<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 06 Apr 2026 08:41:55 +0530</lastBuildDate>
        <atom:link href="https://kannada.asianetnews.com/rss/hassan" rel="self" type="application/rss+xml"/>
        <item>
            <title><![CDATA['ಯಾಕಪ್ಪ ಹೊಡೆಯುತ್ತಿದ್ದೀರಿ...' ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡುತ್ತಿದ್ದವರ ಮೇಲೆ ಸ್ಥಳೀಯ ಪುಂಡರು ಹಲ್ಲೆ!]]></title>
            <link>https://kannada.asianetnews.com/karnataka-districts/pre-wedding-shoot-turns-violent-locals-attack-photographer-at-sakleshpur-bettada-bhairaveshwara-temple-rav/articleshow-72e8q6v</link>
            <guid isPermaLink="true">https://kannada.asianetnews.com/karnataka-districts/pre-wedding-shoot-turns-violent-locals-attack-photographer-at-sakleshpur-bettada-bhairaveshwara-temple-rav/articleshow-72e8q6v</guid>
            <pubDate>Fri, 27 Mar 2026 13:39:29 +0530</pubDate>
            <description><![CDATA[ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇಗುಲದ ಬಳಿ ಪ್ರೀ-ವೆಡ್ಡಿಂಗ್ ಶೂಟಿಂಗ್ ಮಾಡುತ್ತಿದ್ದ ಫೋಟೋಗ್ರಾಫರ್&zwnj;ಗಳ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದಾರೆ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದು, ಗಲಾಟೆ ತಾರಕಕ್ಕೇರಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmq2emgnxw2dh8c1t4dxp03b,imgname----------------------1--1774595822101.gif" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮಾ. 27): &lt;/strong&gt;ಪ್ರವಾಸಕ್ಕೆ ಬಂದು ಫೋಟೋ ಶೂಟಿಂಗ್ ಮಾಡುತ್ತಿದ್ದವರ ಮೇಲೆ ಸ್ಥಳೀಯ ಕೆಲವು ಪುಂಡರು ವಿನಾಕಾರಣ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇಗುಲದ ಆವರಣದಲ್ಲಿ ನಡೆದಿದೆ.&lt;/p&gt;&lt;p&gt;ಪ್ರೀ-ವೆಡ್ಡಿಂಗ್ ಶೂಟ್ ಮಾಡಲು ಬಂದಿದ್ದ ಫೋಟೋಗ್ರಾಫರ್&zwnj;ಗಳ ಮೇಲೆ ಸ್ಥಳೀಯ ಯುವಕರು ಎನ್ನಲಾದ ಗುಂಪೊಂದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.&lt;/p&gt;&lt;h2&gt;ಸ್ಥಳೀಯ ಪುಂಡರು ಹಲ್ಲೆ ಮಾಡಿದ್ದು ಯಾಕೆ?&lt;/h2&gt;&lt;p&gt;ಬೆಳ್ಳಂಬೆಳಗ್ಗೆ ದೇವಸ್ಥಾನದ ಸುಂದರ ಪರಿಸರದಲ್ಲಿ ಫೋಟೋಗ್ರಾಫರ್&zwnj;ಗಳು ಪ್ರೀ-ವೆಡ್ಡಿಂಗ್ ಶೂಟಿಂಗ್&zwnj; ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅಲ್ಲಿಗೆ ಬಂದ ಕೆಲವು ಸ್ಥಳೀಯರು, 'ಇಲ್ಲಿ ಯಾಕೆ ಶೂಟಿಂಗ್ ಮಾಡುತ್ತಿದ್ದೀರಿ? ಯಾರು ಹೇಳಿದ್ದು ಎಂದು ಪ್ರಶ್ನಿಸಿದ್ದಾರೆ. ದೇವಸ್ಥಾನದಲ್ಲಿ ಫೋಟೋ ತೆಗೆಯಲು ಯಾರ ಅನುಮತಿ ಬೇಕು, ಪ್ರವಾಸಕ್ಕೆ ಬಂದಿದ್ದೇವೆ ಫೋಟೋ ತೆಗೆದರೆ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.&lt;/p&gt;&lt;h3&gt;ಫೋಟೋಗ್ರಾಫರ್&zwnj;ಗಳ ಮೇಲೆ ಗೂಂಡಾಗಿರಿ&lt;/h3&gt;&lt;p&gt;ಮಾತಿನ ಚಕಮಕಿ ತಾರಕಕ್ಕೇರಿದಾಗ ಸ್ಥಳೀಯರು ಎಂದು ಹೇಳಿಕೊಂಡ ಯುವಕರ ಗುಂಪು ಫೋಟೋಗ್ರಾಫರ್&zwnj;ಗಳ ಮೇಲೆ ಏಕಾಏಕಿ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. 'ಯಾಕಪ್ಪಾ ಹೊಡೆಯುತ್ತಿದ್ದೀರಿ, ಏನಾಗಿದೆ?' ಎಂದು ಕೇಳಿದರೂ ಫೋಟೋಗ್ರಾಫರ್&zwnj;ಗಳಿಗೆ ಮನಬಂದಂತೆ ಥಳಿಸಿದ್ದಾರೆ. ಅವರು ಯಾಕೆ ಹೊಡೆಯುತ್ತಿದ್ದಾರೆಂದೇ ತಿಳಿದಿಲ್ಲ. ಪ್ರಶ್ನಿಸಿದಷ್ಟೂ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಕಾಣಬಹುದು.&lt;/p&gt;&lt;p&gt;ಶಾಂತಿಯುತವಾಗಿದ್ದ ದೇವಸ್ಥಾನದ ಆವರಣ ಪುಂಡರಿಂದಾಗಿ ಕೆಲಕಾಲ ಪ್ರವಾಸಿಗರಲ್ಲಿ ಆತಂಕ ತರಿಸಿತು. ಪ್ರವಾಸಿಗರ ಮೇಲೆ ಸ್ಥಳೀಯರು ಎನ್ನಲಾದ ವ್ಯಕ್ತಿಗಳು ಗೂಂಡಾಗಿರಿ ನಡೆಸುತ್ತಿರುವುದನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಉಪಕರಣಗಳನ್ನು ಹಾನಿಗೊಳಿಸಲು ಯತ್ನಿಸಿದ ಘಟನೆಯೂ ನಡೆದಿದೆ ಎನ್ನಲಾಗಿದೆ.&lt;/p&gt;&lt;h3&gt;ಪೊಲೀಸ್ ಮೆಟ್ಟಿಲೇರಿದ ಪ್ರಕರಣ&lt;/h3&gt;&lt;p&gt;ಈ ಗಲಾಟೆಗೆ ಸಂಬಂಧಿಸಿದಂತೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎರಡೂ ಕಡೆಯವರು ಪರಸ್ಪರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ನಡುವಿನ ಇಂತಹ ಘರ್ಷಣೆಗಳು ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀರುತ್ತಿವೆ.&lt;/p&gt;]]></content:encoded>
            <category>hassan</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/pre-wedding-shoot-turns-violent-locals-attack-photographer-at-sakleshpur-bettada-bhairaveshwara-temple-rav/articleshow-72e8q6v"/>
        </item>
        <item>
            <title><![CDATA[ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ಫುಲ್ ಕೂಲ್! ಆದ್ರೆ ಮಾವಿನ ಬೆಳೆಗೆ ಟ್ರಬಲ್]]></title>
            <link>https://kannada.asianetnews.com/gallery/karnataka-districts/karnataka-weather-update-summer-rain-hailstones-in-hassan-kodagu-mysore-raichur-sat-77i2ncp</link>
            <guid isPermaLink="true">https://kannada.asianetnews.com/gallery/karnataka-districts/karnataka-weather-update-summer-rain-hailstones-in-hassan-kodagu-mysore-raichur-sat-77i2ncp</guid>
            <pubDate>Mon, 16 Mar 2026 20:07:42 +0530</pubDate>
            <description><![CDATA[&lt;p&gt;ರಾಜ್ಯದ ಹಾಸನ, ರಾಯಚೂರು, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಈ ಅಕಾಲಿಕ ಮಳೆಯು ಬಿಸಿಲಿನಿಂದ ಜನರಿಗೆ ತಂಪೆರೆದರೂ, ರಾಯಚೂರಿನ ಮಾವು ಬೆಳೆಗಾರರು ಮತ್ತು ಇತರೆ ರೈತರಿಗೆ ಬೆಳೆ ಹಾನಿಯ ಭೀತಿಯನ್ನು ತಂದೊಡ್ಡಿದೆ. ಮೈಸೂರಿನಲ್ಲಿ ಸಿಡಿಲಿಗೆ ತೆಂಗಿನ ಮರ ಹೊತ್ತಿ ಉರಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkvgt0sc0bgmx9eqms2wcyy2,imgname-mysuru-hailstones-rain-1773671351084.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದ ಹಾಸನ, ರಾಯಚೂರು, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಈ ಅಕಾಲಿಕ ಮಳೆಯು ಬಿಸಿಲಿನಿಂದ ಜನರಿಗೆ ತಂಪೆರೆದರೂ, ರಾಯಚೂರಿನ ಮಾವು ಬೆಳೆಗಾರರು ಮತ್ತು ಇತರೆ ರೈತರಿಗೆ ಬೆಳೆ ಹಾನಿಯ ಭೀತಿಯನ್ನು ತಂದೊಡ್ಡಿದೆ. ಮೈಸೂರಿನಲ್ಲಿ ಸಿಡಿಲಿಗೆ ತೆಂಗಿನ ಮರ ಹೊತ್ತಿ ಉರಿದಿದೆ.&lt;/p&gt;&lt;img&gt;&lt;p&gt;ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ, ವರುಣದೇವ ದಿಢೀರ್ ಪ್ರತ್ಯಕ್ಷನಾಗಿ ಧರೆಗೆ ತಂಪೆರೆದಿದ್ದಾನೆ. ಹಾಸನ, ರಾಯಚೂರು, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಹಲವೆಡೆ ಇಂದು ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ಸುಡುವ ಬಿಸಿಲಿಗೆ ಬೆಂದಿದ್ದ ಜನರಿಗೆ ಸಮಾಧಾನ ತಂದಿದೆ. ಆದರೆ, ಕೆಲವು ಕಡೆ ಆಲಿಕಲ್ಲು ಮಳೆಯಿಂದಾಗಿ ರೈತರಿಗೆ ಸಂಕಷ್ಟವೂ ಎದುರಾಗಿದೆ.&lt;/p&gt;&lt;img&gt;&lt;p&gt;ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಬೆಟ್ಟದಪುರ ಸುತ್ತಮುತ್ತ ವರ್ಷದ ಮೊದಲ ಮಳೆಯಾಗಿದೆ. ಆದರೆ, ಮಳೆಯ ಜೊತೆಗೆ ಗುಡುಗು ಸಿಡಿಲಿನ ಅಬ್ಬರ ಜೋರಾಗಿತ್ತು. ಪಿರಿಯಾಪಟ್ಟಣ ಪಟ್ಟಣದಲ್ಲಿ ಸಿಡಿಲು ಬಡಿದ ರಭಸಕ್ಕೆ ತೆಂಗಿನ ಮರವೊಂದು ಹೊತ್ತಿ ಉರಿದ ಘಟನೆ ಸಂಭವಿಸಿದೆ. ಮಳೆ ಸುರಿಯುತ್ತಿದ್ದರೂ ಮರದ ಮೇಲ್ಭಾಗದಲ್ಲಿ ಬೆಂಕಿ ಆವರಿಸಿದ್ದು ನೋಡುಗರನ್ನು ಆತಂಕಕ್ಕೀಡು ಮಾಡಿತ್ತು.&lt;/p&gt;&lt;img&gt;&lt;p&gt;ಹಾಸನ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸುರಿಯಿತು. ಮಳೆಯ ತೀವ್ರತೆಗೆ ರಸ್ತೆ ಬದಿಯಲ್ಲಿ ಮತ್ತು ಮನೆಗಳ ಮೇಲೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದಿದ್ದವು. ರಸ್ತೆಯಲ್ಲಿ ಆಲಿಕಲ್ಲುಗಳನ್ನು ನೋಡಿ ಮಕ್ಕಳು ಮತ್ತು ಸಾರ್ವಜನಿಕರು ಖುಷಿಯಿಂದ ಆಟವಾಡಿದ ದೃಶ್ಯಗಳು ಕಂಡುಬಂದವು. ವರ್ಷದ ಮೊದಲ ಮಳೆ ಇದಾಗಿದ್ದು, ದಿಢೀರ್ ಮಳೆಯಿಂದಾಗಿ ವಾಹನ ಸವಾರರು ಸ್ವಲ್ಪ ಮಟ್ಟಿಗೆ ಪರದಾಟ ನಡೆಸಬೇಕಾಯಿತು.&lt;/p&gt;&lt;img&gt;&lt;p&gt;ಬಿಸಿಲ ನಾಡು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲದಗುಡ್ಡು ಸೇರಿದಂತೆ ವಿವಿಧೆಡೆ ಸುಮಾರು ಒಂದು ಗಂಟೆ ಕಾಲ ನಿರಂತರ ಆಲಿಕಲ್ಲು ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪು ನೀಡಿದ್ದರೂ, ಆಲಿಕಲ್ಲುಗಳ ಅಬ್ಬರ ಮಾವು ಬೆಳೆಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೂವು ಬಿಟ್ಟಿದ್ದ ಮಾವಿನ ಗಿಡಗಳಿಗೆ ಆಲಿಕಲ್ಲು ಮಳೆ ಏಟು ನೀಡಿದ್ದು, ಬೆಳೆ ಹಾನಿಯಾಗುವ ಭೀತಿ ಎದುರಾಗಿದೆ.&lt;/p&gt;&lt;img&gt;&lt;p&gt;ಕೊಡಗು ಜಿಲ್ಲೆಯ ಶಿರಂಗಾಲ, ಹೆಬ್ಬಾಲೆ, ಬೇತ್ರಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಹೊಲ ಮತ್ತು ಗದ್ದೆಗಳಿಗೆ ನೀರು ನುಗ್ಗುವಂತೆ ಮಳೆ ಸುರಿದಿದ್ದು, ಬಿಸಿಲಿನಿಂದ ಬಸವಳಿದಿದ್ದ ಇಳೆಗೆ ಚೈತನ್ಯ ನೀಡಿದೆ. ಕಾಫಿ ಮತ್ತು ಕರಿಮೆಣಸು ಬೆಳೆಗಾರರಿಗೆ ಈ ಮಳೆ ವರದಾನವಾಗಿ ಪರಿಣಮಿಸುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಈ ದಿಢೀರ್ ಮಳೆ ಬಿಸಿಲಿನ ತಾಪವನ್ನು ಕಡಿಮೆ ಮಾಡಿದ್ದರೂ, ಆಲಿಕಲ್ಲು ಮತ್ತು ಸಿಡಿಲಿನ ಅಬ್ಬರ ಕೆಲವು ಅನಾಹುತಗಳಿಗೂ ಕಾರಣವಾಗಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/karnataka-weather-update-summer-rain-hailstones-in-hassan-kodagu-mysore-raichur-sat-77i2ncp"/>
        </item>
        <item>
            <title><![CDATA[Hassan: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಅದಲು ಬದಲು: 6 ವಿದ್ಯಾರ್ಥಿಗಳಿಗೆ ಅನ್ಯಾಯ]]></title>
            <link>https://kannada.asianetnews.com/karnataka-districts/hassan-second-puc-computer-science-question-paper-changed-injustice-to-6-students-mrq/articleshow-7ctrdbw</link>
            <guid isPermaLink="true">https://kannada.asianetnews.com/karnataka-districts/hassan-second-puc-computer-science-question-paper-changed-injustice-to-6-students-mrq/articleshow-7ctrdbw</guid>
            <pubDate>Tue, 17 Mar 2026 07:17:04 +0530</pubDate>
            <description><![CDATA[&lt;p&gt;ದ್ವಿತೀಯ ಪಿಯುಸಿ ಕಂಪ್ಯೂಟರ್&zwnj; ಸೈನ್ಸ್ ಪರೀಕ್ಷೆ ವೇಳೆ, ಆರು ವಿದ್ಯಾರ್ಥಿನಿಯರಿಗೆ ಪುನರಾವರ್ತಿತ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ನೀಡಿ ಅನ್ಯಾಯ ಮಾಡಲಾಗಿದೆ. ಮೂರು ಗಂಟೆಗಳ ಕಾಲ ತಪ್ಪಾದ ಪರೀಕ್ಷೆ ಬರೆದ ನಂತರ, ಹೊಸ ಪ್ರಶ್ನೆಪತ್ರಿಕೆಗೆ ಕೇವಲ ಅರ್ಧ ಗಂಟೆ ಸಮಯ ನೀಡಲಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkwqj4pw7empkkyxk34nny2m,imgname-puc-1773711987420.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &amp;nbsp;&lt;/strong&gt;ಸೋಮವಾರ ನಡೆದ ದ್ವಿತೀಯ ಪಿಯುಸಿ ಕಂಪ್ಯೂಟರ್&zwnj; ಸೈನ್ಸ್ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ನಡೆದ ತಪ್ಪಿನಿಂದ ಆರು ವಿದ್ಯಾರ್ಥಿನಿಯರಿಗೆ ಅನ್ಯಾಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ ಬೇಲೂರಿನ ಬಿಕ್ಕೋಡು ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೂಂ ನಂಬರ್&zwnj; 6ರಲ್ಲಿ 6 ವಿದ್ಯಾರ್ಥಿನಿಯರಿಗೆ ಪ್ರಶ್ನೆಪತ್ರಿಕೆ ವಿತರಿಸುವ ಸಂಧ್ಯಾ ರಿಪೀಟರ್ಸ್&zwnj; ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆಪತ್ರಿಕೆಯನ್ನು ನೀಡಿದ್ದಾರೆ. ಒಂದೇ ಕೊಠಡಿಯಲ್ಲಿ ರಿಪೀಟರ್ಸ್&zwnj; ಮತ್ತು ಮೊದಲ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿದ್ದರು.&lt;/p&gt;&lt;h2&gt;&lt;strong&gt;ತಪ್ಪಾದ ಪ್ರಶ್ನೆಪತ್ರಿಕೆ&lt;/strong&gt;&lt;/h2&gt;&lt;p&gt;ಹಳೆಯ ಮತ್ತು ಹೊಸ ಪಠ್ಯಕ್ರಮಗಳಲ್ಲಿ ಕೆಲವು ಅಧ್ಯಾಯಗಳು ಒಂದೇ ರೀತಿಯಾಗಿದ್ದರಿಂದ ವಿದ್ಯಾರ್ಥಿನಿಯರು ಇದು ಕಷ್ಟವಾದ ಪ್ರಶ್ನೆಪತ್ರಿಕೆ ಇರಬಹುದು ಎಂದುಕೊಂಡು ಮೂರು ಗಂಟೆಗಳ ಕಾಲ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಮುಗಿದು ಹೊರ ಬಂದ ಬಳಿಕ ಇತರ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಯನ್ನು ಹೋಲಿಸಿ ನೋಡಿದಾಗ ಅವರು ಬರೆದಿದ್ದು ತಪ್ಪಾದ ಪ್ರಶ್ನೆಪತ್ರಿಕೆ ಎಂಬುದು ತಿಳಿದು ಬಂದಿದೆ.&lt;/p&gt;&lt;p&gt;ತಕ್ಷಣ ಪ್ರಾಂಶುಪಾಲರಿಗೆ ಮತ್ತು ಮೇಲ್ವಿಚಾರಕರಿಗೆ ವಿಷಯ ತಿಳಿಸಿದ್ದಾರೆ. ಪರೀಕ್ಷೆ ಸಮಯ ಮುಗಿದ ನಂತರ ಹೊಸ ಪ್ರಶ್ನೆಪತ್ರಿಕೆ ನೀಡಿ ಕೇವಲ ಅರ್ಧ ಗಂಟೆಯಲ್ಲಿ ಬರೆಯುವಂತೆ ಸೂಚಿಸಿ ವಿದ್ಯಾರ್ಥಿನಿಯರಿಗೆ ಆತಂಕ ಉಂಟು ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಅದಲು-ಬದಲು ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೆಟ್ಟು&lt;/strong&gt;&lt;/h3&gt;&lt;p&gt;ಈ ಸಂದರ್ಭದಲ್ಲಿ ಕಣ್ಣೀರು ಹಾಕಿ ಮಾತನಾಡಿದ ವಿದ್ಯಾರ್ಥಿನಿಯರು, ನಾವು ಬಡ ಕುಟುಂಬದ ಮಕ್ಕಳಾಗಿದ್ದರೂ ನಮ್ಮ ಪೋಷಕರು ಕಷ್ಟಪಟ್ಟು ದುಡಿದು ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದರೆ ಪ್ರಶ್ನೆಪತ್ರಿಕೆ ವಿತರಿಸುವಾಗ ಪುನರಾವರ್ತಿತ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆಪತ್ರಿಕೆಯನ್ನು ನೀಡಿದ್ದಾರೆ. ಪ್ರಶ್ನೆಪತ್ರಿಕೆಯನ್ನು ಅದಲು-ಬದಲು ಮಾಡಿ ನಮ್ಮ ಭವಿಷ್ಯಕ್ಕೆ ಪೆಟ್ಟು ನೀಡಿದ್ದಾರೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯುಪಿಎಸ್&zwnj;ಸಿ ಪರೀಕ್ಷೆಯಲ್ಲಿ 389ನೇ &zwnj;Rank ಪಡೆದ ಸಕಲೇಶಪುರ ತಾಲೂಕಿನ ರೈತನ ಮಗ ಮನೋ&lt;/strong&gt;&lt;strong&gt;ಜ್&zwnj;&lt;/strong&gt;&lt;/p&gt;&lt;p&gt;ನಾವು ಕೇಳಲು ಹೋದ ಸಂದರ್ಭದಲ್ಲಿ ಇಲ್ಲಿಯ ಪ್ರಾಂಶುಪಾಲರು ಮುಂದೆ 20 ದಿನಗಳ ಬಳಿಕ ಮತ್ತೆ ಪರೀಕ್ಷೆ ಬರೆಯಲು ಅವಕಾಶವಿದ್ದು, ಆವಾಗ ನೀವು ಮತ್ತೆ ಬರೆಯಬಹುದು ಎಂದು ಉಡಾಫೆ ಉತ್ತರ ನೀಡಿದ್ದಾರೆ. ನಾವು ಪತ್ರಕರ್ತರ ಬಳಿ ಹೋಗುತ್ತೇವೆ ಎಂದಾಗ ಅರ್ಧ ಗಂಟೆ ಕಾಲಾವಲಾಶ ನೀಡಿ ಹೆಚ್ಚುವರಿ ಸಮಯ ನೀಡಿದರು. ಆದರೆ, ಮೂರು ಗಂಟೆ ಅವಧಿಯ ಪರೀಕ್ಷೆ ಕೇವಲ ಅರ್ಧ ಗಂಟೆಯಲ್ಲಿ ಹೇಗೆ ಬರೆಯಲು ಸಾಧ್ಯ ಎಂದು ಕಣ್ಣೀರು ಹಾಕಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಾಸನ ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ಲೋಕಾ ಅಧಿಕಾರಿಗಳಿಗೆ ಮನೆ ಬಾಗಿಲು ತೆರೆಯದ ಇಂಜಿನಿಯರ್ ಸತ್ಯಾನಾರಾಯಣ&lt;/strong&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-second-puc-computer-science-question-paper-changed-injustice-to-6-students-mrq/articleshow-7ctrdbw"/>
        </item>
        <item>
            <title><![CDATA[ಹಾಸನ ಪಾಲಿಕೆಯಲ್ಲಿ ಅಧಿಕಾರಿ ದುರ್ವರ್ತನೆ, ಕಮಿಷನರ್ ಸಿಸಿಟಿವಿ ಹಾಕಿಸಿದ್ದಕ್ಕೆ ಮುರಿದು ಹಾಕುವಂತೆ ನೌಕರನಿಗೆ ಅವಾಜ್!]]></title>
            <link>https://kannada.asianetnews.com/karnataka-districts/hassan-municipal-corporation-official-accused-of-misconduct-over-cctv-installation/articleshow-93gi6oe</link>
            <guid isPermaLink="true">https://kannada.asianetnews.com/karnataka-districts/hassan-municipal-corporation-official-accused-of-misconduct-over-cctv-installation/articleshow-93gi6oe</guid>
            <pubDate>Wed, 25 Feb 2026 13:38:50 +0530</pubDate>
            <description><![CDATA[&lt;p&gt;ಹಾಸನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪಾರದರ್ಶಕತೆಗಾಗಿ ಸಿಸಿಟಿವಿ ಅಳವಡಿಸಿದ್ದಕ್ಕೆ ಮ್ಯಾನೇಜರ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿ, ಕ್ಯಾಮೆರಾವನ್ನು ಮುರಿಯಲು ಯತ್ನಿಸಿದ ಘಟನೆ ನಡೆದಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj9x9yg8mn67cfkykqh3k7df,imgname-cctv-installation-dispute-hassan-1772006734344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ&lt;/strong&gt;: ನಗರದ ಹಾಸನ ಮಹಾನಗರ ಪಾಲಿಕೆ (Hassan City Municipal Corporation) ಕಚೇರಿಯಲ್ಲಿ ಸಿಸಿಟಿವಿ ಹಾಕಿಸಿದ ಕಾರಣಕ್ಕೆ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಸಿಬ್ಬಂದಿಯೊಂದಿಗೆ ದುರ್ವರ್ತನೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಘಟನೆ ಪಾಲಿಕೆ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಪಾಲಿಕೆ ಕಚೇರಿಯ ವಿವಿಧ ಕೊಠಡಿಗಳಲ್ಲಿ ಪಾರದರ್ಶಕ ಆಡಳಿತ ಮತ್ತು ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಈ ಕ್ರಮಕ್ಕೆ ಕಿಡಿಕಾರಿದ ಮಹಾನಗರ ಪಾಲಿಕೆ ಮ್ಯಾನೇಜರ್ ಪ್ರಕಾಶ್ ತಮ್ಮ ಚೇಂಬರ್&zwnj;ನಲ್ಲಿ ತನ್ನ ಅನುಮತಿ ಇಲ್ಲದೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lsquo;ಯಾರ ಅನುಮತಿಯಿಂದ ಕ್ಯಾಮೆರಾ ಹಾಕಿದ್ದೀರಿ?&rsquo;&lt;/h2&gt;&lt;p&gt;ನನ್ನ ಚೇಂಬರ್&zwnj;ನಲ್ಲಿ ನನ್ನ ಅನುಮತಿ ಇಲ್ಲದೆ ಹೇಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ? ಯಾರನ್ನು ಕೇಳಿ ಈ ಕೆಲಸ ಮಾಡಿದ್ದಾರೆ ಎಂದು ಮ್ಯಾನೇಜರ್ ಪ್ರಕಾಶ್ ಕಚೇರಿ ಸಿಬ್ಬಂದಿಯನ್ನು ಪ್ರಶ್ನಿಸಿ ಗದರಿಸಿದ್ದಾರೆ . ಈ ವೇಳೆ ಅವಾಚ್ಯ ಪದಗಳನ್ನು ಬಳಸಿ ಸಿಬ್ಬಂದಿಗೆ ಮಾನಸಿಕವಾಗಿ ಅವಮಾನ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಸಿಸಿ ಕ್ಯಾಮೆರಾ ಮುರಿಯಲು ಸೂಚನೆ&lt;/h2&gt;&lt;p&gt;ಇಷ್ಟು ಮಾತ್ರವಲ್ಲ ಅಧಿಕಾರಿ ಪ್ರಕಾಶ್ ಸಿಟ್ಟಿಗೆದ್ದು ಸಿಸಿ ಕ್ಯಾಮೆರಾವನ್ನು ಮುರಿದು ಹಾಕುವಂತೆ ನೌಕರನಿಗೆ ಸೂಚನೆ ನೀಡಿದ್ದಾರೆ. ಅವರ ಆದೇಶದಂತೆ ನೌಕರನೊಬ್ಬ ಸಿಸಿ ಕ್ಯಾಮೆರಾವನ್ನು ಕಿತ್ತು ಹಾಕಲು ಯತ್ನಿಸಿದ್ದಾನೆ. ಆದರೆ ಪರಿಸ್ಥಿತಿಯ ತೀವ್ರತೆಯನ್ನು ಗಮನಿಸಿದ ನೌಕರ, ಕೊನೆಗೆ ಕ್ಯಾಮೆರಾವನ್ನು ಸಂಪೂರ್ಣವಾಗಿ ತೆಗೆದು ಹಾಕದೆ ಬೇರೆ ದಿಕ್ಕಿಗೆ ತಿರುಗಿಸಿದ್ದಾನೆ.&lt;/p&gt;&lt;h2&gt;ಕಮಿಷನರ್ ಆದೇಶಕ್ಕೆ ವಿರೋಧ?&lt;/h2&gt;&lt;p&gt;ಪಾಲಿಕೆಯ ಎಲ್ಲ ಕೊಠಡಿಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸುವ ನಿರ್ಧಾರವನ್ನು ಮಹಾನಗರ ಪಾಲಿಕೆ ಆಯುಕ್ತರು (ಕಮಿಷನರ್) ಆಡಳಿತಾತ್ಮಕ ಕ್ರಮವಾಗಿ ಕೈಗೊಂಡಿದ್ದರು. ಆದರೆ ಈ ಆಡಳಿತಾತ್ಮಕ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಮ್ಯಾನೇಜರ್ ಪ್ರಕಾಶ್, ಕಚೇರಿಯಲ್ಲೇ ದುಂಡಾವರ್ತನೆ ನಡೆಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಪಾಲಿಕೆಯಲ್ಲಿ ಅಸಮಾಧಾನ, ಕ್ರಮಕ್ಕೆ ಒತ್ತಾಯ&lt;/h2&gt;&lt;p&gt;ಈ ಘಟನೆ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಯಲ್ಲಿ ಅಸಮಾಧಾನ ಮೂಡಿದ್ದು, ಹಿರಿಯ ಅಧಿಕಾರಿಯ ದುರ್ವರ್ತನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಹೆಚ್ಚಾಗಿದೆ. ಸಿಸಿ ಕ್ಯಾಮೆರಾ ಅಳವಡಿಕೆ ಪಾರದರ್ಶಕತೆ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯವಾಗಿದ್ದು, ಅದನ್ನು ವಿರೋಧಿಸಿ ಸಿಬ್ಬಂದಿಗೆ ಅವಾಚ್ಯ ಪದ ಬಳಸಿ ಬೆದರಿಕೆ ಹಾಕಿರುವುದು ಖಂಡನೀಯ ಎಂಬುದು ಸಿಬ್ಬಂದಿಗಳ ಅಭಿಪ್ರಾಯ. ಈ ಘಟನೆ ಕುರಿತು ಮಹಾನಗರ ಪಾಲಿಕೆ ಆಡಳಿತವು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hassan-municipal-corporation-official-accused-of-misconduct-over-cctv-installation/articleshow-93gi6oe"/>
        </item>
        <item>
            <title><![CDATA[ಯುಪಿಎಸ್‌ಸಿ ಪರೀಕ್ಷೆಯಲ್ಲಿ 389ನೇ ‌Rank ಪಡೆದ ಸಕಲೇಶಪುರ ತಾಲೂಕಿನ ರೈತನ ಮಗ ಮನೋಜ್‌]]></title>
            <link>https://kannada.asianetnews.com/education/hassan-manoj-the-son-of-a-farmer-from-sakleshpur-taluk-secured-389th-rank-in-the-upsc-exam-mrq/articleshow-9w2pxri</link>
            <guid isPermaLink="true">https://kannada.asianetnews.com/education/hassan-manoj-the-son-of-a-farmer-from-sakleshpur-taluk-secured-389th-rank-in-the-upsc-exam-mrq/articleshow-9w2pxri</guid>
            <pubDate>Sat, 07 Mar 2026 07:07:26 +0530</pubDate>
            <description><![CDATA[ಹಾಸನ ಜಿಲ್ಲೆಯ ಸಕಲೇಶಪುರದ ರೈತ ಕುಟುಂಬದ ಜಿ.ಎಸ್. ಮನೋಜ್, ಯುಪಿಎಸ್&zwnj;ಸಿ ಪರೀಕ್ಷೆಯಲ್ಲಿ 389ನೇ ರ್ಯಾಂಕ್ ಪಡೆದಿದ್ದಾರೆ. ಯಾವುದೇ ಕೋಚಿಂಗ್ ಇಲ್ಲದೆ, ಸ್ವಯಂ ಅಧ್ಯಯನದ ಮೂಲಕ ಈ ಸಾಧನೆ ಮಾಡಿರುವುದು ಅವರ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಅವರ ಈ ಯಶಸ್ಸು ಗ್ರಾಮೀಣ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk2z1zpz8cj0s86ts1azj4s6,imgname-upsc-hassan-manoj-1772847431391.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಗುರ್ಜಾನಹಳ್ಳಿ ಗ್ರಾಮದ ರೈತ ಕುಟುಂಬದ ಯುವಕ ಜಿ.ಎಸ್. ಮನೋಜ್ ಅವರು ಯುಪಿಎಸ್&zwnj;ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 389ನೇ &zwnj;ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಮನೋಜ್ ಅವರು ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದರೂ ದೃಢ ಸಂಕಲ್ಪ ಮತ್ತು ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾರೆ.&lt;/p&gt;&lt;p&gt;ರೈತ ಜಿ.ಕೆ.ಸೋಮಶೇಖರ್ ಹಾಗೂ ತಾಯಿ ತೀರ್ಥಾವತಿ ಪುತ್ರರಾದ ಮನೋಜ್ ಅವರು ಹಾಸನದ ಮಾವಿನಕೆರೆ ನವೋದಯ ಶಾಲೆಯಲ್ಲಿ ಆರನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಸೂರತ್ಕಲ್&zwnj;ನ ಎನ್&zwnj;ಐಟಿಕೆ ಕಾಲೇಜಿನಲ್ಲಿ ಬಿ.ಟೆಕ್. ಪದವಿ ಪಡೆದಿದ್ದಾರೆ. ಪದವಿ ನಂತರ ಕ್ಯಾಂಪಸ್ ಆಯ್ಕೆಯಾದರೂ ಯುಪಿಎಸ್&zwnj;ಸಿ ಪರೀಕ್ಷೆ ಬರೆಯುವ ಉದ್ದೇಶದಿಂದ ಉದ್ಯೋಗಕ್ಕೆ ಸೇರದೆ, ಪರೀಕ್ಷಾ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು.&amp;nbsp;&lt;/p&gt;&lt;h2&gt;&lt;strong&gt;ಸ್ವಯಂ ಅಧ್ಯಯನದ ಮೂಲಕ ಯುಪಿಎಸ್&zwnj;ಸಿ ಪರೀಕ್ಷೆಯಲ್ಲಿ 389 ನೇ ರ್ಯಾಂಕ್&lt;/strong&gt;&lt;/h2&gt;&lt;p&gt;ಯಾವುದೇ ಕೋಚಿಂಗ್ ಸೆಂಟರ್&zwnj;ನಲ್ಲಿ ತರಬೇತಿ ಪಡೆಯದೇ, ಬಾಡಿಗೆ ಕೊಠಡಿ ಮಾಡಿಕೊಂಡು ಗ್ರಂಥಾಲಯದ ಪುಸ್ತಕಗಳನ್ನು ಓದುತ್ತಲೇ ಸ್ವಯಂ ಅಧ್ಯಯನದ ಮೂಲಕ ಯುಪಿಎಸ್&zwnj;ಸಿ ಪರೀಕ್ಷೆಯಲ್ಲಿ 389 ನೇ ರ್ಯಾಂಕ್ ಗಳಿಸಿರುವುದು ವಿಶೇಷವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯುಪಿಎಸ್&zwnj;ಸಿಯಲ್ಲಿ ರಾಜ್ಯ ಗೆದ್ದ PWD ಇಂಜಿನಿಯರ್ ಕಿರಣ್ ಕಮತೆ! ಫಸ್ಟ್ ರ&zwj;್ಯಾಂಕ್ ಪಡೆದ ಉತ್ತರ ಕರ್ನಾಟಕದ ಹಮ್ಮೀರ&lt;/strong&gt;&lt;/p&gt;&lt;h3&gt;&lt;strong&gt;ಗ್ರಾಮದಲ್ಲಿ ಹಬ್ಬದ ವಾತಾವರಣ&lt;/strong&gt;&lt;/h3&gt;&lt;p&gt;ಮನೋಜ್ ಅವರ ಈ ಸಾಧನೆಗೆ ಕುಟುಂಬದವರು, ಸ್ನೇಹಿತರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದ ಯುವಕರಿಗೆ ಮನೋಜ್ ಸಾಧನೆ ಪ್ರೇರಣೆಯಾಗಿದೆ ಎಂದು ಮನೋಜ್ ಅವರ ತಂದೆ ಸೋಮಶೇಖರ್ ಹಮ್ಮೆಯಿಂದ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಐಎಎಸ್&zwnj;, ಐಎಫ್ಎಸ್&zwnj;ಗಳಿಗೆ ಯುಪಿಎಸ್ಸಿ 2ನೇ ಚಾನ್ಸ್&zwnj; ಇಲ್ಲ- ಯುಪಿಎಸ್ಸಿ ನಿಯಮ ಬದಲು&lt;/strong&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/hassan-manoj-the-son-of-a-farmer-from-sakleshpur-taluk-secured-389th-rank-in-the-upsc-exam-mrq/articleshow-9w2pxri"/>
        </item>
        <item>
            <title><![CDATA[ರೈತರಿಗೆ ಅನ್ಯಾಯ ಮಾಡುವ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅದು ಕಿರುಕುಳವೇ?: ಶಾಸಕ ಎಚ್.ಡಿ.ರೇವಣ್ಣ]]></title>
            <link>https://kannada.asianetnews.com/karnataka-districts/hd-revanna-slams-officials-farmers-compensation-hassan-land-issue-gvd/articleshow-ecbvbgo</link>
            <guid isPermaLink="true">https://kannada.asianetnews.com/karnataka-districts/hd-revanna-slams-officials-farmers-compensation-hassan-land-issue-gvd/articleshow-ecbvbgo</guid>
            <pubDate>Sun, 22 Mar 2026 22:46:05 +0530</pubDate>
            <description><![CDATA[&lt;p&gt;ರೈತರಿಗೆ ದ್ರೋಹ ಮಾಡುವ ಹಾಗೂ ಬೇಜವಾಬ್ದಾರಿ ಅಧಿಕಾರಿಗಳ ವರ್ತನೆಯನ್ನು ಟೀಕಿಸಿದರೆ ಅದು ಹೇಗೆ ಕಿರುಕುಳವಾಗುತ್ತದೆ. ಹಾಗೇನಾದರೂ ಆದರೆ ಸುಮ್ಮನೆ ಕೂರಲು ಸಾಧ್ಯವೇ ಎಂದು ಶಾಸಕ ಎಚ್.ಡಿ.ರೇವಣ್ಣ ಪ್ರಶ್ನಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j31k98nc0aqcsnde2q7ct929,imgname-1.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಳೆನರಸೀಪುರ (ಮಾ.22): &lt;/strong&gt;ಜಿಲ್ಲೆಯ ಹೇಮಾವತಿ, ಯಗಚಿ ವಾಟೆಹೊಳೆ ಹಾಗೂ ಹಾರಂಗಿ ಜಲಾಶಯಗಳ ವ್ಯಾಪ್ತಿಯ ಭೂಸ್ವಾಧೀನ ಪ್ರಕರಣಗಳ ಇತ್ಯರ್ಥಕ್ಕೆಂದು ರೈತರಿಗೆ ವಿತರಿಸಲು ಸರ್ಕಾರದಿಂದ ಮಂಜೂರಾಗಿದ್ದ 10 ಕೋಟಿ 95 ಲಕ್ಷಕ್ಕೂ ಹೆಚ್ಚು ಹಣವನ್ನು ಸರ್ಕಾರಕ್ಕೆ ವಾಪಸ್&zwnj; ಕಳುಹಿಸಿದ್ದಾರೆ. ರೈತರಿಗೆ ದ್ರೋಹ ಮಾಡುವ ಹಾಗೂ ಬೇಜವಾಬ್ದಾರಿ ಅಧಿಕಾರಿಗಳ ವರ್ತನೆಯನ್ನು ಟೀಕಿಸಿದರೆ ಅದು ಹೇಗೆ ಕಿರುಕುಳವಾಗುತ್ತದೆ. ಹಾಗೇನಾದರೂ ಆದರೆ ಸುಮ್ಮನೆ ಕೂರಲು ಸಾಧ್ಯವೇ ಎಂದು ಶಾಸಕ ಎಚ್.ಡಿ.ರೇವಣ್ಣ ಪ್ರಶ್ನಿಸಿದರು.&lt;/p&gt;&lt;p&gt;ಪಟ್ಟಣದ ಅವರ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ಹಿನ್ನೆಲೆಯಲ್ಲಿ ತೆರಿಗೆ ಬಟ್ಟೆ ತೊಡಿಸುವ ವಿಚಾರದಲ್ಲಿ ನಡೆದ ಘಟನೆಗಳು ಹಾಗೂ ನನಗಾದ ಅವಮಾನವನ್ನು ಖಂಡಿಸಿ, ಹಕ್ಕುಚ್ಯುತಿ ಮಂಡಿಸಿದ್ದೇನೆ. ಈ ಕುರಿತು ಸರ್ಕಾರದ ವತಿಯಿಂದ ತನಿಖೆಯಾಗುತ್ತದೆ ಮತ್ತು ಸತ್ಯಾಂಶ ತಿಳಿಯುತ್ತದೆ. ಅವರದೇ ಪಕ್ಷ ಆಡಳಿತವಿರುವಾಗ ನಾ ಕಿರುಕುಳ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ತೇರಿಗೆ ಬಟ್ಟೆ ತೊಡಿಸಲು ಸಂಸದರು ೨ ಲಕ್ಷ ರುಪಾಯಿ ಕೊಟ್ಟ ವಿಚಾರ ನನಗೆ ತಿಳಿದಿಲ್ಲ. ನನಗೆ ಯಾರು ತಿಳಿಸಿದ್ದಾರೆ ಎಂದು ಪ್ರಶ್ನಿಸಿ, ನನಗೆ ತಿಳಿಯದ ವಿಷಯದಲ್ಲಿ ಇಲ್ಲ ಸಲದ ಆರೋಪ ಸರಿಯಲ್ಲವೆಂದರು.&lt;/p&gt;&lt;p&gt;ಹಾಸನದಲ್ಲಿ ಭೂ ಮಾಫಿಯಾ ವ್ಯಾಪಕವಾಗಿದೆ. ಏರ್&zwnj;ಪೋರ್ಟ್&zwnj;ಗೆ ಮೀಸಲಿಟ್ಟ ಜಾಗವನ್ನೂ ಕಬಳಿಸಲು ಹುನ್ನಾರ ನಡೆಯುತ್ತಿದೆ. ಭೂ ಮಾಫಿಯಾದಲ್ಲಿ ಯಾವ ಯಾವ ರಾಜಕಾರಣಿ ತೊಡಗಿಸಿಕೊಂಡಿದ್ದಾರೆ, ಅವರಿಗೆ ಯಾವ ಯಾವ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎನ್ನುವುದು ನನಗೆ ತಿಳಿಸಿದೆ. ಕಾಲ ಬಂದಾಗ ಎಲ್ಲವನ್ನೂ ದಾಖಲೆ ಸಹಿತ ನೀಡುತ್ತೇನೆ. ನನ್ನ ತಾಲೂಕಿನ ಕಲ್ಲೋಡೆಬಾರೆ ಕಾವಲಿನಲ್ಲಿ 95 ಸಾವಿರ ಮೆಟ್ರಿಕ್ ಟನ್ ಎಂ ಸ್ಯಾಂಡ್, ಜಲ್ಲಿ ಲೂಟಿ ಆಗಿದೆ.&lt;/p&gt;&lt;p&gt;ಜಿಲ್ಲಾಧಿಕಾರಿಗಳಿಗೆ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೇಳಿ. ಲೂಟಿಕೋರರು ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೋ ಆ ಪಕ್ಷದ ಜೊತೆಯಲ್ಲಿದ್ದು ಲೂಟಿ ಮಾಡಿಕೊಳ್ಳುತ್ತಾರೆ. ಹಂಗರಹಳ್ಳಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕಾನೂನು ಬದ್ಧವಾಗಿ ನಡೆಯುತ್ತಿದ್ದ ಅನಂತ್&zwnj;ಕುಮಾರ್ ಎಂಬುವವರ ಕ್ರಷರ್&zwnj;ನ ಜಾಗವನ್ನು ಈಗ ಡೀಮ್ಡ್&zwnj; ಫಾರೆಸ್ಟ್ ಪ್ರದೇಶಕ್ಕೆ ಸೇರಿದೆ ಎಂದು ನಿಲ್ಲಿಸುತ್ತಾರೆ. ಆದರೆ ಸಂಸದರ ಪಕ್ಕದಲ್ಲೇ ಇರುವವರು ಡೀಮ್ಡ್&zwnj; ಫಾರೆಸ್ಟ್ ಹಾಗೂ ಮೀಸಲು ಅರಣ್ಯಪ್ರದೇಶದಲ್ಲಿ ಕ್ರಷರ್ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳು ಸುಮ್ಮನಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;ತಾಲೂಕು ಹುಲಿವಾಲ ಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭೂಮಿ ನೋಂದಣಿಯನ್ನು ನುಗ್ಗೆಹಳ್ಳಿಯಲ್ಲಿ ನೋಂದಣಿ ಕಚೇರಿಯಲ್ಲಿ ಮಾಡಿಸುತ್ತಾರೆ ನಮ್ಮೂರಿನಲ್ಲಿ ನೋಂದಣಿ ಕಚೇರಿ ಇಲ್ವ, ಈ ಕೆಲಸಕ್ಕೆ ಏನ್ನಂತೀರಿ ಎಂದರು. ಹಾಸನ ನಗರಸಭೆ ಚುನಾವಣೆ ಸಂದರ್ಭದಲ್ಲಿ ನೀವು ತಿಳಿಸಿದ ವ್ಯಕ್ತಿ ಬಿಜೆಪಿ ಜೊತೆ ಸೇರಿ ಯಾರಿಗೆ ಮತ ನೀಡಿದರು ಎಂಬುದು ಎಲ್ಲರಿಗೂ ಗೊತ್ತಿದೆ, ಈ ರೀತಿ ಮತ ನೀಡುವಾಗ ನೈತಿಕತೆ ಇರಬೇಕಲ್ವಾ ಎಂದು ಪ್ರಶ್ನಿಸಿದರು.&lt;/p&gt;&lt;p&gt;ತಾಲೂಕಿನ ಗ್ರಾಮ ಪಂಚಾಯಿತಿ ಒಂದರಲ್ಲಿ 17 ಲಕ್ಷ ರುಪಾಯಿಗಳ ಬೋಗಸ್ ಬಿಲ್ ಮಾಡಿದ ಕುರಿತು ಶಾಸಕ ಮಂಜಣ್ಣ ಅವರು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದಾರೆ. ಇದನ್ನ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿತ್ತು, ಏಕೆ ಮಾಡಿಲ್ಲ ಪ್ರಶ್ನಿಸಿ, ಒಬ್ಬ ಅಧಿಕಾರಿಯ ಬೇಜವಾಬ್ದಾರಿ ವರ್ತನೆಯನ್ನು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ ಎಂದು ಶಾಸಕ ಮಂಜಣ್ಣ ನಡೆಯನ್ನು ರೇವಣ್ಣ ಅವರು ಸಮರ್ಥಿಸಿದರು.&lt;/p&gt;&lt;p&gt;ಹಾಸನ ಮೆಡಿಕಲ್ ಕಾಲೇಜು, ಹಾಸನ ಹಾಗೂ ಹೊಳೆನರಸೀಪುರ ಫ್ಲೈಓವರ್&zwnj;ಗಳು ಎಷ್ಟು ವರ್ಷದಿಂದ ಬಾಕಿ ಉಳಿದಿತ್ತು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಡಳಿತದಲ್ಲಿ ಈ ಕಾರ್ಯಗಳಿಗೆ ಚಾಲನೆ ನೀಡಿ, ಜನರಿಗೆ ಉಪಯೋಗ ಆಗುವಂತಹ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಯಿತು. ಆದರೆ ಈಗ ಏರ್ಪೋರ್ಟಿಗೆಂದು ಭೂಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಕಬಳಿಸಲು ಹೊರಟಿದ್ದಾರೆ. ಇದನೆಲ್ಲ ನೋಡಿಕೊಂಡು ಹೇಗೆ ಸುಮ್ಮನಿರಲು ಸಾಧ್ಯ. ಕಾನೂನು ಬಾಹಿರ ಕೆಲಸ ಮಾಡುವುದನ್ನು ಪ್ರಶ್ನಿಸುವುದು ತಪ್ಪಾ, ಅಧಿಕಾರಿಗಳಿಗೆ ಲೂಟಿ ಮಾಡಿಕೊಂಡು ಇರಲು ಬಿಡಬೇಕು ಎಂದು ಮೂದಲಿಸಿದರು. ಅವರದೇ ಸರ್ಕಾರ ಇರುವಾಗ ನಾ ಹೇಗೆ ಕಿರುಕುಳ ನೀಡಲು ಸಾಧ್ಯ ರೀ ಅವರೇ ಅಧಿಕಾರಿಗಳು ಆಕಿಸಿಕೊಂಡು ಬರುತ್ತಾರೆ ಜತೆಗೆ ಇಂದಿನ ಆಡಳಿತದಿಂದ ಜನರಿಗೆ ಬಹಳ ಹಿಂಸೆಯಾಗುತ್ತಿದೆ. ಜನರ ಕೆಲಸ ಆಗುತ್ತಿಲ್ಲವೆಂದು ಬೇಸರದಿಂದ ನುಡಿದರು.&lt;/p&gt;&lt;h2&gt;&lt;strong&gt;ದನದ ದೊಡ್ಡಿಯಂತಾಗಿದೆ ಹಿಮ್ಸ್&zwnj;: ರೇವಣ್ಣ ಅಸಮಾಧಾನ&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಹಾಸನದ ಹಿಮ್ಸ್ ಆಸ್ಪತ್ರೆ ದನದ ದೊಡ್ಡಿಯಂತಾಗಿದೆ. ಈ ಬಗ್ಗೆ ವ್ಯಾಪಕ ದೂರುಗಳಿದ್ದು ಜಿಲ್ಲಾಧಿಕಾರಿಗಳು ಇಂತಹವುಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡು ಬಡಜನರಿಗೆ ಅನುಕೂಲ ಕಲ್ಪಿಸಿಲಿ ಎಂದು ಸಲಹೆ ನೀಡಿದರು. ಹೊಳೆನರಸೀಪುರ ಆಸ್ಪತ್ರೆಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು, ಅಗತ್ಯಕ್ಕೆ ತಕ್ಕಷ್ಟು ವೈದ್ಯರನ್ನು ಹಾಕಿಸಿದ್ದೇನೆ. ಶಾಸಕರ ನಿಧಿಯಿಂದ ಕೆಲವು ಯಂತ್ರೋಪಕರಣ ಕೊಡಿಸಿದ್ದೇನೆ. ಇಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪ್ರಶಂಶಿಸಿದರು. ಡಿ ಗ್ರೂಪ್ ನೌಕರರನ್ನು ನೇಮಿಸಿಕೊಳ್ಳಲು ಹೊರಗುತ್ತಿಗೆಯ ಅವಧಿ ಮುಗಿದು ಟೆಂಡರ್ ಹಾಕಿ ತಿಂಗಳು ಕಳೆದಿದ್ದರೂ ಜಿಲ್ಲಾಧಿಕಾರಿಗಳು ಇನ್ನೂ ಅನುಮೋದನೆ ನೀಡಿಲ್ಲ ಎಂದರು.&lt;/p&gt;]]></content:encoded>
            <category>hassan</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/hd-revanna-slams-officials-farmers-compensation-hassan-land-issue-gvd/articleshow-ecbvbgo"/>
        </item>
        <item>
            <title><![CDATA[ಹಾಸನ ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ಲೋಕಾ ಅಧಿಕಾರಿಗಳಿಗೆ ಮನೆ ಬಾಗಿಲು ತೆರೆಯದ ಇಂಜಿನಿಯರ್ ಸತ್ಯಾನಾರಾಯಣ]]></title>
            <link>https://kannada.asianetnews.com/gallery/state/lokayukta-raid-in-bagalkot-and-hassan-engineer-satyanarayanadid-not-open-door-to-officers-eurvxdx</link>
            <guid isPermaLink="true">https://kannada.asianetnews.com/gallery/state/lokayukta-raid-in-bagalkot-and-hassan-engineer-satyanarayanadid-not-open-door-to-officers-eurvxdx</guid>
            <pubDate>Thu, 05 Mar 2026 08:18:50 +0530</pubDate>
            <description><![CDATA[&lt;p&gt;ಹಾಸನ ಮತ್ತು ಬಾಗಲಕೋಟೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಪಾಲಿಕೆ ಇಂಜಿನಿಯರ್ ಬಾಗಿಲು ತೆರೆಯಲು ನಿರಾಕರಿಸಿದರೆ, ಬಾಗಲಕೋಟೆಯಲ್ಲಿ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjxxmwyptq63hmj5pd1qkyfq,imgname-loka-raid-hassan-1772678181846.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನ ಮತ್ತು ಬಾಗಲಕೋಟೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಪಾಲಿಕೆ ಇಂಜಿನಿಯರ್ ಬಾಗಿಲು ತೆರೆಯಲು ನಿರಾಕರಿಸಿದರೆ, ಬಾಗಲಕೋಟೆಯಲ್ಲಿ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ.&lt;/p&gt;&lt;img&gt;&lt;p&gt;ಹಾಸನ/ಬಾಗಲಕೋಟೆ: ಬೆಳ್ಳಂಬೆಳಗ್ಗೆ ಹಾಸನ ಹಾಗೂ ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಹಾಸನದಲ್ಲಿ ಮಹಾನಗರಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸತ್ಯನಾರಾಯಣ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.&lt;/p&gt;&lt;img&gt;&lt;p&gt;ಹಾಸನ ನಗರದ ರವೀಂದ್ರ ನಗರದಲ್ಲಿರುವ ಮನೆ ಮೇಲೆ ಲೋಕಾಯುಕ್ತ ಡಿಎವೈಎಸ್ಫಿ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಆದರೆ ಅಧಿಕಾರಿಗಳು ಮನೆ ಬಾಗಿಲು ತೆರೆಯದೇ ಒಳಗಡೆ ಕುಳಿತಿದ್ದು, ಲೋಕಾಯುಕ್ತ ಅಧಿಕಾರಿಗಳು ಮನೆ ಬಾಗಿಲು ತೆರೆಯುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಮನೆ ಮೇಲೆ ಹೋಗಲು ಅಧಿಕಾರಿಗಳ ಹರಸಾಹಸಪಡುತ್ತಿದ್ದು, ಜೀಪ್ ಮೇಲೆ ಹತ್ತಿ ಮೊದಲನೆ ಮಹಡಿಗೆ ಹೋಗಿದ್ದಾರೆ. ನಂತರ ಬಾಗಿಲು ಬಡಿದರು ಮನೆಯಿಂದ ಯಾರೂ ಹೊರಗೆ ಬಂದಿಲ್ಲ. ಹೀಗಾಗಿ ಮನೆ ಬಾಗಿಲು ತೆಗೆಯುವುದಕ್ಕೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಅರ್ಧ ಗಂಟೆಯಿಂದ ಅಧಿಕಾರಿ ಮನೆ ಮುಂದೆ ಲೋಕಾಯುಕ್ತ ಅಧಿಕಾರಿಗಳು ಕಾದು ಕುಳಿತಿದ್ದಾರೆ. ಸತ್ಯನಾರಾಯಣ ಅವರು ಹಾಸನ ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಸುರೇಶ್, ಇನ್ಸ್ ಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆದಿದೆ.&lt;/p&gt;&lt;img&gt;&lt;p&gt;ಹಾಗೆಯೇ ಬಾಗಲಕೋಟೆಯಲ್ಲೂ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ&zwnj; ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ ಅವರ ಬೆಂಗಳೂರು ಹಾಗೂ ಬಾಗಲಕೋಟೆಯಲ್ಲಿರುವ ಮನೆಯ ಮೇಲೆ ದಾಳಿ ನಡೆದಿದೆ.&lt;/p&gt;&lt;img&gt;&lt;p&gt;ವಸಂತ ಸಹೋದರ ಭೀಮಸಿಂಗ್ ನಾಯಕ್ ಅವರ ಬಾಗಲಕೋಟೆ ಮನೆ ಮೇಲೆ ದಾಳಿ ನಡೆದಿದೆ. ಭೀಮಸಿಂಗ್ ನಾಯಕ ಬಾಗಲಕೋಟೆ ಡಿಎಆರ್&zwnj;ನಲ್ಲಿ ಎಎಸ್&zwnj;ಐ ಆಗಿದ್ದಾರೆ. ಬಾಗಲಕೋಟೆಯ ಪೋಸ್ಟಲ್&zwnj; ಕಾಲೋನಿಯಲ್ಲಿರುವ ಭೀಮಸಿಂಗ್ ಮನೆ ಮೇಲೆ ದಾಳಿ ನಡದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಲೋಕಾ ದಾಳಿಗೊಳಗಾದ KREIS ಎಂಜಿನಿಯರ್ ಜನಾರ್ಧನ್ ಒಂದು ತಿಂಗಳಿಂದ ನಿಗೂಢ ನಾಪತ್ತೆ&lt;/p&gt;&lt;img&gt;&lt;p&gt;ಹಾಗೆಯೇ ವಸಂತ ನಾಯಕ ಅವರ ಮೂಲ ಗ್ರಾಮ ಬಾಗಲಕೋಟೆ ತಾಲೂಕಿನ ಬಸವನಗರ ತಾಂಡಾದಲ್ಲಿರುವ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಗಲಕೋಟೆ ಲೋಕಾಯುಕ್ತ ಎಸ್ ಪಿ ಮಾನಿಂಗ್ ನಂದಗಾವಿ ಮಾರ್ಗದರ್ಶನದಲ್ಲಿ ಲೋಕಾ ಡಿವೈಎಸ್ ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಸಿದ್ಧಾಪುರ ಠಾಣೆ ಪೊಲೀಸರಿಗೀಗ ಕೇಸ್&zwnj;ಗಿಂತ 7 ಕೋಟಿ ಕಾಸು ಕಾಯುವುದೇ ಚಿಂತೆ&lt;/p&gt;]]></content:encoded>
            <category>hassan</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/lokayukta-raid-in-bagalkot-and-hassan-engineer-satyanarayanadid-not-open-door-to-officers-eurvxdx"/>
        </item>
        <item>
            <title><![CDATA[ಹಾಸನ: ನ್ಯಾಯ ಅಂದ್ರೆ ನ್ಯಾಯ, 66 ಪೈಸೆ ಮರುಪಾವತಿಸದೆ ಉಳಿಸಿಕೊಂಡ ಬ್ಯಾಂಕ್ ವಿರುದ್ಧ ಕೋರ್ಟ್ ಮೆಟ್ಟಲೇರಲು ನಿರ್ಧರಿಸಿದ ಗ್ರಾಹಕ!]]></title>
            <link>https://kannada.asianetnews.com/karnataka-districts/canara-bank-calls-customer-over-9-34-loan-dues-in-hassan-refuses-to-return-66-paise-customer-threatens-legal-action/articleshow-fdoy7px</link>
            <guid isPermaLink="true">https://kannada.asianetnews.com/karnataka-districts/canara-bank-calls-customer-over-9-34-loan-dues-in-hassan-refuses-to-return-66-paise-customer-threatens-legal-action/articleshow-fdoy7px</guid>
            <pubDate>Fri, 27 Feb 2026 13:51:58 +0530</pubDate>
            <description><![CDATA[&lt;p&gt;ಹಾಸನದ ಸಕಲೇಶಪುರದಲ್ಲಿ, ಕೆನರಾ ಬ್ಯಾಂಕ್ ₹9.34 ಸಾಲ ಬಾಕಿಗಾಗಿ ಗ್ರಾಹಕರಿಗೆ ಕರೆ ಮಾಡಿದೆ. ಗ್ರಾಹಕ ₹10 ಪಾವತಿಸಿದರೂ, 66 ಪೈಸೆ ಚಿಲ್ಲರೆ ವಾಪಸ್ ನೀಡದ ಬ್ಯಾಂಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಈ ಘಟನೆಯು ಬ್ಯಾಂಕ್&zwnj;ಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jrhcyyh9sncandnas5r4vhyh,imgname-whatsapp-image-2025-04-11-at-08.33.12.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ಬ್ಯಾಂಕ್ ವ್ಯವಸ್ಥೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಹ ಅಚ್ಚರಿಯ ಘಟನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಕೇವಲ ₹9 ರೂ 34 ಪೈಸೆ ಸಾಲ ಬಾಕಿ ಉಳಿದಿದೆ ಎಂಬ ಕಾರಣಕ್ಕೆ ಕೆನರಾ ಬ್ಯಾಂಕ್ ನಿಂದ ಗ್ರಾಹಕರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡರು. ಇದಕ್ಕೆ ಸಾಲ ಕಟ್ಟಿದ ನಂತರ ಚಿಲ್ಲರೆ ನೀಡದ ಬ್ಯಾಂಕ್ ವಿರುದ್ಧ ಕೋರ್ಟ್ ಮೆಟ್ಟಲೇರಲು ಗ್ರಾಹಕ ತೀರ್ಮಾ ಮಾಡಿದ್ದಾನೆ.&lt;/p&gt;&lt;p&gt;ಸಕಲೇಶಪುರ ತಾಲೂಕಿನ ನಿವಾಸಿ ಚರಣ್ ಎಂಬ ಗ್ರಾಹಕರಿಗೆ, ತಮ್ಮ ಸಾಲ ಖಾತೆಯಲ್ಲಿ ₹9.34 ಬಾಕಿ ಉಳಿದಿದೆ ಕಟ್ಟಿ ಎಂದು ಬ್ಯಾಂಕ್ ಸಿಬ್ಬಂದಿಯಿಂದ ದೂರವಾಣಿ ಕರೆ ಬಂದಿದೆ. ಕರೆ ಬಂದ ತಕ್ಷಣವೇ ಚರಣ್ ಅವರು ಯಾವುದೇ ವಿಳಂಬವಿಲ್ಲದೆ ಬ್ಯಾಂಕ್&zwnj;ಗೆ ತೆರಳಿ ₹10 ಹಣವನ್ನು ಪಾವತಿಸಿದ್ದಾರೆ.&lt;/p&gt;&lt;h2&gt;66 ಪೈಸೆ ವಾಪಸ್ ಕೊಡದ ಬ್ಯಾಂಕ್ ವಿರುದ್ಧ ಅಸಮಾಧಾನ&lt;/h2&gt;&lt;p&gt;₹9.34 ಬಾಕಿಗೆ ₹10 ಪಾವತಿಸಿದರೂ ಉಳಿದ 66 ಪೈಸೆಯನ್ನು ಬ್ಯಾಂಕ್ ವಾಪಸ್ ನೀಡಲಿಲ್ಲ ಎಂದು ಚರಣ್ ಆರೋಪಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಅವರು, &ldquo;ನಾನು ಹೆಚ್ಚಾಗಿ ಕೊಟ್ಟ ಹಣವನ್ನು ವಾಪಸ್ ಕೊಡದಿದ್ದರೆ, ನ್ಯಾಯಾಲಯದ ಮೊರೆ ಹೋಗುತ್ತೇನೆ&rdquo; ಎಂದು ಸ್ಪಷ್ಟವಾಗಿ ಹೇಳಿದ್ದಾರೆ.&lt;/p&gt;&lt;h2&gt;ಬ್ಯಾಂಕಿನ ವಾಸ್ತವತೆ ಬಿಚ್ಚಿಟ್ಟ ಗ್ರಾಹಕ&lt;/h2&gt;&lt;p&gt;ಚರಣ್ ಅವರು ಈ ಹಿಂದೆ ಬ್ಯಾಂಕ್&zwnj;ನಿಂದ ₹50,000 ಸಾಲ ಪಡೆದಿದ್ದರು. ಆ ಸಾಲದ ಬಹುತೇಕ ಮೊತ್ತವನ್ನು ಪೂರ್ಣವಾಗಿ ಮರುಪಾವತಿಸಿದ್ದು, ಕೇವಲ ₹9.34 ಮಾತ್ರ ಬಾಕಿ ಉಳಿದಿತ್ತು. ಈ ಅತಿ ಸಣ್ಣ ಮೊತ್ತದ ಬಾಕಿಗಾಗಿ ಕೂಡ ಬ್ಯಾಂಕ್&zwnj;ನಿಂದ ಕರೆ ಮಾಡಿರುವುದನ್ನು ಪ್ರಶ್ನಿಸಿದ ಚರಣ್, &ldquo;ಕೇವಲ 9 ರೂಪಾಯಿ 34 ಪೈಸೆಗಾಗಿ ಬ್ಯಾಂಕ್ ಕರೆ ಮಾಡುತ್ತದೆ ಎಂದರೆ, ಗ್ರಾಹಕರ ಮೇಲೆ ಇರುವ ಒತ್ತಡ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ&rdquo; ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h2&gt;ಸಕಲೇಶಪುರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಘಟನೆ&lt;/h2&gt;&lt;p&gt;ಈ ಘಟನೆ ಸಕಲೇಶಪುರ ತಾಲೂಕಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಸಾಲದ ಉಳಿಕೆ ಮೊತ್ತ ಪಾವತಿಸಲು ಕರೆ ಮಾಡಿದ್ದ ಬ್ಯಾಂಕ್, ಹೆಚ್ಚಾಗಿ ಪಾವತಿಸಿದ ಹಣವನ್ನು ವಾಪಸ್ ನೀಡದಿರುವುದು ಗ್ರಾಹಕ ಹಕ್ಕುಗಳ ಕುರಿತು ಪ್ರಶ್ನೆ ಎತ್ತಿದೆ. 10 ರೂಪಾಯಿ ಪಾವತಿಸಿದ್ದೇನೆ, ಆದರೆ 66 ಪೈಸೆ ವಾಪಸ್ ಕೊಡಲಾಗಿಲ್ಲ. ಇದು ಹಣದ ಪ್ರಶ್ನೆ ಅಲ್ಲ, ನ್ಯಾಯದ ಪ್ರಶ್ನೆ. ಅಗತ್ಯವಿದ್ದರೆ ಬ್ಯಾಂಕ್ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಚರಣ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;ಈ ಘಟನೆ, ಸಾರ್ವಜನಿಕ ವಲಯದ ಬ್ಯಾಂಕ್&zwnj;ಗಳು ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ಮತ್ತೊಮ್ಮೆ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಅತಿ ಸಣ್ಣ ಮೊತ್ತಗಳ ವಿಚಾರದಲ್ಲೂ ಬ್ಯಾಂಕ್ ಮಾನವೀಯತೆ ಹಾಗೂ ಸ್ಪಷ್ಟ ನೀತಿ ಅಗತ್ಯವಿದೆ ಎಂಬ ಸಂದೇಶ ನೀಡುತ್ತಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/canara-bank-calls-customer-over-9-34-loan-dues-in-hassan-refuses-to-return-66-paise-customer-threatens-legal-action/articleshow-fdoy7px"/>
        </item>
        <item>
            <title><![CDATA[ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ: ಸೋದರಿಯ ಅಗಲಿಕೆಗೆ ಕಂಬನಿ ಮಿಡಿದ ‘ದೊಡ್ಡಗೌಡರು’]]></title>
            <link>https://kannada.asianetnews.com/state/former-prime-minister-hd-deve-gowda-sister-javaramma-passes-away-hassan-news-sat/articleshow-g8bd84l</link>
            <guid isPermaLink="true">https://kannada.asianetnews.com/state/former-prime-minister-hd-deve-gowda-sister-javaramma-passes-away-hassan-news-sat/articleshow-g8bd84l</guid>
            <pubDate>Thu, 19 Mar 2026 16:07:30 +0530</pubDate>
            <description><![CDATA[&lt;p&gt;ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ತಂಗಿ ಜವರಮ್ಮ (88) ಅವರು ವಯೋಸಹಜ ಕಾಯಿಲೆಯಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಹೋದರಿಯ ನಿಧನಕ್ಕೆ ದೇವೇಗೌಡರು ಭಾವುಕರಾಗಿದ್ದು, ಅವರ ಅಂತ್ಯಕ್ರಿಯೆ ಸ್ವಗ್ರಾಮ ಬಸವನಾಯಕನಹಳ್ಳಿಯಲ್ಲಿ ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km2tk1yjxw2tfrf1vx8d8hms,imgname-hd-deve-gowda-sister-javaramma-passes-away-1773916489682.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮಾ.19): ಮಾ&lt;/strong&gt;ಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ. ದೇವೇಗೌಡರ ಪ್ರೀತಿಯ ತಂಗಿ ಜವರಮ್ಮ (88) ಅವರು ವಯೋಸಹಜ ಕಾಯಿಲೆಯಿಂದ ಶುಕ್ರವಾರ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.&lt;/p&gt;&lt;h2&gt;&lt;strong&gt;ವಯೋಸಹಜ ಕಾಯಿಲೆಯಿಂದ ಸಾವು:&lt;/strong&gt;&lt;/h2&gt;&lt;p&gt;ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಜವರಮ್ಮ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಜವರಮ್ಮ ಅವರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಬಸವನಾಯಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದರು.&lt;/p&gt;&lt;h2&gt;&lt;strong&gt;ಕಂಬನಿ ಮಿಡಿದ ದೊಡ್ಡಗೌಡರು:&lt;/strong&gt;&lt;/h2&gt;&lt;p&gt;ತಮ್ಮ ಆಪ್ತ ಸಹೋದರಿಯ ನಿಧನದ ವಾರ್ತೆ ಕೇಳುತ್ತಿದ್ದಂತೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೀವ್ರ ಭಾವುಕರಾಗಿದ್ದಾರೆ. ರಾಜಕೀಯವಾಗಿ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದರೂ ದೇವೇಗೌಡರು ತಮ್ಮ ಹಳ್ಳಿಯ ಸೊಗಡು ಮತ್ತು ಕುಟುಂಬದ ಬಾಂಧವ್ಯವನ್ನು ಎಂದಿಗೂ ಮರೆತವರಲ್ಲ. ಅದರಲ್ಲೂ ತಂಗಿ ಜವರಮ್ಮ ಅವರ ಮೇಲೆ ಗೌಡರಿಗೆ ವಿಶೇಷ ಪ್ರೀತಿ ಇತ್ತು. ತಮ್ಮ ತಂಗಿಯ ಅಗಲಿಕೆಗೆ ಅವರು ಕಂಬನಿ ಮಿಡಿದಿದ್ದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಕುಟುಂಬದ ಆಧಾರಸ್ತಂಭ:&lt;/strong&gt;&lt;/h2&gt;&lt;p&gt;ಜವರಮ್ಮ ಅವರು ಹಳೇ ಮೈಸೂರು ಭಾಗದ ಸಂಪ್ರದಾಯಬದ್ಧ ಕೃಷಿ ಕುಟುಂಬದ ಹಿನ್ನೆಲೆಯವರು. ಸರಳ ಜೀವನ ನಡೆಸುತ್ತಿದ್ದ ಅವರು, ದೇವೇಗೌಡರ ರಾಜಕೀಯ ಏಳುಬೀಳುಗಳ ಸಂದರ್ಭದಲ್ಲಿ ಕುಟುಂಬದ ನೈತಿಕ ಬೆಂಬಲವಾಗಿ ನಿಂತಿದ್ದರು. ಎಚ್.ಡಿ. ರೇವಣ್ಣ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರೂ ಕೂಡ ಅತ್ತೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ದೇವೇಗೌಡರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.&lt;/p&gt;&lt;h2&gt;&lt;strong&gt;ಅಂತ್ಯಕ್ರಿಯೆಯ ವಿವರ:&lt;/strong&gt;&lt;/h2&gt;&lt;p&gt;ಜವರಮ್ಮ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಅವರ ಸ್ವಗ್ರಾಮವಾದ ಬಸವನಾಯಕನಹಳ್ಳಿಗೆ ರವಾನಿಸಲಾಗಿದೆ. ಇಂದು ಸಂಜೆ ಹೊಳೆನರಸೀಪುರ ತಾಲ್ಲೂಕಿನ ಬಸವನಾಯಕನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗ್ರಾಮದ ಹಿರಿಯರು, ಬಂಧು-ಮಿತ್ರರು ಹಾಗೂ ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.&lt;/p&gt;&lt;p&gt;ದೇವೇಗೌಡರ ಕುಟುಂಬದಲ್ಲಿ ಹಿರಿಯ ಜೀವವೊಂದರ ನಿರ್ಗಮನ ಕುಟುಂಬದ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಹಾಸನ ಜಿಲ್ಲೆಯ ಗಣ್ಯರು ಹಾಗೂ ವಿವಿಧ ಪಕ್ಷಗಳ ಮುಖಂಡರು ಜವರಮ್ಮ ಅವರ ಆತ್ಮಕ್ಕೆ ಶಾಂತಿ ಕೋರಿ ಸಂದೇಶಗಳನ್ನು ಕಳುಹಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/former-prime-minister-hd-deve-gowda-sister-javaramma-passes-away-hassan-news-sat/articleshow-g8bd84l"/>
        </item>
        <item>
            <title><![CDATA[Hassan: ನಿಧಾನವಾಗಿ ಚಲಿಸು ಎಂದಿದ್ದಕ್ಕೆ ಕಾರ್ ಗುದ್ದಿಸಿ ಯುವಕನ ಭೀಕರ ಹತ್ಯೆ; ಮೂವರು ಪಾರು]]></title>
            <link>https://kannada.asianetnews.com/karnataka-districts/young-man-brutally-murdered-after-being-hit-by-car-holenarasipur-hassan-mrq/articleshow-idvbfpf</link>
            <guid isPermaLink="true">https://kannada.asianetnews.com/karnataka-districts/young-man-brutally-murdered-after-being-hit-by-car-holenarasipur-hassan-mrq/articleshow-idvbfpf</guid>
            <pubDate>Wed, 04 Mar 2026 07:51:17 +0530</pubDate>
            <description><![CDATA[&lt;p&gt;ಹೊಳೆನರಸೀಪುರದ ಸೂರನಹಳ್ಳಿ ಬಳಿ, ನಿಧಾನವಾಗಿ ಚಲಿಸುವಂತೆ ಬುದ್ಧಿಮಾತು ಹೇಳಿದ್ದಕ್ಕೆ ಕೋಪಗೊಂಡ ಕಾರು ಚಾಲಕನೊಬ್ಬ ನಾಲ್ವರ ಮೇಲೆ ಕಾರು ಹರಿಸಿದ್ದಾನೆ. ಈ ಘಟನೆಯಲ್ಲಿ ಮನು ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjva21greqr1ybnfrsxnfy60,imgname-hassan-murder-1772590532120.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಳೆನರಸೀಪುರ: &lt;/strong&gt;ಪಟ್ಟಣದ ಪುರಸಭೆ ವ್ಯಾಪ್ತಿಯ ಸೂರನಹಳ್ಳಿ ಸಮೀಪ ಬುದ್ಧಿಮಾತು ಹೇಳಿದ ವ್ಯಕ್ತಿಯ ಮೇಲೆ ಆಕ್ರೋಶಗೊಂಡ ಕಾರಿನ ಚಾಲಕ ಕಾರಿನಿಂದ ನಡೆಸಿದ ಡೆಡ್ಲಿ ಎಟ್ಯಾಕ್ ಪರಿಣಾಮ ಮನು(22) ಎಂಬ ವ್ಯಕ್ತಿ ಸ್ಥಳದಲೇ ಸಾವನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ 11.45 ಸುಮಾರಿನಲ್ಲಿ ನಡೆದಿದೆ.&lt;/p&gt;&lt;p&gt;ಸೂರನಹಳ್ಳಿ ಗ್ರಾಮದ ರಸ್ತೆ ಬದಿ ಮನು, ಅಭಿಷೇಕ, ರಾಕೇಶ್ ಹಾಗೂ ಕುಶಾಲ್, ಪಟ್ಟಣದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕೆ ಆಗಮಿಸಿ, ಸ್ವಗ್ರಾಮದ ರಸ್ತೆ ಬದಿ ಮಾತನಾಡುತ್ತಿದ್ದ ವೇಳೆ ಪಟ್ಟಣದಿಂದ ಕೆ.ಎ.01 ಎಂ.ಎಫ್.2883 ಸಂಖ್ಯೆಯ ಕಾರು ವೇಗದಿಂದ ಚಲಿಸಿದೆ. ಅದನ್ನು ಕಂಡ ಮನು ಮತ್ತು ಗೆಳೆಯರು ನಿಧಾನವಾಗಿ ಚಲಿಸುವಂತೆ ಬುದ್ಧಿಮಾತು ಹೇಳಿದ್ದಾರೆ.&amp;nbsp;&lt;/p&gt;&lt;h2&gt;&lt;strong&gt;ನಾಲ್ವರ ಮೇಲೆ ಕಾರ್ ನುಗ್ಗಿಸಿದ ಚಾಲಕ&lt;/strong&gt;&lt;/h2&gt;&lt;p&gt;ಆದರೆ ಕಾರಿನ ಚಾಲಕ ಬುದ್ಧಿವಾದವನ್ನು ತಪ್ಪಾಗಿ ಆರ್ಥೈಸಿಕೊಂಡು ಮುಂದಕ್ಕೆ ಚಲಿಸುತ್ತಿದ್ದ ಕಾರನ್ನು ತಿರುಗಿಸಿಕೊಂಡು ವೇಗವಾಗಿ ಬಂದು ರಸ್ತೆ ಬದಿ ನಿಂತಿದ್ದ ನಾಲ್ವರ ಮೇಲೆ ನುಗ್ಗಿಸಿದ್ದಾನೆ. ಡಿಕ್ಕಿಯ ರಭಸಕ್ಕೆ ನಾಲ್ವರಲ್ಲಿ ಮನು ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಮತ್ತು ಜತೆಗಿದ್ದ ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ತೀವ್ರವಾಗಿ ಗಾಯಗೊಂಡಿದ್ದು, ಹಾಸನದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ?&lt;/strong&gt;&lt;/p&gt;&lt;h3&gt;&lt;strong&gt;ಕಾರ್ ವಶಕ್ಕೆ, ಚಾಲಕ ಪರಾರಿ&lt;/strong&gt;&lt;/h3&gt;&lt;p&gt;ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಅಪಘಾತ ಮಾಡಿದ ಕಾರನ್ನು ವಶಕ್ಕೆ ಪಡೆದಿದ್ದಾರೆ ಮತ್ತು ತಲೆ ಮರೆಸಿಕೊಂಡಿರುವ ಕಾರು ಚಾಲಕ ಪತ್ತೆಗಾಗಿ ಪೋಲಿಸರು ಕ್ರಮಕೈಗೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಸೋದರರನ್ನು ಮದುವೆಯಾಗಿ ಪ್ರತ್ಯಕ್ಷ: ರಕ್ಷಣೆ ಕೋರಿ ಮನವಿ&lt;/strong&gt;&lt;/p&gt;]]></content:encoded>
            <category>hassan</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/young-man-brutally-murdered-after-being-hit-by-car-holenarasipur-hassan-mrq/articleshow-idvbfpf"/>
        </item>
        <item>
            <title><![CDATA[ರಕ್ತಚಂದ್ರನ ಮಾಯೆ: ನಾಳೆ ರಾಜ್ಯದ ಹಲವು ದೇಗುಲದಲ್ಲಿ ದರ್ಶನ ಸಮಯ ಬದಲಾವಣೆ, ಹೋಳಿ ಹಬ್ಬಕ್ಕೆ ಯಾವುದೇ ತೊಂದರೆ ಇಲ್ಲ]]></title>
            <link>https://kannada.asianetnews.com/state/blood-moon-lunar-eclipse-special-pujas-and-darshan-timing-changes-across-karnataka-temples/articleshow-if9tkfc</link>
            <guid isPermaLink="true">https://kannada.asianetnews.com/state/blood-moon-lunar-eclipse-special-pujas-and-darshan-timing-changes-across-karnataka-temples/articleshow-if9tkfc</guid>
            <pubDate>Mon, 02 Mar 2026 13:37:17 +0530</pubDate>
            <description><![CDATA[&lt;p&gt;ಮಾ.3ರಂದು ರಾಜ್ಯಾದ್ಯಂತ ಕೇತುಗ್ರಸ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ, ಬೆಂಗಳೂರು, ಮೈಸೂರು, ಉಡುಪಿ ಸೇರಿದಂತೆ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಗ್ರಹಣದ ವೇಳೆ ಗರ್ಭಗುಡಿಗಳನ್ನು ಮುಚ್ಚಲಾಗುತ್ತಿದ್ದು, ನಂತರ ಶುದ್ಧೀಕರಣ ಕಾರ್ಯ ನಡೆಸಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjje2f06v8mp070fxxqfej7m,imgname-lunar-eclips-1772292750342.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು &lt;/strong&gt;ಸೇರಿದಂತೆ ರಾಜ್ಯದ ಹಲವೆಡೆ ನಾಳೆ (ಮಾರ್ಚ್&zwnj; 3, ಮಂಗಳವಾರ) ಪಾಲ್ಗುಣ ಶುಕ್ಲ ಹುಣ್ಣಿಮೆ ದಿನ ನಡೆಯಲಿರುವ ರಕ್ತಚಂದ್ರ (ಕೇತುಗ್ರಸ್ತ) ಚಂದ್ರಗ್ರಹಣ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ&ndash;ವಿಧಿವಿಧಾನಗಳು ಹಾಗೂ ದರ್ಶನ ಸಮಯದಲ್ಲಿ ಬದಲಾವಣೆಗಳನ್ನು ಘೋಷಿಸಲಾಗಿದೆ. ಗ್ರಹಣದ ಜೊತೆಗೆ ಇದೇ ದಿನ ಹೋಳಿ ಹಬ್ಬವೂ ಇರುವುದರಿಂದ, ಧಾರ್ಮಿಕ ಆಚರಣೆಗಳಿಗೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ಧಾರ್ಮಿಕ ಮುಖಂಡರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಬೆಂಗಳೂರಿನಲ್ಲಿ ಕಾಡು ಮಲ್ಲಿಕಾರ್ಜುನ ದೇವಾಲಯದಲ್ಲಿ ವಿಶೇಷ ಪೂಜೆ&lt;/h2&gt;&lt;p&gt;ಬೆಂಗಳೂರಿನ ಕಾಡು ಮಲ್ಲಿಕಾರ್ಜುನ ದೇವಾಲಯದಲ್ಲಿ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕ್ರಮಗಳನ್ನು ರೂಪಿಸಲಾಗಿದೆ. ಮಧ್ಯಾಹ್ನ 12 ಗಂಟೆವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುತ್ತದೆ. ಬಳಿಕ ಗ್ರಹಣ ಆರಂಭಕ್ಕೂ ಮುನ್ನ ಗರ್ಭಗುಡಿ ದರ್ಶನ ಬಂದ್ ಮಾಡಲಾಗುತ್ತದೆ. ಸಂಜೆ 7 ಗಂಟೆಗೆ ದೇವಾಲಯದ ಬಾಗಿಲು ಪುನಃ ತೆರೆಯಲಾಗಿದ್ದು, ತೀರ್ಥ&ndash;ಪುಣ್ಯಃ ಮತ್ತು ಶುದ್ಧೀಕರಣ ಕಾರ್ಯಗಳ ನಂತರ ಚಂದ್ರನಿಗೆ ಹಾಗೂ ಕಾಡುಮಲ್ಲೇಶ್ವರನಿಗೆ ಕ್ಷೀರಾಭಿಷೇಕ, ಪಂಚಾಮೃತ ನೈವೇದ್ಯ ಅರ್ಪಿಸಲಾಗುತ್ತದೆ. ರಾತ್ರಿ 9.30ರವರೆಗೆ ಭಕ್ತಾಧಿಗಳಿಗೆ ದರ್ಶನ ನೀಡಲಾಗುತ್ತದೆ. ಮರುದಿನ ನವಗ್ರಹ ಶಾಂತಿ ಹೋಮ ನೆರವೇರಲಿದೆ. ಗ್ರಹಣದ ನಂತರ ಸ್ನಾನ ಮಾಡಿ ಪೂಜೆ ಸಲ್ಲಿಸಬೇಕು ಎಂದು ಪಂಚಾಂಗ ಸೂಚಿಸುತ್ತದೆ. ಕೆಲ ರಾಶಿಯವರಿಗೆ ದೋಷ ಇರುವುದರಿಂದ ದಾನ&ndash;ಪೂಜೆ ಮಾಡುವುದು ಶ್ರೇಯಸ್ಕರ ಎಂದು ದೇವಾಲಯದ ಅರ್ಚಕ ಶರತ್ ತಿಳಿಸಿದ್ದಾರೆ.&lt;/p&gt;&lt;h2&gt;ವಿಜಯನಗರ: ಗ್ರಹಣ ಸಮಯ ವಿವರ, ಹಂಪಿಯ ದೇವಾಲಯಗಳು ಬಂದ್&lt;/h2&gt;&lt;p&gt;ವಿಜಯನಗರ ಜಿಲ್ಲೆಯಲ್ಲಿ ಗ್ರಹಣ ಸಮಯ ಗ್ರಹಣ ಸ್ಪರ್ಶ: ಮಧ್ಯಾಹ್ನ 3.20, ಮಧ್ಯಕಾಲ: ಸಂಜೆ 5.04, ಮೋಕ್ಷ ಕಾಲ: ಸಂಜೆ 6.47 ಈ ಅವಧಿಯಲ್ಲಿ ಹಂಪಿ ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ಬಹುತೇಕ ದೇವಾಲಯಗಳ ಗರ್ಭಗುಡಿಗಳನ್ನು ಬಂದ್ ಮಾಡಲಾಗುತ್ತದೆ. ರಾಶಿಗೆ ಅನುಗುಣವಾಗಿ ಪೂಜೆ, ದಾನ&ndash;ಧರ್ಮ ಕೈಗೊಳ್ಳುವಂತೆ ಅರ್ಚಕರು ಸಲಹೆ ನೀಡಿದ್ದಾರೆ.&lt;/p&gt;&lt;h2&gt;ಉಡುಪಿ: ಶ್ರೀ ಕೃಷ್ಣಮಠದಲ್ಲಿ ಗ್ರಹಣ ಆಚರಣೆ&lt;/h2&gt;&lt;p&gt;ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಗ್ರಹಣ ಆಚರಣೆ ಕುರಿತಂತೆ ದಿವಾಣರಾದ ಡಾ. ಉದಯ ಸರಳತ್ತಾಯ ಮಾಹಿತಿ ನೀಡಿದ್ದಾರೆ. ಮಾರ್ಚ್&zwnj; 3ರಂದು ಗ್ರಸ್ತೋದಯ ಚಂದ್ರಗ್ರಹಣ ನಡೆಯಲಿದ್ದು, ನಮ್ಮ ಭಾಗದಲ್ಲಿ ಸೂರ್ಯಾಸ್ತ ಸಮಯ ಸಂಜೆ 6.19ರಿಂದ 6.47ರವರೆಗೆ ಮಾತ್ರ ಗ್ರಹಣ ಗೋಚರವಾಗಲಿದೆ. ಕೇವಲ ಎಂಟು ನಿಮಿಷಗಳ ಕಾಲ ಗ್ರಹಣ ಕಾಣಿಸಿಕೊಳ್ಳುತ್ತದೆ. ಏಕಾದಶಿಯಂತೆ ಕೃಷ್ಣಮಠದಲ್ಲಿ ಆ ದಿನ ಆಹಾರ ಸ್ವೀಕಾರ ಇರದು. ಮಧ್ಯಾಹ್ನ ಹಾಗೂ ರಾತ್ರಿ ಊಟ ಇರುವುದಿಲ್ಲ. ಸಂಜೆ 7 ಗಂಟೆಗೆ ಸ್ನಾನ ಪೂರ್ಣಗೊಳಿಸಿ ರಾತ್ರಿ ಪೂಜೆ ನಡೆಯಲಿದೆ. ಗ್ರಹಣ ಕಾಲದಲ್ಲೂ ಮಠ ತೆರೆದಿರುತ್ತದೆ. ಹೋಳಿ ಹುಣ್ಣಿಮೆ ಪ್ರಯುಕ್ತ ಸಂಜೆ ಮೆರವಣಿಗೆ ನಡೆಯಲಿದ್ದು, ಕಡಿಯಾಳಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಲಾಗುತ್ತದೆ. ಮರುದಿನ ಎಂದಿನಂತೆ ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಧಾನ ನಡೆಯಲಿದೆ. ಗ್ರಹಣ ಕಾಲದಲ್ಲಿ ಮಧ್ವ ಸರೋವರದಲ್ಲಿ ಅನುಷ್ಟಾನ ಜರುಗುತ್ತದೆ.&lt;/p&gt;&lt;h2&gt;ಹಾಸನ&ndash;ಬೇಲೂರು: ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ಬಂದ್&lt;/h2&gt;&lt;p&gt;ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಮಾರ್ಚ್&zwnj; 3ರಂದು ಬೆಳಿಗ್ಗೆ 9 ಗಂಟೆಯೊಳಗೆ ಪೂಜೆ ಸಲ್ಲಿಸಿ, ನಂತರ ಗರ್ಭಗುಡಿ ಬಂದ್ ಮಾಡಲಾಗುತ್ತದೆ. ಗ್ರಹಣ ಮುಗಿದ ಬಳಿಕ ರಾತ್ರಿ 7 ಗಂಟೆಯ ನಂತರ ತೀರ್ಥ&ndash;ಪುಣ್ಯಃ, ಆಲಯ ಅರ್ಚನೆ, ಅಭಿಷೇಕ ಹಾಗೂ ಸಂಪ್ರೋಕ್ಷಣೆಯೊಂದಿಗೆ ಮಹಾನೈವೇದ್ಯ ನೆರವೇರಲಿದೆ. ಆ ದಿನ ಗರ್ಭಗುಡಿ ಮಾತ್ರ ಬಂದ್ ಆಗಲಿದ್ದು, ಪ್ರವಾಸಿಗರು ದೇವಾಲಯ ವೀಕ್ಷಿಸಬಹುದು. ಮರುದಿನ ಮಾರ್ಚ್&zwnj; 4ರಂದು ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುತ್ತದೆ. ಗ್ರಹಣ ಪೂಜೆ ಸಲ್ಲಿಸುವವರು ಹುರುಳಿ ಮತ್ತು ಅಕ್ಕಿ ದಾನ ಮಾಡಿದರೆ ನಿಮಿತ್ತ ಶಾಂತಿ ದೊರೆಯುತ್ತದೆ ಎಂದು ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ಮನವಿ ಮಾಡಿದ್ದಾರೆ.&lt;/p&gt;&lt;h2&gt;ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ದರ್ಶನಕ್ಕೆ ಅವಕಾಶ&lt;/h2&gt;&lt;p&gt;ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಗ್ರಹಣ ವೇಳೆಯಲ್ಲಿಯೂ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಹದೇಶ್ವರರಿಗೆ ಗ್ರಹಣದ ಯಾವುದೇ ಪರಿಣಾಮ ಇಲ್ಲ ಎಂದು ತಿಳಿಸಲಾಗಿದ್ದು, ಭಕ್ತರು ನಿರ್ಬಂಧವಿಲ್ಲದೆ ದರ್ಶನ ಪಡೆಯಬಹುದು. ಗ್ರಹಣದ ಬಳಿಕ ಧಾರ್ಮಿಕ ವಿಧಿ&ndash;ವಿಧಾನಗಳಂತೆ ಶುದ್ಧೀಕರಣ ನಡೆಸಿ ಪುನಃ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.&lt;/p&gt;&lt;h2&gt;ಮೈಸೂರು: ಚಾಮುಂಡೇಶ್ವರಿ ದೇವಾಲಯದಲ್ಲಿ ದರ್ಶನ ಸಮಯ ಬದಲಾವಣೆ&lt;/h2&gt;&lt;p&gt;ಮೈಸೂರು ಚಾಮುಂಡೇಶ್ವರಿ ದೇವಾಲಯ ದಲ್ಲಿ ಚಂದ್ರಗ್ರಹಣ ಹಿನ್ನೆಲೆ ಮಧ್ಯಾಹ್ನ 2 ಗಂಟೆಗೆ ದೇವಾಲಯ ಬಂದ್ ಮಾಡಲಾಗುತ್ತದೆ. ರಾತ್ರಿ 8.30ರವರೆಗೆ ಬಾಗಿಲು ಮುಚ್ಚಿರುತ್ತದೆ. ಗ್ರಹಣ ಸ್ಪರ್ಶ, ಮಧ್ಯಕಾಲ ಮತ್ತು ಮೋಕ್ಷ ಕಾಲದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಈ ಸಮಯದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಾರ್ಚ್&zwnj; 4ರಂದು ಬೆಳಿಗ್ಗೆ 7.30ರಿಂದ ಎಂದಿನಂತೆ ದರ್ಶನ ಆರಂಭವಾಗಲಿದೆ.&lt;/p&gt;&lt;p&gt;ಒಟ್ಟಾರೆ, ನಾಳೆಯ ರಕ್ತಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ದೇವಾಲಯಗಳಲ್ಲಿ ಪರಂಪರಾಗತ ಆಚರಣೆಗಳಿಗೆ ಒತ್ತು ನೀಡಲಾಗಿದ್ದು, ಭಕ್ತರು ದರ್ಶನ ಸಮಯದ ಬದಲಾವಣೆಗಳನ್ನು ಗಮನಿಸಿ ಸಹಕರಿಸುವಂತೆ ದೇವಸ್ಥಾನ ಆಡಳಿತಗಳು ಮನವಿ ಮಾಡಿವೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/state/blood-moon-lunar-eclipse-special-pujas-and-darshan-timing-changes-across-karnataka-temples/articleshow-if9tkfc"/>
        </item>
        <item>
            <title><![CDATA[ಬೆಟ್ಟದ ಬೈರವೇಶ್ವರ ಟೆಂಪಲ್ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಶೂಟ್; ಫೋಟೋಗ್ರಾಫರ್‌ಗಳ ಹಲ್ಲೆಗೆ ಹೊರಬಿತ್ತು ಕಾರಣ!]]></title>
            <link>https://kannada.asianetnews.com/karnataka-districts/sakaleshpura-photographers-attacked-during-pre-wedding-shoot-at-bettada-bhairaveshwara-temple-sat/articleshow-k59zrbr</link>
            <guid isPermaLink="true">https://kannada.asianetnews.com/karnataka-districts/sakaleshpura-photographers-attacked-during-pre-wedding-shoot-at-bettada-bhairaveshwara-temple-sat/articleshow-k59zrbr</guid>
            <pubDate>Fri, 27 Mar 2026 20:57:42 +0530</pubDate>
            <description><![CDATA[&lt;p&gt;ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಬೈರವೇಶ್ವರ ದೇವಸ್ಥಾನದ ಬಳಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸುತ್ತಿದ್ದ ಫೋಟೋಗ್ರಾಫರ್&zwnj;ಗಳ ಮೇಲೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ದೇವಾಲಯದ ಆವರಣದಲ್ಲಿ ನಿಯಮ ಉಲ್ಲಂಘಿಸಿದ್ದೇ ಗಲಾಟೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmqya0hbfb82radr6346rfmz,imgname-hassan-temple-1774625030698.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮಾ.27): ಪ್ರ&lt;/strong&gt;ಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಂದರ ಪ್ರವಾಸಿ ತಾಣವೊಂದು ಇಂದು ಬೆಳ್ಳಂಬೆಳಗ್ಗೆ ರಣರಂಗವಾಗಿ ಮಾರ್ಪಟ್ಟಿತ್ತು. ಪ್ರಸಿದ್ಧ ಬೆಟ್ಟದ ಬೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ (Pre-wedding shoot) ನಡೆಸುತ್ತಿದ್ದ ಫೋಟೋಗ್ರಾಫರ್&zwnj;ಗಳ ಮೇಲೆ ಸ್ಥಳೀಯರು ಎಂದು ಹೇಳಿಕೊಂಡ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಮಲೆನಾಡಿನ ಸುಂದರ ಪರಿಸರದಲ್ಲಿ ತಮ್ಮ ಮದುವೆಯ ನೆನಪುಗಳನ್ನು ಸೆರೆಹಿಡಿಯಲು ನವಜೋಡಿಯೊಂದು ಫೋಟೋಗ್ರಾಫರ್&zwnj;ಗಳ ತಂಡದೊಂದಿಗೆ ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಸ್ಥಾನಕ್ಕೆ ಬಂದಿತ್ತು. ಮುಂಜಾನೆಯ ಮಂಜಿನ ನಡುವೆ ಶೂಟಿಂಗ್ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಕೆಲ ಸ್ಥಳೀಯ ಯುವಕರು, 'ಇಲ್ಲಿ ಯಾಕೆ ಶೂಟಿಂಗ್ ಮಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಫೋಟೋಗ್ರಾಫರ್&zwnj;ಗಳು ಮತ್ತು ಸ್ಥಳೀಯ ಯುವಕರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.&lt;/p&gt;&lt;h2&gt;&lt;strong&gt;ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುವು:&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಕೇವಲ ಮಾತಿನ ಚಕಮಕಿಯಾಗಿದ್ದ ಈ ಘಟನೆ, ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿದೆ. ಸ್ಥಳೀಯರು ಎಂದು ಹೇಳಿಕೊಂಡ ಗುಂಪು ಫೋಟೋಗ್ರಾಫರ್&zwnj;ಗಳ ಮೇಲೆ ಏಕಾಏಕಿ ಹಲ್ಲೆ ನಡೆಸಲು ಮುಂದಾಗಿದೆ. 'ಯಾಕಪ್ಪ ಹೊಡಿತಾ ಇದ್ದೀರಿ? ನಮ್ಮ ತಪ್ಪೇನಿದೆ?' ಎಂದು ಫೋಟೋಗ್ರಾಫರ್&zwnj;ಗಳು ಅಸಹಾಯಕತೆಯಿಂದ ಪ್ರಶ್ನಿಸಿದರೂ ಕೇಳದ ಉದ್ರಿಕ್ತ ಗುಂಪು, ಗೂಂಡಾಗಿರಿ ಪ್ರದರ್ಶಿಸಿ ಅವರ ಮೇಲೆ ಹಿಗ್ಗಾಮುಗ್ಗಾ ಕೈ ಮಾಡಿದೆ ಎನ್ನಲಾಗಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ದೇವಸ್ಥಾನದ ಪವಿತ್ರ ಆವರಣದಲ್ಲಿ ಗಲಾಟೆಯ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;h2&gt;&lt;strong&gt;ಹಲ್ಲೆಗೆ ಅಸಲಿ ಕಾರಣವೇನು?&lt;/strong&gt;&lt;/h2&gt;&lt;p&gt;ಹಲ್ಲೆಯ ಬಳಿಕ ಎರಡೂ ಕಡೆಯವರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಧಾವಿಸಿದ್ದು, ಪರಸ್ಪರ ದೂರು ನೀಡಿದ್ದಾರೆ. ಫೋಟೋಗ್ರಾಫರ್&zwnj;ಗಳು ತಮಗೆ ಅನ್ಯಾಯವಾಗಿ ಹೊಡೆದಿದ್ದಾರೆ ಎಂದು ದೂರಿದ್ದಾರೆ. ಆದರೆ, ಸ್ಥಳೀಯರು ತಾವು ಹಲ್ಲೆ ಮಾಡುವುದಕ್ಕೆ ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. ಈ ಪ್ರಸಿದ್ಧ ದೇವಸ್ಥಾನದ ಬಳಿ ನಿಯಮ ಎಲ್ಲಿಂದಲೋ ಬರುವ ಫೋಟೋ ಶೂಟ್ ಮಾಡಿಸಿಕೊಳ್ಳುವವರು ಇಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಇನ್ನು ಫೋಟೋಗ್ರಾಫರ್&zwnj;ಗಳಿಗೆ ನಿಯಮ ಪಾಲನೆಗೆ ಹೇಳಿದರೂ ಕೇಳದೆ ಪುನಃ ಹೊಸ ಆರ್ಡರ್&zwnj;ಗಳನ್ನು ತೆಗೆದುಕೊಂಡು ವಾಪಸ್ ಇಲ್ಲಿಗೇ ಬರುತ್ತಾರೆ. ಇದೀಗ ಹಲ್ಲೆಗೆ ಒಳಗಾದ ಫೋಟೋಗ್ರಾಫರ್&zwnj;ಗಳು ಹೊಸ ಜೋಡಿಗಳಿಗೆ ದೇವಾಲಯ ಆವರಣದಲ್ಲಿ ಚಪ್ಪಲಿ ಹಾಗೂ ಶೂ ಹಾಕಿಕೊಂಡು ಫೋಟೋ ಶೂಟಿಂಗ್ ಮಾಡಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಹೀಗಾಗಿ, ಹಲ್ಲೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಪ್ರವಾಸಿಗರಲ್ಲಿ ಆತಂಕ:&lt;/strong&gt;&lt;/h3&gt;&lt;p&gt;ಸಕಲೇಶಪುರ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಪ್ರೀ ವೆಡ್ಡಿಂಗ್ ಶೂಟಿಂಗ್&zwnj;ಗೆ ಹೇಳಿ ಮಾಡಿಸಿದ ಜಾಗಗಳಾಗಿವೆ. ಪ್ರತಿ ದಿನ ನೂರಾರು ತಂಡಗಳು ಇಲ್ಲಿಗೆ ಆಗಮಿಸುತ್ತವೆ. ಆದರೆ, ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಇಂತಹ ಸಂಘರ್ಷಗಳು ಮರುಕಳಿಸುತ್ತಿರುವುದು ಪ್ರವಾಸಿಗರಲ್ಲಿ ಭೀತಿ ಮೂಡಿಸಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಇಂತಹ ಜಾಗಗಳಲ್ಲಿ ಸೂಕ್ತ ನಿಯಮಗಳನ್ನು ರೂಪಿಸಿ, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/sakaleshpura-photographers-attacked-during-pre-wedding-shoot-at-bettada-bhairaveshwara-temple-sat/articleshow-k59zrbr"/>
        </item>
        <item>
            <title><![CDATA[ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!]]></title>
            <link>https://kannada.asianetnews.com/karnataka-districts/hassan-delivery-boy-varun-murder-case-ganja-money-dispute-friends-arrested-san-videoshow-luzn4ng</link>
            <guid isPermaLink="true">https://kannada.asianetnews.com/karnataka-districts/hassan-delivery-boy-varun-murder-case-ganja-money-dispute-friends-arrested-san-videoshow-luzn4ng</guid>
            <pubDate>Thu, 26 Mar 2026 22:00:16 +0530</pubDate>
            <description><![CDATA[ಹಣ ಮತ್ತು ಗಾಂಜಾ ವಿಚಾರಕ್ಕಾಗಿ ಬೆಂಗಳೂರಿನ ಡೆಲಿವರಿ ಬಾಯ್ ವರುಣ್&zwnj;ನನ್ನು ಆತನ ಸ್ನೇಹಿತರೇ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟುಹಾಕಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xa3bitw" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ಹಾಸನ (ಮಾ.26): &lt;/strong&gt;ಗಾಂಜಾ ನಶೆ ಹಾಗೂ ಹಣದ ವಿಚಾರಕ್ಕಾಗಿ ನಡೆದ ಭೀಕರ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವರುಣ್ ಎಂಬ ಯುವಕ ತನ್ನದೇ ಸ್ನೇಹಿತರಿಂದ ಹತ್ಯೆಯಾಗಿದ್ದಾನೆ. ತಿಂಗಳಿಗೊಮ್ಮೆ ತನ್ನೂರಿಗೆ ಹೋಗುತ್ತಿದ್ದ ವರುಣ್, ಕಳೆದ ಬಾರಿ ಹೋದಾಗ ನಾಪತ್ತೆಯಾಗಿದ್ದ.&amp;nbsp;&lt;strong&gt;ಸತ್ತಂತೆ ಕಥೆ ಕಟ್ಟಿದ್ದ ಹಾಸನದ ವಿವಾಹಿತೆ: ಪ್ರಿಯಕರ ಡೇವಿಡ್&zwnj;ಗೆ ಕೈ ಕೊಟ್ಟು ಗಂಡನ ಜೊತೆ ಹೋಗಲು ಒಪ್ಪಿದ ಪ್ರಿಯಾಂಕ!&lt;/strong&gt;&lt;/p&gt;&lt;p&gt;ಮೂರು ದಿನಗಳ ನಂತರ ನಿರ್ಜನ ಪ್ರದೇಶದಲ್ಲಿ ಆತನ ಸುಟ್ಟ ಮೃತದೇಹ ಪತ್ತೆಯಾಗಿತ್ತು. ಪೊಲೀಸರ ತನಿಖೆಯಲ್ಲಿ ಹಂತಕ ಸ್ನೇಹಿತರ ಅಸಲಿ ಮುಖವಾಡ ಕಳಚಿದೆ. ವರುಣ್&zwnj;ನ ಸ್ನೇಹಿತ ಶಶಾಂಕ್, ಬೆಂಗಳೂರಿನಿಂದ ಗಾಂಜಾ (ಮಾಲ್) ತರುವಂತೆ ವರುಣ್ ಅಕೌಂಟ್&zwnj;ಗೆ 7 ಸಾವಿರ ರೂಪಾಯಿ ಹಾಕಿದ್ದ. ಆದರೆ ವರುಣ್ ಗಾಂಜಾವನ್ನೂ ತರದೆ, ಹಣವನ್ನೂ ಮರಳಿಸದೆ ಸತಾಯಿಸುತ್ತಿದ್ದ ಎನ್ನಲಾಗಿದೆ.&lt;/p&gt;&lt;p&gt;ಇದರಿಂದ ಆಕ್ರೋಶಗೊಂಡ ಶಶಾಂಕ್ ಮತ್ತು ಗ್ಯಾಂಗ್, ವರುಣ್&zwnj;ನನ್ನು ಕಿಡ್ನ್ಯಾಪ್ ಮಾಡಿ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬೆಂಕಿ ಹಚ್ಚಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ನಶೆಯ ಹವ್ಯಾಸಕ್ಕೆ ಬಲಿಯಾದ ವರುಣ್ ಕುಟುಂಬ ಬೀದಿಗೆ ಬಿದ್ದಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>hassan</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/hassan-delivery-boy-varun-murder-case-ganja-money-dispute-friends-arrested-san-videoshow-luzn4ng"/>
        </item>
        <item>
            <title><![CDATA[ಹಾಸನ: ಜೀತಕ್ಕಿದ್ದ 18ಮಂದಿ ರಕ್ಷಣೆ, ಕೂಡಿ ಹಾಕಿದ್ದ ಶೆಡ್‌ನಿಂದ ಓರ್ವ ತಪ್ಪಿಸಿಕೊಂಡಿದ್ದರಿಂದ ಬಯಲಾಯ್ತು ಕರಾಳ ಸತ್ಯ!]]></title>
            <link>https://kannada.asianetnews.com/gallery/karnataka-districts/bonded-labour-racket-exposed-in-hassan-district-18-rescued-in-joint-police-revenue-operation-osf9q01</link>
            <guid isPermaLink="true">https://kannada.asianetnews.com/gallery/karnataka-districts/bonded-labour-racket-exposed-in-hassan-district-18-rescued-in-joint-police-revenue-operation-osf9q01</guid>
            <pubDate>Thu, 26 Feb 2026 11:07:25 +0530</pubDate>
            <description><![CDATA[&lt;p&gt;ಹಾಸನದಲ್ಲಿ, ಜೀತ ಪದ್ಧತಿಯಡಿ ಅಕ್ರಮವಾಗಿ ಬಂಧಿಸಿ ದುಡಿಸಿಕೊಳ್ಳುತ್ತಿದ್ದ 18 ಕಾರ್ಮಿಕರನ್ನು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ವಿಜಯಪುರದ ವೃದ್ಧೆಯೊಬ್ಬರು ತಮ್ಮ ಮಗನನ್ನು ಜೀತಕ್ಕಿಟ್ಟುಕೊಂಡಿದ್ದಾರೆ ಎಂದು ಮಾಧ್ಯಮಕ್ಕೆ ದೂರು ನೀಡಿದ ನಂತರ ಈ ಕಾರ್ಯಾಚರಣೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjc6etmdkps8q27m0vwn1nes,imgname-bonded-labour-case-in-hassan-1772083440269.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನದಲ್ಲಿ, ಜೀತ ಪದ್ಧತಿಯಡಿ ಅಕ್ರಮವಾಗಿ ಬಂಧಿಸಿ ದುಡಿಸಿಕೊಳ್ಳುತ್ತಿದ್ದ 18 ಕಾರ್ಮಿಕರನ್ನು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ವಿಜಯಪುರದ ವೃದ್ಧೆಯೊಬ್ಬರು ತಮ್ಮ ಮಗನನ್ನು ಜೀತಕ್ಕಿಟ್ಟುಕೊಂಡಿದ್ದಾರೆ ಎಂದು ಮಾಧ್ಯಮಕ್ಕೆ ದೂರು ನೀಡಿದ ನಂತರ ಈ ಕಾರ್ಯಾಚರಣೆ ನಡೆದಿದೆ.&lt;/p&gt;&lt;img&gt;&lt;p&gt;ಹಾಸನ ಜಿಲ್ಲೆಯಲ್ಲಿ ಮಾನವೀಯತೆಯನ್ನು ಮರೆತಿರುವ ಜೀತಪದ್ದತಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೇರೆ ಬೇರೆ ಭಾಗಗಳಿಂದ ಜನರನ್ನು ಕರೆತಂದು, ಯಾವುದೇ ಸಂಬಳ ನೀಡದೇ ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದ ಆರೋಪದಡಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಿ 18 ಮಂದಿಯನ್ನು ಜೀತದಿಂದ ಮುಕ್ತಗೊಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಭಾರೀ ಅಕ್ರಮವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ ಎಕ್ಸ್&zwnj;ಕ್ಲೂಸಿವ್ ವರದಿಯ ಮೂಲಕ ಬಹಿರಂಗಪಡಿಸಿದೆ. ಹಾಸನದ ವರದಿಗಾರ ಹರೀಶ್ ಅವರಿಗೆ ವಿಜಯಪುರ ಮೂಲದ ವೃದ್ಧೆಯೊಬ್ಬರು ಭೇಟಿ ನೀಡಿ, ತಮ್ಮ ಮಗ ಈರಣ್ಣನನ್ನು ಜೀತವಿರಿಸಿಕೊಂಡಿದ್ದಾರೆ ಎಂದು ಕಣ್ಣೀರಿನಿಂದ ತಮ್ಮ ನೋವು ತೋಡಿಕೊಂಡಿದ್ದರು. ಈ ಮಾಹಿತಿ ಹೊರಬಂದ ಬಳಿಕ ಸುವರ್ಣ ನ್ಯೂಸ್, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಡುವೆ ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳಲಾಯಿತು.&lt;/p&gt;&lt;img&gt;&lt;p&gt;ಪೊಲೀಸ್ ಅಧೀಕ್ಷಕ (ಎಎಸ್ಪಿ) ತಮ್ಮಯ್ಯ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ಜೀತದಲ್ಲಿದ್ದ 18 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರನ್ನು ಅಕ್ರಮ ಬಂಧನದಿಂದ ಬಿಡುಗಡೆ ಮಾಡಲಾಗಿದೆ.&lt;/p&gt;&lt;img&gt;&lt;p&gt;ಈ ಜೀತಪದ್ದತಿ ಬೇಲೂರು ತಾಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ನಡೆಯುತ್ತಿತ್ತು . ನಾಗರಾಜ್ ಮತ್ತು ಮೋಹನೇಶ್ ಎಂಬವರು ಕಾರ್ಮಿಕರನ್ನು ಒಂದೇ ಶೆಡ್&zwnj;ನಲ್ಲಿ ಅಕ್ರಮವಾಗಿ ಬಂಧಿಸಿ, ಮೂಲಭೂತ ಸೌಲಭ್ಯಗಳಿಲ್ಲದೆ ಅಮಾನವೀಯವಾಗಿ ಅವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿತ್ತು. ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಿಸಿ, ರಾತ್ರಿ ಮತ್ತೆ ಶೆಡ್&zwnj;ಗೆ ಕರೆತಂದು ಇಡಲಾಗುತ್ತಿತ್ತು. ಹೊರಗಿನವರ ಸಂಪರ್ಕವಾಗದಂತೆ ಕಠಿಣ ನಿಗಾವಹಿಸಿ, ಕಾರ್ಮಿಕರನ್ನು ಭೀತಿಯಲ್ಲಿಟ್ಟಿದ್ದರು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಆರೋಪಿಗಳು ರೈಲ್ವೆ ನಿಲ್ದಾಣಗಳಲ್ಲಿ ಆಶ್ರಯವಿಲ್ಲದೆ ಇದ್ದ ಜನರನ್ನು ಗುರುತಿಸಿ, ಕೆಲಸ ನೀಡುವ ನೆಪದಲ್ಲಿ ಕರೆತಂದು ಹಣ ನೀಡದೆ ದುಡಿಸಿಕೊಳ್ಳುತ್ತಿದ್ದರು ಎಂಬುದು ಬಹಿರಂಗವಾಗಿದೆ. ಒಂದೇ ಶೆಡ್&zwnj;ನಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಜನರು ನರಕಸದೃಶ ಜೀವನ ನಡೆಸುತ್ತಿದ್ದ ದೃಶ್ಯಗಳು ಮನಕಲಕುವಂತಿದ್ದವು.&lt;/p&gt;&lt;img&gt;&lt;p&gt;ಜೀತದಿಂದ ಮುಕ್ತಗೊಳಿಸಲಾದವರಲ್ಲಿ ಕೇರಳ, ಒರಿಸ್ಸಾ, ಜಾರ್ಖಂಡ್, ಉತ್ತರ ಪ್ರದೇಶ ಸೇರಿದಂತೆ ಹೊರರಾಜ್ಯಗಳ ಕಾರ್ಮಿಕರಿದ್ದು, ರಾಜ್ಯದ ಹಾವೇರಿ, ವಿಜಯಪುರ, ಗದಗ, ಕಾಸರಗೋಡು ಸೇರಿದಂತೆ ಹಲವೆಡೆಗಳಿಂದ ಬಂದವರು ಇದ್ದರು. ಇವರ ದುಡಿಮೆಯಿಂದ ಸಂಪಾದಿಸಿದ ಹಣವನ್ನು ನಾಗರಾಜ್ ಮತ್ತು ಮೋಹನೇಶ್ ತಮ್ಮದಾಗಿಸಿಕೊಂಡು, ಕಾರ್ಮಿಕರಿಗೆ ಒಂದು ರೂಪಾಯಿ ಕೂಡ ನೀಡದೇ ಜೀತವಿರಿಸಿಕೊಂಡಿದ್ದರು ಎಂಬುದು ಆರೋಪವಾಗಿದೆ.&lt;/p&gt;&lt;img&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಮೂಲದ ರಜತ್ ಎಂಬಾತ ತಪ್ಪಿಸಿಕೊಂಡು ಹೋಗಿದ್ದಾನೆ. ಈರಣ್ಣನ ಸ್ನೇಹಿತನಾಗಿದ್ದ ರಜತ್, ಈರಣ್ಣನನ್ನು ಬೇಲೂರಿನಲ್ಲಿ ಜೀತವಿರಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಆತನ ಕುಟುಂಬಕ್ಕೆ ನೀಡಿದ್ದನು. ನಂತರ ಸುವರ್ಣ ನ್ಯೂಸ್ ಈರಣ್ಣನ ತಾಯಿ ಹಾಗೂ ಕುಟುಂಬವನ್ನು ಸಂಪರ್ಕಿಸಿ, ರಕ್ಷಣಾ ಕಾರ್ಯಾಚರಣೆಗೆ ದಾರಿ ಮಾಡಿಕೊಟ್ಟಿತು.&lt;/p&gt;&lt;p&gt;ಜೀತಪದ್ದತಿ ನಿಷೇಧ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಿಸಲಾದ 18 ಮಂದಿಗೆ ಪುನರ್ವಸತಿ, ಆಹಾರ, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ಈ ಘಟನೆ ಜೀತಪದ್ದತಿ ಎಂಬ ಸಾಮಾಜಿಕ ಕಳಂಕ ಇನ್ನೂ ಜೀವಂತವಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಇಂತಹ ಅಮಾನವೀಯ ಕೃತ್ಯಗಳ ವಿರುದ್ಧ ಸಮಾಜ ಒಗ್ಗಟ್ಟಾಗಿ ನಿಲ್ಲಬೇಕೆಂಬ ಸಂದೇಶವನ್ನು ನೀಡುತ್ತಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bonded-labour-racket-exposed-in-hassan-district-18-rescued-in-joint-police-revenue-operation-osf9q01"/>
        </item>
        <item>
            <title><![CDATA[Heartbreaking Incident in Hassan: ಸಾಲ ಮಾಡಿ ತಂದ ಮೇವಿನ ಬಣವೆಗೆ ಬೆಂಕಿ, ರೈತ ಕಣ್ಣೀರು]]></title>
            <link>https://kannada.asianetnews.com/karnataka-districts/heartbreaking-incident-in-hassan-farmer-loses-loan-funded-fodder-to-fire-rav/articleshow-prb9gv6</link>
            <guid isPermaLink="true">https://kannada.asianetnews.com/karnataka-districts/heartbreaking-incident-in-hassan-farmer-loses-loan-funded-fodder-to-fire-rav/articleshow-prb9gv6</guid>
            <pubDate>Tue, 17 Mar 2026 06:56:35 +0530</pubDate>
            <description><![CDATA[&lt;p&gt;ಹಾಸನ ತಾಲೂಕಿನ ವೇದಾವತಿ ಗ್ರಾಮದ ರೈತ ರಂಗಸ್ವಾಮಿ ಅವರು ಸಾಲ ಮಾಡಿ ಸಂಗ್ರಹಿಸಿದ್ದ 80 ಸಾವಿರಕ್ಕೂ ಹೆಚ್ಚು ಮೌಲ್ಯದ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ದುರ್ಘಟನೆಯಿಂದ ಸಂಪೂರ್ಣ ಮೇವು ನಾಶವಾಗಿದ್ದು, ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ದನಕರುಗಳಿಗೆ ಮೇವು ಒದಗಿಸಲು ಪರದಾಟ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkwp4kmzaxespqs7af2e2429,imgname-1-1773710495391.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮಾ.17):&lt;/strong&gt; ರೈತನು ಸಾಲ ಮಾಡಿ ತಂದು ಸಂಗ್ರಹಿಸಿ ಇಡಲಾಗಿದ್ದ ಮೇವಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಆಹುತಿಯಾದ ಘಟನೆ ತಾಲೂಕಿನ ದುದ್ದ ಹೋಬಳಿ ವೇದಾವತಿ ಗ್ರಾಮದಲ್ಲಿ ಸಂಭವಿಸಿದೆ.&lt;/p&gt;&lt;p&gt;ವೇದಾವತಿ ಗ್ರಾಮದ ರೈತ ರಂಗಸ್ವಾಮಿಗೆ ಸೇರಿದ ಸುಮಾರು ಐದಾರು ಲೋಡ್&zwnj;ಗಿಂತ ಹೆಚ್ಚು ಮೇವಿನ ಸಂಗ್ರಹಣೆ ಮಾಡಲಾಗಿದ್ದ ಬಣವೆಗೆ ಬೆಂಕಿ ತಗುಲಿದ್ದು, ಅಂದಾಜು ೮೦ ಸಾವಿರಕ್ಕೂ ಹೆಚ್ಚಿನ ಬೆಲೆಬಾಳುವ ಗೋವುಗಳ ಮೇವು ಪೂರ್ಣ ಬೆಂಕಿಯಲ್ಲಿ ಬೆಂದು ಕರಕಲು ಆಗಿದೆ ಎಂದು ತಿಳಿದು ಬಂದಿದೆ.&amp;nbsp;&lt;/p&gt;&lt;p&gt;ಬೆಂಕಿಯ ಜ್ವಾಲೆ ತೀವ್ರವಾಗಿದ್ದರಿಂದ ಕೆಲವೇ ಕ್ಷಣಗಳಲ್ಲಿ ಮೇವಿನ ಬಣವೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಈ ದುರ್ಘಟನೆಯ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಹಾಸನ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿಯ ತೀವ್ರತೆಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿದರು.&amp;nbsp;&lt;/p&gt;&lt;p&gt;ಗ್ರಾಮಸ್ಥರು ಕೂಡ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿಗೆ ಸಹಕಾರ ನೀಡಿ ಬೆಂಕಿ ನಂದಿಸುವ ಕಾರ್ಯದಲ್ಲಿ ಪಾಲ್ಗೊಂಡರು. ಇದೇ ವೇಳೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್&zwnj;ನ ರೋವರ್&zwnj; ನಾರಾಯಣಗೌಡ ಅವರು ಸಹ ನೆರವು ನೀಡಿದರು.&lt;/p&gt;&lt;p&gt;ಇದೇ ವೇಳೆ ರೈತ ರಂಗಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ತಮ್ಮ ದನಕರುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ಸಾಲ ಮಾಡಿಕೊಂಡು ಮೇವು ಖರೀದಿಸಿ ಸಂಗ್ರಹಿಸಿ ಇಡಲಾಗಿತ್ತು. ಆದರೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣ ಮೇವು ನಾಶವಾಗಿದ್ದು, ಇದೀಗ ದನಕರುಗಳಿಗೆ ಮೇವು ಒದಗಿಸುವುದೇ ಕಷ್ಟಕರವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.&amp;nbsp;&lt;/p&gt;&lt;p&gt;ಈ ಅಗ್ನಿ ಅವಘಡದಿಂದ ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಘಟನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣ ಪರಿಹಾರ ಮತ್ತು ನೆರವು ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/heartbreaking-incident-in-hassan-farmer-loses-loan-funded-fodder-to-fire-rav/articleshow-prb9gv6"/>
        </item>
        <item>
            <title><![CDATA[ನುಗ್ಗೇಹಳ್ಳಿಯಲ್ಲಿ ವರ್ಷದ ಉತ್ತಮ ಮಳೆಗಾಗಿ ತಿಂಗಳ ಮಾಮನ ತೇರು ಹಬ್ಬ; ಮದುವೆ ಮಾಡಿ ಆಚರಣೆ]]></title>
            <link>https://kannada.asianetnews.com/karnataka-districts/channarayapatna-tingala-mama-teru-festival-in-nuggehalli-for-good-rains-of-the-year-mrq/articleshow-twroytm</link>
            <guid isPermaLink="true">https://kannada.asianetnews.com/karnataka-districts/channarayapatna-tingala-mama-teru-festival-in-nuggehalli-for-good-rains-of-the-year-mrq/articleshow-twroytm</guid>
            <pubDate>Mon, 06 Apr 2026 08:41:49 +0530</pubDate>
            <description><![CDATA[ಹಾಸನದ ನುಗ್ಗೇಹಳ್ಳಿಯಲ್ಲಿ ಮಳೆಗಾಗಿ 'ತಿಂಗಳಮಾಮನ ತೇರು' ಎಂಬ ವಿಶಿಷ್ಟ ಹಬ್ಬವನ್ನು ಆಚರಿಸಿದರೆ, ಸಕಲೇಶಪುರದಲ್ಲಿ 16 ಅಡಿ ಎತ್ತರದ ಏಕಶಿಲಾ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಇದರೊಂದಿಗೆ, ಮದ್ದೂರಿನಲ್ಲಿ ಸಾಯಿಬಾಬಾರ 21ನೇ ವರ್ಷದ ಪಲ್ಲಕ್ಕಿ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kngc7yg8ts70sy5kh1fzna35,imgname-channarayapatna-1775444949512.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯಲ್ಲಿ ತಿಂಗಳ ಮಾಮನ ತೇರು ಹಬ್ಬವನ್ನು 9 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.&lt;/p&gt;&lt;p&gt;ಕಾರ್ಯಕ್ರಮವನ್ನು ಮಾಡುವ ಉದ್ದೇಶವೇನೆಂದರೆ ಮಳೆಗಾಗಿ ಮಾಡುವಂತ ಹಬ್ಬ, ಈ ಹಬ್ಬವನ್ನು ಗ್ರಾಮದ ಮಹಿಳೆಯರು ಪುರುಷರು ಸೇರಿ ಮಾಡುವಂತಹ ಹಬ್ಬವಾಗಿದ್ದು ಹಬ್ಬದಲ್ಲಿ ಮೊದಲನೇ ದಿನ ತಿಂಗಳ ಮಾವನ ತೇರನ್ನು ಬಿಡಿಸಿ ಆಂಜನೇಯನ ಪ್ರತಿಮೆಯನ್ನು ರಂಗೋಲಿಯಲ್ಲಿ ಬಿಡಿಸಿ ಪ್ರತಿದಿನ ಪೂಜೆ ಮಾಡಿ ಒಂದು ರೊಟ್ಟಿಯಿಂದ ಒಂಬತ್ತು ರೊಟ್ಟಿವರೆಗೆ ಇಟ್ಟು ಪೂಜಿಸಲಾಗುವುದು. ವಿಶೇಷವೇನೆಂದರೆ ಪೂಜೆ ಮುಗಿದ ನಂತರ ಒಂದು ರೊಟ್ಟಿಗೆ ಪೂಜೆ ಮಾಡಿ ಪೂಜೆ ಮುಗಿದ ನಂತರ ರೊಟ್ಟಿಯನ್ನು ಇಟ್ಟಿ ಕದ್ದಂಥವರಿಗೆ ನೀರನ್ನು ಎರಚುವ ಪದ್ಧತಿ. ಅಂದರೆ ಕೊನೆ ದಿನ ಒಂಬತ್ತು ರೊಟ್ಟಿಯನ್ನು ಇಟ್ಟು ಪೂಜಿಸಿ ಸೋಬಾನೆ ಪದ ಹಾಡಿ ಹೆಣ್ಣು-ಗಂಡಿಗೆ ಮದುವೆ ಮಾಡಿ ಆಚರಣೆ ಮಾಡಲಾಗುವುದು. ಈ ಕೊನೆ ದಿನ ಗ್ರಾಮಸ್ಥರೆಲ್ಲ ಸೇರಿ ಸಂತೋಷದಿಂದ ಆಚರಣೆ ಮಾಡಲಾಗುವುದು. ಈ ಆಚರಣೆಯ ಉದ್ದೇಶ ಮಳೆರಾಯನನ್ನು ಒಲಿಸುವುದು.&lt;/p&gt;&lt;p&gt;ಗ್ರಾಮದ ಮಹಿಳೆಯರಾದ ಸಣ್ಣಮ್ಮ, ಗೌರಮ್ಮ, ಪೂರ್ಣಿಮಾ, ಸುಜಾತ, ಮಂಜಮ್ಮ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪ್ರತಿದಿನ ಭಾಗವಹಿಸಿ ಸೋಬಾನೆ ಪದ ಹಾಡಿ ರಂಜಿಸಿದರು. ಸೋಮನಾಥ್, ಕಲಾನಾಥ್, ಗೋಪಿನಾಥ್, ನಾಗೇಶ್ ಅವರು ಗ್ರಾಮದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಂದಂತ ಸಾರ್ವಜನಿಕರಿಗೆ ಕೊನೆಯ ದಿನ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.&lt;/p&gt;&lt;h2&gt;&lt;strong&gt;ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ&lt;/strong&gt;&lt;/h2&gt;&lt;p&gt;ಸಕಲೇಶಪುರ ತಾಲೂಕಿನ ಕರಗೂರು ಕೂಡಿಗೆ ಪಾಲಹಳ್ಳಿಯಲ್ಲಿ ಶ್ರೀ ಆಂಜನೇಯ ಸ್ವಾವಿ 16 ಅಡಿ ಎತ್ತರದ ಕಲ್ಲಿನ ಏಕಶಿಲಾ ನೂತನ ವಿಗ್ರಹದ ಪ್ರತಿಷ್ಠಾಪನೆ ಮಹೋತ್ಸವ ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ನಡೆಯಿತು.&lt;/p&gt;&lt;p&gt;ಕಾರ್ಯಕ್ರಮಕ್ಕೆ ಹಾಸನ ಹಾಗೂ ಕೊಡಗು ಜಿಲ್ಲೆಯ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಂಜನೇಯ ಸ್ವಾಮಿ ಸೇವೆಯ ಪ್ರತೀಕವಾಗಿದ್ದು, ಎಲ್ಲಾ ಯುಗಗಳಲ್ಲೂ ಭಕ್ತರ ಪಾಲಿಗೆ ಶಕ್ತಿಯ ಮೂಲವಾಗಿದ್ದಾರೆ. ಭಕ್ತರು ನಿರಂತರ ರಾಮನಾಮ ಜಪ ಮಾಡಬೇಕು ಎಂದು ಹೇಳಿದರು. ತುಳಸಿ ಪೂಜೆ, ಗೋ ಪೂಜೆ ಮಾಡುವ ಮನೆಗಳು ಪವಿತ್ರವಾಗುತ್ತವೆ ಎಂದೂ ಅವರು ತಿಳಿಸಿದರು. ಆಂಜನೇಯನು ಬ್ರಹ್ಮಚಾರಿ, ಜಾಗೃತಿಯ ಪ್ರತೀಕವಾಗಿದ್ದು, ಯುವಜನತೆಗೆ ಆದರ್ಶ ಎಂದರು.&lt;/p&gt;&lt;p&gt;ಹೆಗ್ಗಡಹಳ್ಳಿ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಳೆದ ಮೂರು ದಿನಗಳಿಂದ ಯಜ್ಞ, ಹೋಮ-ಹವನ ಸೇರಿದಂತೆ ಸನಾತನ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಈ ವಿಗ್ರಹದ ಮುಂದೆ ಕೆಲ ಕ್ಷಣ ಪ್ರಾರ್ಥನೆ ಮಾಡಿದರೂ ಆತ್ಮಶಕ್ತಿ ಹೆಚ್ಚುತ್ತದೆ. ಕರಗೂರಿನ ಇತಿಹಾಸದಲ್ಲಿ ಇದು ಸುವರ್ಣ ಕ್ಷಣವಾಗಿದ್ದು, ಗ್ರಾಮಸ್ಥರಿಗೆ ಆರೋಗ್ಯ ಹಾಗೂ ಆಯುಷ್ಯ ಲಭಿಸಲಿ ಎಂದು ಆಶಿಸಿದರು.&lt;/p&gt;&lt;h3&gt;&lt;strong&gt;ಸಾಯಿಬಾಬಾರ 21ನೇ ವರ್ಷದ ಪಲ್ಲಕ್ಕಿ ಮಹೋತ್ಸವ&lt;/strong&gt;&lt;/h3&gt;&lt;p&gt;ಮದ್ದೂರು ತಾಲೂಕಿನ ವಳಗೆರೆಹಳ್ಳಿಯಲ್ಲಿ ಶ್ರೀ ಸಮರ್ಥ ಸದ್ಗುರು ಸಾಯಿಬಾಬಾರ 21ನೇ ವರ್ಷದ ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಶನಿವಾರ ಬೆಳಗ್ಗೆಯಿಂದಲೇ ಬಾಬಾರಿಗೆ ಹೋಮ ಹವನ ಪೂಜಾ ವಿಧಿ ವಿಧಾನಗಳು ಜರುಗಿದವು. ಸಾಯಂಕಾಲ ಬಾಬಾರ ಪಲ್ಲಕ್ಕಿ ಉತ್ಸವ ಮಂಗಳವಾದ್ಯ ತಮಟೆ ನಗಾರಿಗಳ ಝೇಂಕಾರಗಳು ಮೊಳಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿ ಮನೆಯಲ್ಲೂ ಪೂಜೆ ಸಲ್ಲಿಸಿ ಬಾಬಾರವರ ದಿವ್ಯ ದರ್ಶನ ಪಡೆದು ಪುನೀತರಾದರು.&lt;/p&gt;&lt;p&gt;ಗ್ರಾಮದ ಪ್ರಮುಖ ಬೀದಿಗಳು ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದವು. ಭಾನುವಾರ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಿತು. ಸಂಜೆ ಗೋವಿನ ಪೂಜೆ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ನಡೆಯಿತು.&lt;/p&gt;&lt;p&gt;&lt;img&gt;&lt;/p&gt;&lt;p&gt;ಕಲಾವಿದ ಗೌತಮ್ ವಳಗೆರೆಹಳ್ಳಿ ತಂಡದವರಿಂದ ಭಕ್ತಿ ಗೀತೆಗಳ ಗೀತ ಗಾಯನ ಕಾರ್ಯಕ್ರಮ ಮನಸೂರೆಗೊಂಡಿತು. ಪೂಜಾ ವಿಧಿ ವಿಧಾನಗಳನ್ನು ಬಾಬಾಸೇವಕ ಮುನಿ ಶಂಕರಯ್ಯ ನೆರವೇರಿಸಿದರು. ವಳಗೆರೆಹಳ್ಳಿ ಸೊಳ್ಳೆಪುರ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಬಾಬಾರವರ ದಿವ್ಯ ದರ್ಶನ ಪಡೆದರು.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/channarayapatna-tingala-mama-teru-festival-in-nuggehalli-for-good-rains-of-the-year-mrq/articleshow-twroytm"/>
        </item>
        <item>
            <title><![CDATA[ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ]]></title>
            <link>https://kannada.asianetnews.com/state/lakshminarasimha-swamy-rathotsava-in-holenarasipur-jds-workers-express-anger-against-shreyas-patel/articleshow-vgo1fmg</link>
            <guid isPermaLink="true">https://kannada.asianetnews.com/state/lakshminarasimha-swamy-rathotsava-in-holenarasipur-jds-workers-express-anger-against-shreyas-patel/articleshow-vgo1fmg</guid>
            <pubDate>Mon, 02 Mar 2026 23:49:39 +0530</pubDate>
            <description><![CDATA[&lt;p&gt;ಹೊಳೇನರಸೀಪುರದ ಲಕ್ಷ್ಮಿ ನರಸಿಂಹ ಸ್ವಾಮಿ ರಥೋತ್ಸವದ ಅಲಂಕಾರ ವಿಚಾರದಲ್ಲಿ ರಾಜಕೀಯ ನುಸುಳಿದೆ. ಸಂಸದ ಶ್ರೇಯಸ್ ಪಟೇಲ್ ನೀಡಿದ ಬಟ್ಟೆ ಬಳಸಿದ್ದಕ್ಕೆ &amp;nbsp;ರೇವಣ್ಣ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjqw19azpxrw1521cwr7t2kj,imgname-lakshminarasimha-swamy-rathotsava-in-holenarasipura-1772475163999.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಲಕ್ಷ್ಮಿ ನರಸಿಂಹ ಸ್ವಾಮಿಯ ರಥೋತ್ಸವದಲ್ಲಿ ರಥದ ಅಲಂಕಾರ ವಿಚಾರದಲ್ಲಿ ಗಲಾಟೆ:&lt;/strong&gt;&lt;/h2&gt;&lt;p&gt;ಹಾಸನ: ಮಾಜಿ ಪ್ರಧಾನಿ ದೇವೇಗೌಡರ ತವರು ಹೊಳೆನರಸೀಪುರದ ಲಕ್ಷ್ಮಿ ನರಸಿಂಹ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನಾಳೆ ನಡೆಯಲಿದ್ದು, ಅದಕ್ಕಾಗಿ ಸಲ ಸಿದ್ಧತೆಗಳು ನಡೆದಿವೆ. ಹೀಗಿರುವಾಗ ಲಕ್ಷ್ಮಿ ನರಸಿಂಹ ಸ್ವಾಮಿ ರಥೋತ್ಸವದ ಅಲಂಕಾರ ವಿಚಾರದಲ್ಲಿ ಗೊಂದಲ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;p&gt;ಹಾಸನದ ಸಂಸದ ಕಾಂಗ್ರೆಸ್&zwnj;ನ ಶ್ರೇಯಸ್ ಪಟೇಲ್ ಕೊಡಿಸಿರೋ ಬಟ್ಟೆ ರಥಕ್ಕೆ ಹಾಕಿರುವುದಕ್ಜೆ ಜೆಡಿಎಸ್&zwnj;ನ ಹೆಚ್ ಡಿ ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಹಳೆ ಬಟ್ಟೆ ಈ ಬಾರಿ ಹಾಕೋದು ಅಂತ ತೀರ್ಮಾನ ಆಗಿತ್ತು ಅನ್ನೋದು ರೇವಣ್ಣ ವಾದವಾಗಿದ್ದು, ಇದರಿಂದ ಲಕ್ಷ್ಮೀನರಸಿಂಹ ದೇವಾಲಯದ ಮುಂಭಾಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;p&gt;ದೇವಾಲಯದ ಮುಂಭಾಗಕ್ಕೆ ಆಗಮಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ಕಾರ್ಯಕರ್ತರು ನಾವು ರಥಕ್ಕೆ ಹೂವು ಹಾಕೋದಕ್ಕೂ&zwnj; ಬಿಡೋದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ. ರಥಕ್ಕೆ ಸಂಸದ ಶ್ರೇಯಸ್ ಪಟೇಲ್ ನೀಡಿರುವ ಬಟ್ಟೆಯನ್ನು ತೆಗೆಯುವವರೆಗೂ ಸ್ಥಳ ಬಿಟ್ಟು ಹೋಗಲ್ಲ ಅಂತಾ ರೇವಣ್ಣ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದರಿಮದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು&lt;/p&gt;&lt;p&gt;ದೇವಾಲಯದ ಮುಂಭಾಗವೇ ಶಾಸಕ ಹೆಚ್.ಡಿ.ರೇವಣ್ಣ ಹಾಗೂ ಕಾರ್ಯಕರ್ತರು ನಿಂತಿದ್ದು, ಘೋಷಣೆ ಕೂಗಿದ್ದಾರೆ. ಇದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಘಟನೆಯ ಹಿನ್ನೆಲೆ ಎಸಿ ಹಾಗೂ ತಹಸೀಲ್ದಾರ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ದೇವಾಲಯದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಗುಂಡಿನ ಗಮ್ಮತ್ತು: ಬೆಳಗಾವಿ ರಾಯಭಾಗದಲ್ಲಿ ಕಂಠಪೂರ್ತಿ ಕುಡಿದು ಬಾರ್ ಮುಂದೆಯೇ ಮಲಗಿದ ನಾರಿ&lt;/strong&gt;&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಹೊಳೆನರಸೀಪುರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಶಾಸಕ ಹೆಚ್.ಡಿ ರೇವಣ್ಣ, ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ ವಿಚಾರವಾಗಿ ನಾವು ಈ ಹಿಂದೆ ತಹಶೀಲ್ದಾರ್ &zwnj;ಜೊತೆ ಸಭೆ ನಡೆಸಿದ್ದೆವು. ಆಗ ರಥೋತ್ಸವದ ಬಗ್ಗೆ ಯಾವುದೇ ತೀರ್ಮಾನ ಆಗಿರಲಿಲ್ಲ, ಹಿಂದಿನಿಂದ ನಡೆದುಕೊಂಡು ಬಂದ&zwnj; ರೀತಿಯೇ ಮುಂದುವರೆಯಲು ತೀರ್ಮಾನ ಆಗಿತ್ತು. ಹೊಸ ಬಟ್ಟೆಯನ್ನ ರಥಕ್ಕೆ ಹಾಕೋ ತೀರ್ಮಾನ ಆಗಿರಲಿಲ್ಲ, ಇಂದು ಮಧ್ಯಾಹ್ನ ಅಧಿಕಾರಿಗಳೇ ಹಳೆ ಬಟ್ಟೆಯನ್ನ ರಥೋತ್ಸವಕ್ಕೆ ಹಾಕಿದ್ದರು. ಆದರೆ ಇಂದು ದಿಢೀರ್ ಆಗಿ ರಥದಿಂದ ಹಳೇ ಬಟ್ಟೆ ತೆಗೆದಿದ್ದಾರೆ. ಕೇಳಿದಾಗ ಇದು ಜಿಲ್ಲಾಧಿಕಾರಿ ಆದೇಶ ಎಂದು ಹೇಳಿದರು.&lt;/p&gt;&lt;p&gt;ಹಾಗಿದ್ರೆ ಜಿಲ್ಲಾಧಿಕಾರಿ ಆದೇಶದ ಪ್ರತಿ ಕೊಡಿ&zwnj; ಎಂದು ಆಗ್ರಹಿಸಿದ್ದೇನೆ. ಇಲ್ಲಿವರೆಗೂ ಯಾವುದೇ ಆದೇಶದ ಪ್ರತಿ ನೀಡಿಲ್ಲ, ನಾನು ಸ್ಥಳೀಯ ಶಾಸಕನಿದ್ದೇನೆ, ನನ್ನನ್ನು ಕಡೆಗಣಿಸಲಾಗಿದೆ, ಒಬ್ಬ ಶಾಸಕನನ್ನ ಕರೆದು ತೀರ್ಮಾನ ಮಾಡಬೇಕಿತ್ತಲ್ವಾ? ಇದರಿಂದ ನನ್ನ ಹಕ್ಕಿಗೆ ಚ್ಯುತಿ ಬಂದಿದೆ. ಆದರೂ ಪರವಾಗಿಲ್ಲ, ರಥೋತ್ಸವ ನಡೆಯಲಿ ನನ್ನ ಅಭ್ಯಂತರವಿಲ್ಲ, ನನಗೆ ರಥೋತ್ಸವ ನಿಲ್ಲಿಸೋ ಉದ್ದೇಶವೇನಿಲ್ಲ ಯಾರದ್ದೋ ಕುಮ್ಮಕ್ಕಿಗೆ ಹೀಗೆ ಮಾಡುತ್ತಿರಬಹುದು ಸರಿಯಾದ ರೀತಿ ರಥೋತ್ಸವ ನಡೆಸಲಿ, ಸ್ವ ಹಿತಾಸಕ್ತಿಯಿಂದ ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>hassan</category>
            <dc:creator>Anusha Kb</dc:creator>
            <atom:link href="https://kannada.asianetnews.com/state/lakshminarasimha-swamy-rathotsava-in-holenarasipur-jds-workers-express-anger-against-shreyas-patel/articleshow-vgo1fmg"/>
        </item>
        <item>
            <title><![CDATA[ಹೊಳೆನರಸೀಪುರ ದೇಗುಲದ ರಥದ ಬಟ್ಟೆ ವಿಚಾರಕ್ಕೆ ಕಿತ್ತಾಡಿಕೊಂಡ  ರೇವಣ್ಣ-ಶ್ರೇಯಸ್ ಪಟೇಲ್, ಬರೇ ಹೂವಿನ ಅಲಂಕಾರದಲ್ಲೇ  ಸಂಪನ್ನಗೊಂಡ ರಥೋತ್ಸವ]]></title>
            <link>https://kannada.asianetnews.com/karnataka-districts/hassan-rathotsava-held-peacefully-amid-political-row-over-chariot-cloth-in-holenarasipura-gdp/articleshow-wgmp7ak</link>
            <guid isPermaLink="true">https://kannada.asianetnews.com/karnataka-districts/hassan-rathotsava-held-peacefully-amid-political-row-over-chariot-cloth-in-holenarasipura-gdp/articleshow-wgmp7ak</guid>
            <pubDate>Tue, 03 Mar 2026 14:12:24 +0530</pubDate>
            <description><![CDATA[&lt;p&gt;ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವದಲ್ಲಿ ರಥದ ಬಟ್ಟೆಯ ವಿಚಾರ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಜಿಲ್ಲಾಡಳಿತದ ಮಧ್ಯಪ್ರವೇಶದಿಂದ, ಯಾವುದೇ ಬಟ್ಟೆ ಬಳಸದೆ ರಥವನ್ನು ಸಂಪೂರ್ಣವಾಗಿ ಹೂವುಗಳಿಂದ ಅಲಂಕರಿಸಿ ಉತ್ಸವವನ್ನು ಶಾಂತಿಯುತವಾಗಿ ನಡೆಸಲಾಯಿತು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjsdkcr6rfzfmxe782qvwsnq,imgname-shreyas-patel-vs-h-d-revanna--1--1772527137542.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ರಾಜಕೀಯ ಜಟಾಪಟಿಗೆ ಕಾರಣವಾಗಿದ್ದ ರಥದ ಬಟ್ಟೆ ವಿವಾದದ ನಡುವೆಯೇ ಹೊಳೆನರಸೀಪುರದಲ್ಲಿ ನಡೆದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ ಶಾಂತಿಯುತವಾಗಿ ಹಾಗೂ ಭಕ್ತಿಪೂರ್ವಕವಾಗಿ ನೆರವೇರಿತು. ಬಹು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ರಥದ ಅಲಂಕಾರ ವಿಚಾರಕ್ಕೆ ಅಂತಿಮವಾಗಿ ಜಿಲ್ಲಾಡಳಿತ ತೆರೆ ಎಳೆದಿದ್ದು, ಈ ಬಾರಿ ರಥವನ್ನು ಯಾವುದೇ ಬಟ್ಟೆ ಬಳಸದೆಯೇ ಸಂಪೂರ್ಣ ಹೂವಿನ ಅಲಂಕಾರದಿಂದ ಸಿಂಗಾರಿಸಿ ರಥೋತ್ಸವವನ್ನು ನಡೆಸಲಾಯಿತು.&lt;/p&gt;&lt;h2&gt;ರಾಜಕೀಯ ಸಂಘರ್ಷಕ್ಕೆ ಕಾರಣವಾದ ರಥದ ಬಟ್ಟೆ&lt;/h2&gt;&lt;p&gt;ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಹೊಳೆನರಸೀಪುರದಲ್ಲಿ ನಡೆಯುವ ವಾರ್ಷಿಕ ರಥೋತ್ಸವಕ್ಕೆ ಸಂಬಂಧಿಸಿದಂತೆ ಈ ಬಾರಿ ರಥದ ಬಟ್ಟೆ ವಿಚಾರ ರಾಜಕೀಯ ಬಣ್ಣ ಪಡೆದುಕೊಂಡಿತ್ತು. ಹೊಸ ಬಟ್ಟೆ ಹೊದಿಸಬೇಕೇ ಅಥವಾ ಹಳೆಯ ಬಟ್ಟೆಯನ್ನೇ ಬಳಸಬೇಕೇ ಎಂಬ ಪ್ರಶ್ನೆ ಇಬ್ಬರು ರಾಜಕೀಯ ನಾಯಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.&lt;/p&gt;&lt;p&gt;ಹೊಸ ಬಟ್ಟೆ ಹೊದಿಸಲು ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಒತ್ತಾಯಿಸಿದ್ದರು. ಅವರು ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ರಥದ ಬಟ್ಟೆಯನ್ನು ಹೊಲೆಸಿಸಿದ್ದರು ಎಂಬ ಮಾಹಿತಿ ಲಭ್ಯವಾಯಿತು. ಆದರೆ, ಒಬ್ಬರಿಂದ ಮಾತ್ರ ಹಣ ಪಡೆದು ಬಟ್ಟೆ ಹೊಲೆಯಲಾಗಿದೆ ಎಂಬ ಆಕ್ಷೇಪದೊಂದಿಗೆ ಜೆಡಿಎಸ್ ನಾಯಕ ಮತ್ತು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರೋಧ ವ್ಯಕ್ತಪಡಿಸಿದರು. ಹೊಸ ಬಟ್ಟೆ ಹಾಕಬಾರದು ಎಂದು ಅವರು ಪಟ್ಟು ಹಿಡಿದಿದ್ದರು.&lt;/p&gt;&lt;h2&gt;ಜಿಲ್ಲಾಡಳಿತದ ಹಸ್ತಕ್ಷೇಪ&lt;/h2&gt;&lt;p&gt;ವಿವಾದ ತೀವ್ರಗೊಳ್ಳುತ್ತಿದ್ದಂತೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿತು. ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ರಥದ ಹಳೆಯ ಬಟ್ಟೆಯನ್ನು ತೆರವುಗೊಳಿಸಲಾಯಿತು ಎಂದು ತಿಳಿದುಬಂದಿತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, &ldquo;ಶಾಸಕನನ್ನೇ ಕಡೆಗಣಿಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ&rdquo; ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದಾಗ್ಯೂ, &ldquo;ನನ್ನ ಹಕ್ಕಿಗೆ ಚ್ಯುತಿ ಬಂದರೂ ಪರವಾಗಿಲ್ಲ, ರಥೋತ್ಸವ ಸುಸೂತ್ರವಾಗಿ ನಡೆಯಬೇಕು&rdquo; ಎಂದು ಅವರು ನಂತರ ಹೇಳಿದ್ದಾರೆ.&lt;/p&gt;&lt;h2&gt;ಹೂವಿನ ಅಲಂಕಾರದಲ್ಲೇ ರಥೋತ್ಸವ&lt;/h2&gt;&lt;p&gt;ರಾಜಕೀಯ ಜಟಾಪಟಿ ನಡುವೆಯೇ ಯಾವುದೇ ಬಟ್ಟೆ ಬಳಸದೆ, ಇಡೀ ರಥವನ್ನು ಹೂವಿನಿಂದಲೇ ಅಲಂಕರಿಸುವ ನಿರ್ಧಾರ ಕೈಗೊಳ್ಳಲಾಯಿತು. ಹೊಸ ಬಟ್ಟೆಯೂ ಇಲ್ಲ, ಹಳೆಯ ಬಟ್ಟೆಯೂ ಇಲ್ಲ&mdash;ಹೂವಿನ ಸಿಂಗಾರವೇ ಈ ಬಾರಿ ರಥದ ವೈಶಿಷ್ಟ್ಯವಾಗಿತ್ತು. ರಥೋತ್ಸವದ ದಿನ ಭಕ್ತರ ಹರ್ಷೋದ್ಗಾರಗಳ ನಡುವೆ ಮಹಾರಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.&lt;/p&gt;&lt;h2&gt;ಶಾಂತಿಯುತವಾಗಿ ಜರುಗಿದ ಉತ್ಸವ&lt;/h2&gt;&lt;p&gt;ವಿವಾದದ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ರಥೋತ್ಸವ ಶಾಂತಿಯುತವಾಗಿ ನೆರವೇರಿತು.&lt;/p&gt;&lt;p&gt;ವಿವಾದಗಳ ನಡುವೆಯೂ ಸಾವಿರಾರು ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ಹರಕೆ ತೀರಿಸಿದರು. ರಾಜಕೀಯ ಸಂಘರ್ಷದಿಂದ ಆರಂಭವಾದ ಈ ಘಟನೆ, ಅಂತಿಮವಾಗಿ ಭಕ್ತಿಪೂರ್ವಕವಾಗಿ ಹಾಗೂ ಶಾಂತಿಯುತವಾಗಿ ಸಂಪನ್ನಗೊಂಡ ರಥೋತ್ಸವದೊಂದಿಗೆ ಮುಕ್ತಾಯಗೊಂಡಿತು.&lt;/p&gt;&lt;p&gt;ಒಟ್ಟಿನಲ್ಲಿ, ಶ್ರೇಯಸ್ ಪಟೇಲ್ ಮತ್ತು ಹೆಚ್.ಡಿ. ರೇವಣ್ಣ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ರಥದ ಬಟ್ಟೆ ವಿವಾದಕ್ಕೆ ಜಿಲ್ಲಾಡಳಿತ ಮಧ್ಯಸ್ಥಿಕೆಯಿಂದ ತೆರೆ ಬಿದ್ದಿದ್ದು, ಭಕ್ತರ ಭಾಗವಹಿಸುವಿಕೆಯಿಂದ ಉತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿತು.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hassan-rathotsava-held-peacefully-amid-political-row-over-chariot-cloth-in-holenarasipura-gdp/articleshow-wgmp7ak"/>
        </item>
        <item>
            <title><![CDATA[ಹಾಸನ, ಮೈಸೂರು ಮಾರ್ಗದ ರೈಲು ಸಂಚಾರದಲ್ಲಿ ದಿಢೀರ್ ಬದಲಾವಣೆ!  ಹಲವು ರೈಲುಗಳು ರದ್ದು!]]></title>
            <link>https://kannada.asianetnews.com/state/train-services-cancelled-on-march-16-due-to-underpass-construction-between-hassan-and-mavinakere-stations-gdp/articleshow-yw7h845</link>
            <guid isPermaLink="true">https://kannada.asianetnews.com/state/train-services-cancelled-on-march-16-due-to-underpass-construction-between-hassan-and-mavinakere-stations-gdp/articleshow-yw7h845</guid>
            <pubDate>Mon, 09 Mar 2026 22:15:32 +0530</pubDate>
            <description><![CDATA[ಹಾಸನ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ಕೆಳಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ, ದಕ್ಷಿಣ ಪಶ್ಚಿಮ ರೈಲ್ವೆಯು ಮಾರ್ಚ್ 16 ರಂದು ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಅರಸೀಕೆರೆ-ಮೈಸೂರು ಪ್ಯಾಸೆಂಜರ್ ಮತ್ತು ಮೈಸೂರು-ತಾಳಗುಪ್ಪ ಎಕ್ಸ್&zwnj;ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ಅಂದು ಸಂಚರಿಸುವುದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kd6243fcjxrv96wmk1ggke23,imgname-image-5a758be4-76e8-4466-b9d6-05a95d17bb18-1766508858860.jpg" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಪಶ್ಚಿಮ ರೈಲ್ವೆಯ ವತಿಯಿಂದ ಹಾಸನ ಮತ್ತು ಮಾವಿನಕೆರೆ ರೈಲು ನಿಲ್ದಾಣಗಳ ನಡುವಿನ ಭಾಗದಲ್ಲಿ ಕೆಳಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಯನ್ನು ಸುರಕ್ಷಿತವಾಗಿ ಮತ್ತು ವೇಗವಾಗಿ ಪೂರ್ಣಗೊಳಿಸಲು ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;&lt;p&gt;ಕಾಮಗಾರಿಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 16ರಂದು ಕೆಲವು ಪ್ರಮುಖ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆ ದಿನ ಪ್ರಯಾಣ ಮಾಡಲು ಯೋಜಿಸಿದ್ದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡುಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.&lt;/p&gt;&lt;h2&gt;ಮಾರ್ಚ್ 16ರಂದು ರದ್ದುಪಡಿಸಲಾದ ರೈಲು&lt;/h2&gt;&lt;p&gt;ಮಾರ್ಚ್ 16ರಂದು ರದ್ದುಪಡಿಸಲಾದ ರೈಲುಗಳಲ್ಲಿ ರೈಲು ಸಂಖ್ಯೆ 56267 ಅರಸೀಕೆರೆ&ndash;ಮೈಸೂರು ಪ್ಯಾಸೆಂಜರ್ ರೈಲು ಪ್ರಮುಖವಾಗಿದೆ. ಈ ರೈಲು ಸಾಮಾನ್ಯವಾಗಿ ದಿನನಿತ್ಯ ಪ್ರಯಾಣಿಕರಿಗೆ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದ್ದು, ಅದರ ಸಂಚಾರ ಆ ದಿನ ನಡೆಯುವುದಿಲ್ಲ.&lt;/p&gt;&lt;p&gt;ಅದೇ ರೀತಿ ರೈಲು ಸಂಖ್ಯೆ 16206 ಮೈಸೂರು&ndash;ತಾಳಗುಪ್ಪ ಎಕ್ಸ್&zwnj;ಪ್ರೆಸ್ ರೈಲು ಕೂಡ ಮಾರ್ಚ್ 16ರಂದು ಸಂಚರಿಸುವುದಿಲ್ಲ. ಈ ರೈಲು ಮೈಸೂರು ಹಾಗೂ ತಾಳಗುಪ್ಪ ನಡುವಿನ ಪ್ರಯಾಣಿಕರಿಗೆ ಮಹತ್ವದ ಸಂಪರ್ಕ ಕಲ್ಪಿಸುವ ಸೇವೆಯಾಗಿದೆ.&lt;/p&gt;&lt;p&gt;ಇದರ ಜೊತೆಗೆ ರೈಲು ಸಂಖ್ಯೆ 16205 ತಾಳಗುಪ್ಪ&ndash;ಮೈಸೂರು ಎಕ್ಸ್&zwnj;ಪ್ರೆಸ್ ರೈಲು ಸಂಚಾರವೂ ಆ ದಿನ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಈ ಕಾಮಗಾರಿ ಪೂರ್ಣಗೊಂಡ ನಂತರ ರೈಲು ಸಂಚಾರ ಮತ್ತಷ್ಟು ಸುಗಮ&lt;/h2&gt;&lt;p&gt;ಹಾಸನ ಮತ್ತು ಮಾವಿನಕೆರೆ ರೈಲು ನಿಲ್ದಾಣಗಳ ನಡುವೆ ನಡೆಯುತ್ತಿರುವ ಕೆಳಸೇತುವೆ ನಿರ್ಮಾಣ ಕಾಮಗಾರಿ ರೈಲು ಮಾರ್ಗದ ಸುರಕ್ಷತೆ ಹಾಗೂ ಭವಿಷ್ಯದ ಸಂಚಾರ ಸುಗಮತೆಗೆ ಅಗತ್ಯವಾಗಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ರೈಲು ಸಂಚಾರ ಮತ್ತಷ್ಟು ಸುಗಮವಾಗಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.&lt;/p&gt;&lt;p&gt;ಆದ್ದರಿಂದ ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆ ಮಾಡುವ ಮುನ್ನ ರೈಲುಗಳ ವೇಳಾಪಟ್ಟಿ ಮತ್ತು ಸಂಚಾರ ಸ್ಥಿತಿಯನ್ನು ಪರಿಶೀಲಿಸಿ ಬಳಿಕವೇ ಟಿಕೆಟ್&zwnj;ಗಳನ್ನು ಬುಕ್ ಮಾಡಿಕೊಳ್ಳುವುದು ಉತ್ತಮ ಎಂದು ರೈಲ್ವೆ ಇಲಾಖೆ ಸಲಹೆ ನೀಡಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/state/train-services-cancelled-on-march-16-due-to-underpass-construction-between-hassan-and-mavinakere-stations-gdp/articleshow-yw7h845"/>
        </item>
        <item>
            <title><![CDATA[ಹೊಯ್ಸಳರ ಬೇಲೂರು ದೇವಸ್ಥಾನಕ್ಕೂ ಲೂಯಿ ವಿಟಾನ್ ಲಾಂಛನಕ್ಕೂ ಇದೆ ನಂಟು? ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ!]]></title>
            <link>https://kannada.asianetnews.com/life/louis-vuitton-logo-resemblance-belur-chennakeshava-temple-hoysala-carvings-viral-san/articleshow-zr6d4qu</link>
            <guid isPermaLink="true">https://kannada.asianetnews.com/life/louis-vuitton-logo-resemblance-belur-chennakeshava-temple-hoysala-carvings-viral-san/articleshow-zr6d4qu</guid>
            <pubDate>Thu, 26 Feb 2026 10:38:17 +0530</pubDate>
            <description><![CDATA[&lt;p&gt;ವಿಶ್ವವಿಖ್ಯಾತ 'ಲೂಯಿ ವಿಟಾನ್' ಬ್ರ್ಯಾಂಡ್&zwnj;ನ ಲಾಂಛನಕ್ಕೂ ಮತ್ತು ಕರ್ನಾಟಕದ ಬೇಲೂರಿನ 12ನೇ ಶತಮಾನದ ಹೊಯ್ಸಳ ಶಿಲ್ಪಕಲೆಗೂ ಇರುವ ಅಚ್ಚರಿಯ ಸಾಮ್ಯತೆ ಜಾಗತಿಕ ಚರ್ಚೆಗೆ ಕಾರಣವಾಗಿದೆ. ಆಸ್ಟ್ರೇಲಿಯಾದ ಇನ್&zwnj;ಫ್ಲುಯೆನ್ಸರ್ ಒಬ್ಬರು ಹಂಚಿಕೊಂಡ ವಿಡಿಯೋ ಈ ಚರ್ಚೆಗೆ ನಾಂದಿ ಹಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjc5a133yt7z89qwfj7884n0,imgname-louis-vuitton-iconic-monogram-from-karnataka--1772082234467.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಫೆ.26): &lt;/strong&gt;ಐಷಾರಾಮಿ ಫ್ಯಾಷನ್ ಲೋಕ ಅಂದಾಕ್ಷಣ ನಮಗೆ ನೆನಪಾಗುವುದು ವಿಶಿಷ್ಟ ವಿನ್ಯಾಸ ಮತ್ತು ಬ್ರ್ಯಾಂಡ್ ಇತಿಹಾಸ. ಆದರೆ, ಜಗತ್ತಿನ ಅತ್ಯಂತ ದುಬಾರಿ ಬ್ರ್ಯಾಂಡ್&zwnj;ಗಳಲ್ಲಿ ಒಂದಾದ 'ಲೂಯಿ ವಿಟಾನ್' (Louis Vuitton) ಲಾಂಛನಕ್ಕೂ ಮತ್ತು ಕರ್ನಾಟಕದ ಬೇಲೂರಿನ ಹೊಯ್ಸಳ ಶಿಲ್ಪಕಲೆಗೂ ಅಚ್ಚರಿಯ ಸಾಮ್ಯತೆ ಇರುವುದು ಈಗ ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ. ಆಸ್ಟ್ರೇಲಿಯಾದ ಇನ್&zwnj;ಫ್ಲುಯೆನ್ಸರ್ ಒಬ್ಬರು ಹಂಚಿಕೊಂಡ ವಿಡಿಯೋವೊಂದು ಈಗ ಜಾಗತಿಕ ಮಟ್ಟದಲ್ಲಿ 'ಭಾರತೀಯ ಕಲೆಯ ಪ್ರಭಾವ'ದ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ.&lt;/p&gt;&lt;h2&gt;&lt;strong&gt;ಕಣ್ಣೆದುರೇ ಇದ್ದ ಅಚ್ಚರಿಯ ಸತ್ಯ!&lt;/strong&gt;&lt;/h2&gt;&lt;p&gt;ಕರ್ನಾಟಕದ ಹಾಸನ ಜಿಲ್ಲೆಯ ಐತಿಹಾಸಿಕ ಪಟ್ಟಣ ಬೇಲೂರಿನಲ್ಲಿರುವ ಚೆನ್ನಕೇಶವ ದೇವಾಲಯವು 12ನೇ ಶತಮಾನದ ಅದ್ಭುತ ಕಲಾಕೃತಿ. ಹೊಯ್ಸಳ ರಾಜವಂಶದ ಕಾಲದಲ್ಲಿ ನಿರ್ಮಿಸಲಾದ ಈ ದೇವಾಲಯದ ಗೋಡೆಗಳು ಸಂಕೀರ್ಣ ಕೆತ್ತನೆಗಳು, ಹೂವಿನ ವಿನ್ಯಾಸಗಳು ಮತ್ತು ಜ್ಯಾಮಿತೀಯ ಮಾದರಿಗಳಿಂದ ಅಲಂಕರಿಸಲ್ಪಟ್ಟಿವೆ.&lt;/p&gt;&lt;p&gt;ದೇವಾಲಯದ ಸೌಂದರ್ಯವನ್ನು ಸವಿಯುತ್ತಿದ್ದ ಆಸ್ಟ್ರೇಲಿಯನ್ ಇನ್&zwnj;ಫ್ಲುಯೆನ್ಸರ್, ಅಲ್ಲಿನ ಕಲ್ಲಿನ ಕೆತ್ತನೆಯೊಂದನ್ನು ಗಮನಿಸಿದರು. ಆ ನಾಲ್ಕು ದಳಗಳ ಹೂವಿನ ವಿನ್ಯಾಸವು ಅಚ್ಚರಿ ಎನ್ನುವಂತೆ 'ಲೂಯಿ ವಿಟಾನ್' ಬ್ರ್ಯಾಂಡ್&zwnj;ನ 'ಮೊನೊಗ್ರಾಮ್ ಫ್ಲವರ್'ನಂತೆಯೇ ಇತ್ತು. ನಾಲ್ಕು ದುಂಡಗಿನ ದಳಗಳು ಸಮಪಾರ್ಶ್ವವಾಗಿ ಜೋಡಿಸಲ್ಪಟ್ಟಿರುವ ಈ ವಿನ್ಯಾಸವು ಎಂಟೂ ನೂರು ವರ್ಷಗಳ ಹಿಂದಿನ ಭಾರತೀಯ ಶಿಲ್ಪಕಲೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತಿದೆ.&lt;/p&gt;&lt;h2&gt;&lt;strong&gt;ವೈರಲ್ ವಿಡಿಯೋ ಮತ್ತು ನೆಟ್ಟಿಗರ ಚರ್ಚೆ&lt;/strong&gt;&lt;/h2&gt;&lt;p&gt;ಈ ವಿಡಿಯೋ ಆನ್&zwnj;ಲೈನ್&zwnj;ನಲ್ಲಿ ಸಕತ್ ಸದ್ದು ಮಾಡುತ್ತಿದ್ದು, ನೋಡುಗರು ದಂಗಾಗಿದ್ದಾರೆ. ಪುರಾತನ ಭಾರತೀಯ ಕಲೆಯು ಜಾಗತಿಕ ವಿನ್ಯಾಸಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಕೆಲವರು ಅಭಿಪ್ರಾಯಪಟ್ಟರೆ, ಹೂವಿನ ಮಾದರಿಗಳು ಎಲ್ಲಾ ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿರುವುದರಿಂದ ಇದು ಕೇವಲ ಕಾಕತಾಳೀಯ ಇರಬಹುದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by The Now India (@thenowindia)&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಲೂಯಿ ವಿಟಾನ್ ಲೋಗೋದ ಇತಿಹಾಸವೇನು?&lt;/strong&gt;&lt;/h2&gt;&lt;p&gt;ಲೂಯಿ ವಿಟಾನ್&zwnj;ನ ಈ ಐಕಾನಿಕ್ ಲೋಗೋವನ್ನು 1896 ರಲ್ಲಿ ಸ್ಥಾಪಕ ಲೂಯಿ ವಿಟಾನ್ ಅವರ ಮಗ ಜಾರ್ಜಸ್ ವಿಟಾನ್ ರಚಿಸಿದ್ದು ಎಂದು ಹೇಳುತ್ತಿದೆ. ಆ ಸಮಯದಲ್ಲಿ ನಡೆಯುತ್ತಿದ್ದ ನಕಲಿ ಉತ್ಪನ್ನಗಳ ಹಾವಳಿಯನ್ನು ತಡೆಯಲು ಮತ್ತು ತನ್ನ ಬ್ರ್ಯಾಂಡ್&zwnj;ಗೆ ವಿಶಿಷ್ಟ ಗುರುತು ನೀಡಲು ಅವರು ಈ ಮೊನೊಗ್ರಾಮ್ ವಿನ್ಯಾಸಗೊಳಿಸಿದ್ದರು. ಕಂಪನಿಯ ಪ್ರಕಾರ, ಈ ವಿನ್ಯಾಸವು 19ನೇ ಶತಮಾನದ 'ಆರ್ಟ್ ನೌವೋ' (Art Nouveau), ಜಪಾನಿನ ಅಲಂಕಾರಿಕ ಕಲೆ ಮತ್ತು ವಿಕ್ಟೋರಿಯನ್ ಯುಗದ ವಿನ್ಯಾಸಗಳಿಂದ ಪ್ರೇರಿತವಾಗಿದೆ.&lt;/p&gt;&lt;h2&gt;&lt;strong&gt;ಪ್ರೇರಣೆಯೋ ಅಥವಾ ಕಾಕತಾಳೀಯವೋ?&lt;/strong&gt;&lt;/h2&gt;&lt;p&gt;ಲೂಯಿ ವಿಟಾನ್ ಮೊನೊಗ್ರಾಮ್ ನೇರವಾಗಿ ಭಾರತೀಯ ದೇವಾಲಯದ ಕೆತ್ತನೆಗಳಿಂದಲೇ ಪ್ರೇರಿತವಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಪುರಾವೆಗಳಿಲ್ಲ. ಆದರೆ, ಶತಮಾನಗಳಿಂದ ಕಲೆ ಹೇಗೆ ವಿಕಸನಗೊಳ್ಳುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಭಾರತ, ಯುರೋಪ್ ಮತ್ತು ಏಷ್ಯಾದಾದ್ಯಂತ ಹೂವಿನ ವಿನ್ಯಾಸಗಳನ್ನು ಸೌಂದರ್ಯ, ಸಮತೋಲನ ಮತ್ತು ಆಧ್ಯಾತ್ಮಿಕತೆಯ ಸಂಕೇತವಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>hassan</category>
            <dc:creator>Santosh Naik</dc:creator>
            <atom:link href="https://kannada.asianetnews.com/life/louis-vuitton-logo-resemblance-belur-chennakeshava-temple-hoysala-carvings-viral-san/articleshow-zr6d4qu"/>
        </item>
    </channel>
</rss>
