<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 18 Aug 2026 22:00:06 +0530</lastBuildDate>
        <atom:link href="https://kannada.asianetnews.com/rss/health-life" rel="self" type="application/rss+xml"/>
        <item>
            <title><![CDATA[ಪತಿಗೆ ಬೇರೊಂದು ಮದ್ವೆಯಾಗಲು ನಟಿ ಹಿನಾ ಖಾನ್​ ಒತ್ತಾಯ: 'Amruthadhaare Serial' ರಿಯಲ್​ ಸ್ಟೋರಿ]]></title>
            <link>https://kannada.asianetnews.com/gallery/relationship/cancer-patients-must-get-love-from-family-actress-hina-khan-story-and-amruthadhaare-serial-suc-1nf40df</link>
            <guid isPermaLink="true">https://kannada.asianetnews.com/gallery/relationship/cancer-patients-must-get-love-from-family-actress-hina-khan-story-and-amruthadhaare-serial-suc-1nf40df</guid>
            <pubDate>Wed, 12 Aug 2026 15:21:22 +0530</pubDate>
            <description><![CDATA[&lt;p&gt;ನಟಿ ಹಿನಾ ಖಾನ್ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ತಮಗಿದ್ದ 3ನೇ ಹಂತದ ಸ್ತನ ಕ್ಯಾನ್ಸರ್ ಬಗ್ಗೆ ಬಹಿರಂಗಪಡಿಸಿದ್ದಾರೆ. ಆದ್ದರಿಂದ ಅವರು ಪತಿ ರಾಕಿ ಜೈಸ್ವಾಲ್​ ಅವರನ್ನು ಬೇರೊಬ್ಬರನ್ನು ಮದುವೆಯಾಗುವಂತೆ ಒತ್ತಾಯಿಸಿದ್ದರು. ಇವರ ಸ್ಟೋರಿಗೆ ಅಮೃತಧಾರೆ ಸೀರಿಯಲ್​ ಲಿಂಕ್​ ಆಗುತ್ತಿದೆ. ಏನದು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kztp2rqjb7ebneqrywz467wj,imgname-cancer-survivor-1786528228082.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಹಿನಾ ಖಾನ್ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ತಮಗಿದ್ದ 3ನೇ ಹಂತದ ಸ್ತನ ಕ್ಯಾನ್ಸರ್ ಬಗ್ಗೆ ಬಹಿರಂಗಪಡಿಸಿದ್ದಾರೆ. ಆದ್ದರಿಂದ ಅವರು ಪತಿ ರಾಕಿ ಜೈಸ್ವಾಲ್​ ಅವರನ್ನು ಬೇರೊಬ್ಬರನ್ನು ಮದುವೆಯಾಗುವಂತೆ ಒತ್ತಾಯಿಸಿದ್ದರು. ಇವರ ಸ್ಟೋರಿಗೆ ಅಮೃತಧಾರೆ ಸೀರಿಯಲ್​ ಲಿಂಕ್​ ಆಗುತ್ತಿದೆ. ಏನದು?&lt;/p&gt;&lt;img&gt;&lt;p&gt;ಖ್ಯಾತ ಸೀರಿಯಲ್​ ನಟಿ ಹಿನಾ ಖಾನ್ ಕಳೆದ ಜೂನ್​ನಲ್ಲಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. 13-14 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ಕಳೆದ ವರ್ಷ ರಾಕಿ ಜೈಸ್ವಾಲ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದು ಹಿಂದೂ-ಮುಸ್ಲಿಂ ವಿವಾಹವಾಗಿದ್ದ ಕಾರಣದಿಂದಾಗಿ ಬಹಳ ಸದ್ದು ಕೂಡ ಆಗಿತ್ತು. ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಈ ಮದುವೆ ನಡೆದಿತ್ತು.&lt;/p&gt;&lt;img&gt;&lt;p&gt;ಆದರೆ, ಆ ಸಮಯದಲ್ಲಿ ಅವರು, ಬೇರೊಬ್ಬಳನ್ನು ಮದುವೆಯಾಗುವಂತೆ ರಾಕಿ ಜೈಸ್ವಾಲ್​ ಅವರಿಗೆ ಒತ್ತಾಯಿಸಿದ್ದನ್ನು ಈಗ ರಿವೀಲ್​ ಮಾಡಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣ ಇದೆ. ನಟಿ ಹಿನಾ ಖಾನ್​ ಮದುವೆಯಾಗುವ ತಯಾರಿಯಲ್ಲಿ ಇದ್ದಾಗಲೇ ಅವರಿಗೆ ಕ್ಯಾನ್ಸರ್​ ಬಂದು ಅಪ್ಪಳಿಸಿತ್ತು. 3 ನೇ ಹಂತದ ಬ್ರೆಸ್ಟ್​ ಕ್ಯಾನ್ಸರ್&zwnj;ನಿಂದ ಅವರು ಬಳಲುತ್ತಿದ್ದರು.&lt;/p&gt;&lt;img&gt;&lt;p&gt;ಇದೇ ಕಾರಣಕ್ಕೆ ಅವರು ಬೇರೊಬ್ಬಳನ್ನು ಮದುವೆಯಾಗುವಂತೆ ಭಾವಿ ಪತಿಗೆ ಒತ್ತಾಯಿಸಿದ್ದರು. ಆದರೆ ಇಷ್ಟು ಸುದೀರ್ಘ ಅವಧಿಯವರೆಗೆ ಸಂಬಂಧ ಹೊಂದಿದ್ದ ಬಳಿಕ, ತಾನು ಏನೇ ಆದರೂ ಬೇರೆ ಮದುವೆಯಾಗುವುದಿಲ್ಲ. ನಿನ್ನನ್ನೇ ಆಗುವುದು ಎಂದು ರಾಕಿ ಮದುವೆ ಮಾಡಿಕೊಂಡಿರುವುದಾಗಿ ನಟಿ ಬಹಿರಂಗಪಡಿಸಿದ್ದಾರೆ. ಮದುವೆಯ ಸ್ವಲ್ಪ ಸಮಯದ ನಂತರ, ಅವರು ರಿಯಾಲಿಟಿ ಶೋ &quot;ಪತಿ, ಪತ್ನಿ ಔರ್ ಪಂಗಾ&quot;ದಲ್ಲಿ ಕಾಣಿಸಿಕೊಂಡರು. ಆ ಸಮಯದಲ್ಲಿ, ಮದುವೆಯನ್ನು ಪ್ರಚಾರದ ವಸ್ತು ಎಂದು ಹಲವರು ಹಂಗಿಸಿದ್ದೂ ಇದೆ.ಆದರೆ, ಇದಕ್ಕೆ ಜೋಡಿ ತಲೆ ಕೆಡಿಸಿಕೊಳ್ಳಲಿಲ್ಲ.&lt;/p&gt;&lt;img&gt;&lt;p&gt;ಹಿನಾ ಖಾನ್ ಮತ್ತು ರಾಕಿ ಜೈಸ್ವಾಲ್ &quot;ಯೇ ರಿಷ್ಟಾ ಕ್ಯಾ ಕೆಹ್ಲತಾ ಹೈ&quot; ಹಿಂದಿ ಸೀರಿಯಲ್​ನ ಸೆಟ್&zwnj;ನಲ್ಲಿ ಭೇಟಿಯಾದರು, ಅಲ್ಲಿ ಅವರು ಪ್ರೀತಿಯಲ್ಲಿ ಸಿಲುಕಿದರು. ಸುಮಾರು 13-14 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ಕಳೆದ ವರ್ಷ ವಿವಾಹವಾದರು. &quot;ನಾವು 13-14 ವರ್ಷಗಳ ಕಾಲ ಬಹಳ ಕಾಲ ಡೇಟಿಂಗ್ ಮಾಡಿದ್ದರಿಂದ ಮದುವೆಯಾದೆವು. ನಿಜ ಹೇಳಬೇಕೆಂದರೆ, ಈಗಲಾದರೂ ಮದುವೆ ಆಗುತ್ತಿರಲಿಲ್ಲ. ಎಲ್ಲವನ್ನೂ ತಿಂಗಳುಗಳ ಮೊದಲೇ ನಿರ್ಧರಿಸಲಾಗಿತ್ತು. ಇದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿತ್ತು, ಆದ್ದರಿಂದ ನಾವು ಎಲ್ಲವನ್ನೂ ಸಂಪೂರ್ಣವಾಗಿ ಯೋಜಿಸಬೇಕಾಗಿತ್ತು. ಭವಿಷ್ಯ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲದ ಕಾರಣ ನಾವು ಮದುವೆಯಾದೆವು. ಮದುವೆಯ ದಿನಾಂಕವನ್ನು ಸಹ ಮೊದಲೇ ನಿರ್ಧರಿಸಿದ್ದೆವು ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಸಂಬಂಧದಲ್ಲಿನ ಕಠಿಣ ಹಂತದ ಬಗ್ಗೆ ಮಾತನಾಡುತ್ತಾ, ಹಿನಾ, ತಮ್ಮ ಕ್ಯಾನ್ಸರ್ ಹೋರಾಟದ ಸಮಯದಲ್ಲಿ, ರಾಕಿಯನ್ನು ಬೇರೊಬ್ಬರನ್ನು ಮದುವೆಯಾಗಲು ಪದೇ ಪದೇ ಕೇಳಿಕೊಂಡಿದ್ದಳು ಎಂದು ಬಹಿರಂಗಪಡಿಸಿದರು. ಆದರೆ ರಾಕಿ ಹಾಗೆ ಮಾಡಲಿಲ್ಲ. ಪ್ರತಿ ಹಂತದಲ್ಲಿಯೂ ನನ್ನ ಸಪೋರ್ಟ್​ಗೆ ನಿಂತರು. ಇದೇ ಕಾರಣಕ್ಕೆ ನಾನು ಸಾವನ್ನು ಜಯಿಸಲು ಸಾಧ್ಯವಾಯಿತು ಎನ್ನುತ್ತಾರೆ ನಟಿ.&lt;/p&gt;&lt;img&gt;&lt;p&gt;ನಟಿ ಹಿನಾ ಖಾನ್​ ಮತ್ತು ರಾಕಿ ಅವರ ಲವ್​ ಸ್ಟೋರಿ ಅಮೃತಧಾರೆಯ ಭೂಮಿಕಾ ಮತ್ತು ಗೌತಮ್​ಗಿಂತ ಭಿನ್ನವಾಗಿರಬಹುದು. ಆದರೆ ಒಂದು ಸಾಮ್ಯತೆ ಎಂದರೆ, ಸೀರಿಯಲ್​ನಲ್ಲಿ ಕೂಡ ಬ್ರೆಸ್ಟ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಭೂಮಿಕಾಗೆ ಗೌತಮ್​ ಪ್ರೀತಿಯೇ ಆಸರೆಯಾಯಿತು. ಇಲ್ಲಿ ಹಿನಾ ಖಾನ್​ ತಮ್ಮ ಕ್ಯಾನ್ಸರ್​ ಗೆಲ್ಲಲು ಭಾವಿ ಪತಿಯ ಪ್ರೀತಿಯೇ ಕಾರಣ ಎಂದಿದ್ದಾರೆ. ಕ್ಯಾನ್ಸರ್​ನಂಥ ಕಾಯಿಲೆಗೆ ಚಿಕಿತ್ಸೆಯ ಜೊತೆಜೊತೆಗೆ ಮನೆಯವರ ಸಹಕಾರ, ಪ್ರೀತಿ ಎಷ್ಟು ಮುಖ್ಯ ಎನ್ನುವುದು ಸಾಬೀತಾಗಿದೆ.&lt;/p&gt;]]></content:encoded>
            <category>health-life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/cancer-patients-must-get-love-from-family-actress-hina-khan-story-and-amruthadhaare-serial-suc-1nf40df"/>
        </item>
        <item>
            <title><![CDATA[ಬರಿಗಣ್ಣಿನಲ್ಲಿ ಸೂರ್ಯಗ್ರಹಣ ನೋಡಿದ ಮಹಿಳೆಗೆ ಕಾದಿತ್ತು ಶಾಕ್: ಕಣ್ಣಿನೊಳಗೇ ಮೂಡಿತು ಶಾಶ್ವತ 'ಅರ್ಧಚಂದ್ರ'!]]></title>
            <link>https://kannada.asianetnews.com/science/solar-eclipse-eye-damage-crescent-blind-spot-woman-san/articleshow-1vigz4k</link>
            <guid isPermaLink="true">https://kannada.asianetnews.com/science/solar-eclipse-eye-damage-crescent-blind-spot-woman-san/articleshow-1vigz4k</guid>
            <pubDate>Tue, 11 Aug 2026 19:29:50 +0530</pubDate>
            <description><![CDATA[&lt;p&gt;ಸೂರ್ಯಗ್ರಹಣವನ್ನು ಅಸುರಕ್ಷಿತವಾಗಿ ವೀಕ್ಷಿಸಿದ ನ್ಯೂಯಾರ್ಕ್&zwnj;ನ ಯುವತಿಯೊಬ್ಬರ ಕಣ್ಣಿನ ರೆಟಿನಾದಲ್ಲಿ ಅರ್ಧಚಂದ್ರಾಕಾರದ ಶಾಶ್ವತ ಕುರುಡು ಚುಕ್ಕೆ (Blind Spot) ಮೂಡಿದೆ. ಈ ಘಟನೆಯು 'ಸೋಲಾರ್ ರೆಟಿನೋಪತಿ' ಎಂಬ ಗಂಭೀರ ಸ್ಥಿತಿಯನ್ನು ವಿವರಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzrhv04mafqqwjxanserb478,imgname-nia-pyne-eye-1786456670356.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.11): &lt;/strong&gt;ಸೂರ್ಯಗ್ರಹಣವನ್ನು ಖಾಲಿ ಕಣ್ಣಿನಿಂದ ನೋಡಬಾರದು ಎಂಬ ವಿಜ್ಞಾನಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಅಮೆರಿಕದ ನ್ಯೂಯಾರ್ಕ್ ಮೂಲದ 26 ವರ್ಷದ ಮಹಿಳೆಯೊಬ್ಬರ ಕಣ್ಣಿನೊಳಗೆ ಅರ್ಧಚಂದ್ರಾಕಾರದ Blind Spot ಶಾಶ್ವತವಾಗಿ ಮೂಡಿದೆ. ಸೂರ್ಯನಿಂದ ಹೊರಹೊಮ್ಮಿದ ಅಪಾಯಕಾರಿ ಕಿರಣಗಳು ಆಕೆಯ ಕಣ್ಣಿನ ಅತ್ಯಂತ ಸೂಕ್ಷ್ಮವಾದ ರೆಟಿನಾ (Retina) ಭಾಗದ ಜೀವಕೋಶಗಳನ್ನು ಸುಟ್ಟುಹಾಕಿದ್ದು, ಈ ಕಳವಳಕಾರಿ ಸಂಶೋಧನೆಯ ವಿವರಗಳನ್ನು ಪ್ರಸಿದ್ಧ 'ಜಾಮಾ ಆಫ್ತಾಲ್ಮೋಲಜಿ' (JAMA Ophthalmology) ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ನ್ಯೂಯಾರ್ಕ್&zwnj;ನ ಮೌಂಟ್ ಸಿನಾಯ್ ಆಸ್ಪತ್ರೆಯ ವೈದ್ಯರು ಈ ಅಪರೂಪದ ವೈದ್ಯಕೀಯ ಪ್ರಕರಣವನ್ನು ಜಗತ್ತಿಗೆ ಉಲ್ಲೇಖಿಸಿದ್ದಾರೆ.&lt;/p&gt;&lt;h2&gt;&lt;strong&gt;21 ಸೆಕೆಂಡ್ ವೀಕ್ಷಣೆ ತಂದಿಟ್ಟ ವಿಪತ್ತು&lt;/strong&gt;&lt;/h2&gt;&lt;p&gt;2017 ರ ಆಗಸ್ಟ್ 21 ರಂದು ಅಮೆರಿಕದಲ್ಲಿ ಸೂರ್ಯಗ್ರಹಣ ಸಂಭವಿಸಿತ್ತು. ನ್ಯೂಯಾರ್ಕ್&zwnj;ನ ಸ್ಟೇಟನ್ ಐಲ್ಯಾಂಡ್ ನಿವಾಸಿ ನಿಯಾ ಪೇನ್ (Nia Payne) ಎಂಬ 26 ವರ್ಷದ ಯುವತಿ ಈ ಗ್ರಹಣ ವೀಕ್ಷಿಸಲು ಹೊರಬಂದಿದ್ದರು. ಆ ಪ್ರದೇಶದಲ್ಲಿ ಸೂರ್ಯ ಶೇ. 70 ರಷ್ಟು ಚಂದ್ರನಿಂದ ಆವೃತನಾಗಿದ್ದ ಅಂದರೆ ಭಾಗಶಃ ಗ್ರಹಣವಾಗಿತ್ತು.&lt;/p&gt;&lt;p&gt;ಆರಂಭದಲ್ಲಿ ಸೂಕ್ತ ಕಣ್ಣಿನ ರಕ್ಷಣಾ ಗ್ಲಾಸ್ ಇಲ್ಲದೆ ಕೇವಲ 6 ಸೆಕೆಂಡುಗಳ ಕಾಲ ಸೂರ್ಯನನ್ನು ನೇರವಾಗಿ ನೋಡಿದ ಪೇನ್, ನಂತರ ಪಕ್ಕದಲ್ಲಿದ್ದವರಿಂದ ಗ್ರಹಣ ವೀಕ್ಷಣೆಯ ಕನ್ನಡಕ ಪಡೆದು ಮತ್ತೊಮ್ಮೆ 15 ರಿಂದ 20 ಸೆಕೆಂಡುಗಳ ಕಾಲ ಗ್ರಹಣ ವೀಕ್ಷಿಸಿದ್ದರು. ಆದರೆ ಆ ಕನ್ನಡಕ 'ISO 12312-2' ಎಂಬ ಅಂತರರಾಷ್ಟ್ರೀಯ ಭದ್ರತಾ ಮಾನದಂಡವನ್ನು ಹೊಂದಿರಲಿಲ್ಲ. ಪರಿಣಾಮವಾಗಿ ಒಟ್ಟು 21 ಸೆಕೆಂಡುಗಳ ಕಾಲ ಗ್ರಹಣ ನೋಡಿದ ಪೇನ್ ಅವರಿಗೆ ಕೆಲವೇ ಗಂಟೆಗಳಲ್ಲಿ ಎಡಕಣ್ಣಿನ ಮಧ್ಯಭಾಗದಲ್ಲಿ ಮಸುಕಾದಂತೆ ಅನುಭವವಾಯಿತು.&lt;/p&gt;&lt;h2&gt;&lt;strong&gt;ಸಾಮಾನ್ಯ ಮಸುಕಲ್ಲ, ಕಣ್ಣಿನ ಮುಂದೆ ಅರ್ಧಚಂದ್ರ!&lt;/strong&gt;&lt;/h2&gt;&lt;p&gt;ಕೆಲ ದಿನಗಳ ನಂತರವೂ ಆ ಮಸುಕು ಮರೆಯಾಗಲಿಲ್ಲ. ಬದಲಿಗೆ ಅವರು ಯಾವುದೇ ವಸ್ತುವನ್ನು ನೋಡಿದರೂ ಅದರ ಮಧ್ಯಭಾಗದಲ್ಲಿ ಅರ್ಧಚಂದ್ರಾಕಾರದ ಕಪ್ಪು ಚುಕ್ಕೆ (Blindspot) ಅಡ್ಡಬರಲು ಪ್ರಾರಂಭಿಸಿತು. ಇದರಿಂದ ಓದಲು, ಜನರ ಮುಖ ಗುರುತಿಸಲು ಹಾಗೂ ಸ್ಕ್ರೀನ್&zwnj;ಗಳನ್ನು ವೀಕ್ಷಿಸಲು ಅವರಿಗೆ ತೀವ್ರ ತೊಂದರೆಯಾಯಿತು.&lt;/p&gt;&lt;p&gt;ಮೌಂಟ್ ಸಿನಾಯ್&zwnj;ನ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದಾಗ, ಅವರ ಕಣ್ಣಿನ ದೃಷ್ಟಿ ಸಾಮರ್ಥ್ಯ (Visual Acuity) ಬಲಗಣ್ಣು 20/20 ಮತ್ತು ಎಡಗಣ್ಣು 20/25 ರಷ್ಟಿತ್ತು (ಸಾಮಾನ್ಯ ಸ್ಥಿತಿ). ಆದರೆ, ಸಮಸ್ಯೆ ಇದ್ದದ್ದು ದೃಷ್ಟಿಯ ತೀವ್ರತೆಯಲ್ಲ, ಬದಲಿಗೆ ಸೆಂಟ್ರಲ್ ವಿಷನ್&zwnj;ನಲ್ಲಿ (ಮಧ್ಯ ದೃಷ್ಟಿ) ಮೂಡಿದ 'ಸೋಲಾರ್ ರೆಟಿನೋಪತಿ' (Solar Retinopathy) ಎಂಬ ಕಾಯಿಲೆಯಲ್ಲಿ.&lt;/p&gt;&lt;h2&gt;&lt;strong&gt;ರೆಟಿನಾಗೆ ಹಾನಿಯಾದದ್ದು ಹೇಗೆ?&lt;/strong&gt;&lt;/h2&gt;&lt;p&gt;ಕಣ್ಣಿನ ರೆಟಿನಾ ಎಂಬುದು ಅತ್ಯಂತ ಸೂಕ್ಷ್ಮವಾದ ನರಮಂಡಲದ ಪದರವಾಗಿದ್ದು, ಬೆಳಕನ್ನು ಗ್ರಹಿಸಿ ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಇದರಲ್ಲಿರುವ 'ಕೋನ್' ಜೀವಕೋಶಗಳು ಪ್ರಕಾಶಮಾನ ಬೆಳಕು ಮತ್ತು ವಸ್ತುಗಳ ವಿವರವಾದ ಚಿತ್ರಣಕ್ಕೆ ಕಾರಣವಾಗುತ್ತವೆ. ಅದರಲ್ಲೂ ರೆಟಿನಾದ ಮಧ್ಯದಲ್ಲಿರುವ 'ಫೋವಿಯಾ' ಎಂಬ ಪುಟ್ಟ ಜಾಗದಲ್ಲಿ ಈ ಕೋನ್&zwnj;ಗಳ ಸಾಂದ್ರತೆ ಹೆಚ್ಚಿರುತ್ತದೆ.&lt;/p&gt;&lt;p&gt;ಸೂರ್ಯನ ಕಡೆಗೆ ನೇರವಾಗಿ ನೋಡಿದಾಗ, ಕಣ್ಣಿನ ಮಸೂರವು (Lens) ಆ ತೀವ್ರವಾದ ಸೂರ್ಯನ ಕಿರಣಗಳನ್ನು ಒಂದೇ ಸಣ್ಣ ಜಾಗಕ್ಕೆ ಕೇಂದ್ರೀಕರಿಸುತ್ತದೆ. ಸೂರ್ಯನ ಪ್ರಚಂಡ ತಾಪ ಮತ್ತು ಕೆಮಿಕಲ್ ರಿಯಾಕ್ಷನ್&zwnj;ಗೆ ಈ ಪ್ರೋಟೋರೆಸೆಪ್ಟರ್ (Photoreceptor) ಜೀವಕೋಶಗಳು ಸುಟ್ಟು ಕರಕಲಾಗುತ್ತವೆ. ಇಲ್ಲಿ ಮುಖ್ಯ ಸಂಗತಿಯೆಂದರೆ ರೆಟಿನಾದಲ್ಲಿ ನೋವಿನ ನರಗಳಿಲ್ಲದಿರುವುದರಿಂದ ಈ ಹಾನಿ ಸಂಭವಿಸುವಾಗ ಕಣ್ಣಿನಲ್ಲಿ ಯಾವುದೇ ನೋವಾಗುವುದಿಲ್ಲ! ಒಮ್ಮೆ ನಾಶವಾದ ಜೀವಕೋಶಗಳನ್ನು ದೇಹವು ಮರಳಿ ಉತ್ಪಾದಿಸಲು ಸಾಧ್ಯವಿಲ್ಲ.&lt;/p&gt;&lt;h2&gt;&lt;strong&gt;ಡ್ರಾಯಿಂಗ್ ಶೀಟ್ ಮತ್ತು ರೆಟಿನಾ ಸ್ಕ್ಯಾನ್ ಎರಡೂ ಸೇಮ್&lt;/strong&gt;&lt;/h2&gt;&lt;p&gt;ಆಸ್ಪತ್ರೆಯ ವೈದ್ಯರು ಪೇನ್ ಅವರಿಗೆ ತಮಗೆ ಕಾಣಿಸದಿರುವ ಭಾಗದ ಚಿತ್ರ ಬರೆಯಲು (Draw) ಸೂಚಿಸಿದರು. ಅವರು ಕಾಗದದ ಮೇಲೆ ಬಿಡಿಸಿದ ಚಿತ್ರವು ಸೂರ್ಯಗ್ರಹಣದ ಸಮಯದಲ್ಲಿ ಕಾಣಿಸುವ ಅರ್ಧಚಂದ್ರಾಕಾರದ ರೂಪದಲ್ಲೇ ಇತ್ತು!&lt;/p&gt;&lt;p&gt;ವೈದ್ಯರು 'ಅಡಾಪ್ಟಿವ್ ಆಪ್ಟಿಕ್ಸ್' (Adaptive Optics) ಎಂಬ ಅತ್ಯಾಧುನಿಕ ಖಗೋಳವಿಜ್ಞಾನದ ತಂತ್ರಜ್ಞಾನ ಆಧಾರಿತ ಸ್ಕ್ಯಾನಿಂಗ್ ಯಂತ್ರದ ಮೂಲಕ ಪೇನ್ ಅವರ ಕಣ್ಣನ್ನು ಪರೀಕ್ಷಿಸಿದರು. ಅತ್ಯಂತ ಸೂಕ್ಷ್ಮ ಜೀವಕೋಶಗಳನ್ನು ಸ್ಕ್ಯಾನ್ ಮಾಡಿದಾಗ, ಆಕೆಯ ಎಡಕಣ್ಣಿನ ರೆಟಿನಾದಲ್ಲಿದ್ದ ಸುಟ್ಟ ಜೀವಕೋಶಗಳ ಆಕಾರ ಮತ್ತು ಪೇನ್ ಕಾಗದದ ಮೇಲೆ ಬಿಡಿಸಿದ ಆಕಾರ ಎರಡೂ ಶೇ.100 ರಷ್ಟು ಒಂದಕ್ಕೊಂದು ಹೋಲುತ್ತಿದ್ದವು! ಸೂರ್ಯನ ಪ್ರಕಾಶಮಾನ ಭಾಗವು ರೆಟಿನಾದ ಮೇಲೆ ಹೇಗೆ ಬಿತ್ತರಗೊಂಡಿತ್ತೋ, ಅದೇ ಆಕಾರದಲ್ಲಿ ಜೀವಕೋಶಗಳು ನಶಿಸಿಹೋಗಿದ್ದವು.&lt;/p&gt;&lt;h2&gt;&lt;strong&gt;ಭಾಗಶಃ ಸೂರ್ಯಗ್ರಹಣ ಏಕೆ ಹೆಚ್ಚು ಅಪಾಯಕಾರಿ?&lt;/strong&gt;&lt;/h2&gt;&lt;p&gt;ಪೂರ್ಣ ಸೂರ್ಯಗ್ರಹಣದ (Totality) ಸಮಯದಲ್ಲಿ ಸೂರ್ಯ ಸಂಪೂರ್ಣವಾಗಿ ಮುಚ್ಚಲ್ಪಟ್ಟಾಗ ಕೆಲವು ಸೆಕೆಂಡುಗಳ ಕಾಲ ಕಣ್ಣಿನಿಂದ ನೋಡಬಹುದು. ಆದರೆ 'ಭಾಗಶಃ ಗ್ರಹಣ' ಅತ್ಯಂತ ಅಪಾಯಕಾರಿ. ಏಕೆಂದರೆ ಸೂರ್ಯನ ಸಣ್ಣ ಕತ್ತರಿಸಿದ ಭಾಗದಿಂದ ಹೊರಬರುವ ಕಿರಣಗಳು ಸಹ ಕಣ್ಣಿನ ಜೀವಕೋಶಗಳನ್ನು ಶಾಶ್ವತವಾಗಿ ನಾಶಪಡಿಸುವಷ್ಟು ಶಕ್ತಿಶಾಲಿಯಾಗಿರುತ್ತವೆ. ಸಾಮಾನ್ಯ ಸನ್ ಗ್ಲಾಸ್&zwnj;ಗಳು (Sunglasses) ಸೂರ್ಯನ ಈ ಅಪಾಯಕಾರಿ ರೇಡಿಯೇಶನ್ ತಡೆಯಲು ಸಾಧ್ಯವಿಲ್ಲ.&lt;/p&gt;&lt;p&gt;ಸೋಲಾರ್ ರೆಟಿನೋಪತಿಗೆ ಯಾವುದೇ ಚಿಕಿತ್ಸೆ ಇಲ್ಲ. ನಶಿಸಿಹೋದ ರೆಟಿನಾ ಜೀವಕೋಶಗಳನ್ನು ಮರುಸೃಷ್ಟಿಸಲು ಸಾಧ್ಯವಿಲ್ಲದಿರುವುದರಿಂದ ನಿಯಾ ಪೇನ್ ಅವರ ಎಡಕಣ್ಣಿನಲ್ಲಿ ಆ ಕತ್ತಲೆಯ ಚಂದ್ರಾಕಾರದ ಕಲೆ ಶಾಶ್ವತವಾಗಿ ಉಳಿದುಕೊಂಡಿದೆ. ಪ್ರಸ್ತುತ ಅವರು ಬಲಗಣ್ಣಿನ ಮೇಲೆ ಹೆಚ್ಚು ಅವಲಂಬಿತರಾಗಿ ಜೀವನ ನಡೆಸುತ್ತಿದ್ದಾರೆ. ಗ್ರಹಣದ ವೇಳೆ ಸುರಕ್ಷಿತ ಐಎಸ್&zwnj;ಒ (ISO) ಪ್ರಮಾಣೀಕೃತ ಕಣ್ಣಡಕ ಧರಿಸದಿದ್ದರೆ ಎಂತಹ ಭೀಕರ ಪರಿಣಾಮ ಎದುರಾಗಬಹುದು ಎಂಬುದಕ್ಕೆ ಈ ಘಟನೆ ಅತ್ಯಂತ ದೊಡ್ಡ ಉದಾಹರಣೆಯಾಗಿದೆ.&lt;/p&gt;]]></content:encoded>
            <category>health-life</category>
            <dc:creator>Santosh Naik</dc:creator>
            <atom:link href="https://kannada.asianetnews.com/science/solar-eclipse-eye-damage-crescent-blind-spot-woman-san/articleshow-1vigz4k"/>
        </item>
        <item>
            <title><![CDATA[ಬಾತ್‌ರೂಮ್‌ಗೂ ಲಗ್ಗೆ ಇಟ್ಟ ತಂತ್ರಜ್ಞಾನ.. ಇನ್ಮೇಲೆ ಟಾಯ್ಲೆಟ್ ಪೇಪರ್‌ ಇರಲ್ವಂತೆ, ಏನಿದು ಸ್ಮಾರ್ಟ್ ಟಾಯ್ಲೆಟ್‌?]]></title>
            <link>https://kannada.asianetnews.com/gallery/life/smart-toilets-the-future-of-bathroom-hygiene-and-technology-3nx0fpz</link>
            <guid isPermaLink="true">https://kannada.asianetnews.com/gallery/life/smart-toilets-the-future-of-bathroom-hygiene-and-technology-3nx0fpz</guid>
            <pubDate>Tue, 11 Aug 2026 22:56:27 +0530</pubDate>
            <description><![CDATA[&lt;p&gt;Smart Toilet Technology: ತಂತ್ರಜ್ಞಾನವು ಈಗ ಬಾತ್&zwnj;ರೂಮ್&zwnj;ಗಳಿಗೂ ಲಗ್ಗೆ ಇಟ್ಟಿದೆ! ಟಾಯ್ಲೆಟ್ ಪೇಪರ್ ಬಳಕೆ ಕಡಿಮೆ ಮಾಡುವ ಮತ್ತು ವೈಯಕ್ತಿಕ ನೈರ್ಮಲ್ಯ ಹೆಚ್ಚಿಸುವ ಸ್ಮಾರ್ಟ್ ಟಾಯ್ಲೆಟ್&zwnj;ಗಳು ಜಗತ್ತಿನಾದ್ಯಂತ ಟ್ರೆಂಡ್ ಆಗುತ್ತಿವೆ. ಈ ಸ್ಮಾರ್ಟ್ ಟಾಯ್ಲೆಟ್&zwnj;ಗಳ ವಿಶೇಷತೆಗಳೇನು ಎಂಬ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzrxce325rg956576db5mbj2,imgname-thumbnail---2026-08-11t224748.674-1786468776034.jpg" type="image/jpeg" height="390" width="690"/>
            <content:encoded><![CDATA[&lt;p&gt;Smart Toilet Technology: ತಂತ್ರಜ್ಞಾನವು ಈಗ ಬಾತ್&zwnj;ರೂಮ್&zwnj;ಗಳಿಗೂ ಲಗ್ಗೆ ಇಟ್ಟಿದೆ! ಟಾಯ್ಲೆಟ್ ಪೇಪರ್ ಬಳಕೆ ಕಡಿಮೆ ಮಾಡುವ ಮತ್ತು ವೈಯಕ್ತಿಕ ನೈರ್ಮಲ್ಯ ಹೆಚ್ಚಿಸುವ ಸ್ಮಾರ್ಟ್ ಟಾಯ್ಲೆಟ್&zwnj;ಗಳು ಜಗತ್ತಿನಾದ್ಯಂತ ಟ್ರೆಂಡ್ ಆಗುತ್ತಿವೆ. ಈ ಸ್ಮಾರ್ಟ್ ಟಾಯ್ಲೆಟ್&zwnj;ಗಳ ವಿಶೇಷತೆಗಳೇನು ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಐಷಾರಾಮಿ ಹೋಟೆಲ್&zwnj;, ಜಪಾನ್&zwnj;ನಂತಹ ದೇಶಗಳಲ್ಲಿ ಇತ್ತು ಈ ಸೌಲಭ್ಯ&lt;/strong&gt;ಬಾತ್&zwnj;ರೂಮ್ ಎಂಬುದು ಕೇವಲ ದೈನಂದಿನ ಅವಶ್ಯಕತೆಗಳನ್ನು ಪೂರೈಸುವ ಸ್ಥಳ ಮಾತ್ರವಲ್ಲ, ಈಗ ಅಲ್ಲಿಯೂ ತಂತ್ರಜ್ಞಾನ ವೇಗವಾಗಿ ಕಾಲಿಡುತ್ತಿದೆ. ವಿಶೇಷವಾಗಿ 'ಸ್ಮಾರ್ಟ್ ಟಾಯ್ಲೆಟ್&zwnj;ಗಳು' ಮತ್ತು 'ವಾಶ್&zwnj;ಲೆಟ್&zwnj;ಗಳು' ಆಧುನಿಕ ಮನೆಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿವೆ. ಒಂದು ಕಾಲದಲ್ಲಿ ಕೇವಲ ಐಷಾರಾಮಿ ಹೋಟೆಲ್&zwnj;ಗಳು ಅಥವಾ ಜಪಾನ್&zwnj;ನಂತಹ ದೇಶಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಈ ಹೈಟೆಕ್ ಸೌಲಭ್ಯಗಳು ಈಗ ವಿಶ್ವದಾದ್ಯಂತ ಮನೆ ಮನೆಗಳನ್ನು ತಲುಪುತ್ತಿವೆ.&lt;/p&gt;&lt;img&gt;&lt;p&gt;&lt;strong&gt;ಏನಿದು ಸ್ಮಾರ್ಟ್ ಟಾಯ್ಲೆಟ್?&lt;/strong&gt;ಟಾಯ್ಲೆಟ್ ಮತ್ತು ಬಿಡೆಟ್ (ನೀರಿನಿಂದ ಶುಚಿಗೊಳಿಸುವ ವ್ಯವಸ್ಥೆ) ಎರಡನ್ನೂ ಒಂದೇ ಯುನಿಟ್&zwnj;ನಲ್ಲಿ ಹೊಂದಿರುವ ಈ ಸ್ಮಾರ್ಟ್ ಟಾಯ್ಲೆಟ್&zwnj;ಗಳಲ್ಲಿ ನೀರಿನ ತಾಪಮಾನ, ನೀರಿನ ಒತ್ತಡ ಮತ್ತು ನೀರು ಬರುವ ದಿಕ್ಕನ್ನು ನಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಸೌಲಭ್ಯವಿರುತ್ತದೆ. ಕೆಲವು ಮಾದರಿಗಳಲ್ಲಿ ಬಿಸಿಯಾದ ಸೀಟ್&zwnj;ಗಳು (Heated seats), ಬೆಚ್ಚಗಿನ ಗಾಳಿಯಿಂದ ಒಣಗಿಸುವ ವ್ಯವಸ್ಥೆ (Warm air dryer) ಮತ್ತು ಆಟೋಮ್ಯಾಟಿಕ್ ಸೆನ್ಸರ್&zwnj;ಗಳೂ ಇರುತ್ತವೆ.&lt;/p&gt;&lt;img&gt;&lt;p&gt;&lt;strong&gt;ಇದರ ಪ್ರಮುಖ ಅನುಕೂಲಗಳು&lt;/strong&gt;&lt;strong&gt;ಟಾಯ್ಲೆಟ್ ಪೇಪರ್ ಬಳಕೆಗೆ ಮುಕ್ತಿ: &lt;/strong&gt;ನೀರಿನಿಂದ ಶುಚಿಗೊಳಿಸುವ ವ್ಯವಸ್ಥೆ ಇರುವುದರಿಂದ ಟಾಯ್ಲೆಟ್ ಪೇಪರ್ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದು ಪರಿಸರಕ್ಕೂ ಪೂರಕವಾಗಿದೆ.&lt;/p&gt;&lt;p&gt;&lt;strong&gt;ಉತ್ತಮ ನೈರ್ಮಲ್ಯ: &lt;/strong&gt;ಕೇವಲ ಪೇಪರ್ ಬಳಸುವುದಕ್ಕಿಂತ ನೀರಿನಿಂದ ತೊಳೆದುಕೊಳ್ಳುವುದು ಹೆಚ್ಚು ಪರಿಣಾಮಕಾರಿ ಮತ್ತು ಸ್ವಚ್ಛತೆಯನ್ನು ನೀಡುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.&lt;/p&gt;&lt;p&gt;&lt;strong&gt;ಕಡಿಮೆ ಸ್ಪರ್ಶ, ಹೆಚ್ಚು ಸುರಕ್ಷತೆ: &lt;/strong&gt;ಆಟೋಮ್ಯಾಟಿಕ್ ಸೆನ್ಸರ್&zwnj;ಗಳು ಇರುವುದರಿಂದ ಟಾಯ್ಲೆಟ್&zwnj;ನ ಭಾಗಗಳನ್ನು ಪದೇ ಪದೇ ಕೈಯಿಂದ ಮುಟ್ಟುವ ಅವಶ್ಯಕತೆ ಇರುವುದಿಲ್ಲ. ಇದು ಬ್ಯಾಕ್ಟೀರಿಯಾಗಳ ಹರಡುವಿಕೆಯನ್ನು ತಡೆಯುತ್ತದೆ.&lt;/p&gt;&lt;p&gt;&lt;strong&gt;ಪರಿಸರ ಸ್ನೇಹಿ: &lt;/strong&gt;ಟಾಯ್ಲೆಟ್ ಪೇಪರ್ ತಯಾರಿಕೆಗೆ ಹೆಚ್ಚಿನ ಮರಗಳನ್ನು ಕಡಿಯಬೇಕಾಗುತ್ತದೆ. ಈ ತಂತ್ರಜ್ಞಾನದ ಬಳಕೆಯಿಂದ ಕಾಗದದ ಬಳಕೆ ಕಡಿಮೆಯಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಲು ಸಾಧ್ಯವಿದೆ.&lt;/p&gt;&lt;img&gt;&lt;p&gt;&lt;strong&gt;ಎಚ್ಚರವೂ ಅಗತ್ಯ&lt;/strong&gt;ಸ್ಮಾರ್ಟ್ ಟಾಯ್ಲೆಟ್&zwnj;ಗಳಲ್ಲಿ ಸೆಲ್ಫ್ ಕ್ಲೀನಿಂಗ್ (ಸ್ವಯಂ ಸ್ವಚ್ಛತೆ) ವ್ಯವಸ್ಥೆ ಇದ್ದರೂ ಸಹ, ಅದನ್ನು ಆಗಾಗ್ಗೆ ಮ್ಯಾನುವಲ್ ಆಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಬ್ಯಾಕ್ಟೀರಿಯಾ ಮತ್ತು ದುರ್ವಾಸನೆಯನ್ನು ತಡೆಗಟ್ಟಲು ಡಿಸ್&zwnj;ಇನ್&zwnj;ಫೆಕ್ಷನ್ ಮಾಡುವುದು ಅಗತ್ಯವಾಗಿರುತ್ತದೆ.&lt;/p&gt;&lt;img&gt;&lt;p&gt;&lt;strong&gt;ಸಾಮಾನ್ಯ ಮನೆಗಳಲ್ಲೂ ಸ್ಮಾರ್ಟ್ ಟಾಯ್ಲೆಟ್&zwnj;ಗಳು&lt;/strong&gt;ಭವಿಷ್ಯದಲ್ಲಿ ಸ್ಮಾರ್ಟ್ ಹೋಮ್ ಕಾನ್ಸೆಪ್ಟ್ ಹೆಚ್ಚಾದಂತೆ, ಸಾಮಾನ್ಯ ಮನೆಗಳಲ್ಲೂ ಈ ಸ್ಮಾರ್ಟ್ ಟಾಯ್ಲೆಟ್&zwnj;ಗಳು ಅನಿವಾರ್ಯವಾಗಲಿವೆ. ಇದು ಬದುಕಿನ ಶೈಲಿಯನ್ನು ಸುಲಭಗೊಳಿಸುವುದಲ್ಲದೆ, ನೈರ್ಮಲ್ಯದ ಮಟ್ಟವನ್ನು ಹೆಚ್ಚಿಸಲಿದೆ.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/smart-toilets-the-future-of-bathroom-hygiene-and-technology-3nx0fpz"/>
        </item>
        <item>
            <title><![CDATA[ನೀವು ಕೂಡ ಚಹಾ ಕುಡಿದ ತಕ್ಷಣ ನೀರು ಕುಡಿಯಲ್ಲ ತಾನೇ?  ಸಣ್ಣ ತಪ್ಪಿನಿಂದ ದೊಡ್ಡ ಸಮಸ್ಯೆ]]></title>
            <link>https://kannada.asianetnews.com/health-life/what-happens-when-you-drink-water-after-tea/articleshow-5mc6e3t</link>
            <guid isPermaLink="true">https://kannada.asianetnews.com/health-life/what-happens-when-you-drink-water-after-tea/articleshow-5mc6e3t</guid>
            <pubDate>Wed, 12 Aug 2026 13:17:49 +0530</pubDate>
            <description><![CDATA[&lt;p&gt;Health Tips: ಆಫೀಸ್&zwnj;ನ ಬ್ರೇಕ್ ಸಮಯದಲ್ಲಿ ಚಹಾ, ಸಂಜೆ ಸ್ನೇಹಿತರ ಜೊತೆ ಅಥವಾ ಕುಟುಂಬದವರೊಂದಿಗೆ ಚಹಾ ಕುಡಿಯುವುದು ಹಲವರ ದಿನಚರಿಯ ಒಂದು ಭಾಗವಾಗಿದೆ. ಚಹಾ ಕುಡಿಯೋದೇನೋ ಸರಿ, ಆದರೆ ಚಹಾ ಕುಡಿದ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮಗಿದ್ದರೆ, ಇವತ್ತೆ ಆ ಅಭ್ಯಾಸವನ್ನು ಬದಲಾಯಿಸಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kztf1w5n6c3bzv5qy9s6cjt8,imgname-drinking-water-after-tea-1786520858804.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ನೀವು ಕೂಡ ಚಹಾ ಕುಡಿದ ತಕ್ಷಣ ನೀರು ಕುಡಿಯುತ್ತಿಲ್ಲ ತಾನೆ?&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಬದಲಾಗಿದ್ದು, ಅವರ ಆಹಾರ ಪದ್ಧತಿಯಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ. ಬಹುತೇಕ ಜನರಿಗೆ ಚಹಾ ಕುಡಿಯುವುದು ತುಂಬಾ ಇಷ್ಟ. ಚಹಾ ಇಲ್ಲದೆ ಅವರ ಬೆಳಗ್ಗೆಯೇ ಆರಂಭವಾಗುವುದಿಲ್ಲ. ಆದರೆ ಕೆಲವರಿಗೆ ಚಹಾ ಕುಡಿದ ತಕ್ಷಣ ನೀರು ಕುಡಿಯುವ ಅಭ್ಯಾಸ ಇರುತ್ತದೆ. ನೀವು ಕೂಡ ಚಹಾ ಕುಡಿದ ತಕ್ಷಣವೇ ನೀರು ಕುಡಿಯುವವರಾಗಿದ್ದರೆ, ಈ ಅಭ್ಯಾಸವನ್ನು ಇವತ್ತೆ ಬಿಟ್ಟು ಬಿಡಿ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾದರೆ ಪ್ರತಿದಿನ ಚಹಾದ ಜೊತೆಗೆ ನೀರು ಕುಡಿಯುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಿಳಿಯೋಣ.&lt;/p&gt;&lt;h3&gt;&lt;strong&gt;ಚಹಾ ಕುಡಿದ ತಕ್ಷಣ ನೀರು ಕುಡಿದರೆ ಏನಾಗುತ್ತದೆ?&lt;/strong&gt;&lt;/h3&gt;&lt;p&gt;&lt;strong&gt;ಹೊಟ್ಟೆ ತುಂಬಿದಂತೆ ಅಥವಾ ಅಸ್ವಸ್ಥತೆ&lt;/strong&gt;&lt;/p&gt;&lt;p&gt;ನೀವು ಚಹಾ ಕುಡಿದ ತಕ್ಷಣ ನೀರು ಕುಡಿದರೆ, ಅದು ನಿಮಗೆ ತೊಂದರೆ ಉಂಟುಮಾಡಬಹುದು. ಇದರಿಂದ ಹೊಟ್ಟೆ ಉಬ್ಬರಿಸಿದಂತೆ ಭಾಸವಾಗಬಹುದು ಮತ್ತು ಅಸ್ವಸ್ಥತೆಯ ಅನುಭವವೂ ಆಗಬಹುದು. ಹಾಗಾಗಿ ಚಹಾ ಕುಡಿದ ತಕ್ಷಣ ನೀರು ಕುಡಿಯಬೇಡಿ.&lt;/p&gt;&lt;p&gt;&lt;strong&gt;ಡಿಹೈಡ್ರೇಷನ್&lt;/strong&gt;&lt;/p&gt;&lt;p&gt;ಚಹಾದ ಜೊತೆಗೆ ನೀರು ಕುಡಿಯುವುದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು. ಡಿಹೈಡ್ರೇಷನ್&zwnj;ನ ಸಮಸ್ಯೆಯೂ ಎದುರಾಗಬಹುದು ಎಂದು ಹೇಳಲಾಗುತ್ತದೆ. ದಿನವಿಡೀ ಚಹಾ, ಕಾಫಿ ಅಥವಾ ಇತರ ಕ್ಯಾಫೀನ್ ಇರುವ ಪಾನೀಯಗಳನ್ನು ಮಾತ್ರ ಸೇವಿಸುತ್ತಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಮುಖ್ಯ. ಆದರೆ ಎರಡನ್ನು ಒಟ್ಟಿಗೆ ಸೇವಿಸಬೇಡಿ. ಅರ್ಧ ಗಂಟೆಯ ಅಂತರ ಇರಲಿ.&lt;/p&gt;&lt;p&gt;&lt;strong&gt;ಹಲ್ಲುಗಳ ಸಮಸ್ಯೆ&lt;/strong&gt;&lt;/p&gt;&lt;p&gt;ಚಹಾದ ಜೊತೆಗೆ ನೀರು ಕುಡಿಯುವ ಅಭ್ಯಾಸವಿದ್ದರೆ ಅದನ್ನು ತಪ್ಪಿಸುವುದು ಉತ್ತಮ. ಇದರಿಂದ ಹಲ್ಲುಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ತಣ್ಣನೆಯ ನೀರು ಕುಡಿದಾಗ ಹಲ್ಲುಗಳಲ್ಲಿ ಜುಂ ಎನ್ನುವುದು ಅಥವಾ ನೋವು ಕಾಣಿಸಿಕೊಳ್ಳಬಹುದು.&lt;/p&gt;&lt;p&gt;&lt;strong&gt;ಗ್ಯಾಸ್ ಅಥವಾ ಅಸಿಡಿಟಿ&lt;/strong&gt;&lt;/p&gt;&lt;p&gt;ಗ್ಯಾಸ್ ಅಥವಾ ಅಸಿಡಿಟಿಯ ಸಮಸ್ಯೆಯೂ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ಚಹಾ ಮತ್ತು ನೀರನ್ನು ಒಂದೇ ಸಮಯದಲ್ಲಿ ಸೇವಿಸುವ ಅಭ್ಯಾಸವನ್ನು ತಪ್ಪಿಸುವುದು ಉತ್ತಮ. ಇದು ಆರೋಗ್ಯಕ್ಕೆ ತೊಂದರೆ ಉಂಟುಮಾಡಬಹುದು.&lt;/p&gt;&lt;p&gt;&lt;strong&gt;ಶೀತ-ಜ್ವರದ ಸಮಸ್ಯೆ&lt;/strong&gt;&lt;/p&gt;&lt;p&gt;ನೀವು ಚಹಾದ ಜೊತೆಗೆ ನೀರನ್ನೂ ಕುಡಿಯುತ್ತಿದ್ದರೆ, ಇದರಿಂದ ಶೀತ-ಜ್ವರದ ರೀತಿಯ ಅಸ್ವಸ್ಥತೆ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಇವುಗಳನ್ನು ಜೊತೆಯಾಗಿ ಸೇವಿಸುವುದು ಅವಾಯ್ಡ್ ಮಾಡಿ.&lt;/p&gt;]]></content:encoded>
            <category>health-life</category>
            <dc:creator>Pavna Das</dc:creator>
            <atom:link href="https://kannada.asianetnews.com/health-life/what-happens-when-you-drink-water-after-tea/articleshow-5mc6e3t"/>
        </item>
        <item>
            <title><![CDATA[ಆಪರೇಷನ್ ಇಲ್ಲದೆಯೇ ಕಣ್ಣಿನ ದೃಷ್ಟಿ ಹೆಚ್ಚಿಸಲು ದಿನಕ್ಕೊಂದು ಗ್ಲಾಸ್ ಈ ಟೀ ಕುಡಿಯಿರಿ!]]></title>
            <link>https://kannada.asianetnews.com/gallery/health-life/why-you-should-drink-guava-leaf-tea-for-eye-care-agy502z</link>
            <guid isPermaLink="true">https://kannada.asianetnews.com/gallery/health-life/why-you-should-drink-guava-leaf-tea-for-eye-care-agy502z</guid>
            <pubDate>Sat, 15 Aug 2026 19:33:51 +0530</pubDate>
            <description><![CDATA[&lt;p&gt;&lt;strong&gt;Natural Eye Care Tips: &lt;/strong&gt;ಮೊಬೈಲ್ ಮತ್ತು ಕಂಪ್ಯೂಟರ್&zwnj;ಗಳ ಅತಿಯಾದ ಬಳಕೆಯಿಂದ ಇತ್ತೀಚೆಗೆ ಸಣ್ಣ ವಯಸ್ಸಿನಲ್ಲೇ ಕಣ್ಣಿನ ದೃಷ್ಟಿ ಮಂದವಾಗುವುದು ಸಾಮಾನ್ಯವಾಗಿದೆ. ಆದರೆ, ಕಣ್ಣಿನ ದೃಷ್ಟಿಯನ್ನು ನೈಸರ್ಗಿಕವಾಗಿ ಸುಧಾರಿಸಲು ಮತ್ತು ಕನ್ನಡಕದಿಂದ ಮುಕ್ತಿ ಪಡೆಯಲು ಪ್ರಕೃತಿಯಲ್ಲೇ ಒಂದು ಅದ್ಭುತ ಔಷಧಿಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbfbf26088ef2x471dwn6v83,imgname-drinking-guava-leaf-tea-improves-eye-health-1764673161408.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Natural Eye Care Tips: &lt;/strong&gt;ಮೊಬೈಲ್ ಮತ್ತು ಕಂಪ್ಯೂಟರ್&zwnj;ಗಳ ಅತಿಯಾದ ಬಳಕೆಯಿಂದ ಇತ್ತೀಚೆಗೆ ಸಣ್ಣ ವಯಸ್ಸಿನಲ್ಲೇ ಕಣ್ಣಿನ ದೃಷ್ಟಿ ಮಂದವಾಗುವುದು ಸಾಮಾನ್ಯವಾಗಿದೆ. ಆದರೆ, ಕಣ್ಣಿನ ದೃಷ್ಟಿಯನ್ನು ನೈಸರ್ಗಿಕವಾಗಿ ಸುಧಾರಿಸಲು ಮತ್ತು ಕನ್ನಡಕದಿಂದ ಮುಕ್ತಿ ಪಡೆಯಲು ಪ್ರಕೃತಿಯಲ್ಲೇ ಒಂದು ಅದ್ಭುತ ಔಷಧಿಯಿದೆ.&lt;/p&gt;&lt;img&gt;&lt;p&gt;&lt;strong&gt;ಅಡುಗೆಮನೆಯಲ್ಲೇ ಇರುವ ಒಂದು ಸುಲಭ ಮನೆಮದ್ದು&lt;/strong&gt;ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಿಗೂ ಕನ್ನಡಕ ಅನಿವಾರ್ಯವಾಗಿದೆ. ದಿನವಿಡೀ ಮೊಬೈಲ್ ನೋಡುವುದು, ಗಂಟೆಗಟ್ಟಲೆ ಲ್ಯಾಪ್&zwnj;ಟಾಪ್&zwnj; ಮುಂದೆ ಕುಳಿತು ಕೆಲಸ ಮಾಡುವುದು ಅಥವಾ ಟಿವಿ ನೋಡುವುದರಿಂದ ಕಣ್ಣುಗಳ ಮೇಲೆ ಅತಿಯಾದ ಒತ್ತಡ ಬೀಳುತ್ತಿದೆ. ಇದರಿಂದ ಕಣ್ಣು ಉರಿ, ಕಣ್ಣಿನಿಂದ ನೀರು ಬರುವುದು ಮತ್ತು ದೃಷ್ಟಿ ಮಸುಕಾಗುವಂತಹ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ. ಇಂತಹ ಸಮಸ್ಯೆಗಳಿಗೆ ಅಡುಗೆಮನೆಯಲ್ಲೇ ಇರುವ ಒಂದು ಸುಲಭ ಮನೆಮದ್ದು ಅಂದರೆ ಅದು ಪೇರಲೆ ಎಲೆ ಅಥವಾ ಸೀಬೆ ಕಾಯಿ ಎಲೆ (Guava Leaves).&lt;/p&gt;&lt;img&gt;&lt;p&gt;&lt;strong&gt;ಪೇರಲೆ ಎಲೆ ಕಣ್ಣಿಗೆ ಹೇಗೆ ಪ್ರಯೋಜನಕಾರಿ?&lt;/strong&gt;ಪೇರಲೆ ಎಲೆಯಲ್ಲಿ ವಿಟಮಿನ್ ಎ (Vitamin A) ಮತ್ತು ಹೇರಳವಾದ ಆಂಟಿಆಕ್ಸಿಡೆಂಟ್&zwnj;ಗಳು ಅಡಗಿವೆ. ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಅತ್ಯಗತ್ಯವಾದ ಪೋಷಕಾಂಶವಾಗಿದೆ. ಇದು ಕಣ್ಣಿನ ದೃಷ್ಟಿ ಮಂದವಾಗುವುದನ್ನು ತಡೆಯುವುದಲ್ಲದೆ, ರೆಟಿನಾದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ, ಇದರಲ್ಲಿರುವ ಪೋಷಕಾಂಶಗಳು ಕಣ್ಣಿನ ಒತ್ತಡವನ್ನು ಕಡಿಮೆ ಮಾಡಿ, ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತವೆ. ನಿರಂತರವಾಗಿ ಸ್ಕ್ರೀನ್ ನೋಡುವವರಿಗೆ ಕಣ್ಣಿನ ಆಯಾಸವನ್ನು (Eye Strain) ನೀಗಿಸಲು ಪೇರಲೆ ಎಲೆ ರಾಮಬಾಣವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಪೇರಳೆ ಎಲೆಯ ಕಷಾಯ ಅಥವಾ ಟೀ ತಯಾರಿಸುವ ವಿಧಾನ&lt;/strong&gt;*ಕೆಲವು ತಾಜಾ ಮತ್ತು ಪೇರಲೆ ಎಲೆಗಳನ್ನು ತೆಗೆದುಕೊಂಡು ಶುದ್ಧವಾದ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.&lt;/p&gt;&lt;p&gt;*ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಈ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ.&lt;/p&gt;&lt;p&gt;*ನೀರಿನ ಬಣ್ಣ ಬದಲಾದ ನಂತರ ಅದನ್ನು ಸೋಸಿಕೊಳ್ಳಿ.&lt;/p&gt;&lt;p&gt;*ಈ ಕಷಾಯ ಅಥವಾ ಟೀಗೆ ಸ್ವಲ್ಪ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ರಸವನ್ನು ಬೆರೆಸಿ.&lt;/p&gt;&lt;p&gt;*ಈ ಪಾನೀಯವನ್ನು ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಕುಡಿಯುವುದರಿಂದ ಕಣ್ಣಿನ ದೃಷ್ಟಿ ಕ್ರಮೇಣ ಸುಧಾರಿಸುತ್ತದೆ.&lt;/p&gt;&lt;p&gt;*ಈ ಚಹಾ ಕೇವಲ ಕಣ್ಣಿನ ದೃಷ್ಟಿಗಷ್ಟೇ ಅಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದ ಕಲ್ಮಶಗಳನ್ನು ಹೊರಹಾಕಲು ಕೂಡ ಸಹಾಯ ಮಾಡುತ್ತದೆ. ಕನ್ನಡಕದಿಂದ ಮುಕ್ತಿ ಪಡೆಯಲು ಬಯಸುವವರು ನಿಯಮಿತವಾಗಿ ಈ ಪೇರಲೆ ಎಲೆಯ ಟೀಯನ್ನು ರೂಢಿಸಿಕೊಳ್ಳಬಹುದು.&lt;/p&gt;&lt;img&gt;&lt;p&gt;&lt;strong&gt;ಗಮನಿಸಿ (Disclaimer)&lt;/strong&gt;ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ಮನೆಮದ್ದಿನ ಆಧಾರದ ಮೇಲೆ ನೀಡಲಾಗಿದೆ. ಇದು ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಕಣ್ಣಿನ ತೀವ್ರ ಸಮಸ್ಯೆ ಇರುವವರು ಅಥವಾ ಯಾವುದೇ ಮನೆಮದ್ದುಗಳನ್ನು ಅನುಸರಿಸುವ ಮೊದಲು ನೇತ್ರ ತಜ್ಞರನ್ನು (Ophthalmologist) ಅಥವಾ ಕುಟುಂಬ ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯ.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/why-you-should-drink-guava-leaf-tea-for-eye-care-agy502z"/>
        </item>
        <item>
            <title><![CDATA[Gut health tips Kannada: ಈ ತಪ್ಪುಗಳು ಹೊಟ್ಟೆ ಉಬ್ಬರ, ಮಲಬದ್ಧತೆ, ಕರುಳಿನ ಸಮಸ್ಯೆ ಹೆಚ್ಚಿಸುತ್ತವೆ]]></title>
            <link>https://kannada.asianetnews.com/gallery/health-life/5-expert-tips-to-cure-constipation-using-fiber-correctly-cf6xkb3</link>
            <guid isPermaLink="true">https://kannada.asianetnews.com/gallery/health-life/5-expert-tips-to-cure-constipation-using-fiber-correctly-cf6xkb3</guid>
            <pubDate>Tue, 18 Aug 2026 20:43:16 +0530</pubDate>
            <description><![CDATA[&lt;p&gt;Fiber intake mistakes: ಫೈಬರ್ ಯುಕ್ತ ಆಹಾರ ಸೇವಿಸಿದರೂ ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ಕಾಡುತ್ತಿದೆಯೇ? ಹಾಗಿದ್ದರೆ ನೀವು ಸೇವಿಸುವ ಕ್ರಮದಲ್ಲಿ ತಪ್ಪಾಗಿರಬಹುದು. ಪ್ರಸಿದ್ಧ ವೈದ್ಯ ಡಾ. ಸೌರಭ್ ಸೇಠಿ ಅವರು ವಿವರಿಸಿರುವ ಫೈಬರ್ ಸೇವನೆಯ 5 ಪ್ರಮುಖ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4mgz8xqrn9nxe7pbh31md84,imgname-mixcollage-08-sep-2025-04-51-pm-5204-1757330514871.jpg" type="image/jpeg" height="390" width="690"/>
            <content:encoded><![CDATA[&lt;p&gt;Fiber intake mistakes: ಫೈಬರ್ ಯುಕ್ತ ಆಹಾರ ಸೇವಿಸಿದರೂ ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ಕಾಡುತ್ತಿದೆಯೇ? ಹಾಗಿದ್ದರೆ ನೀವು ಸೇವಿಸುವ ಕ್ರಮದಲ್ಲಿ ತಪ್ಪಾಗಿರಬಹುದು. ಪ್ರಸಿದ್ಧ ವೈದ್ಯ ಡಾ. ಸೌರಭ್ ಸೇಠಿ ಅವರು ವಿವರಿಸಿರುವ ಫೈಬರ್ ಸೇವನೆಯ 5 ಪ್ರಮುಖ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಮಲಬದ್ಧತೆಯಿಂದ ದೂರವಿರಲು ಈ ಕೆಳಗಿನ ಅಂಶ ಗಮನಿಸಿ&lt;/strong&gt;ಉತ್ತಮ ಜೀರ್ಣಕ್ರಿಯೆಗೆ ನಾರಿನಂಶವಿರುವ (Fiber) ಆಹಾರ ಸೇವನೆ ಅತ್ಯಗತ್ಯ. ಆದರೆ, ಫೈಬರ್ ಯುಕ್ತ ಆಹಾರ ಸೇವಿಸುವಾಗ ಮಾಡುವ ಕೆಲವು ತಪ್ಪುಗಳು ಲಾಭಕ್ಕಿಂತ ಹೆಚ್ಚಾಗಿ ಹಾನಿಯನ್ನುಂಟುಮಾಡುತ್ತವೆ. ಈ ಬಗ್ಗೆ ಪ್ರಸಿದ್ಧ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಠಿ ಅವರು ಕೆಲವು ಮಹತ್ವದ ವೈಜ್ಞಾನಿಕ ಸತ್ಯಗಳನ್ನು ಹಂಚಿಕೊಂಡಿದ್ದಾರೆ. ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಮಲಬದ್ಧತೆಯಿಂದ ದೂರವಿರಲು ನೀವು ಈ ಕೆಳಗಿನ ಅಂಶಗಳನ್ನು ಗಮನಿಸಬೇಕು.&lt;/p&gt;&lt;img&gt;&lt;p&gt;&lt;strong&gt;ಫೈಬರ್ ಜೊತೆಗೆ ನೀರಿನ ಕೊರತೆ&lt;/strong&gt;ನಾರಿನಂಶವಿರುವ ಆಹಾರ ಸೇವಿಸುವಾಗ ನೀವು ಸಾಕಷ್ಟು ಪ್ರಮಾಣದ ದ್ರವ ಪದಾರ್ಥ (ನೀರು) ಸೇವಿಸದಿದ್ದರೆ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಫೈಬರ್ ಕರುಳಿನ ಮೂಲಕ ಹಾದುಹೋಗುವಾಗ ನೀರನ್ನು ಹೀರಿಕೊಳ್ಳುತ್ತದೆ. ದೇಹದಲ್ಲಿ ಸಾಕಷ್ಟು ನೀರಿಲ್ಲದಿದ್ದರೆ ಫೈಬರ್ ಕರುಳಿನಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ, ಇದು ಜೀರ್ಣಕ್ರಿಯೆಗೆ ಅಡ್ಡಿಪಡಿಸಿ ಮಲಬದ್ಧತೆಗೆ ಕಾರಣವಾಗುತ್ತದೆ ಎಂದು ಡಾ. ಸೌರಭ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಅತೀ ವೇಗವಾಗಿ ಫೈಬರ್ ಪ್ರಮಾಣ ಹೆಚ್ಚಿಸುವುದು&lt;/strong&gt;ಒಂದೇ ರಾತ್ರಿಯಲ್ಲಿ ಅಥವಾ ಅತೀ ವೇಗವಾಗಿ ಆಹಾರದಲ್ಲಿ ಫೈಬರ್ ಪ್ರಮಾಣವನ್ನು ಹೆಚ್ಚಿಸುವುದು ಅಪಾಯಕಾರಿ. ನಿಮ್ಮ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ಈ ಬದಲಾವಣೆಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಆದ್ದರಿಂದ, ದಿನಕ್ಕೆ 5 ಗ್ರಾಂನಷ್ಟು ಫೈಬರ್ ಅನ್ನು ಮಾತ್ರ ಹೆಚ್ಚಿಸುತ್ತಾ, ನಿಧಾನವಾಗಿ 15 ಗ್ರಾಂನಿಂದ 35 ಗ್ರಾಂ ವರೆಗೆ ತಲುಪಿಸುವುದು ಸರಿಯಾದ ಕ್ರಮ.&lt;/p&gt;&lt;img&gt;&lt;p&gt;&lt;strong&gt;ಒಂದೇ ಬಾರಿಗೆ ಅತಿಯಾದ ಸೇವನೆ ಬೇಡ&lt;/strong&gt;ದಿನಕ್ಕೆ ಬೇಕಾದ ಫೈಬರ್ ಪ್ರಮಾಣವನ್ನು ದಿನವಿಡೀ ವಿವಿಧ ಅವಧಿಗಳಲ್ಲಿ ಹಂಚಿ ಸೇವಿಸಬೇಕು. ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದ ಫೈಬರ್ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಕರುಳಿಗೆ ಏಕಕಾಲಕ್ಕೆ ದೊಡ್ಡ ಪ್ರಮಾಣದ ಆಹಾರ ನೀಡುವ ಬದಲು, ಸ್ವಲ್ಪ ಸ್ವಲ್ಪವಾಗಿ ನೀಡುವುದು ಜೀರ್ಣಕ್ರಿಯೆಗೆ ಸಹಕಾರಿ.&lt;/p&gt;&lt;img&gt;&lt;p&gt;&lt;strong&gt;ಫೈಬರ್&zwnj;ನ ವಿಧಗಳ ಬಗ್ಗೆ ತಿಳಿವಳಿಕೆ ಇರಲಿ&lt;/strong&gt;ಎಲ್ಲಾ ಫೈಬರ್&zwnj;ಗಳು ಒಂದೇ ರೀತಿ ಇರುವುದಿಲ್ಲ. ಅವುಗಳಲ್ಲಿ ಎರಡು ವಿಧಗಳಿವೆ&lt;/p&gt;&lt;p&gt;&lt;strong&gt;ಕರಗುವ ಫೈಬರ್ (Soluble Fiber): &lt;/strong&gt;ಇದು ಓಟ್ಸ್ ಮತ್ತು ಸೈಲಿಯಮ್&zwnj;ನಂತಹ ಪದಾರ್ಥಗಳಲ್ಲಿ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆಗೆ ಹಾಗೂ ಅತಿಸಾರ ತಡೆಯಲು ಸಹಕಾರಿ.&lt;/p&gt;&lt;p&gt;&lt;strong&gt;ಕರಗದ ಫೈಬರ್ (Insoluble Fiber): &lt;/strong&gt;ಇದು ಗೋಧಿಯ ಚೋಕರ್ ಮತ್ತು ತರಕಾರಿಗಳ ಸಿಪ್ಪೆಗಳಲ್ಲಿ ಇರುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸಲು ಮತ್ತು ಹೊಟ್ಟೆ ತುಂಬಿದ ಅನುಭವ ನೀಡಲು ಹೆಚ್ಚು ಪ್ರಯೋಜನಕಾರಿ.&lt;/p&gt;&lt;img&gt;&lt;p&gt;&lt;strong&gt;ದೇಹದ ಸಂಕೇತಗಳನ್ನು ನಿರ್ಲಕ್ಷಿಸಬೇಡಿ&lt;/strong&gt;ಫೈಬರ್ ಸೇವನೆಯ ಪ್ರಮಾಣವನ್ನು ಬದಲಿಸಿದ ನಂತರ ನಿಮ್ಮ ಜೀರ್ಣಕ್ರಿಯೆ ಸಮಸ್ಯೆಗಳು ಇನ್ನು ಹೆಚ್ಚಾಗುತ್ತಿದ್ದರೆ, ಅದೇ ಆಹಾರ ಪದ್ಧತಿಯನ್ನು ಮುಂದುವರಿಸಬೇಡಿ. ಪ್ರತಿಯೊಬ್ಬರ ದೇಹದ ಅವಶ್ಯಕತೆಗಳು ವಿಭಿನ್ನವಾಗಿರುತ್ತವೆ. ಆದ್ದರಿಂದ ನಿಮ್ಮ ದೇಹದ ಲಕ್ಷಣಗಳನ್ನು ಗಮನಿಸಿ, ಹಂತಹಂತವಾಗಿ ಬದಲಾವಣೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಹೊಸ ಬದಲಾವಣೆಗೆ ಸರಿಯಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/5-expert-tips-to-cure-constipation-using-fiber-correctly-cf6xkb3"/>
        </item>
        <item>
            <title><![CDATA[Organ Donation Explain: ಸತ್ತ ಬಳಿಕವೂ ಬದುಕಬೇಕಿದ್ದರೆ ಅಂಗಾಂಗ ದಾನ ಮಾಡಿ!]]></title>
            <link>https://kannada.asianetnews.com/health-life/organ-donation-explain-donate-your-organs-if-you-wish-to-live-on-even-after-death-rav/articleshow-i17wm3o</link>
            <guid isPermaLink="true">https://kannada.asianetnews.com/health-life/organ-donation-explain-donate-your-organs-if-you-wish-to-live-on-even-after-death-rav/articleshow-i17wm3o</guid>
            <pubDate>Thu, 13 Aug 2026 07:45:05 +0530</pubDate>
            <description><![CDATA[&lt;p&gt;ಭಾರತದಲ್ಲಿ ಲಕ್ಷಾಂತರ ಜನರಿಗೆ ಅಂಗಾಂಗಗಳ ಅವಶ್ಯಕತೆಯಿದ್ದರೂ, ದಾನಿಗಳ ಕೊರತೆಯಿಂದಾಗಿ ಜೀವಹಾನಿಯಾಗುತ್ತಿದೆ. ಮೆದುಳು ನಿಷ್ಕ್ರಿಯಗೊಂಡ (ಬ್ರೈನ್ ಡೆತ್) ವ್ಯಕ್ತಿಗಳಿಂದ ಅಂಗಾಂಗ ದಾನ, ಅದರ ಕಾನೂನು ಪ್ರಕ್ರಿಯೆ ಮತ್ತು ಮಹತ್ವವನ್ನು ಈ ಲೇಖನ ವಿವರಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzwe6mxbwds0ma3rcq91y138,imgname-----------------------2026-08-13t073945.142-1786587075499.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;-ಡಾ। ಮುರಲೀ ಮೋಹನ್ ಚೂಂತಾರು&lt;/strong&gt;&lt;/p&gt;&lt;p&gt;ಆಗಸ್ಟ್ 13 ಅನ್ನು ವಿಶ್ವದಾದ್ಯಂತ &lsquo;ಆಂಗಾಂಗ ದಾನಿಗಳ&rsquo; ಎಂದು ಆಚರಿಸಲಾಗುತ್ತಿದೆ. ಆಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ವಿಪರ್ಯಾಸದ ವಿಷಯವೆಂದರೆ 140 ಕೋಟಿಗೂ ಜಾಸ್ತಿ ಜನಸಂಖ್ಯೆ ಇರುವ ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಾಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯ ಇದೆ. ನಮ್ಮ ಬೃಹತ್ ಭಾರತದಲ್ಲಿ ಬಹಳಷ್ಟು ಅಂಗಾಂಗಗಳು ಇವೆಯಾದರೂ, ದಾನಿಗಳ ಕೊರತೆ ಕಾಡುತ್ತಿದೆ. ಕೇವಲ ಸಾವಿರಗಳ ಸಂಖ್ಯೆಯಲ್ಲಿರುವ ಅಂಗಾಂಗ ದಾನಿಗಳಿಂದಾಗಿ ಲಕ್ಷಾಂತರ ಮಂದಿ ಜೀವ ನಷ್ಟವಾಗುತ್ತಿದೆ. ಸಾಕಷ್ಟು ಮಾಹಿತಿಯ ಕೊರತೆ, ಕಾನೂನಿನ ಅಡಚಣೆ ಮತ್ತು ಸೂಕ್ತ ಮಾರ್ಗದರ್ಶನ ಲಭ್ಯವಿಲ್ಲದ ಕಾರಣ ಬದುಕಿ ಬಾಳಬೇಕಾದ ಜೀವಗಳು ಕಮರಿ ಹೋಗುತ್ತಿವೆ. ಉದಾಹರಣೆಯೆಂದರೆ, ವಾರ್ಷಿಕ ಸರಾಸರಿ 2.5 ಲಕ್ಷ ಮಂದಿಗೆ ಭಾರತದಲ್ಲಿ ಕಿಡ್ನಿ ಕಸಿಯ ಅವಶ್ಯಕತೆ ಇದೆ. ಅದರೆ ಕೇವಲ 4ರಿಂದ 5 ಸಾವಿರ ಮಂದಿಗೆ ಮಾತ್ರ ದಾನಿಗಳು ಸಿಗುತ್ತಾರೆ. ಈ ನಿಟ್ಟಿನಲ್ಲಿ ಅಂಗಾಂಗ ದಾನಗಳ ಬಗ್ಗೆ ಜಾಗೃತಿ ನೀಡುವ ಮಹತ್ಕಾರ್ಯ ಆಗಲೇಬೇಕು. ಸತ್ತ ಮೇಲೂ ಬದುಕುವುದಲ್ಲಿಯೇ ನಿಜವಾದ ಸಾರ್ಥಕತೆ ಇದೆ.&lt;/p&gt;&lt;h2&gt;ಏನಿದು ಅಂಗಾಂಗ ದಾನ?:ಅಂಗಾಂಗ ದಾನಗಳಲ್ಲಿ ಎರಡು ವಿಧಗಳಿವೆ.&lt;/h2&gt;&lt;p&gt;&lt;strong&gt;1.ಜೀವಂತ ವ್ಯಕ್ತಿಗಳು ಮಾಡುವ ದಾನ:&lt;/strong&gt;&lt;/p&gt;&lt;p&gt;ವ್ಯಕ್ತಿಯ ದೇಹದಲ್ಲಿ ಮರುಸೃಷ್ಟಿಯಾಗುವ ಅಂಗಾಂಗಗಳನ್ನು, ಜೀವಕೋಶಗಳನ್ನು ಮತ್ತು ದ್ರವ್ಯಗಳನ್ನು ದಾನ ಮಾಡುವುದು.&lt;/p&gt;&lt;p&gt;ಉದಾಹರಣೆಗೆ:&lt;/p&gt;&lt;p&gt;ರಕ್ತದಾನ, ವೀರ್ಯದಾನ, ಚರ್ಮದಾನ, ಅಸ್ಥಿಮಜ್ಜೆ ದಾನ ಇತ್ಯಾದಿ. ಇನ್ನೊಂದು ವಿಧವೆಂದರೆ ದೇಹದ ಯಾವುದಾದರೂ ಅಂಗಗಳನ್ನು ಅಥವಾ ಅದರ ಭಾಗಗಳನ್ನು ಇನ್ನೊಬ್ಬನಿಗೆ ದಾನ ಮಾಡುವುದು. ಉದಾಹರಣೆಗೆ ಎರಡು ಕಿಡ್ನಿಗಳಲ್ಲಿ ಒಂದನ್ನು ನೀಡುವುದು, ಯಕೃತಿನ ಒಂದು ಭಾಗ ಅಥವಾ ಸಣ್ಣ ಕರುಳಿನ ಒಂದು ಭಾಗ ಇತ್ಯಾದಿ.&lt;/p&gt;&lt;p&gt;&lt;strong&gt;2. ಎರಡನೇಯ ದಾನ:&lt;/strong&gt;&lt;/p&gt;&lt;p&gt;ಮೃತ ಅಥವಾ ಮೆದುಳು ನಿಷ್ಕ್ರೀಯಗೊಂಡ (Brain Death) ವ್ಯಕ್ತಿಗಳ ಅಂಗಾಂಗವನ್ನು ಇನ್ನೊಂದು ರೋಗಿಗೆ ನೀಡುವುದು ಅಥವಾ ಜೋಡಿಸುವುದು.&lt;/p&gt;&lt;p&gt;ಉದಾ:&lt;/p&gt;&lt;p&gt;ಹೃದಯ, ಶ್ವಾಸಕೋಶ, ಪಿತ್ತ ಜನಕಾಂಗ, ಸಣ್ಣ ಕರುಳು, ಮೋದೋಜಿರಕಾಂಗ, ಕಾರ್ನಿಯಾ (ಅಶ್ವಪಟಲ) ಮೂಳೆಗಳು, ಹೃದಯದ ಕವಾಟಗಳು ಇತ್ಯಾದಿ.&lt;/p&gt;&lt;p&gt;ಒಬ್ಬ ಮೃತ ವ್ಯಕ್ತಿಯಿಂದ ಕನಿಷ್ಠ 8 ಜೀವಗಳನ್ನು ಉಳಿಸಬಹುದು. ಅಂಕಿ ಅಂಶಗಳ ಪ್ರಕಾರ, ನಿಮಿಷಕ್ಕೊಬ್ಬರು ಸಾಯುತ್ತಾರೆ. ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡಿದಲ್ಲಿ ನಿಮಿಷಕ್ಕೆ 8 ಜೀವಗಳು ಪುನರ್ಜನ್ಮ ಪಡೆಯುವ ಅವಕಾಶವಿದೆ.&lt;/p&gt;&lt;p&gt;&lt;strong&gt;ಏನಿದು ಬ್ರೈನ್ ಡೆತ್?:&lt;/strong&gt;&lt;/p&gt;&lt;p&gt;ಅಫಘಾತದಿಂದ ತಲೆಗೆ ಏಟು ಬಿದ್ದು ಅಥವಾ ಇನ್ನಾವುದೇ ಕಾರಣದಿಂದ ಮೆದುಳಿಗೆ ಘಾಸಿಯಾಗಿ ಸಂಪೂರ್ಣ ರಕ್ತಸಂಚಾರ ನಿಂತಿರುತ್ತದೆ. ಆಮ್ಲಜನಕದ ಪೂರೈಕೆಯೂ ಸ್ಥಗಿತವಾಗಿರುತ್ತದೆ. ಆದರೆ ಹೃದಯ, ಶ್ವಾಸಕೋಶ ತನ್ನ ಪಾಡಿಗೆ ತಾನು ಕಾರ್ಯ ಮಾಡುತ್ತಿರುತ್ತದೆ. ವ್ಯಕ್ತಿಯನ್ನು ತೀವ್ರ ನಿಗಾ ವಿಭಾಗದಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯ ಮುಖಾಂತರ, ಉಸಿರಾಟಕ್ಕೆ ಬೇಕಾದ ಆಮ್ಲಜನಕದ ಪೂರೈಕೆ ನಡೆಯುತ್ತಿರುತ್ತದೆ. ಹೃದಯ, ಶ್ವಾಸಕೋಶ, ಪಿತ್ತಜನಾಕಾಂಗ, ಮೂತ್ರಪಿಂಡಗಳಿಗೆ ಆಮ್ಲಜನಕ ಸರಬರಾಜು ಆಗುತ್ತಲೇ ಇರುತ್ತದೆ. ವ್ಯಕ್ತಿ ಮಾತ್ರ ಬದುಕಿದ್ದು, ಸತ್ತಿರುತ್ತಾನೆ. ವ್ಶೆದ್ಯಕಿಯ ಭಾಷೆಯಲ್ಲಿ ಇದನ್ನು ಬ್ರೈನ್ ಡೆತ್ ಅಥವಾ ಮೆದುಳು ನಿಷ್ಕ್ರಿಯತೆ ಎಂದು ಹೇಳುತ್ತಾರೆ. ಇಂತಹ ವ್ಯಕ್ತಿಯ ದೇಹದಿಂದ ಅಗತ್ಯ ರೋಗಿಗಳಿಗೆ ಅಂಗಾಂಗಗಳನ್ನು ತೆಗೆದು, ವ್ಯಕ್ತಿಯ ಬಂಧುಗಳ ಸಮ್ಮತಿಯೊಂದಿಗೆ ಜೋಡಿಸಬಹುದು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳು ಕೃತಕ ಉಸಿರಾಟದ ವ್ಯವಸ್ಥೆ ತೆಗೆದೊಡನೆಯೋ ಸಾಯುತ್ತಾರೆ. ಅಂಗಾಂಗ ದಾನ ಮಾಡಿದಲ್ಲಿ ಸತ್ತು ಹುತಾತ್ಮರಾಗುವುದರ ಜೊತೆಗೆ ಮತ್ತೊಬ್ಬ ವ್ಯಕ್ತಿಯಲ್ಲಿ ಮರುಜನ್ಮ ಪಡೆಯುತ್ತಾರೆ ಮತ್ತು ಸಾವಲ್ಲೂ ಸಾರ್ಥಕತೆಯನ್ನು ಪಡೆಯುತ್ತಾರೆ. ವೈದ್ಯರು ಲಿಖಿತ ರೂಪದಲ್ಲಿ ಬ್ರೈನ್ ಡೆತ್ ಎಂದು ವರದಿ ನೀಡಿದ ಬಳಿಕವೇ, ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಅನುಸರಿಸಿ ಅಂಗಾಂಗ ದಾನಕ್ಕೆ ಸಮ್ಮತಿ ನೀಡಲಾಗುತ್ತದೆ. ಈ ರೀತಿ ದಾನಿಗಳಿಂದ ಪಡೆದ ಹೃದಯವನ್ನು ನಾಲ್ಕೈದು ಗಂಟೆಗಳ ಒಳಗೆ, ಹತ್ತು ಹನ್ನೆರಡು ಗಂಟೆಗಳ ಒಳಗೆ ಪಿತ್ತಕೋಶಜನಾಕಾಂಗ ಹಾಗೂ 24 ಗಂಟೆಗಳ ಒಳಗೆ ಮೂತ್ರಪಿಂಡವನ್ನು ಅಗತ್ಯ ರೋಗಿಗಳಿಗೆ ಜೋಡಿಸಲಾಗುತ್ತದೆ. ಇದೇ ರೀತಿ ಚರ್ಮ, ಹೃದಯದ ಕವಾಟಗಳು, ಮೂಳೆಗಳನ್ನು ದಾನ ಮಾಡಲಾಗುತ್ತದೆ. ಸಹಜವಾಗಿ ಸತ್ತ ವ್ಯಕ್ತಿಗಳಿಂದ ನೇತ್ರದಾನವನ್ನು 4ರಿಂದ 5 ಗಂಟೆ ಒಳಗೆ ಬೇರೆಯವರಿಗೆ ಜೋಡಿಸಲಾಗುತ್ತದೆ. ಒಟ್ಟಿನಲ್ಲಿ ಸತ್ತು ಮಣ್ಣಾಗುವ ಹಲವಾರು ಅಂಗಾಂಗಗಳು ಮತ್ತೆ ಬೇರೊಬ್ಬ ರೋಗಿಯಲ್ಲಿ ಬದುಕಿ ಬಾಳುತ್ತವೆ. ಒಟ್ಟಿನಲ್ಲಿ ರಕ್ತದಾನ, ದೇಹದಾನ, ನೇತ್ರದಾನದಂತೆಯೇ ಅಂಗಾಂಗ ದಾನವೂ ಬಹಳ ಪವಿತ್ರವಾದ ದಾನವಾಗಿರುತ್ತದೆ.&lt;/p&gt;&lt;p&gt;&lt;strong&gt;ಯಾರು ದಾನ ಮಾಡಬಹುದು?:&lt;/strong&gt;&lt;/p&gt;&lt;p&gt;ಅಂಗಾಂಗ ದಾನಕ್ಕೆ ಯಾವುದೇ ರೀತಿಯ ಚೌಕಟ್ಟಿಲ್ಲ. ಸಣ್ಣ ಮಗುವಿನಿಂದ ಹಿಡಿದು ವೃದ್ಧರೂ ಕೂಡಾ ಅಂಗಾಂಗ ದಾನ ಮಾಡಬಹುದು. ಸ್ವ ಇಚ್ಛೆಯಿಂದ ಯಾರು ಬೇಕಾದರೂ ಅಂಗಾಂಗ ದಾನ ಮಾಡಬಹುದು. ಸಂಪೂರ್ಣವಾಗಿ ಅಂಗಾಂಗಗಳಿಲ್ಲದ ದೇಹಕ್ಕೆ ಅಂತ್ಯಕ್ರಿಯೆ ಮಾಡಿದಲ್ಲಿ ಪರಲೋಕ ಪ್ರಾಪ್ತಿ ಆಗುವುದಿಲ್ಲ, ಮೋಕ್ಷ ಸಿಗುವುದಿಲ್ಲ ಎಂಬ ಮೂಢನಂಬಿಕೆಯಿಂದಾಗಿ ಅಂಗಾಂಗ ದಾನಿಗಳ ಸಂಖ್ಯೆಯ ಕೊರತೆ ಬಾಧಿಸುತ್ತಿದೆ. ಅದೇ ರೀತಿ ಸರಿಯಾದ ನಿಯಂತ್ರಣ ಮತ್ತು ಸೂಕ್ತ ಕಾನೂನಿನ ಚೌಕಟ್ಟು ಇಲ್ಲದ ಕಾರಣ 80 ಮತ್ತು 90ರ ದಶಕದಲ್ಲಿ ಅಂಗಾಂಗ ಮಾರಾಟ ದಂದೆ ವ್ಯಾಪಕವಾಗಿ ಹುಟ್ಟಿಕೊಂಡಿತ್ತು.&lt;/p&gt;&lt;p&gt;ಈ ನಿಟ್ಟಿನಲ್ಲಿ ಸಾರ್ವಜನಿಕ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸ್ವಯಂ ಸೇವಕ ಸಂಘಗಳು, ಸಾರ್ವಜನಿಕರನ್ನು ಉತ್ತೇಜಿಸುವ ಕಾರ್ಯ ಮಾಡಬೇಕು ಮತ್ತು ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ತುರ್ತು ಅಗತ್ಯ ಇದೆ. ಅಂಗಾಂಗ ದಾನಿಗಳು ಮತ್ತು ದಾನ ಪಡೆಯುವ ವ್ಯಕ್ತಿಗಳ ನಡುವಿನ ಅಂತರ ಕಡಿಮೆ ಮಾಡುವ ದಾನಿಗಳ ಬ್ಯಾಂಕ್ ಸ್ಥಾಪಿಸುವ ತುರ್ತು ಅವಶ್ಯಕತೆ ಇದೆ.&lt;/p&gt;&lt;p&gt;&lt;strong&gt;ಕಾನೂನು ಏನನ್ನುತ್ತದೆ?:&lt;/strong&gt;&lt;/p&gt;&lt;p&gt;ಭಾರತದಲ್ಲಿ 1994ರಲ್ಲಿ ಅಂಗಾಂಗ ದಾನವನ್ನು ಸರಕಾರ ಕಾನೂನು ಬದ್ಧಗೊಳಿಸಿದೆ. 1967ರಲ್ಲಿ ಮೊದಲ ಬಾರಿ ಭಾರತದಲ್ಲಿ ಮೂತ್ರಪಿಂಡದ ಕಸಿ ಮಾಡಲಾಯಿತು ಮತ್ತು 1994ರಲ್ಲಿ ಬದಲಿ ಹೃದಯವನ್ನು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಜೋಡಿಸಲಾಯಿತು ಮತ್ತು 1995ರಲ್ಲಿ ಮದ್ರಾಸಿನ ಆಸ್ಪತ್ರೆಯಲ್ಲಿ ಅಂಗಾಂಗ ಬದಲಿ ಜೋಡಣೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಭಾರತದಾದ್ಯಂತ ಅಂಗಾಂಗ ಜೋಡಿಸುವ ನೂರಾರು ಸುಸಜ್ಜಿತ ಆಸ್ಪತ್ರೆಗಳಿವೆ. ಆದರೆ ದುರಾದೃಷ್ಟವೆಂದರೆ ಅಂಗಾಂಗ ದಾನಿಗಳ ತೀವ್ರ ಕೊರತೆಯಿದೆ. ಅಂಕಿಅಂಶಗಳ ಪ್ರಕಾರ 2022ರಲ್ಲಿ ಸುಮಾರು 2 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು ಮತ್ತು ಇದರಲ್ಲಿ ಕೇವಲ ಒಂದು ಶೇಕಡಾ ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದಾರೆ ಎಂಬುದು ಬಹಳ ಖೇದಕರ ವಿಚಾರ. ಅಂದಾಜಿನ ಪ್ರಕಾರ ಭಾರತದಲ್ಲಿ ವರ್ಷಕ್ಕೆ 2 ಲಕ್ಷ ಮಂದಿಗೆ ಕಿಡ್ನಿಯ ಅಗತ್ಯವಿದೆ. ಆದರೆ ಕೇವಲ 6000 ರಿಂದ 7000 ಮಂದಿಗೆ ಮಾತ್ರ ಕಿಡ್ನಿ ಸಿಗುತ್ತದೆ. 50 ರಿಂದ 55 ಮಂದಿಗೆ ಹೃದಯದ ಅಗತ್ಯವಿದೆ ಆದರೆ ಕೇವಲ ಹತ್ತಿಪ್ಪತ್ತು ಮಂದಿಗೆ ಹೃದಯ ದೊರಕುತ್ತಿದೆ. 50,000 ಮಂದಿಗೆ ಯಕೃತ್ತಿನ ಅವಶ್ಯಕತೆ ಇದ್ದು ಕೇವಲ 800 ರಿಂದ 1000 ಮಂದಿಗೆ ಮಾತ್ರ ಈ ಭಾಗ್ಯ ದೊರಕುತ್ತಿದೆ. ಸಂತೋಷದ ವಿಚಾರವೆಂದರೆ ನೇತ್ರದಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.&lt;/p&gt;&lt;p&gt;&lt;strong&gt;ನಾವೇನು ಮಾಡಬೇಕು?:&lt;/strong&gt;&lt;/p&gt;&lt;p&gt;ನಮ್ಮ ಬಂಧುಗಳು, ಸ್ನೇಹಿತರು ಅಫಘಾತದಲ್ಲಿ ಮೃತ ಪಟ್ಟಲ್ಲಿ ಅವರನ್ನು ತಿಳಿಹೇಳಿ ಅಂಗಾಂಗ ದಾನಕ್ಕೆ ಒಪ್ಪಿಸಬೇಕು. ನಾವು ಕೂಡಾ ದೇಹದಾನ ಮತ್ತು ನೇತ್ರದಾನಕ್ಕೆ ಒಪ್ಪಿಗೆ ನೀಡಬೇಕು. ಆಕಸ್ಮಿಕವಾಗಿ ಸಾವು ಬಂದಲ್ಲಿ ಅಂಗಾಂಗ ದಾನಕ್ಕೂ ಮೊದಲೇ ಒಪ್ಪಿಗೆ ನೀಡಿದಲ್ಲಿ ಮತ್ತಷ್ಟು ಜೀವಗಳು ಉಳಿಯಬಹುದು. ಇನ್ನೇಕೆ ತಡಮಾಡುತ್ತೀರಿ ಗೆಳೆಯರೇ, ತಮ್ಮ ಹೆಸರನ್ನು ಸ್ಥಳೀಯ ನೇತ್ರದಾಮಗಳಲ್ಲಿ, ಮೆಡಿಕಲ್ ಕಾಲೇಜುಗಳಲ್ಲಿ ನೋಂದಾಯಿಸಿ ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನಕ್ಕೆ ಸಿದ್ಧರಾಗಿ. ಸತ್ತ ಬಳಿಕವೂ ಬದುಕುವುದರಲ್ಲಿಯೇ ಸಾರ್ಥಕತೆ ಅಡಗಿದೆ. ನಾವು ಸತ್ತ ಬಳಿಕವೂ ನಮ್ಮ ಕಣ್ಣುಗಳಿಂದ ಇನ್ನೊಬ್ಬರು ನೋಡುವುದಕ್ಕಿಂತ ದೊಡ್ಡ ಭಾಗ್ಯ ಇನ್ಯಾವುದೂ ಇಲ್ಲ. ನಮ್ಮ ಸಾವಿನ ಬಳಿಕವೂ ನಮ್ಮ ಹೃದಯ ಇನ್ನೊಬ್ಬರ ದೇಹದಲ್ಲಿ ಲಬ್-ಡಬ್ ಎಂದು ಬಡಿದು ಕೊಳ್ಳುತ್ತಲೇ ಇರುವುದರಿಂದ ಸಿಗುವ ಆತ್ಮತೃಪ್ತಿ, ನೆಮ್ಮದಿ ಮತ್ತು ಶಾಂತಿ ಎಷ್ಟೇ ಹಣ ನೀಡಿದರೂ ನಮ್ಮ ಕುಟುಂಬ ವರ್ಗಕ್ಕೆ ದೊರಕಲಿಕ್ಕಿಲ್ಲ. ನಾವು ಸತ್ತ ಬಳಿಕ ನಮ್ಮ ದೇಹ ಮಣ್ಣಲ್ಲಿ ಮಣ್ಣಾಗಿ ಹೋಗುವುದಕ್ಕಿಂತ ಅಂಗಾಂಗಗಳನ್ನು ದಾನ ಮಾಡಿದ್ದಲ್ಲಿ ನಾಲ್ಕಾರು ಜೀವಗಳು ಬದುಕಿ ಬಾಳಬಹುದು. ಜಾತಿ, ಮತ, ಕೋಮು ದ್ವೇಷ ದಳ್ಳುರಿಗಳಿಂದ ಬಾಳುತ್ತಿರುವ ಈ ಕಾಲಘಟ್ಟದಲ್ಲಿ ಅಂಗಾಂಗ ದಾನದ ಶಪಥ ಮಾಡಿ ಸಾವನ್ನೇ ಗೆಲ್ಲೋಣ, ಸತ್ತ ಬಳಿಕವೂ ಮತ್ತೆ ಬದುಕೋಣ, ಮಾನವತೆಯನ್ನು ಎತ್ತಿ ಹಿಡಿಯೋಣ.&lt;/p&gt;]]></content:encoded>
            <category>health-life</category>
            <dc:creator>Kannadaprabha News</dc:creator>
            <atom:link href="https://kannada.asianetnews.com/health-life/organ-donation-explain-donate-your-organs-if-you-wish-to-live-on-even-after-death-rav/articleshow-i17wm3o"/>
        </item>
        <item>
            <title><![CDATA[16 ವರ್ಷ, 275 ಕೆಜಿ! ಸ್ಪೆಷಲ್ ಸರ್ಜರಿ ಮಾಡಿ ಬಾಲಕನಿಗೆ ಮರುಜೀವ ಕೊಟ್ಟ ದೆಹಲಿ ವೈದ್ಯರು]]></title>
            <link>https://kannada.asianetnews.com/health-life/delhi-doctors-saved-the-life-of-a-16-year-old-boy-weighing-275-kg-by-performing-bariatric-surgery/articleshow-i8emrwi</link>
            <guid isPermaLink="true">https://kannada.asianetnews.com/health-life/delhi-doctors-saved-the-life-of-a-16-year-old-boy-weighing-275-kg-by-performing-bariatric-surgery/articleshow-i8emrwi</guid>
            <pubDate>Tue, 18 Aug 2026 16:56:05 +0530</pubDate>
            <description><![CDATA[&lt;p&gt;ದೆಹಲಿಯ ಸಿರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಬರೋಬ್ಬರಿ 275 ಕೆಜಿ ತೂಕವಿದ್ದ 16 ವರ್ಷದ ಬಾಲಕನಿಗೆ 'ಬಾರಿಯಾಟ್ರಿಕ್ ಸರ್ಜರಿ' ಮಾಡುವ ಮೂಲಕ ಆತನ ಜೀವನದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0a9xcw16jdk1cq08xrkw4w1,imgname-bariatric-surgery-1787052340096.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ದೆಹಲಿಯ ಸಿರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಬರೋಬ್ಬರಿ 275 ಕೆಜಿ ತೂಕವಿದ್ದ 16 ವರ್ಷದ ಬಾಲಕನಿಗೆ 'ಬಾರಿಯಾಟ್ರಿಕ್ ಸರ್ಜರಿ' ಮಾಡುವ ಮೂಲಕ ಆತನ ಜೀವನದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.&lt;/p&gt;&lt;p&gt;ಈ ಬಾಲಕನ ಸ್ಥಿತಿ ಎಷ್ಟೊಂದು ಗಂಭೀರವಾಗಿತ್ತೆಂದರೆ.. ಅತಿಯಾದ ಬೊಜ್ಜಿನ ಕಾರಣದಿಂದಾಗಿ ಆತನಿಗೆ ಸಾಮಾನ್ಯ ಕಾರಿನೊಳಗೆ ಕೂರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆತನನ್ನು ಆಸ್ಪತ್ರೆಗೆ ಕರೆತರಲು 'ಮೆಟಾಡೋರ್' ವಾಹನ ಬಳಸಲಾಗಿತ್ತು. ಆಸ್ಪತ್ರೆಗೆ ದಾಖಲಾಗುವಾಗ ಬಾಲಕ ತೀವ್ರ ಉಸಿರಾಟದ ತೊಂದರೆ ಸ್ಲೀಪ್ ಅಪ್ನಿಯಾ (ನಿದ್ರೆಯಲ್ಲಿ ಉಸಿರು ಕಟ್ಟುವಿಕೆ) ಮತ್ತು ಗಂಭೀರ ಚರ್ಮದ ಸೋಂಕಿನಿಂದ ಬಳಲುತ್ತಿದ್ದ.&lt;/p&gt;&lt;h2&gt;&lt;strong&gt;ವೈದ್ಯಲೋಕಕ್ಕೆ ಇದೊಂದು ಸವಾಲು&lt;/strong&gt;&lt;/h2&gt;&lt;p&gt;ಬಾಲಕನ ಬಿಎಂಐ (BMI) ಸುಮಾರು 100ರಷ್ಟಿತ್ತು. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ತೂಕವಿರುವುದು ವೈದ್ಯರಿಗೂ ಆತಂಕ ತಂದಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ ಆತನನ್ನು ಸುಮಾರು ಎರಡು ವಾರಗಳ ಕಾಲ ಮಕ್ಕಳ ತೀವ್ರ ನಿಗಾ ಘಟಕದಲ್ಲಿ (PICU) ಇರಿಸಿ ಚಿಕಿತ್ಸೆ ನೀಡಲಾಯಿತು. ಸುಮಾರು 20 ತಜ್ಞ ವೈದ್ಯರ ತಂಡ (ಹೃದ್ರೋಗ ತಜ್ಞರು, ಶ್ವಾಸಕೋಶ ತಜ್ಞರು, ಅರಿವಳಿಕೆ ತಜ್ಞರು ಸೇರಿದಂತೆ) ಈ ಶಸ್ತ್ರಚಿಕಿತ್ಸೆಯ ಸಾಧಕ-ಬಾಧಕಗಳನ್ನು ಚರ್ಚಿಸಿ ಅಂತಿಮವಾಗಿ 'ಲ್ಯಾಪ್ರೊಸ್ಕೋಪಿಕ್ ಸ್ಲೀವ್ ಗ್ಯಾಸ್ಟ್ರೆಕ್ಟಮಿ' ಮಾಡಲು ನಿರ್ಧರಿಸಿತು.&lt;/p&gt;&lt;h2&gt;&lt;strong&gt;2 ತಿಂಗಳಲ್ಲಿ 50 ಕೆಜಿ ಇಳಿಕೆ!&lt;/strong&gt;&lt;/h2&gt;&lt;p&gt;ಡಾ. ದಕ್ಷ್ ಸೇಥಿ ಮತ್ತು ಡಾ. ಸುಧೀರ್ ಕಲ್ಹಾನ್ ನೇತೃತ್ವದ ತಂಡವು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ. ಶಸ್ತ್ರಚಿಕಿತ್ಸೆ ನಡೆದ ಕೇವಲ ಮೂರೇ ದಿನಗಳಲ್ಲಿ ಬಾಲಕ ಗುಣಮುಖನಾಗಿ ಮನೆಗೆ ಮರಳಿದ್ದ. ಪ್ರಸ್ತುತ, ಶಸ್ತ್ರಚಿಕಿತ್ಸೆ ನಡೆದು ಎರಡು ತಿಂಗಳು ಕಳೆದಿದ್ದು, ಬಾಲಕನ ತೂಕ 275 ಕೆಜಿಯಿಂದ 223 ಕೆಜಿಗೆ ಇಳಿಕೆಯಾಗಿದೆ. ಅಂದರೆ ಕೇವಲ 60 ದಿನಗಳಲ್ಲಿ ಬಾಲಕ ಸುಮಾರು 50 ಕೆಜಿ ತೂಕ ಇಳಿಸಿಕೊಂಡಿದ್ದಾನೆ.&lt;/p&gt;&lt;p&gt;ಇದು ಕೇವಲ ತೂಕ ಇಳಿಸುವ ಉದ್ದೇಶದ ಶಸ್ತ್ರಚಿಕಿತ್ಸೆಯಲ್ಲ. ಬಾಲಕನ ಆರೋಗ್ಯವನ್ನು ಸುಧಾರಿಸಿ, ಆತ ಸಾಮಾನ್ಯ ಜೀವನ ನಡೆಸುವಂತೆ ಮಾಡುವುದು ನಮ್ಮ ಗುರಿಯಾಗಿತ್ತು. ಬಾಲಕನ ಆರೋಗ್ಯದಲ್ಲಿ ಈಗ ಉತ್ತಮ ಚೇತರಿಕೆ ಕಂಡುಬರುತ್ತಿದೆ ಎಂದು ಶಸ್ತ್ರಚಿಕಿತ್ಸಕ ಡಾ. ದಕ್ಷ್ ಸೇಥಿ ತಿಳಿಸಿದ್ದಾರೆ. ಪ್ರಸ್ತುತ ಬಾಲಕ ವೈದ್ಯರ ನಿಗಾ ಹಾಗೂ ಸಮರ್ಪಕ ಆಹಾರ ಕ್ರಮದ ಮಾರ್ಗದರ್ಶನದಲ್ಲಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ತೂಕ ಇಳಿಸಿಕೊಳ್ಳುವ ಭರವಸೆ ಹೊಂದಿದ್ದಾನೆ.&lt;/p&gt;]]></content:encoded>
            <category>health-life</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/health-life/delhi-doctors-saved-the-life-of-a-16-year-old-boy-weighing-275-kg-by-performing-bariatric-surgery/articleshow-i8emrwi"/>
        </item>
        <item>
            <title><![CDATA[135 ಕೆಜಿಯಿಂದ 89 ಕೆಜಿಗೆ! 46 ಕೆಜಿ ತೂಕ ಇಳಿಸಿದ ಗಡ್ಕರಿ ಸೀಕ್ರೆಟ್.. ಸ್ಫೂರ್ತಿದಾಯಕ ಕಥೆ]]></title>
            <link>https://kannada.asianetnews.com/health-life/inspiring-story-central-minister-nitin-gadkari-reveals-his-weight-loss-secret-gkn/articleshow-l9z6343</link>
            <guid isPermaLink="true">https://kannada.asianetnews.com/health-life/inspiring-story-central-minister-nitin-gadkari-reveals-his-weight-loss-secret-gkn/articleshow-l9z6343</guid>
            <pubDate>Wed, 12 Aug 2026 16:42:17 +0530</pubDate>
            <description><![CDATA[&lt;p&gt;ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಬಂಧಿಸಿದ ಆಸಕ್ತಿದಾಯಕ ಸ್ಟೋರಿಯೊಂದು ರಿವೀಲ್ ಆಗಿದೆ. ಅಂದು ಬರೋಬ್ಬರಿ 135 ಕೆಜೆ ತೂಕವಿದ್ದ ಅವರು ಇಂದು 89 ಕೆಜಿಗೆ ಇಳಿದಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzttnhjcvy3dwzecfmx44ya0,imgname-nitin-gadkari-1786533037644.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಮ್ಮ ಕೆಲಸದ ವಿಚಾರದಲ್ಲಿ ಎಷ್ಟು ಹೆಸರಾಗಿದ್ದಾರೋ, ಈಗ ಅಷ್ಟೇ ತಮ್ಮ ಅದ್ಭುತ ದೇಹದಾರ್ಢ್ಯ ಬದಲಾವಣೆಯಿಂದ ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ 135 ಕೆಜಿ ತೂಕವಿದ್ದ ಗಡ್ಕರಿ ಅವರು, ಬರೋಬ್ಬರಿ 46 ಕೆಜಿ ತೂಕ ಇಳಿಸಿ ಈಗ 89 ಕೆಜಿಗೆ ಬಂದಿದ್ದಾರೆ. ಇದು ಕೇವಲ ಮ್ಯಾಜಿಕ್ ಅಲ್ಲ, ಅವರ ಕಠಿಣ ಪರಿಶ್ರಮ ಮತ್ತು ಶಿಸ್ತಿನ ಫಲ.&lt;/p&gt;&lt;p&gt;ಇತ್ತೀಚೆಗೆ ಫರಾ ಖಾನ್ ಅವರ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಮಾತನಾಡಿದ ಗಡ್ಕರಿ, ತಮ್ಮ ಫಿಟ್&zwnj;ನೆಸ್ ಪಯಣದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಜೀವನ ಬದಲಿಸಿದ ಕೊರೊನಾ&lt;/strong&gt;&lt;/h2&gt;&lt;p&gt;ಗಡ್ಕರಿ ಅವರ ಪ್ರಕಾರ.. ಅವರ ಈ ಬದಲಾವಣೆಗೆ ಮುಖ್ಯ ಕಾರಣ ಕೋವಿಡ್ ಸಾಂಕ್ರಾಮಿಕ. ಕೋವಿಡ್ ಸಮಯದಲ್ಲಿ ನನ್ನ ಆಪ್ತ ಸ್ನೇಹಿತರನ್ನು ನಾನು ಕಳೆದುಕೊಂಡೆ. ಅದು ನನಗೆ ದೊಡ್ಡ ಆಘಾತ ನೀಡಿತು. ಆಗ ನನಗೆ ಅನಿಸಿದ್ದು ಒಂದೇ - ಆರೋಗ್ಯವೇ ಭಾಗ್ಯ (Health is Wealth). ಅಲ್ಲಿಯವರೆಗೆ ನನ್ನ ಜೀವನ ಅಸ್ತವ್ಯಸ್ತವಾಗಿತ್ತು, ಯಾವುದೇ ಶಿಸ್ತು ಇರಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಹೇಗಿದೆ ಗಡ್ಕರಿ ದಿನಚರಿ?&lt;/strong&gt;&lt;/h2&gt;&lt;p&gt;ಸಚಿವರ ಕೆಲಸದ ಒತ್ತಡದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ತಡರಾತ್ರಿಯವರೆಗೂ ಸಭೆಗಳು, ಪ್ರಯಾಣಗಳಿದ್ದರೂ ಗಡ್ಕರಿ ಅವರು ತಮ್ಮ ದಿನಚರಿಯನ್ನು ಬದಲಿಸುವುದಿಲ್ಲ. ಎಷ್ಟೇ ತಡವಾಗಿ ಮಲಗಿದರೂ ಬೆಳಿಗ್ಗೆ 7 ಗಂಟೆಗೆ ಎದ್ದೇಳುವುದು ಅವರ ನಿಯಮ. ಪ್ರತಿದಿನ ಕನಿಷ್ಠ ಎರಡೂವರೆ ಗಂಟೆಗಳ ಕಾಲ ಅವರು ವ್ಯಾಯಾಮ ಮಾಡುತ್ತಾರೆ. ವ್ಯಾಯಾಮ ಈಗ ನನ್ನ ಜೀವನದ ಅವಿಭಾಜ್ಯ ಅಂಗ. ಇದು ಒಮ್ಮೊಮ್ಮೆ ಮಾಡುವ ಕೆಲಸವಲ್ಲ, ಪ್ರತಿದಿನ ಮಾಡಲೇಬೇಕಾದ ಕೆಲಸ ಎನ್ನುತ್ತಾರೆ ಅವರು.&lt;/p&gt;&lt;p&gt;ತೂಕ ಇಳಿಸಿಕೊಳ್ಳುವುದು ಕೇವಲ ನೋಡಲು ಚೆನ್ನಾಗಿ ಕಾಣುವುದಕ್ಕಾಗಿ ಅಲ್ಲ.ಬದಲಾಗಿ ಒಟ್ಟಾರೆ ಆರೋಗ್ಯ ಸುಧಾರಣೆಗಾಗಿ ಇರಬೇಕು ಎಂಬುದು ಗಡ್ಕರಿ ಅವರ ಅಭಿಪ್ರಾಯ. ಮೊದಲು ಅನಿಯಮಿತ ಆಹಾರ ಮತ್ತು ಅಶಿಸ್ತಿನ ಜೀವನ ನಡೆಸುತ್ತಿದ್ದ ಅವರು, ಈಗ ಸಂಪೂರ್ಣ ಶಿಸ್ತುಬದ್ಧ ಜೀವನಕ್ಕೆ ಒಗ್ಗಿಕೊಂಡಿದ್ದಾರೆ. ಅವರ ಈ ಬದಲಾವಣೆಯು ಮುಖದಲ್ಲಿನ ಹೊಳಪು ಮತ್ತು ಅವರ ಕೆಲಸದ ಉತ್ಸಾಹದಲ್ಲಿ ಎದ್ದು ಕಾಣುತ್ತಿದೆ.&lt;/p&gt;&lt;p&gt;ಗಡ್ಕರಿ ಅವರ ಈ ಪಯಣ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಆದರೆ ತಜ್ಞರ ಪ್ರಕಾರ ಪ್ರತಿಯೊಬ್ಬರ ದೇಹದ ಸ್ಥಿತಿ ಬೇರೆ ಬೇರೆಯಾಗಿರುತ್ತದೆ. ಸತತ ಎರಡೂವರೆ ಗಂಟೆಗಳ ವ್ಯಾಯಾಮ ಎಲ್ಲರಿಗೂ ಸೂಕ್ತವಾಗದಿರಬಹುದು. ಹೀಗಾಗಿ, ತೂಕ ಇಳಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಕೇವಲ ವ್ಯಾಯಾಮ ಮಾತ್ರವಲ್ಲದೆ, ಸಮತೋಲಿತ ಆಹಾರ ಮತ್ತು ಉತ್ತಮ ನಿದ್ದೆಯೂ ಅಗತ್ಯ. ರಾತ್ರೋರಾತ್ರಿ ಬದಲಾವಣೆ ಬಯಸುವ ಬದಲು ಗಡ್ಕರಿ ಅವರಂತೆ ಶಿಸ್ತನ್ನು ರೂಢಿಸಿಕೊಳ್ಳಿ.&lt;/p&gt;&lt;p&gt;ಆರೋಗ್ಯವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನಿತಿನ್ ಗಡ್ಕರಿ ಅವರೇ ಸಾಕ್ಷಿ. ರಾಜಕೀಯದಂತಹ ಒತ್ತಡದ ಕೆಲಸದ ನಡುವೆಯೂ ತಮ್ಮ ಆರೋಗ್ಯಕ್ಕೆ ಸಮಯ ಮೀಸಲಿಟ್ಟಿರುವ ಅವರ ಈ ನಿರ್ಧಾರ ನಿಜಕ್ಕೂ ಎಲ್ಲರಿಗೂ ಮಾದರಿ.&lt;/p&gt;]]></content:encoded>
            <category>health-life</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/health-life/inspiring-story-central-minister-nitin-gadkari-reveals-his-weight-loss-secret-gkn/articleshow-l9z6343"/>
        </item>
        <item>
            <title><![CDATA[ಸಮುದ್ರ Vs ನದಿ? ಆರೋಗ್ಯಕ್ಕೆ ಯಾವುದು ಬೆಸ್ಟ್ ಮೀನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ]]></title>
            <link>https://kannada.asianetnews.com/health-life/sea-vs-river-which-fish-is-best-for-health-see-complete-information-here-mrq/articleshow-n23l2y1</link>
            <guid isPermaLink="true">https://kannada.asianetnews.com/health-life/sea-vs-river-which-fish-is-best-for-health-see-complete-information-here-mrq/articleshow-n23l2y1</guid>
            <pubDate>Wed, 12 Aug 2026 09:42:33 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ಮೀನುಗಳಲ್ಲಿ ಪ್ರೋಟೀನ್, ವಿಟಮಿನ್&zwnj;ಗಳು, ಖನಿಜಾಂಶಗಳು ಮತ್ತು ದೇಹಕ್ಕೆ ಒಳ್ಳೆಯದು ಮಾಡುವ ಕೊಬ್ಬಿನಾಮ್ಲಗಳು ತುಂಬಿರುತ್ತವೆ. ಆದರೆ ಮೀನಿನ ವಿಧ, ಅದು ಬದುಕುವ ವಾತಾವರಣ, ಅದರ ಆಹಾರ ಪದ್ಧತಿ ಮೇಲೆ ಈ ಸತ್ವಗಳ ಪ್ರಮಾಣ ಬದಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzt2fhr003gbyz4rnc95ms9y,imgname-fish-1786507675391.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಂಸಾಹಾರಿಗಳ ಊಟದಲ್ಲಿ ಮೀನಿಗೆ ಯಾವಾಗಲೂ ಒಂದು ವಿಶೇಷ ಸ್ಥಾನವಿದೆ. ರುಚಿ ಒಂದು ಕಡೆಯಾದರೆ, ಅದರಲ್ಲಿರುವ ಸತ್ವಗಳು ಇನ್ನೊಂದು ಕಡೆ. ಆದರೆ, ಮೀನು ಖರೀದಿಸುವಾಗ ನಮ್ಮಲ್ಲಿ ಹಲವರಿಗೆ 'ಸಮುದ್ರದ ಮೀನು ಒಳ್ಳೆಯದಾ ಅಥವಾ ನದಿ ಮೀನು ಒಳ್ಳೆಯದಾ?' ಅನ್ನೋ ಗೊಂದಲ ಶುರುವಾಗುತ್ತೆ. ಇದಕ್ಕೆ ಒಂದೇ ಸಾಲಿನಲ್ಲಿ ಉತ್ತರ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಎರಡಕ್ಕೂ ತನ್ನದೇ ಆದ ವಿಶೇಷತೆಗಳಿವೆ. ಸಾಮಾನ್ಯವಾಗಿ ಮೀನುಗಳಲ್ಲಿ ಪ್ರೋಟೀನ್, ವಿಟಮಿನ್&zwnj;ಗಳು, ಖನಿಜಾಂಶಗಳು ಮತ್ತು ದೇಹಕ್ಕೆ ಒಳ್ಳೆಯದು ಮಾಡುವ ಕೊಬ್ಬಿನಾಮ್ಲಗಳು ತುಂಬಿರುತ್ತವೆ. ಆದರೆ ಮೀನಿನ ವಿಧ, ಅದು ಬದುಕುವ ವಾತಾವರಣ, ಅದರ ಆಹಾರ ಪದ್ಧತಿ ಮೇಲೆ ಈ ಸತ್ವಗಳ ಪ್ರಮಾಣ ಬದಲಾಗುತ್ತದೆ.&lt;/p&gt;&lt;h2&gt;&lt;strong&gt;ಒಮೆಗಾ-3: ಸಮುದ್ರ ಮೀನುಗಳ ಸ್ಪೆಷಾಲಿಟಿ&lt;/strong&gt;&lt;/h2&gt;&lt;p&gt;ನಮ್ಮ ಹೃದಯ, ಮೆದುಳು ಮತ್ತು ಕಣ್ಣಿನ ಆರೋಗ್ಯಕ್ಕೆ ಒಮೆಗಾ-3 ಕೊಬ್ಬಿನಾಮ್ಲಗಳು ಬಹಳ ಮುಖ್ಯ. ಅದರಲ್ಲೂ, ಬಂಗುಡೆ (mackerel), ಸಾಲ್ಮನ್&zwnj;ನಂತಹ ಕೊಬ್ಬು ಸಮುದ್ರ ಮೀನುಗಳಲ್ಲಿ EPA ಮತ್ತು DHA ಎಂಬ ಒಮೆಗಾ-3 ಆಮ್ಲಗಳು ಹೇರಳವಾಗಿ ಸಿಗುತ್ತವೆ. DHA ಮೆದುಳು ಮತ್ತು ಕಣ್ಣಿನ ಅಂಗಾಂಶಗಳ ಪ್ರಮುಖ ಭಾಗವಾಗಿರುವುದರಿಂದ, ಸಮುದ್ರದ ಮೀನುಗಳು ಈ ವಿಚಾರದಲ್ಲಿ ಮುಂದಿವೆ. ಹಾಗಂತ ನದಿ ಮೀನುಗಳಲ್ಲಿ ಒಮೆಗಾ-3 ಇಲ್ವಾ ಅಂತ ಕೇಳಿದ್ರೆ, ಖಂಡಿತ ಇದೆ. ಆದರೆ, ಸಮುದ್ರ ಮೀನುಗಳಿಗೆ ಹೋಲಿಸಿದರೆ ಇದರ ಪ್ರಮಾಣ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಹೀಗಾಗಿ, ಒಮೆಗಾ-3 ಬೇಕು ಎನ್ನುವವರಿಗೆ ಸಮುದ್ರದ ಮೀನುಗಳು ಉತ್ತಮ ಆಯ್ಕೆಯಾಗುತ್ತದೆ.&lt;/p&gt;&lt;h3&gt;&lt;strong&gt;ಪ್ರೋಟೀನ್ ಮತ್ತು ಖನಿಜಾಂಶಗಳು: ಎರಡರಲ್ಲೂ ಇದೆ&lt;/strong&gt;&lt;/h3&gt;&lt;p&gt;ದೇಹದ ಸ್ನಾಯುಗಳ ಬೆಳವಣಿಗೆಗೆ ಮತ್ತು ಜೀವಕೋಶಗಳ ದುರಸ್ತಿಗೆ ಪ್ರೋಟೀನ್ ಅತ್ಯಗತ್ಯ. ಈ ವಿಷಯದಲ್ಲಿ ಸಮುದ್ರ ಮೀನು ಮತ್ತು ನದಿ ಮೀನು ಎರಡೂ ಉತ್ತಮ ಮೂಲಗಳಾಗಿವೆ. ಎರಡರಲ್ಲೂ ಸುಲಭವಾಗಿ ಜೀರ್ಣವಾಗುವ, ಉತ್ತಮ ಗುಣಮಟ್ಟದ ಪ್ರೋಟೀನ್ ಸಿಗುತ್ತದೆ. ಹಾಗಾಗಿ, ಪ್ರೋಟೀನ್ ವಿಚಾರದಲ್ಲಿ ಎರಡೂ ಸಮಾನ. ಇದೇ ರೀತಿ, ಕ್ಯಾಲ್ಸಿಯಂ, ಫಾಸ್ಫರಸ್, ಪೊಟ್ಯಾಸಿಯಮ್&zwnj;ನಂತಹ ಖನಿಜಾಂಶಗಳು ಕೂಡ ಮೀನುಗಳಲ್ಲಿವೆ. ಅದರಲ್ಲೂ, ನೆತ್ತಲಿಯಂತಹ ಸಣ್ಣ ಮೀನುಗಳನ್ನು ಮುಳ್ಳಿನ ಸಮೇತ ತಿಂದಾಗ, ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದು ಸಮುದ್ರ ಮತ್ತು ನದಿ ಮೀನು ಎರಡಕ್ಕೂ ಅನ್ವಯಿಸುತ್ತದೆ.&lt;/p&gt;&lt;p&gt;ಮೀನು ತಿನ್ನುವಾಗ ನಾವು ಗಮನಿಸಬೇಕಾದ ಅತಿ ಮುಖ್ಯವಾದ ವಿಷಯವೆಂದರೆ ಪಾದರಸ (mercury). ಸಮುದ್ರದಲ್ಲಿ ದೀರ್ಘಕಾಲ ಬದುಕುವ ಶಾರ್ಕ್, ಕತ್ತಿ ಮೀನಿನಂತಹ (swordfish) ದೊಡ್ಡ ಮೀನುಗಳು, ತಾವು ತಿನ್ನುವ ಸಣ್ಣ ಮೀನುಗಳ ಮೂಲಕ ಹೆಚ್ಚಿನ ಪ್ರಮಾಣದ ಪಾದರಸವನ್ನು ತಮ್ಮ ದೇಹದಲ್ಲಿ ಶೇಖರಿಸಿಕೊಳ್ಳುತ್ತವೆ. ಈ ಪಾದರಸ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇರಿದರೆ ನರವ್ಯೂಹದ ಮೇಲೆ ಪರಿಣಾಮ ಬೀರಬಹುದು. ಇದೇ ಕಾರಣಕ್ಕೆ, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಚಿಕ್ಕ ಮಕ್ಕಳು ಇಂತಹ ದೊಡ್ಡ ಸಮುದ್ರ ಮೀನುಗಳನ್ನು ತಿನ್ನಬಾರದು ಎಂದು ಸಲಹೆ ನೀಡಲಾಗುತ್ತದೆ. ನದಿ ಮೀನುಗಳಲ್ಲಿ ಈ ಅಪಾಯ ಕಡಿಮೆ. ಹಾಗೆಯೇ, ಮೀನನ್ನು ಅಡುಗೆ ಮಾಡುವ ವಿಧಾನವೂ ಮುಖ್ಯ; ಹೆಚ್ಚು ಉಪ್ಪು, ಎಣ್ಣೆಯಲ್ಲಿ ಕರಿದು ತಿನ್ನುವುದು ಅದರ ಸತ್ವಗಳನ್ನು ಕಡಿಮೆ ಮಾಡಿ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.&lt;/p&gt;&lt;h3&gt;&lt;strong&gt;ಯಾವ ಮೀನನ್ನು ಹೆಚ್ಚು ತಿನ್ನಬಹುದು?&lt;/strong&gt;&lt;/h3&gt;&lt;p&gt;ಕೊನೆಯದಾಗಿ ಹೇಳುವುದಾದರೆ, 'ಇದೇ ಬೆಸ್ಟ್' ಅಂತ ಒಂದನ್ನು ಮಾತ್ರ ಆಯ್ಕೆ ಮಾಡುವುದು ಸರಿಯಲ್ಲ. ಒಮೆಗಾ-3 ಬೇಕಿದ್ದರೆ ಸಮುದ್ರದ ಮೀನುಗಳು, ಕಡಿಮೆ ಪಾದರಸದ ಅಪಾಯದೊಂದಿಗೆ ಪ್ರೋಟೀನ್ ಬೇಕಿದ್ದರೆ ನದಿ ಮೀನುಗಳು. ಹೀಗೆ ಎರಡನ್ನೂ ಬೆರೆಸಿ ತಿನ್ನುವುದೇ ಜಾಣತನ. ನಿಮ್ಮ ಆರೋಗ್ಯ ಮತ್ತು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಸರಿಯಾದ ಮೀನನ್ನು ಆಯ್ಕೆ ಮಾಡಿ, ಸರಿಯಾದ ರೀತಿಯಲ್ಲಿ ಅಡುಗೆ ಮಾಡಿ ತಿನ್ನುವುದೇ ಆರೋಗ್ಯಕ್ಕೆ ದಾರಿ.&lt;/p&gt;]]></content:encoded>
            <category>health-life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/health-life/sea-vs-river-which-fish-is-best-for-health-see-complete-information-here-mrq/articleshow-n23l2y1"/>
        </item>
        <item>
            <title><![CDATA[10000 Steps: 4 ಭಾಗಗಳಾಗಿ ವಿಂಗಡಿಸಿ 10 ಸಾವಿರ ಹೆಜ್ಜೆ ನಡೆದ್ರೆ 10 ಆರೋಗ್ಯಕರ ಲಾಭಗಳು]]></title>
            <link>https://kannada.asianetnews.com/health-life/kannada-health-tips-10-health-benefits-of-walking-10000-steps-divided-into-4-parts-mrq/articleshow-n9n66fu</link>
            <guid isPermaLink="true">https://kannada.asianetnews.com/health-life/kannada-health-tips-10-health-benefits-of-walking-10000-steps-divided-into-4-parts-mrq/articleshow-n9n66fu</guid>
            <pubDate>Tue, 18 Aug 2026 10:09:10 +0530</pubDate>
            <description><![CDATA[ಪ್ರತಿದಿನ ಹತ್ತು ಸಾವಿರ ಹೆಜ್ಜೆ ನಡೆಯುವುದು ಯಾವುದೇ ಖರ್ಚಿಲ್ಲದ, ಸುಲಭವಾದ ವ್ಯಾಯಾಮವಾಗಿದ್ದು, ದೇಹದ ಹೆಚ್ಚುವರಿ ಕ್ಯಾಲರಿಗಳನ್ನು ಕರಗಿಸಲು ಸಹಕಾರಿಯಾಗಿದೆ. ಈ ಗುರಿಯನ್ನು ಸುಲಭವಾಗಿ ತಲುಪುವ ವಿಧಾನಗಳು ಮತ್ತು ನಿರಂತರ ನಡಿಗೆಯಿಂದ ಸಿಗುವ ಹೃದಯದ ಆರೋಗ್ಯ, ತೂಕ ನಿಯಂತ್ರಣ ಹಾಗೂ ಮಾನಸಿಕ ಯೋಗಕ್ಷೇಮದಂತಹ ಹತ್ತು ಪ್ರಮುಖ ಲಾಭಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzeeejafs2s6m3nr7aagf15p,imgname-barefoot-walking--1--1786117572943.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿರುಸುನಡಿಗೆ ಎನ್ನುವುದು ನಮ್ಮ ದೇಹಕ್ಕೆ ಬೇಕಾದ ಅತ್ಯಂತ ಅವಶ್ಯಕ ವ್ಯಾಯಾಮವಾಗಿದ್ದು, ಯಾವುದೇ ಖರ್ಚು ಇಲ್ಲದೆ ದೇಹದಲ್ಲಿ ಹೆಚ್ಚಾಗಿ ಶೇಖರಿಸಲ್ಪಟ್ಟ ಕೊಬ್ಬು ಅಥವಾ ಕ್ಯಾಲರಿಗಳನ್ನು ಕರಗಿಸುವ ಬಹಳ ಸುಲಭವಾದ ವ್ಯಾಯಾಮವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿದಿನ ಹತ್ತು ಸಾವಿರ ಹೆಜ್ಜೆ ನಡೆಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ಎಲ್ಲ ವೈದ್ಯರುಗಳು ಹಾಗೂ ಜಿಮ್ ತರಬೇತುದಾರರು ಒಮ್ಮತದಿಂದ ಅಂಗೀಕರಿಸಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಯುವಜನರು ಮತ್ತು ಫಿಟ್&zwnj;ನೆಸ್&zwnj;ಪ್ರಿಯ ವ್ಯಕ್ತಿಗಳು ಈ ಸುಲಭದ ದಾರಿಗೆ ಒಲವು ತೋರುತ್ತಿದ್ದಾರೆ ಮತ್ತು ಇದೊಂದು ಜನಪ್ರಿಯ ದೈಹಿಕ ಗುರಿಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಹತ್ತು ಸಾವಿರ ಹೆಜ್ಜೆ ಅಂದರೆ ಸುಮಾರು 7.5ಕಿ.ಮೀ ನಿಂದ 8 ಕಿ.ಮೀಟರ್ (5 ಮೈಲಿ)ಗಳ ದೂರಕ್ಕೆ ಸಮನಾಗಿರುತ್ತದೆ ಮತ್ತು ಇಷ್ಟು ದೂರ ಕ್ರಮಿಸಲು ಸರಿಸುಮಾರು 90 ರಿಂದ 100 ನಿಮಿಷಗಳು ನಿರಂತರವಾಗಿ ನಡೆಯಬೇಕಾಗುತ್ತದೆ. ಚುರುಕಾಗಿ ನಡೆದಲ್ಲಿ ಹತ್ತು ನಿಮಿಷಗಳಲ್ಲಿ ಸುಮಾರು 1000 ಹೆಜ್ಜೆಗಳನ್ನು ಕ್ರಮಿಸಬಹುದಾಗಿದೆ. ನಿರಂತರವಾಗಿ ಹತ್ತು ಸಾವಿರ ಹೆಜ್ಜೆಗಳನ್ನು ಒಂದೇ ಬಾರಿಗೆ ಮುಗಿಸಲು ಸಮಯದ ಅಭಾವ ಇರಬಹುದು ಮತ್ತು ಮಾಡಲು ಬೇಸರವಾದಲ್ಲಿ ಈ ಹತ್ತು ಸಾವಿರ ಹೆಜ್ಜೆಗಳನ್ನು ನಾಲಕ್ಕು ಭಾಗಗಳಾಗಿ ವಿಂಗಡಿಸಿ ಒಟ್ಟು ಹತ್ತು ಸಾವಿರ ಹೆಜ್ಜೆಗಳನ್ನು ಪೂರ್ತಿ ಮಾಡಬಹುದಾಗಿದೆ.&lt;/p&gt;&lt;h2&gt;&lt;strong&gt;ಹತ್ತು ಸಾವಿರ ಹೆಜ್ಜೆಗಳನ್ನು ನಾಲಕ್ಕು ಭಾಗಗಳಾಗಿ ವಿಂಗಡಿಸಿ&lt;/strong&gt;&lt;/h2&gt;&lt;p&gt;1.ಬೆಳಿಗ್ಗೆ ಎದ್ದ ತಕ್ಷಣ ಪ್ರಾತಃವಿಧಿಗಳನ್ನು ತೀರಿಸಿದ ಬಳಿಕ ಒಳಾಂಗಣದಲ್ಲಿ ಅಥವಾ ರಸ್ತೆಯಲ್ಲಿ 20 ನಿಮಿಷಗಳ ಕಾಲ ಬಿರುಸು ನಡಿಗೆ ಮಾಡಿದ್ದಲ್ಲಿ ಎರಡು ಸಾವಿರ ಹೆಜ್ಜೆ ಪೂರ್ತಿಯಾಗುತ್ತದೆ.&lt;/p&gt;&lt;p&gt;2.ಊಟ, ಫಲಾಹಾರ ಮತ್ತು ಡಿನ್ನರ್ ಬಳಿಕ ಪ್ರತಿದಿನ ಹತ್ತು ನಿಮಿಷ ಬಿರುಸು ನಡಿಗೆ ಮಾಡಿದ್ದಲ್ಲಿ, ಮೂರು ಸಾವಿರ ಹೆಜ್ಜೆ ಪೂರ್ತಿಯಾಗುತ್ತದೆ.&lt;/p&gt;&lt;p&gt;3.ದೈನಂದಿನ ಕೆಲಸಗಳನ್ನು ಮಾಡುವಾಗ, ಫೋನಿನಲ್ಲಿ ಮಾತನಾಡುವಾಗ ಮತ್ತು ಕಚೇರಿ ಕೆಲಸ ಮಾಡುವಾಗ ಕನಿಷ್ಠ ಮೂವತ್ತು ನಿಮಿಷಗಳ ಕಾಲ ನಡೆದಾಡಿದ್ದಲ್ಲಿ, ಮತ್ತೆ ಮೂರುಸಾವಿರ ಹೆಜ್ಜೆ ಮುಗಿಯುತ್ತದೆ.&lt;/p&gt;&lt;p&gt;4.ರಾತ್ರಿ ಮಲಗುವ ಮೊದಲು ಕನಿಷ್ಟ 20 ನಿಮಿಷಗಳ ಕಾಲ ನಡೆದಲ್ಲಿ ಮತ್ತೆ ಎರಡು ಸಾವಿರ ಹೆಜ್ಜೆ ಪೂರ್ತಿಯಾಗಿ ದಿನದ ಹತ್ತು ಸಾವಿರ ಹೆಜ್ಜೆಗಳ ಕೋಟಾ ಸುಲಭದಲ್ಲಿ ಮುಗಿಯುತ್ತದೆ.&lt;/p&gt;&lt;h2&gt;&lt;strong&gt;ಹತ್ತು ಲಾಭಗಳು ಏನು?&lt;/strong&gt;&lt;/h2&gt;&lt;p&gt;1.ನಿರಂತರ ನಡಿಗೆಯಿಂದ ಹೃದಯದ ರಕ್ತನಾಳಗಳ ಆರೋಗ್ಯ ವೃದ್ಧಿಸಿ ಹೃದಯಾಘಾತದ ಸಾಧ್ಯತೆಯನ್ನು ಕಡಿತಗೊಳಿಸುತ್ತದೆ. ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ.&lt;/p&gt;&lt;p&gt;2.ನಮ್ಮ ದೇಹದ ಮೂಳೆಗಳನ್ನು ಬಲಗೊಳಿಸಿ, ಸಮತೋಲನವನ್ನು ವರ್ಧಿಸುತ್ತದೆ ಮತ್ತು ಅಸ್ಥಿರಂದ್ರತೆ ರೋಗದ ಸಾಧ್ಯತೆಯನ್ನು ಕ್ಷೀಣಿಸುತ್ತದೆ.&lt;/p&gt;&lt;p&gt;3.ನಮ್ಮ ದೇಹದ ಸ್ನಾಯುಗಳನ್ನು ಶಕ್ತಿಯುತಗೊಳಿಸಿ, ಸ್ನಾಯುಗಳ ಸಾಂದ್ರತೆ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ.&lt;/p&gt;&lt;p&gt;4.ನಿರಂತರ ನಡಿಗೆಯಿಂದ ದೇಹದಲ್ಲಿ ಹೆಚ್ಚಾಗಿ ಶೇಖರಿತವಾದ ಕೊಬ್ಬನ್ನು ಕರಗಿಸುತ್ತದೆ ಮತ್ತು ದೇಹದ ತೂಕವನ್ನು ನಿಯಂತ್ರಿಸುತ್ತದೆ.&lt;/p&gt;&lt;p&gt;5.ನಡಿಗೆಯಿಂದಾಗಿ ನಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೇಹ ಸದಾಕಾಲ ಉಲ್ಲಸಿತವಾಗಿರುವಂತೆ ಮಾಡುತ್ತದೆ.&lt;/p&gt;&lt;p&gt;6.ನಡಿಗೆಯು ನಮ್ಮ ಮನಸ್ಸಿಗೆ ಮುದನೀಡಿ ಮನಸ್ಸಿಗೆ ಹೊಸ ಚೈತನ್ಯ ನೀಡಿ, ಆಲಸ್ಯವನ್ನು ತೊಡೆದು ಹಾಕಿ, ಸದಾಕಾಲ ಖುಷಿಯಾಗಿರುವಂತೆ ಮಾಡುತ್ತದೆ.&lt;/p&gt;&lt;p&gt;7.ನಿರಂತರ ನಡಿಗೆಯಿಂದ ಖಿನ್ನತೆ ಇಲ್ಲದಾಗುತ್ತದೆ. ಆತಂಕವನ್ನು ದೂರಮಾಡಿ ದೇಹಕ್ಕೆ ಹೊಸ ಹುರುಪು ಮತ್ತು ಶಕ್ತಿಯನ್ನು ತುಂಬುತ್ತದೆ. ಧನಾತ್ಮಕ ಯೋಚನೆಗಳು ಮೂಡುವಂತೆ ಪ್ರಚೋದಿಸುತ್ತದೆ.&lt;/p&gt;&lt;p&gt;8.ಮಾನಸಿಕ ಒತ್ತಡವನ್ನು ದೂರ ಮಾಡಿ ನಿರುತ್ಸಾಹವನ್ನು ಕಡಿತಗೊಳಿಸಿ, ಲವಲವಿಕೆಯನ್ನು ವೃದ್ಧಿಸುತ್ತದೆ. ದೇಹ ಮತ್ತು ಮನಸ್ಸು ಸದಾಕಾಲ ಉಲ್ಲಸಿತವಾಗಿರುವಂತೆ ಪ್ರಚೋದಿಸುತ್ತದೆ. ಒತ್ತಡ ಉಂಟುಮಾಡುವ ಕಾರ್ಟಿಸೋಲ್ ಎಂಬ ರಸದೂತವನ್ನು ಸ್ರವಿಸದಂತೆ ತಡೆಯುತ್ತದೆ.&lt;/p&gt;&lt;p&gt;9.ಪ್ರತಿದಿನ ನಡೆಯುವುದರಿಂದ ಇನ್ಸುಲಿನ್ ರಸದೂತಗಳ ಸಂವೇದನೆ ಸುಧಾರಿಸುತ್ತದೆ ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಟೈಪ್ ೨ ಮಧುಮೇಹ ತಡೆಯುವಲ್ಲಿ ನಿರಂತರ ನಡಿಗೆ ಅತೀ ಅವಶ್ಯಕ.&lt;/p&gt;&lt;p&gt;10.ನಿರಂತರ ನಡಿಗೆಯಿಂದ ರಕ್ತದೊತ್ತಡ ನಿಯಂತ್ರಿಸಲ್ಪಡುತ್ತದೆ. ಪಾರ್ಶ ವಾಯು ಮತ್ತು ಕೊಲೆಸ್ಟಾಲ್ ಸಮಸ್ಯೆಗೆ ಇತಿಶ್ರೀ ಹಾಡುತ್ತದೆ.&lt;/p&gt;&lt;h3&gt;&lt;strong&gt;ಕೊನೆಮಾತು&lt;/strong&gt;&lt;/h3&gt;&lt;p&gt;ದಿನನಿತ್ಯ ಹತ್ತು ಸಾವಿರ ಹೆಜ್ಜೆ ಹಾಕುವುದು ಕಷ್ಟದ ಕೆಲಸವೇನಲ್ಲ. ನನಗೆ ಟೈಮಿಲ್ಲ ಎಂದು ಹೇಳುವುದು ಪಲಾಯನವಾದ. ದಿನದಲ್ಲಿ ೧೦೦ ನಿಮಿಷ ಆರೋಗ್ಯಕ್ಕೆ ಕೊಡಲು ಸಾಧ್ಯವಿಲ್ಲದಿದ್ದರೆ ಅಂತಹ ವ್ಯಕ್ತಿಗಳಿಗೆ ಬದುಕುವ ಅರ್ಹತೆ ಇಲ್ಲವೇ ಇಲ್ಲ. ನಿರಂತರವಾಗಿ ೧೦೦ ನಿಮಿಷ ನಡೆಯಲೇಬೇಕೆಂದಿಲ್ಲ, ಮನೆಯೊಳಗೆ ಲಭ್ಯವಿರುವ ಜಾಗಗಳಲ್ಲಿ ನಡೆಯುವುದು, ಮನೆಯಲ್ಲಿ ಟಿವಿ ನೋಡುವಾಗ ನಡೆದಾಡುವುದು, ಮನೆಯೊಳಗೆ ನಡೆದಾಡುವುದು ಮತ್ತು ಕಚೇರಿಗಳಲ್ಲಿ ಮೆಟ್ಟಿಲುಗಳನ್ನು ಬಳಸುವುದು, ಫೋನ್&zwnj;ನಲ್ಲಿ ಕುಳಿತುಕೊಂಡು ಘಂಟೆಗಟ್ಟಲೆ ಮಾತನಾಡುವ ಬದಲು ಓಡಾಡುತ್ತಾ ಮಾತನಾಡುವುದು ಹೀಗೆ ಹತ್ತು ಹಲವು ವಿಧಗಳಲ್ಲಿ ಹತ್ತು ಸಾವಿರ ಹೆಜ್ಜೆಗಳನ್ನು ದಿನದಂತ್ಯದೊಳಗೆ ಮುಗಿಸಬಹುದು.&lt;/p&gt;&lt;p&gt;ಆರಂಭದಲ್ಲಿ ದಿನಕ್ಕೆ 3000 ನಂತರ 4000 ಹಾಗೇ ನಿಧಾನವಾಗಿ ಹೆಜ್ಜೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಬೇಕು. ಒಂದು ಒಳ್ಳೆಯ ಸ್ಮಾರ್ಟ್ ಫೋನ್ ಬಳಸಿ ಯಾವುದಾದರೂ ಆ್ಯಪ್ ಬಳಸಿ ಹೆಜ್ಜೆಗಳ ಸಂಖ್ಯೆಗಳನ್ನು ದಾಖಲಿಸುವುದು ಉತ್ತಮ. ಒಂದೇ ಬಾರಿ ಹತ್ತು ಸಾವಿರ ಹೆಜ್ಜೆ ಹಾಕುವುದರ ಬದಲು ಎರಡು ಮೂರು ಭಾಗಗಳಲ್ಲಿ ಮಾಡಬಹುದು. ಹೆಜ್ಜೆ ಹಾಕುವುದನ್ನು ಆನಂದಿಸುತ್ತಾ, ಅನುಭವಿಸತ್ತಾ ಮಾಡುವುದು ಉತ್ತಮ. ನಡಿಗೆಯ ವೇಗ, ನಡಿಗೆಯ ಗಾತ್ರ ಮತ್ತು ನಡೆಯುವ ಜಾಗ, ವ್ಯಕ್ತಿಯ ತೂಕಕ್ಕೆ ಅನುಗುಣವಾಗಿ ಒಬ್ಬ ವ್ಯಕ್ತಿ ಹತ್ತು ಸಾವಿರ ಹೆಜ್ಜೆ ಹಾಕಿದ್ದಲ್ಲಿ, 400 ರಿಂದ 600 ಕ್ಯಾಲರಿ ಪ್ರತಿದಿನ ಕರಗಿಸಲು ಸಾಧ್ಯವಾಗಬಹುದು. ವಿಶ್ವಸಂಸ್ಥೆ ಒಬ್ಬ ವ್ಯಕ್ತಿಗೆ ವಾರದಲ್ಲಿ 150 ರಿಂದ 200 ನಿಮಿಷಗಳ ದೈಹಿಕ ವ್ಯಾಯಾಮ ಅತೀ ಅವಶ್ಯಕ ಎಂದು ವರದಿ ಮಾಡಿದೆ. ದಿನದಲ್ಲಿ ಹತ್ತು ಸಾವಿರ ಹೆಜ್ಜೆ ಹಾಕಿದ್ದಲ್ಲಿ ಈ ಮಾನದಂಡವನ್ನು ಸುಲಭವಾಗಿ ತಲುಪಬಹುದು ಮತ್ತು ನಾವು ನಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಂಡು ನೂರು ವರುಷ ಬದುಕಲು ಸಾಧ್ಯವಾಗಲೂಬಹುದು ಮತ್ತು ಅದರಲ್ಲಿಯೇ ನಮ್ಮ ಮತ್ತು ಸಮಾಜದ ಹಿತ ಅಡಗಿದೆ.&lt;/p&gt;&lt;p&gt;&lt;strong&gt;ಡಾ.ಮುರಲೀ ಮೋಹನ ಚೂಂತಾರು. ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು ಮಂಗಳೂರು&lt;/strong&gt;&lt;/p&gt;]]></content:encoded>
            <category>health-life</category>
            <dc:creator>Kannadaprabha News</dc:creator>
            <atom:link href="https://kannada.asianetnews.com/health-life/kannada-health-tips-10-health-benefits-of-walking-10000-steps-divided-into-4-parts-mrq/articleshow-n9n66fu"/>
        </item>
        <item>
            <title><![CDATA[ಪ್ರತಿದಿನ ಬ್ರಶ್ ಮಾಡೋ ಮುನ್ನ ಈ ಎಲೆ ತಿನ್ನಿ… ಜೀರ್ಣಕ್ರಿಯೆಯಿಂದ ಬ್ಲಡ್ ಶುಗರ್’ವರೆಗೂ ಎಲ್ಲವೂ ಮಾಯ]]></title>
            <link>https://kannada.asianetnews.com/health-life/5-possible-health-benefits-of-chewing-guava-leaves-daily/articleshow-pdvp1tg</link>
            <guid isPermaLink="true">https://kannada.asianetnews.com/health-life/5-possible-health-benefits-of-chewing-guava-leaves-daily/articleshow-pdvp1tg</guid>
            <pubDate>Tue, 18 Aug 2026 22:00:01 +0530</pubDate>
            <description><![CDATA[&lt;p&gt;Guava leaves benefits: ಪೇರಳೆ ಹಣ್ಣು ಆರೋಗ್ಯಕ್ಕೆ ಎಷ್ಟು ಮುಖ್ಯ ಅನ್ನೋದು ನಿಮಗೆ ಗೊತ್ತೆ ಇದೆ. ಆದರೆ ಪೇರಳೆಯ ಎಲೆಗಳನ್ನು ಅಗೆದು ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಅನ್ನೋದು ನಿಮಗೆ ಗೊತ್ತಿದ್ಯಾ? ಜೀರ್ಣ ಕ್ರಿಯೆಯಿಂದ ಹಿಡಿದು, ಬ್ಲಡ್ ಶುಗರ್ ವರೆಗೂ ಹಲವು ಪ್ರಯೋಜನಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ava3nwhaq5yvxddv0aa468,imgname-guava-leaves-benefits-1787070582458.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪೇರಳೆ ಹಣ್ಣಲ್ಲ ಎಲೆ ತಿಂದು ನೋಡಿ ಎಷ್ಟೊಂದು ಪ್ರಯೋಜನ&lt;/strong&gt;&lt;/h2&gt;&lt;p&gt;ಪೇರಳೆ ಹಣ್ಣನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನ ನೀಡುತ್ತದೆ. ನೀವು ಇದನ್ನು ಪ್ರತಿದಿನವೂ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಪೇರಳೆ ಹಣ್ಣಿನ ಜೊತೆಗೆ ಎಲೆಗಳನ್ನು ಸಹ ಸಾಂಪ್ರದಾಯಿಕವಾಗಿ ಹಲವು ರೀತಿಯಲ್ಲಿ ಬಳಸಲಾಗುತ್ತದೆ ಮತ್ತು ಅವು ಕೂಡ ನಿಮಗೆ ಸಾಕಷ್ಟು ಪ್ರಯೋಜ ನೀಡುತ್ತದೆ. ಕೆಲವರು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆಗಳನ್ನು ಜಗಿಯುತ್ತಾರೆ, ಇದರಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನ ಸಿಗುತ್ತೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆಗಳನ್ನು ಜಗಿಯುವುದರಿಂದ ಏನೆಲ್ಲಾ ಪ್ರಯೋಜನಗಳು ದೊರೆಯಬಹುದು ಎಂಬುದನ್ನು ಇಂದು ತಿಳಿಯೋಣ. ಪೇರಳೆ ಎಲೆಗಳನ್ನು ಜಗಿಯುವುದರಿಂದ ಯಾವುದೇ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ ಅನ್ನೋದು ನೆನಪಿರಲಿ. ಆದರೆ ಸಮಸ್ಯೆಯ ಪರಿಣಾಮ ಕಡಿಮೆ ಮಾಡಬಹುದು.&lt;/p&gt;&lt;h3&gt;&lt;strong&gt;ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು&lt;/strong&gt;&lt;/h3&gt;&lt;p&gt;ನೀವು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆಗಳನ್ನು ಜಗಿದರೆ, ಹಲವು ಪ್ರಯೋಜನಗಳು ದೊರೆಯಬಹುದು. ಆದರೆ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು.&lt;/p&gt;&lt;p&gt;&lt;strong&gt;ಬ್ಲಡ್ ಶುಗರ್&lt;/strong&gt;&lt;/p&gt;&lt;p&gt;ಹೆಚ್ಚುತ್ತಿರುವ ಬ್ಲಡ್ ಶುಗರ್ ಮಟ್ಟವನ್ನು ಕಡಿಮೆ ಮಾಡಲು ಸಹ ಇದು ಸಹಾಯಕವಾಗಬಹುದು. ಪ್ರತಿದಿನ ಪೇರಳೆ ಎಲೆಗಳನ್ನು ಜಗಿಯುವುದು ಆರೋಗ್ಯ ಉತ್ತಮವಾಗುತ್ತದೆ. ಆದರೆ ಯಾರಿಗಾದರೂ ಮಧುಮೇಹ ಇದ್ದು ಅವರು ಔಷಧಿ ತೆಗೆದುಕೊಳ್ಳುತ್ತಿದ್ದರೆ, ಪೇರಳೆ ಎಲೆಗಳನ್ನು ಔಷಧಿಯಂತೆ ಪರಿಗಣಿಸಿ ಸೇವಿಸಬಾರದು.&lt;/p&gt;&lt;p&gt;&lt;strong&gt;ಬಾಯಿಯ ತಾಜಾತನ&lt;/strong&gt;&lt;/p&gt;&lt;p&gt;ಬಾಯಿಯ ತಾಜಾತನವನ್ನು ಕಾಪಾಡಿಕೊಳ್ಳಲು ಸಹ ಪ್ರತಿದಿನ ಪೇರಳೆ ಎಲೆಗಳನ್ನು ಜಗಿಯುವುದು ಉತ್ತಮ. ಬೆಳಗ್ಗೆ ಹಲ್ಲುಗಳನ್ನು ಬ್ರಷ್ ಮಾಡುವುದು, ನಾಲಿಗೆಯನ್ನು ಸ್ವಚ್ಛಗೊಳಿಸುವುದು, ಫ್ಲಾಸಿಂಗ್ ಮಾಡುವುದು ಮತ್ತು ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳುವುದು ಕೂಡ ಅಗತ್ಯ.&lt;/p&gt;&lt;p&gt;&lt;strong&gt;ಆ್ಯಂಟಿಆಕ್ಸಿಡೆಂಟ್ ಸಪೋರ್ಟ್&lt;/strong&gt;&lt;/p&gt;&lt;p&gt;ಆ್ಯಂಟಿಆಕ್ಸಿಡೆಂಟ್&zwnj;ಗಳ ಬೆಂಬಲ ಪಡೆಯಲು ಸಹ ಪೇರಳೆ ಎಲೆಗಳನ್ನು ಜಗಿಯುವುದು ಉತ್ತಮ. ದೇಹದಲ್ಲಿ ಉಂಟಾಗುವ ಆಕ್ಸಿಡೇಟಿವ್ ಸ್ಟ್ರೆಸ್ ವಿರುದ್ಧ ಹೋರಾಡಲು ಆ್ಯಂಟಿಆಕ್ಸಿಡೆಂಟ್&zwnj;ಗಳು ಸಹಾಯ ಮಾಡುತ್ತದೆ.&lt;/p&gt;&lt;p&gt;&lt;strong&gt;ಬಾಯಿಯ ಆರೋಗ್ಯಕ್ಕೆ ಪ್ರಯೋಜನಕಾರಿ&lt;/strong&gt;&lt;/p&gt;&lt;p&gt;ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಪೇರಳೆ ಎಲೆಗಳನ್ನು ಜಗಿಯುವುದು ಉತ್ತಮ ಪರಿಹಾರ. ನಿಮ್ಮ ಒಸಡುಗಳಿಂದ ರಕ್ತ ಬರುತ್ತಿದ್ದರೆ, ನಿರಂತರವಾಗಿ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಅಥವಾ ಹಲ್ಲುಗಳಲ್ಲಿ ನೋವು ಇದ್ದರೆ, ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಅದನ್ನು ಮರಿಬೇಡಿ.&lt;/p&gt;]]></content:encoded>
            <category>health-life</category>
            <dc:creator>Pavna Das</dc:creator>
            <atom:link href="https://kannada.asianetnews.com/health-life/5-possible-health-benefits-of-chewing-guava-leaves-daily/articleshow-pdvp1tg"/>
        </item>
        <item>
            <title><![CDATA[BGC Hospitals Kannada YouTube ಚಾನೆಲ್‌ಗೆ 1 ಲಕ್ಷ ಸಬ್‌ಸ್ಕ್ರೈಬರ್ಸ್‌; ಜೀರ್ಣಾಂಗ ಆರೋಗ್ಯ ಶಿಕ್ಷಣದಲ್ಲಿ ಐತಿಹಾಸಿಕ ಸಾಧನೆ]]></title>
            <link>https://kannada.asianetnews.com/health-life/bgc-hospitals-kannada-youtube-channel-crosses-100k-subscribers-san/articleshow-rgb2vm7</link>
            <guid isPermaLink="true">https://kannada.asianetnews.com/health-life/bgc-hospitals-kannada-youtube-channel-crosses-100k-subscribers-san/articleshow-rgb2vm7</guid>
            <pubDate>Tue, 11 Aug 2026 19:54:34 +0530</pubDate>
            <description><![CDATA[&lt;p&gt;ಬೆಂಗಳೂರು ಗ್ಯಾಸ್ಟ್ರೋ ಸೆಂಟರ್ (BGC Hospitals) ನ ಕನ್ನಡ ಯೂಟ್ಯೂಬ್ ಚಾನೆಲ್ 1 ಲಕ್ಷಕ್ಕೂ ಹೆಚ್ಚು ಸಬ್&zwnj;ಸ್ಕ್ರೈಬರ್&zwnj;ಗಳನ್ನು ತಲುಪಿದೆ. ಈ ಚಾನೆಲ್ ಹೊಟ್ಟೆ, ಯಕೃತ್ತು, ಮತ್ತು ಇತರ ಜೀರ್ಣಾಂಗ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzrk4nw01db8r0erv6h9esb8,imgname-bgc-hospital-1786458036096.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.11): &lt;/strong&gt;ಡಿಜಿಟಲ್ ಮಾಧ್ಯಮಗಳು ಆರೋಗ್ಯ ಶಿಕ್ಷಣದ ಪ್ರಮುಖ ವೇದಿಕೆಯಾಗುತ್ತಿರುವ ಈ ಸಂದರ್ಭದಲ್ಲಿ,ಬೆಂಗಳೂರು ಗ್ಯಾಸ್ಟ್ರೋ ಸೆಂಟರ್ (BGC Hospitals) ಮತ್ತೊಂದು ಗಮನಾರ್ಹ ಸಾಧನೆ ಮಾಡಿದೆ. ಆಸ್ಪತ್ರೆಯ BGC Hospitals Kannada YouTube ಚಾನೆಲ್ 1 ಲಕ್ಷಕ್ಕೂ ಹೆಚ್ಚು (100K+) ಸಬ್&zwnj;ಸ್ಕ್ರೈಬರ್&zwnj; ತಲುಪುವ ಮೂಲಕ ಜೀರ್ಣಾಂಗ (Gastroenterology) ಆರೋಗ್ಯ ಕ್ಷೇತ್ರಕ್ಕೆ ಸಮರ್ಪಿತವಾದ ಮೊದಲ ಕನ್ನಡ YouTube ಚಾನೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ಸಾಮಾನ್ಯವಾಗಿ ಆಸ್ಪತ್ರೆಗಳ YouTube ಚಾನೆಲ್&zwnj;ಗಳು ಆಸ್ಪತ್ರೆಯ ಕಾರ್ಯಕ್ರಮಗಳು, ವೈದ್ಯರ ಪರಿಚಯ ಅಥವಾ ಜಾಹೀರಾತು ವಿಡಿಯೋಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ BGC Hospitals ತನ್ನ YouTube ಚಾನೆಲ್ ಅನ್ನು ಆರೋಗ್ಯ ಶಿಕ್ಷಣದ ವೇದಿಕೆಯಾಗಿಸಿ, ಸಾಮಾನ್ಯ ಜನರಿಗೆ ವೈಜ್ಞಾನಿಕ ಹಾಗೂ ವೈದ್ಯಕೀಯ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಉದ್ದೇಶದಿಂದ ನಿರಂತರವಾಗಿ ವಿಷಯಗಳನ್ನು ಪ್ರಕಟಿಸುತ್ತಿದೆ.&lt;/p&gt;&lt;p&gt;ಈ ಚಾನೆಲ್&zwnj;ನಲ್ಲಿ ಹೊಟ್ಟೆ, ಜೀರ್ಣಾಂಗ, ಯಕೃತ್ತು (Liver), Pancreas, ಅಂತರಗಳು, ಗ್ಯಾಸ್ಟ್ರಿಕ್ ಸಮಸ್ಯೆಗಳು, ಅಲ್ಸರ್, ಆಸಿಡ್ ರಿಫ್ಲಕ್ಸ್, ಫ್ಯಾಟಿ ಲಿವರ್, ಪೈಲ್ಸ್, ಫಿಸ್ತುಲಾ, ಮಲಬದ್ಧತೆ, IBS, IBD ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳ ಕುರಿತು ತಜ್ಞ ವೈದ್ಯರು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಆರೋಗ್ಯ ಜಾಗೃತಿ ಮುಖ್ಯ ಉದ್ದೇಶ&lt;/strong&gt;&lt;/h2&gt;&lt;p&gt;ಆರೋಗ್ಯ ಸಮಸ್ಯೆಗಳು ಗಂಭೀರವಾಗುವ ಮೊದಲು ಸರಿಯಾದ ಮಾಹಿತಿ ದೊರಕಿದರೆ ಅನೇಕ ರೋಗಗಳನ್ನು ತಡೆಯಲು ಸಾಧ್ಯ. ಇದೇ ಉದ್ದೇಶದಿಂದ BGC Hospitals ಹಲವು ವರ್ಷಗಳಿಂದ ಡಿಜಿಟಲ್ ಆರೋಗ್ಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.&lt;/p&gt;&lt;p&gt;ಚಾನೆಲ್&zwnj;ನಲ್ಲಿ ಪ್ರಕಟವಾಗುವ ವಿಡಿಯೋಗಳು ಸಾಮಾನ್ಯವಾಗಿ ರೋಗಗಳ ಲಕ್ಷಣಗಳು, ಕಾರಣಗಳು, ಚಿಕಿತ್ಸೆ, ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು, ಯಾವ ಪರೀಕ್ಷೆಗಳು ಅಗತ್ಯ, ಯಾವ ಆಹಾರ ಪದ್ಧತಿ ಅನುಸರಿಸಬೇಕು ಎಂಬ ವಿಷಯಗಳನ್ನು ಒಳಗೊಂಡಿರುತ್ತವೆ. ವೈದ್ಯಕೀಯ ಪದಗಳನ್ನು ಸರಳ ಕನ್ನಡದಲ್ಲಿ ವಿವರಿಸುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೂ ಉಪಯುಕ್ತ ಮಾಹಿತಿಯನ್ನು ತಲುಪಿಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ತಜ್ಞ ವೈದ್ಯರಿಂದ ನೇರ ಮಾಹಿತಿ&lt;/strong&gt;&lt;/h2&gt;&lt;p&gt;ಇಂಟರ್ನೆಟ್&zwnj;ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ತಪ್ಪು ಮಾಹಿತಿಗಳು ಹರಿದಾಡುತ್ತಿರುವ ಸಂದರ್ಭದಲ್ಲಿ, ತಜ್ಞ ವೈದ್ಯರಿಂದ ನೇರವಾಗಿ ಮಾಹಿತಿ ಪಡೆಯುವುದು ಅತ್ಯಂತ ಮುಖ್ಯವಾಗಿದೆ. BGC Hospitals Kannada ಚಾನೆಲ್&zwnj;ನ ಪ್ರಮುಖ ವಿಶೇಷತೆಯೇ ಇದು.&lt;/p&gt;&lt;p&gt;ವೈದ್ಯರು ತಮ್ಮ ದೈನಂದಿನ ಚಿಕಿತ್ಸಾ ಅನುಭವದ ಆಧಾರದ ಮೇಲೆ ರೋಗಿಗಳಲ್ಲಿ ಹೆಚ್ಚಾಗಿ ಕಾಣುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಇದರಿಂದ ಜನರಲ್ಲಿ ಇರುವ ಅನಗತ್ಯ ಭಯ ಹಾಗೂ ತಪ್ಪು ಕಲ್ಪನೆಗಳು ಕಡಿಮೆಯಾಗಲು ಸಹಕಾರಿಯಾಗುತ್ತಿದೆ.&lt;/p&gt;&lt;h2&gt;&lt;strong&gt;ಕನ್ನಡದಲ್ಲಿ ಆರೋಗ್ಯ ಶಿಕ್ಷಣದ ಅಗತ್ಯ&lt;/strong&gt;&lt;/h2&gt;&lt;p&gt;ಭಾರತದಲ್ಲಿ ಆರೋಗ್ಯ ಮಾಹಿತಿಯ ಬಹುಪಾಲು ಇಂಗ್ಲಿಷ್ ಅಥವಾ ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಆದರೆ ಕರ್ನಾಟಕದ ಅನೇಕ ಜನರಿಗೆ ವೈದ್ಯಕೀಯ ಮಾಹಿತಿಯನ್ನು ತಮ್ಮ ಮಾತೃಭಾಷೆಯಲ್ಲೇ ಅರ್ಥಮಾಡಿಕೊಳ್ಳುವುದು ಸುಲಭ.&lt;/p&gt;&lt;p&gt;ಈ ಅಗತ್ಯವನ್ನು ಮನಗಂಡು BGC Hospitals ಕನ್ನಡದಲ್ಲಿ ಗುಣಮಟ್ಟದ ಆರೋಗ್ಯ ವಿಷಯಗಳನ್ನು ನಿರಂತರವಾಗಿ ಪ್ರಕಟಿಸುತ್ತಿದ್ದು, ಗ್ರಾಮೀಣ ಪ್ರದೇಶಗಳ ಜನರೂ ಸಹ ಇದರ ಪ್ರಯೋಜನ ಪಡೆಯುತ್ತಿದ್ದಾರೆ.&lt;/p&gt;&lt;h2&gt;&lt;strong&gt;BGC Hospitals ಬಗ್ಗೆ&lt;/strong&gt;&lt;/h2&gt;&lt;p&gt;ಬೆಂಗಳೂರು ಗ್ಯಾಸ್ಟ್ರೋ ಸೆಂಟರ್ (BGC Hospitals) ಜೀರ್ಣಾಂಗ ಮತ್ತು ಯಕೃತ್ತಿನ ಕಾಯಿಲೆಗಳ ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಆಸ್ಪತ್ರೆಯಾಗಿದೆ. ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ, ಎಂಡೋಸ್ಕೋಪಿ, ಮಿನಿಮಲಿ ಇನ್ವೇಸಿವ್ ಸರ್ಜರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಗ್ರ ಚಿಕಿತ್ಸೆಯನ್ನು ಒದಗಿಸುತ್ತಿದೆ.&lt;/p&gt;&lt;p&gt;ರೋಗಿ ಕೇಂದ್ರಿತ ಸೇವೆ, ಆಧುನಿಕ ವೈದ್ಯಕೀಯ ತಂತ್ರಜ್ಞಾನ ಹಾಗೂ ಅನುಭವಿ ತಜ್ಞ ವೈದ್ಯರ ತಂಡದ ಮೂಲಕ ಆಸ್ಪತ್ರೆ ಕರ್ನಾಟಕದಲ್ಲಿ ಜೀರ್ಣಾಂಗ ಚಿಕಿತ್ಸೆಗೆ ವಿಶ್ವಾಸಾರ್ಹ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆಸ್ಪತ್ರೆಯು ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಜೀರ್ಣಾಂಗ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ವೈದ್ಯಕೀಯ ಶಿಕ್ಷಣ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದ್ದು, ಆರೋಗ್ಯ ಸೇವೆಯನ್ನು ಆಸ್ಪತ್ರೆಯ ನಾಲ್ಕು ಗೋಡೆಗಳೊಳಗೆ ಮಾತ್ರ ಸೀಮಿತಗೊಳಿಸದೆ ಸಮಾಜದತ್ತ ವಿಸ್ತರಿಸಿದೆ.&lt;/p&gt;&lt;h2&gt;&lt;strong&gt;ಡಿಜಿಟಲ್ ಶಿಕ್ಷಣವೇ ಹೊಸ ಆರೋಗ್ಯ ಸೇವೆ&lt;/strong&gt;&lt;/h2&gt;&lt;p&gt;ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಡಿಜಿಟಲ್ ಶಿಕ್ಷಣದ ಮಹತ್ವ ಹೆಚ್ಚುತ್ತಿದೆ. ರೋಗಿಗಳು ಆಸ್ಪತ್ರೆಗೆ ಬರುವ ಮುನ್ನವೇ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ YouTube ಸೇರಿದಂತೆ ಸಾಮಾಜಿಕ ಜಾಲತಾಣಗಳು ಆರೋಗ್ಯ ಜಾಗೃತಿಯ ಪ್ರಮುಖ ಸಾಧನಗಳಾಗಿವೆ.&lt;/p&gt;&lt;p&gt;BGC Hospitals ಕೂಡ ಇದೇ ದಿಕ್ಕಿನಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಜನರಿಗೆ ವೈಜ್ಞಾನಿಕ ಮಾಹಿತಿ ಸುಲಭವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದೆ.&lt;/p&gt;&lt;ul&gt; &lt;li&gt;1 ಲಕ್ಷ ಸಬ್&zwnj;ಸ್ಕ್ರೈಬರ್&zwnj; ಮೈಲಿಗಲ್ಲು&lt;/li&gt; &lt;li&gt;1 ಲಕ್ಷಕ್ಕೂ ಹೆಚ್ಚು ಸಬ್&zwnj;ಸ್ಕ್ರೈಬರ್&zwnj; ತಲುಪಿರುವುದು ಕೇವಲ ಒಂದು ಸಂಖ್ಯೆಯ ಸಾಧನೆಯಲ್ಲ. ಇದು ಜನರು ವಿಶ್ವಾಸಾರ್ಹ ಆರೋಗ್ಯ ಮಾಹಿತಿಯನ್ನು ಹುಡುಕುತ್ತಿರುವುದಕ್ಕೆ ಸಾಕ್ಷಿಯಾಗಿದೆ.&lt;/li&gt;&lt;/ul&gt;&lt;p&gt;ಈ ಸಾಧನೆಯ ಹಿಂದೆ ನಿರಂತರವಾಗಿ ಪ್ರಕಟವಾಗುತ್ತಿರುವ ಗುಣಮಟ್ಟದ ವಿಡಿಯೋಗಳು, ವೈದ್ಯರ ಸರಳ ವಿವರಣೆಗಳು, ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ನೀಡಲಾಗುತ್ತಿರುವ ಆರೋಗ್ಯ ಮಾಹಿತಿ ಹಾಗೂ ಸಾರ್ವಜನಿಕ ಆರೋಗ್ಯ ಜಾಗೃತಿಯ ಮೇಲಿನ ಆಸ್ಪತ್ರೆಯ ಬದ್ಧತೆ ಪ್ರಮುಖ ಕಾರಣಗಳಾಗಿವೆ.&lt;/p&gt;&lt;p&gt;ಆಸ್ಪತ್ರೆಯ ಇಂಗ್ಲಿಷ್ YouTube ಚಾನೆಲ್ ಕೂಡ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಸಬ್&zwnj;ಸ್ಕ್ರೈಬರ್&zwnj; ಹೊಂದಿದ್ದು, ಲಕ್ಷಾಂತರ ವೀಕ್ಷಕರಿಗೆ ಆರೋಗ್ಯ ಶಿಕ್ಷಣವನ್ನು ತಲುಪಿಸುತ್ತಿದೆ. ಈಗ ಕನ್ನಡ ಚಾನೆಲ್ ಕೂಡ ಈ ಮಹತ್ವದ ಮೈಲಿಗಲ್ಲು ಸಾಧಿಸಿರುವುದು ಕನ್ನಡ ಭಾಷೆಯ ಆರೋಗ್ಯ ಶಿಕ್ಷಣ ಕ್ಷೇತ್ರಕ್ಕೆ ಹೊಸ ಹೆಮ್ಮೆ ತಂದಿದೆ.&lt;/p&gt;&lt;h2&gt;&lt;strong&gt;ಮುಂದಿನ ಗುರಿ&lt;/strong&gt;&lt;/h2&gt;&lt;p&gt;ಆರೋಗ್ಯ ಮಾಹಿತಿಯನ್ನು ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಿಸುವುದು, ಜೀರ್ಣಾಂಗ ಕಾಯಿಲೆಗಳ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸುವುದು ಹಾಗೂ ತಪ್ಪು ಮಾಹಿತಿಯನ್ನು ತಜ್ಞ ವೈದ್ಯರ ಸಲಹೆಗಳ ಮೂಲಕ ಸರಿಪಡಿಸುವುದು BGC Hospitals Kannada ಚಾನೆಲ್ನ ಮುಂದಿನ ಗುರಿಯಾಗಿದೆ.&lt;/p&gt;&lt;p&gt;ಡಿಜಿಟಲ್ ಆರೋಗ್ಯ ಶಿಕ್ಷಣದ ಮೂಲಕ ಸಾವಿರಾರು ಕುಟುಂಬಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿ ತಲುಪಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವ ಪ್ರಯತ್ನವನ್ನು ಆಸ್ಪತ್ರೆ ಮುಂದುವರಿಸುತ್ತಿದೆ.&lt;/p&gt;&lt;p&gt;ಜೀರ್ಣಾಂಗ ಆರೋಗ್ಯಕ್ಕೆ ಸಮರ್ಪಿತ ಮೊದಲ ಕನ್ನಡ YouTube ಚಾನೆಲ್ 1 ಲಕ್ಷ ಸಬ್&zwnj;ಸ್ಕ್ರೈಬರ್&zwnj; ತಲುಪಿರುವುದು ಕನ್ನಡ ಡಿಜಿಟಲ್ ಆರೋಗ್ಯ ಶಿಕ್ಷಣದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಆರೋಗ್ಯ ಜಾಗೃತಿಗೆ ಹೊಸ ದಿಕ್ಕು ನೀಡಿದ ಸಾಧನೆಯಾಗಿದೆ.&lt;/p&gt;&lt;h2&gt;&lt;strong&gt;ಹೆಚ್ಚಿನ ಮಾಹಿತಿಗಾಗಿ:&lt;/strong&gt;&lt;/h2&gt;&lt;p&gt;&lt;strong&gt;ವೆಬ್&zwnj;ಸೈಟ್&zwnj;: &lt;/strong&gt;&lt;strong&gt;https://www.bangaloregastrocentre.com&lt;/strong&gt;&lt;/p&gt;&lt;p&gt;&lt;strong&gt;BGC Hospitals Kannada YouTube ಚಾನೆಲ್: &lt;/strong&gt;https://www.youtube.com/@BGCHospitalsKannada&lt;/p&gt;&lt;p&gt;&lt;strong&gt;BGC Hospitals English YouTube ಚಾನೆಲ್: &lt;/strong&gt;https://www.youtube.com/@BangaloreGastroCentreHospital&lt;/p&gt;]]></content:encoded>
            <category>health-life</category>
            <dc:creator>Santosh Naik</dc:creator>
            <atom:link href="https://kannada.asianetnews.com/health-life/bgc-hospitals-kannada-youtube-channel-crosses-100k-subscribers-san/articleshow-rgb2vm7"/>
        </item>
        <item>
            <title><![CDATA[ನೀರು, ಸೋಡಾ, ಐಸ್ ಕ್ಯೂಬ್ಸ್.. ಡ್ರಿಂಕ್ಸ್ ಜೊತೆ ಯಾವ್ದು ಮಿಕ್ಸ್ ಮಾಡಬೇಕು? ಇಲ್ಲಿದೆ ತಜ್ಞರ ಉತ್ತರ]]></title>
            <link>https://kannada.asianetnews.com/gallery/life/soda-or-water-the-shocking-science-of-mixing-alcohol-rmq5yhb</link>
            <guid isPermaLink="true">https://kannada.asianetnews.com/gallery/life/soda-or-water-the-shocking-science-of-mixing-alcohol-rmq5yhb</guid>
            <pubDate>Sun, 16 Aug 2026 18:23:07 +0530</pubDate>
            <description><![CDATA[&lt;p&gt;Alcohol Mixing Science: ಡ್ರಿಂಕ್ಸ್ ಜೊತೆ ನೀರು ಹಾಕಬೇಕಾ ಅಥವಾ ಸೋಡಾ ಹಾಕಬೇಕಾ? ಐಸ್ ಕ್ಯೂಬ್ಸ್ ಹಾಕಿದರೆ ಕಹಿ ಕಡಿಮೆಯಾಗುವುದು ಏಕೆ? ಈ ಎಲ್ಲಾ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m059wc1xqkz5m6r0xnfhmfz4,imgname-thumbnail---2026-08-16t181817.071-1786884534332.jpg" type="image/jpeg" height="390" width="690"/>
            <content:encoded><![CDATA[&lt;p&gt;Alcohol Mixing Science: ಡ್ರಿಂಕ್ಸ್ ಜೊತೆ ನೀರು ಹಾಕಬೇಕಾ ಅಥವಾ ಸೋಡಾ ಹಾಕಬೇಕಾ? ಐಸ್ ಕ್ಯೂಬ್ಸ್ ಹಾಕಿದರೆ ಕಹಿ ಕಡಿಮೆಯಾಗುವುದು ಏಕೆ? ಈ ಎಲ್ಲಾ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಸಾರ್ವಜನಿಕರಲ್ಲಿರುವ ತಪ್ಪು ತಿಳುವಳಿಕೆಗಳಿಗೆ ಸರಿ ಉತ್ತರ&lt;/strong&gt;ಮದ್ಯಪಾನ ಅಂದ್ರೆ ಡ್ರಿಂಕ್ಸ್ ಮಾಡುವವರಲ್ಲಿ ಸಾಮಾನ್ಯವಾಗಿ ಕಾಡುವ ಒಂದು ದೊಡ್ಡ ಪ್ರಶ್ನೆಯೆಂದರೆ, ಮದ್ಯದ ಜೊತೆ ನೀರು ಬೆರೆಸಬೇಕೋ ಅಥವಾ ಸೋಡಾ ಬೆರೆಸಬೇಕೋ? ಈ ಕುರಿತು ಸಾರ್ವಜನಿಕರಲ್ಲಿರುವ ಅನೇಕ ತಪ್ಪು ತಿಳುವಳಿಕೆಗಳಿಗೆ ಪ್ರಖ್ಯಾತ ಆರೋಗ್ಯ ತಜ್ಞರಾದ ಡಾ. ರಾಜು ಅವರು ವೈಜ್ಞಾನಿಕ ಉತ್ತರ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಮದ್ಯದ ಬಗ್ಗೆ ಡಾಕ್ಟರ್ ವೈಜ್ಞಾನಿಕ ವಿಶ್ಲೇಷಣೆ&lt;/strong&gt;ಡಾ. ರಾಜು ಅವರು ಹೇಳುವಂತೆ, &quot;ನಮ್ಮ ದೇಹದ ಜೀವಕೋಶಗಳಾಗಲಿ, ಹೃದಯವಾಗಲಿ ಅಥವಾ ಲಿವರ್ ಆಗಲಿ ಎಂದೂ ಆಲ್ಕೋಹಾಲ್ ಅನ್ನು ಕೇಳುವುದಿಲ್ಲ. ಇದು ದೇಹದ ಅವಶ್ಯಕತೆಯಲ್ಲ, ಕೇವಲ ಮನಸ್ಸಿನ ಸಮಾಧಾನಕ್ಕಾಗಿ ಮಾಡುವಂತಹದ್ದು. ಒಂದು ವೇಳೆ ಅಭ್ಯಾಸವಿಲ್ಲದಿದ್ದರೆ ದಯವಿಟ್ಟು ಆರಂಭಿಸಬೇಡಿ.&quot; ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;ಮದ್ಯದೊಂದಿಗೆ ವಿವಿಧ ದ್ರವಗಳನ್ನು ಮಿಕ್ಸ್ ಮಾಡಿದಾಗ ದೇಹದ ಮೇಲೆ ಉಂಟಾಗುವ ಪರಿಣಾಮಗಳನ್ನು ಅವರು ಈ ಕೆಳಗಿನಂತೆ ವಿವರಿಸಿದ್ದಾರೆ..&lt;/p&gt;&lt;img&gt;&lt;p&gt;&lt;strong&gt;1. ಐಸ್ ಕ್ಯೂಬ್ಸ್ (On the Rocks)&lt;/strong&gt;ಬಹಳಷ್ಟು ಮಂದಿ ಐಸ್ ಕ್ಯೂಬ್ಸ್ ಮಾತ್ರ ಹಾಕಿ ಕುಡಿಯುತ್ತಾರೆ. ಮದ್ಯದ ಕಹಿಯನ್ನು ಮರೆಮಾಚಲು ಇದು ಸಹಕಾರಿ. ಐಸ್&zwnj;ನಿಂದಾಗಿ ಬಾಯಿಯ ನರಗಳು ಮರಗಟ್ಟುವುದರಿಂದ ಮದ್ಯದ ಕಹಿ ಫೀಲ್ ಆಗುವುದಿಲ್ಲ ಎಂದು ಡಾ. ರಾಜು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;2. ಸೋಡಾ ಮತ್ತು 'ಕಿಕ್' ರಹಸ್ಯ&lt;/strong&gt;ಸೋಡಾ ಮಿಕ್ಸ್ ಮಾಡಿದಾಗ ಅದರಲ್ಲಿರುವ ಅನಿಲವು (Gas) ಹೊಟ್ಟೆಯಲ್ಲಿರುವ ಆಲ್ಕೋಹಾಲ್ ಅನ್ನು ಅತಿ ವೇಗವಾಗಿ ಸಣ್ಣ ಕರಳಿಗೆ ತಳ್ಳುತ್ತದೆ. ಇದರಿಂದ ಮದ್ಯವು ರಕ್ತಕ್ಕೆ ಅತಿ ವೇಗವಾಗಿ ಸೇರುವುದರಿಂದ 'ಕಿಕ್' ಬೇಗನೆ ಸಿಗುತ್ತದೆ. ಇದು ದೇಹದ ಮೇಲೆ ಅತಿ ವೇಗವಾಗಿ ಪರಿಣಾಮ ಬೀರುವ ವಿಧಾನವಾಗಿದೆ.&lt;/p&gt;&lt;img&gt;&lt;p&gt;&lt;strong&gt;3. ಸಾಫ್ಟ್ ಡ್ರಿಂಕ್ಸ್ (ಸ್ಪ್ರೈಟ್/ಕೋಕ್) ಮತ್ತು ಹ್ಯಾಂಗ್ ಓವರ್&lt;/strong&gt;ಸ್ಪ್ರೈಟ್ ಅಥವಾ ಇತರೆ ಕೂಲ್ ಡ್ರಿಂಕ್ಸ್ ಬೆರೆಸಿದಾಗ ಅದರಲ್ಲಿರುವ ಅತಿಯಾದ ಗ್ಲುಕೋಸ್ (ಸಕ್ಕರೆ) ಅಂಶವು ದೇಹದಲ್ಲಿ ಶುಗರ್ ಲೆವೆಲ್ ಹೆಚ್ಚಿಸುತ್ತದೆ. ಇದು ದೇಹವನ್ನು ನಿರ್ಜಲೀಕರಣ (Dehydration) ಮಾಡುವುದರಿಂದ ಮಾರನೇ ದಿನ ವಿಪರೀತ ಹ್ಯಾಂಗ್ ಓವರ್ ಮತ್ತು ತಲೆನೋವಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;4. ಕಾಕ್ಟೈಲ್ ಎಂಬ ಕ್ಯಾಲೋರಿ ಬಾಂಬ್&lt;/strong&gt;ಜ್ಯೂಸ್, ಹಣ್ಣುಗಳು ಮತ್ತು ವಿವಿಧ ಫ್ಲೇವರ್ ಬೆರೆಸಿದ ಕಾಕ್ಟೈಲ್&zwnj;ಗಳು ಅತಿಯಾದ ಸಕ್ಕರೆ ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತವೆ. ಡಾ. ರಾಜು ಅವರ ಪ್ರಕಾರ, ಒಂದು ಗ್ಲಾಸ್ ಕಾಕ್ಟೈಲ್ ಕುಡಿಯುವುದು ಒಂದು ಪೂರ್ಣ ಪ್ರಮಾಣದ ಊಟ ಮಾಡಿದಷ್ಟೇ ಕ್ಯಾಲೋರಿಗಳನ್ನು ದೇಹಕ್ಕೆ ನೀಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ದೇಹಕ್ಕೆ ಹಾನಿಯಾಗದಂತೆ ಜಾಗೃತೆ ವಹಿಸಿ&lt;/strong&gt;ಮದ್ಯಪಾನವು ಆರೋಗ್ಯಕ್ಕೆ ಎಂದಿಗೂ ಪೂರಕವಲ್ಲ. ಒಂದು ವೇಳೆ ಈ ಅಭ್ಯಾಸವನ್ನು ಬಿಡಲು ಸಾಧ್ಯವಾಗದಿದ್ದರೆ, ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸುವುದು ಮತ್ತು ದೇಹಕ್ಕೆ ಹಾನಿಯಾಗದಂತೆ ಜಾಗೃತೆ ವಹಿಸುವುದು ಮುಖ್ಯ ಎಂದು ಡಾ. ರಾಜು ತಿಳಿಸಿದ್ದಾರೆ.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/soda-or-water-the-shocking-science-of-mixing-alcohol-rmq5yhb"/>
        </item>
        <item>
            <title><![CDATA[ಜಾಗತಿಕ ರೋಗಿಗಳ ನೆಚ್ಚಿನ ತಾಣವಾದ ಇಂಡಿಯಾ: ಬ್ರಿಟನ್ ರೋಗಿಗೆ ಹೊಸ ಜೀವನ ಕೊಟ್ಟ ಭಾರತದ ವೈದ್ಯರು!]]></title>
            <link>https://kannada.asianetnews.com/health-life/why-global-patients-choose-india-for-medical-tourism-uk-man-jean-paul-s-nhs-dilemma-to-knee-surgery-success-gdp/articleshow-tb3b5s4</link>
            <guid isPermaLink="true">https://kannada.asianetnews.com/health-life/why-global-patients-choose-india-for-medical-tourism-uk-man-jean-paul-s-nhs-dilemma-to-knee-surgery-success-gdp/articleshow-tb3b5s4</guid>
            <pubDate>Wed, 12 Aug 2026 11:31:35 +0530</pubDate>
            <description><![CDATA[ಯುಕೆಯಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಅಡಿಯಲ್ಲಿ ಮೂರು ವರ್ಷ ಕಾಯುವ ಬದಲು, ಬ್ರಿಟಿಷ್ ಪ್ರಜೆ ಜೀನ್ ಪಾಲ್ ಭಾರತಕ್ಕೆ ಬಂದು ಕಡಿಮೆ ವೆಚ್ಚದಲ್ಲಿ ಯಶಸ್ವಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಈ ಘಟನೆಯು ಭಾರತದ ವೈದ್ಯಕೀಯ ಪ್ರವಾಸೋದ್ಯಮದ ಬೆಳವಣಿಗೆ ಮತ್ತು ವಿದೇಶಿಯರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿರುವ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಎತ್ತಿ ತೋರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzt7jr8cd5fw3sn71yxevd4c,imgname-jean-paul-1786513023244.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿಗೆ ಬ್ರಿಟಿಷ್ ಪ್ರಜೆ ಜೀನ್ ಪಾಲ್ ಅವರ ಕಥೆಯು ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ರೋಗಿಗಳು ತಮ್ಮ ತಾಯ್ನಾಡಿನ ಆರೋಗ್ಯ ರಕ್ಷಣಾ ವ್ಯವಸ್ಥೆಯ ಹಿನ್ನಡೆಗಳನ್ನು ಹೇಗೆಎದುರಿಸುತ್ತಿದ್ದಾರೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಅವರು ಯುಕೆಯಂತಹ ದೂರದ ಊರಿನಿಂದ ಭಾರತಕ್ಕೆ ಬಂದು ಇಲ್ಲಿನ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಕಡಿಮೆ ವೆಚ್ಚದಲ್ಲಿ ಪಡೆದು ಉತ್ತಮ ಆರೋಗ್ಯದ ಮೂಲಕ ಹಿಂತಿರುಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದೇಶಿಯರು ಭಾರತಕ್ಕೆ ವೈದ್ಯಕೀಯ ಚಿಕಿತ್ಸೆಗೆ ಬರುತ್ತಿರುವುದು ಹೆಚ್ಚುತ್ತಿದೆ.&lt;/p&gt;&lt;h2&gt;ಬ್ರಿಟಿಷ್ ಪ್ರಜೆಯ ಭಾರತದ ವೈದ್ಯಕೀಯ ಪ್ರಯಾಣ&lt;/h2&gt;&lt;p&gt;ಬ್ರಿಟನ್&zwnj;ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಅಡಿಯಲ್ಲಿ ಜೀನ್ ಪಾಲ್ ಅವರಿಗೆ ಮೂರು ವರ್ಷಗಳ ಕಾಲ ಕಾಯುವ ಅನಿವಾರ್ಯತೆ ಎದುರಾಯಿತು. ಇದರಿಂದಾಗಿ ಅವರು 'ತಮ್ಮ ಸಾಕುನಾಯಿಗಳನ್ನು ವಾಯುವಿಹಾರಕ್ಕೆ ಕರೆದೊಯ್ಯುವುದು ಹಾಗೂ ಪತ್ನಿಯ ಕೈಹಿಡಿದು ಕಾಲುವೆಯ ದಂಡೆಯಲ್ಲಿ ಸಂಜೆ ವಿಹರಿಸುವುದು' ಮುಂತಾದ ಜೀವನದ ಸಣ್ಣಪುಟ್ಟ ಸಂತೋಷಗಳಿಂದ ವಂಚಿತರಾಗಬೇಕಾಯಿತು. ಯುಕೆ ಮತ್ತು ಭಾರತ ಮೂಲದ 'ದಿ ಮೆಡಿಕಲ್ ಟ್ರಾವೆಲ್ ಕಂಪನಿ' ಆಗಸ್ಟ್ 10 ರಂದು ತನ್ನ ಇನ್&zwnj;ಸ್ಟಾಗ್ರಾಮ್ ಪೋಸ್ಟ್&zwnj;ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.&lt;/p&gt;&lt;p&gt;ಪೋಸ್ಟ್&zwnj;ನ ಪ್ರಕಾರ, ನಿರಂತರ ಕೀಲು ನೋವಿನಿಂದ ಬಳಲುತ್ತಿದ್ದ ಅವರು ಖಾಸಗಿಯಾಗಿ ಇಮೇಜಿಂಗ್ ಸ್ಕ್ಯಾನ್ ಮಾಡಿಸಿಕೊಂಡಾಗ ಅವರ ವೈದ್ಯಕೀಯ ಪ್ರಯಾಣ ಪ್ರಾರಂಭವಾಯಿತು. ಈ ಸ್ಕ್ಯಾನ್ ವರದಿಗಳನ್ನು ಸಾಮಾನ್ಯ ವೈದ್ಯರಿಗೆ ತೋರಿಸಿದಾಗ, ಅವರನ್ನು ಮೂಳೆಚಿಕಿತ್ಸಾ ವಿಭಾಗಕ್ಕೆ ಸಜೆಸ್ಟ್ ಮಾಡಲಾಯ್ತು. ತಜ್ಞ ವೈದ್ಯರು ಪರಿಶೀಲಿಸಿ, ಜೀನ್ ಅವರ ಎರಡೂ ಮೊಣಕಾಲುಗಳ ಸಂಪೂರ್ಣ ಬದಲಿ ಶಸ್ತ್ರಚಿಕಿತ್ಸೆ ಅತ್ಯಗತ್ಯವೆಂದು ದೃಢಪಡಿಸಿದರು. ಆದರೆ, ಸ್ಥಳೀಯ NHS ನಿಯಮಾವಳಿಗಳ ಪ್ರಕಾರ ಎರಡೂ ಮೊಣಕಾಲುಗಳಿಗೆ ಏಕಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಅವಕಾಶವಿರಲಿಲ್ಲ ಮತ್ತು ಇದಕ್ಕೆ ಹಲವು ವರ್ಷ ಕಾಯಬೇಕಾದ ಪರಿಸ್ಥಿತಿಯಿತ್ತು.&lt;/p&gt;&lt;p&gt;ಇಷ್ಟೊಂದು ಸುದಿರ್ಘ ಕಾಲ ಕಾಯಲು ಇಷ್ಟವಿಲ್ಲದ ಜೀನ್, 'ದಿ ಮೆಡಿಕಲ್ ಟ್ರಾವೆಲ್ ಕಂಪನಿ'ಯನ್ನು ಸಂಪರ್ಕಿಸಿದರು. ಅವರು ಭಾರತಕ್ಕೆ ವಿಮಾನ ಹತ್ತುವ ಮುನ್ನವೇ, ಸಂಸ್ಥೆಯ ಯುಕೆ ವೈದ್ಯಕೀಯ ನಿರ್ದೇಶಕರು ಹಾಗೂ ಆಹಾರ ತಜ್ಞರು ಅವರಿಗೆ ಅಗತ್ಯ ಶಾರೀರಿಕ ಪೂರ್ವಸಿದ್ಧತೆಗಳ ಮಾರ್ಗದರ್ಶನ ನೀಡಿದರು. ಶಸ್ತ್ರಚಿಕಿತ್ಸೆಗೆ ಸೂಕ್ತ ದೈಹಿಕ ಅರ್ಹತೆ ಪಡೆಯಲು ಜೀನ್ ಕೆಲವೇ ತಿಂಗಳುಗಳಲ್ಲಿ ಸುಮಾರು 19 ಕಿಲೋಗ್ರಾಂಗಳಷ್ಟು ತೂಕ ಇಳಿಸಿಕೊಂಡರು. ಭಾರತಕ್ಕೆ ಬಂದ ತಕ್ಷಣ ಅವರನ್ನು ಮ್ಯಾಕ್ಸ್ ಹೆಲ್ತ್&zwnj;ಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅಲ್ಲಿನ ವೈದ್ಯರು ಯಶಸ್ವಿಯಾಗಿ ಎರಡೂ ಮೊಣಕಾಲುಗಳ ಶಸ್ತ್ರಚಿಕಿತ್ಸೆ ನೆರವೇರಿಸಿದರು.&lt;/p&gt;&lt;h2&gt;ವೆಚ್ಚ ಮತ್ತು ಸೌಲಭ್ಯಗಳ ಹೋಲಿಕೆ&lt;/h2&gt;&lt;p&gt;ಸದರಿ ಪೋಸ್ಟ್ ಎರಡೂ ದೇಶಗಳ ಆರೋಗ್ಯ ವ್ಯವಸ್ಥೆಯ ನಡುವಿನ ಆರ್ಥಿಕ ಹಾಗೂ ಕಾರ್ಯಾಚರಣೆಯ ಗಮನಾರ್ಹ ವ್ಯತ್ಯಾಸವನ್ನು ತೋರಿಸಿದೆ. ಯುಕೆಯಲ್ಲಿ ಖಾಸಗಿಯಾಗಿ ಶಸ್ತ್ರಚಿಕಿತ್ಸೆ, ಶಸ್ತ್ರಚಿಕಿತ್ಸೋತ್ತರ ಆರೈಕೆ ಮತ್ತು ಭೌತಚಿಕಿತ್ಸೆಗೆ (Physiotherapy) ಮಾತ್ರವೇ ಅಂದಾಜು &pound; 40,000 ಪೌಂಡ್ (ಸರಿಸುಮಾರು ₹51,56,468) ವೆಚ್ಚವಾಗುತ್ತಿತ್ತು.&lt;/p&gt;&lt;p&gt;ಭಾರತದಲ್ಲಿ ಒಟ್ಟು ವೆಚ್ಚ ಸುಮಾರು &pound;14,000 ಪೌಂಡ್ (ಸರಿಸುಮಾರು ₹18,04,811) ಆಗಿದೆ. ಇದರಲ್ಲಿ ಎರಡೂ ಮೊಣಕಾಲುಗಳ ಬದಲಿ ಶಸ್ತ್ರಚಿಕಿತ್ಸೆ, ರೌಂಡ್-ಟ್ರಿಪ್ ವಿಮಾನ ದರ, ವಸತಿ, ಊಟ, ವೈದ್ಯಕೀಯ ವಿಮೆ ಮತ್ತು ಸಮಗ್ರ ಕ್ಲಿನಿಕಲ್ ಆರೈಕೆ ಸಂಪೂರ್ಣವಾಗಿ ಒಳಗೊಂಡಿತ್ತು.&lt;/p&gt;&lt;p&gt;ಶಸ್ತ್ರಚಿಕಿತ್ಸೆಯ ನಂತರ ಜೀನ್ ಅವರು ಎರಡು ವಾರಗಳ ಕಾಲ ವಿಶೇಷ ಆರೈಕೆ ಕೇಂದ್ರದಲ್ಲಿದ್ದು, ತೀವ್ರ ದೈನಂದಿನ ವ್ಯಾಯಾಮಗಳ ಮೂಲಕ ಸುರಕ್ಷಿತವಾಗಿ ತನ್ನ ದಿನಚರಿಯನನು ಮರಳಿ ಪಡೆದರು. ಇಂದು ಅವರು ಸಂಪೂರ್ಣ ಗುಣಮುಖರಾಗಿ ಯುಕೆಗೆ ಹಿಂತಿರುಗಿದ್ದು, ಮತ್ತೆ ತಮ್ಮ ಸಾಕುನಾಯಿಗಳೊಂದಿಗೆ ಮತ್ತು ಧರ್ಮಪತ್ನಿಯೊಂದಿಗೆ ಕಾಲುವೆಯ ದಂಡೆಯಲ್ಲಿ ಸಂಜೆಯ ನಡಿಗೆಯನ್ನು ಸಂತಸದಿಂದ ಪುನರಾರಂಭಿಸಿದ್ದಾರೆ.&lt;/p&gt;&lt;p&gt;ಭಾರತದ ಪ್ರವಾಸೋದ್ಯಮ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, 2025 ರ ಆರಂಭದಲ್ಲೇ ದೇಶಕ್ಕೆ ವೈದ್ಯಕೀಯ ಉದ್ದೇಶಗಳಿಗಾಗಿ 1,31,856 ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ. ಅಂತರರಾಷ್ಟ್ರೀಯ ರೋಗಿಗಳು ದೀರ್ಘಾವಧಿಯ ಕಾಯಲು ಇಷ್ಟಪಡದೆ ವಿಶೇಷ ಆರೈಕೆಗಾಗಿ ಭಾರತದ 'ಹೀಲ್ ಇನ್ ಇಂಡಿಯಾ' (Heal in India) ಯೋಜನೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಂಭವಿಸುತ್ತಿರುವ ಈ ಬದಲಾವಣೆಯ ನೈಜ ಪರಿಣಾಮವನ್ನು ರೋಗಿಗಳ ವೈಯಕ್ತಿಕ ಅನುಭವಗಳ ಮೂಲಕ ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದು.&lt;/p&gt;]]></content:encoded>
            <category>health-life</category>
            <dc:creator>Gowthami K</dc:creator>
            <atom:link href="https://kannada.asianetnews.com/health-life/why-global-patients-choose-india-for-medical-tourism-uk-man-jean-paul-s-nhs-dilemma-to-knee-surgery-success-gdp/articleshow-tb3b5s4"/>
        </item>
        <item>
            <title><![CDATA[Goosebumps: ಥಟ್ಟಂತ ಮೈ ಜುಮ್ ಅನ್ನುತ್ತಾ? ಆ ಕ್ಷಣ ನಿಮ್ಮ ದೇಹದೊಳಗೆ ಏನಾಗುತ್ತೆ ಗೊತ್ತಾ?]]></title>
            <link>https://kannada.asianetnews.com/health-life/why-do-we-get-goosebumps-the-fascinating-science-behind-it-gvd/articleshow-tvu4gc7</link>
            <guid isPermaLink="true">https://kannada.asianetnews.com/health-life/why-do-we-get-goosebumps-the-fascinating-science-behind-it-gvd/articleshow-tvu4gc7</guid>
            <pubDate>Thu, 13 Aug 2026 20:41:23 +0530</pubDate>
            <description><![CDATA[&lt;p&gt;ಭಯ, ಚಳಿ, ಆಶ್ಚರ್ಯ ಅಥವಾ ತುಂಬಾ ಇಷ್ಟವಾದ ಹಾಡು ಕೇಳುವಾಗಲೂ ದೇಹದಲ್ಲಿ ಥಟ್ಟಂತ ಮೈ ಜುಮ್ ಅನ್ನುತ್ತದೆ. ಕೈ ಮೇಲಿನ ಕೂದಲು ನಿಮಿರಿ ನಿಲ್ಲುವ ಈ ಅನುಭವವನ್ನೇ ಇಂಗ್ಲಿಷ್&zwnj;ನಲ್ಲಿ &quot;Goosebumps&quot; ಅಂತ ಕರೆಯುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzxthf9hb00s292psrz8c1h2,imgname-hhvv-1786633567537.png" type="image/jpeg" height="390" width="690"/>
            <content:encoded><![CDATA[&lt;p&gt;ಚಳಿ, ಭಯ ಅಥವಾ ಇಷ್ಟದ ಹಾಡು ಕೇಳುವಾಗ ಇದ್ದಕ್ಕಿದ್ದಂತೆ ಮೈ ಜುಮ್ ಅನ್ನೋ ಅನುಭವ ನಮಗಾಗಿರುತ್ತೆ. ಆದ್ರೆ ಆ ಕೆಲವೇ ಸೆಕೆಂಡುಗಳಲ್ಲಿ ನಮ್ಮ ಮೆದುಳಿನಿಂದ ಹಿಡಿದು ಚರ್ಮದೊಳಗಿನ ಸಣ್ಣ ಸಣ್ಣ ಸ್ನಾಯುಗಳವರೆಗೆ ಏನೆಲ್ಲಾ ನಡೆಯುತ್ತೆ ಗೊತ್ತಾ? ಇದರ ಹಿಂದಿನ ಕಥೆ ತುಂಬಾ ಸ್ವಾರಸ್ಯಕರವಾಗಿದೆ! ಕೆಲವೊಮ್ಮೆ ಭಯ, ಚಳಿ, ಆಶ್ಚರ್ಯ ಅಥವಾ ತುಂಬಾ ಇಷ್ಟವಾದ ಹಾಡು ಕೇಳುವಾಗಲೂ ದೇಹದಲ್ಲಿ ಥಟ್ಟಂತ ಮೈ ಜುಮ್ ಅನ್ನುತ್ತದೆ. ಕೈ ಮೇಲಿನ ಕೂದಲು ನಿಮಿರಿ ನಿಲ್ಲುವ ಈ ಅನುಭವವನ್ನೇ ಇಂಗ್ಲಿಷ್&zwnj;ನಲ್ಲಿ &quot;Goosebumps&quot; ಅಂತ ಕರೆಯುತ್ತಾರೆ.&lt;/p&gt;&lt;p&gt;ಆದರೆ, ಇದು ಕೇವಲ ಒಂದು ಅನುಭವವಲ್ಲ. ಆ ಕೆಲವೇ ಸೆಕೆಂಡುಗಳಲ್ಲಿ ನಮ್ಮ ದೇಹದೊಳಗೆ ಒಂದು ಇಂಟರೆಸ್ಟಿಂಗ್ ಬಯಾಲಾಜಿಕಲ್ ಪ್ರಕ್ರಿಯೆಯೇ ನಡೆಯುತ್ತದೆ! ಚಳಿಯಾದಾಗ ಯಾಕೆ ಮೈ ಜುಮ್ ಅನ್ನುತ್ತೆ? ನಮ್ಮ ಚರ್ಮದಲ್ಲಿರುವ ಪ್ರತಿಯೊಂದು ಕೂದಲಿನ ಬುಡದಲ್ಲಿಯೂ ಒಂದು ಸಣ್ಣ ಸ್ನಾಯು ಇರುತ್ತದೆ. ಇದನ್ನು Arrector pili muscle ಎಂದು ಕರೆಯುತ್ತಾರೆ. ನಮ್ಮ ದೇಹಕ್ಕೆ ಚಳಿಯ ಅನುಭವವಾದಾಗ, ಮೆದುಳಿಗೆ ಮಾಹಿತಿ ಹೋಗುತ್ತದೆ. ಇದಕ್ಕೆ ಪ್ರತಿಯಾಗಿ, Sympathetic nervous system ಆ ಸಣ್ಣ ಸ್ನಾಯುಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಏನಾಗುತ್ತೆ ಅಂದ್ರೆ: ಕೂದಲುಗಳು ನೇರವಾಗಿ ನಿಲ್ಲುತ್ತವೆ, ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಏಳುತ್ತವೆ, ನಮಗೆ &quot;ಮೈ ಜುಮ್&quot; ಆದ ಹಾಗೆ ಭಾಸವಾಗುತ್ತದೆ.&lt;/p&gt;&lt;p&gt;ಇಲ್ಲೇ ನೋಡಿ ವಿಷಯ ಇನ್ನೂ ಸ್ವಾರಸ್ಯಕರವಾಗೋದು. ಥಟ್ಟಂತ ಭಯವಾದಾಗ, ದೇಹ ಅದನ್ನು ಒಂದು ಅಪಾಯ ಎಂದು ಪರಿಗಣಿಸುತ್ತದೆ. ತಕ್ಷಣ ಮೆದುಳಿನ ನಿಯಂತ್ರಣದಲ್ಲಿ ದೇಹವು &quot;Fight or Flight&quot; ಎನ್ನುವ ತುರ್ತು ಪರಿಸ್ಥಿತಿಯ ಪ್ರತಿಕ್ರಿಯೆಗೆ ಹೋಗುತ್ತದೆ. ಆಗ Adrenaline ನಂತಹ ಹಾರ್ಮೋನುಗಳ ಚಟುವಟಿಕೆ ಹೆಚ್ಚಾಗುತ್ತದೆ. ಇದರ ಒಂದು ಭಾಗವಾಗಿ ಚರ್ಮದಲ್ಲಿರುವ ಆ ಸಣ್ಣ ಸ್ನಾಯುಗಳು ಸಂಕುಚಿತಗೊಂಡು, ಕೂದಲುಗಳು ನಿಮಿರುತ್ತವೆ. ಅದಕ್ಕಾಗಿಯೇ, ಇದ್ದಕ್ಕಿದ್ದಂತೆ ಭಯಾನಕ ಘಟನೆ ನಡೆದಾಗ &quot;ಮೈಯೆಲ್ಲಾ ಜುಮ್ ಅನ್ನುಬಿಡ್ತು!&quot; ಅಂತ ನಾವು ಹೇಳೋದು.&lt;/p&gt;&lt;p&gt;ಹಾಡು ಕೇಳಿದಾಗಲೂ Goosebumps ಬರುತ್ತಾ? ಹೌದು! ಕೆಲವರಿಗೆ ತುಂಬಾ ಇಷ್ಟವಾದ ಹಾಡು, ಸಂಗೀತ, ಸಿನಿಮಾದ ದೃಶ್ಯ ಅಥವಾ ಭಾವನಾತ್ಮಕ ಕ್ಷಣಗಳನ್ನು ನೋಡುವಾಗಲೂ ಮೈ ಜುಮ್ ಅನ್ನಿಸಬಹುದು. ಆ ಸಮಯದಲ್ಲಿ ನಮ್ಮ ಮೆದುಳಿನಲ್ಲಿ ಭಾವನೆ ಮತ್ತು ಸಂತೋಷಕ್ಕೆ (reward) ಸಂಬಂಧಿಸಿದ ಭಾಗಗಳು ಹೆಚ್ಚು ಸಕ್ರಿಯವಾಗುತ್ತವೆ. ಇದರಿಂದ ಕೆಲವರಿಗೆ &quot;music chills&quot; ಎನ್ನುವ ನವಿರೇಳುವ ಅನುಭವ ಆಗುತ್ತದೆ. ಅಂದರೆ, ಮೈ ಜುಮ್ ಎನ್ನುವುದು ಕೇವಲ ಭಯದಿಂದ ಬರುವುದಿಲ್ಲ, ತೀವ್ರವಾದ ಭಾವನೆಗಳಿಂದಲೂ ಬರಬಹುದು.&lt;/p&gt;&lt;h2&gt;&lt;strong&gt;&quot;Goosebumps&quot; ಅಂತ ಯಾಕೆ ಹೆಸರು ಬಂತು?&lt;/strong&gt;&lt;/h2&gt;&lt;p&gt;ಈ ಹೆಸರಿನ ಹಿಂದೆ ಒಂದು ಸ್ವಾರಸ್ಯಕರ ಕಾರಣವಿದೆ. ಕೂದಲು ನಿಂತು ಚರ್ಮದ ಮೇಲೆ ಸಣ್ಣ ಗುಳ್ಳೆಗಳು ಎದ್ದಾಗ, ಅದು ಹೆಬ್ಬಾತು (goose) ಚರ್ಮದಂತೆ ಕಾಣುವುದರಿಂದ ಇಂಗ್ಲಿಷ್&zwnj;ನಲ್ಲಿ &quot;Goosebumps&quot; ಎಂಬ ಹೆಸರು ಜನಪ್ರಿಯವಾಯಿತು. ಕನ್ನಡದಲ್ಲಿ ನಾವು ಇದನ್ನು ಸಾಮಾನ್ಯವಾಗಿ ಮೈ ಜುಮ್ ಎನ್ನುವುದು, ನವಿರೇಳುವುದು, ಮೈ ರೋಮಾಂಚನಗೊಳ್ಳುವುದು ಅಂತ ಕರೆಯುತ್ತೇವೆ. ಇದು ನಮಗೆ ಈಗಲೂ ಯಾಕೆ ಆಗುತ್ತದೆ? ಇದರ ಹಿಂದೆ ವಿಕಾಸವಾದವೂ ಇದೆ. ಮನುಷ್ಯರ ದೇಹದಲ್ಲಿ ಈಗ ಕಡಿಮೆ ಇರುವ ಕೂದಲು, ನಮ್ಮ ಪೂರ್ವಜರಲ್ಲಿ ದಟ್ಟವಾಗಿತ್ತು. ಕೂದಲು ನಿಮಿರುವುದು ದೇಹವನ್ನು ಸ್ವಲ್ಪ ದೊಡ್ಡದಾಗಿ ಕಾಣುವಂತೆ ಮಾಡುವುದರ ಜೊತೆಗೆ, ಚಳಿಗಾಲದಲ್ಲಿ ದೇಹದ ಶಾಖವನ್ನು ಉಳಿಸಿಕೊಳ್ಳಲು ಸ್ವಲ್ಪ ಮಟ್ಟಿಗೆ ಸಹಾಯ ಮಾಡಿರಬಹುದು.&lt;/p&gt;&lt;p&gt;ಆದರೆ ಮನುಷ್ಯರಲ್ಲಿ ದೇಹದ ಕೂದಲು ಕಡಿಮೆಯಾದ ಕಾರಣ, ಈ ಪ್ರಕ್ರಿಯೆಯು ಇಂದು ಹೆಚ್ಚಾಗಿ ಒಂದು ವಿಕಾಸದ ಕುರುಹಾಗಿ (evolutionary remnant) ನೋಡಲ್ಪಡುತ್ತದೆ. ಚಿಕ್ಕದಾಗಿ ಹೇಳಬೇಕೆಂದರೆ... ಚಳಿ / ಭಯ / ತೀವ್ರ ಭಾವನೆ-ನರಮಂಡಲದ ಪ್ರಚೋದನೆ-ಚರ್ಮದ ಸಣ್ಣ ಸ್ನಾಯುಗಳ ಸಂಕೋಚನ -ಕೂದಲು ನಿಮಿರುವುದು-ಚರ್ಮದ ಮೇಲೆ ಸಣ್ಣ ಗುಳ್ಳೆಗಳು-Goosebumps! ಹಾಗಾಗಿ, ಮುಂದಿನ ಬಾರಿ ಒಂದು ಹಾಡು ಕೇಳಿದಾಗ ಅಥವಾ ಥಟ್ಟಂತ ಭಯವಾದಾಗ ಮೈ ಜುಮ್ ಅಂದರೆ, &quot;ಏನಾಯ್ತು?&quot; ಅಂತ ಆಶ್ಚರ್ಯಪಡಬೇಡಿ. ನಿಮ್ಮ ಮೆದುಳು ಮತ್ತು ನರಮಂಡಲ ಆ ಕ್ಷಣದಲ್ಲಿ ವೇಗವಾಗಿ ಕೆಲಸ ಮಾಡುತ್ತಿವೆ ಅಂತ ಅರ್ಥ!&lt;/p&gt;]]></content:encoded>
            <category>health-life</category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/why-do-we-get-goosebumps-the-fascinating-science-behind-it-gvd/articleshow-tvu4gc7"/>
        </item>
        <item>
            <title><![CDATA[ಮಗುವಿನ ಜೀವನವನ್ನೇ ಬದಲಿಸಬಲ್ಲ ಆ ಮೊದಲ 1000 ದಿನಗಳು.. ತಾಯಿ ಹಾಲಿನಲ್ಲಿದೆ ಅಮೃತವನ್ನೂ ಮೀರಿದ ಶಕ್ತಿ]]></title>
            <link>https://kannada.asianetnews.com/health-life/first-1000-days-child-nutrition-secrets-revealed/articleshow-u0mp52v</link>
            <guid isPermaLink="true">https://kannada.asianetnews.com/health-life/first-1000-days-child-nutrition-secrets-revealed/articleshow-u0mp52v</guid>
            <pubDate>Wed, 12 Aug 2026 19:17:50 +0530</pubDate>
            <description><![CDATA[&lt;p&gt;&lt;strong&gt;Mother&rsquo;s Milk Benefits: &lt;/strong&gt;ತಾಯಿಯ ಎದೆಹಾಲಿನಲ್ಲಿರುವ ಸೂಕ್ಷ್ಮಾಣುಜೀವಿಗಳಿಗೂ ಮಗುವಿನ ಮೆದುಳಿನ ಬೆಳವಣಿಗೆಗೂ ಇರುವ ಸಂಬಂಧವೇನು? ಇಂದಿನ ಡಿಜಿಟಲ್ ಜಗತ್ತಿನಲ್ಲಿ ಡಯಟ್ ಬಗ್ಗೆ ನಮಗಿರುವ ತಪ್ಪು ಕಲ್ಪನೆಗಳೇನು? ಈ ಎಲ್ಲಾ ಕುತೂಹಲಕಾರಿ ವಿಷಯಗಳ ಬಗ್ಗೆ ಬೆಂಗಳೂರಿನ 'ದಿ ಎಡ್ಜ್ ಆಫ್ ನ್ಯೂಟ್ರಿಷನ್' ಶೃಂಗಸಭೆಯಲ್ಲಿ ಹೊರಬಿದ್ದ ಅಚ್ಚರಿಯ ಸಂಗತಿಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g9c703607txkzeajvkxparz6,imgname-collage-maker-01-aug-2022-01-34-pm--1-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಾ&lt;/strong&gt;ಯಿಯ ಎದೆಹಾಲು ಕೇವಲ ಮಗುವಿನ ಹಸಿವು ನೀಗಿಸುವ ದ್ರವವಲ್ಲ, ಅದು ಮಗುವಿನ ಇಡೀ ಜೀವನದ ಆರೋಗ್ಯವನ್ನು ನಿರ್ಧರಿಸುವ ಅದ್ಭುತ ಸಂಜೀವಿನಿ. ಎದೆಹಾಲಿನಲ್ಲಿರುವ ಪ್ರತಿಯೊಂದು ಸೂಕ್ಷ್ಮಾಣುಜೀವಿಯೂ ಮಗುವಿನ ಭವಿಷ್ಯದ ಬದುಕಿಗೆ ರಕ್ಷಾಕವಚದಂತೆ ಕೆಲಸ ಮಾಡುತ್ತದೆ ಎಂಬ ಮಹತ್ವದ ವಿಚಾರಗಳು ಬೆಂಗಳೂರಿನಲ್ಲಿ ನಡೆದ ವೈದ್ಯಕೀಯ ಶೃಂಗಸಭೆಯಲ್ಲಿ ವ್ಯಕ್ತವಾದವು. ಇತ್ತೀಚೆಗೆ ಆಯೋಜಿಸಿದ್ದ 'ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026' ವಾರ್ಷಿಕ ಶೃಂಗಸಭೆಯಲ್ಲಿ ದೇಶದ ಖ್ಯಾತ ಪೌಷ್ಟಿಕಾಂಶ ತಜ್ಞರು ಮತ್ತು ವೈದ್ಯರು ಭಾಗವಹಿಸಿ, ಪೌಷ್ಟಿಕಾಂಶದ ಹೊಸ ಆಯಾಮಗಳ ಬಗ್ಗೆ ಚರ್ಚಿಸಿದರು.&lt;/p&gt;&lt;h2&gt;&lt;strong&gt;ಜೀವನದ ಮೊದಲ 1000 ದಿನಗಳು ಚಿನ್ನದಂತಹ ಅವಧಿ&lt;/strong&gt;&lt;/h2&gt;&lt;p&gt;ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಗರ್ಭಧಾರಣೆಯ ದಿನಗಳಿಂದ ಹಿಡಿದು ಮಗುವಿಗೆ ಎರಡು ವರ್ಷ ತುಂಬುವವರೆಗಿನ (ಒಟ್ಟು 1,000 ದಿನಗಳು) ಸಮಯ ಅತ್ಯಂತ ನಿರ್ಣಾಯಕ. ಈ ಅವಧಿಯಲ್ಲಿ ಸಿಗುವ ಪೌಷ್ಟಿಕಾಂಶವು ಜೀವನಪರ್ಯಂತದ ಆರೋಗ್ಯಕ್ಕೆ ಬುನಾದಿ ಹಾಕುತ್ತದೆ. ಎದೆಹಾಲಿನಲ್ಲಿರುವ ಎಚ್&zwnj;ಎಂಒ (Human Milk Oligosaccharides) ಎಂಬ ಅಂಶವು ಮಗುವಿನ ಕರುಳಿನಲ್ಲಿ 'ಒಳ್ಳೆಯ ಬ್ಯಾಕ್ಟೀರಿಯಾ'ಗಳನ್ನು ವೃದ್ಧಿಸಿ, ಮೆದುಳಿನ ವಿಕಾಸ ಹಾಗೂ ರೋಗನಿರೋಧಕ ಶಕ್ತಿಯನ್ನು ಪ್ರಬಲಗೊಳಿಸುತ್ತದೆ ಎಂದು ತಜ್ಞರು ವಿವರಿಸಿದರು.&lt;/p&gt;&lt;h2&gt;&lt;strong&gt;ತಾಯಿಗೆ ಬೇಕು ಕುಟುಂಬದ ಬೆಂಬಲ&lt;/strong&gt;&lt;/h2&gt;&lt;p&gt;ಈ ಸಂದರ್ಭದಲ್ಲಿ ಡಾ. ಆಶಾ ಬೆನಕಪ್ಪ ಮಾತನಾಡಿ, &quot;ತಾಯಿಯ ಹಾಲಿನಲ್ಲಿರುವ ಸೂಕ್ಷ್ಮಾಣುಜೀವಿಗಳು (ಮೈಕ್ರೋಬಯೋಮ್) ಕರುಳು ಮತ್ತು ಮೆದುಳಿನ ನಡುವೆ ಅದ್ಭುತ ಸಂಪರ್ಕ ಸೇತುವೆಯಾಗುತ್ತವೆ. ಆದರೆ, ತಾಯಿ ಮಗುವಿಗೆ ಸರಿಯಾಗಿ ಹಾಲುಣಿಸಲು ಕೇವಲ ಪೌಷ್ಟಿಕಾಂಶವಿದ್ದರೆ ಸಾಲದು; ಕುಟುಂಬ, ಗಂಡ ಹಾಗೂ ಸಮಾಜ ಆಕೆಗೆ ಉತ್ತಮ ಮಾನಸಿಕ ನೆಮ್ಮದಿ ಮತ್ತು ಬೆಂಬಲ ನೀಡಬೇಕು&quot; ಎಂದು ಕರೆ ನೀಡಿದರು.&lt;/p&gt;&lt;h2&gt;&lt;strong&gt;ಆ್ಯಪ್&zwnj;ಗಳಿಗಿಂತ ತಜ್ಞರ ಸಲಹೆ ಮಿಗಿಲು&lt;/strong&gt;&lt;/h2&gt;&lt;p&gt;ಆರೋಗ್ಯ ಮತ್ತು ಡಯೆಟ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶೀಲಾ ಕೃಷ್ಣಸ್ವಾಮಿ, ಡಾ. ನಂದಿತಾ ಅಯ್ಯರ್ ಮತ್ತು ಅದಿತಿ ಪ್ರಸಾದ್ ಆಪ್ಟೆ ಅವರು ಇಂದಿನ ತಂತ್ರಜ್ಞಾನದ ಅತಿಯಾದ ಅವಲಂಬನೆಯ ಬಗ್ಗೆ ಎಚ್ಚರಿಸಿದರು. &quot;ಆರೋಗ್ಯ ಎಂದರೆ ಕೇವಲ ಡೇಟಾ ಅಥವಾ ಟೆಸ್ಟ್ ರಿಪೋರ್ಟ್ ಅಲ್ಲ. ಪ್ರತಿಯೊಬ್ಬ ವ್ಯಕ್ತಿಯ ನಿದ್ದೆ, ಜೀವನಶೈಲಿ ಮತ್ತು ಕೌಟುಂಬಿಕ ಹಿನ್ನೆಲೆಗೆ ಅನುಗುಣವಾಗಿ ಡಯೆಟ್ ಇರಬೇಕು. ಸ್ಮಾರ್ಟ್ ಆ್ಯಪ್&zwnj;ಗಳು ಅಥವಾ ಯಂತ್ರಗಳು ಎಂದಿಗೂ ಒಬ್ಬ ಅನುಭವೀ ವೈದ್ಯರಿಗೆ ಪರ್ಯಾಯವಾಗಲು ಸಾಧ್ಯವಿಲ್ಲ,&quot; ಎಂದು ಅಭಿಪ್ರಾಯಪಟ್ಟರು.&lt;/p&gt;&lt;h2&gt;&lt;strong&gt;ಸಮತೋಲಿತ ಜೀವನಶೈಲಿಯ ಪಾಠ&lt;/strong&gt;&lt;/h2&gt;&lt;p&gt;ರಘು ಕೃಷ್ಣನ್ ಮಾತನಾಡಿ, ಸಂಕೀರ್ಣವಾದ ವಿಜ್ಞಾನವನ್ನು ಜನಸಾಮಾನ್ಯರಿಗೆ ಸರಳವಾಗಿ ಅರ್ಥೈಸುವುದೇ ಈ ಶೃಂಗಸಭೆಯ ಮುಖ್ಯ ಉದ್ದೇಶ ಎಂದರು. ಇನ್ನು ಸಮಾರಂಭದಲ್ಲಿ ಡಾ. ಉಮೇಶ್ ವಧ್ವಾನಿ ಅವರು 'ಡಯಟಿಂಗ್ ಕಾ ಮಜಾಕ್' ಎಂಬ ಹಾಸ್ಯದ ಮೂಲಕ ಜನರಿಗಿರುವ ತಪ್ಪು ಕಲ್ಪನೆಗಳನ್ನು ಕಿಚಾಯಿಸುತ್ತಲೇ, ಸಮತೋಲಿತ ಜೀವನಶೈಲಿಯ ಪಾಠ ಮಾಡಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಈ ಶೃಂಗಸಭೆಯು ಉತ್ತಮ ಆರೋಗ್ಯಕ್ಕಾಗಿ ಕೇವಲ ಯಂತ್ರಗಳನ್ನಲ್ಲ, ಬದಲಿಗೆ ಸರಿಯಾದ ತಿಳುವಳಿಕೆ ಮತ್ತು ಸಂಪ್ರದಾಯದ ಜೊತೆಗೆ ವಿಜ್ಞಾನದ ಸಮನ್ವಯದ ಹಾದಿಯನ್ನು ಕಂಡುಕೊಳ್ಳುವಂತೆ ಪ್ರೇರೇಪಿಸಿತು.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/health-life/first-1000-days-child-nutrition-secrets-revealed/articleshow-u0mp52v"/>
        </item>
        <item>
            <title><![CDATA[ಕರ್ನಾಟಕದಲ್ಲಿ ಇನ್ಮುಂದೆ ಮದುವೆ ಊಟದ ವೇಳೆ ಕೇಟರರ್ಸ್‌ಗಳು ಕ್ಯಾಲೋರಿ ಕೌಂಟ್‌ ಡಿಸ್‌ಪ್ಲೇ ಮಾಡುವುದು ಕಡ್ಡಾಯ!]]></title>
            <link>https://kannada.asianetnews.com/food/karnataka-fda-rule-calorie-chart-mandatory-for-wedding-caterers-san/articleshow-vcrgq9o</link>
            <guid isPermaLink="true">https://kannada.asianetnews.com/food/karnataka-fda-rule-calorie-chart-mandatory-for-wedding-caterers-san/articleshow-vcrgq9o</guid>
            <pubDate>Fri, 14 Aug 2026 13:30:05 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ 50ಕ್ಕಿಂತ ಹೆಚ್ಚು ಜನರು ಭಾಗವಹಿಸುವ ಮದುವೆ ಹಾಗೂ ಸಮಾರಂಭಗಳಲ್ಲಿ ಬಡಿಸುವ ಆಹಾರಕ್ಕೆ ಕ್ಯಾಲೋರಿ ಚಾರ್ಟ್ ಪ್ರದರ್ಶನವನ್ನು ಕಡ್ಡಾಯಗೊಳಿಸಲು ಆಹಾರ ಸುರಕ್ಷತಾ ಇಲಾಖೆ ಸಿದ್ಧತೆ ನಡೆಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzzmgyn75138xd7p5xr6f0bj,imgname-wedding-food-in-karnataka--1--1786694367651.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.12):&lt;/strong&gt; ಮುಂದಿನ ದಿನಗಳಲ್ಲಿ ನೀವು ರಾಜ್ಯದಲ್ಲಿ ನಡೆಯುವ ಯಾವುದೇ ಅದ್ದೂರಿ ಮದುವೆ ಅಥವಾ ಶುಭ ಸಮಾರಂಭಗಳಲ್ಲಿ ಭಾಗವಹಿಸಿ ವಿವಿಧ ಬಗೆಯ ಖಾದ್ಯಗಳನ್ನು ಸವಿಯಲು ಮುಂದಾದರೆ, ಪ್ರವೇಶ ದ್ವಾರದಲ್ಲೇ 'ಕ್ಯಾಲೊರಿ ಚಾರ್ಟ್' (ಕ್ಯಾಲೋರಿಗಳ ಕೋಷ್ಟಕ) ನಿಮ್ಮನ್ನು ಎದುರುಗೊಳ್ಳುವ ಸಾಧ್ಯತೆಯಿದೆ! 50ಕ್ಕಿಂತ ಹೆಚ್ಚು ಜನರು ಭಾಗವಹಿಸುವ ಸಮಾರಂಭಗಳು ಮತ್ತು ಕಾರ್ಯಕ್ರಮಗಳಲ್ಲಿ ಬಡಿಸುವ ಆಹಾರ ಪದಾರ್ಥಗಳ ಕ್ಯಾಲೋರಿ ಮೌಲ್ಯವನ್ನು (Calorific Content) ಕಡ್ಡಾಯವಾಗಿ ಪ್ರದರ್ಶಿಸುವಂತೆ ಕೇಟರರ್ಸ್&zwnj;ಗಳಿಗೆ ನಿರ್ದೇಶಿಸಲು 'ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ' (FDA) ಶೀಘ್ರದಲ್ಲೇ ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ.&lt;/p&gt;&lt;p&gt;ದೊಡ್ಡ ಸಾಮಾಜಿಕ ಸಮಾರಂಭಗಳು ಹಾಗೂ ಮದುವೆಗಳಲ್ಲಿ ಜನರು ಮಿತಿಗಿಂತ ಹೆಚ್ಚಾಗಿ ಆಹಾರ ಸೇವಿಸುವುದನ್ನು (ಅತಿಯಾಗಿ ತಿನ್ನುವುದನ್ನು) ತಡೆಯುವ ಉದ್ದೇಶದಿಂದ ಈ ಹೊಸ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಮದುವೆಯಲ್ಲಿ 5 ಸಾವಿರ ಕ್ಯಾಲೋರಿ ಊಟ&lt;/strong&gt;&lt;/h2&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಆಯುಕ್ತರಾದ ಕೆ. ಶ್ರೀನಿವಾಸ್, &quot;ಸಾರ್ವಜನಿಕರು ಮದುವೆ ಅಥವಾ ಬೃಹತ್ ಸಮಾರಂಭಗಳಿಗೆ ಹೋದಾಗ ಮಟನ್ ಕರ್ರಿ, ಫಿಶ್ ಫ್ರೈ, ಬಿರಿಯಾನಿ, ಸಾಂಬಾರ್, ಅನ್ನ ಹಾಗೂ ಒಂದೆರಡು ಬಗೆಯ ಸಿಹಿ ತಿಂಡಿಗಳು ಸೇರಿದಂತೆ ಸಾಲು ಸಾಲು ಖಾದ್ಯಗಳನ್ನು ಬಡಿಸಲಾಗುತ್ತದೆ. ಇಂತಹ ಸಮಾರಂಭಗಳಲ್ಲಿ ಕೇವಲ ಒಂದೇ ಬಾರಿಯ ಊಟದಲ್ಲಿ ಒಬ್ಬ ವ್ಯಕ್ತಿಯು ಬರೋಬ್ಬರಿ 5,000 ಕ್ಯಾಲೋರಿಗಳಷ್ಟು ಆಹಾರವನ್ನು ಸೇವಿಸುವ ಸಾಧ್ಯತೆಯಿರುತ್ತದೆ&quot; ಎಂದು ಕಳವಳ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಮುಂದುವರಿದು ಮಾತನಾಡಿದ ಅವರು, &quot;ದಿನದ ಇತರ ಸಮಯದ ಆಹಾರದ ಜೊತೆಗೆ ಈ ಅತಿಯಾದ ಸೇವನೆ ಸೇರಿದಾಗ ವ್ಯಕ್ತಿಯ ದೇಹದಲ್ಲಿ ಸಕ್ಕರೆ (ಶುಗರ್) ಮತ್ತು ಸೋಡಿಯಂ (ಉಪ್ಪು) ಮಟ್ಟ ದಿಢೀರನೆ ಹೆಚ್ಚಾಗುತ್ತದೆ. ಸುದೀರ್ಘ ಅವಧಿಯಲ್ಲಿ ಇಂತಹ ಆಹಾರ ಪದ್ಧತಿಯು ಅಧಿಕ ರಕ್ತದೊತ್ತಡ (ಬಿಪಿ) ಮತ್ತು ಮಧುಮೇಹ (ಡಯಾಬಿಟಿಸ್) ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಕಾರ್ಯಕ್ರಮಗಳಲ್ಲಿ ಕ್ಯಾಲೊರಿ ಚಾರ್ಟ್ ಪ್ರದರ್ಶಿಸುವುದರಿಂದ, ಜನರು ತಾವು ಏನು ಸೇವಿಸುತ್ತಿದ್ದೇವೆ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತಿದ್ದೇವೆ ಎಂಬುದರ ಕುರಿತು ಹೆಚ್ಚು ಜಾಗರೂಕರಾಗಲು ಸಾಧ್ಯವಾಗುತ್ತದೆ&quot; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಇದಲ್ಲದೆ, ನಗರದಲ್ಲಿ 'ಕ್ಲೌಡ್ ಕಿಚನ್&zwnj;'ಗಳು ಹಾಗೂ ಮನೆಗಳಲ್ಲೇ ಅಡುಗೆ ತಯಾರಿಸುವ 'ಹೋಮ್ ಶೆಫ್&zwnj;'ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಸಂಸ್ಥೆಗಳು ಬಳಸುವ ಪದಾರ್ಥಗಳ ಗುಣಮಟ್ಟ ಹಾಗೂ ಅವು ಅನುಸರಿಸುತ್ತಿರುವ ನೈರ್ಮಲ್ಯ ಮತ್ತು ಭದ್ರತಾ ಕ್ರಮಗಳನ್ನು ಪರಿಶೀಲಿಸಲು ವಿಶೇಷ ತಪಾಸಣಾ ಕಾರ್ಯಾಚರಣೆಗಳನ್ನು (Special Inspection Drives) ಕೈಗೊಳ್ಳಲು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ (FDA) ಯೋಜನೆ ರೂಪಿಸಿದೆ.&lt;/p&gt;]]></content:encoded>
            <category>health-life</category>
            <dc:creator>Santosh Naik</dc:creator>
            <atom:link href="https://kannada.asianetnews.com/food/karnataka-fda-rule-calorie-chart-mandatory-for-wedding-caterers-san/articleshow-vcrgq9o"/>
        </item>
        <item>
            <title><![CDATA[ಮುಖದ ಮೇಲಿನ ಮೊಡವೆಗೆ ವಿಕ್ಸ್ (Vicks) ಹಚ್ಚಬಹುದಾ? ಚರ್ಮರೋಗ ತಜ್ಞರ ಸಲಹೆ ನೀವೂ ತಿಳಿದುಕೊಳ್ಳಿ!]]></title>
            <link>https://kannada.asianetnews.com/life/does-vicks-vaporub-cure-pimples-dermatologist-warning-and-tips-kannada/articleshow-w2u8xre</link>
            <guid isPermaLink="true">https://kannada.asianetnews.com/life/does-vicks-vaporub-cure-pimples-dermatologist-warning-and-tips-kannada/articleshow-w2u8xre</guid>
            <pubDate>Fri, 14 Aug 2026 12:13:53 +0530</pubDate>
            <description><![CDATA[&lt;p&gt;ಮೊಡವೆ ನಿವಾರಣೆಗೆ 'ವಿಕ್ಸ್' ಬಳಸುವವರ ಸಂಖ್ಯೆ ಹೆಚ್ಚಾಗಿದೆ. ನೀವೂ ಕೂಡ ವಿಕ್ಸ್ ಬಳಕೆ ಮಾಡಿದ ತಕ್ಷಣ ನೋವು ಕಡಿಮೆಯಾಗಿ ಸಂತಸಪಡುವವರಾಗಿದ್ದರೆ, ಮುಂದಾಗುವ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಮೊಡವೆಗೆ ವಿಕ್ಸ್ ಬಳಕೆ ಮಾಡುವುದರ ಹಿಂದಿರುವ ಅಪಾಯಗಳು ಇಲ್ಲಿವೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzzfybwh4n7cw77m701hpmva,imgname-vicks-used-for-pimples-1786689564561.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಖದ ಮೇಲೆ ಒಂದು ಸಣ್ಣ ಮೊಡವೆ (Pimple) ಕಾಣಿಸಿಕೊಂಡರೂ ಸಾಕು, ಅದನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಲು ಪ್ರತಿಯೊಬ್ಬರೂ ನಾನಾ ಸಾಹಸಗಳನ್ನು ಮಾಡುತ್ತಾರೆ. ಕೆಲವರು ದುಬಾರಿ ಸೌಂದರ್ಯ ವರ್ಧಕಗಳನ್ನು (Skin Care Products) ಬಳಸಿದರೆ, ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವ ಮನೆಮದ್ದುಗಳನ್ನು ಯಥಾವತ್ತಾಗಿ ಪಾಲಿಸುತ್ತಾರೆ. ಅಂತಹ ಮನೆಮದ್ದುಗಳಲ್ಲಿ 'ವಿಕ್ಸ್ ವೇಪೊರಬ್' (Vicks Vaporub) ಹಚ್ಚುವುದೂ ಒಂದಾಗಿದೆ.&lt;/p&gt;&lt;p&gt;ವಿಕ್ಸ್ ಹಚ್ಚಿದರೆ ಮೊಡವೆಗಳು ಒಂದೇ ರಾತ್ರಿಯಲ್ಲಿ ಮಾಯವಾಗುತ್ತವೆ ಎಂಬ ನಂಬಿಕೆ ಅನೇಕರಲ್ಲಿದೆ. ಆದರೆ, ಇದು ನಿಜವೇ? ವಿಕ್ಸ್ ಹಚ್ಚುವುದು ಚರ್ಮಕ್ಕೆ ಸುರಕ್ಷಿತವೇ? ಈ ಬಗ್ಗೆ ಪ್ರಸಿದ್ಧ ಚರ್ಮರೋಗ ತಜ್ಞೆ (Dermatologist) ಡಾ. ಪ್ರಿಯಾಂಕಾ ರೆಡ್ಡಿ ನೀಡಿರುವ ಪ್ರಮುಖ ಮಾಹಿತಿಗಳು ಇಲ್ಲಿದೆ.&lt;/p&gt;&lt;h2&gt;&lt;strong&gt;ತಜ್ಞರು ಏನು ಹೇಳುತ್ತಾರೆ?&lt;/strong&gt;&lt;/h2&gt;&lt;p&gt;ವಿಕ್ಸ್&zwnj;ನಂತಹ ಉತ್ಪನ್ನಗಳನ್ನು ಮುಖದ ಮೇಲಿನ ಮೊಡವೆಗಳನ್ನು ಶಮನಗೊಳಿಸಲು ಅಥವಾ ಬಂದ್ ಆಗಿರುವ ಚರ್ಮದ ರಂಧ್ರಗಳನ್ನು (Pores) ತೆರೆಯಲು ತಯಾರಿಸಲಾಗಿಲ್ಲ. ವಿಕ್ಸ್ ಮೂಲತಃ ಶೀತ, ಕೆಮ್ಮು ಮತ್ತು ಮೂಗು ಕಟ್ಟುವಿಕೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡಲು ಬಳಕೆಯಾಗುತ್ತದೆ. ವಿಕ್ಸ್&zwnj;ನಲ್ಲಿ ಕರ್ಪೂರ (Camphor), ಮೆಂಥಾಲ್ (Menthol), ಯೂಕಲಿಪ್ಟಸ್ ಎಣ್ಣೆ (Eucalyptus oil) ಹಾಗೂ ಗಟ್ಟಿಯಾದ ಪೆಟ್ರೋಲಿಯಂ ಬೇಸ್ (Petroleum Base) ಇರುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲೆ ದಪ್ಪನೆಯ ಪದರ ಉಂಟಾಗಿ, ರಂಧ್ರಗಳು ಮತ್ತಷ್ಟು ಮುಚ್ಚಿಹೋಗುತ್ತವೆ. ಇದರಿಂದ ಮೊಡವೆ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು.&lt;/p&gt;&lt;h2&gt;&lt;strong&gt;ತಂಪಾದ ಅನುಭವದ ಹಿಂದಿರುವ ನಿಜಾಂಶವೇನು?&lt;/strong&gt;&lt;/h2&gt;&lt;p&gt;ವಿಕ್ಸ್ ಹಚ್ಚಿದ ತಕ್ಷಣ ಮುಖದ ಮೇಲೆ ತಂಪಾದ ಅಥವಾ ಹಗುರವಾದ ಉರಿಯುವ ಅನುಭವವಾಗುತ್ತದೆ. ಇದನ್ನು ಕಂಡ ತಕ್ಷಣವೇ ಔಷಧಿ ಕೆಲಸ ಮಾಡುತ್ತಿದೆ, ಮೊಡವೆ ಒಣಗುತ್ತಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಈ ತಂಪಾದ ಅನುಭವ ಮೊಡವೆ ವಾಸಿಯಾಗುತ್ತಿರುವುದರ ಸಂಕೇತವಲ್ಲ. ಬದಲಿಗೆ, ವಿಕ್ಸ್&zwnj;ನಲ್ಲಿರುವ ಗ hisಸಾದ ಅಂಶಗಳಿಂದ ಚರ್ಮ ಕಿರಿಕಿರಿಯೊಳ್ಳುತ್ತಿರುವುದರ (Skin Irritation) ಸಂಕೇತವಾಗಿದೆ.&lt;/p&gt;&lt;h2&gt;&lt;strong&gt;ರಾತ್ರಿಯಿಡೀ ವಿಕ್ಸ್ ಹಚ್ಚಿ ಮಲಗಿದರೆ ಏನಾಗುತ್ತದೆ?&lt;/strong&gt;&lt;/h2&gt;&lt;p&gt;ರಾತ್ರಿಯಿಡೀ ಮೊಡವೆ ಮೇಲೆ ವಿಕ್ಸ್ ಹಚ್ಚಿ ಬಿಡುವುದರಿಂದ ಚರ್ಮ ತೀವ್ರವಾಗಿ ಹಾನಿಗೊಳಗಾಗುತ್ತದೆ. ಇದರಿಂದ ಮುಖದ ಮೇಲೆ ಕೆಂಪು ಅಥವಾ ಕಪ್ಪು ಕಲೆಗಳು (Post-Inflammatory Hyperpigmentation - PIH) ಮೂಡಬಹುದು. 'ಮೊಡವೆ ಕೆಲವೇ ದಿನಗಳಲ್ಲಿ ತಾನಾಗಿಯೇ ಮಾಯವಾಗಬಹುದು, ಆದರೆ ವಿಕ್ಸ್&zwnj;ನಂತಹ ಪ್ರಯೋಗಗಳಿಂದ ಉಂಟಾಗುವ ಕಪ್ಪು ಕಲೆಗಳು ಮುಖದ ಮೇಲೆ ಹಲವು ತಿಂಗಳುಗಳ ಕಾಲ ಹಾಗೆಯೇ ಉಳಿದುಬಿಡುತ್ತವೆ' ಎಂದು ಡಾ. ಪ್ರಿಯಾಂಕಾ ಎಚ್ಚರಿಸುತ್ತಾರೆ.&lt;/p&gt;&lt;h3&gt;&lt;strong&gt;ನಿಂಬೆ, ಬೆಳ್ಳುಳ್ಳಿ ಹಾಗೂ ಟೂತ್&zwnj;ಪೇಸ್ಟ್ ಸಹ ಅಪಾಯಕಾರಿ!&lt;/strong&gt;&lt;/h3&gt;&lt;p&gt;ಕೇವಲ ವಿಕ್ಸ್ ಮಾತ್ರವಲ್ಲದೆ, ಮೊಡವೆಗಳ ಮೇಲೆ ಟೂತ್&zwnj;ಪೇಸ್ಟ್ (Toothpaste), ನಿಂಬೆ ರಸ (Lemon) ಹಾಗೂ ಬೆಳ್ಳುಳ್ಳಿ ಹಚ್ಚುವ ಮನೆಮದ್ದುಗಳಿಂದಲೂ ದೂರವಿರಲು ತಜ್ಞರು ಸಲಹೆ ನೀಡುತ್ತಾರೆ. ಇವುಗಳಲ್ಲಿರುವ ಅತಿಯಾದ ಆಮ್ಲೀಯತೆ ಮತ್ತು ರಾಸಾಯನಿಕಗಳು ಚರ್ಮಕ್ಕೆ ಸುಟ್ಟ ಗಾಯದಂತಹ ಹಾನಿಯನ್ನು ಉಂಟುಮಾಡಬಲ್ಲವು.&lt;/p&gt;&lt;h2&gt;&lt;strong&gt;ಮೊಡವೆ ಬಂದಾಗ ಏನು ಮಾಡಬೇಕು?&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಕೈಯಿಂದ ಮುಟ್ಟಬೇಡಿ: &lt;/strong&gt;ಮೊಡವೆಗಳನ್ನು ಚಿವುಟುವುದು ಅಥವಾ ಪದೇ ಪದೇ ಮುಟ್ಟುವುದು ಮಾಡಬೇಡಿ.&lt;/li&gt; &lt;li&gt;&lt;strong&gt;ಸಾಮಾಜಿಕ ಜಾಲತಾಣದ ಹ್ಯಾಕ್ಸ್ ತಪ್ಪಿಸಿ: &lt;/strong&gt;ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವ ಪ್ರತಿಯೊಂದು DIY ವಿಡಿಯೋಗಳನ್ನು ಕಣ್ಣು ಮುಚ್ಚಿ ಅನುಕರಿಸಬೇಡಿ.&lt;/li&gt; &lt;li&gt;&lt;strong&gt;ತಜ್ಞರ ಸಲಹೆ ಪಡೆಯಿರಿ:&lt;/strong&gt; ಮೊಡವೆಗಳ ಸಮಸ್ಯೆ ಹೆಚ್ಚಾಗಿದ್ದರೆ ನಿಮ್ಮ ಚರ್ಮದ ಸ್ವಭಾವಕ್ಕೆ (Skin Type) ಅನುಗುಣವಾಗಿ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ.&lt;/li&gt;&lt;/ul&gt;&lt;p&gt;ಸ್ವಲ್ಪ ದಿನಗಳ ಮೊಡವೆ ನಿವಾರಣೆಗೆ ಹೋಗಿ ಮುಖದ ಮೇಲೆ ದೀರ್ಘಕಾಲದ ಕಲೆಗಳನ್ನು ತಂದುಕೊಳ್ಳಬೇಡಿ. ಸೌಂದರ್ಯ ಪ್ರಯೋಗಗಳನ್ನು ಮಾಡುವ ಮುನ್ನ ಜಾಗರೂಕರಾಗಿರಿ.&lt;/p&gt;]]></content:encoded>
            <category>health-life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/life/does-vicks-vaporub-cure-pimples-dermatologist-warning-and-tips-kannada/articleshow-w2u8xre"/>
        </item>
        <item>
            <title><![CDATA[ದಿನಕ್ಕೊಂದು ಲೋಟ ಅನಾನಸ್ ಜ್ಯೂಸ್ ಕುಡಿದ್ರೆ ದೇಹದಲ್ಲಾಗುತ್ತೆ ಈ ಬದಲಾವಣೆ]]></title>
            <link>https://kannada.asianetnews.com/webstories/life/top-5-health-benefits-of-drinking-pineapple-juice-regularly-w9zukfv</link>
            <guid isPermaLink="true">https://kannada.asianetnews.com/webstories/life/top-5-health-benefits-of-drinking-pineapple-juice-regularly-w9zukfv</guid>
            <pubDate>Tue, 11 Aug 2026 23:33:13 +0530</pubDate>
            <description><![CDATA[&lt;p&gt;Pineapple Juice Benefits: ನೈಸರ್ಗಿಕ ಸಿಹಿ ಮತ್ತು ಪೋಷಕಾಂಶಗಳ ಆಗರವಾಗಿರುವ ಅನಾನಸ್ ಜ್ಯೂಸ್ ನಿಮ್ಮ ದೇಹಕ್ಕೆ ನೀಡುವ 5 ಅದ್ಭುತ ಪ್ರಯೋಜನಗಳು ಇಲ್ಲಿವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktp0dwpjdrtjdc4cpszg58z7,imgname-new-project---2026-06-09t162351.234-1781002597074.jpg" type="image/jpeg" height="390" width="690"/>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/life/top-5-health-benefits-of-drinking-pineapple-juice-regularly-w9zukfv"/>
        </item>
    </channel>
</rss>
