<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 10 May 2026 06:07:47 +0530</lastBuildDate>
        <atom:link href="https://kannada.asianetnews.com/rss/india-news" rel="self" type="application/rss+xml"/>
        <item>
            <title><![CDATA[ಉಡುಪಿ ಗ್ರಾಪಂ ದೇಶಕ್ಕೇ ನಂಬರ್ ಒನ್, ಬಡತನರಹಿತ ವಿಭಾಗದಲ್ಲಿ ಮುದ್ರಾಡಿ ಗ್ರಾಪಂಗೆ ₹1 ಕೋಟಿಯ ಪ್ರಥಮ ಪ್ರಶಸ್ತಿ]]></title>
            <link>https://kannada.asianetnews.com/india-news/udupi-gram-panchayat-ranks-no-1-in-india-mudradi-gp-wins-first-prize-of-rs-1-crore-in-poverty-free-category-rav/articleshow-qi56zwr</link>
            <guid isPermaLink="true">https://kannada.asianetnews.com/india-news/udupi-gram-panchayat-ranks-no-1-in-india-mudradi-gp-wins-first-prize-of-rs-1-crore-in-poverty-free-category-rav/articleshow-qi56zwr</guid>
            <pubDate>Sun, 10 May 2026 06:07:42 +0530</pubDate>
            <description><![CDATA[&lt;p&gt;ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 2025ನೇ ಸಾಲಿನ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಘೋಷಿಸಿದ್ದು, 'ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ' ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮುದ್ರಾಡಿ ಗ್ರಾಮ ಪಂಚಾಯತ್ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7mn5feyjgrvnqzqt8c5gcx,imgname-----------------------2026-05-10t055919.140-1778373006830.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.10): &lt;/strong&gt;ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 2025ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಘೋಷಿಸಿದ್ದು, &lsquo;ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ&rsquo; ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮುದ್ರಾಡಿ ಗ್ರಾಮ ಪಂಚಾಯತ್&zwnj;, ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.&lt;/p&gt;&lt;p&gt;ರಾಜ್ಯದ ಒಟ್ಟಾರೆ 6 ಗ್ರಾ.ಪಂ.ಗಳು ವಿವಿಧ ವಿಭಾಗಗಳಲ್ಲಿ ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿವೆ. ರಾಜ್ಯಕ್ಕೆ ಲಭಿಸಿದ 6 ಪ್ರಶಸ್ತಿಗಳ ಪೈಕಿ 5 ಪ್ರಶಸ್ತಿಗಳು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ಲಭಿಸಿವೆ. ಜೂನ್&zwnj; 3ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಯ್ಕೆಯಾದ ಗ್ರಾ.ಪಂ.ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.&lt;/p&gt;&lt;p&gt;ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ, &lsquo;ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ&rsquo; ವಿಭಾಗದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಈ ಅಪೂರ್ವ ಸಾಧನೆಗಾಗಿ ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಲಾಗಿದೆ. ಆ ಮೂಲಕ ಮುದ್ರಾಡಿ, ಇಂದು ಭಾರತದ ಮಾದರಿ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ಈ ಮಧ್ಯೆ, ಆರೋಗ್ಯ ಮತ್ತು ಕಲ್ಯಾಣ ವಿಭಾಗದಲ್ಲಿ ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಮ ಪಂಚಾಯಿತಿ ಹಾಗೂ ಮಕ್ಕಳ ಸ್ನೇಹಿ ಪಂಚಾಯಿತಿ ವಿಭಾಗದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಹಲನಾಯಕನಹಳ್ಳಿ ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಸಮಗ್ರ ನೀರು ನಿರ್ವಹಣೆ ವಿಭಾಗದಲ್ಲಿ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದು, ಇವುಗಳಿಗೆ ತಲಾ ₹75 ಲಕ್ಷ ಬಹುಮಾನ ಘೋಷಿಸಲಾಗಿದೆ.&lt;/p&gt;&lt;p&gt;ಅಲ್ಲದೆ, ಸ್ವಾವಲಂಬಿ ಮೂಲಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಸಾಣೂರು ಹಾಗೂ ಸಾಮಾಜಿಕ ನ್ಯಾಯ ವಿಭಾಗದಲ್ಲಿ ಉಡುಪಿ ಜಿಲ್ಲೆ ಕುಂದಾಪುರದ ಹಕ್ಲಾಡಿ ಗ್ರಾಮ ಪಂಚಾಯಿತಿಗಳು ದೇಶದಲ್ಲಿ ಮೂರನೇ ಸ್ಥಾನ ಪಡೆದು, ತಲಾ 50 ಲಕ್ಷ ರುಪಾಯಿ ಬಹುಮಾನ ಗಳಿಸಿವೆ. ಮುದ್ರಾಡಿ ಗ್ರಾಪಂ ಸಾಧನೆಯೇನು?:&lt;/p&gt;&lt;p&gt;ಮುದ್ರಾಡಿ ಪಂಚಾಯಿತಿ ಒಟ್ಟು 1,671 ಮನೆಗಳನ್ನು ಹೊಂದಿದ್ದು, ಸುಮಾರು 6,102 ಜನರಿಗೆ ಸಮರ್ಪಕ ಸೇವೆ ಒದಗಿಸುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿರುವ 1,046 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಏಳಿಗೆಗಾಗಿ ವಿಶೇಷ ಆದ್ಯತೆ ನೀಡಲಾಗಿದೆ.ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಪಂಚಾಯಿತಿ, ಕಾಡು ಉತ್ಪನ್ನ ಆಧಾರಿತ ಜೀವನೋಪಾಯ, ನೀರಿನ ಸಂರಕ್ಷಣೆ, ಮಣ್ಣಿನ ಸುಧಾರಣೆ ಮತ್ತು ಹಸಿರು ಆರ್ಥಿಕತೆಯತ್ತ ಗ್ರಾಮಸ್ಥರನ್ನು ಪ್ರೇರೇಪಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದು, ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗ ಭದ್ರತೆ ಒದಗಿಸುವುದರ ಜೊತೆಗೆ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗೂ ಯೋಜನೆಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಶೇ.100ರಷ್ಟು ವ್ಯಾಪ್ತಿ ಸಾಧಿಸಿರುವುದು ಇಲ್ಲಿನ ಮತ್ತೊಂದು ಮೈಲಿಗಲ್ಲು. ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ನೆರವು ಸೇರಿದಂತೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸಿದೆ.-----&lt;/p&gt;&lt;p&gt;ಪಂಚಾಯತಿಗಳ ಅಭಿವೃದ್ಧಿಯ ದೃಷ್ಟಿಕೋನ, ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಎಲ್ಲರ ಸಹಕಾರದಿಂದ ಈ ಅಭಿವೃದ್ಧಿ ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.&lt;/p&gt;&lt;h2&gt;-ವಿ&zwnj;.ಸುನೀಲ್ ಕುಮಾರ್, ಶಾಸಕರು ಕಾರ್ಕಳ.&lt;/h2&gt;&lt;p&gt;ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಶಾಶ್ವತ ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತೆಯನ್ನು ಸಮಗ್ರವಾಗಿ ಜಾರಿಗೊಳಿಸಿದ ಮುದ್ರಾಡಿ ಪಂಚಾಯಿತಿ, ಗ್ರಾಮೀಣಾಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿದೆ.&lt;/p&gt;&lt;p&gt;&lt;strong&gt;-ಸುಭಾಸ್, ಪಿಡಿಒ, ಮುದ್ರಾಡಿ.&lt;/strong&gt;&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/udupi-gram-panchayat-ranks-no-1-in-india-mudradi-gp-wins-first-prize-of-rs-1-crore-in-poverty-free-category-rav/articleshow-qi56zwr"/>
        </item>
        <item>
            <title><![CDATA[NCRB Report : ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶಕ್ಕೇ ನಂ.3!  ಮಹಾರಾಷ್ಟ್ರ ಪ್ರಥಮ, ತಮಿಳುನಾಡಿಗೆ 2ನೇ ಸ್ಥಾನ: NCRB ವರದಿ]]></title>
            <link>https://kannada.asianetnews.com/india-news/karnataka-ranks-no-3-in-corruption-across-india-maharashtra-tops-list-tamil-nadu-takes-second-reveals-ncrb-report-rav/articleshow-hd9ou54</link>
            <guid isPermaLink="true">https://kannada.asianetnews.com/india-news/karnataka-ranks-no-3-in-corruption-across-india-maharashtra-tops-list-tamil-nadu-takes-second-reveals-ncrb-report-rav/articleshow-hd9ou54</guid>
            <pubDate>Sun, 10 May 2026 05:45:07 +0530</pubDate>
            <description><![CDATA[2024ರ ಎನ್&zwnj;ಸಿಆರ್&zwnj;ಬಿ ವರದಿಯ ಪ್ರಕಾರ, ಕರ್ನಾಟಕವು 334 ಭ್ರಷ್ಟಾಚಾರ ಪ್ರಕರಣಗಳೊಂದಿಗೆ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ಮೊದಲ ಎರಡು ಸ್ಥಾನಗಳಲ್ಲಿವೆ. ಆದಾಗ್ಯೂ, ಅಕ್ರಮ ಆಸ್ತಿ ಪ್ರಕರಣಗಳಲ್ಲಿ 75 ಕೇಸ್&zwnj;ಗಳೊಂದಿಗೆ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನವನ್ನು ಪಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7k7bgcnwjham3exs9h8pwz,imgname-----------------------2026-05-10t053430.217-1778371505676.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;2024ರಲ್ಲಿ ಎಷ್ಟು ಕೇಸ್&zwnj;?&lt;/li&gt; &lt;li&gt;ಮಹಾರಾಷ್ಟ್ರ 721&lt;/li&gt; &lt;li&gt;ತಮಿಳುನಾಡು 374&lt;/li&gt; &lt;li&gt;ಕರ್ನಾಟಕ 334&lt;/li&gt;&lt;/ul&gt;&lt;p&gt;--ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್&zwnj;ಸಿಆರ್&zwnj;ಬಿ) ಅಂಕಿ-ಅಂಶಗಳ ಪ್ರಕಾರ, 2024ರಲ್ಲಿ ಕರ್ನಾಟಕದಲ್ಲಿ 334 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯವು ಭ್ರಷ್ಟಾಚಾರದಲ್ಲಿ ದೇಶದಲ್ಲೇ ಮೂರನೇ ಸ್ಥಾನ ಪಡೆದಿದೆ.&lt;/p&gt;&lt;p&gt;ಪಟ್ಟಿಯಲ್ಲಿ ಮಹಾರಾಷ್ಟ್ರವು 721 ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ತಮಿಳುನಾಡು 374 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಕರ್ನಾಟಕವು ಮೂರನೇ ಸ್ಥಾನದಲ್ಲಿದೆ ಎಂದು ಮೇ 7ರ ಗುರುವಾರ ಬಿಡುಗಡೆಯಾದ ವರದಿ ಹೇಳಿದೆ.&lt;/p&gt;&lt;p&gt;ಆದಾಗ್ಯೂ, ಅಕ್ರಮ ಆಸ್ತಿ (ಡಿಎ) ಪ್ರಕರಣಗಳಲ್ಲಿ ಕರ್ನಾಟಕವು ಎಲ್ಲರಿಗಿಂತ ಮುಂದಿದೆ. 75 ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಇದರ ನಂತರ ಒಡಿಶಾ 62 ಪ್ರಕರಣ ಮತ್ತು ಅಸ್ಸಾಂ 44 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ.&lt;/p&gt;&lt;h2&gt;ಕೊಂಚ ಕಡಿಮೆ:&lt;/h2&gt;&lt;p&gt;ಆದಾಗ್ಯೂ,ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದ ಭ್ರಷ್ಟಾಚಾರ ಪ್ರಕರಣಗಳನ್ನು ಪರಿಗಣಿಸಿದಾಗ, ಈಗ ಸ್ವಲ್ಪ ಇಳಿಕೆ ಕಂಡುಬಂದಿದೆ, ಏಕೆಂದರೆ ರಾಜ್ಯವು 2023ರಲ್ಲಿ 362 ಪ್ರಕರಣಗಳು ಮತ್ತು 2022ರಲ್ಲಿ 389 ಪ್ರಕರಣಗಳನ್ನು ದಾಖಲಿಸಿತ್ತು ಎಂದು ವರದಿ ಹೇಳಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/karnataka-ranks-no-3-in-corruption-across-india-maharashtra-tops-list-tamil-nadu-takes-second-reveals-ncrb-report-rav/articleshow-hd9ou54"/>
        </item>
        <item>
            <title><![CDATA[Actor Vijay Tamil Nadu CM: ಬಹುಮತ ವಿಜಯ- 120 ನಂಬರ್ ಪಡೆದ ನಟ । ಇಂದು ಬೆಳಗ್ಗೆ 10ಕ್ಕೆ ಸಿಎಂ ಆಗಿ ಶಪಥ!]]></title>
            <link>https://kannada.asianetnews.com/india-news/actor-vijay-secures-support-of-120-mlas-to-form-govt-set-to-take-oath-as-chief-minister-of-tamil-nadu-today-at-10-am-rav/articleshow-5twl4up</link>
            <guid isPermaLink="true">https://kannada.asianetnews.com/india-news/actor-vijay-secures-support-of-120-mlas-to-form-govt-set-to-take-oath-as-chief-minister-of-tamil-nadu-today-at-10-am-rav/articleshow-5twl4up</guid>
            <pubDate>Sun, 10 May 2026 05:28:06 +0530</pubDate>
            <description><![CDATA[&lt;p&gt;ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್, 120 ಶಾಸಕರ ಬೆಂಬಲದೊಂದಿಗೆ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಲಿದ್ದಾರೆ. ರಾಜ್ಯಪಾಲರಿಂದ ಸರ್ಕಾರ ರಚನೆಗೆ ಆಹ್ವಾನ, ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಿಂದ ಕೂದಲೆಳೆ ಅಂತರದಲ್ಲಿ ಪಾರು!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7j8tj7qc1h1chhfmjwkm45,imgname-----------------------2026-05-10t051750.683-1778370505287.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಿಟಿಐ ಚೆನ್ನೈ (ಮೇ.10) &lt;/strong&gt;ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್&zwnj;ಗೆ ತಮಿಳುನಾಡಿನ 13ನೇ ಮುಖ್ಯಮಂತ್ರಿ ಆಗುವ ಯೋಗ ಕೊನೆಗೂ ಒಲಿದುಬಂದಿದೆ. ಬಹುಮತದ ಸಂಖ್ಯೆಯಾದ 118 ಅನ್ನು ಮೀರಿ ಅವರು 120 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಶನಿವಾರ ಸಂಜೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಲಾಗಿದ್ದು, ಭಾನುವಾರ ಬೆಳಗ್ಗೆ 10 ಗಂಟೆಗೆ ಜವಾಹರಲಾಲ್&zwnj; ನೆಹರು ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.&lt;/p&gt;&lt;p&gt;ಇದೇ ವೇಳೆ, ರಾಜ್ಯಪಾಲರು ವಿಜಯ್&zwnj; ಅವರಿಗೆ ಮೇ 13ರೊಳಗೆ ಬಹುಮತ ಸಾಬೀತುಪಡಿಸಲು ಸೂಚಿಸಿದ್ದಾರೆ.&lt;/p&gt;&lt;p&gt;ತಮಿಳುನಾಡಿನಲ್ಲಿ ಈ ಹಿಂದಿನ ಸರ್ಕಾರದ ಅವಧಿ ಭಾನುವಾರ ಅಂತ್ಯವಾಗುತ್ತದೆ. ಅದುವರೆಗೂ ಹೊಸ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗುತ್ತಿತ್ತು. ಹೀಗಾಗಿ ಕೂದಲೆಳೆ ಅಂತರದಿಂದ ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಿಂದ ಪಾರಾಗಿದೆ.&lt;/p&gt;&lt;p&gt;ವಿಜಯ್ ಪ್ರಮಾಣ ವಚನದಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.&lt;/p&gt;&lt;h2&gt;ಬೆಂಬಲ ನೀಡಿದ ವಿಸಿಕೆ, ಮುಸ್ಲಿಂ ಲೀಗ್:&lt;/h2&gt;&lt;p&gt;ವಿಜಯ್&zwnj; ಕಳೆದ 3 ದಿನದಲ್ಲಿ 3 ಸಲ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರಿದ್ದರು. ಆದರೆ ಸರ್ಕಾರ ರಚಿಸಲು 118 ಸ್ಥಾನಗಳ ಸರಳ ಬಹುಮತ ತಲುಪಲಾಗದೆ ತೊಳಲಾಡುತ್ತಿದ್ದರು. ಶನಿವಾರ ಸಂಜೆ ವಿಜಯ್&zwnj;ಗೆ ತಲಾ 2 ಶಾಸಕರನ್ನು ಹೊಂದಿರುವ ವಿಸಿಕೆ ಮತ್ತು ಇಂಡಿಯನ್&zwnj; ಯೂನಿಯನ್&zwnj; ಮುಸ್ಲಿಂ ಲೀಗ್&zwnj; (ಐಯುಎಂಎಲ್&zwnj;) ಪಕ್ಷಗಳು ಕೊನೆಗೂ ಅಧಿಕೃತವಾಗಿ ಬೆಂಬಲ ಪ್ರಕಟಿಸಿದವು. ಈ ಮೂಲಕ ಟಿವಿಕೆ ಸರ್ಕಾರ ರಚನೆಗೆ ಎದುರಾಗಿದ್ದ ಅನಿಶ್ಚಿತತೆಗೆ ಅಂತ್ಯ ಹಾಡಿದವು.&lt;/p&gt;&lt;h3&gt;ಈ 2 ಸಣ್ಣ ಪಕ್ಷಗಳ ಬೆಂಬಲದೊಂದಿಗೆ, ಟಿವಿಕೆ ಪರ ಶಾಸಕರ ಸಂಖ್ಯೆ 120ಕ್ಕೆ ಏರಿದೆ.&lt;/h3&gt;&lt;p&gt;ವಿಸಿಕೆ ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಟಿವಿಕೆಗೆ ಬೆಂಬಲ ಘೋಷಿಸುವ ಪತ್ರವನ್ನು ವಿಜಯ್&zwnj;ಗೆ ಹಸ್ತಾಂತರ ಮಾಡಿದ್ದಾರೆ. ಈ ಬೆನ್ನಲ್ಲೇ ಐಯುಎಂಎಲ್&zwnj; ಕೂಡಾ ಟಿವಿಕೆಯನ್ನು ಬೆಂಬಲಿಸುವುದಾಗಿ ಅಧಿಕೃತ ಪತ್ರ ಮುಖೇನ ಹೇಳಿದೆ.&lt;/p&gt;&lt;p&gt;ವಿಸಿಕೆಗೆ ಡಿಸಿಎಂ ಪಟ್ಟ ಬೇಕು ಎಂದು ಟಿವಿಕೆ ಅಧ್ಯಕ್ಷ ತೋಲ್ ತಿರುಮಾವಲವನ್ ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು. ಹೀಗಾಗಿ ಸರ್ಕಾರಕ್ಕೆ ಶುಕ್ರವಾರ ಅವರು ಅಧಿಕೃತ ಬೆಂಬಲ ಘೋಷಿಸಿರಲಿಲ್ಲ. ಆದರೆ ಶನಿವಾರ ಮಾತನಾಡಿದ ಅವರು, &lsquo;ರಾಜ್ಯವನ್ನು ರಾಷ್ಟ್ರಪತಿ ಆಡಳಿತದಿಂದ ಪಾರು ಮಾಡಲು ವಿಜಯ್&zwnj;ಗೆ ಬೆಂಬಲ ನೀಡುತ್ತಿದ್ದೇನೆ&rsquo; ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;&lt;strong&gt;ವಿಜಯ್&zwnj; ಬಲ 120 ಹೇಗೆ?:&lt;/strong&gt;&lt;/p&gt;&lt;p&gt;234 ಸದಸ್ಯಬಲದ ತಮಿಳುನಾಡಿನಲ್ಲಿ ಸರಳ ಬಹುಮತಕ್ಕೆ 118 ಸ್ಥಾನಗಳು ಅಗತ್ಯ. ಟಿವಿಕೆ 108 ಸ್ಥಾನಗಳನ್ನು ಹೊಂದಿದೆ. ಆದರೆ ವಿಜಯ್&zwnj; 2 ಕ್ಷೇತ್ರದಲ್ಲಿ ಗೆದ್ದ ಕಾರಣ ಅದರ ಬಲವನ್ನು 107 ಎಂದು ಪರಿಗಣಿಸಲಾಗುತ್ತದೆ. ಬಹುಮತಕ್ಕೆ ಆರಂಭದಲ್ಲಿ 11 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿತ್ತು. ಹೀಗಾಗಿ ಮೊದಲು ಕಾಂಗ್ರೆಸ್&zwnj; ಪಕ್ಷ ಅವರನ್ನು ಬೆಂಬಲಿಸಿತ್ತು. ಪರಿಣಾಮವಾಗಿ ಮೈತ್ರಿಕೂಟದ ಬಲ 112ಕ್ಕೆ ಏರಿತ್ತು. ಬಳಿಕ ಸಿಪಿಎಂನ 2 ಹಾಗೂ ಸಿಪಿಐನ 2 ಶಾಸಕರು ಬೆಂಬಲ ಘೋಷಿಸಿದ್ದರು. ಆಗ ಬಲ 116ಕ್ಕೆ ಏರಿತ್ತು. ಇದೀಗ ಸಿವಿಕೆಯ 2 ಹಾಗೂ ಮುಸ್ಲಿಂ ಲೀಗ್&zwnj;ನ 2 ಶಾಸಕರ ಬೆಂಬಲದೊಂದಿಗೆ 118ರ ಮ್ಯಾಜಿಕ್&zwnj; ಸಂಖ್ಯೆ ದಾಟಿ 120ಕ್ಕೆ ಕೂಟದ ಬಲವರ್ಧನೆ ಆಗಿದೆ.&lt;/p&gt;&lt;p&gt;&lt;strong&gt;3 ಬಾರಿ ನಿರಾಕರಿಸಿದ್ದ ಅರ್ಲೇಕರ್:&lt;/strong&gt;&lt;/p&gt;&lt;p&gt;ಬುಧವಾರ, ಗುರುವಾರ ಮತ್ತು ಶುಕ್ರವಾರ ಬಹುಮತದ ಕೊರತೆಯನ್ನು ಉಲ್ಲೇಖಿಸಿ, ಸರ್ಕಾರ ರಚನೆಗೆ ವಿಜಯ್ ಅವರನ್ನು ಆಹ್ವಾನಿಸಲು ಅರ್ಲೇಕರ್ ನಿರಾಕರಿಸಿದ್ದರು. ಇದು ಕೇಂದ್ರವು ಸರ್ಕಾರ ರಚನೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಆಕ್ರೋಶಕ್ಕೆ ನಾಂದಿ ಹಾಡಿತ್ತು ಹಾಗೂ ವಿರೋಧ ಪಕ್ಷಗಳಿಂದ ಪ್ರತಿಭಟನೆಗೆ ನಾಂದಿ ಹಾಡಿತ್ತು.&lt;/p&gt;&lt;p&gt;&lt;strong&gt;ತ.ನಾಡು ವಿಧಾನಸಭೆ ಬಲ 234&lt;/strong&gt;&lt;/p&gt;&lt;p&gt;ಟಿವಿಕೆ 107 ಕಾಂಗ್ರೆಸ್&zwnj; 5 ಸಿಪಿಐ 2 ಸಿಪಿಎಂ 2 ಸಿವಿಕೆ 2 ಮುಸ್ಲಿಂ ಲೀಗ್ 2 (ಒಟ್ಟು 120)&lt;/p&gt;&lt;p&gt;&lt;strong&gt;ವಿಜಯ್&zwnj; ಪರ ಖರ್ಗೆ ಮನವೊಲಿಕೆ ಯಶಸ್ವಿ&lt;/strong&gt;&lt;/p&gt;&lt;p&gt;ಕಾಂಗ್ರೆಸ್&zwnj; ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್ ಮತ್ತು ಮುಸ್ಲಿಂ ಲೀಗ್&zwnj; ಜತೆ ಶುಕ್ರವಾರವೇ ಮಾತನಾಡಿ ಟಿವಿಕೆ-ಕಾಂಗ್ರೆಸ್ ಕೂಟಕ್ಕೆ ಬೆಂಬಲ ಯಾಚಿಸಿದ್ದರು. ಇದು ವಿಜಯ್ ಪರವಾಗಿ ಸಂಖ್ಯೆಗಳನ್ನು ಕ್ರೋಢೀಕರಿಸಲು ಸಹಾಯ ಮಾಡಿತು ಎನ್ನಲಾಗಿದೆ.&lt;/p&gt;&lt;p&gt;--&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/actor-vijay-secures-support-of-120-mlas-to-form-govt-set-to-take-oath-as-chief-minister-of-tamil-nadu-today-at-10-am-rav/articleshow-5twl4up"/>
        </item>
        <item>
            <title><![CDATA[BSY Abhimanotsav: ಕರ್ನಾಟಕ ಅಷ್ಟೇ ಅಲ್ಲ, ದೇಶದ ಬಿಜೆಪಿ ಕಾರ್ಯಕರ್ತರಿಗೂ ಸ್ಪೂರ್ತಿ ಯಡಿಯೂರಪ್ಪ: ಪ್ರಧಾನಿ ಮೋದಿ]]></title>
            <link>https://kannada.asianetnews.com/india-news/bs-yadiyurappa-an-inspiration-not-just-for-karnataka-but-for-bjp-karyakartas-across-the-india-says-pm-modi-ravv/articleshow-ppo2gk4</link>
            <guid isPermaLink="true">https://kannada.asianetnews.com/india-news/bs-yadiyurappa-an-inspiration-not-just-for-karnataka-but-for-bjp-karyakartas-across-the-india-says-pm-modi-ravv/articleshow-ppo2gk4</guid>
            <pubDate>Sun, 10 May 2026 04:17:19 +0530</pubDate>
            <description><![CDATA[&lt;p&gt;ಬಿ.ಎಸ್. ಯಡಿಯೂರಪ್ಪನವರ 50 ವರ್ಷಗಳ ಸಾರ್ವಜನಿಕ ಜೀವನದ ಕುರಿತು ಚಿತ್ರದುರ್ಗದಲ್ಲಿ ನಡೆದ 'ಅಭಿಮಾನೋತ್ಸವ'ಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂದೇಶ ಕಳುಹಿಸಿದ್ದಾರೆ. ಯಡಿಯೂರಪ್ಪನವರ ಹೋರಾಟ, ಪಕ್ಷ ಸಂಘಟನೆ, ಮತ್ತು ರೈತಪರ ಆಡಳಿತವನ್ನು ಶ್ಲಾಘಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7e91ygd1ews44cpqdq77bv,imgname-----------------------2026-05-10t040816.181-1778366318544.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಎಸ್&zwnj;ವೈ ಉತ್ಸವಕ್ಕೆ ಪ್ರಧಾನಿ ಸಂದೇಶ&amp;nbsp;&lt;/p&gt;&lt;p&gt;&lt;strong&gt;ನರೇಂದ್ರ ಮೋದಿ, ಪ್ರಧಾನಿ&lt;/strong&gt;&lt;/p&gt;&lt;p&gt;ಬಿ.ಎಸ್.ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ ಐವತ್ತು ವರ್ಷಗಳ ಸಾರ್ಥಕ ಕ್ಷಣಗಳನ್ನು ಸ್ಮರಿಸಲು ಚಿತ್ರದುರ್ಗದಲ್ಲಿ &lsquo;ಅಭಿಮಾನೋತ್ಸವ&rsquo; ನಡೆಸುತ್ತಿರುವುದು ಹೃದಯಸ್ಪರ್ಶಿ ಸಂಗತಿ. ಈ 50 ವರ್ಷಗಳ ಅವರ ಸಾರ್ವಜನಿಕ ಬದುಕಿನ ಪ್ರಯಾಣವು ಜನರ ಕಲ್ಯಾಣಕ್ಕೆ ಅವರು ತೋರಿದ ಬದ್ಧತೆ, ಹೋರಾಟ, ತ್ಯಾಗ ಮತ್ತು ಸಮರ್ಪಣೆಯ ಕಥೆಯಾಗಿದೆ. ಇದು ಇಡೀ ಕರ್ನಾಟಕಕ್ಕೆ ಆಚರಣೆಯ ಸಂಭ್ರಮ ಮಾತ್ರವಲ್ಲ, ಭಾರತದಾದ್ಯಂತದ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರಿಗೆ ಅವರಿಂದ ಸ್ಫೂರ್ತಿ ಪಡೆಯಲು ಒದಗಿ ಬಂದ ಒಂದು ಅವಕಾಶವೂ ಆಗಿದೆ.&lt;/p&gt;&lt;p&gt;ಈ &lsquo;ಅಭಿಮಾನೋತ್ಸವ&rsquo;ಕ್ಕೆ ಖುದ್ದಾಗಿ ಹಾಜರಾಗಲು ನನಗೆ ಸಾಧ್ಯವಾಗದಿದ್ದರೂ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ನಮ್ಮ ನಾಯಕನನ್ನು ಗೌರವಿಸಲು ಒಟ್ಟುಗೂಡಿದ ಎಲ್ಲ ನಾಯಕರ ಜೊತೆ ನನ್ನ ಶುಭ ಹಾರೈಕೆ ಇರುತ್ತದೆ.&lt;/p&gt;&lt;h2&gt;ಪ್ರೀತಿ, ವಿನಮ್ರತೆಯ ನಾಯಕ&lt;/h2&gt;&lt;p&gt;ಯಡಿಯೂರಪ್ಪ ಅವರ ಜೊತೆ ಹಲವು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಅವರಲ್ಲಿ ಯಾವಾಗಲೂ ಪ್ರೀತಿ, ವಿನಮ್ರತೆ ಇರುತ್ತದೆ. ಕಠಿಣ ಪರಿಶ್ರಮಪಡುವ ಮನೋಭಾವ ಅವರಲ್ಲಿದೆ. ಸಾರ್ವಜನಿಕ ಬದುಕಿನ ಅವರ ಹೋರಾಟ ಮತ್ತು ಯಶಸ್ಸಿನ ಕ್ಷಣಗಳಲ್ಲಿ ನಾನು ಅವರನ್ನು ನೋಡಿದ್ದೇನೆ. ಕರ್ನಾಟಕದ ಜನರಿಗೆ ಮತ್ತು ನಮ್ಮ ಪಕ್ಷದ ಆದರ್ಶಗಳಿಗೆ ಅವರ ಸಂಪೂರ್ಣ ಬದ್ಧತೆಯನ್ನು ಪ್ರತಿಹಂತದಲ್ಲೂ ಕಂಡಿದ್ದೇನೆ. ಅವರ ರಾಜಕೀಯ ಜೀವನ, ನಮ್ಮ ಪ್ರಜಾಪ್ರಭುತ್ವದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಸಾಧಾರಣ ರೈತ ಕುಟುಂಬದಿಂದ ಬೆಳೆದು ಬೆಳೆದ ಅವರು, ರೈತರು, ಕಾರ್ಮಿಕರು, ಬಡವರ ನಡುವೆ ದಣಿವರಿಯದ ಕೆಲಸದ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಹಂತ, ಹಂತವಾಗಿ ರೂಪಿಕೊಂಡರು. ಆ ಮೂಲಕ ಜನರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸಿದರು.&lt;/p&gt;&lt;p&gt;ಇಂದು, ಕರ್ನಾಟಕದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಹೊಂದಿರುವ ಪಕ್ಷವಾಗಿ ಬಿಜೆಪಿ ಬೆಳೆದಿದೆ. ಇದನ್ನು ನೋಡಿದಾಗ ನಮಗೆಲ್ಲಾ ಸಂತೋಷವಾಗುತ್ತದೆ. ಆದರೆ, ಹಿಂದಿನ ದಶಕಗಳ ಹೋರಾಟವನ್ನು ಕಂಡವರಿಗೆ ಪಕ್ಷಕ್ಕೆ ಈ ಅಡಿಪಾಯವನ್ನು ನಿರ್ಮಿಸಲು ಎಷ್ಟು ತ್ಯಾಗ ಮತ್ತು ಬೆವರು ಹರಿಸಬೇಕಾಯಿತು ಎಂಬುದು ತಿಳಿದಿದೆ. ಯಡಿಯೂರಪ್ಪ ಅವರು ದಶಕಗಳ ಕಾಲ ಪೀಳಿಗೆಯಿಂದ ಪೀಳಿಗೆಗೆ ಪಕ್ಷವನ್ನು ಬಲಪಡಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ರಾಜ್ಯದಲ್ಲಿ ಪಕ್ಷವನ್ನು ಕಟ್ಟುವ ಆರಂಭಿಕ ದಿನಗಳಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಆ ವೇಳೆ, ರಾಜ್ಯಾದ್ಯಂತ ಓಡಾಡಿ, ಪಕ್ಷ ಬೆಳೆಸಿದರು. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಪರ್ಕಿಸಿ, ಅವರಲ್ಲಿ ವಿಶ್ವಾಸ ತುಂಬಿದರು. ತಳಮಟ್ಟದಲ್ಲಿ ಆಳವಾಗಿ ಸಂಪರ್ಕ ಸಾಧಿಸುವ ಅವರ ಆ ಸಂಘಟನಾ ಸಾಮರ್ಥ್ಯ, ಅವರಲ್ಲಿ ನಾಯಕತ್ವವನ್ನು ಬೆಳೆಸಿತು. ಜನರ ಪಕ್ಷವಾಗಿ ಬಿಜೆಪಿಯನ್ನು ರೂಪುಗೊಳಿಸಿತು.&lt;/p&gt;&lt;h3&gt;ಕರ್ನಾಟಕದ ಮೊದಲ ಬಿಜೆಪಿ ಸಿಎಂ&lt;/h3&gt;&lt;p&gt;ಬಿಜೆಪಿಯನ್ನು ಕೆಲವು ಪ್ರದೇಶಗಳ ಸೀಮಿತ ಪಕ್ಷ ಎಂದು ಅನ್ಯಾಯವಾಗಿ ಹಣೆಪಟ್ಟಿ ಕಟ್ಟಲಾಗುತ್ತಿದ್ದ ಸಮಯದಲ್ಲಿ ಯಡಿಯೂರಪ್ಪ ಅವರು ಜನರಲ್ಲಿ ಆ ನಂಬಿಕೆಯನ್ನು ಹೋಗಲಾಡಿಸಲು, ಬಿಜೆಪಿ ಪ್ರತಿಯೊಬ್ಬ ಭಾರತೀಯನ ಪಕ್ಷ ಎಂದು ಪ್ರದರ್ಶಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅದರ ಫಲವಾಗಿ ರಾಜ್ಯದಲ್ಲಿ ಮೊದಲ ಬಿಜೆಪಿ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿ ಅವರು ಆಡಳಿತಾತ್ಮಕ ಸಾಮರ್ಥ್ಯದೊಂದಿಗೆ ಸಂಘಟನಾ ಬದ್ಧತೆಯನ್ನು ತೋರಿದರು. ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ರೈತರ ಅಭ್ಯುದಯಕ್ಕೆ ಕಾರಣರಾದರು. ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ರೈತ ಕಲ್ಯಾಣ ಕ್ಷೇತ್ರಗಳಲ್ಲಿನ ಅವರ ಸಾಧನೆಗಳು ಕರ್ನಾಟಕ ರಾಜ್ಯದ ಪ್ರಗತಿಗೆ ಕಾರಣವಾದವು. ಆ ಮೂಲಕ ರಾಜ್ಯದ ಪ್ರಮುಖ ರೈತ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡರು.&lt;/p&gt;&lt;p&gt;&lt;strong&gt;ಜನಸಾಮಾನ್ಯರ ಜತೆಗೇ ಉಳಿದವರು&lt;/strong&gt;&lt;/p&gt;&lt;p&gt;ಯಡಿಯೂರಪ್ಪ ಅವರ ಅಭಿವೃದ್ಧಿ ಯೋಜನೆಗಳು ಎಲ್ಲಾ ವರ್ಗದ ಜನರನ್ನು ತಲುಪಿದವು. ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ವಸತಿ ಯೋಜನೆಗಳ ಮೂಲಕ ದುರ್ಬಲ ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಅವರು ಜಾರಿಗೊಳಿಸಿದರು. ಕರ್ನಾಟಕದ ಜನ ಯಡಿಯೂರಪ್ಪ ಅವರನ್ನು ಅವರ ಸರಳತೆಗಾಗಿ ಮೆಚ್ಚಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಿದ ನಂತರವೂ ಅವರು ಸಾಮಾನ್ಯ ಕಾರ್ಯಕರ್ತರು ಹಾಗೂ ಜನಸಾಮಾನ್ಯರಿಂದ ಎಂದಿಗೂ ದೂರವಾಗಲಿಲ್ಲ.&lt;/p&gt;&lt;p&gt;ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ ಮತ್ತು ಜನರೊಂದಿಗಿನ ಅವರ ಭಾವನಾತ್ಮಕ ಬಾಂಧವ್ಯವನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ರಾಜ್ಯದ ಮೇಲಿನ ಅವರ ಪ್ರೀತಿ ಯಾವಾಗಲೂ ರಾಜಕೀಯವನ್ನು ಮೀರಿ ನಿಂತಿದೆ. ಅವರು ಕನ್ನಡಿಗರ ಘನತೆ, ಗೌರವಗಳನ್ನು ಎತ್ತಿಹಿಡಿಯುವಲ್ಲಿ ಸದಾ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಯಡಿಯೂರಪ್ಪ ಅವರ ಐವತ್ತು ವರ್ಷಗಳ ಸಾರ್ವಜನಿಕ ಬದುಕಿನ ಪ್ರಯಾಣ ಪಕ್ಷದ ಪ್ರತಿಯೊಬ್ಬ ಯುವ ಕಾರ್ಯಕರ್ತನಿಗೂ ಸ್ಫೂರ್ತಿದಾಯಕವಾಗಿದೆ. ನಾಯಕತ್ವದ ಬದುಕು ರಾತ್ರೋರಾತ್ರಿ ನಿರ್ಮಾಣವಾಗುವುದಿಲ್ಲ, ಬದಲಾಗಿ ಹಲವು ವರ್ಷಗಳ ತ್ಯಾಗ, ತಾಳ್ಮೆ ಮತ್ತು ನಿರಂತರ ಕಠಿಣ ಪರಿಶ್ರಮದ ಮೂಲಕ ನಿರ್ಮಾಣವಾಗುತ್ತದೆ. ಅಸಂಖ್ಯಾತ ಅಭಿಮಾನಿಗಳು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕಾರ್ಯಕರ್ತರು ಅವರನ್ನು ಗೌರವಿಸಲು ಒಟ್ಟುಗೂಡುತ್ತಿರುವ ಇಂದಿನ ಈ ಸುಸಂದರ್ಭದಲ್ಲಿ, ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲು, ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಲು ನಾನು ಅವರ ಜೊತೆ ನಿಲ್ಲುತ್ತೇನೆ.&lt;/p&gt;&lt;p&gt;ಸಾರ್ವಜನಿಕ ಜೀವನದಲ್ಲಿ ಐವತ್ತು ವರ್ಷಗಳ ಸಾಧನೆ ಒಂದು ಗಮನಾರ್ಹ ಮೈಲಿಗಲ್ಲು. ಈ ಸಂದರ್ಭದಲ್ಲಿ ಅವರಿಗೆ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳು. ಯಡಿಯೂರಪ್ಪ ಅವರ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಮುಂಬರುವ ವರ್ಷಗಳಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಪೀಳಿಗೆಗೆ ತಮ್ಮ ಮಾರ್ಗದರ್ಶನ ನೀಡುವುದನ್ನು ಅವರು ಮುಂದುವರಿಸಲಿ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/bs-yadiyurappa-an-inspiration-not-just-for-karnataka-but-for-bjp-karyakartas-across-the-india-says-pm-modi-ravv/articleshow-ppo2gk4"/>
        </item>
        <item>
            <title><![CDATA[ಬಂಗಾಳದಲ್ಲಿ ಸರ್ಕಾರ ರಚನೆ ಬೆನ್ನಲ್ಲೇ ದೆಹಲಿ ಬಿಜೆಪಿ ಕಚೇರಿ ಮೇಲೆ ಉಗ್ರ ದಾಳಿ ಎಚ್ಚರಿಕೆ, ಭದ್ರತೆ ಹೆಚ್ಚಳ]]></title>
            <link>https://kannada.asianetnews.com/india-news/delhi-bjp-headquarters-on-high-alert-following-terror-attack-warning-intelligence-input/articleshow-okpirgp</link>
            <guid isPermaLink="true">https://kannada.asianetnews.com/india-news/delhi-bjp-headquarters-on-high-alert-following-terror-attack-warning-intelligence-input/articleshow-okpirgp</guid>
            <pubDate>Sat, 09 May 2026 21:55:41 +0530</pubDate>
            <description><![CDATA[&lt;p&gt;ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಬಾಂಗ್ಲಾದೇಶ, ಪಾಕಿಸ್ತಾನದ ಕೆಲ ಉಗ್ರ ಸಂಘಟನೆಗಳನ್ನು ಕೆರಳಿಸಿದೆ. ಈ ಗೆಲುವಿನ ಬೆನ್ನಲ್ಲೇ ದೆಹಲಿ ಬಿಜೆಪಿ ಪ್ರಧಾನ ಕಚೇರಿ ಮೇಲೆ ಉಗ್ರರ ದಾಳಿ ಸಾಧ್ಯತೆಯನ್ನು ಗುಪ್ತಚರ ಇಲಾಖೆ ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr6fmrbthdf5hs31ryw5jnew,imgname-terror-threat-alert-around-delhi-bjp-headquarters-security-intensified-at-ddu-marg-1778334196090.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.09) &lt;/strong&gt;ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಿದೆ. ಅದರಲ್ಲೂ ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಹಿಂದುತ್ವ ಮತಗಳು ಧ್ರುವಿಕರಣಗೊಂಡು ಮಮತಾ ಬ್ಯಾನರ್ಜಿ ಸರ್ಕಾರವನ್ನು ಮತದಾರರು ಕಿತ್ತೆಸೆದಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವುದು ಬಾಂಗ್ಲಾದೇಶ, ಪಾಕಿಸ್ತಾನದಲ್ಲೂ ಅಸಮಾಧಾನಕ್ಕೆ ಕಾರಣಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಚೇರಿ ಮೇಲೆ ಉಗ್ರ ದಾಳಿ ಆತಂಕ ಎದುರಾಗಿದೆ. ಗುಪ್ತಚರ ಇಲಾಖೆ ಅಧಿಕಾರಿಗಳು ಬಿಜೆಪಿ ಕಚೇರಿ ಸೇರಿದಂತೆ ದೆಹಲ ಕೆಲ ಪ್ರಮುಖ ಸ್ಥಳಗಳ ಮೇಲೆ ಉಗ್ರರ ದಾಳಿ ಆತಂಕದ ಸೂಚನೆ ನೀಡಿದೆ.&lt;/p&gt;&lt;h2&gt;ಐಇಡಿ, ಕಾರು ಬಾಂಬ್, ಉಗ್ರ ದಾಳಿ&lt;/h2&gt;&lt;p&gt;ಬಿಜೆಪಿ ಕಚೇರಿ ಹಾಗೂ ಇತರ ಕೆಲವೆಡೆ ಉಗ್ರರು ದಾಳಿಗೆ ಸಜ್ಜಾಗಿದ್ದಾರೆ. ಐಇಡಿ ಬಾಂಬ್ ದಾಳಿ, ಕಾರು ಬಾಂಬ್, ಆತ್ಮಾ*ಹುತಿ ದಾಳಿ, ಶೂಟೌಟ್ ರೀತಿಯಲ್ಲಿ ದಾಳಿ ನಡೆಸಲು ಉಗ್ರರು ಸಜ್ಜಾಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.&lt;/p&gt;&lt;h2&gt;ದೆಹಲಿಯಲ್ಲಿ ಭದ್ರತೆ ಹೆಚ್ಚಿಸಿದ ಸರ್ಕಾರ&lt;/h2&gt;&lt;p&gt;ದೆಹಲಿಯಲ್ಲಿ ಉಗ್ರರ ದಾಳಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸರ್ಕಾರ ಭದ್ರತೆ ಹೆಚ್ಚಿಸಿದೆ. ದೆಹಲಿಯ ಎಲ್ಲೆಡೆ ಭದ್ರತೆ ಹಾಗೂ ತಪಾಸಣೆ ನಡೆಯುತ್ತಿದೆ. ಪ್ಯಾರಾಮಿಲಿಟರಿ ಸೇರಿದಂತೆ ಹಲವು ಭದ್ರಾತಾ ಎಜೆನ್ಸಿಗಳ ನಿಯೋಜನೆ ಮಾಡಲಾಗಿದೆ. ಪೊಲೀಸ್ ಸರ್ಪಗಾವಲು ಹಾಕಲಾಗಿದೆ.&lt;/p&gt;&lt;p&gt;ದೆಹಲಿ ಬಿಜೆಪಿ ಕಚೇರಿ ಜೊತೆಗೆ ಕೆಲ ಸರ್ಕಾರಿ ಕಚೇರಿಗಳು ಉಗ್ರರ ಟಾರ್ಗೆಟ್ ಲಿಸ್ಟ್&zwnj;ನಲ್ಲಿದೆ ಅನ್ನೋ ಮಾಹಿತಿಯನ್ನು ಇಂಟಲಿಜೆನ್ಸ್ ನೀಡಿದೆ. ಈ ಮಾಹಿತಿಗಳ ಆಧಾರದಲ್ಲಿ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇತ್ತ ದೆಹಲಿ ಮಾತ್ರವಲ್ಲ ಇದೀಗ ಕೇಂದ್ರ ಸರ್ಕಾರ ಇತರ ಕೆಲ ನಗರಗಳಲ್ಲೂ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ತೀವ್ರ ನಿಗಾವಹಿಸಲು ಸೂಚನೆ ನೀಡಲಾಗಿದೆ. ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/delhi-bjp-headquarters-on-high-alert-following-terror-attack-warning-intelligence-input/articleshow-okpirgp"/>
        </item>
        <item>
            <title><![CDATA[Video: ರೈಲ್ವೆ ನಿಲ್ದಾಣದಲ್ಲಿ ಬಣ್ಣದಲ್ಲಿ ಅದ್ದಿದ ಸೌತೆಕಾಯಿ ಮಾರಾಟ: ವಿಚಾರಣೆ ವೇಳೆ ಮಹಿಳೆಯರ ಶಾಕಿಂಗ್​ ಹೇಳಿಕೆ]]></title>
            <link>https://kannada.asianetnews.com/india-news/a-viral-video-from-bihars-katihar-railway-station-has-sparked-outraged-suc/articleshow-pnchilq</link>
            <guid isPermaLink="true">https://kannada.asianetnews.com/india-news/a-viral-video-from-bihars-katihar-railway-station-has-sparked-outraged-suc/articleshow-pnchilq</guid>
            <pubDate>Sat, 09 May 2026 21:05:09 +0530</pubDate>
            <description><![CDATA[ಬಿಹಾರದ ರೈಲು ನಿಲ್ದಾಣದಲ್ಲಿ, ಸೌತೆಕಾಯಿಗಳನ್ನು ತಾಜಾ ಎಂದು ತೋರಿಸಲು ರಾಸಾಯನಿಕ ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿದ್ದ ಮಹಿಳೆಯರ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಪ್ರಯಾಣಿಕರಲ್ಲಿ ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr6p1b7ns788ex72x22dv885,imgname-cucumber-1778340900085.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೇಸಿಗೆಯ ತಾಪ ಹೆಚ್ಚಿದಂತೆ ಏನಾದರೂ ತಣ್ಣನೆಯ ವಸ್ತು, ಪಾನೀಯ ತಿನ್ನಬೇಕು, ಕುಡಿಯಬೇಕು ಎನ್ನುವ ಹಂಬಲ ಉಂಟಾಗುತ್ತದೆ. ಅದರಲ್ಲಿಯೂ ಪ್ರಯಾಣದ ಸಮಯದಲ್ಲಿ ಏನಾದರೂ ತಂಪು ಸಿಕ್ಕರೆ ಎಷ್ಟು ಚೆನ್ನ ಎನ್ನುವವರೇ ಎಲ್ಲರೂ. ತಂಪು ಎಂದಾಕ್ಷಣ ಮೊದಲಿಗೆ ಕಾಣಬರುವುದು ಸೌತೇಕಾಯಿ. ರೈಲ್ವೆ ನಿಲ್ದಾಣಗಳಲ್ಲಿ, ಬಸ್​ ನಿಲ್ದಾಣಗಳಲ್ಲಿ ತಾಜಾ ತಾಜಾ ಸೌತೆಕಾಯಿ ನೋಡಿ ಬಾಯಲ್ಲಿ ನೀರೂರುತ್ತದೆ. ಅದಕ್ಕೆ ಉಪ್ಪು, ಮೆಣಸಿನ ಪುಡಿ ಸೇರಿಸಿ ಕೊಟ್ಟರೆ ಆಹಾ, ಬೇಸಿಗೆ ಮಾತ್ರವಲ್ಲದೇ ಎಲ್ಲಾ ಕಾಲದಲ್ಲಿಯೂ ತಿನ್ನಲು ಬಲು ರುಚಿ. ಆದರೆ ಹಾಗೆಂದು ಕಂಡಕಂಡಲ್ಲಿ ಇದನ್ನು ಖರೀದಿಸಿ ಸೇವಿಸುವವರಿಗೆ ಬಿಗ್​ ಶಾಕ್​ ಎನ್ನುವಂಥ ವಿಡಿಯೋ ಒಂದು ರೈಲ್ವೆ ನಿಲ್ದಾಣದಿಂದ ಬಂದಿದೆ.&lt;/p&gt;&lt;h2&gt;&lt;strong&gt;ಬಣ್ಣದಲ್ಲಿ ಅದ್ದಿದ ಸೌತೆಕಾಯಿ&lt;/strong&gt;&lt;/h2&gt;&lt;p&gt;ಬಿಹಾರದ ರೈಲು ನಿಲ್ದಾಣದಲ್ಲಿ ಕೆಲವು ಮಹಿಳೆಯರು ಸೌತೆಕಾಯಿ ಫ್ರೆಷ್​ ಆಗಿರಲಿ ಎನ್ನುವ ಕಾರಣಕ್ಕೆ ಅದರ ಸಿಪ್ಪೆ ತೆಗೆದು ರಾಸಾಯನಿಕ ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿರುವ ಶಾಕಿಂಗ್​ ವಿಡಿಯೋ ಇದಾಗಿದೆ. ಇದನ್ನು ಯಾರೋ ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ. ಇದು ಈಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪ್ರಯಾಣದ ಸಂದರ್ಭಗಳಲ್ಲಿ ಅಲ್ಲಿ ಸಿಗುವುದನ್ನೆಲ್ಲಾ ಕೊಂಡು ತಿನ್ನುವವರಿಗೆ ಇದು ದೊಡ್ಡ ಪಾಠವಾಗಿದೆ. ಇದಾಗಲೇ ರೈಲ್ವೆಯಲ್ಲಿಮಾರಾಟ ಆಗುವ ಚಹ, ನೀರು ಇವುಗಳ ಬಗ್ಗೆಯೂ ಸಾಕಷ್ಟು ವಿಡಿಯೋಗಳು ಬಂದಿವೆ. ಇದೀಗ ಸೌತೆಕಾಯಿಯ ವಿಡಿಯೋ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.&lt;/p&gt;&lt;h3&gt;&lt;strong&gt;ವಿಡಿಯೋ ವೈರಲ್​&lt;/strong&gt;&lt;/h3&gt;&lt;p&gt;ಈ ವಿಡಿಯೋ ವೈರಲ್ ಆಗುತ್ತಲೇ ರೈಲ್ವೆ ಇಲಾಖೆಯ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸೌತೆಕಾಯಿಗಳನ್ನು ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿದ್ದ ಒಂಬತ್ತು ಮಂದಿ ಮಹಿಳೆಯರನ್ನು ವಶಕ್ಕೆ ಪಡೆದುಕೊಂಮಡಿದ್ದಾರೆ. ವೈರಲ್​ ಆಗಿರುವ ವಿಡಿಯೋದಲ್ಲಿ ಈ 9 ಮಂದಿಯೂ ಇರುವುದು ಖಚಿತವಾಗಿದೆ.&lt;/p&gt;&lt;h3&gt;&lt;strong&gt;ಜನರ ಆಕ್ರೋಶ&lt;/strong&gt;&lt;/h3&gt;&lt;p&gt;ವಿಚಾರಣೆ ವೇಳೆ ಇನ್ನೂ ಶಾಕಿಂಗ್​ ವಿಷ್ಯ ತಿಳಿಸಿದ್ದಾರೆ ಮಹಿಳೆಯರು. ಮದುವೆ ಸಮಾರಂಭಗಳಲ್ಲಿ ಸಿಹಿತಿಂಡಿಗಳನ್ನು ತಯಾರಿಸಲು ಬಳಸುವಂತಹ ಹಸಿರು ಬಣ್ಣವನ್ನೇ ತಾನು ಬಳಸುತ್ತಿರುವುದಾಗಿ ಹೇಳಿದ್ದಾಳೆ. ಇದರಿಂದ ಸಿಹಿ ಪದಾರ್ಥಗಳ ಮೇಲೆಯೂ ಈಗ ಸಂದೇಹ ವ್ಯಕ್ತವಾಗಿದೆ. ಇವರು ಬಳಸುತ್ತಿದ್ದ ಕೆಮಿಕಲ್ಸ್​ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ವಿಡಿಯೋ ವೈರಲ್​ ಆಗುತ್ತಲೇ, ಆಹಾರ ಸುರಕ್ಷತೆ ಮತ್ತು ಅಧಿಕಾರಿಗಳ ಹೊಣೆಗಾರಿಕೆಯ ಕುರಿತು ಭಾರಿ ಪ್ರಶ್ನೆ ಕೇಳುತ್ತಿದ್ದಾರೆ ಪ್ರಶ್ನಿಸುತ್ತಿದ್ದಾರೆ. ಸೂಕ್ತ ಕಠಿಣ ಕ್ರಮ ಅಗತ್ಯ. ಎಚ್ಚರಿಕೆ ಕೊಟ್ಟು ಬಿಟ್ಟರೆ ಏನೂ ಪ್ರಯೋಜನವಿಲ್ಲ. ರೈಲ್ವೆ ಅಧಿಕಾರಿಗಳು ಇದರ ಜವಾಬ್ದಾರಿ ಹೊರಬೇಕು ಎಂದೆಲ್ಲಾ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/a-viral-video-from-bihars-katihar-railway-station-has-sparked-outraged-suc/articleshow-pnchilq"/>
        </item>
        <item>
            <title><![CDATA[ದಳಪತಿ ವಿಜಯ್ 'SSLC ಮಾಕ್ಸ್‌ಕಾರ್ಡ್' ವೈರಲ್ ಆಗಿರೋ ಬೆನ್ನಲ್ಲೇ ಓಡಾಡ್ತಿರೋ ಕಾಮೆಂಟ್ ಏನ್ ಗೊತ್ತಾ?]]></title>
            <link>https://kannada.asianetnews.com/cine-world/thalapathy-vijay-sslc-marksheet-and-his-struggle-with-mathematics-to-mastering-political-calculations-goes-viral/articleshow-89yvl0g</link>
            <guid isPermaLink="true">https://kannada.asianetnews.com/cine-world/thalapathy-vijay-sslc-marksheet-and-his-struggle-with-mathematics-to-mastering-political-calculations-goes-viral/articleshow-89yvl0g</guid>
            <pubDate>Sat, 09 May 2026 20:49:32 +0530</pubDate>
            <description><![CDATA[&lt;p&gt;ಸಿನಿಮಾ ಪರದೆಯ ಮೇಲೆ ನೂರಾರು ವಿಲನ್&zwnj;ಗಳನ್ನು ಏಕಾಂಗಿಯಾಗಿ ಚಚ್ಚಿ ಹಾಕುವ, ಬಾಕ್ಸ್ ಆಫೀಸ್&zwnj;ನಲ್ಲಿ ಕೋಟಿ ಕೋಟಿ ಹಣದ ಲೇಕ್ಕಾಚಾರ ಮಾಡುವ 'ದಳಪತಿ' ವಿಜಯ್ ಅವರ ಹಳೆಯ ರಿಪೋರ್ಟ್ ಕಾರ್ಡ್ ಈಗ ಇಡೀ ಸೌತ್ ಇಂಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyabwx0q17mtmeqmy646dp8,imgname-thalapathy-vijay-tamil-nadu-cm-2026-net-worth-assets-car-collection-tvk-property-affidavit-1778060227488.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಳಪತಿ ವಿಜಯ್ ಅಂಕಪಟ್ಟಿ ವೈರಲ್!&lt;/strong&gt;&lt;/p&gt;&lt;p&gt;ಸಿನಿಮಾ ಪರದೆಯ ಮೇಲೆ ನೂರಾರು ವಿಲನ್&zwnj;ಗಳನ್ನು ಏಕಾಂಗಿಯಾಗಿ ಚಚ್ಚಿ ಹಾಕುವ, ಬಾಕ್ಸ್ ಆಫೀಸ್&zwnj;ನಲ್ಲಿ ಕೋಟಿ ಕೋಟಿ ಹಣದ ಲೇಕ್ಕಾಚಾರ ಮಾಡುವ 'ದಳಪತಿ' ವಿಜಯ್ (Thalapathy Vijay) ಅವರ ಹಳೆಯ ರಿಪೋರ್ಟ್ ಕಾರ್ಡ್ ಈಗ ಇಡೀ ಸೌತ್ ಇಂಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹೌದು, ತಮಿಳುನಾಡು ರಾಜಕೀಯದಲ್ಲಿ ಸದ್ಯಕ್ಕೆ ಟ್ರೆಂಡಿಂಗ್&zwnj;ನಲ್ಲಿರುವ ಏಕೈಕ ಹೆಸರು ದಳಪತಿ ವಿಜಯ್. ಅವರ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಂ' (TVK) ಮೂಲಕ ಭವಿಷ್ಯದ ಮುಖ್ಯಮಂತ್ರಿಯಾಗುವ ಹಾದಿಯಲ್ಲಿರುವ ವಿಜಯ್ ಅವರ 10ನೇ ತರಗತಿಯ ಅಂಕಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ!&lt;/p&gt;&lt;h2&gt;ಅಷ್ಟಕ್ಕೂ ಆ ಅಂಕಪಟ್ಟಿಯಲ್ಲಿ ಏನಿದೆ?&lt;/h2&gt;&lt;p&gt;ವೈರಲ್ ಆಗಿರುವ ಮಾಹಿತಿಯ ಪ್ರಕಾರ, ವಿಜಯ್ ಅವರು ಶಾಲಾ ದಿನಗಳಲ್ಲಿ ಅಷ್ಟೇನೂ ದೊಡ್ಡ ಟಾಪರ್ ಆಗಿರಲಿಲ್ಲ. ಅವರು ಓರ್ವ 'ಆವರೇಜ್' ಅಂದ್ರೆ ಸರಾಸರಿ ವಿದ್ಯಾರ್ಥಿಯಾಗಿದ್ದರು. ಒಟ್ಟು 1100 ಅಂಕಗಳಿಗೆ ಅವರು ಪಡೆದಿದ್ದು 711 ಅಂಕಗಳು. ಅಂದರೆ ಸುಮಾರು ಶೇಕಡಾ 65 ರಷ್ಟು ಅಂಕಗಳೊಂದಿಗೆ ಅವರು ಉತ್ತೀರ್ಣರಾಗಿದ್ದರು. ಅಚ್ಚರಿಯ ವಿಷಯವೆಂದರೆ, ಎಲ್ಲರಿಗೂ ಕಷ್ಟವೆನಿಸುವ 'ಗಣಿತ'ದಲ್ಲಿ ವಿಜಯ್ ಕೂಡ ಸ್ವಲ್ಪ ಎಡವಿದ್ದರು. 200 ಅಂಕಗಳ ಗಣಿತ ಪರೀಕ್ಷೆಯಲ್ಲಿ ವಿಜಯ್ ಗಳಿಸಿದ್ದು ಕೇವಲ 95 ಅಂಕಗಳನ್ನು ಮಾತ್ರ!&lt;/p&gt;&lt;p&gt;ವಿಜಯ್ ಪಡೆದ ಅಂಕಗಳ ವಿವರ ಹೀಗಿದೆ:&lt;/p&gt;&lt;p&gt;ತಮಿಳು: 155/200 (ತಮ್ಮ ಮಾತೃಭಾಷೆಯಲ್ಲಿ ವಿಜಯ್ ಯಾವಾಗಲೂ ಕಿಂಗ್ ಎಂಬುದಕ್ಕೆ ಇದು ಸಾಕ್ಷಿ)&lt;/p&gt;&lt;p&gt;ಇಂಗ್ಲಿಷ್: 133/200&lt;/p&gt;&lt;p&gt;ಗಣಿತ: 95/200&lt;/p&gt;&lt;p&gt;ವಿಜ್ಞಾನ: 206/300&lt;/p&gt;&lt;p&gt;ಸಮಾಜ ವಿಜ್ಞಾನ: 122/200&lt;/p&gt;&lt;h3&gt;ವೈರಲ್ ಆಗುತ್ತಿರುವ ಕಾಮೆಂಟ್&zwnj;ಗಳೇನು?&lt;/h3&gt;&lt;p&gt;ಈ ಅಂಕಪಟ್ಟಿ ವೈರಲ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮತ್ತು ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. &quot;ಅಂದು ಸ್ಕೂಲ್&zwnj;ನಲ್ಲಿ ಮ್ಯಾಥ್ಸ್ ಲೆಕ್ಕಾಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದ ಅದೇ ವಿದ್ಯಾರ್ಥಿ, ಇಂದು ತಮಿಳುನಾಡಿನ ಘಟಾನುಘಟಿ ರಾಜಕಾರಣಿಗಳ ರಾಜಕೀಯ ಲೆಕ್ಕಾಚಾರವನ್ನೇ ಬುಡಮೇಲು ಮಾಡುತ್ತಿದ್ದಾನೆ&quot; ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇನ್ನು ಕೆಲವರು, &quot;ಕಡಿಮೆ ಅಂಕ ಬಂದ ತಕ್ಷಣ ಜೀವನ ಮುಗಿಯಿತು ಎಂದುಕೊಳ್ಳುವ ವಿದ್ಯಾರ್ಥಿಗಳಿಗೆ ವಿಜಯ್ ಅವರ ಈ ಯಶಸ್ಸಿನ ಕಥೆಯೇ ಒಂದು ದೊಡ್ಡ ಸ್ಫೂರ್ತಿ&quot; ಎನ್ನುತ್ತಿದ್ದಾರೆ.&lt;/p&gt;&lt;p&gt;ಮಾಕ್ಸ್ ಕಾರ್ಡ್ ಕೇವಲ ಕಾಗದದ ಚೂರು!&lt;/p&gt;&lt;p&gt;ವಿಜಯ್ ಅವರ ಅಂಕಪಟ್ಟಿ ವೈರಲ್ ಆಗಲು ಕಾರಣ ಅವರ ಕಡಿಮೆ ಅಂಕಗಳಲ್ಲ, ಬದಲಾಗಿ ಆ ಅಂಕಗಳನ್ನು ಮೀರಿ ಅವರು ಬೆಳೆದಿರುವ ಎತ್ತರ. ಶಾಲೆಯಲ್ಲಿ ಓರ್ವ ಶಿಸ್ತಿನ ಮತ್ತು ಸರಾಸರಿ ವಿದ್ಯಾರ್ಥಿಯಾಗಿದ್ದ ವಿಜಯ್, ಇಂದು ಕೋಟ್ಯಂತರ ಜನರ ಆರಾಧ್ಯ ದೈವ. ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಿದವರು ಈಗ ಮುಖ್ಯಮಂತ್ರಿ ಕುರ್ಚಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ವಿಜಯ್ ಅವರ ಈ ವೈರಲ್ ಅಂಕಪಟ್ಟಿ ಒಂದು ಮಾತನ್ನಂತೂ ಸಾಬೀತುಪಡಿಸಿದೆ: &quot;ನಿಮ್ಮ ಅಂಕಪಟ್ಟಿ ನಿಮ್ಮ ಯೋಗ್ಯತೆಯನ್ನು ನಿರ್ಧರಿಸುವುದಿಲ್ಲ, ನಿಮ್ಮ ಶ್ರಮ ಮತ್ತು ಛಲವಿದ್ದರೆ ಮಾತ್ರ ಆಕಾಶವೇ ಮಿತಿ&quot;. ಅಂದು ಲೆಕ್ಕದಲ್ಲಿ ತಡವರಿಸಿದ್ದ ಅದೇ ಕೈಗಳು ಇಂದು ಹೊಸ ತಮಿಳುನಾಡಿನ ಇತಿಹಾಸ ಬರೆಯಲು ಸಜ್ಜಾಗಿರುವುದು ನಿಜಕ್ಕೂ ರೋಚಕ!&lt;/p&gt;]]></content:encoded>
            <category>india-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/thalapathy-vijay-sslc-marksheet-and-his-struggle-with-mathematics-to-mastering-political-calculations-goes-viral/articleshow-89yvl0g"/>
        </item>
        <item>
            <title><![CDATA[ನಾಳೆ 3:45ಕ್ಕೆ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ, ರಾಜ್ಯಪಾಲರ ಒಪ್ಪಿಗೆ]]></title>
            <link>https://kannada.asianetnews.com/india-news/governor-gives-nod-for-vijay-cm-swearing-in-ceremony-tomorrow-at-3-45-pm-says-report/articleshow-8nr06yk</link>
            <guid isPermaLink="true">https://kannada.asianetnews.com/india-news/governor-gives-nod-for-vijay-cm-swearing-in-ceremony-tomorrow-at-3-45-pm-says-report/articleshow-8nr06yk</guid>
            <pubDate>Sat, 09 May 2026 20:15:51 +0530</pubDate>
            <description><![CDATA[&lt;p&gt;ಎಲ್ಲಾ ಕಸರತ್ತು ಬಳಿಕ ನಟ ವಿಜಯ್ ಟಿವಿಕೆ ಪಕ್ಷ 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುತ್ತಿದೆ. ನಾಳೆ 3.45ಕ್ಕೆ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr6k4qzspf4kky1h6cedqfm4,imgname-vijay-stakes-claim-to-form-tamil-nadu-government-after-securing-support-of-121-mlas-1778337865721.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಮೇ.08) &lt;/strong&gt;ತಮಿಳುನಾಡು ಚುನಾವಣೆ ಫಲಿತಾಂಶ ಹೊರಬಂದ ಬಳಿಕ ಶುರುವಾದ ರಾಜಕೀಯ ಕಸರತ್ತು ಇದೀಗ ಅಂತ್ಯಗೊಂಡಿದೆ. ಕೊನೆಗೆ ನಟ ವಿಜಯ್ ಅವರ ಟಿವಿಕೆ ಪಕ್ಷ 120 ಶಾಸಕರ ಬೆಂಬಲದ ಜೊತೆ ಸರ್ಕಾರ ರಚಿಸುತ್ತಿದ್ದಾರೆ. ವಿಸಿಕೆ ಮುಖ್ಯಸ್ಥ ಭೇಷರತ್ ಬೆಂಬಲ ಸೂಚಿಸಿದ ಬೆನ್ನಲ್ಲೇ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಭೇಟಿಯಾದ ನಟ ವಿಜಯ್&zwnj;ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಾಳೆ (ಮೇ.10) ಅದ್ಧೂರಿ ಕಾರ್ಯಕ್ರಮದ ಮೂಲಕ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದಾಗಿ ಮಾಹಿತಿ ಹೊರಬಿದ್ದಿದೆ.&lt;/p&gt;&lt;h2&gt;ನಾಳೆ 3:45ಕ್ಕೆ ಪ್ರಮಾಣ ವಚನ ಸ್ವೀಕರಿಸಲಿರುವ ವಿಜಯ್&lt;/h2&gt;&lt;p&gt;ನಾಳೆ ಮಧ್ಯಾಹ್ನ 3.45ಕ್ಕೆ ನಟ ವಿಜಯ್ ಜೊಸೆಫ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇವರ ಜೊತೆಗೆ ಕೆಲವರು ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚಿಸಲು ಶಾಸಕರ ಬೆಂಬಲ ಪತ್ರ ನೀಡಿದ ಬಳಿಕ ರಾಜ್ಯಪಾಲ ಅರ್ಲೇಕರ್ ವಚನ ಬೋಧಿಸಲು ಒಪ್ಪಿಗೆ ಸೂಚಿಸಿದ್ದಾರೆ.&lt;/p&gt;&lt;p&gt;107 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ವಿಜಯ್ ಜೊಸೆಫ್ ಅವರ ಟಿವಿಕೆ ಸರ್ಕಾರ ರಚಿಸಲು 11 ಶಾಸಕರ ಕೊರತೆ ಎದುರಿಸಿತ್ತು. ಕಾಂಗ್ರೆಸ್ ಬೆಂಬಲ ನೀಡಿದ ಬಳಿಕ ಸಿಪಿಎಂ ಹಾಗೂ ಸಿಪಿಎಂ(ಐ) ಕೂಡ ಬೆಂಬಲ ಸೂಚಿಸಿತ್ತು. ಇತ್ತ ಡಿಎಂಕೆ ಮೈತ್ರಿ ಪಕ್ಷವಾಗಿರುವ ವಿಸಿಕೆ ನಡೆ ಕುತೂಹಲ ಕೆರಳಿಸಿತ್ತು. 2 ಶಾಸಕರನ್ನು ಹೊಂದಿರುವ ವಿಸಿಕೆ ಇಂದು ಸಂಜೆ ಟಿವಿಕೆ ಪಕ್ಷಕ್ಕೆ ಭೇಷರತ್ ಬೆಂಬಲ ಸೂಚಿಸಿತ್ತು. ಇದರ ಬೆನ್ನಲ್ಲೇ ನಟ ವಿಜಯ್ ರಾಜ್ಯಪಾಲರ ಭೇಟಿಗೆ ಅವಕಕಾಶ ಕೇಳಿದ್ದರು.&lt;/p&gt;&lt;p&gt;ನಟ ವಿಜಯ್ ಭೇಟಿಗೆ ಅವಕಾಶ ಕೇಳುವ ಮೊದಲೇ ರಾಜ್ಯಪಾಲರು ಕೇರಳ ಪ್ರವಾಸಕ್ಕೆ ಸಜ್ಜಾಗಿದ್ದರು. ಹೀಗಾಗಿ ಆರಂಭದಲ್ಲಿ ನಟ ವಿಜಯ್&zwnj; ಭೇಟಿಗೆ ಅವತಾಶ ನಿರಾಕರಿಸಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿತ್ತು. ಕೊನೆಗೆ ರಾಜ್ಯಪಾಲರು ಕೇರಳ ಪ್ರವಾಸ ರದ್ದುಗೊಳಿಸಿ ನಟ ವಿಜಯ್ ಜೊಸೆಫ್&zwnj;ಗೆ ಭೇಟಿಗೆ ಅವಕಾಶ ನೀಡಿದ್ದರು. ಇದರಂತೆ ವಿಜಯ್ ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚಿಸವು ಅವಕಾಶ ಕೇಳಿದ್ದರು. ಭಾರಿ ಕಸರತ್ತಿನ ಬಳಿಕ ಇದೀಗ ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರೂಪುಗೊಳ್ಳುತ್ತಿದೆ. ನಾಳೆ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/governor-gives-nod-for-vijay-cm-swearing-in-ceremony-tomorrow-at-3-45-pm-says-report/articleshow-8nr06yk"/>
        </item>
        <item>
            <title><![CDATA[ರೈಲಿನಲ್ಲಿ ಅಜ್ಜನ ಪಕ್ಕ ಮಲಗಿದ್ದ 6 ವರ್ಷ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ, ಆರೋಪಿ ಅರೆಸ್ಟ್]]></title>
            <link>https://kannada.asianetnews.com/india-news/shocking-train-incident-assault-attempt-on-minor-girl-accused-arrested-kerala/articleshow-dnbetfb</link>
            <guid isPermaLink="true">https://kannada.asianetnews.com/india-news/shocking-train-incident-assault-attempt-on-minor-girl-accused-arrested-kerala/articleshow-dnbetfb</guid>
            <pubDate>Sat, 09 May 2026 19:15:07 +0530</pubDate>
            <description><![CDATA[&lt;p&gt;ಸೀಟು ಸಿಗದೆ ಅಜ್ಜನ ಪಕ್ಕ ರೈಲು ಕೋಚ್&zwnj;ನ ನೆಲದಲ್ಲಿ ಮಲಗಿದ್ದ 6 ವರ್ಷದ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಘಟನೆ ಸಂಬಂಧ 40ರ ಹರೆಯದ ಆರೋಪಿಯನ್ನು ಬಂಧಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr6fqy4vmdnsz9739meaxy6f,imgname-accused-sanish-train-case-1778334300315.png" type="image/jpeg" height="390" width="690"/>
            <content:encoded><![CDATA[&lt;p&gt;ಕೊಲ್ಲಂ (ಮೇ.08) ಪಲರುವಿ ಎಕ್ಸ್&zwnj;ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ 6 ವರ್ಷದ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ ಘಟನೆ ನಡೆಗಿದೆ. ತಮಿಳುನಾಡಿನಿಂದ ಕೇರಳಕ್ಕೆ ಹೊರಟ್ಟಿದ್ದ ರೈಲಿನಲ್ಲಿ ಅಜ್ಜನ ಜೊತೆ ಮಲಗಿದ್ದ ಬಾಲಕಿ ಮೇಲೆ 40 ಹರೆಯದ ಆರೋಪಿ ಸಾನಿಶ್ ಲೈ0ಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.&lt;/p&gt;&lt;p&gt;ಪಲರುವಿ ಎಕ್ಸ್&zwnj;ಪ್ರೆಸ್ ಜನರಲ್ ಬೋಗಿಯಲ್ಲಿ ಈ ಘಟನೆ ನಡೆದಿದೆ.ತಮಿಳುನಾಡಿನ ತೆಂಕಾಶಿಯಿಂದ ಕೇರಳಕ್ಕೆ ಮರಳುತ್ತಿರುವಾಗ ಘಟನೆ ನಡೆದಿದೆ. ಜನರಲ್ ಬೋಗಿಯಲ್ಲಿ ಅಜ್ಜ ಹಾಗೂ ಮೊಮ್ಮಗಳಿಗೆ ಸೀಟು ಸಿಕ್ಕಿಲ್ಲ. ಕಿಕ್ಕಿರಿದು ತುಂಬಿದ್ದ ಜನರಲ್ ಬೋಗಿಯಲ್ಲಿ ಸೀಟು ಸಿಗದ ಕಾರಣ ರಾತ್ರಿಯಾಗುತ್ತಿದ್ದಂತೆ ಬೋಗಿಯ ನೆಲದ ಮೇಲೆ ಅಜ್ಜನ ಪಕ್ಕದಲ್ಲೇ ಬಾಲಕಿ ಮಲಗಿದ್ದಳು. ಪ್ರಯಾಣ, ಬಿಸಿಲಿನ ಬೇಗೆ, ಆಯಾಸದ ಕಾರಣ ಇಬ್ಬರು ಗಾಢ ನಿದ್ದೆ ಮಾಡಿದ್ದಾರೆ. ಇದೇ ವೇಳೆ ಆರೋಪಿ ಸಾನಿಶ್ ತನ್ನ ಸೀಟಿನಿಂದ ಎದ್ದು ಬಾಲಕಿ ಮಲಗಿದ್ದಲ್ಲಿಗೆ ತೆರಳಿ ಕಿರುಕುಳ ನೀಡಿದ್ದಾನೆ.&lt;/p&gt;&lt;h2&gt;ರಾತ್ರಿ ವೇಳೆ ಆರೋಪಿಯ ಪ್ರಯತ್ನ&lt;/h2&gt;&lt;p&gt;40ರ ಹರೆಯದ ಆರೋಪಿ ಸಾನಿಶ್ ಹಲವು ಬಾರಿ ಇದೇ ದಾರಿಯಲ್ಲಿ ಸಾಗಿ ಎಲ್ಲರನ್ನು ಗಮನಿಸಿದ್ದಾರೆ. ಬಹುತೇಕರು ನಿದ್ದೆಯಲ್ಲಿದ್ದ ಕಾರಣ ಇದೇ ಸಂದರ್ಭವನ್ನು ಬಳಸಿಕೊಂಡು ಬಾಲಕಿ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಆದರೆ ಬಾಲಕಿ ಮಲಗಿದ್ದ ಕೆಲ ದೂರದಲ್ಲಿದ್ದ ಮಹಿಳೆಯೊಬ್ಬರು ಅನುಮಾನಗೊಂಡು ಮೊಬೈಲ್ ರೆಕಾರ್ಡ್ ಮಾಡಿದ್ದಾರೆ. ಬಾಲಕಿ ಮೇಲೆ ದೌರ್ಜನ್ಯ ಎಸಗುತ್ತಿದ್ದಂತೆ ಮಹಿಳೆ ಎಚ್ಚೆತ್ತುಕೊಂಡಿದ್ದಾಳೆ. ಮೊಬೈಲ್ ರೆಕಾರ್ಡ್ ಮಾಡಿ ತಕ್ಷಣವೇ ರೈಲ್ವೇ ಪೊಲೀಸರಿಗೆ ಸೂಚಿಸಿದ್ದಾಳೆ.&lt;/p&gt;&lt;p&gt;ಇದೇ ವೇಳೆ ರೈಲು ಸೆಂಗೊಟೆ ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆ ಆರೋಪಿ ಇಳಿದು ಪರಾರಿಯಾಗುವ ಪ್ರಯತ್ನ ಮಾಡಿದ್ದ, ಆದರೆ ರೈಲ್ವೇ ಪೊಲೀಸರು ಕೊಲ್ಲಂ ಮೂಲದ ಪೌಲ್ಟ್ರಿ ಫಾರ್ಮ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸಾನಿಶ್&zwnj;ನನ್ನು ಅರೆಸ್ಟ್ ಮಾಡಿದ್ದಾರೆ. ಪಕ್ಕದ ಸೀಟಿನಲ್ಲಿದ್ದ ಮಹಿಳೆಯೊಬ್ಬರು ಈ ದೌರ್ಜನ್ಯದ ದೃಶ್ಯವನ್ನು ತಮ್ಮ ಮೊಬೈಲ್&zwnj;ನಲ್ಲಿ ರೆಕಾರ್ಡ್ ಮಾಡಿಕೊಂಡು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ತಪ್ಪಿಸಿಕೊಳ್ಳದಂತೆ ನೋಡಿಕೊಂಡಿದ್ದೇ ಈ ಮಹಿಳೆ. ಅವರ ಸಮಯಪ್ರಜ್ಞೆಯಿಂದಲೇ ಆರೋಪಿಯನ್ನು ಹಿಡಿಯಲು ಸಾಧ್ಯವಾಯಿತು.&lt;/p&gt;&lt;p&gt;ರೈಲು ಪ್ರಯಾಣದ ವೇಳೆ ಕಿಕ್ಕಿರಿದ ಪ್ರಯಾಣಿಕರ ನಡುವೆ ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ತಡೆಗಟ್ಟಲು ರೈಲಿನಲ್ಲಿ ಸಿಸಿಟಿವಿ ಸೇರಿದಂತೆ ಹಲವು ಇತರ ತಂತ್ರಜ್ಞಾನಗಳನ್ನು ಬಳಸಲಾಗಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/shocking-train-incident-assault-attempt-on-minor-girl-accused-arrested-kerala/articleshow-dnbetfb"/>
        </item>
        <item>
            <title><![CDATA[ನಟ ವಿಜಯ್ ಭೇಟಿಗೆ ರಾಜ್ಯಪಾಲರ ಅವಕಾಶ, ನಾಳೆ ಸಿಎಂ ಆಗಿ ಪ್ರಮಾಣಚವನ ಸಾಧ್ಯತೆ]]></title>
            <link>https://kannada.asianetnews.com/india-news/governor-gives-appointment-to-actor-vijay-swearing-in-as-cm-likely-tomorrow/articleshow-25lea27</link>
            <guid isPermaLink="true">https://kannada.asianetnews.com/india-news/governor-gives-appointment-to-actor-vijay-swearing-in-as-cm-likely-tomorrow/articleshow-25lea27</guid>
            <pubDate>Sat, 09 May 2026 18:36:29 +0530</pubDate>
            <description><![CDATA[&lt;p&gt;ತಮಿಳುನಾಡು ರಾಜ್ಯಪಾಲರು ತಮ್ಮ ಕೇರಳ ಪ್ರವಾಸ ರದ್ದು ಮಾಡಿ ನಟ ವಿಜಯ್ ಜೊಸೆಫ್ ಭೇಟಿಗೆ ಸಮಯ ನೀಡಿದ್ದಾರೆ. ನಾಳೆ ನಟ ವಿಜಯ್ ಜೊಸೆಫ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr6cdbwqx78j2nm8ybr5m1gd,imgname-vijay-car-1778330808215.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಮೇ.08)&lt;/strong&gt; ತಮಿಳುನಾಡಿನಲ್ಲಿ ಚುನಾವಣೆ ಫಲಿತಾಂಶ ಬಳಿಕ ಪ್ರತಿ ದಿನ ರಾಜಕೀಯ ಬೆಳವಣಿಗೆ ದೇಶದ ಗಮನಸೆಳೆದಿತ್ತು. ಇದೀಗ ಕ್ಲೈಮಾಕ್ಸ್ ಹಂತ ತಲುಪಿದೆ. ವಿಸಿಕೆ ಬೆಂಬಲ ಪಡೆಯದ ಟಿವಿಕೆ ಪಾರ್ಟಿ ಇದೀಗ ಮ್ಯಾಜಿಕ್ ನಂಬರ್ ದಾಟಿ ಮತ್ತೆರೆಡು ಶಾಸಕರ ಬೆಂಬಲ ಪಡೆದಿದೆ. 120 ಶಾಸಕರ ಬೆಂಬಲದೊಂದಿಗೆ ನಟ ವಿಜಯ್ ಜೊಸೆಫ್ ಇಂದು 6.30ಕ್ಕೆ ರಾಜ್ಯಪಾಲರ ಭೇಟಿಯಾಗುತ್ತಿದ್ದಾರೆ. ರಾಜ್ಯಪಾಲರು ತಮ್ಮ ಕೇರಳ ಪ್ರವಾಸ ರದ್ದುಗೊಳಿಸಿ ವಿಜಯ್ ಭೇಟಿಗೆ ಅವಕಾಶ ನೀಡಿದ್ದಾರೆ.&lt;/p&gt;&lt;h2&gt;ಲೋಕಭವನದತ್ತ ನಟ ವಿಜಯ್&lt;/h2&gt;&lt;p&gt;ನಟ ವಿಜಯ್ ಜೊಸೆಫ್ ಇದೀಗ ಲೋಕಭವನದತ್ತ ತೆರಳಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ನಟ ವಿಜಯ್ ಜೊಸೆಫ್ ಸರ್ಕಾರ ರಚನೆಗೆ ರಾಜ್ಯಪಾಲರ ಅವಕಾಶ ಕೇಳಲಿದ್ದಾರೆ. ಸದ್ಯ ಮ್ಯಾಜಿಕ್ ನಂಬರ್ ದಾಟಿರುವ ಕಾರಣ ವಿಜಯ್ ಟಿವಿಕೆ ಪಕ್ಷಕ್ಕೆ ಸರ್ಕಾರ ರಜನೆಗೆ ಅಡ್ಡಿ ಆತಂಕವಿಲ್ಲ. ಈ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಬ್ರೇಕ್ ಬಿದ್ದಿದೆ.&lt;/p&gt;&lt;p&gt;ಫಲಿತಾಂಶ ಘೋಷಣೆಯಾದ ಬಳಿಕ ನಟ ವಿಜಯ್ ಮೂರು ಬಾರಿ ರಾಜ್ಯಪಾಲರ ಭೇಟಿಯಾಗಿದ್ದರು. ಈ ವೇಳೆ ಶಾಸಕರ ಬೆಂಬಲ ಕೊರತೆ ಕಾರಣ ಸರ್ಕಾರ ರಚನೆ ಗೊಂದಲ ಮುಂದುವರಿದಿತ್ತು. ಇದರ ನಡುವೆ ಡಿಎಂಕೆ ಹಾಗೂ ಎಐಡಿಎಂಕೆ ಸರ್ಕಾರ ರಚಿಸುವ ಮಾತುಗಳು ಕೇಳಿಬಂದಿತ್ತು. ಇದೀಗ ನಾಲ್ಕನೇ ಬಾರಿ ನಟ ವಿಜಯ್ ಜೊಸೆಫ್, ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದಾರೆ.&lt;/p&gt;&lt;h2&gt;ವಿಸಿಕೆಯಿಂದ ಮಹತ್ವದ ಹೇಳಿಕೆ&lt;/h2&gt;&lt;p&gt;ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಿದ ವಿಸಿಕೆ ಪಕ್ಷದ ಮುಖ್ಯಸ್ಥ ತಿರು ಮಾವಲವನ್, ಮಹತ್ವ ಹೇಳಿಕೆ ನೀಡಿದ್ದಾರೆ. ಟಿವಿಕೆಗೆ ನಾವು ಬೆಂಬಲ ಸೂಚಿಸುತ್ತಿದ್ದೇವೆ. ಸರ್ಕಾರ ರಚನೆಗೆ ನಮ್ಮ ಬೆಂಬಲವಿದೆ. ನಾವು ಈ ಮಾಹಿತಿಯನ್ನು ನಮ್ಮ ಮೈತ್ರಿ ಪಕ್ಷವಾಗಿರುವ ಡಿಎಂಕೆಗೆ ಸೂಚಿಸಿದ್ದೇವೆ. ಡಿಎಂಕೆ ಜೊತೆ ನಮ್ಮ ಮೈತ್ರಿ ಮುಂದುವರಿಯಲಿದೆ ಎಂದು ತಿರು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/governor-gives-appointment-to-actor-vijay-swearing-in-as-cm-likely-tomorrow/articleshow-25lea27"/>
        </item>
        <item>
            <title><![CDATA[ಸರ್ಕಾರ ರಚನೆ, ಪ್ರಮಾಣವಚನ ನಡುವೆ ರಾಜಕೀಯ ಬಿರುಗಾಳಿ, ಸಚಿವ ಸಂಜೀವ್ ಅರೋರಾ ಅರೆಸ್ಟ್]]></title>
            <link>https://kannada.asianetnews.com/india-news/aap-faces-fresh-crisis-as-minister-sanjeev-arora-arrested-in-rs-100-crore-case/articleshow-p38feu0</link>
            <guid isPermaLink="true">https://kannada.asianetnews.com/india-news/aap-faces-fresh-crisis-as-minister-sanjeev-arora-arrested-in-rs-100-crore-case/articleshow-p38feu0</guid>
            <pubDate>Sat, 09 May 2026 18:12:14 +0530</pubDate>
            <description><![CDATA[&lt;p&gt;ಸರ್ಕಾರ ರಚನೆ ಕಸರತ್ತು, ಪ್ರಮಾಣವಚನ ಸಂಭ್ರಮಗಳ ನಡುವೆ ರಾಜಕೀಯ ಬಿರುಗಾಳಿ ಎದ್ದಿದೆ. ಬರೋಬ್ಬರಿ 100 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಪ್ ಸಚಿವ ಅರೆಸ್ಟ್ ಆಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr653mrx7yjtj23ptbemseg5,imgname-punjab-minister-sanjeev-arora-arrested-under-ed-scanner-amid-fake-gst-bill-and-money-laundering-allegations-1778323149597.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.08) &lt;/strong&gt;ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತ ತಮಿಳುನಾಡಿನಲ್ಲಿ ಟಿವಿಕೆ ಪಕ್ಷಕ್ಕೆ ಬೆಂಬಲ ಸಿಕ್ಕ ಖುಷಿಯಲ್ಲಿ ಸರ್ಕಾರ ರಜನೆಗೆ ರಾಜ್ಯಪಾಲರ ಅವಕಾಶ ಕೋರಿದ್ದಾರೆ. ದೇಶದ ರಾಜಕೀಯ ಬೆಳವಣಿಗೆ ನಡುವೆ ಸದ್ದಿಲ್ಲದೆ ಮತ್ತೊಂದು ಬಿರುಗಾಳಿ ಎದ್ದಿದೆ. ಬರೋಬ್ಬರಿ 100 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಂಜಾಬ್&zwnj;ನ ಸಚಿವ ಸಂಜೀವ್ ಅರೋರ ಅರೆಸ್ಟ್ ಆಗಿದ್ದಾರೆ.&lt;/p&gt;&lt;h2&gt;ಜಿಎಸ್&zwnj;ಟಿ ವ್ಯವಹಾರದಲ್ಲಿ ಅಕ್ರಮ&lt;/h2&gt;&lt;p&gt;ಪಂಜಾಬ್&zwnj;ನ ಆಪ್ ನಾಯಕ, ಪಂಜಾಬ್ ಮಿನಿಸ್ಟರ್ ಸಂಜೀವ್ ಆರೋರ ಕಳೆದ ಕೆಲ ದಿನಗಳಿಂದ ಇಡಿ ರೇಡಾರ್&zwnj;ನಲ್ಲಿದ್ದರು. ಜಿಎಸ್&zwnj;ಟಿ ಬಿಲ್ಲಿಂಗ್, ಅಕ್ರಮ ವ್ಯವಹಾರಗಳ ಆರೋಪದಡಿ ಇಡಿ ಅಧಿಕಾರಿಗಳು ಸತತ ತನಿಖೆ ನಡೆಸುತ್ತಿದ್ದರು. ಇಂದು ಇಡಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸಂಜೀವ್ ಆರೋರಾ ಅವರ ಕಚೇರಿ, ಮನೆ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಇಡಿ ದಾಳಿ ನಡೆಸಿತ್ತು. ಬರೋಬ್ಬರಿ 8 ಗಂಟೆಗಳ ಶೋಧ ಕಾರ್ಯ, ವಿಚಾರಣೆ ಬಳಿಕ ಸಂಜೀವ್ ಅರೋರಾರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.&lt;/p&gt;&lt;p&gt;ಅಕ್ರಮ ಹಣ ವರ್ಗಾವಣೆ ಹಾಗೂ ನಕಲಿ ಜಿಎಸ್&zwnj;ಟಿ ಬಿಲ್ಲಿಂಗ್ ಪ್ರಕರಣದಲ್ಲಿ ಇಂದು ಇಡಿ ಅಧಿಕಾರಿಗಳು ಏಕಕಾಲಕ್ಕೆ ದೆಹಲಿ, ಪಂಜಾಬ್, ಗುರುಗ್ರಾಂ ಸೇರಿದಂತೆ ಐದು ಕಡೆ ದಾಳಿ ನಡೆಸಿದ್ದರು. ಎಪ್ರಿಲ್ 17 ರಂದು ಇದೇ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಮತ್ತೆ 2ನೇ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲೇ ಸಂಜೀವ್ ಆರೋರ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಸತತ 8 ಗಂಟೆಗಳ ವಿಚಾರಣೆ ಹಾಗೂ ಶೋಧ ಕಾರ್ಯದ ಬಳಿಕ ಅರೆಸ್ಟ್ ಮಾಡಿದ್ದಾರೆ.&lt;/p&gt;&lt;p&gt;ಪಂಜಾಬ್&zwnj;ನ ಕೈಗಾರಿಕಾ ಸಚಿವ ಸಂಜೀವ್ ಆರೋರಾ, ಮೊಬೈಲ್ ಫೋನ್ ಖರೀದಿಯಲ್ಲಿ ನಕಲಿ ಜಿಎಸ್&zwnj;ಟಿ ಬಿಲ್ ನೀಡಿದ್ದಾರೆ ಅನ್ನೋ ಗಂಭೀರ ಆರೋಪ ಇದೆ. ಇದೇ ವೇಳೆ ಬರೋಬ್ಬರಿ 100 ಕೋಟಿ ರೂಪಾಯಿ ಮೊತ್ತವನ್ನು ಅಕ್ರಮ ವರ್ಗಾವಣೆ ಮಾಡಿದ ಆರೋಪವೂ ಸಂಜೀವ್ ಆರೋರ ಮೇಲಿದೆ. ಕಳೆದ ಒಂದು ತಿಂಗಳಿನಿಂದ ಇಡಿ ಅಧಿಕಾರಿಗಳು ಸತತ ತನಿಖೆ ನಡೆಸಿ ಇದೀಗ ಅರೋರ ಅರೆಸ್ಟ್ ಮಾಡಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ರಾಘವ್ ಚಡ್ಡಾ ಸೇರಿದಂತೆ 6 ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿಕೊಂಡಿದ್ದರು. ಇತ್ತ ದೆಹಲಿಯಲ್ಲಿ ಆಪ್ ಸರ್ಕಾರ ಪತನ ಗೊಂಡು ಇದೀಗ ಬಣಗುಡುತ್ತಿದೆ. ಉಳಿದಿರುವ ಪಂಜಾಬ್&zwnj;ನಲ್ಲಿ ಆಪ್ ಬುಡ ಅಲುಗಾಡತೊಡಗಿದೆ. ಈ ಬೆಳವಣಿಗೆ ನಡುವೆ ಸಂಜೀವ್ ಅರೋರಾ ಬಂಧನ ಆಪ್ ರಾಜಕೀಯ ಜೀವನದಲ್ಲಿ ತೀವ್ರ ಹೊಡೆತ ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/aap-faces-fresh-crisis-as-minister-sanjeev-arora-arrested-in-rs-100-crore-case/articleshow-p38feu0"/>
        </item>
        <item>
            <title><![CDATA[ರಾಜಕೀಯದ ಹುಚ್ಚು ಹಿಡಿಸಿದ್ದ ಅಪ್ಪನ ವಿರುದ್ಧವೇ ತಿರುಗಿ ನಿಂತ ವಿಜಯ್, ತಂದೆ ಪಕ್ಷ ವಿರೋಧಿಸಿ, ಟಿವಿಕೆ ಕಟ್ಟಿದ ಕಥೆ!]]></title>
            <link>https://kannada.asianetnews.com/politics/vijay-political-journey-from-opposing-father-sa-chandrasekhar-party-to-leading-tvk-gdp/articleshow-mgek29b</link>
            <guid isPermaLink="true">https://kannada.asianetnews.com/politics/vijay-political-journey-from-opposing-father-sa-chandrasekhar-party-to-leading-tvk-gdp/articleshow-mgek29b</guid>
            <pubDate>Sat, 09 May 2026 18:04:07 +0530</pubDate>
            <description><![CDATA[ನಟ ವಿಜಯ್ ರಾಜಕೀಯ ಪ್ರವೇಶದ ಕನಸು ಕಂಡಿದ್ದು ಅವರ ತಂದೆ ಎಸ್.ಎ. ಚಂದ್ರಶೇಖರ್. 2020ರಲ್ಲಿ ಮಗನಿಗಾಗಿ ಪಕ್ಷ ಸ್ಥಾಪಿಸಿದಾಗ, ವಿಜಯ್ ಅದನ್ನು ವಿರೋಧಿಸಿ, ತಮ್ಮ ಹೆಸರು ಬಳಸದಂತೆ ತಂದೆ-ತಾಯಿ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈಗ, ವಿಜಯ್ ತಮ್ಮದೇ ಟಿವಿಕೆ ಪಕ್ಷ ಸ್ಥಾಪಿಸಿ, ತಂದೆಯ ಹಳೆಯ ಕನಸನ್ನು ನನಸು ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01eay6kk4kgzmv6mpv8f4w5pdg,imgname-images--84--jpeg.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡಿನಲ್ಲಿ ದಳಪತಿಯ ಟಿವಿಕೆ ಪಾರ್ಟಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆಗಿ ಹೊರಹೊಮ್ಮಿದೆ. ಇದನ್ನ ಕಂಡು ವಿಜಯ್ ಫ್ಯಾನ್ಸ್ ವಿಜಯ್ ಸಿಎಂ ಆಗೇಬಿಟ್ರು ಅಂತ ಕುಣಿದಾಡಿದ್ರು. ಆದ್ರೆ ವಿಜಯ್ ರಾಜಕಾರಣಿ ಆಗಬೇಕು ಮೊದಲು ಕನಸು ಕಂಡವರು ದಳಪತಿಯ ಜನ್ಮದಾತ. ಆದ್ರೆ ಅಂದು ಅಪ್ಪನ ಆಸೆಯನ್ನೇ ದಿಕ್ಕರಿಸಿದ್ದ ವಿಜಯ್​​ ತಂದೆಯ ವಿರುದ್ಧವೇ ಕೇಸ್ ದಾಖಲಿಸಿದ್ರು. ಹಾಗಾದ್ರೆ ವಿಜಯ್ ಅಂದು ತಂದೆಯ ವಿರುದ್ಧವೇ ತಿರುಗಿ ಬಿದ್ದಿದ್ದೇಕೆ ನೋಡೋಣ ಬನ್ನಿ.&lt;/p&gt;&lt;h2&gt;ರಾಜಕೀಯದ ಕಾರಣಕ್ಕೆ ತಂದೆ-ತಾಯಿ ಮೇಲೆ ವಿಜಯ್ ದೂರು!&lt;/h2&gt;&lt;p&gt;ದಳಪತಿ ವಿಜಯ್, ತಮಿಳುನಾಡು ರಾಜಕಾರಣ ಹೊಸ ಫೈಯರ್​ ಬ್ರ್ಯಾಂಡ್​. ಜಯಲಲಿತಾ, ಕರುಣಾನಿಧಿಯಂತಹ ದಿಗ್ಗಜರು ಕಟ್ಟಿದ್ದ ಪಕ್ಷಗಳ ಎದುರು ತೊಡೆ ತಟ್ಟಿ ಗೆದ್ದ ಗಟ್ಟಿಗ. ಇವತ್ತು ವಿಜಯ್​​ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ರಾಜಕೀಯ ರಂಗದಲ್ಲಿ ಕಹಳೆ ಊದುತ್ತಿದ್ದಾರೆ. ಆದ್ರೆ ವಿಜಯ್​​ಗೆ ಪೊಲಿಟಿಕ್ಸ್​​ನ ಹುಚ್ಚು ಹಿಡಿಸಿದ್ದೇ ಅವರ ತಂದೆ ಅನ್ನೋದು ನಿಮ್ಗೆ ಗೊತ್ತಾ? ಅದು ಸತ್ಯವೂ ಹೌದು.&lt;/p&gt;&lt;h2&gt;2020ರಲ್ಲೇ ಮಗ ವಿಜಯ್&zwnj; ಗಾಗಿ ರಾಜಕೀಯ ಪಕ್ಷ ಕಟ್ಟಿದ್ದ ತಂದೆ!&lt;/h2&gt;&lt;p&gt;ವಿಜಯ್ ತಂದೆ ಎಸ್.​​ಎ ಚಂದ್ರಶೇಖರ್ ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಮತ್ತು ನಟ ಕೂಡ. ಹೀಗಾಗಿ ತಮ್ಮ ಮಗ ವಿಜಯ್ ಸ್ಟಾರ್ ಆಗುವಲ್ಲಿ ಎಸ್​​ಎ ಚಂದ್ರಶೇಖರ್ ಪಾಲು ದೊಡ್ಡದಿದೆ. ಆರಂಭದ ದಿನಗಳಲ್ಲಿ ವಿಜಯ್ ಅವರಿಗೆ ಸಿನಿಮಾ ನಿರ್ದೇಶನ, ನಿರ್ಮಾಣ ಮಾಡುವ ಜೊತೆಗೆ ಮಗನ ಸಿನಿಮಾಗಳ ಚಿತ್ರಕತೆ, ಶೂಟಿಂಗ್ ಎಲ್ಲಾ ಕೆಲಸ ನೋಡಿಕೊಂಡಿದ್ದು ಚಂದ್ರಶೇಖರ್. ಹಾಗೆ ಇವತ್ತು ವಿಜಯ್ ರಾಜಕೀಯ ಯಶಸ್ಸಿಗೆ ಕಾರಣವೂ ಅವರ ತಂದೆಯೇ. ಯಾಕಂದ್ರೆ ವಿಜಯ್​ರನ್ನ ರಾಜಕಾರಣಿಯಾಗಿ ನೋಡೋ ಆಸೆ ಪಟ್ಟು, 2020ರಲ್ಲೇ ಮಗ ವಿಜಯ್​​​​​ಗಾಗಿ ರಾಜಕೀಯ ಪಕ್ಷ ಕಟ್ಟಿದ್ರು ತಂದೆ ಚಂದ್ರಶೇಖರ್.&lt;/p&gt;&lt;h2&gt;&lsquo;ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ&rsquo; ಪಕ್ಷ ಸಂಘಟನೆ!&lt;/h2&gt;&lt;p&gt;ವಿಜಯ್ ಇಂದಿನ ರಾಜಕೀಯ ಯಶಸ್ಸಿಗೆ ಒಂದು ಕಾರಣ ಅವರ ಅಭಿಮಾನಿ ಸಂಘ &lsquo;ವಿಜಯ್ ಮಕ್ಕಳ್ ಇಯಕ್ಕಂ&rsquo; ಸ್ಥಾಪನೆ ಮತ್ತು ಆ ಸಂಘದಿಂದ ಆದ ಸಮಾಜಮುಖಿ ಕೆಲಸಗಳು. ಈ ಅಭಿಮಾನಿ ಸಂಘಕ್ಕೆ ಶಕ್ತಿಯಾಗಿ ನಿಂತಿದ್ದು ವಿಜಯ್​​ಅವರ ತಂದೆ ಎಸ್​​ಎ ಚಂದ್ರಶೇಖರ್.. ಕೊನೆಗೆ ವಿಜಯ್​​ ರಾಜಕೀಯಕ್ಕೆ ಬರಲಿ ಅನ್ನೋ ಅಭಿಮಾನಿಗಳ ಕೂಗು ಜೋರಾಗಿದ್ದಕ್ಕೆ 2020ರರಲ್ಲಿ ವಿಜಯ್ ತಂದೆ ಎಸ್​​ಎ ಚಂದ್ರಶೇಖರ್ &lsquo;ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ&rsquo; ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ರು. ಅದರಲ್ಲಿ ಸ್ವತಃ ತಾವು ಹಾಗೂ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಅವರು ಆಫೀಸ್ ಬೇರರ್ ಆಗಿದ್ರು.&lt;/p&gt;&lt;h2&gt;ಅಪ್ಪ-ಅಮ್ಮನ ಆಸೆ ವಿರುದ್ಧ ಬಹಿರಂಗ ಪ್ರಕಟಣೆ ಹೊರಡಿಸಿದ್ದ ವಿಜಯ್!&lt;/h2&gt;&lt;p&gt;ಯೆಸ್, ವಿಜಯ್​ ತಂದೆಗೆ ಮಗ ದೊಡ್ಡ ರಾಜಕಾರಣಿ ಆಗಿ ಬೆಳೆಯಲಿ ಅನ್ನೋ ಆಸೆ. ಆದ್ರೆ ಮಗನ ಲಕ್ಷ್ಯ ಬೇರೆಯದ್ದೇ ಆಗಿತ್ತು. ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದ ವಿಜಯ್ ನೂರಾರು ಕೋಟಿ ದುಡಿಯಬೇಕು ಅಂತ ಅದರ ಹಿಂದೆ ಬಿದ್ದಿದ್ರು. ಹೀಗಾಗಿ ತನ್ನ ಪೋಷಕರು ಕಟ್ಟಿದ್ದ &lsquo;ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ&rsquo; ಪಕ್ಷಕ್ಕೂ ನನಗೂ ಸಂಬಂಧ ಇಲ್ಲ ಅಂತ ಪ್ರಕಟಣೆ ಕೊಟ್ಟಿದ್ದ ವಿಜಯ್ ಅಂದು ತನ್ನ ತಂದೆಯ ಆಸೆಗೆ ತಣ್ಣೀರೆರಚಿದ್ರು.&lt;/p&gt;&lt;h2&gt;ಅಪ್ಪ-ಅಮ್ಮನ ವಿರುದ್ಧ ಕೋರ್ಟ್​ ಮೊರೆ ಹೋಗಿದ್ದ ದಳಪತಿ!&lt;/h2&gt;&lt;p&gt;ಅಷ್ಟೆ ಅಲ್ಲ ವಿಜಯ್ ಅಪ್ಪ ಕಟ್ಟಿರೋ ಪಕ್ಷದಿಂದ ದೂರ ಉಳಿಯಲು ಚೆನ್ನೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರು. ತಮ್ಮ ತಂದೆ ಪ್ರಾರಂಭಿಸಿರುವ ಪಕ್ಷವನ್ನು ರದ್ದು ಮಾಡಬೇಕು ಹಾಗೂ ಆ ಪಕ್ಷದಲ್ಲಿ ತಮ್ಮ ಹೆಸರು ಹಾಗೂ ಭಾವಚಿತ್ರವನ್ನು ಬಳಸಬಾರದೆಂದು ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ರು.&lt;/p&gt;&lt;p&gt;ಅಂತೆಯೇ ನ್ಯಾಯಾಲಯ ಸಹ ವಿಜಯ್ ಪರವಾಗಿಯೇ ಆದೇಶ ನೀಡಿತ್ತು. ಬಳಿಕ ಎಸ್​​ಎ ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ಅಪಿಢವಿಟ್ ಸಲ್ಲಿಸಿ, ಪಕ್ಷಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ಚಿತ್ರ, ಹೆಸರು ಬಳಸುವುದಿಲ್ಲ ಎಂದಿದ್ರು. ಕೊನೆಗೆ ಈ ಪ್ರಕರಣ ಬಗೆ ಹರಿದ ಮರು ವರ್ಷವೇ &lsquo;ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ&rsquo; ಪಕ್ಷವನ್ನು ರದ್ದಾಯ್ತು.&lt;/p&gt;&lt;h2&gt;ತಂದೆಯ ಕನಸು ನನಸು ಮಾಡಿದ ವಿಜಯ್!&lt;/h2&gt;&lt;p&gt;ವಿಜಯ್ ಮೊದಲಿನಿಂದಲೂ ಬಹಿರಂಗವಾಗಿ ಮಾತನಾಡಿದವರಲ್ಲ. ಆದ್ರೆ ಅವರ ತಂದೆ ಮಗನ ಪರವಾಗಿ ಎಲ್ಲಾ ಸಮಸ್ಯೆಗಳಿದ್ದಾಗ್ಲು ಪರಿಹಾರ ಹುಡುಕಿದವರು. ವಿಜಯ್ ರಾಜಕೀಯಕ್ಕೆ ಬರಬೇಕೆಂಬುದು ತಂದೆಯ ಆಸೆಯಾಗಿತ್ತು. ಅದರಂತೆ ಈಗ ವಿಜಯ್ ಟಿವಿಕೆ ರಾಜಕೀಯ ಪಕ್ಷ ಕಟ್ಟಿ ಭಾರಿ ಯಶಸ್ಸು ಸಾಧಿಸಿದ್ದಾರೆ. ಈಗ ವಿಜಯ್ ತಮಿಳುನಾಡು ಸಿಎಂ ಪಟ್ಟಕ್ಕೇರೋದೊಂದೇ ಭಾಕಿ ಇದೆ. ವಿಜಯ್ ಪೊಲಿಟಿಕ್ಸ್​​​​​​​ ನೋಡಿ ದಳಙತಿ ಅಭಿಮಾನಿ ಕೋಟೆ ಜೊತೆ ಮನೆ ಮಂದಿಯೆಲ್ಲಾ ಸಂಭ್ರಮಿಸುತ್ತಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/politics/vijay-political-journey-from-opposing-father-sa-chandrasekhar-party-to-leading-tvk-gdp/articleshow-mgek29b"/>
        </item>
        <item>
            <title><![CDATA[ನಟ ವಿಜಯ್ ಸರ್ಕಾರ ರಚನೆ ಖಚಿತ ಬೆನ್ನಲ್ಲೇ ಎಐಎಡಿಎಂಕೆ 30 ಬಂಡಾಯ ಶಾಸಕರ ಮಹತ್ವದ ಸಭೆ]]></title>
            <link>https://kannada.asianetnews.com/gallery/india-news/aiadmk-30-rebel-mlas-hold-key-meeting-amid-vijay-government-formation-buzz-v486ihs</link>
            <guid isPermaLink="true">https://kannada.asianetnews.com/gallery/india-news/aiadmk-30-rebel-mlas-hold-key-meeting-amid-vijay-government-formation-buzz-v486ihs</guid>
            <pubDate>Sat, 09 May 2026 17:44:17 +0530</pubDate>
            <description><![CDATA[&lt;p&gt;ವಿಸಿಕೆ ಬೆಂಬಲ ಘೋಷಿಸಿದ ಬೆನ್ನಲ್ಲೇ ನಟ ವಿಜಯ್ ಅವರ ಟಿವಿಕೆ ಸರ್ಕಾರ ರಚನೆ ಹಾದಿ ಸುಗಮಗೊಂಡಿದೆ. ಆದರೆ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಇದೀಗ ಎಐಎಡಿಎಂಕೆಯ 30 ಬಂಡಾಯ ನಾಯಕರು ಇಪಿಎಸ್ ಮನೆಗೆ ದೌಡಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9ertdxbb9hzd4gebyheyzcw,imgname-tamil-news--24--1762506127274.png" type="image/jpeg" height="390" width="690"/>
            <content:encoded><![CDATA[&lt;p&gt;ವಿಸಿಕೆ ಬೆಂಬಲ ಘೋಷಿಸಿದ ಬೆನ್ನಲ್ಲೇ ನಟ ವಿಜಯ್ ಅವರ ಟಿವಿಕೆ ಸರ್ಕಾರ ರಚನೆ ಹಾದಿ ಸುಗಮಗೊಂಡಿದೆ. ಆದರೆ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಇದೀಗ ಎಐಎಡಿಎಂಕೆಯ 30 ಬಂಡಾಯ ನಾಯಕರು ಇಪಿಎಸ್ ಮನೆಗೆ ದೌಡಾಯಿಸಿದ್ದಾರೆ.&lt;/p&gt;&lt;img&gt;&lt;p&gt;ತಮಿಳುನಾಡು ರಾಜಕೀಯ ನಿರೀಕ್ಷೆಗೂ ಮೀರಿದ ತಿರುವು ಪಡೆದುಕೊಳ್ಳುತ್ತಿದೆ. ವಿಸಿಕೆ ಬೆಂಬಲ ಘೋಷಣೆ ಮಾಡಿದ ಬೆನ್ನಲ್ಲೇ ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಸರ್ಕಾರ ರಚನೆಗೆ ರಾಜ್ಯಪಾಲ ಭೇಟಿಗೆ ಅವಕಾಶ ಕೇಳಿದೆ. ಸದ್ಯ 120 ಶಾಸಕರ ಬೆಂಬಲದೊಂದಿಗೆ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆ ಮಾಡಲಿದೆ. ಆದರೆ ಇದೀಗ ಎಐಎಡಿಎಂಕೆ ಪಕ್ಷದಲ್ಲಿ ಭಾರಿ ಬಂಡಾಯ ಎದ್ದಿದೆ.&lt;/p&gt;&lt;img&gt;&lt;p&gt;ಎಐಎಡಿಎಂಕೆ ಪಕ್ಷದಲ್ಲಿ ದೊಡ್ಡ ಬಂಡಾಯ ಶುರುವಾಗಿದೆ. ಪಕ್ಷದ ಒಂದು ಬಣದ ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ. ಇದರಿಂದ ಎಐಎಡಿಎಂಕೆ ಇಬ್ಭಾಗವಾಗುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಸಚಿವರಾದ ಎಸ್.ಪಿ. ವೇಲುಮಣಿ, ಸಿ.ವಿ. ಷಣ್ಮುಗಂ ಮತ್ತು ವಿಜಯಭಾಸ್ಕರ್ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದೆ. ಸುಮಾರು 30ಕ್ಕೂ ಹೆಚ್ಚು ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಂಡಾಯ ಶಾಸಕರು ನಟ ವಿಜಯ್&zwnj;ಗೆ ಬೆಂಬಲ ನೀಡುವ ಕುರಿತು ಪಕ್ಷದಲ್ಲಿ ಇಬ್ಬಗೆ ಅಭಿಪ್ರಾಯ ವ್ಯಕ್ತವಾಗಿತ್ತು.&lt;/p&gt;&lt;img&gt;&lt;p&gt;ಎಐಎಡಿಎಂಕೆ ಪಕ್ಷ ಎರಡು ಹೋಳಾಗುವ ಎಲ್ಲಾ ಸಾಧ್ಯತೆ ಇವೆ. ನಟ ವಿಜಯ್ ಆಗಮನದಿಂದ ಕಳೆದ 50 ವರ್ಷಗಳ ತಮಿಳುನಾಡು ರಾಜಕೀಯದಲ್ಲಿ ಹೊಸ ಬೆಳವಣಿಗೆಯಾಗಿದೆ. ಎಡಪ್ಪಾಡಿ ಕೆ ಪಳನಿಸ್ವಾಮಿ ನಿವಾಸಕ್ಕೆ ಒಂದು ಬಣದ ನಾಯಕರು ಆಗಮಿಸಿ ಸಭೆ ಸೇರಿದ್ದಾರೆ. 30 ಶಾಸಕರು ಇಪಿಎಸ್ ಮನೆಯಲ್ಲಿ ಸಭೆ ಸೇರಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.&lt;/p&gt;&lt;img&gt;&lt;p&gt;ಸರ್ಕಾರ ರಚಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಮತ್ತು ಎಐಎಡಿಎಂಕೆ ತಮ್ಮ ಪ್ರಯತ್ನವನ್ನು ಕೈಬಿಟ್ಟಿದ್ದಾರೆ. ಶಾಸಕರೊಂದಿಗೆ ಮಹತ್ವದ ಚರ್ಚೆ ನಡೆಸಿದ ಬಳಿಕ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ತಾನು ಹೊಸ ಸರ್ಕಾರ ರಚಿಸುವುದಿಲ್ಲ ಮತ್ತು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಇಪಿಎಸ್ 'ಎಕ್ಸ್' (X) ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಧಿಕಾರ ಹಿಡಿಯುವ ಎಲ್ಲಾ ದಾರಿಗಳು ಮುಚ್ಚಿಹೋದ ಕಾರಣ ಇಪಿಎಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.&lt;/p&gt;&lt;img&gt;&lt;p&gt;ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ನಿಲುವು ನಿರ್ಣಾಯಕವಾಗಿದೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಮಧ್ಯೆ, ರಾಜ್ಯಪಾಲರು ಕೇರಳಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ, ಲೀಗ್ ಮತ್ತು ವಿಸಿಕೆ ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿರುವುದರಿಂದ, ನಟ ವಿಜಯ್ ಸರಳ ಬಹುಮತವನ್ನು ಖಚಿತಪಡಿಸಿಕೊಂಡಿದ್ದಾರೆ. ಎರಡೂ ಪಕ್ಷಗಳು ಬೇಷರತ್ ಬೆಂಬಲ ನೀಡುವುದಾಗಿ ತಮ್ಮ ಪತ್ರಗಳಲ್ಲಿ ತಿಳಿಸಿವೆ.&lt;/p&gt;&lt;h2&gt;ನಟ ವಿಜಯ್ ಸರ್ಕಾರ&lt;/h2&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/aiadmk-30-rebel-mlas-hold-key-meeting-amid-vijay-government-formation-buzz-v486ihs"/>
        </item>
        <item>
            <title><![CDATA[ಸರ್ಕಾರ ರಚಿಸಲು ಎಲ್ಲರ ಬೆಂಬಲ ಪಡೆದ ದಳಪತಿ ವಿಜಯ್‌, ಆದ್ರೆ ಪ್ರತಿಜ್ಞಾವಿಧಿ ಬೋಧಿಸೋಕೆ ರಾಜ್ಯಪಾಲರೇ ಇರಲ್ಲ!]]></title>
            <link>https://kannada.asianetnews.com/gallery/india-news/vijay-tvk-majority-120-seats-governor-rv-arlekar-kerala-visit-cm-oath-ceremony-san-6vzdbz7</link>
            <guid isPermaLink="true">https://kannada.asianetnews.com/gallery/india-news/vijay-tvk-majority-120-seats-governor-rv-arlekar-kerala-visit-cm-oath-ceremony-san-6vzdbz7</guid>
            <pubDate>Sat, 09 May 2026 17:41:16 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್&zwnj;, ವಿಸಿಕೆ ಹಾಗೂ ಐಯುಎಂಎಲ್&zwnj; ಬೆಂಬಲ ನೀಡಿವೆ, ಇದರಿಂದ ಶಾಸಕರ ಬಲ 120ಕ್ಕೆ ಏರಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಂಜೆ 6 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5h418pptg7ena7jc36w5tr,imgname-tamil-nadu-political-crisis-vijay-tvk-vck-x-account-suspended-coalition-government-row-1-1778302190870.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್&zwnj;, ವಿಸಿಕೆ ಹಾಗೂ ಐಯುಎಂಎಲ್&zwnj; ಬೆಂಬಲ ನೀಡಿವೆ, ಇದರಿಂದ ಶಾಸಕರ ಬಲ 120ಕ್ಕೆ ಏರಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಂಜೆ 6 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.&lt;/p&gt;&lt;img&gt;&lt;p&gt;ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಸರ್ಕಾರ ರಚನೆಯಲ್ಲಿ ಸೃಷ್ಟಿಯಾಗಿರುವ ಅತಂತ್ರ ಸ್ಥಿತಿ ಈಗ ಮುಕ್ತಾಯವಾಗುವ ಸನಿಹ ಬಂದಿದೆ. ಸರ್ಕಾರ ರಚಿಸಲು ವಿಜಯ್&zwnj; ಕಾಂಗ್ರೆಸ್&zwnj;, ವಿಸಿಕೆ ಹಾಗೂ ಐಯುಎಂಎಲ್&zwnj; ಪಕ್ಷದ ಬೆಂಬಲ ಪಡೆಯುವುದರೊಂದಿಗೆ ಅವರ ಬೆಂಬಲ 120ಕ್ಕೆ ಏರಿದೆ. ಆದರೆ, ಪ್ರತಿಜ್ಞಾವಿಧಿ ಬೋಧಿಸಲು ರಾಜ್ಯಪಾಲರು ಸಿಗುವುದೇ ಅನುಮಾನವಾಗಿದೆ.&lt;/p&gt;&lt;img&gt;&lt;p&gt;ವಿಜಯ್&zwnj; ಅವರ ಟಿವಿಕೆ ಪಕ್ಷಕ್ಕೆ 120 ಶಾಸಕರು ಬೆಂಬಲ ನೀಡಿದ್ದಾರೆ. ಇದರಿಂದಾಗಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಸಂಜೆ 6 ಗಂಟೆಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದಾರೆ ಎಂದು ವರದಿಯಾಗಿದೆ. ಹಾಗೇನಾದರೂ ವಿಜಯ್&zwnj; ಈ ಸಮಯದಲ್ಲಿ ರಾಜ್ಯಪಾಲರ ಭೇಟಿಗೆ ಹೋಗದೇ ಇದ್ದಲ್ಲಿ, ಪ್ರಮಾಣವಚನ ಸ್ವೀಕಾರ ಸಮಾರಂಭ ಇನ್ನಷ್ಟು ದಿನ ತಡವಾಗಬಹುದು ಎನ್ನಲಾಗಿದೆ.&lt;/p&gt;&lt;img&gt;&lt;p&gt;ತಮಿಳುನಾಡು ಹಾಗೂ ಕೇರಳ ಎರಡೂ ರಾಜ್ಯಕ್ಕೂ ಆರ್&zwnj;ವಿ ಅರ್ಲೇಕರ್&zwnj; ರಾಜ್ಯಪಾಲರಾಗಿದ್ದಾರೆ. ಕೇರಳದಲ್ಲೂ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವ ಕಾರಣ ಅಲ್ಲಿಗೆ ಭೇಟಿ ನೀಡುವುದೂ ಕೂಡ ಅಗತ್ಯವಾಗಿದೆ. ಇಷ್ಟು ದಿನಗಳ ಕಾಲ ತಮಿಳುನಾಡಿನಲ್ಲಿ ಸರ್ಕಾರ ರಚನೆ ಆಗುವ ನಿರೀಕ್ಷೆಯಲ್ಲಿದ್ದ ಅರ್ಲೇಕರ್&zwnj;, ಇಂದು ಸಂಜೆ 7 ಗಂಟೆ ವೇಳೆಗೆ ಕೇರಳಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಇದರಿಂದಾಗಿ ವಿಜಯ್&zwnj; ಸಂಜೆ 6 ಗಂಟೆಯ ಒಳಗಡೆ ರಾಜ್ಯಪಾಲರ ಭೇಟಿ ಮಾಡಿ ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಮನವಿ ಮಾಡಲಿದ್ದಾರೆ. ಸರ್ಕಾರಕ್ಕೆ ಇರುವ ಬೆಂಬಲ ಪತ್ರವನ್ನು ನೋಡಿದ ಬಳಿಕ ಅರ್ಲೇಕರ್&zwnj; ಇದರ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಹಾಗೇನಾದರೂ ಬೆಂಬಲ ಇರುವುದು ಖಚಿತವಾದಲ್ಲಿ ಮಾತ್ರವೇ, ಕೇರಳ ಪ್ರವಾಸವನ್ನು ರದ್ದು ಮಾಡಲಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಸಿ. ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಈಗಾಗಲೇ ಸರ್ಕಾರ ರಚಿಸಲು ಹಕ್ಕು ಮಂಡಿಸಿದೆ. ಆದರೆ, ರಾಜ್ಯಪಾಲರು ಈ ವಿಚಾರದಲ್ಲಿ ಅತ್ಯಂತ ಜಾಗರೂಕತೆಯ ಹೆಜ್ಜೆ ಇರಿಸಿದ್ದಾರೆ. &quot;ಕೇವಲ ಹಕ್ಕು ಮಂಡಿಸಿದರೆ ಸಾಲದು, ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲದ (Magic Figure) ಬೆಂಬಲ ಪತ್ರಗಳೊಂದಿಗೆ ಬನ್ನಿ&quot; ಎಂದು ವಿಜಯ್ ನೇತೃತ್ವದ ನಿಯೋಗಕ್ಕೆ ರಾಜ್ಯಪಾಲರು ಸ್ಪಷ್ಟಪಡಿಸಿದ್ದರು.&lt;/p&gt;&lt;img&gt;&lt;p&gt;ಯಾವುದೇ ಪಕ್ಷ ಅಥವಾ ಮೈತ್ರಿಕೂಟವು ಅಗತ್ಯ ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿ ಸಂಖ್ಯಾಬಲವನ್ನು ಸಾಬೀತುಪಡಿಸಿದರೆ, ತಕ್ಷಣವೇ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಲಾಗುತ್ತದೆ. ತದನಂತರ ನಿಗದಿತ ಸಮಯದೊಳಗೆ ವಿಧಾನಸಭೆಯ ಸದನದಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡಲಾಗುತ್ತದೆ. ಆದರೆ, ಈ ಹಂತದಲ್ಲಿ ಕಾಂಕ್ರೀಟ್ ದಾಖಲೆಗಳಿಲ್ಲದೆ ಯಾವುದೇ ಪಕ್ಷವನ್ನು ಆಹ್ವಾನಿಸುವುದು ಸೂಕ್ತವಲ್ಲ ಎಂಬುದು ರಾಜ್ಯಪಾಲರ ನಿಲುವಾಗಿದೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/vijay-tvk-majority-120-seats-governor-rv-arlekar-kerala-visit-cm-oath-ceremony-san-6vzdbz7"/>
        </item>
        <item>
            <title><![CDATA[ಬಂಗಾಳದಲ್ಲಿ ಬಿಜೆಪಿ ಸರ್ಕಾರ, 15 ವರ್ಷ ಬಳಿಕ ಸಿಪಿಎಂ ಪತ್ರಿಕೆಗೆ ಸಿಕ್ತು ಸರ್ಕಾರಿ ಜಾಹೀರಾತು]]></title>
            <link>https://kannada.asianetnews.com/gallery/india-news/west-bengal-political-twist-cpm-daily-receives-government-ads-after-15-years-xfscdtu</link>
            <guid isPermaLink="true">https://kannada.asianetnews.com/gallery/india-news/west-bengal-political-twist-cpm-daily-receives-government-ads-after-15-years-xfscdtu</guid>
            <pubDate>Sat, 09 May 2026 17:17:10 +0530</pubDate>
            <description><![CDATA[&lt;p&gt;ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ತಮ್ಮ ಪಕ್ಷದ ಬೆಂಬಲದ, ನಾಯಕರ ಪತ್ರಿಕೆ, ತಮ್ಮ ಪರವಾಗಿರುವ ಪತ್ರಿಕೆ, ಮಾಧ್ಯಮಗಳಿಗೆ ಜಾಹೀರಾತು ನೀಡುವ ಪದ್ಧತಿ ಇತ್ತು. ಇದೀಗ ಬಿಜೆಪಿ ಸರ್ಕಾರ ಬಂದ ಬೆನ್ನಲ್ಲೇ ಸಿಪಿಎಂ ಪಕ್ಷದ ಪತ್ರಿಕೆಗೆ ಜಾಹೀರಾತು ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr68qzhb6t9esvma3jqncjcx,imgname-bengal-bjp-sarkar-1778326961706.png" type="image/jpeg" height="390" width="690"/>
            <content:encoded><![CDATA[&lt;p&gt;ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ತಮ್ಮ ಪಕ್ಷದ ಬೆಂಬಲದ, ನಾಯಕರ ಪತ್ರಿಕೆ, ತಮ್ಮ ಪರವಾಗಿರುವ ಪತ್ರಿಕೆ, ಮಾಧ್ಯಮಗಳಿಗೆ ಜಾಹೀರಾತು ನೀಡುವ ಪದ್ಧತಿ ಇತ್ತು. ಇದೀಗ ಬಿಜೆಪಿ ಸರ್ಕಾರ ಬಂದ ಬೆನ್ನಲ್ಲೇ ಸಿಪಿಎಂ ಪಕ್ಷದ ಪತ್ರಿಕೆಗೆ ಜಾಹೀರಾತು ಸಿಕ್ಕಿದೆ.&lt;/p&gt;&lt;img&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ 35 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಪಿಎಂ, ಅಧಿಕಾರ ಕಳೆದುಕೊಂಡ ನಂತರ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿತ್ತು. ಅದರಲ್ಲೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ಮೇಲೆ, ಕಳೆದ 15 ವರ್ಷಗಳಲ್ಲಿ ಸಿಪಿಎಂ ಪಕ್ಷದ ಪತ್ರಿಕೆಗೆ ಒಂದೇ ಒಂದು ಸರ್ಕಾರಿ ಜಾಹೀರಾತು ಸಿಕ್ಕಿರಲಿಲ್ಲ. ಆದರೆ ಈಗ, ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದು, ಪ್ರಮಾಣ ವಚನ ಸ್ವೀಕರಿಸಿದ ದಿನವೇ ಸಿಪಿಎಂ ಪತ್ರಿಕೆಗೆ ಸರ್ಕಾರಿ ಜಾಹೀರಾತು ಹುಡುಕಿಕೊಂಡು ಬಂದಿದೆ.&lt;/p&gt;&lt;img&gt;&lt;p&gt;ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಹಲವು ಪತ್ರಿಕೆಗಳಿಗೆ ಜಾಹೀರಾತು ನಿಷೇಧಿಸಲಾಗಿತ್ತು. ಆದರೆ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸಿಪಿಎಂ ಮುಖವಾಣಿ 'ಗಣಶಕ್ತಿ'ಯ ಮೊದಲ ಪುಟದಲ್ಲೇ ಇಂದು ಸರ್ಕಾರದ ಅಧಿಕೃತ ಜಾಹೀರಾತು ಪ್ರಕಟವಾಗಿದೆ. ಈ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಅವರ ಫೋಟೋಗಳಿವೆ.&lt;/p&gt;&lt;img&gt;&lt;p&gt;ಮಮತಾ ಬ್ಯಾನರ್ಜಿ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಬದಲಾವಣೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಂತ ಸಿಪಿಎಂ ಪಾಲಿಟ್&zwnj;ಬ್ಯೂರೋ ಸದಸ್ಯ ಹಾಗೂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಪ್ರತಿಕ್ರಿಯಿಸಿದ್ದಾರೆ. 'ಗಣಶಕ್ತಿ'ಗೆ ಜಾಹೀರಾತು ನಿಷೇಧಿಸಿದ್ದ ಮಮತಾ ಸರ್ಕಾರದ ನಿಲುವಿನ ವಿರುದ್ಧ ಸಿಪಿಎಂ ಕಾನೂನು ಹೋರಾಟವನ್ನೂ ನಡೆಸಿತ್ತು, ಆದರೆ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಸಮಯದಲ್ಲಿ ಪತ್ರಿಕೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದರಿಂದ ಈ ಸಂಕಷ್ಟ ದೂರವಾಗಿದೆ ಎಂದು ಸಿಪಿಎಂ ರಾಜ್ಯ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಇಂದು ನಡೆದ ಪ್ರಮಾಣ ವಚನ ಸಮಾರಂಭದಲ್ಲೂ ಬಿಜೆಪಿ ನಾಯಕರು ಸಿಪಿಎಂ ನಾಯಕರನ್ನು ಹಾಡಿ ಹೊಗಳಿದ್ದಾರೆ. ಮಾಜಿ ಮುಖ್ಯಮಂತ್ರಿ, ದಿವಂಗತ ಬುದ್ಧದೇಬ್ ಭಟ್ಟಾಚಾರ್ಯ ಮತ್ತು ಪಶ್ಚಿಮ ಬಂಗಾಳ ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಅವರನ್ನು ಬಿಜೆಪಿ ನಾಯಕರು ಪ್ರಶಂಸಿದ್ದಾರೆ.&lt;/p&gt;&lt;img&gt;&lt;p&gt;ಸುವೆಂಧು ಅಧಿಕಾರಿ ಅವರು ಬುದ್ಧದೇಬ್ ಭಟ್ಟಾಚಾರ್ಯರನ್ನು 'ಒಳ್ಳೆಯ ಹೃದಯದ ವ್ಯಕ್ತಿ' ಎಂದು ಪದೇ ಪದೇ ಹೇಳಿದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ಸಿಪಿಎಂ ನಾಯಕರು ಭ್ರಷ್ಟಾಚಾರದ ಕಳಂಕ ಅಂಟಿಸಿಕೊಳ್ಳದ ನಾಯಕರು ಎಂದು ಹೊಗಳಲು ಬಿಜೆಪಿ ನಾಯಕರು ಹಿಂದೆ ಮುಂದೆ ನೋಡಲಿಲ್ಲ.&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/west-bengal-political-twist-cpm-daily-receives-government-ads-after-15-years-xfscdtu"/>
        </item>
        <item>
            <title><![CDATA[BREAKING: ಕೊನೆಗೂ ಮುಗಿದ ಅನಿಶ್ಚಿತತೆ: ತಮಿಳುನಾಡಿನ ಇತಿಹಾಸದಲ್ಲೇ ಮೊದಲು ಮೈತ್ರಿ ಸರ್ಕಾರ; ವಿಜಯ್ ಕೈಹಿಡಿದ ತಿರುಮಾವಳವನ್!]]></title>
            <link>https://kannada.asianetnews.com/gallery/india-news/vijay-tvk-forms-government-tamil-nadu-vck-support-majority-118-seats-san-54hqymo</link>
            <guid isPermaLink="true">https://kannada.asianetnews.com/gallery/india-news/vijay-tvk-forms-government-tamil-nadu-vck-support-majority-118-seats-san-54hqymo</guid>
            <pubDate>Sat, 09 May 2026 17:12:40 +0530</pubDate>
            <description><![CDATA[&lt;p&gt;ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ವಿಸಿಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಮ್ಯಾಜಿಕ್ ನಂಬರ್ ತಲುಪಿದೆ. ಈ ಮೂಲಕ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಿದ್ದು, ಮೊದಲ ಬಾರಿಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr684e7yrzvm9kpr05mmbkc8,imgname-fotojet---2026-05-09t170146.348-1778326321406.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ವಿಸಿಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಮ್ಯಾಜಿಕ್ ನಂಬರ್ ತಲುಪಿದೆ. ಈ ಮೂಲಕ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಿದ್ದು, ಮೊದಲ ಬಾರಿಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.&lt;/p&gt;&lt;img&gt;&lt;p&gt;ಸತತ ಮೂರು ದಿನಗಳಿಂದ ತಮಿಳುನಾಡು ರಾಜಕೀಯದಲ್ಲಿ ಮನೆಮಾಡಿದ್ದ ಅನಿಶ್ಚಿತತೆ ಕೊನೆಗೂ ಅಂತ್ಯವಾಗಿದೆ. ಸೂಪರ್&zwnj;ಸ್ಟಾರ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118ನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ವಿಸಿಕೆ (VCK) ಪಕ್ಷವು ವಿಜಯ್&zwnj;ಗೆ ಬೇಷರತ್ ಬೆಂಬಲ ಘೋಷಿಸುವುದರೊಂದಿಗೆ, ತಮಿಳುನಾಡಿನಲ್ಲಿ ಮೊದಲ ಬಾರಿಗೆ 'ಮೈತ್ರಿ ಸರ್ಕಾರ' ಅಸ್ತಿತ್ವಕ್ಕೆ ಬರಲಿರುವುದು ದೃಢಪಟ್ಟಿದೆ.&lt;/p&gt;&lt;img&gt;&lt;p&gt;ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಶಾಸಕರ ಅಗತ್ಯವಿತ್ತು. ವಿಜಯ್ ಮೈತ್ರಿಕೂಟವು ಈ ಮೊದಲು 116 ಶಾಸಕರ (ಟಿವಿಕೆ 107, ಕಾಂಗ್ರೆಸ್ 5, ಎಡಪಕ್ಷಗಳು 4) ಬಲ ಹೊಂದಿತ್ತು. ಈಗ ವಿಸಿಕೆಯ ಇಬ್ಬರು ಶಾಸಕರು ಬೆಂಬಲ ಸೂಚಿಸಿರುವುದರಿಂದ ಮೈತ್ರಿಕೂಟದ ಸಂಖ್ಯಾಬಲ 118ಕ್ಕೆ ಏರಿಕೆಯಾಗಿದ್ದು, ಬಹುಮತದ ಗಡಿಯನ್ನು ತಲುಪಿದೆ.&lt;/p&gt;&lt;img&gt;&lt;p&gt;ವಿಸಿಕೆ ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಅವರು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರಿಗೆ ಪತ್ರ ಬರೆದಿದ್ದು, &quot;ತಮಿಳುನಾಡಿನಲ್ಲಿ ಸ್ಥಿರ ಮತ್ತು ಪ್ರಜಾಪ್ರಭುತ್ವ ಸರ್ಕಾರವನ್ನು ಖಚಿತಪಡಿಸುವ ಹಿತದೃಷ್ಟಿಯಿಂದ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆಗೆ ನಮ್ಮ ಇಬ್ಬರು ಶಾಸಕರು ಬೇಷರತ್ ಬೆಂಬಲ ನೀಡುತ್ತಿದ್ದಾರೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಬುಧವಾರದಿಂದಲೇ ವಿಜಯ್ ಹಲವು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರೂ, ಸಂಖ್ಯಾಬಲದ ಲಿಖಿತ ದಾಖಲೆ ನೀಡದ ಕಾರಣ ಸರ್ಕಾರ ರಚಿಸಲು ಆಹ್ವಾನ ಸಿಕ್ಕಿರಲಿಲ್ಲ. ವಿಸಿಕೆ ನೀಡುತ್ತಿದ್ದ ಪರಸ್ಪರ ವಿರೋಧಿ ಹೇಳಿಕೆಗಳಿಂದಾಗಿ ವಿಜಯ್ ಅವರ ರಾಜಕೀಯ ಭವಿಷ್ಯ ಅತಂತ್ರವಾಗಿತ್ತು. ಆದರೆ ಶನಿವಾರ ಮಧ್ಯಾಹ್ನ ವಿಸಿಕೆ ಮುಖ್ಯಸ್ಥ ತಿರುಮಾವಳವನ್ ಅವರು ಬೆಂಬಲ ಪತ್ರವನ್ನು ಹಸ್ತಾಂತರಿಸುವುದರೊಂದಿಗೆ ಎಲ್ಲಾ ಗೊಂದಲಗಳು ಬಗೆಹರಿದಿವೆ.&lt;/p&gt;&lt;img&gt;&lt;p&gt;ಕೇವಲ ಎರಡು ವರ್ಷಗಳ ಹಿಂದೆ ಪಕ್ಷ ಸ್ಥಾಪಿಸಿದ್ದ ವಿಜಯ್, ಈ ಚುನಾವಣೆಯಲ್ಲಿ 108 ಸ್ಥಾನಗಳನ್ನು (ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಪ್ರಸ್ತುತ 107 ಶಾಸಕರು) ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ 62 ವರ್ಷಗಳ ಸುದೀರ್ಘ ಆಡಳಿತದ ಏಕಸ್ವಾಮ್ಯವನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4 ಸ್ಥಾನಗಳನ್ನು ಗೆದ್ದಿವೆ. ವಿಸಿಕೆ, ಎಡಪಕ್ಷಗಳು ಮತ್ತು ಐಯುಎಂಎಲ್ ತಲಾ 2 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ, ಡಿಎಂಡಿಕೆ ಮತ್ತು ಎಎಮ್&zwnj;ಎಂಕೆ ತಲಾ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.&lt;/p&gt;&lt;img&gt;&lt;p&gt;ಎಡಪಕ್ಷಗಳು ವಿಜಯ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದ್ದು, ಸಂಪುಟ ಸೇರದಿರಲು ತೀರ್ಮಾನಿಸಿವೆ. ಆದರೆ, ಬೆಂಬಲ ನೀಡಿರುವ ಕಾಂಗ್ರೆಸ್ ಎರಡು ಸಚಿವ ಸ್ಥಾನಗಳ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ. ಇದೇ ವೇಳೆ ಎಐಎಡಿಎಂಕೆಯ ಮೂವರು ಶಾಸಕರು ಬಂಡಾಯವೆದ್ದು ಟಿವಿಕೆ ಸೇರುವ ಸಾಧ್ಯತೆ ಇರುವುದು ದ್ರಾವಿಡ ಪಕ್ಷಗಳಿಗೆ ಮತ್ತೊಂದು ಆಘಾತ ನೀಡಿದೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/vijay-tvk-forms-government-tamil-nadu-vck-support-majority-118-seats-san-54hqymo"/>
        </item>
        <item>
            <title><![CDATA[ರೇ*ಪಿಸ್ಟ್​ಗೆ ಪೊಲೀಸರ ರಕ್ಷಣೆ; ಪದೇ ಪದೇ ಜಾಮೀನು- ಕೋರ್ಟ್​ನಲ್ಲಿಯೇ ಇರಿದು ಕೊಂದ ಮಹಿಳೆಯರು]]></title>
            <link>https://kannada.asianetnews.com/crime/what-drove-200-women-to-stab-a-gangster-to-death-nagpurs-curious-story-suc/articleshow-05e6zkn</link>
            <guid isPermaLink="true">https://kannada.asianetnews.com/crime/what-drove-200-women-to-stab-a-gangster-to-death-nagpurs-curious-story-suc/articleshow-05e6zkn</guid>
            <pubDate>Sat, 09 May 2026 16:55:26 +0530</pubDate>
            <description><![CDATA[&lt;p&gt;ನ್ಯಾಯ ವಿಳಂಬದಿಂದ ಬೇಸತ್ತ ನಾಗ್ಪುರದ 200 ಮಹಿಳೆಯರು, ಸರಣಿ ಅ*ತ್ಯಾಚಾರ ಮತ್ತು ಕೊಲೆಗಳನ್ನು ಮಾಡಿ ಪದೇ ಪದೇ ಜಾಮೀನು ಪಡೆಯುತ್ತಿದ್ದ ರೇಪಿಸ್ಟ್ ಅಕ್ಕು ಯಾದವ್&zwnj;ನನ್ನು ಕೋರ್ಟ್ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಿದರು. ದಶಕಗಳ ಕಾಲ ನೋವುಂಡಿದ್ದ ಮಹಿಳೆಯರು 15 ನಿಮಿಷಗಳಲ್ಲಿ ತಮ್ಮ ಆಕ್ರೋಶವನ್ನು ತೀರಿಸಿಕೊಂಡರು, ನಂತರ ಕೋರ್ಟ್ ಇವರನ್ನು ಖುಲಾಸೆಗೊಳಿಸಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr67nvz03m15k3evtmwjma31,imgname-akkuyadav-1778325843936.jpg" type="image/jpeg" height="390" width="690"/>
            <content:encoded><![CDATA[&lt;p&gt;ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆ (justice delayed is justice denied) ಎಂಬ ಮಾತಿದೆ. ಆದರೆ ಕೋರ್ಟ್​ ಬಾಗಿಲಿಗೆ ಹೋಗುವ ಪ್ರಕರಣಗಳ ಪೈಕಿ ಹಲವು ದಶಕಗಳವರೆಗೂ ಇತ್ಯರ್ಥ ಆಗದೇ ಸಂತ್ರಸ್ತರ ಗೋಳು ಹೇಳತೀರದ ಸ್ಥಿತಿ ಇದೆ. ಅದೂ ಹೋಗಲಿ ಎಂದರೆ ಕೊ*ಲೆ ಪಾತಕಿಗಳು, ಅ*ತ್ಯಾಚಾರಿಗಳಿಗೆ ಕೋರ್ಟ್​ಗಳು ಪದೇ ಪದೇ ಜಾಮೀನು ನೀಡುವ ಕಾರಣ, ಸಂತ್ರಸ್ತರು ಭಯದಿಂದ ಇರಬೇಕಾದ ಸ್ಥಿತಿ ಈಗಲೂ ಇದೆ. ಜಾಮೀನು ಪಡೆದು ರಾಜಾರೋಷವಾಗಿ ಓಡಾಡುವ ಈ ಖದೀಮರು, ತಮ್ಮ ಮೇಲೆ ದೂರು ನೀಡಿದರನ್ನು ಸಾಯಿಸುವುದೂ ಇದೆ, ಇಲ್ಲವೇ ಆ್ಯಸಿಡ್​ ಎರೆಚುವುದು, ಮಾರಣಾಂತಿಕವಾಗಿ ಹಲ್ಲೆ ಮಾಡುವುದು... ಎಲ್ಲವೂ ನಡೆದೇ ಇದೆ. ಒಂದು ಕೊ*ಲೆ ಮಾಡಿದರೇನು, ಅದರ ಜೊತೆ ಇನ್ನೊಂದು ಕೊ*ಲೆ ಆದ್ರೇನು, ಶಿಕ್ಷೆ ಒಂದೇ ಅಲ್ವಾ ಎನ್ನುವ ಮನಸ್ಥಿತಿ. ಇದರ ಹೊರತಾಗಿಯೂ ಕೋರ್ಟ್​ಗಳು ನಿರಾಯಾಸವಾಗಿ ಅಪರಾಧಿಗಳು ಎಂದು ಸಾಬೀತಾಗದ ಆರೋಪಿಗಳಿಗೆ ಜಾಮೀನು ನೀಡುವುದು ಬಹು ದೊಡ್ಡ ದುರಂತವಾಗಿಯೇ ಉಳಿದುಕೊಂಡಿದೆ.&lt;/p&gt;&lt;h2&gt;&lt;strong&gt;ರೇ*ಪಿಸ್ಟ್​ ಅಕ್ಕು ಯಾದವ್&lt;/strong&gt;&lt;/h2&gt;&lt;p&gt;ಅಂಥದ್ದೇ ಒಂದು ಪ್ರಕರಣವೇ ರೇ*ಪಿಸ್ಟ್​ ಅಕ್ಕು ಯಾದವ್ ಬರ್ಬರ ಹತ್ಯೆಯದ್ದು. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದೆ ಘಟನೆ ಇದು. 2004ರಲ್ಲಿ ನಡೆದಿರುವ ಈ ಘಟನೆ ಇಂದಿಗೂ ವೈರಲ್​ ಆಗುತ್ತಲೇ ಇರುತ್ತದೆ. ಕೊಳೆಗೇರಿಯ ಯುವತಿಯನ್ನು ರೇ*ಪ್​ ಮಾಡಿ ಸಾಯಿಸಿದ್ದ ಈ ಕಿರಾತಕ. 10 ವರ್ಷಗಳು ಕೋರ್ಟ್​ನಲ್ಲಿ ವಿಚಾರಣೆ ನಡೆದಾಗಲೆಲ್ಲವೂ ಆತನಿಗೆ ಸಲೀಸಾಗಿ ಜಾಮೀನು ಸಿಗುತ್ತಿತ್ತು! ಇದಕ್ಕೂ ಮೊದಲು ಆತನಿಂದ ಯುವತಿ ಅ*ತ್ಯಾಚಾರಕ್ಕೊಳಗಾಗಿದ್ದಾನೆಂದು ಅವರ ಮನೆಯವರು ಕೇಸ್​ ದಾಖಲಿಸಲು ಹೋದಾಗ ಪೊಲೀಸರು ನಕ್ಕಿ ಅವರನ್ನೇ ನಿಂದಿಸಿದ್ದರು. ಇದರಿಂದಾಗಿ ಅಕ್ಕು ಯಾದವ್​ ಮತ್ತು ಅವನ ಗ್ಯಾಂಗ್​ನ ಆಟಾಟೋಪ ಹೆಚ್ಚಾಗಿತ್ತು. ಅಲ್ಲಿರುವ ಮಹಿಳೆಯರಿಗೆ ಕಿರುಕುಳ ಕೊಡುವುದೇ ಕೆಲಸವಾಗಿತ್ತು. ಜನರನ್ನು ಬೆದರಿಸಿ, ದುಡ್ಡು ಕೀಳುತ್ತಿದ್ದರು. ಯುವತಿಯರ ಮಾನಭಂಗ ಮಾಡುತ್ತಿದ್ದರು. ಚಿಕ್ಕ ಚಿಕ್ಕ ಹೆಣ್ಣು ಮಕ್ಕಳನ್ನೂ ಬಿಡಲಿಲ್ಲ ಈ ಕಾಮುಕ. ಈ ಗ್ಯಾಂಗ್​ಗೆ ಪ್ರತಿರೋಧ ಒಡ್ಡಿವರ ಕೊ*ಲೆ ಆಗುತ್ತಿತ್ತು. ಶವಗಳನ್ನು ರೈಲ್ವೆ ಹಳಿಗಳ ಮೇಲೆ ಎಸೆದು ನುಣುಚಿಕೊಳ್ಳುತ್ತಿದ್ದ. ಕೊನೆಗೆ ಜನರ ಒತ್ತಡ ಹೆಚ್ಚಾದ ಮೇಲೆ ಪೊಲೀಸರು ಬಂಧಿಸುವಂತೆ ನಾಟಕವಾಡುತ್ತಿದ್ದರೂ ಪದೇ ಪದೇ ಅವನಿಗೆ ಜಾಮೀನು ಸಿಗುತ್ತಿತ್ತು. ಮತ್ತೆ ಅವನ ಆಟಾಟೋಪ ಹೆಚ್ಚಾಗುತ್ತಿತ್ತು.&lt;/p&gt;&lt;h3&gt;&lt;strong&gt;ಕಾನೂನು ಕೈಗೆತ್ತಿಕೊಂಡ ಮಹಿಳೆಯರು&lt;/strong&gt;&lt;/h3&gt;&lt;p&gt;ಕಾನೂನನ್ನು ಕೈಗೆತ್ತಿಕೊಳ್ಳದೇ ಬೇರೆ ದಾರಿಯೇ ಇಲ್ಲ ಎನ್ನುವುದನ್ನು ಮೊದಲು ಅಲ್ಲಿಯ ಮಹಿಳೆಯರು ಅರಿತರು. ನ್ಯಾಯಕ್ಕಾಗಿ ಕಾದು ಕುಳಿತರೆ ಇನ್ನೊಂದಿಷ್ಟ ಹೆಣಗಳು ಉರುಳುತ್ತವೆ, ಪೊಲೀಸರಿಂದ ಆ ರೇ*ಪಿಸ್ಟ್​ಗೆ ರಕ್ಷಣೆ ಬೇರೆ ಇದೆ. ಇನ್ನು ಸುಮ್ಮನೇ ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ಟೊಂಕ ಕಟ್ಟಿ ನಿಂತರು ಮಹಿಳೆಯರು. ಕೇಸ್​ವೊಂದರ ವಿಚಾರಣೆ ವೇಳೆ ಅಕ್ಕುವನ್ನು ಕೋರ್ಟ್​ಗೆ ಹಾಜರು ಪಡಿಸಲು ಪೊಲೀಸರು ಕರೆದುಕೊಂಡು ಹೋಗುವಾಗಲೇ ಮುಹೂರ್ತ ಫಿಕ್ಸ್​ ಮಾಡಿದ್ದರು 200 ಮಹಿಳೆಯರು. ಆಗಸ್ಟ್ 13, 2004 ರಂದು ಮಧ್ಯಾಹ್ನ 3 ಗಂಟೆಗೆ, ನೆರೆದ ಮಹಿಳೆಯರ ಗುಂಪು ಅವನ ಮುಖಕ್ಕೆ ಮೆಣಸಿನ ಪುಡಿ ಎಸೆದು ಕಲ್ಲುಗಳನ್ನು ಎಸೆದರು. ಪೊಲೀಸರಿಂದಲೂ ನಿಯಂತ್ರಿಸಲು ಸಾಧ್ಯವಾಗಲೇ ಓಡಿ ಹೋದರು. ಮಹಿಳೆಯರು ಆತನ ಪ್ಯಾಂಟ್​ ಬಿಚ್ಚಿ ಖಾಸಗಿ ಅಂಗವನ್ನೇ ಕತ್ತರಿಸಿದರು! ಕಂಡ ಕಂಡಲ್ಲಿ ಅವನ ಮೇಲೆ ಚಾಕುವಿನಿಂದ ಇರಿದರು. ದಶಕಗಳವರೆಗಿನ ಆ ನೋವನ್ನು 15 ನಿಮಿಷಗಳಲ್ಲಿ ತೀರಿಸಿಕೊಂಡಿದ್ದರು ಈ ಮಹಿಳೆಯರು!&lt;/p&gt;&lt;h3&gt;&lt;strong&gt;ಮಹಿಳೆಯರ ಪರವಾಗಿ ಒಗ್ಗಟ್ಟಾದ ಜನ&lt;/strong&gt;&lt;/h3&gt;&lt;p&gt;ಕೊ*ಲೆ ಮಾಡಿ ಸಂತ್ರಪ್ತರಾದ ಮಹಿಳೆಯರು ಬನ್ನಿ ನಾವು ಕೊ*ಲೆಗಾರರು, ನಮ್ಮನ್ನು ಬಂಧಿಸಿ ಎಂದು ಪೊಲೀಸರ ಮುಂದೆ ಹೋದಾಗ ಅವರು ಭಯದಿಂದ ತತ್ತರಿಸಿ ಹೋಗಿದ್ದರು. ಅಕ್ಕು ಸಾವಿನ ಬಳಿಕ, ಮಹಿಳೆಯರ ಪರವಾಗಿ ಎಲ್ಲರೂ ಒಕ್ಕೋರಲಿನಿಂದ ನಿಂತರು. ವಕೀಲರು ಕೂಡ ಮಹಿಳೆಯರನ್ನು ಆರೋಪಿಯನ್ನಾಗಿಸಬಾರದು ಎಂದು ದನಿ ಎತ್ತಿದರು. ಬಳಿಕ ಕೋರ್ಟ್​ ಕೂಡ ಪ್ರಕರಣದ ಗಂಭೀರತೆಯನ್ನು ಅರಿತು ವರ್ಷಗಳ ಬಳಿಕ ತೀರ್ಪು ನೀಡಿ, ಎಲ್ಲರನ್ನೂ ಖುಲಾಸೆಗೊಳಿಸಿತು.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/what-drove-200-women-to-stab-a-gangster-to-death-nagpurs-curious-story-suc/articleshow-05e6zkn"/>
        </item>
        <item>
            <title><![CDATA[Alcohol Price: ಗೋವಾ ಅಲ್ಲ, ಈ ರಾಜ್ಯದಲ್ಲಿ ಮಾತ್ರ ಅರ್ಧ ಬೆಲೆಗೆ ಮದ್ಯ ಸಿಗುತ್ತೆ! ಕಾರಣವೇನು?]]></title>
            <link>https://kannada.asianetnews.com/gallery/business/why-alcohol-is-cheaper-in-haryana-than-telangana-goa-sg5p9cm</link>
            <guid isPermaLink="true">https://kannada.asianetnews.com/gallery/business/why-alcohol-is-cheaper-in-haryana-than-telangana-goa-sg5p9cm</guid>
            <pubDate>Sat, 09 May 2026 16:33:21 +0530</pubDate>
            <description><![CDATA[&lt;p&gt;Alcohol Price: ನಮ್ಮ ರಾಜ್ಯಕ್ಕಿಂತ ಗೋವಾದಲ್ಲಿ ಕಡಿಮೆ ಬೆಲೆಗೆ ಮದ್ಯ ಸಿಗುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಗೋವಾ ಬಿಟ್ಟು ಇನ್ನೊಂದು ರಾಜ್ಯದಲ್ಲೂ ನಮ್ಮ ರಾಜ್ಯಕ್ಕಿಂತ ಅರ್ಧ ಬೆಲೆಗೆ ಮದ್ಯ ಸಿಗುತ್ತೆ ಅನ್ನೋದು ನಿಮಗೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knvfn4r7ry7wgmf6r4209prh,imgname-new-project--64--1775817626375.jpg" type="image/jpeg" height="390" width="690"/>
            <content:encoded><![CDATA[&lt;p&gt;Alcohol Price: ನಮ್ಮ ರಾಜ್ಯಕ್ಕಿಂತ ಗೋವಾದಲ್ಲಿ ಕಡಿಮೆ ಬೆಲೆಗೆ ಮದ್ಯ ಸಿಗುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಗೋವಾ ಬಿಟ್ಟು ಇನ್ನೊಂದು ರಾಜ್ಯದಲ್ಲೂ ನಮ್ಮ ರಾಜ್ಯಕ್ಕಿಂತ ಅರ್ಧ ಬೆಲೆಗೆ ಮದ್ಯ ಸಿಗುತ್ತೆ ಅನ್ನೋದು ನಿಮಗೆ ಗೊತ್ತಾ?&lt;/p&gt;&lt;img&gt;&lt;p&gt;ಅನೇಕ ಮದ್ಯ ಪ್ರಿಯರಿಗೆ ಈ ಅನುಮಾನ ಕಾಡುತ್ತದೆ. ಗೋವಾ, ಹರಿಯಾಣಕ್ಕೆ ಹೋದಾಗ ಅಲ್ಲಿನ ಮದ್ಯದ ಬೆಲೆ ನೋಡಿ ಶಾಕ್ ಆಗುತ್ತಾರೆ. ಉದಾಹರಣೆಗೆ, ಹರಿಯಾಣದಲ್ಲಿ ಪ್ರೀಮಿಯಂ ವಿಸ್ಕಿ ಬಾಟಲಿಯ ಬೆಲೆ 1500 ರೂ. ಇದ್ದರೆ, ಅದೇ ಬಾಟಲಿ ನಮ್ಮಲ್ಲಿ 3000 ರೂ. ಆಗುತ್ತದೆ. ಈ ವ್ಯತ್ಯಾಸದ ಹಿಂದಿನ ಕಾರಣವೇನು?&amp;nbsp;&lt;/p&gt;&lt;img&gt;&lt;p&gt;ಭಾರತದ ಸಂವಿಧಾನದ ಪ್ರಕಾರ, ಮದ್ಯದ ಮೇಲೆ ತೆರಿಗೆ ವಿಧಿಸುವ ಅಧಿಕಾರ ಸಂಪೂರ್ಣವಾಗಿ ರಾಜ್ಯ ಸರ್ಕಾರಗಳಿಗೇ ಸೇರಿದೆ. ಇದೇ ಕಾರಣಕ್ಕೆ ಬಾಟಲಿಯೊಳಗಿನ ಮದ್ಯ ಒಂದೇ ಆಗಿದ್ದರೂ, ರಾಜ್ಯದಿಂದ ರಾಜ್ಯಕ್ಕೆ ಬೆಲೆಗಳು ಭಿನ್ನವಾಗಿರುತ್ತವೆ. ಹರಿಯಾಣ ಸರ್ಕಾರ ಮದ್ಯದ ಮೇಲೆ ಕಡಿಮೆ ಅಬಕಾರಿ ಸುಂಕ (Excise Duty) ವಿಧಿಸುತ್ತದೆ. ಇದರಿಂದಾಗಿ ಅಲ್ಲಿ ಬೆಲೆಗಳು ತುಂಬಾ ಕಡಿಮೆ.&amp;nbsp;&lt;/p&gt;&lt;p&gt;ಮಾರಾಟ ಹೆಚ್ಚಾಗಿ, ರಾಜ್ಯದ ಆದಾಯವೂ ಹೆಚ್ಚಾಗುತ್ತದೆ. ಆದರೆ ನಮ್ಮ ತೆಲುಗು ರಾಜ್ಯಗಳಲ್ಲಿ ಮದ್ಯದ ಮೇಲೆ ವಿಧಿಸುವ ಅಬಕಾರಿ ಸುಂಕ ಮತ್ತು ಹೆಚ್ಚುವರಿ ತೆರಿಗೆಗಳು ತುಂಬಾ ಹೆಚ್ಚು. ರಾಜ್ಯದ ಬಜೆಟ್&zwnj;ನ ಹೆಚ್ಚಿನ ಆದಾಯ ಮದ್ಯದಿಂದ ಬರುವುದರಿಂದ ಇಲ್ಲಿ ಬೆಲೆಗಳು ಹೆಚ್ಚಾಗಿರುತ್ತವೆ.&lt;/p&gt;&lt;img&gt;&lt;p&gt;ಮದ್ಯದಂಗಡಿಗಳ ಹರಾಜು ಮತ್ತು ಪರವಾನಗಿ ಶುಲ್ಕಗಳು ಸಹ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ. ಹರಿಯಾಣದಲ್ಲಿ, ಖಾಸಗಿ ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಮತ್ತು ಪೂರೈಕೆ ಸರಪಳಿಯಲ್ಲಿ ಸ್ಪರ್ಧೆ ಹೆಚ್ಚಾಗಿರುತ್ತದೆ. ಆದರೆ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಸರ್ಕಾರಿ ನಿಗಮಗಳ ಮೂಲಕ ಮಾರಾಟ ನಡೆಯುವುದರಿಂದ ಬೆಲೆಗಳು ಹೆಚ್ಚಾಗಿರುತ್ತವೆ.&amp;nbsp;&lt;/p&gt;&lt;p&gt;ಉತ್ತರ ಭಾರತದಲ್ಲಿ ಮದ್ಯ ತಯಾರಿಕಾ ಘಟಕಗಳು ಹೆಚ್ಚಿವೆ. ಇದರಿಂದ ಅಲ್ಲಿ ಸಾರಿಗೆ ವೆಚ್ಚ ಕಡಿಮೆಯಾಗುತ್ತದೆ. ದಕ್ಷಿಣದ ರಾಜ್ಯಗಳಿಗೆ ಸಾಗಿಸಲು ಸಾರಿಗೆ ವೆಚ್ಚ ಹೆಚ್ಚಾಗುವುದರಿಂದ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹಲವು ರಾಜ್ಯಗಳು ಕಲ್ಯಾಣ ಯೋಜನೆಗಳಿಗೆ ಮದ್ಯದ ಮಾರಾಟವನ್ನೇ ಅವಲಂಬಿಸಿವೆ. ವಿಶೇಷವಾಗಿ ಆಂಧ್ರದಂತಹ ರಾಜ್ಯಗಳಲ್ಲಿ, ಮದ್ಯದ ಬೆಲೆ ಏರಿಸಿ ಬರುವ ಆದಾಯವನ್ನು ಸಾಮಾಜಿಕ ಯೋಜನೆಗಳಿಗೆ ಬಳಸಲಾಗುತ್ತದೆ.&amp;nbsp;&lt;/p&gt;&lt;p&gt;ಹಾಗಾಗಿ ಬೆಲೆ ಇಳಿಸುವುದು ಸರ್ಕಾರಗಳಿಗೆ ಕಷ್ಟ. ಬೆಲೆ ಕಡಿಮೆ ಎಂದು ಹರಿಯಾಣ ಅಥವಾ ಗೋವಾದಿಂದ ನಮ್ಮ ರಾಜ್ಯಕ್ಕೆ ಮದ್ಯ ತರುವುದು ಕಾನೂನುಬಾಹಿರ. ಅನುಮತಿ ಇಲ್ಲದೆ ಬೇರೆ ರಾಜ್ಯದ ಮದ್ಯದ ಬಾಟಲಿಗಳು ಸಿಕ್ಕಿಬಿದ್ದರೆ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸುತ್ತಾರೆ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/why-alcohol-is-cheaper-in-haryana-than-telangana-goa-sg5p9cm"/>
        </item>
        <item>
            <title><![CDATA[ಪಟ್ಟಕ್ಕೇರುವ ಮುನ್ನವೇ ದಳಪತಿ ಪ್ರಾಣಕ್ಕೆ ಕುತ್ತು? ಸರ್ಕಾರಿ ಬೆಂಗಾವಲು ಭದ್ರತೆ ಬಿಟ್ಟಿದ್ದೇಕೆ ಟಿವಿಕೆ ವಿಜಯ್?]]></title>
            <link>https://kannada.asianetnews.com/politics/tamil-nadu-politics-threat-claims-emerge-against-vijay-actor-rejects-security-cover-gdp/articleshow-izq5fcf</link>
            <guid isPermaLink="true">https://kannada.asianetnews.com/politics/tamil-nadu-politics-threat-claims-emerge-against-vijay-actor-rejects-security-cover-gdp/articleshow-izq5fcf</guid>
            <pubDate>Sat, 09 May 2026 16:24:40 +0530</pubDate>
            <description><![CDATA[ನಟ ದಳಪತಿ ವಿಜಯ್ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಂತೆ ಅವರ ಪ್ರಾಣಕ್ಕೆ ಬೆದರಿಕೆ ಇದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಡಿಜಿಪಿಗೆ ಪತ್ರ ಬರೆದಿದ್ದಾರೆ. ಆದರೆ, ತಾನು ಸರಳ ರಾಜಕಾರಣಿ ಎಂದು ಹೇಳಿಕೊಂಡಿರುವ ವಿಜಯ್, ತಮಗೆ ನೀಡಲಾಗಿದ್ದ ಹೆಚ್ಚುವರಿ ಭದ್ರತೆಯನ್ನು ನಿರಾಕರಿಸಿದ್ದಾರೆ. ಈ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr573jn7g2s98qg27z9byxkz,imgname-fotojet---2026-05-09t072433.092-1778291690151.jpg" type="image/jpeg" height="390" width="690"/>
            <content:encoded><![CDATA[&lt;p&gt;ದಳಪತಿ ವಿಜಯ್​​ ತಮಿಳುನಾಡು ಪಟ್ಟಾಭಿಶೇಷಕಕ್ಕೆ ಹೊಸ ಬಟ್ಟೆ ಸಿದ್ಧಮಾಡ್ಕೊಂಡು ಕಾಯ್ತಾ ಇದ್ದಾರೆ. ಆದ್ರೆ ಅದ್ಯಾವ ಗ್ರಹಚಾರವೋ ಏನೋ..? ವಿಜಯ್​ ಕನಸು ಇನ್ನು ನನಸಾಗಿಲ್ಲ. ಅಷ್ಟರಲ್ಲಾಗಲೇ ದಳಪತಿ ದೇಹಕ್ಕೆ ಕುತ್ತು ಬಂದೊದಗಿದೆ. ಹಾಗಾದ್ರೆ ಕಾಲಿವುಡ್ ಮಾಸ್ಟರ್ ವಿಜಯ್​​ಗಿರೋ ಆ ಕಂಠಕ ಏನು?&lt;/p&gt;&lt;h2&gt;ಪಟ್ಟಾಭಿಷೇಕ ಮೊದಲೇ ದಳಪತಿ ಪ್ರಾಣಕ್ಕೆ ಬಂದಿದೆಯಾ ಆಪತ್ತು?&lt;/h2&gt;&lt;p&gt;ತಮಿಳುನಾಡು ಈಗ ರಾಜಕೀಯ ರಣರಂಗ ಆಗಿದೆ. ಇಷ್ಟು ದಿನ ಎಲೆಕ್ಷನ್ ಗೆಲ್ಲೋಕೆ ಮೇಲಾಟ ಆಡುತ್ತಿದ್ದವರೆಲ್ಲಾ ಈಗ ಅಧಿಕಾರಕ್ಕೇರಲು ಚೆಲ್ಲಾಟವಾಡುತ್ತಿದ್ದಾರೆ. ಹೊಸ ಬಿಲ್ಲು ಬಾಣ ರೆಡಿ ಮಾಡ್ಕೊಂಡು ಯಾವಾಗ ಯಾರಿಗೆ ಬಿಡೋದು ಅಂತ ಕಾಯ್ತಾ ಇದ್ದಾರೆ. ಆದ್ರೆ ಆಗಿದ್ದಾಗ್ಲಿ ನಾನೇ ಸರ್ಕಾರ ರಚನೆ ಮಾಡುತ್ತೇನೆ ಅಂತ ವಿಜಯ್​ ಮುನ್ನುಗ್ಗಿದ್ದಾರೆ. ಅಷ್ಟರಲ್ಲಾಗಲೇ ದಳಪತಿ ಫ್ಯಾನ್ಸ್ ದಂಗಾಗೋ ವಿಷ್ಯವೊಂದು ಹೊರ ಜಗತ್ತಿಗೆ ಬಿಕರಿ ಆಗಿದೆ. ಅದೇ ವಿಜಯ್ ಪ್ರಾಣಕ್ಕೆ ಆಪತ್ತಿದೆ ಅನ್ನೋ ವಿಚಾರ.&lt;/p&gt;&lt;p&gt;ಹೌದು, ನಟ ವಿಜಯ್ ಈಗ ಟಿವಿಕೆ ಪಕ್ಷದ ಜನನಾಯಕ. ಜನ ಮೆಚ್ಚಿದ ರಾಜಕಾರಣಿ ಆಗಿರೋ ವಿಜಯ್​​ ಆ್ಯಕ್ಟರ್ ಆಗಿದ್ದಾಗ ಇಷ್ಟು ತ್ರಟ್ ಇತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ರಾಜಕಾರಣಿ ಆದ್ಮೇಲೆ ವಿಜಯ್ ಪ್ರಾಣಕ್ಕೇ ಕುತ್ತು ಬರುತ್ತೆ ಅನ್ನೋ ಮಾತುಗಳು ತಮಿಳು ನಾಡಿನಾಧ್ಯಂತೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದು ಗೊತ್ತಾಗಿದ್ದು ತಮಿಳು ನಾಡು ಕಾಂಗ್ರೇಸ್​​ ಮುಖಂಡ ಡಿಜಿಪಿಗೆ ಬರೆದ ಪತ್ರದಿಂದ.&lt;/p&gt;&lt;h2&gt;ದಳಪತಿ ವಿಜಯ್​​ಗೆ ರಕ್ಷಣೆ ಕೊಡಿ. ಡಿಜಿಪಿಗೆ ಪತ್ರ ಬರೆದ ಕಾಂಗ್ರೇಸ್!&lt;/h2&gt;&lt;p&gt;ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನಕ್ಕೆ ಎಲ್ಲಾ ತಯಾರಿ ಮಾಡಿದ್ದಾರೆ. ಆದ್ರೆ 118 ಕಂಠಕ ವಿಜಯ್​​​​​​​ರನ್ನ ಕಾಡುತ್ತಿದೆ. ಆದರೆ .. ಇದೇ ಸಮಯದಲ್ಲಿ ವಿಜಯ್ ಪ್ರಾಣಕ್ಕೆ ಬೆದರಿಕೆ ಇದೆ ಅಂತ ಕಾಂಗ್ರೆಸ್ ಪಾಳಯಯಕ್ಕೆ ಕಾಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮಿಳುನಾಡಿನ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ವಿಜಯ್ ಪ್ರಾಣಕ್ಕೆ ಭಯ ಇದೆ ರಕ್ಷಣೆ ಕೊಡಿ ಎಂದು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.&lt;/p&gt;&lt;h2&gt;ನನಗೆ ಭದ್ರತೆ ಬೇಡ , ನಾನು ಸರಳ ರಾಜಕಾರಣಿ-ವಿಜಯ್&lt;/h2&gt;&lt;p&gt;ದಳಪತಿ ವಿಜಯ್​ ಪ್ರಚಾರಕ್ಕೆ ಹೋದಾಗ ಸೆಕ್ಯೂರಿಟಿ ಹೆಚ್ಚಿಸಿಕೊಂಡಿದ್ರು. ವಿಜಯ್ ಅಕ್ಕ ಪಕ್ಕ 25 ಜನ ಸೆಕ್ಯೂರಿಟಿ ಗಾರ್ಡ್​​ಗಳಿದ್ರು. ವಿಜಯ್ ಎಲೆಕ್ಷನ್ ಗೆದ್ದ ಮೇಲೆ ಶಿಷ್ಟಾಚಾರದ ಪ್ರಕಾರ ಭದ್ರತೆ ಕೊಡಲಾಗಿತ್ತು. ಆದ್ರೆ ವಿಜಯ್ ಸ್ವಯಂ ಪ್ರೇರಿತವಾಗಿ ಭದ್ರತೆ ನಿರಾಕರಿಸಿದ್ದಾರೆ. ನಾಲ್ಕು ಬೆಂಗಾವಲು ವಾಹನ ಬೇಡ ಎಂದಿದ್ದಾರಂತೆ ವಿಜಯ್. ಹೀಗಾಗಿ ಪೊಲೀಸ್​ ಇಲಾಖೆ ಸೆಕ್ಯುರಿಟಿಯನ್ನ ಹಿಂಪಡೆಯಲಾಗಿದೆ.&lt;/p&gt;&lt;p&gt;ದಳಪತಿ ವಿಜಯ್ ತಮಿಳು ಸಿನಿಮಾ ಜನರ ಆರಾಧ್ಯ ದೈವ ಆಗಿದ್ದಾರೆ. ವಿಜಯ್​​ಗೆ ಕೋಟ್ಯಾನು ಕೋಟಿ ಅಭಿಮಾನಿ ಬಳಗ ಇದೆ. ಸೆಲೆಬ್ರಿಟಿ ಆಗಿರೋ ಕಾರಣ ವಿಜಯ್​​ರನ್ನ ಅಪ್ಪಿ ಮುದ್ದಾಡೋಕೆ ಮುನ್ನುಗ್ಗೋರು ಲಕ್ಷಾಂತರ ಜನ. ಆದ್ರೆ ವಿಜಯ್​​​ ಇನ್ನು ಸರ್ಕಾರ ರಚನೆ ಮಾಡಿಲ್ಲ. ಅದಾದ ನಂತರ ಭಧ್ರತೆ ಬಗ್ಗೆ ವಿಜಯ್​​​ ಹೇಳುತ್ತಾರೆ ಅಂತ ಟಿವಿಕೆ ಹೇಳಿಕೊಂಡಿದೆ. ಒಟ್ನಲ್ಲಿ ದಳಪತಿ ವಿಜಯ್ ಸರಳ ರಾಜಕಾರಣಿ ಅಂತ ತೋರಿಸಿಕೊಳ್ಳೋ ಮಾರ್ಗ ಹಿಡಿದಂತೆ ಕಾಣುತ್ತಿದೆ.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/politics/tamil-nadu-politics-threat-claims-emerge-against-vijay-actor-rejects-security-cover-gdp/articleshow-izq5fcf"/>
        </item>
        <item>
            <title><![CDATA[ನಟ ವಿಜಯ್ ಸರ್ಕಾರ ರಚನೆ ಡೀಲ್ ಫೈನಲ್? ಸುಳಿವು ನೀಡಿದ ಪಳನಿಸ್ವಾಮಿ ಪೋಸ್ಟ್]]></title>
            <link>https://kannada.asianetnews.com/gallery/india-news/actor-vijay-government-formation-deal-final-eps-post-sparks-political-buzz-522x38d</link>
            <guid isPermaLink="true">https://kannada.asianetnews.com/gallery/india-news/actor-vijay-government-formation-deal-final-eps-post-sparks-political-buzz-522x38d</guid>
            <pubDate>Sat, 09 May 2026 15:36:12 +0530</pubDate>
            <description><![CDATA[&lt;p&gt;ತಮಿಳುನಾಡು ರಾಜಕೀಯಲ್ಲಿ ಮೇಲಿಂದ ಮೇಲೆ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾಡಿದ ಪೋಸ್ಟ್ ನಟ ವಿಜಯ್ ಸಿಎಂ ಆಗೋದು ಖಚಿತಪಡಿಸುತ್ತಿದೆಯಾ? ಇಪಿಎಸ್ ಪೋಸ್ಟ್&zwnj;ನಲ್ಲಿ ಏನಿದೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1jvzh4ye5f8a0fsncheyc8,imgname-vijay-eps-1778169806372.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ರಾಜಕೀಯಲ್ಲಿ ಮೇಲಿಂದ ಮೇಲೆ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾಡಿದ ಪೋಸ್ಟ್ ನಟ ವಿಜಯ್ ಸಿಎಂ ಆಗೋದು ಖಚಿತಪಡಿಸುತ್ತಿದೆಯಾ? ಇಪಿಎಸ್ ಪೋಸ್ಟ್&zwnj;ನಲ್ಲಿ ಏನಿದೆ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ತಮಿಳುನಾಡು ರಾಜಕೀಯ ಇದೀಗ ದೇಶದ ಗಮನ ಸೆಳೆದಿದೆ. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ನಟ ವಿಜಯ್ ಟಿವಿಕೆ ಪಕ್ಷ ಹೆಣಗಾಡುತ್ತಿದೆ. ಕಾಂಗ್ರೆಸ್, ಸಿಪಿಎಂ, ಸಿಪಿಐ ಬೆಂಬಲ ನೀಡಿದರೂ ಮ್ಯಾಜಿಕ್ ನಂಬರ್ ದಾಟಿಲ್ಲ. ಇದರ ನಡುವೆ ವಿಸಿಕೆ ಪಕ್ಷ ನಾಲ್ಕು ಗಂಟೆ ಬಳಿಕ ನಿರ್ಧಾರ ತಿಳಿಸುವುದಾಗಿ ಹೇಳಿದೆ. ಇದರ ನಡುವೆ ನಟ ವಿಜಯ್ ಮುಖ್ಯಮಂತ್ರಿಯಾಗುವುದು, ಟಿವಿಕೆ ಸರ್ಕಾರ ರಚಿಸುವ ಡೀಲ್ ಫೈನಲ್ ಆಗಿದೆ ಅನ್ನೋ ಸುಳಿವನ್ನು ಎಐಡಿಎಂಕೆಯ ಎಡಪ್ಪಾಡಿ ಕೆ ಪಳನಿಸ್ವಾಮಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿರುವ ನಡುವೆ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಎಕ್ಸ್ ಮೂಲಕ ಪೋಸ್ಟ್ ಮಾಡಿ ಮಹತ್ವದ ಸುಳಿವು ನೀಡಿದ್ದಾರೆ. 17ನೇ ತಮಿಳುನಾಡು ವಿಧಾನಸಭೆ ಚುನಾವಣೆ ಯಶಸ್ವಿಯಾಗಿದೆ. ವಿವಿಧ ಪಕ್ಷಗಳಿಂದ ನಾಯಕರು ಸ್ಪರ್ಧಿಸಿ ಗೆದ್ದಿದ್ದಾರೆ. ಈ ವೇಳೆ ಸರ್ಕಾರ ರಚಿಸುತ್ತಿರುವ ಪಕ್ಷಕ್ಕೆ ನನ್ನ ಹೃದಯತುಂಬಿದ ಅಭಿನಂದನೆಗಳು ಎಂದು ಇಪಿಎಸ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇಪಿಎಸ್ ಮಾಡಿದ ಪೋಸ್ಟ್ ಟೈಮಿಂಗ್ ಹಾಗೂ ಶುಭಾಶಯ ಇದೀಗ ಮಹತ್ವದ ಸುಳಿವು ನೀಡಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಸರ್ಕಾರ ರಚಿಸುತ್ತಿರುವ ಪಕ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ಸದ್ಯ 107 ಶಾಸಕರನ್ನು ಹೊಂದಿರುವ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ ಬೆಂಬಲ ನೀಡಿದೆ. ಆದರೂ ಇನ್ನೆರಡು ಶಾಸಕರ ಬೆಂಬಲ ಬೇಕಿದೆ. ಇದಕ್ಕೆ ವಿಸಿಕೆ ಜೊತೆ ಮಾತುಕತೆ ನಡೆಯುತ್ತಿದೆ. ಇದರ ನಡುವೆ ಎಡಪ್ಪಾಡಿ ಪೋಸ್ಟ್ ನಟ ವಿಜಯ್ ಅವರ ಟಿವಿಕೆ ಪಕ್ಷ ಸರ್ಕಾರ ರಚಿಸುವ ಡೀಲ್ ಫೈನಲ್ ಮಾಡಿದ ಸುಳಿವು ನೀಡಿದೆ.&lt;/p&gt;&lt;img&gt;&lt;p&gt;ತಮಿಳುನಾಡು ಫಲಿತಾಂಶ ಬಳಿಕ ಎಐಡಿಎಂಕೆ ನಡೆ ತೀವ್ರ ಕುತೂಹಲ ಕೆರಳಿಸಿದೆ. ಒಂದು ಹಂತದಲ್ಲಿ ಡಿಎಂಕೆ ಜೊತೆ ಸೇರಿ ಸರ್ಕಾರ ರಚಿಸಲಿದೆ ಅನ್ನೋ ಮಾತು ಕೇಳಿಬಂದಿತ್ತು. ಈ ಮಾತು ಇನ್ನೂ ತಳ್ಳಿಹಾಕುವಂತಿಲ್ಲ. ಇಷ್ಟೇ ಅಲ್ಲ ಎಐಎಡಿಂಕೆ ಸಂಸದರು, ನಮ್ಮ ಪಕ್ಷದ ನಾಯಕರು ಮುಖ್ಯಮಂತ್ರಿಯಾಗುತ್ತಾರೆ ಅನ್ನೋ ಹೇಳಿಕೆಯನ್ನು ನೀಡಿದ್ದರು.&lt;/p&gt;&lt;img&gt;&lt;p&gt;ಈ ಮಾತುಗಳು, ನಡೆಗಳನ್ನು ಗಮನಿಸಿದರೆ ಎಡಪ್ಪಾಡಿ ಕೆ ಪಳನಿಸ್ವಾಮಿ ಪೋಸ್ಟ್ ಹಲವು ಅರ್ಥ ನೀಡುತ್ತಿದೆ. ನಟ ವಿಜಯ್ ಅವರ ಟಿವಿಕೆಗೆ ಸೆಡ್ಡು ಹೊಡೆದು ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಒಂದಾದರು ಅಚ್ಚರಿ ಪಡಬೇಕಿಲ್ಲ.&lt;/p&gt;&lt;h2&gt;ಒಂದಾಗುತ್ತಾ ಡಿಎಂಕೆ, ಎಐಎಡಿಎಂಕೆ&lt;/h2&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/actor-vijay-government-formation-deal-final-eps-post-sparks-political-buzz-522x38d"/>
        </item>
        <item>
            <title><![CDATA[ಅಂತು ಇಂತು ನೆರವೇರಿತು ದಳಪತಿ ವಿಜಯ್​ ದೊಡ್ಡ ಆಸೆ! 118 ನಂಬರ್ ಗೇಮ್ ರಹಸ್ಯ ಭೇದಿಸಿದ್ದು ಹೇಗೆ ವಿಜಯ್?]]></title>
            <link>https://kannada.asianetnews.com/politics/actor-vijay-tvk-stuns-tamil-nadu-politics-claims-majority-with-120-mlas-gdp/articleshow-ca9dzy8</link>
            <guid isPermaLink="true">https://kannada.asianetnews.com/politics/actor-vijay-tvk-stuns-tamil-nadu-politics-claims-majority-with-120-mlas-gdp/articleshow-ca9dzy8</guid>
            <pubDate>Sat, 09 May 2026 15:25:27 +0530</pubDate>
            <description><![CDATA[ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ತಲುಪಲು ಪರದಾಡಿ, ಕೊನೆಗೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr5h418jvvp1jccagqejvbx7,imgname-vijay-tvk-oath-delay-tamil-nadu-coalition-government-vck-support-majority-crisis-governor-standoff-1778302190866.jpg" type="image/jpeg" height="390" width="690"/>
            <content:encoded><![CDATA[&lt;p&gt;ದಳಪತಿ ವಿಜಯ್​ ಇತಿಹಾಸ ಸೃಷ್ಟಿಸಿದ್ದಾರೆ. ಎರಡು ವರ್ಷ ಕಂಡ ಕನಸು ಈಗ ನೆರವೇರಿದೆ. ಜನ ನಾಯಗನ್ ವಿಜಯ್​ ತಮಿಳುನಾಡು ದಂಡ ನಾಯಕ ಆಗಿದ್ದಾರೆ. ಈ ಬಗೆಗಿನ ಒಂದು ವರದಿ ಇಲ್ಲಿದೆ ನೋಡಿ.&lt;/p&gt;&lt;h2&gt;ಅಂತು ಇಂತು ನೆರವೇರಿತು ದಳಪತಿ ವಿಜಯ್​ ದೊಡ್ಡ ಆಸೆ!&lt;/h2&gt;&lt;p&gt;ತಮಿಳುನಾಡಿಗೆ ಕೊನೆಗೂ ದಂಡನಾಯಕ ನಾಮಕರಣ ಆಗುತ್ತಿದೆ. ಬಹುಮತ ಪಡೆದ ದೊಡ್ಡ ಪಾರ್ಟಿ ಅನ್ನೋ ಹೆಗ್ಗಳಿಕೆ ಪಡೆದಿದ್ದ ನಟ ವಿಜಯ್​ರ ಟಿವಿಕೆ ಅಧಿಕಾರದ ಗದ್ಧುಗೆ ಏರೋ ಸಮಯ ಮಂದಿದೆ. ಮತ ಎಣಿಕೆ ಮುಗಿದು ನಾಲ್ಕು ದಿನ ಕಳೆದಿದ್ರು ಸರ್ಜಾರ ರಚನೆಗೆ ಒದ್ದಾಡುತ್ತಿದ್ದ ವಿಜಯ್ ಈಗ ಎದ್ದು ಬಿದ್ದು ಹಂಗು ಹಿಂಹು ಹೆಂಗೋ ಮಾಡಿ ಮ್ಯಾಜಿಕ್ ನಂಬರ್​​​ನ ತಂದು ತಮಿಳುನಾಡು ಗವರ್ನರ್​​ ಎದುರಿಟ್ಟು ಮೀಸೆ ತಿರುವಿದ್ದಾರೆ.&lt;/p&gt;&lt;h2&gt;118 ನಂಬರ್ ಗೇಮ್ ರಹಸ್ಯ ಭೇದಿಸಿದ್ದು ಹೇಗೆ ವಿಜಯ್?&lt;/h2&gt;&lt;p&gt;ಸೋಮವಾರದ ದಿನ ಪಂಚರಾಜ್ಯ ಚುನಾವಣೆಯ ಫಲಿತಾಂಶ ಬಂದಿದ್ದು, ತಮಿಳುನಾಡಿನಲ್ಲಿ ವಿಜಯ್ ನಾಯಕತ್ವದ ಟಿವಿಕೆ ದಿಗ್ವಿಜಯ ಸಾಧಿಸಿದ್ದು ಗೊತ್ತೇ ಇದೆ. ಅದ್ರಲ್ಲೂ ದಶಕಗಳ ಕಾಲ ನಿರಂತರವಾಗಿ ತಮಿಳುನಾಡನ್ನ ಆಳ್ತಾ ಬಂದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನ ಎರಡು ಮತ್ತು ಮೂರನೇ ಸ್ಥಾನಕ್ಕೆ ತಳ್ಳಿ, ಟಿವಿಕೆ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಹೊರಹೊಮ್ಮಿತ್ತು.&lt;/p&gt;&lt;p&gt;ವಿಜಯ್ , ಟಿವಿಕೆ ಪಕ್ಷವನ್ನ ಹುಟ್ಟಿಹಾಕಿದ್ದೇ ಜಸ್ಟ್ ಎರಡು ವರ್ಷಗಳ ಹಿಂದೆ. ಹೀಗೆ ಬರೀ ಎರಡು ವರ್ಷಗಳ ಹಿಂದೆ ಹುಟ್ಟಿದ ಪಕ್ಷ, ಮೊದಲ ಚುನಾವಣೆ ಎದುರಿಸಿದ ಪಕ್ಷ. ದಶಕಗಳ ಇತಿಹಾಸವುಳ್ಳ ದ್ರಾವಿಡ ಪಕ್ಷಗಳನ್ನ ಮಣಿಸಿದ್ದು ರಾಜಕೀಯ ಪಂಡಿತರನ್ನೂ ಶಾಕ್ ಆಗುವಂತೆ ಮಾಡಿತ್ತು. ಈಗ ಸಿಎಂ ಪಟ್ಟಕ್ಕೇ ಏರಿದ್ದಾರೆ ವಿಜಯ್.&lt;/p&gt;&lt;p&gt;ಟಿವಿಕೆಯ ಈ ಅಮೋಘ ವಿಜಯದ ಹಿಂದೆ ಇದ್ದಿದ್ದು ಒನ್ ಌಂಡ್ ಓನ್ಲಿ ವಿಜಯ್... ಹೌದು ದಳಪತಿ ವಿಜಯ್ ನಾಮಬಲ ಮತ್ತು ತಾರಾಬಲವೇ ಟಿವಿಕೆಯ ವಿಜಯಕ್ಕೆ ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸೇಮ್ ಸಿನಿಮಾ ಸ್ಟೈಲ್​ನಲ್ಲೇ ಡೈಲಾಗ್ ಹೊಡೆದೇ ತಮಿಳುನಾಡನ್ನ ಗೆದ್ರು ವಿಜಯ್.&lt;/p&gt;&lt;p&gt;ವಿಜಯ್ ಚುನಾವಣೆಯನ್ನೇನೋ ಫಿಲ್ಮಿ ಸ್ಟೈಲ್​ನಲ್ಲಿ ಗೆದ್ದುಬಿಟ್ರು. ಆದ್ರೆ ವಿಜಯ್ ಪಕ್ಷ ಗೆದ್ದಿದ್ದು 108 ಸ್ಥಾನಗಳಲ್ಲಿ. ಅದ್ರಲ್ಲಿ ವಿಜಯ್​ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರಿಂದ ಅವರ ಬಳಿಯ ಶಾಸಕರ ಸಂಖ್ಯೆ 107. ಆದ್ರೆ ತಮಿಳುನಾಡಿನಲ್ಲಿ ಸರ್ಕಾರ ರಚಿಸೋದಕ್ಕೆ ಬೇಕಿದ್ದ ಮ್ಯಾಜಿಕ್ 118. ಇದನ್ನ ಗಳಿಸೋಕೆ ವಿಜಯ್ ಅಕ್ಷರಶಃ ಪರದಾಡಿ ಹೋಗಿದ್ದು ಸುಳ್ಳಲ್ಲ.&lt;/p&gt;&lt;p&gt;ಮೊದಲಿಗೆ ಕಾಂಗ್ರೆಸ್ , ಡಿಎಂಕೆ ಮೈತ್ರಿಯಿಂದ ಹೊರಬಂದು ಟಿವಿಕೆ ಬೆಂಬಲಿಸೋದಾಗಿ ಘೋಷಿಸಿತು. ಕಾಂಗ್ರೆಸ್&zwnj;ನ ಐದು ಸದಸ್ಯರ ಬೆಂಬಲ ಪತ್ರ ಸಿಕ್ತಾನೆ , ವಿಜಯ್ ರಾಜ್ಯಪಾಲರನ್ನ ಭೇಟಿ ಮಾಡಿ ಸರ್ಕಾರ ರಚಿಸೋಕೆ ಅವಕಾಶ ಕೇಳಿದ್ರು. ರಾಜ್ಯಪಾಲರು ಆಹ್ವಾನ ಕೊಡ್ತಾರೆ ಗುರುವಾರವೇ ಪ್ರಮಾಣ ವಚನ ಸ್ವೀಕರಿಸಬೇಕು ಅಂತ ವಿಜಯ್ ಸಜ್ಜಾಗಿ ನಿಂತಿದ್ರು, ಆದ್ರೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ದಳಪತಿಯ ಪತ್ರವನ್ನ ರಿಜೆಕ್ಟ್ ಮಾಡಿದ್ರು. ಕೊನೆಗೆ ಹಂಗೋ ಹಿಂಗೋ ಹೆಂಗೋ ಒಂದ್ ಮಾಡಿ ವಿಜಯ್​​ ಮ್ಯಾಜಿಗ್ ನಂಬರ್ ತಂದೇ ಬಿಟ್ರು. ಕಾಂಗ್ರೇಸ್​​, ವಿಸಿಕೆ, ಎಡಪಕ್ಷಗಳು ಸೇರಿ 120 ಸಂಖ್ಯಾಬಲ ತೋರಿಸಿದ್ರು.&lt;/p&gt;&lt;p&gt;&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/politics/actor-vijay-tvk-stuns-tamil-nadu-politics-claims-majority-with-120-mlas-gdp/articleshow-ca9dzy8"/>
        </item>
        <item>
            <title><![CDATA[ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!]]></title>
            <link>https://kannada.asianetnews.com/politics/tamil-nadu-political-buzz-vijay-cm-prospects-face-hurdle-over-majority-numbers-gdp-videoshow-oc0k9l2</link>
            <guid isPermaLink="true">https://kannada.asianetnews.com/politics/tamil-nadu-political-buzz-vijay-cm-prospects-face-hurdle-over-majority-numbers-gdp-videoshow-oc0k9l2</guid>
            <pubDate>Sat, 09 May 2026 14:31:05 +0530</pubDate>
            <description><![CDATA[ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆಯನ್ನ ಹಿಂದಿಕ್ಕಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ವಿಜಯ್ ಕನಸಿಗೆ ರಾಜ್ಯಪಾಲರು ಅಡ್ಡಿಪಡಿಸಿದ್ದು, 118 ಶಾಸಕರ ಬೆಂಬಲ ಪತ್ರವನ್ನು ಕೇಳಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xa8q8gi" medium="video" height="768" width="1024"/>
            <content:encoded><![CDATA[&lt;p&gt;ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆಯನ್ನ ಹಿಂದಿಕ್ಕಿ ವಿಜಯ್ ನಾಯಕತ್ವದ ಟಿವಿಕೆ ಪಾರ್ಟಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದಳಪತಿ ವಿಜಯ್ ಗುರುವಾರವೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸ್ತಾರೆ ಅಂತ ಹೇಳಲಾಗಿತ್ತು. ಆದ್ರೆ ವಿಜಯ್ ಸಿಎಂ ಕನಸಿಗೆ ರಾಜ್ಯಪಾಲರು ಬ್ರೇಕ್ ಹಾಕಿದ್ದಾರೆ. ಮೊದಲು 118 ಎಂ.ಎಲ್​ಎಗಳ ಬೆಂಬಲ ಪತ್ರ ತನ್ನಿ ಅಂದಿದ್ದಾರೆ. 2 ಸಾರಿ ಭೇಟಿ ಮಾಡಿದ್ರೂ ವಿಜಯ್​ನ ಸರ್ಕಾರ ರಚನೆಗೆ ಆಹ್ವಾನಿಸಿಲ್ಲ. ಹಾಗಾದ್ರೆ ದಳಪತಿ ಮುಂದಿನ ದಾರಿ ಏನು..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.&lt;/p&gt;&lt;p&gt;ದಳಪತಿ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ವಿಜಯ ಸಾಧಿಸಿ ಸಿಎಂ ಆಗುವ ಹೊಸ್ತಿಲಿನಲ್ಲಿರೋವಾಗ, ತ್ರಿಷಾ ಹೆಸರು ಕೂಡ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ದಳಪತಿ ಗೆಳತಿ ತ್ರಿಷಾ ಕೂಡ ಪಾಲಿಟಿಕ್ಸ್​ಗೆ ಬರ್ತಾರೆ ಅಂತ ಸುದ್ದಿಯಾಗ್ತಾ ಇದೆ. ತ್ರಿಷಾ ಕಳೆದ 27 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ವಯಸ್ಸು &amp;nbsp;40 ದಾಟಿದ್ರೂ ಈಗಲೂ ಬಹುಬೇಡಿಕೆಯ ನಟಿ. ಅಷ್ಟೇ ಅಲ್ಲ ತ್ರಿಷಾ ನೂರಾರು ಕೋಟಿ ಒಡತಿ ಕೂಡ.&amp;nbsp;&lt;/p&gt;&lt;p&gt;ಅಸಲಿಗೆ ದಳಪತಿ ವಿಜಯ್, ಟಿವಿಕೆ ಪಾರ್ಟಿ ಆರಂಭಿಸಿದ್ದು ಎರಡು ವರ್ಷಗಳ ಹಿಂದೆಯಾದ್ರೂ 2009ರಿಂದಲೇ ವಿಜಯ್ ತಮ್ಮ ಅಭಿಮಾನಿ ಸಂಘದ ಮೂಲಕ ರಾಜಕೀಯದಲ್ಲಿ ಪರೋಕ್ಷವಾಗಿ ತೊಡಗಿಕೊಂಡಿದ್ರು. 2011ರ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಗೆಲ್ಲೋದ್ರಲ್ಲಿ ದೊಡ್ಡ ಪಾತ್ರ ವಹಿಸಿದ್ರು. ಈಗ ದಶಕದ ಬಳಿಕ ತಾವೇ ಜಯಾ ಜಾಗಕ್ಕೆ ಬಂದು ಕೂತಿದ್ದಾರೆ. ತಮಿಳುನಾಡಿನಲ್ಲಿ ಮತ್ತೊಬ್ಬ ಚಿತ್ರನಟ ಸಿಎಂ ಸ್ಥಾನಕ್ಕೆ ಏರಲು ಸಜ್ಜಾಗಿದ್ದಾರೆ.&amp;nbsp;&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/politics/tamil-nadu-political-buzz-vijay-cm-prospects-face-hurdle-over-majority-numbers-gdp-videoshow-oc0k9l2"/>
        </item>
        <item>
            <title><![CDATA[ತಮಿಳುನಾಡು ರಾಜಕೀಯದ ಅತಿದೊಡ್ಡ ಟ್ವಿಸ್ಟ್: ಕೇವಲ 2 ಸೀಟು ಗೆದ್ದರೂ ಸಿಎಂ ಆಗ್ತಾರಾ ತಿರುಮಾವಳವನ್? ವಿಜಯ್ ಹಾದಿಗೆ ದ್ರಾವಿಡ ಕಂಟಕ!]]></title>
            <link>https://kannada.asianetnews.com/india-news/vck-chief-thirumavalavan-as-tn-cm-dmk-aiadmk-alliance-to-stop-vijay-tvk-san/articleshow-dfc1449</link>
            <guid isPermaLink="true">https://kannada.asianetnews.com/india-news/vck-chief-thirumavalavan-as-tn-cm-dmk-aiadmk-alliance-to-stop-vijay-tvk-san/articleshow-dfc1449</guid>
            <pubDate>Sat, 09 May 2026 14:27:36 +0530</pubDate>
            <description><![CDATA[ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ಪಕ್ಷ ಬಹುಮತದ ಅಂಚಿನಲ್ಲಿದೆ. ವಿಜಯ್&zwnj;ರನ್ನು ಅಧಿಕಾರದಿಂದ ದೂರವಿಡಲು, ದ್ರಾವಿಡ ಪಕ್ಷಗಳು 2 ಸ್ಥಾನ ಗೆದ್ದ ವಿಸಿಕೆ ನಾಯಕ ತಿರುಮಾವಳವನ್ ಅವರನ್ನೇ ಮುಖ್ಯಮಂತ್ರಿ ಮಾಡುವ ಅಚ್ಚರಿಯ ತಂತ್ರ ರೂಪಿಸುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k9pfqgzq1tsd8jvatyrc0c43,imgname-thirumavalavan-1762765030390.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ (ಮೇ.9): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ 'ಟಿವಿಕೆ' ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚಿಸಲು ಅಗತ್ಯವಿರುವ ಬಹುಮತದ ಗಡಿ (118) ತಲುಪಲು ವಿಫಲವಾಗಿದೆ. ಈ ಅತಂತ್ರ ಸ್ಥಿತಿಯ ನಡುವೆಯೇ ಈಗ ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ಆರಂಭವಾಗಿದ್ದು, ಕೇವಲ 2 ಸ್ಥಾನ ಗೆದ್ದಿರುವ ವಿಸಿಕೆ (VCK) ಮುಖ್ಯಸ್ಥ ತೋಳ್ ತಿರುಮಾವಳವನ್ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ಶುರುವಾಗಿದೆ.&lt;/p&gt;&lt;p&gt;ದಳಪತಿ ವಿಜಯ್ ಅವರ ಟಿವಿಕೆ ಸದ್ಯ 116 ಶಾಸಕರ ಬೆಂಬಲ ಹೊಂದಿದೆ (ಟಿವಿಕೆ 107, ಕಾಂಗ್ರೆಸ್ 5, ಎಡಪಕ್ಷಗಳು 4). ಬಹುಮತಕ್ಕೆ ಇನ್ನು ಕೇವಲ 2 ಶಾಸಕರ ಕೊರತೆಯಿದೆ. ವಿಸಿಕೆ ಪಕ್ಷವು 2 ಸ್ಥಾನಗಳನ್ನು ಗೆದ್ದಿದ್ದು, ಒಂದು ವೇಳೆ ಅವರು ವಿಜಯ್&zwnj;ಗೆ ಬೆಂಬಲ ನೀಡಿದರೆ ಟಿವಿಕೆ ಸರ್ಕಾರ ರಚನೆ ಸುಗಮವಾಗಲಿದೆ. ಇಂದು ಸಂಜೆ 4 ಗಂಟೆಗೆ ವಿಜಯ್ ತಮ್ಮ ಮುಂದಿನ ನಿಲುವನ್ನು ಪ್ರಕಟಿಸುವ ನಿರೀಕ್ಷೆಯಿದೆ.&lt;/p&gt;&lt;p&gt;ಮೂಲಗಳ ಪ್ರಕಾರ, ವಿಸಿಕೆಯ ಇಬ್ಬರು ಶಾಸಕರ ಪೈಕಿ ಒಬ್ಬರು ಇನ್ನೂ ಚೆನ್ನೈ ತಲುಪಿಲ್ಲ. ಇಬ್ಬರ ಸಹಿ ಸಿಕ್ಕ ಬಳಿಕವಷ್ಟೇ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ವಿಸಿಕೆ ಪಟ್ಟು ಹಿಡಿದಿದೆ. ಅತ್ತ ಟಿಟಿವಿ ದಿನಕರನ್ ಅವರ ಎಎಮ್&zwnj;ಎಂಕೆ ಮತ್ತು ಐಯುಎಂಎಲ್ ಈಗಾಗಲೇ ವಿಜಯ್&zwnj;ಗೆ ಬೆಂಬಲ ನೀಡಲು ನಿರಾಕರಿಸಿವೆ.&lt;/p&gt;&lt;p&gt;ದ್ರಾವಿಡ ಪಕ್ಷಗಳ 'ಅಪವಿತ್ರ' ಮೈತ್ರಿ ಮತ್ತು ಮಾಸ್ಟರ್ ಪ್ಲಾನ್!&lt;/p&gt;&lt;p&gt;ಕಳೆದ 60 ವರ್ಷಗಳಿಂದ ಪರಸ್ಪರ ಬದ್ಧ ವೈರಿಗಳಾಗಿದ್ದ ಡಿಎಂಕೆ (59 ಸೀಟು) ಮತ್ತು ಎಐಎಡಿಎಂಕೆ (47 ಸೀಟು), ವಿಜಯ್ ಎಂಬ ಸುನಾಮಿಯನ್ನು ತಡೆಯಲು ಈಗ ಒಂದಾಗುವ ಮಾತುಕತೆ ನಡೆಸುತ್ತಿವೆ. ಈ ಎರಡೂ ಪಕ್ಷಗಳ ಒಟ್ಟು ಬಲ 106 ಆಗುತ್ತದೆ. ಈ ಮೈತ್ರಿಗೆ ವಿಸಿಕೆಯ 2 ಶಾಸಕರು ಸೇರಿದರೆ ಒಟ್ಟು ಸಂಖ್ಯೆ 108 ಆಗಲಿದೆ. ಆದರೆ, ಇಲ್ಲಿನ ಅಸಲಿ ಟ್ವಿಸ್ಟ್ ಎಂದರೆ, ವಿಜಯ್ ಅವರನ್ನು ಅಧಿಕಾರದಿಂದ ದೂರವಿಡಲು ದ್ರಾವಿಡ ಪಕ್ಷಗಳು ವಿಸಿಕೆ ಮುಖ್ಯಸ್ಥ ತಿರುಮಾವಳವನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಸಮಾಲೋಚನೆ ನಡೆಸುತ್ತಿವೆ ಎನ್ನಲಾಗಿದೆ.&lt;/p&gt;&lt;p&gt;ಸಾಧ್ಯವೇ ಈ ಲೆಕ್ಕಾಚಾರ?&lt;/p&gt;&lt;p&gt;ಒಕ್ಕೂಟ ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ. ಆದರೆ ಇಲ್ಲಿಯೂ ಒಂದು ತಾಂತ್ರಿಕ ಅಡಚಣೆಯಿದೆ. ಡಿಎಂಕೆ+ಎಐಎಡಿಎಂಕೆ+ವಿಸಿಕೆ ಸೇರಿದರೂ ಒಟ್ಟು ಸಂಖ್ಯೆ 108 ಮಾತ್ರ ಆಗುತ್ತದೆ. ಇದು ವಿಜಯ್ ಅವರ ಮೈತ್ರಿಕೂಟದ ಬಲಕ್ಕಿಂತ (116) ಕಡಿಮೆ. ಬಹುಮತಕ್ಕೆ ಬೇಕಾದ 118 ತಲುಪಲು ಈ 'ಮಹಾಮೈತ್ರಿ'ಗೆ ಇನ್ನೂ ಹೆಚ್ಚಿನ ಶಾಸಕರ ಅಗತ್ಯವಿದೆ. ಯಾರು ಯಾರಿಗೆ ಗಾಳ ಹಾಕಲಿದ್ದಾರೆ? ಅಂತಿಮವಾಗಿ ತಮಿಳುನಾಡಿನ ಸಿಎಂ ಪೀಠ ಯಾರ ಪಾಲಾಗಲಿದೆ ಎಂಬುದು ಈಗ ಇಡೀ ದೇಶದ ಕುತೂಹಲ ಕೆರಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/vck-chief-thirumavalavan-as-tn-cm-dmk-aiadmk-alliance-to-stop-vijay-tvk-san/articleshow-dfc1449"/>
        </item>
        <item>
            <title><![CDATA[West Bengal ಗುರು ಔಟ್​, ಶಿಷ್ಯ ಇನ್​: ಸಿಎಂ ಸ್ಥಾನ ಏರಿದ ದೀದಿ ಮಾಜಿ ಬಲಗೈ ಬಂಟ: ಗಮನ ಸೆಳೆದ 98ರ ವೃದ್ಧ]]></title>
            <link>https://kannada.asianetnews.com/politics/suvendu-adhikari-sworn-in-as-first-bjp-cm-of-west-bengal-five-other-mlas-also-take-oath-suc/articleshow-uzycsph</link>
            <guid isPermaLink="true">https://kannada.asianetnews.com/politics/suvendu-adhikari-sworn-in-as-first-bjp-cm-of-west-bengal-five-other-mlas-also-take-oath-suc/articleshow-uzycsph</guid>
            <pubDate>Sat, 09 May 2026 13:33:36 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಆಡಳಿತ ಅಂತ್ಯಗೊಂಡಿದ್ದು, ಬಿಜೆಪಿ 207 ಸ್ಥಾನಗಳೊಂದಿಗೆ ಅಧಿಕಾರಕ್ಕೇರಿದೆ. ಒಂದು ಕಾಲದಲ್ಲಿ ದೀದಿಯ ಬಲಗೈ ಬಂಟನಾಗಿದ್ದ ಸುವೇಂದು ಅಧಿಕಾರಿ, ಇದೀಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr5w659r6s88d6gf0gd1rhzm,imgname-suvendu-adhikari-sworn-in-programme-1778313794868.jpg" type="image/jpeg" height="390" width="690"/>
            <content:encoded><![CDATA[&lt;p&gt;15 ವರ್ಷಗಳ ಮಮತಾ ಬ್ಯಾನರ್ಜಿ ಹಿಡಿತದಿಂದ ಪಶ್ಚಿಮ ಬಂಗಾಳ ಮುಕ್ತವಾಗಿದೆ. 207 ಸೀಟ್&zwnj;ಗಳನ್ನು ಗೆಲ್ಲುವ ಮೂಲಕ ಬಿಜೆಪಿಯ ಗೆಲುವಿನೊಂದಿಗೆ ಕಾಂಗ್ರೆಸ್​​ ಕಾರ್ಯಕರ್ತರೂ ಸೇರಿ, ಹಿಂದೂಗಳೆಲ್ಲರೂ ಭಾರಿ ವಿಜಯೋತ್ಸವ ಆಚರಿಸಿದ್ದಾರೆ. ತಮ್ಮ ಸ್ಥಾನವನ್ನೂ ಉಳಿಸಿಕೊಳ್ಳಲಾಗದ ಮಮತಾಗೆ ಭಾರಿ ಮುಖಭಂಗವಾಗಿದೆ. ಇದರ ನಡುವೆಯೇ, ಈ ಹತಾಶೆ ಎಷ್ಟರಮಟ್ಟಿಗೆ ಹೋಗಿದೆ ಎಂದರೆ ದೀದಿ ವಿರುದ್ಧ ಗೆದ್ದ ಈಗ ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಸುವೇಂದು ಅಧಿಕಾರಿ ಅವರ ಪಿಎಯನ್ನೇ ಹ*ತ್ಯೆ ಮಾಡಲಾಗಿದೆ. ಇವೆಲ್ಲವುಗಳ ನಡುವೆಯೇ ಸುವೇಂದು ಅಧಿಕಾರಿ ಇಂದು ಅಧಿಕಾರದ ಗದ್ದುಗೆ ಏರಿದ್ದಾರೆ. ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.&lt;/p&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಒಂದು ಕಾಲದಲ್ಲಿ ದೀದಿ ಬಲಗೈ ಬಂಟ ಎಂದೇ ಫೇಮಸ್ ಆಗಿದ್ದ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಚುಕ್ಕಾಣಿ ಹಿಡಿಯುವ ಮೂಲಕ ಗುರುವಾಗಿದ್ದ ಮಮತಾ ಔಟ್&zwnj; ಆಗಿದ್ದ, ಶಿಷ್ಯ ಇನ್&zwnj; ಆಗಿದ್ದಾರೆ. ಹಿಂದೊಮ್ಮೆ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ಕಾರಣರಾಗಿದ್ದ ಸುವೇಂದು ಅವರು, ಇಂದು ಆ ಗದ್ದುಗೆ ಏರಿದ್ದಾರೆ. 2020ರ ಸುಮಾರಿಗೆ, ಪಕ್ಷದಲ್ಲಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪ್ರಭಾವ ಹೆಚ್ಚಾಗಿದ್ದರಿಂದ ಸುವೇಂದು ಅಧಿಕಾರಿ ಅಸಮಾಧಾನಗೊಂಡಿದ್ದರು. ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯ ಮತ್ತು ಪಕ್ಷದಲ್ಲಿ ತಮ್ಮ ಸ್ಥಾನಮಾನ ಕಡಿಮೆಯಾಗುತ್ತಿದೆ ಎಂಬ ಭಾವನೆಯಿಂದಾಗಿ, ಅವರು 2020ರ ಡಿಸೆಂಬರ್&zwnj;ನಲ್ಲಿ ಟಿಎಂಸಿ ತೊರೆದು ಬಿಜೆಪಿಗೆ ಸೇರಿದರು. ಬಿಜೆಪಿ ಸೇರಿದ ನಂತರ, ಅವರು 2021ರ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ, ಬಿಜೆಪಿಯ ಬಲಿಷ್ಠ ನಾಯಕರಾಗಿ ಹೊರಹೊಮ್ಮಿದರು.&lt;/p&gt;&lt;h2&gt;&lt;strong&gt;ಪ್ರಮಾಣ ವಚನ ಸ್ವೀಕಾರ&lt;/strong&gt;&lt;/h2&gt;&lt;p&gt;ಇಂದು ನಡೆದ ಕಾರ್ಯಕ್ರಮದಲ್ಲಿ, ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಅವರಿಗೆ ರಾಜ್ಯಪಾಲ ಆರ್.ಎನ್. ರವಿ ಪ್ರಮಾಣ ವಚನ ಬೋಧಿಸಿದರು, ಜೊತೆಗೆ ಸಚಿವ ಸಂಪುಟಕ್ಕೆ ಸೇರಿದ ಐದು ಶಾಸಕರಾದ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ಅಶೋಕ್ ಕೀರ್ತಾನಿಯಾ, ಕ್ಷುದಿರಾಮ್ ತುಡು ಮತ್ತು ನಿಸಿತ್ ಪ್ರಾಮಾಣಿಕ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಸಚಿವರು ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ NDA ಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.&lt;/p&gt;&lt;h3&gt;&lt;strong&gt;98 ವರ್ಷದ ವೃದ್ಧ&lt;/strong&gt;&lt;/h3&gt;&lt;p&gt;ಇಂದು ನಡೆದ ಕಾರ್ಯಕ್ರಮದಲ್ಲಿ ಗಮನ ಸೆಳೆದದ್ದು 98 ವರ್ಷದ ವೃದ್ಧ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಧಾನಿ ಮೋದಿ ಅವರು ಇವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದದ್ದು ಭಾರಿ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಇವರು ಮಖನ್ಲಾಲ್ ಸರ್ಕಾರ್. ಮಖನ್&zwnj;ಲಾಲ್ ಸರ್ಕಾರ್ ಅವರು ಪಶ್ಚಿಮ ಬಂಗಾಳದ ಬಿಜೆಪಿ ಪಕ್ಷದ 97-98 ವರ್ಷದ ಅತ್ಯಂತ ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತರು. ಮಖನ್ಲಾಲ್ ಸರ್ಕಾರ್ ಅವರು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಷ್ಟ್ರೀಯತಾವಾದಿ ಚಳವಳಿಗೆ ಸಂಬಂಧಿಸಿದ ಆರಂಭಿಕ ತಳಮಟ್ಟದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಜನಸಂಘದ ಕಾಲದಿಂದಲೂ ಬಿಜೆಪಿಗಾಗಿ ಕೆಲಸ ಮಾಡುತ್ತಿರುವ ಇವರು, ಬಂಗಾಳದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ದಶಕಗಳ ಕಾಲ ಶ್ರಮಿಸಿದವರು.ಇವರನ್ನು ಪಕ್ಷದ 'ಹಳೆ ಸಿಂಹ' ಎಂದು ಕರೆಯಲಾಗುತ್ತದೆ.&lt;/p&gt;&lt;h3&gt;&lt;strong&gt;ಎಕ್ಸ್ ಖಾತೆಯಲ್ಲಿ ಅನ್​ಫಾಲೋ?&lt;/strong&gt;&lt;/h3&gt;&lt;p&gt;ಕೋಲ್ಕತ್ತಾ ಪೊಲೀಸರ ಅಧಿಕೃತ &lsquo;ಎಕ್ಸ್&rsquo; ಖಾತೆಯಲ್ಲೊಂದು ಬದಲಾವಣೆ ನಡೆದಿದೆ. ಈ ಡಿಜಿಟಲ್ ಬದಲಾವಣೆಯನ್ನು ಹಲವರು ರಾಜಕೀಯ ಸಂದೇಶವೆಂದು ನೋಡುತ್ತಿದ್ದಾರೆ. ಮೊದಲು ಈ ಖಾತೆಯು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಕೆಲ ಪ್ರಮುಖ ಟಿಎಂಸಿ ನಾಯಕರನ್ನು ಫಾಲೋ ಮಾಡುತ್ತಿತ್ತು. ಈಗ ಆ ಖಾತೆಯಿಂದ ಅವರುಗಳನ್ನು ಅನ್&zwnj;ಫಾಲೋ ಮಾಡಲಾಗಿದೆ ಎಂದು ವರದಿಯಾಗಿದೆ.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/politics/suvendu-adhikari-sworn-in-as-first-bjp-cm-of-west-bengal-five-other-mlas-also-take-oath-suc/articleshow-uzycsph"/>
        </item>
        <item>
            <title><![CDATA[70ನೇ ವಯಸ್ಸಿನಲ್ಲಿ 20ರ ಯುವತಿಯನ್ನು 4ನೇ ಮದುವೆಯಾದ 11 ಮಕ್ಕಳ ತಂದೆ;  ದೂರು ದಾಖಲು]]></title>
            <link>https://kannada.asianetnews.com/gallery/india-news/uttar-pradesh-sp-leader-haji-khaleel-father-of-11-children-marries-4th-time-to-20-year-old-woman-at-70-mrq-44xyefc</link>
            <guid isPermaLink="true">https://kannada.asianetnews.com/gallery/india-news/uttar-pradesh-sp-leader-haji-khaleel-father-of-11-children-marries-4th-time-to-20-year-old-woman-at-70-mrq-44xyefc</guid>
            <pubDate>Sat, 09 May 2026 13:26:21 +0530</pubDate>
            <description><![CDATA[&lt;p&gt;70 ವರ್ಷದ ವ್ಯಕ್ತಿ ತಮಗಿಂತ 50 ವರ್ಷ ಚಿಕ್ಕ ಯುವತಿಯನ್ನು ನಾಲ್ಕನೇ ಮದುವೆಯಾಗಿದ್ದಾರೆ. ಈ ಮದುವೆಯಿಂದಾಗಿ ಅವರ ಎರಡನೇ ಪತ್ನಿ ಆಸ್ತಿ ಕಬಳಿಕೆ ಮತ್ತು ಜೀವಬೆದರಿಕೆ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5v9kkx614yxvvycx04n198,imgname-marriage--3--1778312859260.jpg" type="image/jpeg" height="390" width="690"/>
            <content:encoded><![CDATA[&lt;p&gt;70 ವರ್ಷದ ವ್ಯಕ್ತಿ ತಮಗಿಂತ 50 ವರ್ಷ ಚಿಕ್ಕ ಯುವತಿಯನ್ನು ನಾಲ್ಕನೇ ಮದುವೆಯಾಗಿದ್ದಾರೆ. ಈ ಮದುವೆಯಿಂದಾಗಿ ಅವರ ಎರಡನೇ ಪತ್ನಿ ಆಸ್ತಿ ಕಬಳಿಕೆ ಮತ್ತು ಜೀವಬೆದರಿಕೆ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಸಮಾಜವಾದಿ ಪಕ್ಷದ ನಾಯಕನೊಬ್ಬನ ನಾಲ್ಕನೇ ಮದುವೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 70 ವರ್ಷದ ಪತಿಯ ವಿರುದ್ಧ ಎರಡನೇ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿಂದೆಯೂ ಈ ವ್ಯಕ್ತಿ ವೈಯಕ್ತಿಕ ವಿಷಯಗಳಿಂದ ಸುದ್ದಿಯಲ್ಲಿದ್ದರು.&lt;/p&gt;&lt;img&gt;&lt;p&gt;ಉತ್ತರ ಪ್ರದೇಶದ ಕೋತ್ವಾಲಿ ಕ್ಷೇತ್ರದ ಕೈಲಾ ಭಟ್ಟಾ ನಿವಾಸಿಯಾಗಿರುವ ಮಾಜಿ ಕೌನ್ಸಿಲರ್ ಆಗಿರುವ ಹಾಜಿ ಖಲೀಲ ತನಗಿಂತ 50 ವರ್ಷ ಚಿಕ್ಕವಳಾದ ಯುವತಿಯನ್ನು ಮದುವೆಯಾಗಿದ್ದಾನೆ. ಎರಡನೇ ಪತ್ನಿ ನಾಜರೀನ್, ಗಂಡನ ವಿರುದ್ಧ ಮೋಸ, ಜೀವಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪುತ್ರನೊಂದಿಗೆ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ದೂರು ಸಲ್ಲಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಹಿಂದೆ ಮೆಹರ್&zwnj;ನಲ್ಲಿ (ವಧುದಕ್ಷಿಣೆ) ಪಡೆದುಕೊಂಡಿದ್ದ ಆಸ್ತಿಯನ್ನು ಪಡೆದುಕೊಳ್ಳಲು ಗಂಡ ಹಾಜಿ ಖಲೀಲ ಪ್ರಯತ್ನಿಸುತ್ತಿದ್ದಾನೆ. ಕಳೆದ ಹಲವು ದಿನಗಳಿಂದ ಆಸ್ತಿ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದು, ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ನಾಜರೀನ್ ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;1991ರಲ್ಲಿ ಹಾಜಿ ಖಲೀಲ್ ಮೊದಲ ಮದುವೆ ವಿಷಯ ಮುಚ್ಚಿಟ್ಟು ನನ್ನನ್ನು ಮದುವೆಯಾದೆ. ಮೊದಲ ಪತ್ನಿಗೆ 8 ಮಕ್ಕಳಿದ್ದು, ತಮಗೆ ಮೂರು ಮಕ್ಕಳಿವೆ ಎಂದು ನಾಜರೀನ್ ಹೇಳುತ್ತಾರೆ. ಮುಂದುವರಿದು 2010ರಲ್ಲಿ ಮದುವೆಯಾದ ಹಾಜಿ ಖಲೀಲ್, ಆಕೆಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ 20 ವರ್ಷದ ಯುವತಿಯನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ. 20 ವರ್ಷದ ಯುವತಿಯನ್ನು ಕರೆದುಕೊಂಡು ಬರುತ್ತಿದ್ದಂತೆ ಮನೆಯಲ್ಲಿ ಕೌಟುಂಬಿಕ ಕಲಹ ಶುರುವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru: ಬೆತ್ತಲೆ ಸ್ಥಿತಿಯಲ್ಲಿ ಜಾರ್ಖಂಡ್ ಮೂಲದ ಯುವತಿಯ ಅರೆಕೊಳೆತ ಶವ ಪತ್ತೆ&lt;/strong&gt;&lt;/p&gt;&lt;img&gt;&lt;p&gt;ಸಮಾಜವಾದಿ ಪಕ್ಷದ ನಾಯಕನಾಗಿರುವ ಹಾಜಿ ಖಲೀಲ್ 1995 ರಿಂದ 2000ರವರೆಗೆ ಇಸ್ಲಾಂನಗರ ವಾರ್ಡ್ ಸದಸ್ಯನಾಗಿದ್ದನು. ಈ ಹಾಜಿ ಖಲೀಲ್ ವಿರುದ್ಧ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಿರುವ ಆರೋಪವಿದೆ. ಎರಡನೇ ಪತ್ನಿಯ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಖಲೀಲ್ ನಾಲ್ಕನೇ ಮದುವೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು: ಸಂಸಾರ ತ್ಯಜಿಸಿದ ಮಹಿಳೆ ಜತೆ ಚಿತ್ರದುರ್ಗ ಯುವಕನ ಲಿವ್-ಇನ್, ಪ್ರೇಮಕಥೆಯಲ್ಲಿ ಅನುಮಾನದ ಸಾವು!&lt;/strong&gt;&lt;/p&gt;]]></content:encoded>
            <category>india-news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/india-news/uttar-pradesh-sp-leader-haji-khaleel-father-of-11-children-marries-4th-time-to-20-year-old-woman-at-70-mrq-44xyefc"/>
        </item>
        <item>
            <title><![CDATA[ರಾಜ್ಯದ ಜನರಿಗೆ ಗುಡ್​ ನ್ಯೂಸ್​: ಮೂರು ಡೆಮು ರೈಲುಗಳು ಕಾಯಂ- 6 ಜಿಲ್ಲೆಗಳ ಫುಲ್​ ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/gallery/travel/three-new-permenant-demu-rail-for-karnataka-connecting-6-districts-details-suc-yth7fm4</link>
            <guid isPermaLink="true">https://kannada.asianetnews.com/gallery/travel/three-new-permenant-demu-rail-for-karnataka-connecting-6-districts-details-suc-yth7fm4</guid>
            <pubDate>Sat, 09 May 2026 13:01:07 +0530</pubDate>
            <description><![CDATA[ಭಾರತೀಯ ರೈಲ್ವೆಯು ಉತ್ತರ ಮತ್ತು ಮಧ್ಯ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಮೂರು ಹೊಸ ಡೆಮು ರೈಲು ಸೇವೆಗಳನ್ನು ಕಾಯಂಗೊಳಿಸಿದೆ. ಈ ರೈಲುಗಳು ಬಳ್ಳಾರಿ-ದಾವಣಗೆರೆ, ಹೊಸಪೇಟೆ-ಬಳ್ಳಾರಿ, ಮತ್ತು ಹೊಸಪೇಟೆ-ಹುಬ್ಬಳ್ಳಿ ನಡುವೆ ಸಂಚರಿಸಲಿದ್ದು, ಪ್ರಯಾಣವನ್ನು ಸುಲಭಗೊಳಿಸಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqct7mpyyfbrsbp62p0hmtj1,imgname-indian-railways-1777472885470.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ರೈಲ್ವೆಯು ಉತ್ತರ ಮತ್ತು ಮಧ್ಯ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಮೂರು ಹೊಸ ಡೆಮು ರೈಲು ಸೇವೆಗಳನ್ನು ಕಾಯಂಗೊಳಿಸಿದೆ. ಈ ರೈಲುಗಳು ಬಳ್ಳಾರಿ-ದಾವಣಗೆರೆ, ಹೊಸಪೇಟೆ-ಬಳ್ಳಾರಿ, ಮತ್ತು ಹೊಸಪೇಟೆ-ಹುಬ್ಬಳ್ಳಿ ನಡುವೆ ಸಂಚರಿಸಲಿದ್ದು, ಪ್ರಯಾಣವನ್ನು ಸುಲಭಗೊಳಿಸಲಿವೆ.&lt;img&gt;&lt;p&gt;ಭಾರತೀಯ ರೈಲ್ವೆಯು ದೇಶದ ಹಲವಾರು ಭಾಗಗಳಲ್ಲಿ ಕಡಿಮೆ ಅಂತರದಲ್ಲಿ ಸಂಚರಿಸುವ ಡೆಮು (Diesel Electric Multiple Unit ) ರೈಲುಗಳನ್ನು ಈಗ ಕಾರ್ಯ ಮಾಡಿದೆ. ಇದರಿಂದ ಕೆಲವು ಭಾಗದ ಜನರಿಗೆ ತುಂಬಾ ಅನುಕೂಲ ಆಗಲಿದೆ. ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆ ರೈಲುಗಳೆಂದರೆ ಬಳ್ಳಾರಿ-ದಾವಣಗೆರೆ, ಹೊಸಪೇಟೆ-ಬಳ್ಳಾರಿ ಹಾಗೂ ಹೊಸಪೇಟೆ-ಹುಬ್ಬಳ್ಳಿ ನಡುವೆ ಸಂಚರಿಸುವ 8 ಬೋಗಿಗಳ ಈ ರೈಲುಗಳು. ಈ ರೈಲು ಅಗತ್ಯವಿದ್ದಾಗ ಸಂಚಾರ ಮಾಡುತ್ತಿತ್ತು. ಆದರೆ ಇದನ್ನೀಗ ಕಾಯಂ ಮಾಡಿರುವ ಕಾರಣದಿಂದ ಉತ್ತರ ಮತ್ತು ಮಧ್ಯ ಕರ್ನಾಟಕದ ಜನರಿಗೆ ತುಂಬಾ ಪ್ರಯೋಜನ ಆಗಿದೆ.&lt;/p&gt;&lt;img&gt;&lt;ul&gt; &lt;li&gt;ರೈಲು ಸಂಖ್ಯೆ 76509 (ಬಳ್ಳಾರಿ - ದಾವಣಗೆರೆ): ಈ ರೈಲು ಬಳ್ಳಾರಿ ಜಂಕ್ಷನ್&zwnj;ನಿಂದ ಬೆಳಿಗ್ಗೆ 07:50ಕ್ಕೆ ಹೊರಟು, ಹೊಸಪೇಟೆ (09:30), ಕೊಟ್ಟೂರು (11:36), ಹರಪನಹಳ್ಳಿ (12:25) ಮಾರ್ಗವಾಗಿ ಮಧ್ಯಾಹ್ನ 1:30ಕ್ಕೆ ದಾವಣಗೆರೆ ತಲುಪಲಿದೆ.&lt;/li&gt; &lt;li&gt;ರೈಲು ಸಂಖ್ಯೆ 76510 (ದಾವಣಗೆರೆ - ಬಳ್ಳಾರಿ): ಈ ರೈಲು ದಾವಣಗೆರೆಯಿಂದ ಮಧ್ಯಾಹ್ನ 2:30ಕ್ಕೆ ಹೊರಟು, ಅದೇ ಮಾರ್ಗದಲ್ಲಿ ಹಿಂತಿರುಗಿ ರಾತ್ರಿ 8:00 ಗಂಟೆಗೆ ಬಳ್ಳಾರಿ ತಲುಪಲಿದೆ.&lt;/li&gt;&lt;/ul&gt;&lt;img&gt;&lt;ul&gt; &lt;li&gt;ರೈಲು ಸಂಖ್ಯೆ 76511 (ಹೊಸಪೇಟೆ - ಬಳ್ಳಾರಿ): ಹೊಸಪೇಟೆಯಿಂದ ಮುಂಜಾನೆ 06:00 ಗಂಟೆಗೆ ಹೊರಡುವ ಈ ರೈಲು, ತೋರಣಗಲ್ಲು (06:29) ಮಾರ್ಗವಾಗಿ ಬೆಳಿಗ್ಗೆ 07:40ಕ್ಕೆ ಬಳ್ಳಾರಿ ಜಂಕ್ಷನ್ ತಲುಪಲಿದೆ.&lt;/li&gt; &lt;li&gt;ರೈಲು ಸಂಖ್ಯೆ 76512 (ಬಳ್ಳಾರಿ - ಹೊಸಪೇಟೆ): ಬಳ್ಳಾರಿಯಿಂದ ರಾತ್ರಿ 20:10ಕ್ಕೆ ಹೊರಡುವ ಈ ರೈಲು, ರಾತ್ರಿ 21:50ಕ್ಕೆ ಹೊಸಪೇಟೆ ತಲುಪಲಿದೆ.&lt;/li&gt;&lt;/ul&gt;&lt;img&gt;&lt;ul&gt; &lt;li&gt;ರೈಲು ಸಂಖ್ಯೆ 76507 (ಹೊಸಪೇಟೆ - ಹುಬ್ಬಳ್ಳಿ): ಹೊಸಪೇಟೆಯಿಂದ ರಾತ್ರಿ 22:00 ಗಂಟೆಗೆ ಹೊರಟು, ಕೊಪ್ಪಳ (22:36), ಗದಗ (ರಾತ್ರಿ 11:32) ಮಾರ್ಗವಾಗಿ ಮಧ್ಯರಾತ್ರಿ 00:35ಕ್ಕೆ ಹುಬ್ಬಳ್ಳಿ ತಲುಪಲಿದೆ. (ಮೇ 16, 2026 ರಿಂದ ಅನ್ವಯ).&lt;/li&gt; &lt;li&gt;ರೈಲು ಸಂಖ್ಯೆ 76508 (ಹುಬ್ಬಳ್ಳಿ - ಹೊಸಪೇಟೆ): ಹುಬ್ಬಳ್ಳಿಯಿಂದ ರಾತ್ರಿ 23:30ಕ್ಕೆ ಹೊರಟು, ಮುಂಜಾನೆ 02:05ಕ್ಕೆ ಹೊಸಪೇಟೆ ತಲುಪಲಿದೆ. (ಮೇ 10, 2026 ರಿಂದ ಅನ್ವಯ).&lt;/li&gt;&lt;/ul&gt;&lt;p&gt;ಭಾರತೀಯ ರೈಲ್ವೆಯ ಅಧಿಕೃತ ವೆಬ್&zwnj;ಸೈಟ್ www.enquiry.indianrail.gov.in ಗೆ ಭೇಟಿ ನೀಡಬಹುದು. ಅಥವಾ NTES ಆ್ಯಪ್ ಬಳಸಬಹುದು ಹಾಗೂ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಿ.&lt;/p&gt;&lt;img&gt;&lt;p&gt;Diesel Electric Multiple Unit ಡೆಮು ರೈಲಿನ ಪೂರ್ಣರೂಪವಾಗಿದೆ. ಕಡಿಮೆ ದೂರದ ಪ್ರಯಾಣಕ್ಕೆ ಡೆಮು ರೈಲುಗಳನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿಯೂ ಡೀಸೆಲ್ ಎಲೆಕ್ಟ್ರಿಕ್ ಡೆಮು, ಡೀಸೆಲ್ ಮೆಕ್ಯಾನಿಕಲ್ ಡೆಮು ಮತ್ತು ಡೀಸೆಲ್ ಹೈಡ್ರಾಲಿಕ್ ಡೆಮು ಎಂಬ ಮೂರು ವಿಧಗಳಿವೆ. ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸುವ ಸಾಮಾರ್ಥ್ಯವನ್ನು ಹೊಂದಿದ್ದು, ಪ್ರತಿ ಮೂರು ಬೋಗಿಗಳ ನಂತರ ಒಂದು ಪವರ್ ಕೋಚ್ ಇರುತ್ತದೆ.&lt;/p&gt;&lt;img&gt;&lt;p&gt;ಈ ರೈಲುಗಳಲ್ಲಿ ಸ್ಲೀಪರ್&zwnj; ಕೋಚ್, ಫಸ್ಟ್ ಎಸಿ, ಎಕ್ಸಿಕ್ಯೂಟಿವ್ ಕ್ಲಾಸ್ ಶ್ರೇಣಿಯ ಆಸನಗಳು ಲಭ್ಯ ಇವೆ. 120 ಕಿಮೀ ವೇಗದ ಸಾಮಾರ್ಥ್ಯ ಹೊಂದಿದ್ರೂ ನಿಧಾನವಾಗಿಯೇ ಚಲಿಸುತ್ತವೆ. ನಾನ್​-ಎಲೆಕ್ಟ್ರಿಫೈಡ್​ ಮಾರ್ಗದಲ್ಲಿ ಹೆಚ್ಚಾಗಿ ಈ ಡೆಮು ರೈಲುಗಳು ಸಂಚರಿಸುತ್ತವೆ. ಅಕ್ಟೋಬರ್ 23, 1994 ರಂದು ಜಲಂಧರ್ ಮತ್ತು ಹೋಶಿಯಾರ್&zwnj;ಪುರ ನಡುವೆ ಮೊದಲ ಡೆಮು ರೈಲು ಸಂಚರಿಸಿತ್ತು. ಗ್ರಾಮೀಣ ಅಥವಾ ಉಪನಗರಳಿಗೆ ಸಂಪರ್ಕ ಕಲ್ಪಿಸುತ್ತವೆ.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/travel/three-new-permenant-demu-rail-for-karnataka-connecting-6-districts-details-suc-yth7fm4"/>
        </item>
        <item>
            <title><![CDATA[ಸಿಎಂ ಆಗಿ ಸುವೇಂದು ಪ್ರಮಾಣವಚನ, ವೇದಿಕೆಯಲ್ಲಿ ಬಂಗಾಳ ಬಿಜೆಪಿಯ ಹಿರಿಯ ನಾಯಕನ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ!]]></title>
            <link>https://kannada.asianetnews.com/gallery/india-news/suvendu-adhikari-oath-ceremony-pm-modi-greets-makhan-lal-sarkar-bengal-bjp-govt-san-efwvd7c</link>
            <guid isPermaLink="true">https://kannada.asianetnews.com/gallery/india-news/suvendu-adhikari-oath-ceremony-pm-modi-greets-makhan-lal-sarkar-bengal-bjp-govt-san-efwvd7c</guid>
            <pubDate>Sat, 09 May 2026 11:44:35 +0530</pubDate>
            <description><![CDATA[&lt;p&gt;ದಶಕಗಳ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸುವೇಂದು ಅಧಿಕಾರಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5nrafd16ck51t8a9d3174e,imgname-west-bengal-cm-oath-taking--3--1778307049965.jpg" type="image/jpeg" height="390" width="690"/>
            <content:encoded><![CDATA[&lt;p&gt;ದಶಕಗಳ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸುವೇಂದು ಅಧಿಕಾರಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.&lt;/p&gt;&lt;img&gt;&lt;p&gt;ದಶಕಗಳ ಕಾಯುವಿಕೆಯ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಕೆ ಆರಂಭವಾಗಿದೆ. ಶನಿವಾರ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಘಟಾನುಘಟಿ ನಾಯಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಸಮಾರಂಭದ ಅತ್ಯಂತ ಭಾವುಕ ಕ್ಷಣವೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಯ ಮೇಲಿದ್ದ ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನ್ ಲಾಲ್ ಸರ್ಕಾರ್ ಅವರಿಗೆ ಗೌರವ ಸಲ್ಲಿಸಿದ್ದು. ಬಂಗಾಳದಲ್ಲಿ ದಶಕಗಳಿಂದ ಪಕ್ಷಕ್ಕಾಗಿ ದುಡಿದಿರುವ ಸರ್ಕಾರ್ ಅವರ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ, ನಂತರ ಅವರನ್ನು ಆಲಂಗಿಸಿಕೊಂಡು ಶುಭ ಹಾರೈಸಿದರು. ಸಾಮಾನ್ಯ ಕಾರ್ಯಕರ್ತನಿಗೆ ಪ್ರಧಾನಿ ನೀಡಿದ ಈ ಗೌರವ ನೆರೆದಿದ್ದ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಯಿತು.&lt;/p&gt;&lt;img&gt;&lt;p&gt;ಅದರೊಂದಿಗೆ ಇಂದು ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನವಾದ್ದರಿಂದ (ರವೀಂದ್ರ ಜಯಂತಿ), ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಟ್ಯಾಗೋರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಅರ್ಪಿಸಿದರು.&lt;/p&gt;&lt;img&gt;&lt;p&gt;ಈ ಸಮಾರಂಭವು ಎನ್&zwnj;ಡಿಎ ಮೈತ್ರಿಕೂಟದ ಶಕ್ತಿ ಪ್ರದರ್ಶನದಂತೆಯೂ ಇತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಜೆ.ಪಿ. ನಡ್ಡಾ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಪಾಲ್ಗೊಂಡಿದ್ದರು. ಅಲ್ಲದೆ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಆಂಧ್ರಪ್ರದೇಶದ ಸಿಎಂ ಎನ್. ಚಂದ್ರಬಾಬು ನಾಯ್ಡು ಮತ್ತು ಹರಿಯಾಣ ಸಿಎಂ ನಾಯಬ್ ಸಿಂಗ್ ಸೈನಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.&lt;/p&gt;&lt;img&gt;&lt;p&gt;ಹರಿಯಾಣ ಸಿಎಂ ನಾಯಬ್ ಸಿಂಗ್ ಸೈನಿ, &quot;ಇಂದು ಪಶ್ಚಿಮ ಬಂಗಾಳಕ್ಕೆ ಐತಿಹಾಸಿಕ ದಿನ. ಪ್ರಧಾನಿ ಮೋದಿಯವರ 'ವಿಕಸಿತ ಭಾರತ 2047' ಕನಸನ್ನು ನನಸು ಮಾಡುವಲ್ಲಿ ಈ ನೂತನ ಸರ್ಕಾರ ಪ್ರಮುಖ ಪಾತ್ರ ವಹಿಸಲಿದೆ&quot; ಎಂದು ಆಶಯ ವ್ಯಕ್ತಪಡಿಸಿದರು. ಕೋಲ್ಕತ್ತಾದ ಮೈದಾನವು ಕೇಸರಿ ಮಯವಾಗಿದ್ದು, ಲಕ್ಷಾಂತರ ಕಾರ್ಯಕರ್ತರು ಈ ಐತಿಹಾಸಿಕ ಬದಲಾವಣೆಯನ್ನು ಸಂಭ್ರಮಿಸಿದರು. ಸುವೇಂದು ಅಧಿಕಾರಿ ಅವರ ನೇತೃತ್ವದಲ್ಲಿ ಬಂಗಾಳದ ಆಡಳಿತದಲ್ಲಿ ಹೊಸ ಬದಲಾವಣೆಯ ನಿರೀಕ್ಷೆ ಮೂಡಿದೆ.&lt;/p&gt;&lt;img&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ, ಬ್ರಿಗೇಡ್ ಪೆರೇಡ್ ಮೈದಾನದೊಳಗೆ ಸ್ಥಾಪಿಸಲಾದ ಅಂಗಡಿಯಲ್ಲಿ ಜನರು 'ಜಲ್ಮುರಿ' ತಿಂದು ಸಂಭ್ರಮಿಸಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಸುವೇಂದು ಅಧಿಕಾರಿ ಇಲ್ಲಿ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/suvendu-adhikari-oath-ceremony-pm-modi-greets-makhan-lal-sarkar-bengal-bjp-govt-san-efwvd7c"/>
        </item>
        <item>
            <title><![CDATA[ದೇಶದ ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ನೇಮಕ!]]></title>
            <link>https://kannada.asianetnews.com/webstories/india-news/lt-gen-ns-raja-subramani-new-chief-of-defence-staff-krishna-swaminathan-navy-chief-san-8gaahax</link>
            <guid isPermaLink="true">https://kannada.asianetnews.com/webstories/india-news/lt-gen-ns-raja-subramani-new-chief-of-defence-staff-krishna-swaminathan-navy-chief-san-8gaahax</guid>
            <pubDate>Sat, 09 May 2026 10:49:59 +0530</pubDate>
            <description><![CDATA[&lt;p&gt;ಭಾರತೀಯ ರಕ್ಷಣಾ ಪಡೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಜನರಲ್ ಅನಿಲ್ ಚೌಹಾಣ್ ಉತ್ತರಾಧಿಕಾರಿಯಾಗಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎನ್.ಎಸ್. ರಾಜಾ ಸುಬ್ರಮಣಿ ಅವರನ್ನು ನೂತನ ಸಿಡಿಎಸ್ (CDS) ಆಗಿ ಕೇಂದ್ರ ಸರ್ಕಾರ ನೇಮಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5j1ep9p06hptpvmvz1j4pj,imgname-lt-gen-ns-raja-subramani--1--1778303154889.jpg" type="image/jpeg" height="390" width="690"/>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/webstories/india-news/lt-gen-ns-raja-subramani-new-chief-of-defence-staff-krishna-swaminathan-navy-chief-san-8gaahax"/>
        </item>
        <item>
            <title><![CDATA[Operation Sindoora anniversary: ಭಾರತೀಯ ಸೇನೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದೇಕೆ?  ಪಾಕ್ ಸೇನಾ ವಕ್ತಾರನ ಈ ಪ್ರಶ್ನೆ ಫುಲ್ ಟ್ರೋಲ್!]]></title>
            <link>https://kannada.asianetnews.com/india-news/why-indian-army-officers-used-english-asks-pak-army-spox-gets-trolled-by-pakistanis-rav/articleshow-qpp2vuk</link>
            <guid isPermaLink="true">https://kannada.asianetnews.com/india-news/why-indian-army-officers-used-english-asks-pak-army-spox-gets-trolled-by-pakistanis-rav/articleshow-qpp2vuk</guid>
            <pubDate>Sat, 09 May 2026 09:30:32 +0530</pubDate>
            <description><![CDATA[&lt;p&gt;ಆಪರೇಷನ್&zwnj; ಸಿಂದೂರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜೈಪುರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಭಾರತೀಯ ಸೇನಾಧಿಕಾರಿಗಳು ಇಂಗ್ಲಿಷ್&zwnj;ನಲ್ಲಿ ಮಾತನಾಡಿದ್ದಕ್ಕೆ ಪಾಕಿಸ್ತಾನದ ಸೇನಾ ವಕ್ತಾರ ಅಹ್ಮದ್&zwnj; ಷರೀಫ್&zwnj; ಚೌಧರಿ ಪ್ರಶ್ನಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5dwy1v7ppycm014efk0fc7,imgname-----------------------2026-05-09t092255.378-1778298812475.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಸ್ಲಾಮಾಬಾದ್&zwnj; (ಮೇ.9): &lt;/strong&gt;ಆಪರೇಷನ್&zwnj; ಸಿಂದೂರಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾರತೀಯ ಸೇನಾಧಿಕಾರಿಗಳು ಗುರುವಾರ ಜೈಪುರದಲ್ಲಿ ನಡೆಸಿದ ಮಾಧ್ಯಮ ಸಂವಾದದ ಬಗ್ಗೆ ಪಾಕಿಸ್ತಾನದ ಸೇನಾ ವಕ್ತಾರ ಲೆ.ಜ. ಅಹ್ಮದ್&zwnj; ಷರೀಫ್&zwnj; ಚೌಧರಿ ಕೇಳಿರುವ ಪ್ರಶ್ನೆಯೊಂದು ಭಾರೀ ವೈರಲ್&zwnj; ಆಗುತ್ತಿದೆ. &lsquo;ಅವರು ಇಂಗ್ಲಿಷ್&zwnj;ನಲ್ಲಿ ಯಾಕೆ ಮಾತಾಡಿದರು?&rsquo; ಎಂದು ಜ। ಷರೀಫ್&zwnj; ಕೇಳಿದ್ದಾರೆ.&lt;/p&gt;&lt;p&gt;&lsquo;ನಿಮಗೆ ಇಂಗ್ಲಿಷ್&zwnj;ನಲ್ಲಿ ಮಾತಾಡುವಂತೆ ಯಾರು ಹೇಳಿದರು? ನೀವು ಹೇಳಬೇಕಿರುವುದನ್ನು ಇಡೀ ವಿಶ್ವಕ್ಕೆ ತಲುಪಿಸಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದೇ?&rsquo; ಎಂದು ಷರೀಫ್&zwnj; ಪ್ರಶ್ನಿಸಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್&zwnj; ಆಗುತ್ತಿದೆ.&lt;/p&gt;&lt;p&gt;ಪಹಲ್ಗಾಂ ದಾಳಿಯ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಆಂಗ್ಲ ಭಾಷೆಯಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಈ ಮೂಲಕ, ಭಾರತವು ತನ್ನ ಮೇಲಿನ ದಾಳಿಗೆ ಪಾಕ್&zwnj; ಬೆಲೆ ತೆರಬೇಕಾಗುವುದು ಎಂದು ಇಡೀ ವಿಶ್ವಕ್ಕೆ ಹೇಳಿದ್ದರು.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/why-indian-army-officers-used-english-asks-pak-army-spox-gets-trolled-by-pakistanis-rav/articleshow-qpp2vuk"/>
        </item>
        <item>
            <title><![CDATA[ಬಹುಮತ ಸಾಬೀತಿಗೆ ಹೆಣಗಾಡ್ತಿರೋ ವಿಜಯ್‌ಗೆ ಮತ್ತೊಂದು ಆಘಾತ; ರಾತ್ರಿಯೇ ಲೋಕಭವನಕ್ಕೆ ದೌಡಾಯಿಸಿದ TTV ದಿನಕರನ್]]></title>
            <link>https://kannada.asianetnews.com/gallery/india-news/ttv-dhinakaran-accuses-tvk-thalapathy-vijay-s-of-forgery-amid-tamil-nadu-government-formation-drama-mrq-02c78mx</link>
            <guid isPermaLink="true">https://kannada.asianetnews.com/gallery/india-news/ttv-dhinakaran-accuses-tvk-thalapathy-vijay-s-of-forgery-amid-tamil-nadu-government-formation-drama-mrq-02c78mx</guid>
            <pubDate>Sat, 09 May 2026 09:11:06 +0530</pubDate>
            <description><![CDATA[&lt;p&gt;ಸರ್ಕಾರ ರಚಿಸಲು ಬೇಕಾದ ಬಹುಮತವಿಲ್ಲದೆ ನಟ ವಿಜಯ್ ಅವರ ಟಿವಿಕೆ ಪಕ್ಷ ಹೆಣಗಾಡುತ್ತಿರುವಾಗ, ಎಎಂಎಂಕೆ ಶಾಸಕರ ಬೆಂಬಲ ಪತ್ರ ನಕಲಿ ಎಂದು ಟಿಟಿವಿ ದಿನಕರನ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಎಎಂಎಂಕೆ ಶಾಸಕರು ಪ್ರಜ್ಞಾಪೂರ್ವಕವಾಗಿಯೇ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಟಿವಿಕೆ ವಿಡಿಯೋ ಬಿಡುಗಡೆ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jg0wd4p6d0pbhdwee5mq6ta5,imgname-ttv-dhinakaran-1.jpg" type="image/jpeg" height="390" width="690"/>
            <content:encoded><![CDATA[&lt;p&gt;ಸರ್ಕಾರ ರಚಿಸಲು ಬೇಕಾದ ಬಹುಮತವಿಲ್ಲದೆ ನಟ ವಿಜಯ್ ಅವರ ಟಿವಿಕೆ ಪಕ್ಷ ಹೆಣಗಾಡುತ್ತಿರುವಾಗ, ಎಎಂಎಂಕೆ ಶಾಸಕರ ಬೆಂಬಲ ಪತ್ರ ನಕಲಿ ಎಂದು ಟಿಟಿವಿ ದಿನಕರನ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಎಎಂಎಂಕೆ ಶಾಸಕರು ಪ್ರಜ್ಞಾಪೂರ್ವಕವಾಗಿಯೇ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಟಿವಿಕೆ ವಿಡಿಯೋ ಬಿಡುಗಡೆ ಮಾಡಿದೆ.&lt;/p&gt;&lt;img&gt;ನಟ ವಿಜಯ್ ಅವರ ಟಿವಿಕೆ ಪಕ್ಷವು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರ್ಕಾರ ರಚಿಸಲು ಬೇಕಾದ ಬಹುಮತ ಸಾಬೀತುಪಡಿಸಲು ಹೆಣಗಾಡುತ್ತಿದೆ. ಐವರು ಕಾಂಗ್ರೆಸ್ ಶಾಸಕರು ಮತ್ತು ಎರಡು ಕಮ್ಯುನಿಸ್ಟ್ ಪಕ್ಷಗಳ ನಾಲ್ವರು ಶಾಸಕರ ಬೆಂಬಲ ಸಿಕ್ಕಿದ್ದು, ಒಟ್ಟು ಬಲ 117ಕ್ಕೆ ಏರಿದೆ. ವಿಸಿಕೆ ಪಕ್ಷ ಇಂದು ತನ್ನ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದ್ದು, ಅವರ ಬೆಂಬಲ ಸಿಕ್ಕರೆ ಟಿವಿಕೆ ಬಲ 119ಕ್ಕೆ ಏರಿಕೆಯಾಗಲಿದೆ.&lt;img&gt;ಆದರೆ, ತಿರುಚಿ ಪೂರ್ವ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ ನೀಡುವುದರಿಂದ ಮತ್ತು ಹಂಗಾಮಿ ಸ್ಪೀಕರ್ ಆಯ್ಕೆಯಿಂದಾಗಿ ಟಿವಿಕೆ ಬಲ 117ಕ್ಕೆ ಇಳಿಯಲಿದೆ. ಬಹುಮತ ಸಾಬೀತುಪಡಿಸಲು ಪಕ್ಷಕ್ಕೆ ಇನ್ನೂ ಒಬ್ಬ ಶಾಸಕರ ಬೆಂಬಲದ ಅಗತ್ಯವಿದೆ. ಹೀಗಾಗಿ ವಿಜಯ್ ಅವರ ಸರ್ಕಾರ ರಚನೆಯ ಹಾದಿಯಲ್ಲಿ ಬಿಕ್ಕಟ್ಟು ಮುಂದುವರಿದಿದೆ.&lt;img&gt;ಈ ನಡುವೆ, ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಮಧ್ಯರಾತ್ರಿ ತಮಿಳುನಾಡಿನ ಪ್ರಭಾರ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 'ಮನ್ನಾರ್&zwnj;ಗುಡಿ ಕ್ಷೇತ್ರದಿಂದ ಗೆದ್ದ ನಮ್ಮ ಪಕ್ಷದ ಶಾಸಕ ಎಸ್. ಕಾಮರಾಜ್ ನಾಪತ್ತೆಯಾಗಿದ್ದಾರೆ. ಅವರನ್ನು ಟಿವಿಕೆ ಪಕ್ಷದವರು ಖರೀದಿಸಿರಬಹುದು. ಟಿವಿಕೆ ಕುದುರೆ ವ್ಯಾಪಾರದಲ್ಲಿ ತೊಡಗಿದೆ' ಎಂದು ದಿನಕರನ್ ಗಂಭೀರ ಆರೋಪ ಮಾಡಿದರು.&lt;img&gt;&lt;p&gt;ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಎಎಂಎಂಕೆ ಶಾಸಕ ಎಸ್. ಕಾಮರಾಜ್ ರಾಜಭವನಕ್ಕೆ ಬಂದರು. ಇದಾದ ನಂತರ ಟಿಟಿವಿ ದಿನಕರನ್ ಎರಡನೇ ಬಾರಿಗೆ ರಾಜ್ಯಪಾಲರನ್ನು ಭೇಟಿಯಾದರು. ನಂತರ ಮಾತನಾಡಿದ ಅವರು, 'ರಾಜ್ಯಪಾಲರಿಗೆ ನೀಡಿದ ಪತ್ರಕ್ಕೂ ಕಾಮರಾಜ್&zwnj;ಗೂ ಸಂಬಂಧವಿಲ್ಲ, ಅದು ನಕಲಿ ಪತ್ರ. ನಮ್ಮ ನಾಯಕರ ಹೆಸರಲ್ಲಿ ಟಿವಿಕೆ ನಕಲಿ ಪತ್ರ ನೀಡಿದೆ. ಇದು ಶುದ್ಧ ಶಕ್ತಿ ಮಾಡುವ ಕೆಲಸವೇ? ಟಿವಿಕೆ ಶುದ್ಧ ಶಕ್ತಿಯಲ್ಲ, ಮೋಸದ ಶಕ್ತಿ' ಎಂದು ಆರೋಪಿಸಿದರು.&amp;nbsp;&lt;/p&gt;&lt;p&gt;ಈ ಸಂಬಂಧ ದಿನಕರನ್ ಗಿಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 'ನಾನು ಎಐಎಡಿಎಂಕೆಯನ್ನು ಬೆಂಬಲಿಸುತ್ತೇನೆ, ಪತ್ರದಲ್ಲಿರುವುದು ನನ್ನ ಸಹಿ ಅಲ್ಲ' ಎಂದು ಕಾಮರಾಜ್ ಕೂಡಾ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;ಟಿಟಿವಿ ದಿನಕರನ್ ಅವರ ಆರೋಪಕ್ಕೆ ಟಿವಿಕೆ ಪಕ್ಷವು ವಿಡಿಯೋ ಸಾಕ್ಷ್ಯದೊಂದಿಗೆ ತಿರುಗೇಟು ನೀಡಿದೆ. 'ಎಎಂಎಂಕೆ ಶಾಸಕರು ಪ್ರಜ್ಞಾಪೂರ್ವಕವಾಗಿಯೇ ಬೆಂಬಲ ಪತ್ರ ನೀಡಿದ್ದಾರೆ. ನಮಗೆ ಕುದುರೆ ವ್ಯಾಪಾರ ಮಾಡುವ ಅಗತ್ಯವಿಲ್ಲ' ಎಂದು ಟಿವಿಕೆ ಹೇಳಿದೆ. ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಶಾಸಕ ಕಾಮರಾಜ್ ಕಾರಿನಲ್ಲಿ ಕುಳಿತು ಪತ್ರಕ್ಕೆ ಸಹಿ ಹಾಕುತ್ತಿರುವ ದೃಶ್ಯಗಳಿವೆ. ಈ ಘಟನೆಯು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ.]]></content:encoded>
            <category>india-news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/india-news/ttv-dhinakaran-accuses-tvk-thalapathy-vijay-s-of-forgery-amid-tamil-nadu-government-formation-drama-mrq-02c78mx"/>
        </item>
        <item>
            <title><![CDATA[ಬಂಗಾಳಕ್ಕೆ ಸುವೇಂದು ಅಧಿಕಾರಿ ಮೊದಲ ಬಿಜೆಪಿ ಸಿಎಂ!  ದೀದಿ ಆಳ್ವಿಕೆಗೆ ಅಂತ್ಯ, ದಾದಾ ಸಾಮ್ರಾಜ್ಯ ಆರಂಭ!]]></title>
            <link>https://kannada.asianetnews.com/india-news/west-bengal-government-formation-updates-suvendu-adhikari-first-bjp-cm-rav/articleshow-8gxzabb</link>
            <guid isPermaLink="true">https://kannada.asianetnews.com/india-news/west-bengal-government-formation-updates-suvendu-adhikari-first-bjp-cm-rav/articleshow-8gxzabb</guid>
            <pubDate>Sat, 09 May 2026 06:09:21 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದು, ಸುವೇಂದು ಅಧಿಕಾರಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಅವರು ಶನಿವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಮೂಲಕ ದಶಕಗಳ ಕಾಲದ ಮಮತಾ ಬ್ಯಾನರ್ಜಿ ಆಳ್ವಿಕೆಗೆ ತೆರೆಬಿದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr52hhc3bvc6nz4gzb40b07k,imgname-----------------------2026-05-09t060405.387-1778286904707.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ (ಮೇ.9) :&lt;/strong&gt; ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೇರುವ ಐತಿಹಾಸಿಕ ಮುಹೂರ್ತಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಗಿದೆ.&lt;/p&gt;&lt;p&gt;ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನು &lsquo;ದೀದಿ ಆಳ್ವಿಕೆಯ ಬಳಿಕ ಇನ್ನು ದಾದಾ ಸಾಮ್ರಾಜ್ಯ&rsquo; ಎಂದು ಬಣ್ಣಿಸಲಾಗುತ್ತಿದೆ.ಅಧಿಕಾರಿ ಅವರು ಶನಿವಾರ ಬ್ರಿಗೇಡ್&zwnj; ಪರೇಡ್&zwnj; ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು, ಘಟಾನುಘಟಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.&lt;/p&gt;&lt;p&gt;ಬಂಗಾಳಕ್ಕೆ ಸಿಎಂ ಆಯ್ಕೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಅಮಿತ್&zwnj; ಶಾ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಸಂಜೆ, ನೂತನ ಶಾಸಕರು ಮತ್ತು ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿ ಆಯ್ಕೆಯನ್ನು ಅಮಿತ್&zwnj; ಶಾ ಘೋಷಿಸಿದರು.&lsquo;ಶಾಸಕಾಂಗ ಸಭೆಯಲ್ಲಿ ಸಲ್ಲಿಸಲಾಗಿದ್ದ 8 ಪ್ರಸ್ತಾವನೆಗಳಲ್ಲೂ ಒಂದೇ ಹೆಸರಿತ್ತು (ಸುವೇಂದು ಅಧಿಕಾರಿ). 2ನೇ ಅವಕಾಶ ಕೊಟ್ಟರೂ ಯಾರೂ ಅದನ್ನು ಬದಲಿಸಲು ಬಯಸಲಿಲ್ಲ.&lt;/p&gt;&lt;p&gt;ಹಾಗಾಗಿ ಸುವೇಂದು ಅವರನ್ನೇ ಅಂತಿಮವಾಗಿ ಬಂಗಾಳದ ಸಿಎಂ ಆಗಿದೆ ಆಯ್ಕೆ ಮಾಡಲಾಗಿದೆ&rsquo; ಎಂದು ಶಾ ಹೇಳಿದರು.ಅಧಿಕಾರಿ ಆರ್&zwnj;ಎಸ್&zwnj;ಎಸ್&zwnj; ಹಿನ್ನೆಲೆ ಇಲ್ಲದಿದ್ದರೂ (ಮೂಲತಃ ಟಿಎಂಸಿಯವರು- ನಂತರ ಬಿಜೆಪಿಗೆ ಬಂದಿದ್ದರು) ಆಯ್ಕೆ ಆಗಿರುವುದು ವಿಶೇಷ. ಅಧಿಕಾರಿ ಅವರ ಜತೆ ಸಿಎಂ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ದಿಲೀಪ್&zwnj; ಘೋಷ್&zwnj;, ಅಗ್ನಿಮಿತ್ರಾ ಪೌಲ್&zwnj;, ರೂಪಾ ಗಂಗೂಲಿ ಇದ್ದರು. ಅವರನ್ನೆಲ್ಲ ಹಿಂದಿಕ್ಕಿ ಸುವೇಂದು ಆಯ್ಕೆಯಾಗಿದ್ದಾರೆ.&lt;/p&gt;&lt;p&gt;ಈ ನಡುವೆ, ಅಗ್ನಿಮಿತ್ರಾ ಹಾಗೂ ಶಾಸಕ ಶಂಕರ್&zwnj; ಘೋಷ್ ಅವರಿಗೆ ಡಿಸಿಎಂ ಹುದ್ದೆ ಒಲಿಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.&lt;/p&gt;&lt;h2&gt;ದೀದಿ ಬಳಿಕ ದಾದಾ:&lt;/h2&gt;&lt;p&gt;ದಶಕದ ಹಿಂದೆ ರಾಜ್ಯದಲ್ಲಿ ನೆಲೆಯನ್ನೇ ಹೊಂದಿರದ ಬಿಜೆಪಿಯು ಇಂದು ಸರ್ಕಾರ ರಚಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅತ್ತ ಸತತ 15 ವರ್ಷಗಳ ಕಾಲ ಬಂಗಾಳವನ್ನಾಳಿದ್ದ ಟಿಎಂಸಿಯ ಮಮತಾ ಬ್ಯಾನರ್ಜಿ ಅವರನ್ನು ಕೊನೆಗೂ ಸಿಎಂ ಕುರ್ಚಿಯಿಂದ ಕೆಳಗಿಳಿಸಲಾಗಿದೆ. 2021ರ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿ, ಎದುರಾಳಿ ಮಮತಾರನ್ನು ಮಣಿಸಿದ್ದರು. ಈ ಬಾರಿಯೂ ನಂದಿಗ್ರಾಮವನ್ನು ಗೆಲ್ಲುವುದರ ಜತೆಗೆ, ಭವಾನಿಪುರ ಕ್ಷೇತ್ರದಲ್ಲಿ ಮತ್ತೆ ಪ್ರತಿಸ್ಪರ್ಧಿಯಾಗಿದ್ದ ದೀದಿಗೆ ಮತ್ತೊಮ್ಮೆ ಸೋಲಿನ ರುಚಿ ಉಣಿಸಿದವರು ಅಧಿಕಾರಿ.ಭದ್ರತೆ ಬಿಗಿ:ಅಧಿಕಾರಿಯವರ ಶಪಥಕ್ಕೆ ಘಾಟಾನುಘಟಿ ನಾಯಕರ ಆಗಮನವಾಗಲಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮ ನಡೆಯುವ ಮೈದಾನ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಂಚಾರಿ ನಿಯಮಗಳಲ್ಲೂ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದ್ದು, ಬೆಳಗ್ಗೆ 4 ಗಂಟೆಯಿಂದ ರಾತ್ರಿ 8ರ ವರೆಗೆ ಸರಕು ಸಾಗಣೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.&lt;/p&gt;&lt;h3&gt;ಒಂದು ಸ್ಥಾನ ಮಹಿಳೆ ಪಾಲು? ಕೊಟ್ಟ ಎಲ್ಲಾ ಭರವಸೆ ಈಡೇರಿಸ್ತೇವೆ&lt;/h3&gt;&lt;p&gt;ಬಂಗಾಳದ ಜನ ನಮಗೆ ಐತಿಹಾಸಿಕ ಜನಾದೇಶ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ರಾಜ್ಯದಲ್ಲೀಗ ಭಯವು ಹೋಗಿ ಭರವಸೆ ಬಂದಿದೆ. ನಮ್ಮ ಪ್ರಣಾಳಿಕೆಯಲ್ಲಿದ್ದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸುತ್ತೇವೆ. ಬಂಗಾಳ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಕೆಲಸ ಮಾಡುವುದು ಅತ್ಯಗತ್ಯ.&lt;/p&gt;&lt;p&gt;&lt;strong&gt;- ಸುವೇಂದು ಅಧಿಕಾರ, ಬಂಗಾಳ ನಿಯೋಜಿತ ಸಿಎಂ&lt;/strong&gt;&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/west-bengal-government-formation-updates-suvendu-adhikari-first-bjp-cm-rav/articleshow-8gxzabb"/>
        </item>
        <item>
            <title><![CDATA[ತೆಲಂಗಾಣ: ಶಾಲಾ ನಿರ್ಮಾಣಕ್ಕಾಗಿ 800 ವರ್ಷಗಳ ಪುರಾತನ ಕಾಕತೀಯ ಶಿವ ದೇಗುಲ ಧ್ವಂಸ, ಭುಗಿಲೆದ್ದ ಆಕ್ರೋಶ!]]></title>
            <link>https://kannada.asianetnews.com/india-news/800-year-old-shiva-temple-demolished-for-govt-school-in-telangana-rav/articleshow-cwho7qq</link>
            <guid isPermaLink="true">https://kannada.asianetnews.com/india-news/800-year-old-shiva-temple-demolished-for-govt-school-in-telangana-rav/articleshow-cwho7qq</guid>
            <pubDate>Sat, 09 May 2026 05:55:28 +0530</pubDate>
            <description><![CDATA[ವಾರಂಗಲ್&zwnj;ನಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ 800 ವರ್ಷಗಳಷ್ಟು ಹಳೆಯ ಕಾಕತೀಯ ಕಾಲದ ಶಿವ ದೇಗುಲವನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆಯು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ದೇಗುಲವನ್ನು ಮರುನಿರ್ಮಿಸುವ ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr51r3hmrm864pr2ysbe0hfc,imgname-----------------------2026-05-09t054836.743-1778286071348.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಭುಗಿಲೆದ್ದ ಆಕ್ರೋಶ, ಪ್ರಕರಣ ದಾಖಲು&lt;/li&gt; &lt;li&gt;ಕೆಡವಿದ ಗುಡಿ ಮರುನಿರ್ಮಾಣ: ಡೀಸಿ&lt;/li&gt; &lt;li&gt;ಪುರಾತತ್ವ, ದತ್ತಿ ಇಲಾಖೆಯ ಒಪ್ಪಿಗೆ ಪಡೆದಿಲ್ಲ: ದೂರು&lt;/li&gt; &lt;li&gt;ಸಂಸ್ಕೃತಿ ಸಚಿವಾಲಯವನ್ನು ಹೊಣೆ ಮಾಡಿ: ಆಗ್ರಹ&lt;/li&gt;&lt;/ul&gt;&lt;p&gt;&lt;strong&gt;ವಾರಂಗಲ್&zwnj; (ಮೇ.9): &lt;/strong&gt;ಸರ್ಕಾರಿ ಶಾಲೆಯ ನಿರ್ಮಾಣಕ್ಕಾಗಿ ಕಾಕತಿಯ ಕಾಲದ 800 ವರ್ಷ ಪುರಾತನ ಶಿವನ ದೇಗುಲವೊಂದನ್ನು ಇಲ್ಲಿನ ಖಾನಾಪುರ ಮಂಡಲದ ಅಶೋಕ ನಗರದಲ್ಲಿ ಧ್ವಂಸಗೊಳಿಸಲಾಗಿದೆ. ಇದಕ್ಕೆ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದೂರು ದಾಖಲಾಗಿದೆ.&lt;/p&gt;&lt;p&gt;ಈ ಬಗ್ಗೆ ವಕೀಲ ರಾಮರಾವ್&zwnj; ಇಮ್ಮನೇನಿ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದಲ್ಲಿ ದೂರು ದಾಖಲಿಸಿದ್ದಾರೆ. ಪುರಾತತ್ವ ಮತ್ತು ದತ್ತಿ ಇಲಾಖೆಗಳಿಂದ ಅನುಮೋದನೆ ಪಡೆಯದೆ ಈ ಯೋಜನೆಗೆ ಅನುಮತಿಸಿದ ಅಧಿಕಾರಿಗಳ ವಿರುದ್ಧ ತೆಲಂಗಾಣ ಪರಂಪರೆ ಕಾಯ್ದೆಯ 30ನೇ ಸೆಕ್ಷನ್&zwnj;ನ ಅಡಿ ಕಾನೂನು ಕ್ರಮ ಜರುಗಿಸಬೇಕು. ಇದಕ್ಕೆ ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಇತಿಹಾಸಕಾರರನ್ನು ಹೊಣೆ ಮಾಡಬೇಕು ಎಂದು ಕೋರಿದ್ದಾರೆ.&lt;/p&gt;&lt;h2&gt;&lt;strong&gt;ಜಿಲ್ಲಾಧಿಕಾರಿ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ದೇಗುಲ ಧ್ವಂಸಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಾರಂಗಲ್&zwnj; ಜಿಲ್ಲಾಧಿಕಾರಿ ಡಾ. ಸತ್ಯ ಶಾರದಾ ಮತ್ತು ನರಸಂಪೇಟೆ ಶಾಸಕ ದೊಂತಿ ಮಾಧವ ರೆಡ್ಡಿ ಮೇ 6ರಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ, &lsquo;ಆ 30 ಎಕರೆಯಲ್ಲಿ ಪೊದೆಗಳನ್ನು ತೆರವುಗೊಳಿಸುವಾಗ ಹಳೆಯ ಶಿಥಿಲಗೊಂಡ ರಚನೆಯ ಅವಶೇಷಗಳಷ್ಟೇ ಕಂಡುಬಂದಿದ್ದವು ಹಾಗೂ ಅವುಗಳು ಸಂರಕ್ಷಿತ ಸ್ಮಾರಕವೆಂದು ದಾಖಲಾಗಿರಲಿಲ್ಲ&rsquo; ಎಂದು ಸ್ಪಷ್ಟನೆ ನೀಡಿದ್ದಾರೆ. ಜತೆಗೆ, ಅದೇ ಸ್ಥಳದಲ್ಲಿ ದೇವಸ್ಥಾನವನ್ನು ಮರುನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.&lt;/p&gt;&lt;p&gt;13ನೇ ಶತಮಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಕಾಕತೀಯ ದೊರೆ ಗಣಪತಿದೇವನ ಕಾಲದ ಈ ದೇವಾಲಯದ ಸ್ಥಳವು ಫೆಬ್ರವರಿ ಕ್ರಿ.ಶ. 1231ರ ಅಪರೂಪದ 7 ಸಾಲುಗಳ ತೆಲುಗು ಶಾಸನವನ್ನು ಹೊಂದಿದ್ದು, ಅದರಲ್ಲಿ ರಾಜನನ್ನು &lsquo;ಮಹಾರಾಜ&rsquo; ಮತ್ತು &lsquo;ರಾಜಾಧಿರಾಜುಲು&rsquo; ಎಂದು ಸಂಬೋಧಿಸಲಾಗಿತ್ತು.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/800-year-old-shiva-temple-demolished-for-govt-school-in-telangana-rav/articleshow-cwho7qq"/>
        </item>
        <item>
            <title><![CDATA[ಕಾಂಗ್ರೆಸ್ಸಿಂದ ನಮ್ಮನ್ನು ದೂರ ಕೂರಿಸಿ; ಸ್ಪೀಕರ್‌ಗೆ ಡಿಎಂಕೆ ಮನವಿ, ಇಂಡಿ ಕೂಟಕ್ಕೂ ವಿದಾಯ ಸಂಭವ]]></title>
            <link>https://kannada.asianetnews.com/india-news/dmk-demands-separate-lok-sabha-seats-from-congress-india-alliance-faces-collapse-rav/articleshow-22z95de</link>
            <guid isPermaLink="true">https://kannada.asianetnews.com/india-news/dmk-demands-separate-lok-sabha-seats-from-congress-india-alliance-faces-collapse-rav/articleshow-22z95de</guid>
            <pubDate>Sat, 09 May 2026 05:19:21 +0530</pubDate>
            <description><![CDATA[&lt;p&gt;ತಮಿಳುನಾಡು ಚುನಾವಣೆಯ ನಂತರ ಕಾಂಗ್ರೆಸ್, ವಿಜಯ್ ಅವರ ಟಿವಿಕೆ ಪಕ್ಷವನ್ನು ಬೆಂಬಲಿಸಿದ್ದರಿಂದ ದಶಕಗಳ ಮಿತ್ರಪಕ್ಷವಾದ ಡಿಎಂಕೆ ತೀವ್ರ ಅಸಮಾಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆಗೆ ಡಿಎಂಕೆ ಮನವಿ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr4zf4jw02kp28hhr8fedqw1,imgname-----------------------2026-05-09t051103.684-1778283680348.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಹಲವು ದಶಕಗಳಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್&zwnj; ಜತೆ ಮೈತ್ರಿ ಹೊಂದಿದ್ದ ಡಿಎಂಕೆ&lt;/li&gt; &lt;li&gt;ಆದರೆ ತಮಿಳ್ನಾಡು ಚುನಾವಣೆ ಬಳಿಕ ವಿಜಯ್&zwnj;ರ ಟಿವಿಕೆ ಪಕ್ಷ ಬೆಂಬಲಿಸಿದ್ದ ಕಾಂಗ್ರೆಸ್&zwnj;&lt;/li&gt; &lt;li&gt;ಕಾಂಗ್ರೆಸ್&zwnj;ನ ಈ ನಡೆ ಬಗ್ಗೆ ಡಿಎಂಕೆ ಮೈತ್ರಿಕೂಟದ ಸಭೆಯಲ್ಲಿ ಸಿಎಂ ಸ್ಟಾಲಿನ್ ಆಕ್ರೋಶ&lt;/li&gt; &lt;li&gt;ಕಷ್ಟದ ಸಮಯದಲ್ಲಿ ಹಲವು ಬಾರಿ ಬೆಂಬಲಿಸಿದ್ದರೂ ಇದೀಗ ಕಾಂಗ್ರೆಸ್&zwnj; ಕೈಕೊಟ್ಟ ಆರೋಪ&lt;/li&gt; &lt;li&gt;ಹೀಗಾಗಿ ಲೋಕಸಭೇಲಿ ಪ್ರತ್ಯೇಕ ಸ್ಥಾನ ನೀಡುವಂತೆ ಸ್ಪೀಕರ್&zwnj; ಡಿಎಂಕೆ ನಾಯಕರ ಮನವಿ&lt;/li&gt; &lt;li&gt;ಶೀಘ್ರವೇ ಕಾಂಗ್ರೆಸ್&zwnj; ನೇತೃತ್ವದ ಇಂಡಿಯಾ ಕೂಟಕ್ಕೂ ಡಿಎಂಕೆ ವಿದಾಯ ಹೇಳುವ ಸಂಭವ&lt;/li&gt;&lt;/ul&gt;&lt;p&gt;&lt;strong&gt;ಚೆನ್ನೈ: &lt;/strong&gt;ಟಿವಿಕೆ ಜತೆ ಕಾಂಗ್ರೆಸ್&zwnj; ಪಕ್ಷದ ಮೈತ್ರಿ ಬಹುಕಾಲದ ಮಿತ್ರ ಡಿಎಂಕೆಯನ್ನು ಸಿಟ್ಟಿಗೆಬ್ಬಿಸಿದ್ದು ರಾಷ್ಟ್ರದಲ್ಲೇ ಮೈತ್ರಿ ಕಡಿತಕ್ಕೆ ಮುಂದಾದಂತಿದೆ. ಇದರ ಮೊದಲ ಸಂಕೇತವಾಗಿ ಗುರುವಾರ ನಡೆದ ಡಿಎಂಕೆ ಸಭೆಯಲ್ಲಿ ಕಾಂಗ್ರೆಸ್&zwnj; ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇನ್ನೊಂದು ಕಡೆ, &lsquo;ಲೋಕಸಭೆಯಲ್ಲಿ ಕಾಂಗ್ರೆಸ್&zwnj; ಜತೆ ಇನ್ನು ನಾವು ಕೂರಲ್ಲ. ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿ&rsquo; ಎಂದು ಸದನದ ಸ್ಪೀಕರ್&zwnj;ಗೆ ಡಿಎಂಕೆ ಸಂಸದೆ ಕನಿಮೋಳಿ ಪತ್ರ ಬರೆದಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್&zwnj; ಜತೆ ಡಿಎಂಕೆ ಮೈತ್ರಿ ಕಡಿದುಕೊಂಡರೆ ವಿಪಕ್ಷಗಳ ಇಂಡಿಯಾ ಕೂಟದಿಂದ ಕೂಡ ಅದು ಹೊರಬಂದಂತೆ ಎನ್ನಲಾಗುತ್ತಿದೆ.&lt;/p&gt;&lt;h2&gt;ಸ್ಟಾಲಿನ್&zwnj;ಗೆ ಬೇಸರ:&lt;/h2&gt;&lt;p&gt;ಕಾಂಗ್ರೆಸ್&zwnj; ನಡೆ ಬಗ್ಗೆ ಮಾತನಾಡಿದ ಡಿಎಂಕೆ ನಾಯಕರೊಬ್ಬರು, ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್&zwnj; ತೀವ್ರ ಬೇಸರಗೊಂಡಿದ್ದಾರೆ ಎಂದಿದ್ದಾರೆ. &lsquo;ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕಾಗಿ ಅವರನ್ನು ನೀವು (ರಾಹುಲ್&zwnj; ಗಾಂಧಿ) ದೇಶದ್ರೋಹಿ ಎಂದು ಕರೆದಿದ್ದೀರಿ. ಈಗ ಇದನ್ನು ಪರಿಗಣಿಸಿ. ಮಂಗಳವಾರ ಮಧ್ಯಾಹ್ನ ನೀವು ಎಂ.ಕೆ. ಸ್ಟಾಲಿನ್&zwnj;ಗೆ ಕರೆ ಮಾಡಿ, &lsquo;ನಾನು ನಿಮ್ಮೊಂದಿಗಿದ್ದೇನೆ&rsquo; ಎಂದು ಹೇಳಿದ್ದಿರಿ. ಮರುದಿನ ಬೆಳಿಗ್ಗೆ, ನೀವು ಮೈತ್ರಿಕೂಟದಿಂದ ಪಕ್ಷಾಂತರಗೊಂಡು ನಿಮ್ಮ ವಿರುದ್ಧ ಸಡ್ಡು ಹೊಡೆದಿದ್ದ ಪಕ್ಷಕ್ಕೆ ಹಾರಿದ್ದೀರಿ. ಇದು ಅವಕಾಶವಾದಿ ಮತ್ತು ರಾಜಕೀಯವಾಗಿ ಅನೈತಿಕ&rsquo; ಎಂದರು.&lt;/p&gt;&lt;p&gt;&lsquo;ನಾವು ನಿಮಗೆ 28 ಸೀಟು ಬಿಟ್ಟವು. 5ರಲ್ಲಿ ಗೆದ್ದಿರಿ. ನಮ್ಮಿಂದಾಗಿ ಈ ಸೀಟು ಬಂದವು ಎಂಬುದನ್ನೂ ಮರೆತಿದ್ದೀರಿ&rsquo; ಎಂದು ಕಿಡಿಕಾರಿದ್ದಾರೆ.&lt;/p&gt;&lt;h3&gt;ಬೇರೆ ಆಸನ ವ್ಯವಸ್ಥೆಗೆ ಬೇಡಿಕೆ:&lt;/h3&gt;&lt;p&gt;ಈ ನಡುವೆ, ಲೋಕಸಭೆ ಸ್ಪೀಕರ್&zwnj;ಗೆ ಪತ್ರ ಬರೆದಿರುವ ಸಂಸದೆ ಕನಿಮೋಳಿ, &lsquo;ಲೋಕಸಭೆಯಲ್ಲಿ ಡಿಎಂಕೆಗೆ ಸಂಸದರ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ವಿನಂತಿಸುತ್ತೇನೆ. ಕಾಂಗ್ರೆಸ್&zwnj; ಜತೆಗಿನ ನಮ್ಮ ಮೈತ್ರಿ ಮುರಿದುಬಿದ್ದಿರುವ ವೇಳೆ ಸದನದಲ್ಲಿ ಅವರೊಂದಿಗೆ ಕೂರುವುದು ಸರಿಯಾಗದು&rsquo; ಎಂದಿದ್ದಾರೆ. ಈತನಕ ಲೋಕಸಭೆಯಲ್ಲಿ ಕಾಂಗ್ರೆಸ್&zwnj; ಜತೆಗೇ ಡಿಎಂಕೆ ಸಂಸದರು ಕೂರುತ್ತಿದ್ದರು.&lt;/p&gt;&lt;p&gt;ಬಹುಮತ ಪಡೆದು ಸರ್ಕಾರ ರಚಿಸಲು ಟಿವಿಕೆಗೆ 10 ಸೀಟುಗಳ ಆವಶ್ಯಕತೆ ಇದೆ. ಹೀಗಾಗಿ 5 ಸೀಟು ಪಡೆದಿರುವ ಕಾಂಗ್ರೆಸ್&zwnj;, ವಿಜಯ್&zwnj;ರನ್ನು ಬೆಂಬಲಿಸಿದೆ. &lsquo;ಇದು ನಮಗೆ ಬಗೆದ ದ್ರೋಹ. ಕಾಂಗ್ರೆಸ್&zwnj;ಗೆ ಅಷ್ಟು ಸೀಟು ದಕ್ಕಿರುವುದೂ ನಮ್ಮಿಂದಲೇ&rsquo; ಎಂದು ಡಿಎಂಕೆ ಇತ್ತೀಚೆಗೆ ಹೇಳಿತ್ತು.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/dmk-demands-separate-lok-sabha-seats-from-congress-india-alliance-faces-collapse-rav/articleshow-22z95de"/>
        </item>
        <item>
            <title><![CDATA[ದೇಶದಲ್ಲೀಗ 604 ಲಕ್ಷ ಟನ್ ಆಹಾರ ದಾಸ್ತಾನು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ]]></title>
            <link>https://kannada.asianetnews.com/india-news/pralhad-joshi-india-food-security-buffer-stock-gvd/articleshow-3z7spev</link>
            <guid isPermaLink="true">https://kannada.asianetnews.com/india-news/pralhad-joshi-india-food-security-buffer-stock-gvd/articleshow-3z7spev</guid>
            <pubDate>Fri, 08 May 2026 22:57:22 +0530</pubDate>
            <description><![CDATA[&lt;p&gt;&lsquo;ಭಾರತದ ಆಹಾರ ಭದ್ರತಾ ವ್ಯವಸ್ಥೆ ಉತ್ತಮವಾಗಿದ್ದು, ಪ್ರಸ್ತುತ ವರ್ಷ ಬಫರ್ ಅವಶ್ಯಕತೆಗಿಂತ 3 ಪಟ್ಟು ಹೆಚ್ಚಾಗಿದೆ&rsquo; ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jp7n43y505fyxcwb264jm9y1,imgname-1.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.08):&lt;/strong&gt; &lsquo;ಭಾರತದ ಆಹಾರ ಭದ್ರತಾ ವ್ಯವಸ್ಥೆ ಉತ್ತಮವಾಗಿದ್ದು, ಪ್ರಸ್ತುತ ವರ್ಷ ಬಫರ್ ಅವಶ್ಯಕತೆಗಿಂತ 3 ಪಟ್ಟು ಹೆಚ್ಚಾಗಿದೆ&rsquo; ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸುವಲ್ಲಿ ಬದ್ಧತೆ ತೋರಿದ್ದು, ಪರಿಣಾಮ ನಮ್ಮ ಆಹಾರ ಭದ್ರತಾ ಚೌಕಟ್ಟು ಬಲವಾಗಿ ಬೆಳೆಯುತ್ತಲೇ ಇದೆ ಎಂದು ಪ್ರತಿಪಾದಿಸಿದ್ದಾರೆ.&lt;/p&gt;&lt;p&gt;604.02 ಲಕ್ಷ ಟನ್&zwnj; ದಾಸ್ತಾನು: ಪ್ರಸ್ತುತ ಕೇಂದ್ರ ಸರ್ಕಾರದ ಆಹಾರ ಧಾನ್ಯ ದಾಸ್ತಾನು 604.02 ಲಕ್ಷ ಟನ್ ತಲುಪಿದೆ. ಇದು ಕಡ್ಡಾಯ ಬಫರ್ ಅವಶ್ಯಕತೆಗಿಂತ 3 ಪಟ್ಟು ಎಂದು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಗೋಧಿ ಮತ್ತು ಅಕ್ಕಿ ದಾಸ್ತಾನು ಸಮೃದ್ಧವಾಗಿದ್ದು, ದೇಶಾದ್ಯಂತ ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ವಿವಿಧ ಜನಕಲ್ಯಾಣ ಯೋಜನೆಗಳಿಗೆ ನಿರಂತರ ಪೂರೈಕೆಯನ್ನು ಸಾಧ್ಯವಾಗುತ್ತಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಒಂದರಿಂದಲೇ 80 ಕೋಟಿಗೂ ಹೆಚ್ಚು ಭಾರತೀಯರಿಗೆ ಉಚಿತ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ದೇಶೀಯವಾಗಿ ಆಹಾರ ಭದ್ರತೆ ಒದಗಿಸುವ ಜತೆಗೆ ರೈತರಿಂದ ವ್ಯವಸ್ಥಿತ ಖರೀದಿ, ಸಮೃದ್ಧ ಫಸಲು ಮತ್ತು ಅನ್ನದಾತರಿಗೆ ನೀಡುತ್ತಿರುವ ನಿರಂತರ ಬೆಂಬಲವು ರೈತ ಕಲ್ಯಾಣ ಮತ್ತು ದೇಶದ ಸುಭದ್ರತೆ ಕಡೆಗಿನ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ರಾಜ್ಯದ 10 ಲಕ್ಷ ರೈತರಿಗೆ ಅನುಕೂಲ&lt;/strong&gt;&lt;/h2&gt;&lt;p&gt;ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರ ಬೆಂಬಲಕ್ಕೆ ನಿಂತ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ಕಬ್ಬು ಬೆಳೆಗಾರರಿಗೂ ಬೆಂಬಲ ಬೆಲೆ ಹೆಚ್ಚಿಸಿ ನೆರವಿಗೆ ಬಂದಿದೆ. ಇದರಿಂದಾಗಿ ಕರ್ನಾಟಕದ ಸರಿ ಸುಮಾರು 8 ರಿಂದ 10 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ 2026-27ನೇ ಹಂಗಾಮಿಗೆ ಕಬ್ಬಿಗೆ ಶೇ.10.25 ಮೂಲ ರಿಕವರಿ ದರದ ಮೇಲೆ ಪ್ರತಿ ಕ್ವಿಂಟಲ್&zwnj;ಗೆ ₹365 ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆಯನ್ನು (ಎಫ್&zwnj;ಆರ್&zwnj;ಪಿ) ಅನುಮೋದಿಸಿದೆ. ಕಬ್ಬಿನ &lrm;ರಿಕವರಿಯಲ್ಲಿ 0.1% ಏರಿಕೆಗೆ ₹3.56 ಪ್ರತಿ ಕ್ವಿಂಟಲ್ ಹೆಚ್ಚುವರಿ ಪ್ರೋತ್ಸಾಹಧನ ನೀಡುವುದರ ಜತೆಗೆ ರಿಕವರಿ 9.5% ಅಥವಾ ಅದಕ್ಕಿಂತ ಕಡಿಮೆ ಇದ್ದರೂ ಯಾವುದೇ ಕಡಿತವಿಲ್ಲದೆ ಪ್ರತಿ ಕ್ವಿಂಟಲ್ ಗೆ ₹338.3 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.&lrm;&lt;/p&gt;&lt;p&gt;ರಾಜ್ಯದ ಬೆಳಗಾವಿ, ಬಾಗಲಕೋಟೆ, ಮಂಡ್ಯ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ, ದಾವಣಗೆರೆ, ಬೀದರ್ ಹೀಗೆ ವಿವಿಧ ಜಿಲ್ಲೆಗಳು ಕಬ್ಬು ಬೆಳೆಯುವಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಒಟ್ಟು ಸಕ್ಕರೆ ಉತ್ಪಾದನೆಯ ಶೇ.16 ರಷ್ಟು ಕರ್ನಾಟಕದ ಪಾಲಿದೆ. ಹೀಗಾಗಿ ಈ ಎಫ್&zwnj;ಆರ್&zwnj;ಪಿ ಹೆಚ್ಚಳವು ರಾಜ್ಯದ ಪಾಲಿಗೂ ಅನನ್ಯ ಕೊಡುಗೆಯಾಗಿದೆ ಎಂದು ಸಚಿವ ಪ್ರಹ್ಲಾದ್&zwnj; ಜೋಶಿ ತಿಳಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Govindaraj S</dc:creator>
            <atom:link href="https://kannada.asianetnews.com/india-news/pralhad-joshi-india-food-security-buffer-stock-gvd/articleshow-3z7spev"/>
        </item>
        <item>
            <title><![CDATA[ತಮಿಳುನಾಡು ರಾಜಕೀಯದಲ್ಲಿ ಹಠಾತ್ ಟ್ವಿಸ್ಟ್‌: ವಿಜಯ್ ಪಟ್ಟಾಭಿಷೇಕಕ್ಕೆ ಮತ್ತೆ ರಾಜ್ಯಪಾಲರ ಬ್ರೇಕ್; ಮ್ಯಾಜಿಕ್ ನಂಬರ್ ಸಿಗದೆ ದಳಪತಿ ಕಂಗಾಲು!]]></title>
            <link>https://kannada.asianetnews.com/india-news/governor-refuses-vijay-oath-taking-majority-mark-118-shortfall-tn-politics-san/articleshow-botzed5</link>
            <guid isPermaLink="true">https://kannada.asianetnews.com/india-news/governor-refuses-vijay-oath-taking-majority-mark-118-shortfall-tn-politics-san/articleshow-botzed5</guid>
            <pubDate>Fri, 08 May 2026 22:10:01 +0530</pubDate>
            <description><![CDATA[&lt;p&gt;ತಮಿಳುನಾಡು ರಾಜಕೀಯದಲ್ಲಿ, ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷಕ್ಕೆ ಬಹುಮತದ ಕೊರತೆಯಿಂದಾಗಿ ಹಿನ್ನಡೆಯಾಗಿದೆ. ಅಗತ್ಯ ಸಂಖ್ಯಾಬಲ ಸಾಬೀತುಪಡಿಸಲು ವಿಫಲವಾದ ಕಾರಣ, ರಾಜ್ಯಪಾಲರು ವಿಜಯ್ ಅವರ ಪ್ರಮಾಣವಚನ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2ks9j8ckmjx3j500crccdt,imgname-tamil-nadu-political-crisis-vijay-tvk-108-mlas-resignation-dmk-aiadmk-government-row---0-1778204321352.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಮೇ.8): &lt;/strong&gt;ತಮಿಳುನಾಡು ರಾಜಕೀಯದ 'ಥ್ರಿಲ್ಲರ್' ಕಥೆಯಲ್ಲಿ ಮತ್ತೊಂದು ಆಘಾತಕಾರಿ ಟ್ವಿಸ್ಟ್&zwnj; ಸಿಕ್ಕಿದೆ. ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದ 'ತಮಿಳಗ ವೆಟ್ರಿ ಕಳಗಂ' (TVK) ಅಧ್ಯಕ್ಷ ವಿಜಯ್ ಅವರಿಗೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಪ್ರಮಾಣವಚನ ಸ್ವೀಕರಿಸಲು ಅನುಮತಿ ನಿರಾಕರಿಸಿದ್ದಾರೆ. ಶನಿವಾರ ಬೆಳಿಗ್ಗೆ ನಡೆಯಬೇಕಿದ್ದ ಪಟ್ಟಾಭಿಷೇಕದ ಆಸೆ ಈಗ ಕಮರಿಹೋಗಿದ್ದು, ಸಂಖ್ಯಾಬಲದ ಕೊರತೆಯೇ ವಿಜಯ್&zwnj;ಗೆ ಅತಿದೊಡ್ಡ ವಿಘ್ನವಾಗಿ ಪರಿಣಮಿಸಿದೆ.&lt;/p&gt;&lt;p&gt;234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಿದೆ. ಆದರೆ, ವಿಜಯ್ ಅವರು ಕೇವಲ 116 ಶಾಸಕರ ಬೆಂಬಲವನ್ನು ಮಾತ್ರ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಹುಮತಕ್ಕೆ ಇನ್ನೂ ಇಬ್ಬರು ಶಾಸಕರ ಕೊರತೆಯಿದ್ದು, ರಾಜ್ಯಪಾಲರು ಕೇಳಿದಂತೆ ಬೆಂಬಲದ ಅಧಿಕೃತ ಪತ್ರಗಳನ್ನು ಒದಗಿಸಲು ವಿಜಯ್ ವಿಫಲರಾಗಿದ್ದಾರೆ.&lt;/p&gt;&lt;h2&gt;&lt;strong&gt;ಕೈಕೊಟ್ಟ ವಿಸಿಕೆ ಮತ್ತು ಐಯುಎಂಎಲ್&lt;/strong&gt;&lt;/h2&gt;&lt;p&gt;ವಿಜಯ್ ಅವರು ವಿಸಿಕೆ (VCK), ಎಎಮ್&zwnj;ಎಂಕೆಯ ಟಿಟಿವಿ ದಿನಕರನ್ ಮತ್ತು ಐಯುಎಂಎಲ್ (IUML) ಪಕ್ಷಗಳ ಜೊತೆ ತೀವ್ರ ಮಾತುಕತೆ ನಡೆಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಐಯುಎಂಎಲ್ ತಾನು ಟಿವಿಕೆ ಮೈತ್ರಿಕೂಟದ ಭಾಗವಲ್ಲ ಎಂದು ಪತ್ರ ಬಿಡುಗಡೆ ಮಾಡಿದೆ. ಇತ್ತ ಟಿಟಿವಿ ದಿನಕರನ್ ಅವರು ಎಐಎಡಿಎಂಕೆಗೆ ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇನ್ನು ವಿಸಿಕೆ ಕೂಡ ಅಧಿಕೃತ ಬೆಂಬಲದ ಪತ್ರ ನೀಡಲು ಹಿಂದೇಟು ಹಾಕಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ರಾಜ್ಯಪಾಲರ ಕಠಿಣ ನಿಲುವು&lt;/strong&gt;&lt;/h2&gt;&lt;p&gt;ಕಳೆದ ಮೂರು ದಿನಗಳಿಂದ ವಿಜಯ್ ಅವರು ಸತತವಾಗಿ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದಾರೆ. &quot;ಕೇವಲ 113 ಶಾಸಕರನ್ನು ಇಟ್ಟುಕೊಂಡು 118ರ ಸಂಖ್ಯಾಬಲದ ಸದನವನ್ನು ನಡೆಸಲು ಸಾಧ್ಯವಿಲ್ಲ&quot; ಎಂದು ರಾಜ್ಯಪಾಲರು ಗುರುವಾರವೇ ಸ್ಪಷ್ಟಪಡಿಸಿದ್ದರು. ಪ್ರತಿ ಶಾಸಕರ ಬೆಂಬಲದ ಪತ್ರವನ್ನೇ ಅವರು ಆಗ್ರಹಿಸಿದ್ದರು. ವಿಜಯ್ ಅವರ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದರೆ, ಡಿಎಂಕೆ ಮೈತ್ರಿಕೂಟದಿಂದ ಹೊರಬಂದಿದ್ದ ಕಾಂಗ್ರೆಸ್ ತನ್ನ 5 ಶಾಸಕರ ಬೆಂಬಲ ನೀಡಿತ್ತು. ಆದರೂ ಬಹುಮತದ ಗಡಿ ತಲುಪಲು ವಿಜಯ್&zwnj;ಗೆ ಸಾಧ್ಯವಾಗಿಲ್ಲ.&lt;/p&gt;&lt;h2&gt;&lt;strong&gt;ಪಕ್ಷಗಳ ನಡುವಿನ ಜೂಟಾಟ&lt;/strong&gt;&lt;/h2&gt;&lt;p&gt;ಬಿಜೆಪಿಯಂತಹ ಕೋಮುವಾದಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಬಾರದು ಎಂಬ ಷರತ್ತಿನ ಮೇಲೆ ಕಾಂಗ್ರೆಸ್ ವಿಜಯ್&zwnj;ಗೆ ಬೆಂಬಲ ನೀಡಿದೆ. ಈ ನಡುವೆ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ 7 ವರ್ಷಗಳ ದೋಸ್ತಿ ಕಡಿದುಬಿದ್ದಿದ್ದು, ಪರಸ್ಪರ 'ನಂಬಿಕೆ ದ್ರೋಹ'ದ ಆರೋಪಗಳು ಕೇಳಿಬರುತ್ತಿವೆ. ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ವಿಜಯ್ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಘೋಷಿಸಿವೆ. ಇವರು ಸಂಪುಟ ಸೇರುವುದಿಲ್ಲ. ಜಯ್ ಅವರ ಏಳಿಗೆಯನ್ನು ತಡೆಯಲು ಬದ್ಧವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಒಂದಾಗುತ್ತಿವೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಅಂತಹ 'ಅಪವಿತ್ರ ಮೈತ್ರಿ' ಸಾಧ್ಯವಿಲ್ಲ ಎಂದು ಎರಡೂ ಪಕ್ಷಗಳ ಹಿರಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಿಜೆಪಿ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ರಾಜ್ಯಪಾಲರ ಮೇಲೆ ಬಿಜೆಪಿ ಒತ್ತಡ ಹೇರುತ್ತಿದೆ ಎಂಬ ಆರೋಪಗಳನ್ನು ಪಕ್ಷದ ವಕ್ತಾರ ನಾರಾಯಣ ತಿರುಪತಿ ತಳ್ಳಿಹಾಕಿದ್ದಾರೆ. &quot;ಇದು ಅತಂತ್ರ ತೀರ್ಪು. ವಿಜಯ್ ಬಹುಮತ ಸಾಬೀತುಪಡಿಸಿದರೆ ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಒಪ್ಪುತ್ತಾರೆ. ಇಲ್ಲಿ ಯಾವುದೇ ಗೊಂದಲವಿಲ್ಲ&quot; ಎಂದು ಅವರು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಿಜಯ್ ಸಿಎಂ ಆಗುವ ಹಾದಿ ಮುಳ್ಳಿನ ಹಾದಿಯಂತಾಗಿದ್ದು, ನಾಳೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಸಾಧ್ಯವಿಲ್ಲ ಎಂದು ರಾಜ್ಯಪಾಲರ ಮೂಲಗಳು ಖಚಿತಪಡಿಸಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/governor-refuses-vijay-oath-taking-majority-mark-118-shortfall-tn-politics-san/articleshow-botzed5"/>
        </item>
        <item>
            <title><![CDATA[ಸಿಎಂ ಆಗೋಕು ಮುನ್ನವೇ ವಿಸಿಕೆ ಡಿಮಾಂಡ್‌ ಕೇಳಿ ಕಂಗಾಲಾದ ದಳಪತಿ ವಿಜಯ್‌, ಮೈತ್ರಿ ಉಳಿಯುತ್ತಾ?]]></title>
            <link>https://kannada.asianetnews.com/gallery/india-news/vck-demands-deputy-cm-post-vijay-tvk-coalition-government-tn-politics-san-yid44tp</link>
            <guid isPermaLink="true">https://kannada.asianetnews.com/gallery/india-news/vck-demands-deputy-cm-post-vijay-tvk-coalition-government-tn-politics-san-yid44tp</guid>
            <pubDate>Fri, 08 May 2026 21:12:44 +0530</pubDate>
            <description><![CDATA[ನಟ ವಿಜಯ್ ಅವರ ಟಿವಿಕೆ ಪಕ್ಷವು ಮೈತ್ರಿಕೂಟದ ವಿಸಿಕೆ ಪಕ್ಷದಿಂದ ಕಠಿಣ ಬೇಡಿಕೆಗಳನ್ನು ಎದುರಿಸುತ್ತಿದೆ. ಉಪಮುಖ್ಯಮಂತ್ರಿ ಹುದ್ದೆ, ಶಾಸಕ ಮತ್ತು ಸಂಸದ ಸ್ಥಾನಗಳು ಸೇರಿದಂತೆ ವಿಸಿಕೆಯ ಬೇಡಿಕೆಗಳು ವಿಜಯ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ, ಇದು ಮೈತ್ರಿಯ ಭವಿಷ್ಯದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr43xdhep9n757v5zj0xz0na,imgname-tvk-and-vck--5--1778254788142.jpeg" type="image/jpeg" height="390" width="690"/>
            <content:encoded><![CDATA[ನಟ ವಿಜಯ್ ಅವರ ಟಿವಿಕೆ ಪಕ್ಷವು ಮೈತ್ರಿಕೂಟದ ವಿಸಿಕೆ ಪಕ್ಷದಿಂದ ಕಠಿಣ ಬೇಡಿಕೆಗಳನ್ನು ಎದುರಿಸುತ್ತಿದೆ. ಉಪಮುಖ್ಯಮಂತ್ರಿ ಹುದ್ದೆ, ಶಾಸಕ ಮತ್ತು ಸಂಸದ ಸ್ಥಾನಗಳು ಸೇರಿದಂತೆ ವಿಸಿಕೆಯ ಬೇಡಿಕೆಗಳು ವಿಜಯ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ, ಇದು ಮೈತ್ರಿಯ ಭವಿಷ್ಯದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.&lt;img&gt;&lt;p&gt;ತಮಿಳುನಾಡು ರಾಜಕೀಯದ ಹೊಸ ಸೆನ್ಸೇಷನ್ ವಿಜಯ್ ಅವರ ಟಿವಿಕೆ (TVK) ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಮೈತ್ರಿ ಪಕ್ಷಗಳ 'ಡಿಮಾಂಡ್' ಲಿಸ್ಟ್ ನೋಡಿ ಕಂಗಾಲಾಗಿದೆ. ನೆನ್ನೆವರೆಗೂ 'ಬ್ರೋ' ಅಂದಿದ್ದ ಮಿತ್ರಪಕ್ಷ ವಿಸಿಕೆ (VCK), ಈಗ ಪಕ್ಕಾ 'ಬಿಸಿನೆಸ್' ಮೂಡ್&zwnj;ಗೆ ಬಂದಿದೆ. ವಿಸಿಕೆ ಇಟ್ಟಿರುವ ನಾಲ್ಕು ಬೇಡಿಕೆ ನೋಡಿ ಸ್ವತಃ ಕಂಗಾಲಾಗಿದ್ದಾರೆ. ಈ ಮೈತ್ರಿ ಐದು ವರ್ಷಗಳ ಕಾಲ ಉಳಿಯುತ್ತಾ ಅನ್ನೋದರ ಬಗ್ಗೆಯೇ ಸೋಷಿಯಲ್ ಮೀಡಿಯಾದಲ್ಲಿ ಡಿಬೇಟ್ ಶುರುವಾಗಿದೆ.&lt;/p&gt;&lt;img&gt;&lt;p&gt;ವಿಜಯ್ ಸಿಎಂ ಆಗೋದು ಓಕೆ, ಆದ್ರೆ ನಮಗೆ ಪವರ್&zwnj;ನಲ್ಲಿ ಶೇರ್ ಬೇಕು ಅನ್ನೋದು ವಿಸಿಕೆ ವಾದ. ಒಂದು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನದ ಜೊತೆಗೆ 'ಡೆಪ್ಯುಟಿ ಸಿಎಂ' ಪಟ್ಟವನ್ನೂ ವಿಸಿಕೆ ಕೇಳುತ್ತಿದೆ. ಅಂದ್ರೆ ಪವರ್ ಇಬ್ಬರ ನಡುವೆ ಡಿವೈಡ್ ಆಗಬೇಕು ಅನ್ನೋದು ಪಕ್ಕಾ ಪ್ಲಾನ್.&lt;/p&gt;&lt;img&gt;&lt;p&gt;ವಿಜಯ್ ಎರಡು ಕಡೆ ಗೆದ್ದಿರೋದ್ರಿಂದ ಒಂದು ಸೀಟನ್ನು ಬಿಟ್ಟುಕೊಡಲೇಬೇಕು. ಆ ಖಾಲಿಯಾಗುವ ಎಂಎಲ್&zwnj;ಎ ಸೀಟ್ ನಮಗೆ ಬೇಕು ಅಂತ ವಿಸಿಕೆ ಪಟ್ಟು ಹಿಡಿದಿದೆ. ಅಂದ್ರೆ ವಿಜಯ್ ಕ್ಷೇತ್ರದಲ್ಲಿ ವಿಸಿಕೆ ಬಾವುಟ ಹಾರಿಸೋದು ಇವರ ಐಡಿಯಾ.&lt;/p&gt;&lt;img&gt;&lt;p&gt;ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಳವನ್ ಕ್ಯಾಬಿನೆಟ್ ಸೇರೋದು ಪಕ್ಕಾ ಆದ್ರೆ, ಅವರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತೆ. ಆ ಎಂಪಿ ಸೀಟನ್ನೂ ನಮಗೇ ಕೊಡಬೇಕು ಅನ್ನೋದು ವಿಸಿಕೆ ಡಿಮಾಂಡ್. ಅಂದ್ರೆ ವಿಧಾನಸಭೆ ಇರಲಿ, ಲೋಕಸಭೆಯಲ್ಲೂ ಪವರ್ ನಮಗೇ ಇರಲಿ ಅನ್ನೋ ಲಾಜಿಕ್ ಇಲ್ಲಿದೆ.&lt;/p&gt;&lt;img&gt;&lt;p&gt;ಇದು ಕೇವಲ ಸೀಟ್ ಪಾಲಿಟಿಕ್ಸ್ ಅಲ್ಲ, ಸಿದ್ಧಾಂತವೂ ಹೌದು. ಎಸ್&zwnj;ಸಿ ಸಮುದಾಯದ ಏಳಿಗೆಗಾಗಿ ಒಂದು ವಿಶೇಷ ಶಾಸಕಾಂಗ ಕಾಯ್ದೆಯನ್ನು ತರಲೇಬೇಕು ಎಂಬ ಕಂಡೀಷನ್ ಹಾಕಿದೆ. ರಾಜಕಾರಣದಲ್ಲಿ ಯಾರೂ ಫ್ರೀಯಾಗಿ ಬೆಂಬಲ ಕೊಡಲ್ಲ. ಪ್ರತಿಯೊಂದು ವೋಟ್&zwnj;ಗೂ ಒಂದು ಪ್ರೈಸ್ ಟ್ಯಾಗ್ ಇದೆ. ವಿಜಯ್ ಈಗ ಕೇವಲ ಆಕ್ಟರ್ ಅಲ್ಲ, ಒಬ್ಬ ಪಕ್ಕಾ ಡೀಲ್ ಮೇಕರ್ ಆಗಬೇಕಾದ ಅನಿವಾರ್ಯತೆ ಇದೆ. ಮೈತ್ರಿ ಗಾಡಿ ಸ್ಮೂತ್ ಆಗಿ ಸಾಗುತ್ತಾ ಅಥವಾ ಸ್ಟಾರ್ಟಿಂಗ್&zwnj;ನಲ್ಲೇ ಬ್ರೇಕ್ ಬೀಳುತ್ತಾ ಅನ್ನೋದೇ ಮುಂದಿನ ಪ್ರಶ್ನೆಯಾಗಿದೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/vck-demands-deputy-cm-post-vijay-tvk-coalition-government-tn-politics-san-yid44tp"/>
        </item>
        <item>
            <title><![CDATA[ರಾಜ್ಯದಲ್ಲಿ ಎನ್‌ಫೀಲ್ಡ್‌ ಶೋರೂಮ್‌ ಮೇಲೆ ಕನ್ನಡ ಕಾರ್ಯರ್ಕತರ ದಾಳಿ, ಇನ್ನೊಂದೆಡೆ ಆಂಧ್ರದಲ್ಲಿ ಭಾರೀ ಹೂಡಿಕೆ ಘೋಷಿಸಿದ ಕಂಪನಿ!]]></title>
            <link>https://kannada.asianetnews.com/business/royal-enfield-new-plant-andhra-pradesh-2200-crore-karnataka-showroom-protest-san/articleshow-g4rx119</link>
            <guid isPermaLink="true">https://kannada.asianetnews.com/business/royal-enfield-new-plant-andhra-pradesh-2200-crore-karnataka-showroom-protest-san/articleshow-g4rx119</guid>
            <pubDate>Fri, 08 May 2026 20:31:56 +0530</pubDate>
            <description><![CDATA[&lt;p&gt;ರಾಯಲ್ ಎನ್&zwnj;ಫೀಲ್ಡ್ ಸಂಸ್ಥೆಯು ಆಂಧ್ರಪ್ರದೇಶದಲ್ಲಿ ₹2200 ಕೋಟಿ ವೆಚ್ಚದ ಬೃಹತ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ, ಇದು 5000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ. ಇದೇ ಸಮಯದಲ್ಲಿ, ಕರ್ನಾಟಕದ ಕೋಲಾರದಲ್ಲಿ ನಾಮಫಲಕ ವಿಚಾರವಾಗಿ ರಾಯಲ್ ಎನ್&zwnj;ಫೀಲ್ಡ್ ಶೋರೂಮ್ ದಾಳಿ ನಡೆಸಿದ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr41h97bggckh5240t01rdh2,imgname-royal-enfield-andhra-pradesh-1778252293355.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.8): &lt;/strong&gt;ಒಂದೆಡೆ ರಾಜ್ಯದಲ್ಲಿ ಕನ್ನಡ ಕಾರ್ಯಕರ್ತರು ರಾಯಲ್&zwnj; ಎನ್&zwnj;ಫೀಲ್ಡ್&zwnj; ಶೋರೂಮ್&zwnj;ನಲ್ಲಿ ಕನ್ನಡ ವಿಚಾರವಾಗಿ ದಾಳಿ ಮಾಡಿರುವ ದಿನವೇ ಕಂಪನಿ ಆಂಧ್ರಪ್ರದೇಶದಲ್ಲಿ ತನ್ನ ಮೇಜರ್&zwnj; ಪ್ಲ್ಯಾಂಟ್&zwnj; ಘೋಷಣೆ ಮಾಡಿದೆ. ಈ ಎರಡೂ ವಿಚಾರ ಕಾಕತಾಳೀಯವಾಗಿದ್ದರೂ, ಹೂಡಿಕೆಯ ವಿಚಾರದಲ್ಲಿ ಕರ್ನಾಟಕ ಮತ್ತೊಂದು ಪ್ರಮುಖ ಅವಕಾಶವನ್ನು ತಪ್ಪಿಸಿಕೊಂಡಂತಾಗಿದೆ. ಅದಾಗಲೇ ತಮಿಳುನಾಡಿನಲ್ಲಿ ಒಂದು ಉತ್ಪಾದನಾ ಘಟಕ ಹೊಂದಿರುವ ರಾಯಲ್&zwnj; ಎನ್&zwnj;ಫೀಲ್ಡ್&zwnj; ತಮಿಳುನಾಡು ಹೊರತಾಗಿ ಮತ್ತೊಂದು ರಾಜ್ಯದಲ್ಲಿ ಉತ್ಪಾದನಾ ಘಟಕವನ್ನು ತೆರೆಯುವ ಬಗ್ಗೆ ವರ್ಷಗಳ ಹಿಂದೆ ವಿಚಾರ ಮಾಡಿತ್ತು. ಈಗ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ನೀಡಿದ ಆಫರ್&zwnj; ಒಪ್ಪಿರುವ ಕಂಪನಿ, ಅಂದಾಜು 2200 ಕೋಟಿ ರೂಪಾಯಿ ಹೂಡಿಕೆಯ ಪ್ಲ್ಯಾಂಟ್&zwnj;ಅನ್ನು ರಾಯಲ್&zwnj;ಸೀಮಾ ಭಾಗದಲ್ಲಿ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಂಡಿದೆ.&lt;/p&gt;&lt;p&gt;ಖ್ಯಾತ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ 'ರಾಯಲ್ ಎನ್&zwnj;ಫೀಲ್ಡ್' (Royal Enfield), ಆಂಧ್ರಪ್ರದೇಶದಲ್ಲಿ ತನ್ನ ನೂತನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. 1950ರ ದಶಕದಲ್ಲಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರ, ಕಂಪನಿಯು ತಮಿಳುನಾಡಿನಿಂದ ಹೊರಗೆ ಸ್ಥಾಪಿಸುತ್ತಿರುವ ಮೊದಲ ಬೃಹತ್ ಉತ್ಪಾದನಾ ಘಟಕ ಇದಾಗಲಿದೆ.&lt;/p&gt;&lt;p&gt;ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಯ ಸಮೀಪವಿರುವ ತಿರುಪತಿ ಜಿಲ್ಲೆಯ ಸತ್ಯವೇಡು ಎಂಬಲ್ಲಿ ಈ ನೂತನ ಘಟಕ ತಲೆ ಎತ್ತಲಿದೆ. ಆಂಧ್ರಪ್ರದೇಶ ರಾಜ್ಯ ಹೂಡಿಕೆ ಉತ್ತೇಜನಾ ಮಂಡಳಿಯ (SIPB) ಭಾಗವಾಗಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಯೋಜನೆಗೆ ವೈಯಕ್ತಿಕವಾಗಿ ಅನುಮೋದನೆ ನೀಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;5 ಸಾವಿರಕ್ಕೂ ಅಧಿಕ ಉದ್ಯೋಗ&lt;/strong&gt;&lt;/h2&gt;&lt;p&gt;ಎರಡು ಹಂತಗಳಲ್ಲಿ ಕಂಪನಿಯು ಸುಮಾರು 2,200 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಈ ಘಟಕವು ವಾರ್ಷಿಕ 9 ಲಕ್ಷ ಯುನಿಟ್&zwnj;ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರಲಿದೆ. ಈ ಯೋಜನೆಯಿಂದ ಈ ಭಾಗದಲ್ಲಿ ಸುಮಾರು 5,000 ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.&lt;/p&gt;&lt;h2&gt;&lt;strong&gt;ವೆಂಡರ್ ಪಾರ್ಕ್ ಸೌಲಭ್ಯ&lt;/strong&gt;&lt;/h2&gt;&lt;p&gt;ಕಂಪನಿಗೆ ಸುಮಾರು 267 ಎಕರೆ ಭೂಮಿಯನ್ನು ನಿಗದಿಪಡಿಸಲಾಗಿದ್ದು, ಉತ್ಪಾದನಾ ಘಟಕದ ಜೊತೆಗೆ ಪ್ರತ್ಯೇಕ 'ವೆಂಡರ್ ಪಾರ್ಕ್' (Vendor Park) ಅನ್ನು ಕೂಡ ಇಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಬಿಡಿಭಾಗಗಳ ಪೂರೈಕೆ ವ್ಯವಸ್ಥೆ ಸುಗಮವಾಗಲಿದ್ದು, ಸಾರಿಗೆ ವೆಚ್ಚ ಕಡಿಮೆಯಾಗುವುದಲ್ಲದೆ ಉತ್ಪಾದನಾ ಪ್ರಕ್ರಿಯೆಯೂ ವೇಗವನ್ನು ಪಡೆದುಕೊಳ್ಳಲಿದೆ.&lt;/p&gt;&lt;h2&gt;&lt;strong&gt;ಯೋಜನೆಯ ಕಾಲಮಿತಿ&lt;/strong&gt;&lt;/h2&gt;&lt;p&gt;ರಾಯಲ್ ಎನ್&zwnj;ಫೀಲ್ಡ್&zwnj;ನ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತವು 2029 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಮತ್ತು ಎರಡನೇ ಹಂತವು 2032 ರ ವೇಳೆಗೆ ಪೂರ್ಣಗೊಳ್ಳಲಿದೆ. ಪ್ರಸ್ತುತ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ರಾಯಲ್ ಎನ್&zwnj;ಫೀಲ್ಡ್ ಬೈಕ್&zwnj;ಗಳಿಗೆ ಇರುವ ಭಾರಿ ಬೇಡಿಕೆಯನ್ನು ಪೂರೈಸಲು ಈ ಘಟಕವು ಪೂರಕವಾಗಲಿದೆ.&lt;/p&gt;&lt;h2&gt;&lt;strong&gt;ಕೋಲಾರದಲ್ಲಿ ರಾಯಲ್&zwnj; ಎನ್&zwnj;ಫೀಲ್ಡ್&zwnj; ಶೋರೂಮ್&zwnj; ಮೇಲೆ ದಾಳಿ&lt;/strong&gt;&lt;/h2&gt;&lt;p&gt;ಒಂದೆಡೆ ಕಂಪನಿ ತನ್ನ ಪ್ರಮುಖ ಉತ್ಪಾದನಾ ಘಟಕವನ್ನು ಘೋಷಣೆ ಮಾಡಿರುವ ದಿನವೇ ಸೋಶಿಯಲ್&zwnj; ಮೀಡಿಯಾದಲ್ಲಿ ಕರ್ನಾಟಕದ ಕೋಲಾರದಲ್ಲಿರುವ ರಾಯಲ್&zwnj; ಎನ್&zwnj;ಫೀಲ್ಡ್&zwnj; ಶೋರೂಮ್&zwnj; ಮೇಲೆ ಕನ್ನಡ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಕನ್ನಡ ನಾಮಫಲಕದ ವಿಚಾರವಾಗಿ ದಾಳಿ ಮಾಡಿರುವ ಕರ್ನಾಟಕ ನಾಡು ನುಡಿ ಸ್ವಾಭಿಮಾನಿ ವೇದಿಕೆ, ಶೋರೂಮ್&zwnj;ನ ಅಧಿಕಾರಿಗಳಿಗೆ ನೋಟಿಸ್&zwnj; ನೀಡಿ ಎಚ್ಚರಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/business/royal-enfield-new-plant-andhra-pradesh-2200-crore-karnataka-showroom-protest-san/articleshow-g4rx119"/>
        </item>
        <item>
            <title><![CDATA[Breaking: ದಳಪತಿ ವಿಜಯ್‌ಗೆ ಕೊನೆಗೂ ಸಿಕ್ತು ರಾಜ್ಯಪಾಲರ ಗ್ರೀನ್‌ಸಿಗ್ನಲ್‌, ನಾಳೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ]]></title>
            <link>https://kannada.asianetnews.com/gallery/india-news/thalapathy-vijay-tvk-governor-approval-oath-taking-tomorrow-san-lphaxpk</link>
            <guid isPermaLink="true">https://kannada.asianetnews.com/gallery/india-news/thalapathy-vijay-tvk-governor-approval-oath-taking-tomorrow-san-lphaxpk</guid>
            <pubDate>Fri, 08 May 2026 19:44:20 +0530</pubDate>
            <description><![CDATA[&lt;p&gt;ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ, ನಟ ವಿಜಯ್ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ಈ ಐತಿಹಾಸಿಕ ಬೆಳವಣಿಗೆಯೊಂದಿಗೆ, ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಂತಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3ytdz6f4479aarnjnr5kj1,imgname-thalapathy-vijay--1--1778249447396.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ, ನಟ ವಿಜಯ್ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ಈ ಐತಿಹಾಸಿಕ ಬೆಳವಣಿಗೆಯೊಂದಿಗೆ, ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಂತಾಗಿದೆ.&lt;/p&gt;&lt;img&gt;&lt;p&gt;ತಮಿಳುನಾಡು ರಾಜಕೀಯದಲ್ಲಿ ಸೃಷ್ಟಿಯಾಗಿದ್ದ ಸುದೀರ್ಘ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ ಮತ್ತು ಸೂಪರ್ ಸ್ಟಾರ್ ವಿಜಯ್ ಅವರು ರಾಜ್ಯದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅಧಿಕೃತವಾಗಿ ಸಮ್ಮತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ವಿಜಯ್ ಅವರು ನಾಳೆ (ಶನಿವಾರ) ಬೆಳಿಗ್ಗೆ 11 ಗಂಟೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾದ ವಿಜಯ್, ತಮ್ಮ ಮೈತ್ರಿಕೂಟಕ್ಕೆ ಇರುವ 118 ಶಾಸಕರ ಬೆಂಬಲದ ಪತ್ರವನ್ನು ಹಸ್ತಾಂತರಿಸಿದ್ದರು. ಸಂಖ್ಯಾಬಲದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ರಾಜ್ಯಪಾಲರು, ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.&lt;/p&gt;&lt;img&gt;&lt;p&gt;ಈ ಐತಿಹಾಸಿಕ ಕ್ಷಣದೊಂದಿಗೆ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಏಕಸ್ವಾಮ್ಯ ಅಂತ್ಯಗೊಂಡು, ಹೊಸ ಮೈತ್ರಿ ಸರ್ಕಾರದ ಆಡಳಿತ ಆರಂಭವಾಗಲಿದೆ. ನಾಳೆಯ ಸಮಾರಂಭದಲ್ಲಿ ವಿಜಯ್ ಅವರೊಂದಿಗೆ ಮಿತ್ರಪಕ್ಷಗಳಾದ ಕಾಂಗ್ರೆಸ್, ವಿಸಿಕೆ ಮತ್ತು ಎಡಪಕ್ಷಗಳ ಕೆಲವು ನಾಯಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಚೆನ್ನೈನಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಲಕ್ಷಾಂತರ ಅಭಿಮಾನಿಗಳು ತಮ್ಮ 'ದಳಪತಿ' ಮುಖ್ಯಮಂತ್ರಿ ಆಗುವುದನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ. ಇದರ ನಡುವೆ ಟಿವಿಕೆ ಸದಸ್ಯರು ರಾಜ್ಯಪಾಲರು ಸರ್ಕಾರ ರಚಿಸಲು ಅನುಮತಿ ನೀಡದ ಕಾರಣಕ್ಕೆ ಸುಪ್ರೀಂ ಕೋರ್ಟ್&zwnj; ಕದ ತಟ್ಟಿದ್ದರು. &lsquo;ಪಕ್ಷವು 118 ಸಹಿಗಳನ್ನು ಸ್ವೀಕರಿಸಿದ್ದು, ನಾಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ&rsquo; ಎಂದು ಹಿರಿಯ ಟಿವಿಕೆ ನಾಯಕ ಕೆ. ಸೆಂಗೋಟ್ಟಯನ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ವಿಜಯ್&zwnj; ಜೋಸೆಫ್&zwnj; ಅವರ ಟಿವಿಕೆ ಪಕ್ಷಕ್ಕೆ ಮೊದಲಿಗರಾಗಿ ಬೆಂಬಲ ನೀಡಿದ್ದ ಕಾಂಗ್ರೆಸ್&zwnj; ಪಕ್ಷದಿಂದ ವಿರೋಧ ಪಕ್ಷದ ನಾಯಕ ರಾಹುಲ್&zwnj; ಗಾಂಧಿ ಹಾಗೂ ಕಾಂಗ್ರೆಸ್&zwnj; ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/thalapathy-vijay-tvk-governor-approval-oath-taking-tomorrow-san-lphaxpk"/>
        </item>
        <item>
            <title><![CDATA[Tamilu Nadu Breaking: ವಿಜಯ್​ ಮ್ಯಾಜಿಕ್​ ನಂಬರ್​ ದಾಟಿದ್ರೂ, 'ಸುಪ್ರೀಂ' ಮೆಟ್ಟಿಲೇರಿದ ಟಿವಿಕೆ- ಮುಂದೇನು?]]></title>
            <link>https://kannada.asianetnews.com/politics/tvk-functionary-moves-sc-seeking-direction-to-tn-governor-to-swear-in-vijay-as-cm-suc/articleshow-hywgwl1</link>
            <guid isPermaLink="true">https://kannada.asianetnews.com/politics/tvk-functionary-moves-sc-seeking-direction-to-tn-governor-to-swear-in-vijay-as-cm-suc/articleshow-hywgwl1</guid>
            <pubDate>Fri, 08 May 2026 19:27:52 +0530</pubDate>
            <description><![CDATA[ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಮಿತ್ರಪಕ್ಷಗಳ ಬೆಂಬಲದೊಂದಿಗೆ ಬಹುಮತ ಪಡೆದಿದೆ. ಆದಾಗ್ಯೂ, ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸದ ಕಾರಣ, ವಿಜಯ್ ಅವರನ್ನು ಆಹ್ವಾನಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್&zwnj;ನಲ್ಲಿ ಅರ್ಜಿ ಸಲ್ಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3y120zxrmaf6mb4vznazj8,imgname-thalapathy-vijay-1778248615967.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳನಾಡು ರಾಜಕೀಯದಲ್ಲಿ ಮತ್ತೆ ಕೋಲಾಹಲ ಎಬ್ಬಿದೆ. ಇತ್ತ ಭಾವಿ ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಅವರು, ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮ್ಯಾಜಿಕ್​ ನಂಬರ್​ ಅವರಿಗೆ ಸಿಕ್ಕಿದೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ 118 ಸ್ಥಾನಗಳಲ್ಲಿ ಜಯಗಳಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ, ಕಾಂಗ್ರೆಸ್&zwnj; (5), ವಿಸಿಕೆ (2), ಸಿಪಿಐ (2) ಮತ್ತು ಸಿಪಿಎಂ (2) ಪಕ್ಷಗಳು ಬೆಂಬಲ ಘೋಷಿಸಿವೆ. ಹೀಗಾಗಿ ವಿಧಾನಸಭೆಯಲ್ಲಿ ವಿಜಯ್&zwnj; ಸಂಖ್ಯಾಬಲ 119 ಆಗಿದೆ. ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯ್&zwnj;, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದು, ಟಿವಿಕೆ ಮೈತ್ರಿಕೂಟದ ಸಂಖ್ಯಾಬಲ 118 ಆಗಲಿದೆ. ಇದು ಸರಳ ಬಹುಮತದ ಸಂಖ್ಯಾಬಲವಾಗಿದೆ.&lt;/p&gt;&lt;p&gt;ಆದರೆ, ಕುತೂಹಲ ಎನ್ನುವಂತೆ ಅದೇ ಇನ್ನೊಂದೆಡೆ, ಟಿವಿಕೆ ನಾಯಕ ಸಿ ಜೋಸೆಫ್ ವಿಜಯ್ ಅವರನ್ನು ರಾಜ್ಯದಲ್ಲಿ ಸರ್ಕಾರ ರಚಿಸಲು ಆಹ್ವಾನಿಸುವಂತೆ ನಿರ್ದೇಶಿಸಬೇಕೆಂದು ಸುಪ್ರೀಂ ಕೋರ್ಟ್&zwnj;ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಟಿವಿಕೆಯ ಸಕ್ರಿಯ ಸದಸ್ಯೆ ಎಂದು ಕರೆದುಕೊಳ್ಳುವ ವಕೀಲೆ ಕೆ. ಎಳಿಲರಸಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸದನಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಅರ್ಜಿಯಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 59 ಸ್ಥಾನಗಳನ್ನು ಗೆದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) 47 ಸ್ಥಾನ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದಿದೆ. ಪಿಎಂಕೆ, ಐಯುಎಂಎಲ್, ಸಿಪಿಐ, ವಿಸಿಕೆ, ಸಿಪಿಐ(ಎಂ), ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ಸೇರಿದಂತೆ ಇತರ ಪಕ್ಷಗಳು ಉಳಿದ ಸ್ಥಾನಗಳನ್ನು ಗೆದ್ದವು. 234 ಸದಸ್ಯರ ವಿಧಾನಸಭೆಯಲ್ಲಿ 108 ಸ್ಥಾನಗಳೊಂದಿಗೆ ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರ ಹೊರತಾಗಿಯೂ ಶಾಸಕರ ಕೊರತೆಯಿಂದ ಸರ್ಕಾರ ರಚಿಸಲು ಆಗುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;&lt;strong&gt;ರಾಜ್ಯಪಾಲರಿಂದ ನಕಾರ&lt;/strong&gt;&lt;/h3&gt;&lt;p&gt;ಪಕ್ಷದ ಮುಖ್ಯಸ್ಥ ವಿಜಯ್ ಮೇ 7 ರಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಆದರೆ, ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ಮೊದಲು ತಮಗೆ ಬಹುಮತದ ಬೆಂಬಲವಿದೆ (118 ಶಾಸಕರ ಬೆಂಬಲ) ಎಂದು ಸಾಬೀತುಪಡಿಸುವಂತೆ ಕೇಳಿಕೊಂಡರು. ಇದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದ.&lt;/p&gt;&lt;h3&gt;&lt;strong&gt;ಅರ್ಜಿಯಲ್ಲಿ ಏನಿದೆ?&lt;/strong&gt;&lt;/h3&gt;&lt;p&gt;ಯಾವುದೇ ಚುನಾವಣಾ ಪೂರ್ವ ಮೈತ್ರಿಕೂಟವು ಬಹುಮತವನ್ನು ಗಳಿಸದ ಕಾರಣ, ರಾಜ್ಯಪಾಲರು ಏಕೈಕ ಅತಿದೊಡ್ಡ ಪಕ್ಷವಾಗಿರುವ ಟಿವಿಕೆಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಮತ್ತು ನಂತರ ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಸದನವು ಬಹುಮತದ ಹಕ್ಕನ್ನು ಪರೀಕ್ಷಿಸಲು ಏಕೈಕ ಕಾನೂನುಬದ್ಧ ಸ್ಥಳವಾಗಿದೆ. ರಾಜ್ಯಪಾಲರಿಗೆ ನೀಡಲಾದ ಯಾವುದೇ ಪತ್ರ, ಅಫಿಡವಿಟ್ ಅಥವಾ ಬೆಂಬಲ ದಾಖಲೆಯು ವಿಧಾನಸಭೆಯಲ್ಲಿ ಮತವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಅರ್ಜಿಯಲ್ಲಿ ಎಸ್.ಆರ್. ಬೊಮ್ಮಾಯಿ v/s ಭಾರತ ಒಕ್ಕೂಟ, ಜಗದಾಂಬಿಕಾ ಪಾಲ್ v/s ಭಾರತ ಒಕ್ಕೂಟ, ಚಂದ್ರಕಾಂತ್ ಕವ್ಲೇಕರ್ v/s ಭಾರತ ಒಕ್ಕೂಟ, ಜಿ. ಪರಮೇಶ್ವರ v/s ಭಾರತ ಒಕ್ಕೂಟ ಮತ್ತು ಶಿವರಾಜ್ ಸಿಂಗ್ ಚೌಹಾಣ್ v/s ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಆಧರಿಸಿ ಇಲ್ಲಿಯೂ ಅದೇ ರೀತಿ ಮಾಡುವಂತೆ ಕೋರಲಾಗಿದೆ.&lt;/p&gt;&lt;h3&gt;&lt;strong&gt;ಪ್ರಜಾಪ್ರಭುತ್ವದ ಆದೇಶದ ಮೇಲೆ ಪರಿಣಾಮ&lt;/strong&gt;&lt;/h3&gt;&lt;p&gt;ಸರ್ಕಾರ ರಚಿಸಲು ಪಕ್ಷವನ್ನು ಆಹ್ವಾನಿಸುವುದು ಮಾತ್ರ ರಾಜ್ಯಪಾಲರ ಪಾತ್ರ, ಅಂತಹ ಆಹ್ವಾನವನ್ನು ನೀಡುವ ಮೊದಲು ಬಹುಮತದ ಪೂರ್ಣ ಪುರಾವೆಯನ್ನು ಕೋರಬಾರದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆಹ್ವಾನ ನೀಡುವ ಮೊದಲು 118 ಶಾಸಕರಿಂದ ಪತ್ರಗಳನ್ನು ಸಲ್ಲಿಸುವಂತೆ ಒತ್ತಾಯಿಸುವುದು ಸಾಂವಿಧಾನಿಕ ಅನುಕ್ರಮವನ್ನು ತಲೆಕೆಳಗು ಮಾಡುತ್ತದೆ&quot; ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸರ್ಕಾರ ರಚಿಸಲು ರಾಜ್ಯಪಾಲರು ಬೇರೆ ಯಾವುದೇ ವ್ಯಕ್ತಿಯನ್ನು ಆಹ್ವಾನಿಸದಂತೆ ತಡೆಯಲು ಮಧ್ಯಂತರ ಅರ್ಜಿಯನ್ನು ಸಹ ಸಲ್ಲಿಸಲಾಗಿದೆ. ವಿಜಯ್ ಹೊರತುಪಡಿಸಿ ಬೇರೆಯವರಿಗೆ ಆಹ್ವಾನ ನೀಡುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿರುತ್ತದೆ ಮತ್ತು ತಮಿಳುನಾಡಿನ ಜನರ ಪ್ರಜಾಪ್ರಭುತ್ವದ ಆದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/politics/tvk-functionary-moves-sc-seeking-direction-to-tn-governor-to-swear-in-vijay-as-cm-suc/articleshow-hywgwl1"/>
        </item>
        <item>
            <title><![CDATA[ವಿಜಯ್ ಜೊತೆಗಿನ ಕಾಂಗ್ರೆಸ್ ಮೈತ್ರಿ 'ಅನೈತಿಕ', ಗಾಂಧಿ ತತ್ವಕ್ಕೆ ಮಾಡಿದ ಅವಮಾನ;  ಕೈ ನಾಯಕ ಮಣಿಶಂಕರ್ ಅಯ್ಯರ್ ಕಿಡಿ!]]></title>
            <link>https://kannada.asianetnews.com/india-news/immorality-of-joining-vijay-mani-shankar-aiyar-targets-congress-over-tvk-tie-up/articleshow-rr0kfns</link>
            <guid isPermaLink="true">https://kannada.asianetnews.com/india-news/immorality-of-joining-vijay-mani-shankar-aiyar-targets-congress-over-tvk-tie-up/articleshow-rr0kfns</guid>
            <pubDate>Fri, 08 May 2026 18:52:57 +0530</pubDate>
            <description><![CDATA[&lt;p&gt;ದಶಕಗಳ ಕಾಲದ ಮಿತ್ರಪಕ್ಷ ಡಿಎಂಕೆ (DMK) ಕೈಬಿಟ್ಟು, ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ನಿರ್ಧಾರವನ್ನು 'ಅನೈತಿಕ' ಮತ್ತು 'ರಾಜಕೀಯ ಅವಕಾಶವಾದಿತನ' ಕಾಂಗ್ರೆಸ್&zwnj;ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಟೀಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3w2cpq17y15z1anv9wr7x0,imgname-mani-shankar-aiyar-1778246562519.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ 08): ತ&lt;/strong&gt;ಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ದಶಕಗಳ ಕಾಲದ ಮಿತ್ರಪಕ್ಷ ಡಿಎಂಕೆ (DMK) ಕೈಬಿಟ್ಟು, ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ನಿರ್ಧಾರಕ್ಕೆ ಈಗ ಪಕ್ಷದ ಒಳಗಡೆಯೇ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್&zwnj;ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ತಮ್ಮದೇ ಪಕ್ಷದ ಈ ನಡೆಯನ್ನು 'ಅನೈತಿಕ' ಮತ್ತು 'ರಾಜಕೀಯ ಅವಕಾಶವಾದಿತನ' ಎಂದು ಕಟುವಾಗಿ ಟೀಕಿಸಿದ್ದಾರೆ.&lt;/p&gt;&lt;h3&gt;&lt;strong&gt;ಗಾಂಧೀಜಿಯ ತತ್ವಗಳಿಗೆ ವಿರುದ್ಧವಾದ ನಡೆ:&lt;/strong&gt;&lt;/h3&gt;&lt;p&gt;ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಮಣಿಶಂಕರ್ ಅಯ್ಯರ್, 'ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದು ಅತ್ಯಂತ ಘೋರವಾದ ನಡೆ. ಇದು ಕೀಳುಮಟ್ಟದ ರಾಜಕೀಯ ಅವಕಾಶವಾದಿತನವನ್ನು ಪ್ರದರ್ಶಿಸುತ್ತದೆ. 1925ರಲ್ಲಿ ಮಹಾತ್ಮ ಗಾಂಧೀಜಿಯವರು 'ಸ್ವರಾಜ್ಯ ಎಂಬುದು ನೈತಿಕತೆಯ ಆಧಾರದ ಮೇಲೆ ರಚಿತವಾದ ಸರ್ಕಾರವಾಗಿರಬೇಕು' ಎಂದು ಹೇಳಿದ್ದರು. ಆದರೆ, ಇಂದು ಕಾಂಗ್ರೆಸ್ ಹಡಗು ಬದಲಿಸುವ ಮೂಲಕ ಗಾಂಧೀಜಿಯವರ ಆ ಆಶಯವನ್ನೇ ಗಾಳಿಗೆ ತೂರಿದೆ' ಎಂದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h3&gt;&lt;strong&gt;ಡಿಎಂಕೆಗೆ ಮಾಡಿದ ದ್ರೋಹವೇ?&lt;/strong&gt;&lt;/h3&gt;&lt;p&gt;ಕಳೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ತಮಿಳುನಾಡಿನಲ್ಲಿ ಡಿಎಂಕೆಯ ಕಿರಿಯ ಪಾಲುದಾರನಾಗಿ ಗುರುತಿಸಿಕೊಂಡಿತ್ತು. 'ಕಾಂಗ್ರೆಸ್ ಇಂದು ಗೆದ್ದಿರುವ ಐದು ಸ್ಥಾನಗಳು ಅದರ ಸ್ವಂತ ಶಕ್ತಿಯಿಂದ ಬಂದಿದ್ದಲ್ಲ, ಬದಲಿಗೆ ಡಿಎಂಕೆಯೊಂದಿಗಿನ ದಶಕಗಳ ಕಾಲದ ಮೈತ್ರಿಯ ಬಲದಿಂದ ಬಂದಿದ್ದು. ಇಂತಹ ಪರಿಸ್ಥಿತಿಯಲ್ಲಿ ವಿಜಯ್ ಜೊತೆ ಕೈಜೋಡಿಸಿರುವುದು ಡಿಎಂಕೆಗೆ ಮಾಡಿದ ದ್ರೋಹ. ಇನ್ನು ಮುಂದೆ ನಮ್ಮನ್ನು ಯಾರು ತಾನೇ ನಂಬುತ್ತಾರೆ?' ಎಂದು ಅಯ್ಯರ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್&zwnj;ನ ಈ ನಡೆಯನ್ನು ಡಿಎಂಕೆ ಈಗಾಗಲೇ 'ಬೆನ್ನಿಗೆ ಇರಿದ ಕೆಲಸ' ಎಂದು ಕರೆದಿದೆ.&lt;/p&gt;&lt;h2&gt;&lt;strong&gt;ಬಿಜೆಪಿಗೆ ಹಿತ್ತಲ ಬಾಗಿಲ ಪ್ರವೇಶದ ಭೀತಿ:&lt;/strong&gt;&lt;/h2&gt;&lt;p&gt;ಮಣಿಶಂಕರ್ ಅಯ್ಯರ್ ಅವರ ಮತ್ತೊಂದು ಪ್ರಮುಖ ಆತಂಕವೆಂದರೆ ಅದು ಬಿಜೆಪಿಯ ಪ್ರವೇಶ. 'ದ್ರಾವಿಡ ನೆಲದ ರಾಜಕೀಯ ಸಂಸ್ಕೃತಿಯಲ್ಲಿ ಕಾಂಗ್ರೆಸ್&zwnj;ನ ಈ ಎಡವಟ್ಟು ಬಿಜೆಪಿಗೆ ಹಿತ್ತಲ ಬಾಗಿಲಿನಿಂದ ಪ್ರವೇಶ ನೀಡುವಂತೆ ಮಾಡಬಹುದು. ಇದು ರಾಜಕೀಯ ಫುಟ್&zwnj;ಬಾಲ್ ಇತಿಹಾಸದಲ್ಲಿ ನಮ್ಮ ವಿರುದ್ಧವೇ ನಾವೇ ಹೊಡೆದುಕೊಂಡ 'ಸೆಲ್ಫ್ ಗೋಲ್' ಆಗಲಿದೆ' ಎಂದು ಅವರು ಎಚ್ಚರಿಸಿದ್ದಾರೆ. ಅಸ್ಥಿರ ಸರ್ಕಾರ ಅಥವಾ ಮೈತ್ರಿಕೂಟದ ಗೊಂದಲವು ಬಿಜೆಪಿಯಂತಹ ಪಕ್ಷಗಳಿಗೆ ಲಾಭವಾಗಬಹುದು ಎಂಬುದು ಅವರ ವಾದ.&lt;/p&gt;&lt;h3&gt;&lt;strong&gt;ಸಂಖ್ಯಾಬಲದ ಲೆಕ್ಕಾಚಾರ:&lt;/strong&gt;&lt;/h3&gt;&lt;p&gt;ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ವಿಜಯ್ ಅವರ ಟಿವಿಕೆ ಒಂಟಿಯಾಗಿ 108 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್&zwnj;ನ 5 ಶಾಸಕರು ಬೆಂಬಲ ನೀಡಿದರೂ ಸಂಖ್ಯೆ 113ಕ್ಕೆ ಏರುತ್ತದೆ, ಇದು ಮ್ಯಾಜಿಕ್ ನಂಬರ್&zwnj;ಗಿಂತ ಐದು ಸ್ಥಾನ ಕಡಿಮೆ. ಆದರೆ, ಮೂಲಗಳ ಪ್ರಕಾರ ವಿಸಿಪಿ (2), ಸಿಪಿಐ (2) ಮತ್ತು ಸಿಪಿಎಂ (4) ಪಕ್ಷಗಳು ವಿಜಯ್&zwnj;ಗೆ ಬೆಂಬಲ ನೀಡಲು ಮುಂದಾಗಿವೆ. ಈ ಮೂಲಕ ವಿಜಯ್ ಸರ್ಕಾರ ರಚಿಸಲು ಸಿದ್ಧರಾಗಿದ್ದರೂ, ಮಣಿಶಂಕರ್ ಅಯ್ಯರ್ ಅವರಂತಹ ಹಿರಿಯ ನಾಯಕರು ಕಾಂಗ್ರೆಸ್&zwnj;ನ 'ನೈತಿಕತೆ'ಯ ಬಗ್ಗೆ ಪ್ರಶ್ನೆ ಎತ್ತುತ್ತಿರುವುದು ಪಕ್ಷಕ್ಕೆ ಇರಿಸುಮುರಿಸು ಉಂಟುಮಾಡಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/immorality-of-joining-vijay-mani-shankar-aiyar-targets-congress-over-tvk-tie-up/articleshow-rr0kfns"/>
        </item>
        <item>
            <title><![CDATA[ರಮೇಶ್‌, ಸತೀಶ್‌ ಯಾರಿಗೂ ಇಲ್ಲ, ದೇವರ ನಾಡಿಗೆ ಸಿಎಂ ಆಗ್ತಾರಂತೆ ವೇಣುಗೋಪಾಲ!]]></title>
            <link>https://kannada.asianetnews.com/gallery/india-news/kc-venugopal-frontrunner-for-kerala-cm-udf-victory-swearing-in-ceremony-san-kalguax</link>
            <guid isPermaLink="true">https://kannada.asianetnews.com/gallery/india-news/kc-venugopal-frontrunner-for-kerala-cm-udf-victory-swearing-in-ceremony-san-kalguax</guid>
            <pubDate>Fri, 08 May 2026 18:58:05 +0530</pubDate>
            <description><![CDATA[&lt;p&gt;ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಕೆ.ಸಿ. ವೇಣುಗೋಪಾಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಕಾಂಗ್ರೆಸ್ ಹೈಕಮಾಂಡ್&zwnj;ಗೆ ಸಲ್ಲಿಸಿದ ವರದಿಯಲ್ಲಿ ಅವರ ಪರ ಒಲವು ವ್ಯಕ್ತವಾಗಿದ್ದು, ಯುಡಿಎಫ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqxpe1k42b7xbqj74bxk2cxx,imgname-fotojet---2026-05-06t091810.887-1778039326308.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಕೆ.ಸಿ. ವೇಣುಗೋಪಾಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಕಾಂಗ್ರೆಸ್ ಹೈಕಮಾಂಡ್&zwnj;ಗೆ ಸಲ್ಲಿಸಿದ ವರದಿಯಲ್ಲಿ ಅವರ ಪರ ಒಲವು ವ್ಯಕ್ತವಾಗಿದ್ದು, ಯುಡಿಎಫ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ.&amp;nbsp;&lt;/p&gt;&lt;img&gt;&lt;p&gt;ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಕೆ.ಸಿ. ವೇಣುಗೋಪಾಲ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹಿರಿಯ ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಕೆ.ಸಿ. ವೇಣುಗೋಪಾಲ್ ಅವರ ಹೆಸರು &quot;ಎಲ್ಲರಿಗಿಂತ ಮುಂದಿದೆ&quot; ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಶಾಸಕರು, ಮೈತ್ರಿ ಪಕ್ಷದ ನಾಯಕರು ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿರುವ ವೀಕ್ಷಕರು, ಅಂತಿಮ ನಿರ್ಧಾರವನ್ನು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಸಿಎಂ ಸ್ಥಾನಕ್ಕಾಗಿ ವೇಣುಗೋಪಾಲ್ ಅವರೊಂದಿಗೆ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಡಿ. ಸತೀಶನ್ ಮತ್ತು ಅನುಭವಿ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ, ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗೂ ಆಲಪ್ಪುಳ ಸಂಸದರಾಗಿರುವ 63 ವರ್ಷದ ಕೆ.ಸಿ. ವೇಣುಗೋಪಾಲ್ ಅವರೇ ಈ ಬಾರಿಯ ಗೆಲುವಿನ 'ನಿಜವಾದ ಶಿಲ್ಪಿ' ಎಂದು ಪಕ್ಷದ ಕಾರ್ಯಕರ್ತರು ಬಣ್ಣಿಸುತ್ತಿದ್ದಾರೆ. ಕಾಂಗ್ರೆಸ್ ಕಚೇರಿಯ ಮುಂದೆ ಅವರನ್ನು 'ನಾಯಕ' ಮತ್ತು 'ಹೀರೋ' ಎಂದು ಬಿಂಬಿಸುವ ಪೋಸ್ಟರ್&zwnj;ಗಳು ಈಗಾಗಲೇ ರಾರಾಜಿಸುತ್ತಿವೆ. ಅವರು ಸಿಎಂ ಆಗಿ ಆಯ್ಕೆಯಾದಲ್ಲಿ, ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.&lt;/p&gt;&lt;img&gt;&lt;p&gt;ಮುಂದಿನ ಸೋಮವಾರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆಯಿದ್ದು, ರಾಹುಲ್ ಗಾಂಧಿ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಿಶೇಷವೆಂದರೆ, ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತಿನಲ್ಲಿರುವ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಮತ್ತು ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಆಮಂತ್ರಣ ನೀಡುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಕೇರಳದ 140 ಸ್ಥಾನಗಳ ಪೈಕಿ ಯುಡಿಎಫ್ 102 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಸಾಧಿಸಿದೆ. ಕಾಂಗ್ರೆಸ್ 63, ಐಯುಎಂಎಲ್ (IUML) 22, ಕೇರಳ ಕಾಂಗ್ರೆಸ್ 07, ಇತರೆ ಮಿತ್ರಪಕ್ಷಗಳು 10, ಹಾಗೂ ಎಲ್&zwnj;ಡಿಎಫ್ (LDF) ಕೇವಲ 35 ಸ್ಥಾನಗಳಿಗೆ ಕುಸಿದಿದೆ.&lt;/p&gt;&lt;img&gt;&lt;p&gt;ಇದೇ ವೇಳೆ ತಮಿಳುನಾಡಿನಲ್ಲಿ ಕಾಂಗ್ರೆಸ್ ತನ್ನ ಹಳೆಯ ಮಿತ್ರ ಡಿಎಂಕೆಯನ್ನು ಕೈಬಿಟ್ಟು ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿದೆ. ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಶಾಸಕರ ಬಲ 112ಕ್ಕೆ ಇಳಿಯಲಿದೆ. ಕಾಂಗ್ರೆಸ್&zwnj;ನ 5 ಶಾಸಕರ ಬೆಂಬಲವನ್ನೂ ಸೇರಿದರೆ ಮೈತ್ರಿಕೂಟದ ಬಲ 117ಕ್ಕೆ ತಲುಪಲಿದೆ. ಆದರೆ, ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಅಲ್ಲಿ ಇನ್ನೂ ಸಣ್ಣ ಪಕ್ಷಗಳ ಜೊತೆ ಮಾತುಕತೆಗಳು ನಡೆಯುತ್ತಿವೆ. ಆದರೆ ಕೇರಳದಲ್ಲಿ ಯುಡಿಎಫ್&zwnj;ಗೆ ಇಂತಹ ಯಾವುದೇ ಸಮಸ್ಯೆ ಇಲ್ಲದೆ ಸುಗಮವಾಗಿ ಅಧಿಕಾರಕ್ಕೇರುತ್ತಿದೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/kc-venugopal-frontrunner-for-kerala-cm-udf-victory-swearing-in-ceremony-san-kalguax"/>
        </item>
        <item>
            <title><![CDATA[ಎಸ್‌ಬಿಐನಲ್ಲಿ ಕವಿದ ಕಾರ್ಮೋಡ: ಮೇ 25, 26ಕ್ಕೆ ಬ್ಯಾಂಕ್ ಸೇವೆ ವ್ಯತ್ಯಯ, ಒಟ್ಟು 4 ದಿನ ಬಂದ್ ಸಾಧ್ಯತೆ!]]></title>
            <link>https://kannada.asianetnews.com/business/sbi-employees-announce-nationwide-strike-on-may-25-26-over-16-demands-gdp/articleshow-vmtnvsg</link>
            <guid isPermaLink="true">https://kannada.asianetnews.com/business/sbi-employees-announce-nationwide-strike-on-may-25-26-over-16-demands-gdp/articleshow-vmtnvsg</guid>
            <pubDate>Fri, 08 May 2026 18:56:02 +0530</pubDate>
            <description><![CDATA[ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್&zwnj;ಬಿಐ) ನೌಕರರು ತಮ್ಮ 16 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 25 ಮತ್ತು 26 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸಿಬ್ಬಂದಿ ಕೊರತೆ, ಪಿಂಚಣಿ ಸೌಲಭ್ಯ, ವೇತನ ಅಸಮಾನತೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k8avbdy297k210jxeknt0tap,imgname-3-1761300821954.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್&zwnj;ಬಿಐ) ನೌಕರರು 16 ವಿವಿಧ ಬೇಡಿಕೆ ಈಡೇರಿಕೆಗಳಿಗೆ ಆಗ್ರಹಿಸಿ ಮೇ 25, 26 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅಖಿಲ ಭಾರತ ಸ್ಟೇಟ್ ಬ್ಯಾಂಕ್&zwnj; ಆಫ್&zwnj; ಇಂಡಿಯಾ ಸಿಬ್ಬಂದಿ ಒಕ್ಕೂಟ ( ಎಐಎಸ್&zwnj;ಬಿಐಎಸ್&zwnj;ಎಫ್&zwnj;) ದೇಶಾದ್ಯಂತ 2 ದಿನಗಳ ಮುಷ್ಕರ ನಡೆಸುವುದಾಗಿ ಘೋಷಿಸಿವೆ. ಬ್ಯಾಂಕುಗಳಲ್ಲಿ ಸಂದೇಶವಾಹಕ ನೇಮಕಾತಿ, ಸಶಸ್ತ್ರ ಗಾರ್ಡ್&zwnj;ಗಳ ಹೊಸ ನೇಮಕಾತಿ, ಸಿಬ್ಬಂದಿ ಕೊರತೆ, ಪಿಂಚಣಿ ಸೌಲಭ್ಯ ಸೇರಿದಂತೆ 16 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರ ಪರಿಣಾಮ ಎಸ್&zwnj;ಬಿಐ ಶಾಖೆಗಳಲ್ಲಿ ಸತತ 4 ದಿನ ಗ್ರಾಹಕರಿಗೆ ಬ್ಯಾಂಕ್&zwnj; ಸೇವೆಯಲ್ಲಿ ವ್ಯತ್ಯಯವಾಗಲಿದೆ. ಕಾರಣ 23 ನಾಲ್ಕನೇ ಶನಿವಾರ, 24 ಭಾನುವಾರ ಆಗಿರಲಿದೆ.&lt;/p&gt;&lt;h2&gt;16 ಬೇಡಿಕೆಗಳ ಈಡೇರಿಕೆಗೆ ಆಗ್ರಹ&lt;/h2&gt;&lt;p&gt;ನೌಕರರು ಒಟ್ಟು 16 ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಿದ್ದು, ಪ್ರಮುಖವಾಗಿ ಸಂದೇಶವಾಹಕರ (ಮೆಸೆಂಜರ್) ನೇಮಕಾತಿ, ಸಶಸ್ತ್ರ ಗಾರ್ಡ್&zwnj;ಗಳ ಹೊಸ ನೇಮಕಾತಿ, ಸಿಬ್ಬಂದಿ ಕೊರತೆ ನಿವಾರಣೆ, ಶಾಶ್ವತ ಹುದ್ದೆಗಳ ಹೊರಗುತ್ತಿಗೆ ನಿಲ್ಲಿಸುವುದು, ವೇತನ ಸಮಾನತೆ ಸಮಸ್ಯೆ ಪರಿಹಾರ, ಪಿಂಚಣಿ ಸೌಲಭ್ಯಗಳಲ್ಲಿ ಸುಧಾರಣೆ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ.&lt;/p&gt;&lt;p&gt;ಇದೇ ವೇಳೆ, 2019ರಿಂದ ಸೇರ್ಪಡೆಯಾದ ನೌಕರರಿಗೆ ಅಂತರ ವಲಯ (ಇಂಟರ್-ಸರ್ಕಲ್) ವರ್ಗಾವಣೆ ಜಾರಿಗೊಳಿಸುವುದು, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್&zwnj;ಪಿಎಸ್) ವ್ಯಾಪ್ತಿಯಲ್ಲಿರುವ ನೌಕರರಿಗೆ ಪಿಂಚಣಿ ನಿಧಿ ನಿರ್ವಹಣೆಯಲ್ಲಿ ಆಯ್ಕೆ ನೀಡುವುದು, ವೈದ್ಯಕೀಯ ಮರುಪಾವತಿ ಯೋಜನೆಯಲ್ಲಿ ಸುಧಾರಣೆ ತರುವುದು, ವೃತ್ತಿ ಪ್ರಗತಿ ಯೋಜನೆಯ ಮರುಪರಿಶೀಲನೆ, ಎಚ್&zwnj;ಆರ್&zwnj;ಎಂಎಸ್ ಸಮಸ್ಯೆಗಳ ಪರಿಹಾರ ಮತ್ತು ಕಾರ್ಮಿಕರ ಪ್ರತಿನಿಧಿಗಳ ನೇಮಕ ಸೇರಿದಂತೆ ಬೇಡಿಕೆಗಳನ್ನೂ ಒಕ್ಕೂಟ ಮುಂದಿಟ್ಟಿದೆ.&lt;/p&gt;&lt;h2&gt;ಸಿಬ್ಬಂದಿ ಕೊರತೆ, ಭದ್ರತಾ ಸಮಸ್ಯೆಗಳ ಬಗ್ಗೆ ಆತಂಕ&lt;/h2&gt;&lt;p&gt;ಅಧೀನ ಕೇಡರ್&zwnj;ನಲ್ಲಿ ಸಿಬ್ಬಂದಿ ಕೊರತೆ ಗಂಭೀರವಾಗಿದ್ದು, ಸುಮಾರು ಮೂರು ದಶಕಗಳಿಂದ ಸಂದೇಶವಾಹಕರ ನೇಮಕಾತಿ ಸ್ಥಗಿತಗೊಂಡಿರುವುದಾಗಿ ಒಕ್ಕೂಟ ಹೇಳಿದೆ. ಇದರ ಪರಿಣಾಮವಾಗಿ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂದು ಆರೋಪಿಸಲಾಗಿದೆ. ಸಶಸ್ತ್ರ ಗಾರ್ಡ್&zwnj;ಗಳ ಕೊರತೆಯಿಂದ ಭದ್ರತಾ ಸಮಸ್ಯೆಗಳು ಎದುರಾಗುತ್ತಿವೆ ಎಂಬುದನ್ನೂ ಒಕ್ಕೂಟ ಉಲ್ಲೇಖಿಸಿದೆ. ಇತ್ತೀಚೆಗೆ ಸೂರತ್&zwnj;ನ ಎಸ್&zwnj;ಬಿಐ ಶಾಖೆಯಲ್ಲಿ ನಡೆದ ದರೋಡೆ ಘಟನೆಯನ್ನು ಉದಾಹರಣೆಯಾಗಿ ನೀಡಿದ್ದು, ಇಂತಹ ನಿರ್ಲಕ್ಷ್ಯವು ನೌಕರರು ಹಾಗೂ ಗ್ರಾಹಕರ ಭದ್ರತೆಯನ್ನು ಹಾನಿಗೊಳಿಸುತ್ತದೆ ಎಂದು ಎಚ್ಚರಿಸಿದೆ.&lt;/p&gt;&lt;h2&gt;ವೇತನ ಅಸಮಾನತೆ ಆರೋಪ&lt;/h2&gt;&lt;p&gt;ಎಸ್&zwnj;ಬಿಐನಲ್ಲಿ ಅಧಿಕಾರಿಗಳು ಮತ್ತು ಕಾರ್ಮಿಕರ ನಡುವೆ ವೇತನ ಪರಿಷ್ಕರಣೆಯಲ್ಲಿ ಅಸಮಾನತೆ ಇದೆ ಎಂದು ಎಐಎಸ್&zwnj;ಬಿಐಎಸ್&zwnj;ಎಫ್ ಆರೋಪಿಸಿದೆ. 12ನೇ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಶೇ.17ರಷ್ಟು ವೇತನ ಹೆಚ್ಚಳ ಒಪ್ಪಂದವಾಗಿದ್ದರೂ, ವಿಶೇಷ ವೇತನದ ಮೂಲಕ ಅಧಿಕಾರಿಗಳು ಶೇ.22ರಷ್ಟು ಲಾಭ ಪಡೆದರೆ, ಕಾರ್ಮಿಕ ಸಿಬ್ಬಂದಿಗೆ ಶೇ.17ರಷ್ಟೇ ಸೀಮಿತವಾಗಿದೆ ಎಂದು ಹೇಳಲಾಗಿದೆ.&lt;/p&gt;&lt;h2&gt;ಪ್ರತಿಭಟನೆಗಳ ಸರಣಿ ಕಾರ್ಯಕ್ರಮ&lt;/h2&gt;&lt;p&gt;ಮುಷ್ಕರಕ್ಕೂ ಮುನ್ನ ಒಕ್ಕೂಟವು ಹಲವು ಹಂತಗಳಲ್ಲಿ ಪ್ರತಿಭಟನೆಗಳನ್ನು ಘೋಷಿಸಿದೆ. ಊಟದ ವಿರಾಮದ ವೇಳೆ ಪ್ರತಿಭಟನೆ, ಸಾಮಾಜಿಕ ಜಾಲತಾಣ ಅಭಿಯಾನ, ಮೌನ ಧರಣಿ, ಧರಣಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜೊತೆಗೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜ್ಞಾಪಕ ಪತ್ರಗಳನ್ನು ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿದೆ. ನೌಕರರು ಮೇ 19ರಂದು ಹಣಕಾಸು ಸಚಿವರಿಗೆ ಮತ್ತು ಮೇ 21ರಂದು ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಮೇ 25 ಅಥವಾ 26ರಂದು ರಜೆ ಬಂದಲ್ಲಿ, ಮುಷ್ಕರವನ್ನು ಮೇ 27ರಂದು ಮುಂದೂಡಲಾಗುತ್ತದೆ ಎಂದು ಒಕ್ಕೂಟ ತಿಳಿಸಿದೆ.&lt;/p&gt;&lt;h2&gt;ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ&lt;/h2&gt;&lt;p&gt;ಈ ಮುಷ್ಕರದ ಪರಿಣಾಮವಾಗಿ ಎಸ್&zwnj;ಬಿಐ ಶಾಖೆಗಳಲ್ಲಿನ ದೈನಂದಿನ ಬ್ಯಾಂಕಿಂಗ್ ಕಾರ್ಯಾಚರಣೆಗಳು ವ್ಯತ್ಯಯಗೊಳ್ಳುವ ಸಾಧ್ಯತೆ ಇದೆ. ಆದರೆ ಸೇವೆಗಳ ಅಡಚಣೆ ಕುರಿತು ಬ್ಯಾಂಕ್ ವತಿಯಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.&lt;/p&gt;&lt;p&gt;ಒಟ್ಟಾರೆ, ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯವಾಗಿ ನಡೆಯಲಿರುವ ಈ ರಾಷ್ಟ್ರವ್ಯಾಪಿ ಮುಷ್ಕರ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಸರ್ಕಾರ ಮತ್ತು ಬ್ಯಾಂಕ್ ಆಡಳಿತವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಗಮನಾರ್ಹವಾಗಿದೆ.&lt;/p&gt;]]></content:encoded>
            <category>india-news</category>
            <dc:creator>Gowthami K</dc:creator>
            <atom:link href="https://kannada.asianetnews.com/business/sbi-employees-announce-nationwide-strike-on-may-25-26-over-16-demands-gdp/articleshow-vmtnvsg"/>
        </item>
        <item>
            <title><![CDATA[ತಮಿಳುನಾಡು ರಾಜಕೀಯದಲ್ಲಿ ಈಗ ನೈತಿಕತೆಗೆ ಇಲ್ಲ ಬೆಲೆ: ಸಿದ್ಧಾಂತ, ಬದ್ಧತೆ ಬರೀ ನೀರ ಮೇಲಿನ ಗುಳ್ಳೆ!]]></title>
            <link>https://kannada.asianetnews.com/gallery/india-news/tamil-nadu-politics-zero-morals-vijay-mandate-dmk-aiadmk-unholy-alliance-san-napbb6s</link>
            <guid isPermaLink="true">https://kannada.asianetnews.com/gallery/india-news/tamil-nadu-politics-zero-morals-vijay-mandate-dmk-aiadmk-unholy-alliance-san-napbb6s</guid>
            <pubDate>Fri, 08 May 2026 17:53:08 +0530</pubDate>
            <description><![CDATA[ನಟ ವಿಜಯ್ ಅವರ ರಾಜಕೀಯ ಪ್ರವೇಶವು ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಧಿಕಾರದ ಆಸೆಗಾಗಿ, ಡಿಎಂಕೆ, ಎಐಎಡಿಎಂಕೆ ಸೇರಿದಂತೆ ಎಲ್ಲಾ ಪ್ರಮುಖ ಪಕ್ಷಗಳು ತಮ್ಮ ಸಿದ್ಧಾಂತ ಮತ್ತು ಮೈತ್ರಿಗಳನ್ನು ತೊರೆದು ಅವಕಾಶವಾದಿ ರಾಜಕಾರಣಕ್ಕೆ ಮುಂದಾಗಿವೆ, ಇದು ರಾಜಕೀಯ ನೈತಿಕತೆಯ ಪತನಕ್ಕೆ ಸಾಕ್ಷಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3rcfszhp9nm57qeyj0nc9p,imgname-tamil-nadu-politics--1--1778242699071.jpg" type="image/jpeg" height="390" width="690"/>
            <content:encoded><![CDATA[ನಟ ವಿಜಯ್ ಅವರ ರಾಜಕೀಯ ಪ್ರವೇಶವು ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಧಿಕಾರದ ಆಸೆಗಾಗಿ, ಡಿಎಂಕೆ, ಎಐಎಡಿಎಂಕೆ ಸೇರಿದಂತೆ ಎಲ್ಲಾ ಪ್ರಮುಖ ಪಕ್ಷಗಳು ತಮ್ಮ ಸಿದ್ಧಾಂತ ಮತ್ತು ಮೈತ್ರಿಗಳನ್ನು ತೊರೆದು ಅವಕಾಶವಾದಿ ರಾಜಕಾರಣಕ್ಕೆ ಮುಂದಾಗಿವೆ, ಇದು ರಾಜಕೀಯ ನೈತಿಕತೆಯ ಪತನಕ್ಕೆ ಸಾಕ್ಷಿಯಾಗಿದೆ.&lt;img&gt;&lt;p&gt;ತಮಿಳುನಾಡು ರಾಜಕೀಯ ಅಖಾಡದಲ್ಲಿ ಈಗ ಟಿವಿಕೆ ಸ್ಟಾರ್&zwnj; ದಳಪತಿ ವಿಜಯ್ ಎಸೆದ ದಾಳಕ್ಕೆ ಘಟಾನುಘಟಿಗಳೇ ಚೆಲ್ಲಾಪಿಲ್ಲಿಯಾಗಿದ್ದಾರೆ. ಚುನಾವಣಾ ಫಲಿತಾಂಶ ಕೇವಲ ಅಧಿಕಾರ ಬದಲಾವಣೆಯಲ್ಲ, ಬದಲಿಗೆ ವರ್ಷಗಳ ಕಾಲ &lsquo;ನೈತಿಕತೆ&rsquo;ಯ ಜಪ ಮಾಡುತ್ತಿದ್ದ ಪಕ್ಷಗಳ ಮುಖವಾಡವನ್ನೇ ಕಳಚಿಟ್ಟಿದೆ. ಚುನಾವಣೆಗೂ ಮುನ್ನ ಬೇರೆ ಬೇರೆ ತಟ್ಟೆಯಲ್ಲಿ ಅನ್ನ ತಿನ್ನುತ್ತಿದ್ದ ಪಕ್ಷಗಳು, ಚುನಾವಣೆ ಮುಗಿದ ಬೆನ್ನಲ್ಲಿಯೇ ತಮ್ಮ ತಟ್ಟೆಯಲ್ಲಿನ ಅನ್ನವನ್ನು ಒಂದೇ ಬಕೆಟ್&zwnj;ಗೆ ಹಾಕಿ ಕಲಗಚ್ಚು ಮಾಡಿಕೊಂಡು ತಿನ್ನುತ್ತಿವೆ ಅನ್ನೋದಕ್ಕೆ ತಮಿಳುನಾಡು ರಾಜಕೀಯ ನೇರವಾಗಿ ಸಾಕ್ಷಿಯಾಗಿದೆ.&lt;/p&gt;&lt;img&gt;&lt;p&gt;ಯಾರನ್ನು ಸೋಲಿಸಲು ಇಡೀ ಜನ್ಮವನ್ನೇ ಮುಡಿಪಿಟ್ಟಿದ್ದೇವೋ, ಆ ಡಿಎಂಕೆ ಮತ್ತು ಎಐಎಡಿಎಂಕೆ ಈಗ &lsquo;ಬದ್ಧವೈರಿ&rsquo;ಗಳೆಂಬುದನ್ನು ಮರೆತು ಒಂದೇ ಬೆಡ್&zwnj;ಶೀಟ್ ಹಂಚಿಕೊಳ್ಳುವ ಸ್ಥಿತಿಗೆ ಬಂದಿವೆ. ವಿಜಯ್ ಎಂಬ ಸಾಮಾನ್ಯ ಶಕ್ತಿಯನ್ನು ಎದುರಿಸಲು ಈ ದ್ರಾವಿಡ ದೈತ್ಯರು ನಡೆಸುತ್ತಿರುವ ಈ &lsquo;ಅಪವಿತ್ರ ಮೈತ್ರಿ&rsquo; ರಾಜಕೀಯ ನೈತಿಕತೆಯ ಅಧಃಪತನಕ್ಕೆ ಸಾಕ್ಷಿ.&lt;/p&gt;&lt;img&gt;&lt;p&gt;ದಶಕಗಳಿಂದ ಡಿಎಂಕೆ ಜೊತೆಗಿದ್ದ ಕಾಂಗ್ರೆಸ್, ಫಲಿತಾಂಶ ಬಂದ ಕೆಲವೇ ನಿಮಿಷಗಳಲ್ಲಿ &lsquo;ಸೋ ಸಾರಿ&rsquo; ಎಂದು ಎಂ.ಕೆ. ಸ್ಟಾಲಿನ್&zwnj;ಗೆ ಡಿವೋರ್ಸ್ ನೀಡಿದೆ. ಇದು &lsquo;ಮ್ಯೂಚುಯಲ್ ಅಂಡರ್ಸ್ಟ್ಯಾಂಡಿಂಗ್&rsquo; ಅಲ್ಲ, ಅಧಿಕಾರದ ಆಸೆಗೆ ಬಿದ್ದು ಮಾಡಿದ ಪಕ್ಕಾ &lsquo;ಬ್ರೇಕಪ್&rsquo;.&lt;/p&gt;&lt;img&gt;&lt;p&gt;ಸಿದ್ಧಾಂತಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವ ಎಡಪಕ್ಷಗಳು (CPI/CPM), ಡಿಎಂಕೆಯೊಂದಿಗಿನ ಹಳೆಯ ದೋಸ್ತಿಗೆ ಎಳ್ಳುನೀರು ಬಿಟ್ಟು ವಿಜಯ್ ಕ್ಯಾಂಪ್&zwnj;ಗೆ ಓಡಿವೆ. ಸಿದ್ಧಾಂತಕ್ಕಿಂತ ಅಧಿಕಾರದ ಲಾಲಸೆಯೇ ಮುಖ್ಯ ಎಂಬುದು ಇಲ್ಲಿ ಸಾಬೀತಾಗಿದೆ.&lt;/p&gt;&lt;img&gt;&lt;p&gt;ದಲಿತರ ಧ್ವನಿ ಎನ್ನುವ ವಿಸಿಕೆ ಪಕ್ಷ ಕೂಡ ಡಿಎಂಕೆಯನ್ನು ಅನಾಥವಾಗಿ ಬಿಟ್ಟು ವಿಜಯ್ ಸಚಿವ ಸಂಪುಟ ಸೇರಲು ಮುಂದಾಗಿದೆ. ನೆನ್ನೆವರೆಗೂ ಇದ್ದ ಮೈತ್ರ, ಸಿದ್ದಾಂತ, ಬದ್ದತೆ ಎಲ್ಲವೂ ಇವತ್ತು &lsquo;ಜೀರೋ&rsquo; ವ್ಯಾಲ್ಯೂ ಪಡೆದಿದೆ.&lt;/p&gt;&lt;img&gt;&lt;p&gt;ಇತ್ತ ವಿಜಯ್ ಅಬ್ಬರಕ್ಕೆ ಬೆದರಿದ ಎಐಎಡಿಎಂಕೆ ಎರಡು ಹೋಳಾಗಿದೆ. ನಾಯಕತ್ವದ ವಿರುದ್ಧ ಬಂಡಾಯ ಎದ್ದಿರುವ ಶಾಸಕರು ವಿಜಯ್ ಪಕ್ಷದ ಕಡೆ ಮುಖ ಮಾಡಿರುವುದು &lsquo;ಅಮ್ಮ&rsquo;ನ ಪಕ್ಷಕ್ಕೆ ಅತಿದೊಡ್ಡ ಹಿನ್ನಡೆ. ಇಂದಿನ ಜೆನ್-ಝೀಗಳು (Gen-Z) ಬದಲಾವಣೆ ಬಯಸಿದ್ದರು ನಿಜ, ಆದರೆ ರಾಜಕಾರಣಿಗಳ ಈ ಪಕ್ಕಾ ಅವಕಾಶವಾದಿ ವರ್ತನೆ ನೋಡಿ ಅವರಿಗೂ ಶಾಕ್ ಆಗಿದೆ. ವಿಜಯ್ ಬಂದ ಮೇಲೆ ತಮಿಳುನಾಡಿನಲ್ಲಿ ನೈತಿಕತೆ ಎಂಬುದು ಕೇವಲ ಡಿಕ್ಷನರಿಯ ಪದವಷ್ಟೇ ಆಗಿದೆ!&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/tamil-nadu-politics-zero-morals-vijay-mandate-dmk-aiadmk-unholy-alliance-san-napbb6s"/>
        </item>
        <item>
            <title><![CDATA[BREAKING: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಆಯ್ಕೆ]]></title>
            <link>https://kannada.asianetnews.com/gallery/india-news/suvendu-adhikari-elected-west-bengal-first-bjp-cm-swearing-in-ceremony-updates-san-ftc2ghz</link>
            <guid isPermaLink="true">https://kannada.asianetnews.com/gallery/india-news/suvendu-adhikari-elected-west-bengal-first-bjp-cm-swearing-in-ceremony-updates-san-ftc2ghz</guid>
            <pubDate>Fri, 08 May 2026 17:13:57 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಬಹುಮತ ಗಳಿಸಿದ್ದು, ಸುವೇಂದು ಅಧಿಕಾರಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ಗಮನ ಸೆಳೆದಿರುವ ಸುವೇಂದು ಅವರೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳು ಕೂಡ ನೇಮಕಗೊಳ್ಳಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3p6mh1329bqb9d77sh7djh,imgname-suvendu-adhikari--2--1778240410145.jpg" type="image/jpeg" height="390" width="690"/>
            <content:encoded><![CDATA[ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಬಹುಮತ ಗಳಿಸಿದ್ದು, ಸುವೇಂದು ಅಧಿಕಾರಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ಗಮನ ಸೆಳೆದಿರುವ ಸುವೇಂದು ಅವರೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳು ಕೂಡ ನೇಮಕಗೊಳ್ಳಲಿದ್ದಾರೆ.&lt;img&gt;&lt;p&gt;ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಸುದೀರ್ಘ ಕಾಲದ ನಂತರ ಮಹತ್ವದ ಬದಲಾವಣೆಯಾಗಿದೆ. ಶುಕ್ರವಾರ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದು, ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಲ್ಕತ್ತಾದ ಕನ್ವೆನ್ಷನ್ ಸೆಂಟರ್&zwnj;ನಲ್ಲಿ ನಡೆದ ಶಾಸಕರ ಸಭೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕೃತವಾಗಿ ಈ ಘೋಷಣೆ ಮಾಡಿದರು. ಹೆಸರು ಘೋಷಣೆಯಾಗುತ್ತಿದ್ದಂತೆಯೇ ಅಮಿತ್ ಶಾ ಅವರು ವೇದಿಕೆಯ ಮೇಲೆ ಸುವೇಂದು ಅಧಿಕಾರಿ ಅವರಿಗೆ ಹಾರ ಹಾಕಿ, ಆಲಂಗಿಸಿಕೊಳ್ಳುವ ಮೂಲಕ ಶುಭ ಹಾರೈಸಿದರು.&lt;/p&gt;&lt;img&gt;&lt;p&gt;ಬಂಗಾಳದಲ್ಲಿ ಆಡಳಿತಾತ್ಮಕ ಸಮತೋಲನ ಕಾಯ್ದುಕೊಳ್ಳಲು ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸಲು ಬಿಜೆಪಿ ನಿರ್ಧರಿಸಿದೆ. ಹಿರಿಯ ನಾಯಕಿ ರೂಪಾ ಗಂಗೂಲಿ ಅವರು ಉಪಮುಖ್ಯಮಂತ್ರಿಯಾಗಿ ದೃಢಪಟ್ಟಿದ್ದಾರೆ. ಎರಡನೇ ಉಪಮುಖ್ಯಮಂತ್ರಿ ಸ್ಥಾನವನ್ನು ಉತ್ತರ ಬಂಗಾಳ ಭಾಗದ ಪುರುಷ ಶಾಸಕರೊಬ್ಬರಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಸುವೇಂದು ಅಧಿಕಾರಿ ಅವರು ನಾಳೆ (ಶನಿವಾರ) ಬೆಳಗ್ಗೆ 10 ಗಂಟೆಗೆ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಎನ್&zwnj;ಡಿಎ ಮೈತ್ರಿಕೂಟದ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ.&lt;/p&gt;&lt;img&gt;&lt;p&gt;ಈ ಬಾರಿಯ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಮಮತಾ ಅವರ ಭದ್ರಕೋಟೆಯಾಗಿದ್ದ ಭವಾನಿಪುರ ಕ್ಷೇತ್ರದಲ್ಲಿ ಅವರನ್ನು ಸೋಲಿಸುವ ಮೂಲಕ ಸುವೇಂದು ಇತಿಹಾಸ ಬರೆದಿದ್ದಾರೆ. ಅಷ್ಟೇ ಅಲ್ಲದೆ, ನಂದಿಗ್ರಾಮ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಮಮತಾ ಬ್ಯಾನರ್ಜಿ ಅವರಿಗೆ ಸೋಲುಣಿಸಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.&lt;/p&gt;&lt;img&gt;&lt;p&gt;ಮೇ 4 ರಂದು ಪ್ರಕಟವಾದ ಫಲಿತಾಂಶದಲ್ಲಿ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆಡಳಿತಾರೂಢ ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿದೆ. ಬಾಕಿ ಉಳಿದಿರುವ ಒಂದು ಸ್ಥಾನಕ್ಕೆ ಮೇ 21 ರಂದು ಮರುಚುನಾವಣೆ ನಡೆಯಲಿದ್ದು, ಮೇ 24 ರಂದು ಫಲಿತಾಂಶ ಹೊರಬರಲಿದೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/suvendu-adhikari-elected-west-bengal-first-bjp-cm-swearing-in-ceremony-updates-san-ftc2ghz"/>
        </item>
        <item>
            <title><![CDATA[ಆ ಮಹಿಳೆಯ 19 ನಿಮಿಷ 34 ಸೆಕೆಂಡ್ ವಿಡಿಯೋ ಸರ್ಚ್‌ ಮಾಡಿದ್ರೆ ನಿಮ್ಮ ಕಥೆ ಮುಗೀತು!]]></title>
            <link>https://kannada.asianetnews.com/gallery/tv-talk/sofik-sonali-viral-video-scam-beware-of-fake-links-and-malware-traps-details-5vylrho</link>
            <guid isPermaLink="true">https://kannada.asianetnews.com/gallery/tv-talk/sofik-sonali-viral-video-scam-beware-of-fake-links-and-malware-traps-details-5vylrho</guid>
            <pubDate>Fri, 08 May 2026 17:05:16 +0530</pubDate>
            <description><![CDATA[&lt;p&gt;ಸೋಫಿಕ್, ಸೊನಾಲಿ ಅವರದ್ದು ಎನ್ನಲಾದ ವೈರಲ್ ವಿಡಿಯೋ ಹೆಸರಲ್ಲಿ ಸೈಬರ್ ಕಳ್ಳರು ಜನರಿಗೆ ನಕಲಿ ಲಿಂಕ್&zwnj;ಗಳನ್ನು ಕಳಿಸುತ್ತಿದ್ದಾರೆ. &lsquo;Season 2&rsquo;, 'Leaked Video' ಅಂತ ಹೇಳಿ ಮಾಲ್&zwnj;ವೇರ್ ಹರಡುತ್ತಿದ್ದಾರೆ. ಈ ವಿಡಿಯೋ AI ಡೀಪ್&zwnj;ಫೇಕ್ ಇರಬಹುದು, ಹಾಗಾಗಿ ಎಚ್ಚರವಾಗಿರಿ ಅಂತ ತಜ್ಞರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3nxmwpjjymw9j83wp46w08,imgname-new-project---2026-05-08t170449.831-1778240115606.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೋಫಿಕ್, ಸೊನಾಲಿ ಅವರದ್ದು ಎನ್ನಲಾದ ವೈರಲ್ ವಿಡಿಯೋ ಹೆಸರಲ್ಲಿ ಸೈಬರ್ ಕಳ್ಳರು ಜನರಿಗೆ ನಕಲಿ ಲಿಂಕ್&zwnj;ಗಳನ್ನು ಕಳಿಸುತ್ತಿದ್ದಾರೆ. &lsquo;Season 2&rsquo;, 'Leaked Video' ಅಂತ ಹೇಳಿ ಮಾಲ್&zwnj;ವೇರ್ ಹರಡುತ್ತಿದ್ದಾರೆ. ಈ ವಿಡಿಯೋ AI ಡೀಪ್&zwnj;ಫೇಕ್ ಇರಬಹುದು, ಹಾಗಾಗಿ ಎಚ್ಚರವಾಗಿರಿ ಅಂತ ತಜ್ಞರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸೋಫಿಕ್ ಮತ್ತು ಸೊನಾಲಿ ವಿಡಿಯೋ ವೈರಲ್ ಆಗಿ ತಿಂಗಳುಗಳೇ ಕಳೆದರೂ, ಜನ ಇನ್ನೂ ಅದರ ಬಗ್ಗೆ ಹುಡುಕುತ್ತಲೇ ಇದ್ದಾರೆ. ಇದನ್ನೇ ಹ್ಯಾಕರ್&zwnj;ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಫೇಸ್&zwnj;ಬುಕ್, ಇನ್&zwnj;ಸ್ಟಾಗ್ರಾಂ ಮತ್ತು ಇತರ ಸೋಶಿಯಲ್ ಮೀಡಿಯಾಗಳಲ್ಲಿ 'ಪೂರ್ತಿ ವಿಡಿಯೋ ಇಲ್ಲಿ ನೋಡಿ' ಅಥವಾ 'Season 2 ಡೌನ್&zwnj;ಲೋಡ್ ಮಾಡಿ' ಎಂಬಂತಹ ನಕಲಿ ಲಿಂಕ್&zwnj;ಗಳನ್ನು ಹಂಚಿಕೊಳ್ಳುತ್ತಿದ್ದಾರೆ.&amp;nbsp;&lt;/p&gt;&lt;p&gt;ಬಳಕೆದಾರರು ಈ ಲಿಂಕ್&zwnj;ಗಳನ್ನು ಕ್ಲಿಕ್ ಮಾಡಿದ ತಕ್ಷಣ, ಅವರ ಡಿವೈಸ್&zwnj;ನಲ್ಲಿ ಮಾಲ್&zwnj;ವೇರ್ ಅಥವಾ ವೈರಸ್ ಡೌನ್&zwnj;ಲೋಡ್ ಆಗಬಹುದು. ಇದರ ನಂತರ ಹ್ಯಾಕರ್&zwnj;ಗಳು ಬಳಕೆದಾರರ ಖಾಸಗಿ ಫೋಟೋ, ಪಾಸ್&zwnj;ವರ್ಡ್, ಸೋಶಿಯಲ್ ಮೀಡಿಯಾ ಅಕೌಂಟ್ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಕದಿಯಬಹುದು. ಹಲವು ಪ್ರಕರಣಗಳಲ್ಲಿ ಫೋನ್ ಅಥವಾ ಲ್ಯಾಪ್&zwnj;ಟಾಪ್ ಸಂಪೂರ್ಣವಾಗಿ ಹ್ಯಾಕ್ ಆಗುವ ಅಪಾಯವೂ ಇದೆ.&lt;/p&gt;&lt;img&gt;&lt;p&gt;ವಿಡಿಯೋ ವಿವಾದದ ನಂತರ, ಸೊನಾಲಿ ಮಾನಹಾನಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಸುಳ್ಳು ಸುದ್ದಿಯನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸಲಾಗಿತ್ತು. ಆದರೆ, ತನಿಖೆಯಲ್ಲಿ ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ತಿಳಿದುಬಂದಿದೆ. ಇಂತಹ ಸುಳ್ಳು ಸುದ್ದಿಗಳನ್ನು ಕೇವಲ ಜನರಲ್ಲಿ ಭಯ ಮತ್ತು ಭಾವನಾತ್ಮಕ ಒತ್ತಡ ಸೃಷ್ಟಿಸಲು ಹರಡಲಾಗುತ್ತದೆ. ಸದ್ಯಕ್ಕೆ ಇಬ್ಬರೂ ಇನ್&zwnj;ಫ್ಲುಯೆನ್ಸರ್&zwnj;ಗಳು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ, ಆದರೆ ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಡಿಜಿಟಲ್ ಫೋರೆನ್ಸಿಕ್ ತಜ್ಞರ ಪ್ರಕಾರ, ವೈರಲ್ ಆಗುತ್ತಿರುವ 19 ನಿಮಿಷದ ಈ ವಿಡಿಯೋ ನಿಜವಾಗಿರಲೇಬೇಕು ಅಂತೇನಿಲ್ಲ. ಇದು AI ಡೀಪ್&zwnj;ಫೇಕ್ ತಂತ್ರಜ್ಞಾನದಿಂದ ಸೃಷ್ಟಿಸಿದ ವಿಡಿಯೋ ಆಗಿರಬಹುದು. ಇಂದಿನ ಆಧುನಿಕ AI ತಂತ್ರಜ್ಞಾನ ಬಳಸಿ, ಯಾವುದೇ ವ್ಯಕ್ತಿಯ ಮುಖವನ್ನು ಬೇರೆ ವಿಡಿಯೋಗೆ ಸುಲಭವಾಗಿ ಜೋಡಿಸಬಹುದು. ಇದೇ ಕಾರಣಕ್ಕೆ, ಇಂಟರ್ನೆಟ್&zwnj;ನಲ್ಲಿ ವೈರಲ್ ಆಗುವ ಯಾವುದೇ ವಿಡಿಯೋವನ್ನು ಪರಿಶೀಲಿಸದೆ ನಂಬುವುದು ಅಪಾಯಕಾರಿ.&lt;/p&gt;&lt;p&gt;&lt;strong&gt;&lsquo;ಸೀಸನ್ 2&rsquo; ಮತ್ತು &lsquo;ಸೀಸನ್ 3&rsquo; ಬರೀ ಕ್ಲಿಕ್&zwnj;ಬೈಟ್?&lt;/strong&gt;&lt;/p&gt;&lt;p&gt;ಈ ವೈರಲ್ ವಿಡಿಯೋದ 'Season 2' ಮತ್ತು 'Season 3' ಕೂಡ ಬರಲಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಲಾಗುತ್ತಿದೆ. ಆದರೆ, ಸೈಬರ್ ತಜ್ಞರು ಹೇಳುವ ಪ್ರಕಾರ, ಅಂತಹ ಯಾವುದೇ ವಿಡಿಯೋ ಅಸ್ತಿತ್ವದಲ್ಲಿಲ್ಲ. ಇದು ಕೇವಲ ಒಂದು ಕ್ಲಿಕ್&zwnj;ಬೇಟ್ ತಂತ್ರವಾಗಿದ್ದು, ಬಳಕೆದಾರರನ್ನು ನಕಲಿ ವೆಬ್&zwnj;ಸೈಟ್&zwnj;ಗಳು ಮತ್ತು ಡೌನ್&zwnj;ಲೋಡ್ ಲಿಂಕ್&zwnj;ಗಳತ್ತ ಸೆಳೆಯಲು ಬಳಸಲಾಗುತ್ತಿದೆ. ಈ ಲಿಂಕ್&zwnj;ಗಳನ್ನು ಕ್ಲಿಕ್ ಮಾಡಿದರೆ, ಬಳಕೆದಾರರು ಸೈಬರ್ ವಂಚನೆಗೆ ಬಲಿಯಾಗಬಹುದು.&lt;/p&gt;&lt;p&gt;ಹಕ್ಕುತ್ಯಾಗ: ಈ ವರದಿಯನ್ನು ಡಿಜಿಟಲ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಸೋಶಿಯಲ್ ಮೀಡಿಯಾ ಮತ್ತು ಇಂಟರ್ನೆಟ್&zwnj;ನಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಯಾವುದೇ ಪರಿಶೀಲಿಸದ ವಿಡಿಯೋವನ್ನು ಬೆಂಬಲಿಸುವ, ಪ್ರಚಾರ ಮಾಡುವ ಅಥವಾ ಪ್ರವೇಶ ನೀಡುವ ಉದ್ದೇಶ ಈ ವರದಿಗಿಲ್ಲ. ವೈರಲ್ ಕ್ಲಿಪ್&zwnj;ನ ಸತ್ಯಾಸತ್ಯತೆ ಅಧಿಕೃತವಾಗಿ ದೃಢಪಟ್ಟಿಲ್ಲ ಮತ್ತು ಇದು AI ಡೀಪ್&zwnj;ಫೇಕ್ ತಂತ್ರಜ್ಞಾನದ ಪರಿಣಾಮವೂ ಆಗಿರಬಹುದು. ಲಭ್ಯವಿರುವ ಆನ್&zwnj;ಲೈನ್ ಮಾಹಿತಿಯ ಆಧಾರದ ಮೇಲೆ ಈ ವಿಷಯವನ್ನು ಸಿದ್ಧಪಡಿಸಲಾಗಿದೆ. ಏಷ್ಯಾನೆಟ್ ನ್ಯೂಸ್ ಈ ಹೇಳಿಕೆಗಳು ಮತ್ತು ಅವುಗಳ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/sofik-sonali-viral-video-scam-beware-of-fake-links-and-malware-traps-details-5vylrho"/>
        </item>
        <item>
            <title><![CDATA[ತಮಿಳುನಾಡು ಇತಿಹಾಸದ ಮೊದಲ ಸಮ್ಮಿಶ್ರ ಸರ್ಕಾರಕ್ಕೆ ದಳಪತಿ ಸಾರಥಿ: ವಿಸಿಕೆಗೆ ಒಂದು, ಎಡಪಕ್ಷಕ್ಕೆ ಎರಡು ಸಚಿವ ಸ್ಥಾನ!]]></title>
            <link>https://kannada.asianetnews.com/gallery/india-news/vijay-tvk-coalition-government-tn-cabinet-berths-vck-left-congress-alliance-san-sr5uvf7</link>
            <guid isPermaLink="true">https://kannada.asianetnews.com/gallery/india-news/vijay-tvk-coalition-government-tn-cabinet-berths-vck-left-congress-alliance-san-sr5uvf7</guid>
            <pubDate>Fri, 08 May 2026 16:54:31 +0530</pubDate>
            <description><![CDATA[ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಸಮ್ಮಿಶ್ರ ಸರ್ಕಾರ ರಚಿಸಲು ಸಜ್ಜಾಗಿದೆ. ವಿಸಿಕೆ, ಕಾಂಗ್ರೆಸ್, ಮತ್ತು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಸಚಿವ ಸಂಪುಟ ಹಂಚಿಕೆಯ ಸೂತ್ರದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3g3eaem2xct4837e9r69v0,imgname-tvk-vijay-numerology-1778234014030.jpg" type="image/jpeg" height="390" width="690"/>
            <content:encoded><![CDATA[ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಸಮ್ಮಿಶ್ರ ಸರ್ಕಾರ ರಚಿಸಲು ಸಜ್ಜಾಗಿದೆ. ವಿಸಿಕೆ, ಕಾಂಗ್ರೆಸ್, ಮತ್ತು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಸಚಿವ ಸಂಪುಟ ಹಂಚಿಕೆಯ ಸೂತ್ರದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಲಿದ್ದಾರೆ.&lt;img&gt;&lt;p&gt;ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 'ಸಮ್ಮಿಶ್ರ ಸರ್ಕಾರ' ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ. ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರು ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಗಳಿಸಿದ್ದು, ಮೈತ್ರಿ ಧರ್ಮದಂತೆ ಮಿತ್ರಪಕ್ಷಗಳಿಗೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;img&gt;&lt;p&gt;ಮೂಲಗಳ ಪ್ರಕಾರ, ವಿಜಯ್ ಅವರ ಸಚಿವ ಸಂಪುಟದಲ್ಲಿ ಮಿತ್ರಪಕ್ಷಗಳಿಗೆ ಈ ಕೆಳಗಿನಂತೆ ಸ್ಥಾನಗಳನ್ನು ಹಂಚಿಕೆ ಮಾಡಲು ಪ್ರಾಥಮಿಕವಾಗಿ ನಿರ್ಧರಿಸಲಾಗಿದೆ ತೋಳ್ ತಿರುಮಾವಳವನ್ ನೇತೃತ್ವದ ವಿಡುತಲೈ ಚಿರುತ್ತೈಗಳ್ ಕಚ್ಚಿ (ವಿಸಿಕೆ) ಪಕ್ಷಕ್ಕೆ ಒಂದು ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಸ್ವತಃ ತಿರುಮಾವಳವನ್ ಅವರೇ ಸಂಪುಟ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಮೈತ್ರಿಯಲ್ಲಿ ಭಾಗಿಯಾಗಿರುವ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಮತ್ತು ಸಿಪಿಐ (ಮಾರ್ಕ್ಸ್&zwnj;ವಾದಿ) ಪಕ್ಷಗಳಿಗೆ ಒಟ್ಟು ಎರಡು ಸಚಿವ ಸ್ಥಾನಗಳನ್ನು ನೀಡಲು ತೀರ್ಮಾನಿಸಲಾಗಿದೆ. ಇನ್ನು ಈ ಮೊದಲೇ ಬೆಂಬಲ ನೀಡಿದ್ದ ಕಾಂಗ್ರೆಸ್&zwnj; ಪಕ್ಷ 2 ಸಚಿವ ಸ್ಥಾನವನ್ನು ಪಡೆಯಲಿದೆ.&lt;/p&gt;&lt;img&gt;&lt;p&gt;ದಶಕಗಳಿಂದ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯ ಏಕಪಕ್ಷೀಯ ಆಡಳಿತಕ್ಕೆ ಒಗ್ಗಿಕೊಂಡಿದ್ದ ತಮಿಳುನಾಡಿಗೆ ಇದು ಹೊಸ ಅನುಭವ. ಮುಖ್ಯಮಂತ್ರಿ ಗದ್ದುಗೆಯನ್ನು ವಿಜಯ್ ಅಲಂಕರಿಸಲಿದ್ದು, ಸಣ್ಣ ಪಕ್ಷಗಳ ಶಾಸಕರು ಸಚಿವರಾಗಿ ಆಡಳಿತದಲ್ಲಿ ಭಾಗಿಯಾಗಲಿದ್ದಾರೆ. ಇದು ರಾಜ್ಯದ ರಾಜಕೀಯ ಸಮೀಕರಣದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಲಿದೆ.&lt;/p&gt;&lt;img&gt;&lt;p&gt;ಕಳೆದ ಮೂರು ದಿನಗಳಲ್ಲಿ ವಿಜಯ್&zwnj; ಮೂರನೇ ಬಾರಿಗೆ ರಾಜ್ಯಪಾಲ ಆರ್ಲೇಕರ್&zwnj; ಅವರನ್ನು ಭೇಟಿಯಾಗಲಿದ್ದಾರೆ. ವಿಸಿಕೆ ಮುಖ್ಯಸ್ಥರ ಜೊತೆ ಕಾಂಗ್ರೆಸ್&zwnj; ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ ಬೆನ್ನಲ್ಲಿಯೇ ವಿಸಿಕೆ ಅಧಿಕೃತವಾಗಿ ತನ್ನ ಬೆಂಬಲವನ್ನು ಟಿವಿಕೆಗೆ ಸೂಚಿಸಿದೆ. ವಿಜಯ್ ಅವರು ಈಗಾಗಲೇ ಬಹುಮತದ ಸಂಖ್ಯಾಬಲವನ್ನು ಕ್ರೋಢೀಕರಿಸಿದ್ದು, ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಮೈತ್ರಿ ಸರ್ಕಾರದ ಹಕ್ಕು ಮಂಡಿಸಲಿದ್ದಾರೆ. ಮೈತ್ರಿ ಪಕ್ಷಗಳ ನಡುವಿನ ಅಧಿಕಾರ ಹಂಚಿಕೆಯ ಈ ಸೂತ್ರವು ಸರ್ಕಾರದ ಸ್ಥಿರತೆಗೆ ನಾಂದಿ ಹಾಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/vijay-tvk-coalition-government-tn-cabinet-berths-vck-left-congress-alliance-san-sr5uvf7"/>
        </item>
        <item>
            <title><![CDATA[BREAKING: ಕೊನೆಗೂ ಮ್ಯಾಜಿಕ್ ನಂಬರ್ ತಲುಪಿದ ದಳಪತಿ ವಿಜಯ್, ಡಿಎಂಕೆಗೆ ಕೈಕೊಟ್ಟು ಟಿವಿಕೆಗೆ ಸಾಥ್ ನೀಡಿದ ಎಡಪಕ್ಷ ಮತ್ತು ವಿಸಿಕೆ!]]></title>
            <link>https://kannada.asianetnews.com/gallery/india-news/vijay-tvk-secures-majority-to-form-tamil-nadu-government-vck-left-support-san-ooquxab</link>
            <guid isPermaLink="true">https://kannada.asianetnews.com/gallery/india-news/vijay-tvk-secures-majority-to-form-tamil-nadu-government-vck-left-support-san-ooquxab</guid>
            <pubDate>Fri, 08 May 2026 16:36:33 +0530</pubDate>
            <description><![CDATA[ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷವು ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ ಬಹುಮತವನ್ನು ಪಡೆದುಕೊಂಡಿದೆ. ದ್ರಾವಿಡ ಪಕ್ಷಗಳ 62 ವರ್ಷಗಳ ಆಡಳಿತಕ್ಕೆ ತೆರೆ ಎಳೆದು, ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಅಧಿಕೃತವಾಗಿ ಹಕ್ಕು ಮಂಡಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyq49z1bqmrxtxtc04pqa1d,imgname-untitled-design---2026-05-06t182133.306-1778073610209.jpg" type="image/jpeg" height="390" width="690"/>
            <content:encoded><![CDATA[ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷವು ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ ಬಹುಮತವನ್ನು ಪಡೆದುಕೊಂಡಿದೆ. ದ್ರಾವಿಡ ಪಕ್ಷಗಳ 62 ವರ್ಷಗಳ ಆಡಳಿತಕ್ಕೆ ತೆರೆ ಎಳೆದು, ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಅಧಿಕೃತವಾಗಿ ಹಕ್ಕು ಮಂಡಿಸಲಿದ್ದಾರೆ.&lt;img&gt;&lt;p&gt;ಕಳೆದ ನಾಲ್ಕು ದಿನಗಳಿಂದ ತಮಿಳುನಾಡು ರಾಜಕಾರಣದಲ್ಲಿ ಮನೆಮಾಡಿದ್ದ ಅನಿಶ್ಚಿತತೆ ಮತ್ತು ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಸೂಪರ್ ಸ್ಟಾರ್ ವಿಜಯ್ ಅವರ ಚೆನ್ನೈ ನಿವಾಸದ ಮುಂದೆ ಈಗ 'ಟಿವಿಕೆ.. ಟಿವಿಕೆ..' ಎಂಬ ಹರ್ಷೋದ್ಗಾರಗಳು ಮೊಳಗುತ್ತಿವೆ. ಮೂಲಗಳ ಪ್ರಕಾರ, ಸರ್ಕಾರ ರಚಿಸಲು ಅಗತ್ಯವಿರುವ ಶಾಸಕರ ಬೆಂಬಲವನ್ನು ಕ್ರೋಢೀಕರಿಸುವಲ್ಲಿ ವಿಜಯ್ ಯಶಸ್ವಿಯಾಗಿದ್ದು, ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವುದು ಈಗ ಖಚಿತವಾಗಿದೆ. ವಿಜಯ್ ಅವರು ಇಂದು ಸಂಜೆ 6 ಗಂಟೆಗೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅಧಿಕೃತವಾಗಿ ಹಕ್ಕು ಮಂಡಿಸಲಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಚೊಚ್ಚಲ ಪ್ರಯತ್ನದಲ್ಲೇ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿತ್ತು. ಈ ಮೂಲಕ ದಶಕಗಳಿಂದ ತಮಿಳುನಾಡು ರಾಜಕಾರಣವನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ 62 ವರ್ಷಗಳ ಏಕಸ್ವಾಮ್ಯವನ್ನು ವಿಜಯ್ ಮುರಿದಿದ್ದರು. ಆದರೆ, ಜಯ ಗಳಿಸಿದರೂ ಬಹುಮತದ ಕೊರತೆಯಿಂದಾಗಿ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿರಲಿಲ್ಲ.&lt;/p&gt;&lt;img&gt;&lt;p&gt;ಬುಧವಾರ ಮತ್ತು ಗುರುವಾರ ನಡೆದ ಸತತ ಎರಡು ಸಭೆಗಳಲ್ಲಿ ರಾಜ್ಯಪಾಲ ಅರ್ಲೇಕರ್ ಅವರು ತಮ್ಮ ನಿಲುವಿನಿಂದ ಹಿಂದೆ ಸರಿದಿರಲಿಲ್ಲ. 118 ಶಾಸಕರ ಲಿಖಿತ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ವಿಜಯ್ ಅವರು ತಿರುಚಿರಾಪಳ್ಳಿ (ಪೂರ್ವ) ಮತ್ತು ಪೆರಂಬೂರ್ ಎಂಬ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಅವರ ಪಕ್ಷದ ಬಲ 107ಕ್ಕೆ ಇಳಿದಿತ್ತು. ಸರ್ಕಾರ ರಚಿಸಲು ಅವರಿಗೆ ಕನಿಷ್ಠ 11 ಶಾಸಕರ ಬೆಂಬಲದ ಅಗತ್ಯವಿತ್ತು.&lt;/p&gt;&lt;img&gt;&lt;p&gt;ಡಿಎಂಕೆ ಮೈತ್ರಿಕೂಟದಿಂದ ಹೊರಬಂದಿದ್ದ ಕಾಂಗ್ರೆಸ್&zwnj;ನ ಐವರು ಶಾಸಕರು ಮೊದಲೇ ವಿಜಯ್&zwnj;ಗೆ ಬೆಂಬಲ ಘೋಷಿಸಿದ್ದರು. ಆದರೂ ಮ್ಯಾಜಿಕ್ ನಂಬರ್ ತಲುಪಲು ಇನ್ನೂ 6 ಶಾಸಕರ ಕೊರತೆಯಿತ್ತು. ಇದಕ್ಕಾಗಿ ವಿಜಯ್ ಅವರು ತೋಳ್ ತಿರುಮಾವಳವನ್ ನೇತೃತ್ವದ ವಿಸಿಕೆ (VCK) ಹಾಗೂ ಎಡಪಕ್ಷಗಳಾದ ಸಿಪಿಐ(ಎಂ) ಮತ್ತು ಸಿಪಿಐ ಜೊತೆ ಮಾತುಕತೆ ನಡೆಸುತ್ತಿದ್ದರು.&lt;/p&gt;&lt;img&gt;&lt;p&gt;ಒಂದೆಡೆ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದ ಎಂ.ಕೆ. ಸ್ಟಾಲಿನ್ ಅವರು ತಮ್ಮ ಹಳೆಯ ಮಿತ್ರರಾದ ವಿಸಿಕೆ ಮತ್ತು ಎಡಪಕ್ಷಗಳನ್ನು ಉಳಿಸಿಕೊಳ್ಳಲು ಅಂತಿಮ ಪ್ರಯತ್ನ ನಡೆಸಿದ್ದರು. ಅಷ್ಟೇ ಅಲ್ಲದೆ, ತಮ್ಮ ಬದ್ಧವೈರಿ ಎಐಎಡಿಎಂಕೆ ಜೊತೆಗೂ 'ಅಪವಿತ್ರ ಮೈತ್ರಿ' ಮಾಡಿಕೊಳ್ಳುವ ಮಾತುಕತೆ ನಡೆಸುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ, ಇಂದು ಮಧ್ಯಾಹ್ನ ಹೊರಬಿದ್ದಿರುವ ಮಾಹಿತಿಯಂತೆ, ವಿಸಿಕೆ ಮತ್ತು ಎಡಪಕ್ಷಗಳು ಕೊನೆಗೂ ವಿಜಯ್ ಅವರನ್ನು ಬೆಂಬಲಿಸಲು ನಿರ್ಧರಿಸಿವೆ.&lt;/p&gt;&lt;img&gt;&lt;p&gt;ಟಿವಿಕೆ: 107 (ವಿಜಯ್ ಅವರ ಒಂದು ಸ್ಥಾನ ಹೊರತುಪಡಿಸಿ)&lt;/p&gt;&lt;p&gt;ಕಾಂಗ್ರೆಸ್: 05&lt;/p&gt;&lt;p&gt;ವಿಸಿಕೆ: 02&lt;/p&gt;&lt;p&gt;ಸಿಪಿಐ (ಎಂ): 02&lt;/p&gt;&lt;p&gt;ಸಿಪಿಐ: 02&lt;/p&gt;&lt;p&gt;ಒಟ್ಟು: 118 (ಅಗತ್ಯವಿರುವ ನಿಖರ ಬಹುಮತ)&lt;/p&gt;&lt;p&gt;ಈ ಮೂಲಕ ತಮಿಳುನಾಡಿನಲ್ಲಿ ಹೊಸ ಯುಗ ಆರಂಭವಾಗುತ್ತಿದ್ದು, ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ವಿಜಯ್ ಈಗ ಅಧಿಕೃತವಾಗಿ ರಾಜಕೀಯದ 'ತಲೈವಾ' ಆಗಿ ಹೊರಹೊಮ್ಮುತ್ತಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/india-news/vijay-tvk-secures-majority-to-form-tamil-nadu-government-vck-left-support-san-ooquxab"/>
        </item>
        <item>
            <title><![CDATA[ತೆಲಂಗಾಣದಲ್ಲಿ ಶಾಲಾ ಕಟ್ಟಡಕ್ಕಾಗಿ 800 ವರ್ಷ ಹಳೆಯ ಶಿವ ದೇವಾಲಯ ಧ್ವಂಸ, ಅಧಿಕಾರಿಗಳ ವಿರುದ್ಧ ಕೇಸ್ ದಾಖಲು]]></title>
            <link>https://kannada.asianetnews.com/india-news/800-year-old-kakatiya-shiva-temple-demolished-telangana-warangal-school-case-san/articleshow-ti9r3va</link>
            <guid isPermaLink="true">https://kannada.asianetnews.com/india-news/800-year-old-kakatiya-shiva-temple-demolished-telangana-warangal-school-case-san/articleshow-ti9r3va</guid>
            <pubDate>Fri, 08 May 2026 16:07:40 +0530</pubDate>
            <description><![CDATA[&lt;p&gt;ತೆಲಂಗಾಣದ ವಾರಂಗಲ್&zwnj;ನಲ್ಲಿ ಶಾಲಾ ಸಂಕೀರ್ಣ ನಿರ್ಮಾಣಕ್ಕಾಗಿ 13ನೇ ಶತಮಾನದ ಐತಿಹಾಸಿಕ ಕಾಕತೀಯರ ಕಾಲದ ಶಿವ ದೇವಾಲಯವನ್ನು ನೆಲಸಮಗೊಳಿಸಲಾಗಿದೆ. ಈ ಘಟನೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟನೆಯ ನಂತರ ಅಧಿಕಾರಿಗಳು ಅದೇ ಸ್ಥಳದಲ್ಲಿ ದೇವಾಲಯವನ್ನು ಮರುನಿರ್ಮಿಸುವ ಭರವಸೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3hw2bh9430y5b0mgedqxs7,imgname-whatsapp-image-2026-05-08-at-3.52.38-pm-1778235869553.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾರಂಗಲ್ (ಮೇ.8): &lt;/strong&gt;ತೆಲಂಗಾಣದ ವಾರಂಗಲ್ ಜಿಲ್ಲೆಯ ಖಾನಾಪುರ ಮಂಡಲದ ಅಶೋಕ ನಗರದಲ್ಲಿ ಶಾಲಾ ಸಂಕೀರ್ಣ ನಿರ್ಮಿಸಲು 13ನೇ ಶತಮಾನದ ಕಾಕತೀಯರ ಕಾಲದ ಪುರಾತನ ಶಿವ ದೇವಾಲಯವನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಗಿದೆ. ಈ ಘಟನೆಯು ಇತಿಹಾಸಕಾರರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.&lt;/p&gt;&lt;p&gt;ಈ ದೇವಾಲಯವು ಕಾಕತೀಯ ದೊರೆ ಗಣಪತಿದೇವನ ಆಳ್ವಿಕೆಯ ಕಾಲದ್ದಾಗಿದ್ದು (ಕ್ರಿ.ಶ. 1231), ಇಲ್ಲಿ ಅತ್ಯಂತ ಅಪರೂಪದ ಏಳು ಸಾಲುಗಳ ತೆಲುಗು ಶಾಸನವಿತ್ತು. ಈ ಶಾಸನದಲ್ಲಿ ಗಣಪತಿದೇವನನ್ನು &quot;ಮಹಾರಾಜ&quot; ಮತ್ತು &quot;ರಾಜಾಧಿರಾಜ&quot; ಎಂದು ಸಂಬೋಧಿಸಲಾಗಿತ್ತು. 1965ರಲ್ಲಿಯೇ ಪುರಾತತ್ವ ಇಲಾಖೆಯಿಂದ ದಾಖಲೀಕರಣಗೊಂಡಿದ್ದ ಈ ದೇವಾಲಯವು ಐತಿಹಾಸಿಕ &quot;ಕೋಟಾ ಕಟ್ಟಾ&quot; ಮಣ್ಣಿನ ಕೋಟೆಯ ಆವರಣದಲ್ಲಿತ್ತು. ಅಂದಿನ ರಕ್ಷಣಾ ಕೋಟೆಗಳ ಅವಶೇಷಗಳ ನಡುವೆ ಇದ್ದ ಈ ಪಾರಂಪರಿಕ ಕಟ್ಟಡವನ್ನು ಸುಲಭವಾಗಿ ಸಂರಕ್ಷಿಸಬಹುದಿತ್ತು ಅಥವಾ ಸ್ಥಳಾಂತರಿಸಬಹುದಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಸರ್ಕಾರದ ಸಮಗ್ರ ಶಾಲಾ ಕಟ್ಟಡದ ಕಾಮಗಾರಿಗಾಗಿ ಪುರಾತತ್ವ ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ತೆಲಂಗಾಣದ ಮಾನವ ಹಕ್ಕುಗಳ ವಕೀಲ ರಾಮರಾವ್ ಇಮ್ಮನೇನಿ ಅವರು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ತೆಲಂಗಾಣ ಪುರಾತತ್ವ ಕಾಯ್ದೆ ಸೆಕ್ಷನ್ 30ರ ಅಡಿಯಲ್ಲಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಪಾರಂಪರಿಕ ಸಂರಕ್ಷಣಾ ಸಮಿತಿಯನ್ನು ರಚಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.&lt;/p&gt;&lt;p&gt;ಘಟನೆ ಸಂಬಂಧ ಮೇ 6ರಂದು ಜಂಟಿ ತಪಾಸಣೆ ನಡೆಸಿದ ವಾರಂಗಲ್ ಜಿಲ್ಲಾಧಿಕಾರಿ ಕಚೇರಿಯು ಸ್ಪಷ್ಟನೆಯೊಂದನ್ನು ನೀಡಿದೆ. &quot;ನಾವು ಉದ್ದೇಶಪೂರ್ವಕವಾಗಿ ದೇವಾಲಯವನ್ನು ಧ್ವಂಸಗೊಳಿಸಿಲ್ಲ. 30 ಎಕರೆ ವಿಸ್ತೀರ್ಣದ ಜಾಗದಲ್ಲಿ ಹರಡಿಕೊಂಡಿದ್ದ ದಟ್ಟ ಪೊದೆಗಳನ್ನು ಸ್ವಚ್ಛಗೊಳಿಸುವಾಗ ಶಿಥಿಲಗೊಂಡಿದ್ದ ಹಳೆಯ ಕಟ್ಟಡದ ಅವಶೇಷಗಳು ಪತ್ತೆಯಾಗಿವೆ. ಅಲ್ಲದೆ ಈ ಕಟ್ಟಡವು ಅಧಿಕೃತವಾಗಿ ರಕ್ಷಿತ ಸ್ಮಾರಕ ಎಂಬ ಪಟ್ಟಿಯಲ್ಲಿ ದಾಖಲಾಗಿಲ್ಲ&quot; ಎಂದು ಜಿಲ್ಲಾಡಳಿತ ಸಮರ್ಥಿಸಿಕೊಂಡಿದೆ.&lt;/p&gt;&lt;h2&gt;&lt;strong&gt;ಮರುನಿರ್ಮಾಣದ ಭರವಸೆ&lt;/strong&gt;&lt;/h2&gt;&lt;p&gt;ಸಾರ್ವಜನಿಕರ ಆಕ್ರೋಶ ಮತ್ತು ಪ್ರತಿಭಟನೆಗಳು ತೀವ್ರಗೊಂಡ ಬೆನ್ನಲ್ಲೇ ವಾರಂಗಲ್ ಜಿಲ್ಲಾಧಿಕಾರಿ ಡಾ. ಸತ್ಯ ಶಾರದಾ ಮತ್ತು ನರಸಂಪೇಟೆ ಶಾಸಕ ದೊಂತಿ ಮಾಧವ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದರು. ಜನರ ಆಕ್ರೋಶ ತಣಿಸಲು ಅದೇ ಸ್ಥಳದಲ್ಲಿ ಶಿವ ದೇವಾಲಯವನ್ನು ಪುನಃ ನಿರ್ಮಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಇತಿಹಾಸಕಾರರು, ವಾಸ್ತುಶಿಲ್ಪಿಗಳು ಮತ್ತು ಪುರಾತತ್ವ ಇಲಾಖೆಯ ಸಲಹೆಯೊಂದಿಗೆ ಶಾಸ್ತ್ರೋಕ್ತವಾಗಿ ದೇವಾಲಯವನ್ನು ಮರುಸ್ಥಾಪಿಸಲಾಗುವುದು ಮತ್ತು ಆ ಜಾಗವನ್ನು ರಕ್ಷಿತ ಪ್ರದೇಶವೆಂದು ಘೋಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/800-year-old-kakatiya-shiva-temple-demolished-telangana-warangal-school-case-san/articleshow-ti9r3va"/>
        </item>
        <item>
            <title><![CDATA[40 ವರ್ಷ ಹಳೇ ರಿಸರ್ವೇಶನ್ ಸಿಸ್ಟಮ್ ಕೈಬಿಟ್ಟ ಭಾರತೀಯ ರೈಲ್ವೇ, ಹೊಸ ವ್ಯವಸ್ಥೆ ಯಾವಾಗ ಜಾರಿ?]]></title>
            <link>https://kannada.asianetnews.com/gallery/india-news/indian-railways-to-replace-40-year-old-reservation-system-from-august-2026-57ubp1u</link>
            <guid isPermaLink="true">https://kannada.asianetnews.com/gallery/india-news/indian-railways-to-replace-40-year-old-reservation-system-from-august-2026-57ubp1u</guid>
            <pubDate>Fri, 08 May 2026 13:55:25 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೇ ಅತೀ ಹೆಚ್ಚು ಬದಲಾವಣೆ ಕಾಣುತ್ತಿರುವ ಕ್ಷೇತ್ರ. ಇದೀಗ 40 ವರ್ಷಗಳಿಂದ ಇರುವ ಹಳೇ ರಿಸರ್ವೇಶನ್ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. ಹೊಸ ಸಿಸ್ಟಮ್ ಯಾವಾಗಿಂದ ಜಾರಿಯಾಗುತ್ತಿದೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjrzjq23bk4xrbf6nd1wk4pw,imgname-tamil-news---2026-03-03t100322.228-1772512435265.png" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರೈಲ್ವೇ ಅತೀ ಹೆಚ್ಚು ಬದಲಾವಣೆ ಕಾಣುತ್ತಿರುವ ಕ್ಷೇತ್ರ. ಇದೀಗ 40 ವರ್ಷಗಳಿಂದ ಇರುವ ಹಳೇ ರಿಸರ್ವೇಶನ್ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. ಹೊಸ ಸಿಸ್ಟಮ್ ಯಾವಾಗಿಂದ ಜಾರಿಯಾಗುತ್ತಿದೆ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭಾರತೀಯ ರೈಲ್ವೇ ಕಳೆದ ಒಂದು ದಶಕದಲ್ಲಿ ಮಹತ್ತರ ಬದಲಾವಣೆ ಕಂಡಿದೆ. ಹೊಸ ರೈಲು, ವಿದ್ಯುತ್ತೀಕರಣ, ಮೂಲಭೂತ ಸೌಕರ್ಯ ಸೇರಿದಂತೆ ಹಲವು. ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿದೆ. ಇದೀಗ ಬರೋಬ್ಬರಿ 40 ವರ್ಷಗಳಿಂದ ಇರುವ ಹಳೇ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಸಂಪೂರ್ಣ ಬದಲಾವಣೆ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಪ್ರಯಾಣಕರ ರಿಸರ್ವೇಶನ್ ಸಿಸ್ಟಮ್ ಬದಲು ಇದೀಗ ಹೊಸ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಆನ್&zwnj;ಲೈನ್ ಮೂಲಕ ಟಿಕೆಟ್ ಬುಕಿಂಗ್ ಹೆಚ್ಚಾಗಿದೆ. ಶೇಕಡಾ 80ರಷ್ಟು ಟಿಕೆಟ್ ಬುಕಿಂಗ್ ಆನ್&zwnj;ಲೈನ್ ಮೂಲಕವೇ ನಡೆಯುತ್ತಿದೆ.ಕೌಂಟರ್&zwnj;ಗೆ ಹೋಗಿ ಬುಕಿಂಗ್ ಮಾಡುವವರ ಸಂಖ್ಯೆ ವಿರಳವಾಗುತ್ತಿದೆ. ಇದರ ನಡುವೆ ರಿಸರ್ವೇಶನ್ ವ್ಯವಸ್ಥೆ ಬದಲಾಯಿಸಿ ಹೊಸ ಡಿಜಿಟಲ್ ವ್ಯವಸ್ಥೆ ತರಲು ಭಾರತೀಯ ರೈಲ್ವೇ ಸಚಿವಾಲಯ ಮುಂದಾಗಿದೆ.&lt;/p&gt;&lt;img&gt;&lt;p&gt;40 ವರ್ಷಗಳಿಂದ ಚಾಲ್ತಿಯಲ್ಲಿರುವ ಹಳೇ ರಿಸರ್ವೇಶನ್ ಸಿಸ್ಟಮ್ ಬದಲು ಹೊಸ ಡಿಜಿಟಲ್ ವ್ಯವಸ್ಥೆ ಇದೇ ಆಗಸ್ಟ್ 1 ರಿಂದ ಜಾರಿಯಾಗುತ್ತಿದೆ. ಈ ವೇಳೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ 1986ರಲ್ಲಿ ಜಾರಿಗೆ ಬಂದಿದೆ. ಬಳಿಕ ಹಲವು ಸಣ್ಣ ಬದಲಾವಣೆಯೊಂದಿಗೆ ಇದುವರೆಗೂ ಚಾಲ್ತಿಯಲ್ಲಿದೆ.ಸದ್ಯ ಡಿಜಿಟಲ್ ಬೇಡಿಕೆಯಲ್ಲಿ ಹಳೇ ಮೀಸಲಾತಿ ವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ರಚಿಸಲಾಗಿದೆ. ಇದರಿಂದ ಬುಕಿಂಗ್ ವೇಗವೂ ಹೆಚ್ಚಾಗಲಿದೆ.&lt;/p&gt;&lt;img&gt;&lt;p&gt;ಹೊಸ ವ್ಯವಸ್ಥೆಯಲ್ಲಿ ಎಐ ಬಳಕೆ ಮಾಡಲಾಗುತ್ತಿದೆ. ಇದರಿಂದ ಟಿಕೆಟ್ ಕನ್&zwnj;ಫರ್ಮೇಶನ್, ಬುಕಿಂಗ್ ಬಗ್ಗೆ ನಿಖತರೆ ಸಿಗಲಿದೆ. ಹಳೇ ಪದ್ಧತಿಯಿಂದ ಹೊಸ ಡಿಜಿಟಲ್ ವ್ಯವಸ್ಥೆಗೆ ಬದಲಾಗುವ ವೇಳೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಸಚಿವ ಅಶ್ವಿನಿ ವೈಷ್ಣವ್ ಖಡಕ್ ಸೂಚನೆ ನೀಡಿದ್ದಾರೆ. ಟಿಕೆಟ್ ಬುಕಿಂಗ್ ಯಾವುದೇ ಕಾರಣಕ್ಕೆ ಸಮಸ್ಯೆಗೆ ಸಿಲುಕಬಾರದು ಎಂದಿದ್ದಾರೆ. ಇದರಂತೆ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ.&lt;/p&gt;&lt;img&gt;&lt;p&gt;ಹೊಸ ಪದ್ಥತಿಗಳು ಜಾರಿಯಾಗುತ್ತಿದೆ. ಆದರೆ ಕೆಲ ಹಳೇ ವ್ಯವಸ್ಥೆಗಳನ್ನು ಮುಂದುವರಿಸಲಾಗುತ್ತಿದೆ. ಈ ಬೈಕಿ ಪ್ರಯಾಣಿಕರಿಗೆ ನೀಡುವ ಸಬ್ಸಿಡಿ ಮುಂದುವರಿಸಲಾಗುತ್ತಿದೆ. 2024-25ರ ಸಾಲಿನಲ್ಲಿ ರೈಲ್ವೇ ಬರೋಬ್ಬರಿ 60 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಪ್ರಯಾಣಿಕರಿಗೆ ಸಬ್ಸಿಡಿ ರೂಪದಲ್ಲಿ ನೀಡಿದೆ.&lt;/p&gt;&lt;h2&gt;ಸಬ್ಸಿಡಿ ಮುಂದುವರಿಕೆ&lt;/h2&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/indian-railways-to-replace-40-year-old-reservation-system-from-august-2026-57ubp1u"/>
        </item>
        <item>
            <title><![CDATA[ವಿಜಯ್‌ ಸಿಎಂ ಕನಸಿಗೆ ಅಡ್ಡಗಾಲಾಯ್ತಾ ಕಾಂಗ್ರೆಸ್? ಮೈತ್ರಿಯೊಂದಿಗೆ ಸರ್ಕಾರ ರಚನೆಗೆ ಹೋಗಿದ್ದೇ ಪ್ರಮಾದವಾಯ್ತಾ?]]></title>
            <link>https://kannada.asianetnews.com/gallery/india-news/tamil-nadu-election-vijay-tvk-government-formation-failure-reasons-sat-avmw4xv</link>
            <guid isPermaLink="true">https://kannada.asianetnews.com/gallery/india-news/tamil-nadu-election-vijay-tvk-government-formation-failure-reasons-sat-avmw4xv</guid>
            <pubDate>Fri, 08 May 2026 15:51:52 +0530</pubDate>
            <description><![CDATA[&lt;p&gt;ತಮಿಳುನಾಡು ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆದ್ದರೂ, ದಳಪತಿ ವಿಜಯ್ ಅವರ TVK ಪಕ್ಷಕ್ಕೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ರಾಜ್ಯಪಾಲರ ಬಳಿ ಮೈತ್ರಿ ಸರ್ಕಾರದ ಪ್ರಸ್ತಾಪ ಮುಂದಿಟ್ಟಿದ್ದೇ ಸಿಎಂ ಕನಸಿಗೆ ಮುಳುವಾಯಿತು. ಈ ಎಡವಟ್ಟಿನಿಂದಾಗಿ ಬಹುಮತದ ಹತ್ತಿರ ಬಂದಿದ್ದ ವಿಜಯ್ ಅವಕಾಶ ಕಳೆದುಕೊಂಡರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyf463zqq70mkqcnsbg73kh,imgname-gemini-generated-image-5ossjs5ossjs5oss--1--1778065217663.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆದ್ದರೂ, ದಳಪತಿ ವಿಜಯ್ ಅವರ TVK ಪಕ್ಷಕ್ಕೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ರಾಜ್ಯಪಾಲರ ಬಳಿ ಮೈತ್ರಿ ಸರ್ಕಾರದ ಪ್ರಸ್ತಾಪ ಮುಂದಿಟ್ಟಿದ್ದೇ ಸಿಎಂ ಕನಸಿಗೆ ಮುಳುವಾಯಿತು. ಈ ಎಡವಟ್ಟಿನಿಂದಾಗಿ ಬಹುಮತದ ಹತ್ತಿರ ಬಂದಿದ್ದ ವಿಜಯ್ ಅವಕಾಶ ಕಳೆದುಕೊಂಡರು.&lt;/p&gt;&lt;img&gt;&lt;p&gt;ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ. ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚಿಸುವಲ್ಲಿ ವಿಫಲವಾಗಿದೆ. ರಾಜಕೀಯ ಅನುಭವದ ಕೊರತೆ ಮತ್ತು ಸಲಹೆಗಾರರ ಎಡವಟ್ಟು ವಿಜಯ್ ಅವರ ಸಿಎಂ ಕನಸಿಗೆ ತಣ್ಣೀರು ಎರಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ತಮಿಳುನಾಡಿನ 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಿದೆ. ವಿಜಯ್ ಅವರ TVK ಪಕ್ಷ 108 ಸ್ಥಾನಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡಿತ್ತು. ವಿಜಯ್ ಸ್ವತಃ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ನಿಯಮದಂತೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಿದೆ. ಆಗ ಪಕ್ಷದ ಬಲ 107ಕ್ಕೆ ಇಳಿಯುತ್ತದೆ. ಈ ನಡುವೆ 5 ಸ್ಥಾನ ಗೆದ್ದಿದ್ದ ಕಾಂಗ್ರೆಸ್, ವಿಜಯ್ ಅವರಿಗೆ ಬೆಂಬಲ ಘೋಷಿಸಿತ್ತು. ಇದರಿಂದ ಮೈತ್ರಿಕೂಟದ ಬಲ 112ಕ್ಕೆ ಏರಿತು. ಆದರೂ ಬಹುಮತಕ್ಕೆ 6 ಸ್ಥಾನಗಳ ಕೊರತೆಯಿತ್ತು.&lt;/p&gt;&lt;img&gt;&lt;p&gt;ರಾಜಕೀಯ ತಜ್ಞರ ಪ್ರಕಾರ, ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ಅತಿದೊಡ್ಡ ಪಕ್ಷದ ನಾಯಕನಿಗೆ ಸರ್ಕಾರ ರಚಿಸಲು ಮೊದಲ ಅವಕಾಶ ನೀಡಲಾಗುತ್ತದೆ. ವಿಜಯ್ ಅವರು ಕೇವಲ ತಮ್ಮ ಪಕ್ಷದ (TVK) 108 ಶಾಸಕರ ಬೆಂಬಲ ಪತ್ರವನ್ನು ಹಿಡಿದು ರಾಜ್ಯಪಾಲರನ್ನು ಭೇಟಿಯಾಗಬೇಕಿತ್ತು. ಆಗ ರಾಜ್ಯಪಾಲರು ಅತಿದೊಡ್ಡ ಪಕ್ಷದ ನಾಯಕ ಎಂಬ ನೆಲೆಯಲ್ಲಿ ವಿಜಯ್ ಅವರಿಗೆ ಪ್ರಮಾಣವಚನ ಬೋಧಿಸಿ, ಸದನದಲ್ಲಿ ಬಹುಮತ ಸಾಬೀತುಪಡಿಸಲು ಕಾಲಾವಕಾಶ ನೀಡುತ್ತಿದ್ದರು.&lt;/p&gt;&lt;img&gt;&lt;p&gt;ಆದರೆ, ವಿಜಯ್ ಅವರು ತಮ್ಮ ಪತ್ರದಲ್ಲಿ ಕಾಂಗ್ರೆಸ್ ಶಾಸಕರ ಸಹಿಯನ್ನೂ ಸೇರಿಸಿ 'ಮೈತ್ರಿ' ಸರ್ಕಾರ ರಚನೆಯ ಪ್ರಸ್ತಾಪ ಮುಂದಿಟ್ಟರು. ಒಮ್ಮೆ ಮೈತ್ರಿ ಸರ್ಕಾರದ ಪ್ರಸ್ತಾಪ ಹೋದರೆ, ರಾಜ್ಯಪಾಲರು ಅಲ್ಲಿ ಸಂಖ್ಯಾಬಲವನ್ನು (Magic Number 118) ಕಟ್ಟುನಿಟ್ಟಾಗಿ ಪರಿಶೀಲಿಸುತ್ತಾರೆ. ವಿಜಯ್ ಅವರ ಮೈತ್ರಿಕೂಟದ ಬಳಿ ಕೇವಲ 112 ಶಾಸಕರಿದ್ದ ಕಾರಣ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಈ ಮನವಿಯನ್ನು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸಿದರು.&lt;/p&gt;&lt;img&gt;&lt;p&gt;ಎರಡನೇ ಬಾರಿ ರಾಜ್ಯಪಾಲರನ್ನು ಭೇಟಿಯಾದಾಗಲೂ ಬಹುಮತಕ್ಕೆ ಬೇಕಾದ 118 ಶಾಸಕರ ಬೆಂಬಲದ ದಾಖಲೆ ಒದಗಿಸಲು ವಿಜಯ್&zwnj;ಗೆ ಸಾಧ್ಯವಾಗಲಿಲ್ಲ. ಒಂದು ವೇಳೆ ಅವರು ಅತಿದೊಡ್ಡ ಪಕ್ಷದ ನಾಯಕನಾಗಿ ಹಕ್ಕು ಮಂಡಿಸಿದ್ದರೆ, ನೇರವಾಗಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದರು. ಉತ್ತಮ ರಾಜಕೀಯ ಸಲಹೆಗಾರರ ಕೊರತೆಯಿಂದಾಗಿ ವಿಜಯ್ ಅವರು ಸಿಎಂ ಪಟ್ಟದ ಹತ್ತಿರಕ್ಕೆ ಬಂದು ಅವಕಾಶ ಕೈಚೆಲ್ಲುವಂತಾಗಿದೆ. ಸದ್ಯ ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/india-news/tamil-nadu-election-vijay-tvk-government-formation-failure-reasons-sat-avmw4xv"/>
        </item>
        <item>
            <title><![CDATA[ಒಂದೇ ತಪ್ಪಿನಿಂದ ನಟ ವಿಜಯ್ ಸಿಎಂ ಪಟ್ಟ ಮಿಸ್? ಅನುಭವ ಕೊರತೆಯಿಂದ ಟಿವಿಕೆ ಮಾಡಿದ ಎಡವಟ್ಟು]]></title>
            <link>https://kannada.asianetnews.com/gallery/india-news/did-one-mistake-cost-actor-vijay-the-chief-minister-dream-tvk-strategy-under-question-21786zb</link>
            <guid isPermaLink="true">https://kannada.asianetnews.com/gallery/india-news/did-one-mistake-cost-actor-vijay-the-chief-minister-dream-tvk-strategy-under-question-21786zb</guid>
            <pubDate>Fri, 08 May 2026 15:21:46 +0530</pubDate>
            <description><![CDATA[&lt;p&gt;ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ 108 ಸ್ಥಾನ ಗೆದ್ದು ದಾಖಲೆ ಬರೆದಿದೆ ನಿಜ. ಆದರೆ ಸರ್ಕಾರ ರಚಿಸುವ ಧಾವಂತದಲ್ಲಿ ಮಾಡಿದ ಒಂದು ತಪ್ಪು ವಿಜಯ್ ಮುಖ್ಯಮಂತ್ರಿ ಪಟ್ಟವನ್ನೇ ಕಸಿದುಕೊಂಡಿದೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2v5cx25deym7mt3ngs4c5v,imgname-tvk-vijay-5-1778212058017.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ 108 ಸ್ಥಾನ ಗೆದ್ದು ದಾಖಲೆ ಬರೆದಿದೆ ನಿಜ. ಆದರೆ ಸರ್ಕಾರ ರಚಿಸುವ ಧಾವಂತದಲ್ಲಿ ಮಾಡಿದ ಒಂದು ತಪ್ಪು ವಿಜಯ್ ಮುಖ್ಯಮಂತ್ರಿ ಪಟ್ಟವನ್ನೇ ಕಸಿದುಕೊಂಡಿದೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.&lt;/p&gt;&lt;img&gt;&lt;p&gt;ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾದರೂ ರಾಜಕೀಯದ ಅನುಭವದ ಕೊರತೆಯಿಂದಾಗಿ ನಟ ವಿಜಯ್ ಮತ್ತು ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬಹುಮತ ಇಲ್ಲದ ಕಾರಣ ಸರ್ಕಾರ ರಚಿಸಲು ಹಕ್ಕು ಮಂಡಿಸಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್&zwnj;ಗೆ ನಿರಾಸೆಯಾಗಿದೆ. ಟಿವಿಕೆ ನಾಯಕತ್ವ ಮಾಡಿದ ಒಂದು ಸಣ್ಣ ತಾಂತ್ರಿಕ ತಪ್ಪೇ ವಿಜಯ್ ಅವರ ಮುಖ್ಯಮಂತ್ರಿ ಕುರ್ಚಿಗೆ ಅಡ್ಡಗಾಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟು 234 ಸ್ಥಾನಗಳಿರುವ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 118 ಶಾಸಕರ ಬಲ ಬೇಕು. ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಜಯ್ ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದು, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆಗ ಪಕ್ಷದ ಬಲ 107ಕ್ಕೆ ಇಳಿಯಲಿದೆ. ಬಹುಮತಕ್ಕೆ ಇನ್ನೂ 11 ಸ್ಥಾನಗಳ ಕೊರತೆ ಇದ್ದು, 5 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ವಿಜಯ್&zwnj;ಗೆ ಬೆಂಬಲ ಘೋಷಿಸಿತ್ತು. ಇದರೊಂದಿಗೆ ಟಿವಿಕೆ-ಕಾಂಗ್ರೆಸ್ ಮೈತ್ರಿಕೂಟದ ಬಲ 112ಕ್ಕೆ ಏರಿಕೆಯಾಗಿತ್ತು. ಆದರೆ, ಇಲ್ಲೇ ವಿಜಯ್ ರಾಜಕೀಯವಾಗಿ ಎಡವಟ್ಟು ಮಾಡಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ಸಾಂಪ್ರದಾಯಿಕವಾಗಿ, ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ಅತಿದೊಡ್ಡ ಪಕ್ಷದ ನಾಯಕನಾಗಿ ವಿಜಯ್ ತಮ್ಮ ಪಕ್ಷದ ಶಾಸಕರ ಸಹಿ ಇರುವ ಪತ್ರವನ್ನು ಮಾತ್ರ ರಾಜ್ಯಪಾಲರಿಗೆ ನೀಡಬೇಕಿತ್ತು. ಆಗ ರಾಜ್ಯಪಾಲರು ವಿಜಯ್&zwnj;ಗೆ ಸರ್ಕಾರ ರಚಿಸಲು ಅವಕಾಶ ನೀಡಿ, ನಂತರ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುತ್ತಿದ್ದರು. ಆದರೆ, ವಿಜಯ್ ತಮ್ಮ ಪತ್ರದಲ್ಲಿ ಕಾಂಗ್ರೆಸ್ ಶಾಸಕರ ಸಹಿಯನ್ನೂ ಸೇರಿಸಿದ್ದರಿಂದ, ರಾಜ್ಯಪಾಲರು ಇದನ್ನು ಮೈತ್ರಿ ಸರ್ಕಾರದ ಪ್ರಸ್ತಾಪವೆಂದು ಪರಿಗಣಿಸಿದರು. ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಬೇಕಾದ 118 ಶಾಸಕರ ಬೆಂಬಲ ಇಲ್ಲದ ಕಾರಣ, ರಾಜ್ಯಪಾಲರು ವಿಜಯ್ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ.&lt;/p&gt;&lt;img&gt;&lt;p&gt;ಎರಡನೇ ಬಾರಿಗೆ ರಾಜ್ಯಪಾಲರನ್ನು ಭೇಟಿಯಾದಾಗಲೂ ಬಹುಮತ ಸಾಬೀತುಪಡಿಸಲು ಬೇಕಾದ ದಾಖಲೆಗಳನ್ನು ಹಾಜರುಪಡಿಸಲು ವಿಜಯ್&zwnj;ಗೆ ಸಾಧ್ಯವಾಗಲಿಲ್ಲ ಎಂದು ರಾಜಭವನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಉತ್ತಮ ರಾಜಕೀಯ ಸಲಹೆಗಾರರ ಕೊರತೆಯೇ ವಿಜಯ್&zwnj;ಗೆ ಮುಳುವಾಯಿತು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಅತಿದೊಡ್ಡ ಪಕ್ಷದ ನಾಯಕನಾಗಿ ಮಾತ್ರ ಹಕ್ಕು ಮಂಡಿಸಿದ್ದರೆ, ವಿಜಯ್ ಈಗಾಗಲೇ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರು ಎನ್ನುವುದು ತಜ್ಞರ ಅಭಿಪ್ರಾಯ. ಸದ್ಯಕ್ಕೆ ತಮಿಳುನಾಡು ರಾಜಕೀಯ ತೀವ್ರ ಕುತೂಹಲ ಕೆರಳಿಸಿದೆ.&lt;/p&gt;&lt;img&gt;&lt;p&gt;ವಿಜಯ್ ನಿರಾಸೆ ಮಾತ್ರವಲ್ಲ, ಇತ್ತ ಡಿಎಂಕೆ ಹಾಗೂ ಎಐಡಿಂಕೆ ಒಂದಾಗಿ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ಹೀಗೆ ಆದರೆ 107 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ವಿಜಯ್ ಎಚ್ಚರಿಕೆ ನೀಡಿದ್ದಾರೆ. ಇತ್ತ ಕೆಲ ಪಕ್ಷಗಳು ವಿಜಯ್ ಟಿವಿಕೆಗೆ ಬೆಂಬಲ ನೀಡುವುದಾಗಿ ಹೇಳಿದೆ. ಈ ನಡುವೆ ವಿಸಿಕೆ ಪಕ್ಷ ಶೀಘ್ರದಲ್ಲೇ ಬೆಂಬಲ ನೀಡುವ ಕುರಿತು ನಿರ್ಧಾರ ಪ್ರಕಟಿಸುವುದಾಗಿ ಹೇಳಿದೆ.&lt;/p&gt;&lt;h2&gt;ಸಾಮೂಹಿಕ ರಾಜೀನಾಮೆ ಬೆದರಿಕೆ&lt;/h2&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/did-one-mistake-cost-actor-vijay-the-chief-minister-dream-tvk-strategy-under-question-21786zb"/>
        </item>
        <item>
            <title><![CDATA[ಎಸ್‌ಬಿಐ ಹೂಡಿಕೆದಾರರಿಗೆ ಲಾಟರಿ:ಪ್ರತಿ ಷೇರಿಗೆ ₹17.35 ಡಿವಿಡೆಂಡ್ ಘೋಷಣೆ; ರೆಕಾರ್ಡ್ ಡೇಟ್ ಯಾವಾಗ?]]></title>
            <link>https://kannada.asianetnews.com/business/state-bank-of-india-dividend-2026-record-date-payment-details-share-price-update-sat/articleshow-gfqsgt3</link>
            <guid isPermaLink="true">https://kannada.asianetnews.com/business/state-bank-of-india-dividend-2026-record-date-payment-details-share-price-update-sat/articleshow-gfqsgt3</guid>
            <pubDate>Fri, 08 May 2026 15:19:45 +0530</pubDate>
            <description><![CDATA[ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2025-26ರ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹17.35 ಅಂತಿಮ ಲಾಭಾಂಶವನ್ನು ಘೋಷಿಸಿದೆ. ಈ ಲಾಭಾಂಶವನ್ನು ಪಡೆಯಲು ಮೇ 16, 2026 ಅನ್ನು ದಾಖಲೆ ದಿನಾಂಕವಾಗಿ ನಿಗದಿಪಡಿಸಲಾಗಿದ್ದು, ಜೂನ್ 4, 2026 ರಂದು ಅರ್ಹ ಹೂಡಿಕೆದಾರರಿಗೆ ಹಣ ಪಾವತಿಸಲಾಗುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kr3fn1bve8r1cc0hf5880dm6,imgname-sbi-share-dividend-1778233542011.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 08): ದೇ&lt;/strong&gt;ಶದ ಅತಿದೊಡ್ಡ ಸಾರ್ವಜನಿಕ ವಲಯದ ಸಾಲದಾತ ಸಂಸ್ಥೆಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ ಹೂಡಿಕೆದಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. 2025-26ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಪ್ರತಿ ಷೇರಿಗೆ ಬರೋಬ್ಬರಿ 17.35 ರೂಪಾಯಿಗಳ ಅಂತಿಮ ಲಾಭಾಂಶವನ್ನು (Final Dividend) ಘೋಷಿಸಿದೆ.&lt;/p&gt;&lt;p&gt;ಶುಕ್ರವಾರ ನಡೆದ ಬ್ಯಾಂಕಿನ ಕೇಂದ್ರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದ್ದು, ಸೆಬಿ (SEBI) ನಿಯಮಾವಳಿಗಳ ಅನ್ವಯ ಈ ಘೋಷಣೆ ಮಾಡಲಾಗಿದೆ. ಈ ಲಾಭಾಂಶವು ಬ್ಯಾಂಕಿನ ಷೇರುದಾರರಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ತಂದುಕೊಡಲಿದೆ.&lt;/p&gt;&lt;h3&gt;&lt;strong&gt;1,735 ಶೇಕಡಾ ಲಾಭಾಂಶ!&lt;/strong&gt;&lt;/h3&gt;&lt;p&gt;ಎಸ್&zwnj;ಬಿಐನ ಪ್ರತಿ ಈಕ್ವಿಟಿ ಷೇರಿನ ಮುಖಬೆಲೆ (Face Value) 1 ರೂಪಾಯಿ ಆಗಿದ್ದು, ಈಗ ಘೋಷಿಸಲಾದ 17.35 ರೂಪಾಯಿ ಡಿವಿಡೆಂಡ್ ಎಂದರೆ ಅದು ಶೇಕಡಾ 1,735 ರಷ್ಟು ಲಾಭಾಂಶ ಎಂದರ್ಥ. ಬ್ಯಾಂಕ್ ತನ್ನ ಹಣಕಾಸಿನ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆದಾರರಿಗೆ ಈ ಪ್ರತಿಫಲವನ್ನು ನೀಡಲು ಮುಂದಾಗಿದೆ.&lt;/p&gt;&lt;h2&gt;&lt;strong&gt;ರೆಕಾರ್ಡ್ ಡೇಟ್ ಮತ್ತು ಅರ್ಹತೆ:&lt;/strong&gt;&lt;/h2&gt;&lt;p&gt;ಹೂಡಿಕೆದಾರರು ಈ ಡಿವಿಡೆಂಡ್ ಪಡೆಯಲು ಅರ್ಹರಾಗಿದ್ದಾರೆಯೇ ಎಂದು ನಿರ್ಧರಿಸಲು ಬ್ಯಾಂಕ್ 2026ರ ಮೇ 16 ರನ್ನು 'ದಾಖಲೆ ದಿನಾಂಕ' (Record Date) ಎಂದು ನಿಗದಿಪಡಿಸಿದೆ. ಅಂದರೆ, ಮೇ 16ರ ವೇಳೆಗೆ ಯಾರೆಲ್ಲಾ ತಮ್ಮ ಡಿಮ್ಯಾಟ್ ಖಾತೆಯಲ್ಲಿ ಎಸ್&zwnj;ಬಿಐ ಷೇರುಗಳನ್ನು ಹೊಂದಿರುತ್ತಾರೋ, ಅವರು ಮಾತ್ರ ಈ 17.35 ರೂಪಾಯಿ ಡಿವಿಡೆಂಡ್ ಪಡೆಯಲು ಅರ್ಹರಾಗಿರುತ್ತಾರೆ.&lt;/p&gt;&lt;h3&gt;&lt;strong&gt;ಹಣ ಪಾವತಿ ಯಾವಾಗ?&lt;/strong&gt;&lt;/h3&gt;&lt;p&gt;ಅರ್ಹ ಷೇರುದಾರರಿಗೆ ಡಿವಿಡೆಂಡ್ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ, 2026ರ ಜೂನ್ 4 ರಂದು ಈ ಲಾಭಾಂಶದ ಮೊತ್ತವನ್ನು ಪಾವತಿಸಲಾಗುವುದು.&lt;/p&gt;&lt;h2&gt;&lt;strong&gt;ಷೇರು ಮಾರುಕಟ್ಟೆಯಲ್ಲಿ ಎಸ್&zwnj;ಬಿಐ ಸ್ಥಿತಿ:&lt;/strong&gt;&lt;/h2&gt;&lt;p&gt;ಡಿವಿಡೆಂಡ್ ಘೋಷಣೆಯ ಹೊರತಾಗಿಯೂ, ಶುಕ್ರವಾರದ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಎಸ್&zwnj;ಬಿಐ ಷೇರುಗಳು ಶೇಕಡಾ 3 ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಮಾರ್ಚ್ ತ್ರೈಮಾಸಿಕದ ಫಲಿತಾಂಶಗಳು ಮಾರುಕಟ್ಟೆಯ ನಿರೀಕ್ಷೆಗಿಂತ ಭಿನ್ನವಾಗಿದ್ದರಿಂದ ಷೇರು ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಎಸ್&zwnj;ಬಿಐ ವರದಿ ಮಾಡಿದ ಮಿಶ್ರ ಫಲಿತಾಂಶವು ಹೂಡಿಕೆದಾರರಲ್ಲಿ ಸ್ವಲ್ಪ ಮಟ್ಟದ ಆತಂಕ ಮೂಡಿಸಿದ್ದರೂ, ಭಾರಿ ಪ್ರಮಾಣದ ಡಿವಿಡೆಂಡ್ ಘೋಷಣೆಯು ದೀರ್ಘಕಾಲದ ಹೂಡಿಕೆದಾರರಿಗೆ ಸಮಾಧಾನ ತಂದಿದೆ.&lt;/p&gt;&lt;p&gt;ಕಳೆದ ಹಣಕಾಸು ವರ್ಷದಲ್ಲಿ ಎಸ್&zwnj;ಬಿಐ ಸ್ಥಿರವಾದ ಕಾರ್ಯಾಚರಣೆಯ ಪ್ರದರ್ಶನ ನೀಡಿದ್ದು, ತನ್ನ ಲಾಭದ ಒಂದು ಭಾಗವನ್ನು ಷೇರುದಾರರೊಂದಿಗೆ ಹಂಚಿಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಂಡಿದೆ.&lt;/p&gt;]]></content:encoded>
            <category>india-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/business/state-bank-of-india-dividend-2026-record-date-payment-details-share-price-update-sat/articleshow-gfqsgt3"/>
        </item>
        <item>
            <title><![CDATA[ಬಂಗಾಳ ಚುನಾವಣೆಯಲ್ಲಿ ಪ್ರಭಾವ ಬೀರಿತಾ ಎಸ್ಐಆರ್? ವಿಪಕ್ಷಗಳ ಬಣ್ಣ ಬಯಲು ಮಾಡಿದ ಫಲಿತಾಂಶ]]></title>
            <link>https://kannada.asianetnews.com/india-news/did-sir-influence-bengal-elections-results-expose-opposition-strategy/articleshow-sf8tkzx</link>
            <guid isPermaLink="true">https://kannada.asianetnews.com/india-news/did-sir-influence-bengal-elections-results-expose-opposition-strategy/articleshow-sf8tkzx</guid>
            <pubDate>Fri, 08 May 2026 14:32:16 +0530</pubDate>
            <description><![CDATA[&lt;p&gt;ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಎಸ್ಐಆರ್ ಮೇಲೆ ಆರೋಪ ಮಾಡಿದೆ. ನಿಜಕ್ಕೂ ಚುನಾವಣೆ ಫಲಿತಾಂಶದ ಮೇಲೆ ಎಸ್ಐಆರ್ ಪ್ರಭಾವ ಬೀರುತ್ತಾ? ಸತ್ಯವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk3jbwg3t9x4h9snfv6jcker,imgname-rahul-gandhi-mamata-banerjee-1772867678723.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ (ಮೇ.08) &lt;/strong&gt;ಪಶ್ಜಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿದಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮಕಾಡೆ ಮಲಗಿದ್ದು ಕೇವಲ 80 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇತ್ತ ಬಿಜೆಪಿ 207 ಸ್ಥಾನ ಗೆದ್ದು ಭರ್ಜರಿ ಬಹುಮತ ಪಡೆದಿದೆ. ಸೋಲು ಖಚಿತವಾಗುತ್ತಿದ್ದಂತೆ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳ ನಾಯಕರು ಕಾರಣಗಳನ್ನು ಹುಡುಕುತ್ತಿದ್ದಾರೆ. ಈ ಪೈಕಿ ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ಮೇಲೆ ಎಸ್ಐಆರ್ ಪರಿಣಾಮ ಬೀರಿದೆ ಅನ್ನೋ ವಾದ ಮುಂದಿಡುತ್ತಿದ್ದಾರೆ. ಆದರೆ SIR ಎಲ್ಲಾ ರಾಜ್ಯಗಳಲ್ಲಿ ನಡೆಸಲಾಗುವ ಸಾಮಾನ್ಯ ಸಂವಿಧಾನಿಕ ಪ್ರಕ್ರಿಯೆಯಾಗಿದೆ. ದತ್ತಾಂಶಗಳು, ನ್ಯಾಯಾಂಗದ ಮೇಲ್ವಿಚಾರಣೆ ಮತ್ತು ವಿಶಾಲವಾದ ಚುನಾವಣಾ ಪ್ರವೃತ್ತಿಗಳ ಮೂಲಕ SIR ನಡೆಸಲಾಗುತ್ತದೆ. ಬಂಗಾಳ ಫಲಿತಾಂಶ ಸಾರ್ವಜನಿಕ ಭಾವನೆ ಮತ್ತು ಆಡಳಿತ ವಿರೋಧಿ ಅಲೆಯ ಕಾರಣದಿಂದ ಸಂಭವಿಸಿದ ನೈಜ ರಾಜಕೀಯ ಬದಲಾವಣೆ ಅನ್ನೋ ಅರಿಯಲು ವಿಪಕ್ಷಗಳು ವಿಫಲವಾಗಿದೆ.&lt;/p&gt;&lt;h2&gt;ಎಸ್&zwnj;ಐಆರ್ (SIR) ಒಂದು ಸಾಮಾನ್ಯ ಸಾಂವಿಧಾನಿಕ ಪ್ರಕ್ರಿಯೆ:&lt;/h2&gt;&lt;p&gt;ವಿಶೇಷ ತೀವ್ರ ಪರಿಷ್ಕರಣೆ (SIR) ಎಂಬುದು ಯಾವುದೇ ಹೊಸ ಅಥವಾ ಅಸಾಮಾನ್ಯ ಪ್ರಕ್ರಿಯೆಯಲ್ಲ. ಈ ಹಿಂದೆಯೂ ಹಲವಾರು ರಾಜ್ಯಗಳಲ್ಲಿ ಚುನಾವಣಾ ಆಯೋಗದ ಚೌಕಟ್ಟು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ಇಂತಹ ಪರಿಷ್ಕರಣೆಗಳನ್ನು ನಡೆಸಲಾಗಿದೆ. ಇದನ್ನು ಬಂಗಾಳಕ್ಕೆ ಮಾತ್ರ ಸೀಮಿತವಾದ ರಾಜಕೀಯ ಪಿತೂರಿ ಎಂದು ಬಿಂಬಿಸಲು ಪ್ರಯತ್ನಿಸುವುದು ವಾಸ್ತವಕ್ಕೆ ದೂರವಾದ ಮತ್ತು ದಾರಿ ತಪ್ಪಿಸುವ ಕೆಲಸವಾಗಿದೆ ಅನ್ನೋದು ಹಲವು ಬಾರಿ ಸಾಬೀತಾಗಿದೆ.&lt;/p&gt;&lt;p&gt;&lt;strong&gt;ಆಯ್ದ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂಬ ಸುಳ್ಳು ಆರೋಪ&lt;/strong&gt;&lt;/p&gt;&lt;p&gt;ವಿರೋಧ ಪಕ್ಷಗಳು ಆಳುವ ರಾಜ್ಯಗಳಲ್ಲಿ ಮಾತ್ರ ಆಯ್ದು ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಆರೋಪವು ರಾಷ್ಟ್ರೀಯ ದತ್ತಾಂಶವನ್ನು ಗಮನಿಸಿದಾಗ ಸುಳ್ಳೆಂದು ಸಾಬೀತಾಗುತ್ತದೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್&zwnj;ಗಢದಂತಹ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳಕ್ಕಿಂತ ಹೆಚ್ಚಿನ ಅಥವಾ ಸಮಾನವಾದ ಶೇಕಡಾವಾರು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದು ಎಸ್&zwnj;ಐಆರ್ (SIR) ಇಡೀ ದೇಶಾದ್ಯಂತ ನಡೆಸಲಾದ ಆಡಳಿತಾತ್ಮಕ ಪ್ರಕ್ರಿಯೆ ಎಂಬುದನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;ತಮ್ಮ ಪರ ಇರುವ ಸಮೀಕ್ಷೆ ಬಳಸಿ ಪ್ರಚಾರ&lt;/strong&gt;&lt;/p&gt;&lt;p&gt;ವಿರೋಧ ಪಕ್ಷಗಳು ನಿಜವಾದ ಚುನಾವಣಾ ಫಲಿತಾಂಶಗಳನ್ನು ತಳ್ಳಿಹಾಕಲು ಕೇವಲ ತಮಗೆ ಅನುಕೂಲಕರವಾದ ಚುನಾವಣಾ ಸಮೀಕ್ಷೆಗಳನ್ನು ಬಳಸುತ್ತಿವೆ. 2024ರಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳಿದಾಗ ಅಥವಾ ಕೇರಳದ ಎಕ್ಸಿಟ್ ಪೋಲ್&zwnj;ಗಳು ವಿಫಲವಾದಾಗ ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಪ್ರಶ್ನಿಸಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪು ಮತದಾರನದ್ದೇ ಹೊರತು ಟಿವಿ ಸಮೀಕ್ಷೆಗಳದ್ದಲ್ಲ.&lt;/p&gt;&lt;h2&gt;ಭಾರತದ ಚುನಾವಣಾ ವ್ಯವಸ್ಥೆಯು ಕೇವಲ ಮತಗಳ ಹಂಚಿಕೆಯ ಲೆಕ್ಕಾಚಾರವಲ್ಲ:&lt;/h2&gt;&lt;p&gt;ಕೇವಲ 4.85% ಮತಗಳ ವ್ಯತ್ಯಾಸವು ಇಷ್ಟೊಂದು ದೊಡ್ಡ ಮಟ್ಟದ ಸ್ಥಾನಗಳ ಬದಲಾವಣೆಯನ್ನು ತರಲು ಸಾಧ್ಯವಿಲ್ಲ ಎಂಬ ವಾದವು ಭಾರತದ 'ಫಸ್ಟ್-ಪಾಸ್ಟ್-ದಿ-ಪೋಸ್ಟ್' (First-Past-The-Post) ಚುನಾವಣಾ ವ್ಯವಸ್ಥೆಯ ಅಜ್ಞಾನವನ್ನು ತೋರಿಸುತ್ತದೆ. ಭಾರತೀಯ ರಾಜಕೀಯ ಇತಿಹಾಸದಲ್ಲಿ ಹಿಮಾಚಲ ಪ್ರದೇಶ (2022), ಮಧ್ಯಪ್ರದೇಶ (2018) ಮತ್ತು ತೆಲಂಗಾಣ (2023) ಚುನಾವಣೆಗಳಲ್ಲಿ ಕಂಡುಬಂದಂತೆ, ಮತಗಳ ಹಂಚಿಕೆಯಲ್ಲಿನ ಸಣ್ಣ ಬದಲಾವಣೆಗಳೂ ದೊಡ್ಡ ಸಂಖ್ಯೆಯ ಸ್ಥಾನಗಳ ವ್ಯತ್ಯಾಸಕ್ಕೆ ಕಾರಣವಾಗಬಹುದು.&lt;/p&gt;&lt;p&gt;&lt;strong&gt;ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ಕಾಂಗ್ರೆಸ್&zwnj;ನ ಇಬ್ಬಗೆಯ ನೀತಿ:&lt;/strong&gt;&lt;/p&gt;&lt;p&gt;2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮೊದಲು 12 ಲಕ್ಷಕ್ಕೂ ಹೆಚ್ಚು ಮತದಾರರನ್ನು ಸೇರಿಸಲಾಯಿತು ಮತ್ತು 6 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಆಗ ಫಲಿತಾಂಶ ತಮಗೆ ಪೂರಕವಾಗಿದ್ದರಿಂದ ಕಾಂಗ್ರೆಸ್ ಯಾವುದೇ ಆಕ್ಷೇಪ ವ್ಯತ್ತಪಡಿಸಿರಲಿಲ್ಲ. ಆದರೆ ಈಗ ಇದನ್ನೇ &quot;ಮತಗಳ ಕಳ್ಳತನ&quot; ಎಂದು ಕರೆಯುವುದು ಅವರ ರಾಜಕೀಯ ಅವಕಾಶವಾದವನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;ರಾಜಕೀಯ ಪ್ರೇರಿತ ಪ್ರಶ್ನೆ:&lt;/strong&gt;&lt;/p&gt;&lt;p&gt;ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ ನೇಮಕಗೊಂಡಿದ್ದ ಹಲವಾರು ಮಾಜಿ ಮುಖ್ಯ ಚುನಾವಣಾ ಆಯುಕ್ತರು ನಂತರ ರಾಜ್ಯಪಾಲರಾಗಿ ಅಥವಾ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ನಂತರವೇ ವಿರೋಧ ಪಕ್ಷಗಳು ಇಂತಹ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿರುವುದು ಕೇವಲ ರಾಜಕೀಯ ಪ್ರೇರಿತವಾಗಿದೆ.&lt;/p&gt;&lt;p&gt;&lt;strong&gt;ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ನಡೆದಿದೆ&lt;/strong&gt;&lt;/p&gt;&lt;p&gt;ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್&zwnj;ಐಆರ್ (SIR) ಮತ್ತು ಮತದಾನ ಪ್ರಕ್ರಿಯೆಯು ಸುಪ್ರೀಂ ಕೋರ್ಟ್ ಮತ್ತು ಕಲ್ಕತ್ತಾ ಹೈಕೋರ್ಟ್&zwnj;ನ ನಿರಂತರ ಮೇಲ್ವಿಚಾರಣೆಯಲ್ಲಿ ನಡೆದಿದೆ. ಟಿಎಂಸಿ ಸಲ್ಲಿಸಿದ ಹಲವಾರು ಅರ್ಜಿಗಳನ್ನು ನ್ಯಾಯಾಲಯಗಳು ವಿಚಾರಣೆ ನಡೆಸಿವೆ. ನ್ಯಾಯಾಲಯಗಳು ಚುನಾವಣಾ ಆಯೋಗದ ಚೌಕಟ್ಟಿಗೆ ಅನುಮತಿ ನೀಡಿದ ನಂತರವೂ &quot;ಚುನಾವಣೆ ಕಳುವಾಗಿದೆ&quot; ಎಂದು ಆರೋಪಿಸುವುದು ನ್ಯಾಯಾಂಗದ ಮೇಲಿನ ದಾಳಿಯಾಗಿದೆ.&lt;/p&gt;&lt;h2&gt;ಬಂಗಾಳದಲ್ಲಿ ಕಂಡುಬಂದಿದ್ದು ನೈಜ ರಾಜಕೀಯ ಬದಲಾವಣೆ:&lt;/h2&gt;&lt;p&gt;ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶವು ಆಡಳಿತ ವಿರೋಧಿ ಅಲೆ ಮತ್ತು ಸಾರ್ವಜನಿಕ ಅಸಮಾಧಾನದಿಂದ ಸಂಭವಿಸಿದ ನೈಜ ಬದಲಾವಣೆಯಾಗಿದೆ. ಬಿಜೆಪಿ ತನ್ನ ಹಳೆಯ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಹೊಸ ಕ್ಷೇತ್ರಗಳಿಗೂ ವಿಸ್ತರಿಸಿದೆ ಮತ್ತು ಮತಗಳ ಹಂಚಿಕೆಯನ್ನು ಹೆಚ್ಚಿಸಿಕೊಂಡಿದೆ. ಇದೇ ಸಮಯದಲ್ಲಿ ಟಿಎಂಸಿ ತನ್ನ ಭದ್ರಕೋಟೆಗಳನ್ನು ಕಳೆದುಕೊಂಡಿದೆ.&lt;/p&gt;&lt;p&gt;&lt;strong&gt;ಎಸ್&zwnj;ಐಆರ್ (SIR), ಬಿಜೆಪಿ ಗೆಲುವಿನ ನಡುವೆ ಸಂಬಂಧವಿಲ್ಲ:&lt;/strong&gt;&lt;/p&gt;&lt;p&gt;ಎಸ್&zwnj;ಐಆರ್ (SIR) ಮೂಲಕ ಹೆಸರುಗಳನ್ನು ತೆಗೆದುಹಾಕಿದ್ದರಿಂದ ಬಿಜೆಪಿಗೆ ಲಾಭವಾಗಿದೆ ಎಂಬ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ. ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾದ ಕ್ಷೇತ್ರಗಳಲ್ಲಿ ಬಿಜೆಪಿಗಿಂತ ಟಿಎಂಸಿಯೇ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಸ್ವತಂತ್ರ ವಿಶ್ಲೇಷಣೆಗಳ ಪ್ರಕಾರ ಹೆಸರುಗಳ ತೆಗೆದುಹಾಕುವಿಕೆ ಮತ್ತು ಮತಗಳ ಹಂಚಿಕೆಯ ನಡುವೆ ಯಾವುದೇ ಸಂಬಂಧ ಕಂಡುಬಂದಿಲ್ಲ.&lt;/p&gt;&lt;p&gt;&lt;strong&gt;ಬಿಜೆಪಿಯ ಬೆಳವಣಿಗೆಯು ರಾಜ್ಯಾದ್ಯಂತ ಹರಡಿದೆ&lt;/strong&gt;&lt;/p&gt;&lt;p&gt;ಬಿಜೆಪಿಯ ಸಾಧನೆಯು ಕೇವಲ ಕೆಲವು ಆಯ್ದ ಪ್ರದೇಶಗಳಿಗೆ ಸೀಮಿತವಾಗಿಲ್ಲ; ಇದು ಉತ್ತರ ಬಂಗಾಳ, ಜಂಗಲ್ ಮಹಲ್ ಮತ್ತು ಪ್ರೆಸಿಡೆನ್ಸಿ ಪ್ರದೇಶಗಳಾದ್ಯಂತ ಕಂಡುಬಂದಿದೆ. ಕೆಲವು ನಿರ್ದಿಷ್ಟ ಪಾಕೆಟ್&zwnj;ಗಳಲ್ಲಿ ಮಾತ್ರ ಬಿಜೆಪಿಗೆ ಲಾಭವಾಗಿದೆ ಎಂಬ ವಾದವನ್ನು ರಾಜ್ಯಾದ್ಯಂತ ಕಂಡುಬಂದಿರುವ ಚುನಾವಣಾ ಪ್ರವೃತ್ತಿಗಳು ತಳ್ಳಿಹಾಕುತ್ತವೆ.&lt;/p&gt;&lt;p&gt;&lt;strong&gt;ಇಂತಹ ಬದಲಾವಣೆಗಳು ಐತಿಹಾಸಿಕವಾಗಿ ಅಸಾಮಾನ್ಯವೇನಲ್ಲ:&lt;/strong&gt;&lt;/p&gt;&lt;p&gt;2024ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿ ತನ್ನ ಮತಗಳ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ ಮತ್ತು ಟಿಎಂಸಿ ಕುಸಿತ ಕಂಡಿದೆ. ಬಂಗಾಳವು ಹಿಂದೆ 2006 ಮತ್ತು 2011ರ ನಡುವೆ ಎಡರಂಗದ ಪತನದಂತಹ ದೊಡ್ಡ ರಾಜಕೀಯ ಬದಲಾವಣೆಗಳನ್ನು ಕಂಡಿದೆ. ಆದ್ದರಿಂದ 2026ರ ಫಲಿತಾಂಶವು ಒಂದು ಪ್ರಜಾಪ್ರಭುತ್ವದ ಸಹಜ ಬದಲಾವಣೆಯೇ ಹೊರತು ಅಸಹಜವೇನಲ್ಲ.&lt;/p&gt;&lt;p&gt;&lt;strong&gt;ರಾಹುಲ್ ಗಾಂಧಿಯವರ ಆರೋಪಗಳೇ ಎಸ್&zwnj;ಐಆರ್ (SIR) ಅಗತ್ಯವನ್ನು ಸಮರ್ಥಿಸುತ್ತವೆ:&lt;/strong&gt;&lt;/p&gt;&lt;p&gt;ನಕಲಿ ಮತದಾರರು, ತಪ್ಪು ವಿಳಾಸಗಳು ಮತ್ತು ಅಕ್ರಮ ನೋಂದಣಿಗಳ ಬಗ್ಗೆ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಗಳೇ ಎಸ್&zwnj;ಐಆರ್ (SIR) ಪ್ರಕ್ರಿಯೆಯ ಅಗತ್ಯತೆಯನ್ನು ಸಾಬೀತುಪಡಿಸುತ್ತವೆ. ಇಂತಹ ದೋಷಗಳನ್ನು ಸರಿಪಡಿಸುವುದೇ ಎಸ್&zwnj;ಐಆರ್ (SIR) ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಎಸ್&zwnj;ಐಆರ್ (SIR) ಅನ್ನು ವಿರೋಧಿಸುವುದು ಕಾಂಗ್ರೆಸ್ ನಾಯಕತ್ವವು ವ್ಯಕ್ತಪಡಿಸುತ್ತಿರುವ ಕಳಕಳಿಗೆ ವಿರುದ್ಧವಾಗಿದೆ.&lt;/p&gt;&lt;p&gt;&lt;strong&gt;ಪ್ರಜಾಪ್ರಭುತ್ವದ ತೀರ್ಪನ್ನು ಗೌರವಿಸಬೇಕು:&lt;/strong&gt;&lt;/p&gt;&lt;p&gt;ಭಾರತದ ಪ್ರಜಾಪ್ರಭುತ್ವವು ಕೇವಲ ಒಂದು ನಿರ್ದಿಷ್ಟ ಪಕ್ಷ ಗೆದ್ದಾಗ ಮಾತ್ರ ನ್ಯಾಯಬದ್ಧವಾಗುವುದಿಲ್ಲ. ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಸಾಂವಿಧಾನಿಕ ಸಂಸ್ಥೆಗಳು ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿವೆ. ಯಾವುದೇ ಸಾಕ್ಷ್ಯಗಳಿಲ್ಲದೆ ಚುನಾವಣಾ ಫಲಿತಾಂಶಗಳನ್ನು ಪ್ರಶ್ನಿಸುವುದು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಂದಿಸುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/did-sir-influence-bengal-elections-results-expose-opposition-strategy/articleshow-sf8tkzx"/>
        </item>
        <item>
            <title><![CDATA[ಸಿಎಂ ಸ್ಥಾನ ಬಿಡಲ್ಲ ಎಂದಿರುವ ದೀದಿ ಭಾರಿ ಸ್ಕೆಚ್​? ಅಖಿಲೇಶ್​ ಯಾದವ್​ ಜೊತೆ ಸಿಕ್ರೇಟ್​ ಮೀಟಿಂಗ್​ನಲ್ಲಿ ನಡೆದದ್ದೇನು]]></title>
            <link>https://kannada.asianetnews.com/politics/didi-you-have-not-lost-akhilesh-yadav-meets-mamata-gives-emotional-support-suc/articleshow-5mgydbh</link>
            <guid isPermaLink="true">https://kannada.asianetnews.com/politics/didi-you-have-not-lost-akhilesh-yadav-meets-mamata-gives-emotional-support-suc/articleshow-5mgydbh</guid>
            <pubDate>Fri, 08 May 2026 13:48:29 +0530</pubDate>
            <description><![CDATA[ಶಾಸಕಿಯಾಗಿ ಸೋತರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದಾರೆ. ಬಹುಮತ ಸಾಬೀತುಪಡಿಸಲು ಸಂವಿಧಾನದಲ್ಲಿ ಅವಕಾಶವಿದ್ದರೂ, ಟಿಎಂಸಿಗೆ ಸ್ಥಾನಗಳ ಕೊರತೆಯಿದೆ. ಈ ನಡುವೆ ಅಖಿಲೇಶ್ ಯಾದವ್ ಅವರ ಭೇಟಿ, ದೀದಿಯ ಮುಂದಿನ ರಾಜಕೀಯ ನಡೆಗಳ ಬಗ್ಗೆ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3am8ksregf4ev64knjsjej,imgname-mamata-banarjee-and-akhilesh-yadav-1778228273784.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ನನ್ನನ್ನು ವಜಾಗೊಳಿಸಿದ್ರೂ ಪರವಾಗಿಲ್ಲ, ನಾನು ಸೀಟು ಬಿಟ್ಟುಕೊಡಲ್ಲ ಎಂದು ಪಟ್ಟು ಹಿಡಿದು ಕುಳಿತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಏನಾದರೂ ಮಾಡಿಯಾದರೂ, ಮುಖ್ಯಮಂತ್ರಿ ಸ್ಥಾನವನ್ನು ಮತ್ತೆ ಮರಳಿ ಪಡೆಯುವ ತವಕದಲ್ಲಿ ಇದ್ದಾರೆ. ಪಶ್ಚಿಮ ಬಂಗಾಳವನ್ನು ಸೋತಿದ್ದೂ ಅಲ್ಲದೇ, ಕೊನೆಯ ಪಕ್ಷ ಶಾಸಕಿಯಾಗಲೂ ಆಗಲಿಲ್ಲ. ಈ ಪರಿಯಲ್ಲಿ ಬಂಗಾಳದ ಜನರ ಅವರಿಗೆ ಛೀಮಾರಿ ಹಾಕಿದ್ದಾರೆ. 15 ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ, ಅ*ತ್ಯಾಚಾರ, ಅ*ತ್ಯಾಚಾರಿಗಳಿಗೆ ರಕ್ಷಣೆ ಸಹಿಸಿಕೊಂಡಿರುವ ಜನರು ಈ ಬಾರಿ ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ. ಅವರು ಸೋತಿದ್ದು ಅದೆಷ್ಟರ ಮಟ್ಟಿಗೆ ಫಲಿತಾಂಶ ಕೊಟ್ಟಿದೆ ಎಂದರೆ, ಕಾಂಗ್ರೆಸ್ಸಿನ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಇದಕ್ಕೆ ಕಾರಣ, ಕಾಂಗ್ರೆಸ್​ ಕಚೇರಿಯನ್ನು ಕೂಡ ಟಿಎಂಸಿ ವಶಕ್ಕೆ ಪಡೆದಿತ್ತು. ನಿನ್ನೆ ಕಾಂಗ್ರೆಸ್​ ಕಾರ್ಯಕರ್ತರು, ಟಿಎಂಸಿ ಆಕ್ರಮಿಸಿಕೊಂಡಿದ್ದ ಕಚೇರಿಯ ಬೀಗ ಒಡೆದು, ಸರಸ್ವತಿ ಪೂಜೆ ಸಲ್ಲಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸಿಎಂ ಆಗ್ಬೋದು&lt;/strong&gt;&lt;/h2&gt;&lt;p&gt;ಇಷ್ಟಾದರೂ ಮಮತಾ ಮುಖ್ಯಮಂತ್ರಿಯಾಗಲು ಒಂದು ಛಾನ್ಸ್​ ನಮ್ಮ ಸಂವಿಧಾನ ನೀಡಿದೆ. ಅದೇನೆಂದರೆ, ರಾಜ್ಯಪಾಲರು ಮಮತಾ ಬ್ಯಾನರ್ಜಿ ಅವರಿಗೆ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುತ್ತಾರೆ. ಒಂದು ವೇಳೆ ಮಮತಾ ಬಹುಮತ ಸಾಧಿಸುವಲ್ಲಿ ಯಶಸ್ವಿಯಾದರೆ, ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವ ಅವಕಾಶವಿದೆ. ಅವರು ಹಾಗೆ ಮಾಡಲು ಸಾಧ್ಯವಾಗದೇ ಹೋದರೆ, ಅವರನ್ನು ವಜಾಗೊಳಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ ಎನ್ನುವುದು ತಜ್ಞರ ಅಭಿಮತ. ಇನ್ನು ಸದ್ಯದ ಸ್ಥಿತಿ ನೋಡುವುದಾದರೆ, ತೃಣಮೂಲ ಕಾಂಗ್ರೆಸ್​ಗೆ 80 ಸ್ಥಾನಗಳು ಬಂದಿವೆ. ಬಹುಮತಕ್ಕೆ 68 ಸ್ಥಾನಗಳ ಕೊರತೆಯಿದೆ. ಆದ್ದರಿಂದ ಈ 68 ಸ್ಥಾನವನ್ನು ಪಡೆಯುವಲ್ಲಿ ಮಮತಾ ಯಶಸ್ವಿಯಾದರೆ ಮುಖ್ಯಮಂತ್ರಿ ಆಗಬಹುದು. ಪರಿಸ್ಥಿತಿ ಕೈಮೀರಿದರೆ, ಮುಖ್ಯಮಂತ್ರಿಯನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಇಲ್ಲವೇ ಸುಪ್ರೀಂಕೋರ್ಟ್​ಗೆ ಅವರು ಹೋಗಬಹುದು.&lt;/p&gt;&lt;h3&gt;&lt;strong&gt;ಸುದೀರ್ಘ ಮಾತುಕತೆ&lt;/strong&gt;&lt;/h3&gt;&lt;p&gt;ಇದರ ನಡುವೆಯೇ, ಪಶ್ಚಿಮ ಬಂಗಾಳದಲ್ಲಿ ಒಂದೂ ಸ್ಥಾನ ಗೆಲ್ಲದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಿನ್ನೆ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿದ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಇಲ್ಲಿ ಮುಖ್ಯಮಂತ್ರಿಯಾಗಿ ಮುಂದುವರೆಯುವ ಸಂಬಂಧ ಏನೋ ಮಾಸ್ಟರ್​ ಪ್ಲ್ಯಾನ್​ ಹಾಕಿದಂತಿದೆ ಎಂದು ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಏನು ಮಾಡಿದರೂ ಮಮತಾಗೆ ಬಹುಮತ ಬೇಕೇ ಬೇಕು. ಬಿಜೆಪಿ 207 ಸ್ಥಾನಗಳನ್ನು ಗೆದ್ದಿದ್ದರೆ, ಟಿಎಂಸಿ 80 ಸ್ಥಾನ ಗೆದ್ದಿದೆ. ಆದ್ದರಿಂದ ಬಹುಮತ ಸಾಬೀತು ಮಾಡುವುದು ಮಮತಾಗೆ ಭಾರಿ ಕಷ್ಟ ಇದ್ದರು, ಏನಾದರೂ ಮಾಡಿ ಇದನ್ನು ಸಾಧ್ಯವಾಗಿಸುವ ಕನಸಿನ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆಸಿರಬಹುದು ಎನ್ನುವ ಮಾತು ಕೇಳಿಬರುತ್ತಿದೆ.&lt;/p&gt;&lt;h3&gt;&lt;strong&gt;ಆಗಿದ್ದೇನು?&lt;/strong&gt;&lt;/h3&gt;&lt;p&gt;ಅಷ್ಟಕ್ಕೂ ಅಖಿಲೇಶ್​ ಅವರು ದೀದಿ ಅವರಿಗೆ ನಿಮ್ಮ ಜೊತೆ ನಾನಿದ್ದೇನೆ, ನೀವೇನು ಚಿಂತೆ ಮಾಡಬೇಡಿ ಎಂದಿದ್ದಾರೆ ಎನ್ನಲಾಗಿದೆ. ಈ ಭೇಟಿಯ ಬಗ್ಗೆ ಪಕ್ಷದ ಮೂಲಗಳು, ಸಭೆಯು ಸೌಹಾರ್ದಯುತ ವಾತಾವರಣಕ್ಕೆ ಸಾಕ್ಷಿಯಾಯಿತು. ಉಭಯ ನಾಯಕರು ಶುಭಾಶಯ ವಿನಿಮಯ ಮಾಡಿಕೊಂಡರು ಮತ್ತು ಸಭೆಯ ಆರಂಭದಲ್ಲಿ, ಅಖಿಲೇಶ್ ಯಾದವ್ ಮತ್ತು ಅಭಿಷೇಕ್ ಬ್ಯಾನರ್ಜಿ ಪರಸ್ಪರ ಅಪ್ಪಿಕೊಂಡರು ಎಂದು ತಿಳಿಸಿವೆ. ಟಿಎಂಸಿ ಅಧಿಕೃತ ಮೂಲಗಳು ಹೇಳುವಂತೆ ಚರ್ಚೆಯು ಸಕಾರಾತ್ಮಕವಾಗಿತ್ತು. ಅಖಿಲೇಶ್ ಯಾದವ್, ಅಭಿಷೇಕ್ ಬ್ಯಾನರ್ಜಿಗೆ &quot;ನೀವೆಲ್ಲರೂ ಎಂತಹ ಶ್ಲಾಘನೀಯ ಯುದ್ಧ ಮಾಡಿದ್ದೀರಿ&quot; ಎಂದು ಹೇಳಿದ್ದಾರೆ. &quot;ದೀದಿ, ನೀವು ಸೋತಿಲ್ಲ&quot; ಎಂದು ಅಖಿಲೇಶ್ ಯಾದವ್ ಅವರು ಮಮತಾ ಬ್ಯಾನರ್ಜಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/politics/didi-you-have-not-lost-akhilesh-yadav-meets-mamata-gives-emotional-support-suc/articleshow-5mgydbh"/>
        </item>
        <item>
            <title><![CDATA[Kerala Congress: ಕೇರಳ ಕಾಂಗ್ರೆಸ್ ಸಿಎಂ ರೇಸ್‌ನಲ್ಲಿ ಹೊಸ ಬಿರುಗಾಳಿ. ಶಾಸಕರ ಆದ್ಯತಾ ಪಟ್ಟಿ ಲೀಕ್!]]></title>
            <link>https://kannada.asianetnews.com/india-news/leaked-mla-list-puts-kc-venugopal-ahead-in-kerala-cm-race-rav/articleshow-c5qfpo6</link>
            <guid isPermaLink="true">https://kannada.asianetnews.com/india-news/leaked-mla-list-puts-kc-venugopal-ahead-in-kerala-cm-race-rav/articleshow-c5qfpo6</guid>
            <pubDate>Fri, 08 May 2026 13:50:53 +0530</pubDate>
            <description><![CDATA[&lt;p&gt;ಕೇರಳ ಕಾಂಗ್ರೆಸ್&zwnj;ನ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಚರ್ಚೆ ಜೋರಾಗಿರುವಾಗಲೇ, ಶಾಸಕರ ಆದ್ಯತಾ ಪಟ್ಟಿ ಎನ್ನಲಾದ ಫೋಟೋವೊಂದು ಲೀಕ್ ಆಗಿ ಭಾರೀ ವಿವಾದ ಸೃಷ್ಟಿಸಿದೆ. ಎಐಸಿಸಿ ವೀಕ್ಷಕರ ಬಳಿ ಇದ್ದ ಈ ಡಾಕ್ಯುಮೆಂಟ್ ಪ್ರಕಾರ, ಕೆ.ಸಿ. ವೇಣುಗೋಪಾಲ್ ಅವರಿಗೆ 46 ಶಾಸಕರ ಬೆಂಬಲವಿದೆ ಎಂದು ಅವರ ಬಣ ಹೇಳಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-d70e39c2-92fd-4185-98ab-06dabeb01e3b.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಚರ್ಚೆ ಕಾಂಗ್ರೆಸ್&zwnj;ನಲ್ಲಿ ಜೋರಾಗಿದೆ. ಈ ನಡುವೆಯೇ, ಕಾಂಗ್ರೆಸ್ ಶಾಸಕರ ಆದ್ಯತಾ ಪಟ್ಟಿ ಎನ್ನಲಾದ ಫೋಟೋವೊಂದು ಸಾರ್ವಜನಿಕವಾಗಿ ಕಾಣಿಸಿಕೊಂಡು ಹೊಸ ವಿವಾದಕ್ಕೆ ಕಾರಣವಾಗಿದೆ.&lt;/p&gt;&lt;p&gt;&lsquo;ದಿ ನ್ಯೂ ಇಂಡಿಯನ್ ಎಕ್ಸ್&zwnj;ಪ್ರೆಸ್&rsquo; ಪತ್ರಿಕೆ ಈ ಫೋಟೋವನ್ನು ಪ್ರಕಟಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ವೇಳೆ ಎಐಸಿಸಿ ವೀಕ್ಷಕ ಮುಕುಲ್ ವಾಸ್ನಿಕ್ ಅವರ ಕೈಯಲ್ಲಿದ್ದ ಡಾಕ್ಯುಮೆಂಟ್ ಇದಾಗಿದೆ ಎಂದು ವರದಿಯಾಗಿದೆ. ಈ ಪಟ್ಟಿಯು, ಸಿಎಂ ರೇಸ್&zwnj;ನಲ್ಲಿರುವ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;p&gt;ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರ ಜೊತೆ ವೀಕ್ಷಕರು ಸಮಾಲೋಚನೆ ಮುಗಿಸಿದ ನಂತರ ಈ ಫೋಟೋ ತೆಗೆಯಲಾಗಿದೆ ಎಂದು ವರದಿ ಹೇಳಿದೆ. ಈ ಪಟ್ಟಿಯಲ್ಲಿ ಸಂದೀಪ್ ವಾರಿಯರ್, ಸಜೀವ್ ಜೋಸೆಫ್, ಟಿ.ಒ. ಮೋಹನನ್, ಸನ್ನಿ ಜೋಸೆಫ್, ಉಷಾ ವಿಜಯನ್, ಐ.ಸಿ. ಬಾಲಕೃಷ್ಣನ್ ಮತ್ತು ಟಿ. ಸಿದ್ದಿಕ್ ಅವರ ಹೆಸರುಗಳು ಕಾಣಿಸುತ್ತಿವೆ.&lt;/p&gt;&lt;p&gt;ವರದಿಯ ಪ್ರಕಾರ, ಹೆಚ್ಚಿನ ಹೆಸರುಗಳ ಮುಂದೆ 'ಕೆಸಿ' ಎಂದು ಬರೆಯಲಾಗಿದ್ದು, ಇದು ಕೆ.ಸಿ. ವೇಣುಗೋಪಾಲ್ ಅವರನ್ನು ಸೂಚಿಸುತ್ತದೆ ಎನ್ನಲಾಗಿದೆ. ಐ.ಸಿ. ಬಾಲಕೃಷ್ಣನ್ ಅವರ ಹೆಸರಿನ ಮುಂದೆ 'ಕೆಸಿ' ಮತ್ತು 'ಆರ್&zwnj;ಸಿ' ಎರಡೂ ಇರುವುದು ರಾಜಕೀಯವಾಗಿ ಕುತೂಹಲ ಕೆರಳಿಸಿದೆ. ಇದು ವೇಣುಗೋಪಾಲ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಾಲ ಇಬ್ಬರಿಗೂ ಬೆಂಬಲ ಸೂಚಿಸುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.&lt;/p&gt;&lt;h2&gt;ವೇಣುಗೋಪಾಲ್ ಬಣದಿಂದ ಬಹುಮತದ ಪ್ರತಿಪಾದನೆ&lt;/h2&gt;&lt;p&gt;ಕೆ.ಸಿ. ವೇಣುಗೋಪಾಲ್ ಬಣವು, ಕಾಂಗ್ರೆಸ್&zwnj;ನ ಒಟ್ಟು 63 ಶಾಸಕರ ಪೈಕಿ ಬಹುಮಂದಿ ತಮ್ಮ ನಾಯಕನಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿಕೊಳ್ಳುತ್ತಿದೆ. ಈಗ ಲೀಕ್ ಆಗಿರುವ ಪಟ್ಟಿಯು ಈ ವಾದಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ರಾಜಕೀಯ ಪಂಡಿತರು ನೋಡುತ್ತಿದ್ದಾರೆ.&lt;/p&gt;&lt;p&gt;ವೇಣುಗೋಪಾಲ್ ಬೆಂಬಲಿಗರ ಪ್ರಕಾರ, 46 ಶಾಸಕರು ಅವರಿಗೆ ಜೈ ಎಂದಿದ್ದಾರೆ. ಮೂವರು ಶಾಸಕರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರೆ, 8 ಶಾಸಕರು ರಮೇಶ್ ಚೆನ್ನಿತ್ತಾಲ ಅವರ ಹೆಸರನ್ನು ಬೆಂಬಲಿಸಿದ್ದಾರೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರಿಗೆ ಕೇವಲ 6 ಶಾಸಕರ ಬೆಂಬಲವಿದೆ ಎಂದು ತಿಳಿದುಬಂದಿದೆ.&lt;/p&gt;&lt;h3&gt;ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ&lt;/h3&gt;&lt;p&gt;ಈ ಫೋಟೋ ವಿವಾದದ ಬಗ್ಗೆ ಎಎನ್&zwnj;ಐ ಜೊತೆ ಮಾತನಾಡಿದ ಕೆಪಿಸಿಸಿ ಮುಖ್ಯಸ್ಥ ಸನ್ನಿ ಜೋಸೆಫ್, ಈ ಡಾಕ್ಯುಮೆಂಟ್ ಬಗ್ಗೆ ಮುಕುಲ್ ವಾಸ್ನಿಕ್ ಅವರನ್ನೇ ಕೇಳಬೇಕು ಎಂದಿದ್ದಾರೆ. ತಾವು ವೀಕ್ಷಕರ ಮುಂದೆ ಯಾವುದೇ ಒಬ್ಬರ ಹೆಸರನ್ನು ಸೂಚಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಎಐಸಿಸಿ ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ಅವರು ಹೊಸ ಶಾಸಕರು ಮತ್ತು ಮಿತ್ರಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದರು. ಸಭೆಯ ನಂತರ ಮಾತನಾಡಿದ ಮಾಕೆನ್, &quot;ನಾವು ಇಂದು ನಮ್ಮ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದ್ದೇವೆ. ಸಿಎಲ್&zwnj;ಪಿ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಕಾಂಗ್ರೆಸ್ ಹೈಕಮಾಂಡ್&zwnj;ಗೆ ನೀಡುವ ಒಂದು ಸಾಲಿನ ನಿರ್ಣಯವನ್ನು ಇಡೀ ಸಿಎಲ್&zwnj;ಪಿ ಅಂಗೀಕರಿಸಿದೆ. ನಾವು ಶಾಸಕರೊಂದಿಗೆ ಒಬ್ಬೊಬ್ಬರಾಗಿ ಮಾತನಾಡಿ, ಅವರು ಹೇಳಿದ್ದನ್ನೆಲ್ಲಾ ಬರೆದುಕೊಂಡಿದ್ದೇವೆ. ಕೇವಲ ಹೆಸರುಗಳಲ್ಲ, ಹಲವರು ಬಹಳಷ್ಟು ವಿಚಾರಗಳನ್ನು ಹೇಳಿದ್ದಾರೆ. ಅದನ್ನೆಲ್ಲಾ ನಾವು ಹೈಕಮಾಂಡ್&zwnj;ಗೆ ಸಲ್ಲಿಸಿದ್ದೇವೆ&quot; ಎಂದು ತಿಳಿಸಿದರು. (ಎಎನ್&zwnj;ಐ)&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/leaked-mla-list-puts-kc-venugopal-ahead-in-kerala-cm-race-rav/articleshow-c5qfpo6"/>
        </item>
        <item>
            <title><![CDATA[UP Horror: ಮಗಳು ಸತ್ತರೂ 4 ತಿಂಗಳು ಮನೆಯಲ್ಲೇ ಶವ ಇಟ್ಟ ತಂದೆ, ವಾಸನೆ ಬರದಂತೆ ಪರ್ಫ್ಯೂಮ್ ಸ್ಪ್ರೇ!]]></title>
            <link>https://kannada.asianetnews.com/india-news/meerut-man-arrested-for-hiding-daughters-skeletal-remains-in-locked-house-for-months/articleshow-a5zqb97</link>
            <guid isPermaLink="true">https://kannada.asianetnews.com/india-news/meerut-man-arrested-for-hiding-daughters-skeletal-remains-in-locked-house-for-months/articleshow-a5zqb97</guid>
            <pubDate>Fri, 08 May 2026 13:39:19 +0530</pubDate>
            <description><![CDATA[&lt;p&gt;ಉತ್ತರ ಪ್ರದೇಶದ ಮೀರತ್&zwnj;ನಲ್ಲಿ 72 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಮಗಳು ಸತ್ತು ಹಲವು ತಿಂಗಳಾದರೂ ಆಕೆಯ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಅನಾರೋಗ್ಯದಿಂದ ಡಿಸೆಂಬರ್ 2025ರಲ್ಲಿ ಮಗಳು ಸತ್ತಿದ್ದಳು. ವಾಸನೆ ಬಾರದಿರಲು ಪರ್ಫ್ಯೂಮ್ ಸ್ಪ್ರೇ. ಪೊಲೀಸರು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr37wwxc0dr738rrmxgy349f,imgname-uttar-pradesh-shocker-meerut-man-arrested-after-daughter-skeletal-remains-found-inside-locked-house-months-after-deathimage---2026-05-08t125820.726-1778225410988.png" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಪ್ರದೇಶದ ಮೀರತ್&zwnj;ನಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮಗಳು ಸತ್ತು ಹಲವು ತಿಂಗಳಾದರೂ ಆಕೆಯ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಆರೋಪದ ಮೇಲೆ 72 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು ಸಾದರ್ ಬಜಾರ್ ಪ್ರದೇಶದಲ್ಲಿರುವ ಇವರ ಮನೆಯಿಂದ 35 ವರ್ಷದ ಪ್ರಿಯಾಂಕಾರ ಅಸ್ಥಿಪಂಜರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.&lt;/p&gt;&lt;p&gt;ಉದಯ್ ಭಾನು ವಿಶ್ವಾಸ್ (72) ಬಂಧಿತ ಆರೋಪಿ. ಈತ ಕಸ ಮತ್ತು ಹಳೆಯ ಸಾಮಾನುಗಳಿಂದ ತುಂಬಿದ್ದ ಕೋಣೆಯೊಂದರಲ್ಲಿ ಮಗಳ ಶವವನ್ನು ಮುಚ್ಚಿಟ್ಟಿದ್ದ. ಕೊಳೆತ ಶವದಿಂದ ಬರುತ್ತಿದ್ದ ಕೆಟ್ಟ ವಾಸನೆಯನ್ನು ಮರೆಮಾಚಲು ಮನೆಯೊಳಗೆ ಪರ್ಫ್ಯೂಮ್ ಸ್ಪ್ರೇ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ಇಂಡಿಯಾ ಟುಡೇ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.&lt;/p&gt;&lt;h2&gt;ಡಿಸೆಂಬರ್&zwnj;ನಲ್ಲೇ ಮಗಳು ಸತ್ತಿದ್ದಳು ಎಂದ ಪೊಲೀಸರು&lt;/h2&gt;&lt;p&gt;ಪೊಲೀಸರ ಪ್ರಕಾರ, ಪ್ರಿಯಾಂಕಾ ಬಹಳ ಸಮಯದಿಂದ ತೀವ್ರ ಅನಾರೋಗ್ಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಳು. ಆಕೆ ಡಿಸೆಂಬರ್ 2025ರಲ್ಲೇ ಸಾವನ್ನಪ್ಪಿದ್ದಳು ಎಂದು ತಿಳಿದುಬಂದಿದೆ.&lt;/p&gt;&lt;p&gt;ಆದರೆ, ಈ ವೃದ್ಧ ಸಂಬಂಧಿಕರಿಗೆ ವಿಷಯ ತಿಳಿಸದೆ, ಅಂತಿಮ ಸಂಸ್ಕಾರವನ್ನೂ ಮಾಡದೆ, ಸುಮಾರು ನಾಲ್ಕು ತಿಂಗಳ ಕಾಲ ಮನೆಯಲ್ಲೇ ಶವವನ್ನು ಇಟ್ಟುಕೊಂಡು ಮನೆಗೆ ಬೀಗ ಹಾಕಿದ್ದ.&lt;/p&gt;&lt;p&gt;ಪೊಲೀಸರು ಮನೆಗೆ ನುಗ್ಗುವಷ್ಟರಲ್ಲಿ, ಶವ ಸಂಪೂರ್ಣ ಕೊಳೆತು ಅಸ್ಥಿಪಂಜರವಾಗಿ ಮಾರ್ಪಟ್ಟಿತ್ತು.&lt;/p&gt;&lt;h3&gt;ಸಂಬಂಧಿಕರಿಗೆ ಅನುಮಾನ ಬಂದಿದ್ದು ಹೇಗೆ?&lt;/h3&gt;&lt;p&gt;ಏಪ್ರಿಲ್ 10 ರಂದು ಈ ಪ್ರಕರಣ ಬೆಳಕಿಗೆ ಬಂದಿದೆ. ತಿಂಗಳುಗಳಿಂದ ನಾಪತ್ತೆಯಾಗಿದ್ದ ಉದಯ್ ಭಾನು ವಿಶ್ವಾಸ್, ಮೀರತ್&zwnj;ನ ಬೇಗಂ ಬಾಗ್ ಪ್ರದೇಶದ ಟೀ ಅಂಗಡಿಯೊಂದರಲ್ಲಿ ಕುಳಿತಿರುವುದನ್ನು ಕೆಲವು ಸಂಬಂಧಿಕರು ನೋಡಿದ್ದಾರೆ.&lt;/p&gt;&lt;p&gt;ಕುಟುಂಬಸ್ಥರು ಪ್ರಿಯಾಂಕಾ ಬಗ್ಗೆ ವಿಚಾರಿಸಿದಾಗ, ಆಕೆಯನ್ನು ಚಿಕಿತ್ಸೆಗಾಗಿ ಡೆಹ್ರಾಡೂನ್&zwnj;ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೊದಲು ಸುಳ್ಳು ಹೇಳಿದ್ದಾನೆ.&lt;/p&gt;&lt;p&gt;ಆದರೆ, ಪದೇ ಪದೇ ಪ್ರಶ್ನಿಸಿದಾಗ, ಮಗಳು ಸತ್ತುಹೋಗಿದ್ದಾಳೆ ಮತ್ತು ಆಕೆಯ ಶವ ಇನ್ನೂ ಮನೆಯಲ್ಲೇ ಇದೆ ಎಂದು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ತಕ್ಷಣ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಮನೆಯ ಬೀಗ ಮುರಿದು ಒಳನುಗ್ಗಿದ ಪೊಲೀಸರು&lt;/p&gt;&lt;p&gt;ಪೊಲೀಸ್ ತಂಡಗಳು ಸಾದರ್ ಬಜಾರ್ ಪ್ರದೇಶದಲ್ಲಿರುವ ಮನೆಗೆ ತಲುಪಿ, ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾರೆ.&lt;/p&gt;&lt;p&gt;ಮನೆಯೊಳಗೆ, ಕಸ ಮತ್ತು ಹಳೆಯ ವಸ್ತುಗಳಿಂದ ಮುಚ್ಚಲಾಗಿದ್ದ ಕೋಣೆಯೊಂದರಲ್ಲಿ ಪ್ರಿಯಾಂಕಾರ ಅಸ್ಥಿಪಂಜರವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.&lt;/p&gt;&lt;p&gt;ಶವ ಕೊಳೆಯುತ್ತಿದ್ದ ವಾಸನೆಯನ್ನು ಮುಚ್ಚಿಹಾಕಲು ಆರೋಪಿ ಮನೆಯೊಳಗೆ ಪರ್ಫ್ಯೂಮ್ ಬಳಸುತ್ತಿದ್ದ ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಿಯಾಂಕಾ ಸತ್ತ ನಂತರವೂ ಆತ ಹಲವು ದಿನಗಳ ಕಾಲ ಶವದೊಂದಿಗೇ ಮನೆಯಲ್ಲಿ ವಾಸವಾಗಿದ್ದ ಎಂದು ಅವರು ಆರೋಪಿಸಿದ್ದಾರೆ.&lt;/p&gt;&lt;p&gt;&lt;strong&gt;ಆರೋಪಿ ವಿರುದ್ಧ ಪ್ರಕರಣ ದಾಖಲು&lt;/strong&gt;&lt;/p&gt;&lt;p&gt;ಪೊಲೀಸರು ಉದಯ್ ಭಾನು ವಿಶ್ವಾಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 239, 271 ಮತ್ತು 301ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.&lt;/p&gt;&lt;p&gt;ಶವವನ್ನು ಮುಚ್ಚಿಟ್ಟಿದ್ದು ಮತ್ತು ಗೌರವಯುತ ಅಂತ್ಯಕ್ರಿಯೆ ನಡೆಸಲು ವಿಫಲವಾದ ಆರೋಪಗಳನ್ನು ಈ ಸೆಕ್ಷನ್&zwnj;ಗಳು ಒಳಗೊಂಡಿವೆ. ಕೊಳೆತ ಶವದಿಂದಾಗಿ ಅಕ್ಕಪಕ್ಕದ ನಿವಾಸಿಗಳ ಆರೋಗ್ಯಕ್ಕೂ ಅಪಾಯವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಮಾನಸಿಕ ಆರೋಗ್ಯದ ತಪಾಸಣೆ&lt;/strong&gt;&lt;/p&gt;&lt;p&gt;ಆರೋಪಿ ಈ ಹಿಂದೆ ಸ್ಥಳೀಯ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದಲ್ಲಿ ಕೌನ್ಸೆಲಿಂಗ್ ಪಡೆದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಬಂಧನದ ನಂತರ, ಆತನ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಲು ಮತ್ತೆ ಮನೋವೈದ್ಯಕೀಯ ಮೌಲ್ಯಮಾಪನಕ್ಕೆ ದಾಖಲಿಸಲಾಗಿದೆ. ಆದರೆ, ಪ್ರಾಥಮಿಕ ವರದಿಗಳ ಪ್ರಕಾರ ಆತನ ಮಾನಸಿಕ ಸ್ಥಿತಿ ಹೆಚ್ಚಾಗಿ ಸ್ಥಿರವಾಗಿದೆ ಎಂದು ತೋರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;2013ರಲ್ಲಿ ಪ್ರಿಯಾಂಕಾ ತಾಯಿ ನಿಧನರಾದ ನಂತರ, ಆಕೆ ಮತ್ತು ಆಕೆಯ ತಂದೆ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಈ ವೃದ್ಧ ಆಗಾಗ ತನ್ನ ಮಗಳನ್ನು ರಿಕ್ಷಾದಲ್ಲಿ ಚಿಕಿತ್ಸೆಗೆ ಕರೆದೊಯ್ಯುತ್ತಿದ್ದರು ಎಂದು ನಿವಾಸಿಗಳು ಹೇಳಿದ್ದಾರೆ.&lt;/p&gt;&lt;p&gt;ತನಿಖೆ ಮುಂದುವರಿದಿದ್ದು, ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/meerut-man-arrested-for-hiding-daughters-skeletal-remains-in-locked-house-for-months/articleshow-a5zqb97"/>
        </item>
        <item>
            <title><![CDATA[ಗೆದ್ದ ಶಾಸಕಿಯನ್ನು ಬೇಡ ಬೇಡ ಎಂದರೂ ಬಿಡದೆ ತಬ್ಬಿ ಮುದ್ದಾಡಲು ಯತ್ನಿಸಿದ ಕಾಂಗ್ರೆಸ್ ನಾಯಕ]]></title>
            <link>https://kannada.asianetnews.com/india-news/kerala-congress-leader-sparks-row-after-attempting-to-hug-woman-mla-despite-resistance/articleshow-0x7dnll</link>
            <guid isPermaLink="true">https://kannada.asianetnews.com/india-news/kerala-congress-leader-sparks-row-after-attempting-to-hug-woman-mla-despite-resistance/articleshow-0x7dnll</guid>
            <pubDate>Fri, 08 May 2026 13:05:09 +0530</pubDate>
            <description><![CDATA[&lt;p&gt;ಕಾಂಗ್ರೆಸ್ ಮುಖಂಡನ ನಡೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಸರ್ಕಾರ ರಚಿಸುವ ಮುನ್ನವೇ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ. ಮಹಿಳಾ ಶಾಸಕಿಯನ್ನು ತಬ್ಬಿಕೊಳ್ಳಲು ಯತ್ನಿಸಿದ ಘಟನೆ ಹಾಗೂ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr385bebyz0agr1mx12t2n3v,imgname-congress-leader-under-fire-1778225688010.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ (ಮೇ.08) &lt;/strong&gt;ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಮರಳಿದೆ. ಸರ್ಕಾರ ರಚನೆ, ಮುಖ್ಯಮಂತ್ರಿ ಯಾರಾಗಬೇಕು ಅನ್ನೋ ಚರ್ಚೆಗಳು, ಸ್ಪರ್ಧಗಳು ತೀವ್ರಗೊಳ್ಳುತ್ತಿದೆ. ಇದರ ನಡುವೆ ಕೇರಳ ಕಾಂಗ್ರೆಸ್ ಮುಖಂಡನ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಮುಖ್ಯ ಕಚೇರಿಗೆ ಆಗಮಿಸಿದ ಮಹಿಳಾ ಶಾಸಕಿಯನ್ನು ತಬ್ಬಿಕೊಳ್ಳಲು ಯತ್ನಿಸಿದ ಕಾಂಗ್ರೆಸ್ ಮುಖಂಡನ ವಿಡಿಯೋ ಭಾರಿ ವೈರಲ್ ಆಗಿದೆ. ಬೇಡ ಬೇಡ ಎಂದು ಕೈಯಿಂದ ಕಾಂಗ್ರೆಸ್ ಮುಖಂಡನ ದೂರ ತಳ್ಳಿದರೂ ಸಿನಿಮಾ ಶೈಲಿಯಲ್ಲಿ ರೊಮ್ಯಾಂಟಿಕ್ ಆಗಿ ತಬ್ಬಿಕೊಳ್ಳಲು ಪ್ರಯತ್ನಿಸಿದ ಘಟನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.&lt;/p&gt;&lt;p&gt;ಈ ವಿಡಿಯೋದಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಚೆರಿಯನ್ ಫಿಲಿಪ್ ಅವರು, ಹೊಸದಾಗಿ ಆಯ್ಕೆಯಾದ ಶಾಸಕಿ ಬಿಂದು ಕೃಷ್ಣ ಅವರನ್ನು ತಬ್ಬಿಕೊಳ್ಳಲು ಯತ್ನಿಸುವುದು ಕಾಣಿಸುತ್ತದೆ. ಆದರೆ, ಬಿಂದು ಕೃಷ್ಣ ಅವರು ಮುಜುಗರದಿಂದ ಹಿಂದೆ ಸರಿಯುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಕಚೇರಿಯಲ್ಲಿ ಶಾಸಕರ ಸಭೆ ನಡೆಯುವಾಗ ಈ ಘಟನೆ ನಡೆದಿದೆ. ಕ್ಯಾಮೆರಾಗಳು, ಪತ್ರಕರ್ತರು ಮತ್ತು ಪಕ್ಷದ ನಾಯಕರ ಮುಂದೆಯೇ ನಡೆದ ಈ ಘಟನೆ, ಈಗ ರಾಜಕೀಯದಲ್ಲಿ ಘನತೆ, ಮಹಿಳಾ ಗೌರವ ಮತ್ತು ವೈಯಕ್ತಿಕ ಗಡಿಗಳ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;h2&gt;ಕ್ಯಾಮೆರಾದಲ್ಲಿ ಸೆರೆಯಾಯ್ತು ಇಡೀ ಘಟನೆ&lt;/h2&gt;&lt;p&gt;ವೈರಲ್ ಆಗಿರುವ ವಿಡಿಯೋದಲ್ಲಿ, ಕೊಲ್ಲಂನಿಂದ ಆಯ್ಕೆಯಾದ ಶಾಸಕಿ ಬಿಂದು ಕೃಷ್ಣ ಗೆಲುವಿನ ಸಂಭ್ರಮದೊಂದಿಗೆ ಕಾಂಗ್ರೆಸ್ ಪ್ರಧಾನ ಕಚೇರಿಗೆ ಆಗಮಿಸಿದ್ದಾರೆ. ಬಿಳಿ ಹಾಗೂ ಹಳದಿ ಸೀರೆ ಉಟ್ಟು ಬೆಂಬಲಿಗರತ್ತ ಕೈಬೀಸುತ್ತಾ ಆಗಮಿಸಿದ ಶಾಸಕಿಯನ್ನು ಕಾಂಗ್ರೆಸ್ ಹಿರಿಯ ನಾಯಕ ಚೆರಿಯನ್ ಪಿಲಿಪ್ ಬರಮಾಡಿಕೊಳ್ಳುವ ನೆಪದಲ್ಲಿ ತಬ್ಬಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಿಂದು ಕೃಷ್ಣ ಶೇಕ್&zwnj;ಹ್ಯಾಂಡ್ ಮಾಡಲು ಕೈ ಮುಂದೆ ಚಾಚಿದರೆ, ಅದೇ ಕೈಗಳನ್ನು ಹಿಡಿದು ಎಳೆದು ತಬ್ಬಿಕೊಳ್ಳಲು ಪಿಲಿಪ್ ಪ್ರಯತ್ನಿಸಿದ್ದಾರೆ.&lt;/p&gt;&lt;p&gt;ಪಿಲಿಪ್ ಕೈಗಳನ್ನು ದೂರ ತಳ್ಳಿದರೂ ಕೆಲ ಸೆಕೆಂಡ್&zwnj;ಗಳ ಕಾಲ ಪಿಲಿಪ್ ಬಲವಾಗಿ ಶಾಸಕಿಯನ್ನು ಕೈಗಳನ್ನು ಹಿಡಿದು ಆಕೆಯನ್ನು ಎಳೆದು ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಇದರ ನಡುವೆ ಕುತ್ತಿಗೆ ಕೈಹಾಕಿ ತಬ್ಬಿಕೊಂಡು ಬರ ಮಾಡಿಕೊಳ್ಳುವ ಪ್ರಯತ್ನವೂ ನಡೆದಿದೆ. ಪಿಲಿಪ್ ಅವರ ಬಳಿ ಬೇಡ ಬೇಡ ಎಂದು ದೂರ ತಳ್ಳಿದರೂ ಪಿಲಿಪ್ ಮಾತ್ರ ಒಂದು ಬಾರಿ ತಬ್ಬಿಕೊಳ್ಳಲೇಬೇಕು ಎಂಬ ಹಠದಲ್ಲಿ ಈ ಕೃತ್ಯ ಮಾಡಿದಂತಿದೆ. ತಬ್ಬಿಕೊಳ್ಳುವ ಮೊದಲ ಪ್ರಯತ್ನ ವಿಫಲವಾದ ಬೆನ್ನಲ್ಲೇ ಪಿಲಿಪ್ ಎರಡನೇ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಬಿಂದು ಕೃಷ್ಣ ಕೈಮುಗಿದು ನಮಸ್ಕರಿಸಿ ಸಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Awkward moment at the KPCC meeting in Thiruvananthapuram as senior #Kerala #Congress leader Cherian Philip allegedly attempting to hug newly elected Kollam MLA Bindu Krishna even as she appeared uncomfortable and tried to move away. #Keralam pic.twitter.com/JcQqcjsUzS&lt;/p&gt;&lt;p&gt;&mdash; Ashish (@KP_Aashish) May 7, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ&lt;/h2&gt;&lt;p&gt;ಈ ಘಟನೆಯ ವಿಡಿಯೋ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಹಿಳಾ ನಾಯಕಿಗೆ ಸ್ಪಷ್ಟವಾಗಿ ಮುಜುಗರವಾಗುತ್ತಿದ್ದರೂ, ಯಾಕೆ ಗೌರವಿಸಲಿಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲ ಬಳಕೆದಾರರು ಇದನ್ನು &quot;ಅನುಚಿತ ವರ್ತನೆ&quot; ಎಂದು ಕರೆದಿದ್ದು, ಕಾಂಗ್ರೆಸ್ ನಾಯಕತ್ವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಘಟನೆ ನಡೆಯುವಾಗ ಅಲ್ಲೇ ಇದ್ದು ನಗುತ್ತಿದ್ದ ನಾಯಕರು ಮತ್ತು ಪತ್ರಕರ್ತರ ಬಗ್ಗೆಯೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. &quot;ಒಬ್ಬ ಮಹಿಳೆ ಹಿಂದೆ ಸರಿಯುತ್ತಿರುವಾಗ, ಯಾವುದೇ ರೀತಿಯ ದೈಹಿಕ ಸಂಪರ್ಕವನ್ನು ತಕ್ಷಣ ನಿಲ್ಲಿಸಬೇಕು&quot; ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ಇದನ್ನು &quot;ಸಾರ್ವಜನಿಕ ವೇದಿಕೆಯಲ್ಲಿ ಮುಜುಗರ ಉಂಟುಮಾಡುವ ಘಟನೆ&quot; ಎಂದು ಹೇಳಿದ್ದಾರೆ.&lt;/p&gt;&lt;h2&gt;ಕಾಂಗ್ರೆಸ್ ಮೇಲೆ ಒತ್ತಡ, ಇಬ್ಬರೂ ನಾಯಕರು ಮೌನ&lt;/h2&gt;&lt;p&gt;ವಿವಾದ ದೊಡ್ಡದಾಗುತ್ತಿದ್ದರೂ, ಈ ಬಗ್ಗೆ ಚೆರಿಯನ್ ಫಿಲಿಪ್ ಅಥವಾ ಬಿಂದು ಕೃಷ್ಣ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಕಾಂಗ್ರೆಸ್ ಪಕ್ಷ ಕೂಡ ಈ ವಿಷಯದ ಬಗ್ಗೆ ಔಪಚಾರಿಕವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ಸಾರ್ವಜನಿಕ ಜೀವನದಲ್ಲಿ ಹಿರಿಯ ಸ್ಥಾನದಲ್ಲಿದ್ದೇವೆ ಎಂಬ ಕಾರಣಕ್ಕೆ ಇನ್ನೊಬ್ಬರ ವೈಯಕ್ತಿಕ ಗಡಿಗಳನ್ನು ಮತ್ತು ಒಪ್ಪಿಗೆಯನ್ನು ಮೀರಿ ವರ್ತಿಸಬಹುದೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ. ಈ ವೈರಲ್ ವಿಡಿಯೋ ಕೇವಲ ರಾಜಕೀಯ ವಿವಾದವನ್ನು ಸೃಷ್ಟಿಸಿಲ್ಲ, ಬದಲಿಗೆ ಸಾರ್ವಜನಿಕ ವೇದಿಕೆಗಳಲ್ಲಿ ಮಹಿಳೆಯರ ಮುಜುಗರವನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಾಗುತ್ತದೆ ಮತ್ತು ಕ್ಯಾಮೆರಾಗಳ ಮುಂದೆಯೂ ವೈಯಕ್ತಿಕ ಗಡಿಗಳನ್ನು ಗೌರವಿಸುವುದು ರಾಜಕೀಯ ಸಂಸ್ಕೃತಿಯ ಭಾಗವಾಗಬೇಕೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/kerala-congress-leader-sparks-row-after-attempting-to-hug-woman-mla-despite-resistance/articleshow-0x7dnll"/>
        </item>
        <item>
            <title><![CDATA[ಮದುವೆಯ ದಿನವೇ ವರನ ಸಾವು.. ಅತ್ತಿಗೆಯೊಂದಿಗೆ ಏಳು ಸುತ್ತು ಹಾಕಿದ ಮೈದುನನ ವಿಡಿಯೋ ವೈರಲ್]]></title>
            <link>https://kannada.asianetnews.com/india-news/heartbreaking-viral-video-bihar-groom-dies-in-accident-family-marries-bride-to-younger-brother/articleshow-7807t1q</link>
            <guid isPermaLink="true">https://kannada.asianetnews.com/india-news/heartbreaking-viral-video-bihar-groom-dies-in-accident-family-marries-bride-to-younger-brother/articleshow-7807t1q</guid>
            <pubDate>Fri, 08 May 2026 13:08:46 +0530</pubDate>
            <description><![CDATA[&lt;p&gt;&lt;strong&gt;Bihar wedding tragedy: &lt;/strong&gt;ವಧುವಿನ ಮನೆಗೆ ಹೋಗುವ ದಾರಿಯಲ್ಲಿ ವರನು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಈ ಸಾವಿನ ನೋವಿನ ನಡುವೆಯೇ, ಹೆಣ್ಣಿನ ಭವಿಷ್ಯ ಹಾಳಾಗಬಾರದು ಎಂದು ವರನ ತಮ್ಮನ ಜೊತೆಗೆ ವಧುವಿನ ಮದುವೆ ಮಾಡಿಸಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ಪೋಸ್ಟ್ ಭಾರಿ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಆ ಕರುಣಾಜನಕ ಕಥೆ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr38c3tn8bg6navj4cb6hmhb,imgname-thumbnail---2026-05-08t130312.799-1778225909589.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಿ&lt;/strong&gt;ಹಾರದಲ್ಲಿ ನಡೆದ ಅನಿರೀಕ್ಷಿತ ಘಟನೆಯೊಂದು ಇಡೀ ಮದುವೆಯ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಶೋಕ ಸಾಗರದಲ್ಲಿ ಮುಳುಗಿಸಿದೆ. ಮದುವೆಯ ದಿಬ್ಬಣದಲ್ಲಿ ಅತ್ಯಂತ ಸಡಗರದಿಂದ ಹೊರಟಿದ್ದ ವರನು ಮಾರ್ಗಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದಾನೆ. ಆದರೆ, ಈ ಘಟನೆಯ ನಂತರದ ಬೆಳವಣಿಗೆಯಲ್ಲಿ ಮೃತ ವರನ ಕಿರಿಯ ಸಹೋದರನೊಂದಿಗೆ ವಧುವಿನ ವಿವಾಹವನ್ನು ನೆರವೇರಿಸಲಾಗಿದೆ. ಈ ಭಾವುಕ ಮತ್ತು ಆಶ್ಚರ್ಯಕರ ಘಟನೆಯ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಲಭ್ಯವಿರುವ ಮಾಹಿತಿಯ ಪ್ರಕಾರ, ಮದುವೆಯ ದಿಬ್ಬಣವು ಅತ್ಯಂತ ವಿಜೃಂಭಣೆಯಿಂದ ವಧುವಿನ ಮನೆಯತ್ತ ಹೊರಟಿತ್ತು. ವರನು ಹೂವುಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟ ಕಾರಿನಲ್ಲಿ ಕುಳಿತು ಜೀವನದ ಹೊಸ ಅಧ್ಯಾಯವನ್ನು ಆರಂಭಿಸುವ ಮಹದಾಸೆ ಮತ್ತು ಅತೀವ ಉತ್ಸಾಹದಲ್ಲಿದ್ದನು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಮಾರ್ಗಮಧ್ಯೆ ವರನ ಕಾರು ಗಂಭೀರವಾದ ಅಪಘಾತಕ್ಕೆ ಈಡಾಯಿತು. ಈ ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ವರನಿಗೆ ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಸ್ಥಳದಲ್ಲೇ ಕೊನೆಯುಸಿರೆಳೆದನು. ಮದುವೆಯ ಸಂಭ್ರಮವಿರಬೇಕಾದ ದಿನವೇ ಸಂಭವಿಸಿದ ಈ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳಲ್ಲಿ ಶೋಕ ಮಡುಗಟ್ಟಿತು. ಸಂತೋಷದಿಂದ ಕುಣಿದಾಡುತ್ತಿದ್ದ ಬಂಧು-ಬಳಗದವರ ಕಣ್ಣಲ್ಲಿ ಕ್ಷಣಮಾತ್ರದಲ್ಲಿ ನೀರು ತುಂಬಿಕೊಂಡಿತು.&lt;/p&gt;&lt;h2&gt;&lt;strong&gt;ವರನ ತಮ್ಮನ ಜೊತೆ ನಡೆದ ಮದುವೆ&lt;/strong&gt;&lt;/h2&gt;&lt;p&gt;ಒಂದೆಡೆ ಮಗನ ಅಕಾಲಿಕ ಸಾವಿನಿಂದ ವರನ ಮನೆಯಲ್ಲಿ ಬರಸಿಡಿಲು ಬಡಿದಂತಾಗಿದ್ದರೆ, ಇನ್ನೊಂದೆಡೆ ಮದುವೆಯಾಗಲು ಸರ್ವ ಸಿದ್ಧತೆ ಮಾಡಿಕೊಂಡಿದ್ದ ಯುವತಿಯ ಭವಿಷ್ಯ ಮತ್ತು ಅವಳ ಕುಟುಂಬದ ಗೌರವದ ಪ್ರಶ್ನೆ ಎದುರಾಯಿತು. ವಧುವಿನ ಮನೆಯವರು ಮಗಳ ಮುಂದಿನ ಬದುಕಿನ ಬಗ್ಗೆ ತೀವ್ರ ಆತಂಕ ಮತ್ತು ಆಘಾತಕ್ಕೆ ಒಳಗಾದರು. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆ ಮತ್ತು ಎರಡೂ ಕುಟುಂಬದ ಹಿರಿಯರ ಸರ್ವಾನುಮತದ ಸಮ್ಮತಿಯ ಮೇರೆಗೆ ಅತ್ಯಂತ ಕಠಿಣ ಹಾಗೂ ಅಸಾಮಾನ್ಯ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಮೃತ ವರನ ಕಿರಿಯ ಸಹೋದರನನ್ನೇ (ಮೈದುನ) ವಧುವಿನೊಂದಿಗೆ ವಿವಾಹ ಮಾಡಿಕೊಡಲು ಹಿರಿಯರು ಅಂತಿಮವಾಗಿ ತೀರ್ಮಾನಿಸಿದರು. ತದನಂತರ, ಮೃತ ವರನ ತಮ್ಮನಿಗೆ ಮದುವೆಯ ವಸ್ತ್ರಗಳನ್ನು ತೊಡಿಸಿ ಸಿದ್ಧಪಡಿಸಲಾಯಿತು ಮತ್ತು ಎಲ್ಲಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಾಹವನ್ನು ನೆರವೇರಿಸಲಾಯಿತು.&lt;/p&gt;&lt;h2&gt;&lt;strong&gt;ಸಮಾಜದಲ್ಲಿ ಪರ-ವಿರೋಧದ ತೀವ್ರ ಚರ್ಚೆ&lt;/strong&gt;&lt;/h2&gt;&lt;p&gt;ಈ ಘಟನೆಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಮಾಜದಲ್ಲಿ ದೊಡ್ಡ ಮಟ್ಟದ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಸಮಾಜದ ಒಂದು ವರ್ಗವು ಇದನ್ನು &quot;ಕುಟುಂಬದ ಅನಿವಾರ್ಯತೆ ಮತ್ತು ಅಸಹಾಯಕ ಸ್ಥಿತಿಯಲ್ಲಿದ್ದ ಹೆಣ್ಣುಮಗಳ ಭವಿಷ್ಯಕ್ಕಾಗಿ ತೆಗೆದುಕೊಳ್ಳಲಾದ ಧೈರ್ಯದ ನಿರ್ಧಾರ&quot; ಎಂದು ಪ್ರಶಂಸಿಸಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಯುವತಿಯ ಬದುಕನ್ನ ಅಂಧಕಾರಕ್ಕೆ ದೂಡಬಾರದು ಎಂಬ ಮಾನವೀಯ ದೃಷ್ಟಿಯಿಂದ ಇದು ಸರಿಯಾದ ಕ್ರಮ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇನ್ನೊಂದು ವರ್ಗದ ಜನರು ಈ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಮನೆಯ ಮಗ ಸಾವನ್ನಪ್ಪಿರುವಾಗ, ಅಂತಹ ತೀವ್ರ ಶೋಕಾಚರಣೆಯ ಸಮಯದಲ್ಲಿ ಮದುವೆಯಂತಹ ಸಂಭ್ರಮದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಾನವ ಸಂವೇದನೆಗಳ ದೃಷ್ಟಿಯಿಂದ ಸರಿಯಲ್ಲ ಎಂದು ಅವರು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ, ಬಿಹಾರದ ಈ ವಿಚಿತ್ರ ಮತ್ತು ಭಾವುಕ ಮದುವೆ ಈಗ ಇಡೀ ದೇಶದ ಗಮನ ಸೆಳೆದಿದೆ.&lt;/p&gt;&lt;h3&gt;2021 ರಲ್ಲಿ ಇದೇ ರೀತಿ ಪ್ರಕರಣ ನಡೆದಿತ್ತು. ಉತ್ತರ ಪ್ರದೇಶದಲ್ಲಿ ವರನು ಮದುವೆ ಮಂಟಪದಲ್ಲೇ ಹೃದಯಾಘಾತದಿಂದ ಮರಣ ಹೊಂದಿದಾಗ, ಸಮಾಜದ ಹಿರಿಯರು ವಧುವಿನ ಭವಿಷ್ಯಕ್ಕಾಗಿ ವರನ ತಮ್ಮನೊಂದಿಗೆ ಅಂದೇ ವಿವಾಹ ಮಾಡಿಸಿದ ಘಟನೆ ವರದಿಯಾಗಿತ್ತು.&lt;/h3&gt;&lt;p&gt;&lt;strong&gt;ಇಲ್ಲಿದೆ ನೋಡಿ ವಿಡಿಯೋ&amp;nbsp;&lt;/strong&gt;&lt;/p&gt;&lt;p&gt;बिहार में दर्दनाक हादसा: दूल्हे की मौत के बाद छोटे भाई से हुई शादी || बिहार से एक हैरान कर देने वाली और भावनात्मक खबर सामने आई है, जहां एक शादी की खुशियां अचानक मातम में बदल गईं। बताया जा रहा है कि एक गांव से निकली बारात पूरे धूमधाम के साथ जा रही थी, लेकिन रास्ते में दूल्हे&hellip; pic.twitter.com/OeB34V2CWI&lt;/p&gt;&lt;p&gt;&mdash; JosD92 (@JosD92official) May 6, 2026&lt;/p&gt;]]></content:encoded>
            <category>india-news</category>
            <dc:creator>Ashwini HR</dc:creator>
            <atom:link href="https://kannada.asianetnews.com/india-news/heartbreaking-viral-video-bihar-groom-dies-in-accident-family-marries-bride-to-younger-brother/articleshow-7807t1q"/>
        </item>
        <item>
            <title><![CDATA[ಜೀವಾವಧಿ ಶಿಕ್ಷೆಯ ಕೈದಿ ಜೊತೆ ಜೈಲಧಿಕಾರಿ ಲವ್:​ ಮದ್ವೆಯಲ್ಲಿ ಬಂಧಿಯಾದ ಅಂತರ್​ಧರ್ಮೀಯ ಜೋಡಿ ಸ್ಟೋರಿ ಕೇಳಿ]]></title>
            <link>https://kannada.asianetnews.com/gallery/relationship/woman-jailer-falls-in-love-with-prisoner-couple-ties-the-knot-after-he-completes-life-term-suc-46879va</link>
            <guid isPermaLink="true">https://kannada.asianetnews.com/gallery/relationship/woman-jailer-falls-in-love-with-prisoner-couple-ties-the-knot-after-he-completes-life-term-suc-46879va</guid>
            <pubDate>Fri, 08 May 2026 12:17:34 +0530</pubDate>
            <description><![CDATA[&lt;p&gt;ಜೈಲಾಧಿಕಾರಿಯೊಬ್ಬರು, ಕೊ*ಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯನ್ನು ವಿವಾಹವಾಗಿದ್ದಾರೆ. ಜೈಲಿನಲ್ಲಿ ಕರ್ತವ್ಯದಲ್ಲಿದ್ದಾಗ ಪ್ರಾರಂಭವಾದ ಇವರ ಸಂಬಂಧ, ಕೈದಿಯ ಬಿಡುಗಡೆಯ ನಂತರ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದೆ. ಇದು ಹಿಂದೂ-ಮುಸ್ಲಿಂ ಅಂತರ್​ಧರ್ಮೀಯ ವಿವಾಹದ ರೋಚಕ ಸ್ಟೋರಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr353837een38gzars9gd9wh,imgname-jail-06-1778222473319.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೈಲಾಧಿಕಾರಿಯೊಬ್ಬರು, ಕೊ*ಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯನ್ನು ವಿವಾಹವಾಗಿದ್ದಾರೆ. ಜೈಲಿನಲ್ಲಿ ಕರ್ತವ್ಯದಲ್ಲಿದ್ದಾಗ ಪ್ರಾರಂಭವಾದ ಇವರ ಸಂಬಂಧ, ಕೈದಿಯ ಬಿಡುಗಡೆಯ ನಂತರ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದೆ. ಇದು ಹಿಂದೂ-ಮುಸ್ಲಿಂ ಅಂತರ್​ಧರ್ಮೀಯ ವಿವಾಹದ ರೋಚಕ ಸ್ಟೋರಿಯಾಗಿದೆ.&lt;/p&gt;&lt;img&gt;&lt;p&gt;ಮದುವೆ ಸ್ವರ್ಗದಲ್ಲಿಯೇ ಆಗುತ್ತದೆ ಎನ್ನುವ ಮಾತಿದೆ. ಅದರಂತೆಯೇ, ಇಲ್ಲೊಂದು ಅಪರೂಪದ ಪ್ರಕರಣ ನಡೆದಿದೆ. ಜೈಲಾಧಿಕಾರಿಯೊಬ್ಬರು ಜೈಲಿನಲ್ಲಿಯೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯ ಜೊತೆ ಮದುವೆಯಾಗಿರುವ ರೋಚಕ ಘಟನೆ ಇದಾಗಿದೆ. ಹಿಂದೂ-ಮುಸ್ಲಿಂ ಅಂತರ್​ಧರ್ಮೀಯ ಮದುವೆಯ ರೋಚಕ ಸ್ಟೋರಿ ಇದಾಗಿದೆ.&lt;/p&gt;&lt;img&gt;&lt;p&gt;ಮಧ್ಯಪ್ರದೇಶದ ಸತ್ನಾದಲ್ಲಿರುವ ಮಹಿಳಾ ಜೈಲು ಅಧಿಕಾರಿಯೊಬ್ಬರು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಕೈದಿಯನ್ನು ವಿವಾಹವಾಗಿದ್ದಾರೆ. ಈ ಸಂಬಂಧ ಜೈಲಿನೊಳಗೆ ಪ್ರಾರಂಭವಾಗಿತ್ತು. ಸತ್ನಾ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ಆಗಿರುವ ಫಿರೋಜಾ ಖಾಟೂನ್, ಜೈಲಿನಲ್ಲಿ ವಾರಂಟ್ ಇನ್&zwnj;ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದಾಗ ಧರ್ಮೇಂದ್ರ ಸಿಂಗ್ ಅವರನ್ನು ಭೇಟಿಯಾದರು. ಛತ್ತರ್&zwnj;ಪುರ ಜಿಲ್ಲೆಯ ಚಾಂಡ್ಲಾ ನಿವಾಸಿ ಸಿಂಗ್, 2007 ರಲ್ಲಿ ಕೌನ್ಸಿಲರ್ ಒಬ್ಬರ ಕೊಲೆ ಮತ್ತು ಇತರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.&lt;/p&gt;&lt;img&gt;&lt;p&gt;ಜೈಲಿನಲ್ಲಿದ್ದಾಗ, ಧರ್ಮೇಂದ್ರ ಸಿಂಗ್ ಜೈಲು ಅಧಿಕಾರಿಗಳಿಗೆ ವಾರೆಂಟ್ ಸಂಬಂಧಿತ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು ಎಂದು ವರದಿಯಾಗಿದೆ, ಇದರಿಂದಾಗಿ ಅವರು ಫಿರೋಜಾ ಅವರೊಂದಿಗೆ ನಿಯಮಿತ ಸಂಪರ್ಕಕ್ಕೆ ಬಂದರು. ಅವರ ವೃತ್ತಿಪರ ಸಂವಹನಗಳು ಕ್ರಮೇಣ ಸ್ನೇಹವಾಗಿ ಮತ್ತು ನಂತರ ಸಂಬಂಧವಾಗಿ ಬೆಳೆಯಿತು. ಸುಮಾರು 14 ವರ್ಷಗಳ ಜೈಲು ಶಿಕ್ಷೆಯ ನಂತರ ಸಿಂಗ್ ಅವರನ್ನು ನಾಲ್ಕು ವರ್ಷಗಳ ಹಿಂದೆ ಬಿಡುಗಡೆ ಮಾಡಲಾಯಿತು, ವರದಿಯ ಪ್ರಕಾರ ಉತ್ತಮ ನಡವಳಿಕೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು.&lt;/p&gt;&lt;img&gt;&lt;p&gt;ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಮೇ 5 ರಂದು ಛತ್ತರ್&zwnj;ಪುರ ಜಿಲ್ಲೆಯಲ್ಲಿ ವಿವಾಹ ನಡೆಯಿತು. ವರದಿಗಳ ಪ್ರಕಾರ, ಸಾಮಾಜಿಕ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಸಿಂಗ್ ವಿವಾಹ ಆಮಂತ್ರಣ ಪತ್ರಗಳಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ವಿವಾಹ ಸಮಾರಂಭವನ್ನು ವೈದಿಕ ವಿಧಿವಿಧಾನಗಳು ಮತ್ತು ಪಠಣಗಳೊಂದಿಗೆ ನಡೆಸಲಾಯಿತು.&lt;/p&gt;&lt;img&gt;&lt;p&gt;ಖಾಟೂನ್&zwnj;ನ ಮುಸ್ಲಿಂ ಕುಟುಂಬ ಸದಸ್ಯರ ಬೆಂಬಲವನ್ನು ಅಂತರ್ಧರ್ಮೀಯ ವಿವಾಹಕ್ಕೆ ಪಡೆಯಲಿಲ್ಲ ಎಂದು ವರದಿಯಾಗಿದೆ, ಅವರು ಸಮಾರಂಭಕ್ಕೆ ಹಾಜರಾಗಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ, ವಿಶ್ವ ಹಿಂದೂ ಪರಿಷತ್ (ವಿಎಚ್&zwnj;ಪಿ) ಜಿಲ್ಲಾ ಉಪಾಧ್ಯಕ್ಷ ರಾಜಬಹಾದೂರ್ ಮಿಶ್ರಾ ಮತ್ತು ಅವರ ಪತ್ನಿ ವಿದ್ಯುಕ್ತ 'ಕನ್ಯಾದಾನ' ನೆರವೇರಿಸಿದರು. ಬಜರಂಗದಳದ ಸದಸ್ಯರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.&lt;/p&gt;&lt;img&gt;&lt;p&gt;ಸತ್ನಾ ಕೇಂದ್ರ ಜೈಲಿಗೆ ಸಂಬಂಧಿಸಿದ ಅಧಿಕಾರಿಗಳು, ಉದ್ಯೋಗಿಗಳು ಮತ್ತು ಕೈದಿಗಳು ಸಹ ನವವಿವಾಹಿತ ದಂಪತಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/woman-jailer-falls-in-love-with-prisoner-couple-ties-the-knot-after-he-completes-life-term-suc-46879va"/>
        </item>
        <item>
            <title><![CDATA[T20 World Cup ಗೆದ್ದರೂ ಸೂರ್ಯಕುಮಾರ್‌ಗೆ ಬಂತು ಕುತ್ತು ! ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿ ಹೊಸ ಆಟಗಾರ ಎಂಟ್ರಿ?]]></title>
            <link>https://kannada.asianetnews.com/cricket-sports/bcci-consider-shreyas-iyer-as-t20-captain-replacement-of-suryakumar-yadav/articleshow-uxmemeh</link>
            <guid isPermaLink="true">https://kannada.asianetnews.com/cricket-sports/bcci-consider-shreyas-iyer-as-t20-captain-replacement-of-suryakumar-yadav/articleshow-uxmemeh</guid>
            <pubDate>Fri, 08 May 2026 11:27:44 +0530</pubDate>
            <description><![CDATA[&lt;p&gt;Suryakumar Yadav: ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾ ಟಿ20 ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಒಂದೂ ಸರಣಿ ಸೋತಿಲ್ಲ. ಆದರೂ ಅವರ ಕಳಪೆ ಫಾರ್ಮ್&zwnj;ನಿಂದಾಗಿ ಬಿಸಿಸಿಐ ಅವರನ್ನು ಕೆಳಗಿಳಿಸಲು ಚಿಂತಿಸುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkmes8h8pshgqvpf9x8vfpzg,imgname-thumb--5--1773434348072.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ:&lt;/strong&gt; ಭಾರತೀಯ ಟಿ20 ತಂಡದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆಯುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನೇ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಲು ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.&amp;nbsp;&lt;/p&gt;&lt;h2&gt;35 ವರ್ಷದ ಸೂರ್ಯಕುಮಾರ್&zwnj;ಗೆ ಕ್ಯಾಪ್ಟನ್ಸಿ ಇಲ್ಲವೇ?&lt;/h2&gt;&lt;p&gt;ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್, ಅದರಲ್ಲೂ ಐಪಿಎಲ್&zwnj;ನಲ್ಲಿನ ಕಳಪೆ ಪ್ರದರ್ಶನವೇ ಈ ಕಠಿಣ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ. ಅವರ ಬದಲಿಗೆ, ಐಪಿಎಲ್&zwnj;ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಮಿಂಚುತ್ತಿರುವ ಶ್ರೇಯಸ್ ಅಯ್ಯರ್ ಅವರನ್ನು ಟಿ20 ನಾಯಕತ್ವಕ್ಕೆ ಪರಿಗಣಿಸಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. 2028ರ ವಿಶ್ವಕಪ್ ಮತ್ತು ಒಲಿಂಪಿಕ್ಸ್ ತನಕ ನಾಯಕನಾಗಿ ಮುಂದುವರಿಯಲು 35 ವರ್ಷದ ಸೂರ್ಯಕುಮಾರ್ ಯಾದವ್ ಆಸಕ್ತಿ ತೋರಿಸಿದ್ದರೂ, ಆಯ್ಕೆ ಸಮಿತಿಗೆ ಇದರಲ್ಲಿ ಒಲವಿಲ್ಲ.&lt;/p&gt;&lt;p&gt;ರೋಹಿತ್ ಶರ್ಮಾ ನಿವೃತ್ತಿಯ ನಂತರ ಟೀಂ ಇಂಡಿಯಾವನ್ನು ಮುನ್ನಡೆಸಿದ ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ ಒಂದೇ ಒಂದು ಟಿ20 ಸರಣಿಯನ್ನೂ ಸೋತಿಲ್ಲ. ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಎರಡನ್ನೂ ಗೆದ್ದುಕೊಟ್ಟಿದ್ದಾರೆ. ತಂಡವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಸೂರ್ಯ ಅವರ ವೈಯಕ್ತಿಕ ಫಾರ್ಮ್ ಆಯ್ಕೆ ಸಮಿತಿಯನ್ನು ಈ ಕಠಿಣ ನಿರ್ಧಾರಕ್ಕೆ ದೂಡುತ್ತಿದೆ. ಈ ಬಾರಿಯ ಐಪಿಎಲ್ ಸೀಸನ್&zwnj;ನಲ್ಲಿ ಮುಂಬೈ ಇಂಡಿಯನ್ಸ್&zwnj; ಪರ 10 ಪಂದ್ಯಗಳಿಂದ ಸೂರ್ಯ ಗಳಿಸಿದ್ದು ಕೇವಲ 195 ರನ್. ಟಿ20 ವಿಶ್ವಕಪ್&zwnj;ನಲ್ಲಿ ಭಾರತ ಚಾಂಪಿಯನ್ ಆದಾಗ 9 ಇನ್ನಿಂಗ್ಸ್&zwnj;ಗಳಿಂದ 242 ರನ್ ಗಳಿಸಿದ್ದರೂ, ಅದರಲ್ಲಿ 84 ರನ್&zwnj;ಗಳು ಅಮೆರಿಕ ವಿರುದ್ಧವೇ ಬಂದಿದ್ದವು. ಫೈನಲ್ ಸೇರಿದಂತೆ ದೊಡ್ಡ ತಂಡಗಳ ವಿರುದ್ಧದ ಒತ್ತಡದ ಪಂದ್ಯಗಳಲ್ಲಿ ಸೂರ್ಯ ಮಿಂಚಲು ವಿಫಲರಾಗಿದ್ದರು.&lt;/p&gt;&lt;h2&gt;9 ಇನ್ನಿಂಗ್ಸ್&zwnj;ಗಳಿಂದ 333 ರನ್&lt;/h2&gt;&lt;p&gt;ಕಳೆದ ಕೆಲವು ಸಮಯದಿಂದ ಸೂರ್ಯಕುಮಾರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೈ ನೋವಿನ ನಡುವೆಯೂ ಅವರು ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ, ಅವರನ್ನು ಕೇವಲ ಬ್ಯಾಟರ್ ಆಗಿ ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆಯೂ ಆಯ್ಕೆ ಸಮಿತಿಯಲ್ಲಿ ಭಿನ್ನಾಭಿಪ್ರಾಯವಿದೆ. ಸುಮಾರು ಎರಡು ವರ್ಷಗಳ ಕಾಲ ಟಿ20 ತಂಡದಿಂದ ಹೊರಗಿದ್ದ ಶ್ರೇಯಸ್ ಅಯ್ಯರ್, ಐಪಿಎಲ್&zwnj;ನಲ್ಲಿನ ಭರ್ಜರಿ ಪ್ರದರ್ಶನದ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಈ ಸೀಸನ್&zwnj;ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್, ಮೊದಲ ಏಳು ಪಂದ್ಯಗಳಲ್ಲಿ ಆರರಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಬ್ಯಾಟಿಂಗ್&zwnj;ನಲ್ಲೂ ಮಿಂಚಿರುವ ಅವರು 9 ಇನ್ನಿಂಗ್ಸ್&zwnj;ಗಳಿಂದ 333 ರನ್ ಗಳಿಸಿದ್ದಾರೆ.&lt;/p&gt;&lt;p&gt;ಐಪಿಎಲ್ ನಂತರ ನಡೆಯಲಿರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಂದಲೇ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ವಿಶ್ವಕಪ್ ಗೆಲುವಿನ ನಂತರ ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಗುರಿ ಇಟ್ಟುಕೊಂಡಿದೆ. ಕೊನೇ ಕ್ಷಣದಲ್ಲಿ ಯಾವುದೇ ಬದಲಾವಣೆಗಳಾಗದಿದ್ದರೆ, ಶ್ರೇಯಸ್ ಅಯ್ಯರ್ ಅವರೇ ಭಾರತದ ಮುಂದಿನ ಟಿ20 ನಾಯಕನಾಗುವುದು ಬಹುತೇಕ ಖಚಿತ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/cricket-sports/bcci-consider-shreyas-iyer-as-t20-captain-replacement-of-suryakumar-yadav/articleshow-uxmemeh"/>
        </item>
        <item>
            <title><![CDATA[ಕಾಂಗ್ರೆಸ್ ಸರ್ಕಾರದಿಂದ 10,000 ಫ್ರೀ ಟಿಕೆಟ್ ಬೇಡಿಕೆ, ಬೆಂಗಳೂರಿಗೆ ಐಪಿಎಲ್ ಫೈನಲ್ ಮ್ಯಾಚ್ ಕೈತಪ್ಪಲು ಅಸಲಿ ಕಾರಣ ಬಿಚ್ಚಿಟ್ಟ ಬಿಸಿಸಿಐ!]]></title>
            <link>https://kannada.asianetnews.com/india-news/ipl-final-row-bcci-claims-bengaluru-lost-match-over-govt-s-10-000-ticket-demand/articleshow-8yh4co6</link>
            <guid isPermaLink="true">https://kannada.asianetnews.com/india-news/ipl-final-row-bcci-claims-bengaluru-lost-match-over-govt-s-10-000-ticket-demand/articleshow-8yh4co6</guid>
            <pubDate>Fri, 08 May 2026 10:51:52 +0530</pubDate>
            <description><![CDATA[&lt;p&gt;IPL Final Row ಬೆಂಗಳೂರಿನಿಂದ ಐಪಿಎಲ್ ಫೈನಲ್ ಪಂದ್ಯ ಕೈತಪ್ಪಲು ಕ್ರೀಡಾಂಗಣದ ಸಾಮರ್ಥ್ಯ ಕಾರಣವಲ್ಲ, ಬದಲಾಗಿ ಸರ್ಕಾರದ 10,000 ಉಚಿತ ವಿವಿಐಪಿ ಟಿಕೆಟ್&zwnj;ಗಳ ಬೇಡಿಕೆಯೇ ಕಾರಣ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಹಿರಂಗಪಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr30csb29z0kvsvyc5he84h2,imgname-----------------------2026-05-08t104034.749-1778217543010.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.8)&lt;/strong&gt;: ಆರ್&zwnj;ಸಿಬಿ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವು ಬೆಂಗಳೂರಿನಿಂದ ಕೈತಪ್ಪಲು ಕ್ರೀಡಾಂಗಣದ ಸಾಮರ್ಥ್ಯ ಕಾರಣವಲ್ಲ, ಬದಲಾಗಿ ಸರ್ಕಾರದ ದುರಾಸೆ ಕಾರಣ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.&lt;/p&gt;&lt;p&gt;ಕಾಂಗ್ರೆಸ್ ಸರ್ಕಾರವು 'ಕ್ರೀಡಾಂಗಣದ ಸಾಮರ್ಥ್ಯ' ಕಡಿಮೆ ಇದೆ ಎಂಬ ಕುಂಟು ನೆಪ ಹೇಳಿ ಜನರ ದಾರಿ ತಪ್ಪಿಸುತ್ತಿದ್ದರೆ, ಇತ್ತ ಬಿಸಿಸಿಐ ಅಸಲಿ ಕಾರಣವನ್ನು ಬಿಚ್ಚಿಟ್ಟಿದೆ. ಹಾಗಾದರೆ ಬೆಂಗಳೂರಿನಿಂದ ಐಪಿಎಲ್ ಫೈನಲ್ ಕೈತಪ್ಪಲು ಅಸಲಿ ಕಾರಣವೇನು? ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಬಾಯಲ್ಲೇ ಕೇಳಿ.&lt;/p&gt;&lt;p&gt;ಕಾಂಗ್ರೆಸ್ ಸರ್ಕಾರ 'ಕ್ರೀಡಾಂಗಣದ ಸಾಮರ್ಥ್ಯ&quot;ದ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತಿದ್ದರೆ, ಇತ್ತ ಬಿಸಿಸಿಐ ಸತ್ಯವನ್ನೇ ಬಿಚ್ಚಿಟ್ಟಿದೆ: ಕೇವಲ ತಮ್ಮ ವಿವಿಐಪಿ (VVIP) ಬಳಗಕ್ಕಾಗಿ ಬರೋಬ್ಬರಿ 10,000 ಉಚಿತ ಟಿಕೆಟ್&zwnj;ಗಳಿಗಾಗಿ ಇವರು ಬೇಡಿಕೆಯಿಟ್ಟಿದ್ದರು! .&lt;/p&gt;&lt;p&gt;ಈ ಉಚಿತ ಟಿಕೆಟ್&zwnj;ಗಳ ಪಟ್ಟಿಯಲ್ಲಿ 900 ಟಿಕೆಟ್&zwnj;ಗಳು ಶಾಸಕರಿಗೆ ಹಾಗೂ 700 ಟಿಕೆಟ್&zwnj;ಗಳು ನೇರವಾಗಿ ಸರ್ಕಾರಕ್ಕೆ ಬೇಕೆಂದು ಪಟ್ಟು ಹಿಡಿಯಲಾಗಿತ್ತು ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ಕೇವಲ ಐಷಾರಾಮಿ ಸವಲತ್ತುಗಳಿಗಾಗಿ ಹಠಕ್ಕೆ ಬಿದ್ದ ಪರಿಣಾಮವಾಗಿ ಇಂದು ಬೆಂಗಳೂರಿನ ಕ್ರೀಡಾಭಿಮಾನಿಗಳು ಐಪಿಎಲ್ ಫೈನಲ್&zwnj;ರ ರಣರೋಚಕ, ಅದ್ಭುತ ಪಂದ್ಯವನ್ನ ಕಳೆದುಕೊಳ್ಳುವಂತಾಗಿದೆ.&lt;/p&gt;&lt;p&gt;ಇನ್ನೊಂದೆಡೆ, ರಿಯಾಯಿತಿ ದರದಲ್ಲಿ ಸರ್ಕಾರದಿಂದ ಜಮೀನು ಪಡೆದ ಕೆಎಸ್&zwj;ಸಿಎ (KSCA) ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಸವಲತ್ತುಗಳನ್ನು ಅನುಭವಿಸುತ್ತಿರುವ ಈ ಸಂಸ್ಥೆ, ಸಾಮಾನ್ಯ ಅಭಿಮಾನಿಗಳಿಗೆ ಮಾತ್ರ 'ಡೈನಾಮಿಕ್ ಪ್ರೈಸಿಂಗ್' ಹೆಸರಲ್ಲಿ ಟಿಕೆಟ್ ದರ ಏರಿಸಿ ಲೂಟಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಚಿನ್ನಸ್ವಾಮಿ ಕ್ರೀಡಾಂಗಣವು ಕನ್ನಡಿಗರ ಮತ್ತು ಅಭಿಮಾನಿಗಳ ಆಸ್ತಿಯೇ ಹೊರತು, ರಾಜಕಾರಣಿಗಳ ಖಾಸಗಿ ಪಾರ್ಟಿ ಹಾಲ್ ಅಲ್ಲ. ವಿವಿಐಪಿ ಬಾಕ್ಸ್&zwnj;ನಲ್ಲಿ ಕುಳಿತು ಉಚಿತವಾಗಿ ತಿಂಡಿ ತಿನ್ನಲು ಮತ್ತು ಮಜಾ ಮಾಡಲು ಅಭಿಮಾನಿಗಳ ಭಾವನೆಯನ್ನೇ ಸರ್ಕಾರ ಒತ್ತೆ ಇಟ್ಟಿದೆ. ಬೆಂಗಳೂರಿನ ಜನತೆ ಈ ನಂಬಿಕೆ ದ್ರೋಹವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.&lt;/p&gt;&lt;h2&gt;ಪ್ರಿಯಾಂಕ್ ಖರ್ಗೆ ಹೇಳಿದ್ದೇನು?&lt;/h2&gt;&lt;p&gt;ಐಪಿಎಲ್ ಫೈನಲ್ ಮ್ಯಾಚ್ ಬೆಂಗಳೂರಿನಿಂದ ಗುಜರಾತ್&zwnj;ಗೆ ಸ್ಥಳಾಂತರಗೊಂಡ ವಿಚಾರವಾಗಿ ನಿನ್ನೆಯಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ಬಿಸಿಸಿಐ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.&lt;/p&gt;&lt;p&gt;ಕರ್ನಾಟಕಕ್ಕೆ ಬರಬೇಕಾದ ಬಂಡವಾಳ ಮತ್ತು ಐಪಿಎಲ್ ಪಂದ್ಯಗಳನ್ನು ಗುಜರಾತ್&zwnj;ಗೆ ಹೈಜಾಕ್ ಮಾಡಲಾಗುತ್ತಿದೆ. ಸೆಮಿಕಂಡಕ್ಟರ್ ಯೋಜನೆಗಳಿಗೆ ಕಂಪನಿಗಳು ಕರ್ನಾಟಕವನ್ನು ಆಯ್ಕೆ ಮಾಡಿದರೂ ಅವುಗಳನ್ನು ಅಸ್ಸಾಂ ಅಥವಾ ಗುಜರಾತ್&zwnj;ಗೆ ಕೊಂಡೊಯ್ಯಲಾಗುತ್ತಿದೆ. ಬಿಸಿಸಿಐನಲ್ಲಿ ಜಯ್ ಶಾ ಇರುವುದರಿಂದ ಅವರಿಗೆ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ, ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದರು. ಅದರೆ ಐಪಿಎಲ್ ಫೈನಲ್ ಮ್ಯಾಚ್ ಬೆಂಗಳೂರು ಕೈತಪ್ಪಲು ಅಸಲಿ ಕಾರಣವೇನು ಎಂಬುದನ್ನ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಯಲು ಮಾಡಿದ್ದಾರೆ.&lt;/p&gt;&lt;p&gt;ಬೆಂಗಳೂರಿನಿಂದ ಐಪಿಎಲ್ ಫೈನಲ್ ಕೈತಪ್ಪಲು ಅಸಲಿ ಕಾರಣವೇನು ಎಂಬುದನ್ನು @BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಬಾಯಲ್ಲೇ ಕೇಳಿ.@INCKarnataka ಸರ್ಕಾರ &quot;ಕ್ರೀಡಾಂಗಣದ ಸಾಮರ್ಥ್ಯ&quot;ದ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತಿದ್ದರೆ, ಇತ್ತ ಬಿಸಿಸಿಐ ಸತ್ಯವನ್ನೇ ಬಿಚ್ಚಿಟ್ಟಿದೆ: ಕೇವಲ ತಮ್ಮ ವಿವಿಐಪಿ (VVIP) ಬಳಗಕ್ಕಾಗಿ ಬರೋಬ್ಬರಿ 10,000&hellip; pic.twitter.com/Gcompeax3y&lt;/p&gt;&lt;p&gt;&mdash; Nikhil Kumar (@Nikhil_Kumar_k) May 8, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/ipl-final-row-bcci-claims-bengaluru-lost-match-over-govt-s-10-000-ticket-demand/articleshow-8yh4co6"/>
        </item>
        <item>
            <title><![CDATA[ರಾಜಕೀಯ ಬಿರುಗಾಳಿ, ಟಿವಿಕೆ ಪಕ್ಷದ 108 ಶಾಸಕರು ರಾಜೀನಾಮೆ ಎಚ್ಚರಿಕೆ ಕೊಟ್ಟ ನಟ ವಿಜಯ್]]></title>
            <link>https://kannada.asianetnews.com/gallery/india-news/actor-vijay-warns-of-108-mla-resignations-over-dmk-aiadmk-government-formation-fears-nvbmlak</link>
            <guid isPermaLink="true">https://kannada.asianetnews.com/gallery/india-news/actor-vijay-warns-of-108-mla-resignations-over-dmk-aiadmk-government-formation-fears-nvbmlak</guid>
            <pubDate>Fri, 08 May 2026 10:40:12 +0530</pubDate>
            <description><![CDATA[&lt;p&gt;ಅತೀ ದೊಡ್ಡ ಪಕ್ಷವಾದರೂ ಸರ್ಕಾರ ರಚಿಸಲು ನಟ ವಿಜಯ್ ಟಿವಿಕೆ ಪಕ್ಷ ಕಸರತ್ತು ನಡೆಸುತ್ತಿರುವಾಗಲೇ, ಡಿಎಂಕೆ-ಎಐಡಿಎಂಕೆ ಹಿಂಬಾಗಿಲ ರಾಜಕೀಯ ಕಸರತ್ತು ತೀವ್ರಗೊಂಡಿದೆ. ಇದರ ಬೆನ್ನಲ್ಲೇ 108 ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2qkftmnemmhz3csepnm7pt,imgname-----------------------2026-05-08t080837.800-1778208325460.jpg" type="image/jpeg" height="390" width="690"/>
            <content:encoded><![CDATA[&lt;p&gt;ಅತೀ ದೊಡ್ಡ ಪಕ್ಷವಾದರೂ ಸರ್ಕಾರ ರಚಿಸಲು ನಟ ವಿಜಯ್ ಟಿವಿಕೆ ಪಕ್ಷ ಕಸರತ್ತು ನಡೆಸುತ್ತಿರುವಾಗಲೇ, ಡಿಎಂಕೆ-ಎಐಡಿಎಂಕೆ ಹಿಂಬಾಗಿಲ ರಾಜಕೀಯ ಕಸರತ್ತು ತೀವ್ರಗೊಂಡಿದೆ. ಇದರ ಬೆನ್ನಲ್ಲೇ 108 ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ತಮಿಳುನಾಡಿನಲ್ಲಿ ಫಲಿತಾಂಶ ಹೊರಬಿದ್ದು ನಟ ವಿಜಯ್ ಜೊಸೆಫ್ ಅವರ ಟಿವಿಕೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 108 ಸ್ಥಾನ ಗೆದ್ದುಕೊಂಡಿದೆ. ಆದರೆ ಸರ್ಕಾರ ರಚಿಸಲು 118 ಶಾಸಕರು ಬೇಕಾಗಿದ್ದಾರೆ. ಕಾಂಗ್ರೆಸ್ ಬೆಂಬಲ ನೀಡಿದರೂ ಮ್ಯಾಜಿಕ್ ನಂಬರ್ ದಾಟುತ್ತಿಲ್ಲ. ಹೀಗಾಗಿ ನಟ ವಿಜಯ್ ಸರ್ಕಾರ ರಚಿಸುವ ಕಸರತ್ತಿನಲ್ಲಿದ್ದಾರೆ. ಇಧರ ನಡುವೆ ಮಹತ್ವದ ಬಿರುಗಾಳಿ ಎದ್ದಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಕಸರತ್ತು ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷ ಎಚ್ಚರಿಕೆ ನೀಡಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಒಂದಾದರೆ, ನಮ್ಮೆಲ್ಲಾ ಶಾಸಕರೂ ರಾಜೀನಾಮೆ ನೀಡಲಿದ್ದಾರೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಜನರ ತೀರ್ಪನ್ನು ಬದಿಗೊತ್ತಿ ಈ ಎರಡೂ ದ್ರಾವಿಡ ಪಕ್ಷಗಳು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಸಂಚು ರೂಪಿಸಿವೆ ಎಂದು ಟಿವಿಕೆ ಆರೋಪಿಸಿದೆ. 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿರುವ ನಮಗೆ ಸರ್ಕಾರ ರಚಿಸಲು ರಾಜ್ಯಪಾಲರು ಮೊದಲು ಅವಕಾಶ ನೀಡಬೇಕು ಎಂದು ಟಿವಿಕೆ ಹೇಳಿದೆ. ಆದರೆ, ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ವಿಜಯ್ ಅವರ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಸರ್ಕಾರ ರಚಿಸಲು ಬೇಕಾದ ಬಹುಮತ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಹುಮತ ಸಾಬೀತುಪಡಿಸಲು ವಿಜಯ್ ನೀಡಿದ ಯೋಜನೆಯನ್ನೂ ರಾಜ್ಯಪಾಲರು ಒಪ್ಪಲಿಲ್ಲ. 118 ಶಾಸಕರ ಬೆಂಬಲ ಪತ್ರ ನೀಡುವಂತೆ ರಾಜ್ಯಪಾಲರು ಪಟ್ಟು ಹಿಡಿದಿದ್ದರಿಂದ ಸರ್ಕಾರ ರಚನೆ ಪ್ರಕ್ರಿಯೆ ಸಂಕಷ್ಟಕ್ಕೆ ಸಿಲುಕಿದೆ. ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಅಗತ್ಯವಿರುವ ಬಹುಮತ ಇನ್ನೂ ಯಾರಿಗೂ ಸಿಕ್ಕಿಲ್ಲ ಎಂದು ರಾಜ್ಯಪಾಲರು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಬಹುಮತಕ್ಕೆ ಟಿವಿಕೆಗೆ ಇನ್ನೂ 10 ಸ್ಥಾನಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ, ಪಕ್ಷವು ಎಡಪಕ್ಷಗಳು ಮತ್ತು ಕೆಲವು ಸಣ್ಣ ಪಕ್ಷಗಳ ಜೊತೆ ಮಾತುಕತೆ ನಡೆಸುತ್ತಿದೆ. ಇದರ ಜೊತೆಗೆ, ನ್ಯಾಯಾಲಯದ ಮೊರೆ ಹೋಗಲು ಕೂಡ ಪಕ್ಷ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಡಿಎಂಕೆ ಸಭೆ ನಡೆಸಿದ ನಂತರ ಈ ಎಲ್ಲಾ ರಾಜಕೀಯ ವದಂತಿಗಳು ಶುರುವಾಗಿವೆ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರಿಗೆ ಪಕ್ಷವು ಸಂಪೂರ್ಣ ಅಧಿಕಾರ ನೀಡಿದೆ. ಮತ್ತೊಂದು ಚುನಾವಣೆಯನ್ನು ತಪ್ಪಿಸುವುದು, ಸ್ಥಿರ ಸರ್ಕಾರವನ್ನು ರಚಿಸುವುದು ಮತ್ತು ಕೋಮುವಾದಿ ಶಕ್ತಿಗಳಿಗೆ ಅವಕಾಶ ನೀಡದಿರುವುದೇ ನಮ್ಮ ಪ್ರಾಥಮಿಕ ಗುರಿ ಎಂದು ಡಿಎಂಕೆ ಹೇಳಿದೆ.&lt;/p&gt;&lt;img&gt;&lt;p&gt;ಮೇ 10ರವರೆಗೆ ಎಲ್ಲಾ ಶಾಸಕರು ಚೆನ್ನೈನಲ್ಲೇ ಇರುವಂತೆ ಡಿಎಂಕೆ ಸೂಚನೆ ನೀಡಿದೆ. ಡಿಎಂಕೆ ಹೊರಗಿನಿಂದ ಬೆಂಬಲ ನೀಡಿ, ಇ. ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಯೋಜನೆ ಚರ್ಚೆಯಲ್ಲಿದೆ ಎಂದು ಡಿಎಂಕೆ ಉನ್ನತ ಮೂಲಗಳು ಖಚಿತಪಡಿಸಿವೆ. ಒಂದು ವೇಳೆ ವಿಜಯ್ ಅಧಿಕಾರಕ್ಕೆ ಬಂದರೆ, ಅವರು ಎಂ.ಜಿ. ರಾಮಚಂದ್ರನ್ ಅವರಂತೆ ಆಗುತ್ತಾರೆ, ನಂತರ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಅಸಾಧ್ಯ ಎಂಬ ಭಯ ಈ ಪಕ್ಷಗಳನ್ನು ಕಾಡುತ್ತಿದೆ.&lt;/p&gt;&lt;h2&gt;ಎಲ್ಲಾ ಶಾಸಕರಿಗೆ ಚೆನ್ನೈನಲ್ಲೇ ಇರುವಂತೆ ಸೂಚನೆ&lt;/h2&gt;]]></content:encoded>
            <category>india-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/actor-vijay-warns-of-108-mla-resignations-over-dmk-aiadmk-government-formation-fears-nvbmlak"/>
        </item>
        <item>
            <title><![CDATA[ಡಿಎಂಕೆ ಜೊತೆ ನಿಶ್ಚಿತಾರ್ಥ, ಟಿವಿಕೆ ಜೊತೆಗೆ ಮದುವೆ: ಕಾಂಗ್ರೆಸ್ ತನ್ನ ಹಳೇ ಬುದ್ಧಿ ಬಿಟ್ಟಿಲ್ಲ, ಡಿಎಂಕೆ ಕಿಡಿ]]></title>
            <link>https://kannada.asianetnews.com/india-news/tamil-nadu-government-formation-dmk-party-slams-congress-party-rav/articleshow-ui03ao9</link>
            <guid isPermaLink="true">https://kannada.asianetnews.com/india-news/tamil-nadu-government-formation-dmk-party-slams-congress-party-rav/articleshow-ui03ao9</guid>
            <pubDate>Fri, 08 May 2026 10:16:28 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡದ ರಾಜ್ಯಪಾಲರ ನಡೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ. ಮತ್ತೊಂದೆಡೆ, ಮೈತ್ರಿ ಮುರಿದು ವಿಜಯ್&zwnj;ಗೆ ಬೆಂಬಲ ನೀಡಿದ ಕಾಂಗ್ರೆಸ್ ವಿರುದ್ಧ ಡಿಎಂಕೆ, 'ಬೆನ್ನಿಗೆ ಚೂರಿ ಹಾಕಿದೆ' ಎಂದು ತೀವ್ರ ಅಸಮಾಧಾನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2ya7j8yx2rfb970hdtdxwb,imgname-----------------------2026-05-08t101226.907-1778215362120.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಮೇ.8):&lt;/strong&gt; ತಮಿಳುನಾಡಿನಲ್ಲಿ ಅತಂತ್ರ ಫಲಿತಾಂಶ ಬಳಿಕ ಮೈತ್ರಿ ಕಡಿದುಕೊಂಡು ವಿಜಯ್&zwnj;ರ ಟಿವಿಕೆ ಬೆಂಬಲಿಸಿದ ಕಾಂಗ್ರೆಸ್&zwnj; ವಿರುದ್ಧ ಡಿಎಂಕೆ ಕಿಡಿಕಾರಿದೆ. &lsquo; ಕಾಂಗ್ರೆಸ್&zwnj; ಹಿಂದಿನಿಂದ ಚೂರಿ ಹಾಕಿ ದ್ರೋಹ ಮಾಡಿದೆ&rsquo; ಎಂದು ವಾಗ್ದಾಳಿ ನಡೆಸಿದೆ.&lt;/p&gt;&lt;p&gt;ನಿರ್ಗಮಿತ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಸ್ಟಾಲಿನ್&zwnj; ನೇತೃತ್ವದಲ್ಲಿ ನೂತನ ಶಾಸಕರ ಸಭೆ ನಡೆದಿದೆ. ಈ ವೇಳೆ ಒಂದು ಕಾಲದ ಮಿತ್ರ ಕಾಂಗ್ರೆಸ್ ವಿರುದ್ಧ ಡಿಎಂಕೆ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. &lsquo; ಬಿಜೆಪಿ ಹಲವು ರಾಜ್ಯಗಳಲ್ಲಿ ಮಾಡಿದಂತೆ ಕಾಂಗ್ರೆಸ್&zwnj; ನಮಗೆ ತಮಿಳುನಾಡಿನಲ್ಲಿ ಮಾಡಿದೆ. ಡಿಎಂಕೆ ಜೊತೆ ನಿಶ್ಚಿತಾರ್ಥ, ಟಿವಿಕೆ ಜೊತೆಗೆ ಮದುವೆ. &amp;nbsp;ಇದು ಕಾಂಗ್ರೆಸ್&zwnj;ನ ಅವಕಾಶವಾದಿ ರಾಜಕಾರಣ. ತನ್ನ ಹಳೆಯ ಬುದ್ಧಿಯನ್ನು ಇದು ಬಿಟ್ಟಿಲ್ಲ ಎಂದು ತೋರಿಸುತ್ತದೆ. ನಮ್ಮ ಪಕ್ಷದ ನಾಯಕನ ಬೆನ್ನಿಗೆ ಚೂರಿಯಿಂದ ಇರಿದ ಕಾಂಗ್ರೆಸ್ ದೊಡ್ಡ ದ್ರೋಹ ಮಾಡಿದೆ. ಗೆಲುವಿಗೆ ಧನ್ಯವಾದ ಹೇಳಲು ಸಹ ಖುದ್ದಾಗಿ ಬರಲಿಲ್ಲ&rsquo; ಎಂದು ಕಿಡಿಕಾರಿದರು.&lt;/p&gt;&lt;h2&gt;ವಿಜಯ್ ಸರ್ಕಾರ ರಚನೆ ರಾಜ್ಯಪಾಲರು ಅಡ್ಡಿ ಮಾಡೋದು ಸರಿಯಲ್ಲ: ಡಿಕೆಶಿ&lt;/h2&gt;&lt;p&gt;ಬೆಂಗಳೂರು (ಮೇ.8): ತಮಿಳುನಾಡಿನಲ್ಲಿ ವಿಜಯ್&zwnj; ಅವರಿಗೆ ಸರ್ಕಾರ ರಚನೆ ಮಾಡಿ ಬಹುಮತ ಸಾಬೀತುಪಡಿಸುವುದನ್ನು ತಡೆದಿರುವ ರಾಜ್ಯಪಾಲರ ನಡೆ ಸರಿಯಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್&zwnj; ತಿಳಿಸಿದರು.&lt;/p&gt;&lt;p&gt;ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ರಾಜ್ಯಪಾಲರು ವಿಜಯ್&zwnj; ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಕರ್ನಾಟಕದಲ್ಲಿ ಈ ಹಿಂದೆ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಹೆಚ್ಚು ಸ್ಥಾನ ಗಳಿಸಿದ ಪಕ್ಷಗಳಿಗೆ ಸರ್ಕಾರ ರಚಿಸಲು ಹಿಂದೆಯೂ ಹಲವೆಡೆ ಅನುಮತಿಸಲಾಗಿತ್ತು. ರಾಷ್ಟ್ರಪತಿಗಳಾದ ನಾರಾಯಣನ್&zwnj;, ಅಬ್ದುಲ್&zwnj; ಕಲಾಂ ಅವರೂ ಈ ರೀತಿ ಮಾಡಿದ್ದರು.&lt;/p&gt;&lt;p&gt;ವಾಜಪೇಯಿ ಅವರಿಗೂ ಇದೇ ರೀತಿ ಸರ್ಕಾರ ರಚಿಸಲು ಅನುಮತಿಸಿ, ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಟಿವಿಕೆಗೆ ಅವಕಾಶ ನೀಡದಿರುವುದು ತಪ್ಪು ಎಂದರು.&lt;/p&gt;&lt;p&gt;ಮೊದಲು ಬಹುಮತ ಸಾಬೀತಿಗೆ ಅವಕಾಶ ನೀಡಬೇಕು. ರಾಜ್ಯದ ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಇದು ಪ್ರಜಾಪ್ರಭುತ್ವ. ಒಂದು ಮತದಿಂದ ಬಹುಮತ ಬರಬಹುದು ಅಥವಾ ಕಳೆದುಕೊಳ್ಳಬಹುದು. ವಾಜಪೇಯಿ ಅವರಿಗೆ ಇದೇ ರೀತಿ ಆಗಲಿಲ್ಲವೇ? ಬಹುಮತ ಸಾಬೀತಾಗದಿದ್ದರೆ ಮುಂದಿನ ಆಯ್ಕೆ ನೋಡಬಹುದು ಎಂದು ತಿಳಿಸಿದರು.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/tamil-nadu-government-formation-dmk-party-slams-congress-party-rav/articleshow-ui03ao9"/>
        </item>
        <item>
            <title><![CDATA[West Bengal fish pond conflict: ಚುನಾವಣಾ ಹಿಂಸಾಚಾರ ಆಯ್ತು, ಈಗ ಪಶ್ಚಿಮ ಬಂಗಾಳದಲ್ಲೀಗ ಮೀನುಗಾರಿಕೆ ಕೆರೆಗಳ ಹಿಡಿತಕ್ಕಾಗಿ ಸಂಘರ್ಷ]]></title>
            <link>https://kannada.asianetnews.com/india-news/election-violence-is-over-now-conflict-in-west-bengal-for-control-of-fishing-ponds-rav/articleshow-kt7i3mi</link>
            <guid isPermaLink="true">https://kannada.asianetnews.com/india-news/election-violence-is-over-now-conflict-in-west-bengal-for-control-of-fishing-ponds-rav/articleshow-kt7i3mi</guid>
            <pubDate>Fri, 08 May 2026 09:44:26 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದ ನಂತರ ಹಿಂಸಾಚಾರ ಭುಗಿಲೆದ್ದಿದ್ದು, ಐವರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರನ್ನು ಬಂಧಿಸಲಾಗಿದೆ. ಟಿಎಂಸಿ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ, ಈ ಹಿಂದೆ ಅವರ ಹಿಡಿತದಲ್ಲಿದ್ದ ಮೀನುಗಾರಿಕೆ ಕೆರೆಗಳ ನಿಯಂತ್ರಣಕ್ಕಾಗಿ ಸಂಘರ್ಷಗಳು ನಡೆಯುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr2wgtpmcrxrm4xk11fx8k5s,imgname-----------------------2026-05-08t094057.878-1778213481172.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;2.50 ಲಕ್ಷ ಹೆಕ್ಟೇರ್&zwnj; ಕೆರೆಗಳಲ್ಲಿ ಮೀನು ಸಾಕಾಣಿಕೆ ದೊಡ್ಡ ಆದಾಯದ ಮೂಲ&lt;/li&gt; &lt;li&gt;ಚುನಾವಣೆ ಬಳಿಕ ಭುಗಿಲೆದ್ದ ಹಿಂಸೆ । 5 ಸಾವು, 200 ಕೇಸು, 400 ಜನರ ಸೆರೆ&lt;/li&gt;&lt;/ul&gt;&lt;p&gt;&lt;strong&gt;ಕೋಲ್ಕತಾ: &lt;/strong&gt;ಪಶ್ಚಿಮ ಬಂಗಾಳ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಹಿಂದಿನ ಟಿಎಂಸಿ ಆಡಳಿತದಲ್ಲಿ ಶೋಷಣೆಗೊಳಗಾದವರೆಲ್ಲ ಈಗ ಅವರ ವಿರುದ್ಧ ತಿರುಗಿಬಿದ್ದಿದ್ದು, ಕಳೆದ 48 ಗಂಟೆಗಳಲ್ಲಿ, ಸಂಭಾವ್ಯ ಸಿಎಂ ಸುವೇಂದು ಆಪ್ತ ಸಹಾಯಕ ಚಂದ್ರನಾಥ್&zwnj; ರಥ್&zwnj; ಸೇರಿದಂತೆ 5 ಜನ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಕೆರೆಗಳ ಮೇಲಿನ ನಿಯಂತ್ರಣಕ್ಕಾಗಿ ಕಾದಾಟ ಶುರುವಾಗಿದೆ.&lt;/p&gt;&lt;p&gt;&lsquo;ಮೇ 4ರಂದು ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ರಾಜ್ಯಾದ್ಯಂತ ಸುಮಾರು 400 ಜನರನ್ನು ಬಂಧಿಸಲಾಗಿದೆ. 1000ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. 200 ಎಫ್&zwnj;ಐಆರ್&zwnj;ಗಳು ದಾಖಲಾಗಿವೆ&rsquo; ಎಂದು ಹಂಗಾಮಿ ಪೊಲೀಸ್ ಮಹಾನಿರ್ದೇಶಕ ಸಿದ್ಧನಾಥ್ ಗುಪ್ತಾ ಬುಧವಾರ ಹೇಳಿದ್ದಾರೆ.&lt;/p&gt;&lt;p&gt;2021ರ ವಿಧಾನಸಭೆ ಚುನಾವಣೆ ವೇಳೆ 1900 ಹಿಂಸಾಚಾರ ಪ್ರಕರಣ ನಡೆದು 29 ಮಂದಿ ಸಾವನ್ನಪ್ಪಿದ್ದರು. 345 ಜನರ ಬಂಧನವಾಗಿತ್ತು. ಈ ಭಾರಿ ಭದ್ರತೆ ಹೆಚ್ಚಿದ್ದ ಕಾರಣ ಹಿಂಸೆ, ಸಾವು, ನೋವಿನಲ್ಲಿ ಇಳಿಕೆ ಕಂಡುಬಂದಿದೆ.&lt;/p&gt;&lt;h2&gt;ಕೆರೆಗಾಗಿ ಹೊಡೆದಾಟ:&lt;/h2&gt;&lt;p&gt;ಮೀನುಗಾರಿಕೆ ಬಂಗಾಳಿಗರ ಆದಾಯದ ಮೂಲಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಾವಿರಾರು ಭೇರಿ (ಕೆರೆ) ನಿರ್ಮಿಸಲಾಗಿದೆ. ಇವು 2.6 ಲಕ್ಷ ಹೆಕ್ಟೇರ್&zwnj; ಪ್ರದೇಶದಲ್ಲಿ ವಿಸ್ತರಿಸಿವೆ. ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಟಿಎಂಸಿ ಆಡಳಿತ ಇದ್ದಕಾರಣ, ಅವುಗಳ ನಿಯಂತ್ರಣವು ಸಂಪೂರ್ಣವಾಗಿ ಟಿಎಂಸಿ ಕಡೆಯವರ ಕೈಲಿತ್ತು ಹಾಗೂ ಬೇರಾರಿಗೂ ಅವುಗಳ ಬಳಕೆಗೆ ಅವಕಾಶ ಇರಲಿಲ್ಲ. ಇದೀಗ ಪಕ್ಷವು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಆ ಕೊಳಗಳನ್ನು ಸಾರ್ವಜನಿಕರಿಗೆ ಮುಕ್ತ ಮಾಡಬೇಕೆಂಬ ಆಗ್ರಹ ಜೋರಾಗಿದೆ. ಇದೇ ವಿಷಯಕ್ಕೆ ಸಂದೇಶ್&zwnj; ಖಾಲಿಯಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ನಡೆದು, ಆ ವೇಳೆ ನಡೆದ ಗುಂಡಿನ ಚಕಮಕಿಯಿಂದಾಗಿ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.&lt;/p&gt;&lt;h3&gt;ಕಾರ್ಯಕರ್ತರಿಗೆ ಬಿಜೆಪಿ ಎಚ್ಚರಿಕೆ:&lt;/h3&gt;&lt;p&gt;ಟಿಎಂಸಿ ಕಾರ್ಯಕರ್ತರ ಮೇಲೆ ಬಿಜೆಪಿಯವರು ಹಲ್ಲೆ ನಡೆಸುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ, &lsquo;ಯಾರಾದರೂ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದು ಕಂಡುಬಂದಲ್ಲಿ ಅವರನ್ನು ಪಕ್ಷದಿಂದ ತೆಗೆದುಹಾಕಲಾಗುವುದು&rsquo; ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಮೀಕ್&zwnj; ಭಟ್ಟಾಚಾರ್ಯ ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/election-violence-is-over-now-conflict-in-west-bengal-for-control-of-fishing-ponds-rav/articleshow-kt7i3mi"/>
        </item>
        <item>
            <title><![CDATA[ಯಾರಿಗೆ ಒಲಿಯಲಿದೆ ಕೇರಳ ಸಿಎಂ ಪಟ್ಟ? ಖರ್ಗೆ ಹೆಗಲಿಗೆ ಆಯ್ಕೆ ನಿರ್ಧಾರ]]></title>
            <link>https://kannada.asianetnews.com/india-news/who-will-be-the-kerala-cm-decision-rests-on-kharge-s-shoulders-rav/articleshow-94nd1cf</link>
            <guid isPermaLink="true">https://kannada.asianetnews.com/india-news/who-will-be-the-kerala-cm-decision-rests-on-kharge-s-shoulders-rav/articleshow-94nd1cf</guid>
            <pubDate>Fri, 08 May 2026 08:34:31 +0530</pubDate>
            <description><![CDATA[&lt;p&gt;ಕೇರಳದಲ್ಲಿ ಯುಡಿಎಫ್ ಬಹುಮತ ಗಳಿಸಿದರೂ, ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್&zwnj;ಗೆ ದೊಡ್ಡ ತಲೆನೋವಾಗಿದೆ. ಹಾಲಿ ಸಂಸದ ಕೆ.ಸಿ.ವೇಣುಗೋಪಾಲ್&zwnj; ಪರ ಬಹುತೇಕ ಶಾಸಕರು ಒಲವು ತೋರಿದ್ದು, ಇದು ಹಿರಿಯ ನಾಯಕರಾದ ವಿ.ಡಿ. ಸತೀಶನ್&zwnj; ಮತ್ತು ರಮೇಶ್&zwnj; ಚೆನ್ನಿತ್ತಲ ಅವರ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knqxaacjkktrtqw8rra40m29,imgname-----------------------2026-04-09t065154.760-1775697734034.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ&lt;/strong&gt;: ದಶಕದ ಬಳಿಕ ಕೇರಳಂನಲ್ಲಿ ಯುಡಿಎಫ್&zwnj; (ಸಂಯುಕ್ತ ಪ್ರಜಾಸತ್ತಾತ್ಮಕ ರಂಗ) ಬಹುಮತ ಪಡೆದಿದ್ದರೂ, ಆ ಕೂಟದ ನೇತೃತ್ವ ಹೊತ್ತಿರುವ ಕಾಂಗ್ರೆಸ್&zwnj;ನಲ್ಲಿ ಮುಖ್ಯಮಂತ್ರಿ ಆಯ್ಕೆ ವಿಷಯ ಕಗ್ಗಂಟಾಗಿದೆ. ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆಗಾಗಿ ಗುರುವಾರ ನಡೆದ ಸಭೆಯ ವೇಳೆ ಕಾಂಗ್ರೆಸ್&zwnj;ನ 63 ಶಾಸಕರ ಪೈಕಿ ಕನಿಷ್ಠ 46 ಮಂದಿ ವಿಧಾನಸಭೆಯ ಸದಸ್ಯರೇ ಅಲ್ಲದ ಹಾಲಿ ಸಂಸದ, ರಾಹುಲ್&zwnj; ಗಾಂಧಿ ಅವರ ಆಪ್ತ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್&zwnj; ಪರ ಬೆಂಬಲ ಘೋಷಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಈ ಬೆಳವಣಿಗೆ ಸಹಜವಾಗಿಯೇ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ, ಹಿಂದಿನ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ವಿ.ಡಿ. ಸತೀಶನ್&zwnj; ಮತ್ತು ಪಕ್ಷದ ಹಿರಿಯ ನಾಯಕ ರಮೇಶ್&zwnj; ಚೆನ್ನಿತ್ತಲ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆಯ ಹೊಣೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಲು ಸಭೆ ನಿರ್ಣಯ ಕೈಗೊಂಡಿದೆ.&lt;/p&gt;&lt;h2&gt;ವೇಣು ಪರ ಬ್ಯಾಟಿಂಗ್&zwnj;:&lt;/h2&gt;&lt;p&gt;ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್&zwnj; ನೇತೃತ್ವದಲ್ಲಿ ನಡೆದ ಸಭೆ ವೇಳೆ ಬಹುತೇಕ ಶಾಸಕರು ವೇಣುಗೋಪಾಲ್&zwnj; ಮುಖ್ಯಮಂತ್ರಿಯಾಗುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟ ಉಳಿದಿಬ್ಬರು ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.&lt;/p&gt;&lt;p&gt;ಈ ಬಾರಿ ಚುನಾವಣೆಯಲ್ಲಿ ಸಂಸದರನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಪಕ್ಷ ಮೊದಲೇ ನಿರ್ಧರಿಸಿತ್ತು. ಜೊತೆಗೆ ವೇಣುಗೋಪಾಲ್&zwnj; ಶಾಸಕ ಕೂಡ ಅಲ್ಲ. ಹೀಗಾಗಿ ಅವರ ಆಯ್ಕೆ ಸೂಕ್ತವಲ್ಲ. ಜೊತೆಗೆ ರಾಜ್ಯದ ಹಲವು ಕಡೆ ವೇಣುಗೋಪಾಲ್&zwnj; ಅವರು ಕೂಡ ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಪೋಸ್ಟರ್&zwnj;ಗಳನ್ನು ಹಾಕಲಾಗಿದೆ. ಇದು ಪಕ್ಷದಲ್ಲಿ ಆಂತರಿಕ ಸಂಘರ್ಷಕ್ಕೆ ಮುನ್ನುಡಿ ಬರೆಯುತ್ತದೆ. ಇದಕ್ಕೆ ಕೂಡಲೇ ತಡೆ ಹಾಕಬೇಕು ಎಂದು ಚೆನ್ನಿತ್ತಲ ಹಾಗೂ ಸತೀಶನ್&zwnj; ನೇರವಾಗಿ ವೀಕ್ಷಕರ ಬಳಿ ಧ್ವನಿ ಎತ್ತಿದ್ದಾರೆ ಎನ್ನಾಗಿದೆ.&lt;/p&gt;&lt;h3&gt;ವೇಣು ಏಕೆ?:&lt;/h3&gt;&lt;p&gt;ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಮೈತ್ರಿಕೂಟದ ನಡುವೆ ಹೊಂದಾಣಿಕೆ ಏರ್ಪಡಿಸುವಲ್ಲಿ ವೇಣು ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ಎಲ್&zwnj;ಡಿಎಫ್&zwnj; ಕೂಟದ ಅಭ್ಯರ್ಥಿಗಳ ಸೆಳೆದು ಕಾಂಗ್ರೆಸ್&zwnj; ಬಲ ಹೆಚ್ಚಿಸಿದ್ದು ವೇಣುಗೋಪಾಲ್&zwnj; ಪರ ಬಹುತೇಕ ಶಾಸಕರು ಒಲವು ತೋರಲು ಕಾರಣವಾಗಿದೆ. ಜೊತೆಗೆ ಹೈಕಮಾಂಡ್&zwnj; ಬೆಂಬಲವೂ ಇದೆ. ಜೊತೆಗೆ ಮೈತ್ರಿಕೂಟ ಸರ್ಕಾರ ನಡೆಸಲು ದೆಹಲಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ನಾಯಕರ ಅಗತ್ಯವಿದೆ ಎನ್ನುವ ಅಂಶವೂ ವೇಣುಗೋಪಾಲ್&zwnj; ಪರವಾಗಿದೆ.&lt;/p&gt;&lt;h3&gt;ಸತೀಶನ್&zwnj;ಗೆ ಜಾತಿ ಸಂಘ ವಿರೋಧ:&lt;/h3&gt;&lt;p&gt;ಸತೀಶನ್&zwnj; ಕಳೆದ 5 ವರ್ಷಗಳಿಂದ ವಿಪಕ್ಷ ನಾಯಕನಾಗಿ ವಿಪಕ್ಷ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶಬರಿಮಲೆ ವಿಷಯದಲ್ಲಿ ಕೇರಳದ ಪ್ರಭಾವಿ ನಾಯರ್&zwnj; ಸಮುದಾಯದ ವಿರೋಧ ಕಟ್ಟಿಕೊಂಡಿದ್ದಾರೆ. ಹೀಗಾಗಿ ಅವರ ಆಯ್ಕೆ ಬಗ್ಗೆ ಪಕ್ಷದ ಶಾಸಕರಲ್ಲೇ ವಿರೋಧವಿದೆ ಎನ್ನಲಾಗಿದೆ.&lt;/p&gt;&lt;h3&gt;ಚೆನ್ನಿತ್ತಲಗೆ ಬೆಂಬಲವಿಲ್ಲ:&lt;/h3&gt;&lt;p&gt;ಪಕ್ಷದ ಹಿರಿಯ ನಾಯಕ. 4 ಬಾರಿ ಸಂಸದರಾದ ಹಿನ್ನೆಲೆ ಹೊಂದಿದ್ದಾರೆ. ಸಂಘಟನಾ ಚತುರ ಎಂಬ ಹಿರಿಮೆ ಇದೆ. ಆದರೆ ಈಗಾಗಲೇ 69 ವರ್ಷ ತುಂಬಿರುವ ನಾಯಕನ ಆಯ್ಕೆಗೆ ಪಕ್ಷದ ಶಾಸಕರು ಒಲವು ತೋರಿಲ್ಲ ಎಂದು ಹೇಳಲಾಗಿದೆ.&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/who-will-be-the-kerala-cm-decision-rests-on-kharge-s-shoulders-rav/articleshow-94nd1cf"/>
        </item>
        <item>
            <title><![CDATA[Tamil Nadu government formation: ಟಿವಿಕೆ ವಿಜಯ್ ಹಾದಿಗೆ ರಾಜ್ಯಪಾಲರು ಅಡ್ಡಗಾಲು? 118 ಶಾಸಕರ ಬೆಂಬಲ ಸಾಬೀತುಪಡಿಸಲು ಸೂಚನೆ!]]></title>
            <link>https://kannada.asianetnews.com/india-news/tamil-nadu-govt-formation-governor-block-tvk-vijays-path-instruction-prove-of-118-mlas/articleshow-gb0pz0c</link>
            <guid isPermaLink="true">https://kannada.asianetnews.com/india-news/tamil-nadu-govt-formation-governor-block-tvk-vijays-path-instruction-prove-of-118-mlas/articleshow-gb0pz0c</guid>
            <pubDate>Fri, 08 May 2026 08:17:33 +0530</pubDate>
            <description><![CDATA[ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ತಡೆ ನೀಡಿದ್ದಾರೆ. ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದು, ಅಗತ್ಯ ಬೆಂಬಲಕ್ಕಾಗಿ ವಿಜಯ್ ಪಕ್ಷವು ಇದೀಗ ಇತರ ಪಕ್ಷಗಳ ಬೆಂಬಲ ಯಾಚಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr2qkftmnemmhz3csepnm7pt,imgname-----------------------2026-05-08t080837.800-1778208325460.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಮೇ.8):&lt;/strong&gt; ಇತ್ತೀಚಿನ ಇತಿಹಾಸದಲ್ಲೇ ರೋಚಕ ವಿಧಾನಸಭಾ ಚುನಾವಣಾ ಫಲಿತಾಂಶ ನೀಡಿದ ತಮಿಳುನಾಡಿನಲ್ಲಿ ಇದೀಗ ಸರ್ಕಾರ ರಚನೆಯ ಪ್ರಕ್ರಿಯೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 108 ಸ್ಥಾನ ಗೆದ್ದ ನಟ ವಿಜಯ್&zwnj; ನೇತೃತ್ವದ ಟಿವಿಕೆ ಪಕ್ಷ ಇನ್ನೇನು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ ಎನ್ನುವ ಹೊತ್ತಿನಲ್ಲೇ ಅದಕ್ಕೆ ರಾಜ್ಯಪಾಲರು ಬ್ರೇಕ್&zwnj; ಹಾಕಿದ್ದಾರೆ. ಸರ್ಕಾರ ರಚನೆಗೆ ನಿಮ್ಮ ಬಳಿ ಅಗತ್ಯ ಬಹುಮತವೇ ಇಲ್ಲ. ಇದ್ದರೆ, ಅದನ್ನು ತೋರಿಸಿ ಎಂದು ರಾಜ್ಯಪಾಲರು ವಿಜಯ್&zwnj;ಗೆ ಸೂಚಿಸಿರುವುದು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.&lt;/p&gt;&lt;p&gt;ಸರ್ಕಾರ ರಚನೆ ಸಂಬಂಧ ಬುಧವಾರ ಮೊದಲ ಸಲ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದ ನಟ ವಿಜಯ್&zwnj;, ಗುರುವಾರ ಮತ್ತೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್&zwnj; ಅರ್ಲೇಕರ್&zwnj; ಬಳಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ವಿಶ್ವಾಸಮತ ಸಾಬೀತುಪಡಿಸಲು 2 ತಿಂಗಳ ಅವಕಾಶ ನೀಡುವಂತೆಯೂ ಕೋರಿದರು ಎನ್ನಲಾಗಿದೆ.&lt;/p&gt;&lt;p&gt;ಈ ವೇಳೆ ಸರ್ಕಾರ ರಚನೆಗೆ ಅಗತ್ಯವಾದ ಶಾಸಕರ ಬೆಂಬಲ (118 ಶಾಸಕರ ಬೆಂಬಲ) ಪ್ರದರ್ಶಿಸುವಂತೆ ರಾಜ್ಯಪಾಲರು ಕೇಳಿದ್ದಾರೆ. ಅಲ್ಲದೆ ಸರ್ಕಾರ ರಚನೆ ಬಳಿಕ ನಿಮಗೆ ವ್ಯಕ್ತವಾಗಬಹುದಾದ ಬೆಂಬಲವನ್ನು ಈಗಲೇ ಪರಿಗಣಿಸಲಾಗದು. ನಿಮ್ಮನ್ನು ಬೆಂಬಲಿಸುವವರ ಪಟ್ಟಿ ನೀಡಿ. ನಾನು ನಿಯಮಗಳ ಅನುಸಾರವೇ ನಡೆದುಕೊಳ್ಳುತ್ತೇನೆ. ಬೆಂಬಲ ಪತ್ರ ತೋರಿಸಿದರೆ ನಿಮಗೇ ಮೊದಲ ಅವಕಾಶ ನೀಡುತ್ತೇನೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಅಲ್ಲದೆ, ಈ ಹಿಂದೆ ಇದೇ ರೀತಿ ಸರ್ಕಾರ ರಚನೆಗೆ ಅವಕಾಶ ನೀಡಿದ ಪ್ರಕರಣಗಳಲ್ಲಿ ನ್ಯಾಯಾಲಯಗಳು ರಾಜ್ಯಪಾಲರ ಕಾರ್ಯ ಕುರಿತು ವಿವರಣೆ ಕೇಳಿದ ಪ್ರಸಂಗಗಳನ್ನು ರಾಜ್ಯಪಾಲರು ಟಿವಿಕೆ ನಿಯೋಗದ ಮುಂದೆ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಹೀಗಾಗಿ ಇದೀಗ ವಿಜಯ್&zwnj; ಪಕ್ಷ ಸಣ್ಣಪುಟ್ಟ ಪಕ್ಷಗಳ ಬೆಂಬಲ ಯಾಚನೆಗೆ ಮುಂದಾಗಿದೆ. ಆದರೆ ಒಂದು ವೇಳೆ ಬಹುಮತಕ್ಕೆ ಅಗತ್ಯವಾದ 118 ಶಾಸಕರ ಬೆಂಬಲ ಪಡೆಯುವಲ್ಲಿ ವಿಫಲವಾದರೆ ಅತಿದೊಡ್ಡ ಪಕ್ಷವಾದ ತನಗೆ ಸರ್ಕಾರ ರಚನೆಗೆ ಅವಕಾಶ ಕೊಡಲು ರಾಜ್ಯಪಾಲರಿಗೆ ಸೂಚಿಸಬೇಕೆಂದು ಕೋರಿ ವಿಜಯ್&zwnj; ಪಕ್ಷ ಸುಪ್ರೀಂಕೋರ್ಟ್&zwnj; ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ.&lt;/p&gt;&lt;p&gt;ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್&zwnj;ನ 5 ಶಾಸಕರ ಬೆಂಬಲ ಸಿಕ್ಕರೂ ಬಹುಮತ ಸಾಬೀತುಪಡಿಸಲು(118 ಸ್ಥಾನ) ಇನ್ನೂ 5 ಸ್ಥಾನದ ಕೊರತೆ ಎದುರಿಸುತ್ತಿದೆ.&lt;/p&gt;&lt;p&gt;ಅಪರೂಪದ ಬೆಳವಣಿಗೆ&lt;/p&gt;&lt;p&gt;ಚೆನ್ನೈ: ಅಪರೂಪದ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್&zwnj; ನೇತೃತ್ವದ ಟಿವಿಕೆ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡದ ರಾಜ್ಯಪಾಲ ಆರ್&zwnj;.ವಿ.ಅರ್ಲೇಕರ್&zwnj; ಅವರ ಕ್ರಮಕ್ಕೆ ವಿಜಯ್&zwnj; ವಿರುದ್ಧ ಚುನಾವಣೆಯಲ್ಲಿ ಸೋತ ಡಿಎಂಕೆ, ಎಂಎನ್&zwnj;ಎಂ, ವಿಸಿಕೆ, ಸಿಪಿಐ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.&lt;/p&gt;&lt;p&gt;ರಾಜ್ಯಪಾಲರು ಜನಾದೇಶಕ್ಕೆ ಅಪಮಾನ ಮಾಡಿದ್ದಾರೆ. ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ.&lt;/p&gt;&lt;p&gt;ಅಣ್ಣಾಡಿಎಂಕೆಯ 28 ಶಾಸಕರಿಂದ ವಿಜಯ್ಪಕ್ಷಕ್ಕೆ ಶೀಘ್ರ ಬೆಂಬಲ?&lt;/p&gt;&lt;p&gt;ಚೆನ್ನೈ: ಎನ್&zwnj;ಡಿಎ ಮಿತ್ರಪಕ್ಷವಾದ ಅಣ್ಣಾಡಿಎಂಕೆಯ 28 ಶಾಸಕರ ಗುಂಪೊಂದು ಪುದುಚೇರಿ ರೆಸಾರ್ಟ್&zwnj;ಗೆ ತೆರಳಿದ್ದು, ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಟಿವಿಕೆ ಮುಖಂಡರು ಈ 28 ಶಾಸಕರ ಜತೆಗೆ ಸಂಪರ್ಕದಲ್ಲಿದ್ದಾರೆ. ಈ ಗುಂಪಿನ ನಾಯಕ ಸಿ.ವಿ.ಷಣ್ಮುಗಂ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಮತ್ತು ಇತರೆ ಕೆಲವರಿಗೆ ಸಚಿವ ಹುದ್ದೆಯ ಆಫರ್&zwnj; ಅನ್ನು ಟಿವಿಕೆ ನೀಡಿದೆ ಎನ್ನಲಾಗಿದೆ.ಒಂದು ವೇಳೆ ಇದು ಖಚಿತವಾದರೆ ಎಂ.ಜಿ.ರಾಮಚಂದ್ರನ್&zwnj; ಕಟ್ಟಿದ, ಮಾಜಿ ಸಿಎಂ ಜಯಲಲಿತಾ ಬೆಳೆಸಿದ ಎಐಎಡಿಎಂಕೆ ಪಕ್ಷ ಎರಡು ಹೋಳಾಗುವುದು ಖಚಿತ.&lt;/p&gt;&lt;p&gt;ಗೌರ್&zwj;ನರ್&zwnj; ಲೆಕ್ಕಾಚಾರ ಏನು?&lt;/p&gt;&lt;p&gt;1. ಸರ್ಕಾರ ರಚನೆಗೆ ಹಕ್ಕು ಮಂಡಿಸಿದವರಿಂದ ಬಹುಮತ ಕೇಳುವುದು ರಾಜ್ಯಪಾಲರ ವಿವೇಚನೆ ಒಳಪಟ್ಟಿದ್ದು&lt;/p&gt;&lt;p&gt;2. ಸರ್ಕಾರ ರಚಿಸುವಷ್ಟು ಸಂಖ್ಯೆ ಇದೆಯೇ ಎಂಬುದು ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಮನವರಿಕೆಯಾಗಬೇಕು&lt;/p&gt;&lt;p&gt;3. ಆ ಹಂತ ದಾಟಿದ ಬಳಿಕ ಸರ್ಕಾರ ರಚನೆಗೆ ಅವಕಾಶ ಪಡೆದ ಪಕ್ಷಗಳು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು&lt;/p&gt;]]></content:encoded>
            <category>india-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/tamil-nadu-govt-formation-governor-block-tvk-vijays-path-instruction-prove-of-118-mlas/articleshow-gb0pz0c"/>
        </item>
        <item>
            <title><![CDATA[ಮಮತಾಗೆ ಗೌರ್ನರ್ ಗೇಟ್‌ ಪಾಸ್, ದೀದಿ ಈಗ ಬೀದಿಗೆ, ಮರಳಿ ವಕೀಲಿ ವೃತ್ತಿಗೆ?]]></title>
            <link>https://kannada.asianetnews.com/india-news/west-bengal-assembly-dissolved-governor-rn-ravi-gives-gate-pass-to-mamata-banerjee-rav/articleshow-ul2x6tk</link>
            <guid isPermaLink="true">https://kannada.asianetnews.com/india-news/west-bengal-assembly-dissolved-governor-rn-ravi-gives-gate-pass-to-mamata-banerjee-rav/articleshow-ul2x6tk</guid>
            <pubDate>Fri, 08 May 2026 07:36:23 +0530</pubDate>
            <description><![CDATA[ಚುನಾವಣೆಯಲ್ಲಿ ಸೋತರೂ ರಾಜೀನಾಮೆ ನೀಡಲು ನಿರಾಕರಿಸಿದ್ದ ಮಮತಾ ಬ್ಯಾನರ್ಜಿಗೆ, ರಾಜ್ಯಪಾಲರು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸುವ ಮೂಲಕ ಗೇಟ್&zwnj;ಪಾಸ್&zwnj; ನೀಡಿದ್ದಾರೆ. ಅಧಿಕಾರ ಕಳೆದುಕೊಂಡಿರುವ ಮಮತಾ ಇದೀಗ ತಮ್ಮ ಹಳೆಯ ವಕೀಲಿ ವೃತ್ತಿಗೆ ಮರಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqxnnmc8xdt63psbs3h5n4td,imgname-mamata-banerjee-resigns-refuses-mahesh-jethmalani-governor-remove-bengal-election-row-1778038526344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ (ಮೇ.8):&lt;/strong&gt; ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯನ್ನು ರಾಜ್ಯಪಾಲ ಆರ್&zwnj;.ಎನ್&zwnj;. ರವಿ ಗುರುವಾರದಿಂದ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ. ಈ ಮೂಲಕ ಇತ್ತೀಚಿನ ಚುನಾವಣೆಯಲ್ಲಿ ಸೋತರೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿ ರಾಜ್ಯವು ಸಾಂವಿಧಾನಿಕ ಬಿಕ್ಕಟ್ಟಿನತ್ತ ಹೆಜ್ಜೆ ಹಾಕುವಂತೆ ಮಾಡಿದ್ದ ಮಮತಾ ಬ್ಯಾನರ್ಜಿಗೆ ಗೇಟ್&zwnj;ಪಾಸ್&zwnj; ನೀಡಿದ್ದಾರೆ.&lt;/p&gt;&lt;p&gt;ಪರಿಣಾಮ ಅತ್ತ ಮುಖ್ಯಮಂತ್ರಿಯೂ ಅಲ್ಲದ, ಅತ್ತ ಶಾಸಕಿಯೂ ಅಲ್ಲದ ಮಮತಾ ಇನ್ನು ಬಿಜೆಪಿ ಸರ್ಕಾರದ ವಿರುದ್ಧ ಬೀದಿಯಿಂದಲೇ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;h2&gt;ವಿಸರ್ಜನೆ:&lt;/h2&gt;&lt;p&gt;ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಅಕ್ರಮ, ರಾಜಕೀಯ ಪಿತೂರಿ ಎಂದು ಬಣ್ಣಿಸಿದ್ದ ಮಮತಾ ಬ್ಯಾನರ್ಜಿ ತಾವು ಸಿಎಂ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿದ್ದರು. ಅಲ್ಲದೆ &lsquo;ಅಧಿಕಾರವಿಲ್ಲವಾದ್ದರಿಂದ ನಾನೀಗ ಸ್ವತಂತ್ರ ಹಕ್ಕಿ. ಬೀದಿಗಿಳಿದು ಹೋರಾಟ ಮಾಡುತ್ತೇನೆ&rsquo; ಎಂದು ಹೇಳಿದ್ದರು. ಹೀಗಾಗಿ ಅವರು ರಾಜೀನಾಮೆ ನೀಡದ ಹೊರತೂ ಅಥವಾ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸದ ಹೊರತೂ ಮೇ 9ರಂದು ನಡೆಯಬೇಕಿರುವ ನೂತನ ಸರ್ಕಾರ ರಚನೆ ಸಾಧ್ಯವಿರಲಿಲ್ಲ. ಹೀಗಾಗಿ ರಾಜ್ಯಪಾಲರು ತಮ್ಮ ಅಧಿಕಾರ ಬಳಸಿ, ಅವಧಿ ಮುಗಿದ ವಿಧಾನಸಭೆಯನ್ನು ವಿಸರ್ಜಿಸಿ ಮುಂದಿನ ಸಾಂವಿಧಾನಿಕ ಪ್ರಕ್ರಿಯೆಗೆ ಹಾದಿ ಸುಗಮಗೊಳಿಸಿದ್ದಾರೆ.&lt;/p&gt;&lt;p&gt;ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 207 ಸೀಟುಗಳನ್ನು ತನ್ನದಾಗಿಸಿಕೊಂಡಿದ್ದರೆ, ಟಿಎಂಸಿ 80 ಕ್ಷೇತ್ರಗಳಲ್ಲಷ್ಟೇ ಗೆದ್ದಿತ್ತು. ಸತತ 15 ವರ್ಷ ಮುಖ್ಯಮಂತ್ರಿಯಾಗಿದ್ದ ಮಮತಾ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಭವಾನಿಪುರ ಕ್ಷೇತ್ರದಲ್ಲಿ ಸೋಲುಂಡಿದ್ದರು.&lt;/p&gt;&lt;h3&gt;ಚುನಾವಣೆ ಸೋತ ದೀದಿ ಮರಳಿ ವಕೀಲಿ ವೃತ್ತಿಗೆ?&lt;/h3&gt;&lt;p&gt;ಕೋಲ್ಕತಾ: ಬಂಗಾಳ ಚುನಾವಣೆ ಸೋಲುವ ಜೊತೆಗೆ ಸ್ವತಃ ವಿಧಾನಸಭೆಗೆ ಆಯ್ಕೆಯಾಗುವುದರಿಂದಲೂ ವಂಚಿತರಾಗಿರುವ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ತಮ್ಮ ಹಿಂದಿನ ವಕೀಲ ವೃತ್ತಿ ಆರಂಭಿಸುವ ಸಾಧ್ಯತೆ ಇದೆ. ಚುನಾವಣಾ ಸೋಲಿನ ಬಗ್ಗೆ ಸುಪ್ರೀಂಕೋರ್ಟ್&zwnj;ನಲ್ಲಿ ಅರ್ಜಿ ಸಲ್ಲಿಸಿ ಅದರಲ್ಲಿ ವಾದ ಮಂಡಿಸುವ ಮೂಲಕವೇ ಅವರು ವಕೀಲ ವೃತ್ತಿಗೆ ಮರಳುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಪಕ್ಷದ ನೂತನ ಶಾಸಕರ ಸಭೆಯಲ್ಲಿ ಮಮತಾ ತಾವು ವಕೀಲಿಕೆಗೆ ಮರಳುವ ಮಾತುಗಳನ್ನು ಆಡಿದ್ದಾರೆ. ಅಲ್ಲದೆ ಪಕ್ಷದಲ್ಲಿನ ಇತರೆ ಹಲವು ನಾಯಕರಿಗೂ ಮರಳಿ ವಕೀಲಿಕೆ ಪುನಾರಂಭಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ, ಮತಪಟ್ಟಿ ವಿಶೇಷ ಪರಿಷ್ಕರಣೆಯನ್ನು ಪ್ರಶ್ನಿಸಿ ಸ್ವತಃ ಮಮತಾ ಸುಪ್ರೀಂ ಕೋರ್ಟ್&zwnj;ನಲ್ಲಿ ವಾದಿಸಿದ್ದರು. ಇದು ಭಾರತದಲ್ಲಿ ಸಿಎಂ ಒಬ್ಬರು ಸುಪ್ರೀಂನಲ್ಲಿ ವಾದಿಸಿದ ಮೊದಲ ಘಟನೆಯಾಗಿತ್ತು.&lt;/p&gt;]]></content:encoded>
            <category>india-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/west-bengal-assembly-dissolved-governor-rn-ravi-gives-gate-pass-to-mamata-banerjee-rav/articleshow-ul2x6tk"/>
        </item>
    </channel>
</rss>
