<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 13 Jul 2026 17:18:27 +0530</lastBuildDate>
        <atom:link href="https://kannada.asianetnews.com/rss/india-news" rel="self" type="application/rss+xml"/>
        <item>
            <title><![CDATA[ಅಂಬಾನಿ 16 ವರ್ಷದ ಹಿಂದೆ 15,000 ಕೋಟಿಯಲ್ಲಿ ನಿರ್ಮಿಸಿದ ಆಂಟಿಲಿಯಾ ಅರಮನೆ, ಇಂದು ನಿರ್ಮಿಸಿದರೆ ಕೋಟಿ ಖರ್ಚಾಗುತ್ತೆ?]]></title>
            <link>https://kannada.asianetnews.com/gallery/business/mukesh-ambani-antilia-rebuilding-cost-2026-luxury-home-value-rs-15000-crore-to-rs-38000-crore-3eloggt</link>
            <guid isPermaLink="true">https://kannada.asianetnews.com/gallery/business/mukesh-ambani-antilia-rebuilding-cost-2026-luxury-home-value-rs-15000-crore-to-rs-38000-crore-3eloggt</guid>
            <pubDate>Mon, 13 Jul 2026 17:18:24 +0530</pubDate>
            <description><![CDATA[&lt;p&gt;2010ರಲ್ಲಿ ಸುಮಾರು 15,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಮುಕೇಶ್ ಅಂಬಾನಿ ಅವರ 'ಆಂಟಿಲಿಯಾ' ಮನೆಯನ್ನು, ಇಂದಿನ ಹಣದುಬ್ಬರ ಮತ್ತು ಹೆಚ್ಚಿದ ಭೂಮಿ ಬೆಲೆಯಿಂದಾಗಿ 2026ರಲ್ಲಿ ನಿರ್ಮಿಸಲು ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈಗಿನ ಬೆಲೆ ಎಷ್ಟಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdma9b50vg5tee29n13eny1,imgname-mukesh-ambani-antilia-rebuilding-cost--2--1783942686052.jpg" type="image/jpeg" height="390" width="690"/>
            <content:encoded><![CDATA[&lt;p&gt;2010ರಲ್ಲಿ ಸುಮಾರು 15,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಮುಕೇಶ್ ಅಂಬಾನಿ ಅವರ 'ಆಂಟಿಲಿಯಾ' ಮನೆಯನ್ನು, ಇಂದಿನ ಹಣದುಬ್ಬರ ಮತ್ತು ಹೆಚ್ಚಿದ ಭೂಮಿ ಬೆಲೆಯಿಂದಾಗಿ 2026ರಲ್ಲಿ ನಿರ್ಮಿಸಲು ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈಗಿನ ಬೆಲೆ ಎಷ್ಟಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ನಿವಾಸ 'ಆಂಟಿಲಿಯಾ' ಬಗ್ಗೆ ಕೇಳದವರೇ ಇಲ್ಲ. ಮುಂಬೈನ ಪ್ರತಿಷ್ಠಿತ ಅಲ್ಟಾಮೌಂಟ್ ರಸ್ತೆಯಲ್ಲಿರುವ ಈ 27 ಅಂತಸ್ತಿನ ಗಗನಚುಂಬಿ ಕಟ್ಟಡವು ವಿಶ್ವದ ಅತ್ಯಂತ ದುಬಾರಿ ಖಾಸಗಿ ಮನೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.&amp;nbsp;&lt;/p&gt;&lt;p&gt;2010 ರಲ್ಲಿ ಈ ಮನೆ ನಿರ್ಮಾಣವಾದಾಗ ಇದರ ವೆಚ್ಚ ಸುಮಾರು 15,000 ಕೋಟಿ ರೂಪಾಯಿಗಳಾಗಿತ್ತು. ಆದರೆ, ಇಂದಿನ ಹಣದುಬ್ಬರ ಮತ್ತು ಗಗನಕ್ಕೇರಿರುವ ಭೂಮಿಯ ಬೆಲೆಯನ್ನು ಗಮನಿಸಿದರೆ, ಇದೇ ರೀತಿಯ ಮನೆಯನ್ನು 2026ರಲ್ಲಿ ನಿರ್ಮಿಸಲು ಎಷ್ಟು ಹಣ ಬೇಕಾಗಬಹುದು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.&lt;/p&gt;&lt;img&gt;&lt;p&gt;&lt;strong&gt;2010 ರಲ್ಲಿ ಎಷ್ಟು ವೆಚ್ಚವಾಗಿತ್ತು?&lt;/strong&gt;&lt;/p&gt;&lt;p&gt;ಆಂಟಿಲಿಯಾ ನಿರ್ಮಾಣ ಕಾರ್ಯವು 2006 ರಲ್ಲಿ ಪ್ರಾರಂಭವಾಗಿ 2010 ರಲ್ಲಿ ಪೂರ್ಣಗೊಂಡಿತು. ಅಂದಿನ ಅಂದಾಜಿನ ಪ್ರಕಾರ, ಇದರ ಒಟ್ಟು ನಿರ್ಮಾಣ ವೆಚ್ಚ ಸುಮಾರು 2 ಬಿಲಿಯನ್ ಡಾಲರ್ ಆಗಿತ್ತು. ಅಂದಿನ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ ಇದು ಸುಮಾರು 15,000 ದಿಂದ 17,400 ಕೋಟಿ ರೂಪಾಯಿಗಳಾಗುತ್ತದೆ. ಕೇವಲ ಈ ಕಟ್ಟಡದ ಮೂಲ ರಚನೆಯನ್ನು (Core Structure) ನಿರ್ಮಿಸಲು ಸುಮಾರು 6,000 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು ಎಂದು ವರದಿಗಳು ತಿಳಿಸುತ್ತವೆ. ನಂತರ ಆಮದು ಮಾಡಿಕೊಂಡ ಅಮೃತಶಿಲೆ, ಅತ್ಯಾಧುನಿಕ ಒಳಾಂಗಣ ವಿನ್ಯಾಸ ಮತ್ತು ಐಷಾರಾಮಿ ಸೌಲಭ್ಯಗಳನ್ನು ಸೇರಿಸಿದಾಗ ಈ ವೆಚ್ಚ ದುಪ್ಪಟ್ಟಾಯಿತು.&lt;/p&gt;&lt;img&gt;&lt;p&gt;&lt;strong&gt;ಇಂದು ಕಟ್ಟಬೇಕೆಂದರೆ ಎಷ್ಟು ಹಣ ಬೇಕು?&lt;/strong&gt;&lt;/p&gt;&lt;p&gt;ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, 2026 ರ ವೇಳೆಗೆ ಆಂಟಿಲಿಯಾದಂತಹ ಮತ್ತೊಂದು ಮನೆಯನ್ನು ನಿರ್ಮಿಸಲು ಈಗಿನ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚು ಹಣದ ಅಗತ್ಯವಿದೆ. ಅಂದರೆ, ಸುಮಾರು 4.6 ಬಿಲಿಯನ್ ಡಾಲರ್ ಅಥವಾ 38,000 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹೂಡಿಕೆ ಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಮುಂಬೈನಲ್ಲಿ ಗಗನಕ್ಕೇರಿರುವ ಭೂಮಿಯ ಬೆಲೆ, ಹೆಚ್ಚುತ್ತಿರುವ ಸಿಮೆಂಟ್, ಸ್ಟೀಲ್ ಮುಂತಾದ ನಿರ್ಮಾಣ ಸಾಮಗ್ರಿಗಳ ದರ ಮತ್ತು ಕಾರ್ಮಿಕರ ವೆಚ್ಚ.&lt;/p&gt;&lt;img&gt;&lt;p&gt;&lt;strong&gt;ಆಂಟಿಲಿಯಾದ ವಿಶೇಷತೆಗಳೇನು?&lt;/strong&gt;&lt;/p&gt;&lt;p&gt;&lt;strong&gt;ವಿಸ್ತೀರ್ಣ: &lt;/strong&gt;ಸುಮಾರು 4,00,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಮನೆಯು ಕೇವಲ ನಿವಾಸವಲ್ಲ, ಇದೊಂದು ಅದ್ಭುತ ಎಂಜಿನಿಯರಿಂಗ್ ಕೌಶಲವಾಗಿದೆ.&lt;/p&gt;&lt;p&gt;&lt;strong&gt;ಅಂತಸ್ತುಗಳ ಎತ್ತರ: &lt;/strong&gt;ಇದರಲ್ಲಿ ಕೇವಲ 27 ಅಂತಸ್ತುಗಳಿದ್ದರೂ, ಪ್ರತಿಯೊಂದು ಅಂತಸ್ತಿನ ಸೀಲಿಂಗ್ ಬಹಳ ಎತ್ತರವಿರುವುದರಿಂದ, ಇದು ಸಾಮಾನ್ಯ 60 ಅಂತಸ್ತುಗಳ ಕಟ್ಟಡದಷ್ಟು ಎತ್ತರವಾಗಿ ಕಾಣುತ್ತದೆ.&lt;/p&gt;&lt;p&gt;&lt;strong&gt;ಭೂಕಂಪ ನಿರೋಧಕ: &lt;/strong&gt;ಈ ಬೃಹತ್ ಕಟ್ಟಡವನ್ನು ರಿಕ್ಟರ್ ಮಾಪಕದಲ್ಲಿ 8.0 ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ಐಷಾರಾಮಿ ಸೌಲಭ್ಯಗಳು:&lt;/strong&gt; ಮನೆಯಲ್ಲಿ ಮೂರು ಹೆಲಿಪ್ಯಾಡ್&zwnj;ಗಳು, 168 ಕಾರುಗಳನ್ನು ನಿಲ್ಲಿಸಲು 6 ಹಂತದ ಪಾರ್ಕಿಂಗ್ ವ್ಯವಸ್ಥೆ, ಖಾಸಗಿ ಚಿತ್ರಮಂದಿರ, ಜಿಮ್, ಸ್ಪಾ ಮತ್ತು ಸುಂದರವಾದ ದೇವಾಲಯವಿದೆ.&lt;/p&gt;&lt;p&gt;&lt;strong&gt;ಸ್ನೋ ರೂಮ್: &lt;/strong&gt;ಮುಂಬೈನ ಸೆಖೆಯನ್ನು ತಣಿಸಲು ಈ ಮನೆಯಲ್ಲಿ ವಿಶೇಷ 'ಸ್ನೋ ರೂಮ್' (ಹಿಮದ ಕೊಠಡಿ) ಕೂಡ ಇದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ಅಂಬಾನಿ ಕುಟುಂಬದ ಈ ಆಂಟಿಲಿಯಾ ಕೇವಲ ಹಣದ ಸಂಕೇತವಲ್ಲ, ಬದಲಾಗಿ ಇದು ಆಧುನಿಕ ವಾಸ್ತುಶಿಲ್ಪದ ಒಂದು ಮೈಲಿಗಲ್ಲಾಗಿದೆ. ಇಂದು ಮುಂಬೈನ ಹೃದಯಭಾಗದಲ್ಲಿ ಇಂತಹ ಮತ್ತೊಂದು ಸಾಮ್ರಾಜ್ಯವನ್ನು ನಿರ್ಮಿಸುವುದು ಸಾಮಾನ್ಯ ವ್ಯಕ್ತಿಯ ಕನಸಿನ ಮಾತು ಬಿಡಿ, ವಿಶ್ವದ ದೊಡ್ಡ ಉದ್ಯಮಿಗಳಿಗೂ ಇದು ಸವಾಲಿನ ಕೆಲಸವಾಗಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/business/mukesh-ambani-antilia-rebuilding-cost-2026-luxury-home-value-rs-15000-crore-to-rs-38000-crore-3eloggt"/>
        </item>
        <item>
            <title><![CDATA[900ರೂ ಸ್ಕಾಲರ್‌ಶಿಪ್ ಡ್ರಾ ಮಾಡಲು ಹೋದ 7ನೇ ತರಗತಿ ಬಾಲಕಿಗೆ ಅಚ್ಚರಿ, 759 ಕೋಟಿ ರೂ ಜಾಕ್‌ಪಾಟ್]]></title>
            <link>https://kannada.asianetnews.com/viral/seventh-standard-girl-went-to-withdraw-rs-900-scholarship-finds-rs-759-crore-in-bengal/articleshow-eowx1n8</link>
            <guid isPermaLink="true">https://kannada.asianetnews.com/viral/seventh-standard-girl-went-to-withdraw-rs-900-scholarship-finds-rs-759-crore-in-bengal/articleshow-eowx1n8</guid>
            <pubDate>Mon, 13 Jul 2026 16:53:25 +0530</pubDate>
            <description><![CDATA[&lt;p&gt;ಕಡು ಬಡತನದ ಕುಟುಂಬ. 7ನೇ ತರಗತಿ ಬಾಲಕಿ ಶೂ ಹರಿದಿತ್ತು. ಹೊಸ ಶೂ ಖರೀದಿಸಲು ಸ್ಕಾಲರ್&zwnj;ಶಿಪ್ ಹಣ ಡ್ರಾ ಮಾಡಲು ಅಣ್ಣನ ಜೊತೆ ಎಟಿಎಂ ಬಳಿ ತೆರಳಿದ್ದಾಳೆ. ಆದರೆ ಸ್ಕಾಲರ್&zwnj;ಶಿಪ್ ಚೆಕ್ ಮಾಡಿದಾಗ ಅಚ್ಚರಿ ಕಾದಿದೆ. ಕಾರಣ ಖಾತೆಯಲ್ಲಿದ್ದಿದ್ದು ಬರೋಬ್ಬರಿ 759 ಕೋಟಿ ರೂಪಾಯಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyksvc1vzsqmdx8s8d0hke6,imgname-karnataka-rain-school-holiday--1--1783438830977.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೂಚ್ ಬಿಹಾರ್ (ಜು.13) &lt;/strong&gt;ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಬಡ ಕುಟುಂಬ ಅದು. ತಂದೆ ಕೇರಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ಕೂಡ ಕೂಲಿ ಕೆಲಸ ಮಾಡಿ ಇಬ್ಬರು ಮಕ್ಕಳ ಖರ್ಚು ವೆಚ್ಚ ನೋಡಿಕೊಳ್ಳುತ್ತಾರೆ. ಕಡು ಬಡತನದಲ್ಲಿದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್&zwnj;&zwnj;ಶಿಪ್ ಪ್ರಮುಖ ಆಸರೆಯಾಗಿತ್ತು. ಶಾಲೆ, ಪುಸ್ತಕ ಸೇರಿದಂತೆ ಇತರ ಖರ್ಚು ವೆಚ್ಚಗಳಿಗೆ ಇದು ಸಾಕಾಗುತ್ತಿರಲಿಲ್ಲ. ಇದರ ನಡುವೆ 7ನೇ ತರಗತಿ ಬಾಲಕಿಯ ಶೂ ಹರಿದಿತ್ತು. ಬದಲಿ ಶೂ ಖರೀದಿಗೆ ಪೋಷಕರ ಬಳಿ ಹಣ ಇರಲಿಲ್ಲ. ಹೀಗಾಗಿ ಜುಲೈ ತಿಂಗಳ 900 ರೂಪಾಯಿ ಸ್ಕಾಲರ್&zwnj;ಶಿಪ್&zwnj;ನಲ್ಲಿ ಶೂ ಖರೀದಿಗೆ ನಿರ್ಧರಿಸಿದ್ದಾರೆ. ಸ್ಕಾಲರ್&zwnj;ಶಿಪ್ ಹಣ ಜಮೆ ದಿನಾಂಕದ ಮರುದಿನ ಬಾಲಕಿ ತನ್ನ ಸಹೋದರನ ಜೊತೆ ಹೋಗಿ 900 ರೂಪಾಯಿ ಜಮೆ ಆಗಿದೆಯಾ ಅನ್ನೋದು ಪರಿಶೀಲಿಸಿದಾಗ ಅಚ್ಚರಿಯಾಗಿದೆ. ನಾಲ್ಕು ಬಾರಿ ಚೆಕ್ ಮಾಡಿದರೂ ಖಾತೆಯಲ್ಲಿ 759 ಕೋಟಿ ರೂಪಾಯಿ ಜಮೆ ಆಗಿತ್ತು. ಕೋಟಿ ಕೋಟಿ ರೂಪಾಯಿ ನೋಡಿದ ಬಾಲಕಿ ಗಾಬರಿಯಾಗಿದ್ದಾಳೆ.&lt;/p&gt;&lt;h2&gt;ಬ್ಯಾಂಕ್ ಬ್ಯಾಲೆನ್ಸ್ 759,69,51,951 ರೂಪಾಯಿ&lt;/h2&gt;&lt;p&gt;ಬಾಲಕಿ ಸುಪರ್ಣ ರಾಯ್ ಹಾಗೂ ಆತನ ಸಹೋದರ ಎಟಿಎಂ ಬಳಿ ಬಂದು ಸ್ಕಾಲರ್&zwnj;ಶಿಪ್ ಹಣ ಡ್ರಾ ಮಾಡಲು ಮುಂದಾಗಿದ್ದಾರೆ. ಎಟಿಎಂ ಕಾರ್ಡ್ ಹಿಡಿದು ಬ್ಯಾಲೆನ್ಸ್ ಚೆಕ್ ಮಾಡಿದ್ದಾರೆ. 900 ರೂಪಾಯಿ ಬಂದಿಯೋ ಅಥವಾ ಇಲ್ಲವೋ ಎಂದು ಮೊದಲು ಪರಿಶೀಲಿಸಿದ್ದಾರೆ. 900 ರೂಪಾಯಿ ಬದಲು 759,69,51,951 ರೂಪಾಯಿ ತೋರಿಸಿದೆ. ಇದು ತಾಂತ್ರಿಕ ದೋಷ ಎಂದು ಮತ್ತೆ ಕಾರ್ಡ್ ಹಾಕಿ ಚೆಕ್ ಮಾಡಿದ್ದಾರೆ. ಆಗಲೂ ಅಷ್ಟೇ ಮೊತ್ತ ತೋರಿಸಿದೆ.&lt;/p&gt;&lt;h2&gt;ಬ್ಯಾಂಕ್&zwnj;ಗೆ ಮಾಹಿತಿ ನೀಡಿದ ಬಾಲಕಿ&lt;/h2&gt;&lt;p&gt;ಹೀಗೆ ನಾಲ್ಕು ಬಾರಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ದಾರೆ. ನಾಲ್ಕು ಬಾರಿ ಪರಿಶೀಲಿಸಿದಾಗ 759 ಕೋಟಿ ರೂಪಾಯಿ ಇರುವುದು ನಿಜವಾಗಿದೆ. ಬಾಲಕಿ ಹಾಗೂ ಆಕೆಯ ಸಹೋದರ ಗಾಬರಿಯಾಗಿದ್ದಾರೆ. 900 ರೂಪಾಯಿ ಡ್ರಾ ಮಾಡಿದ ಬಾಲಕಿ ಉಳಿದ ಹಾಗೇ ಇರಲಿ ಎಂದು ಮರಳಿದ್ದಾಳೆ. ಬಳಿಕ ನೇರವಾಗಿ ಬ್ಯಾಂಕ್&zwnj;ಗೆ ತೆರಳಿದ್ದಾರೆ. ಬ್ಯಾಂಕ್&zwnj;ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್&zwnj;ನಲ್ಲಿ ಚೆಕ್ ಮಾಡಿದಾಗ 759 ಕೋಟಿ ರೂಪಾಯಿ ಇರುವುದು ನಿಜವಾಗಿದೆ.&lt;/p&gt;&lt;p&gt;ಬಾಲಕಿ ಬ್ಯಾಂಕ್&zwnj;ಗೆ ಮಾಹಿತಿ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇತ್ತ ಈ ಮಾಹಿತಿ ಪೊಲೀಸರಿಗೂ ಸಿಕ್ಕಿದೆ. ಪೊಲೀಸರು ಆಗಮಿಸಿ ಇದೀಗ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ಮೂಲಗಳ ಪ್ರಕಾರ ಇದು ತಾಂತ್ರಿಕ ದೋಷದಿಂದ ಆಗಿರುವ ಸಾಧ್ಯತೆ ಇದೆ. ಇನ್ನು ಇಷ್ಟು ಮೊತ್ತವನ್ನು ಹೀಗೆ ವರ್ಗಾವಣೆ ಮಾಡುವುದಿಲ್ಲ. ಹೀಗಾಗಿ ತಾಂತ್ರಿಕ ದೋಷವಾಗಿರುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ. ತನಿಖೆ ಬಳಿಕ ಖಚಿತ ಮಾಹಿತಿ ಸಿಗಲಿದೆ ಎಂದಿದ್ದಾರೆ.&lt;/p&gt;&lt;h2&gt;ಬಾಲಕಿ ಹಾಗೂ ಪೋಷಕರಿಗೆ ಆದಾಯ ತೆರಿಗೆ ತಲೆನೋವು&lt;/h2&gt;&lt;p&gt;759 ಕೋಟಿ ರೂಪಾಯಿ ಖಾತೆಗೆ ಜಮೆ ಆಗಿದೆ. ಕೂಲಿ ಕೆಲಸ ಮಾಡಿಕೊಂಡು ಮೂರು ಹೊತ್ತು ಊಟ ಮಾಡುತ್ತಿರುವುದೇ ದೊಡ್ಡ ವಿಷಯ. ಇದರ ನಡುವೆ ನಮ್ಮಿಂದ ಆದಾಯ ತೆರಿಗೆ ಕಸಿದುಕೊಳ್ಳಬೇಡಿ ಎಂದು ಬಾಲಕಿ ತಾಯಿ ಮನವಿ ಮಾಡಿದ್ದಾರೆ. ಖಾತೆಯಲ್ಲಿ ಕೋಟಿ ಕೋಟಿ ದುಡ್ಡ ಜಮೆ ಆಗಿದೆ. ಇದು ನಮ್ಮ ದುಡ್ಡಲ್ಲ. ಹೀಗಾಗಿ ತೆರಿಗೆ ಸಂಕಷ್ಟಕ್ಕೆ ನಮ್ಮನ್ನು ಸಿಲುಕಿಸಬೇಡಿ ಎಂದು ಬ್ಯಾಂಕ್ ಬಳಿ ಮನವಿ ಮಾಡಿದ್ದಾರೆ. ಇತ್ತ ಗ್ರಾಮಸ್ಥರು ಇದೀಗ ಈ ಬಡ ಕುಟುಂಬದ ಮನೆಯತ್ತ ತಂಡೋಪ ತಂಡವಾಗಿ ಧಾವಿಸುತ್ತಿದ್ದಾರೆ.&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/seventh-standard-girl-went-to-withdraw-rs-900-scholarship-finds-rs-759-crore-in-bengal/articleshow-eowx1n8"/>
        </item>
        <item>
            <title><![CDATA[ಸೌಜನ್ಯ ಪ್ರಕರಣ; ಮಹೇಶ್ ಶೆಟ್ಟಿ ತಿಮರೋಡಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ, ಗಡೀಪಾರು ಪ್ರಶ್ನಿಸಿದ್ದ ಅರ್ಜಿ ವಜಾ]]></title>
            <link>https://kannada.asianetnews.com/karnataka-districts/supreme-court-rejects-mahesh-shetty-timarodi-petition-challenging-extradition/articleshow-2f7r19m</link>
            <guid isPermaLink="true">https://kannada.asianetnews.com/karnataka-districts/supreme-court-rejects-mahesh-shetty-timarodi-petition-challenging-extradition/articleshow-2f7r19m</guid>
            <pubDate>Mon, 13 Jul 2026 15:28:17 +0530</pubDate>
            <description><![CDATA[&lt;p&gt;ಸೌಜನ್ಯ ಪ್ರಕರಣ ಬಳಸಿ ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನ ನಡೆಸಿದ ಮಹೇಶೆ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ತಮ್ಮ ಗಡೀಪಾರು ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdegn8vnhcjnar9zcd67dbd,imgname-mahesh-shetty-timarodi-case-1783936603419.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.13) &lt;/strong&gt;ಕರ್ನಾಟಕದಲ್ಲಿ ಭಾರಿ ಕೋಲಾಹಲ ಮೂಡಿಸಿದ ಸೌಜನ್ಯ ಪ್ರಕರಣ ಹಾಗೂ ಈ ಪ್ರಕರಣ ಹಿಡಿದು ಮಾಡಿದ ಹೋರಾಟ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಅಂಶವನ್ನು ಉಲ್ಲೇಖಿಸಿದೆ. ಸೌಜನ್ಯ ಪ್ರಕರಣವನ್ನು ಬಳಸಿಕೊಂಡು ಧರ್ಮಸ್ಥಳ ವಿರುದ್ಧ ಭಾರಿ ಪ್ರತಿಭಟನೆ, ಗಂಭೀರ ಆರೋಪಗಳನ್ನು ಮಾಡಿದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸೌಜನ್ಯ ಪ್ರಕರಣವನ್ನು ಬಳಸಿಕೊಂಡು ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನವನ್ನು ಮಹೇಶ್ ಶೆಟ್ಟಿ ತಿಮರೋಡಿ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಗಡೀಪಾರು ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.&lt;/p&gt;&lt;h2&gt;ಮಹೇಶ್ ಶೆಟ್ಟಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ&lt;/h2&gt;&lt;p&gt;ಸೌಜನ್ಯ ಪ್ರಕರಣ, ಬುರುಡೆ ಪ್ರಕರಣಗಳಲ್ಲಿ ಬುರುಡೆ ಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕೆಲ ಪ್ರಕರಣಗಳು ದಾಖಲಾಗಿದೆ. ಇದೇ ವೇಳೆ ಮಹೇಶ್ ಶೆಟ್ಟಿ ಗಡೀಪಾರಿಗೆ ಆದೇಶ ನೀಡಲಾಗಿತ್ತು. ಈ ಆದೇಶ ಪ್ರಶ್ನಿಸಿ ತಿಮರೋಡಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆದರೆ ತಿಮರೋಡಿ ಸಲ್ಲಿಸಿದ್ದ ಅರ್ಜಿ ಪ್ರಶ್ನಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಕಾನೂನು ಪ್ರಕಾರ ಸೂಕ್ತ ಸಕ್ಷಮ ಪ್ರಾಧಿಕಾರವನ್ನೇ ಸಂಪರ್ಕಿಸುವಂತೆ ನಿರ್ದೇಶಿಸಿದೆ. ಮಹೇಶ್ ಶೆಟ್ಟಿ ಗಡೀಪಾರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಲಭ್ಯವಿರುವ ಶಾಸನಬದ್ಧ ಪರಿಹಾರಗಳನ್ನು ಬಳಸಿಕೊಳ್ಳುವ ಬದಲು ನೇರವಾಗಿ ಸುಪ್ರೀಂ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿರುವುದರ ಕುರಿತು ನ್ಯಾಯಪೀಠವು ಪ್ರಶ್ನಿಸಿದೆ.&lt;/p&gt;&lt;h2&gt;ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ&lt;/h2&gt;&lt;p&gt;ಮಹೇಶ್ ಶೆಟ್ಟಿ ವಕೀಲರು ಸುಪ್ರೀಂ ಕೋರ್ಟ್&zwnj;ನಲ್ಲಿ ವಿಚಿತ್ರ ವಾದ ಮಂಡಿಸಿದ್ದರು. ಮಹೇಶ್ ಶೆಟ್ಟಿ ಗಡೀಪಾರು ಪ್ರಕರಣ ಹಾಗೂ ಸೌಜನ್ಯ ಪ್ರಕರಣ ಜೋಡಿಸಿ ವಾದ ಮಂಡಿಸಿದ್ದರು. ಇಷ್ಟೇ ಅಲ್ಲ ಸ್ಥಳೀಯ ದೇವಸ್ಥಾನದ ಪ್ರಮುಖರು ತಮ್ಮನ್ನು ಗುರಿಯಾಗಿಸಿದ್ದಾರೆ. ಹೀಗಾಗಿ ತಮ್ಮ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಾದ ಮಂಡಿಸಿದ್ದರು. ಈ ವಾದ ಕೇಳಿ ಗರಂ ಆದ ಸುಪ್ರೀಂ ಕೋರ್ಟ್, ಅಸಂಬಂಧಿತ ವಿಷಯಗಳನ್ನು ಬಳಸಿ ಸಾರ್ವಜನಿಕ ಭಾವನೆಗಳನ್ನು ಕೆರಳಿಸುವುದು ಅಥವಾ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ತರಾಟೆ ತೆಗೆದುಕೊಂಡಿತು.&lt;/p&gt;&lt;p&gt;ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ ಪರಿಹಾರ ನೀಡಲೂ ನಿರಾಕರಿಸಿದೆ. ಊಹಾತ್ಮಕ ವಾದ ಮಂಡಿಸಿದ ವಕೀಲರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ನ್ಯಾಯಾಲಯದಲ್ಲಿ ಜೂಜಾಟ ಬೇಡ. ಇಲ್ಲಿ ಅವಕಾಶಗಳಿಲ್ಲ. ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸಂಜಯ್ ಕುಮಾರ್ ಹಾಗೂ ನ್ಯಾಯಮೂರ್ತಿ ಶ್ರೀ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್&zwnj;ನ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/supreme-court-rejects-mahesh-shetty-timarodi-petition-challenging-extradition/articleshow-2f7r19m"/>
        </item>
        <item>
            <title><![CDATA[S Janaki: ದಕ್ಷಿಣ ಭಾರತದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅನ್ಯಾಯ, ಸಿಡಿದೆದ್ದ ಎಸ್ ಜಾನಕಿ; ಮುಂದೆ ಆಗಿದ್ದು ಇತಿಹಾಸ!]]></title>
            <link>https://kannada.asianetnews.com/gallery/cine-world/s-janaki-created-history-by-refusing-padma-bhushan-award-speaking-out-against-the-discrimination-in-indian-languages-bnaylim</link>
            <guid isPermaLink="true">https://kannada.asianetnews.com/gallery/cine-world/s-janaki-created-history-by-refusing-padma-bhushan-award-speaking-out-against-the-discrimination-in-indian-languages-bnaylim</guid>
            <pubDate>Mon, 13 Jul 2026 13:32:25 +0530</pubDate>
            <description><![CDATA[&lt;p&gt;2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. ಆ ಮೂಲಕ ಈ ಮೇರು ಗಾಯಕಿ ಇತಿಹಾಸ ಸೃಷ್ಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxbc0jk8dbs2m1sawtgvs7s4,imgname-janaki-last-moments-1783866870376.jpg" type="image/jpeg" height="390" width="690"/>
            <content:encoded><![CDATA[&lt;p&gt;2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. ಆ ಮೂಲಕ ಈ ಮೇರು ಗಾಯಕಿ ಇತಿಹಾಸ ಸೃಷ್ಟಿಸಿದ್ದಾರೆ.&lt;/p&gt;&lt;img&gt;&lt;p&gt;ಮೊನ್ನೆ, ಅಂದರೆ 11 ಜುಲೈ 2026ರಂದು ಭಾರತದ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್ ಜಾನಕಿ (S Janaki) ನಿಧರಾಗಿದ್ದು ಗೊತ್ತೇ ಇದೆ. ಈ ಗಂಧರ್ವ ಗಾಯಕಿಯ ಬಗ್ಗೆ ಭಾರತೀಯರಿಗೆ ಹೆಚ್ಚಾಗಿ ಹೇಳುವ ಅಗತ್ಯವೇನಿಲ್ಲ. 4 ರಾಷ್ಟ್ರೀಯ ಪ್ರಶಸ್ತಿ, 30 ರಾಜ್ಯ ಪ್ರಶಸ್ತಿ, ಹಲವಾರು ನಂದಿ ಪ್ರಶಸ್ತಿ ಜೊತೆಗೆ ಬಹಳಷ್ಟು ಸಂಘ-ಸಂಸ್ಥೆಗಳಿಂದ ಲೆಕ್ಕವಿಡಲಾಗದಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಎಸ್ ಜಾನಕಿಯವರಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಇಂಥ ಮೇರು ಗಾಯಕಿ ಎಸ್&zwnj; ಜಾನಕಿಯವರು, ಚಿತ್ರರಂಗದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಿನ್ನೆಲೆ ಗಾಯಕ-ಗಾಯಕಿಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಮಾತನ್ನಾಡಿದ್ದರು. ಈ ವಿಷಯ ಹಲವರಿಗೆ ಗೊತ್ತಿಲ್ಲ.&lt;/p&gt;&lt;img&gt;&lt;p&gt;2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. '50 ವರ್ಷಗಳ ನನ್ನ ಸಂಗೀತದ ಸೇವೆಗೆ ಈಗ ಪ್ರಶಸ್ತಿ ಕೋಡುವುದು ತುಂಬಾ ತಡವಾಯ್ತು. ಅದಕ್ಕೆ ಕಾರಣ ನಾವು ಹಿಂದಿಯಲ್ಲಿ ಹಾಡಿಲ್ಲ, ದಕ್ಷಿಣ ಭಾರತದ ಭಾಷೆಗಳಲ್ಲಿ ಹಾಡಿರೋದು' ಎಂದು ಎಸ್ ಜಾನಕಿಯವರು ಆ ಬಗ್ಗೆ ಅವರು ನೀಡಿದ್ದ ಹೇಳಿಕೆ ಹಲವರ ಮೆಚ್ಚುಗೆ ಗಳಿಸಿತ್ತು. ಜೊತೆಗೆ, ಎಸ್ ಜಾನಕಿಯವರು ಕೊಟ್ಟ ಕಾರಣ ಹಾಗೂ ಮಾಡಿದ್ದ ನಿರಾಕರಣೆಗೆ ಬಹಳಷ್ಟು ಜನರು ಸಮ್ಮತಿ ಸೂಚಿಸಿದ್ದು ಮಾತ್ರವಲ್ಲ, ಅವರ ದೃಢ ನಿರ್ಧಾರಕ್ಕೆ ಬೆನ್ನೆಲುಬಾಗಿ ನಿಂತಿದ್ದರು.&lt;/p&gt;&lt;img&gt;&lt;p&gt;ಈ ಬಗ್ಗೆ ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್&zwnj;ಪಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಹೇಳುವ ಮೂಲಕ ಸಹಮತ ಸೂಚಿಸಿದ್ದರು. ಜೊತೆಗೆ, ಆ ದಕ್ಷಿಣ ಭಾರತ-ಉತ್ತರ ಭಾರತದ ಕಲಾವಿದರ ನಡುವಿನ ತಾರತಮ್ಯದ ನೋವು ತಾವೂ ಸೇರಿದಂತೆ, ದಕ್ಷಿಣ ಭಾರತದ ಎಲ್ಲ ಕಲಾವಿದರೂ ಅನುಭವಿಸುತ್ತಿದ್ದಾರೆ ಎಂದಿದ್ದರು. ಜೊತೆಗೆ, ಎಸ್ ಜಾನಕಿಯವರ ದಿಟ್ಟ ನಿರ್ಧಾರ ಹಾಗೂ ಪ್ರಶಸ್ತಿಯನ್ನು ನಿರಾಕರಿಸಿದ್ದನ್ನು ಶ್ಲಾಘಿಸುವ ಅರ್ಥದಲ್ಲಿ ಮಾತನ್ನಾಡಿದ್ದರು.&lt;/p&gt;&lt;img&gt;&lt;p&gt;ಈ ಬಗ್ಗೆ ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್&zwnj;ಪಿ ಬಾಲಸುಬ್ರಹ್ಮಣ್ಯಂ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಹೀಗೆ ಹೇಳಿದ್ದರು-&lt;/p&gt;&lt;p&gt;'ಭಾರತದ ಸರ್ಕಾರ ಎಸ್ ಜಾನಕಿಯವರ ಪ್ರತಿಭೆಗೆ ತಕ್ಕ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಲಿಲ್ಲ. ನಮ್ಮವರಿಗೆ ಅಂದರೆ ದಕ್ಷಿಣ ಭಾರತದ ಸಂಸದರಿಗೆ ಲಾಬಿ ಮಾಡಲು ಬರುವುದಿಲ್ಲ' ಎಂದು ನೇರವಾಗಿಯೇ ಹೇಳಿದ್ದರು.&lt;/p&gt;&lt;img&gt;&lt;p&gt;ಸುಮಾರು 48000 ಕ್ಕೂ ಹೆಚ್ಚು ಹಾಡುಗಳನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಯಲ್ಲಿ ಹಾಡಿದ್ದರೂ ಇವರು &quot;ಭಾರತದ ನೈಟಿಂಗೆಲ್&quot; ಆಗಲಿಲ್ಲ. ಏಕೆಂದರೆ ಭಾರತದ ಸರ್ಕಾರದ ಪ್ರಕಾರ ಇವರು ಹಿಂದಿಯಲ್ಲಿ ಅಷ್ಟಾಗಿ ಹಾಡಲಿಲ್ಲ. ಇದೂ ಒಂದು ಕಾರಣ ಎಂಬುದೇ ದುರಂತ. ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ಸಂಗೀತಕ್ಕೆ, ಕಲೆಗೆ ಯಾವುದೇ ಬೇಧಭಾವ ಇರುವುದಿಲ್ಲ, ಇರಬಾರದು. ಭಾರತದ ಸರ್ಕಾರವು ಇಂತಹ ಮಲತಾಯಿಯ ಧೋರಣೆಯನ್ನು ಬಿಡುವವರೆಗೂ ಕಲೆಯಲ್ಲಿ ಸಾಧಿಸಿದವರಿಗೆ ಸಮನಾದ ಪ್ರಾಮುಖ್ಯತೆ ಸಿಗುವುದಿಲ್ಲ' ಎಂದಿದ್ದರು.&lt;/p&gt;&lt;img&gt;&lt;p&gt;ಇದು 'ನ್ಯಾಷನಲ್ ಅವಾರ್ಡ್' ಅಂದರೆ 'ಪದ್ಮ' ಕೆಟಗರಿಯ ಹಾಗೂ ಭಾರತ ರತ್ನ, ದಾದಾ ಸಾಹೇಬ್ ಪ್ರಶಸ್ತಿಗಳು ಮುಂತಾದವುಗಳ ವಿಷಯಕ್ಕೆ ಎಸ್ ಜಾನಕಿಯವರು ಹೇಳಿದ್ದ ಮಾತು ಹಾಗೂ ಮಾಡಿದ್ದ ಗಟ್ಟಿ ನಿರ್ಧಾರ. ಪ್ರಶಸ್ತಿ ಬಂದಿದ್ದರೂ ಅದನ್ನೂ ಸ್ವೀಕರಿಸದೇ ಅದಕ್ಕೆ ಸೂಕ್ತ ಕಾರಣ ಕೊಟ್ಟು ನಿರಾಕರಿಸಿದ್ದು ಎಸ್ ಜಾನಕಿಯವರ ಬಗ್ಗೆ 'ದಕ್ಷಿಣ ಭಾರತೀಯರ' ಪ್ರೀತಿ ಆದರ ಹೆಚ್ಚಾಗಲು ಕಾರಣವಾಯಿತು, ಜೊತೆಗೆ, ಹಿಂದಿ ಭಾಷಿಗರು ಹಾಗೂ ದಕ್ಷಿಣ ಭಾರತೀಯರ ಕಲಾವಿದರ ನಡುವೆ ಭಾರತದ ಸರ್ಕಾರ ತೋರುತ್ತಿದ್ದ ತಾರತಮ್ಮು ಇಡೀ ಜಗತ್ತಿಗೆ ಅರ್ಥವಾಗಲು ಕಾರಣವಾಯಿತು. ಎಸ್ ಜಾನಕಿಯವರ ಕಾರಣಕ್ಕೆ ಈ ಸಂಗತಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ದಾಖಲಾಗಿದೆ.&lt;/p&gt;&lt;p&gt;ಇಂದು ಎಸ್ ಜಾನಕಿಯವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರ ಸ್ವರ ಮಾಧುರ್ಯ ಹಾಗೂ ಹಾಡಿರುವ ಗೀತೆಗಳು ಈ ಜಗತ್ತು ಇರುವವರೆಗೂ ಅಜರಾಮರ!&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/s-janaki-created-history-by-refusing-padma-bhushan-award-speaking-out-against-the-discrimination-in-indian-languages-bnaylim"/>
        </item>
        <item>
            <title><![CDATA[ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ]]></title>
            <link>https://kannada.asianetnews.com/india-news/sc-stays-madras-hc-order-banning-cow-slaughter-in-tamil-nadu-slp-abhishek-singhvi-san/articleshow-6380xt8</link>
            <guid isPermaLink="true">https://kannada.asianetnews.com/india-news/sc-stays-madras-hc-order-banning-cow-slaughter-in-tamil-nadu-slp-abhishek-singhvi-san/articleshow-6380xt8</guid>
            <pubDate>Mon, 13 Jul 2026 12:59:48 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಆದೇಶವು ಚಾಲ್ತಿಯಲ್ಲಿರುವ 'ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958'ಕ್ಕೆ ವಿರುದ್ಧವಾಗಿದೆ ಎಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd60k3np8pbd1pcghgdm0rd,imgname-supreme-court-cow-slaughter-stay-madras-high-court-tamil-nadu-ban-1783927688309.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.13):&lt;/strong&gt; ತಮಿಳುನಾಡು ರಾಜ್ಯದಾದ್ಯಂತ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಥವಾ ಇನ್ಯಾವುದೇ ದಿನಗಳಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ. ಮದ್ರಾಸ್ ಹೈಕೋರ್ಟ್&zwnj;ನ ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯ (SLP) ವಿಚಾರಣೆ ನಡೆಸಿದ ನ್ಯಾಯಾಲಯವು ಈ ಮಹತ್ವದ ಆದೇಶ ಹೊರಡಿಸಿದೆ.&lt;/p&gt;&lt;p&gt;ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಈ ಮಧ್ಯಂತರ ಆದೇಶವನ್ನು ಪ್ರಕಟಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮೊದಲ ನೋಟಕ್ಕೆ ಹೈಕೋರ್ಟ್ ಆದೇಶದ ಕೊನೆಯ ಪ್ಯಾರಾಗ್ರಾಫ್ (ರಾಜ್ಯಾದ್ಯಂತ ಸಂಪೂರ್ಣ ನಿಷೇಧ ಹೇರಿರುವ ಭಾಗ) &quot;ತಿದ್ದುಪಡಿ&quot;ಗೆ ಅರ್ಹವಾಗಿದೆ ಎಂದು ಪೀಠವು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.&lt;/p&gt;&lt;h2&gt;&lt;strong&gt;ಸರ್ಕಾರದ ಪರ ಹಿರಿಯ ವಕೀಲ ಸಿಂಘ್ವಿ ವಾದ&lt;/strong&gt;&lt;/h2&gt;&lt;p&gt;ತಮಿಳುನಾಡು ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿದರು. &quot;ಹೈಕೋರ್ಟ್&zwnj;ನ ಈ ಆದೇಶವು ಜಾರಿಯಲ್ಲಿರುವ 'ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958' ಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಈ ಕಾಯ್ದೆಯ ಪ್ರಕಾರ, ಕೆಲಸ ಮಾಡಲು ಮತ್ತು ಸಂತಾನೋತ್ಪತ್ತಿಗೆ ಅಸಮರ್ಥವಾಗಿರುವ 10 ವರ್ಷ ಮೇಲ್ಪಟ್ಟ ಹಸುಗಳನ್ನು ಸಕ್ಷಮ ಅಧಿಕಾರಿಯಿಂದ ಸೂಕ್ತ ಪ್ರಮಾಣಪತ್ರ ಪಡೆದು ನಿಯಮಾನುಸಾರ ಹತ್ಯೆ ಮಾಡಲು ಅವಕಾಶವಿದೆ. ಇದನ್ನು ಹೈಕೋರ್ಟ್ ನಿರ್ಲಕ್ಷಿಸಿದೆ&quot; ಎಂದು ಅವರು ವಾದಿಸಿದರು.&lt;/p&gt;&lt;p&gt;ಅಲ್ಲದೆ, ಪ್ರಾಣಿ ಹಿಂಸೆ ತಡೆ ಕಾಯ್ದೆ 1960, ಪ್ರಾಣಿ ಹಿಂಸೆ ತಡೆ (ಕಸಾಯಿಖಾನೆ) ನಿಯಮಗಳು 2001, ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆ 1998 ಮತ್ತು ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ನಿಯಮಗಳು 2023 ರಂತಹ ಚಾಲ್ತಿಯಲ್ಲಿರುವ ಕಾನೂನುಗಳು ಪ್ರಾಣಿಗಳನ್ನು ಹತ್ಯೆ ಮಾಡುವ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ಪರಿಸ್ಥಿತಿಗಳನ್ನು ನಿಯಂತ್ರಿಸುತ್ತವೆಯೇ ಹೊರತು, ಸಂಪೂರ್ಣ ನಿಷೇಧವನ್ನು ಹೇರುವುದಿಲ್ಲ. ಹೀಗಿದ್ದೂ ಹೈಕೋರ್ಟ್ ಸಂಪೂರ್ಣ ನಿಷೇಧದ ನಿರ್ದೇಶನ ನೀಡುವ ಮೂಲಕ ಶಾಸನಬದ್ಧ ಕಾನೂನಿನ ಜಾಗದಲ್ಲಿ 'ನ್ಯಾಯಾಂಗ ಶಾಸನ'ವನ್ನು (Judicial Legislation) ಜಾರಿಗೆ ತರಲು ಯತ್ನಿಸಿದೆ ಎಂದು ತಮಿಳುನಾಡು ಸರ್ಕಾರ ಆಕ್ಷೇಪಿಸಿದೆ.&lt;/p&gt;&lt;h2&gt;&lt;strong&gt;ಹೈಕೋರ್ಟ್ ಆದೇಶದ ಹಿನ್ನೆಲೆ&lt;/strong&gt;&lt;/h2&gt;&lt;p&gt;ಹಿಂದೂ ಮಕ್ಕಳ್ ಕಚ್ಚಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್&zwnj;ನ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಅವರಿದ್ದ ಪೀಠವು, ಕಳೆದ ಮೇ 27 ರಂದು ಬಕ್ರೀದ್ ಹಬ್ಬದ ಮುನ್ನಾದಿನ ಈ ನಿಷೇಧದ ಆದೇಶ ಹೊರಡಿಸಿತ್ತು.&lt;/p&gt;&lt;p&gt;ಅರ್ಜಿದಾರರು ಕೇವಲ ನಿಗದಿಪಡಿಸಿದ ಅಧಿಕೃತ ಜಾಗಗಳಲ್ಲಿ ಮಾತ್ರ ಹತ್ಯೆ ನಡೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಆದರೆ ಹೈಕೋರ್ಟ್ ಮಾತ್ರ ಯಾವುದೇ ದಿನದಲ್ಲೂ, ಎಲ್ಲೂ ಹಸು ಅಥವಾ ಕರುಗಳನ್ನು ಕೊಲ್ಲಬಾರದು ಎಂದು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಸಂಪೂರ್ಣ ನಿಷೇಧದ ಆದೇಶ ನೀಡಿತ್ತು. ಹಾಲಿನ ಉತ್ಪಾದನೆ ಹೆಚ್ಚಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸಲು ಗೋಹತ್ಯೆ ನಿಷೇಧ ಅಗತ್ಯ ಎಂಬ ಸರ್ಕಾರಿ ಆದೇಶವನ್ನು (GO) ಹೈಕೋರ್ಟ್ ಉಲ್ಲೇಖಿಸಿತ್ತು. ಜೊತೆಗೆ, ಬಕ್ರೀದ್ ಆಚರಣೆಗೆ ಗೋಹತ್ಯೆ ಅತ್ಯಗತ್ಯ ಆಚರಣೆಯಲ್ಲ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನೂ ಹೈಕೋರ್ಟ್ ಉಲ್ಲೇಖಿಸಿತ್ತು.&lt;/p&gt;&lt;h2&gt;&lt;strong&gt;ತಮಿಳುನಾಡು ಸರ್ಕಾರದ ಆಕ್ಷೇಪಣೆಗಳೇನು?&lt;/strong&gt;&lt;/h2&gt;&lt;p&gt;ಸುಪ್ರೀಂ ಕೋರ್ಟ್&zwnj;ನಲ್ಲಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ವಿಶೇಷ ರಜೆ ಅರ್ಜಿಯಲ್ಲಿ (SLP) ಹೈಕೋರ್ಟ್ ತೀರ್ಪಿನ ವಿರುದ್ಧ ಹಲವು ಗಂಭೀರ ತಾಂತ್ರಿಕ ಅಂಶಗಳನ್ನು ಎತ್ತಿ ತೋರಿಸಲಾಗಿದೆ:&lt;/p&gt;&lt;p&gt;&lt;strong&gt;ಕಾನೂನು ಮೀರಿ ಸರ್ಕಾರಿ ಆದೇಶಕ್ಕೆ ಮನ್ನಣೆ: &lt;/strong&gt;ಪ್ರಕರಣದಲ್ಲಿ ಯಾವುದೇ ವಿವಾದಕ್ಕೆ ಒಳಗಾಗದ ಅಥವಾ ಅನ್ವಯವಾಗದ ಸರ್ಕಾರಿ ಆದೇಶ ಸಂಖ್ಯೆ 1715 ಅನ್ನು ಹೈಕೋರ್ಟ್ ನೆಚ್ಚಿಕೊಂಡಿರುವುದು ತಪ್ಪು. ಯಾವುದೇ ಕಾರ್ಯಾಂಗದ ಸೂಚನೆಯು ತಮಿಳುನಾಡಿನಲ್ಲಿ ಜಾರಿಯಲ್ಲಿರುವ ಶಾಸನಬದ್ಧ ಕಾಯ್ದೆಗಳನ್ನು ಮೀರಲು ಸಾಧ್ಯವಿಲ್ಲ.&lt;/p&gt;&lt;p&gt;&lt;strong&gt;ಕೋರದ ಪರಿಹಾರವನ್ನು ನೀಡಿದ ಕೋರ್ಟ್: &lt;/strong&gt;ಮೂಲ ಅರ್ಜಿಯು ಕೇವಲ ಕೊಯಮತ್ತೂರಿನಲ್ಲಿ ಬಕ್ರೀದ್ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಹತ್ಯೆ ತಡೆಯುವುದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಹೈಕೋರ್ಟ್ ವ್ಯಾಪ್ತಿಯನ್ನು ವಿಸ್ತರಿಸಿ, ಅರ್ಜಿದಾರರು ಕೇಳದಿದ್ದರೂ ಅಧಿಕೃತ ಕಸಾಯಿಖಾನೆಗಳಲ್ಲೂ ಹತ್ಯೆ ಮಾಡದಂತೆ ಸಂಪೂರ್ಣ ನಿಷೇಧ ಹೇರಿದೆ.&lt;/p&gt;&lt;p&gt;&lt;strong&gt;ತೀರ್ಪಿನಲ್ಲೇ ಇದೆ ಪರಸ್ಪರ ವಿರೋಧ: &lt;/strong&gt;ಹೈಕೋರ್ಟ್ ತನ್ನ ತೀರ್ಪಿನ ಒಂದು ಭಾಗದಲ್ಲಿ ಪ್ರಾಣಿಗಳನ್ನು ಕೇವಲ ನಿಗದಿಪಡಿಸಿದ ಕಸಾಯಿಖಾನೆಗಳಲ್ಲೇ ಹತ್ಯೆ ಮಾಡಬೇಕು ಎಂದು ಹೇಳುತ್ತಲೇ, ಮತ್ತೊಂದು ಭಾಗದಲ್ಲಿ ಬಕ್ರೀದ್ ಅಥವಾ ಇನ್ಯಾವ ದಿನದಲ್ಲೂ ಹಸು-ಕರುಗಳನ್ನು ಕೊಲ್ಲುವಂತಿಲ್ಲ ಎಂದಿದೆ. ಇದು ತೀರ್ಪಿನ ಒಳಗೇ ಇರುವ ಪರಸ್ಪರ ವಿರೋಧಾಭಾಸವಾಗಿದೆ.&lt;/p&gt;&lt;p&gt;&lt;strong&gt;ಪೊಲೀಸ್ ವರದಿಯ ತಪ್ಪು ಅರ್ಥೈಕೆ: &lt;/strong&gt;ಸಾರ್ವಜನಿಕ ಸ್ಥಳಗಳಲ್ಲಿ ಹತ್ಯೆ ನಡೆಯಲಿದೆ ಎಂಬುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೈಕೋರ್ಟ್ ತಪ್ಪಾಗಿ ಗ್ರಹಿಸಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಹತ್ಯೆ ನಡೆಯದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಮತ್ತು ಧಾರ್ಮಿಕ ಆಚರಣೆಗಳನ್ನು ಸಾರ್ವಜನಿಕವಲ್ಲದ, ಆವರಣದ ಒಳಗಿರುವ ಸ್ಥಳಗಳಿಗೆ ಸೀಮಿತಗೊಳಿಸಲಾಗುವುದು ಎಂದು ಪೊಲೀಸರು ಅಫಿಡವಿಟ್&zwnj;ನಲ್ಲಿ ಸ್ಪಷ್ಟಪಡಿಸಿದ್ದರು. ಇದನ್ನು ಹೈಕೋರ್ಟ್ ನಿರ್ಲಕ್ಷಿಸಿದೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/sc-stays-madras-hc-order-banning-cow-slaughter-in-tamil-nadu-slp-abhishek-singhvi-san/articleshow-6380xt8"/>
        </item>
        <item>
            <title><![CDATA['ಹೆಣ್ಣಾನೆ ಇದ್ರೆ ದಾನ ಮಾಡಿ..' ಕೇರಳ ಸಿಎಂಗೆ ಪತ್ರ ಬರೆದ ಸಿಎಂ ಡಿಕೆ ಶಿವಕುಮಾರ್‌]]></title>
            <link>https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va</link>
            <guid isPermaLink="true">https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va</guid>
            <pubDate>Mon, 13 Jul 2026 12:38:25 +0530</pubDate>
            <description><![CDATA[&lt;p&gt;ಉಡುಪಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗಾಗಿ ಹೆಣ್ಣಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2xg6xfggnqq9znzah8jaq5,imgname-dk-shivakumar--5--1783583218607.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13): &lt;/strong&gt;ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯುಳ್ಳ ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಿಗಾಗಿ ಹೆಣ್ಣು ಸಾಕಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಅಧಿಕೃತ ವಿನಂತಿ ಮಾಡಿದೆ. ನೆರೆರಾಜ್ಯಗಳಿಗೆ ಸಾಕಾನೆಗಳನ್ನು ದಾನ ಮಾಡುವ ಅಥವಾ ವರ್ಗಾವಣೆ ಮಾಡುವಂತೆ ಕೇರಳ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ಕೇರಳದ ಯಾವುದೇ ದೇವಸ್ಥಾನದಿಂದ ಇಚ್ಛಾಪೂರ್ವಕವಾಗಿ ಹೆಣ್ಣು ಆನೆಯೊಂದನ್ನು ದಾನವಾಗಿ ನೀಡಲು ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದಾರೆ.&lt;/p&gt;&lt;p&gt;ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಮತ್ತು ದೇವಸ್ಥಾನದ ಆಚರಣೆಗಳಲ್ಲಿ ಭಾಗವಹಿಸಲು ಆನೆಯ ಅಗತ್ಯವಿದೆ. ಚಾಲ್ತಿಯಲ್ಲಿರುವ ಎಲ್ಲಾ ಕಾನೂನು ನಿಬಂಧನೆಗಳು ಮತ್ತು ನಿಯಮಾವಳಿಗಳಿಗೆ ಬದ್ಧವಾಗಿಯೇ ಈ ಆನೆ ದಾನದ ಪ್ರಕ್ರಿಯೆಗೆ ನೆರವಾಗಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಪತ್ರದಲ್ಲಿ ವಿನಂತಿಸಿದ್ದಾರೆ. ಕೇರಳ ಸರ್ಕಾರದ ಈ ತ ನಡೆ ಉಭಯ ರಾಜ್ಯಗಳ ನಡುವಿನ ಶತಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ತೆಲಂಗಾಣ ಪ್ರಸ್ತಾವನೆ ತಿರಸ್ಕರಿಸಿದ್ದ ಕೇರಳ&lt;/strong&gt;&lt;/h2&gt;&lt;p&gt;ಇದಕ್ಕೂ ಮುನ್ನ, ತೆಲಂಗಾಣ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಧಾರ್ಮಿಕ ಉದ್ದೇಶಗಳಿಗಾಗಿ ಕೇರಳದ ಅರಣ್ಯ ಇಲಾಖೆಯ ಶಿಬಿರದ ಆನೆಗಳನ್ನು (ರಕ್ಷಿಸಿ ಸಾಕಲಾಗುತ್ತಿರುವ ಆನೆಗಳು) ನೀಡುವಂತೆ ಕೋರಿದ್ದ ಪ್ರಸ್ತಾವನೆಯನ್ನು ಕೇರಳ ಸರ್ಕಾರ ತಿರಸ್ಕರಿಸಿತ್ತು ಎಂದು ಅರಣ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಪ್ರಸ್ತುತ ಕೇರಳದ ಕೊಟ್ಟೂರು, ಧೋನಿ, ಮಲಯಾತ್ತೂರು ಮತ್ತು ಕೊನ್ನಿ ಸೇರಿದಂತೆ ರಾಜ್ಯದಾದ್ಯಂತ ಇರುವ ವಿವಿಧ ಶಿಬಿರಗಳಲ್ಲಿ ಸುಮಾರು 30 ಸಾಕಾನೆಗಳನ್ನು ನಿರ್ವಹಿಸಲಾಗುತ್ತಿದೆ. ಇಡೀ ಕೇರಳ ರಾಜ್ಯದಲ್ಲಿ ಒಟ್ಟು ಸಾಕಾನೆಗಳ ಸಂಖ್ಯೆ ಸುಮಾರು 368 ರಷ್ಟಿದ್ದು, ವಾರ್ಷಿಕವಾಗಿ 15 ರಿಂದ 20 ಆನೆಗಳು ಮೃತಪಡುತ್ತಿವೆ.&lt;/p&gt;&lt;p&gt;ಕೇವಲ ತೆಲಂಗಾಣ ಮಾತ್ರವಲ್ಲದೆ, ಮೂರು ವರ್ಷಗಳ ಹಿಂದೆ ತ್ರಿಪುರಾದ ವ್ಯಕ್ತಿಯೊಬ್ಬರು ಮಾವೇಲಿಕ್ಕರಾದ ದೇವಸ್ಥಾನಕ್ಕೆ ಆನೆಯೊಂದನ್ನು ಉಡುಗೊರೆಯಾಗಿ ನೀಡಲು ಕೋರಿದ್ದ ಮನವಿಯನ್ನೂ ಕೇರಳ ಅಧಿಕಾರಿಗಳು ತಿರಸ್ಕರಿಸಿದ್ದರು. ಅಸ್ಸಾಂ ಮತ್ತು ಇತರ ಆನೆ ಬಾಹುಳ್ಯವಿರುವ ರಾಜ್ಯಗಳಿಂದ ಸಾಕಾನೆಗಳನ್ನು ತರಲು ಈ ಹಿಂದೆ ಕೆಲವು ಮಧ್ಯವರ್ತಿಗಳು ಅನೌಪಚಾರಿಕವಾಗಿ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಅಂತರರಾಜ್ಯ ಆನೆ ವರ್ಗಾವಣೆಗೆ ಕಠಿಣ ನಿಯಮಗಳು&lt;/strong&gt;&lt;/h2&gt;&lt;p&gt;ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ 'ಸಾಕಾನೆ (ವರ್ಗಾವಣೆ ಅಥವಾ ಸಾರಿಗೆ) ನಿಯಮಗಳು, 2024' ರ ಅಡಿಯಲ್ಲಿ ಅಂತರರಾಜ್ಯ ಆನೆ ವರ್ಗಾವಣೆಗೆ ಕಟ್ಟುನಿಟ್ಟಿನ ನಿಯಮಗಳಿವೆ. ಫೆಬ್ರವರಿ 24, 2024 ಕ್ಕಿಂತ ಮೊದಲು ಮಾಲೀಕತ್ವದ ಪ್ರಮಾಣಪತ್ರವನ್ನು ಹೊಂದಿರುವ ಮತ್ತು ಕೇಂದ್ರ ಸಚಿವಾಲಯದ ಎಲೆಕ್ಟ್ರಾನಿಕ್ ಮಾನಿಟರಿಂಗ್ ಅಪ್ಲಿಕೇಶನ್&zwnj;ನಲ್ಲಿ ಜೆನೆಟಿಕ್ ಪ್ರೊಫೈಲ್ (Genetic Profile) ನಮೂದಾಗಿರುವ ಆನೆಗಳ ವರ್ಗಾವಣೆಗೆ ಮಾತ್ರ ಅವಕಾಶವಿರುತ್ತದೆ. ದಾನ ನೀಡುವ ರಾಜ್ಯದ ಮುಖ್ಯ ವನ್ಯಜೀವಿ ಪಾಲಕರು (Chief Wildlife Warden), ಪ್ರಸ್ತುತ ಮಾಲೀಕರು ಆನೆಯನ್ನು ಪೋಷಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಮತ್ತು ಹೊಸ ಸ್ಥಳದಲ್ಲಿ ಪ್ರಸ್ತುತ ಸಂದರ್ಭಕ್ಕಿಂತ ಉತ್ತಮ ಪಾಲನೆ ಸಿಗಲಿದೆ ಎಂದು ತೃಪ್ತಿಪಟ್ಟರೆ ಮಾತ್ರ ವರ್ಗಾವಣೆಗೆ ಒಪ್ಪಿಗೆ ನೀಡಬಹುದು.&lt;/p&gt;&lt;h2&gt;&lt;strong&gt;ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಕೇರಳ ಅರಣ್ಯ ಇಲಾಖೆ&lt;/strong&gt;&lt;/h2&gt;&lt;p&gt;ಕರ್ನಾಟಕ ಮುಖ್ಯಮಂತ್ರಿಗಳಿಂದ ಪತ್ರ ಬಂದಿರುವುದನ್ನು ಕೇರಳದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ, ದೇವಸ್ಥಾನಗಳಿಂದ ದಾನಿಗಳನ್ನು ಹುಡುಕುವುದು ಅಥವಾ ಆನೆ ದಾನದ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಅರಣ್ಯ ಇಲಾಖೆಯ ಕಾನೂನು ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ನಿಯಮಾವಳಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ಮೌಲ್ಯೀಕರಿಸುವುದು ಮತ್ತು ಅದರ ಆಧಾರದ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಇಲಾಖೆಯ ಕೆಲಸ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va"/>
        </item>
        <item>
            <title><![CDATA[ಭಿಕ್ಷುಕರಿಗೆ ಬಿರಿಯಾನಿ ಕೊಟ್ಟು ಅಕ್ರಮ ವೀರ್ಯ ಸಂಗ್ರಹ: ಆಘಾತಕಾರಿ ಮಾನವ ಕಳ್ಳಸಾಗಾಣಿಕೆ ಜಾಲ ಬಯಲು]]></title>
            <link>https://kannada.asianetnews.com/crime/hyderabad-sperm-bank-racket-beggars-lured-with-biryani-and-money-for-donation-case-exposed-suc/articleshow-vk48pxk</link>
            <guid isPermaLink="true">https://kannada.asianetnews.com/crime/hyderabad-sperm-bank-racket-beggars-lured-with-biryani-and-money-for-donation-case-exposed-suc/articleshow-vk48pxk</guid>
            <pubDate>Mon, 13 Jul 2026 12:24:28 +0530</pubDate>
            <description><![CDATA[&lt;p&gt;ಪೊಲೀಸರು ಖಾಸಗಿ ವೀರ್ಯ ಬ್ಯಾಂಕ್ ಮೇಲೆ ದಾಳಿ ನಡೆಸಿ, ಭಿಕ್ಷುಕರಿಗೆ ಬಿರಿಯಾನಿ ಮತ್ತು ಹಣದ ಆಮಿಷವೊಡ್ಡಿ ವೀರ್ಯ ಸಂಗ್ರಹಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಅಕ್ರಮವು ಬಾಡಿಗೆ ತಾಯ್ತನ ಮತ್ತು ಮಕ್ಕಳ ಕಳ್ಳಸಾಗಾಣಿಕೆಯ ದೊಡ್ಡ ದಂಧೆಯ ಭಾಗವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿನ ಅನೈತಿಕ ಶೋಷಣೆಯನ್ನು ಇದು ಎತ್ತಿ ತೋರಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd42mcn14g8kbpw2hgknpxg,imgname-crime-1783925658005.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿಕಂದರಾಬಾದ್​: ಬಾಡಿಗೆ ತಾಯ್ತತನದ ಮೂಲಕ ಮಕ್ಕಳನ್ನು ಪಡೆಯುವವರು ಸಂಖ್ಯೆ ದೊಡ್ಡದಾಗುತ್ತಿದೆ. ಇದಕ್ಕೆ ವೀರ್ಯದ ಅವಶ್ಯಕತೆ ಇದೆ. ಅದೇ ಇನ್ನೊಂದೆಡೆ, ಮಕ್ಕಳ ಕಳ್ಳ ಸಾಗಾಣಿಕೆಯಂತೂ ಅವ್ಯಾಹತವಾಗಿ ನಡೆಯುತ್ತಿದ್ದು, ಇದು ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಬಿಜ್​ನೆಸ್​​ ಆಗಿಬಿಟ್ಟಿದೆ. ಇವೆಲ್ಲಕ್ಕೂ ಬೇಕಾಗಿದ್ದು ವೀರ್ಯದಾನಿಗಳು. ವೀರ್ಯ ಸಂಗ್ರಹ ಮಾಡಿ ಮಕ್ಕಳನ್ನು ಹುಟ್ಟಿಸಿ ಅಕ್ರಮ ಕಳ್ಳಸಾಗಾಣಿಕೆ ಮಾಡುವುದು ಜೊತೆಗೆ ಬಾಡಿಗೆ ತಾಯಿಯಾಗಬಯಸುವವರಿಂದ ಕೋಟಿ ಕೋಟಿ ಹಣ ಪಡೆದು ಮಕ್ಕಳನ್ನು ನೀಡುವ ದೊಡ್ಡ ಜಾಲ ಇದಾಗಿದ್ದು, ಆಘಾತಕಾರಿ ಜಾಲವೊಂದನ್ನು ಇದೀಗ ಪೊಲೀಸರು ಬೇಧಿಸಿದ್ದಾರೆ!&lt;/p&gt;&lt;p&gt;ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಶೋಷಣೆ ಮತ್ತು ಅನೈತಿಕ ಪದ್ಧತಿಗಳ ಆಘಾತಕಾರಿ ಪ್ರಕರಣ ಇದಾಗಿದ್ದು, ಜನರು ಆಘಾತಕ್ಕೊಳಗಾಗಿದ್ದಾರೆ. ಟಾಸ್ಕ್ ಫೋರ್ಸ್ ಪೊಲೀಸರು ಸಿಕಂದರಾಬಾದ್&zwnj;ನ ಖಾಸಗಿ ವೀರ್ಯ ಬ್ಯಾಂಕ್ ಮೇಲೆ ದಾಳಿ ನಡೆಸಿ, ಒಂದು ದೊಡ್ಡ ಹಗರಣವನ್ನು ಬಯಲು ಮಾಡಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಭಿಕ್ಷುಕರು ಮತ್ತು ಪಾದಚಾರಿಗಳಿಗೆ ಬಿರಿಯಾನಿ ಆಮಿಷ ಒಡ್ಡಿ ವೀರ್ಯ ದಾನ ಮಾಡಿಸಿಕೊಳ್ಳುತ್ತಿರುವ ಹಗರಣ ಇದಾಗಿದೆ. ಪೊಲೀಸರ ಪ್ರಕಾರ, ಆಸ್ಪತ್ರೆಯ ಹೊರಗೆ ಕುಳಿತಿರುವ ಭಿಕ್ಷುಕರೇ ಈ ಕ್ಷಿನಿಕ್​ ಸಿಬ್ಬಂದಿ ಟಾರ್ಗೆಟ್​. ಅವರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಆಸ್ಪತ್ರೆಗೆ ಕರೆಸಲಾಗುತ್ತದೆ. ಬಿರಿಯಾನಿ ಕೊಡಲಾಗುತ್ತದೆ, ಜೊತೆಗೆ 4,000 ರಿಂದ 6,000 ರೂಪಾಯಿ ಹಣವನ್ನೂ ನೀಡಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಅವರಿಂದ ವೀರ್ಯದ ಸಹಾಯ ಕೇಳಲಾಗುತ್ತದೆ. ವೀರ್ಯ ಮಾದರಿಗಳಿಗಾಗಿ ಸ್ನಾನಗೃಹ ಅಥವಾ ಪ್ರತ್ಯೇಕ ಕೋಣೆಗೆ ಕರೆದೊಯ್ದು, ಅದನ್ನು ಸಂಗ್ರಹಿಸಿ, ನಂತರ ಈ ಮಾದರಿಗಳನ್ನು ಅಹಮದಾಬಾದ್&zwnj;ನಲ್ಲಿರುವ ಫಲವತ್ತತೆ ಕೇಂದ್ರಗಳಿಗೆ ಕಳುಹಿಸುವ ಜಾಲ ಪತ್ತೆಯಾಗಿದೆ.&lt;/p&gt;&lt;h2&gt;&lt;strong&gt;ಸರೊಗಸಿ ಮತ್ತು ಮಕ್ಕಳ ಕಳ್ಳಸಾಗಣೆಯೊಂದಿಗೆ ಸಂಪರ್ಕಗಳು&lt;/strong&gt;&lt;/h2&gt;&lt;p&gt;ಈ ಕ್ಲಿನಿಕ್ ಅಕ್ರಮ ಸರೊಗಸಿ ಮತ್ತು ಮಕ್ಕಳ ಕಳ್ಳಸಾಗಣೆಯ ದೊಡ್ಡ ದಂಧೆಯ ಭಾಗವಾಗಿತ್ತು ಎಂದು ತಿಳಿದುಬಂದಿದೆ. ಬಡವರು ಮತ್ತು ಭಿಕ್ಷುಕರನ್ನು ಶೋಷಿಸುವ ಮೂಲಕ ವೀರ್ಯವನ್ನು ಅಗ್ಗವಾಗಿ ಸಂಗ್ರಹಿಸಲಾಗಿದ್ದು, ಪೊಲೀಸರು 16 ಮಾದರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಮತ್ತು ನಿರ್ವಾಹಕರು ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ. ಎಫ್&zwnj;ಐಆರ್ ದಾಖಲಿಸಿ ತನಿಖೆ ಆರಂಭಿಸಲಾಯಿತು. ಆದಾಗ್ಯೂ, ಎಲ್ಲಾ ಮಾದರಿಗಳು ಭಿಕ್ಷುಕರಿಂದ ಬಂದವು ಎಂದು ದೃಢೀಕರಿಸಲು ಸಾಧ್ಯವಾಗಲಿಲ್ಲ.&lt;/p&gt;&lt;h3&gt;&lt;strong&gt;ಆರೋಗ್ಯ ವಲಯದಲ್ಲಿ ಗುಣಮಟ್ಟ ಕುಸಿಯುತ್ತಿದೆ&lt;/strong&gt;&lt;/h3&gt;&lt;p&gt;ಈ ಪ್ರಕರಣವು ಫಲವತ್ತತೆ ಚಿಕಿತ್ಸಾಲಯಗಳಲ್ಲಿ ನಡೆಯುತ್ತಿರುವ ಅನೈತಿಕ ಪದ್ಧತಿಗಳನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ ವೀರ್ಯ ದಾನ ಕಾನೂನುಬದ್ಧವಾಗಿದೆ, ಆದರೆ ಇದಕ್ಕೆ ಕಟ್ಟುನಿಟ್ಟಾದ ನಿಯಮಗಳು ಮತ್ತು ಒಪ್ಪಿಗೆಯ ಅಗತ್ಯವಿದೆ. ಬಡವರನ್ನು ಆಕರ್ಷಿಸುವ ಮೂಲಕ ಅವರ ಲಾಭ ಪಡೆಯುವುದು ಸಂಪೂರ್ಣವಾಗಿ ಕಾನೂನುಬಾಹಿರ. ದಾಳಿಯ ಸಮಯದಲ್ಲಿ ಕಾರ್ಯಪಡೆ ಹಲವಾರು ದಾಖಲೆಗಳು ಮತ್ತು ಮಾದರಿಗಳನ್ನು ವಶಪಡಿಸಿಕೊಂಡಿದೆ. ಕ್ಲಿನಿಕ್ ಅಹಮದಾಬಾದ್&zwnj;ನಲ್ಲಿರುವ ಫಲವತ್ತತೆ ಕೇಂದ್ರಕ್ಕೆ ಸಂಪರ್ಕ ಹೊಂದಿದೆ ಎಂದು ವರದಿಯಾಗಿದೆ. ಈ ಸುದ್ದಿ ಕೋಲಾಹಲಕ್ಕೆ ಕಾರಣವಾಯಿತು. ಭಾರತೀಯ ಕಾನೂನಿನ ಪ್ರಕಾರ, ವೀರ್ಯ ದಾನ ಸ್ವಯಂಪ್ರೇರಿತವಾಗಿರಬೇಕು. ಆರ್ಥಿಕ ಪ್ರೇರಣೆ ಅಥವಾ ವಂಚನೆಯ ಮೂಲಕ ದೇಣಿಗೆ ನೀಡುವುದು ಕಾನೂನುಬಾಹಿರ. ಸರೊಗಸಿ ನಿಯಂತ್ರಣ ಕಾಯ್ದೆ ಕೂಡ ಕಠಿಣವಾಗಿದೆ. ಅಂತಹ ದಂಧೆಗಳನ್ನು ಹತ್ತಿಕ್ಕುವುದು ಮುಖ್ಯವಾಗಿದೆ.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/hyderabad-sperm-bank-racket-beggars-lured-with-biryani-and-money-for-donation-case-exposed-suc/articleshow-vk48pxk"/>
        </item>
        <item>
            <title><![CDATA[ಚಲಿಸುವ ರೈಲಿನಲ್ಲಿ ಹೋಮ-ಹವನ, ಪೂಜೆ! ಭುಗಿಲೆದ್ದ ವಿವಾದ.. ಅಸಲಿಗೆ ಆಗಿದ್ದೇನು?]]></title>
            <link>https://kannada.asianetnews.com/viral/big-controversy-religious-ceremony-inside-moving-train-goes-viral-gkn/articleshow-2l5xag5</link>
            <guid isPermaLink="true">https://kannada.asianetnews.com/viral/big-controversy-religious-ceremony-inside-moving-train-goes-viral-gkn/articleshow-2l5xag5</guid>
            <pubDate>Mon, 13 Jul 2026 12:27:30 +0530</pubDate>
            <description><![CDATA[ಚಲಿಸುವ ರೈಲಿನಲ್ಲಿ ಅರ್ಚಕರು ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ಚರ್ಚೆಗೆ ಕಾರಣವಾಗಿತ್ತು. ಇದು ಸಾಮಾನ್ಯ ಕೋಚ್ ಅಲ್ಲ, ಬದಲಿಗೆ ಐಆರ್&zwnj;ಸಿಟಿಸಿ ಮೂಲಕ 3 ಲಕ್ಷಕ್ಕೂ ಹೆಚ್ಚು ಹಣ ಪಾವತಿಸಿ ಬುಕ್ ಮಾಡಲಾಗಿದ್ದ ಖಾಸಗಿ 'ಸಲೂನ್ ಕಾರ್' ಎಂದು ಉತ್ತರ ರೈಲ್ವೆ ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxd46vr107nh3x5b4nmrjy8q,imgname-religious-ceremony-inside-moving-train-goes-viral-1783925796609.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಇತ್ತೀಚೆಗಷ್ಟೇ ರೈಲೊಂದರ ಕೋಚ್ ಅನ್ನು ಹನಿಮೂನ್ ಕೋಚ್ ರೀತಿ ಅಲಂಕರಿಸಿದ್ದ ವಿಡಿಯೋ ವೈರಲ್ ಆಗಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಬೆನ್ನಲ್ಲೇ ಈಗ ಚಲಿಸುವ ರೈಲಿನಲ್ಲಿ ಅರ್ಚಕರು ಮತ್ತು ಭಕ್ತರು ಸೇರಿ ಪೂಜೆ ಮಾಡ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರೈಲಿನಲ್ಲಿ ಇಂತಹ ಧಾರ್ಮಿಕ ವಿಧಿವಿಧಾನಗಳಿಗೆ ಅವಕಾಶವಿದೆಯೇ? ಎಂಬ ಪ್ರಶ್ನೆಗಳು ಕೇಳಿಬಂದ ಬೆನ್ನಲ್ಲೇ ಉತ್ತರ ರೈಲ್ವೆ (Northern Railway) ಈ ಬಗ್ಗೆ ಸ್ಪಷ್ಟನೆ ನೀಡಿದೆ.&lt;/p&gt;&lt;h2&gt;&lt;strong&gt;ವೈರಲ್ ವಿಡಿಯೋದಲ್ಲೇನಿದೆ?&lt;/strong&gt;&lt;/h2&gt;&lt;p&gt;ಟ್ವಿಟರ್ (X) ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ರೈಲ್ವೆ ಕೋಚ್&zwnj;ನ ನೆಲದ ಮೇಲೆ ಅರ್ಚಕರೊಬ್ಬರು ಕುಳಿತು ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಅವರ ಸುತ್ತಲೂ ಬಿಳಿ ಬಟ್ಟೆ ಧರಿಸಿದ ಹಲವಾರು ಭಕ್ತರು ಕುಳಿತು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಇದು ಸಾಮಾನ್ಯ ಪ್ರಯಾಣಿಕರ ಕೋಚ್ ಇರಬಹುದು ಎಂದು ಭಾವಿಸಿದ ನೆಟ್ಟಿಗರು ರೈಲ್ವೆ ಇಲಾಖೆಯನ್ನು ಪ್ರಶ್ನಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;&lt;p&gt;After honeymoon coach, now worship rituals in saloon coach of Indian Railways. Indian Railway is becoming circus. pic.twitter.com/5UwZIJAdGb&lt;/p&gt;&lt;p&gt;&mdash; VIZHPUNEET (@vizhpuneet) July 12, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ರೈಲ್ವೆ ಇಲಾಖೆಯ ಸ್ಪಷ್ಟನೆ&lt;/strong&gt;&lt;/h3&gt;&lt;p&gt;ವಿಡಿಯೋ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಉತ್ತರ ರೈಲ್ವೆ, ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದೆ. ಈ ಪೂಜೆ ನಡೆದಿರುವುದು ಸಾಮಾನ್ಯ ಪ್ರಯಾಣಿಕರ ಕೋಚ್&zwnj;ನಲ್ಲಿ ಅಲ್ಲ, ಬದಲಾಗಿ ಖಾಸಗಿಯಾಗಿ ಬುಕ್ ಮಾಡಲಾದ 'ಸಲೂನ್ ಕಾರ್' (Saloon Car) ಒಳಗೆ ಎಂದು ಇಲಾಖೆ ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt; The Saloon Car was booked by IRCTC on 08.07.26.The party made an advance payment of Rs 3,08,580as commercial booking. The Saloon Car was to be attached in Train No. 12926 Paschim Express on one way journey from New Delhi (NDLS) to Mumbai (BDTS) on 10.07.2026.NR issued&hellip;&lt;/p&gt;&lt;p&gt;&mdash; Northern Railway (@RailwayNorthern) July 12, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಬಾಡಿಗೆ ಬರೋಬ್ಬರಿ 3 ಲಕ್ಷ ರೂಪಾಯಿ!&lt;/strong&gt;&lt;/h3&gt;&lt;p&gt;ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈ ಸಲೂನ್ ಕಾರ್ ಅನ್ನು ಐಆರ್&zwnj;ಸಿಟಿಸಿ (IRCTC) ಮೂಲಕ ಖಾಸಗಿ ಪಾರ್ಟಿಯೊಂದು ಜುಲೈ 8 ರಂದು ಬುಕ್ ಮಾಡಿತ್ತು. ಈ ವಿಶೇಷ ಕೋಚ್&zwnj;ಗಾಗಿ ಬರೋಬ್ಬರಿ 3,08,580 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದೆ. ಜುಲೈ 10 ರಂದು ನವದೆಹಲಿಯಿಂದ ಮುಂಬೈಗೆ ತೆರಳುವ 'ಪಶ್ಚಿಮ ಎಕ್ಸ್&zwnj;ಪ್ರೆಸ್' (ರೈಲು ಸಂಖ್ಯೆ 12926) ರೈಲಿಗೆ ಈ ಕೋಚ್ ಅನ್ನು ಜೋಡಿಸಲಾಗಿತ್ತು.&lt;/p&gt;&lt;h3&gt;&lt;strong&gt;ಏನಿದು ಸಲೂನ್ ಕಾರ್?&lt;/strong&gt;&lt;/h3&gt;&lt;p&gt;ಸಲೂನ್ ಕಾರ್ ಎಂಬುದು ರೈಲ್ವೆಯ ಅತ್ಯಂತ ಐಷಾರಾಮಿ ಕೋಚ್ ಆಗಿದ್ದು, ಇದನ್ನು ಸಾಮಾನ್ಯವಾಗಿ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ವಿಐಪಿಗಳು ಬಳಸುತ್ತಾರೆ. ಇದು ಚಲಿಸುವ ಮನೆಯಂತೆಯೇ ಇರುತ್ತದೆ. ಇದರಲ್ಲಿ, ಹವಾನಿಯಂತ್ರಿತ ಮಲಗುವ ಕೋಣೆಗಳು (AC Bedrooms), ಸಣ್ಣ ಅಡುಗೆ ಮನೆ (Kitchenette), ಲಿವಿಂಗ್ ಮತ್ತು ಡೈನಿಂಗ್ ರೂಮ್, ಅಟ್ಯಾಚ್ಡ್ ಶೌಚಾಲಯಗಳು ಮತ್ತು ಎಲ್ಲಾ ಆಧುನಿಕ ಸೌಲಭ್ಯಗಳಿರುತ್ತವೆ, ಖಾಸಗಿ ವ್ಯಕ್ತಿಗಳು ಹಣ ಪಾವತಿಸಿ ಈ ಕೋಚ್ ಅನ್ನು ಬುಕ್ ಮಾಡಬಹುದಾಗಿದ್ದು, ಅಂತಹ ಒಂದು ಖಾಸಗಿ ಬುಕಿಂಗ್&zwnj;ನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆದಿದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಈ ಮೂಲಕ ರೈಲಿನಲ್ಲಿ ಪೂಜೆ ನಡೆದ ವಿವಾದಕ್ಕೆ ತೆರೆ ಬಿದ್ದಂತಾಗಿದೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/big-controversy-religious-ceremony-inside-moving-train-goes-viral-gkn/articleshow-2l5xag5"/>
        </item>
        <item>
            <title><![CDATA[ಪಕ್ಕದಲ್ಲಿ ಕೂರುತ್ತಿದ್ದ ಮಹಿಳೆ ಮಾಡಿದ ಕೆಲಸಕ್ಕೆ ಸಹದ್ಯೋಗಿ ಕರಿಯರ್‌ಗೆ ಕುತ್ತು ತಂದ ಮ್ಯಾನೇಜರ್!]]></title>
            <link>https://kannada.asianetnews.com/jobs/a-manager-threatened-a-woman-saying-i-will-destroy-your-career/articleshow-l3wndc4</link>
            <guid isPermaLink="true">https://kannada.asianetnews.com/jobs/a-manager-threatened-a-woman-saying-i-will-destroy-your-career/articleshow-l3wndc4</guid>
            <pubDate>Mon, 13 Jul 2026 12:24:28 +0530</pubDate>
            <description><![CDATA[&lt;p&gt;Toxic Work Environment: ಸಹದ್ಯೋಗಿಯೊಬ್ಬರು ಪರ್ಸನಲ್&zwnj; ನೋಟ್&zwnj; ಮಾಡಿದ್ದರು. ಹೀಗಾಗಿ ನನ್ನ ಮ್ಯಾನೇಜರ್&zwnj; ನನ್ನ ಕರಿಯರ್&zwnj; ಹಾಳು ಮಾಡ್ತೀನಿ ಎಂದಿದ್ದಾನೆ ಎಂದು ಉದ್ಯೋಗಿಯೋರ್ವರು ಹೇಳಿಕೊಂಡಿದ್ದಾರೆ. ರೆಡ್ಡಿಟ್&zwnj;ನಲ್ಲಿ ಅವರು ಈ ವಿಷಯವನ್ನು ಪೋಸ್ಟ್&zwnj; ಮಾಡಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd3nyvh4pkvya7n151qg35x,imgname-new-project--25--1783925242736.jpg" type="image/jpeg" height="390" width="690"/>
            <content:encoded><![CDATA[&lt;p&gt;Toxic Work Environment: ಕಂಪೆನಿಗಳಲ್ಲಿ ಮ್ಯಾನೇಜರ್&zwnj;, ಸಹದ್ಯೋಗಿಗಳ ಕಿರುಕುಳ, ಗಾಸಿಪ್&zwnj;, ಪಾಲಿಟಿಕ್ಸ್&zwnj;, ತಾರತಮ್ಯ ಎಲ್ಲ ಇರುವುದು. ಇಲ್ಲೋರ್ವ ಉದ್ಯೋಗಿಗೆ ಮ್ಯಾನೇಜರ್&zwnj; ಬೆದರಿಕೆ ಹಾಕಿದ್ದಾರಂತೆ. ಪರ್ಸನಲ್&zwnj; ನೋಟ್&zwnj; ಮಾಡಲು ಸಹಾಯ ಮಾಡಿದ್ದೀಯಾ, ನಿನ್ನ ಕರಿಯರ್&zwnj; ಹಾಳು ಮಾಡ್ತೀನಿ ಎಂದು ಮ್ಯಾನೇಜರ್&zwnj; ಬೆದರಿಕೆ ಹಾಕಿದ್ದಾರೆ.&lt;/p&gt;&lt;p&gt;ಪರ್ಸನಲ್&zwnj; ನೋಟ್&zwnj; ಮಾಡಲು ನಾನು ಯಾವುದೇ ಸಹಾಯ ಮಾಡಿಲ್ಲ. ಆ ಉದ್ಯೋಗಿ ಪಕ್ಕದಲ್ಲಿ ಕೂರುತ್ತಿದ್ದ ಕಾರಣ, ನಮ್ಮನ್ನು ಬಲಿಪಶು ಮಾಡ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಉದ್ಯೋಗಿ ಹೇಳಿದ್ದೇನು?&lt;/h2&gt;&lt;p&gt;&ldquo;ಸಹೋದ್ಯೋಗಿಯ ಪರ್ಸನಲ್&zwnj; ನೋಟ್&zwnj; ಮಾಡಿದ್ದಾರೆ. ಹೀಗಾಗಿ ಕರಿಯರ್&zwnj; ಹಾಳು ಮಾಡ್ತೀನಿ ಎಂದು ಮ್ಯಾನೇಜರ್&zwnj; ಬೆದರಿಕೆ ಹಾಕಿದ್ದಾನೆ, ಏನು ಮಾಡಲಿ? ನಮ್ಮ ಟೀಂನಲ್ಲಿದ್ದ ಮಹಿಳೆಗೆ ಬೇರೆ ಉದ್ಯೋಗಿಗಳ ಜೊತೆ ಸಮಸ್ಯೆ ಇತ್ತು, ನನ್ನ ಬಗ್ಗೆ ಗಾಸಿಪ್ ಮಾಡ್ತಾರೆ, ಕೆಟ್ಟದಾಗಿ ಬಿಹೇವ್&zwnj; ಮಾಡ್ತಾರೆ ಎಂದು ಅವರು ಅಂದುಕೊಂಡಿದ್ದರು&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಆ ಸಹೋದ್ಯೋಗಿ ಒಂದು ಎಕ್ಸೆಲ್ ಶೀಟ್ ರೆಡಿ ಮಾಡಿದ್ದಾರೆ. ಅದರಲ್ಲಿ ಹಲವು ಸಹೋದ್ಯೋಗಿಗಳ ಹೆಸರುಗಳನ್ನು ಬರೆದಿದ್ದಾರೆ. ಆಯಾ ಹೆಸರಿನ ಮುಂದೆ ನನ್ನನ್ನು ಕೆಟ್ಟದಾಗಿ ನೋಡುತ್ತಾರೆ, ನನ್ನ ಬೆನ್ನ ಹಿಂದೆ ಮಾತನಾಡುತ್ತಾರೆ, ಕೆಟ್ಟ ಸನ್ನೆ ಮಾಡ್ತಾರೆ ಎಂದೆಲ್ಲ ಕಾಮೆಂಟ್&zwnj; ಮಾಡಿದ್ದರು. ಆ ಸಹದ್ಯೋಗಿ ಮನೆಗೆ ಹೋದ್ಮೇಲೆ ಮ್ಯಾನೇಜರ್&zwnj; ಆ ಎಕ್ಸೆಲ್&zwnj; ಶೀಟ್&zwnj; ಹುಡುಕಿದ್ದಾರೆ. ಆಮೇಲೆ ನನ್ನ ಬಳಿ ಬಂದು ಕೂಗಾಡಿದ್ದಾರೆ. ನಾನು ಆ ಸಹದ್ಯೋಗಿ ಪಕ್ಕದಲ್ಲಿ ಕೂರ್ತೀನಿ, ಅವರಿಗೆ ಕ್ಲೋಸ್&zwnj; ಎಂಬ ಕಾರಣಕ್ಕೆ ಬೈಯ್ದರು.&lt;/p&gt;&lt;p&gt;&quot;ಈ ಸಮಸ್ಯೆಯಲ್ಲಿ ನನ್ನ ಹೆಸರು ಏನಾದರೂ ಬಂದರೆ, ನನ್ನ ಕರಿಯರ್&zwnj; ಹಾಳುಮಾಡ್ತೀನಿ&rdquo; ಎಂದು ಹೇಳಿದ್ದಾರೆ. ಆ ಎಕ್ಸೆಲ್ ಶೀಟ್ ರೆಡಿ ಆದ ಬಗ್ಗೆ ಕೂಡ ನನಗೆ ಯಾವುದೇ ಮಾಹಿತಿ ಇರಲಿಲ್ಲ, ಅದನ್ನು ರೆಡಿ ಮಾಡೋಕೆ ಸಹಾಯ ಮಾಡಿಲ್ಲ, ಆ ನಡವಳಿಕೆಯನ್ನು ಕೂಡ ನಾನು ಎಂದಿಗೂ ಸಪೋರ್ಟ್&zwnj; ಮಾಡಿಲ್ಲ. ಇದನ್ನು ನಾನು ರೆಕಾರ್ಡ್&zwnj; ಮಾಡಬೇಕಾ? HR ಕಾಂಟ್ಯಾಕ್ಟ್&zwnj; ಮಾಡಬೇಕಾ? ಇದರಿಂದ ದೂರ ಇರಲಾ? ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಸೋಶಿಯಲ್&zwnj; ಮೀಡಿಯಾದಲ್ಲಿ ಏನು ಹೇಳಿದರು?&lt;/h2&gt;&lt;p&gt;ಈ ಘಟನೆ ಬಗ್ಗೆ ಕೇಳಿದವರು ಸೋಶಿಯಲ್&zwnj; ಮೀಡಿಯಾದಲ್ಲಿ, &ldquo;ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಿ. ಇದರಿಂದ ದೂರ ಇರಿ, ಈ ಬಗ್ಗೆ ಚರ್ಚೆ ಮಾಡದಂತೆ ಮ್ಯಾನೇಜರ್&zwnj;ಗೆ ಹೇಳಿ&rdquo; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಮತ್ತೊಬ್ಬರು HR ಕಾಂಟ್ಯಾಕ್ಟ್&zwnj; ಮಾಡಿ, ಇದರಲ್ಲಿ HR ಸೇರಿಸಿಕೊಳ್ಳಿ. ಏನು ನಡೆದಿದೆ, ನಿಮ್ಮ ಮ್ಯಾನೇಜರ್ ನಿಮಗೆ ಹೇಗೆ ಬೆದರಿಕೆ ಹಾಕಿದ್ದಾರೆ ಎಂಬುದನ್ನು ವಿವರಿಸಿ ಎಚ್&zwnj;ಆರ್&zwnj;ಗೆ ಮೇಲ್ ಕಳುಹಿಸಿ. ಉದ್ಯೋಗಿಗಳು ಎಲ್ಲವನ್ನೂ ದಾಖಲಿಸಿಡಬೇಕು, ತಮ್ಮ ಪರವಾಗಿ ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ.&lt;/p&gt;&lt;p&gt;ಮ್ಯಾನೇಜರ್ ಮೊದಲಿಗೆ ಆ ದಾಖಲೆಯನ್ನು ಹೇಗೆ ಪತ್ತೆಹಚ್ಚಿದರು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಎಚ್&zwnj;ಆರ್ ಸಂಪರ್ಕಿಸುವುದು ಉತ್ತಮ, ಆದರೆ ಅಧಿಕೃತ ಸಂವಹನ ಮಾಧ್ಯಮಗಳನ್ನು ಮಾತ್ರ ಬಳಸಿ. ಮ್ಯಾನೇಜರ್ ಜೊತೆ ಚರ್ಚೆ ಮಾಡುವಾಗ HR ಉಪಸ್ಥಿತಿ ಇರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/jobs/a-manager-threatened-a-woman-saying-i-will-destroy-your-career/articleshow-l3wndc4"/>
        </item>
        <item>
            <title><![CDATA[ಭಾರತಕ್ಕೆ ಬಂದ ಅನ್ಯಗ್ರಹ ಜೀವಿ? ಚಂದ್ರಲೋಕದಿಂದ ಬಂದವನಂತೆ ಈತ! 3 ವರ್ಷ ಭೂಮಿ ಮೇಲೆ ಇದ್ದವ ಏನಂದ]]></title>
            <link>https://kannada.asianetnews.com/viral/man-from-uttar-pradesh-claimed-that-he-is-an-alien-from-the-moon-video-viral-suc/articleshow-972ofwz</link>
            <guid isPermaLink="true">https://kannada.asianetnews.com/viral/man-from-uttar-pradesh-claimed-that-he-is-an-alien-from-the-moon-video-viral-suc/articleshow-972ofwz</guid>
            <pubDate>Sat, 11 Jul 2026 17:28:46 +0530</pubDate>
            <description><![CDATA[ಉತ್ತರ ಪ್ರದೇಶದ ವೃಂದಾವನದಲ್ಲಿ ವ್ಯಕ್ತಿಯೊಬ್ಬ ತಾನು ಚಂದ್ರನಿಂದ ಬಂದವನು ಎಂದು ಹೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಕಳೆದ ಮೂರು ವರ್ಷಗಳಿಂದ ಭೂಮಿಯ ಮೇಲೆ ವಾಸಿಸುತ್ತಿದ್ದು, ಜನರ ಮನಸ್ಸನ್ನು ಓದುವ ಶಕ್ತಿ ತನಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಭೂಮಿಯ ಮೇಲೆ ಯಾವುದೂ ಸರಿಯಿಲ್ಲ ಎಂದು ಹೇಳಿ, ತಾನು ಚಂದ್ರಲೋಕಕ್ಕೆ ವಾಪಸ್ ಹೋಗುವುದಾಗಿ ತಿಳಿಸಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx8gnz4wbzt4fzv8jpxxdank,imgname-viral-video-1783771102364.jpg" type="image/jpeg" height="390" width="690"/>
            <content:encoded><![CDATA[&lt;p&gt;ಏಲಿಯನ್&zwnj;ಗಳು ಎನ್ನುವ ಕಲ್ಪನೆಯೇ ಕುತೂಹಲವಾದದ್ದು. ಮನುಷ್ಯದ ಊಹೆಗೂ ನಿಲುಕದ ಅದೆಷ್ಟೋ ಪ್ರಕೃತಿ ವಿಸ್ಮಯಗಳು ನಡೆದೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಕೆಲವು ವಿಷಯಗಳು ಎಲ್ಲವನ್ನೂ ಮೀರಿದ್ದೇ ಆಗಿವೆ. ಅಂಥದ್ದರಲ್ಲಿ ಒಂದು ಈ ಏಲಿಯನ್&zwnj;. ಏಲಿಯನ್&zwnj; ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಇಂದು ನಿನ್ನೆಯದ್ದಲ್ಲ. ಎಷ್ಟೋ ದಶಕಗಳಿಂದ ಈ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ, ಪರ-ವಿರೋಧಗಳ ಚರ್ಚೆಗಳೂ ಆಗುತ್ತಿವೆ. ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ಈಗಾಗಲೇ ಏಲಿಯನ್ಸ್ ಬಗ್ಗೆ ಮಾಹಿತಿ ಇದೆ ಎಂಬ ಸುದ್ದಿ ಇತ್ತು. ಆದರೆ ಏಲಿಯನ್​ಗಳ ಮಾಹಿತಿಗಳನ್ನು ಅಮರಿಕ ಮರೆಮಾಚುತ್ತಿದೆ ಎಂಬ ಗಂಭೀರ ಆರೋಪಗಳೂ ಇವೆ. ನೂರಾರು ವರ್ಷಗಳ ಭವಿಷ್ಯ ನುಡಿದಿದ್ದ ಬಾಬಾ ವಾಂಗಾ ಮುಂದೊಂದು ದಿನ ಈ ಭೂಮಿಯ ಮೇಲೆ ಏಲಿಯನ್​ ಆಳುತ್ತದೆ ಎಂದಿದ್ದರು. ಅದೇ ರೀತಿ, 2026ರಲ್ಲಿಯೇ ಏಲಿಯನ್​ಗಳು ಪ್ರತ್ಯಕ್ಷವಾಗಲಿವೆ ಎಂದೂ ಭವಿಷ್ಯ ನುಡಿಯಲಾಗಿತ್ತು.&lt;/p&gt;&lt;h2&gt;&lt;strong&gt;ನಿಜ ಹೇಳಿದ್ರೂ ನಂಬಲ್ಲ&lt;/strong&gt;&lt;/h2&gt;&lt;p&gt;ಇದರ ನಡುವೆಯೇ ತಾನು ಚಂದ್ರಲೋಕದವ, ಭೂಮಿಯ ಮೇಲೆ ಮೂರು ವರ್ಷಗಳಿಂದ ವಾಸವಾಗಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿಕೊಂಡು ಬಂದಿದ್ದು, ಅದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಉತ್ತರ ಪ್ರದೇಶದ ವೃಂದಾವನದ ವ್ಯಕ್ತಿ ತಾನು ಚಂದ್ರನಿಂದ ಬಂದಿರುವುದಾಗಿ ಹೇಳುತ್ತಿದ್ದಾನೆ. ಇದನ್ನು ಹೇಳಿದ್ರೆ ಯಾರೂ ನಂಬಲ್ಲ. ಎಷ್ಟು ಹೇಳಿದರೂ ಯಾರೂ ಕೇಳುವುದಿಲ್ಲ. ನಾನು ತಮಾಷೆಗೆ ಹೇಳ್ತೇನೆ ಎಂದುಕೊಂಡಿದ್ದಾರೆ. ನಾನು ನಿಜವಾಗಿಯೂ ಚಂದ್ರನಿಂದ ಬಂದ ವ್ಯಕ್ತಿ ಎಂದು ಈತ ಹೇಳುತ್ತಿರುವ ವಿಡಿಯೋ ವೈರಲ್​ ಆಗಿದೆ.&lt;/p&gt;&lt;h3&gt;&lt;strong&gt;ಭೂಮಿ ಮೇಲೆ ಯಾರೂ ಸರಿಯಿಲ್ಲ&lt;/strong&gt;&lt;/h3&gt;&lt;p&gt;ವೈರಲ್ ಆಗಿರುವ ಈ ಕ್ಲಿಪ್&zwnj;ನಲ್ಲಿ, ಆ ವ್ಯಕ್ತಿ ತನ್ನನ್ನು ತಾನು ಭೂಮಿಗೆ ಸೇರಿದವನಲ್ಲ ಎಂದು ಆತ್ಮವಿಶ್ವಾಸದಿಂದ ಪರಿಚಯಿಸಿಕೊಳ್ಳುತ್ತಾ, ನಾನು ಚಂದ್ರನಿಂದ ಬಂದಿದ್ದೇನೆ ಮತ್ತು ಕಳೆದ ಮೂರು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ. ನಾನು ಜನರ ಮನಸ್ಸಿನಲ್ಲಿ ಏನಿದೆ ಎಲ್ಲವನ್ನೂ ಹೇಳುತ್ತೇನೆ. ಚಂದ್ರನಲ್ಲಿ ವಾಸಿಸುವವರಿಗೆ ಈ ವಿಶೇಷ ಶಕ್ತಿ ಇದೆ. ನನಗೂ ಅದು ಬಂದಿದೆ ಎಂದು ವ್ಯಕ್ತಿ ಹೇಳಿದ್ದಾನೆ. ಈ ಭೂಮಿಯ ಮೇಲೆ ಯಾರೂ ಸರಿಯಿಲ್ಲ, ಇದು ನಡೆಯುತ್ತಿರುವುದು ಯಾವುದೂ ಸರಿಯಲ್ಲ ಎಂದಿರುವ ಆತ, ತಾನು ವಾಪಸ್​ ಚಂದ್ರಲೋಕಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾನೆ.&lt;/p&gt;&lt;p&gt;ಇದರ ವಿಡಿಯೋ ನೋಡಿ ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಈತನನ್ನು ಮೊದಲು ಮೆಂಟಲ್​ ಆಸ್ಪತ್ರೆಗೆ ಸೇರಿಸಿ ಎಂದು ಕೆಲವರು ಹೇಳುತ್ತಿದ್ದರೆ, ಈತನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿತ್ತು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ರೀಲ್ಸ್​ಗಾಗಿ ಈ ರೀತಿಯ ಖತರ್ನಾಕ್​ ಪ್ಲ್ಯಾನ್​ ಯಾರೋ ಕಂಟೆಂಟ್​ ಕ್ರಿಯೇಟರ್​ ಮಾಡಿರಲಿಕ್ಕೆ ಸಾಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈತನ ವೇಷ ಮತ್ತು ಮಾತು ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಹಾಸ್ಯದ ಹೊಳೆಯೇ ಹರಿಯುತ್ತಿದೆ.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/viral/man-from-uttar-pradesh-claimed-that-he-is-an-alien-from-the-moon-video-viral-suc/articleshow-972ofwz"/>
        </item>
        <item>
            <title><![CDATA[ಬೆಚ್ಚಿಬೀಳಿಸಿತು 6 ಕೊಲೆ: ಕೋರ್ಟ್​ ಜಾಮೀನು ಕೊಟ್ಟ ಖುಷಿಯಲ್ಲಿ ಸಂತ್ರಸ್ತೆಯ ಕುಟುಂಬ ನಾಶ ಮಾಡಿದ ಪಾಪಿ]]></title>
            <link>https://kannada.asianetnews.com/crime/out-on-bail-telangana-man-kills-pocso-complainant-then-murders-his-wife-and-children-suc/articleshow-32dgp34</link>
            <guid isPermaLink="true">https://kannada.asianetnews.com/crime/out-on-bail-telangana-man-kills-pocso-complainant-then-murders-his-wife-and-children-suc/articleshow-32dgp34</guid>
            <pubDate>Sat, 11 Jul 2026 18:21:36 +0530</pubDate>
            <description><![CDATA[ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ, ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಯು ಸೇಡು ತೀರಿಸಿಕೊಳ್ಳಲು ತನ್ನ ಕುಟುಂಬದ ಮೂವರು ಮತ್ತು ಸಂತ್ರಸ್ತ ಬಾಲಕಿಯ ಕುಟುಂಬದ ಮೂವರು ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆಯು ಕಾನೂನು ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx8kmsmn10fc6zj6dwj2n6sn,imgname-bail-1783774209685.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಕೊಲೆ ಮಾಡಿದ್ರೂ ಅಷ್ಟೇ ಶಿಕ್ಷೆ, 10 ಕೊಲೆ ಮಾಡಿದ್ರೂ ಅಷ್ಟೇ ಶಿಕ್ಷೆ, ಇನ್ಯಾಕೆ ಸುಮ್ಮನೇ ಒಬ್ಬರನ್ನೇ ಕೊಲೆ ಮಾಡಿ ವೇಸ್ಟ್​ ಮಾಡೋದು ಎನ್ನುತ್ತಾರಂತೆ ಕ್ರಿಮಿನಲ್ಸ್​. ಒಂದೆಡೆ ಕೋರ್ಟ್​ಗಳಿಂದ ಸುಲಭದಲ್ಲಿ ಸಿಗುವ ಜಾಮೀನು, ಮತ್ತೊಂದೆಡೆ ದೂರು ಕೊಟ್ಟ ತಪ್ಪಿಗೆ ಸಂತ್ರಸ್ತ ಕುಟುಂಬಗಳ ನರಳಾಟ... ಇದು ಅಂದಿನಿಂದ ಇಂದಿನವರೆಗೂ ನಮ್ಮ ಕಾನೂನು ವ್ಯವಸ್ಥೆಯಲ್ಲಿ ನಡೆದುಕೊಂಡೇ ಬಂದಿದೆ. ಇದಕ್ಕಾಗಿಯೇ ದೂರು ಕೊಡುವ ಬದಲು, ಎಲ್ಲವನ್ನೂ ಸಹಿಸಿಕೊಂಡು ಹೋಗೋಣ ಎನ್ನುವ ಮನಸ್ಥಿತಿ ಎಷ್ಟೋ ಸಂತ್ರಸ್ತರ ಮನೆಗಳಲ್ಲಿ ಕೇಳಿಬರುತ್ತದೆ. ತನಿಖೆ ಸಮಯದಲ್ಲಿ ಪೊಲೀಸರು ಮಾಡುವ ಎಡವಟ್ಟುಗಳು, ಕ್ರಿಮಿನಲ್ಸ್​ಗಳಿಗಾಗಿ ಇರುವ ವಕೀಲರು... ಯಾವುದೋ ಒಂದು ಚಿಕ್ಕ ಕಾನೂನು ಲೋಪ... ಇವೆಲ್ಲವುಗಳಿಂದ ಇದು ಕೊಲೆ ಪಾತಕಿಗಳಿಗೆ ಸುಲಭದಲ್ಲಿ ಜಾಮೀನು ಸಿಗುತ್ತಿವೆ. ಅವರಿಗೆ ಜಾಮೀನು ಸಿಕ್ಕಾಗ ಸಂತ್ರಸ್ತ ಕುಟುಂಬಗಳ ಮನಸ್ಥಿತಿಯ ಬಗ್ಗೆ ಕಾನೂನಿನಲ್ಲಿ ಏನೂ ಇಲ್ಲವಲ್ಲ, ಅದಕ್ಕಾಗಿಯೇ ಕೋರ್ಟ್​ಗಳಿಂದ ಸುಲಭದಲ್ಲಿ ಜಾಮೀನು ಪಡೆದು ಬರುವ ಕ್ರಿಮಿನಲ್ಸ್​ ಮಾಡುವ ಅಟ್ಟಹಾಸ ಮಿತಿಮೀರುತ್ತಿವೆ.&lt;/p&gt;&lt;p&gt;ಈಗ ಅಂಥದ್ದೇ ಒಂದು ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಇದು ಮತ್ತೆ ಮತ್ತೆ ನಮ್ಮ ಕಾನೂನು ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡುತ್ತಿದೆ. ಈ ಘಟನೆ ನಡೆದಿರುವುದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ. ಆರು ಜನರ ಕೊಲೆ ದೇಶದಲ್ಲಿಯೇ ಸಂಚಲನ ಮೂಡಿಸುತ್ತಿದೆ. ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಪಾಪಿಯನ್ನು ಪೋಕ್ಸೋ ಕಾಯ್ದೆಯಡಿ ಅರೆಸ್ಟ್​ ಮಾಡಲಾಗಿತ್ತು. ನಮ್ಮ ಕಾನೂನಿನ ಹೃದಯ ವಿಶಾಲ ಆಗಿರುವ ಕಾರಣದಿಂದ ಈತನಿಗೆ ಜಾಮೀನು ಕೊಟ್ಟಿತು ಕೋರ್ಟ್​. ಅದೇ ಖುಷಿಯಲ್ಲಿ ಬಂದ ಕಿರಾತಕ, ಸಂತ್ರಸ್ತ ಬಾಲಕಿ, ಆಕೆಯ ತಾಯಿ ಮತ್ತು ಅಜ್ಜಿಯನ್ನು ಕೊಂದಿದ್ದಾನೆ ಮಾತ್ರವಲ್ಲದೇ ತನ್ನ ಪಾಪಕಾರ್ಯಕ್ಕೆ ಛೀಮಾರಿ ಹಾಕಿದ್ದ ಸ್ವಂತ ಪತ್ನಿ ಮಾತ್ರವಲ್ಲದೇ ಇಬ್ಬರು ಮಕ್ಕಳನ್ನೂ ಕೊಲೆ ಮಾಡಿದ್ದಾನೆ! ಅಲ್ಲಿಗೆ ಅವನ ಕಾರ್ಯ ಮುಗಿದಿದೆ, ಮತ್ತೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ರಂಗಾರೆಡ್ಡಿ ಜಿಲ್ಲೆಯ ಶಹಾಬಾದ್ ಪ್ರದೇಶದ ದೈವಲಗುಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ರಾಜಶೇಖರ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ, ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಆರೋಪಿ ಕೊಲೆ ಮಾಡಿದ್ದಾನೆ. ರಾಜಶೇಖರ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ತಿಳಿದುಬಂದಿದೆ, ಇದು ಕುಟುಂಬದೊಳಗೆ ಭಯಾನಕ ಘಟನೆಗೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಆರು ಜನರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ&lt;/strong&gt;&lt;/h3&gt;&lt;p&gt;ತನ್ನ ಕುಟುಂಬವನ್ನು ಕೊಂದ ನಂತರ, ಆರೋಪಿ ಬೇರೆ ಸ್ಥಳಕ್ಕೆ ಹೋಗಿ ಅಪ್ರಾಪ್ತ ಬಾಲಕಿ, ಆಕೆಯ ತಾಯಿ ಮತ್ತು ಅಜ್ಜಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಕ್ಸೊ ಪ್ರಕರಣ ದಾಖಲಾಗುತ್ತಿದ್ದಂತೆ ಸೇಡು ತೀರಿಸಿಕೊಳ್ಳಲು ಆರೋಪಿ ಈ ಕೊಲೆಗಳನ್ನು ಮಾಡಿದ್ದಾನೆ. ಕೊಲೆಗಳ ಸುದ್ದಿ ತಿಳಿದ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ರಾಜಶೇಖರ್&zwnj;ನನ್ನು ವಶಕ್ಕೆ ಪಡೆದರು. ನಂತರ ಆತನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅಧಿಕಾರಿಗಳು ಔಪಚಾರಿಕ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ತಂಡಗಳನ್ನು ಸಹ ಸ್ಥಳಕ್ಕೆ ಕರೆಸಲಾಗಿದೆ. ತನಿಖಾ ಅಧಿಕಾರಿಗಳು ಘಟನೆಗಳ ಅನುಕ್ರಮವನ್ನು ಅರ್ಥಮಾಡಿಕೊಳ್ಳಲು ಮತ್ತು ಹತ್ಯಾಕಾಂಡದ ಹಿಂದಿನ ನಿಜವಾದ ಉದ್ದೇಶವನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/out-on-bail-telangana-man-kills-pocso-complainant-then-murders-his-wife-and-children-suc/articleshow-32dgp34"/>
        </item>
        <item>
            <title><![CDATA[ಬಂಗಾರದ ಬೆಲೆಯಲ್ಲಿಂದು ಮಹಾ ಪತನ; ಬೆಂಗಳೂರಿನಲ್ಲಿಂದು ಗೋಲ್ಡ್ ರೇಟ್ ಎಷ್ಟು?]]></title>
            <link>https://kannada.asianetnews.com/gallery/business/gold-price-falls-for-third-straight-day-check-today-gold-and-silver-rates-in-bengaluru-kvn-ziqilhr</link>
            <guid isPermaLink="true">https://kannada.asianetnews.com/gallery/business/gold-price-falls-for-third-straight-day-check-today-gold-and-silver-rates-in-bengaluru-kvn-ziqilhr</guid>
            <pubDate>Mon, 13 Jul 2026 11:43:38 +0530</pubDate>
            <description><![CDATA[&lt;p&gt;ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯು ಇಳಿಮುಖ ಮಾಡಿದೆ. ಇದು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಜೂನ್ 13ರಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ? ನೋಡೋಣ ಬನ್ನಿ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvf9mgcb14h5bhtq93xwyyyy,imgname-gold-price-in-india-1781851111819.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯು ಇಳಿಮುಖ ಮಾಡಿದೆ. ಇದು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಜೂನ್ 13ರಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ? ನೋಡೋಣ ಬನ್ನಿ.&lt;/p&gt;&lt;p&gt;&lt;/p&gt;&lt;img&gt;&lt;p&gt;ಅಮೆರಿಕ ಮತ್ತು ಇರಾನ್ ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸುವ ಮೂಲಕ ಮತ್ತೆ ಯುದ್ದ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಕಚ್ಛಾ ತೈಲಗಳ ಬೆಲೆಯಲ್ಲಿ 4-5% ಏರಿಕೆ ಕಂಡಿದ್ದು, ಯುಎಸ್&zwnj; ಡಾಲರ್&zwnj; ಕೂಡಾ ಮತ್ತಷ್ಟು ಬಲವಾಗಿದೆ. ಇದರ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ.&lt;/p&gt;&lt;img&gt;&lt;p&gt;ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಸುಮಾರು 2% ರಷ್ಟು ಕುಸಿತ ಕಂಡಿದ್ದು, ಪ್ರತಿ ಔನ್ಸ್&zwnj;ಗೆ $4,060ಕ್ಕಿಂತ ಕಡಿಮೆಯಾಗಿದೆ. ಕಚ್ಛಾ ತೈಲದ ಬೆಲೆ ಏರಿಕೆಯು ಹಣದುಬ್ಬರಕ್ಕೆ ಒಳ್ಳೆಯ ಸೂಚನೆಯಲ್ಲ. ಹೀಗಾಗಿ ಚಿನ್ನ ಮತ್ತು ಬೆಳ್ಳಿಯಂತಹ ಇಳುವರಿ ನೀಡದ ಸ್ವತ್ತುಗಳ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಕಡಿಮೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಇದೀಗ 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿಂದು ಸುಮಾರು ₹1,420 ರುಪಾಯಿ ಕುಸಿತವಾಗಿದೆ. ಈ ಮೂಲಕ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,291 ರುಪಾಯಿಗಳಾಗಿದೆ. ಇದು ಚಿನ್ನದ ಮೇಲೆ ಹೂಡಿಕೆ ಮಾಡುವವರ ಪಾಲಿಗೆ ಗುಡ್ ನ್ಯೂಸ್ ಆಗಿದೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲೂ ಸಹಾ ಭಾರೀ ಇಳಿಕೆ ಕಂಡಿದೆ. 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1300 ರುಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 13,100 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿರುವುದು ಆಭರಣ ಪ್ರಿಯರು ಬಂಗಾರದ ಅಂಗಡಿಯತ್ತ ದಾಪುಗಾಲು ಹಾಕಲಾರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.&lt;/p&gt;&lt;img&gt;&lt;p&gt;ಇನ್ನು ಚಿನ್ನದ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಇಳಿಕೆಯಾಗಿದ್ದರೂ ಬೆಳ್ಳಿ ಬೆಲೆಯು ಕಳೆದ ಮೂರು ದಿನಗಳಿಂದ ಯಾವುದೇ ಏರಿಳಿತ ಕಾಣದೇ ಸ್ಥಿರವಾಗಿದೆ. ಇದೀಗ ಒಂದು ಕೆಜಿ ಬೆಳ್ಳಿ ಬೆಲೆ 2,35,000 ರುಪಾಯಿಗಳಾಗಿದೆ.&lt;/p&gt;]]></content:encoded>
            <category>india-news</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/gold-price-falls-for-third-straight-day-check-today-gold-and-silver-rates-in-bengaluru-kvn-ziqilhr"/>
        </item>
        <item>
            <title><![CDATA[ಸೊಸೆಯಾಗಿ ಬಂದವಳನ್ನು ಮಗಳಾಗಿ ಬೀಳ್ಕೊಟ್ಟ ಮಾವ: ಮಗನ ಅಗಲಿಕೆಯ ನೋವಲ್ಲೂ ವಿಧವೆ ಸೊಸೆಗೆ ಅದ್ದೂರಿ ಮದುವೆ]]></title>
            <link>https://kannada.asianetnews.com/india-news/inspiring-story-of-father-in-law-remarries-his-widowed-daughter-in-law-in-ujjain/articleshow-8k0mn36</link>
            <guid isPermaLink="true">https://kannada.asianetnews.com/india-news/inspiring-story-of-father-in-law-remarries-his-widowed-daughter-in-law-in-ujjain/articleshow-8k0mn36</guid>
            <pubDate>Mon, 13 Jul 2026 11:36:23 +0530</pubDate>
            <description><![CDATA[&lt;p&gt;Inspiring story: ಉಜ್ಜಯಿನಿಯ ದಿನೇಶ್ ವೈರಾಗಿ ತಮ್ಮ ಮಗನ ಮರಣದ ನಂತರ, ಮಗಳಂತಿದ್ದ ತಮ್ಮ ಸೊಸೆಗೆ ಯೋಗ್ಯ ವರನನ್ನು ಹುಡುಕಿ, ತಾವೇ ಕನ್ಯಾದಾನ ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾದ ಘಟನೆ ನಡೆದಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd1ag57p3n39xc9ad5fv2c6,imgname-ujjain-news-1783922770086.jpg" type="image/jpeg" height="390" width="690"/>
            <content:encoded><![CDATA[&lt;h2&gt;ಸಮಾಜಕ್ಕೆ ಮಾದರಿಯಾದ ಮಾವ&lt;/h2&gt;&lt;p&gt;ಸೊಸೆ ಮೇಲೆ ಹಲ್ಲೆ, ಸೊಸೆಯ ಕಥೆ ಮುಗಿಸಿದ ಗಂಡನ ಮನೆಯವರು ಎನ್ನುವ ಹಲವಾರು ಕ್ರೈಂ ಸುದ್ದಿಗಳ ನಡುವೆ, ಅಥವಾ ಮಗ ಸಣ್ಣ ವಯಸ್ಸಲ್ಲೆ ಸತ್ತರೆ ಸೊಸೆಯನ್ನೇ ದೂಷಿಸುವವರ ಮಧ್ಯೆ ಇಲ್ಲೊಬ್ಬರು ಮಾವ ತಮ್ಮ ಮಗನ ಜೀವನಕ್ಕೆ ಪತ್ನಿಯಾಗಿ ಬಂದು, ತಮ್ಮ ಮನೆಯ ಮಗಳೇ ಆಗಿದ್ದ ಸೊಸೆಗೆ, ಮಗನ ಮರಣದ ಬಳಿಕ, ಯೋಗ್ಯ ವರ ಹುಡುಕಿ ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ. ತಾವೇ ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಕೂಡ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;19 ನೇ ವಯಸ್ಸಿನಲ್ಲಿ ಮದುವೆ, ಐದು ವರ್ಷದಲ್ಲೇ ವಿಧವೆ&lt;/strong&gt;&lt;/h3&gt;&lt;p&gt;2018 ರಲ್ಲಿ , ಭೋಪಾಲ್ ನಿವಾಸಿ ಪ್ರಿಯಾಂಕಾ ಉಜ್ಜಯಿನಿಯ ಜೈತಾಲ್ ಗ್ರಾಮದ ನಿವಾಸಿ ಕಪಿಲ್ ಬೈರಾಗಿಯನ್ನು ವರಿಸಿದ್ದರು. ಆ ಸಮಯದಲ್ಲಿ ಪ್ರಿಯಾಂಕಾಗೆ ಕೇವಲ 19 ವರ್ಷ. ಮದುವೆಯ ನಂತರ ಜೀವನವು ಸಂತೋಷದಿಂದ ಕೂಡಿತ್ತು, ಆದರೆ ಕೆಲವೇ ವರ್ಷಗಳಲ್ಲಿ ಆ ಸಂತೋಷ ಮಣ್ಣು ಪಾಲಾಯಿತು. ಪ್ರಿಯಾಂಕಾ ಪತಿ ಕಪಿಲ್ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗಿದ್ದರು. ಒಂದು ವರ್ಷ ಕಪಿಲ್ ಗೆ ಕ್ಯಾನ್ಸರ್ ಚಿಕಿತ್ಸೆ ನೀಡಲಾಗಿತ್ತು. ಇನ್ನೇನು ಎಲ್ಲವೂ ಸರಿ ಹೋಗುತ್ತದೆ ಎನ್ನುವಾಗಲೇ ಅಂದರೆ 2023ರಲ್ಲಿ ಕಪಿಲ್ ಕ್ಯಾನ್ಸರ್ ಗೆ ಸೋತು ಜೀವ ತೆತ್ತಿದ್ದರು. ಪತಿಯ ಮರಣದ ಬಳಿಕ ಪ್ರಿಯಾಂಕಾ ಪ್ರಪಂಚವು ಛಿದ್ರವಾಯಿತು. 24ನೇ ವಯಸ್ಸಲ್ಲೇ ವಿಧವೆಯಾಗಿದ್ದ ಪ್ರಿಯಾಂಕಾಳ ನಂತರ ಜೀವನದ ಬಗ್ಗೆ ಕುಟುಂಬದ ಮಂದಿ ಚಿಂತಿತರಾಗಿದ್ದರು.&lt;/p&gt;&lt;h3&gt;&lt;strong&gt;ಸೊಸೆಯಾಗಿ ಬಂದವಳನ್ನು ಮಗಳಾಗಿ ಬೀಳ್ಕೊಟ್ಟ ಮಾವ&lt;/strong&gt;&lt;/h3&gt;&lt;p&gt;ತನ್ನ ಮಗನನ್ನು ಕಳೆದುಕೊಂಡ ದುಃಖ ದಿನೇಶ್ ಬೈರಾಗಿಯವರನ್ನು ಕಾಡುತ್ತಿತ್ತು. ಆದರೆ ತಮ್ಮ ಕಣ್ಣೀರನ್ನು ಬದಿಗೊತ್ತಿ ದಿನೇಶ್ ದಿಟ್ಟ ಮತ್ತು ಧೈರ್ಯಶಾಲಿ ನಿರ್ಧಾರ ತೆಗೆದುಕೊಂಡರು. ಅವರು ಸೊಸೆ ಪ್ರಿಯಾಂಕಾಳ ಕೈ ಹಿಡಿದು, &quot;ನಾನು ಅವಳನ್ನು ನನ್ನ ಸೊಸೆಯಾಗಿ ಕರೆತಂದೆ, ಆದರೆ ಈಗ ನಾನು ಅವಳನ್ನು ನನ್ನ ಮಗಳಂತೆ ಘನತೆಯಿಂದ ಕಳುಹಿಸುತ್ತೇನೆ&quot; ಎಂದು ಪ್ರತಿಜ್ಞೆ ಮಾಡಿದನು.&lt;/p&gt;&lt;p&gt;&lt;strong&gt;ಎರಡು ವರ್ಷಗಳಿಂದ ಸೂಕ್ತ ವರನ ಹುಡುಕಾಟ: &lt;/strong&gt;ದಿನೇಶ್ ಬೈರಾಗಿ ಖಾಂಡ್ವಾದಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದರು. ಪ್ರಿಯಾಂಕಾಳ ಜೀವನವನ್ನು ಸರಿಮಾಡಲು, ಸೂಕ್ತ ವರನಿಗಾಗಿ ಹುಡುಕಾಟ ನಡೆಸಿದರು. ಪ್ರಿಯಾಂಕಾ ಸಾಮಾಜಿಕ ನಿಂದನೆಗಳನ್ನು ಎದುರಿಸುತ್ತಾ, ಒಂಟಿತನದಲ್ಲಿ ಬದುಕಬಾರದು ಎಂದು ಎರಡು ವರ್ಷ ಸೂಕ್ತ ವರನಿಗಾಗಿ ಹುಡುಕಿ, ಸರಿಯಾದ ವರನನ್ನು ಹುಡುಕಿದರು. ದಿನೇಶ್ ಖುದ್ದಾಗಿ ಗೋವಿಂದ್ ಅವರ ಮನೆಗೆ ಭೇಟಿ ನೀಡಿ, ಹುಡುಗನ ಕುಟುಂಬ ಮತ್ತು ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ತೃಪ್ತರಾದ ನಂತರ,ಪ್ರಿಯಾಂಕಾಗೆ ಮದುವೆ ಮಾಡಲು ನಿರ್ಧರಿಸಿದರು. ಗೋವಿಂದ್ ಅವರ ಕುಟುಂಬವೂ ಸಹ ಇದಕ್ಕೆ ಒಪ್ಪಿಕೊಂಡರು.&lt;/p&gt;&lt;h3&gt;&lt;strong&gt;ರೆಸಾರ್ಟ್&zwnj;ನಲ್ಲಿ ಅದ್ಧೂರಿ ಮದುವೆ ಮಾಡಿಸಿದ ಮಾವ&lt;/strong&gt;&lt;/h3&gt;&lt;p&gt;ಇತ್ತೀಚೆಗೆ, ಪ್ರಿಯಾಂಕಾ ಮತ್ತು ಗೋವಿಂದ ಅವರ ವಿವಾಹವು ಭೋಪಾಲ್&zwnj;ನ ಐಷಾರಾಮಿ ರೆಸಾರ್ಟ್&zwnj;ನಲ್ಲಿ ಸುಮಾರು 350 ಅತಿಥಿಗಳ ಸಮ್ಮುಖದಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಪ್ರಿಯಾಂಕಾ ಅವರ ಮಾವ ದಿನೇಶ್ ಬೈರಾಗಿ ಅವರೇ ಮದುವೆಯ ಸಂಪೂರ್ಣ ವೆಚ್ಚವನ್ನು ಭರಿಸಿದರು. ಅಷ್ಟೇ ಅಲ್ಲ ತಾವೇ ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಕೂಡ ಮಾಡಿದರು. ಆ ಮೂಲಕ ಮಾವ ಇಡಿ ಸಮಾಜಕ್ಕೆ ಮಾದರಿಯಾದರು.&lt;/p&gt;]]></content:encoded>
            <category>india-news</category>
            <dc:creator>Pavna Das</dc:creator>
            <atom:link href="https://kannada.asianetnews.com/india-news/inspiring-story-of-father-in-law-remarries-his-widowed-daughter-in-law-in-ujjain/articleshow-8k0mn36"/>
        </item>
        <item>
            <title><![CDATA[Zepto Delivery Boy Earning: ಅಬ್ಬಬ್ಬಾ.. ಏನ್ರೀ ಇದು.. 1 ವಾರದ ಆದಾಯ ರಿವೀಲ್‌ ಮಾಡಿದ ಜೆಪ್ಟೊ ಡೆಲಿವರಿ ಬಾಯ್‌]]></title>
            <link>https://kannada.asianetnews.com/jobs/zepto-delivery-partner-1-week-earning-14-thousand-video-viral/articleshow-oqci6r1</link>
            <guid isPermaLink="true">https://kannada.asianetnews.com/jobs/zepto-delivery-partner-1-week-earning-14-thousand-video-viral/articleshow-oqci6r1</guid>
            <pubDate>Sun, 12 Jul 2026 14:38:16 +0530</pubDate>
            <description><![CDATA[&lt;p&gt;Zepto delivery partner salary: ಇಂದು ನಿರುದ್ಯೋಗ ತಾಂಡವವಾಡುತ್ತಿದೆ. ಎಷ್ಟೋ ಜನರಿಗೆ ಕೆಲಸವೇ ಇಲ್ಲ. ಐಟಿ ಉದ್ಯಮ ಕೂಡ ಕುಸಿಯುತ್ತಿದೆ. ಹೀಗಾಗಿ ಡೆಲಿವರಿ ಮಾಡ್ಕೊಂಡು ಅನೇಕರು ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ. ಈಗ ಜೆಪ್ಟೋ (Zepto) ಡೆಲಿವರಿ ಪಾರ್ಟ್ನರ ವಾರದ ಆದಾಯ ಅನೇಕರ ನಿದ್ದೆ ಹಾಳು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxas5zn13wsv823zvc5x92qw,imgname-new-project--20--1783847124641.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಲ್ಲರಿಗೂ ಇಂದು ಗಡಿಬಿಡಿಯ ಜೀವನ. ಈಗ ಅವಶ್ಯಕತೆ ಇರುವ ವಸ್ತು ಈಗಲೇ ಬೇಕು. ಈಗ ಪ್ರತಿಯೊಂದು ರೆಡಿಮೇಡ್&zwnj; ಸಿಗುತ್ತದೆ. ಯಾರಿಗೂ ಮನೆಯಿಂದ ಹೊರಗಡೆ ಹೋಗಿ ವಸ್ತುಗಳನ್ನು ತಂದುಕೊಳ್ಳುವಷ್ಟು ಸಂಯಮ, ಸಮಯ ಇಲ್ಲ. ಹೀಗಾಗಿ ಡೆಲಿವರಿ ಬಾಯ್&zwnj;ಗಳ ಬೇಡಿಕೆ ಜಾಸ್ತಿ ಆಗಿದೆ. ಸಿಟಿಗಳಲ್ಲಿ Zepto ಮುಂತಾದ ಡೆಲಿವರಿ ಕಂಪೆನಿಗಳು ಇವೆ.&lt;/p&gt;&lt;h2&gt;ವಾರಕ್ಕೆ 14 ಸಾವಿರ ರೂಪಾಯಿ ಆದಾಯ&lt;/h2&gt;&lt;p&gt;Zepto Delivary partner ಒಬ್ಬರು ಸೋಶಿಯಲ್&zwnj; ಮೀಡಿಯಾದಲ್ಲಿ ರೀಲ್ಸ್&zwnj; ಅಪ್&zwnj;ಲೋಡ್&zwnj; ಮಾಡುತ್ತಾರೆ. ಈ ವಾರ ಅವರು ₹14,000 ಕ್ಕೂ ಹೆಚ್ಚು ಗಳಿಸಿರುವುದನ್ನು ಅವರು ರೀಲ್ಸ್&zwnj; ಮಾಡಿದ್ದಾರೆ. ಇದು ಈಗ ಭಾರೀ ಚರ್ಚೆ ಆಗಿದೆ. ಭಾರತದ ಡೆಲಿವರಿ ಮಾರುಕಟ್ಟೆಯಲ್ಲಿ ಸ್ವತಂತ್ರ ಉದ್ಯೋಗಗಳು ಹೇಗೆ ಒಳ್ಳೆಯ ಗಳಿಕೆಯ ಅವಕಾಶಗಳನ್ನು ಕೊಡುತ್ತವೆ ಎಂದು ತೋರಿಸುತ್ತದೆ.&lt;/p&gt;&lt;h2&gt;ಅಸಲಿ ಸತ್ಯ ಏನು?&lt;/h2&gt;&lt;p&gt;ಇದನ್ನು ಸಂಪೂರ್ಣವಾಗಿ ನಂಬಲಾಗದು. ಒಂದು ವಾರದ ಆದಾಯ ನಿಜಕ್ಕೂ ಸಂಪೂರ್ಣ ಸತ್ಯವನ್ನು ಹೇಳುವುದಿಲ್ಲ. ಕೆಲಸದ ಅವಧಿ, ಸಿಟಿಯಲ್ಲಿ ಡೆಲಿವರಿ, ಪ್ರೋತ್ಸಾಹಕ ಧನ (incentives), ಪೆಟ್ರೋಲ್ ವೆಚ್ಚ, ವಾಹನ ನಿರ್ವಹಣೆ, ಆರ್ಡರ್&zwnj;ಗಳ ಪ್ರಮಾಣ&zwnj;, ಪ್ಲಾಟ್&zwnj;ಫಾರ್ಮ್&zwnj;ನ ನೀತಿಗಳನ್ನು ಅವಲಂಬಿಸಿ ಬದಲಾಗಬಹುದು. ಇದು ಎಲ್ಲ ಡೆಲಿವರಿ ಬಾಯ್&zwnj;ಗೂ ಒಂದೇ ತರ ಆಗಿರೋದಿಲ್ಲ.&lt;/p&gt;&lt;h2&gt;ದೊಡ್ಡ ಚರ್ಚೆ ಶುರು ಆಗಿದೆ&lt;/h2&gt;&lt;p&gt;ಈ ವಿಡಿಯೋವು ಜೆಪ್ಟೋ, ಡೆಲಿವರಿ ಉದ್ಯೋಗಗಳು, ಗಿಗ್ ಕಾರ್ಮಿಕರ ವೇತನ, ಆದಾಯದ ಪಾರದರ್ಶಕತೆ, ಇಂತಹ ಪ್ಲಾಟ್&zwnj;ಫಾರ್ಮ್ ಕೆಲಸಗಳು ದೀರ್ಘಾವಧಿಯ ಸ್ಥಿರ ಆದಾಯದ ಮೂಲವಾಗಬಲ್ಲವೇ ಎಂಬ ಬಗ್ಗೆ ಒಂದು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/jobs/zepto-delivery-partner-1-week-earning-14-thousand-video-viral/articleshow-oqci6r1"/>
        </item>
        <item>
            <title><![CDATA['ಆಮಿರ್ ಖಾನ್ 3 ಮದುವೆಯಾದ್ರು, ನೀವು ನಾಲ್ಕು ಆಗಿ..' ಬಿಜೆಪಿ ನಾಯಕ ನಿತೇಶ್ ರಾಣೆ ವಿರುದ್ಧ ವಾರಿಸ್ ಪಠಾಣ್ ವ್ಯಂಗ್ಯ]]></title>
            <link>https://kannada.asianetnews.com/india-news/aimim-waris-pathan-reacts-nitesh-rane-claim-love-jihad-on-aamir-khan-third-marriage-rav/articleshow-09k3muy</link>
            <guid isPermaLink="true">https://kannada.asianetnews.com/india-news/aimim-waris-pathan-reacts-nitesh-rane-claim-love-jihad-on-aamir-khan-third-marriage-rav/articleshow-09k3muy</guid>
            <pubDate>Mon, 13 Jul 2026 11:24:51 +0530</pubDate>
            <description><![CDATA[&lt;p&gt;ನಟ ಆಮಿರ್ ಖಾನ್ ಅವರ ಮೂರನೇ ಮದುವೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದನ್ನು 'ಲವ್ ಜಿಹಾದ್' ಎಂದು ಕರೆದ ಬಿಜೆಪಿ ನಾಯಕ ನಿತೇಶ್ ರಾಣೆಗೆ, ಎಐಎಂಐಎಂ ನಾಯಕ ವಾರಿಸ್ ಪಠಾಣ್ ತಿರುಗೇಟು. ಆಮಿರ್ ಕುಟುಂಬಕ್ಕಿಲ್ಲದ ಸಮಸ್ಯೆ ನಿಮಗೇಕೆ, ಬೇಕಿದ್ದರೆ ನೀವು ನಾಲ್ಕು ಮದುವೆಯಾಗಿ ಎಂದು ಪಠಾಣ್ ವ್ಯಂಗ್ಯ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd0e5vf4k82f50rx2zv4es9,imgname-----------------------2026-07-13t111137.611-1783921842031.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟ, ಮಿ.ಪರ್ಫೆಕ್ಟ್ ಆಮಿರ್ ಖಾನ್ ಇತ್ತೀಚೆಗೆ ಗೌರಿ ಸ್ಪ್ರಾಟ್ ಅವರೊಂದಿಗೆ ಮೂರನೇ ಮದುವೆಯಾದರು. ಆಮಿರ್&zwnj; ಖಾನ್&zwnj;ರ ಈ ವಿವಾಹವು ಮಹಾರಾಷ್ಟ್ರದ ರಾಜಕೀಯದಲ್ಲಿ ವಿವಾದ, ಉದ್ವಿಗ್ನತೆಗೆ ಕಾರಣವಾಗಿದೆ. 'ಆಮಿರ್ ಖಾನ್ ಮೂರು ಮದುವೆಯಾದ್ರು, ನೀವು ನಾಲ್ಕು ಮದುವೆ ಆಗಿ ತೋರಿಸಿ' ಎಂದು ಹಿಂದುತ್ವವಾದಿ ರಾಜಕಾರಣಿ ನಿತೇಶ್ ರಾಣೆ ವಿರುದ್ಧ ಎಐಎಂಐ ನಾಯಕ ವಾರಿಸ್ ಪಠಾಣ್ ವ್ಯಂಗ್ಯವಾಡಿದ್ದಾರೆ.&lt;/p&gt;&lt;h2&gt;ಆಮಿರ್ ಖಾನ್ 'ಲವ್ ಜಿಹಾದ್'ನ ಬ್ರಾಂಡ್ ರಾಯಭಾರಿ'&lt;/h2&gt;&lt;p&gt;ಬಾಲಿವುಡ್ ನಟ ಮುಸ್ಲಿಂಮಾಗಿದ್ದರೂ ಮೂವರು ಹಿಂದೂ ಮಹಿಳೆಯರನ್ನ ಮದುವೆಯಾದ್ದಾರೆ. ಆ ಮೂಲಕ ಲವ್ ಜಿಹಾದ್&zwnj;ನ ಬ್ರಾಂಡ್ ರಾಯಭಾರಿ ಆಗಿದ್ದಾರೆ ಎಂದು ನಿತೇಶ್ ರಾಣೆ ಅವರು ಕಿಡಿಕಾರಿದ್ದರು. ಅಲ್ಲದೇ ಹಿಂದೂಗಳು ಆಮಿರ್&zwnj; ಖಾನ್ ಅವರ ಸಿನಿಮಾಗಳನ್ನ ನೋಡದಂತೆ ಕರೆ ನೀಡಿದ್ದರು. ರಾಣೆ ಹೇಳಿಕೆಗೆ ವಾರಿಸ್ ಪಠಾಣ್ ವ್ಯಂಗ್ಯವಾಡಿದ್ದಾರೆ.&lt;/p&gt;&lt;h3&gt;ಆಮಿರ್ ಖಾನ್ ಬಗ್ಗೆ ನಿತೇಶ್ ರಾಣೆಗೆ ಹೊಟ್ಟೆ ಉರಿ&lt;/h3&gt;&lt;p&gt;ಆಮಿರ್ ಖಾನ್ ಬಗ್ಗೆ ಹಿಂದೂತ್ವವಾದಿ ನಿತೇಶ್ ರಾಣೆಗೆ ಅಸೂಯೆ ಹೆಚ್ಚಾಗಿದೆ. ಅದಕ್ಕಾಗಿಯೇ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಮಿರ್ ಖಾನ್ ಮೂರು ಬಾರಿ ಮದುವೆಯಾದರೆ ಏನಾಯ್ತು, ನೀವು ನಾಲ್ಕು ಮದುವೆಯಾಗಬಹುದು. ನಿಮ್ಮನ್ನು ತಡೆಯುವವರು ಯಾರು? ನೀವು ಯಾಕೆ ಅಸೂಯೆ ಪಡುತ್ತಿದ್ದೀರಿ? ಎಂದು ವಾರಿಸ್ ಪಠಾಣ್ ಪ್ರಶ್ನಿಸಿದ್ದಾರೆ.&lt;/p&gt;&lt;p&gt;&lt;strong&gt;ಕುಟುಂಬದವರಿಗಿಲ್ಲದ ಸಿಟ್ಟು ನಿಮಗ್ಯಾಕೆ?&lt;/strong&gt;&lt;/p&gt;&lt;p&gt;ಆಮಿರ್ ಖಾನ್ ಅವರ ಕುಟುಂಬದವರು, ಸ್ನೇಹಿತರು ಮೂರನೇ ಮದುವೆ ಬಗ್ಗೆ ಯಾವುದೇ ಅಸಮಾಧಾನ ಆಕ್ಷೇಪಣೆ ಇಲ್ಲ. ಆಮೀರ್ ಖಾನ್ ಅವರ ಮೊದಲ ಮತ್ತು ಎರಡನೇ ಪತ್ನಿ ಕೂಡ ಮದುವೆಗೆ ಬಂದಿದ್ರು. ಅವರ ಮಗ ಮಗಳು ಕೂಡ ಬಂದಿದ್ರು. ಅಷ್ಟೇ ಅಲ್ಲ, ಈ ಮದುವೆಗೆ ಅಳಿಯ ಕೂಡ ಬಂದಿದ್ರು. ಅವರ ಸ್ನೇಹಿತರು ಮತ್ತು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಕೂಡ ಬಂದಿದ್ರು. ಇವರಾರು ಆಮಿರ್ ಖಾನ್ ಮೂರನೇ ಮದುವೆ ಆಗ್ತಿದ್ದಾರೆ, ಲವ್ ಜಿಹಾದ್ ಮಾಡ್ತಿದ್ದಾರೆ ಅಂತಾ ಅನ್ನಿಸಲಿಲ್ಲ. ಆದ್ರೆ ನೀವು ಮಾತ್ರ. ನೀವು ಮಾತ್ರ ಯಾಕೆ ಅಸೂಯೆ ಮಾಡ್ತೀರಾ ಎಂದು ವಾರಿಸ್ ಪಠಾಣ್ ಪ್ರಶ್ನಿಸಿದ್ದಾರೆ.&lt;/p&gt;&lt;h3&gt;ನಿತೇಶ್ ರಾಣೆಗೆ ಜಿಹಾದ್&zwnj;ನ ಅರ್ಥವೇ ಗೊತ್ತಿಲ್ಲ&lt;/h3&gt;&lt;p&gt;ಅಮಿರ್&zwnj; ಖಾನ್&zwnj;ಗೆ ನೇಮ್ ಫೇಮು, ಹಣ ಎಲ್ಲ ಇದೆ ಆದ್ದರಿಂದ ಅವರು ಮೂರನೇ ಬಾರಿಗೆ ವಿವಾಹವಾದರು. ನಿಮಗೂ ಹಣ ಅಧಿಕಾರಿ ಇದೆ, ನೀವೂ ಹಾಗೆ ಮಾಡಿ. ಕಾನೂನಿನ ಚೌಕಟ್ಟಿನೊಳಗೆ ಯಾರಾದರೂ ಮದುವೆಯಾಗಲು ಬಯಸಿದ್ರೆ ಮದುವೆ ಆಗಬಹುದು. ಬೇಕಿದ್ರೆ ನೀವು ನಾಲ್ಕು ಮದುವೆಯಾಗಿ ಅದುಬಿಟ್ಟು ಲವ್ ಜಿಹಾದ್ ಅಂತಾ ಅಸಂಬದ್ಧ ಹೇಳಿಕೆ ನೀಡಬಾರದು. ಅಷ್ಟಕ್ಕೂ ನಿಮಗೆ(ನಿತೇಶ್ ರಾಣೆ) ಲವ್ ಜಿಹಾದ್ ಅರ್ಥವೇ ತಿಳಿದಿಲ್ಲ ಎಂದು ವಾರಿಸ್ ಪಠಾಣ್ ಲೇವಡಿ ಮಾಡಿದ್ದಾರೆ.&lt;/p&gt;&lt;p&gt;ಮುಸ್ಲಿಂ ಬಗೆಗಿನ ದ್ವೇಷವೇ ನಿತೇಶ್ ರಾಣೆಯವರ ಮಾತುಗಳಿಗೆ ಕಾರಣ. ಅವರ ಗುರಿ ಅಮಿರ್ ಖಾನ್ ಅಲ್ಲ, ಬದಲಾಗಿ ಮುಸ್ಲಿಮರು. ನಾನು ಇಂಹ ಜನರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಇಷ್ಟಪಡೋಲ್ಲ ಅವರು ಮುಸ್ಲಿಮರ ಮೇಲಿನ ದ್ವೇಷ ಹೊರಹಾಕಲು, ದ್ವೇಷವನ್ನು ಹರಡಲು ಒಗ್ಗಿಕೊಂಡಿದ್ದಾರೆ ಪಠಾಣ್ ಹೇಳಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/aimim-waris-pathan-reacts-nitesh-rane-claim-love-jihad-on-aamir-khan-third-marriage-rav/articleshow-09k3muy"/>
        </item>
        <item>
            <title><![CDATA[35 ವರ್ಷದ ಹಿಂದೆ ಪಡೆದ ₹1000ಕ್ಕೆ ಬಡ್ಡಿ ಸೇರಿಸಿ ಈಗ ₹35,000 ಪಾವತಿ]]></title>
            <link>https://kannada.asianetnews.com/india-news/man-returns-loan-after-35-years-ismail-lachanna-saudi-dharmapuri-honesty-san/articleshow-ef036zl</link>
            <guid isPermaLink="true">https://kannada.asianetnews.com/india-news/man-returns-loan-after-35-years-ismail-lachanna-saudi-dharmapuri-honesty-san/articleshow-ef036zl</guid>
            <pubDate>Mon, 13 Jul 2026 10:35:36 +0530</pubDate>
            <description><![CDATA[&lt;p&gt;35 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಸಹೋದ್ಯೋಗಿ ಲಚ್ಚಣ್ಣನಿಂದ 1000 ರೂ. ಸಾಲ ಪಡೆದಿದ್ದ ಇಸ್ಮಾಯಿಲ್, ಸಂಪರ್ಕ ಕಳೆದುಕೊಂಡರೂ ಅವರನ್ನು ಮರೆತಿರಲಿಲ್ಲ. ಇತ್ತೀಚೆಗೆ, ಕೇವಲ ಅಲ್ಪ ಮಾಹಿತಿಯಿಂದ ಲಚ್ಚಣ್ಣನ ವಿಳಾಸ ಪತ್ತೆಹಚ್ಚಿ, ಅವರ ಕುಟುಂಬಕ್ಕೆ ಬಡ್ಡಿ ಸಮೇತ 25,000 ರೂ. ಮರಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxcxq54fn6b3h0vyk5qtkwdb,imgname-ismail-borrowed-120-saudi-riyals-from-lachanna-1783918990478.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ (ಜು.13): &lt;/strong&gt;ಸಾಲವು ಸಂಬಂಧಗಳ ಪಾಲಿಗೆ ಶೂಲ ಆಗುತ್ತಿರುವ ಈ ಕಾಲದಲ್ಲಿ, ವ್ಯಕ್ತಿಯೊಬ್ಬರು 35 ವರ್ಷಗಳ ಹಿಂದೆ ತಮಗೆ ಸಾಲ ನೀಡಿದವರನ್ನು ಹುಡುಕಿಕೊಂಡು ಹೋಗಿ ಅದನ್ನು ಬಡ್ಡಿ ಸಮೇತ ಪಾವತಿಸಿದ್ದಾರೆ. ಈ ಮೂಲಕ ಪ್ರಾಮಾಣಿಕತೆ ಮೆರೆದ ಇಸ್ಮಾಯಿಲ್&zwnj; ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲಸಕ್ಕೆಂದು ಸೌದಿ ಅರೇಬಿಯಾದ ಅಬ್ಕೈಕ್ ಎಂಬಲ್ಲಿ ನೆಲೆಸಿದ್ದ ಇಸ್ಮಾಯಿಲ್&zwnj; ಮತ್ತು ಲಚ್ಚಣ್ಣ 1991ರಲ್ಲಿ ಪರಸ್ಪರ ಪರಿಚಯವಾಗಿದ್ದರು. ಸಹೋದ್ಯೋಗಿಗಳೂ ಆಗಿದ್ದ ಇವರು, ಒಂದೇ ಕೋಣೆಯಲ್ಲಿ ಸುಮಾರು 5 ವರ್ಷ ವಾಸವಿದ್ದರು. ಆಗ ಲಚ್ಚಣ್ಣನಿಂದ 120 ರಿಯಾಲ್&zwnj; (1 ಸಾವಿರ ರು.) ಪಡೆದ ಇಸ್ಮಾಯಿಲ್&zwnj;, ಸಾಧ್ಯವಾದಾಗ ಅದನ್ನು ಮರಳಿಸುವ ಭರವಸೆ ನೀಡಿದ್ದರು.&lt;/p&gt;&lt;p&gt;ಕೆಲ ವರ್ಷಗಳ ಬಳಿಕ ಲಚ್ಚಣ್ಣ ಭಾರತಕ್ಕೆ ಮರಳಿದರು. ಇಬ್ಬರ ಬಳಿಯೂ ಪರಸ್ಪರರ ದೂರವಾಣಿ ಸಂಖ್ಯೆ ಇರಲಿಲ್ಲ. ಕಾಲಕ್ರಮೇಣ ಅವರ ನಡುವೆ ಸಂಪರ್ಕವೇ ಇಲ್ಲವಾಯಿತು. ಆದರೆ ತಾವು ಪಡೆದ ಸಾಲವನ್ನು ಇಸ್ಮಾಯಿಲ್&zwnj; ಮರೆತಿರಲಿಲ್ಲ.&lt;/p&gt;&lt;h2&gt;&lt;strong&gt;ಹುಡುಕಿದ್ದು ಹೇಗೆ?&lt;/strong&gt;&lt;/h2&gt;&lt;p&gt;35 ವರ್ಷದ ಹಿಂದೆ ಪಡೆದಿದ್ದ ಸಾಲವನ್ನು ಮರುಪಾವತಿಸಬೇಕೆಂದು ಹೊರಟ ಇಸ್ಮಾಯಿಲ್&zwnj; ಬಳಿ ಲಚ್ಚಣ್ಣನ ದೂರವಾಣಿ ಸಂಖ್ಯೆಯಾಗಲಿ, ವಿಳಾಸವಾಗಲಿ ಇರಲಿಲ್ಲ. ತಿಳಿದಿದ್ದದ್ದು, ಅವರು ಧರ್ಮಪುರಿಯವರು ಎಂದು. ಆ ಅಲ್ಪ ಮಾಹಿತಿಯನ್ನು ಬಳಸಿಕೊಂಡು ಆನ್&zwnj;ಲೈನ್&zwnj; ಮೂಲಕ ಲಚ್ಚಣ್ಣ ವಾಸವಿರುವ ಸ್ಥಳ ಪತ್ತೆ ಮಾಡಿದ ಇಸ್ಮಾಯಿಲ್&zwnj;, ಸೀದಾ ಅಲ್ಲಿಗೆ ಹೋಗಿ, ಅವರ ಪರಿವಾರಕ್ಕೆ 25 ಸಾವಿರ ರು. ಮರಳಿಸಿದ್ದಾರೆ. ಸದ್ಯ ಲಚ್ಚಣ್ಣ ಕಾರ್ಯನಿಮಿತ್ತ ಗಲ್ಫ್&zwnj;ನಲ್ಲೇ ಇರುವ ಕಾರಣ ವಾಟ್ಸಪ್&zwnj; ವಿಡಿಯೋ ಕರೆ ಮೂಲಕ ಇಬ್ಬರ ನಡುವೆ ಮಾತುಕತೆ ನಡೆಯಿತು.&lt;/p&gt;&lt;p&gt;ಗೆಳೆಯ ಹಣ ಮರಳಿಸಿದ್ದರ ಬಗ್ಗೆ ಮಾತನಾಡಿದ ಲಚ್ಚಣ್ಣ, &lsquo;25 ಸಾವಿರ ರು.ಅನ್ನು ಹೇಗೆ ಲೆಕ್ಕ ಮಾಡಿ ಕೊಟ್ಟನೋ ಗೊತ್ತಿಲ್ಲ. ಬಹುಶಃ ಬಡ್ಡಿ ಸೇರಿಸಿ ಕೊಟ್ಟಿರಬೇಕು. ಆತ ಪ್ರಾಮಾಣಿಕ ವ್ಯಕ್ತಿ. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ&rsquo; ಎಂದು ಸ್ನೇಹಿತನ ಗುಣಗಾನ ಮಾಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/man-returns-loan-after-35-years-ismail-lachanna-saudi-dharmapuri-honesty-san/articleshow-ef036zl"/>
        </item>
        <item>
            <title><![CDATA[ಪೆನ್ಷನ್ ಹಣಕ್ಕಾಗಿ ಹೋದ ವೃದ್ಧನಿಗೆ ಕಾದಿತ್ತು ಶಾಕ್.. ತನ್ನ ಖಾತೆಯಲ್ಲಿ RS 759 ಕೋಟಿ ಕಂಡು ಹೌಹಾರಿದ ಅಜ್ಜ]]></title>
            <link>https://kannada.asianetnews.com/india-news/pensioner-bank-balance-rs-759-crore-in-bihar-muzaffarpur-gkn/articleshow-brmrdr1</link>
            <guid isPermaLink="true">https://kannada.asianetnews.com/india-news/pensioner-bank-balance-rs-759-crore-in-bihar-muzaffarpur-gkn/articleshow-brmrdr1</guid>
            <pubDate>Mon, 13 Jul 2026 10:29:48 +0530</pubDate>
            <description><![CDATA[ಬಿಹಾರದ ಮುಜಾಫರ್&zwnj;ಪುರದಲ್ಲಿ, ವೃದ್ಧಾಪ್ಯ ವೇತನ ಪಡೆಯಲು ಹೋದ 82 ವರ್ಷದ ವೃದ್ಧರೊಬ್ಬರ ಬ್ಯಾಂಕ್ ಖಾತೆಯಲ್ಲಿ 759 ಕೋಟಿ ರೂ. ಪತ್ತೆಯಾಗಿದೆ. ಅವರ ಮಗನ ಖಾತೆಯಲ್ಲೂ ಇದೇ ರೀತಿ ದೊಡ್ಡ ಮೊತ್ತ ಕಂಡುಬಂದಿದ್ದು, ಇದು ಬ್ಯಾಂಕಿನ ತಾಂತ್ರಿಕ ದೋಷದಿಂದ ಆಗಿರಬಹುದೆಂದು ಶಂಕಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcx9v2nypnaty739hrdts0v,imgname-bihar-man-bank-balance-1783918554197.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಜಾಫರ್&zwnj;ಪುರ (ಬಿಹಾರ): &lt;/strong&gt;ಬ್ಯಾಂಕ್ ಖಾತೆಗೆ ಸಾವಿರಾರು ರೂಪಾಯಿ ಜಮಾ ಆದರೇ ಸಂಭ್ರಮಿಸುತ್ತೇವೆ. ಆದರೆ ಬಿಹಾರದ ವೃದ್ಧರೊಬ್ಬರಿಗೆ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಸಂಭ್ರಮಕ್ಕಿಂತ ಹೆಚ್ಚಾಗಿ ಆತಂಕ ಉಂಟಾಗಿದೆ. ವೃದ್ಧಾಪ್ಯ ವೇತನ (Pension) ಪಡೆಯಲು ಹೋದ 82 ವರ್ಷದ ವೃದ್ಧನ ಖಾತೆಯಲ್ಲಿ ಬರೋಬ್ಬರಿ 759 ಕೋಟಿ ರೂಪಾಯಿ ಹಣ ಪತ್ತೆಯಾದ ಘಟನೆ ಬಿಹಾರದ ಮುಜಾಫರ್&zwnj;ಪುರ ಜಿಲ್ಲೆಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಜಿಲ್ಲೆಯ ನಿವಾಸಿ ಕವಿ ಕಾಮೇಶ್ವರ್ ಮಿಶ್ರಾ ಅವರು ಭಾನುವಾರ ತಮ್ಮ ವೃದ್ಧಾಪ್ಯ ವೇತನವನ್ನು ಹಿಂಪಡೆಯಲು ಸ್ಥಳೀಯ ಕಾಮನ್ ಸರ್ವಿಸ್ ಸೆಂಟರ್&zwnj;ಗೆ (CSC) ಹೋಗಿದ್ದರು. ಅವರ ಜೊತೆಗೆ ವಿಕಲಚೇತನ ಮಗ ಕೂಡ ಹೋಗಿದ್ದ. ಮಗನಿಗೆ ಸಿಗುವ ವಿಕಲಚೇತನ ವೇತನದ ಹಣವನ್ನು ಅಲ್ಲಿ ಪಡೆಯಲಾಯಿತು.&lt;/p&gt;&lt;p&gt;ಹಣ ಪಡೆದ ನಂತರ ಕಾಮೇಶ್ವರ್ ಮಿಶ್ರಾ ಅವರು ಕುತೂಹಲಕ್ಕೆ ತಮ್ಮ ಖಾತೆಯ ಬ್ಯಾಲೆನ್ಸ್ ಎಷ್ಟಿದೆ ಎಂದು ಪರೀಕ್ಷಿಸಿದ್ದಾರೆ. ಆಗ ಕಂಪ್ಯೂಟರ್ ಪರದೆಯ ಮೇಲೆ ಮೂಡಿದ ಅಂಕಿಗಳನ್ನು ಕಂಡು ಅವರು ದಂಗಾಗಿದ್ದಾರೆ. ಅವರ ಖಾತೆಯಲ್ಲಿ ಬರೋಬ್ಬರಿ 759,69,51,951 ರೂಪಾಯಿ (ಸುಮಾರು 759 ಕೋಟಿ) ಬ್ಯಾಲೆನ್ಸ್ ತೋರಿಸುತ್ತಿತ್ತು!&lt;/p&gt;&lt;h3&gt;&lt;strong&gt;ಮಗನ ಖಾತೆಯಲ್ಲೂ ಕೋಟಿ ಕೋಟಿ!&lt;/strong&gt;&lt;/h3&gt;&lt;p&gt;ಅಚ್ಚರಿಯ ವಿಷಯವೆಂದರೆ ಕಾಮೇಶ್ವರ್ ಅವರ ಮಗನ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲೂ ಇಷ್ಟೇ ದೊಡ್ಡ ಮೊತ್ತದ ಹಣ ಇರುವುದು ಕಂಡುಬಂದಿದೆ. ಕುಟುಂಬಸ್ಥರ ಪ್ರಕಾರ, ತಂದೆ-ಮಗ ಇಬ್ಬರ ಖಾತೆ ಸೇರಿ ಒಟ್ಟು 1,500 ಕೋಟಿ ರೂಪಾಯಿಗೂ ಅಧಿಕ ಹಣ ಜಮೆಯಾದಂತೆ ತೋರಿಸುತ್ತಿದೆ.&lt;/p&gt;&lt;h3&gt;&lt;strong&gt;ತಾಂತ್ರಿಕ ದೋಷದ ಶಂಕೆ&lt;/strong&gt;&lt;/h3&gt;&lt;p&gt;ಈ ಅನಿರೀಕ್ಷಿತ ಅಂಕಿಗಳನ್ನು ಕಂಡು ವೃದ್ಧ ಕಾಮೇಶ್ವರ್ ಮಿಶ್ರಾ ಮತ್ತು ಸಿಎಸ್&zwnj;ಸಿ ಕೇಂದ್ರದ ಸಿಬ್ಬಂದಿ ಇಬ್ಬರೂ ಬೆಚ್ಚಿಬಿದ್ದಿದ್ದಾರೆ. ಇದು ಬ್ಯಾಂಕ್ ಸರ್ವರ್&zwnj;ನಲ್ಲಿ ಉಂಟಾದ ಯಾವುದಾದರೂ ತಾಂತ್ರಿಕ ದೋಷ (Technical Glitch) ಇರಬಹುದು ಎಂದು ಶಂಕಿಸಲಾಗಿದೆ. ನನ್ನ ಖಾತೆಗೆ ಇಷ್ಟೊಂದು ಹಣ ಹೇಗೆ ಬಂತು ಎಂದು ನನಗೂ ತಿಳಿಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕು. ಯಾವುದೇ ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸಲಿ ಎಂದು ನಾನು ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇನೆ ಎಂದು ಕಾಮೇಶ್ವರ್ ಮಿಶ್ರಾ ಹೇಳಿದ್ದಾರೆ.&lt;/p&gt;&lt;p&gt;ಈ ಸುದ್ದಿ ಬಿಹಾರದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅಧಿಕೃತ ಸ್ಪಷ್ಟನೆಗಾಗಿ ಕಾಯಲಾಗುತ್ತಿದೆ. ಈ ಹಿಂದೆಯೂ ಬಿಹಾರದ ಹಲವು ಕಡೆಗಳಲ್ಲಿ ತಾಂತ್ರಿಕ ದೋಷದಿಂದಾಗಿ ಜನ ಸಾಮಾನ್ಯರ ಖಾತೆಗೆ ಕೋಟಿ ಕೋಟಿ ಹಣ ಜಮೆಯಾದ ಘಟನೆಗಳು ನಡೆದಿದ್ದವು.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/pensioner-bank-balance-rs-759-crore-in-bihar-muzaffarpur-gkn/articleshow-brmrdr1"/>
        </item>
        <item>
            <title><![CDATA[ಮನೆಯಲ್ಲಿ ಹಿಂದು, ಹೊರಗೆ ಜಾತ್ಯಾತೀತ; ಧರ್ಮ ಪ್ರದರ್ಶನದ ಅಗತ್ಯ ನನಗಿಲ್ಲ ಎಂದ ಅಣ್ಣಾಮಲೈ]]></title>
            <link>https://kannada.asianetnews.com/gallery/india-news/k-annamalai-secular-outside-home-hindu-we-the-leaders-conference-tamil-nadu-san-6an0uyw</link>
            <guid isPermaLink="true">https://kannada.asianetnews.com/gallery/india-news/k-annamalai-secular-outside-home-hindu-we-the-leaders-conference-tamil-nadu-san-6an0uyw</guid>
            <pubDate>Mon, 13 Jul 2026 10:05:47 +0530</pubDate>
            <description><![CDATA[ಇತ್ತೀಚೆಗೆ ಬಿಜೆಪಿ ತೊರೆದ ಕೆ. ಅಣ್ಣಾಮಲೈ, ನಿಜವಾದ ಹಿಂದೂ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಪೊಲ್ಲಾಚಿಯಲ್ಲಿ ನಡೆದ ಸಮಾವೇಶದಲ್ಲಿ, ಯುವಕರ ಮೂಲಕ ರಾಜಕೀಯ ಬದಲಾವಣೆ ತಂದು ಅಧಿಕಾರಕ್ಕೇರುವ ಪರೋಕ್ಷ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcvx7prxkd51ybny38bb6mf,imgname-k-annamalai-1783917092568.jpg" type="image/jpeg" height="390" width="690"/>
            <content:encoded><![CDATA[ಇತ್ತೀಚೆಗೆ ಬಿಜೆಪಿ ತೊರೆದ ಕೆ. ಅಣ್ಣಾಮಲೈ, ನಿಜವಾದ ಹಿಂದೂ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಪೊಲ್ಲಾಚಿಯಲ್ಲಿ ನಡೆದ ಸಮಾವೇಶದಲ್ಲಿ, ಯುವಕರ ಮೂಲಕ ರಾಜಕೀಯ ಬದಲಾವಣೆ ತಂದು ಅಧಿಕಾರಕ್ಕೇರುವ ಪರೋಕ್ಷ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.&lt;img&gt;&lt;p&gt;ನಿಜವಾದ ಹಿಂದೂ ಆಗಿರುವವನು ಎಲ್ಲರನ್ನೂ ಸಮನಾಗಿ ಕಾಣುತ್ತಾನೆ ಹಾಗೂ ಶ್ರೇಷ್ಠ, ಕನಿಷ್ಠವೆಂಬ ತಾರತಮ್ಯ ಮಾಡುವುದಿಲ್ಲ ಎಂದು ಇತ್ತೀಚೆಗಷ್ಟೇ ಬಿಜೆಪಿ ತೊರೆದಿದ್ದ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾನುವಾರ ಪೊಲ್ಲಾಚಿಯಲ್ಲಿ ನಡೆದ ತಮ್ಮ ಸಂಸ್ಥೆಯ ನಶಾಮುಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, &lsquo;ನಾನು ಹೆಮ್ಮೆಯ ರಾಷ್ಟ್ರವಾದಿ ಮತ್ತು ಭಾರತೀಯ. ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ಜಾತಿ, ಧರ್ಮವನ್ನು ಮುಚ್ಚಿಡುತ್ತೇನೆ. ಯಾವಾಗಲೂ ಅವುಗಳನ್ನು ಪ್ರದರ್ಶಿಸುವ ಅಗತ್ಯ ಇಲ್ಲ&rsquo; ಎಂದು ಅಭಿಪ್ರಾಯಪಟ್ಟರು.&lt;/p&gt;&lt;img&gt;&lt;p&gt;ಇದೇ ವೇಳೆ, ಏಪ್ರಿಲ್&zwnj;ನಲ್ಲಿ ನಡೆದ ವಿಧಾನಸಭೆ ಚುನಾವಣೆಯನ್ನು ಉಲ್ಲೇಖಿಸುತ್ತಾ, &lsquo;39 ವರ್ಷಕ್ಕಿಂತ ಕೆಳಗಿನವರು ಅಧಿಕಾರ ಬದಲಾವಣೆ ಮಾಡಿದರು. 2031ರ ಚುನಾವಣೆಯಲ್ಲೂ ಹೀಗೇ ಆಗಲಿದೆ&rsquo; ಎಂಬ ಅಭಿಲಾಷೆ ವ್ಯಕ್ತಪಡಿಸಿದರು. ಈ ಮೂಲಕ ತಾವೂ ಅಧಿಕಾರಕ್ಕೆ ಬರುವ ಪರೋಕ್ಷ ಆಸೆ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಅಣ್ಣಾಮಲೈ ಸಂಘಟನೆಯನ್ನು ಪ್ರಾರಂಭಿಸಿದ ನಂತರ 'We the Leaders' ಆಯೋಜಿಸುತ್ತಿರುವ ಮೊದಲ ಪ್ರಮುಖ ಸಮ್ಮೇಳನ ಇದಾಗಿದೆ. ಕಳೆದ ತಿಂಗಳು ಅವರು ಭಾರತೀಯ ಜನತಾ ಪಕ್ಷದಿಂದ ಹೊರಬಂದು ತಮ್ಮದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಯೋಜನೆಯನ್ನು ಪ್ರಕಟಿಸಿದರು. ತಮ್ಮ ರಾಜೀನಾಮೆಯ ನಂತರ, ಅಣ್ಣಾಮಲೈ ಹೊಸ ರಾಜಕೀಯ ಚಳುವಳಿಯನ್ನು ಘೋಷಿಸಿದ್ದರು, ಅದು ನಂತರ ಐದು ವರ್ಷಗಳಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷವಾಗಿ ವಿಕಸನಗೊಳ್ಳಲಿದೆ.&lt;/p&gt;&lt;img&gt;&lt;p&gt;ಭಾನುವಾರ ತಮ್ಮ ಭಾಷಣದಲ್ಲಿ ಅಣ್ಣಾಮಲೈ, 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 39 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಡಳಿತ ಬದಲಾವಣೆಯನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು. ಈ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ತನ್ನ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿದೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/k-annamalai-secular-outside-home-hindu-we-the-leaders-conference-tamil-nadu-san-6an0uyw"/>
        </item>
        <item>
            <title><![CDATA[ದಾಖಲೆಗಾಗಿ 6 ವರ್ಷದ ಮೊಮ್ಮಗಳಿಗೆ ಕಾರ್‌ ಕೊಟ್ಟ ಪೊಲೀಸ್‌, ಭಾರೀ ಜನಾಕ್ರೋಶ!]]></title>
            <link>https://kannada.asianetnews.com/india-news/hyderabad-cop-allows-6-year-old-granddaughter-drive-car-guinness-record-fir-san/articleshow-7p10gwo</link>
            <guid isPermaLink="true">https://kannada.asianetnews.com/india-news/hyderabad-cop-allows-6-year-old-granddaughter-drive-car-guinness-record-fir-san/articleshow-7p10gwo</guid>
            <pubDate>Mon, 13 Jul 2026 09:48:14 +0530</pubDate>
            <description><![CDATA[ಗಿನ್ನೆಸ್&zwnj; ದಾಖಲೆ ನಿರ್ಮಿಸುವ ಉದ್ದೇಶದಿಂದ ಹೈದರಾಬಾದ್&zwnj;ನ ಪೊಲೀಸ್ ಉಪ-ನಿರೀಕ್ಷಕರೊಬ್ಬರು ತಮ್ಮ 6 ವರ್ಷದ ಮೊಮ್ಮಗಳಿಗೆ ವಾಹನದಟ್ಟಣೆಯ ರಸ್ತೆಯಲ್ಲಿ ಕಾರು ಚಲಾಯಿಸಲು ಬಿಟ್ಟಿದ್ದಾರೆ. ಈ ಹುಚ್ಚಾಟಕ್ಕಾಗಿ ಅವರ ವಿರುದ್ಧ ಇತರರ ಜೀವಕ್ಕೆ ಅಪಾಯವನ್ನುಂಟುಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcv26stfg308nnbrg9pf10f,imgname-hydrabad-year-old-car-1783916206906.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್&zwnj; (ಜು.13):&lt;/strong&gt; ತಮ್ಮ 6 ವರ್ಷದ ಮೊಮ್ಮಗಳನ್ನು ಚಾಲಕರ ಸೀಟಿನಲ್ಲಿ ಕೂರಿಸಿದ ಪೊಲೀಸ್&zwnj; ಒಬ್ಬರು, ವಾಹನದಟ್ಟಣೆ ಇರುವ ನರಸಿಂಗಿಯಲ್ಲಿ ಗಂಧಮಗೂಡ&ndash;ಬೈರಗಿಗುಡ್ಡ ರಸ್ತೆಯಲ್ಲಿ ಡ್ರೈವ್&zwnj; ಮಾಡಲು ಬಿಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ವಿಚಾರಿಸಿದಾಗ, &lsquo;ವಿಶ್ವದ ಅತಿ ಕಿರಿಯ ಡ್ರೈವರ್&zwnj;&rsquo; ಎಂಬ ಗಿನ್ನೆಸ್&zwnj; ದಾಖಲೆ ನಿರ್ಮಿಸುವ ಉದ್ದೇಶದಿಂದ ಆಕೆಗೆ ತರಬೇತಿ ಕೊಡುತ್ತಿದ್ದುದಾಗಿ ಹೇಳಿದ್ದಾರೆ. ಅವರ ವಿರುದ್ಧ ದೂರು ದಾಖಲಾಗಿದೆ.&lt;/p&gt;&lt;p&gt;ಅಪ್ರಾಪ್ತ ಮೊಮ್ಮಗಳ ಕೈಗೆ ಸ್ಟೇರಿಂಗ್ ಕೊಟ್ಟು, ಆಕೆಯ ಪಕ್ಕದಲ್ಲಿ ಹೈದರಾಬಾದ್&zwnj;ನ ಉಪ-ನಿರೀಕ್ಷಕ ಪೂಜಾರಿ ತಿರುಪತಿ ಕುಳಿತು ಸಾಗುತ್ತಿದ್ದ ವಿಡಿಯೋ ಬೆಳಕಿಗೆ ಬಂದಿತ್ತು. ಅವರ ಈ ಹುಚ್ಚಾಟದ ಪರಿಣಾಮ ಕಾರಿನ ಹಿಂದಿದ್ದ ವಾಹನಗಳು ಸಾಗಲಾರದೆ ಒದ್ದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, &lsquo;ಇದು ಸ್ವಯಂಚಾಲಿತ ಕಾರು. ನನ್ನ ನಿಯಂತ್ರಣದಲ್ಲೇ ಇದೆ. ದಾಖಲೆ ನಿರ್ಮಿಸಲು ಆಕೆಗೆ ತರಬೇತಿ ನೀಡುತ್ತಿರುವೆ&rsquo; ಎಂದು ತಿರುಪತಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್&zwnj; 125(ಇತರರ ಜೀವಕ್ಕೆ ಅಪಾಯವನ್ನುಂಟುಮಾಡುವುದು)ಸೇರಿದಂತೆ ಹಲವು ಸೆಕ್ಷನ್&zwnj;ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;p&gt;ತಿರುಪತಿ ಅವರ ಹೆಸರಲ್ಲಿ ನೋಂದಣಿಯಾಗಿರುವ ಈ ಕಾರು 6 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು, ಇದರ ಮೇಲೆ 3,800 ರು. ದಂಡ ಬಾಕಿ ಇದೆ ಎನ್ನಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/hyderabad-cop-allows-6-year-old-granddaughter-drive-car-guinness-record-fir-san/articleshow-7p10gwo"/>
        </item>
        <item>
            <title><![CDATA[ಬದರೀನಾಥ ದೇಗುಲದಲ್ಲೂ ಹುಂಡಿ ಕಳವು ನಿಜ: ಎಸ್‌ಐಟಿ]]></title>
            <link>https://kannada.asianetnews.com/gallery/india-news/badrinath-temple-donation-theft-sit-investigation-report-pramod-nautiyal-bktc-san-w10sbyg</link>
            <guid isPermaLink="true">https://kannada.asianetnews.com/gallery/india-news/badrinath-temple-donation-theft-sit-investigation-report-pramod-nautiyal-bktc-san-w10sbyg</guid>
            <pubDate>Mon, 13 Jul 2026 07:46:56 +0530</pubDate>
            <description><![CDATA[&lt;p&gt;ಉತ್ತರಾಖಂಡದ ಬದರೀನಾಥ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಹುಂಡಿ ಕಳವು ಪ್ರಕರಣವನ್ನು ವಿಶೇಷ ತನಿಖಾ ತಂಡ (SIT) ದೃಢಪಡಿಸಿದೆ. ತನಿಖಾ ವರದಿಯನ್ನು ದೇವಾಲಯ ಸಮಿತಿಗೆ ಸಲ್ಲಿಸಲಾಗಿದ್ದು, ಆರೋಪಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpszjh7c95xvy5t0zh4mq83n,imgname-char-dham-yatra-2026-badrinath-temple-opening-date-registration-history-timings-travel-guide-uttarakhand-6-1776840951020.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರಾಖಂಡದ ಬದರೀನಾಥ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಹುಂಡಿ ಕಳವು ಪ್ರಕರಣವನ್ನು ವಿಶೇಷ ತನಿಖಾ ತಂಡ (SIT) ದೃಢಪಡಿಸಿದೆ. ತನಿಖಾ ವರದಿಯನ್ನು ದೇವಾಲಯ ಸಮಿತಿಗೆ ಸಲ್ಲಿಸಲಾಗಿದ್ದು, ಆರೋಪಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚಿಸಿದೆ.&lt;/p&gt;&lt;img&gt;&lt;p&gt;ಉತ್ತರಾಖಂಡದ ಪ್ರಸಿದ್ಧ ಬದರೀನಾಥ ದೇವಾಲಯದಲ್ಲೂ ಹುಂಡಿ ಕಳವು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್&zwnj;ಐಟಿ), ಅಕ್ರಮ ನಡೆದಿರುವುದು ನಿಜ ಎಂದು ಬಹಿರಂಗಪಡಿಸಿದೆ.&lt;/p&gt;&lt;img&gt;&lt;p&gt;ಇದಕ್ಕೆ ಸಂಬಂಧಿಸಿದ 18 ಪುಟಗಳ ವರದಿಯನ್ನು ಬದರೀನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಸಿಇಒಗೆ ಸಲ್ಲಿಸಿದೆ. ಉತ್ತರಾಖಂಡ ಸರ್ಕಾರವು ಬಿಕೆಟಿಸಿಯ ಸಿಇಒಗೆ ತನಿಖಾ ವರದಿಯಲ್ಲಿ ಹೆಸರಿಸಲಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ.&lt;/p&gt;&lt;img&gt;&lt;p&gt;ಬದರೀನಾಥ ಮಂದಿರದ ದೇಣಿಗೆಯನ್ನು ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ, ದೇವಾಲಯ ಸಮಿತಿ 4 ಸದಸ್ಯರನ್ನುಳ್ಳ ತನಿಖಾ ತಂಡವನ್ನು ರಚನೆ ಮಾಡಿತ್ತು. ಪ್ರಮುಖ ಆರೋಪಿಯಾದ, ಸಮಿತಿ ಅಧ್ಯಕ್ಷರ ಕಚೇರಿಯ ವೈಯಕ್ತಿಕ ಸಹಾಯಕ ಪ್ರಮೋದ್ ನೌಟಿಯಾಲ್&zwnj;ನನ್ನು ಜು.7ರಂದು ತಕ್ಷಣ ಅಮಾನತುಗೊಳಿಸಲಾಗಿತ್ತು.&lt;/p&gt;&lt;img&gt;&lt;p&gt;ಇದೀಗ ಎಸ್ಐಟಿ ತನಿಖೆ ಪೂರ್ಣಗೊಳಿಸಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಆರೋಪಿಯು ಹಣವನ್ನು ಅನುಮಾನಾಸ್ಪದವಾಗಿ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಭಕ್ತರ ಕಾಣಿಕೆ ಹಣ ಮತ್ತು ಇತರ ವಸ್ತುಗಳ ಕಳ್ಳತನ ಒಂದು ಬಾರಿ ಅಲ್ಲ, ಹಲವು ಬಾರಿ ನಡೆದಿದೆ ಎಂದು ಆರೋಪಿಸಿದೆ.&lt;/p&gt;&lt;img&gt;&lt;p&gt;ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಎಸ್&zwnj;ಐಟಿ ಹಲವು ಸಲಹೆಗಳನ್ನು ನೀಡಿದೆ. ಕಾಣಿಕೆ ಎಣಿಕೆ ಕೊಠಡಿಯಲ್ಲಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ದೇವಾಲಯದ ಪ್ರದಕ್ಷಿಣಾ ಮಾರ್ಗದಲ್ಲಿನ ಎಲ್ಲಾ ಮರೆಯ ಜಾಗಗಳನ್ನು ಸಿಸಿಟಿವಿ ವ್ಯಾಪ್ತಿಯಲ್ಲಿ ತರಬೇಕು ಎಂದು ಶಿಫಾರಸು ಮಾಡಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/india-news/badrinath-temple-donation-theft-sit-investigation-report-pramod-nautiyal-bktc-san-w10sbyg"/>
        </item>
        <item>
            <title><![CDATA[ಮೈಸೂರಿನ ತಂತ್ರ ಅಸ್ಸಾಂನಲ್ಲೂ ಪ್ರಯೋಗ: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡಿದ್ರೆ LED Screen ಮೇಲೆ ಪ್ರದರ್ಶನ!]]></title>
            <link>https://kannada.asianetnews.com/india-news/tinsukia-hall-of-shame-campaign-urinating-in-a-public-place-leads-to-display-on-an-led-screen-rav/articleshow-mn478s1</link>
            <guid isPermaLink="true">https://kannada.asianetnews.com/india-news/tinsukia-hall-of-shame-campaign-urinating-in-a-public-place-leads-to-display-on-an-led-screen-rav/articleshow-mn478s1</guid>
            <pubDate>Mon, 13 Jul 2026 07:10:19 +0530</pubDate>
            <description><![CDATA[&lt;p&gt;ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಮೈಸೂರಿನ ಕನ್ನಡಿ ತಂತ್ರದಂತೆ, ಅಸ್ಸಾಂನ ಟಿನ್ಸುಕಿಯಾ ಪುರಸಭೆಯು 'ಹಾಲ್&zwnj; ಆಫ್&zwnj; ಶೇಮ್&zwnj;' ಅಭಿಯಾನ ಆರಂಭಿಸಿದೆ. ಈ ಅಭಿಯಾನದಡಿ, ನಿಯಮ ಉಲ್ಲಂಘಿಸುವವರ ದೃಶ್ಯವನ್ನು ಸಿಸಿಟಿವಿಯಲ್ಲಿ ಸೆರೆಹಿಡಿದು, ಬೃಹತ್ ಎಲ್&zwnj;ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxchzvssskq83v350j2xyzm6,imgname-----------------------2026-07-13t070757.337-1783906692921.jpg" type="image/jpeg" height="390" width="690"/>
            <content:encoded><![CDATA[&lt;h2&gt;-ಮೈಸೂರಿನಲ್ಲಿ ಕನ್ನಡಿ ಅಳವಡಿಸಿದಂತೆ ಅಸ್ಸಾಂನಲ್ಲೂ ತಂತ್ರ&lt;/h2&gt;&lt;p&gt;&lt;strong&gt;ಗುವಾಹಟಿ (ಜು.13): &lt;/strong&gt;ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಮೈಸೂರಿನಲ್ಲಿ ಕನ್ನಡಿ ಅಳವಡಿಸುವ ವಿನೂತನ ಪ್ರಯತ್ನ ಮಾಡಲಾಗಿತ್ತು. ಇದೀಗ ಅಸ್ಸಾಂನಲ್ಲೂ ಇಂಥದ್ದೇ ತಂತ್ರದ ಮೊರೆ ಹೋಗಲಾಗಿದೆ&amp;nbsp;&lt;/p&gt;&lt;h3&gt;ಹಾಲ್ ಆಫ್ ಶೇಮ್ ಅಭಿಯಾನ.&lt;/h3&gt;&lt;p&gt;ಅಸ್ಸಾಂನ ಟಿನ್ಸುಕಿಯಾ ಪುರಸಭೆಯು &lsquo;ಹಾಲ್&zwnj; ಆಫ್&zwnj; ಶೇಮ್&zwnj;&rsquo; ಎಂಬ ವಿಶಿಷ್ಟ ಅಭಿಯಾನವನ್ನು ಆರಂಭಿಸಿದೆ. ಇದರ ಮೂಲಕ, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟೀವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾರಾದರೂ ರಸ್ತೆ ಬದಿ ಅಥವಾ ಇತರ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ, ಕಸ ಚೆಲ್ಲಿದರೆ ಆ ದೃಶ್ಯಗಳನ್ನು ಸಿಸಿಟೀವಿ ಸೆರೆಹಿಡಿಯುತ್ತದೆ. ನಂತರ ಅದನ್ನು ಬೀದಿಯಲ್ಲಿ ಅಳವಡಿಸಿದ ಬೃಹತ್&zwnj; ಎಲ್&zwnj;ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಪರದೆ ಮೇಲೆ ಅನಾವರಣವಾಗುವ ಭಯಕ್ಕಾದರೂ ಜನ ಇಂಥ ಕೆಲಸಗಳನ್ನು ಬಿಡಬಹುದು ಎಂಬುದು ಆಡಳಿತದ ಚಿಂತನೆ.&lt;/p&gt;&lt;p&gt;ಆದರೆ ಈ ಕ್ರಮಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕ ನಿಯಮಗಳನ್ನು ಉಲ್ಲಂಘಿಸುವವರಿಗೆ ಸೂಕ್ತ ಶಿಕ್ಷೆ ವಿಧಿಸುವ ಬದಲು ಈ ರೀತಿ ಮಾನ ಕಳೆಯುವುದು ಸರಿಯಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/tinsukia-hall-of-shame-campaign-urinating-in-a-public-place-leads-to-display-on-an-led-screen-rav/articleshow-mn478s1"/>
        </item>
        <item>
            <title><![CDATA[ಭಾರತದ ಮೊದಲ ಬುಲೆಟ್ ರೈಲಿನ ಮಹತ್ವದ ಅಪ್‌ಡೇಟ್ ನೀಡಿದ ಸಚಿವ, ಯಾವಾಗ ಸೇವೆ ಆರಂಭ?]]></title>
            <link>https://kannada.asianetnews.com/india-news/india-first-bullet-train-minister-shares-major-update-on-launch-timeline/articleshow-gkbu5u7</link>
            <guid isPermaLink="true">https://kannada.asianetnews.com/india-news/india-first-bullet-train-minister-shares-major-update-on-launch-timeline/articleshow-gkbu5u7</guid>
            <pubDate>Sun, 12 Jul 2026 21:57:35 +0530</pubDate>
            <description><![CDATA[&lt;p&gt;ಬಹುನಿರೀಕ್ಷಿತ ಹಾಗೂ ಭಾರತದ ಮೊದಲ ಬುಲೆಟ್ ರೈಲು ಓಡಾಟಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ಇದರ ನಡುವೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಅಪ್&zwnj;ಡೇಟ್ ನೀಡಿದ್ದಾರೆ. ಬುಲೆಟ್ ರೈಲು ಓಡಾಟ ಯಾವಾಗ ಸೇರಿದಂತೆ ಹಲವು ಮಾಹಿತಿ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kc8qaa77vwy91xb5hdwbhxrj,imgname-image-3fceee58-ab68-4b9f-831f-1c3b0e26f6f5-1765524449510.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್ (ಜು.12) &lt;/strong&gt;ಭಾರತದ ಬಹುನಿರೀಕ್ಷಿತ ಬುಲೆಟ್ ರೈಲು ಸದ್ದು ಮಾಡುತ್ತಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇದೀಗ ಭಾರತದ ಮೊದಲ ಬುಲೆಟ್ ರೈಲಿನ ಕುರಿತು ಹಲವು ಮಾಹಿತಿ ನೀಡಿದ್ದಾರೆ. ಬುಲೆಟ್ ರೈಲು ಓಡಾಟಕ್ಕೆ ಕಾಮಗಾರಿಗಳು ಭರದಿಂದ ಸಾಗಿದೆ. ಹಂತ ಹಂತವಾಗಿ ಬುಲೆಟ್ ರೈಲು ಕಾರ್ಯಾರಂಭಗೊಳ್ಳಲಿದೆ. ವಿಶೇಷ ಅಂದರೆ ಮುಂದಿನ ವರ್ಷವೇ ಅಂದರೆ 2027ರಲ್ಲಿ ಬುಲೆಟ್ ರೈಲು ಭಾರತದಲ್ಲಿ ಓಡಾಟ ಆರಂಭಿಸಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.&lt;/p&gt;&lt;h2&gt;ಮೊದಲ ಹಂತದಲ್ಲಿ ಸೂರತ್ ಬಿಲ್ಮೋರ ಬುಲೆಟ್ ರೈಲು&lt;/h2&gt;&lt;p&gt;ಹೈದರಾಬಾದ್&zwnj;ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರೈಲ್ವೇ ಸಚಿವ, ಮುಂಬೈ-ಅಹಮ್ಮದಾಬಾದ್ ನಡುವಿನ ದೇಶದ ಮೊದಲ ಬುಲೆಟ್ ರೈಲಿನ ಕಾಮಗಾರಿ ನಡೆಯುತ್ತಿದೆ. ರೈಲ್ವೇ ಟ್ರಾಕ್, ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿದೆ. ಕೆಲ ಹಂತದಲ್ಲಿ ಬುಲೆಟ್ ರೈಲಿನ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ವರ್ಷದ ವೇಳೆ ಸೂರತ್-ಬಿಲ್ಮೋರ್ ಸೆಕ್ಷನ್ ಕಾಮಗಾರಿ ಪೂರ್ಣಗೊಂಡು ಬುಲೆಟ್ ರೈಲು ಓಡಾಟ ಆರಂಭಿಸಲಿದೆ. ಹಂತ ಹಂತದ ಕಾಮಾಗಾರಿ ಪೂರ್ಣಗೊಂಡಂತೆ ಬುಲೆಟ್ ರೈಲು ಸೇವೆ ವಿಸ್ತರಣೆಯಾಗುತ್ತಾ ಸಾಗಲಿದೆ. ಈ ಮೂಲಕ ಮುಂಬೈ-ಅಹಮ್ಮಬಾದ್ ಬುಲೆಟ್ ರೈಲು ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ.&lt;/p&gt;&lt;h2&gt;ಹಲವು ಭಾಗದಲ್ಲಿ ಬುಲೆಟ್ ರೈಲು&lt;/h2&gt;&lt;p&gt;ದೇಶದಲ್ಲಿ ಬುಲೆಟ್ ರೈಲು ಕೇವಲ ಮುಂಬೈ-ಅಹಮ್ಮದಾಬಾದ್ ಮಾತ್ರವಲ್ಲ, ಇತರ ಭಾಗಗಳಿಗೂ ವಿಸ್ತರಣೆಯಾಗಲಿದೆ ಎಂದಿದ್ದಾರೆ. ಮೊದಲ ಬುಲೆಟ್ ರೈಲು ಯೋಜನೆಯ ಮೊದಲ ಹಂತ ಉದ್ಘಾಟನೆಗೊಳ್ಳುತ್ತಿದ್ದಂತೆ ಹೈದರಾಬಾದ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಬುಲೆಟ್ ರೈಲು ಹಾಗೂ ರೈಲು ಸಂಪರ್ಕ ಯೋಜನೆಗಳು ವೇಗ ಪಡೆದುಕೊಳ್ಳಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.&lt;/p&gt;&lt;p&gt;ರೈಲ್ವೇ ಸೇವೆಗಳನ್ನು ನಿರಂತರವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ರೈಲು ನಿಲ್ದಾಣ, ರೈಲು ಕೋಚ್, ಟಿಕೆಟ್ ಬುಕಿಂಗ್, ಪ್ರಯಾಣ ಸೇರಿದಂತೆ ಪ್ರಯಾಣಿಕರಿಗೆ ನೀಡುವ ಒಟ್ಟಾರೆ ಸೇವೆಗಳ ಉನ್ನತೀಕರಣ ನಡೆಯುತ್ತಿದೆ. ಕೆಲವೇ ವರ್ಷಗಳಲ್ಲಿ ಭಾರತೀಯ ರೈಲು ಮಹತ್ತರ ಬದಲಾವಣೆಯಾಗಲಿದೆ. ಈಗಾಗಲೇ ಗಣನೀಯ ಪ್ರಮಾಣದ ಬದಲಾವಣೆಗಳು ಆಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.&lt;/p&gt;&lt;h2&gt;ಮೂರು ಬುಲೆಟ್ ರೈಲು ಯೋಜನೆ&lt;/h2&gt;&lt;p&gt;ಇದೇ ವೇಳೆ ಮೂರು ಬುಲೆಟ್ ರೈಲು ಯೋಜನೆ ಕುರಿತು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಹೈದರಾಬಾದ್ ಬೆಂಗಳೂರು, ಪುಣೆ-ಹೈದರಾಬಾದ್ ಹಾಗೂ ಹೈದರಾಬಾದ್ ಚೆನ್ನೈ ಬುಲೆಟ್ ರೈಲು ಯೋಜನೆ ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/india-first-bullet-train-minister-shares-major-update-on-launch-timeline/articleshow-gkbu5u7"/>
        </item>
        <item>
            <title><![CDATA[S Janaki - Trisha: ನಟಿ ತ್ರಿಷಾ ಜೊತೆ ಎಸ್ ಜಾನಕಿಗೆ ಸ್ಪೆಷಲ್ ನಂಟು; ಆ '96'ರಲ್ಲಿದೆ ಅಪರೂಪದ ನೆನಪು!]]></title>
            <link>https://kannada.asianetnews.com/cine-world/s-janaki-acted-in-c-premkumar-directional-trisha-krishanan-and-vijay-sethupathi-starreer-movie-96/articleshow-tc6yw1d</link>
            <guid isPermaLink="true">https://kannada.asianetnews.com/cine-world/s-janaki-acted-in-c-premkumar-directional-trisha-krishanan-and-vijay-sethupathi-starreer-movie-96/articleshow-tc6yw1d</guid>
            <pubDate>Sun, 12 Jul 2026 21:09:43 +0530</pubDate>
            <description><![CDATA[&lt;p&gt;ಜಾನಕಮ್ಮನ ಧ್ವನಿ ಹೇಗೆ ಭಾಷೆಯ ಗಡಿ ದಾಟಿದೆಯೋ, ಹಾಗೆಯೇ ಅವರ ಆ ಒಂದು ಅಪರೂಪದ ನಟನೆಯ ದೃಶ್ಯವು ಕೂಡ ಅವರ ಅಭಿಮಾನಿಗಳ ಪಾಲಿಗೆ ಎಂದಿಗೂ ಮರೆಯಲಾಗದ &lsquo;ಮಾಸ್ಟರ್ ಪೀಸ್&rsquo;. ಜಾನಕಮ್ಮ, ನೀವು ಹಾಡಿನ ಮೂಲಕ ಸದಾ ನಮ್ಮ ಜೊತೆ ಇರುತ್ತೀರಿ. ಆ ಚಿತ್ರದ ಆ ದೃಶ್ಯದ ಮೂಲಕವೂ ಕೂಡ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxbfgay3xs7vpxjkxfqajedy,imgname-s-janaki-trisha-krishanan-1783870532547.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಾನಕಮ್ಮನ ನಟನೆಯ ಆ ಒಂದು &lsquo;ಅಪರೂಪದ ಸೀನ್&rsquo;:&lt;/strong&gt;&lt;/p&gt;&lt;p&gt;ಭಾರತೀಯ ಸಂಗೀತ ಲೋಕದ ಎವರ್ ಗ್ರೀನ್ ಗಾನ ಕೋಗಿಲೆ, ಸ್ವರ ಸಾಮ್ರಾಜ್ಞಿ ಎಸ್&zwnj; ಜಾನಕಿ (S. Janaki) ಅಮ್ಮ ಎಂದರೆ ನೆನಪಾಗುವುದು ಆ ಮಧುರ ಕಂಠ, ಸಾವಿರಾರು ಮೆಲೋಡಿ ಹಾಡುಗಳು. ಸುಮಾರು ಆರು ದಶಕಗಳ ಕಾಲ ಮೈಕ್ ಮುಂದೆ ನಿಂತು 48 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಜೀವ ತುಂಬಿದ ಈ ದಂತಕಥೆ, ಕ್ಯಾಮೆರಾ ಮುಂದೆ ನಟಿಸಲು ಮಾತ್ರ ಯಾವತ್ತೂ ಒಪ್ಪಿರಲಿಲ್ಲ. ಆದರೆ, ಯಾರೂ ಊಹಿಸದ ಒಂದು ಅದ್ಭುತ 2018ರಲ್ಲಿ ಸಂಭವಿಸಿತ್ತು. ಅದುವೇ ತಮಿಳಿನ ಬ್ಲಾಕ್&zwnj;ಬಸ್ಟರ್ ಸಿನಿಮಾ &lsquo;96&rsquo; ಚಿತ್ರದಲ್ಲಿ ಅವರು ಮಾಡಿದ ಅತಿಥಿ ಪಾತ್ರ!&lt;/p&gt;&lt;p&gt;ನಟನೆಗೆ ಜಾನಕಮ್ಮ &lsquo;ನೋ&rsquo; ಅಂದಿದ್ದೇಕೆ?&lt;/p&gt;&lt;p&gt;ಜಾನಕಮ್ಮನವರ ವೃತ್ತಿಜೀವನದುದ್ದಕ್ಕೂ ನಟನೆಯ ಅನೇಕ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಆದರೆ, &quot;ನಾನು ಹಾಡಲಿಕ್ಕಾಗಿಯೇ ಹುಟ್ಟಿದವಳು, ನಟನೆ ನನಗಲ್ಲ&quot; ಎಂದು ಸವಿನಯವಾಗಿ ನಿರಾಕರಿಸುತ್ತಿದ್ದರು. ಆದರೆ ನಿರ್ದೇಶಕ ಸಿ. ಪ್ರೇಮ್ ಕುಮಾರ್ ಅವರಿಗೆ ತಮ್ಮ &lsquo;96&rsquo; ಚಿತ್ರದಲ್ಲಿ ಜಾನಕಿ ಅಮ್ಮನನ್ನು ತೋರಿಸಲೇಬೇಕು ಎಂಬ ಹಠವಿತ್ತು. ಅದಕ್ಕೆ ಕಾರಣವೂ ಇತ್ತು. ಚಿತ್ರದಲ್ಲಿ ನಟಿ ತ್ರಿಶಾ ಅವರ ಪಾತ್ರದ ಹೆಸರೇ &lsquo;ಎಸ್. ಜಾನಕಿ ದೇವಿ&rsquo; (ಜಾನು). ಆ ಪಾತ್ರವು ಜಾನಕಮ್ಮನವರ ಪರಮ ಭಕ್ತೆ, ಅಭಿಮಾನಿಯಾಗಿರುತ್ತದೆ ಮತ್ತು ಕೇವಲ ಜಾನಕಮ್ಮನ ಹಾಡುಗಳನ್ನು ಮಾತ್ರ ಹಾಡುತ್ತಿರುತ್ತದೆ.&lt;/p&gt;&lt;h2&gt;ಅಂದು ನಡೆದ ಆ &lsquo;ಸರ್ಪ್ರೈಸ್&rsquo; ಶೂಟಿಂಗ್:&lt;/h2&gt;&lt;p&gt;ಸಿನಿಮಾದ ಕಥೆಯ ಪ್ರಕಾರ, ರಾಮ್ (ವಿಜಯ್ ಸೇತುಪತಿ) ಮತ್ತು ಜಾನು (ತ್ರಿಶಾ) ಇಬ್ಬರೂ ಎಸ್. ಜಾನಕಿ ಅವರ ಮನೆಯ ಮುಂದೆ ನಿಂತು ಫೋಟೋ ತೆಗೆದುಕೊಳ್ಳುತ್ತಿರುತ್ತಾರೆ. ಅಷ್ಟರಲ್ಲಿ ಜಾನಕಿ ಅಮ್ಮ ಕಾರಿನಲ್ಲಿ ಅಲ್ಲಿಗೆ ಆಗಮಿಸುತ್ತಾರೆ. ಜಾನು ತನ್ನ ದೊಡ್ಡ ಅಭಿಮಾನಿ ಎಂದು ತಿಳಿದಾಗ, ಜಾನಕಮ್ಮ ಅತ್ಯಂತ ಪ್ರೀತಿಯಿಂದ ಅವರಿಬ್ಬರನ್ನು ತಮ್ಮ ಮನೆಗೆ ಕರೆಯುತ್ತಾರೆ. ಮನೆಯೊಳಗೆ ರಾಮ್ ಮತ್ತು ಜಾನು ಜೊತೆ ಜಾನಕಮ್ಮ ಕುಳಿತು ಹರಟೆ ಹೊಡೆಯುವ, ನಗುನಗುತ್ತಾ ಸಮಯ ಕಳೆಯುವ ಈ ದೃಶ್ಯ ಚಿತ್ರದ ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು.&lt;/p&gt;&lt;p&gt;&lsquo;96&rsquo; ಚಿತ್ರದಲ್ಲಿ ಮಿಸ್ ಆಯ್ತು, ಯೂಟ್ಯೂಬ್&zwnj;ನಲ್ಲಿ ಹಿಟ್ ಆಯ್ತು!&lt;/p&gt;&lt;p&gt;ಚಿತ್ರದ ಪ್ರಮುಖ ಆಕರ್ಷಣೆಯಾಗಬೇಕಿದ್ದ ಈ ದೃಶ್ಯವನ್ನು ಅಂತಿಮ ಎಡಿಟಿಂಗ್ ಸಮಯದಲ್ಲಿ &lsquo;ಸಿನಿಮಾದ ವೇಗ&rsquo;ಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಕತ್ತರಿಸಲಾಗಿತ್ತು. ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳು ಈ ದೃಶ್ಯವನ್ನು ನೋಡಲಾಗದೆ ನಿರಾಸೆ ಅನುಭವಿಸಿದ್ದರು, ಚಿತ್ರತಂಡವನ್ನು ತರಾಟೆಗೆ ತೆಗದುಕೊಂಡಿದ್ದರು. ಆದರೆ, ನಂತರ ಚಿತ್ರತಂಡ ಈ &lsquo;ಡಿಲೀಟೆಡ್ ಸೀನ್&rsquo; (Deleted Scene) ಅನ್ನು ಯೂಟ್ಯೂಬ್&zwnj;ನಲ್ಲಿ ಬಿಡುಗಡೆ ಮಾಡಿತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದು ವೈರಲ್ ಆಯಿತು. ಬೆಳ್ಳಿತೆರೆಯ ಮೇಲೆ ಮೊದಲ ಬಾರಿಗೆ ಜಾನಕಿ ಅಮ್ಮನವರನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದ್ದರು.&lt;/p&gt;&lt;h3&gt;ಸಂಗೀತದ ಧ್ರುವತಾರೆ ಅಮರ:&lt;/h3&gt;&lt;p&gt;2017ರಲ್ಲಿ ಹಿನ್ನೆಲೆ ಗಾಯನಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದ ಜಾನಕಮ್ಮ, ನಂತರದ ದಿನಗಳಲ್ಲಿ ಮೈಸೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇತ್ತೀಚೆಗೆ ಅವರು ನಮ್ಮನ್ನಗಲಿದ್ದರೂ, &lsquo;96&rsquo; ಸಿನಿಮಾದ ಆ ಒಂದು ಕಿರು ದೃಶ್ಯದಲ್ಲಿ ಅವರು ನೀಡಿದ ನಗು ಮತ್ತು ಅವರು ಹಾಡಿದ ಸಾವಿರಾರು ಹಾಡುಗಳು ಎಂದಿಗೂ ಮಾಸದ ನೆನಪುಗಳು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಟಿಸದೆಯೇ &lsquo;ನಟಿ&rsquo;ಯಾಗಿಯೂ ಮಿಂಚಿದ ಏಕೈಕ ಗಾಯಕಿ ಎಂದರೆ ಅದು ನಮ್ಮ ಜಾನಕಿ ಅಮ್ಮ ಮಾತ್ರ.&lt;/p&gt;&lt;p&gt;ಜಾನಕಮ್ಮನ ಧ್ವನಿ ಹೇಗೆ ಭಾಷೆಯ ಗಡಿ ದಾಟಿದೆಯೋ, ಹಾಗೆಯೇ ಅವರ ಆ ಒಂದು ಅಪರೂಪದ ನಟನೆಯ ದೃಶ್ಯವು ಕೂಡ ಅವರ ಅಭಿಮಾನಿಗಳ ಪಾಲಿಗೆ ಎಂದಿಗೂ ಮರೆಯಲಾಗದ &lsquo;ಮಾಸ್ಟರ್ ಪೀಸ್&rsquo;. ಜಾನಕಮ್ಮ, ನೀವು ಹಾಡಿನ ಮೂಲಕ ಸದಾ ನಮ್ಮ ಜೊತೆ ಇರುತ್ತೀರಿ. ಆ ಚಿತ್ರದ ಆ ದೃಶ್ಯದ ಮೂಲಕವೂ ಕೂಡ ಯಾವತ್ತೂ ಜೀವಂತವಾಗಿ ಇರುತ್ತೀರಿ!&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/s-janaki-acted-in-c-premkumar-directional-trisha-krishanan-and-vijay-sethupathi-starreer-movie-96/articleshow-tc6yw1d"/>
        </item>
        <item>
            <title><![CDATA[S Janaki: ಅಜ್ಜಿ ಎಸ್ ಜಾನಕಿಗೆ ಮೊಮ್ಮಗಳು ಅಪ್ಸರಾ ಹೇಳಿದ ಕೊನೆಯ ವಿದಾಯ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು]]></title>
            <link>https://kannada.asianetnews.com/cine-world/granddaughter-apsara-lit-the-funeral-pyre-of-late-s-janaki-after-paying-her-final-respects-with-a-kiss-on-the-forehead/articleshow-qvi8017</link>
            <guid isPermaLink="true">https://kannada.asianetnews.com/cine-world/granddaughter-apsara-lit-the-funeral-pyre-of-late-s-janaki-after-paying-her-final-respects-with-a-kiss-on-the-forehead/articleshow-qvi8017</guid>
            <pubDate>Sun, 12 Jul 2026 20:15:01 +0530</pubDate>
            <description><![CDATA[&lt;p&gt;ದೇಹಕ್ಕೆ ಸಾವಿರಬಹುದು, ಆದರೆ ದೈವದತ್ತವಾದ ಆ ಧ್ವನಿಗೆ ಸಾವಿಲ್ಲ. ಕಣಿಯನಹುಂಡಿಯ ಮಣ್ಣಿನಲ್ಲಿ ಜಾನಕಮ್ಮ ಲೀನವಾಗಿದ್ದರೂ, ಅವರು ಹಾಡಿದ &lsquo;ಬಾನಿಗೊಂದು ಎಲ್ಲೆ ಎಲ್ಲಿದೆ&rsquo;, &lsquo;ಗಗನವು ಎಲ್ಲೋ ಭೂಮಿಯು ಎಲ್ಲೋ&rsquo; ಸೇರಿದಂತೆ ಸಾವಿರಾರು ಹಾಡುಗಳು ಗಾಳಿಯಲ್ಲಿ ತೇಲಿಬರುತ್ತಲೇ ಇರುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxbc0jk8dbs2m1sawtgvs7s4,imgname-janaki-last-moments-1783866870376.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಾನ ಕೋಗಿಲೆಯ ಮೌನ ಪಯಣ: ಮೊಮ್ಮಗಳ ಪ್ರೀತಿಯ ಮುತ್ತು, ಮೈಸೂರಿನ ಮಣ್ಣಿನಲ್ಲಿ ಲೀನವಾದ &lsquo;ಸ್ವರ ಸರಸ್ವತಿ&rsquo;!&lt;/strong&gt;&lt;/p&gt;&lt;p&gt;ಸಂಗೀತದ ಆಕಾಶದಲ್ಲಿ ಏಳು ದಶಕಗಳ ಕಾಲ ಧ್ರುವತಾರೆಯಂತೆ ಹೊಳೆದು, ಕೋಟ್ಯಂತರ ಹೃದಯಗಳನ್ನು ತನ್ನ ಕಂಠಸಿರಿಯಿಂದ ತಣಿಸಿದ್ದ &lsquo;ಗಾನ ಕೋಗಿಲೆ&rsquo; ಎಸ್&zwnj; ಜಾನಕಿ (S Janaki) ಅಮ್ಮ ಇನ್ನು ನೆನಪು ಮಾತ್ರ. 88 ವರ್ಷಗಳ ಸುದೀರ್ಘ ಮತ್ತು ಸಾರ್ಥಕ ಬದುಕನ್ನು ನಡೆಸಿದ ಈ ಸ್ವರ ಸಾಮ್ರಾಜ್ಞಿ, ಜುಲೈ 11ರಂದು ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿಯೊಂದಿಗೆ ಭಾರತೀಯ ಸಂಗೀತ ಲೋಕದ ಒಂದು ಸುವರ್ಣ ಯುಗ ಅಂತ್ಯಗೊಂಡಿದೆ.&lt;/p&gt;&lt;p&gt;ಕಣ್ಣೀರು ತರಿಸಿದ ಮೊಮ್ಮಗಳ ಅಂತಿಮ ವಿದಾಯ:&lt;/p&gt;&lt;p&gt;ಜಾನಕಮ್ಮನವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಕಂಡುಬಂದ ಒಂದು ದೃಶ್ಯ ಮಾತ್ರ ಕಲ್ಲೆದೆಯವರನ್ನೂ ಕರಗಿಸುವಂತಿತ್ತು. ಮೈಸೂರಿನ ಕಣಿಯನಹುಂಡಿ ತೋಟದಲ್ಲಿ ನಡೆದ ವಿಧಿವಿಧಾನಗಳ ವೇಳೆ, ಜಾನಕಿ ಅವರ ಪ್ರೀತಿಯ ಮೊಮ್ಮಗಳು ಅಪ್ಸರಾ (Apsara) ತನ್ನ ಅಜ್ಜಿಯ ಹಣೆಗೆ ಮುತ್ತಿಟ್ಟು, ಬಿಕ್ಕಿ ಬಿಕ್ಕಿ ಅಳುತ್ತಾ ಬೀಳ್ಕೊಟ್ಟ ಕ್ಷಣ ಅಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. &quot;ಅಜ್ಜಿ ನೀವು ಹಾಡಿನ ಮೂಲಕ ಸದಾ ನನ್ನ ಜೊತೆ ಇರುತ್ತೀರಿ&quot; ಎಂಬಂತೆ ಅಪ್ಸರಾ ನೀಡಿದ ಆ ಅಂತಿಮ ಚುಂಬನ, ಅಜ್ಜಿ-ಮೊಮ್ಮಗಳ ನಡುವಿನ ಅಪಾರ ಪ್ರೀತಿಗೆ ಸಾಕ್ಷಿಯಾಗಿತ್ತು. ಇನ್ನೊಬ್ಬರು ಮಗಳು ವರ್ಷಾ ಸಹ ಹಾಜರಿದ್ದು ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.&lt;/p&gt;&lt;h2&gt;ಸ್ವಂತ ತೋಟದಲ್ಲೇ ಅಂತ್ಯಕ್ರಿಯೆ: ನೆರವೇರಿದ ಕೊನೆಯ ಆಸೆ&lt;/h2&gt;&lt;p&gt;ಜಾನಕಮ್ಮನವರಿಗೆ ಮೈಸೂರು ಮತ್ತು ಕನ್ನಡ ನಾಡಿನ ಮೇಲೆ ಎಲ್ಲಿಲ್ಲದ ಪ್ರೀತಿ. ನಾಲ್ಕು ವರ್ಷಗಳ ಹಿಂದೆ ಅವರು ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ರಸ್ತೆಯ ಕಣಿಯನಹುಂಡಿ ಬಳಿ ಒಂದು ಸುಂದರವಾದ ತೋಟದ ಜಮೀನನ್ನು ಖರೀದಿಸಿದ್ದರು. &quot;ನಾನು ಮಣ್ಣಾಗುವುದಿದ್ದರೆ ಇದೇ ಜಾಗದಲ್ಲಿ ಮಣ್ಣಾಗಬೇಕು&quot; ಎಂಬುದು ಅವರ ಕೊನೆಯ ಆಸೆಯಾಗಿತ್ತು. ಅವರ ಇಚ್ಛೆಯಂತೆಯೇ, ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಸಕಲ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕರ್ನಾಟಕ ಸರ್ಕಾರದ ಪರವಾಗಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಮಹಾನ್ ಚೇತನ ಎಸ್ ಜಾನಕಿಯವರಿಗೆ ವಿದಾಯ ಹೇಳಿದರು.&lt;/p&gt;&lt;p&gt;ಕನ್ನಡದ ಮೇಲಿನ ಆ &lsquo;ಅನನ್ಯ&rsquo; ಪ್ರೀತಿ:&lt;/p&gt;&lt;p&gt;ಭಾರತದ ಸುಮಾರು 22ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಿನ್ನಿಸ್ ದಾಖಲೆ ಬರೆದಿದ್ದರೂ, ಜಾನಕಮ್ಮನವರಿಗೆ ಕನ್ನಡ ಚಿತ್ರರಂಗದ ಮೇಲೆ ವಿಶೇಷ ಮಮಕಾರವಿತ್ತು. ಅವರು ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದು ನಮ್ಮ ಹೆಮ್ಮೆಯ ಕನ್ನಡ ಭಾಷೆಯಲ್ಲೇ ಎಂಬುದು ವಿಶೇಷ. ಡಾ. ರಾಜ್&zwnj;ಕುಮಾರ್ ಜೊತೆಗಿನ ಅವರ ಜುಗಲ್ಬಂದಿ ಇಂದಿಗೂ ಕನ್ನಡಿಗರ ಮನೆಮನಗಳಲ್ಲಿ ಹಸಿರಾಗಿದೆ. ಎಸ್&zwnj;ಪಿಬಿ-ಎಸ್&zwnj; ಜಾನಕಿ ಅವರಿಬ್ಬರ ಜೋಡಿಯ ಹಾಡಂತೂ ಸಂಗೀತ ಪ್ರೇಮಿಗಳಿಗೆ ಹಬ್ಬ.&lt;/p&gt;&lt;h3&gt;ಹರಿದುಬಂದ ಅಭಿಮಾನಿ ಸಾಗರ:&lt;/h3&gt;&lt;p&gt;ಜಾನಕಮ್ಮ ಕೇವಲ ಒಬ್ಬ ಗಾಯಕಿಯಾಗಿರಲಿಲ್ಲ, ಚಿತ್ರರಂಗದ ಪ್ರತಿಯೊಬ್ಬರಿಗೂ ಅವರು &lsquo;ಅಮ್ಮ&rsquo;ನಾಗಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕಣಿಯನಹುಂಡಿ ಫಾರ್ಮ್ ಹೌಸ್&zwnj;ನತ್ತ ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಚಿತ್ರರಂಗದ ಖ್ಯಾತ ನಟ-ನಟಿಯರು, ಗಾಯಕರು ಮತ್ತು ರಾಜಕೀಯ ಗಣ್ಯರು ಸರತಿ ಸಾಲಿನಲ್ಲಿ ನಿಂತು ಅಗಲಿರುವ ತಮ್ಮ ಅಚ್ಚುಮೆಚ್ಚಿನ ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು.&lt;/p&gt;&lt;p&gt;ದೇಹಕ್ಕೆ ಸಾವಿರಬಹುದು, ಆದರೆ ದೈವದತ್ತವಾದ ಆ ಧ್ವನಿಗೆ ಸಾವಿಲ್ಲ. ಕಣಿಯನಹುಂಡಿಯ ಮಣ್ಣಿನಲ್ಲಿ ಜಾನಕಮ್ಮ ಲೀನವಾಗಿದ್ದರೂ, ಅವರು ಹಾಡಿದ &lsquo;ಬಾನಿಗೊಂದು ಎಲ್ಲೆ ಎಲ್ಲಿದೆ&rsquo;, &lsquo;ಗಗನವು ಎಲ್ಲೋ ಭೂಮಿಯು ಎಲ್ಲೋ&rsquo; ಸೇರಿದಂತೆ ಸಾವಿರಾರು ಹಾಡುಗಳು ಗಾಳಿಯಲ್ಲಿ ತೇಲಿಬರುತ್ತಲೇ ಇರುತ್ತವೆ. ಈ ಜಗತ್ತು ಇರುವವರೆಗೂ ಎಸ್ ಜಾನಕಿ ಹಾಡುಗಳ ಮೂಲಕ ನಮ್ಮೆಲ್ಲರ ನಡುವೆಯೇ ಇರುತ್ತಾರೆ. ಸ್ವರ ಲೋಕದ ಈ ಧ್ರುವತಾರೆಗೆ ಕೋಟ್ಯಾಂತರ ಅಭಿಮಾನಿಗಳಿಂದ ಕೋಟಿ ಕೋಟಿ ನಮನಗಳು ಸಲ್ಲುತ್ತಿವೆ.&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/granddaughter-apsara-lit-the-funeral-pyre-of-late-s-janaki-after-paying-her-final-respects-with-a-kiss-on-the-forehead/articleshow-qvi8017"/>
        </item>
        <item>
            <title><![CDATA[1 ಮದುವೆ ಮಾಡೋದೇ ಕಷ್ಟ; ಒಂದೇ ದಿನ ತನ್ನ 14 ಗಂಡು ಮಕ್ಕಳ ಮದುವೆ ಮಾಡಿದ ರೈತ; Video Viral]]></title>
            <link>https://kannada.asianetnews.com/life/a-farmer-from-satna-madhya-pradesh-arrange-14-sons-wedding-in-same-day/articleshow-0c6ody9</link>
            <guid isPermaLink="true">https://kannada.asianetnews.com/life/a-farmer-from-satna-madhya-pradesh-arrange-14-sons-wedding-in-same-day/articleshow-0c6ody9</guid>
            <pubDate>Sun, 12 Jul 2026 18:56:46 +0530</pubDate>
            <description><![CDATA[&lt;p&gt;Madhya Pradesh farmer 14 sons marriage: ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಲಕ್ಷಾಂತರ ರೂಪಾಯಿ ಖರ್ಚು ಬೇಡುವ ಒಂದು ದುಬಾರಿ ಸಂಭ್ರಮವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರೈತರೊಬ್ಬರು ಕೈಗೊಂಡ ನಿರ್ಧಾರ ಇಡೀ ದೇಶದ ಗಮನ ಸೆಳೆದಿದೆ. ತಮ್ಮ ಎಲ್ಲಾ 14 ಗಂಡು ಮಕ್ಕಳ ಮದುವೆಯನ್ನು ಒಂದೇ ಮುಹೂರ್ತದಲ್ಲಿ, ಒಂದೇ ವೇದಿಕೆಯಲ್ಲಿ ನೆರವೇರಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxb834dzn9gvxfnc195vhvp6,imgname-new-project--24--1783862759858.jpg" type="image/jpeg" height="390" width="690"/>
            <content:encoded><![CDATA[&lt;p&gt;ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮದುವೆ ವೆಚ್ಚಗಳಿಗೆ ಹೆದರಿ, ಆರ್ಥಿಕವಾಗಿ ಬುದ್ಧಿವಂತಿಕೆಯ ನಿರ್ಧಾರ ಕೈಗೊಂಡಿರುವುದಾಗಿ ಈ ರೈತ ಹೇಳಿಕೊಂಡಿದ್ದಾರೆ. ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ಅದ್ಧೂರಿಯಾಗಿ ಹೊರಟ ಈ ವಿಶಿಷ್ಟ ವರರ ಮೆರವಣಿಗೆಯ ವಿಡಿಯೋಗಳು ನೆಟ್ಟಿಗರನ್ನು ಬೆರಗುಗೊಳಿಸಿವೆ.&lt;/p&gt;&lt;h2&gt;ರೈತನ ಲೆಕ್ಕಾಚಾರ: ಇದು ಮಾದರಿ ಆರ್ಥಿಕ ಜಾಣ್ಮೆ!&lt;/h2&gt;&lt;p&gt;ಹೆಚ್ಚುತ್ತಿರುವ ಹಣದುಬ್ಬರ ಮತ್ತು ಮದುವೆ ಆಡಂಬರಗಳ ನಡುವೆ ಈ ರೈತನ ನಡೆ ಹಲವರಿಗೆ ಸ್ಫೂರ್ತಿಯಾಗಿದೆ. ಈ ನಿರ್ಧಾರದ ಪರವಾಗಿ ಸಾರ್ವಜನಿಕರು ಹಲವು ಸಕಾರಾತ್ಮಕ ಅಂಶಗಳನ್ನು ಗುರುತಿಸಿದ್ದಾರೆ:&lt;/p&gt;&lt;h2&gt;ಬೃಹತ್ ಉಳಿತಾಯ&lt;/h2&gt;&lt;p&gt;ಪ್ರತಿ ಮದುವೆಗೆ ಪ್ರತ್ಯೇಕವಾಗಿ ಮಂಟಪ, ಊಟದ ವ್ಯವಸ್ಥೆ, ಬ್ಯಾಂಡ್ ಮತ್ತು ಸಾರಿಗೆಗೆ ಖರ್ಚು ಮಾಡಿದ್ದರೆ ಈ ಕುಟುಂಬ ಸಾಲದ ಸುಳಿಗೆ ಸಿಲುಕುತ್ತಿತ್ತು. ಒಂದೇ ಬಾರಿಗೆ ಎಲ್ಲವನ್ನೂ ಮುಗಿಸಿರುವುದರಿಂದ ಲಕ್ಷಾಂತರ ರೂಪಾಯಿ ಉಳಿತಾಯವಾಗಿದೆ.&lt;/p&gt;&lt;p&gt;ಸಮಯ ಮತ್ತು ಶ್ರಮದ ಉಳಿತಾಯ: 14 ಪ್ರತ್ಯೇಕ ಮದುವೆಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ. ಕುಟುಂಬಸ್ಥರು ಪದೇ ಪದೇ ರಜೆ ಹಾಕಿ, ಸಂಬಂಧಿಕರನ್ನು ಆಹ್ವಾನಿಸುವ ದೊಡ್ಡ ಕಸರತ್ತಿನಿಂದ ಪಾರಾಗಿದ್ದಾರೆ.&lt;/p&gt;&lt;h2&gt;ಆಡಂಬರಕ್ಕೆ ಬ್ರೇಕ್: ಇಂದಿನ ದಿನಗಳಲ್ಲಿ ಮದುವೆ ಕೇವಲ ಪ್ರತಿಷ್ಠೆಯ ಪ್ರದರ್ಶನವಾಗಿದೆ. ಆದರೆ, ಅತ್ಯಂತ ಪ್ರಾಯೋಗಿಕವಾಗಿ ಯೋಚಿಸಿ ಈ ಮದುವೆ ಮಾಡಿರುವುದು ಮಧ್ಯಮ ವರ್ಗದವರಿಗೆ ಒಂದು ಉತ್ತಮ ಸಂದೇಶ.&lt;/h2&gt;&lt;h2&gt;ನೆಟ್ಟಿಗರ ಚರ್ಚೆ: ಇದು ನಿಜಕ್ಕೂ ನಂಬಲರ್ಹವೇ?&lt;/h2&gt;&lt;p&gt;ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ದೊಡ್ಡ ಚರ್ಚೆಯೇ ಶುರುವಾಗಿದೆ. ಕೆಲವರು ಇದೊಂದು &quot;ಅದ್ಭುತ ಐಡಿಯಾ&quot; ಎಂದು ಕೊಂಡಾಡಿದರೆ, ಇನ್ನು ಕೆಲವರು ಇದನ್ನು ನಂಬಲು ಹಿಂಜರಿಯುತ್ತಿದ್ದಾರೆ:&lt;/p&gt;&lt;p&gt;&quot;ಒಂದೇ ಕುಟುಂಬದಲ್ಲಿ 14 ಗಂಡು ಮಕ್ಕಳಿರಲು ಹೇಗೆ ಸಾಧ್ಯ? ಇದು ಕೇವಲ ಸೋದರಸಂಬಂಧಿಗಳ (Cousins) ಜಂಟಿ ಮದುವೆಯಾಗಿರಬಹುದು, ಸುದ್ದಿಗಾಗಿ ಹೀಗೆ ಬಿಂಬಿಸಲಾಗಿದೆ,&quot; ಎಂದು ಹಲವರು ಕಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಮತ್ತೆ ಕೆಲವರು, &quot;ಪ್ರತಿಯೊಬ್ಬ ಮಗನಿಗೂ ತನ್ನದೇ ಆದ ಮದುವೆಯ ದಿನದ ಕನಸುಗಳಿರುತ್ತವೆ. ಹೀಗೆ ಸಾಮೂಹಿಕವಾಗಿ ಮದುವೆ ಮಾಡುವುದರಿಂದ ವೈಯಕ್ತಿಕ ಸಂಭ್ರಮ ಮಾಯವಾಗುತ್ತದೆ,&quot; ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ ಹೇಳುವುದಾದರೆ, ಕೇವಲ ಸಮಾಜದ ಮೆಚ್ಚುಗೆಗಾಗಿ ಅಥವಾ ಪ್ರತಿಷ್ಠೆಗಾಗಿ ಸಾಲ ಮಾಡಿ ಅದ್ಧೂರಿ ಮದುವೆ ಮಾಡಿಕೊಳ್ಳುವ ಇಂದಿನ ಯುವ ಪೀಳಿಗೆಗೆ ಈ ಸತ್ನಾದ ರೈತ ಒಂದು ಕನ್ನಡಿ ಹಿಡಿದಿದ್ದಾರೆ. 14 ಮಕ್ಕಳು ಒಂದೇ ತಾಯಿಯವರೇ ಅಥವಾ ಇಡೀ ಅವಿಭಕ್ತ ಕುಟುಂಬದ ಮಕ್ಕಳೇ ಎಂಬ ಗೊಂದಲ ಏನೇ ಇದ್ದರೂ, &quot;ಸಾಮೂಹಿಕ ವಿವಾಹ&quot;ದ ಮೂಲಕ ಹಣ ಉಳಿಸುವ ಅವರ ಆಲೋಚನೆ ಮಾತ್ರ ನಿಜಕ್ಕೂ ಶ್ಲಾಘನೀಯ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/life/a-farmer-from-satna-madhya-pradesh-arrange-14-sons-wedding-in-same-day/articleshow-0c6ody9"/>
        </item>
        <item>
            <title><![CDATA[S Janaki: 48,000 ಹಾಡು ಹಾಡಿರೋ ಎಸ್ ಜಾನಕಿ ಅದೊಂದು ಹಾಡಿಗೆ ಮಾತ್ರ 14 ರೀಟೇಕ್ ತೆಗೆದುಕೊಂಡ್ರಂತೆ!]]></title>
            <link>https://kannada.asianetnews.com/cine-world/legendary-playback-singer-s-janaki-takes-14-retakes-for-only-that-song-for-perfection/articleshow-b4lsftc</link>
            <guid isPermaLink="true">https://kannada.asianetnews.com/cine-world/legendary-playback-singer-s-janaki-takes-14-retakes-for-only-that-song-for-perfection/articleshow-b4lsftc</guid>
            <pubDate>Sun, 12 Jul 2026 17:12:54 +0530</pubDate>
            <description><![CDATA[&lt;p&gt;ಮೈಸೂರಿನಲ್ಲಿ ತಮ್ಮ ಕೊನೆಯುಸಿರೆಳೆದ ಜಾನಕಿ ಅಮ್ಮ ಅವರು, ಎಸ್&zwnj;ಪಿಬಿ ನಂತರ ಸಂಗೀತ ಲೋಕದ ಮತ್ತೊಂದು ದೊಡ್ಡ ಕಂಬವನ್ನು ಉರುಳಿಸಿದಂತಾಗಿದೆ. ರಾಜಶೇಖರನ್ ಮತ್ತು ರೋಹಿಣಿ ಅಭಿನಯದ ಸಿನಿಮಾದ ಆ ಹಾಡು ಹೇಗೆ ಇತಿಹಾಸ ಸೃಷ್ಟಿಸಿತೋ, ಹಾಗೆಯೇ ಜಾನಕಮ್ಮನವರ ಜೀವನ ಕೂಡ ಒಂದು ಸುದೀರ್ಘ ಇತಿಹಾಸ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxb1qb7b4e6085086k17tfrf,imgname-ilaiyaraaja-s-janaki-1783856082155.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅದೊಂದು ಹಾಡಿಗೆ 14 ಟೇಕ್!&lt;/strong&gt;&lt;/p&gt;&lt;p&gt;ಸಂಗೀತ ಲೋಕದಲ್ಲಿ 'ಅಮ್ಮ' ಎಂದೇ ಕರೆಯಲ್ಪಡುತ್ತಿದ್ದ ದಕ್ಷಿಣ ಭಾರತದ ಗಾನ ಕೋಗಿಲೆ ಎಸ್&zwnj; ಜಾನಕಿ (S Janaki) ಅವರು ಇಂದು ದೈಹಿಕವಾಗಿ ನಮ್ಮನ್ನಗಲಿದ್ದಾರೆ. ಆದರೆ, ಅವರು ಉಳಿಸಿ ಹೋಗಿರುವ 48,000 ಹಾಡುಗಳ ಮಹಾ ಭಂಡಾರ ಎಂದಿಗೂ ಅಜರಾಮರ. ಒಬ್ಬ ಗಾಯಕಿ 22 ಭಾಷೆಗಳಲ್ಲಿ ಹಾಡುವುದು ಎಂದರೆ ಅದು ಕೇವಲ ಪ್ರತಿಭೆಯಲ್ಲ, ಅದೊಂದು ದೈವದತ್ತ ವರ. ಆದರೆ, ಇಂತಹ ಮೇರು ಗಾಯಕಿಯ ಯಶಸ್ಸಿನ ಹಿಂದೆ ಅಪ್ರತಿಮ ಪರಿಶ್ರಮವಿತ್ತು ಎಂಬುದಕ್ಕೆ ಒಂದು ಸಣ್ಣ ಉದಾಹರಣೆಯೇ ಈ '14 ರೀಟೇಕ್&zwnj;'ಗಳ ಕಥೆ!&lt;/p&gt;&lt;h2&gt;ಸಂಗೀತ ಮಾಂತ್ರಿಕನೇ ಬೆರಗಾದ ಆ ಕ್ಷಣ:&lt;/h2&gt;&lt;p&gt;ಅದು 1980ರ ಸಮಯ. ತಮಿಳಿನ 'ನಿಜಲಗಳು' (Nizhalgal) ಎಂಬ ಸಿನಿಮಾ ಸಿದ್ಧವಾಗುತ್ತಿತ್ತು. ಅದಕ್ಕೆ ಸಂಗೀತ ನೀಡುತ್ತಿದ್ದವರು ಮ್ಯೂಸಿಕ್ ಮೇಸ್ಟ್ರೋ ಇಳಯರಾಜ. ಆ ಚಿತ್ರದಲ್ಲಿ 'ದೂರತಿಲ್ ನಾನ್ ಕಂಡ ಮುಗಂ' (Doorthil Naan Kanda Mugam) ಎಂಬ ಅತ್ಯಂತ ಕ್ಲಿಷ್ಟಕರವಾದ ಹಾಡೊಂದಿತ್ತು. ಈ ಹಾಡಿನ ವಿಶೇಷತೆಯೆಂದರೆ, ಅದರ ಅಂತ್ಯವು ಅತ್ಯಂತ ಹೈ-ಪಿಚ್ (High Pitch) ನಲ್ಲಿ ಕೊನೆಗೊಳ್ಳಬೇಕಿತ್ತು.&lt;/p&gt;&lt;p&gt;ಜಾನಕಿ ಅಮ್ಮ ಮೈಕ್ ಮುಂದೆ ನಿಂತು ಹಾಡಲು ಶುರು ಮಾಡಿದರು. ಇಳಯರಾಜ ಅವರಿಗೆ ಮೊದಲ ಅಥವಾ ಎರಡನೇ ಟೇಕ್&zwnj;ನಲ್ಲೇ ಹಾಡು ಇಷ್ಟವಾಯಿತು. &quot;ಜಾನಕಮ್ಮ, ಸಾಂಗ್ ಅದ್ಭುತವಾಗಿ ಬಂದಿದೆ, ಓಕೆ ಮಾಡೋಣ&quot; ಎಂದರು ಇಳಯರಾಜ. ಆದರೆ ಜಾನಕಮ್ಮನಿಗೆ ಮಾತ್ರ ಸಮಾಧಾನವಾಗಲಿಲ್ಲ!&lt;/p&gt;&lt;p&gt;ಛಲ ಬಿಡದ ಗಾನ ಕೋಗಿಲೆ:&lt;/p&gt;&lt;p&gt;&quot;ಇಲ್ಲ ರಾಜಾ, ಆ ಹೈ-ಪಿಚ್ ಸ್ವರ ಇನ್ನೂ ಸ್ಪಷ್ಟವಾಗಿ ಬರಬೇಕು, ಮತ್ತೊಮ್ಮೆ ಪ್ರಯತ್ನಿಸುತ್ತೇನೆ&quot; ಎಂದು ಜಾನಕಿ ಅಮ್ಮ ಪಟ್ಟು ಹಿಡಿದರು. ಒಮ್ಮೆ ಅಲ್ಲ, ಎರಡಲ್ಲ.. ಬರೋಬ್ಬರಿ 14 ಬಾರಿ ಆ ಹಾಡನ್ನು ಹಾಡಿದರು! ಪ್ರತಿ ಬಾರಿ ಹಾಡಿದಾಗಲೂ ಅವರು ಶ್ರೇಷ್ಠತೆಗಾಗಿ ಹುಡುಕಾಡುತ್ತಿದ್ದರು. ಇಳಯರಾಜ ಅವರೇ ಈ ಬಗ್ಗೆ ನೆನಪಿಸಿಕೊಂಡು, &quot;ಅವರು ಪ್ರತಿಯೊಂದು ಟೇಕ್&zwnj;ನಲ್ಲೂ ಹೊಸತನ್ನು ಹುಡುಕುತ್ತಿದ್ದರು. ಅವರ ಆತುರವಿಲ್ಲದ, ಪರಿಪೂರ್ಣತೆಯ ಹಸಿವು ನನ್ನನ್ನೇ ಬೆರಗುಗೊಳಿಸಿತ್ತು&quot; ಎಂದು ಹೇಳಿಕೊಂಡಿದ್ದರು. ಕೊನೆಗೆ 14ನೇ ಟೇಕ್&zwnj;ನಲ್ಲಿ ಬಂದ ಆ ಸ್ವರ ಸಿನಿಮಾದಲ್ಲಿ ಬಳಕೆಯಾಗಿ, ಇಂದಿಗೂ ಅದು ಸಂಗೀತ ಪ್ರೇಮಿಗಳ ಕಿವಿಯಲ್ಲಿ ಜೇನಿನಂತೆ ಸವಿಯಾಗಿದೆ.&lt;/p&gt;&lt;h3&gt;ದಾಖಲೆಗಳ ಸರದಾರಿಣಿ&lt;/h3&gt;&lt;p&gt;ಜಾನಕಿ ಅಮ್ಮ ಎಂದರೆ ಕೇವಲ ಸಂಖ್ಯೆಯಲ್ಲ. ಅವರು 4 ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ವಿವಿಧ ರಾಜ್ಯಗಳಿಂದ 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು. ತಮ್ಮ ಪಾಲಿಗೆ ಬಂದ ಪದ್ಮಭೂಷಣ ಪ್ರಶಸ್ತಿಯನ್ನು ನಯವಾಗಿಯೇ ನಿರಾಕರಿಸಿ 'ದಕ್ಷಿಣ ಭಾರತದ ಗಾಯಕರಿಗೂ ಉತ್ತರ ಭಾರತೀಯರಂತೆ ಮನ್ನಣೆ ನೀಡಬೇಕು' ಎಂದು ವಿನಯದಿಂದಲೇ ಆಗ್ರಹಿಸಿದವರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮಾತ್ರವಲ್ಲದೆ ಹಿಂದಿ, ಒಡಿಯಾ, ಬಂಗಾಳಿ, ಮರಾಠಿ, ತುಳು ಮತ್ತು ಕೊಂಕಣಿ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ ಅವರು ಧ್ವನಿಯಾಗಿದ್ದಾರೆ. ಗಾಯನದಲ್ಲಿ ಮೂರು ಗಂಟೆಗಳ ಕಾಲ ಸತತವಾಗಿ ಅಭ್ಯಾಸ ಮಾಡುತ್ತಿದ್ದ ಅವರ ಶಿಸ್ತು ಇಂದಿನ ಯುವ ಗಾಯಕರಿಗೆ ಮಾದರಿ.&lt;/p&gt;&lt;p&gt;ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ:&lt;/p&gt;&lt;p&gt;ಮೈಸೂರಿನಲ್ಲಿ ತಮ್ಮ ಕೊನೆಯುಸಿರೆಳೆದ ಜಾನಕಿ ಅಮ್ಮ ಅವರು, ಎಸ್&zwnj;ಪಿಬಿ ನಂತರ ಸಂಗೀತ ಲೋಕದ ಮತ್ತೊಂದು ದೊಡ್ಡ ಕಂಬವನ್ನು ಉರುಳಿಸಿದಂತಾಗಿದೆ. ರಾಜಶೇಖರನ್ ಮತ್ತು ರೋಹಿಣಿ ಅಭಿನಯದ ಸಿನಿಮಾದ ಆ ಹಾಡು ಹೇಗೆ ಇತಿಹಾಸ ಸೃಷ್ಟಿಸಿತೋ, ಹಾಗೆಯೇ ಜಾನಕಮ್ಮನವರ ಜೀವನ ಕೂಡ ಒಂದು ಸುದೀರ್ಘ ಇತಿಹಾಸ. ಅವರು ಹಾಡಿದ ಪ್ರತಿ ಹಾಡು ಕೂಡ ನಮಗೆ ಪಾಠ. ಅವರ ಛಲ, ಪರಿಶ್ರಮ ಮತ್ತು ಆ ಮಧುರ ಧ್ವನಿ ಸದಾ ಕಾಲ ಭಾರತೀಯ ಚಿತ್ರರಂಗದ ಅಂತರಾಳದಲ್ಲಿ ಮೊಳಗುತ್ತಲೇ ಇರುತ್ತದೆ.&lt;/p&gt;&lt;p&gt;ಶತಮಾನಕ್ಕೊಬ್ಬರು ಹುಟ್ಟಿಬರುವ ಇಂತಹ ಮಹಾನ್ ಚೇತನಕ್ಕೆ ಕನ್ನಡಿಗರ ಪರವಾಗಿ ಕೋಟಿ ಕೋಟಿ ನಮನಗಳು. ಜಾನಕಿ ಅಮ್ಮ, ನಿಮ್ಮ ಹಾಡುಗಳ ಮೂಲಕ ನೀವು ಸದಾ ಕಾಲ ನಮ್ಮೊಂದಿಗಿರುತ್ತೀರಿ.&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/legendary-playback-singer-s-janaki-takes-14-retakes-for-only-that-song-for-perfection/articleshow-b4lsftc"/>
        </item>
        <item>
            <title><![CDATA[Viral News: ಆಫರ್ ಲೆಟರ್‌ನಲ್ಲಿ ₹10 ಸಾವಿರ, ಖಾತೆಗೆ ₹5 ಸಾವಿರ! ಕಂಪನಿಗೆ ಪ್ರಶ್ನೆಗಳ ಸುರಿಮಳೆ]]></title>
            <link>https://kannada.asianetnews.com/viral/promised-one-salary-received-another-viral-internship-reddit-story-raises-questions/articleshow-dl2uw5h</link>
            <guid isPermaLink="true">https://kannada.asianetnews.com/viral/promised-one-salary-received-another-viral-internship-reddit-story-raises-questions/articleshow-dl2uw5h</guid>
            <pubDate>Sun, 12 Jul 2026 13:59:51 +0530</pubDate>
            <description><![CDATA[&lt;p&gt;ಒಬ್ಬ ಮಾರ್ಕೆಟಿಂಗ್ ಇಂಟರ್ನ್, ತನಗೆ ಮಾತುಕೊಟ್ಟಂತೆ 10,000 ರೂಪಾಯಿ ಸ್ಟೈಪೆಂಡ್ ನೀಡದೆ, ಕೇವಲ 5,000 ರೂಪಾಯಿ ನೀಡಿ, ನಿಗದಿಗಿಂತ ಹೆಚ್ಚು ಗಂಟೆಗಳ ಕಾಲ ದುಡಿಸಿಕೊಂಡು ಶೋಷಣೆ ಮಾಡಲಾಗಿದೆ ಎಂದು ರೆಡ್ಡಿಟ್&zwnj;ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇಂತಹ ಶೋಷಣೆಯುಳ್ಳ ಕೆಲಸವನ್ನು ತಕ್ಷಣವೇ ಬಿಟ್ಟುಬಿಡುವಂತೆ ಬಳಕೆದಾರರು ವಿದ್ಯಾರ್ಥಿಗೆ ಸಲಹೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxapxwhdm0sertps8e95sj9c,imgname-overworked-intern-faces-brutal-choice-to-quit-or-stay-1783844762157.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಬ್ಬ ಮಾರ್ಕೆಟಿಂಗ್ ಇಂಟರ್ನ್ ರೆಡ್ಡಿಟ್-ನಲ್ಲಿ ಹಾಕಿರೋ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತನಗೆ ಮಾತು ಕೊಟ್ಟಂತೆ ಸ್ಟೈಪೆಂಡ್ ನೀಡಿಲ್ಲ, ಬದಲಾಗಿ ಅರ್ಧದಷ್ಟು ಮಾತ್ರ ನೀಡಿ, ನಿಗದಿಗಿಂತ ಹೆಚ್ಚು ದುಡಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದು, ಆನ್&zwnj;ಲೈನ್&zwnj;ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. &quot;ಇಂಟರ್ನ್&zwnj;ಶಿಪ್&zwnj;ಗೆ 10 ಸಾವಿರ ಕೊಡ್ತೀವಿ ಅಂದ್ರು, 5 ಸಾವಿರ ಕೊಟ್ಟರು, ಕೆಲಸದಲ್ಲಿ ಇರಬೇಕಾ? ಬಿಡಬೇಕಾ?&quot; ಎಂಬ ಶೀರ್ಷಿಕೆಯ ಈ ಪೋಸ್ಟ್&zwnj;ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ಇಂತಹ ಶೋಷಣೆಯ ಕೆಲಸವನ್ನು ತಕ್ಷಣ ಬಿಟ್ಟುಬಿಡು ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ನಾಲ್ಕನೇ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ಇವರು, ಕಳೆದ ತಿಂಗಳು ಈ ಇಂಟರ್ನ್&zwnj;ಶಿಪ್&zwnj;ಗೆ ಸೇರಿದ್ದರು. ವಾರಕ್ಕೆ ಮೂರು ದಿನ ಮಾತ್ರ ಕೆಲಸ, ತಿಂಗಳಿಗೆ 10,000 ರೂಪಾಯಿ ಸ್ಟೈಪೆಂಡ್ ನೀಡುವುದಾಗಿ ಕಂಪನಿ ಭರವಸೆ ನೀಡಿತ್ತು. ಆದರೆ, ಕೆಲಸಕ್ಕೆ ಸೇರಿದ ಮೇಲೆ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು.&lt;/p&gt;&lt;p&gt;&quot;ಮೊದಲ ದಿನದಿಂದಲೇ ನಾನು ಪ್ರತಿದಿನ ಕೆಲಸ ಮಾಡಿದ್ದೇನೆ, ಕೆಲವೊಮ್ಮೆ ಭಾನುವಾರ ಕೂಡಾ ಕೆಲಸ ಮಾಡಿದ್ದೇನೆ. ರಿಮೋಟ್ ಆಗಿ ಕೂಡಾ ಟಾಸ್ಕ್ ಕೊಟ್ಟಿದ್ದಾರೆ. ಆಫೀಸ್ ಸಮಯ ಬೆಳಗ್ಗೆ 10:30 ರಿಂದ ಸಂಜೆ 6 ಗಂಟೆ ತನಕ ಅಂತ ಹೇಳಿದ್ದರು. ಆದರೆ ನಾನು ರಾತ್ರಿ 7:30-9 ಗಂಟೆಯವರೆಗೂ ಇರಬೇಕಾಗಿತ್ತು. ಮನೆಗೆ ಬಂದ ಮೇಲೂ ಕೆಲಸದ ಬಗ್ಗೆ ಮೆಸೇಜ್ ಬರುತ್ತಿತ್ತು. ನನ್ನ ಜವಾಬ್ದಾರಿಗಳಲ್ಲದ ಹೆಚ್ಚುವರಿ ಕೆಲಸಗಳನ್ನೂ ನನ್ನ ಮೇಲೆ ಹೇರಿದ್ದರು,&quot; ಎಂದು ಆ ಇಂಟರ್ನ್ ರೆಡ್ಡಿಟ್ ಪೋಸ್ಟ್&zwnj;ನಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಇಷ್ಟೆಲ್ಲಾ ಹೆಚ್ಚು ಗಂಟೆಗಳ ಕಾಲ ದುಡಿದು, ಹೆಚ್ಚುವರಿ ಜವಾಬ್ದಾರಿಗಳನ್ನು ಹೊತ್ತರೂ, ತಿಂಗಳ ಕೊನೆಗೆ ಕೇವಲ 5,000 ರೂಪಾಯಿ ಮಾತ್ರ ಸಿಕ್ಕಿದೆ ಎಂದು ಇಂಟರ್ನ್ ಹೇಳಿದ್ದಾರೆ. ಸರಿಯಾಗಿ ಆಫೀಸ್&zwnj;ಗೆ ಬಂದಿಲ್ಲ ಎಂಬ ಕಾರಣ ನೀಡಿ ಮ್ಯಾನೇಜ್&zwnj;ಮೆಂಟ್ ಉಳಿದ ಹಣವನ್ನು ತಡೆಹಿಡಿದಿದೆ ಎಂದು ಪೋಸ್ಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;&quot;ಜುಲೈ 5 ರಂದು ನನ್ನ ಖಾತೆಗೆ ಕೇವಲ 5,000 ರೂಪಾಯಿ ಜಮಾ ಆಗಿದೆ. ಮ್ಯಾನೇಜರ್ ಹೇಳುವ ಪ್ರಕಾರ, ನಾನು ನಿಯಮಿತವಾಗಿ ಆಫೀಸ್&zwnj;ಗೆ ಬಂದಿಲ್ಲವಂತೆ. ಆದರೆ ನಾನು ಪ್ರತಿದಿನ ಕೆಲಸ ಮಾಡಿದ್ದೇನೆ. ಅವರ ಲೆಕ್ಕಾಚಾರದ ಪ್ರಕಾರ, ನನಗೆ ಕನಿಷ್ಠ 7,500 ರೂಪಾಯಿ ಬರಬೇಕಿತ್ತು. ಪ್ರತಿದಿನ 30 ಕಿ.ಮೀ. ಪ್ರಯಾಣಕ್ಕೆ ಮೂರು ಗಂಟೆ ಸಮಯ ಬೇಕು.&quot;&lt;/p&gt;&lt;p&gt;&ldquo;ನಾನು ಜುಲೈ 9 ರಂದು ಈ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದೇನೆ. ಅವರು 2,000 ರೂಪಾಯಿ ಹೆಚ್ಚಿಸಿದರೆ, ನಾನು ಕೆಲಸದಲ್ಲಿ ಮುಂದುವರಿಯಬಹುದು. ಇಲ್ಲದಿದ್ದರೆ, ನಾನು ಕೆಲಸ ಬಿಡುತ್ತೇನೆ. ಆದರೆ, ಇಲ್ಲಿನ ರಿಕ್ರೂಟರ್ (ತುಂಬಾ ಪ್ರಭಾವಿ ವ್ಯಕ್ತಿ) ನನ್ನ ಮುಂದಿನ ಪ್ಲೇಸ್&zwnj;ಮೆಂಟ್&zwnj; ಮೇಲೆ ಪರಿಣಾಮ ಬೀರಬಹುದೇ ಎಂಬ ಚಿಂತೆ ಕಾಡುತ್ತಿದೆ. ಇಲ್ಲಿಯವರೆಗೆ, ನಾನು ಯಾವುದೇ ಕೌಶಲ್ಯವನ್ನು ಕಲಿತಿಲ್ಲ, ಬರೀ ಸುಸ್ತಾಗಿದ್ದಷ್ಟೇ,&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;Internship promised ₹10k, paid ₹5k, stay or quit?by u/Thookudurai_Mamey in IndianWorkplace&lt;/p&gt;&lt;p&gt;&amp;nbsp;&lt;/p&gt;&lt;p&gt;ಈ ಪೋಸ್ಟ್ ವೇಗವಾಗಿ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮುಂದುವರಿಸುವ ಬದಲು ರಾಜೀನಾಮೆ ನೀಡುವುದೇ ಉತ್ತಮ ಎಂದು ಹಲವರು ಸಲಹೆ ನೀಡಿದ್ದಾರೆ.&lt;/p&gt;&lt;p&gt;&quot;10 ಸಾವಿರದ ಭರವಸೆ ಕೊಟ್ಟು 5 ಸಾವಿರ ಕೊಟ್ಟಿದ್ದಾರೆ. ಇದು ದೊಡ್ಡ 'ರೆಡ್ ಫ್ಲ್ಯಾಗ್'. ತಕ್ಷಣ ನಿನ್ನ ರಾಜೀನಾಮೆ ಕಳಿಸು,&quot; ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.&lt;/p&gt;&lt;p&gt;ಇನ್ನೊಬ್ಬರು, &quot;ತಕ್ಷಣ ಕೆಲಸ ಬಿಡು. ಆ ಸ್ಟಾರ್ಟಪ್ ನಿನಗೆ ಮೋಸ ಮಾಡಿದೆ. ಇದು ಅವರ ನಿಜವಾದ ಬಣ್ಣವನ್ನು ತೋರಿಸುತ್ತದೆ. ಅವರು ತಮ್ಮೆಲ್ಲಾ ಉದ್ಯೋಗಿಗಳನ್ನು ಹೀಗೆಯೇ ನಡೆಸಿಕೊಳ್ಳುತ್ತಾರೆ,&quot; ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಮೂರನೇ ಬಳಕೆದಾರರು, &quot;ಈ ಕಂಪನಿ ಎಷ್ಟು ದೊಡ್ಡದು? 10 ಜನರಿಗಿಂತ ಕಡಿಮೆ ಸಿಬ್ಬಂದಿ ಇದ್ದರೆ, ಖಂಡಿತ ಕೆಲಸ ಬಿಡು. ಆ ರಿಕ್ರೂಟರ್ ಏನೂ ಮಾಡಲು ಸಾಧ್ಯವಿಲ್ಲ. ಅವರು ಕಾಲೇಜಿನ ಬೇರೆ ಪ್ಲೇಸ್&zwnj;ಮೆಂಟ್ ಡ್ರೈವ್&zwnj;ಗಳಲ್ಲಿ ನಿನ್ನನ್ನು ತಡೆಯಬಹುದು ಅಷ್ಟೇ. ಅವರೊಂದಿಗೆ ಮಾತನಾಡಿ, ನೀನೂ ಸ್ವಂತವಾಗಿ ಕೆಲಸ ಹುಡುಕಲು ಪ್ರಾರಂಭಿಸು,&quot; ಎಂದು ಹೇಳಿದ್ದಾರೆ.&lt;/p&gt;&lt;p&gt;ನಾಲ್ಕನೆಯವರು, &quot;ಕೆಲಸ ಬಿಟ್ಟುಬಿಡು. ಉಳಿದ ಹಣಕ್ಕಾಗಿ ಜಗಳವಾಡುತ್ತಾ ಕೂರಬೇಡ, ಅವರು ಕೊಡಲ್ಲ. ಯಾವ ರಿಕ್ರೂಟರ್ ಕೂಡ ನಿನ್ನ ಪ್ಲೇಸ್&zwnj;ಮೆಂಟ್&zwnj;ಗಳನ್ನು ಹಾಳು ಮಾಡಲು ಸಾಧ್ಯವಿಲ್ಲ. ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ. ಎಲ್ಲವೂ ಸರಿ ಹೋಗುತ್ತದೆ. ನಿನಗೆ ಹೀಗಾಗಿದ್ದು ಬೇಸರದ ಸಂಗತಿ, ಆದರೆ ಈ ಸ್ಟಾರ್ಟಪ್&zwnj;ಗಳು ಅಸಹ್ಯ ಹುಟ್ಟಿಸುತ್ತವೆ,&quot; ಎಂದು ಸೇರಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/promised-one-salary-received-another-viral-internship-reddit-story-raises-questions/articleshow-dl2uw5h"/>
        </item>
        <item>
            <title><![CDATA[S Janaki - Modi : ಮೇರು ಗಾಯಕಿ ಎಸ್ ಜಾನಕಿ ಅಗಲಿಕೆಗೆ ದೇಶಾದ್ಯಂತ ಕಂಬನಿ; ಪ್ರಧಾನಿ ಮೋದಿ ನುಡಿ ನಮನ]]></title>
            <link>https://kannada.asianetnews.com/cine-world/prime-minister-narendra-modi-emotional-post-on-x-about-legendary-singer-s-janaki-demise/articleshow-vrau99p</link>
            <guid isPermaLink="true">https://kannada.asianetnews.com/cine-world/prime-minister-narendra-modi-emotional-post-on-x-about-legendary-singer-s-janaki-demise/articleshow-vrau99p</guid>
            <pubDate>Sun, 12 Jul 2026 15:10:11 +0530</pubDate>
            <description><![CDATA[&lt;p&gt;ಆಂಧ್ರದ ಗುಂಟೂರಿನಲ್ಲಿ ಜನಿಸಿದ ಜಾನಕಮ್ಮ, 1957ರಲ್ಲಿ ಬೆಳ್ಳಿತೆರೆಯ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅಪ್ಪಾಜಿ ಡಾ. ರಾಜ್&zwnj;ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರ ಸಿನಿಮಾಗಳಿಗೆ ಇವರದ್ದೇ ಧ್ವನಿ. 2016ರಲ್ಲಿ ಅವರು ಹಾಡಿದ ಮಲಯಾಳಂನ &lsquo;ಅಮ್ಮಪೂವಿನುಮ್&rsquo; ಹಾಡು ಅವರ ವೃತ್ತಿಜೀವನದ ಕೊನೆಯ ಗೀತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxav3k11hs1p1fsfv8j3tsyj,imgname-narendra-modi-s-janaki-1783849143329.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಾನ ಕೋಗಿಲೆಯ ಮೌನ: ಸಂಗೀತದ ಒಂದು &lsquo;ಅಪೂರ್ವ ಯುಗ&rsquo;ದ ಅಂತ್ಯಕ್ಕೆ ಸಾಕ್ಷಿಯಾದ ಮೈಸೂರು!&lt;/strong&gt;&lt;/p&gt;&lt;p&gt;ಸಂಗೀತ ಲೋಕದ ಅರಮನೆಯಲ್ಲಿ ಇಂದು ನೀರವ ಮೌನ. ಆರು ದಶಕಗಳ ಕಾಲ ತನ್ನ ಕಂಠಸಿರಿಯಿಂದ ಕೋಟ್ಯಂತರ ಹೃದಯಗಳನ್ನು ಮಂತ್ರಮುಗ್ಧಗೊಳಿಸಿದ್ದ 'ಗಾನ ಕೋಗಿಲೆ' ಎಸ್&zwnj; ಜಾನಕಿ (S Janaki) ಅಮ್ಮ ಇನ್ನಿಲ್ಲ. 88 ವರ್ಷಗಳ ಕಾಲ ಸಂಗೀತದ ಮೂಲಕವೇ ಉಸಿರಾಡಿದ್ದ ಈ ದಂತಕಥೆ, ಮೈಸೂರಿನ ಮಣ್ಣಿನ ಮಡಿಲಿನಲ್ಲಿ ಶನಿವಾರ ಶಾಶ್ವತ ನಿದ್ರೆಗೆ ಜಾರಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜಾನಕಮ್ಮನವರ ನಿರ್ಗಮನದೊಂದಿಗೆ ಭಾರತೀಯ ಚಿತ್ರರಂಗದ ಸಂಗೀತಲೋಕದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಿದೆ.&lt;/p&gt;&lt;p&gt;ಪ್ರಧಾನಿ ಮೋದಿಯವರ ಭಾವುಕ ನಮನ:&lt;/p&gt;&lt;p&gt;ಜಾನಕಿ ಅಮ್ಮನ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ (X) ದಲ್ಲಿ ಅತ್ಯಂತ ಭಾವುಕವಾಗಿ ಸಂತಾಪ ಸೂಚಿಸಿದ್ದಾರೆ. &quot;ಜಾನಕಿ ಅಮ್ಮನವರ ಧ್ವನಿ ಕೇವಲ ಹಾಡಲ್ಲ, ಅದು ಸಂಸ್ಕೃತಿಯ ಪ್ರತಿಬಿಂಬ. ಪ್ರತಿ ಭಾವನೆಗೂ ಅವರು ಅಪ್ರತಿಮ ಶೈಲಿಯಲ್ಲಿ ಜೀವ ತುಂಬುತ್ತಿದ್ದರು. ಅವರ ನಿಧನ ಸಂಗೀತ ಜಗತ್ತಿಗೆ ತುಂಬಲಾರದ ನಷ್ಟ&quot; ಎಂದು ಪ್ರಧಾನಿ ಸ್ಮರಿಸಿದ್ದಾರೆ.&lt;/p&gt;&lt;h2&gt;ಮೋದಿಯವರು ಪೋಸ್ಟ್&zwnj;ನಲ್ಲಿ ಏನು ಬರೆದಿದ್ದಾರೆ?&lt;/h2&gt;&lt;p&gt;ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್&zwnj; ಜಾನಕಿ ಅಮ್ಮ ಅವರ ನಿಧನವು ಸಂಗೀತ ಮತ್ತು ಸಂಸ್ಕೃತಿ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ವಿವಿಧ ಭಾಷೆಗಳಲ್ಲಿನ ಅವರ ಹಾಡುಗಳು ತಲೆಮಾರುಗಳಿಂದಲೂ ಜನಪ್ರಿಯವಾಗಿವೆ. ಅವರು ಪ್ರತಿ ಭಾವನೆಗೂ ಅಪ್ರತಿಮ ಸೊಬಗು ಮತ್ತು ಬಹುಮುಖತೆಯೊಂದಿಗೆ ಧ್ವನಿ ನೀಡಿದರು. ಅವರ ಮಧುರ ಗೀತೆಗಳು ಮುಂಬರುವ ವರ್ಷಗಳಲ್ಲಿ ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತಲೇ ಇರುತ್ತವೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬಸ್ಥರಿಗೆ, ಅಸಂಖ್ಯಾತ ಅಭಿಮಾನಿಗಳಿಗೆ ಮತ್ತು ಇಡೀ ಸಂಗೀತ ಲೋಕಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ.&quot; ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಸಂಗೀತ ಸಾಮ್ರಾಜ್ಯದ &lsquo;ಜಾನಕಿ-ಬಾಲು&rsquo; ಮ್ಯಾಜಿಕ್:&lt;/p&gt;&lt;p&gt;ಜಾನಕಿ ಅಮ್ಮನ ಹೆಸರು ಕೇಳಿದ ಕೂಡಲೇ ನೆನಪಿಗೆ ಬರುವುದು ದಿವಂಗತ ಎಸ್&zwnj;.ಪಿ. ಬಾಲಸುಬ್ರಹ್ಮಣ್ಯಂ. ಎಸ್&zwnj;ಪಿಬಿ ನಿರ್ಗಮಿಸಿ ಆರು ವರ್ಷಗಳಾದ ಬೆನ್ನಲ್ಲೇ ಈಗ ಜಾನಕಮ್ಮ ಕೂಡ ಹೊರಟು ನಿಂತಿರುವುದು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಈ ಜೋಡಿ ಸೃಷ್ಟಿಸಿದ ಯುಗಳ ಗೀತೆಗಳ ಮೋಡಿ ಅನನ್ಯ. ಭಾಷೆಯ ಗಡಿ ದಾಟಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಇವರು ಹಾಡಿದ ಸುಮಾರು 45 ಸಾವಿರಕ್ಕೂ ಹೆಚ್ಚು ಹಾಡುಗಳು ಇಂದಿಗೂ ಎವರ್&zwnj;ಗ್ರೀನ್. ಸಿನಿಮಾ ಗೀತೆಗಳು ಮಾತ್ರವಲ್ಲ, ಹಲವಾರು ಭಕ್ತಿಗೀತೆಗಳಿಗೂ ಎಸ್ ಜಾನಕಿಯವರು ಧ್ವನಿಯಾಗಿದ್ದಾರೆ. 'ಗಜಮುಖನೆ ಗಣಪತಿಯೆ ನಿನಗೆ ವಂದನೆ' ಎಂಬ ಹಾಡು ಅಂದು-ಇಂದು ಕೂಡ ಎಲ್ಲರ ಮನೆಗಳಲ್ಲಿ, ಅದರಲ್ಲೂ ಮುಖ್ಯವಾಗಿ 'ಗಣೇಶ ಚತುರ್ಥಿ' ಹಬ್ಬದ ಸಾರ್ವಜನಿಕ ವೇದಿಕೆಗಳಲ್ಲಿ ಕೇಳಿಬರುತ್ತಲೇ ಇರುತ್ತದೆ.&lt;/p&gt;&lt;h3&gt;ಮೈಸೂರಿನ ತೋಟದ ಮನೆಯಲ್ಲಿ ಅಂತಿಮಯಾತ್ರೆ:&lt;/h3&gt;&lt;p&gt;ಮೈಸೂರಿನ ಬೋಗಾದಿ ಮನೆಯಲ್ಲಿ ಪ್ರಸ್ತುತ ಜಾನಕಿ ಅಮ್ಮನವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಮೈಸೂರಿನ ಕಣಿಯನಹುಂಡಿಯ ತೋಟದ ಮನೆಯಲ್ಲಿ ಇಂದು ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನಗಳು ನೆರವೇರಲಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕಿಯನ್ನು ಕೊನೆಯ ಬಾರಿ ನೋಡಲು ಮೈಸೂರಿಗೆ ಆಗಮಿಸುತ್ತಿದ್ದಾರೆ. 'ದಕ್ಷಿಣ ಭಾರತದ ಗಾನ ಕೋಗಿಲೆ' ಎಸ್ ಜಾನಕಿಯವರು ತಮ್ಮ ಕೊನೆಯ ಆಸೆಯಂತೆ ಮೈಸೂರಿನಲ್ಲೆ ಪ್ರಾನ ತ್ಯಜಿಸಿ, ಅಲ್ಲೇ ಮಣ್ಣಾಗುತ್ತಿದ್ದಾರೆ.&lt;/p&gt;&lt;p&gt;60 ವರ್ಷಗಳ ಸುದೀರ್ಘ ಪಯಣ:&lt;/p&gt;&lt;p&gt;ಆಂಧ್ರದ ಗುಂಟೂರಿನಲ್ಲಿ ಜನಿಸಿದ ಜಾನಕಮ್ಮ, 1950ರ ದಶಕದಲ್ಲಿಯೇ ಬೆಳ್ಳಿತೆರೆಯ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅಪ್ಪಾಜಿ ಡಾ. ರಾಜ್&zwnj;ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರ ಸಿನಿಮಾಗಳಿಗೆ ಇವರದ್ದೇ ಧ್ವನಿ. 2016ರಲ್ಲಿ ಅವರು ಹಾಡಿದ ಮಲಯಾಳಂನ &lsquo;ಅಮ್ಮಪೂವಿನುಮ್&rsquo; ಹಾಡು ಅವರ ವೃತ್ತಿಜೀವನದ ಕೊನೆಯ ಗೀತೆಯಾಗಿತ್ತು.&lt;/p&gt;&lt;p&gt;ಇಂದು ಜಾನಕಿ ಅಮ್ಮ ದೈಹಿಕವಾಗಿ ನಮ್ಮನ್ನು ಅಗಲಿರಬಹುದು, ಆದರೆ ಅವರ &lsquo;ಗಗನವು ಎಲ್ಲೋ&rsquo;, &lsquo;ಬಾನಿಗೊಂದು ಎಲ್ಲೆ ಎಲ್ಲಿದೆ&rsquo;, 'ಬಿಸಿಲಾದರೇನು ಮಳೆಯಾದರೇನು?' ಎಂಬಂತಹ ಸಾವಿರಾರು ಅಮರ ಗೀತೆಗಳ ಮೂಲಕ ಅವರು ಸದಾ ನಮ್ಮ ನಡುವೆಯೇ ಜೀವಂತವಾಗಿರುತ್ತಾರೆ. ಕರ್ನಾಟಕದ ಮನೆಮಗಳಾಗಿ, ಮೈಸೂರಿನ ಮಣ್ಣಿನಲ್ಲಿ ಲೀನವಾಗುತ್ತಿರುವ ಈ ಗಾನ ಮಾಂತ್ರಿಕೆಗೆ ಚಿತ್ರರಂಗದ ಗಣ್ಯರು ಹಾಗೂ ಸಿನಿರಸಿಕರು ಕಣ್ಣೀರಿನ ವಿದಾಯ ಹೇಳುತ್ತಿದ್ದಾರೆ.&lt;/p&gt;&lt;p&gt;ಚಿರಕಾಲ ಉಳಿಯಲಿದೆ ಜಾನಕಮ್ಮನವರ ಮಧುರ ಧ್ವನಿ ಹಾಗೂ ನೆನಪು!&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/prime-minister-narendra-modi-emotional-post-on-x-about-legendary-singer-s-janaki-demise/articleshow-vrau99p"/>
        </item>
        <item>
            <title><![CDATA[ಮೋದಿ ಭಾಷಣ ಲಿಪ್‌ಸಿಂಕ್ ಮಾಡಿದ ಆಸ್ಟ್ರೇಲಿಯಾ ಕಂಟೆಂಟ್ ಕ್ರಿಯೇಟರ್, ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ]]></title>
            <link>https://kannada.asianetnews.com/viral/australian-content-creator-pm-modi-lip-sync-video-takes-social-media-by-storm/articleshow-0cbovrd</link>
            <guid isPermaLink="true">https://kannada.asianetnews.com/viral/australian-content-creator-pm-modi-lip-sync-video-takes-social-media-by-storm/articleshow-0cbovrd</guid>
            <pubDate>Sun, 12 Jul 2026 14:34:31 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಆಸ್ಟ್ರೇಲಿಯಾ ಭೇಟಿ ವೇಳೆ ಭಾರತೀಯ ಸಮುದಾಯವನ್ನುದ್ದೇಶಿ ಭಾಷಣ ಮಾಡಿದ್ದರು. ಈ ಭಾಷಣದ ತುಣುಕನ್ನು ಆಸಿಸ್ ಕಂಟೆಂಟ್ ಕ್ರಿಯೇಟರ್ ಲಿಪ್ ಸಿಂಕ್ ಮಾಡಿ ಪ್ರಸ್ತುತ ಪಡಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxarxchwdz1wf22bbqztfsfp,imgname-australian-influencer-lip-sync-of-pm-modi-speech-1783846842939.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿಡ್ನಿ (ಜು.12) &lt;/strong&gt;ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶಕ್ಕೆ ತೆರಳಿದರೂ ಅಲ್ಲಿಯ ಭಾರತೀಯ ಸಮುದಾಯವನ್ನು ಭೇಟಿಯಾಗುತ್ತಾರೆ. ಅವರ ಜೊತೆ ಕೆಲ ಹೊತ್ತು ಕಳೆಯುತ್ತಾರೆ. ಈ ಮೂಲಕ ದೇಶ ವಿದೇಶಗಳಲ್ಲಿ ಭಾರತೀಯರ ಜೊತೆ ಮೋದಿ ಉತ್ತಮ ಸಂಬಂಧ ಬೆಸೆಯುತ್ತಾರೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸ ಇದಕ್ಕೆ ಹೊರತಾಗಿಲ್ಲ. ವಿಶೇಷ ಅಂದರೆ ಪ್ರಧಾನಿ ಮೋದಿ ಕುರಿತು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಅಷ್ಟೇ ಕ್ರೇಝ್ ಇದೆ. ಭಾರತದಲ್ಲಿ ಮೋದಿ ಭಾಷಣ, ವಿಡಿಯೋಗಳು ವೈರಲ್ ಆಗುವುದು ಮಾತ್ರವಲ್ಲ, ಇದೀಗ ಆಸ್ಟ್ರೇಲಿಯಾದ ಕಂಟೆಂಟ್ ಕ್ರಿಯೇಟರ್ ಮೋದಿ ಭಾಷಣಕ್ಕೆ ಲಿಪ್ ಸಿಂಕ್ ಮಾಡಿದ ವಿಡಿಯೋ ಭಾರಿ ವೈರಲ್ ಆಗಿದೆ.&lt;/p&gt;&lt;h2&gt;ಮೋದಿ ವಾಯ್ಸ್&zwnj;ಗೆ ಲಿಪ್ ಸಿಂಕ್&lt;/h2&gt;&lt;p&gt;ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೋದಿ ಮಾಡಿದ ಭಾಷಣದ ತುಣುಕು ತೆಗೆದು ವಾಯ್ಸ್&zwnj;ಗೆ ಆಸ್ಟ್ರೇಲಿಯಾ ಕಂಟೆಂಟ್ ಕ್ರಿಯೇಟರ್ ಲಿಪ್ ಸಿಂಕ್ ಮಾಡಿದ್ದಾರೆ. ಮೋದಿ ತಮ್ಮ ಭಾಷಣದಲ್ಲಿ ಆಸ್ಟ್ರೇಲಿಯಾದಲ್ಲಿ ಮನೆಗಳಲ್ಲಿ ಇಲ್ಲಿನ ಸ್ಥಳೀಯ ಹಾಲು ಬಳಸುತ್ತಾರೆ. ಆದರೆ ಅದರಿಂದ ಚಹಾ ಮಾಡಿದಾಗ ಭಾರತೀಯ ಟಚ್ ಸಿಗಲಿದೆ. ಆಸ್ಟ್ರೇಲಿಯಾ ಹಲವು ತರಕಾರಿ ಸೇರಿದಂತೆ ಇತರ ವಸ್ತುಗಳಿಗೆ ಭಾರತೀಯ ಮಸಾಲೆ ಸೇರಿದಾಗ ತಡ್ಕಾ ಸ್ವಾದ ಬರಲಿದೆ ಎಂದು ಮೋದಿ ಭಾಷಣದಲ್ಲಿ ಹೇಳಿದ್ದರು. ಮೋದಿಯ ಧ್ವನಿಯನ್ನು ತೆಗೆದುಕೊಂಡ ಆಸ್ಟ್ರೇಲಿಯಾ ಜೋಸ್ಪೀಕ್&zwnj;ಹಿಂದೆ ಖಾತೆ ನಿರ್ವಹಿಸುತ್ತಿರುವ ಕಂಟೆಂಟ್ ಕ್ರಿಯೇಟರ್ ತಾನು ಅದೇ ರೀತಿ ಲಿಪ್ ಸಿಂಕ್ ಮಾಡಿ ವಿವರಣೆ ನೀಡಿದ್ದಾರೆ.&lt;/p&gt;&lt;p&gt;ಸೂಪರ್ ಮಾರ್ಕೆಟ್&zwnj;ನಲ್ಲಿ ನಿಂತು ಆಸ್ಟ್ರೇಲಿಯಾದ ಸ್ಥಳೀಯ ಹಾಲನ್ನು ಹಿಡಿದು ಮೋದಿ ಮಾತುಗಳನ್ನು ಅದೇ ರೀತಿ ಲಿಪ್ ಸಿಂಕ್ ಮಾಡಿ ಹೇಳಿದ್ದಾನೆ. ಇನ್ನು ತರಕಾರಿ, ಭಾರತೀಯ ಮಸಾಲೆ, ತಡ್ಕಾ ಎಲ್ಲವನ್ನು ಲಿಪ್ ಸಿಂಕ್ ಮಾಡಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಆಸೀಸ್ ಕೆಂಟೆಂಟ್ ಕ್ರಿಯೇಟರ್ ವಿಡಿಯೋ ಭಾರತದಲ್ಲಿ ಭಾರಿ ವೈರಲ್ ಆಗಿದೆ.&lt;/p&gt;&lt;h2&gt;ಭಾರತದ ರೇಷನ್ ಕಾರ್ಡ್&zwnj;ಗೆ ಸಾಹಸ&lt;/h2&gt;&lt;p&gt;ಈ ವಿಡಿಯೋ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಸ್ಟ್ರೇಲಿಯಾದ ಕಂಟೆಂಟ್ ಕ್ರಿಯೇಟರ್ ಭಾರತದ ರೇಷನ್ ಕಾರ್ಡ್&zwnj;ಗಾಗಿ ಕಸರತ್ತು ಮಾಡುತ್ತಿದ್ದಾನೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಹಲವರು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಂಚಾಯತ್ ಸೀರಿಸ್&zwnj;ನ ಜನಪ್ರಿಯ ಡೈಲಾಗ್ ಸುನ್ತೆ ಹೋ ನಾ ಬಿನೋದ್ ವಿಡಿಯೋ ಕ್ಲಿಪಿಂಗ್ ಪ್ರತಿಕ್ರಿಯೆ ರೂಪದಲ್ಲಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;p&gt;ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ 6 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಈ ವಿಡಿಯೋ ಮಿಲಿಯನ್ ವೀವ್ಸ್ ದಾಟಿದೆ. ಆಸಿಸ್ ಕಂಟೆಂಟ್ ಕ್ರಿಯೇಟರ್ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Joe Speaks Hindi (@joespeakshindi)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/australian-content-creator-pm-modi-lip-sync-video-takes-social-media-by-storm/articleshow-0cbovrd"/>
        </item>
        <item>
            <title><![CDATA[3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ದಪ್ಪ ಮತ್ತು ಉದ್ದ ಏಕೆ ಇರುತ್ತದೆ..? ಇಲ್ಲಿದೆ ರೋಚಕ ವಿಜ್ಞಾನ..!]]></title>
            <link>https://kannada.asianetnews.com/gallery/science/why-is-one-pin-in-a-3-pin-plug-thicker-and-longer-here-is-the-interesting-science-gkn-27u6c1w</link>
            <guid isPermaLink="true">https://kannada.asianetnews.com/gallery/science/why-is-one-pin-in-a-3-pin-plug-thicker-and-longer-here-is-the-interesting-science-gkn-27u6c1w</guid>
            <pubDate>Sun, 12 Jul 2026 14:34:30 +0530</pubDate>
            <description><![CDATA[&lt;p&gt;ನಾವು ದಿನ ನಿತ್ಯ ಬಳಸುವ ಅನೇಕ ಸಣ್ಣ ಪುಟ್ಟ ವಸ್ತುಗಳಲ್ಲಿ ರೋಚಕ ವಿಜ್ಞಾನ ಅಡಗಿರುತ್ತದೆ. ಅದರಲ್ಲಿ ಮೂರು ಪಿನ್ ಹೊಂದಿರುವ ಪ್ಲಗ್ ಕೂಡ ಹೌದು. ನಿಮಗೆ ಗೊತ್ತಾ ಕೆಲವು ಪ್ಲಗ್&zwnj;ಗಳಲ್ಲಿ ಯಾಕೆ ಮೂರು ಪಿನ್ ಇರುತ್ತದೆ ಎಂದು? ಈ ಕುರಿತ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ...&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxarnjb8g9m2cnt7mbrpwj7r,imgname-3-pin-plug--3--1783846586728.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾವು ದಿನ ನಿತ್ಯ ಬಳಸುವ ಅನೇಕ ಸಣ್ಣ ಪುಟ್ಟ ವಸ್ತುಗಳಲ್ಲಿ ರೋಚಕ ವಿಜ್ಞಾನ ಅಡಗಿರುತ್ತದೆ. ಅದರಲ್ಲಿ ಮೂರು ಪಿನ್ ಹೊಂದಿರುವ ಪ್ಲಗ್ ಕೂಡ ಹೌದು. ನಿಮಗೆ ಗೊತ್ತಾ ಕೆಲವು ಪ್ಲಗ್&zwnj;ಗಳಲ್ಲಿ ಯಾಕೆ ಮೂರು ಪಿನ್ ಇರುತ್ತದೆ ಎಂದು? ಈ ಕುರಿತ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ...&lt;/p&gt;&lt;img&gt;&lt;p&gt;ನಿತ್ಯ ಜೀವನದಲ್ಲಿ ನಾವು ಅನೇಕ ವಿದ್ಯುತ್ ಉಪಕರಣಗಳನ್ನು ಬಳಸುತ್ತೇವೆ. ನೀವು ಗಮನಿಸಿರಬಹುದು! ಕೆಲವು ಪ್ಲಗ್&zwnj;ಗಳಿಗೆ ಎರಡು ಪಿನ್&zwnj;ಗಳಿದ್ದರೆ, ಇನ್ನು ಕೆಲವುಗಳಿಗೆ ಮೂರು ಪಿನ್&zwnj;ಗಳಿರುತ್ತವೆ. ಈ 3-ಪಿನ್ ಪ್ಲಗ್&zwnj;ಗಳಲ್ಲಿ ಎರಡು ಪಿನ್&zwnj;ಗಳು ಚಿಕ್ಕದಾಗಿದ್ದು, ಮೇಲ್ಭಾಗದ ಒಂದು ಪಿನ್ ಮಾತ್ರ ಉದ್ದ ಮತ್ತು ದಪ್ಪವಾಗಿರುತ್ತದೆ. ಇದು ಕೇವಲ ವಿನ್ಯಾಸಕ್ಕಾಗಿ ಮಾಡಿದ್ದಲ್ಲ, ಇದರ ಹಿಂದೆ ಪ್ರಮುಖವಾದ ಸುರಕ್ಷತಾ ಕಾರಣವಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಫ್ರಿಜ್, ಎಸಿ, ಮೈಕ್ರೋವೇವ್ ಓವನ್ ಮತ್ತು ಗೀಸರ್&zwnj;ನಂತಹ ದೊಡ್ಡ ವಿದ್ಯುತ್ ಉಪಕರಣಗಳಿಗೆ 3-ಪಿನ್ ಪ್ಲಗ್ ಬಳಸಲಾಗುತ್ತದೆ. ಈ ಸಾಧನಗಳ ಹೊರಭಾಗವು ಹೆಚ್ಚಾಗಿ ಲೋಹದಿಂದ (Metal body) ಮಾಡಲ್ಪಟ್ಟಿರುತ್ತದೆ. ಒಂದು ವೇಳೆ ವೈರ್&zwnj;ಗಳು ಸವೆದು ಲೋಹದ ಬಾಡಿಗೆ ತಗುಲಿದರೆ ಅಥವಾ ಶಾರ್ಟ್ ಸರ್ಕ್ಯೂಟ್ ಸಂಭವಿಸಿದರೆ ಆ ಸಾಧನವನ್ನು ಮುಟ್ಟಿದವರಿಗೆ ಜೋರಾದ ಎಲೆಕ್ಟ್ರಿಕ್ ಶಾಕ್ ಹೊಡೆಯುವ ಅಪಾಯವಿರುತ್ತದೆ. ಈ ಅಪಾಯ ತಪ್ಪಿಸಲು 3-ಪಿನ್ ಪ್ಲಗ್ ಅಗತ್ಯ.&lt;/p&gt;&lt;img&gt;&lt;p&gt;ನಮ್ಮ ಮೊಬೈಲ್ ಚಾರ್ಜರ್, ಟಿವಿ ಅಥವಾ ಟ್ರಿಮ್ಮರ್&zwnj;ಗಳಂತಹ ಸಾಧನಗಳಿಗೆ 2-ಪಿನ್ ಪ್ಲಗ್ ಇರುತ್ತದೆ. ಇವುಗಳ ಹೊರಭಾಗವು ಪ್ಲಾಸ್ಟಿಕ್&zwnj;ನಿಂದ ಮಾಡಲ್ಪಟ್ಟಿರುವುದರಿಂದ ಮತ್ತು ಇವು ಕಡಿಮೆ ವಿದ್ಯುತ್ ಬಳಸುವುದರಿಂದ ಇವುಗಳಿಗೆ ಅರ್ಥಿಂಗ್ ಅವಶ್ಯಕತೆ ಇರುವುದಿಲ್ಲ.&lt;/p&gt;&lt;img&gt;&lt;p&gt;3-ಪಿನ್ ಪ್ಲಗ್&zwnj;ನಲ್ಲಿರುವ ಉದ್ದವಾದ ಪಿನ್ ಅನ್ನು 'ಅರ್ಥ್ ಪಿನ್' (Earth Pin) ಎಂದು ಕರೆಯಲಾಗುತ್ತದೆ. ನೀವು ಪ್ಲಗ್ ಅನ್ನು ಸಾಕೆಟ್&zwnj;ಗೆ ಹಾಕಿದಾಗ, ಉದ್ದವಿರುವ ಅರ್ಥ್ ಪಿನ್ ಎಲ್ಲಕ್ಕಿಂತ ಮೊದಲು ಒಳಗೆ ಹೋಗುತ್ತದೆ. ವಿದ್ಯುತ್ ಹರಿಯುವ ಪಿನ್&zwnj;ಗಳಾದ 'ಫೇಸ್' ಮತ್ತು 'ನ್ಯೂಟ್ರಲ್' ಸಂಪರ್ಕ ಹೊಂದುವ ಮೊದಲೇ ಸಾಧನಕ್ಕೆ ಅರ್ಥಿಂಗ್ ಸಂಪರ್ಕ ಸಿಗುತ್ತದೆ.&lt;/p&gt;&lt;p&gt;ಒಂದು ವೇಳೆ ಆ ಉಪಕರಣದಲ್ಲಿ ಮೊದಲೇ ವಿದ್ಯುತ್ ಸೋರಿಕೆ (Current leakage) ಇದ್ದರೆ, ನೀವು ಅದನ್ನು ಮುಟ್ಟುವ ಮೊದಲೇ ಆ ಹೆಚ್ಚುವರಿ ವಿದ್ಯುತ್ ಸುರಕ್ಷಿತವಾಗಿ ಭೂಮಿಗೆ ಸೇರುತ್ತದೆ. ಇದರಿಂದ ನಮಗೆ ಶಾಕ್ ಹೊಡೆಯುವುದು ತಪ್ಪುತ್ತದೆ.&lt;/p&gt;&lt;img&gt;&lt;p&gt;ಪಿನ್ ದಪ್ಪವಾಗಿದ್ದರೆ ಅದನ್ನು ನಾವು ತಿಳಿಯದೇ ಸಾಕೆಟ್&zwnj;ನ 'ಲೈವ್' ಅಥವಾ 'ನ್ಯೂಟ್ರಲ್' ಸ್ಲಾಟ್&zwnj;ಗಳಿಗೆ ಹಾಕಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅದು ಸಣ್ಣದಾಗಿದ್ದರೆ, ತಪ್ಪಾಗಿ ಹಾಕುವ ಸಾಧ್ಯತೆ ಇರುತ್ತದೆ, ಇದರಿಂದ ಸಾಧನ ಹಾಳಾಗಬಹುದು. ವಿಜ್ಞಾನದ ನಿಯಮದಂತೆ, ವೈರ್ ಅಥವಾ ಪಿನ್ ಎಷ್ಟು ದಪ್ಪವಾಗಿರುತ್ತದೆಯೋ ಅದರ ವಿದ್ಯುತ್ ಪ್ರತಿರೋಧ ಅಷ್ಟು ಕಡಿಮೆಯಿರುತ್ತದೆ. ಪ್ರತಿರೋಧ ಕಡಿಮೆಯಿದ್ದಷ್ಟೂ ವಿದ್ಯುತ್ ವೇಗವಾಗಿ ಪ್ರವಹಿಸುತ್ತದೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್ ಆದಾಗ ಸೋರಿಕೆಯಾದ ವಿದ್ಯುತ್ ಯಾವುದೇ ಅಡೆತಡೆಯಿಲ್ಲದೆ, ಕ್ಷಣಾರ್ಧದಲ್ಲಿ ಭೂಮಿಗೆ ಸೇರಿ ಅಪಘಾತಗಳನ್ನು ತಪ್ಪಿಸುತ್ತದೆ. ಹೀಗೆ ನಮಗೆ ಸಣ್ಣದಾಗಿ ಕಾಣುವ ಪ್ಲಗ್ ವಿನ್ಯಾಸವು ನಮ್ಮ ಮನೆಯಲ್ಲಿ ವಿದ್ಯುತ್ ಅಪಘಾತಗಳು ಸಂಭವಿಸದಂತೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/science/why-is-one-pin-in-a-3-pin-plug-thicker-and-longer-here-is-the-interesting-science-gkn-27u6c1w"/>
        </item>
        <item>
            <title><![CDATA[ಒಂದು ಪಾನಿಪುರಿಗಾಗಿ 12 ವರ್ಷಗಳಿಂದ ಕೋರ್ಟ್‌ ಅಲೆದಾಟ.. ರೋಚಕ ಕಾನೂನು ಸಮರ..!]]></title>
            <link>https://kannada.asianetnews.com/india-news/rohtak-district-of-hariyana-a-fight-over-one-pani-puri-has-been-going-on-for-12-years-pani-puri-controversy-gkn/articleshow-5ss51em</link>
            <guid isPermaLink="true">https://kannada.asianetnews.com/india-news/rohtak-district-of-hariyana-a-fight-over-one-pani-puri-has-been-going-on-for-12-years-pani-puri-controversy-gkn/articleshow-5ss51em</guid>
            <pubDate>Sun, 12 Jul 2026 12:54:38 +0530</pubDate>
            <description><![CDATA[&lt;p&gt;ಇದು ಒಂದು ಪಾನಿಪುರಿಗಾಗಿ ನಡೆಯುತ್ತಿರುವ ಹೋರಾಟ. ಅದು ಕೂಡ ಬರೋಬ್ಬರಿ 12 ವರ್ಷಗಳಿಂದ. ಈ ಕಾನೂನು ಸಮರ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣ್ತಿಲ್ಲ. ರೋಚಕ ಕಾನೂನು ಹೋರಾಟದ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxak8tzm2jrd8t3d746hkgpa,imgname-pani-puri-1783840926708.jpg" type="image/jpeg" height="390" width="690"/>
            <content:encoded><![CDATA[&lt;p&gt;ರೋಹ್ಟಕ್ (ಹರಿಯಾಣ): ಆಸ್ತಿ ವಿವಾದ, ಹಣದ ವ್ಯವಹಾರ ಅಥವಾ ಗಂಭೀರ ಅಪರಾಧಗಳಿಗಾಗಿ ಜನ ವರ್ಷಗಟ್ಟಲೆ ಕೋರ್ಟ್ ಮೆಟ್ಟಿಲೇರೋದನ್ನ ನೋಡಿದ್ದೇವೆ. ಹರಿಯಾಣದಲ್ಲಿ ಕೇವಲ ಒಂದೇ ಒಂದು ಪಾನಿಪುರಿಗಾಗಿ ಇಬ್ಬರು ವ್ಯಕ್ತಿಗಳು ಬರೋಬ್ಬರಿ 12 ವರ್ಷಗಳ ಕಾಲ ನ್ಯಾಯಾಲಯದ ಸುತ್ತ ಅಲೆದಾಡಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ವಿಲಕ್ಷಣ ಪ್ರಕರಣ ಆರಂಭವಾಗಿದ್ದು 2013ರ ಮೇ 21ರಂದು. ಹರಿಯಾಣದ ಮಹಂ ಪಟ್ಟಣದ ರಾಜೀವ್ ಚೌಕ್&zwnj;ನಲ್ಲಿ ಅನಿಲ್ ಎಂಬ ಯುವಕ ಸುಬೇ ಸಿಂಗ್ ಎಂಬುವವರ ಪಾನಿಪುರಿ ಗಾಡಿಯ ಬಳಿ ಹೋಗಿದ್ದ. ಎಲ್ಲರೂ 5 ರೂಪಾಯಿಗೆ 5 ಪಾನಿಪುರಿ ನೀಡುತ್ತಿದ್ದರೆ, ಸುಬೇ ಸಿಂಗ್ ಮಾತ್ರ ಕೇವಲ 4 ರೂಪಾಯಿಗೆ ಪಾನಿಪುರಿ ನೀಡುತ್ತಿದ್ದ.&lt;/p&gt;&lt;p&gt;ಇದನ್ನು ಪ್ರಶ್ನಿಸಿದ ಅನಿಲ್, ಎಲ್ಲರೂ ಐದು ಕೊಡುತ್ತಿದ್ದರೆ ನೀನು ಯಾಕೆ ನಾಲ್ಕು ನೀಡುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಸುಬೇ ಸಿಂಗ್, ಇದು ನನ್ನ ವ್ಯಾಪಾರ, ನನ್ನ ಇಷ್ಟ. ಇಷ್ಟವಿದ್ದರೆ ತಿನ್ನು ಇಲ್ಲದಿದ್ದರೆ ಹೋಗು ಎಂದು ಗದರಿಸಿದ್ದಾನೆ. ಈ ಸಣ್ಣ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಅಂತಿಮವಾಗಿ ಇಬ್ಬರೂ ಒಬ್ಬರ ಮೇಲೆ ಒಬ್ಬರು ಪೊಲೀಸ್ ಕೇಸ್ ದಾಖಲಿಸಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;12 ವರ್ಷಗಳ ಸುದೀರ್ಘ ಕಾನೂನು ಸಮರ&lt;/strong&gt;&lt;/h3&gt;&lt;p&gt;ಈ ಪ್ರಕರಣದ ವಿಚಾರಣೆಯು ಮಹಂ ನ್ಯಾಯಾಲಯದಲ್ಲಿ ಆರಂಭವಾಯಿತು. ಆರಂಭದಲ್ಲಿ ಅನಿಲ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅನಿಲ್&zwnj;ಗೆ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅನಿಲ್ ತಂದೆ ಸತ್ಯವಾನ್ ಅವರು ಸೆಷನ್ಸ್ ನ್ಯಾಯಾಲಯದ ಮೊರೆ ಹೋದರು. ಅಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಅನಿಲ್&zwnj;ನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತು. ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ! ಅನಿಲ್ ತಂದೆ ಸತ್ಯವಾನ್ ಅವರು ಪಾನಿಪುರಿ ವ್ಯಾಪಾರಿ ಮತ್ತು ಆಗಿನ ಪೊಲೀಸ್ ಅಧಿಕಾರಿಗಳ (SHO, ಚೌಕಿ ಇನ್-ಚಾರ್ಜ್ ಮತ್ತು ASI) ವಿರುದ್ಧವೇ ಪ್ರತಿ ದೂರು ದಾಖಲಿಸಿದರು. ತನ್ನ ಮಗನ ಮೇಲೆ ಇವರೆಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.&lt;/p&gt;&lt;h3&gt;&lt;strong&gt;ಪೊಲೀಸ್ ಅಧಿಕಾರಿಗಳಿಗೂ ಸಂಕಷ್ಟ&lt;/strong&gt;&lt;/h3&gt;&lt;p&gt;ಈ 12 ವರ್ಷಗಳ ಸುದೀರ್ಘ ವಿಚಾರಣೆಯ ಅವಧಿಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಪೊಲೀಸ್ ಅಧಿಕಾರಿಗಳು ನಿವೃತ್ತರಾಗಿದ್ದಾರೆ ಅಥವಾ ವರ್ಗಾವಣೆಗೊಂಡಿದ್ದಾರೆ. ನ್ಯಾಯಾಲಯವು ಈ ಅವಧಿಯಲ್ಲಿ ಒಟ್ಟು 15 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಸುದೀರ್ಘ ವಿಚಾರಣೆಯ ನಂತರ ಇತ್ತೀಚೆಗೆ ಮಹಂ ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. ಎರಡೂ ಕಡೆಯವರು ನೀಡಿದ ಸಾಕ್ಷ್ಯಗಳಲ್ಲಿ ಬಲವಾದ ಆಧಾರಗಳಿಲ್ಲದ ಕಾರಣ, ಪ್ರಕರಣದಲ್ಲಿದ್ದ ಒಟ್ಟು 9 ಜನ ಆರೋಪಿಗಳನ್ನು (ಪೊಲೀಸರು ಸೇರಿದಂತೆ) ನ್ಯಾಯಾಲಯವು ನಿರ್ದೋಷಿಗಳೆಂದು ಘೋಷಿಸಿ ಖುಲಾಸೆಗೊಳಿಸಿದೆ.&lt;/p&gt;&lt;h3&gt;&lt;strong&gt;ಇನ್ನೂ ಮುಗಿಯದ ಪಾನಿಪುರಿ ಪುರಾಣ!&lt;/strong&gt;&lt;/h3&gt;&lt;p&gt;ನ್ಯಾಯಾಲಯದ ತೀರ್ಪಿನಿಂದ ಸತ್ಯವಾನ್ ಅವರು ತೃಪ್ತರಾಗಿಲ್ಲ. ನನ್ನ ಮಗನಿಗೆ ಅನ್ಯಾಯವಾಗಿದೆ, ನಾವು ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ, ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ, ಒಂದು ಪಾನಿಪುರಿಗಾಗಿ ಆರಂಭವಾದ ಈ ಹೋರಾಟ 12 ವರ್ಷ ಕಳೆದರೂ ಮುಗಿದಿಲ್ಲ, ಮುಂದಿನ ದಿನಗಳಲ್ಲಿ ಇದು ಹೈಕೋರ್ಟ್ ಅಂಗಳ ತಲುಪಲಿದೆ! ಒಟ್ಟಿನಲ್ಲಿ, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಜೀವನದ ಅಮೂಲ್ಯ ಸಮಯ ಮತ್ತು ಹಣವನ್ನು ಹೇಗೆ ವ್ಯರ್ಥ ಮಾಡುತ್ತದೆ ಎಂಬುದಕ್ಕೆ ಈ ಪಾನಿಪುರಿ ಪ್ರಕರಣ ಒಂದು ಸಾಕ್ಷಿಯಾಗಿದೆ.&lt;/p&gt;]]></content:encoded>
            <category>india-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/rohtak-district-of-hariyana-a-fight-over-one-pani-puri-has-been-going-on-for-12-years-pani-puri-controversy-gkn/articleshow-5ss51em"/>
        </item>
        <item>
            <title><![CDATA[MP V MLA Pension: ನಿವೃತ್ತಿಯ ನಂತರ ಒಬ್ಬ ಸಂಸದನಿಗೆ ಎಷ್ಟು ಪಿಂಚಣಿ ಸಿಗುತ್ತೆ?]]></title>
            <link>https://kannada.asianetnews.com/politics/how-much-pension-does-a-member-of-parliament-receive-after-retirement-rav/articleshow-uicdugo</link>
            <guid isPermaLink="true">https://kannada.asianetnews.com/politics/how-much-pension-does-a-member-of-parliament-receive-after-retirement-rav/articleshow-uicdugo</guid>
            <pubDate>Sun, 12 Jul 2026 08:18:44 +0530</pubDate>
            <description><![CDATA[&lt;p&gt;ನಿವೃತ್ತ ಸಂಸದರು ಮಾಸಿಕ ₹31,000 ಪಿಂಚಣಿ ಹಾಗೂ ಹೆಚ್ಚುವರಿ ಸೇವೆಗೆ ಹೆಚ್ಚಿನ ಮೊತ್ತವನ್ನು ಪಡೆಯುತ್ತಾರೆ. ಆದರೆ, ಶಾಸಕರ ಪಿಂಚಣಿಯು ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿದ್ದು, ಕೆಲವೊಮ್ಮೆ ಸಂಸದರಿಗಿಂತ ಹೆಚ್ಚಿರಬಹುದು. ಒಬ್ಬ ವ್ಯಕ್ತಿಯು ಸಂಸದ, ಶಾಸಕರಾಗಿ ಎರಡೂ ಪಿಂಚಣಿ ಪಡೆಯುವ ಬಗ್ಗೆಯೂ ವಿವಾದಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwpsdg1heeqnd602wa67kp3k,imgname-parliament-monsoon-session-1783176282161.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಸಂಸದರು, ಶಾಸಕರ ಸಂಬಳ ಮತ್ತು ಪಿಂಚಣಿಗಳ ವಿಷಯವು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಸಾಮಾನ್ಯ ಸರ್ಕಾರಿ ನೌಕರನ ಪಿಂಚಣಿ ಬದಲಾಗಿದೆ ಅದೇ ರೀತಿ ಸಂಸದರು, ಶಾಸಕರಿಗೂ ಪಿಂಚಣಿ ವ್ಯವಸ್ಥೆ ಇದೆಯೇ? ಕಾಲ ಕಾಲಕ್ಕೆ ಬದಲಾಗುತ್ತದೆಯೇ? ಸರ್ಕಾರಿ ನೌಕರರ ನಿಯಮಗಳೇ ಇಲ್ಲೂ ಅನ್ವಯಿಸುತ್ತವೆಯೇ? ಅಥವಾ ಬೇರೆಯದ್ದೇ ವ್ಯವಸ್ಥೆ ಇದೆಯೇ? ಈ ರೀತಿ ಆಗಾಗ್ಗೆ ಪ್ರಶ್ನೆ ಉದ್ಭವಿಸುತ್ತದೆ.&lt;/p&gt;&lt;p&gt;ನಿವೃತ್ತಿಯ ನಂತರ ಸಂಸದರು ಎಷ್ಟು ಪಿಂಚಣಿ ಪಡೆಯುತ್ತಾರೆ? ಅವರು ಶಾಸಕರಿಗಿಂತ ಹೆಚ್ಚಿನ ಸೌಲಭ್ಯ ಪಡೆಯುತ್ತಾರೆ. ಪಿಂಚಣಿಯಲ್ಲೂ ಸಂಸದರು ಶಾಸಕರಿಗಿಂತ ಹೆಚ್ಚು ಪಡೆಯುತ್ತಾರೆಯೇ ಅಥವಾ ಕಡಿಮೆ?&lt;/p&gt;&lt;h2&gt;ನಿವೃತ್ತ ಸಂಸದರಿಗೆ ಸಿಗುವ ಪಿಂಚಣಿ ಎಷ್ಟು?&lt;/h2&gt;&lt;p&gt;ಅಧಿಕೃತ ಸಂಸದೀಯ ನಿಯಮಗಳ ಪ್ರಕಾರ, ಮಾಜಿ ಸಂಸದರು ನಿವೃತ್ತಿಯ ನಂತರ ಮಾಸಿಕ ₹31,000 ಪಿಂಚಣಿ ಪಡೆಯುತ್ತಾರೆ. ಈ ಹೆಚ್ಚಿನ ಪಿಂಚಣಿಯನ್ನು ಏಪ್ರಿಲ್ 1, 2023 ರಂದು ಜಾರಿಗೆ ತರಲಾಯಿತು. ಹಿಂದೆ, ಮಾಜಿ ಸಂಸದರು ಮಾಸಿಕ ₹25,000 ಪಿಂಚಣಿ ಪಡೆಯುತ್ತಿದ್ದರು. ಸಂಸದರು ಐದು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದರೆ, ಅವರು ಹೆಚ್ಚುವರಿ ಸೇವಾ ಅವಧಿಗೆ ಪಿಂಚಣಿಯನ್ನು ಸಹ ಪಡೆಯುತ್ತಾರೆ. ಐದು ವರ್ಷಗಳ ನಂತರ ಪ್ರತಿ ಹೆಚ್ಚುವರಿ ವರ್ಷಕ್ಕೆ, ತಿಂಗಳಿಗೆ ₹2,500 ಹೆಚ್ಚುವರಿಯಾಗಿ ನೀಡಲಾಗುತ್ತದೆ.&lt;/p&gt;&lt;h3&gt;ಹೆಚ್ಚುವರಿ ಅವಧಿಯಲ್ಲಿ ಪಿಂಚಣಿ ಹೇಗೆ ಹೆಚ್ಚಾಗುತ್ತೆ?&lt;/h3&gt;&lt;p&gt;ಒಬ್ಬ ಸಂಸದರು ಒಂದಕ್ಕಿಂತ ಹೆಚ್ಚು ಅವಧಿಗೆ ಸಂಸತ್ತಿನಲ್ಲಿ ಸೇವೆ ಸಲ್ಲಿಸಿದ್ದರೆ, ಅವರ ಪಿಂಚಣಿ ಹೆಚ್ಚಾಗುತ್ತದೆ. ಉದಾಹರಣೆಗೆ, ಒಬ್ಬ ಸಂಸದರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ, ಅವರು ₹31,000 ಜೊತೆಗೆ ಎರಡು ಹೆಚ್ಚುವರಿ ವರ್ಷಗಳವರೆಗೆ ₹5,000 ಪಡೆಯುತ್ತಾರೆ. ಅಂದರೆ ಅವರ ಒಟ್ಟು ಮಾಸಿಕ ಪಿಂಚಣಿಯನ್ನು ₹36,000 ಬರುತ್ತೆ. ಅದೇ ರೀತಿ, ಒಬ್ಬ ಸಂಸದರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ, ಅವರು ₹31,000 ಜೊತೆಗೆ ₹7,500 ಹೆಚ್ಚುವರಿ ಮೂರು ವರ್ಷಗಳವರೆಗೆ ಪಡೆಯುತ್ತಾರೆ. ಇದು ಅವರ ಒಟ್ಟು ಮಾಸಿಕ ಪಿಂಚಣಿಯನ್ನು ₹38,500 ಕ್ಕೆ ಏರುತ್ತೆ. ನಿಯಮಗಳ ಪ್ರಕಾರ, ಒಬ್ಬ ಸಂಸದರು ಹೆಚ್ಚುವರಿ ವರ್ಷದಲ್ಲಿ ಕನಿಷ್ಠ ಒಂಬತ್ತು ತಿಂಗಳು ಸೇವೆ ಸಲ್ಲಿಸಿದ್ದರೆ, ಅದನ್ನು ಪೂರ್ಣ ವರ್ಷವೆಂದು ಪರಿಗಣಿಸಲಾಗುತ್ತದೆ ಮತ್ತು ಅವರಿಗೆ ಹೆಚ್ಚುವರಿ ಪಿಂಚಣಿ ನೀಡಲಾಗುತ್ತದೆ.&lt;/p&gt;&lt;p&gt;&lt;strong&gt;ಶಾಸಕರು ಪಿಂಚಣಿ ಹೇಗಿದೆ?&lt;/strong&gt;&lt;/p&gt;&lt;p&gt;ದೇಶಾದ್ಯಂತ ಶಾಸಕರ ಪಿಂಚಣಿ ಒಂದೇ ರೀತಿ ಇಲ್ಲ. ಪ್ರತಿಯೊಂದು ರಾಜ್ಯ ವಿಧಾನಸಭೆಯು ತನ್ನ ಶಾಸಕರ ಸಂಬಳ ಮತ್ತು ಪಿಂಚಣಿಗಳಿಗೆ ತನ್ನದೇ ಆದ ನಿಯಮಗಳನ್ನು ನಿಗದಿಪಡಿಸುತ್ತದೆ. ಪರಿಣಾಮವಾಗಿ, ಪಿಂಚಣಿ ಮೊತ್ತವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಅನೇಕ ರಾಜ್ಯಗಳಲ್ಲಿ, ಶಾಸಕರ ಮಾಸಿಕ ಪಿಂಚಣಿ ಸಂಸದರಿಗಿಂತ ಹೆಚ್ಚಾಗಿರುತ್ತದೆ, ಆದರೆ ಇತರ ರಾಜ್ಯಗಳಲ್ಲಿ ಇದು ಕಡಿಮೆ ಇರುತ್ತದೆ. ಪಿಂಚಣಿ ಮೊತ್ತವು ರಾಜ್ಯ ಸರ್ಕಾರವು ಸ್ಥಾಪಿಸಿದ ನಿಯಮಗಳು ಮತ್ತು ಕಾಲಕಾಲಕ್ಕೆ ಮಾಡಿದ ತಿದ್ದುಪಡಿಗಳನ್ನು ಅವಲಂಬಿಸಿರುತ್ತದೆ.&lt;/p&gt;&lt;h3&gt;ಸಂಸದ ಮತ್ತು ಶಾಸಕರಿಬ್ಬರಿಗೂ ಪಿಂಚಣಿ ಸಿಗಬಹುದೇ?&lt;/h3&gt;&lt;p&gt;ಕೆಲವು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಯು ಹಿಂದೆ ಶಾಸಕರಾಗಿ ಸೇವೆ ಸಲ್ಲಿಸಿ ನಂತರ ಸಂಸದರಾಗಿದ್ದರೆ, ಅವರು ಎರಡೂ ಹುದ್ದೆಗಳಿಗೆ ಪಿಂಚಣಿ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಈ ಬಗ್ಗೆ ವಿವಾದವೂ ಇದೆ. ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳು ಡ್ಯುಯಲ್ ಪಿಂಚಣಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುವ ಬಗ್ಗೆ ಪರಿಗಣಿಸಿವೆ&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/how-much-pension-does-a-member-of-parliament-receive-after-retirement-rav/articleshow-uicdugo"/>
        </item>
        <item>
            <title><![CDATA[S Janaki: ಭಾರತದ ಗಾನ ಕೋಗಿಲೆ ಎಸ್ ಜಾನಕಿ ವಿಧಿವಶ; ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಕನ್ನಡದ ನಂಟು ಹೊಂದಿದ್ದ ಗಾಯಕಿ ಇನ್ನು ನೆನಪು ಮಾತ್ರ!]]></title>
            <link>https://kannada.asianetnews.com/cine-world/legendary-indian-playback-singer-padmabhushana-awarded-s-janaki-passed-away-on-11-july-2026/articleshow-w6ioy5y</link>
            <guid isPermaLink="true">https://kannada.asianetnews.com/cine-world/legendary-indian-playback-singer-padmabhushana-awarded-s-janaki-passed-away-on-11-july-2026/articleshow-w6ioy5y</guid>
            <pubDate>Sat, 11 Jul 2026 20:32:28 +0530</pubDate>
            <description><![CDATA[&lt;p&gt;ದಿವಂಗತ ಮೇರುಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಯೋಜಕ ಇಳಯರಾಜ ಅವರೊಂದಿಗೆ ಎಸ್ ಜಾನಕಿ ಅವರಿಗೆ ಆತ್ಮೀಯ ಒಡನಾಟವತ್ತು. ಜೊತೆಗೆ ಉಳಿದ ಹಿರಿಯ ಹಾಗೂ ಕಿರಿಯ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು, ನಟನಟಿಯರು ಕಲಾವಿದರು ಸೇರಿದಂತೆ ಚಿತ್ರರಂಗದ ಬಹಳಷ್ಟು ಜನರ ಜೊತೆ ಎಸ್ ಜಾನಕಿಯವರ ಸಂಬಂಧ ಆಪ್ತವಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx8v6mpqqv1m5e24gyw3qgwy,imgname-whatsapp-image-2026-07-11-at-8.04.28-pm-1783782134487.jpeg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಲೆಜೆಂಡ್ ಸಿಂಗರ್, ಹೆಸರಾಂತ ಗಾಯಕಿ ಎಸ್&zwnj; ಜಾನಕಿಯವರು (S Janaki) ಇಂದು (11 ಜುಲೈ 2026) ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕನ್ನಡದಲ್ಲಿಯೂ ಬಹಳಷ್ಟು ಹಾಡನ್ನು ಹಾಡಿದ್ದ ಎಸ್ ಜಾನಕಿಯವರು ಕರ್ನಾಟಕದಲ್ಲಿ ಮನೆಮಾತಾಗಿದ್ದರು. ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಲ್ಲಿ ಒಂದಾದ ಪದ್ಮಭೂಷಣ ಪಡೆದಿದ್ದಾರೆ ಭಾರತದ ಮೇರು ಗಾಯಕಿ ಎಸ್ ಜಾನಕಿಯವರು.&lt;/p&gt;&lt;p&gt;ಕನ್ನಡದಲ್ಲಿ, ಅದರಲ್ಲೂ ಮುಖ್ಯವಾಗಿ ಕನ್ನಡದ ಮೇರು ನಟರಾದ ಡಾ ರಾಜ್&zwnj;ಕುಮಾರ್, ವಿಷ್ಣುವರ್ಧನ್, ಶಂಕರ್&zwnj; ನಾಗ್, ಅನಂತ್&zwnj; ನಾಗ್, ಅಂಬರೀಷ್, ಶಿವರಾಜ್&zwnj;ಕುಮಾರ್ ಸೇರಿದಂತೆ ಬಹಳಷ್ಟು ನಟನಟಿಯರ ಸಿನಿಮಾಗಳ ಹಾಡುಗಳಿಗೆ ಎಸ್ ಜಾನಕಿಯವರು ಧ್ವನಿ ನೀಡಿದ್ದಾರೆ.&lt;/p&gt;&lt;p&gt;ಅಪ್ರತಿಮ ಗಾಯಕಿ ಎಸ್&zwnj; ಜಾನಕಿ ಅವರಿಗೆ ವಯೋಸಹಜ ಅನಾರೋಗ್ಯವಿತ್ತು. ಜೊತೆಗೆ ಇತ್ತೀಚೆಗೆ ಕಾಲುಜಾರಿ ಬಿದ್ದು ವ್ಹೀಳ್&zwnj;ಚೇರ್&zwnj;ನಲ್ಲಿ ಓಡಾಡುವಂತಾಗಿತ್ತು. ಇಂದು ಆಸಪತ್ರೆಯಲ್ಲಿ ಹಿರಿಯ ಗಾಯಕಿ ಎಸ್&zwnj; ಜಾನಕಿಯವರು ನಿಧನರಾಗಿದ್ದಾರೆ.&lt;/p&gt;&lt;p&gt;ನಾಲ್ಕುರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 33 ವಿವಿಧ ರಾಜ್ಯ ಪ್ರಶಸ್ತಿಗಳು, ಬಹಳಷ್ಟು ಸಂಘಸಂಸ್ಥೆಗಳ ಪ್ರಶಸ್ತಿಗಳನ್ನು ಪಡೆದಿರುವ ಹಿರಿಯ ಗಾಯಕಿ ಎಸ್ ಜಾನಿಯವರು ಇಂದು ತಮ್ಮ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಈ ಮೂಲಕ ಭಾರತದ ಹೆಮ್ಮೆಯ ಹಿನ್ನೆಲೆ ಗಾಯನದ ಹಿರಿಯ ಗಾಯಕರಲ್ಲಿ ಕೊಂಡಿಯಲ್ಲಿ ಮತ್ತೊಂದು ಸಂಗೀತ ರತ್ನ ನಮ್ಮಿಂದ ದೂರವಾಗಿದೆ.&lt;/p&gt;&lt;p&gt;ದಿವಂಗತ ಮೇರುಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಯೋಜಕ ಇಳಯರಾಜ ಅವರೊಂದಿಗೆ ಎಸ್ ಜಾನಕಿ ಅವರಿಗೆ ಆತ್ಮೀಯ ಒಡನಾಟವತ್ತು. ಜೊತೆಗೆ ಉಳಿದ ಹಿರಿಯ ಹಾಗೂ ಕಿರಿಯ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು, ನಟನಟಿಯರು ಕಲಾವಿದರು ಸೇರಿದಂತೆ ಚಿತ್ರರಂಗದ ಬಹಳಷ್ಟು ಜನರ ಜೊತೆ ಎಸ್ ಜಾನಕಿಯವರ ಒಡನಾಟ ಇತ್ತು. ಈ ಸಂಗೀತದ ಮುತ್ತು ಇಂದು ನಮ್ಮನ್ನು ಅಗಲಿದ್ದಾರೆ. ಅವರಿಗೆ ಚಿತ್ರರಂಗ ಸೇರಿದಂತೆ ಇಡೀ ದೇಶ ಅಶ್ರುತರ್ಪಣ ನೀಡುತ್ತಿದೆ.&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/legendary-indian-playback-singer-padmabhushana-awarded-s-janaki-passed-away-on-11-july-2026/articleshow-w6ioy5y"/>
        </item>
        <item>
            <title><![CDATA[S Janaki: ಎಸ್ ಜಾನಕಿಯ ಕೊನೆಯ ಗಾಯನ, ಕೊನೆಯ ಉಸಿರಿಗೆ ಸಾಕ್ಷಿಯಾಗಿದ್ದು ಕನ್ನಡನಾಡಿನ ಮೈಸೂರು!]]></title>
            <link>https://kannada.asianetnews.com/sandalwood/legendary-indian-playback-singer-singer-last-music-event-and-last-breath-ended-in-mysore-of-karnataka/articleshow-ga3v572</link>
            <guid isPermaLink="true">https://kannada.asianetnews.com/sandalwood/legendary-indian-playback-singer-singer-last-music-event-and-last-breath-ended-in-mysore-of-karnataka/articleshow-ga3v572</guid>
            <pubDate>Sat, 11 Jul 2026 21:14:35 +0530</pubDate>
            <description><![CDATA[&lt;p&gt;1952ರಲ್ಲಿ ಜಿ.ಕೆ. ವೆಂಕಟೇಶ್&zwnj; ಅವರು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್&zwnj; ಅವರೊಂದಿಗೆ ಹಾಡಿದ್ದ ಎಸ್ ಜಾನಕಿಯವರು, ಮತ್ತೆ ಅಕ್ಟೋಬರ್&zwnj; 28, 2017ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ಗಾನಸುಧೆ ಹರಿಸಿದ್ದೇ ಕೊನೆಯ ಕಾರ್ಯಕ್ರಮ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx8xm35bm34dghsfyapgvyah,imgname-s-janaki--1--1783784672427.jpg" type="image/jpeg" height="390" width="690"/>
            <content:encoded><![CDATA[&lt;p&gt;'ಹಾಡಿದ್ದು ಸಾಕಾಗಿದೆ. ಹಾಡ ಬೇಕಾದವರು ಹಲವರಿದ್ದಾರೆ. ಇಷ್ಟು ವರ್ಷ ಹಾಡಿರುವ ನನಗೆ ಸಂತೃಪ್ತಿಯಾಗಿದೆ. ಅದಕ್ಕಾಗಿ ಗಾಯನ ನಿಲ್ಲಿಸುತ್ತಿರುವೆ.' ಎಂದು ಹೇಳುತ್ತ, ಕನ್ನಡನಾಡಿನ ಮೈಸೂರಿನಲ್ಲಿಯೇ ತಮ್ಮ ಕೊನೆಯ ಸಂಗೀತ ಕಾರ್ಯಕ್ರಮ (2017) ಮುಗಿಸಿದ್ದರು ಎಸ್ ಜಾನಕಿ. ಇಂದು ಅದೇ ಮೈಸೂರಿನಲ್ಲಿ ಜೀವನದ ಹಾಡು ಮುಗಿಸಿ ಹೊರಟುಹೋಗಿದ್ದಾರೆ ಎಸ್ ಜಾನಕಿ. ಭಾರತದ ಮೇರು ಗಾಯಕಿ, ಪದ್ಮಭೂಷಣ ಪ್ರಶಸ್ತಿ ವಿಜೇತೆ ಎಸ್ ಜಾನಕಿಯವರು ಇನ್ನಿಲ್ಲ ಎಂಬುದು ಸಿನಿರಸಿಕರಿಗೆ, ಸಂಗೀತಪ್ರೇಮಿಗಳಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ.&lt;/p&gt;&lt;p&gt;88 ವರ್ಷ ವಯಸ್ಸಿನ ಎಸ್ ಜಾನಕಿಯವರು ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜೊತೆಗೆ ಮಗನ ಸಾವಿನಿಂದ ಕೂಡ ಕಂಗೆಟ್ಟಿದ್ದರು. ತೀರಾ ಇತ್ತೀಚೆಗೆ ಕಾಲು ಜಾರಿ ಬಿದ್ದು ಏಟು ಮಾಡಿಕೊಂಡಿದ್ದ ಎಸ್ ಜಾನಕಿಯವರು ವೀಲ್&zwnj;ಚೇರ್ ಸಹಾಯದಿಂದ ಓಡಾಡುತ್ತಿದ್ದರು. ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಂತಿಮ ಉಸಿರು ಚೆಲ್ಲಿದ್ದಾರೆ. ಈ ಮೂಲಕ ಭಾರತದ ಹಾಡುಹಕ್ಕಿ ಶಾಶ್ವತವಾಗಿ ಹಾಡು ನಿಲ್ಲಿಸಿ ಮರೆಯಾಗಿದೆ.&lt;/p&gt;&lt;p&gt;1952ರಲ್ಲಿ ಜಿ.ಕೆ. ವೆಂಕಟೇಶ್&zwnj; ಅವರು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್&zwnj; ಅವರೊಂದಿಗೆ ಹಾಡಿದ್ದ ಎಸ್ ಜಾನಕಿಯವರು, ಮತ್ತೆ ಅಕ್ಟೋಬರ್&zwnj; 28ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ಗಾನಸುಧೆ ಹರಿಸಿದ್ದೇ ಕೊನೆಯ ಕಾರ್ಯಕ್ರಮ. ಅಂದು ಸಂಭ್ರಮ, ವಿದಾಯದ ನೋವು, ಸಂಗೀತದ ಪಯಣ ಎಲ್ಲವನ್ನೂ ಮನಸಾರೆ ಹೇಳಿಕೊಂಡಿದ್ದ ಎಸ್ ಜಾಕಿಯವರು ಮತ್ತೆ ಯಾವತ್ತೂ ಸಾರ್ವಜನಿಕ ವೇದಿಕೆಗಳಲ್ಲಿ ಹಾಡಲಿಲ್ಲ. ಸ್ವತಃ ಎಸ್ ಜಾನಕಿಯವರಿಗೆ ಹಾಗೂ ಕನ್ನಡನಾಡು ಹಾಗೂ ಭಾರತದ ಎಲ್ಲಾ ಸಂಗೀತ ಪ್ರೇಮಿಗಳಿಗೆ ಕರ್ನಾಟಕದ ಮೈಸೂರು ಕೊನೆಯ ಸಂಗೀತದ ಕಾರ್ಯಕ್ರಮದ ವೇದಿಕೆಯಾಗಿದ್ದು ಇತಿಹಾಸದ ಪುಟದಲ್ಲಿ ಮರೆಯಲಾದ ಕ್ಷಣವಾಗಿ ಅಚ್ಚಳಿಯದೇ ಉಳಿಯಲಿದೆ.&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/legendary-indian-playback-singer-singer-last-music-event-and-last-breath-ended-in-mysore-of-karnataka/articleshow-ga3v572"/>
        </item>
        <item>
            <title><![CDATA[2013ರಲ್ಲಿ ನೀಡಿದ್ದ ದೇಶದ ಅತ್ಯುನ್ನುತ ನಾಗರಿಕ ಪದ್ಮಭೂಷಣ ಪ್ರಶಸ್ತಿಯೇ ಬೇಡ ಎಂದಿದ್ದ Singer S Janaki]]></title>
            <link>https://kannada.asianetnews.com/gallery/cine-world/singer-s-janaki-reject-indian-civilian-padma-bhushan-award-why-zu5gibe</link>
            <guid isPermaLink="true">https://kannada.asianetnews.com/gallery/cine-world/singer-s-janaki-reject-indian-civilian-padma-bhushan-award-why-zu5gibe</guid>
            <pubDate>Sat, 11 Jul 2026 21:49:26 +0530</pubDate>
            <description><![CDATA[&lt;p&gt;Singer S Janaki: ಅಭಿಮಾನಿಗಳಿಂದ ಜಾನಕಿಯಮ್ಮ ಎಂದೇ ಕರೆಸಿಕೊಳ್ಳುವ S Janaki ಅವರು 25 ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, 'ದಕ್ಷಿಣ ಭಾರತದ ಕೋಗಿಲೆ' ಎಂಬ ಬಿರುದು ಪಡೆದಿದ್ದಾರೆ. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಆಕ್ಟಿವ್&zwnj; ಆಗಿ ಹಾಡು ಹಾಡಿದ್ದ ಅವರು ಇಂದು ನಮಗೆ ನೆನಪು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx8z18n5epf36a0bhmd4txqb,imgname-new-project--17--1783786152613.jpg" type="image/jpeg" height="390" width="690"/>
            <content:encoded><![CDATA[&lt;p&gt;Singer S Janaki: ಅಭಿಮಾನಿಗಳಿಂದ ಜಾನಕಿಯಮ್ಮ ಎಂದೇ ಕರೆಸಿಕೊಳ್ಳುವ S Janaki ಅವರು 25 ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, 'ದಕ್ಷಿಣ ಭಾರತದ ಕೋಗಿಲೆ' ಎಂಬ ಬಿರುದು ಪಡೆದಿದ್ದಾರೆ. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಆಕ್ಟಿವ್&zwnj; ಆಗಿ ಹಾಡು ಹಾಡಿದ್ದ ಅವರು ಇಂದು ನಮಗೆ ನೆನಪು.&lt;/p&gt;&lt;img&gt;&lt;p&gt;ಗಾಯಕ S P Balasubrahmanyam ಜೊತೆ ಜಾನಕಿ ಅವರು ಹಾಡಿದ ಅನೇಕ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಆಂಧ್ರಪ್ರದೇಶದ ಎಸ್. ಜಾನಕಿ ಅವರು ಆರಂಭದಲ್ಲಿ ತೆಲುಗು, ಆಮೇಲೆ ತಮಿಳು ಚಿತ್ರರಂಗದಲ್ಲಿ ಹಾಡಲು ಆರಂಭಿಸಿದರು. ಮಲಯಾಳಂ, ಕನ್ನಡ, ಒಡಿಯಾ ಸೇರಿದಂತೆ ಅನೇಕ ಭಾಷೆಗಳಲ್ಲಿ ಹಾಡಿದ್ದಾರೆ.&lt;/p&gt;&lt;img&gt;&lt;p&gt;ಜಾನಕಿ ಅವರಿಗೆ ಉಸಿರಾಟದ ಸಮಸ್ಯೆ ಇದ್ದರೂ ಅನೇಕ ಕಷ್ಟದ ಹಾಡುಗಳನ್ನು ಹಾಡಿ, ಯಶಸ್ಸು ಗಳಿಸಿದ್ದಾರೆ. ಇದಕ್ಕಾಗಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಿಕ್ಕಿವೆ.&lt;/p&gt;&lt;p&gt;2013ರಲ್ಲಿ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿಯನ್ನು ಕೊಡಲು ರೆಡಿಯಾಗಿತ್ತು. ಆದರೆ ಅವರು ತಮ್ಮ ಸಾಧನೆಗೆ ಈ ಗೌರವ ತುಂಬಾ ತಡವಾಗಿ ಬಂದಿದೆ ಎಂದು ಹೇಳಿದ್ದರು.&amp;nbsp;&lt;/p&gt;&lt;img&gt;&lt;p&gt;ಇಲ್ಲಿಯವರೆಗೆ 48,000ಕ್ಕೂ ಹೆಚ್ಚು ಹಾಡು ಹಾಡಿದ್ದ ಅವರು 2016ರಲ್ಲಿ ಗಾಯನಕ್ಕೆ ನಿವೃತ್ತಿ ಘೋಷಿಸಿದ್ದರು. ಆಮೇಲೆ ತುಂಬ ಒತ್ತಾಯ ಮಾಡಿದ್ದಕ್ಕೆ 2018ರಲ್ಲಿ ಬಿಡುಗಡೆಯಾದ 'ಪನ್ನಾಡಿ' ಚಿತ್ರದ 'ಉನ್ ಉಸುರು ಕಾತುಲ' ಹಾಡನ್ನು ಹಾಡಿದರು.&lt;/p&gt;&lt;img&gt;&lt;p&gt;ಪದ್ಮಭೂಷಣ ಭಾರತ ಸರ್ಕಾರ ನೀಡುವ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.&lt;/p&gt;&lt;ul&gt; &lt;li&gt;ರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆಯುತ್ತದೆ.&lt;/li&gt; &lt;li&gt;ವ್ಯಕ್ತಿಯ ಸಾಧನೆ, ಸೇವೆಗೆ ಅಧಿಕೃತ ಗುರುತಿನ ಚಿಹ್ನೆಯಾಗುತ್ತದೆ.&lt;/li&gt; &lt;li&gt;ಸರ್ಕಾರಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿಶೇಷ ಗೌರವ ಸಿಗಬಹುದು.&lt;/li&gt; &lt;li&gt;ಜೀವನ ಸಾಧನೆಗೆ ಸಂಬಂಧಿಸಿದಂತೆ ಸಾಮಾಜಿಕ, ವೃತ್ತಿಪರ ಪ್ರತಿಷ್ಠೆ ಹೆಚ್ಚಾಗುತ್ತದೆ.&lt;/li&gt; &lt;li&gt;ಪದ್ಮಭೂಷಣ ಪ್ರಶಸ್ತಿಯೊಂದಿಗೆ ಯಾವುದೇ ನೇರ ಕ್ಯಾಶ್&zwnj; ಪ್ರೈಜ್, ಪಿಂಚಣಿ ಅಥವಾ ವಿಶೇಷ ಸರ್ಕಾರಿ ಸೌಲಭ್ಯಗಳು ಸ್ವಯಂಚಾಲಿತವಾಗಿ ದೊರೆಯುವುದಿಲ್ಲ. ಇದರ ಮುಖ್ಯ ಮೌಲ್ಯವು ಗೌರವ, ಮಾನ್ಯತೆ&zwnj;, ಪ್ರತಿಷ್ಠೆಯಲ್ಲಿದೆ.&lt;/li&gt;&lt;/ul&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/singer-s-janaki-reject-indian-civilian-padma-bhushan-award-why-zu5gibe"/>
        </item>
        <item>
            <title><![CDATA[S janaki: ಎಸ್ ಜಾನಕಿ ಜೀವನ ಚರಿತ್ರೆ-1957ರಲ್ಲಿ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ; 2017ರಲ್ಲಿ ಅಧಿಕೃತ ವಿದಾಯ!]]></title>
            <link>https://kannada.asianetnews.com/cine-world/today-passed-away-legendary-indian-playback-singer-s-janaki-music-life-journey-to-know-here/articleshow-pi3ph7u</link>
            <guid isPermaLink="true">https://kannada.asianetnews.com/cine-world/today-passed-away-legendary-indian-playback-singer-s-janaki-music-life-journey-to-know-here/articleshow-pi3ph7u</guid>
            <pubDate>Sat, 11 Jul 2026 22:16:50 +0530</pubDate>
            <description><![CDATA[&lt;p&gt;'ದಕ್ಷಿಣ ಭಾರತದ ಕೋಗಿಲೆ' ಎಂದೇ ಖ್ಯಾತಿ ಪಡೆದಿದ್ದ ಗಾಯಕಿ ಎಸ್ ಜಾನಕಿಯವರು ತಮ್ಮ 88ನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರನ್ನು ಭೌತಿಕವಾಗಿ ಕಳೆದುಕೊಂಡಿರುವ ಭಾರತ ಹಾಗೂ ಜಗತ್ತಿನ ಸಂಗೀತಪ್ರೇಮಿಗಳು ಈ ಸಂಗೀತದ ಮೇರುಪ್ರತಿಭೆಯ ಅಗಲುವಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx90z91ykzzqa35grrbvtg96,imgname-s-janaki--3--1783788184638.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಾನ ಕೋಗಿಲೆ ಎಸ್ ಜಾನಕಿ ಅಸ್ತಂಗತ&lt;/strong&gt;&lt;/p&gt;&lt;p&gt;'ದಕ್ಷಿಣ ಭಾರತದ ಗಾನಕೋಗಿಲೆ&quot; ಎಂದೇ ಪ್ರಸಿದ್ಧರಾದ ಮೇರು ಹಿನ್ನೆಲೆ ಗಾಯಕಿ ಎಸ್. ಜಾನಕಿಯವರು, ಕರ್ನಾಟಕದ ಮೈಸೂರಿನಲ್ಲಿ ತಮ್ಮ ಕೊನೆಯ ಉಸಿರು ಚೆಲ್ಲಿದ್ದಾರೆ. ಎಸ್ ಜಾನಕಿ ಅವರು ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ಹಿನ್ನಲೆ ಗಾಯಕಿ. ಜಗತ್ತಿನ 22ಕ್ಕೂ ಅಧಿಕ ಭಾಷೆಗಳ ಹಾಡುಗಳನ್ನು ಹಾಡಿರುವ ಎಸ್ ಜಾನಕಿಯವರು ಭಾರತದ ಸರ್ಕಾರದ ಅತ್ಯನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.&lt;/p&gt;&lt;p&gt;ಎಸ್ ಜಾನಕಿಯವರು ಗಾಯಕಿಯಾಗಿ ಮಾತ್ರವಲ್ಲದೇ ಗೀತಸಾಹಿತಿ ಮತ್ತು ಸಂಗೀತ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಆದರೆ, ಅವರ ಸಂಗೀತದ ಅಪರಿಮಿತ, ಅಮೋಘ ಸಾಧನೆಯ ಎದುರು ಬೇರೆ ಎಲ್ಲವೂ ಗೌಣವಾಗಿವೆ ಎನ್ನಬಹುದು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದಾರೆ.&lt;/p&gt;&lt;p&gt;ಭಾರತದ ಹಲವು ಭಾಷೆಗಳಲ್ಲಿ ಹಾಡಿರುವ ಎಸ್ ಜಾನಕಿಯವರು ತಮ್ಮ ಸುದೀರ್ಘ ಸಂಗೀತದ ಪಯಣದಲ್ಲಿ ಸುಮಾರು 48,000 ಸಾವಿರ ಹಾಡುಗಳಿಗೆ ಧ್ವನಿಯಾಗಿರುವ ಎಸ್ ಜಾನಕಿಯವರು 10,000ಕ್ಕೂ ಹೆಚ್ಚು ಸಿನಿಮಾ ಗೀತೆಗಳಿಗೆ ಹಿನ್ನೆಲೆ ಗಾಯಕಿಯಾಗಿದ್ದಾರೆ. ತಮ್ಮ ಅದ್ಭುತ ಧ್ವನಿ ವೈವಿಧ್ಯತೆಗೆ ಹೆಸರಾಗಿರುವ ಎಸ್ ಜಾನಕಿಯವರು ಚಿಕ್ಕ ಮಕ್ಕಳಂತೆ ಕೂಡ ಹಾಡಬಲ್ಲವರಾಗಿದ್ದು, ಅನೇಕ ಹಾಡುಗಳನ್ನು ಮಕ್ಕಳಂತೆ ಹಾಡಿ ಸಂಗೀತಪ್ರೇಮಿಗಳನ್ನು ರಂಜಿಸಿದ್ದಾರೆ.&lt;/p&gt;&lt;p&gt;'ದಕ್ಷಿಣ ಭಾರತದ ಕೋಗಿಲೆ' ಎಂದೇ ಖ್ಯಾತಿ ಪಡೆದಿದ್ದ ಗಾಯಕಿ ಎಸ್ ಜಾನಕಿಯವರು ತಮ್ಮ 88ನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರನ್ನು ಭೌತಿಕವಾಗಿ ಕಳೆದುಕೊಂಡಿರುವ ಭಾರತ ಹಾಗೂ ಜಗತ್ತಿನ ಸಂಗೀತಪ್ರೇಮಿಗಳು ಈ ಸಂಗೀತದ ಮೇರುಪ್ರತಿಭೆಯ ಅಗಲುವಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.&lt;/p&gt;&lt;h2&gt;1938 ರಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನನ&lt;/h2&gt;&lt;p&gt;ಎಸ್ ಜಾನಕಿಯವರು 1938 ರಲ್ಲಿ ಆಂಧ್ರಪ್ರದೇಶದ ಗುಂಟೂರಿನ ಹಳ್ಳಿಯಲ್ಲಿ ಜನಿಸಿದರು. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿಯಿದ್ದ ಜಾನಕಿಯವರು ನಾದಸ್ವರ ವಿದ್ವಾನ್ ಶ್ರೀ ಪೈಡಿಸ್ವಾಮಿಯವರ ಹತ್ತಿರ ಸಂಗೀತ ಕಲಿತರು. ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಗಾಯನ ಆರಂಭಿಸಿದ ಜಾನಕಿಯವರು ತಮ್ಮ ಚಿಕ್ಕಪ್ಪನ ಸಲಹೆಯಂತೆ ಚೆನ್ನೈಗೆ ಬಂದು ಎವಿಎಮ್ ಸ್ಟುಡಿಯೋದಲ್ಲಿ ಗಾಯಕಿಯಾಗಿ ಸೇರಿದರು. 1957 ರಲ್ಲಿ ಚಿತ್ರಗಳಲ್ಲಿ ಹಾಡಲು ಆರಂಭಿಸಿದ ಜಾನಕಿ ಅದೇ ವರ್ಷದಲ್ಲಿ ಆರು ಬಾಷೆಗಳಲ್ಲಿ ಹಾಡಿದರು.&lt;/p&gt;&lt;p&gt;ಸಂಗೀತ ನಿರ್ದೇಶಕ ಇಳಯರಾಜ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರು ಹಾಗೂ ಸಾಹಿತಿಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ ಎಸ್ ಜಾನಕಿಯವರು. ಮತ್ತು ಹಿನ್ನಲೆ ಗಾಯಕ ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ ಜೊತೆ ಅತಿ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ಡಾ. ರಾಜಕುಮಾರ್ ಜೊತೆ ಅತಿ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ.&lt;/p&gt;&lt;h3&gt;ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್&lt;/h3&gt;&lt;p&gt;ಮೇರು ಗಾಯಕಿ ಎಸ್ ಜಾನಕಿಯವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಎಸ್ ಜಾನಕಿಯವರು 1959ರಲ್ಲಿ ವಿ ರಾಮಪ್ರಸಾದ್&zwnj;ರನ್ನು ವಿವಾಹವಾದರು. 1997 ರಲ್ಲಿ ಪತಿಯ ಮರಣದ ನಂತರ ಪುತ್ರನ ಜೊತೆ ಹೈದರಾಬಾದಿನಲ್ಲಿ ನೆಲೆಸಿದ್ರು. ಆ ಬಳಿಕ ನವೀನ್ ಅನ್ನೋ ಕೇರ್ ಟೇಕರ್ ಒಬ್ಬರ ಜೊತೆ ಮೈಸೂರಿನಲ್ಲಿ ನೆಲೆಸಿದ್ರು ಈ ಲೆಜೆಂಡ್ ಗಾಯಕಿ ಎಸ್ ಜಾನಕಿ.&lt;/p&gt;&lt;p&gt;ಕಳೆದ 10 ವರ್ಷಗಳಿಂದ ಚಿತ್ರರಂಗದ ಹಿನ್ನೆಲೆ ಗಾಯನದಿಂದ ದೂರವಿದ್ದ ಎಸ್. ಜಾನಕಿಯವರು 2017, ಅಕ್ಟೋಬರ್&zwnj; 28ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ತಮ್ಮ ಸುದೀರ್ಘ ಸಂಗೀತ ಪಯಣಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದರು. ಮಲಯಾಳಂನ &lsquo;10 ಕಲ್ಪನಕಳ್&rsquo; ಚಿತ್ರದ &lsquo;ಅಮ್ಮಪೂವಿನು&rsquo; ಎಂಬ ಹಾಡು ಅವರ ವೃತ್ತಿ ಬದುಕಿನ ಕೊನೆಯ ಹಾಡು.&lt;/p&gt;&lt;p&gt;ಎಸ್. ಜಾನಕಿ ಅವರ ಏಕೈಕ ಪುತ್ರ ಮುರಳಿ ಕೃಷ್ಣ. ಅವರು ವೃತ್ತಿಯಲ್ಲಿ ಭರತನಾಟ್ಯ ಕಲಾವಿದರಾಗಿದ್ರು. ದುರದೃಷ್ಟವಶಾತ್, ಮುರಳಿ ಕೃಷ್ಣ ತಮ್ಮ 65ನೇ ವಯಸ್ಸಿನಲ್ಲಿ 2026ರ ಜನವರಿ 22ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಆ ಬಳಿಕ ಸಾಕುಮಗ ನವೀನ್ ಜೊತೆಗೆ ಎಸ್ ಜಾನಕಿ ವಾಸವಿದ್ದರು. ಕಳೆದ ವಾರವಷ್ಟೇ ಕೊಲ್ಲೂರು ದೇಗುಲಕ್ಕೆ ಭೇಟಿ ಕೊಟ್ಟಿದ್ದರು ಎಸ್​.ಜಾನಕಿ.&lt;/p&gt;&lt;p&gt;ಇಂದು ಮಧ್ಯಾಹ್ನ, ಜುಲೈ 11, 2026 ರಂದು ಮಧ್ಯಾಹ್ನ 12:49 ಕ್ಕೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು.&lt;/p&gt;&lt;p&gt;ಆಸ್ಪತ್ರೆಗೆ ದಾಖಲಿಸಿದಾಗ ಅವರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ತಕ್ಷಣವೇ ತಪಾಸಣೆ ಮಾಡಿ ಹೆಚ್ಚಿನ ನಿರ್ವಹಣೆಗಾಗಿ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ತೀವ್ರ ವೈದ್ಯಕೀಯ ಆರೈಕೆ ಮತ್ತು ನುರಿತವೈದ್ಯರ ತಂಡದ ನಿರಂತರ ಮೇಲ್ವಿಚಾರಣೆಯ ಹೊರತಾಗಿಯೂ, ಚಿಕಿತ್ಸೆಯ ಸಮಯದಲ್ಲಿ ಅವರಿಗೆ ಹೃದಯ ಸ್ತಂಭನ ಉಂಟಾಯಿತು. ಸಂಜೆ 7:30 ಕ್ಕೆ ನಿಧನರಾದರು ಎಂದು ಘೋಷಿಸಲಾಯಿತು.&lt;/p&gt;&lt;p&gt;ಈ ಮೂಲಕ, 'ದಕ್ಷಿಣ ಭಾರತದ ಕೋಗಿಲೆ' ಎಂದೇ ಖ್ಯಾತಿ ಪಡೆದಿದ್ದ ಗಾಯಕಿ ಎಸ್ ಜಾನಕಿಯವರು ತಮ್ಮ 88ನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರನ್ನು ಭೌತಿಕವಾಗಿ ಕಳೆದುಕೊಂಡಿರುವ ಭಾರತ ಹಾಗೂ ಜಗತ್ತಿನ ಸಂಗೀತಪ್ರೇಮಿಗಳು ಈ ಸಂಗೀತದ ಮೇರುಪ್ರತಿಭೆಯ ಅಗಲುವಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/today-passed-away-legendary-indian-playback-singer-s-janaki-music-life-journey-to-know-here/articleshow-pi3ph7u"/>
        </item>
        <item>
            <title><![CDATA[Cyananthus Hookeri: 158 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಅರಳಿದ ಅಪರೂಪದ ಹೂವು!]]></title>
            <link>https://kannada.asianetnews.com/india-news/rare-cyananthus-hookeri-flower-rediscovered-in-india-after-158-years/articleshow-gdowru2</link>
            <guid isPermaLink="true">https://kannada.asianetnews.com/india-news/rare-cyananthus-hookeri-flower-rediscovered-in-india-after-158-years/articleshow-gdowru2</guid>
            <pubDate>Sat, 11 Jul 2026 22:55:50 +0530</pubDate>
            <description><![CDATA[&lt;p&gt;ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ 158 ವರ್ಷಗಳ ನಂತರ 'ಸಯನಾಂತಸ್ ಹೂಕರಿ(Cyananthus Hookeri)' ಎಂಬ ಅಪರೂಪದ ಹೂವಿನ ಗಿಡವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. 1867ರಲ್ಲಿ ಸಿಕ್ಕಿಂನಲ್ಲಿ ಕೊನೆಯದಾಗಿ ಕಂಡಿದ್ದ ಈ ಸಸ್ಯ, ಅರಳಿರುವುದು ಸಸ್ಯಶಾಸ್ತ್ರೀಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx932hzc9pgp59xqmy1gwkkh,imgname-----------------------2026-07-11t224921.803-1783790389228.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Cyananthus Hookeri: &lt;/strong&gt;ಸುಮಾರು 158 ವರ್ಷಗಳ ಸುದೀರ್ಘ ಅಂತರದ ಬಳಿಕ, 'ಸಯನಾಂತಸ್ ಹೂಕರಿ' (Cyananthus hookeri) ಎಂಬ ಅತ್ಯಂತ ಅಪರೂಪದ ಹಿಮಾಲಯನ್ ಹೂವಿನ ಗಿಡ ಭಾರತದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಸಂಶೋಧಕರು ಇದನ್ನು ಪತ್ತೆಹಚ್ಚಿದ್ದು, ಇದು ದೇಶದ ಸಸ್ಯಶಾಸ್ತ್ರೀಯ ಇತಿಹಾಸದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದೆ.&lt;/p&gt;&lt;h2&gt;ಸಿಕ್ಕಿಂನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಹೂವು&lt;/h2&gt;&lt;p&gt;ಭಾರತದಲ್ಲಿ ಈ ಸಸ್ಯವನ್ನು ಕೊನೆಯ ಬಾರಿಗೆ 1867ರಲ್ಲಿ ಸಿಕ್ಕಿಂ ರಾಜ್ಯದಲ್ಲಿ ದಾಖಲಿಸಲಾಗಿತ್ತು, ಅಂದಿನಿಂದ ಇದು ಎಲ್ಲೂ ಕಾಣಿಸಿರಲಿಲ್ಲ. ಬಹುತೇಕ ಈ ಸಸ್ಯ ಕಣ್ಮರೆ ಆಯ್ತು ಎಂದೇ ಭಾವಿಸಲಾಗಿತ್ತು. 'ಕ್ಯಾಂಪನುಲೇಸಿ' (Campanulaceae) ಅಥವಾ ಬೆಲ್&zwnj;ಫ್ಲವರ್ ಕುಟುಂಬಕ್ಕೆ ಸೇರಿದ ಈ ಗಿಡವು ವಿಶಿಷ್ಟವಾದ ನೇರಳೆ-ನೀಲಿ ಬಣ್ಣದ ಹೂವುಗಳನ್ನು ಬಿಡುತ್ತದೆ. ಸಮುದ್ರ ಮಟ್ಟದಿಂದ ಸುಮಾರು 3,600 ಮೀಟರ್ ಎತ್ತರದಲ್ಲಿರುವ ಪೂರ್ವ ಹಿಮಾಲಯದ ಹುಲ್ಲುಗಾವಲು ಮತ್ತು ಕಲ್ಲಿನ ಇಳಿಜಾರುಗಳಲ್ಲಿ ಇದು ಪತ್ತೆಯಾಗಿದೆ. ಈ ಸಸ್ಯದ ಮರುಶೋಧನೆಯು ಹಿಮಾಲಯದ ಕಠಿಣ ವಾತಾವರಣದಲ್ಲೂ ಇಂತಹ ಅಪರೂಪದ ಪ್ರಭೇದಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.&lt;/p&gt;&lt;h3&gt;ಭಾರತದಲ್ಲಿ ಅಳಿವಿನಂಚಿನಲ್ಲಿದೆ ಈ ಸಸ್ಯ?&lt;/h3&gt;&lt;p&gt;ಭೂತಾನ್, ಚೀನಾ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಈ ಸಸ್ಯ ಕಂಡುಬಂದರೂ, ಭಾರತದಲ್ಲಿ ಇದರ ಇರುವಿಕೆ ಅತ್ಯಂತ ವಿರಳ. ದುರ್ಗಮ ಭೂಪ್ರದೇಶ ಮತ್ತು ಸಸ್ಯಶಾಸ್ತ್ರೀಯ ಸಮೀಕ್ಷೆಗಳ ಕೊರತೆಯಿಂದಾಗಿ ದಶಕಗಳ ಕಾಲ ಇದು ದಾಖಲಾಗದೆ ಉಳಿದಿತ್ತು. ಇದೀಗ ಭಾರತದಲ್ಲಿ ಇದರ ಸಂಖ್ಯೆ ತೀರಾ ಕಡಿಮೆ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ (IUCN) ನಿಯಮಗಳ ಅಡಿಯಲ್ಲಿ ಭಾರತದಲ್ಲಿ ಈ ಸಸ್ಯವನ್ನು 'ಅಳಿವಿನಂಚಿನಲ್ಲಿರುವ ಪ್ರಭೇದ' (Endangered) ಎಂದು ವರ್ಗೀಕರಿಸಲು ಸಂಶೋಧಕರು ಶಿಫಾರಸು ಮಾಡಿದ್ದಾರೆ. ಸಸ್ಯವನ್ನು ಪತ್ತೆಹಚ್ಚುವುದು ಮೊದಲ ಹೆಜ್ಜೆ ಮಾತ್ರ, ಅದರ ಹರಡುವಿಕೆ ಮತ್ತು ಉಳಿವಿಗೆ ಇನ್ನಷ್ಟು ಪರಿಸರ ಅಧ್ಯಯನಗಳು ಹಾಗೂ ನಿಗಾ ಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಅರುಣಾಚಲ ಪ್ರದೇಶದಲ್ಲಿನ ಈ ಮರುಶೋಧನೆಯು ಭಾರತದ ಸಸ್ಯಶಾಸ್ತ್ರೀಯ ಇತಿಹಾಸದಲ್ಲಿದ್ದ ಒಂದು ದೊಡ್ಡ ಕಂದಕವನ್ನು ಮುಚ್ಚಿದೆ. ಹಿಮಾಲಯದ ದೂರದ ಪ್ರದೇಶಗಳಲ್ಲಿ ಇನ್ನೂ ಪತ್ತೆಯಾಗದ ಅಪಾರ ಜೀವಿವೈವಿಧ್ಯ ಅಡಗಿದೆ ಎಂಬುದನ್ನು ಇದು ಮತ್ತೊಮ್ಮೆ ನೆನಪಿಸಿದೆ. 1867ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಖಚಿತವಾಗಿ ಪತ್ತೆಯಾಗಿರುವ 'ಸಯನಾಂತಸ್ ಹೂಕರಿ', ದೇಶದ ಸಸ್ಯಶಾಸ್ತ್ರದ ದಾಖಲೆಗೆ ಮರುಸೇರ್ಪಡೆಯಾಗಿದೆ.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/rare-cyananthus-hookeri-flower-rediscovered-in-india-after-158-years/articleshow-gdowru2"/>
        </item>
        <item>
            <title><![CDATA[Karuru Stampede Victims: ಕರೂರು ಕಾಲ್ತುಳಿದ ರಹಸ್ಯ ಬಿಚ್ಚಿಟ್ಟ ವಿಜಯ್; 'ಕೊಲೆಗಾರರಿಗೆ ಕ್ಷಮೆಯಿಲ್ಲ' ಎಂದು ಗುಡುಗಿದ ದಳಪತಿ!]]></title>
            <link>https://kannada.asianetnews.com/cine-world/tamil-nadu-cm-thalapathy-vijay-offered-government-jobs-to-families-of-stampede-victims-during-his-visit-to-karur/articleshow-9alzmi2</link>
            <guid isPermaLink="true">https://kannada.asianetnews.com/cine-world/tamil-nadu-cm-thalapathy-vijay-offered-government-jobs-to-families-of-stampede-victims-during-his-visit-to-karur/articleshow-9alzmi2</guid>
            <pubDate>Sat, 11 Jul 2026 19:06:39 +0530</pubDate>
            <description><![CDATA[&lt;p&gt;ವಿರೋಧಿಗಳು ಯಾವ ಮಣ್ಣಿನಲ್ಲಿ ದಳಪತಿ ಕಥೆ ಮುಗಿಯಿತು ಅಂದುಕೊಂಡಿದ್ದರೋ, ಅದೇ ಮಣ್ಣಿನಿಂದ ವಿಜಯ್ ತಮ್ಮ ರಾಜಕೀಯ ಸಾಮ್ರಾಜ್ಯದ ನೈಜ ವಿಸ್ತರಣೆಯನ್ನು ಆರಂಭಿಸಿದ್ದಾರೆ. ಇದು ಕೇವಲ ನೌಕರಿ ಕೊಡುವ ಕಾರ್ಯಕ್ರಮವಲ್ಲ, ಮುಂಬರುವ ತಮಿಳುನಾಡು ರಾಜಕೀಯ ಸಮರಕ್ಕೆ ದಳಪತಿ ವಿಜಯ್ ಇಟ್ಟಿರುವ ಅತ್ಯಂತ ಚಾಣಾಕ್ಷ ನಡೆ ಅಂತಿದ್ದಾರೆ ರಾಜಕೀಯ ಪಂಡಿತರು..!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwppaq4aye86j6hqsh5x76sn,imgname-whatsapp-image-2026-07-04-at-7.00.48-pm-1783173045386.jpeg" type="image/jpeg" height="390" width="690"/>
            <content:encoded><![CDATA[&lt;p&gt;ಯಾವ ನೆಲದಲ್ಲಿ ನೆತ್ತರು ಹರಿದಿತ್ತೋ.. ಎಲ್ಲಿ ದಳಪತಿ ವಿಜಯ್ (Thalapathy Vijay) ರಾಜಕೀಯ ಭವಿಷ್ಯ ಮುಗಿಯಿತು ಅಂತ ವಿರೋಧಿಗಳು ಅಟ್ಟಹಾಸಗೈದಿದ್ದರೋ.. ಅದೇ ಕರೂರಿನ ಮಣ್ಣಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಹೆಜ್ಜೆ ಇಟ್ಟಿದ್ದಾರೆ ಜೋಸೆಫ್ ವಿಜಯ್. ಅಂದು ಹೆಣ ಬಿದ್ದ ಜಾಗದಲ್ಲಿ ಇಂದು ಬದುಕಿನ ಭರವಸೆ ಬಿತ್ತಿದ್ದಾರೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡು ಸಂತ್ರಸ್ಥ ಕುಟುಂಬಗಳಿಗೆ ಸರ್ಕಾರಿ ಕೆಲಸ ಕೊಟ್ಟು ಕಣ್ಣೀರು ಒರೆಸಿದ್ದಾರೆ. ಅಷ್ಟೇ ಅಲ್ಲ ಈ ದುರಂಥ ಸಂಭವಿಸಲು ಕಾರಣವಾದ ರಕ್ತ ರಾಜಕೀಯವನ್ನ ಹೊರಗೆ ತರ್ತೀನಿ ಅಂತ ಹೇಳಿ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.&lt;/p&gt;&lt;h2&gt;ನೆತ್ತರು ಹರಿದ ನೆಲದಲ್ಲಿ ನಿಂತು ದಳಪತಿ ವಿಜಯ್ ಘರ್ಜನೆ..!&lt;/h2&gt;&lt;p&gt;ಕಣ್ಣೀರಿಟ್ಟ ಕರೂರು..! ಸಂತ್ರಸ್ಥ ಕುಟುಂಬಗಳಿಗೆ ಸರ್ಕಾರಿ ಕೆಲಸ..!&lt;/p&gt;&lt;p&gt;ಕರೂರು.. ತಮಿಳುನಾಡಿನ ಒಂದು ಪುಟ್ಟ ಜಿಲ್ಲೆ. ಆದರೆ ತಮಿಳುನಾಡು ರಾಜಕೀಯದ ಇತಿಹಾಸ ಬರೆಯುವಾಗ ಈ ಹೆಸರನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಕಳೆದ ವರ್ಷ ಅಂದರೆ ಸೆಪ್ಟೆಂಬರ್ 2025 ರಲ್ಲಿ ಇದೇ ಕರೂರಿನ ವೆಲುಸಾಮಿಪುರಂನಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಬೃಹತ್ ರ&zwj;್ಯಾಲಿ ನಡೆದಿತ್ತು. ವಿಜಯ್ ನೋಡಲಿಕ್ಕೆ, ಅವರ ಭಾಷಣ ಕೇಳಲಿಕ್ಕೆ ಸಾವಿರಾರು ಜನ ನೆರೆದಿದ್ರು.&lt;/p&gt;&lt;p&gt;ಆದರೆ, ಆ ರ&zwj;್ಯಾಲಿ ದುರಂತದಲ್ಲಿ ಕೊನೆಗೊಂಡಿತು. ಕಾಲ್ತುಳಿತಕ್ಕೆ ಸಿಲುಕಿ ಬರೋಬ್ಬರಿ 41 ಅಮಾಯಕ ಜೀವಗಳು ಬಲಿಯಾದವು. ಪೊಲೀಸರ ಅಚಾತುರ್ಯವೋ, ಜನರ ಅಜಾಗರೂಕತೆಯೋ, ಒಟ್ನಲ್ಲಿ ಏಕಾಏಕಿ ಸಂಭವಿಸಿದ ಕಾಲ್ತುಳಿತದಲ್ಲಿ ಪುಟ್ಟ ಮಕ್ಕಳೂ ಸೇರಿದಂತೆ 41 ಜನರು ಪ್ರಾಣಬಿಟ್ಟರು.&lt;/p&gt;&lt;p&gt;ಆವತ್ತು ಆಡಳಿತ ಪಕ್ಷವಾಗಿದ್ದ ಡಿಎಂಕೆ, ವಿರೋದ ಪಕ್ಷವಾಗಿ ಎಐಎಡಿಎಂಕೆ ಇದರ ಹೊಣೆಯನ್ನ ವಿಜಯ್ ತಲೆಗೆ ಕಟ್ಟಿದ್ವು. ವಿಜಯ್ ರಾಜಕೀಯ ಮುಗಿಯಿತು, ಅವರ ಜನಪ್ರಿಯತೆಯೇ ಜನರ ಪ್ರಾಣಕ್ಕೆ ಕಂಟಕವಾಯಿತು ಅಂತ ಅಪಪ್ರಚಾರ ಮಾಡಿದ್ರು.&lt;/p&gt;&lt;p&gt;ಆದರೆ, ಕಾಲ ಚಕ್ರ ಉರುಳಿದೆ. ಇದು 2026 ರ ಜುಲೈ. ಆವತ್ತು ರ&zwj;್ಯಾಲಿ ನಡೆಸಲು ಬಂದಿದ್ದ ನಟ ವಿಜಯ್, ಈಗ ಅದೇ ಕರೂರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕೃತ ಭೇಟಿ ನೀಡಿದ್ದಾರೆ.&lt;/p&gt;&lt;p&gt;ವಿಜಯ್ ಭೇಟಿ ಕೇವಲ ಒಂದು ಸರ್ಕಾರಿ ಪ್ರವಾಸವಲ್ಲ; ಇದು ಇತಿಹಾಸದ ಸವಾಲಿಗೆ ವಿಜಯ್ ನೀಡಿರೋ ಎದಿರು-ಬದಿರು ಉತ್ತರ! ಆವತ್ತು ಪ್ರಾಣ ಕಳೆದುಕೊಂಡ 32 ಕುಟುಂಬಗಳ ವಾರಸುದಾರರಿಗೆ ಸ್ವತಃ ಸಿಎಂ ವಿಜಯ್ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನ ಹಸ್ತಾಂತರಿಸಿದ್ದಾರೆ.&lt;/p&gt;&lt;p&gt;ರಾಜಕೀಯ ಅಧಿಕಾರದ ಹಸಿವಿನ ನಡುವೆ ಅಮಾಯಕರ ಕಣ್ಣೀರು ಸದಾ ಕಡೆಗಣಿಸಲ್ಪಡುತ್ತೆ ಅನ್ನೋ ಮಾತಿದೆ. ಆದರೆ ವಿಜಯ್ ಈ ಭೇಟಿಯ ಮೂಲಕ ಹೊಸದೊಂದು ಸಂದೇಶವನ್ನ ಹೊರಟಿದ್ದಾರೆ. 2025 ರ ಆ ಕಪ್ಪು ದಿನದಂದು ಮಡಿದವರ ಕುಟುಂಬಕ್ಕೆ ಅಂದಿನ ಡಿಎಂಕೆ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಆದರೆ ವಿಜಯ್ ವೈಯಕ್ತಿಕವಾಗಿ 20 ಲಕ್ಷ ರೂಪಾಯಿ ನೀಡಿದ್ರು. ಅಷ್ಟೇ ತಮ್ಮ ಸರ್ಕಾರ ಬಂದ್ರೆ ಮಡಿದವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಡ್ತಿನಿ ಅಂದಿದ್ರು. ಆ ಮಾತನ್ನ ಈಗ ಈಡೇರಿಸಿದ್ದಾರೆ ದಳಪತಿ.&lt;/p&gt;&lt;h3&gt;ಖಾಕಿ ನಾಟಕ.. ಡಿಎಂಕೆ ಕಪಟ..! ಕಾಲ್ತುಳಿದ ರಹಸ್ಯ ಬಿಚ್ಚಿಟ್ಟ ವಿಜಯ್..!&lt;/h3&gt;&lt;p&gt;ಕೊಲೆಗಾರರಿಗೆ ಕ್ಷಮೆಯಿಲ್ಲ.. ಜನರ ಕೈಬಿಡಲ್ಲ ಜನನಾಯಕನ ಶಪಥ..!&lt;/p&gt;&lt;p&gt;ಹೌದು, ಕರೂರಿನಲ್ಲಿ ನೆರೆದ ಜನಸಾಗರ ಎದುರು ಬೆಂಕಿ ಭಾಷಣ ಮಾಡಿರೋ ವಿಜಯ್ , ಕರೂರಿನ ಕಾಲ್ತುಳಿತ ದುರಂತಕ್ಕೆ ಅಂದಿನ ಡಿಎಂಕೆ ಸರ್ಕಾರದ ಕಪಟ, ಮತ್ತು ಪೊಲೀಸರ ನಾಟಕವೇ ಕಾರಣ ಅಂತ ಆರೋಪ ಮಾಡಿದ್ದಾರೆ.&lt;/p&gt;&lt;p&gt;ನಾವು ಅರಿಯಲೂರ್&zwnj;ನಲ್ಲಿ ನಮ್ಮ ಸಭೆಯನ್ನು ಮುಗಿಸಿ ಪೆರಂಬಲೂರ್&zwnj;ಗೆ ತೆರಳುವ ಮುನ್ನ, ಅಲ್ಲಿನ ಪೊಲೀಸರು ನಮಗೆ ಮುನ್ನೆಚ್ಚರಿಕೆ ನೀಡಿದರು. 'ಇಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಜನಸಂದಣಿ ಇದೆ, ಈಗಾಗಲೇ ತುಂಬಾ ತಡವಾಗಿದೆ, ಆದ್ದರಿಂದ ದಯವಿಟ್ಟು ಇಲ್ಲಿಗೆ ಬರಬೇಡಿ' ಎಂದು ಅವರು ನಮಗೆ ತಿಳಿಸಿದರು. ನಮಗೆ ಬೇರೆ ಯಾವುದೇ ದಾರಿ ಇರಲಿಲ್ಲ, ಏಕೆಂದರೆ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸರ ಸೂಚನೆಗಳನ್ನು ನಾವು ಗೌರವಿಸಲೇಬೇಕಾಗುತ್ತದೆ. ಅದೇ ಸಮಯದಲ್ಲಿ ಪೆರಂಬಲೂರ್ ಜನರ ಸುರಕ್ಷತೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ತೀವ್ರವಾದ ಮನದ ನೋವಿನೊಂದಿಗೇ ಅಲ್ಲಿಂದ ವಾಪಸ್ ಬರಬೇಕಾಯಿತು. ತದನಂತರ ನಾವು ಪೆರಂಬಲೂರ್ ಕ್ಷೇತ್ರದ ಜನರಲ್ಲಿ ಕ್ಷಮೆಯನ್ನೂ ಸಹ ಯಾಚಿಸಿದೆವು.&lt;/p&gt;&lt;p&gt;ಇದೇ ರೀತಿ, ನಾವು ನಾಮಕ್ಕಲ್&zwnj;ನಲ್ಲಿ ನಮ್ಮ ಸಭೆಯನ್ನು ಮುಗಿಸಿ ಕರೂರ್ ಗೆ ಬರುವ ಮುನ್ನ, ಕರೂರ್ ಪೊಲೀಸರು ಸಹ ನಮಗೆ ಮುಂಚಿತವಾಗಿಯೇ ಇಂತಹ ಮುನ್ನೆಚ್ಚರಿಕೆಯನ್ನು ನೀಡಬಹುದಿತ್ತಲ್ಲವೇ? )&lt;/p&gt;&lt;p&gt;ಹೌದು ಆವತ್ತಿನ ದುರಂತಕ್ಕೆ ಪೊಲೀಸರು ಆಡಿದ ನಾಟಕವೇ ಕಾರಣ ಅಂತ ಆರೋಪಿಸಿದ್ದಾರೆ ವಿಜಯ್. ಅಷ್ಟೇ ಅಲ್ಲ ಹಿಂದಿನ ಡಿಎಂಕೆ ಸರ್ಕಾರ ಸಂಚು ಮಾಡಿತ್ತು. ಅದರಿಂದಲೇ ಇಲ್ಲಿ ರಕ್ತ ಹರಿಯಿತು ಅಂದಿದ್ದಾರೆ.&lt;/p&gt;&lt;p&gt;ನಾವು ಕರೂರ್ ಪೊಲೀಸರನ್ನು ಸಂಪೂರ್ಣವಾಗಿ ನಂಬಿದ್ದೆವು. ನಾನು ಅವರೊಂದಿಗೆ ಮಾತನಾಡುವಾಗ ಅವರಿಗೆ ಧನ್ಯವಾದಗಳನ್ನೂ ಸಹ ಅರ್ಪಿಸಿದ್ದೆ. ಆದರೆ ಇದರ ಹಿಂದೆ ಇಂತಹದ್ದೊಂದು ದೊಡ್ಡ ರಾಜಕೀಯ ಪಿತೂರಿ ಮತ್ತು ನಾಟಕ ನಡೆಯುತ್ತಿದೆ ಎಂಬುದು ನನಗೆ ತಿಳಿದಿರಲಿಲ್ಲ. ಇದಕ್ಕೆಲ್ಲಾ ನಿಜವಾದ ಕಾರಣ ಯಾರು? ಇದೆಲ್ಲವನ್ನೂ ಯಾರ ಸೂಚನೆಯ ಮೇರೆಗೆ ಮಾಡಲಾಯಿತು? 'ಹೀಗೆ ಮಾಡಿ, ಹಾಗೆ ಮಾಡಿ, ಒಂದು ವೇಳೆ ಆ ರೀತಿ ನಡೆದರೆ ಈ ರೀತಿ ಮಾಡಿ' ಎಂದು ಮುಂಚಿತವಾಗಿಯೇ ಯೋಜನೆಗಳನ್ನು ರೂಪಿಸಿ, ನಮ್ಮ ಮೇಲೆ ಒತ್ತಡ ಹೇರಿದವರು ಯಾರು?&lt;/p&gt;&lt;p&gt;ಹೀಗೆ ನೇರವಾಗಿಯೇ ಡಿಎಂಕೆ ಮೇಲೆ ಆರೋಪ ಮಾಡಿರೋ ವಿಜಯ್, ಆ ಕೊಲೆಗಡುರನ್ನ ಸುಮ್ಮನೆ ಬಿಡಲ್ಲ ಅಂದಿದ್ದಾರೆ. ಅವರ ಭ್ರಷ್ಟಾಚಾರ ಹೊರಗೆಳೆದು ಬೆತ್ತಲೆ ಮಾಡ್ತಿನಿ ಅಂತ ಅಬ್ಬರಿಸಿದ್ದಾರೆ.&lt;/p&gt;&lt;p&gt;ವಿರೋಧಿಗಳು ಯಾವ ಮಣ್ಣಿನಲ್ಲಿ ದಳಪತಿ ಕಥೆ ಮುಗಿಯಿತು ಅಂದುಕೊಂಡಿದ್ದರೋ, ಅದೇ ಮಣ್ಣಿನಿಂದ ವಿಜಯ್ ತಮ್ಮ ರಾಜಕೀಯ ಸಾಮ್ರಾಜ್ಯದ ನೈಜ ವಿಸ್ತರಣೆಯನ್ನು ಆರಂಭಿಸಿದ್ದಾರೆ. ಇದು ಕೇವಲ ನೌಕರಿ ಕೊಡುವ ಕಾರ್ಯಕ್ರಮವಲ್ಲ, ಮುಂಬರುವ ತಮಿಳುನಾಡು ರಾಜಕೀಯ ಸಮರಕ್ಕೆ ದಳಪತಿ ವಿಜಯ್ ಇಟ್ಟಿರುವ ಅತ್ಯಂತ ಚಾಣಾಕ್ಷ ನಡೆ ಅಂತಿದ್ದಾರೆ ರಾಜಕೀಯ ಪಂಡಿತರು..!&lt;/p&gt;&lt;p&gt;ಈ ಸ್ಟೋರಿಯನ್ನು'ಸಿನಿಮಾ ಹಂಗಾಮ'ದಲ್ಲಿ ನೋಡಿ..&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/tamil-nadu-cm-thalapathy-vijay-offered-government-jobs-to-families-of-stampede-victims-during-his-visit-to-karur/articleshow-9alzmi2"/>
        </item>
        <item>
            <title><![CDATA[ತಿರುಪತಿಯಲ್ಲಿ ಈ ಬಾರಿ ‘ಅವಳಿ ಬ್ರಹ್ಮೋತ್ಸವ’ ವೈಭವ; ಭಕ್ತರಿಗಾಗಿ ಅತ್ಯಂತ ಮಹತ್ವದ ನಿರ್ಧಾರ ಮಾಡಿದ ಟಿಟಿಡಿ]]></title>
            <link>https://kannada.asianetnews.com/india-news/tirupati-twin-brahmotsavam-ttd-cancels-special-vip-break-darshan-schedule-san/articleshow-wcce3w9</link>
            <guid isPermaLink="true">https://kannada.asianetnews.com/india-news/tirupati-twin-brahmotsavam-ttd-cancels-special-vip-break-darshan-schedule-san/articleshow-wcce3w9</guid>
            <pubDate>Sat, 11 Jul 2026 18:42:28 +0530</pubDate>
            <description><![CDATA[&lt;p&gt;ಈ ವರ್ಷ ಅಧಿಕ ಮಾಸದ ಕಾರಣ ತಿರುಮಲದಲ್ಲಿ 2 ಬ್ರಹ್ಮೋತ್ಸವ ನಡೆಯಲಿವೆ. ಈ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಲಕ್ಷಾಂತರ ಭಕ್ತರ ದಟ್ಟಣೆ ನಿರ್ವಹಿಸಲು ಬೃಹತ್ ಯೋಜನೆಯನ್ನು ರೂಪಿಸಿದ್ದು, ಸಾಮಾನ್ಯ ಭಕ್ತರಿಗೆ ಅನುಕೂಲವಾಗುವಂತೆ ಬಹುತೇಕ ಎಲ್ಲಾ ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqv8jgr6m7jbce22jdbprtwb,imgname-ttd--5--1777957683974.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುಪತಿ (ಜು.11):&lt;/strong&gt; ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಈ ವರ್ಷ &lsquo;ಅಧಿಕ ಮಾಸ&rsquo; ಬಂದಿರುವುದರಿಂದ ಎರಡು ಬ್ರಹ್ಮೋತ್ಸವಗಳು (ಅವಳಿ ಬ್ರಹ್ಮೋತ್ಸವ) ಜರುಗಲಿವೆ. ಈ ಮಹೋತ್ಸವದ ಅವಧಿಯಲ್ಲಿ ತಿರುಮಲಕ್ಕೆ ಹರಿದುಬರಲಿರುವ ಲಕ್ಷಾಂತರ ಭಕ್ತರ ದಟ್ಟಣೆಯನ್ನು ವ್ಯವಸ್ಥಿತವಾಗಿ ನಿಯಂತ್ರಿಸಲು ತಿರುಮಲ ತಿರುಪತಿ ದೇವಸ್ಥಾನಂ (TTD) ಬೃಹತ್ ಜನದಟ್ಟಣೆ ನಿರ್ವಹಣಾ ಯೋಜನೆಯನ್ನು ಪ್ರಕಟಿಸಿದೆ. ಉತ್ಸವದ ದಿನಗಳಲ್ಲಿ ಬಹುತೇಕ ಎಲ್ಲಾ ಮಾದರಿಯ ವಿಶೇಷ ದರ್ಶನ ಸೌಲಭ್ಯಗಳನ್ನು ಕಟ್ಟುನಿಟ್ಟಾಗಿ ರದ್ದುಗೊಳಿಸಲಾಗಿದ್ದು, ಭಕ್ತರ ಅನುಕೂಲಕ್ಕಾಗಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಟಿಟಿಡಿ ತನ್ನ ಎಲ್ಲಾ ವಿಭಾಗಗಳಿಗೆ ಆದೇಶ ನೀಡಿದೆ.&lt;/p&gt;&lt;p&gt;ಪದ್ಮಾವತಿ ಅತಿಥಿ ಗೃಹದ &lsquo;ಸುಧರ್ಮಾ&rsquo; ಸಭಾಂಗಣದಲ್ಲಿ ಗುರುವಾರ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚ. ವೆಂಕಯ್ಯ ಚೌದರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಭೆಯಲ್ಲಿ ತಿರುಪತಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಎ. ಶರತ್, ಮುಖ್ಯ ಜಾಗೃತ ಮತ್ತು ಭದ್ರತಾ ಅಧಿಕಾರಿ (CVSO) ಮುರಳಿ ಕೃಷ್ಣ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.&lt;/p&gt;&lt;h2&gt;&lt;strong&gt;ಬ್ರಹ್ಮೋತ್ಸವದ ಸಂಪೂರ್ಣ ವೇಳಾಪಟ್ಟಿ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಸೆಪ್ಟೆಂಬರ್ 8: &lt;/strong&gt;ಉತ್ಸವದ ಮುನ್ನುಡಿಯಾಗಿ &lsquo;ಕೋಯಿಲ್ ಆಳ್ವಾರ್ ತಿರುಮಂಜನಂ&rsquo; (ದೇವಾಲಯದ ಶುದ್ಧೀಕರಣ ಕಾರ್ಯ) ನಡೆಯಲಿದೆ&lt;/li&gt; &lt;li&gt;&lt;strong&gt;ಸೆಪ್ಟೆಂಬರ್ 14: &lt;/strong&gt;ಅಂಕುರಾರ್ಪಣಂ.&lt;/li&gt; &lt;li&gt;&lt;strong&gt;ಸೆಪ್ಟೆಂಬರ್ 15: &lt;/strong&gt;ಧ್ವಜಾರೋಹಣಂ (ಬ್ರಹ್ಮೋತ್ಸವಕ್ಕೆ ಅಧಿಕೃತ ಚಾಲನೆ).&lt;/li&gt; &lt;li&gt;&lt;strong&gt;ಸೆಪ್ಟೆಂಬರ್ 19: &lt;/strong&gt;ಉತ್ಸವದ ಅತ್ಯಂತ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾದ &lsquo;ಗರುಡ ಸೇವೆ&rsquo; ಜರುಗಲಿದ್ದು, ಇದಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.&lt;/li&gt; &lt;li&gt;&lt;strong&gt;ಸೆಪ್ಟೆಂಬರ್ 22: &lt;/strong&gt;ರಥೋತ್ಸವಂ.&lt;/li&gt; &lt;li&gt;&lt;strong&gt;ಸೆಪ್ಟೆಂಬರ್ 23: &lt;/strong&gt;ಚಕ್ರಸ್ನಾನಂ.&lt;/li&gt;&lt;/ul&gt;&lt;p&gt;ವಾಹನ ಸೇವೆಗಳ ಸಮಯ: ಉತ್ಸವದ ದಿನಗಳಲ್ಲಿ ಪ್ರತಿದಿನ ಎರಡು ಬಾರಿ ಅಂದರೆ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಮತ್ತು ರಾತ್ರಿ 7 ರಿಂದ 9 ಗಂಟೆಯವರೆಗೆ ಸ್ವಾಮಿಯ ವಾಹನ ಸೇವೆಗಳು ನಡೆಯಲಿವೆ.&lt;/p&gt;&lt;h2&gt;&lt;strong&gt;ಯಾವೆಲ್ಲಾ ದರ್ಶನಗಳು ರದ್ದು?&lt;/strong&gt;&lt;/h2&gt;&lt;p&gt;ಅಪಾರ ಪ್ರಮಾಣದ ಭಕ್ತರ ಸಾಗರ ಹರಿದುಬರುವುದನ್ನು ಮುನ್ಸೂಚಿಸಿರುವ ದೇವಸ್ಥಾನದ ಮಂಡಳಿಯು, ಬ್ರಹ್ಮೋತ್ಸವದ ಅವಧಿಯಲ್ಲಿ ಪ್ರೋಟೋಕಾಲ್ ಗಣ್ಯರನ್ನು (ಅಧಿಕೃತ ಸಚಿವರು/ಅಧಿಕಾರಿಗಳು) ಹೊರತುಪಡಿಸಿ ಉಳಿದೆಲ್ಲಾ &lsquo;ವಿಐಪಿ ಬ್ರೇಕ್ ದರ್ಶನ&rsquo;ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇದರೊಂದಿಗೆ ಹಿರಿಯ ನಾಗರಿಕರು (Senior Citizens), ವಿಕಲಚೇತನರು (Persons with Disabilities), ಹಸುಗೂಸುಗಳಿರುವ ಪೋಷಕರು, ಅನಿವಾಸಿ ಭಾರತೀಯರು (NRI) ಮತ್ತು ದಾನಿಗಳಿಗೆ (Donors) ನೀಡಲಾಗುತ್ತಿದ್ದ ವಿಶೇಷ ಆದ್ಯತೆಯ ದರ್ಶನ ಸೌಲಭ್ಯಗಳನ್ನು ಸಹ ಉತ್ಸವ ಮುಗಿಯುವವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಾಮಾನ್ಯ ಭಕ್ತರಿಗೆ ಸರ್ವದರ್ಶನದ ಮೂಲಕ ಹೆಚ್ಚಿನ ಸಮಯಾವಕಾಶ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಕಟ್ಟುನಿಟ್ಟಿನ ಜನದಟ್ಟಣೆ ನಿರ್ವಹಣೆ ಮತ್ತು ಭದ್ರತೆ&lt;/strong&gt;&lt;/h2&gt;&lt;p&gt;ಭಕ್ತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮತ್ತು ತಿರುಮಲದಾದ್ಯಂತ ಸಂಚಾರ ದಟ್ಟಣೆಯನ್ನು ತಡೆಯಲು ಸಮಗ್ರ ಭದ್ರತೆ, ಟ್ರಾಫಿಕ್ ಮತ್ತು ಪಾರ್ಕಿಂಗ್ ಯೋಜನೆಗಳನ್ನು ರೂಪಿಸುವಂತೆ ಹೆಚ್ಚುವರಿ ಇಒ ಅವರು ಜಾಗೃತ (ವಿಜಿಲೆನ್ಸ್) ಮತ್ತು ಪೊಲೀಸ್ ವಿಭಾಗಕ್ಕೆ ಸೂಚಿಸಿದ್ದಾರೆ. ಕ್ಯೂ ಕಾಂಪ್ಲೆಕ್ಸ್&zwnj;ಗಳು, ಗ್ಯಾಲರಿಗಳು ಮತ್ತು ಇತರೆ ಪ್ರಮುಖ ಸ್ಥಳಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ &lsquo;ಅನ್ನಪ್ರಸಾದ&rsquo; ಮತ್ತು ಕುಡಿಯುವ ನೀರು ವಿತರಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಭಕ್ತರ ಅನುಕೂಲಕ್ಕೆ ಅಗತ್ಯವಿರುವ ಎಲ್ಲಾ ಇಂಜಿನಿಯರಿಂಗ್ ಕಾಮಗಾರಿಗಳನ್ನು ಉತ್ಸವ ಆರಂಭಕ್ಕೂ ಮುನ್ನವೇ ಮುಕ್ತಾಯಗೊಳಿಸಲು ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಸ್ವಚ್ಛತೆ ಹಾಗೂ ವಿದ್ಯುತ್ ಅಲಂಕಾರ&lt;/strong&gt;&lt;/h2&gt;&lt;p&gt;ಉತ್ಸವದ ದಿನಗಳಲ್ಲಿ ಗ್ಯಾಲರಿಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿನ ಶೌಚಾಲಯಗಳನ್ನು ನಿರಂತರವಾಗಿ ಸ್ವಚ್ಛವಾಗಿಡಲು ಹೆಚ್ಚುವರಿ ಪೌರಕಾರ್ಮಿಕರನ್ನು ನಿಯೋಜಿಸುವ ಮೂಲಕ ಗರಿಷ್ಠ ಮಟ್ಟದ ನೈರ್ಮಲ್ಯವನ್ನು ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಧಾರ್ಮಿಕ ವಾತಾವರಣವನ್ನು ಮತ್ತಷ್ಟು ಭವ್ಯಗೊಳಿಸಲು ಆಕರ್ಷಕ ವಿದ್ಯುತ್ ದೀಪಾಲಂಕಾರ, ಹಣ್ಣು ಮತ್ತು ಹೂವಿನ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಭಕ್ತರಿಗೆ ನೆರವಾಗಲು ಯುವ ಸ್ವಯಂಸೇವಕರನ್ನು &lsquo;ಶ್ರೀವಾರಿ ಸೇವಕರು&rsquo; ಆಗಿ ದೊಡ್ಡ ಪ್ರಮಾಣದಲ್ಲಿ ನಿಯೋಜಿಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿಷೇಧ&lt;/strong&gt;&lt;/h2&gt;&lt;p&gt;ಅತ್ಯಂತ ಗರಿಷ್ಠ ಜನಸಂದಣಿ ಇರುವ &lsquo;ಗರುಡ ಸೇವೆ&rsquo;ಯ ಸಂದರ್ಭದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸೆಪ್ಟೆಂಬರ್ 18 ರ ರಾತ್ರಿ 9 ಗಂಟೆಯಿಂದ ಸೆಪ್ಟೆಂಬರ್ 20 ರ ಮುಂಜಾನೆ 6 ಗಂಟೆಯವರೆಗೆ ತಿರುಮಲ ಘಾಟ್ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.&lt;/p&gt;&lt;p&gt;ಉತ್ಸವದ ಅವಧಿಯಲ್ಲಿ ಲಡ್ಡು ಪ್ರಸಾದಕ್ಕೆ ಇರುವ ಭಾರಿ ಬೇಡಿಕೆಯನ್ನು ಪೂರೈಸಲು ದೇವಾಲಯದ ಮಂಡಳಿಯು ಸಾಕಷ್ಟು ಪ್ರಮಾಣದ ಲಡ್ಡುಗಳ ದಾಸ್ತಾನು ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನಿರಾಯಾಸ ದರ್ಶನ ಭಾಗ್ಯ ಕಲ್ಪಿಸಿಕೊಡುವುದೇ ಟಿಟಿಡಿಯ ಮುಖ್ಯ ಗುರಿಯಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/tirupati-twin-brahmotsavam-ttd-cancels-special-vip-break-darshan-schedule-san/articleshow-wcce3w9"/>
        </item>
    </channel>
</rss>
