<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 08 Jul 2026 18:27:26 +0530</lastBuildDate>
        <atom:link href="https://kannada.asianetnews.com/rss/health-life" rel="self" type="application/rss+xml"/>
        <item>
            <title><![CDATA[ಬೆಳಗ್ಗೆ ನೋಡಿದ್ರೆ 57 ವರ್ಷದವ, ಮಧ್ಯಾಹ್ನಕ್ಕೆ 25ರ ಯುವಕನಂತೆ ಬಿಂದಾಸ್ ಆಗಿರುವ ವ್ಯಕ್ತಿಯ ವಿಡಿಯೋ ವೈರಲ್]]></title>
            <link>https://kannada.asianetnews.com/viral/57-in-the-morning-25-by-afternoon-the-viral-secret-of-this-mans-shocking-youthful-transformation/articleshow-3di3s4p</link>
            <guid isPermaLink="true">https://kannada.asianetnews.com/viral/57-in-the-morning-25-by-afternoon-the-viral-secret-of-this-mans-shocking-youthful-transformation/articleshow-3di3s4p</guid>
            <pubDate>Sun, 05 Jul 2026 15:23:05 +0530</pubDate>
            <description><![CDATA[&lt;p&gt;&lt;strong&gt;Viral transformation video: &lt;/strong&gt;ವಯಸ್ಸಾಗುವುದು ಪ್ರಕೃತಿ ನಿಯಮ, ಆದರೆ ಅದನ್ನು ಮೀರಿ ನಿಂತಿರುವ 57 ವರ್ಷದ ವ್ಯಕ್ತಿಯ ಕಥೆ ಈಗ ಇಂಟರ್ನೆಟ್&zwnj;ನಲ್ಲಿ ಸಂಚಲನ ಮೂಡಿಸಿದೆ. ಬೆಳಗ್ಗೆ 57ರ ವಯೋವೃದ್ಧನಂತೆ ಕಾಣುವ ಈ ವ್ಯಕ್ತಿ, ಮಧ್ಯಾಹ್ನವಾಗುವಷ್ಟರಲ್ಲಿ 25ರ ಯುವಕನಾಗಿ ಹೇಗೆ ಬದಲಾಗುತ್ತಾರೆ? ಸರ್ಜರಿ ಇಲ್ಲದೆ ಯೌವನ ಕಾಪಾಡಿಕೊಳ್ಳುವ ಈ ವ್ಯಕ್ತಿಯ ರಹಸ್ಯ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwrv14g5sm2sc63cre55npk3,imgname-thumbnail--84--1783245083141.jpg" type="image/jpeg" height="390" width="690"/>
            <content:encoded><![CDATA[&lt;p&gt;&quot;ವಯಸ್ಸು ಕೇವಲ ಒಂದು ಸಂಖ್ಯೆ&quot; ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಅದನ್ನು ಕಣ್ಣಿಗೆ ಕಟ್ಟುವಂತೆ ಸಾಬೀತುಪಡಿಸುವುದು ಸುಲಭದ ಮಾತಲ್ಲ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 57 ವರ್ಷದ ವ್ಯಕ್ತಿಯೊಬ್ಬರ ವಿಡಿಯೋ ಈ ಮಾತಿಗೆ ಹೊಸ ಅರ್ಥ ನೀಡಿದೆ. ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಕೃತಕ ಚಿಕಿತ್ಸೆಗಳಿಲ್ಲದೆ, ಕೇವಲ ಶಿಸ್ತಿನ ಜೀವನಶೈಲಿ ಮತ್ತು ಅಚ್ಚುಕಟ್ಟಾದ ಚರ್ಮದ ಆರೈಕೆಯ ಮೂಲಕ ಈ ವ್ಯಕ್ತಿ 25 ವರ್ಷದ ಯುವಕನಂತೆ ಕಾಣುವ ಮೂಲಕ ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದ್ದಾರೆ. ಅವರ ಈ ಆಘಾತಕಾರಿ ರೂಪಾಂತರದ ಹಿಂದೆ ಅಡಗಿರುವ ರಹಸ್ಯಗಳನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಚೇರಿ, ದೊಡ್ಡ ಬಂಡವಾಳ ಏನೂ ಇಲ್ಲ.. ಅಂದು Zomato ರೈಡರ್ ಈಗ ಬೆಂಗಳೂರಿನ ಎಐ ಕಂಪನಿಯ ಸಿಇಒ&lt;/strong&gt;&lt;/p&gt;&lt;h2&gt;&lt;strong&gt;25 ವರ್ಷದ ಕಾಲೇಜು ಯುವಕನಂತೆ ಪ್ರತ್ಯಕ್ಷ&lt;/strong&gt;&lt;/h2&gt;&lt;p&gt;ಈ ವೈರಲ್ ವಿಡಿಯೋದ ವಿಶೇಷತೆಯೆಂದರೆ, ಆ ವ್ಯಕ್ತಿ ಬೆಳಗ್ಗೆ ನಿದ್ರೆಯಿಂದ ಎದ್ದಾಗ ಅಪ್ಪಟ 57 ವರ್ಷದ ವೃದ್ಧನಂತೆ ಕಾಣುತ್ತಾರೆ. ಬೆಳಗ್ಗೆ ಅವರ ಮುಖ ದಣಿದಿರುತ್ತದೆ, ಕೂದಲು ಹರಡಿಕೊಂಡಿರುತ್ತದೆ ಮತ್ತು ಚರ್ಮದ ಮೇಲೆ ವಯಸ್ಸಾದ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಆದರೆ, ಅವರು ತಮ್ಮ ಚರ್ಮದ ಆರೈಕೆ (Skincare Routine) ಮತ್ತು ಸೌಂದರ್ಯ ವರ್ಧಕಗಳ ಬಳಕೆಯನ್ನು ಆರಂಭಿಸಿದ ತಕ್ಷಣ ಪವಾಡದಂತೆ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಮುಖದ ಮೇಲೆ ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮೊಯಿಶ್ಚರೈಸಿಂಗ್ ಹಂತಗಳನ್ನು ಮುಗಿಸಿ, ವಿಶೇಷ ಸೀರಮ್&zwnj;ಗಳನ್ನು ಹಚ್ಚಿದ ನಂತರ ಅವರ ಚರ್ಮವು ಗಾಜಿನಂತೆ ಹೊಳೆಯಲು ಪ್ರಾರಂಭಿಸುತ್ತದೆ. ಅಂತಿಮವಾಗಿ ಅವರು ಸ್ಟೈಲಿಶ್ ವಿಗ್ ಧರಿಸಿ, ಆಕರ್ಷಕ ಬಟ್ಟೆ ತೊಟ್ಟು ಕೆಮರಾದ ಮುಂದೆ ಬಂದಾಗ, 25 ವರ್ಷದ ಕಾಲೇಜು ಯುವಕ ಪ್ರತ್ಯಕ್ಷನಾದಂತೆ ಭಾಸವಾಗುತ್ತದೆ.&lt;/p&gt;&lt;h2&gt;&lt;strong&gt;ಇದೇ ನೋಡಿ ಆ ನಾಲ್ಕು ಪ್ರಮುಖ ರಹಸ್ಯ&lt;/strong&gt;&lt;/h2&gt;&lt;p&gt;ಈ ಅದ್ಭುತ ಯೌವನದ ಹಿಂದೆ ನಾಲ್ಕು ಪ್ರಮುಖ ರಹಸ್ಯಗಳಿವೆ. ಮೊದಲನೆಯದಾಗಿ, ಕಟ್ಟುನಿಟ್ಟಿನ ಸ್ಕಿನ್&zwnj;ಕೇರ್. ಅವರು ಚರ್ಮವನ್ನು ಹೈಡ್ರೇಟ್ ಆಗಿಡಲು ಮತ್ತು ಸೂರ್ಯನ ಕಿರಣಗಳಿಂದ ರಕ್ಷಿಸಲು ಸನ್&zwnj;ಸ್ಕ್ರೀನ್ ಅನ್ನು ತಪ್ಪದೇ ಬಳಸುತ್ತಾರೆ. ಇದು ಚರ್ಮದ ಮೇಲೆ ಸುಕ್ಕುಗಳು ಬರದಂತೆ ತಡೆಯುತ್ತದೆ. ಎರಡನೆಯದಾಗಿ, ಆಂಟಿ-ಆಕ್ಸಿಡೆಂಟ್ ಸಮೃದ್ಧವಾಗಿರುವ ಆಹಾರ ಪದ್ಧತಿ. ಹಣ್ಣುಗಳು, ಹಸಿರು ತರಕಾರಿಗಳು ಮತ್ತು ಸಾವಯವ ಆಹಾರವು ಅವರ ದೇಹಕ್ಕೆ ಒಳಗಿನಿಂದ ಪೋಷಣೆ ನೀಡುತ್ತದೆ. ಮೂರನೆಯದಾಗಿ, ದೈಹಿಕ ವ್ಯಾಯಾಮ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡುವುದರಿಂದ ದೇಹದ ರಕ್ತ ಸಂಚಾರ ಸುಧಾರಿಸಿ ಮುಖದಲ್ಲಿ ನೈಸರ್ಗಿಕ ಕಾಂತಿ ಉಂಟಾಗುತ್ತದೆ. ಕೊನೆಯದಾಗಿ, ಮಾನಸಿಕ ನೆಮ್ಮದಿ ಮತ್ತು ಸಮರ್ಪಕ ನಿದ್ರೆ. ಒತ್ತಡ ಮುಕ್ತ ಜೀವನಶೈಲಿಯು ಜೀವಕೋಶಗಳ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಎಂದು ಅವರು ನಂಬುತ್ತಾರೆ.&lt;/p&gt;&lt;h2&gt;&lt;strong&gt;ಈ ವ್ಯಕ್ತಿಯೇ ಉದಾಹರಣೆ&lt;/strong&gt;&lt;/h2&gt;&lt;p&gt;ಈ ಶಾಕಿಂಗ್ ಬದಲಾವಣೆಯನ್ನು ಕಂಡು ನೆಟ್ಟಿಗರು ಇವರನ್ನು ರಿಯಲ್ ಲೈಫ್ &quot;ಬೆಂಜಮಿನ್ ಬಟನ್&quot; (ವಯಸ್ಸು ಹಿಂದೆ ಸರಿಯುವ ಪಾತ್ರ) ಎಂದು ಕರೆಯುತ್ತಿದ್ದಾರೆ. ಈ ವೈರಲ್ ಸ್ಟೋರಿ ನಮಗೆ ಹೇಳುವುದು ಒಂದೇ.. ವಯಸ್ಸಾಗುವುದು ಪ್ರಕೃತಿ ನಿಯಮವಾದರೂ, ಸರಿಯಾದ ಜೀವನಶೈಲಿ ಮತ್ತು ನಮ್ಮ ಬಗ್ಗೆ ನಾವು ತೆಗೆದುಕೊಳ್ಳುವ ಕಾಳಜಿಯಿಂದ ವೃದ್ಧಾಪ್ಯವನ್ನು ದೀರ್ಘಕಾಲದವರೆಗೆ ಮುಂದೂಡಬಹುದು. ಆ ಮೂಲಕ ನಾವು ಯಾವಾಗಲೂ ಉತ್ಸಾಹಿ ಯುವಕರಂತೆ ಕಾಣಬಹುದು ಎಂಬುದಕ್ಕೆ ಈ ವ್ಯಕ್ತಿ ಶ್ರೇಷ್ಠ ಉದಾಹರಣೆಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಇಲ್ಲಿದೆ ನೋಡಿ ವೈರಲ್ ವಿಡಿಯೋ&lt;/strong&gt;&lt;/h3&gt;&lt;p&gt;这段视频火了：&ldquo;男人要是好好打理仪表，竟然能改变到这种程度&rdquo;。网友评论：&ldquo;哥们刚醒来时57岁，途中变成了25岁。&rdquo; pic.twitter.com/qfWgioLo6A&lt;/p&gt;&lt;p&gt;&mdash; iPaul (@iPaulCanada) July 4, 2026&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/57-in-the-morning-25-by-afternoon-the-viral-secret-of-this-mans-shocking-youthful-transformation/articleshow-3di3s4p"/>
        </item>
        <item>
            <title><![CDATA[Shapoor Zadran: 2015ರ ಏಕದಿನ ವಿಶ್ವಕಪ್‌ನಲ್ಲಿ ಧೋನಿ ವಿಕೆಟ್‌ ಉರುಳಿಸಿದ್ದ ಅಫ್ಘನ್‌ ಸ್ಟಾರ್‌ ವೇಗಿ ಅಪರೂಪದ HLH ಕಾಯಿಲೆಗೆ ಬಲಿ!]]></title>
            <link>https://kannada.asianetnews.com/cricket-sports/shapoor-zadran-afghanistan-cricketer-dies-38-rare-hlh-disease-dhoni-wicket-san/articleshow-4kry6e0</link>
            <guid isPermaLink="true">https://kannada.asianetnews.com/cricket-sports/shapoor-zadran-afghanistan-cricketer-dies-38-rare-hlh-disease-dhoni-wicket-san/articleshow-4kry6e0</guid>
            <pubDate>Tue, 07 Jul 2026 16:30:58 +0530</pubDate>
            <description><![CDATA[&lt;p&gt;ಅಫ್ಘಾನಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಪೂರ್ ಜದ್ರಾನ್ (38) ಅವರು 'ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್' (HLH) ಎಂಬ ಅಪರೂಪದ ಕಾಯಿಲೆಯಿಂದ ದೆಹಲಿಯಲ್ಲಿ ನಿಧನರಾಗಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy3kgxxvy1eckf22fncj73d,imgname-shapoor-zadran-1783421846461.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7):&lt;/strong&gt; ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಅಫ್ಘಾನಿಸ್ತಾನ ತಂಡವು ಶಕ್ತಿಯುತವಾಗಿ ಬೆಳೆದು ನಿಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರಂಭಿಕ ದಿನಗಳ ಸ್ಟಾರ್&zwnj; ವೇಗದ ಬೌಲರ್ ಶಾಪೂರ್ ಜದ್ರಾನ್ (Shapoor Zadran) ಅವರು ಜು.7ರಂದು ನಿಧನರಾಗಿದ್ದಾರೆ. ಅವರಿಗೆ ಕೇವಲ 38 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ 'ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್' (HLH) ಎಂಬ ಅತ್ಯಂತ ಅಪರೂಪದ ಮತ್ತು ಪ್ರಾಣಾಪಾಯ ಉಂಟುಮಾಡುವ ರೋಗನಿರೋಧಕ ಶಕ್ತಿಯ ಅಸ್ವಸ್ಥತೆಯಿಂದ (Immune Disorder) ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ತಮ್ಮ 39ನೇ ಜನ್ಮದಿನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಶಾಪೂರ್ ಜದ್ರಾನ್ ವಿಧಿವಶರಾಗಿದ್ದು, ಅವರ ಸಹೋದರ ಹಾಗೂ ಅಫ್ಘಾನಿಸ್ತಾನದ ಮಾಜಿ ಕ್ರಿಕೆಟಿಗ ದವ್ಲತ್ ಜದ್ರಾನ್ ಭಾವುಕರಾಗಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. &quot;ನನ್ನ ಪ್ರೀತಿಯ ಗೆಳೆಯ ಮತ್ತು ಸಹೋದರ ಶಾಪೂರ್ ಜದ್ರಾನ್ ಅಗಲಿಕೆಯಿಂದ ನನ್ನ ಹೃದಯ ಒಡೆದುಹೋಗಿದೆ. ಈ ನಷ್ಟವನ್ನು ವ್ಯಕ್ತಪಡಿಸಲು ನನಗೆ ಪದಗಳೇ ಸಿಗುತ್ತಿಲ್ಲ,&quot; ಎಂದು ಅವರು ಕಣ್ಣೀರಿಟ್ಟಿದ್ದಾರೆ.&lt;/p&gt;&lt;p&gt;ಶಾಪೂರ್ ಜದ್ರಾನ್ ಅವರ ಸಾವಿಗೆ 'ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್' (HLH) ಎಂಬ ಅಪರೂಪದ ರಕ್ತ ಮತ್ತು ರೋಗನಿರೋಧಕ ಶಕ್ತಿಯ ಅಸ್ವಸ್ಥತೆ ಕಾರಣವಾಗಿದೆ. ಈ ಕಾಯಿಲೆಯಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆಯು ಅತಿಯಾಗಿ ಸಕ್ರಿಯಗೊಂಡು, ಬಿಳಿ ರಕ್ತಕಣಗಳು ದೇಹದ ಸ್ವಂತ ಆರೋಗ್ಯಕರ ಜೀವಕೋಶಗಳು ಮತ್ತು ಅಂಗಾಂಗಗಳ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸುತ್ತವೆ. ಕುಟುಂಬದ ಮೂಲಗಳ ಪ್ರಕಾರ, ಈ ಕಾಯಿಲೆಯ ನಡುವೆಯೇ ಅವರಿಗೆ ತೀವ್ರವಾದ ಸೋಂಕು (Infection) ತಗುಲಿ ಅದು ಮೆದುಳಿಗೆ ಹರಡಿತ್ತು. ಇದು ಅವರ ಲಿವರ್&zwnj;ನಲ್ಲಿ ತೊಂದರೆ ಸೃಷ್ಟಿಸಿತ್ತು.&lt;/p&gt;&lt;p&gt;ಜದ್ರಾನ್ ಅವರ ಆರೋಗ್ಯ ಸಮಸ್ಯೆಗಳು 2025 ರ ಅಕ್ಟೋಬರ್&zwnj;ನಲ್ಲಿ ಅಫ್ಘಾನಿಸ್ತಾನದಲ್ಲಿದ್ದಾಗಲೇ ಆರಂಭವಾಗಿದ್ದವು. ಅಲ್ಲಿನ ವೈದ್ಯರು ವಿದೇಶದಲ್ಲಿ ಉತ್ತಮ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದರು. ಅದರಂತೆ, 2026 ರ ಜನವರಿಯಲ್ಲಿ ಅವರು ತಮ್ಮ ಕುಟುಂಬ ಹಾಗೂ ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಅಸ್ಘರ್ ಅಫ್ಘಾನ್ ಅವರೊಂದಿಗೆ ನವದೆಹಲಿಗೆ ಆಗಮಿಸಿದ್ದರು. ಇಲ್ಲಿನ ಆಸ್ಪತ್ರೆಯಲ್ಲಿ ಮೂಳೆ ಮಜ್ಜೆ ಪರೀಕ್ಷೆ (Bone Marrow Examination) ನಡೆಸಿದಾಗ ಅವರಿಗೆ ಕೊನೆಯ ಹಂತದ HLH ಇರುವುದು ದೃಢಪಟ್ಟಿತ್ತು. ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ, ಕೇವಲ 20 ದಿನಗಳ ನಂತರ ಸೋಂಕು ಮತ್ತೆ ಮರುಕಳಿಸಿದ್ದರಿಂದ ಅವರನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿತ್ತು. ಆದರೆ ವೈದ್ಯರ ಸತತ ಪ್ರಯತ್ನಗಳ ನಡುವೆಯೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸಿದ್ದಾರೆ.&lt;/p&gt;&lt;h2&gt;&lt;strong&gt;ಯುದ್ಧದ ನೆರಳಿನಲ್ಲಿ ಕಳೆದ ಬಾಲ್ಯ; ಪಾಕಿಸ್ತಾನದ ನಿರಾಶ್ರಿತ ಶಿಬಿರದಲ್ಲಿ ಕ್ರಿಕೆಟ್ ಅಭ್ಯಾಸ&lt;/strong&gt;&lt;/h2&gt;&lt;p&gt;ಶಾಪೂರ್ ಜದ್ರಾನ್ 1987 ಜುಲೈ 8 ರಂದು ಅಫ್ಘಾನಿಸ್ತಾನದ ಲೋಗರ್ ಪ್ರಾಂತ್ಯದಲ್ಲಿ ಜನಿಸಿದರು. ಇವರ ಬಾಲ್ಯವು ತಾಯ್ನಾಡಿನ ಭೀಕರ ಯುದ್ಧ ಮತ್ತು ಸಂಘರ್ಷಗಳ ನೆರಳಿನಲ್ಲೇ ಕಳೆಯಿತು. ಭದ್ರತೆಯ ಕಾರಣಕ್ಕಾಗಿ ಇವರ ಕುಟುಂಬವು ದೇಶ ತೊರೆದು ಪಾಕಿಸ್ತಾನದ ಪೇಶಾವರದಲ್ಲಿ ನಿರಾಶ್ರಿತರಾಗಿ (Refugees) ಆಶ್ರಯ ಪಡೆಯಬೇಕಾಯಿತು. ಪೇಶಾವರದಲ್ಲೇ ಜದ್ರಾನ್ ಕ್ರಿಕೆಟ್ ಜಗತ್ತನ್ನು ಪರಿಚಯಿಸಿಕೊಂಡರು. 2001 ರ ಸುಮಾರಿಗೆ ಹಾರ್ಡ್-ಬಾಲ್ ಕ್ರಿಕೆಟ್ ಆಡಲು ಪ್ರಾರಂಭಿಸಿದ ಅವರು, ಪೇಶಾವರದ ಅರ್ಬಾಬ್ ನಿಯಾಜ್ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನದ ಮುಂದಿನ ತಾರೆಗಳಾದ ಮೊಹಮ್ಮದ್ ನಬಿ ಮತ್ತು ಅಸ್ಘರ್ ಅಫ್ಘಾನ್ ಅವರೊಂದಿಗೆ ತಮ್ಮ ಬೌಲಿಂಗ್ ಕೌಶಲ್ಯವನ್ನು ಬೆಳೆಸಿಕೊಂಡರು.&lt;/p&gt;&lt;p&gt;ಆರಂಭದಲ್ಲಿ ಪಾಕಿಸ್ತಾನ ತಂಡದ ಪರ ಆಡಬೇಕೆಂಬ ಕನಸು ಕಂಡಿದ್ದ ಜದ್ರಾನ್ ಅವರಿಗೆ, ಅಫ್ಘಾನಿಸ್ತಾನದ ಕೋಚ್ ಇಕ್ಬಾಲ್ ಸಿಕಂದರ್ ಅವರು ಪ್ರೇರಣೆ ನೀಡಿ ಅಫ್ಘಾನಿಸ್ತಾನದ ಉದಯೋನ್ಮುಖ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಳಿಸಿದರು. ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಅವರನ್ನು ಆರಾಧ್ಯ ದೈವವಾಗಿ ಸ್ವೀಕರಿಸಿದ್ದ ಜದ್ರಾನ್, ಅವರಂತೆಯೇ ಉದ್ದನೆಯ ಕೂದಲು ಬಿಟ್ಟು, ಮೈದಾನದಲ್ಲಿ ಉಗ್ರ ಆಕ್ರಮಣಕಾರಿ ಬೌಲಿಂಗ್ ಮತ್ತು ಆವೇಶದ ಸಂಭ್ರಮಾಚರಣೆಗೆ ಹೆಸರಾಗಿದ್ದರು.&lt;/p&gt;&lt;h2&gt;&lt;strong&gt;2015 ರ ವಿಶ್ವಕಪ್&zwnj;ನ ಐತಿಹಾಸಿಕ ವಿಜಯ ಮತ್ತು ಸ್ಮರಣೀಯ ಕ್ಷಣಗಳು&lt;/strong&gt;&lt;/h2&gt;&lt;p&gt;ಅಫ್ಘಾನಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಶಾಪೂರ್ ಜದ್ರಾನ್ ಹೆಸರು ಎಂದಿಗೂ ಅಮರ. ಟೀಮ್&zwnj; ಇಂಡಿಯಾ ವಿರುದ್ಧದ ವಿಶ್ವಕಪ್&zwnj; ಅಭ್ಯಾಸ ಪಂದ್ಯದಲ್ಲಿ ಎಂಎಸ್ ಧೋನಿ ವಿಕೆಟ್&zwnj; ಉರುಳಿಸುವ ಮೂಲಕ ಗಮನಸೆಳೆದಿದ್ದರು. ಆ ಬಳಿಕ ಸ್ಕಾಟ್ಲೆಂಡ್&zwnj; ವಿರುದ್ಧ ಡುನೆಡಿನ್&zwnj;ನಲ್ಲಿ ನಡೆದ ಪಂದ್ಯದಲ್ಲಿ ಅವರು 38 ರನ್ನಿಗೆ 4 ವಿಕೆಟ್ ಕಿತ್ತು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು.ಅಷ್ಟೇ ಅಲ್ಲದೆ, ಅಂತಿಮವಾಗಿ ತಂಡಕ್ಕೆ ಜಯದ ಅಗತ್ಯವಿದ್ದಾಗ 11ನೇ ಬ್ಯಾಟರ್ ಆಗಿ ಕ್ರೀಸ್&zwnj;ಗೆ ಬಂದ ಜದ್ರಾನ್, ಐತಿಹಾಸಿಕ ವಿನ್ನಿಂಗ್ ಬೌಂಡರಿ ಬಾರಿಸುವ ಮೂಲಕ ಅಫ್ಘಾನಿಸ್ತಾನಕ್ಕೆ ವಿಶ್ವಕಪ್ ಇತಿಹಾಸದಲ್ಲೇ &lsquo;ಮೊದಲ ವಿಜಯ&rsquo; ತಂದುಕೊಟ್ಟಿದ್ದರು. ಆ ಗೆಲುವಿನ ಸಂಭ್ರಮದಲ್ಲಿ ಅವರು ಮೈದಾನದಲ್ಲೇ ಮಲಗಿ ಸಂಭ್ರಮಿಸಿದ್ದು ಕ್ರಿಕೆಟ್ ಲೋಕದ ಅತ್ಯಂತ ಐಕಾನ್ ಚಿತ್ರಗಳಲ್ಲಿ ಒಂದಾಗಿದೆ.&lt;/p&gt;&lt;p&gt;ಇದಕ್ಕೂ ಮುನ್ನ, 2010 ರ ಟಿ20 ವಿಶ್ವಕಪ್&zwnj;ನಲ್ಲಿ ಭಾರತದ ಬಲಿಷ್ಠ ಬ್ಯಾಟರ್&zwnj;ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರ ವಿಕೆಟ್ ಕಿತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದರು. 2012 ರ ಟಿ20 ವಿಶ್ವಕಪ್&zwnj;ನಲ್ಲಿ ಗುಲ್ಬದಿನ್ ನೈಬ್ ಜೊತೆಗೂಡಿ 9ನೇ ವಿಕೆಟ್&zwnj;ಗೆ 44 ರನ್&zwnj;ಗಳ ಪ್ರಮುಖ ಜೊತೆಯಾಟವಾಡಿ ತಮ್ಮ ಬ್ಯಾಟಿಂಗ್ ಹೋರಾಟವನ್ನೂ ಪ್ರದರ್ಶಿಸಿದ್ದರು. 2018 ರ ಟಿ20 ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ 40 ರನ್ನಿಗೆ 3 ವಿಕೆಟ್ ಪಡೆದಿದ್ದು ಅವರ ಮತ್ತೊಂದು ಸ್ಮರಣೀಯ ಪ್ರದರ್ಶನವಾಗಿತ್ತು.&lt;/p&gt;&lt;h2&gt;&lt;strong&gt;22 ವರ್ಷಗಳ ಕ್ರಿಕೆಟ್ ಪಯಣ ಮತ್ತು ಅಂಕಿ-ಅಂಶಗಳು&lt;/strong&gt;&lt;/h2&gt;&lt;p&gt;ಅಫ್ಘಾನಿಸ್ತಾನ ತಂಡವು ಐಸಿಸಿ ಕ್ವಾಲಿಫೈಯಿಂಗ್ ಟೂರ್ನಿಗಳಿಂದ ಹಿಡಿದು ಇವತ್ತು ಜಾಗತಿಕ ಕ್ರಿಕೆಟ್&zwnj;ನ ಬಲಿಷ್ಠ ಶಕ್ತಿಯಾಗಿ ಬೆಳೆಯುವವರೆಗಿನ 22 ವರ್ಷಗಳ ಸುದೀರ್ಘ ಕ್ರಿಕೆಟ್ ಪ್ರಯಾಣದಲ್ಲಿ ಶಾಪೂರ್ ಜದ್ರಾನ್ ಜೊತೆಯಾಗಿದ್ದರು. 6 ಅಡಿ ಎತ್ತರದ ಈ ಎಡಗೈ ಎಕ್ಸ್&zwnj;ಪ್ರೆಸ್ ವೇಗಿ ದೇಶದ ಪರ ಒಟ್ಟು 80 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ 80 ವಿಕೆಟ್&zwnj;ಗಳನ್ನು ಕಬಳಿಸಿದ್ದಾರೆ. 2025 ರ ಜನವರಿಯಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್&zwnj;ಗೆ ಅಧಿಕೃತ ನಿವೃತ್ತಿ ಘೋಷಿಸಿದ್ದರು.&lt;/p&gt;&lt;p&gt;&lt;strong&gt;ಏಕದಿನ ಕ್ರಿಕೆಟ್ (ODI): &lt;/strong&gt;2009 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 24 ರನ್ನಿಗೆ 4 ವಿಕೆಟ್ ಪಡೆಯುವ ಮೂಲಕ ಭರ್ಜರಿ ಪದಾರ್ಪಣೆ ಮಾಡಿದ್ದ ಅವರು, ಒಟ್ಟು 44 ಒನ್&zwnj;ಡೇ ಪಂದ್ಯಗಳಿಂದ 44 ವಿಕೆಟ್ ಪಡೆದಿದ್ದಾರೆ. 2015 ರ ವಿಶ್ವಕಪ್&zwnj;ನಲ್ಲಿ 10 ವಿಕೆಟ್ ಪಡೆಯುವ ಮೂಲಕ ಅಫ್ಘಾನಿಸ್ತಾನದ ಪರ ಗರಿಷ್ಠ ವಿಕೆಟ್ ಟೇಕರ್ ಆಗಿದ್ದರು.&lt;/p&gt;&lt;p&gt;&lt;strong&gt;ಟಿ20 ಅಂತರರಾಷ್ಟ್ರೀಯ (T20I):&lt;/strong&gt; ಒಟ್ಟು 36 ಪಂದ್ಯಗಳನ್ನಾಡಿರುವ ಜದ್ರಾನ್ 37 ವಿಕೆಟ್&zwnj;ಗಳನ್ನು ಕಬಳಿಸಿದ್ದಾರೆ. ಅವರು ಮೂರು ಟಿ20 ವಿಶ್ವಕಪ್&zwnj;ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದು, 2009 ರ ಎಸಿಸಿ ಟಿ20 ಕಪ್ ಗೆದ್ದ ಅಫ್ಘಾನ್ ತಂಡದ ಪ್ರಮುಖ ಸದಸ್ಯರಾಗಿದ್ದರು.&lt;/p&gt;&lt;p&gt;ಅಫ್ಘಾನಿಸ್ತಾನ ಕ್ರಿಕೆಟ್ ಕಡು ಕಷ್ಟದ ದಿನಗಳಲ್ಲಿದ್ದಾಗ ತನ್ನ ಆಕ್ರಮಣಕಾರಿ ಬೌಲಿಂಗ್ ಹಾಗೂ ಅಪ್ರತಿಮ ದೇಶಪ್ರೇಮದ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಧ್ವಜ ಎತ್ತಿಹಿಡಿದಿದ್ದ ಶಾಪೂರ್ ಜದ್ರಾನ್ ಅವರ ಅಕಾಲಿಕ ನಿಧನಕ್ಕೆ ಇಡೀ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>health-life</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/shapoor-zadran-afghanistan-cricketer-dies-38-rare-hlh-disease-dhoni-wicket-san/articleshow-4kry6e0"/>
        </item>
        <item>
            <title><![CDATA[ಗಂಡ ತುಂಬಾ ಒಳ್ಳೆಯವ, ಆದ್ರೆ ತುಂಬಾ ಗೊರಕೆ ಹೊಡೀತಾನೆ: ಡಿವೋರ್ಸ್​ ಕೋರಿ ಪತ್ನಿ ಹೈಕೋರ್ಟ್​ ಮೊರೆ]]></title>
            <link>https://kannada.asianetnews.com/gallery/health-life/bhopal-wife-driven-to-despair-by-husband-snoring-decides-to-get-a-divorce-suc-9gqvh8c</link>
            <guid isPermaLink="true">https://kannada.asianetnews.com/gallery/health-life/bhopal-wife-driven-to-despair-by-husband-snoring-decides-to-get-a-divorce-suc-9gqvh8c</guid>
            <pubDate>Fri, 03 Jul 2026 16:45:30 +0530</pubDate>
            <description><![CDATA[&lt;p&gt;ಭೋಪಾಲ್&zwnj;ನಲ್ಲಿ ಗಂಡನ ತೀವ್ರ ಗೊರಕೆಯಿಂದ ಬೇಸತ್ತ ಪತ್ನಿ ವಿಚ್ಛೇದನಕ್ಕೆ ಮುಂದಾದ ನೈಜ ಘಟನೆಯನ್ನು ಈ ಲೇಖನ ವಿವರಿಸುತ್ತದೆ. ಗೊರಕೆಯು ಕೇವಲ ಒಂದು ಅಭ್ಯಾಸವಲ್ಲ, ಅದು ಸ್ಲೀಪ್ ಅಪ್ನಿಯಾ ಮತ್ತು ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂಬುದನ್ನು ಇದು ಎತ್ತಿ ತೋರಿಸುತ್ತದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwkv199c86962wne7tcw1etx,imgname-snoring-1783077315884.jpg" type="image/jpeg" height="390" width="690"/>
            <content:encoded><![CDATA[&lt;p&gt;ಭೋಪಾಲ್&zwnj;ನಲ್ಲಿ ಗಂಡನ ತೀವ್ರ ಗೊರಕೆಯಿಂದ ಬೇಸತ್ತ ಪತ್ನಿ ವಿಚ್ಛೇದನಕ್ಕೆ ಮುಂದಾದ ನೈಜ ಘಟನೆಯನ್ನು ಈ ಲೇಖನ ವಿವರಿಸುತ್ತದೆ. ಗೊರಕೆಯು ಕೇವಲ ಒಂದು ಅಭ್ಯಾಸವಲ್ಲ, ಅದು ಸ್ಲೀಪ್ ಅಪ್ನಿಯಾ ಮತ್ತು ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂಬುದನ್ನು ಇದು ಎತ್ತಿ ತೋರಿಸುತ್ತದೆ. &amp;nbsp;&lt;/p&gt;&lt;img&gt;&lt;p&gt;ಗಂಡ ಹೆಂಡತಿಯ ನಡುವಿನ ವಿಚ್ಛೇದನಕ್ಕೆ ನೀವು ಹಲವು ಕಾರಣಗಳನ್ನು ಕೇಳಿರಬಹುದು, ಆದರೆ ಗೊರಕೆಯಿಂದಾಗಿ ಹೆಂಡತಿ ತನ್ನ ಗಂಡನಿಗೆ ವಿಚ್ಛೇದನ ನೀಡಬಹುದೇ? ಹೌದು! ಭೋಪಾಲ್&zwnj;ನಲ್ಲಿ ನಡೆದ ಕೌಟುಂಬಿಕ ಸಮಾಲೋಚನೆಯ ಸಂದರ್ಭದಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತು. ಹಗಲಿನಲ್ಲಿ ಗಂಡ ಹೆಂಡತಿಯರ ಸಂಬಂಧ ಸಾಮಾನ್ಯವಾಗಿತ್ತು, ಆದರೆ ರಾತ್ರಿಯಲ್ಲಿ ಗಂಡನ ಜೋರಾದ ಗೊರಕೆ ಹೆಂಡತಿಯನ್ನು ತೊಂದರೆಗೊಳಿಸಿತು. ಇದು ಅವಳ ನಿದ್ರೆಯನ್ನು ಕಳೆದುಕೊಳ್ಳುವಂತೆ ಮಾಡಿತು. ಇದು ಹೆಂಡತಿಯನ್ನು ಚಿಂತೆಗೀಡು ಮಾಡುತ್ತಲೇ ಇತ್ತು ಮತ್ತು ಅಂತಿಮವಾಗಿ ಅವಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದಳು.&lt;/p&gt;&lt;img&gt;&lt;p&gt;ಮಹಿಳೆ ಕುಟುಂಬ ಸಲಹೆಗಾರರಿಗೆ, &quot;ಅವನು ತುಂಬಾ ಒಳ್ಳೆಯವನು, ಆದರೆ ನಾನು ರಾತ್ರಿಯಿಡೀ ಎಚ್ಚರವಾಗಿರಲು ಸಾಧ್ಯವಿಲ್ಲ&quot; ಎಂದು ಹೇಳಿದಳು. ಗೊರಕೆಯ ಸಮಸ್ಯೆ ಎಷ್ಟು ಅಪಾಯಕಾರಿ ಮತ್ತು ಅದನ್ನು ಹೇಗೆ ಗುಣಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ?&lt;/p&gt;&lt;img&gt;&lt;p&gt;ಸ್ಲೀಪ್ ಅಪ್ನಿಯಾ ಎಂದರೆ ನಿದ್ರೆಯ ಸಮಯದಲ್ಲಿ ಕೆಲವು ಸೆಕೆಂಡುಗಳ ಕಾಲ ಉಸಿರಾಟವು ಪದೇ ಪದೇ ನಿಲ್ಲುವ ಸ್ಥಿತಿ. ಇದು ದೇಹಕ್ಕೆ ಸಾಕಷ್ಟು ಆಮ್ಲಜನಕದ ಕೊರತೆಯನ್ನುಂಟುಮಾಡುತ್ತದೆ ಮತ್ತು ನಿದ್ರೆ ಆಗಾಗ್ಗೆ ಅಡ್ಡಿಪಡಿಸುತ್ತದೆ. ಗೊರಕೆ ಹೊಡೆಯುವ ಪ್ರತಿಯೊಬ್ಬರಿಗೂ ಸ್ಲೀಪ್ ಅಪ್ನಿಯಾ ಇರುವುದಿಲ್ಲ. ಎಚ್ಚರವಾದಾಗ ತಲೆನೋವು, ನಿದ್ರಾಹೀನತೆ ಅಥವಾ ದಿನವಿಡೀ ಆಯಾಸ ಅಥವಾ ಬಾಯಿ ಒಣಗುವುದು ಗೊರಕೆಯೊಂದಿಗೆ ಇದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಗೊರಕೆಯು ವ್ಯಕ್ತಿಗೆ ಮಾತ್ರವಲ್ಲದೆ ಇಡೀ ಕುಟುಂಬಕ್ಕೂ ಸಮಸ್ಯೆಗಳನ್ನು ಉಂಟುಮಾಡಬಹುದು. ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ ನಡೆಸಿದ ಸಮೀಕ್ಷೆಯ ಪ್ರಕಾರ, ಸುಮಾರು 35% ಅಮೇರಿಕನ್ ವಯಸ್ಕರು ತಮ್ಮ ಸಂಗಾತಿಯ ಗೊರಕೆಯಿಂದಾಗಿ ಪ್ರತ್ಯೇಕವಾಗಿ ಮಲಗುತ್ತಾರೆ. ಕಳೆದ 10 ವರ್ಷಗಳಲ್ಲಿ ಈ ಸಮಸ್ಯೆಯ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಅತಿಯಾಗಿ ಗೊರಕೆ ಹೊಡೆಯುವ ಜನರಿಗೆ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಮುಖ್ಯ ಕಾರಣ ಸ್ಲೀಪ್ ಅಪ್ನಿಯಾ. ಒಬ್ಬ ವ್ಯಕ್ತಿಗೆ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (OSA) ಇದ್ದಾಗ, ನಿದ್ರೆಯ ಸಮಯದಲ್ಲಿ ಅವರ ಉಸಿರಾಟವು ಪದೇ ಪದೇ ನಿಲ್ಲುತ್ತದೆ. ಇದು ದೇಹದಲ್ಲಿ ಆಮ್ಲಜನಕದ ಮಟ್ಟಗಳು ಕಡಿಮೆಯಾಗಲು ಕಾರಣವಾಗುತ್ತದೆ, ಇದು ದೇಹದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ರಕ್ತದೊತ್ತಡವು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು ಮತ್ತು ಹೃದಯ ಬಡಿತ ಅನಿಯಮಿತವಾಗಬಹುದು. ದೇಹದಲ್ಲಿ ಊತ ಹೆಚ್ಚಾಗುತ್ತದೆ ಮತ್ತು ರಕ್ತನಾಳಗಳ ಮೇಲಿನ ಒತ್ತಡವು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.&lt;/p&gt;&lt;img&gt;&lt;ul&gt; &lt;li&gt;ಅಧಿಕ ತೂಕ ಅಥವಾ ಬೊಜ್ಜು&lt;/li&gt; &lt;li&gt;ಪಕ್ಕಕ್ಕೆ ಮಲಗದೆ ಬೆನ್ನಿನ ಮೇಲೆ ಮಲಗುವುದು&lt;/li&gt; &lt;li&gt;ವಯಸ್ಸಾದಂತೆ ಗಂಟಲಿನ ಸ್ನಾಯುಗಳು ಸಡಿಲಗೊಳ್ಳುವುದು&lt;/li&gt; &lt;li&gt;ಮೂಗಿನ ದಟ್ಟಣೆ&lt;/li&gt; &lt;li&gt;ಮದ್ಯ ಮತ್ತು ನಿದ್ರೆ ಮಾತ್ರೆಗಳು&lt;/li&gt; &lt;li&gt;ಶ್ವಾಸನಾಳಗಳ ಉರಿಯೂತಕ್ಕೆ ಕಾರಣವಾಗುವ ಧೂಮಪಾನ&lt;/li&gt; &lt;li&gt;ಟಾನ್ಸಿಲ್&zwnj;ಗಳು ಅಥವಾ ಅಡೆನಾಯ್ಡ್&zwnj;ಗಳು ಹಿಗ್ಗುವಿಕೆ&lt;/li&gt; &lt;li&gt;ದವಡೆ ಅಥವಾ ಗಂಟಲಿನ ರಚನೆಯಿಂದಾಗಿ&lt;/li&gt; &lt;li&gt;ಸ್ಲೀಪ್ ಅಪ್ನಿಯಾ&lt;/li&gt; &lt;li&gt;ಗರ್ಭಧಾರಣೆ&lt;/li&gt;&lt;/ul&gt;&lt;img&gt;&lt;ul&gt; &lt;li&gt;ನೀವು ಗೊರಕೆಯನ್ನು ತಪ್ಪಿಸಲು ಬಯಸಿದರೆ, ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಊಟ ಮಾಡಿದ ತಕ್ಷಣ ಎಂದಿಗೂ ಮಲಗಬೇಡಿ. ಸ್ವಲ್ಪ ನಡೆಯಿರಿ. ಇದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಆದರೆ ಗೊರಕೆಯನ್ನು ನಿವಾರಿಸುತ್ತದೆ.&lt;/li&gt;&lt;/ul&gt;&lt;p&gt;ನೀವು ಅಧಿಕ ತೂಕ ಹೊಂದಿದ್ದರೆ, ತೂಕ ಇಳಿಸಿಕೊಳ್ಳುವುದು ಬಹಳ ಮುಖ್ಯ.&lt;/p&gt;&lt;ul&gt; &lt;li&gt;ಧೂಮಪಾನ ಮಾಡಬೇಡಿ ಅಥವಾ ಮದ್ಯ ಸೇವಿಸಬೇಡಿ. ನೀವು ಹಾಗೆ ಮಾಡಿದರೆ, ಕ್ರಮೇಣ ಹಾಗೆ ಮಾಡಿ. ಮಲಗುವ ಮುನ್ನ ಭಾರೀ ಊಟ ಮಾಡುವುದನ್ನು ತಪ್ಪಿಸಿ.&lt;/li&gt; &lt;li&gt;ತಲೆಯ ಕೆಳಗೆ ದಿಂಬನ್ನು ಇಟ್ಟುಕೊಂಡು ಮಲಗಿ. ಇದು ಗೊರಕೆಯನ್ನು ಕಡಿಮೆ ಮಾಡುತ್ತದೆ.&lt;/li&gt; &lt;li&gt;ಬೆನ್ನು ಮೇಲೆ ಮಲಗುವುದಕ್ಕಿಂತ ನಿಮ್ಮ ಪಕ್ಕಕ್ಕೆ ಮಲಗುವುದು ಉತ್ತಮ ಆಯ್ಕೆಯಾಗಿದೆ. ಮಲಗುವ ಮೊದಲು, ಗೊರಕೆಯ ಸಮಸ್ಯೆ ಬರದಂತೆ ನಿಮ್ಮ ಮೂಗು ಮತ್ತು ಗಂಟಲನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು.&lt;/li&gt;&lt;/ul&gt;]]></content:encoded>
            <category>health-life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/health-life/bhopal-wife-driven-to-despair-by-husband-snoring-decides-to-get-a-divorce-suc-9gqvh8c"/>
        </item>
        <item>
            <title><![CDATA[ಬಾಯಿ ಹುಣ್ಣು ಬಂತೆಂದು ಬಾಯಿ ಬಡ್ಕೋಬೇಡಿ, ಈ 6 ಮನೆಮದ್ದು ಹಚ್ಚಿ ನೋಡಿ!]]></title>
            <link>https://kannada.asianetnews.com/webstories/kitchen/how-to-cure-and-reduse-mouth-ulcers-here-6-simple-home-remedies-a75bolz</link>
            <guid isPermaLink="true">https://kannada.asianetnews.com/webstories/kitchen/how-to-cure-and-reduse-mouth-ulcers-here-6-simple-home-remedies-a75bolz</guid>
            <pubDate>Fri, 03 Jul 2026 22:44:11 +0530</pubDate>
            <description><![CDATA[ಬಾಯಿ ಹುಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಚಿಂತೆ ಬೇಡ. ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಬಳಸಿ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01k544w683w6232g9v156rqebw,imgname-fotojet--7--1757854701827.jpg" type="image/jpeg" height="390" width="690"/>
            <category>health-life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/kitchen/how-to-cure-and-reduse-mouth-ulcers-here-6-simple-home-remedies-a75bolz"/>
        </item>
        <item>
            <title><![CDATA[Mushrooms for Hair Growth: ಸಣ್ಣ ವಯಸ್ಸಲ್ಲೇ ಕೂದಲು ಬಿಳಿಯಾಗಿದ್ಯಾ? ಹಾಗಿದ್ರೆ ಈ ಮಶ್ರೂಮ್ ತಿಂದು ನೋಡಿ]]></title>
            <link>https://kannada.asianetnews.com/health-life/how-mushroom-helps-to-grow-healthy-hair/articleshow-afqx27i</link>
            <guid isPermaLink="true">https://kannada.asianetnews.com/health-life/how-mushroom-helps-to-grow-healthy-hair/articleshow-afqx27i</guid>
            <pubDate>Wed, 08 Jul 2026 13:32:22 +0530</pubDate>
            <description><![CDATA[&lt;p&gt;Mushroom for hair growth: ಮಶ್ರೂಮ್ ರುಚಿಕರ ಮತ್ತು ಆರೋಗ್ಯಕ್ಕೆ ಪ್ರಯೋಜನ ನೀಡುವಂತಹ ಆಹಾರವಾಗಿದೆ. ಆದರೆ ಅವುಗಳನ್ನು ಸೇವಿಸುವುದರಿಂದ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯಬಹುದು ಎಂದು ನಿಮಗೆ ತಿಳಿದಿದೆಯೇ? ಅವುಗಳನ್ನು ಸರಿಯಾಗಿ ಹೇಗೆ ಸೇವಿಸಬೇಕೆಂದು ತಿಳಿಯಿರಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g0kdx7dx11ts84q8xwsernnw,imgname-gettyimages-555266759-170667a.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸಣ್ಣ ವಯಸ್ಸಲ್ಲೇ ಕೂದಲು ಬಿಳಿಯಾಗಿದೆಯೆ?&lt;/strong&gt;&lt;/h2&gt;&lt;p&gt;ಕೂದಲು ಬಿಳಿಯಾಗುವುದು ಬಹಳ ಸಾಮಾನ್ಯ ಸಮಸ್ಯೆ . ಇತ್ತೀಚೆಗಂತೂ ಕಿರಿಯರಿಂದ ಹಿರಿಯರವರೆಗೂ ಎಲ್ಲರೂ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಹಾಗಾಗಿ, ಒತ್ತಡ, ನಿಮ್ಮ ಜೀವನಶೈಲಿ ಮತ್ತು ನಿಮ್ಮ ಅಭ್ಯಾಸಗಳಿಗೆ ಗಮನ ಕೊಡುವುದು ಮುಖ್ಯ. ಕೆಲವೊಮ್ಮೆ, ಎಷ್ಟೇ ಜಾಗೃತೆ ವಹಿಸಿದರೂ ಕೂಡ ಕೂದಲು ಬಿಳಿಯಾಗೋದು ತಪ್ಪೋದಿಲ್ಲ. ಇನ್ನು ಕೂದಲನ್ನು ಕಪ್ಪಾಗಿಸಲು ಜನ ಹೆನ್ನಾ ಮತ್ತು ಹೇರ್ ಡೈ ಮೊರೆ ಹೋಗುತ್ತಾರೆ. ಆದರೆ ನೀವು ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡುವ ಮೂಲಕವೂ ಕೂದಲನ್ನು ಕಪ್ಪಾಗಿಸಬಹುದು. ಅದಕ್ಕಾಗಿ ನೀವು ಅಣಬೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು.&lt;/p&gt;&lt;h3&gt;&lt;strong&gt;ಮಶ್ರೂಮ್ ಬಿಳಿ ಕೂದಲನ್ನು ಕಪ್ಪಾಗಿಸಬಹುದೇ?&lt;/strong&gt;&lt;/h3&gt;&lt;p&gt;ಕೂದಲು ಉದುರುವುದು, ಕೂದಲು ಬಿಳಿಯಾಗುವುದು ಹಲವು ಅಂಶಗಳಿಂದ ಉಂಟಾಗಬಹುದು, ಅದಕ್ಕೆ ಮುಖ್ಯ ಕಾರಣ ಹಾರ್ಮೋನ್ ಬದಲಾವಣೆಗಳು, ಕಬ್ಬಿಣ, ಪ್ರೋಟೀನ್ ಅಥವಾ ವಿಟಮಿನ್ ಕೊರತೆ. ಆದ್ದರಿಂದ, ಈ ಕೊರತೆಗಳನ್ನು ತುಂಬುವ ಆಹಾರ ಸೇವಿಸುವುದು ಅತ್ಯಗತ್ಯ. ಅದರಲ್ಲೂ ಅಣಬೆಯನ್ನು ಸರಿಯಾದ ರೀತಿಯಲ್ಲಿ ಸೇವಿಸುವ ಮೂಲಕ ಬಿಳಿ ಕೂದಲಿನ ಸಮಸ್ಯೆ ನಿವಾರಿಸಿ, ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.&lt;/p&gt;&lt;h3&gt;&lt;strong&gt;ಕೂದಲು ಬಿಳಿಯಾಗಲು ಕಾರಣಗಳು:&lt;/strong&gt;&lt;/h3&gt;&lt;ul&gt; &lt;li&gt;ವಿಟಮಿನ್ ಬಿ12&lt;/li&gt; &lt;li&gt;ಮೆಲನಿನ್&lt;/li&gt; &lt;li&gt;ಕಬ್ಬಿಣ ಅಥವಾ ಫೋಲೇಟ್ ಕೊರತೆ&lt;/li&gt; &lt;li&gt;ದೀರ್ಘಕಾಲದ ಒತ್ತಡ&lt;/li&gt; &lt;li&gt;ಥೈರಾಯ್ಡ್ ಸಮಸ್ಯೆಗಳು&lt;/li&gt; &lt;li&gt;ವಯಸ್ಸಾಗುತವಿಕೆ&lt;/li&gt; &lt;li&gt;ರಾಸಾಯನಿಕಗಳ ಬಳಕೆ&lt;/li&gt;&lt;/ul&gt;&lt;h3&gt;&lt;strong&gt;ಅಣಬೆಗಳನ್ನು ತಿನ್ನುವುದರಿಂದ ಏನೆಲ್ಲಾ ಬದಲಾವಣೆ ಆಗುತ್ತದೆ?&lt;/strong&gt;&lt;/h3&gt;&lt;ul&gt; &lt;li&gt;ಕೆಲವು ರೀತಿಯ ಮಶ್ರೂಮ್ ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ, ವಿಶೇಷವಾಗಿ ಆಲ್ಟ್ರಾವಯಲೇಟ್ ಬೆಳಕಿನಲ್ಲಿ ಬೆಳೆಯುವ ಮಶ್ರೂಮ್. ಇವು ಮೂಳೆ ಮತ್ತು ಜೀವಕೋಶಗಳ ಆರೋಗ್ಯಕ್ಕೆ ಉತ್ತಮ.&lt;/li&gt; &lt;li&gt;ಮಶ್ರೂಮ್ ದೇಹದ ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಆಕ್ಸಿಡೇಟಿವ್ ಒತ್ತಡವು ಅಕಾಲಿಕ ವಯಸ್ಸಾಗುವಿಕೆ ಮತ್ತು ಕೂದಲಿನ ಗುಣಮಟ್ಟ ಕಡಿಮೆಯಾಗುವುದಕ್ಕೂ ಸಂಬಂಧಿಸಿದೆ.&lt;/li&gt; &lt;li&gt;ಅಣಬೆಗಳು ಶಕ್ತಿಯನ್ನು ಒದಗಿಸುವ ರಿಬೋಫ್ಲಾವಿನ್, ನಿಯಾಸಿನ್ ಮತ್ತು ಪ್ಯಾಂಟೊಥೆನಿಕ್ ಆಮ್ಲದಂತಹ ಬಿ ಜೀವಸತ್ವಗಳನ್ನು ಹೊಂದಿರುತ್ತವೆ.&lt;/li&gt; &lt;li&gt;ಅಣಬೆಗಳು ಸೆಲೆನಿಯಮ್, ಕಾಪರ್ ಮತ್ತು ಪೊಟ್ಯಾಸಿಯಮ್&zwnj;ನಂತಹ ಖನಿಜಗಳನ್ನು ಹೊಂದಿರುತ್ತವೆ. ಕಾಪರ್ ದೇಹದ ಮೆಲನಿನ್ ಉತ್ಪಾದನೆಯಲ್ಲಿ ಪಾತ್ರವಹಿಸುತ್ತದೆ, ಆದರೆ ಕಾಪರ್ ಮಾತ್ರ ತಿನ್ನುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ ಎಂದು ಹೇಳುವಂತಿಲ್ಲ. ಆದರೆ ಇದು ಕೂಡ ಸಹಾಯ ಮಾಡುತ್ತದೆ.&lt;/li&gt;&lt;/ul&gt;&lt;p&gt;&lt;strong&gt;ಕೂದಲಿನ ಆರೋಗ್ಯಕ್ಕೆ ಬೇರೆ ಏನು ತಿನ್ನಬಹುದು?&lt;/strong&gt;&lt;/p&gt;&lt;p&gt;ನಿಮ್ಮ ಆಹಾರದಲ್ಲಿ ಹಸಿರು ಎಲೆ ತರಕಾರಿಗಳನ್ನು ಸೇರಿಸಿ ಮತ್ತು ಮೊಟ್ಟೆ ಸೇವಿಸಿ. ಬೀನ್ಸ್&zwnj;ನೊಂದಿಗೆ ಡ್ರೈ ಫ್ರುಟ್ಸ್ ಆಂದ್ ನಟ್ಸ್ ತಿನ್ನುವುದು ಸಹ ಒಳ್ಳೆಯದು. ನಿಮ್ಮ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಅದರ ಆರೋಗ್ಯ ಸುಧಾರಿಸುತ್ತದೆ ಮತ್ತು ಕೂದಲು ಬಿಳಿಯಾಗುವುದನ್ನು ತಡೆಯಬಹುದು.&lt;/p&gt;]]></content:encoded>
            <category>health-life</category>
            <dc:creator>Pavna Das</dc:creator>
            <atom:link href="https://kannada.asianetnews.com/health-life/how-mushroom-helps-to-grow-healthy-hair/articleshow-afqx27i"/>
        </item>
        <item>
            <title><![CDATA[Low Sperm Count: ಅಪ್ಪನಾಗದ ನೋವಿಗೆ ಕಾರಣ ಬರೀ ಸಿಗರೇಟ್ ತಂಬಾಕಲ್ಲ, ಇದ್ರಿಂದ್ಲೂ ಕಡಿಮೆ ಆಗ್ತಿದೆ ಸ್ಪರ್ಮ್ ಕೌಂಟ್]]></title>
            <link>https://kannada.asianetnews.com/gallery/health-life/male-fertility-it-is-not-just-cigarettes-or-tobacco-these-factors-can-also-cause-sperm-count-to-drop-to-zero-df6vs7d</link>
            <guid isPermaLink="true">https://kannada.asianetnews.com/gallery/health-life/male-fertility-it-is-not-just-cigarettes-or-tobacco-these-factors-can-also-cause-sperm-count-to-drop-to-zero-df6vs7d</guid>
            <pubDate>Mon, 06 Jul 2026 12:26:47 +0530</pubDate>
            <description><![CDATA[&lt;p&gt;Male Fertility : ಸ್ಪರ್ಮ್ ಕೌಂಟ್&zwnj; ಕಡಿಮೆಯಾಗಿ ಅನೇಕ ಪುರುಷರು ಅಪ್ಪನಾಗುವ ಅವಕಾಶ ಕಳೆದುಕೊಳ್ತಿದ್ದಾರೆ. ಇದಕ್ಕೆ ಬರೀ ತಂಬಾಕು ಕಾರಣ ಆಗ್ತಿಲ್ಲ. ಇದಕ್ಕೆ ಯಾವೆಲ್ಲ ಕಾರಣ ಇದೆ ? ಪರಿಹಾರ ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwv3003metatrptp6mycs7f7,imgname-mens-health-problems-1783320543348.jpg" type="image/jpeg" height="390" width="690"/>
            <content:encoded><![CDATA[&lt;p&gt;Male Fertility : ಸ್ಪರ್ಮ್ ಕೌಂಟ್&zwnj; ಕಡಿಮೆಯಾಗಿ ಅನೇಕ ಪುರುಷರು ಅಪ್ಪನಾಗುವ ಅವಕಾಶ ಕಳೆದುಕೊಳ್ತಿದ್ದಾರೆ. ಇದಕ್ಕೆ ಬರೀ ತಂಬಾಕು ಕಾರಣ ಆಗ್ತಿಲ್ಲ. ಇದಕ್ಕೆ ಯಾವೆಲ್ಲ ಕಾರಣ ಇದೆ ? ಪರಿಹಾರ ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.&lt;/p&gt;&lt;img&gt;&lt;p&gt;ಇತ್ತೀಚಿನ ವರ್ಷಗಳಲ್ಲಿ ಪುರುಷರಲ್ಲಿ ಕಡಿಮೆ ವೀರ್ಯಾಣುಗಳ ಸಂಖ್ಯೆ (Low Sperm Count) ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕೇವಲ ಧೂಮಪಾನ ಅಥವಾ ತಂಬಾಕು ಮಾತ್ರ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಅನಾರೋಗ್ಯಕರ ಜೀವನಶೈಲಿ, ಪೌಷ್ಟಿಕಾಂಶದ ಕೊರತೆ, ಮಾನಸಿಕ ಒತ್ತಡ, ಬೊಜ್ಜು ಹಾಗೂ ಕೆಲವು ಆರೋಗ್ಯ ಸಮಸ್ಯೆಗಳೂ ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತವೆ. ಸಮಯಕ್ಕೆ ಸರಿಯಾಗಿ ಗಮನಹರಿಸದಿದ್ದರೆ, ಮಗುವಿನ ಕನಸು ನನಸಾಗುವ ಸಾಧ್ಯತೆ ದೂರವಾಗುತ್ತದೆ.&lt;/p&gt;&lt;img&gt;&lt;p&gt;ಒಂದು ಮಿಲಿಲೀಟರ್ ವೀರ್ಯದಲ್ಲಿ 15 ಮಿಲಿಯನ್ಗಿಂತ ಕಡಿಮೆ ವೀರ್ಯಾಣುಗಳಿದ್ದರೆ ಅದನ್ನು ವೈದ್ಯಕೀಯವಾಗಿ ಒಲಿಗೋಸ್ಪರ್ಮಿಯಾ (Oligospermia) ಎಂದು ಕರೆಯಲಾಗುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾದರೆ ನೈಸರ್ಗಿಕವಾಗಿ ಗರ್ಭಧರಿಸುವ ಸಾಧ್ಯತೆ ಇಳಿಮುಖವಾಗಬಹುದು. ಕೆಲವರಲ್ಲಿ ವೀರ್ಯದಲ್ಲಿ ವೀರ್ಯಾಣುಗಳೇ ಇಲ್ಲದಿರುವ ಅಜೋಸ್ಪರ್ಮಿಯಾ (Azoospermia) ಸಮಸ್ಯೆಯೂ ಕಂಡುಬರಬಹುದು.&lt;/p&gt;&lt;img&gt;&lt;p&gt;ಸ್ಪರ್ಮ್&zwnj; ಕೌಂಟ್&zwnj; ಕಡಿಮೆ ಆಗಿದೆ ಎಂಬುದನ್ನು ಪತ್ತೆ ಮಾಡೋದು ಸುಲಭವಲ್ಲ. ಯಾವುದೇ ವಿಶೇಷ ಲಕ್ಷಣ ಕಾಣಿಸೋದಿಲ್ಲ. ದೀರ್ಘಕಾಲ ಪ್ರಯತ್ನಿಸಿದರೂ ಪಾಲಕರಾಗದಿರುವುದು, ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ನಿಮಿರುವಿಕೆಯ ಸಮಸ್ಯೆ, ಖಾಸಗಿ ಅಂಗದಲ್ಲಿ ನೋವು ಅಥವಾ ಊತ, ಹಾರ್ಮೋನುಗಳ ಅಸಮತೋಲನಕ್ಕೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.&lt;/p&gt;&lt;img&gt;&lt;p&gt;ಸ್ಪರ್ಮ್&zwnj; ಕೌಂಟ್&zwnj; ಕಡಿಮೆ ಆಗಲು ಅನೇಕ ಕಾರಣವಿದೆ. ಧೂಮಪಾನ ಮತ್ತು ತಂಬಾಕು ಸೇವನೆ ಒಂದು ಕಾರಣವಾಗಿದೆ. ಆದ್ರೆ ಇದೇ ಅಂತಿಮವಲ್ಲ. ಧೂಮಪಾನ ಮತ್ತು ತಂಬಾಕು ಸೇವನೆ ಮಾಡದ ಪುರುಷರಲ್ಲೂ ಸ್ಪರ್ಮ್&zwnj; ಕೌಂಟ್&zwnj; ಕಡಿಮೆಯಾಗುವ ಸಾಧ್ಯತೆ ಇದೆ. ಅದಕ್ಕೆ ಅತಿಯಾದ ಮದ್ಯಪಾನ ಕೂಡ ಒಂದು ಕಾರಣ. ಜೊತೆಗೆ ಬೊಜ್ಜು ಮತ್ತು ವ್ಯಾಯಾಮದ ಕೊರತೆ, ನಿರಂತರ ಮಾನಸಿಕ ಒತ್ತಡ, ಹಾರ್ಮೋನುಗಳ ಅಸಮತೋಲನ, ಥೈರಾಯ್ಡ್ ಸಮಸ್ಯೆಗಳು, ವೆರಿಕೋಸೆಲೆ ಮತ್ತು ಕೆಲವು ಸೋಂಕುಗಳು, ಕೆಲವು ಔಷಧಿಗಳ ದೀರ್ಘಕಾಲದ ಬಳಕೆ ಇದಕ್ಕೆ ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ಸ್ಪರ್ಮ್ ಕೌಂಟ್&zwnj; ಕಡಿಮೆ ಇದೆ ಅಂದ್ರೆ ಅದು ಶಾಶ್ವತ ಬಂಜೆತನ ಎಂದರ್ಥವಲ್ಲ. ಕಾರಣವನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದ ಅನೇಕ ಪುರುಷರು ಪಾಲಕರಾಗಿದ್ದಾರೆ. ಅಗತ್ಯವಿದ್ದರೆ ಔಷಧಿ, ಶಸ್ತ್ರಚಿಕಿತ್ಸೆ ಅಥವಾ ಫಲವತ್ತತೆ ಚಿಕಿತ್ಸೆಯ ಮೂಲಕವೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.&lt;/p&gt;&lt;img&gt;&lt;p&gt;ಪೌಷ್ಟಿಕ ಆಹಾರ ಸೇವನೆ, ಪ್ರತಿದಿನ ವ್ಯಾಯಾಮ, ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಲ್ಲದೆ ಸಾಕಷ್ಟು ನಿದ್ರೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಅತ್ಯಗತ್ಯ. ಧೂಮಪಾನ, ತಂಬಾಕು ಮತ್ತು ಅತಿಯಾದ ಮದ್ಯಪಾನದಿಂದ ದೂರ ಇರಬೇಕು.&lt;/p&gt;]]></content:encoded>
            <category>health-life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/health-life/male-fertility-it-is-not-just-cigarettes-or-tobacco-these-factors-can-also-cause-sperm-count-to-drop-to-zero-df6vs7d"/>
        </item>
        <item>
            <title><![CDATA[ಮಳೆಗಾಲದಲ್ಲಿ ದೇಹ ಸೂಚಿಸುವ ಈ ಲಕ್ಷಣ ಕಡೆಗಣಿಸಬೇಡಿ, ಇದು ಹೊಟ್ಟೆ ಸೋಂಕಿನ ಅಲರ್ಟ್]]></title>
            <link>https://kannada.asianetnews.com/webstories/health-life/monsoon-health-alert-these-symptoms-may-indicate-a-stomach-infection-foxhx42</link>
            <guid isPermaLink="true">https://kannada.asianetnews.com/webstories/health-life/monsoon-health-alert-these-symptoms-may-indicate-a-stomach-infection-foxhx42</guid>
            <pubDate>Sun, 05 Jul 2026 22:46:55 +0530</pubDate>
            <description><![CDATA[&lt;p&gt;ಮಳೆಗಾಲದಲ್ಲಿ ಶೀತ, ಕೆಮ್ಮು, ಜ್ವರಗಳು ಸಾಮಾನ್ಯವಾಗುತ್ತದೆ. ಇದರ ಜೊತೆಗೆ ದೇಹ ಕೆಲ ಸೂಚನೆ ನೀಡುತ್ತಿದೆ. ಇವುಗಳನ್ನು ಕಡೆಗಣಿಸಬೇಡಿ. ಕಾರಣ ಈ ಸೂಚನೆ ಹೊಟ್ಟೆ ಸೋಂಕಿನ ಅಲರ್ಟ್ ಆಗಿರಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jmw339sy3p59xhmcp3ws7pys,imgname-stomh-1740404533054.png" type="image/jpeg" height="390" width="690"/>
            <category>health-life</category>
            <dc:creator>Chethan Kumar</dc:creator>
            <atom:link href="https://kannada.asianetnews.com/webstories/health-life/monsoon-health-alert-these-symptoms-may-indicate-a-stomach-infection-foxhx42"/>
        </item>
        <item>
            <title><![CDATA[Childless Couple: ಸ್ವಂತ ಮಕ್ಕಳಿಲ್ಲ ಅಂದ್ರೆ ಏನಂತೆ? ಹೊಟ್ಟೆ ಬಟ್ಟೆ ಕಟ್ಟಿ 455 ಮಕ್ಕಳ ಜೀವ ಕಾಪಾಡಿದ ದಂಪತಿ!]]></title>
            <link>https://kannada.asianetnews.com/life/china-childless-couple-who-save-the-lives-of-455-children/articleshow-g9cfgmf</link>
            <guid isPermaLink="true">https://kannada.asianetnews.com/life/china-childless-couple-who-save-the-lives-of-455-children/articleshow-g9cfgmf</guid>
            <pubDate>Tue, 07 Jul 2026 22:53:16 +0530</pubDate>
            <description><![CDATA[&lt;p&gt;Chinese couple donated 7 crores: ದಿನಕ್ಕೆ ಕೇವಲ ₹200 ಖರ್ಚು ಮಾಡಿ ಸರಳವಾಗಿ ಬದುಕುತ್ತಿದ್ದ ಮಕ್ಕಳಿಲ್ಲದ ವೃದ್ಧ ದಂಪತಿ, ತಮ್ಮ ಜೀವನದ ಇಡೀ ಉಳಿತಾಯವಾದ ₹7 ಕೋಟಿಯನ್ನು ದಾರಿದ್ರ್ಯ ನಿವಾರಣೆ ಮತ್ತು ಚಿಕಿತ್ಸೆಗೆ ದಾನ ಮಾಡಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyskbsq5dp42bra8xsz4jaz,imgname-new-project---2026-07-07t224509.570-1783444909879.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೀನಾದ ಶಾಂಘೈನಲ್ಲಿದ್ದ ಡು ಯಿಂಗ್ರಾಂಗ್ ಮತ್ತು ಲು ಸುಯಿಂಗ್ ದಂಪತಿಗೆ ಮಕ್ಕಳಿರಲಿಲ್ಲ. ಡು ಅವರು ಶಿಕ್ಷಕರಾಗಿ ಮತ್ತು ಲು ಅವರು ವೈದ್ಯರಾಗಿ ನಿವೃತ್ತರಾಗಿದ್ದರು. ಇಬ್ಬರಿಗೂ ಸಾಕಷ್ಟು ಪೆನ್ಷನ್ ಬರುತ್ತಿದ್ದರೂ, ಅವರು ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಹಳೆಯ ಪೀಠೋಪಕರಣಗಳನ್ನು ಬಳಸುವುದು, ಸುಮಾರು 238 ರೂಪಾಯಿಯ ಮಧ್ಯಾಹ್ನದ ಊಟವನ್ನು ಇಬ್ಬರು ಹಂಚಿಕೊಂಡು ತಿನ್ನುವಷ್ಟು ಮಿತವ್ಯಯದ ಬದುಕು ಇವರದ್ದಾಗಿತ್ತು. ಅಂದರೆ ದಿನಕ್ಕೆ ಅಂದಾಜು 200 ರೂಪಾಯಿಯಷ್ಟೇ ಖರ್ಚು ಮಾಡುತ್ತಿದ್ದರು.&lt;/p&gt;&lt;h2&gt;7 ಕೋಟಿ ರೂಪಾಯಿ ದಾನ ಮಾಡಿದ್ರು!&amp;nbsp;&lt;/h2&gt;&lt;p&gt;2018ರಲ್ಲಿ ಆಸ್ಪತ್ರೆಯೊಂದರ ಮುಂದೆ ಜನ್ಮಜಾತ ಹೃದ್ರೋಗದಿಂದ ಬಳಲುತ್ತಿರುವ ಬಡ ಮಕ್ಕಳ ಚಿಕಿತ್ಸೆಗೆ ಸಹಾಯ ಕೇಳುವ ಪೋಸ್ಟರ್ ಅನ್ನು ಇವರು ನೋಡಿದರು. ಇದನ್ನು ಕಂಡ ತಕ್ಷಣವೇ ದಂಪತಿ ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿದರು. ತಮಗಾಗಿ ಹಣವನ್ನು ಉಳಿಸಿಕೊಳ್ಳುವಂತೆ ಆಸ್ಪತ್ರೆಯ ಸಿಬ್ಬಂದಿ ವಿನಂತಿಸಿದರೂ ಕೇಳದ ಡು ಅವರು, &quot;ನಮ್ಮಿಬ್ಬರಿಗೂ ಇನ್ನು ಹೆಚ್ಚು ಸಮಯ ಉಳಿದಿಲ್ಲ. ನಮಗೆ ಪೆನ್ಷನ್ ಬರುತ್ತದೆ, ನಮಗೆ ಇಷ್ಟೊಂದು ಹಣದ ಅಗತ್ಯವಿಲ್ಲ&quot; ಎಂದು ಹೇಳಿ ತಮ್ಮ ಜೀವಿತಾವಧಿಯ ಸಂಪೂರ್ಣ ಉಳಿತಾಯವಾದ 7 ಕೋಟಿ ರೂಪಾಯಿಯನ್ನು (5 ಮಿಲಿಯನ್ ಯುವಾನ್) ಚಾರಿಟಿಗೆ ದಾನ ಮಾಡಿದರು.&lt;/p&gt;&lt;h2&gt;ಏಪ್ರಿಲ್&zwnj;ನಲ್ಲಿ ಅಂತ್ಯಕ್ರಿಯೆ&lt;/h2&gt;&lt;p&gt;ಕ್ಯಾನ್ಸರ್&zwnj;ನಿಂದ ಬಳಲುತ್ತಿದ್ದ ಡು ಅವರು 2018ರಲ್ಲಿ ನಿಧನರಾದರೆ, ಅವರ ಪತ್ನಿ ಲು ಕಳೆದ ವರ್ಷ (2025) ನಿಧನರಾದರು. ಇವರ ಕೊನೆಯ ಆಸೆಯಂತೆ ಈ ವರ್ಷದ ಏಪ್ರಿಲ್&zwnj;ನಲ್ಲಿ ಸಮುದ್ರದಲ್ಲಿ ಅಂತ್ಯಕ್ರಿಯೆ (ಚಿತಾಭಸ್ಮ ವಿಸರ್ಜನೆ) ನೆರವೇರಿಸಲಾಯಿತು.&lt;/p&gt;&lt;p&gt;ಇತ್ತೀಚೆಗೆ ಶಾಂಘೈನಲ್ಲಿ ನಡೆದ ಪ್ರದರ್ಶನವೊಂದರಲ್ಲಿ ಅಧಿಕಾರಿಗಳು ಈ ದಂಪತಿಯ ದಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ದಂಪತಿ ನೀಡಿದ ಈ ದೊಡ್ಡ ಮೊತ್ತದಿಂದಾಗಿ ಇದುವರೆಗೆ ಒಟ್ಟು 455 ಕಡುಬಡ ಮಕ್ಕಳ ಹೃದಯದ ಚಿಕಿತ್ಸೆ ಸಾಧ್ಯವಾಗಿದೆ. ತಮಗಾಗಿ ಏನನ್ನೂ ಬಯಸದೆ, ನೂರಾರು ಮಕ್ಕಳ ಜೀವ ಉಳಿಸಿದ ಈ ವೃದ್ಧ ದಂಪತಿಯ ಕರುಣೆ ಮತ್ತು ತ್ಯಾಗದ ಕಥೆ ಇಂದು ಜಗತ್ತಿಗೆ ದೊಡ್ಡ ಮಾದರಿಯಾಗಿದೆ.&lt;/p&gt;]]></content:encoded>
            <category>health-life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/life/china-childless-couple-who-save-the-lives-of-455-children/articleshow-g9cfgmf"/>
        </item>
        <item>
            <title><![CDATA[ಗ್ಯಾಸ್ ಟ್ರಬಲ್ ಆಗುತ್ತಾ? ಈ 7 ಆಹಾರಗಳಿಂದ ದೂರವಿರಿ, ಇಲ್ಲದಿದ್ದರೆ ಕಷ್ಟ]]></title>
            <link>https://kannada.asianetnews.com/webstories/health-life/7-common-foods-that-cause-gas-and-bloating-hcdibgg</link>
            <guid isPermaLink="true">https://kannada.asianetnews.com/webstories/health-life/7-common-foods-that-cause-gas-and-bloating-hcdibgg</guid>
            <pubDate>Tue, 07 Jul 2026 22:55:26 +0530</pubDate>
            <description><![CDATA[&lt;p&gt;ಊಟ ಮಾಡಿದ ಮೇಲೆ ಹೊಟ್ಟೆ ಉಬ್ಬರಿಸಿದ ಹಾಗೆ ಆಗುತ್ತಾ? ಗ್ಯಾಸ್ ತುಂಬಿಕೊಂಡು ಕಿರಿಕಿರಿ ಆಗುತ್ತಿದೆಯಾ? ಪೌಷ್ಟಿಕಾಂಶಯುಕ್ತ ಆಹಾರಗಳೇ ಕೆಲವೊಮ್ಮೆ ಗ್ಯಾಸ್ಟ್ರಿಕ್&zwnj;ಗೆ ಕಾರಣವಾಗಬಹುದು. ಹಾಗಾದರೆ ಯಾವ ಆಹಾರಗಳನ್ನು ಅವಾಯ್ಡ್ ಮಾಡಬೇಕು? ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9ydt567p5qm0s4f4w5mc9pz,imgname-fotojet-1763031454919.jpg" type="image/jpeg" height="390" width="690"/>
            <category>health-life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/health-life/7-common-foods-that-cause-gas-and-bloating-hcdibgg"/>
        </item>
        <item>
            <title><![CDATA[Fact Check: ಒಂದು ಪೆಗ್ ಡ್ರಿಂಕ್ಸ್  ಹೃದಯಕ್ಕೆ ಒಳ್ಳೇದಾ? ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿ ಸತ್ಯ!]]></title>
            <link>https://kannada.asianetnews.com/gallery/health-life/is-moderate-drinking-good-for-your-heart-a-new-global-study-debunks-the-myth-htgr8gy</link>
            <guid isPermaLink="true">https://kannada.asianetnews.com/gallery/health-life/is-moderate-drinking-good-for-your-heart-a-new-global-study-debunks-the-myth-htgr8gy</guid>
            <pubDate>Wed, 08 Jul 2026 17:26:32 +0530</pubDate>
            <description><![CDATA[&lt;p&gt;&lt;strong&gt;Alcohol heart health myth Kannada: &lt;/strong&gt;ಅಲ್ಪ ಪ್ರಮಾಣದಲ್ಲಿ ಮದ್ಯ ಸೇವಿಸುವುದು ಆರೋಗ್ಯಕ್ಕೆ, ವಿಶೇಷವಾಗಿ ಹೃದಯಕ್ಕೆ ಒಳ್ಳೆಯದು ಎಂಬ ನಂಬಿಕೆ ಬಹಳಷ್ಟು ಜನರಲ್ಲಿದೆ. &amp;nbsp;ಒತ್ತಡ ಕಡಿಮೆ ಮಾಡಿಕೊಳ್ಳುವ ನೆಪದಲ್ಲಿ ದಿನಕ್ಕೊಂದು ಗ್ಲಾಸ್ ಆಲ್ಕೋಹಾಲ್ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ. &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcxct8g7959x97mr8qxf91gs,imgname-alcohol--2--1766218080775.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Alcohol heart health myth Kannada: &lt;/strong&gt;ಅಲ್ಪ ಪ್ರಮಾಣದಲ್ಲಿ ಮದ್ಯ ಸೇವಿಸುವುದು ಆರೋಗ್ಯಕ್ಕೆ, ವಿಶೇಷವಾಗಿ ಹೃದಯಕ್ಕೆ ಒಳ್ಳೆಯದು ಎಂಬ ನಂಬಿಕೆ ಬಹಳಷ್ಟು ಜನರಲ್ಲಿದೆ. &amp;nbsp;ಒತ್ತಡ ಕಡಿಮೆ ಮಾಡಿಕೊಳ್ಳುವ ನೆಪದಲ್ಲಿ ದಿನಕ್ಕೊಂದು ಗ್ಲಾಸ್ ಆಲ್ಕೋಹಾಲ್ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ. &amp;nbsp;&amp;nbsp;&lt;/p&gt;&lt;img&gt;&lt;p&gt;&lt;strong&gt;ಸಂಶೋಧಕರಿಂದ ಎಚ್ಚರ&lt;/strong&gt;ಸ್ವಲ್ಪ ಮದ್ಯಪಾನ ಹೃದಯದ ಆರೋಗ್ಯಕ್ಕೆ ಹಿತಕಾರಿ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯವಿಲ್ಲ ಎಂದು ಇತ್ತೀಚಿನ ಅಧ್ಯಯನವೊಂದು ಸ್ಪಷ್ಟಪಡಿಸಿದೆ. ದಿನಕ್ಕೆ ಕೇವಲ ಒಂದು ಸಣ್ಣ ಪೆಗ್ ಮದ್ಯ ಸೇವಿಸಿದರೂ ಸಹ ರಕ್ತದೊತ್ತಡ (BP) ಹೆಚ್ಚಾಗುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ದೀರ್ಘಕಾಲದ ಈ ಅಭ್ಯಾಸವು ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ನಂತಹ ಪ್ರಾಣಾಪಾಯದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.&lt;/p&gt;&lt;img&gt;&lt;p&gt;'&lt;strong&gt;ಹೈಪರ್&zwnj;ಟೆನ್ಷನ್ ಜರ್ನಲ್'ನಲ್ಲಿ ಪ್ರಕಟ&lt;/strong&gt;ಈ ಸಂಶೋಧನೆಯ ವಿವರಗಳನ್ನು ಅಮೆರಿಕನ್ ಹಾರ್ಟ್ ಅಸೋಸಿಯೇಷನ್&zwnj;ನ 'ಹೈಪರ್&zwnj;ಟೆನ್ಷನ್ ಜರ್ನಲ್'ನಲ್ಲಿ ಪ್ರಕಟಿಸಲಾಗಿದೆ. ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಸುಮಾರು 19,548 ವ್ಯಕ್ತಿಗಳ ಆರೋಗ್ಯ ಮಾಹಿತಿಯನ್ನು ಹಲವು ವರ್ಷಗಳ ಕಾಲ ವಿಶ್ಲೇಷಿಸಿ ಈ ತೀರ್ಮಾನಕ್ಕೆ ಬರಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಅಧ್ಯಯನದಲ್ಲಿ ತಿಳಿದುಬಂದ ಪ್ರಮುಖ ಅಂಶಗಳು&lt;/strong&gt;&lt;strong&gt;ಮದ್ಯದ ಪ್ರಮಾಣ ಹೆಚ್ಚಾದಂತೆ ಬಿಪಿ ಹೆಚ್ಚಳ: &lt;/strong&gt;ಮದ್ಯ ಸೇವನೆಯ ಪ್ರಮಾಣ ಹೆಚ್ಚಾದಂತೆ 'ಸಿಸ್ಟೋಲಿಕ್' ರಕ್ತದೊತ್ತಡವೂ (BP ಯ ಮೇಲಿನ ಸಂಖ್ಯೆ) ಕ್ರಮೇಣ ಹೆಚ್ಚಾಗುತ್ತದೆ ಎಂದು ಸಂಶೋಧಕರು ಗುರುತಿಸಿದ್ದಾರೆ.&lt;/p&gt;&lt;p&gt;&lt;strong&gt;ಕಡಿಮೆ ತೆಗೆದುಕೊಂಡರೂ ಡೇಂಜರ್:&lt;/strong&gt; ದಿನಕ್ಕೆ ಕೇವಲ ಒಂದು ಸಣ್ಣ ಡ್ರಿಂಕ್ ಸೇವಿಸುವವರಲ್ಲೂ ರಕ್ತದೊತ್ತಡ ಹೆಚ್ಚಾಗುತ್ತದೆ. ಈ ಏರಿಕೆ ಆರಂಭದಲ್ಲಿ ಸಣ್ಣದಾಗಿ ಕಂಡರೂ, ವರ್ಷಗಳ ಕಾಲ ಈ ಅಭ್ಯಾಸ ಮುಂದುವರಿದರೆ ರಕ್ತನಾಳಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.&lt;/p&gt;&lt;p&gt;&lt;strong&gt;ಲಿಂಗ ವ್ಯತ್ಯಾಸ:&lt;/strong&gt; ಪುರುಷರಲ್ಲಿ ಸಿಸ್ಟೋಲಿಕ್ ಮತ್ತು ಡಯಾಸ್ಟೋಲಿಕ್ ಎರಡೂ ಬಿಪಿ ಹೆಚ್ಚಾಗುವುದು ಕಂಡುಬಂದಿದೆ. ಮಹಿಳೆಯರಲ್ಲಿ ಡಯಾಸ್ಟೋಲಿಕ್ ಬಿಪಿ ಹೆಚ್ಚಳ ಅಷ್ಟಾಗಿ ಸ್ಪಷ್ಟವಾಗಿಲ್ಲದಿದ್ದರೂ, ಒಟ್ಟಾರೆ ರಕ್ತದೊತ್ತಡದ ಅಪಾಯ ಮಾತ್ರ ಇರುತ್ತದೆ. &quot;ಸ್ವಲ್ಪ ಕುಡಿದರೆ ಲಾಭ&quot; ಎಂಬುದು ಕೇವಲ ಭ್ರಮೆ!&lt;/p&gt;&lt;img&gt;&lt;p&gt;&lt;strong&gt;ಕಿಡ್ನಿ ಸಮಸ್ಯೆಯೂ ಬರುತ್ತೆ&lt;/strong&gt;ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಪ್ರೊಫೆಸರ್ ಮಾರ್ಕೊ ವಿನ್ಸೆಟಿ ಅವರ ಪ್ರಕಾರ, &quot;ಮದ್ಯ ಸೇವಿಸದವರಿಗಿಂತ ಸ್ವಲ್ಪ ಕುಡಿಯುವವರಲ್ಲಿ ಯಾವುದೇ ವಿಶೇಷ ಆರೋಗ್ಯ ಪ್ರಯೋಜನಗಳು ಕಂಡುಬಂದಿಲ್ಲ. ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದೇ ಉತ್ತಮ ಮಾರ್ಗ.&quot;&lt;/p&gt;&lt;p&gt;ಬ್ರಿಟನ್&zwnj;ನ ನ್ಯಾಷನಲ್ ಹೆಲ್ತ್ ಸರ್ವೀಸ್ (NHS) ಪ್ರಕಾರ, ಸಾಮಾನ್ಯವಾಗಿ 140/90 mmHg ಗಿಂತ ಹೆಚ್ಚಿನ ರಕ್ತದೊತ್ತಡವಿದ್ದರೆ ಅದನ್ನು ಅಧಿಕ ರಕ್ತದೊತ್ತಡ (High BP) ಎಂದು ಪರಿಗಣಿಸಲಾಗುತ್ತದೆ. ಇದು ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು.&amp;nbsp;&lt;/p&gt;&lt;img&gt;&lt;p&gt;&lt;strong&gt;ಹೃದಯದ ಆರೋಗ್ಯಕ್ಕಾಗಿ ಹೀಗೆ ಮಾಡಿ&lt;/strong&gt;*ಮದ್ಯಪಾನವನ್ನು ಸಾಧ್ಯವಾದಷ್ಟು ಸಂಪೂರ್ಣವಾಗಿ ಬಿಡಿ.*ಧೂಮಪಾನದಿಂದ ದೂರವಿರಿ.*ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ.*ಹಣ್ಣು, ತರಕಾರಿ ಮತ್ತು ಕಡಿಮೆ ಉಪ್ಪು ಇರುವ ಸಮತೋಲಿತ ಆಹಾರ ಸೇವಿಸಿ.*ತೂಕ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.*ಮಧುಮೇಹ ಅಥವಾ ಬಿಪಿ ಇರುವವರು ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಿ.*ಆರೋಗ್ಯಕರ ಜೀವನಶೈಲಿ ಮತ್ತು ದುಶ್ಚಟಗಳಿಂದ ದೂರವಿರುವುದು ಹೃದಯದ ಕಾಯಿಲೆಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಹೃದ್ರೋಗ ತಜ್ಞರು ಸಲಹೆ ನೀಡುತ್ತಾರೆ.&amp;nbsp;&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ಈ ಲೇಖನವು ಅಂತರಾಷ್ಟ್ರೀಯ ಅಧ್ಯಯನದ ಆಧಾರದ ಮೇಲೆ ಕೇವಲ ಸಾಮಾನ್ಯ ಮಾಹಿತಿಗಾಗಿ ನೀಡಲಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಆರೋಗ್ಯ ಸಮಸ್ಯೆಗಳಿದ್ದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ.&amp;nbsp;&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/is-moderate-drinking-good-for-your-heart-a-new-global-study-debunks-the-myth-htgr8gy"/>
        </item>
        <item>
            <title><![CDATA[ಇಡ್ಲಿ ದೋಸೆ ಒಂದೇ ಹಿಟ್ಟಿನಿಂದ ತಯಾರಿಸಿದರೂ ಆರೋಗ್ಯಕ್ಕೆ ಯಾವುದು ಹೆಚ್ಚು ಒಳ್ಳೆಯದು?]]></title>
            <link>https://kannada.asianetnews.com/gallery/health-life/idli-vs-dosa-which-is-better-for-your-health-and-weight-loss-k2q5puw</link>
            <guid isPermaLink="true">https://kannada.asianetnews.com/gallery/health-life/idli-vs-dosa-which-is-better-for-your-health-and-weight-loss-k2q5puw</guid>
            <pubDate>Tue, 07 Jul 2026 23:22:23 +0530</pubDate>
            <description><![CDATA[&lt;p&gt;Idli vs Dosa Health: ದಕ್ಷಿಣ ಭಾರತೀಯರ ನೆಚ್ಚಿನ ಉಪಹಾರಗಳಾದ ಇಡ್ಲಿ ಮತ್ತು ದೋಸೆ ಎರಡೂ ರುಚಿಯಲ್ಲಿ ಅದ್ಭುತ. ಇವೆರಡನ್ನೂ ಒಂದೇ ಹಿಟ್ಟಿನಿಂದ ತಯಾರಿಸಿದರೂ, ಅವುಗಳನ್ನು ಬೇಯಿಸುವ ವಿಧಾನ ಮತ್ತು ಅವುಗಳಿಂದ ಸಿಗುವ ಪೋಷಕಾಂಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krn23hxd2bwjtbwfaanwjz7g,imgname-thumbnail---2026-05-15t110039.347-1778823317421.jpg" type="image/jpeg" height="390" width="690"/>
            <content:encoded><![CDATA[&lt;p&gt;Idli vs Dosa Health: ದಕ್ಷಿಣ ಭಾರತೀಯರ ನೆಚ್ಚಿನ ಉಪಹಾರಗಳಾದ ಇಡ್ಲಿ ಮತ್ತು ದೋಸೆ ಎರಡೂ ರುಚಿಯಲ್ಲಿ ಅದ್ಭುತ. ಇವೆರಡನ್ನೂ ಒಂದೇ ಹಿಟ್ಟಿನಿಂದ ತಯಾರಿಸಿದರೂ, ಅವುಗಳನ್ನು ಬೇಯಿಸುವ ವಿಧಾನ ಮತ್ತು ಅವುಗಳಿಂದ ಸಿಗುವ ಪೋಷಕಾಂಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.&lt;/p&gt;&lt;img&gt;&lt;p&gt;&lt;strong&gt;ಬಹಳಷ್ಟು ಜನರಿಗಿರುವ ಸಂದೇಹ&lt;/strong&gt;ದಕ್ಷಿಣ ಭಾರತದ ಉಪಹಾರಗಳಲ್ಲಿ ಇಡ್ಲಿ ಮತ್ತು ದೋಸೆಗೆ ಒಂದು ವಿಶೇಷ ಸ್ಥಾನವಿದೆ. ಇವು ಕೇವಲ ರುಚಿಯನ್ನು ಮಾತ್ರವಲ್ಲದೆ, ಪ್ರತಿ ತುತ್ತಿನಲ್ಲೂ ಒಂದು ರೀತಿಯ ತೃಪ್ತಿ ಮತ್ತು ನೆಮ್ಮದಿಯನ್ನು ನೀಡುತ್ತವೆ. ಆಶ್ಚರ್ಯಕರ ವಿಷಯವೆಂದರೆ.. ಈ ಎರಡನ್ನೂ ತಯಾರಿಸಲು ಬಳಸುವ ಹಿಟ್ಟು ಒಂದೇ ಆಗಿದ್ದರೂ, ಅವುಗಳ ಆಕೃತಿ, ರುಚಿ ಮತ್ತು ಬೇಯಿಸುವ ವಿಧಾನದಲ್ಲಿ ಮಾತ್ರ ಆಕಾಶಕ್ಕೂ ಭೂಮಿಗೂ ಇರುವಷ್ಟು ವ್ಯತ್ಯಾಸವಿದೆ. ಆದರೆ ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂಬ ಸಂದೇಹ ಬಹಳಷ್ಟು ಜನರಲ್ಲಿ ಇರುತ್ತದೆ. ಇವುಗಳ ಅಡುಗೆ ವಿಧಾನ ಮತ್ತು ತಿನ್ನುವ ಪ್ರಮಾಣವೇ ಇವುಗಳ ಪೌಷ್ಟಿಕಾಂಶದ ಮೌಲ್ಯಗಳನ್ನು ನಿರ್ಧರಿಸುತ್ತವೆ.&lt;/p&gt;&lt;img&gt;&lt;p&gt;&lt;strong&gt;ಇಡ್ಲಿಯ ವಿಷಯಕ್ಕೆ ಬಂದರೆ&lt;/strong&gt;ಇದರಿಂದ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇಡ್ಲಿಯನ್ನು ಕೇವಲ ಹಬೆಯಲ್ಲಿ (Steam) ಬೇಯಿಸುವುದರಿಂದ ಇದರಲ್ಲಿ ಕೊಬ್ಬಿನಾಂಶ (Fat) ಅಸ್ತಿತ್ವದಲ್ಲಿರುವುದಿಲ್ಲ. ಎಣ್ಣೆ ಬಳಸದೆ ಇರುವುದರಿಂದ ಕ್ಯಾಲೋರಿಗಳು ಹೆಚ್ಚಾಗದೆ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ. ಇದರ ಹಿಟ್ಟನ್ನು ಚೆನ್ನಾಗಿ ಹುದುಗಿಸುವುದರಿಂದ (Fermentation) ಇದು ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹವು ಪೋಷಕಾಂಶಗಳನ್ನು ಬೇಗನೆ ಹೀರಿಕೊಳ್ಳುವಂತೆ ಮಾಡುತ್ತದೆ. ಇಡ್ಲಿಗಳು ತುಂಬಾ ಹಗುರವಾಗಿದ್ದು ಸುಲಭವಾಗಿ ಜೀರ್ಣವಾಗುವುದರಿಂದ.. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಹಾಗೆಯೇ ವರ್ಕೌಟ್ ಮಾಡುವವರಿಗೆ ಮತ್ತು ಅನಾರೋಗ್ಯದಿಂದ ಚೇತರಿಸಿಕೊಳ್ಳುವವರಿಗೆ ಇದು ಅತ್ಯುತ್ತಮ ಉಪಹಾರವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಇನ್ನೊಂದೆಡೆ ದೋಸೆ&lt;/strong&gt;ಇದು ಕೂಡ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೋಸೆ ತಿಂದರೆ ಹೊಟ್ಟೆ ತುಂಬಿದ ಅನುಭವ ಉಂಟಾಗಿ, ಬೇಗನೆ ಹಸಿವಾಗುವುದಿಲ್ಲ. ಇದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಹಾಯ ಮಾಡುತ್ತದೆ. ದೋಸೆಯಲ್ಲಿ ವಿವಿಧ ರೀತಿಯ ತರಕಾರಿಗಳು ಅಥವಾ ಪನೀರ್, ಮೊಟ್ಟೆಯಂತಹ ಪ್ರೋಟೀನ್ ಸೇರಿಸಿ ಇನ್ನೂ ಹೆಚ್ಚು ಪೌಷ್ಟಿಕ ಆಹಾರವಾಗಿ ಬದಲಾಯಿಸಿಕೊಳ್ಳಬಹುದು. ಇದರಲ್ಲಿರುವ ಕಾರ್ಬೋಹೈಡ್ರೇಟ್&zwnj;ಗಳಿಂದಾಗಿ ದೇಹಕ್ಕೆ ದಿನವಿಡೀ ಅಗತ್ಯವಿರುವ ಸ್ಥಿರವಾದ ಶಕ್ತಿ ಲಭಿಸುತ್ತದೆ. ಆದ್ದರಿಂದ ಬೆಳಗ್ಗೆ ಕಚೇರಿಗೆ ಹೋಗುವವರಿಗೆ ಅಥವಾ ದೈಹಿಕ ಶ್ರಮ ಹೆಚ್ಚಾಗಿ ಮಾಡುವವರಿಗೆ ದೋಸೆ ಒಂದು ಪರ್ಫೆಕ್ಟ್ ಎನರ್ಜಿ ಬೂಸ್ಟರ್ ಆಗಿ ಕೆಲಸ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ಇಡ್ಲಿ ಮತ್ತು ದೋಸೆಗಳಲ್ಲಿ ಯಾವುದು ಅತ್ಯಂತ ಆರೋಗ್ಯಕರ?&lt;/strong&gt;ಒಂದು ವೇಳೆ ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದು, ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿಲ್ಲದ ಹಗುರವಾದ ಆಹಾರವನ್ನು ಬಯಸಿದರೆ ಇಡ್ಲಿ ಅತ್ಯುತ್ತಮ ಆಯ್ಕೆ. ಅಲ್ಲದೆ ಹೆಚ್ಚು ಸಮಯ ಹೊಟ್ಟೆ ತುಂಬಿರಬೇಕು ಮತ್ತು ದಿನವಿಡೀ ಚಟುವಟಿಕೆಯಿಂದ ಇರಲು ಅಗತ್ಯವಾದ ಶಕ್ತಿ ಬೇಕೆಂದರೆ ನೀವು ದೋಸೆಯನ್ನು ಆರಿಸಿಕೊಳ್ಳಬಹುದು. ಈ ಎರಡನ್ನೂ ಪ್ರೋಟೀನ್ ಹೆಚ್ಚಾಗಿರುವ ಸಾಂಬಾರ್ ಅಥವಾ ಪೌಷ್ಟಿಕವಾದ ಚಟ್ನಿಗಳೊಂದಿಗೆ ಸೇವಿಸಿದಾಗ ಮಾತ್ರ ಸಂಪೂರ್ಣ ಪೋಷಕಾಂಶಗಳು ದೊರೆಯುತ್ತವೆ. ಆದ್ದರಿಂದ ನಾವು ತಿನ್ನುವ ಪ್ರಮಾಣ ಮತ್ತು ತಯಾರಿಸುವ ವಿಧಾನದ ಮೇಲೆ ಇವುಗಳ ಫಲಿತಾಂಶ ಇರುತ್ತದೆ.&lt;/p&gt;&lt;img&gt;&lt;p&gt;&lt;strong&gt;ಈ ಎರಡು ಉಪಹಾರಗಳು ತುಂಬಾ ಉಪಯುಕ್ತ&lt;/strong&gt;ಮಧುಮೇಹ (Diabetes) ಇರುವವರಿಗೆ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಈ ಎರಡು ಉಪಹಾರಗಳು ತುಂಬಾ ಉಪಯುಕ್ತ. ಮಧುಮೇಹಿಗಳಿಗೆ ಇಡ್ಲಿ ತುಂಬಾ ಒಳ್ಳೆಯದು. ಏಕೆಂದರೆ ಇದರ ಗ್ಲೈಸೆಮಿಕ್ ಇಂಡೆಕ್ಸ್ (GI) ಕಡಿಮೆಯಿರುತ್ತದೆ ಮತ್ತು ಫೈಬರ್ ಹೆಚ್ಚಾಗಿರುತ್ತದೆ. ಹಿಟ್ಟು ಹುದುಗುವುದರಿಂದ ಕಾರ್ಬೋಹೈಡ್ರೇಟ್&zwnj;ಗಳು ನಿಧಾನವಾಗಿ ಜೀರ್ಣವಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ತನೆ ಹೆಚ್ಚಾಗದಂತೆ ನಿಯಂತ್ರಿಸುತ್ತದೆ. ಹಾಗೆಯೇ ತೂಕ ಇಳಿಸಿಕೊಳ್ಳಲು ಬಯಸುವವರು ಕಡಿಮೆ ಕ್ಯಾಲೋರಿ ಇರುವ ಇಡ್ಲಿಯನ್ನು ಅಥವಾ ಕಡಿಮೆ ಎಣ್ಣೆಯಲ್ಲಿ ಮಾಡಿದ ದೋಸೆಯನ್ನು ಮಿತವಾಗಿ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ತಜ್ಞರು ಸೂಚಿಸುವುದೇನು?&lt;/strong&gt;ಗ್ಲುಟನ್ ಅಲರ್ಜಿ ಅಥವಾ ಸೆಲಿಯಾಕ್ ಕಾಯಿಲೆ ಇರುವವರಿಗೆ ಇಡ್ಲಿ ಮತ್ತು ದೋಸೆ ಒಂದು ಅದ್ಭುತ ವರ. ಇವು ನೈಸರ್ಗಿಕವಾಗಿಯೇ ಗ್ಲುಟನ್ ಮುಕ್ತ (Gluten-free) ಆಹಾರಗಳಾಗಿವೆ. ಅಕ್ಕಿ ಮತ್ತು ಬೇಳೆಗಳ ಮಿಶ್ರಣದಿಂದ ಮಾಡುವುದರಿಂದ ಯಾವುದೇ ಜೀರ್ಣಕಾರಿ ಸಮಸ್ಯೆಗಳಿಲ್ಲದೆ ಇವುಗಳನ್ನು ಸವಿಯಬಹುದು. ನೀವು ಇವುಗಳನ್ನು ಮನೆಯಲ್ಲೇ ತಯಾರಿಸಿದರೂ ಅಥವಾ ಸಮಯವಿಲ್ಲದಿದ್ದಾಗ ಆನ್&zwnj;ಲೈನ್ ಮೂಲಕ ಆರ್ಡರ್ ಮಾಡಿದರೂ.. ಮಿತಿಮೀರಿ ತಿನ್ನದೆ, ಸರಿಯಾದ ಪ್ರಮಾಣದಲ್ಲಿ ತಿಂದಾಗ ಮಾತ್ರ ಇವುಗಳ ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಸೂಚಿಸುತ್ತಾರೆ.&lt;/p&gt;]]></content:encoded>
            <category>health-life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/idli-vs-dosa-which-is-better-for-your-health-and-weight-loss-k2q5puw"/>
        </item>
        <item>
            <title><![CDATA[Beard Hygiene: ಪುರುಷರೇ, ಗಡ್ಡ ಬಿಡೋದು ಅಶುದ್ಧ ಎಂದುಕೊಂಡಿದ್ದೀರಾ? ವಿಜ್ಞಾನ ಹೇಳಿದ್ದು ಕೇಳಿದ್ರೆ ಅಚ್ಚರಿಪಡ್ತೀರಾ!]]></title>
            <link>https://kannada.asianetnews.com/health-life/is-beard-hygienic-science-reveals-the-truth-facts-you-should-know-gvd/articleshow-kyhehlg</link>
            <guid isPermaLink="true">https://kannada.asianetnews.com/health-life/is-beard-hygienic-science-reveals-the-truth-facts-you-should-know-gvd/articleshow-kyhehlg</guid>
            <pubDate>Fri, 03 Jul 2026 20:30:23 +0530</pubDate>
            <description><![CDATA[&lt;p&gt;ಗಡ್ಡ ಅಶುದ್ಧ ಅಂತ ಹಲವರು ಅಂದುಕೊಂಡಿದ್ದಾರೆ. ಆದರೆ, ಮುಖವನ್ನು ಸರಿಯಾಗಿ ನಿರ್ವಹಿಸಿದರೆ, ಅದರಲ್ಲಿ ಬ್ಯಾಕ್ಟೀರಿಯಾ ಕಡಿಮೆ ಇರುತ್ತದೆ ಎಂದು ವಿಜ್ಞಾನ ಹೇಳುತ್ತದೆ. ದೇಹದ ಇತರ ಭಾಗಗಳಂತೆ ಮುಖವನ್ನು ಸ್ವಚ್ಛವಾಗಿಟ್ಟರೆ, ಗಡ್ಡದಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwm7vjfmq9068he9gk57mtkr,imgname-ch-1783090760180.png" type="image/jpeg" height="390" width="690"/>
            <content:encoded><![CDATA[&lt;p&gt;ಗಡ್ಡ ಬಿಟ್ಟ ಪುರುಷರನ್ನು ನೋಡಿದಾಗ, ಅವರ ಮುಖದಲ್ಲಿ ಕೊಳೆ ಮತ್ತು ಬ್ಯಾಕ್ಟೀರಿಯಾಗಳು ಸುಲಭವಾಗಿ ಸೇರಿಕೊಳ್ಳುತ್ತವೆ, ಹಾಗಾಗಿ ಅದು ಅಶುದ್ಧ ಎಂಬ ಭಾವನೆ ದಶಕಗಳಿಂದಲೂ ಇದೆ. ರೆಸ್ಟೋರೆಂಟ್&zwnj;ಗಳಲ್ಲಿ ಗಡ್ಡ ಬಿಟ್ಟ ಸಿಬ್ಬಂದಿಯನ್ನು ನೋಡುವ ಗ್ರಾಹಕರು ಕೂಡ ಅವರನ್ನು ಅಷ್ಟೊಂದು ಸ್ವಚ್ಛವಾಗಿಲ್ಲ ಎಂದು ಭಾವಿಸುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ, ಈ ಅಭಿಪ್ರಾಯ ಸಂಪೂರ್ಣವಾಗಿ ನಿಜವೇ ಎಂಬುದನ್ನು ವಿವರವಾಗಿ ನೋಡೋಣ.&lt;/p&gt;&lt;p&gt;ಹಲವು ದಶಕಗಳಿಂದ ಜನರಲ್ಲೊಂದು ಸಾಮಾನ್ಯ ಅಭಿಪ್ರಾಯವಿದೆ; ಗಡ್ಡ ಬಿಟ್ಟವರ ಮುಖದಲ್ಲಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಉಳಿದುಕೊಳ್ಳುವುದರಿಂದ ಅವರನ್ನು ಅಶುದ್ಧ ಎಂದು ಪರಿಗಣಿಸಲಾಗುತ್ತದೆ. ಲಂಡನ್&zwnj;ನ ಇಂಪೀರಿಯಲ್ ಕಾಲೇಜಿನ ವ್ಯಾಕ್ಸೀನ್ ಇಮ್ಯುನಾಲಜಿ ವಿಭಾಗದ ಪ್ರೊಫೆಸರ್ ಜಾನ್ ಟ್ರೆಗೋನಿಂಗ್ (John Tregoning) ಹೇಳುವಂತೆ, ಜನರು ಗಡ್ಡಧಾರಿ ಪುರುಷರನ್ನು ಅಶುದ್ಧರೆಂದೇ ನೋಡುತ್ತಾರೆ. ಒಂದು ಅಧ್ಯಯನದಲ್ಲಿ, ರೆಸ್ಟೋರೆಂಟ್&zwnj;ಗೆ ಬರುವ ಗ್ರಾಹಕರು ಗಡ್ಡ ಬಿಟ್ಟ ವೇಟರ್&zwnj;ಗಳಿಗಿಂತ ಕ್ಲೀನ್-ಶೇವ್ ಮಾಡಿದವರನ್ನೇ ಹೆಚ್ಚು ಸ್ವಚ್ಛ ಎಂದು ಪರಿಗಣಿಸುವುದು ಕಂಡುಬಂದಿದೆ. ಆದರೆ, ಈ ಅಭಿಪ್ರಾಯವನ್ನು ವಿಜ್ಞಾನ ಸಂಪೂರ್ಣವಾಗಿ ಒಪ್ಪುವುದಿಲ್ಲ.&lt;/p&gt;&lt;p&gt;ಈ ಬಗ್ಗೆ 1967ರಲ್ಲೇ ಒಂದು ಆರಂಭಿಕ ಅಧ್ಯಯನ ನಡೆಸಲಾಗಿತ್ತು. ಸಂಶೋಧಕರು, ಮಾನವರ ಮುಖದ ಮೇಲೆ ಕೃತಕವಾಗಿ ಬ್ಯಾಕ್ಟೀರಿಯಾಗಳನ್ನು ಸಿಂಪಡಿಸಿ, ಗಡ್ಡ ಇರುವ ಮತ್ತು ಗಡ್ಡ ಇಲ್ಲದ ಮುಖಗಳನ್ನು ಹೋಲಿಸಿ ಪರೀಕ್ಷಿಸಿದರು. ಅದರ ಫಲಿತಾಂಶಗಳು ಆಶ್ಚರ್ಯಕರವಾಗಿದ್ದವು: ಮುಖ ತೊಳೆಯದ ಸ್ಥಿತಿಯಲ್ಲಿ, ಕ್ಲೀನ್-ಶೇವ್ ಮಾಡಿದವರ ಮುಖದಲ್ಲೇ ಅತಿ ಹೆಚ್ಚು ಬ್ಯಾಕ್ಟೀರಿಯಾಗಳು ಕಂಡುಬಂದವು. ನಂತರದ ಸ್ಥಾನದಲ್ಲಿ ಮುಖ ತೊಳೆಯದ ಗಡ್ಡಧಾರಿಗಳು ಮತ್ತು ಮುಖ ತೊಳೆದ ಗಡ್ಡಧಾರಿಗಳು ಇದ್ದರು. ಅತ್ಯಂತ ಸ್ವಚ್ಛವಾಗಿದ್ದುದು ಮುಖ ತೊಳೆದ ಕ್ಲೀನ್-ಶೇವ್ ಮಾಡಿದವರ ಮುಖ. ಇದರಿಂದ, ನೀವು ಮುಖವನ್ನು ಸರಿಯಾಗಿ ತೊಳೆಯುವುದಿಲ್ಲ ಎಂದಾದರೆ, ಕ್ಲೀನ್-ಶೇವ್ ಮಾಡುವುದಕ್ಕಿಂತ ಗಡ್ಡ ಬಿಡುವುದೇ ಉತ್ತಮ ಎಂದು ವಿಜ್ಞಾನ ಹೇಳುತ್ತದೆ.&lt;/p&gt;&lt;h2&gt;&lt;strong&gt;ಯಾವುದೇ ವ್ಯತ್ಯಾಸವಿಲ್ಲ&lt;/strong&gt;&lt;/h2&gt;&lt;p&gt;ಇತ್ತೀಚಿನ ಅಧ್ಯಯನಗಳು ಹೆಚ್ಚಾಗಿ ಸರ್ಜನ್&zwnj;ಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಕೇಂದ್ರಿಕರಿಸಿ ನಡೆದಿವೆ. ಆಸ್ಪತ್ರೆಗಳಲ್ಲಿ ಗಡ್ಡ ಬಿಡುವುದು ಸೋಂಕಿಗೆ ಕಾರಣವಾಗುತ್ತದೆಯೇ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟವಾದ ಒಂದೇ ನಿರ್ಧಾರಕ್ಕೆ ಬರಲಾಗಿಲ್ಲ. ಕೆಲವು ಅಧ್ಯಯನಗಳು ಗಡ್ಡದಲ್ಲಿ ಬ್ಯಾಕ್ಟೀರಿಯಾಗಳು ಸಿಕ್ಕಿಹಾಕಿಕೊಳ್ಳಬಹುದು ಎಂದು ಹೇಳಿದರೆ, ಇತರ ಕೆಲವು ಅಧ್ಯಯನಗಳು ದೊಡ್ಡ ಮಟ್ಟದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದೇ ಹೇಳುತ್ತವೆ. ಹೆಚ್ಚಿನ ಸಂಶೋಧಕರ ಪ್ರಕಾರ, ಮಾಸ್ಕ್&zwnj;ಗಳನ್ನು ಸರಿಯಾಗಿ ಧರಿಸಿದರೆ, ಗಡ್ಡದಿಂದ ಯಾವುದೇ ದೊಡ್ಡ ಪರಿಣಾಮ ಅಥವಾ ಆರೋಗ್ಯದ ಕೊರತೆ ಉಂಟಾಗುವುದಿಲ್ಲ.&lt;/p&gt;&lt;p&gt;ಗಡ್ಡ ಅಶುದ್ಧ ಎಂಬ ಭಯವು ಬಹಳ ಉತ್ಪ್ರೇಕ್ಷಿತವಾಗಿದೆ. ಮಾನವ ದೇಹದ ಯಾವುದೇ ಭಾಗದಲ್ಲಿ-ಅಲ್ಲಿ ಕೂದಲು ಇರಲಿ ಅಥವಾ ಇಲ್ಲದಿರಲಿ-ಬ್ಯಾಕ್ಟೀರಿಯಾಗಳು ಇರುವುದು ಸಹಜ. ಮುಖದ ಮೇಲೆ ಯಾವುದೇ ತೆರೆದ ಗಾಯಗಳಿಲ್ಲದಿದ್ದರೆ, ಈ ಬ್ಯಾಕ್ಟೀರಿಯಾಗಳಿಂದ ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ, ಸರಿಯಾದ ಮುಖದ ಸ್ವಚ್ಛತೆ ಮತ್ತು ನಿಯಮಿತ ಸ್ನಾನದ ಆರೈಕೆ ಇದ್ದರೆ ಗಡ್ಡವು ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯಕರ.&lt;/p&gt;]]></content:encoded>
            <category>health-life</category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/is-beard-hygienic-science-reveals-the-truth-facts-you-should-know-gvd/articleshow-kyhehlg"/>
        </item>
        <item>
            <title><![CDATA[Health Tips: ಆರೋಗ್ಯವಾಗಿದ್ದೇನೆ ಅಂತಾ ನಿರ್ಲಕ್ಷ್ಯ ಬೇಡ; ವರ್ಷಕ್ಕೊಮ್ಮೆ ಈ 5 ದೇಹ ಪರೀಕ್ಷೆ ಮಾಡಿಸಿಕೊಳ್ಳಿ!]]></title>
            <link>https://kannada.asianetnews.com/gallery/health-life/health-tips-dont-negligent-get-these-5-body-check-ups-done-once-a-year-rav-o752i8t</link>
            <guid isPermaLink="true">https://kannada.asianetnews.com/gallery/health-life/health-tips-dont-negligent-get-these-5-body-check-ups-done-once-a-year-rav-o752i8t</guid>
            <pubDate>Wed, 08 Jul 2026 07:52:41 +0530</pubDate>
            <description><![CDATA[&lt;p&gt;ಎಷ್ಟೇ ಆರೋಗ್ಯವಾಗಿದ್ದರೂ ನಿರ್ಲಕ್ಷ್ಯ ಬೇಡ. ಪ್ರತಿವರ್ಷ ಕೆಲವು ಅಗತ್ಯ ದೇಹ ತಪಾಸಣೆ ಮಾಡುವುದು ಒಳ್ಳೆಯದು ಇದರಿಂದ ಕಾಯಿಲೆಗಳನ್ನ ಆರಂಭದಲ್ಲೇ ಪತ್ತೆ ಮಾಡಬಹುದು. ಕೆಳಗಿನ ಐದು ಟೆಸ್ಟ್ ಗಳನ್ನು ತಪ್ಪದೇ ಮಾಡಿಸಿ ಅಂತಾರೆ ವೈದ್ಯರು, ಏಕೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwzqenzt3z7mqcqdh3tq7s1j,imgname-----------------------2026-07-08t073315.508-1783476213753.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಷ್ಟೇ ಆರೋಗ್ಯವಾಗಿದ್ದರೂ ನಿರ್ಲಕ್ಷ್ಯ ಬೇಡ. ಪ್ರತಿವರ್ಷ ಕೆಲವು ಅಗತ್ಯ ದೇಹ ತಪಾಸಣೆ ಮಾಡುವುದು ಒಳ್ಳೆಯದು ಇದರಿಂದ ಕಾಯಿಲೆಗಳನ್ನ ಆರಂಭದಲ್ಲೇ ಪತ್ತೆ ಮಾಡಬಹುದು. ಕೆಳಗಿನ ಐದು ಟೆಸ್ಟ್ ಗಳನ್ನು ತಪ್ಪದೇ ಮಾಡಿಸಿ ಅಂತಾರೆ ವೈದ್ಯರು, ಏಕೆ ಗೊತ್ತಾ?&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ, ಜನರು ಆರೋಗ್ಯದ ವಿಚಾರದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜಾಗೃತರಾಗುತ್ತಿದ್ದಾರೆ. ಅದರಲ್ಲೂ ಕೋವಿಡ್ ಬಳಿಕ ವಯಸಿನ ಮಿತಿಯಿಲ್ಲದೆ, ಆರೋಗ್ಯವಾಗಿದ್ದವರಿಗೂ, ಮಕ್ಕಳಿಗೂ ಮುದುಕರವರೆಗೂ ಹೃದಯಾಘಾತ ಸಂಭವಿಸುವುದು ಹೆಚ್ಚಳವಾಗುತ್ತಿರುವ ಪರಿಣಾಮವಾಗಿ ಇಂದು ಅನೇಕ ಜನರು ಸಣ್ಣ ಸಮಸ್ಯೆಗಳಿಗೂ ಸಹ ಆರೋಗ್ಯ ತಪಾಸಣೆಗೆ ಹೊರಡುತ್ತಾರೆ. ಕೆಲವರು, ಯಾವುದೇ ಸಮಸ್ಯೆಗಳಿಲ್ಲದೆ, ಪ್ರತಿ ಕೆಲವು ತಿಂಗಳಿಗೊಮ್ಮೆ ಪೂರ್ಣ ದೇಹದ ತಪಾಸಣೆಗೆ ಒಳಗಾಗುತ್ತಲೇ ಇರುತ್ತಾರೆ.&lt;/p&gt;&lt;img&gt;&lt;p&gt;ಬಹಳಷ್ಟು ಜನ ಪ್ರಶ್ನೆ ಎಂದರೆ ನಾವು ಆರೋಗ್ಯವಾಗಿದ್ದೇವೆ, ನಮಗ್ಯಾವ ಕಾಯಿಲೆಯೂ ಇಲ್ಲ.. ಆದ್ರೂ ನಾವು ಸಂಪೂರ್ಣ ದೇಹದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆ ಅಥವಾ ಕೆಲವು ಅಗತ್ಯ ಪರೀಕ್ಷೆಗಳು ಸಾಕೆ? ಎಂಬುದು. ಆರೋಗ್ಯ ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ಆರೋಗ್ಯವಾಗಿದ್ದರೆ, ಅವರು ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ತಪಾಸಣೆಗೆ ಒಳಗಾಗಬೇಕಾಗಿಲ್ಲ, ಆದರೆ ಅವರು ಖಂಡಿತವಾಗಿಯೂ ವರ್ಷಕ್ಕೊಮ್ಮೆ ಕೆಲವು ಅಗತ್ಯ ಹೆಲ್ತ್ ಟೆಸ್ಟ್&zwnj;ಗಳನ್ನು ಮಾಡಿಸಿಕೊಳ್ಳಬೇಕು. ಇದು ಆರಂಭಿಕ ಹಂತಗಳಲ್ಲಿ ಅನೇಕ ಗಂಭೀರ ಕಾಯಿಲೆಗಳನ್ನು ಪತ್ತೆಹಚ್ಚಲು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪ್ರಾರಂಭಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಪ್ರತಿ ವರ್ಷ ಈ ಟೆಸ್ಟ್&zwnj;ಗಳನ್ನ ಮಾಡಿಸಿಕೊಳ್ಳುವುದು ಒಳ್ಳೆಯದು.&lt;/p&gt;&lt;img&gt;&lt;p&gt;ತಜ್ಞರ ಪ್ರಕಾರ, ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ತಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ಲಕ್ಷಣಗಳಿಲ್ಲದೆ ಬೆಳೆಯುತ್ತದೆ ಮತ್ತು ಕ್ರಮೇಣ ಹೃದಯ, ಮೂತ್ರಪಿಂಡಗಳು ಮತ್ತು ಮೆದುಳಿಗೆ ಹಾನಿ ಮಾಡುತ್ತದೆ. ಉಪವಾಸ ರಕ್ತದಲ್ಲಿನ ಸಕ್ಕರೆ ಮತ್ತು HbA1c ಪರೀಕ್ಷೆಗಳು ಮಧುಮೇಹ ಮತ್ತು ಪಿಡಿಯಾಬಿಟಿಸ್ ಅನ್ನು ಅವುಗಳ ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚಬಹುದು. CBC (ಸಂಪೂರ್ಣ ರಕ್ತದ ಎಣಿಕೆ) ಪರೀಕ್ಷೆಯು ರಕ್ತಹೀನತೆ, ಸೋಂಕುಗಳು ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ವೈದ್ಯರು ಪ್ರತಿ ವರ್ಷ ಯಕೃತ್ತಿನ ಕಾರ್ಯ ಪರೀಕ್ಷೆಗಳು (LFTಗಳು), ಮೂತ್ರಪಿಂಡದ ಕಾರ್ಯ ಪರೀಕ್ಷೆಗಳು (KETಗಳು), ಥೈರಾಯ್ಡ್ ಪ್ರೊಫೈಲ್&zwnj;ಗಳು, ಹಿಮೋಗ್ಲೋಬಿನ್, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ಅನ್ನು ಸಹ ಪರೀಕ್ಷಿಸಬೇಕೆಂದು ಶಿಫಾರಸು ಮಾಡುತ್ತಾರೆ. ಏಕೆಂದರೆ ಈ ಪರೀಕ್ಷೆಗಳು ಕೊಬ್ಬಿನ ಯಕೃತ್ತು, ಮೂತ್ರಪಿಂಡದ ಕಾರ್ಯ, ಥೈರಾಯ್ಡ್ ಅಸ್ವಸ್ಥತೆಗಳು, ರಕ್ತಹೀನತೆ ಮತ್ತು ದೇಹದಲ್ಲಿನ ಅಗತ್ಯ ವಿಟಮಿನ್ ಕೊರತೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ನಗರವಾಸಿಗಳಲ್ಲಿ ವಿಟಮಿನ್ ಡಿ ಮತ್ತು ಬಿ 12 ಕೊರತೆಗಳು ಹೆಚ್ಚು.&lt;/p&gt;&lt;img&gt;&lt;p&gt;ರಕ್ತ ಪರೀಕ್ಷೆಗಳ ಜೊತೆಗೆ, ಎದೆಯ ಎಕ್ಸ್-ರೇ, ಕಿಬ್ಬೊಟ್ಟೆಯ ಅಲ್ಪಾ ಸೌಂಡ್&zwnj;ಗಳನ್ನು ಸಹ ಉಪಯುಕ್ತ ಪರೀಕ್ಷೆಗಳೆಂದು ಪರಿಗಣಿಸಲಾಗುತ್ತದೆ. ಅಲ್ಪಾ ಸೌಂಡ್&zwnj;ಗಳು ಕಿಬ್ಬೊಟ್ಟೆಯ ಕುಹರದೊಳಗಿನ ಅಂಗಗಳ ಸ್ಥಿತಿಯನ್ನು ನಿರ್ಣಯಿಸಬಹುದು. ಕೊಬ್ಬಿನ ಯಕೃತ್ತಿನಂತಹ ಸ್ಥಿತಿಗಳನ್ನು ಸಹ ಗುರುತಿಸಬಹುದು. ಅಧಿಕ ತೂಕ ಹೊಂದಿರುವ ವ್ಯಕ್ತಿಗಳು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು, ಏಕೆಂದರೆ ಬೊಜ್ಜು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಹೊಂದಿರುವ ರೋಗಿಗಳು ಸಹ ತಮ್ಮ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು.&lt;/p&gt;&lt;img&gt;&lt;p&gt;ತಜ್ಞರ ಪ್ರಕಾರ, ಹೃದಯ ಕಾಯಿಲೆಗೆ ಹೆಚ್ಚಿನ ಅಪಾಯದಲ್ಲಿರುವ ಜನರು 40 ನೇ ವಯಸ್ಸಿನಿಂದ ಪ್ರಾರಂಭಿಸಿ ಪ್ರತಿ ಐದು ವರ್ಷಗಳಿಗೊಮ್ಮೆ CT ಕರೋನರಿ ಆಂಜಿಯೋಗ್ರಫಿ ಮತ್ತು CT ಕ್ಯಾಲ್ಸಿಯಂ ಸ್ಕೋರ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಸಾಮಾನ್ಯ ಅಪಾಯದಲ್ಲಿರುವವರು 50 ನೇ ವಯಸ್ಸಿನಿಂದ ಪ್ರಾರಂಭಿಸಿ ಪ್ರತಿ ಐದು ವರ್ಷಗಳಿಗೊಮ್ಮೆ CT ಕರೋನರಿ ಆಂಜಿಯೋಗ್ರಫಿ, CT ಕ್ಯಾಲ್ಸಿಯಂ ಸ್ಕೋರ್ ಪರೀಕ್ಷೆ ಮಾಡಿಸಬೇಕು. ಇದರಿಂದ ಹೆಚ್ಚುವರಿಯಾಗಿ, ಹೃದಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡಲು 40 ವರ್ಷ ವಯಸ್ಸಿನ ನಂತರ ಇಸಿಜಿ, ಎಕೋಕಾರ್ಡಿಯೋಗ್ರಫಿ ಮತ್ತು ಒತ್ತಡ ಪರೀಕ್ಷೆಗಳನ್ನು ಸಹ ಮಾಡಬಹುದು.&lt;/p&gt;&lt;img&gt;&lt;p&gt;ಗರ್ಭಕಂಠದ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಮಹಿಳೆಯರು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ಯಾಪ್ ಸ್ಮಿಯರ್ ಪರೀಕ್ಷೆ ಮಾಡಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ. ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು 40 ವರ್ಷ ವಯಸ್ಸಿನ ನಂತರ ವಾರ್ಷಿಕವಾಗಿ ಮ್ಯಾಮೊಗ್ರಫಿಯನ್ನು ನಡೆಸಬೇಕು.&lt;/p&gt;&lt;p&gt;ಆಸ್ಟಿಯೊಪೊರೋಸಿಸ್ ಅಪಾಯ ಹೆಚ್ಚಿರುವ ಮಹಿಳೆಯರು 50 ವರ್ಷ ವಯಸ್ಸಿನ ನಂತರ DEXA ಮೂಳೆ ಸಾಂದ್ರತೆಯ ಸ್ಕ್ಯಾನ್ ಅನ್ನು ಸಹ ಮಾಡಿಸಿಕೊಳ್ಳಬೇಕು.&lt;/p&gt;]]></content:encoded>
            <category>health-life</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/health-life/health-tips-dont-negligent-get-these-5-body-check-ups-done-once-a-year-rav-o752i8t"/>
        </item>
        <item>
            <title><![CDATA[Wheat-free Diet: ಪ್ರತಿ ದಿನ ಚಪಾತಿ ತಿನ್ನೋರು ಒಂದು ತಿಂಗಳು ರೂಟೀನ್‌  ಬದಲಿಸಿ, ಗೋಧಿ ಬಿಟ್ರೆ ಏನಾಗುತ್ತೆ ಗೊತ್ತಾ?]]></title>
            <link>https://kannada.asianetnews.com/gallery/food/what-happens-if-you-abstain-from-wheat-food-for-a-month-including-wheat-chapatis-q599tkq</link>
            <guid isPermaLink="true">https://kannada.asianetnews.com/gallery/food/what-happens-if-you-abstain-from-wheat-food-for-a-month-including-wheat-chapatis-q599tkq</guid>
            <pubDate>Wed, 08 Jul 2026 12:20:29 +0530</pubDate>
            <description><![CDATA[&lt;p&gt;Wheat Chapati : ನಮ್ಮಲ್ಲಿ ಬಹುತೇಕ ಪ್ರತಿದಿನದ ಊಟ ಅಂದ್ರೆ ಗೋಧಿ ಚಪಾತಿ. ಆರೋಗ್ಯಕರ ಆಹಾರ ಅಂತಲೇ ನಾವು ಇದನ್ನು ನಂಬಿದ್ದೇವೆ. ಆದರೆ ಆರೋಗ್ಯ ತಜ್ಞರು, ಗೋಧಿ ಚಪಾತಿ ಬಗ್ಗೆ ಹೇಳೋದೇ ಬೇರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx07jew2c2wmjghmmn7cpft2,imgname-wheat-chapati-1783493114753.jpg" type="image/jpeg" height="390" width="690"/>
            <content:encoded><![CDATA[&lt;p&gt;Wheat Chapati : ನಮ್ಮಲ್ಲಿ ಬಹುತೇಕ ಪ್ರತಿದಿನದ ಊಟ ಅಂದ್ರೆ ಗೋಧಿ ಚಪಾತಿ. ಆರೋಗ್ಯಕರ ಆಹಾರ ಅಂತಲೇ ನಾವು ಇದನ್ನು ನಂಬಿದ್ದೇವೆ. ಆದರೆ ಆರೋಗ್ಯ ತಜ್ಞರು, ಗೋಧಿ ಚಪಾತಿ ಬಗ್ಗೆ ಹೇಳೋದೇ ಬೇರೆ.&lt;/p&gt;&lt;img&gt;&lt;p&gt;ಕೆಲವರಿಗೆ ಗೋಧಿಯಲ್ಲಿರುವ ಗ್ಲುಟನ್ ಎಂಬ ಪ್ರೋಟೀನ್ ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್, ಅಸಿಡಿಟಿ ಅಥವಾ ಹೊಟ್ಟೆಯಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಆದರೆ ಇದು ಎಲ್ಲರಲ್ಲೂ ಆಗುವುದಿಲ್ಲ. ಕೆಲವು ತಜ್ಞರ ಅಭಿಪ್ರಾಯದ ಪ್ರಕಾರ, ನೀವು 21 ರಿಂದ 30 ದಿನಗಳವರೆಗೆ ಗೋಧಿಯನ್ನು ಬಿಟ್ಟು, ಅದರ ಬದಲು ರಾಗಿ, ಜೋಳ, ಸಜ್ಜೆ ಅಥವಾ ಇತರ ಸಿರಿಧಾನ್ಯಗಳನ್ನು ಸೇವಿಸಿದರೆ, ದೇಹದಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ಗಮನಿಸಬಹುದು.&lt;/p&gt;&lt;img&gt;&lt;p&gt;ನೀವು ಒಂದು ತಿಂಗಳ ಕಾಲ ಗೋಧಿ ಚಪಾತಿ, ಗೋಧಿ ದೋಸೆ ಸೇರಿದಂತೆ ಗೋಧಿ ಪದಾರ್ಥ ಸೇವನೆ ಬಿಟ್ಟಲ್ಲಿ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆ ಹಗುರವಾಗಿರುವ ಅನುಭವ ಕೆಲವರಿಗೆ ಸಿಗಬಹುದು.&lt;/p&gt;&lt;img&gt;&lt;p&gt;ನೀವು ಗೋಧಿ ಬದಲು ಸಿರಿಧಾನ್ಯಗಳ ಚಪಾತಿ ಸೇವನೆ ಶುರು ಮಾಡಿದ್ರೆ ಸಿರಿಧಾನ್ಯಗಳಲ್ಲಿರುವ ನಾರಿನಾಂಶ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ನೀವು ಪದೇ ಪದೇ ಆಹಾರ ಸೇವನೆ ಮಾಡುವ ಅಗತ್ಯ ಇರೋದಿಲ್ಲ. ಇದ್ರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಸ್ಥಿರವಾಗಿಡಲು ಸಹ ಇದು ನೆರವಾಗಬಹುದು. ಇದನ್ನು ನೀವು ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೆ ಉತ್ತಮ.&lt;/p&gt;&lt;img&gt;&lt;p&gt;ನಿತ್ಯ ಗೋಧಿ ಸೇವನೆ ಮಾಡುವವರು ಒಂದು ತಿಂಗಳು ಗೋಧಿಯಿಂದ ದೂರವಿದ್ರೆ ಕೆಲವರ ದಿನಚರಿ ಬದಲಾಗುತ್ತದೆ. ಚೈತನ್ಯದಿಂದ ಇರ್ಬಹುದು. ಚರ್ಮದ ಆರೋಗ್ಯದಲ್ಲಿ ಸಣ್ಣ ಮಟ್ಟಿನ ಸುಧಾರಣೆಯನ್ನು ನೀವು ಗಮನಿಸಬಹುದು. ಇಲ್ಲಿ ಗಮನಿಸಬೇಕಾದ ವಿಷ್ಯ ಅಂದ್ರೆ ಗೋಧಿ ಎಲ್ಲರಿಗೂ ಹಾನಿಕಾರಕ ಆಹಾರವಲ್ಲ. ಹೆಚ್ಚಿನ ಜನರು ಯಾವುದೇ ತೊಂದರೆಯಿಲ್ಲದೆ ಗೋಧಿಯನ್ನು ಸೇವಿಸಬಹುದು. ವಿಶೇಷವಾಗಿ ಸಿಲಿಯಾಕ್ ಕಾಯಿಲೆ ಅಥವಾ ವೈದ್ಯರು ದೃಢಪಡಿಸಿದ ಗ್ಲುಟನ್ ಸಂವೇದನೆ ಇರುವವರು ಮಾತ್ರ ಗ್ಲುಟನ್ನ್ನು ತಪ್ಪಿಸಬೇಕಾಗುತ್ತದೆ. ಗೋಧಿಯನ್ನು ಸಂಪೂರ್ಣವಾಗಿ ಬಿಡುವ ಮೊದಲು ನಿಮ್ಮ ದೇಹವನ್ನು ಗಮನಿಸಿ. ಅಗತ್ಯವಿದ್ದರೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯಿರಿ.&lt;/p&gt;]]></content:encoded>
            <category>health-life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/food/what-happens-if-you-abstain-from-wheat-food-for-a-month-including-wheat-chapatis-q599tkq"/>
        </item>
        <item>
            <title><![CDATA[Sneezing Facts: ಸೀನು ಯಾಕೆ ಬರುತ್ತೆ? ಇದರ ಹಿಂದಿನ ಸೀಕ್ರೆಟ್ 99% ಜನರಿಗೆ ಗೊತ್ತೇ ಇಲ್ಲ!]]></title>
            <link>https://kannada.asianetnews.com/gallery/life/why-sneezing-is-good-for-you-everything-you-need-to-know-kvn-qgn2p0t</link>
            <guid isPermaLink="true">https://kannada.asianetnews.com/gallery/life/why-sneezing-is-good-for-you-everything-you-need-to-know-kvn-qgn2p0t</guid>
            <pubDate>Wed, 08 Jul 2026 14:57:51 +0530</pubDate>
            <description><![CDATA[&lt;p&gt;ಸೀನು ಬರುವುದು ದೇಹದ ಒಂದು ಸಾಮಾನ್ಯ ಮತ್ತು ನೈಸರ್ಗಿಕ ಪ್ರಕ್ರಿಯೆ. ವಿಜ್ಞಾನದ ಪ್ರಕಾರ, ಇದು ದೇಹದ ಒಂದು ರಕ್ಷಣಾ ವ್ಯವಸ್ಥೆ. ಮೂಗಿನಲ್ಲಿರುವ ಧೂಳು, ಅಲರ್ಜಿ ಕಾರಕಗಳು ಮತ್ತು ಇತರ ಹಾನಿಕಾರಕ ಕಣಗಳನ್ನು ಹೊರಹಾಕಿ ನಮ್ಮನ್ನು ರಕ್ಷಿಸುವುದೇ ಇದರ ಕೆಲಸ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j14f8rsz49rbgxbpac52pde4,imgname-Sneezing-Home-Remedies-1719210894142.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೀನು ಬರುವುದು ದೇಹದ ಒಂದು ಸಾಮಾನ್ಯ ಮತ್ತು ನೈಸರ್ಗಿಕ ಪ್ರಕ್ರಿಯೆ. ವಿಜ್ಞಾನದ ಪ್ರಕಾರ, ಇದು ದೇಹದ ಒಂದು ರಕ್ಷಣಾ ವ್ಯವಸ್ಥೆ. ಮೂಗಿನಲ್ಲಿರುವ ಧೂಳು, ಅಲರ್ಜಿ ಕಾರಕಗಳು ಮತ್ತು ಇತರ ಹಾನಿಕಾರಕ ಕಣಗಳನ್ನು ಹೊರಹಾಕಿ ನಮ್ಮನ್ನು ರಕ್ಷಿಸುವುದೇ ಇದರ ಕೆಲಸ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಮ್ಮ ಮೂಗಿನೊಳಗೆ ನಾಸಲ್ ಮ್ಯೂಕೋಸಾ (Nasal Mucosa) ಎಂಬ ಸೂಕ್ಷ್ಮವಾದ ಪದರ ಇರುತ್ತದೆ. ಧೂಳು, ಹೊಗೆ, ವೈರಸ್, ಬ್ಯಾಕ್ಟೀರಿಯಾ ಅಥವಾ ಯಾವುದೇ ತೀಕ್ಷ್ಣವಾದ ವಾಸನೆ ಈ ಪದರವನ್ನು ಕೆರಳಿಸಿದಾಗ, ಅಲ್ಲಿರುವ ನರಗಳು ತಕ್ಷಣ ಮೆದುಳಿಗೆ ಸಂದೇಶ ಕಳುಹಿಸುತ್ತವೆ. ಮೆದುಳಿನ 'ಸ್ನೀಜ್ ಸೆಂಟರ್' ಸೀನು ಮಾಡಲು ದೇಹಕ್ಕೆ ಆದೇಶ ನೀಡುತ್ತದೆ. ಆಗ ಶ್ವಾಸಕೋಶಗಳು ಆಳವಾದ ಉಸಿರನ್ನು ತೆಗೆದುಕೊಂಡು, ಎದೆ, ಗಂಟಲು ಮತ್ತು ಮುಖದ ಸ್ನಾಯುಗಳು ಒಟ್ಟಾಗಿ ಹಠಾತ್ ಒತ್ತಡವನ್ನು ಸೃಷ್ಟಿಸುತ್ತವೆ. ಇದರಿಂದ ಮೂಗು ಮತ್ತು ಬಾಯಿಯಿಂದ ಗಾಳಿಯು ಅತ್ಯಂತ ವೇಗವಾಗಿ ಹೊರಬಂದು, ಹೊರಗಿನ ಕಣಗಳನ್ನು ಹೊರಹಾಕುತ್ತದೆ. ಅಂದರೆ, ಸೀನು ನಮ್ಮ ಉಸಿರಾಟದ ವ್ಯವಸ್ಥೆಯನ್ನು (Respiratory System) ಸುರಕ್ಷಿತವಾಗಿಡುವ ಒಂದು ಕ್ಲೀನಿಂಗ್ ಪ್ರಕ್ರಿಯೆ.&lt;/p&gt;&lt;img&gt;&lt;p&gt;ಧೂಳು ಮತ್ತು ಮಣ್ಣು, ಪರಾಗ (Pollen Allergy), ಶೀತ-ನೆಗಡಿ ಅಥವಾ ವೈರಲ್ ಸೋಂಕು, ತೀಕ್ಷ್ಣವಾದ ಪರ್ಫ್ಯೂಮ್ ಅಥವಾ ರಾಸಾಯನಿಕದ ವಾಸನೆ, ಹೊಗೆ ಮತ್ತು ಮಾಲಿನ್ಯ, ಸಾಕುಪ್ರಾಣಿಗಳ ಕೂದಲು, ಪ್ರಖರವಾದ ಬಿಸಿಲು (Photic Sneezing), ತಣ್ಣನೆಯ ಗಾಳಿ, ಮಸಾಲೆಯುಕ್ತ ಆಹಾರ ಸೇವನೆಯಿಂದಲೂ ಕೆಲವರಿಗೆ ಸೀನು ಬರುತ್ತದೆ.&lt;/p&gt;&lt;img&gt;&lt;p&gt;ವೈದ್ಯರ ಪ್ರಕಾರ, ಸೀನನ್ನು ಬಲವಂತವಾಗಿ ತಡೆಯುವುದು ಸರಿಯಲ್ಲ. ಸೀನನ್ನು ತಡೆದರೆ ಮೂಗು ಮತ್ತು ಕಿವಿಯೊಳಗೆ ಒತ್ತಡ ಹೆಚ್ಚಾಗಬಹುದು. ಇದರಿಂದ ಕಿವಿಯ ಡ್ರಮ್, ಸೈನಸ್ ಅಥವಾ ಗಂಟಲಿನ ಮೇಲೆ ಪರಿಣಾಮ ಬೀರಬಹುದು. ಸೀನು ಬಂದಾಗ ಅದನ್ನು ತಡೆಯುವ ಬದಲು ಕರವಸ್ತ್ರ ಅಥವಾ ಮೊಣಕೈಯಿಂದ ಮೂಗು-ಬಾಯಿಯನ್ನು ಮುಚ್ಚಿಕೊಳ್ಳಬೇಕು.&lt;/p&gt;&lt;img&gt;&lt;p&gt;ದಿನಕ್ಕೆ 1-2 ಬಾರಿ ಸೀನು ಬರುವುದು ಸಾಮಾನ್ಯ. ಆದರೆ, ಹಲವು ದಿನಗಳವರೆಗೆ ನಿರಂತರವಾಗಿ ಸೀನು ಬರುತ್ತಿದ್ದರೆ ಮತ್ತು ಅದರ ಜೊತೆಗೆ ಮೂಗು ಸೋರುವಿಕೆ, ಕಣ್ಣುಗಳಲ್ಲಿ ತುರಿಕೆ ಅಥವಾ ಉಸಿರಾಟದ ತೊಂದರೆ ಇದ್ದರೆ, ಅದು ಅಲರ್ಜಿಯ ಸಂಕೇತವಾಗಿರಬಹುದು. ಸೀನಿನ ಜೊತೆಗೆ ತೀವ್ರ ಜ್ವರ, ಮೈಕೈ ನೋವು ಮತ್ತು ಗಂಟಲು ಸೋಂಕು ಇದ್ದರೆ, ಅದು ವೈರಲ್ ಕಾಯಿಲೆಯ ಕಾರಣವಾಗಿರಬಹುದು. ದೀರ್ಘಕಾಲದವರೆಗೆ ಸೀನು ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ.&lt;/p&gt;&lt;img&gt;&lt;p&gt;ಕರವಸ್ತ್ರ ಅಥವಾ ಟಿಶ್ಯೂನಿಂದ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಿ. ಬಳಸಿದ ಟಿಶ್ಯೂವನ್ನು ಎಸೆಯಿರಿ. ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ ಅಥವಾ ಸ್ಯಾನಿಟೈಸರ್ ಬಳಸಿ. ಅಲರ್ಜಿ ಇದ್ದರೆ ಧೂಳು, ಹೊಗೆ ಮತ್ತು ಅಲರ್ಜಿ ಉಂಟುಮಾಡುವ ವಸ್ತುಗಳಿಂದ ದೂರವಿರಿ. ಸಾಕಷ್ಟು ನೀರು ಕುಡಿಯಿರಿ ಮತ್ತು ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯಿರಿ.&lt;/p&gt;&lt;img&gt;&lt;p&gt;ಒಂದು ಸೀನಿನ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ ಸುಮಾರು 150-160 ಕಿ.ಮೀ. ತಲುಪಬಹುದು. ಸೀನು ಬಂದಾಗ, ಕಣ್ಣುಗಳು ಕೆಲವು ಸೆಕೆಂಡುಗಳ ಕಾಲ ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಪ್ರಖರವಾದ ಬೆಳಕನ್ನು ನೋಡಿ ಸೀನು ಬರುವ ಸ್ಥಿತಿಯನ್ನು ಫೋಟಿಕ್ ಸ್ನೀಜ್ ರಿಫ್ಲೆಕ್ಸ್ (Photic Sneeze Reflex) ಎಂದು ಕರೆಯಲಾಗುತ್ತದೆ. ಇದು ಕೆಲವರಲ್ಲಿ ಆನುವಂಶಿಕವಾಗಿರುತ್ತದೆ. ನಾಯಿ ಮತ್ತು ಬೆಕ್ಕುಗಳಂತಹ ಅನೇಕ ಪ್ರಾಣಿಗಳು ಸಹ ಸೀನುತ್ತವೆ. ಸೀನಿನ ಮೂಲಕ ಮೂಗಿನಲ್ಲಿ ಸಿಲುಕಿರುವ ಲಕ್ಷಾಂತರ ಸಣ್ಣ ಕಣಗಳು ಹೊರಬರುತ್ತವೆ.&lt;/p&gt;]]></content:encoded>
            <category>health-life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/life/why-sneezing-is-good-for-you-everything-you-need-to-know-kvn-qgn2p0t"/>
        </item>
        <item>
            <title><![CDATA[Science of Anger: ಕೋಪ ಯಾಕೆ ಬರುತ್ತೆ? ಮನಸ್ಸು, ದೇಹ, ಭಾವನೆಗಳ ನಡುವೆ ಏನಾಗುತ್ತೆ ಗೊತ್ತಾ?]]></title>
            <link>https://kannada.asianetnews.com/health-life/the-science-of-anger-why-we-get-mad-and-how-the-brain-reacts-gvd/articleshow-qmdeszc</link>
            <guid isPermaLink="true">https://kannada.asianetnews.com/health-life/the-science-of-anger-why-we-get-mad-and-how-the-brain-reacts-gvd/articleshow-qmdeszc</guid>
            <pubDate>Wed, 08 Jul 2026 16:43:13 +0530</pubDate>
            <description><![CDATA[&lt;p&gt;Science of Anger: ಕೋಪ ಅನ್ನೋದು ನಮ್ಮ ದೇಹ ಮತ್ತು ಮನಸ್ಸಿನ ಒಂದು ಸಾಮಾನ್ಯ ಭಾವನಾತ್ಮಕ ಪ್ರತಿಕ್ರಿಯೆ (Emotional Response). ನಮ್ಮ ಜೊತೆ ಏನೋ ತಪ್ಪು ನಡೀತು, ಏನೋ ಅಪಾಯ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwv1x2ydr9thztzk32h2c1zf,imgname-anger-and-brain-1783319399373.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೋಪ ಅನ್ನೋದು ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ಬಾರಿ ಅನುಭವಿಸುವ ಭಾವನೆ. ಯಾರದ್ದೋ ಮಾತು ಕೇಳಿ ಬೇಜಾರಾದಾಗ, ಅಂದುಕೊಂಡ ಕೆಲಸ ಆಗದಿದ್ದಾಗ ಅಥವಾ ಯಾರಾದರೂ ಕಿರಿಕಿರಿ ಮಾಡಿದಾಗ ಕೋಪ ಬರೋದು ಸಹಜ. ಆದ್ರೆ, ಈ ಕೋಪ ಯಾಕೆ ಬರುತ್ತೆ ಅಂತಾ ಎಂದಾದರೂ ಯೋಚಿಸಿದ್ದೀರಾ? ಇದು ಕೇವಲ ನಮ್ಮ ಸ್ವಭಾವನಾ ಅಥವಾ ಇದರ ಹಿಂದೆ ಏನಾದರೂ ವಿಜ್ಞಾನ ಇದೆಯಾ?&lt;/p&gt;&lt;p&gt;ಕೋಪ ಅನ್ನೋದು ನಮ್ಮ ದೇಹ ಮತ್ತು ಮನಸ್ಸಿನ ಒಂದು ಸಾಮಾನ್ಯ ಭಾವನಾತ್ಮಕ ಪ್ರತಿಕ್ರಿಯೆ (Emotional Response). ನಮ್ಮ ಜೊತೆ ಏನೋ ತಪ್ಪು ನಡೀತು, ಏನೋ ಅಪಾಯ ಇದೆ, ಅಥವಾ ನಾವು ಅಂದುಕೊಂಡ ಹಾಗೆ ಕೆಲಸ ಆಗಲಿಲ್ಲ ಅಂತಾ ಅನಿಸಿದಾಗ, ನಮ್ಮ ಮೆದುಳು ಕೋಪದಿಂದ ಪ್ರತಿಕ್ರಿಯಿಸಬಹುದು. ಅಂದರೆ, ಕೋಪವೇನೂ ಒಂದು ಕಾಯಿಲೆ ಅಲ್ಲ. ಇದೊಂದು ಸಾಮಾನ್ಯ ಭಾವನೆ. ನಾವು ಅದನ್ನು ಹೇಗೆ ನಿಭಾಯಿಸುತ್ತೇವೆ ಅನ್ನೋದಷ್ಟೇ ಮುಖ್ಯ.&lt;/p&gt;&lt;p&gt;ನಮಗೆ ನೋವು ಅಥವಾ ಅಪಾಯವನ್ನುಂಟು ಮಾಡುವ ಘಟನೆ ನಡೆದಾಗ, ನಮ್ಮ ಮೆದುಳಿನ 'ಅಮಿಗ್ಡಾಲಾ' (Amygdala) ಎಂಬ ಭಾಗ ವೇಗವಾಗಿ ಸಕ್ರಿಯಗೊಳ್ಳುತ್ತದೆ. ಅಮಿಗ್ಡಾಲಾ ಎಂಬುದು ಮೆದುಳಿನ ಎರಡೂ ಬದಿಗಳಲ್ಲಿರುವ ಬಾದಾಮಿ ಗಾತ್ರದ ಜೀವಕೋಶಗಳ ಒಂದು ಸಣ್ಣ ಗುಂಪು. ಇದು ಭಾವನೆ, ಭಯ, ಕೋಪ ಮತ್ತು ಅಪಾಯವನ್ನು ಗುರುತಿಸುವುದರ ಜೊತೆಗೆ ನಮ್ಮ ನೆನಪಿನ ಶಕ್ತಿಯನ್ನು ಬಲಪಡಿಸುವ ಕೆಲಸ ಮಾಡುತ್ತದೆ.&lt;/p&gt;&lt;p&gt;ಇದರ ನಂತರ, ದೇಹದಲ್ಲಿ ಅಡ್ರಿನಾಲಿನ್ (Adrenaline) ಮತ್ತು ಕಾರ್ಟಿಸೋಲ್ (Cortisol) ನಂತಹ ಹಾರ್ಮೋನುಗಳು ಹೆಚ್ಚಾಗುತ್ತವೆ. ಇದರಿಂದ ಹೃದಯ ಬಡಿತ ಹೆಚ್ಚಾಗಿ, ಉಸಿರಾಟ ವೇಗವಾಗುತ್ತದೆ ಮತ್ತು ದೇಹವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗುತ್ತದೆ. ಇದೇ ಕಾರಣಕ್ಕೆ ಕೋಪ ಬಂದಾಗ ಹಲವರ ಮುಖ ಕೆಂಪಾಗುತ್ತದೆ ಮತ್ತು ಧ್ವನಿ ಜೋರಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಅನುಭವ, ಸ್ವಭಾವ ಮತ್ತು ಪರಿಸ್ಥಿತಿಗಳು ಬೇರೆ ಬೇರೆಯಾಗಿರುತ್ತವೆ. ಹಾಗಾಗಿ ಕೋಪಕ್ಕೆ ಕಾರಣಗಳೂ ಬೇರೆಯೇ ಇರಬಹುದು.&lt;/p&gt;&lt;p&gt;&lt;strong&gt;ಉದಾಹರಣೆಗೆ:&lt;/strong&gt;&lt;/p&gt;&lt;p&gt;-ಕೆಲವರಿಗೆ ಟ್ರಾಫಿಕ್ ಜಾಮ್&zwnj;ನಿಂದ ಕೋಪ ಬರುತ್ತೆ.&lt;/p&gt;&lt;p&gt;-ಕೆಲವರಿಗೆ ಪದೇ ಪದೇ ತಪ್ಪು ಹುಡುಕಿದರೆ ಕೋಪ ಬರುತ್ತೆ.&lt;/p&gt;&lt;p&gt;&lt;strong&gt;-ಇನ್ನು ಕೆಲವರಿಗೆ ಅವಮಾನವಾದರೆ ಕೋಪ ಬರುತ್ತೆ.&lt;/strong&gt;&lt;/p&gt;&lt;p&gt;-ಮತ್ತೆ ಕೆಲವರಿಗೆ ಕೆಲಸದ ಒತ್ತಡ ಹೆಚ್ಚಾದಾಗ ಕೋಪ ಬರುತ್ತೆ. ಅಂದರೆ, ಕೋಪಕ್ಕೆ ಕೇವಲ ಘಟನೆ ಕಾರಣವಲ್ಲ, ಬದಲಾಗಿ ಆ ಘಟನೆಯನ್ನು ನಾವು ಹೇಗೆ ನೋಡುತ್ತೇವೆ ಮತ್ತು ಅನುಭವಿಸುತ್ತೇವೆ ಅನ್ನೋದು ಕೂಡ ಮುಖ್ಯವಾಗುತ್ತದೆ. ಉದಾಹರಣೆಗೆ, ಇಬ್ಬರು ಸ್ನೇಹಿತರು ಆಫೀಸ್&zwnj;ಗೆ ಹೋಗುವಾಗ ಟ್ರಾಫಿಕ್ ಜಾಮ್&zwnj;ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಅಂದುಕೊಳ್ಳಿ. ಮೊದಲ ವ್ಯಕ್ತಿ, 'ಇವತ್ತೂ ಲೇಟ್ ಆಯ್ತು' ಎಂದುಕೊಂಡು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾನೆ. ಆದರೆ ಎರಡನೇ ವ್ಯಕ್ತಿ, ಜಾಮ್ ತನ್ನ ಹಿಡಿತದಲ್ಲಿಲ್ಲ ಎಂದು ಸುಮ್ಮನಾಗುತ್ತಾನೆ. ಇಲ್ಲಿ ಘಟನೆ ಒಂದೇ, ಆದರೆ ಇಬ್ಬರ ಆಲೋಚನೆ ಬೇರೆ. ಇದೇ ಕಾರಣಕ್ಕೆ ಎಲ್ಲರಿಗೂ ಒಂದೇ ವಿಷಯಕ್ಕೆ ಒಂದೇ ರೀತಿ ಕೋಪ ಬರುವುದಿಲ್ಲ.&lt;/p&gt;&lt;p&gt;ಕೆಲವೊಮ್ಮೆ ಕೋಪ ಬಂದರೆ ಅದು ಸಾಮಾನ್ಯ. ಆದರೆ, ಸಣ್ಣಪುಟ್ಟ ವಿಷಯಗಳಿಗೂ ಅತಿಯಾಗಿ ಕೋಪ ಬರುತ್ತಿದ್ದರೆ, ಕೋಪದಲ್ಲಿ ವಸ್ತುಗಳನ್ನು ಒಡೆಯಬೇಕು ಅಥವಾ ಜನರಿಗೆ ಹಾನಿ ಮಾಡಬೇಕು ಎನಿಸಿದರೆ, ಅಥವಾ ಕೋಪದಿಂದಾಗಿ ನಿಮ್ಮ ಸಂಬಂಧಗಳು, ಕೆಲಸ ಅಥವಾ ಓದಿನ ಮೇಲೆ ಪರಿಣಾಮ ಬೀರುತ್ತಿದ್ದರೆ, ಆಗ ಖಂಡಿತವಾಗಿಯೂ ಮನಶ್ಶಾಸ್ತ್ರಜ್ಞರನ್ನು (Psychologist) ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಬೇಕು.&lt;/p&gt;&lt;p&gt;&lt;strong&gt;ಕೋಪವನ್ನು ನಿಯಂತ್ರಿಸಲು ತಜ್ಞರು ಕೆಲವು ಸರಳ ಸಲಹೆಗಳನ್ನು ನೀಡಿದ್ದಾರೆ&lt;/strong&gt;&lt;/p&gt;&lt;p&gt;-ಕೋಪ ಬಂದಾಗ ದೀರ್ಘವಾಗಿ ಉಸಿರಾಡಿ.&lt;/p&gt;&lt;p&gt;-ಪ್ರತಿಕ್ರಿಯಿಸುವ ಮೊದಲು ಕೆಲವು ಸೆಕೆಂಡುಗಳ ಕಾಲ ನಿಂತು ಯೋಚಿಸಿ.&lt;/p&gt;&lt;p&gt;-ಪೂರ್ತಿಯಾಗಿ ನಿದ್ದೆ ಮಾಡಿ ಮತ್ತು ನಿಯಮಿತವಾಗಿ ಯೋಗ ಮಾಡಿ.&lt;/p&gt;&lt;p&gt;-ನಿಮ್ಮ ಮಾತನ್ನು ಶಾಂತವಾಗಿ ಹೇಳಲು ಪ್ರಯತ್ನಿಸಿ.&lt;/p&gt;&lt;p&gt;-ಒತ್ತಡ ಹೆಚ್ಚಾಗಿದ್ದರೆ, ನಿಮ್ಮ ಆಪ್ತರೊಂದಿಗೆ ಮಾತನಾಡಿ.&lt;/p&gt;&lt;h2&gt;&lt;strong&gt;ಮಾಹಿತಿ ಮೂಲ&lt;/strong&gt;&lt;/h2&gt;&lt;p&gt;ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್, ನ್ಯಾಷನಲ್ ಇನ್&zwnj;ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್, ಮೇಯೊ ಕ್ಲಿನಿಕ್, ವಿಶ್ವ ಆರೋಗ್ಯ ಸಂಸ್ಥೆ.&lt;/p&gt;]]></content:encoded>
            <category>health-life</category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/the-science-of-anger-why-we-get-mad-and-how-the-brain-reacts-gvd/articleshow-qmdeszc"/>
        </item>
        <item>
            <title><![CDATA[Smart Phone: ಮಲಗುವ 1 ಗಂಟೆ ಮೊದಲು ನಿಮ್ಮ ಮೊಬೈಲ್ ಪಕ್ಕಕ್ಕಿಡಿ; ನಿಮ್ಮ ದೇಹದಲ್ಲಿ ಆಗುವ ಮ್ಯಾಜಿಕ್ ನೋಡಿ!]]></title>
            <link>https://kannada.asianetnews.com/mobiles/do-not-use-mobile-one-hour-before-you-go-to-sleep-and-observe-the-changes-in-your-body/articleshow-rg7hysi</link>
            <guid isPermaLink="true">https://kannada.asianetnews.com/mobiles/do-not-use-mobile-one-hour-before-you-go-to-sleep-and-observe-the-changes-in-your-body/articleshow-rg7hysi</guid>
            <pubDate>Wed, 08 Jul 2026 17:22:55 +0530</pubDate>
            <description><![CDATA[&lt;p&gt;ನೀವು ಚೆನ್ನಾಗಿ ನಿದ್ರೆ ಮಾಡಿದಾಗ ದೇಹದಲ್ಲಿ 'ಹ್ಯೂಮನ್ ಗ್ರೋತ್ ಹಾರ್ಮೋನ್' ಚೆನ್ನಾಗಿ ಬಿಡುಗಡೆಯಾಗುತ್ತದೆ. ಇದು ನಿಮ್ಮ ಚರ್ಮದ ಕೋಶಗಳನ್ನು ಪುನಶ್ಚೇತನಗೊಳಿಸಿ, ಮುಖದ ಮೇಲೆ ಸುಕ್ಕುಗಳು ಬರದಂತೆ ತಡೆಯುತ್ತದೆ. ಇನ್ನೂ ಬಹಳಷ್ಟು ಉಪಯೋಗ ಇದೆ, ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0est514rrsff5601wyzyva,imgname-mobile-safety-tips-1783500695713.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಲಗುವ ಮೊದಲು ಮೊಬೈಲ್ ಫೋನ್ ದೂರ ಇಡಿ&lt;/strong&gt;&lt;/p&gt;&lt;p&gt;ಇಂದಿನ ಯುಗದಲ್ಲಿ, ಫಾಸ್ಟ್&zwnj; ಲೈಫ್&zwnj;ನಲ್ಲಿ ನಾವು ಪ್ರತಿಯೊಂದಕ್ಕೂ ಸ್ಮಾರ್ಟ್&zwnj;ಫೋನ್ (Smart Phone) ಅವಲಂಬಿಸಿದ್ದೇವೆ. ಬೆಳಿಗ್ಗೆ ಕಣ್ಣು ಬಿಟ್ಟಾಗ ಅಲಾರಾಂ ಆಫ್ ಮಾಡುವುದರಿಂದ ಹಿಡಿದು, ರಾತ್ರಿ ಕಣ್ಣು ಮುಚ್ಚುವವರೆಗೂ ಮೊಬೈಲ್ (Mobile) ನಮ್ಮ ಕೈಯಲ್ಲೇ ಇರುತ್ತದೆ. ಅದರಲ್ಲೂ ವಿಶೇಷವಾಗಿ, ಬೆಡ್&zwnj;ರೂಮ್&zwnj;ನ ಲೈಟ್ ಆಫ್ ಮಾಡಿದ ಮೇಲೆ ಕಂಬಳಿ ಒಳಗೆ ಮೊಬೈಲ್ ಹಿಡಿದು 'ರೀಲ್ಸ್' ನೋಡುವುದು ಅಥವಾ ಚಾಟ್ ಮಾಡುವುದು ನಮಗೆ ಅರಿವಿಲ್ಲದಂತೆ ಒಂದು ಚಟವಾಗಿ ಬದಲಾಗಿದೆ. ಆದರೆ, ಈ ಕೆಟ್ಟ ಅಭ್ಯಾಸ ನಮ್ಮ ದೇಹದ ಒಳಗಿರುವ ಹಾರ್ಮೋನುಗಳ ಸಮತೋಲನವನ್ನು ಹೇಗೆ ಕೆಡಿಸುತ್ತಿದೆ ಎಂಬುದು ನಮಗೆ ಗೊತ್ತೇ ಇಲ್ಲ.&lt;/p&gt;&lt;p&gt;ವೈದ್ಯಕೀಯ ಸಂಶೋಧನೆಗಳ ಪ್ರಕಾರ, ರಾತ್ರಿ ಮಲಗುವ ಕನಿಷ್ಠ ಒಂದು ಗಂಟೆ ಮೊದಲು ನಿಮ್ಮ ಮೊಬೈಲ್ ಫೋನ್ ಪಕ್ಕಕ್ಕೆ ಇಟ್ಟರೆ, ನಿಮ್ಮ ದೇಹದಲ್ಲಿ ಮೂರು ಅದ್ಭುತ ಬದಲಾವಣೆಗಳು ಘಟಿಸುತ್ತವೆ. ಆ ಬದಲಾವಣೆಗಳು ಯಾವುವು ಎಂಬ ಕಂಪ್ಲೀಟ್ 'ಲೈಫ್&zwnj;ಸ್ಟೈಲ್ ಗೈಡ್' ಇಲ್ಲಿದೆ ನೋಡಿ..&lt;/p&gt;&lt;h2&gt;1. ಮೆಲಟೋನಿನ್ ಮ್ಯಾಜಿಕ್: ನೈಸರ್ಗಿಕ ನಿದ್ರೆಯ ಮಾತ್ರೆ!&lt;/h2&gt;&lt;p&gt;ನಮ್ಮ ಮೆದುಳಿನಲ್ಲಿರುವ 'ಪೀನಲ್ ಗ್ರಂಥಿ' ಕತ್ತಲಾಗುತ್ತಿದ್ದಂತೆ 'ಮೆಲಟೋನಿನ್' ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದು ನಮಗೆ ಆಳವಾದ ಮತ್ತು ಸುಖವಾದ ನಿದ್ರೆ ಬರಲು ಸಹಾಯ ಮಾಡುತ್ತದೆ. ಆದರೆ ನಾವು ಸ್ಕ್ರೀನ್ ನೋಡಿದಾಗ ಹೊರಬರುವ 'ನೀಲಿ ಬೆಳಕು' (Blue Light), ಮೆದುಳಿಗೆ ಇದು ಇನ್ನೂ ಹಗಲು ಎಂದು ಸುಳ್ಳು ಸಂದೇಶ ರವಾನಿಸುತ್ತದೆ. ಇದರಿಂದ ಮೆಲಟೋನಿನ್ ಉತ್ಪತ್ತಿ 50% ಕಡಿಮೆಯಾಗುತ್ತದೆ. ನೀವು ಫೋನ್ ಪಕ್ಕಕ್ಕೆ ಇಟ್ಟರೆ, ಈ ಹಾರ್ಮೋನ್ ಸರಿಯಾಗಿ ಬಿಡುಗಡೆಯಾಗಿ, ಮಾತ್ರೆಗಳಿಲ್ಲದೆ ನೀವು ನೈಸರ್ಗಿಕವಾಗಿ ಆಳವಾದ ನಿದ್ರೆಗೆ ಜಾರುತ್ತೀರಿ.&lt;/p&gt;&lt;p&gt;2. ಕಾರ್ಟಿಸೋಲ್ ನಿಯಂತ್ರಣ: ಒತ್ತಡಮುಕ್ತ ಮನಸ್ಸು&lt;/p&gt;&lt;p&gt;'ಕಾರ್ಟಿಸೋಲ್' ಅನ್ನು ಸ್ಟ್ರೆಸ್ ಹಾರ್ಮೋನ್ ಎನ್ನಲಾಗುತ್ತದೆ. ರಾತ್ರಿ ಹೊತ್ತು ಮಲಗುವ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇತರರ ಜೀವನ ನೋಡಿ ಹೊಟ್ಟೆಕಿಚ್ಚು ಪಡುವುದು, ನೆಗೆಟಿವ್ ನ್ಯೂಸ್ ಓದುವುದು ಅಥವಾ ಕ್ರೈಮ್ ಸರಣಿಗಳನ್ನು ನೋಡುವುದು ಈ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯ ಬಡಿತವನ್ನು ಏರಿಸಿ, ಮೆದುಳನ್ನು ಸದಾ ಜಾಗೃತ ಸ್ಥಿತಿಯಲ್ಲಿ ಇಡುತ್ತದೆ. ಫೋನ್ ಬಳಸುವುದನ್ನು ನಿಲ್ಲಿಸಿದರೆ, ಕಾರ್ಟಿಸೋಲ್ ಮಟ್ಟ ಕಡಿಮೆಯಾಗಿ ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ. ಬೆಳಿಗ್ಗೆ ಎದ್ದಾಗ ನೀವು ಹೊಸ ಉತ್ಸಾಹದಿಂದ ಇರುತ್ತೀರಿ.&lt;/p&gt;&lt;h3&gt;3. ಹಸಿವಿನ ಹಾರ್ಮೋನುಗಳ ಸಮತೋಲನ: ತೂಕ ಇಳಿಕೆಗೆ ಸಹಕಾರಿ&lt;/h3&gt;&lt;p&gt;ನಮ್ಮ ಹಸಿವನ್ನು ನಿಯಂತ್ರಿಸುವ ಎರಡು ಹಾರ್ಮೋನುಗಳೆಂದರೆ 'ಲೆಪ್ಟಿನ್' ಮತ್ತು 'ಗ್ರೆಲಿನ್'. ನಾವು ಫೋನ್ ಬಳಸುತ್ತಾ ನಿದ್ರೆ ಗೆಟ್ಟರೆ, ಈ ಹಾರ್ಮೋನುಗಳ ಬ್ಯಾಲೆನ್ಸ್ ತಪ್ಪುತ್ತದೆ. ಅದಕ್ಕೇ ರಾತ್ರಿ 12 ಗಂಟೆಯ ನಂತರ ಏನಾದರೂ ತಿನ್ನಬೇಕು (Midnight Cravings) ಅನ್ನಿಸುವುದು! ಮಲಗುವ ಮುನ್ನ ಫೋನ್ ದೂರವಿಟ್ಟು ಸರಿಯಾಗಿ ನಿದ್ರೆ ಮಾಡಿದರೆ, ಈ ಹಾರ್ಮೋನುಗಳು ಸಮತೋಲನಕ್ಕೆ ಬರುತ್ತವೆ. ಇದು ಅನಗತ್ಯವಾಗಿ ತೂಕ ಏರುವುದನ್ನು ತಡೆಯುತ್ತದೆ ಮತ್ತು ನಿಮ್ಮ ಚಯಾಪಚಯ ಕ್ರಿಯೆಯನ್ನು (Metabolism) ಸುಧಾರಿಸುತ್ತದೆ.&lt;/p&gt;&lt;p&gt;ಬೋನಸ್ ಟಿಪ್: ಸೌಂದರ್ಯದ ರಹಸ್ಯ!&lt;/p&gt;&lt;p&gt;ನೀವು ಚೆನ್ನಾಗಿ ನಿದ್ರೆ ಮಾಡಿದಾಗ ದೇಹದಲ್ಲಿ 'ಹ್ಯೂಮನ್ ಗ್ರೋತ್ ಹಾರ್ಮೋನ್' ಚೆನ್ನಾಗಿ ಬಿಡುಗಡೆಯಾಗುತ್ತದೆ. ಇದು ನಿಮ್ಮ ಚರ್ಮದ ಕೋಶಗಳನ್ನು ಪುನಶ್ಚೇತನಗೊಳಿಸಿ, ಮುಖದ ಮೇಲೆ ಸುಕ್ಕುಗಳು ಬರದಂತೆ ತಡೆಯುತ್ತದೆ. ಅಂದರೆ, ಯಾವುದೇ ಕಾಸ್ಮೆಟಿಕ್ಸ್ ಇಲ್ಲದೆ ನೈಸರ್ಗಿಕವಾಗಿ ಹೊಳೆಯುವ ಚರ್ಮ ಪಡೆಯಲು ರಾತ್ರಿ ಮಲಗುವ ಮೊದಲು ಮೊಬೈಲ್ ದೂರ ಇಡೋದು ಅತ್ಯುತ್ತಮ ಮದ್ದು!&lt;/p&gt;&lt;p&gt;ಒಟ್ಟಿನಲ್ಲಿ, ಇಂದಿನಿಂದಲೇ ಒಂದು ಸಣ್ಣ ಬದಲಾವಣೆ ಮಾಡಿಕೊಳ್ಳಿ. ರಾತ್ರಿ 9 ಅಥವಾ 10 ಗಂಟೆಯ ನಂತರ ಫೋನ್&zwnj;ಗೆ 'ಗುಡ್ ಬೈ' ಹೇಳಿ, ಒಂದು ಪುಸ್ತಕ ಓದುವ ಅಥವಾ ಪ್ರೀತಿಪಾತ್ರರ ಜೊತೆ ಮಾತನಾಡುವ ಹವ್ಯಾಸ ಬೆಳೆಸಿಕೊಳ್ಳಿ. ಆರೋಗ್ಯವಂತ ಜೀವನ ನಿಮ್ಮದಾಗಲಿ.&lt;/p&gt;]]></content:encoded>
            <category>health-life</category>
            <dc:creator>Shriram Bhat</dc:creator>
            <atom:link href="https://kannada.asianetnews.com/mobiles/do-not-use-mobile-one-hour-before-you-go-to-sleep-and-observe-the-changes-in-your-body/articleshow-rg7hysi"/>
        </item>
        <item>
            <title><![CDATA[Tea And Snacks: ಚಹಾದ ಜೊತೆ ಬಜ್ಜಿ, ವಡೆ ತಿನ್ನುವ ಅಭ್ಯಾಸವಿದೆಯೇ? ಹಾಗಿದ್ರೆ ಮೊದಲು ಇದನ್ನೊಮ್ಮೆ ಓದಿ!]]></title>
            <link>https://kannada.asianetnews.com/health-life/health-risks-of-combining-tea-with-fried-snacks-like-vada-and-bajji-gvd/articleshow-rhk7xwm</link>
            <guid isPermaLink="true">https://kannada.asianetnews.com/health-life/health-risks-of-combining-tea-with-fried-snacks-like-vada-and-bajji-gvd/articleshow-rhk7xwm</guid>
            <pubDate>Fri, 03 Jul 2026 21:58:44 +0530</pubDate>
            <description><![CDATA[&lt;p&gt;ಚಹಾದ ಜೊತೆ ಬಜ್ಜಿ, ವಡೆ ತಿನ್ನುವುದು ಹಲವರ ಸಾಮಾನ್ಯ ಅಭ್ಯಾಸ. ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಇದರಿಂದಾಗುವ ಸಮಸ್ಯೆಗಳು ಮತ್ತು ಆರೋಗ್ಯಕರ ಪರ್ಯಾಯಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwmbnk7rv6etwas56p1b8w5s,imgname-chgc-1783094758648.png" type="image/jpeg" height="390" width="690"/>
            <content:encoded><![CDATA[&lt;p&gt;ಸಂಜೆಯಾಗುತ್ತಿದ್ದಂತೆ ಭಾರತದ ಮೂಲೆ ಮೂಲೆಯಲ್ಲಿರುವ ಚಹಾ ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಾಗುತ್ತದೆ. ಕೆಲಸದ ಒತ್ತಡ, ಆಯಾಸ ಮರೆತು ಬಿಸಿ ಚಹಾದೊಂದಿಗೆ ಬಿಸಿ ಬಿಸಿ ಬಜ್ಜಿ ಅಥವಾ ವಡೆ ತಿನ್ನುವುದು ಅನೇಕರ ದೈನಂದಿನ ಅಭ್ಯಾಸ. ನಾಲಿಗೆಗೆ ರುಚಿ ನೀಡುವ ಈ ಕಾಂಬಿನೇಷನ್, ನಮ್ಮ ದೇಹಕ್ಕೆ ನಿಧಾನವಾಗಿ ವಿಷವಾಗುತ್ತಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಈ ಅಭ್ಯಾಸದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರವಾಗಿ ತಿಳಿಯೋಣ.&lt;/p&gt;&lt;p&gt;ನಮ್ಮ ದೇಹವು ಒಂದು ನಿರ್ದಿಷ್ಟ ತಾಪಮಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಬಿಸಿ ಚಹಾ ಕುಡಿದ ತಕ್ಷಣ ಎಣ್ಣೆಯಲ್ಲಿ ಕರಿದ ಬಜ್ಜಿ, ವಡೆ ತಿಂದಾಗ, ಹೊಟ್ಟೆಯಲ್ಲಿನ ಜೀರ್ಣಕಾರಿ ಆಮ್ಲಗಳ ಸ್ವಭಾವ ಬದಲಾಗುತ್ತದೆ. ಚಹಾದಲ್ಲಿರುವ 'ಟ್ಯಾನಿನ್' ಮತ್ತು 'ಕೆಫೀನ್' ಅಂಶಗಳು, ಬಜ್ಜಿ-ವಡೆಯಲ್ಲಿರುವ ಪ್ರೋಟೀನ್ ಮತ್ತು ಕಬ್ಬಿಣಾಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತವೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ, ಎದೆಯುರಿ, ಅಸಿಡಿಟಿ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಶುರುವಾಗುತ್ತವೆ. ಈ ಅಭ್ಯಾಸ ಮುಂದುವರಿದರೆ ಅಲ್ಸರ್ ಆಗುವ ಅಪಾಯವೂ ಹೆಚ್ಚು.&lt;/p&gt;&lt;p&gt;ರಸ್ತೆಬದಿಯ ಅಂಗಡಿಗಳಲ್ಲಿ ಬಜ್ಜಿ, ವಡೆ ಮಾಡಲು ಬಳಸುವ ಎಣ್ಣೆಯನ್ನು ಮತ್ತೆ ಮತ್ತೆ ಕಾಯಿಸಲಾಗುತ್ತದೆ. ಹೀಗೆ ಪದೇ ಪದೇ ಎಣ್ಣೆಯನ್ನು ಬಿಸಿ ಮಾಡಿದಾಗ, ಅದು ವಿಷಕಾರಿ 'ಟ್ರಾನ್ಸ್ ಫ್ಯಾಟ್' ಆಗಿ ಬದಲಾಗುತ್ತದೆ. ಈ ಅಪಾಯಕಾರಿ ಕೊಬ್ಬು ನಮ್ಮ ರಕ್ತನಾಳಗಳಲ್ಲಿ ಶೇಖರಗೊಂಡು, ಒಳ್ಳೆಯ ಕೊಲೆಸ್ಟ್ರಾಲ್ (HDL) ಕಡಿಮೆ ಮಾಡಿ, ಕೆಟ್ಟ ಕೊಲೆಸ್ಟ್ರಾಲ್ (LDL) ಹೆಚ್ಚಿಸುತ್ತದೆ. ಇದರಿಂದ ರಕ್ತದೊತ್ತಡ (BP) ಹೆಚ್ಚಾಗಿ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ.&lt;/p&gt;&lt;p&gt;ಬಜ್ಜಿ, ವಡೆ ಮಾಡಲು ಬಳಸುವ ಮೈದಾ ಅಥವಾ ಕಡಲೆ ಹಿಟ್ಟು ಮತ್ತು ಚಹಾಕ್ಕೆ ಬಳಸುವ ಸಕ್ಕರೆ, ಇವೆಲ್ಲವೂ 'ಖಾಲಿ ಕ್ಯಾಲೋರಿ'ಗಳನ್ನು ಹೊಂದಿವೆ. ಇವುಗಳನ್ನು ಒಟ್ಟಿಗೆ ಸೇವಿಸಿದಾಗ, ರಕ್ತದಲ್ಲಿನ ಸಕ್ಕರೆ ಮಟ್ಟ ಥಟ್ಟನೆ ಏರುತ್ತದೆ. ಇದನ್ನು ಸರಿದೂಗಿಸಲು, ಮೇದೋಜ್ಜೀರಕ ಗ್ರಂಥಿ (Pancreas) ಹೆಚ್ಚು ಇನ್ಸುಲಿನ್ ಸ್ರವಿಸಬೇಕಾಗುತ್ತದೆ. ದಿನ ಕಳೆದಂತೆ, ದೇಹವು 'ಇನ್ಸುಲಿನ್ ರೆಸಿಸ್ಟೆನ್ಸ್' ಸ್ಥಿತಿಯನ್ನು ತಲುಪುತ್ತದೆ. ಇದು ಟೈಪ್ 2 ಡಯಾಬಿಟಿಸ್&zwnj;ಗೆ ಮುಖ್ಯ ಕಾರಣ. ಜೊತೆಗೆ, ಈ ಅನಗತ್ಯ ಕ್ಯಾಲೋರಿಗಳು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಶೇಖರವಾಗಿ ಬೊಜ್ಜು ಮತ್ತು ಹೊಟ್ಟೆಯ ಭಾಗದಲ್ಲಿ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ.&lt;/p&gt;&lt;p&gt;ವರ್ಷಗಳಿಂದ ರೂಢಿಸಿಕೊಂಡ ಅಭ್ಯಾಸವನ್ನು ಒಂದೇ ದಿನದಲ್ಲಿ ಬದಲಿಸುವುದು ಕಷ್ಟ. ಆದರೆ ಆರೋಗ್ಯಕರ ಜೀವನಕ್ಕಾಗಿ ಕೆಲವು ಸುಲಭ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅವಶ್ಯಕ.&lt;/p&gt;&lt;p&gt;&lt;strong&gt;ಸಮಯದ ಅಂತರ ಮುಖ್ಯ: &lt;/strong&gt;ಚಹಾ ಕುಡಿದ ನಂತರ ಕನಿಷ್ಠ 30-45 ನಿಮಿಷಗಳ ಅಂತರ ಬಿಟ್ಟು ತಿಂಡಿ ತಿನ್ನಿ. ಇದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ.&lt;/p&gt;&lt;p&gt;&lt;strong&gt;ಆರೋಗ್ಯಕರ ತಿಂಡಿಗಳು: &lt;/strong&gt;ಎಣ್ಣೆಯಲ್ಲಿ ಕರಿದ ತಿಂಡಿಗಳ ಬದಲು, ಬೇಯಿಸಿದ ಕಡಲೆ, ಶೇಂಗಾ, ಮೊಳಕೆ ಕಾಳುಗಳು, ಸೀಸನಲ್ ಹಣ್ಣುಗಳನ್ನು ಸೇವಿಸಿ. ಇವು ದೇಹಕ್ಕೆ ಬೇಕಾದ ಫೈಬರ್ ಮತ್ತು ಪ್ರೋಟೀನ್ ನೀಡುತ್ತವೆ.&lt;/p&gt;&lt;p&gt;&lt;strong&gt;ಆರೋಗ್ಯಕರ ಚಹಾ: &lt;/strong&gt;ಸಕ್ಕರೆ ಬೆರೆಸಿದ ಹಾಲಿನ ಚಹಾ ಬದಲು ಗ್ರೀನ್ ಟೀ, ಬ್ಲ್ಯಾಕ್ ಟೀ, ಲೆಮನ್ ಟೀ ಅಥವಾ ಶುಂಠಿ-ಕೊತ್ತಂಬರಿ ಕಾಫಿ ಕುಡಿಯಿರಿ.&lt;/p&gt;&lt;h2&gt;&lt;strong&gt;ಆಸೆಗಾಗಿ ತಿನ್ನಿ, ಅಭ್ಯಾಸ ಬೇಡ&lt;/strong&gt;&lt;/h2&gt;&lt;p&gt;ವಾರಕ್ಕೊಮ್ಮೆ ಅಥವಾ ಎಂದಾದರೂ ಒಮ್ಮೆ ಆಸೆಗಾಗಿ ಸ್ನೇಹಿತರೊಂದಿಗೆ ಬಜ್ಜಿ, ವಡೆ ತಿಂದರೆ ತೊಂದರೆಯಿಲ್ಲ. ಆದರೆ, ಪ್ರತಿದಿನ ಸಂಜೆ 5 ಗಂಟೆಯಾದರೆ ಚಹಾ-ಬಜ್ಜಿ ಬೇಕೇಬೇಕು ಎನ್ನುವ ಅಭ್ಯಾಸ ನಿಮ್ಮ ಆಯಸ್ಸನ್ನು ನೀವೇ ಕಡಿಮೆ ಮಾಡಿಕೊಂಡಂತೆ. 'ಆರೋಗ್ಯವೇ ಭಾಗ್ಯ' ಎಂಬಂತೆ, ನಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಂಡರೆ ಮಾತ್ರ ಜೀವನವನ್ನು ಪೂರ್ಣವಾಗಿ ಆನಂದಿಸಲು ಸಾಧ್ಯ. ಆದ್ದರಿಂದ, ತಾತ್ಕಾಲಿಕ ರುಚಿಗೆ ಮರುಳಾಗದೆ, ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳೋಣ.&lt;/p&gt;]]></content:encoded>
            <category>health-life</category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/health-risks-of-combining-tea-with-fried-snacks-like-vada-and-bajji-gvd/articleshow-rhk7xwm"/>
        </item>
        <item>
            <title><![CDATA[Honey Facts: 3000 ವರ್ಷವಾದರೂ ಜೇನುತುಪ್ಪ ಕೆಡುವುದಿಲ್ಲವೇ? ಇಲ್ಲಿದೆ ಅಚ್ಚರಿಯ ಸತ್ಯ!]]></title>
            <link>https://kannada.asianetnews.com/life/why-honey-never-spoils-the-science-behind-its-long-shelf-life-gvd/articleshow-x3gun1a</link>
            <guid isPermaLink="true">https://kannada.asianetnews.com/life/why-honey-never-spoils-the-science-behind-its-long-shelf-life-gvd/articleshow-x3gun1a</guid>
            <pubDate>Fri, 03 Jul 2026 22:49:15 +0530</pubDate>
            <description><![CDATA[&lt;p&gt;Ancient Egyptian Honey: ಆದಿಮಾನವರು ಜೇನುತುಪ್ಪವನ್ನು ಕೇವಲ ಆಹಾರವಾಗಿ ನೋಡಲಿಲ್ಲ. ಸುಮಾರು 10,000 ವರ್ಷಗಳ ಹಿಂದೆ ಸ್ಪೇನ್&zwnj;ನ ಗುಹಾ ವರ್ಣಚಿತ್ರಗಳಲ್ಲಿ, ಮನುಷ್ಯರು ಜೇನು ಬೇಟೆಯಾಡುವ ದೃಶ್ಯಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwmdwgkqaca7v036hy8v51z4,imgname-ch-1783097082487.png" type="image/jpeg" height="390" width="690"/>
            <content:encoded><![CDATA[&lt;p&gt;3000 ವರ್ಷಗಳಷ್ಟು ಹಳೆಯ ಈಜಿಪ್ಟ್&zwnj;ನ ಗೋರಿಗಳಲ್ಲಿ ಸಿಕ್ಕ ಜೇನುತುಪ್ಪ ಇವತ್ತಿಗೂ ತಿನ್ನಲು ಯೋಗ್ಯವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇದು ಹೇಗೆ ಸಾಧ್ಯ? ಜೇನುತುಪ್ಪದ ಈ ಗುಣದ ಹಿಂದಿರುವ ವೈಜ್ಞಾನಿಕ ಕಾರಣಗಳೇನು? ಇಲ್ಲಿದೆ ವಿವರ.&lt;/p&gt;&lt;p&gt;&lt;strong&gt;ಇತಿಹಾಸದಲ್ಲಿ ಜೇನು: ಪವಿತ್ರ ಆಹಾರ&lt;/strong&gt;&lt;/p&gt;&lt;p&gt;ಆದಿಮಾನವರು ಜೇನುತುಪ್ಪವನ್ನು ಕೇವಲ ಆಹಾರವಾಗಿ ನೋಡಲಿಲ್ಲ. ಸುಮಾರು 10,000 ವರ್ಷಗಳ ಹಿಂದೆ ಸ್ಪೇನ್&zwnj;ನ ಗುಹಾ ವರ್ಣಚಿತ್ರಗಳಲ್ಲಿ, ಮನುಷ್ಯರು ಜೇನು ಬೇಟೆಯಾಡುವ ದೃಶ್ಯಗಳಿವೆ. ಪ್ರಾಚೀನ ಈಜಿಪ್ಟ್&zwnj;ನಲ್ಲಿ, ಜೇನುತುಪ್ಪವನ್ನು 'ಅಮರತ್ವ'ದ (Immortality) ಸಂಕೇತವೆಂದು ಪರಿಗಣಿಸಲಾಗಿತ್ತು. ಫೇರೋಗಳ ಗೋರಿಗಳಲ್ಲಿ, ಅವರು ಪುನರ್ಜನ್ಮದ ನಂತರ ತಿನ್ನಲೆಂದು ಜೇನುತುಪ್ಪದ ಜಾಡಿಗಳನ್ನು ಇಡುತ್ತಿದ್ದರು. ಜೇನಿನ ಈ 'ಅಳಿಯದ' ಗುಣವೇ ಅದನ್ನು ಪವಿತ್ರವಾಗಿಸಿತು.&lt;/p&gt;&lt;p&gt;&lt;strong&gt;ಜೇನುತುಪ್ಪ ಯಾಕೆ ಕೆಡುವುದಿಲ್ಲ? (ವೈಜ್ಞಾನಿಕ ವಿವರಣೆ): &lt;/strong&gt;ಜೇನಿನ ಈ ದೀರ್ಘಾಯುಷ್ಯದ ಹಿಂದೆ ಒಂದು ಸೂಕ್ಷ್ಮವಾದ ರಾಸಾಯನಿಕ ಪ್ರಕ್ರಿಯೆ ಇದೆ&lt;/p&gt;&lt;p&gt;&lt;strong&gt;1. ಕಡಿಮೆ ತೇವಾಂಶ (Low Moisture Content):&lt;/strong&gt; ಜೇನುನೊಣಗಳು ಹೂವುಗಳಿಂದ ಮಕರಂದವನ್ನು ಸಂಗ್ರಹಿಸಿದಾಗ, ಅದರಲ್ಲಿ 80% ನೀರಿರುತ್ತದೆ. ಆದರೆ, ನೊಣಗಳು ತಮ್ಮ ರೆಕ್ಕೆಗಳನ್ನು ಬೀಸಿ ನೀರನ್ನು ಆವಿಯಾಗಿಸಿ, ತೇವಾಂಶವನ್ನು 18% ಕ್ಕಿಂತ ಕಡಿಮೆ ಮಾಡುತ್ತವೆ. ಇಷ್ಟು ಕಡಿಮೆ ತೇವಾಂಶದಲ್ಲಿ ಯಾವುದೇ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ಬೆಳೆಯಲು ಸಾಧ್ಯವಿಲ್ಲ.&lt;/p&gt;&lt;p&gt;&lt;strong&gt;2. ಆಮ್ಲೀಯತೆ (Low pH): &lt;/strong&gt;ಜೇನುತುಪ್ಪವು ನೈಸರ್ಗಿಕವಾಗಿ ಆಮ್ಲೀಯ ಗುಣವನ್ನು (pH 3.2 ರಿಂದ 4.5) ಹೊಂದಿದೆ. ಈ ವಾತಾವರಣವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕವಲ್ಲ.&lt;/p&gt;&lt;p&gt;&lt;strong&gt;3. ಹೈಡ್ರೋಜನ್ ಪೆರಾಕ್ಸೈಡ್: &lt;/strong&gt;ಜೇನುನೊಣಗಳು ಜೇನುತುಪ್ಪವನ್ನು ತಯಾರಿಸುವಾಗ, ಅವುಗಳ ದೇಹದಲ್ಲಿ ಸ್ರವಿಸುವ ಕೆಲವು ಕಿಣ್ವಗಳು (Enzymes) ಜೇನಿನೊಂದಿಗೆ ಸೇರಿ ನೈಸರ್ಗಿಕ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉತ್ಪತ್ತಿ ಮಾಡುತ್ತವೆ. ಇದು ಬ್ಯಾಕ್ಟೀರಿಯಾಗಳನ್ನು ತಡೆಯುವ ನಂಜುನಿರೋಧಕವಾಗಿ ಕೆಲಸ ಮಾಡುತ್ತದೆ.&lt;/p&gt;&lt;p&gt;&lt;strong&gt;4. ಸಕ್ಕರೆಯ ಸಾಂದ್ರತೆ: &lt;/strong&gt;ಜೇನಿನಲ್ಲಿರುವ ಅತಿಯಾದ ಸಕ್ಕರೆಯ ಸಾಂದ್ರತೆಯು (Sugar concentration) ಸೂಕ್ಷ್ಮಾಣುಜೀವಿಗಳ ಜೀವಕೋಶಗಳಲ್ಲಿನ ನೀರನ್ನು ಹೀರಿಕೊಂಡು, ಅವುಗಳನ್ನು ನಿಷ್ಕ್ರಿಯಗೊಳಿಸುತ್ತದೆ.&lt;/p&gt;&lt;p&gt;ಅನೇಕರು ಜೇನುತುಪ್ಪ ಗಟ್ಟಿಯಾದರೆ (Crystallization) ಅದು ಕೆಟ್ಟುಹೋಗಿದೆ ಎಂದು ಭಾವಿಸುತ್ತಾರೆ. ಇದು ಸಂಪೂರ್ಣ ತಪ್ಪು! ವಾಸ್ತವವಾಗಿ, ಜೇನುತುಪ್ಪ ಗಟ್ಟಿಯಾಗುವುದು ಅದು ಶುದ್ಧ ಮತ್ತು ಸಂಸ್ಕರಿಸದ (Raw Honey) ಜೇನು ಎಂಬುದರ ಸಂಕೇತವಾಗಿದೆ. ಜೇನಿನಲ್ಲಿರುವ ಗ್ಲೂಕೋಸ್ ಕಾಲಾನಂತರದಲ್ಲಿ ನೈಸರ್ಗಿಕವಾಗಿ ಹರಳುಗಳಾಗಿ ಬದಲಾಗುತ್ತದೆ. ಹೀಗಾದಾಗ, ಆ ಜೇನಿನ ಬಾಟಲಿಯನ್ನು ಸ್ವಲ್ಪ ಬಿಸಿ ನೀರಿನಲ್ಲಿ ಇಟ್ಟರೆ, ಅದು ಮತ್ತೆ ಮೊದಲಿನ ಸ್ಥಿತಿಗೆ ಮರಳುತ್ತದೆ.&lt;/p&gt;&lt;h2&gt;&lt;strong&gt;ಜೇನುತುಪ್ಪ ಕೆಡುವುದಿಲ್ಲವಾದರೂ, ಅದನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ&lt;/strong&gt;&lt;/h2&gt;&lt;p&gt;&lt;strong&gt;ತೇವಾಂಶವನ್ನು ತಪ್ಪಿಸಿ: &lt;/strong&gt;ಜೇನುತುಪ್ಪವು ಗಾಳಿಯಲ್ಲಿನ ತೇವಾಂಶವನ್ನು ಹೀರಿಕೊಳ್ಳುವ (Hygroscopic) ಗುಣ ಹೊಂದಿದೆ. ಆದ್ದರಿಂದ, ಯಾವಾಗಲೂ ಬಾಟಲಿಯನ್ನು ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿಡಿ.&lt;/p&gt;&lt;p&gt;&lt;strong&gt;ಶುದ್ಧ ಚಮಚ ಬಳಸಿ:&lt;/strong&gt; ಜೇನುತುಪ್ಪವನ್ನು ತೆಗೆಯುವಾಗ ಒದ್ದೆಯಾದ ಅಥವಾ ಎಂಜಲು ತಾಗಿದ ಚಮಚಗಳನ್ನು ಬಳಸಬೇಡಿ. ಇದು ಜೇನಿನಲ್ಲಿ ಶಿಲೀಂಧ್ರ ಬೆಳೆಯಲು ಕಾರಣವಾಗಬಹುದು.&lt;/p&gt;&lt;p&gt;&lt;strong&gt;ಸರಿಯಾದ ಸ್ಥಳ: &lt;/strong&gt;ಜೇನುತುಪ್ಪವನ್ನು ಫ್ರಿಜ್&zwnj;ನಲ್ಲಿ ಇಡುವ ಅಗತ್ಯವಿಲ್ಲ. ತಂಪಾದ ಮತ್ತು ಸೂರ್ಯನ ಬೆಳಕು ಬೀಳದ ಸ್ಥಳದಲ್ಲಿ ಇಡುವುದು ಉತ್ತಮ.&lt;/p&gt;&lt;p&gt;ಜೇನುತುಪ್ಪ ಎಷ್ಟೇ ಅದ್ಭುತ ಆಹಾರವಾಗಿದ್ದರೂ, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದನ್ನು ನೀಡುವುದನ್ನು ತಪ್ಪಿಸಬೇಕು. ಜೇನಿನಲ್ಲಿ ಕೆಲವೊಮ್ಮೆ 'ಬೊಟುಲಿಸಂ' (Botulism) ಎಂಬ ಬ್ಯಾಕ್ಟೀರಿಯಾದ ಬೀಜಕಗಳು ಇರುವ ಸಾಧ್ಯತೆಯಿದೆ. ವಯಸ್ಕರ ಜೀರ್ಣಾಂಗ ವ್ಯವಸ್ಥೆಯು ಇದನ್ನು ನಿಭಾಯಿಸುತ್ತದೆ, ಆದರೆ ಶಿಶುಗಳ ಕರುಳಿನ ಬೆಳವಣಿಗೆ ಪೂರ್ಣಗೊಂಡಿರದ ಕಾರಣ, ಇದು ಅವರಿಗೆ ಅಪಾಯವನ್ನು ಉಂಟುಮಾಡಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಜೇನುತುಪ್ಪವು ಕಾಲದಿಂದ ಅಳಿಯದ ಪ್ರಕೃತಿಯ ವರ. ಅದನ್ನು ಸರಿಯಾಗಿ ನಿರ್ವಹಿಸಿದರೆ, ಜೇನುತುಪ್ಪಕ್ಕೆ ಎಕ್ಸ್&zwnj;ಪೈರಿ ಡೇಟ್ ಎಂಬುದೇ ಇಲ್ಲ!&lt;/p&gt;]]></content:encoded>
            <category>health-life</category>
            <dc:creator>Govindaraj S</dc:creator>
            <atom:link href="https://kannada.asianetnews.com/life/why-honey-never-spoils-the-science-behind-its-long-shelf-life-gvd/articleshow-x3gun1a"/>
        </item>
        <item>
            <title><![CDATA[Fertility Issues: ತಡವಾಗಿ ಗರ್ಭಿಣಿಯಾಗಲು ಕಾರಣಗಳೇನು? ಇಲ್ಲಿವೆ ನೀವು ತಿಳಿದಿರಲೇಬೇಕಾದ 6 ಸಂಗತಿಗಳು]]></title>
            <link>https://kannada.asianetnews.com/gallery/health-life/why-more-women-are-facing-fertility-problems-top-causes-explained-kvn-xbexgq5</link>
            <guid isPermaLink="true">https://kannada.asianetnews.com/gallery/health-life/why-more-women-are-facing-fertility-problems-top-causes-explained-kvn-xbexgq5</guid>
            <pubDate>Wed, 08 Jul 2026 18:27:22 +0530</pubDate>
            <description><![CDATA[&lt;p&gt;35 ವರ್ಷಗಳ ನಂತರ ಗರ್ಭಧಾರಣೆ ಯಾಕೆ ಕಷ್ಟವಾಗುತ್ತದೆ? ಅಧಿಕ ತೂಕ, ಒತ್ತಡ, ಜೀವನಶೈಲಿ, ಪಿಸಿಓಎಸ್ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಫಲವತ್ತತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqz547bdymancr2athdbbzge,imgname-fertility-crisis--2--1778088287597.jpg" type="image/jpeg" height="390" width="690"/>
            <content:encoded><![CDATA[&lt;p&gt;35 ವರ್ಷಗಳ ನಂತರ ಗರ್ಭಧಾರಣೆ ಯಾಕೆ ಕಷ್ಟವಾಗುತ್ತದೆ? ಅಧಿಕ ತೂಕ, ಒತ್ತಡ, ಜೀವನಶೈಲಿ, ಪಿಸಿಓಎಸ್ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಫಲವತ್ತತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಿರಿ.&lt;/p&gt;&lt;img&gt;&lt;p&gt;ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧವು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ತೂಕವು ಹಾರ್ಮೋನ್ ಸಮತೋಲನ, ಅಂಡೋತ್ಪತ್ತಿ ಮತ್ತು ಅಂಡಾಣುವಿನ ಗುಣಮಟ್ಟಕ್ಕೆ ಅಡ್ಡಿಪಡಿಸುತ್ತದೆ. ಬೊಜ್ಜು ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಇರುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಇನ್ಸುಲಿನ್ ಪ್ರತಿರೋಧವು ನೈಸರ್ಗಿಕವಾಗಿ ಗರ್ಭಧರಿಸುವುದನ್ನು ಕಷ್ಟಕರವಾಗಿಸುತ್ತದೆ.&lt;/p&gt;&lt;img&gt;&lt;p&gt;ಬಂಜೆತನದ ಸಮಸ್ಯೆಗಳು ಬೊಜ್ಜಿಗೆ ಮಾತ್ರ ಸೀಮಿತವಾಗಿಲ್ಲ. ಕಟ್ಟುನಿಟ್ಟಿನ ಆಹಾರಕ್ರಮ, ಅತಿಯಾದ ವ್ಯಾಯಾಮ ಮತ್ತು ಕಡಿಮೆ ತೂಕವು, ವಾಯು ಮಾಲಿನ್ಯವು ಅಂಡೋತ್ಪತ್ತಿಯನ್ನು ಅಡ್ಡಿಪಡಿಸಬಹುದು. ಇದು ಅನಿಯಮಿತ ಅಥವಾ ಇಲ್ಲದ ಮುಟ್ಟಿನ ಚಕ್ರಗಳಿಗೆ ಕಾರಣವಾಗಿ, ಗರ್ಭಧಾರಣೆಯನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ.&lt;/p&gt;&lt;img&gt;&lt;p&gt;ಆಧುನಿಕ ಜೀವನಶೈಲಿಯು ದೀರ್ಘ ಕೆಲಸದ ಸಮಯ, ಶಿಫ್ಟ್ ಕೆಲಸ, ಜಡ ದಿನಚರಿ ಮತ್ತು ದೀರ್ಘಕಾಲದ ಒತ್ತಡವನ್ನು ಒಳಗೊಂಡಿರುತ್ತದೆ. ನಿರಂತರ ಒತ್ತಡ ಮತ್ತು ಕಳಪೆ ನಿದ್ರೆಯು ಹಾರ್ಮೋನ್ ನಿಯಂತ್ರಣ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರಿ, ಕಾಲಕ್ರಮೇಣ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ.&lt;/p&gt;&lt;img&gt;&lt;p&gt;ಧೂಮಪಾನ, ಮದ್ಯಪಾನ ಮತ್ತು ತಂಬಾಕು ಸೇವನೆಯು ಯುವತಿಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಅಭ್ಯಾಸಗಳು ಅಂಡಾಣುವಿನ ಗುಣಮಟ್ಟವನ್ನು ಹಾಳುಮಾಡುತ್ತವೆ, ಅಂಡಾಶಯದ ಮೀಸಲು ಕಡಿಮೆ ಮಾಡುತ್ತವೆ ಮತ್ತು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತವೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಪಿಸಿಓಎಸ್&zwnj; (PCOS) ಪ್ರಕರಣಗಳು ಹೆಚ್ಚಾಗಿವೆ. ಇದು ಹಾರ್ಮೋನಿನ ಅಸಮತೋಲನವಾಗಿದ್ದು, ಅನಿಯಮಿತ ಅಂಡೋತ್ಪತ್ತಿಗೆ ಕಾರಣವಾಗುತ್ತದೆ. ನಿಯಮಿತವಾಗಿ ಅಂಡೋತ್ಪತ್ತಿ ಆಗದಿದ್ದರೆ, ಗರ್ಭಧರಿಸುವುದು ಹೆಚ್ಚು ಕಷ್ಟಕರವಾಗುತ್ತದೆ. ಇದು ಯುವತಿಯರಲ್ಲಿ ಬಂಜೆತನಕ್ಕೆ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.&lt;/p&gt;&lt;img&gt;&lt;p&gt;ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಹೊರಗೆ ಬೆಳೆದು ನೋವು ಮತ್ತು ಉರಿಯೂತವನ್ನು ಉಂಟುಮಾಡಿದಾಗ ಎಂಡೊಮೆಟ್ರಿಯೊಸಿಸ್ ಉಂಟಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಇದು ಸಂತಾನೋತ್ಪತ್ತಿ ಅಂಗಗಳಿಗೆ ಹಾನಿ ಮಾಡಿ, ಫಲವತ್ತತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.&lt;/p&gt;]]></content:encoded>
            <category>health-life</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/health-life/why-more-women-are-facing-fertility-problems-top-causes-explained-kvn-xbexgq5"/>
        </item>
    </channel>
</rss>
