<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 14 Sep 2026 07:50:50 +0530</lastBuildDate>
        <atom:link href="https://kannada.asianetnews.com/rss/haveri" rel="self" type="application/rss+xml"/>
        <item>
            <title><![CDATA[ನಸುಕಿನ ಜಾವ ಹೊರಗೆ ಹೋಗುವ ಮಹಿಳೆಯರೇ ಎಚ್ಚರ, ಜಿಮ್‌ಗೆ‌ ಹೊರಟ್ಟಿದವಳ ಕತ್ತಿಗೆ ಕೈಹಾಕಿದ ದುರುಳರು ಮಾಡಿದ್ದೇನು?]]></title>
            <link>https://kannada.asianetnews.com/karnataka-districts/haveri-thieves-snatched-womans-gold-chain-shocking-incident-in-cctv-rav/articleshow-0bnl6ep</link>
            <guid isPermaLink="true">https://kannada.asianetnews.com/karnataka-districts/haveri-thieves-snatched-womans-gold-chain-shocking-incident-in-cctv-rav/articleshow-0bnl6ep</guid>
            <pubDate>Thu, 10 Sep 2026 11:18:42 +0530</pubDate>
            <description><![CDATA[ಹಾವೇರಿಯ ರಾಣೇಬೆನ್ನೂರಿನಲ್ಲಿ ನಸುಕಿನ ಜಾವ ಜಿಮ್&zwnj;ಗೆ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಕಳ್ಳರು, ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24wz5q0xegefghy3pj0qyr9,imgname-haveri-chain-theft-case-1789018478304.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಸೆ.10)&lt;/strong&gt;: ನಸುಕಿನ ಜಾವ ಅಥವಾ ರಾತ್ರಿ ವೇಳೆ ಒಬ್ಬಂಟಿಯಾಗಿ ಜಿಮ್&zwnj;ಗೆ ಹೋಗುವ ಮಹಿಳೆಯರೇ ಎಚ್ಚರ. ಕೊರಳಲ್ಲಿ ಚಿನ್ನ ಇದ್ರೆ ಜೀವಕ್ಕೆ ಅಪಾತ್ತು. ಚಿನ್ನದ ಸರಳ ಕೊರಳಲ್ಲಿದ್ರೆ ಈಗ ಫ್ಯಾಶನ ಅಲ್ಲ, ಪ್ರಾಣಕ್ಕೆ ಕುತ್ತು. ಹೌದು. ಹಾವೇರಿ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಒಂದು ತಾಜಾ ಉದಾಹರಣೆ. ನಸುಕಿನ ಜಾವ ಜಿಮ್&zwnj;ಗೆ ಒಬ್ಬಂಟಿಯಾಗಿ ಜಿಮ್&zwnj;ಗೆ ಹೊರಡ್ತೀರಾ? ಹೋಗೋ ಮುನ್ನ ಈ ಪ್ರಕರಣದ ಬಗ್ಗೆ ತಿಳ್ಕೊಳ್ಳಿ.&lt;/p&gt;&lt;h2&gt;ಜಿಮ್&zwnj; ಹೊಗ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತ ಕಳ್ಳರು&lt;/h2&gt;&lt;p&gt;ಜಿಮ್&zwnj;ಗೆ ಹೊರಟಿದ್ದ ಮಹಿಳೆಯನ್ನ ಹಿಂಬಾಲಿಸಿ ಕದೀಮರು ಆಕೆಯ ಕೊರಳಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ. ಕೊರಳಿಗೆ ಕೈ ಹಾಕಿದ ಖದೀಮರು ಸರ ಕಿತ್ತುವಾಗ ಮಹಿಳೆ ಪ್ರತಿರೋದಿಸಿದರೂ, ಅತ್ತರೂ ಬಿಡದೆ ನೆಲಕ್ಕೆ ಕೆಡವಿ ಕಿತ್ತು ಪರಾರಿಯಾಗಿದ್ದಾರೆ. ಕಳ್ಳರು ಎಳೆದಾಡಿದ ರಭಸಕ್ಕೆ ನೆಲಕ್ಕೆ ಬಿದ್ದು ಮಹಿಳೆ ಒದ್ದಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;ಆಸ್ತಿ ಮಾಲೀಕರೇ ಎಚ್ಚರ! ನಕಲಿ ದಾಖಲೆ ಸೃಷ್ಟಿಸಿ ಯಾರದೋ ಆಸ್ತಿ ಮಂಗಮಾಯ ಮಾಡೋ ಗ್ಯಾಂಗ್ ಇದು!&lt;/p&gt;&lt;h3&gt;ಸಿಸಿಟಿವಿಯಲ್ಲಿ ದಾಖಲಾಯ್ತು ಖದೀಮರ ಕೃತ್ಯ&lt;/h3&gt;&lt;p&gt;ಘಟನೆಯ ಸ್ಥಳದಲ್ಲಿ ಶಾಪ್ ಒಂದರ ಸಿಸಿಟಿವಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ಗೆ ಲಭ್ಯವಾಗಿದೆ. ಕಳ್ಳರ ಈ ಕೃತ್ಯ ಸೆರೆಯಾಗಿ ಇಕ್ಕಟ್ಟಾದ ಓಣಿಯಂತಹ ದಾರಿ, ಬೆಳಗಿನ ಜಾವ ಇರಬೇಕು. ಸುತ್ತಮುತ್ತ ನಿರ್ಜನ ಭಯಾನಕ ಮೌನದ ವಾತಾವರಣವಿದೆ. ಇದೇ ವೇಳೆ ಮಂಜುಳಾ ಹೆಸರಿನ ಮಹಿಳೆ ಎಂದಿನಂತೆ ಜಿಮ್&zwnj; ಹೋಗುತ್ತಿದ್ದಾಳೆ. ಆಕೆಯ ಕೊರಳಲ್ಲಿ ಸುಮಾರು ಎರಡೂವರೆ ಲಕ್ಷ ಮೌಲ್ಯದ ಚಿನ್ನದ ಸರವಿದೆ. ಪಳಪಳ ಹೊಳೆಯುವ ಚಿನ್ನದ ಸರದ ಖದೀಮರ ಕಣ್ಣು ಬಿದ್ದಿದೆ. ಮೊದಲೇ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಹೋಗ್ತಿರೋ ಮಹಿಳೆ, ಈ ಅವಕಾಶಕ್ಕೆ ಕಾದು ಕುಳಿತುಕೊಂಡಿರೋ ಖದೀಮರು ಬೈಕ್&zwnj;ನಲ್ಲಿ ಮಹಿಳೆಯನ್ನ ಹಿಂಬಾಲಿಸಿ ಕುತ್ತಿಗೆಗೆ ಕೈಹಾಕಿಯೇ ಬಿಟ್ಟಿದ್ದಾರೆ. ಕುತ್ತಿಗೆ ಹಾಕಿದ ತಕ್ಷಣ ಮಹಿಳೆ ಆಘಾತಗೊಂಡಿದ್ದಾರೆ ಕ್ಷಣಮಾತ್ರದಲ್ಲಿ ಚಿನ್ನದ ಸರ ಕಿತ್ತು ಕಳ್ಳರು ಪರಾರಿಯಾಗಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ತುಮಕೂರು: ಈ ಸರ್ಕಾರದಲ್ಲಿ ಅನುದಾನ ತರಲು ಮುಖ್ಯಮಂತ್ರಿಗೇ ಲಂಚ ಕೊಡಬೇಕು! ಶಾಸಕನ ಹೇಳಿಕೆ ಸಂಚಲನ&lt;/p&gt;&lt;h3&gt;ಸ್ಥಳಕ್ಕೆ ಡಿವೈಎಸ್ಪಿ ಲೋಕೇಶ್ ಭೇಟಿ&lt;/h3&gt;&lt;p&gt;ಈ ಘಟನೆ ಸ್ಥಳೀಯರನ್ನೇ ಬೆಚ್ಚಿಬಿಳಿಸಿದೆ. ಕಳ್ಳರ ಕೃತ್ಯದ ಮಾಹಿತಿ ತಿಳಿಯುತ್ತಿದ್ದಂತೆ ಹಾವೇರಿ ಡಿವೈಎಸ್&zwnj;ಪಿ ಲೋಕೇಶ್ ರಾಣೆಬೆನ್ನೂರು ನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ಬಸ್&zwnj; ನಿಲ್ದಾಣದ ಸುತ್ತಮುತ್ತ ಅಳವಡಸಲಾದ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸಲು ಪೊಲೀಸರು ಕಾರ್ಯಾಚರಣೆಗಳಿದಿದ್ದಾರೆ. ಘಟನೆ ಸಂಬಂಧ ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>haveri</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/haveri-thieves-snatched-womans-gold-chain-shocking-incident-in-cctv-rav/articleshow-0bnl6ep"/>
        </item>
        <item>
            <title><![CDATA['ಅಡುಗೆ ಮನೆ ಮಹಾರಾಣಿ' ಈರುಳ್ಳಿ ಬೆಲೆ 20 ದಿನದಲ್ಲಿ ಇಳಿಕೆ; ಹೊಸ ಉಳ್ಳಾಗಡ್ಡಿ ಮಾರುಕಟ್ಟೆಗೆ ಆವಕ!]]></title>
            <link>https://kannada.asianetnews.com/karnataka-districts/onion-price-hike-reaches-rs-70-per-kg-ranibennur-market-inflation-impact-sat/articleshow-290hoo9</link>
            <guid isPermaLink="true">https://kannada.asianetnews.com/karnataka-districts/onion-price-hike-reaches-rs-70-per-kg-ranibennur-market-inflation-impact-sat/articleshow-290hoo9</guid>
            <pubDate>Mon, 14 Sep 2026 07:50:44 +0530</pubDate>
            <description><![CDATA[&lt;p&gt;'ಅಡುಗೆ ಮನೆಯ ಮಹಾರಾಣಿ' ಎಂದು ಕರೆಯಲ್ಪಡುವ ಈರುಳ್ಳಿಯ ಬೆಲೆ ಕೆ.ಜಿ.ಗೆ 60-70 ರೂಪಾಯಿಗಳಿಗೆ ತೀವ್ರವಾಗಿ ಏರಿಕೆಯಾಗಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಅಕಾಲಿಕ ಮಳೆ, ಬೆಳೆ ನಾಶ, ಮತ್ತು ಬೇಡಿಕೆ ಹೆಚ್ಚಳದಿಂದಾಗಿ ಈ ದರ ಏರಿಕೆಯಾಗಿದ್ದು, ಮುಂದಿನ 20 ದಿನಗಳಲ್ಲಿ ಹೊಸ ಈರುಳ್ಳಿ ಮಾರುಕಟ್ಟೆಗೆ ಬರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2ev3c61b1xae48xxevgw6dm,imgname-karnataka-onion-market-1789352063169.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ-ಬಸವರಾಜ ಸರೂರ&lt;/strong&gt;&lt;/p&gt;&lt;p&gt;&lt;strong&gt;ಹಾವೇರಿ (ಸೆ.14): &lsquo;&lt;/strong&gt;ಅಡುಗೆ ಮನೆಯ ಮಹಾರಾಣಿ&rsquo; ಎಂದೇ ಕರೆಯಲ್ಪಡುವ ಈರುಳ್ಳಿ ಈಗ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಕಳೆದ ಕೆಲವು ವಾರಗಳಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ತೀವ್ರವಾಗಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಮಾಸಿಕ ಬಜೆಟ್&zwnj; ಅನ್ನು ಸಂಪೂರ್ಣವಾಗಿ ಏರುಪೇರು ಮಾಡಿದೆ.&lt;/p&gt;&lt;p&gt;ಕೆಲವೇ ತಿಂಗಳುಗಳ ಹಿಂದೆ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 20 ರಿಂದ 30 ರುಪಾಯಿ ಇದ್ದ ಈರುಳ್ಳಿ ಬೆಲೆ ಈಗ 60 ರಿಂದ 70 ರುಪಾಯಿ ತಲುಪಿದೆ. ಹೋಟೆಲ್ ಉದ್ಯಮ, ಬೀದಿ ಬದಿಯ ವ್ಯಾಪಾರಿಗಳು ಹಾಗೂ ಗೃಹಿಣಿಯರು ಈ ಹಠಾತ್ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ಅಡುಗೆಗೆ ಈರುಳ್ಳಿ ಬಳಸಬೇಕೋ, ಬೇಡವೋ ಎಂಬ ಗೊಂದಲದಲ್ಲಿ ಜನರಿದ್ದಾರೆ.&lt;/p&gt;&lt;h2&gt;&lt;strong&gt;ಬೆಲೆ ಏರಿಕೆಗೆ ಪ್ರಮುಖ ಕಾರಣಗಳು:&amp;nbsp;&lt;/strong&gt;&lt;/h2&gt;&lt;p&gt;ಈರುಳ್ಳಿ ಉತ್ಪಾದಿಸುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕದ ಕೆಲವು ಭಾಗಗಳು ಮತ್ತು ಮಧ್ಯಪ್ರದೇಶದಲ್ಲಿ ಬಿದ್ದ ಅಕಾಲಿಕ ಮಳೆ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗಿದೆ. ತೇವಾಂಶದ ಕಾರಣದಿಂದಾಗಿ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಕೊಳೆತು ಹೋಗಿದೆ. ಇದಲ್ಲದೆ ಶ್ರಾವಣ ಮಾಸದಿಂದ ಸಾಲು, ಸಾಲು ಹಬ್ಬಗಳು ಶುರುವಾಗುತ್ತವೆ. ಇದು ಕೂಡ ಈರುಳ್ಳಿ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಗೆ ಒಂದು ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಕಡಿಮೆಯಾದ ಈರುಳ್ಳಿ ಕ್ಷೇತ್ರ: ಪೂರೈಕೆಯಲ್ಲಿ ಭಾರಿ ಕುಸಿತ&lt;/strong&gt;&lt;/h3&gt;&lt;p&gt;ತಾಲೂಕಿನಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯುವ ಕ್ಷೇತ್ರದಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವರ್ಷ 900-1,200 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದರೆ, ಈ ವರ್ಷ ಅದು 490-700 ಹೆಕ್ಟೇರ್&zwnj;ಗೆ ಇಳಿದಿದೆ. ಮಾರುಕಟ್ಟೆಗೆ ಬರಬೇಕಾಗಿದ್ದ ಹೊಸ ಈರುಳ್ಳಿ ಫಸಲು ತಡವಾಗಿದ್ದು, ಎಪಿಎಂಸಿ ಮಾರುಕಟ್ಟೆಗಳಿಗೆ ಸರಬರಾಜು ಆಗುವ ಈರುಳ್ಳಿ ಪ್ರಮಾಣ ಅರ್ಧಕ್ಕರ್ಧ ಕಡಿಮೆಯಾಗಿದೆ. ಬೇಡಿಕೆ ಹೆಚ್ಚಾಗಿದ್ದು ಪೂರೈಕೆ ಕಡಿಮೆಯಿರುವುದು ದರ ಏರಿಕೆಗೆ ಮುಖ್ಯ ಕಾರಣ.&lt;/p&gt;&lt;h2&gt;&lt;strong&gt;ಜನತೆ, ಹೋಟೆಲ್ ಉದ್ಯಮ ಕಂಗಾಲು:&lt;/strong&gt;&lt;/h2&gt;&lt;p&gt;ಈರುಳ್ಳಿ ಇಲ್ಲದೆ ಭಾರತೀಯ ಅಡುಗೆ ಪೂರ್ಣಗೊಳ್ಳುವುದೇ ಇಲ್ಲ. ಸಾಂಬಾರ್, ಪಲ್ಯದಿಂದ ಹಿಡಿದು ಉಪ್ಪಿಟ್ಟು, ಬಿರಿಯಾನಿವರೆಗೆ ಎಲ್ಲದಕ್ಕೂ ಈರುಳ್ಳಿ ಬೇಕೇ ಬೇಕು. ಮಧ್ಯಮ ವರ್ಗದ ಕುಟುಂಬಗಳು ಈಗ ಈರುಳ್ಳಿ ಖರೀದಿಯನ್ನು ಅರ್ಧದಷ್ಟು ಕಡಿತಗೊಳಿಸಿವೆ. ವಾರಕ್ಕೆ 2 ಕೆ.ಜಿ. ಕೊಳ್ಳುತ್ತಿದ್ದವರು ಈಗ ಕೇವಲ ಅರ್ಧ ಕೆ.ಜಿ. ಖರೀದಿಸಿ ದಿನ ದೂಡುತ್ತಿದ್ದಾರೆ.&lt;/p&gt;&lt;p&gt;ಹೋಟೆಲ್&zwnj;ಗಳಲ್ಲಿ ದೋಸೆ, ಉತ್ತಪ್ಪ, ಬೇಲ್ ಪುರಿ, ಮತ್ತು ಚಾಟ್ಸ್ ವ್ಯಾಪಾರಿಗಳಿಗೆ ಈರುಳ್ಳಿ ಅನಿವಾರ್ಯ. ಆದರೆ, ಬೆಲೆ ಹೆಚ್ಚಾದ ಕಾರಣ ಗ್ರಾಹಕರಿಗೆ ನೀಡುವ ಈರುಳ್ಳಿ ಪ್ರಮಾಣವನ್ನು ಕಡಿತಗೊಳಿಸಿದ್ದಾರೆ. ಹೋಟೆಲ್&zwnj;ಗಳಲ್ಲಿ ಉಚಿತವಾಗಿ ನೀಡುತ್ತಿದ್ದ ಈರುಳ್ಳಿ ಸಲಾಡ್&zwnj;ಗಳು ಈಗ ಮಾಯವಾಗಿವೆ. ಬೆಲೆ ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ, ಬೆಲೆ ಹೆಚ್ಚಿಸದಿದ್ದರೆ ತಮಗೆ ಲಾಭವಿಲ್ಲ ಎಂಬ ಇಕ್ಕಟ್ಟಿನಲ್ಲಿ ವ್ಯಾಪಾರಿಗಳಿದ್ದಾರೆ.&lt;/p&gt;&lt;p&gt;--&lt;/p&gt;&lt;h2&gt;&lt;strong&gt;20 ದಿನದಲ್ಲಿ ಹೊಸ ಈರುಳ್ಳಿ ಬಂದ ನಂತರ ಬೆಲೆ ಇಳಿಕೆ&lt;/strong&gt;&lt;/h2&gt;&lt;p&gt;ರಾಣಿಬೆನ್ನೂರು ತಾಲೂಕಿನಲ್ಲಿ ಈ ವರ್ಷ ರೈತರು ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಮಳೆ ಆಶ್ರಿತದಲ್ಲಿ ಈರುಳ್ಳಿ ಬೆಳೆದವರು ಮಾರುಕಟ್ಟೆಗೆ ಫಸಲು ತಂದಿಲ್ಲ. ನೀರಾವರಿ ಪ್ರದೇಶದ ರೈತರು ಇದುವರೆಗೂ ಕೊಯ್ಲು ಮಾಡಿಲ್ಲ. ಬಹುಶಃ 15-20 ದಿನಗಳ ನಂತರ ಸ್ಥಳೀಯ ಈರುಳ್ಳಿ ಪೇಟೆಗೆ ಬರಲಿದೆ. ಆಗ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿದೆ. ಅಲ್ಲಿವರೆಗೂ ಈರುಳ್ಳಿ ದರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜು ನಾಯ್ಕ್&zwnj; ಹೇಳಿದರು.&lt;/p&gt;&lt;p&gt;--&lt;/p&gt;&lt;h3&gt;&lt;strong&gt;ರೈತರು ಈರುಳ್ಳಿ ಬಿಟ್ಟು ಬೇರೆ ಬೆಳೆ&lt;/strong&gt;&lt;/h3&gt;&lt;p&gt;ರಾಣಿಬೆನ್ನೂರು ತಾಲೂಕಿನಲ್ಲಿ ಎರಡು ವರ್ಷಗಳ ಹಿಂದೆ ಈರುಳ್ಳಿ ಬೆಳೆದ ರೈತರು ಸರಿಯಾದ ಬೆಲೆ ಸಿಗದ ಕಾರಣ ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ. ಹೀಗಾಗಿ, ತಾಲೂಕಿನಲ್ಲಿ ಈರುಳ್ಳಿ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದ್ದು, ದರ ಹೆಚ್ಚಳಕ್ಕೆ ಇದೂ ಒಂದು ಕಾರಣವಾಗಿದೆ.&lt;/p&gt;&lt;p&gt;&lt;strong&gt;- ಸುರೇಶ ಜ್ಯೋತಿಬಣ್ಣದ, ಹೋಲ್&zwnj;ಸೆಲ್ ಈರುಳ್ಳಿ ವರ್ತಕರು, ರಾಣಿಬೆನ್ನೂರು.&lt;/strong&gt;&lt;/p&gt;]]></content:encoded>
            <category>haveri</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/onion-price-hike-reaches-rs-70-per-kg-ranibennur-market-inflation-impact-sat/articleshow-290hoo9"/>
        </item>
        <item>
            <title><![CDATA[ಐತಿಹಾಸಿಕ ಆಂಜನೇಯ ದೇವಾಲಯದೊಳಗೆ ಮೂತ್ರ ವಿಸರ್ಜನೆ ಮಾಡಿದ ಮಹಮದ್ ಜಾಫರ್!]]></title>
            <link>https://kannada.asianetnews.com/viral/haveri-shiggaon-anjaneya-temple-incident-accused-arrested-police-complaint/articleshow-373vpel</link>
            <guid isPermaLink="true">https://kannada.asianetnews.com/viral/haveri-shiggaon-anjaneya-temple-incident-accused-arrested-police-complaint/articleshow-373vpel</guid>
            <pubDate>Fri, 21 Aug 2026 11:45:01 +0530</pubDate>
            <description><![CDATA[&lt;p&gt;ಆಂಜನೇಯ ದೇವಾಲಯದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿ ಅನುಚಿತವಾಗಿ ವರ್ತಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಘಟನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hezca902chnqazqx8gft6p,imgname-haveri-anjaneya-temple-1787292528969.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಆ.21): ಶಿ&lt;/strong&gt;ಗ್ಗಾವಿ ಪಟ್ಟಣದ ಟೆಂಪೋ ನಿಲ್ದಾಣದ ಬಳಿಯಿರುವ ಐತಿಹಾಸಿಕ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮಹಮದ್ ಜಾಪರ್ ಅಬ್ದುಲ್ ರೆಹಮಾನ್ ಕದರಮಂಡಲಿ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಬುಧವಾರ ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಶ್ರಾವಣ ಮಾಸದ ಅಂಗವಾಗಿ ದೇವಾಲಯದಲ್ಲಿ ಧಾರ್ಮಿಕ ಪೂಜಾ ಕಾರ್ಯಗಳು ನಡೆಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿ ದೇವಾಲಯದ ಒಳಪ್ರವೇಶಿಸಿ ಅಶಿಸ್ತಿನಿಂದ ವರ್ತಿಸಿದ್ದನ್ನು ಗಮನಿಸಿದ ಸ್ಥಳೀಯರು ಆತನನ್ನು ತಡೆದು ವಿಚಾರಿಸಿದ್ದಾರೆ. ಈ ವೇಳೆ ಆತ ಸ್ಥಳದಿಂದ ತೆರಳಲು ಯತ್ನಿಸಿದಾಗ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ದೂರು ಹಾಗೂ ಬಂಧನ:&lt;/strong&gt;&lt;/h2&gt;&lt;p&gt;ಈ ಘಟನೆಗೆ ಸಂಬಂಧಿಸಿದಂತೆ ಸಿದ್ದಪ್ಪ ಶಿವಪ್ಪ ಕಾಳೆ ಎಂಬುವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿ ಶಿಗ್ಗಾವಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಠಾಣೆ ಎದುರು ಜಮಾಯಿಸಿದ ಸ್ಥಳೀಯರು:&lt;/strong&gt;&lt;/h2&gt;&lt;p&gt;ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ರಾತ್ರಿ ಶಿಗ್ಗಾವಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಘಟನೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>haveri</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/haveri-shiggaon-anjaneya-temple-incident-accused-arrested-police-complaint/articleshow-373vpel"/>
        </item>
        <item>
            <title><![CDATA[ಸವಣೂರು ಆಸ್ಪತ್ರೆಯಲ್ಲಿ ರೋಗಿಗಳಿಂದ ಮಲಗುಂಡಿ ಸ್ವಚ್ಛತೆ: ಇಬ್ಬರು ವೈದ್ಯಾಧಿಕಾರಿಗಳು ಅಮಾನತು!]]></title>
            <link>https://kannada.asianetnews.com/karnataka-districts/haveri-hospital-dr-shankar-hiregoudar-and-vanita-kurundawad-suspended-over-patient-mops-controversy-sat/articleshow-3iwltpg</link>
            <guid isPermaLink="true">https://kannada.asianetnews.com/karnataka-districts/haveri-hospital-dr-shankar-hiregoudar-and-vanita-kurundawad-suspended-over-patient-mops-controversy-sat/articleshow-3iwltpg</guid>
            <pubDate>Tue, 01 Sep 2026 08:43:03 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯ ಸವಣೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಂದಲೇ ಮಲಗುಂಡಿ ಸ್ವಚ್ಛಗೊಳಿಸಿದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ಹಿರಿಯ ಶುಶ್ರೂಷಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಆರೋಗ್ಯ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1dezfda9pr8nvfh0rpqg8v5,imgname-savanuru-hospital-toilet-pit-clean-1788232056234.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಹಾವೇರಿ (ಸೆ.01): ಹಾ&lt;/strong&gt;ವೇರಿ ಜಿಲ್ಲೆಯ ಸವಣೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಂದ ಮಲಗುಂಡಿ ಸ್ವಚ್ಛಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಹಿರಿಯ ಶುಶ್ರೂಷಾಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಆಗಸ್ಟ್ 28, 2024 ರಂದು ಸವಣೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ರೋಗಿಗಳು ವಾರ್ಡ್&zwnj;ನಲ್ಲಿ ಮಲಮೂತ್ರ ವಿಸರ್ಜನೆ ಮಾಡಿದ್ದು, ಅದನ್ನು ಆಸ್ಪತ್ರೆಯ ಸಿಬ್ಬಂದಿ ರೋಗಿಗಳ ಕೈಯಿಂದಲೇ ಸ್ವಚ್ಛಗೊಳಿಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.&lt;/p&gt;&lt;p&gt;ಕರ್ನಾಟಕ ಸರ್ಕಾರವು ಮಲಮೂತ್ರವನ್ನು ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಇದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಆದಾಗ್ಯೂ, ಆಡಳಿತ ವೈದ್ಯಾಧಿಕಾರಿ ಹಾಗೂ ಹಿರಿಯ ಶುಶ್ರೂಷಾಧಿಕಾರಿಗಳ ಕಣ್ತಾವಲಿನಲ್ಲಿ ಈ ಅಮಾನವೀಯ ಕೃತ್ಯ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಸಂಬಂಧ ಸವಣೂರು ಪೊಲೀಸ್ ಠಾಣೆಯಲ್ಲಿ BNS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;h2&gt;&lt;strong&gt;ಅಮಾನತುಗೊಂಡ ಅಧಿಕಾರಿಗಳು:&lt;/strong&gt;&lt;/h2&gt;&lt;ol&gt; &lt;li&gt;ಡಾ. ಶಂಕರ ಹಿರೇಗೌಡರ್, ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಸವಣೂರು, ಹಾವೇರಿ ಜಿಲ್ಲೆ.&lt;/li&gt; &lt;li&gt;ಶ್ರೀಮತಿ ವನಿತಾ ಕುರುಂದವಾಡ, ಹಿರಿಯ ಶುಶ್ರೂಷಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಸವಣೂರು, ಹಾವೇರಿ ಜಿಲ್ಲೆ.&lt;/li&gt;&lt;/ol&gt;&lt;p&gt;ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಶ್ರೀ ಗುರುದತ್ತ ಹೆಗಡೆ (ಭಾ.ಆ.ಸೆ.) ಅವರು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10(1)(ಡಿ) ರಡಿ ಪ್ರದತ್ತವಾದ ಅಧಿಕಾರ ಬಳಸಿ ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಅಮಾನತು ಅವಧಿಯಲ್ಲಿ ಈ ಅಧಿಕಾರಿಗಳು ಸರ್ಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಟ್ಟು ತೆರಳುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.&lt;/p&gt;]]></content:encoded>
            <category>haveri</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/haveri-hospital-dr-shankar-hiregoudar-and-vanita-kurundawad-suspended-over-patient-mops-controversy-sat/articleshow-3iwltpg"/>
        </item>
        <item>
            <title><![CDATA[Haveri: ಸಾವಿನಲ್ಲೂ ಒಂದಾದ ಸತಿ-ಪತಿ: ಪತ್ನಿಯ ಅಗಲಿಕೆ ತಾಳಲಾರದೆ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟ ಪತಿ!]]></title>
            <link>https://kannada.asianetnews.com/karnataka-districts/inseparable-in-life-and-death-heartbroken-husband-passes-away-hours-after-wife-demise-in-haveri-gdp/articleshow-5ur2zk8</link>
            <guid isPermaLink="true">https://kannada.asianetnews.com/karnataka-districts/inseparable-in-life-and-death-heartbroken-husband-passes-away-hours-after-wife-demise-in-haveri-gdp/articleshow-5ur2zk8</guid>
            <pubDate>Mon, 27 Jul 2026 11:27:54 +0530</pubDate>
            <description><![CDATA[ಹಾವೇರಿ ಜಿಲ್ಲೆಯ ಹೆಸರೂರು ಗ್ರಾಮದಲ್ಲಿ 45 ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿದ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಪತ್ನಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಅವರ ಅಗಲಿಕೆಯ ದುಃಖ ತಾಳಲಾರದೆ ಪತಿಯೂ ಕೊನೆಯುಸಿರೆಳೆದಿದ್ದಾರೆ. ಈ ಹೃದಯವಿದ್ರಾವಕ ಘಟನೆ ಇಡೀ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyh29fanmq36tx8xhe2j6wsz,imgname-haveri-couple-die-together-1785131744597.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಬದುಕಿದರೂ ಜೊತೆಯಾಗಿ, ಬಾಳದಿದ್ದರೂ ಜೊತೆಯಾಗಿ ಎನ್ನುವ ಹಿರಿಯರ ಮಾತು ಹಾವೇರಿ ಜಿಲ್ಲೆಯಲ್ಲಿ ಅಕ್ಷರಶಃ ನಿಜವಾಗಿದೆ. ದಾಂಪತ್ಯ ಜೀವನದ ಪವಿತ್ರತೆಗೆ ಸಾಕ್ಷಿಯೆಂಬಂತೆ, 45 ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿ ಬದುಕಿದ ಆದರ್ಶ ದಂಪತಿಗಳಿಬ್ಬರು ಸಾವಿನಲ್ಲೂ ಒಂದಾಗುವ ಮೂಲಕ ಇಡೀ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದ್ದಾರೆ. ಪತ್ನಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಆಕೆಯ ಅಗಲಿಕೆಯ ತೀವ್ರ ದುಃಖವನ್ನು ತಾಳಲಾರದೆ ಪತಿಯೂ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ಜರುಗಿದೆ.&lt;/p&gt;&lt;h2&gt;45 ವರ್ಷಗಳ ಅನ್ಯೋನ್ಯ ದಾಂಪತ್ಯ&lt;/h2&gt;&lt;p&gt;ಹೆಸರೂರು ಗ್ರಾಮದ ನಿವಾಸಿಗಳಾದ ಜುಂಜಪ್ಪ ಬಾರ್ಕಿ (75 ವರ್ಷ) ಮತ್ತು ಶಾಂತಮ್ಮ (65 ವರ್ಷ) ಸಾವಿನಲ್ಲೂ ಒಂದಾದ ಅಪರೂಪದ ಸತಿ-ಪತಿಗಳು. ಕಳೆದ 45 ವರ್ಷಗಳ ದೀರ್ಘಾವಧಿಯಿಂದ ಈ ದಂಪತಿಗಳು ಯಾವುದೇ ಕಹಿ ಘಟನೆಗಳಿಲ್ಲದೆ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಹಳ್ಳಿಯ ಜನರ ಕಣ್ಣಿಗೆ ಆದರ್ಶ ಜೋಡಿಯಾಗಿ ಬದುಕಿದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲಾರದಷ್ಟು ಪ್ರೇಮ ಇವರದ್ದಾಗಿತ್ತು.&lt;/p&gt;&lt;h2&gt;ರಾತ್ರಿ ಪತ್ನಿ ಸಾವು, ಬೆಳಗ್ಗೆ ಪತಿ ನಿಧನ!&lt;/h2&gt;&lt;p&gt;ವಿಧಿಯ ಆಟ ವಿಚಿತ್ರವಾಗಿತ್ತು. ಭಾನುವಾರ ತಡರಾತ್ರಿ ಸುಮಾರು 12 ಗಂಟೆಯ ಸುಮಾರಿಗೆ ಪತ್ನಿ ಶಾಂತಮ್ಮ ಅವರು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದರು. ಅರ್ಧಾಂಗಿಯ ಹಠಾತ್ ನಿಧನ ವಯೋವೃದ್ಧ ಜುಂಜಪ್ಪ ಅವರಿಗೆ ಸಹಿಸಿಕೊಳ್ಳಲು ಅಸಾಧ್ಯವಾದ ಆಘಾತವನ್ನು ನೀಡಿತು. 45 ವರ್ಷಗಳ ಕಾಲ ನೆರಳಿನಂತೆ ಜೊತೆಗಿದ್ದ ಹೆಂಡತಿಯ ಶವದ ಮುಂದೆ ಕುಳಿತು, &quot;ನೀನಿಲ್ಲದೆ ನಾ ಹೇಗೆ ಬದುಕಲಿ?&quot; ಎಂದು ಆ ವೃದ್ಧ ರಾತ್ರಿ ಇಡೀ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಪತ್ನಿಯ ವಿಯೋಗದ ತೀವ್ರ ದುಃಖ ಮನಸ್ಸಿನ ಮೇಲೆ ಎಷ್ಟರಮಟ್ಟಿಗೆ ಬೀರಡಿತೆಂದರೆ, ಸೋಮವಾರ ಮುಂಜಾನೆ ಜುಂಜಪ್ಪ ಅವರ ಹೃದಯದ ಬಡಿತವೂ ನಿಂತುಹೋಗಿದೆ. ಪತ್ನಿ ತೀರಿಕೊಂಡ ಕೆಲವೇ ಗಂಟೆಗಳ ಅಂತರದಲ್ಲಿ ಪತಿ ಜುಂಜಪ್ಪ ಅವರೂ ಸಹ ನಿಧನರಾಗುವ ಮೂಲಕ ಪತ್ನಿಯ ಹಿಂದೆಯೇ ಮಸಣದ ಹಾದಿ ಹಿಡಿದರು.&lt;/p&gt;&lt;h2&gt;ಗ್ರಾಮಸ್ಥರ ಕಣ್ಣಾಲಿಗಳು ಒದ್ದೆ&lt;/h2&gt;&lt;p&gt;ಒಂದೇ ಮನೆಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ದಂಪತಿಗಳಿಬ್ಬರೂ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಹೆಸರೂರು ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಇಬ್ಬರ ಪಾರ್ಥಿವ ಶರೀರಗಳನ್ನು ಜೊತೆಯಾಗಿಯೇ ಇರಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಯಿತು.&lt;/p&gt;&lt;p&gt;ದಂಪತಿಗಳ ಈ ಅಪರೂಪದ ಪ್ರೀತಿ ಮತ್ತು ಸಾವಿನಲ್ಲೂ ಒಂದಾದ ನಿಷ್ಠೆಯನ್ನು ಕಂಡು ಗ್ರಾಮಸ್ಥರು ಹಾಗೂ ನೆರೆಹೊರೆಯವರು ತೀವ್ರ ಭಾವುಕರಾಗಿದ್ದಾರೆ. &quot;ಇಂತಹ ಸತಿ-ಪತಿಯರನ್ನು ನೋಡುವುದೇ ಅಪರೂಪ. ಬದುಕಿದ್ದಾಗಲೂ ಪ್ರೀತಿಯಿಂದ ಬಾಳಿದರು, ಈಗ ಸಾವಿನಲ್ಲೂ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಒಟ್ಟಿಗೆ ಹೊರಟುಹೋದರು&quot; ಎಂದು ಗ್ರಾಮದ ಹಿರಿಯರು ಕಣ್ಣೀರು ಹಾಕುತ್ತಾ ದಂಪತಿಗಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ.&lt;/p&gt;]]></content:encoded>
            <category>haveri</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/inseparable-in-life-and-death-heartbroken-husband-passes-away-hours-after-wife-demise-in-haveri-gdp/articleshow-5ur2zk8"/>
        </item>
        <item>
            <title><![CDATA[ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಗಿದ್ದೇ ತಪ್ಪಾಯ್ತು, ಚಿನ್ನ ಕದ್ದಳೆಂದ ಆರೋಪ ಬಡಪಾಯಿ ನೀಲವ್ವಗೆ ಪೊಲೀಸರಿಂದ ಕರೆಂಟ್ ಶಾಕ್!]]></title>
            <link>https://kannada.asianetnews.com/karnataka-districts/woman-allegedly-tortured-with-electric-shock-over-gold-theft-case-in-varamahalakshim-festival-rav/articleshow-abd62o0</link>
            <guid isPermaLink="true">https://kannada.asianetnews.com/karnataka-districts/woman-allegedly-tortured-with-electric-shock-over-gold-theft-case-in-varamahalakshim-festival-rav/articleshow-abd62o0</guid>
            <pubDate>Sun, 13 Sep 2026 17:53:55 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯಲ್ಲಿ, ವರಮಹಾಲಕ್ಷ್ಮಿ ಹಬ್ಬದಂದು ದೇವರ ಚಿನ್ನ ಕದ್ದ ಆರೋಪದ ಮೇಲೆ ನೀಲವ್ವ ಎಂಬ ಬಡ ಮಹಿಳೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಂಕಾಪುರ ಪೊಲೀಸರು ಕರೆಂಟ್ ಶಾಕ್ ನೀಡಿ ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ, ತೀವ್ರ ಅಸ್ವಸ್ಥಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2dba4fc1me684b11h9meg1s,imgname-electric-shock-1789301953004.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ (ಸೆ.13): ದೇವರ ಮೇಲಿನ ಚಿನ್ನ ಕದ್ದರೆಂಬ ಆರೋಪದ ಮೇಲೆ ಬಡ ಮಹಿಳೆಗೆ ಬಂಕಾಪುರ ಪೊಲೀಸರು ಕರೆಂಟ್ ಶಾಕ್ ಟಾರ್ಚರ್ ನೀಡಿದ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಡ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಕರೆಂಟ್ ಶಾಕ್ ಟಾರ್ಚರ್&zwnj;ಗೆ ನೀಲವ್ವ ಎಂಬ ಮಹಿಳೆ ತೀವ್ರ ಅಸ್ವಸ್ಥಗೊಂಡು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;p&gt;ವರಮಹಾಲಕ್ಷ್ಮಿ ಹಬ್ಬಕ್ಕೆ ಪಕ್ಕದ ಮನೆಗೆ ಹೋಗಿದ್ದೇ ತಪ್ಪಾಯ್ತು!&lt;/p&gt;&lt;h2&gt;ದೇವರ ಮೇಲಿನ ಚಿನ್ನ ಕಳವು&lt;/h2&gt;&lt;p&gt;ಕಳೆದ ವರಮಹಾಲಕ್ಷ್ಮಿ ಹಬ್ಬದ ದಿನ ಪಕ್ಕದ ಮನೆಯಲ್ಲಿ ಪೂಜೆ ಕಾರ್ಯಕ್ರಮ ಇತ್ತು. ಅಕ್ಕಪಕ್ಕದ ಮನೆಯವರು ಎಂದಮೇಲೆ ಪೂಜೆ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು ಸಾಮಾನ್ಯ. ಅದೇ ರೀತಿ ನಾಗರಾಜ್ ಸುಂಕದ ಎಂಬುವವರ ಮನೇಲಿ ವರಮಹಾಲಕ್ಷ್ಮಿ ಪೂಜೆ ಬರುವಂತೆ ಕರೆದಿದ್ದರಂತೆ. ಹೀಗಾಗಿ ನೀಲಮ್ಮ ಹಬ್ಬದ ದಿನ ಅವರ ಮನೆಗೆ ಹೋಗಿದ್ದಾರೆ. ನೀಲಮ್ಮ ಅಷ್ಟೇ ಅಲ್ಲದೆ ಆಕೆಯೊಂದಿಗೆ ನೆರೆ ಮನೆಯ ಸುಮಾರು 11 ಜನ ಮಹಿಳೆಯರು ಉಡಿ ತುಂಬಿಸಿಕೊಳ್ಳಲು ಹೋಗಿದ್ರು. ಆದ್ರೆ ಈಗ ಹೋಗಿದ್ದೇ ತಪ್ಪಾಯ್ತು ಅನ್ನಿಸುವಂತಿದೆ ನೀಲಮ್ಮ ಪರಿಸ್ಥಿತಿ.&lt;/p&gt;&lt;h3&gt;ವಿಚಾರಣೆ ನೆಪದಲ್ಲಿ ಕರೆಂಟ್ ಶಾಕ್!&lt;/h3&gt;&lt;p&gt;ನಾಗರಾಜ ಸುಂಕದ ಕುಟುಂಬಸ್ಥರು ನೆರೆಮನೆಯವರು ಸೇರಿ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ಭಾಗಿಯಾಗಿದ್ರು. ಇಷ್ಟು ಜನರ ನಡುವೆ ದೇವರ ಮೇಲಿನ ಚಿನ್ನದ ಅಭರಣ ಕಳ್ಳತನವಾಗಿದೆ. ಯಾರು ಕದ್ದರೆಂದು ತಿಳಿದಿಲ್ಲ. ಆದರೆ ಈ ಬಗ್ಗೆ ನಾಗರಾಜ್ ಸುಂಕದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬಂಕಾಪುರ ಪೊಲೀಸರಿಗೆ ಮನೆಗೆ ಬಂದಿದ್ದವರ ಹೆಸರು ಮನೆ ವಿಳಾಸ ಎಲ್ಲ ಮಾಹಿತಿ ನೀಡಿದ್ದಾರೆ. ಅದರಂತೆ ನೀಲವ್ವ ಹೋಗಿದ್ದರಿಂದ ಪೊಲೀಸರು ಅನುಮಾನಗೊಂಡು ಆಕೆಯನ್ನ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ಕರೆಂಟ್ ಶಾಕ್ ಕೊಟ್ತಿದ್ದಾರೆ. ಕರೆಂಟು ಶಾಕ್ ನಾನು ಕದ್ದಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ಹಿಂಸೆ ನೀಡಿದ್ದಾರೆಂದು ಬಂಕಾಪುರ ಪೊಲೀಸರ ವಿರುದ್ಧ ನೀಲವ್ವ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.&lt;/p&gt;&lt;h3&gt;ಕರೆಂಟ್ ಶಾಕ್&zwnj;ನಿಂದ ನೀಲವ್ವ ಅಸ್ವಸ್ಥ&lt;/h3&gt;&lt;p&gt;ಪಕ್ಕದ ಮನೆಯವರು ಕರೆದ್ರು ಅಂತಾ ವರಮಹಾಲಕ್ಹ್ಮಿ ಹಬ್ಬಕ್ಕೆ ಹೊಗಿ 'ಕಳ್ಳಿ' ಅನ್ನಿಸಿಕೊಳ್ಳಬೇಕಾಗಿದ್ದು ಒಂದು ಕಡೆ, ಚಿನ್ನ ಕಳ್ಳತನ ಮಾಡದಿದ್ರೂ ಅನುಮಾನಗೊಂಡ ಪೊಲೀಸರು ಬಡಪಾಯಿ ಮಹಿಳೆಗೆ ಕರೆಂಟ್ ಶಾಕ್ ನೀಡಿದ್ದರಿಂದ ಆಘಾತಕ್ಕೊಳಗಾಗಿದ್ದಾರೆ. ಸದ್ಯ ತೀವ್ರ ಅಸ್ವಸ್ಥಗೊಂಡಿರುವ ನೀಲವ್ವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ನಾನು ಚಿನ್ನ ಕದ್ದಿಲ್ಲ ಸ್ವಾಮಿ. ನಾವು ಬಡವರು, ಹಣ ಎಲ್ಲಿಂದ ತರಬೇಕು..? ಅಂತಾ ನೋವಿನಿಂದ ನೀಲ್ಲವ್ವ ಕಣ್ಣೀರು ಹಾಕುತ್ತಿದ್ದಾರೆ.&lt;/p&gt;]]></content:encoded>
            <category>haveri</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/woman-allegedly-tortured-with-electric-shock-over-gold-theft-case-in-varamahalakshim-festival-rav/articleshow-abd62o0"/>
        </item>
        <item>
            <title><![CDATA[‘ಸಮಯ ಬಂದಾಗ ಎಲ್ಲ ಹೇಳುವೆ’: ಸಚಿವ ಸ್ಥಾನ ತಪ್ಪಿದ್ದಕ್ಕೆ ಫುಲ್ ಸ್ಟೋರಿ ಬಿಚ್ಚಿಟ್ಟ ಬಸವರಾಜ ಶಿವಣ್ಣವರ]]></title>
            <link>https://kannada.asianetnews.com/karnataka-districts/basavaraj-shivannavar-claims-new-name-came-from-high-command-at-last-moment-gvd/articleshow-ayxickc</link>
            <guid isPermaLink="true">https://kannada.asianetnews.com/karnataka-districts/basavaraj-shivannavar-claims-new-name-came-from-high-command-at-last-moment-gvd/articleshow-ayxickc</guid>
            <pubDate>Thu, 06 Aug 2026 18:32:12 +0530</pubDate>
            <description><![CDATA[&lt;p&gt;ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ವಂಚಿತ ಆಕಾಂಕ್ಷಿಗಳ ಅಸಮಾಧಾನ ಮುಂದುವರಿದಿದೆ. ಈ ನಡುವೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಅವರು ಸಚಿವ ಸ್ಥಾನ ಕೈತಪ್ಪಿದ ಬೆಳವಣಿಗೆಗಳ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzbjmxhxydvqj4cbes7q7zga,imgname-bj-1786021312061.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಆ.06):&lt;/strong&gt; ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ವಂಚಿತ ಆಕಾಂಕ್ಷಿಗಳ ಅಸಮಾಧಾನ ಮುಂದುವರಿದಿದೆ. ಈ ನಡುವೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಅವರು ಸಚಿವ ಸ್ಥಾನ ಕೈತಪ್ಪಿದ ಬೆಳವಣಿಗೆಗಳ ಕುರಿತು ಹಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಕೊನೆಯ ಕ್ಷಣದಲ್ಲಿ ತಮ್ಮ ಹೆಸರು ಸಚಿವರ ಪಟ್ಟಿಯಿಂದ ಕೈಬಿಟ್ಟು, ಹೈಕಮಾಂಡ್&zwnj;ನಿಂದ ಹೊಸ ಹೆಸರು ಬಂದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ &lsquo;ಗಾಡ್&zwnj;ಫಾದರ್&rsquo; ಎಂದು ಹೇಳಿರುವ ಶಿವಣ್ಣವರ, ಉತ್ತರ ಕರ್ನಾಟಕದ ಭಾಗಕ್ಕೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ತಮ್ಮ ಹೆಸರೇ ಪರಿಗಣನೆಯಲ್ಲಿತ್ತು ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಕೊನೆ ತನಕ ನನ್ನ ಹೆಸರೇ ಇತ್ತು&rsquo;&lt;/strong&gt;&lt;/p&gt;&lt;p&gt;ಶಿವಣ್ಣವರ ಅವರ ಪ್ರಕಾರ, ಸಚಿವ ಸ್ಥಾನಕ್ಕೆ ತಮ್ಮ ಹೆಸರು ಕೊನೆಯ ಹಂತದವರೆಗೂ ಇತ್ತು. ಉತ್ತರ ಕರ್ನಾಟಕದ ಭಾಗದಿಂದ ತಮ್ಮನ್ನು ಸಚಿವರನ್ನಾಗಿ ಮಾಡಬೇಕು ಎಂಬ ಅಭಿಪ್ರಾಯವೂ ಇತ್ತು. ಆದರೆ ಅಂತಿಮ ಕ್ಷಣದಲ್ಲಿ ಬೆಳವಣಿಗೆ ಬದಲಾಗಿದೆ. &lsquo;ಕೊನೆ ಘಳಿಗೆಯವರೆಗೂ ನನ್ನ ಹೆಸರೇ ಇತ್ತು. ಆದರೆ ಕೊನೆಯ ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ಇಲ್ಲದೆ, ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ಇಲ್ಲದೆ ಹೊಸ ಹೆಸರು ಪಟ್ಟಿಯಲ್ಲಿ ಬಂತು. ಆ ಹೆಸರು ಹೈಕಮಾಂಡ್&zwnj;ನಿಂದ ಬಂದಿತ್ತು&rsquo; ಎಂದು ಶಿವಣ್ಣವರ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳಾ ಕೋಟಾದಡಿ ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡುವ ಪ್ರಕ್ರಿಯೆಯೂ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ. ಆದರೆ ಕೊನೆಗೆ ಸಿದ್ದರಾಮಯ್ಯ ಅವರು ಆ ಮಹಿಳಾ ಆಕಾಂಕ್ಷಿಗೆ ಪ್ರಮಾಣ ವಚನ ಸ್ವೀಕರಿಸದಂತೆ ಸೂಚಿಸಿದ್ದರು. ಪರಿಣಾಮವಾಗಿ ಅವರು ಪ್ರಮಾಣ ವಚನ ಸ್ವೀಕರಿಸಿಲ್ಲ ಎಂದು ಶಿವಣ್ಣವರ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನನಗೆ ಇನ್ನೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ&rsquo;&lt;/strong&gt;&lt;/p&gt;&lt;p&gt;ತಮಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇನ್ನೂ ಇದೆ ಎಂದು ಬಸವರಾಜ ಶಿವಣ್ಣವರ ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ತಮ್ಮ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. &lsquo;ನನಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸ ಇನ್ನೂ ಇದೆ. ಒಬ್ಬ ಮಹಿಳೆಗೆ ಸಚಿವ ಸ್ಥಾನ ನೀಡಲೇಬೇಕು ಎಂಬ ವಿಚಾರವೂ ಇದೆ. ಮುಂದಿನ ದಿನಗಳಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಆಶಾಭಾವನೆ ಇದೆ&rsquo; ಎಂದು ಹೇಳಿದ್ದಾರೆ. ಆದರೆ ಬೇರೆ ಯಾವುದೇ ನಾಮನಿರ್ದೇಶಿತ ಹುದ್ದೆ ನೀಡಿದರೂ ಸ್ವೀಕರಿಸುವುದಿಲ್ಲ ಎಂಬುದನ್ನೂ ಶಿವಣ್ಣವರ ಸ್ಪಷ್ಟವಾಗಿ ತಿಳಿಸಿದ್ದಾರೆ. &lsquo;ನನಗೆ ಬೇರೆ ಹುದ್ದೆ ಕೊಟ್ಟರೆ ತೆಗೆದುಕೊಳ್ಳುವುದಿಲ್ಲ. ಶಾಸಕನಾಗಿಯೇ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ&rsquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಅರಣ್ಯ ನಿಗಮದ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲು ಮುಂದಾಗಿದ್ದ ಶಿವಣ್ಣವರ&lt;/strong&gt;&lt;/p&gt;&lt;p&gt;ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅರಣ್ಯ ನಿಗಮದ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲು ನಿರ್ಧರಿಸಿದ್ದೆ ಎಂದು ಶಿವಣ್ಣವರ ಬಹಿರಂಗಪಡಿಸಿದ್ದಾರೆ. ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯ ಅವರ ಬಳಿ ತೆಗೆದುಕೊಂಡು ಹೋಗಿದ್ದೆ. ಆದರೆ ಮುಖ್ಯಮಂತ್ರಿ ರಾಜೀನಾಮೆ ನೀಡದಂತೆ ತಡೆದು, ಕ್ಷೇತ್ರದಲ್ಲಿ ಕೆಲಸ ಮುಂದುವರಿಸುವಂತೆ ಸೂಚಿಸಿದ್ದರು ಎಂದು ಅವರು ಹೇಳಿದ್ದಾರೆ. &lsquo;ರಾಜೀನಾಮೆ ನೀಡಬೇಡ, ತಡೆದುಕೋ. ಕ್ಷೇತ್ರದಲ್ಲಿ ಕೆಲಸ ಮಾಡು. ಮುಂದೆ ಏನು ಒಳ್ಳೆಯದು ಮಾಡಬೇಕೋ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು&rsquo; ಎಂದು ಶಿವಣ್ಣವರ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಆ ಹೆಸರು ರಾಹುಲ್ ಗಾಂಧಿಗೂ ಗೊತ್ತಿರಲಿಲ್ಲ&rsquo;&lt;/strong&gt;&lt;/p&gt;&lt;p&gt;ಮಹಿಳಾ ಕೋಟಾದಡಿ ಕೇಳಿಬಂದ ಗಾಯತ್ರಿ ಶಾಂತೇಗೌಡ ಅವರ ಹೆಸರಿನ ಬಗ್ಗೆಯೂ ಶಿವಣ್ಣವರ ಮಹತ್ವದ ಹೇಳಿಕೆ ನೀಡಿದ್ದಾರೆ. ಆ ಹೆಸರು ರಾಹುಲ್ ಗಾಂಧಿ ಅವರಿಗೂ ತಿಳಿದಿರಲಿಲ್ಲ. ಕೆ.ಸಿ. ವೇಣುಗೋಪಾಲ್ ಅಥವಾ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಕಡೆಯಿಂದ ಬಂದ ಹೆಸರು ಎಂದು ಶಿವಣ್ಣವರ ಆರೋಪಿಸಿದ್ದಾರೆ. ಆದರೆ ಸಚಿವ ಸ್ಥಾನ ತಮ್ಮ ಕೈತಪ್ಪಿದ ಸಂಪೂರ್ಣ ಪ್ರಕ್ರಿಯೆಯನ್ನು ಈಗಲೇ ಬಹಿರಂಗಪಡಿಸುವುದಿಲ್ಲ ಎಂದು ಹೇಳಿರುವ ಅವರು, ಸೂಕ್ತ ಸಮಯ ಬಂದಾಗ ಎಲ್ಲವನ್ನೂ ಹೇಳುವುದಾಗಿ ತಿಳಿಸಿದ್ದಾರೆ. &lsquo;ಸಂಪೂರ್ಣ ಪ್ರಕ್ರಿಯೆ ಮುಗಿದ ಮೇಲೆ ನನಗೆ ಸಚಿವ ಸ್ಥಾನ ಹೇಗೆ ತಪ್ಪಿತು ಎಂಬುದನ್ನು ಹೇಳುತ್ತೇನೆ. ಹೇಗೆ ತಪ್ಪಿಸಲಾಯಿತು, ಅದರಲ್ಲಿ ಜಿಲ್ಲೆಯವರ ಪಾತ್ರವಿದೆಯೋ ಅಥವಾ ಹೊರಗಿನವರ ಪಾತ್ರವಿದೆಯೋ ಆಗ ಗೊತ್ತಾಗುತ್ತದೆ&rsquo; ಎಂದು ಶಿವಣ್ಣವರ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಖುಷಿಯಿದೆ&lt;/strong&gt;&lt;/h2&gt;&lt;p&gt;ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಸಂತೋಷವಿದೆ ಎಂದಿರುವ ಶಿವಣ್ಣವರ, ತಮ್ಮ ವಿಚಾರವನ್ನು ಅವರೊಂದಿಗೆ ಹೋಲಿಕೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. &lsquo;ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಖುಷಿಯಿದೆ. ಅವರದ್ದೇ ಬೇರೆ, ನಮ್ಮದೇ ಬೇರೆ. ಲಂಬಾಣಿ ಸಮಾಜದಿಂದ ಒಬ್ಬರೇ ಶಾಸಕರಿರುವ ಕಾರಣ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ&rsquo; ಎಂದು ಶಿವಣ್ಣವರ ಹೇಳಿದ್ದಾರೆ. ತಾವು ಯಾರ ವಿರುದ್ಧವೂ ದೂರು ನೀಡಿಲ್ಲ ಎಂದಿರುವ ಅವರು, ತಮ್ಮ ವಿರುದ್ಧ ಯಾರು ದೂರು ನೀಡಿದ್ದಾರೆ ಎಂಬುದನ್ನು ಮಾತ್ರ ಸೂಕ್ತ ಸಂದರ್ಭ ಬಂದಾಗ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.&lt;/p&gt;&lt;p&gt;&lsquo;ನಾನು ಯಾರ ಮೇಲೂ ಕಂಪ್ಲೇಂಟ್ ಮಾಡಿಲ್ಲ. ಆದರೆ ನನ್ನ ಮೇಲೆ ಯಾರು ಕಂಪ್ಲೇಂಟ್ ಮಾಡಿದ್ದಾರೆ ಎಂಬುದನ್ನು ಸಂದರ್ಭ ಬಂದಾಗ ಹೇಳುತ್ತೇನೆ&rsquo; ಎಂದು ಬಸವರಾಜ ಶಿವಣ್ಣವರ ಹೇಳಿದ್ದಾರೆ. ಶಿವಣ್ಣವರ ಅವರ ಈ ಹೇಳಿಕೆಗಳು ಸಚಿವ ಸಂಪುಟ ವಿಸ್ತರಣೆಯ ಒಳಗಿನ ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ ಅವರು ಬಹಿರಂಗಪಡಿಸಲಿರುವ &lsquo;ಸಚಿವ ಸ್ಥಾನ ಹೇಗೆ ತಪ್ಪಿತು&rsquo; ಎಂಬ ಮಾಹಿತಿಯತ್ತ ಇದೀಗ ರಾಜಕೀಯ ವಲಯದ ಗಮನ ನೆಟ್ಟಿದೆ.&lt;/p&gt;]]></content:encoded>
            <category>haveri</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basavaraj-shivannavar-claims-new-name-came-from-high-command-at-last-moment-gvd/articleshow-ayxickc"/>
        </item>
        <item>
            <title><![CDATA[ಸರ್ಕಾರಿ ಪ್ರೌಢಶಾಲೆ ₹5 ಲಕ್ಷ ಮೌಲ್ಯದ ಮೇಲ್ಚಾವಣಿ ತಗಡು ₹20 ಸಾವಿರಕ್ಕೆ ಮಾರಿದ ಶಿಕ್ಷಕ! ಹಳೆ ವಿದ್ಯಾರ್ಥಿ ಆರೋಪ]]></title>
            <link>https://kannada.asianetnews.com/karnataka-districts/haveri-marol-govt-high-school-teacher-caught-selling-roof-sheets-illegally-allegation/articleshow-cfyqq3x</link>
            <guid isPermaLink="true">https://kannada.asianetnews.com/karnataka-districts/haveri-marol-govt-high-school-teacher-caught-selling-roof-sheets-illegally-allegation/articleshow-cfyqq3x</guid>
            <pubDate>Tue, 28 Jul 2026 10:33:53 +0530</pubDate>
            <description><![CDATA[&lt;p&gt;ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು, ಶಾಲೆಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣದ ತಗಡುಗಳನ್ನು ಕೇವಲ 20 ಸಾವಿರ ರೂಪಾಯಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಈ ಕೃತ್ಯವನ್ನು ಹಳೆಯ ವಿದ್ಯಾರ್ಥಿಯೊಬ್ಬರು ವೀಡಿಯೋ ಮಾಡಿ ಬಯಲಿಗೆಳೆದಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykhkmvpcmgverk4cjy6wat4,imgname-haveri-govt-school-roof-sheets-selling-1785214915446.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಜು.28): 'ಬೇ&lt;/strong&gt;ಲಿಯೇ ಎದ್ದು ಹೊಲ ಮೇಯ್ದರೆ (Fence eating the crop)' ಎಂಬ ಗಾದೆ ಮಾತು ಹಾವೇರಿ ಜಿಲ್ಲೆಯಲ್ಲಿ ಅಕ್ಷರಶಃ ನಿಜವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ, ನೀತಿಪಾಠ ಹೇಳಿಕೊಡಬೇಕಾದ ಗುರುವೇ, ತಾನು ಪಾಠ ಮಾಡುವ ಶಾಲೆಯ ಆಸ್ತಿಯನ್ನೇ ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದಿರುವ ಘಟನೆ ಹಾವೇರಿ ತಾಲೂಕಿನ ಮರೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ (Marol High School) ನಡೆದಿದೆ. ಶಾಲೆಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಕೇವಲ ಕ್ಷುಲ್ಲಕ ಹಣಕ್ಕೆ ಮಾರಿಕೊಂಡ ಶಿಕ್ಷಕನ ಕೃತ್ಯ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ? ಅಕ್ರಮ ನಡೆದಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ (Heavy Rain and Wind) ಮರೋಳ ಪ್ರೌಢಶಾಲೆಯ ಮೇಲ್ಚಾವಣಿ (Roofing sheets) ಸಂಪೂರ್ಣವಾಗಿ ಹಾರಿಹೋಗಿತ್ತು. ಶಾಲೆಯ ಸುಮಾರು 120ಕ್ಕೂ ಹೆಚ್ಚು ಕಬ್ಬಿಣದ ತಗಡುಗಳು ಹಾಗೂ ಪಟ್ಟಿಗಳು ಗಾಳಿಗೆ ಕಿತ್ತುಬಂದಿದ್ದವು. ಈ ಎಲ್ಲಾ ಸಾಮಗ್ರಿಗಳನ್ನು ಶಾಲೆಯ ಆವರಣದಲ್ಲೇ ಸುರಕ್ಷಿತವಾಗಿ ಎತ್ತಿಡಲಾಗಿತ್ತು. ಇದರ ಒಟ್ಟು ಮೌಲ್ಯ ಸುಮಾರು 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ಆದರೆ, ಈ ಶಾಲೆಯ ಮುಖ್ಯೋಪಾಧ್ಯಾಯರ (Head Master) ಆರೋಗ್ಯ ಸರಿಯಿಲ್ಲದ ಕಾರಣ ಅವರು ರಜೆಯಲ್ಲಿದ್ದರು. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಶಾಲೆಯ ಹಿರಿಯ ಶಿಕ್ಷಕ ಪ್ರಭು ಕೆ.ಎಂ. (Prabhu K.M.), ಶಾಲೆಯ ಪ್ರಭಾರಿ (In-charge) ಉಸ್ತುವಾರಿ ವಹಿಸಿಕೊಂಡಿದ್ದರು. ಶಾಲೆಯ ಆಡಳಿತ ಮಂಡಳಿಯಿಂದ ಅಥವಾ ಎಸ್&zwnj;ಡಿಎಂಸಿಯಿಂದ (SDMC) ಯಾವುದೇ ಅಧಿಕೃತ ಠರಾವು (Resolution) ಪಾಸ್ ಮಾಡದೇ, ಪ್ರಭು ಅವರು ಈ ₹5 ಲಕ್ಷ ಮೌಲ್ಯದ ತಗಡುಗಳನ್ನು ಗ್ರಾಮದ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲು ಸಂಚು ರೂಪಿಸಿದ್ದರು.&lt;/p&gt;&lt;h2&gt;&lt;strong&gt;₹20 ಸಾವಿರಕ್ಕೆ ಡೀಲ್: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕ!&lt;/strong&gt;&lt;/h2&gt;&lt;p&gt;ಶಿಕ್ಷಕ ಪ್ರಭು ಕೆ.ಎಂ., ಶಾಲೆಯ ತಗಡುಗಳನ್ನು ಗ್ರಾಮದ ಮಂಜುನಾಥ್ ಮಾಗಡಿ, ಮಾಲತೇಶ್ ಓಲೆಕಾರ, ಹನುಮಪ್ಪ ಈಟಿ ಹಾಗೂ ನಾಗಪ್ಪ ಮಡಿವಾಳರ ಎಂಬ ಖಾಸಗಿ ವ್ಯಕ್ತಿಗಳಿಗೆ ಕೇವಲ 20 ಸಾವಿರ ರೂಪಾಯಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಹಣ ಕೈ ಬದಲಾವಣೆಯಾಗುವ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ (Alumni) ಮನೋಜ್ ದೇವಸೂರು ಎಂಬುವರು ತಮ್ಮ ಮೊಬೈಲ್&zwnj;ನಲ್ಲಿ ಸಂಪೂರ್ಣ ದೃಶ್ಯವನ್ನು ವಿಡಿಯೋ ಚಿತ್ರೀಕರಣ (Video Recording) ಮಾಡಿದ್ದಾರೆ. ಶಿಕ್ಷಕ ಪ್ರಭು ₹20,000 ನಗದು ಹಣ ಪಡೆಯುವಾಗ ರೆಡ್ ಹ್ಯಾಂಡ್ (Red Handed) ಆಗಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.&lt;/p&gt;&lt;h3&gt;&lt;strong&gt;ಡಿಸಿ, ಸಿಇಒ ಕಚೇರಿ ಅಲೆದರೂ ಸಿಗದ ನ್ಯಾಯ: 'ಡೋಂಟ್ ಕೇರ್' ಎಂದ ಅಧಿಕಾರಿಗಳು!&lt;/strong&gt;&lt;/h3&gt;&lt;p&gt;ತಮ್ಮ ಶಾಲೆಯ ಆಸ್ತಿಗೆ ಕನ್ನ ಹಾಕಿದ ಶಿಕ್ಷಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಾಕ್ಷಿ ಸಮೇತ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಶ್ರೀನಿವಾಸ್ ಅವರಿಗೆ ದೂರು ನೀಡಿದ್ದಾರೆ. ಆದರೆ, ಬಿಇಒ ದೂರಿಗೆ ಕನಿಷ್ಠ ಬೆಲೆಯನ್ನೂ ನೀಡದೆ 'ಡೋಂಟ್ ಕೇರ್' (Don't Care) ಧೋರಣೆ ತಳೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಇಷ್ಟಕ್ಕೇ ಸುಮ್ಮನಾಗದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಹಾವೇರಿ ಜಿಲ್ಲಾಧಿಕಾರಿ ಕಚೇರಿ (Haveri DC Office), ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ZP CEO) ಹಾಗೂ ಡಿಡಿಪಿಐ (DDPI) ಅವರಿಗೆ ಸಾಕ್ಷ್ಯಾಧಾರಗಳ ಸಮೇತ ಮನವಿ ಸಲ್ಲಿಸಿದ್ದಾರೆ. ಆದಾಗ್ಯೂ, ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಅಕ್ರಮ ಎಸಗಿದ ಶಿಕ್ಷಕನಿಗೆ ಸಾಥ್ ನೀಡುತ್ತಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರ ಆಕ್ರೋಶ:&lt;/strong&gt;&lt;/h2&gt;&lt;p&gt;'ನಾವು ಓದಿದ ಶಾಲೆಗೆ ಅನ್ಯಾಯವಾದಾಗ ನ್ಯಾಯ ಕೇಳಲು ಜಿಲ್ಲಾಧಿಕಾರಿಗಳ ಕಚೇರಿ ಅಲೆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ' ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ಸ್ವತ್ತನ್ನು ಕದ್ದ ಮಾರಿದ ಶಿಕ್ಷಕ ಪ್ರಭು ಕೆ.ಎಂ. ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು (Suspension) ಹಾಗೂ ಈ ಅಕ್ರಮಕ್ಕೆ ಸಾಥ್ ನೀಡುತ್ತಿರುವ ಶಿಕ್ಷಣಾಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>haveri</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/haveri-marol-govt-high-school-teacher-caught-selling-roof-sheets-illegally-allegation/articleshow-cfyqq3x"/>
        </item>
        <item>
            <title><![CDATA[ಸರ್ಕಾರದ ₹5 ಕೋಟಿ ಕಳಪೆ ಕಾಮಗಾರಿ; ರಾಜಕಾಲುವೆ ಮುಂದೆ ಕಟ್ಟಿಕೊಂಡು ಹೋಗ್ತಿದ್ದರೆ, ಹಿಂದೆ ಬಿದ್ದುಕೊಂಡು ಬರ್ತಿದೆ!]]></title>
            <link>https://kannada.asianetnews.com/gallery/karnataka-districts/haveri-hangal-5-crore-rajakaluve-canal-collapse-minor-irrigation-scam-reality-check-cr69qd0</link>
            <guid isPermaLink="true">https://kannada.asianetnews.com/gallery/karnataka-districts/haveri-hangal-5-crore-rajakaluve-canal-collapse-minor-irrigation-scam-reality-check-cr69qd0</guid>
            <pubDate>Mon, 17 Aug 2026 14:23:07 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯ ಹಾನಗಲ್&zwnj;ನಲ್ಲಿ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ರಾಜಕಾಲುವೆ, ಕಳಪೆ ಕಾಮಗಾರಿಯಿಂದಾಗಿ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಕುಸಿದು ಬಿದ್ದಿದೆ. ಈ ದುರಂತದಿಂದಾಗಿ ರೈತರ ನೂರಾರು ಅಡಿಕೆ ಮರಗಳು ನಾಶವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07e1s5vwp56fysw8q0bwkt2,imgname-haveri-rajakaluve-collapse--5--1786956014779.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ ಜಿಲ್ಲೆಯ ಹಾನಗಲ್&zwnj;ನಲ್ಲಿ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ರಾಜಕಾಲುವೆ, ಕಳಪೆ ಕಾಮಗಾರಿಯಿಂದಾಗಿ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಕುಸಿದು ಬಿದ್ದಿದೆ. ಈ ದುರಂತದಿಂದಾಗಿ ರೈತರ ನೂರಾರು ಅಡಿಕೆ ಮರಗಳು ನಾಶವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಹಾವೇರಿ (ಆ.17): ರಾ&lt;/strong&gt;ಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ನಡೆಯುವ ಕಮಿಷನ್ ಮತ್ತು ಕಳಪೆ ಕಾಮಗಾರಿಯ ಜಾಲಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಬರೋಬ್ಬರಿ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಕಾಂಕ್ರೀಟ್ ರಾಜಕಾಲುವೆ, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಬುಡಮೇಲಾಗಿ ಮುಗುಚಿ ಬಿದ್ದಿದೆ! ಕಾಲುವೆ ಕಟ್ಟುತ್ತಾ ಮುಂದೆ ಸಾಗಿದಂತೆ, ಹಿಂದಿನಿಂದಲೇ ಕುಸಿಯುತ್ತಾ ಬರುತ್ತಿರುವ ಈ ಕಾಮಗಾರಿಯು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಕ್ರಮವನ್ನು ಬೆತ್ತಲು ಮಾಡಿದೆ.&lt;/p&gt;&lt;img&gt;&lt;p&gt;ವಿಶೇಷವೆಂದರೆ, ಈ ಕಳಪೆ ಕಾಮಗಾರಿ ನಡೆದಿರುವುದು ಬೇರೆಲ್ಲೂ ಅಲ್ಲ, ಸಾಕ್ಷಾತ್ ಸಣ್ಣ ನೀರಾವರಿ ಇಲಾಖೆಯ ಕಚೇರಿಯ ಹಿಂಭಾಗದಲ್ಲೇ!&lt;/p&gt;&lt;p&gt;&lt;strong&gt;ಕಾಮಗಾರಿಯ ಹಿನ್ನೆಲೆ ಏನು?&lt;/strong&gt;&lt;/p&gt;&lt;p&gt;ಹಾನಗಲ್ ಪಟ್ಟಣದ ಪ್ರಸಿದ್ಧ ಆನಿಕೆರೆ ಕೋಡಿ ಬಿದ್ದಾಗ ಆ ನೀರು ಮತ್ತೊಂದು ಕೆರೆಗೆ ಸರಾಗವಾಗಿ ಹರಿದು ಹೋಗಲು ಈ ಹಿಂದೆ ಕಚ್ಚಾ ಕಾಲುವೆ ಇತ್ತು. ಇದರಿಂದ ಮಳೆಗಾಲದಲ್ಲಿ ನೀರು ಪಕ್ಕದ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿತ್ತು.&lt;/p&gt;&lt;p&gt;ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ₹5 ಕೋಟಿ ಅನುದಾನ ಮಂಜೂರು ಮಾಡಿತ್ತು.&lt;/p&gt;&lt;p&gt;ಒಟ್ಟು 1.3 ಕಿಲೋಮೀಟರ್ ಉದ್ದದ ಕಾಂಕ್ರೀಟ್ ರಾಜಕಾಲುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು.&lt;/p&gt;&lt;p&gt;ಈ ಗುತ್ತಿಗೆಯನ್ನು ಸುಮಿತ್ ಹೆಗಡೆ ಎಂಬ ಗುತ್ತಿಗೆದಾರನಿಗೆ ವಹಿಸಲಾಗಿತ್ತು.&lt;/p&gt;&lt;img&gt;&lt;p&gt;&lt;strong&gt;3 ತಿಂಗಳಲ್ಲೇ ಧರೆಗುರುಳಿದ ಕಾಲುವೆ - ಕಳಪೆ ಕಾಮಗಾರಿ ಬಯಲು:&lt;/strong&gt;&lt;/p&gt;&lt;p&gt;ಕಾಮಗಾರಿ ಆರಂಭವಾಗಿ ಇನ್ನೂ ಕೇವಲ 3 ತಿಂಗಳಷ್ಟೇ ಕಳೆದಿವೆ. ಯೋಜನೆಯ 1.3 ಕಿ.ಮೀ ಪೈಕಿ ಸುಮಾರು 800 ಮೀಟರ್ ಕಾಲುವೆ ನಿರ್ಮಾಣ ಮುಗಿದಿತ್ತು. ಆದರೆ, ಇಲಾಖೆಯ ಕಣ್ಣೆದುರೇ ಕಳಪೆ ಗುಣಮಟ್ಟದ ಸಿಮೆಂಟ್, ಮರಳು ಹಾಗೂ ಕಳಪೆ ದರ್ಜೆಯ ಕಬ್ಬಿಣವನ್ನು ಬಳಸಿ ಕಾಲುವೆ ಕಟ್ಟಲಾಗಿದೆ. ಪರಿಣಾಮವಾಗಿ, ಕಾಮಗಾರಿ ಮುಕ್ತಾಯವಾಗುವ ಮೊದಲೇ ಬೃಹತ್ ಕಾಂಕ್ರೀಟ್ ಗೋಡೆಗಳು ರೈತರ ಜಮೀನಿನ ಕಡೆಗೆ ಮುರಿದು ಬಿದ್ದಿವೆ.&lt;/p&gt;&lt;img&gt;&lt;p&gt;&lt;strong&gt;ಫಸಲಿಗೆ ಬಂದಿದ್ದ ಅಡಿಕೆ ಮರಗಳು ಬಲಿ &ndash; ಅನ್ನದಾತರ ಆಕ್ರೋಶ:&lt;/strong&gt;&lt;/p&gt;&lt;p&gt;ರಾಜಕಾಲುವೆಯ ತಡೆಗೋಡೆಗಳು ದಿಢೀರನೆ ಕುಸಿದು ಬಿದ್ದ ಪರಿಣಾಮ, ಕಾಲುವೆ ಪಕ್ಕದಲ್ಲಿದ್ದ ಫಲವತ್ತಾದ ಕೃಷಿ ಭೂಮಿಗೆ ಭಾರಿ ಹಾನಿಯಾಗಿದೆ.&lt;/p&gt;&lt;p&gt;ರೈತರು ವರ್ಷಗಟ್ಟಲೆ ಕಷ್ಟಪಟ್ಟು ಬೆಳೆಸಿದ್ದ, ಫಸಲಿಗೆ ಬಂದಿದ್ದ ನೂರಾರು ಅಡಿಕೆ ಮರಗಳು ಮಣ್ಣುಪಾಲಾಗಿವೆ.&lt;/p&gt;&lt;p&gt;ಕಾಲುವೆ ನೀರು ಮತ್ತು ಕಾಂಕ್ರೀಟ್ ಅವಶೇಷಗಳು ತೋಟಗಳಿಗೆ ನುಗ್ಗಿ ರೈತರು ಕಂಗಾಲಾಗಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ರೈತರ ಮತ್ತು ಸಾರ್ವಜನಿಕರ ಪ್ರಮುಖ ಬೇಡಿಕೆಗಳು:&lt;/strong&gt;&lt;/p&gt;&lt;p&gt;&lt;strong&gt;ಗುತ್ತಿಗೆದಾರನನ್ನು ಬ್ಲ್ಯಾಕ್&zwnj;ಲಿಸ್ಟ್&zwnj;ಗೆ ಸೇರಿಸಿ: &lt;/strong&gt;ಕಳಪೆ ಕಾಮಗಾರಿ ನಡೆಸಿ ₹5 ಕೋಟಿ ಲೂಟಿ ಮಾಡಲು ಯತ್ನಿಸಿದ ಗುತ್ತಿಗೆದಾರ ಸುಮಿತ್ ಹೆಗಡೆಯನ್ನು ತಕ್ಷಣವೇ ಕಪ್ಪುಪಟ್ಟಿಗೆ (Blacklist) ಸೇರಿಸಬೇಕು.&lt;/p&gt;&lt;p&gt;&lt;strong&gt;ಅಧಿಕಾರಿಗಳ ಅಮಾನತು: &lt;/strong&gt;ಕಚೇರಿಯ ಹಿಂಭಾಗದಲ್ಲೇ ಇಷ್ಟೊಂದು ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್&zwnj;ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು.&lt;/p&gt;&lt;p&gt;&lt;strong&gt;ಮರು ನಿರ್ಮಾಣ &amp;amp; ಪರಿಹಾರ: &lt;/strong&gt;ಕಾಲುವೆಯನ್ನು ಗುಣಮಟ್ಟದೊಂದಿಗೆ ಮೊದಲಿನಿಂದ ಮರು ನಿರ್ಮಾಣ ಮಾಡಬೇಕು ಹಾಗೂ ಮರಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>haveri</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/haveri-hangal-5-crore-rajakaluve-canal-collapse-minor-irrigation-scam-reality-check-cr69qd0"/>
        </item>
        <item>
            <title><![CDATA[Haveri: SSLCಯಲ್ಲಿ 98%, PUCಯಲ್ಲಿ 95%: ಬಿಂದುಶ್ರೀಗೆ ನೀಟ್‌ನಲ್ಲಿ ಬಂದಿದ್ದು 11 ಅಂಕ]]></title>
            <link>https://kannada.asianetnews.com/karnataka-districts/haveri-hanagal-bindu-sri-pawar-had-expected-668-marks-in-the-neet-exam-but-she-got-11-marks-mrq/articleshow-d11lmvl</link>
            <guid isPermaLink="true">https://kannada.asianetnews.com/karnataka-districts/haveri-hanagal-bindu-sri-pawar-had-expected-668-marks-in-the-neet-exam-but-she-got-11-marks-mrq/articleshow-d11lmvl</guid>
            <pubDate>Sat, 25 Jul 2026 07:52:16 +0530</pubDate>
            <description><![CDATA[ಹಾನಗಲ್ಲದ ಪ್ರತಿಭಾವಂತ ವಿದ್ಯಾರ್ಥಿನಿ ಬಿಂದು ಶ್ರೀ ಪವಾರ ಅವರು ನೀಟ್&zwnj; ಪರೀಕ್ಷೆಯಲ್ಲಿ 668 ಅಂಕ ನಿರೀಕ್ಷಿಸಿದ್ದರು, ಆದರೆ ಅವರಿಗೆ -11 ಅಂಕ ಬಂದಿದೆ. ತಮ್ಮ ಓಎಂಆರ್&zwnj; ಶೀಟ್ ಬದಲಾಗಿದೆ ಮತ್ತು ಹೆಬ್ಬೆಟ್ಟಿನ ಗುರುತು ಹೊಂದಿಕೆಯಾಗುತ್ತಿಲ್ಲ ಎಂದು ಆರೋಪಿಸಿ, ಅವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kybgtf85anaccc935dtxd01p,imgname-bindu-1784945655045.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ನೀಟ್&zwnj; ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ಲ ವಿದ್ಯಾರ್ಥಿನಿಗೆ ಓಎಂಆರ್&zwnj; ಸೀಟ್&zwnj;ನಲ್ಲಿ ಬರೀ -11 ಅಂಕ ಬಂದಿದ್ದು, ಹೆಬ್ಬಟ್ಟಿನ ಗುರುತು ಕೂಡಾ ಓವರ್ ಲ್ಯಾಪ್&zwnj; ಆಗಿದೆ ಎಂದು ವಿದ್ಯಾರ್ಥಿನಿ ದೂರಿದ್ದಾರೆ.&lt;/p&gt;&lt;p&gt;ವಿದ್ಯಾರ್ಥಿನಿ ಬಿಂದು ಶ್ರೀ ಜಗದೀಶ ಪವಾರ ಅವರಿಗೆ ಅನ್ಯಾಯವಾಗಿದ್ದು, ಅವರು ಈ ಕುರಿತು ನ್ಯಾಶನಲ್&zwnj; ಟೆಸ್ಟಿಂಗ್&zwnj; ಏಜೆನ್ಸಿಗೆ ಮೇಲ್&zwnj;ನಲ್ಲಿ ದೂರಿದ್ದಾರೆ. ವಿದ್ಯಾರ್ಥಿನಿ ಹಾವೇರಿ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;720ಕ್ಕೆ ಕನಿಷ್ಠ 668 ಅಂಕ ಬರಲೇಬೇಕು&lt;/strong&gt;&lt;/h2&gt;&lt;p&gt;ನೀಟ್&zwnj; ಪರೀಕ್ಷೆಯಲ್ಲಿ ನಾನು ತುಂಬಿದ ಓಎಂಆರ್&zwnj; ಸೀಟ್&zwnj; ಅಂಕ ನನಗೆ ಬಂದಿಲ್ಲ. ನಾನು ವೆಬ್&zwnj;ಸೈಟ್&zwnj;ನಲ್ಲಿ ತರಿಸಿಕೊಂಡ ಓಎಂಆರ್&zwnj; ಸೀಟ್&zwnj; ನನ್ನದಲ್ಲವೇ ಅಲ್ಲ, ನಾನು ಪರೀಕ್ಷೆಗೆ ಹಾಜರಾದ ಸಮಯ, ಹೊರಬಂದ ಸಮಯ, ಓಎಂಆರ್&zwnj; ಸೀಟ್&zwnj;ನಲ್ಲಿ ಹೊಂದಾಣಿಕೆ ಆಗುತ್ತಿಲ್ಲ. ಅಲ್ಲದೇ ನನ್ನ ಹೆಬ್ಬೆಟ್ಟಿನ ಗುರುತು ಕೂಡಾ ಓವರ್&zwnj; ಲ್ಯಾಪ್&zwnj; ಆಗಿದೆ. ನನಗೆ 720ಕ್ಕೆ ಕನಿಷ್ಠ 668 ಅಂಕ ಬರಲೇಬೇಕು, ಆದರೆ ಬಂದದ್ದು -11 ಅಂಕ ಇದು ನನ್ನ ಫಲಿತಾಂಶದ ಮೇಲೆ ಮಾಡಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;SSLCಯಲ್ಲಿ ಶೇ.98 ಮತ್ತು ಪಿಯುಸಿಯಲ್ಲಿ ಶೇ.95&lt;/strong&gt;&lt;/h3&gt;&lt;p&gt;ಎಸ್ಸೆಸ್ಸೆಲ್ಸಿಯಲ್ಲಿ ಶೇ. 98 ಅಂಕ ಪಡೆದಿದ್ದೇನೆ. ಪಿಯುಸಿ ವಿಜ್ಞಾನದಲ್ಲಿ ಶೇ. 95 ಬಂದಿವೆ. ಇಷ್ಟೆದಲ್ಲರ ನಡುವೆ ನಾನು ಪರಿಶ್ರಮಪಟ್ಟು ಓದಿದ ಫಲಿತಾಂಶ ನನಗೆ ಸಿಗಲಿಲ್ಲ, ಎಲ್ಲೋ ನಡೆದ ಮೋಸ ನನ್ನ ಭವಿಷ್ಯದ ಮೇಲೆ ಆಟವಾಡಿದೆ. ಈ ಪರೀಕ್ಷೆ ವ್ಯವಸ್ಥೆಯ ಮೇಲೆ ನನಗೆ ವಿಶ್ವಾಸವಿಲ್ಲ. ಈ ವಿಷಯವನ್ನು ಸಮಗ್ರ ತನಿಖೆ ಮಾಡಿ ನನಗೆ ನ್ಯಾಯ ಒದಗಿಸಬೇಕು. ಇದಕ್ಕೆ ಸಂಬಂಧಿಸಿದಂತೆ ನ್ಯಾಶನಲ್&zwnj; ಟೆಸ್ಟಿಂಗ್&zwnj; ಏಜೆನ್ಸಿ ಅವರಿಗೆ ಜು. 22ರಂದು ಈ ಓಎಂಆರ್&zwnj; ಸೀಟ್&zwnj; ನನ್ನದಲ್ಲ ಹಾಗೂ ಫಲಿತಾಂಶವೂ ನನ್ನದಲ್ಲ ಎಂದು ಸಲ್ಲಿಸಿದ ದೂರಿಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೆಲ್ಪಲೈನ್&zwnj; ನಂಬರ್&zwnj;ಗೆ 1 ಸಾವಿರ ಬಾರಿ ಫೋನಾಯಿದ್ದರೂ ನನ್ನ ಪೋನ್&zwnj; ಕರೆ ಸ್ವೀಕರಿಸಿಲ್ಲ. ಪರೀಕ್ಷಾ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆ, ಸತ್ಯವನ್ನು ಪರಿಶೀಲಿಸಿ ನನಗೆ ನ್ಯಾಯಕೊಡಿಸುತ್ತದೆ. ನನ್ನದೇ ಆದ ಓಎಂಆರ್&zwnj; ಸೀಟ್&zwnj; ನನಗೆ ಸಿಕ್ಕು 668 ಅಂಕ ಪಡೆದಿದ್ದು, ನನಗೆ ಬಯಸಿದ ಶಿಕ್ಷಣಕ್ಕೆ ಅವಕಾಶ ಸಿಗುತ್ತದೆ ಎಂದು ನಂಬಿದ್ದೇನೆ. ನನ್ನ ನಂಬಿಕೆಗೆ ಮೋಸವಾಗುದಿಲ್ಲ ಎಂಬ ಪೂರ್ಣವಿಶ್ವಾಸವಿದೆ. ಆದರೆ, ನ್ಯಾಯವೇ ಗೆಲ್ಲಬೇಕು ಎಂದು ಬಿಂದುಶ್ರೀ ಪವಾರ ಅವರು ಕನ್ನಡಪ್ರಭಕ್ಕೆ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೆಲಸ ಹುಡುಕೋರಿಗೆ ಗುಡ್&zwnj; ನ್ಯೂಸ್: ಜುಲೈ 29 ರಂದು ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳ ನೇರ ಸಂದರ್ಶನ!&lt;/strong&gt;&lt;/p&gt;&lt;p&gt;ನನ್ನ ಮಗಳು ಪ್ರತಿಭಾವಂತೆ, ಹಿಂದಿನ ಯಾವ ಪರೀಕ್ಷೆಯಲ್ಲೂ ಆಕೆಗೆ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿಲ್ಲ. ಈ ಬಾರಿ ನೀಟ್&zwnj;ನಲ್ಲಿ ಯಶಸ್ವಿಯಾಗುತ್ತಾಳೆ ಎಂಬ ಪೂರ್ಣವಿಶ್ವಾಸ ಇನ್ನು ಇದೆ. ನ್ಯಾಯಕೊಡಿಸಬೇಕಾದ ಪರೀಕ್ಷಾ ಪ್ರಾಧಿಕಾರದ ಮೇಲೆ ಇನ್ನು ನಂಬಿಕೆ ಇಟ್ಟಿದ್ದೇನೆ. ಇದು ನನ್ನ ಮಗಳ ಓಎಂಆರ್&zwnj; ಸೀಟ್ ಅಲ್ಲ. ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಬಿಂದುಶ್ರೀ ತಂದೆ ಜಗದೀಶ್ ಪವಾರ್ ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;BMTC ಪ್ರಯಾಣಿಕರೇ, ವಾಂತಿ ಬರ್ತಿದೆ, ಕಿಟಕಿ ಸೀಟ್ ಬಿಟ್ಕೊಡಿ ಅಂತ ಜನರು ಬಂದ್ರೆ ಹುಷಾರ್!&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-hanagal-bindu-sri-pawar-had-expected-668-marks-in-the-neet-exam-but-she-got-11-marks-mrq/articleshow-d11lmvl"/>
        </item>
        <item>
            <title><![CDATA[ಹೆಲ್ಮೆಟ್‌ ಧರಿಸದೇ ಬೈಕ್‌ ರೈಡ್‌, ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡಗೆ ದಂಡ!]]></title>
            <link>https://kannada.asianetnews.com/karnataka-districts/haveri-district-ranebennur-congress-mla-prakash-koliwada-fined-for-riding-a-bike-without-wearing-a-helmet-mrq/articleshow-dmtivkm</link>
            <guid isPermaLink="true">https://kannada.asianetnews.com/karnataka-districts/haveri-district-ranebennur-congress-mla-prakash-koliwada-fined-for-riding-a-bike-without-wearing-a-helmet-mrq/articleshow-dmtivkm</guid>
            <pubDate>Thu, 27 Aug 2026 06:53:11 +0530</pubDate>
            <description><![CDATA[&lt;p&gt;ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರು ಬೈಕ್ ರ್&zwj;ಯಾಲಿಯಲ್ಲಿ ಹೆಲ್ಮೆಟ್&zwnj; ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕಾಗಿ ಸಂಚಾರಿ ಪೊಲೀಸರು ₹500 ದಂಡ ವಿಧಿಸಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡ ಶಾಸಕರು, ದಂಡ ಪಾವತಿಸಿ, 'ಶಾಸಕ ಸೇವಕನೇ ಹೊರತು ರಾಜನಲ್ಲ' ಎಂದು ಹೇಳುವ ಮೂಲಕ ಪೊಲೀಸರ ಕರ್ತವ್ಯವನ್ನು ಶ್ಲಾಘಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m10d02yr3b6fs8yj1hb23fa7,imgname-prakash-koliwad-1787793771480.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ:&lt;/strong&gt; ಹೆಲ್ಮೆಟ್&zwnj; ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಸಂಚಾರಿ ಪೊಲೀಸರು ₹500 ದಂಡ ವಿಧಿಸಿದ್ದಾರೆ. ಆ.25ರಂದು ಬೈಕ್ ರ್&zwj;ಯಾಲಿಯೊಂದರಲ್ಲಿ ಶಾಸಕ ಕೋಳಿವಾಡ ಹೆಲ್ಮೆಟ್&zwnj; ಧರಿಸದೇ ಬೈಕ್&zwnj; ಚಲಾಯಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.&lt;/p&gt;&lt;h2&gt;&lt;strong&gt;ಶಾಸಕರಿಗೆ ₹500 ದಂಡದ ನೋಟಿಸ್&zwnj;&lt;/strong&gt;&lt;/h2&gt;&lt;p&gt;ಇದು ಸಂಚಾರ ಪೊಲೀಸರ ಗಮನಕ್ಕೆ ಬಂದಿದ್ದು, ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ₹500 ದಂಡದ ನೋಟಿಸ್&zwnj; ಜಾರಿಗೊಳಿಸಿದ್ದರು. ಅಲ್ಲದೆ ನೋಟಿಸ್&zwnj; ಶಾಸಕರ ಮನೆ ಬಾಗಿಲಿಗೆ ತಲುಪಿದ್ದು, ಬಳಿಕ ಅವರು ದಂಡದ ಮೊತ್ತ ಪಾವತಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಳಿವಾಡ, &lsquo;ತಪ್ಪು ಒಪ್ಪಿಕೊಂಡು ದಂಡ ಪಾವತಿಸಿದ್ದೇನೆ. ಶಾಸಕ ಸೇವಕನೇ ಹೊರತು ರಾಜನಲ್ಲ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅವರನ್ನು ಗೌರವಿಸುತ್ತೇನೆ&rsquo; ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಹೆಲ್ಮೆಟ್ ಧರಿಸದೇ ಬೈಕ್&zwnj; ಚಲಾಯಿಸಿದ್ದು ತಪ್ಪು&lt;/strong&gt;&lt;/h3&gt;&lt;p&gt;ನೋಟಿಸ್&zwnj; ನೀಡಿರುವ ವಿಚಾರವನ್ನು ಶಾಸಕ ಪ್ರಕಾಶ ಕೋಳಿವಾಡ ಅವರು ತಮ್ಮ ಫೇಸ್&zwnj;ಬುಕ್&zwnj; ಖಾತೆಯಲ್ಲಿ ಹಂಚಿಕೊಂಡಿದ್ದಾರೆ. &lsquo;ಸರ್ಕಾರಿ ಪ್ರೌಢಶಾಲೆಗಳಿಗೆ ಕಂಪ್ಯೂಟರ್&zwnj; ಲ್ಯಾಬ್&zwnj; ನೀಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಬೈಕ್&zwnj; ರ್&zwj;ಯಾಲಿಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್&zwnj; ಚಲಾಯಿಸಿದ್ದು ತಪ್ಪು. ತಪ್ಪನ್ನು ಒಪ್ಪಿಕೊಂಡಿದ್ದೇನೆ. ದಂಡವನ್ನೂ ಪಾವತಿಸಿದ್ದೇನೆ. ಶಾಸಕ ಸೇವಕನೇ ಹೊರತು ರಾಜನಲ್ಲ. ಪೊಲೀಸರು ನೋಟಿಸ್&zwnj; ನೀಡಿದ್ದಾರೆ. ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅವರನ್ನು ಗೌರವಿಸುತ್ತೇನೆ&rsquo; ಎಂದು ಶಾಸಕರು ತಮ್ಮ ಪೋಸ್ಟ್&zwnj;ನಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಸಂಚಾರ ನಿಯಮ ಉಲ್ಲಂಘಿಸಿದ ಜನಪ್ರತಿನಿಧಿಗೂ ನಿಯಮಾನುಸಾರ ದಂಡ ವಿಧಿಸಿರುವ ಪೊಲೀಸರ ಕ್ರಮ ಇದೀಗ ಗಮನ ಸೆಳೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಐತಿಹಾಸಿಕ ಆಂಜನೇಯ ದೇವಾಲಯದೊಳಗೆ ಮೂತ್ರ ವಿಸರ್ಜನೆ ಮಾಡಿದ ಮಹಮದ್ ಜಾಫರ್&lt;/strong&gt;&lt;strong&gt;!&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-district-ranebennur-congress-mla-prakash-koliwada-fined-for-riding-a-bike-without-wearing-a-helmet-mrq/articleshow-dmtivkm"/>
        </item>
        <item>
            <title><![CDATA[ಮುಗಿಯದ ಶಿರಸಿ ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರ; ಪ್ರತಿನಿತ್ಯ ತೊಂದರೆ]]></title>
            <link>https://kannada.asianetnews.com/karnataka-districts/the-public-is-facing-daily-problems-due-to-the-incomplete-work-on-the-sirsi-haveri-national-highway-mrq/articleshow-kpo0cvm</link>
            <guid isPermaLink="true">https://kannada.asianetnews.com/karnataka-districts/the-public-is-facing-daily-problems-due-to-the-incomplete-work-on-the-sirsi-haveri-national-highway-mrq/articleshow-kpo0cvm</guid>
            <pubDate>Tue, 04 Aug 2026 07:16:01 +0530</pubDate>
            <description><![CDATA[&lt;p&gt;ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಯಿಂದಾಗಿ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ಮಳೆಯಿಂದ ಸೋಮನಹಳ್ಳಿ ರಸ್ತೆ ಬಂದ್ ಆಗಿದ್ದು, ರಸ್ತೆ ಪಕ್ಕದ ನಿವಾಸಿಗಳು ಅಪಘಾತ, ಆರೋಗ್ಯ ಸಮಸ್ಯೆ ಹಾಗೂ ಪ್ರವಾಹದ ಭೀತಿಯಲ್ಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz56x0jjjeefpegjkw8pkryv,imgname-sirsi-haveri-1785807667794.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಂಕರ ಜಿ. ಜಾವೂರ&lt;/strong&gt;&lt;/p&gt;&lt;p&gt;&lt;strong&gt;ಶಿರಸಿ: &lt;/strong&gt;ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮುಗಿಯುವ ವರೆಗೂ ಜನರ ಗೋಳು ಮುಗಿಯುವಂತೆ ಕಾಣುತ್ತಿಲ್ಲ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಸೋಮನಹಳ್ಳಿ ರಸ್ತೆ ಮಾರ್ಗ ಬಂದ್&zwnj; ಆಗಿತ್ತು.&lt;/p&gt;&lt;p&gt;ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸಾರ್ವಜನಿಕರು ನಿತ್ಯ ಹಲವಾರು ರೀತಿಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ. ಹಲವರು ಕೈ-ಕಾಲು ಮುರಿದುಕೊಂಡಿದ್ದಾರೆ. ಈ ಮಾರ್ಗದಲ್ಲಿ ಪ್ರಯಾಣಿಸುವವರ ಸಂಕಷ್ಟ ಒಂದೆಡೆಯಾದರೆ ರಸ್ತೆ ಅಕ್ಕಪಕ್ಕದ ನಿವಾಸಿಗಳು ಬೇರೆ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಗೌಡಳ್ಳಿ ನಿವಾಸಿಗಳಿಂದ ಮನವಿ ಸಲ್ಲಿಕೆ&lt;/strong&gt;&lt;/h2&gt;&lt;p&gt;ರಸ್ತೆ ಸರಿಪಡಿಸುವಂತೆ ಹಾಗೂ ನೀರು ಸರಾಗವಾಗಿ ಹರಿದು ಹೋಗಲು ಸಿಡಿ ನಿರ್ಮಾಣ ಮಾಡಬೇಕೆಂದು ಗೌಡಳ್ಳಿ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಸ್ಥಳೀಯ ಸಂಸದರಿಗೆ ಈಗಾಗಲೇ ಮನವಿ ಮಾಡಿದ್ದಾರೆ. ಆದರೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಸೋಮನಹಳ್ಳಿ ಪ್ರವೇಶ ಮಾಡುವ ರಸ್ತೆಯಲ್ಲಿ ನೀರು ತುಂಬಿತ್ತು. ಸ್ಥಳೀಯರು ಬೇರೆ ಮಾರ್ಗದ ಮೂಲಕ ತಮ್ಮ ದಿನನಿತ್ಯದ ವ್ಯವಹಾರಗಳನ್ನು ನಡೆಸಬೇಕಾಯಿತು.&lt;/p&gt;&lt;p&gt;ಅಕಸ್ಮಾತ್ ಇನ್ನೂ ಹೆಚ್ಚಿನ ಮಳೆಯಾಗಿ ನೀರಿನ ಪ್ರಮಾಣ ಹೆಚ್ಚಾದರೆ ರಸ್ತೆ ಕೊರೆದು, ರಸ್ತೆ ಪಕ್ಕದಲ್ಲಿರುವ ಮನೆಗಳಿಗೆ ಹಾನಿ ಆಗುವ ಸಾಧ್ಯತೆ ಇದೆ. ಈಗಾಗಲೇ ನಿವಾಸಿಗಳು ಜೀವ ಭಯದಲ್ಲಿಯೇ ರಾತ್ರಿ ನಿದ್ರೆ ಇಲ್ಲದೆ ಕಳೆಯುವಂತಾಗಿದೆ. ಅತಿ ಶೀಘ್ರವಾಗಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;p&gt;ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಮನೆಗಳು ಜವಳು ಹಿಡಿಯುತ್ತಿವೆ. ಇದರಿಂದ ಮನೆಯಲ್ಲಿ ತಂಪು ಹೆಚ್ಚಾಗಿ, ಮೈ ಕೈ ನೋವು, ಶೀತ ಮತ್ತು ನೆಗಡಿಯಂತಹ ಕಾಯಿಲೆಗಳು ವೃದ್ಧರು, ದುರ್ಬಲರಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ನಿವಾಸಿಗಳು ದೂರಿದ್ದಾರೆ.&lt;/p&gt;&lt;p&gt;ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಜನರಿಗೆ ಸಂಕಷ್ಟ ಎದುರಾದಾಗ ಸಂಕಷ್ಟಕ್ಕೆ ಸ್ಪಂದಿಸಲು ಯಾರೂ ಬರುವುದಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.&lt;/p&gt;&lt;p&gt;ಮುಂದಿನ ದಿನಗಳಲ್ಲಿ ಶಿರಸಿ - ಹಾವೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಇಲ್ಲಿನ ಸ್ಥಳೀಯ ನಿವಾಸಿಗಳು ಸೇರಿಕೊಂಡು ಪ್ರತಿಭಟನೆ ಮಾಡುವುದಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಸಿಡಿ ನಿರ್ಮಾಣ&lt;/strong&gt;&lt;/h3&gt;&lt;p&gt;ಮಳೆಗಾಲ ಇರುವುದರಿಂದ ಆ ಸ್ಥಳದಲ್ಲಿ ಸಿಡಿ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಮಳೆಯ ಪ್ರಮಾಣ ಕಡಿಮೆಯಾದ ನಂತರ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿಡಿ ನಿರ್ಮಾಣ ಮಾಡಿ ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಿ ಕೊಡುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್ ಹೇಳಿದರು.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/the-public-is-facing-daily-problems-due-to-the-incomplete-work-on-the-sirsi-haveri-national-highway-mrq/articleshow-kpo0cvm"/>
        </item>
        <item>
            <title><![CDATA[Bidadi Township Row: ಹೆಚ್‌ಡಿಕೆ ಪ್ರಾರಂಭಿಸಿದ್ದರೆ ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ?]]></title>
            <link>https://kannada.asianetnews.com/karnataka-districts/bidadi-township-row-former-cm-basavaraj-bommai-slams-cm-dk-shivakumar-rav/articleshow-m9r88to</link>
            <guid isPermaLink="true">https://kannada.asianetnews.com/karnataka-districts/bidadi-township-row-former-cm-basavaraj-bommai-slams-cm-dk-shivakumar-rav/articleshow-m9r88to</guid>
            <pubDate>Fri, 17 Jul 2026 10:14:49 +0530</pubDate>
            <description><![CDATA[&lt;p&gt;ರೈತರ ವಿರೋಧದ ನಡುವೆಯೂ ಬಿಡದಿ ಟೌನ್&zwnj;ಶಿಪ್&zwnj; ಯೋಜನೆ ಮುಂದುವರಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಆರಂಭಿಸಿದ ಯೋಜನೆಯ ಮೇಲೆ ಡಿಸಿಎಂ ಡಿಕೆಶಿಗೆ ಏಕಿಷ್ಟು ಪ್ರೀತಿ, ಇದರ ಹಿಂದೆ ಗುಪ್ತ ಕನಸಿದೆಯೇ? ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq5rabjex6vra6c7bcfzryw,imgname-----------------------2026-07-17t100214.150-1784262961522.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ(ಜು.17): ರೈತರ ವಿರೋಧದ ನಡುವೆಯೂ ಬಿಡದಿ ಟೌನ್&zwnj;ಶಿಪ್&zwnj; ಯೋಜನೆ(Bidadi Township project) ಮುಂದುವರಿಸಲು ರಾಜ್ಯ ಸರ್ಕಾರದ ಆಂತರಿಕ ಕಾರ್ಯಸೂಚಿ ಕಾರಣ. ರೈತರ ಫಲವತ್ತಾದ ಜಮೀನಿನ ಬದಲು ಸರ್ಕಾರದ ಜಮೀನಿನಲ್ಲೇ ಟೌನ್&zwnj;ಶಿಪ್&zwnj; ನಿರ್ಮಿಸಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.&lt;/p&gt;&lt;h2&gt;ಹೆಚ್&zwnj;ಡಿಕೆ ಪ್ರಾರಂಭಿಸಿದ್ದರೆ ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ?&lt;/h2&gt;&lt;p&gt;ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಡದಿ ಟೌನ್&zwnj;ಶಿಪ್ ಯೋಜನೆಯನ್ನು ಎಚ್.ಡಿ.ಕುಮಾರಸ್ವಾಮಿ ಪ್ರಾರಂಭಿಸಿದ್ದು, ಆ ನಂತರ ಯಡಿಯೂರಪ್ಪ ಅವರ ಅವಧಿಯಲ್ಲಿ ಈ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂ ಸಿಎಂ ಡಿ.ಕೆ.ಶಿವಕುಮಾರ್&zwnj;(DK Shivakumar) ಹೇಳಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಅವರು ಇದನ್ನು ಪ್ರಾರಂಭಿಸಿದ್ದರೆ, ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ? ಎಂದು ಪ್ರಶ್ನಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಕಲಬುರಗಿ: ಮಳೆಗಾಗಿ ಪ್ರಾರ್ಥಿಸಿ ಮೂರು ದಿನದಲ್ಲಿ ಬರೋಬ್ಬರಿ 45 ಕಿ.ಮೀ ಉರುಳುಸೇವೆ ಮಾಡಿದ ಮಹಿಳೆ!&lt;/p&gt;&lt;h3&gt;ಎಲ್ಲದಕ್ಕೂ ಕುಮಾರಸ್ವಾಮಿ ಟೀಕಿಸುವ ಡಿಕೆಶಿ ಇದರಲ್ಲೇಕೆ ಆಸಕ್ತಿ?&lt;/h3&gt;&lt;p&gt;ಎಲ್ಲ ವಿಷಯಗಳಲ್ಲೂ ಕುಮಾರಸ್ವಾಮಿ ಅವರನ್ನು ಟೀಕಿಸುವ ಶಿವಕುಮಾರ್&zwnj;, ಈ ಟೌನ್&zwnj;ಶಿಪ್ ಯೋಜನೆಯಲ್ಲಿ ಮಾತ್ರ ಅವರನ್ನು ಏಕೆ ಅನುಸರಿಸುತ್ತಿದ್ದಾರೆ. ಟೌನ್&zwnj;ಶಿಪ್ ಯೋಜನೆಯಲ್ಲಿ ಡಿಕೆಶಿಗೆ ಹಿತಾಸಕ್ತಿ ಏನಿದೆ? ಈ ಕನಸಿನ ಹಿಂದೆ ಸಿಎಂಗೆ ಮತ್ತೊಂದು ಗುಪ್ತ ಕನಸಿದೆಯೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Yettinahole water: 10 ವರ್ಷಗಳ ಬಳಿಕ ಕೊನೆಗೂ ತುಮಕೂರಿಗೆ ಬಂತು ಎತ್ತಿನಹೊಳೆ ನೀರು!&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bidadi-township-row-former-cm-basavaraj-bommai-slams-cm-dk-shivakumar-rav/articleshow-m9r88to"/>
        </item>
        <item>
            <title><![CDATA[ಎಲ್ಲವೂ ರಾಯರ ಪವಾಡ: ಸಾವಿನ ದವಡೆಯಿಂದ ಪಾರಾದ MBBS ವಿದ್ಯಾರ್ಥಿನಿ! ವೀಲ್ ಚೇರ್‍‌ನಿಂದ ಎದ್ದು ಓಡಾಡಿದ್ದು ಹೇಗೆ?]]></title>
            <link>https://kannada.asianetnews.com/haveri/the-miracle-of-guru-raghavendra-wheelchair-bound-mbbs-student-walks-again-after-battling-rare-disease-gkn/articleshow-mybehp6</link>
            <guid isPermaLink="true">https://kannada.asianetnews.com/haveri/the-miracle-of-guru-raghavendra-wheelchair-bound-mbbs-student-walks-again-after-battling-rare-disease-gkn/articleshow-mybehp6</guid>
            <pubDate>Sat, 15 Aug 2026 21:11:11 +0530</pubDate>
            <description><![CDATA[&lt;p&gt;ಅಪರೂಪದ ಕಾಯಿಲೆಯಿಂದ ವೀಲ್ ಚೇರ್ ಗೆ ಸೀಮಿತವಾಗಿದ್ದ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿನಿ ನಿವೇದಿತಾ, ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಪವಾಡಸದೃಶವಾಗಿ ಗುಣಮುಖರಾಗಿದ್ದಾರೆ. ವೈದ್ಯಕೀಯ ವಿಜ್ಞಾನವೇ ಕೈಚೆಲ್ಲಿದ್ದ ಈ ಕಾಯಿಲೆಯು ರಾಯರ ಮಂತ್ರಾಕ್ಷತೆಯ ಮಹಿಮೆಯಿಂದ ಕೇವಲ ಮೂರೇ ವಾರಗಳಲ್ಲಿ ವಾಸಿಯಾಗಿದ್ದು, ಯುವತಿ ಈಗ ಮೊದಲಿನಂತೆ ಓಡಾಡುತ್ತಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0319sh627vgtq1tw6cfz8ha,imgname-haveri-nivedita-mbbs-student-1786808428070.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ನಂಬಿದವರಿಗೆ ಇಷ್ಟಾರ್ಥ ಸಿದ್ಧಿಸುವ ಕಲ್ಪವೃಕ್ಷ, ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳು. ಈ ಮಾತಿಗೆ ಸಾಕ್ಷಿಯೆಂಬಂತೆ ಹಾವೇರಿ ಜಿಲ್ಲೆಯಲ್ಲಿ ಒಂದು ವಿಸ್ಮಯಕಾರಿ ಘಟನೆ ನಡೆದಿದೆ. ಆಧುನಿಕ ವೈದ್ಯಕೀಯ ವಿಜ್ಞಾನವೇ ಕೈಚೆಲ್ಲಿದ್ದ ಪ್ರಕರಣವೊಂದರಲ್ಲಿ ರಾಯರ ಮಂತ್ರಾಕ್ಷತೆ ಮತ್ತು ಅನುಗ್ರಹದಿಂದ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿಯೊಬ್ಬಳು ಅಕ್ಷರಶಃ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾಳೆ.&lt;/p&gt;&lt;h2&gt;&lt;strong&gt;ಏನಾಗಿತ್ತು?&lt;/strong&gt;&lt;/h2&gt;&lt;p&gt;ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿ ನಿವೇದಿತಾ ಶಿವಪ್ಪ ನೆಗಳೂರು (22). ಗದಗದ ಜಿಮ್ಸ್ (GIMS) ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಫೈನಲ್ ಇಯರ್ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. ಸುಮಾರು ಏಳು ತಿಂಗಳ ಹಿಂದೆ ನಿವೇದಿತಾಗೆ ಪದೇ ಪದೇ ಮೂರ್ಚೆ ಹೋಗುವ ಸಮಸ್ಯೆ ಕಾಣಿಸಿಕೊಂಡಿತ್ತು. ನೋಡನೋಡುತ್ತಿದ್ದಂತೆಯೇ ಆಕೆಯ ಕೈಕಾಲುಗಳ ಸ್ವಾಧೀನ ತಪ್ಪಿಹೋಗಿತ್ತು. ವೀಲ್ ಚೇರ್ ಇಲ್ಲದೆ ಒಂದು ಹೆಜ್ಜೆ ಇಡಲಾರದ ಸ್ಥಿತಿಗೆ ಆಕೆ ತಲುಪಿದ್ದಳು.&lt;/p&gt;&lt;h2&gt;&lt;strong&gt;ವೈದ್ಯಲೋಕಕ್ಕೇ ಸವಾಲಾಗಿದ್ದ ಕಾಯಿಲೆ&lt;/strong&gt;&lt;/h2&gt;&lt;p&gt;ನಿವೇದಿತಾ ಅನುಭವಿಸುತ್ತಿದ್ದದ್ದು ಸಾಮಾನ್ಯ ಕಾಯಿಲೆಯಲ್ಲ. ಅದು 'ಆಟೋ ಇಮ್ಯೂನ್ ಡಿಸೀಸ್' (Autoimmune Disease). ದೇಹದ ರೋಗನಿರೋಧಕ ಶಕ್ತಿಯೇ ತನ್ನದೇ ಆದ ಮೆದುಳಿನ ಕೋಶಗಳ ಮೇಲೆ ದಾಳಿ ಮಾಡಿ ಹಾನಿ ಉಂಟುಮಾಡುವ ಗಂಭೀರ ಸ್ಥಿತಿ ಇದು. ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಗಳು, ಮಣಿಪಾಲ್ ಆಸ್ಪತ್ರೆ ಸೇರಿದಂತೆ ಹಲವೆಡೆ ಚಿಕಿತ್ಸೆ ಕೊಡಿಸಲಾಯಿತು. ಸುಮಾರು 5-6 ಲಕ್ಷ ರೂಪಾಯಿ ಖರ್ಚು ಮಾಡಿದರೂ ಚೇತರಿಕೆ ಕಾಣಲಿಲ್ಲ. ಒಂದು ಹಂತದಲ್ಲಿ ಆಕೆ ಐಸಿಯುಗೆ ದಾಖಲಾದಾಗ ಬದುಕುಳಿಯುವ ಭರವಸೆಯೇ ಕ್ಷೀಣಿಸಿತ್ತು. ವೈದ್ಯರೇ ಕಂಗಾಲಾಗಿದ್ದರು.&lt;/p&gt;&lt;h2&gt;&lt;strong&gt;ರಾಯರ ಮಠದಲ್ಲಿ ಪವಾಡ!&lt;/strong&gt;&lt;/h2&gt;&lt;p&gt;ವಿಧಿಯಾಟದ ನಡುವೆ ಕುಟುಂಬಸ್ಥರು ರಾಯರ ಮೇಲೆ ಭಾರ ಹಾಕಿ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ರಾಘವೇಂದ್ರ ಮಠಕ್ಕೆ ಆಕೆಯನ್ನು ಕರೆತಂದರು. ಅದೇ ಸಮಯದಲ್ಲಿ 100ನೇ ಸುಶೀಲೇಂದ್ರ ತೀರ್ಥರ ಆರಾಧನಾ ಮಹೋತ್ಸವಕ್ಕಾಗಿ ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಗಳು ಅಲ್ಲಿಗೆ ಆಗಮಿಸಿದ್ದರು. ವೀಲ್ ಚೇರ್&zwnj;ನಲ್ಲಿ ಕುಳಿತಿದ್ದ ನಿವೇದಿತಾಳ ಸ್ಥಿತಿ ಕಂಡು ಮರುಗಿದ ಸ್ವಾಮೀಜಿಗಳು, ರಾಯರ ಮಂತ್ರಾಕ್ಷತೆ ಮತ್ತು ಭಾವಚಿತ್ರವನ್ನು ನೀಡಿ ಆಶೀರ್ವದಿಸಿದರು. 5 ವಾರಗಳ ಕಾಲ ರಾಯರ ಮಠಕ್ಕೆ ನಡೆದುಕೊಂಡು ಪ್ರದಕ್ಷಿಣೆ ಹಾಕಿ ಎಂದು ಸಲಹೆ ನೀಡಿದರು.&lt;/p&gt;&lt;h2&gt;&lt;strong&gt;ಮೂರೇ ವಾರದಲ್ಲಿ ಕಂಡ ಅಚ್ಚರಿಯ ಬದಲಾವಣೆ!&lt;/strong&gt;&lt;/h2&gt;&lt;p&gt;ಸ್ವಾಮೀಜಿಗಳ ಮಾತಿನಂತೆ ನಿವೇದಿತಾ ಭಕ್ತಿಯಿಂದ ರಾಯರ ಸೇವೆ ಆರಂಭಿಸಿದಳು. ಆಶ್ಚರ್ಯವೆಂದರೆ ಐದು ವಾರ ಮುಗಿಯುವ ಮೊದಲೇ, ಅಂದರೆ ಕೇವಲ 3 ವಾರಗಳಲ್ಲಿ ನಿವೇದಿತಾಳ ಆರೋಗ್ಯದಲ್ಲಿ ಅದ್ಭುತ ಚೇತರಿಕೆ ಕಂಡುಬಂದಿತು. ವೀಲ್ ಚೇರ್&zwnj;ನಲ್ಲಿ ಅಸಹಾಯಕಳಾಗಿ ಕುಳಿತಿದ್ದ ಆಕೆ, ಇಂದು ಯಾರ ಸಹಾಯವೂ ಇಲ್ಲದೆ ತನ್ನಷ್ಟಕ್ಕೆ ತಾನೇ ಎದ್ದು ಓಡಾಡುತ್ತಿದ್ದಾಳೆ.&lt;/p&gt;&lt;p&gt;ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಸಿಗದ ಗುಣಮುಖ, ರಾಯರ ಮಂತ್ರಾಕ್ಷತೆಯ ಮಹಿಮೆಯಿಂದ ಸಿಕ್ಕಿದೆ ಎಂದು ನಿವೇದಿತಾ ಕುಟುಂಬಸ್ಥರು ಭಾವುಕರಾಗಿದ್ದಾರೆ. ವಿಷಯ ತಿಳಿದ ಸುಭುದೇಂದ್ರ ತೀರ್ಥ ಸ್ವಾಮೀಜಿಗಳು ಮಂತ್ರಾಲಯಕ್ಕೆ ಬನ್ನಿ, ರಾಯರು ನಿಮ್ಮನ್ನು ಚೆನ್ನಾಗಿ ಇಡುತ್ತಾರೆ ಎಂದು ಹರಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದರೂ, ಮನುಷ್ಯನ ತರ್ಕಕ್ಕೆ ನಿಲುಕದ ಶಕ್ತಿಯೊಂದು ಈ ಜಗತ್ತನ್ನು ನಡೆಸುತ್ತಿದೆ ಎಂಬುದಕ್ಕೆ ಹಾವೇರಿಯ ಈ ಘಟನೆಯೇ ಸಾಕ್ಷಿ. ನಿವೇದಿತಾ ಇಂದು ಸುಧಾರಿಸಿಕೊಂಡು ಮತ್ತೆ ತನ್ನ ವೈದ್ಯಕೀಯ ಶಿಕ್ಷಣದತ್ತ ಮುಖ ಮಾಡಿರುವುದು ರಾಯರ ಭಕ್ತರಲ್ಲಿ ಸಂತಸ ಮೂಡಿಸಿದೆ.&lt;/p&gt;]]></content:encoded>
            <category>haveri</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/haveri/the-miracle-of-guru-raghavendra-wheelchair-bound-mbbs-student-walks-again-after-battling-rare-disease-gkn/articleshow-mybehp6"/>
        </item>
        <item>
            <title><![CDATA[ಮಳೆಯಿಲ್ಲದಿದ್ದರೂ ತುಂಬಿ ಹರಿಯುತ್ತಿರುವ ನದಿಗಳು; ಕೋಡಿ ಬಿದ್ದ ಮದಗ–ಮಾಸೂರು ಕೆರೆ]]></title>
            <link>https://kannada.asianetnews.com/karnataka-districts/monsoon-rain-varada-tungabhadra-dharma-and-kumadwati-rivers-are-in-full-flow-in-haveri-district-mrq/articleshow-oprxlbd</link>
            <guid isPermaLink="true">https://kannada.asianetnews.com/karnataka-districts/monsoon-rain-varada-tungabhadra-dharma-and-kumadwati-rivers-are-in-full-flow-in-haveri-district-mrq/articleshow-oprxlbd</guid>
            <pubDate>Sat, 08 Aug 2026 09:18:19 +0530</pubDate>
            <description><![CDATA[ಹಾವೇರಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಮಳೆ ಕೊರತೆ ಇದ್ದರೂ, ಮೇಲ್ಭಾಗದ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ತುಂಬಿ ಹರಿಯುತ್ತಿವೆ. ಈ ಬೆಳವಣಿಗೆಯು ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದು, ರಟ್ಟಿಹಳ್ಳಿ ತಾಲೂಕಿನ ಮದಗ-ಮಾಸೂರು ಕೆರೆಯೂ ಕೋಡಿ ಬಿದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfqjtwnd8zy8g7yrf309bh4,imgname-tungabhadra-river-1786160704405.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಗಣನೀಯ ಮಳೆಯಾಗದಿದ್ದರೂ ಜಿಲ್ಲೆಯ ಪ್ರಮುಖ ನದಿಗಳಾದ ವರದಾ, ತುಂಗಭದ್ರಾ, ಧರ್ಮಾ ಹಾಗೂ ಕುಮದ್ವತಿ ನದಿಗಳು ತುಂಬಿ ಹರಿಯುತ್ತಿರುವ ದೃಶ್ಯ ಜನರಲ್ಲಿ ಸಂತಸ ಮೂಡಿಸಿದೆ.&lt;/p&gt;&lt;p&gt;ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿದ್ದರೂ, ನದಿಗಳ ಮೇಲ್ಭಾಗದ ಪ್ರದೇಶಗಳಲ್ಲಿ ಸುರಿದ ಮಳೆಯ ಪರಿಣಾಮವಾಗಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶ ಹಾಗೂ ಶಿವಮೊಗ್ಗ, ದಾವಣಗೆರೆ ಭಾಗಗಳಲ್ಲಿ ಸುರಿದ ನಿರಂತರ ಮಳೆ ನದಿಗಳಿಗೆ ಜೀವ ತುಂಬಿದೆ. ಅದರ ಪರಿಣಾಮವಾಗಿ ಜಿಲ್ಲೆಯ ಮೂಲಕ ಹರಿಯುವ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ನದಿ ತೀರದ ಗ್ರಾಮಗಳಲ್ಲಿ ಹಲವು ತಿಂಗಳ ಬಳಿಕ ಮತ್ತೆ ಜಲಧಾರೆ ಕಂಡು ರೈತರಲ್ಲಿ ಹೊಸ ಭರವಸೆ ಮೂಡಿದೆ.&lt;/p&gt;&lt;h2&gt;&lt;strong&gt;ಮುಳುಗಡೆಯಾದ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ&lt;/strong&gt;&lt;/h2&gt;&lt;p&gt;ಮುಂಗಾರು ಹಂಗಾಮಿನಲ್ಲಿ ಮಳೆಯಿಲ್ಲದೇ ಬೆಳೆ ಒಣಗುವ ಸ್ಥಿತಿಯಿಂದ ಕಂಗೆಟ್ಟಿದ್ದ ರೈತರಿಗೆ ಈ ಬೆಳವಣಿಗೆ ಆಶಾದಾಯಕವಾಗಿದೆ. ನದಿಗಳ ಹರಿವು ಹೆಚ್ಚಿದರೆ ಅಂತರ್ಜಲ ಮಟ್ಟ ಏರಿಕೆಯಾಗುವುದರ ಜೊತೆಗೆ ಕೆರೆ-ಕಟ್ಟೆಗಳಿಗೂ ನೀರು ಸೇರುವ ಸಾಧ್ಯತೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಜಲಾವೃತಗೊಂಡಿದ್ದ ಕಳಸೂರು ಸೇತುವೆ ಗುರುವಾರ ಸಂಚಾರಕ್ಕೆ ತೆರವಾಗಿದೆ. ತುಂಗಭದ್ರಾ ನದಿಯ ನೀರಿನ ಮಟ್ಟ ಏರಿದ್ದರಿಂದ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಮುಳುಗಿದೆ. ಇದು ಜಿಲ್ಲೆಯಲ್ಲಿ ಬರಿದಾಗಿರುವ ಕೆರೆಗಳನ್ನು ಭರ್ತಿ ಮಾಡಲು ಸಕಾಲವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕಿದೆ.&lt;/p&gt;&lt;p&gt;ವರದಾ, ತುಂಗಭದ್ರಾ, ಧರ್ಮಾ ಹಾಗೂ ಕುಮದ್ವತಿ ನದಿಗಳ ಉಕ್ಕಿ ಹರಿಯುವ ದೃಶ್ಯವನ್ನು ವೀಕ್ಷಿಸಲು ಜನರು ಸೇತುವೆಗಳು ಮತ್ತು ನದಿ ತೀರಗಳಿಗೆ ಆಗಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿವೆ.&lt;/p&gt;&lt;p&gt;ಆದರೆ ನದಿಗಳಲ್ಲಿ ಹರಿವು ಹೆಚ್ಚಿರುವ ಕಾರಣ ಜನರು ಅನಗತ್ಯವಾಗಿ ನೀರಿಗೆ ಇಳಿಯದಂತೆ ಹಾಗೂ ಸೇತುವೆಗಳ ಮೇಲೆ ಅಪಾಯಕಾರಿಯಾಗಿ ನಿಂತು ಛಾಯಾಚಿತ್ರ ಅಥವಾ ಸೆಲ್ಫಿ ತೆಗೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಪೋಷಕರು ಮಕ್ಕಳ ಮೇಲೆ ವಿಶೇಷ ನಿಗಾ ವಹಿಸುವ ಅಗತ್ಯವೂ ಇದೆ.&lt;/p&gt;&lt;h3&gt;&lt;strong&gt;ಕೋಡಿ ಬಿದ್ದ ಮದಗ&ndash;ಮಾಸೂರು ಕೆರೆ&lt;/strong&gt;&lt;/h3&gt;&lt;p&gt;ಇತ್ತೀಚಿನ ಮಳೆಯ ಪರಿಣಾಮ ರಟ್ಟಿಹಳ್ಳಿ ತಾಲೂಕಿನ ಪ್ರಮುಖ ಜಲಮೂಲವಾಗಿರುವ ಮದಗ&ndash;ಮಾಸೂರು ಕೆರೆ ತುಂಬಿ ಕೋಡಿ ಬಿದ್ದಿದೆ. ಕೆರೆಯ ಕೋಡಿ ಮೂಲಕ ನೀರು ಭೋರ್ಗರೆಯುತ್ತ ಹರಿಯುತ್ತಿರುವ ದೃಶ್ಯ ಮನಮೋಹಕವಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.&lt;/p&gt;&lt;p&gt;ಕಳೆದ ಕೆಲ ದಿನಗಳಿಂದ ಸುರಿದ ಮಳೆ ಹಾಗೂ ಕೆರೆ ವ್ಯಾಪ್ತಿಯಲ್ಲಿ ಹರಿದು ಬಂದ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೆರೆ ಸಂಪೂರ್ಣ ಭರ್ತಿಯಾದ ಬಳಿಕ ಹೆಚ್ಚುವರಿ ನೀರು ಕೋಡಿ ಮೂಲಕ ಹೊರಹರಿಯುತ್ತಿದೆ. ನೀರು ರಭಸವಾಗಿ ಹರಿಯುವ ಜಲವೈಭವದ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/monsoon-rain-varada-tungabhadra-dharma-and-kumadwati-rivers-are-in-full-flow-in-haveri-district-mrq/articleshow-oprxlbd"/>
        </item>
        <item>
            <title><![CDATA[Revenue Department: ಕಂದಾಯ ಇಲಾಖೆ ನಿರ್ಲಕ್ಷ್ಯ; ಹಾವೇರಿ ಸಮಾವೇಶ ಕಳೆದು 6 ತಿಂಗಳಾದ್ರೂ ಶೇ. 50 ಬಡವರ ಕೈಗೆ ಸಿಕ್ಕಿಲ್ಲ ಹಕ್ಕು ಪತ್ರ?]]></title>
            <link>https://kannada.asianetnews.com/karnataka-districts/karnataka-e-swathu-title-deed-revenue-villages-delay-poor-people-property-rights-bmk/articleshow-sfam3yl</link>
            <guid isPermaLink="true">https://kannada.asianetnews.com/karnataka-districts/karnataka-e-swathu-title-deed-revenue-villages-delay-poor-people-property-rights-bmk/articleshow-sfam3yl</guid>
            <pubDate>Fri, 28 Aug 2026 20:06:44 +0530</pubDate>
            <description><![CDATA[ಹಾವೇರಿಯಲ್ಲಿ ನಡೆದ ಬೃಹತ್ ಸಮಾವೇಶದ ಆರು ತಿಂಗಳ ನಂತರವೂ, ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ 9 ಜಿಲ್ಲೆಗಳ ಶೇ. 50ರಷ್ಟು ಬಡವರಿಗೆ 'ಇ-ಸ್ವತ್ತು' ಹಕ್ಕು ಪತ್ರಗಳು ತಲುಪಿಲ್ಲ. ಈ ವಿಳಂಬದಿಂದಾಗಿ ಬಡವರು ಬ್ಯಾಂಕ್ ಸಾಲ ಪಡೆಯಲು ಮತ್ತು ತಮ್ಮ ಮನೆಯ ಕನಸನ್ನು ನನಸಾಗಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m14csv070brgzrwcxambea92,imgname-e-swattu--1787927784455.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ಸರ್ಕಾರವು ದಾಖಲೆ ರಹಿತ ವಾಸಸ್ಥಳಗಳಾಗಿದ್ದ 6,500 ಹಳ್ಳಿಗಳ ಪೈಕಿ 4,500 ಗ್ರಾಮಗಳನ್ನು &lsquo;ಕಂದಾಯ ಗ್ರಾಮ&rsquo;ಗಳನ್ನಾಗಿ ಪರಿವರ್ತಿಸಿ, ತಲೆತಲಾಂತರದಿಂದ ಸ್ವಂತ ಮನೆಯಿದ್ದರೂ ಕಾಗದಪತ್ರಗಳಿಲ್ಲದೆ ಬದುಕುತ್ತಿದ್ದ ಬಡಜನರಿಗೆ ಭೂಮಿಯ ಹಕ್ಕನ್ನು ಒದಗಿಸಿರುವುದು ನಿಜಕ್ಕೂ ಅಭಿನಂದನಾರ್ಹ ಮತ್ತು ಕ್ರಾಂತಿಕಾರಿ ಹೆಜ್ಜೆ. ಈ ಮಹತ್ಕಾರ್ಯದ ಭಾಗವಾಗಿ ಕಳೆದ ಫೆಬ್ರವರಿಯಲ್ಲಿ ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಿ, 9 ಜಿಲ್ಲೆಗಳ ಜನರಿಗೆ ಸಾಂಕೇತಿಕವಾಗಿ ಹಕ್ಕು ಪತ್ರಗಳನ್ನು ವಿತರಿಸಲಾಗಿತ್ತು. ಆದರೆ, ವೇದಿಕೆಯ ಭಾಷಣ, ಚಪ್ಪಾಳೆ ಮತ್ತು ಫೋಟೋ ಪೋಸ್&zwnj;ಗಳು ಮುಗಿದ ನಂತರ ಕಂದಾಯ ಇಲಾಖೆಯ ಅಸಲಿ ನಾಟಕ ಮತ್ತು ಆಡಳಿತ ವೈಫಲ್ಯ ಬಯಲಾಗಿದೆ.&lt;/p&gt;&lt;h2&gt;&lt;strong&gt;ಡಿಜಿಟಲ್ ಕಾಗದದ ಶಕ್ತಿ ಮತ್ತು ವಾಸ್ತವ ಸ್ಥಿತಿ!&lt;/strong&gt;&lt;/h2&gt;&lt;p&gt;ಕಂದಾಯ ಇಲಾಖೆ ರೂಪಿಸಿರುವ ಈ ಇ-ಸ್ವತ್ತು ಆಧಾರಿತ ಡಿಜಿಟಲ್ ಹಕ್ಕು ಪತ್ರವು ಬರಿ ಬಿಳಿ ಕಾಗದವಲ್ಲ. ಇದು ಆನ್&zwnj;ಲೈನ್&zwnj;ನಲ್ಲಿ ಲಭ್ಯವಿರುವ ಫಾರಂ 9 ಮತ್ತು 11 ರನ್ನೊಳಗೊಂಡ ಅತ್ಯಂತ ಶಕ್ತಿಶಾಲಿ ಹಾಗೂ ಅಧಿಕೃತ ದಾಖಲೆಯಾಗಿದೆ. ಈ ದಾಖಲೆ ಕೈಯಲ್ಲಿದ್ದರೆ ಒಬ್ಬ ಸಾಮಾನ್ಯ ಬಡವ ಬ್ಯಾಂಕಿನಿಂದ ಗೌರವಯುತವಾಗಿ ಸಾಲ ಪಡೆದು ಮನೆ ಕಟ್ಟಿಕೊಳ್ಳಬಹುದು, ಮಕ್ಕಳ ಹೆಸರಿಗೆ ಆಸ್ತಿ ಹಸ್ತಾಂತರಿಸಬಹುದು ಮತ್ತು ತಲೆತಲಾಂತರದ ಆಸ್ತಿ ವಿವಾದಗಳಿಗೆ ಮುಕ್ತಿ ಕಾಣಬಹುದು. ಅಂದರೆ, ಯೋಜನೆ ರೂಪಿಸಿ ಕಾಗದ ಸಿದ್ಧಪಡಿಸಿದ ಸರ್ಕಾರದ ಕೆಲಸ ನೂರಕ್ಕೆ ನೂರರಷ್ಟು ಮುಗಿದಿದೆ. ಆದರೆ, ಅದನ್ನು ಅರ್ಹರ ಕೈಗೆ ತಲುಪಿಸಬೇಕಾದ ಇಲಾಖೆಯ ಅಧಿಕಾರಿಗಳು ಮತ್ತು ಸಿಸ್ಟಮ್ ಮಾತ್ರ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;6 ತಿಂಗಳು ಕಳೆದರೂ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ ಹಕ್ಕು ಪತ್ರಗಳು!&lt;/strong&gt;&lt;/h3&gt;&lt;p&gt;ಕಳೆದ 6 ತಿಂಗಳಿಂದ ಆನ್&zwnj;ಲೈನ್&zwnj;ನಲ್ಲಿ ಇ-ಸ್ವತ್ತು ಜನರೇಟ್ ಆಗಿ, ಕಂಪ್ಯೂಟರ್&zwnj;ನಿಂದ ಮುದ್ರಿತಗೊಂಡ ಹಕ್ಕು ಪತ್ರಗಳು ಕಂದಾಯ ಕಚೇರಿಗಳ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ. ಅರ್ಧ ವರ್ಷ ಕಳೆದರೂ ಆ 9 ಜಿಲ್ಲೆಗಳಲ್ಲಿ ಅಂದ್ರೆ, ಹಾವೇರಿ, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ಚಿತ್ರದುರ್ಗ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಶೇಕಡಾ 50 ರಷ್ಟು ಬಡಜನರಿಗೆ ಇಂದಿಗೂ ಹಕ್ಕು ಪತ್ರಗಳು ತಲುಪಿಲ್ಲ. ಧಾರವಾಡ ತಾಲೂಕಿನ ಉದಾಹರಣೆಯನ್ನೇ ತೆಗೆದುಕೊಂಡರೆ, ಆಶ್ರಯ ಪೋರ್ಟಲ್&zwnj;ನಲ್ಲಿ ಬರೀ ಎರಡೇ ಗ್ರಾಮಗಳ ಹೆಸರು ಕಾಣಿಸುತ್ತಿದೆ. ಸರ್ವರ್&zwnj;ನ ಗೊಂದಲ ಹಾಗೂ ಮಾಹಿತಿ ಕೊರತೆಯಿಂದಾಗಿ ಇಡೀ ತಾಲೂಕಿನ ನೂರಾರು ಹಳ್ಳಿಗಳ ಬಡಜನರು ಪ್ರತಿದಿನ ಕಂದಾಯ ಕಚೇರಿಗಳ ಮುಂದೆ ಸಾಲಿನಲ್ಲಿ ನಿಲ್ಲುವಂತಾಗಿದೆ.&lt;/p&gt;&lt;h3&gt;&lt;strong&gt;ಇರುವ ಅನುಮಾನವೇನು?&lt;/strong&gt;&lt;/h3&gt;&lt;p&gt;ಜಿಲ್ಲಾಧಿಕಾರಿಗಳು (DC) ಅಥವಾ ಉಪವಿಭಾಗಾಧಿಕಾರಿಗಳು (AC) ಹೋಬಳಿ ಮಟ್ಟದಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿ ವಿತರಿಸೋಣ ಎಂಬ ಸಬೂಬು ಹೇಳಿ ಇವುಗಳನ್ನು ತಡೆಹಿಡಿದಿದ್ದಾರೆಯೇ ಎಂಬ ಬಲವಾದ ಅನುಮಾನ ಮೂಡುತ್ತಿದೆ. ಕಾನೂನುಬದ್ಧವಾಗಿ 15 ದಿನದೊಳಗೆ ಸಾರ್ವಜನಿಕ ಸೇವೆ ಒದಗಿಸಬೇಕಾದ &lsquo;ಸಕಾಲ&rsquo; ಕಾಯ್ದೆಯ ನಿಯಮಗಳಿರುವಾಗ, ಬಡವನ ಹಕ್ಕು ಪತ್ರವನ್ನು ಕಾಯ್ದಿರಿಸಲು ಅಧಿಕಾರಿಗಳಿಗಿರುವ ಅಡೆತಡೆಯಾದರೂ ಏನು? ಜನಪ್ರತಿನಿಧಿಗಳ ಕಾಲ್-ಶೀಟ್ ಹಾಗೂ ಪ್ರೋಟೋಕಾಲ್ ನಾಟಕಕ್ಕಾಗಿ ಬಡಜನರು 6 ತಿಂಗಳಿಂದ ಅಲೆಯಬೇಕೇ? ಬ್ಯಾಂಕ್ ಸಾಲ ಸಿಗದೆ ಬಡವನ ಸ್ವಂತ ಮನೆಯ ಕನಸು ಕರಗಿಹೋಗುತ್ತಿದ್ದು, ಅಧಿಕಾರಿಗಳ &lsquo;ಶೋ ಆಫ್&rsquo; ಸಂಸ್ಕೃತಿಗೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಯೋಜನೆಗಳನ್ನು ಪ್ರಕಟಿಸುವುದು ಸರ್ಕಾರದ ಕೆಲಸವಾದರೆ, ಅದನ್ನು ಕಾಲಮಿತಿಯಲ್ಲಿ ಬಡವನ ಕೈಗೆ ತಲುಪಿಸುವುದು ಆಡಳಿತ ಯಂತ್ರದ ಹೊಣೆ. ಆದ್ದರಿಂದ ಇನ್ನಾದರೂ ಹಕ್ಕು ಪತ್ರ ಸಿಗುತ್ತೋ ಏನೋ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>haveri</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/karnataka-e-swathu-title-deed-revenue-villages-delay-poor-people-property-rights-bmk/articleshow-sfam3yl"/>
        </item>
        <item>
            <title><![CDATA[ಮಕ್ಕಳಿಂದ ಛೀಮಾರಿ: ಕೆಸರು ಗದ್ದೆಯಂತಹ ರಸ್ತೆಯಲ್ಲಿ ಭತ್ತ ನಾಟಿ ಮಾಡಿ 80ನೇ ಸ್ವಾತಂತ್ರ್ಯ ದಿನಾಚರಣೆ ಮಾಡಿದ ಮಕ್ಕಳು!]]></title>
            <link>https://kannada.asianetnews.com/karnataka-districts/haveri-80th-independence-day-school-children-protest-muddy-road-planting-paddy/articleshow-tfl6gho</link>
            <guid isPermaLink="true">https://kannada.asianetnews.com/karnataka-districts/haveri-80th-independence-day-school-children-protest-muddy-road-planting-paddy/articleshow-tfl6gho</guid>
            <pubDate>Sat, 15 Aug 2026 11:04:25 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯ ಹಳ್ಳಿಯೊಂದರಲ್ಲಿ, 80ನೇ ಸ್ವಾತಂತ್ರ್ಯ ದಿನದಂದೇ ಶಾಲಾ ಮಕ್ಕಳು ಮೂಲಸೌಕರ್ಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಶಾಲೆಗೆ ಹೋಗುವ ರಸ್ತೆ ಕೆಸರು ಗದ್ದೆಯಂತಾಗಿದ್ದರಿಂದ ಆಕ್ರೋಶಗೊಂಡ ಮಕ್ಕಳು, ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01yc384d3knt96t1ajgbde4,imgname-haveri-independence-day-paddy-cultivation-1786771803395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಆ.15): ದೇ&lt;/strong&gt;ಶದೆಲ್ಲೆಡೆ 2026ರ 80ನೇ ಸ್ವಾತಂತ್ರ್ಯ ದಿನಾಚರಣೆಯ (80th Independence Day) ಸಡಗರ ಮನೆಮಾಡಿದ್ದರೆ, ಹಾವೇರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಶಾಲಾ ಮಕ್ಕಳು ಮೂಲಸೌಕರ್ಯಕ್ಕಾಗಿ ಸ್ವಾತಂತ್ರ್ಯ ದಿನದಂದೇ ರಸ್ತೆಗಿಳಿದು ಕಣ್ಣೀರು ಹಾಕಿದ ಮನಕಲಕುವ ಘಟನೆ ನಡೆದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 8 ದಶಕಗಳು ಕಳೆದರೂ ಶಾಲೆಗೆ ಹೋಗಲು ಸಮರ್ಪಕ ರಸ್ತೆಯಿಲ್ಲ ಎಂದು ಆಕ್ರೋಶಗೊಂಡ ಪುಟಾಣಿ ಮಕ್ಕಳು, ಕೆಸರು ಗದ್ದೆಯಂತಾಗಿದ್ದ ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಆಡಳಿತ ವ್ಯವಸ್ಥೆಗೆ ಛೀಮಾರಿ ಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಎಲ್ಲಿ ನಡೆದಿದೆ ಘಟನೆ?&lt;/strong&gt;&lt;/h2&gt;&lt;p&gt;ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಎಚ್. ಆರೇಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ.&lt;/p&gt;&lt;h2&gt;&lt;strong&gt;80ನೇ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣಕ್ಕೆ ಅಡ್ಡಿ:&lt;/strong&gt;&lt;/h2&gt;&lt;p&gt;ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದಲ್ಲಿ ಭಾಗಿಯಾಗಲು ಮಕ್ಕಳು ಶುಭ್ರವಾದ ಸಮವಸ್ತ್ರ ಧರಿಸಿ ಶಾಲೆ ಮತ್ತು ಅಂಗನವಾಡಿಗೆ ಹೊರಟಿದ್ದರು. ಆದರೆ, ಮಾರ್ಗಮಧ್ಯೆ ರಸ್ತೆಯುದ್ದಕ್ಕೂ ಮೊಣಕಾಲುದ್ದ ಕೆಸರು ತುಂಬಿದ್ದರಿಂದ ಮಕ್ಕಳು ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಇದರಿಂದ ತೀವ್ರ ನಿರಾಶೆ ಹಾಗೂ ಆಕ್ರೋಶಗೊಂಡ ಮಕ್ಕಳು, ಕೈಯಲ್ಲಿ ಭತ್ತದ ಸಸಿಗಳನ್ನು ಹಿಡಿದು ಕೆಸರು ರಸ್ತೆಯಲ್ಲೇ ನಾಟಿ ಮಾಡುವ ಮೂಲಕ '80 ವರ್ಷಗಳ ಸ್ವಾತಂತ್ರ್ಯದ ನಂತರವೂ ನಮ್ಮ ಹಳ್ಳಿಯ ದುಸ್ಥಿತಿ ಇದೇನಾ?' ಎಂದು ಪ್ರಶ್ನಿಸಿ ವಿನೂತನ ಪ್ರತಿಭಟನೆ ನಡೆಸಿದರು.&lt;/p&gt;&lt;h2&gt;&lt;strong&gt;ದಿನವೂ ಜಾರಿ ಬೀಳುತ್ತಿರುವ ಪುಟಾಣಿ ಕಂದಮ್ಮಗಳು:&lt;/strong&gt;&lt;/h2&gt;&lt;p&gt;&lt;strong&gt;ನಿತ್ಯವೂ ಗಾಯ: &lt;/strong&gt;ಅಂಗನವಾಡಿ ಕಂದಮ್ಮಗಳು ಹಾಗೂ ಪ್ರಾಥಮಿಕ ಶಾಲಾ ಮಕ್ಕಳು ಇದೇ ಕೆಸರು ರಸ್ತೆಯಲ್ಲಿ ನಿತ್ಯವೂ ನಡೆದುಕೊಂಡು ಹೋಗಬೇಕು. ದಿನಕ್ಕೆ ಕನಿಷ್ಠ ಒಬ್ಬರಾದರೂ ಜಾರಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;strong&gt;ಬಟ್ಟೆ, ಬ್ಯಾಗ್ ಕೆಸರುಮಯ: &lt;/strong&gt;ಶಾಲೆಗೆ ಹೋಗುವ ಮುನ್ನವೇ ಸಮವಸ್ತ್ರ ಮತ್ತು ಪುಸ್ತಕದ ಚೀಲಗಳು ಕೆಸರು ಪಾಲಾಗುತ್ತಿವೆ.&lt;/p&gt;&lt;p&gt;&lt;strong&gt;ಜನಪ್ರತಿನಿಧಿಗಳಿಗೆ ಮುಖಭಂಗ: &lt;/strong&gt;ರಸ್ತೆ ಅತಿಯಾಗಿ ಹದಗೆಟ್ಟಿರುವ ಕಾರಣ, ಸ್ವಾತಂತ್ರ್ಯ ದಿನದ ಧ್ವಜಾರೋಹಣಕ್ಕೆ ಬರಲು ಸ್ಥಳೀಯ ಜನಪ್ರತಿನಿಧಿಗಳೇ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ತುಪ್ಪ ಸುರಿದಿದೆ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ:&lt;/strong&gt;&lt;/h2&gt;&lt;p&gt;'ದೇಶವು 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವ ಈ ಕಾಲಘಟ್ಟದಲ್ಲೂ ನಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ಒಂದು ಸುಸಜ್ಜಿತ ರಸ್ತೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಹಲವು ಬಾರಿ ಮನವಿ ಸಲ್ಲಿಸಿದರೂ ಶಾಸಕರು, ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ' ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಕೂಡಲೇ ಈ ರಸ್ತೆಯನ್ನು ಡಾಂಬರೀಕರಣ ಅಥವಾ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>haveri</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/haveri-80th-independence-day-school-children-protest-muddy-road-planting-paddy/articleshow-tfl6gho"/>
        </item>
        <item>
            <title><![CDATA[₹46.33 ಲಕ್ಷ ವೇತನದ ಉದ್ಯೋಗ ಪಡೆದ ಆಳ್ವಾಸ್ ಕಾಲೇಜಿನ ಹಾವೇರಿ ರೈತನ ಮಗಳು ಸೃಷ್ಟಿ ಉಳ್ಳಾಗಡ್ಡಿ]]></title>
            <link>https://kannada.asianetnews.com/karnataka-districts/haveri-farmer-daughter-srushti-ullagadi-who-got-a-job-with-a-salary-of-rs-46-lakh-is-student-of-alva-s-college-mrq/articleshow-uetc4ug</link>
            <guid isPermaLink="true">https://kannada.asianetnews.com/karnataka-districts/haveri-farmer-daughter-srushti-ullagadi-who-got-a-job-with-a-salary-of-rs-46-lakh-is-student-of-alva-s-college-mrq/articleshow-uetc4ug</guid>
            <pubDate>Tue, 01 Sep 2026 08:50:15 +0530</pubDate>
            <description><![CDATA[&lt;p&gt;ಹಾವೇರಿಯ ರೈತ ಕುಟುಂಬದ ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ, ಜಾಗತಿಕ ಸಂಸ್ಥೆ ವೀಸಾದಲ್ಲಿ ಸಾಫ್ಟ್&zwnj;ವೇರ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ಇಂಟರ್ನ್&zwnj;ಶಿಪ್ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಇವರು, ವಾರ್ಷಿಕ ₹46.33 ಲಕ್ಷ ವೇತನದ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1df3ev2q029zdprw4rjd2qs,imgname-moodubidire-1788232186722.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೂಡುಬಿದಿರೆ: &lt;/strong&gt;ಹಾವೇರಿಯ ಹಟ್ಟಿಮತ್ತೂರು ಗ್ರಾಮದ ರೈತನ ಮಗಳೊಬ್ಬಳ ಪ್ರತಿಭೆ ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆಳ್ವಾಸ್ ಇನ್&zwnj;ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ, ಜಾಗತಿಕ ಪಾವತಿ ತಂತ್ರಜ್ಞಾನ ಸಂಸ್ಥೆ ವೀಸಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದು, ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಂತೆ ₹46.33 ಲಕ್ಷದ ವಾರ್ಷಿಕ ವೇತನವನ್ನು ಪಡೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಆರನೇ ಸೆಮಿಸ್ಟರ್&zwnj;ನ ಸಂದರ್ಶನದಿಂದ ವೀಸಾ ಉದ್ಯೋಗ&lt;/strong&gt;&lt;/h2&gt;&lt;p&gt;ಸೃಷ್ಟಿಯ ವೃತ್ತಿಜೀವನಕ್ಕೆ ವೀಸಾದಲ್ಲಿನ ಇಂಟರ್ನ್ ಶಿಪ್ ಮಹತ್ವದ ತಿರುವು ನೀಡಿತು. ಆಳ್ವಾಸ್&zwnj;ನಲ್ಲಿ ವಿದ್ಯಾರ್ಥಿಗಳ ವೃತ್ತಿಪರ ಕೌಶಲ್ಯ ವೃದ್ಧಿಗೆ ಗುಣಮಟ್ಟದ ಇಂಟರ್ನ್ ಶಿಪ್ ಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಅದರ ಭಾಗವಾಗಿ ಆರನೇ ಸೆಮಿಸ್ಟರ್&zwnj;ನಲ್ಲಿ ವೀಸಾದಲ್ಲಿ ಇಂಟರ್ನ್ ಶಿಪ್ ಮಾಡಲು ಅವಕಾಶ ಪಡೆದರು.&lt;/p&gt;&lt;p&gt;10 ವಾರಗಳ ಅವಧಿಯಲ್ಲಿ ರೂ. 90,000 ಸ್ಟೈಪೆಂಡ್&zwnj;ನೊಂದಿಗೆ ಕಾರ್ಯನಿರ್ವಹಿಸಿದ ಅವರು, ಸಂಸ್ಥೆಯ ವಾತಾವರಣದಲ್ಲಿ ತಮ್ಮ ತಾಂತ್ರಿಕ ಜ್ಞಾನ ಹಾಗೂ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದರು. ಅವರ ಇಂಟರ್ನ್ ಶಿಪ್ ಸಾಧನೆ ಮೆಚ್ಚಿದ ವೀಸಾ ಸಂಸ್ಥೆ, ಬಳಿಕ ಅವರನ್ನು ಸಾಫ್ಟ್ ವೇರ್ ಎಂಜಿನಿಯರ್ ಹುದ್ದೆಗೆ ಪೂರ್ಣಾವಧಿ ಯಾಗಿ ಆಯ್ಕೆ ಮಾಡಿತು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಟರ್ನ್ ಶಿಪ್ ಅವಕಾಶಗಳನ್ನು ಕಲ್ಪಿಸುವ ಆಳ್ವಾಸ್&zwnj;ನ ಪ್ರಯತ್ನವು ಸೃಷ್ಟಿಯ ಪಾಲಿಗೆ ನೇರವಾಗಿ ಜಾಗತಿಕ ಉದ್ಯೋಗಕ್ಕೆ ಅರ್ಹತೆಯನ್ನು ನೀಡಿತು.&lt;/p&gt;&lt;h3&gt;&lt;strong&gt;46.33 ಲಕ್ಷದ ಒಟ್ಟು ಮೌಲ್ಯ&lt;/strong&gt;&lt;/h3&gt;&lt;p&gt;ವೀಸಾ ಸಂಸ್ಥೆಯ ಉದ್ಯೋಗ ಕೊಡುಗೆಯಲ್ಲಿ ವೇತನದ ಜತೆಗೆ ಹಲವು ಸೌಲಭ್ಯಗಳನ್ನೂ ಒದಗಿಸಲಾಗಿದೆ. ಕುಟುಂಬಕ್ಕೆ ರೂ. 7.50 ಲಕ್ಷ ಮೌಲ್ಯದ ವೈದ್ಯಕೀಯ ವಿಮೆ, ₹25,000ದ ಹೊರರೋಗಿ ಚಿಕಿತ್ಸಾ ಸೌಲಭ್ಯ ಹಾಗೂ ಗರಿಷ್ಠ ರೂ.3 ಲಕ್ಷದವರೆಗೆ ಶಿಕ್ಷಣ ಸಹಾಯಧನ ದೊರೆಯಲಿದೆ. ಇದರೊಂದಿಗೆ ಜಿಮ್ ಸೌಲಭ್ಯ, ಕಚೇರಿ ಸಾರಿಗೆ ಹಾಗೂ ವಾರ್ಷಿಕ ಆರೋಗ್ಯ ತಪಾಸಣೆಯಂತಹ ಹೆಚ್ಚುವರಿ ಸೌಲಭ್ಯಗಳೂ ಲಭ್ಯವಿವೆ.&lt;/p&gt;&lt;h3&gt;&lt;strong&gt;ಇಂಟರ್ನ್ ಶಿಪ್ ಕನಸಿನ ಉದ್ಯೋಗಕ್ಕೆ ದಾರಿ ಮಾಡಿಕೊಟ್ಟಿತು: ಸೃಷ್ಠಿ&lt;/strong&gt;&lt;/h3&gt;&lt;p&gt;ಆಳ್ವಾಸ್ ಇಂಟರ್ನ್ ಶಿಪ್ ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಸೂಕ್ತವಾದ ಸಂಸ್ಥೆಗಳಲ್ಲಿ ಅವಕಾಶಗಳನ್ನು ಕಲ್ಪಿಸುತ್ತದೆ. ವೀಸಾದಲ್ಲಿ ದೊರೆತ ಇಂಟರ್ನ್ ಶಿಪ್ ನನಗೆ ಅಮೂಲ್ಯವಾದ ಉದ್ಯಮ ಅನುಭವ ನೀಡಿತು. ಅದೇ ಅವಕಾಶ ನನ್ನ ಕನಸಿನ ಉದ್ಯೋಗ ಪಡೆಯಲು ನೆರವಾಯಿತು ಎಂದು ಸೃಷ್ಟಿ ತಿಳಿಸಿದರು.&lt;/p&gt;&lt;p&gt;&lt;strong&gt;ಗ್ರಾಮೀಣ ಪ್ರತಿಭೆಗೆ ಜಾಗತಿಕ ಅವಕಾಶ: ಡಾ ಆಳ್ವ&lt;/strong&gt;&lt;/p&gt;&lt;p&gt;ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಸೃಷ್ಟಿಯ ಸಾಧನೆಯನ್ನು ಅಭಿನಂದಿಸಿ, ಆಳ್ವಾಸ್&zwnj;ನ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. &ldquo;ಗ್ರಾಮೀಣ ಹಿನ್ನೆಲೆಯ ರೈತ ಕುಟುಂಬದಿಂದ ಬಂದಿರುವ ಸೃಷ್ಟಿ ಅವರು ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಕಾರ್ಯಕ್ಷಮತೆಯ ಮೂಲಕ ಜಾಗತಿಕ ಸಂಸ್ಥೆಯಲ್ಲಿ ಅವಕಾಶ ಪಡೆದಿರುವುದು ಗಮನಾರ್ಹ.&lt;/p&gt;&lt;p&gt;ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸೂಕ್ತ ಉದ್ಯಮ ಸಂಪರ್ಕ, ಇಂಟರ್ನ್ ಶಿಪ್ ಹಾಗೂ ಪ್ರಾಯೋಗಿಕ ಅನುಭವ ದೊರೆತಾಗ ಅವರ ಪ್ರತಿಭೆಗೆ ಜಾಗತಿಕ ಮಟ್ಟದಲ್ಲಿ ಅವಕಾಶಗಳು ತೆರೆದುಕೊಳ್ಳುತ್ತವೆ. ಸೃಷ್ಟಿ ಅವರ ಸಾಧನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು. ವಿದ್ಯಾರ್ಥಿಯ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಪ್ರಾಚಾರ&zwj;್ಯರು, ಅಧ್ಯಾಪಕ ವೃಂದದವರು ಶ್ಲಾಘಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Haveri: SSLCಯಲ್ಲಿ 98%, PUCಯಲ್ಲಿ 95%: ಬಿಂದುಶ್ರೀಗೆ ನೀಟ್&zwnj;ನಲ್ಲಿ ಬಂದಿದ್ದು 11 ಅಂಕ&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-farmer-daughter-srushti-ullagadi-who-got-a-job-with-a-salary-of-rs-46-lakh-is-student-of-alva-s-college-mrq/articleshow-uetc4ug"/>
        </item>
        <item>
            <title><![CDATA[ಗೆಳೆಯ ವಿಡಿಯೋ ಮಾಡುವಾಗಲೇ ನದಿಗೆ ಹಾರಿದ ಪಾನಮತ್ತ ಯುವಕ! ಜೀವ ಹೋಯ್ತು, ಕಾರಣ ಗೊತ್ತಿಲ್ಲ!]]></title>
            <link>https://kannada.asianetnews.com/karnataka-districts/haveri-drunk-youth-jumps-into-tungabhadra-river-shocking-incident-viral-video/articleshow-wt3yayr</link>
            <guid isPermaLink="true">https://kannada.asianetnews.com/karnataka-districts/haveri-drunk-youth-jumps-into-tungabhadra-river-shocking-incident-viral-video/articleshow-wt3yayr</guid>
            <pubDate>Tue, 01 Sep 2026 16:02:34 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ, ಕುಡಿದ ಅಮಲಿನಲ್ಲಿದ್ದ ಬೀರೇಶ್ ಚಿನ್ನಿಕಟ್ಟಿ ಎಂಬ 31 ವರ್ಷದ ಯುವಕ ತುಂಗಭದ್ರಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಸ್ನೇಹಿತ ವಿಡಿಯೋ ಮಾಡುತ್ತಿರುವಾಗಲೇ ಈ ದುರ್ಘಟನೆ ನಡೆದಿದ್ದು, ಇದು ಆತ್ಮ೧ಹತ್ಯೆಯೋ ಅಥವಾ ಮದ್ಯದ ಅಮಲಿನ ಹುಚ್ಚಾಟವೋ ಎಂಬ ಅನುಮಾನ ಮೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1e7zry781v0zjrarmb5naee,imgname-haveri-tungabhadra-river-incident-1788258280391.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ(ಸೆ.1): ಕುಡಿದ ಅಮಲಿನಲ್ಲಿ ಯುವಕನೊಬ್ಬ ತುಂಗಭದ್ರಾ ನದಿಗೆ ಹಾರಿ ಜೀವ ಕಳೆದುಕೊಂಡ ದುರ್ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಲವೆತ್ತು ಗ್ರಾಮದಲ್ಲಿ ನಡೆದಿದೆ. 31 ವರ್ಷದ ಬೀರೇಶ್ ಚಿನ್ನಿಕಟ್ಟಿ, ಜೀವ ಕಳೆದುಕೊಂಡ ಯುವಕ.&lt;/p&gt;&lt;h2&gt;ಹಾವೇರಿ ತುಂಗಭದ್ರ ನದಿಗೆ ಹಾರಿ ಜೀವ ಕಳೆದುಕೊಂಡ ಯುವಕ&lt;/h2&gt;&lt;p&gt;ಬೀರೇಶ್ ಮದ್ಯ ಸೇವಿಸಿ ತುಂಗಭದ್ರಾ ನದಿ ತೀರಕ್ಕೆ ಬಂದಿದ್ದಾನೆ. ವಿಡಿಯೋದಲ್ಲಿ ತುಗಾಡುತ್ತಿರುವುದು ನೋಡಿದರೆ ಹೆಚ್ಚೇ ಪಾನಮತ್ತನಾಗಿರುವುದು ಕಂಡುಬಂದಿದೆ. ಇತ್ತ ಇನ್ನೊಂದು ದಡದಲ್ಲಿ ಸ್ನೇಹಿತ ವಿಡಿಯೋ ಮಾಡುತ್ತಿದ್ದಾನೆ. ನೋಡುನೋಡುತ್ತಿದ್ದಂತೆ ನದಿಗೆ ಹಾರಿದ ಯುವಕ ನೀರಿನ ರಭಸಕ್ಕೆ ಕ್ಷಣ ಕಾಲ ಕಣ್ಮರೆಯಾಗಿದ್ದಾನೆ. ಆತಂಕದಿಂದ ಸ್ನೇಹಿತ ಹುಡುಕಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.&lt;/p&gt;&lt;h3&gt;ಆತ್ಮ೧ಹತ್ಯೆಯೋ ಮದ್ಯದ ಅಮಲಿನಲ್ಲಾದ ಹುಚ್ಚಾಟವೋ?&lt;/h3&gt;&lt;p&gt;ಬೀರೇಶ್ ನದಿಗೆ ಹಾರಿ ಜೀವ ಕಳೆದುಕೊಂಡ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಕುಡಿದು ನದಿ ತೀರಕ್ಕೆ ಬಂದಿದ್ದೇಕೆ ಇತ್ತ ಸ್ನೇಹಿತ ಮೊಬೈಲ್&zwnj;ನಲ್ಲಿ ವಿಡಿಯೋ ಮಾಡುತ್ತಿರುವಾಗಲೇ ನದಿಗೆ ಹಾರಿರುವುದು ಸಂಶಯ ಹುಟ್ಟಿಸಿದೆ. ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದಾನೆಂದು ಪೋಸ್ ಕೊಡಲು ಜಿಗಿದನೆ? ಅಥವಾ ನಿಜವಾಗಲೂ ಬೇರೆ ಯಾವುದೋ ಕಾರಣಗಳಿಂದ ಜೀವ ಕಳೆದುಕೊಂಡನೋ? ಯುವಕನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಕುಮಾರಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.&lt;/p&gt;]]></content:encoded>
            <category>haveri</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/haveri-drunk-youth-jumps-into-tungabhadra-river-shocking-incident-viral-video/articleshow-wt3yayr"/>
        </item>
        <item>
            <title><![CDATA[8 ಪಿಜಿ ಕೋರ್ಸ್ ರದ್ದುಗೊಳಿಸಿದ ಸರ್ಕಾರ; ಎಂಎ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರಕ್ಕೆ ಅನುಮತಿಯೇ ಇಲ್ಲ!]]></title>
            <link>https://kannada.asianetnews.com/karnataka-districts/karnataka-folklore-university-govt-orders-immediate-halt-to-8-pg-courses-run-without-approval-sat/articleshow-zg7lp16</link>
            <guid isPermaLink="true">https://kannada.asianetnews.com/karnataka-districts/karnataka-folklore-university-govt-orders-immediate-halt-to-8-pg-courses-run-without-approval-sat/articleshow-zg7lp16</guid>
            <pubDate>Thu, 10 Sep 2026 12:10:41 +0530</pubDate>
            <description><![CDATA[ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸರ್ಕಾರದ ಅನುಮೋದನೆ ಇಲ್ಲದೆ 2018-19ರಿಂದ ಎಂಟು ಸ್ನಾತಕೋತ್ತರ ಕೋರ್ಸ್&zwnj;ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಉನ್ನತ ಶಿಕ್ಷಣ ಇಲಾಖೆಯು ಈ ಕೋರ್ಸ್&zwnj;ಗಳ ಪ್ರವೇಶಾತಿಯನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಸಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2507accbsfwfed8brgmvmfx,imgname-karnataka-folklore-university-haveri-1789021890956.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ- ನಾರಾಯಣ ಹೆಗಡೆ&lt;/strong&gt;&lt;/p&gt;&lt;p&gt;&lt;strong&gt;ಹಾವೇರಿ: &lt;/strong&gt;ಸರ್ಕಾರ ಹಾಗೂ ರಾಜ್ಯಪಾಲರ ಅನುಮೋದನೆ ಪಡೆಯದೇ, ನಿಯಮಾವಳಿಗಳನ್ನೂ ರಚಿಸದೆ 2018-19ನೇ ಸಾಲಿನಿಂದ ಎಂಟು ಸ್ನಾತಕೋತ್ತರ ಪದವಿ ಕೋರ್ಸ್&zwnj;ಗಳನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆಸಿರುವುದು ಬೆಳಕಿಗೆ ಬಂದಿದ್ದು, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೀಗ ಈ ಎಲ್ಲ ಕೋರ್ಸ್&zwnj;ಗಳ ಪ್ರವೇಶಾತಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆ ಖಡಕ್&zwnj; ಸೂಚನೆ ನೀಡಿದೆ.&lt;/p&gt;&lt;p&gt;ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಸೆ.8ರಂದು ಉನ್ನತ ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ನೋಟಿಸ್&zwnj;ನಲ್ಲಿ ವಿಶ್ವವಿದ್ಯಾಲಯದ ಕಾರ್ಯವೈಖರಿ ಕುರಿತು ಗಂಭೀರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮದ ಪ್ರಕರಣ 43(2)ರ ಉಪಬಂಧಗಳನ್ನು ಉಲ್ಲಂಘಿಸಿ ಅಗತ್ಯ ಅನುಮೋದನೆ ಪಡೆಯದೇ ಕೋರ್ಸ್&zwnj;ಗಳನ್ನು ಆರಂಭಿಸಿರುವುದು ಗಂಭೀರ ಲೋಪ ಎಂದು ಸರ್ಕಾರ ತಿಳಿಸಿದೆ.&lt;/p&gt;&lt;h2&gt;&lt;strong&gt;ಯಾವ್ಯಾವ ಕೋರ್ಸ್&zwnj;ಗಳು?:&lt;/strong&gt;&lt;/h2&gt;&lt;p&gt;ವಿಶ್ವವಿದ್ಯಾಲಯವು ಸರ್ಕಾರ ಹಾಗೂ ಕುಲಾಧಿಪತಿಗಳ ಅನುಮೋದನೆ ಪಡೆಯದೇ ಆರಂಭಿಸಿದ್ದಾಗಿ ಉಲ್ಲೇಖಿಸಿರುವ ಎಂಟು ಕೋರ್ಸ್&zwnj;ಗಳೆಂದರೆ, ಎಂ.ಎ. ಕನ್ನಡ ಮತ್ತು ಜಾನಪದ, ಎಂ.ಎ. ಇಂಗ್ಲಿಷ್&zwnj;, ಎಂ.ಎ. ಅರ್ಥಶಾಸ್ತ್ರ, ಎಂ.ಎ. ಸಮಾಜಶಾಸ್ತ್ರ, ಮಾಸ್ಟರ್&zwnj; ಆಫ್&zwnj; ಸೋಷಿಯಲ್&zwnj; ವರ್ಕ್&zwnj;, ಮಾಸ್ಟರ್&zwnj; ಆಫ್&zwnj; ಪರ್ಫಾರ್ಮಿಂಗ್&zwnj; ಆರ್ಟ್ಸ್&zwnj;, ಮಾಸ್ಟರ್&zwnj; ಆಫ್&zwnj; ವಿಷ್ಯುಯಲ್&zwnj; ಆರ್ಟ್ಸ್&zwnj;, ಎಂ.ಎ. ಮಹಿಳಾ ಅಧ್ಯಯನ.&lt;/p&gt;&lt;p&gt;ಈ ಕೋರ್ಸ್&zwnj;ಗಳಿಗೆ ಮೊದಲು ನಿಯಮಾವಳಿಗಳನ್ನು ರೂಪಿಸಿ ಕುಲಾಧಿಪತಿಗಳ ಅನುಮೋದನೆ ಪಡೆಯಬೇಕಿತ್ತು. ಆದರೆ ಅಂತಹ ಅನುಮೋದನೆ ಪಡೆಯುವ ಮೊದಲೇ 2018-19ರಿಂದ ಕೋರ್ಸ್&zwnj;ಗಳನ್ನು ಆರಂಭಿಸಿ, ಬಳಿಕ ಘಟನೋತ್ತರ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ.&lt;/p&gt;&lt;h2&gt;&lt;strong&gt;ಶಿಸ್ತು ಕ್ರಮದ ಎಚ್ಚರಿಕೆ:&amp;nbsp;&lt;/strong&gt;&lt;/h2&gt;&lt;p&gt;ಈ ಸಂಬಂಧ ವಿಶ್ವವಿದ್ಯಾಲಯದ ವಿರುದ್ಧ ನಿಯಮಾನುಸಾರ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಒಂದು ವಾರದೊಳಗೆ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಇಷ್ಟೇ ಅಲ್ಲದೆ, ಸರ್ಕಾರದ ಸೂಚನೆಗಳನ್ನು ಪಾಲಿಸದೇ ವಿಳಂಬ ಮಾಡಿದಲ್ಲಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಅವರು ಕುಲಸಚಿವರಿಗೆ ನೀಡಿದ ನೋಟಿಸ್&zwnj;ನಲ್ಲಿ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;ಪ್ರವೇಶಕ್ಕೆ ತಕ್ಷಣ ಬ್ರೇಕ್&zwnj;:&lt;/h2&gt;&lt;p&gt;ಅನುಮೋದನೆ ಇಲ್ಲದೆ 2018-19ರಿಂದ ನಡೆಸಲಾಗುತ್ತಿರುವ ಎಂಟು ಕೋರ್ಸ್&zwnj;ಗಳ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಸರ್ಕಾರ ಸ್ಪಷ್ಟ ಆದೇಶ ನೀಡಿದೆ. ಇದರ ಜತೆಗೆ ಈ ಎಂಟು ಕೋರ್ಸ್&zwnj;ಗಳಿಗೆ ಈವರೆಗೆ ಎಷ್ಟು ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳಲಾಗಿದೆ ಎಂಬುದರ ವಿಷಯವಾರು ಸಂಪೂರ್ಣ ವಿವರವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.&lt;/p&gt;&lt;h3&gt;&lt;strong&gt;ಬೋಧಕ, ಬೋಧಕೇತರ ಸಿಬ್ಬಂದಿಗೂ ಸಂಕಷ್ಟ&lt;/strong&gt;&lt;/h3&gt;&lt;p&gt;ಅನುಮೋದನೆ ಇಲ್ಲದ ಕೋರ್ಸ್&zwnj;ಗಳನ್ನು ನಡೆಸಲು ವಿಶ್ವವಿದ್ಯಾಲಯದಲ್ಲಿ ನಿಯೋಜನೆ ಅಥವಾ ನೇಮಕ ಮಾಡಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ತಕ್ಷಣದಿಂದಲೇ ವಿಶ್ವವಿದ್ಯಾಲಯದ ಸೇವೆಯಿಂದ ಬಿಡುಗಡೆ ಅಥವಾ ವಜಾಗೊಳಿಸುವಂತೆ ಸೂಚಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.&lt;/p&gt;&lt;h2&gt;&lt;strong&gt;ಘಟನೋತ್ತರ ಅನುಮೋದನೆಗೆ ಪ್ರಸ್ತಾವನೆ&lt;/strong&gt;&lt;/h2&gt;&lt;p&gt;ವಿಶ್ವವಿದ್ಯಾಲಯವು 2024ರ ಜೂನ್&zwnj; ಹಾಗೂ 2025ರ ಮಾರ್ಚ್&zwnj;ನಲ್ಲಿ ಈ ಕೋರ್ಸ್&zwnj;ಗಳ ಕರಡು ನಿಯಮಾವಳಿಗಳಿಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ದಾಖಲೆಗಳನ್ನು ಪರಿಶೀಲಿಸಿದಾಗ, ಅಗತ್ಯ ಅನುಮೋದನೆ ಇಲ್ಲದೆಯೇ ಹಲವು ವರ್ಷಗಳಿಂದ ಕೋರ್ಸ್&zwnj;ಗಳು ನಡೆಯುತ್ತಿರುವ ಅಂಶ ಬಹಿರಂಗವಾಗಿದೆ. ಋಣಾತ್ಮಕ ವಿಷಗಳಿಂದಲೇ ಸುದ್ದಿಯಲ್ಲಿರುವ ಜಾನಪದ ವಿವಿಯ ಈ ಎಡವಟ್ಟಿನಿಂದ ನೂರಾರು ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುವ ಸಾಧ್ಯತೆಯಿದೆ. 8 ವರ್ಷಗಳಿಂದ ಈ ಕೋರ್ಸ್&zwnj; ಓದಿರುವ ವಿದ್ಯಾರ್ಥಿಗಳ ಭವಿಷ್ಯವೂ ಅತಂತ್ರವಾಗುವ ಆತಂಕ ಎದುರಾಗಿದೆ.&lt;/p&gt;&lt;h3&gt;&lt;strong&gt;ನೋಟಿಸ್&zwnj; ನೀಡಿದೆ:&lt;/strong&gt;&lt;/h3&gt;&lt;p&gt;8 ಕೋರ್ಸ್&zwnj; ಅನುಮೋದನೆ ಪಡೆಯಬೇಕಿತ್ತು. ಆದರೆ, ಆಗಿನ ಕುಲಸಚಿವರು ರಾಜ್ಯಪಾಲರ ಅನುಮೋದನೆ ಪಡೆಯದೇ 8 ಕೋರ್ಸ್&zwnj; ಆರಂಭಿಸಿದ್ದರು. ಈಗ ಸರ್ಕಾರದ ಗಮನಕ್ಕೆ ಬಂದಿದ್ದರಿಂದ ಆ 8 ಕೋರ್ಸ್&zwnj;ಗಳನ್ನು ಸ್ಥಗಿತ ಮಾಡುವಂತೆ ತಿಳಿಸಿ ನೋಟಿಸ್&zwnj; ನೀಡಿದೆ. ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಜಾನಪದ ವಿವಿ ಕುಲಸಚಿವ ಗುರುಪ್ರಸಾದ್&zwnj; ತಿಳಿಸಿದರು.&lt;/p&gt;]]></content:encoded>
            <category>haveri</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-folklore-university-govt-orders-immediate-halt-to-8-pg-courses-run-without-approval-sat/articleshow-zg7lp16"/>
        </item>
    </channel>
</rss>
