<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Apr 2026 17:15:59 +0530</lastBuildDate>
        <atom:link href="https://kannada.asianetnews.com/rss/health-life" rel="self" type="application/rss+xml"/>
        <item>
            <title><![CDATA[ಸುಣ್ಣ ಹೊಡೆಯುವ ವೇಳೆ ಕೆಳಗೆ ಬಿದ್ದವನಿಗೆ ಚಿಕಿತ್ಸೆ ನೀಡದೇ ಬೀಮ್ಸ್ ಆಸ್ಪತ್ರೆ ನಿರ್ಲಕ್ಷ್ಯ: 22 ವರ್ಷದ ಯುವಕ ಸಾವು]]></title>
            <link>https://kannada.asianetnews.com/state/belagavi-news22-year-old-died-family-outraged-against-beams-hospital-doctors/articleshow-0elws4b</link>
            <guid isPermaLink="true">https://kannada.asianetnews.com/state/belagavi-news22-year-old-died-family-outraged-against-beams-hospital-doctors/articleshow-0elws4b</guid>
            <pubDate>Tue, 14 Apr 2026 12:22:12 +0530</pubDate>
            <description><![CDATA[&lt;p&gt;ಬೆಳಗಾವಿಯಲ್ಲಿ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಯುವಕನೋರ್ವ ಬೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp5byn7n1qxs5a8g75nd09d5,imgname-belgavi-22-year-old-boy-died-1776149288181.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ:&lt;/strong&gt;&lt;/h2&gt;&lt;p&gt;ಬೆಳಗಾವಿ: ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕನೋರ್ವ ಸಾವನ್ನಪ್ಪಿದ ಆರೋಪ ಕೇಳಿ ಬಂದಿದೆ. ಕಟ್ಟಡಕ್ಕೆ ಬಣ್ಣ ಬಳಿಯುವ ವೇಳೆ ಯುವಕನೋರ್ವ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಅವರ ಸೊಂಟ ಹಾಗೂ ಕೈಗಳಿಗೆ ತೀವ್ರ ಗಾಯಗಳಾಗಿತ್ತು. ತಕ್ಷಣವೇ ಯುವಕನನ್ನು ಬೆಳಗಾವಿಯ ಬೀಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸರಿಯಾದ ಸಮಯದಲ್ಲಿ ಯುವಕನಿಗೆ ಬೀಮ್ಸ್&zwnj;ನಲ್ಲಿ ವೈದ್ಯರು ಚಿಕಿತ್ಸೆ ನೀಡದ ಪರಿಣಾಮ ಆತ ಸಾವನ್ನಪ್ಪಿದ್ದಾನೆ ಎಂದು ಯುವಕನ ಕುಟುಂಬದವರು ಆರೋಪ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಕಟ್ಟಡಕ್ಕೆ ಬಣ್ಣ ಬಳಿಯುವಾಗ ಆಯತಪ್ಪಿ ಬಿದ್ದ ಯುವಕ&lt;/strong&gt;&lt;/h3&gt;&lt;p&gt;ಮೃತ ಯುವಕನನ್ನು 22 ವರ್ಷದ ಶಿವು ಕಮ್ಮಾರ ಎಂದು ಗುರುತಿಸಲಾಗಿದೆ. ಈತ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದ ನಿವಾಸಿಯಾಗಿದ್ದ. ಈತ ಗೋಡೆಗೆ ಸುಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದು, ಬೆಳಗಾವಿಯ ಬ್ರಹ್ಮ ನಗರದಲ್ಲಿ ಕಟ್ಟಡಕ್ಕೆ ಬಣ್ಣ ಬಳಿಯುವಾಗ ಆಯತಪ್ಪಿ ಕಟ್ಟಡದಿಂದ ಕೆಳಗೆ ಬಿದ್ದಿದ್ದ. ಕೆಳಗೆ ಬಿದ್ದ ಪರಿಣಾಮ ಶಿವು ಅವರ ಕೈ ಮತ್ತು ಸೊಂಟದ ಭಾಗಕ್ಕೆ ತೀವ್ರ ಗಾಯವಾಗಿತ್ತು. ಕೂಡಲೇ ಯುವಕನನ್ನು ಬೀಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ರಾತ್ರಿ 11ಗಂಟೆಗೆ ಬೀಮ್ಸ್ ಆಸ್ಪತ್ರೆಗೆ ಶಿವು ಅವರನ್ನು ದಾಖಲಿಸಲಾಗಿತ್ತು. ಆದರೆ ತೀವ್ರ ಗಾಯಗೊಂಡಿದ್ದ ಯುವಕನಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಬೀದಿ ಕಾಳಗದ ವೇಳೆ ಅಪ್ಪನ ರಕ್ಷಣೆಗೆ ಗನ್ ಹೊರತೆಗೆದ ಮಗಳು: ವೀಡಿಯೋ ಭಾರಿ ವೈರಲ್&lt;/p&gt;&lt;p&gt;ಆಸ್ಪತ್ರೆಯಲ್ಲಿ ಏಳು ಜನ ವೈದ್ಯರು ಇದ್ದರೂ ಯಾರೂ ಕೂಡ ಯುವಕ ಶಿವುಗೆ ಚಿಕಿತ್ಸೆ ನೀಡುವತ್ತ ಗಮನಹರಿಸದೇ ನಿರ್ಲಕ್ಷ್ಯ ಮಾಡಿದ್ದಾರೆ. ರಾತ್ರಿ ಪಾಳಿಯಲ್ಲಿ ವೈದ್ಯರಿದ್ದರು ಹತ್ತಿರ ಸುಳಿದಿಲ್ಲ. ಇದರಿಂದಲೇ ಶಿವು ಸ್ಥಿತಿ ಹದಗೆಟ್ಟಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ನನ್ನ ಮಗ ಬದುಕುತ್ತಿದ್ದ ಎಂದು ಮೃತನ ಕುಟುಂಬದವರು ಆರೋಪಿಸಿ ಕಣ್ಣೀರಿಟ್ಟಿದ್ದಾರೆ. ಹೀಗಾಗಿ ಸಂಬಂಧಪಟ್ಟ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬದವರು ಆರೋಪಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಗಳ ಮೇಲೆ ಅತ್ಯಾ*ಚಾರವೆಸಗಿದ ವ್ಯಕ್ತಿ ಕೊಲೆ: ತಾಯಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ&lt;/strong&gt;&lt;/p&gt;&lt;p&gt;ಹೀಗಾಗಿ ನಿರ್ಲಕ್ಷ್ಯವಹಿಸಿದ್ದ ಸಂಬಂಧಪಟ್ಟ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬದವರು ಆಗ್ರಹಿಸಿದ್ದಾರೆ. ಆದರೆ ಕುಟುಂಬದವರ ಆರೋಪವನ್ನು ಬೀಮ್ಸ್ ಆಡಳಿತ ಮಂಡಳಿ ನಿರಾಕರಿಸಿದ್ದಾರೆ. ವೈದ್ಯರಿಂದ ನಿರ್ಲಕ್ಷ್ಯ ಆಗಿಲ್ಲ, ಅವರು ಘಟನೆ ನಡೆದ ಮೂರು ದಿನಗಳ ಬಳಿಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮೊದಲೆ ಕರೆತಂದಿದ್ದರೆ ಬದುಕಿಸಬಹುದಿತ್ತು ಎಂದ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಎಪಿಎಂಸಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>health-life</category>
            <dc:creator>Anusha Kb</dc:creator>
            <atom:link href="https://kannada.asianetnews.com/state/belagavi-news22-year-old-died-family-outraged-against-beams-hospital-doctors/articleshow-0elws4b"/>
        </item>
        <item>
            <title><![CDATA[ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು! ಹೇಗೆ ತೆಗೆಯಲಾಗುತ್ತೆ?  ಎಷ್ಟು ಖರ್ಚು?]]></title>
            <link>https://kannada.asianetnews.com/gallery/karnataka-districts/sperm-can-be-extracted-even-from-a-patient-in-coma-what-is-this-medical-marvel-here-is-the-complete-information-rav-4uf6vlw</link>
            <guid isPermaLink="true">https://kannada.asianetnews.com/gallery/karnataka-districts/sperm-can-be-extracted-even-from-a-patient-in-coma-what-is-this-medical-marvel-here-is-the-complete-information-rav-4uf6vlw</guid>
            <pubDate>Thu, 16 Apr 2026 12:32:25 +0530</pubDate>
            <description><![CDATA[&lt;p&gt;ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು! ಹೇಗೆ ತೆಗೆಯಲಾಗುತ್ತೆ, ಸಮಯದ ಪಾfರವೇನು, ಚಿಕ್ಕಿತ್ಸೆಗೆ ಖರ್ಚಾಗುವ ಹಣವೆಷ್ಟು ತಿಳಿಯಲು ಮುಂದೆ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpagtzpkqsx6n6h2yw7h8gne,imgname-----------------------2026-04-16t121902.643-1776322182866.jpg" type="image/jpeg" height="390" width="690"/>
            <content:encoded><![CDATA[&lt;p&gt;ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು! ಹೇಗೆ ತೆಗೆಯಲಾಗುತ್ತೆ, ಸಮಯದ ಪಾfರವೇನು, ಚಿಕ್ಕಿತ್ಸೆಗೆ ಖರ್ಚಾಗುವ ಹಣವೆಷ್ಟು ತಿಳಿಯಲು ಮುಂದೆ ಓದಿ.&lt;/p&gt;&lt;img&gt;&lt;p&gt;ವೈದ್ಯಕೀಯ ವಿಜ್ಞಾನವು ಇಂದು ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾ ಮುನ್ನಡೆಯುತ್ತಿದೆ. ಒಂದು ಕಾಲದಲ್ಲಿ ಕಲ್ಪನೆಗೂ ನಿಲುಕದ ವಿಷಯಗಳು ಇಂದು ವಾಸ್ತವವಾಗುತ್ತಿವೆ. ಹೌದು ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಕೋಮಾದಲ್ಲಿರುವ ವ್ಯಕ್ತಿಯಿಂದ ವೀರ್ಯವನ್ನು ಹೊರತೆಗೆಯುವ ತಂತ್ರಜ್ಞಾನ. ಅಚ್ಚರಿಯೆನಿಸುತ್ತದಲ್ಲವೇ? ಇತ್ತೀಚೆಗೆ ದೆಹಲಿ ಹೈಕೋರ್ಟ್ ನೀಡಿದ ಒಂದು ಮಹತ್ವದ ತೀರ್ಪು ಈ ವಿಷಯದ ಚರ್ಚೆಯು ಮುನ್ನಲೆಗೆ ಬಂದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಆರೋಗ್ಯ ನಿಯತಕಾಲಿಕೆಗಳಲ್ಲಿ ಚರ್ಚಿತಗೊಳ್ಳುತ್ತಿವೆ.&lt;/p&gt;&lt;img&gt;&lt;p&gt;ಇಂಡಿಯನ್ ಅರ್ಮಿ ಸೈನಿಕರೊಬ್ಬರು ದೀರ್ಘಕಾಲದಿಂದ ಕೋಮಾ ಸ್ಥಿತಿಯಲ್ಲಿದ್ದರು. ಆದರೆ ಆ ಸೈನಿಕನ ಪತ್ನಿಗೆ ತಾಯಿಯಾಗುವ ಹಂಬಲ! ಇತ್ತ ಪತಿ ನಿಶ್ಚಲವಾಗಿ ಕೋಮಸ್ಥಿತಿಯಲ್ಲಿ ಮಲಗಿದ್ದಾನೆ ಇಂಥ ಸ್ಥಿತಿಯಲ್ಲಿ ಪತ್ನಿ ಮಾಡಿದ್ದೇನೆಂದರೆ ಪತಿಯ ವೀರ್ಯವನ್ನು ಸಂರಕ್ಷಿಸಲು ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಮಾನವೀಯ ಹಿನ್ನೆಲೆ ತೀರ್ಪು ನೀಡಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ ಅವರು, 'ಪತಿಯ ಲಿಖಿತ ಒಪ್ಪಿಗೆ ಇಲ್ಲ ಎಂಬ ಕಾರಣಕ್ಕೆ ಪತ್ನಿಯ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ' ಎಂದು ಹೇಳಿದರು. ಈ ದಂಪತಿಗಳು ಮೊದಲೇ ಐವಿಎಫ್ (IVF) ಮೂಲಕ ಮಗು ಪಡೆಯಲು ಪ್ರಯತ್ನಿಸುತ್ತಿದ್ದರಿಂದ, ನ್ಯಾಯಾಲಯವು ಇದಕ್ಕೆ ಕಾನೂನು ಮಾನ್ಯತೆ ನೀಡಿತು. ಈ ತೀರ್ಪು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ರೋಗಿಗಳ ಕುಟುಂಬಕ್ಕೆ ಹೊಸ ಭರವಸೆ ನೀಡಿರುವುದಂತೂ ದಿಟ.&lt;/p&gt;&lt;img&gt;&lt;p&gt;ಒಬ್ಬ ವ್ಯಕ್ತಿ ಅಪಘಾತದಿಂದಲೋ, ಇನ್ಯಾವುದೋ ದುರಂತದಿಂದಾಗಿ ಕೋಮಾಕ್ಕೆ ಹೋದಾಗ ಅವರ ದೇಹವು ಬಾಹ್ಯ ಪ್ರಪಂಚಕ್ಕೆ ಸ್ಪಂದಿಸುವುದಿಲ್ಲ, ಆದರೆ ಒಳಗಿನ ಅಂಗಾಂಗಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಇಂತಹ ಸ್ಥಿತಿಯಲ್ಲಿ ನೈಸರ್ಗಿಕವಾಗಿ ವೀರ್ಯ ಹೊರತೆಗೆಯಲು ಸಾಧ್ಯವಾಗದಿದ್ದಾಗ, ವೈದ್ಯರು 'ಸರ್ಜಿಕಲ್ ಸ್ಪೆರ್ಮ್ ರಿಟ್ರೈವಲ್' (SSR) ಎಂಬ ವಿಧಾನವನ್ನು ಬಳಸುತ್ತಾರೆ. ಇದು ಅತ್ಯಂತ ನಿಖರವಾದ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಮೂತ್ರಶಾಸ್ತ್ರಜ್ಞರು (Urologists) ನೇರವಾಗಿ ಸಂತಾನೋತ್ಪತ್ತಿ ಅಂಗಗಳಿಂದ ವೀರ್ಯವನ್ನು ಸಂಗ್ರಹಿಸುತ್ತಾರೆ.&lt;/p&gt;&lt;img&gt;&lt;p&gt;ಈ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಎರಡು ವಿಧಾನಗಳನ್ನು ಬಳಸಲಾಗುತ್ತದೆ:&lt;/p&gt;&lt;p&gt;ಮೊದಲನೆಯದು, PESA (ಪರ್ಕ್ಯುಟೇನಿಯಸ್ ಎಪಿಡಿಡೈಮಲ್ ಸ್ಪೆರ್ಮ್ ಆಸ್ಪಿರೇಷನ್): ಇದರಲ್ಲಿ ವೃಷಣದ ಮೇಲಿರುವ ಕೊಳವೆಯಿಂದ (ಎಪಿಡಿಡೈಮಿಸ್) ಅತ್ಯಂತ ಸೂಕ್ಷ್ಮವಾದ ಸೂಜಿಯ ಮೂಲಕ ವೀರ್ಯವನ್ನು ಹೀರಿಕೊಳ್ಳಲಾಗುತ್ತದೆ.&lt;/p&gt;&lt;p&gt;TESA (ಟೆಸ್ಟಿಕುಲರ್ ಸ್ಪೆರ್ಮ್ ಆಸ್ಪಿರೇಷನ್): ಈ ವಿಧಾನದಲ್ಲಿ ವೈದ್ಯರು ನೇರವಾಗಿ ವೃಷಣದ ಅಂಗಾಂಶಕ್ಕೆ ಸೂಜಿಯನ್ನು ಚುಚ್ಚುವ ಮೂಲಕ ವೀರ್ಯವನ್ನು ಹೊರತೆಗೆಯುತ್ತಾರೆ. ಈ ಎರಡೂ ಪ್ರಕ್ರಿಯೆಗಳನ್ನು ಅರಿವಳಿಕೆ (Anesthesia) ನೀಡಿ ಮಾಡುವುದರಿಂದ ರೋಗಿಗೆ ಯಾವುದೇ ನೋವಾಗುವುದಿಲ್ಲ.&lt;/p&gt;&lt;p&gt;&lt;strong&gt;ಸಮಯ ಅತ್ಯಂತ ಮುಖ್ಯ&lt;/strong&gt;&lt;/p&gt;&lt;p&gt;ಇಲ್ಲಿ ಸಮಯವೇ ಅತ್ಯಂತ ಪ್ರಮುಖವಾದುದು. ವ್ಯಕ್ತಿಯು ಕೋಮಾಕ್ಕೆ ಹೋದಾಗ ಅಥವಾ ಮೆದುಳು ನಿಷ್ಕ್ರಿಯಗೊಂಡಾಗ (Brain Dead), ವೀರ್ಯದ ಗುಣಮಟ್ಟ ಉತ್ತಮವಾಗಿರಲು 48 ರಿಂದ 72 ಗಂಟೆಗಳ ಒಳಗಾಗಿ ಈ ಪ್ರಕ್ರಿಯೆ ನಡೆಯಬೇಕು. ಸಮಯ ಕಳೆದಂತೆ ವೀರ್ಯದ ಚಲನಶೀಲತೆ ಮತ್ತು ಜೀವಿತಾವಧಿ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದಲೇ ಇಂತಹ ಪ್ರಕರಣಗಳಲ್ಲಿ ಕಾನೂನು ಪ್ರಕ್ರಿಯೆ ಮತ್ತು ವೈದ್ಯಕೀಯ ಚಿಕಿತ್ಸೆ ಎರಡೂ ವೇಗವಾಗಿ ನಡೆಯಬೇಕಾಗುತ್ತದೆ.&lt;/p&gt;&lt;img&gt;&lt;p&gt;ಹೊರತೆಗೆದ ವೀರ್ಯವನ್ನು ಕೂಡಲೇ ಬಳಸಬೇಕೆಂದಿಲ್ಲ. 'ಕ್ರಯೋಪ್ರೆಸರ್ವೇಶನ್' (Cryopreservation)* ಎಂಬ ತಂತ್ರಜ್ಞಾನದ ಮೂಲಕ ಇದನ್ನು ದ್ರವ ಸಾರಜನಕವಿರುವ ಟ್ಯಾಂಕ್&zwnj;ಗಳಲ್ಲಿ ಅತಿ ಕಡಿಮೆ ತಾಪಮಾನದಲ್ಲಿ ಹೆಪ್ಪುಗಟ್ಟಿಸಿ ಸಂರಕ್ಷಿಸಲಾಗುತ್ತದೆ. ಈ ವಿಧಾನದಲ್ಲಿ ವೀರ್ಯವನ್ನು ಹಲವು ವರ್ಷಗಳವರೆಗೆ ಸುರಕ್ಷಿತವಾಗಿ ಇಡಬಹುದು. ಮುಂದೆ ಪತ್ನಿ ಅಥವಾ ಸಂಗಾತಿ ಸಿದ್ಧರಾದಾಗ IVF ಅಥವಾ ICSI ಚಿಕಿತ್ಸೆಯ ಮೂಲಕ ಗರ್ಭಧರಿಸಲು ಇದನ್ನು ಬಳಸಬಹುದು.&lt;/p&gt;&lt;p&gt;&lt;strong&gt;ಈ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತೆ?&lt;/strong&gt;&lt;/p&gt;&lt;p&gt;ಭಾರತದಲ್ಲಿ ಈ ತಂತ್ರಜ್ಞಾನದ ವೆಚ್ಚ ಆಸ್ಪತ್ರೆ ಮತ್ತು ನಗರಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ PESA ಅಥವಾ TESA ನಂತಹ ಮೂಲಭೂತ ವಿಧಾನಗಳಿಗೆ ಅಂದಾಜು ₹25,000 ರಿಂದ ₹50,000 ವರೆಗೆ ಖರ್ಚಾಗಬಹುದು.&lt;/p&gt;&lt;p&gt;ಇನ್ನು ಸುಧಾರಿತ ತಂತ್ರ ಬಳಸುವುದಾದರೆ, ಒಂದು ವೇಳೆ ಮೈಕ್ರೋ-TESE ನಂತಹ ಸೂಕ್ಷ್ಮದರ್ಶಕ ಬಳಸಿ ಮಾಡುವ ಸುಧಾರಿತ ವಿಧಾನ ಬೇಕಿದ್ದರೆ, ವೆಚ್ಚ ₹1.2 ಲಕ್ಷಕ್ಕಿಂತ ಹೆಚ್ಚಾಗಬಹುದು.&lt;/p&gt;&lt;p&gt;ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಈ ದರಗಳು ಇನ್ನು ಸ್ವಲ್ಪ ಹೆಚ್ಚಿರಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದು ಅಗ್ಗವಾದರೂ, ಇಂತಹ ಸುಧಾರಿತ ಸೌಲಭ್ಯಗಳ ಲಭ್ಯತೆ ಸವಾಲಿನ ಕೆಲಸವಾಗಿದೆ.&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ಇಲ್ಲಿ ಕೊಡಲಾಗಿರುವ ಮಾಹಿತಿ ಆರೋಗ್ಯ ನಿಯತಕಾಲಿಕೆಗಳಿಂದ ಪಡೆದ ಪ್ರಾಥಮಿಕ ಮಾಹಿತಿಯಾಗಿದೆ. &amp;nbsp;ಆರೋಗ್ಯ ಸಂಬಂಧಿತ ಸಮಸ್ಯೆಗಳೀಗೆ ವೈದ್ಯರನ್ನ ಸಂಪರ್ಕಿಸಿ&lt;/p&gt;]]></content:encoded>
            <category>health-life</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/sperm-can-be-extracted-even-from-a-patient-in-coma-what-is-this-medical-marvel-here-is-the-complete-information-rav-4uf6vlw"/>
        </item>
        <item>
            <title><![CDATA[Night Shift: ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತೀರಾ?  ಎಚ್ಚರ.. ಈ ಕಾಯಿಲೆ ಬರೋ ರಿಸ್ಕ್ ಹೆಚ್ಚು!]]></title>
            <link>https://kannada.asianetnews.com/health-life/night-shift-work-linked-to-higher-diabetes-and-cholesterol-risks-study-finds-gvd/articleshow-5ccns4d</link>
            <guid isPermaLink="true">https://kannada.asianetnews.com/health-life/night-shift-work-linked-to-higher-diabetes-and-cholesterol-risks-study-finds-gvd/articleshow-5ccns4d</guid>
            <pubDate>Thu, 16 Apr 2026 17:37:53 +0530</pubDate>
            <description><![CDATA[&lt;p&gt;ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಡುತ್ತದೆ. ಯಾಕಂದ್ರೆ, ಅವರು ಹಗಲಿನಲ್ಲಿ ನಿದ್ದೆ ಮಾಡುವುದರಿಂದ ಅಥವಾ ಮನೆಯೊಳಗೆ ಹೆಚ್ಚು ಸಮಯ ಕಳೆಯುವುದರಿಂದ ಸೂರ್ಯನ ಬೆಳಕಿಗೆ ಮೈಯೊಡ್ಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k6m13a4bbw9tnhct7cvtdfd2,imgname-fotojet-1759461353611.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾತ್ರಿ ಪಾಳಿಯಲ್ಲಿ ಕೆಲಸ ಮಾಡೋದು ನಿಮ್ಮ ನಿದ್ದೆಯನ್ನಷ್ಟೇ ಕೆಡಿಸಲ್ಲ, ಜೊತೆಗೆ ಮಧುಮೇಹ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ವಿಟಮಿನ್ ಡಿ ಕೊರತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಅಂತ ಒಂದು ಹೊಸ ಅಧ್ಯಯನ ಹೇಳಿದೆ. ನೈಟ್ ಶಿಫ್ಟ್ ಕೆಲಸವು ನಿಮ್ಮ ನಿದ್ದೆಯ ಚಕ್ರವನ್ನು ಹಾಳುಮಾಡಿ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.&lt;/p&gt;&lt;p&gt;ನಿದ್ದೆಯ ಕೊರತೆಯು ರಾತ್ರಿ ಪಾಳಿಯ ಕೆಲಸಗಾರರು ಎದುರಿಸುವ ದೊಡ್ಡ ಸವಾಲು. 'ಇಂಡಿಯನ್ ಜರ್ನಲ್ ಆಫ್ ಎಂಡೋಕ್ರೈನಾಲಜಿ ಅಂಡ್ ಮೆಟಬಾಲಿಸಂ'ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಆರೋಗ್ಯವಂತ ಯುವಕರಲ್ಲಿಯೂ ನೈಟ್ ಶಿಫ್ಟ್ ಕೆಲಸವು ದೇಹದ ಚಯಾಪಚಯ ಕ್ರಿಯೆ (metabolism) ಮತ್ತು ಹಾರ್ಮೋನುಗಳ ಮಟ್ಟವನ್ನು ಗಣನೀಯವಾಗಿ ಏರುಪೇರು ಮಾಡುತ್ತದೆ.&lt;/p&gt;&lt;p&gt;ನೈಟ್ ಶಿಫ್ಟ್ ಕೆಲಸಗಾರರಲ್ಲಿ ಇನ್ಸುಲಿನ್ ಪ್ರತಿರೋಧದ (insulin resistance) ಸಮಸ್ಯೆ ಹೆಚ್ಚಾಗಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಅಂದರೆ, ಇವರಿಗೆ ಟೈಪ್ 2 ಡಯಾಬಿಟಿಸ್ ಬರುವ ಅಪಾಯ ಹೆಚ್ಚು. ಹಗಲು ಪಾಳಿಯಲ್ಲಿ ಕೆಲಸ ಮಾಡುವ ಶೇ. 62ರಷ್ಟು ಜನರಲ್ಲಿ ಈ ಲಕ್ಷಣಗಳಿದ್ದರೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಶೇ. 77ರಷ್ಟು ಜನರಲ್ಲಿ ಇನ್ಸುಲಿನ್ ಪ್ರತಿರೋಧದ ಲಕ್ಷಣಗಳು ಕಂಡುಬಂದಿವೆ.&lt;/p&gt;&lt;p&gt;ಅಷ್ಟೇ ಅಲ್ಲ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ರಕ್ತದಲ್ಲಿ ಟ್ರೈಗ್ಲಿಸರೈಡ್ (ಒಂದು ಬಗೆಯ ಕೊಬ್ಬು) ಹೆಚ್ಚಿದ್ದು, ಎಚ್&zwnj;ಡಿಎಲ್ (ಒಳ್ಳೆಯ ಕೊಲೆಸ್ಟ್ರಾಲ್) ಮಟ್ಟ ಕಡಿಮೆ ಇತ್ತು. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇನ್ನು ಪುರುಷರ ವಿಚಾರಕ್ಕೆ ಬಂದರೆ, ನೈಟ್ ಶಿಫ್ಟ್ ಕೆಲಸಗಾರರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಲ್ಯುಟೈನೈಸಿಂಗ್ ಹಾರ್ಮೋನುಗಳ ಮಟ್ಟ ಕಡಿಮೆ ಇರುವುದು ಕಂಡುಬಂದಿದೆ.&lt;/p&gt;&lt;h2&gt;&lt;strong&gt;ವಿಟಮಿನ್ ಡಿ ಕೊರತೆ&lt;/strong&gt;&lt;/h2&gt;&lt;p&gt;ಇದು ಅವರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಗಲಿನಲ್ಲಿ ನಿದ್ದೆ ಮಾಡುತ್ತಾರೆ ಅಥವಾ ಹೆಚ್ಚು ಸಮಯ ಮನೆಯೊಳಗೆ ಇರುತ್ತಾರೆ. ಇದರಿಂದ ಅವರಿಗೆ ಸೂರ್ಯನ ಬೆಳಕು ಸಿಗುವುದಿಲ್ಲ. ಈ ಕಾರಣದಿಂದಾಗಿ, ಅವರಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುವ ಸಾಧ್ಯತೆ ತುಂಬಾ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ.&lt;/p&gt;]]></content:encoded>
            <category>health-life</category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/night-shift-work-linked-to-higher-diabetes-and-cholesterol-risks-study-finds-gvd/articleshow-5ccns4d"/>
        </item>
        <item>
            <title><![CDATA[ಬೇಸಿಗೆಗೆ ಹೆಚ್ಚಾಯ್ತಾ ಬಾಯಿ ದುರ್ವಾಸನೆ? ₹2 ಬಳಸಿ ಸ್ವಚ್ಛ ಉಸಿರು ನಿಮ್ಮದಾಗಿಸಿ!]]></title>
            <link>https://kannada.asianetnews.com/webstories/health-life/effective-tips-to-get-rid-of-bad-breath-naturally-sat-6h7wp2b</link>
            <guid isPermaLink="true">https://kannada.asianetnews.com/webstories/health-life/effective-tips-to-get-rid-of-bad-breath-naturally-sat-6h7wp2b</guid>
            <pubDate>Thu, 16 Apr 2026 21:40:49 +0530</pubDate>
            <description><![CDATA[ಬಾಯಿ ದುರ್ವಾಸನೆಯಿಂದ ಮುಜುಗರವೇ? ಚಿಂತೆ ಬಿಡಿ. ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಕೆಲವು ಸರಳ ವಸ್ತುಗಳಿಂದ ಈ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಇಲ್ಲಿದೆ ಮಾಹಿತಿ.]]></description>
            <media:content url="https://static.asianetnews.com/images/w-1280,h-720,format-jpg,imgid-01jha78vs3qye94g2e2epp0haf,imgname-bad-breath--1736583704355.png" type="image/jpeg" height="390" width="690"/>
            <category>health-life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/health-life/effective-tips-to-get-rid-of-bad-breath-naturally-sat-6h7wp2b"/>
        </item>
        <item>
            <title><![CDATA[Late Night Eating: ರಾತ್ರಿ ಹೊತ್ತು ತಡವಾಗಿ ಊಟ ಮಾಡ್ತೀರಾ? ಹಾಗಿದ್ರೆ ಲಿವರ್‌ಗೆ ಕಾದಿದೆ ಅಪಾಯ!]]></title>
            <link>https://kannada.asianetnews.com/health-life/health-risks-of-late-night-dinner-and-irregular-eating-habits-gvd/articleshow-7uc47a5</link>
            <guid isPermaLink="true">https://kannada.asianetnews.com/health-life/health-risks-of-late-night-dinner-and-irregular-eating-habits-gvd/articleshow-7uc47a5</guid>
            <pubDate>Thu, 16 Apr 2026 17:20:54 +0530</pubDate>
            <description><![CDATA[&lt;p&gt;ರಾತ್ರಿ ಹೊತ್ತು ತಡವಾಗಿ ಊಟ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದು ನಿಮ್ಮ ಲಿವರ್ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದರಿಂದ 'ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್' ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j8htkyz3krkz0bqh58fb60ph,imgname-Disadvantages-of-eating-rice-at-night-1727175195619.jpg" type="image/jpeg" height="390" width="690"/>
            <content:encoded><![CDATA[&lt;p&gt;ಇವತ್ತಿನ ಬ್ಯುಸಿ ಲೈಫ್&zwnj;ಸ್ಟೈಲ್&zwnj;ನಲ್ಲಿ ನಮ್ಮಲ್ಲಿ ಹಲವರು ಸರಿಯಾದ ಸಮಯಕ್ಕೆ ಊಟ ಮಾಡುವುದೇ ಇಲ್ಲ. ಕೆಲಸದ ಒತ್ತಡದಲ್ಲಿ ಕೆಲವರು ಬೆಳಗಿನ ತಿಂಡಿಯನ್ನೇ ಮರೆತುಬಿಡುತ್ತಾರೆ. ಸಮಯಕ್ಕೆ ಸರಿಯಾಗಿ ಊಟ ಮಾಡದೆ, ಕಂಡ ಕಂಡ ಸ್ನ್ಯಾಕ್ಸ್ ತಿನ್ನುವುದು ಮತ್ತು ರಾತ್ರಿ ತಡವಾಗಿ ಊಟ ಮಾಡುವುದು ಒಂದು ಕೆಟ್ಟ ಅಭ್ಯಾಸವಾಗಿಬಿಟ್ಟಿದೆ. &quot;ನೀವು ಏನು ತಿನ್ನುತ್ತೀರಿ ಅದೇ ನಿಮ್ಮ ಆರೋಗ್ಯ&quot; ಅನ್ನೋ ಮಾತಿದೆ. ಆದರೆ, ನೀವು ಯಾವಾಗ ತಿನ್ನುತ್ತೀರಿ ಅನ್ನೋದು ಕೂಡ ಅಷ್ಟೇ ಮುಖ್ಯ ಅಂತ ತಜ್ಞರು ಹೇಳುತ್ತಾರೆ.&lt;/p&gt;&lt;p&gt;ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಮತ್ತು ಸಲಹೆಗಾರರಾದ ಡಾ. ಹರ್ಷವರ್ಧನ್ ರಾವ್ ಬಿ ಅವರ ಪ್ರಕಾರ, ನಮ್ಮ ಆಹಾರ ಪದ್ಧತಿ ನಮ್ಮ ಲಿವರ್ (ಯಕೃತ್ತು) ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೇಹದಲ್ಲಿ ಸಕ್ಕರೆ ಮತ್ತು ಕೊಬ್ಬನ್ನು ಸಂಸ್ಕರಿಸುವಲ್ಲಿ ಲಿವರ್ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಸಮಯಕ್ಕೆ ಸರಿಯಾಗಿ ಊಟ ಮಾಡದೆ, ಸಂಸ್ಕರಿಸಿದ ಆಹಾರಗಳನ್ನು ಹೆಚ್ಚಾಗಿ ತಿಂದಾಗ, ನಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಪದೇ ಪದೇ ಏರಿಕೆಯಾಗುತ್ತದೆ.&lt;/p&gt;&lt;p&gt;ಆಗ, ನಮ್ಮ ದೇಹವು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು 'ಇನ್ಸುಲಿನ್' ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಆದರೆ, ಇದೇ ಕೆಟ್ಟ ಅಭ್ಯಾಸ ಮುಂದುವರಿದರೆ, ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾಗಿ 'ಇನ್ಸುಲಿನ್ ರೆಸಿಸ್ಟೆನ್ಸ್' ಎಂಬ ಸ್ಥಿತಿ ಉಂಟಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗುವುದು, ರಕ್ತದಲ್ಲಿ ಸಕ್ಕರೆ ಮಟ್ಟ ಏರುವುದು ಮತ್ತು ಲಿವರ್&zwnj;ನಲ್ಲಿ ಕೊಬ್ಬು ಶೇಖರಣೆಯಾಗುವಂತಹ ಸಮಸ್ಯೆಗಳು ಶುರುವಾಗುತ್ತವೆ.&lt;/p&gt;&lt;p&gt;ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದರಿಂದ ಬರುವ ದೊಡ್ಡ ಸಮಸ್ಯೆ ಎಂದರೆ 'ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್' (NAFLD). ಇನ್ಸುಲಿನ್ ರೆಸಿಸ್ಟೆನ್ಸ್&zwnj;ನಿಂದಾಗಿ ಲಿವರ್&zwnj;ನ ಕೋಶಗಳಲ್ಲಿ ಕೊಬ್ಬು ಶೇಖರಣೆಯಾಗಲು ಶುರುವಾಗುತ್ತದೆ. ರಾತ್ರಿ ತಡವಾಗಿ ಊಟ ಮಾಡುವುದು ಮತ್ತೊಂದು ದೊಡ್ಡ ಅಪಾಯ. ನಮ್ಮ ದೇಹದ ಚಯಾಪಚಯ ಕ್ರಿಯೆ (metabolism) ಸಂಜೆಯಾಗುತ್ತಿದ್ದಂತೆ ನಿಧಾನವಾಗುತ್ತದೆ. ಹಾಗಾಗಿ, ರಾತ್ರಿ ತಿಂದ ಕ್ಯಾಲೋರಿಗಳು ಶಕ್ತಿಯಾಗಿ ಬಳಕೆಯಾಗುವ ಬದಲು ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುವ ಸಾಧ್ಯತೆ ಹೆಚ್ಚು.&lt;/p&gt;&lt;h2&gt;&lt;strong&gt;ಲಿವರ್&zwnj;ನಲ್ಲಿ ಕೊಬ್ಬು ಶೇಖರಣೆ&lt;/strong&gt;&lt;/h2&gt;&lt;p&gt;ಉದಾಹರಣೆಗೆ, 400 ಕ್ಯಾಲೋರಿ ಇರುವ ಒಂದು ಸ್ನ್ಯಾಕ್ ಅನ್ನು ಮಧ್ಯಾಹ್ನ ತಿಂದರೆ ಆಗುವ ಪರಿಣಾಮಕ್ಕೂ, ಅದನ್ನೇ ಮಧ್ಯರಾತ್ರಿ ತಿಂದರೆ ಆಗುವ ಪರಿಣಾಮಕ್ಕೂ ಬಹಳ ವ್ಯತ್ಯಾಸವಿದೆ. ಕಾಲಕ್ರಮೇಣ, ಈ ಅಭ್ಯಾಸವು ಲಿವರ್&zwnj;ನಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗುತ್ತದೆ. ಸರಿಯಾದ ಸಮಯಕ್ಕೆ ಊಟ ಮಾಡುವುದು, ಊಟಗಳ ನಡುವೆ ಅಂತರ ಕಾಯ್ದುಕೊಳ್ಳುವುದು, ಸ್ನ್ಯಾಕ್ಸ್ ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಹಾಗೂ ಮಲಗುವ ಸ್ವಲ್ಪ ಸಮಯದ ಮುಂಚೆ ಏನನ್ನೂ ತಿನ್ನದಿರುವುದು ನಮ್ಮ ಲಿವರ್ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಡಾ. ರಾವ್ ಸಲಹೆ ನೀಡುತ್ತಾರೆ.&lt;/p&gt;]]></content:encoded>
            <category>health-life</category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/health-risks-of-late-night-dinner-and-irregular-eating-habits-gvd/articleshow-7uc47a5"/>
        </item>
        <item>
            <title><![CDATA[ಬ್ಯಾಚುಲರ್ ಬಾಯ್ಸ್‌, ಹಾಸ್ಟೆಲ್ ಹುಡುಗ್ರು & ವರ್ಕಿಂಗ್ ವುಮೆನ್‌ಗೆ ಬೆಸ್ಟ್ ಈ ಹುಣುಸೇಹುಳಿ; ಆದ್ರೆ ಈ ಸೀಕ್ರೆಟ್ ಗೊತ್ತಿರ್ಲಿ!]]></title>
            <link>https://kannada.asianetnews.com/food/traditional-tamarind-tangy-soup-called-hunashehuli-recipe-for-quick-cooking-for-hostellers-bachelors-and-working-women/articleshow-86ih85o</link>
            <guid isPermaLink="true">https://kannada.asianetnews.com/food/traditional-tamarind-tangy-soup-called-hunashehuli-recipe-for-quick-cooking-for-hostellers-bachelors-and-working-women/articleshow-86ih85o</guid>
            <pubDate>Thu, 16 Apr 2026 16:56:11 +0530</pubDate>
            <description><![CDATA[&lt;p&gt;ಅನೇಕರಿಗೆ ಹುಣಸೇಹಣ್ಣಿನಿಂದ ಕೇವಲ ಸಾಂಬಾರ್ ಮಾಡುವುದು ಮಾತ್ರ ತಿಳಿದಿದೆ. ಆದರೆ, ಅತ್ಯಂತ ಸರಳವಾಗಿ ಮತ್ತು ಬೇಗನೆ ಮಾಡಬಹುದಾದ 'ಹುಣಸೇಹುಳಿ' (ಒಂದು ರೀತಿಯ ರಸಂ ರೆಸಿಪಿ) ರುಚಿಯೇ ಬೇರೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಇದು ಅರ್ಜೆಂಟ್ ಅಡುಗೆ ಮಾತ್ರವಲ್ಲ, ವಾರಗಟ್ಟಲೆ ಉಪಯೋಗಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpazydvwdhngx0d6k2x2dffm,imgname-hunashehuli-recipe-1776338024316.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಣಸೇಹಣ್ಣಿನ ಆ ಹಳೆಯ ನಂಟು: ಅಜ್ಜಿಯ ಕಾಲದ 'ಹುಣಸೇಹುಳಿ' ರೆಸಿಪಿ ಮತ್ತು ಆರೋಗ್ಯದ ಗುಟ್ಟು!&lt;/strong&gt;&lt;/p&gt;&lt;p&gt;ನಮ್ಮ ಭಾರತೀಯ ಅಡುಗೆಮನೆಯಲ್ಲಿ ಹುಣಸೇಹಣ್ಣಿಗೆ (Tamarind) ಒಂದು ವಿಶಿಷ್ಟವಾದ ಇತಿಹಾಸವಿದೆ. ಬಯಲುಸೀಮೆಯ ಬಿಸಿಲು ತುಂಬಿದ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುವ, ಮಲೆನಾಡಿನ ಕೆಲವು ಭಾಗಗಳಲ್ಲೂ ಆಪ್ತವಾಗಿರುವ ಹುಣಸೇಹಣ್ಣು ಇಲ್ಲದೆ ಹೋದರೆ ನಮ್ಮ ಅಡುಗೆಗೆ ಪೂರ್ಣತ್ವವೇ ಸಿಗುವುದಿಲ್ಲ. ಹಳೆಯ ಕಾಲದಿಂದಲೂ ನಮ್ಮ ಅಜ್ಜಿಯಂದಿರು ಹುಣಸೇಹಣ್ಣನ್ನು ಕೇವಲ ಒಂದು ಪದಾರ್ಥವಾಗಿ ನೋಡದೆ, ಅದನ್ನು ವರ್ಷವಿಡೀ ಕೆಡದಂತೆ ಕಾಪಾಡುವ ಒಂದು ಸಂಪತ್ತಿನಂತೆ ಕಾಣುತ್ತಿದ್ದರು.&lt;/p&gt;&lt;p&gt;ಸಂಪ್ರದಾಯ ಮತ್ತು ಸಂಗ್ರಹಣೆಯ ಕಲೆ:&lt;/p&gt;&lt;p&gt;ಹಿಂದಿನ ದಿನಗಳಲ್ಲಿ ಹುಣಸೇಹಣ್ಣನ್ನು ಬಿಡಿಸಿ, ಅದಕ್ಕೆ ಉಪ್ಪು ಸೇರಿಸಿ, ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ, ದೊಡ್ಡ ದೊಡ್ಡ ಉಂಡೆಗಳನ್ನಾಗಿ ಮಾಡಿ ಜೇಡಿಮಣ್ಣಿನ ಮಡಕೆಗಳಲ್ಲಿ ಅಥವಾ ಜಾಡಿಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಹೀಗೆ ಮಾಡಿದರೆ ಹುಣಸೇಹಣ್ಣು ಎರಡು-ಮೂರು ವರ್ಷಗಳ ಕಾಲ ಕೆಡದಂತೆ ಇರುತ್ತಿತ್ತು. ಈ ಹುಣಸೇಹಣ್ಣು ಕೇವಲ ಸಾಂಬಾರ್ ಅಥವಾ ರಸಂಗೆ ಸೀಮಿತವಾಗಿರಲಿಲ್ಲ; ಪಲ್ಯ, ಗೊಜ್ಜು ಹಾಗೂ ಚಿತ್ರಾನ್ನದಂತಹ ರುಚಿಕರ ಖಾದ್ಯಗಳ ಜೀವಾಳವಾಗಿತ್ತು.&lt;/p&gt;&lt;h2&gt;ಪರಿಮಳಯುಕ್ತ 'ಹುಣಸೇಹುಳಿ' ತಯಾರಿಸುವುದು ಹೇಗೆ?&lt;/h2&gt;&lt;p&gt;ಅನೇಕರಿಗೆ ಹುಣಸೇಹಣ್ಣಿನಿಂದ ಕೇವಲ ಸಾಂಬಾರ್ ಮಾಡುವುದು ಮಾತ್ರ ತಿಳಿದಿದೆ. ಆದರೆ, ಅತ್ಯಂತ ಸರಳವಾಗಿ ಮತ್ತು ಬೇಗನೆ ಮಾಡಬಹುದಾದ 'ಹುಣಸೇಹುಳಿ' (ಒಂದು ರೀತಿಯ ರಸಂ ರೆಸಿಪಿ) ರುಚಿಯೇ ಬೇರೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ:&lt;/p&gt;&lt;p&gt;ಮೊದಲು ಸ್ವಲ್ಪ ಹುಣಸೇಹಣ್ಣನ್ನು ಬಿಸಿ ನೀರಿನಲ್ಲಿ ನೆನೆಸಿ, ಅದರ ರಸವನ್ನು ಚೆನ್ನಾಗಿ ಕಿವುಚಿಕೊಳ್ಳಿ.&lt;/p&gt;&lt;p&gt;ಈ ಹುಣಸೇರಸಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ.&lt;/p&gt;&lt;p&gt;ಕುದಿಯುತ್ತಿರುವ ರಸಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿದರೆ ಅದರ ರುಚಿ ಸಮತೋಲನಗೊಳ್ಳುತ್ತದೆ (ಸಿಹಿ ಇಷ್ಟವಿಲ್ಲದವರು ಬೆಲ್ಲವಿಲ್ಲದೆ ಕೂಡ ಮಾಡಬಹುದು).&lt;/p&gt;&lt;p&gt;ಈಗ ಇದಕ್ಕೆ ಘಮಘಮಿಸುವ ಒಗ್ಗರಣೆ ನೀಡುವ ಸಮಯ. ಸಾಸಿವೆ, ಜೀರಿಗೆ, ಹಸಿ ಮೆಣಸಿನಕಾಯಿ, ಒಣ ಮೆಣಸಿನಕಾಯಿ, ಅರಿಶಿಣ ಮತ್ತು ಇಂಗನ್ನು ಸೇರಿಸಿ ಒಗ್ಗರಣೆ ಸಿದ್ಧಪಡಿಸಿ ಕುದಿಯುತ್ತಿರುವ ರಸಕ್ಕೆ ಸೇರಿಸಿ.&lt;/p&gt;&lt;h3&gt;ಬೆಳ್ಳುಳ್ಳಿಯ ಜಾದೂ ಮತ್ತು ಎಚ್ಚರಿಕೆ:&lt;/h3&gt;&lt;p&gt;ಒಗ್ಗರಣೆ ನೀಡುವಾಗ ಜಜ್ಜಿದ ಬೆಳ್ಳುಳ್ಳಿಯನ್ನು ಸೇರಿಸಿದರೆ ಈ ಹುಣಸೇಹುಳಿಯ ರುಚಿ ಹತ್ತರಷ್ಟು ಹೆಚ್ಚಾಗುತ್ತದೆ. ಬೆಳ್ಳುಳ್ಳಿಯು ಕೇವಲ ರುಚಿಗಷ್ಟೇ ಅಲ್ಲ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಗೂ ರಾಮಬಾಣ. ಆದರೆ ಇಲ್ಲೊಂದು ಸಣ್ಣ ಎಚ್ಚರಿಕೆ ಇದೆ! ನೀವು ಬೆಳ್ಳುಳ್ಳಿ ಸೇರಿಸಿದ ಹುಣಸೇಹುಳಿಯನ್ನು ತಯಾರಿಸಿದರೆ, ಅದನ್ನು ಆ ದಿನವೇ ಬಳಸುವುದು ಉತ್ತಮ. ಏಕೆಂದರೆ ಬೆಳ್ಳುಳ್ಳಿ ಸೇರಿಸಿದ ಆಹಾರ ಪದಾರ್ಥಗಳು ಬೇಗನೆ ಕೆಡುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನೀವು ಈ ಹುಣಸೇಹುಳಿಯನ್ನು ವಾರವಿಡೀ ಇಟ್ಟು ಬಳಸಬೇಕೆಂದಿದ್ದರೆ, ಬೆಳ್ಳುಳ್ಳಿ ಹಾಕದೆ ತಯಾರಿಸುವುದು ಲೈಫ್&zwnj;ಸ್ಟೈಲ್ ಎಕ್ಸ್&zwnj;ಪರ್ಟ್&zwnj;ಗಳ ಸಲಹೆ.&lt;/p&gt;&lt;p&gt;ಬಿಸಿ ಬಿಸಿ ಅನ್ನದ ಜೊತೆ ಅಥವಾ ಸಂಜೆಯ ವೇಳೆ ಒಂದು ಕಪ್ ಬಿಸಿ ಬಿಸಿ ಹುಣಸೇಹುಳಿ ಕುಡಿದರೆ ಸಿಗುವ ಆ ತೃಪ್ತಿಯೇ ಬೇರೆ. ನಿಮ್ಮ ಅಡುಗೆಮನೆಯಲ್ಲಿ ಈ ಪುರಾತನ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ!&lt;/p&gt;]]></content:encoded>
            <category>health-life</category>
            <dc:creator>Shriram Bhat</dc:creator>
            <atom:link href="https://kannada.asianetnews.com/food/traditional-tamarind-tangy-soup-called-hunashehuli-recipe-for-quick-cooking-for-hostellers-bachelors-and-working-women/articleshow-86ih85o"/>
        </item>
        <item>
            <title><![CDATA[ಕೋಮಾದಲ್ಲಿರುವ ಸೈನಿಕನ ಸ್ಪರ್ಮ್ ತೆಗೆಯಲು ಕೋರ್ಟ್ ಒಪ್ಪಿಗೆ]]></title>
            <link>https://kannada.asianetnews.com/health-life/delhi-high-court-significant-verdict-grants-permission-to-preserve-sperm-of-soldier/articleshow-csepblc</link>
            <guid isPermaLink="true">https://kannada.asianetnews.com/health-life/delhi-high-court-significant-verdict-grants-permission-to-preserve-sperm-of-soldier/articleshow-csepblc</guid>
            <pubDate>Thu, 16 Apr 2026 15:15:08 +0530</pubDate>
            <description><![CDATA[&lt;p&gt;Delhi High Court : ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸೈನಿಕನ ಸ್ಪರ್ಮ್ ತೆಗೆದು ಪತ್ನಿಯ ಆಸೆಯಂತೆ ಐವಿಎಫ್&zwnj; ಚಿಕಿತ್ಸೆ ಮುಂದುವರೆಸಲು ಒಪ್ಪಿಗೆ ನೀಡಿದೆ. ಅಷ್ಟಕ್ಕೂ ಏನು ಈ ಪ್ರಕರಣ? ವಿವರ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpatt704b59qpbntbfaw6fvp,imgname-delhi-high-court-1776332643332.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ ಹೈಕೋರ್ಟ್ (Delhi High Court) ತೀರ್ಪು ಎಲ್ಲರ ಮನಸ್ಸು ಗೆದ್ದಿದೆ. ಕೋರ್ಟ್, ಸೈನಿಕನ ಪತ್ನಿ ಆಸೆಯನ್ನು ಪೂರ್ಣಗೊಳಿಸಲು ಮುಂದಾಗಿದೆ. ದೀರ್ಘಕಾಲದವರೆಗೆ ಕೋಮಾದಲ್ಲಿರುವ ಭಾರತೀಯ ಸೇನಾ ಸೈನಿಕನ ಸ್ಪರ್ಮ್ ಹೊರತೆಗೆದು ಸಂರಕ್ಷಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರ್ ನೇತೃತ್ವದ ಪೀಠವು ತನ್ನ ತೀರ್ಪಿನಲ್ಲಿ, ಸೈನಿಕನು ತನ್ನ ಪತ್ನಿಯೊಂದಿಗೆ ಐವಿಎಫ್ ಚಿಕಿತ್ಸೆಗೆ ಒಳಗಾಗಲು ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಇದನ್ನು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ, 2021 ರ ಅಡಿಯಲ್ಲಿ ಮಾನ್ಯ ಒಪ್ಪಿಗೆ ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.&lt;/p&gt;&lt;h2&gt;ಕೋಮಾದಲ್ಲಿ ಸೈನಿಕ&lt;/h2&gt;&lt;p&gt;ಜುಲೈ 2025 ರಲ್ಲಿಸೈನಿಕ ಗಸ್ತಿನಲ್ಲಿದ್ದಾಗ ಮೇಲಿನಿಂದ ಕೆಳಗೆ ಬಿದ್ದಿದ್ದರು. ಅವರ ತಲೆಗೆ ತೀವ್ರವಾದ ಗಾಯವಾಗಿತ್ತು. ಮಿದುಳಿನಲ್ಲಾದ ಗಾಯದಿಂದ ಸೈನಿಕ ಕೋಮಾ ಸ್ಥಿತಿಯಲ್ಲಿದ್ದಾರೆ. ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. 2023 ರಲ್ಲಿ ಸೈನಿಕ ಹಾಗೂ ಅವರ ಪತ್ನಿ ಐವಿಎಫ್ ಗೆ ಒಪ್ಪಿಗೆ ನೀಡಿ ಚಿಕಿತ್ಸೆ ಶುರು ಮಾಡಿದ್ದರು. ಆದ್ರೆ ಸೈನಿಕನ ಆರೋಗ್ಯ ಹದಗೆಟ್ಟಿದ್ದರಿಂದ ಚಿಕಿತ್ಸೆ ನಿಲ್ಲಿಸಲಾಗಿದೆ. ಈಗ ಪತ್ನಿ ಕೋರ್ಟ್ ಮೆಟ್ಟಿಲೇರಿ ಒಪ್ಪಿಗೆ ಚಿಕಿತ್ಸೆ ಮುಂದುವರೆಸಲು ಒಪ್ಪಿಗೆ ಕೇಳಿದ್ದಾರೆ.&lt;/p&gt;&lt;p&gt;ನೀವು ಹೆಚ್ಚು ಚಹಾ ಕುಡಿಯುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು&lt;/p&gt;&lt;h3&gt;ದೆಹಲಿ ಕೋರ್ಟ್ ಹೇಳಿದ್ದೇನು?&lt;/h3&gt;&lt;p&gt;ಸೈನಿಕನ ಪತ್ನಿ ಅರ್ಜಿ ಪರಿಶೀಲನೆ ನಡೆಸಿದ ದೆಹಲಿ ಹೈಕೋರ್ಟ್, ತಾಯ್ತನ, ಘನತೆ ಮತ್ತು ಸಂತಾನೋತ್ಪತ್ತಿ ಸ್ವಾಯತ್ತತೆಯ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿದಿದೆ. ಅರ್ಜಿದಾರರು ಮತ್ತು ಅವರ ಪತಿ ಸ್ವಯಂಪ್ರೇರಣೆಯಿಂದ IVF ಕಾರ್ಯವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. . ಪತಿ ಒಪ್ಪಿಗೆ ನೀಡಿಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಹಾಗಾಗಿ ಐವಿಎಫ್ ಮುಂದುವರಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ ಹೇಳಿದೆ.&lt;/p&gt;&lt;p&gt;ಬಿಸಿ ನೀರು Vs ತಣ್ಣೀರು: ಬಿಸಿಲು ಅಂತ ತಣ್ಣೀರು ಕುಡಿತೀರಾ? ಅದಕ್ಕೂ ಮುನ್ನ ಇದನ್ನ ತಿಳ್ಕೊಳ್ಳಿ&lt;/p&gt;&lt;p&gt;ಸೈನಿಕರಿಂದ ಈಗ ಒಪ್ಪಿಗೆಯ ಯಾವುದೇ ಅಧಿಕೃತ ಸೂಚನೆ ಇಲ್ಲದೆ ಹೋದ್ರೂ IVF ಕಾರ್ಯವಿಧಾನವನ್ನು ಶುರು ಮಾಡುವುದು ಸೂಕ್ತ, ಸಮಂಜಸ ಮತ್ತು ನ್ಯಾಯಯುತವಾಗಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಾಗೆ ಮಾಡಲು ವಿಫಲವಾದರೆ ಸೈನಿಕ ನೀಡಿದ್ದ ಪೂರ್ವಾನುಮತಿ ವ್ಯರ್ಥವಾಗುತ್ತದೆ ಎಂದು ಕೋರ್ಟ್ ಹೇಳಿದೆ.&lt;/p&gt;&lt;p&gt;ಸಂತಾನೋತ್ಪತ್ತಿ ಸ್ವಾಯತ್ತತೆಯ ಹಕ್ಕು ಮೂಲಭೂತ ಹಕ್ಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರಿಗೆ ಮಕ್ಕಳಾಗುತ್ತವೆಯೇ ಎಂಬುದು ಮಾನವನ ಕೈಯಲ್ಲಿಲ್ಲ. ಒಬ್ಬ ವ್ಯಕ್ತಿಗೆ ಪೋಷಕರ ಭಾಗ್ಯ ಸಿಗುತ್ತದೆಯೇ ಎಂಬುದನ್ನು ವಿಧಿ ನಿರ್ಧರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಭಾಗವತ ಪುರಾಣವನ್ನು ಉಲ್ಲೇಖಿಸಿದ ಕೋರ್ಟ್, ಜೀವಿಯು ದೇವರ ಮೇಲ್ವಿಚಾರಣೆಯಲ್ಲಿ ದೇಹವನ್ನು ಪಡೆಯುತ್ತದೆ ಎಂದಿದೆ. ಐವಿಎಫ್ ಮೂಲಕ ಮಕ್ಕಳನ್ನು ಪಡೆಯಲು ಬಯಸಿದ್ದ ಸೈನಿಕ ಗಂಭೀರ ಸ್ಥಿತಿಯಲ್ಲಿದ್ದು. ಬದುಕಿ ಬರುವ ಸಾಧ್ಯತೆ ಅತಿ ಕಡಿಮೆ ಇದೆ. ಇಂಥ ಸಂದರ್ಭದಲ್ಲಿ ಪತ್ನಿ ಪರ ಕೋರ್ಟ್ ನೀಡಿದ ತೀರ್ಪು ಎಲ್ಲರ ಮೆಚ್ಚುಗೆ ಗಳಿಸಿದೆ.&lt;/p&gt;]]></content:encoded>
            <category>health-life</category>
            <dc:creator>Roopa Hegde</dc:creator>
            <atom:link href="https://kannada.asianetnews.com/health-life/delhi-high-court-significant-verdict-grants-permission-to-preserve-sperm-of-soldier/articleshow-csepblc"/>
        </item>
        <item>
            <title><![CDATA[Watermelon: ಬೇಸಿಗೆಯಲ್ಲಿ ಕಲ್ಲಂಗಡಿ ತಿಂತೀರಾ? ಈ ಸಮಯದಲ್ಲಿ ತಿಂದರೆ ಆರೋಗ್ಯಕ್ಕೆ ಡೇಂಜರ್!]]></title>
            <link>https://kannada.asianetnews.com/gallery/food/best-and-worst-times-to-eat-watermelon-in-summer-gvd-dgaqilb</link>
            <guid isPermaLink="true">https://kannada.asianetnews.com/gallery/food/best-and-worst-times-to-eat-watermelon-in-summer-gvd-dgaqilb</guid>
            <pubDate>Tue, 14 Apr 2026 20:23:09 +0530</pubDate>
            <description><![CDATA[&lt;p&gt;ಬೇಸಿಗೆಯಲ್ಲಿ ಆರೋಗ್ಯವಾಗಿರಲು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದೀರಾ? ಆದರೆ, ಯಾವ ಸಮಯದಲ್ಲಿ ತಿನ್ನುತ್ತಿದ್ದೀರಿ ಎಂಬುದು ಮುಖ್ಯ. ಕಲ್ಲಂಗಡಿ ತಿನ್ನಲು ಸರಿಯಾದ ಸಮಯ ಯಾವುದು? ಯಾವ ಸಮಯದಲ್ಲಿ ತಿನ್ನಬಾರದು? ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kknmyr1erxt0596xc8pednh3,imgname-watermelon-tambuli--6--1773474373678.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೇಸಿಗೆಯಲ್ಲಿ ಆರೋಗ್ಯವಾಗಿರಲು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದೀರಾ? ಆದರೆ, ಯಾವ ಸಮಯದಲ್ಲಿ ತಿನ್ನುತ್ತಿದ್ದೀರಿ ಎಂಬುದು ಮುಖ್ಯ. ಕಲ್ಲಂಗಡಿ ತಿನ್ನಲು ಸರಿಯಾದ ಸಮಯ ಯಾವುದು? ಯಾವ ಸಮಯದಲ್ಲಿ ತಿನ್ನಬಾರದು? ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಮತ್ತು ತೇವಾಂಶದಿಂದ ಇಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ಹೆಚ್ಚು ನೀರಿನಂಶವಿರುವ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂತಹ ಹಣ್ಣುಗಳಲ್ಲಿ ಕಲ್ಲಂಗಡಿ ಮೊದಲ ಸ್ಥಾನದಲ್ಲಿದೆ. ಕಲ್ಲಂಗಡಿಯಲ್ಲಿ ಶೇ. 90 ರಿಂದ 92 ರಷ್ಟು ನೀರು ಇರುತ್ತದೆ. ಇದು ದೇಹದ ನಿರ್ಜಲೀಕರಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಕಲ್ಲಂಗಡಿಯಲ್ಲಿರುವ ಪೋಷಕಾಂಶಗಳು... ಕಲ್ಲಂಗಡಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಬಿ6, ಪೊಟ್ಯಾಶಿಯಂ, ಮೆಗ್ನೀಶಿಯಂ, ಕಬ್ಬಿಣ, ಫೋಲೇಟ್&zwnj;ನಂತಹ ಪೋಷಕಾಂಶಗಳೂ ಇವೆ. ಇವು ದೇಹಕ್ಕೆ ಶಕ್ತಿ ನೀಡುವುದಲ್ಲದೆ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ನಾವು ಎಷ್ಟೇ ಆರೋಗ್ಯಕರ ಆಹಾರ ಸೇವಿಸಿದರೂ, ಅದನ್ನು ಸರಿಯಾದ ಸಮಯದಲ್ಲಿ ತಿಂದರೆ ಮಾತ್ರ ಹೆಚ್ಚು ಪ್ರಯೋಜನ ಸಿಗುತ್ತದೆ. ಪ್ರತಿಯೊಂದು ಆಹಾರವನ್ನು ತಿನ್ನಲು ಒಂದು ನಿರ್ದಿಷ್ಟ ಸಮಯವಿರುತ್ತದೆ.&lt;/p&gt;&lt;img&gt;&lt;p&gt;ಆಗಲೇ ಅದು ಗರಿಷ್ಠ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದರೆ, ಕಲ್ಲಂಗಡಿ ತಿನ್ನಲು ಸರಿಯಾದ ಸಮಯ ಯಾವುದು ಗೊತ್ತಾ? ಆಯುರ್ವೇದದ ಪ್ರಕಾರ, ಕಲ್ಲಂಗಡಿ ಹಣ್ಣನ್ನು ಮಧ್ಯಾಹ್ನದ ಸಮಯದಲ್ಲಿ ತಿನ್ನುವುದು ಉತ್ತಮ. ಈ ಸಮಯದಲ್ಲಿ ದೇಹದ ಚಯಾಪಚಯ ಕ್ರಿಯೆ ವೇಗವಾಗಿರುತ್ತದೆ. ಇದರಿಂದ ಕಲ್ಲಂಗಡಿ ಸುಲಭವಾಗಿ ಜೀರ್ಣವಾಗುತ್ತದೆ. ದೇಹವು ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಮಧ್ಯಾಹ್ನದ ಬಿಸಿಲಿನ ತಾಪ ಹೆಚ್ಚಿರುವುದರಿಂದ, ಆ ಸಮಯದಲ್ಲಿ ತಿಂದರೆ ದೇಹ ತಂಪಾಗುತ್ತದೆ.&lt;/p&gt;&lt;img&gt;&lt;p&gt;ನಿರ್ಜಲೀಕರಣವನ್ನು ತಡೆಯುತ್ತದೆ. ಕಲ್ಲಂಗಡಿಯಲ್ಲಿರುವ ನೈಸರ್ಗಿಕ ಸಕ್ಕರೆ ಅಂಶವು ದಿನವಿಡೀ ದೇಹಕ್ಕೆ ಶಕ್ತಿಯನ್ನು ನೀಡಿ, ಆಯಾಸವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಮಧ್ಯಾಹ್ನ ಕಲ್ಲಂಗಡಿ ತಿನ್ನುವುದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ. ಇದರಲ್ಲಿರುವ ಎಲೆಕ್ಟ್ರೋಲೈಟ್&zwnj;ಗಳು ದೇಹದ ಸಮತೋಲನವನ್ನು ಕಾಪಾಡಿ, ಸನ್&zwnj;ಸ್ಟ್ರೋಕ್ ಆಗದಂತೆ ತಡೆಯಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ಬೇಸಿಗೆಯಲ್ಲಿ ಈ ಹಣ್ಣನ್ನು ಖಂಡಿತವಾಗಿ ಸೇವಿಸಬೇಕು.&lt;/p&gt;&lt;img&gt;&lt;p&gt;ಕಲ್ಲಂಗಡಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಆದರೆ, ರಾತ್ರಿ ಸಮಯದಲ್ಲಿ ಇದನ್ನು ತಿನ್ನಬಾರದು. ರಾತ್ರಿ ಹೊತ್ತು ಕಲ್ಲಂಗಡಿ ತಿಂದರೆ ಎದೆಯುರಿ ಅಥವಾ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ, ಇದರಲ್ಲಿ ನೀರಿನಂಶ ಹೆಚ್ಚಾಗಿರುವುದರಿಂದ, ರಾತ್ರಿ ತಿಂದರೆ ನೀವು ಪದೇ ಪದೇ ಬಾತ್&zwnj;ರೂಮ್&zwnj;ಗೆ ಹೋಗಬೇಕಾಗಬಹುದು. ಇದು ನಿಮ್ಮ ನಿದ್ದೆಗೆ ಅಡ್ಡಿಪಡಿಸುತ್ತದೆ.&lt;/p&gt;]]></content:encoded>
            <category>health-life</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/food/best-and-worst-times-to-eat-watermelon-in-summer-gvd-dgaqilb"/>
        </item>
        <item>
            <title><![CDATA[Early Periods: ಖರ್ಜೂರ ತಿಂದರೆ ಪಿರಿಯಡ್ಸ್ ಬೇಗ ಆಗುತ್ತಾ?]]></title>
            <link>https://kannada.asianetnews.com/webstories/health-life/do-dates-really-help-induce-your-period-hapavtg</link>
            <guid isPermaLink="true">https://kannada.asianetnews.com/webstories/health-life/do-dates-really-help-induce-your-period-hapavtg</guid>
            <pubDate>Thu, 16 Apr 2026 19:32:58 +0530</pubDate>
            <description><![CDATA[&lt;p&gt;Natural remedies for late periods: ಖರ್ಜೂರ ತಿಂದರೆ ಮುಟ್ಟು ಬೇಗ ಆಗುತ್ತೆ ಅನ್ನೋ ಮಾತಿದೆ. ಇದರಲ್ಲಿ ಸತ್ಯವಿದೆಯೇ? ಖರ್ಜೂರಕ್ಕೂ, ಮುಟ್ಟಿನ ಚಕ್ರಕ್ಕೂ ಇರುವ ಸಂಬಂಧದ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5x8ag30gdvqdkd38ksh4phm,imgname-fotojet--11--1758697177184.jpg" type="image/jpeg" height="390" width="690"/>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/health-life/do-dates-really-help-induce-your-period-hapavtg"/>
        </item>
        <item>
            <title><![CDATA[ನಿದ್ದೆಯಲ್ಲಿ ಜೋರಾಗಿ ಗೊರಕೆ ಹೊಡೆಯುತ್ತಿದ್ದೀರಾ? ಹಾಗಿದ್ದರೆ 71% ಹೃದಯಾಘಾತದ ಅಪಾಯವಿದ್ದಂತೆಯೇ!]]></title>
            <link>https://kannada.asianetnews.com/health-life/dont-ignore-loud-snoring-it-could-increase-heart-attack-risk-by-71percent/articleshow-i3rhora</link>
            <guid isPermaLink="true">https://kannada.asianetnews.com/health-life/dont-ignore-loud-snoring-it-could-increase-heart-attack-risk-by-71percent/articleshow-i3rhora</guid>
            <pubDate>Fri, 17 Apr 2026 17:15:54 +0530</pubDate>
            <description><![CDATA[&lt;p&gt;&lt;strong&gt;Snoring health risks: &lt;/strong&gt;ಗೊರಕೆ ಎಂಬುದು ಕೇವಲ ಕಿರಿಕಿರಿ ಉಂಟುಮಾಡುವ ಶಬ್ದವಲ್ಲ, ಅದು ನಿಮ್ಮ ಹೃದಯದ ಆರೋಗ್ಯ ಕೆಡುತ್ತಿರುವುದರ ಮುನ್ಸೂಚನೆಯೂ ಆಗಿರಬಹುದು. ಅದರಲ್ಲೂ ಬೊಜ್ಜು ಹೊಂದಿರುವವರಲ್ಲಿ ಇದು ಹೇಗೆ ಪ್ರಾಣಾಪಾಯ ಉಂಟುಮಾಡಬಹುದು? ಈ ಬೃಹತ್ ಅಧ್ಯಯನದ ವರದಿ ಇಲ್ಲಿದೆ ನೋಡಿ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jzt3raq1tv8h9vd3yemqt5aa,imgname-sleep--1--1752149273313.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಿ&lt;/strong&gt;ಮ್ಮ ಮನೆಯಲ್ಲಿ ಯಾರಾದರೂ ನಿದ್ದೆಯಲ್ಲಿ ಜೋರಾಗಿ ಗೊರಕೆ ಹೊಡೆಯುತ್ತಿದ್ದಾರೆಯೇ? &quot;ಪಾಪ, ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿ ಸುಸ್ತಾಗಿದ್ದಾರೆ, ಅದಕ್ಕೇ ಅಷ್ಟು ಗಾಢವಾಗಿ ನಿದ್ದೆ ಮಾಡುತ್ತಿದ್ದಾರೆ&quot; ಎಂದು ನೀವು ಅಂದುಕೊಳ್ಳುತ್ತಿದ್ದೀರಾ? ಹಾಗಿದ್ದರೆ ನೀವು ಒಂದು ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದೇ ಅರ್ಥ. ಗೊರಕೆಯನ್ನು ಹಗುರವಾಗಿ ತೆಗೆದುಕೊಳ್ಳುವುದು ಎಂದರೆ ಪ್ರಾಣವನ್ನು ಪಣಕ್ಕಿಡುವುದು ಎಂದು ಇತ್ತೀಚಿನ ಸಂಶೋಧನೆಗಳು ಗಂಭೀರವಾಗಿ ಎಚ್ಚರಿಸುತ್ತಿವೆ.&lt;/p&gt;&lt;p&gt;ಇತ್ತೀಚೆಗೆ ನಡೆದ ಒಂದು ಬೃಹತ್ ವೈಜ್ಞಾನಿಕ ಅಧ್ಯಯನವು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಗೊರಕೆಯ ನಡುವಿರುವ ಭಯಾನಕ ಸಂಬಂಧವನ್ನು ಬಹಿರಂಗಪಡಿಸಿದೆ. ಅಬ್&zwnj;ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (Obstructive Sleep Apnea - OSA) ಅಂದರೆ ನಿದ್ದೆಯಲ್ಲಿ ಉಸಿರಾಟ ನಿಲ್ಲುವ ಸಮಸ್ಯೆಯಿಂದ ಬಳಲುವವರಿಗೆ, ಸಾಮಾನ್ಯ ಆರೋಗ್ಯವಂತರಿಗೆ ಹೋಲಿಸಿದರೆ ತೀವ್ರವಾದ ಹೃದಯ ಸಂಬಂಧಿ ಕಾಯಿಲೆಗಳು ಅಥವಾ ಇತರ ಕಾರಣಗಳಿಂದ ಅಕಾಲಿಕ ಮರಣ ಸಂಭವಿಸುವ ಅಪಾಯ ಬರೋಬ್ಬರಿ 71 ಪ್ರತಿಶತದಷ್ಟು ಹೆಚ್ಚಿದೆ ಎಂದು ಈ ಅಧ್ಯಯನ ತಿಳಿಸಿದೆ.&lt;/p&gt;&lt;h2&gt;&lt;strong&gt;ಅಬ್&zwnj;ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (OSA) ಎಂದರೇನು?&lt;/strong&gt;&lt;/h2&gt;&lt;p&gt;ಇದು ನಿದ್ದೆಗೆ ಸಂಬಂಧಿಸಿದ ಒಂದು ಅಪಾಯಕಾರಿ ಅಸ್ವಸ್ಥತೆ. ಸಾಮಾನ್ಯವಾಗಿ ನಿದ್ದೆ ಮಾಡುವಾಗ ನಮ್ಮ ಗಂಟಲಿನ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಆದರೆ ಈ ಸಮಸ್ಯೆ ಇರುವವರಲ್ಲಿ ಆ ಸ್ನಾಯುಗಳು ಅಗತ್ಯಕ್ಕಿಂತ ಹೆಚ್ಚಾಗಿ ಸಡಿಲಗೊಂಡು, ಶ್ವಾಸನಾಳಗಳಿಗೆ ಅಡ್ಡಿಪಡಿಸುತ್ತವೆ. ಇದರಿಂದ ಗಾಳಿ ಆಡದೆ ನಿದ್ದೆಯಲ್ಲಿ ಪದೇ ಪದೇ ಉಸಿರಾಟ ನಿಂತು ಹೋಗಿ, ಮತ್ತೆ ಬರುತ್ತಿರುತ್ತದೆ. ಈ ಪ್ರಕ್ರಿಯೆಯಲ್ಲಿ ಮೆದುಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ.&lt;/p&gt;&lt;h3&gt;&lt;strong&gt;ಈ ಕಾಯಿಲೆಯ ಪ್ರಮುಖ ಲಕ್ಷಣಗಳು&lt;/strong&gt;&lt;/h3&gt;&lt;p&gt;ನಿದ್ದೆಯಲ್ಲಿ ಭಯಾನಕ ಶಬ್ದದೊಂದಿಗೆ ಗೊರಕೆ ಹೊಡೆಯುವುದು, ಉಸಿರಾಟ ಸಿಗದೆ ಉಸಿರುಗಟ್ಟಿದಂತಾಗುವುದು, ರಾತ್ರಿಯಿಡೀ ನಿದ್ದೆ ಮಾಡಿದರೂ ಬೆಳಗ್ಗೆ ಎದ್ದ ತಕ್ಷಣ ತೀವ್ರವಾದ ತಲೆನೋವು ಕಾಣಿಸಿಕೊಳ್ಳುವುದು ಹಾಗೂ ದಿನವಿಡೀ ಅತಿಯಾದ ನಿದ್ದೆ ಮತ್ತು ಸುಸ್ತು ಆವರಿಸುವುದು.&lt;/p&gt;&lt;p&gt;ಬೊಜ್ಜು- ಈ ಸಮಸ್ಯೆಗೆ ಮುಖ್ಯ ಕಾರಣಸ್ಲೀಪ್ ಅಪ್ನಿಯಾ ಮತ್ತು ಅತಿಯಾದ ತೂಕಕ್ಕೆ ಅವಿನಾಭಾವ ಸಂಬಂಧವಿದೆ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸುತ್ತಿದ್ದಾರೆ. ಲಂಡನ್&zwnj;ನ ಪ್ರಸಿದ್ಧ ಇಂಪೀರಿಯಲ್ ಕಾಲೇಜ್ ಹೆಲ್ತ್ ಪಾರ್ಟ್&zwnj;ನರ್ಸ್&zwnj;ನ ಪ್ರಮುಖ ಸಂಶೋಧಕಿ ಮತ್ತು ಈ ಅಧ್ಯಯನದ ಸಹ-ಲೇಖಕಿ ಹೀದರ್ ಫಿಟ್ಜ್ ಕೇ ಮಾತನಾಡಿ, ಬೊಜ್ಜಿನಿಂದ ಬಳಲುವವರಿಗೆ ಈ ಕಾಯಿಲೆಯ ಅಪಾಯ ಅತ್ಯಧಿಕವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;ಅಂಕಿಅಂಶಗಳನ್ನು ಗಮನಿಸಿದರೆ, ಅಬ್&zwnj;ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿರುವವರಲ್ಲಿ ಸುಮಾರು 40 ರಿಂದ 70 ಪ್ರತಿಶತದಷ್ಟು ಜನರು ಅತಿಯಾದ ತೂಕ ಅಥವಾ ಸ್ಥೂಲಕಾಯದವರೇ ಆಗಿದ್ದಾರೆ. ಅಲ್ಲದೆ, ಸಾಮಾನ್ಯ ತೂಕ ಇರುವವರಿಗಿಂತ ದಪ್ಪ ಇರುವವರಲ್ಲಿ ಈ ಸ್ಲೀಪ್ ಅಪ್ನಿಯಾ ಲಕ್ಷಣಗಳು ಹೆಚ್ಚು ತೀವ್ರವಾಗಿ ಮತ್ತು ಪ್ರಾಣಾಪಾಯಕಾರಿಯಾಗಿ ಬದಲಾಗುವ ಸಾಧ್ಯತೆಯಿದೆ.&lt;/p&gt;&lt;p&gt;ಈ ನಿರ್ಧಾರಕ್ಕೆ ಬರಲು ವಿಜ್ಞಾನಿಗಳು ಬಹಳ ಆಳವಾದ ವಿಶ್ಲೇಷಣೆ ನಡೆಸಿದ್ದಾರೆ. ಬರೋಬ್ಬರಿ 29 ಲಕ್ಷ ಜನರ ಆರೋಗ್ಯ ದಾಖಲೆಗಳನ್ನು ಅವರು ಅಧ್ಯಯನ ಮಾಡಿದ್ದಾರೆ. ಇದರಲ್ಲಿ ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿರುವ 20,300 ರೋಗಿಗಳ ಡೇಟಾವನ್ನು, 97,412 ಸಾಮಾನ್ಯ ಆರೋಗ್ಯವಂತರ ಡೇಟಾದೊಂದಿಗೆ ಹೋಲಿಸಿ ನೋಡಿದ್ದಾರೆ. ಈ ವಿಶ್ಲೇಷಣೆಯಲ್ಲಿ ಒಂದು ನಂಬಲಾಗದ ಸತ್ಯ ಹೊರಬಂದಿದೆ. ಸ್ಲೀಪ್ ಅಪ್ನಿಯಾ ಇರುವವರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 57.2 ಪ್ರತಿಶತದಷ್ಟು (11,613 ಜನರು) ತೀವ್ರವಾದ ಬೊಜ್ಜಿನಿಂದ ಬಳಲುತ್ತಿರುವವರೇ ಆಗಿದ್ದಾರೆ. ಅಮೆರಿಕದ ಹೊರಗೆ ಈ ಕಾಯಿಲೆಯ ಬಗ್ಗೆ ಈವರೆಗೆ ನಡೆದ ಅತ್ಯಂತ ದೊಡ್ಡ ಅಧ್ಯಯನ ಇದಾಗಿದೆ ಎಂದು ಹೀದರ್ ಫಿಟ್ಜ್ ಕೇ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;strong&gt;Disclaimer: &lt;/strong&gt;ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ. ಇದು ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ನಿಮ್ಮ ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/health-life/dont-ignore-loud-snoring-it-could-increase-heart-attack-risk-by-71percent/articleshow-i3rhora"/>
        </item>
        <item>
            <title><![CDATA[40 ಡಿಗ್ರಿಯ ಬಿಸಿಲಲ್ಲೂ ಮನೆ ಕೂಲ್ ಆಗಿರಲು ಈ ದೇಸಿ ಟ್ರಿಕ್ಸ್ ಟ್ರೈ ಮಾಡಿ]]></title>
            <link>https://kannada.asianetnews.com/gallery/health-life/simple-tricks-to-keep-your-home-cool-in-the-summer-lg27god</link>
            <guid isPermaLink="true">https://kannada.asianetnews.com/gallery/health-life/simple-tricks-to-keep-your-home-cool-in-the-summer-lg27god</guid>
            <pubDate>Thu, 16 Apr 2026 13:28:25 +0530</pubDate>
            <description><![CDATA[&lt;p&gt;Heat Wave: ಬೇಸಿಗೆಯಲ್ಲಿ ನಿಮ್ಮ ಮನೆಯನ್ನು ತಂಪಾಗಿಟ್ಟುಕೊಳ್ಳುವುದು ಸವಾಲಿನ ಕೆಲಸ. ವಿಶೇಷವಾಗಿ ತಾಪಮಾನವು 40 ಡಿಗ್ರಿ ಮೀರಿದಾಗ, ಹೇಗಪ್ಪಾ ಮನೆಯನ್ನು ತಂಪಾಗಿಟ್ಟುಕೊಳ್ಳುವುದು ಎನ್ನುವ ಯೋಚನೆ ಬಾರದೆ ಇರದು. ನೀವು ಅದನ್ನೇ ಯೋಚನೆ ಮಾಡುತ್ತಿದ್ದರೆ ಇಲ್ಲಿ ಮನೆಯನ್ನು ಕೂಲ್ ಆಗಿಡುವ ಸಿಂಪಲ್ ಟ್ರಿಕ್ಸ್.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knc97ddabydmebtjxtdgtz45,imgname-curtion-3-1775307568554.jpg" type="image/jpeg" height="390" width="690"/>
            <content:encoded><![CDATA[&lt;p&gt;Heat Wave: ಬೇಸಿಗೆಯಲ್ಲಿ ನಿಮ್ಮ ಮನೆಯನ್ನು ತಂಪಾಗಿಟ್ಟುಕೊಳ್ಳುವುದು ಸವಾಲಿನ ಕೆಲಸ. ವಿಶೇಷವಾಗಿ ತಾಪಮಾನವು 40 ಡಿಗ್ರಿ ಮೀರಿದಾಗ, ಹೇಗಪ್ಪಾ ಮನೆಯನ್ನು ತಂಪಾಗಿಟ್ಟುಕೊಳ್ಳುವುದು ಎನ್ನುವ ಯೋಚನೆ ಬಾರದೆ ಇರದು. ನೀವು ಅದನ್ನೇ ಯೋಚನೆ ಮಾಡುತ್ತಿದ್ದರೆ ಇಲ್ಲಿ ಮನೆಯನ್ನು ಕೂಲ್ ಆಗಿಡುವ ಸಿಂಪಲ್ ಟ್ರಿಕ್ಸ್.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬೇಸಿಗೆಯಲ್ಲಿ, ತೀವ್ರವಾದ ಸೂರ್ಯನ ಬೆಳಕು ಮನೆಗಳ ಛಾವಣಿ ಮತ್ತು ಗೋಡೆಗಳನ್ನು ಮೇಲೆ ಬೀಳುತ್ತದೆ. ಇದು ಮನೆಯ ಒಳಗೆ ಶಾಖವನ್ನು ಹೆಚ್ಚಿಸುತ್ತದೆ, ಇದರಿಂದ ಮನೆಯೊಳಗೆ ಉಳಿಯೋದು ಕಷ್ಟವಾಗುತ್ತದೆ. ಈ ಶಾಖದಿಂದ ಪರಿಹಾರ ಪಡೆಯಲು, ಜನರು ಕೂಲರ್&zwnj;ಗಳು ಮತ್ತು ಎಸಿಗಳನ್ನು ಬಳಸುತ್ತಾರೆ. ಆದರೆ, ಈ ಸಾಧನಗಳನ್ನು ಆಫ್ ಮಾಡಿದ ತಕ್ಷಣ, ಶಾಖವು ಅಸಹನೀಯವಾಗುತ್ತದೆ. ಎಸಿಗಳು ಮತ್ತು ಕೂಲರ್&zwnj;ಗಳು ಎಲ್ಲರಿಗೂ ಲಭ್ಯವಿಲ್ಲ, ಆದ್ದರಿಂದ ಕೆಲವು ಅಗ್ಗದ ವಿಧಾನಗಳನ್ನು ಬಳಸಿ ಬೇಸಿಗೆಯಲ್ಲಿಯೂ ಸಹ ನಿಮ್ಮ ಮನೆಯನ್ನು ತಂಪಾಗಿಡಬಹುದು. ಹೇಗೆ ನೋಡೋಣ.&lt;/p&gt;&lt;img&gt;&lt;p&gt;ಬೇಸಿಗೆಯಲ್ಲಿ ಮನೆಯನ್ನು ತಂಪಾಗಿಡಲು, ಛಾವಣಿಯ ಮೇಲೆ ನೀರನ್ನು ಸಿಂಪಡಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಛಾವಣಿಗೆ ನೀರು ಹಾಕುವುದರಿಂದ ಶಾಖವು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಮತ್ತು ಕೆಳಗಿನ ಕೊಠಡಿಗಳು ತಂಪಾಗಿರುತ್ತವೆ. ನೀವು ಸಂಜೆ ನೀರು ಸುರಿದರೆ, ರಾತ್ರಿ ತಂಪಾಗಿರುತ್ತದೆ ಮತ್ತು ಮನೆಯಲ್ಲಿ ಶಾಖವನ್ನು ಕಡಿಮೆ ಮಾಡುತ್ತದೆ&lt;/p&gt;&lt;img&gt;&lt;p&gt;ನಿಮ್ಮ ಛಾವಣಿಗೆ ಬಿಳಿ ಬಣ್ಣ ಬಳಿಯುವುದು ಅಥವಾ ಬಿಳಿ ಪ್ಲಾಸ್ಟರ್ ಬಳಸುವುದರಿಂದಲೂ ಶಾಖದಿಂದ ಪರಿಹಾರ ಸಿಗುತ್ತದೆ. ಬಿಳಿ ಬಣ್ಣವು ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುತ್ತದೆ, ಶಾಖವನ್ನು ಕಡಿಮೆ ಮಾಡುತ್ತದೆ. ಅನೇಕ ಜನರು ಕೂಲ್ ರೂಫ್ ಕೋಟಿಂಗ್ ಸಹ ಬಳಸುತ್ತಾರೆ, ಇದು ಅದೇ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಮನೆಯ ತಾಪಮಾನವನ್ನು 3 ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆ ಮಾಡುತ್ತದೆ. ಇದು ಶಾಖದಿಂದ ಪರಿಹಾರ ನೀಡುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ಮನೆ ಬಿಸಿಯಾಗಿದ್ದರೆ, ನೈಸರ್ಗಿಕವಾಗಿ ತಂಪಾಗಿಸಲು ನೀವು ಕಿಟಕಿಗಳು ಮತ್ತು ಬಾಗಿಲುಗಳ ಮೇಲೆ ಒದ್ದೆಯಾದ ಪರದೆಗಳನ್ನು ನೇತುಹಾಕಬಹುದು. ಈ ಒದ್ದೆಯಾದ ಪರದೆಗಳ ಮೂಲಕ ಗಾಳಿ ಹಾದುಹೋದಾಗ, ಅದು ತಣ್ಣಗಾಗುತ್ತದೆ, ಕೋಣೆಯ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದು ಮನೆಯಲ್ಲಿ ತಂಪಾಗುವ ಏರ್ ಕೂಲರ್&zwnj;ನಂತೆಯೇ ಕಾರ್ಯನಿರ್ವಹಿಸುತ್ತದೆ ಮತ್ತು ವಿದ್ಯುತ್ ಅಗತ್ಯವಿಲ್ಲ. ಶಾಖವನ್ನು ಸೋಲಿಸಲು ಇದು ಮತ್ತೊಂದು ಸುಲಭ ಮಾರ್ಗವಾಗಿದೆ.&lt;/p&gt;&lt;img&gt;&lt;p&gt;ಒಳಾಂಗಣದಲ್ಲಿ ಗಿಡಗಳನ್ನು ನೆಡುವುದರಿಂದ ಶಾಖದಿಂದ ಪರಿಹಾರ ಸಿಗುತ್ತದೆ. ಒಳಾಂಗಣ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸುವುದಲ್ಲದೆ, ಸುತ್ತುವರಿದ ತಾಪಮಾನವನ್ನು ಕಡಿಮೆ ಮಾಡುತ್ತದೆ. ಬಾಲ್ಕನಿಯಲ್ಲಿ ಅಥವಾ ಕಿಟಕಿಯ ಬಳಿ ಸಸ್ಯಗಳನ್ನು ಇಡುವುದು ಮನೆಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ನೀವು ಹೆಚ್ಚಿನ ಖರ್ಚು ಮಾಡದೆ ಶಾಖದಿಂದ ಪರಿಹಾರ ಪಡೆಯಲು ಬಯಸಿದರೆ, ಮನೆಯಲ್ಲಿ ಗಿಡ ಬೆಳೆಸಿ.&lt;/p&gt;&lt;img&gt;&lt;p&gt;ಹಗಲಿನಲ್ಲಿ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಡುವುದು ಮತ್ತು ಸಂಜೆ ಅವುಗಳನ್ನು ತೆರೆಯುವುದು ಶಾಖದಿಂದ ಪರಿಹಾರ ಪಡೆಯಲು ಒಂದು ವಿಶಿಷ್ಟ ಮಾರ್ಗವಾಗಿದೆ. ಮಧ್ಯಾಹ್ನದ ಬಿಸಿ ಗಾಳಿ ಪ್ರವೇಶಿಸದಂತೆ ತಡೆಯುವುದು ಮುಖ್ಯ. ತಂಪಾದ ಸಂಜೆ ಗಾಳಿಯನ್ನು ಮನೆಯೊಳಗೆ ಪ್ರವೇಶಿಸಲು ಬಿಡುವುದರಿಂದ ವಾತಾವರಣವು ಹೆಚ್ಚು ಆರಾಮದಾಯಕವಾಗುತ್ತದೆ.&lt;/p&gt;]]></content:encoded>
            <category>health-life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/health-life/simple-tricks-to-keep-your-home-cool-in-the-summer-lg27god"/>
        </item>
        <item>
            <title><![CDATA[ಮಲಗುವಾಗ ಬೆಡ್‌ರೂಂ ಬಾಗಿಲು ಮುಚ್ಚಿರುತ್ತೀರಾ? ತಜ್ಞರು ಹೇಳುವ ಅಸಲಿ ಸತ್ಯ ಇಲ್ಲಿದೆ!]]></title>
            <link>https://kannada.asianetnews.com/gallery/life/5-reasons-to-close-your-bedroom-door-tonight-lx53t0p</link>
            <guid isPermaLink="true">https://kannada.asianetnews.com/gallery/life/5-reasons-to-close-your-bedroom-door-tonight-lx53t0p</guid>
            <pubDate>Thu, 16 Apr 2026 16:50:38 +0530</pubDate>
            <description><![CDATA[&lt;p&gt;Melatonin and sleep: ರಾತ್ರಿ ಮಲಗುವಾಗ ಬೆಡ್&zwnj;ರೂಂ ಬಾಗಿಲು ತೆರೆದಿಡುವುದು ನಿಮಗೊಂದು ಅಭ್ಯಾಸವಾಗಿರಬಹುದು. ಆದರೆ ಇದು ನಿಮ್ಮ ನಿದ್ರೆ ಮತ್ತು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಬಾಗಿಲು ಮುಚ್ಚಿ ಮಲಗುವುದರಿಂದ ಸಿಗುವ ಲಾಭಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khtcjqk4j98saxnpr9v17qth,imgname-gettyimages-2108539552-1771485879908.jpg" type="image/jpeg" height="390" width="690"/>
            <content:encoded><![CDATA[&lt;p&gt;Melatonin and sleep: ರಾತ್ರಿ ಮಲಗುವಾಗ ಬೆಡ್&zwnj;ರೂಂ ಬಾಗಿಲು ತೆರೆದಿಡುವುದು ನಿಮಗೊಂದು ಅಭ್ಯಾಸವಾಗಿರಬಹುದು. ಆದರೆ ಇದು ನಿಮ್ಮ ನಿದ್ರೆ ಮತ್ತು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಬಾಗಿಲು ಮುಚ್ಚಿ ಮಲಗುವುದರಿಂದ ಸಿಗುವ ಲಾಭಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ನಾವು ದಿನವಿಡೀ ಉತ್ಸಾಹದಿಂದ ಇರಲು ರಾತ್ರಿಯ ಗಾಢ ನಿದ್ರೆ ಬಹಳ ಮುಖ್ಯ. ಆದರೆ ಮಲಗುವಾಗ ಕೋಣೆಯ ವಾತಾವರಣ ಹೇಗಿರಬೇಕು ಎಂಬ ಬಗ್ಗೆ ಅನೇಕರಲ್ಲಿ ಗೊಂದಲವಿರುತ್ತದೆ. ಅದರಲ್ಲೂ ಮುಖ್ಯವಾಗಿ ಬಾಗಿಲುಗಳನ್ನು ತೆರೆದಿಡಬೇಕೇ ಅಥವಾ ಮುಚ್ಚಿರಬೇಕೇ? ಎಂಬ ಪ್ರಶ್ನೆಗೆ ತಜ್ಞರು ನೀಡಿರುವ ಕುತೂಹಲಕಾರಿ ಸಲಹೆಗಳು ಇಲ್ಲಿವೆ.&lt;/p&gt;&lt;img&gt;&lt;p&gt;ನಿದ್ರೆಗೆ ಪೂರಕವಾದ ವಾತಾವರಣ ಇಲ್ಲದಿದ್ದರೆ ಅನೇಕರಿಗೆ ನಿದ್ರೆ ಬರುವುದು ಕಷ್ಟವಾಗುತ್ತದೆ. ಕೆಲವರು ಸಂಪೂರ್ಣ ಕತ್ತಲೆಯನ್ನು ಇಷ್ಟಪಟ್ಟರೆ, ಇನ್ನು ಕೆಲವರು ಮಂದ ಬೆಳಕಿನಲ್ಲಿ ಮಲಗಲು ಬಯಸುತ್ತಾರೆ. ಆದರೆ ಆರೋಗ್ಯ ಮತ್ತು ಉತ್ತಮ ನಿದ್ರೆಯ ದೃಷ್ಟಿಯಿಂದ ಮಲಗುವ ಕೋಣೆಯ ಬಾಗಿಲುಗಳನ್ನು ಮುಚ್ಚಿಡುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.&lt;/p&gt;&lt;img&gt;&lt;p&gt;&lt;strong&gt;ಮೆಲಟೋನಿನ್ ಉತ್ಪತ್ತಿ&lt;/strong&gt;ಕತ್ತಲೆಯಾಗಿರುವ ಕೋಣೆಯಲ್ಲಿ 'ಮೆಲಟೋನಿನ್' (Melatonin) ಎಂಬ ಹಾರ್ಮೋನ್ ಚೆನ್ನಾಗಿ ಬಿಡುಗಡೆಯಾಗುತ್ತದೆ. ಇದು ನಾವು ಬೇಗನೆ ನಿದ್ರಿಸಲು ಸಹಾಯ ಮಾಡುತ್ತದೆ. ಬಾಗಿಲು ತೆರೆದಿದ್ದರೆ ಹೊರಗಿನ ಬೆಳಕು ಈ ಪ್ರಕ್ರಿಯೆಗೆ ಅಡ್ಡಿಪಡಿಸಬಹುದು.&lt;/p&gt;&lt;img&gt;&lt;p&gt;ಹಜಾರದಲ್ಲಿ (Hall) ಇತರರು ಮಾತನಾಡುವ ಶಬ್ದ ಅಥವಾ ಟಿವಿ ಶಬ್ದವು ಬೆಡ್&zwnj;ರೂಂ ಒಳಗೆ ಬರದಂತೆ ತಡೆಯಲು ಬಾಗಿಲು ಮುಚ್ಚುವುದು ಉತ್ತಮ. ಇದು ಪ್ರಶಾಂತವಾದ ನಿದ್ರೆಗೆ ಪೂರಕ.&lt;/p&gt;&lt;img&gt;&lt;p&gt;ಎಸಿ ಅಥವಾ ಫ್ಯಾನ್ ಗಾಳಿಯು ಕೋಣೆಯಲ್ಲೇ ಇರಲು ಬಾಗಿಲು ಮುಚ್ಚುವುದು ಸಹಕಾರಿ. ಮಲಗಲು ಸುಮಾರು 20 ರಿಂದ 22 ಡಿಗ್ರಿ ಸೆಲ್ಸಿಯಸ್ ತಾಪಮಾನವು ಅತ್ಯಂತ ಸೂಕ್ತವೆಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ಒಂದು ವೇಳೆ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ, ಮುಚ್ಚಿದ ಬಾಗಿಲುಗಳು ಹೊಗೆ ಮತ್ತು ಶಾಖವು ಕೋಣೆಯೊಳಗೆ ಬರದಂತೆ ಸ್ವಲ್ಪ ಸಮಯದವರೆಗೆ ತಡೆಹಿಡಿಯಬಲ್ಲವು. ಇದು ಸುರಕ್ಷತೆಯ ದೃಷ್ಟಿಯಿಂದಲೂ ಒಳ್ಳೆಯದು.&amp;nbsp;&lt;/p&gt;&lt;img&gt;&lt;p&gt;ಮಕ್ಕಳು ಮಲಗಿದಾಗ ಬಾಗಿಲು ಮುಚ್ಚುವುದರಿಂದ ಮನೆಯ ಸಾಮಾನ್ಯ ಶಬ್ದಗಳಿಗೆ ಅವರು ಪದೇ ಪದೇ ಎಚ್ಚರಗೊಳ್ಳುವುದಿಲ್ಲ. ಹಾಗೆಯೇ ಸಾಕುಪ್ರಾಣಿಗಳು ಮಧ್ಯರಾತ್ರಿಯಲ್ಲಿ ಕೋಣೆಗೆ ಬಂದು ನಿಮ್ಮ ನಿದ್ರೆಗೆ ಭಂಗ ತರುವುದನ್ನು ತಪ್ಪಿಸಬಹುದು.&lt;/p&gt;&lt;img&gt;&lt;p&gt;ಒಂದು ವೇಳೆ ನಿಮ್ಮ ಕೋಣೆಯಲ್ಲಿ ಕಿಟಕಿಗಳಿಲ್ಲದಿದ್ದರೆ ಅಥವಾ ಗಾಳಿಯಾಡಲು ತೊಂದರೆಯಾಗುತ್ತಿದ್ದರೆ (Ventilation), ಬಾಗಿಲನ್ನು ಸ್ವಲ್ಪ ಪ್ರಮಾಣದಲ್ಲಿ ತೆರೆದಿಡಬಹುದು. ಆದರೆ ಗರಿಷ್ಠ ಮಟ್ಟದ ಪ್ರಶಾಂತತೆ ಮತ್ತು ಕತ್ತಲೆಗಾಗಿ ಬಾಗಿಲು ಮುಚ್ಚಿ ಮಲಗುವುದೇ ಆರೋಗ್ಯಕರ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/5-reasons-to-close-your-bedroom-door-tonight-lx53t0p"/>
        </item>
        <item>
            <title><![CDATA[ನೀವು ಹೆಚ್ಚು ಚಹಾ ಕುಡಿಯುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು]]></title>
            <link>https://kannada.asianetnews.com/webstories/health-life/health-risks-of-drinking-too-much-tea-daily-gvd-oksnm62</link>
            <guid isPermaLink="true">https://kannada.asianetnews.com/webstories/health-life/health-risks-of-drinking-too-much-tea-daily-gvd-oksnm62</guid>
            <pubDate>Wed, 15 Apr 2026 19:35:42 +0530</pubDate>
            <description><![CDATA[ನೀವು ದಿನಕ್ಕೆ ಹಲವು ಬಾರಿ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದೀರಾ? ಹಾಗಿದ್ದರೆ, ಅತಿಯಾದ ಚಹಾ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.]]></description>
            <media:content url="https://static.asianetnews.com/images/w-1280,h-720,format-jpg,imgid-01knp5cvt9edpthr75az3g9pmj,imgname-untitled-design--78--1775639097161.jpg" type="image/jpeg" height="390" width="690"/>
            <category>health-life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/health-life/health-risks-of-drinking-too-much-tea-daily-gvd-oksnm62"/>
        </item>
        <item>
            <title><![CDATA[ಬೆಳಗ್ಗೆ ಎದ್ದ ತಕ್ಷಣ ಬೆಡ್‌ಶೀಟ್ ಮಡಚುವ ಅಭ್ಯಾಸ ಇದೆಯಾ, ಹಾಗಾದ್ರೆ ಇವತ್ತಿಂದಲೇ ಸ್ಟಾಪ್ ಮಾಡಿ!]]></title>
            <link>https://kannada.asianetnews.com/gallery/health-life/the-hidden-health-risk-of-making-your-bed-too-early-p4gfmpu</link>
            <guid isPermaLink="true">https://kannada.asianetnews.com/gallery/health-life/the-hidden-health-risk-of-making-your-bed-too-early-p4gfmpu</guid>
            <pubDate>Wed, 15 Apr 2026 15:17:55 +0530</pubDate>
            <description><![CDATA[&lt;p&gt;Don't fold bed immediately: ನಾವೆಲ್ಲರೂ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯನ್ನು ನೀಟಾಗಿ ಜೋಡಿಸುವುದು ಒಳ್ಳೆಯ ಶಿಸ್ತು ಎಂದು ನಂಬಿದ್ದೇವೆ. ಆದರೆ ವೈಜ್ಞಾನಿಕವಾಗಿ ನೋಡಿದರೆ, ಎದ್ದ ತಕ್ಷಣ ಬೆಡ್&zwnj;ಶೀಟ್ ಮಡಚುವುದು ನಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kg4ec9z28kamtf253afjwj5f,imgname-king-bed-5-1769675827170.jpg" type="image/jpeg" height="390" width="690"/>
            <content:encoded><![CDATA[&lt;p&gt;Don't fold bed immediately: ನಾವೆಲ್ಲರೂ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯನ್ನು ನೀಟಾಗಿ ಜೋಡಿಸುವುದು ಒಳ್ಳೆಯ ಶಿಸ್ತು ಎಂದು ನಂಬಿದ್ದೇವೆ. ಆದರೆ ವೈಜ್ಞಾನಿಕವಾಗಿ ನೋಡಿದರೆ, ಎದ್ದ ತಕ್ಷಣ ಬೆಡ್&zwnj;ಶೀಟ್ ಮಡಚುವುದು ನಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು!&lt;/p&gt;&lt;img&gt;&lt;p&gt;ನಿದ್ರೆಯಿಂದ ಎದ್ದ ತಕ್ಷಣ ಹಾಸಿಗೆಯನ್ನು ನೀಟಾಗಿ ಜೋಡಿಸುವುದು ಶಿಸ್ತಿನ ಲಕ್ಷಣವೆಂದು ನಾವು ಭಾವಿಸುತ್ತೇವೆ. ಆದರೆ, ಪ್ರತಿದಿನ ಎದ್ದ ತಕ್ಷಣ ಬೆಡ್ ಸರಿಪಡಿಸುವುದು (Making the bed) ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹಾಸಿಗೆಯನ್ನು ಮಡಚುವ ಮೊದಲು ಕನಿಷ್ಠ 30 ನಿಮಿಷ ಕಾಯಬೇಕು ಎಂದು ಅವರು ಸೂಚಿಸುತ್ತಾರೆ. ಇದಕ್ಕೆ ಕಾರಣ ಇಲ್ಲಿದೆ..&lt;/p&gt;&lt;img&gt;&lt;p&gt;ನಾವು ನಿದ್ದೆ ಮಾಡುವಾಗ ನಮ್ಮ ದೇಹದಿಂದ ನೈಸರ್ಗಿಕವಾಗಿ ಸ್ವಲ್ಪ ಬೆವರು ಮತ್ತು ಚರ್ಮದ ಕೋಶಗಳು ಹೊರಬರುತ್ತವೆ. ಇವು ಬೆಡ್&zwnj;ಶೀಟ್ ಮತ್ತು ಬ್ಲಾಂಕೆಟ್&zwnj;ಗಳ ಮೇಲೆ ಸಂಗ್ರಹವಾಗುತ್ತವೆ. ಈ ತೇವಾಂಶವು 'ಡಸ್ಟ್ ಮೈಟ್ಸ್' (Dust Mites) ಎಂಬ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳಿಗೆ ಮುಖ್ಯ ಆಹಾರವಾಗಿದೆ. ನಾವು ಎದ್ದ ತಕ್ಷಣ ಹಾಸಿಗೆಯನ್ನು ಮಡಚಿಟ್ಟರೆ, ಆ ತೇವಾಂಶವು ಒಳಗೆ ಹಾಗೆಯೇ ಉಳಿಯುತ್ತದೆ. ಇದರಿಂದ ಡಸ್ಟ್ ಮೈಟ್ಸ್ ವೇಗವಾಗಿ ವೃದ್ಧಿಯಾಗಿ ನಮ್ಮ ಹಾಸಿಗೆಯನ್ನು ಬ್ಯಾಕ್ಟೀರಿಯಾಗಳ ಕೇಂದ್ರವನ್ನಾಗಿ ಮಾಡುತ್ತವೆ.&lt;/p&gt;&lt;img&gt;&lt;p&gt;ನಾವು ಎದ್ದ ನಂತರ ಹಾಸಿಗೆಯನ್ನು ಮಡಚದೆ ಹಾಗೆಯೇ ಬಿಡುವುದರಿಂದ (Unmaking the bed), ಕೋಣೆಯಲ್ಲಿನ ಗಾಳಿ ಮತ್ತು ಬೆಳಕು ಹಾಸಿಗೆಗೆ ತಗುಲುತ್ತದೆ. ಇದರಿಂದ ಬೆಡ್&zwnj;ಶೀಟ್&zwnj;ನಲ್ಲಿರುವ ತೇವಾಂಶವು ಆರಿಹೋಗುತ್ತದೆ. ಡಸ್ಟ್ ಮೈಟ್ಸ್&zwnj;ಗಳು ಬದುಕಲು ತೇವಾಂಶ ಬೇಕೇಬೇಕು, ಒಣ ಹವಾಮಾನದಲ್ಲಿ ಅವು ಬದುಕಲಾರವು. ಈ ರೀತಿ ಮಾಡುವುದರಿಂದ ಸೀನು, ನೆಗಡಿ ಮತ್ತು ಚರ್ಮದ ಮೇಲಿನ ದದ್ದುಗಳಂತಹ ಅಲರ್ಜಿ ಸಮಸ್ಯೆಗಳು ಕಡಿಮೆಯಾಗುತ್ತವೆ.&lt;/p&gt;&lt;img&gt;&lt;p&gt;*ಬೆಳಗ್ಗೆ ಎದ್ದ ತಕ್ಷಣ ಕೋಣೆಯ ಕಿಟಕಿಗಳನ್ನು ತೆರೆದು ತಾಜಾ ಗಾಳಿ ಒಳಬರುವಂತೆ ಮಾಡಿ.*ನೀವು ತಯಾರಾದ ನಂತರ ಅಥವಾ ಬ್ರೇಕ್&zwnj;ಫಾಸ್ಟ್ ಮುಗಿಸಿದ ನಂತರ ಹಾಸಿಗೆಯನ್ನು ಜೋಡಿಸುವುದನ್ನು ರೂಢಿಸಿಕೊಳ್ಳಿ.&lt;/p&gt;&lt;img&gt;&lt;p&gt;*ವಾರಕ್ಕೊಮ್ಮೆ ಬೆಡ್&zwnj;ಶೀಟ್&zwnj;ಗಳನ್ನು ಬಿಸಿ ನೀರಿನಲ್ಲಿ ತೊಳೆಯುವುದು ಉತ್ತಮ.*ನೀಟಾಗಿರುವುದು ಎಷ್ಟು ಮುಖ್ಯವೋ, ಆರೋಗ್ಯವಾಗಿರುವುದು ಅಷ್ಟೇ ಮುಖ್ಯ. ಆದ್ದರಿಂದ ನಾಳೆಯಿಂದ ಎದ್ದ ತಕ್ಷಣ ನಿಮ್ಮ ಹಾಸಿಗೆಗೆ ಸ್ವಲ್ಪ ಗಾಳಿ ಮತ್ತು ಬೆಳಕು ತಗುಲಲು ಬಿಡಿ, ಆಮೇಲೆ ಅದನ್ನು ಅಂದವಾಗಿ ಜೋಡಿಸಿ.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/the-hidden-health-risk-of-making-your-bed-too-early-p4gfmpu"/>
        </item>
        <item>
            <title><![CDATA[Bael Juice Benefits: ಹೊಟ್ಟೆ ಉರಿ, ಸನ್‌ಸ್ಟ್ರೋಕ್‌ಗೆ ಬೇಸಿಗೆಯ ಬೆಸ್ಟ್ ಮದ್ದು ಬೇಲದ ಹಣ್ಣಿನ ಶರಬತ್ತು!]]></title>
            <link>https://kannada.asianetnews.com/food/bael-sharbat-recipe-to-beat-summer-heat-and-aid-digestion-gvd/articleshow-qs7zz1g</link>
            <guid isPermaLink="true">https://kannada.asianetnews.com/food/bael-sharbat-recipe-to-beat-summer-heat-and-aid-digestion-gvd/articleshow-qs7zz1g</guid>
            <pubDate>Tue, 14 Apr 2026 18:39:27 +0530</pubDate>
            <description><![CDATA[&lt;p&gt;ಬೇಸಿಗೆ ಬಂತೆಂದರೆ ಸಾಕು, ಸುಡು ಬಿಸಿಲು, ಸನ್&zwnj;ಸ್ಟ್ರೋಕ್ ಭಯ ಹಾಗೂ ಹೊಟ್ಟೆ ಉರಿ ಶುರು. ಈ ಎಲ್ಲಾ ಸಮಸ್ಯೆಗಳಿಗೆ ಬೇಲದ ಹಣ್ಣಿನ ಶರಬತ್ತು ಒಂದು ಸೂಪರ್ ದೇಸಿ ಮದ್ದು. ಬೇಲದ ಹಣ್ಣಿನಲ್ಲಿ ದೇಹವನ್ನು ತಂಪಾಗಿಸುವ ಗುಣವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp5dhxc23aercza141bcz52z,imgname-bael-sharbat-recipe-1776150967682.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೇಸಿಗೆಯಲ್ಲಿ ಹೊಟ್ಟೆ ಉರಿ ಮತ್ತು ಸನ್&zwnj;ಸ್ಟ್ರೋಕ್&zwnj;ನಿಂದ ಪಾರಾಗಲು ಬೇಲದ ಹಣ್ಣಿನ ಶರಬತ್ತು ಒಂದು ಅತ್ಯುತ್ತಮ ಮನೆಮದ್ದು. ಇದನ್ನು ತಯಾರಿಸುವ ಸುಲಭ ವಿಧಾನ, ಅದರ ಪ್ರಯೋಜನಗಳು ಮತ್ತು ಕೆಲವು ಮುಖ್ಯ ಟಿಪ್ಸ್&zwnj; ಇಲ್ಲಿದೆ. ಇದು ದೇಹಕ್ಕೆ ತಂಪು ನೀಡಿ, ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.&lt;/p&gt;&lt;p&gt;ಬೇಸಿಗೆ ಬಂತೆಂದರೆ ಸಾಕು, ಸುಡು ಬಿಸಿಲು, ಸನ್&zwnj;ಸ್ಟ್ರೋಕ್ ಭಯ ಹಾಗೂ ಹೊಟ್ಟೆ ಉರಿ ಶುರು. ಈ ಎಲ್ಲಾ ಸಮಸ್ಯೆಗಳಿಗೆ ಬೇಲದ ಹಣ್ಣಿನ ಶರಬತ್ತು ಒಂದು ಸೂಪರ್ ದೇಸಿ ಮದ್ದು. ಬೇಲದ ಹಣ್ಣಿನಲ್ಲಿ ದೇಹವನ್ನು ತಂಪಾಗಿಸುವ ಗುಣವಿದೆ. ಇದು ದೇಹಕ್ಕೆ ತಂಪು ನೀಡುವುದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನೂ ಬಲಪಡಿಸುತ್ತದೆ. ಈ ಶರಬತ್ತು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ವಿಶೇಷ ಅಂದ್ರೆ, ಇದನ್ನು ಮನೆಯಲ್ಲೇ ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದು.&lt;/p&gt;&lt;p&gt;&lt;strong&gt;ಬೇಲದ ಶರಬತ್ತು ಮಾಡುವ ಸುಲಭ ವಿಧಾನ&lt;/strong&gt;&lt;/p&gt;&lt;p&gt;ಮೊದಲು, ಚೆನ್ನಾಗಿ ಹಣ್ಣಾದ ಬೇಲದ ಹಣ್ಣನ್ನು ಒಡೆದು ಅದರ ತಿರುಳನ್ನು ಹೊರತೆಗೆಯಿರಿ. ಈ ತಿರುಳನ್ನು ನೀರಿನಲ್ಲಿ ಚೆನ್ನಾಗಿ ಕಿವುಚಿ, ನಂತರ ಸೋಸಿಕೊಳ್ಳಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಸೇರಿಸಿ. ಜೊತೆಗೆ ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಹುರಿದ ಜೀರಿಗೆ ಪುಡಿ ಹಾಕಿದರೆ ರುಚಿ ಹೆಚ್ಚುತ್ತದೆ. ಕೊನೆಯಲ್ಲಿ, ಫ್ರಿಡ್ಜ್&zwnj;ನಲ್ಲಿಟ್ಟು ತಣ್ಣಗೆ ಮಾಡಿ ಅಥವಾ ಐಸ್ ಕ್ಯೂಬ್&zwnj; ಹಾಕಿ ಸರ್ವ್ ಮಾಡಿ.&lt;img&gt;&lt;/p&gt;&lt;p&gt;&lt;strong&gt;ಹೊಟ್ಟೆ ಉರಿಗೆ ಹೇಗೆ ಪರಿಹಾರ?&lt;/strong&gt;&lt;/p&gt;&lt;p&gt;ಬೇಲದ ಹಣ್ಣಿನ ಶರಬತ್ತು ಹೊಟ್ಟೆಯ ಉಷ್ಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ತಂಪು ನೀಡುವ ಗುಣಗಳು ಅಸಿಡಿಟಿ, ಹೊಟ್ಟೆ ಉರಿ ಮತ್ತು ಗ್ಯಾಸ್&zwnj;ನಂತಹ ಸಮಸ್ಯೆಗಳನ್ನು ನಿವಾರಿಸುತ್ತವೆ. ಪ್ರತಿದಿನ ಒಂದು ಗ್ಲಾಸ್ ಬೇಲದ ಶರಬತ್ತು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಹೊಟ್ಟೆ ಹಗುರವಾದಂತೆ ಭಾಸವಾಗುತ್ತದೆ.&lt;/p&gt;&lt;p&gt;&lt;strong&gt;ಸನ್&zwnj;ಸ್ಟ್ರೋಕ್&zwnj;ನಿಂದ ರಕ್ಷಣೆ&lt;/strong&gt;&lt;/p&gt;&lt;p&gt;ಬೇಸಿಗೆಯಲ್ಲಿ ಸನ್&zwnj;ಸ್ಟ್ರೋಕ್ ಅಥವಾ ಬಿಸಿಲು ಬಡಿಯುವುದು ಸಾಮಾನ್ಯ. ಬೇಲದ ಶರಬತ್ತು ದೇಹವನ್ನು ಹೈಡ್ರೇಟ್ ಆಗಿಡುತ್ತದೆ ಮತ್ತು ಒಳಗಿನಿಂದ ತಂಪು ನೀಡುತ್ತದೆ. ಇದು ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ, ಇದರಿಂದ ಹೀಟ್ ಸ್ಟ್ರೋಕ್ ಅಪಾಯ ಕಡಿಮೆಯಾಗುತ್ತದೆ.&lt;img&gt;&lt;/p&gt;&lt;p&gt;&lt;strong&gt;ಇಮ್ಯೂನಿಟಿ ಮತ್ತು ಎನರ್ಜಿ ಹೆಚ್ಚಳ&lt;/strong&gt;&lt;/p&gt;&lt;p&gt;ಬೇಲದ ಹಣ್ಣಿನಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್&zwnj;ಗಳು ಮತ್ತು ಫೈಬರ್ ಹೇರಳವಾಗಿವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದಿನವಿಡೀ ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಇದೊಂದು ನ್ಯಾಚುರಲ್ ಎನರ್ಜಿ ಡ್ರಿಂಕ್&zwnj;ನಂತೆ ಕೆಲಸ ಮಾಡುತ್ತದೆ.&lt;/p&gt;&lt;h2&gt;&lt;strong&gt;ಶರಬತ್ತು ಮಾಡುವಾಗ ಈ ಟಿಪ್ಸ್ ನೆನಪಿರಲಿ&lt;/strong&gt;&lt;/h2&gt;&lt;p&gt;ಯಾವಾಗಲೂ ಚೆನ್ನಾಗಿ ಹಣ್ಣಾದ ಬೇಲದ ಹಣ್ಣನ್ನೇ ಬಳಸಿ. ಏಕೆಂದರೆ, ಕಾಯಿ ಜೀರ್ಣಕ್ಕೆ ಭಾರವಾಗಬಹುದು. ಸಕ್ಕರೆಯನ್ನು ಅತಿಯಾಗಿ ಬಳಸಬೇಡಿ, ಬದಲಿಗೆ ಬೆಲ್ಲ ಬಳಸುವುದು ಉತ್ತಮ. ಶರಬತ್ತನ್ನು ಹೆಚ್ಚು ಹೊತ್ತು ಸಂಗ್ರಹಿಸಿಡಬೇಡಿ, ಫ್ರೆಶ್ ಆಗಿ ತಯಾರಿಸಿ ಕುಡಿಯುವುದೇ ಹೆಚ್ಚು ಪ್ರಯೋಜನಕಾರಿ.&lt;/p&gt;]]></content:encoded>
            <category>health-life</category>
            <dc:creator>Govindaraj S</dc:creator>
            <atom:link href="https://kannada.asianetnews.com/food/bael-sharbat-recipe-to-beat-summer-heat-and-aid-digestion-gvd/articleshow-qs7zz1g"/>
        </item>
        <item>
            <title><![CDATA[ಬಾಯಲ್ಲಿ ನೀರೂರಿಸುವ ಟೊಮ್ಯಾಟೋ ಗೊಜ್ಜು: ಈ ಒಂದು 'ಸೀಕ್ರೆಟ್' ಟಿಪ್ಸ್ ಅನುಸರಿಸಿದರೆ ವಾರವಿಡೀ ಫ್ರೆಶ್ ಆಗಿರುತ್ತೆ!]]></title>
            <link>https://kannada.asianetnews.com/food/easy-tomato-gojju-recipe-beware-adding-these-two-ingredients-can-ruin-its-shelf-life/articleshow-u624ebe</link>
            <guid isPermaLink="true">https://kannada.asianetnews.com/food/easy-tomato-gojju-recipe-beware-adding-these-two-ingredients-can-ruin-its-shelf-life/articleshow-u624ebe</guid>
            <pubDate>Thu, 16 Apr 2026 15:47:08 +0530</pubDate>
            <description><![CDATA[&lt;p&gt;ನಮ್ಮ ಅಡುಗೆಮನೆಯಲ್ಲಿ ಟೊಮ್ಯಾಟೋ (Tomato) ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅದು ಸಾಂಬಾರ್ ಇರಲಿ, ರಸಂ ಇರಲಿ ಅಥವಾ ಸಲಾಡ್ ಇರಲಿ, ಟೊಮ್ಯಾಟೋ ಇರಲೇಬೇಕು. ಆದರೆ, ದಿನವೂ ಅದೇ ಸಾಂಬಾರ್, ರಸಂ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಹೀಗೆ ಮಾಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpavz8z3v79ttp2jfe0d0g51,imgname-tomato-gojju-1776333857763.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟೊಮ್ಯಾಟೋ ಗೊಜ್ಜು ಹೀಗೆ ಮಾಡಿ&lt;/strong&gt;&lt;/p&gt;&lt;p&gt;ನಮ್ಮ ಅಡುಗೆಮನೆಯಲ್ಲಿ ಟೊಮ್ಯಾಟೋ (Tomato) ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅದು ಸಾಂಬಾರ್ ಇರಲಿ, ರಸಂ ಇರಲಿ ಅಥವಾ ಸಲಾಡ್ ಇರಲಿ, ಟೊಮ್ಯಾಟೋ ಇರಲೇಬೇಕು. ಆದರೆ, ದಿನವೂ ಅದೇ ಸಾಂಬಾರ್, ರಸಂ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಒಂದು ಭರ್ಜರಿ ರೆಸಿಪಿ! ಅದೇ 'ಟೊಮ್ಯಾಟೋ ಗೊಜ್ಜು'. ಕರ್ನಾಟಕದ ಮನೆ ಮನೆಗಳಲ್ಲಿ ಪ್ರಸಿದ್ಧವಾಗಿರುವ ಈ ಗೊಜ್ಜು, ಬಿಸಿ ಬಿಸಿ ಅನ್ನದ ಜೊತೆಗಷ್ಟೇ ಅಲ್ಲದೆ ಚಪಾತಿ, ರೊಟ್ಟಿ ಹಾಗೂ ದೋಸೆಗೂ ಸಖತ್ ಕಾಂಬಿನೇಷನ್.&lt;/p&gt;&lt;h2&gt;ರುಚಿಯ ಹಿಂದೆ ಅಡಗಿದೆ ವಿಶೇಷ ಜಾದೂ!&lt;/h2&gt;&lt;p&gt;ಸಾಮಾನ್ಯವಾಗಿ ನಾವು ಯಾವುದೇ ಗೊಜ್ಜು ಅಥವಾ ಚಟ್ನಿ ಮಾಡುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸುತ್ತೇವೆ. ಇದು ರುಚಿಯನ್ನು ಹೆಚ್ಚಿಸುವುದು ನಿಜ. ಆದರೆ, ನೀವು ತಯಾರಿಸಿದ ಗೊಜ್ಜು ಅಂದು ಸಂಜೆಯ ಹೊತ್ತಿಗೆಲ್ಲಾ ಹಾಳಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಬ್ಯಾಚುಲರ್&zwnj;ಗಳಿಗೆ ಅಥವಾ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ದಿನವೂ ಅಡುಗೆ ಮಾಡುವುದು ಕಷ್ಟದ ಕೆಲಸ.&lt;/p&gt;&lt;p&gt;ಅಂತಹವರಿಗಾಗಿ ಇಲ್ಲಿದೆ ಒಂದು ಕಿಚನ್ ಹ್ಯಾಕ್!&lt;/p&gt;&lt;p&gt;ವಾರಗಳ ಕಾಲ ಕೆಡದಂತೆ ಇಡುವ 'ಸೀಕ್ರೆಟ್' ಇಲ್ಲಿದೆ:&lt;/p&gt;&lt;p&gt;ಟೊಮ್ಯಾಟೋ ಗೊಜ್ಜನ್ನು ಹೆಚ್ಚು ದಿನಗಳ ಕಾಲ ಇಟ್ಟುಕೊಳ್ಳಬೇಕೆಂದರೆ ನೀವು ಮಾಡುವ ಮೊದಲ ಕೆಲಸವೆಂದರೆ ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸದಿರುವುದು. ಹೌದು, ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದಿದ್ದರೂ ಟೊಮ್ಯಾಟೋ ಗೊಜ್ಜು ಅದ್ಭುತವಾಗಿ ರುಚಿ ನೀಡುತ್ತದೆ.&lt;/p&gt;&lt;p&gt;ಜೊತೆಗೆ ಮತ್ತೊಂದು ಮುಖ್ಯ ಅಂಶವೆಂದರೆ ತೆಂಗಿನೆಣ್ಣೆ.&lt;/p&gt;&lt;p&gt;ನೀವು ಗೊಜ್ಜನ್ನು ತಯಾರಿಸುವಾಗ ಸಾಮಾನ್ಯ ಎಣ್ಣೆಯ ಬದಲು ಶುದ್ಧ ತೆಂಗಿನೆಣ್ಣೆಯನ್ನು ಸ್ವಲ್ಪ ಧಾರಾಳವಾಗಿ ಬಳಸಿ. ತೆಂಗಿನೆಣ್ಣೆಯು ಗೊಜ್ಜಿಗೆ ಒಂದು ವಿಶಿಷ್ಟ ಪರಿಮಳವನ್ನು ನೀಡುವುದಲ್ಲದೆ, ನೈಸರ್ಗಿಕ ಪ್ರಿಸರ್ವೇಟಿವ್ ಆಗಿ ಕೆಲಸ ಮಾಡುತ್ತದೆ. ಚೆನ್ನಾಗಿ ಹಣ್ಣಾದ ಕೆಂಪು ಟೊಮ್ಯಾಟೋಗಳನ್ನು ಸಣ್ಣದಾಗಿ ಹೆಚ್ಚಿ, ಎಣ್ಣೆಯಲ್ಲಿ ಅವು ನೀರು ಬಿಟ್ಟು ಪೇಸ್ಟ್ ಆಗುವವರೆಗೆ ಬೇಯಿಸಿ. ಇದಕ್ಕೆ ಸ್ವಲ್ಪ ಬೆಲ್ಲ, ಉಪ್ಪು ಮತ್ತು ಖಾರದ ಪುಡಿ ಸೇರಿಸಿದರೆ ಅದರ ರುಚಿಯೇ ಬೇರೆ!&lt;/p&gt;&lt;h3&gt;ಪ್ರಯಾಣಕ್ಕೂ ಬೆಸ್ಟ್ ಜೊತೆಗಾರ:&lt;/h3&gt;&lt;p&gt;ನೀವು ಎಲ್ಲಾದರೂ ಪ್ರವಾಸಕ್ಕೆ ಹೋಗುತ್ತಿದ್ದರೆ ಅಥವಾ ಹಾಸ್ಟೆಲ್&zwnj;ನಲ್ಲಿರುವ ಮಕ್ಕಳಿಗೆ ಏನಾದರೂ ಕಳುಹಿಸಿಕೊಡಬೇಕಿದ್ದರೆ ಈ 'ನೋ ಆನಿಯನ್-ನೋ ಗಾರ್ಲಿಕ್' ಟೊಮ್ಯಾಟೋ ಗೊಜ್ಜು ಬೆಸ್ಟ್ ಆಪ್ಷನ್. ಈ ರೀತಿ ತಯಾರಿಸಿದ ಗೊಜ್ಜನ್ನು ಗಾಜಿನ ಸೀಸೆಯಲ್ಲಿ ಹಾಕಿಟ್ಟರೆ ಒಂದು ವಾರಕ್ಕೂ ಹೆಚ್ಚು ಕಾಲ ಇದು ಕೆಡುವುದಿಲ್ಲ.&lt;/p&gt;&lt;p&gt;ಇನ್ನೇಕೆ ತಡ, ನಿಮ್ಮ ಅಡುಗೆಮನೆಯಲ್ಲಿ ಟೊಮ್ಯಾಟೋಗಳಿದ್ದರೆ ಇಂದೇ ಈ ಸ್ಪೆಷಲ್ ಗೊಜ್ಜನ್ನು ಟ್ರೈ ಮಾಡಿ. ನಿಮ್ಮ ಮನೆಯವರು ಖಂಡಿತವಾಗಿಯೂ ಎರಡರ ಬದಲು ನಾಲ್ಕು ಮುದ್ದೆ ಅಥವಾ ಚಪಾತಿ ತಿನ್ನುವುದರಲ್ಲಿ ಅನುಮಾನವೇ ಇಲ್ಲ!&lt;/p&gt;]]></content:encoded>
            <category>health-life</category>
            <dc:creator>Shriram Bhat</dc:creator>
            <atom:link href="https://kannada.asianetnews.com/food/easy-tomato-gojju-recipe-beware-adding-these-two-ingredients-can-ruin-its-shelf-life/articleshow-u624ebe"/>
        </item>
        <item>
            <title><![CDATA[ಮೆಸೇಜ್‌ಗೆ ಲೇಟ್ ರಿಪ್ಲೈ ಕೊಡ್ತಿದ್ದಾರಾ? ಮೊಬೈಲ್ ಸೈಲೆಂಟ್‌ನಲ್ಲಿಡುವವರ ಅಸಲಿ ವ್ಯಕ್ತಿತ್ವ ಇಲ್ಲಿದೆ!]]></title>
            <link>https://kannada.asianetnews.com/gallery/life/why-people-keep-their-phones-on-silent-v6l2knq</link>
            <guid isPermaLink="true">https://kannada.asianetnews.com/gallery/life/why-people-keep-their-phones-on-silent-v6l2knq</guid>
            <pubDate>Wed, 15 Apr 2026 15:58:51 +0530</pubDate>
            <description><![CDATA[&lt;p&gt;Phone on silent personality: ನಿಮ್ಮ ಸುತ್ತಮುತ್ತ ಯಾರಾದರೂ ಯಾವಾಗಲೂ ಮೊಬೈಲ್ ಸೈಲೆಂಟ್&zwnj;ನಲ್ಲಿ ಇಡುತ್ತಾರೆಯೇ? ಹಾಗಿದ್ದರೆ ಅವರನ್ನು ಕಂಡು ಕೋಪಿಸಿಕೊಳ್ಳಬೇಡಿ. ಏಕೆಂದರೆ, ಫೋನ್ ಸೈಲೆಂಟ್&zwnj;ನಲ್ಲಿಡುವ ಅಭ್ಯಾಸದ ಹಿಂದೆ ದೊಡ್ಡ ರಹಸ್ಯವೇ ಅಡಗಿದೆ! ಆ ಕುತೂಹಲಕಾರಿ ವಿಷಯ ಇಲ್ಲಿದೆ ನೋಡಿ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kghx9qvqebqjwahxwwx0zzz9,imgname-mobile-1770127679350.jpg" type="image/jpeg" height="390" width="690"/>
            <content:encoded><![CDATA[&lt;p&gt;Phone on silent personality: ನಿಮ್ಮ ಸುತ್ತಮುತ್ತ ಯಾರಾದರೂ ಯಾವಾಗಲೂ ಮೊಬೈಲ್ ಸೈಲೆಂಟ್&zwnj;ನಲ್ಲಿ ಇಡುತ್ತಾರೆಯೇ? ಹಾಗಿದ್ದರೆ ಅವರನ್ನು ಕಂಡು ಕೋಪಿಸಿಕೊಳ್ಳಬೇಡಿ. ಏಕೆಂದರೆ, ಫೋನ್ ಸೈಲೆಂಟ್&zwnj;ನಲ್ಲಿಡುವ ಅಭ್ಯಾಸದ ಹಿಂದೆ ದೊಡ್ಡ ರಹಸ್ಯವೇ ಅಡಗಿದೆ! ಆ ಕುತೂಹಲಕಾರಿ ವಿಷಯ ಇಲ್ಲಿದೆ ನೋಡಿ.&amp;nbsp;&lt;/p&gt;&lt;img&gt;&lt;p&gt;ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್&zwnj;ಫೋನ್ ನಮ್ಮ ದೇಹದ ಒಂದು ಭಾಗವೇ ಆಗಿಹೋಗಿದೆ. ಸದಾ ಕಾಲ ಬರುವ ನೋಟಿಫಿಕೇಶನ್&zwnj;ಗಳು ನಮ್ಮನ್ನು ಡಿಜಿಟಲ್ ಲೋಕದಲ್ಲಿ ಬಂಧಿಗಳನ್ನಾಗಿ ಮಾಡುತ್ತಿವೆ. ಆದರೆ, ಈ ನಡುವೆಯೂ ಕೆಲವರು ತಮ್ಮ ಫೋನ್ ಅನ್ನು ಯಾವಾಗಲೂ 'ಸೈಲೆಂಟ್ ಮೋಡ್'ನಲ್ಲಿ ಇಡುತ್ತಾರೆ. ಇಂತಹವರ ವ್ಯಕ್ತಿತ್ವ ಮತ್ತು ಅವರ ಈ ಅಭ್ಯಾಸದ ಹಿಂದಿನ ಮಾನಸಿಕ ಕಾರಣಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಸತತವಾಗಿ ಬರುವ ನೋಟಿಫಿಕೇಶನ್ ಸೌಂಡ್ಸ್ ನಮ್ಮ ಮೆದುಳಿನ ಏಕಾಗ್ರತೆಯನ್ನು ಭಂಗಗೊಳಿಸುತ್ತವೆ. ಒಮ್ಮೆ ಕೆಲಸದ ಮಧ್ಯೆ ಫೋನ್ ನೋಡಿದರೆ, ಮತ್ತೆ ಅದೇ ವೇಗದಲ್ಲಿ ಕೆಲಸ ಆರಂಭಿಸಲು ಮೆದುಳಿಗೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ಫೋನ್ ಸೈಲೆಂಟ್&zwnj;ನಲ್ಲಿಡುವವರು ತಮ್ಮ ಸಮಯ ಮತ್ತು ಮಾನಸಿಕ ಸ್ಥಿತಿಯ ಮೇಲೆ ಪೂರ್ಣ ನಿಯಂತ್ರಣ ಹೊಂದಿರುತ್ತಾರೆ. ಇವರು ಫೋನ್&zwnj;ನ ಸಿಗ್ನಲ್&zwnj;ಗಳಿಗೆ ಬಲಿಯಾಗದೆ, ತಾವು ಯಾವಾಗ ಪ್ರತಿಕ್ರಿಯಿಸಬೇಕು ಎಂಬುದನ್ನು ತಾವೇ ನಿರ್ಧರಿಸುತ್ತಾರೆ. ಇದು ಅವರಲ್ಲಿನ ಆತ್ಮವಿಶ್ವಾಸ ಮತ್ತು ಶಿಸ್ತನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಫೋನ್ ಸೈಲೆಂಟ್&zwnj;ನಲ್ಲಿಡುವ ವ್ಯಕ್ತಿಗಳು ತಮ್ಮ ವೈಯಕ್ತಿಕ ಗಡಿಗಳ (Personal Boundaries) ಬಗ್ಗೆ ಸ್ಪಷ್ಟತೆ ಹೊಂದಿರುತ್ತಾರೆ. ದಿನಕ್ಕೆ ಕೇವಲ ನಾಲ್ಕೈದು ಬಾರಿ ಮಾತ್ರ ಫೋನ್ ಚೆಕ್ ಮಾಡುವ ನಿಯಮವನ್ನು ಇವರು ಪಾಲಿಸಬಹುದು. ಪ್ರತಿ ಸಣ್ಣ ಶಬ್ದಕ್ಕೂ ಪ್ರತಿಕ್ರಿಯಿಸದೆ ತಮ್ಮದೇ ಆದ ಪ್ರಶಾಂತ ಜಗತ್ತಿನಲ್ಲಿ ಇರಲು ಇವರು ಬಯಸುತ್ತಾರೆ. ಇದು ಅವರ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ, ಯಾವುದೇ ವಿಷಯದ ಬಗ್ಗೆ ಆಳವಾಗಿ ಯೋಚಿಸಲು (Deep Work) ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ನೋಟಿಫಿಕೇಶನ್&zwnj;ಗಳು ಅನಗತ್ಯವಾಗಿ ಒತ್ತಡವನ್ನು ಹೆಚ್ಚಿಸುತ್ತವೆ. ಫೋನ್ ನೋಡದಿದ್ದರೆ ಯಾವುದೋ ಮುಖ್ಯ ಮಾಹಿತಿ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಯ (FOMO) ಅನೇಕರನ್ನು ಕಾಡುತ್ತದೆ. ಆದರೆ ಫೋನ್ ಸೈಲೆಂಟ್&zwnj;ನಲ್ಲಿಡುವವರಲ್ಲಿ ಈ ಭಯ ಕಡಿಮೆ ಇರುತ್ತದೆ. ಇವರು ಸಂದೇಶಗಳಿಗೆ ತಕ್ಷಣ ರಿಪ್ಲೈ ನೀಡದಿದ್ದರೂ ಆತಂಕಕ್ಕೆ ಒಳಗಾಗುವುದಿಲ್ಲ. ಇದು ಅವರ ಭಾವನಾತ್ಮಕ ಭದ್ರತೆಯನ್ನು ತೋರಿಸುತ್ತದೆ.&lt;/p&gt;&lt;img&gt;&lt;p&gt;ಬಾಹ್ಯ ಪ್ರಪಂಚದ ಶಬ್ದಗಳನ್ನು ಕಡಿಮೆ ಮಾಡಿದಾಗ ಮಾತ್ರ ಅಂತರಾತ್ಮದ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ. ಫೋನ್ ಸೈಲೆಂಟ್&zwnj;ನಲ್ಲಿಡುವುದು ಕೇವಲ ಒಂದು ಸೆಟ್ಟಿಂಗ್ ಅಲ್ಲ, ಅದು ಒಂದು ಜೀವನಶೈಲಿ. ನಮ್ಮ ಪ್ರಶಾಂತತೆ ನಮ್ಮ ಕೈಯಲ್ಲೇ ಇದೆ ಎಂದು ಇಂತಹ ವ್ಯಕ್ತಿಗಳು ನಿರೂಪಿಸುತ್ತಾರೆ.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/why-people-keep-their-phones-on-silent-v6l2knq"/>
        </item>
        <item>
            <title><![CDATA[ಬಿಸಿ ನೀರು Vs ತಣ್ಣೀರು: ಬಿಸಿಲು ಅಂತ ತಣ್ಣೀರು ಕುಡಿತೀರಾ? ಅದಕ್ಕೂ ಮುನ್ನ ಇದನ್ನ ತಿಳ್ಕೊಳ್ಳಿ]]></title>
            <link>https://kannada.asianetnews.com/gallery/health-life/is-drinking-warm-water-beneficial-during-summer-y2h7e31</link>
            <guid isPermaLink="true">https://kannada.asianetnews.com/gallery/health-life/is-drinking-warm-water-beneficial-during-summer-y2h7e31</guid>
            <pubDate>Wed, 15 Apr 2026 16:43:49 +0530</pubDate>
            <description><![CDATA[&lt;p&gt;Summer hydration tips: ಬೇಸಿಗೆಯ ಧಗಧಗಿಸುವ ಬಿಸಿಲಿನಲ್ಲಿ ತಣ್ಣನೆಯ ನೀರು ಕುಡಿಯುವುದು ಹಿತವೆನಿಸುತ್ತದೆ. ಆದರೆ ಈ ಬೇಸಿಗೆಯಲ್ಲೂ ಬಿಸಿ ನೀರು ಅಥವಾ ಸಾಮಾನ್ಯ ತಾಪಮಾನದ ನೀರು ಕುಡಿಯುವುದರಿಂದ ಆಗುವ ಆರೋಗ್ಯಕರ ಬದಲಾವಣೆಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ..&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2f2x2mnh8s3zr2x4q8gcjkn,imgname-mixcollage-12-aug-2025-05-37-pm-7273-1755000507029.jpg" type="image/jpeg" height="390" width="690"/>
            <content:encoded><![CDATA[&lt;p&gt;Summer hydration tips: ಬೇಸಿಗೆಯ ಧಗಧಗಿಸುವ ಬಿಸಿಲಿನಲ್ಲಿ ತಣ್ಣನೆಯ ನೀರು ಕುಡಿಯುವುದು ಹಿತವೆನಿಸುತ್ತದೆ. ಆದರೆ ಈ ಬೇಸಿಗೆಯಲ್ಲೂ ಬಿಸಿ ನೀರು ಅಥವಾ ಸಾಮಾನ್ಯ ತಾಪಮಾನದ ನೀರು ಕುಡಿಯುವುದರಿಂದ ಆಗುವ ಆರೋಗ್ಯಕರ ಬದಲಾವಣೆಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ..&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ದೇಹವನ್ನು ಹೈಡ್ರೇಟೆಡ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಆದರೆ ಈ ಸಮಯದಲ್ಲಿ ಬಿಸಿ ನೀರು ಕುಡಿಯಲು ಯಾರೂ ಇಷ್ಟಪಡುವುದಿಲ್ಲ, ಬದಲಿಗೆ ಫ್ರಿಜ್&zwnj;ನಲ್ಲಿರುವ ತಣ್ಣೀರು ಅಥವಾ ಐಸ್ ವಾಟರ್ ಕುಡಿಯಲು ಬಯಸುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಯಾವುದು ಉತ್ತಮ? ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;ತಣ್ಣೀರು ಕುಡಿಯುವುದರಿಂದ ಕ್ಷಣಿಕವಾಗಿ ತಂಪಿನ ಅನುಭವ ನೀಡಬಹುದು. ಆದರೆ ಅತಿಯಾದ ತಣ್ಣೀರು ಕುಡಿಯುವುದು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಣ್ಣೀರು ದೇಹದ ಆಂತರಿಕ ತಾಪಮಾನವನ್ನು ತಕ್ಷಣವೇ ಕಡಿಮೆ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಅಜೀರ್ಣ ಸಮಸ್ಯೆಗೆ ಕಾರಣವಾಗಬಹುದು. ವಿಶೇಷವಾಗಿ ಊಟದ ನಂತರ ತಣ್ಣೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಉಗುರುಬೆಚ್ಚಗಿನ ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ. ಬೇಸಿಗೆಯಲ್ಲಾದರೂ ಬೆಳಗ್ಗೆ ಎದ್ದ ತಕ್ಷಣ ಉಗುರುಬೆಚ್ಚಗಿನ ನೀರು ಕುಡಿಯುವುದು ಚಯಾಪಚಯ ಕ್ರಿಯೆಯನ್ನು (Metabolism) ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.&lt;/p&gt;&lt;img&gt;&lt;p&gt;ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಅತಿಯಾದ ತಣ್ಣೀರು ಅಥವಾ ಅತಿಯಾದ ಬಿಸಿ ನೀರಿಗಿಂತ ಸಾಮಾನ್ಯ ತಾಪಮಾನದಲ್ಲಿರುವ (Room Temperature) ನೀರು ಕುಡಿಯುವುದು ಅತ್ಯುತ್ತಮ ಆಯ್ಕೆ. ಇದು ದೇಹವನ್ನು ಸಮತೋಲನದಲ್ಲಿಡುತ್ತದೆ. ವಿಶೇಷವಾಗಿ ಬಿಸಿಲಿನಿಂದ ಬಂದ ತಕ್ಷಣ ಫ್ರಿಜ್ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು.&lt;/p&gt;&lt;img&gt;&lt;p&gt;ನಿರ್ಜಲೀಕರಣ (Dehydration) ತಡೆಯಲು ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯುವುದು ಅವಶ್ಯಕ. ಅತಿಯಾಗಿ ಬೆವರುವವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ನೀರಿನ ಜೊತೆಗೆ ಎಳನೀರು, ಹಣ್ಣಿನ ರಸಗಳ ಸೇವನೆ ಕೂಡ ದೇಹಕ್ಕೆ ತಂಪು ನೀಡುತ್ತದೆ.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/is-drinking-warm-water-beneficial-during-summer-y2h7e31"/>
        </item>
        <item>
            <title><![CDATA[ಬೆಳಗ್ಗೆ ತುಳಸಿ ನೀರು ಕುಡಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?]]></title>
            <link>https://kannada.asianetnews.com/webstories/health-life/7-surprising-benefits-of-drinking-tulsi-water-daily-z0sy83n</link>
            <guid isPermaLink="true">https://kannada.asianetnews.com/webstories/health-life/7-surprising-benefits-of-drinking-tulsi-water-daily-z0sy83n</guid>
            <pubDate>Tue, 14 Apr 2026 18:26:28 +0530</pubDate>
            <description><![CDATA[&lt;p&gt;Benefits of Tulsi water: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಹಾಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j6c3gvb6zmckyrfewzr6dg32,imgname-fotojet--15-.jpg" type="image/jpeg" height="390" width="690"/>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/health-life/7-surprising-benefits-of-drinking-tulsi-water-daily-z0sy83n"/>
        </item>
        <item>
            <title><![CDATA[ಚೂಯಿಂಗ್ ಗಮ್, ಸೋಡಾ ಬಳಸಿ 142 ಕೆಜಿಯಿಂದ 80 ಕೆಜಿಗೆ ತೂಕಕೆ… ಸಾಧ್ಯ ಆಗಿದ್ದು ಹೇಗೆ?]]></title>
            <link>https://kannada.asianetnews.com/health-life/how-this-man-weight-loss-from-142-kg-to-80-kg-with-7-rules/articleshow-zg7qgmf</link>
            <guid isPermaLink="true">https://kannada.asianetnews.com/health-life/how-this-man-weight-loss-from-142-kg-to-80-kg-with-7-rules/articleshow-zg7qgmf</guid>
            <pubDate>Fri, 17 Apr 2026 16:05:07 +0530</pubDate>
            <description><![CDATA[&lt;p&gt;Weight Loss Tips:ಅನೇಕ ಜನರು ಜಿಮ್&zwnj;ಗೆ ಸೇರಿ ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಾರೆ. ಇದು ಹೆಚ್ಚಾಗಿ ತೂಕ ಇಳಿಕೆಗೆ ಕಾರಣವಾಗುತ್ತದೆ, ಆದರೆ ಒಬ್ಬ ವ್ಯಕ್ತಿಯು ಚೂಯಿಂಗ್ ಗಮ್ ತಿನ್ನುತ್ತಾ, ಡಯಟ್ ಕೋಕ್ ಕುಡಿಯುತ್ತಾ ಬರೋಬ್ಬರಿ 60 ಕೆಜಿ ತೂಕ ಇಳಿಸಿದ್ದಾರೆ. ಅದು ಹೇಗೆ ಸಾಧ್ಯ ಆಯ್ತು ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdg2gx9dnr06yncrs19v1rj,imgname-weight-loss-1776422044584.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ತೂಕ ಇಳಿಸಿಕೊಳ್ಳೋದು ಸುಲಭ&lt;/strong&gt;&lt;/h2&gt;&lt;p&gt;ಇಂದಿನ ಕಾಲದಲ್ಲಿ, ತೂಕ ಇಳಿಸಿಕೊಳ್ಳಲು ಜನರು ವಿವಿಧ ಹೊಸ ಟ್ರೆಂಡ್ಸ್ ಅನುಸರಿಸುತ್ತಿದ್ದಾರೆ. ಅನೇಕ ಜನರು ತೂಕ ಇಳಿಸಲು ಜಿಮ್&zwnj;ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಿದ್ದರೆ, ಇನ್ನು ಕೆಲವರು ಕಟ್ಟುನಿಟ್ಟಿನ ಆಹಾರಕ್ರಮಗಳನ್ನು ಅನುಸರಿಸುತ್ತಾರೆ. ಆರೋಗ್ಯ ತಜ್ಞರ ಪ್ರಕಾರ, ತೂಕ ಇಳಿಸುವುದು ಕೇವಲ ಆಹಾರ ಪದ್ಧತಿ ಮತ್ತು ಜಿಮ್&zwnj;ಗೆ ಸೀಮಿತವಾಗಿಲ್ಲ; ಬದಲಾಗಿ, ಸಣ್ಣ ಜೀವನಶೈಲಿಯ ಅಭ್ಯಾಸಗಳು ಸಹ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇಂಟರ್ನೆಟ್&zwnj;ನಲ್ಲಿ ತೂಕ ಇಳಿಸಿಕೊಳ್ಳಲು ನೀವು ಸಾವಿರಾರು ವಿಧಾನಗಳನ್ನು ಕಾಣಬಹುದು, ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿ ಸರಿಯಾದ ಆಹಾರ, ವ್ಯಾಯಾಮ ಮತ್ತು ಕೆಲವು ಅಸಾಂಪ್ರದಾಯಿಕ ಫಿಟ್&zwnj;ನೆಸ್ ಹ್ಯಾಕ್&zwnj; ಕಾಂಬಿನೇಶನ್ ಟ್ರೈ ಮಾಡುವ ಮೂಲಕ ನೈಸರ್ಗಿಕವಾಗಿ 60 ಕಿಲೋಗ್ರಾಂಗಳಷ್ಟು ತೂಕ ಕಳೆದುಕೊಂಡಿರುವ ಬಗ್ಗೆ ತಿಳಿಸಿದ್ದಾರೆ. ಅದರ ಬಗೆಗ್ ತಿಳಿದ್ರೆ ನಿಮಗೂ ಅಚ್ಚರಿಯಾಗಬಹುದು.&lt;/p&gt;&lt;h3&gt;&lt;strong&gt;142 ಕೆಜಿಯಿಂದ 80 ಕೆಜಿಗೆ ಇಳಿಸಿಕೊಂಡ ವ್ಯಕ್ತಿ&lt;/strong&gt;&lt;/h3&gt;&lt;p&gt;ಕುವಾರ್ ಕಪೂರ್ ಎಂಬ ವ್ಯಕ್ತಿ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ತೂಕ ಇಳಿಸಿಕೊಳ್ಳಲು ಕೆಲವು ವಿಶಿಷ್ಟ ಬದಲಾವಣೆಗಳನ್ನು ಜಾರಿಗೆ ತಂದಿದ್ದಾಗಿ ಹಂಚಿಕೊಂಡಿದ್ದಾರೆ, ಇದು ಅವರನ್ನು 142 ಕೆಜಿಯಿಂದ 80 ಕೆಜಿಗೆ ಇಳಿಸಲು ಸಹಾಯ ಮಾಡಿತು. ಇವರು ಅದಕ್ಕಾಗಿ ಬಳಸಿದ್ದು ಡಯಟ್ ಸೋಡಾ. ಜನರು ಸಾಮಾನ್ಯವಾಗಿ ಕೂಲ್ ಡ್ರಿಂಕ್ಸ್ ನಿಂದ ದೂರ ಉಳಿಯಲು ಸಲಹೆ ನೀಡುತ್ತಾರೆ. ಆದರೆ ಈ ವ್ಯಕ್ತಿ ಊಟದ ಜೊತೆಗೆ ಜೀರೋ ಕ್ಯಾಲೋರಿ ಡಯಟ್ ಸೋಡಾ ಸೇವಿಸಿದ್ದಾರೆ. ಆವಾಗ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ, ಇದರಿಂದಾಗಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇಷ್ಟೇ ಅಲ್ಲ, ಶುಗರ್ ಲೆಸ್ ಗಮ್ ಅಗಿಯುವುದು ಸಹ ತೂಕ ನಷ್ಟಕ್ಕೆ ಕೊಡುಗೆ ನೀಡುತ್ತದೆ. ಕುವಾರ್ ಕಪೂರ್ ಪ್ರಕಾರ, ಊಟದ ನಂತರ ಗಮ್ ಅಗಿಯುತ್ತಿದ್ದರೆ, ನಿಮ್ಮ ಮೆದುಳು ನೀವು ಇನ್ನೂ ತಿನ್ನುತ್ತಿದ್ದೀರಿ ಎಂದು ನಂಬುತ್ತದೆಯಂತೆ. ಇದು ಆಗಾಗ್ಗೆ ತಿಂಡಿ ತಿನ್ನುವ ಅಭ್ಯಾಸವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಅನಗತ್ಯ ಕ್ಯಾಲೊರಿಗಳ ಸೇವನೆಯನ್ನು ತಡೆಯುತ್ತದೆ.&lt;/p&gt;&lt;h3&gt;&lt;strong&gt;ಪ್ರೊಟೀನ್ ಗೆ ಆದ್ಯತೆ ನೀಡಿ&lt;/strong&gt;&lt;/h3&gt;&lt;p&gt;ಇನ್ನು ತೂಕ ಇಳಿಸಿಕೊಳ್ಳಲು, ಕುವಾರ್ ಕಪೂರ್ ಫಿಟ್&zwnj;ನೆಸ್ ತಜ್ಞರು ಹೇಳಿರುವ ವಿಧಾನವನ್ನೂ ಸಹ ಅನುಸರಿಸುತ್ತಾರೆ. ಇವುಗಳಲ್ಲಿ &quot;ಪ್ರೋಟೀನ್ ಮೊದಲು&quot; ಎಂಬ ನಿಯಮವೂ ಸೇರಿದೆ: ನಿಮ್ಮ ತಟ್ಟೆಯಲ್ಲಿ ಪ್ರೋಟೀನ್&zwnj;ಗೆ ಆದ್ಯತೆ ನೀಡಿ, ಮತ್ತು ನಂತರ ಮಾತ್ರ ಕಾರ್ಬೋಹೈಡ್ರೇಟ್&zwnj;ಗಳು ಮತ್ತು ಕೊಬ್ಬನ್ನು ಸೇರಿಸಿ. ತಟ್ಟೆಯಲ್ಲಿ ತರಕಾರಿಗಳನ್ನು ಸೇರಿಸುವುದು ಅತ್ಯಗತ್ಯ, ಏಕೆಂದರೆ ಅವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರ ಜೊತೆಗೆ ದಿನವಿಡೀ ಸಣ್ಣ ಚಲನೆಗಳಲ್ಲಿ ತೊಡಗಿಸಿಕೊಳ್ಳುವುದು ಸಹ ಸೇರಿಕೊಂಡಿದೆ.ಇದನ್ನು ನಿರಂತರವಾಗಿ ಮಾಡುತ್ತಾ ಬಂದರೆ ತೂಕ ನಿಧಾನವಾಗಿ ಕಡಿಮೆಯಾಗುತ್ತದೆ.&lt;/p&gt;&lt;h3&gt;&lt;strong&gt;ದೀರ್ಘಕಾಲ ಕುಳಿತುಕೊಳ್ಳುವ ಬದಲು ನಿಂತುಕೊಳ್ಳಿ&lt;/strong&gt;&lt;/h3&gt;&lt;p&gt;ಅದೇ ರೀತಿ, ದೀರ್ಘಕಾಲ ಕುಳಿತುಕೊಳ್ಳುವ ಬದಲು ನಿಲ್ಲುವ ಅಭ್ಯಾಸವನ್ನು ಸಹ ಪ್ರಯೋಜನಕಾರಿ ಎಂದಿದ್ದಾರೆ ಕುವಾರ್ ಕಪೂರ್. ನೀವು ನಿಮ್ಮ ಸ್ಕ್ರೀನ್ ಸಮಯದ ಒಂದು ಭಾಗವನ್ನು ನಿಂತುಕೊಂಡು ಕಳೆದರೆ, ನಿಮ್ಮ ದೇಹವು ಹೆಚ್ಚಿನ ಶಕ್ತಿಯನ್ನು ವ್ಯಯಿಸುತ್ತದೆ, ಇದರಿಂದಾಗಿ ಕ್ಯಾಲೊರಿ ವೆಚ್ಚವು ಕ್ರಮೇಣ ಹೆಚ್ಚಾಗುತ್ತದೆ. ಇದಲ್ಲದೆ, ಅವರು &quot;3-2-1 ನಿಯಮ&quot;ವನ್ನು ಹೆಚ್ಚು ಪರಿಣಾಮಕಾರಿ ಎಂದು ವಿವರಿಸಿದ್ದಾರೆ. ಈ ನಿಯಮದ ಪ್ರಕಾರ, ಒಬ್ಬರು ಮಲಗುವ ಸಮಯಕ್ಕೆ ಮೂರು ಗಂಟೆಗಳ ಮೊದಲು ಊಟವನ್ನು ಮುಗಿಸಬೇಕು, ಎರಡು ಗಂಟೆಗಳ ಮೊದಲು ದ್ರವ ಸೇವನೆಯನ್ನು ಕಡಿಮೆ ಮಾಡಬೇಕು ಮತ್ತು ನಿದ್ರೆಗೆ ಹೋಗುವ ಒಂದು ಗಂಟೆ ಮೊದಲು ಸ್ಕ್ರೀನ್&zwnj;ಗಳಿಂದ ಸಂಪರ್ಕ ಕಡಿತಗೊಳಿಸಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.&lt;/p&gt;&lt;h2&gt;&lt;strong&gt;ಡೈಜೆಶನ್ ವಾಕ್&lt;/strong&gt;&lt;/h2&gt;&lt;p&gt;ಕೊನೆಯದಾಗಿ, ಅವರು &quot;ಡೈಜೆಶನ್ ವಾಕ್&rsquo; ಬೆಸ್ಟ್. ಅಂದರೆ ಊಟದ ನಂತರ ಐದು ನಿಮಿಷಗಳ ಚುರುಕಾದ ನಡಿಗೆ. ಇದು ದೇಹವು ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಸಮತೋಲಿತ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದರಿಂದಾಗಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Kuwar Kapur (@fitnessbykuwar)&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>health-life</category>
            <dc:creator>Pavna Das</dc:creator>
            <atom:link href="https://kannada.asianetnews.com/health-life/how-this-man-weight-loss-from-142-kg-to-80-kg-with-7-rules/articleshow-zg7qgmf"/>
        </item>
    </channel>
</rss>
