<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 13 Sep 2026 19:11:48 +0530</lastBuildDate>
        <atom:link href="https://kannada.asianetnews.com/rss/india-news" rel="self" type="application/rss+xml"/>
        <item>
            <title><![CDATA[BRICS ಊಟದಲ್ಲಿ ಪನೀರ್ ಪದಾರ್ಥಕ್ಕೆ ಈರುಳ್ಳಿ ಬದಲು ಶಾಲೆಟ್ಸ್ ಬಳಕೆ, ಈರುಳ್ಳಿಗೂ ಶಾಲೆಟ್ಸ್‌ಗೂ ವ್ಯತ್ಯಾಸ ಏನು?]]></title>
            <link>https://kannada.asianetnews.com/india-news/use-of-shallots-in-paneer-lababdar-dish-at-the-brics-dinner-onions-and-shallots-difference-gkn/articleshow-ynk5z1l</link>
            <guid isPermaLink="true">https://kannada.asianetnews.com/india-news/use-of-shallots-in-paneer-lababdar-dish-at-the-brics-dinner-onions-and-shallots-difference-gkn/articleshow-ynk5z1l</guid>
            <pubDate>Sun, 13 Sep 2026 19:11:42 +0530</pubDate>
            <description><![CDATA[&lt;p&gt;ಬ್ರಿಕ್ಸ್ ಶೃಂಗಸಭೆಯಲ್ಲಿ ನಡೆದ ಊಟದ ಮೆನು ಸಾಕಷ್ಟು ಚರ್ಚೆಗೆ ಕಾರಣವಾಗ್ತಿದೆ. ಡಿನ್ನರ್&zwj;&zwnj;ನಲ್ಲಿ ಭಾರತೀಯ ಪರಂಪರೆಯನ್ನ ಗುರುತಿಸುವ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ವೈವಿದ್ಯಮಯ ತಿನಿಸುಗಳು ಊಟದ ಮೆನುವಿನಲ್ಲಿ ಇದ್ದವು. ಈ ಕುರಿತ ಒಂದು ಸುದ್ದಿ ಇಲ್ಲಿದೆ. ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2dfm24ensttv6skx5mmdw5g,imgname-brics-dinner-1789306472590.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ದೆಹಲಿ ಭಾರತ್ ಮಂಟಪ್&zwnj;ನಲ್ಲಿ ಕಳೆದ ಎರಡು ದಿನಗಳಿಂದ ಬ್ರಿಕ್ಸ್ ಶೃಂಗಸಭೆ ಭರ್ಜರಿಯಾಗಿ ನಡೆಯಿತು. ಬ್ರಿಕ್ಸ್ ಶೃಂಗಸಭೆಯ ಅಧಿವೇಶನಗಳ ಕುರಿತ ಚರ್ಚೆಯ ಜೊತೆಗೆ ಬ್ರಿಕ್ಸ್ ಡಿನ್ನರ್ ಬಗ್ಗೆಯೂ ಬಿಸಿಬಿಸಿ ಚರ್ಚೆ ಆಗ್ತಿದೆ. ಪ್ರಧಾನಿ ಮೋದಿ ಅವರು ಜಿನ್&zwnj;ಪಿಂಗ್, ಪುಟಿನ್ ಸೇರಿ ಜಾಗತಿಕ ನಾಯಕರ ಜೊತೆ ಗಾಲಾ ಡಿನ್ನರ್ ಆಯೋಜಿಸಿದ್ದರು.&lt;/p&gt;&lt;p&gt;ವಿಶೇಷ ಅಂದ್ರೆ ಈ ಡಿನ್ನರ್&zwj;&zwnj;ನಲ್ಲಿ ಭಾರತೀಯ ಪರಂಪರೆಯನ್ನ ಗುರುತಿಸುವ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ವೈವಿದ್ಯಮಯ ತಿನಿಸುಗಳು ಊಟದ ಮೆನುವಿನಲ್ಲಿ ಇದ್ದವು. ಇದೀಗ ಅವುಗಳ ಫೋಟೋಗಳು ಸೋಶಿಯುಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಅದರಲ್ಲೂ ವಿಶೇಷವಾಗಿ ಪನೀರ್ ಲಾಬಾಬ್ದಾರ್ ಪದಾರ್ಥವು ಎಲ್ಲರ ಗಮನ ಸೆಳೆದಿದೆ. ಉತ್ತರ ಭಾರತದ ಜನಪ್ರಿಯ ಖಾದ್ಯವಾಗಿರುವ ಪನೀರ್&zwj;&zwnj; ಲಾಬಾಬ್ದಾರ್ ತಯಾರಿಸಲು ಸಾಮಾನ್ಯ ಈರುಳ್ಳಿ ಬದಲಿಗೆ ಶಾಲೆಟ್ಸ್&zwnj; (ಸಾಂಬಾರ್ ಈರುಳ್ಳಿ) ಬಳಸಲಾಗಿದೆ. ಇದು ಸದ್ಯ ಪಾಕತಜ್ಞರ ಚರ್ಚೆಯ ವಿಷಯ. ನೋಡಲು ಅತ್ಯಂತ ಸಣ್ಣ ವಿಚಾರ ಅಂದುಕೊಂಡರೂ, ಖಾದ್ಯದ ರುಚಿಯನ್ನೇ ಬದಲಾಯಿಸುವ ಶಕ್ತಿ ಈ ಶಾಲೆಟ್ಸ್&zwnj;ಗೆ ಇದೆ.&lt;/p&gt;&lt;p&gt;ನಮಗೆ ತಿಳಿದಿರುವಂತೆ ಲಬಾಬ್ದಾರ್ ಗ್ರೇವಿಯನ್ನ ದಪ್ಪ ಈರುಳ್ಳಿ, ಟೊಮ್ಯಾಟೋ ಗೋಡಂಬಿಯನ್ನ ಬಳಸಿ ತಯಾರಿಸುತ್ತಾರೆ. ಆದರೆ ಬ್ರಿಕ್ಸ್ ಭೋಜನಕೂಟದಲ್ಲಿ ಸಾಮಾನ್ಯ ಈರುಳ್ಳಿ ಬದಲಾಗಿ ಶಾಲೆಟ್ಸ್ ಬಳಸಿದ್ದು ಯಾಕೆ ಅನ್ನೋದು ಹಲವರ ಕುತೂಹಲ.&lt;/p&gt;&lt;h2&gt;&lt;strong&gt;ವ್ಯತ್ಯಾಸ ಏನು?&lt;/strong&gt;&lt;/h2&gt;&lt;ul&gt; &lt;li&gt;ದೊಡ್ಡ ಈರುಳ್ಳಿ ಒಂದೇ ಗೆಡ್ಡೆಯಾಗಿ ಬೆಳೆಯುತ್ತದೆ&lt;/li&gt; &lt;li&gt;ಶಾಲೆಟ್ಸ್ ಬೆಳ್ಳುಳ್ಳಿಯಂತೆ ಸಣ್ಣ ಸಣ್ಣ ಗೆಡ್ಡೆಗಳ ಗೊಂಚಲು ಗೊಂಚಲಾಗಿ ಬೆಳೆಯುತ್ತದೆ&lt;/li&gt; &lt;li&gt;ದಕ್ಷಿಣ ಭಾರತದಲ್ಲಿ ಇದನ್ನು ಸಾಂಬಾರ್ ಈರುಳ್ಳಿ ಎಂದು ಕರೆಯುತ್ತಾರೆ&lt;/li&gt; &lt;li&gt;ಈ ಸಾಂಬಾರ್ ಈರುಳ್ಳಿ ಚಿಕ್ಕದಾಗಿಯೇ ಬೆಳೆಯುತ್ತದೆ&lt;/li&gt; &lt;li&gt;ಎರಡೂ ಈರುಳ್ಳಿಯೇ ಆಗಿದ್ದರೂ ರೂಚಿಯಲ್ಲಿ ಭಾರೀ ವ್ಯತ್ಯಾಸ ಇದೆ&lt;/li&gt; &lt;li&gt;ಸಾಮಾನ್ಯ ಈರುಳ್ಳಿ ಹೆಚ್ಚು ಖಾರ ಮತ್ತು ಕಟು ವಾಸನೆ&lt;/li&gt; &lt;li&gt;ಶಾಲೆಟ್ಸ್&zwnj; ಕಟು ವಾಸನೆ ಇಲ್ಲ, ಸ್ವಲ್ಪ ಸಿಹಿ ಕೂಡ ಇರುತ್ತದೆ&lt;/li&gt;&lt;/ul&gt;&lt;p&gt;ಇನ್ನು ಈ ಶಾಲೆಟ್ಸ್ ಅನ್ನು ಎಣ್ಣೆ ಅಥವಾ ಬೆಣ್ಣೆಯಲ್ಲಿ ಬೇಯಿಸಿದಾಗ ಸಾಮಾನ್ಯ ಈರುಳ್ಳಿಗಿಂತ ತುಂಬಾನೇ ಭಿನ್ನ. ಹೆಚ್ಚು ಬೇಯುತ್ತಿದ್ದಂತೆಯೇ ಅದರಲ್ಲಿರುವ ಸಿಹಿ ಅಂಶ ಹೆಚ್ಚಾಗುತ್ತದೆ. ಹಾಗಾಗಿ ಇದು ಗ್ರೇವಿಗೆ ಒಳ್ಳೆಯ ಟೇಸ್ಟ್ ನೀಡುತ್ತದೆ. ಹಾಗಿದ್ದರೆ ಪನೀರ್ ಲಾಬಾಬ್ದಾರ್&zwj;&zwnj;ಗೆ ಇದನ್ನು ಯಾಕೆ ಬಳಸಲಾಗಿದೆ ಎಂದು ನೋಡೋದಾದರೆ..ಈರುಳ್ಳಿಯ ಘಾಟು ಕಡಿಮೆ ಆಗಿ ಟೊಮ್ಯಾಟೋ ಮತ್ತು ಮಸಾಲೆ ಪದರ್ಥಗಳ ನಿಜವಾದ ಪರಿಮಳ ಎದ್ದು ಕಾಣುತ್ತದೆ ಅನ್ನೋದು ಪಾಕತಜ್ಞರ ಬಣ್ಣನೆಯಾಗಿದೆ.&lt;/p&gt;&lt;h2&gt;&lt;strong&gt;ಇನ್ನು ಬ್ರಿಕ್ಸ್ ಮೆನುವಿನಲ್ಲಿ ಏನೇನು ತಿನಿಸುಗಳು ಇದ್ದವು?&lt;/strong&gt;&lt;/h2&gt;&lt;p&gt;ಬ್ರಿಕ್ಸ್ ಮೆನು ಭಾರತೀಯ ಆಹಾರ ವೈವಿಧ್ಯತೆಯನ್ನ ಪ್ರಪಂಚಕ್ಕೆ ಎತ್ತಿ ತೋರಿಸುವಂತೆ ಇದ್ದವು. ಕೇವಲ ಪನೀರ್ ಲಾಬಾಬ್ದಾರ್ ಅಲ್ಲದೇ, ಖಾಂಡ್ವಿಮಿಲೆ ಫ್ಯೂಯಿಲ್ ಮತ್ತು ಖುಂಬ್ ಗಲೌಟಿ, ಕಾಶ್ಮೀರದ ಗುಚ್ಚಿ ಚಾರ್ಮಿಕ್ (ಮಶ್ರೂಮ್), ಸಿಧಾನ್ಯಗಳ ಫಲಾವ್, ಬೀಟ್&zwnj;ರೂಟ್ ರಾಯಿತ, ಕ್ಯಾರಟ್ ಬೀನ್ಸ್ ಪೊರಿಯಲ್, ಫ್ರೂಟ್&zwnj; ಕ್ರೀಮ್ ಜೊತೆ ಜಿಲೇಬಿ, ಗೋಲ್ಡ್ ಲೀಫ್ ಸೇರಿದಂತೆ ಅನೇಕ ಖಾದ್ಯಗಳನ್ನ ಉಣಬಡಿಸಲಾಗಿತ್ತು.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/use-of-shallots-in-paneer-lababdar-dish-at-the-brics-dinner-onions-and-shallots-difference-gkn/articleshow-ynk5z1l"/>
        </item>
        <item>
            <title><![CDATA[21 ರಾಜ್ಯಗಳಲ್ಲಿ ಯೂನಿಫಾರ್ಮ್ ಸಿವಿಲ್ ಕೋಡ್ ನೀತಿ ಜಾರಿಗೆ ದಿನಾಂಕ ಘೋಷಿಸಿದ ಅಮಿತ್ ಶಾ]]></title>
            <link>https://kannada.asianetnews.com/india-news/amit-shah-announces-date-for-uniform-civil-code-implementation-in-21-states/articleshow-383qcfd</link>
            <guid isPermaLink="true">https://kannada.asianetnews.com/india-news/amit-shah-announces-date-for-uniform-civil-code-implementation-in-21-states/articleshow-383qcfd</guid>
            <pubDate>Sun, 13 Sep 2026 19:04:21 +0530</pubDate>
            <description><![CDATA[&lt;p&gt;ಏಕರೂಪ ನಾಗರಿಕ ಸಂಹಿತೆ ನೀತಿ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಅಮಿತ್ ಶಾ ಯುಸಿಸಿ ಜಾರಿ ದಿನಾಂಕ ಘೋಷಿಸಿದ್ದಾರೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ನೀತಿ ಜಾರಿಗೆ ಅಮಿತ್ ಶಾ ಮುಂದಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktc4x7z54qsdzrbv3v01ztt8,imgname-image-83a1ad31-5a7e-4521-8c7a-42540def0ad3-1780671750117.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.13)&lt;/strong&gt; ಭಾರತದಲ್ಲಿ ಏಕರೂಪ ನಾಗರಿಕ ನೀತಿ ಸಂಹಿತೆ ಕುರಿತು ಭಾರಿ ಚರ್ಚೆಗಳು, ಪರ ವಿರೋಧಗಳು ನಡೆದಿದೆ. ಇದೀಗ ಬರೋಬ್ಬರಿ 21 ರಾಜ್ಯಗಳಲ್ಲಿ ಯೂನಿಫಾರ್ಮ್ ಸಿವಿಲ್ ಕೋಡ್ ನೀತಿ ಜಾರಿಗೆ ದಿನಾಂಕ ಘೋಷಣೆಯಾಗಿದೆ. ಕೇಂದ್ರ ಗ-ಹ ಸಚಿವ ಅಮಿತ್ ಶಾ ಈ ಕುರಿತು ಮಹತ್ವದ ಅಪ್&zwnj;ಡೇಟ್ ನೀಡಿದ್ದಾರೆ. ತ್ರಿವಳಿ ತಲಾಖ್ ನಿಷೇಧಿಸಿ ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕು ನೀಡಲಾಗಿದೆ. ಇದೀಗ ಯುನಿಫಾರ್ಮ್ ಸಿವಿಲ್ ಕೋಡ್ ಜಾರಿಗೆ ತರುತ್ತಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.&lt;/p&gt;&lt;h2&gt;ಯಾವಾಗ ಯುಸಿಸಿ ಜಾರಿ&lt;/h2&gt;&lt;p&gt;ಯೂನಿಫಾರ್ಮ್ ಸಿವಿಲ್ ಕೋಡ್ ಕುರಿತು ಮಾತನಾಡಿದ ಅಮಿತ್ ಶಾ, ಕಳೆದ 12 ವರ್ಷಗಳಲ್ಲಿ ನಾವು ಭರವಸೆ ನೀಡಿದ ಹಲವು ನೀತಿಗಳು, ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇದೀಗ ಬಿಜೆಪಿ ಹಾಗೂ ಎನ್&zwnj;ಡಿಎ ಆಡಳಿತ ಇರುವ 21 ರಾಜ್ಯಗಳಲ್ಲಿ ಯೂನಿಫಾರ್ಮ್ ಸಿವಿಲ್ ಕೋಡ್ ಜಾರಿಯಾಗಲಿದೆ. 2029ರ ಒಳಗೆ ಯುಸಿಸಿ ಜಾರಿಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.&lt;/p&gt;&lt;p&gt;ಏಕರೂಪ ನಾಗರಿಕ ನೀತಿ ಸಂಹಿತೆ ಭಾರತಕ್ಕೆ ಅವಶ್ಯವಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಬದ್ಧವಾಗಿದೆ. 2029ರ ಒಳಗೆ ಎನ್&zwnj;ಡಿಎ ಆಡಳಿತದ ರಾಜ್ಯಗಲ್ಲಿ ಯುಸಿಸಿ ಜಾರಿಯಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. 2029ರಲ್ಲಿ ಮುಂದಿನ ಲೋಕಸಭಾ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ಯುಸಿಸಿ ಜಾರಿಯಾಗಲಿದೆ ಎಂದು ಅಮಿತ್ ಶಾ ಪರೋಕ್ಷವಾಗಿ ಹೇಳಿದ್ದಾರೆ.&lt;/p&gt;&lt;h2&gt;ಐತಿಹಾಸಿಕ ಬಿಲ್&lt;/h2&gt;&lt;p&gt;ಕಳೆದ 12 ವರ್ಷಗಳಿಂದ ಮೋದಿ ನಾಯಕತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಮೋದಿ ನಾಯಕತ್ವದಲ್ಲಿ ಬಿಜೆಪಿ ಹಲವು ಮಹತ್ತರ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಹಲವು ಯೋಜನೆಗಳು, ಐತಿಹಾಸಿಕ ಬಿಲ್ ತರಲಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ. 2014ರ ಮೊದಲು ಭಾರತೀಯ ರಾಜಕೀಯ ಮೂರು ಸಮಸ್ಯೆಗಳಿಂದ ಬಳಲುತ್ತಿತ್ತು. ಭ್ರಷ್ಟಾಚಾರ, ಜಾತಿವಾದ, ವಂಶವಾದದಲ್ಲಿ ಭಾರತದ ರಾಜಕೀಯ ಕೇಂದ್ರಿಕೃತವಾಗಿತ್ತು. 2014ರ ಬಳಿಕ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಬದಲಾಗಿದೆ. ಜನ ಈಗ ರಾಜಕೀಯವನ್ನು ಅವರ ಆಡಳಿತ, ಪರ್ಫಾಮೆನ್ಸ್ ಆಧಾರದಲ್ಲಿ ನೋಡುತ್ತಾರೆ. ಜನರ ಸಮಸ್ಯೆಗೆ ಪರಿಹಾರ ಸಿಕ್ಕಿದೆಯಾ, ಭಾರತದ ಅಭಿವೃದ್ಧಿಯಾಗಿದೆಯಾ, ಮೂಲಭೂತ ಸೌಕರ್ಯ ಸಿಕ್ಕಿದೆಯಾ ಅನ್ನೋ ಮಾನದಡಂಗಳಲ್ಲಿ ನೋಡುತ್ತಿದ್ದಾರೆ. ಇದು ಭಾರತದಲ್ಲಿ ಮಹತ್ತರ ಬದಲಾವಣೆ ಸೂಚನೆ ಎಂದು ಅಮಿತ್ ಶಾ ಹೇಳಿದ್ದಾರೆ.&lt;/p&gt;&lt;p&gt;ಭಾರತೀಯ ನ್ಯಾಯ ಸಂಹಿತೆ ಮೂಲಕ ದೇಶದಲ್ಲಿ ಕಠಿಣ ಕ್ರಮ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಪ್ರಮಾಣ ಹೆಚ್ಚಿಸಲಾಗಿದೆ. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಆರ್ಟಿಕಲ್ 370, 35ಎ ರದ್ದು ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳಿಲ್ಲದೆ ರದ್ದು ಮಾಡಲಾಗಿದೆ. ಕಾಶ್ಮೀರದ ಪರಿಸ್ಥಿತಿ ಹೇಗಿತ್ತು? ಈಗ ಹೇಗಿದೆ? ಕಲ್ಲು ತೂರಾಟ, ಗುಂಡಿನ ಸದ್ದುಗಳು ಕೇಳಿಸುತ್ತಲೇ ಇದ್ದ ಕಾಶ್ಮೀರದಲ್ಲಿ ಇದೀಗ ಯುವಕರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.&lt;/p&gt;&lt;p&gt;ಭಾರತದ ಕೆಲ ರಾಜ್ಯಗಳು ನಕ್ಸಲ್ ಸಮಸ್ಯೆಯಿಂದ ಮುಳುಗಿತ್ತು. ಇಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬರೋಬ್ಬರಿ 9000 ನಕ್ಸಲರ ಶರಣಾಗಿದ್ದಾರೆ. 14ಕ್ಕೂ ಹೆಚ್ಚು ಶಾಂತಿ ಒಪ್ಪಂದ ಮಾಡಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/amit-shah-announces-date-for-uniform-civil-code-implementation-in-21-states/articleshow-383qcfd"/>
        </item>
        <item>
            <title><![CDATA[ಬಂಗಾಳದಲ್ಲಿ 252 ಮದರಸಗಳಿಗೆ ಬೀಗ ಜಡಿದ ಸರ್ಕಾರ, 100ಕ್ಕೂ ಹೆಚ್ಚು ಕೇಂದ್ರಕ್ಕೆ ನೋಟಿಸ್]]></title>
            <link>https://kannada.asianetnews.com/india-news/west-bengal-government-closes-252-madrasas-over-100-more-receive-notices/articleshow-dxs05sx</link>
            <guid isPermaLink="true">https://kannada.asianetnews.com/india-news/west-bengal-government-closes-252-madrasas-over-100-more-receive-notices/articleshow-dxs05sx</guid>
            <pubDate>Sun, 13 Sep 2026 17:42:49 +0530</pubDate>
            <description><![CDATA[&lt;p&gt;ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಸುವೆಂದು ಅದಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬರೋಬ್ಬರಿವ 252 ಮದರಸಗಳಿಗೆ ಬೀಗ ಹಾಕಿದೆ. 100ಕ್ಕೂ ಹೆಚ್ಚು ಮದರಸಗಳಿಗೆ ಶೋಕಾಸ್ ನೋಟಿಸ್ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hrbx9cm8f7pkpakyqzv2tcsw,imgname-illegal-madrassa-1709796799112.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ (ಸೆ.13) &lt;/strong&gt;ಪಶ್ಚಿಮ ಬಂಗಾಳದಲ್ಲಿ ಸುವೆಂದು ಅಧಿಕಾರಿಯ ಬಿಜೆಪಿ ಸರ್ಕಾರ ಹಲವು ಬದಲಾವಣೆ ತಂದಿದೆ. ಆಡಳಿತ, ನಿಯಮ, ಯೋಜನೆ ಸೇರಿದಂತೆ ಹಲವು ರೀತಿಯಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಹಾಡಿದೆ. ಇದೀಗ ಮದರಸಗಳ ಪರಿಶೀಲನೆ ನಡೆಸಿರುವ ಸರ್ಕಾರ ಬರೋಬ್ಬರಿ 252 ಮದರಸಗಳಿಗೆ ಬೀಗ ಜಡಿದಿದೆ. ರಾಜ್ಯದಲ್ಲಿರುವ ಅಧಿಕೃತ ನೋಂದಣಿ ಮದರಸಗಳ ಸರ್ವೆ ವರದಿ ಆಧರಿಸಿ ಮುಖ್ಯಮಂತ್ರಿ ಸುವೆಂದು ಅದಿಕಾರಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ 100ಕ್ಕೂ ಮದರಸಗಳಿಗೆ ಶೋಕಾಸ್ ನೀಟಿಸ್ ಜಾರಿಗೊಳಿಸಿದ್ದಾರೆ.&lt;/p&gt;&lt;h2&gt;ಸರ್ವೆ ವರದಿ ಆಧರಿಸಿ ಕ್ರಮ&lt;/h2&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಗಳ ಕುರಿತು ಸಮೀಕ್ಷೆ ನಡೆಸಲು ಸುವೆಂದು ಅದಿಕಾರಿ ಇತ್ತೀಚೆಗೆ ಆದೇಶ ನೀಡಿದ್ದರು. ಇದರಂತೆ ಸದಸ್ಯರ ಸಮಿತಿ ಸರ್ವೆ ನಡೆಸಿದೆ. ನೋಂದಣಿ ಮದರಸಾ, ನೋಂದಣಿ ಇಲ್ಲದ ಮದರಸ, ಮದರಸ ನಡೆಯುವ ರೀತಿ, ಇರಬೇಕಾದ ದಾಖಲೆ ಪತ್ರಗಳು, ಚಟುವಟಿಕೆ ಸೇರಿದಂತೆ ಹಲವು ಆಯಾಮಗಳಲ್ಲಿ ಸರ್ವೆ ನಡೆಸಲಾಗಿತ್ತು. ಈ ಸರ್ವೆಯ ವರದಿ ಬಂದ ಬೆನ್ನಲ್ಲೇ ಇದೀಗ ಸುವೇಂದು ಅಧಿಕಾರಿ ಕ್ರಮ ಕೈಗೊಂಡಿದ್ದಾರೆ.&lt;/p&gt;&lt;p&gt;ಮೊದಲ ಹಂತದಲ್ಲಿ 252 ಮದರಸಗಳನ್ನು ಬಂದ್ ಮಾಡಿಸಲಾಗಿದೆ. ಹಲವು ಮದರಸಗಳು ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇನ್ನು ಅಕ್ರಮ ಚುಟವಟಿಕೆ, ಕಾನೂನು ಬಾಹಿರ ನಡೆಗಳ ಕಾರಣ ಮೊದಲ ಹಂತದಲ್ಲಿ 252 ಮದರಸಗಳನ್ನು ಬಂದ್ ಮಾಡಿಸಲಾಗಿದೆ. ಇದೇ ವೇಳೆ 100ಕ್ಕೂ ಹೆಚ್ಚು ಮದರಸಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ದಾಖಲೆ ಪತ್ರಗಳೊಂದಿಗೆ ಉತ್ತರಿಸಲು ಸೂಚಿಸಿಲಾಗಿದೆ.&lt;/p&gt;&lt;h2&gt;ಬಂಗಾಳದಲ್ಲಿರುವ 2396 ಮದರಸಗಳಿಗೆ ನೋಂದಣಿ ಇಲ್ಲ&lt;/h2&gt;&lt;p&gt;ಸರ್ವೆಯಲ್ಲಿ ಕೆಲ ಸ್ಫೋಟಕ ಮಾಹಿತಿ ಬಯಲಾಗಿದೆ. ಪಶ್ಚಿಮ ಬಂಗಾಳದಲ್ಲಿರುವ 2396 ಮದರಸಗಳಿಗೆ ಯಾವುದೇ ನೋಂದಣಿ ಇಲ್ಲ. ಅಧಿಕೃತವೂ ಅಲ್ಲ. ನೋಂದಣಿಯಾಗಿ, ಸರ್ಕಾರದ ಅಧಿಕೃತ ಇಲಾಖೆಯಿಂದ ಎಲ್ಲಾ ಪರವಾನಗೆ ಪಡೆದು ನಡೆಯುತ್ತಿರುವ ಮದರಸಾಗಳ ಸಂಖ್ಯೆ 2,132 ಎಂದು ಅಧ್ಯಯನ ವರದಿ ಹೇಳಿದೆ.&lt;/p&gt;&lt;h2&gt;ಮದರಸಾಗೆ ಬೀಗ, ರಾಜಕೀಯ ಹೋರಾಟ ತೀವ್ರ&lt;/h2&gt;&lt;p&gt;ಮದರಸಾಗೆ ಸುವೇಂದು ಅಧಿಕಾರಿ ಬೀಗ ಜಡಿಯುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಆರೋಪ ತೀವ್ರಗೊಂಡಿದೆ. ಟಿಎಂಸಿ ಸೇರಿದಂತೆ ಇತರ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಅಲ್ಪಸಂಖ್ಯಾತರ ಮೇಲೆ ಬಿಜೆಪಿ ಸವಾರಿ ಮಾಡುತ್ತಿದೆ ಎಂದು ಆರೋಪಿಸಿದೆ. ಇದೇ ವೇಳೆ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಟಾರ್ಯ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಅಕ್ರಮ ಚಟುವಟಿಕೆ, ದೇಶ ವಿರೋಧಿಗಳ ತಾಣಗಳನ್ನು ಮುಚ್ಚಲಾಗಿದೆ. ಪರವಾನೆಗೆ ಪಡೆದು ಸರಿಯಾದ ಮಾರ್ಗದಲ್ಲಿರುವ ಮದರಸಾಗಳು ನಡೆಯುತ್ತಿದೆ ಎಂದಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/west-bengal-government-closes-252-madrasas-over-100-more-receive-notices/articleshow-dxs05sx"/>
        </item>
        <item>
            <title><![CDATA[ಅಚ್ಚರಿ ಮೂಡಿಸಿದ ಕೊಹ್ಲಿ ನಡೆ, ದಿಢೀರ್ ಉಪಮುಖ್ಯಮಂತ್ರಿ ಭೇಟಿಯಾಗಿ ಮಹತ್ವದ ಮಾತುಕತೆ]]></title>
            <link>https://kannada.asianetnews.com/cricket-sports/cricketer-virat-kohli-meets-maharashtra-dcm-eknath-shinde-at-london-gkn/articleshow-ftbs87b</link>
            <guid isPermaLink="true">https://kannada.asianetnews.com/cricket-sports/cricketer-virat-kohli-meets-maharashtra-dcm-eknath-shinde-at-london-gkn/articleshow-ftbs87b</guid>
            <pubDate>Sun, 13 Sep 2026 17:35:21 +0530</pubDate>
            <description><![CDATA[&lt;p&gt;ವಿರಾಟ್ ಕೊಹ್ಲಿ ಹಾಗೂ ಏಕನಾಥ್ ಶಿಂಧೆ ಲಂಡನ್&zwnj;ನಲ್ಲಿ ದಿಢೀರ್ ಭೇಟಿಯಾಗಿದ್ದಾರೆ. ಇಬ್ಬರು ಗಣ್ಯರ ಭೇಟಿ ಭಾರೀ ಕುತೂಹಲ ಮೂಡಿಸಿದೆ. ಇನ್ನು, ಕೊಹ್ಲಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನ್ನಾಡಿರುವ ಏಕನಾಥ್ ಶಿಂಧೆ.. ಕೊಹ್ಲಿಯನ್ನ ಗುಣಗಾನ ಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2da2vy5a3kp8tbr2vcsxma1,imgname-virat-kohli-1789300666309.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾ ಸ್ಟಾರ್ ವಿರಾಟ್ ಕೊಹ್ಲಿ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ವಿಶೇಷ ಅಂದ್ರೆ ಇವರಿಬ್ಬರ ಭೇಟಿ ನಡೆದಿರೋದು ಮಾಹಾರಾಷ್ಟ್ರದಲ್ಲಿ ಅಲ್ಲ, ಬದಲಾಗಿ ಲಂಡನ್&zwnj;ನಲ್ಲಿ!&lt;/p&gt;&lt;p&gt;ಭೇಟಿ ವೇಳೆ ಸೂಪರ್&zwnj;ಸ್ಟಾರ್ ಬ್ಯಾಟ್ಸ್&zwnj;ಮನ್ ಕ್ರೀಡೆ, ಮೂಲಸೌಕರ್ಯ ಮತ್ತು ರಾಜ್ಯ ಸರ್ಕಾರ ಆರಂಭಿಸಿರುವ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕೊಹ್ಲಿ ಭೇಟಿ ಬಳಿಕ ANIಗೆ ಪ್ರತಿಕ್ರಿಯಿಸಿರುವ ಏಕನಾಥ್ ಶಿಂಧೆ.. ವಿರಾಟ್ ಕೊಹ್ಲಿ ಅವರು ವಾಸ್ತವಿಕ ವ್ಯಕ್ತಿ ಎಂದು ಬಣ್ಣಿಸಿದರು.&lt;/p&gt;&lt;h2&gt;&lt;strong&gt;ಏನಂದ್ರು ಶಿಂಧೆ?&lt;/strong&gt;&lt;/h2&gt;&lt;p&gt;ನಮ್ಮ ವಿರಾಟ್ ಕೊಹ್ಲಿ ಲಂಡನ್&zwnj;ನಲ್ಲಿ ವಾಸಿಸುತ್ತಿದ್ದಾರೆ. ನಾನು ಇಲ್ಲಿದ್ದೇನೆ ಎಂದು ತಿಳಿದಾಗ ಅವರು ನನ್ನನ್ನು ಸೌಹಾರ್ದಯುತ ಭೇಟಿಗಾಗಿ ಬಂದರು. ದೇಶದ ಶ್ರೇಷ್ಠ ಕ್ರಿಕೆಟರ್ ಕೊಹ್ಲಿ ಅವರದ್ದು ತುಂಬಾ ಸರಳ ವ್ಯಕ್ತಿತ್ವ. ಅವರ ಸರಳತೆ ನೋಡಿ ನನಗೆ ತುಂಬಾ ಖುಷಿ ಆಯಿತು.&lt;/p&gt;&lt;p&gt;ಅಂದ್ಹಾಗೆ ನಾನು ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿರೋದು. ಅವರ ಜೊತೆಗಿನ ಸಂಭಾಷಣೆಯಿಂದ ತುಂಬಾ ಖುಷಿ ಆಗಿದೆ. ನನಗೆ ದೊರೆತ ಪ್ರಶಸ್ತಿ ಬಗ್ಗೆ ಇಬ್ಬರು ಚರ್ಚಿಸಿದೇವು. ಮಹಾರಾಷ್ಟ್ರದಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಕೊಹ್ಲಿಗೆ ತಿಳಿಸಿದೆ. ರಾಜ್ಯದ ಮೂಲ ಸೌಕರ್ಯಗಳ ಬಗ್ಗೆ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರದ ಅಭಿವೃದ್ಧಿ ಅಭೂತಪೂರ್ವವಾಗಿದೆ ಎಂದು ಅವರೇ ತಿಳಿಸಿದರು ಎಂದರು.&lt;/p&gt;&lt;p&gt;ನಮ್ಮ ಸರ್ಕಾರದ ಭವಿಷ್ಯದ ಯೋಜನೆಗಳು, ಪ್ರಸ್ತುತ ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳಾದ ವಿಮಾನ ನಿಲ್ದಾಣದ ಬಳಿಯ ಮೂರನೇ ಮುಂಬೈ ಅಭಿವೃದ್ಧಿ, ಅಟಲ್ ಸೇತು, ಬಾಳಾಸಾಹೇಬ್ ಠಾಕ್ರೆ ಸಮೃದ್ಧಿ ಮಹಾಮಾರ್ಗ್, ಮೆಟ್ರೋ ಮತ್ತು ಶಾಲೆಗಳು ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಉಪಕ್ರಮಗಳನ್ನು ಹಂಚಿಕೊಂಡೆ ಎಂದು ಏಕನಾಥ್ ಶಿಂಧೆ ತಿಳಿಸಿದ್ದಾರೆ.&lt;/p&gt;&lt;p&gt;ನಾನು ವಿರಾಟ್ ಕೊಹ್ಲಿ ಜೊತೆ ಎಲ್ಲಾ ವಿಚಾರಗಳನ್ನೂ ಚರ್ಚಿಸಿದ್ದೇನೆ. ಅದರಲ್ಲಿ ಮಹಾರಾಷ್ಟ್ರಕ್ಕಾಗಿ ನಾವು ಮಾಡುತ್ತಿರುವ ಮೂಲ ಸೌಕರ್ಯಗಳ ಬಗ್ಗೆ ಮಾತಾಡಿದ್ದನ್ನು ಹೈಲೈಟ್ ಮಾಡಿದ್ದೇನೆ. ನಮ್ಮ ರಾಜ್ಯವು ಪ್ರಸ್ತುತ ಜಿಡಿಪಿ, ಸ್ಟಾರ್ಟ್&zwnj;ಅಪ್&zwnj;ಗಳು, ಮೂಲಸೌಕರ್ಯ ಮತ್ತು ಎಫ್&zwnj;ಡಿಐನಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದನ್ನು ಕೇಳಿ ವಿರಾಟ್ ತುಂಬಾ ಸಂತೋಷಪಟ್ಟರು ಎಂದಿದ್ದಾರೆ.&lt;/p&gt;&lt;p&gt;ಲಂಡನ್&zwnj;ನಲ್ಲೇ ಹೆಚ್ಚು ನೆಲೆಯೂರಿರುವ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಮ್ಯಾಚ್&zwnj;ಗಳಿದ್ದಾಗ, ಐಪಿಎಲ್ ಸಂದರ್ಭದಲ್ಲಿ ಭಾರತದಲ್ಲಿ ಹೆಚ್ಚು ಕಾಣಿಸಿಕೊಳ್ತಾರೆ. ಈ ವರ್ಷ ಅವರು ಒಟ್ಟು ಆರು ಏಕದಿನ ಪಂದ್ಯಗಳನ್ನ ಆಡಿದ್ದಾರೆ. ಆರು ಪಂದ್ಯಗಳಲ್ಲಿ 64.00 ಸರಾಸರಿಯಲ್ಲಿ ರನ್&zwnj;ಗಳಿಸಿದ್ದಾರೆ. ಒಂದು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 384 ರನ್ ಗಳಿಸಿದ್ದಾರೆ. ಆಗಸ್ಟ್&zwnj;ನಲ್ಲಿ ಇಂಗ್ಲೆಂಡ್&zwnj; ವಿರುದ್ಧ ಏಕದಿನ ಸರಣಿ ನಡೆದಿತ್ತು. ಈ ವೇಳೆ ಅವರು ಎರಡು ಅರ್ಧಶತಕಗಳು ಸೇರಿದಂತೆ ಮೂರು ಇನ್ನಿಂಗ್ಸ್&zwnj;ಗಳಲ್ಲಿ 144 ರನ್ ಗಳಿಸಿದರು, ಅವರ ಅತ್ಯುತ್ತಮ ಸ್ಕೋರ್ 74 ರನ್ ಆಗಿದೆ.&lt;/p&gt;&lt;p&gt;ಇನ್ನು, ಸೆಪ್ಟೆಂಬರ್ 27 ರಿಂದ ವೆಸ್ಟ್ ಇಂಡೀಸ್ ವಿರುದ್ಧದ ತವರಿನಲ್ಲಿ ಏಕದಿನ ಸರಣಿ ನಡೆಯಲಿದೆ. ಈ ವೇಳೆ ಕೊಹ್ಲಿ 100 ಶತಕಗಳ ದಾಖಲೆಯನ್ನು ಬೆನ್ನಟ್ಟಲಿದ್ದಾರೆ. ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.&lt;/p&gt;&lt;p&gt; लंडन, युनायटेड किंग्डम |भारतीय क्रिकेट संघाचा माजी कर्णधार आणि विश्वविक्रमी फलंदाज विराट कोहली याने आज #लंडन येथे माझी सदिच्छा भेट घेतली.यावेळी राज्यातील क्रीडा सुविधा वाढवण्यासाठी तसेच राष्ट्रीय आणि आंतरराष्ट्रीय कीर्तीचे खेळाडू तयार व्हावेत यासाठी नक्की कोणत्या सुधारणा&hellip; pic.twitter.com/DWIz842j5D&lt;/p&gt;&lt;p&gt;&mdash; Eknath Shinde - एकनाथ शिंदे (@mieknathshinde) September 11, 2026&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/cricketer-virat-kohli-meets-maharashtra-dcm-eknath-shinde-at-london-gkn/articleshow-ftbs87b"/>
        </item>
        <item>
            <title><![CDATA[9/11 ದಾಳಿಗೂ ಮುನ್ನವೇ ಭಾರತದ ಮೇಲೆ ಕಣ್ಣಿಟ್ಟಿದ್ದ ಬಿನ್‌ ಲಾಡೆನ್: ಸಿಐಎ ರಹಸ್ಯ ಕಡತದಿಂದ ಸ್ಫೋಟಕ ಮಾಹಿತಿ!]]></title>
            <link>https://kannada.asianetnews.com/india-news/bin-ladens-india-target-before-america-revealed-in-newly-released-cia-files/articleshow-m481q0i</link>
            <guid isPermaLink="true">https://kannada.asianetnews.com/india-news/bin-ladens-india-target-before-america-revealed-in-newly-released-cia-files/articleshow-m481q0i</guid>
            <pubDate>Sun, 13 Sep 2026 16:30:24 +0530</pubDate>
            <description><![CDATA[&lt;p&gt;1998ರ CIA ಗುಪ್ತಚರ ವರದಿಯಲ್ಲಿ ಒಸಾಮಾ ಬಿನ್ ಲಾಡೆನ್&zwnj;ನ ಅಲ್&zwnj;ಖೈದಾ ಜಾಲವು ಭಾರತ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳನ್ನು ಸಂಭಾವ್ಯ ಭಯೋತ್ಪಾದಕ ಗುರಿಗಳಾಗಿ ಪರಿಗಣಿಸಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. 9/11ಕ್ಕೂ ಮುನ್ನವೇ ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ಅಲ್&zwnj;ಖೈದಾದ ಜಾಗತಿಕ ಬೆದರಿಕೆಯ ಸುಳಿವು ಸಿಕ್ಕಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d1j70htbs0emravw0sfp1s,imgname-bin-laden-s-india-plans-revealed-in-newly-released-cia-files-1789291731981.jpg" type="image/jpeg" height="390" width="690"/>
            <content:encoded><![CDATA[&lt;h2&gt;9/11ಗೂ ಮುನ್ನವೇ ಭಾರತ ಬಿನ್ ಲಾಡೆನ್&zwnj; ಟಾರ್ಗೆಟ್?&lt;/h2&gt;&lt;p&gt;ಹೊಸದಾಗಿ ಬಹಿರಂಗಪಡಿಸಿರುವ ಅಮೆರಿಕದ ಗುಪ್ತಚರ ದಾಖಲೆಗಳು, ಅಲ್&zwnj;ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್&zwnj; ಜಾಲದ ಭಯೋತ್ಪಾದಕ ಯೋಜನೆಗಳ ಕುರಿತು ಮಹತ್ವದ ಮಾಹಿತಿಯನ್ನು ಹೊರಹಾಕಿವೆ. 1998ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್&zwnj; ಅವರಿಗೆ ಸಿದ್ಧಪಡಿಸಲಾಗಿದ್ದ CIA ವರದಿಯಲ್ಲಿ ಭಾರತ ಮತ್ತು ಪಾಕಿಸ್ತಾನವೂ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿದ್ದವು ಎಂದು ಉಲ್ಲೇಖಿಸಲಾಗಿದೆ.&lt;/p&gt;&lt;h3&gt;1998ರಲ್ಲೇ CIAಗೆ ಸುಳಿವು&lt;/h3&gt;&lt;p&gt;ಆಗಸ್ಟ್ 28, 1998ರ ವರದಿಯಲ್ಲಿ ಬಿನ್ ಲಾಡೆನ್&zwnj;ನ ಜಾಲವು ಈಜಿಪ್ಟ್, ಸೌದಿ ಅರೇಬಿಯಾ, ಯೆಮೆನ್, ಕುವೈತ್ ಸೇರಿದಂತೆ ಹಲವು ದೇಶಗಳಲ್ಲಿ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ತಿಳಿಸಲಾಗಿತ್ತು. ಆ ಪಟ್ಟಿಯಲ್ಲಿ ಭಾರತ, ಪಾಕಿಸ್ತಾನ, ಉಗಾಂಡಾ ಮತ್ತು ನೈಜೀರಿಯಾ ಕೂಡ ಸೇರಿದ್ದವು.&lt;/p&gt;&lt;p&gt;ಆದರೆ, ಭಾರತದ ಮೇಲೆ ನಿರ್ದಿಷ್ಟವಾಗಿ ಯಾವ ದಾಳಿ ನಡೆಸಲು ಯೋಜಿಸಲಾಗಿತ್ತು ಎಂಬ ವಿವರ ಈ ದಾಖಲೆಯಲ್ಲಿ ಇಲ್ಲ. ಹೀಗಾಗಿ ಭಾರತ ಗುರಿಯಾಗಿತ್ತು ಎಂಬುದನ್ನು ನಿರ್ದಿಷ್ಟ ದಾಳಿ ಸಂಚಿನ ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ.&lt;/p&gt;&lt;h3&gt;9/11ಕ್ಕೂ ಮುನ್ನವೇ ಹೆಚ್ಚಿದ್ದ ಆತಂಕ&lt;/h3&gt;&lt;p&gt;1998ರ ಈ ಎಚ್ಚರಿಕೆ ಅಮೆರಿಕದ ರಾಯಭಾರ ಕಚೇರಿಗಳ ಮೇಲೆ ನಡೆದ ಬಾಂಬ್ ದಾಳಿಗಳ ಕೆಲವೇ ವಾರಗಳ ಬಳಿಕ ಹೊರಬಂದಿತ್ತು. ನೈರೋಬಿ ಮತ್ತು ದಾರ್ ಎಸ್ ಸಲಾಮ್&zwnj;ನಲ್ಲಿನ ದಾಳಿಗಳಲ್ಲಿ 224 ಮಂದಿ ಮೃತಪಟ್ಟಿದ್ದರು. ಈ ಘಟನೆಗಳ ನಂತರ ಬಿನ್ ಲಾಡೆನ್ ಮತ್ತು ಅಲ್&zwnj;ಖೈದಾ ಅಮೆರಿಕದ ಪ್ರಮುಖ ಭಯೋತ್ಪಾದನಾ ಬೆದರಿಕೆಯಾಗಿ ಹೊರಹೊಮ್ಮಿತು.&lt;/p&gt;&lt;p&gt;ಮುಂದಿನ ವರ್ಷಗಳಲ್ಲಿ CIA ಬಿನ್ ಲಾಡೆನ್&zwnj; ಚಟುವಟಿಕೆಗಳ ಮೇಲೆ ನಿಗಾ ಮುಂದುವರಿಸಿತು. 2001ರ ಸೆಪ್ಟೆಂಬರ್ 11ರಂದು ಅಲ್&zwnj;ಖೈದಾ ಉಗ್ರರು ನಾಲ್ಕು ವಿಮಾನಗಳನ್ನು ಅಪಹರಿಸಿ ಅಮೆರಿಕದ ಮೇಲೆ ಭೀಕರ ದಾಳಿ ನಡೆಸಿದರು.&lt;/p&gt;&lt;h3&gt;9/11ರ ಕರಾಳ ದಿನ&lt;/h3&gt;&lt;p&gt;ವಿಮಾನಗಳ ಪೈಕಿ ಎರಡು ನ್ಯೂಯಾರ್ಕ್&zwnj;ನ ವರ್ಲ್ಡ್ ಟ್ರೇಡ್ ಸೆಂಟರ್&zwnj;ನ ಅವಳಿ ಗೋಪುರಗಳಿಗೆ ಅಪ್ಪಳಿಸಿದವು. ಮತ್ತೊಂದು ಪೆಂಟಗನ್&zwnj;ಗೆ ಡಿಕ್ಕಿಯಾಯಿತು. ನಾಲ್ಕನೇ ವಿಮಾನ ಪೆನ್ಸಿಲ್ವೇನಿಯಾದಲ್ಲಿ ಪತನಗೊಂಡಿತು.&lt;/p&gt;&lt;p&gt;ಅಪಹರಣಕಾರರನ್ನು ಹೊರತುಪಡಿಸಿ ಒಟ್ಟು 2,977 ಮಂದಿ ಈ ದಾಳಿಯಲ್ಲಿ ಮೃತಪಟ್ಟರು. ಅಲ್&zwnj;ಖೈದಾ ನಾಯಕ ಬಿನ್ ಲಾಡೆನ್ ದಾಳಿಯ ಪ್ರಮುಖ ಸಂಚುಕೋರನಾಗಿದ್ದ. 9/11 ಆಯೋಗವು ಖಾಲಿದ್ ಶೇಖ್ ಮೊಹಮ್ಮದ್ ಅವರನ್ನು ದಾಳಿಯ ಪ್ರಮುಖ ವಾಸ್ತುಶಿಲ್ಪಿ ಎಂದು ಗುರುತಿಸಿತ್ತು.&lt;/p&gt;&lt;h3&gt;ಬಿನ್ ಲಾಡೆನ್&zwnj;ನ ಅಂತ್ಯ&lt;/h3&gt;&lt;p&gt;9/11 ನಂತರ ಬಿನ್ ಲಾಡೆನ್&zwnj;ಗಾಗಿ ಅಮೆರಿಕದ ಹುಡುಕಾಟ ತೀವ್ರಗೊಂಡಿತು. ಕೊನೆಗೆ ಪಾಕಿಸ್ತಾನದ ಅಬೋಟಾಬಾದ್&zwnj;ನಲ್ಲಿದ್ದ ಆತನ ಅಡಗುತಾಣವನ್ನು ಪತ್ತೆಹಚ್ಚಲಾಯಿತು. 2011ರ ಮೇ 2ರಂದು ಅಮೆರಿಕದ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬಿನ್ ಲಾಡೆನ್ ಹತನಾದ.&lt;/p&gt;&lt;p&gt;ಹೊಸದಾಗಿ ಬಿಡುಗಡೆಯಾದ ದಾಖಲೆಗಳು 9/11ಗೂ ಹಲವು ವರ್ಷಗಳ ಮುನ್ನವೇ ಅಲ್&zwnj;ಖೈದಾದ ಜಾಗತಿಕ ಬೆದರಿಕೆಯ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಮಾಹಿತಿ ಹೊಂದಿದ್ದವು ಎಂಬುದನ್ನು ಮತ್ತೊಮ್ಮೆ ತೋರಿಸಿವೆ.&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/bin-ladens-india-target-before-america-revealed-in-newly-released-cia-files/articleshow-m481q0i"/>
        </item>
        <item>
            <title><![CDATA[Rahul Gandhi: ಬ್ರಿಕ್ಸ್ ಔತಣಕೂಟದಲ್ಲಿ ಮಾಂಸಾಹಾರ ಸಂಪೂರ್ಣ ನಿಷೇಧಿಸಿದ್ದಕ್ಕೆ ರಾಹುಲ್ ಗಾಂಧಿ ಕಿಡಿ]]></title>
            <link>https://kannada.asianetnews.com/india-news/indian-non-veg-food-is-delicious-rahul-gandhi-s-veiled-dig-brics-summit-menu-rav/articleshow-20fr0gq</link>
            <guid isPermaLink="true">https://kannada.asianetnews.com/india-news/indian-non-veg-food-is-delicious-rahul-gandhi-s-veiled-dig-brics-summit-menu-rav/articleshow-20fr0gq</guid>
            <pubDate>Sun, 13 Sep 2026 15:37:20 +0530</pubDate>
            <description><![CDATA[&lt;p&gt;ಬ್ರಿಕ್ಸ್ ಶೃಂಗಸಭೆಗೆ ಆಗಮಿಸಿದ ವಿಶ್ವ ನಾಯಕರಿಗೆ ಪ್ರಧಾನಿ ಮೋದಿ ಸಸ್ಯಾಹಾರಿ ಔತಣಕೂಟವನ್ನು ಆಯೋಜಿಸಿದ್ದರು. ಈ ಔತಣಕೂಟದಲ್ಲಿ ಮಾಂಸಾಹಾರವನ್ನು ಕೈಬಿಟ್ಟಿರುವುದಕ್ಕೆ ರಾಹುಲ್ ಗಾಂಧಿ ಆಕ್ಷೇಪ. ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ಈ ಔತಣಕೂಟದಿಂದ ದೂರ ಉಳಿದರೇಕೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d3jh54mjnbfnxhqrrrsgz8,imgname-indian-non-veg-food-is-delicious-rahul-gandhi-1789293839524.jpg" type="image/jpeg" height="390" width="690"/>
            <content:encoded><![CDATA[&lt;p&gt;BRICS ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವ ನಾಯಕರು ಭಾರತಕ್ಕೆ ಆಗಮಿಸಿದ್ದಾರೆ. ಚೀನಾ, ರಷ್ಯಾ ಸೇರಿದಂತೆ ಬಲಾಡ್ಯ ರಾಷ್ಟ್ರಗಳ ನಾಯಕರು ಆಗಮಿಸಿದ್ದಾರೆ. ಪ್ರಧಾನಿ ಮೋದಿ ಭಾರತ ಇತಿಹಾಸ ಪರಂಪರೆ ಜೊತೆಗೆ ಇಲ್ಲಿನ ಆಹಾರ ಪದ್ಧತಿಯಂತೆ ಗಣ್ಯರಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ. ಅದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬ್ರಿಕ್ಸ್ ಶೃಂಗಸಭೆಗೆ ಆಗಮಿಸಿದ್ದ ಗಣ್ಯರಿಗೆ ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟದಲ್ಲಿ ಕೇವಲ ಸಸ್ಯಾಹಾರ ಬಡಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪರೋಕ್ಷವಾಗಿ ಟೀಕಿಸಿದ್ದಾರೆ.&lt;/p&gt;&lt;h2&gt;ಭಾರತದ 80ರಷ್ಟು ಜನರು ಮಾಂಸಾಹಾರಿಗಳು&lt;/h2&gt;&lt;p&gt;ಭಾರತದ ಶೇ. 80ರಷ್ಟು ಜನರು ಮಾಂಸಾಹಾರಿಗಳಾಗಿದ್ದಾರೆ. ನನ್ನ ಸಹೋದರಿ ಮಾಡುವ ಛೋಲೆ ಬಟೂರೆಯಷ್ಟೇ ಭಾರತೀಯ ನಾನ್-ವೆಜ್ ಊಟ ಕೂಡಾ ತುಂಬಾ ರುಚಿಕರವಾಗಿರುತ್ತದೆ. ಆದರೆ ಔತಣಕೂಟದಲ್ಲಿ ವಿದೇಶಿ ಗಣ್ಯರಿಗೆ ಕೇವಲ ಸಸ್ಯಾಹಾರ ಬಡಿಸಲಾಗಿದೆ ಎಂದು ರಾಹುಲ್ ಗಾಂಧಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;h3&gt;ಬ್ರಿಕ್ಸ್ ಶೃಂಗಸಭೆಯಲ್ಲಿ ಗಣ್ಯರ ಔತಣಕೂಟದಲ್ಲಿ ಮಾಂಸಾಹಾರ ಕೈಬಿಟ್ಟಿದ್ದೇಕೆ?&lt;/h3&gt;&lt;p&gt;ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಿಗಾಗಿ ವಿಶೇಷ ಔತಣಕೂಟ ಏರ್ಪಡಿಸಿದ್ದರು. ಇದರಲ್ಲಿ ಭಾರತದ ಸಾಂಪ್ರದಾಯಿಕ ರುಚಿ ಮತ್ತು ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳ ಖಾದ್ಯಗಳನ್ನು ಮಾತ್ರ ಬಡಿಸಲಾಗಿತತು. ಆದರೆ ಔತಣಕೂಟದ ಮೇನುವಿನಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ಕೈಬಿಡಲಾಗಿತ್ತು. ಗುಜರಾತಿ ಖಾದ್ಯವಾದ ಖಾಂಡ್ವಿ, ಪನೀರ್ ಲಬಾಬ್ದಾರ್, ಮಿಲೆಟ್ ಪುಲಾವ್ ಮತ್ತು ಜಿಲೇಬಿಯಂತಹ ಭಾರತೀಯ ಖಾದ್ಯಗಳು ಅತಿಥಿಗಳ ಮನಗೆದ್ದವು. ಈ ಔತಣಕೂಟಕ್ಕೆ ವಿದೇಶಿ ಗಣ್ಯರಲ್ಲದೆ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರಿಗೂ ಆಹ್ವಾನ ನೀಡಲಾಗಿತ್ತು.&lt;/p&gt;&lt;h3&gt;ಔತಣಕೂಟದಿಂದ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ದೂರ ಉಳಿದಿದ್ದೇಕೆ?&lt;/h3&gt;&lt;p&gt;ಆದರೆ, ಈ ಔತಣಕೂಟದಿಂದ ಚೀನಾದ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ದೂರ ಉಳಿದಿದ್ದರು. ಶನಿವಾರ ಭಾರತ್ ಮಂಟಪದಲ್ಲಿ ಮೋದಿ ಆಯೋಜಿಸಿದ್ದ ಈ ಡಿನ್ನರ್&zwnj;ನಲ್ಲಿ ಕ್ಸಿ ಜಿನ್&zwnj;ಪಿಂಗ್ ಭಾಗವಹಿಸಲಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆದರೆ ಅವರ ಗೈರುಹಾಜರಿಗೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಔತಣಕೂಟದಲ್ಲಿ ಭಾರತೀಯ ಸಂಪ್ರಾದಾಯಿಕ ತಿಂಡಿಗಳಿಗೆ ಗಣ್ಯರು ಮನಸೋತಿದ್ದಾರೆ. ಆದರೆ ಮಾಂಸಾಹಾರ ವಿಚಾರವಾಗಿ ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆ ಇದೀಗ ರಾಜಕೀಯವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/indian-non-veg-food-is-delicious-rahul-gandhi-s-veiled-dig-brics-summit-menu-rav/articleshow-20fr0gq"/>
        </item>
        <item>
            <title><![CDATA[₹7 ಸಾವಿರ ಊಟದ ಭತ್ಯೆ ಸಿಕ್ಕರೂ… ಅದನ್ನು ಸೆಕ್ಯುರಿಟಿ ಗಾರ್ಡ್‌ಗಳಿಗಾಗಿ ಉದ್ಯೋಗಿ ಮಾಡಿದ ಈ ಕೆಲಸಕ್ಕೆ ನೆಟ್ಟಿಗರು ಫಿದಾ]]></title>
            <link>https://kannada.asianetnews.com/viral/7000-daily-food-allowance-big-four-employee-reportedly-uses-it-to-feed-security-guards/articleshow-mlkg92w</link>
            <guid isPermaLink="true">https://kannada.asianetnews.com/viral/7000-daily-food-allowance-big-four-employee-reportedly-uses-it-to-feed-security-guards/articleshow-mlkg92w</guid>
            <pubDate>Sun, 13 Sep 2026 15:46:40 +0530</pubDate>
            <description><![CDATA[&lt;p&gt;ಬಿಗ್ ಫೋರ್ ಸಂಸ್ಥೆಯ ಉದ್ಯೋಗಿಯೊಬ್ಬರು ತಮ್ಮ ₹7,000 ದೈನಂದಿನ ಆಹಾರ ಭತ್ಯೆಯ ಒಂದು ಭಾಗವನ್ನು ಭದ್ರತಾ ಸಿಬ್ಬಂದಿಗೆ ಪಿಜ್ಜಾ ಕೊಡಿಸಲು ಬಳಸುತ್ತಾರೆ ಎಂದು ವೈದ್ಯರೊಬ್ಬರು Xನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಕೆಲವರು ಅವರ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇಷ್ಟು ದೊಡ್ಡ ದೈನಂದಿನ ಆಹಾರ ಭತ್ಯೆಯ ನಿಖರತೆಯನ್ನೇ ಪ್ರಶ್ನಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2av1bst664n94fyt47xwnem,imgname-big-four-employee-repeatedly-uses-his-food-allowances-to-feed-security-guards--1--1789217779513.jpg" type="image/jpeg" height="390" width="690"/>
            <content:encoded><![CDATA[&lt;h2&gt;₹7,000 ಫುಡ್ ಅಲೋವನ್ಸ್ ಕಥೆ; ಗಾರ್ಡ್&zwnj;ಗಳಿಗೆ ಪಿಜ್ಜಾ ಕೊಡಿಸಿದ ಉದ್ಯೋಗಿ!&lt;/h2&gt;&lt;p&gt;ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟ್, ಕಾರ್ಪೊರೇಟ್ ಉದ್ಯೋಗಿಗಳ ಸೌಲಭ್ಯಗಳು ಮತ್ತು ಅವುಗಳನ್ನು ಹೇಗೆ ಬಳಸಬಹುದು ಎಂಬ ಚರ್ಚೆಗೆ ಕಾರಣವಾಗಿದೆ. ವೈದ್ಯ ನೀಲೇಶ್ ನೊಲ್ಖಾ ಅವರು Xನಲ್ಲಿ ಹಂಚಿಕೊಂಡಿರುವ ಅನುಭವದ ಪ್ರಕಾರ, ಬಿಗ್ ಫೋರ್ ಕನ್ಸಲ್ಟಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರು ತಮ್ಮ ದೈನಂದಿನ ಆಹಾರ ಭತ್ಯೆಯ ಒಂದು ಭಾಗವನ್ನು ವಸತಿ ಸಮುಚ್ಚಯದ ಭದ್ರತಾ ಸಿಬ್ಬಂದಿಗೆ ಪಿಜ್ಜಾ ಕೊಡಿಸಲು ಬಳಸುತ್ತಾರೆ ಎನ್ನಲಾಗಿದೆ.&lt;/p&gt;&lt;p&gt;ವೈದ್ಯರ ಪೋಸ್ಟ್&zwnj;ನಲ್ಲಿ ಈ ಉದ್ಯೋಗಿಗೆ ದಿನಕ್ಕೆ ಸುಮಾರು ₹7,000 ಆಹಾರ ಭತ್ಯೆ ಸಿಗುತ್ತದೆ ಎಂದು ಹೇಳಲಾಗಿದೆ. ಈ ಮೊತ್ತದ ಒಂದು ಭಾಗವನ್ನು ಸ್ವಂತ ಊಟಕ್ಕೆ ಮಾತ್ರ ಬಳಸದೆ, ತಮ್ಮ ಸೊಸೈಟಿಯಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಗಾಗಿ ದೊಡ್ಡ ಪಿಜ್ಜಾಗಳನ್ನು ಆರ್ಡರ್ ಮಾಡುತ್ತಾರೆ ಎಂಬುದು ಪೋಸ್ಟ್&zwnj;ನಲ್ಲಿರುವ ಪ್ರಮುಖ ಅಂಶ.&lt;/p&gt;&lt;h3&gt;ಸರಳ ಮಾನವೀಯತೆ, ದೊಡ್ಡ ಮೆಚ್ಚುಗೆ&lt;/h3&gt;&lt;p&gt;ಈ ಘಟನೆ ನಿಜವಾಗಿದ್ದರೆ, ಉದ್ಯೋಗಿಯ ನಡೆ ಮಾನವೀಯತೆಯ ಸರಳ ಉದಾಹರಣೆಯಾಗಿ ಕಾಣಬಹುದು. ಸಾಮಾನ್ಯವಾಗಿ ಕಾರ್ಪೊರೇಟ್ ಸೌಲಭ್ಯಗಳು ಉದ್ಯೋಗಿಯ ವೈಯಕ್ತಿಕ ಅಥವಾ ಅಧಿಕೃತ ಕೆಲಸದ ಖರ್ಚಿಗೆ ಸಂಬಂಧಿಸಿದ್ದಾಗಿರುತ್ತವೆ. ಆದರೆ ಅವುಗಳಿಂದ ಇತರರಿಗೂ ಸಂತೋಷ ನೀಡುವ ಪ್ರಯತ್ನ ನಡೆದಿದೆ ಎಂಬ ಕಥೆ ನೆಟ್ಟಿಗರ ಗಮನ ಸೆಳೆದಿದೆ.&lt;/p&gt;&lt;p&gt;ಕೆಲವರು ಈ ಉದ್ಯೋಗಿಯನ್ನು ಉದಾರ ಮನಸ್ಸಿನ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ. ವಿಶೇಷವಾಗಿ ದಿನನಿತ್ಯದ ಜೀವನದಲ್ಲಿ ಶ್ರಮಿಸುವ ಭದ್ರತಾ ಸಿಬ್ಬಂದಿಯಂತಹ ಕಾರ್ಮಿಕರಿಗೆ ಇಂತಹ ಸಣ್ಣ ಉಡುಗೊರೆಗಳು ಸಂತೋಷ ನೀಡಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಆದರೆ ₹7,000 ಭತ್ಯೆ ನಿಜವೇ?&lt;/strong&gt;&lt;/p&gt;&lt;p&gt;ಕಥೆಯ ಮತ್ತೊಂದು ಭಾಗವೇ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿದ ಅನುಮಾನ. ಕೆಲವರು ಬಿಗ್ ಫೋರ್ ಸಂಸ್ಥೆಗಳ ಸಾಮಾನ್ಯ ಆಹಾರ ಭತ್ಯೆ ದಿನಕ್ಕೆ ₹7,000 ಇರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದು ಸಾಮಾನ್ಯ ಫುಡ್ ಅಲವನ್ಸ್ ಬದಲಿಗೆ ಅಧಿಕೃತ ಪ್ರಯಾಣ, ವಸತಿ ಅಥವಾ ಕ್ಲೈಂಟ್&zwnj; ಸಂಬಂಧಿತ ವೆಚ್ಚಗಳ ಬಜೆಟ್ ಆಗಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.&lt;/p&gt;&lt;p&gt;ಇನ್ನೂ ಕೆಲ ನೆಟ್ಟಿಗರು ತಮ್ಮ ಕಾರ್ಪೊರೇಟ್ ಪ್ರಯಾಣದ ಅನುಭವಗಳನ್ನು ಹಂಚಿಕೊಂಡಿದ್ದು, ಅಧಿಕೃತ ಪ್ರವಾಸದ ವೇಳೆ ದಿನಕ್ಕೆ ಸಾವಿರಾರು ರೂಪಾಯಿಗಳ ಊಟದ ಭತ್ಯೆ ದೊರೆಯುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಭತ್ಯೆಯ ಮೊತ್ತ ಸಂಸ್ಥೆ, ದೇಶ, ಪ್ರಯಾಣದ ಸ್ವರೂಪ ಮತ್ತು ಕಂಪನಿ ನೀತಿಯನ್ನು ಅವಲಂಬಿಸಬಹುದು.&lt;/p&gt;&lt;p&gt;&lt;strong&gt;&lsquo;ಸಮಾಜ ಸೇವೆ&rsquo; ಎಂದ ನೆಟ್ಟಿಗರು!&lt;/strong&gt;&lt;/p&gt;&lt;p&gt;ವೈದ್ಯರ ಪೋಸ್ಟ್&zwnj; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಚರ್ಚೆ ಕೇವಲ ಪಿಜ್ಜಾ ಅಥವಾ ₹7,000 ಭತ್ಯೆಗೆ ಸೀಮಿತವಾಗಲಿಲ್ಲ. ಕಾರ್ಪೊರೇಟ್ ಉದ್ಯೋಗಿಗಳ ಸೌಲಭ್ಯಗಳು, ಕೆಲಸದ ಸಂಸ್ಕೃತಿ, ಪ್ರಯಾಣ ವೆಚ್ಚ ಮತ್ತು ಬಿಗ್ ಫೋರ್ ಸಂಸ್ಥೆಗಳಲ್ಲಿನ ಉದ್ಯೋಗಿಗಳ ಅನುಭವಗಳ ಬಗ್ಗೆಯೂ ಚರ್ಚೆ ನಡೆಯಿತು.&lt;/p&gt;&lt;p&gt;ಕೆಲವರು ಈ ಘಟನೆಯನ್ನು ಹಾಸ್ಯಮಯವಾಗಿ &ldquo;ಸಮಾಜ ಕಲ್ಯಾಣ ಯೋಜನೆ&rdquo; ಎಂದು ಕರೆದರೆ, ಮತ್ತಷ್ಟು ಮಂದಿ ಉದ್ಯೋಗಿಯ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಹಣದ ಮೌಲ್ಯಕ್ಕಿಂತ ಮಾನವೀಯತೆಯ ಮೌಲ್ಯ ದೊಡ್ಡದೇ?&lt;/strong&gt;&lt;/p&gt;&lt;p&gt;₹7,000 ಭತ್ಯೆಯ ಕುರಿತಾದ ಹೇಳಿಕೆ ಸತ್ಯವೇ ಅಥವಾ ಅದರ ಹಿಂದೆ ಬೇರೆ ರೀತಿಯ ಕಾರ್ಪೊರೇಟ್ ವೆಚ್ಚವಿದೆಯೇ ಎಂಬುದು ಸ್ಪಷ್ಟವಾಗದಿದ್ದರೂ, ಈ ಕಥೆ ಒಂದು ವಿಚಾರವನ್ನು ಮುನ್ನೆಲೆಗೆ ತಂದಿದೆ&mdash;ನಮಗೆ ದೊರೆಯುವ ಸೌಲಭ್ಯಗಳನ್ನು ನಾವು ಹೇಗೆ ಬಳಸುತ್ತೇವೆ ಎಂಬುದೂ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ.&lt;/p&gt;&lt;p&gt;ಪಿಜ್ಜಾದ ಬೆಲೆಗಿಂತ ಅದನ್ನು ಹಂಚಿಕೊಳ್ಳುವ ಮನಸ್ಸೇ ಈ ಕಥೆಯ ಪ್ರಮುಖ ಆಕರ್ಷಣೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಮೂಡಿದೆ.&lt;/p&gt;&lt;p&gt;Met a consultant/employee at one of the Big Four firms who gets a ₹7,000-per-day food allowance He&rsquo;s apparently quite famous in his society for ordering huge pizzas using the allowance&mdash;not for himself, but for the security guards! He is turning corporate food allowance&hellip;&lt;/p&gt;&lt;p&gt;&mdash; Dr Nilesh Nolkha (@nileshnolkha) September 11, 2026&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/7000-daily-food-allowance-big-four-employee-reportedly-uses-it-to-feed-security-guards/articleshow-mlkg92w"/>
        </item>
        <item>
            <title><![CDATA[ತಿರುಪತಿ ಬ್ರಹ್ಮೋತ್ಸವಕ್ಕೆ ಕ್ಷಣಗಣನೆ: ಸಾಮಾನ್ಯ ಭಕ್ತರಿಗೆ ಗುಡ್‌ನ್ಯೂಸ್ ಕೊಟ್ಟ ಟಿಟಿಡಿ]]></title>
            <link>https://kannada.asianetnews.com/india-news/tirupati-tirumala-brahmotsavam-ttd-cancels-special-darshan-gives-priority-to-common-devotees-gvd/articleshow-oyg1e22</link>
            <guid isPermaLink="true">https://kannada.asianetnews.com/india-news/tirupati-tirumala-brahmotsavam-ttd-cancels-special-darshan-gives-priority-to-common-devotees-gvd/articleshow-oyg1e22</guid>
            <pubDate>Sun, 13 Sep 2026 15:29:16 +0530</pubDate>
            <description><![CDATA[&lt;p&gt;ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ಪೂರ್ಣಗೊಂಡಿವೆ. ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲು ಟಿಟಿಡಿ ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d37zbmda6kbpywrfyq84sg,imgname-jb-1789293493620.png" type="image/jpeg" height="390" width="690"/>
            <content:encoded><![CDATA[&lt;p&gt;ಕಲಿಯುಗದ ಪ್ರತ್ಯಕ್ಷ ದೈವ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವಕ್ಕೆ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ಉತ್ಸವಗಳು ಅದ್ದೂರಿಯಾಗಿ ಆರಂಭವಾಗಲಿದ್ದು, ತಿರುಮಲ ಬೆಟ್ಟಗಳು ವೈಕುಂಠವನ್ನು ನೆನಪಿಸುವಂತೆ ಕಂಗೊಳಿಸುತ್ತಿವೆ. ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಟಿಟಿಡಿ ಕೈಗೊಂಡಿರುವ ವಿಶೇಷ ವ್ಯವಸ್ಥೆಗಳು ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತಿರುಮಲ ಭೇಟಿ ವಿವರಗಳನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.&lt;/p&gt;&lt;p&gt;ಕಲಿಯುಗ ವೈಕುಂಠವೆಂದೇ ಪ್ರಸಿದ್ಧವಾಗಿರುವ ತಿರುಮಲ ಕ್ಷೇತ್ರ ಶ್ರೀವಾರಿ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವಕ್ಕಾಗಿ ಸರ್ವಾಂಗ ಸುಂದರವಾಗಿ ಸಿಂಗಾರಗೊಂಡಿದೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ಉತ್ಸವಗಳನ್ನು ಅತ್ಯಂತ ವೈಭವದಿಂದ ನಡೆಸಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಎಲ್ಲ ವಿಭಾಗಗಳ ಸಮನ್ವಯದೊಂದಿಗೆ ವ್ಯಾಪಕ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದೆ.&lt;/p&gt;&lt;p&gt;ಈ ವರ್ಷ ಅಧಿಕ ಮಾಸ ಇರುವುದರಿಂದ ಶ್ರೀವಾರಿಗೆ ಎರಡು ಬಾರಿ ಬ್ರಹ್ಮೋತ್ಸವಗಳು ನಡೆಯಲಿವೆ. ಮೊದಲಿಗೆ ಭಾದ್ರಪದ ಮಾಸದಲ್ಲಿ ಸಾಲಕಟ್ಲ ಬ್ರಹ್ಮೋತ್ಸವ ಹಾಗೂ ನಂತರ ಆಶ್ವಯುಜ ಮಾಸದಲ್ಲಿ ನವರಾತ್ರಿ ಬ್ರಹ್ಮೋತ್ಸವವನ್ನು ಆಯೋಜಿಸಲಾಗುತ್ತದೆ. ಇದೇ ತಿಂಗಳ 14ರಂದು ರಾತ್ರಿ 7ರಿಂದ 8 ಗಂಟೆಯೊಳಗೆ ಶಾಸ್ತ್ರೋಕ್ತವಾಗಿ ಅಂಕುರಾರ್ಪಣೆಯೊಂದಿಗೆ ಬ್ರಹ್ಮೋತ್ಸವಕ್ಕೆ ಚಾಲನೆ ದೊರೆಯಲಿದೆ. ಬಳಿಕ 15ರಂದು ಸಂಜೆ 6.21ರಿಂದ 6.35ರ ನಡುವೆ ಮೀನ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಧ್ವಜಾರೋಹಣ ನೆರವೇರಿಸಲಾಗುತ್ತದೆ.&lt;/p&gt;&lt;p&gt;ಈ ತಿಂಗಳ 15ರಿಂದ 23ರವರೆಗೆ ಅತ್ಯಂತ ವೈಭವದಿಂದ ನಡೆಯಲಿರುವ ಬ್ರಹ್ಮೋತ್ಸವದಲ್ಲಿ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು 15ರಂದು ಶ್ರೀವಾರಿಗೆ ಪಟ್ಟು ವಸ್ತ್ರಗಳನ್ನು ಸಮರ್ಪಿಸಲಿದ್ದಾರೆ. ಅದೇ ದಿನ ರಾತ್ರಿ ನಡೆಯುವ ದೊಡ್ಡಶೇಷ ವಾಹನ ಸೇವೆಯಲ್ಲೂ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಬಳಿಕ 16ರಂದು ಬೆಳಗ್ಗೆ ನವೀಕರಿಸಲಾದ ಎಸ್&zwnj;ವಿ ಮ್ಯೂಸಿಯಂ, ರಿಲಯನ್ಸ್ ಸಂಸ್ಥೆ ದೇಣಿಗೆಯಾಗಿ ನೀಡಿರುವ 25 ಎಲೆಕ್ಟ್ರಿಕ್ ಬಸ್&zwnj;ಗಳು ಹಾಗೂ ಭಕ್ತರ ಗ್ರೂಪ್ ಇನ್ಶೂರೆನ್ಸ್ ಯೋಜನೆಯನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ.&lt;/p&gt;&lt;p&gt;&lt;strong&gt;ವಿಶೇಷ ದರ್ಶನ ರದ್ದು&lt;/strong&gt;&lt;/p&gt;&lt;p&gt;ಶ್ರೀವಾರಿಯ ವಾರ್ಷಿಕ ಬ್ರಹ್ಮೋತ್ಸವದ ಸಂದರ್ಭದಲ್ಲಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಉತ್ಸವದ ದಿನಗಳಲ್ಲಿ ಭಕ್ತರ ಭಾರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರೀತಿಯ ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ. ಪ್ರೋಟೋಕಾಲ್ ಗಣ್ಯರಿಗೆ ಮಾತ್ರ ವಿಐಪಿ ಬ್ರೇಕ್ ದರ್ಶನವನ್ನು ಸೀಮಿತಗೊಳಿಸಲಾಗಿದ್ದು, ಸಾಮಾನ್ಯ ಶಿಫಾರಸು ಪತ್ರಗಳ ಆಧಾರದ ಮೇಲೆ ನೀಡಲಾಗುತ್ತಿದ್ದ ಬ್ರೇಕ್ ದರ್ಶನಗಳನ್ನು ಸ್ಥಗಿತಗೊಳಿಸಲಾಗಿದೆ.&lt;/p&gt;&lt;p&gt;ಅದೇ ರೀತಿ ವಯೋವೃದ್ಧರು, ದಿವ್ಯಾಂಗರು ಹಾಗೂ ಚಿಕ್ಕ ಮಕ್ಕಳ ಪೋಷಕರಿಗೆ ನೀಡಲಾಗುತ್ತಿದ್ದ ವಿಶೇಷ ಪ್ರಿವಿಲೇಜ್ ದರ್ಶನಗಳನ್ನೂ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಸಾಮಾನ್ಯ ಭಕ್ತರು ಹೆಚ್ಚು ಸಮಯ ಕಾಯದೆ ಸ್ವಾಮಿಯ ದರ್ಶನ ಪಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಕ್ತರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.&lt;/p&gt;&lt;p&gt;ಬ್ರಹ್ಮೋತ್ಸವದ ಪ್ರಮುಖ ಘಟ್ಟವಾದ ಗರುಡಸೇವೆ ಹಾಗೂ ಸಮಾರೋಪದ ದಿನ ನಡೆಯುವ ಚಕ್ರಸ್ನಾನದ ವ್ಯವಸ್ಥೆಗಳತ್ತ ಅಧಿಕಾರಿಗಳು ವಿಶೇಷ ಗಮನ ಹರಿಸಿದ್ದಾರೆ. ನಾಲ್ಕು ಮಾಢ ಬೀದಿಗಳಲ್ಲಿರುವ ಗ್ಯಾಲರಿಗಳ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳನ್ನು ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಟಿಟಿಡಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಗರುಡಸೇವೆಯ ದಿನ ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಅಗತ್ಯ ಭದ್ರತಾ ಕ್ರಮಗಳನ್ನು ಸಮರ್ಪಕವಾಗಿ ರೂಪಿಸಲಾಗಿದೆ. ಚಕ್ರಸ್ನಾನ ನಡೆಯುವ ಶ್ರೀವಾರಿ ಪುಷ್ಕರಿಣಿ ಬಳಿ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಕಾಮಗಾರಿಯನ್ನೂ ಈಗಾಗಲೇ ಪೂರ್ಣಗೊಳಿಸಲಾಗಿದೆ.&lt;/p&gt;&lt;h2&gt;&lt;strong&gt;ಬಿಗಿ ಬಂದೋಬಸ್ತ್ ವ್ಯವಸ್ಥೆ&lt;/strong&gt;&lt;/h2&gt;&lt;p&gt;ತಿರುಮಲ ಬೆಟ್ಟದಾದ್ಯಂತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಟಿಟಿಡಿ ಹೆಚ್ಚುವರಿ ಈಒ ಸಿ.ಹೆಚ್. ವೆಂಕಯ್ಯ ಚೌಧರಿ ಅವರು ಮಾಢ ಬೀದಿಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಾಗೂ ಸಿಸಿಟಿವಿ ಕಂಟ್ರೋಲ್ ರೂಮ್ ಕಾರ್ಯವೈಖರಿಯನ್ನು ಸ್ವತಃ ಪರಿಶೀಲಿಸಿ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಟಿಟಿಡಿ ವಿಜಿಲೆನ್ಸ್, ಗುಪ್ತಚರ ವಿಭಾಗ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಹಾಗೂ ಕಾಲ್ತುಳಿತದಂತಹ ಅನಾಹುತಗಳು ಸಂಭವಿಸದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ತಿರುಮಾಡ ಬೀದಿಗಳು ವಿದ್ಯುತ್ ದೀಪಗಳು, ರಂಗೋಲಿ ಹಾಗೂ ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿದ್ದು, ಇಡೀ ತಿರುಮಲ ವೈಕುಂಠವನ್ನು ನೆನಪಿಸುವಂತಾಗಿದೆ.&lt;/p&gt;]]></content:encoded>
            <category>india-news</category>
            <dc:creator>Govindaraj S</dc:creator>
            <atom:link href="https://kannada.asianetnews.com/india-news/tirupati-tirumala-brahmotsavam-ttd-cancels-special-darshan-gives-priority-to-common-devotees-gvd/articleshow-oyg1e22"/>
        </item>
        <item>
            <title><![CDATA[ಭಾರತೀಯನಾಗಿ ಹಿಂದೆಂದೂ ಇಷ್ಟು ಹೆಮ್ಮೆ ಅನಿಸಿರಲಿಲ್ಲ, ಪ್ರಧಾನಿ ಮೋದಿ ಬಗ್ಗೆ ರವಿ ಶಾಸ್ತ್ರಿ ಭಾವನಾತ್ಮಕ ಪೋಸ್ಟ್]]></title>
            <link>https://kannada.asianetnews.com/cricket-sports/brics-summit-ravi-shastri-on-pm-narendra-modi-gkn/articleshow-9n752uv</link>
            <guid isPermaLink="true">https://kannada.asianetnews.com/cricket-sports/brics-summit-ravi-shastri-on-pm-narendra-modi-gkn/articleshow-9n752uv</guid>
            <pubDate>Sun, 13 Sep 2026 15:01:13 +0530</pubDate>
            <description><![CDATA[&lt;p&gt;ಬ್ರಿಕ್ಸ್ ಶೃಂಗಸಭೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರು ಮುಕ್ತಕಂಠದಿಂದ ಹೊಗಳಿದ್ದಾರೆ. ಜೊತೆಗೆ ವಿಶೇಷ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಶಾಸ್ತ್ರಿ ಏನು ಹೇಳಿದರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d1p79kbe3vpspmxwtpc7k4,imgname-ravi-shastri-on-narendra-modi-1789291863347.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ. ಬ್ರಿಕ್ಸ್&zwnj; ಶೃಂಗಸಭೆ ವಿಚಾರದಲ್ಲಿ ಭಾರತದ ರಾಜತಾಂತ್ರಿಕತೆಯನ್ನು ಕೊಂಡಾಡಿರುವ ಶಾಸ್ತ್ರಿ, ಮೋದಿ, ಚೀನಾ ಅಧ್ಯಕ್ಷ ಜಿನ್&zwnj; ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಟ್ಟಿಗೆ ಇರುವ ಫೋಟೋಗಳನ್ನ ಹಂಚಿಕೊಂಡು ಮೋದಿಯನ್ನ ಕೊಂಡಾಡಿದ್ದಾರೆ.&lt;/p&gt;&lt;h2&gt;&lt;strong&gt;ಶಾಸ್ತ್ರಿ ಏನು ಹೇಳಿದರು?&lt;/strong&gt;&lt;/h2&gt;&lt;p&gt;ಒಬ್ಬ ಭಾರತೀಯನಾಗಿ ನನಗೆ ಹಿಂದೆಂದೂ ಇಷ್ಟು ಹೆಮ್ಮೆ ಎನಿಸಿರಲಿಲ್ಲ. ಭಾರತ ಮಾತೆಯ ಮಡಿಲಲ್ಲಿ ಅಧ್ಯಕ್ಷ ಪುಟಿನ್, ಅಧ್ಯಕ್ಷ ಕ್ಸಿ ಮತ್ತು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಒಟ್ಟಿಗೆ ಇದ್ದಾರೆ. ನಾನು ಹಿಂದೆಂದೂ ಕಾಣದಂಥ ರಾಜತಾಂತ್ರಿಕತೆ ಇದು. ನಿಮಗೆ ತಲೆಬಾಗಿ ನಮಸ್ಕರಿಸುವೆ ಮೋದಿ ಜೀ ಎಂದು ಟ್ವಿಟರ್&zwj;&zwnj;ನಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಅಂದ್ಹಾಗೆ 18ಬೇ ಬ್ರಿಕ್ಸ್ ಶೃಂಗಸಭೆಯನ್ನು ಭಾರತ ಆಯೋಜಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯನ್ನ ವಹಿಸಿದ್ದಾರೆ. ಸೆಪ್ಟೆಂಬರ್ 12 ರಿಂದ ಆರಂಭವಾಗಿರುವ ಶೃಂಗಸಭೆಗೆ ಇಂದು ಕೊನೆಯ ದಿ. ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ನಿರ್ಮಾಣ ಎಂಬ ಆಶಯದೊಂದಿಗೆ ದೆಹಲಿಯ ಭಾರತ್ ಮಂಟಪದಲ್ಲಿ ಶೃಂಗಸಭೆ ನಡೆಯುತ್ತಿದೆ.&lt;/p&gt;&lt;p&gt;ಇನ್ನು ಅಂತಿಮ ದಿನವಾದ ಇಂದು ಬ್ರಿಕ್ಸ್ ಸದಸ್ಯರು ಮತ್ತು ಪಾಲುದಾರರು ಇವತ್ತಿನ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ಮೋದಿ ಅವರು ಏಳು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಪ್ರಮುಖವಾಗಿ ದಕ್ಷಿಣ ಆಫ್ರಿಕಾ, ಫಿಲಿಪೈನ್ಸ್&zwnj;, ಬುರುಂಡಿ, ಕಜಕಿಸ್ತಾನ್, ಉಗಾಂಡಾ ಮತ್ತು ನೈಜೀರಿಯಾ ನಾಯಕರನ್ನು ಮೋದಿ ಭೇಟಿ ಆಗಲಿದ್ದಾರೆ.&lt;/p&gt;&lt;p&gt;ಅಲ್ಲದೇ ಶೃಂಗಸಭೆಯನ್ನು ಹೊರತಪಡಿಸಿಯೂ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾರ ಜೊತೆ ಮೋದಿ ವಿಶೇಷ ಮಾತುಕತೆ ನಡೆಸಿದ್ದಾರೆ. ರಾಮಫೋಸಾ ಅವರು ನಿನ್ನೆ ನಡೆದ ವಿಶೇಷ ಅಧಿವೇಶನಗಳಲ್ಲಿ ಭಾಗಿಯಾಗಿದ್ದರು. ಜೊತೆಗೆ ಭಾರತ್ ಇನ್ನೋವೇಟ್ಸ್ ಪ್ರದರ್ಶನಕ್ಕೂ ಭೇಟಿ ನೀಡಿದ್ದರು.&lt;/p&gt;&lt;p&gt;ಇನ್ನು, ಬ್ರಿಕ್ಸ್ ನಾಯಕರು ನವದೆಹಲಿ ಘೋಷಣೆ 2026ಯನ್ನ ಸರ್ವಾನುಮತದಿಂದ ಅಂಗೀಕರಿಸಿದರು. ಈ ಗುಂಪಿನಲ್ಲಿ ಪ್ರಸ್ತುತ 11 ಸದಸ್ಯರು ಬ್ರೆಜಿಲ್, ಚೀನಾ, ಭಾರತ, ಇಂಡೋನೇಷ್ಯಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ - ಮತ್ತು 10 ಪಾಲುದಾರ ರಾಷ್ಟ್ರಗಳೂ ಸೇರಿವೆ. ನೈಜೀರಿಯಾ, ಬೆಲಾರಸ್, ಕಝಾಕಿಸ್ತಾನ್, ಮಲೇಷ್ಯಾ, ಥೈಲ್ಯಾಂಡ್, ಉಗಾಂಡಾ, ಬೊಲಿವಿಯಾ, ಕ್ಯೂಬಾ ಉಜ್ಬೇಕಿಸ್ತಾನ್ ಮತ್ತು ವಿಯೆಟ್ನಾಂ.&lt;/p&gt;&lt;p&gt;Never felt prouder as an Indian. President Putin. President Xi. And our Magnificent Prime Minister Narendra Modi together in Mother India. International diplomacy like never before. Take a Bow. Modi Ji pic.twitter.com/RfINH8SiAB&lt;/p&gt;&lt;p&gt;&mdash; Ravi Shastri (@RaviShastriOfc) September 12, 2026&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/brics-summit-ravi-shastri-on-pm-narendra-modi-gkn/articleshow-9n752uv"/>
        </item>
        <item>
            <title><![CDATA['ಗಾಡ್ಜಿಲ್ಲಾ ಎಲ್‌ ನಿನೋ' ಉಗ್ರರೂಪ; ISROದಿಂದ ಬಿಗ್ ಅಲರ್ಟ್, ಭಾರತಕ್ಕೆ ಭಾರೀ ಆತಂಕ!]]></title>
            <link>https://kannada.asianetnews.com/india-news/godzilla-el-nino-is-fierce-big-alert-from-isro-eos-06-concern-for-india-farmers-sns/articleshow-f0fch6t</link>
            <guid isPermaLink="true">https://kannada.asianetnews.com/india-news/godzilla-el-nino-is-fierce-big-alert-from-isro-eos-06-concern-for-india-farmers-sns/articleshow-f0fch6t</guid>
            <pubDate>Sun, 13 Sep 2026 13:52:11 +0530</pubDate>
            <description><![CDATA[ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಪ್ರಭಾವವು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದ್ದು, ಇದು 'ಗಾಡ್ಜಿಲ್ಲಾ ಎಲ್ ನಿನೋ' ಆಗಿ ಬದಲಾಗುವ ಅಪಾಯವಿದೆ ಎಂದು ಇಸ್ರೋದ EOS-06 ಉಪಗ್ರಹ ಪತ್ತೆಹಚ್ಚಿದೆ. ಈ ವಿದ್ಯಮಾನವು ಭಾರತದ ನೈಋತ್ಯ ಮಾನ್ಸೂನ್ ಮೇಲೆ ತೀವ್ರ ಪರಿಣಾಮ ಬೀರಿ, 2027ರ ಆರಂಭದವರೆಗೂ ಮುಂದುವರೆಯುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cxmkqt8w2jsm59wk9y7dgt,imgname-el-nino-1789287616250.jpg" type="image/jpeg" height="390" width="690"/>
            <content:encoded><![CDATA[&lt;p&gt;ಪೆಸಿಪಿಕ್ ಮಹಾಸಮುದ್ರದಲ್ಲಿ ಏರ್ಪಾಟ್ಟ ಎಲ್&zwnj; ನಿನೋ ಪ್ರಭಾವ ದೇಶದಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ ಎಂದು ನಮಗೆ ಈಗಾಗಲೇ ತಿಳಿದಿದೆ. ಆದರೆ ಈ ಎಲ್ ನಿನೋ ಅನ್ನೋದು ದಿನದಿಂದ ದಿನಕ್ಕೆ ಮತ್ತಷ್ಟು ಬಲಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಇದು ಗಾಡ್ಜಿಲ್ಲ ಎಲ್ ನಿನೋ ಆಗಿ ಬದಲಾವಣೆ ಆಗುವ ಅಪಾಯ ನಮ್ಮ ಮುಂದಿದೆ ಎಂದು ಇತ್ತೀಚೆಗೆ ಇಸ್ರೋ ಉಡಾವಣೆ ಮಾಡಿದ್ದEOS-06 ಎಂಬ ಉಪಗ್ರಹ ಕಂಡು ಹಿಡಿದಿದೆ. ಸಮುದ್ರ ವಾತಾವರಣ, ಅವುಗಳಿಂದ ಬೀಸುವ ಗಾಳಿಯಲ್ಲಿ ಉಂಟಾಗುವ ಬದಲಾವಣೆಗಳ ಆಧಾರದ ಮೇರೆಗೆ ಉಪಗ್ರಹ ಇದನ್ನು ಅಂದಾಜು ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.&lt;/p&gt;&lt;h2&gt;2027ರ ಆರಂಭದ ವರೆಗೂ ಮುಂದುವರೆಯುವ ಅಪಾಯ&lt;/h2&gt;&lt;p&gt;ಭೂಮಿಯ ಮೇಲೆ ಆಗುತ್ತಿರುವ ಬದಲಾವಣೆಗಳನ್ನು ಕಂಡುಕೊಳ್ಳಲು ಹಾಗೂ ಅವುಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಇಸ್ರೋ ಕಳುಹಿಸಿದ್ದ EOS-06 (ಓಷನ್&zwnj;ಶಾಟ್-3) ಉಪಗ್ರಹ ಉತ್ತಮವಾಗಿ ಕೆಲಸ ಮಾಡುತ್ತಿದೆ. ಭೂಮಿಗೆ 741 ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿರುವ ಈ ಉಪಗ್ರಹ, ಪೆಸಿಫಿಕ್ ಮಹಾಸಮುದ್ರದಲ್ಲಿ ಬಲಗೊಳ್ಳುತ್ತಿರುವ ಶಕ್ತಿವಂತ ಗಾಡ್ಜಿಲ್ಲಾ ಎಲ್ ನಿನೋ ಪ್ರಾರಂಭವಾಗುತ್ತಿರುವ ಸಂಕೇತಗಳನ್ನು ಗುರುತಿಸಿದೆ. ವಾತಾವರಣದಲ್ಲಿರುವ ಉಂಟಾಗುತ್ತಿರುವ ಬದಲಾವಣೆಗಳು, ಮಳೆಯ ಪ್ರಮಾಣದಲ್ಲಿರುವ ಬದಲಾವಣೆಗಳು ಸ್ಟಷ್ಟವಾಗಿ ಕಾಣುವ ಮುನ್ನವೇ ಸಮುದ್ರದ ವಾತಾವರಣದಲ್ಲಿ, ಗಾಳಿಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಉಪಗ್ರಹ ಗುರುತಿಸಿದೆ.&lt;/p&gt;&lt;p&gt;ಎಡ್ಲ್ಯೂಎಂಒ ಅಂದಾಜಿನ ಅನ್ವಯ, ಜೂನ್-ಆಗಸ್ಟ್ ನಡುವೆ ಎಲ್ ನಿನೋ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಶೇಖಡಾ 80ರಷ್ಟು ಅವಕಾಶವಿದೆ. ಇದು ಆಗಸ್ಟ್-ಅಕ್ಟೋಬರ್ ವೇಳೆಗೆ ಮತ್ತಷ್ಟು ತೀವ್ರಗೊಳ್ಳುತ್ತದೆ. 2027ರ ಆರಂಭದ ವರೆಗೂ ಮುಂದುವರೆಯುವ ಅಪಾಯವಿದೆ ಎಂದು ಹೇಳಿತ್ತು. ಆದರೆ ಈಗ EOS-06 ನೀಡಿರುವ ಮುನ್ಸೂಚನೆಗಳು ಕೂಡ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಹೈದರಾಬಾದ್&zwnj;ನ ಎನ್&zwnj;ಆರ್&zwnj;ಎಸ್&zwnj;ಸಿ ಗುರುತಿಸಿರುವಂತೆ, 2024 ಮತ್ತು 2025ಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಪರಿಸ್ಥಿತಿ ಬಹಳ ಭಿನ್ನವಾಗಿದೆ. ಪೆಸಿಫಿಕ್ ಸಾಗರದಲ್ಲಿರುವ ಆಹಾರ ಸರಪಳಿಯ ಮೂಲಾಧಾರವಾಗಿರುವ ಸೂಕ್ಷ್ಮ ಗಾತ್ರದ ಸಾಗರ ಸಸ್ಯಗಳಲ್ಲಿ ಕಂಡುಬರುವ ಕ್ಲೋರೊಫಿಲ್ ಮಟ್ಟ ಭಾರೀ ಇಳಿಕೆ ಕಂಡು ಬಂದಿದೆ. ಇದರ ಅರ್ಥ ಏನು ಅಂದರೆ, ಮೇಲ್ಮೈ ತಾಪಮಾನ ಸಾಮಾನ್ಯ ಸ್ಥಿತಿಗೆ ಮರಳಲು ಕೆಲವು ವಾರಗಳ ಸಮಯ ಬೇಕಾಗುತ್ತದೆ. ಆದರೆ ಕ್ಲೋರೊಫಿಲ್&zwnj;ನಲ್ಲಿನ ಬದಲಾವಣೆಗಳು ತಕ್ಷಣವೇ ಗೋಚರಿಸುತ್ತವೆ. ಇದನ್ನ ಮೊದಲೇ ಇಸ್ರೋ ಉಪಗ್ರಹ ಪತ್ತೆ ಮಾಡಿದ್ದು, ಮುಂದಿನ ದಿನಗಳಲ್ಲಿ ಪೆಸಿಫಿಕ್ ಮಹಾಸಾಗರದಲಲಿ ಕಡಿಮೆ ಕ್ಲೋರೊಫಿಲ್ ಪ್ರದೇಶ ಹೆಚ್ಚು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಭಾರತ ಮೇಲೆ ಏನೆಲ್ಲಾ ಪರಿಣಾಮ ಉಂಟಾಗುತ್ತದೆ?&lt;/h2&gt;&lt;p&gt;ಭಾರತ ತನ್ನ ಮಳೆಗಾಲದ ಅವಧಿಯಲ್ಲಿ ಪಡೆದುಕೊಳ್ಳುವ ಬಹುತೇಕ ಮಳೆ ನೈಋತ್ಯ ಮಾನ್ಸೂನ್ ಮೇಲೆ ಎಲ್ ನಿನೋ ತೀವ್ರ ಪರಿಣಾಮವನ್ನು ಬೀರುತ್ತದೆ. ಆದರೆ ಪ್ರತಿಬಾರಿ ಎಲ್ ನಿನೋ ಎದುರಾಗ ಭಾರತದಲ್ಲಿ ಮಳೆ ಕಡಿಮೆ ಆಗುವುದಿಲ್ಲ. ಆದರೆ ಎಲ್&zwnj; ನಿನೋ ಸಾಮರ್ಥ್ಯ ಹೆಚ್ಚಾಗಿ ಬಲಗೊಳ್ಳುತ್ತಿದ್ದಂತೆ ಭಾರತದಲ್ಲಿ ನೈಋತ್ಯ ಮಾನ್ಸೂನ್ ದುರ್ಬಲಗೊಳ್ಳುತ್ತದೆ, ಮಳೆ ಕಡಿಮೆಯಾಗಿ ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸದ್ಯ ಸಮಭಾಜಕ ವೃತ್ತದ ಪೆಸಿಫಿಕ್&zwnj;ನಲ್ಲಿ ಪ್ರಸ್ತುತ ಮಧ್ಯಮ ಎಲ್ ನಿನೋ ಪರಿಸ್ಥಿತಿ ಇದ್ದರೂ, ಇದು ಮುಂಬರುವ ತಿಂಗಳಿನಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.&lt;/p&gt;&lt;p&gt;ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಎಲ್ ನಿನೋ ಪ್ರಭಾವ ಭಾರತದ ಮೇಲೆ ಮಾತ್ರ ಉಂಟಾಗುತ್ತಿಲ್ಲ. ವಿಶ್ವ ಹವಾಮಾನ ಸಂಸ್ಥೆಯು ಈಗಾಗಲೇ ಬಲವಾದ ಎಲ್ ನಿನೋ ಎಚ್ಚರಿಕೆ ನೀಡಿದ್ದರೆ, ಈಗ ಭಾರತ ಉಪಗ್ರಹ 2027ರ ಆರಂಭವರೆಗೂ ಎಲ್ ನಿನೋ ಪ್ರಭಾವ ಮುಂದುವರೆಯುವ ಮುನ್ಸೂಚನೆ ನೀಡಿದೆ. ಇದರೊಂದಿಗೆ EOS-06 ಉಪಗ್ರಹದ ಕಾರ್ಯವೂ ಮುಂಬರುವ ಹವಾಮಾನ ವಿಪತ್ತುಗಳು ಮತ್ತು ತೀವ್ರವಾದ ಎಲ್ ನಿನೋ ಪರಿಣಾಮವನ್ನು ವೇಗವಾಗಿ ಭಾರತ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ.&lt;/p&gt;&lt;p&gt;ಎಲ್ ನಿನೋ ಎಂದರೇನು ಅಂತ ನೋಡುವುದಾದರೆ, ಪೆಸಿಫಿಕ್ ಮಹಾಸಾಗರ ಮೇಲ್ಮೈ ನೀರನ್ನು ಬೆಚ್ಚಗಾಗಿಸುವ ನೈಸರ್ಗಿಕ ವಿದ್ಯಮಾನವಾಗಿದೆ. ಸಾಮಾನ್ಯವಾಗಿ, ಮಾನ್ಸೂನ್ ಮಾರುತಗಳು ಬೆಚ್ಚಿನ ನೀರಿನ್ನು ಪಶ್ಚಿಮಕ್ಕೆ ತಳುತ್ತವೆ. ಇದು ದಕ್ಷಿಣ ಅಮೆರಿಕ ಕರಾವಳಿಯಲ್ಲಿ ಶೀತ, ಸಮೃದ್ಧ ನೀರನ್ನು ಮೇಲಕ್ಕೆ ತರುತ್ತದೆ. ಆದರೆ ಎಲ್ ನಿನೋ ಸಮಯದಲ್ಲಿ ಈ ಗಾಳಿ ದುರ್ಬಲಗೊಳ್ಳುತ್ತವೆ, ಹಿಮ್ಮುಖವಾಗಿ ಚಲಿಸುತ್ತದೆ. ಇದರಿಂದ ಬೆಚ್ಚಗಿನ ನೀರು ಪೂರ್ವ ಪೆಸಿಫಿಕ್ ಮಹಾಸಾಗರಕ್ಕೆ ಹರಡುತ್ತದೆ. ಇದರ ಪರಿಣಾಮ ಫೈಟೊಪ್ಲಾಂಕ್ಟನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದು ಸಮುದ್ರ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ತೀವ್ರ ಬರಗಾಲ ಜೊತೆಗೆ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿ ಪ್ರವಾಹದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇದರ ಪರಿಣಾಮ ಈ 2027ರ ಆರಂಭವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;El Ni&ntilde;o is leaving its fingerprint on the ocean&mdash;and ISRO&rsquo;s satellite is watching!ISRO&rsquo;s EOS-06 (Oceansat-3) is detecting a reduction in ocean Chlorophyll-a for the month of June 2026, indicating changes in tiny marine plants (phytoplankton), along with a shift in surface&hellip; pic.twitter.com/tMRR8pdBuD&lt;/p&gt;&lt;p&gt;&mdash; ISRO (@isro) September 11, 2026&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Sumanth SN</dc:creator>
            <atom:link href="https://kannada.asianetnews.com/india-news/godzilla-el-nino-is-fierce-big-alert-from-isro-eos-06-concern-for-india-farmers-sns/articleshow-f0fch6t"/>
        </item>
        <item>
            <title><![CDATA[ಮಹಿಳೆಯನ್ನು ಬಿಗಿಯಾಗಿ ಹಿಡಿದುಕೊಂಡು ‘ನನ್ನನ್ನು ಕೊಲ್ಲುತ್ತಾರೆ’ ಎಂದ ಯುವಕ! 2 ಗಂಟೆ ಬಳಿಕ ಗೊತ್ತಾಯ್ತು ಅಸಲಿ ಕಾರಣ!]]></title>
            <link>https://kannada.asianetnews.com/india-news/he-thought-someone-was-after-him-gurugram-youths-viral-video-has-a-different-story/articleshow-oiqqciv</link>
            <guid isPermaLink="true">https://kannada.asianetnews.com/india-news/he-thought-someone-was-after-him-gurugram-youths-viral-video-has-a-different-story/articleshow-oiqqciv</guid>
            <pubDate>Sun, 13 Sep 2026 12:35:37 +0530</pubDate>
            <description><![CDATA[&lt;p&gt;ಗುರುಗ್ರಾಮ್&zwnj;ನ ಸಿವಿಲ್ ಲೈನ್ಸ್&zwnj;ನಲ್ಲಿ ದೆಹಲಿ ಮೂಲದ ಯುವಕನೊಬ್ಬ &lsquo;ನನ್ನನ್ನು ಶೂಟ್ ಮಾಡುತ್ತಾರೆ&rsquo; ಎಂದು ಭಯಭೀತನಾಗಿ ಮಹಿಳೆಯ ಹಿಂದೆ ಅಡಗಿ 2-3 ಗಂಟೆಗಳ ಕಾಲ ಹೈಡ್ರಾಮಾ ಸೃಷ್ಟಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಆತ ಶಾಂತನಾಗಲಿಲ್ಲ. ಬಳಿಕ ಕುಟುಂಬಸ್ಥರು ಆಗಮಿಸಿ, ಯುವಕ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cetpykb53mdf85f10avxrr,imgname-delhi-youth-s-gurugram-panic-leaves-locals-shocked--1--1789272087507.jpg" type="image/jpeg" height="390" width="690"/>
            <content:encoded><![CDATA[&lt;h2&gt;&lsquo;ಅವರು ನನ್ನನ್ನು ಶೂಟ್ ಮಾಡ್ತಾರೆ!&rsquo; ಎಂದ ಯುವಕ&lt;/h2&gt;&lt;p&gt;ಗುರುಗ್ರಾಮ್&zwnj;ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಯುವಕನೊಬ್ಬ ರಸ್ತೆಯಲ್ಲೇ ಭಯಭೀತನಾಗಿ ಕೂಗಾಡಿದ ಘಟನೆ ಕೆಲಕಾಲ ಆತಂಕ ಸೃಷ್ಟಿಸಿತು. &lsquo;ಯಾರೋ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ&rsquo;, &lsquo;ಅವರು ನನ್ನನ್ನು ಶೂಟ್ ಮಾಡುತ್ತಾರೆ&rsquo; ಎಂದು ಆತ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ. ಜೊತೆಯಲ್ಲಿದ್ದ ಯುವತಿಯ ಹಿಂದೆ ಅಡಗಿ, ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;h3&gt;ಸ್ಥಳದಲ್ಲಿ ಜಮಾಯಿಸಿದ ಜನ, ಪೊಲೀಸರ ಆಗಮನ&lt;/h3&gt;&lt;p&gt;ಯುವಕನ ವರ್ತನೆಯಿಂದ ಸುತ್ತಮುತ್ತಲಿನ ಜನರಿಗೆ ಆತಂಕ ಉಂಟಾಯಿತು. ಪರಿಸ್ಥಿತಿ ತಿಳಿದುಕೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸಿವಿಲ್ ಲೈನ್ಸ್ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಯುವಕನನ್ನು ಸಮಾಧಾನಪಡಿಸಲು ಪ್ರಯತ್ನಿಸಿತು.&lt;/p&gt;&lt;p&gt;ಆದರೆ ಪೊಲೀಸರ ಮನವಿಗೂ ಆರಂಭದಲ್ಲಿ ಆತ ಸ್ಪಂದಿಸಲಿಲ್ಲ. ತನ್ನ ಜೀವಕ್ಕೆ ಅಪಾಯವಿದೆ ಎಂಬ ಭಯದಲ್ಲೇ ಆತ ಇದ್ದ ಎಂದು ವರದಿಯಾಗಿದೆ.&lt;/p&gt;&lt;h3&gt;ಯುವತಿಯ ಸಮಯಪ್ರಜ್ಞೆಯಿಂದ ಕುಟುಂಬಕ್ಕೆ ಕರೆ&lt;/h3&gt;&lt;p&gt;ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದಾಗ ಯುವತಿಯು ಯುವಕನ ಮೊಬೈಲ್&zwnj;ನಿಂದಲೇ ಆತನ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾಳೆ. ಘಟನೆಯ ಬಗ್ಗೆ ವಿವರಿಸಿ, ಕೂಡಲೇ ಗುರುಗ್ರಾಮ್&zwnj;ಗೆ ಬರುವಂತೆ ತಿಳಿಸಿದ್ದಾಳೆ.&lt;/p&gt;&lt;p&gt;ನಂತರ ದೆಹಲಿಯ ಉತ್ತಮ್ ನಗರದಿಂದ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದರು. ಯುವಕ ಈಗಾಗಲೇ ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ತೀವ್ರ ಒತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.&lt;/p&gt;&lt;h3&gt;&lsquo;ಯಾರೋ ಕೊಲ್ಲುತ್ತಾರೆ&rsquo; ಎಂಬ ಭಯ ಏಕೆ?&lt;/h3&gt;&lt;p&gt;ಕುಟುಂಬದ ಪ್ರಕಾರ, ಯುವಕ ವ್ಯವಹಾರ ಸಂಬಂಧಿತ ಕೆಲಸಕ್ಕಾಗಿ ಗುರುಗ್ರಾಮ್&zwnj;ಗೆ ಹೊರಟಿದ್ದ. ಆದರೆ ಪ್ರಯಾಣದ ವೇಳೆ ಆತನ ಮಾನಸಿಕ ಸ್ಥಿತಿ ಹದಗೆಟ್ಟು, ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಅಥವಾ ಕೊಲ್ಲಲು ಬರುತ್ತಿದ್ದಾರೆ ಎಂಬ ಭಯ ಆವರಿಸಿತ್ತು.&lt;/p&gt;&lt;p&gt;ಇತ್ತೀಚಿನ ವರದಿಗಳಲ್ಲೂ ಪೊಲೀಸರು ಯುವಕನಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದ್ದುದನ್ನು ಉಲ್ಲೇಖಿಸಿದ್ದಾರೆ. ಜನಸಂದಣಿ ಕಂಡು ಆತ ಮತ್ತಷ್ಟು ಆತಂಕಕ್ಕೊಳಗಾದ ಸಾಧ್ಯತೆಯನ್ನೂ ವರದಿಗಳು ಸೂಚಿಸಿವೆ.&lt;/p&gt;&lt;h3&gt;ಕೊನೆಗೆ ಕುಟುಂಬದೊಂದಿಗೆ ಸುರಕ್ಷಿತವಾಗಿ ಸೇರಿದ ಯುವಕ&lt;/h3&gt;&lt;p&gt;ಕುಟುಂಬಸ್ಥರು ಸ್ಥಳಕ್ಕೆ ಬಂದ ಬಳಿಕ ಪೊಲೀಸರು ಅವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕೆಲ ವರದಿಗಳ ಪ್ರಕಾರ, ಕುಟುಂಬದವರು ಯುವಕನ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನೂ ಪೊಲೀಸರಿಗೆ ತೋರಿಸಿದ್ದಾರೆ.&lt;/p&gt;&lt;p&gt;ಈ ಘಟನೆ ಒಂದು ಮಹತ್ವದ ಸಂದೇಶವನ್ನೂ ನೀಡಿದೆ: ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಆತಂಕಕ್ಕೊಳಗಾದಾಗ, ಕುತೂಹಲದಿಂದ ವಿಡಿಯೋ ಮಾಡುವುದಕ್ಕಿಂತ ಮೊದಲು ಆತನಿಗೆ ಸುರಕ್ಷಿತ ವಾತಾವರಣ ಕಲ್ಪಿಸಿ, ಅಗತ್ಯವಿದ್ದರೆ ಕುಟುಂಬ ಅಥವಾ ತುರ್ತು ಸೇವೆಗಳ ನೆರವು ಪಡೆಯುವುದು ಮುಖ್ಯ.&lt;/p&gt;View this post on Instagram&lt;p&gt;A post shared by TRENDYLAST24HR (@trendylast24hr)&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/he-thought-someone-was-after-him-gurugram-youths-viral-video-has-a-different-story/articleshow-oiqqciv"/>
        </item>
        <item>
            <title><![CDATA[ನೀನೊಬ್ಬನೇ ಜಾಣನಾ! ಚುನಾವಣೇಲಿ ಸೋತ ಬಳಿಕ ಪುನಃ ಸರ್ಕಾರಿ ನೌಕರಿಗೆ ಸೇರಿಸಿಕೊಳ್ಳಲಾಗಲ್ಲ-ಹೈಕೋರ್ಟ್!]]></title>
            <link>https://kannada.asianetnews.com/viral/rajasthan-high-court-ruling-govt-employee-resignation-withdrawal-election-efeat-sat/articleshow-bw2wmu8</link>
            <guid isPermaLink="true">https://kannada.asianetnews.com/viral/rajasthan-high-court-ruling-govt-employee-resignation-withdrawal-election-efeat-sat/articleshow-bw2wmu8</guid>
            <pubDate>Sun, 13 Sep 2026 11:38:33 +0530</pubDate>
            <description><![CDATA[&lt;p&gt;ಸರ್ಕಾರದ ಸೇವೆಯಲ್ಲಿ ದುಡಿದು ಹಣ ಮಾಡಿಕೊಂಡು, ಸೇವೆಯಲ್ಲಿರುವಾಗಲೇ ಚುನಾವನೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ದೀರಿ.ಇದೀಗ ಚುನಾವಣೆಯಲ್ಲಿ ಸೋಲುಂಡ ಬಳಿಕ ಪುನಃ ವಾಪಸ್ ಸರ್ಕಾರಿ ನೌಕರಿಗೆ ಸೇರಿಸಿಕೊಳ್ಳಿ ಎಂದರೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cnpy6na8njkhsyjz2m6a5t,imgname-indian-railway-job-1789279303893.jpg" type="image/jpeg" height="390" width="690"/>
            <content:encoded><![CDATA[&lt;p&gt;ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಉದ್ಯೋಗಿಯೊಬ್ಬರು, ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ &lsquo;ನನ್ನ ರಾಜೀನಾಮೆ ವಾಪಸ್ ಪಡೆಯುತ್ತೇನೆ, ಮತ್ತೆ ಕೆಲಸ ಕೊಡಿ&rsquo; ಎಂದು ಕೇಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ರಾಜಸ್ಥಾನ ಹೈಕೋರ್ಟ್&zwnj; ಮಹತ್ವದ ತೀರ್ಪು ನೀಡಿದೆ.&lt;/p&gt;&lt;p&gt;ವಾಯವ್ಯ ರೈಲ್ವೆ ವಿಭಾಗದಲ್ಲಿ (North Western Railway) ಹಿರಿಯ ಆಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ನೀರಜ್ ಬಿಷ್ಣೋಯ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿ ಸಂಪೂರ್ಣವಾಗಿ ವಜಾಗೊಳಿಸಿದೆ. 'ಚುನಾವಣಾ ಸೋಲು ಎಂಬುದು ಸೇವಾ ನಿಯಮಾವಳಿಗಳ ಅಡಿಯಲ್ಲಿ ರಾಜೀನಾಮೆಯನ್ನು ಹಿಂಪಡೆಯಲು ಯಾವುದೇ ಸಕಾರಣವಾಗಲು ಸಾಧ್ಯವಿಲ್ಲ' ಎಂದು ಹೈಕೋರ್ಟ್ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ನೀರಜ್ ಬಿಷ್ಣೋಯ್ ಅವರು 2023ರ ಅಕ್ಟೋಬರ್ 10ರಂದು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ತಮ್ಮ ಹಿರಿಯ ಆಡಿಟರ್ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದರು. ರೈಲ್ವೆ ಇಲಾಖೆಯು ನಿಯಮಾನುಸಾರ ಅವರ ರಾಜೀನಾಮೆಯನ್ನು ಪರಿಶೀಲಿಸಿ, ನವೆಂಬರ್ 1ರಂದು ಅಧಿಕೃತವಾಗಿ ಅಂಗೀಕರಿಸಿತ್ತು. ಬಳಿಕ ಬಹುಜನ ಸಮಾಜ ಪಕ್ಷದ (BSP) ಅಭ್ಯರ್ಥಿಯಾಗಿ ರತ್ನಗಢ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ ಬಿಷ್ಣೋಯ್, ಚುನಾವಣೆಯಲ್ಲಿ ಸೋಲು ಕಂಡರು. ಸೋಲಿನ ಬಳಿಕ ಅಂದರೆ 2024ರ ಜನವರಿ 1ರಂದು, &lsquo;ನನ್ನ ರಾಜೀನಾಮೆಯನ್ನು ಹಿಂಪಡೆದು ನನ್ನನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಿ&rsquo; ಎಂದು ರೈಲ್ವೆ ಇಲಾಖೆಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.&lt;/p&gt;&lt;h2&gt;&lt;strong&gt;ಅರ್ಜಿ ತಿರಸ್ಕರಿಸಿದ್ದ ರೈಲ್ವೆ ಇಲಾಖೆ&lt;/strong&gt;&lt;/h2&gt;&lt;p&gt;ರೈಲ್ವೆ ಸೇವಾ ನಿಯಮಗಳ ಪ್ರಕಾರ ಒಮ್ಮೆ ಅಂಗೀಕೃತವಾದ ರಾಜೀನಾಮೆಯನ್ನು ಹೀಗೆ ಹಿಂಪಡೆಯಲು ಅವಕಾಶವಿಲ್ಲ ಎಂದು ತಿಳಿಸಿ ರೈಲ್ವೆ ಇಲಾಖೆಯು ಅವರ ಮನವಿಯನ್ನು ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಬಿಷ್ಣೋಯ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಅರ್ಜಿದಾರರು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಇಲಾಖೆಯು ಅದನ್ನು ಈಗಾಗಲೇ ಅಂಗೀಕರಿಸಿದೆ. ರಾಜಕೀಯ ಪ್ರವೇಶಿಸಿ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಮತ್ತೆ ಸರ್ಕಾರಿ ಹುದ್ದೆಗೆ ಮರಳುವುದು ಸೇವಾ ಶಿಸ್ತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ರದ್ದುಗೊಳಿಸಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/rajasthan-high-court-ruling-govt-employee-resignation-withdrawal-election-efeat-sat/articleshow-bw2wmu8"/>
        </item>
        <item>
            <title><![CDATA[ಭಾರತದ ಅತಿ ಉದ್ದದ ತಡೆರಹಿತ ರೈಲು! 528 ಕಿ.ಮೀ. ಚಲಿಸಿದರೂ ಒಂದೇ ಒಂದು ನಿಲ್ದಾಣದಲ್ಲಿ ನಿಲ್ಲೋದಿಲ್ಲ!]]></title>
            <link>https://kannada.asianetnews.com/gallery/travel/indian-railway-indias-longest-non-stop-train-journey-from-kota-to-vadodara-sat-deu1sdx</link>
            <guid isPermaLink="true">https://kannada.asianetnews.com/gallery/travel/indian-railway-indias-longest-non-stop-train-journey-from-kota-to-vadodara-sat-deu1sdx</guid>
            <pubDate>Sun, 13 Sep 2026 08:44:09 +0530</pubDate>
            <description><![CDATA[ಒಂದು ರೈಲು ಸುಮಾರು 528 ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ. ಆದರೆ, ಯಾವುದೇ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಮಧ್ಯದಲ್ಲಿ ಒಬ್ಬ ಪ್ರಯಾಣಿಕನನ್ನೂ ಹತ್ತಿಸಿಕೊಳ್ಳುವುದಿಲ್ಲ. ಈ ರೈಲು ಯಾವುದೇ ನಿಲ್ದಾಣದಲ್ಲಿ ಯಾಕೆ ನಿಲ್ಲುವುದಿಲ್ಲ? ಇಲ್ಲಿದೆ ವಿವರ.]]></description>
            <media:content url="https://static.asianetnews.com/images/w-1280,h-720,format-jpg,imgid-01m1p1s7f382tqdjvcmpj7hn2e,imgname-vjh-1788520209891.png" type="image/jpeg" height="390" width="690"/>
            <content:encoded><![CDATA[ಒಂದು ರೈಲು ಸುಮಾರು 528 ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ. ಆದರೆ, ಯಾವುದೇ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಮಧ್ಯದಲ್ಲಿ ಒಬ್ಬ ಪ್ರಯಾಣಿಕನನ್ನೂ ಹತ್ತಿಸಿಕೊಳ್ಳುವುದಿಲ್ಲ. ಈ ರೈಲು ಯಾವುದೇ ನಿಲ್ದಾಣದಲ್ಲಿ ಯಾಕೆ ನಿಲ್ಲುವುದಿಲ್ಲ? ಇಲ್ಲಿದೆ ವಿವರ.&lt;img&gt;ನಮ್ಮ ದೇಶದಲ್ಲಿ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ದೂರದ ಪ್ರಯಾಣಕ್ಕೆ ರೈಲು ಮೊದಲ ಆಯ್ಕೆಯಾಗಿರುತ್ತದೆ. ಗಂಟೆಗಟ್ಟಲೆ ಸಾಗುವ ಈ ಪ್ರಯಾಣದಲ್ಲಿ ರೈಲು ಹಲವು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಆದರೆ, ನಮ್ಮ ದೇಶದಲ್ಲಿ ಒಂದೇ ಒಂದು ನಿಲ್ದಾಣದಲ್ಲೂ ನಿಲ್ಲದೆ, ಬರೋಬ್ಬರಿ 528 ಕಿಲೋಮೀಟರ್ ನಾನ್&zwnj;ಸ್ಟಾಪ್ ಆಗಿ ಚಲಿಸುವ ರೈಲು ಒಂದಿದೆ. ರಾಜಸ್ಥಾನದ ಕೋಟಾದಿಂದ ಗುಜರಾತ್&zwnj;ನ ವಡೋದರಾವರೆಗೆ ಸಾಗುವ ಆ ರೈಲಿನ ಬಗ್ಗೆ ಈಗ ನೋಡೋಣ.&lt;img&gt;ಒಂದೇ ಒಂದು ನಿಲ್ದಾಣದಲ್ಲೂ ನಿಲ್ಲದೆ 528 ಕಿಲೋಮೀಟರ್ ಪ್ರಯಾಣಿಸುವ ಮೂಲಕ ತ್ರಿವೇಂಡ್ರಂ ರಾಜಧಾನಿ ಎಕ್ಸ್&zwnj;ಪ್ರೆಸ್ ದಾಖಲೆ ನಿರ್ಮಿಸಿದೆ. ಸಾಮಾನ್ಯವಾಗಿ ಎಕ್ಸ್&zwnj;ಪ್ರೆಸ್ ಅಥವಾ ಸೂಪರ್&zwnj;ಫಾಸ್ಟ್ ರೈಲುಗಳು ಪ್ರತಿ 50 ರಿಂದ 100 ಕಿಲೋಮೀಟರ್&zwnj;ಗೆ ಒಮ್ಮೆ ಯಾವುದಾದರೂ ನಿಲ್ದಾಣದಲ್ಲಿ ನಿಲ್ಲುತ್ತವೆ. ಆದರೆ ತ್ರಿವೇಂಡ್ರಂ ರಾಜಧಾನಿ ಎಕ್ಸ್&zwnj;ಪ್ರೆಸ್ ಕೋಟಾ ಜಂಕ್ಷನ್&zwnj;ನಿಂದ ಹೊರಟರೆ, ಮತ್ತೆ 528 ಕಿಲೋಮೀಟರ್ ದೂರದಲ್ಲಿರುವ ವಡೋದರಾ ಜಂಕ್ಷನ್&zwnj;ನಲ್ಲೇ ನಿಲ್ಲುತ್ತದೆ. ಈ ಎರಡು ದೊಡ್ಡ ಜಂಕ್ಷನ್&zwnj;ಗಳ ನಡುವೆ ಇರುವ ಹತ್ತಾರು ಸಣ್ಣ, ದೊಡ್ಡ ರೈಲ್ವೆ ನಿಲ್ದಾಣಗಳನ್ನು ಈ ರೈಲು ಕ್ಯಾರೇ ಎನ್ನದೆ ಸಾಗುತ್ತದೆ.&lt;img&gt;ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ ಎರಡು ಕಮರ್ಷಿಯಲ್ ಹಾಲ್ಟ್&zwnj;ಗಳ ನಡುವೆ ಅತಿ ಹೆಚ್ಚು ದೂರ ನಾನ್&zwnj;ಸ್ಟಾಪ್ ಆಗಿ ಸಂಚರಿಸುವ ರೈಲು ಇದಾಗಿದೆ. ಮಧ್ಯದಲ್ಲಿ ಎಲ್ಲಿಯೂ ನಿಲ್ಲದೆ ಇರುವುದರಿಂದ, ಈ ರೈಲು ಸುಮಾರು 528 ಕಿಲೋಮೀಟರ್&zwnj;ಗಳ ಈ ದೈತ್ಯ ದೂರವನ್ನು ಕೇವಲ 5 ರಿಂದ 6 ಗಂಟೆಗಳಲ್ಲಿ ಕ್ರಮಿಸುತ್ತದೆ. ಈ ಸುದೀರ್ಘ ನಾನ್&zwnj;ಸ್ಟಾಪ್ ಪ್ರಯಾಣದಲ್ಲಿ ಪ್ರಯಾಣಿಕರು ಯಾವುದೇ ಅಡೆತಡೆ ಇಲ್ಲದೆ, ನಿರಂತರ ಪ್ರಯಾಣವನ್ನು ಆನಂದಿಸಬಹುದು. ರೈಲು ವೇಗವಾಗಿ ಚಲಿಸುವುದರಿಂದ ದಣಿವಾದ ಅನುಭವ ಆಗುವುದಿಲ್ಲ. ಕಡಿಮೆ ಸಮಯದಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪುತ್ತಾರೆ.]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/indian-railway-indias-longest-non-stop-train-journey-from-kota-to-vadodara-sat-deu1sdx"/>
        </item>
        <item>
            <title><![CDATA[ಕೆನಡಾದಿಂದ ಬಂದ ಹಣ… ಪುಟ್ಟ ಬಾಲಕ ಮಾಡಿದ್ದೇನು ಗೊತ್ತಾ? ಗೆಳೆಯರಿಗಾಗಿ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ!]]></title>
            <link>https://kannada.asianetnews.com/viral/canadian-woman-sponsors-little-boys-food-party-what-he-does-with-the-money-wins-hearts/articleshow-61qduhz</link>
            <guid isPermaLink="true">https://kannada.asianetnews.com/viral/canadian-woman-sponsors-little-boys-food-party-what-he-does-with-the-money-wins-hearts/articleshow-61qduhz</guid>
            <pubDate>Sun, 13 Sep 2026 08:27:44 +0530</pubDate>
            <description><![CDATA[&lt;p&gt;ಕೆನಡಾದಲ್ಲಿ ವಾಸಿಸುವ ಕೇಶಾ ಎಂಬ ಮಹಿಳೆಯ ನೆರವಿನಿಂದ ಪುಟ್ಟ ವಿಷಯ ಸೃಷ್ಟಿಕರ್ತ ಸೂರಜ್ ಕುಮಾರ್ ತನ್ನ ಸ್ನೇಹಿತರಿಗೆ ವಿಶೇಷ ಆಹಾರ ಕೂಟ ಆಯೋಜಿಸಿದ್ದಾರೆ. ಫ್ರೆಂಚ್ ಫ್ರೈಸ್, ಕಪ್&zwnj;ಕೇಕ್, ಪ್ಯಾಟೀಸ್, ಕಾಲಾ ಜಾಮೂನ್ ಮತ್ತು ತಂಪು ಪಾನೀಯಗಳ ಮೆನು ಗಮನ ಸೆಳೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸೂರಜ್ ಗ್ಯಾಂಗ್&zwnj;ಗೆ ಸೇರಲು ನೆಟ್ಟಿಗರು ತಮಾಷೆಯಾಗಿ ಆಸೆ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2an2rjk9ra94sybx8gm0sg0,imgname-young-content-creator-suraj-kumar-enjoys-party-with-friends--1--1789211533907.jpg" type="image/jpeg" height="390" width="690"/>
            <content:encoded><![CDATA[&lt;h2&gt;ಕೆನಡಾದಿಂದ ಬಂದ ನೆರವು; ಗೆಳೆಯರಿಗೆ ಸೂರಜ್ ಕೊಟ್ಟ ಭರ್ಜರಿ ಟ್ರೀಟ್!&lt;/h2&gt;&lt;p&gt;ಕೆನಡಾದಲ್ಲಿ ವಾಸಿಸುವ ಕೇಶಾ ಎಂಬ ಮಹಿಳೆಯೊಬ್ಬರು ನೀಡಿದ ದೇಣಿಗೆ ಪುಟ್ಟ ವಿಷಯ ಸೃಷ್ಟಿಕರ್ತ ಸೂರಜ್ ಕುಮಾರ್ ಮತ್ತು ಅವರ ಸ್ನೇಹಿತರ ಪಾಲಿಗೆ ವಿಶೇಷ ಸಂಭ್ರಮಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ತನ್ನ ಸ್ನೇಹಿತರಿಗಾಗಿ ವಿವಿಧ ಖಾದ್ಯಗಳನ್ನು ತಯಾರಿಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸೂರಜ್, ಈ ಬಾರಿ ದೊರೆತ ನೆರವಿನಿಂದ ಗೆಳೆಯರಿಗೆ ವಿಶೇಷ ಆಹಾರ ಕೂಟ ಆಯೋಜಿಸಿದ್ದಾರೆ.&lt;/p&gt;&lt;h3&gt;ಮೆನುವಿನಲ್ಲಿ ಏನೇನಿತ್ತು ಗೊತ್ತಾ?&lt;/h3&gt;&lt;p&gt;ಈ ವಿಶೇಷ ಪಾರ್ಟಿಯ ಮೆನು ಕೂಡ ಗಮನ ಸೆಳೆಯುವಂತಿತ್ತು. ಫ್ರೆಂಚ್ ಫ್ರೈಸ್, ಕಪ್&zwnj;ಕೇಕ್&zwnj;ಗಳು, ಪ್ಯಾಟೀಸ್, ಕಾಲಾ ಜಾಮೂನ್ ಮತ್ತು ತಂಪು ಪಾನೀಯಗಳು ಮಕ್ಕಳಿಗೆ ಹಬ್ಬದ ವಾತಾವರಣ ಸೃಷ್ಟಿಸಿವೆ.&lt;/p&gt;&lt;p&gt;ಸೂರಜ್ ಮೊದಲು ಆಲೂಗಡ್ಡೆಗಳನ್ನು ಕತ್ತರಿಸಿ ಫ್ರೆಂಚ್ ಫ್ರೈಸ್ ತಯಾರಿಸುವ ಮೂಲಕ ಅಡುಗೆ ಆರಂಭಿಸಿದರು. ನಂತರ ಉಳಿದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ, ಕೊನೆಯಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ತಟ್ಟೆಗಳಲ್ಲಿ ಬಡಿಸಿದರು. ಸ್ನೇಹಿತರೆಲ್ಲರೂ ಒಟ್ಟಿಗೆ ಕುಳಿತು ಊಟ ಸವಿಯುವ ದೃಶ್ಯವೂ ವಿಡಿಯೋದಲ್ಲಿದೆ.&lt;/p&gt;&lt;h3&gt;ದೇಣಿಗೆ ನೀಡಿದ ಕೇಶಾಗೆ ವಿಶೇಷ ಧನ್ಯವಾದ&lt;/h3&gt;&lt;p&gt;ಈ ಪಾರ್ಟಿ ಕೆನಡಾದಲ್ಲಿರುವ ಕೇಶಾ ಅವರ ನೆರವಿನಿಂದ ಸಾಧ್ಯವಾಯಿತು ಎಂದು ಸೂರಜ್ ವಿಡಿಯೋದಲ್ಲಿ ತಿಳಿಸಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಆಹಾರ ಹಂಚಿಕೊಳ್ಳುವ ಮೂಲಕ ದೊರೆತ ಸಹಾಯವನ್ನು ಸಂಭ್ರಮವಾಗಿ ಪರಿವರ್ತಿಸಿರುವುದು ವೀಕ್ಷಕರ ಗಮನ ಸೆಳೆದಿದೆ.&lt;/p&gt;&lt;p&gt;ಸೂರಜ್ ಅವರ ಕಂಟೆಂಟ್&zwnj;ನ ವಿಶೇಷತೆಯೇ ಸ್ನೇಹಿತರಿಗಾಗಿ ಅಡುಗೆ ಮಾಡಿ, ಎಲ್ಲರೂ ಒಟ್ಟಿಗೆ ಊಟ ಮಾಡುವ ಕ್ಷಣಗಳನ್ನು ಹಂಚಿಕೊಳ್ಳುವುದು. ಹೀಗಾಗಿ ಈ ಬಾರಿ ವಿದೇಶದಿಂದ ಬಂದ ನೆರವು ಕೂಡ ಅದೇ ಸರಳ ಮತ್ತು ಆತ್ಮೀಯ ಶೈಲಿಯಲ್ಲಿ ಬಳಕೆಯಾಗಿದೆ.&lt;/p&gt;&lt;h3&gt;&lsquo;ಗ್ಯಾಂಗ್&zwnj;ಗೆ ಸೇರಿಸಿಕೊಳ್ಳಿ&rsquo; ಎಂದ ನೆಟ್ಟಿಗರು!&lt;/h3&gt;&lt;p&gt;ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಮೆಂಟ್&zwnj;ಗಳಲ್ಲೂ ತಮಾಷೆಯ ಮಾತುಗಳು ಶುರುವಾದವು. ಕೆಲವರು &ldquo;ವಿದೇಶಿ ನಿಧಿಯೂ ಬರಲು ಶುರುವಾಗಿದೆ&rdquo; ಎಂದು ತಮಾಷೆ ಮಾಡಿದರೆ, ಇನ್ನೂ ಹಲವರು ಸೂರಜ್ ಅವರ ಸ್ನೇಹಿತರ ಗುಂಪಿಗೆ ಸೇರಲು ತಮಾಷೆಯಾಗಿ ಆಸೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&ldquo;ನಿಮ್ಮ ಗ್ಯಾಂಗ್&zwnj;ಗೆ ಸೇರಲು ಏನು ಮಾಡಬೇಕು?&rdquo;, &ldquo;ನನ್ನನ್ನೂ ನಿಮ್ಮ ತಂಡಕ್ಕೆ ಸೇರಿಸಿಕೊಳ್ಳಿ&rdquo; ಎಂಬ ರೀತಿಯ ಕಾಮೆಂಟ್&zwnj;ಗಳು ಗಮನ ಸೆಳೆದಿವೆ.&lt;/p&gt;&lt;h3&gt;ಊಟಕ್ಕಿಂತ ದೊಡ್ಡದಾದ ಸಂದೇಶ&lt;/h3&gt;&lt;p&gt;ಈ ವಿಡಿಯೋದಲ್ಲಿ ಗಮನ ಸೆಳೆಯುವುದು ಕೇವಲ ರುಚಿಕರ ಆಹಾರವಲ್ಲ. ಸಿಕ್ಕ ನೆರವನ್ನು ಹಂಚಿಕೊಳ್ಳುವ ಮನೋಭಾವ ಮತ್ತು ಸ್ನೇಹಿತರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಸರಳತೆ ವೀಕ್ಷಕರನ್ನು ಸೆಳೆದಿದೆ.&lt;/p&gt;&lt;p&gt;ಸೂರಜ್ ಅವರ ಕಂಟೆಂಟ್&zwnj;ಗೆ ದೊರೆಯುತ್ತಿರುವ ಪ್ರತಿಕ್ರಿಯೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಸರಳವಾದ ಮಾನವೀಯ ಕ್ಷಣಗಳಿಗೂ ದೊಡ್ಡ ಮಟ್ಟದ ಪ್ರೇಕ್ಷಕರ ಸಂಪರ್ಕ ಸಿಗಬಹುದು ಎಂಬುದನ್ನು ತೋರಿಸುತ್ತಿವೆ.&lt;/p&gt;View this post on Instagram&lt;p&gt;A post shared by Suraj Kumar (@surajkaju10k)&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/canadian-woman-sponsors-little-boys-food-party-what-he-does-with-the-money-wins-hearts/articleshow-61qduhz"/>
        </item>
        <item>
            <title><![CDATA[2026 BRICS: ಸ್ವಂತ ಫೋನ್‌ ನೆಟ್‌ವರ್ಕ್‌, ಸ್ಪೋಟಕ್ಕೂ ಜಗ್ಗದ ಕಾರಿನ ಜತೆ ಬಂದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್!]]></title>
            <link>https://kannada.asianetnews.com/india-news/china-president-xi-jinping-india-visit-brics-summit-2026-hongqi-car-security-details-sat/articleshow-a4u7ygi</link>
            <guid isPermaLink="true">https://kannada.asianetnews.com/india-news/china-president-xi-jinping-india-visit-brics-summit-2026-hongqi-car-security-details-sat/articleshow-a4u7ygi</guid>
            <pubDate>Sun, 13 Sep 2026 05:55:38 +0530</pubDate>
            <description><![CDATA[&lt;p&gt;ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ಅವರ 24 ಗಂಟೆಗಳ ಪ್ರವಾಸಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ಅವರ ವಿಶೇಷ 'ಹಾಂಗ್ಕಿ' ಕಾರು, ಆಹಾರ ಪರೀಕ್ಷಕರ ತಂಡ ಮತ್ತು ಅತ್ಯಾಧುನಿಕ ಸಂವಹನ ವ್ಯವಸ್ಥೆಗಳು ಅವರ ಭೇಟಿಯ ಪ್ರಮುಖ ಅಂಶಗಳಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m286yh00bm9v7yjk3ah759ah,imgname-xi-jinping-car-hongqi-n701-1789129606141.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: ಭಾ&lt;/strong&gt;ರತದ ಆತಿಥ್ಯದಲ್ಲಿ ನಡೆಯುತ್ತಿರುವ ಬ್ರಿಕ್ಸ್&zwnj; ಶೃಂಗಸಭೆಯಲ್ಲಿ ಭಾಗವಹಿಸಲು ಕೇವಲ 24 ತಾಸಿನ ಅವಧಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ದೆಹಲಿಗೆ ಆಗಮಿಸಿದ್ದಾರೆ. ವಿಶೇಷವೆಂದರೆ, ಪ್ರವಾಸಕ್ಕೂ 10 ದಿನ ಮೊದಲೇ ಚೀನಾದಿಂದ ವಿಶೇಷ ಸರಕು ವಿಮಾನದ ಮೂಲಕ ಕ್ಸಿ ಅವರ ಅಧಿಕೃತ &lsquo;ಹಾಂಗ್ಕಿ&rsquo; ಲಿಮೋಸಿನ್&zwnj; ಕಾರು, ಮತ್ತೊಂದು ಬ್ಯಾಕಪ್&zwnj; ಕಾರು ಮತ್ತು ಸಂವಹನ ಉಪಕರಣಗಳು ಭಾರತವನ್ನು ತಲುಪಿವೆ.&lt;/p&gt;&lt;p&gt;ಮಿಲಿಟರಿ ಮತ್ತು ಸರ್ಕಾರಿ ಪ್ರಧಾನ ಕಚೇರಿಗಳೊಂದಿಗೆ ದೂರವಾಣಿ ಸಂಪರ್ಕದಲ್ಲಿರಲು ಕ್ಸಿ ತಮ್ಮ ಅಧ್ಯಕ್ಷೀಯ ವಿಮಾನದಲ್ಲಿ ತಮ್ಮದೇ ಆದ ಭಾರೀ ಭದ್ರತೆಯ, ಎನ್&zwnj;ಕ್ರಿಪ್ಟ್ ಮಾಡಿದ ಉಪಗ್ರಹ ವ್ಯವಸ್ಥೆ ಬಳಸುತ್ತಾರೆ. ಅಲ್ಲದೆ, ಅವರ ಕಾರಿನಲ್ಲಿ ಕೂಡ ಅವರದ್ದೇ ಆದ ಸಂವಹನ ಉಪಕರಣಗಳಿವೆ. ಭಾರತದಲ್ಲಿ ವಿದೇಶಿಗರು ಅವರದ್ದೇ ಆದ ಸ್ಯಾಟಲೈಟ್ ಫೋನ್&zwnj; ಬಳಸಲು ನಿರ್ಬಂಧವಿದೆ. ಆದರೆ ಆಯಾ ರಾಯಭಾರ ಕಚೇರಿಗಳು ಸ್ವತಂತ್ರ ಪ್ರದೇಶಗಳಾಗಿರುವ ಕಾರಣ ಅಲ್ಲಿ ಆಯಾ ದೇಶಗಳ ಉಪಗ್ರಹ ನೆಟ್&zwnj;ವರ್ಕ್&zwnj; ಬಳಸಲು ಅವಕಾಶವುಂಟು. ಕ್ಸಿ ಕೂಡ ಅಲ್ಲಿನ ಚೀನೀ ನೆಟ್&zwnj;ವರ್ಕ್&zwnj; ಬಳಸಿ ಸಂವಹನ ನಡೆಸುತ್ತಾರೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಆಹಾರ ಪರೀಕ್ಷಕರೂ ಆಗಮನ!:&lt;/strong&gt;&lt;/h2&gt;&lt;p&gt;ವಿಶೇಷವೆಂದರೆ, ಅವರ ಭದ್ರತಾ ಪಡೆಯ ಜತೆ &lsquo;ಆಹಾರ ಪರೀಕ್ಷಕರು&rsquo; ಕೂಡಾ ಆಗಮಿಸಿದ್ದು ಗಮನ ಸೆಳೆದಿದೆ. ವಿಶ್ವದ ಅತ್ಯಂತ ಪ್ರಭಾವಿ ನಾಯಕರು ವಿದೇಶ ಪ್ರವಾಸ ಕೈಗೊಂಡಾಗ ಅವರ ಜೀವಕ್ಕೆ ಎದುರಾಗಬಹುದಾದ ವಿಷಪ್ರಾಶನ ಅಥವಾ ಆಹಾರ ಕಲಬೆರಕೆಯಂತಹ ಗಂಭೀರ ಅಪಾಯಗಳನ್ನು ತಡೆಯಲು ಆಹಾರ ಪರೀಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ. ಅಧ್ಯಕ್ಷರಿಗೆ ಬಡಿಸುವ ಪ್ರತಿಯೊಂದು ಆಹಾರ, ಪಾನೀಯ ಮತ್ತು ಕುಡಿಯುವ ನೀರನ್ನು ಈ ತಂಡ ಪರೀಕ್ಷಿಸುತ್ತದೆ. ಆಹಾರದಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಅದನ್ನು ನಾಯಕರಿಗೆ ಬಡಿಸಲು ಅನುಮತಿ ನೀಡಲಾಗುತ್ತದೆ.&lt;/p&gt;&lt;p&gt;ಇದೇ ರೀತಿ, ಕ್ಸಿಯವರಿಗೆ ನೀಡಲಾಗುವ ಆಹಾರವನ್ನು ಚೀನಾದ ಪರೀಕ್ಷಕರು ರುಚಿ ನೋಡಿ ಪರೀಕ್ಷಿಸಿದ್ದಾರೆ. ಆಹಾರವು ಸಂಪೂರ್ಣ ಸಸ್ಯಾಹಾರವಾಗಿರಲಿದೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಭದ್ರತಾ ಸಿಬ್ಬಂದಿ ಸೇರಿ 67 ಸದಸ್ಯರ ತಂಡ:&lt;/strong&gt;&lt;/h2&gt;&lt;p&gt;ಕ್ಸಿ ಜತೆ ರಾಜಕಾರಣಿಗಳು, ರಾಜತಾಂತ್ರಿಕರು, ಭದ್ರತಾ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಒಳಗೊಂಡ 67 ಸದಸ್ಯರ ತಂಡ ಭಾರತಕ್ಕೆ ಆಗಮಿಸಿದೆ. ಲೋನ್&zwnj;-ವೋಲ್ಫ್&zwnj; (ಒಂಟಿ ದಾಳಿಕೋರ) ದಾಳಿ ಅಥವಾ ಟಿಬೆಟಿಯನ್&zwnj; ಕಾರ್ಯಕರ್ತರ ಪ್ರತಿಭಟನೆಯ ಆತಂಕದಿಂದಾಗಿ ಈ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಚೀನಾ ವಿರೋಧಿ ಪ್ರಚಾರಕ್ಕಾಗಿ ಡ್ರೋನ್&zwnj;ಗಳು, ಬ್ಯಾನರ್&zwnj;ಗಳು, ಲೌಡ್&zwnj;ಸ್ಪೀಕರ್&zwnj;ಗಳು ಮತ್ತು ಬಲೂನ್&zwnj;ಗಳನ್ನು ಬಳಸುವ ಸಾಧ್ಯತೆಯಿದೆ ಎಂದು ಚೀನಾ ಮುನ್ನೆಚ್ಚರಿಕೆ ನೀಡಿದ್ದು, ಸಣ್ಣ ಗಾತ್ರದ ವೈಮಾನಿಕ ವಸ್ತುಗಳು ಮತ್ತು ಡ್ರೋನ್&zwnj;ಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ.&lt;/p&gt;&lt;h2&gt;&lt;strong&gt;ಅಭೂತಪೂರ್ವ ಭದ್ರತೆ:&lt;/strong&gt;&lt;/h2&gt;&lt;p&gt;2019ರ ನಂತರ ಭಾರತಕ್ಕೆ ಇದು ಕ್ಸಿ ಅವರ ಮೊದಲ ಭೇಟಿಯಾಗಿದ್ದು, ಅವರು ತಂಗುವ ಹೋಟೆಲ್&zwnj; ಸುತ್ತ ತಾತ್ಕಾಲಿಕ &lsquo;ನೋ ಫ್ಲೈ ಝೋನ್&rsquo; ಘೋಷಣೆ ಮಾಡುವುದರಿಂದ ಹಿಡಿದು ಸಂಭವನೀಯ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಅಣು ಬೆದರಿಕೆಗಳ ತಪಾಸಣೆವರೆಗೆ ಹಿಂದೆಂದೂ ಕಾಣದ ಮಟ್ಟದ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅಧ್ಯಕ್ಷರು ತಂಗುವ ಹೋಟೆಲ್&zwnj;ನಲ್ಲಿ ಅಣು ವಿಕಿರಣ ಮತ್ತು ಜೈವಿಕ ರಾಸಾಯನಿಕ ಸುರಕ್ಷತಾ ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ಭೂಗತ ಪೈಪ್&zwnj;ಲೈನ್ ಜಾಲಗಳನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ.&lt;/p&gt;&lt;h2&gt;&lt;strong&gt;ಅತ್ಯಾಧುನಿಕ ಕಾರು:&lt;/strong&gt;&lt;/h2&gt;&lt;p&gt;10 ದಿನ ಮೊದಲೇ ಅವರ ಕಾರು ಭಾರತಕ್ಕೆ ಬಂದಿದೆ. 18 ಅಡಿ ಉದ್ದವಿರುವ ಹಾಂಗ್ಕಿ ಎನ್&zwnj;701 ಕಾರು 21-ಇಂಚಿನ ಬುಲೆಟ್&zwnj;ಪ್ರೂಫ್ ವೀಲ್&zwnj;ಗಳು, ಗಟ್ಟಿಯಾದ ಬುಲೆಟ್&zwnj;ಪ್ರೂಫ್ ಗ್ಲಾಸ್&zwnj;ಗಳು ಮತ್ತು ಬಲವರ್ಧಿತ ಶಸ್ತ್ರಸಜ್ಜಿತ ಕವಚವನ್ನು ಹೊಂದಿದೆ. ಸಣ್ಣ ಪ್ರಮಾಣದ ಸ್ಫೋಟಕ ದಾಳಿಗಳನ್ನು ತಡೆಯುವ ಸಾಮರ್ಥ್ಯ ಮಾತ್ರವಲ್ಲದೆ, ವಿಷಕಾರಿ ಅನಿಲ ಅಥವಾ ರಾಸಾಯನಿಕ ದಾಳಿ ನಡೆದರೆ ಕಾರಿನ ಒಳಗಿರುವವರನ್ನು ರಕ್ಷಿಸಲು ಪ್ರತ್ಯೇಕ ಏರ್-ಕಂಪ್ರೆಷನ್ ಆಕ್ಸಿಜನ್ ವ್ಯವಸ್ಥೆಯನ್ನು ಇದು ಹೊಂದಿದೆ. ಚೀನಾದ ಐಷಾರಾಮಿ ವಾಹನ ತಯಾರಿಕಾ ಸಂಸ್ಥೆಯಾದ ಹಾಂಗ್ಕಿ ಇದನ್ನು ಕಸ್ಟಮ್-ಬಿಲ್ಟ್ ಮಾದರಿಯಲ್ಲಿ ಸಿದ್ಧಪಡಿಸಿದೆ.&lt;/p&gt;&lt;h2&gt;&lt;strong&gt;ಕೆಲವೇ ಕೆಲವರಿಗೆ ಕಾರು ಸೌಲಭ್ಯ:&lt;/strong&gt;&lt;/h2&gt;&lt;p&gt;ವಿದೇಶಿ ಗಣ್ಯರೆಲ್ಲರಿಗೂ ಭಾರತಕ್ಕೆ ಬಂದರೆ ತಮ್ಮದೇ ಆದ ಕಾರು ಬಳಸಲು ಅವಕಾಶವಿಲ್ಲ. ಪುಟಿನ್&zwnj;, ಟ್ರಂಪ್&zwnj;, ಕ್ಸಿ ಅಂಥವರಿಗೆ ಮಾತ್ರ ಇಂಥ ಆವಕಾಶವಿದೆ.&lt;/p&gt;&lt;h3&gt;&lt;strong&gt;ಪಿಸ್ತೂಲ್&zwnj; ಬಿಟ್ಟು ಬೇರೆ ಶಸ್ತ್ರಾಸ್ತ್ರ ತರುವಂತಿಲ್ಲ:&lt;/strong&gt;&lt;/h3&gt;&lt;p&gt;ವಿದೇಶಿ ನಿಯೋಗವು ಭಾರತದ ದೂರಸಂಪರ್ಕ ಇಲಾಖೆಯ ಅನುಮತಿ ಪಡೆದು ತಮ್ಮ ಸ್ವಂತ ಸಂವಹನ ಉಪಕರಣಗಳನ್ನು ಭಾರತಕ್ಕೆ ತರಬಹುದಾಗಿದೆ. ಆದರೆ ಉಪಗ್ರಹ ಸಂವಹನ ಉಪಕರಣಗಳನ್ನು ತರಲು ಅನುಮತಿಯಿಲ್ಲ. ಬಂದೂಕು ಮತ್ತು ಮದ್ದುಗುಂಡುಗಳನ್ನು ತರುವ ಅನಿವಾರ್ಯತೆಯಿದ್ದರೆ, ಪಿಸ್ತೂಲ್&zwnj;ಗಳಿಗೆ ಅವಕಾಶವಿದೆ. ಆದರೆ ಸಬ್&zwnj;ಮಷಿನ್&zwnj; ಗನ್&zwnj;ಗಳು ಮತ್ತು ಆ್ಯಂಟಿ-ಡ್ರೋನ್&zwnj; ಉಪಕರಣಗಳನ್ನು ಏರ್ಪೋರ್ಟ್&zwnj;ನ ಕಸ್ಟಮ್ಸ್&zwnj; ವಿಭಾಗದಲ್ಲೇ ಇಟ್ಟುಬರಬೇಕಾಗುತ್ತದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/china-president-xi-jinping-india-visit-brics-summit-2026-hongqi-car-security-details-sat/articleshow-a4u7ygi"/>
        </item>
        <item>
            <title><![CDATA[BRICS: ಯುದ್ಧದ ವಿರುದ್ಧ ಬ್ರಿಕ್ಸ್ ಸಮರ; ಮೋದಿ 'ದೆಹಲಿ ನಿರ್ಣಯ'ಕ್ಕೆ ಸರ್ವಾನುಮತದ ಅಂಗೀಕಾರ!]]></title>
            <link>https://kannada.asianetnews.com/india-news/brics-summit-2026-new-delhi-declaration-terrorism-tariffs-india-diplomatic-win-sat/articleshow-4zbbaib</link>
            <guid isPermaLink="true">https://kannada.asianetnews.com/india-news/brics-summit-2026-new-delhi-declaration-terrorism-tariffs-india-diplomatic-win-sat/articleshow-4zbbaib</guid>
            <pubDate>Sun, 13 Sep 2026 05:26:53 +0530</pubDate>
            <description><![CDATA[&lt;p&gt;ಭಾರತದ ಅಧ್ಯಕ್ಷತೆಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ 'ನವದೆಹಲಿ ನಿರ್ಣಯ 2026' ಅನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ನಿರ್ಣಯವು ಯುದ್ಧ, ಪಹಲ್ಗಾಂ ದಾಳಿ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಏಕಪಕ್ಷೀಯ ಸುಂಕ ಹೇರಿಕೆಯನ್ನು ಖಂಡಿಸಿದ್ದು, ಇದು ಭಾರತಕ್ಕೆ ಸಿಕ್ಕ ದೊಡ್ಡ ರಾಜತಾಂತ್ರಿಕ ಯಶಸ್ಸು ಎಂದು ಪರಿಗಣಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2ay3t7sst4h08m65te2y8hy,imgname-brics-2026-group-photo-1789221005561.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಿಟಿಐ ನವದೆಹಲಿ (ಸೆ.13): ಭಾ&lt;/strong&gt;ರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯ ಮೊದಲ ದಿನದಂದೇ ಬ್ರಿಕ್ಸ್ ಒಕ್ಕೂಟವು ಯುದ್ಧವನ್ನು ಖಂಡಿಸಿ, ಸರ್ವಾನುಮತದಿಂದ &lsquo;ನವದೆಹಲಿ ನಿರ್ಣಯ 2026&rsquo; ಅನ್ನು ಅಂಗೀಕರಿಸಿದೆ. ಇದೇ ವೇಳೆ, ಪಹಲ್ಗಾಂ ದಾಳಿ ಹಾಗೂ ಎಲ್ಲ ರೀತಿಯ ಉಗ್ರವಾದ ಖಂಡಿಸಿ ಪಾಕಿಸ್ತಾನಕ್ಕೆ ಚಾಟಿಯೇಟು ನೀಡಿದೆ. ಇನ್ನು ಏಕಪಕ್ಷೀಯ ಸುಂಕ ಹೇರಿಕೆಯನ್ನೂ ಪ್ರಶ್ನಿಸಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj;ಗೆ ಪರೋಕ್ಷ ಸಂದೇಶ ರವಾನಿಸಿದೆ.&lt;/p&gt;&lt;p&gt;ಶೃಂಗಸಭೆಯ ಉದ್ಘಾಟನಾ ಅಧಿವೇಶನದ ಮುಕ್ತಾಯದ ವೇಳೆ ಪ್ರಧಾನಿ ನರೇಂದ್ರ ಮೋದಿ, ಜಂಟಿ ಪ್ರಕಟಣೆಯ ಅಂಗೀಕಾರವನ್ನು ಅಧಿಕೃತವಾಗಿ ಘೋಷಿಸಿದರು. &lsquo;ಯಾವ ಸದಸ್ಯ ರಾಷ್ಟ್ರವೂ ಯಾವುದೇ ಆಕ್ಷೇಪಣೆ ಎತ್ತಿಲ್ಲ. ಹೀಗಾಗಿ &lsquo;ನವದೆಹಲಿ ನಿರ್ಣಯ 2026&rsquo; ಅನ್ನು ಸರ್ವಸಮ್ಮತಿಯಿಂದ ಅಂಗೀಕರಿಸಲಾಗಿದೆ&rsquo; ಎಂದು ತಿಳಿಸಿದರು.&lt;/p&gt;&lt;p&gt;ಈ ಬಾರಿಯ ಜಂಟಿ ಪ್ರಕಟಣೆಯಲ್ಲಿ ಯಾವುದೇ ನಿರ್ದಿಷ್ಟ ದೇಶದ ಹೆಸರು ಉಲ್ಲೇಖಿಸದೆ &lsquo;ಏಕಪಕ್ಷೀಯ ಮಿಲಿಟರಿ ದಾಳಿ&rsquo; ಹಾಗೂ ಸಂಘರ್ಷಗಳನ್ನು ಖಂಡಿಸಲಾಗಿದೆ. ಜಾಗತಿಕ ಶಾಂತಿ, ಮಾತುಕತೆ, ಸಾರ್ವಭೌಮತ್ವದ ರಕ್ಷಣೆ, ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ವ್ಯಾಪಾರ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಬದಲಿಗೆ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಉತ್ತೇಜಿಸುವ ವಿಷಯಗಳ ಬಗ್ಗೆ ಬ್ರಿಕ್ಸ್ ಒಕ್ಕೂಟ ಒಮ್ಮತಕ್ಕೆ ಬಂದಿದೆ.&lt;/p&gt;&lt;h2&gt;&lt;strong&gt;ತಡರಾತ್ರಿವರೆಗೂ ಚರ್ಚೆ:&lt;/strong&gt;&lt;/h2&gt;&lt;p&gt;ಪ್ರಕಟಣೆಯ ಕರಡು ಸಿದ್ಧಪಡಿಸುವ ವೇಳೆ ವೈರಿ ರಾಷ್ಟ್ರಗಳಾದ ಇರಾನ್ ಮತ್ತು ಯುಎಇ ತಮ್ಮ ನಿಲುವುಗಳಿಗೆ ಪಟ್ಟು ಹಿಡಿದಿದ್ದರಿಂದ ಮಧ್ಯರಾತ್ರಿಯವರೆಗೂ ಸುದೀರ್ಘ ಮಾತುಕತೆಗಳು ನಡೆದವು. ಶನಿವಾರ ಮುಂಜಾನೆ 4 ಗಂಟೆಯವರೆಗೆ ನಡೆದ ತೀವ್ರತರ ಚರ್ಚೆಯ ಬಳಿಕ ಈ ಕರಡು ನಿರ್ಣಯಕ್ಕೆ ಒಮ್ಮತ ಮೂಡಿತು.&lt;/p&gt;&lt;p&gt;ಪಹಲ್ಗಾಂ ದಾಳಿಗೆ ಖಂಡನೆ:&lt;/p&gt;&lt;p&gt;2025ರ ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯನ್ನು ಬ್ರಿಕ್ಸ್&zwnj; ಜಂಟಿ ನಿರ್ಣಯ ಖಂಡಿಸಿದೆ. ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಲು ಮತ್ತು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಭಯೋತ್ಪಾದನೆ ತಡೆ ಸಮಗ್ರ ಒಪ್ಪಂದವನ್ನು ಶೀಘ್ರ ಅಂಗೀಕರಿಸಲು ಕರೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಭಾರತಕ್ಕೆ ರಾಜತಾಂತ್ರಿಕ ಯಶ:&lt;/strong&gt;&lt;/h2&gt;&lt;p&gt;ಬ್ರಿಕ್ಸ್ ಶೃಂಗಸಭೆಯಲ್ಲಿ ಜಂಟಿ ಪ್ರಕಟಣೆಯ ಕುರಿತು ಎಲ್ಲಾ ಸದಸ್ಯ ರಾಷ್ಟ್ರಗಳ ನಡುವೆ ಸರ್ವಾನುಮತ ಮೂಡಿಸಿರುವುದು ಭಾರತಕ್ಕೆ ಲಭಿಸಿದ ದೊಡ್ಡ ರಾಜತಾಂತ್ರಿಕ ಯಶಸ್ಸಾಗಿದೆ. ಪ್ರಾದೇಶಿಕ ಮತ್ತು ಭೌಗೋಳಿಕ ರಾಜಕೀಯ ವಿಷಯಗಳಲ್ಲಿ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಇರಾನ್ ಮತ್ತು ಯುಎಇ ದೇಶಗಳು ವಿಸ್ತರಿತ ಬ್ರಿಕ್ಸ್ ಒಕ್ಕೂಟದ ಭಾಗವಾಗಿದ್ದರೂ, ಈ ರಾಜತಾಂತ್ರಿಕ ಯಶಸ್ಸು ಲಭಿಸಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.&lt;/p&gt;&lt;h2&gt;&lt;strong&gt;ನಿರ್ಣಯದ ಮುಖ್ಯಾಂಶಗಳು:&lt;/strong&gt;&lt;/h2&gt;&lt;p&gt;&lt;strong&gt;1.ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ:&lt;/strong&gt; ಗಡಿಯಾಚೆಗಿನ ಭಯೋತ್ಪಾದನೆ, ಉಗ್ರರಿಗೆ ಹಣಕಾಸು ನೆರವು ಮತ್ತು ಸುರಕ್ಷಿತ ತಾಣಗಳನ್ನು ಒದಗಿಸುವುದೂ ಸೇರಿದಂತೆ ಎಲ್ಲ ಮಾದರಿಯ ಭಯೋತ್ಪಾದನೆಯನ್ನು ಬ್ರಿಕ್ಸ್ ತೀವ್ರವಾಗಿ ಖಂಡಿಸಿದೆ.&lt;/p&gt;&lt;p&gt;&lt;strong&gt;2. ರಾಜತಾಂತ್ರಿಕ ಪರಿಹಾರಕ್ಕೆ ಒತ್ತು: &lt;/strong&gt;ಸಂಘರ್ಷಗಳ ಮೂಲ ಕಾರಣಗಳನ್ನು ಕಂಡುಕೊಂಡು ಅವುಗಳನ್ನು ತಡೆಯಲು ಬ್ರಿಕ್ಸ್ ಒತ್ತು ನೀಡಿದೆ. ರಾಜತಾಂತ್ರಿಕತೆ, ಮಾತುಕತೆ ಮತ್ತು ಸಮಾಲೋಚನೆಗಳ ಮೂಲಕವೇ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದೆ. ಗಾಜಾದಲ್ಲಿ ಕದನ ವಿರಾಮ ಪಾಲನೆ, ಮಾನವೀಯ ನೆರವು ಹಾಗೂ 1967ರ ಗಡಿ ಆಧರಿತ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರದೊಂದಿಗೆ &lsquo;ದ್ವಿ-ರಾಷ್ಟ್ರ ಪರಿಹಾರ&rsquo;ಕ್ಕೆ ಬೆಂಬಲ ಸೂಚಿಸಲಾಗಿದೆ.&lt;/p&gt;&lt;p&gt;&lt;strong&gt;3. ಏಕಪಕ್ಷೀಯ ಸುಂಕಕ್ಕೆ ಕಳವಳ: &lt;/strong&gt;ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿ ಮತ್ತು ಜಾಗತಿಕ ವ್ಯಾಪಾರಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಕೆಲವು ರಾಷ್ಟ್ರಗಳು ಏಕಪಕ್ಷೀಯವಾಗಿ ವಿಧಿಸುತ್ತಿರುವ ಸುಂಕ ಹಾಗೂ ಸುಂಕೇತರ ನಿರ್ಬಂಧಗಳ ಕುರಿತು ಬ್ರಿಕ್ಸ್ ತೀವ್ರ ಕಳವಳ ವ್ಯಕ್ತಪಡಿಸಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/brics-summit-2026-new-delhi-declaration-terrorism-tariffs-india-diplomatic-win-sat/articleshow-4zbbaib"/>
        </item>
        <item>
            <title><![CDATA[ಗೆಳತಿಗೆ RS 3.5 ಕೋಟಿ ಖರ್ಚು ಮಾಡಿ ಮೋಸ ಹೋದ, Break-Up ಬಳಿಕ ಕೋರ್ಟ್‌ ಮೆಟ್ಟಿಲೇರಿ ಕೇಸ್‌ ಕೂಡ ಸೋತ CEO]]></title>
            <link>https://kannada.asianetnews.com/india-news/indian-origin-ceo-chander-agarwal-spends-rs-3-5-crore-on-girlfriend-after-breakup-he-lose-court-case-gkn/articleshow-216wyba</link>
            <guid isPermaLink="true">https://kannada.asianetnews.com/india-news/indian-origin-ceo-chander-agarwal-spends-rs-3-5-crore-on-girlfriend-after-breakup-he-lose-court-case-gkn/articleshow-216wyba</guid>
            <pubDate>Sat, 12 Sep 2026 23:58:02 +0530</pubDate>
            <description><![CDATA[&lt;p&gt;ಭಾರತೀಯ ಮೂಲದ ಸಿಇಒ ಚಂದರ್ ಅಗರ್ವಾಲ್, ತಮ್ಮ ಗೆಳತಿ ಫೆಲಿಷಿಯಾ ಲೀ ಮೇಲೆ ಸುಮಾರು 3.5 ಕೋಟಿ ರೂಪಾಯಿ ಖರ್ಚು ಮಾಡಿ, ಸಂಬಂಧ ಮುರಿದ ನಂತರ ಅದನ್ನು ಸಾಲವೆಂದು ವಾದಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಸಿಂಗಾಪುರದ ಕೋರ್ಟ್ ಈ ಹಣವನ್ನು ಉಡುಗೊರೆ ಎಂದು ಪರಿಗಣಿಸಿ, ಸಿಇಒ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಪ್ರೀತಿಯಲ್ಲಿ ಹಣ ಕಳೆದುಕೊಂಡ ಸಿಇಒಗೆ ನ್ಯಾಯಾಲಯದಲ್ಲೂ ಹಿನ್ನಡೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2be0g3ewnxrkb98kyyre0nb,imgname-chander-agarwal-1789237674094.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೆಣ್ಣು ಮಕ್ಕಳಾದರೂ ಅಷ್ಟೇ, ಗಂಡು ಮಕ್ಕಳಾದರೂ ಅಷ್ಟೇ. ಅಷ್ಟು ಈಜಿಯಾಗಿ ಯಾರನ್ನೂ ನಂಬಿ ಮೋಸ ಹೋಗಬೇಡಿ ಅಂತಾ ಅನುಭವಿಗಳು ಆಗಾಗ ಹೇಳುತ್ತಲೇ ಇರುತ್ತಾರೆ. ಅದನ್ನ ನಾವು ಹಾಗೇ ಕೇಳಿಸಿಕೊಂಡು ಹೀಗೆ ಬಿಟ್ಟು ಬಿಡುತ್ತೇವೆ. ನನ್ನ ಹತ್ರ ಬೇಕಾದಷ್ಟು ಹಣ ಇದೆ ಅಂದ್ಕೊಂಡ ಭಾರತೀಯ ಮೂಲದ ಸಿಇಓ ಒಬ್ಬ ತನ್ನ ಗೆಳತಿಗೆ ಬರೋಬ್ಬರಿ 3.5 ಕೋಟಿ ರೂಪಾಯಿ ಖರ್ಚು ಮಾಡಿ ಮೋಸ ಹೋಗಿದ್ದಾರೆ. ಅಸಲಿ ಸತ್ಯ ಗೊತ್ತಾದ್ಮೇಲೆ ಕೋರ್ಟ್&zwnj; ಮೇಟ್ಟಿಲೇರಿದ್ದ ಪುಣ್ಯಾತ್ಮನಿಗೆ ಅಲ್ಲೂ ಹಿನ್ನಡೆ ಆಗಿದೆ ಅನ್ನೋದು ಆತನ ವಾದ. ಆದರೆ ಕೋರ್ಟ್&zwnj; ಎಲ್ಲವನ್ನೂ ವಿಚಾರಣೆ ನಡೆಸಿಯೇ ತೀರ್ಪು ನೀಡಿದೆ.&lt;/p&gt;&lt;p&gt;ಪ್ರೀತಿಯೂ ಸಿಗಲಿಲ್ಲ. ಹಣವೂ ಸಿಗಲಿಲ್ಲ. ಕೋರ್ಟ್&zwnj; ಕೂಡ ನನ್ನ ಮಾತನ್ನ ಕೇಳಲಿಲ್ಲ ಅನ್ನೋ ಸ್ಥಿತಿಗೆ ಆ ಯುವಕ ಸಿಲುಕಿದ್ದಾನೆ. ಹೌದು, ಭಾರತೀಯ ಲಾಜಿಸ್ಟಿಕ್ಸ್ ಕಂಪನಿ ಟಿಸಿಐ ಎಕ್ಸ್&zwnj;ಪ್ರೆಸ್ ಲಿಮಿಟೆಡ್&zwnj;ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಚಂದರ್ ಅಗರ್ವಾಲ್, ತಮ್ಮ ಮಾಜಿ ಗೆಳತಿ ಫೆಲಿಷಿಯಾ ಲೀ ವಿರುದ್ಧ ಸಿಂಗಾಪುರದ ಹೈಕೋರ್ಟ್&zwnj;ನಲ್ಲಿ ಮೊಕದ್ದಮೆ ಹೂಡಿದ್ದರು. ಆಕೆಗಾಗಿ ಖರ್ಚು ಮಾಡಿದ ಹಣವನ್ನು ಬಡ್ಡಿರಹಿತ ಸಾಲವಾಗಿ ನೀಡಲಾಗಿದೆ ಮತ್ತು ಅದನ್ನು ಮರುಪಾವತಿಸಬೇಕಾಗಿತ್ತು ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್&zwnj;, ಹಣವನ್ನು ಹೆಚ್ಚಾಗಿ ಉಡುಗೊರೆ ರೂಪದಲ್ಲಿ ನೀಡಲಾಗಿದೆ ಎಂಬುದನ್ನ ಕಂಡುಕೊಂಡಿದೆ. ವಿಚಾರಣೆ ಬಳಿಕ ಅಗರ್ವಾಲ್&zwnj; ಅರ್ಜಿಯನ್ನು ವಜಾಗೊಳಿಸಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಅಗರ್ವಾಲ್ ಮತ್ತು ಲೀ ಮೊದಲ ಬಾರಿಗೆ 2019 ರಲ್ಲಿ ಭೇಟಿಯಾದರು. ಅವರು ಸೆಪ್ಟೆಂಬರ್ 2022 ರಲ್ಲಿ ಪ್ರಣಯ ಸಂಬಂಧ ಹೊಂದಿದ್ದರು ಮತ್ತು ಅಗರ್ವಾಲ್ ಲೀ ಅವರನ್ನು ವಿಶ್ವಾಸದ್ರೋಹಿ ಎಂದು ಅನುಮಾನಿಸಿದರು. ಡಿಸೆಂಬರ್ 2023 ರಲ್ಲಿ ಇಬ್ಬರು ಬೇರ್ಪಟ್ಟರು. ಅವರು ಒಟ್ಟಿಗೆ ಇದ್ದಾಗ ಅಗರ್ವಾಲ್, ಲೀ ಅವರ ಮೇಲೆ ದೊಡ್ಡ ಮೊತ್ತವನ್ನು ಖರ್ಚು ಮಾಡಿದರು. ವೆಚ್ಚಗಳಲ್ಲಿ ಹರ್ಮ್ಸ್, ಡಿಯರ್ ಮತ್ತು ಪ್ರಾಡಾದಂತಹ ಬ್ರ್ಯಾಂಡ್&zwnj;ಗಳ ಐಷಾರಾಮಿ ವಸ್ತುಗಳು, ಪ್ರಥಮ ದರ್ಜೆ ವಿಮಾನಗಳು, ವಿದೇಶ ಪ್ರವಾಸಗಳು, ಜೀವ ವಿಮಾ ಕಂತುಗಳು ಅವರ ಕ್ರೆಡಿಟ್ ಕಾರ್ಡ್&zwnj;ಗಳ ವೈಯಕ್ತಿಕ ವೆಚ್ಚಗಳು ಮತ್ತು ಸ್ಟ್ಯಾನ್&zwnj;ಫೋರ್ಡ್-ಎನ್&zwnj;ಯುಎಸ್ ಕಾರ್ಯನಿರ್ವಾಹಕ ಕಾರ್ಯಕ್ರಮ ಸೇರಿವೆ.&lt;/p&gt;&lt;p&gt;ಲೀ ಅವರ ಫ್ಲಾಟ್&zwnj;ಗಾಗಿ ಅವರು ಫೆಂಗ್ ಶೂಯಿ ಮಾಸ್ಟರ್&zwnj;ಗಾಗಿ ಸುಮಾರು 17,000 ಡಾಲರ್&zwnj; ಹಣ ಖರ್ಚು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಭಾರತೀಯರಾಗಿ ಫೆಂಗ್ ಶೂಯಿಯಲ್ಲಿ ನಂಬಿಕೆ ಇಲ್ಲದ ಕಾರಣ ಪಾವತಿ ಸಾಲವಾಗಿರಬೇಕು ಎಂದು ಅಗರ್ವಾಲ್ ವಾದಿಸಿದರು. ನ್ಯಾಯಾಧೀಶರು ವಾದವನ್ನು ತಿರಸ್ಕರಿಸಿದರು, ಅಗರ್ವಾಲ್ ಅವರೇ ಈ ಸೇವೆಯನ್ನು ಏರ್ಪಡಿಸಿದ್ದರು ಎಂಬುದುನ್ನ ಕೋರ್ಟ್&zwnj; ಕಂಡುಕೊಂಡಿದೆ. ಲೀ ಹಣವನ್ನು ಸಾಲವಾಗಿ ವಿನಂತಿಸಿದ್ದರು ಮತ್ತು ಮರುಪಾವತಿಸಲು ಒಪ್ಪಿಕೊಂಡಿದ್ದರು ಎಂದು ಅಗರ್ವಾಲ್ ಹೇಳಿದ್ದಾರೆ. ಆದರೆ ಅದನ್ನು ಕೋರ್ಟ್&zwnj;ನಲ್ಲಿ ಸಾಬೀತುಪಡಿಸಲು ಅಗರ್ವಾಲ್&zwnj; ವಿಫಲರಾಗಿದ್ದಾರೆ.&lt;/p&gt;&lt;p&gt;ಅರ್ಜಿಯನ್ನು ವಜಾ ಮಾಡಿರುವ ಕೋರ್ಟ್&zwnj;, ಲೀ ಅವರ ಕಾನೂನು ವೆಚ್ಚವನ್ನೂ ಪಾವತಿಸುವಂತೆ ಆದೇಶ ನೀಡಿದೆ. ವಿವಾದಿತ ಪಾವತಿಗಳು ಸಾಲಗಳಲ್ಲ, ಉಡುಗೊರೆಗಳಾಗಿದ್ದು, ಲೀ ಹಣವನ್ನು ಮರುಪಾವತಿಸಲು ಬಾಧ್ಯಸ್ಥರಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/indian-origin-ceo-chander-agarwal-spends-rs-3-5-crore-on-girlfriend-after-breakup-he-lose-court-case-gkn/articleshow-216wyba"/>
        </item>
        <item>
            <title><![CDATA[ಮೀನು ಪ್ರಿಯರಿಗೆ ಬಾಯಲ್ಲಿ ನೀರೂರಿಸುವ ಸುದ್ದಿ, ಭಾರೀ ಬೇಡಿಕೆಯ ಹಿಲ್ಸಾ ಮೀನು ಸವಿಯಲು ರೆಡಿಯಾಗಿ]]></title>
            <link>https://kannada.asianetnews.com/india-news/association-of-indian-fish-importers-requests-bangladesh-to-export-hilsa-fish-gkn/articleshow-r08019t</link>
            <guid isPermaLink="true">https://kannada.asianetnews.com/india-news/association-of-indian-fish-importers-requests-bangladesh-to-export-hilsa-fish-gkn/articleshow-r08019t</guid>
            <pubDate>Sat, 12 Sep 2026 21:06:32 +0530</pubDate>
            <description><![CDATA[ದುರ್ಗಾ ಪೂಜೆಗೂ ಮುನ್ನ ಹಿಲ್ಸಾ ಮೀನು ರಫ್ತಿಗೆ ಅವಕಾಶ ನೀಡುವಂತೆ ಭಾರತೀಯ ಆಮದುಗಾರರು ಬಾಂಗ್ಲಾದೇಶಕ್ಕೆ ಮನವಿ ಮಾಡಿದ್ದಾರೆ. ಈ ಮನವಿಗೆ ಬಾಂಗ್ಲಾದೇಶ ಸಕಾರಾತ್ಮಕವಾಗಿ ಸ್ಪಂದಿಸಿದ್ದು, 'ಮೀನುಗಳ ರಾಣಿ' ಎಂದೇ ಖ್ಯಾತವಾದ ಈ ಮೀನಿಗೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಭಾರಿ ಬೇಡಿಕೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj87enmhfwzan8c2y3x0cr4,imgname-hilsa-fish-1786245266100.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೀನುಗಳ ರಾಣಿ ಎಂದೇ ಕರೆಯಲ್ಪಡುವ ಹಿಲ್ಸಾ ಮೀನಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರಾದಲ್ಲಿ ಹಿಲ್ಸಾ ಮೀನಿಗೆ ಭಾರಿ ಡಿಮ್ಯಾಂಡು. ವಿಷಯ ಏನಪ್ಪ ಅಂದ್ರೆ ಮುಂದಿನ ದರ್ಗಾ ಪೂಜೆಗೂ ಮುನ್ನವೇ ಹಿಲ್ಸಾ ಮೀನು ರಫ್ತಿಗೆ ಅವಕಾಶ ಮಾಡಿಕೊಡುವಂತೆ ಭಾರತೀಯ ಆಮದುಗಾರರು ಬಾಂಗ್ಲಾದೇಶಕ್ಕೆ ಮನವಿ ಮಾಡಿದ್ದಾರೆ. ಸಮಾಧಾನದ ವಿಚಾರ ಎಂದರೆ ಬಾಂಗ್ಲಾದೇಶ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ.&lt;/p&gt;&lt;p&gt;ಹೌದು, ದುರ್ಗಾ ಪೂಜೆಗೂ ಮುನ್ನ ಹಿಲ್ಸಾ ರಫ್ತಿಗೆ ಅವಕಾಶ ನೀಡುವಂತೆ ಬಾಂಗ್ಲಾದೇಶವನ್ನು ಒತ್ತಾಯಿಸಲಾಗಿದೆ. ಕೋಲ್ಕತ್ತದ ಆಮದುದಾರರ ಸಂಘವು ಬಾಂಗ್ಲಾದೇಶದ ಸಚಿವರಿಗೆ ಮೀನು ಸಾಗಣೆಯನ್ನು ಪುನರಾರಂಭಿಸುವಂತೆ ಮನವಿ ಮಾಡಿದೆ. 1996 ರಿಂದ ಬಾಂಗ್ಲಾದೇಶದಿಂದ ಹಿಲ್ಸಾ ಮೀನು ಆಮದು ಮಾಡಿಕೊಳ್ಳಲಾಗುತ್ತಿದೆ. 2012ರಲ್ಲಿ ಬಾಂಗ್ಲಾದೇಶ ಈ ಮೀನನ್ನು ರಫ್ತು ಮಾಡೋದನ್ನು ನಿಷೇಧ ಮಾಡಿತ್ತು. ಮೊದಲು ಪಶ್ಚಿಮ ಬಂಗಾಳದ ಬೆನಪೋಲ್ ಭೂ ಕಸ್ಟಮ್ಸ್ ಠಾಣೆ ಮತ್ತು ತ್ರಿಪುರಾದ ಅಖೌರಾ ಭೂ ಕಸ್ಟಮ್ಸ್ ಠಾಣೆ ಮೂಲಕ ಹಿಲ್ಸಾವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.&lt;/p&gt;&lt;p&gt;ರಫ್ತು ನಿಷೇಧದ ನಡುವೆಯೂ 2019ರಿಂದ ದುರ್ಗಾ ಪೂಜೆಯ ಸಮಯದಲ್ಲಿ ಹಿಲ್ಸಾ ಮೀನನ್ನು ಸೀಮಿತ ರಫ್ತಿಗೆ ಅನುಮತಿಯನ್ನ ಬಾಂಗ್ಲಾ ನೀಡಿದೆ. ಆದರೆ ಈ ವ್ಯವಹಾರ ಒಂದು ತಿಂಗಳ ಮಾತ್ರ ಇರೋದ್ರಿಂದ ವ್ಯಾಪಾರಸ್ಥರಿಗೆ ಈ ಅವಧಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮೀನು ಆಮದುದಾರರು ಎರಡು ಬಂಗಾಳಗಳ ನಡುವಿನ ದೀರ್ಘಕಾಲದ ಸಾಂಸ್ಕೃತಿಕ ಮತ್ತು ಪಾಕಶಾಲೆಯ ಸಂಪರ್ಕಗಳನ್ನು ಹಾಗೂ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಹಿಲ್ಸಾದ ಜನಪ್ರಿಯತೆಯನ್ನು ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಕಳೆದ ವರ್ಷ ದುರ್ಗಾ ಪೂಜೆ ಸಂದರ್ಭದಲ್ಲಿ ಭಾರತಕ್ಕೆ 1200 ಟನ್&zwnj; ಹಿಲ್ಸಾ ಮೀನು ಬಂದಿತ್ತು. ಈ ಬಾರಿ 2420 ಟನ್&zwnj; ಹಿಲ್ಸಾ ಮೀನು ಬರುವ ಸಾಧ್ಯತೆ ಇದೆ. ಕೆಲವು ವರದಿಗಳ ಪ್ರಕಾರ ಬಾಂಗ್ಲಾದೇಶ ಸರ್ಕಾರವು ಇತ್ತೀಚಿನ ವಿನಂತಿಗೆ ಸಕಾರಾತ್ಮಕವಾಗಿ ಪರಿಗಣಿಸಿದೆ ಎನ್ನಲಾಗಿದೆ. ಇದು ಈ ವರ್ಷದ ದುರ್ಗಾ ಪೂಜೆಗೆ ಮುನ್ನ ಬಂಗಾಳ ಮೀನು ಮಾರುಕಟ್ಟೆಗಳಲ್ಲಿ ಹಿಲ್ಸಾ ಲಭ್ಯತೆಯ ಬಗ್ಗೆ ಆಸಕ್ತಿಯನ್ನು ಸೃಷ್ಟಿಸಿದೆ.&lt;/p&gt;&lt;p&gt;ಪೂರ್ವ ಭಾರತದಲ್ಲಿ ಈ ಮೀನು ಅತ್ಯಂತ ಪ್ರಿಯವಾದ ಖಾದ್ಯ. ಅದ್ಭುತ ರುಚಿ ಮತ್ತು ಆರೋಗ್ಯಕರ ಗುಣಗಳಿಂದಾಗಿ ಈ ಮೀನಿಗೆ ತುಂಬಾನೇ ಜನಪ್ರಿಯತೆ ಇದೆ. ಈ ಮೀನನ್ನು ಬೇಯಿಸುವಾಗ ಬರುವ ವಿಶಿಷ್ಟ ಸುವಾಸನೆ ಮೀನು ಪ್ರಿಯರನ್ನು ಆಕರ್ಷಿಸುತ್ತದೆ. ದುಬಾರಿ ಮೀನುಗಳಲ್ಲಿ ಇದು ಕೂಡ ಒಂದು. ಈ ಮೀನನ್ನು ಮೀನುಗಳ ರಾಣಿ ಎಂದು ಹೇಳುತ್ತಾರೆ. ಹಿಲ್ಸಾ ಮೀನುಗಳು ಸಾಮಾನ್ಯವಾಗಿ ಸಮುದ್ರದ ಉಪ್ಪು ನೀರಿನಲ್ಲಿ ವಾಸಿಸುತ್ತವೆ. ಆದರೆ ಸಂತಾನೋತ್ಪತ್ತಿಯ (ಮೊಟ್ಟೆಯಿಡಲು) ಸಮಯದಲ್ಲಿ ಇವು ನದಿಗಳ ಸಿಹಿ ನೀರಿಗೆ ವಲಸೆ ಬರುತ್ತವೆ.&lt;/p&gt;&lt;h2&gt;&lt;strong&gt;ಭಾರತದಲ್ಲಿ ಹಿಲ್ಸಾ ಮೀನು&lt;/strong&gt;&lt;/h2&gt;&lt;p&gt;ಹಿಂದೂಗಳ ಪವಿತ್ರ ನದಿಯಾದ ಉತ್ತರ ಪ್ರದೇಶದ ಗಂಗಾ ನದಿ (Ganga River) ಜಲಾನಯನ ಪ್ರದೇಶದಲ್ಲಿ ದಶಕಗಳ ಕಾಲ ಕಾಣೆಯಾಗಿದ್ದ ಅತ್ಯಂತ ರುಚಿಕರ ಹಾಗೂ ಅಪರೂಪದ 'ಹಿಲ್ಸಾ' (Hilsa Fish) ಮೀನುಗಳು ಮತ್ತೆ ಪ್ರತ್ಯಕ್ಷವಾಗಿವೆ ಎಂದು ಇತ್ತೀಚೆಗೆ ವರದಿಯಾಗಿದೆ. ಸುಮಾರು ಅರ್ಧ ಶತಮಾನದ (50 ವರ್ಷಗಳು) ಸುದೀರ್ಘ ಕಾಯುವಿಕೆಯ ನಂತರ ಉತ್ತರ ಪ್ರದೇಶದ ಗಾಜಿಪುರ (Ghazipur) ಬಳಿ ಗಂಗಾ ನದಿಯಲ್ಲಿ ಹಿಲ್ಸಾ ಮೀನುಗಳು ಪತ್ತೆಯಾಗಿದ್ದು, ವಿಜ್ಞಾನಿಗಳು ಹಾಗೂ ಸ್ಥಳೀಯ ಮೀನುಗಾರರಲ್ಲಿ ಹೊಸ ಆಶಾದಾಯಕ ವಾತಾವರಣ ಮೂಡಿಸಿದೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/association-of-indian-fish-importers-requests-bangladesh-to-export-hilsa-fish-gkn/articleshow-r08019t"/>
        </item>
        <item>
            <title><![CDATA[ಸಮುದ್ರದ ನೀರು ಶುದ್ಧೀಕರಿಸಿ ಕುಡಿಯಲು ಮುಂಬೈ ಮಾಸ್ಟರ್ ಪ್ಲಾನ್: 4,007 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಚಾಲನೆ!]]></title>
            <link>https://kannada.asianetnews.com/india-news/mumbai-seawater-desalination-plant-bmc-s-rs-4000-cr-drinking-water-project-gdp/articleshow-p8dn5ou</link>
            <guid isPermaLink="true">https://kannada.asianetnews.com/india-news/mumbai-seawater-desalination-plant-bmc-s-rs-4000-cr-drinking-water-project-gdp/articleshow-p8dn5ou</guid>
            <pubDate>Sat, 12 Sep 2026 20:44:34 +0530</pubDate>
            <description><![CDATA[ಮುಂಬೈನಲ್ಲಿನ ತೀವ್ರ ನೀರಿನ ಕೊರತೆ ನೀಗಿಸಲು, ಬೃಹನ್&zwnj;ಮುಂಬೈ ಮಹಾನಗರ ಪಾಲಿಕೆಯು ₹4,007 ಕೋಟಿ ವೆಚ್ಚದಲ್ಲಿ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಬೃಹತ್ ಘಟಕವನ್ನು ಸ್ಥಾಪಿಸುತ್ತಿದೆ. ಮನೋರಿಯಲ್ಲಿ ನಿರ್ಮಾಣವಾಗಲಿರುವ ಈ ಘಟಕವು ಇಸ್ರೇಲ್ ತಂತ್ರಜ್ಞಾನ ಬಳಸಿ ದಿನಕ್ಕೆ 40 ಕೋಟಿ ಲೀಟರ್ ನೀರನ್ನು ಶುದ್ಧೀಕರಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b2n1pw6p5hp52yye4dsdf3,imgname-mumbai-seawater--1--1789225764572.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: &lt;/strong&gt;ಇಸ್ರೇಲ್ ಹಾಗೂ ಗಲ್ಫ್ ರಾಷ್ಟ್ರಗಳ ಮಾದರಿಯಲ್ಲಿ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಮುಂಬೈ ಮಹಾನಗರ ಸಜ್ಜಾಗಿದೆ. ಚೆನ್ನೈ ನಂತರ ಈ ತಂತ್ರಜ್ಞಾನದ ಮೂಲಕ ಬೃಹತ್ ಪ್ರಮಾಣದಲ್ಲಿ ತಲೆದೂರಿದ ನೀರಿನ ಕೊರತೆ ನೀಗಿಸಿಕೊಳ್ಳಲಿರುವ ಭಾರತದ ಎರಡನೇ ನಗರವಾಗಿ ಮುಂಬೈ ಹೊರಹೊಮ್ಮಲಿದೆ. 2029ರ ವೇಳೆಗೆ ನಗರದಲ್ಲಿ ಎದುರಾಗಬಹುದಾದ ಭೀಕರ ನೀರಿನ ಅಭಾವವನ್ನು ಕಮ್ಮಿ ಮಾಡಲು ಬೃಹನ್&zwnj;ಮುಂಬೈ ಮಹಾನಗರ ಪಾಲಿಕೆ ₹4,007 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.&lt;/p&gt;&lt;h2&gt;15 ವರ್ಷಗಳ ಹಳೆಯ ಪ್ರಸ್ತಾಪಕ್ಕೆ ಜೀವ!&lt;/h2&gt;&lt;p&gt;2009ರಲ್ಲಿ ಮುಂಬೈ ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸಿದಾಗ ನಗರದ ಸರೋವರಗಳು ಬತ್ತಿ ಹೋಗಿದ್ದವು. ಅಂದಿನಿಂದ ಪ್ರತಿದಿನ ನೀರಿನ ಕೊರತೆ ಎದುರಿಸುತ್ತಿದ್ದ ಮುಂಬೈ ಮಹಾನಗರ ಪಾಲಿಕೆ, ಮಾನ್ಸೂನ್ ಮಳೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಮುದ್ರದ ನೀರನ್ನು ಶುದ್ಧೀಕರಿಸುವ ಪ್ರಸ್ತಾಪ ಇಟ್ಟಿತ್ತು. ತದನಂತರ ಸುಮಾರು 15 ವರ್ಷಗಳ ಕಾಲ ನಾನಾ ಹಂತಗಳಲ್ಲಿ ಚರ್ಚೆಯಲ್ಲಿದ್ದ ಈ ಯೋಜನೆಗೆ ಇದೀಗ ಅಂತಿಮ ರೂಪ ಸಿಕ್ಕಿದೆ. ವಾಯುವ್ಯ ಮುಂಬೈನ ಮಲಾಡ್ ಬಳಿಯ ಕರಾವಳಿ ಗ್ರಾಮವಾದ ಮನೋರಿಯಲ್ಲಿ 12 ಎಕರೆ ಜಾಗದಲ್ಲಿ ಈ ಬೃಹತ್ 'ಉಪ್ಪುನೀರು ಶುದ್ಧೀಕರಣ ಘಟಕ' (Desalination Plant) ನಿರ್ಮಾಣವಾಗಲಿದೆ.&lt;/p&gt;&lt;p&gt;ಮೊದಲ ಹಂತವಾಗಿ ನಿತ್ಯ 200 ಮಿಲಿಯನ್ ಲೀಟರ್ (20 ಕೋಟಿ ಲೀಟರ್) ನೀರು ಸಂಸ್ಕರಣೆ. ಎರಡನೇ ಹಂತವಾಗಿ ಯೋಜನೆ ಪೂರ್ಣಗೊಂಡಾಗ ನಿತ್ಯ 400 ಮಿಲಿಯನ್ ಲೀಟರ್ (40 ಕೋಟಿ ಲೀಟರ್) ನೀರು ಪೂರೈಕೆ ಆಗಲಿದೆ. 2030ರ ಮಧ್ಯಭಾಗದ ವೇಳೆಗೆ ಈ ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಭಾರತದಲ್ಲೇ ಅತ್ಯಂತ ದೊಡ್ಡ ಉಪ್ಪುನೀರು ಶುದ್ಧೀಕರಣ ಘಟಕ ಎನಿಸಿಕೊಳ್ಳಲಿದೆ.&lt;/p&gt;&lt;h2&gt;ಜಾಗತಿಕ ಪಾಲುದಾರಿಕೆ ಹಾಗೂ ಪರಿಸರ ಕಾಳಜಿ&lt;/h2&gt;&lt;p&gt;ಈ ಬೃಹತ್ ಘಟಕದ ಉಪ್ಪುನೀರು ನಿರ್ಮೂಲನ ವ್ಯವಸ್ಥೆಯನ್ನು ಇಸ್ರೇಲ್ ಮೂಲದ ಪ್ರಸಿದ್ಧ ಐಡಿಇ ಟೆಕ್ನಾಲಜೀಸ್ ಸಂಸ್ಥೆಯು ನಿರ್ಮಿಸಲಿದ್ದು, ಮುಂದಿನ 20 ವರ್ಷಗಳ ಕಾಲ ಇದರ ನಿರ್ವಹಣೆಯನ್ನು ವಹಿಸಿಕೊಳ್ಳಲಿದೆ. ಮೂಲಸೌಕರ್ಯ ಹಾಗೂ ನಾಗರಿಕ ಕಾಮಗಾರಿಗಳನ್ನು ಹೈದರಾಬಾದ್ ಮೂಲದ ಜಿವಿಪಿಆರ್ ಎಂಜಿನಿಯರ್ಸ್ ಸಂಸ್ಥೆ ನಡೆಸಿಕೊಡಲಿದೆ.&lt;/p&gt;&lt;p&gt;ಈ ಯೋಜನೆಗೆ ರಾಜ್ಯ ಮತ್ತು ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳಿಂದ (CRZ) ಕಠಿಣ ಷರತ್ತುಗಳೊಂದಿಗೆ ಅನುಮತಿ ದೊರೆತಿದೆ. ತ್ಯಾಜ್ಯ ಉಪ್ಪುನೀರನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಮರಳಿಸುವುದು. ಕಡಲಾಚೆಯ ಪೈಪ್&zwnj;ಲೈನ್&zwnj;ಗಳಿಗಾಗಿ ವಿಶೇಷ ಟನಲ್ ಬೋರಿಂಗ್ ಬಳಸುವುದು. ಪ್ಲಾಂಟ್&zwnj;ಗೆ ಅಗತ್ಯವಿರುವ ವಿದ್ಯುತ್&zwnj; ಶಕ್ತಿಯ ಒಂದು ಭಾಗವನ್ನು ನವೀಕರಿಸಬಹುದಾದ ಇಂಧನದಿಂದ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಮಳೆಗಾಲದ ತಕ್ಷಣವೇ ಕಾಮಗಾರಿ ಆರಂಭವಾಗಲಿದೆ ಎಂದು ಬಿಎಂಸಿ ಹೆಚ್ಚುವರಿ ಆಯುಕ್ತ ಅಭಿಜಿತ್ ಬಂಗಾರ್ ತಿಳಿಸಿದ್ದಾರೆ.&lt;/p&gt;&lt;h2&gt;ಸಮುದ್ರದ ನೀರು ಕುಡಿಯುವ ನೀರಾಗುವುದು ಹೇಗೆ?&lt;/h2&gt;&lt;p&gt;ಸಮುದ್ರದಿಂದ ಪೈಪ್&zwnj;ಲೈನ್ ಮೂಲಕ ಉಪ್ಪು ನೀರನ್ನು ಘಟಕಕ್ಕೆ ತರಲಾಗುತ್ತದೆ. ಬಳಿಕ ಮರಳು, ಪಾಚಿ ಹಾಗೂ ಕಸವನ್ನು ಮೊದಲ ಹಂತದಲ್ಲೇ ತಡೆಯಲಾಗುತ್ತದೆ. ಅತ್ಯಂತ ಹೆಚ್ಚಿನ ಒತ್ತಡದಲ್ಲಿ ನೀರನ್ನು ವಿಶೇಷ ಸೂಕ್ಷ್ಮ ಪೊರೆಗಳ (Semi-permeable Membranes) ಮೂಲಕ ತಳ್ಳಲಾಗುತ್ತದೆ. ಇವು ಕರಗಿದ ಲವಣಗಳು ಮತ್ತು ಕಲ್ಮಶಗಳನ್ನು ತಡೆದು, ಶುದ್ಧ ನೀರಿನ ಅಣುಗಳನ್ನು ಒಂದು ಕಡೆ ಶೇಖರಣೆ ಮಾಡುತ್ತದೆ. ಕೊನೆಯಲ್ಲಿ ನೀರನ್ನು ಕುಡಿಯಲು ಯೋಗ್ಯವಾಗಿಸಲು ಅಗತ್ಯವಾದ ಖನಿಜಗಳನ್ನು ಪುನಃ ಸೇರಿಸಲಾಗುತ್ತದೆ.&lt;/p&gt;&lt;h2&gt;ಮುಂಬೈಗೆ ಈ ಯೋಜನೆ ಎಷ್ಟು ಅಗತ್ಯ?&lt;/h2&gt;&lt;p&gt;ಮುಂಬೈ ನಗರಕ್ಕೆ ಏಳು ಪ್ರಮುಖ ಸರೋವರಗಳಿಂದ ನಿತ್ಯ ಸುಮಾರು 4,100 ಮಿಲಿಯನ್ ಲೀಟರ್ ನೀರು ಸರಬರಾಜಾಗುತ್ತದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಣಿಜ್ಯ ಅಗತ್ಯಗಳಿಗೆ ನಿತ್ಯ ಕನಿಷ್ಠ 4,664 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಅಂದರೆ ಪ್ರಸ್ತುತವೇ ನಿತ್ಯ 500 ರಿಂದ 600 ಮಿಲಿಯನ್ ಲೀಟರ್ ನೀರಿನ ಕೊರತೆ ಇದೆ.&lt;/p&gt;&lt;p&gt;ಮಾನ್ಸೂನ್ ಮಳೆ ವಿಳಂಬವಾದರೆ ಅಥವಾ ಕಡಿಮೆಯಾದರೆ ನಗರದಲ್ಲಿ ಹಾಹಾಕಾರ ಸೃಷ್ಟಿಯಾಗುತ್ತದೆ. ಜಲಾಶಯಗಳ ಮಟ್ಟ ಶೇ. 23.5ಕ್ಕೆ ಕುಸಿದಾಗ ನಗರದಾದ್ಯಂತ ಶೇ. 10ರಷ್ಟು ನೀರು ಕಡಿತ ಮಾಡುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಈ ನೂತನ 'ಸಮುದ್ರ ನೀರು ಶುದ್ಧೀಕರಣ ಘಟಕ'ವು ಮುಂಬೈ ನಗರಕ್ಕೆ ಜೀವಜಲದ ಹೊಸ ಜೀವ ತುಂಬಲಿದೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/mumbai-seawater-desalination-plant-bmc-s-rs-4000-cr-drinking-water-project-gdp/articleshow-p8dn5ou"/>
        </item>
        <item>
            <title><![CDATA[ತಿರುಪತಿ ತಿಮ್ಮಪ್ಪನ ಹುಂಡಿಗೆ ಒಂದೇ ದಿನ ಬಂತು 6.93 ಕೋಟಿ ರೂ, ತಿರುಮಲದಲ್ಲಿ ದಾಖಲೆ]]></title>
            <link>https://kannada.asianetnews.com/festivals/tirupati-tirumala-create-record-temple-hundi-receives-record-rs-6-93-crore-in-a-single-day/articleshow-c0gyv8t</link>
            <guid isPermaLink="true">https://kannada.asianetnews.com/festivals/tirupati-tirumala-create-record-temple-hundi-receives-record-rs-6-93-crore-in-a-single-day/articleshow-c0gyv8t</guid>
            <pubDate>Sat, 12 Sep 2026 20:32:52 +0530</pubDate>
            <description><![CDATA[&lt;p&gt;ಗಣೇಶ ಹಬ್ಬದ ಸಾಲು ಸಾಲು ರಜೆ ಆಗಮಿಸುತ್ತಿದ್ದಂತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರ ದಂಡು ಹೆಚ್ಚಿದೆ. ಇದೇ ವೇಳೆ ತಿರುಮಲದಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಒಂದೇ ದಿನ 6.93 ಕೋಟಿ ರೂಪಾಯಿ ಹುಂಡಿಯಲ್ಲಿ ಕಾಣಿಕೆ ಸಂಗ್ರಹವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxg4v7pk9kkb599bd3cpp056,imgname-new-project--34--1784027127506.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುಪತಿ (ಸೆ.12)&lt;/strong&gt; ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಮಂದಿ ಆಗಮಿಸುತ್ತಾರೆ. ವಿಶೇಷ ದಿನ, ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದೀಗ ಒಂದೇ ದಿನ ತಿರುಪತಿ ಹುಂಡಿಯಲ್ಲಿ ದಾಖಲೆ ನಿರ್ಮಾಣವಾಗಿದೆ. ಒಂದೇ ದಿನ 6.93 ಕೋಟಿ ರೂ ಕಾಣಿಕೆ ಸಂಗ್ರವಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ. ಗುರುವಾರ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಬರೋಬ್ಬರಿ 6.93 ಕೋಟಿ ರೂಪಾಯಿ ಕಾಣಿಕೆ ಸಂಗ್ರವಾಗಿದೆ. ಇದು ತಿರುಮಲ ತಿರುಪತಿ ದೇವಸ್ಥಾನ ಇತಿಹಾಸದಲ್ಲೇ 2ನೇ ಗರಿಷ್ಠ ಸಂಗ್ರಹ ಅನ್ನೋ ದಾಖಲೆ ಬರೆದಿದೆ.&lt;/p&gt;&lt;h2&gt;ಒಂದೇ ದಿನ ಹಲವು ದಾಖಲೆ&lt;/h2&gt;&lt;p&gt;ವಿಶೇಷ ದಿನಗಳ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ತಿರುಪತಿ ತಿರುಮಲದ ಇತಿಹಾಸದಲ್ಲಿ ಒಂದೇ ದಿನ 7.68 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗುವ ಮೂಲಕ ಅತ್ಯಂತ ಗರಿಷ್ಠ ದಾಖಲೆ ಬರೆದಿದೆ. ಇದೀಗ 6.93 ಕೋಟಿ ರೂಪಾಯಿ ಮೂಲಕ 2ನೇ ಗರಿಷ್ಠ ದಾಖಲೆ ಕಾಣಿಕೆ ಸಂಗ್ರಹ ನಿರ್ಮಾಣವಾಗಿದೆ. 7ನೇ ಬಾರಿ ಒಂದೇ ದಿನ 6 ಕೋಟಿ ರೂಪಾಯಿಗಿಂತ ಹೆಚ್ಚು ಕಾಣಿಕೆ ಸಂಗ್ರಹಗಿದೆ. ಸುದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ಭಕ್ತ ಭೇಟಿ ಹೆಚ್ಚಿದ್ದು ಇದಕ್ಕೆ ಕಾರಣ.&lt;/p&gt;&lt;h2&gt;ತಿರುಪತಿಯಲ್ಲಿ ಕಾಣಿಕೆ ಸಂಗ್ರಹ&lt;/h2&gt;&lt;p&gt;ಈ ಹಿಂದೆ 2023ರ ಜ.2ರ ವೈಕುಂಠ ಏಕಾದಶಿಯಂದು ಸಂಗ್ರಹವಾಗಿದ್ದ 7.68 ಕೋಟಿ ರು. ಈವರೆಗಿನ ಗರಿಷ್ಠವಾಗಿದೆ. ಇದನ್ನು ಹೊರತುಪಡಿಸಿ 2018ರ ಏ.1ರಂದು 6.45 ಕೋಟಿ ರು., 2022ರ ಅ.23ರಂದು 6.31 ಕೋಟಿ ರು., 2018ರ ಜು.26ರಂದು 6.28 ಕೋಟಿ ರು., 2022ರ ಜು.4ರಂದು 6.18 ಕೋಟಿ ರು., 2026ರ ಆ.18ರಂದು 6.12 ಕೋಟಿ ರು. ಸಂಗ್ರಹವಾಗಿತ್ತು.&lt;/p&gt;&lt;h2&gt;ತಿರುಪತಿ ಭಕ್ತರಿಗೆ ವಿಮೆ&lt;/h2&gt;&lt;p&gt;ಇತ್ತೀಚೆಗೆ ತಿರುಪತಿ ತಿರುಮಲ ಭಕ್ತರಿಗೆ ನೀಡುವ ವಿಮೆ ಸೌಲಭ್ಯವನ್ನು ವಿಸ್ತರಿಲಾಗಿದೆ. 3 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ತಿರುಪತಿ ತಿರುಮಲ ದರ್ಶನಕ್ಕೆ ಆಗಮಿಸುವ ಭಕ್ತರು ಆಕಸ್ಮಿಕವಾಗಿ ಮೃತಪಟ್ಟರೆ ಕುಟುಂಬಕ್ಕೆ 10 ಲಕ್ಷ ರೂಪಾಯಿ ವಿಮೆ ಸೌಲಭ್ಯ ನೀಡಲಾಗುತ್ತಿದೆ. ಇನ್ನು ತಿರುಪತಿ ಭಕ್ತರು ಸಹಜ ಸಾವು ಸಂಭವಿಸಿದಲ್ಲಿ 2 ಲಕ್ಷ ರೂಪಾಯಿ ವಿಮೆ ಸೌಲಭ್ಯ ನೀಡಲಾಗುತ್ತದೆ. ಅಪಘಾತ ವಿಮೆ ಜೊತೆ ಸಹಜ ಸಾವಿಗೂ ವಿಮೆ ಕಲ್ಪಿಸುವ ಮೂಲಕ ತಿರುಪತಿ ಭಕ್ತರಿಗೆ ಸಂಪೂರ್ಣ ವಿಮಾ ಕವಚ ನೀಡಲು ಮುಂದಾಗಿದೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/festivals/tirupati-tirumala-create-record-temple-hundi-receives-record-rs-6-93-crore-in-a-single-day/articleshow-c0gyv8t"/>
        </item>
        <item>
            <title><![CDATA[ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಏರ್‌ ಇಂಡಿಯಾ ಕಾಕ್‌ಪಿಟ್‌ ಸಿಬ್ಬಂದಿ ನಿಧನ]]></title>
            <link>https://kannada.asianetnews.com/india-news/air-india-cockpit-crew-found-unconscious-dies-gkn/articleshow-da0txrw</link>
            <guid isPermaLink="true">https://kannada.asianetnews.com/india-news/air-india-cockpit-crew-found-unconscious-dies-gkn/articleshow-da0txrw</guid>
            <pubDate>Sat, 12 Sep 2026 19:57:10 +0530</pubDate>
            <description><![CDATA[&lt;p&gt;ಏರ್&zwnj; ಇಂಡಿಯಾ ಸಿಬ್ಬಂದಿಯೊಬ್ಬರು ದೆಹಲಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ನಂತರ ಏನೆಲ್ಲ ಆಗಿದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2b07ec42dvxk0ka5y0z62ba,imgname-air-india-1789223221636.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ:&lt;/strong&gt; ಏರ್&zwnj; ಇಂಡಿಯಾ ಸಿಬ್ಬಂದಿಯೊಬ್ಬರು ದೆಹಲಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ ವಸಂತ್&zwnj; ಕುಂಚ್&zwnj;ನಲ್ಲಿರುವ ಹೋಟೆಲ್&zwnj; ಒಂದರಲ್ಲಿ ಏರ್&zwnj; ಇಂಡಿಯಾದ ಕಾಕ್&zwnj;ಪಿಟ್&zwnj; ಸಿಬ್ಬಂದಿ ಒಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ನಂತರದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಪೊಲೀಸರು ಹೇಳಿದ್ದೇನು?&lt;/strong&gt;&lt;/h2&gt;&lt;p&gt;ದೆಹಲಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಹೋಟೆಲ್&zwnj; ದಿ ಗ್ರ್ಯಾಂಡ್&zwnj;ನಿಂದ ಕರೆ ಬಂದಿದೆ. ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು. ಅಲ್ಲಿಗೆ ಭದ್ರತಾ ಅಧಿಕಾರಿಗಳು ಹೋಗಿ ತಲುಪಿದಾಗ, ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರೋದು ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದೇವು.&lt;/p&gt;&lt;p&gt;ಆದರೆ ಅಲ್ಲಿನ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ನಂತರ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೇವು. ಮೃತ ವ್ಯಕ್ತಿ ವಿಮಾನ ಸಂಸ್ಥೆಯ ಕ್ಯಾಪ್ಟನ್&zwnj; ಆಗಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್&zwnj; 10 ರಂದು ಹೋಟೆಲ್&zwnj;ಗೆ ಭೇಟಿ ನೀಡಿದ್ದರು. ಸೆಪ್ಟೆಂಬರ್&zwnj; 11 ಸಂಜೆ ಅವರ ಸಹೋದರ ಹೋಟೆಲ್&zwnj; ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದರು. ಸಹೋದರ ನನ್ನ ಕರೆಗಳನ್ನ ಸ್ವೀಕರಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಬೆನ್ನಲ್ಲೇ ಹೋಟೆಲ್&zwnj; ಮ್ಯಾನೇಜರ್&zwnj; ಅವರಿಗೆ ನೀಡಲಾಗಿದ್ದ ಹೋಟೆಲ್&zwnj; ರೂಮ್&zwnj;ಗೆ ಹೋಗಿದ್ದಾರೆ. ಆಗಲೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಹೋಟೆಲ್&zwnj;ನ ಇನ್ನೊಂದು ಕೀನಿಂದ ರೂಮ್&zwnj;ನ ಡೋರ್&zwnj; ಓಪನ್&zwnj; ಮಾಡಲಾಗಿದೆ. ಆಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರೋದು ಪತ್ತೆಯಾಗಿದೆ. ಕೂಡಲೇ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.&lt;/p&gt;&lt;p&gt;ವೈದ್ಯರು ಮೃತಪಟ್ಟಿದ್ದಾರೆ ಎಂದು ಹೇಳಿದ ಕೂಡಲೇ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಮರಣೋತ್ತರ ಪರೀಕ್ಷೆ ಕೂಡ ಮುಗಿದಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194 ರ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇನ್ನೊಂದು ಕಡೆ ಏರ್&zwnj; ಇಂಡಿಯಾ ಕೂಡ ತನ್ನ ಸಿಬ್ಬಂದಿ ಸಾವನ್ನು ಖಚಿತಪಡಿಸಿದೆ. ನಿನ್ನೆ ರಾತ್ರಿ ನಮ್ಮ ಕಾಕ್&zwnj;ಪಿಟ್&zwnj; ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ ಅಂತಾ ವಕ್ತಾರರು ತಿಳಿಸಿದ್ದಾರೆ.&lt;/p&gt;&lt;p&gt;ಏರ್&zwnj; ಇಂಡಿಯಾ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ದುಃಖದ ಸಮಯದಲ್ಲಿ ನಾವು ಆ ಕುಟುಂಬದ ಜೊತೆ ನಿಲ್ಲುತ್ತೇವೆ ಎಂದು ಏರ್&zwnj; ಇಂಡಿಯಾ ಹೇಳಿದೆ.&lt;/p&gt;&lt;p&gt;Delhi Police: &quot;A PCR call was received at PS Vasant Kunj North on September 11 regarding the ill health of a guest at Hotel The Grand in Vasant Kunj. Police reached the spot and found the person unconscious and unresponsive. He was shifted to a hospital, where he was declared brought dead. The Crime Team was subsequently called to the spot. The deceased was working as a captain with an airline and had checked into the hotel on September 10. On the evening of September 11, his brother contacted the hotel manager and informed him that his brother was not responding to his calls. The manager went to the room, which was locked from the inside, and opened it with the hotel master key, where the deceased was found unconscious and unresponsive. The post-mortem examination was conducted at Safdarjung Hospital on September 12. The final cause of death will be ascertained after the final opinion is received. Further inquiry is underway, and inquest proceedings under Section 194 of the BNSS are being conducted.&quot;&lt;/p&gt;&lt;p&gt;&mdash; ANI (@ANI) September 12, 2026&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/air-india-cockpit-crew-found-unconscious-dies-gkn/articleshow-da0txrw"/>
        </item>
        <item>
            <title><![CDATA[ಲೇಓವರ್ ವೇಳೆ ಏರ್ ಇಂಡಿಯಾ ಪೈಲೆಟ್ ಅಸ್ವಸ್ಥ, ತಕ್ಷಣ ಆಸ್ಪತ್ರೆ ದಾಖಲಿಸಿದರೂ ಬದುಕುಳಿಯಲಿಲ್ಲ]]></title>
            <link>https://kannada.asianetnews.com/india-news/air-india-pilot-falls-ill-during-layover-dies-despite-immediate-hospitalisation-delhi/articleshow-aqp4bdg</link>
            <guid isPermaLink="true">https://kannada.asianetnews.com/india-news/air-india-pilot-falls-ill-during-layover-dies-despite-immediate-hospitalisation-delhi/articleshow-aqp4bdg</guid>
            <pubDate>Sat, 12 Sep 2026 19:50:11 +0530</pubDate>
            <description><![CDATA[&lt;p&gt;ಏರ್ ಇಂಡಿಯಾ ಪೈಲೆಟ್ ಲೇ ಓವರ್ ವೇಳೆ ಮೃತಪಟ್ಟ ಘಟನೆ ನಡೆದಿದೆ. ಅಸ್ವಸ್ಥರಾಗಿ ಬಿದ್ದಿದ್ದ ಪೈಲೆಟ್&zwnj;ನ ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಲೇ ಓವರ್ ವೇಳೆ ದಿಢೀರ್ ಆರೋಗ್ಯ ಏರುಪೇರಾಗಿದ್ದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks602zk6t1502rzcgrn88v41,imgname-air-india-fire--1779391626854.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ (ಸೆ.12) &lt;/strong&gt;ಏರ್ ಇಂಡಿಯಾ ಪೈಲೆಟ್ ಲೇ ಓವರ್ ವೇಳೆ ಮೃತಪಟ್ಟ ಘಟನೆ ನಡೆದಿದೆ. ಮುಂಬೈ ಮೂಲಕ 40ರ ಹರೆಯದ ಪೈಲೆಟ್ ಲೇ ಓವರ್ ವೇಳೆ ದೆಹಲಿಯ ವಸಂತ್ ಕುಂಜ್ ಹೊಟೆಲ್&zwnj;ನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದಾರೆ. ತಕ್ಷಣವೇ ದೆಹಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಪೈಲೆಟ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಈ ಘಟನೆಯಿಂದ ಪೈಲೆಟ್&zwnj;ಗಳ ಆರೋಗ್ಯ ಕುರಿತು ಭಾರಿ ಚರ್ಚೆಯಾಗುತ್ತಿದೆ. ಪ್ರಮುಖವಾಗಿ ಲೇಓವರ್ ವೇಳೆ ಪೈಲೆಟ್ ಆರೋಗ್ಯ ಏರುಪೇರಾಗುವ ಕುರಿತು ತೀವ್ರ ಚರ್ಚೆಯಾಗುತ್ತಿದೆ.&lt;/p&gt;&lt;p&gt;40ರ ಹರೆಯದ ಮುಂಬೈ ಮೂಲಕ ಪೈಲೆಟ್ ಸುದೀರ್ಘ ಏರ್ ಇಂಡಿಯಾ ಪ್ರಯಾಣ ಬಳಿ ಲೇಓವರ್ ಸಮಯದಲ್ಲಿದ್ದರು. ಲೇಓವರ್ ವೇಳೆ ವಸಂತ್ ಕುಂಜ್ ಹೊಟೆಲ್&zwnj;ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಆರೋಗ್ಯ ಏರುಪೇರಾಗಿದೆ. ಲೇಓವರ್ ಸಮಯದ ಕಾರಣ ಮತ್ತೆ ಪ್ರಯಾಣ ಮುಂದುವರಿಸಬೇಕಾದ ಕಾರಣ ವಿಶ್ರಾಂತಿಗೆ ಜಾರಿದ್ದರು. ಈ ವೇಳೆ ಆರೋಗ್ಯ ಸಮಸ್ಯೆ ಎದುರಾಗಿದೆ. ಈ ನಡುವೆ ಸಹೋದ್ಯೋಗಿಗಳು ಹೊಟೆಲ್&zwnj;ಗೆ ಬಂದಾಗ ಪೈಲೆಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.&lt;/p&gt;&lt;h2&gt;ದೆಹಲಿ ಪೊಲೀಸರಿಂದ ತನಿಖೆ&lt;/h2&gt;&lt;p&gt;ಘಟನೆ ಕುರಿತು ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೀಗ ವೈದ್ಯಕೀಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಪೈಲೆಟ್ ಸಾವಿಗೆ ನೈಜ ಕಾರಣವೇನು ಅನ್ನೋ ಕುರಿತು ವೈದ್ಯರ ವರದಿಯಲ್ಲಿ ಉಲ್ಲೇಖವಾಗಲಿದೆ. ಪ್ರಮುಖವಾಗಿ ಆರೋಗ್ಯದ ಕಾರಣವೇ ಅಥವಾ ಇತರ ಕಾರಣಗಳಿತ್ತಾ ಅನ್ನೋ ಕುರಿತು ಪೊಲೀಸರು ವೈದ್ಯರ ಜೊತೆ ಚರ್ಚಿಸಿದ್ದಾರೆ.&lt;/p&gt;&lt;p&gt;ಸಾಮಾನ್ಯವಾಗಿ ಸುದೀರ್ಘ ಹಾರಾಟದ ಬಳಿಕ ಲೇಓವರ್ ಸಮಯದಲ್ಲಿ ಪೈಲೆಟ್ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುವ ಕಾರಣ ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸುತ್ತಾರೆ. ಇದೀಗ ಪೈಲೆಟ್ ಸಾವು ಲೇಓವರ್ ವೇಳೆ ಆರೋಗ್ಯದ ಮೇಲಿನ ಕಾಳಜಿ ಹೆಚ್ಚಿಸಿದೆ. ಘಟನೆಗೆ ಏರ್ ಇಂಡಿಯಾ ಆಘಾತ ವ್ಯಕ್ತಪಡಿಸಿದೆ. ಇದೇ ವೇಳೆ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಇಷ್ಟೇ ಅಲ್ಲ ಕುಟುಂಬಕ್ಕೆ ಎಲ್ಲಾ ನೆರವು ನೀಡುವುದಾಗಿ ಏರ್ ಇಂಡಿಯಾ ಹೇಳಿದೆ. ಏರ್ ಇಂಡಿಯಾ ಪೈಲೆಟ್ ಸಾವಿಗೆ ಸಹೋದ್ಯೋಗಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/air-india-pilot-falls-ill-during-layover-dies-despite-immediate-hospitalisation-delhi/articleshow-aqp4bdg"/>
        </item>
        <item>
            <title><![CDATA[BMW ಖರೀದಿ ಖುಷಿಯಲ್ಲಿದ್ದ ಮಾಲೀಕನಿಗೆ ಬಿಗ್ ಶಾಕ್: ಲಕ್ಷ ಲಕ್ಷ ಹಣ ಕೊಡದಿದ್ದರೆ ಜಾಗ ಖಾಲಿ ಮಾಡಲ್ಲ ಅಂದ್ರು!]]></title>
            <link>https://kannada.asianetnews.com/car-news/new-bmw-delivery-turns-awkward-in-hyderabad-as-viral-video-shows-alleged-2-lakh-demand/articleshow-ccug8hh</link>
            <guid isPermaLink="true">https://kannada.asianetnews.com/car-news/new-bmw-delivery-turns-awkward-in-hyderabad-as-viral-video-shows-alleged-2-lakh-demand/articleshow-ccug8hh</guid>
            <pubDate>Sat, 12 Sep 2026 19:45:22 +0530</pubDate>
            <description><![CDATA[&lt;p&gt;ಹೈದರಾಬಾದ್&zwnj;ನಲ್ಲಿ ಹೊಸ BMW ಡೆಲಿವರಿ ವೇಳೆ ಟ್ರಾನ್ಸ್&zwnj;ಜೆಂಡರ್&zwnj;ಗಳ ಗುಂಪೊಂದು ಕಾರನ್ನು ಸುತ್ತುವರಿದು ₹2 ಲಕ್ಷ ಕೇಳಿದೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಸಂಭ್ರಮದ ಸಂದರ್ಭಗಳಲ್ಲಿ ಹಣದ ಬೇಡಿಕೆ, ಕಾನೂನು ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2azgceb1zm7htvdy1jy89f5,imgname-bmw-delivery-video-going-viral-1789222465993.jpg" type="image/jpeg" height="390" width="690"/>
            <content:encoded><![CDATA[&lt;h2&gt;ಹೊಸ BMW ಡೆಲಿವರಿ ವೇಳೆ ₹2 ಲಕ್ಷ ಬೇಡಿಕೆ? ಹೈದರಾಬಾದ್ ವೈರಲ್ ವಿಡಿಯೋ ಸೃಷ್ಟಿಸಿದ ಚರ್ಚೆ!&lt;/h2&gt;&lt;p&gt;ಹೈದರಾಬಾದ್&zwnj;ನಲ್ಲಿ ಹೊಸದಾಗಿ ಡೆಲಿವರಿ ಪಡೆದ BMW ಕಾರಿನ ಸುತ್ತ ಗುಂಪೊಂದು ಸೇರಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಾರು ಮಾಲೀಕರಿಂದ ₹2 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂಬ ಆರೋಪಗಳು ಆನ್&zwnj;ಲೈನ್&zwnj;ನಲ್ಲಿ ಹರಿದಾಡುತ್ತಿದ್ದು, ವಾಹನ ಡೆಲಿವರಿ ಹಾಗೂ ಇತರ ಸಂಭ್ರಮದ ಸಂದರ್ಭಗಳಲ್ಲಿ ಹಣ ಕೇಳುವ ಪದ್ಧತಿ ಕುರಿತು ಚರ್ಚೆ ಶುರುವಾಗಿದೆ. ಆದರೆ, ವೈರಲ್ ವಿಡಿಯೋದಲ್ಲಿರುವ ಆರೋಪಗಳ ಸ್ವತಂತ್ರ ದೃಢೀಕರಣ ಸದ್ಯಕ್ಕೆ ಲಭ್ಯವಿಲ್ಲ.&lt;/p&gt;&lt;h3&gt;BMW ಡೆಲಿವರಿ ವೇಳೆ ಏನಾಯ್ತು?&lt;/h3&gt;&lt;p&gt;ವರದಿಗಳ ಪ್ರಕಾರ, ಹೊಸ BMW ಕಾರಿನ ಡೆಲಿವರಿ ಪಡೆದ ಕೆಲವೇ ಸಮಯದಲ್ಲಿ ಮಾಲೀಕರನ್ನು ಗುಂಪೊಂದು ಸಂಪರ್ಕಿಸಿದೆ. ವೈರಲ್ ಆಗಿರುವ ದೃಶ್ಯದಲ್ಲಿ ಹಲವು ಮಂದಿ ಕಾರಿನ ಸುತ್ತ ನಿಂತಿರುವುದು ಕಾಣಿಸುತ್ತದೆ. ಕಾರು ಶೋರೂಮ್ ಆವರಣದಿಂದ ಹೊರಡುವುದಕ್ಕೂ ಅಡ್ಡಿಯಾಗುವ ರೀತಿಯಲ್ಲಿ ಕೆಲವರು ವಾಹನದ ಬಳಿ ನಿಂತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ ಎಂದು ವರದಿಯಾಗಿದೆ.&lt;/p&gt;&lt;p&gt;ಆನ್&zwnj;ಲೈನ್&zwnj;ನಲ್ಲಿ ಹರಿದಾಡುತ್ತಿರುವ ಹೇಳಿಕೆಗಳ ಪ್ರಕಾರ, ಗುಂಪು ಕಾರು ಮಾಲೀಕರಿಂದ ₹2 ಲಕ್ಷ ಕೇಳಿದೆ ಎನ್ನಲಾಗಿದೆ. ಕೆಲವರು ಕಾರಿನ ಮೇಲೆ ಒರಗಿಕೊಂಡಿರುವುದು ಹಾಗೂ ವಾಹನದಲ್ಲಿದ್ದವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿರುವ ದೃಶ್ಯವೂ ಕ್ಲಿಪ್&zwnj;ನಲ್ಲಿದೆ.&lt;/p&gt;&lt;p&gt;&lt;strong&gt;ಮೊಬೈಲ್ ಕ್ಯಾಮೆರಾದಿಂದ ಸೋಶಿಯಲ್ ಮೀಡಿಯಾವರೆಗೆ&lt;/strong&gt;&lt;/p&gt;&lt;p&gt;ಘಟನೆಯ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್&zwnj;ನಲ್ಲಿ ಚಿತ್ರೀಕರಿಸಿದ್ದು, ಬಳಿಕ ಅದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಹೊಸ ಕಾರು ಖರೀದಿ, ಗೃಹಪ್ರವೇಶ, ಮದುವೆ ಸೇರಿದಂತೆ ಹಲವು ಶುಭ ಸಮಾರಂಭಗಳಲ್ಲಿ ಹಣಕ್ಕಾಗಿ ಬೇಡಿಕೆ ಇಡುವ ಆರೋಪಗಳ ಕುರಿತು ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.&lt;/p&gt;&lt;p&gt;&lt;strong&gt;ಹಳೆಯ ಘಟನೆಗಳೂ ಚರ್ಚೆಗೆ&lt;/strong&gt;&lt;/p&gt;&lt;p&gt;ವೈರಲ್ ವಿಡಿಯೋ ಹಿನ್ನೆಲೆಯಲ್ಲಿ ಹೈದರಾಬಾದ್&zwnj;ನಲ್ಲೇ ಹಿಂದೆ ನಡೆದಿದ್ದ ಎಂದು ಹೇಳಲಾಗುವ ಗೃಹಪ್ರವೇಶದ ಘಟನೆಯನ್ನೂ ಕೆಲವರು ನೆನಪಿಸಿಕೊಂಡಿದ್ದಾರೆ. 2019ರ ಘಟನೆಯಲ್ಲಿ ₹50,000 ಕೇಳಲಾಗಿತ್ತು ಎಂಬ ಸಾಮಾಜಿಕ ಮಾಧ್ಯಮದ ಹೇಳಿಕೆಗಳು ಚರ್ಚೆಗೆ ಬಂದಿವೆ. ಇದೇ ವೇಳೆ, ಪುಣಿಯಲ್ಲಿ ಸಂಗ್ರಹದ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದಿತ್ತೆಂದು ಹೇಳಲಾಗುವ ಘರ್ಷಣೆಯನ್ನೂ ಕೆಲವರು ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಆದರೆ ಇಂತಹ ಸಾಮಾಜಿಕ ಮಾಧ್ಯಮದ ಹೇಳಿಕೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸದೆ ಖಚಿತ ಘಟನೆಗಳೆಂದು ಪರಿಗಣಿಸುವುದು ಸೂಕ್ತವಲ್ಲ.&lt;/p&gt;&lt;p&gt;&lt;strong&gt;ಹಣದ ಬೇಡಿಕೆನಾ, ಸಾಮಾಜಿಕ ಸಮಸ್ಯೆಯಾ?&lt;/strong&gt;&lt;/p&gt;&lt;p&gt;ಈ ಘಟನೆ ಕೇವಲ ವೈರಲ್ ವಿಡಿಯೋ ಚರ್ಚೆಗೆ ಸೀಮಿತವಾಗದೆ, ಹಣಕ್ಕಾಗಿ ಬಲವಂತದ ಬೇಡಿಕೆಗಳ ಆರೋಪಗಳನ್ನು ಕಾನೂನು ಹೇಗೆ ಎದುರಿಸಬೇಕು ಎಂಬ ಪ್ರಶ್ನೆಯನ್ನೂ ಎತ್ತಿದೆ. ಕೆಲ ನೆಟ್ಟಿಗರು ಇಂತಹ ಸಂದರ್ಭಗಳಲ್ಲಿ ಕಠಿಣ ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರೆ, ಮತ್ತೊಂದು ವರ್ಗವು ಟ್ರಾನ್ಸ್&zwnj;ಜೆಂಡರ್ ಸಮುದಾಯ ಎದುರಿಸುವ ಉದ್ಯೋಗ, ಆದಾಯ ಮತ್ತು ಸಾಮಾಜಿಕ ಸ್ವೀಕಾರದ ಸಮಸ್ಯೆಗಳನ್ನೂ ಚರ್ಚೆಯ ಭಾಗವಾಗಿಸಬೇಕು ಎಂದು ಹೇಳಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಹೈದರಾಬಾದ್&zwnj;ನ BMW ಡೆಲಿವರಿ ವಿಡಿಯೋವು ಒಂದು ಘಟನೆಯನ್ನಷ್ಟೇ ತೋರಿಸದೆ, ಸಂಭ್ರಮದ ಸಂದರ್ಭಗಳಲ್ಲಿ ಹಣ ಕೇಳುವ ಪದ್ಧತಿ, ಬಲವಂತದ ಬೇಡಿಕೆಗಳ ಆರೋಪ ಮತ್ತು ಅದರ ಹಿಂದಿನ ಸಾಮಾಜಿಕ ಕಾರಣಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.&lt;/p&gt;&lt;p&gt;BMW owner harassed by transgenders in Hyderabad, demanding 2 lakh rupees after new car was delivered pic.twitter.com/zVFXKdbJh8&lt;/p&gt;&lt;p&gt;&mdash; Mogambo (@Netajinonsense1) September 11, 2026&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/car-news/new-bmw-delivery-turns-awkward-in-hyderabad-as-viral-video-shows-alleged-2-lakh-demand/articleshow-ccug8hh"/>
        </item>
        <item>
            <title><![CDATA['ತಲಾಖ್‌-ಎ-ಹಸನ್‌' ದೇಶದಲ್ಲಿ ಅಮಾನ್ಯವಲ್ಲ, ಅದು ಮಾನ್ಯ ವಿಚ್ಛೇದನ ವಿಧಾನ: ಹೈಕೋರ್ಟ್‌ ಮಹತ್ವದ ಆದೇಶ!]]></title>
            <link>https://kannada.asianetnews.com/relationship/talaq-e-hasan-valid-divorce-practice-in-india-rules-gauhati-high-court-gdp/articleshow-81k9ang</link>
            <guid isPermaLink="true">https://kannada.asianetnews.com/relationship/talaq-e-hasan-valid-divorce-practice-in-india-rules-gauhati-high-court-gdp/articleshow-81k9ang</guid>
            <pubDate>Sat, 12 Sep 2026 19:30:43 +0530</pubDate>
            <description><![CDATA['ತಲಾಖ್&zwnj;-ಎ-ಹಸನ್&zwnj;' ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಮಾನ್ಯವಾದ ವಿಚ್ಛೇದನ ಪದ್ಧತಿಯಾಗಿದ್ದು, ಇದನ್ನು ಭಾರತದಲ್ಲಿ ನಿಷೇಧಿಸಿಲ್ಲ ಎಂದು ಗುವಾಹಟಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ರೀತಿಯ ವಿಚ್ಛೇದನಗಳನ್ನು 'ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆ-2024'ರ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfmcj8281bshnfbe2fvh5bx0,imgname-up-triple-talaq-halala-fir-legal-ambiguity-muslim-women-rights-1769137053768.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗುವಾಹಟಿ:&lt;/strong&gt; 'ತಲಾಖ್&zwnj;-ಎ-ಹಸನ್&zwnj;' (Talaq-e-Hasan) ಎಂಬುದು ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಮಾನ್ಯವಾದ ವಿಚ್ಛೇದನ ಪದ್ಧತಿಯಾಗಿದ್ದು, ಇದನ್ನು ಭಾರತದಲ್ಲಿ ನಿಷೇಧಿಸಿಲ್ಲ ಎಂದು ಗುವಾಹಟಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಸ್ಸಾಂನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್&zwnj; ದೇವ್&zwnj; ಚೌಧುರಿ ಅವರಿದ್ದ ಏಕಸದಸ್ಯ ಪೀಠವು ಈ ಸ್ಪಷ್ಟನೆ ನೀಡಿದೆ.&lt;/p&gt;&lt;p&gt;ಅಲ್ಲದೆ, ಇಂತಹ ವಿಚ್ಛೇದನಗಳನ್ನು ಇತ್ತೀಚೆಗೆ ಜಾರಿಗೆ ತರಲಾದ 'ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಡ್ಡಾಯ ನೋಂದಣಿ ಕಾಯ್ದೆ-2024' ರ ಅಡಿಯಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಿಕೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ&lt;/h2&gt;&lt;p&gt;ಅರ್ಜಿದಾರರು 2016ರಲ್ಲಿ ವಿವಾಹವಾಗಿದ್ದರು. ಆದರೆ ದಂಪತಿ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ಕಾರಣ 2018ರಲ್ಲಿ ಪತ್ನಿ ಮನೆಬಿಟ್ಟು ತೆರಳಿದ್ದರು. ತದನಂತರ ನಡೆದ ರಾಜಿ ಸಂಧಾನದ ಪ್ರಯತ್ನಗಳೂ ವಿಫಲವಾದಾಗ, ಅರ್ಜಿದಾರರು ಸಾಂಪ್ರದಾಯಿಕ ನಿಯಮಾವಳಿಯಂತೆ ಮೂರು ಪ್ರತ್ಯೇಕ ತಿಂಗಳುಗಳಲ್ಲಿ (ಮಾರ್ಚ್ 22, ಏಪ್ರಿಲ್ 26 ಮತ್ತು ಮೇ 27) ತಮ್ಮ ಪತ್ನಿಗೆ 'ತಲಾಖ್' ಉಚ್ಚರಿಸಿದ್ದರು.&lt;/p&gt;&lt;p&gt;ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ನೋಂದಾಯಿಸಲು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಭಾರತದಲ್ಲಿ 'ತಲಾಖ್-ಎ-ಹಸನ್' ಗೆ ಯಾವುದೇ ಕಾನೂನು ತಡೆಯಿಲ್ಲ ಮತ್ತು ತಾವು ಧಾರ್ಮಿಕ ನಿಯಮಾವಳಿಗಳನ್ನು ಪೂರ್ಣಗೊಳಿಸಿರುವುದರಿಂದ ವಿಚ್ಛೇದನವನ್ನು ನೋಂದಾಯಿಸಬೇಕು ಎಂದು ಅರ್ಜಿದಾರರು ವಾದಿಸಿದ್ದರು.&lt;/p&gt;&lt;h2&gt;ಏನಿದು 'ತಲಾಖ್-ಎ-ಹಸನ್'?&lt;/h2&gt;&lt;p&gt;ತಲಾಖ್-ಎ-ಹಸನ್ ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ವಿಚ್ಛೇದನ ನೀಡುವ ಸಾಂಪ್ರದಾಯಿಕ ವಿಧಾನವಾಗಿದೆ. ಈ ಪದ್ಧತಿಯಲ್ಲಿ ಪತಿಯು ಸತತ ಮೂರು ತಿಂಗಳುಗಳ ಕಾಲ, ಪ್ರತಿ ತಿಂಗಳಿಗೆ ಒಂದರಂತೆ 'ತಲಾಖ್' ಪದವನ್ನು ಉಚ್ಚರಿಸಬೇಕಾಗುತ್ತದೆ.&lt;/p&gt;&lt;p&gt;ಈ ಉಚ್ಚಾರಣೆಗಳ ನಡುವಿನ ಕಾಲಾವಕಾಶವು ದಂಪತಿಗೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಮತ್ತು ಸಮನ್ವಯ ಸಾಧಿಸಲು ಸಾಕಷ್ಟು ಅವಕಾಶ ನೀಡುತ್ತದೆ. ಹೀಗಾಗಿ, 2017 ರಲ್ಲಿ ಸುಪ್ರೀಂ ಕೋರ್ಟ್&zwnj;ನಿಂದ ಅಸಂವಿಧಾನಿಕ ಎಂದು ರದ್ದುಗೊಳಿಸಲಾದ 'ತಲಾಖ್-ಎ-ಬಿದ್ದತ್' (ತತ್ಕ್ಷಣದ ತ್ರಿವಳಿ ತಲಾಖ್) ಗೂ ಮತ್ತು 'ತಲಾಖ್-ಎ-ಹಸನ್'ಗೂ ವ್ಯತ್ಯಾಸವಿದೆ.&lt;/p&gt;&lt;h2&gt;ಹೈಕೋರ್ಟ್ ನೀಡಿದ ನಿರ್ದೇಶನಗಳೇನು?&lt;/h2&gt;&lt;p&gt;ರಾಜ್ಯ ಸರ್ಕಾರವು ಈ ಹಿಂದೆ ಅಸ್ತಿತ್ವದಲ್ಲಿದ್ದ 1935ರ ಕಾನೂನು ರದ್ದಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ಈ ಕೆಳಗಿನ ನಿರ್ದೇಶನಗಳನ್ನು ನೀಡಿತು.&lt;/p&gt;&lt;p&gt;1935ರ ಹಳೆಯ ಕಾನೂನು ರದ್ದಾಗಿರುವುದರಿಂದ, ಹಳೆಯ ಪ್ರಾಧಿಕಾರದ ಬಳಿ ನೋಂದಣಿಗೆ ಆದೇಶಿಸಲು ಸಾಧ್ಯವಿಲ್ಲ. ಆದರೆ ಅರ್ಜಿದಾರರು ತಮ್ಮ 'ತಲಾಖ್&zwnj;ನಾಮಾ'ವನ್ನು 'ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆ-2024'ರ ಸೆಕ್ಷನ್ 12 ರ ಹೊಸ ಕಾಯ್ದೆಯಡಿ ಬರ್ಪೇಟಾ ನೋಂದಣಾಧಿಕಾರಿ (Registrar) ಮುಂದೆ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.&lt;/p&gt;&lt;p&gt;ನೋಂದಣಾಧಿಕಾರಿಗಳು ಅರ್ಜಿದಾರರ ಗುರುತನ್ನು ಪರಿಶೀಲಿಸಿದ ನಂತರವೇ ವಿಚ್ಛೇದನ ನೋಂದಣಿ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಒಂದು ವೇಳೆ ರಿಜಿಸ್ಟ್ರಾರ್ ನೋಂದಣಿಯನ್ನು ನಿರಾಕರಿಸಿದರೆ, ಅರ್ಜಿದಾರರಿಗೆ ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕಿರುತ್ತದೆ.&lt;/p&gt;&lt;p&gt;ವಿಚಾರಣೆಗೆ ನೋಟಿಸ್ ಕಳುಹಿಸಿದರೂ ಅರ್ಜಿದಾರರ ಪತ್ನಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಗೈರು ಹಾಜರಿಯಿಂದ ಅವರ ಕಾನೂನುಬದ್ಧ ಹಕ್ಕುಗಳು ಕಸಿದುಕೊಂಡಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಪತ್ನಿಯು ಬಯಸಿದರೆ 'ತಲಾಖ್-ಎ-ಹಸನ್' ವಿಚ್ಛೇದನವನ್ನು ಸೂಕ್ತ ನ್ಯಾಯಾಂಗ ವೇದಿಕೆಯಲ್ಲಿ ಪ್ರಶ್ನಿಸಲು ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿದೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/relationship/talaq-e-hasan-valid-divorce-practice-in-india-rules-gauhati-high-court-gdp/articleshow-81k9ang"/>
        </item>
        <item>
            <title><![CDATA[ಇ-ಕಾಮರ್ಸ್ ಸಂಸ್ಥೆಗಳಿಗೆ ಬಿಗಿಬಂಧನ: ಆನ್‌ಲೈನ್ ಸೇಲ್ ವೇಳೆ 'ಅಸಲಿ ಬೆಲೆ' ತೋರಿಸೋದು ಕಡ್ಡಾಯ!]]></title>
            <link>https://kannada.asianetnews.com/india-news/e-commerce-discount-rules-india-mandatory-mrp-and-previous-price-display-from-january-in-online-shopping-gdp/articleshow-dw5qma0</link>
            <guid isPermaLink="true">https://kannada.asianetnews.com/india-news/e-commerce-discount-rules-india-mandatory-mrp-and-previous-price-display-from-january-in-online-shopping-gdp/articleshow-dw5qma0</guid>
            <pubDate>Sat, 12 Sep 2026 19:07:49 +0530</pubDate>
            <description><![CDATA[ಕೇಂದ್ರ ಸರ್ಕಾರವು ಆನ್&zwnj;ಲೈನ್ ಶಾಪಿಂಗ್&zwnj;ನಲ್ಲಿ ಪಾರದರ್ಶಕತೆ ತರಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇ-ಕಾಮರ್ಸ್ ಪ್ಲಾಟ್&zwnj;ಫಾರ್ಮ್&zwnj;ಗಳು ಇನ್ನು ಮುಂದೆ ನಕಲಿ ರಿಯಾಯಿತಿಗಳನ್ನು ತಡೆಯಲು ಉತ್ಪನ್ನದ ನೈಜ ಬೆಲೆಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಗ್ರಾಹಕರನ್ನು ದಾರಿತಪ್ಪಿಸುವ ಡಾರ್ಕ್ ಪ್ಯಾಟರ್ನ್&zwnj;ಗಳು ಮತ್ತು ಜಾಹೀರಾತುಗಳನ್ನು ನಿಷೇಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kf2v8sp4pdr8gjasma6j1nrv,imgname-e-commerce-1768548492996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಆನ್&zwnj;ಲೈನ್ ಶಾಪಿಂಗ್ ಪ್ರಿಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು ಇ-ಕಾಮರ್ಸ್ ಪ್ಲಾಟ್&zwnj;ಫಾರ್ಮ್&zwnj;ಗಳ ನಕಲಿ ರಿಯಾಯಿತಿ ಮತ್ತು ದಾರಿತಪ್ಪಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮುಂಬರುವ ಜನವರಿಯಿಂದ ಜಾರಿಗೆ ಬರಲಿರುವ ಹೊಸ ನಿಯಮಗಳ ಪ್ರಕಾರ, ಫ್ಲಿಪ್&zwnj;ಕಾರ್ಟ್, ಅಮೆಜಾನ್ ಸೇರಿದಂತೆ ಎಲ್ಲಾ ಇ-ಕಾಮರ್ಸ್ ಸಂಸ್ಥೆಗಳು ಹಬ್ಬದ ಮಾರಾಟ ಅಥವಾ ಯಾವುದೇ ಕೊಡುಗೆಗಳ ಸಮಯದಲ್ಲಿ ಉತ್ಪನ್ನದ &lsquo;ರಿಯಾಯಿತಿ ದರ&rsquo;ದ ಜೊತೆಗೆ ಅದರ ಅಸಲಿ ಬೆಲೆ ಯನ್ನು ಸ್ಪಷ್ಟವಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.&lt;/p&gt;&lt;p&gt;ಗ್ರಾಹಕರ ಹಿತರಕ್ಷಣೆ ಮತ್ತು ಆನ್&zwnj;ಲೈನ್ ವ್ಯಾಪಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು 'ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು'ಗಳಿಗೆ ವ್ಯಾಪಕ ತಿದ್ದುಪಡಿ ತಂದಿದ್ದು, ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.&lt;/p&gt;&lt;h2&gt;'ಹಿಂದಿನ ಬೆಲೆ' ಎಂದರೆ ಏನು?&lt;/h2&gt;&lt;p&gt;ಸಾಮಾನ್ಯವಾಗಿ ಹಬ್ಬದ ಸೇಲ್&zwnj;ಗಳಲ್ಲಿ ರಿಯಾಯಿತಿ ನೀಡುವ ಮುನ್ನ ಉತ್ಪನ್ನಗಳ ಬೆಲೆಯನ್ನು ಕೃತಕವಾಗಿ ಏರಿಸಿ, ನಂತರ ಭಾರಿ ಆಫರ್ ನೀಡಿದಂತೆ ಬಿಂಬಿಸಲಾಗುತ್ತದೆ ಎಂಬ ದೂರುಗಳಿದ್ದವು. ಇದನ್ನು ತಡೆಯಲು &lsquo;ಹಿಂದಿನ ಬೆಲೆ&rsquo; (Previous Price) ಎಂಬ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದೆ. ಆಫರ್ ಘೋಷಿಸುವ ದಿನಕ್ಕಿಂತ ಹಿಂದಿನ 30 ದಿನಗಳ ಅವಧಿಯಲ್ಲಿ ಆ ಉತ್ಪನ್ನಕ್ಕೆ ವಿಧಿಸಲಾಗಿದ್ದ ಅತ್ಯಂತ ಕಡಿಮೆ ಬೆಲೆಯನ್ನು 'ಹಿಂದಿನ ಬೆಲೆ' ಎಂದು ಪರಿಗಣಿಸಲಾಗುತ್ತದೆ. ಪ್ಲಾಟ್&zwnj;ಫಾರ್ಮ್&zwnj;ಗಳು ಕಡ್ಡಾಯವಾಗಿ ಈ ಕಡಿಮೆ ಬೆಲೆ ಮತ್ತು ಪ್ರಸ್ತುತ ನೀಡುತ್ತಿರುವ ರಿಯಾಯಿತಿ ಬೆಲೆ ಎರಡನ್ನೂ ಪ್ರದರ್ಶಿಸಬೇಕು.&lt;/p&gt;&lt;h2&gt;ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಜೊತೆ ಲಿಂಕ್ ಕಡ್ಡಾಯ&lt;/h2&gt;&lt;p&gt;ಇನ್ಮುಂದೆ ಪ್ರತಿಯೊಂದು ಇ-ಕಾಮರ್ಸ್ ಸಂಸ್ಥೆಯು 'ರಾಷ್ಟ್ರೀಯ ಗ್ರಾಹಕ ಸಹಾಯವಾಣಿ'ಯ (NCH) ಒಮ್ಮುಖ ವ್ಯವಸ್ಥೆಯೊಂದಿಗೆ ಸಂಯೋಜನೆಗೊಳ್ಳುವುದು ಕಡ್ಡಾಯವಾಗಿದೆ. 2025 ರ ಒಂದೇ ವರ್ಷದಲ್ಲಿ ಎನ್&zwnj;ಸಿಎಚ್&zwnj;ಗೆ ಬಂದ ಒಟ್ಟು 17.7 ಲಕ್ಷ ದೂರುಗಳಲ್ಲಿ ಶೇಕಡಾ 29 ರಷ್ಟು ದೂರುಗಳು ಇ-ಕಾಮರ್ಸ್ ವಲಯಕ್ಕೆ ಸಂಬಂಧಿಸಿದ್ದಾಗಿದ್ದವು. ಗ್ರಾಹಕರು ಬೆಲೆಯಲ್ಲಿ ವ್ಯತ್ಯಾಸ ಅಥವಾ ಮೋಸ ಕಂಡುಕೊಂಡರೆ ಎನ್&zwnj;ಸಿಎಚ್&zwnj;ಗೆ ದೂರು ನೀಡಬಹುದು. ಗ್ರಾಹಕ ಕುಂದುಕೊರತೆ ಅಧಿಕಾರಿಯು ದಾಖಲಿಸಿದ ದೂರಿನ ಪ್ರತಿಯನ್ನು ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರಿಗೆ ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.&lt;/p&gt;&lt;h2&gt;ಡಾರ್ಕ್ ಪ್ಯಾಟರ್ನ್ ಹಾಗೂ ದಾರಿತಪ್ಪಿಸುವ ಹುಡುಕಾಟಗಳಿಗೆ ನಿಷೇಧ&lt;/h2&gt;&lt;p&gt;ಗ್ರಾಹಕರು ಆನ್&zwnj;ಲೈನ್ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ವಸ್ತುಗಳನ್ನು ಸರ್ಚ್ ಮಾಡುವಾಗ ಅವರನ್ನು ದಾರಿತಪ್ಪಿಸುವ &lsquo;ಡಾರ್ಕ್ ಪ್ಯಾಟರ್ನ್&zwnj;&rsquo; (Dark Patterns) ತಂತ್ರಗಳನ್ನು ಹೊಸ ನಿಯಮಗಳು ಕಟ್ಟುನಿಟ್ಟಾಗಿ ನಿಷೇಧಿಸುತ್ತವೆ.&lt;/p&gt;&lt;p&gt;ಪ್ರಾಯೋಜಿತ ಪಟ್ಟಿಗಳ (Sponsored Listings) ಬಹಿರಂಗಪಡಿಸುವಿಕೆ: ಪ್ರಾಯೋಜಿತ ಅಥವಾ ಪಾವತಿಸಿದ ಜಾಹೀರಾತು ಉತ್ಪನ್ನಗಳನ್ನು ನೈಜ (Organic) ಶೋಧನಾ ಫಲಿತಾಂಶಗಳಿಂದ ಪ್ರತ್ಯೇಕಿಸಲು &quot;ಸ್ಪಷ್ಟ ಮತ್ತು ಎದ್ದುಕಾಣುವ&quot; ಲೇಬಲ್&zwnj;ಗಳನ್ನು ಹಾಕಬೇಕು. ಇದರಿಂದ ಗ್ರಾಹಕರು ಜಾಹೀರಾತು ಮತ್ತು ನೈಜ ಉತ್ಪನ್ನಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಈ ತಿದ್ದುಪಡಿ ನಿಯಮಗಳು ಆನ್&zwnj;ಲೈನ್ ಶಾಪಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿಯಲಿದ್ದು, ಬೆಲೆ ನಿಗದಿಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲಿವೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/e-commerce-discount-rules-india-mandatory-mrp-and-previous-price-display-from-january-in-online-shopping-gdp/articleshow-dw5qma0"/>
        </item>
        <item>
            <title><![CDATA[ದೇಶದ ನಾಲ್ಕು ಪ್ರಸಿದ್ಧ ದೇಗುಲದಲ್ಲಿ ಮಾಂಸಾಹಾರವೇ ಭಕ್ತರಿಗೆ ಪ್ರಸಾದ - ಅವು ಯಾವುದು?]]></title>
            <link>https://kannada.asianetnews.com/india-news/in-four-of-the-country-is-famous-temples-non-vegetarian-food-is-served-as-prasada-to-devotees-which-are-they-gkn/articleshow-wb9aq3w</link>
            <guid isPermaLink="true">https://kannada.asianetnews.com/india-news/in-four-of-the-country-is-famous-temples-non-vegetarian-food-is-served-as-prasada-to-devotees-which-are-they-gkn/articleshow-wb9aq3w</guid>
            <pubDate>Sat, 12 Sep 2026 19:05:27 +0530</pubDate>
            <description><![CDATA[&lt;p&gt;ನಿಮಗೆ ಗೊತ್ತಾ? ದೇಶದಲ್ಲಿರುವ ಕೆಲವು ದೇಗುಲಗಳಲ್ಲಿ ಮಾಂಸಾಹಾರವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಅವುಗಳ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2ax7kt36vvk5m5ecq5f7nr7,imgname-suvendu-adhikari-1789220081475.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಬಂಗಾಳದಲಿ ದುರ್ಗಾ ಪೂಜೆಗೂ ಮುನ್ನ ಆಹಾರ ಮತ್ತು ಧಾರ್ಮಿಕ ಸಂಪ್ರದಾಯಗಳ ಕುರಿತು ಹೊಸ ಚರ್ಚೆ ಭುಗಿಲೆದ್ದಿದೆ. ಇತ್ತೀಚೆಗೆ ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಒಂದು ಹೇಳಿಕೆಯನ್ನ ನೀಡಿದ್ದಾರೆ. ದುರ್ಗಾ ಪೂಜೆಯ ಸಮಯದಲ್ಲಿ ಬಂಗಾಳಿ ಹಿಂದೂಗಳು ಮಾಂಸಾಹಾರದಿಂದ ದೂರವಿರಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇತ್ತ, ಅಲ್ಲಿನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೌಶಿಕಿ ಅಮವಾಸ್ಯೆಯ ಸಂದರ್ಭದಲ್ಲಿ ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಮೀನು ನೈವೇದ್ಯವನ್ನು ಸೇವಿಸಲು ನೆಲದ ಮೇಲೆ ಕುಳಿತರು. ಬೆನ್ನಲ್ಲೇ ಶಾಸ್ತ್ರಿಗಳ ಈ ಹೇಳಿಕೆಯು ಮತ್ತಷ್ಟು ವಿವಾದವನ್ನು ಹೆಚ್ಚಿಸಿತು.&lt;/p&gt;&lt;p&gt;ವಿವಾದ ಏನೇ ಇರಲಿ. ದೇಶದಲ್ಲಿರುವ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ಮಾಂಸಾಹಾರವನ್ನೇ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಅಂಥ ದೇಗುಲಗಳು ಯಾವ್ಯಾವುದು ಅನ್ನೋ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಕಾಳಿಘಾಟ್ ದೇವಾಲಯ&lt;/strong&gt;&lt;/h2&gt;&lt;p&gt;ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಕಾಳಿಘಾಟ್ ಕಾಳಿ ದೇವಾಲಯ ಇದೆ. ಇದು ದೇಶದ ಅತ್ಯಂತ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದು. ಕಾಳಿ ದೇವಿಗೆ ಮೇಕೆಯನ್ನು ಬಲಿ ನೀಡಲಾಗುತ್ತದೆ. ಇದು ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ದೇವಾಲಯದ ಒಂದು ಜಾಗದಲ್ಲಿ ಬಲಿಗೆ ಮೀಸಲಾದ ಸ್ಥಳ ಇದೆ. ಮೇಕೆ ಕಡಿದ ನಂತರ ಮಾಂಸವನ್ನು ಬೇಯಿಸಿ ದೇವಿಗೆ ಅರ್ಪಿಸಲಾಗುತ್ತದೆ. ನಂತರ ಅದನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಭಕ್ತರು ಬಲಿ ನೀಡುವ ಬದಲು ತೆಂಗಿನಕಾಯಿ, ಕುಂಬಳಕಾಯಿ ಅರ್ಪಿಸುತ್ತಾರೆ. ಹೀಗಿದ್ದೂ ಮಾಂಸವನ್ನು ಅರ್ಪಿಸುವ ಸಂಪ್ರದಾಯ ಇಂದಿಗೂ ನಡೆದುಕೊಂಡೇ ಬಂದಿದೆ.&lt;/p&gt;&lt;h2&gt;&lt;strong&gt;ಕಾಮಾಕ್ಯ ದೇವಾಲಯ&lt;/strong&gt;&lt;/h2&gt;&lt;p&gt;ಅಸ್ಸಾಂನ ಗುವಾಹಟಿಯಲ್ಲಿ ಮಾ ಕಾಮಾಕ್ಯ ದೇವಾಲಯ ಇದೆ. ದೇಶದ ಪ್ರಮುಖ ಶಕ್ತಿಪೀಠಗಳಲ್ಲಿ ಇದೂ ಒಂದು. ಈ ದೇಗುಲ ತಾಂತ್ರಿಕ ಪದ್ಧತಿಗಳಿಗೂ ಹೆಸರುವಾಸಿ. ಅಂಬುಬಾಚಿ ಜಾತ್ರೆಯ ಸಮಯದಲ್ಲಿ ಮತ್ತು ನಿಯಮಿತ ಸಂದರ್ಭಗಳಲ್ಲಿ ಮೇಕೆ ಮತ್ತು ಪಾರಿವಾಳಗಳನ್ನ ಬಲಿಯಾಗಿ ನೀಡಲಾಗುತ್ತದೆ. ದುರ್ಗಾ ಪೂಜೆಯ ಸಮಯದಲ್ಲಿ ಕೋಣಗಳು ಮತ್ತು ಬಾತುಕೋಳಿಗಳನ್ನು ಸಹ ಬಲಿ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಬಲಿ ಪಡೆದ ನಂತರ ಮಾಂಸವನ್ನು ದೇವಿಗೆ ನೈವೇದ್ಯವೆಂದು ಅರ್ಪಿಸಲಾಗುತ್ತದೆ. ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ನರಬಲಿಯಂತಹ ಪ್ರಾಚೀನ ಪದ್ಧತಿಗಳನ್ನು ಈಗ ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದರೂ ಪ್ರಾಣಿ ಬಲಿಯ ಸಂಪ್ರದಾಯ ಮುಂದುವರೆದಿದೆ..&lt;/p&gt;&lt;h2&gt;&lt;strong&gt;ತಾರಾಪೀಠ ದೇವಾಲಯ&lt;/strong&gt;&lt;/h2&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಇನ್ನೊಂದು ದೇಗುಲ ಬಿರ್ಭುಮ್ ಜಿಲ್ಲೆಯಲ್ಲಿದೆ. ಅದುವೇ ತಾರಾಪೀಠ ದೇವಾಲಯ. ತಾರಾ ದೇವಿಗೆ ಮಾಂಸಾಹಾರ ಸಮರ್ಪಿತ. ಈ ದೇಗುಲ ತಾಂತ್ರಿಕ ಪದ್ಧತಿಗೆ ಹೆಸರುವಾಸಿ. ಇಲ್ಲಿ ಮೇಕೆಯನ್ನು ಬಲಿ ನೀಡುವ ಸಂಪ್ರದಾಯವಿದೆ. ಬಲಿದಾನದ ನಂತರ ಮಾಂಸವನ್ನು ದೇವಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಕಾಲಕಾಲಕ್ಕೆ ದೇವಾಲಯದ ಆವರಣದಲ್ಲಿ ದೊಡ್ಡ ಪ್ರಮಾಣದ ಆಹಾರ ದೇಣಿಗೆಗಳನ್ನು ಆಯೋಜಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ಕೇರಳದ ಭದ್ರಕಾಳಿ&lt;/strong&gt;&lt;/h2&gt;&lt;p&gt;ಕೇರಳದಲ್ಲಿ ಒಂದು ಭದ್ರಕಾಳಿ ದೇವಸ್ಥಾನವಿದೆ. ಇದನ್ನು ಉತ್ತರ ಕೇರಳದ ಎಲ್ಲಾ ಭದ್ರಕಾಳಿ ದೇವಸ್ಥಾನಗಳ ಮೂಲವೆಂದು ಪರಿಗಣಿಸಲಾಗಿದೆ. ಒಂದು ಕಾಲದಲ್ಲಿ ಪ್ರಾಣಿ ಬಲಿ ಇಲ್ಲಿ ಒಂದು ಸಂಪ್ರದಾಯವಾಗಿತ್ತು. ಕಾನೂನು ಅದನ್ನು ನಿಷೇಧಿಸಿದ ನಂತರ ಈ ದೇವಸ್ಥಾನದಲ್ಲಿ ನಿತ್ಯ ಕೋಳಿಯನ್ನು ಅರ್ಪಿಸಲಾಗುತ್ತದೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/in-four-of-the-country-is-famous-temples-non-vegetarian-food-is-served-as-prasada-to-devotees-which-are-they-gkn/articleshow-wb9aq3w"/>
        </item>
        <item>
            <title><![CDATA[BRICS Summit ಪ್ರಧಾನಿ ಮೋದಿ ಜತೆ ಝಾಕಿರ್ ನಾಯಕ್ ಹಸ್ತಾಂತರ ಚರ್ಚೆ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಸ್ಪಷ್ಟನೆ!]]></title>
            <link>https://kannada.asianetnews.com/india-news/zakir-naik-extradition-discussed-with-pm-modi-confirms-malaysian-pm-anwar-ibrahim-on-brics-summit-gdp/articleshow-vcy0h6x</link>
            <guid isPermaLink="true">https://kannada.asianetnews.com/india-news/zakir-naik-extradition-discussed-with-pm-modi-confirms-malaysian-pm-anwar-ibrahim-on-brics-summit-gdp/articleshow-vcy0h6x</guid>
            <pubDate>Sat, 12 Sep 2026 18:46:10 +0530</pubDate>
            <description><![CDATA[ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ವಿವಾದಿತ ಧರ್ಮೋಪದೇಶಕ ಝಾಕಿರ್ ನಾಯಕ್ ಹಸ್ತಾಂತರದ ಬಗ್ಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ದ್ವಿಪಕ್ಷೀಯ ಬಾಂಧವ್ಯವನ್ನು ಗೌರವಿಸಿ, ಮಲೇಷ್ಯಾದ ಕಾನೂನು ಪ್ರಕ್ರಿಯೆಗಳ ಅಡಿಯಲ್ಲಿ ಈ ವಿಷಯವನ್ನು ಪರಿಗಣಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j9n4pfbz4q930pj9n1c4h1p8,imgname-capture.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಭಾರತದಿಂದ ಪರಾರಿಯಾಗಿ ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ವಿವಾದಾತ್ಮಕ ಇಸ್ಲಾಮಿಕ್ ಧರ್ಮೋಪದೇಶಕ ಝಾಕಿರ್ ನಾಯಕ್&zwnj;ನ ಹಸ್ತಾಂತರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿರುವುದಾಗಿ ದೃಢಪಡಿಸಿದ್ದಾರೆ.&lt;/p&gt;&lt;h2&gt;ದ್ವಿಪಕ್ಷೀಯ ಬದ್ಧತೆ&lt;/h2&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಸಭೆಯ ನಂತರ ಮಾತನಾಡಿದ ಅನ್ವರ್ ಇಬ್ರಾಹಿಂ, ಖಾಸಗಿ ಕಾರ್ಯಕ್ರಮಗಳಲ್ಲಿ ಇಂತಹ ವಿಷಯಗಳ ಕುರಿತು ಮಾತುಕತೆಗಳು ಮುಂದುವರಿಯುತ್ತವೆ. ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಹಿತಾಸಕ್ತಿಗಳನ್ನು ಕಾಯುವ ನಿಟ್ಟಿನಲ್ಲಿ ಈ ವಿಷಯವನ್ನು ಅತ್ಯಂತ ಖಾಸಗಿಯಾಗಿ ಇರಿಸುವುದು ಸೂಕ್ತ. ಆದರೆ, ಉಭಯ ದೇಶಗಳ ನಡುವಿನ ಪರಸ್ಪರ ವಿಶ್ವಾಸ ಮತ್ತು ಮೈತ್ರಿ ಸಂಬಂಧವನ್ನು ಬಲಪಡಿಸಲು ಈ ವಿಷಯವನ್ನು ಆದ್ಯತೆಯ ಪಟ್ಟಿಯಲ್ಲಿ ಇರಿಸಿದ್ದೇವೆ ಎಂದು ಹೇಳಿದ್ದಾರೆ ಎಂದು ಎನ್&zwnj;ಡಿಟಿವಿ ವರದಿ ಮಾಡಿದೆ.&lt;/p&gt;&lt;p&gt;ಆದರೂ ಗಡಿಪಾರು ಪ್ರಕ್ರಿಯೆಯ ಕುರಿತು ಮಾತನಾಡಿ ಭಾರತದ ಹಸ್ತಾಂತರ ಬೇಡಿಕೆಯ ಬಗ್ಗೆ ನಮಗೆ ಅರಿವಿದೆ. ಆದರೆ ಮಲೇಷ್ಯಾದ ಕಾನೂನು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ದ್ವಿಪಕ್ಷೀಯ ಬಾಂಧವ್ಯ ಹಾಗೂ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಗೌರವಿಸಿ ಈ ವಿಷಯದಲ್ಲಿ ಕಟ್ಟುನಿಟ್ಟಿನ ಹಾಗೂ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ&quot; ಎಂದು ಸ್ಪಷ್ಟಪಡಿಸಿದರು.&lt;/p&gt;&lt;h2&gt;ಯಾರು ಈ ಝಾಕಿರ್ ನಾಯಕ್? ಭಾರತಕ್ಕೆ ಏಕೆ ಬೇಕು?&lt;/h2&gt;&lt;p&gt;ಮುಂಬೈ ಮೂಲದ ಇಸ್ಲಾಮಿಕ್ ಟೆಲಿವಿಂಜೆಲಿಸ್ಟ್ ಆಗಿರುವ ಝಾಕಿರ್ ನಾಯಕ್, ತನ್ನ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' (IRF) ಹಾಗೂ ಅಂತರರಾಷ್ಟ್ರೀಯ ಉಪಗ್ರಹ ಚಾನೆಲ್ 'ಪೀಸ್ ಟಿವಿ' ಮೂಲಕ ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾನೆ ಮತ್ತು ಅಕ್ರಮ ಹಣ ವರ್ಗಾವಣೆ ನಡೆಸಿದ್ದಾನೆ ಎಂದು ಭಾರತೀಯ ತನಿಖಾ ಸಂಸ್ಥೆಗಳು ಆರೋಪಿಸಿವೆ.&lt;/p&gt;&lt;p&gt;2016 ರ ಢಾಕಾ ಕೆಫೆ ಭಯೋತ್ಪಾದಕ ದಾಳಿ ಸೇರಿದಂತೆ ಜಾಗತಿಕ ಮಟ್ಟದ ಹಲವು ಉಗ್ರ ಕೃತ್ಯಗಳಿಗೆ ಆತನ ಭಾಷಣಗಳೇ ಪ್ರೇರಣೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಭಾರತೀಯ ಅಧಿಕಾರಿಗಳು ಆತನ ಜಾಲದ ವಿರುದ್ಧ ತನಿಖೆ ತೀವ್ರಗೊಳಿಸಿದರು. ಇದರಿಂದಾಗಿ ನಾಯಕ್ 2016 ರಲ್ಲಿ ಭಾರತದಿಂದ ಪಲಾಯನ ಮಾಡಿ ಮಲೇಷ್ಯಾಕ್ಕೆ ತೆರಳಿದನು. ಅಲ್ಲಿ ಆತನಿಗೆ ಶಾಶ್ವತ ನಿವಾಸಿ ಅರ್ಹತೆ ನೀಡಲಾಯಿತು.&lt;/p&gt;&lt;h2&gt;ಪಾಸ್&zwnj;ಪೋರ್ಟ್ ರದ್ದು ಮತ್ತು ಹಸ್ತಾಂತರಕ್ಕೆ ಮನವಿ:&lt;/h2&gt;&lt;p&gt;2017 ರಲ್ಲಿ ಭಾರತ ಸರ್ಕಾರವು ಝಾಕಿರ್ ನಾಯಕ್&zwnj;ನ ಪಾಸ್&zwnj;ಪೋರ್ಟ್ ರದ್ದುಗೊಳಿಸಿ, ಆತನನ್ನು 'ಘೋಷಿತ ಅಪರಾಧಿ' ಎಂದು ಪ್ರಕಟಿಸಿತು. ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮಲೇಷ್ಯಾ ಸರ್ಕಾರಕ್ಕೆ ಔಪಚಾರಿಕ ವಿನಂತಿಗಳನ್ನು ಸಲ್ಲಿಸಲಾಯಿತು. ಆದರೆ, ಆತನ ವಿರುದ್ಧ ದೃಢ ಹಾಗೂ ವಿಶ್ವಾಸಾರ್ಹ ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ಮಾತ್ರವೇ ಸ್ಥಾಪಿತ ಕಾನೂನು ಮಾರ್ಗಗಳ ಮೂಲಕ ಸಹಕರಿಸುವುದಾಗಿ ಮಲೇಷ್ಯಾ ವಾದಿಸುತ್ತಾ ಬಂದಿದೆ. ಸಾಕಷ್ಟು ಆಧಾರಗಳ ಕೊರತೆಯನ್ನು ಉಲ್ಲೇಖಿಸಿ ಇಂಟರ್&zwnj;ಪೋಲ್ ಸಹ ಹಿಂದೆ ಆತನ ವಿರುದ್ಧ 'ರೆಡ್ ಕಾರ್ನರ್ ನೋಟಿಸ್' ಹೊರಡಿಸಲು ನಿರಾಕರಿಸಿತ್ತು.&lt;/p&gt;&lt;h2&gt;ಮಲೇಷ್ಯಾದಲ್ಲೂ ವಿವಾದ ಸೃಷ್ಟಿಸಿದ್ದ ಧರ್ಮೋಪದೇಶಕ&lt;/h2&gt;&lt;p&gt;ಝಾಕಿರ್ ನಾಯಕ್ ತನ್ನ ಪ್ರಚೋದನಕಾರಿ ಹೇಳಿಕೆಗಳಿಂದ ಮಲೇಷ್ಯಾ ಸರ್ಕಾರಕ್ಕೂ ಮುಜುಗರ ಉಂಟುಮಾಡಿದ್ದಾನೆ. 2019 ರಲ್ಲಿ ಮಲೇಷ್ಯಾದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಚೀನಿ ಹಾಗೂ ಭಾರತೀಯ ಮೂಲದ ನಾಗರಿಕರ ವಿರುದ್ಧ ಜನಾಂಗೀಯವಾಗಿ ಸೂಕ್ಷ್ಮ ಹೇಳಿಕೆಗಳನ್ನು ನೀಡಿ ತೀವ್ರ ಸಾರ್ವಜನಿಕ ಮತ್ತು ರಾಜಕೀಯ ಆಕ್ರೋಶಕ್ಕೆ ಗುರಿಯಾಗಿದ್ದನು. ತದನಂತರ ಆತ ತನ್ನ ಹೇಳಿಕೆಗಳಿಗಾಗಿ ಮಲೇಷ್ಯಾ ಜನತೆಯಲ್ಲಿ ಕ್ಷಮೆಯಾಚಿಸಿದ್ದರೂ, ಮಲೇಷ್ಯಾ ಅಧಿಕಾರಿಗಳು ಆತನಿಗೆ ಸಾರ್ವಜನಿಕ ಭಾಷಣ ಮಾಡದಂತೆ ಹಲವು ರಾಜ್ಯಗಳಲ್ಲಿ ತಾತ್ಕಾಲಿಕ ನಿಷೇಧ ಹೇರಿದ್ದರು.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/zakir-naik-extradition-discussed-with-pm-modi-confirms-malaysian-pm-anwar-ibrahim-on-brics-summit-gdp/articleshow-vcy0h6x"/>
        </item>
        <item>
            <title><![CDATA[ಪದವಿ ಇಲ್ಲ, ಪ್ರಯೋಗಾಲಯವೂ ಇಲ್ಲ; 23 ಸಸ್ಯಗಳ ಪತ್ತೆ ಮಾಡಿದ ‘ಬರಿಗಾಲಿನ ವಿಜ್ಞಾನಿ’!]]></title>
            <link>https://kannada.asianetnews.com/science/he-left-school-early-then-discovered-23-plants-meet-keralas-barefoot-scientist-salim-pichan/articleshow-c3n8pwn</link>
            <guid isPermaLink="true">https://kannada.asianetnews.com/science/he-left-school-early-then-discovered-23-plants-meet-keralas-barefoot-scientist-salim-pichan/articleshow-c3n8pwn</guid>
            <pubDate>Sat, 12 Sep 2026 16:12:29 +0530</pubDate>
            <description><![CDATA[&lt;p&gt;ಶಾಲಾ ಶಿಕ್ಷಣವನ್ನು ಬೇಗನೇ ಮುಗಿಸಿದ ಕೇರಳದ ಪಿಚನ್ ಎಂ. ಸಲೀಂ ಕಾಡನ್ನೇ ವಿಶ್ವವಿದ್ಯಾಲಯ ಮಾಡಿಕೊಂಡು ಸಸ್ಯಶಾಸ್ತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. 2,000ಕ್ಕೂ ಹೆಚ್ಚು ಸಸ್ಯಗಳ ಜ್ಞಾನ ಹೊಂದಿರುವ ಅವರು 23 ಹೊಸ ಸಸ್ಯಗಳ ಪತ್ತೆಗೆ ಕೊಡುಗೆ ನೀಡಿದ್ದಾರೆ. ಎರಡು ಸಸ್ಯಗಳಿಗೆ ಅವರ ಹೆಸರಿಡಲಾಗಿದ್ದು, ರಾಷ್ಟ್ರಪತಿಗಳಿಂದಲೂ ಗೌರವ ಪಡೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2a5hk6dbszdmbeg5y76z6jq,imgname-pichan-m-salim--a-barefoot-scientist-from-kerala--1--1789195242701.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಶಾಲೆ ಬಿಟ್ಟರೂ ಕಾಡನ್ನೇ ವಿಶ್ವವಿದ್ಯಾಲಯ ಮಾಡಿಕೊಂಡ &lsquo;ಬೇರ್&zwnj;ಫೂಟ್ ಸೈಂಟಿಸ್ಟ್&rsquo;!&lt;/strong&gt;&lt;/h2&gt;&lt;p&gt;ಕೇರಳದ ವಯನಾಡಿನ ಪಿಚನ್ ಎಂ. ಸಲೀಂ ಅವರ ಕಥೆ, ಪದವಿ ಅಥವಾ ದೊಡ್ಡ ಶೈಕ್ಷಣಿಕ ಅರ್ಹತೆಯಿಲ್ಲದಿದ್ದರೂ ಜ್ಞಾನ ಮತ್ತು ಕ್ಷೇತ್ರಾನುಭವದಿಂದ ವಿಜ್ಞಾನ ಲೋಕದಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ. ಶಾಲಾ ಶಿಕ್ಷಣವನ್ನು ಬೇಗನೇ ಮುಗಿಸಿದ ಸಲೀಂ, ಪಶ್ಚಿಮ ಘಟ್ಟಗಳ ಕಾಡುಗಳನ್ನೇ ತಮ್ಮ ವಿಶ್ವವಿದ್ಯಾಲಯವನ್ನಾಗಿ ಮಾಡಿಕೊಂಡು ಸಸ್ಯಶಾಸ್ತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;2,000ಕ್ಕೂ ಹೆಚ್ಚು ಸಸ್ಯಗಳ ವೈಜ್ಞಾನಿಕ ಹೆಸರುಗಳ ಜ್ಞಾನ&lt;/strong&gt;&lt;/h3&gt;&lt;p&gt;1997ರಲ್ಲಿ ವಯನಾಡಿನಲ್ಲಿ ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (MSSRF) ಆಯೋಜಿಸಿದ್ದ ಪ್ಯಾರಾಟ್ಯಾಕ್ಸಾನಮಿ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾದ 20 ಸ್ಥಳೀಯ ಯುವಕರಲ್ಲಿ ಸಲೀಂ ಕೂಡ ಒಬ್ಬರು. ಬಳಿಕ MSSRF ಜೊತೆ ಕೆಲಸ ಆರಂಭಿಸಿದ ಅವರು ಕೃಷಿ ಜೀವವೈವಿಧ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡರು.&lt;/p&gt;&lt;p&gt;ವರ್ಷಗಳ ಕಾಲ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಸಂಚರಿಸಿ ಸಸ್ಯಗಳನ್ನು ಗುರುತಿಸುವ ಮೂಲಕ ಸಲೀಂ 2,000ಕ್ಕೂ ಹೆಚ್ಚು ಸಸ್ಯಗಳ ವೈಜ್ಞಾನಿಕ ಹೆಸರುಗಳನ್ನು ಕಲಿತಿದ್ದಾರೆ. ಸಂಶೋಧಕರಿಗೆ ಸಸ್ಯಗಳು ಹಾಗೂ ಅವುಗಳ ಆವಾಸಸ್ಥಾನಗಳನ್ನು ಗುರುತಿಸಲು ಸಹಾಯ ಮಾಡುತ್ತಾ, 23 ಹೊಸ ಸಸ್ಯ ಪ್ರಭೇದಗಳ ಪತ್ತೆ, 10ಕ್ಕೂ ಹೆಚ್ಚು ಹೊಸ ಭೌಗೋಳಿಕ ದಾಖಲೆಗಳು ಹಾಗೂ 53ಕ್ಕೂ ಹೆಚ್ಚು ವೈಜ್ಞಾನಿಕ ಪ್ರಕಟಣೆಗಳಿಗೆ ಅವರ ಕೆಲಸ ಕೊಡುಗೆ ನೀಡಿದೆ.&lt;/p&gt;&lt;h3&gt;&lt;strong&gt;175 ವರ್ಷಗಳ ಬಳಿಕ ಅಪರೂಪದ ಸಸ್ಯದ ಮರುಪತ್ತೆ&lt;/strong&gt;&lt;/h3&gt;&lt;p&gt;ಸಲೀಂ ಅವರ ಗಮನಾರ್ಹ ಸಾಧನೆಗಳಲ್ಲಿ 175 ವರ್ಷಕ್ಕೂ ಹೆಚ್ಚು ಕಾಲ ಕಾಣೆಯಾಗಿದ್ದ Campbellia aurantiaca ಸಸ್ಯದ ಮರುಪತ್ತೆಯೂ ಒಂದು. ವಯನಾಡಿನ ತೊಲ್ಲಾಯಿರಂ ಪ್ರದೇಶದಲ್ಲಿ ಸಂಶೋಧಕರ ತಂಡದೊಂದಿಗೆ ಅವರು ಈ ಅಪರೂಪದ ಪರಾವಲಂಬಿ ಹೂವಿನ ಸಸ್ಯವನ್ನು ಪತ್ತೆಹಚ್ಚಿದರು. ಈ ಸಂಶೋಧನೆಯ ಫಲಿತಾಂಶ 2025ರಲ್ಲಿ Kew Bulletinನಲ್ಲಿ ಪ್ರಕಟವಾಯಿತು.&lt;/p&gt;&lt;h3&gt;&lt;strong&gt;ಸಲೀಂ ಹೆಸರನ್ನೇ ಪಡೆದ ಎರಡು ಸಸ್ಯಗಳು!&lt;/strong&gt;&lt;/h3&gt;&lt;p&gt;ಸಸ್ಯಶಾಸ್ತ್ರ ಕ್ಷೇತ್ರಕ್ಕೆ ಅವರ ಕೊಡುಗೆ ಎಷ್ಟರ ಮಟ್ಟಿಗೆ ಗುರುತಿಸಲ್ಪಟ್ಟಿದೆ ಎಂಬುದಕ್ಕೆ ಎರಡು ಅಪರೂಪದ ಸಸ್ಯಗಳೇ ಸಾಕ್ಷಿ. Seidenfadeniella salimii ಹಾಗೂ Impatiens salimii ಎಂಬ ಸಸ್ಯಗಳಿಗೆ ಸಲೀಂ ಅವರ ಹೆಸರನ್ನೇ ಇಡಲಾಗಿದೆ. ಇದು ಅವರ ಕ್ಷೇತ್ರಜ್ಞಾನಕ್ಕೆ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮುದಾಯ ನೀಡಿದ ಗೌರವವಾಗಿದೆ.&lt;/p&gt;&lt;h3&gt;&lt;strong&gt;ರಾಷ್ಟ್ರಪತಿಗಳಿಂದಲೂ ಗೌರವ&lt;/strong&gt;&lt;/h3&gt;&lt;p&gt;ಸಸ್ಯ ಜನಿತ ಸಂಪತ್ತಿನ ಸಂರಕ್ಷಣೆಗೆ ನೀಡಿದ ಕೊಡುಗೆಗಾಗಿ ಸಲೀಂ ಅವರಿಗೆ 2020&ndash;21ರ Plant Genome Saviour Award ದೊರೆತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023ರಲ್ಲಿ ಈ ಗೌರವವನ್ನು ಪ್ರದಾನ ಮಾಡಿದರು. ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿ ಪ್ರಶಸ್ತಿ ಹಾಗೂ ವನಮಿತ್ರ ಪ್ರಶಸ್ತಿಯೂ ಅವರಿಗೆ ಲಭಿಸಿದೆ.&lt;/p&gt;&lt;h3&gt;&lt;strong&gt;ಮನೆಯೇ ಜೀವಂತ &lsquo;ಜೀನ್ ಬ್ಯಾಂಕ್&rsquo;&lt;/strong&gt;&lt;/h3&gt;&lt;p&gt;ಸಲೀಂ ಅವರ ಸಂರಕ್ಷಣಾ ಕಾರ್ಯ ಕಾಡಿನಲ್ಲಷ್ಟೇ ಸೀಮಿತವಾಗಿಲ್ಲ. ವಯನಾಡಿನ ಅಥಿಮೂಲದಲ್ಲಿರುವ ತಮ್ಮ ಮನೆಯಲ್ಲೇ ಅವರು ಇನ್-ಸಿಟು ಮತ್ತು ಎಕ್ಸ್-ಸಿಟು ಜೈವ ಸಂರಕ್ಷಣಾ ಕೇಂದ್ರವನ್ನು ನಿರ್ಮಿಸಿದ್ದಾರೆ. ಇಲ್ಲಿ 614 ಸಾಂಪ್ರದಾಯಿಕ ಹಾಗೂ ಕಾಡು ಸಸ್ಯ ಪ್ರಭೇದಗಳು ಮತ್ತು ವೈವಿಧ್ಯಗಳನ್ನು ಸಂರಕ್ಷಿಸಲಾಗುತ್ತಿದೆ.&lt;/p&gt;&lt;p&gt;ಪದವಿ ಇಲ್ಲದಿದ್ದರೂ ಕ್ಷೇತ್ರಜ್ಞಾನ, ನಿರಂತರ ಅಧ್ಯಯನ ಮತ್ತು ಪ್ರಕೃತಿಯ ಮೇಲಿನ ಅಪಾರ ಆಸಕ್ತಿಯಿಂದ ಸಲೀಂ ಇಂದು &lsquo;ಬೇರ್&zwnj;ಫೂಟ್ ಸೈಂಟಿಸ್ಟ್&rsquo; ಎಂದೇ ಗುರುತಿಸಿಕೊಂಡಿದ್ದಾರೆ. ಅವರ ಬದುಕು, ವಿಜ್ಞಾನ ಕಲಿಯಲು ತರಗತಿಯ ನಾಲ್ಕು ಗೋಡೆಗಳೇ ಬೇಕೆಂದಿಲ್ಲ; ಪ್ರಕೃತಿಯೂ ಒಂದು ದೊಡ್ಡ ಪಾಠಶಾಲೆಯಾಗಬಹುದು ಎಂಬುದನ್ನು ತೋರಿಸುತ್ತದೆ.&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/science/he-left-school-early-then-discovered-23-plants-meet-keralas-barefoot-scientist-salim-pichan/articleshow-c3n8pwn"/>
        </item>
        <item>
            <title><![CDATA[Instagram ರೀಲ್ಸ್, ನೆಟ್ಟಿಗರ ಕಾಮೆಂಟ್ಸ್; ಗಂಡನಿಗೇ ಡಿವೋರ್ಸ್ ಕೊಟ್ಟ ಮಹಿಳೆ! ನಿಜಕ್ಕೂ ಅಲ್ಲೇನಾಯ್ತು?]]></title>
            <link>https://kannada.asianetnews.com/india-news/he-doesnt-deserve-me-instagram-comments-change-womans-view-of-her-husband/articleshow-snb2g07</link>
            <guid isPermaLink="true">https://kannada.asianetnews.com/india-news/he-doesnt-deserve-me-instagram-comments-change-womans-view-of-her-husband/articleshow-snb2g07</guid>
            <pubDate>Sat, 12 Sep 2026 13:29:04 +0530</pubDate>
            <description><![CDATA[&lt;p&gt;ಭೋಪಾಲ್&zwnj;ನಲ್ಲಿ 12 ವರ್ಷಗಳ ದಾಂಪತ್ಯ ಸಾಮಾಜಿಕ ಮಾಧ್ಯಮದ ಹೊಗಳಿಕೆಯಿಂದ ವಿಚ್ಛೇದನದ ಅಂಚಿಗೆ ತಲುಪಿರುವುದಾಗಿ ವರದಿಯಾಗಿದೆ. ಇನ್&zwnj;ಸ್ಟಾಗ್ರಾಂ ರೀಲ್ಸ್&zwnj;ಗೆ ಬಂದ ಮೆಚ್ಚುಗೆಯ ಬಳಿಕ ಪತ್ನಿ ಪತಿ ತನಗೆ ಅರ್ಹರಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ ಎನ್ನಲಾಗಿದೆ. ಬಳಿಕ ಜಗಳ, ಹೊಸ ಮನೆ ಬೇಡಿಕೆ, ಜೀವನಾಂಶ, ವಿಚ್ಛೇದನ ಹಾಗೂ ಕೌಟುಂಬಿಕ ಹಿಂಸಾಚಾರದ ಆರೋಪಗಳೊಂದಿಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m29wqk4e6tcqzrpeqg3wg1db,imgname-instagram-compliments-trigger-marital-trouble-after-12-years-of-marriage--1--1789186002062.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರೀಲ್ಸ್, ಫಾಲೋವರ್ಸ್, ಹೊಗಳಿಕೆ... ಕೊನೆಗೆ ವಿಚ್ಛೇದನದವರೆಗೆ ಹೋದ ದಾಂಪತ್ಯ!&lt;/strong&gt;&lt;/p&gt;&lt;p&gt;ಮಧ್ಯಪ್ರದೇಶದ ಭೋಪಾಲ್&zwnj;ನಲ್ಲಿ ನಡೆದಿರುವ ವಿಚಿತ್ರ ದಾಂಪತ್ಯ ವಿವಾದವೊಂದು ಸಾಮಾಜಿಕ ಮಾಧ್ಯಮದ ಪ್ರಭಾವದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ವರದಿಗಳ ಪ್ರಕಾರ, 12 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಯ ವೈವಾಹಿಕ ಜೀವನದಲ್ಲಿ ಪತ್ನಿಯ ಸೋಷಿಯಲ್ ಮೀಡಿಯಾ ಚಟುವಟಿಕೆಗಳ ಬಳಿಕ ಬಿರುಕು ಮೂಡಿದೆ. ಪ್ರಕರಣ ಇದೀಗ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದೆ.&lt;/p&gt;&lt;p&gt;&lt;strong&gt;12 ವರ್ಷ ಚೆನ್ನಾಗಿದ್ದ ಸಂಸಾರದಲ್ಲಿ ಬಿರುಗಾಳಿ!&lt;/strong&gt;&lt;/p&gt;&lt;p&gt;ಭೋಪಾಲ್ ಮೂಲದ ಮಹಿಳೆ 2014ರಲ್ಲಿ ಇಂದೋರ್&zwnj;ನ ಜಂಟಿ ಕುಟುಂಬದ ವ್ಯಕ್ತಿಯನ್ನು ವಿವಾಹವಾಗಿದ್ದರು. ಮದುವೆಯ ಬಳಿಕ ಇಂದೋರ್&zwnj;ನಲ್ಲಿ ವಾಸವಾಗಿದ್ದ ದಂಪತಿಗೆ 11 ವರ್ಷದ ಮಗಳು ಹಾಗೂ 7 ವರ್ಷದ ಮಗನಿದ್ದಾರೆ.&lt;/p&gt;&lt;p&gt;ಆರಂಭದಲ್ಲಿ ಕುಟುಂಬ ಜೀವನ ಸಾಮಾನ್ಯವಾಗಿಯೇ ಸಾಗುತ್ತಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಮಹಿಳೆ ಇನ್&zwnj;ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಆಸಕ್ತಿ ಬೆಳೆಸಿಕೊಂಡರು. ಅವರ ವಿಡಿಯೋಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯತೊಡಗಿತು. ಫಾಲೋವರ್ಸ್ ಸಂಖ್ಯೆ ಹೆಚ್ಚಿದಂತೆ, ಅವರ ನೋಟ ಮತ್ತು ವ್ಯಕ್ತಿತ್ವವನ್ನು ಹೊಗಳುವ ಕಾಮೆಂಟ್&zwnj;ಗಳೂ ಹೆಚ್ಚಾದವು.&lt;/p&gt;&lt;p&gt;&lt;strong&gt;ಸೋಷಿಯಲ್ ಮೀಡಿಯಾ ಕಾಮೆಂಟ್&zwnj;ಗಳಿಂದ ಮನಸ್ಥಿತಿಯಲ್ಲಿ ಬದಲಾವಣೆ?&lt;/strong&gt;&lt;/p&gt;&lt;p&gt;ಕುಟುಂಬ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಹೆ ನೀಡುತ್ತಿರುವ ಶೈಲ್ ಅವಸ್ಥಿ ಅವರ ಪ್ರಕಾರ, ಈ ನಿರಂತರ ಹೊಗಳಿಕೆ ಮಹಿಳೆಯ ಮನೋಭಾವದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ತಮ್ಮ ಪತಿ ತಮ್ಮ ಮಟ್ಟಕ್ಕೆ ಹೊಂದಿಕೆಯಾಗುವುದಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿದೆ ಎಂದು ಹೇಳಲಾಗಿದೆ.&lt;/p&gt;&lt;p&gt;ಇದಾದ ಬಳಿಕ ದಂಪತಿಯ ನಡುವೆ ಜಗಳಗಳು ಹೆಚ್ಚಾದವು. ಪತ್ನಿ ಹೊಸ ಮನೆ ಖರೀದಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರೆ, ಪತಿ ಅದನ್ನು ಒಪ್ಪಲಿಲ್ಲ ಎನ್ನಲಾಗಿದೆ. ನಂತರ ಮಹಿಳೆ ಮಕ್ಕಳೊಂದಿಗೆ ಭೋಪಾಲ್&zwnj;ನಲ್ಲಿರುವ ತವರು ಮನೆಗೆ ತೆರಳಿದರು.&lt;/p&gt;&lt;p&gt;&lt;strong&gt;ಜೀವನಾಂಶ, ವಿಚ್ಛೇದನ ಮತ್ತು ಕಿರುಕುಳದ ಆರೋಪ..!&lt;/strong&gt;&lt;/p&gt;&lt;p&gt;ಮಹಿಳೆ ತನ್ನ ಮತ್ತು ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶ ಕೋರಿ ಭೋಪಾಲ್ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಜೊತೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕಿರುಕುಳ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪಗಳನ್ನೂ ಮುಂದಿಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಪತಿಯ ವಾದವೇನು?&lt;/strong&gt;&lt;/p&gt;&lt;p&gt;ಕುಟುಂಬ ನ್ಯಾಯಾಲಯದ ಸಲಹೆಗಾರರ ಪ್ರಕಾರ, ಪತಿ ತಮ್ಮ ಪತ್ನಿಯ ಶಿಕ್ಷಣಕ್ಕೆ ನೆರವಾಗಿದ್ದಾಗಿ ತಿಳಿಸಿದ್ದಾರೆ. ಮದುವೆಯ ಸಮಯದಲ್ಲಿ ಅವರು ಶಾಲಾ ವಿದ್ಯಾರ್ಥಿನಿಯಾಗಿದ್ದರು ಎಂದು ಪತಿ ಹೇಳಿಕೊಂಡಿದ್ದು, ಆರ್ಥಿಕವಾಗಿ ಸ್ವಾವಲಂಬಿಯಾಗಲು ಸುಮಾರು ₹4 ಲಕ್ಷವನ್ನು ಬ್ಯೂಟಿ ಪಾರ್ಲರ್ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ತಮ್ಮ ರೂಪ-ರೇಖೆಯ ಕಾರಣದಿಂದ ಪತ್ನಿ ತನ್ನನ್ನು ತಿರಸ್ಕರಿಸುತ್ತಿದ್ದಾರೆ ಎಂಬ ಭಾವನೆ ಪತಿಯಲ್ಲಿ ಮೂಡಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಮಕ್ಕಳ ಭವಿಷ್ಯವೂ ಪ್ರಶ್ನೆಯಲ್ಲಿದೆ&lt;/strong&gt;&lt;/p&gt;&lt;p&gt;ಪ್ರಸ್ತುತ ಮಹಿಳೆ ವಿಚ್ಛೇದನ ಪಡೆಯುವುದರಲ್ಲೇ ದೃಢವಾಗಿದ್ದಾರೆ ಎಂದು ಸಲಹೆಗಾರರು ತಿಳಿಸಿದ್ದಾರೆ. ವಿಚ್ಛೇದನವಾದರೆ ಇಬ್ಬರೂ ಮಕ್ಕಳಲ್ಲಿ ತಲಾ ಒಬ್ಬರ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ.&lt;/p&gt;&lt;p&gt;ಈ ಪ್ರಕರಣವು ಸಾಮಾಜಿಕ ಮಾಧ್ಯಮದ ಹೊಗಳಿಕೆ ಮಾತ್ರವೇ ದಾಂಪತ್ಯ ಬಿಕ್ಕಟ್ಟಿಗೆ ಕಾರಣ ಎಂದು ಸಾಬೀತುಪಡಿಸುವುದಿಲ್ಲ. ಆದರೆ ಆನ್&zwnj;ಲೈನ್&zwnj;ನಲ್ಲಿ ಸಿಗುವ ನಿರಂತರ ಮೆಚ್ಚುಗೆ, ವೈಯಕ್ತಿಕ ನಿರೀಕ್ಷೆಗಳು ಮತ್ತು ನೈಜ ಸಂಬಂಧಗಳ ನಡುವಿನ ವ್ಯತ್ಯಾಸವನ್ನು ಹೇಗೆ ಗ್ರಹಿಸಲಾಗುತ್ತದೆ ಎಂಬುದರ ಕುರಿತು ಚರ್ಚೆಗೆ ಕಾರಣವಾಗಿದೆ. ಅಂತಿಮವಾಗಿ, ಈ ಪ್ರಕರಣದ ನಿಜವಾದ ಕಾನೂನು ಪರಿಣಾಮಗಳನ್ನು ನ್ಯಾಯಾಲಯದ ತೀರ್ಪೇ ನಿರ್ಧರಿಸಲಿದೆ.&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/he-doesnt-deserve-me-instagram-comments-change-womans-view-of-her-husband/articleshow-snb2g07"/>
        </item>
        <item>
            <title><![CDATA[ನದಿ ಸ್ವಚ್ಛಗೊಳಿಸಿ ಫೇಮಸ್ ಆದ ಬಿಟ್ಟು; ಈಗ ದೇಶಕ್ಕೆ ಕೊಟ್ಟಿದ್ದಾರೆ ಬಿಗ್ ಚಾಲೆಂಜ್!]]></title>
            <link>https://kannada.asianetnews.com/viral/from-cleaning-ajnar-river-to-cleaning-india-bittu-tabahi-reveals-his-next-big-plan/articleshow-g9g4pwt</link>
            <guid isPermaLink="true">https://kannada.asianetnews.com/viral/from-cleaning-ajnar-river-to-cleaning-india-bittu-tabahi-reveals-his-next-big-plan/articleshow-g9g4pwt</guid>
            <pubDate>Sat, 12 Sep 2026 14:16:35 +0530</pubDate>
            <description><![CDATA[&lt;p&gt;ಮಧ್ಯಪ್ರದೇಶದ ಅಜ್ನರ್ ನದಿಯನ್ನು ಸ್ವಚ್ಛಗೊಳಿಸಿ ವೈರಲ್ ಆಗಿರುವ ಬಿಟ್ಟು ತಬಾಹಿ ಇದೀಗ ತಮ್ಮ ಅಭಿಯಾನವನ್ನು ದೇಶದಾದ್ಯಂತ ವಿಸ್ತರಿಸಲು ಮುಂದಾಗಿದ್ದಾರೆ. ಮೊದಲು ಯಾವ ರಾಜ್ಯಕ್ಕೆ ಭೇಟಿ ನೀಡಬೇಕು ಎಂದು ಜನರನ್ನೇ ಕೇಳಿದ್ದಾರೆ. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ The Ocean Cleanup ಸಂಸ್ಥೆಯ CEO ಬೋಯನ್ ಸ್ಲಾಟ್, ಅವರಿಗೆ ಕೆಲಸದ ಆಹ್ವಾನವನ್ನೂ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2a8qed02zy2a4p1nk88s1gq,imgname-bittu-tabahi-s-next-move---from-viral-river-cleaner-to-national-environmental-crusader-1789198580127.jpg" type="image/jpeg" height="390" width="690"/>
            <content:encoded><![CDATA[&lt;h2&gt;ಅಜ್ನರ್ ನದಿಯಿಂದ ದೇಶದ ಮೂಲೆಮೂಲೆಗೂ: ಬಿಟ್ಟು ತಬಾಹಿ ಹೊಸ ಪ್ಲಾನ್!&lt;/h2&gt;&lt;p&gt;ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಬಿಯೋರಾದ ಅಜ್ನರ್ ನದಿಯಲ್ಲಿ ತುಂಬಿದ್ದ ಕಸ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಗಮನ ಸೆಳೆದಿರುವ ಸುರೇಂದ್ರ ಸಿಂಗ್ ಚೌಧರಿ, &lsquo;ಬಿಟ್ಟು ತಬಾಹಿ&rsquo; ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿದ್ದಾರೆ. ತಮ್ಮ ಪ್ರದೇಶದ ಸ್ವಚ್ಛತೆಗಾಗಿ ಆರಂಭಿಸಿದ ಅವರ ವೈಯಕ್ತಿಕ ಪ್ರಯತ್ನ ಇದೀಗ ದೊಡ್ಡ ಅಭಿಯಾನದ ರೂಪ ಪಡೆಯುವ ಸೂಚನೆ ನೀಡಿದೆ.&lt;/p&gt;&lt;p&gt;&lt;strong&gt;&ldquo;ಮಧ್ಯಪ್ರದೇಶದಲ್ಲೇ ನಿಲ್ಲಬಾರದು&rdquo; &ndash; ಬಿಟ್ಟು ತಬಾಹಿ&lt;/strong&gt;&lt;/p&gt;&lt;p&gt;ಅಜ್ನರ್ ನದಿಯ ಸ್ವಚ್ಛತಾ ಕಾರ್ಯದ ಬಳಿಕ ಬಿಟ್ಟು ತಬಾಹಿ ಇದೀಗ ತಮ್ಮ ಅಭಿಯಾನವನ್ನು ದೇಶದ ಇತರ ರಾಜ್ಯಗಳಿಗೂ ಕೊಂಡೊಯ್ಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಇನ್&zwnj;ಸ್ಟಾಗ್ರಾಮ್ ವೀಡಿಯೊದಲ್ಲಿ, ಮೊದಲು ಯಾವ ರಾಜ್ಯಕ್ಕೆ ಭೇಟಿ ನೀಡಬೇಕು? ಎಂದು ಜನರನ್ನೇ ಕೇಳಿದ್ದಾರೆ.&lt;/p&gt;&lt;p&gt;ಜನರು ಕಾಮೆಂಟ್ ಮೂಲಕ ತಮ್ಮ ರಾಜ್ಯದ ಹೆಸರನ್ನು ಸೂಚಿಸುವಂತೆ ಮನವಿ ಮಾಡಿರುವ ಅವರು, ಸ್ವಚ್ಛತೆಯ ಸಂದೇಶವನ್ನು ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶ ಹೊಂದಿದ್ದಾರೆ. ಅಂದರೆ, ಒಂದು ನದಿಯ ಸ್ವಚ್ಛತೆಯಿಂದ ಆರಂಭವಾದ ಕೆಲಸವನ್ನು ಇದೀಗ ರಾಷ್ಟ್ರಮಟ್ಟದ ಜನಾಂದೋಲನವಾಗಿ ಬೆಳೆಸುವ ಪ್ರಯತ್ನ ಇದಾಗಿದೆ.&lt;/p&gt;&lt;p&gt;&lt;strong&gt;ಒಬ್ಬರಿಂದ ಆರಂಭವಾದ ಕೆಲಸಕ್ಕೆ ಜನರ ಬೆಂಬಲ&lt;/strong&gt;&lt;/p&gt;&lt;p&gt;ಅಜ್ನರ್ ನದಿಯ ಸ್ವಚ್ಛತಾ ಕಾರ್ಯದಲ್ಲಿ ಬಿಟ್ಟು ತಬಾಹಿ ಸ್ವತಃ ಕಸ ಹಾಗೂ ಪ್ಲಾಸ್ಟಿಕ್ ತೆರವುಗೊಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅವರ ಪ್ರಯತ್ನಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸೇರಿದಂತೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಈ ಅಭಿಯಾನ ಕೇವಲ ನದಿ ಸ್ವಚ್ಛಗೊಳಿಸುವ ಕೆಲಸವಾಗಿರದೆ, ಸ್ಥಳೀಯ ಸಮಸ್ಯೆಗಳಿಗೆ ನಾಗರಿಕರೂ ಮುಂದಾಗಿ ಪರಿಹಾರ ಹುಡುಕಬಹುದು ಎಂಬ ಸಂದೇಶವನ್ನೂ ನೀಡಿದೆ.&lt;/p&gt;&lt;p&gt;&lt;strong&gt;ವಿದೇಶಿ ಸಂಸ್ಥೆಯ CEO ಗಮನ ಸೆಳೆದ ಕೆಲಸ!&lt;/strong&gt;&lt;/p&gt;&lt;p&gt;ಬಿಟ್ಟು ತಬಾಹಿ ಅವರ ಕೆಲಸಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸಿಕ್ಕಿದೆ. ಸಮುದ್ರ ಮತ್ತು ನದಿಗಳಲ್ಲಿನ ಪ್ಲಾಸ್ಟಿಕ್ ಮಾಲಿನ್ಯ ನಿವಾರಣೆಗೆ ಕೆಲಸ ಮಾಡುತ್ತಿರುವ ನೆದರ್ಲ್ಯಾಂಡ್ಸ್ ಮೂಲದ The Ocean Cleanup ಸಂಸ್ಥೆಯ ಸಂಸ್ಥಾಪಕ ಹಾಗೂ CEO ಬೋಯನ್ ಸ್ಲಾಟ್, ಸಾಮಾಜಿಕ ಜಾಲತಾಣದಲ್ಲಿ ಅವರ ಕೆಲಸವನ್ನು ಮೆಚ್ಚಿ ಸಂಸ್ಥೆಯೊಂದಿಗೆ ಕೆಲಸ ಮಾಡಲು ಆಹ್ವಾನಿಸಿದ್ದರು.&lt;/p&gt;&lt;p&gt;ನಂತರ ಬಿಟ್ಟು ತಬಾಹಿ ಅವರು ಸಂಸ್ಥೆಯೊಂದಿಗೆ ವೀಡಿಯೊ ಕಾಲ್ ನಡೆಸಿರುವುದನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಅವರ ಮುಂದಿನ ಹೆಜ್ಜೆಯ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.&lt;/p&gt;View this post on Instagram&lt;p&gt;A post shared by Surendra singh choudhry (@bittu_tabahi)&lt;/p&gt;&lt;p&gt;&lt;/p&gt;&lt;p&gt;&lt;strong&gt;&ldquo;ಭಾರತಕ್ಕಾಗಿ ಮಾತ್ರವಲ್ಲ, ಜಗತ್ತಿಗಾಗಿ ಯೋಚಿಸಿ&rdquo;&lt;/strong&gt;&lt;/p&gt;&lt;p&gt;ಬಿಟ್ಟು ತಬಾಹಿ ಅವರ ಕೆಲಸಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಅಭಿಯಾನವನ್ನು ನಿಲ್ಲಿಸದೆ ಇನ್ನಷ್ಟು ದೂರ ಕೊಂಡೊಯ್ಯುವಂತೆ ಪ್ರೋತ್ಸಾಹಿಸಿದ್ದಾರೆ. ಕೆಲವರು ವಿದೇಶಿ ಸಂಸ್ಥೆಯಿಂದ ಬಂದಿರುವ ಉದ್ಯೋಗದ ಆಹ್ವಾನವನ್ನು ಪರಿಗಣಿಸುವಂತೆ ಸಲಹೆ ನೀಡಿದ್ದಾರೆ.&lt;/p&gt;&lt;p&gt;ಅಜ್ನರ್ ನದಿಯ ಸ್ವಚ್ಛತೆಯಿಂದ ಆರಂಭವಾದ ಈ ಯುವಕನ ಪ್ರಯತ್ನ ಇದೀಗ ಭಾರತದ ಇತರ ನದಿಗಳು ಮತ್ತು ಪರಿಸರ ಸಮಸ್ಯೆಗಳತ್ತ ಗಮನ ಸೆಳೆಯುವ ದೊಡ್ಡ ವೇದಿಕೆಯಾಗುತ್ತದೆಯೇ? ಎಂಬುದು ಮುಂದಿನ ದಿನಗಳಲ್ಲಿ ಕುತೂಹಲ ಮೂಡಿಸುವ ಪ್ರಶ್ನೆಯಾಗಿದೆ.&lt;/p&gt;View this post on Instagram&lt;p&gt;A post shared by Surendra singh choudhry (@bittu_tabahi)&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/from-cleaning-ajnar-river-to-cleaning-india-bittu-tabahi-reveals-his-next-big-plan/articleshow-g9g4pwt"/>
        </item>
        <item>
            <title><![CDATA[₹75 ಲಕ್ಷ ಸಂಬಳ ತೊರೆದು ಉದ್ಯಮಕ್ಕೆ ಧುಮುಕಿದ ಮಹಿಳೆ; ChatGPT ಕೊಟ್ಟ ಶಾಕ್‌ನಿಂದ ಹೊರಬಂದ ಕಥೆ!]]></title>
            <link>https://kannada.asianetnews.com/india-news/chatgpt-killed-her-first-startup-product-what-happened-next-is-a-lesson-in-resilience/articleshow-4y6m1bb</link>
            <guid isPermaLink="true">https://kannada.asianetnews.com/india-news/chatgpt-killed-her-first-startup-product-what-happened-next-is-a-lesson-in-resilience/articleshow-4y6m1bb</guid>
            <pubDate>Sat, 12 Sep 2026 11:59:03 +0530</pubDate>
            <description><![CDATA[&lt;p&gt;₹75 ಲಕ್ಷದ ವಾರ್ಷಿಕ ಸಂಬಳದ ಉದ್ಯೋಗ ತೊರೆದು ಸ್ಟಾರ್ಟ್&zwnj;ಅಪ್ ಆರಂಭಿಸಿದ ಖ್ಯಾತಿ ಠಾಕೂರ್&zwnj;ಗೆ ಮೊದಲ ಉತ್ಪನ್ನವೇ ದೊಡ್ಡ ಹಿನ್ನಡೆ ತಂದಿತು. ChatGPT ಮತ್ತು Google AI ಬೆಳವಣಿಗೆಯಿಂದ 30 ದಿನಗಳಲ್ಲಿ ಎಲ್ಲ ಗ್ರಾಹಕರನ್ನೂ ಕಳೆದುಕೊಂಡರು. ಆದರೂ ಕಂಪನಿ ಮುಚ್ಚದೆ 7 ತಿಂಗಳು ಹೊಸ ದಿಕ್ಕು ಹುಡುಕಿ, ಬಳಿಕ ಹೊಸ ಉತ್ಪನ್ನ ನಿರ್ಮಿಸಲು ಮುಂದಾದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m29tgaabc98d4907fz5f0h2k,imgname-a-startup-founder-s-brutal-startup-journey--1--1789183666507.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;₹75 ಲಕ್ಷದ ಕೆಲಸ ಬಿಟ್ಟು ಸ್ಟಾರ್ಟ್&zwnj;ಅಪ್; ಆದರೆ ಮೊದಲ ಉತ್ಪನ್ನವೇ ಕೈಕೊಟ್ಟಿತು!&lt;/strong&gt;&lt;/p&gt;&lt;p&gt;ವರ್ಷಕ್ಕೆ ₹75 ಲಕ್ಷದ ಸಂಬಳ ಬರುತ್ತಿದ್ದ ತಾಂತ್ರಿಕ ಉದ್ಯೋಗವನ್ನು ತೊರೆದು ಸ್ವಂತ ಸ್ಟಾರ್ಟ್&zwnj;ಅಪ್ ಕಟ್ಟುವುದು ಸುಲಭದ ನಿರ್ಧಾರವಲ್ಲ. ಆದರೆ ಖ್ಯಾತಿ ಠಾಕೂರ್ ಈ ಅಪಾಯವನ್ನು ತೆಗೆದುಕೊಂಡರು. ಫ್ರೈಡೇ AI ಎಂಬ ಕಂಪನಿಯನ್ನು ಆರಂಭಿಸಿದ ಅವರಿಗೆ ಆರಂಭದಲ್ಲೇ ದೊಡ್ಡ ಸವಾಲು ಎದುರಾಯಿತು. ಅವರು ನಿರ್ಮಿಸಿದ್ದ ಮೊದಲ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಲು ಶುರುವಾಯಿತು.&lt;/p&gt;&lt;p&gt;&lt;strong&gt;ChatGPT, Google AI ತಂದ ಅನಿರೀಕ್ಷಿತ ಹೊಡೆತ&lt;/strong&gt;&lt;/p&gt;&lt;p&gt;ಖ್ಯಾತಿ ಹಂಚಿಕೊಂಡಿರುವ ಅನುಭವದ ಪ್ರಕಾರ, ChatGPT ಮತ್ತು Google AIಯಂತಹ ತಂತ್ರಜ್ಞಾನಗಳ ಬೆಳವಣಿಗೆಯಿಂದ ಅವರ ಮೊದಲ ಉತ್ಪನ್ನ ಬಹುತೇಕ ಅಪ್ರಸ್ತುತವಾಯಿತು. ಪರಿಣಾಮವಾಗಿ ಕೇವಲ 30 ದಿನಗಳಲ್ಲಿ ಸ್ಟಾರ್ಟ್&zwnj;ಅಪ್&zwnj;ನ ಎಲ್ಲ ಗ್ರಾಹಕರನ್ನೂ ಕಳೆದುಕೊಂಡರು.&lt;/p&gt;&lt;p&gt;ಒಂದು ಉತ್ಪನ್ನದ ಮೇಲೆ ಸಮಯ, ಹಣ ಮತ್ತು ಪರಿಶ್ರಮ ಹೂಡಿದ ನಂತರ ಅದೇ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಜಾಗವಿಲ್ಲದಂತಾಗುವುದು ಯಾವುದೇ ಸಂಸ್ಥಾಪಕರಿಗೂ ದೊಡ್ಡ ಆಘಾತ. ಆದರೆ ಖ್ಯಾತಿ ಮತ್ತು ಅವರ ತಂಡ ಕಂಪನಿಯನ್ನು ಮುಚ್ಚುವ ಬದಲು ಹೊಸ ಅವಕಾಶ ಹುಡುಕಲು ಮುಂದಾದರು.&lt;/p&gt;&lt;p&gt;&lt;strong&gt;7 ತಿಂಗಳು ಕೇವಲ &lsquo;ಪಿವೋಟ್&rsquo; ಹುಡುಕಲು!&lt;/strong&gt;&lt;/p&gt;&lt;p&gt;ಹೊಸ ಉತ್ಪನ್ನ ಅಥವಾ ವ್ಯವಹಾರ ಮಾದರಿ ಯಾವುದು ಆಗಬೇಕು ಎಂಬುದನ್ನು ನಿರ್ಧರಿಸಲು ತಂಡಕ್ಕೆ ಸುಮಾರು ಏಳು ತಿಂಗಳುಗಳು ಬೇಕಾಯಿತು. ಅದರ ನಂತರ ಅರ್ಥಪೂರ್ಣ ಉತ್ಪನ್ನವನ್ನು ನಿರ್ಮಿಸಲು ಇನ್ನೂ ಒಂಬತ್ತು ತಿಂಗಳುಗಳ ಕಾಲ ಪರಿಶ್ರಮಿಸಿದರು.&lt;/p&gt;&lt;p&gt;ಈ ಅವಧಿ ಸ್ಟಾರ್ಟ್&zwnj;ಅಪ್ ಜಗತ್ತಿನ ಮತ್ತೊಂದು ಕಠಿಣ ಸತ್ಯವನ್ನು ತೋರಿಸುತ್ತದೆ. ಐಡಿಯಾ ಬಂದ ತಕ್ಷಣ ಯಶಸ್ಸು ಸಿಗುವುದಿಲ್ಲ. ಮಾರುಕಟ್ಟೆ ಬದಲಾಗಬಹುದು, ಗ್ರಾಹಕರ ಅಗತ್ಯ ಬದಲಾಗಬಹುದು, ಸ್ಪರ್ಧಿಗಳು ಹೊಸ ತಂತ್ರಜ್ಞಾನ ತರಬಹುದು. ಅಂತಹ ಸಂದರ್ಭದಲ್ಲಿ ಸಂಸ್ಥಾಪಕರು ತಮ್ಮ ಮೂಲ ಯೋಜನೆಯನ್ನೇ ಬದಲಿಸಲು ಸಿದ್ಧರಾಗಿರಬೇಕು.&lt;/p&gt;&lt;p&gt;&lt;strong&gt;ಈಗ ಏನು ಮಾಡುತ್ತಿದೆ Friday AI?&lt;/strong&gt;&lt;/p&gt;&lt;p&gt;ಫ್ರೈಡೇ AI ಸಣ್ಣ ಉದ್ಯಮಗಳಿಗೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಆನ್&zwnj;ಲೈನ್ ಸ್ಟೋರ್&zwnj;ಗಳು, ಉತ್ಪನ್ನ ಕ್ಯಾಟಲಾಗ್&zwnj;ಗಳು ಮತ್ತು ಮಾರ್ಕೆಟಿಂಗ್ ವಿಷಯಗಳನ್ನು ಸಿದ್ಧಪಡಿಸಲು ನೆರವಾಗುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ.&lt;/p&gt;&lt;p&gt;ಆದರೆ ಪ್ರಯಾಣ ಇನ್ನೂ ಸುಲಭವಾಗಿಲ್ಲ. ಖ್ಯಾತಿಯ ಪ್ರಕಾರ ಕಂಪನಿಯ ಹಣಕಾಸಿನ &lsquo;ರನ್&zwnj;ವೇ&rsquo; ತಾವು ಬಯಸಿದಷ್ಟು ದೊಡ್ಡದಿಲ್ಲ. B2B ಗ್ರಾಹಕರನ್ನು ಪಡೆಯಲು 3&ndash;4 ತಿಂಗಳಷ್ಟು ದೀರ್ಘ ಮಾರಾಟ ಪ್ರಕ್ರಿಯೆ ಎದುರಾಗುತ್ತಿದೆ. ಜೊತೆಗೆ ತಮ್ಮ ಹೊಸ ಆಲೋಚನೆಯನ್ನು ಅರ್ಥಮಾಡಿಕೊಂಡು ಹೂಡಿಕೆ ಮಾಡಲು ಸಿದ್ಧರಿರುವ ಹೂಡಿಕೆದಾರರ ಹುಡುಕಾಟವೂ ಮುಂದುವರಿದಿದೆ.&lt;/p&gt;&lt;p&gt;&lt;strong&gt;&lsquo;ತಿಂಗಳ ಸಂಬಳವೇ ಮೇಲು&rsquo; ಅನ್ನಿಸುವ ದಿನಗಳು!&lt;/strong&gt;&lt;/p&gt;&lt;p&gt;ಸ್ಟಾರ್ಟ್&zwnj;ಅಪ್ ಆರಂಭಿಸಿದವರ ಜೀವನ ಹೊರಗಿನಿಂದ ರೋಮಾಂಚಕವಾಗಿ ಕಾಣಬಹುದು. ಆದರೆ ವಾಸ್ತವದಲ್ಲಿ ನಿರಂತರ ಅನಿಶ್ಚಿತತೆ ಇರುತ್ತದೆ. ಖ್ಯಾತಿ ಹೇಳುವಂತೆ, ವ್ಯವಹಾರ ಕಟ್ಟುವಾಗ ತಪ್ಪಾಗಬಹುದಾದ ಬಹುತೇಕ ಎಲ್ಲವೂ ತಪ್ಪಾಗಬಹುದು. ಕೆಲ ದಿನಗಳಲ್ಲಿ ನಿಯಮಿತ ಸಂಬಳದ ಉದ್ಯೋಗವನ್ನು ಆಯ್ಕೆ ಮಾಡದಿರುವುದೇ ತಪ್ಪು ಎಂದು ಅನಿಸಬಹುದು.&lt;/p&gt;&lt;p&gt;ಆದರೂ ಸ್ವಂತವಾಗಿ ಏನನ್ನಾದರೂ ನಿರ್ಮಿಸುವ ಅನುಭವಕ್ಕೆ ಬೇರೆ ರೀತಿಯ ಮೌಲ್ಯವಿದೆ. ಯಾವಾಗ ಹೋರಾಟ ಮುಂದುವರಿಸಬೇಕು, ಯಾವಾಗ ದಿಕ್ಕು ಬದಲಿಸಬೇಕು ಎಂಬ ನಿರ್ಧಾರವೇ ಸಂಸ್ಥಾಪಕರಿಗೆ ದೊಡ್ಡ ಸವಾಲಾಗುತ್ತದೆ.&lt;/p&gt;&lt;p&gt;&lt;strong&gt;ಸೋಲಿಗಿಂತ ಕಲಿತ ಪಾಠ ದೊಡ್ಡದು&lt;/strong&gt;&lt;/p&gt;&lt;p&gt;ಖ್ಯಾತಿ ತಮ್ಮ ಅನುಭವವನ್ನು ಇತರರನ್ನು ಸ್ಟಾರ್ಟ್&zwnj;ಅಪ್ ಆರಂಭಿಸದಂತೆ ಹೆದರಿಸಲು ಹಂಚಿಕೊಂಡಿಲ್ಲ. ಬದಲಾಗಿ, ಉದ್ಯಮಶೀಲತೆಯ ನಿಜವಾದ ಮುಖವನ್ನು ಅರ್ಥಮಾಡಿಕೊಳ್ಳಬೇಕು ಎಂಬ ಸಂದೇಶ ನೀಡಿದ್ದಾರೆ.&lt;/p&gt;&lt;p&gt;ಮೊದಲ ಉತ್ಪನ್ನ ವಿಫಲವಾದರೂ, ಗ್ರಾಹಕರನ್ನು ಕಳೆದುಕೊಂಡರೂ, ಅವರ ತಂಡ ಹೊಸದನ್ನು ಕಲಿತು ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಿದೆ. ಇದೇ ಕಾರಣಕ್ಕೆ ಅವರ ಕಥೆ ಕೇವಲ ಸ್ಟಾರ್ಟ್&zwnj;ಅಪ್ ಯಶಸ್ಸಿನ ಕಥೆಯಲ್ಲ; ವಿಫಲತೆಯ ನಂತರ ಮತ್ತೆ ಎದ್ದು ನಿಲ್ಲುವ ಧೈರ್ಯದ ಕಥೆಯಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/chatgpt-killed-her-first-startup-product-what-happened-next-is-a-lesson-in-resilience/articleshow-4y6m1bb"/>
        </item>
        <item>
            <title><![CDATA[ಒಂದೇ ಎಕರೆ ಜಮೀನು, ದಿನಕ್ಕೆ ₹12 ಸಾವಿರ ಆದಾಯ; ಈ ರೈತನ ಹೊಸ ಕೃಷಿ ಮಾದರಿ ವೈರಲ್..!]]></title>
            <link>https://kannada.asianetnews.com/india-news/this-maharashtra-farmer-earns-12000-rupees-a-day-from-just-one-acre-of-flowers/articleshow-vpy83b3</link>
            <guid isPermaLink="true">https://kannada.asianetnews.com/india-news/this-maharashtra-farmer-earns-12000-rupees-a-day-from-just-one-acre-of-flowers/articleshow-vpy83b3</guid>
            <pubDate>Sat, 12 Sep 2026 10:30:44 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ರೈತ ಅರ್ಜುನ್ ಸಬಳೆ ಅವರು ಕೇವಲ ಒಂದು ಎಕರೆಯಲ್ಲಿ ಗುಲಾಬಿ ಮತ್ತು ಜರ್ಬೆರಾ ಬೆಳೆದು ದಿನಕ್ಕೆ ₹12,000&ndash;₹13,000 ಆದಾಯ ಗಳಿಸುತ್ತಿದ್ದಾರೆ. ತಿಂಗಳ ವಹಿವಾಟು ₹3.5 ಲಕ್ಷಕ್ಕೂ ಅಧಿಕವಾಗಿದ್ದು, ನಿವ್ವಳ ಲಾಭ ಸುಮಾರು ₹2.5 ಲಕ್ಷ. ಪಾಲಿಹೌಸ್, ಹನಿ ನೀರಾವರಿ ಮತ್ತು ಉತ್ತಮ ಮಾರುಕಟ್ಟೆ ಸಂಪರ್ಕವೇ ಅವರ ಯಶಸ್ಸಿನ ಪ್ರಮುಖ ಕಾರಣಗಳು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m27ggn0rfrsepv9bpzrq753q,imgname-maharashtra-farmer-s-flower-farming-success--1--1789106082839.jpg" type="image/jpeg" height="390" width="690"/>
            <content:encoded><![CDATA[&lt;h2&gt;ಒಂದೇ ಒಂದು ಎಕರೆಯಲ್ಲಿ ಹೂವಿನ ಕೃಷಿ; ತಿಂಗಳಿಗೆ ₹2.5 ಲಕ್ಷ ಲಾಭ!&lt;/h2&gt;&lt;p&gt;ಕೃಷಿಯಲ್ಲಿ ಹೆಚ್ಚು ಭೂಮಿ ಇದ್ದರೆ ಮಾತ್ರ ಹೆಚ್ಚು ಆದಾಯ ಗಳಿಸಬಹುದು ಎಂಬ ಮಾತನ್ನು ಮಹಾರಾಷ್ಟ್ರದ ರೈತ ಅರ್ಜುನ್ ಸಬಳೆ ಅವರ ಯಶೋಗಾಥೆ ಪ್ರಶ್ನಿಸುವಂತಿದೆ. ಕೇವಲ ಒಂದು ಎಕರೆ ಜಾಗದಲ್ಲಿ ಗುಲಾಬಿ ಮತ್ತು ಜರ್ಬೆರಾ ಬೆಳೆದು ಅವರು ದಿನಕ್ಕೆ ಸುಮಾರು ₹12,000&ndash;₹13,000 ಆದಾಯ ಗಳಿಸುತ್ತಿದ್ದಾರೆ. ತಿಂಗಳ ವಹಿವಾಟು ₹3.5 ಲಕ್ಷಕ್ಕೂ ಅಧಿಕವಾಗಿದ್ದು, ನಿವ್ವಳ ಲಾಭ ಸುಮಾರು ₹2.5 ಲಕ್ಷ ಎಂದು Moneycontrol ವರದಿ ತಿಳಿಸಿದೆ.&lt;/p&gt;&lt;h3&gt;ಸಾಂಪ್ರದಾಯಿಕ ಹೂವಿನ ಕೃಷಿಯಿಂದ ಹೊಸ ಪ್ರಯೋಗ&lt;/h3&gt;&lt;p&gt;ಅರ್ಜುನ್ ಅವರ ಕುಟುಂಬ ಹಲವು ವರ್ಷಗಳಿಂದ ಸೇವಂತಿಗೆ ಮತ್ತು ಚೆಂಡುಹೂವು ಬೆಳೆದು, ಮುಂಬೈ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿತ್ತು. ಆದರೆ ಬೆಲೆ ಕುಸಿತ ಮತ್ತು ಹೆಚ್ಚಿದ ಸ್ಪರ್ಧೆಯಿಂದ ಸಾಂಪ್ರದಾಯಿಕ ಹೂವಿನ ಕೃಷಿಯಿಂದ ಸಿಗುತ್ತಿದ್ದ ಆದಾಯ ಕಡಿಮೆಯಾಗತೊಡಗಿತು. ಹೀಗಾಗಿ ಹೆಚ್ಚು ಲಾಭ ನೀಡುವ ಪರ್ಯಾಯ ಬೆಳೆಗಳ ಹುಡುಕಾಟ ಆರಂಭಿಸಿದರು.&lt;/p&gt;&lt;p&gt;&lt;strong&gt;ಪಾಲಿಹೌಸ್ ಕಂಡು ಬದಲಾಯಿತು ಕೃಷಿಯ ದಾರಿ&lt;/strong&gt;&lt;/p&gt;&lt;p&gt;ಕೃಷಿಯಲ್ಲಿ ಪದವಿ ಓದುತ್ತಿದ್ದ ಸಂದರ್ಭದಲ್ಲಿ ವಿವಿಧ ಕೃಷಿ ತೋಟಗಳಿಗೆ ಭೇಟಿ ನೀಡಿದ ಅರ್ಜುನ್, ಪಾಲಿಹೌಸ್&zwnj;ನಲ್ಲಿ ಬೆಳೆಯುತ್ತಿದ್ದ ಗುಲಾಬಿ ಕೃಷಿಯನ್ನು ಗಮನಿಸಿದರು. ನಿಯಂತ್ರಿತ ವಾತಾವರಣದಲ್ಲಿ ಹೂ ಬೆಳೆಸುವ ವಿಧಾನ ಅವರಿಗೆ ಇಷ್ಟವಾಯಿತು. 2016ರಲ್ಲಿ ಸುಮಾರು 10 ಗುಂಠೆ, ಅಂದರೆ ಕಾಲು ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆದು ಪ್ರಯೋಗ ಆರಂಭಿಸಿದರು.&lt;/p&gt;&lt;p&gt;ಆರಂಭದಲ್ಲಿ ಸುಮಾರು ₹8,000 ಹೂ ಸಸಿಗಳಿಗಾಗಿ ಖರ್ಚು ಮಾಡಿದ್ದರು. ಆರು ತಿಂಗಳ ಬಳಿಕ ದಿನಕ್ಕೆ ಸುಮಾರು 500 ಗುಲಾಬಿಗಳನ್ನು ಕೊಯ್ಲು ಮಾಡಲಾರಂಭಿಸಿದರು. ಸ್ಥಳೀಯವಾಗಿ ಪ್ರತಿ ಹೂವನ್ನು ₹5ರಂತೆ ಮಾರಾಟ ಮಾಡುವ ಮೂಲಕ ದಿನಕ್ಕೆ ಸುಮಾರು ₹2,500 ಆದಾಯ ಗಳಿಸಿದರು. ಈ ಫಲಿತಾಂಶವೇ ಮುಂದಿನ ವಿಸ್ತರಣೆಗೆ ಪ್ರೇರಣೆಯಾಯಿತು.&lt;/p&gt;&lt;p&gt;&lt;strong&gt;ಈಗ 16 ಸಾವಿರ ಗುಲಾಬಿ, 16 ಸಾವಿರ ಜರ್ಬೆರಾ ಗಿಡಗಳು!&lt;/strong&gt;&lt;/p&gt;&lt;p&gt;ಇಂದು ಅರ್ಜುನ್ ಒಂದು ಎಕರೆ ಪ್ರದೇಶದಲ್ಲಿ ಗುಲಾಬಿ ಮತ್ತು ಜರ್ಬೆರಾ ಬೆಳೆಸುತ್ತಿದ್ದಾರೆ. ಸುಮಾರು 16,000 ಗುಲಾಬಿ ಹಾಗೂ 16,000 ಜರ್ಬೆರಾ ಗಿಡಗಳಿವೆ. ಪ್ರತಿದಿನ ಸುಮಾರು 1,000 ಗುಲಾಬಿ ಮತ್ತು 2,000 ಜರ್ಬೆರಾ ಕಾಂಡಗಳನ್ನು ಉತ್ಪಾದಿಸುತ್ತಾರೆ. ಸರಾಸರಿ ₹5ರಂತೆ ಗುಲಾಬಿ ಮತ್ತು ₹4ರಂತೆ ಜರ್ಬೆರಾ ಮಾರಾಟವಾಗುವುದರಿಂದ ದಿನದ ಆದಾಯ ಸುಮಾರು ₹13,000ಕ್ಕೆ ತಲುಪುತ್ತದೆ.&lt;/p&gt;&lt;p&gt;&lt;strong&gt;ಪಾಲಿಹೌಸ್, ಹನಿ ನೀರಾವರಿ ಮತ್ತು ನೇರ ಮಾರಾಟ..!&lt;/strong&gt;&lt;/p&gt;&lt;p&gt;ಅರ್ಜುನ್ ನೈಸರ್ಗಿಕವಾಗಿ ಗಾಳಿ ಸಂಚಾರವಾಗುವ ಪಾಲಿಹೌಸ್ ಬಳಸುತ್ತಾರೆ. ಮೇಲ್ಛಾವಣಿಯ ವೆಂಟ್&zwnj;ಗಳು ಮತ್ತು ಬದಿಯ ಪರದೆಗಳ ಮೂಲಕ ಗಾಳಿಯ ಹರಿವು ನಿಯಂತ್ರಿಸಲಾಗುತ್ತದೆ. ಹನಿ ನೀರಾವರಿ, ಮೈಕ್ರೋ ಸ್ಪ್ರಿಂಕ್ಲರ್&zwnj;ಗಳು ಹಾಗೂ ನಿಯಮಿತ ಕೀಟ ನಿಯಂತ್ರಣ ಕ್ರಮಗಳನ್ನೂ ಬಳಸುತ್ತಾರೆ. ಅವರ ಮೊದಲ 10,000 ಚದರ ಅಡಿ ಪಾಲಿಹೌಸ್&zwnj;ಗೆ 2015&ndash;16ರಲ್ಲಿ ಸುಮಾರು ₹3 ಲಕ್ಷ ವೆಚ್ಚವಾಗಿತ್ತು.&lt;/p&gt;&lt;p&gt;&lt;strong&gt;ಮುಂಬೈಯಿಂದ ಬೆಂಗಳೂರಿನವರೆಗೆ ಮಾರುಕಟ್ಟೆ!&lt;/strong&gt;&lt;/p&gt;&lt;p&gt;ಹೂಗಳನ್ನು ನೇರವಾಗಿ ಹೂವಿನ ಅಂಗಡಿಗಳು ಮತ್ತು ಸಗಟು ಮಾರುಕಟ್ಟೆಗಳಿಗೆ ಮಾರಾಟ ಮಾಡಲಾಗುತ್ತದೆ. ಜರ್ಬೆರಾಗಳನ್ನು ಬೇಡಿಕೆಗೆ ಅನುಗುಣವಾಗಿ ಬೆಂಗಳೂರು, ವಡೋದರಾ, ಅಹಮದಾಬಾದ್, ಹೈದರಾಬಾದ್ ಮತ್ತು ಮುಂಬೈ ಮಾರುಕಟ್ಟೆಗಳಿಗೂ ಕಳುಹಿಸಲಾಗುತ್ತದೆ. ಹೀಗಾಗಿ ಸೂಕ್ತ ಬೆಳೆ ಆಯ್ಕೆ, ಸಂರಕ್ಷಿತ ಕೃಷಿ ಮತ್ತು ಮಾರುಕಟ್ಟೆ ಸಂಪರ್ಕ ಇದ್ದರೆ ಸೀಮಿತ ಜಮೀನಿನಿಂದಲೂ ಉತ್ತಮ ಆದಾಯದ ಅವಕಾಶ ಸೃಷ್ಟಿಸಬಹುದು ಎಂಬುದನ್ನು ಈ ಯಶೋಗಾಥೆ ತೋರಿಸುತ್ತದೆ.&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/this-maharashtra-farmer-earns-12000-rupees-a-day-from-just-one-acre-of-flowers/articleshow-vpy83b3"/>
        </item>
        <item>
            <title><![CDATA[ಜಿನ್‌ಪಿಂಗ್ ಭಾರತದಲ್ಲಿ ತಮ್ಮ ಶೌಚಾಲಯವನ್ನೂ ಬಿಡುವುದಿಲ್ಲ, ವಾಪಸ್ ಚೀನಾಗೆ ಕೊಂಡೊಯ್ಯುತ್ತಾರೆ - ಕಾರಣವೇನು?]]></title>
            <link>https://kannada.asianetnews.com/india-news/xi-jinping-would-not-even-leave-his-toilet-behind-in-india-he-takes-it-back-to-china-what-is-the-reason-gkn/articleshow-6qlwhq3</link>
            <guid isPermaLink="true">https://kannada.asianetnews.com/india-news/xi-jinping-would-not-even-leave-his-toilet-behind-in-india-he-takes-it-back-to-china-what-is-the-reason-gkn/articleshow-6qlwhq3</guid>
            <pubDate>Sat, 12 Sep 2026 18:06:38 +0530</pubDate>
            <description><![CDATA[&lt;p&gt;ಪ್ರಮುಖ ನಾಯಕರು ತಮ್ಮ ವಿದೇಶಿ ಪ್ರವಾಸದ ವೇಳೆ ತಾವು ಬಳಸುವ ಪೋರ್ಟಬಲ್&zwnj; ಶೌಚಾಲಯವನ್ನೂ ತೆಗೆದುಕೊಂಡೇ ಹೋಗ್ತಾರೆ. ಇದಕ್ಕೆ ಚೀನಾದ ಅಧ್ಯಕ್ಷ ಶೀ ಜಿನ್&zwnj;ಪಿಂಗ್&zwnj;, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್&zwnj; ಪುಟಿನ್&zwnj; ಕೂಡ ಹೊರತಾಗಿಲ್ಲ. ಯಾಕೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2asq9dkd9947hdc0p6p5mpn,imgname-xi-jinping-and-puti-1789216400819.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿಯಲ್ಲಿ ಬ್ರಿಕ್ಸ್&zwnj; (BRICS) ಶೃಂಗಸಭೆ ನಡೆಯುತ್ತಿದೆ. ಚೀನಾದ ಅಧ್ಯಕ್ಷ ಶೀ ಜಿನ್&zwnj;ಪಿಂಗ್&zwnj; ಕೂಡ ಭಾರತಕ್ಕೆ ಏಳು ವರ್ಷಗಳ ಬಳಿಕ ಕಾಲಿಟ್ಟಿದ್ದಾರೆ. ಸದ್ಯ ಸೋಶಿಯಲ್&zwnj; ಮೀಡಿಯಾದಲ್ಲಿ ಚರ್ಚೆ ಆಗ್ತಿರುವ ವಿಚಾರ ಏನೆಂದ್ರೆ ಜಿನ್&zwnj;ಪಿಂಗ್&zwnj; ತಮ್ಮ ಪೋರ್ಟಬಲ್&zwnj; ಶೌಚಾಲಯವನ್ನೂ ಭಾರತದ ಪ್ರವಾಸದ ವೇಳೆ ತೆಗೆದುಕೊಂಡು ಬರುತ್ತಾರೆ ಅನ್ನೋದು. ಹಾಗಂತ ಈ ಕೆಲಸವನ್ನು ಜಿನ್&zwnj;ಪಿಂಗ್&zwnj; ಮಾತ್ರವಲ್ಲ. ವಿಶ್ವದ ಅನೇಕ ನಾಯಕರು ತಮ್ಮ ಪ್ರವಾಸದ ವೇಳೆ ಪೋರ್ಟಬಲ್&zwnj; ಶೌಚಾಲಯವನ್ನು ತೆಗೆದುಕೊಂಡೇ ಓಡಾಡುತ್ತಾರೆ.&lt;/p&gt;&lt;h2&gt;&lt;strong&gt;ಯಾಕೆ ಹೀಗೆ ಮಾಡುತ್ತಾರೆ?&lt;/strong&gt;&lt;/h2&gt;&lt;p&gt;ವಿಶ್ವದ ಪ್ರಮುಖ ನಾಯಕರ ಇಂಥ ನಿರ್ಧಾರಗಳಿಗೆ ಪ್ರಮುಖ ಎರಡು ಕಾರಣಗಳಿರುತ್ತವೆ. ಒಂದು ವೈದ್ಯಕೀಯ ಸೂಕ್ಷ್ಮ ಮಾಹಿತಿಯ ರಕ್ಷಣೆ. ಇನ್ನೊಂದು ಸಂಭಾವ್ಯ ಬೇಹುಗಾರಿಕೆ ತಡೆಗಟ್ಟುವಿಕೆ. ಅಂದರೆ ಜೈವಿಕ ತ್ಯಾಜ್ಯಗಳನ್ನ ಸಂಗ್ರಹಿಸುವ ಕಾಳಜಿಗಳಲ್ಲಿ ಅದರಲ್ಲಿರುವ ಸೂಕ್ಷ್ಮ ಮಾಹಿತಿ. ಮಾನವ ತ್ಯಾಜ್ಯವು ವ್ಯಕ್ತಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ. ಒಬ್ಬ ಗಣ್ಯ ವ್ಯಕ್ತಿಯ ಆರೋಗ್ಯ ವಿಚಾರವು ತುಂಬಾನೇ ಸುಕ್ಷ್ಮವಾಗಿರೋದ್ರಿಂದ ಅದು ಬಹಿರಂಗವಾಗಬಾರದು. ಅಂದರೆ ಹಿರಿಯ ನಾಯಕರ ಭದ್ರತೆಗೆ ಇಂತಹ ಮಾಹಿತಿ ನಿರ್ಣಾಯಕವಾಗಬಹುದು ಎಂಬ ಸಾಧ್ಯತೆಯಲ್ಲಿ ಇಂಥ ವ್ಯವಸ್ಥೆ ಮಾಡಿಕೊಳ್ತಾರೆ.&lt;/p&gt;&lt;p&gt;ಕೆಲವು ಗುಪ್ತಚರ ಸಂಸ್ಥೆಗಳು ಗಂಭೀರ ಕಾಯಿಲೆಗಳು, ಔಷಧಿಗಳು ಅಥವಾ ನಾಯಕನ ವೈದ್ಯಕೀಯ ಸ್ಥಿತಿಯ ಇತರ ಅಂಶಗಳ ಬಗ್ಗೆ ಸುಳಿವುಗಳನ್ನು ಪತ್ತೆಹಚ್ಚುವ ಸಾಧ್ಯತೆ ದಟ್ಟವಾಗಿರುತ್ತದೆ. ಹೀಗಾಗಿಯೇ ಹೆಚ್ಚಿನ ಭದ್ರತೆ ಹೊಂದಿರುವ ನಾಯಕರು ವಿದೇಶ ಪ್ರವಾಸಗಳ ಸಂದರ್ಭದಲ್ಲಿ ತಮ್ಮ ಜೈವಿಕ ಮಾದರಿಗಳನ್ನು ಬಿಡದಂತೆ ಎಚ್ಚರ ವಹಿಸುತ್ತಾರೆ.&lt;/p&gt;&lt;h2&gt;&lt;strong&gt;ಬೇಹುಗಾರಿಕೆ, ಗೌಪ್ಯತೆಯ ಕಾಳಜಿಗಳು&lt;/strong&gt;&lt;/h2&gt;&lt;p&gt;ಇನ್ನೊಂದು ಪ್ರಮುಖ ಉದ್ದೇಶ ಏನಂದ್ರೆ ಪರಿಚಯವೇ ಇಲ್ಲದ ಸ್ಥಳಗಳಲ್ಲಿ ಕಣ್ಗಾವಲು ಸಾಧ್ಯತೆ ಇರುತ್ತದೆ. ಹೋಟೆಲ್&zwnj;, ಸ್ನಾನಗೃಹಗಳು ಸೇರಿದಂತೆ ನೆಲೆವಸ್ತುಗಳು ಮತ್ತು ಎಲೆಕ್ಟ್ರಾನಿಕ್&zwnj; ವ್ಯವಸ್ಥೆಗಳನ್ನ ಹೊಂದಿರಬಹುದು ಎಂಬ ಭಯ ಇರುತ್ತದೆ. ಯಾಕೆಂದರೆ ಭದ್ರತಾ ತಂಡವು ಅವು ಸುರಕ್ಷಿತವಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.&lt;/p&gt;&lt;h2&gt;&lt;strong&gt;ಪೋರ್ಟಬಲ್ ಶೌಚಾಲಯ ಹೇಗೆ ಕೆಲಸ ಮಾಡುತ್ತೆ?&lt;/strong&gt;&lt;/h2&gt;&lt;p&gt;ನಾಯಕರ ಜೈವಿಕ ತ್ಯಾಜ್ಯವನ್ನು ವಿದೇಶಿ ಸ್ಥಳದಲ್ಲಿ ಬಿಡದಂತೆ ನೋಡಿಕೊಳ್ಳಲು ಅದನ್ನು ವಿನ್ಯಾಸ ಮಾಡಲಾಗುತ್ತದೆ. ಅದಕ್ಕಾಗಿಯೇ ಮೀಸಲಾಗಿರುವ ಭದ್ರತಾ ತಂಡವು ಆ ಶೌಚಾಲಯವನ್ನು ಸಿದ್ಧಪಡಿಸುತ್ತದೆ. ಪೋರ್ಟಬಲ್ ಶೌಚಾಲಯಗಳನ್ನು ಬಳಸಿದ ನಂತರ ಅದನ್ನು ಸುಲಭವಾಗಿ ಸಂಗ್ರಹಿಸುವ ವ್ಯವಸ್ಥೆಯನ್ನೂ ಮಾಡಿರುತ್ತಾರೆ. ಆ ವಸ್ತುವನ್ನು ಭದ್ರತಾ ತಂಡದ ಮೇಲ್ವಿಚಾರಣೆಯಲ್ಲಿ ಸುರಕ್ಷಿತಗೊಳಿಸಿ ಸ್ವದೇಶಕ್ಕೆ ಸಾಗಿಸಲಾಗುತ್ತದೆ.&lt;/p&gt;&lt;p&gt;ಎಲ್ಲಾ ದೇಶಗಳಲ್ಲೂ ಸಾಮಾನ್ಯ ಜನರಿಗೆ ಹೋಟೆಲ್ ಸ್ನಾನಗೃಹವನ್ನು ಬಳಸುವುದು ಸಾಮಾನ್ಯ ಸಂಗತಿ. ಆದರೆ ಒಂದು ರಾಷ್ಟ್ರದ ಮುಖ್ಯಸ್ಥರಿಗೆ, ಅತ್ಯಲ್ಪವೆಂದು ತೋರುವ ವೈಯಕ್ತಿಕ ಮಾಹಿತಿಯು ಸಹ ಗುಪ್ತಚರ ಮೂಲವಾಗಬಹುದು. ಸೈದ್ಧಾಂತಿಕವಾಗಿ ಒಂದು ಜೈವಿಕ ಮಾದರಿಯು ನಾಯಕನೊಬ್ಬ ವಿದೇಶಿ ಏಜೆನ್ಸಿಗಳು ಪ್ರವೇಶಿಸಲು ಬಯಸದ ಮಾಹಿತಿಯನ್ನು ಬಹಿರಂಗಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸುರಕ್ಷಿತ ಸ್ನಾನಗೃಹಗಳ ಕೊರತೆಯು ಕಣ್ಗಾವಲುಗೆ ಅವಕಾಶಗಳನ್ನು ನೀಡುತ್ತದೆ. ಕೆಲವು ನಾಯಕರಿಗೆ, ಭದ್ರತಾ ಕ್ರಮಗಳು ಅಂಗರಕ್ಷಕರು, ಗುಂಡು ನಿರೋಧಕ ವಾಹನಗಳು ಮತ್ತು ಸುರಕ್ಷಿತ ಮಾರ್ಗಗಳನ್ನು ಮೀರಿ ಹೋಗುತ್ತವೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/xi-jinping-would-not-even-leave-his-toilet-behind-in-india-he-takes-it-back-to-china-what-is-the-reason-gkn/articleshow-6qlwhq3"/>
        </item>
        <item>
            <title><![CDATA[ಮುಂಗಾರು ವಿದಾಯ ಹೇಳ್ತಿದೆ .. ಮಾನ್ಸೂನ್‌ ಹಿಂತಿರುಗುವ ಪ್ರಕ್ರಿಯೆ ಹೇಗೆ ನಡೆಯುತ್ತೆ?]]></title>
            <link>https://kannada.asianetnews.com/bengaluru-urban/the-monsoon-is-bidding-farewell-how-does-the-monsoon-withdrawal-process-take-place-gkn/articleshow-krwpmre</link>
            <guid isPermaLink="true">https://kannada.asianetnews.com/bengaluru-urban/the-monsoon-is-bidding-farewell-how-does-the-monsoon-withdrawal-process-take-place-gkn/articleshow-krwpmre</guid>
            <pubDate>Sat, 12 Sep 2026 16:50:47 +0530</pubDate>
            <description><![CDATA[&lt;p&gt;ಮುಂಗಾರು ದುರ್ಬಲಗೊಂಡಿದೆ. ರಾಜ್ಯದಲ್ಲಿ ಮಳೆಯ ಕೊರತೆ ಶುರುವಾಗಿದೆ. ಈ ನಡುವೆ ಮಾನ್ಸೂನ್&zwnj; ಹಿಮ್ಮೆಟ್ಟುವಿಕೆ ಪ್ರಕ್ರಿಯೆ ಶುರುವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2angecfc9p4cx98my1z1245,imgname-monsoon-1789211982223.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಈ ವರ್ಷ ದೇಶದಲ್ಲಿ ಅಂದುಕೊಂಡಷ್ಟು ಮಳೆಯೇ ಆಗಿಲ್ಲ. ಇದರಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಅನ್ನದಾತರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಮಾನ್ಸೂನ್&zwnj; ಹಿಮ್ಮೆಟ್ಟುವ ಪ್ರಕ್ರಿಯೆ ಶುರುವಾಗಿದೆ.. ಕರ್ನಾಟಕದಲ್ಲೂ ಮುಂಗಾರು ದುರ್ಬಲಗೊಂಡಿದ್ದು, ಹವಾಮಾನ ಇಲಾಖೆ ಮಳೆಯ ಬಗ್ಗೆ ಭವಿಷ್ಯ ನುಡಿದಿದೆ.&lt;/p&gt;&lt;p&gt;ಹೌದು, ಸೆಪ್ಟೆಂಬರ್&zwnj; ಅಂತ್ಯದ ಒಳಗಾಗಿ ಮಾನ್ಸೂನ್&zwnj; ಸಂಪೂರ್ಣವಾಗಿ ನಿರ್ಗಮನವಾಗಲಿದೆ. ಮಾನ್ಸೂನ್&zwnj; ಹಿಮ್ಮೆಟ್ಟುವ ವೇಳೆ ಅನೇಕ ರಾಜ್ಯಗಳ ಮೇಲೆ ಸಹಜವಾಗಿಯೇ ಪರಿಣಾಮ ಬೀಳಲಿದೆ. ಗಾಳಿಯ ದಿಕ್ಕು ಬದಲಾಗುತ್ತದೆ. ತೇವಾಂಶವುಳ್ಳ ಗಾಳಿಯು ಒಂದು ನಿರ್ದಿಷ್ಟ ಪ್ರದೇಶದ ಕಡೆಗೆ ಹಿಂತಿರುಗುತ್ತದೆ. ಇದರಿಂದ ಭಾರೀ ಮಳೆಯಾದರೂ ಅಚ್ಚರಿ ಇಲ್ಲ. ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಮಳೆ ಬೀಳಲಿದೆ. ವಿಶೇಷ ಅಂದ್ರೆ ಈ ಬಾರಿಯ ಮಾನ್ಸೂನ್&zwnj; ಆರ್ಭಟದಿಂದ ಆಗಮಿಸಿತ್ತು. ಆದರೆ ಹೋಗುವಾಗ ಶಾಂತ ಮತ್ತು ನಿಧಾನವಾಗಿ ಹೋಗಲಿದೆ. ಇನ್ನು, ಈ ಮಾನ್ಸುನ್&zwnj; ಹಿಮ್ಮೆಟ್ಟುವ ಪ್ರಕ್ರಿಯೆಯು ಅಕ್ಟೋಬರ್&zwnj; ಮತ್ತು ನವೆಂಬರ್&zwnj;ನಲ್ಲಿ ಉತ್ತಮ ಮಳೆಗೆ ಅವಕಾಶ ಮಾಡಿಕೊಡಲಿದೆ.&lt;/p&gt;&lt;h2&gt;&lt;strong&gt;ಯಾವಾಗಿಂದ?&lt;/strong&gt;&lt;/h2&gt;&lt;p&gt;ಯಾವಾಗಲೂ ದೇಶದ ವಾಯುವ್ಯ ತುದಿಯಲ್ಲಿ ಮಾನ್ಸೂನ್ ನಿರ್ಗಮನ ಪ್ರಾರಂಭವಾಗುತ್ತದೆ. ಪಶ್ಚಿಮ ರಾಜಸ್ಥಾನ ಮತ್ತು ಕಚ್&zwnj;ನಿಂದ ಶುರುವಾಗುತ್ತದೆ. ಹವಾಮಾನ ಇಲಾಖೆಯ ನಿಯಮಗಳ ಪ್ರಕಾರ.. ಸೆಪ್ಟೆಂಬರ್ 1 ರ ಮೊದಲು ದೇಶದ ಯಾವುದೇ ಭಾಗದಿಂದ ಮಾನ್ಸೂನ್ ಹಿಂತೆಗೆತ ಪ್ರಾರಂಭಿಸುವುದಿಲ್ಲ. ಒಂದು ಪ್ರದೇಶದಲ್ಲಿ ಸತತ ಐದು ದಿನಗಳವರೆಗೆ ಮಳೆಯಾಗದಿದ್ದರೆ.. ಗಾಳಿಯ ಒತ್ತಡ ಬದಲಾದರೆ ಮತ್ತು ಆರ್ದ್ರತೆಯ ಮಟ್ಟ ಕಡಿಮೆಯಾಗಲು ಪ್ರಾರಂಭಿಸಿದರೆ.. ಹವಾಮಾನ ಇಲಾಖೆಯು ಆ ಪ್ರದೇಶದಿಂದ ಮಾನ್ಸೂನ್ ಹಿಂತೆಗೆತ ಎಂದು ಪರಿಗಣಿಸುತ್ತದೆ.&lt;/p&gt;&lt;p&gt;ರಾಜಸ್ಥಾನ ಮತ್ತು ಕಚ್&zwnj;ನಿಂದ ನಿರ್ಗಮಿಸಿದ ನಂತರ ಮಾನ್ಸೂನ್ ಕ್ರಮೇಣ ಪಂಜಾಬ್, ಹರಿಯಾಣ, ದೆಹಲಿ ಮತ್ತು ಗುಜರಾತ್&zwnj;ನ ಉಳಿದ ಭಾಗಗಳಿಂದ ಹಿಮ್ಮೆಟ್ಟುತ್ತದೆ. ನಂತರ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಗೆ ಚಲಿಸುತ್ತದೆ. ಅದು ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಿಂದ ತನ್ನ ಹಿಮ್ಮೆಟ್ಟುವಿಕೆಯನ್ನ ಪ್ರಾರಂಭಿಸುತ್ತದೆ.&lt;/p&gt;&lt;p&gt;ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಿಂದ ಕೊನೆಯದಾಗಿ ಹೊರಡುತ್ತದೆ. ಇದರರ್ಥ ಅದು ಬಂದ ಮಾರ್ಗಕ್ಕೆ ವಿರುದ್ಧವಾದ ಮಾರ್ಗವನ್ನು ಅನುಸರಿಸಿ ದೇಶವನ್ನು ಬಿಡುತ್ತದೆ. ಮಾನ್ಸೂನ್ ಇಡೀ ದೇಶದಿಂದ ಸಂಪೂರ್ಣವಾಗಿ ಹಿಂದೆ ಸರಿಯಲು ಸಾಮಾನ್ಯವಾಗಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ..&lt;/p&gt;&lt;h2&gt;&lt;strong&gt;ರಾಜ್ಯದ ಇವತ್ತಿನ ಮಳೆ ಪರಿಸ್ಥಿತಿ ಹೇಗಿದೆ?&lt;/strong&gt;&lt;/h2&gt;&lt;p&gt;ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣ ದುರ್ಬಲಗೊಂಡಿದೆ. ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರವಾಗಿ ಮಳೆ ಬೀಳುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಸೆಪ್ಟೆಂಬರ್&zwnj; 13 ರಂದು ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯಲ್ಲೂ ಮಳೆ ಬೀಳುವ ಸೂಚನೆ ನೀಡಲಾಗಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿ ಮೈಸೂರು, ಚಾಮರಾಜನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಒಂದೆರಡು ಭಾಗಗಳಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/the-monsoon-is-bidding-farewell-how-does-the-monsoon-withdrawal-process-take-place-gkn/articleshow-krwpmre"/>
        </item>
        <item>
            <title><![CDATA[ಭಾರತದಲ್ಲಿ ಚೀನಾ ಅಧ್ಯಕ್ಷರ 24 ಗಂಟೆ, ಭದ್ರತಾ ಪಡೆ ಸೇರಿ 15 ಸಾವಿರ ಅಧಿಕಾರಿಗಳು, 50ಕ್ಕೂ ಹೆಚ್ಚು ಕಾರು]]></title>
            <link>https://kannada.asianetnews.com/india-news/brics-china-president-24-hours-in-india-15000-officials-security-forces-and-50-puls-cars/articleshow-iaa93hn</link>
            <guid isPermaLink="true">https://kannada.asianetnews.com/india-news/brics-china-president-24-hours-in-india-15000-officials-security-forces-and-50-puls-cars/articleshow-iaa93hn</guid>
            <pubDate>Sat, 12 Sep 2026 16:23:13 +0530</pubDate>
            <description><![CDATA[&lt;p&gt;ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ 24 ಗಂಟೆ ಭಾರತದಲ್ಲಿ ಇರಲಿದ್ದಾರೆ. ಚೀನಾ ಅಧ್ಯಕ್ಷರಿಗೆ ಭದ್ರತಾ ಪಡೆ, ಅಧಿಕಾರಿಗಳು ಸೇರಿದಂತೆ 15 ಸಾವಿರ ಮಂದಿ ನಿಯೋಜಿಸಲಾಗಿದೆ. ಇನ್ನು ಕ್ಸಿ ಪ್ರಯಾಣಿಸುವ ಲಿಮೋಸಿನ್ ಸೇರಿ 50ಕ್ಕೂ ಹೆಚ್ಚು ಕಾರು ಕೂಡ ತಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2a9x1e621hcre6f6crg1hv8,imgname-20260912083l-1789199812038.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.12) &lt;/strong&gt;ವಿಶ್ವವೇ ಇದೀಗ ಭಾರತದಲ್ಲಿ ನೋಡುತ್ತಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ಸೇರಿದಂತೆ ಹಲವು ಗಣ್ಯರು ಭಾರತದಲ್ಲಿದ್ದಾರೆ. ಈ ಪೈಕಿ ಪುಟಿನ್ ಹಾಗೂ ಕ್ಸಿ ಜಿನ್&zwnj;ಪಿಂಗ್ ಭದ್ರತೆ ಎಲ್ಲರಿಗಂತ ಭಿನ್ನ. ಈ ಬಾರಿ ಕ್ಸಿ ಜಿನ್&zwnj;&zwj;ಪಿಂಗ್ ಭಾರತ ಬೇಟಿಯಲ್ಲಿ 24 ಗಂಟೆ ಕಳೆಯಲಿದ್ದಾರೆ. ಇದಕ್ಕಾಗಿ ಚೀನಾದಿಂದ ಭದ್ರತಾ ಪಡೆಗಳು, ಅಧಿಕಾರಿಗಳು ಆಗಮಿಸಿದ್ದಾರೆ. ಚೀನಾ ಅಧ್ಯಕ್ಷರಿಗೆ ಒಟ್ಟು 15 ಸಾವಿರ ಮಂದಿ ನಿಯೋಜಿಸಲಾಗಿದೆ. ಇನ್ನು ಕ್ಸಿ ಜಿನ್&zwnj;ಪಿಂಗ್ ಪ್ರಯಾಣಿಸುವ ಲಿಮೋಸಿನ್ ಕಾರು ಸೇರಿದಂತೆ 50ಕ್ಕೂ ಹೆಚ್ಚು ಕಾರನ್ನು ಚೀನಾದಿಂದಲೇ ತಂದಿದ್ದಾರೆ. ಜಿನ್&zwnj;ಪಿಂಗ್ ಭದ್ರತೆ ಹಾಗೂ ಅಧಿಕಾರಿಗಳ ಬಳಗವೇ ಭಾರಿ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಕ್ಸಿ ಜಿನ್&zwnj;ಪಿಂಗ್&zwnj;ಗೆ ಹಲವು ಸ್ತರದ ಭದ್ರತೆ&lt;/h2&gt;&lt;p&gt;ಕ್ಸಿ ಜಿನ್&zwnj;ಪಿಂಗ್ ಚೀನಾ ಏರ್ ವಿಮಾನ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಹಲವು ಎಜೆನ್ಸಿಗಳು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡ ನಾಯಕರಿಗೆ ಭದ್ರತೆ ನೀಡುತ್ತಿದೆ. ದೆಹಲಿ ಪೊಲೀಸ್, ಎನ್&zwnj;ಎಸ್&zwnj;ಜಿ ಕಮಾಂಡೋ, ಪ್ಯಾರಾ ಮಿಲಿಟರಿ ಸೇರಿದಂತೆ ಹಲವು ಎಜೆನ್ಸಿಗಳಿಂದ ಭಾರಿ ಭದ್ರತೆ ನೀಡುತ್ತಿದೆ. ಇದರ ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ಭದ್ರತಾ ಪಡೆಗಳು ಭಾರತಕ್ಕೆ ಆಗಮಿಸಿದ್ದಾರೆ. ಚೀನಾ ಭದ್ರತಾ ಪಡೆಗಳು, ಭದ್ರತಾ ಎಜೆನ್ಸಿ ಅಧಿಕಾರಿಗಳು, ರಾಜತಾಂತ್ರಿಕ ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು ಸೇರಿದಂತೆ ಬರೋಬ್ಬರಿ 15 ಸಾವಿರ ಮಂದಿ ಇದ್ದಾರೆ.&lt;/p&gt;&lt;h2&gt;ಲಿಮೋಸಿನ್ ಸೇರಿ 50ಕ್ಕೂ ಹೆಚ್ಚು ಕಾರು&lt;/h2&gt;&lt;p&gt;ಚೀನಾ ಅಧ್ಯಕ್ಷರು ಪ್ರಯಾಣಿಸುವ ಅತೀ ಸುರಕ್ಷತೆ ಹಾಗೂ ಭದ್ರತೆಯ ಲಿಮೋಸಿನ್ ಕಾರನ್ನು ಚೀನಾದಿಂದಲೇ ತರಿಸಿಕೊಳ್ಳಲಾಗಿದೆ. ವಿಶೇಷ ಅಂದರೆ ಕ್ಸಿ ಜಿನ್&zwnj;ಪಿಂಗ್ ಪ್ರಯಾಣಿಸುವ ಲಿಮೋಸಿನ್ ಕಾರು ಭಾರತಕ್ಕೆ 10 ದಿನಗಳ ಮೊದಲೇ ಆಗಮಿಸಿದೆ. ಇದರ ಜೊತೆಗೆ ಬೆಂಗಾವಲು ಪಡೆ ಕಾರು ಸೇರಿದಂತೆ 50ಕ್ಕೂ ಹೆಚ್ಚು ಕಾರು ಭಾರತಕ್ಕೆ ಆಗಮಿಸಿದೆ. ಇದರ ಜೊತೆಗೆ ಭಾರತದ ಭದ್ರತಾ ಪಡೆಗಳ ಕಾರು ಇರಲಿದೆ.&lt;/p&gt;&lt;p&gt;ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್&zwnj;ಗೆ ಚಾಣಾಕ್ಯಪುರಿಯ ಲಕ್ಷುರಿ ಹೊಟೆಲ್&zwnj;ನಲ್ಲಿ ತಂಗಲಿದ್ದಾರೆ. ಕ್ಸಿ ಜಿನ್&zwnj;ಪಿಂಗ್&zwnj;ಗೆ ಪ್ರತ್ಯೇಕ ಹೊಟೆಲ್ ವ್ಯವಸ್ಥೆ ಮಾಡಿದ್ದಾರೆ. ಹೊಟೆಲ್ ಸುತ್ತಲೂ ಭದ್ರತಾ ಪಡೆಗಳಿವೆ. ಇನ್ನು ಪ್ರತಿ ಚಲನವಲನಗಳನ್ನು ಕೂಡ ಪರಿಶೀಲಿಸಲಾಗುತ್ತದೆ. ಪ್ರತಿ ರಸ್ತೆ, ಹೊಟೆಲ್, ಶೃಂಗಸಭೆ ಸ್ಥಳ ಸೇರಿದಂತೆ ಎಲ್ಲೆಡೆ ಭದ್ರತೆ ನಿಯೋಜನೆ ಮಾಡಲಾಗಿದೆ. 700ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ, ಡ್ರೋನ್&zwnj;ಗಳ ಮೂಲಕ ಭದ್ರತಾ ಪಡೆಗಳು ಕಣ್ಗಾವಲು ಇಟ್ಟಿದ್ದಾರೆ. ಕಂಟ್ರೋಲ್ ರೂಂ ಮೂಕ ಎಲ್ಲವನ್ನು ಪರಿಶೀಲಿಸಲಾಗುತ್ತದೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/brics-china-president-24-hours-in-india-15000-officials-security-forces-and-50-puls-cars/articleshow-iaa93hn"/>
        </item>
        <item>
            <title><![CDATA[ಇಡಿ ದಾಳಿ ಬೆನ್ನಲ್ಲೇ ರಾಜೀನಾಮೆಗೆ ಮುಂದಾದ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ನಡೆಯಿಂದ ಕೋಲಾಹಲ]]></title>
            <link>https://kannada.asianetnews.com/india-news/ed-raids-trigger-resignation-buzz-around-uttarakhand-congress-leader-harish-rawat/articleshow-qkwu2at</link>
            <guid isPermaLink="true">https://kannada.asianetnews.com/india-news/ed-raids-trigger-resignation-buzz-around-uttarakhand-congress-leader-harish-rawat/articleshow-qkwu2at</guid>
            <pubDate>Sat, 12 Sep 2026 15:53:19 +0530</pubDate>
            <description><![CDATA[&lt;p&gt;ಕಾಂಗ್ರೆಸ್&zwnj;ನಲ್ಲೀಗ ಇಡಿ ದಾಳಿಯಿಂದ ಕೋಲಾಹಲ ಶುರುವಾಗಿದೆ. ಸೆ.10ರಂದು ಇಡಿ ಅಧಿಕಾರಿಗಳು ಮಾಜಿ ಸಿಎಂ ನಿವಾಸ, ಕಚೇರಿ ಸೇರದಿದಂತೆ ಹಲವು ಕಡೆ ದಾಳಿ ಮಾಡಲಾಗಿದೆ. ಈ ದಾಳಿ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಇದೀಗ ಪ್ರಮುಖ 2 ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jyrqbx8ej40khb8r1hwwt4xp,imgname-gettyimages-1249642728-1751028987150.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡೆಹ್ರಡೂನ್ (ಸೆ.12)&lt;/strong&gt; ದೇಶದ ಹಲವು ಭಾಗದಲ್ಲಿ ಇಡಿ ದಾಳಿ ನಡೆಯುತ್ತಿದೆ. ಕರ್ನಾಟಕದಲ್ಲಿ ಸತೀಶ್ ಜಾರಕಿಹೊಳಿಗೆ ಸೇರಿದ ಹಲವೆಡೆ ದಾಳಿ ನಡೆದಿದೆ. ಇನ್ನು ಉತ್ತರಖಂಡದಲ್ಲೂ ಇಡಿ ದಾಳಿ ಮುಂದುವರಿದಿದೆ. ಉತ್ತರಖಂಡದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ನಿವಾಸ ಸೇರಿದಂತೆ ಹಲವೆಡೆ ಇಡಿ ದಾಳಿ ನಡೆದಿದೆ.ಹರೀಶ್ ರಾವತ್ ಸಹಾಯಕನ ಮನೆಯಿಂದ 1.28 ಕೋಟಿ ರೂಪಾಯಿ ನಗದು, ಚಿನ್ನಾಭರಣ, ಲಕ್ಷುರಿ ವಾಚ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇಡಿ ದಾಳಿ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹರೀಶ್ ರಾವತ್, ಇದೀಗ ಕಾಂಗ್ರೆಸ್ ಪಕ್ಷದ ಪ್ರಮುಖ ಎರಡೂ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.&lt;/p&gt;&lt;h2&gt;2 ಸ್ಥಾನಗಳಿಗೆ ಹರೀಶ್ ರಾವತ್ ರಾಜೀನಾಮೆ ಸಾಧ್ಯತೆ&lt;/h2&gt;&lt;p&gt;ಇಡಿ ದಾಳಿ ಬೆನ್ನಲ್ಲೇ ಹರೀಶ್ ರಾವತ್ ರಾಜೀನಾಮೆ ಮಾತುಗಳನ್ನಾಡಿದ್ದಾರೆ. ಉತ್ತರಖಂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪ್ರಮುಖ ಜವಾಬ್ದಾರಿಯಿಂದ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಾಕಾರಿ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಹರೀಶ್ ರಾವತ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಉತ್ತರಖಂಡದಲ್ಲಿ ಚುನಾವಣೆ ಸೋತ ಬಳಿಕ ಹಿರಿಯ ನಾಯಕ ಹರೀಶ್ ರಾವತ್&zwnj;&zwj;ಗೆ ಉತ್ತರಖಂಡ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಕಾಂಗ್ರೆಸ್&zwnj;ನಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗಿತ್ತು. ಇದೀಗ ಈ ಎರಡೂ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಹರೀಶ್ ರಾವತ್ ಅಧಿೃಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.&lt;/p&gt;&lt;p&gt;ಸೆಪ್ಟೆಂಬರ್ 10ಕ್ಕೆ ಹರೀಶ್ ರಾವತ್&zwnj;ಗೆ ಸೇರಿದ ಹಲವು ಕಡೆಗಳಲ್ಲಿ ಇಡಿ ದಾಳಿ ನಡೆದಿತ್ತು. 2016ರ ಉತ್ತರಖಂಡ ಸಬೋರ್ಡಿನೇಟ್ ಸೆಲೆಕ್ಷನ್ ಕಮಿಷನ್ (UKSSSC) ನಡೆದಿದೆ ಎನ್ನಲಾದ ಹಲವು ಅಕ್ರಮಗಳಿಗೆ ಸಂಬಂಧಿಸಿ ಇಡಿ ದಾಳಿ ನಡೆಸಿದೆ. ಹರೀಶ್ ರಾವತ್, UKSSSC ಮಧ್ಯವರ್ತಿಗಳು ಸೇರಿದಂತೆ ಹಲವು ಕಡೆಗಳಲ್ಲಿ ಇಡಿ ದಾಳಿ ನಡೆದಿದೆ. 2009 ರಿಂದ 2017ರ ವರೆಗೆ ಮುಖ್ಯಮಂತ್ರಿಯಾಗಿದ್ದ ಹರೀಶ್ ರಾವತ್, ಈ ಸಮಯದಲ್ಲಿದ್ದ ನಿವಾಸದ ಮೇಲೂ ಇಡಿ ದಾಳಿ ನಡೆದಿದೆ.&lt;/p&gt;&lt;p&gt;ಒಎಂಆರ್ ಶೀಟ್, ಉತ್ತರ ಪತ್ರಿಕೆಗಳು ರಹಸ್ಯವಾಗಿ ಕಮಿಷನರ್ ಕಸ್ಟಡಿಯಿಂದ ಸೆಕ್ರಟರಿ ಕಚೇರಿಗೆ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು. UKSSSCನಲ್ಲಿ ಹಲವು ಅಕ್ರಮಗಳು ನಡೆದಿರುವ ಕುರಿತು ತನಿಖೆ ತೀವ್ರಗೊಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಜವಾಬ್ದಾರಿಗಳಿಂದ ಮುಕ್ತಿಹೊಂದಲು ಹರೀಶ್ ರಾವತ್ ಬಯಸಿದ್ದಾರೆ. ಇಷ್ಟೇ ಅಲ್ಲ ಹರೀಶ್ ರಾವತ್ ನಡೆ ಇದೀಗ ಭಾರಿ ಕೋಲಾಹಲಕ್ಕೂ ಕಾರಣವಾಗಿದೆ. ಇಡಿ ದಾಳಿ ಬೆನ್ನಲ್ಲೇ ಹರೀಶ್ ರಾವತ್ ರಾಜೀನಾಮೆ ಬಯಸಿರುವುದು ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಆಳ ಸೂಚಿಸುತ್ತಿದೆ ಎಂದು ರಾಜಕೀಯ ಆರೋಪಗಳು ಕೇಳಿಬರುತ್ತಿದೆ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/ed-raids-trigger-resignation-buzz-around-uttarakhand-congress-leader-harish-rawat/articleshow-qkwu2at"/>
        </item>
        <item>
            <title><![CDATA[ಅನಂತ್ ಅಂಬಾನಿ ವಂತಾರಾದಲ್ಲಿ ಮಾಧುರಿಗೆ ಸಿಕ್ತು ಪುನರ್ಜನ್ಮ, ಚೇತರಿಸಿಕೊಂಡು ನಂದನಿ ಮಠಕ್ಕೆ ಮರಳಿದ ಮಹಾದೇವಿ!]]></title>
            <link>https://kannada.asianetnews.com/india-news/elephant-madhuri-returns-to-kolhapur-after-successful-ananth-ambani-vantara-rehabilitation-gdp/articleshow-4ge7y7k</link>
            <guid isPermaLink="true">https://kannada.asianetnews.com/india-news/elephant-madhuri-returns-to-kolhapur-after-successful-ananth-ambani-vantara-rehabilitation-gdp/articleshow-4ge7y7k</guid>
            <pubDate>Sat, 12 Sep 2026 15:28:42 +0530</pubDate>
            <description><![CDATA[&lt;p&gt;ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 'ಮಾಧುರಿ' ಆನೆಯು, ಗುಜರಾತ್&zwnj;ನ ವಂತಾರಾ ಪುನರ್ವಸತಿ ಕೇಂದ್ರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಶೇಷ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದೆ. ಉನ್ನತಾಧಿಕಾರ ಸಮಿತಿಯ ಅನುಮೋದನೆಯೊಂದಿಗೆ, ಕಟ್ಟುನಿಟ್ಟಾದ ಷರತ್ತುಗಳ ಅಡಿಯಲ್ಲಿ ಆನೆಯು ತನ್ನ ಮೂಲ ನಿವಾಸವಾದ ಕೊಲ್ಹಾಪುರಕ್ಕೆ ಮರಳುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2agtbhsmzscgnhz318pm7j5,imgname-elephant-madhuri-1789207064120.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಕೊಲ್ಹಾಪುರ:&lt;/strong&gt; ಗುಜರಾತ್&zwnj;ನ ಜಾಮ್&zwnj;ನಗರದಲ್ಲಿರುವ ಅಂಬಾನಿ ಸಮೂಹದ &lsquo;ವಂತಾರಾ&rsquo; (Vantara) ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಶೇಷ ವೈದ್ಯಕೀಯ ಆರೈಕೆ ಮತ್ತು ಪುನರ್ವಸತಿ ಪಡೆದ 'ಮಾಧುರಿ' (ಸ್ಥಳೀಯವಾಗಿ 'ಮಹಾದೇವಿ' ಎಂದೂ ಕರೆಯಲ್ಪಡುವ) ಆನೆ, ಅಂತಿಮವಾಗಿ ತನ್ನ ಮೂಲ ನಿವಾಸವಾದ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಮರಳುತ್ತಿದೆ. ತೀವ್ರ ಆರೋಗ್ಯ ಸಮಸ್ಯೆ ಹಾಗೂ ಚಲನಶೀಲತೆಯ ಸವಾಲುಗಳನ್ನು ಎದುರಿಸುತ್ತಿದ್ದ ಮಾಧುರಿ, ಈಗ ಚೇತರಿಸಿಕೊಂಡು ಕೊಲ್ಹಾಪುರಕ್ಕೆ ಮರಳುತ್ತಿರುವುದು ಒಂದು ಪ್ರಮುಖ ಮೈಲಿಗಲ್ಲಾಗಿದೆ.&lt;/p&gt;&lt;h2&gt;ಆರೋಗ್ಯ ಹದಗೆಡಲು ಕಾರಣವಾದ ಹಿನ್ನೆಲೆ:&lt;/h2&gt;&lt;p&gt;ಜುಲೈ 30, 2023 ರಂದು ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತಾಧಿಕಾರ ಸಮಿತಿಯ (HPC) ನಿರ್ದೇಶನದಂತೆ ಮಾಧುರಿಯನ್ನು ವಂತಾರಾಕ್ಕೆ ಕರೆತರಲಾಗಿತ್ತು. ವರ್ಷಗಳ ಕಾಲ ಗಟ್ಟಿಯಾದ ಕಾಂಕ್ರೀಟ್ ಮೇಲ್ಮೈಯಲ್ಲಿ ಕಟ್ಟಿಹಾಕಿದ್ದು, ಸರಪಳಿಗಳಿಂದ ನಿರ್ಬಂಧಿತ ಚಲನೆ, ಬಿಸಿ ಡಾಂಬರು ರಸ್ತೆಗಳಲ್ಲಿ ದೂರದವರೆಗೆ ನಡೆಸುವುದು ಹಾಗೂ ಹಬ್ಬ-ಹರಿದಿನಗಳ ಮೆರವಣಿಗೆಗಳಲ್ಲಿ ಭಾಗವಹಿಸುವಂತೆ ಮಾಡಿದ್ದರಿಂದ ಆಕೆಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ವಂಟಾರಾಕ್ಕೆ ಬಂದಾಗ ಆಕೆ ತೀವ್ರ ಸ್ವರೂಪದ ಸಂಧಿವಾತ (Arthritis), ದೀರ್ಘಕಾಲದ ಪಾದದ ಕೊಳೆತ (Foot Rot) ಮತ್ತು ತೀವ್ರ ಚಲನಶೀಲತೆಯ ಸಮಸ್ಯೆಗಳಿಂದ ಬಳಲುತ್ತಿದ್ದಳು.&lt;/p&gt;&lt;h2&gt;ವಂತಾರಾದಲ್ಲಿ ದೊರೆತ ಆಧುನಿಕ ಚಿಕಿತ್ಸೆ ಮತ್ತು ಒಡನಾಟ:&lt;/h2&gt;&lt;p&gt;ಅನಂತ್ ಅಂಬಾನಿ ಅವರ ಮಾರ್ಗದರ್ಶನದಲ್ಲಿ ವಂತಾರಾದ ಪಶುವೈದ್ಯರು, ಆರೈಕೆದಾರರು, ಪೌಷ್ಟಿಕತಜ್ಞರು ಹಾಗೂ ನಡವಳಿಕೆಯ ತಜ್ಞರ ತಂಡವು ಮಾಧುರಿಗೆ ತೀವ್ರ ಪುನರ್ವಸತಿ ಕಾರ್ಯಕ್ರಮವನ್ನು ರೂಪಿಸಿತು.&lt;/p&gt;&lt;p&gt;&lt;strong&gt;ದೈಹಿಕ ಚಿಕಿತ್ಸೆ: &lt;/strong&gt;ಜಲಚಿಕಿತ್ಸೆ (Hydrotherapy), ಲೇಸರ್ ಥೆರಪಿ, ವಿಶೇಷ ಪಾದದ ಆರೈಕೆ ಹಾಗೂ ಪೌಷ್ಟಿಕ ಆಹಾರ ನೀಡುವ ಮೂಲಕ ಚಲನಶೀಲತೆಯನ್ನು ಸುಧಾರಿಸಲಾಯಿತು.&lt;/p&gt;&lt;p&gt;&lt;strong&gt;ಭಾವನಾತ್ಮಕ ಪುನರ್ವಸತಿ: &lt;/strong&gt;ಸುರಕ್ಷಿತ ವಾತಾವರಣದಲ್ಲಿ ಇತರ ಆನೆಗಳೊಂದಿಗೆ ಸಂವಹನ ನಡೆಸಲು ಅವಕಾಶ ನೀಡಿದ್ದರಿಂದ, ವರ್ಷಗಳ ಬಂಧನದಿಂದ ಉಂಟಾಗಿದ್ದ ಮಾನಸಿಕ ಒತ್ತಡ ಕಡಿಮೆಯಾಗಿ ಭದ್ರತೆಯ ಪ್ರಜ್ಞೆ ಮೂಡಿತು.&lt;/p&gt;&lt;h2&gt;ಉನ್ನತಾಧಿಕಾರ ಸಮಿತಿ (HPC) ಅನುಮೋದನೆ ಮತ್ತು ಷರತ್ತುಗಳು:&lt;/h2&gt;&lt;p&gt;ಮಾಧುರಿಯ ಆರೋಗ್ಯದಲ್ಲಿ ಕಂಡುಬಂದ ಸುಧಾರಣೆಯನ್ನು ಪರಿಶೀಲಿಸಿದ ಉನ್ನತಾಧಿಕಾರ ಸಮಿತಿಯು (HPC) ಸೆಪ್ಟೆಂಬರ್ 9 ರಂದು ಕೊಲ್ಹಾಪುರಕ್ಕೆ ವರ್ಗಾಯಿಸಲು ಅಗತ್ಯವಾದ ಸಾರಿಗೆ ಪರವಾನಗಿಗಳನ್ನು ನೀಡಿದೆ. ಕೊಲ್ಹಾಪುರದ ನಂದನಿಯಲ್ಲಿರುವ ಸೌಲಭ್ಯವನ್ನು ಪರಿಶೀಲಿಸಿದ ನಂತರವೇ ಈ ಅನುಮತಿ ನೀಡಲಾಗಿದ್ದು, ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಲಾಗಿದೆ.&lt;/p&gt;&lt;ul&gt; &lt;li&gt;ಮಾಧುರಿಯನ್ನು ಇನ್ಮುಂದೆ ಯಾವುದೇ ಮೆರವಣಿಗೆ ಅಥವಾ ಇತರ ಧಾರ್ಮಿಕ/ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ.&lt;/li&gt; &lt;li&gt;ಆನೆಗೆ ದಿನದ 24 ಗಂಟೆಯೂ ನಿರಂತರ ಆರೈಕೆ ಸಿಗಬೇಕು.&lt;/li&gt; &lt;li&gt;ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯ ವೈದ್ಯಕೀಯ ಪರೀಕ್ಷೆ ನಡೆಯಬೇಕು.&lt;/li&gt;&lt;/ul&gt;&lt;h2&gt;ನಂದನಿ ಮಠಕ್ಕೆ ಸುಸಜ್ಜಿತ ಸಾರಿಗೆಯೊಂದಿಗೆ ವಾಪಸಾತಿ:&lt;/h2&gt;&lt;p&gt;ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ವಾಸಿಸುತ್ತಿದ್ದ ಕೊಲ್ಹಾಪುರದ ನಂದನಿ ಮಠಕ್ಕೆ ಮಾಧುರಿಯನ್ನು ಪಶುವೈದ್ಯಕೀಯ ತಂಡದೊಂದಿಗೆ ವಿಶೇಷವಾಗಿ ಸುಸಜ್ಜಿತವಾದ 'ಆನೆ ಆಂಬ್ಯುಲೆನ್ಸ್'ನಲ್ಲಿ ಕರೆತರಲಾಗುತ್ತಿದೆ. ನಂದನಿಯ ಆವರಣದಲ್ಲಿ ಅಗತ್ಯ ಮೂಲಸೌಕರ್ಯ, ವೈದ್ಯಕೀಯ ಉಪಕರಣ ಹಾಗೂ ಔಷಧಿಗಳ ವ್ಯವಸ್ಥೆ ಮಾಡಲು ವಂತಾರಾ ನೆರವಾಗಿದೆ. ಪ್ರಸ್ತುತ ಟೌನ್ ಪ್ಲಾನಿಂಗ್ ನಿಯಮಗಳಿಂದಾಗಿ ಮಠದ ಆವರಣದ ದೊಡ್ಡ ಮಟ್ಟದ ನವೀಕರಣಕ್ಕೆ ತಡೆಯಿದೆಯಾದರೂ, ಲಭ್ಯವಿರುವ ಜಾಗದಲ್ಲೇ ಉತ್ತಮ ವಾತಾವರಣ ನಿರ್ಮಿಸಲಾಗಿದೆ.&lt;/p&gt;&lt;p&gt;ವಂತಾರಾದ ಪಶುವೈದ್ಯರು ಪ್ರತಿ ಹದಿನೈದು ದಿನಗಳಿಗೊಮ್ಮೆ ಕೊಲ್ಹಾಪುರಕ್ಕೆ ಭೇಟಿ ನೀಡಿ ಮಾಧುರಿಯನ್ನು ತಪಾಸಣೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ.&lt;/p&gt;&lt;p&gt;&quot;ಮಾಧುರಿಯ ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆ. ಆಕೆಯ ಆರೋಗ್ಯ, ಕಲ್ಯಾಣ ಮತ್ತು ಘನತೆಗೆ ನಮ್ಮ ಬದ್ಧತೆ ಎಂದಿಗೂ ಮುಂದುವರಿಯುತ್ತದೆ,&quot; ಎಂದು ವಂತಾರಾ ಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/elephant-madhuri-returns-to-kolhapur-after-successful-ananth-ambani-vantara-rehabilitation-gdp/articleshow-4ge7y7k"/>
        </item>
        <item>
            <title><![CDATA[ಹಲವು ದಿನಗಳ ಬಳಿಕ ಸೀಮಾ ಹೈದರ್ ರೀಲ್ಸ್, ಡ್ಯಾನ್ಸ್‌ಗಿಂತ ಹೆಚ್ಚು ಚರ್ಚೆಯಾಗುತ್ತಿದೆ ಹಿಂದಿನ ಫೋಟೋ]]></title>
            <link>https://kannada.asianetnews.com/viral/seema-haider-latest-reels-grab-attention-due-to-photo-over-pakistani-woman-dance-clip/articleshow-eqcg4xl</link>
            <guid isPermaLink="true">https://kannada.asianetnews.com/viral/seema-haider-latest-reels-grab-attention-due-to-photo-over-pakistani-woman-dance-clip/articleshow-eqcg4xl</guid>
            <pubDate>Sat, 12 Sep 2026 15:00:49 +0530</pubDate>
            <description><![CDATA[&lt;p&gt;ಪ್ರೀತಿಗಾಗಿ ಪಾಕಿಸ್ತಾನ ಗಡಿ ದಾಟಿ ಬಂದು ಸಚಿನ್ ಮೀನಾ ವರಿಸಿದ ಸೀಮಾ ಹೈದರ್ ಈಗಾಗಲೇ 6 ಮಕ್ಕಳ ತಾಯಿಯಾಗಿ ಭಾರಿ ಸುದ್ದಿಯಾಗಿದ್ದಾರೆ. ಹಲವು ದಿನಗಳ ಬಳಿಕ ಸೀಮಾ ಹೈದರ್ ಡ್ಯಾನ್ಸ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆದರೆ ಸೀಮಾ ಡ್ಯಾನ್ಸ್&zwnj;ಗಿಂತ ಕೋಣೆಯಲ್ಲಿರುವ ಫೋಟೋ ಭಾರಿ ಚರ್ಚೆಯಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2af67hyp6mwekncx10mm01h,imgname-seema-haider-shares-reels-behind-photo-talk-of-the-town-1789205356092.png" type="image/jpeg" height="390" width="690"/>
            <content:encoded><![CDATA[&lt;p&gt;ಸೀಮಾ ಹೈದರ್ ಭಾರತ ಹಾಗೂ ಪಾಕಿಸ್ತಾನದಲ್ಲಿ ಬಾರಿ ಕೋಲಾಹಲ ಸೃಷ್ಟಿಸಿದ ಮಹಿಳೆ. ಮದುವೆಯಾಗಿ ಮಕ್ಕಳಿರುವಾಗಲೇ ಭಾರತದ ಸಚಿನ್ ಮೀನಾ ಜೊತೆ ಪ್ರೀತಿಯಲ್ಲಿ ಬಿದ್ದ ಸೀಮಾ ಹೈದರ್ ಮಕ್ಕಳ ಜೊತೆ ಭಾರತಕ್ಕೆ ಬಂದ ಸೀಮಾ ಇದೀಗ 6 ಮಕ್ಕಳ ತಾಯಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಸೀಮಾ ಹೈದರ್ ಸೈಲೆಂಟ್ ಆಗಿದ್ದರು. ಸುದೀರ್ಘ ದಿನಗಳ ಬಳಿಕ ಸೀಮಾ ಹೈದರ್ ಡ್ಯಾನ್ಸ್ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಆದರೆ ಸೀಮಾ ಹೈದರ್ ಮಾಡಿರುವ ಡ್ಯಾನ್ಸ್ ರೀಲ್ಸ್&zwnj;ಗಿಂತ ಹೆಚ್ಚು ಕೋಣೆಯಲ್ಲಿರುವ ಫೋಟೋ ಕುರಿತು ಭಾರಿ ಚರ್ಚೆಯಾಗುತ್ತಿದೆ.&lt;/p&gt;&lt;h2&gt;ವಿಡಿಯೋದಲ್ಲಿ ಕಾಣಿಸಿಕೊಂಡ ಫೋಟೋ ಯಾರದ್ದು?&lt;/h2&gt;&lt;p&gt;ಸೀಮಾ ಹೈದರ್ ತಮ್ಮ ಮನೆ ಅಥವಾ ಖಾಸಗಿ ಕೋಣೆಯಲ್ಲಿ ಡ್ಯಾನ್ಸ್ ವಿಡಿಯೋ ಮಾಡಿದ್ದಾರೆ. ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬೆಡ್ ಮೇಲೆ ಕುಳಿತು ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಸೀಮಾ ಹೈದರ್ ಈ ವಿಡಿಯೋ ಮಾಡುವಾ ಕೋಣೆಯ ಹಿಂಭಾಗದಲ್ಲಿ ಫೋಟೋ ಒಂದು ಕಾಣಿಸಿಕೊಂಡಿದೆ. ಸೀಮಾ ಹೈದರ್ ಪತಿ ಸಚಿನ್ ಮೀನಾ ಫೋಟೋ ಅಲ್ಲ. ಹೀಗಾಗಿ ಎಲ್ಲರ ಚಿತ್ತ ಈ ಫೋಟೋ ಮೇಲೆ ನೆಟ್ಟಿದೆ. ಸೀಮಾ ಹೈದರ್ ಡ್ಯಾನ್ಸ್ ರೀಲ್ಸ್&zwnj;ನ ಹಿಂದೆ ಕಾಣಿಸುವ ಫೋಟೋ ಆಕೆಯ ವಕೀಲರ ಫೋಟೋ. ಸೀಮಾ ಹೈದರ್ ವಕೀಲ ಎಪಿ ಸಿಂಗ್ ಫೋಟೋ ಇದೀಗ ಭಾರಿ ಚರ್ಚೆಯಾಗುತ್ತಿದೆ.&lt;/p&gt;&lt;h2&gt;ಬೆಡ್ ರೂಂನಲ್ಲಿ ಲಾಯರ್ ಫೋಟೋ&lt;/h2&gt;&lt;p&gt;ಸೀಮಾ ಹೈದರ್ ಬೆಡ್ ರೂಂನಲ್ಲಿ ಎಪಿ ಸಿಂಗ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಬೆಡ್&zwnj;ರೂಂನಲ್ಲಿ ಸೀಮಾ ಹೈದರ್ ಪತಿ ಫೋಟೋ ಇರುವುದು ಸಾಮಾನ್ಯ, ಅಥವಾ ಸೀಮಾ ಹೈದರ್, ಸಚಿನ್ ಮೀನಾ ಕುಟುಂಬಸ್ಥರ ಫೋಟೋ ಇದ್ದರೂ ವಿಶೇಷವಲ್ಲ, ಆದರೆ ಲಾಯರ್ ಫೋಟೋ ಹಿಂದಿನ ರಹಸ್ಯವೇನು ಎಂದು ಹಲವರು ಪ್ರಶ್ನಿಸಿದ್ದಾರೆ. ಸೀಮಾ ಹೈದರ್ ಭಾರತಕ್ಕೆ ಬಂದ ಬಳಿಕ ಹಲವು ಕಾನೂನು ತೊಡಕು, ಸಮಸ್ಯೆಗಳು ಎದುರಾಗಿತ್ತು. ಈ ವೇಳೆ ಸೀಮಾ ಹೈದರ್ ಪರ್ ಎಪಿ ಸಿಂಗ್ ಹಾಜರಾಗಿದ್ದರು. ಮಾಧ್ಯಮಗಳಲ್ಲೂ ಎಪಿ ಸಿಂಗ್ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದೀಗ ಸೀಮಾ ಹೈದರ್ ಬೆಡ್ ರೂಂನಲ್ಲಿರುವ ಎಪಿ ಸಿಂಗ್ ಫೋಟೋ ಕೋಲಾಹಲಕ್ಕೆ ಕಾರಣವಾಗಿದೆ.&lt;/p&gt;&lt;p&gt;ಸೀಮಾ ಹೈದರ್ ರೀಲ್ಸ್ ವಿಡಿಯೋಗಿಂತ ಹೆಚ್ಚು ಇದೀಗ ಲಾಯರ್ ಫೋಟೋ ಚರ್ಚೆಯಾಗುತ್ತಿದೆ. ಹಲವು ಸೀಮಾ ಹೈದರ್ ಭಾರತದಲ್ಲಿ ಉಳಿದುಕೊಳ್ಳಲು ಎಪಿ ಸಿಂಗ್ ಕಾರಣರಾಗಿದ್ದಾರೆ. ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಪರ ವಾದಿಸಿ ಕಾನೂನು ಗೆಲುವು ತಂದುಕೊಟ್ಟಿದ್ದಾರೆ. ಹೀಗಾಗಿ ಎಪಿ ಸಿಂಗ್ ಫೋಟೋ ಇಟ್ಟುಕೊಂಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ. ಆದರೆ ಚರ್ಚೆ, ಪ್ರಶ್ನೆಗಳು ತೀವ್ರಗೊಳ್ಳುತ್ತಿದೆ.&lt;/p&gt;&lt;p&gt;ಸೀಮಾ ಹೈದರ್ 2023ಮೇ ತಿಂಗಳಲ್ಲಿ ಪಾಕಿಸ್ತಾನದ ಗಂಡನ ಬಿಟ್ಟು ಮಕ್ಕಳ ಜೊತೆ ನೇರವಾಗಿ ನೇಪಾಳಕ್ಕೆ ಬಂದಿದ್ದರು. ಇತ್ತ ಸೀಮಾ ಹೈದರ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ರಿಲೇಶನ್&zwnj;ಶಿಪ್ ಬೆಳೆಸಿಕೊಂಡ ಸಚಿನ್ ಮೀನಾ ಕೂಡ ನೇರವಾಗಿ ನೇಪಾಳಕ್ಕೆ ಹೋಗಿ ಭೇಟಿಯಾಗಿದ್ದರು. ಪಬ್&zwnj;&zwj;ಜಿ ಗೇಮ್ ಮೂಲಕ ಇವರಿಬ್ಬರು ಆನ್&zwnj;ಲೈನ್ ಮೂಲಕ ಬೇಟಿಯಾಗಿದ್ದರು. ಬಳಿಕ ಈ ಪರಿಚಯ, ಪ್ರೀತಿಯಾಗಿ ತಿರುಗಿತ್ತು. ಬಳಿಕ ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಪತ್ತೆಯಾಗಿದ್ದರು. ಸೀಮಾ ಹೈದರ್ ಪತ್ತೆ ಪ್ರಕರಣ ಕೋಲಾಹಲ ಸೃಷ್ಟಿಸಿತ್ತು. ಒಂದೆಡೆ ಪಾಕಿಸ್ತಾನದ ಗಂಡ ಕೂಡ ಪ್ರಕರಣ ದಾಖಲಿಸಿದ್ದರೆ, ಇತ್ತ ಪಾಕಿಸ್ತಾನದಿಂದ ಬಂದು ದಾಖಲೆಗಳಿಲ್ಲದೆ ಭಾರತದಲ್ಲಿ ಇರುವಿಕೆ ಕುರಿತು ಕೆಲ ಪ್ರಕರಣ ದಾಖಲಾಗಿತ್ತು. ಈ ವೇಳೆ ಸಚಿನ್ ಮೀನಾ ಹಾಗೂ ಸೀಮಾ ಹೈದರ್ ವಕೀಲರಾಗಿ ಎಪಿ ಸಿಂಗ್ ನೇಮಕ ಮಾಡಿದ್ದರು.&lt;/p&gt;&lt;p&gt;सीमा हैदर का यह वीडियो वायरल हो रहा है।वायरल होने का कारण सीमा हैदर के बेडरूम में उनके वकील की फोटो लगी होना है।लोग कह रहे हैं कि सचिन की जगह वकील की फोटो क्यों लगी। pic.twitter.com/BCq4fo6WOV&lt;/p&gt;&lt;p&gt;&mdash; Rajendra Raj (@iamrajendraraj) September 12, 2026&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/seema-haider-latest-reels-grab-attention-due-to-photo-over-pakistani-woman-dance-clip/articleshow-eqcg4xl"/>
        </item>
        <item>
            <title><![CDATA[ದುಡ್ಡು ದುಡ್ಡು,  ದೇಶದ ಟಾಪ್‌ 5 ಶ್ರೀಮಂತ ನಗರಗಳಲ್ಲಿ ನಮ್ಮ ಬೆಂಗಳೂರಿಗೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/bengaluru-urban/what-rank-does-bengaluru-hold-among-the-country-is-top-5-wealthiest-cities-and-india-richest-citygkn/articleshow-io2dse5</link>
            <guid isPermaLink="true">https://kannada.asianetnews.com/bengaluru-urban/what-rank-does-bengaluru-hold-among-the-country-is-top-5-wealthiest-cities-and-india-richest-citygkn/articleshow-io2dse5</guid>
            <pubDate>Sat, 12 Sep 2026 14:16:49 +0530</pubDate>
            <description><![CDATA[&lt;p&gt;ದೇಶದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸಿಟಿ ಯಾವುದು? ನಿಮಗೆ ಗೊತ್ತಾ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ ಎಂದು? ಈ ಕುರಿತ ಕಂಪ್ಲೀಟ್&zwnj; ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2acr3d2y9jxt153jtcqae6a,imgname-richest-city-in-india-1789202795937.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತ ಕೂಡ ಒಂದು. ಅದಕ್ಕೆ ನಮ್ಮ ಮಹಾನಗರಗಳು ಪ್ರಮುಖ ಪಾತ್ರವಹಿಸುತ್ತವೆ. ಬೆಂಗಳೂರು, ಹೈದರಾಬಾದ್&zwnj;, ಮುಂಬೈ, ದೆಹಲಿ, ಅಹ್ಮದಾಬಾದ್&zwnj; ಸೇರಿದಂತೆ ಪ್ರಮುಖ ನಗರಗಳು ದೇಶದ ಬೆಳವಣಿಗೆಗೆ ಅಮೂಲ್ಯ ಕೊಡುಗೆಗಳನ್ನ ನೀಡುತ್ತಿವೆ. ನಿಮಗೆ ದೇಶದ ಯಾವ ನಗರವು ಆದಾಯ ಮತ್ತು ಸಂಪತ್ತಿನ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಗೊತ್ತಾ? ಇತ್ತೀಚೆಗೆ ಜಿಡಿಪಿ ದತ್ತಾಂಶದ ಮಾಹಿತಿ ಪ್ರಕಾರ ದೇಶದ ಮಹಾನಗರಗಳ ಕೊಡುಗೆ ಇಲ್ಲಿದೆ.&lt;/p&gt;&lt;h2&gt;&lt;strong&gt;ಮುಂಬೈ ಕೊಡುಗೆ ಏನು?&lt;/strong&gt;&lt;/h2&gt;&lt;p&gt;ಅತ್ಯಂತ ಶ್ರೀಮಂತ ಮತ್ತು ಆದಾಯದ ದೃಷ್ಟಿಯಿಂದ ಮುಂಬೈ ಮೊದಲ ಸ್ಥಾನದಲ್ಲಿದೆ. ಹಣಕಾಸು ವರ್ಷದ ಅಂಕಿ-ಅಂಶಗಳ ಪ್ರಕಾರ.. ಮುಂಬೈನ GDP ಸುಮಾರು $310 ಬಿಲಿಯನ್ ಅಂದರೆ ಸರಿಸುಮಾರು ₹25 ಲಕ್ಷ ಕೋಟಿ. ಅತಿದೊಡ್ಡ ಷೇರು ವಿನಿಮಯ ಕೇಂದ್ರ ಇರೋದು ಇದೇ ಮುಂಬೈನಲ್ಲಿ. ಈ ಎಲ್ಲಾ ಕಾರಣಗಳಿಂದ ಮುಂಬೈ ನಗರವನ್ನು ಭಾರತದ ಆರ್ಥಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಬಾಲಿವುಡ್, ಬಂದರುಗಳಲ್ಲಿ ನಡೆಯುವ ದಾಖಲೆಯ ವ್ಯವಹಾರಗಳು ಆದಾಯಕ್ಕೆ ಪ್ರಮುಖ ಕೊಡುಗೆಗಳನ್ನ ನೀಡುತ್ತವೆ.&lt;/p&gt;&lt;h2&gt;&lt;strong&gt;ದೆಹಲಿ NCR&lt;/strong&gt;&lt;/h2&gt;&lt;p&gt;ಇನ್ನು, ಎರಡನೇ ಪಟ್ಟಿಯಲ್ಲಿ ದೇಶದ ರಾಜಧಾನಿ ದೆಹಲಿ ಮತ್ತು ಅದರ NCR ಪ್ರದೇಶಗಳು ಬರುತ್ತವೆ. ದೆಹಲಿ-NCR ಸುಮಾರು 293.6 ಬಿಲಿಯನ್ ಡಾಲರ್ ಜಿಡಿಪಿ ಹೊಂದಿದೆ. ದೆಹಲಿ ದೇಶದ ರಾಜಕೀಯ ಕೇಂದ್ರ ಮಾತ್ರವಲ್ಲದೇ, ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದೆ. ಅಲ್ಲೇ ಸಮೀಪವಿರುವ ಗುರುಗ್ರಾಮ್ ವಿಶ್ವದ ಕೆಲವು ದೊಡ್ಡ ಕಾರ್ಪೊರೇಟ್ ಕಂಪನಿಗಳ ಕಚೇರಿ ಹೊಂದಿದೆ. ಆದರೆ ನೋಯ್ಡಾ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿದೆ.&lt;/p&gt;&lt;h2&gt;&lt;strong&gt;ಕೋಲ್ಕತ್ತಾ&lt;/strong&gt;&lt;/h2&gt;&lt;p&gt;ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ದೇಶದ ಶ್ರೀಮಂತ ನಗರಗಳಲ್ಲಿ ಮೂರನೇ ಸ್ಥಾವನ್ನು ಪಡೆದುಕೊಂಡಿದೆ. ಕೋಲ್ಕತ್ತಾದ ಒಟ್ಟು GDP ಸುಮಾರು $150 ಬಿಲಿಯನ್ ಎಂದು ಹೇಳಲಾಗಿದೆ. ಕೋಲ್ಕತ್ತಾವನ್ನು ಈಶಾನ್ಯ ಭಾರತದ ಅತಿದೊಡ್ಡ ವಾಣಿಜ್ಯ ಕೇಂದ್ರ ಎಂದು ಹೇಳುತ್ತಾರೆ. ಸೆಣಬಿನ ಉದ್ಯಮ, ಚಹಾ ವ್ಯಾಪಾರ, ಬಂದರುಗಳು, ಬ್ಯಾಂಕಿಂಗ್ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಿಂದಾಗಿ ಬಲವಾದ ಆರ್ಥಿಕ ಶಕ್ತಿ ಕೇಂದ್ರವಾಗಿ ಇಂದಿಗೂ ಉಳಿದುಕೊಂಡಿದೆ.&lt;/p&gt;&lt;h2&gt;&lt;strong&gt;ಬೆಂಗಳೂರು&lt;/strong&gt;&lt;/h2&gt;&lt;p&gt;ಕನ್ನಡಿಗರ ರಾಜಧಾನಿ ಬೆಂಗಳೂರು ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬೆಂಗಳೂರು ಸುಮಾರು 110 ಬಿಲಿಯನ್ ಡಾಲರ್&zwnj; ಜಿಡಿಪಿ ಹೊಂದಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಮತ್ತು ಸ್ಟಾರ್ಟ್ಅಪ್ ರಾಜಧಾನಿ ಅಂತಲೂ ಕರೆಯಲಾಗುತ್ತದೆ. ವಿಶ್ವದ ದೈತ್ಯ ಐಟಿ ಮತ್ತು ಸಾಫ್ಟ್&zwnj;ವೇರ್ ಕಂಪನಿಗಳು, ಏರೋಸ್ಪೇಸ್ ಉದ್ಯಮ ಮತ್ತು ಬಯೋಟೆಕ್ ಸಂಸ್ಥೆಗಳು ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತವೆ. ಬೆಂಗಳೂರು ಹೆಚ್ಚು ಟೆಕ್ ಪ್ರೊಫೆಷನಲಿಸ್ಟ್&zwnj; ಮತ್ತು ಹೊಸ ಮಿಲಿಯನೇರ್&zwnj;ಗಳನ್ನ ಹುಟ್ಟು ಹಾಕುತ್ತದೆ.&lt;/p&gt;&lt;h2&gt;&lt;strong&gt;ಚೆನ್ನೈ&lt;/strong&gt;&lt;/h2&gt;&lt;p&gt;ದಕ್ಷಿಣ ಭಾರತದ ಪ್ರಮುಖ ಮಹಾನಗರ ಚೆನ್ನೈ. ಈ ಪಟ್ಟಿಯಲ್ಲಿ ಅದು 5ನೇ ಸ್ಥಾನವನ್ನು ಪಡೆದುಕೊಂಡಿದೆ. ಅಂದಾಜು $90 ರಿಂದ $100 ಬಿಲಿಯನ್ ಜಿಡಿಪಿಯೊಂದಿಗೆ, ಚೆನ್ನೈ ದೇಶದ ಅತಿದೊಡ್ಡ ಆಟೋಮೊಬೈಲ್ ಉದ್ಯಮಕ್ಕೆ ನೆಲೆಯಾಗಿದೆ. ಚೆನ್ನೈ ಬಂದರಿನ ಮೂಲಕ ಜಾಗತಿಕ ವ್ಯಾಪಾರ ಮತ್ತು ವೇಗವಾಗಿ ಬೆಳೆಯುತ್ತಿರುವ ಜವಳಿ ಮತ್ತು ಜವಳಿ ಕ್ಷೇತ್ರಗಳು ದೇಶಕ್ಕೆ ಪ್ರಮುಖ ಕೊಡುಗೆಗಳನ್ನು ನೀಡುತ್ತಿವೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/what-rank-does-bengaluru-hold-among-the-country-is-top-5-wealthiest-cities-and-india-richest-citygkn/articleshow-io2dse5"/>
        </item>
        <item>
            <title><![CDATA[ಶ್ರೀಶಾಂತ್‌ ಅವರ ತಂದೆ ನಿಧನ, ತೀವ್ರ ದುಃಖದಲ್ಲಿ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/cricket-sports/former-cricketer-s-sreesanths-father-v-santhakumaran-nair-has-passed-away-gkn/articleshow-ggyyob3</link>
            <guid isPermaLink="true">https://kannada.asianetnews.com/cricket-sports/former-cricketer-s-sreesanths-father-v-santhakumaran-nair-has-passed-away-gkn/articleshow-ggyyob3</guid>
            <pubDate>Sat, 12 Sep 2026 13:23:17 +0530</pubDate>
            <description><![CDATA[&lt;p&gt;ಭಾರತ ಕ್ರಿಕೆಟ್&zwnj; ತಂಡದ ಮಾಜಿ ಆಟಗಾರ ಎಸ್&zwnj;.ಶ್ರೀಶಾಂತ್&zwnj; ಅವರ ತಂದೆ ವಿ.ಶಾಂತಕುಮಾರನ್&zwnj; ನಿಧನರಾಗಿದ್ದು, ಗಣ್ಯರು ಸಂತಾಪ ಸೂಚಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2a90hzmxa69nr49arca8a3n,imgname-sreesanth-father-dies-at-89-1789198878708.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಎಸ್&zwnj;.ಶ್ರೀಶಾಂತ್&zwnj; ಅವರ ತಂದೆ ವಿ.ಶಾಂತಕುಮಾರನ್&zwnj; ನಾಯರ್&zwnj; ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಎರ್ನಾಕುಲಂನ ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ ಎಂದು ವಾರದಿಯಾಗಿದೆ.&lt;/p&gt;&lt;p&gt;ವಿ.ಶಾಂತಕುಮಾರನ್&zwnj; ನಾಯರ್&zwnj; ಅವರು ಪತ್ನಿ ಟಿ.ಎನ್&zwnj;.ಸಾವಿತ್ರಿ ದೇವಿ, ಮಕ್ಕಳಾದ ದೀಪು, ನಿವೇದಿತಾ, ದಿವ್ಯಾ ಹಾಗೂ ಶ್ರೀಶಾಂತ್&zwnj; ಅವರನ್ನು ಅಗಲಿದ್ದಾರೆ. ತಂದೆಯನ್ನು ಕಳೆದುಕೊಂಡ ಶ್ರೀಶಾಂತ್&zwnj;ಗೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಇನ್ನು ವಿ.ಶಾಂತಕುಮಾರನ್&zwnj; ಅವರ ಪಾರ್ಥಿವ ಶರೀರವನ್ನು ಕೊಟ್ಟಮಂಗಲಂನಲ್ಲಿರುವ ಅವರ ಪೂರ್ವಜನರ ನಿವಾಸಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಕೆಲವು ವರದಿಗಳ ಪ್ರಕಾರ, ಶ್ರೀಶಾಂತ್&zwnj; ಕುಟುಂಬದ&zwnj; ಕೆಲವು ಸದಸ್ಯರು ವಿದೇಶದಲ್ಲಿದ್ದಾರೆ. ಅವರು ಕೇರಳಕ್ಕೆ ಹಿಂದಿರುಗಿದ ನಂತರ ಕೊಟ್ಟಮಂಗಲಂನಲ್ಲಿರುವ ಪೂರ್ವಜರ ಮನೆಗೆ ಮೃತದೇಹ ಕೊಂಡೊಯ್ಯಲಿದ್ದಾರೆ ಎಂದು ಹೇಳಲಾಗಿದೆ. ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ. ವಿ.ಶಾಂತಕುಮಾರನ್&zwnj; ನಾಯರ್&zwnj; ಅವರು ಭಾರತೀಯ ಜೀವ ವಿಮಾ ನಿಗಮದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು.&lt;/p&gt;&lt;p&gt;ತಂದೆಯನ್ನು ಕಳೆದುಕೊಂಡ ಶ್ರೀಶಾಂತ್&zwnj; ಅವರಿಗೆ ಕ್ರಿಕೆಟ್&zwnj; ದಿಗ್ಗಜರು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. 43 ವರ್ಷದ ಶ್ರೀಶಾಂತ್&zwnj; 2022 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್&zwnj;ನಿಂದ ನಿವೃತ್ತಿ ಹೊಂದಿದ್ದಾರೆ. ಅವರು ಭಾರತ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 87, 75 ಮತ್ತು 7 ವಿಕೆಟ್&zwnj;ಗಳನ್ನು ಕಬಳಿಸಿದ್ದಾರೆ. 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಎಸ್. ಶ್ರೀಶಾಂತ್ ಐಪಿಎಲ್ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದರು. 2015 ರಲ್ಲಿ ಕೆಳ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದರೂ ಅಂತರರಾಷ್ಟ್ರೀಯ ಕ್ರಿಕೆಟ್ ಅಥವಾ ಐಪಿಎಲ್&zwnj;ಗೆ ಮರಳಲು ಸಾಧ್ಯವಾಗಲಿಲ್ಲ.&lt;/p&gt;&lt;p&gt;STORY | Former Indian cricketer Sreesanth&rsquo;s father dies at 89&lt;/p&gt;&lt;p&gt;V Santhakumaran Nair, father of former Indian cricketer S Sreesanth, died at a private hospital here, family sources said on Saturday. He was 89.&lt;/p&gt;&lt;p&gt;He was undergoing treatment at Lisie Hospital here and died at 9.45 pm on Friday, family sources said.&lt;/p&gt;&lt;p&gt;READ: https://t.co/jfDMoUpnkL&lt;/p&gt;&lt;p&gt;&mdash; Press Trust of India (@PTI_News) September 12, 2026&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/former-cricketer-s-sreesanths-father-v-santhakumaran-nair-has-passed-away-gkn/articleshow-ggyyob3"/>
        </item>
        <item>
            <title><![CDATA[ಬೆಳಗಾವಿ, ಬಾಗಲಕೋಟೆಯ ಖೋವಾ, ಪನೀರ್ ಮಹಾರಾಷ್ಟ್ರದಲ್ಲಿ ವಶ; 600 KG ಖೋವಾ, 12,500 KG ಪನೀರ್ ಜಪ್ತಿ]]></title>
            <link>https://kannada.asianetnews.com/india-news/belgaum-khoa-of-bagalkot-paneer-seized-in-maharashtra-600-kg-khoa-12500-kg-paneer-seized-sns/articleshow-y8fak3s</link>
            <guid isPermaLink="true">https://kannada.asianetnews.com/india-news/belgaum-khoa-of-bagalkot-paneer-seized-in-maharashtra-600-kg-khoa-12500-kg-paneer-seized-sns/articleshow-y8fak3s</guid>
            <pubDate>Sat, 12 Sep 2026 10:56:39 +0530</pubDate>
            <description><![CDATA[ಗಣಪತಿ ಹಬ್ಬದ ಮುನ್ನ ಮಹಾರಾಷ್ಟ್ರದ ಎಫ್&zwnj;ಡಿಎ, ಕರ್ನಾಟಕದ ಬೆಳಗಾವಿ ಮತ್ತು ಬಾಗಲಕೋಟೆಯಿಂದ ಸಾಗಿಸುತ್ತಿದ್ದ 4600 ಕೆ.ಜಿ. ಕಳಪೆ ಖೋವಾ ಮತ್ತು 12,500 ಕೆ.ಜಿ. ಪನೀರ್ ಅನ್ನು ವಶಪಡಿಸಿಕೊಂಡಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 39 ಲಕ್ಷ ಮೌಲ್ಯದ ಆಹಾರೋತ್ಪನ್ನಗಳನ್ನು ಜಪ್ತಿ ಮಾಡಲಾಗಿದ್ದು, ನಕಲಿ ಪನೀರ್ ಮತ್ತು ಖೋವಾವನ್ನು ಪತ್ತೆ ಹಚ್ಚುವ ವಿಧಾನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0mbj5w721tmmzhvcdv3p3zn,imgname-fake-paneer-1787389613959.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುಣೆ: &lt;/strong&gt;ಗಣಪತಿ ಹಬ್ಬಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್&zwnj;ಡಿಎ) ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಬೆಳಗಾವಿ, ಬಾಗಲಕೋಟೆಯಿಂದ ಸಾಗಿಸಲಾಗುತ್ತಿದ್ದ ಕಳಪೆ ಗುಣಮಟ್ಟ ಹೊಂದಿದ್ದ 4600 ಕೆ.ಜಿ. ಖೋವಾ, 12,500 ಕೆ.ಜಿ ಪನೀರ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.&lt;/p&gt;&lt;h2&gt;ಹಬ್ಬದ ಹೊತ್ತಲ್ಲಿ ಬಯಲಾಯ್ತು 'ಸಿಹಿ' ರಹಸ್ಯ!&lt;/h2&gt;&lt;p&gt;ಈ ಬಗ್ಗೆ 10-12 ದಿನಗಳಿಂದ ಪೊಲೀಸರು ಗುಪ್ತಚರ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆಯನ್ನು ನಡೆಸಿ 39 ಲಕ್ಷ ರು. ಮೌಲ್ಯದ ಆಹಾರೋತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;p&gt;ಈ ಪೈಕಿ ಖೋವಾ ಸುಮಾರು 11.60 ಲಕ್ಷ ರು. ಮೌಲ್ಯದಾಗಿದ್ದು, ಅನೈರ್ಮಲ್ಯ ಸ್ಥಿತಿಯಲ್ಲಿ ಗೋಣಿ ಜಿಲ್ಲೆಗಳಲ್ಲಿ ಸಾಗಿಸಲಾಗುತ್ತಿತ್ತು, ಇನ್ನು ಎರಡು ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ವಿವಿಧ ಬಗೆಯ ಪನೀರ್&zwnj;ಗಳು ಜಪ್ತಿಯಾಗಿದ್ದು ಇದರ ಮೌಲ್ಯ, 27.83 ಲಕ್ಷ ರು. ಎಂದು ತಿಳಿದು ಬಂದಿದೆ. ಇವುಗಳನ್ನು ಬೆಳಗಾವಿ, ಬಾಗಲಕೋಟೆ ಸೇರಿದಂತೆ ಕರ್ನಾಟಕ ಗಡಿಯ ಕೆಲವು ಭಾಗಗಳಿಂದ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಸದ್ಯ ಅಧಿಕಾರಿಗಳು ಅವುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.&lt;/p&gt;&lt;h2&gt;ನಕಲಿ ಪನೀರ್, ಖೋವಾ ಪತ್ತೆ ಹಚ್ಚುವುದು ಹೇಗೆ?&lt;/h2&gt;&lt;p&gt;ನಿಜವಾದ ಪನೀರ್ ಮೃದುವಾಗಿರುತ್ತದೆ. ಆದರೆ ನಕಲಿ ರಬ್ಬರ್&zwnj;ನಂತೆ ಹಿಗ್ಗುವಂತೆ ಭಾಸವಾಗುತ್ತದೆ. ಶುದ್ಧ ಪನೀರ್ ಹಗುರವಾದ ಸ್ವಚ್ಛವಾದ ಹಾಲಿನ ಪರಿಮಳವನ್ನು ಹೊಂದಿರುತ್ತದೆ. ದರೆ ಕಲಬೆರಕೆ ಮಾಡಿದ ಪನೀರ್ ಹುಳಿ ರಾಸಾಯನಿಕದಂತಹ ವಾಸನೆಯನ್ನು ಹೊಂದಿರುತ್ತದೆ. ಒಂದು ಸಣ್ಣ ಪನೀರ್ ಅನ್ನು ಕುದಿಸಿ, ಆ ಬಳಿಕ ತಣ್ಣಗಾಗಲು ಬಿಡಿ. ಕೆಲವು ಹನಿ ಅಯೋಡಿನ್ ದ್ರಾವಣ ಸೇರಿಸಿದರೆ, ಅದು ನೀಲಿ ಅಥವಾ ಕಪ್ಪು ಬಣಕ್ಕೆ ತಿರುಗಿದರೆ ಅದರಲ್ಲಿ ಪಿಷ್ಟವಿರುತ್ತದೆ. ಪ್ಯಾಕ್ ಮಾಡಲಾದ ಅನಲಾಗ್ ಪನೀರ್ ಅನ್ನು ಎಫ್&zwnj;ಎಸ್&zwnj;ಎಸ್&zwnj;ಎಐ ಲೇಬಲ್ ಪರಿಶೀಲನೆ ಮಾಡಿ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/belgaum-khoa-of-bagalkot-paneer-seized-in-maharashtra-600-kg-khoa-12500-kg-paneer-seized-sns/articleshow-y8fak3s"/>
        </item>
        <item>
            <title><![CDATA[ಸಚಿವ ಜಾರಕಿಹೊಳೆ ಮನೆ ಮೇಲೆ ಇಡಿ ದಾಳಿಗೆ ವಿಜಯ್ ಮಲ್ಯ ಕೆಂಡಾಮಂಡಲ, ತನ್ನಿಷ್ಟದ ದೇಗುಲ ನೆನೆದು ಬೇಸರ!]]></title>
            <link>https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq</link>
            <guid isPermaLink="true">https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq</guid>
            <pubDate>Sat, 12 Sep 2026 10:19:36 +0530</pubDate>
            <description><![CDATA[ಸಚಿವ ಸತೀಶ್ ಜಾರಕಿಹೊಳೆ ಆಪ್ತರ ಮೇಲಿನ ಇಡಿ ದಾಳಿಯನ್ನು ಉದ್ಯಮಿ ವಿಜಯ್ ಮಲ್ಯ 'ಎಕ್ಸ್'ನಲ್ಲಿ ಖಂಡಿಸಿದ್ದಾರೆ. ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಎಂದಿರುವ ಅವರು, ಇದು ಸಾರ್ವಜನಿಕ ಚಾರಿತ್ರ್ಯ ವಧೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29ywc4316j1cpx6kr99k0xm,imgname-satish-jarkiholi-vijay-mallya-1789188255874.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ಮನೆಗಳ ಮೇಲಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದೇಶದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಅವರು, ಯಾವುದೇ ಸೂಕ್ತ ಚಾರ್ಜ್&zwnj;ಶೀಟ್ ಸಲ್ಲಿಸದೆ ಹಾಗೂ ನ್ಯಾಯಯುತ ವಿಚಾರಣೆ ನಡೆಸದೆ, ಕೇವಲ ಸಾರ್ವಜನಿಕವಾಗಿ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವುದರಲ್ಲಿ ಇಡಿ ಹೆಮ್ಮೆ ಪಟ್ಟುಕೊಳ್ಳುತ್ತಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಇಂತಹ ಜಾರಿ ಸಂಸ್ಥೆಗಳ ನಡವಳಿಕೆಯನ್ನು ಕಾಣಲು ಸಾಧ್ಯವಿಲ್ಲ. ನಾಗರಿಕರು ಈ ಬಗ್ಗೆ ಯೋಚಿಸಬೇಕು ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ತಮ್ಮ ಮೇಲಿನ ಆರೋಪಗಳು ಹಾಗೂ ಸಾರ್ವಜನಿಕ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಮಲ್ಯ, ನನ್ನನ್ನು ಪ್ರೀತಿಸಿ, ದ್ವೇಷಿಸಿ, ನಿಂದಿಸಿ ಅಥವಾ ನಿರ್ಲಕ್ಷಿಸಿ ಆದರೆ ನಾನು ಎಂದಿಗೂ ಬದಲಾಗುವುದಿಲ್ಲ. ದೇವರು ನನಗೆ ಸಾಟಿಯಿಲ್ಲದ ಧೈರ್ಯ ಮತ್ತು ಶಕ್ತಿಯನ್ನು ನೀಡಿದ್ದಾನೆ. ಕೊನೆಯಲ್ಲಿ ಸತ್ಯವೇ ಜಯಗಳಿಸಲಿದೆ ಎಂಬ ನಂಬಿಕೆ ನನಗಿದೆ. ಭಾರತದಲ್ಲಿರುವ ನಾನು ಪೂಜಿಸುವ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಲಾಗದಿರುವುದು ನನಗೆ ಅತ್ಯಂತ ಬೇಸರ ತಂದಿದೆ. ನಾನು ದೇವಾಲಯ ಭೇಟಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದಾಗ್ಯೂ, ನನ್ನ ಧಾರ್ಮಿಕ ಚೌಕಟ್ಟು ಮತ್ತು ನಿಷ್ಠೆಯನ್ನು ನಾನು ಸದಾ ಕಾಪಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ಸಾಲ ತೀರಿದರೂ ಮಲ್ಯ ಮೇಲಿನ ಕೇಸ್ ರದ್ದಾಗಲ್ಲ&lt;/h2&gt;&lt;p&gt;ಬ್ಯಾಂಕ್&zwnj;ಗಳಿಗೆ ವಂಚಿಸಿ ದೇಶ ತೊರೆದಿರುವ ಉದ್ಯಮಿ ವಿಜಯ ಮಲ್ಯ ಅವರ 14,131.6 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್&zwnj;ಬಿಐ) ನೇತೃತ್ವದ ಕನ್ಸೋರ್ಟಿಯಂಗೆ ಹಸ್ತಾಂತರಿಸಲಾಗಿದ್ದರೂ, ಅವರ ವಿರುದ್ಧದ ಹಣ ಅಕ್ರಮ ವರ್ಗಾವಣೆ (ಮನಿ ಲ್ಯಾಂಡರಿಂಗ್) ಪ್ರಕರಣಗಳು ರದ್ದಾಗುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಸ್ಪಷ್ಟಪಡಿಸಿದೆ.&lt;/p&gt;&lt;p&gt;&quot;ನನ್ನ 14,000 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡು ಬ್ಯಾಂಕ್&zwnj;ಗಳ ಸಾಲ ತೀರಿಸಲಾಗಿದೆ. ಆದ್ದರಿಂದ ನನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಅಂತ್ಯಗೊಳಿಸಬೇಕು,&quot; ಎಂದು ಕೋರಿ ವಿಜಯ ಮಲ್ಯ ಅವರು ಬಾಂಬೆ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದರು.&lt;/p&gt;&lt;p&gt;ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್&zwnj;ಗೆ ಅಫಿಡವಿಟ್ ಸಲ್ಲಿಸಿರುವ ಇ.ಡಿ., &quot;ಮಲ್ಯ ಅವರು ಕಾನೂನು ಪ್ರಕ್ರಿಯೆಯಿಂದ ಹಾಗೂ ತನಿಖೆಯಿಂದ ಸತತವಾಗಿ ನುಣಚಿಕೊಳ್ಳುತ್ತಿದ್ದಾರೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ತಕ್ಷಣವೇ ಅವರ ಮೇಲಿನ ಅಪರಾಧ ಹೊಣೆಗಾರಿಕೆ ಇಲ್ಲವಾಗುವುದಿಲ್ಲ. ಹೀಗಾಗಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಸಾಧ್ಯವಿಲ್ಲ,&quot; ಎಂದು ತಿಳಿಸಿದೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq"/>
        </item>
        <item>
            <title><![CDATA[BRICS: ದೆಹಲಿಯ ಭಾರತ ಮಂಟಪದಲ್ಲಿ 2 ದಿನಗಳ 18ನೇ  ಬ್ರಿಕ್ಸ್‌ ಶೃಂಗಸಭೆಗೆ ಇಂದು ಚಾಲನೆ]]></title>
            <link>https://kannada.asianetnews.com/india-news/the-two-day-18th-brics-summit-kicks-off-today-at-bharat-mandapam-in-delhi-mrq/articleshow-43lhfol</link>
            <guid isPermaLink="true">https://kannada.asianetnews.com/india-news/the-two-day-18th-brics-summit-kicks-off-today-at-bharat-mandapam-in-delhi-mrq/articleshow-43lhfol</guid>
            <pubDate>Sat, 12 Sep 2026 07:18:09 +0530</pubDate>
            <description><![CDATA[&lt;p&gt;ಭಾರತ ಮಂಟಪದಲ್ಲಿ 18ನೇ ಬ್ರಿಕ್ಸ್&zwnj; ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಅಧ್ಯಕ್ಷತೆ ವಹಿಸಿದ್ದಾರೆ. ಈ ಸಭೆಯಲ್ಲಿ ಚೀನಾ, ರಷ್ಯಾ ಸೇರಿದಂತೆ ಸದಸ್ಯ ರಾಷ್ಟ್ರಗಳ ನಾಯಕರು ಭಾಗವಹಿಸಲಿದ್ದು, ಜಾಗತಿಕ ಆಡಳಿತ, ವ್ಯಾಪಾರ, ಮತ್ತು ಇಂಧನ ಭದ್ರತೆಯಂತಹ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಸಭೆಯ ಕೊನೆಯಲ್ಲಿ 'ನವದೆಹಲಿ ಘೋಷಣೆ'ಯನ್ನು ಹೊರಡಿಸಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m29kdaxwfenbsexsptpz37rg,imgname-today-top-10-morning-news-xi-jinping-modi-putin-trump-iran-oil-apple-asia-cup-rupee-0-1789176228796.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಮಧ್ಯಪ್ರಾಚ್ಯ ಕದನ ಹಾಗೂ ಜಾಗತಿಕ ಉದ್ವಿಗ್ನತೆಗಳ ನಡುವೆಯೇ, ದೆಹಲಿಯಲ್ಲಿ ಬಹುನಿರೀಕ್ಷಿತ 18ನೇ ಬ್ರಿಕ್ಸ್&zwnj; ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಮತ್ತು ಭಾನುವಾರ 2 ದಿನಗಳ ಕಾಲ ನಡೆಯಲಿರುವ ಈ ಉನ್ನತ ಮಟ್ಟದ ಸಭೆಯಲ್ಲಿ ಜಾಗತಿಕ ಆಡಳಿತ ವ್ಯವಸ್ಥೆಯ ಸುಧಾರಣೆ, ವ್ಯಾಪಾರ, ಇಂಧನ ಭದ್ರತೆ ಮತ್ತು ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿರ್ಣಯಗಳ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ.&lt;/p&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಭಾರತ ಮಂಟಪದಲ್ಲಿ ಶೃಂಗಸಭೆ ನಡೆಯಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್&zwnj;, ರಷ್ಯಾ ಅಧ್ಯಕ್ಷ ವ್ಲಾಡಿಮಿರ್&zwnj; ಪುಟಿನ್&zwnj;, ಇರಾನ್&zwnj; ಅಧ್ಯಕ್ಷ ಮಸೂದ್&zwnj; ಪೆಜೆಶ್ಕಿಯಾನ್&zwnj;, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್&zwnj; ರಾಮಫೋಸಾ ಸೇರಿದಂತೆ ವಿಸ್ತರಿತ ಒಕ್ಕೂಟದ ವಿಶ್ವನಾಯಕರು ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ಪೂರೈಕೆ ಸರಪಳಿಯ ವ್ಯತ್ಯಯ ಮತ್ತು ಆರ್ಥಿಕ ಸವಾಲುಗಳ ಹಿನ್ನೆಲೆಯಲ್ಲಿ ಈ ಶೃಂಗಸಭೆಯು ಜಾಗತಿಕ ಗಮನ ಸೆಳೆದಿದೆ.&lt;/p&gt;&lt;h2&gt;&lt;strong&gt;ವಿವಿಧ ಕಲಾಪ&lt;/strong&gt;&lt;/h2&gt;&lt;p&gt;ಶೃಂಗಸಭೆಯ ಮೊದಲ ದಿನವಾದ ಶನಿವಾರ ಮಧ್ಯಾಹ್ನ 2:35ಕ್ಕೆ &lsquo;ಸಮಗ್ರ ಜಾಗತಿಕ ಆಡಳಿತ ಹಾಗೂ ಬಹುಪಕ್ಷೀಯತೆಯ ಬಲವರ್ಧನೆ&rsquo; ವಿಷಯದ ಕುರಿತು ಬ್ರಿಕ್ಸ್&zwnj; ಸದಸ್ಯ ರಾಷ್ಟ್ರಗಳ ನಾಯಕರ ನಡುವೆ ಮುಚ್ಚಿದ ಬಾಗಿಲಿನ ಸಭೆ ನಡೆಯಲಿದೆ. ತದನಂತರ 4.25ಕ್ಕೆ ನಾಯಕರು &lsquo;ಭಾರತ್&zwnj; ಇನ್ನೋವೇಟ್ಸ್&zwnj;&rsquo; ಪ್ರದರ್ಶನ ವೀಕ್ಷಿಸಲಿದ್ದು, ಅಧಿಕೃತ ಛಾಯಾಚಿತ್ರ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಪ್ರಧಾನಿ ಮೋದಿಯವರು ಆಗಮಿಸಿದ ಎಲ್ಲಾ ವಿಶ್ವನಾಯಕರಿಗೆ ವಿಶೇಷ ಭೋಜನಕೂಟ ಆಯೋಜಿಸಲಿದ್ದಾರೆ.&lt;/p&gt;&lt;p&gt;2ನೇ ದಿನವಾದ ಭಾನುವಾರ ಬೆಳಗ್ಗೆ 9.55ಕ್ಕೆ ಬ್ರಿಕ್ಸ್&zwnj; ಸದಸ್ಯ ರಾಷ್ಟ್ರಗಳು, ಪಾಲುದಾರ ದೇಶಗಳು ಹಾಗೂ ಆಹ್ವಾನಿತ ಪ್ರತಿನಿಧಿಗಳ ಆಗಮನದೊಂದಿಗೆ ಸಭೆ ಆರಂಭವಾಗಲಿದೆ. ಬೆಳಿಗ್ಗೆ 10:50ಕ್ಕೆ &lsquo;ಸ್ಥಿರತೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ: ಸಮಗ್ರ ಜಾಗತಿಕ ಪ್ರಗತಿಯ ಭವಿಷ್ಯ ರೂಪಿಸುವಿಕೆ&rsquo; ಎಂಬ ಶೀರ್ಷಿಕೆಯಡಿಯಲ್ಲಿ ಮುಖ್ಯ ಮುಕ್ತ ಅಧಿವೇಶನ ನಡೆಯಲಿದೆ. ಸಭೆಯ ಕೊನೆಯಲ್ಲಿ ಜಾಗತಿಕ ಮಟ್ಟದ ವಿವಿಧ ಒಪ್ಪಂದಗಳು ಮತ್ತು ನಿರ್ಣಯಗಳನ್ನು ಒಳಗೊಂಡ &lsquo;ನವದೆಹಲಿ ಘೋಷಣೆ&rsquo;ಯನ್ನು ಹೊರಡಿಸುವುದರೊಂದಿಗೆ ಶೃಂಗಸಭೆ ಮುಕ್ತಾಯಗೊಳ್ಳಲಿದೆ.&lt;/p&gt;&lt;h3&gt;&lt;strong&gt;ಏನೇನು ಚರ್ಚೆ?&lt;/strong&gt;&lt;/h3&gt;&lt;p&gt;ಈ ಪ್ರಮುಖ ಸಭೆಯಲ್ಲಿ ಜಾಗತಿಕ ಆಡಳಿತ ವ್ಯವಸ್ಥೆಯ ಸುಧಾರಣೆ, ಇಂಧನ ಮತ್ತು ಆಹಾರ ಭದ್ರತೆ, ವ್ಯಾಪಾರ, ಹೂಡಿಕೆ ಹಾಗೂ ನಿರ್ಣಾಯಕ ಪೂರೈಕೆ ಸರಪಳಿಗಳ ಬಲವರ್ಧನೆಯ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ. ಇದರೊಂದಿಗೆ ಜಾಗತಿಕ ಮಟ್ಟದ ಪ್ರಾದೇಶಿಕ ಸಂಘರ್ಷಗಳು, ಆರ್ಥಿಕ ಹಿನ್ನಡೆ ಹಾಗೂ ಅಮೆರಿಕನ್ ಡಾಲರ್&zwnj;ಗೆ ಪರ್ಯಾಯವಾಗಿ ಪ್ರತ್ಯೇಕ ಕರೆನ್ಸಿ ರೂಪಿಸುವ ವಿಷಯಗಳ ಕುರಿತಾಗಿಯೂ ನಾಯಕರು ವಿಚಾರ ವಿನಿಮಯ ನಡೆಸಲಿದ್ದಾರೆ.&lt;/p&gt;&lt;h3&gt;&lt;strong&gt;ಯಾರ್ಯಾರು ಭಾಗಿ?&lt;/strong&gt;&lt;/h3&gt;&lt;p&gt;ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್&zwnj;, ರಷ್ಯಾ ಅಧ್ಯಕ್ಷ ವ್ಲಾದಿಮಿರ್&zwnj; ಪುಟಿನ್&zwnj;, ಇರಾನ್ ಅಧ್ಯಕ್ಷ ಮಸೌದ್&zwnj; ಪೆಜೆಶ್ಕಿಯಾನ್&zwnj;, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಈಜಿಪ್ಟ್, ಮಲೇಷ್ಯಾ, ಯುಎಇ, ಇಥಿಯೋಪಿಯಾ ಹಾಗೂ ವಿಯೆಟ್ನಾಂ ದೇಶಗಳ ಪ್ರಧಾನಮಂತ್ರಿಗಳು/ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಮಹಾನಿರ್ದೇಶಕ ಆಂಟೋನಿಯೊ ಗುಟೆರಸ್, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ನ್ಯೂ ಡೆವಲಪ್&zwnj;ಮೆಂಟ್ ಬ್ಯಾಂಕ್ ಹಾಗೂ ಎಐಐಬಿ ಸಂಸ್ಥೆಯ ಮುಖ್ಯಸ್ಥರು ಭಾಗವಹಿಸಲಿದ್ದಾರೆ.&lt;/p&gt;&lt;h3&gt;&lt;strong&gt;ಬ್ರಿಕ್ಸ್ ದೇಶಗಳು ಯಾವುವು?&lt;/strong&gt;&lt;/h3&gt;&lt;p&gt;ಪ್ರಸ್ತುತ ಭಾರತ, ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ ದೇಶಗಳು ಬ್ರಿಕ್ಸ್&zwnj; ಒಕ್ಕೂಟದ ಪ್ರಮುಖ ಸದಸ್ಯ ರಾಷ್ಟ್ರಗಳಾಗಿವೆ.&lt;/p&gt;&lt;h3&gt;&lt;strong&gt;ಬ್ರಿಕ್ಸ್&zwnj; ಬಲಶಾಲಿ ಹೇಗೆ?&lt;/strong&gt;&lt;/h3&gt;&lt;p&gt;ಬ್ರಿಕ್ಸ್&zwnj; ದೇಶಗಳು ಜಾಗತಿಕ ಜನಸಂಖ್ಯೆಯ ಸುಮಾರು ಶೇಕಡಾ 49.5, ಜಾಗತಿಕ ಜಿಡಿಪಿಯ ಶೇ.40 ಮತ್ತು ಜಾಗತಿಕ ವ್ಯಾಪಾರದ ಶೇ.26ರಷ್ಟು ಪಾಲು ಹೊಂದಿವೆ.&lt;/p&gt;&lt;p&gt;&lt;strong&gt;ಅರ್ಥಪೂರ್ಣ ಚರ್ಚೆಗೆ ಬ್ರಿಕ್ಸ್&zwnj; ವೇದಿಕೆ&lt;/strong&gt;&lt;/p&gt;&lt;p&gt;ಪ್ರಪಂಚದಾದ್ಯಂತದ ನಾಯಕರು ಬ್ರಿಕ್ಸ್ ಶೃಂಗಸಭೆಗೆ ಸೇರುತ್ತಾರೆ. ಜಾಗತಿಕ ಕಲ್ಯಾಣಕ್ಕಾಗಿ ಹಂಚಿಕೆಯ ಆಶಯದೊಂದಿಗೆ ವಿವಿಧ ವಿಷಯಗಳ ಕುರಿತು ಸಕಾರಾತ್ಮಕ ಮತ್ತು ಅರ್ಥಪೂರ್ಣ ಚರ್ಚೆಗಳು ನಡೆಯುತ್ತವೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.&lt;/p&gt;&lt;p&gt;- ನರೇಂದ್ರ ಮೋದಿ, ಪ್ರಧಾನ ಮಂತ್ರಿ&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/the-two-day-18th-brics-summit-kicks-off-today-at-bharat-mandapam-in-delhi-mrq/articleshow-43lhfol"/>
        </item>
        <item>
            <title><![CDATA[ದ್ವಿಪಕ್ಷೀಯ ವ್ಯಾಪಾರ ದ್ವಿಗುಣಕ್ಕೆ ಮೋದಿ-ಪುಟಿನ್ ಅಸ್ತು; ಶತಕೋಟಿ ಡಾಲರ್ ಒಪ್ಪಂದ!]]></title>
            <link>https://kannada.asianetnews.com/india-news/bilateral-meeting-between-prime-minister-narendra-modi-and-russian-president-vladimir-putin-mrq/articleshow-08hoz3x</link>
            <guid isPermaLink="true">https://kannada.asianetnews.com/india-news/bilateral-meeting-between-prime-minister-narendra-modi-and-russian-president-vladimir-putin-mrq/articleshow-08hoz3x</guid>
            <pubDate>Sat, 12 Sep 2026 06:46:41 +0530</pubDate>
            <description><![CDATA[ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ, 2030ರ ವೇಳೆಗೆ ವಾರ್ಷಿಕ ವ್ಯಾಪಾರವನ್ನು 100 ಶತಕೋಟಿ ಡಾಲರ್&zwnj;ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ರಕ್ಷಣೆ, ಇಂಧನ, ಮತ್ತು ಖನಿಜಗಳ ಸಹಕಾರವನ್ನು ಬಲಪಡಿಸಲು ಒಪ್ಪಿಕೊಳ್ಳಲಾಗಿದ್ದು, ಉಕ್ರೇನ್ ಸಂಘರ್ಷವನ್ನು ಮಾತುಕತೆಯ ಮೂಲಕ ಕೊನೆಗೊಳಿಸಲು ಮೋದಿ ಕರೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28dh8avfet0vae8sj0erzwn,imgname-20260911368l-1789136511323.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಬ್ರಿಕ್ಸ್&zwnj; ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆಸಿದ ದ್ವಿಪಕ್ಷೀಯ ಮಾತುಕತೆ ಯಶ ಕಂಡಿದೆ. ಈ ಸಭೆಯಲ್ಲಿ 2030ರ ವೇಳೆಗೆ ಉಭಯ ದೇಶಗಳ ನಡುವಿನ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು ಹಾಲಿ 65 ಶತಕೋಟಿ ಡಾಲರ್&zwnj;ನಿಂದ 100 ಶತಕೋಟಿ ಡಾಲರ್&zwnj;ಗೆ ಹೆಚ್ಚಿಸಲು ಹಾಗೂ ರಕ್ಷಣೆ, ಇಂಧನ, ನಿರ್ಣಾಯಕ ಖನಿಜಗಳು ಮತ್ತು ರಸಗೊಬ್ಬರ ಪೂರೈಕೆ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಈ ಮೂಲಕ ರಷ್ಯಾ ಜತೆ ವ್ಯಾಪಾರ ನಡೆಸಬೇಡಿ ಎಂಬ ಅಮೆರಿಕದ ಒತ್ತಾಯಕ್ಕೆ ಮಣಿಯದಿರಲು ಭಾರತ ನಿರ್ಧರಿಸಿದೆ. ಇದೇ ವೇಳೆ, ಇತ್ತೀಚೆಗೆ ರಷ್ಯಾ ಸನಿಹದ ಕಪ್ಪು ಸಮುದ್ರದಲ್ಲಿ ಭಾರತೀಯರು ಇದ್ದ ಹಡಗುಗಳು ದಾಳಿಗೆ ಒಳಗಾದ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದ್ದು, ಭಾರತೀಯ ನಾವಿಕರ ಸುರಕ್ಷತೆಗೆ ಆಗ್ರಹಿಸಿದ್ದಾರೆ. ಅಲ್ಲದೆ, &lsquo;ಉಕ್ರೇನ್ ಜತೆ ರಷ್ಯಾ ಮಾತುಕತೆ ನಡೆಸಿ ಸಂಘರ್ಷ ನಿಲ್ಲಿಸಿಬೇಕು. ಯುದ್ಧದ ಅಂತ್ಯಕ್ಕೆ ಶಾಂತಿ ಉಪಕ್ರಮವನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ&rsquo; ಎಂದು ಪುನರುಚ್ಚರಿಸಿದ್ದಾರೆ. ಆಗ ಪುಟಿನ್ ಉಕ್ರೇನ್ ಯುದ್ಧದ ಪ್ರಸ್ತುತ ಪರಿಸ್ಥಿತಿ ಮತ್ತು ಶಾಂತಿ ಸ್ಥಾಪನೆಯ ಪ್ರಯತ್ನಗಳ ಬಗ್ಗೆ ಮೋದಿಗೆ ವಿವರಣೆ ನೀಡಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಅಸ್ತಾನಾದಲ್ಲಿ ನಡೆದ ಎಸ್&zwnj;ಸಿಒ ಶೃಂಗಸಭೆಯ ವೇಳೆ ಭೇಟಿಯಾಗಿದ್ದ ಮೋದಿ, ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು ಮತ್ತು ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದತ್ತ ಸಾಗಬೇಕು ಎಂದು ಪುಟಿನ್&zwnj; ಅವರಿಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.&lt;/p&gt;&lt;h2&gt;&lt;strong&gt;100 ಶತಕೋಟಿ ಡಾಲರ್&zwnj; ವ್ಯಾಪಾರ ಗುರಿ:&lt;/strong&gt;&lt;/h2&gt;&lt;p&gt;ಈ ಬಾರಿಯ ಸಭೆಯಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆಯನ್ನು ನೀಗಿಸಲು ಭಾರತೀಯ ರಫ್ತುದಾರರಿಗೆ ರಷ್ಯಾ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದು ಭಾರತ ಮನವಿ ಮಾಡಿದೆ. ಪ್ರಸ್ತುತ ವರ್ಷಕ್ಕೆ ಸುಮಾರು 65 ಶತಕೋಟಿ ಡಾಲರ್&zwnj;ನಷ್ಟಿರುವ ದ್ವಿಪಕ್ಷೀಯ ವ್ಯಾಪಾರವನ್ನು 2030ರ ವೇಳೆಗೆ 100 ಶತಕೋಟಿ ಡಾಲರ್&zwnj;ಗೆ ತಲುಪಿಸುವ ಕಾರ್ಯತಂತ್ರಗಳ ಕುರಿತು ಎರಡೂ ದೇಶಗಳು ಸುದೀರ್ಘವಾಗಿ ಸಮಾಲೋಚನೆ ನಡೆಸಿವೆ.&lt;/p&gt;&lt;h3&gt;&lt;strong&gt;ರಕ್ಷಣಾ ಸಹಕಾರಕ್ಕೆ ಒತ್ತು:&lt;/strong&gt;&lt;/h3&gt;&lt;p&gt;ಇದರೊಂದಿಗೆ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ನೀಡಿರುವ ಮಾಹಿತಿಯಂತೆ, ಬ್ರಹ್ಮೋಸ್ ಕ್ಷಿಪಣಿಗಳ ನವೀಕರಣ, ಬಾಕಿ ಇರುವ ಎಸ್&zwnj;-400 ವ್ಯವಸ್ಥೆಗಳ ಪೂರೈಕೆ ಹಾಗೂ ಸು-57 ಫೈಟರ್ ಜೆಟ್&zwnj;ಗಳ ಪೂರೈಕೆ ಕುರಿತು ಉಭಯ ದೇಶಗಳು ಚರ್ಚಿಸಿವೆ. ಇಂಧನ ಕ್ಷೇತ್ರದಲ್ಲಿ ನಾಗರಿಕ ಪರಮಾಣು ಶಕ್ತಿ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಳ್ಳಲಾಗಿದ್ದು, ರೈಲ್ವೆ, ಸುರಂಗ ನಿರ್ಮಾಣ, ಉಕ್ಕು ವಲಯ, ನಿರ್ಣಾಯಕ ಖನಿಜಗಳು ಹಾಗೂ ಭಾರತೀಯ ಕುಶಲ ಕಾರ್ಮಿಕರಿಗೆ ರಷ್ಯಾದಲ್ಲಿ ಅವಕಾಶ ಕಲ್ಪಿಸುವ ಬಗ್ಗೆಯೂ ಮಾತುಕತೆ ನಡೆದಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/bilateral-meeting-between-prime-minister-narendra-modi-and-russian-president-vladimir-putin-mrq/articleshow-08hoz3x"/>
        </item>
        <item>
            <title><![CDATA[15 ವರ್ಷಗಳ ದೇಶಸೇವೆ ಮುಗಿಸಿ ಮನೆಗೆ ಬಂದ ಇಂಡಿಯನ್‌ ನೇವಿ ಹೀರೋ: ಪತಿಗೆ ಹಾರ ಹಾಕಿ, ಆರತಿ ಎತ್ತಿ ಸಂಭ್ರಮಿಸಿದ ಪತ್ನಿ!]]></title>
            <link>https://kannada.asianetnews.com/viral/indian-navy-officer-rahul-madhwal-retires-after-15-years-viral-welcome-san/articleshow-0y0vead</link>
            <guid isPermaLink="true">https://kannada.asianetnews.com/viral/indian-navy-officer-rahul-madhwal-retires-after-15-years-viral-welcome-san/articleshow-0y0vead</guid>
            <pubDate>Fri, 11 Sep 2026 21:01:59 +0530</pubDate>
            <description><![CDATA[&lt;p&gt;ಭಾರತೀಯ ನೌಕಾಪಡೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ರಾಹುಲ್ ಮಾಧ್ವಾಲ್ ಅವರಿಗೆ, ಅವರ ಪತ್ನಿ ಶಿವಾನಿ ಸಾಂಪ್ರದಾಯಿಕವಾಗಿ ನೀಡಿದ ಭಾವುಕ ಸ್ವಾಗತದ ವಿಡಿಯೋ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m24z1nkr63byy9rp982he1jt,imgname-indian-navy-soldier-retirement-1789020657271.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.11): &lt;/strong&gt;ಭಾರತೀಯ ನೌಕಾಪಡೆಯಲ್ಲಿ (Indian Navy) ಸುದೀರ್ಘ 15 ವರ್ಷಗಳ ಕಾಲ ಕಠಿಣ ಹಾಗೂ ನಿಷ್ಠಾವಂತ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ರಾಹುಲ್ ಮಾಧ್ವಾಲ್ (Rahul Madhwal) ಅವರು ಮನೆಗೆ ಮರಳಿದಾಗ, ಅವರ ಪತ್ನಿ ಅತ್ಯಂತ ಭಾವುಕ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ನೀಡಿದ ಅದ್ಧೂರಿ ಸ್ವಾಗತದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ದೇಶ ಕಾಯುವ ಕಠಿಣ ಜವಾಬ್ದಾರಿ ಮುಗಿಸಿ ಬಂದ ಪತಿಯನ್ನು 'ನನ್ನ ರಿಯಲ್ ಹೀರೋ' ಎಂದು ಕರೆದಿರುವ ಪತ್ನಿಯ ಪ್ರೀತಿ ಹಾಗೂ ಸಂಭ್ರಮದ ಕ್ಷಣಗಳು ಲಕ್ಷಾಂತರ ನೆಟ್ಟಿಗರ ಮನ ಗೆದ್ದಿವೆ. ಸೆಪ್ಟೆಂಬರ್ 1 ರಂದು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾವಿರಾರು ಜನರು ಈ ದೇಶಪ್ರೇಮಿ ದಂಪತಿಗೆ ಶುಭಹಾರೈಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹಾರ ಹಾಕಿ, ಆರತಿ ಎತ್ತಿ ಸಾಂಪ್ರದಾಯಿಕ ಸ್ವಾಗತ&lt;/strong&gt;&lt;/h2&gt;&lt;p&gt;ರಾಹುಲ್ ಮಾಧ್ವಾಲ್ ಅವರ ಪತ್ನಿ ಶಿವಾನಿ ಬುಧಕೋಟಿ (Shivani Budhkoti) ತಮ್ಮ ಪತಿಯ ನಿವೃತ್ತಿಯನ್ನು ಸ್ಮರಣೀಯವಾಗಿಸಲು ಮನೆ ಬಾಗಿಲಲ್ಲೇ ವಿಶೇಷ ಸಮಾರಂಭವನ್ನು ಆಯೋಜಿಸಿದ್ದರು. ರಾಹುಲ್ ಮನೆಗೆ ಆಗಮಿಸುತ್ತಿದ್ದಂತೆ ಬಾಗಿಲಲ್ಲಿ ನಿಂತು ಅವರ ಸಾಮಗ್ರಿಗಳನ್ನು ಕೈಗೆ ತೆಗೆದುಕೊಂಡ ಶಿವಾನಿ, ಪತಿಯ ಹಣೆಗೆ ಶ್ರೀಗಂಧ ಮತ್ತು ಅಕ್ಷತೆಯನ್ನು ಇಟ್ಟು, ಹೂವಿನ ಮಳೆಗರೆದು, ಆರತಿ ಎತ್ತುವ ಮೂಲಕ ಗೌರವದಿಂದ ಒಳಗೆ ಬರಮಾಡಿಕೊಂಡರು.&lt;/p&gt;&lt;p&gt;ಬಳಿಕ, ಜೀವನದ ಹೊಸ ಅಧ್ಯಾಯದ ಸಂಕೇತವಾಗಿ ಕತ್ತರಿಯನ್ನು ನೀಡಿ ಮನೆ ಬಾಗಿಲಲ್ಲಿದ್ದ ರಿಬ್ಬನ್ ಕತ್ತರಿಸುವಂತೆ ಮಾಡಿದರು. ಮನೆಯೊಳಗೆ &quot;ಥ್ಯಾಂಕ್ ಯೂ ರಾಹುಲ್&quot; (Thank You Rahul) ಎಂದು ಬರೆದಿದ್ದ ವಿಶೇಷ ಕೇಕ್ ಅನ್ನು ದಂಪತಿ ಹಾಗೂ ಅವರ ಮಗು ಒಟ್ಟಾಗಿ ಕತ್ತರಿಸಿ, 15 ವರ್ಷಗಳ ಸಾರ್ಥಕ ದೇಶಸೇವೆಯನ್ನು ಒಟ್ಟಾಗಿ ಸಂಭ್ರಮಿಸಿದರು.&lt;/p&gt;&lt;h2&gt;&lt;strong&gt;ನೌಕಾಪಡೆಯಲ್ಲಿ ರಾಹುಲ್ ಅವರ ಪಾತ್ರವೇನಿತ್ತು?:&lt;/strong&gt;&lt;/h2&gt;&lt;p&gt;ರಾಹುಲ್ ಮಾಧ್ವಾಲ್ ಅವರು 2011 ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡು 2026 ರಲ್ಲಿ ಸೇವಾ ನಿವೃತ್ತಿ ಹೊಂದಿದ್ದಾರೆ. ನೌಕಾಪಡೆಯಲ್ಲಿ ಅವರು ಪಿಒ-ಲಾಜ್&zwnj; (PO-LOG - Petty Officer Logistics) ಹುದ್ದೆಯಲ್ಲಿದ್ದರು. ಇದು ನಾನ್-ಕಮಿಷನ್ಡ್ ಮಿಡ್-ರಾಂಕ್ ಹುದ್ದೆಯಾಗಿದ್ದು, ನೌಕಾಪಡೆಯ ಕಾರ್ಯಾಚರಣೆಗಳಲ್ಲಿ ಪೂರೈಕೆ ಸರಣಿ (Supply Chain), ದಾಸ್ತಾನು ನಿರ್ವಹಣೆ (Inventory), ಖರೀದಿ ಹಾಗೂ ಹಣಕಾಸು ಆಡಳಿತದಂತಹ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುವ ಪಾತ್ರವಾಗಿದೆ.&lt;/p&gt;&lt;p&gt;ಪತಿ ಪಡೆದ ಪ್ರಶಸ್ತಿ ಮತ್ತು ಪದಕಗಳ ಚಿತ್ರಗಳನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡ ಶಿವಾನಿ, &quot;15 ವರ್ಷಗಳ ಸಮರ್ಪಣೆ, ಶಿಸ್ತು ಮತ್ತು ತ್ಯಾಗದ ನಂತರ, ಈಗ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ. ನಿಮ್ಮನ್ನು ಕಂಡು ಹೆಮ್ಮೆಯಾಗುತ್ತಿದೆ. ನಿವೃತ್ತಿಯ ಶುಭಾಶಯಗಳು. ಮನೆಗೆ ಸುಸ್ವಾಗತ ನನ್ನ ಹೀರೋ&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಮಹಾಪೂರ&lt;/strong&gt;&lt;/h2&gt;&lt;p&gt;ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್&zwnj;ಗಳ ಮೂಲಕ ದಂಪತಿಗೆ ಹಾರೈಸಿದ್ದಾರೆ. ವಿಡಿಯೋದಲ್ಲಿ ರಾಹುಲ್ ಅವರು ತಮಗೆ ನೀಡಿದ ಸಿಹಿಯನ್ನು ತಿಂದ ನಂತರ ಮೊದಲು ತಮ್ಮ ಪತ್ನಿಗೆ ನೀಡುವ ಸಣ್ಣ ಕ್ಷಣವನ್ನು ಹಲವರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ, ಕೆಲ ಯೂಸರ್&zwnj;ಗಳು &quot;ಅಷ್ಟು ಚಿಕ್ಕ ವಯಸ್ಸಿನಲ್ಲಿ, ಕೇವಲ 15 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇಕೆ?&quot; ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.&lt;/p&gt;&lt;h2&gt;&lt;strong&gt;ನೌಕಾಪಡೆಯಲ್ಲಿ 15 ವರ್ಷಕ್ಕೆ ನಿವೃತ್ತಿ ಪಡೆಯುವುದೇಕೆ?&lt;/strong&gt;&lt;/h2&gt;&lt;p&gt;ಭಾರತೀಯ ನೌಕಾಪಡೆಯಲ್ಲಿ 15 ರಿಂದ 20 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ,&lt;/p&gt;&lt;ul&gt; &lt;li&gt;&lt;strong&gt;ಯುವಪಡೆಗೆ ಅವಕಾಶ: &lt;/strong&gt;ನೌಕಾಪಡೆಯು ಸದಾ ಯುವ ಹಾಗೂ ಹುರುಪಿನ ಯೋಧರಿಂದ ಕೂಡಿರಲು ಈ ನಿಯಮ ನೆರವಾಗುತ್ತದೆ.&lt;/li&gt; &lt;li&gt;&lt;strong&gt;ಹುದ್ದೆಗಳ ಸಮತೋಲನ: &lt;/strong&gt;ಶ್ರೇಣಿವಾರು ಹುದ್ದೆಗಳ (Ranks) ನಡುವೆ ಸರಿಯಾದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.&lt;/li&gt; &lt;li&gt;&lt;strong&gt;ಕಠಿಣ ವಾತಾವರಣ: &lt;/strong&gt;ಕಡಲಿನಲ್ಲಿ ಸುದೀರ್ಘ ನಿಯೋಜನೆ (Deployments) ಮತ್ತು ಸವಾಲಿನ ವಾತಾವರಣದಲ್ಲಿ ವಯಸ್ಸಾಗುತ್ತಿದ್ದಂತೆ ಕಾರ್ಯನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ.&lt;/li&gt; &lt;li&gt;&lt;strong&gt;ವಿಶೇಷ ಸೌಲಭ್ಯಗಳು:&lt;/strong&gt; 15 ವರ್ಷಗಳ ನಿರಂತರ ಸೇವೆಯ ನಂತರ ಯೋಧರು ಪಿಂಚಣಿ ಸೇರಿದಂತೆ ಎಲ್ಲಾ ನಿವೃತ್ತಿ ಸೌಲಭ್ಯಗಳಿಗೆ (Benefits) ಅರ್ಹತೆ ಪಡೆಯುತ್ತಾರೆ.&lt;/li&gt; &lt;li&gt;&lt;strong&gt;ಹೊಸ ವೃತ್ತಿ ಅವಕಾಶ:&lt;/strong&gt; ಬೇಗನೆ ನಿವೃತ್ತಿ ಹೊಂದುವುದರಿಂದ ಯೋಧರಿಗೆ ನಾಗರಿಕ ಜೀವನದಲ್ಲಿ ಬೇರೆ ಹೊಸ ವೃತ್ತಿಜೀವನದ ಅವಕಾಶಗಳನ್ನು (New Career Opportunities) ಕಂಡುಕೊಳ್ಳಲು ಸುಲಭವಾಗುತ್ತದೆ.&lt;/li&gt;&lt;/ul&gt;View this post on Instagram&lt;p&gt;A post shared by Shivani Budakoti (@shivanibudakoti_)&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/viral/indian-navy-officer-rahul-madhwal-retires-after-15-years-viral-welcome-san/articleshow-0y0vead"/>
        </item>
        <item>
            <title><![CDATA[​'ನಿನ್ನ ಕೈ ಅಡುಗೆ ಬೇಡ' ಎಂದವನಿಗೆ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿ ತೋರಿಸಿ ಸುಮ್ಮನಾಗಿಸಿದ ಶೆಫ್!]]></title>
            <link>https://kannada.asianetnews.com/india-news/chef-trolled-over-skin-colour-and-food-choice-his-response-wins-hearts-online/articleshow-ha0a58y</link>
            <guid isPermaLink="true">https://kannada.asianetnews.com/india-news/chef-trolled-over-skin-colour-and-food-choice-his-response-wins-hearts-online/articleshow-ha0a58y</guid>
            <pubDate>Fri, 11 Sep 2026 19:38:24 +0530</pubDate>
            <description><![CDATA[&lt;p&gt;ಅಡುಗೆ ವಿಡಿಯೋ ಹಂಚಿಕೊಂಡಿದ್ದ ಶೆಫ್ ಒಬ್ಬರಿಗೆ ನೆಟ್ಟಿಗನೊಬ್ಬ ಚರ್ಮದ ಬಣ್ಣವನ್ನು ಗುರಿಯಾಗಿಸಿಕೊಂಡು &lsquo;ನಿಮ್ಮ ಕೈಯಲ್ಲಿ ಮಾಡಿದ ಅಡುಗೆ ತಿನ್ನಲ್ಲ&rsquo; ಎಂಬ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ಶೆಫ್ ಆತ್ಮಗೌರವದಿಂದ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಣ್ಣದ ಆಧಾರದ ತಾರತಮ್ಯದ ಬಗ್ಗೆ ಚರ್ಚೆ ಹುಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m27k7tqmrmfq6qm5me89mv8h,imgname-chef-karthikeyan-selvaraj-1789108939508.jpg" type="image/jpeg" height="390" width="690"/>
            <content:encoded><![CDATA[&lt;h2&gt;&lsquo;ನಿಮ್ಮ ಕೈಯಲ್ಲಿ ಮಾಡಿದ ಅಡುಗೆ ತಿನ್ನಲ್ಲ&rsquo; ಎಂದ ನೆಟ್ಟಿಗ!&lt;/h2&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಆಹಾರ ತಯಾರಿಸುವ ವಿಡಿಯೋಗಳು ವೈರಲ್ ಆಗುವುದು ಸಾಮಾನ್ಯ. ರುಚಿಕರವಾದ ಅಡುಗೆ, ವಿಭಿನ್ನ ರೆಸಿಪಿ ಮತ್ತು ಅಡುಗೆ ಮಾಡುವ ಶೈಲಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಕೆಲವೊಮ್ಮೆ ಆಹಾರ ಅಥವಾ ಪ್ರತಿಭೆಯ ಬದಲು ವ್ಯಕ್ತಿಯ ರೂಪ, ಚರ್ಮದ ಬಣ್ಣದಂತಹ ವೈಯಕ್ತಿಕ ವಿಚಾರಗಳೇ ಟ್ರೋಲ್&zwnj;ಗಳ ಗುರಿಯಾಗುತ್ತವೆ. ಇದೀಗ ಶೆಫ್ ಒಬ್ಬರಿಗೂ ಇದೇ ರೀತಿಯ ಅನುಭವವಾಗಿದ್ದು, ಅವರ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.&lt;/p&gt;&lt;p&gt;&lt;strong&gt;ಆಹಾರದ ವಿಡಿಯೋಗೆ ಬಂತು ವೈಯಕ್ತಿಕ ಕಾಮೆಂಟ್&lt;/strong&gt;&lt;/p&gt;&lt;p&gt;ಶೆಫ್ ಹಂಚಿಕೊಂಡಿದ್ದ ಅಡುಗೆ ಸಂಬಂಧಿತ ವಿಡಿಯೋವೊಂದಕ್ಕೆ ನೆಟ್ಟಿಗನೊಬ್ಬ ಆಹಾರದ ಗುಣಮಟ್ಟದ ಬಗ್ಗೆ ಮಾತನಾಡುವ ಬದಲು, ಶೆಫ್&zwnj;ನ ಚರ್ಮದ ಬಣ್ಣವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾನೆ. &ldquo;ನಿಮ್ಮ ಕೈಯಲ್ಲಿ ಮಾಡಿದ ಅಡುಗೆ ನಾನು ತಿನ್ನಲ್ಲ&rdquo; ಎಂಬ ರೀತಿಯ ಮಾತುಗಳು ಚರ್ಚೆಗೆ ಕಾರಣವಾಗಿವೆ.&lt;/p&gt;&lt;p&gt;&lt;strong&gt;ಚರ್ಮದ ಬಣ್ಣದ ಆಧಾರದ ಮೇಲೆ ಟೀಕೆ ಏಕೆ?&lt;/strong&gt;&lt;/p&gt;&lt;p&gt;ಒಬ್ಬ ವ್ಯಕ್ತಿಯ ಚರ್ಮದ ಬಣ್ಣಕ್ಕೂ ಅವರ ಸಾಮರ್ಥ್ಯ, ವ್ಯಕ್ತಿತ್ವ ಅಥವಾ ಅವರು ತಯಾರಿಸುವ ಆಹಾರದ ಗುಣಮಟ್ಟಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರೂಪ ಅಥವಾ ಬಣ್ಣದ ಆಧಾರದ ಮೇಲೆ ಇತರರನ್ನು ಅವಮಾನಿಸುವುದು ಕಂಡುಬರುತ್ತದೆ. ಇಂತಹ ಕಾಮೆಂಟ್&zwnj;ಗಳು ಕೇವಲ ಒಬ್ಬ ವ್ಯಕ್ತಿಗೆ ನೋವುಂಟು ಮಾಡುವುದಷ್ಟೇ ಅಲ್ಲ, ಸಮಾಜದಲ್ಲಿ ಇರುವ ಬಣ್ಣದ ಕುರಿತ ಪೂರ್ವಾಗ್ರಹಗಳನ್ನೂ ಪ್ರತಿಬಿಂಬಿಸುತ್ತವೆ.&lt;/p&gt;&lt;p&gt;&lt;strong&gt;ಟ್ರೋಲ್&zwnj;ಗೆ ಶೆಫ್ ಕೊಟ್ಟ ಪ್ರತಿಕ್ರಿಯೆ&lt;/strong&gt;&lt;/p&gt;&lt;p&gt;ಅವಮಾನಕಾರಿ ಕಾಮೆಂಟ್&zwnj;ಗೆ ಕೋಪದಿಂದ ಪ್ರತಿಕ್ರಿಯಿಸುವ ಬದಲು ಶೆಫ್ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ. ಅವರ ಪ್ರತಿಕ್ರಿಯೆ ಆನ್&zwnj;ಲೈನ್&zwnj;ನಲ್ಲಿ ಚರ್ಚೆಗೆ ಕಾರಣವಾಗಿದ್ದು, ಅನೇಕರು ಅವರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟೀಕೆ ಎದುರಾದಾಗ ಅದೇ ರೀತಿಯ ಅವಹೇಳನಕ್ಕೆ ಇಳಿಯದೆ, ಆತ್ಮಗೌರವದಿಂದ ಪ್ರತಿಕ್ರಿಯಿಸುವುದು ಹೇಗೆ ಎಂಬುದಕ್ಕೂ ಈ ಘಟನೆ ಉದಾಹರಣೆಯಾಗಿದೆ.&lt;/p&gt;&lt;p&gt;&lt;strong&gt;ವೈರಲ್ ವಿಡಿಯೋ ಹೇಳುವ ದೊಡ್ಡ ಸಂದೇಶ&lt;/strong&gt;&lt;/p&gt;&lt;p&gt;ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಯೊಂದು ಕಾಮೆಂಟ್ ಕೂಡ ಮತ್ತೊಬ್ಬ ವ್ಯಕ್ತಿಯ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಚರ್ಮದ ಬಣ್ಣ, ದೇಹದ ಆಕಾರ, ಮುಖ ಅಥವಾ ಇತರ ವೈಯಕ್ತಿಕ ಲಕ್ಷಣಗಳನ್ನು ಗುರಿಯಾಗಿಸಿಕೊಂಡು ಮಾಡುವ ಹಾಸ್ಯ ಮತ್ತು ಟೀಕೆಗಳು ಮನರಂಜನೆಯ ವಿಷಯವಲ್ಲ.&lt;/p&gt;&lt;p&gt;ಅಡುಗೆಯ ಬಗ್ಗೆ ಇಷ್ಟವಿಲ್ಲದಿದ್ದರೆ ರುಚಿ, ವಿಧಾನ ಅಥವಾ ರೆಸಿಪಿ ಕುರಿತು ಆರೋಗ್ಯಕರ ಟೀಕೆ ಮಾಡಬಹುದು. ಆದರೆ ವ್ಯಕ್ತಿಯ ಚರ್ಮದ ಬಣ್ಣವನ್ನು ಅವಮಾನಿಸುವುದು ಯಾವುದೇ ರೀತಿಯ ರಚನಾತ್ಮಕ ಅಭಿಪ್ರಾಯವಲ್ಲ. ಈ ಘಟನೆ, ಸಾಮಾಜಿಕ ಜಾಲತಾಣ ಬಳಸುವಾಗ ಪರದೆಯ ಆಚೆಯೂ ಒಬ್ಬ ಮನುಷ್ಯ ಇದ್ದಾನೆ ಎಂಬುದನ್ನು ನೆನಪಿಸುತ್ತದೆ.&lt;/p&gt;&lt;p&gt;&lt;strong&gt;ರೂಪವಲ್ಲ, ಪ್ರತಿಭೆ ಮುಖ್ಯ&lt;/strong&gt;&lt;/p&gt;&lt;p&gt;ಒಬ್ಬ ಶೆಫ್&zwnj;ನ ಸಾಮರ್ಥ್ಯವನ್ನು ಅವರ ಚರ್ಮದ ಬಣ್ಣದಿಂದ ಅಳೆಯಲು ಸಾಧ್ಯವಿಲ್ಲ. ಉತ್ತಮ ಆಹಾರ, ಪರಿಶ್ರಮ ಮತ್ತು ಪ್ರತಿಭೆಯೇ ಅವರ ವೃತ್ತಿಪರತೆಯನ್ನು ನಿರ್ಧರಿಸಬೇಕು. ವೈರಲ್ ಆಗಿರುವ ಈ ಘಟನೆ, ಬಣ್ಣದ ಆಧಾರದ ಮೇಲಿನ ತಾರತಮ್ಯದ ವಿರುದ್ಧ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.&lt;/p&gt;View this post on Instagram&lt;p&gt;A post shared by karthi cooks | Karthikeyan Selvaraj (@imkarthi_89)&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/chef-trolled-over-skin-colour-and-food-choice-his-response-wins-hearts-online/articleshow-ha0a58y"/>
        </item>
    </channel>
</rss>
