianetnews.com/india-news/mother-sangita-s-video-adds-major-twist-to-horrifying-incident-shocking-details-revealed-kunal-chandgude-sns/articleshow-3xgrcoz</guid>
            <pubDate>Sun, 23 Aug 2026 17:20:00 +0530</pubDate>
            <description><![CDATA[ಮಹಾರಾಷ್ಟ್ರದಲ್ಲಿ ಐಫೋನ್ ಇಎಂಐಗಾಗಿ ನಡೆದ ವಾಗ್ವಾದದಲ್ಲಿ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟ ತಾಯಿ ಸಂಗೀತಾ, ಯೂಟ್ಯೂಬರ್ ಆಗಿದ್ದು, ಸಾವಿಗೂ ಮುನ್ನ ಅವರು ಪೋಸ್ಟ್ ಮಾಡಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಸಂಬಂಧಗಳ ಮೌಲ್ಯದ ಬಗ್ಗೆ ಮಾತನಾಡಿದ್ದು, ಇಡೀ ಘಟನೆಗೆ ಹೊಸ ತಿರುವು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0q6wcdh8h0c751v7v1efz6y,imgname-sangita-video-1787485368753.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಫೋನ್ ಮೇಲಿನ ಮೋಹ ಒಂದ ಇಡೀ ಕುಟುಂಬವನ್ನು ಹೇಗೆ ನಾಶ ಮಾಡಿದೆ ಅಂತ ಈಗಾಗಲೇ ನಿಮಗೆ ತಿಳಿದಿರುತ್ತದೆ. ಮಹಾರಾಷ್ಟ್ರದ ಛತ್ರಪತಿ ಶಂಭಾಜಿನಗರ ಜಿಲ್ಲೆಯ ದೇವಲಾಯ್ ಪ್ರದೇಶದಲ್ಲಿ ನಡೆದ ಭಯಾನಕ ಘಟನೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ನಡುವೆಯೇ ಘಟನೆಯಲ್ಲಿ ಬಲಿಯಾದ ಯುವಕನ ತಾಯಿ, ಯೂಟ್ಯೂಬ್&zwnj;ನಲ್ಲಿ ಪೋಸ್ಟ್ ಮಾಡಿದ ಒಂದು ಈಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಇಡೀ ಘಟನೆಗೆ ಬಿಗ್ ಟ್ವಿಸ್ಟ್ ನೀಡಿದ್ದು, ನೆಟ್ಟಿಗರು ಈ ಬಗ್ಗೆ ತಮ್ಮದೇ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;ಏನಿದು ಘಟನೆ?&lt;/h2&gt;&lt;p&gt;ಮಹಾರಾಷ್ಟ್ರದ 18 ವರ್ಷದ ಕುನಾಲ್ ತನ್ನ ಹೊಸ ಐಫೋನ್ ಇಎಂಐಗಳ ಬಗ್ಗೆ ಪೋಷಕರೊಂದಿಗೆ ವಾದ ಮಾಡಿ ಬೆಟ್ಟ ಹತ್ತಿದ್ದ. ಪೊಲೀಸರ ಮಾಹಿತಿಯ ಅನ್ವಯ ಆತ, ಐಫೋನ್ ಇಎಂಐ ಪಾವತಿ ಮಾಡಲು ಆತ ಪೋಷಕರಿಗೆ ಒತ್ತಾಯ ಮಾಡುತ್ತಿದ್ದ. ಇದರ ಬಗ್ಗೆ ತಿಳಿದು ಆತನ ತಂದೆ ಕೂಡ ಬೆಟ್ಟಡ ಬಳಿಗೆ ಆಗಮಿಸಿದ್ದರು. ಆದರೆ ಸತತವಾಗಿ ಮನವೊಲಿಕೆ ಮಾಡಿದರೂ ಆತನ ಕೇಳಿರಲಿಲ್ಲ. ಇದರೊಂದಿಗೆ ತಂದೆಯೇ ಮುನ್ನುಗ್ಗಿ ಆತನನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಕೆಲ ಕ್ಷಣಗಳಲ್ಲಿಯೇ ಅಲ್ಲಿ ನಡೆಬಾರದ ಘಟನೆ ನಡೆದು, ಮೂವರು ಜೀವ ಕಳೆದುಕೊಂಡಿದ್ದರು.&lt;/p&gt;&lt;h2&gt;ತಾಯಿಯ ಕೊನೆಯ ವಿಡಿಯೋ: ಐಫೋನ್ ದುರಂತದ ಹಿಂದಿನ ರಹಸ್ಯ?&lt;/h2&gt;&lt;p&gt;ಘಟನೆ ಬಳಿಕ ಕುನಾಲ್ ತಾಯಿ ಸಂಗೀತಾ ಮತ್ತು 48 ವರ್ಷದ ತಂದೆ ಮುರಳೀಧರ್ ಚಂದಗುಡೆ ಅವರ ಕುಟುಂಬದ ಕುರಿತು ಹಲವು ಮಾಹಿತಿಗಳು ರಿವೀಲ್ ಆಗುತ್ತಿದೆ. ಮೃತ ಸಂಗೀತಾ ಅವರು ಒಂದು ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಇದರಲ್ಲಿ ಅವರಿಗೆ ಸಾವಿರಾರು ಮಂದಿ ಫಾಲೋವರ್&zwnj;ಗಳು ಇದ್ದರೆ. ಈ ಘಟನೆ ನಡೆಯುವ ಕೆಲವೇ ದಿನಗಳ ಹಿಂದೆ ಸಂಗೀತಾ ಅವರು ಪೋಸ್ಟ್ ಮಾಡಿದ್ದ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಸಂಗೀತಾ ಅವರು ಸಂಬಂಧಗಳ ಮೌಲ್ಯಗಳನ್ನು ತಿಳಿಸುತ್ತಾ, 'ಪ್ರೀತಿಗೆ ಬೆಲೆ ಕೊಡದ ವ್ಯಕ್ತಿಗೆ ಏನೂ ಮಾಡಿದರು ಅರ್ಥವಿಲ್ಲ, ಅಂತಹ ಸಂಬಂಧಳನ್ನು ಕಡಿದುಕೊಳ್ಳುವುದು ಉತ್ತಮ' ಎಂದು ತಿಳಿಸಿದ್ದರು.&lt;/p&gt;&lt;p&gt;ಮರಾಠಿಯಲ್ಲಿ ಮಾತನಾಡಿರುವ ಸಂಗೀತಾ ಅವರು, ನಿಮ್ಮಗೆ ಬೆಲೆ ಕೊಡುವ, ನಿಮ್ಮನ್ನು ಗೌರವಿಸುವ, ನಿಮ್ಮ ಪ್ರೀತಿಯನ್ನು ತಿಳಿದುಕೊಳ್ಳುವ ವ್ಯಕ್ತಿಗೆ ನಿಮ್ಮ ಅದೃಷ್ಟವನ್ನು ನೀಡಿ. ಆದರೆ ನಿಮ್ಮ ಪ್ರೀತಿಗೆ ಗೌರವ ನೀಡಿದಿದ್ದರೆ, ನೀವು ಅವರಿಗಾಗಿ ಏನು ಮಾಡುತ್ತಿದ್ದೀರಿ ಎಂದು ಅರ್ಥ ಮಾಡಿಕೊಳ್ಳಲಿಲ್ಲ ಎಂದರೆ, ಅಂತಹ ವ್ಯಕ್ತಿಗೆ ಏನು ಮಾಡಿದರು ಅದಕ್ಕೆ ಅರ್ಥ ಇರೋದಿಲ್ಲ. ಅಂತಹ ಸಂಬಂಧಗಳನ್ನು ಮುರಿದುಕೊಳ್ಳುವುದೇ ಉತ್ತಮ' ಎಂದು ಸಲಹೆ ನೀಡಿದ್ದರು.&lt;/p&gt;&lt;p&gt;ಅಲ್ಲದೇ, ಆರು ವರ್ಷಗಳ ಹಿಂದೆ ಅವರ ಹಿರಿಯ ಮಗ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದರು. ಆ ಬಳಿಕ ಸಂಗೀತಾ ಅವರು ಗಂಡನ ಕುಟುಂಬದೊಂದಿಗೆ ದೂರ ಆಗಿ ವಾಸಿಸುತ್ತಿದ್ದರಂತೆ. ಒಂದು ನಿಮಿಷದ ವಿಡಿಯೋದಲ್ಲಿ ಮಾತನಾಡಿರುವ ಸಂಗೀತಾ, ಎರಡು ಬದಿ ಚಪಾತಿ ಬೇಯಿಸಿದಾಗ ಮಾತ್ರ ರುಚಿಯಾಗಿರುತ್ತದೆ. ಸಂಬಂಧಗಳು ಅದೇ ರೀತಿ ಎರಡು ಕಡೆಯಿಂದ ಒಬ್ಬರಿಗೆ ಒಬ್ಬರು ಬೆಲೆ ಕೊಟ್ಟಾಗ ಮಾತ್ರ ಉಳಿಯುತ್ತವೆ. ಒಬ್ಬರಿಗೆ ಬೆಳೆ ಕೊಡಲಿಲ್ಲ ಎಂದರೆ, ಅಂತಹ ಸಂಬಂಧಕ್ಕೆ ಯಾವುದೇ ಅರ್ಥ ಇರೋದಿಲ್ಲ. ಅಂತಹ ಸಂಬಂಧದಿಂದ ಹೊರಬರುವುದು ಯಾವಾಗಲೂ ಉತ್ತಮ ಎಂದು ಹೇಳಿದ್ದರು.&lt;/p&gt;&lt;p&gt;ಅಂದಹಾಗೇ, ಸಂಗೀತಾ ಅವರಿಗೆ ಯೂಟ್ಯೂಬ್&zwnj;ನಲ್ಲಿ ಸುಮಾರು 29 ಸಾವಿರಕ್ಕಿಂತ ಹೆಚ್ಚು ಮಂದಿ ಫಾಲೋವರ್ಸ್ ಹೊಂದಿದ್ದರು. ಸಣ್ಣ ಸಣ್ಣ ವ್ಲಾಗ್ ಮಾಡುತ್ತಾ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರು. ಹಲವರಿಗೆ ತಮ್ಮ ಪೋಸ್ಟ್&zwnj;ಗಳ ಮೂಲಕ ಪ್ರೇರಣೆ ನೀಡುವ ಕೆಲಸವನ್ನು ಸಂಗೀತಾ ಮಾಡುತ್ತಿದ್ದರು.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Sumanth SN</dc:creator>
            <atom:link href="https://kannada.asianetnews.com/india-news/mother-sangita-s-video-adds-major-twist-to-horrifying-incident-shocking-details-revealed-kunal-chandgude-sns/articleshow-3xgrcoz"/>
        </item>
        <item>
            <title><![CDATA[ಪತಿಯ ಕಣ್ಣು ತಪ್ಪಿಸಿ ಕೂಡಿಟ್ಟ 12 ಲಕ್ಷ ಇಲಿಯ ಪಾಲು! ಭವಿಷ್ಯದ ಬಗ್ಗೆ ಆಲೋಚಿಸಿದ್ದ ಪತ್ನಿಯ ಸ್ಥಿತಿ ಚಿಂತಾಜನಕ]]></title>
            <link>https://kannada.asianetnews.com/india-news/up-woman-saves-12-lakh-cash-hides-it-from-husband-for-future-eaten-by-rat-suc/articleshow-55tfzb8</link>
            <guid isPermaLink="true">https://kannada.asianetnews.com/india-news/up-woman-saves-12-lakh-cash-hides-it-from-husband-for-future-eaten-by-rat-suc/articleshow-55tfzb8</guid>
            <pubDate>Sun, 23 Aug 2026 17:17:45 +0530</pubDate>
            <description><![CDATA[ಉತ್ತರ ಪ್ರದೇಶದ ಗೃಹಿಣಿಯೊಬ್ಬರು ಚಿನ್ನಾಭರಣ ಖರೀದಿಸಲು ಎಂಟು ವರ್ಷಗಳಿಂದ ಟ್ರಂಕ್&zwnj;ನಲ್ಲಿ ಕೂಡಿಟ್ಟಿದ್ದ 12 ಲಕ್ಷ ರೂಪಾಯಿ ಹಣವನ್ನು ಇಲಿಗಳು ತಿಂದು ನಾಶಪಡಿಸಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನೆಯಲ್ಲಿ ಹಣ ಇಡುವುದರ ಅಪಾಯವನ್ನು ಇದು ಎತ್ತಿ ತೋರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0q74qg3f94dxra6an5e5h7m,imgname-money-1787485642243.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಖನೌ (ಉತ್ತರ ಪ್ರದೇಶ): ಎಷ್ಟೋ ಗೃಹಿಣಿಯರು ತಮಗೆ ಪತಿ ಕೊಡುವ ಹಣವನ್ನು ಅಡುಗೆ ಮನೆಯ ಡಬ್ಬದಲ್ಲೋ, ತಿಜೋರಿಯಲ್ಲೋ ಕೂಡಿಟ್ಟು ಉಳಿಸುವುದು ಇದೆ.ಭವಿಷ್ಯದ ದೃಷ್ಟಿಯಿಂದ ಇದು ಉಪಯೋಗಕ್ಕೆ ಬರುತ್ತದೆ, ಮನೆಯ ಸಾಮಗ್ರಿ ಖರೀದಿಸಬಹುದು, ಚಿನ್ನಾಭರಣ ಖರೀದಿ ಮಾಡಬಹುದು, ಮಕ್ಕಳ ಭವಿಷ್ಯಕ್ಕೆ ಉಪಯೋಗಕ್ಕೆ ಬರಬಹುದು... ಹೀಗೆ ಕಾರಣಗಳು ನೂರಾರು ಇರುತ್ತವೆ. ಅದೇ ರೀತಿ, ಉತ್ತರ ಪ್ರದೇಶದ ಗೊಂಡಾದಲ್ಲಿನ ಮಹಿಳೆಯೊಬ್ಬರು ಪತಿ ಕೊಟ್ಟ ಹಣವನ್ನು ಎಂಟು ವರ್ಷಗಳಿಂದ ಕೂಡಿಟ್ಟಿದ್ದರು. ಅದು 12 ಲಕ್ಷ ರೂಪಾಯಿ ಆಗಿತ್ತು.&lt;/p&gt;&lt;p&gt;ಅವರು ಮನೆಯಲ್ಲಿ ಒಂದು ಟ್ರಂಕ್&zwnj;ನಲ್ಲಿ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದರು, ಅದರೊಂದಿಗೆ ಚಿನ್ನದ ಆಭರಣಗಳನ್ನು ಖರೀದಿಸುವ ಉದ್ದೇಶ ಹೊಂದಿದ್ದರು. ಬಹಳ ಸಮಯದ ನಂತರ ಅವರು ಟ್ರಂಕ್ ಅನ್ನು ತೆರೆದಾಗ, ಅದರೊಳಗಿನ ದೃಶ್ಯದಿಂದ ಅವರು ಆಘಾತಕ್ಕೊಳಗಾದರು. ನೋಟುಗಳನ್ನು ಇಲಿಗಳು ಅಗಿಯುತ್ತಿದ್ದವು ಮತ್ತು ಅವುಗಳಲ್ಲಿ ಹೆಚ್ಚಿನವು ಕೆಟ್ಟದಾಗಿ ಹಾನಿಗೊಳಗಾಗಿದ್ದವು. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.&lt;/p&gt;&lt;h2&gt;&lt;strong&gt;12 ಲಕ್ಷ ಹಾನಿ&lt;/strong&gt;&lt;/h2&gt;&lt;p&gt;ಮಹಿಳೆ 2019 ರ ಸುಮಾರಿಗೆ ಟ್ರಂಕ್&zwnj;ನಲ್ಲಿ ಸಣ್ಣ ಪ್ರಮಾಣದ ಹಣವನ್ನು ಉಳಿಸಲು ಪ್ರಾರಂಭಿಸಿದರು. ಕ್ರಮೇಣ, ಈ ಮೊತ್ತವು ಸುಮಾರು ₹1.2 ಮಿಲಿಯನ್ (ಸುಮಾರು $1.2 ಮಿಲಿಯನ್) ಗೆ ಬೆಳೆಯಿತು. ಈ ಬಗ್ಗೆ ಅವರು ತಮ್ಮ ಪತಿಗೂ ತಿಳಿಸಿರಲಿಲ್ಲ. ಭವಿಷ್ಯದಲ್ಲಿ ತನಗಾಗಿ ಚಿನ್ನದ ಆಭರಣಗಳನ್ನು ಖರೀದಿಸಲು ಅವರು ಆ ಹಣವನ್ನು ಬಳಸಲು ಉದ್ದೇಶಿಸಿದ್ದರು. ಟ್ರಂಕ್ ಹಲವಾರು ವರ್ಷಗಳ ಕಾಲ ಲಾಕ್ ಆಗಿದ್ದ ನಂತರ, ಮಹಿಳೆ ತಾನು ಉಳಿಸಿದ ಹಣವನ್ನು ಬಳಸಲು ನಿರ್ಧರಿಸಿದರು. ಟ್ರಂಕ್ ತೆರೆದಾಗ, ಒಳಗಿನ ನೋಟುಗಳ ಸ್ಥಿತಿಯನ್ನು ನೋಡಿ ಆಕೆ ಆಘಾತಕ್ಕೊಳಗಾದರು. ಕಟ್ಟುಗಳಲ್ಲಿ ವಿವಿಧ ಸ್ಥಳಗಳಲ್ಲಿ ಇಲಿಗಳು ಕಚ್ಚಿದ್ದವು. ಹಲವು ನೋಟುಗಳ ತುಣುಕುಗಳು ಮಾತ್ರ ಉಳಿದಿವೆ.&lt;/p&gt;&lt;h3&gt;&lt;strong&gt;ಕುಟುಂಬ ಶಾಕ್​&lt;/strong&gt;&lt;/h3&gt;&lt;p&gt;ಈ ಘಟನೆ ಬೆಳಕಿಗೆ ಬಂದ ನಂತರ, ಮಹಿಳೆ ತನ್ನ ಪತಿಗೆ ಮಾಹಿತಿ ನೀಡಿದರು. ನಂತರ ಇಬ್ಬರೂ ಉಳಿದ ನೋಟುಗಳು ಮತ್ತು ಅವುಗಳ ತುಣುಕುಗಳನ್ನು ಟ್ರಂಕ್&zwnj;ನಿಂದ ಹೊರತೆಗೆದರು. ಹತ್ತಿರದ ಜನರ ಸಹಾಯದಿಂದ, ಅವರು ಹಾನಿಗೊಳಗಾದ ನೋಟುಗಳಿಂದ ತುಲನಾತ್ಮಕವಾಗಿ ಅಖಂಡ ನೋಟುಗಳನ್ನು ಬೇರ್ಪಡಿಸಲು ಪ್ರಯತ್ನಿಸಿದರು. ಆದಾಗ್ಯೂ, ಹಣದ ಹೆಚ್ಚಿನ ಭಾಗವು ಇಲಿಗಳಿಂದ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹಂಚಿಕೊಳ್ಳಲಾಯಿತು ಮತ್ತು ಅದು ಬೇಗನೆ ವೈರಲ್ ಆಗಿತ್ತು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯಿಂದ ತಮ್ಮ ಆಘಾತವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆಯು ಜನರಿಗೆ ಒಂದು ಪ್ರಮುಖ ಪಾಠವಾಗಿಯೂ ಕಾರ್ಯನಿರ್ವಹಿಸುತ್ತದೆ. ಮನೆಯಲ್ಲಿ ದೊಡ್ಡ ಪ್ರಮಾಣದ ಹಣವನ್ನು ಇಟ್ಟುಕೊಳ್ಳುವುದು ಕಳ್ಳತನ, ಬೆಂಕಿ, ತೇವಾಂಶ ಅಥವಾ ಕೀಟಗಳು ಮತ್ತು ಇಲಿಗಳಿಂದ ಹಾನಿಯಾಗುವ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ, ಬ್ಯಾಂಕ್ ಖಾತೆ ಅಥವಾ ಇತರ ಸುರಕ್ಷಿತ ಹಣಕಾಸು ಸಾಧನಗಳಲ್ಲಿ ಹಣವನ್ನು ಇಡುವುದರಿಂದ ಈ ಅಪಾಯಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/up-woman-saves-12-lakh-cash-hides-it-from-husband-for-future-eaten-by-rat-suc/articleshow-55tfzb8"/>
        </item>
        <item>
            <title><![CDATA[ಮುಚ್ಚಿದ ಕೋಣೆಯಲ್ಲಿ ಜಾತಿ ನಿಂದನೆ- SC, ST ಕಾಯ್ದೆಯಡಿ ಅಪರಾಧವಲ್ಲ ಎಂದ ಸುಪ್ರೀಂಕೋರ್ಟ್​]]></title>
            <link>https://kannada.asianetnews.com/india-news/hurling-caste-based-abuses-inside-closed-room-will-not-establish-sc-st-act-case-supreme-court-suc/articleshow-eyi8wxh</link>
            <guid isPermaLink="true">https://kannada.asianetnews.com/india-news/hurling-caste-based-abuses-inside-closed-room-will-not-establish-sc-st-act-case-supreme-court-suc/articleshow-eyi8wxh</guid>
            <pubDate>Sun, 23 Aug 2026 17:12:41 +0530</pubDate>
            <description><![CDATA[ಖಾಸಗಿಯಾಗಿ ಅಥವಾ ಸಾರ್ವಜನಿಕರ ಗಮನಕ್ಕೆ ಬಾರದಂತೆ ಮುಚ್ಚಿದ ಕೋಣೆಯಲ್ಲಿ ಮಾಡುವ ಜಾತಿ ನಿಂದನೆಯು ಎಸ್&zwnj;ಸಿ/ಎಸ್&zwnj;ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಘಟನೆಯು ಸಾರ್ವಜನಿಕರ ಉಪಸ್ಥಿತಿಯಿಲ್ಲದೆ ನಡೆದರೆ, ಅದನ್ನು ಈ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0f2k9ex3c00trvasd20zpc5,imgname-supreme-court-1787212441053.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ: ಖಾಸಗಿಯಾಗಿ ಅಥವಾ ಮುಚ್ಚಿದ ಕೋಣೆಯಲ್ಲಿ ಮಾಡಿದ ಜಾತಿ ನಿಂದನೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವಲ್ಲ. ಮುಚ್ಚಿದ ಕೋಣೆಯಲ್ಲಿ ಜಾತಿ ಸಂಬಂಧಿತ ನಿಂದನೆಯನ್ನು ಬಳಸುವುದು ಎಲ್ಲಾ ಸಂದರ್ಭಗಳಲ್ಲಿಯೂ ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ.&lt;/p&gt;&lt;p&gt;ಸಾರ್ವಜನಿಕರು ಹಾಜರಿದ್ದರೆ ಅಥವಾ ಘಟನೆಯನ್ನು ನೋಡಬಹುದಾದರೆ/ ಕೇಳಬಹುದಾದರೆ ಖಾಸಗಿ ಸ್ಥಳದಲ್ಲಿ ನಡೆಯುವ ಘಟನೆಯು ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕರ ಗಮನದಲ್ಲಿರಬಹುದು. ಆದರೆ ಘಟನೆಯು ಸಾರ್ವಜನಿಕರ ಉಪಸ್ಥಿತಿಯಿಲ್ಲದೆ ಸಂಪೂರ್ಣವಾಗಿ ಮುಚ್ಚಿದ ಜಾಗದಲ್ಲಿ ಸಂಭವಿಸಿದ್ದರೆ, ಶಾಲೆ, ಕಚೇರಿ ಅಥವಾ ಇತರ ಸಾರ್ವಜನಿಕ ಆವರಣದ ಅಸ್ತಿತ್ವವು ಸಾಕಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಹೇಳಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಉತ್ತರ ಪ್ರದೇಶದ ಶಾಲೆಯೊಂದರ ಘಟನೆ ಇದಾಗಿದೆ. ಆರೋಪಿ ಶಾಲಾ ವ್ಯವಸ್ಥಾಪಕರಾಗಿದ್ದರು. ಇಬ್ಬರು ವಿದ್ಯಾರ್ಥಿಗಳ ನಡುವಿನ ವಿವಾದದ ನಂತರ, ವಿದ್ಯಾರ್ಥಿಯ ತಂದೆ ಶಾಲಾ ವ್ಯವಸ್ಥಾಪಕರನ್ನು ಸಂಪರ್ಕಿಸಿದರು. ವಿವಾದದ ಸಮಯದಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಜಾತಿ ಸಂಬಂಧಿತ ನಿಂದನೆಗಳನ್ನು ಬಳಸಲಾಗಿದೆ ಎಂಬ ಆರೋಪವಿತ್ತು. ಇದರ ಆಧಾರದ ಮೇಲೆ, ಎಸ್&zwnj;ಸಿ/ಎಸ್&zwnj;ಟಿ ಕಾಯ್ದೆಯ ಸೆಕ್ಷನ್&zwnj;ಗಳು ಮತ್ತು ಇತರ ಕ್ರಿಮಿನಲ್ ಸೆಕ್ಷನ್&zwnj;ಗಳ ಅಡಿಯಲ್ಲಿ ಎಫ್&zwnj;ಐಆರ್ ದಾಖಲಿಸಲಾಯಿತು. ನಂತರ ಆರೋಪಪಟ್ಟಿ ಸಲ್ಲಿಸಲಾಯಿತು ಮತ್ತು ವಿಶೇಷ ನ್ಯಾಯಾಧೀಶರು ಪ್ರಕರಣವನ್ನು ಪರಿಗಣಿಸಿದರು.&lt;/p&gt;&lt;h2&gt;&lt;strong&gt;ಪ್ರಕರಣವು ಸುಪ್ರೀಂ ಕೋರ್ಟ್&zwnj;ಗೆ ಹೇಗೆ ತಲುಪಿತು?&lt;/strong&gt;&lt;/h2&gt;&lt;p&gt;ವಿಶೇಷ ನ್ಯಾಯಾಧೀಶರು ಗಮನಕ್ಕೆ ತಂದ ನಂತರ, ಆರೋಪಿಗಳು ಅಲಹಾಬಾದ್ ಹೈಕೋರ್ಟ್&zwnj;ನಲ್ಲಿ ಸಮನ್ಸ್ ಆದೇಶವನ್ನು ಪ್ರಶ್ನಿಸಿದರು. ಹೈಕೋರ್ಟ್ ಆರೋಪಿಗಳಿಗೆ ಪರಿಹಾರ ನೀಡಲು ನಿರಾಕರಿಸಿತು, ಅಂತಹ ಆರೋಪದ ಮೇಲಿನ ವಿಚಾರಣೆಯನ್ನು ರದ್ದುಗೊಳಿಸಲು ಕೇವಲ ಪ್ರತಿಕ್ರಿಯೆಯ ನೆಪ ಸಾಕಾಗುವುದಿಲ್ಲ ಮತ್ತು ಪ್ರಾಥಮಿಕವಾಗಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿತು. ಇದರ ನಂತರ, ಆರೋಪಿಗಳು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದರು.&lt;/p&gt;&lt;p&gt;ಅಲಹಾಬಾದ್ ಹೈಕೋರ್ಟ್&zwnj;ನ ತೀರ್ಪಿನ ವಿರುದ್ಧದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಆಲಿಸಿತು. ಕೋರ್ಟ್ ಪ್ರಾಥಮಿಕವಾಗಿ ಸೆಕ್ಷನ್ 3(1)(r) ಮತ್ತು 3(1)(s) ಗಳನ್ನು ಉಲ್ಲೇಖಿಸಿದೆ. ಸೆಕ್ಷನ್ 3(1)(r) SC/ST ಸಮುದಾಯದ ಸದಸ್ಯರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವುದು, ಬೆದರಿಸುವುದು ಮತ್ತು ಅವಮಾನಿಸುವುದನ್ನು ಅಪರಾಧೀಕರಿಸಿದರೆ, ಸೆಕ್ಷನ್ 3(1)(s) ಜಾತಿ ಆಧಾರಿತ ನಿಂದನೆಯನ್ನು ಅಪರಾಧೀಕರಿಸುತ್ತದೆ.&lt;/p&gt;&lt;p&gt;ಈ ಘಟನೆಯಲ್ಲಿ, ಶಿಕ್ಷಕರು ವಿವಾದ ಮತ್ತು ಗಲಾಟೆಯನ್ನು ಉಲ್ಲೇಖಿಸಿದ್ದರೂ, ಅವರಲ್ಲಿ ಯಾರೂ ಆಪಾದಿತ ಜಾತಿ ನಿಂದನೆಯ ಸಮಯದಲ್ಲಿ ತಾವು ಹಾಜರಿದ್ದೆವು ಅಥವಾ ಅವುಗಳನ್ನು ಕೇಳಿದ್ದೇವೆ ಎಂದು ಹೇಳಲಿಲ್ಲ. ಶಾಲಾ ಆವರಣದಲ್ಲಿ ಶಿಕ್ಷಕರು ಇರುವುದು ಮಾತ್ರ ಆಪಾದಿತ ಹೇಳಿಕೆಗಳನ್ನು ಸಾರ್ವಜನಿಕರ ಮುಂದೆ ಮಾಡಲಾಗಿದೆ ಎಂದು ಸಾಬೀತುಪಡಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಾಲಯವು ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು ಮತ್ತು ಎಸ್&zwnj;ಸಿ/ಎಸ್&zwnj;ಟಿ ಕಾಯ್ದೆಯಡಿಯಲ್ಲಿ ವಿಚಾರಣೆಗಳನ್ನು ವಜಾಗೊಳಿಸಿತು.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/hurling-caste-based-abuses-inside-closed-room-will-not-establish-sc-st-act-case-supreme-court-suc/articleshow-eyi8wxh"/>
        </item>
        <item>
            <title><![CDATA[ಅಪ್ಪನ ಸೆಲ್ಯೂಟ್‌ಗಾಗಿ 1.5 ಲಕ್ಷದ ಕೆಲಸಕ್ಕೆ ಗುಡ್‌ಬೈ! ಬಡ ಡ್ರೈವರ್​ ಪುತ್ರನ ಸ್ಟೋರಿ ಕೇಳಿ ಅಮಿತಾಭ್​ ಬಚ್ಚನ್​ ಭಾವುಕ]]></title>
            <link>https://kannada.asianetnews.com/relationship/amitabh-in-kbc-gets-emotional-over-the-story-of-a-drivers-son-who-turned-down-a-job-worth-lakh-suc/articleshow-m2793n6</link>
            <guid isPermaLink="true">https://kannada.asianetnews.com/relationship/amitabh-in-kbc-gets-emotional-over-the-story-of-a-drivers-son-who-turned-down-a-job-worth-lakh-suc/articleshow-m2793n6</guid>
            <pubDate>Sun, 23 Aug 2026 13:58:31 +0530</pubDate>
            <description><![CDATA[ಬಡ ಚಾಲಕನ ಮಗನೊಬ್ಬ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಸಂಬಳದ ಉದ್ಯೋಗವನ್ನು ತಿರಸ್ಕರಿಸಿದ್ದಾನೆ. ತನ್ನ ತಂದೆ ಇತರ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುವುದನ್ನು ನೋಡಿ, ತಾನು ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿ ಅಧಿಕಾರಿಯಾಗಿ, ತಂದೆ ತಲೆ ಎತ್ತಿ ನಡೆಯುವಂತೆ ಮಾಡುವುದೇ ತನ್ನ ಗುರಿ ಎಂದು ಆ ಯುವಕ ಹೇಳಿಕೊಂಡಿದ್ದಾನೆ. ಈತನ ಛಲದ ಕಥೆ ಕೇಳಿ ಅಮಿತಾಭ್ ಬಚ್ಚನ್ ಕೂಡ ಭಾವುಕರಾದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0pvpm57mcp33ky796z66yxq,imgname-kbc-1787473645735.jpg" type="image/jpeg" height="390" width="690"/>
            <content:encoded><![CDATA[&lt;p&gt;ತಿಂಗಳಿಗೆ ಒಂದೂವರೆ ಲಕ್ಷದ ಸಂಬಳದ ಉದ್ಯೋಗ ಸಿಗುತ್ತದೆ ಎಂದರೆ ಬಹುಶಃ ಯಾವ ಯುವಕರೂ ಅದನ್ನು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ. ತಮ್ಮ ಶಿಕ್ಷಣಕ್ಕೆ ಈ ಸಂಬಳ ಕಡಿಮೆ ಆಯಿತು ಎಂದು ಎನ್ನಿಸಿದರೂ, ಆ ಕ್ಷಣದಲ್ಲಿ, ಉದ್ಯೋಗ ಬೇಡ ಎನ್ನುವ ತೀರ್ಮಾನ ಮಾಡುವುದೇ ಇಲ್ಲ. ಅದರಲ್ಲಿಯೂ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇರುವಾಗ, ಒಂದೂವರೆ ಲಕ್ಷ ಎನ್ನುವುದು ಅವರಿಗೆ ಕೋಟಿ ಕೋಟಿಯ ಸಮಾನವೇ. ನೂರಾರು ರೂಪಾಯಿಗಳನ್ನೇ ಕಣ್ತುಂಬ ನೋಡದ ಮನೆಯಲ್ಲಿ ತಿಂಗಳಿಗೆ ಲಕ್ಷ ಲಕ್ಷ ಬರುತ್ತೆ ಎಂದರೆ, ಅದು ಯಾವ ಪರಿಯಲ್ಲಿ ಸಂತೋಷ ತರುತ್ತದೆ ಎನ್ನುವುದು ಬರಿಯ ಶಬ್ದಗಳಲ್ಲಿ ಬಣ್ಣಿಸಲಾಗದ ಮಾತೇ.&lt;/p&gt;&lt;p&gt;ಆದರೆ ಇಲ್ಲೊಬ್ಬ ಬಡ ಡ್ರೈವರ್​ ಪುತ್ರ, ಒಂದೂವರೆ ಲಕ್ಷ ರೂಪಾಯಿ ಸಂಬಳದ ಉದ್ಯೋಗ ಸಿಕ್ಕರೂ ಅದನ್ನು ಒಪ್ಪಿಕೊಳ್ಳಲಿಲ್ಲ. ಆ ಒಂದೂವರೆ ಲಕ್ಷ ಎನ್ನುವುದು ಆ ಮನೆಯನ್ನು ಅದೆಷ್ಟೋ ಪಾಲಿಗೆ ಸ್ವರ್ಗ ಮಾಡಬಹುದಿತ್ತು. ಆದರೂ ಅದನ್ನು ಆ ಮಗ ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಕಾರಣ ಮಾತ್ರ ತುಂಬಾ ರೋಚಕ. ಇದನ್ನು ಕೌನ್​ ಬನೇಗಾ ಕರೋರ್​ಪತಿಯನ್ನು ನಟ ಅಮಿತಾಭ್​ ಬಚ್ಚನ್​ ಅವರು ಪ್ರಶ್ನಿಸಿದಾಗ, ಆ ಯುವಕ ಕೊಟ್ಟ ಉತ್ತರಕ್ಕೆ ಒಂದು ಕ್ಷಣ ಬಿಗ್​ ಬಿನೇ ಮೌನಕ್ಕೆ ಜಾರಿದರು. ಅಬ್ಬಾ ಅದೆಂಥ ಛಲ, ಕುಟುಂಬದ ಬಗ್ಗೆ ಅದೆಂಥ ಒಲವು ಎಂದು ನಟ ಭಾವುಕರಾದರು.&lt;/p&gt;&lt;h2&gt;&lt;strong&gt;UPSC ಪರೀಕ್ಷೆಯ ಛಲ&lt;/strong&gt;&lt;/h2&gt;&lt;p&gt;ಅಷ್ಟಕ್ಕೂ ಆ ಯುವಕ, ಉದ್ಯೋಗ ಒಪ್ಪಿಕೊಳ್ಳದೇ ಇರಲು ಕಾರಣ, UPSC ಪರೀಕ್ಷೆಯನ್ನು ಬರೆದು ಪಾಸ್​ ಮಾಡುವುದಕ್ಕಾಗಿ! ಅದರಲ್ಲೇನು ವಿಶೇಷ ಅಂತೀರಾ? ಅಲ್ಲೇ ಇರೋದು ವಿಶೇಷ. ಯುಪಿಎಸ್ಸಿ ಪರೀಕ್ಷೆ ಬರೆದು ಪಾಸ್​ ಆದರೂ ಅವರಿಗೆ ಒಂದೂವರೆ ಲಕ್ಷದ ಉದ್ಯೋಗವೇ ಸಿಗಬಹುದು, ಇಲ್ಲವೇ ಕಡಿಮೆಯೇ ಇರಬಹುದು. ಆದರೆ ಈ ಯುವಕನಿಗೆ ಅದು ಮ್ಯಾಟರೇ ಆಗಿಲ್ಲ. ಏಕೆಂದರೆ ಅವನಿಗೆ ಅಪ್ಪ ತಲೆ ಎತ್ತಿ ತಿರುಗುವಂತೆ ಮಾಡಬೇಕಿತ್ತು. ಅದು ಸಾಧ್ಯವಾಗುವುದು ಸರ್ಕಾರಿ ನೌಕರಿಯಿಂದ ಮಾತ್ರ ಎನ್ನುವುದು ಆತನ ಮಾತು.&lt;/p&gt;&lt;h3&gt;&lt;strong&gt;'ಅಪ್ಪ ಸೆಲ್ಯೂಟ್​ ಹೊಡೆದದ್ದು ಸಾಕು'&lt;/strong&gt;&lt;/h3&gt;&lt;p&gt;'ನಾನು ಇರುವ ಗ್ರಾಮದಲ್ಲಿ ಸರ್ಕಾರಿ ನೌಕರರಿಗೆ ತುಂಬಾ ಗೌರವ ಕೊಡುತ್ತಾರೆ. ನನ್ನ ಅಪ್ಪ ಡ್ರೈವರ್​ ಆಗಿ ಹಲವು ಸರ್ಕಾರಿ ನೌಕರರ ಕಾರುಗಳಿಗೆ ಡ್ರೈವರ್​ ಆಗಿದ್ದಾರೆ. ದಿನವೂ ಅವರು ಆ ಸರ್ಕಾರಿ ಅಧಿಕಾರಿಗಳಿಗೆ ಸೆಲ್ಯೂಟ್​ ಹೊಡೆಯುವುದು, ಕಾರಿನ ಬಾಗಿಲು ತೆರೆಯುವುದು, ಅವರ ಎದುರು ತಲೆ ಬಗ್ಗಿಸಿ ನಿಲ್ಲುವ ಕೆಲಸವಷ್ಟೇ. ಆ ದಿನಗಳು ಸಾಕೆಂದು ನನಗೆ ಎನ್ನಿಸಿತು. ನಾನೂ ಸರ್ಕಾರಿ ನೌಕರನಾಗಿ ಅಪ್ಪ ತಲೆ ಎತ್ತಿ ತಿರುಗುವಂತೆ ಮಾಡುವುದು ನನ್ನ ಧ್ಯೇಯ. ಅಧಿಕಾರಿಗಳು ಬಂದಾಗ ಡ್ರೈವರ್​ ಆಗಿ ಸೆಲ್ಯೂಟ್ ಮಾಡುವ ನನ್ನ ಅಪ್ಪನನ್ನು ಎಲ್ಲರೂ ಸೆಲ್ಯೂಟ್​ ಮಾಡಬೇಕು ಎನ್ನುವುದು ನನ್ನ ಆಸೆ. ಅದಕ್ಕಾಗಿಯೇ ಉದ್ಯೋಗ ಒಪ್ಪಿಕೊಳ್ಳಲಿಲ್ಲ. ಯುಪಿಎಸ್ಸಿ ಪರೀಕ್ಷೆ ಪಾಸ್​ ಮಾಡುವುದೇ ನನ್ನ ಧ್ಯೇಯ' ಎಂದಿದ್ದಾರೆ.​ ಎಂಥ ಮಾತು ಎಂದು ಅಮಿತಾಭ್​ ಬಚ್ಚನ್​ ಭಾವುಕರಾದರು. ಅಲ್ಲಿಯೇ ಇದ್ದ ಅಪ್ಪನ ಕಣ್ಣು ಕೂಡ ತೇವಗೊಂಡವು.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/amitabh-in-kbc-gets-emotional-over-the-story-of-a-drivers-son-who-turned-down-a-job-worth-lakh-suc/articleshow-m2793n6"/>
        </item>
        <item>
            <title><![CDATA[ನನಗೆ ಗಂಡನೂ ಬೇಕು ಅವನೂ ಬೇಕು! ಗಂಡ ಒಪ್ಪಿದರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ ಈ ಪ್ರಕರಣ?]]></title>
            <link>https://kannada.asianetnews.com/india-news/woman-wants-to-live-with-husband-and-another-man-family-dispute-reaches-police-station/articleshow-wk5r3ly</link>
            <guid isPermaLink="true">https://kannada.asianetnews.com/india-news/woman-wants-to-live-with-husband-and-another-man-family-dispute-reaches-police-station/articleshow-wk5r3ly</guid>
            <pubDate>Sun, 23 Aug 2026 13:45:51 +0530</pubDate>
            <description><![CDATA[&lt;p&gt;ಪತಿ, ಪತ್ನಿ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಒಳಗೊಂಡ ವಿಚಿತ್ರ ಪ್ರಕರಣವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮೂವರೂ ತಮ್ಮದೇ ನಿಲುವಿನಲ್ಲಿ ಮುಂದುವರಿಯಲು ಬಯಸಿದ್ದು, ಕುಟುಂಬದ ವಿರೋಧದಿಂದ ಪರಿಸ್ಥಿತಿ ಬಿಗಡಾಯಿಸಿದೆ ಎನ್ನಲಾಗಿದೆ. ಪೊಲೀಸರು ಹಲವು ಸುತ್ತಿನ ಮಾತುಕತೆ ನಡೆಸಿದರೂ ಅಂತಿಮ ಪರಿಹಾರ ಸಿಗಲಿಲ್ಲ. ಅಷ್ಟಕ್ಕೂ ಈ ಗೊಂದಲದ ಹಿಂದಿರುವ ಕಾರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mw432hvzagaygfx9qz98z4,imgname-love-triangle-turns-into-police-matter-as-family-opposes-unusual-arrangement--1--1787406978128.jpg" type="image/jpeg" height="390" width="690"/>
            <content:encoded><![CDATA[&lt;h2&gt;ಪತಿ, ಪತ್ನಿ, ಮತ್ತು ಅವನು; ಸಂಬಂಧದ ವಿವಾದ ಠಾಣೆಗೆ!&lt;/h2&gt;&lt;p&gt;&lt;strong&gt;ಉತ್ತರ ಪ್ರದೇಶ:&lt;/strong&gt; ಸಂಬಂಧಗಳ ಸ್ವರೂಪ ಮತ್ತು ವೈಯಕ್ತಿಕ ನಿರ್ಧಾರಗಳು ಕೆಲವೊಮ್ಮೆ ಕುಟುಂಬದೊಳಗೆ ದೊಡ್ಡ ಸಂಘರ್ಷಕ್ಕೆ ಕಾರಣವಾಗುತ್ತವೆ. ಸೀತಾಪುರದ ಮಹಮೂದಾಬಾದ್&zwnj;ನಲ್ಲಿ ಪತಿ, ಪತ್ನಿ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಒಳಗೊಂಡ ಸಂಬಂಧದ ವಿಚಾರವೊಂದು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮೂವರ ನಡುವೆ ನಡೆದ ಮಾತುಕತೆ ಸ್ಥಳೀಯವಾಗಿ ಕುತೂಹಲಕ್ಕೂ ಕಾರಣವಾಗಿದೆ.&lt;/p&gt;&lt;h3&gt;ಠಾಣೆಗೆ ತಲುಪಿದ ಸಂಬಂಧದ ಗೊಂದಲ&lt;/h3&gt;&lt;p&gt;ಶುಕ್ರವಾರ ಸಂಜೆ ಶುಭಂ ವರ್ಮಾ, ಅವರ ಪತ್ನಿ ಅಂಜು ಮತ್ತು ನಿತಿನ್ ವಿಶ್ವಕರ್ಮ ಮಹಮೂದಾಬಾದ್ ಕೊತ್ವಾಲಿಗೆ ಆಗಮಿಸಿದ್ದರು ಎನ್ನಲಾಗಿದೆ. ಸಂಬಂಧಕ್ಕೆ ಸಂಬಂಧಿಸಿದ ವಿಚಾರವಾಗಿ ಮೂವರೊಂದಿಗೆ ಪೊಲೀಸರು ದೀರ್ಘವಾಗಿ ಚರ್ಚಿಸಿದ್ದಾರೆ.&lt;/p&gt;&lt;p&gt;ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಅಧಿಕಾರಿಗಳು ಪರಸ್ಪರ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಹಲವು ಸುತ್ತಿನ ಚರ್ಚೆಯ ಬಳಿಕವೂ ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.&lt;/p&gt;&lt;h3&gt;ಪತ್ನಿಯ ನಿರ್ಧಾರವೇನು?&lt;/h3&gt;&lt;p&gt;ವರದಿಗಳ ಪ್ರಕಾರ, ಅಂಜು ಪತಿ ಶುಭಂ ಹಾಗೂ ನಿತಿನ್ ಇಬ್ಬರೊಂದಿಗೂ ವಾಸಿಸಲು ಬಯಸಿದ್ದಾರೆ. ಈ ವಿಚಾರವೇ ವಿವಾದದ ಪ್ರಮುಖ ಕಾರಣ ಎನ್ನಲಾಗಿದೆ.&lt;/p&gt;&lt;p&gt;ಇನ್ನೊಂದೆಡೆ, ಶುಭಂ ಕೂಡ ಇಬ್ಬರನ್ನೂ ಬಿಟ್ಟು ದೂರ ಹೋಗಲು ಸಿದ್ಧರಿಲ್ಲ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅಗತ್ಯವಿದ್ದರೆ ತಮ್ಮ ಮನೆಯನ್ನು ತೊರೆಯಲು ಸಿದ್ಧ, ಆದರೆ ಪತ್ನಿ ಅಥವಾ ನಿತಿನ್&zwnj;ನಿಂದ ದೂರವಾಗುವುದಿಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;p&gt;ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಮಕ್ಕಳ ಭವಿಷ್ಯ ಮತ್ತು ಅವರು ಯಾರೊಂದಿಗೆ ಇರಬೇಕು ಎಂಬ ವಿಚಾರವೂ ಚರ್ಚೆಗೆ ಬಂದಿದೆ ಎನ್ನಲಾಗಿದೆ.&lt;/p&gt;&lt;h3&gt;ಕುಟುಂಬಕ್ಕೆ ಪರಿಚಿತ ವ್ಯಕ್ತಿ&lt;/h3&gt;&lt;p&gt;ನಿತಿನ್ ಕುಟುಂಬಕ್ಕೆ ಸಂಪೂರ್ಣ ಅಪರಿಚಿತ ವ್ಯಕ್ತಿಯಾಗಿರಲಿಲ್ಲ ಎನ್ನಲಾಗಿದೆ. ಆತ ಶುಭಂ ಅವರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಹಾಗೂ ಕೆಲ ಸಂದರ್ಭಗಳಲ್ಲಿ ಅಲ್ಲಿಯೇ ಉಳಿದುಕೊಳ್ಳುತ್ತಿದ್ದ ಎಂದು ವರದಿಗಳು ಹೇಳುತ್ತವೆ. ಶುಭಂ ಅವರನ್ನು ಇತರರಿಗೆ ತಮ್ಮ ಸಹೋದರ ಎಂದು ಪರಿಚಯಿಸುತ್ತಿದ್ದರು ಎನ್ನಲಾಗಿದೆ.&lt;/p&gt;&lt;h3&gt;ಕುಟುಂಬದ ವಿರೋಧದಿಂದ ಬಿಗಡಾಯಿಸಿದ ಪರಿಸ್ಥಿತಿ&lt;/h3&gt;&lt;p&gt;ಮೂವರು ತಮ್ಮದೇ ರೀತಿಯಲ್ಲಿ ಬದುಕಲು ಬಯಸಿದರೂ ಕುಟುಂಬದ ಇತರ ಸದಸ್ಯರು ಈ ನಿರ್ಧಾರವನ್ನು ಒಪ್ಪಲಿಲ್ಲ ಎನ್ನಲಾಗಿದೆ. ಕುಟುಂಬದ ವಿರೋಧದಿಂದ ವಿಚಾರ ಮತ್ತಷ್ಟು ಗಂಭೀರವಾಗಿ, ಕೊನೆಗೆ ಪೊಲೀಸ್ ಠಾಣೆಯವರೆಗೂ ತಲುಪಿದೆ.&lt;/p&gt;&lt;h3&gt;ಪೊಲೀಸರು ನೀಡಿದ ಸಲಹೆ ಏನು?&lt;/h3&gt;&lt;p&gt;ಮಹಮೂದಾಬಾದ್ ಕೊತ್ವಾಲ್ ಭಾನು ಪ್ರತಾಪ್ ಸಿಂಗ್ ಮೂವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿದುಕೊಂಡಿದ್ದಾರೆ. ಯಾವುದೇ ಬಲವಂತದ ನಿರ್ಧಾರಕ್ಕೆ ಬದಲಾಗಿ, ಎಲ್ಲರ ಒಪ್ಪಿಗೆಯೊಂದಿಗೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪೊಲೀಸರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಆದರೆ ಈ ಹಂತದಲ್ಲಿ ಮೂವರು ಮುಂದೆ ಹೇಗೆ ಬದುಕಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ಈ ಸಂಬಂಧದ ವಿಚಾರ ಇದೀಗ ಸ್ಥಳೀಯವಾಗಿ ಚರ್ಚೆಯ ವಿಷಯವಾಗಿದೆ.&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/woman-wants-to-live-with-husband-and-another-man-family-dispute-reaches-police-station/articleshow-wk5r3ly"/>
        </item>
        <item>
            <title><![CDATA[ರಾಮಮಂದಿರದ ತೀರ್ಪಿನ ದಿನ ನ್ಯಾಯಮೂರ್ತಿಗಳನ್ನು ಹಿಂಬಾಲಿಸಿದ್ದ ಆ ಕೋತಿ: ಆತ್ಮಚರಿತ್ರೆಯಲ್ಲಿ ರೋಚಕ ಅನುಭವ]]></title>
            <link>https://kannada.asianetnews.com/india-news/monkey-that-came-to-the-court-on-the-day-of-the-ram-temple-verdict-experience-in-judge-autobiography-suc/articleshow-tbtge76</link>
            <guid isPermaLink="true">https://kannada.asianetnews.com/india-news/monkey-that-came-to-the-court-on-the-day-of-the-ram-temple-verdict-experience-in-judge-autobiography-suc/articleshow-tbtge76</guid>
            <pubDate>Sun, 23 Aug 2026 13:36:04 +0530</pubDate>
            <description><![CDATA[1986ರಲ್ಲಿ ರಾಮಜನ್ಮಭೂಮಿ ಬೀಗ ತೆರೆಯಲು ಆದೇಶಿಸಿದ ನ್ಯಾಯಮೂರ್ತಿ ಕೃಷ್ಣ ಮೋಹನ್ ಪಾಂಡೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ರೋಚಕ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ತೀರ್ಪಿನ ದಿನ ನ್ಯಾಯಾಲಯದ ಮೇಲೆ ಕಾಣಿಸಿಕೊಂಡ ಕಪ್ಪು ಕೋತಿಯೊಂದು ನಂತರ ತಮ್ಮ ಬಂಗಲೆಯಲ್ಲಿಯೂ ಕಾಣಿಸಿಕೊಂಡಿದ್ದು, ಅದೊಂದು ದೈವಿಕ ಶಕ್ತಿ ಎಂದು ಅವರು ಭಾವಿಸಿದ್ದರು. ಈ ತೀರ್ಪಿನ ನಂತರ ಅಂದಿನ ರಾಜ್ಯ ಸರ್ಕಾರದಿಂದ ಕಿರುಕುಳವನ್ನೂ ಎದುರಿಸಬೇಕಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m0ptf13t2q0errb9g6ad8k8g,imgname-ram-mandir-1787472348282.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯ ರಾಮ ಮಂದಿರವು ಅನೇಕ ಜನರ ತ್ಯಾಗ ಮತ್ತು ಹೋರಾಟಗಳನ್ನು ಹೊಂದಿದೆ. 500ಕ್ಕೂ ಅಧಿಕ ಹೆಚ್ಚು ವರ್ಷಗಳಿಂದ ಇದರ ಹೋರಾಟ ನಡೆಯುತ್ತಲೇ ಇತ್ತು. ಶ್ರೀರಾಮಚಂದ್ರನೇ ಸುಳ್ಳು, ಹನುಮಂತನೇ ಸುಳ್ಳು ಎನ್ನುವ ಮಾತುಗಳು ಇಂದಿಗೂ ಕೆಲವು ಹಿಂದೂಗಳಿಂದಲೇ ಕೇಳಿಬರುವುದು ಉಂಟು. ಅದು ಅವರವರ ಭಾವಕ್ಕೆ, ಅವರವರ ಭಕುತಿಗೆ. ಅದೇನೇ ಇದ್ದರೂ, ಶ್ರೀರಾಮಚಂದ್ರ ಕೋಟ್ಯಂತರ ಹಿಂದೂಗಳು ಮಾತ್ರವಲ್ಲದೇ ಬೇರೆ ಬೇರೆ ಧರ್ಮೀಯರ ಮನಸ್ಸಿನಲ್ಲಿಯೂ ಆಳವಾಗಿ ಬೇರೂರಿದ್ದಾನೆ ಎನ್ನುವುದಕ್ಕೆ ಇದಾಗಲೇ ಸಾಕಷ್ಟು ಉದಾಹರಣಗಳು ಸಿಗುತ್ತಲೇ ಇವೆ. 1986ರ ಫೆಬ್ರುವರಿ 1ರಂದು ಹೈಕೋರ್ಟ್​ ನ್ಯಾಯಮೂರ್ತಿ ಕೃಷ್ಣ ಮೋಹನ್ ಪಾಂಡೆ ಅವರು ರಾಮಜನ್ಮ ಭೂಮಿಯ ತೀರ್ಪು ನೀಡುವ ಸಂದರ್ಭದಲ್ಲಿ ಆದ ಮೈನವಿರಿಳಿಸೋ ರೋಚಕ ಘಟನೆಯನ್ನು ತಮ್ಮ ಆತ್ಮಚರಿತ್ರೆ 1991 ರಲ್ಲಿ ಬರೆದ ತಮ್ಮ ಆತ್ಮಚರಿತ್ರೆ &quot;ವಾಯ್ಸ್ ಆಫ್ ಕಾನ್ಸೈನ್ಸ್&quot; ನಲ್ಲಿ (Voice of Conscience) ಬರೆದುಕೊಂಡಿದ್ದಾರೆ. ಅಂದು ಅವರು, ವಿವಾದಿತ ರಚನೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿ ತೀರ್ಪು ಹೊರಡಿಸಿದ್ದರು.&lt;/p&gt;&lt;p&gt;ಈ ಕುರಿತು, ಆತ್ಮಚರಿತ್ರೆಯಲ್ಲಿ ನ್ಯಾಯಮೂರ್ತಿ ಕೃಷ್ಣ ಮೋಹನ್ ಪಾಂಡೆ ಅವರು, &quot;ದೇವಾಲಯದ ಬೀಗಗಳನ್ನು ತೆರೆಯುವ ಆದೇಶಗಳನ್ನು ಹೊರಡಿಸಿದ ಆದೇಶದ ದಿನಾಂಕದಂದು, ವಿಚಾರಣೆ ನಡೆಯುತ್ತಿರುವ ನ್ಯಾಯಾಲಯದ ಕೋಣೆಯ ಛಾವಣಿಯ ಮೇಲೆ ಒಂದು ಕಪ್ಪು ಕೋತಿ ಇಡೀ ದಿನ ಕುಳಿತಿತ್ತು, ಧ್ವಜಸ್ತಂಭವನ್ನು ಹಿಡಿದಿತ್ತು. ನ್ಯಾಯಾಲಯದ ಅಂತಿಮ ಆದೇಶಗಳನ್ನು ಕೇಳಲು ಹಾಜರಿದ್ದ ಫೈಜಾಬಾದ್ ಮತ್ತು ಅಯೋಧ್ಯೆಯ ಸಾವಿರಾರು ಜನರು ಅವನಿಗೆ ನೆಲಗಡಲೆ ಮತ್ತು ವಿವಿಧ ಹಣ್ಣುಗಳನ್ನು ಅರ್ಪಿಸಿದರು. ವಿಚಿತ್ರವೆಂದರೆ, ಹೇಳಲಾದ ಕೋತಿ ಯಾವುದೇ ಪದಾರ್ಥ ಮುಟ್ಟಲಿಲ್ಲ ಮತ್ತು ಸಂಜೆ 4.40 ಕ್ಕೆ ಅಂತಿಮ ತೀರ್ಪು ಹೊರಡಿಸಿದಾಗ ಸ್ಥಳದಿಂದ ಹೊರಟುಹೋಯಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್&zwnj;ಎಸ್&zwnj;ಪಿ ನನ್ನನ್ನು ನನ್ನ ಬಂಗಲೆಗೆ ಕರೆದೊಯ್ದರು. ಆ ಕೋತಿ ನನ್ನ ಬಂಗಲೆಯ ವರಾಂಡಾದಲ್ಲಿತ್ತು. ಅವನನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಅವನನ್ನು ಯಾವುದೋ ದೈವಿಕ ಶಕ್ತಿ ಎಂದು ಪರಿಗಣಿಸಿ ವಂದಿಸಿದೆ&quot; ಎಂದು ರೋಚಕ ಅನುಭವ ತೆರೆದಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ರಾಜ್ಯ ಸರ್ಕಾರದಿಂದ ಕಿರುಕುಳ!&lt;/strong&gt;&lt;/h2&gt;&lt;p&gt;ಅದೇ ವೇಳೆ, ಅಂದಿನ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಉತ್ತರ ಪ್ರದೇಶದ ರಾಜ್ಯ ಸರ್ಕಾರದಿಂದ ತಮಗಾದ ಆಘಾತಕಾರಿ ವಿಷಯಗಳನ್ನೂ ಇದರಲ್ಲಿ ಅವರು ಉಲ್ಲೇಖಿಸಿದ್ದಾರೆ. ವಿವಾದಿತ ರಚನೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ನಂತರ, ಪಾಕಿಸ್ತಾನದಿಂದ ಬೆದರಿಕೆಗಳು ಬರಲು ಪ್ರಾರಂಭಿಸಿದವು. ಭಾರತದಲ್ಲಿಯೂ ಅನ್ಯಾಯವನ್ನು ಎದುರಿಸಬೇಕಾಯಿತು. ಮುಲಾಯಂ ಸಿಂಗ್ ಯಾದವ್ ನೇತೃತ್ವದ ರಾಜ್ಯ ಸರ್ಕಾರವು ಅವರ ಬಡ್ತಿಯನ್ನು ನಿಲ್ಲಿಸಿತು. ಬಡ್ತಿ ಪಡೆಯಲು ನಾನು ನ್ಯಾಯಾಲಯವನ್ನು ಸಂಪರ್ಕಿಸಬೇಕಾಯಿತು. ಇದಲ್ಲದೆ, ತಮ್ಮ ಮಗಳಿಗೆ ತರಗತಿಯಲ್ಲಿ ನಿರ್ದಿಷ್ಟ ಸಮುದಾಯದ ಸದಸ್ಯರು ಕಿರುಕುಳ ನೀಡಿದ್ದನ್ನು ನ್ಯಾಯಮೂರ್ತಿಗಳು ಬರೆದಿದ್ದಾರೆ.&lt;/p&gt;&lt;h3&gt;&lt;strong&gt;ಸೋದರಳಿಯನ ಮಾತು&lt;/strong&gt;&lt;/h3&gt;&lt;p&gt;ನ್ಯಾಯಮೂರ್ತಿ ಪಾಂಡೆ ಅವರ ಸೋದರಳಿಯ ಸುಜಿತ್ ಪಾಂಡೆ ತಮ್ಮ ಚಿಕ್ಕಪ್ಪ ಆ ಒಂದು ಪ್ರಕರಣಕ್ಕಾಗಿ ದಿನಕ್ಕೆ 8 ಗಂಟೆಗಳ ಕಾಲ ಸಂಶೋಧನೆ ನಡೆಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಇದು ಸುಮಾರು ಆರು ತಿಂಗಳ ಕಾಲ ನಡೆಯಿತು. ಆದರೆ, ಅವರು ಯಾವ ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದಾರೆಂದು ಯಾರಿಗೂ ಹೇಳಲಿಲ್ಲ. ಜ್ಯೋತಿಷಿ ಪ್ರೊಫೆಸರ್ ಕುನ್ನೆ ಅವರು ತಮ್ಮ ಚಿಕ್ಕಪ್ಪನಿಗೆ ತಮ್ಮನ್ನು ಒಂದು ಸಣ್ಣ ಜಿಲ್ಲೆಗೆ ವರ್ಗಾಯಿಸಲಾಗುವುದು ಮತ್ತು ವರ್ಗಾವಣೆಯ ನಂತರ ಅವರು ಖ್ಯಾತಿಯನ್ನು ಗಳಿಸುತ್ತಾರೆ ಎಂದು ಅದನ್ನು ನಿರಾಕರಿಸಬಾರದು ಎಂದು ಹೇಳಿದ್ದರು ಎಂದು ಸುಜಿತ್ ಪಾಂಡೆ ಹೇಳಿದರು. ನ್ಯಾಯಮೂರ್ತಿ ಪಾಂಡೆ ಅವರನ್ನು ಫಿಯಾಜಾಬಾದ್&zwnj;ಗೆ ವರ್ಗಾಯಿಸಿದಾಗ ಮತ್ತು ಅಯೋಧ್ಯಾ ಪ್ರಕರಣ ಅವರ ಮುಂದೆ ಬಂದಾಗ, ಇದು ನಿಜ ಎಂದು ಅವರು ಅರ್ಥಮಾಡಿಕೊಂಡರು. ತೀರ್ಪು ನೀಡಲು ಅವರು ಹಗಲಿರುಳು ಶ್ರಮಿಸಿದರು.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/monkey-that-came-to-the-court-on-the-day-of-the-ram-temple-verdict-experience-in-judge-autobiography-suc/articleshow-tbtge76"/>
        </item>
        <item>
            <title><![CDATA[ಜಪಾನ್‌ನ ಶೇ.80ಕ್ಕೂ ಹೆಚ್ಚು ದೇವರುಗಳ ಮೂಲ ಭಾರತದ್ದು; ಮಾಜಿ ರಾಯಭಾರಿ ಯಸುಕುನಿ ಹೇಳಿಕೆ ವೈರಲ್]]></title>
            <link>https://kannada.asianetnews.com/gallery/india-news/former-japanese-ambassador-yasukuni-enoki-said-more-than-80-percents-of-japans-gods-originally-have-indian-roots-dmvggtk</link>
            <guid isPermaLink="true">https://kannada.asianetnews.com/gallery/india-news/former-japanese-ambassador-yasukuni-enoki-said-more-than-80-percents-of-japans-gods-originally-have-indian-roots-dmvggtk</guid>
            <pubDate>Sun, 23 Aug 2026 11:16:52 +0530</pubDate>
            <description><![CDATA[&lt;p&gt;Yasukuni Enoki: ಇಂದು ಜಪಾನ್&zwnj;ನಲ್ಲಿ ಪೂಜಿಸಲ್ಪಡುವ ಶೇ.80ಕ್ಕೂ ಹೆಚ್ಚು ದೇವತೆಗಳ ಮೂಲ ಭಾರತದ್ದು. ಬೌದ್ಧ ಧರ್ಮದ ಪ್ರಸಾರದ ಮೂಲಕ ಭಾರತೀಯ ಪರಂಪರೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಭಾರತದ್ದು; ಮಾಜಿ ರಾಯಭಾರಿ ಯಸುಕುನಿ ಹೇಳಿಕೆ ವೈರಲ್ ಆಗಿದೆ. ಪೂರ್ಣ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0pj4xwdtq8md9p2tn4yvxwr,imgname-----------------------2026-08-23t110540.215-1787463628685.jpg" type="image/jpeg" height="390" width="690"/>
            <content:encoded><![CDATA[&lt;p&gt;Yasukuni Enoki: ಇಂದು ಜಪಾನ್&zwnj;ನಲ್ಲಿ ಪೂಜಿಸಲ್ಪಡುವ ಶೇ.80ಕ್ಕೂ ಹೆಚ್ಚು ದೇವತೆಗಳ ಮೂಲ ಭಾರತದ್ದು. ಬೌದ್ಧ ಧರ್ಮದ ಪ್ರಸಾರದ ಮೂಲಕ ಭಾರತೀಯ ಪರಂಪರೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಭಾರತದ್ದು; ಮಾಜಿ ರಾಯಭಾರಿ ಯಸುಕುನಿ ಹೇಳಿಕೆ ವೈರಲ್ ಆಗಿದೆ. ಪೂರ್ಣ ಓದಿ.&lt;/p&gt;&lt;img&gt;&lt;p&gt;ಭಾರತ ಮತ್ತು ಜಪಾನ್&zwnj; ನಡುವಿನ ಸಂಬಂಧ ರಾಜತಾಂತ್ರಿಕ ಸಂಬಂಧಕ್ಕಿಂತ ಹಳೆಯದು. ಅಂತಹ ಶತಮಾನಗಳ ಹಿಂದಿನ ಸಾಂಸ್ಕೃತಿಕ ಸಂಬಂಧದ ಬಗ್ಗೆ ಭಾರತದಲ್ಲಿನ ಜಪಾನ್&zwnj;ನ ಮಾಜಿ ರಾಯಭಾರಿ ಯಸುಕುನಿ ಎನೋಕಿ ಇತ್ತೀಚೆಗೆ ನೀಡಿರುವ ಹೇಳಿಕೆಯಿಂದ ಗಮನ ಸೆಳೆದಿದ್ದಾರೆ. ಅವರು ಹೇಳಿದ್ದೇನೆಂದರೆ ಇಂದು ಜಪಾನ್&zwnj;ನಲ್ಲಿ ಪೂಜಿಸಲ್ಪಡುವ ಶೇ.80ಕ್ಕೂ ಹೆಚ್ಚು ದೇವತೆಗಳ ಮೂಲ ಭಾರತದ್ದು. ಬೌದ್ಧ ಧರ್ಮದ ಪ್ರಸಾರದ ಮೂಲಕ ಭಾರತೀಯ ಪರಂಪರೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಯಸುಕುನಿ ಎನೋಕಿ ಅವರು 2004ರಿಂದ 2007ರವರೆಗೆ ಭಾರತದಲ್ಲಿನ ಜಪಾನ್&zwnj; ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.&lt;/p&gt;&lt;img&gt;&lt;p&gt;ಹಲವು ಶತಮಾನಗಳ ಹಿಂದೆಯೇ ಬೌದ್ಧ ಧರ್ಮದ ಗ್ರಂಥಗಳು, ಸಾಂಸ್ಕೃತಿಕ ವಿನಿಮಯ ಮತ್ತು ರೇಷ್ಮೆ ಮಾರ್ಗದ ಮೂಲಕ ಭಾರತದ ಹಲವು ಹಿಂದೂ ದೇವತೆಗಳ ಆರಾಧನಾ ಪರಂಪರೆ ಪೂರ್ವ ಏಷ್ಯಾದ ದೇಶಗಳಿಗೆ ಹರಡಿತು. ಕಾಲಕ್ರಮೇಣ ಈ ದೇವತೆಗಳು ಜಪಾನ್&zwnj;ನಲ್ಲಿ ವಿಭಿನ್ನ ಹೆಸರುಗಳು ಮತ್ತು ಸ್ಥಳೀಯ ರೂಪಗಳಲ್ಲಿ ಪರಿಚಿತರಾದರು.&lt;/p&gt;&lt;img&gt;&lt;p&gt;ಉದಾಹರಣೆಗೆ, ಹಿಂದೂ ದೇವತೆ ಸರಸ್ವತಿಯನ್ನು ಜಪಾನ್&zwnj;ನಲ್ಲಿ ಬೆಂಜೈಟೆನ್&zwnj; (Benzaiten) ಎಂದು ಪೂಜಿಸಲಾಗುತ್ತದೆ. ಅದೇ ರೀತಿ ಗಣೇಶನನ್ನು ಕಂಗಿಟೆನ್&zwnj; (Kangiten), ಇಂದ್ರನನ್ನು ತೈಶಕುಟೆನ್&zwnj; (Taishakuten) ಮತ್ತು ಬ್ರಹ್ಮನನ್ನು ಬೊಂಟೆನ್&zwnj; (Bonten) ಎಂದು ಕರೆಯಲಾಗುತ್ತದೆ.&lt;/p&gt;&lt;p&gt;ಜಪಾನ್&zwnj;ನ ನಾಲ್ವರು ಸ್ವರ್ಗದ ದೇವತೆಗಳ (Four Heavenly Kings) ಪರಂಪರೆಯೂ ಹಿಂದೂ ಮತ್ತು ಬೌದ್ಧ ಧಾರ್ಮಿಕ ನಂಬಿಕೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ಕಾಲ ಕಳೆದಂತೆ ಈ ದೇವತೆಗಳು ಜಪಾನ್&zwnj;ನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಭಾಗವಾಗಿದ್ದಾರೆ. ಭಾರತ ಮತ್ತು ಜಪಾನ್&zwnj; ನಡುವಿನ ಶತಮಾನಗಳಷ್ಟು ಹಳೆಯ ನಾಗರಿಕತೆಯ ನಂಟಿನ ಕುರಿತು ಮಾತನಾಡಿದ ಎನೋಕಿ, ಈ ಪರಂಪರೆಗಳು ಜಪಾನ್&zwnj; ಮೇಲೆ ಭಾರತೀಯ ತತ್ವಶಾಸ್ತ್ರ, ಬೌದ್ಧ ಧರ್ಮ ಮತ್ತು ಆಧ್ಯಾತ್ಮಿಕತೆಯ ಆಳವಾದ ಪ್ರಭಾವವನ್ನು ತೋರಿಸುತ್ತವೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾರತ ಮತ್ತು ಜಪಾನ್&zwnj; ನಡುವಿನ ಸಂಬಂಧ ಕೇವಲ ಇಂದಿನ ರಾಜತಾಂತ್ರಿಕ, ಆರ್ಥಿಕ ಹಾಗೂ ತಂತ್ರಜ್ಞಾನ ಸಹಕಾರಕ್ಕೆ ಸೀಮಿತವಾಗಿಲ್ಲ. ಎರಡೂ ದೇಶಗಳ ನಡುವೆ ಶತಮಾನಗಳ ಹಿಂದಿನಿಂದಲೂ ತತ್ವಶಾಸ್ತ್ರ, ಆಧ್ಯಾತ್ಮಿಕತೆ, ಕಲೆ ಮತ್ತು ಧಾರ್ಮಿಕ ಪರಂಪರೆಗಳ ಮೂಲಕ ಆಳವಾದ ನಂಟಿದೆ.&lt;/p&gt;&lt;img&gt;&lt;p&gt;ಯಾವುದೇ ಸಂಸ್ಕೃತಿ ಸಂಪೂರ್ಣವಾಗಿ ಪ್ರತ್ಯೇಕವಾಗಿ ಬೆಳೆಯುವುದಿಲ್ಲ. ಒಂದು ದೇಶದ ವಿಚಾರಗಳು, ನಂಬಿಕೆಗಳು ಮತ್ತು ಪರಂಪರೆಗಳು ಮತ್ತೊಂದು ದೇಶದ ಮೇಲೆ ಪ್ರಭಾವ ಬೀರುತ್ತವೆ. ನಂತರ ಅವು ಅಲ್ಲಿನ ಸ್ಥಳೀಯ ಸಂಪ್ರದಾಯಗಳಿಗೆ ಹೊಂದಿಕೊಂಡು ಹೊಸ ರೂಪ ಪಡೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಎನೋಕಿ ಅವರ ಹೇಳಿಕೆ ಏಷ್ಯಾದಾದ್ಯಂತ ಭಾರತದ ಪ್ರಾಚೀನ ಸಾಂಸ್ಕೃತಿಕ ಪ್ರಭಾವದ ಬಗ್ಗೆ ಆಸಕ್ತಿ ಹೊಂದಿರುವವರ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಭಾರತ&ndash;ಜಪಾನ್&zwnj; ಸಂಬಂಧವು ಪುರಾತನ ಸಾಂಸ್ಕೃತಿಕ ಪರಂಪರೆ ಮತ್ತು ಆಧುನಿಕ ಸಹಕಾರದ ಅಪರೂಪದ ಸಂಯೋಜನೆಯಾಗಿದೆ. ಎರಡೂ ದೇಶಗಳ ನಡುವಿನ ಈ ಹಂಚಿಕೊಂಡಿರುವ ಪರಂಪರೆಯನ್ನು ತಿಳಿದುಕೊಳ್ಳುವುದು ಪರಸ್ಪರ ಗೌರವ, ತಿಳುವಳಿಕೆ ಮತ್ತು ಸ್ನೇಹವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡಬಹುದು.&lt;/p&gt;&lt;img&gt;&lt;p&gt;ಯಸುಕುನಿ ಅವರ ಈ ಹೇಳಿಕೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/india-news/former-japanese-ambassador-yasukuni-enoki-said-more-than-80-percents-of-japans-gods-originally-have-indian-roots-dmvggtk"/>
        </item>
        <item>
            <title><![CDATA[ಟಾಕ್ಸಿಕ್ ಪ್ರಿ-ರಿಲೀಸ್ ಇವೆಂಟ್‌ ವೇಳೆ ದುರಂತ, ಸೌಂಡ್‌ಬಾಕ್ಸ್ ಕುಸಿದು ವಿದ್ಯಾರ್ಥಿಗಳಿಗೆ ಗಾಯ; ಯಶ್ ಫುಲ್ ಗಾಬರಿ!]]></title>
            <link>https://kannada.asianetnews.com/entertainment/sound-box-collapsed-and-injuring-students-in-tragedy-during-toxic-pre-release-event-and-yash-left-in-shock/articleshow-prd323m</link>
            <guid isPermaLink="true">https://kannada.asianetnews.com/entertainment/sound-box-collapsed-and-injuring-students-in-tragedy-during-toxic-pre-release-event-and-yash-left-in-shock/articleshow-prd323m</guid>
            <pubDate>Sun, 23 Aug 2026 11:01:21 +0530</pubDate>
            <description><![CDATA[&lt;p&gt;ಈ ಕಾರ್ಯಕ್ರಮ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದ ಗ್ರೌಂಡ್&zwnj;ನಲ್ಲಿ ನಡೆದಿದೆ. ಈ ಇವೆಂಟ್&zwnj;ನಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದು, ಮಲ್ಲಾರೆಡ್ಡಿ ವಿವಿ ಗ್ರೌಂಡ್ ಕಿಕ್ಕಿರಿದು ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ವಿದ್ಯಾರ್ಥಿಗಳು ಸೇರಿದ್ದರು. ಅವರಲ್ಲಿ ಕೆಲವರು ಸೌಂಡ್&zwnj;ಬಾಕ್ಸ್&zwnj; ಸಿಸ್ಟಮ್&zwnj; ಇಟ್ಟಿದ್ದ ಸ್ಟ್ಯಾಂಡ್&zwnj; ಮೇಲೆ ಕುಳಿತು ಕಾರ್ಯಕ್ರಮ ನೋಡುತ್ತಿದ್ದಾಗ ಈ ದುರಂತ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0pgjmaq1agme328wpz9s21t,imgname-yash-toxic-hydrabad-event-1787461980503.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Toxic movie event accident-Yash Toxic pre-release event-Hyderabad Toxic event tragedy-Toxic movie soundbox collapsed: ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ದುರ್ಘಟನೆ ವಿವರ ಇಲ್ಲಿದೆ ನೋಡಿ-&lt;/strong&gt;&lt;/p&gt;&lt;p&gt;ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ನಿನ್ನೆ ರಾತ್ರಿ ಹೈದ್ರಾಬಾದ್&zwnj;ನಲ್ಲಿ ನಡೆದಿದ್ದು ಗೊತ್ತೇ ಇದೆ. ಈ ವೇಳೆ ದುರಂತವೊಂದು ನಡೆದಿದೆ. ಇವೆಂಟ್ ನಡೆಯುತ್ತಿದ್ದಾಗ, ಯಶ್ ಮಾತನಾಡುತ್ತಿದ್ದ ವೇಳೆ ಅಲ್ಲಿದ್ದ ಸೌಂಡ್&zwnj;ಬಾಕ್ಸ್ ಮುರಿದು ಬಿದ್ದು ದುರ್ಘಟನೆ ಸಂಭವಿಸಿದೆ. ಈ ವೇಳೆ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅದನ್ನು ನೋಡಿದ ಯಶ್ ಸಿಕ್ಕಾಪಟ್ಟೆ ಗಾಬರಿಯಾಗಿದ್ದಾರೆ. ಜೊತೆಗೆ, ತಮ್ಮ ಮಾತನ್ನು ಅಷ್ಟಕ್ಕೇ ನಿಲ್ಲಿಸಿ, ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ.&lt;/p&gt;&lt;p&gt;ಸೌಂಡ್&zwnj;ಬಾಕ್ಸ್ ಕುಸಿದು ವಿದ್ಯಾರ್ಥಿಗಳಿಗೆ ಗಾಯವಾಗಿದ್ದನ್ನು ನಟ ಯಶ್ ಕಣ್ಣಾರೆ ಕಂಡಿದ್ದಾರೆ. ಸೌಂಡ್ ಬಾಕ್ಸ್ ಜೊತೆಗೆ ವಿದ್ಯಾರ್ಥಿಗಳು ಕೂಡ ಕೆಳಗೆ ಬಿದ್ದ ದೃಶ್ಯ ನೋಡಿ ಯಶ್ ಗಾಬರಿಯಾಗಿದ್ದಾರೆ. ತಕ್ಷಣವೇ 'ಓಯ್ ಏನೂ ತೊಂದ್ರೆ ಆಗಿಲ್ವ..? ಬಿ ಕೇರ್ ಫುಲ್..' ಎಂದು ಹೇಳಿದ ಯಶ್ ಅವರು ಸ್ವಲ್ಪ ಹೊತ್ತು ಅದನ್ನೆಲ್ಲಾ ನೋಡುತ್ತ ತಮ್ಮ ಮಾತನ್ನು ನಿಲ್ಲಿಸಿ, ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ ಬಳಿಕ ಮತ್ತೆ ತಮ್ಮ ಮಾತನ್ನು ಮುಂದುವರೆಸಿದ್ದಾರೆ.&lt;/p&gt;&lt;p&gt;ಹೈದರಾಬಾದ್&zwnj;ನಲ್ಲಿ ನಡೀತಿದ್ದ ಟಾಕ್ಸಿಕ್ ಪ್ರಿ-ರಿಲೀಸ್ ಇವೆಂಟ್ ವೇಳೆ, ಅಲ್ಲಿದ್ದ ಸೌಂಡ್&zwnj;ಬಾಕ್ಸ್&zwnj; ಮೇಲೆ ಹತ್ತಿ ಕೆಲವು ಸ್ಟೂಡೆಂಟ್ಸ್ ಈ ಕಾರ್ಯಕ್ರಮ ನೋಡುತ್ತಿದ್ದರು. ವಿದ್ಯಾರ್ಥಿಗಳ ಭಾರ ತಾಳಲಾರದ ಸೌಂಡ್&zwnj;ಬಾಕ್ಸ್ ಸ್ಟ್ಯಾಂಡ್ ಕುಸಿದು ಬಿದ್ದಿದೆ. ಆಗ ಸೌಂಡ್&zwnj;ಬಾಕ್ಸ್ ಸಿಸ್ಟಮ್ ಮೇಲೆ ಹತ್ತಿ ಕುಳಿತಿದ್ದ ಸ್ಟೂಡಂಟ್ಸ್&zwnj; ಕೆಳಗೆ ಬಿದ್ದಿದ್ದಾರೆ. ಅವರಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.&lt;/p&gt;&lt;p&gt;ಗಾಯಾಳು ವಿದ್ಯಾರ್ಥಿಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ತಕ್ಷಣವೇ ಇವೆಂಟ್&zwnj;ನ ಪರಿಸ್ಥಿತಿ ನಾರ್ಮಲ್ ಆಗಿದೆ. ಈ ಘಟನೆಯಲ್ಲಿ ಪ್ರಜ್ಞೆ ತಪ್ಪಿದ್ದ ಓರ್ವ ಯುವತಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ. ಜೊತೆಗೆ, ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳಿಗೆ ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ, ಆಗಬಹುದಾಗಿದ್ದ ಹೆಚ್ಚಿನ ಸಮಸ್ಯೆಗಳಿಮದ ಪಾರುಮಾಡಲಾಗಿದೆ.&lt;/p&gt;&lt;p&gt;ಈ ಕಾರ್ಯಕ್ರಮ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದ ಗ್ರೌಂಡ್&zwnj;ನಲ್ಲಿ ನಡೆದಿದೆ. ಈ ಇವೆಂಟ್&zwnj;ನಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದು, ಮಲ್ಲಾರೆಡ್ಡಿ ವಿವಿ ಗ್ರೌಂಡ್ ಕಿಕ್ಕಿರಿದು ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ವಿದ್ಯಾರ್ಥಿಗಳು ಸೇರಿದ್ದರು. ಅವರಲ್ಲಿ ಕೆಲವರು ಸೌಂಡ್&zwnj;ಬಾಕ್ಸ್&zwnj; ಸಿಸ್ಟಮ್&zwnj; ಇಟ್ಟಿದ್ದ ಸ್ಟ್ಯಾಂಡ್&zwnj; ಮೇಲೆ ಕುಳಿತು ಕಾರ್ಯಕ್ರಮ ನೋಡುತ್ತಿದ್ದಾಗ ಈ ದುರಂತ ಸಂಭವಿಸಿದೆ.&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/sound-box-collapsed-and-injuring-students-in-tragedy-during-toxic-pre-release-event-and-yash-left-in-shock/articleshow-prd323m"/>
        </item>
        <item>
            <title><![CDATA[Sugar Price Explained: ಸಕ್ಕರೆ ಬೆಲೆ ನಿರ್ಧರಿಸೋರು ಯಾರು? ರೈತರ? ಕಾರ್ಖಾನೆ ಮಾಲೀಕರಾ? ಅಥವಾ ಸರ್ಕಾರ?]]></title>
            <link>https://kannada.asianetnews.com/india-news/sugar-price-explained-who-decides-sugar-prices-government-farmers-or-sugar-mills-rav/articleshow-g1kpedz</link>
            <guid isPermaLink="true">https://kannada.asianetnews.com/india-news/sugar-price-explained-who-decides-sugar-prices-government-farmers-or-sugar-mills-rav/articleshow-g1kpedz</guid>
            <pubDate>Sun, 23 Aug 2026 10:09:23 +0530</pubDate>
            <description><![CDATA[ಹಬ್ಬಗಳ ಸೀಸನ್&zwnj;ನಲ್ಲಿ ಸಕ್ಕರೆ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರ ಮೇಲೆ ಹೊರೆಯಾಗಿದೆ. ಭಾರತದಲ್ಲಿ ಸಕ್ಕರೆ ಬೆಲೆಯನ್ನು ಯಾರು ನಿರ್ಧರಿಸುತ್ತಾರೆ, ಸರ್ಕಾರದ ಪಾತ್ರವೇನು ಮತ್ತು ಕಬ್ಬಿಗೆ ನಿಗದಿಪಡಿಸುವ FRP ಬೆಲೆ ಎಷ್ಟು ಎಂಬುದರ ಕುರಿತು ಈ ಲೇಖನ ಮಾಹಿತಿ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0pec12d40mjey4dd0f0x8z7,imgname-----------------------2026-08-23t100410.632-1787459667021.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಗಟು ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆಯು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಗೌರಿ-ಗಣೇಶ, ದಸರಾ ಸೇರಿದಂತೆ ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹೊತ್ತಲ್ಲಿ ಸಕ್ಕರೆ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.&lt;/p&gt;&lt;p&gt;ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ 5 ದಿನಗಳ ಹಿಂದೆ ಕೆಜಿ ಸಕ್ಕರೆ ಬೆಲೆಯು ₹52 ಇತ್ತು. ಅದು ಶನಿವಾರಕ್ಕೆ ₹65ಕ್ಕೆ ಏರಿಕೆಯಾಗಿದೆ. ಹಳೆಯ ದರದಲ್ಲಿ ಈ ಹಿಂದೆ ಸಕ್ಕರೆ ಖರೀದಿಸಿದವರು ಅದು ಖಾಲಿ ಆಗುವವರೆಗೂ ಕಡಿಮೆ ದರದಲ್ಲಿಯೇ ಮಾರಾಟ ಮಾಡಲಿದ್ದು, ಹೊಸ ದರದಲ್ಲಿ ಖರೀದಿಸಿದ ಸಕ್ಕರೆಯನ್ನು ಹೊಸ ದರದಲ್ಲಿ ಮಾರಾಟ ಮಾಡಲು ಆರಂಭಿಸಲಿದ್ದಾರೆ. ಆಗ ಗ್ರಾಹಕರಿಗೆ ಸಕ್ಕರೆ ದರ ಹೆಚ್ಚಳದ ಬಿಸಿ ತಟ್ಟಲಿದೆ ಎನ್ನುತ್ತಾರೆ ಸಂಜಯನಗರದ ಲಕ್ಷ್ಮಿ ಟ್ರೇಡರ್ ಮಾಲೀಕ ಸೂರ್ಯಾನಂದ.&lt;/p&gt;&lt;p&gt;ಒಂದು ಕಪ್ ಚಹಾದಿಂದ ಹಿಡಿದು ಹಬ್ಬದ ಸಿಹಿತಿಂಡಿಗಳವರೆಗೆ ಭಾರತೀಯರ ಪ್ರತಿ ಮನೆಗಳಲ್ಲೂ ಸಕ್ಕರೆಯನ್ನೇ ಬಳಸಲಾಗುತ್ತೆ. ಈ ನಡುವೆ ಕರ್ನಾಟಕ ಸೇರಿ ದೇಶಾದ್ಯಂತ ಸಕ್ಕರೆ ಬೆಲೆ ಹೆಚ್ಚುತ್ತಿರುವುದು ಚಿಂತೆಗೀಡುಮಾಡಿದೆ.&lt;/p&gt;&lt;h2&gt;ಸಕ್ಕರೆಯ ಬೆಲೆಯನ್ನು ಯಾರು ನಿರ್ಧರಿಸುತ್ತಾರೆ?&lt;/h2&gt;&lt;p&gt;ರೈತರು ಕಬ್ಬಿನ ಬೆಲೆಯನ್ನು ತಾವಾಗಿಯೇ ನಿರ್ಧರಿಸುತ್ತಾರೆಯೇ ಅಥವಾ ಸರ್ಕಾರವೇ ನಿರ್ಧರಿಸುತ್ತದೆಯೇ? ಭಾರತದಲ್ಲಿ ಸಕ್ಕರೆಯ ಬೆಲೆಯನ್ನು ಯಾರು ನಿರ್ಧರಿಸುತ್ತಾರೆ? ಸರ್ಕಾರವೋ? ಕಾರ್ಖಾನೆಗಳೋ ಅಥವಾ ರೈತರೋ? ಇಲ್ಲಿ ತಿಳಿಯೋಣ.&lt;/p&gt;&lt;h3&gt;ಸಕ್ಕರೆಯ ಬೆಲೆ ಎಷ್ಟು ಹೆಚ್ಚಾಗಿದೆ?&lt;/h3&gt;&lt;p&gt;ಬೆಂಗಳೂರು ಸೇರಿದಂತೆ ದೇಶದ ಅನೇಕ ಸಕ್ಕರೆಯ ಚಿಲ್ಲರೆ ಬೆಲೆ ಕೆಜಿಗೆ ₹65 ತಲುಪಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ ₹42 ರಿಂದ ₹45 ಕ್ಕೆ ಸಕ್ಕರೆ ಸಿಗುತ್ತಿತ್ತು. ಆದರೀಗ ಕೆಜಿಗೆ ₹62 ಕ್ಕೆ ತಲುಪಿದೆ. ಸಕ್ಕರೆ ಬೆಲೆ ಏರಿಕೆಯು ಮನೆಯ ಬಜೆಟ್ ಜೊತೆಗೆ ಟೀ ಅಂಗಡಿಗಳು, ಸಿಹಿತಿಂಡಿ ಅಂಗಡಿಗಳು ಮತ್ತು ಆಹಾರ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ವ್ಯಾಪಾರಿಗಳು ಹೇಳುವ ಪ್ರಕಾರ, ಬೆಲೆ ಏರಿಕೆಯು ಹೆಚ್ಚಿದ ಬೇಡಿಕೆ ಮತ್ತು ಪೂರೈಕೆ ಕಡಿಮೆಯಾಗಿರುವುದರಿಂದ ಆಗಿದೆ. ಎಥೆನಾಲ್ ನೀತಿಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಹೆಚ್ಚುತ್ತಿರುವ ಹಣದುಬ್ಬರಕ್ಕೆ ಪ್ರತಿಕ್ರಿಯೆಯಾಗಿ, ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು 1 ಮಿಲಿಯನ್ ಟನ್ ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಅನುಮೋದನೆ ನೀಡಿದೆ ಮತ್ತು ದೊಡ್ಡ ಖರೀದಿದಾರರ ಮೇಲೆ ಸ್ಟಾಕ್ ಮಿತಿಗಳನ್ನು ವಿಧಿಸಿದೆ.&lt;/p&gt;&lt;p&gt;ಭಾರತದಲ್ಲಿ ಸಕ್ಕರೆಯ ಬೆಲೆ ಯಾರು ನಿರ್ಧರಿಸುತ್ತಾರೆ?&lt;/p&gt;&lt;p&gt;ಕೇಂದ್ರ ಸರ್ಕಾರವು 1955 ರ ಅಗತ್ಯ ಸರಕುಗಳ ಕಾಯ್ದೆಯಡಿಯಲ್ಲಿ ಸಕ್ಕರೆ ವಲಯವನ್ನು ನಿಯಂತ್ರಿಸುತ್ತದೆ. ಇದು ಸಕ್ಕರೆ ಉತ್ಪಾದನೆ, ಮಾರಾಟ, ದಾಸ್ತಾನು, ಆಮದು ಮತ್ತು ರಫ್ತುಗಳನ್ನು ನಿಯಂತ್ರಿಸುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಕ್ಕರೆ ಪೂರೈಕೆಯಾಗಲು, ಸ್ಥಿರ ಬೆಲೆಗಳನ್ನು ಕಾಯ್ದುಕೊಳ್ಳಲು ಸರ್ಕಾರವು ವಿವಿಧ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.&lt;/p&gt;&lt;h3&gt;ಸರ್ಕಾರ ಅಥವಾ ರೈತರ ಪಾತ್ರವೇನು?&lt;/h3&gt;&lt;p&gt;ಸಕ್ಕರೆಯ ಬೆಲೆಯನ್ನು ನಿರ್ಧರಿಸುವಲ್ಲಿ ಸರ್ಕಾರ ಪ್ರಮುಖ ಪಾತ್ರ ವಹಿಸುತ್ತದೆ, ಆದರೆ ರೈತರ ಪಾತ್ರ ಕಬ್ಬಿನ ಬೆಲೆಗೆ ಸೀಮಿತವಾಗಿದೆ. ಕೇಂದ್ರ ಸರ್ಕಾರವು ಕಬ್ಬಿಗೆ FRP (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಅನ್ನು ನಿಗದಿಪಡಿಸುತ್ತದೆ. ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬನ್ನು ಖರೀದಿಸಬೇಕಾದ ಕನಿಷ್ಠ ಬೆಲೆಯನ್ನು CACP ಯ ಶಿಫಾರಸುಗಳು ಮತ್ತು ರಾಜ್ಯ ಸರ್ಕಾರಗಳು ಮತ್ತು ಇತರ ಪಾಲುದಾರರೊಂದಿಗೆ ಚರ್ಚೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕೆಲವು ರಾಜ್ಯಗಳು ತಮ್ಮದೇ ಆದ ರಾಜ್ಯ ಸಲಹಾ ಬೆಲೆಯನ್ನು (SAP) ಸಹ ನಿಗದಿಪಡಿಸುತ್ತವೆ, ಇದು FRP ಗಿಂತ ಹೆಚ್ಚಿರಬಹುದು. ಮತ್ತೊಂದೆಡೆ, ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆಯನ್ನು ನಿಯಂತ್ರಿಸಲು, ಸರ್ಕಾರವು ಉತ್ಪಾದನೆ, ಮಾರಾಟ, ದಾಸ್ತಾನು, ಆಮದು ಮತ್ತು ರಫ್ತುಗಳ ಮೇಲೆ ನಿಯಮಗಳನ್ನು ಮಾಡಬಹುದು.&lt;/p&gt;&lt;p&gt;&lt;strong&gt;2025-26 ರ FRP ಬೆಲೆ ಎಷ್ಟು?&lt;/strong&gt;&lt;/p&gt;&lt;p&gt;2025-26 ರಂತೆ ಕಬ್ಬಿಗೆ FRP ಅನ್ನು ಕ್ವಿಂಟಲ್&zwnj;ಗೆ 355 ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದು ಶೇಕಡಾ 10.25 ರ ಮೂಲ ಚೇತರಿಕೆ ದರಕ್ಕೆ ಸಂಬಂಧಿಸಿದೆ. ಚೇತರಿಕೆ ಇದನ್ನು ಮೀರಿದರೆ, ರೈತರು ಹೆಚ್ಚುವರಿ ಚೇತರಿಕೆಯ ಪ್ರತಿ ಶೇಕಡಾ 0.1 ಕ್ಕೆ ಕ್ವಿಂಟಲ್&zwnj;ಗೆ 3.46 ರೂ.ಗಳ ಪ್ರೀಮಿಯಂ ಪಡೆಯುತ್ತಾರೆ. ಆದಾಗ್ಯೂ, ರೈತರ ಹಿತದೃಷ್ಟಿಯಿಂದ, ಚೇತರಿಕೆ ಶೇಕಡಾ 9.5 ಕ್ಕಿಂತ ಕಡಿಮೆಯಿದ್ದರೂ ಸಹ ಯಾವುದೇ ಕಡಿತವನ್ನು ಮಾಡಲಾಗಿಲ್ಲ. ಅಂತಹ ರೈತರು ಪ್ರತಿ ಕ್ವಿಂಟಲ್&zwnj;ಗೆ 329.05 ರೂ.ಗಳ ದರವನ್ನು ಪಡೆಯುತ್ತಾರೆ.&lt;/p&gt;&lt;p&gt;&lt;strong&gt;ಕೆಲವು ರಾಜ್ಯಗಳಲ್ಲಿ ವಿಭಿನ್ನ ಬೆಲೆಗಳು&lt;/strong&gt;&lt;/p&gt;&lt;p&gt;ಕರ್ನಾಟಕ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಕೂಡ ತಮ್ಮದೇ ಆದ ರಾಜ್ಯ ಸಲಹಾ ಬೆಲೆಗಳನ್ನು (SAP) ಘೋಷಿಸುತ್ತವೆ. ಈ ಬೆಲೆ ಸಾಮಾನ್ಯವಾಗಿ ಕೇಂದ್ರ ಸರ್ಕಾರದ FRP ಗಿಂತ ಹೆಚ್ಚಿರುತ್ತದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ, ಸಕ್ಕರೆ ಕಾರ್ಖಾನೆಗಳು SAP ಪ್ರಕಾರ ಕಬ್ಬಿಗೆ ಪಾವತಿಸಲು ಜವಾಬ್ದಾರರಾಗಿರುತ್ತವೆ. ಪಂಜಾಬ್&zwnj;ನಲ್ಲಿ, ರಾಜ್ಯ ಸರ್ಕಾರ ಮತ್ತು ಹರಿಯಾಣದಲ್ಲಿ, ರಾಜ್ಯ ಸರ್ಕಾರವು FRP ಮತ್ತು SAP ನಡುವಿನ ವ್ಯತ್ಯಾಸವನ್ನು ಸರಿದೂಗಿಸಲು ಸಬ್ಸಿಡಿಯನ್ನು ನೀಡುತ್ತದೆ.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/sugar-price-explained-who-decides-sugar-prices-government-farmers-or-sugar-mills-rav/articleshow-g1kpedz"/>
        </item>
        <item>
            <title><![CDATA[Mallikarjun kharge: ಮೋದಿ, ಶಾರನ್ನು ಜೆನ್‌ಝೀ ಅಟ್ಟಾಡಿಸಿ ಹೊಡೀತಾರೆ: ಖರ್ಗೆ ಎಚ್ಚರಿಕೆ!]]></title>
            <link>https://kannada.asianetnews.com/india-news/gen-z-will-chase-down-and-thrash-modi-and-shah-aicc-president-mallikarjun-kharge-warns-rav/articleshow-x3tni81</link>
            <guid isPermaLink="true">https://kannada.asianetnews.com/india-news/gen-z-will-chase-down-and-thrash-modi-and-shah-aicc-president-mallikarjun-kharge-warns-rav/articleshow-x3tni81</guid>
            <pubDate>Sun, 23 Aug 2026 06:33:11 +0530</pubDate>
            <description><![CDATA[&lt;p&gt;ಅಧಿಕಾರದ ವ್ಯಾಮೋಹದಿಂದ ದೇಶವನ್ನು ಹಾಳುಗೆಡವುತ್ತಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೋಮು ಭಾವನೆ ಕೆರಳಿಸುವುದನ್ನು ಬಿಟ್ಟು ಯುವಕರ ಶಿಕ್ಷಣ ಮತ್ತು ಉದ್ಯೋಗದತ್ತ ಗಮನ ಹರಿಸದಿದ್ದರೆ, ಯುವ ಸಮೂಹವೇ ಬೆನ್ನಟ್ಟಿ ಹೊಡೆಯಲಿದೆ. ಎಚ್ಚರಿಕೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0p20fk2zjjq1dtffcf9f22z,imgname-----------------------2026-08-23t062805.690-1787446705761.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಆ.23): &lt;/strong&gt;ಅಧಿಕಾರದ ಮೇಲಿನ ವ್ಯಾಮೋಹದಿಂದಾಗಿ ದೇಶವನ್ನೇ ಹಾಳುಗೆಡವುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್&zwnj; ಶಾ ಅವರನ್ನು ಜೆನ್&zwnj; ಝೀಗಳು (ಯುವ ಸಮೂಹ) ಬೆನ್ನಟ್ಟಿ ಹೊಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h2&gt;'ಧೀಮಂತ ಧುರಿಣ ಡಾ. ಮಲ್ಲಿಕಾರ್ಜುನ ಖರ್ಗೆ' ಅಭಿನಂದನಾ ಕೃತಿ ಬಿಡುಗಡೆ&lt;/h2&gt;&lt;p&gt;ನಗರದಲ್ಲಿ ಶನಿವಾರ ಸುಮೇಧ ಪ್ರಕಾಶನ ಹೊರತಂದಿರುವ &lsquo;ಧೀಮಂತ ಧುರಿಣ ಡಾ.ಮಲ್ಲಿಕಾರ್ಜುನ ಖರ್ಗೆ&rsquo; ಅಭಿನಂದನಾ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಅಧಿಕಾರದ ಆಸೆಗಾಗಿ ನೀವು (ಬಿಜೆಪಿ ನಾಯಕರು) ದೇಶದುದ್ದಗಲಕ್ಕೂ ಕೋಮು ಭಾವನೆ ಬಿತ್ತುತ್ತಾ ಹೊರಟರೆ ಯುವಕರು ನಿಮ್ಮನ್ನು ಬೆನ್ನಟ್ಟಿ ಹೊಡೀತಾರೆ ಎಂದು ಎಚ್ಚರಿಸಿದರು.&lt;/p&gt;&lt;p&gt;ಅಧಿಕಾರ ಬೇಕು, ದೇಶ ಬೇಡ. ವಂದೇ ಮಾತರಂ 2 ಚರಣ ಹೇಳ್ತೀವಿ ಅಂದ್ರೆ ದೇಶದ್ರೋಹಿ ಎನ್ನೋದು, ಪ್ರಗತಿಪರ ಚಿಂತಕರಿಗೆ ದಿಮಾಗಿ ನಕ್ಸಲ್ ಅನ್ನೋದನ್ನೆಲ್ಲಾ ಬಿಟ್ಟು ಯುವಕರಿಗೆ ಶಿಕ್ಷಣ ಕೊಡಿ, ಪರೀಕ್ಷೆ ಸರಿಯಾಗಿ ನಡೆಸಿ. ಕೋಮು ಭಾವನೆ ಕೆರಳಿಸುವ ನಿಮ್ಮ ಧೋರಣೆಯನ್ನು ಇದೇ ರೀತಿ ಮುಂದುವರಿಸಿದರೆ ಈ ದೇಶದ ಯುವಕರು ನಿಮ್ಮನ್ನು ಹಂಗೇ ಬಿಡೋದಿಲ್ಲ, ಅಟ್ಟಾಡಿಸಿಕೊಡು ಬರ್ತಾರೆ ಎಂದು ಮೋದಿ- ಶಾಗೆ ಚಾಟಿ ಬೀಸಿದರು.&lt;/p&gt;&lt;h3&gt;ಮೋದಿ ಮಾತಲ್ಲೇ ಮಾತ್ರ ಬುಲೆಟ್&zwnj;:&lt;/h3&gt;&lt;p&gt;ದೇಶದ ಶಿಕ್ಷಣ ರಂಗದಲ್ಲಿ ಅರಾಜಕತೆ ಹುಟ್ಟಿಕೊಂಡಿದೆ. ಮೋದಿ ಮನ್&zwnj; ಕೀ ಬಾತ್&zwnj; ಬಿಟ್ಟು ಜನ್&zwnj; ಕೀ ಬಾತ್&zwnj; ಹೇಳಲಿ. ಮೋದಿ ಶಿಕ್ಷಣ, ಉದ್ಯೋಗದಂತಹ ಯುವಜನರ ಸಮಸ್ಯೆಗಳತ್ತ ಗಮನ ಕೊಡುತ್ತಿಲ್ಲ. ದೌರ್ಜನ್ಯ, ಅನ್ಯಾಯ ಹೆಚ್ಚಾಗಿ ಯುವಕರು ದಂಗೆ ಏಳುತ್ತಿದ್ದಾರೆ. ಬುಲೆಟ್&zwnj; ಟ್ರೇನ್ ಕೇವಲ ಮೋದಿ ಮಾತಲ್ಲೇ ಓಡುತ್ತಿದ್ದು, ವಾಸ್ತವದಲ್ಲಿ ಮೋದಿ ಸರ್ಕಾರ ವಿದ್ಯಾರ್ಥಿಗಳ ಮೇಲೆ ಬುಲೆಟ್&zwnj; ಹಾರಿಸುತ್ತಿದೆ ಎಂದು ಖರ್ಗೆ ಟೀಕಿಸಿದರು.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/gen-z-will-chase-down-and-thrash-modi-and-shah-aicc-president-mallikarjun-kharge-warns-rav/articleshow-x3tni81"/>
        </item>
        <item>
            <title><![CDATA[ದೇಶದಲ್ಲಿ ಅತೀ ಹೆಚ್ಚು ಸಕ್ಕರೆ ತಯಾರಿಸುವ ರಾಜ್ಯ ಯಾವುದು? ಕರ್ನಾಟಕಕ್ಕೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/gallery/india-news/which-state-is-the-largest-sugar-producer-in-india-what-is-karnatakas-position-gkn-7mxxw3z</link>
            <guid isPermaLink="true">https://kannada.asianetnews.com/gallery/india-news/which-state-is-the-largest-sugar-producer-in-india-what-is-karnatakas-position-gkn-7mxxw3z</guid>
            <pubDate>Sat, 22 Aug 2026 23:39:55 +0530</pubDate>
            <description><![CDATA[&lt;p&gt;ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ ಸುಮಾರು ₹17 ರಷ್ಟು ಏರಿಕೆಯಾಗಿದ್ದು, ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಹಾಗೂ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hbkv92pys4673jbmh3xfzp,imgname-sugar-1787289005325.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ ಸುಮಾರು ₹17 ರಷ್ಟು ಏರಿಕೆಯಾಗಿದ್ದು, ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಹಾಗೂ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: &lt;/strong&gt;ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ ಕೇವಲ ಒಂದು ತಿಂಗಳ ಅವಧಿಯಲ್ಲಿ ಸಕ್ಕರೆಯ ಚಿಲ್ಲರೆ ದರ ಪ್ರತಿ ಕೆಜಿಗೆ ಸುಮಾರು ₹48.18 ರಿಂದ ಬರೋಬ್ಬರಿ ₹65 ಕ್ಕೆ ತಲುಪಿದೆ. ಅಂದರೆ ಪ್ರತಿ ಕೆಜಿಗೆ ಸರಿಸುಮಾರು ₹17 ರಷ್ಟು ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯ ನಡುವೆ ದೇಶದಲ್ಲಿ ಸಕ್ಕರೆ ಉತ್ಪಾದನೆ ಮತ್ತು ಅದರ ಮಾರುಕಟ್ಟೆಯ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.&lt;/p&gt;&lt;p&gt;ಜವಳಿ (ಟೆಕ್ಸ್&zwnj;ಟೈಲ್ಸ್) ಉದ್ಯಮದ ನಂತರ ಸಕ್ಕರೆ ಉದ್ಯಮವು ದೇಶದ ಎರಡನೇ ಅತಿ ದೊಡ್ಡ ಕೃಷಿ ಆಧಾರಿತ ಉದ್ಯಮವಾಗಿದೆ. ಇದು ಲಕ್ಷಾಂತರ ರೈತರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ. ಪ್ರಸ್ತುತ 2025-26ರ ಸಕ್ಕರೆ ಹಂಗಾಮಿನಲ್ಲಿ ಭಾರತದ ಒಟ್ಟು ಸಕ್ಕರೆ ಉತ್ಪಾದನೆಯು ಸುಮಾರು 30.6 ಮಿಲಿಯನ್ ಮೆಟ್ರಿಕ್ ಟನ್&zwnj;ಗಳಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯಗಳು ಯಾವುವು? ಮತ್ತು ಈ ಪಟ್ಟಿಯಲ್ಲಿ ನಮ್ಮ ಕರ್ನಾಟಕದ ಸ್ಥಾನ ಎಷ್ಟು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.&lt;/p&gt;&lt;img&gt;&lt;p&gt;ಸದ್ಯ ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಪ್ರಸ್ತುತ ಹಂಗಾಮಿನಲ್ಲಿ ರಾಜ್ಯದಲ್ಲಿ 200ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಮಹಾರಾಷ್ಟ್ರದ ಉಷ್ಣವಲಯದ ಮತ್ತು ಸಮುದ್ರ ಹವಾಮಾನವು ಕಬ್ಬು ಬೇಗನೆ ಒಣಗದಂತೆ ಉತ್ತಮವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲಿಷ್ಠ ಮಾದರಿಯು ರೈತರಿಗೆ ನೇರ ಪ್ರಯೋಜನ ನೀಡುತ್ತದೆ. ರಾಜ್ಯದಲ್ಲಿ ವಾರ್ಷಿಕ ಸುಮಾರು 9.92 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದ್ದು, ಪುಣೆ, ಸತಾರಾ, ಸೋಲಾಪುರ, ಅಹಮದ್&zwnj;ನಗರ ಮತ್ತು ಕೊಲ್ಹಾಪುರ ಪ್ರಮುಖ ಸಕ್ಕರೆ ಉತ್ಪಾದನಾ ಕೇಂದ್ರಗಳಾಗಿವೆ.&lt;/p&gt;&lt;img&gt;&lt;p&gt;ಉತ್ತರ ಪ್ರದೇಶವನ್ನು ಸಾಮಾನ್ಯವಾಗಿ &lsquo;ಭಾರತದ ಸಕ್ಕರೆ ಬಟ್ಟಲು&rsquo; (Sugar Bowl of India) ಎಂದು ಕರೆಯಲಾಗುತ್ತದೆ. ಕಬ್ಬು ಬೆಳೆಯುವ ಅತ್ಯಂತ ದೊಡ್ಡ ವಿಸ್ತೀರ್ಣವನ್ನು ಹೊಂದಿರುವ ಹೆಗ್ಗಳಿಕೆ ಈ ರಾಜ್ಯದ್ದಾಗಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೂ, ಕಬ್ಬು ಬೆಳೆಯುವ ಒಟ್ಟು ವಿಸ್ತೀರ್ಣದಲ್ಲಿ ಉತ್ತರ ಪ್ರದೇಶವೇ ಮುಂಚೂಣಿಯಲ್ಲಿದೆ. ಇಲ್ಲಿ ವಾರ್ಷಿಕ ಸುಮಾರು 8.92 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ಇಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳ ಪಾತ್ರ ದೊಡ್ಡದಾಗಿದೆ. ಮುಜಾಫರ್&zwnj;ನಗರ, ಮೀರತ್, ಬಿಜ್ನೋರ್, ಸಹರಾನ್&zwnj;ಪುರ ಮತ್ತು ಗೋರಖ್&zwnj;ಪುರ ಪ್ರಮುಖ ಉತ್ಪಾದನಾ ಕೇಂದ್ರಗಳಾಗಿವೆ.&lt;/p&gt;&lt;img&gt;&lt;p&gt;ಕರ್ನಾಟಕ (ತೃತೀಯ ಸ್ಥಾನ)&lt;/p&gt;&lt;img&gt;&lt;p&gt;ಗುಜರಾತ್ ನಾಲ್ಕನೇ ಸ್ಥಾನದಲ್ಲಿದ್ದು, ಇಲ್ಲಿ ವಾರ್ಷಿಕ ಸುಮಾರು 1.1 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ಇಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲಿಷ್ಠ ಜಾಲ ಮತ್ತು ಸುಧಾರಿತ ಬೇಸಾಯ ಪದ್ಧತಿಗೆ ಈ ರಾಜ್ಯ ಹೆಸರುವಾಸಿಯಾಗಿದೆ. ದಕ್ಷಿಣ ಗುಜರಾತ್&zwnj;ನ ಮೈದಾನ ಮತ್ತು ಕರಾವಳಿ ಪ್ರದೇಶಗಳಲ್ಲಿ ಕಬ್ಬನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.&lt;/p&gt;&lt;img&gt;&lt;p&gt;ಟಾಪ್ 5 ಪಟ್ಟಿಯಲ್ಲಿ ತಮಿಳುನಾಡು ಕೊನೆಯ ಸ್ಥಾನದಲ್ಲಿದೆ. ಇಲ್ಲಿ ವಾರ್ಷಿಕ ಸುಮಾರು 0.9 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ತಮಿಳುನಾಡಿನ ಬಿಸಿ ಹವಾಮಾನದಿಂದಾಗಿ ಇಲ್ಲಿ ದೀರ್ಘಕಾಲದವರೆಗೆ ಕಬ್ಬು ಕಟಾವು ಮತ್ತು ಅರೆಯುವಿಕೆ ಕಾರ್ಯ ನಡೆಯುತ್ತದೆ. ಇಲ್ಲಿನ ರೈತರು ನೀರಿನ ಸದ್ಬಳಕೆಗಾಗಿ ಹನಿ ನೀರಾವರಿ (Drip Irrigation) ಯಂತಹ ಆಧುನಿಕ ಕೃಷಿ ಪದ್ಧತಿಗಳನ್ನು ಹೆಚ್ಚಾಗಿ ಬಳಸುತ್ತಾರೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/india-news/which-state-is-the-largest-sugar-producer-in-india-what-is-karnatakas-position-gkn-7mxxw3z"/>
        </item>
        <item>
            <title><![CDATA[Saifullah Kasuri: ಪಿಒಕೆ ಹೊತ್ತಿ ಉರಿಯವ ಹೊತ್ತಲ್ಲಿ ಕಾಶ್ಮೀರದ ಬಗ್ಗೆ ವಿಷ ಕಕ್ಕಿದ ಲಷ್ಕರ್ ಉಗ್ರ!]]></title>
            <link>https://kannada.asianetnews.com/india-news/lashkar-commander-saifullah-kasuri-incites-violence-over-kashmir-amid-pok-protests/articleshow-x0hgv2a</link>
            <guid isPermaLink="true">https://kannada.asianetnews.com/india-news/lashkar-commander-saifullah-kasuri-incites-violence-over-kashmir-amid-pok-protests/articleshow-x0hgv2a</guid>
            <pubDate>Sat, 22 Aug 2026 23:12:01 +0530</pubDate>
            <description><![CDATA[&lt;p&gt;ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವಾಗಲೇ, ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಉಪ ಕಮಾಂಡರ್ ಸೈಫುಲ್ಲಾ ಕಸೂರಿಯ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0n8815h4h9efj5cbv5avpc8,imgname-----------------------2026-08-22t224928.757-1787419690161.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಾಕ್ ಆಕ್ರಮಿತ ಕಾಶ್ಮೀರ (PoK) ಪಾಕಿಸ್ತಾನ ಸರ್ಕಾರದ ವಿರುದ್ಧದ ಪ್ರತಿಭಟನೆಗಳಿಂದ ಹೊತ್ತಿ ಉರಿಯುತ್ತಿದೆ. ನಾಗರಿಕರ ಮೇಲೆ ಪಾಕಿಸ್ತಾನ ಸೈನಿಕರು ನಿರ್ದಯವಾಗಿ ಗುಂಡು ಹಾರಿಸಲಾಗುತ್ತಿದೆ. ಪಿಒಕೆ ಜನರು ಪಾಕಿಸ್ತಾನ ವಿರುದ್ಧ ಸಂಘರ್ಷಕ್ಕಿಳಿದು ತೀವ್ರ ಹಿಂಸಾಚಾರ, ಸಾವು ನೋವು ಸಂಭವಿಸಿರುವ ಹೊತ್ತಲ್ಲಿ ಉಗ್ರ ಸಂಘಟನೆಗಳು ತಮ್ಮ ಹಳೆಯ ಚಾಳಿ ಮುಂದುವರಿಸಿವೆ. ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಉಪ ಕಮಾಂಡರ್ ಸೈಫುಲ್ಲಾ ಕಸೂರಿಯ ಹೊಸ ವಿಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ಆತ ಕಾಶ್ಮೀರದ ಬಗ್ಗೆ ವಿಷ ಕಾರಿದ್ದಾನೆ.&lt;/p&gt;&lt;h2&gt;ಸೈಫುಲ್ಲಾ ಕಸೂರಿ ವಿಡಿಯೋದಲ್ಲಿ ಏನಿದೆ?&lt;/h2&gt;&lt;p&gt;ಈ ವಿಡಿಯೋದಲ್ಲಿ ಕಸೂರಿ, ಭಾರತದ ವಿರುದ್ಧ ಅತ್ಯಂತ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾನೆ. ಕಾಶ್ಮೀರದಲ್ಲಿ 'ಗೆಲುವು' ಸಾಧಿಸುವುದನ್ನು 'ಗಜ್ವಾ-ಎ-ಹಿಂದ್'ಗೆ ಹೋಲಿಸಿರುವ ಆತ, 'ಕಯಾಮತ್' ಬರುವವರೆಗೂ ಈ ಸಂಘರ್ಷ ಮುಂದುವರಿಯಲಿದೆ ಎಂದು ಹೇಳಿಕೊಂಡಿದ್ದಾನೆ. ಪಿಒಕೆಯಲ್ಲಿ ಜನರು ಬೀದಿಗಿಳಿದು ಹೋರಾಡುತ್ತಿರುವಾಗ, ಉಗ್ರರು ಮಾತ್ರ ಕಾಶ್ಮೀರದ ಬಗ್ಗೆಯೇ ಮಾತನಾಡುತ್ತಿರುವುದು ವಿಪರ್ಯಾಸ.&lt;/p&gt;&lt;h3&gt;ಯಾರೀ ಸೈಫುಲ್ಲಾ ಕಸೂರಿ?&lt;/h3&gt;&lt;p&gt;ಸೈಫುಲ್ಲಾ ಕಸೂರಿ, ಕುಖ್ಯಾತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಪ್ರಮುಖ ನಾಯಕರಲ್ಲಿ ಒಬ್ಬ. ಈತನನ್ನು ಜಾಗತಿಕ ಉಗ್ರ ಹಫೀಜ್ ಸಯೀದ್&zwnj;ನ ಆಪ್ತ ಎಂದೇ ಪರಿಗಣಿಸಲಾಗುತ್ತದೆ. ಭಾರತದ ವಿರುದ್ಧ ನಡೆದ ಅನೇಕ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಈತನ ಹೆಸರು ಈ ಹಿಂದೆಯೂ ಕೇಳಿಬಂದಿತ್ತು.&lt;/p&gt;&lt;p&gt;ಭಾರತೀಯ ಸೇನೆಯು ಈ ಹಿಂದೆ ಪಹಲ್ಗಾಮ್ ಮೇಲಿನ ದಾಳಿಗೆ ಪ್ರತೀಕಾರವಾಗಿ 'ಆಪರೇಷನ್ ಸಿಂದೂರ್' ನಡೆಸಿತ್ತು. ಈ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಿಒಕೆಯಲ್ಲಿದ್ದ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಲಾಗಿತ್ತು. ಇಷ್ಟೆಲ್ಲಾ ಕಠಿಣ ಕ್ರಮಗಳ ಬಳಿಕವೂ, ಕಸೂರಿಯಂತಹ ಉಗ್ರರು ಮತ್ತೆ ತಲೆ ಎತ್ತುತ್ತಿರುವುದು, ಉಗ್ರ ಸಂಘಟನೆಗಳ ಹಳೆಯ ನಿರೂಪಣೆಗೆ ಹಿಡಿದ ಕನ್ನಡಿಯಾಗಿದೆ.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/lashkar-commander-saifullah-kasuri-incites-violence-over-kashmir-amid-pok-protests/articleshow-x0hgv2a"/>
        </item>
        <item>
            <title><![CDATA[Tragic Incident: ಐಫೋನ್ ದುರಂತಕ್ಕೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ವಿಡಿಯೋ ಬಹಿರಂಗ! ಕರಳು ಹಿಂಡುವಂತಿದೆ ಆ ತಾಯಿಯ ಅಂತಿಮ ಮಾತು!]]></title>
            <link>https://kannada.asianetnews.com/viral/iphone-death-case-new-video-mothers-plea-investigation-big-twist-emotional-shocking-viral-news-bmk/articleshow-ea3sik6</link>
            <guid isPermaLink="true">https://kannada.asianetnews.com/viral/iphone-death-case-new-video-mothers-plea-investigation-big-twist-emotional-shocking-viral-news-bmk/articleshow-ea3sik6</guid>
            <pubDate>Sat, 22 Aug 2026 22:20:33 +0530</pubDate>
            <description><![CDATA[ಹೊಸ ಐಫೋನ್&zwnj;ಗಾಗಿ ಬೆಟ್ಟದ ತುದಿಯಿಂದ ಜಿಗಿಯುವುದಾಗಿ ಬೆದರಿಸಿದ ಯುವಕನ ಹಠವು ಮಹಾ ದುರಂತಕ್ಕೆ ಕಾರಣವಾಗಿದೆ. ಮಗನನ್ನು ರಕ್ಷಿಸಲು ಹೋದ ಪೋಷಕರು ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದು, ಮಗನೊಂದಿಗೆ ಪ್ರಾಣ ಕಳೆದುಕೊಂಡರು. ಈ ಆಘಾತಕಾರಿ ಘಟನೆಯು ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0n60p3dm78vrfzjp9ny0wz9,imgname-maharastra-i-phone-case--1787417352300.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ 'ಖಾವದ್ಯ ಡೊಂಗರ್' ಬೆಟ್ಟದಲ್ಲಿ ಹೃದಯವಿದ್ರಾವಕ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಹೊಸ ಐಫೋನ್ (iPhone) ಕೊಡ್ಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಂದೆಯೊಂದಿಗೆ ಜಗಳವಾಡಿದ 19 ವರ್ಷದ ಕುನಾಲ್ ಚಂದಗುಡೆ ಎಂಬ ಯುವಕ, ಬೆಟ್ಟದ ತುದಿಗೆ ಹತ್ತಿ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿದ್ದ. ಆತನನ್ನು ರಕ್ಷಿಸಲು ಹೋದ ತಂದೆ ಮತ್ತು ತಾಯಿ ಇಬ್ಬರೂ ಕಣ್ಣೆದುರೇ ಜೀವ ಕಳೆದುಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಕುಟುಂಬವೇ ನಾಶವಾಗಿದೆ.&lt;/p&gt;&lt;h2&gt;&lt;strong&gt;&quot;ನಾನು ನಿನ್ನ ಪಾದಕ್ಕೆ ಬೀಳುತ್ತೇನೆ ಕೆಳಗೆ ಬಾ ಮಗನೇ...&quot;: ತಾಯಿಯ ಕರುಣಾಜನಕ ರೋದನ!&lt;/strong&gt;&lt;/h2&gt;&lt;p&gt;ಘಟನೆಯ ತನಿಖೆಯ ವೇಳೆ ಲಭ್ಯವಾಗಿರುವ ವೀಡಿಯೊದಲ್ಲಿ, ಕುನಾಲ್ ಅವರ ತಾಯಿ ಸಂಗೀತಾ ಚಂದಗುಡೆ ತಮ್ಮ ಮಗನನ್ನು ಉಳಿಸಿಕೊಳ್ಳಲು ಅಂತಿಮ ಕ್ಷಣದವರೆಗೂ ಪಟ್ಟ ಶ್ರಮ ಮನ ಕಲಕುವಂತಿದೆ. ಮಗನ ಮುಂದೆ ಕೈಮುಗಿದು ಬೇಡಿಕೊಳ್ಳುವ ತಾಯಿ, ನಾನು ನಿನ್ನ ಪಾದಗಳಿಗೆ ಬೀಳುತ್ತೇನೆ, ದಯವಿಟ್ಟು ಕೆಳಗೆ ಬಾ... ಹೀಗೆ ಮಾಡಬೇಡ ಮಗನೇ.&quot; ಎಂದು ಅಳುತ್ತಾ ಗೋಗರೆಯುತ್ತಾರೆ. ಮಗ ಹಿಂದೆ ಸರಿಯುವಂತೆ ಹೇಳಿದಾಗ ತಾಯಿ ಕೆಲವು ಹೆಜ್ಜೆ ಹಿಂದೆ ಸರಿತಾರಾದರೂ, ಕುನಾಲ್ ಆತನ ಪಟ್ಟು ಸಡಿಲಿಸುವುದಿಲ್ಲ. ಮಗನನ್ನು ರಕ್ಷಿಸಲು ಬೇರೆ ದಾರಿ ಕಾಣದೆ ತಾಯಿ ಆ ಭಾವೋದ್ವೇಗದಲ್ಲಿ ತನ್ನ ತಲೆಯನ್ನು ನೆಲಕ್ಕೆ ಅಪ್ಪಳಿಸಿಕೊಂಡು ಬೇಡಿಕೊಂಡರೂ ಆತ ಮನಸ್ಸನ್ನು ಬದಲಾಯಿಸುವುದಿಲ್ಲ. ಸ್ಥಳದಲ್ಲಿದ್ದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಗಂಟೆಗಳ ಕಾಲ ಆತನ ಮನವೊಲಿಸಲು ತೀವ್ರ ಪ್ರಯತ್ನ ನಡೆಸಿದರು. &quot;ಮತ್ತೆ ಜೀವ ಸಿಗುವುದಿಲ್ಲ, ಹಿಂತಿರುಗಿ ಬಾ&quot; ಎಂದು ಎಷ್ಟೇ ತಿಳಿಹೇಳಿದರೂ ಆತ ಜಿಗಿಯುವ ಬೆದರಿಕೆಯೊಡ್ಡುತ್ತಲೇ ಇದ್ದ.&lt;/p&gt;&lt;h3&gt;&lt;strong&gt;ಕಂದಕಕ್ಕೆ ಬಿದ್ದು ಪ್ರಾಣ ತೆತ್ತ ಪೋಷಕರು!&lt;/strong&gt;&lt;/h3&gt;&lt;p&gt;ಮಗನನ್ನು ಹೇಗಾದರೂ ಮಾಡಿ ಸುರಕ್ಷಿತವಾಗಿ ಹಿಡಿದು ಕೆಳಗೆ ಎಳೆಯಬೇಕೆಂದು ಆತನ ಬಳಿಗೆ ಹೋದ ತಂದೆ ಮುರಳೀಧರ್ ಚಂದಗುಡೆ, ಬೆಟ್ಟದ ತುದಿಯಲ್ಲಿ ಹಠಾತ್ತಾಗಿ ಸಮತೋಲನ ತಪ್ಪಿದರು. ಕಂದಕಕ್ಕೆ ಬೀಳುವಾಗ ಅವರು ಮಗ ಕುನಾಲ್&zwnj;ನನ್ನು ರಕ್ಷಿಸಲು ಹಿಡಿಯಲು ಯತ್ನಿಸಿದಾಗ, ಇಬ್ಬರೂ ಆಳವಾದ ಕಂದಕಕ್ಕೆ ಬಿದ್ದರು. ತನ್ನ ಕಣ್ಣೆದುರೇ ಗಂಡ ಮತ್ತು ಮಗ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದನ್ನು ಕಂಡ ತಾಯಿ ಸಂಗೀತಾಗೆ ಆ ಆಘಾತವನ್ನು ತಡೆಯಲಾಗಲಿಲ್ಲ. ತೀವ್ರ ಮಾನಸಿಕ ಆಘಾತಕ್ಕೊಳಗಾದ ಅವರು, ಮರುಕ್ಷಣದಲ್ಲೇ ಅದೇ ಕಂದಕಕ್ಕೆ ಜಿಗಿದರು. ಕೇವಲ ಕೆಲವೇ ಸೆಕೆಂಡುಗಳ ಅಂತರದಲ್ಲಿ ಕುಟುಂಬದ ಮೂವರೂ ದಾರುಣವಾಗಿ ಪ್ರಾಣ ಕಳೆದುಕೊಂಡರು.&lt;/p&gt;&lt;h3&gt;&lt;strong&gt;ಕ್ಷುಲ್ಲಕ ವಿಷಯದಿಂದ ಉಂಟಾದ ಮಹಾ ದುರಂತ!&lt;/strong&gt;&lt;/h3&gt;&lt;p&gt;ಕೇವಲ ಒಂದು ಹೊಸ ಮೊಬೈಲ್ ಫೋನ್&zwnj;ಗಾಗಿ ನಡೆದ ಸಣ್ಣ ವಾಗ್ವಾದ, ಕೊನೆಗೆ ಸುಂದರ ಕುಟುಂಬವೊಂದನ್ನು ಹೀಗೆ ಉಸಿರುಗಟ್ಟಿಸಿ ಕೊನೆಗೊಳಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಘಟನೆಯಿಂದ ಇಡೀ ಛತ್ರಪತಿ ಸಂಭಾಜಿನಗರದಲ್ಲಿ ಶೋಕಸಾಗರ ಆವರಿಸಿದೆ. ಯುವ ಪೀಳಿಗೆಯ ಹಠಮಾರಿತನ ಹಾಗೂ ತತ್ಕ್ಷಣದ ಆವೇಶಗಳು ಹೇಗೆ ಇಡೀ ಕುಟುಂಬವನ್ನೇ ಬಲಿಪಡೆಯಬಲ್ಲವು ಎಂಬುದಕ್ಕೆ ಈ ಘಟನೆ ಕಣ್ಣೀರಿನ ಸಾಕ್ಷಿಯಾಗಿದೆ.&lt;/p&gt;&lt;p&gt;(&lt;strong&gt;ಹಕ್ಕುತ್ಯಾಗ: &lt;/strong&gt;ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಖಿನ್ನತೆಗೆ ಒಳಗಾಗಿದ್ದರೆ ಅಥವಾ ಸ್ವಯಂ-ಹಾನಿ ಮಾಡಿಕೊಳ್ಳುವ ಆಲೋಚನೆಗಳನ್ನು ಹೊಂದಿದ್ದರೆ, ದಯವಿಟ್ಟು ತಕ್ಷಣವೇ ವೈದ್ಯಕೀಯ ಸಹಾಯ ಪಡೆಯಿರಿ. ಅಮೂಲ್ಯವಾದ ಜೀವವನ್ನು ಉಳಿಸಲು ಭಾರತ ಸರ್ಕಾರದ ಜೀವನ್ ಸತಿ ಸಹಾಯವಾಣಿ ಸಂಖ್ಯೆ 18002333330 ಅನ್ನು ಸಂಪರ್ಕಿಸಿ.)&lt;/p&gt;]]></content:encoded>
            <category>india-news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/iphone-death-case-new-video-mothers-plea-investigation-big-twist-emotional-shocking-viral-news-bmk/articleshow-ea3sik6"/>
        </item>
        <item>
            <title><![CDATA[Dimagi Naxals: 'ನಮಗೆ ದೇಶಭಕ್ತಿಯ ಪಾಠ ಮಾಡಬೇಡಿ..' ಪ್ರಧಾನಿ ಮೋದಿ ದಿಮಾಗಿ ನಕ್ಸಲ್ ಹೇಳಿಕೆಗೆ ಖರ್ಗೆ ತಿರುಗೇಟು!]]></title>
            <link>https://kannada.asianetnews.com/india-news/dimagi-naxals-row-kharge-hits-back-at-pm-modi-s-remark-says-dont-teach-us-patriotism-rav/articleshow-ww10dmo</link>
            <guid isPermaLink="true">https://kannada.asianetnews.com/india-news/dimagi-naxals-row-kharge-hits-back-at-pm-modi-s-remark-says-dont-teach-us-patriotism-rav/articleshow-ww10dmo</guid>
            <pubDate>Sat, 22 Aug 2026 21:54:58 +0530</pubDate>
            <description><![CDATA[&lt;p&gt;ಪ್ರಧಾನಿ ಮೋದಿಯವರ 'ದಿಮಾಗಿ ನಕ್ಸಲ್' ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಗಮನಹರಿಸಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-b9f03e5a-52e5-433c-a3c1-268b2c39bcc2.jpg" type="image/jpeg" height="390" width="690"/>
            <content:encoded><![CDATA[&lt;h2&gt;'ದಿಮಾಗಿ ನಕ್ಸಲ್' ಹೇಳಿಕೆಗೆ ಖರ್ಗೆ ಕಿಡಿ&lt;/h2&gt;&lt;p&gt;ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC Chief Mallikarjun kharge)ಯವರು ಶನಿವಾರ ಪ್ರಧಾನಿ ನರೇಂದ್ರ ಮೋದಿ(Prime minister Modi)ಯವರ 'ದಿಮಾಗಿ ನಕ್ಸಲ್' ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಹೂಡಿಕೆಯಂತಹ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ. 'ಪ್ರಧಾನಿ ಮೋದಿ 'ದಿಮಾಗಿ ನಕ್ಸಲ್' ಅನ್ನೋ ಹೊಸ ಪದ ಬಳಸುತ್ತಿದ್ದಾರೆ. ಹಾಗಾದರೆ ನಾವೆಲ್ಲರೂ 'ದಿಮಾಗಿ ನಕ್ಸಲರೇ' ಆಯಿತು. ದೇಶಕ್ಕಾಗಿ ನೀವೇನು ಮಾಡುತ್ತಿದ್ದೀರಿ ಅಂತ ಮಾತಾಡಿ. ಉದ್ಯೋಗ, ಹಣದುಬ್ಬರ, ಹೂಡಿಕೆ, ದೇಶದ ಜನರಿಗೆ ಕೆಲಸ ಕೊಡುವ ಬಗ್ಗೆ ಮಾತಾಡಿ. ಇದೆಲ್ಲವನ್ನೂ ಬಿಟ್ಟು, ವಂದೇ ಮಾತರಂ ಹಾಡಲಿಲ್ಲ ಅಂತ ಮಾತಾಡ್ತೀರಿ' ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.&lt;/p&gt;&lt;h3&gt;ಬಿಜೆಪಿಯ ದೇಶಭಕ್ತಿಯನ್ನೇ ಪ್ರಶ್ನಿಸಿದ ಖರ್ಗೆ&lt;/h3&gt;&lt;p&gt;ಈ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ತ್ಯಾಗ ಮಾಡಿದೆ. ನಾವೇನು ದೇಶದ್ರೋಹಿಗಳಾ? ನಾವು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ. ನೀವಾದರೆ ಬ್ರಿಟಿಷರಿಗೆ ಶರಣಾಗಿ, ಕ್ಷಮಾಪಣೆ ಪತ್ರ ಬರೆದುಕೊಟ್ಟವರು. ಇವತ್ತು ನೀವು ದೇಶಭಕ್ತರು ಅಂತ ಹೇಳಿಕೊಳ್ತಿದ್ದೀರಿ. ನಿಮಗೆ ನಾಚಿಕೆಯಾಗುವುದಿಲ್ಲವೇ? ಇವತ್ತು ಅವರು, 'ನಾವು ದೇಶಭಕ್ತರು, ವಂದೇ ಮಾತರಂ ಹಾಡದವರು ದೇಶದ್ರೋಹಿಗಳು' ಅಂತ ನಮಗೆ ಹೇಳ್ತಾರೆ. ಪ್ರಧಾನಿ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಹಾಡಲಿಲ್ಲ? ಅವರಿಗೆ ಬೇಕಿದ್ದರೆ ಪೂರ್ತಿ ಹಾಡನ್ನು ಹಾಡಬೇಕಿತ್ತು. ಸತ್ಯ ಏನೆಂದರೆ, ನಿಮಗೆ ಅದನ್ನು ಓದಕ್ಕೂ ಬರುವುದಿಲ್ಲ. ನಾಳೆ ಸರ್ಕಾರಗಳು ಬದಲಾಗುತ್ತವೆ. ನಾಳೆ ಬೇರೆ ಸರ್ಕಾರ ಬಂದು, 'ಇದೆಲ್ಲಾ ಬೇಡ' ಅಂದರೆ, ನೀವು ಮತ್ತೆ ಬದಲಾಯಿಸುತ್ತೀರಾ?' ಎಂದು ಖರ್ಗೆ ಪ್ರಶ್ನಿಸಿದ್ದಾರೆ.&lt;/p&gt;&lt;h3&gt;'ದಿಮಾಗಿ ನಕ್ಸಲ್' ಹೇಳಿಕೆಯ ಹಿನ್ನೆಲೆ&lt;/h3&gt;&lt;p&gt;ವಂದೇ ಮಾತರಂ ವಿಚಾರವಾಗಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ವಾಕ್ಸಮರ ನಡೆಯುತ್ತಿರುವ ಹೊತ್ತಲ್ಲೇ ಈ ಹೇಳಿಕೆಗಳು ಬಂದಿವೆ. ಕೆಂಪುಕೋಟೆಯ ಮೇಲಿಂದ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು, 'ಕಾಡುಗಳಲ್ಲಿ ಶಸ್ತ್ರ ಹಿಡಿದ ನಕ್ಸಲರನ್ನು ಮಟ್ಟ ಹಾಕಲಾಗಿದೆ. ಆದರೆ ದೇಶದ ಬೇರೆ ಬೇರೆ ಭಾಗಗಳಲ್ಲಿ 'ದಿಮಾಗಿ ನಕ್ಸಲರು' ಇದ್ದಾರೆ. ಅವರನ್ನು 'ಗುರುತಿಸಿ, ಪ್ರತ್ಯೇಕಿಸಬೇಕು' ಎಂದು ಹೇಳಿದ್ದರು.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/dimagi-naxals-row-kharge-hits-back-at-pm-modi-s-remark-says-dont-teach-us-patriotism-rav/articleshow-ww10dmo"/>
        </item>
        <item>
            <title><![CDATA[ನಾಲ್ಕು ವರ್ಷದ ಮಕ್ಕಳಿಗೆ ಈ ಔಷಧಿ ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ]]></title>
            <link>https://kannada.asianetnews.com/health-life/central-govt-restricts-use-of-chlorpheniramine-and-phenylephrine-combinations-for-children-below-four-years-gkn/articleshow-hfzf7w5</link>
            <guid isPermaLink="true">https://kannada.asianetnews.com/health-life/central-govt-restricts-use-of-chlorpheniramine-and-phenylephrine-combinations-for-children-below-four-years-gkn/articleshow-hfzf7w5</guid>
            <pubDate>Sat, 22 Aug 2026 21:38:40 +0530</pubDate>
            <description><![CDATA[&lt;p&gt;4 ವರ್ಷದೊಳಗಿನ ಮಕ್ಕಳಿಗೆ ಶೀತ ಮತ್ತು ಅಲರ್ಜಿಗಾಗಿ ಬಳಸಲಾಗುವ ಕ್ಲೋರ್&zwnj;ಫೆನಿರಮೈನ್ ಮಲೇಟ್ ಹಾಗೂ ಫೆನೈಲೆಫ್ರಿನ್ ಹೈಡ್ರೋಕ್ಲೋರೈಡ್ ಕಾಂಬಿನೇಷನ್ (FDC) ಔಷಧಗಳ ಬಳಕೆಯನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಔಷಧಗಳ ಲೇಬಲ್ ಮತ್ತು ಪ್ಯಾಕೆಟ್&zwnj;ಗಳ ಮೇಲೆ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಇದನ್ನು ಬಳಸಬಾರದು ಎಂಬ ಎಚ್ಚರಿಕೆಯನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0n3bv0gng7v19nvb3mtnhpd,imgname-chlorpheniramine-and-phenylephrine-combinationschlorpheniramine-and-phenylephrine-combinations-1787414572048.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶೀತ ಮತ್ತು ಅಲರ್ಜಿಗಾಗಿ ಸಾಮಾನ್ಯವಾಗಿ ಬಳಸಲಾಗುವ &quot;ಕ್ಲೋರ್&zwnj;ಫೆನಿರಮೈನ್ ಮಲೇಟ್&quot; (Chlorpheniramine Maleate) ಮತ್ತು &quot;ಫೆನೈಲೆಫ್ರಿನ್ ಹೈಡ್ರೋಕ್ಲೋರೈಡ್&quot; (Phenylephrine Hydrochloride) ಒಳಗೊಂಡಿರುವ ಡೋಸ್ ಸಂಯೋಜನೆ (FDC - Fixed-Dose Combination) ಔಷಧಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ.&lt;/p&gt;&lt;h2&gt;&lt;strong&gt;ಲೇಬಲ್ ಮೇಲೆ ಎಚ್ಚರಿಕೆ ಸಂದೇಶ&lt;/strong&gt;&lt;/h2&gt;&lt;p&gt;ಹೊಸ ಆದೇಶದ ಪ್ರಕಾರ.. ಇನ್ನು ಮುಂದೆ ಔಷಧ ತಯಾರಕರು ತಮ್ಮ ಉತ್ಪನ್ನಗಳ ಲೇಬಲ್, ಪ್ಯಾಕೇಜ್ ಮತ್ತು ಪ್ರಚಾರದ ಪತ್ರಗಳ ಮೇಲೆ ಈ ಸ್ಥಿರ ಡೋಸ್ ಸಂಯೋಜನೆಯನ್ನು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಬಳಸಬಾರದು (Fixed Dose Combination shall not be used in children below four years of age) ಎಂಬ ಎಚ್ಚರಿಕೆ ಸಂದೇಶವನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಪ್ರಮುಖವಾಗಿ ಪ್ರದರ್ಶಿಸಬೇಕೆಂದು ಸರ್ಕಾರ ಆದೇಶಿಸಿದೆ.&lt;/p&gt;&lt;h2&gt;&lt;strong&gt;ಏಕೆ ಈ ನಿರ್ಬಂಧ?&lt;/strong&gt;&lt;/h2&gt;&lt;p&gt;ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಣ್ಣ ಮಕ್ಕಳಿಗೆ ಈ ಕಾಂಬಿನೇಷನ್ ಔಷಧಗಳನ್ನು ನೀಡುವುದು ಅವರ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ಸರ್ಕಾರ ತಿಳಿಸಿದೆ. ಅಲ್ಲದೆ ಇವುಗಳಿಗೆ ಬದಲಾಗಿ ಮಕ್ಕಳಿಗೆ ನೀಡಲು ಅತ್ಯಂತ ಸುರಕ್ಷಿತವಾದ ಪರ್ಯಾಯ ಔಷಧಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಔಷಧ ತಜ್ಞರ ಸಮಿತಿ (Expert Committee) ಮತ್ತು ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (DTAB) ನೀಡಿದ ಅತ್ಯಂತ ಪ್ರಮುಖ ತಾಂತ್ರಿಕ ಶಿಫಾರಸುಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಹೆಜ್ಜೆಯನ್ನಿಟ್ಟಿದೆ. ಇದೇ ವರ್ಷ ಜೂನ್ ತಿಂಗಳಿನಲ್ಲಿಯೂ ಸಹ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾನವ ಬಳಕೆಗೆ ಯೋಗ್ಯವಲ್ಲದ ಮತ್ತು ಸೂಕ್ತ ವೈಜ್ಞಾನಿಕ ಪುರಾವೆಗಳಿಲ್ಲದ ಒಟ್ಟು 16 'ಸ್ಥಿರ ಡೋಸ್ ಸಂಯೋಜನೆ' (FDC) ಔಷಧಿಗಳ ತಯಾರಿಕೆ, ಮಾರಾಟ ಹಾಗೂ ವಿತರಣೆಯನ್ನು ದೇಶಾದ್ಯಂತ ನಿಷೇಧಿಸಿತ್ತು. ಪ್ರಸ್ತುತ ಆದೇಶವು ಸಣ್ಣ ಮಕ್ಕಳಲ್ಲಿ ಸಂಭವಿಸಬಹುದಾದ ಔಷಧೀಯ ಅಡ್ಡಪರಿಣಾಮಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎನ್ನಲಾಗಿದೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/health-life/central-govt-restricts-use-of-chlorpheniramine-and-phenylephrine-combinations-for-children-below-four-years-gkn/articleshow-hfzf7w5"/>
        </item>
        <item>
            <title><![CDATA[Niti Ayoga: ದೇಶದ 8.7 ಕೋಟಿ ಯುವಕರು ಏನು ಮಾಡುತ್ತಿದ್ದಾರೆ? ನೀತಿ ಆಯೋಗದ ವರದಿ ಬಿಚ್ಚಿಟ್ಟ ಶಾಕಿಂಗ್ ಸತ್ಯ!]]></title>
            <link>https://kannada.asianetnews.com/india-news/8-7-crore-indian-youth-niti-aayog-report-youth-employment-unemployment-shocking-facts-bmk/articleshow-nl2fbga</link>
            <guid isPermaLink="true">https://kannada.asianetnews.com/india-news/8-7-crore-indian-youth-niti-aayog-report-youth-employment-unemployment-shocking-facts-bmk/articleshow-nl2fbga</guid>
            <pubDate>Sat, 22 Aug 2026 21:32:30 +0530</pubDate>
            <description><![CDATA[&lt;p&gt;ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ದೇಶದ 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ಯಾವುದೇ ಕೌಶಲ್ಯ ತರಬೇತಿಯಿಂದ ಹೊರಗುಳಿದಿದ್ದಾರೆ. ಹೆಚ್ಚುತ್ತಿರುವ ಶಿಕ್ಷಣದ ವೆಚ್ಚ ಮತ್ತು ಪ್ರಾಯೋಗಿಕ ಕೌಶಲ್ಯಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಆರ್ಥಿಕ ನೆರವು ಹಾಗೂ 'ಗಳಿಸುತ್ತಲೇ ಕಲಿಯಿರಿ' ಯೋಜನೆಗಳಂತಹ ಪರಿಹಾರಗಳನ್ನು ವರದಿ ಶಿಫಾರಸು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0n3asssjyjpca0fcs0kwczc,imgname-niti-ayoga-1787414538040.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಉದ್ಯೋಗ ಹಾಗೂ ಶಿಕ್ಷಣ ವಲಯದಲ್ಲಿ ತೀವ್ರ ಕಳವಳಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ನೀತಿ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿರುವ 'ವೈವಿಧ್ಯಮಯ ಭಾರತಕ್ಕಾಗಿ ಕೌಶಲ್ಯವನ್ನು ಮರು ಕಲ್ಪಿಸುವುದು@2047' ವರದಿಯ ಪ್ರಕಾರ, ದೇಶದಲ್ಲಿ 15 ರಿಂದ 29 ವರ್ಷದೊಳಗಿನ ಸುಮಾರು 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ಯಾವುದೇ ಕೌಶಲ್ಯ ತರಬೇತಿಯಲ್ಲಿ ತೊಡಗಿಸಿಕೊಂಡಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಯುವಕರನ್ನು 'NEET' (Not in Education, Employment, or Training) ಎಂದು ಕರೆಯಲಾಗುತ್ತದೆ. ರಾಷ್ಟ್ರೀಯ ಮಾದರಿ ಸಮೀಕ್ಷೆಯ (NSSO) 78 ನೇ ಸುತ್ತಿನ ದತ್ತಾಂಶವನ್ನು ಆಧರಿಸಿ ತಯಾರಿಸಲಾದ ಈ ವರದಿಯು, ಯುವಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಮಾರುಕಟ್ಟೆಯ ನಡುವಿನ ಕೊಂಡಿಯನ್ನು ಬಲಪಡಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದೆ.&lt;/p&gt;&lt;h2&gt;&lt;strong&gt;ಯುವಕರು ಈ ಪರಿಸ್ಥಿತಿಗೆ ಸಿಲುಕಲು ಪ್ರಮುಖ ಕಾರಣಗಳು!&lt;/strong&gt;&lt;/h2&gt;&lt;p&gt;ಹೆಚ್ಚುತ್ತಿರುವ ಶಿಕ್ಷಣದ ವೆಚ್ಚ; ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಈಗಾಗಲೇ ಕಾಲೇಜು ಶುಲ್ಕ, ಖಾಸಗಿ ಬೋಧನೆ (ಟ್ಯೂಷನ್) ಹಾಗೂ ಇತರ ಶೈಕ್ಷಣಿಕ ವೆಚ್ಚಗಳಿಗಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಿರುತ್ತವೆ. ಹೀಗಾಗಿ, ಪದವಿ ಮುಗಿದ ನಂತರ ಹೆಚ್ಚುವರಿ ಕೌಶಲ್ಯ ಕೋರ್ಸ್&zwnj;ಗಳಿಗೆ ಹಣ ಪಾವತಿಸುವುದು ಆರ್ಥಿಕ ಹೊರೆಯಾಗುತ್ತಿದೆ.&lt;/p&gt;&lt;p&gt;ಪ್ರಾಯೋಗಿಕ ಕೌಶಲ್ಯಗಳ ಕೊರತೆ; ದೇಶದಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದ್ದರೂ, ಕೈಗಾರಿಕೆಗಳಿಗೆ ಅಗತ್ಯವಿರುವ ನೈಜ ಕಾರ್ಯ ನಿರ್ವಹಣೆಯ ಪ್ರಾಯೋಗಿಕ ಅನುಭವ ಅವರಲ್ಲಿರುತ್ತಿಲ್ಲ. ವರದಿಯ ಪ್ರಕಾರ, ಪ್ರಸ್ತುತ ಕೇವಲ ಶೇಕಡಾ 8.25 ರಷ್ಟು ಪದವೀಧರರು ಮಾತ್ರ ತಮ್ಮ ಅರ್ಹತೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಆರ್ಥಿಕ ನಿರ್ಬಂಧಗಳು;&lt;/strong&gt; ಸೂಕ್ತ ಉದ್ಯೋಗ ಸಿಗದಿದ್ದಾಗ, ಹೆಚ್ಚಿನ ಯುವಕರು ತರಬೇತಿಯನ್ನು ಮುಂದುವರಿಸಲಾಗದೆ ಸಿಕ್ಕಿದ ಕಡಿಮೆ ಸಂಬಳದ ಕೆಲಸಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಕೆಲವರು ಸರಿಯಾದ ಮಾರ್ಗದರ್ಶನ ಹಾಗೂ ಅವಕಾಶಗಳಿಲ್ಲದೆ ಉದ್ಯೋಗ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹೊರಗುಳಿಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಪರಿಹಾರಕ್ಕಾಗಿ ನೀತಿ ಆಯೋಗದ ಪ್ರಮುಖ ಶಿಫಾರಸುಗಳು;&lt;/strong&gt;&lt;/h3&gt;&lt;p&gt;ಆರ್ಥಿಕ ನೆರವು ಮತ್ತು ಸಬ್ಸಿಡಿ ತರಬೇತಿ; ಆರ್ಥಿಕವಾಗಿ ಹಿಂದುಳಿದ ಯುವಕರು ಮತ್ತು ಮಹಿಳೆಯರಿಗೆ ಉಚಿತ ಅಥವಾ ಕಡಿಮೆ ವೆಚ್ಚದ (ಸಬ್ಸಿಡಿ) ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕು.&lt;/p&gt;&lt;p&gt;&lt;strong&gt;'ಗಳಿಸುತ್ತಲೇ ಕಲಿಯಿರಿ' ಯೋಜನೆ;&lt;/strong&gt; ತರಬೇತಿ ಪಡೆಯುವ ಅವಧಿಯಲ್ಲಿಯೇ ಯುವಕರಿಗೆ ಸ್ವಲ್ಪ ಮಟ್ಟದ ಆದಾಯ ಸಿಗುವಂತಹ 'Earn While Learn' ಮಾದರಿಯ ಕಾರ್ಯಕ್ರಮಗಳನ್ನು ಉತ್ತೇಜಿಸಬೇಕು. ಇದರಿಂದ ಕುಟುಂಬ ನಿರ್ವಹಣೆಗೂ ನೆರವಾಗುತ್ತದೆ.&lt;/p&gt;&lt;p&gt;&lt;strong&gt;ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ತರಬೇತಿ;&lt;/strong&gt; ಪ್ರತಿಯೊಂದು ಪ್ರದೇಶದ ಉದ್ಯಮ ಅಗತ್ಯಗಳು ಬೇರೆ ಬೇರೆಯಾಗಿರುತ್ತವೆ. ಒಂದು ಕಡೆ ಉತ್ಪಾದನಾ ವಲಯಕ್ಕೆ ಬೇಡಿಕೆಯಿದ್ದರೆ, ಇನ್ನೊಂದೆಡೆ ಐಟಿ, ಸೇವಾ ವಲಯ ಅಥವಾ ಆರೋಗ್ಯ ಕ್ಷೇತ್ರಕ್ಕೆ ಬೇಡಿಕೆ ಇರಬಹುದು. ಆದ್ದರಿಂದ, ಆಯಾ ಪ್ರದೇಶದ ಉದ್ಯಮಗಳ ಲಭ್ಯತೆಗೆ ಅನುಗುಣವಾಗಿ ತರಬೇತಿ ನೀಡಬೇಕು.&lt;/p&gt;&lt;h3&gt;&lt;strong&gt;ಏನಾಗಲಿದೆ ವಿಕಸಿತ ಭಾರತದ ಕನಸು!&lt;/strong&gt;&lt;/h3&gt;&lt;p&gt;ಭಾರತವು 'ವಿಕಸಿತ ಭಾರತ@2047' ಗುರಿಯನ್ನು ತಲುಪಬೇಕಾದರೆ, ದೇಶದ ಯುವ ಸಂಪನ್ಮೂಲ ಮತ್ತು ಮಹಿಳೆಯರನ್ನು ಕೌಶಲ್ಯಪೂರ್ಣವಾಗಿ ಸಜ್ಜುಗೊಳಿಸುವುದು ಕಡ್ಡಾಯ. ಪ್ರಾಯೋಗಿಕ ತರಬೇತಿಯ ಜೊತೆಗೆ ಸೂಕ್ತ ಆರ್ಥಿಕ ಬೆಂಬಲ ಸಿಕ್ಕಾಗ ಮಾತ್ರ 8.7 ಕೋಟಿ ಯುವಕರನ್ನು ಮತ್ತೆ ಸಕ್ರಿಯ ಉದ್ಯೋಗ ಚೌಕಟ್ಟಿಗೆ ತರಲು ಸಾಧ್ಯ.&lt;/p&gt;]]></content:encoded>
            <category>india-news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/india-news/8-7-crore-indian-youth-niti-aayog-report-youth-employment-unemployment-shocking-facts-bmk/articleshow-nl2fbga"/>
        </item>
        <item>
            <title><![CDATA[ಅಣ್ಣಾ, ಹತ್ತು ದಿನದಲ್ಲಿ ರಾಖಿ ಹಬ್ಬ ಇದೆ, ಆಗ ಯಾರಿಗೆ ಫೋನ್ ಮಾಡಲಿ? ಅಣ್ಣನ ಮೃತದೇಹ ನೋಡಿ ತಂಗಿ ಕಣ್ಣೀರು]]></title>
            <link>https://kannada.asianetnews.com/india-news/brother-rakhi-is-just-10-days-away-whom-will-i-call-now-sister-weeps-after-seeing-her-brothers-body-at-the-hospital-gkn/articleshow-248oqa0</link>
            <guid isPermaLink="true">https://kannada.asianetnews.com/india-news/brother-rakhi-is-just-10-days-away-whom-will-i-call-now-sister-weeps-after-seeing-her-brothers-body-at-the-hospital-gkn/articleshow-248oqa0</guid>
            <pubDate>Sat, 22 Aug 2026 20:45:39 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್&zwnj;ಗಾಗಿ ನಡೆದ ಜಗಳದ ಬಳಿಕ ಮಗ ಬೆಟ್ಟದಿಂದ ಧುಮುಕಿದ್ದು, ಆತನನ್ನು ರಕ್ಷಿಸಲು ಹೋದ ತಂದೆ-ತಾಯಿ ಇಬ್ಬರೂ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಮೃತ ಸಹೋದರನ ಶವ ಕಂಡು ಕಣ್ಣೀರಿಟ್ಟ ತಂಗಿ, ಇನ್ನು ಹತ್ತು ದಿನದಲ್ಲಿ ರಾಖಿ ಇದೆ, ಈಗ ನಾನು ಯಾರಿಗೆ ಫೋನ್ ಮಾಡಲಿ? ಎಂದು ಕರುಣಾಜನಕವಾಗಿ ರೋದಿಸಿರುವುದು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0n0kfqgmcr8rmgy84xbrt0m,imgname-maharashtra-1787411676912.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಹಾರಾಷ್ಟ್ರ: &lt;/strong&gt;ಅಣ್ಣಾ, ಇನ್ನು ಕೇವಲ ಹತ್ತು ದಿನಗಳಲ್ಲಿ ರಕ್ಷಾಬಂಧನ ಹಬ್ಬ ಇದೆ. ಈಗ ನಾನು ಯಾರಿಗೆ ಫೋನ್ ಮಾಡಲಿ? ಯಾರಿಗೆ ರಾಖಿ ಕಟ್ಟಲು ಕರೆಯಲಿ? ಇದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಸರ್ಕಾರಿ ಆಸ್ಪತ್ರೆಯಲ್ಲಿ ತಂಗಿಯೊಬ್ಬಳು ತನ್ನ ಸಹೋದರನ ಶವದ ಮುಂದೆ ನಿಂತು ಕಣ್ಣೀರು ಹಾಕುತ್ತಾ ಆಡಿದ ಕರುಣಾಜನಕ ಮಾತುಗಳು..&lt;/p&gt;&lt;p&gt;ಇತ್ತೀಚೆಗೆ ಇಲ್ಲಿನ ತಿಸ್&zwnj;ಗಾಂವ್ ಬಳಿಯ ಖವಡ್ಯಾ ಬೆಟ್ಟದಲ್ಲಿ ನಡೆದ ಭೀಕರ ಕೌಟುಂಬಿಕ ದುರಂತ ಇಡೀ ದೇಶವನ್ನೇ ನಡುಗಿಸಿದೆ. ಮೊಬೈಲ್ ಫೋನ್&zwnj;ಗಾಗಿ ನಡೆದ ಜಗಳದಲ್ಲಿ ಮಗ ಬೆಟ್ಟದಿಂದ ಧುಮುಕಿದಾಗ, ಆತನನ್ನು ರಕ್ಷಿಸಲು ಹೋದ ತಂದೆ ಮತ್ತು ಈ ದೃಶ್ಯವನ್ನು ಕಣ್ಣಾರೆ ಕಂಡು ಆಘಾತಕ್ಕೊಳಗಾದ ತಾಯಿ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದರು. ಶನಿವಾರ ಮೃತರ ಮರಣೋತ್ತರ ಪರೀಕ್ಷೆ ಮುಗಿದ ನಂತರ ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ತಂದಾಗ ಇಡೀ ಆಸ್ಪತ್ರೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.&lt;/p&gt;&lt;h2&gt;&lt;strong&gt;ಕೊನೆಯ ಭೇಟಿಯೂ ಆಸ್ಪತ್ರೆಯಲ್ಲೇ ಆಯಿತು!&lt;/strong&gt;&lt;/h2&gt;&lt;p&gt;ಮೃತ ಮುರಳಿಧರ್ ಚಂದ್ವಾಡೆ ಅವರಿಗೆ ಮೂವರು ಸಹೋದರಿಯರಿದ್ದಾರೆ. ಸುಮಾರು ಐದು ತಿಂಗಳ ಹಿಂದೆ ನಡೆದ ಸೋದರಳಿಯನ ಮದುವೆಗೆ ಮುರಳಿಧರ್ ಅವರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಸಹೋದರ-ಸಹೋದರಿಯರ ಭೇಟಿಯೇ ಆಗಿರಲಿಲ್ಲ. ಇತ್ತೀಚೆಗಷ್ಟೇ ಫೋನ್&zwnj;ನಲ್ಲಿ ಮಾತನಾಡಿದ್ದ ಮುರಳಿಧರ್, ಶೀಘ್ರದಲ್ಲೇ ಭೇಟಿಯಾಗುವುದಾಗಿ ತಂಗಿಗೆ ಭರವಸೆ ನೀಡಿದ್ದರು. ಮುಂದಿನ ಭೇಟಿ ಹೀಗೆ ಶವಗಾರದಲ್ಲಿ ಆಗುತ್ತದೆ ಎಂದು ಯಾರು ತಾನೇ ಊಹಿಸಿದ್ದರು? ರಕ್ಷಾಬಂಧನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಸಹೋದರನ ಅಗಲಿಕೆಯಿಂದ ಸೋದರಿಯರು ಕಣ್ಣೀರಿನ ಕಡಲಲ್ಲಿ ಮುಳುಗಿದ್ದಾರೆ.&lt;/p&gt;&lt;h2&gt;&lt;strong&gt;ಐಫೋನ್&zwnj;ಗಾಗಿ ಹಠ ಹಿಡಿದಿದ್ದ ಮಗ&lt;/strong&gt;&lt;/h2&gt;&lt;p&gt;ವರದಿಗಳ ಪ್ರಕಾರ ಮೃತ ಮುರಳಿಧರ್ ಅವರು ಟ್ರಕ್ ಚಾಲಕರಾಗಿದ್ದು, ಕೆಲಸದ ನಿಮಿತ್ತ ಮನೆಯಿಂದ ದೂರ ಇರುತ್ತಿದ್ದರು. ಇವರ 18 ವರ್ಷದ ಮಗ ಕುಣಾಲ್ ಚಂದ್ವಾಡೆಗೆ ಈಗಾಗಲೇ ಐಫೋನ್ ಇದ್ದರೂ ಆತ ಇನ್ನೂ ಹೊಸ ಹಾಗೂ ಅಪ್&zwnj;ಡೇಟೆಡ್ ಐಫೋನ್ ಬೇಕೆಂದು ಹಠ ಹಿಡಿದಿದ್ದ. ಹಳೆಯ ಫೋನ್&zwnj;ನ ಕೆಲವು ಕಂತುಗಳು (EMIs) ಬಾಕಿ ಇದ್ದ ಕಾರಣ ತಂದೆ ಹೊಸ ಫೋನ್ ಕೊಡಿಸಲು ಒಪ್ಪಿರಲಿಲ್ಲ. ಇದೇ ವಿಚಾರವಾಗಿ ತಂದೆ-ಮಗನ ನಡುವೆ ಕಳೆದ ಎರಡು ದಿನಗಳಿಂದ ತೀವ್ರ ಜಗಳ ನಡೆದಿತ್ತು.&lt;/p&gt;&lt;h2&gt;&lt;strong&gt;ರಕ್ಷಿಸಲು ಹೋದ ಹೆತ್ತವರೂ ಸಾವು&lt;/strong&gt;&lt;/h2&gt;&lt;p&gt;ಶುಕ್ರವಾರ ಬೆಳಗ್ಗೆ ತಂದೆಯೊಂದಿಗೆ ಜಗಳವಾಡಿದ ಕುಣಾಲ್ ಮನೆಯಿಂದ ಹೊರಟು ತಿಸ್&zwnj;ಗಾಂವ್&zwnj;ನ ಖವಡ್ಯಾ ಬೆಟ್ಟದ ತುದಿಗೆ ಹೋಗಿ ನಿಂತಿದ್ದ. ಮಾಹಿತಿ ತಿಳಿದು ಹೆತ್ತವರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ಸುಮಾರು ಮೂರು ಗಂಟೆಗಳ ಕಾಲ ಆತನಿಗೆ ಬೆಟ್ಟದಿಂದ ಇಳಿದು ಬರುವಂತೆ ಎಲ್ಲರೂ ಮನವಿ ಮಾಡಿದರು ಸ್ಥಳೀಯ ಪಂಚಾಯತ್ ಅಧ್ಯಕ್ಷರು ಆತನಿಗೆ ತಾನೇ ಹೊಸ ಐಫೋನ್ ಕೊಡಿಸುವುದಾಗಿ ಆಮಿಷ ಒಡ್ಡಿದರೂ ಕುಣಾಲ್ ಒಪ್ಪಲಿಲ್ಲ.&lt;/p&gt;&lt;p&gt;ನನಗೆ ತಂದೆಯೊಂದಿಗೆ ಇರಲು ತೊಂದರೆಯಿದ್ದರೆ ನಾನು ನಿನ್ನ ಜೊತೆಗೇ ಇರುತ್ತೇನೆ, ಬೇಕಿದ್ದರೆ ನನ್ನ ಮಾಂಗಲ್ಯ ಸರವನ್ನೂ ಎಸೆದುಬಿಡುತ್ತೇನೆ, ಬಂದುಬಿಡು ಮಗನೇ ಎಂದು ತಾಯಿ ಸಂಗೀತ ಕಣ್ಣೀರು ಹಾಕುತ್ತಾ ಕೈಮುಗಿದು ಬೇಡಿಕೊಂಡರು. ಆದರೆ ಯಾರ ಮಾತುಗಳಿಗೂ ಮಣಿಯದ ಕುಣಾಲ್ ಬೆಟ್ಟದಿಂದ ಧುಮುಕಿದನು. ಆತನನ್ನು ಹಿಡಿದು ರಕ್ಷಿಸಲು ಮುಂದಾದ ತಂದೆ ಮುರಳಿಧರ್ ಕೂಡ ಕಾಲು ಜಾರಿ ಆಳವಾದ ಕಂದಕಕ್ಕೆ ಬಿದ್ದರು. ತನ್ನ ಕಣ್ಣೆದುರೇ ಗಂಡ ಹಾಗೂ ಮಗ ಕಂದಕಕ್ಕೆ ಬಿದ್ದ ಭೀಕರ ದೃಶ್ಯವನ್ನು ಸಹಿಸಲಾಗದ ತಾಯಿ ಸಂಗೀತ ಕೂಡ ತಕ್ಷಣವೇ ಬೆಟ್ಟದಿಂದ ಕೆಳಗೆ ಧುಮುಕಿದರು. ಮೂವರೂ ಸ್ಥಳದಲ್ಲೇ ಮೃತಪಟ್ಟರು.&lt;/p&gt;&lt;p&gt;ಈ ಕುಟುಂಬದ ದುರಂತದ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಈ ದಂಪತಿ ಸುಮಾರು ಆರು ವರ್ಷಗಳ ಹಿಂದೆಯಷ್ಟೇ ತಮ್ಮ ಹಿರಿಯ ಮಗನನ್ನು ಕಳೆದುಕೊಂಡಿದ್ದರು. ಈಗ ಕಿರಿಯ ಮಗನ ಹಠ ಹಾಗೂ ಆತನನ್ನು ಉಳಿಸಲು ಹೋಗಿ ಹೆತ್ತವರೂ ಸಾವನ್ನಪ್ಪುವ ಮೂಲಕ ಇಡೀ ಕುಟುಂಬವೇ ಸರ್ವನಾಶವಾಗಿದೆ. ಈ ಭೀಕರ ಘಟನೆ ಇಡೀ ಗ್ರಾಮಸ್ಥರನ್ನು ಮತ್ತು ಸಂಬಂಧಿಕರನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/brother-rakhi-is-just-10-days-away-whom-will-i-call-now-sister-weeps-after-seeing-her-brothers-body-at-the-hospital-gkn/articleshow-248oqa0"/>
        </item>
        <item>
            <title><![CDATA[ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್: ಚಿರತೆ ನಿಗಾಕ್ಕೆ ಬರಲಿದೆ ರೋಬೋಟಿಕ್ ನಾಯಿಗಳು]]></title>
            <link>https://kannada.asianetnews.com/india-news/tirupati-tirumala-plans-robotic-dogs-to-monitor-leopards-gvd/articleshow-4ziylnv</link>
            <guid isPermaLink="true">https://kannada.asianetnews.com/india-news/tirupati-tirumala-plans-robotic-dogs-to-monitor-leopards-gvd/articleshow-4ziylnv</guid>
            <pubDate>Sat, 22 Aug 2026 18:42:23 +0530</pubDate>
            <description><![CDATA[&lt;p&gt;ಎಲ್ಲವೂ ಅಂದುಕೊಂಡಂತೆ ನಡೆದರೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗೆ ನಾಯಿಗಳ ನಿಯೋಜನೆ ಆಗಲಿದೆ. ಆದರೆ, ಇದು ಅಂತಿಂಥ ನಾಯಿಗಳಲ್ಲ, ಅತ್ಯಾಧುನಿಕ ರೋಬೋಟಿಕ್&zwnj; ನಾಯಿಗಳು!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0msjvb9ds9cy6fzm1m1he38,imgname-vuv-1787404316009.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುಪತಿ (ಆ.22): &lt;/strong&gt;ಎಲ್ಲವೂ ಅಂದುಕೊಂಡಂತೆ ನಡೆದರೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗೆ ನಾಯಿಗಳ ನಿಯೋಜನೆ ಆಗಲಿದೆ. ಆದರೆ, ಇದು ಅಂತಿಂಥ ನಾಯಿಗಳಲ್ಲ, ಅತ್ಯಾಧುನಿಕ ರೋಬೋಟಿಕ್&zwnj; ನಾಯಿಗಳು! ತಿರುಮಲ ಬೆಟ್ಟ ವ್ಯಾಪ್ತಿಯ ಕಾಡಿನಲ್ಲಿರುವ ಚಿರತೆ ಸೇರಿದಂತೆ ವನ್ಯಮೃಗಗಳ ಓಡಾಟದ ಮೇಲೆ ತೀವ್ರ ನಿಗಾ ಇಡಲು ಹಾಗೂ ವನ್ಯಮೃಗಗಳ ದಾಳಿಗಳಿಂದ ತಿರುಮಲ ಭಕ್ತರನ್ನು ರಕ್ಷಿಸಲು ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನಗಳು) ಆಡಳಿತ ಮಂಡಳಿಯು ಅತ್ಯಾಧುನಿಕ ರೋಬೋಟಿಕ್&zwnj; ತಂತ್ರಜ್ಞಾನ ಬಳಕೆ ಕುರಿತು ಚಿಂತನೆ ನಡೆಸುತ್ತಿದೆ.&lt;/p&gt;&lt;p&gt;ಅದರ ಭಾಗವಾಗಿ ತಿರುಮಲದ ಶ್ರೀ ಪದ್ಮಾವತಿ ಗೆಸ್ಟ್&zwnj; ಹೌಸ್&zwnj;ನಲ್ಲಿ ರೋಬೋಟಿಕ್&zwnj; ನಾಯಿ ತಂತ್ರಜ್ಞಾನದ ಕಾರ್ಯ ವಿಧಾನವನ್ನು ಟಿಟಿಡಿ ಆಡಳಿತ ಮಂಡಳಿ ಹೆಚ್ಚುವರಿ ಎಕ್ಸಿಕ್ಯುಟಿವ್&zwnj; ಅಧಿಕಾರಿ ವೆಂಕಟೇಶ್ ಚೌಧರಿ ಮತ್ತು ದೇವಸ್ಥಾನದ ಇತರೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ರೋಬೋಟಿಕ್ ನಾಯಿಯು ಆಪ್ಟಿಕಲ್&zwnj; ಮತ್ತು 360 ಡಿಗ್ರಿ ಎಲ್&zwnj;ಐಡಿಎಆರ್&zwnj;, ಬಹುಸೆನ್ಸಾರ್&zwnj;ಗಳು, ಎಐ ಒಳಗೊಂಡ ಥರ್ಮಲ್&zwnj; ಇಮೇಜಿಂಗ್&zwnj; ಕ್ಯಾಮೆರಾಗಳನ್ನು ಹೊಂದಿದೆ. ಈ ತಂತ್ರಜ್ಞಾನಗಳು ಮಂಜು ಕವಿದ ವಾತಾವರಣ, ಕಗ್ಗತ್ತಲಲ್ಲೂ ವನ್ಯಪ್ರಾಣಿಗಳ ಓಡಾಟದ ಮೇಲೆ ಕಣ್ಣಿಡಲು ನೆರವು ನೀಡುತ್ತವೆ.&lt;/p&gt;&lt;p&gt;ಇದರಲ್ಲಿರುವ ಎಐ ವ್ಯವಸ್ಥೆ ದೊಡ್ಡ ಪ್ರಾಣಿಗಳು, ಮಾನವರು, ಸಾಕುಪ್ರಾಣಿಗಳು ಹಾಗೂ ವಾಹನಗಳನ್ನು ಗುರುತಿಸುವ ಜತೆಗೆ ಕಾಡುಪ್ರಾಣಿಗಳ ಚಲನವಲನಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿವೆ. ಆ ಬಳಿಕ ಜಿಯೋ ಟ್ಯಾಗ್&zwnj; ಮಾಡಲಾದ ಅಲರ್ಟ್&zwnj;ಗಳು ಮತ್ತು ಸ್ಟ್ರೀಂ ಲೈವ್&zwnj; ವಿಡಿಯೋ ಹಾಗೂ ಥರ್ಮಲ್&zwnj; ಮಾಹಿತಿಗಳನ್ನು ಕಂಟ್ರೋಲ್&zwnj; ರೂಮ್&zwnj; ಹಾಗೂ ಗಸ್ತು ಸಿಬ್ಬಂದಿಗೆ ತಕ್ಷಣ ಪ್ರತಿಕ್ರಿಯೆಗಾಗಿ ರವಾನಿಸುತ್ತವೆ.&lt;/p&gt;&lt;h2&gt;&lt;strong&gt;ಎಲ್ಲಿ ನಿಯೋಜನೆ?&lt;/strong&gt;&lt;/h2&gt;&lt;p&gt;ಪದೇ ಪದೆ ಕಾಡುಪ್ರಾಣಿಗಳ ಓಡಾಟಕ್ಕೆ ಸಾಕ್ಷಿಯಾಗುತ್ತಿರುವ ಅಲಿಪಿರಿ-ತಿರುಮಲ ಮೆಟ್ಟಿಲು ಪ್ರದೇಶ, ಇತರ ಕಡೆ ಈ ರೋಬೋಟಿಕ್&zwnj; ನಾಯಿಗಳನ್ನು ನಿಯೋಜಿಸಲು ಟಿಟಿಡಿ ಆಸಕ್ತಿ ತೋರಿದೆ. ಈ ಮೂಲಕ ಈ ಭಾಗದಲ್ಲಿ ಹೆಚ್ಚಾಗಿರುವ ಚಿರತೆಗಳ ಚಲನವಲನಗಳನ್ನು ಪತ್ತೆ ಹಚ್ಚಿ ಭಕ್ತರನ್ನು ಎಚ್ಚರಿಸಲು, ಸುರಕ್ಷತಾ ಸಿಬ್ಬಂದಿಯನ್ನು ನಿಯೋಜಿಸಲು ಅನುಕೂಲಾಗಲಿದೆ.&lt;/p&gt;&lt;p&gt;ಈ ರೋಬೋಟಿಕ್&zwnj; ನಾಯಿಗಳು ಈಗಾಗಲೇ ಇರುವ ಕ್ಯಾಮೆರಾ ಟ್ರ್ಯಾಪ್&zwnj;, ನಿಯಮಿತ ಗಸ್ತು ಮತ್ತು ಕಾಡಿನ ಕಣ್ಗಾವಲು ವ್ಯವಸ್ಥೆಗೆ ಪರ್ಯಾಯವಲ್ಲ, ಬದಲಾಗಿ ಪೂರಕ ಅಷ್ಟೆ ಎನ್ನಲಾಗಿದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಆಗಮಿಸುವ ಭಕ್ತರ ಮೇಲೆ ಅದರಲ್ಲೂ ಮುಖ್ಯವಾಗಿ ಮಕ್ಕಳ ಮೇಲೆ ಚಿರತೆ ದಾಳಿ ನಡೆಸಿದ ಘಟನೆಗೆಗಳ ಹಿನ್ನೆಲೆಯಲ್ಲಿ ಟಿಟಿಡಿ ಇಂಥದ್ದೊಂದು ಚಿಂತನೆ ನಡೆಸುತ್ತಿದೆ.&lt;/p&gt;]]></content:encoded>
            <category>india-news</category>
            <dc:creator>Govindaraj S</dc:creator>
            <atom:link href="https://kannada.asianetnews.com/india-news/tirupati-tirumala-plans-robotic-dogs-to-monitor-leopards-gvd/articleshow-4ziylnv"/>
        </item>
        <item>
            <title><![CDATA[ಪೊಲೀಸ್ ಶ್ವಾನಗಳಿಗೆ ಗುಡ್ ನ್ಯೂಸ್, ಮಹಾ ಮುಖ್ಯಮಂತ್ರಿಯ ಹೃದಯಸ್ವರ್ಶಿ ನಡೆಗೆ ಭಾರಿ ಮೆಚ್ಚುಗೆ]]></title>
            <link>https://kannada.asianetnews.com/india-news/maharashtra-cm-announces-big-benefits-for-police-dogs-even-after-retirement/articleshow-k4kmzni</link>
            <guid isPermaLink="true">https://kannada.asianetnews.com/india-news/maharashtra-cm-announces-big-benefits-for-police-dogs-even-after-retirement/articleshow-k4kmzni</guid>
            <pubDate>Sat, 22 Aug 2026 17:12:20 +0530</pubDate>
            <description><![CDATA[&lt;p&gt;ಪೊಲೀಸ್ ಶ್ವಾನಗಳಿಗೆ ಗುಡ್ ನ್ಯೂಸ್. 10 ವರ್ಷಗಳ ಸೇವೆ ಬಳಿಕ ಪೊಲೀಸ್ ಶ್ವಾನಗಳಿಗೆ ಸರ್ಕಾರವೇ ಆರೈಕೆ ಮಾಡಲಿದೆ. ಈ ಕುರಿತು ಮಹತ್ವದ ಮಾರ್ಗಸೂಚಿ ಹಾಗೂ ಹೊಸ ನೀತಿ ಘೋಷಣೆಯಾಗಿದೆ. ಏನಿದು ಬಿಗ್ ಆಫರ್?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j5bagx48g6603qsj4xvm3y3v,imgname-indian-army-dog-kent.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಆ.22) &lt;/strong&gt;ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಶ್ವಾನಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಹತ್ವದ ಘೋಷಣೆ ಮಾಡಿದ್ದಾರೆ. 10 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಶ್ವಾನಗಳ ಆರೈಕೆಯನ್ನು ಇನ್ನು ಮುಂದೆ ಸರ್ಕಾರವೇ ನಿರ್ವಹಿಸಲಿದೆ ಎಂದು ಫಡ್ನವಿಸ್ ಹೇಳಿದ್ದಾರೆ. ಸದ್ಯ 10 ವರ್ಷದ ಬಳಿಕ ನಿವೃತ್ತಿಯಾಗುವ ಶ್ವಾನಗಳನ್ನು ಖಾಸಗಿ ಹಾಗೂ ಹೊರಗಿನ ಕೇಂದ್ರಗಳಿಗೆ ದತ್ತು ನೀಡುವ ನೀತಿ ಇತ್ತು. ಈ ನೀತಿ ಬದಲಾಯಿಸಿ ಶ್ವಾನಗಳ ಆರೈಕೆಯನ್ನು ಸರ್ಕಾರವೇ ಮಾಡಲಿದೆ ಎಂದಿದೆ.&lt;/p&gt;&lt;p&gt;ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಶ್ವಾನಗಳು ಪೊಲೀಸ್ ಹ್ಯಾಂಡ್ಲರ್ ಜೊತೆ ಇರಲಿದೆ. ಪೊಲೀಸ್ ತನಿಖೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದೆ. ಆದರೆ 10 ವರ್ಷ ಬಳಿಕ ನಿವೃತ್ತಿಯಾದ ಬಳಿಕ ಶ್ವಾನಗಳನ್ನು ಹೊರಗಿನ ಸಂಸ್ಥೆಗಳಿಗೆ ದತ್ತು ನೀಡಲಾಗುತ್ತಿತ್ತು. ಈ ಪದ್ಧತಿಗೆ ಬ್ರೇಕ್ ಹಾಕಲಾಗಿದೆ. ಇದೀಗ ನಿವೃತ್ತಿ ಬಳಿಕವೂ ಪೊಲೀಸ್ ಹ್ಯಾಂಡ್ಲರ್ ಜೊತೆಗೆ ಶ್ವಾನಗಳು ಇರಲಿದೆ. ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ ಎಂದಿದೆ.&lt;/p&gt;&lt;h2&gt;ಶ್ವಾನಗಳಿಗೆ ಮಾನಸಿಕ ಒತ್ತಡ&lt;/h2&gt;&lt;p&gt;10 ವರ್ಷ ಪೊಲೀಸ್ ಹ್ಯಾಂಡ್ಲರ್ ಜೊತೆ ಆಪ್ತವಾಗಿರುವ ಶ್ವಾನಗಳು ಉತ್ತಮ ಬಾಂಧವ್ಯ ಹೊಂದಿರುತ್ತದೆ. 10 ವರ್ಷಗಳ ಬಳಿಕ ನಿವೃತ್ತಿಯಾಗುವ ಶ್ವಾನಗಳನ್ನು ಹ್ಯಾಂಡ್ಲರ್&zwnj;ಗಳಿಂದ ಬೇರ್ಪಡಿಸಿ ಹೊರಗಿನವರಿಗೆ ದತ್ತು ನೀಡುವುದರಿಂದ ಶ್ವಾನಗಳು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತದೆ. ಮರಿಯಿಂದ ಹಿಡಿದು 10 ವರ್ಷಗಳ ಕಾಲ ಹ್ಯಾಂಡ್ಲರ್ ಜೊತೆ ಇರುವಾಗ ಆತ್ಮೀಯ ಸಂಬಂಧವಿರುತ್ತದೆ. ಆದರೆ ಹೊರಗಿನವರಿಗೆ ದತ್ತು ನೀಡಿದಾಗ ಈ ಬಾಂಧವ್ಯ ಕಡಿತಗೊಳ್ಳುತ್ತದೆ. ಹೀಗಾಗಿ 10 ವರ್ಷ ಸಕ್ರಿಯವಾಗಿರುವ ನಾಯಿಗಳು ಬಳಿಕ ಮಾನಸಿಕವಾಗಿ ಕುಗ್ಗಿ ಹೋಗುತ್ತದೆ. ಸಕ್ರಿಯತೆಗಳು ಇರುವುದಿಲ್ಲ. ಹೊಸ ನಿರ್ಧಾರಿಂದ ಈ ಸಮಸ್ಯೆಗಳು ನಿವಾರಣೆಯಾಗಲಿದೆ.&lt;/p&gt;&lt;p&gt;ಪೊಲೀಸ್ ಆರೆಕೆಯಿಂದ ದಿಢೀರ್ ಆಗಿ ದೂರವಾಗುವಾಗ ಎದುರಾಗುವ ಹಲವು ಸಮಸ್ಯೆಗಳು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಹಲವು ದಿನಗಳೇ ತೆಗೆದುಕೊಳ್ಳುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡಲು ದೇವೇಂದ್ರ ಫಡ್ನವಿಸ್ ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ. ದೇವೇಂದ್ರ ಫಡ್ನವಿಸ್ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಶ್ವಾನ ಪ್ರೀಯರು, ಪ್ರಾಣಿ ಪ್ರಿಯರು ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ಹಲವು ಪ್ರಾಣಿ ಪ್ರಿಯರು ಈ ಕುರಿತು ಮನವಿ ಸಲ್ಲಿಸಿದ್ದರು. ಇದೀಗ ದೇವೇಂದ್ರ ಫಡ್ನವಿಸ್ ಈ ಸಮಸ್ಯೆಗೆ ಸ್ಪಂದಿಸಿದ್ದಾರೆ. ನಾಯಿಗಳ ಮಾನಸಿಕ ಒತ್ತಡ, ಮಾನಸಿಕವಾಗಿ ಕುಗ್ಗುವುದು ತಪ್ಪಿಸಲು ಈ ನಿರ್ಧಾರ ಅತ್ಯಂತ ಮುಖ್ಯ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/maharashtra-cm-announces-big-benefits-for-police-dogs-even-after-retirement/articleshow-k4kmzni"/>
        </item>
        <item>
            <title><![CDATA[ಗುರುವಾರ-ಶುಕ್ರವಾರದ ಬದಲು 'ಬುಧವಾರ' ರಿಲೀಸ್ ಆಗ್ತಿರೋದ್ಯಾಕೆ? ಯಶ್‌ 'ಟಾಕ್ಸಿಕ್' ಸೀಕ್ರೆಟ್ ಇರೋದೇ ಇದ್ರಲ್ಲಿ!]]></title>
            <link>https://kannada.asianetnews.com/entertainment/hidden-secret-behind-why-yash-toxic-is-skipping-the-traditional-thursday-friday-release-for-a-wednesday-opened/articleshow-yzh7n8y</link>
            <guid isPermaLink="true">https://kannada.asianetnews.com/entertainment/hidden-secret-behind-why-yash-toxic-is-skipping-the-traditional-thursday-friday-release-for-a-wednesday-opened/articleshow-yzh7n8y</guid>
            <pubDate>Sat, 22 Aug 2026 17:06:14 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರ ತೆರೆಕಾಣುತ್ತವೆ. ದೊಡ್ಡ ಸಿನಿಮಾಗಳಾದರೆ ಗುರುವಾರ ಪ್ರೀಮಿಯರ್ ಆಗುತ್ತವೆ. 'ಕೆಜಿಎಫ್-1' ಬಂದಿದ್ದು ಶುಕ್ರವಾರ, 'ಕೆಜಿಎಫ್-2' ಬಂದಿದ್ದು ಗುರುವಾರ. ಆದರೆ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26, ಬುಧವಾರದಂದು ರಿಲೀಸ್ ಆಗುತ್ತಿದೆ. ಇದರ ಹಿಂದೆ ಇದೆ ಈ ಬಿಗ್ ಸೀಕ್ರೆಟ್!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mm1m834a5918b2j7x9ktbp,imgname-yash-toxic-movie--2--1787398508803.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic movie release date secret-ಯಶ್ 'ಟಾಕ್ಸಿಕ್' ಬುಧವಾರವೇ ಅಪ್ಪಳಿಸುತ್ತಿರುವುದರ ಹಿಂದೆ ಅಡಗಿದೆಯೇ 'ಮಸ್ತ್' ಸೀಕ್ರೆಟ್? ಇಲ್ಲಿದೆ ರೋಚಕ ಮಾಹಿತಿ!&lt;/strong&gt;&lt;/p&gt;&lt;p&gt;ರಾಕಿಂಗ್ ಸ್ಟಾರ್ ಯಶ್ ಎಂದರೆ ಅಲ್ಲಿ ಒಂದು ಬ್ರ್ಯಾಂಡ್ ಇರುತ್ತದೆ, ಒಂದು ಹೊಸ ಟ್ರೆಂಡ್ ಇರುತ್ತದೆ. 'ಕೆಜಿಎಫ್' ಸರಣಿಯ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ಸ್ಯಾಂಡಲ್&zwnj;ವುಡ್ ಕಡೆಗೆ ತಿರುಗಿ ನೋಡುವಂತೆ ಮಾಡಿದ ಈ ಸುಲ್ತಾನ, ಈಗ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್&zwnj;-ಅಪ್ಸ್' ಮೂಲಕ ಜಾಗತಿಕ ವೇದಿಕೆಗೆ ಸಜ್ಜಾಗಿದ್ದಾರೆ. ಆದರೆ, ಈ ಬಾರಿ ಯಶ್ ಸಿನಿಮಾ ಬಿಡುಗಡೆಯ ವಿಚಾರದಲ್ಲಿ ಒಂದು ವಿಚಿತ್ರ ಹಾಗೂ ಸಖತ್ ಇಂಟರೆಸ್ಟಿಂಗ್ ಆದ ಬದಲಾವಣೆ ನಡೆದಿದೆ. ಅದೇ 'ಬುಧವಾರ'ದ ಬಿಡುಗಡೆ!&lt;/p&gt;&lt;h2&gt;ಶುಕ್ರವಾರವಲ್ಲ, ಗುರುವಾರವಲ್ಲ.. ಇದ್ಯಾಕೆ ಬುಧವಾರ?&lt;/h2&gt;&lt;p&gt;ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರ ತೆರೆಕಾಣುತ್ತವೆ. ದೊಡ್ಡ ಸಿನಿಮಾಗಳಾದರೆ ಗುರುವಾರ ಪ್ರೀಮಿಯರ್ ಆಗುತ್ತವೆ. 'ಕೆಜಿಎಫ್-1' ಬಂದಿದ್ದು ಶುಕ್ರವಾರ, 'ಕೆಜಿಎಫ್-2' ಬಂದಿದ್ದು ಗುರುವಾರ. ಆದರೆ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26, ಬುಧವಾರದಂದು ರಿಲೀಸ್ ಆಗುತ್ತಿದೆ. ಯಶ್ ಅವರ ಕೆರಿಯರ್&zwnj;ನಲ್ಲಿ ಇದುವರೆಗೂ ಬುಧವಾರ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಈ ಬದಲಾವಣೆಯ ಹಿಂದೆ ಎರಡು ಪ್ರಮುಖ ಲೆಕ್ಕಾಚಾರಗಳಿವೆ.&lt;/p&gt;&lt;p&gt;ನಂಬರ್ 8 ಮತ್ತು ರಾಕಿಂಗ್ ಸ್ಟಾರ್ ಸೆಂಟಿಮೆಂಟ್!&lt;/p&gt;&lt;p&gt;ಸಿನಿಮಾ ಪಂಡಿತರ ಪ್ರಕಾರ, ಯಶ್ ಅವರಿಗೆ '8' ಎಂಬ ಸಂಖ್ಯೆ ಅತ್ಯಂತ ಲಕ್ಕಿ. ಯಶ್ ಜನಿಸಿದ್ದು ಜನವರಿ 8ರಂದು. ಈಗ ನೋಡಿ, 'ಟಾಕ್ಸಿಕ್' ಬಿಡುಗಡೆಯಾಗುತ್ತಿರುವ ಆಗಸ್ಟ್ 26ರ ದಿನಾಂಕವನ್ನು ಕೂಡಿಸಿದರೆ (2+6) ಬರುವುದು ಕೂಡ ಸಂಖ್ಯೆ 8! ಅಷ್ಟೇ ಅಲ್ಲ, ಈ ಚಿತ್ರದ ಮುಹೂರ್ತ ನಡೆದಿದ್ದು ಆಗಸ್ಟ್ 8ಕ್ಕೆ, ಟ್ರೈಲರ್ ಬಿಡುಗಡೆಯಾಗಿದ್ದು ಕೂಡ ಆಗಸ್ಟ್ 8ಕ್ಕೆ. ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ '8' ಎಂಬ ಮ್ಯಾಜಿಕ್ ನಂಬರ್ ಕೆಲಸ ಮಾಡುತ್ತಿದೆ. ಇದು ಕೇವಲ ಕಾಕತಾಳೀಯವೋ ಅಥವಾ ಯಶ್ ಅವರ ಯಶಸ್ಸಿನ ಸೀಕ್ರೆಟ್ ಮಂತ್ರವೋ ಎಂಬುದು ಅಭಿಮಾನಿಗಳ ಕುತೂಹಲ.&lt;/p&gt;&lt;h3&gt;ಬಾಕ್ಸಾಫೀಸ್ ಸುನಾಮಿಗೆ ರಜೆಯ ರಕ್ಷೆ!&lt;/h3&gt;&lt;p&gt;ಬುಧವಾರವೇ ಸಿನಿಮಾ ರಿಲೀಸ್ ಮಾಡುತ್ತಿರುವುದರ ಹಿಂದೆ ಬಲವಾದ ವಾಣಿಜ್ಯ ಉದ್ದೇಶವೂ ಇದೆ. ಆಗಸ್ಟ್ 26ರ ಬುಧವಾರ 'ಈದ್ ಮಿಲಾದ್' ಹಬ್ಬದ ರಜೆ ಇರುವುದರಿಂದ, ಚಿತ್ರಕ್ಕೆ ಮೊದಲ ದಿನವೇ ಬೃಹತ್ ಓಪನಿಂಗ್ ಸಿಗುವುದು ಖಚಿತ. ಬುಧವಾರವೇ ಶುರುವಾಗಿ ಮುಂದೆ ಬರುವ ವಾರಾಂತ್ಯದವರೆಗೆ (ಲಾಂಗ್ ವೀಕೆಂಡ್) ಸಿನಿಮಾ ಸತತವಾಗಿ ಹೌಸ್&zwnj;ಫುಲ್ ಪ್ರದರ್ಶನ ಕಾಣುವಂತೆ ಮಾಡುವ ಮಾಸ್ಟರ್ ಪ್ಲಾನ್ ಇದಾಗಿದೆ.&lt;/p&gt;&lt;p&gt;ಹೈದರಾಬಾದ್&zwnj;ನಲ್ಲೂ 'ಟಾಕ್ಸಿಕ್' ಹವಾ: 23 ಶೋಗಳ ದಾಖಲೆ!&lt;/p&gt;&lt;p&gt;ಕರ್ನಾಟಕದ ಸಿನಿಮಾಗಳಿಗೆ ಪರಭಾಷೆಯಲ್ಲಿ ಈ ಮಟ್ಟದ ಕ್ರೇಜ್ ಸಿಗುವುದು ಅಪರೂಪ. ಆದರೆ 'ಟಾಕ್ಸಿಕ್' ವಿಷಯದಲ್ಲಿ ಎಲ್ಲವೂ ಉಲ್ಟಾ! ಹೈದರಾಬಾದ್&zwnj;ನ ಪ್ರತಿಷ್ಠಿತ 'ಎಎಂಬಿ ಸಿನಿಮಾಸ್'ನಲ್ಲಿ ಮೊದಲ ದಿನವೇ ಬರೋಬ್ಬರಿ 23 ಶೋಗಳನ್ನು ಪ್ಲಾನ್ ಮಾಡಲಾಗಿದೆ. ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಆರ್ಭಟಿಸಲಿದೆ.&lt;/p&gt;&lt;p&gt;ಪ್ರಚಾರದಲ್ಲೂ ಡಿಫರೆಂಟ್ ಶೈಲಿ!&lt;/p&gt;&lt;p&gt;ಯಶ್ ಈ ಬಾರಿ ಕೇವಲ ಟಿವಿ ಸಂದರ್ಶನಗಳಿಗೆ ಸೀಮಿತವಾಗದೆ, ಜನಸಾಮಾನ್ಯರ ಬಳಿ ಹೋಗುತ್ತಿದ್ದಾರೆ. ಮೆಟ್ರೋ ರೈಲುಗಳ ಮೇಲೆ 'ಟಾಕ್ಸಿಕ್' ಪೋಸ್ಟರ್&zwnj;ಗಳು ರಾರಾಜಿಸುತ್ತಿವೆ. ಪ್ರಮುಖ ನಗರಗಳಲ್ಲಿ ಅದ್ಧೂರಿ ಪ್ರೀ-ರಿಲೀಸ್ ಇವೆಂಟ್&zwnj;ಗಳ ಮೂಲಕ ಚಿತ್ರತಂಡ ಹಬ್ಬದ ವಾತಾವರಣ ಸೃಷ್ಟಿಸುತ್ತಿದೆ. ಒಟ್ಟಿನಲ್ಲಿ, ಆಗಸ್ಟ್ 26ರ ಬುಧವಾರ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುವುದು ಗ್ಯಾರಂಟಿ. 'ಟಾಕ್ಸಿಕ್' ಭಾಯ್ ಅಬ್ಬರಕ್ಕೆ ಬಾಕ್ಸಾಫೀಸ್ ಉಡೀಸ್ ಆಗೋದಂತೂ ಖಚಿತ!&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/hidden-secret-behind-why-yash-toxic-is-skipping-the-traditional-thursday-friday-release-for-a-wednesday-opened/articleshow-yzh7n8y"/>
        </item>
        <item>
            <title><![CDATA[ಮನೆಯಲ್ಲಿ ಹಾವು ಪ್ರತ್ಯಕ್ಷವಾದರೆ ಆತಂಕ ಬೇಡ, ಸುಲಭವಾಗಿ ರಕ್ಷಣೆಗೆ ಬರುತ್ತಿದೆ ಶಿವಾ ಆ್ಯಪ್]]></title>
            <link>https://kannada.asianetnews.com/india-news/snake-spotted-at-home-dont-panic-madhya-pradesh-shiva-app-offers-easy-rescue-assistance/articleshow-g1oxwc9</link>
            <guid isPermaLink="true">https://kannada.asianetnews.com/india-news/snake-spotted-at-home-dont-panic-madhya-pradesh-shiva-app-offers-easy-rescue-assistance/articleshow-g1oxwc9</guid>
            <pubDate>Sat, 22 Aug 2026 16:20:06 +0530</pubDate>
            <description><![CDATA[&lt;p&gt;ಮನೆಯಲ್ಲಿ ಅಥವಾ ಇನ್ಯಾವುದೇ ಕಡೆ ಹಾವು ಕಂಡ ತಕ್ಷಣ ಆತಂಕ ಬೇಡ. ಉರಗ ತಜ್ಞರ ನಂಬರ್ ಪಡೆದು ಕರೆ ಮಾಡಿ ಅವರು ಸ್ಥಳಕ್ಕೆ ಆಗಮಿಸುವಷ್ಟರಲ್ಲೇ ಅವಾಂತರಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಹೊಸ ಶಿವಾ ಆ್ಯಪ್ ಬಿಡುಗಡೆ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ep9hb048xrrb2k0my0m6rweq,imgname-snake-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೋಪಾಲ್ (ಆ.22)&lt;/strong&gt; ಮಳೆಗಾಲ ಸೇರಿದಂತೆ ಕೆಲ ಋತುವಿನಲ್ಲಿ ಹಾವುಗಳ ಉಪಟಳ ಹೆಚ್ಚು. ಹಾವು ಕಡಿತ, ಮನೆಯಲ್ಲಿ ಹಾವು ಪ್ರತ್ಯಕ್ಷ, ಎಲ್ಲೆಡೆ ಹಾವುಗಳು ಕಾಣಿಸಿಕೊಳ್ಳುವುದು ಸ್ವಾಭಾವಿಕವಾಗಿ ಆತಂಕ ಹೆಚ್ಚಿಸುತ್ತದೆ. ಮನೆಯಲ್ಲಿ ಹಾವು ಪ್ರತ್ಯಕ್ಷಗೊಂಡಾಗ ಹೊರಹಾಕಲು ಹರಹಾಸ ಪಡುವುದು ಸಾಮಾನ್ಯ. ಇನ್ನು ಉರಗ ತಜ್ಞರ ನಂಬರ್ ಕಲೆ ಹಾಕಿ ಅವರನ್ನು ಕರೆಯಿಸಿಕೊಳ್ಳುವ ಹೊತ್ತಿಗೆ ಅಪಾಯ ಹೆಚ್ಚಾಗಲಿದೆ. ಇದಕ್ಕೆ ಪರಿಹಾರ ಒದಗಿಸಲು ಇದೀಗ ಕ್ಯಾಬ್ ಬುಕ್ ಮಾಡುವ ರೀತಿ ಹಾವಿನ ರಕ್ಷಣೆಗೆ ಶಿವಾ ಅನ್ನೋ ಆ್ಯಪ್ ಬರುತ್ತಿದೆ. ಆ್ಯಪ್ ಮೂಲಕ ಕೇವಲ ಒಂದೇ ಟಚ್&zwnj;ನಲ್ಲಿ ಆತಂಕದಿಂದ ದೂರವಾಗಬಹುದು.&lt;/p&gt;&lt;h2&gt;ಹೊಸ ಶಿವಾ ಆ್ಯಪ್ ಮೂಲಕ ಹಾವಿನ ರಕ್ಷಣೆ&lt;/h2&gt;&lt;p&gt;ಮಧ್ಯಪ್ರದೇಶದಲ್ಲಿ ಶಿವಾ ಆ್ಯಪ್ ಬಿಡುಗಡೆ ಮಾಡಲು ಅರಣ್ಯ ಸಚಿವಾಲಯ ಮುಂದಾಗಿದೆ. ವನ್ಯಜೀವಿ ಸಪ್ತಾಹ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ 2 ರಿಂದ ಅಕ್ಟೋಬರ್ 8ರೊಳಗೆ ಈ ಶಿವಾ ಆ್ಯಪ್ ಬಿಡುಗಡೆ ಮಾಡಲು ಮಧ್ಯಪ್ರದೇಶ ಅರಣ್ಯ ಸಚಿವಾಲಯ ಮುಂದಾಗಿದೆ. ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಹಾವುಗಳ ರಕ್ಷಣೆಗೆ ಮಧ್ಯಪ್ರದೇಶ ಶಿವಾ ಆ್ಯಪ್ ಬಿಡುಗಡೆ ಮಾಡುತ್ತಿದೆ.&lt;/p&gt;&lt;p&gt;ಭಾರತದಲ್ಲಿ ಗರಿಷ್ಠ ಹಾವು ಕಡಿತ ಪ್ರಕರಣ ದಾಖಲಾದ ಕೆಲ ರಾಜ್ಯಗಳ ಪೈಕಿ ಮಧ್ಯಪ್ರದೇಶ ಕೂಡ ಒಂದು. ಮಧ್ಯಪ್ರದೇಶ ನಾಗರೀಕರು ಹಾವಿನ ಭಯದಿಂದ ಮುಕ್ತವಾಗಿರಲು ಹಾಗೂ ಹಾವು ಕಡಿತದಿಂದ ಜೀವ ಕಳೆದುಕೊಳ್ಳದಿರಲು ಆ್ಯಪ್ ನೆರವಾಗಲಿದೆ ಎಂದು ಮಧ್ಯಪ್ರದೇಶ ಸರ್ಕಾರ ಹೇಳಿದೆ. ಎಲ್ಲೇ ಹಾವು ಕಂಡರೂ ಆ್ಯಪ್ ಮೂಲಕ ವರದಿ ಮಾಡಿದರೆ ಉರಗ ತಜ್ಞರು ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಲಿದ್ದಾರೆ. ಹೀಗೆ ರಕ್ಷಣೆ ಮಾಡಿದ ಹಾವುಗಳನ್ನು ದಟ್ಟ ಅರಣ್ಯದಲ್ಲಿ ಬಿಡಲಾಗುವುದು. ಇದರಿಂದ ಮತ್ತೆ ಮತ್ತೆ ಹಾವುಗಳು ನಗರ, ಜನನಿಬಿಡಿದ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಲಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;ಇದೇ ವೇಳೆ ಹಾವು ಕಡಿತ ಸೇರಿದಂತೆ ಹಲವು ರೀತಿಯ ಮಾರ್ಗದರ್ಶನಗಳನ್ನು ಈ ಆ್ಯಪ್&zwnj;ನಲ್ಲಿ ನೀಡಲಾಗಿದೆ. ಹಾವು ಕಡಿತದ ಬಳಿಕ ಪ್ರಥಮ ಚಿಕಿತ್ಸೆ, ಮಾಡಬೇಕಾದ ಪ್ರಮುಖ ಜವಾಬ್ದಾರಿಗಳು, ಮಾಡಬಾರದ ಕೆಲಸಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಹಾವು ಕಡಿತಕ್ಕೆ ಸಮೀಪದಲ್ಲಿ ಆ್ಯಂಟಿ ಸ್ನೇಕ್ ವೆನಮ್ ಇಂಜೆಕ್ಷನ್ ಲಭ್ಯವಿರುವ ಆಸ್ಪತ್ರೆಗಳ ವಿವರಗಳು ಇದರಲ್ಲಿ ಲಭ್ಯವಿದೆ. ಚಿಕಿತ್ಸೆ ಪಡೆಯಲು ಎದುರಾಗುವ ಸವಾಲು, ವಿಳಂಬಗಳನ್ನು ಈ ಆ್ಯಪ್ ತಡೆಯಲಿದೆ.&lt;/p&gt;&lt;p&gt;ಆ್ಯಪ್&zwnj;ನಲ್ಲಿ ನೋಂದಾಯಿತ ಉರಗ ತಜ್ಞರ ಇರಲಿದ್ದಾರೆ. ಅವರಿಗೆ ಮಧ್ಯಪ್ರದೇಶ ಅರಣ್ಯ ಇಲಾಖೆಯಿಂದ ಸರ್ಟಿಫಿಕೇಶನ್ ಪಡೆದ ಉರಗ ತಜ್ಞರು ಆಗಿರುತ್ತಾರೆ. ಹೀಗಾಗಿ ಹೆಚ್ಚು ಹೊಣೆಗಾರಿಕೆಯಲ್ಲಿ ಹಾವುಗಳ ರಕ್ಷಣೆಯಾಗಲಿದೆ ಎಂದು ಅರಣ್ಯ ಇಲಾಖೆ ಹೇಳಿದೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/snake-spotted-at-home-dont-panic-madhya-pradesh-shiva-app-offers-easy-rescue-assistance/articleshow-g1oxwc9"/>
        </item>
        <item>
            <title><![CDATA[ಬೆಂಗಳೂರಿಗೆ ಹೊಸ ಐಷಾರಾಮಿ ಬಸ್ ಬಿಟ್ಟು ಜನರಿಂದ ಛೀಮಾರಿ ಹಾಕಿಸಿಕೊಂಡ ಕೇರಳ ಸರ್ಕಾರ]]></title>
            <link>https://kannada.asianetnews.com/gallery/india-news/new-luxury-ksrtc-bus-from-alappuzha-to-bengaluru-outrage-from-kerala-youth-community-mrq-wu1bg5b</link>
            <guid isPermaLink="true">https://kannada.asianetnews.com/gallery/india-news/new-luxury-ksrtc-bus-from-alappuzha-to-bengaluru-outrage-from-kerala-youth-community-mrq-wu1bg5b</guid>
            <pubDate>Sat, 22 Aug 2026 16:17:24 +0530</pubDate>
            <description><![CDATA[ಕೇರಳ ಸರ್ಕಾರವು ಆಲಪ್ಪುಳದಿಂದ ಬೆಂಗಳೂರಿಗೆ ಹೊಸ ಐಷಾರಾಮಿ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಆದರೆ, ತಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ಬೆಂಗಳೂರಿಗೆ ವಲಸೆ ಹೋಗಲು ಪ್ರೋತ್ಸಾಹಿಸುತ್ತಿದೆ ಎಂದು ಕೇರಳದ ಯುವ ಸಮುದಾಯವೇ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0mgvh6mmv0y2sr9v0p7ws6v,imgname-kerala-bus--2--1787395163348.jpg" type="image/jpeg" height="390" width="690"/>
            <content:encoded><![CDATA[ಕೇರಳ ಸರ್ಕಾರವು ಆಲಪ್ಪುಳದಿಂದ ಬೆಂಗಳೂರಿಗೆ ಹೊಸ ಐಷಾರಾಮಿ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಆದರೆ, ತಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ಬೆಂಗಳೂರಿಗೆ ವಲಸೆ ಹೋಗಲು ಪ್ರೋತ್ಸಾಹಿಸುತ್ತಿದೆ ಎಂದು ಕೇರಳದ ಯುವ ಸಮುದಾಯವೇ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.&lt;img&gt;&lt;p&gt;ಇತ್ತೀಚೆಗಷ್ಟೇ ಕೇರಳಂ ಸರ್ಕಾರ ಆಲಪ್ಪುಳದಿಂದ ಬೆಂಗಳೂರಿಗೆ ಲಕ್ಷುರಿಯಾದ ಬಸ್ ಆರಂಭಿಸಿದೆ. ಕೇರಳ ಪ್ರಯಾಣಿಕರು ಈ ಬಸ್ ಮೂಲಕ ಬೆಂಗಳೂರಿಗೆ ತೆರಳಬಹುದು ಎಂಬ ಸಂದೇಶವುಳ್ಳ ಮಾಹಿತಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಆದ್ರೆ ಈ ಬಸ್ ಆರಂಭಕ್ಕೆ ಕೇರಳಿಗರೇ ತಮ್ಮ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.&lt;/p&gt;&lt;img&gt;&lt;p&gt;ಕೇರಳದ ಬಹುತೇಕರು ಉದ್ಯೋಗ ಅರಸಿ ಬೆಂಗಳೂರಿನತ್ತ ಮುಖ ಮಾಡುತ್ತಾರೆ. ಮತ್ತೆ ಕೆಲವರು ಗಲ್ಫ್ ರಾಷ್ಟಗಳಿಗೆ ತೆರಳುತ್ತಾರೆ. ಕೇರಳದಲ್ಲಿ ಉದ್ಯೋಗ ಸೃಷ್ಟಿ ಆಗಬೇಕೆಂಬ ಕೂಗು ಕೇಳಿ ಬರುತ್ತಿರುತ್ತದೆ. ಈ ಎಲ್ಲಾ ಬೆಳವಣಿಗೆ ನಡುವೆ ಕೇರಳಂ ಸರ್ಕಾರದಿಂದ ಬೆಂಗಳೂರಿಗೆ ಬಸ್ ಬಿಟ್ಟಿರೋದಕ್ಕೆ ಯುವ ಸಮುದಾಯ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;Chief Minister Keralam ಎಕ್ಸ್ ಖಾತೆಯಲ್ಲಿ ನೂತನ್ ಬಸ್&zwnj; ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಈ ಟ್ವೀಟ್&zwnj;ಗೆ ಪ್ರತಿಕ್ರಿಯಿಸಿರುವ ಬಳಕೆದಾರರು, ಬೆಂಗಳೂರಿಗೆ ಬಸ್ ಒದಗಿಸಿದ್ದು ನಿಮ್ಮ ಸಾಧನೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಬಿಹಾರಗಿಂತ ಕೇರಳ ರಾಜ್ಯ ಶ್ರೀಮಂತರಾಗಿದ್ರೂ ಜನರು ಕೆಲಸಕ್ಕಾಗಿ ಪಕ್ಕದ ರಾಜ್ಯಕ್ಕೆ ಯಾಕೆ ಹೋಗ್ತಾರೆ ಎಂಬುದನ್ನು ತಿಳಿದುಕೊಂಡು ಸಮಸ್ಯೆಯನ್ನು ಪರಿಹಾರ ಮಾಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಬಸ್ ಮೂಲಕ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಅಂತ ಹೇಳ್ತಿದ್ದೀರಾ ಎಂದು ಪ್ರಶ್ನೆ ಮಾಡಿರುವ ಜನರು, ಶೇ.100ರಷ್ಟು ಸಾಕ್ಷರತೆ ಹೊಂದಿರುವ ರಾಜ್ಯ ಆಗಿದ್ದರೂ ಇಲ್ಲಿ ಕೆಲಸ ಇಲ್ಲ ಎಂದಿದ್ದಾರೆ. ಇನ್ನು ಇದೇ ಟ್ವೀಟ್&zwnj;ಗೆ ಕೆಲ ಕನ್ನಡಿಗರು ತಮ್ಮ ಅಭಿಪ್ರಾಯುವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ದಯವಿಟ್ಟು ನಿಮ್ಮ ರಾಜ್ಯದಲ್ಲಿಯೇ ಕೇರಳಿಗರಿಗೆ ಉದ್ಯೋಗಗಳನ್ನು ಸೃಷ್ಟಿಸಿ. ಬೆಂಗಳೂರಿಗೆ/ಕರ್ನಾಟಕಕ್ಕೆ ಕೆಲಸಗಾರರನ್ನು ರಫ್ತು ಮಾಡುವುದನ್ನು ನಿಲ್ಲಿಸಿ. ನೀವು ಯಶಸ್ವಿಯಾದರೆ, ಅದು ನಿಮ್ಮ ನಿಜವಾದ ಸಾಧನೆಯಾಗುತ್ತದೆ. ಈ ರೀತಿಯ ತೋರಿಕೆಯ ಸಾಧನೆಗಳಿಂದ ಅಭಿವೃದ್ಧಿ ಆಗಲ್ಲ. ಅಭಿವೃದ್ಧಿಯ ಕೊರತೆಯಿಂದಾಗಿ ಕೇರಳದ ಜನರು ವಲಸೆ ಹೋಗುತ್ತಿದ್ದಾರೆ ಎಂದಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/india-news/new-luxury-ksrtc-bus-from-alappuzha-to-bengaluru-outrage-from-kerala-youth-community-mrq-wu1bg5b"/>
        </item>
        <item>
            <title><![CDATA[FDI ದೇಶದ ನೆರೆ ರಾಷ್ಟ್ರಗಳಿಗೆ ಬಿಗ್ ಆಫರ್,  ಭಾರತಕ್ಕೆ ಹರಿದುಬಂತು ₹4,895 ಕೋಟಿ ವಿದೇಶಿ ಹಣ!]]></title>
            <link>https://kannada.asianetnews.com/business/india-receives-rs-4895-crore-fdi-under-relaxed-rules-for-neighboring-countries-gdp/articleshow-ztu7f0m</link>
            <guid isPermaLink="true">https://kannada.asianetnews.com/business/india-receives-rs-4895-crore-fdi-under-relaxed-rules-for-neighboring-countries-gdp/articleshow-ztu7f0m</guid>
            <pubDate>Sat, 22 Aug 2026 16:14:36 +0530</pubDate>
            <description><![CDATA[ಭಾರತದೊಂದಿಗೆ ಭೂ ಗಡಿ ಹಂಚಿಕೊಳ್ಳುವ ದೇಶಗಳಿಗೆ ಹೂಡಿಕೆ ನಿಯಮಗಳನ್ನು ಸಡಿಲಗೊಳಿಸಿದ ನಂತರ, ದೇಶಕ್ಕೆ ₹4,895 ಕೋಟಿ ಮೌಲ್ಯದ ವಿದೇಶಿ ನೇರ ಹೂಡಿಕೆ (FDI) ಬಂದಿದೆ. ಈ ಹೂಡಿಕೆಗಳು ಐಟಿ, ಉತ್ಪಾದನೆ, ಮತ್ತು ಫಾರ್ಮಾದಂತಹ ಕ್ಷೇತ್ರಗಳಲ್ಲಿ ಬಂದಿದ್ದು, ಶೇ. 10ಕ್ಕಿಂತ ಕಡಿಮೆ ಪಾಲುದಾರಿಕೆಗೆ 'ಸ್ವಯಂಚಾಲಿತ ಮಾರ್ಗ'ದ ಮೂಲಕ ಅವಕಾಶ ಕಲ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq54qtvj1ddn7x5kw7wrh6qd,imgname-sip-investment-tips--1--1777215466354.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಭಾರತದೊಂದಿಗೆ ಭೂ ಗಡಿ ಹಂಚಿಕೊಳ್ಳುವ ದೇಶಗಳ ಹೂಡಿಕೆದಾರರಿಗೆ ಅನುಕೂಲವಾಗುವಂತೆ ಹೂಡಿಕೆ ನಿಯಮಗಳನ್ನು ಸಡಿಲಗೊಳಿಸಿದ ಬೆನ್ನಲ್ಲೇ, ಭಾರತಕ್ಕೆ ₹4,895 ಕೋಟಿ ಮೌಲ್ಯದ ವಿದೇಶಿ ನೇರ ಹೂಡಿಕೆ (FDI) ಹರಿದುಬಂದಿದೆ. ಒಟ್ಟು 29 ಹೂಡಿಕೆ ಪ್ರಸ್ತಾವನೆಗಳ ಮೂಲಕ ಈ ಬೃಹತ್ ಹೂಡಿಕೆ ಬಂದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿ &lsquo;ರಾಯಿಟರ್ಸ್&rsquo; ವರದಿ ಮಾಡಿದೆ.&lt;/p&gt;&lt;p&gt;ಈ ಹೂಡಿಕೆಗಳು ಮಾಹಿತಿ ತಂತ್ರಜ್ಞಾನ (IT), ಕೃತಕ ಬುದ್ಧಿಮತ್ತೆ (AI), ಉತ್ಪಾದನೆ (Manufacturing), ಫಾರ್ಮಾಸಿಟಿಕಲ್ಸ್, ಡೇಟಾ ಸೆಂಟರ್&zwnj;ಗಳು ಮತ್ತು ಸಾರಿಗೆ ಸೇವೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಹಂಚಿಕೆಯಾಗಿವೆ.&lt;/p&gt;&lt;h2&gt;ಹೊಸ FDI ನಿಯಮದಿಂದ ಏನು ಬದಲಾಗಿದೆ?&lt;/h2&gt;&lt;p&gt;ಹೂಡಿಕೆ ನಿಯಮಗಳ ಪರಿಷ್ಕರಣೆಯ ಅಡಿಯಲ್ಲಿ, ಭಾರತದೊಂದಿಗೆ ಗಡಿ ಹಂಚಿಕೊಳ್ಳುವ ದೇಶಗಳ (ಮುಖ್ಯವಾಗಿ ಚೀನಾ) ಹೂಡಿಕೆದಾರರು, ಒಂದು ಕಂಪನಿಯಲ್ಲಿ ಮ್ಯಾನೇಜ್&zwnj;ಮೆಂಟ್ ನಿಯಂತ್ರಣ ಹೊಂದಿರದಿದ್ದರೆ ಮತ್ತು ಅವರ ಪಾಲು ಶೇ. 10 ಕ್ಕಿಂತ ಕಡಿಮೆಯಿದ್ದರೆ 'ಸ್ವಯಂಚಾಲಿತ ಮಾರ್ಗದ' (Automatic Route) ಮೂಲಕ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಅಂದರೆ ಹೂಡಿಕೆದಾರರು ಸರ್ಕಾರದ ಯಾವುದೇ ಪೂರ್ವಾನುಮತಿಯ ಅಗತ್ಯವಿಲ್ಲದೆ ನೇರವಾಗಿ ನಿಯಮಾನುಸಾರ ಹೂಡಿಕೆ ಮಾಡಬಹುದು.&lt;/p&gt;&lt;p&gt;ಚೀನಾಗೆ ದೊಡ್ಡ ರಿಲೀಫ್: ಭಾರತಕ್ಕೆ ಗಡಿ ಹಂಚಿಕೊಂಡಿರುವ ಅತಿ ದೊಡ್ಡ ಆರ್ಥಿಕತೆಯಾದ ಚೀನಾದ ಹೂಡಿಕೆದಾರರಿಗೆ ಈ ಹೊಸ ನಿಯಮದಿಂದ ಹೆಚ್ಚಿನ ಲಾಭ ಸಿಗಲಿದೆ.&lt;/p&gt;&lt;h2&gt;2020 ರಲ್ಲಿ ಕಟ್ಟುನಿಟ್ಟಾಗಿದ್ದ ನಿಯಮ:&lt;/h2&gt;&lt;p&gt;2020 ರಲ್ಲಿ ನೆರೆಯ ದೇಶಗಳಿಂದ ದೇಶೀಯ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಭೀತಿಯಿಂದಾಗಿ ಭಾರತವು FDI ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿತ್ತು. ಅಂದು ಗಡಿ ಹಂಚಿಕೊಳ್ಳುವ ದೇಶಗಳ ಯಾವುದೇ ಸಣ್ಣ ಪ್ರಮಾಣದ ಹೂಡಿಕೆಗೂ ಸರ್ಕಾರದ ಪೂರ್ವಾನುಮೋದನೆ ಕಡ್ಡಾಯವಾಗಿತ್ತು. ಆದರೆ ಪ್ರಸ್ತುತ ಪರಿಷ್ಕೃತ ಚೌಕಟ್ಟು ಸಣ್ಣ ಮತ್ತು ನಿಯಂತ್ರಣವಿಲ್ಲದ ಪಾಲು ಹೊಂದಿರುವ ಹೂಡಿಕೆದಾರರಿಗೆ ಹೆಚ್ಚಿನ ನಮ್ಯತೆ (Flexibility) ಒದಗಿಸಿದೆ.&lt;/p&gt;&lt;h2&gt;ವಿವಿಧ ದೇಶಗಳ ಮೂಲಕ ಹರಿದುಬಂದ ಹೂಡಿಕೆ:&lt;/h2&gt;&lt;p&gt;ವಾಣಿಜ್ಯ ಸಚಿವಾಲಯದ ಪ್ರಕಾರ, ಈ 29 ಹೂಡಿಕೆ ಪ್ರಸ್ತಾವನೆಗಳು ನೇರವಾಗಿ ಅಲ್ಲದೆ ಮಾರಿಷಸ್, ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್, ಸಿಂಗಾಪುರ, ಲಕ್ಸೆಂಬರ್ಗ್ ಮತ್ತು ಕೇಮನ್ ಐಲ್ಯಾಂಡ್&zwnj;ಗಳಲ್ಲಿ ನೋಂದಾಯಿತವಾಗಿರುವ ಸಂಸ್ಥೆಗಳು ಹಾಗೂ ಹೂಡಿಕೆದಾರರ ಮೂಲಕ ಭಾರತವನ್ನು ತಲುಪಿವೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/business/india-receives-rs-4895-crore-fdi-under-relaxed-rules-for-neighboring-countries-gdp/articleshow-ztu7f0m"/>
        </item>
        <item>
            <title><![CDATA[ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಕೇರಳಂ ಸಿಎಂ ಕಿರಿಕ್; ಯಾಕೆ ಈ ವಿರೋಧ?]]></title>
            <link>https://kannada.asianetnews.com/india-news/kerala-cm-vd-satheesan-opposes-inclusion-of-mangaluru-railway-in-mysuru-division-mrq/articleshow-7cu6k5p</link>
            <guid isPermaLink="true">https://kannada.asianetnews.com/india-news/kerala-cm-vd-satheesan-opposes-inclusion-of-mangaluru-railway-in-mysuru-division-mrq/articleshow-7cu6k5p</guid>
            <pubDate>Sat, 22 Aug 2026 14:12:28 +0530</pubDate>
            <description><![CDATA[&lt;p&gt;ಮಂಗಳೂರು ರೈಲ್ವೆ ವಲಯವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ಮೈಸೂರು ವಿಭಾಗಕ್ಕೆ ಸೇರಿಸುವ ಕೇಂದ್ರದ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಸಂಸದರೊಂದಿಗೆ ಒಗ್ಗಟ್ಟಿನ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ma2kkkcy9r767sg0ssppx5,imgname-mangaluru-central-1787388055155.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ:&lt;/strong&gt; ಮಂಗಳೂರು ರೈಲ್ವೆ ವಲಯವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸುವ ಕೇಂದ್ರ ಸರ್ಕಾರದ ನಿರ್ಧಾರ ಏಕಪಕ್ಷೀಯವಾಗಿದೆ ಎಂದು ಕೇರಳ ಸಿಎಂ ವಿ.ಡಿ. ಸತೀಶನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಂದ್ರವನ್ನು ಒತ್ತಾಯಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದಕ್ಕಾಗಿ ರಾಜ್ಯದ ಎಲ್ಲಾ ಸಂಸದರ ಸಹಕಾರ ಪಡೆದು ಒಗ್ಗಟ್ಟಿನಿಂದ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಈ ನಿರ್ಧಾರದಿಂದಾಗಿ, ಅತ್ಯಂತ ಪ್ರಮುಖವಾದ ಮಂಗಳೂರು ಜಂಕ್ಷನ್ ಕೈತಪ್ಪಲಿದೆ. ಇದರಿಂದ ಪಾಲಕ್ಕಾಡ್ ವಿಭಾಗದ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದು ವಿಭಾಗದ ಅಭಿವೃದ್ಧಿ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸಿಎಂ ವಿ.ಡಿ. ಸತೀಶನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಾಕೆ ಈ ವಿರೋಧ?&lt;/strong&gt;&lt;/h2&gt;&lt;p&gt;ದಕ್ಷಿಣ ರೈಲ್ವೆಯ ಭಾಗವಾಗಿರುವ ಉಳ್ಳಾಲದಿಂದ ಮಂಗಳೂರುವರೆಗಿನ ಪ್ರದೇಶಗಳು ನೈಋತ್ಯ ರೈಲ್ವೆಗೆ ಸೇರ್ಪಡೆಯಾಗಲಿವೆ. ಇದರಿಂದ ದಕ್ಷಿಣ ರೈಲ್ವೆ ಮತ್ತು ಕೇರಳ ರಾಜ್ಯಕ್ಕೆ ದೊಡ್ಡ ನಷ್ಟ ಉಂಟಾಗಲಿದೆ. ರೈಲ್ವೆ ಸಚಿವಾಲಯ ಈ ನಿರ್ಧಾರ ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರದ ಗಮನಕ್ಕೆ ತಂದಿಲ್ಲ ಅಥವಾ ಯಾವುದೇ ರೀತಿಯ ಚರ್ಚೆಯನ್ನೂ ನಡೆಸಿಲ್ಲ. ಇದು ಖಂಡನೀಯ ಎಂದು ಸತೀಶನ್ ಹೇಳಿದ್ದಾರೆ.&lt;/p&gt;&lt;p&gt;&quot;ಈ ನಿರ್ಧಾರವನ್ನು ಮರುಪರಿಶೀಲಿಸಬೇಕೆಂಬುದು ಕೇರಳದ ಒಕ್ಕೊರಲ ಆಗ್ರಹ. ಈ ಗಂಭೀರ ಸಮಸ್ಯೆಗೆ ತಕ್ಷಣ ಪರಿಹಾರ ಕೋರಿ ನಾವು ಕೇಂದ್ರ ಸರ್ಕಾರವನ್ನು ಸಂಪರ್ಕಿಸುತ್ತೇವೆ. ಪ್ರಧಾನಮಂತ್ರಿ ಹಾಗೂ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆಯುತ್ತೇನೆ. ರಾಜ್ಯದ ಸಂಸದರ ಸಹಕಾರದೊಂದಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ,&quot; ಎಂದು ವಿ.ಡಿ. ಸತೀಶನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಂಸತ್ತಿನಲ್ಲಿ ಬಲವಾಗಿ ಧ್ವನಿ ಎತ್ತುವೆ ಎಂದ ಸಂಸದ&lt;/strong&gt;&lt;/h3&gt;&lt;p&gt;ಪಾಲಕ್ಕಾಡ್ ರೈಲ್ವೆ ವಿಭಾಗದ ಅಡಿಯಲ್ಲಿ ಅತಿ ಹೆಚ್ಚು ಆದಾಯ ತರುವ ಪಣಂಬೂರು ನಿಲ್ದಾಣ ಸೇರಿದಂತೆ, ಕರ್ನಾಟಕದ ಉಳ್ಳಾಲದಿಂದ ಮಂಗಳೂರುವರೆಗಿನ ಭಾಗಗಳನ್ನು ಮೈಸೂರು ವಿಭಾಗಕ್ಕೆ ವರ್ಗಾಯಿಸಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ. ಈ ಆದೇಶ ಹೊರಬಿದ್ದ ನಂತರವೇ ಜನಪ್ರತಿನಿಧಿಗಳಿಗೆ ವಿಷಯ ತಿಳಿದಿದೆ. ಕರ್ನಾಟಕದ ಒತ್ತಡದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ವಿರುದ್ಧ ಸಂಸತ್ತಿನಲ್ಲಿ ಬಲವಾಗಿ ಧ್ವನಿ ಎತ್ತುತ್ತೇವೆ ಎಂದು ಸಂಸದ ವಿ.ಕೆ. ಶ್ರೀಕಂಠನ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭಾರತದ ಚಂದ್ರಯಾನ-3 ಬೆನ್ನಲ್ಲೇ ಚಂದ್ರನ ದಕ್ಷಿಣ ಧ್ರುವಕ್ಕೆ ಚೀನಾದ ಲಗ್ಗೆ, ಅಮೆರಿಕಕ್ಕೆ ಸವಾಲೆಸೆದು ಉಡಾವಣೆ ಸಜ್ಜು!&lt;/strong&gt;&lt;/p&gt;&lt;p&gt;ಇದು ಪಾಲಕ್ಕಾಡ್ ವಿಭಾಗದ ರೆಕ್ಕೆಗಳನ್ನು ಕತ್ತರಿಸುವ ಪ್ರಯತ್ನ ಎಂದು ಸಂಸದ ಎಂ.ಕೆ. ರಾಘವನ್ ಆರೋಪಿಸಿದ್ದಾರೆ. ಈ ವಿಷಯವಾಗಿ ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸುವುದಾಗಿ ಕೇರಳದ ಸಂಸದರು ಎಚ್ಚರಿಸಿದ್ದಾರೆ. ಕೇರಳಕ್ಕೆ ಪ್ರತ್ಯೇಕ ರೈಲ್ವೆ ವಲಯ ಬೇಕು, ಪಾಲ್ಘಾಟ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಬಲಪಡಿಸಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿರುವಾಗಲೇ, ಕೇಂದ್ರದ ಈ ನಿರ್ಧಾರ ಕೇರಳದ ನಿರೀಕ್ಷೆಗಳಿಗೆ ಹಿನ್ನಡೆ ಉಂಟುಮಾಡಿದೆ. ಈ ವಿಭಾಗ ವಿಭಜನೆಯು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.&lt;/p&gt;&lt;p&gt;The Gazette Notification is here!Once again I thank our Union Railway Ministry led by Shri @AshwiniVaishnaw @VSOMANNA_BJP for enabling this long sought change.&amp;nbsp;Mangaluru &amp;amp; all its Railway enthusiasts and passengers looked forward to it for years now.&amp;nbsp;May this change to&hellip; pic.twitter.com/BqNIlhdq0E&lt;/p&gt;&lt;p&gt;&mdash; Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) August 22, 2026&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/india-news/kerala-cm-vd-satheesan-opposes-inclusion-of-mangaluru-railway-in-mysuru-division-mrq/articleshow-7cu6k5p"/>
        </item>
        <item>
            <title><![CDATA[ಇವ್ರು ನಮ್ಮ ಚೀಫ್ ಆಫೀಸರ್,  ಮೆಟ್ರೋ ನಿಲ್ದಾಣದ ವೈರಲ್ ಬೆಕ್ಕಿಗೆ ಹುದ್ದೆ ಕೊಟ್ಟ ಮೆಟ್ರೋ ಲಿಮಿಟೆಡ್]]></title>
            <link>https://kannada.asianetnews.com/viral/meet-our-chief-officer-mumbai-metro-gives-official-post-to-viral-metro-station-cat/articleshow-kobvn8i</link>
            <guid isPermaLink="true">https://kannada.asianetnews.com/viral/meet-our-chief-officer-mumbai-metro-gives-official-post-to-viral-metro-station-cat/articleshow-kobvn8i</guid>
            <pubDate>Sat, 22 Aug 2026 13:56:03 +0530</pubDate>
            <description><![CDATA[&lt;p&gt;ಇವ್ರು ನಮ್ಮ ಚೀಫ್ ಫೀಲೈನ್ ಆಫೀಸರ್, ಪ್ರಯಾಣಿಕರ ಮೇಲೆ ನಿಗಾ ಇಡುವುದು ಸೇರಿದಂತೆ ಹಲವು ಕೆಲಸವನ್ನು ಪರ್ಫೆಕ್ಟ್ ಆಗಿ ಮಾಡುತ್ತಿದೆ ಎಂದು ಮೆಟ್ರೋ ಕಾರ್ಪೋರೇಶನ್ ಹೇಳಿದೆ. ಮೆಟ್ರೋ ನಿಲ್ದಾಣದಲ್ಲಿರುವ ಬೆಕ್ಕಿನ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಮೆಟ್ರೋ ಈ ಪ್ರತಿಕ್ರಿಯೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0m93yrnqr98pfxdrkagt66y,imgname-viral-metro-station-cat-gets-an-official-position-1787387050773.png" type="image/jpeg" height="390" width="690"/>
            <content:encoded><![CDATA[&lt;p&gt;ಮೆಟ್ರೋ ನಿಲ್ದಾಣಕ್ಕೆ ಎಂಟ್ರಿಕೊಡುತ್ತಿದ್ದಂತೆ ಈ ಬೆಕ್ಕು ನಿಮ್ಮನ್ನು ಸ್ವಾಗತಿಸುತ್ತದೆ. ಪ್ರತಿಯೊಬ್ಬ ಪ್ರಯಾಣಿಕರ ಮೇಲೆ ಗಮವಿಡುತ್ತದೆ. ಹಲವು ಬಾರಿ ಅತೀಯಾದ ಕೆಲಸದಿಂದ ಆರಾಮಾಗಿ ನಿದ್ರಿಸುತ್ತದೆ. ಆದರೆ ತನ್ನ ಕರ್ತವ್ಯ ಸಮಯದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಹೀಗಾಗಿ ಈ ಬೆಕ್ಕು ಪ್ರಯಾಣಿಕರ ಗಮನಸೆಳೆದಿದೆ. ಈ ಪೈಕಿ ಒರ್ವ ಪ್ರಯಾಣಿಕ ಈ ಬೆಕ್ಕಿನ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಮೆಟ್ರೋ ಕಾರ್ಪೋರೇಶನ್ ಈ ಬೆಕ್ಕಿನ ಕುರಿತು ವಿವರಣೆ ನೀಡಿ ಪ್ರಯಾಣಿಕರ ಮನಗೆದ್ದಿದೆ. ಈ ಬೆಕ್ಕು ನಮ್ಮ ಚೀಫ್ ಫೀಲೈನ್ ಆಫೀಸರ್. ಇವರ ಕೆಲಸ ಪರ್ಫೆಕ್ಟ್ ಎಂದು ಪ್ರತಿಕ್ರಿಯಿಸಿದೆ.&lt;/p&gt;&lt;h2&gt;ಮೆಟ್ರೋ ನಿಲ್ದಾಣದಲ್ಲಿ ಸ್ವಾಗತ ಕೋರುವ ಬೆಕ್ಕು&lt;/h2&gt;&lt;p&gt;ಇದು ಮುಂಬೈ ಮೆಟ್ರೋ ನಿಲ್ದಾಣದಲ್ಲಿರುವ ಬೆಕ್ಕು. ಗುಂಡುವಳಿ ಮೆಟ್ರೋ ನಿಲ್ದಾಣದ ಆರಂಭದಲ್ಲಿರುವ ಜಾಗದಲ್ಲಿ ಬೆಕ್ಕು ಆರಾಮವಾಗಿ ನಿದ್ರಿಸುತ್ತದೆ. ಇಲ್ಲೇ ಕುಳಿತುಕೊಂಡಿರುತ್ತದೆ. ಪ್ರತಿ ದಿನ ಪ್ರಯಾಣಿಕರಿಗೆ ಈ ಬೆಕ್ಕು ಕಾಣಸಿಗುತ್ತದೆ. ಪ್ರತಿ ದಿನ ಈ ಬೆಕ್ಕು ನೋಡುತ್ತಾ ಹಲವರು ಸಾಗುತ್ತಾರೆ. ಈ ಪೈಕಿ ಮೆಟ್ರೋ ಪ್ರಯಾಣಿಕ ಸಂದೇಶ್ ಸಾಮಂತ್ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಶುದ್ಧ ಆತ್ಮಕ್ಕೆ ಮೆಟ್ರೋದಿಂದ ಅಧಿಕೃತ ಹುದ್ದೆ ನೀಡಬೇಕು ಎಂದು ಮುಂಬೈ ಮೆಟ್ರೋ ಕಾರ್ಪೋರೇಶನ್&zwnj;ಗೆ ಮನವಿ ಮಾಡಿದ್ದರು. ಇದು ಯಾವುದೇ ವೇತನವಿಲ್ಲದೆ ಕೆಲಸ ಮಾಡುತ್ತಿದೆ ಎಂದು ಸಾವಂತ್ ಹೇಳಿದ್ದರು.&lt;/p&gt;&lt;h2&gt;ಮುಂಬೈ ಮೆಟ್ರೋದಿಂದ ಅಧಿಕೃತ ಹುದ್ದೆ&lt;/h2&gt;&lt;p&gt;ಈ ಪೋಸ್ಟ್&zwnj;ಗೆ ಮುಂಬೈ ಮೆಟ್ರೋ ಪ್ರತಿಕ್ರಿಯೆ ನೀಡಿದೆ. ಇವರು ನಮ್ಮ ಮುಖ್ಯ ಫೀಲೈನ್ ಆಫೀಸರ್ ಎಂದು ಮೆಟ್ರೋ ಕಾರ್ಪೋರೇಶನ್ ಪ್ರತಿಕ್ರಿಯಿಸಿದೆ. ಈ ಅಧಿಕಾರಿಯ ಮುಖ್ಯಕೆಲಸವನ್ನು ಮಾಡುತ್ತಿದ್ದಾರೆ. ಮೆಟ್ರೋ ನಿಲ್ದಾಣ ಪರಿಶೀಲನೆ, ಪ್ರಯಾಣಿಕರ ಮೇಲೆ ನಿಗಾ ಇಡುವುದು, ಎಲ್ಲರನ್ನು ಮೆಚ್ಚುವಂತೆ ಸರಿಯಾದ ಸ್ಥಳದಲ್ಲಿ ಕುಳಿತು ಎಲ್ಲರನ್ನು ಸ್ವಾಗತಿಸುವುದು ಎಲ್ಲವೂ ಈ ಅಧಿಕಾರಿಯ ಜವಾಬ್ದಾರಿಯಾಗಿದೆ. ಇಲ್ಲೀವರೆಗೆ ಈ ಅಧಿಕಾರಿಯ ಕೆಲಸ ಪರ್ಫೆಕ್ಟ್ ಎಂದು ಮುಂಬೈ ಮೆಟ್ರೋ ಕಾರ್ಪೋರೇಶನ್ ತಮಾಷೆ ಮಾಡಿದೆ.&lt;/p&gt;&lt;p&gt;ಮುಂಬೈ ಕಾರ್ಪೋರೇಶನ್ ಈ ಪ್ರತಿಕ್ರಿಯೆ ನೀಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಹಲವು ನಗೆಗಡಲಲ್ಲಿ ತೇಲಾಡಿದ್ದಾರೆ. ತಾವು ಕೂಡ ಈ ಬೆಕ್ಕು ನೋಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬೆಕ್ಕು ಇಲ್ಲಿದೆ. ಈ ಬೆಕ್ಕಿಗೆ ಸಂಗಾತಿ ಇತ್ತು. ಆದರೆ ಇತ್ತೀಚೆಗೆ ಈ ಸಂಗಾತಿ ಕಾಣಿಸುತ್ತಿಲ್ಲ. ಕಳೆದ ಮೂರು ವರ್ಷಗಳ ಪ್ರೊಬೇಷನ್ ಪಿರಿಯೆಡ್ ಬಳಿಕ ಇದೀಗ ಅಧಿಕೃತವಾಗಿ ಆನ್&zwnj;ರೋಲ್ ಹುದ್ದೆ ಗಿಟ್ಟಿಸಿಕೊಂಡಿದೆ. ಅಭಿನಂದನೆಗಳು ಎಂದು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಕಾಶಿಗಾಂವ್ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಬೆಕ್ಕು ಕರ್ತವ್ಯದಲ್ಲಿದೆ ಎಂದಿದ್ದಾರೆ.&lt;/p&gt;&lt;p&gt;ಈ ಆಫೀಸರ್ ತುಂಬಾ ಮುದ್ದಾಗಿದ್ದಾರೆ. ಇದರಿಂದ ನಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಕರ್ತವ್ಯ ಲೋಪದಡಿ ದಂಡ ವಿಧಿಸಬೇಕು ಎಂದು ಹಲವರು ಸೂಚಿಸಿದ್ದಾರೆ. ಬೆಕ್ಕಿನ ಫೋಟೋ ಅನುಮತಿ ಇಲ್ಲದೆ ಪಡೆಯಲಾಗಿದೆ. ನಾಳೆ ಫೀಲೈನ್ ಆಫೀಸರ್ ದಂಡ ಹಾಕುವ ಸಾಧ್ಯತೆ ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/meet-our-chief-officer-mumbai-metro-gives-official-post-to-viral-metro-station-cat/articleshow-kobvn8i"/>
        </item>
        <item>
            <title><![CDATA[ಸಿಎಂ ಹೆಗಲ ಮೇಲೆ ಕೈ ಹಾಕಿ ಜಪಾನ್ ವಿದ್ಯಾರ್ಥಿಗಳು ಸೆಲ್ಫಿ ಫೋಟೋ! ವೈರಲ್ ವಿಡಿಯೋ]]></title>
            <link>https://kannada.asianetnews.com/india-news/japanese-student-s-selfie-with-yogi-adityanath-goes-viral-rav/articleshow-f028uz2</link>
            <guid isPermaLink="true">https://kannada.asianetnews.com/india-news/japanese-student-s-selfie-with-yogi-adityanath-goes-viral-rav/articleshow-f028uz2</guid>
            <pubDate>Sat, 22 Aug 2026 13:21:15 +0530</pubDate>
            <description><![CDATA[ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋದಲ್ಲಿ ಜಪಾನ್ ವಿದ್ಯಾರ್ಥಿಗಳನ್ನು ಭೇಟಿಯಾದರು. ಈ ಸಭೆಯು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಗೆಯ ಕ್ಷಣಗಳಿಂದ ಕೂಡಿತ್ತು, ವಿದ್ಯಾರ್ಥಿಗಳು ಯೋಗಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0m5f4w5hvm74zsyt1d780xq,imgname-japanese-students-meet-yogi-adityanath-1787304903-1787383223172.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಜಪಾನ್ ವಿದ್ಯಾರ್ಥಿಗಳ ನಡುವಿನ ಒಂದು ಸಭೆ, ನಗು ಖುಷಿಯ ಕ್ಷಣಗಳಿಗೆ ಸಾಕ್ಷಿಯಾಯಿತು. ಲಕ್ನೋದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಯೋಗಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.&lt;/p&gt;&lt;h2&gt;ಯುಪಿ-ಜಪಾನ್ ಹೂಡಿಕೆ ಸಭೆ&lt;/h2&gt;&lt;p&gt;ಶುಕ್ರವಾರ, ಆಗಸ್ಟ್ 21 ರಂದು ಲಕ್ನೋದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ 'ಯುಪಿ ಜಪಾನ್ ಹೂಡಿಕೆ ಸಭೆ'ಯ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. 'ಭವಿಷ್ಯದೊಂದಿಗೆ ಸಂವಾದ' (A Dialogue with the Future) ಹೆಸರಿನ ಈ ಕಾರ್ಯಕ್ರಮದಲ್ಲಿ 13 ಜಪಾನ್ ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಕರು ಸ್ಥಳೀಯ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.&lt;/p&gt;&lt;h3&gt;ಸೆಲ್ಫಿ ವೇಳೆ ಸಿಎಂ ಹೆಗಲ ಮೇಲೆ ಕೈ, ಯೋಗಿ ಫುಲ್ ಖುಷಿ&lt;/h3&gt;&lt;p&gt;ಯೋಗಿ ಆದಿತ್ಯನಾಥ್ ಅವರು ಜಪಾನೀಸ್ ಭಾಷೆಯಲ್ಲಿ 'ಒಹಾಯೋ ಗೊಝೈಮಾಸು' (ಶುಭೋದಯ) ಎಂದು ಹೇಳಿ ಮಾತು ಆರಂಭಿಸಿದರು. ಉತ್ತರ ಪ್ರದೇಶವು 25 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಅತಿದೊಡ್ಡ ರಾಜ್ಯ ಎಂದು ಅವರು ವಿವರಿಸಿದರು.&lt;/p&gt;&lt;p&gt;ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಜಪಾನ್ ವಿದ್ಯಾರ್ಥಿಗಳು ಒಂದು ಜಪಾನೀಸ್ ಹಾಡನ್ನು ಹಾಡಿದರೆ, ಉತ್ತರ ಪ್ರದೇಶದ ಇಶಾನ್ ಎಂಬ ವಿದ್ಯಾರ್ಥಿ 'ಕೌಶಲ್ಯ ದಶರಥ ಕೆ ನಂದನ್' ಗೀತೆಯನ್ನು ಹಾಡಿ ರಂಜಿಸಿದ. ಜಪಾನ್ ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಯೋಗಿ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.&lt;/p&gt;ಇನ್&zwnj;ಸ್ಟಾಗ್ರಾಂನಲ್ಲಿ ಈ ಪೋಸ್ಟ್ ವೀಕ್ಷಿಸಿ&lt;p&gt;TV1 INDIA खबरों का नया अड्डा* (@tv1indialive) ಇವರಿಂದ ಹಂಚಿಕೊಳ್ಳಲಾದ ಪೋಸ್ಟ್&lt;/p&gt;&lt;p&gt;&lt;/p&gt;&lt;p&gt;ನಂತರ ವಿದ್ಯಾರ್ಥಿಗಳು ಸಿಎಂ ಜೊತೆ ಫೋಟೋ ತೆಗೆಸಿಕೊಂಡರು. ಕೆಲವು ವಿದ್ಯಾರ್ಥಿಗಳು ಯೋಗಿ ಹತ್ತಿರ ಹೋಗಲು ಹಿಂಜರಿದು ದೂರದಿಂದಲೇ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಯೋಗಿ, ಅವರನ್ನು ಹತ್ತಿರ ಕರೆದು ಖುಷಿಯಿಂದ ಪೋಸ್ ನೀಡಿದರು. ಇದೇ ತಮಾಷೆಯ ಕ್ಷಣದಲ್ಲಿ, ವಿದ್ಯಾರ್ಥಿನಿಯೊಬ್ಬಳು ಯೋಗಿ ಅವರ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡಳು. ಈ ಅನಿರೀಕ್ಷಿತ ಸಲುಗೆಯಿಂದ ಯೋಗಿ ಅವರ ಮುಖದಲ್ಲಿ ನಗು ಮೂಡಿತು.&lt;/p&gt;&lt;p&gt;ವಿದ್ಯಾರ್ಥಿಗಳು ಯೋಗಿ ಅವರನ್ನು ಪ್ರೀತಿಯಿಂದ 'ಯೋಗಿ-ಸಾನ್' ಎಂದು ಕರೆಯುತ್ತಿದ್ದರು ಮತ್ತು ತಮ್ಮ ಸರದಿಗಾಗಿ ಕಾತರದಿಂದ ಕಾಯುತ್ತಿದ್ದರು. ಜಪಾನ್ ವಿದ್ಯಾರ್ಥಿನಿ ಮಿಯಾಗಿ ಮೋಟೋ ತನ್ನ ಅನುಭವ ಹಂಚಿಕೊಂಡು, 'ನಾನು ಮೊದಲ ಬಾರಿಗೆ ಬಿಂದಿ ಇಟ್ಟುಕೊಂಡೆ, ನನಗೆ ಇದು ತುಂಬಾ ಇಷ್ಟವಾಯಿತು. ಭಾರತದಲ್ಲಿನ ನನ್ನ ಅನುಭವ ಬಹಳ ವಿಶಿಷ್ಟವಾಗಿತ್ತು' ಎಂದು ಹೇಳಿದಳು.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/japanese-student-s-selfie-with-yogi-adityanath-goes-viral-rav/articleshow-f028uz2"/>
        </item>
        <item>
            <title><![CDATA[ದಕ್ಷಿಣ ಭಾರತದ ಅಭಿವೃದ್ಧಿಗೆ ಬೆಂಗಳೂರು-ಹೊಸೂರು ಮೆಟ್ರೋ ಮಾರ್ಗ  ಅಗತ್ಯ: ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌]]></title>
            <link>https://kannada.asianetnews.com/india-news/vijay-pushes-for-bengaluru-hosur-interstate-metro-link-southern-zonal-council-san/articleshow-d0fcppa</link>
            <guid isPermaLink="true">https://kannada.asianetnews.com/india-news/vijay-pushes-for-bengaluru-hosur-interstate-metro-link-southern-zonal-council-san/articleshow-d0fcppa</guid>
            <pubDate>Sat, 22 Aug 2026 12:54:53 +0530</pubDate>
            <description><![CDATA[&lt;p&gt;ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ. ಈ ಅಂತರ್&zwnj;ರಾಜ್ಯ ಮೆಟ್ರೋ ಯೋಜನೆಯು ಎರಡೂ ರಾಜ್ಯಗಳ ಆರ್ಥಿಕತೆಗೆ ಬಲ ನೀಡಲಿದೆ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0m5k6wtemrz5atq6v7bv8wg,imgname-bengaluru-hosur-metro-link-1787383356314.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಹಾಬಲಿಪುರಂ (ಆ.22): &lt;/strong&gt;ದಕ್ಷಿಣ ಭಾರತದ ರಾಜ್ಯಗಳು ಒಂದೇ ಸಮಗ್ರ ಆರ್ಥಿಕ ವಲಯವಾಗಿ (Single, integrated economic region) ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿಗೆ ಮೆಟ್ರೋ ಜಾಲವನ್ನು ವಿಸ್ತರಿಸುವ ಯೋಜನೆಯನ್ನು ಶೀಘ್ರ ಜಾರಿಗೊಳಿಸುವಂತೆ ಹೇಳಿದ್ದಾರೆ. ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ (Southern Zonal Council meeting) ಮಾತನಾಡಿದ ವಿಜಯ್, ಈ ಮೆಟ್ರೋ ಯೋಜನೆಯು ದಕ್ಷಿಣ ಭಾರತದ ಮೊದಲ ಅಂತರ್&zwnj;ರಾಜ್ಯ ಮೆಟ್ರೋ ಸಂಪರ್ಕವಾಗಲಿದ್ದು, ರಾಜ್ಯ ಗಡಿಗಳನ್ನು ಮೀರಿ ಕೈಗೊಳ್ಳುವ ಸಹಕಾರ ಮೂಲಸೌಕರ್ಯ ಯೋಜನೆಗಳಿಗೆ (Cooperative infrastructure) ಅತ್ಯುತ್ತಮ ಮಾದರಿಯಾಗಲಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಬಿಎಂಆರ್&zwnj;ಸಿಎಲ್ ತಿರಸ್ಕರಿಸಿದ್ದ ಯೋಜನೆಯಿಟ್ಟುಕೊಂಡು ಪ್ರತಿಪಾದನೆ&lt;/strong&gt;&lt;/h2&gt;&lt;p&gt;ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ಅಂತರ್&zwnj;ರಾಜ್ಯ ಮೆಟ್ರೋ ಸಂಪರ್ಕ ಯೋಜನೆಯು ಕಾರ್ಯಸಾಧ್ಯವಲ್ಲ (Not feasible) ಎಂದು ತಿರಸ್ಕರಿಸಿದ ಬೆನ್ನಲ್ಲೇ ತಮಿಳುನಾಡು ಸಿಎಂ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಪ್ರಸ್ತುತ ಹಳದಿ ಮಾರ್ಗದ ಕೊನೆಯ ನಿಲ್ದಾಣವಾಗಿರುವ ಬೊಮ್ಮಸಂದ್ರದಿಂದ ತಮಿಳುನಾಡು ಗಡಿಗೆ ಹತ್ತಿರವಿರುವ ಬೆಂಗಳೂರಿನ ಪ್ರಮುಖ ಉಪನಗರ ಅತ್ತಿಬೆಲೆಯವರೆಗೆ ಮಾತ್ರ ಮೆಟ್ರೋ ವಿಸ್ತರಿಸಲು ಬಿಎಂಆರ್&zwnj;ಸಿಎಲ್ ಪರಿಶೀಲಿಸುತ್ತಿದೆ.&lt;/p&gt;&lt;p&gt;ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ತಮಿಳುನಾಡು ಸರ್ಕಾರವೇ ಧನಸಹಾಯ ನೀಡಿ ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿ (DPR) ಪ್ರಕಾರ, ಬೆಂಗಳೂರು ಮತ್ತು ಹೊಸೂರು ನಡುವೆ 23 ಕಿಲೋಮೀಟರ್ ಉದ್ದದ ಮೆಟ್ರೋ ಕಾರಿಡಾರ್ ನಿರ್ಮಿಸಲು ಪ್ರಸ್ತಾಪಿಸಲಾಗಿತ್ತು. ಈ ಪೈಕಿ 12 ಕಿ.ಮೀ. ಕರ್ನಾಟಕದ ವ್ಯಾಪ್ತಿಯಲ್ಲಿದ್ದರೆ, ಬಾಕಿ 11 ಕಿ.ಮೀ. ತಮಿಳುನಾಡು ವ್ಯಾಪ್ತಿಗೆ ಬರುತ್ತದೆ. ಯೋಜನೆಗೆ ಒಟ್ಟು 12 ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿತ್ತು. ತಮಿಳುನಾಡು ಭಾಗದಲ್ಲಿ ಕಾರಿಡಾರ್ ಉದ್ದವನ್ನು 2.5 ಕಿ.ಮೀ. ವಿಸ್ತರಿಸಿ, ಕೈಗಾರಿಕಾ ನಗರವಾದ ಹೊಸೂರಿನ ಹೊರವಲಯದಲ್ಲಿ ಕೊನೆಯ ನಿಲ್ದಾಣವನ್ನು ಯೋಜಿಸಲಾಗಿತ್ತು.&lt;/p&gt;&lt;h2&gt;&lt;strong&gt;'ದಕ್ಷಿಣದ ರಾಜ್ಯಗಳಿಗೆ ಬಲ ತುಂಬಲಿದೆ'&lt;/strong&gt;&lt;/h2&gt;&lt;p&gt;ತಮ್ಮ ಭಾಷಣದಲ್ಲಿ ಈ ಯೋಜನೆಯ ಪ್ರಾಮುಖ್ಯತೆಯನ್ನು ವಿವರಿಸಿದ ಮುಖ್ಯಮಂತ್ರಿ ವಿಜಯ್, &quot;ಈ ಯೋಜನೆಯು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಕಾರಿಡಾರ್ ಅನ್ನು ವೇಗವಾಗಿ ಬೆಳೆಯುತ್ತಿರುವ ಹೊಸೂರಿನ ಕೈಗಾರಿಕಾ ಹಬ್&zwnj;ನೊಂದಿಗೆ ಜೋಡಿಸಲಿದೆ. ಇದರಿಂದ ಎರಡೂ ರಾಜ್ಯಗಳ ಶ್ರಮಿಕ ವರ್ಗ ಮತ್ತು ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ,&quot; ಎಂದರು.&lt;/p&gt;&lt;p&gt;&quot;ರಾಜ್ಯ ಗಡಿಗಳನ್ನು ಮೀರಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಈ ಮಾದರಿ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಕೇಂದ್ರ ಸರ್ಕಾರ ಮತ್ತು ಎರಡೂ ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಇದನ್ನು ತ್ವರಿತವಾಗಿ ಮುನ್ನಡೆಸಬೇಕು. ದಕ್ಷಿಣದ ರಾಜ್ಯಗಳ ನಡುವೆ ಇಂತಹ ಇನ್ನಷ್ಟು ಸಂಪರ್ಕ ಜಾಲಗಳಿಗೆ ಇದು ಮುನ್ನುಡಿಯಾಗಲಿ,&quot; ಎಂದು ವಿಜಯ್ ಆಶಯ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಹೊಸೂರು ಮೂಲಸೌಕರ್ಯ ಅಭಿವೃದ್ಧಿಗೆ ಕಣ್ಣು&lt;/strong&gt;&lt;/h2&gt;&lt;p&gt;ತಮಿಳುನಾಡು ಸರ್ಕಾರದ ಪ್ರಕಾರ, ಈ ಮೆಟ್ರೋ ವಿಸ್ತರಣೆಯು ಹೊಸೂರಿನ ಕೈಗಾರಿಕಾ ಪ್ರಗತಿಯನ್ನು ಹೆಚ್ಚಿಸುವುದಲ್ಲದೆ ಎರಡೂ ರಾಜ್ಯಗಳ ನಡುವೆ ಸುಲಭ ಸಂಚಾರಕ್ಕೆ ನೆರವಾಗಲಿದೆ. ಸುಮಾರು 500 ಬೃಹತ್ ಕೈಗಾರಿಕೆಗಳು ಮತ್ತು 3,000 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು (MSME) ಹೊಂದಿರುವ ಹೊಸೂರಿಗಾಗಿ, ಕೃಷ್ಣಗಿರಿ ಜಿಲ್ಲೆಯ ಬೇರಿಗೈ-ಬಾಗಲೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರ ಯೋಜನೆ ರೂಪಿಸುತ್ತಿದೆ.&lt;/p&gt;&lt;p&gt;ದಕ್ಷಿಣ ರಾಜ್ಯಗಳ ಉದ್ಯಮ ಸಾಮರ್ಥ್ಯವು ಕೇವಲ ರಾಜ್ಯದ ಗಡಿಗಳಿಗೆ ಸೀಮಿತವಾಗಿಲ್ಲ ಎಂಬುದನ್ನು ಮನಗಂಡು, ಎಲ್ಲರೂ ಒಂದಾಗಿ ಆಲೋಚಿಸಬೇಕು. ಪ್ರತ್ಯೇಕವಾಗಿ ಬೆಳೆಯುವುದಕ್ಕಿಂತ, ರಾಜ್ಯಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಬಲವಾದ ಸರಪಳಿಯನ್ನು ನಿರ್ಮಿಸಬಹುದು ಎಂದು ವಿಜಯ್ ಹೇಳಿದರು. ಇದರೊಂದಿಗೆ ದಕ್ಷಿಣ ರಾಜ್ಯಗಳಲ್ಲಿ ಜಂಟಿ ಉತ್ಪಾದನಾ ವಲಯಗಳು, ಸಾರಿಗೆ ಪಾರ್ಕ್&zwnj;ಗಳು ಹಾಗೂ ಉತ್ಪಾದನಾ ಕೇಂದ್ರಗಳಿಂದ ಬಂದರುಗಳಿಗೆ ಸುಲಭವಾಗಿ ಸರಕು ಸಾಗಿಸುವ ಜಂಟಿ 'ಆರ್ಥಿಕ ಮತ್ತು ಲಾಜಿಸ್ಟಿಕ್ಸ್ ಕ್ಲಸ್ಟರ್'ಗಳನ್ನು ನಿರ್ಮಿಸುವ ಪ್ರಸ್ತಾಪವನ್ನೂ ಅವರು ಸಭೆಯ ಮುಂದಿಟ್ಟರು.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/vijay-pushes-for-bengaluru-hosur-interstate-metro-link-southern-zonal-council-san/articleshow-d0fcppa"/>
        </item>
        <item>
            <title><![CDATA[SSLCಯಲ್ಲಿ ಬಂದದ್ದು 54%:  ಇವನ ಹಣೆಬರಹ ಇಷ್ಟೇ ಎಂದೋರ ಎದುರೇ JEE ನಲ್ಲಿ ಟಾಪರ್​ ಆಗಿ ಮೆರೆದ ಯುವಕ]]></title>
            <link>https://kannada.asianetnews.com/education/he-scored-54-percent-in-class-10-three-years-later-jainendrajeet-cracked-jee-advanced-suc/articleshow-4drznqv</link>
            <guid isPermaLink="true">https://kannada.asianetnews.com/education/he-scored-54-percent-in-class-10-three-years-later-jainendrajeet-cracked-jee-advanced-suc/articleshow-4drznqv</guid>
            <pubDate>Sat, 22 Aug 2026 12:42:18 +0530</pubDate>
            <description><![CDATA[10ನೇ ತರಗತಿಯಲ್ಲಿ ಕೇವಲ 54% ಅಂಕ ಗಳಿಸಿದ್ದ ಜೈನೇಂದ್ರಜೀತ್, ಪೋಷಕರ ಪ್ರೋತ್ಸಾಹ ಮತ್ತು ಬದಲಾದ ಅಧ್ಯಯನ ಶೈಲಿಯಿಂದ JEE ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ IIT ಬಾಂಬೆಗೆ ಪ್ರವೇಶ ಪಡೆದರು. ಒಂದು ಕೆಟ್ಟ ಫಲಿತಾಂಶವು ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಅವರ ಈ ಯಶೋಗಾಥೆಯು ಸ್ಫೂರ್ತಿದಾಯಕ ಸಾಕ್ಷಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0m4zee2v2hxhkdgcw5qq0k7,imgname-student-1787382708674.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೀವನದಲ್ಲಿ ಹಲವು ಬಾರಿ, ಕೆಟ್ಟ ಫಲಿತಾಂಶವು ನಮ್ಮ ಇಡೀ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ನಾವು ಭಾವಿಸುತ್ತೇವೆ, ಆದರೆ ವಾಸ್ತವದಲ್ಲಿ, ಅದು ಕೇವಲ ಒಂದು ಮೈಲಿಗಲ್ಲು, ಅದೇ ಕೊನೆಯಲ್ಲ. ಒಂದು ಅಂಕ ಕಡಿಮೆ ಬಂದರೂ, ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿದ್ದಾರೆ. ಅದಕ್ಕೆ ಮುಖ್ಯ ಕಾರಣನೇ ಅಪ್ಪ-ಅಮ್ಮ. ಅವರ ಪ್ರತಿಷ್ಠೆಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಅಕ್ಕ-ಪಕ್ಕದವರ ಜೊತೆ ಹೋಲಿಕೆ ಮಾಡುವುದು, ನೆಂಟರಿಷ್ಟರ ಮಕ್ಕಳ ಜೊತೆ ಹೋಲಿಸಿ ಹೀಯಾಳಿಸುವುದು... ಇಂಥ ಒಣ ಪ್ರತಿಷ್ಠೆಗೆ ತಮ್ಮ ಮಕ್ಕಳನ್ನು ಅಂಕ ಗಳಿಸುವ ಸಾಧನ ಮಾಡಿ, ಕೊನೆಗೆ ಅವರನ್ನು ಸಾವಿನ ಬಾಯಿಗೆ ನೂಕುವವರೂ ಇದೇ ಅಪ್ಪ-ಅಮ್ಮಂದಿರೇ. ಆದರೆ, ಅದ್ಯಾವುದೋ ಕಾರಣಕ್ಕೆ ಒಮ್ಮೆ ಕಡಿಮೆ ಅಂಕ ಬಂತು ಎಂದರೆ, ಪರವಾಗಿಲ್ಲ ಬಿಡು, ಅಂಕವೇ ಎಲ್ಲವೂ ಅಲ್ಲ. ಜೀವನದಲ್ಲಿ ಸಾಧನೆ ಮಾಡುವುದು ಬೇಕಾದಷ್ಟು ಇದೆ ಎಂದು ಪ್ರೋತ್ಸಾಹ ನೀಡಿದಾಗ, ಅವರು ನಿಜಕ್ಕೂ ಮುಂದೊಂದು ದಿನ ಸಾಧನೆ ಮಾಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಜೈನೇಂದ್ರಜೀತ್ ಎನ್ನುವ ಯುವಕನ ಈ ಯಶೋಗಾಥೆ.&lt;/p&gt;&lt;p&gt;10 ನೇ ತರಗತಿಯಲ್ಲಿ ಕೇವಲ 54% ಅಂಕಗಳನ್ನು ಗಳಿಸಿದ ಜೈನೇಂದ್ರಜೀತ್ ಅವರ ಕಥೆ ಇದು. ಅವರು ಗಣಿತದಲ್ಲಿ ಕೇವಲ 41 ಮತ್ತು ವಿಜ್ಞಾನದಲ್ಲಿ ಕೇವಲ 48 ಅಂಕಗಳನ್ನು ಗಳಿಸಿದರು. ಆದರೆ ಹೆಚ್ಚಿನ ಅಪ್ಪ-ಅಮ್ಮಂದಿರಂತೆ ಈತನ ಪಾಲಕರು ಹೀಗಳೆಯಲಿಲ್ಲ. ಒಣ ಪ್ರತಿಷ್ಠೆಯ ಬೆನ್ನು ಬೀಳಲಿಲ್ಲ. ಅಂಕವೇ ಎಲ್ಲವೂ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟರು. 10 ನೇ ತರಗತಿಯಲ್ಲಿ ಅಂಕಗಳನ್ನು ದೌರ್ಬಲ್ಯವಾಗಿ ಅಲ್ಲ, ಬದಲಾಗಿ ರೂಪಾಂತರದ ಆರಂಭವಾಗಿಸಬಹುದು ಎನ್ನುವುದಾಗಿ ತಿಳಿ ಹೇಳಿದರು. ಆದ್ದರಿಂದ ಈ ಫಲಿತಾಂಶವೇ ನಂತರ ತನ್ನ ದೊಡ್ಡ ಶಕ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಆ ಯುವಕ ಮುನ್ನುಗ್ಗಿದ. ಒಬ್ಬ ಸಾಮಾನ್ಯ ಹುಡುಗ ಸೋಲನ್ನು ಧೈರ್ಯವಾಗಿ ಪರಿವರ್ತಿಸಿ ದೇಶದ ಉನ್ನತ ಎಂಜಿನಿಯರಿಂಗ್ ಕಾಲೇಜಿಗೆ ದಾರಿ ಕಂಡುಕೊಂಡ!&lt;/p&gt;&lt;h2&gt;&lt;strong&gt;ಸಣ್ಣ ಸೋಲಿನಿಂದ ಪ್ರಾರಂಭ&lt;/strong&gt;&lt;/h2&gt;&lt;p&gt;ವೃಂದಾವನದ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ಜೈನೇಂದ್ರಜೀತ್, ಅವರ ಅನೇಕ ಸಹಪಾಠಿಗಳು 10ನೇ ಕ್ಲಾಸ್​ನಲ್ಲಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವುದನ್ನು ನೋಡಿದಾಗ ನನ್ನ ದುಃಖ ಹೆಚ್ಚಾಗಿತ್ತು ಎಂದಿರೋ ಈ ಯುವಕ, ಮೂರು ವರ್ಷಗಳ ನಂತರ, ಅದೇ ಹುಡುಗ JEE ಅಡ್ವಾನ್ಸ್&zwnj;ಡ್&zwnj;ನಲ್ಲಿ ಉತ್ತೀರ್ಣನಾಗಿ ದೇಶದ ಪ್ರಮುಖ ಎಂಜಿನಿಯರಿಂಗ್ ಕಾಲೇಜು IIT ಬಾಂಬೆಗೆ ಪ್ರವೇಶಿಸಿದ್ದಾನೆ. ಈ ಕಥೆಯು ಒಬ್ಬರ ಇಡೀ ಜೀವನವನ್ನು ಒಂದು ಕೆಟ್ಟ ಫಲಿತಾಂಶವು ವ್ಯಾಖ್ಯಾನಿಸುವುದಿಲ್ಲ ಎಂದು ತೋರಿಸುತ್ತದೆ. 10 ನೇ ತರಗತಿಯಲ್ಲಿ ಜೈನೇಂದ್ರಜಿತ್ ಅವರ ಕಳಪೆ ಫಲಿತಾಂಶಗಳ ಹಿಂದೆ ಅವರ ಆರೋಗ್ಯವು ಪ್ರಮುಖ ಅಂಶವಾಗಿತ್ತು. ಬೋರ್ಡ್ ಪರೀಕ್ಷೆಗಳಿಗೆ ಸುಮಾರು 40 ರಿಂದ 50 ದಿನಗಳ ಮೊದಲು ಅವರು ಬೆಡ್ ರೆಸ್ಟ್&zwnj;ನಲ್ಲಿದ್ದರು, ಇದು ಅವರನ್ನು ಸರಿಯಾಗಿ ತಯಾರಿ ಮಾಡದಂತೆ ತಡೆಯಿತು. ಫಲಿತಾಂಶಗಳು ಪ್ರಕಟವಾದ ನಂತರ, ಅವರು ಟೀಕೆ ಮತ್ತು ಅಪಹಾಸ್ಯಗಳನ್ನು ಎದುರಿಸಿದರು, ಅನೇಕರು ಅವರ ಕಡಿಮೆ ಅಂಕಗಳಿಗಾಗಿ ಅವರನ್ನು ಅಪಹಾಸ್ಯ ಮಾಡಿದರು. ಆದರೆ ಜೈನೇಂದ್ರಜಿತ್ ಈ ಫಲಿತಾಂಶವನ್ನು ಅವರ ಸಾಮರ್ಥ್ಯದ ಪುರಾವೆಯಾಗಿ ತೆಗೆದುಕೊಳ್ಳಲಿಲ್ಲ. ಅವರು ಅಧ್ಯಯನದ ಬಗೆಗಿನ ತಮ್ಮ ವಿಧಾನವನ್ನು ಬದಲಾಯಿಸುವ ಅಗತ್ಯತೆಯ ಸಂಕೇತವಾಗಿ ಇದನ್ನು ತೆಗೆದುಕೊಂಡರು. ಅವರ ನಿಜವಾದ ಕಠಿಣ ಪರಿಶ್ರಮ ಇಲ್ಲಿಯೇ ಪ್ರಾರಂಭವಾಯಿತು ಮತ್ತು ಅವರು ತಮ್ಮ ಭವಿಷ್ಯದ ಪ್ರಯಾಣದಲ್ಲಿ ಯಾವುದೇ ಕಲ್ಲನ್ನು ಬಿಡಲು ನಿರ್ಧರಿಸಿದರು.&lt;/p&gt;&lt;h2&gt;&lt;strong&gt;ಬದಲಾದ ಅಧ್ಯಯನ ವಿಧಾನ, ಬದಲಾದ ಫಲಿತಾಂಶಗಳು&lt;/strong&gt;&lt;/h2&gt;&lt;p&gt;10 ನೇ ತರಗತಿಯ ನಂತರ, ಜೈನೇಂದ್ರಜೀತ್ ತಮ್ಮ ಅಧ್ಯಯನದ ಸಮಯವನ್ನು ಹೆಚ್ಚಿಸಿದ್ದಲ್ಲದೆ, ಅವರ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದರು. ಅವರು ನಿಗದಿತ ವೇಳಾಪಟ್ಟಿಯನ್ನು ರಚಿಸಿಕೊಂಡರು, ಸಾಮಾಜಿಕ ಮಾಧ್ಯಮ ಮತ್ತು ಇತರ ಗೊಂದಲಗಳಿಂದ ಸಂಪರ್ಕ ಕಡಿತಗೊಳಿಸಿದರು ಮತ್ತು ಕ್ರಮೇಣ ಪ್ರತಿದಿನ ಸುಮಾರು 10 ಗಂಟೆಗಳ ಕಾಲ ಅಧ್ಯಯನ ಮಾಡಲು ಪ್ರಾರಂಭಿಸಿದರು. ತರಗತಿಗೆ ಹೋಗುವ ಮೊದಲು, ಅವರು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ವಿಷಯಕ್ಕೆ ಸಂಬಂಧಿಸಿದ ಶೈಕ್ಷಣಿಕ ವೀಡಿಯೊಗಳನ್ನು ನೋಡುತ್ತಿದ್ದರು. ಅವರು ದೊಡ್ಡ ಪಠ್ಯಕ್ರಮವನ್ನು ಸಣ್ಣ ಗುರಿಗಳಾಗಿ ವಿಂಗಡಿಸಿದರು ಮತ್ತು ಅವುಗಳನ್ನು ಸಾಧಿಸಲು ದೈನಂದಿನ ಗುರಿಗಳನ್ನು ನಿಗದಿಪಡಿಸಿದರು. ಹಿಂದಿನ ವರ್ಷಗಳ ಪತ್ರಿಕೆಗಳನ್ನು ಪರಿಹರಿಸುವುದು ಸಹ ಅವರ ತಯಾರಿಯ ಪ್ರಮುಖ ಭಾಗವಾಯಿತು. ಈ ಕಠಿಣ ಪರಿಶ್ರಮದ ಪರಿಣಾಮವಾಗಿ, ಅವರು JEE ಮುಖ್ಯ 2023 ರಲ್ಲಿ 99.98 ಶೇಕಡಾವನ್ನು ಗಳಿಸಿದರು ಮತ್ತು JEE ಅಡ್ವಾನ್ಸ್ಡ್&zwnj;ನಲ್ಲಿ AIR 349 ​​ಅನ್ನು ಪಡೆದರು.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/education/he-scored-54-percent-in-class-10-three-years-later-jainendrajeet-cracked-jee-advanced-suc/articleshow-4drznqv"/>
        </item>
        <item>
            <title><![CDATA[ಸಕ್ಕರೆ ಬೆಲೆ ಮತ್ತೆ 30 ರೂ ಏರಿಕೆ, ಎಥೆನಾಲ್‌ನಿಂದ ಶುಗರ್ ದರ ಹೆಚ್ಚಳವಾಯ್ತಾ? ಕೇಂದ್ರದ ಉತ್ತರವೇನು?]]></title>
            <link>https://kannada.asianetnews.com/india-news/sugar-prices-rise-again-by-rs-30-did-ethanol-drive-the-increase-centre-responds/articleshow-0nbz9w6</link>
            <guid isPermaLink="true">https://kannada.asianetnews.com/india-news/sugar-prices-rise-again-by-rs-30-did-ethanol-drive-the-increase-centre-responds/articleshow-0nbz9w6</guid>
            <pubDate>Sat, 22 Aug 2026 12:40:50 +0530</pubDate>
            <description><![CDATA[&lt;p&gt;ಸಕ್ಕರೆ ಬೆಲೆ ಮತ್ತೆ 30 ರೂಪಾಯಿ ಏರಿಕೆ ಕಂಡು ಇದೀಗ ಕೆಜೆಗಿ 75 ರೂಪಾಯಿ ಆಗಿದೆ. ಇದೀಗ ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಕೊರತೆ ಎದುರಾಗಿದೆ. ಪರಿಣಾಮ ಬೆಲೆ ಗಗನಕ್ಕೇರುತ್ತಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0m4xf1h120179ch4yn6kes9,imgname-sugar-price-hike-ethanol-centre-response-1787382643760.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.22) &lt;/strong&gt;ಭಾರತದಲ್ಲಿ ಸಕ್ಕರೆ ಬೆಲೆ ಏರಿಕೆಯಾಗುತ್ತಿದೆ.ಒಂದೇ ತಿಂಗಳಲ್ಲಿ ಕೆಜಿಗೆ 30 ರೂಪಾಯಿ ಏರಿಕೆಯಾಗಿದೆ. ಕಳೆದ ತಿಂಗಳು ಪ್ರತಿ ಕೆಜಿ ಸಕ್ಕರೆಗೆ 45 ರೂಪಾಯಿ ಇತ್ತು. ಇದೀಗ 75 ರೂಪಾಯಿಗೆ ಏರಿಕೆಯಾಗಿದೆ. ಸಕ್ಕರೆ ದುಬಾರಿಯಾಗುತ್ತಿರುವ ಬೆನ್ನಲ್ಲೇ ದೇಶದಲ್ಲಿ ಆತಂಕ ಹೆಚ್ಚಾಗಿದೆ. ಒಂದೆಡೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆತಂಕ ಎದುರಾಗಿದೆ. ಇದೇ ವೇಳೆ ದೇಶದಲ್ಲಿ ಎಥೆನಾಲ್ ಪೆಟ್ರೋಲ್&zwnj;ಗೆ ಆದ್ಯತೆ ನೀಡಿರುವ ಕಾರಣ ಸಕ್ಕರೆ ಉತ್ಪಾದನೆ ಕುಂಠಿತವಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಇದರ ಪರಿಣಾಮ ಸಕ್ಕರೆ ಬೆಲೆ ಏರಿಕೆಯಾಗಿದೆ ಎಂಬ ಆರೋಪಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆ ಕಾರಣಲ್ಲ ಎಂದಿದೆ.ಟ&lt;/p&gt;&lt;h2&gt;ಎಥೆನಾಲ್ ಉತ್ಪಾದನೆಗೆ ಕಬ್ಬು, ಸಕ್ಕರೆ ಉತ್ಪಾದನೆ ಕುಂಠಿತ ಆರೋಪ&lt;/h2&gt;&lt;p&gt;ರೈತರು ಕಬ್ಬು ಬೆಳೆಯನ್ನು ಎಥೆನಾಲ್ ಉತ್ಪಾದನೆಗೆ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಎಥೆನಾಲ್ ಉತ್ಪಾದನೆ ಮೇಲೆ ಒತ್ತು ನೀಡಿರುವ ಕಾರಣ ಇದೀಗ ಕಬ್ಬು ನೇರವಾಗಿ ಎಥೆನಾಲ್ ಫ್ಯಾಕ್ಟರಿಗೆ ತಲುಪುತ್ತಿದೆ. ರೈತರಿಗೆ ಸಕ್ಕರೆ ಫ್ಯಾಕ್ಚರಿಗಿಂತ ಹೆಚ್ಚಿನ ಬೆಲೆಯೂ ಸಿಗುತ್ತಿದೆ. ಹೀಗಾಗಿ ಸಕ್ಕರೆ ಸಮಸ್ಯೆ ಎದುರಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಆರೋಪ, ಟೀಕೆಗಳು ಸಂಪೂರ್ಣ ತಪ್ಪು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ದೇಶದಲ್ಲಿ ಸಕ್ಕಾರೆ ಉತ್ಪಾದನೆ ಕಡಿಮೆಯಾಗಿದೆ. ಇದಕ್ಕೆ ಎಥೆನಾಲ್ ಕಾರಣವಲ್ಲ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೇಳಿದೆ.&lt;/p&gt;&lt;h2&gt;ಎಥೆನಾಲ್&zwnj;ಗೆ ಕಬ್ಬು ಬಳಕೆ ಇಳಿಕೆ&lt;/h2&gt;&lt;p&gt;2022-23ರಲ್ಲಿ ಎಥೆನಾಲ್ ಉತ್ಪಾದನೆಗೆ ಬಳಸಿದ ಕಬ್ಬಿನ ಪ್ಪಮಾಣ ಶೇಕಡಾ 13ರಷ್ಟಿತ್ತು. ಆದರೆ 2025-26ರ ಸಾಲಿನಲ್ಲಿ ಎಥೆನಾಲ್&zwnj;ಗೆ ಬಳಸಿದ ಕಬ್ಬಿನ ಪ್ರಮಾಣ ಶೇಕಡಾ 9ಕ್ಕೆ ಇಳಿಕೆಯಾಗಿದೆ. ಎಥೆನಾಲ್ ಉತ್ಪಾದನೆಗೆ ಕಬ್ಬಿಗಿಂತ ಹೆಚ್ಚು ಧಾನ್ಯಗಳ ತ್ಯಾಜ್ಯ, ಜೋಳಗಳಿಂದ ಮಾಡಲಾಗುತ್ತಿದೆ. ಕಬ್ಬಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಆದರೆ ದೇಶದಲ್ಲಿ ಕಬ್ಬಿನ ಉತ್ಪಾದನೆ ಹಾಗೂ ಸಕ್ಕರೆ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಸಕ್ಕರೆ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಅಕ್ಟೋಬರ್&zwnj;ನಲ್ಲಿ ಸಕ್ಕರೆ ಬೆಲೆ ಇಳಿಕೆ&lt;/h2&gt;&lt;p&gt;ಸದ್ಯ ಸಕ್ಕರೆ ಉತ್ಪಾದನೆ 306 ಲಕ್ಷ ಮೆಟ್ರಿಕ್ ಟನ್ ಆಗುವ ನಿರೀಕ್ಷೆ ಇದೆ. ನಿರೀಕ್ಷೆಗಿಂತ ಇದು ಸರಿಸುಮಾರು 40 ಟನ್ ಕಡಿಮೆ. ಹಲವೆಡೆ ಅತೀಯಾದ ಮಳೆ, ಮತ್ತೆ ಹಲವೆಡೆ ಮಳೆ ಕೊರತೆಯಿಂದ ಕಬ್ಬು ಬೆಳೆ ಕುಂಠಿತವಾಗಿದೆ. ಪ್ರತಿಕೂಲ ಹಮಾನದಿಂದ ಕಬ್ಬು ಸೇರಿದಂತೆ ಹಲವು ಬೆಳೆಗಳ ಮೇಲೆ ಪರಿಣಾಮ ಬಿದ್ದಿದೆ. ಇದರಿಂದ ಉತ್ಪಾದನೆ ಕುಂಠಿತವಾಗಿದೆ ಎಂದು ಹೇಳಿದೆ. ಆದರೆ ಅಕ್ಟೋಬರ್&zwnj;ನಲ್ಲಿ ದೇಶಕ್ಕೆ ಬೇಕಾಗುವ ಸಕ್ಕರೆ ಉತ್ಪಾದನೆಯಾಗಲಿದೆ. ಹೀಗಾಗಿ ಬೆಲೆ ಇಳಿಕೆಯಾಗಲಿದೆ ಎಂದಿದೆ.&lt;/p&gt;&lt;p&gt;ಜಾಗತಿಕವಾಗಿ ಸಕ್ಕರೆ ಪೂರೈಕೆಯಲ್ಲಿ ಕೊರತ ಎದುರಾಗಿದೆ. ಇದು ಭಾರತದ ಮೇಲೂ ಆಗಿದೆ. 2026-27ರಲ್ಲಿ ಸಕ್ಕರೆ ಕೊರತೆ 33 ಲಕ್ಷ ಮೆಟ್ರಿಕ್ ಟನ್&zwnj;ಗೆ ಏರಿಕೆಯಾಗಲಿದೆ ಎಂದು ಕೇಂದ್ರ ಹೇಳಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಟನ್ ಸಕ್ಕರೆಗೆ 552 ಡಾಲರ್&zwnj;ಗೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಶೇಕಡಾ 16ರಷ್ಟು ಸಕ್ಕರೆ ಬೆಲೆ ಜಾಗತಿಕವಾಗಿ ಏರಿಕೆಯಾಗಿದೆ ಎಂದಿದೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/sugar-prices-rise-again-by-rs-30-did-ethanol-drive-the-increase-centre-responds/articleshow-0nbz9w6"/>
        </item>
        <item>
            <title><![CDATA[ರಕ್ಷಿಸಿ ಕಾಡಿಗೆ ಬಿಟ್ಟಿದ್ದರೂ ಅದೇ ಸ್ಥಳಕ್ಕೆ ಮರಳಿತು ಹಾವು.. ಒಂದೇ ಜಾಗ, 11 ದಿನ! ಅರ್ಥವಾಗದ ನಾಗಪ್ಪನ ವರ್ತನೆ]]></title>
            <link>https://kannada.asianetnews.com/india-news/mp-mystery-cobra-returns-after-rescue-villagers-see-a-miracle-and-start-worship/articleshow-sxkotzd</link>
            <guid isPermaLink="true">https://kannada.asianetnews.com/india-news/mp-mystery-cobra-returns-after-rescue-villagers-see-a-miracle-and-start-worship/articleshow-sxkotzd</guid>
            <pubDate>Sat, 22 Aug 2026 12:03:00 +0530</pubDate>
            <description><![CDATA[&lt;p&gt;&lt;strong&gt;Dhar Cobra News: &lt;/strong&gt;ಕಳೆದ 11 ದಿನದಿಂದ ಒಂದೇ ಸ್ಥಳದಲ್ಲಿ ಕುಳಿತಿರುವ ಈ ಹಾವನ್ನು ಜನರು 'ಭಗವಾನ್ ಭೀಲತ್ ದೇವ್' ಪವಾಡ ಎಂದು ನಂಬಿ ಪೂಜೆ ಸಲ್ಲಿಸುತ್ತಿದ್ದಾರೆ. ಹಾವಿನ ಭಕ್ತಿಯಿಂದಾಗಿ ಈಗ ಅಲ್ಲಿ ದೇವಸ್ಥಾನ ಕಟ್ಟಲು ಗ್ರಾಮಸ್ಥರು ಸಿದ್ಧತೆ ನಡೆಸುತ್ತಿದ್ದು, ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0m2qm1wx91z80s40svfh9je,imgname-dhar-cobra-news-1787380355132.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮ&lt;/strong&gt;ಧ್ಯಪ್ರದೇಶದ ಧಾರ್ ಜಿಲ್ಲೆಯ ಸಾಲಿ ಗ್ರಾಮದಲ್ಲಿ ನಾಗರಹಾವೊಂದು ಸತತವಾಗಿ ಒಂದೇ ಸ್ಥಳದಲ್ಲಿ ಇರುವುದು ಕುತೂಹಲದ ವಿಷಯವಾಗಿದೆ. ಗ್ರಾಮಸ್ಥರ ಪ್ರಕಾರ, ಅರಣ್ಯ ಇಲಾಖೆಯು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದರೂ ಸಹ, ಅದು ಕೆಲವೇ ಸಮಯದಲ್ಲಿ ಮತ್ತೆ ಅದೇ ಸ್ಥಳಕ್ಕೆ ಮರಳಿದೆ. ಇದರ ನಂತರ ನಾಗಪಂಚಮಿಯಂದು ಇಲ್ಲಿ ಸಾವಿರಾರು ಜನರ ಸಾಗರವೇ ಹರಿದು ಬಂದಿದ್ದು, ಜನರು ಇದನ್ನು 'ಭಗವಾನ್ ಭೀಲತ್ ದೇವ್'ಗೆ ಹೋಲಿಸುತ್ತಿದ್ದಾರೆ.&lt;/p&gt;&lt;p&gt;ಗಂಧವಾನಿ ಪ್ರದೇಶದ ಪುಟ್ಟ ಗ್ರಾಮ ಸಾಲಿ ಇಂದು ನಾಗರಹಾವಿನ ಕಾರಣದಿಂದ ಸುದ್ದಿಯಲ್ಲಿದೆ. ಗ್ರಾಮದ ರಸ್ತೆ ಬದಿಯ ಒಂದು ಸ್ಥಳದಲ್ಲಿ ಸತತ ಹಲವು ದಿನಗಳಿಂದ ಹಾವು ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲಿ ಹಾವು ಕಂಡಾಗ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಂಡವು ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಗ್ರಾಮದಿಂದ ದೂರವಿರುವ ಕಾಡಿಗೆ ಬಿಟ್ಟಿತ್ತು. ಆದರೆ ಅದರ ನಂತರ ನಡೆದ ಘಟನೆ ಗ್ರಾಮಸ್ಥರಿಗೆ ಆಶ್ಚರ್ಯ ಉಂಟು ಮಾಡಿದೆ.&lt;/p&gt;&lt;h2&gt;&lt;strong&gt;ಕಾಡಿಗೆ ಬಿಟ್ಟ ಕೆಲವು ಗಂಟೆಗಳ ನಂತರ ಮತ್ತೆ ಅಲ್ಲಿಯೇ ಕಂಡ ಹಾವು&lt;/strong&gt;&lt;/h2&gt;&lt;p&gt;ಕಾಡಿಗೆ ಬಿಟ್ಟ ಕೆಲವೇ ಗಂಟೆಗಳಲ್ಲಿ ಹಾವು ಮತ್ತೆ ಅದೇ ಸ್ಥಳದಲ್ಲಿ ಕಾಣಿಸಿಕೊಂಡಿತು ಎಂದು ಸ್ಥಳೀಯರು ಪ್ರತಿಪಾದಿಸುತ್ತಿದ್ದಾರೆ. ಅಂದಿನಿಂದ ಅದು ಅಲ್ಲಿಂದ ಕದಲುತ್ತಿಲ್ಲ. ಗ್ರಾಮಸ್ಥ ಶಂಕರ್ ನಿಗವಾಲ್ ಅವರ ಪ್ರಕಾರ, ಹಾವು ಹಗಲು-ರಾತ್ರಿ ಹೆಚ್ಚಾಗಿ ಅದೇ ಸ್ಥಳದ ಸುತ್ತಮುತ್ತ ಇರುತ್ತದೆ. ಇದೇ ಕಾರಣಕ್ಕೆ ಜನರ ಗಮನ ಸತತವಾಗಿ ಅದರತ್ತ ಸೆಳೆಯುತ್ತಿದೆ. ಆದರೆ ಹಾವು ಮತ್ತೆ ಅದೇ ಸ್ಥಳಕ್ಕೆ ಮರಳಲು ಕಾರಣವೇನು ಎಂಬುದರ ಬಗ್ಗೆ ಇನ್ನೂ ಯಾವುದೇ ವೈಜ್ಞಾನಿಕ ಕಾರಣ ಲಭ್ಯವಾಗಿಲ್ಲ.&lt;/p&gt;&lt;h2&gt;&lt;strong&gt;ನಾಗಪಂಚಮಿಯಂದು ಹೆಚ್ಚಿದ ಜನಸಂದಣಿ&lt;/strong&gt;&lt;/h2&gt;&lt;p&gt;ನಾಗಪಂಚಮಿಯಂದಯ ಈ ಘಟನೆಯು ಹೊಸ ರೂಪ ಪಡೆದುಕೊಂಡಿದೆ. ಹಾವನ್ನು ನೋಡಲು ಸುತ್ತಮುತ್ತಲಿನ ಹಳ್ಳಿಗಳಲ್ಲದೆ ಮನಾವರ್, ಉಮರಬನ್, ಕುಕ್ಷಿ, ಬರ್ವಾನಿ ಮತ್ತು ಖಾರ್ಗೋನ್ ಜಿಲ್ಲೆಗಳಿಂದಲೂ ಜನರು ಬರತೊಡಗಿದ್ದಾರೆ. ಗ್ರಾಮಸ್ಥರ ಪ್ರಕಾರ, ನಾಗಪಂಚಮಿಯ ದಿನ ಸುಮಾರು 5 ರಿಂದ 7 ಸಾವಿರ ಜನರು ಇಲ್ಲಿಗೆ ಬಂದಿದ್ದರು. ಅನೇಕ ಜನರು ಹಾವಿಗೆ ಪೂಜೆ ಸಲ್ಲಿಸಿದರು. ಇಷ್ಟು ಜನಸಂದಣಿಯ ನಡುವೆಯೂ ಹಾವು ಶಾಂತವಾಗಿರುವುದು ಜನರ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಗ್ರಾಮಸ್ಥರಿಂದ 'ಭೀಲತ್ ದೇವ್'ಗೆ ಹೋಲಿಕೆ&lt;/strong&gt;&lt;/h2&gt;&lt;p&gt;ಹಾವು ದೀರ್ಘಕಾಲ ಒಂದೇ ಸ್ಥಳದಲ್ಲಿ ಇರುವುದನ್ನು ಕಂಡ ಗ್ರಾಮಸ್ಥರು ಭಗವಾನ್ ಭೀಲತ್ ದೇವ್ ಅವರ ಪವಾಡ ಎಂದು ನಂಬಿದ್ದಾರೆ. ಇದೇ ನಂಬಿಕೆಯಿಂದಾಗಿ, ಹಾವು ಕುಳಿತುಕೊಳ್ಳುವ ಸ್ಥಳದಲ್ಲಿ ಭೀಲತ್ ದೇವರ ದೇವಸ್ಥಾನವನ್ನು ನಿರ್ಮಿಸಲು ಸಿದ್ಧತೆಗಳು ನಡೆಯುತ್ತಿವೆ ಎಂಬ ವಿಷಯವೂ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಹಾವು ಆರೋಗ್ಯವಾಗಿದೆ ಎಂದ ಅರಣ್ಯ ಇಲಾಖೆ&lt;/strong&gt;&lt;/h2&gt;&lt;p&gt;ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಧಿಕಾರಿಗಳ ಪ್ರಕಾರ ಹಾವು ಆರೋಗ್ಯವಾಗಿದೆ. ತಂಡವು ಮೊದಲು ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲು ಪ್ರಯತ್ನಿಸಿತ್ತು. ಆದರೆ ಗ್ರಾಮಸ್ಥರ ಪ್ರಕಾರ ಅದು ಮತ್ತೆ ಮರಳಿದೆ.&lt;/p&gt;&lt;h2&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದ ಗ್ರಾಮ&lt;/strong&gt;&lt;/h2&gt;&lt;p&gt;ಹಾವಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಘಟನೆ ಜಿಲ್ಲೆಯಾದ್ಯಂತ ಪ್ರಚಾರ ಪಡೆಯಿತು. ಇದರಿಂದಾಗಿ ಇತರ ಜಿಲ್ಲೆಗಳಿಂದಲೂ ಜನರು ಸಾಲಿ ಗ್ರಾಮಕ್ಕೆ ಬರಲಾರಂಭಿಸಿದರು. ಸ್ಥಳದಲ್ಲಿ ಜನಸಂದಣಿ ಹೆಚ್ಚಾದ ಕಾರಣ, ಅರಣ್ಯ ಇಲಾಖೆಯೊಂದಿಗೆ ಪೊಲೀಸರೂ ಜನರ ಸುರಕ್ಷತೆಯ ದೃಷ್ಟಿಯಿಂದ ಜಾಗರೂಕರಾಗಿದ್ದಾರೆ. ನಂಬಿಕೆಯೊಂದಿಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಜನರಿಗೆ ಮನವಿ ಮಾಡುತ್ತಿದ್ದಾರೆ ಮತ್ತು ಯಾರೂ ಹಾವಿನ ಹತ್ತಿರ ಹೋಗಬಾರದು ಎಂದು ಸೂಚಿಸಿದ್ದಾರೆ.&lt;/p&gt;&lt;h2&gt;&lt;strong&gt;ಪವಾಡವೋ ಅಥವಾ ಹಾವಿನ ಸಹಜ ವರ್ತನೆಯೋ?&lt;/strong&gt;&lt;/h2&gt;&lt;p&gt;ಗ್ರಾಮಸ್ಥರು ಇದನ್ನು ಧಾರ್ಮಿಕ ನಂಬಿಕೆಗೆ ಜೋಡಿಸುತ್ತಿದ್ದರೂ, ವನ್ಯಜೀವಿ ತಜ್ಞರ ದೃಷ್ಟಿಕೋನದಿಂದ ಯಾವುದೇ ಹಾವು ಒಂದು ನಿರ್ದಿಷ್ಟ ಸ್ಥಳದ ಸುತ್ತಮುತ್ತ ದೀರ್ಘಕಾಲ ಇರಲು ಅಲ್ಲಿನ ಸುರಕ್ಷಿತ ವಾತಾವರಣ, ಆಹಾರ, ತಾಪಮಾನ ಅಥವಾ ಅಡಗಿಕೊಳ್ಳಲು ಇರುವ ಸ್ಥಳದಂತಹ ನೈಸರ್ಗಿಕ ಕಾರಣಗಳಿರಬಹುದು. ಇದೇ ಕಾರಣಕ್ಕೆ ಸದ್ಯಕ್ಕೆ ಸಾಲಿ ಗ್ರಾಮ ಎಲ್ಲರ ಕೇಂದ್ರಬಿಂದುವಾಗಿರುವುದಂತು ಸುಳ್ಳಲ್ಲ.&lt;/p&gt;]]></content:encoded>
            <category>india-news</category>
            <dc:creator>Ashwini HR</dc:creator>
            <atom:link href="https://kannada.asianetnews.com/india-news/mp-mystery-cobra-returns-after-rescue-villagers-see-a-miracle-and-start-worship/articleshow-sxkotzd"/>
        </item>
        <item>
            <title><![CDATA[ಆರ್ಡರ್ ಮಾಡಿದ 505 ರೂ ಪಿಝಾ ಹಿಂದೆ ಗ್ರಾಹಕನಿಗೆ ಬಂತು 10520 ರೂಪಾಯಿ, ಏನಿದು ಸರ್ಪ್ರೈಸ್?]]></title>
            <link>https://kannada.asianetnews.com/viral/ordered-10-inch-pizza-received-7-inch-pizza-customer-gets-rs-10520-compensation/articleshow-41ubtgw</link>
            <guid isPermaLink="true">https://kannada.asianetnews.com/viral/ordered-10-inch-pizza-received-7-inch-pizza-customer-gets-rs-10520-compensation/articleshow-41ubtgw</guid>
            <pubDate>Sat, 22 Aug 2026 11:52:09 +0530</pubDate>
            <description><![CDATA[&lt;p&gt;ಗ್ರಾಹಕ 505 ರೂಪಾಯಿ ನೀಡಿ ಪಿಝಾ ಆರ್ಡರ್ ಮಾಡಿದ್ದಾನೆ. ಪಿಝಾ ತಲುಪಿದೆ. ಆದರೆ ಗ್ರಾಹಕನಿಗೆ ಸಣ್ಣ ಅನುಮಾನ ಕಾಡಿದೆ. ಕಣ್ಣೆತ್ತಿ ನೋಡಿದ ಬೆನ್ನಲ್ಲೇ 10520 ರೂಪಾಯಿ ಕೂಡ ಬಂದಿದೆ. ಏನಿದು ಘಟನೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpapk47v67jqjpdss228dyrd,imgname-4-1776328216826.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನೈನಿತಾಲ್ (ಆ.22) &lt;/strong&gt;ಫುಡ್ ಡೆಲಿವರಿಯಲ್ಲಿ ಅತೀ ಹೆಚ್ಚು ಆರ್ಡರ್ ಮಾಡುವ ಆಹಾರಗಳಲ್ಲಿ ಪಿಝಾ ಮುಂಚೂಣಿಯಲ್ಲಿದೆ. ಪಿಝಾ ಶಾಪ್, ಆನ್&zwnj;ಲೈನ್ ಮೂಲಕವೂ ಜನರು ಅತೀ ಹೆಚ್ಚು ಇಷ್ಟಪಟ್ಟು ಸವಿಯುತ್ತಾರೆ. ಹೀಗೆ ಗ್ರಾಹಕ ಫಿಝಾ ತಿನ್ನುವ ಮನಸ್ಸಾಗಿ 505 ರೂಪಾಯಿ ಮೌಲ್ಯದ ಪಿಝಾ ಆರ್ಡರ್ ಮಾಡಿದ್ದಾನೆ. ಗ್ರಾಹಕನಿಗೆ ಫಿಜಾ ತಲುಪಿದೆ. ಆದರೆ ಗ್ರಾಹಕ ಅಸಮಾಧಾನಗೊಂಡಿದ್ದಾನೆ. ಕಾರಣ ತಾನು ಆರ್ಡರ್ ಮಾಡಿದ್ದು 10 ಇಂಚು ಗಾತ್ರದ ಪಿಝಾ, ಆದರೆ ಕೊಟ್ಟಿರೋದು 7 ಇಂಚಿನ ಪಿಝಾ. 3 ಇಂಚು ಕಡಿಮೆ ಎಂದು ಗ್ರಾಹಕ ಸುಮ್ಮನಾಗಲಿಲ್ಲ. ತಕ್ಷಣವೇ ಪಿಝಾಗೆ ಕರೆ ಮಾಡಿ ದೂರು ನೀಡಿದರೂ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಕಾನೂನು ಹೋರಾಟದ ಮೊರೆ ಹೋಗಿದ್ದಾನೆ. ಪರಿಣಾಮ ಈತನಿಗೆ 10520 ರೂಪಾಯಿ ಪರಿಹಾರ ನೀಡಲು ಗ್ರಾಹಕರ ವೇದಿಕೆ ಆದೇಶಿಸಿದೆ.&lt;/p&gt;&lt;h2&gt;ಏನಿದು ಘಟನೆ?&lt;/h2&gt;&lt;p&gt;ಆ್ಯಪ್ ಮೂಲಕ 505 ರೂಪಾಯಿ ಮೌಲ್ಯದ ಪಿಝಾ ಆರ್ಡರ್ ಮಾಡಿದ್ದಾನೆ. 10 ಇಂಚಿನ ಪಿಝಾ ಮನೆಗೆ ಬಂದಾಗ 7 ಇಂಚು ಆಗಿತ್ತು. ದೂರು ಸಲ್ಲಿಸಿದರೂ ಸ್ಪಂದನೆ ಸಿಗಲಿಲ್ಲ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಪೋರ್ಟಲ್ ಮೂಲಕ ದೂರು ದಾಖಲಿಸಿದರು. ಗ್ರಾಹಕ ಸೇವಾ ವೇದಿಕೆ ಈ ಪ್ರಕರಣವನ್ನು ಕೈಗೆತ್ತಿಕೊಂಡಿತು. ಗ್ರಾಹಕ ವೇದಿಕೆ ಈ ಪ್ರಕರಣ ಸಂಬಂಧ ಪಿಝಾ ಔಟ್&zwnj;ಲೆಟ್&zwnj;ಗೆ ನೋಟಿಸ್ ನೀಡಿತ್ತು. ತಾನು ರೆಸ್ಟೋರೆಂಟ್ ಹಾಗೂ ಗ್ರಾಹಕನ ನಡುವೆ ವಿತರಣಾ ವೇದಿಕೆ ಮಾತ್ರ. ಪಿಝಾ ಗಾತ್ರದಲ್ಲಿ ತನ್ನ ಪಾತ್ರ ಇಲ್ಲ ಎಂದು ವಾದಿಸಿತು. ಆದರೆ ಆರ್ಡರ್ ಮಾಡಿದ ಪಿಝಾ ಬದಲು ಬೇರೆ ಪಿಝಾ ನೀಡಲಾಗಿದೆ. ಇದು ಸೇವೆಯಲ್ಲಿ ಆದ ವ್ಯತ್ಯಯ. ಹೀಗಾಗಿ ಪರಿಹಾರ ನೀಡಬೇಕು ಎಂದು ಆಯೋಗ ಹೇಳಿತು.&lt;/p&gt;&lt;h2&gt;ಗ್ರಾಹಕರ ವೇದಿಕೆ ಖಡಕ್ ಆದೇಶ&lt;/h2&gt;&lt;ul&gt; &lt;li&gt;ಪಿಝಾ ಬೆಲೆ 505 ರೂಪಾಯಿ&lt;/li&gt; &lt;li&gt;ವಿತರಣೆ 15 ರೂಪಾಯಿ&lt;/li&gt; &lt;li&gt;ವಿತರಣಾ ಶುಲ್ಕ 15 ರೂಪಾಯಿ&lt;/li&gt; &lt;li&gt;ಗ್ರಾಹಕನಿಗೆ ಆದ ಸಮಸ್ಯೆಗೆ 5000 ರೂಪಾಯಿ ಪರಿಹಾರ&lt;/li&gt; &lt;li&gt;ಕಾನೂನು ಹೋರಾಟ ವೆಚ್ಚ 5000 ರೂಪಾಯಿ&lt;/li&gt; &lt;li&gt;ಒಟ್ಟು 10520 ರೂಪಾಯಿ&lt;/li&gt;&lt;/ul&gt;&lt;p&gt;ಗ್ರಾಹಕರು ಆರ್ಡರ್ ಮಾಡಿದ ಉತ್ಪನ್ನ ಸರಿಯಾಗಿ ವಿತರಣೆಯಾಗಬೇಕು. ಸೇವೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ಥರ್ಡ್ ಪಾರ್ಟಿ ಆ್ಯಪ್ ಹೊಣೆಯಾಗಲಿದೆ. ಹೀಗಾಗಿ ಪ್ರತಿ ಸೇವೆಯಲ್ಲೂ ಲೋಪವಾಗದಂತೆ ಎಚ್ಚರವಹಿಸಬೇಕು ಎಂದು ಗ್ರಾಹಕರ ವೇದಿಕೆ ಸೂಚಿಸಿದೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/ordered-10-inch-pizza-received-7-inch-pizza-customer-gets-rs-10520-compensation/articleshow-41ubtgw"/>
        </item>
        <item>
            <title><![CDATA[Bribe Allegation: ಪಂಜಾಬ್ ಸಿಎಂ ಪತ್ನಿ ಮೇಲೆ ₹5 ಕೋಟಿ ಲಂಚದ ಆರೋಪ, NHRC ತನಿಖೆಗೆ ಆದೇಶ]]></title>
            <link>https://kannada.asianetnews.com/india-news/nhrc-probes-5-crore-bribe-allegation-against-punjab-cms-wife-gurpreet-kaur-rav/articleshow-iwg1wwt</link>
            <guid isPermaLink="true">https://kannada.asianetnews.com/india-news/nhrc-probes-5-crore-bribe-allegation-against-punjab-cms-wife-gurpreet-kaur-rav/articleshow-iwg1wwt</guid>
            <pubDate>Sat, 22 Aug 2026 10:48:53 +0530</pubDate>
            <description><![CDATA[&lt;p&gt;ಹಲವು ಭ್ರಷ್ಟಾಚಾರ, ಡ್ರಗ್ಸ್ ಮಾಫಿಯಾದಿಂದ ಸುದ್ದಿಯಾಗುತ್ತಿರುವ ಪಂಜಾಬ್ ಇದೀಗ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ವಿರುದ್ಧ ಅತ್ಯಾ೧ಚಾರ ಪ್ರಕರಣವೊಂದನ್ನು ಮುಚ್ಚಿಹಾಕಲು 5 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಪ್ರಕರವನ್ನು NHRC ಗಂಭೀರವಾಗಿ ಪರಿಗಣಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0kyctambzw3v7zgz2sfeedn,imgname-----------------------2026-08-22t104600.633-1787375806804.jpg" type="image/jpeg" height="390" width="690"/>
            <content:encoded><![CDATA[&lt;h2&gt;ಪಂಜಾಬ್ ಸಿಎಂ ಪತ್ನಿ ವಿರುದ್ಧದ ಆರೋಪಗಳ ಬಗ್ಗೆ NHRC ತನಿಖೆ&lt;/h2&gt;&lt;p&gt;&lt;strong&gt;ಪಂಜಾಬ್ (ಆ.22): &lt;/strong&gt;ಹಲವು ಭ್ರಷ್ಟಾಚಾರ, ಡ್ರಗ್ಸ್ ಮಾಫಿಯಾದಿಂದ ಸುದ್ದಿಯಾಗುತ್ತಿರುವ ಪಂಜಾಬ್ ಇದೀಗ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ವಿರುದ್ಧ ಅತ್ಯಾ೧ಚಾರ ಪ್ರಕರಣವೊಂದನ್ನು ಮುಚ್ಚಿಹಾಕಲು 5 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಪ್ರಕರವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC) ಗಂಭೀರವಾಗಿ ಪರಿಗಣಿಸಿದೆ.&lt;/p&gt;&lt;h3&gt;ಪಂಜಾಬ್ ಮುಖ್ಯಮಂತ್ರಿ ಪತ್ನಿಯಿಂದಲೇ ಲಂಚಕ್ಕೆ ಬೇಡಿಕೆ!&lt;/h3&gt;&lt;p&gt;ಪಂಜಾಬ್&zwnj;ನಲ್ಲಿ ನಡೆದಿದ್ದ ಬಲತ್ಕಾರ ಪ್ರಕರಣವೊಂದರಲ್ಲಿ ಕೇಸ್ ದಾಖಲಾಗಿತ್ತು. ಈ ಕೇಸ್ ಮುಚ್ಚಿಹಾಕಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಕೇಳಿಬಂದಿದೆ. ಈ ಆರೋಪ ಬೇರೆ ಯಾರೋ ಸಾಮಾನ್ಯರು ಮಾಡಿದ್ದಲ್ಲ, ಪಂಜಾಬ್&zwnj;ನ ಮಾಜಿ ನ್ಯಾಯಾಧೀಶ ರಂಜಿತ್ ಸಿಂಗ್ ಈ ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಿಯಾಂಕ್ ಕಾನೂಂಗೊ ನೇತೃತ್ವದ NHRC ಪೀಠವು ಈ ಬಗ್ಗೆ ತನಿಖೆ ನಡೆಸಿ ಎರಡು ವಾರಗಳಲ್ಲಿ ಕ್ರಮ ಕೈಗೊಂಡ ವರದಿ (ATR) ಸಲ್ಲಿಸುವಂತೆ ಪಂಜಾಬ್&zwnj;ನ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೂಚಿಸಿದೆ. ಈ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯದ ಮಹಿಳಾ ಸುರಕ್ಷತಾ ವಿಭಾಗಕ್ಕೂ ಆಯೋಗ ರವಾನಿಸಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ NHRC ತಿಳಿಸಿದೆ.&lt;/p&gt;&lt;p&gt;&lt;strong&gt;ಸರ್ಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸದ ಬಗ್ಗೆಯೂ ತನಿಖೆ&lt;/strong&gt;&lt;/p&gt;&lt;p&gt;ಇದಕ್ಕೂ ಮುನ್ನ ಆಗಸ್ಟ್ 19 ರಂದು, ಪ್ರಿಯಾಂಕ್ ಕಾನೂಂಗೊ ಅವರಿದ್ದ NHRC ಪೀಠವು ಪಂಜಾಬ್&zwnj;ನ ಸರ್ಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸದ ಬಗ್ಗೆ ಬಂದ ದೂರಿನ ಬಗ್ಗೆಯೂ ವಿಚಾರಣೆ ಆರಂಭಿಸಿದೆ. ಈ ಕುರಿತು ಪಂಜಾಬ್ ಸರ್ಕಾರದಿಂದ ವಿವರವಾದ ವರದಿ ಕೇಳಿದೆ. ದೂರಿನ ಪ್ರಕಾರ ಗ್ರಾಮೀಣ ದೂರದ ಮತ್ತು ಗಡಿ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸಿಲ್ಲ. ಇದರಿಂದಾಗಿ ಈ ಶಾಲೆಗಳ ಮಕ್ಕಳು ರಾಷ್ಟ್ರೀಯ ಹಬ್ಬದಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.&lt;/p&gt;&lt;p&gt;ಗಡಿ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ, ರಾಜ್ಯದ ಇತರ ಭಾಗಗಳ ಮಕ್ಕಳಂತೆ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ನಾಗರಿಕ ಅವಕಾಶಗಳನ್ನು ನಿರಾಕರಿಸಲಾಗಿದೆಯೇ? ಈ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಬಗ್ಗೆ ರಾಜ್ಯವಾರು ಜಿಲ್ಲಾವಾರು ಮತ್ತು ಶಾಲಾವಾರು ವಿವರಗಳನ್ನು ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಲಾಗಿದೆ. ಎಷ್ಟು ಸರ್ಕಾರಿ ಶಾಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಯಿತು, ರಾಷ್ಟ್ರಗೀತೆ ಹಾಡಲಾಯಿತು ಮತ್ತು ವಿದ್ಯಾರ್ಥಿಗಳು ಆಚರಣೆಯಲ್ಲಿ ಭಾಗವಹಿಸಿದ್ದರು ಎಂಬ ಮಾಹಿತಿ ನೀಡಬೇಕು. ಅಲ್ಲದೆ ಈ ಚಟುವಟಿಕೆಗಳನ್ನು ನಡೆಸದ ಶಾಲೆಗಳನ್ನು ಗುರುತಿಸಿ, ಅದಕ್ಕೆ ಕಾರಣಗಳನ್ನು ವಿವರಿಸುವಂತೆ ಕೇಳಲಾಗಿದೆ.&lt;/p&gt;&lt;p&gt;ಗ್ರಾಮೀಣ, ದೂರದ ಗಡಿ ಪ್ರದೇಶಗಳಲ್ಲಿರುವ ಶಾಲೆಗಳನ್ನು ವಿಶೇಷವಾಗಿ ಪರಿಶೀಲಿಸುವಂತೆ ಮತ್ತು ಈ ಪ್ರದೇಶಗಳ ಮಕ್ಕಳಿಗೆ ಲಭ್ಯವಿರುವ ಅವಕಾಶಗಳಲ್ಲಿ ಯಾವುದೇ ತಾರತಮ್ಯ ಆಗಿದೆಯೇ ಎಂಬ ಬಗ್ಗೆ ವಿವರಗಳನ್ನು ನೀಡುವಂತೆ ಪೀಠವು ನಿರ್ದಿಷ್ಟವಾಗಿ ನಿರ್ದೇಶಿಸಿದೆ.&lt;/p&gt;&lt;p&gt;ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಸಂದರ್ಭಗಳು ಮಕ್ಕಳಿಗೆ ಭಾರತದ ಸ್ವಾತಂತ್ರ್ಯ ಹೋರಾಟ, ಸಂವಿಧಾನ, ರಾಷ್ಟ್ರೀಯ ಚಿಹ್ನೆಗಳು, ನಾಗರಿಕ ಕರ್ತವ್ಯಗಳು, ರಾಷ್ಟ್ರೀಯ ಏಕತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಕಲಿಯಲು ಒಂದು ಪ್ರಮುಖ ಅವಕಾಶವನ್ನು ಒದಗಿಸುತ್ತವೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಆದರೆ ಸ್ವಾತಂತ್ರ್ಯ ದಿನಾಚರಣೆಯನ್ನೇ ಆಚರಿಸಿಲ್ಲ ಎಂದರೆ ಏನರ್ಥ? ನಾಲ್ಕು ವಾರಗಳೊಳಗೆ ವಿವರವಾಗಿ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸುವಂತೆ ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವಾಲಯದಿಂದಲೂ ಆಯೋಗ ಮಾಹಿತಿ ಕೇಳಿದೆ ಮತ್ತು ಸೂಕ್ತ ಕ್ರಮಕ್ಕಾಗಿ ಕೇಂದ್ರ ಗೃಹ ಸಚಿವಾಲಯಕ್ಕೂ ತಿಳಿಸಿದೆ.&lt;/p&gt;&lt;p&gt;ಶಾಲೆಗಳ ಭೌಗೋಳಿಕ ಸ್ಥಳದ ಕಾರಣಕ್ಕಾಗಿಯೇ ಗಡಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ರಾಷ್ಟ್ರೀಯ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಸಮಾನ ಅವಕಾಶಗಳನ್ನು ನಿರಾಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಿಯಾಂಕ್ ಕಾನೂಂಗೊ ನೇತೃತ್ವದ NHRC ಪೀಠವು ಮುಂದಾಗಿದೆ.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/nhrc-probes-5-crore-bribe-allegation-against-punjab-cms-wife-gurpreet-kaur-rav/articleshow-iwg1wwt"/>
        </item>
        <item>
            <title><![CDATA[ಪಾಕ್‌ಗೆ ಪೋಲಾಗುತ್ತಿದ್ದ ಸಿಂಧೂ ನದಿ ನೀರನ್ನು ಲಡಾಕ್‌ಗೆ ಬಳಸಿಕೊಂಡ ಮೋದಿ ಸರ್ಕಾರ, ಕೃಷಿ ಕ್ರಾಂತಿಗೆ ಸಾಕ್ಷಿಯಾಯ್ತು ಭಾರತ]]></title>
            <link>https://kannada.asianetnews.com/india-news/indus-water-pact-halt-ladakh-uses-glacier-water-for-agriculture-san/articleshow-71igepu</link>
            <guid isPermaLink="true">https://kannada.asianetnews.com/india-news/indus-water-pact-halt-ladakh-uses-glacier-water-for-agriculture-san/articleshow-71igepu</guid>
            <pubDate>Sat, 22 Aug 2026 09:48:54 +0530</pubDate>
            <description><![CDATA[&lt;p&gt;ಸಿಂಧೂ ಜಲ ಒಪ್ಪಂದದಡಿ ಪಾಕಿಸ್ತಾನಕ್ಕೆ ವ್ಯರ್ಥವಾಗಿ ಹರಿಯುತ್ತಿದ್ದ ಹಿಮನದಿ ನೀರನ್ನು ಲಡಾಖ್ ಆಡಳಿತ ಯಶಸ್ವಿಯಾಗಿ ಸದ್ಬಳಕೆ ಮಾಡಿಕೊಂಡಿದೆ. ಈ ಯೋಜನೆಯಿಂದಾಗಿ 'ಇಗೂ-ಫೇ' ಕಾಲುವೆಗೆ ಜೀವಕಳೆ ಬಂದಿದ್ದು, ಸಾವಿರಾರು ಎಕರೆ ಬಂಜರು ಭೂಮಿ ಹಸಿರಾಗುವ ನಿರೀಕ್ಷೆಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0kty5a1ydkvrr4nbxga2eac,imgname-iwt-1787372180801.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.22):&lt;/strong&gt; ಸಿಂಧೂ ಜಲ ಒಪ್ಪಂದವು (IWT) ಭಾರತಕ್ಕೆ ಎಷ್ಟು ಹಾನಿಕಾರಕವಾಗಿತ್ತು ಎಂಬುದಕ್ಕೆ ಈಗ ಕೇಂದ್ರಾಡಳಿತ ಪ್ರದೇಶವಾದ ಲಡಾಖ್&zwnj; ಸಾಕ್ಷಿ ಒದಗಿಸಿದೆ. ಸಿಂಧು ನದಿಯಲ್ಲಿ ಈವರೆಗೆ ವ್ಯರ್ಥವಾಗಿ ಪಾಕಿಸ್ತಾನದತ್ತ ಹರಿದುಹೋಗುತ್ತಿದ್ದ ಹಿಮನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಲಡಾಖ್ ಆಡಳಿತವು ತನ್ನ ಚಿತ್ರಣವನ್ನೇ ಬದಲಾಯಿಸಿಕೊಂಡಿದೆ. ಪಕ್ಷಭೇದ ಮರೆತು ಈ ಮಹತ್ಕಾರ್ಯವನ್ನು ಕೊಂಡಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಲಡಾಖ್ ಆಡಳಿತಕ್ಕೆ ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಸಿಂಧೂ ಜಲ ಒಪ್ಪಂದದ ರದ್ದತಿ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಪಾಕಿಸ್ತಾನದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಕೂಗಾಟ ನಡೆಸುತ್ತಿರುವ ಪಾಕಿಸ್ತಾನಕ್ಕೆ, ಈ ಒಪ್ಪಂದವು ಇಷ್ಟು ವರ್ಷಗಳ ಕಾಲ ಹೇಗೆ ಏಕಪಕ್ಷೀಯವಾಗಿ ಲಾಭ ತಂದುಕೊಡುತ್ತಿತ್ತು ಎಂಬುದನ್ನು ಭಾರತ ಈಗ ಜಗತ್ತಿಗೆ ತೋರಿಸಿಕೊಟ್ಟಿದೆ. ತನ್ನ ಸ್ವಂತ ಭೂಮಿ ಮತ್ತು ಜನರ ಹಿತಾಸಕ್ತಿಯನ್ನು ಬಲಿ ಕೊಟ್ಟು, ಶತ್ರು ರಾಷ್ಟ್ರಕ್ಕಾಗಿ ಭಾರತವು ಬರೋಬ್ಬರಿ 65 ವರ್ಷಗಳ ಕಾಲ ತನ್ನ ನೈಸರ್ಗಿಕ ಜಲಸಂಪನ್ಮೂಲವನ್ನು ಹರಿಯಲು ಬಿಟ್ಟಿತ್ತು. ಆದರೆ, ಕೇವಲ ಒಂದು ವರ್ಷದ ಅವಧಿಯಲ್ಲಿ ಲಡಾಖ್&zwnj;ನಲ್ಲಿ ಅದ್ಭುತ ಬದಲಾವಣೆ ಸೃಷ್ಟಿಯಾಗಿದ್ದು, ಸಿಂಧು ನದಿಗೆ ಹರಿದು ಪೋಲಾಗುತ್ತಿದ್ದ ನೀರಿನಿಂದಲೇ ಅಲ್ಲಿನ ರೈತರು ತಮ್ಮ ಜಮೀನುಗಳಿಗೆ ನೀರುಣಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹಿಮನದಿ ನೀರು ಸದ್ಬಳಕೆ: ಲಡಾಖ್&zwnj;ನ ಭಾಗ್ಯೋದಯ&lt;/strong&gt;&lt;/h2&gt;&lt;p&gt;ಲಡಾಖ್&zwnj;ಗೆ ತಲುಪುತ್ತಿದ್ದ ಹಿಮನದಿಯ ನೀರಿನ ಪೈಕಿ ದಿನನಿತ್ಯ ಸುಮಾರು 9 ಕೋಟಿ ಲೀಟರ್&zwnj;ನಷ್ಟು ನೀರು ಸಿಂಧೂ ನದಿಯನ್ನು ಸೇರಿ ವ್ಯರ್ಥವಾಗಿ ಪಾಕಿಸ್ತಾನದತ್ತ ಹರಿದುಹೋಗುತ್ತಿತ್ತು. ಪಾಕಿಸ್ತಾನ ಎಂದಿಗೂ ಸಿಂಧು ನದಿಯ ನೀರನ್ನು ದಕ್ಷತೆಯಿಂದ ಬಳಸಿಕೊಳ್ಳದೆ ಪೋಲು ಮಾಡಿತ್ತು. ಆದರೆ, ಸಿಂಧು ಜಲ ಒಪ್ಪಂದ ಸ್ಥಗಿತಗೊಂಡ ಬಳಿಕ ಲಡಾಖ್ ಆಡಳಿತವು ದಿಟ್ಟ ಹೆಜ್ಜೆ ಇಟ್ಟು ಪರಿಸ್ಥಿತಿಯನ್ನು ಬದಲಾಯಿಸಿದೆ. ಪರಿಣಾಮವಾಗಿ, ಸಿಂಧು ನದಿಗೆ ಹರಿದು ವ್ಯರ್ಥವಾಗುತ್ತಿದ್ದ ಹಿಮನದಿಯ ನೀರು ಈಗ ದಿನಕ್ಕೆ ಕೇವಲ 50 ಲಕ್ಷ ಲೀಟರ್&zwnj;ಗೆ ಕುಸಿದಿದೆ.&lt;/p&gt;&lt;h2&gt;&lt;strong&gt;ಜಲಸಂಕಟ ಮೆಟ್ಟಿ ನಿಂತ ಲಡಾಖ್ ಸಾಧನೆ&lt;/strong&gt;&lt;/h2&gt;&lt;p&gt;ಲಡಾಖ್&zwnj;ನ ಉಪರಾಜ್ಯಪಾಲ (ಎಲ್&zwnj;ಜಿ) ವಿನಯ್ ಕುಮಾರ್ ಸಕ್ಸೇನಾ ಅವರು 2026ರ ಆಗಸ್ಟ್&zwnj;ನಲ್ಲಿ ಈ ಭಾಗಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ಆಂಗ್ಲ ಪತ್ರಿಕೆ 'ದಿ ಎಕನಾಮಿಕ್ ಟೈಮ್ಸ್' ವರದಿ ಪ್ರಕಾರ, ಆಗಸ್ಟ್ 16ರಂದು ಕೈಗೊಂಡ ಪ್ರವಾಸದ ವೇಳೆ ಚುಚೋಟ್ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಕ್ಸೇನಾ, ಸ್ಟೋಕ್ ಗ್ಲೇಷಿಯರ್&zwnj;ನ ಸುಮಾರು 2 ಕೋಟಿ ಲೀಟರ್ ನೀರನ್ನು ಆ ಒಣಗಿದ ಗ್ರಾಮದ ಕಾಲುವೆಗೆ ತಿರುಗಿಸುವಲ್ಲಿ ಲಡಾಖ್ ಆಡಳಿತ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಕೃಷಿಯ ಸ್ಥಿರತೆ ಹಾಗೂ ಜಲಸಂಕಟದಿಂದ ಮುಕ್ತಿ ಪಡೆಯುವ ನಿಟ್ಟಿನಲ್ಲಿ ಇದೊಂದು ಬೃಹತ್ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.&lt;/p&gt;&lt;h2&gt;&lt;strong&gt;ಲಡಾಖ್ ಆಡಳಿತಕ್ಕೆ ಶಶಿ ತರೂರ್ ಮೆಚ್ಚುಗೆ&lt;/strong&gt;&lt;/h2&gt;&lt;p&gt;ಕೃಷಿ ಮತ್ತು ರೈತರ ಹಿತದೃಷ್ಟಿಯಿಂದ ಕೈಗೊಂಡ ಈ ಬೃಹತ್ ಕಾರ್ಯವನ್ನು ಸಂಸದೀಯ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಹಾಗೂ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಮುಕ್ತವಾಗಿ ಪ್ರಶಂಸಿದ್ದಾರೆ. ರಾಜಕೀಯವನ್ನು ಬದಿಗಿಟ್ಟು ಎಲ್&zwnj;ಜಿ ವಿನಯ್ ಕುಮಾರ್ ಸಕ್ಸೇನಾ ಅವರ 'ಎಕ್ಸ್' (ಟ್ವಿಟರ್) ಪೋಸ್ಟ್&zwnj;ಗೆ ಪ್ರತಿಕ್ರಿಯಿಸಿರುವ ತರೂರ್, 'ಸಾಧಿಸಿದ್ದೀರಿ, ಶಹಬಾಸ್!' ಎಂದು ಅಭಿನಂದಿಸಿದ್ದಾರೆ.&lt;/p&gt;&lt;p&gt;&quot;ಲಡಾಖ್ ಉಪರಾಜ್ಯಪಾಲರೇ, ಅತ್ಯುತ್ತಮ ಕೆಲಸ! ಇತ್ತೀಚೆಗೆ ನನ್ನ ನೇತೃತ್ವದ ಸಂಸದೀಯ ಸಮಿತಿಯು ಲಡಾಖ್&zwnj;ಗೆ ಭೇಟಿ ನೀಡಿದ್ದಾಗ ನಮಗೆ ಲಭಿಸಿದ ಮಾಹಿತಿಯಂತೆ, ಈ ಯೋಜನೆ ಪರಿಸರ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಕ್ಷೇತ್ರದಲ್ಲಿ ಇಡೀ ದೇಶಕ್ಕೇ ಮಾದರಿಯಾಗುವ ಸಾಮರ್ಥ್ಯ ಹೊಂದಿದೆ. ಹೀಗೆಯೇ ಮುಂದುವರಿಯಿರಿ&quot; ಎಂದು ಶಶಿ ತರೂರ್ ಶ್ಲಾಘಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಂಜರು ಭೂಮಿಗೆ ಜೀವಕಳೆ ತಂದ ಸಿಂಧು ನೀರು&lt;/strong&gt;&lt;/h2&gt;&lt;p&gt;ಶಶಿ ತರೂರ್ ನೇತೃತ್ವದ ಸಂಸದೀಯ ನಿಯೋಗವು ಇತ್ತೀಚೆಗಷ್ಟೇ ಕೇಂದ್ರಾಡಳಿತ ಪ್ರದೇಶವಾದ ಲಡಾಖ್&zwnj;ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.&lt;/p&gt;&lt;ul&gt; &lt;li&gt;ಲಡಾಖ್ ಆಡಳಿತವು ಸ್ಟೋಕ್ ನಾಲಾದಿಂದ ಎರಡು ಡೈವರ್ಷನ್&zwnj;ಗಳನ್ನು (ನೀರು ತಿರುಗಿಸುವ ವ್ಯವಸ್ಥೆ) ಯಶಸ್ವಿಯಾಗಿ ನಿರ್ಮಿಸುವ ಮೂಲಕ ಈ ಮೈಲಿಗಲ್ಲು ಸಾಧಿಸಿದೆ.&lt;/li&gt; &lt;li&gt;ಇದರಿಂದಾಗಿ, ಸ್ಟೋಕ್ ಕಾಂಗ್ರಿ ಗ್ಲೇಷಿಯರ್&zwnj;ನಿಂದ ಸಿಂಧೂ ನದಿಯ ಮೂಲಕ ಪಾಕಿಸ್ತಾನದ ತಗ್ಗು ಪ್ರದೇಶಗಳಿಗೆ ಹರಿದು ಪೋಲಾಗುತ್ತಿದ್ದ 9 ಕೋಟಿ ಲೀಟರ್ ನೀರನ್ನು ಇದೀಗ 'ಇಗೂ-ಫೇ' ನೀರಾವರಿ ಕಾಲುವೆಗೆ ಯಶಸ್ವಿಯಾಗಿ ತಿರುಗಿಸಲಾಗಿದೆ.&lt;/li&gt; &lt;li&gt;ವಿಶೇಷವೆಂದರೆ, ಈ ಯೋಜನೆಗೆ ಯಾವುದೇ ದೊಡ್ಡ ಪ್ರಮಾಣದ ಬಂಡವಾಳ ವೆಚ್ಚವಾಗಿಲ್ಲ. ಕೇವಲ ಸರಳ ಹಾಗೂ ಸಾಂಪ್ರದಾಯಿಕ ಮಣ್ಣಿನ ಕಾಮಗಾರಿಯ ಮೂಲಕವೇ ಜಗತ್ತಿಗೆ ಮಾದರಿಯಾಗುವಂತಹ ದೊಡ್ಡ ಬದಲಾವಣೆಯನ್ನು ತರಲಾಗಿದೆ.&lt;/li&gt; &lt;li&gt;ಸದ್ಯ ಸ್ಟೋಕ್ ನಾಲಾದಲ್ಲಿ ಹರಿಯುವ 36 ಕ್ಯೂಸೆಕ್ ನೀರಿನ ಪೈಕಿ 25 ಕ್ಯೂಸೆಕ್ ನೀರು ಕಾಲುವೆಗೆ ಹರಿಯುತ್ತಿದ್ದು, ಕಾಲುವೆಯ ನೀರಿನ ಸರಬರಾಜು ಸಾಮರ್ಥ್ಯ 50 ಕ್ಯೂಸೆಕ್&zwnj;ನಿಂದ 75 ಕ್ಯೂಸೆಕ್&zwnj;ಗೆ ಹೆಚ್ಚಾಗಿದೆ.&lt;/li&gt; &lt;li&gt;ಈವರೆಗೆ ನದಿಯಲ್ಲಿ ಹರಿದು ಪಾಕಿಸ್ತಾನಕ್ಕೆ ಸೇರಿ ಪೋಲಾಗುತ್ತಿದ್ದ ನೀರು, ಇಂದಿನಿಂದ 12 ಗ್ರಾಮಗಳ ಜನರ ಜೀವನದ ಜೀವಧಾತುವಾಗಿ ಮಾರ್ಪಟ್ಟಿದೆ. ಅಲ್ಲದೆ, ದಶಕಗಳಿಂದ ಪಾಳುಬಿದ್ದಿದ್ದ 1,000 ಎಕರೆಗೂ ಅಧಿಕ ಬಂಜರು ಭೂಮಿ ಶೀಘ್ರದಲ್ಲೇ ಹಸಿರಿನಿಂದ ಕಂಗೊಳಿಸಲಿದೆ.&lt;/li&gt;&lt;/ul&gt;&lt;p&gt;ಸಿಂಧು ಜಲ ಒಪ್ಪಂದದ ಪರಿಣಾಮವಾಗಿ ಕಳೆದ ಹಲವು ದಶಕಗಳಿಂದ ಕೇವಲ ಒಣ ನಾಲೆಯಂತಿದ್ದ 43 ಕಿಲೋಮೀಟರ್ ಉದ್ದದ 'ಇಗೂ-ಫೇ' ನೀರಾವರಿ ಕಾಲುವೆಯಲ್ಲಿ ಈಗ ಜೀವಜಲ ಮೊಳಗುತ್ತಿದೆ.&lt;/p&gt;&lt;p&gt;Well done, @lg_ladakh. As I discovered during my Committee&rsquo;s recent visit, Ladakh promises to be a national showcase for environmental progress and sustainability. Let&rsquo;s keep at it! https://t.co/meBFJvzz5g&lt;/p&gt;&lt;p&gt;&mdash; Shashi Tharoor (@ShashiTharoor) August 21, 2026&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/indus-water-pact-halt-ladakh-uses-glacier-water-for-agriculture-san/articleshow-71igepu"/>
        </item>
    </channel>
</rss>
