<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 04 Aug 2026 07:16:08 +0530</lastBuildDate>
        <atom:link href="https://kannada.asianetnews.com/rss/haveri" rel="self" type="application/rss+xml"/>
        <item>
            <title><![CDATA[ಮಗನ ಜನ್ಮದಿನಕ್ಕೆ  ಸ್ವಂತ ದುಡ್ಡಿನಲ್ಲಿ ಶಾಲೆಗೆ ಸುಣ್ಣಬಣ್ಣ ಮಾಡಿಸಿದ ಶಿಕ್ಷಕಿ ಉಮೈ ಸಲ್ಮಾ]]></title>
            <link>https://kannada.asianetnews.com/karnataka-districts/haveri-teacher-umai-salma-spends-rs-2-lakh-on-her-son-s-birthday-to-renovate-the-school-with-her-own-money-mrq/articleshow-4736pv9</link>
            <guid isPermaLink="true">https://kannada.asianetnews.com/karnataka-districts/haveri-teacher-umai-salma-spends-rs-2-lakh-on-her-son-s-birthday-to-renovate-the-school-with-her-own-money-mrq/articleshow-4736pv9</guid>
            <pubDate>Mon, 06 Jul 2026 06:23:56 +0530</pubDate>
            <description><![CDATA[&lt;p&gt;ಹಿರೇಕೆರೂರು ತಾಲೂಕಿನ ಹಂಸಭಾವಿ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಉಮೈ ಸಲ್ಮಾ, ತಮ್ಮ ಮಗನ ಜನ್ಮದಿನದ ನೆನಪಿಗಾಗಿ ಸ್ವಂತ ಹಣದಲ್ಲಿ ಶಾಲೆಗೆ ಸುಣ್ಣಬಣ್ಣ ಬಳಿಸಿ, ಆಟದ ಮೈದಾನ ನಿರ್ಮಿಸಿದ್ದಾರೆ. ಅವರ ಈ ಆದರ್ಶ ಕಾರ್ಯವು ಶಿಕ್ಷಕ ವಲಯದಲ್ಲಿ ಮತ್ತು ಸಾರ್ವಜನಿಕವಾಗಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwtegz27bwq1h665spbx6p4c,imgname-urdu-school-teacher-1783299079239.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಮೈ ಸಲ್ಮಾ ಅವರು ತಮ್ಮ ಮಗ ಮಲಿಕ್ ರೆಹನ್ ಅವರ ಹುಟ್ಟುಹಬ್ಬದ ಅಂಗವಾಗಿ ₹ 2 ಲಕ್ಷ ಸ್ವಂತ ಹಣದಲ್ಲಿ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸಮಾಜಕ್ಕೆ ವಿಶಿಷ್ಟ ಹಾಗೂ ಮಾದರಿ ಸಂದೇಶವೊಂದನ್ನು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಶಾಲೆಗೆ ಉತ್ತಮ ಗುಣಮಟ್ಟದ ಸುಣ್ಣ-ಬಣ್ಣ&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಜನರು ತಮ್ಮ ಮಕ್ಕಳ ಜನ್ಮದಿನವನ್ನು ಐಷಾರಾಮಿ ಹೋಟೆಲ್&zwnj;ಗಳಲ್ಲಿ ಅಥವಾ ಅನಗತ್ಯ ವೆಚ್ಚಗಳ ಮೂಲಕ ಆಚರಿಸಿಕೊಳ್ಳುವುದು ರೂಢಿ. ಆದರೆ ಶಿಕ್ಷಕಿ ಉಮೈ ಸಲ್ಮಾ ಅವರು ತಾವೇ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸಲು ನಿರ್ಧರಿಸಿದರು. ತಮ್ಮ ಮಗನ ಜನ್ಮದಿನದ ಸವಿನೆನಪಿಗಾಗಿ ಸ್ವಂತ ₹ 2 ಲಕ್ಷ ವೆಚ್ಚದಲ್ಲಿ ಇಡೀ ಶಾಲೆಗೆ ಉತ್ತಮ ಗುಣಮಟ್ಟದ ಸುಣ್ಣ-ಬಣ್ಣ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ಶಾಲಾ ಮಕ್ಕಳಿಗೆ ಆಟವಾಡಲು ಸುಂದರ ಹಾಗೂ ಸುರಕ್ಷಿತವಾದ ಆಟದ ಮೈದಾನವನ್ನು ನಿರ್ಮಿಸಿಕೊಡುವ ಮೂಲಕ ಶಾಲೆಯ ಅಂದವನ್ನು ಹೆಚ್ಚಿಸಿದ್ದಾರೆ.&lt;/p&gt;&lt;p&gt;ಮುಖ್ಯ ಶಿಕ್ಷಕಿಯ ಈ ಸೇವಾ ಮನೋಭಾವ, ಉದಾರತೆ ಮತ್ತು ಶಿಕ್ಷಣದ ಮೇಲಿನ ಅಪಾರ ಕಾಳಜಿಯನ್ನು ಶ್ಲಾಘಿಸಿ, ಶಿಕ್ಷಕರ ಸಂಘವು ಅಭಿನಂದನೆ ಸಲ್ಲಿಸಿದೆ.&lt;/p&gt;&lt;h3&gt;&lt;strong&gt;ಶಿಕ್ಷಕರ ಸಂಘದ ಪದಾಧಿಕಾರಿಗಳು ಪ್ರಶಂಸೆ&lt;/strong&gt;&lt;/h3&gt;&lt;p&gt;ಉಮೈ ಸಲ್ಮಾ ಅವರ ಈ ಅಪೂರ್ವ ಕಾರ್ಯವು ಕೇವಲ ಹಿರೇಕೆರೂರು ತಾಲೂಕಿಗೆ ಮಾತ್ರವಲ್ಲದೆ, ಇಡೀ ಹಾವೇರಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಶಿಕ್ಷಕರಿಗೂ ಸ್ಫೂರ್ತಿದಾಯಕವಾಗಿದೆ. ಅವರ ಸಮಾಜಮುಖಿ ಚಿಂತನೆ, ಶಾಲಾ ಅಭಿವೃದ್ಧಿಯ ಮೇಲಿನ ಬದ್ಧತೆ ಮತ್ತು ಮಕ್ಕಳ ಭವಿಷ್ಯದ ಮೇಲಿನ ಪ್ರೀತಿ ಸದಾ ಸ್ಮರಣೀಯ ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ಪ್ರಶಂಸಿಸಿದ್ದಾರೆ. ಸರ್ಕಾರಿ ಶಾಲೆಯ ಚಿತ್ರಣವನ್ನೇ ಬದಲಾಯಿಸಿದ ಈ ಆದರ್ಶ ಶಿಕ್ಷಕಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-teacher-umai-salma-spends-rs-2-lakh-on-her-son-s-birthday-to-renovate-the-school-with-her-own-money-mrq/articleshow-4736pv9"/>
        </item>
        <item>
            <title><![CDATA[Farmers: ಶುಂಠಿ, ಹಸಿಮೆಣಸಿನಕಾಯಿ ಬೆಳೆದ ರೈತರಿಗೆ ದಾಖಲೆ ಸಲ್ಲಿಸಲು ಸರ್ಕಾರದಿಂದ ಸೂಚನೆ]]></title>
            <link>https://kannada.asianetnews.com/karnataka-districts/haveri-hanagal-farmers-growing-ginger-green-chillies-instructed-to-submit-documents-to-get-crop-insurance-mrq/articleshow-4yv9de5</link>
            <guid isPermaLink="true">https://kannada.asianetnews.com/karnataka-districts/haveri-hanagal-farmers-growing-ginger-green-chillies-instructed-to-submit-documents-to-get-crop-insurance-mrq/articleshow-4yv9de5</guid>
            <pubDate>Tue, 16 Jun 2026 13:46:14 +0530</pubDate>
            <description><![CDATA[&lt;p&gt;ಶುಂಠಿ ಮತ್ತು ಹಸಿಮೆಣಸಿನಕಾಯಿ ಬೆಳೆಗಾರರು ಬೆಳೆ ವಿಮೆ ಪಡೆಯಲು ದಾಖಲೆಗಳನ್ನು ಸಲ್ಲಿಸಬೇಕಿದೆ. ಹಾಗೆಯೇ, 2026-27ನೇ ಸಾಲಿನಿಂದ ವಿದ್ಯಾರ್ಥಿಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದ್ದು, ಈಗಾಗಲೇ ಶುಲ್ಕ ಪಾವತಿಸಿದವರಿಗೆ ಮರುಪಾವತಿ ಮಾಡಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv7qv93pxjqrvf1qn915xart,imgname-farmers-1-1781597578358.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಕಳೆದ 2024-25ನೇ ಸಾಲಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹಾನಗಲ್ಲ ತಾಲೂಕಿನಲ್ಲಿ ಶುಂಠಿ 199 ಪ್ರಕರಣಗಳಿಗೆ ಮತ್ತು ಹಸಿಮೆಣಸಿನಕಾಯಿ 92 ಪ್ರಕರಣಗಳಿಗೆ ರೈತರ ಬೆಳೆ ಹೊಂದಾಣಿಕೆ ಆಗದೇ ಇರುವುದರಿಂದ ಬೆಳೆ ವಿಮೆ ಜಮೆಯಾಗಿರುವುದಿಲ್ಲ.&lt;/p&gt;&lt;p&gt;ಆದ್ದರಿಂದ 2024-25ನೇ ಸಾಲಿನ ಪಹಣೆ ಪತ್ರಿಕೆಯಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ನಮೂದು ಆಗಿರಬೇಕು. 2024-25ನೇ ಸಾಲಿನಲ್ಲಿ ವಿಮೆ ನೋಂದಾಯಿತ ಬೆಳೆ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಕಂಪ್ಯೂಟರ್ ರಶೀದಿ, ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿಮೆ ನೋಂದಾಯಿತ ಉತ್ಪನ್ನವನ್ನು ಬೆಳೆ ಮಾರಾಟ ಮಾಡಿದ್ದಲ್ಲಿ ಸೂಕ್ತ ದಾಖಲೆ, ವಿಮೆ ನೋಂದಾಯಿತ ಬೆಳೆಯನ್ನು ಬೆಳೆಯಲು ಮೇಲಿನ ಸಾಲಿನಲ್ಲಿ ಬ್ಯಾಂಕಿನಿಂದ ಬೆಳೆಸಾಲ ಪಡೆದಿದ್ದಲ್ಲಿ ಬ್ಯಾಂಕಿನವರಿಂದ ದೃಢೀಕೃತ ಪ್ರತಿಗಳು, ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ಮೇಲಿನ ವರ್ಷಕ್ಕೆ ಸಂಬಂಧಿಸಿದಂತೆ ಇದ್ದಲ್ಲಿ ಸಂಬಂಧಿಸಿದ ರೈತರು ಈ ಪ್ರಕಟಣೆ ದಿನಾಂಕದಿಂದ 15 ದಿನಗಳೊಳಗಾಗಿ ಹಾನಗಲ್ ತೋಟಗಾರಿಕೆ ಇಲಾಖೆ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು ಎಂದು ಹಾನಗಲ್ಲ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳ ಬಸ್ ಸೇವಾಸಿಂಧು ಪೋರ್ಟಲ್ ಮೂಲಕ ವಿತರಣೆ&lt;/strong&gt;&lt;/h2&gt;&lt;p&gt;ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು, 2026-27ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿ ಬಸ್ ಪಾಸ್&zwnj;ಗಳನ್ನು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾಸಿಂಧು ಪೋರ್ಟಲ್ ಮೂಲಕ ವಿತರಿಸಲಾಗುತ್ತಿದೆ.&lt;/p&gt;&lt;p&gt;ಕರ್ನಾಟಕ ಸರ್ಕಾರವು ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್&zwnj;ಗಳಲ್ಲಿ ಪ್ರಯಾಣಿಸುವ ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದೆ.&lt;/p&gt;&lt;p&gt;ಜೂ.12ರಿಂದ ಸಂಸ್ಥೆಯ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸುಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿ ಬಸ್ ಪಾಸ್ ವಿತರಣೆಯಲ್ಲಿ ಹಾಲಿ ಅನುಸರಿಸುತ್ತಿರುವ ನಿಯಮಾವಳಿಗಳನ್ನು (ವಿದ್ಯಾರ್ಥಿ ಪಾಸಿಗಾಗಿ ಶೈಕ್ಷಣಿಕ ವಿದ್ಯಾಭ್ಯಾಸದ ಅರ್ಹತಾ ಮಾನದಂಡಗಳು, ದೂರದ ಮಿತಿ, ಪಾಸಿನ ಕಾಲಾವಧಿ ಇತ್ಯಾದಿ) ಮುಂದುವರೆಸಲಾಗಿದೆ.&lt;/p&gt;&lt;p&gt;ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆಯಲು, ಈ ಹಿಂದಿನಂತೆ ಕರ್ನಾಟಕ ಸರ್ಕಾರದ ಸೇವಾಸಿಂಧು ಪೋರ್ಟಲ್&zwnj;ನಲ್ಲಿ, ಶಾಲೆಗಳು ಸೇರಿದಂತೆ ಎಲ್ಲಿಂದಲಾದರೂ, ಆನ್&zwnj;ಲೈನಲ್ಲಿ ಅರ್ಜಿ ಸಲ್ಲಿಸಬಹುದು. ಆನಲೈನ್ ಸೇವಾಸಿಂಧು ಪೋರ್ಟಲ್ ಐಡಿ, ವಾ.ಕ.ರ.ಸಾ. ಸಂಸ್ಥೆ ವ್ಯಾಪ್ತಿಯ 82 ಪಾಸ್ ವಿತರಣಾ ಕೌಂಟರ್&zwnj;ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್&zwnj;ಸೈಟ್&zwnj;ನಲ್ಲಿ ಒದಗಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಫ್ರಿ ಬಸ್ ಸ್ಮಾರ್ಟ್&zwnj;ಕಾರ್ಡ್&zwnj; ವಿತರಣೆಗೆ ಸಿದ್ಧವಾಯ್ತು ಹೊಸ ಸೂತ್ರ: ಸಚಿವ ಬೈರತಿ ಸುರೇಶ್&zwnj;&lt;/strong&gt;&lt;/p&gt;&lt;p&gt;ನಿಗಮದ ವೆಬ್&zwnj;ಸೈಟ್ ವಿಳಾಸ&amp;nbsp;; ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ವಿತರಿಸಲಾಗಿರುವ ವಿದ್ಯಾರ್ಥಿ ಬಸ್ ಪಾಸುಗಳು ಯಥಾವತ್ತಾಗಿ ಚಾಲ್ತಿಯಲ್ಲಿರುತ್ತವೆ. ಆದಾಗ್ಯೂ ವಿದ್ಯಾರ್ಥಿಗಳು ಪಾವತಿಸಿರುವ ಮೊತ್ತವನ್ನು ಹಿಂದಿರುಗಿಸಲಾಗುವುದು. ರಾಜ್ಯದಲ್ಲಿ ವಾಸವಿದ್ದು, ನೆರೆರಾಜ್ಯಗಳಲ್ಲಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ನೆರೆರಾಜ್ಯಗಳಲ್ಲಿ (ರಾಜ್ಯದ ಗಡಿಭಾಗದಲ್ಲಿ) ವಾಸವಿದ್ದು, ರಾಜ್ಯದೊಳಗಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಉಚಿತ ಬಸ್ ಪಾಸ್ ಪಡೆಯಬಹುದಾಗಿದೆ.&lt;/p&gt;&lt;p&gt;ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷ 2026-27ನೇ ಸಾಲಿನಲ್ಲಿ ಶುಲ್ಕ ಪಡೆದು ವಿತರಿಸಲಾದ ಪಾಸುಗಳ ಸಂಪೂರ್ಣ ಶುಲ್ಕವನ್ನು 15 ದಿನಗಳೊಳಗಾಗಿ ವಿದ್ಯಾರ್ಥಿಗಳಿಗೆ ಮರುಪಾವತಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಸ್ಥಗಿತದ ಸುದ್ದಿಗೆ ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-hanagal-farmers-growing-ginger-green-chillies-instructed-to-submit-documents-to-get-crop-insurance-mrq/articleshow-4yv9de5"/>
        </item>
        <item>
            <title><![CDATA[ಕೈಕೊಟ್ಟ ಮಳೆ: 11 ಎಕ್ರೆ ಗೋವಿನಜೋಳದ ಬೆಳೆ ಟ್ರ‍್ಯಾಕ್ಟರ್‌ನಿಂದ ನಾಶ ಮಾಡಿದ ಹಾವೇರಿ ರೈತ]]></title>
            <link>https://kannada.asianetnews.com/karnataka-districts/haveri-bydadgi-lack-of-monsoon-rains-shidenoor-village-farmer-destroys-11-acres-of-crop-with-tractor-mrq/articleshow-5br2og5</link>
            <guid isPermaLink="true">https://kannada.asianetnews.com/karnataka-districts/haveri-bydadgi-lack-of-monsoon-rains-shidenoor-village-farmer-destroys-11-acres-of-crop-with-tractor-mrq/articleshow-5br2og5</guid>
            <pubDate>Tue, 23 Jun 2026 07:27:17 +0530</pubDate>
            <description><![CDATA[&lt;p&gt;ರೈತರೊಬ್ಬರು, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹತಾಶರಾಗಿ, ತಾವು ಬೆಳೆದಿದ್ದ 11 ಎಕರೆ ಗೋವಿನಜೋಳದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ನಷ್ಟ ಅನುಭವಿಸಿರುವ ಅವರು, ಸರ್ಕಾರದ ನೆರವಿಗಾಗಿ ಒತ್ತಾಯಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs2tdpwfrrpjhj8h4m0cs8t,imgname-haveri-farmer-1782179509980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕಂಗಾಲಾದ ರೈತನೊಬ್ಬ ಅಪಾರ ವೆಚ್ಚದಲ್ಲಿ ಬೆಳೆಸಿದ್ದ 11 ಎಕರೆ ಗೋವಿನ ಜೋಳ ಬೆಳೆಯನ್ನು ಟ್ರ&zwj;್ಯಾಕ್ಟರ್ ಕುಂಟೆ ಮೂಲಕ ಹರಗಿ ನಾಶಪಡಿಸಿದ ಘಟನೆ ತಾಲೂಕಿನ ಶಿಡೇನೂರ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಶಿಡೇನೂರ ಗ್ರಾಮದ ರೈತ ಕಿರಣಕುಮಾರ ಗಡಿಗೋಳ ಬೆಳೆ ನಾಶಪಡಿಸಿದ ರೈತ. ಎಷ್ಟೇ ಕಾದರೂ ಮಳೆ ಬಾರದೆ ಬೆಳೆ ಒಣಗಿ ಹೋಗುತ್ತಿರುವುದನ್ನು ನೋಡಿ ಕಂಗಾಲಾಗಿ ಬೆಳೆ ನಾಶ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;11 ಎಕರೆ ಲಾವಣಿ ಹೊಲ ನಾಶ&lt;/strong&gt;&lt;/h2&gt;&lt;p&gt;ಕಿರಣಕುಮಾರ ಗಡಿಗೋಳ ತಮ್ಮ ಸ್ವಂತ ಜಮೀನಿನ ಜೊತೆಗೆ ಲಾವಣಿ ಪಡೆದ ಜಮೀನು ಸೇರಿ ಒಟ್ಟು 11 ಎಕರೆ ಪ್ರದೇಶದಲ್ಲಿ ಗೋವಿನ ಜೋಳ ಬೆಳೆ ಬೆಳೆದಿದ್ದರು, ಪೂರ್ವ ಮುಂಗಾರು ಉತ್ತಮವಾಗಿದ್ದ ಹಿನ್ನೆಲೆಯಲ್ಲಿ ಉತ್ತಮ ಬೆಳೆ ನಿರೀಕ್ಷೆ ಹೊಂದಿದ್ದರು. ಆದರೆ ಕಳೆದ ಒಂದು ತಿಂಗಳಿಂದ ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದು ಇದರಿಂದ ಬೇಸತ್ತು ಬೆಳೆ ನಾಶದ ನಿರ್ಧಾರ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;₹2 ಲಕ್ಷ ನಷ್ಟ&lt;/strong&gt;&lt;/h3&gt;&lt;p&gt;ಸುಮಾರು 2 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿ ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ಹಣ ಹೂಡಿಕೆ ಮಾಡಿದ್ದರು. ಆದರೆ, ಬಿತ್ತನೆ ಬಳಿಕ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಬೆಳೆ ಒಣಗಿ ಹೋಗಿದ್ದು, ಹೂಡಿಕೆ ಮಾಡಿದ ಹಣವೂ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ತೀವ್ರ ನಿರಾಶೆಗೊಂಡ ರೈತ ಕಿರಣಕುಮಾರ ಗಡಿಗೋಳ ಟ್ರ&zwj;್ಯಾಕ್ಟರ್&zwnj;ನಿಂದ ಕುಂಟೆ ಹೊಡೆಸಿ ಸಂಪೂರ್ಣ ಬೆಳೆ ನಾಶಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೊನ್ನಾಳಿ-ದಾವಣಗೆರೆಗೆ ಬಸವಾಪಟ್ಟಣ ಮೂಲಕ ಹೊಸ ಬಸ್ ಆರಂಭ; ಮಾರ್ಗ, ಸಮಯ ಈ ರೀತಿಯಾಗಿದೆ&lt;/strong&gt;&lt;/p&gt;&lt;p&gt;ಪ್ರಸ್ತುತ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆ ಅಭಾವ ಮುಂದುವರಿದರೆ ಕೃಷಿ ಆಧಾರಿತ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆಯಿದೆ. ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ, ಸಾಲ ಮರುಪಾವತಿ ಅವಧಿ ವಿಸ್ತರಣೆ ಹಾಗೂ ಅಗತ್ಯ ನೆರವು ನೀಡುವಂತೆ ರೈತರಾದ ಶಿವಪ್ಪ ತೆವರಿ, ಪ್ರಭು ಬಿದರಿ, ಗಣೇಶ ಯೋಗಿಕೊಪ್ಪ, ಶಂಭು ಭಾವಿಕಟ್ಟಿ, ಮಲ್ಲಿಕಾರ್ಜುನ ದುರ್ಗದ, ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಕೃಷಿಗೆ ಮಾಡಿದ ಎಲ್ಲ ಹೂಡಿಕೆ ಮಣ್ಣಾಯಿತು. ಸಾಲ ಮಾಡಿ ಕೃಷಿ ಮಾಡಿದ್ದೇವೆ. ಮಳೆ ಕೈಕೊಟ್ಟಿದ್ದರಿಂದ ಬದುಕೇ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ರೈತರಿಗೆ ನೆರವಾಗಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಜೊತೆಗೆ ಹಸಿರು ಬರಗಾಲ ಎಂದು ಘೋಷಿಸಿ ಜಿಲ್ಲೆಯ ರೈತರಿಗೆ ವಿಶೇಷ ನೆರವು ನೀಡಬೇಕು ಎಂದು ಶಿಡೆನೂರ ರೈತ ಕಿರಣಕುಮಾರ ಗಡಿಗೋಳ ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Haveri: ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ; ಎತ್ತುಗಳ ಖರೀದಿಗಿಲ್ಲ ಹಣ&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-bydadgi-lack-of-monsoon-rains-shidenoor-village-farmer-destroys-11-acres-of-crop-with-tractor-mrq/articleshow-5br2og5"/>
        </item>
        <item>
            <title><![CDATA[Haveri: ಸಾವಿನಲ್ಲೂ ಒಂದಾದ ಸತಿ-ಪತಿ: ಪತ್ನಿಯ ಅಗಲಿಕೆ ತಾಳಲಾರದೆ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟ ಪತಿ!]]></title>
            <link>https://kannada.asianetnews.com/karnataka-districts/inseparable-in-life-and-death-heartbroken-husband-passes-away-hours-after-wife-demise-in-haveri-gdp/articleshow-5ur2zk8</link>
            <guid isPermaLink="true">https://kannada.asianetnews.com/karnataka-districts/inseparable-in-life-and-death-heartbroken-husband-passes-away-hours-after-wife-demise-in-haveri-gdp/articleshow-5ur2zk8</guid>
            <pubDate>Mon, 27 Jul 2026 11:27:54 +0530</pubDate>
            <description><![CDATA[ಹಾವೇರಿ ಜಿಲ್ಲೆಯ ಹೆಸರೂರು ಗ್ರಾಮದಲ್ಲಿ 45 ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿದ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಪತ್ನಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಅವರ ಅಗಲಿಕೆಯ ದುಃಖ ತಾಳಲಾರದೆ ಪತಿಯೂ ಕೊನೆಯುಸಿರೆಳೆದಿದ್ದಾರೆ. ಈ ಹೃದಯವಿದ್ರಾವಕ ಘಟನೆ ಇಡೀ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyh29fanmq36tx8xhe2j6wsz,imgname-haveri-couple-die-together-1785131744597.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಬದುಕಿದರೂ ಜೊತೆಯಾಗಿ, ಬಾಳದಿದ್ದರೂ ಜೊತೆಯಾಗಿ ಎನ್ನುವ ಹಿರಿಯರ ಮಾತು ಹಾವೇರಿ ಜಿಲ್ಲೆಯಲ್ಲಿ ಅಕ್ಷರಶಃ ನಿಜವಾಗಿದೆ. ದಾಂಪತ್ಯ ಜೀವನದ ಪವಿತ್ರತೆಗೆ ಸಾಕ್ಷಿಯೆಂಬಂತೆ, 45 ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿ ಬದುಕಿದ ಆದರ್ಶ ದಂಪತಿಗಳಿಬ್ಬರು ಸಾವಿನಲ್ಲೂ ಒಂದಾಗುವ ಮೂಲಕ ಇಡೀ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದ್ದಾರೆ. ಪತ್ನಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಆಕೆಯ ಅಗಲಿಕೆಯ ತೀವ್ರ ದುಃಖವನ್ನು ತಾಳಲಾರದೆ ಪತಿಯೂ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ಜರುಗಿದೆ.&lt;/p&gt;&lt;h2&gt;45 ವರ್ಷಗಳ ಅನ್ಯೋನ್ಯ ದಾಂಪತ್ಯ&lt;/h2&gt;&lt;p&gt;ಹೆಸರೂರು ಗ್ರಾಮದ ನಿವಾಸಿಗಳಾದ ಜುಂಜಪ್ಪ ಬಾರ್ಕಿ (75 ವರ್ಷ) ಮತ್ತು ಶಾಂತಮ್ಮ (65 ವರ್ಷ) ಸಾವಿನಲ್ಲೂ ಒಂದಾದ ಅಪರೂಪದ ಸತಿ-ಪತಿಗಳು. ಕಳೆದ 45 ವರ್ಷಗಳ ದೀರ್ಘಾವಧಿಯಿಂದ ಈ ದಂಪತಿಗಳು ಯಾವುದೇ ಕಹಿ ಘಟನೆಗಳಿಲ್ಲದೆ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಹಳ್ಳಿಯ ಜನರ ಕಣ್ಣಿಗೆ ಆದರ್ಶ ಜೋಡಿಯಾಗಿ ಬದುಕಿದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲಾರದಷ್ಟು ಪ್ರೇಮ ಇವರದ್ದಾಗಿತ್ತು.&lt;/p&gt;&lt;h2&gt;ರಾತ್ರಿ ಪತ್ನಿ ಸಾವು, ಬೆಳಗ್ಗೆ ಪತಿ ನಿಧನ!&lt;/h2&gt;&lt;p&gt;ವಿಧಿಯ ಆಟ ವಿಚಿತ್ರವಾಗಿತ್ತು. ಭಾನುವಾರ ತಡರಾತ್ರಿ ಸುಮಾರು 12 ಗಂಟೆಯ ಸುಮಾರಿಗೆ ಪತ್ನಿ ಶಾಂತಮ್ಮ ಅವರು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದರು. ಅರ್ಧಾಂಗಿಯ ಹಠಾತ್ ನಿಧನ ವಯೋವೃದ್ಧ ಜುಂಜಪ್ಪ ಅವರಿಗೆ ಸಹಿಸಿಕೊಳ್ಳಲು ಅಸಾಧ್ಯವಾದ ಆಘಾತವನ್ನು ನೀಡಿತು. 45 ವರ್ಷಗಳ ಕಾಲ ನೆರಳಿನಂತೆ ಜೊತೆಗಿದ್ದ ಹೆಂಡತಿಯ ಶವದ ಮುಂದೆ ಕುಳಿತು, &quot;ನೀನಿಲ್ಲದೆ ನಾ ಹೇಗೆ ಬದುಕಲಿ?&quot; ಎಂದು ಆ ವೃದ್ಧ ರಾತ್ರಿ ಇಡೀ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಪತ್ನಿಯ ವಿಯೋಗದ ತೀವ್ರ ದುಃಖ ಮನಸ್ಸಿನ ಮೇಲೆ ಎಷ್ಟರಮಟ್ಟಿಗೆ ಬೀರಡಿತೆಂದರೆ, ಸೋಮವಾರ ಮುಂಜಾನೆ ಜುಂಜಪ್ಪ ಅವರ ಹೃದಯದ ಬಡಿತವೂ ನಿಂತುಹೋಗಿದೆ. ಪತ್ನಿ ತೀರಿಕೊಂಡ ಕೆಲವೇ ಗಂಟೆಗಳ ಅಂತರದಲ್ಲಿ ಪತಿ ಜುಂಜಪ್ಪ ಅವರೂ ಸಹ ನಿಧನರಾಗುವ ಮೂಲಕ ಪತ್ನಿಯ ಹಿಂದೆಯೇ ಮಸಣದ ಹಾದಿ ಹಿಡಿದರು.&lt;/p&gt;&lt;h2&gt;ಗ್ರಾಮಸ್ಥರ ಕಣ್ಣಾಲಿಗಳು ಒದ್ದೆ&lt;/h2&gt;&lt;p&gt;ಒಂದೇ ಮನೆಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ದಂಪತಿಗಳಿಬ್ಬರೂ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಹೆಸರೂರು ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಇಬ್ಬರ ಪಾರ್ಥಿವ ಶರೀರಗಳನ್ನು ಜೊತೆಯಾಗಿಯೇ ಇರಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಯಿತು.&lt;/p&gt;&lt;p&gt;ದಂಪತಿಗಳ ಈ ಅಪರೂಪದ ಪ್ರೀತಿ ಮತ್ತು ಸಾವಿನಲ್ಲೂ ಒಂದಾದ ನಿಷ್ಠೆಯನ್ನು ಕಂಡು ಗ್ರಾಮಸ್ಥರು ಹಾಗೂ ನೆರೆಹೊರೆಯವರು ತೀವ್ರ ಭಾವುಕರಾಗಿದ್ದಾರೆ. &quot;ಇಂತಹ ಸತಿ-ಪತಿಯರನ್ನು ನೋಡುವುದೇ ಅಪರೂಪ. ಬದುಕಿದ್ದಾಗಲೂ ಪ್ರೀತಿಯಿಂದ ಬಾಳಿದರು, ಈಗ ಸಾವಿನಲ್ಲೂ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಒಟ್ಟಿಗೆ ಹೊರಟುಹೋದರು&quot; ಎಂದು ಗ್ರಾಮದ ಹಿರಿಯರು ಕಣ್ಣೀರು ಹಾಕುತ್ತಾ ದಂಪತಿಗಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ.&lt;/p&gt;]]></content:encoded>
            <category>haveri</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/inseparable-in-life-and-death-heartbroken-husband-passes-away-hours-after-wife-demise-in-haveri-gdp/articleshow-5ur2zk8"/>
        </item>
        <item>
            <title><![CDATA[ಹಾವೇರಿ: ಕಾರ ಹುಣ್ಣಿಮೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ, ರೈತನ ಮೇಲೆ ಹಲ್ಲೆ, ಪಟಾಕಿ ಸಿಡಿಸಿದ್ದೇ ತಪ್ಪಾಯ್ತಾ?]]></title>
            <link>https://kannada.asianetnews.com/karnataka-districts/clashes-erupt-in-naregal-village-during-kara-hunnnime-bull-racing-competition-at-haveri-district-rav/articleshow-8rvqa08</link>
            <guid isPermaLink="true">https://kannada.asianetnews.com/karnataka-districts/clashes-erupt-in-naregal-village-during-kara-hunnnime-bull-racing-competition-at-haveri-district-rav/articleshow-8rvqa08</guid>
            <pubDate>Tue, 30 Jun 2026 06:16:16 +0530</pubDate>
            <description><![CDATA[&lt;p&gt;ಕಾರ ಹುಣ್ಣಿಮೆ ದಿನದಂದು ಹೋರಿಗಳನ್ನ ಓಡಿಸುವ ಸ್ಪರ್ಧೆ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸಿದರೆಂದು ಅನ್ಯಕೋಮಿನ ಗುಂಪೊಂದು ರೈತನೋರ್ವನ ಕೈ &amp;nbsp;ಕಡಿದ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwazgqb6qpk2y42ktv76n8fv,imgname----------------------58--1782780026214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾನಗಲ್ಲ (ಜೂ.30): &lt;/strong&gt;ಹಾವೇರಿ(Haveri) ಜಿಲ್ಲೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮ(Naregal village)ದಲ್ಲಿ ಕಾರಹುಣ್ಣಿಮೆ ಹಬ್ಬದಂಗವಾಗಿ ಸಂಪ್ರದಾಯದಂತೆ ಹೋರಿಗಳನ್ನು ಓಡಿಸುವ(Bull racing competition) ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಕಾರಣಕ್ಕೆ ಎರಡು ಕೋಮಿನ ಜನರ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರ ಕೈ ಕಡಿಯಲಾಗಿದೆ. ಒಟ್ಟು 8 ಮಂದಿ ಗಾಯಗೊಂಡಿದ್ದು, ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.&lt;/p&gt;&lt;h2&gt;ಕಾರ ಹುಣ್ಣಿಮೆ: ನರೇಗಲ್ ಗ್ರಾಮದಲ್ಲಿ ನಡೆದಿದ್ದೇನು?&lt;/h2&gt;&lt;p&gt;ಕಾರಹುಣ್ಣಿಮೆ ಅಂಗವಾಗಿ ನರೇಗಲ್ಲ ಗ್ರಾಮದಲ್ಲಿ ಪ್ರತಿ ವರ್ಷದಂತೆ ಸೋಮವಾರವೂ ಹೋರಿ ಓಡಿಸುವ ಕಾರ್ಯಕ್ರಮವಿತ್ತು. ಅದರಂತೆ ಮಧ್ಯಾಹ್ನ ರೈತರು ತಮ್ಮ ಎತ್ತುಗಳನ್ನು ಓಡಿಸುವ ಸಂದರ್ಭದಲ್ಲಿ ಗ್ರಾಮದ ಮಸೀದಿ ಬಳಿ ಪಟಾಕಿ ಸಿಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಾಷಾಸಾಬ ಗೌಂಡಿ ಎಂಬುವರು &lsquo;ನಮ್ಮ ಮಸೀದಿ ಬಳಿ ಏಕೆ ಪಟಾಕಿ ಸಿಡಿಸುತ್ತೀರಾ&rsquo; ಎಂದು ಪ್ರಶ್ನಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಹೋರಿ ಹಿಂದೆ ಬಂದಿದ್ದ ಲೋಹಿತ್ ಜಯಪ್ಪ(Lohit Jayappa) ಎಂಬುವರನ್ನು ಅನ್ಯಕೋಮಿನವರು ಥಳಿಸಿದರು. ಇದರಿಂದ ರೊಚ್ಚಿಗೆದ್ದ ಹಿಂದೂ ಯುವಕರ ಗುಂಪು ಕುಡುಗೋಲು ಮತ್ತಿತರ ಆಯುಧಗಳಿಂದ ಪ್ರತಿದಾಳಿ ನಡೆಸಿತು.&lt;/p&gt;&lt;p&gt;ಘರ್ಷಣೆಯಲ್ಲಿ ಶಿವರಾಜ್ ಕುರುಬರ (27), ನಾಗಪ್ಪ ಹನುಮಂತಪ್ಪ ಕುರುಬರ (34), ಮಲ್ಲಪ್ಪ ರಾಯಪ್ಪ ಕೊಡಸಂಗಿ (30), ನಿಂಗರಾಜ ಮಹಾಂತೇಶ ಕುರುಬರ (30), ಜಯಪ್ಪ ಸಂಗಪ್ಪ ಕುರುಬರ (20), ಲೋಹಿತ ರೇವಣಪ್ಪ ಕುರುಬರ (24), ಬಾಷಾಸಾಬ ಗೌಂಡಿ (55), ಖಾಜಾ ಗೌಂಡಿ (18) ಎಂಬುವರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವರಾಜ ಕುರುಬರ, ಜಯಪ್ಪ ಕುರುಬರ ಹಾಗೂ ಲೋಹಿತ ಕುರುಬರ ಅವರನ್ನು ಹುಬ್ಬಳ್ಳಿ ಕಿಮ್ಸ್&zwnj;ಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಕೈ ಕಡಿಯಲಾಗಿದೆ. ಉಳಿದವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;p&gt;ಘಟನೆಯಿಂದಾಗಿ ನರೇಗಲ್ಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್&zwnj; ಬಂದೋಬಸ್ತ್&zwnj; ಏರ್ಪಡಿಸಲಾಗಿದೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/clashes-erupt-in-naregal-village-during-kara-hunnnime-bull-racing-competition-at-haveri-district-rav/articleshow-8rvqa08"/>
        </item>
        <item>
            <title><![CDATA[Haveri: ಕ್ಷುಲ್ಲಕ ಜಗಳಕ್ಕೆ ಬಲಿಯಾದ ಬೀದಿ ಬದಿ ವ್ಯಾಪಾರಿ! ಇದು ಒಂದು ಮೊಟ್ಟೆಯ ಕಥೆ!]]></title>
            <link>https://kannada.asianetnews.com/karnataka-districts/haveri-a-street-vendor-who-fell-victim-to-a-trivial-fight-this-is-the-story-of-an-egg/articleshow-9egt640</link>
            <guid isPermaLink="true">https://kannada.asianetnews.com/karnataka-districts/haveri-a-street-vendor-who-fell-victim-to-a-trivial-fight-this-is-the-story-of-an-egg/articleshow-9egt640</guid>
            <pubDate>Thu, 02 Jul 2026 17:18:13 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಕ್ಷುಲ್ಲಕವಿಚಾರಕ್ಕೆ ಬೀದಿ ಬದಿ ವ್ಯಾಪಾರಿಬ್ಬರು ಕೊಲೆಯಾಗಿದ್ದಾರೆ. ಸುಕಾ ಸುಮ್ಮನೆ ಶುರುವಾದ ಜಗಳ ತಾರಕಕ್ಕೇರಿ, ನಾಲ್ವರು ಯುವಕರು ಹಲ್ಲೆ ನಡೆಸಿದ್ದರಿಂದ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwhact88v2wkd6ajak7ksxj8,imgname-shivaji-1782992759048.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಬೀದಿ-ಬದಿ ವ್ಯಾಪಾರಿ ಮೇಲೆ ಮನಸ್ಸೊಯಿಚ್ಚೆ ಹಲ್ಲೆಮಾಡಿ ಕೊಲೆ ಮಾಡಿರುವ ಘಟನೆ ನಿನ್ನೆ ಸಂಜೆ 7ಕ್ಕೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ಹಲ್ಲೆಯ ತೀವ್ರತೆಗೆ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲೆಯಾದ ಕೆಲವೇ ಗಂಟೆಯಲ್ಲಿ ಸ್ಥಳಕ್ಕೆ ದಾವಿಸಿದ ಪೊಲೀಸ್&zwnj;ರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಅಷ್ಟಕ್ಕೂ ಆಗಿದ್ದೇನು?&lt;/strong&gt;&lt;/h2&gt;&lt;p&gt;ಮೊಟ್ಟೆ ತರಲು ಬಂದ ವಾಸಿಂ ಎಂಬ ಆರೋಪಿ 100 ರೂ., ನೀಡಿ 5 ಮೊಟ್ಟೆ ಕೇಳಿದ್ದಾನೆ. ನಂತರ 100 ಅಲ್ಲಾ 500 ಕೊಟ್ಟಿದ್ದೇನೆ ಎಂದು ಜಗಳಕ್ಕಿಳಿದಿದ್ದಾನೆ. ಅವನು ಹಾಗೂ ಅವನ ಜತೆ ಇದ್ದ ಮೂವರು ಸೇರಿ ಎದೆಗೆ ಕಾಲಿನಿಂದ ಒದ್ದು ಹಲ್ಲೆಗೈದ ನಾಲ್ವರು ಯುವಕರು ಕೊಲೆಗೈದಿದ್ದಾರೆ. ಶಿವಾಜಿ ರಾವ್&zwnj; ಬೈರೋಜಿ (55) ಮೃತ ವ್ಯಕ್ತಿ.&lt;/p&gt;&lt;h3&gt;&lt;strong&gt;ತಂದೆಗಿಂತ ಮೊದಲು ಮಗನ ಜತೆ ಜಗಳ!&lt;/strong&gt;&lt;/h3&gt;&lt;p&gt;ಈ ಹಿಂದೆ ಹೇಳಿಂದಂತೆ ಮೊಟ್ಟೆ ಖರೀದಿಸಲು ಅಂಗಡಿಗೆ ನಾಲ್ವರು ಮುಸ್ಲಿಂ ಯುವಕರು ಬಂದಿದ್ದಾರೆ. ನಾವು ಕೊಟ್ಟಿದ್ದು ₹500 ಎಂದು ವಾಸೀಮ್ ಜಗಳ ತೆಗೆದಿದ್ದಾನೆ. ಇಲ್ಲ ಕೊಟ್ಟಿದ್ದು ₹100 ಎಂದಿದ್ದಕ್ಕೆ ಮೃತ ಶಿವಾಜಿರಾವ್ ಮಗನ ಜೊತೆ ಗಲಾಟೆ ಮಾಡಿದ್ದರು. ಮಗನ ಜೊತೆ ಗಲಾಟೆ ಬಿಡಿಸಲು ಬಂದಾಗ ತಂದೆ ಮೇಲೆ ಆ ಯುವಕರು ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ವಾಸೀಮ್ ಮುಲ್ಲಾ,ಸರ್ಪರಾಜ್ ಮುಲ್ಲಾ,ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ ಆರೋಪಿಗಳಾಗಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆ ಬಳಿಕ ಆಗಿದ್ದೇನು?&lt;/strong&gt;&lt;/h3&gt;&lt;p&gt;ಶಿವಾಜಿರಾವ್ ಮೃತದೇಹವನ್ನು ಮರೋಣತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆ ಬಗ್ಗೆ ಶಿವಾಜಿರಾವ್ ಮಗ ಭರತ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಐಜಿ ರವಿಕಾಂತೇಗೌಡ ಹಾಗೂ ಎಸ್ಪಿ ಯಶೋದಾ ವಂಟಗೋಡಿ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಸಧ್ಯ ಈ ಘಟನೆಯಿಂದಾಗಿ ರಟ್ಟಿಹಳ್ಳಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಠಿಯಾಗಿದೆ. ಸಧ್ಯಕ್ಕೆ ರಟ್ಟಿಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.&lt;/p&gt;&lt;h3&gt;&lt;strong&gt;ಘಟನೆ ಕುರಿತು ಎಸ್&zwnj;ಪಿ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಘಟನೆ ಕುರಿತು ಮಾತನಾಡಿದ ಹಾವೇರಿ ಎಸ್ ಪಿ ಯಶೋಧಾ ವಂಟಗೋಡಿ, ಈ ಪ್ರಕರಣದಲ್ಲಿ ನಾಲ್ವರ ಮೇಲೆ ಕಂಪ್ಲೇಂಟ್ ಆಗಿತ್ತು. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾ. ಅವನನ್ನೂ ಕೂಡಾ ಬಂಧಿಸುತ್ತೇವೆ ಎಂದು ಖಡಕ್&zwnj; ಮಾತನ್ನು ಆಡಿದ್ದಾರೆ. ಆರೋಪಿಗಳಾದ ವಾಸಿಂ, ಸರ್ಪರಾಜ್, ಸಾಧಿಕ್ ಬಂಧಿಸಲಾಗಿದೆ. ಸಿರಾಜ್ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ.&lt;/p&gt;&lt;h3&gt;&lt;strong&gt;ಗೂಡಂಗಡಿ ಇಟ್ಟುಕೊಂಡಿದ್ದ ಶಿವಾಜಿರಾವ್&zwnj;!&lt;/strong&gt;&lt;/h3&gt;&lt;p&gt;ಮೃತ ಶಿವಾಜಿ ರಾವ್ ಗೂಡಂಗಡಿ ಇಟ್ಟುಕೊಂಡು ಜೀವನ ಸಾಗಿಸಿದ್ದರು.ಈ ವೇಳೆ ಗಲಾಟೆ ಆಗಿ ತಳ್ಳಾಟ ಆಗಿದೆ. ಈ ಹಿನ್ನೆಲೆಯಲ್ಲಿ ಗಲಾಟೆ ವೇಳೆ ಶಿವಾಜಿ ರಾವ್ ತಳ್ಳಿದ್ದಕ್ಕೆ ಕೆಳಗೆ ಬಿದ್ದಿದಾರೆ. ಶಿವಾಜಿ ರಾವ್ ಸ್ಥಳದಲ್ಲೇ ಅನ್ ಕಾನ್ಸಿಯಸ್ ಆಗಿದ್ದಾರೆ. ಮುಂದೆ ಆಸ್ಪತ್ರೆಗೆ ದಾಖಲಿಸಿದಾಗ ಅವರು ಮೃತ ಪಟ್ಟಿರೋದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಎಲ್ಲರೂ ಆಪ್ತರೇ ಆಗಿದ್ರಾ?&lt;/strong&gt;&lt;/h3&gt;&lt;p&gt;ನಾಲ್ವರು ಆರೋಪಿಗಳು ಸ್ವಂತ ಅಣ್ಣ ತಮ್ಮಂದಿರಾಗಿದ್ದಾರೆ. ಆರೋಪಿಗಳ ಅಪ್ಪ ಹಾಗೂ ಮೃತ ಪಟ್ಟ ಶಿವಾಜಿ ರಾವ್ ಇಬ್ಬರೂ &zwnj;ಪರಸ್ಪರ ಗೊತ್ತಿರೋರೇ ಆಗಿದ್ದಾರೆ. ತಳ್ಳಾಟದಲ್ಲಿ ಈ ತರ ಡೆತ್ ಆಗಿದೆ, ಇದು ಕಮ್ಯುನಲ್ ಅಟೆಂಪ್ಟ್&zwnj; ಅಲ್ಲ ಎನ್ನುವುದು ಪೊಲೀಸ್&zwnj; ಮೂಲಗಳಿಂದ ತಿಳಿದು ಬಂದಿದೆ. ಮೃತ ಶಿವಾಜಿ ರಾವ್ ದೇಹದ ಮೇಲೆ ಮೇಲ್ಮೋಟಕ್ಕೆ ಎಲ್ಲೂ ಗಾಯಗಳಿಲ್ಲ ಅಂತ ಮಾಹಿತಿ ಇದೆ. ಪಿಎಂ ವರದಿ ಬಂದ ಮೇಲೆ ಎನಾಗಿದೆ ಎಂದು ಗೊತ್ತಾಗಲಿದೆ. ಪೊಲೀಸ್&zwnj;ರು ತನಿಖೆ ಮುಂದುವರೆಸಿದ್ದಾರೆ.&lt;/p&gt;]]></content:encoded>
            <category>haveri</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/haveri-a-street-vendor-who-fell-victim-to-a-trivial-fight-this-is-the-story-of-an-egg/articleshow-9egt640"/>
        </item>
        <item>
            <title><![CDATA[ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ  ವೈದ್ಯರಿಲ್ಲ, ಸೂಕ್ತ ಚಿಕಿತ್ಸೆ ಸಿಗದೆ ಮಗು ಸಾವು! ರೊಚ್ಚಿಗೆದ್ದ ಕುಟುಂಬ]]></title>
            <link>https://kannada.asianetnews.com/karnataka-districts/one-year-old-girl-dies-due-to-absence-of-doctor-protests-outside-haveri-government-hospital-gdp/articleshow-9g4o32z</link>
            <guid isPermaLink="true">https://kannada.asianetnews.com/karnataka-districts/one-year-old-girl-dies-due-to-absence-of-doctor-protests-outside-haveri-government-hospital-gdp/articleshow-9g4o32z</guid>
            <pubDate>Fri, 10 Jul 2026 13:02:14 +0530</pubDate>
            <description><![CDATA[ಹಾವೇರಿ ತಾಲ್ಲೂಕಿನ ಹಾವನೂರು ಗ್ರಾಮದಲ್ಲಿ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಒಂದು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ಆಸ್ಪತ್ರೆಯ ಮುಂದೆ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದ್ದು, ವೈದ್ಯರ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx5ev9k9fp859rdrb9dxqgm3,imgname-haveri-government-hospital-negligence-1783668516456.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ಸರ್ಕಾರಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರು ಸಿಗದೆ, ಸೂಕ್ತ ಚಿಕಿತ್ಸೆ ಲಭಿಸದೇ ಕೇವಲ ಒಂದು ವರ್ಷದ ಹೆಣ್ಣು ಮಗುವೊಂದು ಪ್ರಾಣ ಕಳೆದುಕೊಂಡಿರುವ ಕರುಳು ಹಿಂಡುವ ಘಟನೆ ಹಾವೇರಿ ತಾಲ್ಲೂಕಿನ ಹಾವನೂರು ಗ್ರಾಮದಲ್ಲಿ ನಡೆದಿದೆ. ಭವಾನಿ ಮಹೇಶ ಕಿಳ್ಳಿಕ್ಯಾತರ್ (1 ವರ್ಷ) ಮೃತಪಟ್ಟ ದುರ್ದೈವಿ ಮಗುವಾಗಿದ್ದಾಳೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆಯ ಮುಂದೆಯೇ ಮಗುವಿನ ಶವವನ್ನಿಟ್ಟು ತೀವ್ರ ಪ್ರತಿಭಟನೆ ನಡೆಸಿದ್ದಾರೆ.&lt;/p&gt;&lt;h2&gt;ಆಟವಾಡುತ್ತಿದ್ದ ಮಗು ಏಕಾಏಕಿ ಮೂರ್ಛೆ ಹೋಗಿತ್ತು:&lt;/h2&gt;&lt;p&gt;ಮಗು ಭವಾನಿ ಮನೆಯಲ್ಲಿ ಎಂದಿನಂತೆ ನಗುನಗುತ್ತಾ ಆಟವಾಡುತ್ತಿತ್ತು. ಆದರೆ ಆಟವಾಡುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಮಗು ಪ್ರಜ್ಞೆ ತಪ್ಪಿ ಮೂರ್ಛೆ ಹೋಗಿದೆ. ಇದರಿಂದ ತೀವ್ರ ಆತಂಕಗೊಂಡ ಪೋಷಕರು ತಕ್ಷಣವೇ ಮಗುವನ್ನು ಉಪಚರಿಸಲು ಹಾವನೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.&lt;/p&gt;&lt;h2&gt;ಆಸ್ಪತ್ರೆಯಲ್ಲಿ ಇರಲಿಲ್ಲ ವೈದ್ಯರು&lt;/h2&gt;&lt;p&gt;ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಅಲ್ಲಿ ಯಾವುದೇ ವೈದ್ಯರು ಕರ್ತವ್ಯದಲ್ಲಿ ಇರಲಿಲ್ಲ ಎನ್ನಲಾಗಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರೂ ತುರ್ತು ಚಿಕಿತ್ಸೆ ನೀಡಲು ವೈದ್ಯರಿಲ್ಲದ ಕಾರಣ ಪೋಷಕರು ಅಸಹಾಯಕರಾಗಿ ಕಣ್ಣೀರು ಹಾಕಿದ್ದಾರೆ. ಅಲ್ಲಿ ಯಾವುದೇ ಸಕಾಲಿಕ ವೈದ್ಯಕೀಯ ನೆರವು ಸಿಗದ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಹಾವನೂರಿನ ಪಕ್ಕದ ಪಟ್ಟಣವಾದ ಗುತ್ತಲದ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಹಾವನೂರಿನಿಂದ ಗುತ್ತಲ ಪಟ್ಟಣದ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಮಗು ಜೀವ ಕಳೆದುಕೊಂಡಿದೆ. ಸಕಾಲಕ್ಕೆ ಹಾವನೂರು ಆಸ್ಪತ್ರೆಯಲ್ಲೇ ಚಿಕಿತ್ಸೆ ಸಿಕ್ಕಿದ್ದರೆ ನಮ್ಮ ಮಗು ಬದುಕುತ್ತಿತ್ತು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.&lt;/p&gt;&lt;h2&gt;ಶವವಿಟ್ಟು ಪ್ರತಿಭಟನೆ, ಸಾರ್ವಜನಿಕರ ಆಕ್ರೋಶ:&lt;/h2&gt;&lt;p&gt;ವೈದ್ಯರ ಬೇಜವಾಬ್ದಾರಿತನ ಹಾಗೂ ಆಸ್ಪತ್ರೆಯ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ನೇರ ಕಾರಣ ಎಂದು ರೊಚ್ಚಿಗೆದ್ದ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಮಗುವಿನ ಶವವನ್ನು ಹಾವನೂರು ಸರ್ಕಾರಿ ಆಸ್ಪತ್ರೆಯ ಮುಂದೆಯೇ ಇಟ್ಟು ಧರಣಿ ಕುಳಿತರು. ಆರೋಗ್ಯ ಇಲಾಖೆ ಹಾಗೂ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಗೈರುಹಾಜರಿಯಿಂದಾಗಿ ಬಡವರ ಜೀವಗಳು ಬಲಿಯಾಗುತ್ತಿವೆ ಎಂದು ಸಾರ್ವಜನಿಕರು ಆಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;h2&gt;ಸ್ಥಳಕ್ಕೆ ತಾಲ್ಲೂಕು ವೈದ್ಯಾಧಿಕಾರಿ ಭೇಟಿ:&lt;/h2&gt;&lt;p&gt;ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಹಾವೇರಿ ತಾಲ್ಲೂಕು ವೈದ್ಯಾಧಿಕಾರಿ (ಟಿ.ಎಚ್.ಒ) ಡಾ. ಪ್ರಭಾಕರ್ ಕುಂದೂರ ಅವರು ತಕ್ಷಣ ಹಾವನೂರು ಆಸ್ಪತ್ರೆಗೆ ಭೇಟಿ ನೀಡಿದರು. ಸ್ಥಳದಲ್ಲಿದ್ದ ಉದ್ರಿಕ್ತ ಜನರನ್ನು ಮಾತುಕತೆ ನಡೆಸಿ ಮಗುವಿನ ಕುಟುಂಬ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ವೇಳೆ ಸಾರ್ವಜನಿಕರು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಮುಗಿಬಿದ್ದು, ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದರು.&lt;/p&gt;&lt;h2&gt;ಪೊಲೀಸ್ ಪ್ರಕರಣ ದಾಖಲು:&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಸದ್ಯ ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಮುಂದಿನ ತನಿಖೆ ಪ್ರಗತಿಯಲ್ಲಿದೆ.&lt;/p&gt;]]></content:encoded>
            <category>haveri</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/one-year-old-girl-dies-due-to-absence-of-doctor-protests-outside-haveri-government-hospital-gdp/articleshow-9g4o32z"/>
        </item>
        <item>
            <title><![CDATA[ಸರ್ಕಾರಿ ಪ್ರೌಢಶಾಲೆ ₹5 ಲಕ್ಷ ಮೌಲ್ಯದ ಮೇಲ್ಚಾವಣಿ ತಗಡು ₹20 ಸಾವಿರಕ್ಕೆ ಮಾರಿದ ಶಿಕ್ಷಕ! ಹಳೆ ವಿದ್ಯಾರ್ಥಿ ಆರೋಪ]]></title>
            <link>https://kannada.asianetnews.com/karnataka-districts/haveri-marol-govt-high-school-teacher-caught-selling-roof-sheets-illegally-allegation/articleshow-cfyqq3x</link>
            <guid isPermaLink="true">https://kannada.asianetnews.com/karnataka-districts/haveri-marol-govt-high-school-teacher-caught-selling-roof-sheets-illegally-allegation/articleshow-cfyqq3x</guid>
            <pubDate>Tue, 28 Jul 2026 10:33:53 +0530</pubDate>
            <description><![CDATA[&lt;p&gt;ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು, ಶಾಲೆಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣದ ತಗಡುಗಳನ್ನು ಕೇವಲ 20 ಸಾವಿರ ರೂಪಾಯಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಈ ಕೃತ್ಯವನ್ನು ಹಳೆಯ ವಿದ್ಯಾರ್ಥಿಯೊಬ್ಬರು ವೀಡಿಯೋ ಮಾಡಿ ಬಯಲಿಗೆಳೆದಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykhkmvpcmgverk4cjy6wat4,imgname-haveri-govt-school-roof-sheets-selling-1785214915446.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಜು.28): 'ಬೇ&lt;/strong&gt;ಲಿಯೇ ಎದ್ದು ಹೊಲ ಮೇಯ್ದರೆ (Fence eating the crop)' ಎಂಬ ಗಾದೆ ಮಾತು ಹಾವೇರಿ ಜಿಲ್ಲೆಯಲ್ಲಿ ಅಕ್ಷರಶಃ ನಿಜವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ, ನೀತಿಪಾಠ ಹೇಳಿಕೊಡಬೇಕಾದ ಗುರುವೇ, ತಾನು ಪಾಠ ಮಾಡುವ ಶಾಲೆಯ ಆಸ್ತಿಯನ್ನೇ ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದಿರುವ ಘಟನೆ ಹಾವೇರಿ ತಾಲೂಕಿನ ಮರೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ (Marol High School) ನಡೆದಿದೆ. ಶಾಲೆಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಕೇವಲ ಕ್ಷುಲ್ಲಕ ಹಣಕ್ಕೆ ಮಾರಿಕೊಂಡ ಶಿಕ್ಷಕನ ಕೃತ್ಯ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ? ಅಕ್ರಮ ನಡೆದಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ (Heavy Rain and Wind) ಮರೋಳ ಪ್ರೌಢಶಾಲೆಯ ಮೇಲ್ಚಾವಣಿ (Roofing sheets) ಸಂಪೂರ್ಣವಾಗಿ ಹಾರಿಹೋಗಿತ್ತು. ಶಾಲೆಯ ಸುಮಾರು 120ಕ್ಕೂ ಹೆಚ್ಚು ಕಬ್ಬಿಣದ ತಗಡುಗಳು ಹಾಗೂ ಪಟ್ಟಿಗಳು ಗಾಳಿಗೆ ಕಿತ್ತುಬಂದಿದ್ದವು. ಈ ಎಲ್ಲಾ ಸಾಮಗ್ರಿಗಳನ್ನು ಶಾಲೆಯ ಆವರಣದಲ್ಲೇ ಸುರಕ್ಷಿತವಾಗಿ ಎತ್ತಿಡಲಾಗಿತ್ತು. ಇದರ ಒಟ್ಟು ಮೌಲ್ಯ ಸುಮಾರು 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ಆದರೆ, ಈ ಶಾಲೆಯ ಮುಖ್ಯೋಪಾಧ್ಯಾಯರ (Head Master) ಆರೋಗ್ಯ ಸರಿಯಿಲ್ಲದ ಕಾರಣ ಅವರು ರಜೆಯಲ್ಲಿದ್ದರು. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಶಾಲೆಯ ಹಿರಿಯ ಶಿಕ್ಷಕ ಪ್ರಭು ಕೆ.ಎಂ. (Prabhu K.M.), ಶಾಲೆಯ ಪ್ರಭಾರಿ (In-charge) ಉಸ್ತುವಾರಿ ವಹಿಸಿಕೊಂಡಿದ್ದರು. ಶಾಲೆಯ ಆಡಳಿತ ಮಂಡಳಿಯಿಂದ ಅಥವಾ ಎಸ್&zwnj;ಡಿಎಂಸಿಯಿಂದ (SDMC) ಯಾವುದೇ ಅಧಿಕೃತ ಠರಾವು (Resolution) ಪಾಸ್ ಮಾಡದೇ, ಪ್ರಭು ಅವರು ಈ ₹5 ಲಕ್ಷ ಮೌಲ್ಯದ ತಗಡುಗಳನ್ನು ಗ್ರಾಮದ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲು ಸಂಚು ರೂಪಿಸಿದ್ದರು.&lt;/p&gt;&lt;h2&gt;&lt;strong&gt;₹20 ಸಾವಿರಕ್ಕೆ ಡೀಲ್: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕ!&lt;/strong&gt;&lt;/h2&gt;&lt;p&gt;ಶಿಕ್ಷಕ ಪ್ರಭು ಕೆ.ಎಂ., ಶಾಲೆಯ ತಗಡುಗಳನ್ನು ಗ್ರಾಮದ ಮಂಜುನಾಥ್ ಮಾಗಡಿ, ಮಾಲತೇಶ್ ಓಲೆಕಾರ, ಹನುಮಪ್ಪ ಈಟಿ ಹಾಗೂ ನಾಗಪ್ಪ ಮಡಿವಾಳರ ಎಂಬ ಖಾಸಗಿ ವ್ಯಕ್ತಿಗಳಿಗೆ ಕೇವಲ 20 ಸಾವಿರ ರೂಪಾಯಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಹಣ ಕೈ ಬದಲಾವಣೆಯಾಗುವ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ (Alumni) ಮನೋಜ್ ದೇವಸೂರು ಎಂಬುವರು ತಮ್ಮ ಮೊಬೈಲ್&zwnj;ನಲ್ಲಿ ಸಂಪೂರ್ಣ ದೃಶ್ಯವನ್ನು ವಿಡಿಯೋ ಚಿತ್ರೀಕರಣ (Video Recording) ಮಾಡಿದ್ದಾರೆ. ಶಿಕ್ಷಕ ಪ್ರಭು ₹20,000 ನಗದು ಹಣ ಪಡೆಯುವಾಗ ರೆಡ್ ಹ್ಯಾಂಡ್ (Red Handed) ಆಗಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.&lt;/p&gt;&lt;h3&gt;&lt;strong&gt;ಡಿಸಿ, ಸಿಇಒ ಕಚೇರಿ ಅಲೆದರೂ ಸಿಗದ ನ್ಯಾಯ: 'ಡೋಂಟ್ ಕೇರ್' ಎಂದ ಅಧಿಕಾರಿಗಳು!&lt;/strong&gt;&lt;/h3&gt;&lt;p&gt;ತಮ್ಮ ಶಾಲೆಯ ಆಸ್ತಿಗೆ ಕನ್ನ ಹಾಕಿದ ಶಿಕ್ಷಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಾಕ್ಷಿ ಸಮೇತ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಶ್ರೀನಿವಾಸ್ ಅವರಿಗೆ ದೂರು ನೀಡಿದ್ದಾರೆ. ಆದರೆ, ಬಿಇಒ ದೂರಿಗೆ ಕನಿಷ್ಠ ಬೆಲೆಯನ್ನೂ ನೀಡದೆ 'ಡೋಂಟ್ ಕೇರ್' (Don't Care) ಧೋರಣೆ ತಳೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಇಷ್ಟಕ್ಕೇ ಸುಮ್ಮನಾಗದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಹಾವೇರಿ ಜಿಲ್ಲಾಧಿಕಾರಿ ಕಚೇರಿ (Haveri DC Office), ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ZP CEO) ಹಾಗೂ ಡಿಡಿಪಿಐ (DDPI) ಅವರಿಗೆ ಸಾಕ್ಷ್ಯಾಧಾರಗಳ ಸಮೇತ ಮನವಿ ಸಲ್ಲಿಸಿದ್ದಾರೆ. ಆದಾಗ್ಯೂ, ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಅಕ್ರಮ ಎಸಗಿದ ಶಿಕ್ಷಕನಿಗೆ ಸಾಥ್ ನೀಡುತ್ತಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರ ಆಕ್ರೋಶ:&lt;/strong&gt;&lt;/h2&gt;&lt;p&gt;'ನಾವು ಓದಿದ ಶಾಲೆಗೆ ಅನ್ಯಾಯವಾದಾಗ ನ್ಯಾಯ ಕೇಳಲು ಜಿಲ್ಲಾಧಿಕಾರಿಗಳ ಕಚೇರಿ ಅಲೆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ' ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ಸ್ವತ್ತನ್ನು ಕದ್ದ ಮಾರಿದ ಶಿಕ್ಷಕ ಪ್ರಭು ಕೆ.ಎಂ. ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು (Suspension) ಹಾಗೂ ಈ ಅಕ್ರಮಕ್ಕೆ ಸಾಥ್ ನೀಡುತ್ತಿರುವ ಶಿಕ್ಷಣಾಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>haveri</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/haveri-marol-govt-high-school-teacher-caught-selling-roof-sheets-illegally-allegation/articleshow-cfyqq3x"/>
        </item>
        <item>
            <title><![CDATA[Haveri: SSLCಯಲ್ಲಿ 98%, PUCಯಲ್ಲಿ 95%: ಬಿಂದುಶ್ರೀಗೆ ನೀಟ್‌ನಲ್ಲಿ ಬಂದಿದ್ದು 11 ಅಂಕ]]></title>
            <link>https://kannada.asianetnews.com/karnataka-districts/haveri-hanagal-bindu-sri-pawar-had-expected-668-marks-in-the-neet-exam-but-she-got-11-marks-mrq/articleshow-d11lmvl</link>
            <guid isPermaLink="true">https://kannada.asianetnews.com/karnataka-districts/haveri-hanagal-bindu-sri-pawar-had-expected-668-marks-in-the-neet-exam-but-she-got-11-marks-mrq/articleshow-d11lmvl</guid>
            <pubDate>Sat, 25 Jul 2026 07:52:16 +0530</pubDate>
            <description><![CDATA[ಹಾನಗಲ್ಲದ ಪ್ರತಿಭಾವಂತ ವಿದ್ಯಾರ್ಥಿನಿ ಬಿಂದು ಶ್ರೀ ಪವಾರ ಅವರು ನೀಟ್&zwnj; ಪರೀಕ್ಷೆಯಲ್ಲಿ 668 ಅಂಕ ನಿರೀಕ್ಷಿಸಿದ್ದರು, ಆದರೆ ಅವರಿಗೆ -11 ಅಂಕ ಬಂದಿದೆ. ತಮ್ಮ ಓಎಂಆರ್&zwnj; ಶೀಟ್ ಬದಲಾಗಿದೆ ಮತ್ತು ಹೆಬ್ಬೆಟ್ಟಿನ ಗುರುತು ಹೊಂದಿಕೆಯಾಗುತ್ತಿಲ್ಲ ಎಂದು ಆರೋಪಿಸಿ, ಅವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kybgtf85anaccc935dtxd01p,imgname-bindu-1784945655045.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ: &lt;/strong&gt;ನೀಟ್&zwnj; ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ಲ ವಿದ್ಯಾರ್ಥಿನಿಗೆ ಓಎಂಆರ್&zwnj; ಸೀಟ್&zwnj;ನಲ್ಲಿ ಬರೀ -11 ಅಂಕ ಬಂದಿದ್ದು, ಹೆಬ್ಬಟ್ಟಿನ ಗುರುತು ಕೂಡಾ ಓವರ್ ಲ್ಯಾಪ್&zwnj; ಆಗಿದೆ ಎಂದು ವಿದ್ಯಾರ್ಥಿನಿ ದೂರಿದ್ದಾರೆ.&lt;/p&gt;&lt;p&gt;ವಿದ್ಯಾರ್ಥಿನಿ ಬಿಂದು ಶ್ರೀ ಜಗದೀಶ ಪವಾರ ಅವರಿಗೆ ಅನ್ಯಾಯವಾಗಿದ್ದು, ಅವರು ಈ ಕುರಿತು ನ್ಯಾಶನಲ್&zwnj; ಟೆಸ್ಟಿಂಗ್&zwnj; ಏಜೆನ್ಸಿಗೆ ಮೇಲ್&zwnj;ನಲ್ಲಿ ದೂರಿದ್ದಾರೆ. ವಿದ್ಯಾರ್ಥಿನಿ ಹಾವೇರಿ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;720ಕ್ಕೆ ಕನಿಷ್ಠ 668 ಅಂಕ ಬರಲೇಬೇಕು&lt;/strong&gt;&lt;/h2&gt;&lt;p&gt;ನೀಟ್&zwnj; ಪರೀಕ್ಷೆಯಲ್ಲಿ ನಾನು ತುಂಬಿದ ಓಎಂಆರ್&zwnj; ಸೀಟ್&zwnj; ಅಂಕ ನನಗೆ ಬಂದಿಲ್ಲ. ನಾನು ವೆಬ್&zwnj;ಸೈಟ್&zwnj;ನಲ್ಲಿ ತರಿಸಿಕೊಂಡ ಓಎಂಆರ್&zwnj; ಸೀಟ್&zwnj; ನನ್ನದಲ್ಲವೇ ಅಲ್ಲ, ನಾನು ಪರೀಕ್ಷೆಗೆ ಹಾಜರಾದ ಸಮಯ, ಹೊರಬಂದ ಸಮಯ, ಓಎಂಆರ್&zwnj; ಸೀಟ್&zwnj;ನಲ್ಲಿ ಹೊಂದಾಣಿಕೆ ಆಗುತ್ತಿಲ್ಲ. ಅಲ್ಲದೇ ನನ್ನ ಹೆಬ್ಬೆಟ್ಟಿನ ಗುರುತು ಕೂಡಾ ಓವರ್&zwnj; ಲ್ಯಾಪ್&zwnj; ಆಗಿದೆ. ನನಗೆ 720ಕ್ಕೆ ಕನಿಷ್ಠ 668 ಅಂಕ ಬರಲೇಬೇಕು, ಆದರೆ ಬಂದದ್ದು -11 ಅಂಕ ಇದು ನನ್ನ ಫಲಿತಾಂಶದ ಮೇಲೆ ಮಾಡಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;SSLCಯಲ್ಲಿ ಶೇ.98 ಮತ್ತು ಪಿಯುಸಿಯಲ್ಲಿ ಶೇ.95&lt;/strong&gt;&lt;/h3&gt;&lt;p&gt;ಎಸ್ಸೆಸ್ಸೆಲ್ಸಿಯಲ್ಲಿ ಶೇ. 98 ಅಂಕ ಪಡೆದಿದ್ದೇನೆ. ಪಿಯುಸಿ ವಿಜ್ಞಾನದಲ್ಲಿ ಶೇ. 95 ಬಂದಿವೆ. ಇಷ್ಟೆದಲ್ಲರ ನಡುವೆ ನಾನು ಪರಿಶ್ರಮಪಟ್ಟು ಓದಿದ ಫಲಿತಾಂಶ ನನಗೆ ಸಿಗಲಿಲ್ಲ, ಎಲ್ಲೋ ನಡೆದ ಮೋಸ ನನ್ನ ಭವಿಷ್ಯದ ಮೇಲೆ ಆಟವಾಡಿದೆ. ಈ ಪರೀಕ್ಷೆ ವ್ಯವಸ್ಥೆಯ ಮೇಲೆ ನನಗೆ ವಿಶ್ವಾಸವಿಲ್ಲ. ಈ ವಿಷಯವನ್ನು ಸಮಗ್ರ ತನಿಖೆ ಮಾಡಿ ನನಗೆ ನ್ಯಾಯ ಒದಗಿಸಬೇಕು. ಇದಕ್ಕೆ ಸಂಬಂಧಿಸಿದಂತೆ ನ್ಯಾಶನಲ್&zwnj; ಟೆಸ್ಟಿಂಗ್&zwnj; ಏಜೆನ್ಸಿ ಅವರಿಗೆ ಜು. 22ರಂದು ಈ ಓಎಂಆರ್&zwnj; ಸೀಟ್&zwnj; ನನ್ನದಲ್ಲ ಹಾಗೂ ಫಲಿತಾಂಶವೂ ನನ್ನದಲ್ಲ ಎಂದು ಸಲ್ಲಿಸಿದ ದೂರಿಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೆಲ್ಪಲೈನ್&zwnj; ನಂಬರ್&zwnj;ಗೆ 1 ಸಾವಿರ ಬಾರಿ ಫೋನಾಯಿದ್ದರೂ ನನ್ನ ಪೋನ್&zwnj; ಕರೆ ಸ್ವೀಕರಿಸಿಲ್ಲ. ಪರೀಕ್ಷಾ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆ, ಸತ್ಯವನ್ನು ಪರಿಶೀಲಿಸಿ ನನಗೆ ನ್ಯಾಯಕೊಡಿಸುತ್ತದೆ. ನನ್ನದೇ ಆದ ಓಎಂಆರ್&zwnj; ಸೀಟ್&zwnj; ನನಗೆ ಸಿಕ್ಕು 668 ಅಂಕ ಪಡೆದಿದ್ದು, ನನಗೆ ಬಯಸಿದ ಶಿಕ್ಷಣಕ್ಕೆ ಅವಕಾಶ ಸಿಗುತ್ತದೆ ಎಂದು ನಂಬಿದ್ದೇನೆ. ನನ್ನ ನಂಬಿಕೆಗೆ ಮೋಸವಾಗುದಿಲ್ಲ ಎಂಬ ಪೂರ್ಣವಿಶ್ವಾಸವಿದೆ. ಆದರೆ, ನ್ಯಾಯವೇ ಗೆಲ್ಲಬೇಕು ಎಂದು ಬಿಂದುಶ್ರೀ ಪವಾರ ಅವರು ಕನ್ನಡಪ್ರಭಕ್ಕೆ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೆಲಸ ಹುಡುಕೋರಿಗೆ ಗುಡ್&zwnj; ನ್ಯೂಸ್: ಜುಲೈ 29 ರಂದು ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳ ನೇರ ಸಂದರ್ಶನ!&lt;/strong&gt;&lt;/p&gt;&lt;p&gt;ನನ್ನ ಮಗಳು ಪ್ರತಿಭಾವಂತೆ, ಹಿಂದಿನ ಯಾವ ಪರೀಕ್ಷೆಯಲ್ಲೂ ಆಕೆಗೆ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿಲ್ಲ. ಈ ಬಾರಿ ನೀಟ್&zwnj;ನಲ್ಲಿ ಯಶಸ್ವಿಯಾಗುತ್ತಾಳೆ ಎಂಬ ಪೂರ್ಣವಿಶ್ವಾಸ ಇನ್ನು ಇದೆ. ನ್ಯಾಯಕೊಡಿಸಬೇಕಾದ ಪರೀಕ್ಷಾ ಪ್ರಾಧಿಕಾರದ ಮೇಲೆ ಇನ್ನು ನಂಬಿಕೆ ಇಟ್ಟಿದ್ದೇನೆ. ಇದು ನನ್ನ ಮಗಳ ಓಎಂಆರ್&zwnj; ಸೀಟ್ ಅಲ್ಲ. ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಬಿಂದುಶ್ರೀ ತಂದೆ ಜಗದೀಶ್ ಪವಾರ್ ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;BMTC ಪ್ರಯಾಣಿಕರೇ, ವಾಂತಿ ಬರ್ತಿದೆ, ಕಿಟಕಿ ಸೀಟ್ ಬಿಟ್ಕೊಡಿ ಅಂತ ಜನರು ಬಂದ್ರೆ ಹುಷಾರ್!&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-hanagal-bindu-sri-pawar-had-expected-668-marks-in-the-neet-exam-but-she-got-11-marks-mrq/articleshow-d11lmvl"/>
        </item>
        <item>
            <title><![CDATA[ಅಮೆರಿಕದ ವಿಶೇಷ ವಿಮಾನದಿಂದ ಹಾವೇರಿ ಜಿಲ್ಲೆಯಲ್ಲಿ 3 ದಿನ ಮೋಡ ಬಿತ್ತನೆ: ಶಾಸಕರಿಂದಲೇ ವೆಚ್ಚ]]></title>
            <link>https://kannada.asianetnews.com/karnataka-districts/special-american-plane-to-sow-clouds-in-haveri-district-for-3-days-said-mla-prakash-koliwada-mrq/articleshow-fc8v6sy</link>
            <guid isPermaLink="true">https://kannada.asianetnews.com/karnataka-districts/special-american-plane-to-sow-clouds-in-haveri-district-for-3-days-said-mla-prakash-koliwada-mrq/articleshow-fc8v6sy</guid>
            <pubDate>Sat, 04 Jul 2026 07:20:26 +0530</pubDate>
            <description><![CDATA[ಹಾವೇರಿ ಜಿಲ್ಲೆಯಲ್ಲಿನ ಮಳೆ ಕೊರತೆ ನೀಗಿಸಲು ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಮೋಡ ಬಿತ್ತನೆ ಮಾಡಲು ನಿರ್ಧರಿಸಲಾಗಿದೆ. ಜುಲೈ 7 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಾಚರಣೆಗೆ ಅಮೆರಿಕದಿಂದ ವಿಶೇಷ ವಿಮಾನ ತರಿಸಲಾಗುತ್ತಿದ್ದು, ಇದರ ಸಂಪೂರ್ಣ ವೆಚ್ಚವನ್ನು ಜಿಲ್ಲೆಯ ಶಾಸಕರೇ ಭರಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwnd1f5rbvzzvntcp6vb4bjg,imgname-cloud-seeding-1783129750712.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ: ಮಳೆ ಕೊರತೆಯ ಹಿನ್ನೆಲೆಯಲ್ಲಿ ರೈತರ ನೆರವಿಗೆ ಧಾವಿಸಿರುವ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರು ಜಿಲ್ಲಾದ್ಯಂತ ಮೋಡ ಬಿತ್ತನೆ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಜು.7ರಿಂದ ಸತತ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋಡ ಬಿತ್ತನೆಗೆ ಕೇಂದ್ರ ಸರ್ಕಾರದಿಂದ ಪರವಾನಗಿ ಕೇಳಲಾಗಿತ್ತು. ಇಂದಷ್ಟೇ ಅವಕಾಶ ನೀಡಿರುವ ಮಾಹಿತಿ ಬಂದಿದೆ.&lt;/p&gt;&lt;h2&gt;&lt;strong&gt;ಪೈಲಟ್&zwnj;ಗಳಿಗೆ ವಿಶೇಷ ತರಬೇತಿ&lt;/strong&gt;&lt;/h2&gt;&lt;p&gt;ಮೋಡ ಬಿತ್ತನೆ ಕಾರ್ಯಕ್ಕಾಗಿಯೇ ಅಮೆರಿಕದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಅತ್ಯಾಧುನಿಕ ವಿಮಾನವನ್ನು ಬಳಸಲಾಗುತ್ತಿದ್ದು, ಸೋಮವಾರವೇ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ. ಈ ಕಾರ್ಯಾಚರಣೆಗಾಗಿ ಈಗಾಗಲೇ ಪೈಲಟ್&zwnj;ಗಳಿಗೆ ವಿಶೇಷ ತರಬೇತಿಯನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Haveri: ಕ್ಷುಲ್ಲಕ ಜಗಳಕ್ಕೆ ಬಲಿಯಾದ ಬೀದಿ ಬದಿ ವ್ಯಾಪಾರಿ! ಇದು ಒಂದು ಮೊಟ್ಟೆಯ ಕಥೆ!&lt;/strong&gt;&lt;/p&gt;&lt;p&gt;ರಾಜ್ಯಾದ್ಯಂತ ಮೋಡ ಬಿತ್ತನೆ ಮಾಡಲು ರಾಜ್ಯ ಸರ್ಕಾರ ಟೆಂಡರ್&zwnj; ಕರೆಯಬೇಕಿದೆ. ಅದಕ್ಕೆ ಸಮಯ ತಗಲುವುದರಿಂದ ಜಿಲ್ಲೆಯ 6 ಶಾಸಕರೇ ಸೇರಿ 8 ತಾಲೂಕುಗಳಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ಮಾಡುತ್ತೇವೆ. ಒಂದು ತಾಸಿನ ಕಾರ್ಯಾಚರಣೆಗೆ ₹15 ಲಕ್ಷ ವೆಚ್ಚವಾಗಲಿದೆ. ಈ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ. ಜಿಲ್ಲೆಯ ರೈತರು ಮಳೆ ಕೊರತೆಯಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಈ ನಿರ್ಧಾರ ಮಾಡಲಾಗಿದೆ. ಸೋಮವಾರ ವಿಮಾನ ಬರಲಿದ್ದು, ಆಕಾಶದಲ್ಲಿ ಮೋಡಗಳ ಲಭ್ಯತೆಯನ್ನು ಪರಿಶೀಲಿಸಿ, ಜು. 7ರಂದಲೇ ಮೋಡ ಬಿತ್ತನೆ ಆರಂಭಿಸಲಾಗುವುದು. ಮಳೆ ತರುವ ಮೋಡಗಳು ಸೂಕ್ತ ಪ್ರಮಾಣದಲ್ಲಿದ್ದಾಗ ಮಾತ್ರ ಬಿತ್ತನೆ ಪ್ರಕ್ರಿಯೆ ಯಶಸ್ವಿಯಾಗುವುದರಿಂದ, ಹವಾಮಾನದ ಮೇಲೆ ನಿಗಾ ಇಟ್ಟು ಕಾರ್ಯಾಚರಣೆ ನಡೆಸಲು ತಂಡ ಸಜ್ಜಾಗಿದೆ ಎಂದು ಪ್ರಕಾಶ ಕೋಳಿವಾಡ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೈಕೊಟ್ಟ ಮಳೆ: 11 ಎಕ್ರೆ ಗೋವಿನಜೋಳದ ಬೆಳೆ ಟ್ರ&zwj;್ಯಾಕ್ಟರ್&zwnj;ನಿಂದ ನಾಶ ಮಾಡಿದ ಹಾವೇರಿ ರೈತ&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/special-american-plane-to-sow-clouds-in-haveri-district-for-3-days-said-mla-prakash-koliwada-mrq/articleshow-fc8v6sy"/>
        </item>
        <item>
            <title><![CDATA[Satish Jarkiholi: ಸಿದ್ದರಾಮಯ್ಯ ಜೊತೆ ಅಸಮಾಧಾನ, ರಾಜ್ಯದ ಸಮಸ್ಯೆ ಅಲ್ಲ, ನಮ್ಮ ಸಮಸ್ಯೆ- ಜಾರಕಿಹೊಳಿ]]></title>
            <link>https://kannada.asianetnews.com/politics/satish-jarkiholi-reacts-on-siddaramaiah-and-bidadi-township-row-in-haveri-rav/articleshow-fupu2bg</link>
            <guid isPermaLink="true">https://kannada.asianetnews.com/politics/satish-jarkiholi-reacts-on-siddaramaiah-and-bidadi-township-row-in-haveri-rav/articleshow-fupu2bg</guid>
            <pubDate>Wed, 15 Jul 2026 06:45:32 +0530</pubDate>
            <description><![CDATA[&lt;p&gt;ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಅಸಮಾಧಾನದ ವಿಚಾರ ರಾಜ್ಯ ಮಟ್ಟದ ಸಮಸ್ಯೆಯಲ್ಲ ಅದು ನಮ್ಮ ನಡುವಿನ ಸಮಸ್ಯೆ ಎಂದು ಹೇಳುವ ಮೂಲಕ ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಸಮಾಧಾನದ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxhn4mm6d3jm1a1mbvvgdknm,imgname-----------------------2026-07-15t063911.881-1784077767302.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಜು.15): &lt;/strong&gt;ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಅಸಮಾಧಾನದ ವಿಚಾರ ರಾಜ್ಯ ಮಟ್ಟದ ಸಮಸ್ಯೆಯಲ್ಲ ಅದು ನಮ್ಮ ನಡುವಿನ ಸಮಸ್ಯೆ ಎಂದು ಹೇಳುವ ಮೂಲಕ ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಸಮಾಧಾನದ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.&lt;/p&gt;&lt;h2&gt;ರಾಜ್ಯದ ಸಮಸ್ಯೆ ಅಲ್ಲ, ನಮ್ಮ ನಡುವಿನ ಸಮಸ್ಯೆ&lt;/h2&gt;&lt;p&gt;ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಜೊತೆ ಅಸಮಾಧಾನ ಇದೆಯೇ ಎಂದು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸದೇ ಅದು ರಾಜ್ಯದ ಸಮಸ್ಯೆ ಅಲ್ಲ, ನಮ್ಮ ನಮ್ಮ ನಡುವಿನ ಸಮಸ್ಯೆ ಎಂದಷ್ಟೇ ಚುಟುಕಾಗಿ ಉತ್ತರಿಸಿದರು. ಭಿನ್ನಾಭಿಪ್ರಾಯ, ಅಸಮಾಧಾನ ಇಲ್ಲ ಎಂದೇನೂ ಹೇಳಲಿಲ್ಲ.&lt;/p&gt;&lt;h3&gt;ಒತ್ತಾಯದಿಂದ ಬಿಡದಿ ಜಮೀನು ಪಡೆಯುತ್ತಿಲ್ಲ:&amp;nbsp;&lt;/h3&gt;&lt;p&gt;ಬಿಡದಿ ಭಾಗದ ರೈತರ ಜಮೀನನ್ನು ಸರ್ಕಾರ ಒತ್ತಾಯಪೂರ್ವಕವಾಗಿ ಪಡೆಯುತ್ತಿಲ್ಲ. ಸ್ವಯಂಪ್ರೇರಿತವಾಗಿ ಜಮೀನು ನೀಡಲು ಮುಂದೆ ಬರುತ್ತಿರುವ ರೈತರ ಜಮೀನನ್ನು ಮಾತ್ರ ಪಡೆಯಲಾಗುತ್ತಿದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.&lt;/p&gt;&lt;p&gt;ರೈತರ ಜಮೀನನ್ನು ಸರ್ಕಾರ ಒತ್ತಾಯಪೂರ್ವಕವಾಗಿ ಪಡೆಯುತ್ತಿಲ್ಲ. ಸ್ವಯಂಪ್ರೇರಿತವಾಗಿ ಜಮೀನು ನೀಡಲು ಮುಂದೆ ಬರುತ್ತಿರುವ ರೈತರ ಜಮೀನನ್ನು ಮಾತ್ರ ಪಡೆಯಲಾಗುತ್ತಿದೆ. ಜಮೀನು ನೀಡುವುದಿಲ್ಲ ಎಂದು ಹೇಳಿದವರ ಜಮೀನನ್ನು ಸರ್ಕಾರ ಪಡೆದುಕೊಳ್ಳುವುದಿಲ್ಲ. ಜಮೀನು ನೀಡಿದವರ ಜಾಗದ ಸರ್ವೆ ಕಾರ್ಯಕ್ಕಾಗಿ ಅಧಿಕಾರಿಗಳು ನಿನ್ನೆ ಕೂಡ ಭೇಟಿ ನೀಡಿದ್ದರು ಎಂದು ಹೇಳಿದರು.&lt;/p&gt;&lt;p&gt;ರೈತರ ಮೇಲೆ ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಇಲ್ಲ ಎಂದು ತಿಳಿಸಿದ ಅವರು, ಸರ್ಕಾರದಿಂದ ರೈತರ ಮೇಲೆ ಯಾವುದೇ ರೀತಿಯ ಒತ್ತಡ ಹೇರಿಲ್ಲ. ಅಲ್ಲಿ ನಡೆದಿರುವ ಘಟನೆಯ ಸಂಪೂರ್ಣ ಮಾಹಿತಿ ನನಗೆ ಇಲ್ಲ. ಆದರೆ ರೈತರ ಮೇಲೆ ಯಾವುದೇ ಒತ್ತಡ ಅಥವಾ ಬಲವಂತ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಆರ್&zwnj;ಎಸ್&zwnj;ಎಸ್ ನೋಂದಣಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಆರ್&zwnj;ಎಸ್&zwnj;ಎಸ್ ನೋಂದಣಿ ಕುರಿತ ವಿಚಾರವು ಗೃಹ ಸಚಿವರ ವ್ಯಾಪ್ತಿಗೆ ಸಂಬಂಧಿಸಿದ್ದು, ಈ ಬಗ್ಗೆ ಗೃಹ ಸಚಿವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅಹಿಂದ ಸಂಘಟನೆ ಈ ಹಿಂದೆ ಯಾವುದೋ ಹೆಸರಿನಲ್ಲಿ ನೋಂದಣಿಯಾಗಿದೆ. ಆದರೆ ಈ ವಿಚಾರವು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದದ್ದಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/satish-jarkiholi-reacts-on-siddaramaiah-and-bidadi-township-row-in-haveri-rav/articleshow-fupu2bg"/>
        </item>
        <item>
            <title><![CDATA[ಗಂಟೆಗೆ 15 ಲಕ್ಷ ರೂ. ವೆಚ್ಚ; ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಚಾಲನೆ, ರೈತರಿಗೆ ನೆರವು]]></title>
            <link>https://kannada.asianetnews.com/gallery/karnataka-districts/mla-prakash-koliwad-cost-of-rs-15-lakh-per-hour-cloud-seeding-launched-in-haveri-district-helping-farmers-mrq-g1n09en</link>
            <guid isPermaLink="true">https://kannada.asianetnews.com/gallery/karnataka-districts/mla-prakash-koliwad-cost-of-rs-15-lakh-per-hour-cloud-seeding-launched-in-haveri-district-helping-farmers-mrq-g1n09en</guid>
            <pubDate>Tue, 07 Jul 2026 08:54:50 +0530</pubDate>
            <description><![CDATA[ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು, ಹಾವೇರಿ ಜಿಲ್ಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಸರ್ಕಾರವೇ ವಹಿಸಿಕೊಂಡು ಧಾರವಾಡ, ಗದಗ ಜಿಲ್ಲೆಗಳಿಗೂ ವಿಸ್ತರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwx8vkq1aj9cwrphw72htqxm,imgname-cloud-seeding--5--1783393799905.jpg" type="image/jpeg" height="390" width="690"/>
            <content:encoded><![CDATA[ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು, ಹಾವೇರಿ ಜಿಲ್ಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಸರ್ಕಾರವೇ ವಹಿಸಿಕೊಂಡು ಧಾರವಾಡ, ಗದಗ ಜಿಲ್ಲೆಗಳಿಗೂ ವಿಸ್ತರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.&lt;img&gt;&lt;p&gt;ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಮೋಡ ಬಿತ್ತನೆ ಅವಶ್ಯವಿದ್ದು ಇದು ಸರ್ಕಾರದಿಂದಲೇ ಈ ಕಾರ್ಯವಾಗಬೇಕಿದೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಲೋಕೋಪಯೋಗಿ ಸಚಿವ, ಧಾರವಾಡ, ಹಾವೇರಿ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆ ಉಸ್ತುವಾರಿ ಮಂತ್ರಿ ಸತೀಶ ಜಾರಕಿಹೊಳಿ ಹೇಳಿದರು.&lt;/p&gt;&lt;p&gt;ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಹಾವೇರಿ ಜಿಲ್ಲೆಯ ಭಾಗದಲ್ಲಿ ಮೋಡ ಬಿತ್ತನೆಯ ವಿಶೇಷ ವಿಮಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.&lt;/p&gt;&lt;img&gt;&lt;p&gt;ಹಾವೇರಿಯಲ್ಲಿ ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ಈ ಹಿಂದೆ ಸಭೆ ನಡೆಸಿ, ಮೋಡ ಬಿತ್ತನೆ ಕುರಿತು ಚರ್ಚಿಸಲಾಗಿತ್ತು. ಮುಂದುವರಿದ ಭಾಗವಾಗಿ ವಿಶೇಷ ವಿಮಾನದ ಮೂಲಕ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು ಸರ್ಕಾರದ ಕಾರ್ಯಕ್ರಮ ಆಗಬೇಕು ಎನ್ನುವುದು ನಮ್ಮ ಆಶಯ. ಮಳೆ ಕೊರತೆಯಿಂದ ರೈತರಿಗೆ ಉಂಟಾಗಿರುವ ಸಮಸ್ಯೆ ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದರು.&lt;/p&gt;&lt;img&gt;&lt;p&gt;ಜೂನ್ ತಿಂಗಳಲ್ಲಿ ಸಮರ್ಪಕ ಮಳೆಯಾಗದ ಕಾರಣ ಮುಂಗಾರು ಬೆಳೆಗಳಿಗೆ ಹಾನಿಯಾಗಿದ್ದು, ಬೆಳೆ ಹಾನಿಯ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಮೀಕ್ಷೆ ವರದಿ ಬಂದ ಬಳಿಕ ಸರ್ಕಾರ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ. ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ಬ್ಯಾಂಕ್&zwnj;ಗಳು ಮತ್ತು ವಿಮಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.&lt;/p&gt;&lt;img&gt;&lt;p&gt;ಮೋಡ ಬಿತ್ತನೆ ಕಾರ್ಯಕ್ರಮದ ನೇತೃತ್ವ ವಹಿಸಿದ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ರೈತರ ಒಳಿತಿಗಾಗಿ ಹಾವೇರಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಸೇರಿ ಈ ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಸೋಮವಾರದಿಂದ 3 ದಿನ ನಿರಂತರ ಮೋಡ ಬಿತ್ತನೆ ನಡೆಯಲಿದೆ. ವಿಶೇಷ ವಿಮಾನ ಒಂದು ತಿಂಗಳು ಹುಬ್ಬಳ್ಳಿಯಲ್ಲೇ ಇರಲಿದ್ದು, ತೇವಾಂಶ ಸಿಕ್ಕಾಗ ವಿಜ್ಞಾನಿಗಳು ಹೇಳಿದ ಸಮಯಕ್ಕೆ ಮೋಡ ಬಿತ್ತನೆ ಮಾಡಲಾಗುವುದು. ಒಂದು ತಾಸಿಗೆ ₹15 ಲಕ್ಷ ವೆಚ್ಚವಾಗುತ್ತದೆ ಎಂದು ತಿಳಿಸಿದರು..&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕ ಭಾಗದಲ್ಲಿ ಸಮರ್ಪಕ ಮಳೆಯಾಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬರದ ಛಾಯೆ ಆವರಿಸುತ್ತಿದ್ದರೂ ಸರ್ಕಾರ ಮೋಡ ಬಿತ್ತನೆಗೆ ಏಕೆ ವಿಳಂಬ ಮಾಡುತ್ತಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಪ್ರಶ್ನಿಸಿದರು.&lt;/p&gt;&lt;p&gt;ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮೋಡಗಳು ಕಾಣಿಸಿಕೊಳ್ಳುತ್ತಿದ್ದು, ಮೋಡ ಬಿತ್ತನೆಗೆ ಇದು ಸೂಕ್ತ ಸಮಯವಾಗಿದೆ. ಸರ್ಕಾರ ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಅಧಿಕಾರಿಗಳ ಮಾತು ಕೇಳದೆ ವಿಜ್ಞಾನಿಗಳ ಮಾತು ಕೇಳಬೇಕು. ವಿಳಂಬ ಮಾಡದೆ ತಕ್ಷಣ ಮೋಡ ಬಿತ್ತನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.&lt;/p&gt;&lt;img&gt;&lt;p&gt;ತಂತ್ರಜ್ಞಾನಗಳು ಸಾಕಷ್ಟು ಆವಿಷ್ಕಾರ ಆಗಿರುವುದರಿಂದ ಮೋಡ ಬಿತ್ತನೆ ಯಶಸ್ವಿಯಾಗುತ್ತಿದೆ. 2001 ಮತ್ತು 2017ರಲ್ಲಿ ಇಲ್ಲಿಂದಲೇ ಕಾರ್ಯಾಚರಣೆ ನಡೆಸಿದಾಗ, ಹುಬ್ಬಳ್ಳಿ ಸೇರಿ ಹಾವೇರಿ, ಗದಗ ಭಾಗದಲ್ಲಿ ಉತ್ತಮ ಮಳೆಯಾಗಿತ್ತು. ರಕ್ಷಣಾ ಇಲಾಖೆ ವಿಮಾನಗಳು ಖಾಲಿ ನಿಂತಿರುತ್ತವೆ. ಮೋಡ ಬಿತ್ತನೆಗೆ ಅವುಗಳನ್ನು ಬಳಸಿಕೊಂಡು ರೈತರ ನೆರವಿಗೆ ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.&amp;nbsp;&lt;/p&gt;&lt;img&gt;&lt;p&gt;ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಹಾವೇರಿ ಭಾಗದಲ್ಲಿ ಮೋಡ ಬಿತ್ತನೆ ಮಾಡಲಾಗಿದೆ. ಸರ್ಕಾರ ಅನುಮತಿ&zwnj; ನೀಡದಿದ್ದರೆ, ಧಾರವಾಡ, ಗದಗ ಭಾಗದ&zwnj; ಶಾಸಕರ ಸಹಕಾರದಲ್ಲಿ ನಾವೇ ಈ ಭಾಗದಲ್ಲೂ ಮೋಡ ಬಿತ್ತನೆ ಮಾಡುತ್ತೇವೆ ಎಂದರು.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಧಾರವಾಡ ಜಿಲ್ಲೆಯಲ್ಲೂ ಮೋಡ ಬಿತ್ತನೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದ್ದಾರೆ.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಧಾರವಾಡ ಜಿಲ್ಲೆಯಲ್ಲಿಯೂ ಮೋಡ ಬಿತ್ತನೆ ನಡೆಸುವಂತೆ ಮನವಿ ಮಾಡಲಾಗಿದೆ. ಸರ್ಕಾರ ಈ ಕುರಿತು ಕ್ರಮಕೈಗೊಳ್ಳದಿದ್ದರೆ ಧಾರವಾಡ ಹಾಗೂ ಗದಗ ಜಿಲ್ಲೆಯ ಶಾಸಕರು ಒಗ್ಗೂಡಿ ಸ್ವಂತ ಪ್ರಯತ್ನದಿಂದ ಮೋಡ ಬಿತ್ತನೆ ನಡೆಸುವ ಕುರಿತು ಚಿಂತನೆ ನಡೆಸಲಾಗುವುದು. ಮೋಡ ಬಿತ್ತನೆಗೆ ಬಳಸುವ ವಿಮಾನ ಒಂದು ತಿಂಗಳ ಕಾಲ ಈ ಭಾಗದಲ್ಲೇ ಲಭ್ಯವಿರುವುದರಿಂದ ಅಗತ್ಯವಿದ್ದರೆ ಅದರ ಪ್ರಯೋಜನ ಪಡೆಯಲು ಸಿದ್ಧರಾಗಿದ್ದೇವೆ ಎಂದರು.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/mla-prakash-koliwad-cost-of-rs-15-lakh-per-hour-cloud-seeding-launched-in-haveri-district-helping-farmers-mrq-g1n09en"/>
        </item>
        <item>
            <title><![CDATA[Haveri: ಯುವಕರಿಂದ ಉಮ್ಲಿಂಗ್ ಲಾ ಪಾಸ್‌ಗೆ ಬೈಕ್ ಸವಾರಿ: 47 ದಿನಗಳ ಅದ್ಭುತ ಯಾತ್ರೆ]]></title>
            <link>https://kannada.asianetnews.com/karnataka-districts/haveri-shyamasundara-daivagya-from-ranibennur-and-his-friends-have-successfully-completed-a-47-day-motorcycle-trip-mrq/articleshow-k8u7yk2</link>
            <guid isPermaLink="true">https://kannada.asianetnews.com/karnataka-districts/haveri-shyamasundara-daivagya-from-ranibennur-and-his-friends-have-successfully-completed-a-47-day-motorcycle-trip-mrq/articleshow-k8u7yk2</guid>
            <pubDate>Mon, 06 Jul 2026 06:12:59 +0530</pubDate>
            <description><![CDATA[ರಾಣಿಬೆನ್ನೂರಿನ ಶ್ಯಾಮಸುಂದರ ದೈವಜ್ಞ ಮತ್ತು ಅವರ ಸ್ನೇಹಿತರು 47 ದಿನಗಳ ಮೋಟಾರ್ ಸೈಕಲ್ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಯಾತ್ರೆಯು ಉತ್ತರಾಖಂಡದ ಪಂಚ ಕೇದಾರದಿಂದ ಲಡಾಖ್&zwnj;ನ ಉಮ್ಲಿಂಗ್ ಲಾ ಪಾಸ್&zwnj;ವರೆಗೆ ಸಾಗಿ, ಆಧ್ಯಾತ್ಮಿಕ, ದೇಶಭಕ್ತಿ ಮತ್ತು ಸಾಹಸಮಯ ಅನುಭವಗಳನ್ನು ನೀಡಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kwtdxzw8b2nrrkzdgcwas9h2,imgname-ranibennur-1783298457480.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಸವರಾಜ ಸರೂರ&amp;nbsp;&lt;/strong&gt;&lt;/p&gt;&lt;p&gt;&lt;strong&gt;ಹಾವೇರಿ: &lt;/strong&gt;ರಾಣಿಬೆನ್ನೂರು ನಗರದ ಶಾಮಸುಂದರ ದೈವಜ್ಞ ತನ್ನ ಸ್ನೇಹಿತರ ಜತೆ ಇತ್ತೀಚಿಗೆ ಉತ್ತರ ಭಾರತದಾದ್ಯಂತ 47 ದಿನಗಳ ಮೋಟಾರ್ ಸೈಕಲ್ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿ ಸಾಧನೆ ಮೆರೆದಿದ್ದಾರೆ.&lt;/p&gt;&lt;p&gt;ಈ ತಂಡವು ಉತ್ತರಾಖಂಡದ ಪಂಚ ಕೇದಾರ ದೇವಾಲಯಗಳಿಂದ ಲಡಾಖ್&zwnj;ನ ಉಮ್ಲಿಂಗ್ ಲಾ ಕಣಿವೆ ವರೆಗಿನ ಮಾರ್ಗಗಳಲ್ಲಿ ಸಾವಿರಾರು ಕಿಲೋಮೀಟರ್&zwnj;ಗಳಷ್ಟು ಪ್ರಯಾಣಿಸಿತು. ಈ ಯಾತ್ರೆಯ ಭಾಗವಾಗಿ, ಅವರು ಹರಿದ್ವಾರಕ್ಕೆ ಹೋಗುವ ಮಾರ್ಗಮಧ್ಯೆ 188 ಕಿ.ಮೀ. ಕಠಿಣ ಪಾದಯಾತ್ರೆಯನ್ನು ಕೈಗೊಂಡರು. ಇದು ಅವರ ಸಹಿಷ್ಣುತೆ ಮತ್ತು ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ.&amp;nbsp;&lt;/p&gt;&lt;p&gt;ರೈಡರ್ಸ್ ಶ್ಯಾಮಸುಂದರ ದೈವಜ್ಞ (ರಾಣಿಬೆನ್ನೂರು), ಬಾಹುಬಲಿ ಹುಕ್ಕೇರಿ, ಶುಭಂ ಬಡವೆ (ಚಿಕ್ಕೋಡಿ), ಸೋಮನಾಥ ಸುತಾರ್, ವಿವೇಕ ಪಾಟೀಲ, ಆದರ್ಶ ಪಾಟೀಲ (ಕುರಂದವಾಡ, ಮಹಾರಾಷ್ಟ್ರ) ಒಳಗೊಂಡ ತಂಡವು ಪ್ರಕೃತಿಯನ್ನು ಅನುಭವಿಸಲು, ಸವಾಲಿನ ಭೂಪ್ರದೇಶವನ್ನು ಸುತ್ತಾಡಲು ಮತ್ತು ಗಡಿ ಪ್ರದೇಶಗಳಲ್ಲಿ ಭಾರತೀಯ ಸೇನೆಯ ಶಕ್ತಿಯನ್ನು ವೀಕ್ಷಿಸಲು ತೆರಳಿದರು.&lt;/p&gt;&lt;p&gt;ಪತ್ರಿಕೆಯೊಂದಿಗೆ ತನ್ನ ಪ್ರವಾಸದ ಅನುಭವವನ್ನು ಹಂಚಿಕೊಂಡ ಶ್ಯಾಮಸುಂದರ ಅವರು, ಮೇ 11ರಂದು ಆರಂಭವಾದ ನಮ್ಮ ಪ್ರಯಾಣವು ಕೇವಲ ವಿವಿಧ ರಾಜ್ಯಗಳ ಮೂಲಕ ಸಾಗುವ ರಸ್ತೆ ಪ್ರಯಾಣಕ್ಕಿಂತ ಮಿಗಿಲಾಗಿದ್ದಾಗಿತ್ತು. ಇದು ಭಗವಂತ ಶಿವನನ್ನು ಅರಸುವ ಆಧ್ಯಾತ್ಮಿಕ ಅನ್ವೇಷಣೆ, ಪ್ರಕೃತಿಯೊಂದಿಗಿನ ಗಾಢವಾದ ವೈಯಕ್ತಿಕ ನಂಟು ಹಾಗೂ ಸೈನಿಕರ ತ್ಯಾಗವನ್ನು ಕಣ್ತುಂಬಿಕೊಂಡ ದೇಶಭಕ್ತಿಯ ಅನುಭವವಾಗಿತ್ತು. ಇದು ನಮಗೆ ಧೈರ್ಯ ಮತ್ತು ಆತ್ಮವಿಶ್ವಾಸದಂತಹ ಜೀವನ ಪಾಠಗಳನ್ನೂ ಕಲಿಸಿತು. ಇಂತಹ ಪ್ರಯಾಣಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ರೂಪಿಸುತ್ತವೆ.&lt;/p&gt;&lt;h2&gt;&lt;strong&gt;ಸುಮಾರು 188 ಕಿಮೀ ಚಾರಣ ಮತ್ತು 400 ಕಿಮೀ ಚಾಲನೆ&lt;/strong&gt;&lt;/h2&gt;&lt;p&gt;&amp;nbsp;ಘರ್ವಾಲ್ ಹಿಮಾಲಯದಲ್ಲಿರುವ ಕೇದಾರನಾಥ, ತುಂಗನಾಥ, ರುದ್ರನಾಥ, ಮಧ್ಯ ಮಹೇಶ್ವರ ಮತ್ತು ಕಪಿಲೇಶ್ವರವನ್ನು ಒಳಗೊಂಡ ಪಂಚ ಕೇದಾರ ಯಾತ್ರೆಯು ಸುಮಾರು 188 ಕಿಮೀ ಚಾರಣ ಮತ್ತು 400 ಕಿಮೀ ಚಾಲನೆಯನ್ನು ಒಳಗೊಂಡಿತ್ತು. ನಾವು ಕಡಿದಾದ ಮೆಟ್ಟಿಲುಗಳು, ನಿರ್ಜನ ಕಣಿವೆಗಳು, ಕಲ್ಲುಬಂಡೆಗಳ ಹಾದಿಗಳು, ದಟ್ಟ ಅರಣ್ಯಗಳು ಮತ್ತು ಹಿಮಾವೃತ ಶಿಖರಗಳನ್ನು ದಾಟಿದೆವು. ಬೈಕಿಂಗ್ ಮತ್ತು ಪರ್ವತಾರೋಹಣ ಸೇರಿದಂತೆ ಪ್ರತಿಯೊಂದು ಹಂತವು ನಮ್ಮ ಶಕ್ತಿಯನ್ನು ಪರೀಕ್ಷಿಸಿತು. ನಾವು ಶಿಮ್ಲಾದಲ್ಲಿ ಮೊದಲ ಹಂತವನ್ನು ಪೂರ್ಣಗೊಳಿಸಿದೆವು.&lt;/p&gt;&lt;p&gt;ಟಿಬೆಟ್ ಮತ್ತು ಭಾರತದ ನಡುವೆ ಇರುವ ಸ್ಥಿತಿ ಕಣಿವೆಯ ಭೂ ಪ್ರದೇಶವು ಒಂದು ಭಿನ್ನ ಲೋಕದಂತೆ ಭಾಸವಾಗುತ್ತದೆ. ಶಿಮ್ಲಾದಿಂದ ನಿರ್ಜನ ಪ್ರದೇಶಗಳ ಮೂಲಕ ಪ್ರಯಾಣಿಸಿ ಬುದ್ಧ ವಿಹಾರಗಳು ಮತ್ತು ಒರಟಾದ ಭೂಪ್ರದೇಶಕ್ಕೆ ಹೆಸರುವಾಸಿಯಾದ ಭಾರತ-ಟಿಬೆಟ್ ಗಡಿಯಲ್ಲಿರುವ ಕೊನೆಯ ಗ್ರಾಮವಾದ ಚಿಟ್ಕುಲ್ ತಲುಪಿದೆವು. ಅಲ್ಲಿಂದ ಕುನು ಮನಾಲಿ, ಲೆಹ್, ಲಡಾಕ್, ಸಿಯಾಚಿನ್ ಗಡಿ ಪ್ರದೇಶ, ರೇಜಾಂಗ್ ಲಾ, ಕಾರ್ಗಿಲ್, ಶ್ರೀನಗರ, ಅಮೃತಸರ, ವಾಘಾ ಗಡಿ, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮಾರ್ಗವಾಗಿ ರಾಣಿಬೆನ್ನೂರಿಗೆ ಮರಳಿದೆವು.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/haveri-shyamasundara-daivagya-from-ranibennur-and-his-friends-have-successfully-completed-a-47-day-motorcycle-trip-mrq/articleshow-k8u7yk2"/>
        </item>
        <item>
            <title><![CDATA[ಮುಗಿಯದ ಶಿರಸಿ ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರ; ಪ್ರತಿನಿತ್ಯ ತೊಂದರೆ]]></title>
            <link>https://kannada.asianetnews.com/karnataka-districts/the-public-is-facing-daily-problems-due-to-the-incomplete-work-on-the-sirsi-haveri-national-highway-mrq/articleshow-kpo0cvm</link>
            <guid isPermaLink="true">https://kannada.asianetnews.com/karnataka-districts/the-public-is-facing-daily-problems-due-to-the-incomplete-work-on-the-sirsi-haveri-national-highway-mrq/articleshow-kpo0cvm</guid>
            <pubDate>Tue, 04 Aug 2026 07:16:01 +0530</pubDate>
            <description><![CDATA[&lt;p&gt;ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಯಿಂದಾಗಿ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ಮಳೆಯಿಂದ ಸೋಮನಹಳ್ಳಿ ರಸ್ತೆ ಬಂದ್ ಆಗಿದ್ದು, ರಸ್ತೆ ಪಕ್ಕದ ನಿವಾಸಿಗಳು ಅಪಘಾತ, ಆರೋಗ್ಯ ಸಮಸ್ಯೆ ಹಾಗೂ ಪ್ರವಾಹದ ಭೀತಿಯಲ್ಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz56x0jjjeefpegjkw8pkryv,imgname-sirsi-haveri-1785807667794.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಂಕರ ಜಿ. ಜಾವೂರ&lt;/strong&gt;&lt;/p&gt;&lt;p&gt;&lt;strong&gt;ಶಿರಸಿ: &lt;/strong&gt;ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮುಗಿಯುವ ವರೆಗೂ ಜನರ ಗೋಳು ಮುಗಿಯುವಂತೆ ಕಾಣುತ್ತಿಲ್ಲ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಸೋಮನಹಳ್ಳಿ ರಸ್ತೆ ಮಾರ್ಗ ಬಂದ್&zwnj; ಆಗಿತ್ತು.&lt;/p&gt;&lt;p&gt;ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸಾರ್ವಜನಿಕರು ನಿತ್ಯ ಹಲವಾರು ರೀತಿಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ. ಹಲವರು ಕೈ-ಕಾಲು ಮುರಿದುಕೊಂಡಿದ್ದಾರೆ. ಈ ಮಾರ್ಗದಲ್ಲಿ ಪ್ರಯಾಣಿಸುವವರ ಸಂಕಷ್ಟ ಒಂದೆಡೆಯಾದರೆ ರಸ್ತೆ ಅಕ್ಕಪಕ್ಕದ ನಿವಾಸಿಗಳು ಬೇರೆ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಗೌಡಳ್ಳಿ ನಿವಾಸಿಗಳಿಂದ ಮನವಿ ಸಲ್ಲಿಕೆ&lt;/strong&gt;&lt;/h2&gt;&lt;p&gt;ರಸ್ತೆ ಸರಿಪಡಿಸುವಂತೆ ಹಾಗೂ ನೀರು ಸರಾಗವಾಗಿ ಹರಿದು ಹೋಗಲು ಸಿಡಿ ನಿರ್ಮಾಣ ಮಾಡಬೇಕೆಂದು ಗೌಡಳ್ಳಿ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಸ್ಥಳೀಯ ಸಂಸದರಿಗೆ ಈಗಾಗಲೇ ಮನವಿ ಮಾಡಿದ್ದಾರೆ. ಆದರೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಸೋಮನಹಳ್ಳಿ ಪ್ರವೇಶ ಮಾಡುವ ರಸ್ತೆಯಲ್ಲಿ ನೀರು ತುಂಬಿತ್ತು. ಸ್ಥಳೀಯರು ಬೇರೆ ಮಾರ್ಗದ ಮೂಲಕ ತಮ್ಮ ದಿನನಿತ್ಯದ ವ್ಯವಹಾರಗಳನ್ನು ನಡೆಸಬೇಕಾಯಿತು.&lt;/p&gt;&lt;p&gt;ಅಕಸ್ಮಾತ್ ಇನ್ನೂ ಹೆಚ್ಚಿನ ಮಳೆಯಾಗಿ ನೀರಿನ ಪ್ರಮಾಣ ಹೆಚ್ಚಾದರೆ ರಸ್ತೆ ಕೊರೆದು, ರಸ್ತೆ ಪಕ್ಕದಲ್ಲಿರುವ ಮನೆಗಳಿಗೆ ಹಾನಿ ಆಗುವ ಸಾಧ್ಯತೆ ಇದೆ. ಈಗಾಗಲೇ ನಿವಾಸಿಗಳು ಜೀವ ಭಯದಲ್ಲಿಯೇ ರಾತ್ರಿ ನಿದ್ರೆ ಇಲ್ಲದೆ ಕಳೆಯುವಂತಾಗಿದೆ. ಅತಿ ಶೀಘ್ರವಾಗಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;p&gt;ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಮನೆಗಳು ಜವಳು ಹಿಡಿಯುತ್ತಿವೆ. ಇದರಿಂದ ಮನೆಯಲ್ಲಿ ತಂಪು ಹೆಚ್ಚಾಗಿ, ಮೈ ಕೈ ನೋವು, ಶೀತ ಮತ್ತು ನೆಗಡಿಯಂತಹ ಕಾಯಿಲೆಗಳು ವೃದ್ಧರು, ದುರ್ಬಲರಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ನಿವಾಸಿಗಳು ದೂರಿದ್ದಾರೆ.&lt;/p&gt;&lt;p&gt;ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಜನರಿಗೆ ಸಂಕಷ್ಟ ಎದುರಾದಾಗ ಸಂಕಷ್ಟಕ್ಕೆ ಸ್ಪಂದಿಸಲು ಯಾರೂ ಬರುವುದಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.&lt;/p&gt;&lt;p&gt;ಮುಂದಿನ ದಿನಗಳಲ್ಲಿ ಶಿರಸಿ - ಹಾವೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಇಲ್ಲಿನ ಸ್ಥಳೀಯ ನಿವಾಸಿಗಳು ಸೇರಿಕೊಂಡು ಪ್ರತಿಭಟನೆ ಮಾಡುವುದಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಸಿಡಿ ನಿರ್ಮಾಣ&lt;/strong&gt;&lt;/h3&gt;&lt;p&gt;ಮಳೆಗಾಲ ಇರುವುದರಿಂದ ಆ ಸ್ಥಳದಲ್ಲಿ ಸಿಡಿ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಮಳೆಯ ಪ್ರಮಾಣ ಕಡಿಮೆಯಾದ ನಂತರ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿಡಿ ನಿರ್ಮಾಣ ಮಾಡಿ ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಿ ಕೊಡುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್ ಹೇಳಿದರು.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/the-public-is-facing-daily-problems-due-to-the-incomplete-work-on-the-sirsi-haveri-national-highway-mrq/articleshow-kpo0cvm"/>
        </item>
        <item>
            <title><![CDATA[Bidadi Township Row: ಹೆಚ್‌ಡಿಕೆ ಪ್ರಾರಂಭಿಸಿದ್ದರೆ ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ?]]></title>
            <link>https://kannada.asianetnews.com/karnataka-districts/bidadi-township-row-former-cm-basavaraj-bommai-slams-cm-dk-shivakumar-rav/articleshow-m9r88to</link>
            <guid isPermaLink="true">https://kannada.asianetnews.com/karnataka-districts/bidadi-township-row-former-cm-basavaraj-bommai-slams-cm-dk-shivakumar-rav/articleshow-m9r88to</guid>
            <pubDate>Fri, 17 Jul 2026 10:14:49 +0530</pubDate>
            <description><![CDATA[&lt;p&gt;ರೈತರ ವಿರೋಧದ ನಡುವೆಯೂ ಬಿಡದಿ ಟೌನ್&zwnj;ಶಿಪ್&zwnj; ಯೋಜನೆ ಮುಂದುವರಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಆರಂಭಿಸಿದ ಯೋಜನೆಯ ಮೇಲೆ ಡಿಸಿಎಂ ಡಿಕೆಶಿಗೆ ಏಕಿಷ್ಟು ಪ್ರೀತಿ, ಇದರ ಹಿಂದೆ ಗುಪ್ತ ಕನಸಿದೆಯೇ? ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq5rabjex6vra6c7bcfzryw,imgname-----------------------2026-07-17t100214.150-1784262961522.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ(ಜು.17): ರೈತರ ವಿರೋಧದ ನಡುವೆಯೂ ಬಿಡದಿ ಟೌನ್&zwnj;ಶಿಪ್&zwnj; ಯೋಜನೆ(Bidadi Township project) ಮುಂದುವರಿಸಲು ರಾಜ್ಯ ಸರ್ಕಾರದ ಆಂತರಿಕ ಕಾರ್ಯಸೂಚಿ ಕಾರಣ. ರೈತರ ಫಲವತ್ತಾದ ಜಮೀನಿನ ಬದಲು ಸರ್ಕಾರದ ಜಮೀನಿನಲ್ಲೇ ಟೌನ್&zwnj;ಶಿಪ್&zwnj; ನಿರ್ಮಿಸಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.&lt;/p&gt;&lt;h2&gt;ಹೆಚ್&zwnj;ಡಿಕೆ ಪ್ರಾರಂಭಿಸಿದ್ದರೆ ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ?&lt;/h2&gt;&lt;p&gt;ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಡದಿ ಟೌನ್&zwnj;ಶಿಪ್ ಯೋಜನೆಯನ್ನು ಎಚ್.ಡಿ.ಕುಮಾರಸ್ವಾಮಿ ಪ್ರಾರಂಭಿಸಿದ್ದು, ಆ ನಂತರ ಯಡಿಯೂರಪ್ಪ ಅವರ ಅವಧಿಯಲ್ಲಿ ಈ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂ ಸಿಎಂ ಡಿ.ಕೆ.ಶಿವಕುಮಾರ್&zwnj;(DK Shivakumar) ಹೇಳಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಅವರು ಇದನ್ನು ಪ್ರಾರಂಭಿಸಿದ್ದರೆ, ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ? ಎಂದು ಪ್ರಶ್ನಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಕಲಬುರಗಿ: ಮಳೆಗಾಗಿ ಪ್ರಾರ್ಥಿಸಿ ಮೂರು ದಿನದಲ್ಲಿ ಬರೋಬ್ಬರಿ 45 ಕಿ.ಮೀ ಉರುಳುಸೇವೆ ಮಾಡಿದ ಮಹಿಳೆ!&lt;/p&gt;&lt;h3&gt;ಎಲ್ಲದಕ್ಕೂ ಕುಮಾರಸ್ವಾಮಿ ಟೀಕಿಸುವ ಡಿಕೆಶಿ ಇದರಲ್ಲೇಕೆ ಆಸಕ್ತಿ?&lt;/h3&gt;&lt;p&gt;ಎಲ್ಲ ವಿಷಯಗಳಲ್ಲೂ ಕುಮಾರಸ್ವಾಮಿ ಅವರನ್ನು ಟೀಕಿಸುವ ಶಿವಕುಮಾರ್&zwnj;, ಈ ಟೌನ್&zwnj;ಶಿಪ್ ಯೋಜನೆಯಲ್ಲಿ ಮಾತ್ರ ಅವರನ್ನು ಏಕೆ ಅನುಸರಿಸುತ್ತಿದ್ದಾರೆ. ಟೌನ್&zwnj;ಶಿಪ್ ಯೋಜನೆಯಲ್ಲಿ ಡಿಕೆಶಿಗೆ ಹಿತಾಸಕ್ತಿ ಏನಿದೆ? ಈ ಕನಸಿನ ಹಿಂದೆ ಸಿಎಂಗೆ ಮತ್ತೊಂದು ಗುಪ್ತ ಕನಸಿದೆಯೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Yettinahole water: 10 ವರ್ಷಗಳ ಬಳಿಕ ಕೊನೆಗೂ ತುಮಕೂರಿಗೆ ಬಂತು ಎತ್ತಿನಹೊಳೆ ನೀರು!&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bidadi-township-row-former-cm-basavaraj-bommai-slams-cm-dk-shivakumar-rav/articleshow-m9r88to"/>
        </item>
        <item>
            <title><![CDATA[ಹುಬ್ಬಳ್ಳಿ-ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ, 5 ಜಿಲ್ಲೆಯ ಪ್ರವಾಸಿಗರಿಗೆ ಇದೊಂದು ಆಫರ್!]]></title>
            <link>https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm</link>
            <guid isPermaLink="true">https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm</guid>
            <pubDate>Wed, 17 Jun 2026 12:01:04 +0530</pubDate>
            <description><![CDATA[ನೈಋತ್ಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 20 ಮತ್ತು 21 ರಂದು ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು 5 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಪ್ರವಾಸಿಗರಿಗೆ ಅನುಕೂಲಕರವಾದ ವೇಳಾಪಟ್ಟಿಯನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khp601b9hctbmkhxep8fe8wz,imgname-indian-railway--2--1771344758121.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಹುಬ್ಬಳ್ಳಿ ಮತ್ತು ಪ್ರವಾಸಿ ತಾಣಗಳಿರುವ ಚಿಕ್ಕಮಗಳೂರು ನಡುವೆ ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ವಾರಾಂತ್ಯದ ದಿನಗಳಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹಾಗೂ ರೈಲುಗಳಲ್ಲಿನ ಹೆಚ್ಚುವರಿ ಜನದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಜೂನ್ 20 ಮತ್ತು 21 ರಂದು ಈ ಎರಡೂ ನಗರಗಳ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ರೈಲು ಉತ್ತರ ಮತ್ತು ಮಧ್ಯ ಕರ್ನಾಟಕದ ಒಟ್ಟು 5 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಮಾನ್ಸೂನ್ ಪ್ರಕೃತಿ ಸವಿಯಲು ಇದೊಂದು ಆಫರ್ ನೀಡಿದಂತಿದೆ. ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ಅನುಕೂಲಕರವಾದ ಈ ರೈಲಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.&lt;/p&gt;&lt;h2&gt;ರೈಲಿನ ವೇಳಾಪಟ್ಟಿ ಮತ್ತು ಸಂಚಾರದ ವಿವರ&lt;/h2&gt;&lt;p&gt;ಈ ವಿಶೇಷ ರೈಲನ್ನು ಜೂನ್ 20 (ಶನಿವಾರ) ಮತ್ತು ಜೂನ್ 21 (ಭಾನುವಾರ) ರಂದು ಒಟ್ಟು ಎರಡು ಟ್ರಿಪ್&zwnj;ಗಳ ಕಾಲ ಓಡಿಸಲಾಗುತ್ತಿದೆ.&lt;/p&gt;&lt;p&gt;ಹುಬ್ಬಳ್ಳಿ - ಚಿಕ್ಕಮಗಳೂರು ವಿಶೇಷ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 07341): ಜೂನ್ 20 ಮತ್ತು 21 ರಂದು ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಟು, ಅದೇ ದಿನ ಬೆಳಗ್ಗೆ 11:15 ಕ್ಕೆ ಚಿಕ್ಕಮಗಳೂರು ನಿಲ್ದಾಣವನ್ನು ತಲುಪಲಿದೆ.&lt;/p&gt;&lt;p&gt;ಚಿಕ್ಕಮಗಳೂರು - ಹುಬ್ಬಳ್ಳಿ ವಿಶೇಷ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 07342): ಜೂನ್ 20 ಮತ್ತು 21 ರಂದು ಚಿಕ್ಕಮಗಳೂರಿನಿಂದ ಸಂಜೆ 5:30 ಕ್ಕೆ ಹೊರಟು, ಅದೇ ದಿನ ರಾತ್ರಿ 11:20 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ತಲುಪಲಿದೆ.&lt;/p&gt;&lt;h2&gt;ಎಲ್ಲೆಲ್ಲಿ ನಿಲುಗಡೆ ಇರಲಿದೆ? (ಮಾರ್ಗ ಮತ್ತು ನಿಲ್ದಾಣಗಳು)&lt;/h2&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಮಾರ್ಗಮಧ್ಯೆ ಪ್ರಮುಖ ನಗರಗಳು ಸೇರಿದಂತೆ ಒಟ್ಟು 15 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.&lt;/p&gt;&lt;p&gt;ಪ್ರಮುಖ ನಿಲುಗಡೆಗಳು: ಕುಂದಗೋಳ, ಸಂಶಿ (ಸೌಂಶಿ), ಯಳವಿಗಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು(ಚಿತ್ರದುರ್ಗ), ರಾಮಗಿರಿ, ಅಜ್ಜಂಪುರ, ಬೀರೂರು, ಕಡೂರು, ಬಿಸ್ಲೆಹಳ್ಳಿ, ಸಖರಾಯಪಟ್ಟಣ ಹಾಗೂ ಕಣಿವೆಹಳ್ಳಿ.&lt;/p&gt;&lt;h2&gt;ಬೋಗಿಗಳ ವಿವರ&amp;nbsp;&lt;/h2&gt;&lt;p&gt;ಈ ವಿಶೇಷ ರೈಲು ಒಟ್ಟು 10 ಬೋಗಿಗಳನ್ನು (Coaches) ಒಳಗೊಂಡಿರುತ್ತದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೋಗಿಗಳನ್ನು ವಿನ್ಯಾಸಗೊಳಿಸಲಾಗಿದೆ:&lt;/p&gt;&lt;ul&gt; &lt;li&gt;1 ಸ್ಲೀಪರ್ ಕ್ಲಾಸ್ ಬೋಗಿ (Sleeper Class)&lt;/li&gt; &lt;li&gt;7 ಸಾಮಾನ್ಯ ದರ್ಜೆ ಬೋಗಿಗಳು (General Coach)&lt;/li&gt; &lt;li&gt;2 ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ ದಿವ್ಯಾಂಗರ ವಿಶೇಷ ಕಂಪಾರ್ಟ್&zwnj;ಮೆಂಟ್ ಬೋಗಿಗಳು.&lt;/li&gt;&lt;/ul&gt;&lt;h2&gt;ಪ್ರವಾಸಿಗರಿಗೆ &amp;nbsp;ಸೂಕ್ತ ಸಮಯದ ಪ್ಲಾನಿಂಗ್!&lt;/h2&gt;&lt;p&gt;ನೈಋತ್ಯ ರೈಲ್ವೆ ಅಧಿಕಾರಿಗಳು ಈ ರೈಲಿನ ವೇಳಾಪಟ್ಟಿಯನ್ನು ಪ್ರವಾಸಿಗರಿಗೆ ಅತ್ಯಂತ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಿದ್ದಾರೆ.&lt;/p&gt;&lt;p&gt;ರೈಲು ಬೆಳಗ್ಗೆ 11:15ಕ್ಕೆ ಚಿಕ್ಕಮಗಳೂರು ತಲುಪುವುದರಿಂದ, ಪ್ರವಾಸಿಗರು ಆರಾಮವಾಗಿ &amp;nbsp;ಮಧ್ಯಾಹ್ನದ ವೇಳೆಗೆ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್&zwnj;ಗಿರಿ ಮುಂತಾದ ಕಡೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಲು ಸಾಕಷ್ಟು ಸಮಯ ಸಿಗುತ್ತದೆ.&lt;/p&gt;&lt;p&gt;ಇನ್ನು ಹಿಂದಿರುಗುವಾಗ ಭಾನುವಾರ ಸಂಜೆ 5:30ಕ್ಕೆ ರೈಲು ಇರುವುದರಿಂದ, ವೀಕೆಂಡ್&zwnj;ನಲ್ಲಿ ಇಡೀ ದಿನ ಸುತ್ತಾಡಿ, ಯಾವುದೇ ಆತುರವಿಲ್ಲದೇ ಆರಾಮವಾಗಿ ರೈಲು ಹತ್ತಿ ರಾತ್ರಿಯೊಳಗೆ ಹುಬ್ಬಳ್ಳಿಗೆ ತಲುಪಬಹುದಾಗಿದೆ. ಸಾರ್ವಜನಿಕರು ಹಾಗೂ ಪ್ರಕೃತಿ ಪ್ರೇಮಿಗಳು ಈ ವಿಶೇಷ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಕೋರಿದೆ.&lt;/p&gt;]]></content:encoded>
            <category>haveri</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm"/>
        </item>
        <item>
            <title><![CDATA[ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಂತೆ ಮನವಿ; ರೈತ ಸಂಘದ ಆತಂಕ ಏನು?]]></title>
            <link>https://kannada.asianetnews.com/karnataka-districts/appeal-not-to-sign-india-us-free-trade-agreement-what-are-the-concerns-of-the-haveri-farmers-association-mrq/articleshow-po3kex2</link>
            <guid isPermaLink="true">https://kannada.asianetnews.com/karnataka-districts/appeal-not-to-sign-india-us-free-trade-agreement-what-are-the-concerns-of-the-haveri-farmers-association-mrq/articleshow-po3kex2</guid>
            <pubDate>Tue, 23 Jun 2026 08:20:21 +0530</pubDate>
            <description><![CDATA[ಮುಂಬರಲಿರುವ ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದವು ದೇಶದ ಕೃಷಿ ವಲಯಕ್ಕೆ ಮಾರಕವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆತಂಕ ವ್ಯಕ್ತಪಡಿಸಿದೆ. ಆಮದು ಸುಂಕ ಕಡಿತ ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಧಕ್ಕೆಯಾಗುವ ಸಾಧ್ಯತೆಯಿಂದಾಗಿ, ಈ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ರೈತ ಮುಖಂಡರು ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvs5y8y4880dkbygqep5a7dm,imgname-haveri-farmer--1--1782182781892.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ&lt;/strong&gt;: ಮುಂಬರಲಿರುವ ಭಾರತ-ಅಮೆರಿಕ ಮಧ್ಯಂತರ ಮುಕ್ತ ವ್ಯಾಪಾರ ಒಪ್ಪಂದದಿಂದ ದೇಶದ ಕೃಷಿ ವಲಯಕ್ಕೆ ಭಾರಿ ಪೆಟ್ಟು ಬೀಳಲಿದ್ದು, ಯಾವುದೇ ಕಾರಣಕ್ಕೂ ರೈತರ ಹಿತಾಸಕ್ತಿ ಬಲಿಗೊಡುವ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಮೋದಿಯವರಿಗೆ ತುರ್ತು ಮನವಿ ಸಲ್ಲಿಸಿದರು.&lt;/p&gt;&lt;p&gt;ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ರೈತ ಮುಖಂಡರು, ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಜೂ. 23, 24ರಂದು ನವದೆಹಲಿಗೆ ಭೇಟಿ ನೀಡಲಿದ್ದು, ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ. ಇದರಿಂದ ರೈತ ಸಮುದಾಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಸ್ಥಳೀಯ ಮಾರುಕಟ್ಟೆ ನಾಶದ ಆತಂಕ&lt;/strong&gt;&lt;/h2&gt;&lt;p&gt;ಹತ್ತಿ, ಜೋಳ, ಸೋಯಾಬೀನ್ ಎಣ್ಣೆ ಹಾಗೂ ಸಂಸ್ಕರಿಸಿದ ಹಣ್ಣುಗಳ ಮೇಲಿನ ಆಮದು ಸುಂಕ ಕಡಿತಗೊಳಿಸಿದರೆ, ಅಮೆರಿಕದ ಸಬ್ಸಿಡಿಯುಕ್ತ ಉತ್ಪನ್ನಗಳ ಎದುರು ನಮ್ಮ ರೈತರು ಸ್ಪರ್ಧಿಸಲು ಸಾಧ್ಯವಿಲ್ಲ. ತಾಂತ್ರಿಕ ಅಡೆತಡೆಗಳ ನಿವಾರಣೆಯಿಂದ ವಿದೇಶಿ ಹಾಲು, ಮಾಂಸ, ಜೋಳ ಭಾರತದ ಮಾರುಕಟ್ಟೆ ಪ್ರವೇಶಿಸಿ ಸ್ಥಳೀಯ ಮಾರುಕಟ್ಟೆ ನಾಶವಾಗಲಿದೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಅಮೆರಿಕವು ಭಾರತದ ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ತರಲು ಒತ್ತಡ ಹೇರುತ್ತಿದೆ. ಈಗಾಗಲೇ ಸೂಪರ್ ಎಲ್-ನಿನೋ ಮುಂಗಾರು ಭೀತಿಯಿರುವಾಗ, ಎಂ.ಎಸ್.ಪಿಗೆ ಧಕ್ಕೆಯಾದರೆ ಭತ್ತ ಮತ್ತು ಗೋಧಿ ಬೆಳೆಯುವ ಕೋಟ್ಯಂತರ ರೈತರು ಬೀದಿಪಾಲಾಗಲಿದ್ದಾರೆ. ಯಾವುದೇ ಕಾರಣಕ್ಕೂ ಕೃಷಿಕರು, ಹಾಲು ಉತ್ಪಾದಕರು ಹಾಗೂ ಮೀನುಗಾರರನ್ನು ಸಂಕಷ್ಟಕ್ಕೆ ತಳ್ಳುವ ಈ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಹಾಕಬಾರದು ಎಂದು ಒತ್ತಾಯಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೈಕೊಟ್ಟ ಮಳೆ: 11 ಎಕ್ರೆ ಗೋವಿನಜೋಳದ ಬೆಳೆ ಟ್ರ&zwj;್ಯಾಕ್ಟರ್&zwnj;ನಿಂದ ನಾಶ ಮಾಡಿದ ಹಾವೇರಿ ರೈತ&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಶಿವಯೋಗಿ ಹೊಸಗೌಡ್ರ, ಜಾನ್ ಪುನಿತ್, ಸುಭಾಸ ಬನ್ನಿಹಟ್ಟಿ, ರಾಜು ತರ್ಲಗಟ್ಟ ಇತರರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 17 ಲಕ್ಷಕ್ಕೆ ಕೋಟ್ಯಂತರ ಮೌಲ್ಯದ 5 ಎಕರೆ ಕೃಷಿಭೂಮಿ ಕಬಳಿಕೆ? ದೂರು ದಾಖಲಿಸಿದ ನೊಂದ ರೈತ&lt;/strong&gt;&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/appeal-not-to-sign-india-us-free-trade-agreement-what-are-the-concerns-of-the-haveri-farmers-association-mrq/articleshow-po3kex2"/>
        </item>
        <item>
            <title><![CDATA[ಬದುಕಿದ್ದಾಗಲೇ ಬರ್ತಿವೆ ಡೆತ್​ ಸರ್ಟಿಫಿಕೇಟ್​: ಹಾವೇರಿಯಲ್ಲೇ ಇನ್ನೊಂದು ಎಡವಟ್ಟು- ಸರ್ಕಾರದ ಸೌಲಭ್ಯಗಳು ಕಟ್​]]></title>
            <link>https://kannada.asianetnews.com/karnataka-districts/death-certificate-in-the-name-of-living-person-another-case-in-haveri-suc/articleshow-qe9p0mi</link>
            <guid isPermaLink="true">https://kannada.asianetnews.com/karnataka-districts/death-certificate-in-the-name-of-living-person-another-case-in-haveri-suc/articleshow-qe9p0mi</guid>
            <pubDate>Thu, 18 Jun 2026 11:30:42 +0530</pubDate>
            <description><![CDATA[ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ, ತಾಯಿಯ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ ವೃದ್ಧೆಗೆ, ಆಕೆಯ ಹೆಸರಿನಲ್ಲೇ ಮರಣ ಪ್ರಮಾಣಪತ್ರ ನೀಡಲಾಗಿದೆ. ಈ ಆಡಳಿತಾತ್ಮಕ ಎಡವಟ್ಟಿನಿಂದಾಗಿ, ಶಿವಗಂಗವ್ವ ಎಂಬ ಮಹಿಳೆ ತನ್ನೆಲ್ಲಾ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvcn1taxtmv5ykczhsqz7cmv,imgname-death-certificate-1781762419036.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವೇರಿ: ಹಾವೇರಿ ಜಿಲ್ಲಾಡಳಿತದಿಂದಲೇ ಈಗ ಮತ್ತೊಂದು ಎಡವಟ್ಟಾಗಿದ್ದು, ವೃದ್ಧ ಮಹಿಳೆಯೊಬ್ಬರು ನರಳುವಂತಾಗಿರುವ ಘಟನೆ ವರದಿಯಾಗಿದೆ. ಕೆಲ ತಿಂಗಳ ಹಿಂದೆ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಹಶೀಲ್ದಾರ್ ಕಚೇರಿಯ ಡಾಟಾ ಎಂಟ್ರಿ ಸಿಬ್ಬಂದಿಯೊಬ್ಬರು ಮಾಡಿದ್ದ ಎಡವಟ್ಟಿನಿಂದ ಕುಟುಂಬವನ್ನು ನರಳುವಂತಾಗಿತ್ತು. ಪತ್ನಿ ಸಾವನ್ನಪ್ಪಿದ ನಂತರ ಆಕೆಯ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಪತಿಗೆ, ಅವರೇ ಸತ್ತ ಸರ್ಟಿಫಿಕೇಟ್​ ನೀಡಲಾಗಿತ್ತು. ಪತ್ನಿ ಸತ್ತಿದ್ದರೆ, ಬದುಕಿದ್ದ ಪತಿಯ ಹೆಸರಿನಲ್ಲಿ ಸರ್ಟಿಫಿಕೇಟ್​ ಕೊಟ್ಟು ಅವರು ಅದನ್ನು ಸರಿಪಡಿಸಲು ಮತ್ತಷ್ಟು ಸಮಸ್ಯೆ ಎದುರಿಸಬೇಕಾಗಿತ್ತು.&lt;/p&gt;&lt;p&gt;ರಟ್ಟಿಹಳ್ಳಿ ತಾಲೂಕಿನ ಶಿರಗಂಬಿ ಗ್ರಾಮದ ತೋಪನಗೌಡ ಗುಬ್ಬಿ ಎಂಬುವವರ ಪತ್ನಿ ಮಲ್ಲಮ್ಮ ಅವರು ಕಳೆದ 12-08-2021 ರಂದು ಮೃತಪಟ್ಟಿದ್ದರು. ಪತ್ನಿಯ ಮರಣದ ನಂತರ ಸರ್ಕಾರಿ ದಾಖಲೆಗಳಿಗಾಗಿ ತೋಪನಗೌಡರು ಪತ್ನಿಯ ಡೆತ್ ಸರ್ಟಿಫಿಕೇಟ್ ಕೇಳಿ ಅರ್ಜಿ ಸಲ್ಲಿಸಿದ್ದರು. ಆದರೆ ಮಲ್ಲಮ್ಮನ ಹೆಸರಿಗೆ ಬದಲು ಜೀವಂತ ಇರುವ ಪತಿ ಅಂದರೆ ಅರ್ಜಿ ಸಲ್ಲಿಸಿದ ತೋಪನಗೌಡರ ಹೆಸರಲ್ಲೇ ಮರಣ ಪ್ರಮಾಣ ಪತ್ರವನ್ನು ಪ್ರಿಂಟ್ ಮಾಡಿ ಕೈಗಿಟ್ಟಿದ್ದರು. ಈ ಎಡವಟ್ಟು ನಡೆದು ಐದು ವರ್ಷಗಳ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.&lt;/p&gt;&lt;h2&gt;&lt;strong&gt;ಮತ್ತೊಂದು ಘಟನೆ&lt;/strong&gt;&lt;/h2&gt;&lt;p&gt;ಆದರೆ, ಇದೀಗ ಮಹಿಳೆಯೊಬ್ಬರಿಗೆ ಇದೇ ಸ್ಥಿತಿ ಆಗಿರುವ ಕಾರಣ, ಸರ್ಕಾರಿ ಸೌಲಭ್ಯಗಳೆಲ್ಲಾ ಕಟ್​ ಆಗಿ ಈಗ ಮಹಿಳೆ ನರಳುವಂತಾಗಿದೆ. ಅಮ್ಮ ಸತ್ತಿದ್ದರೆ ಮಗಳ ಹೆಸರಿನ ಮರಣ ಪ್ರಮಾಣ ಪತ್ರ ಬಂದಿರುವ ಕಾರಣ, ಆಕೆಗೆ ಸರ್ಕಾರದಿಂದ ಸಿಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಕಟ್​ ಮಾಡಲಾಗಿದೆ ಎಂದು ಮಹಿಳೆ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ.&lt;/p&gt;&lt;p&gt;ಅತ್ತಿಗೇರಿ ಗ್ರಾಮದ ಶಿವಗಂಗವ್ವ ತಳಳ್ಳಿ ಎಂಬ ಮಹಿಳೆಯ ತಾಯಿ ಶಂಕ್ರವ್ವ ಮೀಳ್ಳಿ ಇತ್ತೀಚೆಗೆ ನಿಧನರಾಗಿದ್ದರು. ತಾಯಿ ಮೃತಪಟ್ಟಿರುವ ಕಾರಣ ಡೆತ್​ ಸರ್ಟಿಫಿಕೇಟ್​ಗೆ ವೃದ್ಧೆಯಾಗಿರುವ ಮಗಳು ಶಿವಗಂಗವ್ವ ಅರ್ಜಿ ಸಲ್ಲಿಸಿದ್ದರು. ಆದರೆ, ಶಿಗ್ಗಾಂವಿ ತಾಲೂಕಾಡಳಿತ ಮತ್ತು ಅತ್ತಿಗೇರಿ ಗ್ರಾಮದ ಅಧಿಕಾರಿಗಳ ಎಡವಟ್ಟಿನಿಂದ ಜೀವಂತವಾಗಿರುವ ಮಗಳು ಶಿವಗಂಗವ್ವಳ ಹೆಸರಲ್ಲೇ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದಾರೆ. ಇದು ಶಿವಗಂಗವ್ವ ಅವರಿಗೆ ತಿಳಿದೇ ಇರಲಿಲ್ಲ. ಬ್ಯಾಂಕಿನಲ್ಲಿ ಹಣ ತೆಗೆಯಲು ಹೋದಾಗ ವಿಷಯ ತಿಳಿದಿದೆ. ಆ ಬಳಿಕ ನೋಡಿದ್ರೆ ಅದು ತಾವೇ ಸತ್ತು ಹೋಗಿರುವ ಸರ್ಟಿಫಿಕೇಟ್​ ಎಂದು ತಿಳಿದಿದೆ.&lt;/p&gt;&lt;h3&gt;&lt;strong&gt;ಸರ್ಕಾರಿ ಸೌಲಭ್ಯಗಳಿಂದ ವಂಚಿತ&lt;/strong&gt;&lt;/h3&gt;&lt;p&gt;ಶಿವಗಂಗವ್ವ ಸದ್ಯ ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತಳಾಗಿದ್ದಾರೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಷ್ಟೇ ಅಲ್ಲದೆ, ಅವರಿಗೆ ಬರುತ್ತಿದ್ದ ವೃದ್ಧಾಪ್ಯ ವೇತನ ಹಾಗೂ ಗಂಡನ ಪೀಚಣಿ ಹಣವೂ ಸಹ ರದ್ದಾಗಿದೆ. ರೇಷನ್ ಮತ್ತು ಹಣ ಯಾವುದೂ ಇಲ್ಲವಾಗಿದೆ. ಇದನ್ನು ಶಿವಗಂಗವ್ವ ಮತ್ತು ಕುಟುಂಬಸ್ಥರು ತಕ್ಷಣವೇ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎನ್ನಲಾಗುತ್ತಿದೆ. ಅತ್ತಿಗೇರಿ ಗ್ರಾಮಸ್ಥರು ಹಾಗೂ ವೃದ್ಧೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>haveri</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/death-certificate-in-the-name-of-living-person-another-case-in-haveri-suc/articleshow-qe9p0mi"/>
        </item>
        <item>
            <title><![CDATA[ಬೆಂಗಳೂರು-ದೆಹಲಿ ರೈಲಲ್ಲಿ ಹಾವೇರಿ ಸಮೀಪ ಅಕ್ರಮ ಮಾರಾಟಗಾರರಿಂದ ಟ್ರೈನ್ ಸಿಬ್ಬಂದಿಗೆ ಚಾಕು ಇರಿತ, ಇಬ್ಬರು ಗಂಭೀರ!]]></title>
            <link>https://kannada.asianetnews.com/karnataka-districts/bengaluru-delhi-train-pantry-staff-stabbed-by-illegal-vendors-in-yesvantpur-hazrat-nizamuddin-sampark-kranti-express-gdp/articleshow-r43u5b3</link>
            <guid isPermaLink="true">https://kannada.asianetnews.com/karnataka-districts/bengaluru-delhi-train-pantry-staff-stabbed-by-illegal-vendors-in-yesvantpur-hazrat-nizamuddin-sampark-kranti-express-gdp/articleshow-r43u5b3</guid>
            <pubDate>Sat, 20 Jun 2026 17:07:32 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್&zwnj;ಪ್ರೆಸ್ ರೈಲಿನಲ್ಲಿ, ಅನಧಿಕೃತ ವ್ಯಾಪಾರವನ್ನು ಪ್ರಶ್ನಿಸಿದ್ದಕ್ಕೆ ಪ್ಯಾಂಟ್ರಿ ಸಿಬ್ಬಂದಿ ಮೇಲೆ ಅಕ್ರಮ ಮಾರಾಟಗಾರರ ಗುಂಪೊಂದು ಚಾಕುವಿನಿಂದ ಹಲ್ಲೆ ನಡೆಸಿದೆ. ಈ ಘೋರ ಕೃತ್ಯದಲ್ಲಿ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkzwr0wwwxzjy1k54030qy8m,imgname-new-project--66--1767188089530-1773818086300.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರೈಲ್ವೆ ಇಲಾಖೆ ಎಷ್ಟೇ ಬಿಗಿ ಭದ್ರತೆಯ ಭರವಸೆ ನೀಡಿದರೂ, ಚಲಿಸುವ ರೈಲುಗಳಲ್ಲಿ ಸಾಮಾನ್ಯ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯ ಸುರಕ್ಷತೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಬೆಂಗಳೂರಿನಿಂದ ದೆಹಲಿಗೆ ಸಂಚರಿಸುತ್ತಿದ್ದ ಪ್ರತಿಷ್ಠಿತ ಎಕ್ಸ್&zwnj;ಪ್ರೆಸ್ ರೈಲೊಂದರಲ್ಲಿ ಅನಧಿಕೃತ ವ್ಯಾಪಾರಿಗಳ ಗ್ಯಾಂಗ್ ಹಾಗೂ ಪ್ಯಾಂಟ್ರಿ ಸಿಬ್ಬಂದಿ ನಡುವೆ ನಡೆದ ವಾಗ್ವಾದ ಭೀಕರ ಹಿಂಸಾಚಾರಕ್ಕೆ ತಿರುಗಿದೆ. ಅಕ್ರಮ ಮಾರಾಟಗಾರರ ಗುಂಪೊಂದು ಪ್ಯಾಂಟ್ರಿ ಸಿಬ್ಬಂದಿ ಮೇಲೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಸೋಮವಾರ ಸಂಜೆ ನಡೆದಿದೆ. ಈ ರಕ್ತಪಾತದಲ್ಲಿ ಇಬ್ಬರು ಪ್ಯಾಂಟ್ರಿ ನೌಕರರು ತೀವ್ರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;h2&gt;ಘಟನೆಯ ಹಿನ್ನೆಲೆ: ಎಸಿ ಕೋಚ್&zwnj;ನಲ್ಲಿ ಶುರುವಾದ ಗಲಾಟೆ&lt;/h2&gt;&lt;p&gt;ಸೋಮವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್&zwnj;ಪ್ರೆಸ್ ರೈಲು (Yesvantpur-Hazrat Nizamuddin Sampark Kranti Express) ಹಾವೇರಿ ನಿಲ್ದಾಣವನ್ನು ದಾಟಿ ಮುನ್ನಡೆಯುತ್ತಿತ್ತು. ಈ ವೇಳೆ ರೈಲಿನ ಹವಾನಿಯಂತ್ರಿತ (AC) ಬೋಗಿಯೊಳಗೆ ನುಗ್ಗಿದ ಅನಧಿಕೃತ ಮಾರಾಟಗಾರನೊಬ್ಬ ಮಸಾಲಾ ಕಡಲೆಕಾಯಿ (ಮಸಾಲಾ ಶೇಂಗಾ) ಮಾರಾಟ ಮಾಡಲು ಆರಂಭಿಸಿದ್ದಾನೆ.&lt;/p&gt;&lt;p&gt;ರೈಲಿನಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವುದನ್ನು ಗಮನಿಸಿದ ಪ್ಯಾಂಟ್ರಿ ಕಾರ್ಯಾಚರಣೆಯ ಸಿಬ್ಬಂದಿ ಧೀರೇಂದ್ರ ಸಿಂಗ್ (40) ಎಂಬುವವರು ತಕ್ಷಣವೇ ಆತನನ್ನು ಆಕ್ಷೇಪಿಸಿದ್ದಾರೆ. ರೈಲ್ವೆ ನಿಯಮಾವಳಿಗಳ ಪ್ರಕಾರ ಇಲ್ಲಿ ವ್ಯಾಪಾರ ಮಾಡುವಂತಿಲ್ಲ, ತಕ್ಷಣವೇ ಹೊರಗೆ ಹೋಗಿ ಎಂದು ಧೀರೇಂದ್ರ ಸಿಂಗ್ ಎಚ್ಚರಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ.&lt;/p&gt;&lt;h2&gt;ಮಾರಾಕಾಸ್ತ್ರಗಳೊಂದಿಗೆ ಧಾವಿಸಿದ ಅಕ್ರಮ ಗ್ಯಾಂಗ್&lt;/h2&gt;&lt;p&gt;ಧೀರೇಂದ್ರ ಸಿಂಗ್ ಒಂಟಿಯಾಗಿರುವುದನ್ನು ಗಮನಿಸಿದ ಕಡಲೆಕಾಯಿ ವ್ಯಾಪಾರಿ, ರೈಲಿನಲ್ಲೇ ಇದ್ದ ತನ್ನ ಸಹಚರರಿಗೆ ಸದ್ದಿಲ್ಲದೆ ಕರೆ ಮಾಡಿದ್ದಾನೆ. ಧೀರೇಂದ್ರ ಅವರು ಜಿಆರ್&zwnj;ಪಿ (ಸರ್ಕಾರಿ ರೈಲ್ವೆ ಪೊಲೀಸ್)ಗೆ ನೀಡಿದ ದೂರಿನ ಪ್ರಕಾರ, ಕೇವಲ ಕೆಲವೇ ನಿಮಿಷಗಳಲ್ಲಿ ಅದೇ ರೈಲಿನಲ್ಲಿದ್ದ ಸುಮಾರು ಐದು ಜನರ ಅಕ್ರಮ ಮಾರಾಟಗಾರರ ಗುಂಪು ಆತನ ಬೆಂಬಲಕ್ಕೆ ಧಾವಿಸಿದೆ. ಅವರೆಲ್ಲರೂ ಮೊದಲೇ ಸಂಚು ರೂಪಿಸಿಕೊಂಡು ರೈಲು ಹತ್ತಿದವರಂತೆ ಕಾಣುತ್ತಿದ್ದರು. ಪ್ಯಾಂಟ್ರಿ ಸಿಬ್ಬಂದಿ ಪ್ರಶ್ನಿಸಿದ್ದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿ ಜಗಳಕ್ಕೆ ನಿಂತರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪ್ಯಾಂಟ್ರಿ ಮ್ಯಾನೇಜರ್ ಜಿತೇಂದ್ರ ಸಿಂಗ್ ತೋಮರ್ ಸ್ಥಳಕ್ಕೆ ಆಗಮಿಸಿ, ಗಲಾಟೆ ತಣ್ಣಗಾಗಿಸಲು ಯತ್ನಿಸಿದ್ದಾರೆ. ಆದರೆ, ಮ್ಯಾನೇಜರ್ ಬರುತ್ತಿದ್ದಂತೆಯೇ ಜೇಬಿನಲ್ಲಿದ್ದ ಹರಿತವಾದ ಚಾಕುಗಳನ್ನು ಹೊರತೆಗೆದ ದುಷ್ಕರ್ಮಿಗಳು ಸಿಬ್ಬಂದಿಯ ಮೇಲೆ ಮುಗಿಬಿದ್ದಿದ್ದಾರೆ.&lt;/p&gt;&lt;h2&gt;ರಕ್ತದ ಮಡುವಿನಲ್ಲಿ ಬಿದ್ದ ನೌಕರರು:&lt;/h2&gt;&lt;p&gt;ಆ ದುಷ್ಕರ್ಮಿಗಳು ಧೀರೇಂದ್ರ ಅವರನ್ನು ನೇರವಾಗಿ ಇರಿದು ಕೊಲೆ ಮಾಡಲು ಯತ್ನಿಸಿದರು. ಧೀರೇಂದ್ರ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಚಾಕು ಅವರ ಕುತ್ತಿಗೆಗೆ ತಗುಲಿದ್ದರಿಂದ ತೀವ್ರ ರಕ್ತಸ್ರಾವ ಆರಂಭವಾಯಿತು ಎಂದು ಮ್ಯಾನೇಜರ್ ಜಿತೇಂದ್ರ ಸಿಂಗ್ ತೋಮರ್ ನಡೆದ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ&lt;/p&gt;&lt;p&gt;ಇದೇ ವೇಳೆ ಧೀರೇಂದ್ರ ಅವರ ರಕ್ಷಣೆಗೆ ಧಾವಿಸಿದ ಮತ್ತೊಬ್ಬ ಪ್ಯಾಂಟ್ರಿ ಸಿಬ್ಬಂದಿ ಲೋಕೇಂದ್ರ ಎಂಬುವವರ ಎಡ ಭುಜದ ಭಾಗಕ್ಕೆ ದುಷ್ಕರ್ಮಿಗಳು ಬಲವಾಗಿ ಇರಿದಿದ್ದಾರೆ. ಚಾಕು ತಗುಲಿದ ರಭಸಕ್ಕೆ ಲೋಕೇಂದ್ರ ಅವರ ಭುಜದಿಂದ ರಕ್ತದ ಕಾರಂಜಿ ಚಿಮ್ಮಿದೆ. ಅಷ್ಟಕ್ಕೇ ನಿಲ್ಲದ ಗ್ಯಾಂಗ್, ಪ್ಯಾಂಟ್ರಿ ತಂಡದಲ್ಲಿದ್ದ ಇತರ ಸಿಬ್ಬಂದಿಗಳ ಮೇಲೂ ಮನಬಂದಂತೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಕೆಲವು ಸರಕು ಸರಂಜಾಮುಗಳನ್ನು ಕಸಿದುಕೊಂಡಿದ್ದಾರೆ.&lt;/p&gt;&lt;h2&gt;ಕರ್ಜಗಿ ನಿಲ್ದಾಣದಲ್ಲಿ ದುಷ್ಕರ್ಮಿಗಳು ಪರಾರಿ&lt;/h2&gt;&lt;p&gt;ರೈಲು ಹಾವೇರಿ ದಾಟಿದ ಬಳಿಕ ಸಿಗ್ನಲ್ ಕ್ರಾಸಿಂಗ್&zwnj;ಗಾಗಿ ಕರ್ಜಗಿ ರೈಲ್ವೆ ನಿಲ್ದಾಣದಲ್ಲಿ ಕೆಲ ಕಾಲ ಸ್ಥಗಿತಗೊಂಡಿತು. ರೈಲು ನಿಲ್ಲುತ್ತಿದ್ದಂತೆಯೇ, ಅಕ್ರಮ ಮಾರಾಟಗಾರರ ಗ್ಯಾಂಗ್ ರೈಲಿನಿಂದ ಕೆಳಕ್ಕೆ ಜಿಗಿದು, ಕತ್ತಲಲ್ಲಿ ಓಡಿಹೋಗಿ ತಲೆಮರೆಸಿಕೊಂಡಿದೆ. ರೈಲು ಮುಂದಿನ ನಿಲ್ದಾಣ ತಲುಪುತ್ತಿದ್ದಂತೆಯೇ ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಸಿಬ್ಬಂದಿ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.&lt;/p&gt;&lt;h2&gt;ಹಾವೇರಿ ಮೂಲದ ಕಿಡಿಗೇಡಿಗಳ ವಿರುದ್ಧ ಎಫ್&zwnj;ಐಆರ್ ದಾಖಲು&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಸರ್ಕಾರಿ ರೈಲ್ವೆ ಪೊಲೀಸ್ (GRP) ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಹಾವೇರಿ ಮೂಲದವರೆಂದು ಶಂಕಿಸಲಾದ ಐದೂ ಜನ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್&zwnj;ಗಳ ಅಡಿಯಲ್ಲಿ ಎಫ್&zwnj;ಐಆರ್ (FIR) ದಾಖಲಿಸಿಕೊಳ್ಳಲಾಗಿದೆ.&lt;/p&gt;&lt;p&gt;ಕರ್ನಾಟಕ ಜಿಆರ್&zwnj;ಪಿ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸಾರಾ ಫಾತಿಮಾ ಅವರು ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ನಮ್ಮ ವಿಶೇಷ ಪೊಲೀಸ್ ತಂಡವು ಆರೋಪಿಗಳ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ. ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸಲಾಗುವುದು. ಸದ್ಯಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದ ಪ್ಯಾಂಟ್ರಿ ಸಿಬ್ಬಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ರೈಲ್ವೆ ಇಲಾಖೆಗೆ ತಲೆನೋವಾದ ಅಕ್ರಮ ವೆಂಡರ್ಸ್ ಹಾವಳಿ&lt;/h2&gt;&lt;p&gt;ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC) ಅಧಿಕಾರಿಗಳ ಪ್ರಕಾರ, ರೈಲುಗಳಲ್ಲಿ ಅಧಿಕೃತ ಪರವಾನಗಿ ಇಲ್ಲದೆ ನುಗ್ಗುವ ಅಕ್ರಮ ಮಾರಾಟಗಾರರ ಹಾವಳಿ ಇತ್ತೀಚಿನ ದಿನಗಳಲ್ಲಿ ಅತಿಯಾಗಿದೆ. ಇದು ಕೇವಲ ಇಲಾಖೆಯ ಆದಾಯಕ್ಕೆ ನಷ್ಟವನ್ನುಂಟು ಮಾಡುತ್ತಿಲ್ಲ, ಬದಲಿಗೆ ಪ್ರಯಾಣಿಕರ ಹಾಗೂ ಸಿಬ್ಬಂದಿಯ ಸುರಕ್ಷತೆಗೂ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಇದನ್ನು ತಡೆಯಲು ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ತಿಂಗಳ ಆರಂಭದಲ್ಲೇ ಅಕ್ರಮವಾಗಿ ಟಿಕೆಟ್ ಹಾಗೂ ಸೇವೆಗಳನ್ನು ಒದಗಿಸುತ್ತಿದ್ದ 14 ವೆಬ್&zwnj;ಸೈಟ್&zwnj;ಗಳನ್ನು ಐಆರ್&zwnj;ಸಿಟಿಸಿ ಮುಟ್ಟುಗೋಲು ಹಾಕಿಕೊಂಡಿದೆ.&lt;/p&gt;&lt;p&gt;ಮತ್ತೊಂದೆಡೆ, ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ (SWR) ಮೇ ತಿಂಗಳಿನಲ್ಲಿಯೇ ಅಕ್ರಮ ವ್ಯಾಪಾರಿಗಳ ವಿರುದ್ಧ ಬೃಹತ್ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದ ಮೂಲಕ ರೈಲಿನಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿದ್ದವರಿಂದ ಬರೋಬ್ಬರಿ 1.5 ಲಕ್ಷ ರೂಪಾಯಿಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿತ್ತು. ಆದಾಗ್ಯೂ, ಇಂತಹ ಕ್ರಿಮಿನಲ್ ಹಿನ್ನೆಲೆಯುಳ್ಳ ಗ್ಯಾಂಗ್&zwnj;ಗಳು ರೈಲುಗಳೊಳಗೆ ಮಾರಾಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವುದು ಈಗ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದೆ. ರೈಲ್ವೆ ಭದ್ರತಾ ಪಡೆ (RPF) ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂಬ ಆಗ್ರಹ ಕೇಳಿಬರುತ್ತಿದೆ.&lt;/p&gt;]]></content:encoded>
            <category>haveri</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-delhi-train-pantry-staff-stabbed-by-illegal-vendors-in-yesvantpur-hazrat-nizamuddin-sampark-kranti-express-gdp/articleshow-r43u5b3"/>
        </item>
        <item>
            <title><![CDATA[Yashodhara Vaddar Death: ತರಬೇತಿ ವೇಳೆ ಗುಂಡು ತಗುಲಿ ಹಾನಗಲ್ಲ ಮೂಲದ ನೌಕಪಡೆಯ ಯೋಧ ಸಾವು]]></title>
            <link>https://kannada.asianetnews.com/karnataka-districts/yashodhara-vaddar-indian-navy-sailor-from-hanagal-dies-after-hit-by-bullet-during-training-rav/articleshow-rs4ob6y</link>
            <guid isPermaLink="true">https://kannada.asianetnews.com/karnataka-districts/yashodhara-vaddar-indian-navy-sailor-from-hanagal-dies-after-hit-by-bullet-during-training-rav/articleshow-rs4ob6y</guid>
            <pubDate>Sat, 04 Jul 2026 06:02:36 +0530</pubDate>
            <description><![CDATA[&lt;p&gt;Yashodhara Vaddar Death ಕೇರಳದ ಕೊಚ್ಚಿಯಲ್ಲಿ ನೌಕಾಪಡೆಯ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಹಾನಗಲ್ಲ ತಾಲೂಕಿನ ಉಪ್ಪುಣಸಿ ಗ್ರಾಮದ ಯೋಧರೊಬ್ಬರು ಗುಂಡು ತಗುಲಿ ಮೃತಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwn7wmj5nrzrjg5s7fcsxsgr,imgname-----------------------2026-07-04t054841.711-1783124349509.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾನಗಲ್ಲ(ಹಾವೇರಿ) (ಜು.4): &lt;/strong&gt;ಕೇರಳದ ಕೊಚ್ಚಿಯಲ್ಲಿ ನೌಕಾಪಡೆಯ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಹಾನಗಲ್ಲ ತಾಲೂಕಿನ ಉಪ್ಪುಣಸಿ ಗ್ರಾಮದ ಯೋಧರೊಬ್ಬರು ಗುಂಡು ತಗುಲಿ ಮೃತಪಟ್ಟಿದ್ದಾರೆ.&amp;nbsp;&lt;/p&gt;&lt;p&gt;ಯಶೋಧರ ವಡ್ಡರ (29)(Yashodhara Vaddar Death) ಮೃತ ಯೋಧ. ಅಂಡಮಾನ್&zwnj;ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಯಶೋಧರ ಕಳೆದ 3 ತಿಂಗಳಿನಿಂದ ಕೊಚ್ಚಿಯಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯಾಗಿ ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿದ್ದರು. 2016ರಲ್ಲಿ ಭಾರತೀಯ ನೌಕಾಪಡೆಯ ಯೋಧರಾಗಿ ಯಶೋಧರ ನೇಮಕಗೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಮೌಂಟ್ ಎವರೆಸ್ಟ್&zwnj;ನಲ್ಲಿ ಯೋಧನ 'ಗ್ರೀನ್ ಬೂಟ್' ರಹಸ್ಯ ಬಯಲು; ಪರ್ವತಾರೋಹಿಗಳ ದಿಕ್ಸೂಚಿಗೆ 30 ವರ್ಷದ ಬಳಿಕ ಮುಕ್ತಿ!&lt;/p&gt;&lt;p&gt;ಕರ್ತವ್ಯ ನಿರ್ವಹಣೆ ವೇಳೆ ಯೋಧ ಯಶೋಧರ ಗುಂಡು ತಾಗಿ ಮೃತಪಟ್ಟಿದ್ದಾರೆ.ಉಪ್ಪುಣಸಿಗೆ ಯೋಧನ ಪಾರ್ಥೀವ ಶರೀರ ಶನಿವಾರ ಆಗಮಿಸಲಿದೆ. ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರಕ್ಕಾಗಿ ಎಲ್ಲ ಸಿದ್ಧತೆ ನಡೆದಿದೆ.&lt;/p&gt;]]></content:encoded>
            <category>haveri</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/yashodhara-vaddar-indian-navy-sailor-from-hanagal-dies-after-hit-by-bullet-during-training-rav/articleshow-rs4ob6y"/>
        </item>
    </channel>
</rss>
