<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 23 Jun 2026 08:20:26 +0530</lastBuildDate>
        <atom:link href="https://kannada.asianetnews.com/rss/haveri" rel="self" type="application/rss+xml"/>
        <item>
            <title><![CDATA[ಆಘಾತಕಾರಿ! ಏನಾಗಿದೆ ಯುವ ಸಮೂಹಕ್ಕೆ? ಕನ್ಯೆ ಸಿಗಲಿಲ್ಲವೆಂದು ಯುವಕ ದುರಂತ ಅಂತ್ಯ, ಬಿಎಸ್ಸಿಯಲ್ಲಿ ಒಂದು ವಿಷಯ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿನಿಯೂ ಜೀವ ಕಳೆದುಕೊಂಡಳು!]]></title>
            <link>https://kannada.asianetnews.com/karnataka-districts/two-shocking-tragedies-haveri-young-man-dies-over-marriage-setback-hassan-student-found-dead-after-fail-bsc-rav/articleshow-3w4ioy1</link>
            <guid isPermaLink="true">https://kannada.asianetnews.com/karnataka-districts/two-shocking-tragedies-haveri-young-man-dies-over-marriage-setback-hassan-student-found-dead-after-fail-bsc-rav/articleshow-3w4ioy1</guid>
            <pubDate>Fri, 05 Jun 2026 04:26:27 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮದುವೆಗೆ ಕನ್ಯೆ ಸಿಗದಿದ್ದಕ್ಕೆ ಯುವಕನೊಬ್ಬ ಆತ್ಮ೧ಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಹಾಸನದ ಹೊಳೆನರಸೀಪುರದಲ್ಲಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಫೇಲ್ ಆದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktad9jh06mxxkpq1jbdxev0d,imgname-----------------------2026-06-05t042011.797-1780613433888.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಜೂ.5):&lt;/strong&gt; ಮದುವೆಗೆ ಕನ್ಯೆ ಸಿಗದಿದ್ದಕ್ಕೆ ಬೇಸತ್ತು ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ೧ಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ನಡೆದಿದೆ. ಮ್ಯಾಗೇರಿ ಓಣಿ ನಿವಾಸಿ ಮನೋಜ ಬಸವರಾಜ ಹಡಪದ(Manoj Basavaraj Hadapad) (27) ಮೃತ ಯುವಕ. ಈತ ಸಲೂನ್&zwnj; ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಹಲವು ದಿನಗಳಿಂದ ನಾನಾ ಕಡೆ ಕನ್ಯೆ ಹುಡುಕಿದರೂ ಯಾರೂ ಸಿಕ್ಕಿರಲಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದ. ಬುಧವಾರ ಅಡುಗೆಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.&lt;/p&gt;&lt;p&gt;ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ&lt;/p&gt;&lt;h2&gt;ಬಿಎಸ್ಸಿಯಲ್ಲಿ 1 ವಿಷಯ ಫೇಲ್&zwnj; ಆಗಿದ್ದಕ್ಕೆ ವಿದ್ಯಾರ್ಥಿನಿ ನೇಣಿಗೆ&lt;/h2&gt;&lt;p&gt;ಇನ್ನೊಂದೆಡೆ ಹೊಳೆನರಸೀಪುರ(ಹಾಸನ ಬಿಎಸ್&zwnj;ಸ್ಸಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮ೧ಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಹಳಿಯೂರು ಗ್ರಾಮದ ಶ್ರೀರಕ್ಷಾ (21) ಮೃತ ವಿದ್ಯಾರ್ಥಿನಿ.&lt;/p&gt;&lt;p&gt;ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿಯಲ್ಲಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದು, 2 ವರ್ಷದಿಂದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಇದ್ದರು. ಒಂದು ವಿಷಯದಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ನಗರ ಪೊಲೀಸ್&zwnj; ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/two-shocking-tragedies-haveri-young-man-dies-over-marriage-setback-hassan-student-found-dead-after-fail-bsc-rav/articleshow-3w4ioy1"/>
        </item>
        <item>
            <title><![CDATA[ಬೆಂಗಳೂರು ಮುಂಬೈ ನಡುವೆ ಹೊಸ ದ್ವಿಸಾಪ್ತಾಹಿಕ ಎಕ್ಸಪ್ರೆಸ್‌ ರೈಲು ಆರಂಭ, ಸಚಿವ ಜೋಶಿ ಚಾಲನೆ, ವೇಳಾಪಟ್ಟಿ ಇಲ್ಲಿದೆ]]></title>
            <link>https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8</link>
            <guid isPermaLink="true">https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8</guid>
            <pubDate>Sun, 17 May 2026 20:29:20 +0530</pubDate>
            <description><![CDATA[ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಹೊಸ ದ್ವಿಸಪ್ತಾಹಿಕ ವಿಶೇಷ ರೈಲಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದ್ದಾರೆ. ಈ ರೈಲು ಸೇವೆಯು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮತ್ತು ದಾವಣಗೆರೆ ಭಾಗದ ಪ್ರಯಾಣಿಕರಿಗೆ ಮುಂಬೈ ಹಾಗೂ ಪುಣೆಗೆ ಪ್ರಯಾಣಿಸಲು ಹೆಚ್ಚು ಅನುಕೂಲಕರವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krv6zk5wx9t8zxpzhr580ac2,imgname-pralhad-joshi-flags-off-train-1779029757116.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಲ್&zwnj;, ಮುಂಬೈ ನಡುವೆ ಹುಬ್ಬಳ್ಳಿ ಮುಖಾಂತರ ಸಂಚರಿಸುವ ನೂತನ ವಿಶೇಷ ರೈಲಿಗೆ (06557) ಮೇ 17ರಂದು ಸಂಜೆ ನಗರದ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ ತೋರಿದರು.&lt;/p&gt;&lt;h2&gt;ಯಾವ ಊರೆಲ್ಲ ಹಾದು ಹೋಗಲಿದೆ?&lt;/h2&gt;&lt;p&gt;ಬೆಂಗಳೂರಿನಿಂದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ಮುಂಬೈಗೆ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಸಂಚರಿಸುವಂತೆ ಜೋಶಿ ಮನವಿ ಮೇರೆಗೆ ಈ ರೈಲಿಗೆ ಅನುಮೋದನೆ ನೀಡಲಾಗಿತ್ತು. ಈ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲು ರೈಲು ಮಾರ್ಗದ (16553/16554) ಮೇ 23ರಿಂದ ಬೆಂಗಳೂರು ಮತ್ತು ಮೇ 24ರಿಂದ ಮುಂಬೈನಿಂದ ಪ್ರಾರಂಭವಾಗಲಿದೆ.&lt;/p&gt;&lt;h2&gt;ಯಾವಾಗ ಎಲ್ಲಿಂದ ಹೊರಡಲಿದೆ?&lt;/h2&gt;&lt;p&gt;ಪ್ರತಿ ಶನಿವಾರ ಮತ್ತು ಮಂಗಳವಾರ ಬೆಂಗಳೂರಿನಿಂದ ಪ್ರತಿ ಭಾನುವಾರ ಮತ್ತು ಬುಧವಾರ ಮುಂಬೈನಿಂದ ರೈಲು ಸಂಚರಿಸಲಿದೆ. ಈ ಹೊಸ ರೈಲು ಸೇವೆಯು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ದಾವಣಗೆರೆ ಭಾಗದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕಾಗಿ ಮುಂಬೈ ಹಾಗೂ ಪುಣೆಗೆ ಪ್ರಯಾಣಿಸುವವರಿಗೆ ವರದಾನವಾಗಲಿದೆ.&lt;/p&gt;&lt;p&gt;ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಚಿವ ಪ್ರಹ್ಲಾದ ಜೋಶಿ ಅವರು, ಪ್ರಧಾನಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ತುಂಬುತ್ತಿದ್ದು, ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಸುಗಮ, ಸುರಕ್ಷಿತ ಹಾಗೂ ವೇಗದಾಯಕವಾಗುತ್ತಿದೆ. ಕರ್ನಾಟಕದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ನಮ್ಮಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು ರಾಜ್ಯದ ಪ್ರತಿಯೊಂದು ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ,ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ ,ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಸಮಸ್ತ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ಹುಬ್ಬಳ್ಳಿ ಮುಖಾಂತರ ಸಂಪರ್ಕದ ಹೊಸ ಕ್ರಾಂತಿ!&amp;nbsp;ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿಯ ಮೂಲಕ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲು ಪ್ರಾರಂಭ.ಇಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್, ಮುಂಬೈ ನಡುವೆ&hellip; pic.twitter.com/NddQEBPea4&lt;/p&gt;&lt;p&gt;&mdash; Pralhad Joshi (@JoshiPralhad) May 17, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>haveri</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8"/>
        </item>
        <item>
            <title><![CDATA[Farmers: ಶುಂಠಿ, ಹಸಿಮೆಣಸಿನಕಾಯಿ ಬೆಳೆದ ರೈತರಿಗೆ ದಾಖಲೆ ಸಲ್ಲಿಸಲು ಸರ್ಕಾರದಿಂದ ಸೂಚನೆ]]></title>
            <link>https://kannada.asianetnews.com/karnataka-districts/haveri-hanagal-farmers-growing-ginger-green-chillies-instructed-to-submit-documents-to-get-crop-insurance-mrq/articleshow-4yv9de5</link>
            <guid isPermaLink="true">https://kannada.asianetnews.com/karnataka-districts/haveri-hanagal-farmers-growing-ginger-green-chillies-instructed-to-submit-documents-to-get-crop-insurance-mrq/articleshow-4yv9de5</guid>
            <pubDate>Tue, 16 Jun 2026 13:46:14 +0530</pubDate>
            <description><![CDATA[&lt;p&gt;ಶುಂಠಿ ಮತ್ತು ಹಸಿಮೆಣಸಿನಕಾಯಿ ಬೆಳೆಗಾರರು ಬೆಳೆ ವಿಮೆ ಪಡೆಯಲು ದಾಖಲೆಗಳನ್ನು ಸಲ್ಲಿಸಬೇಕಿದೆ. ಹಾಗೆಯೇ, 2026-27ನೇ ಸಾಲಿನಿಂದ ವಿದ್ಯಾರ್ಥಿಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದ್ದು, ಈಗಾಗಲೇ ಶುಲ್ಕ ಪಾವತಿಸಿದವರಿಗೆ ಮರುಪಾವತಿ ಮಾಡಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv7qv93pxjqrvf1qn915xart,imgname-farmers-1-1781597578358.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಕಳೆದ 2024-25ನೇ ಸಾಲಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹಾನಗಲ್ಲ ತಾಲೂಕಿನಲ್ಲಿ ಶುಂಠಿ 199 ಪ್ರಕರಣಗಳಿಗೆ ಮತ್ತು ಹಸಿಮೆಣಸಿನಕಾಯಿ 92 ಪ್ರಕರಣಗಳಿಗೆ ರೈತರ ಬೆಳೆ ಹೊಂದಾಣಿಕೆ ಆಗದೇ ಇರುವುದರಿಂದ ಬೆಳೆ ವಿಮೆ ಜಮೆಯಾಗಿರುವುದಿಲ್ಲ.&lt;/p&gt;&lt;p&gt;ಆದ್ದರಿಂದ 2024-25ನೇ ಸಾಲಿನ ಪಹಣೆ ಪತ್ರಿಕೆಯಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ನಮೂದು ಆಗಿರಬೇಕು. 2024-25ನೇ ಸಾಲಿನಲ್ಲಿ ವಿಮೆ ನೋಂದಾಯಿತ ಬೆಳೆ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಕಂಪ್ಯೂಟರ್ ರಶೀದಿ, ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿಮೆ ನೋಂದಾಯಿತ ಉತ್ಪನ್ನವನ್ನು ಬೆಳೆ ಮಾರಾಟ ಮಾಡಿದ್ದಲ್ಲಿ ಸೂಕ್ತ ದಾಖಲೆ, ವಿಮೆ ನೋಂದಾಯಿತ ಬೆಳೆಯನ್ನು ಬೆಳೆಯಲು ಮೇಲಿನ ಸಾಲಿನಲ್ಲಿ ಬ್ಯಾಂಕಿನಿಂದ ಬೆಳೆಸಾಲ ಪಡೆದಿದ್ದಲ್ಲಿ ಬ್ಯಾಂಕಿನವರಿಂದ ದೃಢೀಕೃತ ಪ್ರತಿಗಳು, ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ಮೇಲಿನ ವರ್ಷಕ್ಕೆ ಸಂಬಂಧಿಸಿದಂತೆ ಇದ್ದಲ್ಲಿ ಸಂಬಂಧಿಸಿದ ರೈತರು ಈ ಪ್ರಕಟಣೆ ದಿನಾಂಕದಿಂದ 15 ದಿನಗಳೊಳಗಾಗಿ ಹಾನಗಲ್ ತೋಟಗಾರಿಕೆ ಇಲಾಖೆ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು ಎಂದು ಹಾನಗಲ್ಲ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳ ಬಸ್ ಸೇವಾಸಿಂಧು ಪೋರ್ಟಲ್ ಮೂಲಕ ವಿತರಣೆ&lt;/strong&gt;&lt;/h2&gt;&lt;p&gt;ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು, 2026-27ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿ ಬಸ್ ಪಾಸ್&zwnj;ಗಳನ್ನು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾಸಿಂಧು ಪೋರ್ಟಲ್ ಮೂಲಕ ವಿತರಿಸಲಾಗುತ್ತಿದೆ.&lt;/p&gt;&lt;p&gt;ಕರ್ನಾಟಕ ಸರ್ಕಾರವು ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್&zwnj;ಗಳಲ್ಲಿ ಪ್ರಯಾಣಿಸುವ ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದೆ.&lt;/p&gt;&lt;p&gt;ಜೂ.12ರಿಂದ ಸಂಸ್ಥೆಯ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸುಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿ ಬಸ್ ಪಾಸ್ ವಿತರಣೆಯಲ್ಲಿ ಹಾಲಿ ಅನುಸರಿಸುತ್ತಿರುವ ನಿಯಮಾವಳಿಗಳನ್ನು (ವಿದ್ಯಾರ್ಥಿ ಪಾಸಿಗಾಗಿ ಶೈಕ್ಷಣಿಕ ವಿದ್ಯಾಭ್ಯಾಸದ ಅರ್ಹತಾ ಮಾನದಂಡಗಳು, ದೂರದ ಮಿತಿ, ಪಾಸಿನ ಕಾಲಾವಧಿ ಇತ್ಯಾದಿ) ಮುಂದುವರೆಸಲಾಗಿದೆ.&lt;/p&gt;&lt;p&gt;ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆಯಲು, ಈ ಹಿಂದಿನಂತೆ ಕರ್ನಾಟಕ ಸರ್ಕಾರದ ಸೇವಾಸಿಂಧು ಪೋರ್ಟಲ್&zwnj;ನಲ್ಲಿ, ಶಾಲೆಗಳು ಸೇರಿದಂತೆ ಎಲ್ಲಿಂದಲಾದರೂ, ಆನ್&zwnj;ಲೈನಲ್ಲಿ ಅರ್ಜಿ ಸಲ್ಲಿಸಬಹುದು. ಆನಲೈನ್ ಸೇವಾಸಿಂಧು ಪೋರ್ಟಲ್ ಐಡಿ, ವಾ.ಕ.ರ.ಸಾ. ಸಂಸ್ಥೆ ವ್ಯಾಪ್ತಿಯ 82 ಪಾಸ್ ವಿತರಣಾ ಕೌಂಟರ್&zwnj;ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್&zwnj;ಸೈಟ್&zwnj;ನಲ್ಲಿ ಒದಗಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಫ್ರಿ ಬಸ್ ಸ್ಮಾರ್ಟ್&zwnj;ಕಾರ್ಡ್&zwnj; ವಿತರಣೆಗೆ ಸಿದ್ಧವಾಯ್ತು ಹೊಸ ಸೂತ್ರ: ಸಚಿವ ಬೈರತಿ ಸುರೇಶ್&zwnj;&lt;/strong&gt;&lt;/p&gt;&lt;p&gt;ನಿಗಮದ ವೆಬ್&zwnj;ಸೈಟ್ ವಿಳಾಸ&amp;nbsp;; ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ವಿತರಿಸಲಾಗಿರುವ ವಿದ್ಯಾರ್ಥಿ ಬಸ್ ಪಾಸುಗಳು ಯಥಾವತ್ತಾಗಿ ಚಾಲ್ತಿಯಲ್ಲಿರುತ್ತವೆ. ಆದಾಗ್ಯೂ ವಿದ್ಯಾರ್ಥಿಗಳು ಪಾವತಿಸಿರುವ ಮೊತ್ತವನ್ನು ಹಿಂದಿರುಗಿಸಲಾಗುವುದು. ರಾಜ್ಯದಲ್ಲಿ ವಾಸವಿದ್ದು, ನೆರೆರಾಜ್ಯಗಳಲ್ಲಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ನೆರೆರಾಜ್ಯಗಳಲ್ಲಿ (ರಾಜ್ಯದ ಗಡಿಭಾಗದಲ್ಲಿ) ವಾಸವಿದ್ದು, ರಾಜ್ಯದೊಳಗಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಉಚಿತ ಬಸ್ ಪಾಸ್ ಪಡೆಯಬಹುದಾಗಿದೆ.&lt;/p&gt;&lt;p&gt;ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷ 2026-27ನೇ ಸಾಲಿನಲ್ಲಿ ಶುಲ್ಕ ಪಡೆದು ವಿತರಿಸಲಾದ ಪಾಸುಗಳ ಸಂಪೂರ್ಣ ಶುಲ್ಕವನ್ನು 15 ದಿನಗಳೊಳಗಾಗಿ ವಿದ್ಯಾರ್ಥಿಗಳಿಗೆ ಮರುಪಾವತಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಸ್ಥಗಿತದ ಸುದ್ದಿಗೆ ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-hanagal-farmers-growing-ginger-green-chillies-instructed-to-submit-documents-to-get-crop-insurance-mrq/articleshow-4yv9de5"/>
        </item>
        <item>
            <title><![CDATA[ಕೈಕೊಟ್ಟ ಮಳೆ: 11 ಎಕ್ರೆ ಗೋವಿನಜೋಳದ ಬೆಳೆ ಟ್ರ‍್ಯಾಕ್ಟರ್‌ನಿಂದ ನಾಶ ಮಾಡಿದ ಹಾವೇರಿ ರೈತ]]></title>
            <link>https://kannada.asianetnews.com/karnataka-districts/haveri-bydadgi-lack-of-monsoon-rains-shidenoor-village-farmer-destroys-11-acres-of-crop-with-tractor-mrq/articleshow-5br2og5</link>
            <guid isPermaLink="true">https://kannada.asianetnews.com/karnataka-districts/haveri-bydadgi-lack-of-monsoon-rains-shidenoor-village-farmer-destroys-11-acres-of-crop-with-tractor-mrq/articleshow-5br2og5</guid>
            <pubDate>Tue, 23 Jun 2026 07:27:17 +0530</pubDate>
            <description><![CDATA[&lt;p&gt;ರೈತರೊಬ್ಬರು, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹತಾಶರಾಗಿ, ತಾವು ಬೆಳೆದಿದ್ದ 11 ಎಕರೆ ಗೋವಿನಜೋಳದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ನಷ್ಟ ಅನುಭವಿಸಿರುವ ಅವರು, ಸರ್ಕಾರದ ನೆರವಿಗಾಗಿ ಒತ್ತಾಯಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs2tdpwfrrpjhj8h4m0cs8t,imgname-haveri-farmer-1782179509980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕಂಗಾಲಾದ ರೈತನೊಬ್ಬ ಅಪಾರ ವೆಚ್ಚದಲ್ಲಿ ಬೆಳೆಸಿದ್ದ 11 ಎಕರೆ ಗೋವಿನ ಜೋಳ ಬೆಳೆಯನ್ನು ಟ್ರ&zwj;್ಯಾಕ್ಟರ್ ಕುಂಟೆ ಮೂಲಕ ಹರಗಿ ನಾಶಪಡಿಸಿದ ಘಟನೆ ತಾಲೂಕಿನ ಶಿಡೇನೂರ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಶಿಡೇನೂರ ಗ್ರಾಮದ ರೈತ ಕಿರಣಕುಮಾರ ಗಡಿಗೋಳ ಬೆಳೆ ನಾಶಪಡಿಸಿದ ರೈತ. ಎಷ್ಟೇ ಕಾದರೂ ಮಳೆ ಬಾರದೆ ಬೆಳೆ ಒಣಗಿ ಹೋಗುತ್ತಿರುವುದನ್ನು ನೋಡಿ ಕಂಗಾಲಾಗಿ ಬೆಳೆ ನಾಶ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;11 ಎಕರೆ ಲಾವಣಿ ಹೊಲ ನಾಶ&lt;/strong&gt;&lt;/h2&gt;&lt;p&gt;ಕಿರಣಕುಮಾರ ಗಡಿಗೋಳ ತಮ್ಮ ಸ್ವಂತ ಜಮೀನಿನ ಜೊತೆಗೆ ಲಾವಣಿ ಪಡೆದ ಜಮೀನು ಸೇರಿ ಒಟ್ಟು 11 ಎಕರೆ ಪ್ರದೇಶದಲ್ಲಿ ಗೋವಿನ ಜೋಳ ಬೆಳೆ ಬೆಳೆದಿದ್ದರು, ಪೂರ್ವ ಮುಂಗಾರು ಉತ್ತಮವಾಗಿದ್ದ ಹಿನ್ನೆಲೆಯಲ್ಲಿ ಉತ್ತಮ ಬೆಳೆ ನಿರೀಕ್ಷೆ ಹೊಂದಿದ್ದರು. ಆದರೆ ಕಳೆದ ಒಂದು ತಿಂಗಳಿಂದ ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದು ಇದರಿಂದ ಬೇಸತ್ತು ಬೆಳೆ ನಾಶದ ನಿರ್ಧಾರ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;₹2 ಲಕ್ಷ ನಷ್ಟ&lt;/strong&gt;&lt;/h3&gt;&lt;p&gt;ಸುಮಾರು 2 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿ ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ಹಣ ಹೂಡಿಕೆ ಮಾಡಿದ್ದರು. ಆದರೆ, ಬಿತ್ತನೆ ಬಳಿಕ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಬೆಳೆ ಒಣಗಿ ಹೋಗಿದ್ದು, ಹೂಡಿಕೆ ಮಾಡಿದ ಹಣವೂ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ತೀವ್ರ ನಿರಾಶೆಗೊಂಡ ರೈತ ಕಿರಣಕುಮಾರ ಗಡಿಗೋಳ ಟ್ರ&zwj;್ಯಾಕ್ಟರ್&zwnj;ನಿಂದ ಕುಂಟೆ ಹೊಡೆಸಿ ಸಂಪೂರ್ಣ ಬೆಳೆ ನಾಶಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೊನ್ನಾಳಿ-ದಾವಣಗೆರೆಗೆ ಬಸವಾಪಟ್ಟಣ ಮೂಲಕ ಹೊಸ ಬಸ್ ಆರಂಭ; ಮಾರ್ಗ, ಸಮಯ ಈ ರೀತಿಯಾಗಿದೆ&lt;/strong&gt;&lt;/p&gt;&lt;p&gt;ಪ್ರಸ್ತುತ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆ ಅಭಾವ ಮುಂದುವರಿದರೆ ಕೃಷಿ ಆಧಾರಿತ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆಯಿದೆ. ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ, ಸಾಲ ಮರುಪಾವತಿ ಅವಧಿ ವಿಸ್ತರಣೆ ಹಾಗೂ ಅಗತ್ಯ ನೆರವು ನೀಡುವಂತೆ ರೈತರಾದ ಶಿವಪ್ಪ ತೆವರಿ, ಪ್ರಭು ಬಿದರಿ, ಗಣೇಶ ಯೋಗಿಕೊಪ್ಪ, ಶಂಭು ಭಾವಿಕಟ್ಟಿ, ಮಲ್ಲಿಕಾರ್ಜುನ ದುರ್ಗದ, ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಕೃಷಿಗೆ ಮಾಡಿದ ಎಲ್ಲ ಹೂಡಿಕೆ ಮಣ್ಣಾಯಿತು. ಸಾಲ ಮಾಡಿ ಕೃಷಿ ಮಾಡಿದ್ದೇವೆ. ಮಳೆ ಕೈಕೊಟ್ಟಿದ್ದರಿಂದ ಬದುಕೇ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ರೈತರಿಗೆ ನೆರವಾಗಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಜೊತೆಗೆ ಹಸಿರು ಬರಗಾಲ ಎಂದು ಘೋಷಿಸಿ ಜಿಲ್ಲೆಯ ರೈತರಿಗೆ ವಿಶೇಷ ನೆರವು ನೀಡಬೇಕು ಎಂದು ಶಿಡೆನೂರ ರೈತ ಕಿರಣಕುಮಾರ ಗಡಿಗೋಳ ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Haveri: ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ; ಎತ್ತುಗಳ ಖರೀದಿಗಿಲ್ಲ ಹಣ&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-bydadgi-lack-of-monsoon-rains-shidenoor-village-farmer-destroys-11-acres-of-crop-with-tractor-mrq/articleshow-5br2og5"/>
        </item>
        <item>
            <title><![CDATA[ವಾಟ್ಸಾಪ್ ಯುನಿವರ್ಸಿಟಿ ಸುದ್ದಿಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ: ಸಂಸದ ಬೊಮ್ಮಾಯಿ]]></title>
            <link>https://kannada.asianetnews.com/karnataka-districts/mp-basavaraj-bommai-on-assembly-ticket-rumours-haveri-gvd/articleshow-bs2v8ap</link>
            <guid isPermaLink="true">https://kannada.asianetnews.com/karnataka-districts/mp-basavaraj-bommai-on-assembly-ticket-rumours-haveri-gvd/articleshow-bs2v8ap</guid>
            <pubDate>Tue, 09 Jun 2026 21:27:00 +0530</pubDate>
            <description><![CDATA[&lt;p&gt;ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಂಸದರಿಗೆ ಟಿಕೆಟ್ ನೀಡುವ ಕುರಿತು ಹರಿದಾಡುತ್ತಿರುವ ಸುದ್ದಿಗಳು 'ವಾಟ್ಸಾಪ್ ಯುನಿವರ್ಸಿಟಿ'ಯ ಸೃಷ್ಟಿಯಾಗಿದ್ದು, ಅಂತಹ ಸುದ್ದಿಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g13n41gvc7eqbjx6sbynt5ry,imgname-basavaraj-bommai---kalburgi.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಜೂ.09): &lt;/strong&gt;ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಂಸದರಿಗೆ ಟಿಕೆಟ್ ನೀಡುವ ಕುರಿತು ಹರಿದಾಡುತ್ತಿರುವ ಸುದ್ದಿಗಳು 'ವಾಟ್ಸಾಪ್ ಯುನಿವರ್ಸಿಟಿ'ಯ ಸೃಷ್ಟಿಯಾಗಿದ್ದು, ಅಂತಹ ಸುದ್ದಿಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಪಕ್ಷದ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.&lt;/p&gt;&lt;p&gt;ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ರಾಜ್ಯಸಭೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಮರು ಆಯ್ಕೆ ಕುರಿತು ಪಕ್ಷದ ಉನ್ನತ ನಾಯಕರು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ. ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಿಂದುಳಿದ ವರ್ಗಗಳು, ಎಸ್&zwnj;ಸಿ ಹಾಗೂ ಎಸ್&zwnj;ಟಿ ಸಮುದಾಯಗಳ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.&lt;/p&gt;&lt;p&gt;ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಯುದ್ಧ ಪರಿಸ್ಥಿತಿ ಉಂಟಾಗಿರುವುದರಿಂದ ಸಮಸ್ಯೆಗಳು ಎದುರಾಗಿವೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಬೇರೆ ರೀತಿಯಲ್ಲಿ ಹೊಂದಾಣಿಕೆ ಮಾಡಲಾಗುತ್ತಿದೆ. ಆದರೆ ಅಡುಗೆ ಅನಿಲದ ಬಹುಪಾಲು ಮಧ್ಯ ಪ್ರಾಚ್ಯದ ದೇಶಗಳಿಂದಲೇ ಬರಬೇಕಾಗಿರುವುದರಿಂದ ಬೆಲೆ ಏರಿಕೆಯಾಗಿದೆ. ಆದರೂ ಸಿಲಿಂಡರ್ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳು ಪೆಟ್ರೋಲಿಯಂ ಉಪ ಉತ್ಪನ್ನಗಳಾಗಿವೆ. ರಷ್ಯಾ, ಮೊರಾಕ್ಕೊ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಇವುಗಳ ಪೂರೈಕೆ ನಡೆಯುತ್ತಿದ್ದು, ಯುದ್ಧದ ಪರಿಣಾಮವಾಗಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಸಮಸ್ಯೆಗಳು ಎದುರಾಗಿವೆ ಎಂದರು.&lt;/p&gt;&lt;h2&gt;&lt;strong&gt;ಸಚಿವ ಸ್ಥಾನಕ್ಕಾಗಿ ನಮ್ಮ ಹೆಸರು ಬಳಕೆ&lt;/strong&gt;&lt;/h2&gt;&lt;p&gt;ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಿರುಕುಳ ನೀಡುತ್ತಿದ್ದಾರೆ ಎಂಬ ಶಾಸಕ ಯಾಸೀರ್&zwnj; ಅಹ್ಮದ್&zwnj;ಖಾನ್ ಪಠಾಣ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಕಿರುಕುಳ ಎಂಬ ಪದವೇ ನಮ್ಮ ಡಿಕ್ಷನರಿಯಲ್ಲಿ ಇಲ್ಲ. ಕೆಲವರು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ನಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.&lt;/p&gt;]]></content:encoded>
            <category>haveri</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-basavaraj-bommai-on-assembly-ticket-rumours-haveri-gvd/articleshow-bs2v8ap"/>
        </item>
        <item>
            <title><![CDATA[SIR ಮೂಲಕ ಮತದಾರರ ಹಕ್ಕು ಕಸಿಯಲು ಅವಕಾಶ ನೀಡಲ್ಲ: ಸಲೀಂ ಅಹ್ಮದ್ ಎಚ್ಚರಿಕೆ]]></title>
            <link>https://kannada.asianetnews.com/karnataka-districts/saleem-ahmed-slams-election-commission-over-voter-list-deletion-gvd/articleshow-cklg5tk</link>
            <guid isPermaLink="true">https://kannada.asianetnews.com/karnataka-districts/saleem-ahmed-slams-election-commission-over-voter-list-deletion-gvd/articleshow-cklg5tk</guid>
            <pubDate>Sun, 14 Jun 2026 22:48:39 +0530</pubDate>
            <description><![CDATA[&lt;p&gt;SIR: ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೂಲಕ ಜನರ ಮೂಲಭೂತ ಹಕ್ಕು ಕಸಿಯುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದು ಸಲೀಂ ಅಹ್ಮದ್ ಎಚ್ಚರಿಕೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g2m1ancat090bwxmywwna2y0,imgname-saleem-ahmed.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಜೂ.14): &lt;/strong&gt;ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೂಲಕ ಜನರ ಮೂಲಭೂತ ಹಕ್ಕು ಕಸಿಯುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ. ಅಗತ್ಯವಿದ್ದರೆ ಬೀದಿಗಿಳಿದು ಹೋರಾಟ ನಡೆಸಲು ಸಿದ್ಧವಿದ್ದೇವೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಎಚ್ಚರಿಕೆ ನೀಡಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗವು ಮತದಾರರನ್ನು ಸೇರಿಸುವುದನ್ನು ಬಿಟ್ಟು ತೆಗೆಯುವ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.&lt;/p&gt;&lt;p&gt;ಈ ಹಿಂದೆ ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರ್ಪಡೆ ಮಾಡುವ ಕೆಲಸ ಮಾಡುತ್ತಿತ್ತು. ಆದರೆ ಈಗ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಒತ್ತಡದಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಹಾರ ಹಾಗೂ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಅನುಸರಿಸಿದ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಕಾಂಗ್ರೆಸ್&zwnj;ನ ಬಿಎಲ್&zwnj;ಎಗಳು ಮತ್ತು ಕಾರ್ಯಕರ್ತರು ಅದಕ್ಕೆ ಅವಕಾಶ ನೀಡುವುದಿಲ್ಲ. ಬಿಹಾರ, ಪಶ್ಚಿಮ ಬಂಗಾಳದಂತೆ ಆಗಲು ಬಿಡುವುದಿಲ್ಲ ಎಂದು ಹೇಳಿದರು.&lt;/p&gt;&lt;p&gt;ಹಿಂದುಳಿದವರು, ಅಲ್ಪಸಂಖ್ಯಾತರು, ಎಸ್&zwnj;ಸಿ-ಎಸ್&zwnj;ಟಿಗಳ ಮತದಾನದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ಎಸ್&zwnj;ಐಆರ್&zwnj; ಮೂಲಕ ನಡೆಯುತ್ತಿದೆ. ಮೋದಿ, ಅಮಿತ್ ಶಾ ಅವರ ನೇರ ಮಾರ್ಗದರ್ಶನದಲ್ಲಿ ಆಯೋಗ ಈ ರೀತಿಯ ಕೆಲಸ ಮಾಡುತ್ತಿದೆ. ಆದರೆ ಈ ಷಡ್ಯಂತ್ರ ರಾಜ್ಯದಲ್ಲಿ ನಡೆಯಲು ನಾವು ಬಿಡುವುದಿಲ್ಲ. ನಾವು ಈಗಾಗಲೇ ಎಚ್ಚೆತ್ತುಕೊಂಡಿದ್ದೇವೆ ಎಂದು ಹೇಳಿದರು.&lt;/p&gt;&lt;p&gt;ಯುವಕರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಡಿ.ಕೆ. ಶಿವಕುಮಾರ ಸಿಎಂ ಆದ ಮೊದಲ ಸಂಪುಟದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಜಾರಿಗೊಳಿಸಿದ್ದಾರೆ. ಭಾರತ ಜೋಡೋ ಯುವ ಸಂಘಗಳಿಗೆ ಅನುದಾನ ಸೇರಿದಂತೆ 10 ಸಾವಿರ ಯುವ ಸಂಘಗಳ ಸ್ಥಾಪನೆಗೆ ಉತ್ತೇಜನ ನೀಡಲಾಗಿದೆ. ಈಚೆಗೆ ನಡೆದ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಶಿವಕುಮಾರ್ ಪಾಲ್ಗೊಂಡು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಕೇಂದ್ರ ಸರ್ಕಾರದ ಮುಂದೆ 18 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಎಸ್&zwnj;ಐಆರ್&zwnj;ಗೆ ದಾಖಲೆ ಸಿದ್ಧ ಮಾಡಿಟ್ಟುಕೊಳ್ಳಿ&lt;/strong&gt;&lt;/h2&gt;&lt;p&gt;ವಿಧಾನಪರಿಷತ್ ಸದಸ್ಯ, ಎಸ್ಐಆರ್&zwnj; ಉಸ್ತುವಾರಿ ಎಸ್.ಎಫ್. ಜಕ್ಕಪ್ಪನವರ ಮಾತನಾಡಿ, ಬೆಳಗಾವಿ ವಿಭಾಗದ 65 ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ತಮ್ಮ ಮೇಲೆ ವಹಿಸಲಾಗಿದ್ದು, ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೇನೆ. ಕಾನೂನಿನ ವ್ಯಾಪ್ತಿಯಲ್ಲೇ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದ್ದರೂ, ಮತದಾನದಂತಹ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಕೆಲ ಸಮುದಾಯಗಳ ಮತವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ನಾವು ಖಂಡಿಸುತ್ತೇವೆ. ಆದ್ದರಿಂದ ಮತದಾರರು ಪಾಸ್&zwnj;ಪೋರ್ಟ್, ಆಸ್ತಿ ದಾಖಲೆ, ರಹವಾಸಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಜನ್ಮದಿನಾಂಕ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಬಿಎಲ್&zwnj;ಒಗಳು ಮನೆಗಳಿಗೆ ಭೇಟಿ ನೀಡಿದಾಗ ನಮೂನೆಗಳನ್ನು ಭರ್ತಿ ಮಾಡದಿದ್ದರೆ ಮತದಾನ ಹಕ್ಕಿನಿಂದ ವಂಚಿತರಾಗುತ್ತಾರೆ. ಇದು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಮನವಿ ಮಾಡಿದರು.&lt;/p&gt;]]></content:encoded>
            <category>haveri</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/saleem-ahmed-slams-election-commission-over-voter-list-deletion-gvd/articleshow-cklg5tk"/>
        </item>
        <item>
            <title><![CDATA[ಕನಸಲ್ಲೂ ಕೂಡಾ ನಾನು ಸ್ಪೀಕರ್ ಆಗ್ತೇನಿ ಅಂತ ಬಯಸಿರಲಿಲ್ಲ: ರುದ್ರಪ್ಪ ಲಮಾಣಿ ಹೇಳಿದ್ದೇನು?]]></title>
            <link>https://kannada.asianetnews.com/politics/rudrappa-lamani-confident-of-minister-post-ahead-of-cabinet-expansion-gvd/articleshow-cuska6r</link>
            <guid isPermaLink="true">https://kannada.asianetnews.com/politics/rudrappa-lamani-confident-of-minister-post-ahead-of-cabinet-expansion-gvd/articleshow-cuska6r</guid>
            <pubDate>Thu, 04 Jun 2026 17:41:36 +0530</pubDate>
            <description><![CDATA[&lt;p&gt;ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆಯೇ ವಿಧಾನಸಭೆ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ಸಚಿವ ಸ್ಥಾನ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt98q2bahe00w1eay7ptga3q,imgname-chh-1780575078762.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಜೂ.04): &lt;/strong&gt;ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆಯೇ ವಿಧಾನಸಭೆ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ಸಚಿವ ಸ್ಥಾನ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, &quot;ನಾನು ಕನಸಲ್ಲಿಯೂ ಸ್ಪೀಕರ್ ಆಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಪಕ್ಷದ ನಾಯಕತ್ವವೇ ನನಗೆ ಈ ಜವಾಬ್ದಾರಿ ನೀಡಿದೆ. ಹೊಸ ಸ್ಪೀಕರ್ ಆಯ್ಕೆಯಾಗುವವರೆಗೆ ನಾನು ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತೇನೆ&quot; ಎಂದು ಹೇಳಿದರು.&lt;/p&gt;&lt;p&gt;ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು, ಮುಖ್ಯಮಂತ್ರಿ ಹುದ್ದೆಯನ್ನೇ ಬದಲಾಯಿಸಿರುವ ನಾಯಕತ್ವದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಅವರು ಹೇಳಿದರು. &quot;ಕಳೆದ ಬಾರಿ ಹೈಕಮಾಂಡ್ ಸೂಚನೆಯ ಮೇರೆಗೆ ಇಷ್ಟವಿಲ್ಲದಿದ್ದರೂ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಸ್ವೀಕರಿಸಿದ್ದೆ. ಡಿ.ಕೆ. ಶಿವಕುಮಾರ್, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮನವಿಯ ಮೇರೆಗೆ ಆ ಜವಾಬ್ದಾರಿ ವಹಿಸಿಕೊಂಡಿದ್ದೆ&quot; ಎಂದರು.&lt;/p&gt;&lt;p&gt;ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಲಮಾಣಿ, &quot;ರಾಜ್ಯ ಸಚಿವ ಸಂಪುಟದಲ್ಲಿ ಇನ್ನೂ 19 ಸ್ಥಾನಗಳು ಖಾಲಿ ಇವೆ. ಜಾತಿ, ಪ್ರಾದೇಶಿಕ ಮತ್ತು ರಾಜಕೀಯ ಸಮೀಕರಣಗಳನ್ನು ಪರಿಗಣಿಸಿ ಸಚಿವ ಸ್ಥಾನಗಳನ್ನು ಹಂಚಲಾಗುತ್ತದೆ. ಕಳೆದ ಬಾರಿ ಪಕ್ಷದ ನಾಯಕತ್ವದಿಂದ ನನಗೆ ಭರವಸೆ ನೀಡಲಾಗಿತ್ತು. ಈ ಬಾರಿ ನಮ್ಮ ಸಮುದಾಯಕ್ಕೂ ಸಚಿವ ಸ್ಥಾನ ದೊರೆಯಲಿದೆ ಎಂಬ ವಿಶ್ವಾಸವಿದೆ&quot; ಎಂದು ಹೇಳಿದರು.&lt;/p&gt;&lt;p&gt;&quot;ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ನಮ್ಮ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಇರುತ್ತಿತ್ತು. ಆದರೆ ಕಳೆದ ಬಾರಿ ಅದು ಸಾಧ್ಯವಾಗಲಿಲ್ಲ. ಈ ಬಾರಿ ಆ ಕೊರತೆ ನೀಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ಸಮುದಾಯವನ್ನು ಪ್ರತಿನಿಧಿಸುವ ಏಕೈಕ ಶಾಸಕನಾಗಿ ನನ್ನ ಹಕ್ಕಿನ ಬೇಡಿಕೆಯನ್ನು ಪಕ್ಷದ ಮುಂದೆ ಇಡುತ್ತಿದ್ದೇನೆ&quot; ಎಂದು ತಿಳಿಸಿದರು.&lt;/p&gt;&lt;p&gt;ಸಚಿವ ಸ್ಥಾನ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಕುರಿತು ಪ್ರತಿಕ್ರಿಯಿಸಿದ ಅವರು, &quot;ಗೆದ್ದು ಬಂದ ಪ್ರತಿಯೊಬ್ಬ ಶಾಸಕರಿಗೂ ಸಚಿವರಾಗುವ ಆಸೆ ಇರುತ್ತದೆ. ಆದರೆ ಸಂವಿಧಾನಾತ್ಮಕವಾಗಿ ಸಚಿವರ ಸಂಖ್ಯೆಗೆ ಮಿತಿ ಇದೆ. ಹೀಗಾಗಿ ಅಂತಿಮ ನಿರ್ಧಾರವನ್ನು ಪಕ್ಷದ ನಾಯಕತ್ವವೇ ಕೈಗೊಳ್ಳಲಿದೆ&quot; ಎಂದರು.&lt;/p&gt;&lt;p&gt;ಹಿರಿಯ ನಾಯಕ ಹೆಚ್.ಕೆ. ಪಾಟೀಲ್ ಕುರಿತು ಮಾತನಾಡಿದ ಲಮಾಣಿ, &quot;ಹೆಚ್.ಕೆ. ಪಾಟೀಲ್ ಅವರು ನನ್ನ ರಾಜಕೀಯ ಗುರುಗಳು. ಅವರು ದೂರದೃಷ್ಟಿಯ ನಾಯಕರು. ಅವರನ್ನು ಆಡಳಿತ ವ್ಯವಸ್ಥೆಯಲ್ಲಿಯೇ ಬಳಸಿಕೊಳ್ಳುವುದು ರಾಜ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ&quot; ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಸಾರ್ವಜನಿಕವಾಗಿ ಹೇಳಿಕೆ ನೀಡಬಾರದು&lt;/strong&gt;&lt;/h2&gt;&lt;p&gt;ಇದೇ ವೇಳೆ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಶ್ರೀನಿವಾಸ್ ಮಾನೆ ಮತ್ತು ಬಸವರಾಜ ಶಿವಣ್ಣವರ ನಡುವಿನ ಭಿನ್ನಾಭಿಪ್ರಾಯದ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, &quot;ಸತ್ಯಾಂಶ ತಿಳಿಯದೆ ಯಾರೂ ಸಾರ್ವಜನಿಕವಾಗಿ ಹೇಳಿಕೆ ನೀಡಬಾರದು. ಸಣ್ಣ ಭಿನ್ನಾಭಿಪ್ರಾಯಗಳನ್ನು ದೊಡ್ಡದಾಗಿಸದೇ ಪರಸ್ಪರ ತಾಳ್ಮೆಯಿಂದ ವರ್ತಿಸಬೇಕು. ಪಕ್ಷದೊಳಗಿನ ಯಾವುದೇ ಬಿರುಕು ಹೆಚ್ಚಾಗದಂತೆ ಸರಿಪಡಿಸುವ ಪ್ರಯತ್ನ ಮಾಡಲಾಗುತ್ತದೆ&quot; ಎಂದು ತಿಳಿಸಿದರು.&lt;/p&gt;&lt;p&gt;ಮುಖ್ಯಮಂತ್ರಿ ಬದಲಾವಣೆಯ ಸಂದರ್ಭವನ್ನು ಉಲ್ಲೇಖಿಸಿದ ಅವರು, &quot;ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಬಲವನ್ನು ಪ್ರದರ್ಶಿಸುವ ಅವಕಾಶ ಇದ್ದರೂ, ಹೈಕಮಾಂಡ್ ನಿರ್ಧಾರಕ್ಕೆ ಗೌರವ ನೀಡಿ ತಲೆಬಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ತೀರ್ಮಾನವೇ ಅಂತಿಮ&quot; ಎಂದು ಹೇಳಿದರು.&lt;/p&gt;]]></content:encoded>
            <category>haveri</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/rudrappa-lamani-confident-of-minister-post-ahead-of-cabinet-expansion-gvd/articleshow-cuska6r"/>
        </item>
        <item>
            <title><![CDATA[ಕೆಪಿಎಸ್ ಶಾಲೆಗಳಿಂದಾಗಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚಲಿವೆಯೇ?  ಬಸವರಾಜ ಹೊರಟ್ಟಿ ಆತಂಕ]]></title>
            <link>https://kannada.asianetnews.com/education/will-kps-schools-lead-to-closure-govt-school-what-basavaraj-horatti-said-on-corruption-and-teacher-shortage-rav/articleshow-e2g2a3v</link>
            <guid isPermaLink="true">https://kannada.asianetnews.com/education/will-kps-schools-lead-to-closure-govt-school-what-basavaraj-horatti-said-on-corruption-and-teacher-shortage-rav/articleshow-e2g2a3v</guid>
            <pubDate>Tue, 26 May 2026 11:34:11 +0530</pubDate>
            <description><![CDATA[&lt;p&gt;ಕೆಪಿಎಸ್ ಶಾಲೆಗಳ ಸ್ಥಾಪನೆಯಿಂದಾಗಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಅಪಾಯವಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ, ಶಿಕ್ಷಕರ ಕೊರತೆ, ಮತ್ತು ಅವೈಜ್ಞಾನಿಕ ಮೌಲ್ಯಮಾಪನದ ಬಗ್ಗೆಯೂ ಅವರು ತೀವ್ರ ಅಸಮಾಧಾನ&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk5svbf6f4tfqqayhk4c203f,imgname----------------------90--1772942634470.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ: ರಾಜ್ಯದಲ್ಲಿ ಈಗ ಕೆಪಿಎಸ್ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ. ಹೀಗಾದರೆ ಹಳ್ಳಿಗಳಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ಬರುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಈ ಬಗ್ಗ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಜತೆಗೆ ತ್ರಿಭಾಷಾ ಸೂತ್ರವನ್ನೇ ಸರಿಯಾಗಿ ಅನುಷ್ಠಾನ ಮಾಡಬೇಕು. ಹಿಂದಿ ಭಾಷೆ ಕಲಿಯದಿದ್ದರೆ ಬೇರೆ ರಾಜ್ಯಕ್ಕೆ ಹೋದಾಗ ಸಮಸ್ಯೆ ಆಗಲಿದೆ. ಪ್ರತಿ ತರಗತಿಗೆ ಒಬ್ಬರು ಶಿಕ್ಷಕರು ಇರುವಂತೆ ನೋಡಿಕೊಳ್ಳಬೇಕು. ಪ್ರತಿ ಹಳ್ಳಿಗಳಲ್ಲಿ ಕನಿಷ್ಠ 5ನೇ ತರಗತಿವರೆಗಾದರೂ ಸರ್ಕಾರಿ ಕನ್ನಡ ಶಾಲೆಗಳು ಇರುವಂತೆ ಸರ್ಕಾರ ನೋಡಿಕೊಳ್ಳಬೇಕು. ಸರ್ಕಾರಿ ಶಾಲೆ ಮುಚ್ಚಿದರೆ ಸ್ವಾತಂತ್ರ್ಯ, ಗಣರಾಜ್ಯೋತ್ಸವ ದಿನಾಚರಣೆ ಮಾಡುವವರ&zwj;್ಯಾರು ಎಂದಿದ್ದಾರೆ.&lt;/p&gt;&lt;p&gt;ಈ ಹಿಂದೆ ಶಾಸಕರ ಮಾದರಿ ಶಾಲೆ ಮಾಡಿದ್ದರು. ಈಗ ಅವುಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕನ ಮಾಡಬೇಕು. ಕೇರಳದಲ್ಲಿ ಒಂದು ತರಗತಿಗೆ ಒಬ್ಬರು ಶಿಕ್ಷಕರಿದ್ದಾರೆ. ಆದರೆ, ಇಲ್ಲಿ ಶಿಕ್ಷಕರೇ ಇಲ್ಲ. ಹೀಗಾಗಿ, ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಿಕ್ಷಣ ಸಚಿವರಿಗೆ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಬೇಕೆಂಬ ಹುಮ್ಮಸ್ಸಿದೆ. ಆದರೆ, ಅಧಿಕಾರಿಗಳು ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದರು.&lt;/p&gt;&lt;h2&gt;ಅತಿ ಹೆಚ್ಚು ಭ್ರಷ್ಟಾಚಾರ:&lt;/h2&gt;&lt;p&gt;ಶಿಕ್ಷಣ ಇಲಾಖೆಯಲ್ಲಿ ಇರುವಷ್ಟು ಭ್ರಷ್ಟಾಚಾರ ಯಾವ ಇಲಾಖೆಯಲ್ಲೂ ಇಲ್ಲ. ಈ ಇಲಾಖೆಯಲ್ಲಿ ಅನೇಕ ಅಯೋಗ್ಯ ಅಧಿಕಾರಿಗಳು ಸೇರಿದ್ದಾರೆ. ಕಣ್ಮುಂದೆ ಅನಧಿಕೃತ ಶಾಲೆಗಳು ನಡೆಯುತ್ತಿದ್ದರೂ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದೆ. 12 ಅಂಕ ಪಡೆದ ಮಕ್ಕಳು ಈ ಬಾರಿ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಇಂಟರ್ನಲ್&zwnj; ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಸರಿಯಾಗಿ ಮೌಲ್ಯಮಾಪನ ಮಾಡಿದರೆ ಶೇ.55ರಷ್ಟೂ ಫಲಿತಾಂಶ ಬರುವುದಿಲ್ಲ ಎಂದು ಕಿಡಿಕಾರಿದರು.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/will-kps-schools-lead-to-closure-govt-school-what-basavaraj-horatti-said-on-corruption-and-teacher-shortage-rav/articleshow-e2g2a3v"/>
        </item>
        <item>
            <title><![CDATA[ರಾಜ್ಯದಲ್ಲಿ ಹೊಸ ರೀತಿಯ ಭ್ರಷ್ಟಾಚಾರ ಹೆಚ್ಚಾಗಿದೆ: ಸಂಸದ ಬೊಮ್ಮಾಯಿ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/mp-basavaraj-bommai-slams-congress-karnataka-politics-gvd/articleshow-fyrnytz</link>
            <guid isPermaLink="true">https://kannada.asianetnews.com/karnataka-districts/mp-basavaraj-bommai-slams-congress-karnataka-politics-gvd/articleshow-fyrnytz</guid>
            <pubDate>Tue, 12 May 2026 22:57:41 +0530</pubDate>
            <description><![CDATA[&lt;p&gt;ಕಾಂಗ್ರೆಸ್ ಪಕ್ಷ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಅಸ್ತಿತ್ವಕ್ಕಾಗಿ ಇನ್ನೊಂದು ಪಕ್ಷ ಅವಲಂಬಿತವಾಗಿಯೇ ತಮ್ಮ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h09h6p8d77a57yjcyxg0k1ff,imgname-Who-is-Basavaraj-Bommai-1683947215117.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸವಣೂರು (ಮೇ.12): &lt;/strong&gt;ಕಾಂಗ್ರೆಸ್ ಪಕ್ಷ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಅಸ್ತಿತ್ವಕ್ಕಾಗಿ ಇನ್ನೊಂದು ಪಕ್ಷ ಅವಲಂಬಿತವಾಗಿಯೇ ತಮ್ಮ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಜಮ್ಮು ಕಾಶ್ಮೀರದ ವಿಚಾರದಲ್ಲಿ ಒಂದು ದೇಶದಲ್ಲಿ ಇಬ್ಬರು ಪ್ರಧಾನಿ, ಎರಡು ಕಾನೂನು ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಚುನಾವಣೆಗಾಗಿ ಒಂದು ಪಕ್ಷ ಕಟ್ಟಬಾರದು.&lt;/p&gt;&lt;p&gt;ಒಂದು ದೇಶ ಕಟ್ಟುವ ರಾಷ್ಟ್ರೀಯವಾದಿ ಪಕ್ಷವಾಗಿರಬೇಕು ಎಂದು ಜನಸಂಘವನ್ನು ಕಟ್ಟಿದರು. ಇವತ್ತಿನ ರಾಜಕಾರಣ ನೋಡಿದಾಗ ಅಧಿಕಾರಕ್ಕಾಗಿ ರಾಜಕಾರಣ ಮಾಡುವುದು ಇನ್ನೊಂದು ಜನರಿಗಾಗಿ ಪೀಪಲ್ ಪೊಲಿಟಿಕ್ಸ್ ಮಾಡುವುದು. ಭಾರತೀಯ ಜನತಾಪಕ್ಷ ಪೀಪಲ್ಸ್ ಪೊಲಿಟಿಕ್ಸ್ ಮಾಡುತ್ತಿದೆ. ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಇನ್ನೊಂದು ಪಕ್ಷ ಅವಲಂಬಿತವಾಗಿಯೇ ತಮ್ಮ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಯಾವ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿದೆಯೋ ಅಂತಹ ಪಕ್ಷದಿಂದ ದೇಶದ ರಕ್ಷಣೆ ಹೇಗೆ ಸಾಧ್ಯ. ಲಾಭವಾಗಲಿ ನಷ್ಟವಾಗಲಿ ರಾಷ್ಟ್ರವಾದಿ ಚಿಂತನೆ ಮಾಡುವುದು ಬಿಜೆಪಿ, ತಮಿಳುನಾಡಿನಲ್ಲಿ ಆಗಿರುವ ಬೆಳವಣಿಗೆ ಗಮನಿಸಿದ್ದೀರಿ. ಅಲ್ಲಿ ಡಿಎಂಕೆ ಆಡಳಿತ ಇತ್ತು. ಅಲ್ಲಿ ಹೊಸ ಪಕ್ಷ, ಹೊಸ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಯಾವುದೇ ಸರ್ಕಾರ ಇರಲಿ, ಪುನರ್ ಸ್ಥಾಪನೆ ಆಗುವುದು ಭಾರತೀಯ ಜನತಾ ಪಕ್ಷ ಒಂದು ವಿಚಾರಧಾರೆ ಹಾಗೂ ಒಂದು ಉದ್ದೇಶ, ಭಾರತ ದೇಶ ಮತ್ತು ಭಾರತದ ಭವಿಷ್ಯಕ್ಕಾಗಿ ನಾವು ಹೋರಾಟ ಮಾಡುತ್ತೇವೆ. ಕರ್ನಾಟಕದಲ್ಲಿ ನಾವು ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿಭಾಯಿಸಬೇಕು. ಜನರು ಯಾವುದೇ ಕೆಲಸಕ್ಕೂ ದುಡ್ಡು ಕೊಡದೇ ಈ ಸರ್ಕಾರದಲ್ಲಿ ಏನೂ ಆಗುವುದಿಲ್ಲ, ಸಚಿವರಿಗೆ ದುಡ್ಡು ಕೊಟ್ಟರೆ ಕೆಲಸ, ಇಲ್ಲಿ ಒಂದು ಸಣ್ಣ ಕೆಲಸ ಆಗಬೇಕೆಂದರೂ ಬೆಂಗಳೂರಿನಿಂದ ಫೋನ್ ಬರಬೇಕು, ಅಲ್ಲಿ ಹಣ ಮುಟ್ಟಿದಾಗ ಮಾತ್ರ ಅಲ್ಲಿಂದ ಫೋನ್ ಬರುತ್ತದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಹೊಸ ರೀತಿ ಭ್ರಷ್ಟಾಚಾರ&lt;/strong&gt;&lt;/h2&gt;&lt;p&gt;ಹಿಂದೆಂದೂ ಕಾಣದ ರೀತಿಯಲ್ಲಿ ಹೊಸ ರೀತಿಯ ಭ್ರಷ್ಟಾಚಾರ ರಾಜ್ಯದಲ್ಲಿ ಹೆಚ್ಚಾಗಿದೆ. ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ. ಎಸ್ಟಿ, ಎಸ್ಪಿ ಸಮುದಾಯದ ಗಂಗಾ ಕಲ್ಯಾಣ ಯೋಜನೆ ಅಡಿ ಯಾವುದೇ ಬೋ&zwnj;ರ್ ವೆಲ್ ಕೊರೆಯಲಿಲ್ಲ. ಹಿಂದುಳಿದ ವರ್ಗಗಳ ನಿಗಮಗಳಿಗೆ ಮೀಸಲಿಟ್ಟಿದ್ದ 440 ಕೋಟಿ ರು. ಗಳನ್ನು ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡಲು ಖರ್ಚು ಮಾಡಿದ್ದಾರೆ. ಎಸ್ಸಿಪಿ ಟಿಎಸ್&zwnj;ಪಿಗೆ ಮೀಸಲಿಟ್ಟಿದ್ದರಲ್ಲಿ 1400 ಕೋಟಿ ರು. ಕಡತ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿ ಇಲ್ಲ. ನಾವು ಜನಪರವಾಗಿ ಹೋರಾಟ ಮಾಡಿ ರಾಜಕೀಯ ಜವಾಬ್ದಾರಿ ನಿರ್ವಹಿಸಬೇಕು. ರಾಷ್ಟ್ರೀಯ ಪಕ್ಷವಾಗಿ ಅಂತ್ಯೋದಯ ಅಭಿವೃದ್ದಿ, ದೇಶದ ಐಕ್ಯತೆಯ ವಿಚಾರದಲ್ಲಿ ಎಲ್ಲರೂ ಜನರ ಧ್ವನಿಯಾಗುವ ಸೈನಿಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.&lt;/p&gt;]]></content:encoded>
            <category>haveri</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-basavaraj-bommai-slams-congress-karnataka-politics-gvd/articleshow-fyrnytz"/>
        </item>
        <item>
            <title><![CDATA[Haveri: ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ; ಎತ್ತುಗಳ ಖರೀದಿಗಿಲ್ಲ ಹಣ]]></title>
            <link>https://kannada.asianetnews.com/karnataka-districts/haveri-farmer-uses-two-children-as-laborers-to-pull-weeds-from-cabbage-crop-mrq/articleshow-g9qt2nv</link>
            <guid isPermaLink="true">https://kannada.asianetnews.com/karnataka-districts/haveri-farmer-uses-two-children-as-laborers-to-pull-weeds-from-cabbage-crop-mrq/articleshow-g9qt2nv</guid>
            <pubDate>Sun, 14 Jun 2026 07:54:35 +0530</pubDate>
            <description><![CDATA[ಹಾವೇರಿ ಜಿಲ್ಲೆಯ ರೈತ ಶಂಕರಪ್ಪ ಲಮಾಣಿ, ಎತ್ತುಗಳನ್ನು ಖರೀದಿಸಲು ಹಣವಿಲ್ಲದೆ, ತಮ್ಮ ಎಲೆಕೋಸು ಬೆಳೆಯಲ್ಲಿನ ಕಳೆ ತೆಗೆಯಲು ಇಬ್ಬರು ಮಕ್ಕಳನ್ನೇ ಜೋಡೆತ್ತುಗಳಂತೆ ಬಳಸಿದ್ದಾರೆ. ಈ ಘಟನೆಯು ಸಾಲ ಮಾಡಿ ಕೃಷಿ ಮಾಡುವ ರೈತರ ಸಂಕಷ್ಟ ಮತ್ತು ಅಸಹಾಯಕ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv1yv2bf0s7dmqdbwba241jd,imgname-haveri-1781403584879.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಎಲೆಕೋಸು ಬೆಳೆಯ ಮಧ್ಯೆ ಬೆಳೆದ ಕಳೆ ನಾಶಮಾಡಲು ಹೊಲದ ಮಧ್ಯೆ ಇಬ್ಬರು ಮಕ್ಕಳು ಜೋಡೆತ್ತುಗಳಂತೆ ನೊಗ ಹೊತ್ತು ಸಾಗುತ್ತಿದ್ದರೆ, ಅಪ್ಪ ಎಡೆಕುಂಟೆ ಹಿಡಿದು ಅವರ ಹಿಂದೆ ಸಾಗುತ್ತಾನೆ. ಈ ದೃಶ್ಯ ನೋಡಿದರೆ ಇಂದಿಗೂ ನಮ್ಮ ರೈತರ ಪರಿಸ್ಥಿತಿ ಹೇಗಿದೆ ಎಂಬುದು ಅರ್ಥವಾಗುತ್ತದೆ.&lt;/p&gt;&lt;p&gt;ರಾಣಿಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದ ರೈತ ಶಂಕರಪ್ಪ ಲಮಾಣಿ ಹಾಗೂ ಅವರ ಇಬ್ಬರು ಮಕ್ಕಳು ತಾವೇ ಎಡೆಕುಂಟೆ ಕಟ್ಟಿ ಎಳೆದಿರುವ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h2&gt;&lt;strong&gt;ಎಲೆಕೋಸು ಬೆಳೆದಿರುವ ರೈತ&lt;/strong&gt;&lt;/h2&gt;&lt;p&gt;3 ಎಕರೆ 16 ಗುಂಟೆ ಜಮೀನಿನಲ್ಲಿ ಎಲೆಕೋಸು ಬೆಳೆದಿರುವ ಅವರು, ಉತ್ತಮ ಬೆಳೆ ನಿರೀಕ್ಷೆಯಲ್ಲಿ ಸಾಲ ಮಾಡಿ ಕೃಷಿ ಮಾಡಿದ್ದಾರೆ. ಬೀಜ, ಗೊಬ್ಬರ, ಔಷಧಿ, ಕೂಲಿ ಸೇರಿದಂತೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಸುರಿದ ಪೂರ್ವ ಮುಂಗಾರು ಮಳೆಯಿಂದಾಗಿ ಎಲೆಕೋಸು ಬೆಳೆ ಮಧ್ಯೆ ಕಳೆ ವ್ಯಾಪಕವಾಗಿ ಬೆಳೆದಿದೆ. ಕಳೆ ನಾಶ ಮಾಡದೇ ಬಿಟ್ಟರೆ ಬೆಳೆ ಕುಂಠಿತವಾಗುತ್ತದೆ. ಹೀಗಾಗಿ ಕಳೆ ನಾಶ ಮಾಡುವುದು ರೈತನಿಗೆ ಅನಿವಾರ್ಯವಾಗಿದೆ. ಆದರೆ ಕಳೆ ನಾಶ ಮಾಡಲು ಎತ್ತುಗಳನ್ನು ಖರೀದಿಸಬೇಕೆಂದರೆ ಲಕ್ಷಾಂತರ ರು. ಖರ್ಚು ಮಾಡಬೇಕು. ಯಂತ್ರ ಬಾಡಿಗೆಯೂ ಅಧಿಕವಾಗಿದೆ. ಆದ್ದರಿಂದ ರೈತ ಶಂಕರಪ್ಪ ಲಮಾಣಿ ತನ್ನ ಇಬ್ಬರು ಮಕ್ಕಳೊಂದಿಗೆ ಸೇರಿ ಎಡೆಕುಂಟೆ ಹೊಡೆದಿದ್ದಾರೆ.&lt;/p&gt;&lt;p&gt;ಮಕ್ಕಳಾದ ನಿಂಗರಾಜ್ ಮತ್ತು ಪ್ರವೀಣ್ ಜೋಡೆತ್ತುಗಳಂತೆ ನೊಗ ಎಳೆದರೆ, ಅಪ್ಪ ಎಡೆಕುಂಟೆ ಹಿಡಿದು ಮೂರೂವರೆ ಎಕರೆ ಹೊಲದಲ್ಲಿ ಬೆಳೆದಿದ್ದ ಕಳೆ ನಾಶ ಮಾಡಿದ್ದಾರೆ. ಇನ್ನು ಕೇವಲ 20 ದಿನದ ಎಲೆಕೋಸು ಬೆಳೆಯಿದೆ. ಈ ಬೆಳೆ ಮಾರುಕಟ್ಟೆಗೆ ತಲುಪುವವರೆಗೆ ಕನಿಷ್ಠ ಮೂರು ಬಾರಿ ಕಳೆ ನಾಶ ಮಾಡಲೇಬೇಕಿದೆ. ಒಂದು ಬಾರಿ ಕಳೆ ನಾಶ ಮಾಡಲು ಮೂರು ಜನ ಸೇರಿ ನಾಲ್ಕೈದು ದಿನಗಳ ಆಗುತ್ತದೆ. ಅಷ್ಟೊಂದು ಶ್ರಮ ಹಾಕಿ ಈ ಕುಟುಂಬ ಬೆಳೆ ತೆಗೆಯುತ್ತಿರುವುದು ಕಂಡು ಅನೇಕರು ಮರುಗಿದ್ದಾರೆ.&lt;/p&gt;&lt;p&gt;ನಮ್ಮಲ್ಲಿ ಎತ್ತು ಖರೀದಿಸಲು ಹಣವಿಲ್ಲ. ಬಾಡಿಗೆ ಎತ್ತು, ಬಾಡಿಗೆ ಟ್ರ್ಯಾಕ್ಟರ್&zwnj; ಪಡೆದರೂ ನೀಡುವುದು ಕಷ್ಟ. ಆದರೆ ಬೆಳೆ ಉಳಿಸಲೇಬೇಕು. ಹೀಗಾಗಿ ಇಬ್ಬರು ಮಕ್ಕಳೊಂದಿಗೆ ಸೇರಿ ಎಡೆಕುಂಟೆ ಹೊಡೆದಿದ್ದೇನೆ. ನಮ್ಮ ರೈತನ ಪರಿಸ್ಥಿತಿ ಯಾವಾಗಲೂ ಹೀಗೆಯೇ. ಯಾರ ಮುಂದೆ ಕೈಚಾಚಿ ನಿಲ್ಲುವುದು ನಮ್ಮಿಂದ ಸಾಧ್ಯವಿಲ್ಲ ಎಂದು ಎಲೆಕೋಸು ಬೆಳೆದ ರೈತ ಶಂಕರಪ್ಪ ಲಮಾಣಿ ಹೇಳಿದರು.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-farmer-uses-two-children-as-laborers-to-pull-weeds-from-cabbage-crop-mrq/articleshow-g9qt2nv"/>
        </item>
        <item>
            <title><![CDATA[Haveri: ಅಕ್ರಮ ಸಂಬಂಧ ಶಂಕೆ; ಅಕ್ಕನ ಕತ್ತು ಸೀಳಿದ ತಮ್ಮ! ಅಂಗನವಾಡಿಯಲ್ಲಿ ಭೀಕರ ಕೊಲೆ]]></title>
            <link>https://kannada.asianetnews.com/gallery/karnataka-districts/haveri-suspicion-of-an-illicit-relationship-the-brother-brutally-murdered-his-sister-shiggavi-mrq-gdlh2ed</link>
            <guid isPermaLink="true">https://kannada.asianetnews.com/gallery/karnataka-districts/haveri-suspicion-of-an-illicit-relationship-the-brother-brutally-murdered-his-sister-shiggavi-mrq-gdlh2ed</guid>
            <pubDate>Mon, 25 May 2026 11:40:08 +0530</pubDate>
            <description><![CDATA[ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ, ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆಯಿಂದ ಸ್ವಂತ ತಮ್ಮನೇ ತನ್ನ ಅಕ್ಕನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಂಗನವಾಡಿ ಸಹಾಯಕಿಯಾಗಿದ್ದ ಮಹಿಳೆಯ ಮೇಲೆ ಮಚ್ಚಿನಿಂದ ದಾಳಿ ಮಾಡಿ, ಆಕೆ ಕೆಲಸ ಮಾಡುತ್ತಿದ್ದ ಕೇಂದ್ರದಲ್ಲಿಯೇ ಹತ್ಯೆಗೈದಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpaqn2dbdgs1ykh3s3bta6ab,imgname-delhi-jafrabad-metro-stabbing-akil-ahmed-murder-match-refusal-case-youth-arrested-crime-news-002-1776329329067.jpg" type="image/jpeg" height="390" width="690"/>
            <content:encoded><![CDATA[ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ, ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆಯಿಂದ ಸ್ವಂತ ತಮ್ಮನೇ ತನ್ನ ಅಕ್ಕನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಂಗನವಾಡಿ ಸಹಾಯಕಿಯಾಗಿದ್ದ ಮಹಿಳೆಯ ಮೇಲೆ ಮಚ್ಚಿನಿಂದ ದಾಳಿ ಮಾಡಿ, ಆಕೆ ಕೆಲಸ ಮಾಡುತ್ತಿದ್ದ ಕೇಂದ್ರದಲ್ಲಿಯೇ ಹತ್ಯೆಗೈದಿದ್ದಾನೆ.&lt;img&gt;&lt;p&gt;ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಸ್ವಂತ ತಮ್ಮನೇ ಅಕ್ಕನನ್ನು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು 29 ವರ್ಷದ ಸುಮಾ ಶಿವಶಂಕರ್ ವನಹಳ್ಳಿ ಎಂದು ಗುರುತಿಸಲಾಗಿದೆ. ಸಂಜು ಕೊಲೆ ಆರೋಪಿ. (ಸಾಂದರ್ಭಿಕ ಚಿತ್ರ)&lt;/p&gt;&lt;img&gt;&lt;p&gt;ಸುಮಾ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಎಂದಿನಂತೆ ಸುಮಾ ಶಿಗ್ಗಾವಿ ಪಟ್ಟಣದ ಮೌಲಾಲಿ ಗುಡ್ಡದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ಅಂಗನವಾಡಿ ಕೇಂದ್ರಕ್ಕೆ ಬಂದ ಸಂಜು, ಅಕ್ಕನ ಮೇಳೆ ಮಚ್ಚಿನಿಂದ ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾನೆ. (ಸಾಂದರ್ಭಿಕ ಚಿತ್ರ)&lt;/p&gt;&lt;img&gt;&lt;p&gt;ಮಚ್ಚಿನ ದಾಳಿಗೆ ಒಂದು ಕೈ ತುಂಡಾಗಿದ್ದು, ಕುತ್ತಿಗೆ ಸೀಳಿ ಅಪಾರ ಪ್ರಮಾಣದ ರಕ್ತಸ್ರಾವದಿಂದ ಸುಮಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಂಗನವಾಡಿ ಮುಖ್ಯದ್ವಾರದ ಬಳಿಯೇ ರಕ್ತದ ಮಡುವಿನಲ್ಲಿ ಸುಮಾ ಅವರ ಹೆಣ ಬಿದ್ದಿರೋದನ್ನು ಕಂಡು ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ. (ಸಾಂದರ್ಭಿಕ ಚಿತ್ರ)&lt;/p&gt;&lt;img&gt;&lt;p&gt;ಇಂದು ಬೆಳಗ್ಗೆ ಸುಮಾರು 10.15ರ ವೇಳೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಶವವನ್ನು ಮರಣೋತ್ತರ ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. (ಸಾಂದರ್ಭಿಕ ಚಿತ್ರ)&lt;/p&gt;]]></content:encoded>
            <category>haveri</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/haveri-suspicion-of-an-illicit-relationship-the-brother-brutally-murdered-his-sister-shiggavi-mrq-gdlh2ed"/>
        </item>
        <item>
            <title><![CDATA[ಪಟ್ಟಣದಲ್ಲಿನ ಲೋಕಲ್ ಬಸ್ ಸಂಚಾರ ರದ್ದುಗೊಳಿಸುವಂತೆ ಶಾಸಕರಿಗೆ ಆಟೋ ಚಾಲಕರ ಮನವಿ]]></title>
            <link>https://kannada.asianetnews.com/karnataka-districts/haveri-byadagi-auto-drivers-appeal-to-mla-basavaraj-shivannavar-to-cancel-local-bus-services-in-the-town-mrq/articleshow-kvzz9yq</link>
            <guid isPermaLink="true">https://kannada.asianetnews.com/karnataka-districts/haveri-byadagi-auto-drivers-appeal-to-mla-basavaraj-shivannavar-to-cancel-local-bus-services-in-the-town-mrq/articleshow-kvzz9yq</guid>
            <pubDate>Sun, 07 Jun 2026 05:40:44 +0530</pubDate>
            <description><![CDATA[&lt;p&gt;ರಸ್ತೆ ಅಗಲೀಕರಣದಿಂದ ಬಸ್ ಸಂಚಾರ ಮಾರ್ಗ ಬದಲಾಗಿದ್ದು ಮತ್ತು ಲೋಕಲ್ ಬಸ್ ಸೇವೆ ಆರಂಭವಾಗಿರುವುದರಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ಆಟೋ ಚಾಲಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಲೋಕಲ್ ಬಸ್ ಸಂಚಾರವನ್ನು ರದ್ದುಗೊಳಿಸಿ, ಎಲ್ಲಾ ಬಸ್&zwnj;ಗಳನ್ನು ಬಸ್ ನಿಲ್ದಾಣದ ಮೂಲಕವೇ ಓಡಾಟ ನಡೆಸುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktfpj3vn3m73bda18sbkxa5j,imgname-byadagi-1780790923125.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಬ್ಯಾಡಗಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯಿಂದ ಉಂಟಾಗಿರುವ ಬಸ್ ಸಂಚಾರ ಬದಲಾವಣೆ ಹಾಗೂ ಲೋಕಲ್ ಬಸ್ ಸಂಚಾರದಿಂದ ಆಟೋ ಚಾಲಕರ ಬದುಕು ಬೀದಿಗೆ ಬಂದಿದ್ದು, ಲೋಕಲ್ ಬಸ್ ಸಂಚಾರ ರದ್ದು ಮಾಡುವಂತೆ ಆಗ್ರಹಿಸಿ ನೆಹರು ಆಟೋ ಚಾಲಕ ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು ಶಾಸಕ ಬಸವರಾಜ ಶಿವಣ್ಣನವರ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.&lt;/p&gt;&lt;p&gt;ಈ ವೇಳೆ ಮಾತನಾಡಿದ ಆಟೋ ಚಾಲಕ ಗಣೇಶ ವಡ್ಡರ, ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಅನೇಕ ಬಸ್&zwnj;ಗಳು ಬಸ್ ನಿಲ್ದಾಣಕ್ಕೆ ಬಾರದೆಯೇ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಹಾವೇರಿ ಮಾರ್ಗದ ಬಸ್&zwnj;ಗಳು ಹಳೇ ಪೊಲೀಸ್ ಠಾಣೆ ಮಾರ್ಗವಾಗಿ, ರಾಣಿಬೆನ್ನೂರು ಮಾರ್ಗದ ಬಸ್&zwnj;ಗಳು ದರ್ಗಾ ಸರ್ಕಲ್ ಮೂಲಕ ಹಾಗೂ ಹಿರೇಕೆರೂರು ಮಾರ್ಗದ ಬಸ್&zwnj;ಗಳು ಗುಮ್ಮನಹಳ್ಳಿ ಸಮೀಪದಿಂದ ಸಂಚರಿಸುತ್ತಿರುವುದರಿಂದ ಪ್ರಯಾಣಿಕರು ಮತ್ತು ಆಟೋ ಚಾಲಕರಿಗೆ ಗೊಂದಲ ಉಂಟಾಗುತ್ತಿದೆ.&amp;nbsp;&lt;/p&gt;&lt;p&gt;ಸರಿಯಾದ ಬಸ್ ನಿಲುಗಡೆ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ಹಾಗೂ ಆಟೋ ಚಾಲಕರ ನಡುವೆ ಬಾಡಿಗೆ ವಿಚಾರವಾಗಿ ಮನಸ್ತಾಪಗಳು ಹೆಚ್ಚಾಗುತ್ತಿವೆ. ಆಟೋ ಚಾಲನೆಯೇ ಜೀವನೋಪಾಯದ ಪ್ರಮುಖ ಆಧಾರವಾಗಿರುವುದರಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಪೋಸ್ಟ್ ಆಫೀಸ್ ಮಾರ್ಗದ ಮೂಲಕ ಬಸ್&zwnj;ಗಳನ್ನು ಬಸ್ ನಿಲ್ದಾಣಕ್ಕೆ ಕರೆತಂದು ಅಲ್ಲಿಂದ ಆಯಾ ಮಾರ್ಗಗಳಿಗೆ ತೆರಳುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.&lt;/p&gt;&lt;h2&gt;&lt;strong&gt;ಲೋಕಲ್ ಬಸ್ ರದ್ದು ಮಾಡಿ&lt;/strong&gt;&lt;/h2&gt;&lt;p&gt;ಮಾರುತಿ ಒಳಗುಂದಿ ಮಾತನಾಡಿ, ಮೋಟೆಬೆನ್ನೂರು ಮಾರ್ಗವಾಗಿ ರೈಲ್ವೆ ನಿಲ್ದಾಣ, ಹಳೇ ಪೊಲೀ ಸ್ ಠಾಣೆ, ಸುಭಾಷ್ ಸರ್ಕಲ್, ದರ್ಗಾ ಸರ್ಕಲ್, ಕಲಾಭವನ, ಗುಮ್ಮನಹಳ್ಳಿ ರಸ್ತೆ ಹಾಗೂ ಅಗಸನಹಳ್ಳಿ ಮಾರ್ಗವಾಗಿ ಶಿಡೇನೂರಿಗೆ ಸಂಚರಿಸುತ್ತಿರುವ ಲೋಕಲ್ ಬಸ್ ಸೇವೆಯಿಂದ ಆಟೋ ಚಾಲಕರಿಗೆ ಬಾಡಿಗೆ ಸಿಗದಂತಾಗಿದೆ. ಇದರಿಂದ ದಿನನಿತ್ಯದ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ಇತರೆ ಖರ್ಚುಗಳನ್ನು ಭರಿಸುವುದು ದುಸ್ತರವಾಗಿದೆ. ಆದ್ದರಿಂದ ಆಟೋ ಚಾಲಕರ ಹಿತದೃಷ್ಟಿಯಿಂದ ಬಸ್ ನಿಲ್ದಾಣಕ್ಕೆ ಬಸ್&zwnj;ಗಳ ಸಂಚಾರವನ್ನು ಪುನಃ ಆರಂಭಿಸಬೇಕು ಹಾಗೂ ಲೋಕಲ್ ಬಸ್ ಸೇವೆಯನ್ನು ಕೂಡಲೇ ರದ್ದು ಮಾಡುವಂತೆ ಆಗ್ರಹಿಸಿದರು. ಈ ವೇಳೆ ಪ್ರಕಾಶ ಬೇನಾಳ, ಪ್ರವೀಣ ಬಂಡಿವಡ್ಡರ, ನಾಗರಾಜ ಕಳ್ಯಾಣಿ, ಕುಮಾರ ಹಿರೇಮಠ, ಕುಮಾರ ಗಾಂಧಿನಗರ, ರಾಜಕುಮಾರ ಯಾದವಾಡ, ಹಸನಸಾಬ್, ಬಸಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-byadagi-auto-drivers-appeal-to-mla-basavaraj-shivannavar-to-cancel-local-bus-services-in-the-town-mrq/articleshow-kvzz9yq"/>
        </item>
        <item>
            <title><![CDATA[ಕುರ್ಚಿ ಕಿತ್ತಾಟದ ಬಗ್ಗೆ ಪ್ರಧಾನಿ ಮೋದಿ ಹೇಳುವುದು ಸ್ವಾಭಾವಿಕ: ಸಚಿವ ಸತೀಶ್ ಜಾರಕಿಹೊಳಿ]]></title>
            <link>https://kannada.asianetnews.com/karnataka-districts/satish-jarkiholi-reacts-to-pm-modi-karnataka-chair-fight-gvd/articleshow-n8q2qfd</link>
            <guid isPermaLink="true">https://kannada.asianetnews.com/karnataka-districts/satish-jarkiholi-reacts-to-pm-modi-karnataka-chair-fight-gvd/articleshow-n8q2qfd</guid>
            <pubDate>Mon, 11 May 2026 21:22:22 +0530</pubDate>
            <description><![CDATA[&lt;p&gt;ಕರ್ನಾಟಕ ರಾಜ್ಯದ ಕುರ್ಚಿ ಕಿತ್ತಾಟದ ಬಗ್ಗೆ ಮೋದಿ ಅವರು ರಾಜಕೀಯವಾಗಿ ಹೇಳುವುದು ಸ್ವಾಭಾವಿಕ. ರಾಜ್ಯದಲ್ಲಿ ಕುರ್ಚಿ ಗುದ್ದಾಟ ಇರುವುದೇ ಅಲ್ವಾ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7ks415c0bec5bxdck4jh9j9,imgname----------------------19--1760526730412.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಮೇ.11): &lt;/strong&gt;ಕರ್ನಾಟಕ ರಾಜ್ಯದ ಕುರ್ಚಿ ಕಿತ್ತಾಟದ ಬಗ್ಗೆ ಮೋದಿ ಅವರು ರಾಜಕೀಯವಾಗಿ ಹೇಳುವುದು ಸ್ವಾಭಾವಿಕ. ರಾಜ್ಯದಲ್ಲಿ ಕುರ್ಚಿ ಗುದ್ದಾಟ ಇರುವುದೇ ಅಲ್ವಾ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.&lt;/p&gt;&lt;p&gt;ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ವರ್ಕಿಂಗ್ ಸ್ಟೈಲ್ ಬೇರೆ, ಕಾಂಗ್ರೆಸ್ ವರ್ಕಿಂಗ್ ಸ್ಟೈಲ್ ಬೇರೆ. ಅವರು ಹೇಳಿದಂತೆ ನಾವು ಹೇಳಲು ಆಗಲ್ಲ. ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ಯಾವ ರೀತಿ ಅಧಿಕಾರಕ್ಕೆ ಬಂದರು ಅಂತ ಗೊತ್ತಿದೆ ಎಂದರು.&lt;/p&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗ ಭದ್ರತಾ ವೈಫಲ್ಯದ ಬಗ್ಗೆ ಮಾತನಾಡಿದ ಅವರು, ಆ ರೀತಿಯಲ್ಲ ಆಗಲ್ಲ. ಪೊಲೀಸರು ಭದ್ರತೆಯಲ್ಲಿ ಇರುತ್ತಾರೆ. ಅವರೇ ಎಲ್ಲ ನೋಡಿಕೊಳ್ಳುತ್ತಾರೆ. ಎಲ್ಲೋ ಆಗಿದ್ದಕ್ಕೂ, ಪ್ರಧಾನ ಮಂತ್ರಿಗೆ ಹೋಲಿಸಲು ಆಗುವುದಿಲ್ಲ. ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿನೇ, ಭದ್ರತೆ ಜವಾಬ್ದಾರಿ ನಮ್ಮದು ಅಷ್ಟೇಯಲ್ಲ. ಕೇಂದ್ರ ಸರ್ಕಾರದ್ದು ಇರುತ್ತದೆ. ಅದೇನೂ ಆತಂಕ ಪಡುವಂತಹ ಅವಶ್ಯಕತೆ ಇಲ್ಲ ಎಂದರು.&lt;/p&gt;&lt;h2&gt;&lt;strong&gt;ಟೀಕೆ ಮಾಡುತ್ತಾರೆ&lt;/strong&gt;&lt;/h2&gt;&lt;p&gt;ತಮಿಳುನಾಡಿನಲ್ಲಿ ಸೆಲ್ಯುಲರ್ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಬಹಳ ಸಂತೋಷ. ಆ ಹಿನ್ನೆಲೆಯಲ್ಲಿ ನಾವೆಲ್ಲರೂ ಬೆಂಬಲ ಮಾಡಿದ್ದೇವೆ. ಗ್ಯಾರಂಟಿ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಾರೆ. ಬಿಜೆಪಿ ಅಧಿಕಾರ ಇರುವ ಬೇರೆ ರಾಜ್ಯದಲ್ಲಿ ನಮ್ಮದೇ ಗ್ಯಾರಂಟಿ ಕಾಪಿ ಮಾಡಿ, ಅದನ್ನೇ ಜಾರಿಗೊಳಿಸುತ್ತಾರೆ ಎಂದು ಜಾರಕಿಹೊಳಿ ಲೇವಡಿ ಮಾಡಿದರು.&lt;/p&gt;]]></content:encoded>
            <category>haveri</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/satish-jarkiholi-reacts-to-pm-modi-karnataka-chair-fight-gvd/articleshow-n8q2qfd"/>
        </item>
        <item>
            <title><![CDATA[ವಿದ್ಯೆ ಕಲಿಸಿದ ಗುರುವಿನ ಕನಸು ಈಡೇರಿಸಿದ ವಿದ್ಯಾರ್ಥಿ; ನೆಚ್ಚಿನ ಮೇಸ್ಟ್ರಿಗೆ 'ಹೊಸ ಕಾರು' ಗಿಫ್ಟ್ ಕೊಟ್ಟ ಶಿಷ್ಯ!]]></title>
            <link>https://kannada.asianetnews.com/karnataka-districts/haveri-school-old-student-naveen-gifted-maruti-suzuki-swift-car-to-his-favorite-teacher-vastrad-sat/articleshow-os4oknt</link>
            <guid isPermaLink="true">https://kannada.asianetnews.com/karnataka-districts/haveri-school-old-student-naveen-gifted-maruti-suzuki-swift-car-to-his-favorite-teacher-vastrad-sat/articleshow-os4oknt</guid>
            <pubDate>Tue, 09 Jun 2026 20:57:34 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯಲ್ಲಿ, ಶಿಕ್ಷಕರೊಬ್ಬರ ನಿವೃತ್ತಿ ದಿನದಂದು ಶಿಷ್ಯನೊಬ್ಬ ಕಾರನ್ನು ಉಡುಗೊರೆಯಾಗಿ ನೀಡಿ ಅಪರೂಪದ ಗುರುದಕ್ಷಿಣೆ ಸಲ್ಲಿಸಿದ್ದಾನೆ. ಶಿಕ್ಷಕರ ಬೀಳ್ಕೊಡುಗೆ ಸಮಾರಂಭದಲ್ಲಿ ನಡೆದ ಈ ಘಟನೆಯು, ಆಧುನಿಕ ಕಾಲದಲ್ಲಿಯೂ ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಸಾರಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktpftcv331kqnehftpz1k5yq,imgname-haveri-student-car-gifted-to-teacher-1781018735459.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: '&lt;/strong&gt;ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ' ಎಂಬ ಮಾತಿಗೆ ಅನ್ವರ್ಥ ಎಂಬಂತೆ ಹಾವೇರಿ ಜಿಲ್ಲೆಯಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ತನಗೆ ಅಕ್ಷರ ಕಲಿಸಿ, ಬಡತನದ ನಡುವೆಯೂ ಆಸರೆಯಾಗಿ ನಿಂತು ಜೀವನ ರೂಪಿಸಿದ ಶಿಕ್ಷಕನಿಗೆ, ಅವರ ನಿವೃತ್ತಿಯ ದಿನದಂದು ಶಿಷ್ಯನೊಬ್ಬ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಮರೆಯಲಾಗದ 'ಗುರುದಕ್ಷಿಣೆ' ಸಮರ್ಪಿಸಿದ್ದಾನೆ.&lt;/p&gt;&lt;p&gt;ಹಾವೇರಿ ಜಿಲ್ಲೆಯ ಹಾನಗಲ್&zwnj;ನ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್ ನಡೆಸುತ್ತಿರುವ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ಈ ಭಾವನಾತ್ಮಕ ಸನ್ನಿವೇಶ ಕಂಡುಬಂದಿದೆ. ಇಲ್ಲಿ ದೀರ್ಘಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಿ.ಎಸ್. ವಸ್ತ್ರದ್ ಅವರ ನಿವೃತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಇಡೀ ಜಿಲ್ಲೆಯಾದ್ಯಂತ ಈಗ ಚರ್ಚೆಯ ವಿಷಯವಾಗಿದೆ.&lt;/p&gt;&lt;h2&gt;&lt;strong&gt;ಸಹಸ್ರ ಶಿಷ್ಯರ ಸಮಾಗಮ:&lt;/strong&gt;&lt;/h2&gt;&lt;p&gt;ಮೇ 30 ರಂದು ನಡೆದ ಈ ಸಮಾರಂಭಕ್ಕೆ ಶಾಲೆಯ ಸುಮಾರು 1000ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದರು. ತಮ್ಮ ನೆಚ್ಚಿನ ಶಿಕ್ಷಕನಿಗೆ ಗೌರವ ಸಲ್ಲಿಸಲು ನಾಡಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಆದರೆ ಈ ಕಾರ್ಯಕ್ರಮದ ಹೈಲೈಟ್ ಆಗಿದ್ದು 2007ನೇ ಸಾಲಿನ ಎಸ್&zwnj;ಎಸ್&zwnj;ಎಲ್&zwnj;ಸಿ ಬ್ಯಾಚ್&zwnj;ನ ವಿದ್ಯಾರ್ಥಿ ನವೀನ್ ಹುಲಿಹಳ್ಳಿ ನೀಡಿದ ವಿಶೇಷ ಕಾಣಿಕೆ. ನವೀನ್ ತನ್ನ ಗುರುವಿಗೆ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಮೌಲ್ಯದ ಹೊಸ 'ಮಾರುತಿ ಸುಜುಕಿ ಸ್ವಿಫ್ಟ್' ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಬಡ ವಿದ್ಯಾರ್ಥಿಗೆ ಪೋಷಕರಾಗಿದ್ದ ಶಿಕ್ಷಕ:&lt;/strong&gt;&lt;/h2&gt;&lt;p&gt;ಬೆಂಗಳೂರಿನ ಎಂಎನ್&zwnj;ಸಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ನವೀನ್ ಅವರ ಈ ನಿರ್ಧಾರದ ಹಿಂದೆ ಒಂದು ನೋವಿನ ಮತ್ತು ಸ್ಫೂರ್ತಿದಾಯಕ ಕಥೆಯಿದೆ. ನವೀನ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ತೀವ್ರ ಬಡತನದ ಕಾರಣ ಅವರ ಶಿಕ್ಷಣ ಅರ್ಧಕ್ಕೆ ನಿಲ್ಲುವ ಹಂತ ತಲುಪಿತ್ತು. ಅಂತಹ ಸಮಯದಲ್ಲಿ ಶಿಕ್ಷಕ ವಸ್ತ್ರದ್ ಅವರು ನವೀನ್&zwnj;ಗೆ ಆರ್ಥಿಕವಾಗಿ ಸಹಾಯ ಮಾಡಿದ್ದಲ್ಲದೆ, ರಜಾ ದಿನಗಳಲ್ಲೂ ವಿಶೇಷ ಪಾಠಗಳನ್ನು ಹೇಳಿಕೊಟ್ಟಿದ್ದರು. ಸ್ನಾತಕೋತ್ತರ ಪದವಿ ಮುಗಿಯುವವರೆಗೂ ಶಿಕ್ಷಕರು ನವೀನ್&zwnj;ಗೆ ಒಬ್ಬ ಪೋಷಕನಂತೆ ಬೆನ್ನೆಲುಬಾಗಿ ನಿಂತಿದ್ದರು.&lt;/p&gt;&lt;h2&gt;&lt;strong&gt;ಶಿಷ್ಯನ ಕೃತಜ್ಞತೆ - ಗುರುವಿನ ಭಾವುಕತೆ:&lt;/strong&gt;&lt;/h2&gt;&lt;p&gt;ಕಾರಿನ ಕೀ ಹಸ್ತಾಂತರಿಸಿ ಮಾತನಾಡಿದ ನವೀನ್, 'ವಸ್ತ್ರದ್ ಸರ್ ಕೇವಲ ಪಠ್ಯದ ಪಾಠ ಮಾಡಲಿಲ್ಲ, ಜೀವನದ ಪಾಠ ಕಲಿಸಿದರು. ನನ್ನ ಜೀವನದ ಈ ಯಶಸ್ಸಿಗೆ ಅವರೇ ಕಾರಣ. ಅವರಿಗೆ ಈ ಕಾರು ನೀಡುತ್ತಿರುವುದು ನನ್ನ ಸಣ್ಣ ಕೃತಜ್ಞತೆ ಅಷ್ಟೇ,' ಎಂದರು. ಶಿಕ್ಷಕ ಸಿ.ಎಸ್. ವಸ್ತ್ರದ್ ಅವರು ಮಾತನಾಡಿ, 'ನನ್ನ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಸೇರಿರುವುದೇ ನನಗೆ ದೊಡ್ಡ ಪ್ರಶಸ್ತಿ. ನವೀನ್ ನಡೆ ನನಗೆ ಮಾತು ಬಾರದಂತೆ ಮಾಡಿದೆ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಅಷ್ಟೇ' ಎಂದು ಭಾವುಕರಾದರು.&lt;/p&gt;&lt;p&gt;ಹಾನಗಲ್&zwnj;ನ ಕುಮಾರೇಶ್ವರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಈ ಸಮಾರಂಭವು ಆಧುನಿಕ ಕಾಲದಲ್ಲೂ 'ಗುರು-ಶಿಷ್ಯ' ಪರಂಪರೆ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ.&lt;/p&gt;]]></content:encoded>
            <category>haveri</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/haveri-school-old-student-naveen-gifted-maruti-suzuki-swift-car-to-his-favorite-teacher-vastrad-sat/articleshow-os4oknt"/>
        </item>
        <item>
            <title><![CDATA[ಹುಬ್ಬಳ್ಳಿ-ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ, 5 ಜಿಲ್ಲೆಯ ಪ್ರವಾಸಿಗರಿಗೆ ಇದೊಂದು ಆಫರ್!]]></title>
            <link>https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm</link>
            <guid isPermaLink="true">https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm</guid>
            <pubDate>Wed, 17 Jun 2026 12:01:04 +0530</pubDate>
            <description><![CDATA[ನೈಋತ್ಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 20 ಮತ್ತು 21 ರಂದು ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು 5 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಪ್ರವಾಸಿಗರಿಗೆ ಅನುಕೂಲಕರವಾದ ವೇಳಾಪಟ್ಟಿಯನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khp601b9hctbmkhxep8fe8wz,imgname-indian-railway--2--1771344758121.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಹುಬ್ಬಳ್ಳಿ ಮತ್ತು ಪ್ರವಾಸಿ ತಾಣಗಳಿರುವ ಚಿಕ್ಕಮಗಳೂರು ನಡುವೆ ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ವಾರಾಂತ್ಯದ ದಿನಗಳಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹಾಗೂ ರೈಲುಗಳಲ್ಲಿನ ಹೆಚ್ಚುವರಿ ಜನದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಜೂನ್ 20 ಮತ್ತು 21 ರಂದು ಈ ಎರಡೂ ನಗರಗಳ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ರೈಲು ಉತ್ತರ ಮತ್ತು ಮಧ್ಯ ಕರ್ನಾಟಕದ ಒಟ್ಟು 5 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಮಾನ್ಸೂನ್ ಪ್ರಕೃತಿ ಸವಿಯಲು ಇದೊಂದು ಆಫರ್ ನೀಡಿದಂತಿದೆ. ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ಅನುಕೂಲಕರವಾದ ಈ ರೈಲಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.&lt;/p&gt;&lt;h2&gt;ರೈಲಿನ ವೇಳಾಪಟ್ಟಿ ಮತ್ತು ಸಂಚಾರದ ವಿವರ&lt;/h2&gt;&lt;p&gt;ಈ ವಿಶೇಷ ರೈಲನ್ನು ಜೂನ್ 20 (ಶನಿವಾರ) ಮತ್ತು ಜೂನ್ 21 (ಭಾನುವಾರ) ರಂದು ಒಟ್ಟು ಎರಡು ಟ್ರಿಪ್&zwnj;ಗಳ ಕಾಲ ಓಡಿಸಲಾಗುತ್ತಿದೆ.&lt;/p&gt;&lt;p&gt;ಹುಬ್ಬಳ್ಳಿ - ಚಿಕ್ಕಮಗಳೂರು ವಿಶೇಷ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 07341): ಜೂನ್ 20 ಮತ್ತು 21 ರಂದು ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಟು, ಅದೇ ದಿನ ಬೆಳಗ್ಗೆ 11:15 ಕ್ಕೆ ಚಿಕ್ಕಮಗಳೂರು ನಿಲ್ದಾಣವನ್ನು ತಲುಪಲಿದೆ.&lt;/p&gt;&lt;p&gt;ಚಿಕ್ಕಮಗಳೂರು - ಹುಬ್ಬಳ್ಳಿ ವಿಶೇಷ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 07342): ಜೂನ್ 20 ಮತ್ತು 21 ರಂದು ಚಿಕ್ಕಮಗಳೂರಿನಿಂದ ಸಂಜೆ 5:30 ಕ್ಕೆ ಹೊರಟು, ಅದೇ ದಿನ ರಾತ್ರಿ 11:20 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ತಲುಪಲಿದೆ.&lt;/p&gt;&lt;h2&gt;ಎಲ್ಲೆಲ್ಲಿ ನಿಲುಗಡೆ ಇರಲಿದೆ? (ಮಾರ್ಗ ಮತ್ತು ನಿಲ್ದಾಣಗಳು)&lt;/h2&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಮಾರ್ಗಮಧ್ಯೆ ಪ್ರಮುಖ ನಗರಗಳು ಸೇರಿದಂತೆ ಒಟ್ಟು 15 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.&lt;/p&gt;&lt;p&gt;ಪ್ರಮುಖ ನಿಲುಗಡೆಗಳು: ಕುಂದಗೋಳ, ಸಂಶಿ (ಸೌಂಶಿ), ಯಳವಿಗಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು(ಚಿತ್ರದುರ್ಗ), ರಾಮಗಿರಿ, ಅಜ್ಜಂಪುರ, ಬೀರೂರು, ಕಡೂರು, ಬಿಸ್ಲೆಹಳ್ಳಿ, ಸಖರಾಯಪಟ್ಟಣ ಹಾಗೂ ಕಣಿವೆಹಳ್ಳಿ.&lt;/p&gt;&lt;h2&gt;ಬೋಗಿಗಳ ವಿವರ&amp;nbsp;&lt;/h2&gt;&lt;p&gt;ಈ ವಿಶೇಷ ರೈಲು ಒಟ್ಟು 10 ಬೋಗಿಗಳನ್ನು (Coaches) ಒಳಗೊಂಡಿರುತ್ತದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೋಗಿಗಳನ್ನು ವಿನ್ಯಾಸಗೊಳಿಸಲಾಗಿದೆ:&lt;/p&gt;&lt;ul&gt; &lt;li&gt;1 ಸ್ಲೀಪರ್ ಕ್ಲಾಸ್ ಬೋಗಿ (Sleeper Class)&lt;/li&gt; &lt;li&gt;7 ಸಾಮಾನ್ಯ ದರ್ಜೆ ಬೋಗಿಗಳು (General Coach)&lt;/li&gt; &lt;li&gt;2 ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ ದಿವ್ಯಾಂಗರ ವಿಶೇಷ ಕಂಪಾರ್ಟ್&zwnj;ಮೆಂಟ್ ಬೋಗಿಗಳು.&lt;/li&gt;&lt;/ul&gt;&lt;h2&gt;ಪ್ರವಾಸಿಗರಿಗೆ &amp;nbsp;ಸೂಕ್ತ ಸಮಯದ ಪ್ಲಾನಿಂಗ್!&lt;/h2&gt;&lt;p&gt;ನೈಋತ್ಯ ರೈಲ್ವೆ ಅಧಿಕಾರಿಗಳು ಈ ರೈಲಿನ ವೇಳಾಪಟ್ಟಿಯನ್ನು ಪ್ರವಾಸಿಗರಿಗೆ ಅತ್ಯಂತ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಿದ್ದಾರೆ.&lt;/p&gt;&lt;p&gt;ರೈಲು ಬೆಳಗ್ಗೆ 11:15ಕ್ಕೆ ಚಿಕ್ಕಮಗಳೂರು ತಲುಪುವುದರಿಂದ, ಪ್ರವಾಸಿಗರು ಆರಾಮವಾಗಿ &amp;nbsp;ಮಧ್ಯಾಹ್ನದ ವೇಳೆಗೆ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್&zwnj;ಗಿರಿ ಮುಂತಾದ ಕಡೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಲು ಸಾಕಷ್ಟು ಸಮಯ ಸಿಗುತ್ತದೆ.&lt;/p&gt;&lt;p&gt;ಇನ್ನು ಹಿಂದಿರುಗುವಾಗ ಭಾನುವಾರ ಸಂಜೆ 5:30ಕ್ಕೆ ರೈಲು ಇರುವುದರಿಂದ, ವೀಕೆಂಡ್&zwnj;ನಲ್ಲಿ ಇಡೀ ದಿನ ಸುತ್ತಾಡಿ, ಯಾವುದೇ ಆತುರವಿಲ್ಲದೇ ಆರಾಮವಾಗಿ ರೈಲು ಹತ್ತಿ ರಾತ್ರಿಯೊಳಗೆ ಹುಬ್ಬಳ್ಳಿಗೆ ತಲುಪಬಹುದಾಗಿದೆ. ಸಾರ್ವಜನಿಕರು ಹಾಗೂ ಪ್ರಕೃತಿ ಪ್ರೇಮಿಗಳು ಈ ವಿಶೇಷ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಕೋರಿದೆ.&lt;/p&gt;]]></content:encoded>
            <category>haveri</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm"/>
        </item>
        <item>
            <title><![CDATA[ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಂತೆ ಮನವಿ; ರೈತ ಸಂಘದ ಆತಂಕ ಏನು?]]></title>
            <link>https://kannada.asianetnews.com/karnataka-districts/appeal-not-to-sign-india-us-free-trade-agreement-what-are-the-concerns-of-the-haveri-farmers-association-mrq/articleshow-po3kex2</link>
            <guid isPermaLink="true">https://kannada.asianetnews.com/karnataka-districts/appeal-not-to-sign-india-us-free-trade-agreement-what-are-the-concerns-of-the-haveri-farmers-association-mrq/articleshow-po3kex2</guid>
            <pubDate>Tue, 23 Jun 2026 08:20:21 +0530</pubDate>
            <description><![CDATA[ಮುಂಬರಲಿರುವ ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದವು ದೇಶದ ಕೃಷಿ ವಲಯಕ್ಕೆ ಮಾರಕವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆತಂಕ ವ್ಯಕ್ತಪಡಿಸಿದೆ. ಆಮದು ಸುಂಕ ಕಡಿತ ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಧಕ್ಕೆಯಾಗುವ ಸಾಧ್ಯತೆಯಿಂದಾಗಿ, ಈ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ರೈತ ಮುಖಂಡರು ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvs5y8y4880dkbygqep5a7dm,imgname-haveri-farmer--1--1782182781892.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ&lt;/strong&gt;: ಮುಂಬರಲಿರುವ ಭಾರತ-ಅಮೆರಿಕ ಮಧ್ಯಂತರ ಮುಕ್ತ ವ್ಯಾಪಾರ ಒಪ್ಪಂದದಿಂದ ದೇಶದ ಕೃಷಿ ವಲಯಕ್ಕೆ ಭಾರಿ ಪೆಟ್ಟು ಬೀಳಲಿದ್ದು, ಯಾವುದೇ ಕಾರಣಕ್ಕೂ ರೈತರ ಹಿತಾಸಕ್ತಿ ಬಲಿಗೊಡುವ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಮೋದಿಯವರಿಗೆ ತುರ್ತು ಮನವಿ ಸಲ್ಲಿಸಿದರು.&lt;/p&gt;&lt;p&gt;ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ರೈತ ಮುಖಂಡರು, ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಜೂ. 23, 24ರಂದು ನವದೆಹಲಿಗೆ ಭೇಟಿ ನೀಡಲಿದ್ದು, ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ. ಇದರಿಂದ ರೈತ ಸಮುದಾಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಸ್ಥಳೀಯ ಮಾರುಕಟ್ಟೆ ನಾಶದ ಆತಂಕ&lt;/strong&gt;&lt;/h2&gt;&lt;p&gt;ಹತ್ತಿ, ಜೋಳ, ಸೋಯಾಬೀನ್ ಎಣ್ಣೆ ಹಾಗೂ ಸಂಸ್ಕರಿಸಿದ ಹಣ್ಣುಗಳ ಮೇಲಿನ ಆಮದು ಸುಂಕ ಕಡಿತಗೊಳಿಸಿದರೆ, ಅಮೆರಿಕದ ಸಬ್ಸಿಡಿಯುಕ್ತ ಉತ್ಪನ್ನಗಳ ಎದುರು ನಮ್ಮ ರೈತರು ಸ್ಪರ್ಧಿಸಲು ಸಾಧ್ಯವಿಲ್ಲ. ತಾಂತ್ರಿಕ ಅಡೆತಡೆಗಳ ನಿವಾರಣೆಯಿಂದ ವಿದೇಶಿ ಹಾಲು, ಮಾಂಸ, ಜೋಳ ಭಾರತದ ಮಾರುಕಟ್ಟೆ ಪ್ರವೇಶಿಸಿ ಸ್ಥಳೀಯ ಮಾರುಕಟ್ಟೆ ನಾಶವಾಗಲಿದೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಅಮೆರಿಕವು ಭಾರತದ ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ತರಲು ಒತ್ತಡ ಹೇರುತ್ತಿದೆ. ಈಗಾಗಲೇ ಸೂಪರ್ ಎಲ್-ನಿನೋ ಮುಂಗಾರು ಭೀತಿಯಿರುವಾಗ, ಎಂ.ಎಸ್.ಪಿಗೆ ಧಕ್ಕೆಯಾದರೆ ಭತ್ತ ಮತ್ತು ಗೋಧಿ ಬೆಳೆಯುವ ಕೋಟ್ಯಂತರ ರೈತರು ಬೀದಿಪಾಲಾಗಲಿದ್ದಾರೆ. ಯಾವುದೇ ಕಾರಣಕ್ಕೂ ಕೃಷಿಕರು, ಹಾಲು ಉತ್ಪಾದಕರು ಹಾಗೂ ಮೀನುಗಾರರನ್ನು ಸಂಕಷ್ಟಕ್ಕೆ ತಳ್ಳುವ ಈ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಹಾಕಬಾರದು ಎಂದು ಒತ್ತಾಯಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೈಕೊಟ್ಟ ಮಳೆ: 11 ಎಕ್ರೆ ಗೋವಿನಜೋಳದ ಬೆಳೆ ಟ್ರ&zwj;್ಯಾಕ್ಟರ್&zwnj;ನಿಂದ ನಾಶ ಮಾಡಿದ ಹಾವೇರಿ ರೈತ&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಶಿವಯೋಗಿ ಹೊಸಗೌಡ್ರ, ಜಾನ್ ಪುನಿತ್, ಸುಭಾಸ ಬನ್ನಿಹಟ್ಟಿ, ರಾಜು ತರ್ಲಗಟ್ಟ ಇತರರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 17 ಲಕ್ಷಕ್ಕೆ ಕೋಟ್ಯಂತರ ಮೌಲ್ಯದ 5 ಎಕರೆ ಕೃಷಿಭೂಮಿ ಕಬಳಿಕೆ? ದೂರು ದಾಖಲಿಸಿದ ನೊಂದ ರೈತ&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/appeal-not-to-sign-india-us-free-trade-agreement-what-are-the-concerns-of-the-haveri-farmers-association-mrq/articleshow-po3kex2"/>
        </item>
        <item>
            <title><![CDATA[ಬದುಕಿದ್ದಾಗಲೇ ಬರ್ತಿವೆ ಡೆತ್​ ಸರ್ಟಿಫಿಕೇಟ್​: ಹಾವೇರಿಯಲ್ಲೇ ಇನ್ನೊಂದು ಎಡವಟ್ಟು- ಸರ್ಕಾರದ ಸೌಲಭ್ಯಗಳು ಕಟ್​]]></title>
            <link>https://kannada.asianetnews.com/karnataka-districts/death-certificate-in-the-name-of-living-person-another-case-in-haveri-suc/articleshow-qe9p0mi</link>
            <guid isPermaLink="true">https://kannada.asianetnews.com/karnataka-districts/death-certificate-in-the-name-of-living-person-another-case-in-haveri-suc/articleshow-qe9p0mi</guid>
            <pubDate>Thu, 18 Jun 2026 11:30:42 +0530</pubDate>
            <description><![CDATA[ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ, ತಾಯಿಯ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ ವೃದ್ಧೆಗೆ, ಆಕೆಯ ಹೆಸರಿನಲ್ಲೇ ಮರಣ ಪ್ರಮಾಣಪತ್ರ ನೀಡಲಾಗಿದೆ. ಈ ಆಡಳಿತಾತ್ಮಕ ಎಡವಟ್ಟಿನಿಂದಾಗಿ, ಶಿವಗಂಗವ್ವ ಎಂಬ ಮಹಿಳೆ ತನ್ನೆಲ್ಲಾ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvcn1taxtmv5ykczhsqz7cmv,imgname-death-certificate-1781762419036.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ: ಹಾವೇರಿ ಜಿಲ್ಲಾಡಳಿತದಿಂದಲೇ ಈಗ ಮತ್ತೊಂದು ಎಡವಟ್ಟಾಗಿದ್ದು, ವೃದ್ಧ ಮಹಿಳೆಯೊಬ್ಬರು ನರಳುವಂತಾಗಿರುವ ಘಟನೆ ವರದಿಯಾಗಿದೆ. ಕೆಲ ತಿಂಗಳ ಹಿಂದೆ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಹಶೀಲ್ದಾರ್ ಕಚೇರಿಯ ಡಾಟಾ ಎಂಟ್ರಿ ಸಿಬ್ಬಂದಿಯೊಬ್ಬರು ಮಾಡಿದ್ದ ಎಡವಟ್ಟಿನಿಂದ ಕುಟುಂಬವನ್ನು ನರಳುವಂತಾಗಿತ್ತು. ಪತ್ನಿ ಸಾವನ್ನಪ್ಪಿದ ನಂತರ ಆಕೆಯ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಪತಿಗೆ, ಅವರೇ ಸತ್ತ ಸರ್ಟಿಫಿಕೇಟ್​ ನೀಡಲಾಗಿತ್ತು. ಪತ್ನಿ ಸತ್ತಿದ್ದರೆ, ಬದುಕಿದ್ದ ಪತಿಯ ಹೆಸರಿನಲ್ಲಿ ಸರ್ಟಿಫಿಕೇಟ್​ ಕೊಟ್ಟು ಅವರು ಅದನ್ನು ಸರಿಪಡಿಸಲು ಮತ್ತಷ್ಟು ಸಮಸ್ಯೆ ಎದುರಿಸಬೇಕಾಗಿತ್ತು.&lt;/p&gt;&lt;p&gt;ರಟ್ಟಿಹಳ್ಳಿ ತಾಲೂಕಿನ ಶಿರಗಂಬಿ ಗ್ರಾಮದ ತೋಪನಗೌಡ ಗುಬ್ಬಿ ಎಂಬುವವರ ಪತ್ನಿ ಮಲ್ಲಮ್ಮ ಅವರು ಕಳೆದ 12-08-2021 ರಂದು ಮೃತಪಟ್ಟಿದ್ದರು. ಪತ್ನಿಯ ಮರಣದ ನಂತರ ಸರ್ಕಾರಿ ದಾಖಲೆಗಳಿಗಾಗಿ ತೋಪನಗೌಡರು ಪತ್ನಿಯ ಡೆತ್ ಸರ್ಟಿಫಿಕೇಟ್ ಕೇಳಿ ಅರ್ಜಿ ಸಲ್ಲಿಸಿದ್ದರು. ಆದರೆ ಮಲ್ಲಮ್ಮನ ಹೆಸರಿಗೆ ಬದಲು ಜೀವಂತ ಇರುವ ಪತಿ ಅಂದರೆ ಅರ್ಜಿ ಸಲ್ಲಿಸಿದ ತೋಪನಗೌಡರ ಹೆಸರಲ್ಲೇ ಮರಣ ಪ್ರಮಾಣ ಪತ್ರವನ್ನು ಪ್ರಿಂಟ್ ಮಾಡಿ ಕೈಗಿಟ್ಟಿದ್ದರು. ಈ ಎಡವಟ್ಟು ನಡೆದು ಐದು ವರ್ಷಗಳ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.&lt;/p&gt;&lt;h2&gt;&lt;strong&gt;ಮತ್ತೊಂದು ಘಟನೆ&lt;/strong&gt;&lt;/h2&gt;&lt;p&gt;ಆದರೆ, ಇದೀಗ ಮಹಿಳೆಯೊಬ್ಬರಿಗೆ ಇದೇ ಸ್ಥಿತಿ ಆಗಿರುವ ಕಾರಣ, ಸರ್ಕಾರಿ ಸೌಲಭ್ಯಗಳೆಲ್ಲಾ ಕಟ್​ ಆಗಿ ಈಗ ಮಹಿಳೆ ನರಳುವಂತಾಗಿದೆ. ಅಮ್ಮ ಸತ್ತಿದ್ದರೆ ಮಗಳ ಹೆಸರಿನ ಮರಣ ಪ್ರಮಾಣ ಪತ್ರ ಬಂದಿರುವ ಕಾರಣ, ಆಕೆಗೆ ಸರ್ಕಾರದಿಂದ ಸಿಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಕಟ್​ ಮಾಡಲಾಗಿದೆ ಎಂದು ಮಹಿಳೆ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ.&lt;/p&gt;&lt;p&gt;ಅತ್ತಿಗೇರಿ ಗ್ರಾಮದ ಶಿವಗಂಗವ್ವ ತಳಳ್ಳಿ ಎಂಬ ಮಹಿಳೆಯ ತಾಯಿ ಶಂಕ್ರವ್ವ ಮೀಳ್ಳಿ ಇತ್ತೀಚೆಗೆ ನಿಧನರಾಗಿದ್ದರು. ತಾಯಿ ಮೃತಪಟ್ಟಿರುವ ಕಾರಣ ಡೆತ್​ ಸರ್ಟಿಫಿಕೇಟ್​ಗೆ ವೃದ್ಧೆಯಾಗಿರುವ ಮಗಳು ಶಿವಗಂಗವ್ವ ಅರ್ಜಿ ಸಲ್ಲಿಸಿದ್ದರು. ಆದರೆ, ಶಿಗ್ಗಾಂವಿ ತಾಲೂಕಾಡಳಿತ ಮತ್ತು ಅತ್ತಿಗೇರಿ ಗ್ರಾಮದ ಅಧಿಕಾರಿಗಳ ಎಡವಟ್ಟಿನಿಂದ ಜೀವಂತವಾಗಿರುವ ಮಗಳು ಶಿವಗಂಗವ್ವಳ ಹೆಸರಲ್ಲೇ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದಾರೆ. ಇದು ಶಿವಗಂಗವ್ವ ಅವರಿಗೆ ತಿಳಿದೇ ಇರಲಿಲ್ಲ. ಬ್ಯಾಂಕಿನಲ್ಲಿ ಹಣ ತೆಗೆಯಲು ಹೋದಾಗ ವಿಷಯ ತಿಳಿದಿದೆ. ಆ ಬಳಿಕ ನೋಡಿದ್ರೆ ಅದು ತಾವೇ ಸತ್ತು ಹೋಗಿರುವ ಸರ್ಟಿಫಿಕೇಟ್​ ಎಂದು ತಿಳಿದಿದೆ.&lt;/p&gt;&lt;h3&gt;&lt;strong&gt;ಸರ್ಕಾರಿ ಸೌಲಭ್ಯಗಳಿಂದ ವಂಚಿತ&lt;/strong&gt;&lt;/h3&gt;&lt;p&gt;ಶಿವಗಂಗವ್ವ ಸದ್ಯ ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತಳಾಗಿದ್ದಾರೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಷ್ಟೇ ಅಲ್ಲದೆ, ಅವರಿಗೆ ಬರುತ್ತಿದ್ದ ವೃದ್ಧಾಪ್ಯ ವೇತನ ಹಾಗೂ ಗಂಡನ ಪೀಚಣಿ ಹಣವೂ ಸಹ ರದ್ದಾಗಿದೆ. ರೇಷನ್ ಮತ್ತು ಹಣ ಯಾವುದೂ ಇಲ್ಲವಾಗಿದೆ. ಇದನ್ನು ಶಿವಗಂಗವ್ವ ಮತ್ತು ಕುಟುಂಬಸ್ಥರು ತಕ್ಷಣವೇ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎನ್ನಲಾಗುತ್ತಿದೆ. ಅತ್ತಿಗೇರಿ ಗ್ರಾಮಸ್ಥರು ಹಾಗೂ ವೃದ್ಧೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>haveri</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/death-certificate-in-the-name-of-living-person-another-case-in-haveri-suc/articleshow-qe9p0mi"/>
        </item>
        <item>
            <title><![CDATA[ಬೆಂಗಳೂರು-ದೆಹಲಿ ರೈಲಲ್ಲಿ ಹಾವೇರಿ ಸಮೀಪ ಅಕ್ರಮ ಮಾರಾಟಗಾರರಿಂದ ಟ್ರೈನ್ ಸಿಬ್ಬಂದಿಗೆ ಚಾಕು ಇರಿತ, ಇಬ್ಬರು ಗಂಭೀರ!]]></title>
            <link>https://kannada.asianetnews.com/karnataka-districts/bengaluru-delhi-train-pantry-staff-stabbed-by-illegal-vendors-in-yesvantpur-hazrat-nizamuddin-sampark-kranti-express-gdp/articleshow-r43u5b3</link>
            <guid isPermaLink="true">https://kannada.asianetnews.com/karnataka-districts/bengaluru-delhi-train-pantry-staff-stabbed-by-illegal-vendors-in-yesvantpur-hazrat-nizamuddin-sampark-kranti-express-gdp/articleshow-r43u5b3</guid>
            <pubDate>Sat, 20 Jun 2026 17:07:32 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್&zwnj;ಪ್ರೆಸ್ ರೈಲಿನಲ್ಲಿ, ಅನಧಿಕೃತ ವ್ಯಾಪಾರವನ್ನು ಪ್ರಶ್ನಿಸಿದ್ದಕ್ಕೆ ಪ್ಯಾಂಟ್ರಿ ಸಿಬ್ಬಂದಿ ಮೇಲೆ ಅಕ್ರಮ ಮಾರಾಟಗಾರರ ಗುಂಪೊಂದು ಚಾಕುವಿನಿಂದ ಹಲ್ಲೆ ನಡೆಸಿದೆ. ಈ ಘೋರ ಕೃತ್ಯದಲ್ಲಿ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkzwr0wwwxzjy1k54030qy8m,imgname-new-project--66--1767188089530-1773818086300.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರೈಲ್ವೆ ಇಲಾಖೆ ಎಷ್ಟೇ ಬಿಗಿ ಭದ್ರತೆಯ ಭರವಸೆ ನೀಡಿದರೂ, ಚಲಿಸುವ ರೈಲುಗಳಲ್ಲಿ ಸಾಮಾನ್ಯ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯ ಸುರಕ್ಷತೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಬೆಂಗಳೂರಿನಿಂದ ದೆಹಲಿಗೆ ಸಂಚರಿಸುತ್ತಿದ್ದ ಪ್ರತಿಷ್ಠಿತ ಎಕ್ಸ್&zwnj;ಪ್ರೆಸ್ ರೈಲೊಂದರಲ್ಲಿ ಅನಧಿಕೃತ ವ್ಯಾಪಾರಿಗಳ ಗ್ಯಾಂಗ್ ಹಾಗೂ ಪ್ಯಾಂಟ್ರಿ ಸಿಬ್ಬಂದಿ ನಡುವೆ ನಡೆದ ವಾಗ್ವಾದ ಭೀಕರ ಹಿಂಸಾಚಾರಕ್ಕೆ ತಿರುಗಿದೆ. ಅಕ್ರಮ ಮಾರಾಟಗಾರರ ಗುಂಪೊಂದು ಪ್ಯಾಂಟ್ರಿ ಸಿಬ್ಬಂದಿ ಮೇಲೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಸೋಮವಾರ ಸಂಜೆ ನಡೆದಿದೆ. ಈ ರಕ್ತಪಾತದಲ್ಲಿ ಇಬ್ಬರು ಪ್ಯಾಂಟ್ರಿ ನೌಕರರು ತೀವ್ರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;h2&gt;ಘಟನೆಯ ಹಿನ್ನೆಲೆ: ಎಸಿ ಕೋಚ್&zwnj;ನಲ್ಲಿ ಶುರುವಾದ ಗಲಾಟೆ&lt;/h2&gt;&lt;p&gt;ಸೋಮವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್&zwnj;ಪ್ರೆಸ್ ರೈಲು (Yesvantpur-Hazrat Nizamuddin Sampark Kranti Express) ಹಾವೇರಿ ನಿಲ್ದಾಣವನ್ನು ದಾಟಿ ಮುನ್ನಡೆಯುತ್ತಿತ್ತು. ಈ ವೇಳೆ ರೈಲಿನ ಹವಾನಿಯಂತ್ರಿತ (AC) ಬೋಗಿಯೊಳಗೆ ನುಗ್ಗಿದ ಅನಧಿಕೃತ ಮಾರಾಟಗಾರನೊಬ್ಬ ಮಸಾಲಾ ಕಡಲೆಕಾಯಿ (ಮಸಾಲಾ ಶೇಂಗಾ) ಮಾರಾಟ ಮಾಡಲು ಆರಂಭಿಸಿದ್ದಾನೆ.&lt;/p&gt;&lt;p&gt;ರೈಲಿನಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವುದನ್ನು ಗಮನಿಸಿದ ಪ್ಯಾಂಟ್ರಿ ಕಾರ್ಯಾಚರಣೆಯ ಸಿಬ್ಬಂದಿ ಧೀರೇಂದ್ರ ಸಿಂಗ್ (40) ಎಂಬುವವರು ತಕ್ಷಣವೇ ಆತನನ್ನು ಆಕ್ಷೇಪಿಸಿದ್ದಾರೆ. ರೈಲ್ವೆ ನಿಯಮಾವಳಿಗಳ ಪ್ರಕಾರ ಇಲ್ಲಿ ವ್ಯಾಪಾರ ಮಾಡುವಂತಿಲ್ಲ, ತಕ್ಷಣವೇ ಹೊರಗೆ ಹೋಗಿ ಎಂದು ಧೀರೇಂದ್ರ ಸಿಂಗ್ ಎಚ್ಚರಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ.&lt;/p&gt;&lt;h2&gt;ಮಾರಾಕಾಸ್ತ್ರಗಳೊಂದಿಗೆ ಧಾವಿಸಿದ ಅಕ್ರಮ ಗ್ಯಾಂಗ್&lt;/h2&gt;&lt;p&gt;ಧೀರೇಂದ್ರ ಸಿಂಗ್ ಒಂಟಿಯಾಗಿರುವುದನ್ನು ಗಮನಿಸಿದ ಕಡಲೆಕಾಯಿ ವ್ಯಾಪಾರಿ, ರೈಲಿನಲ್ಲೇ ಇದ್ದ ತನ್ನ ಸಹಚರರಿಗೆ ಸದ್ದಿಲ್ಲದೆ ಕರೆ ಮಾಡಿದ್ದಾನೆ. ಧೀರೇಂದ್ರ ಅವರು ಜಿಆರ್&zwnj;ಪಿ (ಸರ್ಕಾರಿ ರೈಲ್ವೆ ಪೊಲೀಸ್)ಗೆ ನೀಡಿದ ದೂರಿನ ಪ್ರಕಾರ, ಕೇವಲ ಕೆಲವೇ ನಿಮಿಷಗಳಲ್ಲಿ ಅದೇ ರೈಲಿನಲ್ಲಿದ್ದ ಸುಮಾರು ಐದು ಜನರ ಅಕ್ರಮ ಮಾರಾಟಗಾರರ ಗುಂಪು ಆತನ ಬೆಂಬಲಕ್ಕೆ ಧಾವಿಸಿದೆ. ಅವರೆಲ್ಲರೂ ಮೊದಲೇ ಸಂಚು ರೂಪಿಸಿಕೊಂಡು ರೈಲು ಹತ್ತಿದವರಂತೆ ಕಾಣುತ್ತಿದ್ದರು. ಪ್ಯಾಂಟ್ರಿ ಸಿಬ್ಬಂದಿ ಪ್ರಶ್ನಿಸಿದ್ದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿ ಜಗಳಕ್ಕೆ ನಿಂತರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪ್ಯಾಂಟ್ರಿ ಮ್ಯಾನೇಜರ್ ಜಿತೇಂದ್ರ ಸಿಂಗ್ ತೋಮರ್ ಸ್ಥಳಕ್ಕೆ ಆಗಮಿಸಿ, ಗಲಾಟೆ ತಣ್ಣಗಾಗಿಸಲು ಯತ್ನಿಸಿದ್ದಾರೆ. ಆದರೆ, ಮ್ಯಾನೇಜರ್ ಬರುತ್ತಿದ್ದಂತೆಯೇ ಜೇಬಿನಲ್ಲಿದ್ದ ಹರಿತವಾದ ಚಾಕುಗಳನ್ನು ಹೊರತೆಗೆದ ದುಷ್ಕರ್ಮಿಗಳು ಸಿಬ್ಬಂದಿಯ ಮೇಲೆ ಮುಗಿಬಿದ್ದಿದ್ದಾರೆ.&lt;/p&gt;&lt;h2&gt;ರಕ್ತದ ಮಡುವಿನಲ್ಲಿ ಬಿದ್ದ ನೌಕರರು:&lt;/h2&gt;&lt;p&gt;ಆ ದುಷ್ಕರ್ಮಿಗಳು ಧೀರೇಂದ್ರ ಅವರನ್ನು ನೇರವಾಗಿ ಇರಿದು ಕೊಲೆ ಮಾಡಲು ಯತ್ನಿಸಿದರು. ಧೀರೇಂದ್ರ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಚಾಕು ಅವರ ಕುತ್ತಿಗೆಗೆ ತಗುಲಿದ್ದರಿಂದ ತೀವ್ರ ರಕ್ತಸ್ರಾವ ಆರಂಭವಾಯಿತು ಎಂದು ಮ್ಯಾನೇಜರ್ ಜಿತೇಂದ್ರ ಸಿಂಗ್ ತೋಮರ್ ನಡೆದ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ&lt;/p&gt;&lt;p&gt;ಇದೇ ವೇಳೆ ಧೀರೇಂದ್ರ ಅವರ ರಕ್ಷಣೆಗೆ ಧಾವಿಸಿದ ಮತ್ತೊಬ್ಬ ಪ್ಯಾಂಟ್ರಿ ಸಿಬ್ಬಂದಿ ಲೋಕೇಂದ್ರ ಎಂಬುವವರ ಎಡ ಭುಜದ ಭಾಗಕ್ಕೆ ದುಷ್ಕರ್ಮಿಗಳು ಬಲವಾಗಿ ಇರಿದಿದ್ದಾರೆ. ಚಾಕು ತಗುಲಿದ ರಭಸಕ್ಕೆ ಲೋಕೇಂದ್ರ ಅವರ ಭುಜದಿಂದ ರಕ್ತದ ಕಾರಂಜಿ ಚಿಮ್ಮಿದೆ. ಅಷ್ಟಕ್ಕೇ ನಿಲ್ಲದ ಗ್ಯಾಂಗ್, ಪ್ಯಾಂಟ್ರಿ ತಂಡದಲ್ಲಿದ್ದ ಇತರ ಸಿಬ್ಬಂದಿಗಳ ಮೇಲೂ ಮನಬಂದಂತೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಕೆಲವು ಸರಕು ಸರಂಜಾಮುಗಳನ್ನು ಕಸಿದುಕೊಂಡಿದ್ದಾರೆ.&lt;/p&gt;&lt;h2&gt;ಕರ್ಜಗಿ ನಿಲ್ದಾಣದಲ್ಲಿ ದುಷ್ಕರ್ಮಿಗಳು ಪರಾರಿ&lt;/h2&gt;&lt;p&gt;ರೈಲು ಹಾವೇರಿ ದಾಟಿದ ಬಳಿಕ ಸಿಗ್ನಲ್ ಕ್ರಾಸಿಂಗ್&zwnj;ಗಾಗಿ ಕರ್ಜಗಿ ರೈಲ್ವೆ ನಿಲ್ದಾಣದಲ್ಲಿ ಕೆಲ ಕಾಲ ಸ್ಥಗಿತಗೊಂಡಿತು. ರೈಲು ನಿಲ್ಲುತ್ತಿದ್ದಂತೆಯೇ, ಅಕ್ರಮ ಮಾರಾಟಗಾರರ ಗ್ಯಾಂಗ್ ರೈಲಿನಿಂದ ಕೆಳಕ್ಕೆ ಜಿಗಿದು, ಕತ್ತಲಲ್ಲಿ ಓಡಿಹೋಗಿ ತಲೆಮರೆಸಿಕೊಂಡಿದೆ. ರೈಲು ಮುಂದಿನ ನಿಲ್ದಾಣ ತಲುಪುತ್ತಿದ್ದಂತೆಯೇ ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಸಿಬ್ಬಂದಿ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.&lt;/p&gt;&lt;h2&gt;ಹಾವೇರಿ ಮೂಲದ ಕಿಡಿಗೇಡಿಗಳ ವಿರುದ್ಧ ಎಫ್&zwnj;ಐಆರ್ ದಾಖಲು&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಸರ್ಕಾರಿ ರೈಲ್ವೆ ಪೊಲೀಸ್ (GRP) ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಹಾವೇರಿ ಮೂಲದವರೆಂದು ಶಂಕಿಸಲಾದ ಐದೂ ಜನ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್&zwnj;ಗಳ ಅಡಿಯಲ್ಲಿ ಎಫ್&zwnj;ಐಆರ್ (FIR) ದಾಖಲಿಸಿಕೊಳ್ಳಲಾಗಿದೆ.&lt;/p&gt;&lt;p&gt;ಕರ್ನಾಟಕ ಜಿಆರ್&zwnj;ಪಿ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸಾರಾ ಫಾತಿಮಾ ಅವರು ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ನಮ್ಮ ವಿಶೇಷ ಪೊಲೀಸ್ ತಂಡವು ಆರೋಪಿಗಳ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ. ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸಲಾಗುವುದು. ಸದ್ಯಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದ ಪ್ಯಾಂಟ್ರಿ ಸಿಬ್ಬಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ರೈಲ್ವೆ ಇಲಾಖೆಗೆ ತಲೆನೋವಾದ ಅಕ್ರಮ ವೆಂಡರ್ಸ್ ಹಾವಳಿ&lt;/h2&gt;&lt;p&gt;ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC) ಅಧಿಕಾರಿಗಳ ಪ್ರಕಾರ, ರೈಲುಗಳಲ್ಲಿ ಅಧಿಕೃತ ಪರವಾನಗಿ ಇಲ್ಲದೆ ನುಗ್ಗುವ ಅಕ್ರಮ ಮಾರಾಟಗಾರರ ಹಾವಳಿ ಇತ್ತೀಚಿನ ದಿನಗಳಲ್ಲಿ ಅತಿಯಾಗಿದೆ. ಇದು ಕೇವಲ ಇಲಾಖೆಯ ಆದಾಯಕ್ಕೆ ನಷ್ಟವನ್ನುಂಟು ಮಾಡುತ್ತಿಲ್ಲ, ಬದಲಿಗೆ ಪ್ರಯಾಣಿಕರ ಹಾಗೂ ಸಿಬ್ಬಂದಿಯ ಸುರಕ್ಷತೆಗೂ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಇದನ್ನು ತಡೆಯಲು ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ತಿಂಗಳ ಆರಂಭದಲ್ಲೇ ಅಕ್ರಮವಾಗಿ ಟಿಕೆಟ್ ಹಾಗೂ ಸೇವೆಗಳನ್ನು ಒದಗಿಸುತ್ತಿದ್ದ 14 ವೆಬ್&zwnj;ಸೈಟ್&zwnj;ಗಳನ್ನು ಐಆರ್&zwnj;ಸಿಟಿಸಿ ಮುಟ್ಟುಗೋಲು ಹಾಕಿಕೊಂಡಿದೆ.&lt;/p&gt;&lt;p&gt;ಮತ್ತೊಂದೆಡೆ, ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ (SWR) ಮೇ ತಿಂಗಳಿನಲ್ಲಿಯೇ ಅಕ್ರಮ ವ್ಯಾಪಾರಿಗಳ ವಿರುದ್ಧ ಬೃಹತ್ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದ ಮೂಲಕ ರೈಲಿನಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿದ್ದವರಿಂದ ಬರೋಬ್ಬರಿ 1.5 ಲಕ್ಷ ರೂಪಾಯಿಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿತ್ತು. ಆದಾಗ್ಯೂ, ಇಂತಹ ಕ್ರಿಮಿನಲ್ ಹಿನ್ನೆಲೆಯುಳ್ಳ ಗ್ಯಾಂಗ್&zwnj;ಗಳು ರೈಲುಗಳೊಳಗೆ ಮಾರಾಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವುದು ಈಗ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದೆ. ರೈಲ್ವೆ ಭದ್ರತಾ ಪಡೆ (RPF) ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂಬ ಆಗ್ರಹ ಕೇಳಿಬರುತ್ತಿದೆ.&lt;/p&gt;]]></content:encoded>
            <category>haveri</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-delhi-train-pantry-staff-stabbed-by-illegal-vendors-in-yesvantpur-hazrat-nizamuddin-sampark-kranti-express-gdp/articleshow-r43u5b3"/>
        </item>
        <item>
            <title><![CDATA[ನಿಧಿ ಆಸೆಗಾಗಿ ಮೂಕಬಸವೇಶ್ವರ, ಈಶ್ವರ ಮೂರ್ತಿಯುಳ್ಳ ದೇವಸ್ಥಾನ ಕೆಡವಿದ ನಾಲ್ವರ ಬಂಧನ]]></title>
            <link>https://kannada.asianetnews.com/karnataka-districts/haveri-savanuru-four-arrested-for-demolishing-a-temple-with-idols-of-mookabasaveshwara-ishwara-for-sake-of-wealth-mrq/articleshow-vsg4yvz</link>
            <guid isPermaLink="true">https://kannada.asianetnews.com/karnataka-districts/haveri-savanuru-four-arrested-for-demolishing-a-temple-with-idols-of-mookabasaveshwara-ishwara-for-sake-of-wealth-mrq/articleshow-vsg4yvz</guid>
            <pubDate>Thu, 11 Jun 2026 08:05:21 +0530</pubDate>
            <description><![CDATA[&lt;p&gt;ನಿಧಿ ಆಸೆಗಾಗಿ ಪುರಾತನ ಮೂಕಬಸವೇಶ್ವರ ಹಾಗೂ ಈಶ್ವರ ದೇವಸ್ಥಾನವನ್ನು ಕೆಡವಿ, ಜೆಸಿಬಿಯಿಂದ ನೆಲ ಅಗೆದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪದ ಮೇಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktt8gb9ee4g72a076rq7e565,imgname-haveri-temple-1781145283886.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ನಿಧಿ ಆಸೆಗಾಗಿ ಮೂಕಬಸವೇಶ್ವರ ಹಾಗೂ ಈಶ್ವರ ಮೂರ್ತಿ ಇರುವ ಕಲ್ಲಿನ ದೇವಸ್ಥಾನವನ್ನು ಕೆಡವಿ ನೆಲವನ್ನು ಅಗೆದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿರುವ ಘಟನೆ ಸವಣೂರು ತಾಲೂಕಿನ ನದಿನೀರಲಗಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ನದಿನೀರಲಗಿ ಗ್ರಾಮದ ಫಕ್ಕಿರಪ್ಪ ಮಾದರ ಅವರ ಜಮೀನಿನಲ್ಲಿರುವ ಮೂಕಬಸವೇಶ್ವರ ಮತ್ತು ಈಶ್ವರಮೂರ್ತಿ ಇರುವ ಸಣ್ಣ ಕಲ್ಲಿನ ದೇವಸ್ಥಾನವನ್ನು ನಿಧಿ ಆಸೆಯ ಸಲುವಾಗಿ ಕೆಡವಿ ಧ್ವಂಸ ಮಾಡಲಾಗಿದೆ ಎಂದು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.&lt;/p&gt;&lt;h2&gt;&lt;strong&gt;ಬಂಧಿತರು ಯಾರು?&lt;/strong&gt;&lt;/h2&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಯುನಿಸಖಾನ್ ಮಹಬೂಬಖಾನ್ ಕುಲಕರ್ಣಿ, ನೂರಅಹ್ಮದ ಯುನಿಸಖಾನ್ ಕುಲಕರ್ಣಿ, ಮುಂಡಗೋಡದ ಮುಸ್ತಾಕಅಹ್ಮದ ಇಮಾಮಖಾನ್ ದುಂಡಸಿ, ದೇವಿಹೊಸೂರಿನ ಆಸೀಪ್ ಮಕ್ಬುಲಸಾಬ ಯಲವಗಿ ಎಂಬುದವರು ಹೊಲದಲ್ಲಿರುವ ದೇವಸ್ಥಾನದಲ್ಲಿನ ಮೂರ್ತಿಗಳನ್ನು ಪಕ್ಕಕ್ಕೆ ಸರಿಸಿ ಅದರ ಕೆಳಗಡೆಯ ನೆಲವನ್ನು ಜೆಸಿಬಿಯಿಂದ ಗುಂಡಿ ತೊಡಿ, ಹಿಂದೂ ಧರ್ಮದ ಪೂಜಾ ಸ್ಥಳಕ್ಕೆ ಹಾನಿಯುಂಟು ಮಾಡಿ, ಧಾರ್ಮಿಕ ನಂಬಿಕೆಗೆ ಧಕ್ಕೆಯನ್ನುಂಟು ಮಾಡಿದ ಆರೋಪದಡಿ ಬಂಧಿಸಲಾಗಿದೆ.&lt;/p&gt;&lt;p&gt;ಈ ಕುರಿತು ತನಿಖೆ ನಡೆಸಿ ಆರೋಪಗಳ ಪತ್ತೆಗಾಗಿ ಎಸ್ಪಿ ಯಶೋದಾ ವಂಟಗೋಡಿ, ಎಎಸ್ಪಿ ಲಕ್ಷ್ಮಣ ಶಿರಕೋಳ, ಡಿಎಸ್ಪಿ ಗುರುಶಾಂತಪ್ಪ ಕೆ.ವಿ., ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ತನಿಖಾ ತಂಡವು ವಿವಿಧ ಆಯಾಮಗಳಲ್ಲಿ ತನಿಖಾ ಕಾರ್ಯಗಳನ್ನು ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನಿಧಿ ಆಸೆಗಾಗಿ ಚಾಲುಕ್ಯರ ಕಾಲದ ದೇಗುಲ ಧ್ವಂಸ; ಗಂಗಾವತಿಯಲ್ಲಿ ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ&lt;/strong&gt;&lt;/p&gt;&lt;p&gt;ಈ ಪತ್ತೆ ಕಾರ್ಯದಲ್ಲಿ ಸಿಪಿಐ ತಿಮ್ಮಣ್ಣ ಎಸ್.ಚಾಮನೂರ, ಪಿಎಸ್&zwnj;ಐ ರಂಗನಾಥ ಅಂತರಗಟ್ಟಿ, ಸಂಗನಗೌಡ ಪೋಲಿಸಗೌಡ್ರ ಠಾಣೆಯ ಸಿಬ್ಬಂದಿಗಳಾದ ಆರ್.ಎನ್. ಪೂಜಾರ, ಬಿ.ಎನ್. ಆವೋಜಿ, ಮಂಜುನಾಥ ಮಣ್ಣಿಯವರ, ಮಹೇಶ ಕೆಲೂರ, ಎ.ಎಚ್. ನದಾಫ್, ಅನೀಲ ಮಲ್ಲಾಡದ, ಆರ್.ಎನ್. ಕನವಳ್ಳಿ, ತಾಂತ್ರಿಕ ಸಿಬ್ಬಂದಿಗಳಾದ ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ ಅವರು ಪಾಲ್ಗೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಲಕ್ಕುಂಡಿ ಹಳೇ ಹಂಡೆಯಲ್ಲಿ ಗೋಲ್ಡನ್ ಕವರ್ ಚಾಕ್ಲೆಟ್ ಹಾಕಿ 22 ಲಕ್ಷ ದೋಚಿದ್ದ ಮೌಲ್ವಿ ಅರೆಸ್ಟ್&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-savanuru-four-arrested-for-demolishing-a-temple-with-idols-of-mookabasaveshwara-ishwara-for-sake-of-wealth-mrq/articleshow-vsg4yvz"/>
        </item>
        <item>
            <title><![CDATA[Haveri: ಬಿತ್ತನೆ ಬೀಜಕ್ಕೆ ಕೃಷಿ ಕೇಂದ್ರ ಮುಂದೆ ಮಲಗಿದ ರೈತರು; ವಿಳಂಬ ಧೋರಣೆಗೆ ಆಕ್ರೋಶ]]></title>
            <link>https://kannada.asianetnews.com/karnataka-districts/haveri-farmers-sleeping-in-front-of-the-agricultural-center-to-sow-seeds-mrq/articleshow-yvoqgwf</link>
            <guid isPermaLink="true">https://kannada.asianetnews.com/karnataka-districts/haveri-farmers-sleeping-in-front-of-the-agricultural-center-to-sow-seeds-mrq/articleshow-yvoqgwf</guid>
            <pubDate>Sat, 23 May 2026 06:34:07 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚಿದೆ. ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿಯಲ್ಲಿ ಸೋಯಾಬೀನ್, ಶೇಂಗಾ ಬೀಜಗಳಿಗಾಗಿ ರೈತರು ಕೃಷಿ ಕೇಂದ್ರದ ಮುಂದೆ ರಾತ್ರಿಯಿಡೀ ಸರದಿ ಸಾಲಿನಲ್ಲಿ ಕಾಯುತ್ತಿದ್ದು, ಅಧಿಕಾರಿಗಳ ವಿಳಂಬ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks95rc77na6bft4vwhmj94hg,imgname-haveri-farmers--1779498234087.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಜಿಲ್ಲೆಯಲ್ಲಿ ಹದವಾದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜಗಳಿಗಾಗಿ ರೈತರ ಪರದಾಟ ಶುರುವಾಗಿದ್ದು, ಜಿಲ್ಲೆಯ ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿ ಕೃಷಿ ಕೇಂದ್ರದ ಮುಂದೆ ಅನ್ನದಾತರು ಶುಕ್ರವಾರ ರಾತ್ರಿ ಪೂರ್ತಿ ಸರದಿ ಸಾಲಿನಲ್ಲಿ ಮಲಗಿದರು.&lt;/p&gt;&lt;p&gt;ಸೋಯಾಬೀನ್, ಶೇಂಗಾ ಬೀಜಕ್ಕಾಗಿ ರೈತರ ಪರದಾಡುತ್ತಿದ್ದಾರೆ. ಎರಡು ದಿನಗಳಿಂದ ಕೃಷಿ ಇಲಾಖೆಯಿಂದ ಸರಿಯಾಗಿ ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ. ನೆಟ್&zwnj;ವರ್ಕ್ ಸಮಸ್ಯೆ ನೆಪ ಹೇಳಿ ಬಿತ್ತನೆ ಬೀಜ ನೀಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದು, ರಾತ್ರೀ ಇಡೀ ಅನ್ನದಾತರು ಕೃಷಿ ಕೇಂದ್ರ ಮುಂದೆ ಕ್ಯೂ ಹಚ್ಚಿ ಮಲಗಿದ್ದಾರೆ.&lt;/p&gt;&lt;h2&gt;&lt;strong&gt;ಬೀಜ ಪಡೆಯಲು ನೂಕುನುಗ್ಗಲು&lt;/strong&gt;&lt;/h2&gt;&lt;p&gt;ಇನ್ನು ಹಗಲು ರಾತ್ರಿ ಕೆಲವು ಕಡೆ ಬಿತ್ತನೆ ಬೀಜ ಪಡೆಯಲು ನೂಕುನುಗ್ಗಲು ಉಂಟಾಗುತ್ತಿದ್ದು, ಕೃಷಿ ಇಲಾಖೆಯ ವಿರುದ್ಧ ಜಿಲ್ಲೆಯ ಅನ್ನದಾತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಅಗತ್ಯ ಬೀಜ ದಾಸ್ತಾನಿಲ್ಲ ಹಾಗೂ ಸರದಿಯಲ್ಲಿ ನಿಂತರೂ ಬೀಜ ಸಿಗುತ್ತಿಲ್ಲ, ಉತ್ತಮ ಮಳೆ ಆಗುತ್ತಿರುವುದರಿಂದ ಬೀಜ ಖಾಲಿ ಆದರೆ ಸಮಸ್ಯೆಯಾಗುತ್ತದೆ ಎಂದು ರೈತರು ಶುಕ್ರವಾರ ರಾತ್ರಿಯೇ ಕೃಷಿ ಕೇಂದ್ರದ ಬಳಿ ಆಗಮಿಸಿದ್ದರು.&lt;/p&gt;&lt;p&gt;ಇನ್ನು ಶುಕ್ರವಾರ ಸಂಜೆ ಸುರಿಯುವ ಮಳೆಯಲ್ಲೇ ಕೆಲ ರೈತರು ಸರದಿಯಲ್ಲಿ ನಿಂತು ಬೀಜ ಖರೀದಿಸಿದ ದೃಶ್ಯಗಳು ಕಂಡುಬಂತು.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-farmers-sleeping-in-front-of-the-agricultural-center-to-sow-seeds-mrq/articleshow-yvoqgwf"/>
        </item>
    </channel>
</rss>
