<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 15 Jul 2026 22:12:00 +0530</lastBuildDate>
        <atom:link href="https://kannada.asianetnews.com/rss/hassan" rel="self" type="application/rss+xml"/>
        <item>
            <title><![CDATA[ಕಳಪೆ ಕಾಮಗಾರಿ, ಬರದ ನಡುವೆ ಎತ್ತಿನಹೊಳೆ ಪೈಪ್‌ಲೈನ್‌ ಒಡೆದು 8 ಕೋಟಿ ಲೀಟರ್‌ ನೀರು ಪೋಲು!]]></title>
            <link>https://kannada.asianetnews.com/gallery/hassan/yettinahole-pipeline-leakage-sakleshpur-8-crore-liters-water-wasted-vjnl-san-0ixkpc5</link>
            <guid isPermaLink="true">https://kannada.asianetnews.com/gallery/hassan/yettinahole-pipeline-leakage-sakleshpur-8-crore-liters-water-wasted-vjnl-san-0ixkpc5</guid>
            <pubDate>Tue, 14 Jul 2026 17:13:41 +0530</pubDate>
            <description><![CDATA[ಸಕಲೇಶಪುರ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್&zwnj;ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವೆಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxg6sy3f1x8d0e0etxaf2v19,imgname-yettinahole-pipeline-burst--5--1784029182063.jpg" type="image/jpeg" height="390" width="690"/>
            <content:encoded><![CDATA[ಸಕಲೇಶಪುರ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್&zwnj;ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವೆಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.&lt;img&gt;&lt;p&gt;ಬಯಲು ಸೀಮೆಯಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಣಭೂಮಿಗೆ ಕುಡಿಯುವ ನೀರು ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ &lsquo;ಎತ್ತಿನಹೊಳೆ ಯೋಜನೆ&rsquo;ಯ ಬೃಹತ್ ಪೈಪ್&zwnj;ಲೈನ್ ಸಕಲೇಶಪುರ ತಾಲೂಕಿನಲ್ಲಿ ಒಡೆದು ಭಾರಿ ಪ್ರಮಾಣದ ನೀರು ಪೋಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೀರು ಪೋಲಾದ ಹಿನ್ನೆಲೆಯಲ್ಲಿ ಸದ್ಯ ಯೋಜನೆ ಅಡಿ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.&lt;/p&gt;&lt;img&gt;&lt;p&gt;ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಬಳಿ ಭಾನುವಾರ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್&zwnj;ಲೈನ್ ಇದ್ದಕ್ಕಿದ್ದಂತೆ ಒಡೆದುಹೋಗಿದೆ. ಪೈಪ್&zwnj;ಲೈನ್ ನಿರ್ಮಾಣದ ವೇಳೆ ನಡೆದ ಕಳಪೆ ವೆಲ್ಡಿಂಗ್ ಹಾಗೂ ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಪೈಪ್ ಒಡೆದ ರಭಸಕ್ಕೆ ನೀರು ಸುಮಾರು 15 ಗಂಟೆಗಳಿಗೂ ಹೆಚ್ಚು ಕಾಲ ಬೃಹತ್ ಕಾರಂಜಿಯಂತೆ ಆಕಾಶಕ್ಕೆ ಚಿಮ್ಮಿದ್ದು, ಇಡೀ ಪ್ರದೇಶ ಜಲಾವೃತಗೊಂಡಿತ್ತು.&lt;/p&gt;&lt;img&gt;&lt;p&gt;ಹಲಸುಲಿಗೆ ಗ್ರಾಮದ ಸುತ್ತಮುತ್ತಲ ಕೃಷಿ ಭೂಮಿಗಳಿಗೆ ನಿರಂತರವಾಗಿ ಹರಿದ ನೀರು, ಅಲ್ಲಿನ ಬೆಳೆಗಳನ್ನು ಜಲಾವೃತಗೊಳಿಸಿದೆ. ಅತ್ಯಂತ ಒತ್ತಡದಲ್ಲಿ ಭಾರಿ ಪ್ರಮಾಣದ ನೀರು ಗದ್ದೆಗಳಿಗೆ ನುಗ್ಗಿದ್ದರಿಂದ ಮಣ್ಣಿನ ಸವಕಳಿಯಾಗಿದ್ದು, ರೈತರ ಬೆಳೆ ಹಾನಿಯಾಗಿದೆ. ಪೈಪ್&zwnj;ಲೈನ್ ಯೋಜನೆ ಜಾರಿಯಾದಾಗಿನಿಂದಲೂ ಸಕಲೇಶಪುರ ತಾಲೂಕಿನಲ್ಲಿ ನಿರಂತರವಾಗಿ ಇಂತಹ ಘಟನೆಗಳು ಜರುಗುತ್ತಿದ್ದು, ಇದು ಸ್ಥಳೀಯ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದೆ ಎಂದು ಪರಿಸರವಾದಿಗಳು ಹಾಗೂ ಗ್ರಾಮಸ್ಥರು ದೂರಿದ್ದಾರೆ.&lt;/p&gt;&lt;img&gt;&lt;p&gt;ಭಾನುವಾರ ಸಂಭವಿಸಿದ ಈ ಪೈಪ್&zwnj;ಲೈನ್ ಬಿರುಕಿನಿಂದಾಗಿ ಸುಮಾರು 8 ಕೋಟಿ ಲೀಟರ್&zwnj;ನಷ್ಟು ನೀರು ನದಿ ಅಥವಾ ಜನರಿಗೂ ಸೇರದೆ, ರೈತರ ಜಮೀನುಗಳ ಮೂಲಕ ಹರಿದು ಪೋಲಾಗಿದೆ. ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರದ ಜನತೆ ಒಂದು ಹನಿ ನೀರಿಗೂ ಪರದಾಡುತ್ತಿರುವ ಇಂತಹ ಪರಿಸ್ಥಿತಿಯಲ್ಲಿ, ಇಷ್ಟೊಂದು ಬೃಹತ್ ಪ್ರಮಾಣದ ನೀರು ಕಳಪೆ ಕಾಮಗಾರಿಯಿಂದಾಗಿ ವ್ಯರ್ಥವಾಗಿ ಹರಿದು ಹೋಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಪೈಪ್&zwnj;ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಎತ್ತಿನಹೊಳೆ ಯೋಜನೆ ಅಡಿ ನೀರು ಹರಿಸುವುದನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ (AEE) ಪ್ರಮೋದ್ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಪೈಪ್ ಒಡೆದ ಜಾಗದಲ್ಲಿ ನೀರು ಸಂಪೂರ್ಣವಾಗಿ ಸೋರಿಕೆಯಾಗುವುದನ್ನು ನಿಲ್ಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಈಗಾಗಲೇ ಪರಿಣಿತ ವೆಲ್ಡಿಂಗ್ ತಜ್ಞರ ತಂಡವನ್ನು ರವಾನಿಸಲಾಗಿದೆ. ಪೈಪ್&zwnj;ಲೈನ್&zwnj;ನಿಂದ ನೀರು ಸೋರಿಕೆಯಾಗುವುದು ಸಂಪೂರ್ಣವಾಗಿ ನಿಂತ ತಕ್ಷಣವೇ, ಅಂದರೆ ಬುಧವಾರದಿಂದ (ನಾಳೆ) ಸಮರೋಪಾದಿಯಲ್ಲಿ ದುರಸ್ತಿ ಕಾಮಗಾರಿ ಆರಂಭವಾಗಲಿದ್ದು, ಆದಷ್ಟು ಬೇಗ ನೀರು ಪೂರೈಕೆಯನ್ನು ಮರುಸ್ಥಾಪಿಸಲಾಗುವುದು ಎಂದು ಎಇಇ ಪ್ರಮೋದ್ ತಿಳಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/hassan/yettinahole-pipeline-leakage-sakleshpur-8-crore-liters-water-wasted-vjnl-san-0ixkpc5"/>
        </item>
        <item>
            <title><![CDATA[ಬೆಂಗಳೂರು-ಮಂಗಳೂರು ವಂದೇ ಭಾರತ್: ಜೂನ್ ಅಂತ್ಯಕ್ಕೆ ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ಪ್ರಾಯೋಗಿಕ ಸಂಚಾರ!]]></title>
            <link>https://kannada.asianetnews.com/gallery/state/indian-railway-update-bengaluru-mangaluru-vande-bharat-express-trail-run-june-subramanya-to-sakleshpur-2bkg4d4</link>
            <guid isPermaLink="true">https://kannada.asianetnews.com/gallery/state/indian-railway-update-bengaluru-mangaluru-vande-bharat-express-trail-run-june-subramanya-to-sakleshpur-2bkg4d4</guid>
            <pubDate>Thu, 18 Jun 2026 22:08:53 +0530</pubDate>
            <description><![CDATA[&lt;p&gt;ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಠಿಣ ಘಾಟಿ ವಿಭಾಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಜೂನ್ ಕೊನೆಯಲ್ಲಿ ನಡೆಯಲಿದೆ. ರೈಲಿಗೆ ವಿಶೇಷ 'ಸ್ವಯಂಚಾಲಿತ ತುರ್ತು ಬ್ರೇಕಿಂಗ್' (AEB) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvds6hpt0kd5zg32mxapfkrc,imgname-sakaleshpura-subrahmanya-road-vande-bharat-1781800322778.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಠಿಣ ಘಾಟಿ ವಿಭಾಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಜೂನ್ ಕೊನೆಯಲ್ಲಿ ನಡೆಯಲಿದೆ. ರೈಲಿಗೆ ವಿಶೇಷ 'ಸ್ವಯಂಚಾಲಿತ ತುರ್ತು ಬ್ರೇಕಿಂಗ್' (AEB) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ.&lt;/p&gt;&lt;img&gt;&lt;p&gt;ಕರ್ನಾಟಕದ ಕರಾವಳಿ ನಗರಗಳು ಮತ್ತು ರಾಜಧಾನಿ ಬೆಂಗಳೂರು ನಡುವೆ ವೇಗದ ರೈಲು ಸಂಚಾರದ ಕನಸು ನನಸಾಗುವತ್ತ ಮತ್ತೊಂದು ಪ್ರಮುಖ ಹೆಜ್ಜೆ ಇರಿಸಲಾಗಿದೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಉದ್ದದ ಕಠಿಣ ಘಾಟಿ ವಿಭಾಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ (Vande Bharat Express) ರೈಲಿನ ಪ್ರಾಯೋಗಿಕ ಸಂಚಾರ ಜೂನ್ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;&lt;strong&gt;ಘಾಟಿ ವಿಭಾಗಕ್ಕೆ ವಿಶೇಷ ಸುರಕ್ಷತಾ ವ್ಯವಸ್ಥೆ:&lt;/strong&gt;&lt;/p&gt;&lt;p&gt;ರೈಲ್ವೆ ಸಚಿವಾಲಯದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO) ಈ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಿದೆ. ಹಾಸನ-ಮಂಗಳೂರು ರೈಲ್ವೆ ಮಾರ್ಗದ ಈ ಘಾಟಿ ವಿಭಾಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ನಿರ್ದೇಶನದಂತೆ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 30 ಕಿ.ಮೀ ಗೆ ಸೀಮಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ವಂದೇ ಭಾರತ್ ರೈಲಿಗೆ ವಿಶೇಷವಾದ 'ಸ್ವಯಂಚಾಲಿತ ತುರ್ತು ಬ್ರೇಕಿಂಗ್' (AEB - Automatic Emergency Braking) ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯವಾಗಿದೆ.&lt;/p&gt;&lt;img&gt;&lt;p&gt;ರೈಲು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಿದರೆ, ಈ AEB ವ್ಯವಸ್ಥೆಯು ತಾನಾಗಿಯೇ ವೇಗವನ್ನು ಕಡಿಮೆ ಮಾಡುತ್ತದೆ. ಈ ತಂತ್ರಜ್ಞಾನವನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ರೈಲಿನ ಬೋಗಿಗಳಿಗೆ ಅಳವಡಿಸಲಾಗುತ್ತಿದ್ದು, ಮುಂದಿನ ವಾರ ರೈಲು ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಾಯೋಗಿಕ ಪರೀಕ್ಷೆಗಳ ವಿವರ:&lt;/strong&gt;&lt;/p&gt;&lt;p&gt;ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯವಸ್ಥಾಪಕ (DRM) ಮುದಿತ್ ಮಿತ್ತಲ್ ಅವರು ಮಾಹಿತಿ ನೀಡಿ, 'ಘಾಟಿ ವಿಭಾಗದಲ್ಲಿ ಈಗಾಗಲೇ ಐಸಿಎಫ್ (ICF) ಮತ್ತು ಎಲ್ಎಚ್&zwnj;ಬಿ (LHB) ಬೋಗಿಗಳ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ. ಈಗ ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆ ಬಾಕಿ ಇದೆ. ಇದಕ್ಕಾಗಿ ಎಇಬಿ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಸಿದ್ಧವಾಗುತ್ತಿದೆ' ಎಂದು ತಿಳಿಸಿದ್ದಾರೆ. ಜೂನ್ ಎರಡನೇ ವಾರದಿಂದ ಆರಂಭವಾದ ಈ ಪರೀಕ್ಷೆಗಳಲ್ಲಿ 5 ದಿನಗಳ ಕಾಲ 5 ಟ್ರಿಪ್&zwnj;ಗಳನ್ನು ನಡೆಸಲಾಗಿದ್ದು, ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು-ಮಂಗಳೂರು ರೈಲು ಸಂಚಾರಕ್ಕೆ ಮುಕ್ತಿ:&lt;/p&gt;&lt;p&gt;ಈ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ, ಆರ್&zwnj;ಡಿಎಸ್&zwnj;ಒ (RDSO) ರೈಲ್ವೆ ಸಚಿವಾಲಯಕ್ಕೆ ಹಸಿರು ನಿಶಾನೆ ತೋರಿಸಿದರೆ, ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಓಡಾಟಕ್ಕೆ ಇದ್ದ ಅತಿದೊಡ್ಡ ತಾಂತ್ರಿಕ ಅಡಚಣೆ ದೂರವಾಗಲಿದೆ. ಇದು ಕರಾವಳಿ ಕರ್ನಾಟಕದ ಜನರಿಗೆ ರಾಜಧಾನಿಗೆ ಹೋಗಲು ಅತ್ಯಂತ ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸಲಿದೆ.&lt;/p&gt;&lt;img&gt;&lt;p&gt;ಈ ಮಾರ್ಗದ ವಿದ್ಯುದೀಕರಣ ಕಾರ್ಯವು ಡಿಸೆಂಬರ್ 2025 ರಲ್ಲಿ ಪೂರ್ಣಗೊಂಡಿತ್ತು. ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆಯವರೆಗಿನ 400 ಕಿ.ಮೀ ರೈಲ್ವೆ ಮಾರ್ಗದ ವಿದ್ಯುದೀಕರಣವನ್ನು ರೈಟ್ಸ್ (RITES) ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸಿದೆ. ಪ್ರಾಯೋಗಿಕ ಸಂಚಾರದ ನಂತರ ಕರಾವಳಿ ಭಾಗಕ್ಕೆ ಶೀಘ್ರದಲ್ಲೇ ವಂದೇ ಭಾರತ್ ಭಾಗ್ಯ ಸಿಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railway-update-bengaluru-mangaluru-vande-bharat-express-trail-run-june-subramanya-to-sakleshpur-2bkg4d4"/>
        </item>
        <item>
            <title><![CDATA[ಪ್ರಯಾಣಿಕರೇ ಗಮನಿಸಿ; ಜೂನ್ 18, 23 ರಂದು ಮೈಸೂರು-ಅರಸೀಕೆರೆ-ತಾಳಗುಪ್ಪ ಮಾರ್ಗದ ಪ್ರಮುಖ ರೈಲುಗಳ ಸಂಚಾರ ರದ್ದು!]]></title>
            <link>https://kannada.asianetnews.com/gallery/karnataka-districts/mysore-arasikere-talaguppa-train-passengers-alert-major-trains-cancelled-on-june-18-23-2bm8mub</link>
            <guid isPermaLink="true">https://kannada.asianetnews.com/gallery/karnataka-districts/mysore-arasikere-talaguppa-train-passengers-alert-major-trains-cancelled-on-june-18-23-2bm8mub</guid>
            <pubDate>Mon, 15 Jun 2026 20:53:50 +0530</pubDate>
            <description><![CDATA[&lt;p&gt;ಹೊಳೆನರಸೀಪುರ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ಅತ್ಯಗತ್ಯವಾಗಿ ನಡೆಯಬೇಕಾಗಿರುವ ರಸ್ತೆ ಕೆಳಸೇತುವೆ (ಆರ್&zwnj;ಯುಬಿ) ಕಾಮಗಾರಿಯ ಹಿನ್ನೆಲೆಯಲ್ಲಿ ಜೂನ್ 18 ಮತ್ತು 23 ರಂದು ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksphq7ck9atjhr7p4x09t11k,imgname-shivamogga-railway-station-1779946986898.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೊಳೆನರಸೀಪುರ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ಅತ್ಯಗತ್ಯವಾಗಿ ನಡೆಯಬೇಕಾಗಿರುವ ರಸ್ತೆ ಕೆಳಸೇತುವೆ (ಆರ್&zwnj;ಯುಬಿ) ಕಾಮಗಾರಿಯ ಹಿನ್ನೆಲೆಯಲ್ಲಿ ಜೂನ್ 18 ಮತ್ತು 23 ರಂದು ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.&lt;/p&gt;&lt;img&gt;&lt;p&gt;&lt;strong&gt;ಭಾಗಶಃ ರದ್ದು ಹಾಗೂ ನಿಯಂತ್ರಣ&lt;/strong&gt;ಹೊಳೆನರಸೀಪುರ ಮತ್ತು ಮಾವಿನಕೆರೆ ರೈಲ್ವೆ ನಿಲ್ದಾಣಗಳ ನಡುವೆ ರಸ್ತೆ ಕೆಳಸೇತುವೆ (ಆರ್&zwnj;ಯುಬಿ) ಕಾಮಗಾರಿ ನಡೆಯುತ್ತಿರುವುದರಿಂದ ಜೂನ್ 18 ಮತ್ತು 23 ರಂದು ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ಈ ದಿನಗಳಲ್ಲಿ ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದರೆ, ಇನ್ನು ಕೆಲವು ರೈಲುಗಳನ್ನು ಭಾಗಶಃ ರದ್ದು ಹಾಗೂ ನಿಯಂತ್ರಣ (ವಿಳಂಬ) ಮಾಡಲಾಗುತ್ತಿದೆ. ಆ ವಿವರಗಳು ಹೀಗಿವೆ..&lt;/p&gt;&lt;img&gt;&lt;p&gt;&lt;strong&gt;ಸಂಪೂರ್ಣವಾಗಿ ರದ್ದಾಗಿರುವ ರೈಲುಗಳು (ಜೂನ್ 18 ಮತ್ತು 23)&lt;/strong&gt;ಕೆಳಕಂಡ ದೈನಂದಿನ ರೈಲುಗಳ ಸಂಚಾರವನ್ನು ಈ ಎರಡು ದಿನಗಳ ಕಾಲ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆಅರಸೀಕೆರೆ&ndash;ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ: 56267)ಮೈಸೂರು&ndash;ತಾಳಗುಪ್ಪ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16206)ತಾಳಗುಪ್ಪ&ndash;ಮೈಸೂರು ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16205)&lt;/p&gt;&lt;img&gt;&lt;p&gt;&lt;strong&gt;ಭಾಗಶಃ ರದ್ದಾಗಿರುವ ರೈಲುಗಳು&lt;/strong&gt;ಮೈಸೂರು&ndash;ಶಿವಮೊಗ್ಗ ಟೌನ್ ದೈನಂದಿನ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16225): ಜೂನ್ 18 ಮತ್ತು 23 ರಂದು ಈ ರೈಲನ್ನು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಹೀಗಾಗಿ, ಈ ರೈಲು ಮೈಸೂರಿನಿಂದ ಹೊರಡುವ ಬದಲು ಅರಸೀಕೆರೆಯಿಂದಲೇ ತನ್ನ ನಿಗದಿತ ಸಮಯಕ್ಕೆ ಶಿವಮೊಗ್ಗದ ಕಡೆಗೆ ಪ್ರಯಾಣ ಬೆಳೆಸಲಿದೆ.&lt;/p&gt;&lt;img&gt;&lt;p&gt;&lt;strong&gt;ತಡವಾಗಿ ಓಡಲಿರುವ ರೈಲುಗಳು (ನಿಯಂತ್ರಣ)&lt;/strong&gt;ಮೈಸೂರು&ndash;ಯಶವಂತಪುರ ದೈನಂದಿನ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16208): ಜೂನ್ 18 ಮತ್ತು 23 ರಂದು ಹೊರಡುವ ಈ ರೈಲಿನ ಸಂಚಾರವನ್ನು ಮಾರ್ಗಮಧ್ಯೆ ನಿಯಂತ್ರಿಸಲಾಗುತ್ತದೆ. ಜೂನ್ 18 ರಂದು 30 ನಿಮಿಷ ಹಾಗೂ ಜೂನ್ 23 ರಂದು 120 ನಿಮಿಷ (2 ಗಂಟೆ) ಕಾಲ ಈ ರೈಲು ತಡವಾಗಿ ಸಂಚರಿಸಲಿದೆ.&lt;/p&gt;]]></content:encoded>
            <category>hassan</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/karnataka-districts/mysore-arasikere-talaguppa-train-passengers-alert-major-trains-cancelled-on-june-18-23-2bm8mub"/>
        </item>
        <item>
            <title><![CDATA[UT Khader: ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೇಲಿ ಮುಂಜಾನೆ 3ರವರೆಗೆ ಸಭೆ ನಡೆಸಿ ಅಚ್ಚರಿ ಮೂಡಿಸಿದ ಖಾದರ್!]]></title>
            <link>https://kannada.asianetnews.com/karnataka-districts/health-minister-ut-khader-visits-crawford-hospital-in-sakleshpur-review-meeting-till-3-am-rav/articleshow-2g62l4t</link>
            <guid isPermaLink="true">https://kannada.asianetnews.com/karnataka-districts/health-minister-ut-khader-visits-crawford-hospital-in-sakleshpur-review-meeting-till-3-am-rav/articleshow-2g62l4t</guid>
            <pubDate>Sun, 14 Jun 2026 05:22:37 +0530</pubDate>
            <description><![CDATA[&lt;p&gt;ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್&zwnj;(UT Khader) ಅವರು ಹಾಸನ(Hassan)ದ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆ(Crawford Hospital in Sakleshpur)ಯಲ್ಲಿ ಗುರುವಾರ ರಾತ್ರಿ 11 ಗಂಟೆಯಿಂದ ಶುಕ್ರವಾರ ಮುಂಜಾನೆ 3 ಗಂಟೆಯ ತನಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಚ್ಚರಿ ಮೂಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv1nwzc8x4qsskcw1vfapf4w,imgname-----------------------2026-06-14t051305.293-1781394210184.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಕಲೇಶಪುರ (ಜೂ.14): &lt;/strong&gt;ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್&zwnj;(UT Khader) ಅವರು ರಾತ್ರಿ 11 ಗಂಟೆಗೆ ಪ್ರಗತಿ ಪರಿಶೀಲನಾ ಸಭೆ ಆರಂಭಿಸಿ ಮುಂಜಾನೆ 3 ಗಂಟೆ ವರೆಗೂ ಸಭೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.&lt;/p&gt;&lt;h2&gt;ಕ್ರಾಫರ್ಡ್ ಆಸ್ಪತ್ರೆ ಪ್ರಗತಿ ಪರಿಶೀಲನಾ ಸಭೆ&lt;/h2&gt;&lt;p&gt;ಹಾಸನ(Hassan)ದ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆ(Crawford Hospital in Sakleshpur)ಯಲ್ಲಿ ಗುರುವಾರ ರಾತ್ರಿ 11 ಗಂಟೆಯಿಂದ ಶುಕ್ರವಾರ ಮುಂಜಾನೆ 3 ಗಂಟೆಯ ತನಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಶಾಸಕ ಸಿಮೆಂಟ್&zwnj; ಮಂಜು, ಸಂಸದ ಶ್ರೇಯಸ್&zwnj; ಪಟೇಲ್&zwnj; ಭಾಗವಹಿಸಿದ್ದರು. ಜೂ.5ರಂದು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ರಾತ್ರಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಿಢೀರ್&zwnj; ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ತಡರಾತ್ರಿ ಆಸ್ಪತ್ರೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಚ್ಚರಿ ಮೂಡಿದ್ದಾರೆ.&lt;/p&gt;&lt;h3&gt;ಮಧ್ಯರಾತ್ರಿವರೆಗೆ ಪ್ರಗತಿ ಪರಿಶೀಲನಾ ಸಭೆ&lt;/h3&gt;&lt;p&gt;ಸ್ಥಳೀಯ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಮಧ್ಯರಾತ್ರಿವರೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮಂತ್ರಿ ಯಾರಾದರೂ ಇದ್ದರೆ ಅದು ಯು.ಟಿ. ಖಾದರ್ ಮಾತ್ರ. ವಿಧಾನಸಭಾ ಅಧ್ಯಕ್ಷರಾಗಿದ್ದಾಗ ಅವರ ಕಾರ್ಯವೈಖರಿಯನ್ನು ನೋಡಿದ್ದೇನೆ. ಸದನದಲ್ಲಿ ಮಾತನಾಡಲು ಅವಕಾಶ ಸಿಗುವುದು ಒಂದು ಕೋಟಿಗೂ ಅಧಿಕ ಅನುದಾನ ದೊರೆತಷ್ಟು ಖುಷಿ ನೀಡುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಶಾಸಕರಿಗೂ ಸಮಾನ ಅವಕಾಶ ಕಲ್ಪಿಸಿದ ಮೊದಲ ಸಭಾಧ್ಯಕ್ಷರಲ್ಲಿ ಇವರು ಎಂದರೆ ತಪ್ಪಾಗದು ಎಂದು ಹೇಳಿದರು.&lt;/p&gt;&lt;h3&gt;ಸರ್ಕಾರಿ ಆಸ್ಪತ್ರೆ ಎಂದರೆ ಕುಟುಂಬದ ಆಸ್ಪತ್ರೆ: ಖಾದರ್&lt;/h3&gt;&lt;p&gt;ಇನ್ನು ಸಭೆಯಲ್ಲಿ ಮಾತನಾಡಿದ ಯು.ಟಿ.ಖಾದರ್&zwnj;, ಸರ್ಕಾರಿ ಆಸ್ಪತ್ರೆ ಎಂದರೆ ಅದು ಕುಟುಂಬದ ಆಸ್ಪತ್ರೆಯೆಂದು ಭಾವಿಸಬೇಕು. ರೋಗಿಗಳು ಬಂದ ವೇಳೆ ಅವರಿಗೆ ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು.&lt;/p&gt;&lt;p&gt;&lt;strong&gt;ಐದು ವರ್ಷ ಸೇವೆ ಸಲ್ಲಿಸಿದ ವೈದ್ಯರಿಗೆ ಶುಭಸುದ್ದಿ&lt;/strong&gt;&lt;/p&gt;&lt;p&gt;ಇನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಐದು ವರ್ಷ ಪೂರ್ಣಗೊಳಿಸಿ ಸೇವೆ ಸಲ್ಲಿಸಿದ ಹೊರಗುತ್ತಿಗೆ ವೈದ್ಯರನ್ನು ಶೀಘ್ರದಲ್ಲೇ ನೇಮಕಾತಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ ಸಚಿವರು, ಆಸ್ಪತ್ರೆಯಲ್ಲಿನ ಕುಂದುಕೊರತೆಗಳ ಬಗ್ಗೆ ರಾಜ್ಯಾದ್ಯಂತ ನೂತನ ಸಹಾಯವಾಣಿಯನ್ನು ಸ್ಥಾಪಿಸುವ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಇದೇ ವೇಳೆ ಹೇಳಿದರು.&lt;/p&gt;&lt;p&gt;ಕಿರಿಯ ವೈದ್ಯರು ಹಾಗೂ ಹೊಸದಾಗಿ ಬರುವ ವೈದ್ಯರಲ್ಲಿ ಆಸ್ಪತ್ರೆಯ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿಸಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು, ಅವರನ್ನು ಮನವೊಲಿಸಬೇಕು ಎಂದರು. ಮಾನಸಿಕವಾಗಿ ಸದೃಢವಾಗಿರುವ ನಿವೃತ್ತ ವೈದ್ಯರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು ಸರ್ಕಾರದೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.&lt;/p&gt;&lt;p&gt;ಸಂಘ-ಸಂಸ್ಥೆಯವರು ಆಸ್ಪತ್ರೆಯನ್ನು ತಮ್ಮ ಆಸ್ಪತ್ರೆ ಎಂಬ ಭಾವನೆಯೊಂದಿಗೆ ನೋಡಬೇಕು. ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಮಾನವೀಯ ದೃಷ್ಟಿಕೋನದಿಂದ ವರ್ತಿಸಬೇಕು ಹಾಗೂ ಅವರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಸಹಕರಿಸಬೇಕು ಎಂದರು.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/health-minister-ut-khader-visits-crawford-hospital-in-sakleshpur-review-meeting-till-3-am-rav/articleshow-2g62l4t"/>
        </item>
        <item>
            <title><![CDATA[ಅಂದು ಸಕಲೇಶಪುರದ ರಸ್ತೆಯಲ್ಲಿ ನಡೆದಿದ್ದೇನು? ಮಧ್ಯರಾತ್ರಿ ಬೈಕ್ ರೈಡರ್ಸ್‌ಗೆ ಸಿಕ್ಕ ಆ ತಲೆ ಇಲ್ಲದ ನೆರಳಿನ ರಹಸ್ಯವಿದು]]></title>
            <link>https://kannada.asianetnews.com/gallery/hassan/sakleshpur-ghost-photo-bike-ride-viral-story-kannada-suh-3eq36au</link>
            <guid isPermaLink="true">https://kannada.asianetnews.com/gallery/hassan/sakleshpur-ghost-photo-bike-ride-viral-story-kannada-suh-3eq36au</guid>
            <pubDate>Wed, 01 Jul 2026 13:17:47 +0530</pubDate>
            <description><![CDATA[&lt;p&gt;Sakleshpur ghost photo ಸಕಲೇಶಪುರ ಕಾಡಿನಲ್ಲಿ ಮಧ್ಯರಾತ್ರಿ ರೈಡ್&hellip; ಒಂದು ಫೋಟೋ ಇಬ್ಬರು ಸ್ನೇಹಿತರ ಬದುಕನ್ನೇ ಬದಲಿಸಿತಂತೆ, ಒಂದು ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwe6t467ndbmd14pv8gcmf1t,imgname-sakleshpur-ghost-story-kannada-1782888337607.jpeg" type="image/jpeg" height="390" width="690"/>
            <content:encoded><![CDATA[&lt;p&gt;Sakleshpur ghost photo ಸಕಲೇಶಪುರ ಕಾಡಿನಲ್ಲಿ ಮಧ್ಯರಾತ್ರಿ ರೈಡ್&hellip; ಒಂದು ಫೋಟೋ ಇಬ್ಬರು ಸ್ನೇಹಿತರ ಬದುಕನ್ನೇ ಬದಲಿಸಿತಂತೆ, ಒಂದು ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;img&gt;&lt;p&gt;ಕರ್ನಾಟಕದ ಸಕಲೇಶಪುರ ಸಮೀಪದ ಕಾಡು ರಸ್ತೆಯಲ್ಲಿ ನಡೆದಿತ್ತೆಂದು ಹೇಳಲಾಗುತ್ತಿರುವ ಒಂದು ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮಧ್ಯರಾತ್ರಿ ಬೈಕ್ ರೈಡ್&zwnj;ಗೆ ತೆರಳಿದ್ದ ಇಬ್ಬರು ಸ್ನೇಹಿತರಿಗೆ ಸಂಭವಿಸಿದ ಅನುಭವಗಳು ಇಂದಿಗೂ ರಹಸ್ಯವಾಗಿಯೇ ಉಳಿದಿವೆ ಎನ್ನಲಾಗಿದೆ.&lt;/p&gt;&lt;p&gt;ಕುಣಿಗಲ್&zwnj;ನ ವೆಂಕಿ ಮತ್ತು ರಾಜು ಬೈಕ್&zwnj;ನಲ್ಲಿ ಸಕಲೇಶಪುರ ಪ್ರವಾಸಕ್ಕೆ ತೆರಳಿದ್ದರು. ಎರಡು ದಿನಗಳ ಪ್ರವಾಸದ ಬಳಿಕ ಜನವರಿ 8ರ ಮಧ್ಯರಾತ್ರಿ ಕುಣಿಗಲ್&zwnj;ಗೆ ಮರಳುವ ವೇಳೆ ದಟ್ಟ ಮಂಜಿನಿಂದ ತಪ್ಪು ದಾರಿ ಹಿಡಿದಿದ್ದಾರೆ. ಮಾಗಡಿ ಕಡೆ ಸಾಗುತ್ತಿದ್ದ ನಿರ್ಜನ ಕಾಡು ರಸ್ತೆಯಲ್ಲಿ ಅವರಿಗೆ ವಿಚಿತ್ರ ಅನುಭವಗಳು ಆರಂಭವಾಗಿವೆ ಎಂದು ಕಥೆ ಹೇಳುತ್ತದೆ.&lt;/p&gt;&lt;img&gt;&lt;p&gt;ಮೊದಲು ರಾಜುಗೆ ಕಾಡಿನೊಳಗಿಂದ ಮರ ಕಡಿಯುವ ಶಬ್ದ ಕೇಳಿಸಿದೆ. ವೆಂಕಿ ಅದನ್ನು ನಿರ್ಲಕ್ಷಿಸಿದರೂ, ಸ್ವಲ್ಪ ಹೊತ್ತಿನ ಬಳಿಕ ಇಬ್ಬರಿಗೂ ಅದೇ ಶಬ್ದ ಸ್ಪಷ್ಟವಾಗಿ ಕೇಳಿದೆಯಂತೆ. ಕೆಲವೇ ನಿಮಿಷಗಳಲ್ಲಿ ಫೋಟೋ ತೆಗೆಯೋಣ ಎಂದು ನಿಂತ ಅವರು, ಬಳಿಕ ಗ್ಯಾಲರಿಯಲ್ಲಿ ಫೋಟೋ ನೋಡಿದಾಗ ವೆಂಕಿಯ ತಲೆಯ ಮೇಲೊಂದು ತಲೆ ಇಲ್ಲದ ನೆರಳು ಕಾಣಿಸಿಕೊಂಡಿತ್ತೆಂದು ಹೇಳಲಾಗಿದೆ.&lt;/p&gt;&lt;p&gt;ಆ ಫೋಟೋ ನೋಡಿ ಬೆಚ್ಚಿಬಿದ್ದ ಇಬ್ಬರೂ ಅಲ್ಲಿಂದ ಹೊರಡಲು ಮುಂದಾದರು. ಆದರೆ ರಾಜುವಿನ ವರ್ತನೆ ಏಕಾಏಕಿ ಬದಲಾಗತೊಡಗಿತು. &quot;ಇಲ್ಲೇ ನನಗೆ ಪರಿಚಯದವರು ಇದ್ದಾರೆ... ಬೈಕ್ ನಿಲ್ಲಿಸು&quot; ಎಂದು ಆತ ಪದೇ ಪದೇ ಹೇಳುತ್ತಿದ್ದನೆಂದು ವೆಂಕಿ ವಿವರಿಸಿದ್ದಾನೆ.&lt;/p&gt;&lt;img&gt;&lt;p&gt;ಸ್ವಲ್ಪ ದೂರದಲ್ಲಿ ಮಂಜಿನ ನಡುವೆ ಇಬ್ಬರು ಮಹಿಳೆಯರ ಆಕೃತಿಗಳು ಕಾಣಿಸಿಕೊಂಡವು. ಅವರ ಮುಖಗಳು ಸ್ಪಷ್ಟವಾಗಿ ಕಾಣಿಸದಿದ್ದರೂ, ರಾಜು ಅವರನ್ನು ಪರಿಚಯದವರು ಎಂದು ಹೇಳುತ್ತಾ ಅವರ ಬಳಿಗೆ ಹೋಗಲು ಒತ್ತಾಯಿಸಿದ್ದಾನೆ ಎನ್ನಲಾಗಿದೆ.&lt;/p&gt;&lt;p&gt;ವೆಂಕಿ ಬೈಕ್ ನಿಲ್ಲಿಸದೆ ಮುಂದುವರಿದಾಗ, ರಾಜು ಕೋಪಗೊಂಡು ಅವನ ಕುತ್ತಿಗೆಯನ್ನು ಹಿಡಿದಿದ್ದಾನೆ. ಇದರಿಂದ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ವೆಂಕಿ ಸಹಾಯಕ್ಕಾಗಿ ಓಡುತ್ತಿದ್ದಾಗ, ಎದುರಿನಿಂದ ಬಂದ ಕೆಲ ಸ್ಥಳೀಯರು ರಾಜುವನ್ನು ರಕ್ಷಿಸಿದ್ದಾರೆ.&lt;/p&gt;&lt;img&gt;&lt;p&gt;ಮರುದಿನ ಬೆಳಗ್ಗೆ ಇಬ್ಬರೂ ಸುರಕ್ಷಿತವಾಗಿ ಕುಣಿಗಲ್ ತಲುಪಿದರೂ, ರಾಜುವಿನ ಆರೋಗ್ಯ ಮತ್ತು ವರ್ತನೆ ದಿನದಿಂದ ದಿನಕ್ಕೆ ಬದಲಾಗತೊಡಗಿದೆಯಂತೆ. ಬಳಿಕ ಕುಟುಂಬದವರು ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ ನಂತರ ಮಾತ್ರ ಆತ ಸಹಜ ಸ್ಥಿತಿಗೆ ಬಂದನೆಂದು ಕಥೆಯಲ್ಲಿ ಹೇಳಲಾಗಿದೆ.&lt;/p&gt;&lt;p&gt;ನಂತರ ವೆಂಕಿ ಮತ್ತೆ ಅದೇ ಪ್ರದೇಶಕ್ಕೆ ತೆರಳಿ ಸ್ಥಳೀಯರೊಂದಿಗೆ ಮಾತನಾಡಿದಾಗ, ಆ ಕಾಡಿನಲ್ಲಿ ಹಲವು ವರ್ಷಗಳಿಂದ ವಿಚಿತ್ರ ಘಟನೆಗಳು ನಡೆದಿವೆ ಎಂಬ ಮಾತುಗಳನ್ನು ಕೇಳಿದ್ದಾಗಿ ಹೇಳಿದ್ದಾನೆ.&lt;/p&gt;&lt;p&gt;ಗಮನಿಸಿ: ಈ ಕಥೆ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗಿರುವ ಮಾಹಿತಿಯಾಗಿದ್ದು, ಈ ಸುದ್ದಿಗೆ ಏಷ್ಯಾನೆಟ್&zwnj; ನ್ಯೂಸ್&zwnj; ಕನ್ನಡಕ್ಕೆ ಯಾವುದೇ ಸಂಬಂಧವಿಲ್ಲ ಇದಕ್ಕೆ ವೈಜ್ಞಾನಿಕ ಅಥವಾ ಅಧಿಕೃತ ದೃಢೀಕರಣ ಲಭ್ಯವಿಲ್ಲ. ಇದನ್ನು ಮನರಂಜನೆ ಅಥವಾ ಜನಪ್ರಿಯ ನಂಬಿಕೆಗಳ ಕಥೆಯಾಗಿ ಮಾತ್ರ ಪರಿಗಣಿಸಬೇಕು.&lt;/p&gt;]]></content:encoded>
            <category>hassan</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/hassan/sakleshpur-ghost-photo-bike-ride-viral-story-kannada-suh-3eq36au"/>
        </item>
        <item>
            <title><![CDATA[ಮಳೆಗಾಲದಲ್ಲಿ ಕೆಲಸ ಮಾಡೋ ಚೆಸ್ಕಾಂ ಸಿಬ್ಬಂದಿಗೆ ಕಾಡಾನೆಗಳಿಂದ ಜೀವಭಯ! ಈ ದೃಶ್ಯ ನೋಡಿದ್ರೆ ಜೀವ ಬಾಯಿಗೆ ಬರುತ್ತೆ!]]></title>
            <link>https://kannada.asianetnews.com/karnataka-districts/wild-elephant-attempts-to-attack-hassan-cescom-occupants-narrowly-escape/articleshow-7b168i6</link>
            <guid isPermaLink="true">https://kannada.asianetnews.com/karnataka-districts/wild-elephant-attempts-to-attack-hassan-cescom-occupants-narrowly-escape/articleshow-7b168i6</guid>
            <pubDate>Thu, 09 Jul 2026 11:46:30 +0530</pubDate>
            <description><![CDATA[&lt;p&gt;ಸಕಲೇಶಪುರ ತಾಲೂಕಿನ ಲಕ್ಕುಂದ ಗ್ರಾಮದ ಬಳಿ ಲೈನ್ ದುರಸ್ತಿ ಮುಗಿಸಿ ವಾಪಸಾಗುತ್ತಿದ್ದ ಚೆಸ್ಕಾಂ ಸಿಬ್ಬಂದಿಯ ವಾಹನದ ಮೇಲೆ ಒಂಟಿ ಸಲಗವೊಂದು ದಾಳಿಗೆ ಯತ್ನಿಸಿದೆ. ತಡರಾತ್ರಿ ನಡೆದ ಈ ಘಟನೆ ವಾಹನದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಬ್ಬಂದಿ ಅದೃಷ್ಟವಶಾತ್ ಪಾರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2r6qyfemted9n60t9hdk9w,imgname-----------------------2026-07-09t114355.769-1783577665487.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.9):&lt;/strong&gt; ಲೈನ್ ದುರಸ್ತಿ ಮುಗಿಸಿ ರಾತ್ರಿ ವಾಪಸ್ ಆಗುತ್ತಿದ್ದ ಚೆಸ್ಕಾಂ ಸಿಬ್ಬಂದಿ ಮೇಲೆ ರಸ್ತೆಗೆ ಅಡ್ಡಲಾಗಿ ನಿಂತ ಒಂಟಿ ಸಲಗ ಏಕಾಏಕಿ ದಾಳಿ ಮಾಡಲು ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಲಕ್ಕುಂದ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಕಾಡಾನೆ ದಾಳಿಯಿಂದ ಸಿಬ್ಬಂದಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ.&lt;/p&gt;&lt;h2&gt;ಒಂಟಿ ಸಲಗ ಏಕಾಏಕಿ ದಾಳಿ, ಡ್ಯಾಶ್&zwnj; ಕ್ಯಾಮ್&zwnj;ನಲ್ಲಿ ದೃಶ್ಯ ಸೆರೆ&lt;/h2&gt;&lt;p&gt;ನಿನ್ನೆ ತಡರಾತ್ರಿ ಸುಮಾರು 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಯಸಳೂರು ವಲಯ ವ್ಯಾಪ್ತಿಯ ಲಕ್ಕುಂದ ಗ್ರಾಮದ ಬಳಿ ಸಿಬ್ಬಂದಿ ವಾಹನದಲ್ಲಿ ವಾಪಸ್ ಆಗುತ್ತಿದ್ದರು. ಶಾಖಾಧಿಕಾರಿ ಮಂಜುನಾಥ್ ಹಾಗೂ ಪವರ್ ಮ್ಯಾನ್ ವಾಹನದಲ್ಲಿದ್ದರು. ವೇಗವಾಗಿ ಸಾಗುತ್ತಿದ್ದ ವೇಳೆ ಕಾಡಾನೆ ರಸ್ತೆಗೆ ನಿಂತಿರುವುದು ಕಾಣುತ್ತಿದ್ದಂತೆ ನಿಧಾನಗೊಳಿಸಿದ್ದಾರೆ. ಆದರೆ ರಸ್ತೆ ದಾಟುವ ಬದಲು ಒಂಟಿ ಸಲ ನೇರ ವಾಹನದತ್ತ ಬಂದು ದಾಳಿ ನಡೆಸಲು ಯತ್ನಿಸಿರುವುದು ವಾಹನದ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದೆ.&lt;/p&gt;&lt;h3&gt;ಮಳೆಗಾಲದಲ್ಲಿ ಕೆಲಸ ಮಾಡೋ&zwnj; ಚೆಸ್ಕಾಂ ಸಿಬ್ಬಂದಿಗೆ ಕಾಡಾನೆಯದ್ದೇ ಭಯ&lt;/h3&gt;&lt;p&gt;ಮಳೆಗಾಲದಲ್ಲಿ ಪದೇಪದೆ ವಿದ್ಯುತ್ ಸಮಸ್ಯೆಯಾಗ್ತಿದೆ. ನಿನ್ನೆಯೂ ವಿದ್ಯುತ್ ಸಮಸ್ಯೆಗೆ ಕರೆ ಬಂದಿದ್ದರಿಂದ ಸರಿಪಡಿಸಲು ವಾಹನದಲ್ಲಿ ತೆರಳಿದ್ದ ಸಿಬ್ಬಂದಿ ಆದರೆ ಬರುವುದು ತಡರಾತ್ರಿಯಾಗಿದೆ. ಮಲೆನಾಡಿನಲ್ಲಿ ಚೆಸ್ಕಾಂ ಸಿಬ್ಬಂದಿಗೆ ಇಂಥ ಅನುಭವಗಳು ಎದುರಾಗುತ್ತಿವೆ. ವನ್ಯಜೀವಿಗಳ ದಾಳಿಗೆ ಭಯದಲ್ಲೇ ಸಂಚರಿಸುವಂತಾಗಿದೆ. ಇತ್ಚೀಚೆಗೆ ಕಾಡಾನೆಗಳ ಹೆಚ್ಚಿರುವುದರಿಂದ ರಾತ್ರಿ ವೇಳೆ ವಿದ್ಯುತ್ ಸಮಸ್ಯೆ ಸರಿಪಡಿಸಲು ತೆರಳುವ ಸಿಬ್ಬಂದಿ ಜೀವಭಯದ ಆತಂಕ ಎದುರಾಗಿದೆ. ಹೀಗಾಗಿ ರಾತ್ರಿ ಕರ್ತವ್ಯಕ್ಕೆ ತೆರಳುವು ಸಿಬ್ಬಂದಿಗೆ ಅಗತ್ಯ ಭದ್ರತೆ ಒದಗಿಸಲು, ಕಾಡಾನೆ ಓಡಾಡುವ ಪ್ರದೇಶದಲ್ಲಿ ಸುರಕ್ಷತಾ ಕ್ರಮ ಬಲಪಡಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/wild-elephant-attempts-to-attack-hassan-cescom-occupants-narrowly-escape/articleshow-7b168i6"/>
        </item>
        <item>
            <title><![CDATA[Channakeshava temple donation theft: ಹಾಸನದ ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವ ದೇಗುಲದಲ್ಲೂ ಲಕ್ಷ ಲಕ್ಷ  ಹುಂಡಿ ಹಣ ಕಳವು!]]></title>
            <link>https://kannada.asianetnews.com/gallery/karnataka-districts/hassan-world-famous-beluru-channakeshava-temple-donation-theft-videographer-arrest-7em3gzi</link>
            <guid isPermaLink="true">https://kannada.asianetnews.com/gallery/karnataka-districts/hassan-world-famous-beluru-channakeshava-temple-donation-theft-videographer-arrest-7em3gzi</guid>
            <pubDate>Thu, 09 Jul 2026 10:46:16 +0530</pubDate>
            <description><![CDATA[&lt;p&gt;Hassan world famous belur channakeshava temple donation theft: &amp;nbsp;ಹಾಸನ ಪಟ್ಟಣದ ಶ್ರೀ ಚನ್ನಕೇಶವ ದೇಗುಲದ ಹುಂಡಿ ಹಣ ಎಣಿಕೆ ಮಾಡುವ ವೇಳೆ ₹1.98 ಲಕ್ಷ ನಗದು ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಗ್ರಾಫರ್ ನೀಲಕಂಠ ಸಿಕ್ಕಿಬಿದ್ದಿದ್ದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2mnamm1zvn8c07s5vgk9ag,imgname-----------------------2026-07-09t104211.448-1783573949076.jpg" type="image/jpeg" height="390" width="690"/>
            <content:encoded><![CDATA[&lt;p&gt;Hassan world famous belur channakeshava temple donation theft: &amp;nbsp;ಹಾಸನ ಪಟ್ಟಣದ ಶ್ರೀ ಚನ್ನಕೇಶವ ದೇಗುಲದ ಹುಂಡಿ ಹಣ ಎಣಿಕೆ ಮಾಡುವ ವೇಳೆ ₹1.98 ಲಕ್ಷ ನಗದು ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಗ್ರಾಫರ್ ನೀಲಕಂಠ ಸಿಕ್ಕಿಬಿದ್ದಿದ್ದು ಹೇಗೆ?&lt;/p&gt;&lt;img&gt;&lt;p&gt;ಅಯೋಧ್ಯೆ ರಾಮ ಮಂದಿರ, ಬದರಿನಾಥ ದೇಗುಲದಲ್ಲಿ ದೇಣಿಗೆ ಕಳವು ಪ್ರಕರಣದಲ್ಲಿ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ಕರ್ನಾಟಕದ ಹಾಸನ ಜಿಲ್ಲೆಯ ವಿಶ್ವ ವಿಖ್ಯಾತ ಚನ್ನಕೇಶವ ದೇಗುಲ(Channakeshava Temple)ದಲ್ಲಿಯೂ ಹುಂಡಿ ಎಣಿಕೆ ವೇಳೆ ಲಕ್ಷ ಲಕ್ಷ ಹಣ ಎಗರಿಸಿದ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಗರ್ಭಗುಡಿಯ ಹುಂಡಿ ತೆಗೆದು ಹಣವನ್ನು ಎಣಿಸಲು ದೇಗುಲದ ಹಿಂಭಾಗದ ಕಲ್ಯಾಣ ಮಂಟಪಕ್ಕೆ ತಂದು ಸುರಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ನಿಯೋಜಿಸಿದ್ದ ನೀಲಕಂಠ ಎಂಬಾತ ಹಣ ಕಳವು ಮಾಡಿದ್ದು, ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಳ್ಳತನದ ಯತ್ನ ವಿಫಲವಾಗಿದೆ. ಆರೋಪಿ ಹುಂಡಿಯಿಂದ ತೆಗೆದ ಕಳವು ಮಾಡಲು ಯತ್ನಿಸಿದ್ದ ವೇಳೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ದೇಣಿಗೆ ಹಣ ಕಳ್ಳತನವಾಗಬಾರದು ಎಲ್ಲವೂ ಪಾರದರ್ಶಕವಾಗಿಡಲು ವಿಡಿಯೋ ರೆಕಾರ್ಡ್ ಮಾಡಲು ನೀಲಕಂಠನನ್ನು ಕರೆಸಲಾಗಿತ್ತು. ಆದರೆ ಘಟನೆ ಬಳಿಕ ವಿಡಿಯೋ ಮಾಡಲು ಕರೆಸಿದರೋ, ವಿಡಿಯೋ ಮಾಡುವ ನೆಪದಲ್ಲಿ ದೇಗುಲದ ಹಣ ಎಗರಿಸಲು ಕರೆಸಿದರೋ ಎಂದು ಸ್ಥಳೀಯರು, ಭಕ್ತರು ಅನುಮಾನ ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;&lt;p&gt;ವಿಡಿಯೋ ಗ್ರಾಫರ್ ನೀಲಕಂಠ ಸಾವಿರೋ ಎರಡು ಸಾವಿರೋ ಕದ್ದಿದ್ದಲ್ಲ. ಈ ಭೂಪ ಬರೋಬ್ಬರಿ 1.98 ಲಕ್ಷ ಹಣ ಎಗರಿಸಿದ್ದಾನೆ ಊಹಿಸಿಕೊಳ್ಳಿ. ಇಷ್ಟೊಂದು ಹಣ ಸಿಬ್ಬಂದಿ ನಡುವೆ ಕದಿಯಲು ಹೇಗೆ ಸಾಧ್ಯ?&lt;/p&gt;&lt;img&gt;&lt;p&gt;ಕಾರ್ಯಾಚರಣೆಯ ವೇಳೆ ಒಟ್ಟು 1,98,000 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಕಳ್ಳತನದ ಯತ್ನದ ಹಿಂದಿನ ಉದ್ದೇಶ ಹಾಗೂ ಇತರರ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದರೂ, ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಯ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಅಲ್ಲೇ ಇದ್ದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ತನಿಖೆಗೆ ಸ್ಥಳೀಯರ ಆಗ್ರಹ&amp;nbsp;&lt;/strong&gt;&lt;/p&gt;&lt;p&gt;ದೇವಾಲಯ ಆಡಳಿತ ಮಂಡಳಿ, ಸಿಬ್ಬಂದಿ, ಅಧಿಕಾರಿಗಳ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಧಿಕಾರಿಗಳ ಶಾಮೀಲಿನಿಂದ ಹಲವು ಬಾರಿ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ ಎಂದರು. ಈ ಬಗ್ಗೆ ಸಹ ತನಿಖೆಯಾಗಬೇಕು, ಅಧಿಕಾರಿಗಳ ಪಾತ್ರವನ್ನ ಪತ್ತೆಹಚ್ಚಬೇಕು ಎಂಬುದು ಸ್ಥಳೀಯರು ಆಗ್ರಹಿಸಿದರು.&lt;/p&gt;]]></content:encoded>
            <category>hassan</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/hassan-world-famous-beluru-channakeshava-temple-donation-theft-videographer-arrest-7em3gzi"/>
        </item>
        <item>
            <title><![CDATA[75 ವರ್ಷದ ಸಿನಿ ನೆನಪುಗಳಿಗೆ ತೆರೆ: ಇತಿಹಾಸದ ಪುಟ ಸೇರಿದ ಅರಸೀಕೆರೆಯ ಸಾಧನ ಚಿತ್ರಮಂದಿರ]]></title>
            <link>https://kannada.asianetnews.com/karnataka-districts/hassan-district-arasikere-75-year-old-sadhana-theatre-building-demolition-mrq/articleshow-aw2adw3</link>
            <guid isPermaLink="true">https://kannada.asianetnews.com/karnataka-districts/hassan-district-arasikere-75-year-old-sadhana-theatre-building-demolition-mrq/articleshow-aw2adw3</guid>
            <pubDate>Mon, 29 Jun 2026 07:38:22 +0530</pubDate>
            <description><![CDATA[ಅರಸೀಕೆರೆಯ 75 ವರ್ಷಗಳ ಇತಿಹಾಸವಿದ್ದ, ಪಂಚಭಾಷಾ ಚಿತ್ರಗಳ ಪ್ರದರ್ಶನಕ್ಕೆ ಹೆಸರಾಗಿದ್ದ ಸಾಧನ ಚಿತ್ರಮಂದಿರ ಇದೀಗ ತೆರವುಗೊಳ್ಳುತ್ತಿದೆ. ಮಲ್ಟಿಪ್ಲೆಕ್ಸ್ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದಾಗಿ, ಒಂದು ಕಾಲದ ಜನಪ್ರಿಯ ಮನರಂಜನಾ ತಾಣವಾಗಿದ್ದ ಈ ಚಿತ್ರಮಂದಿರವು ಇದೀಗ ಇತಿಹಾಸದ ಪುಟ ಸೇರುತ್ತಿದ್ದು, ಅದರ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw8j03d8sc4mc7hx3ep98ynp,imgname-arasikere-1782698741160.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ಒಂದು ಕಾಲದಲ್ಲಿ ಅರಸೀಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಮನರಂಜನೆಯ ಪ್ರಮುಖ ತಾಣವಾಗಿದ್ದ ಸಾಧನ ಚಿತ್ರಮಂದಿರ ಇದೀಗ ನೆನಪುಗಳ ಲೋಕಕ್ಕೆ ಸೇರಿದೆ. ಸುಮಾರು ಏಳು ದಶಕಗಳ ಕಾಲ ಸಾವಿರಾರು ಸಿನಿಪ್ರಿಯರ ನಗು, ಸಂಭ್ರಮ ಮತ್ತು ಚಪ್ಪಾಳೆಗಳಿಗೆ ಸಾಕ್ಷಿಯಾಗಿದ್ದ ಈ ಚಿತ್ರಮಂದಿರದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದ್ದು, ನಗರದ ಜನರಲ್ಲಿ ಭಾವನಾತ್ಮಕ ಕ್ಷಣಗಳನ್ನು ಮೂಡಿಸಿದೆ.&lt;/p&gt;&lt;p&gt;ಸ್ವಾತಂತ್ರ್ಯಾನಂತರದ ಆರಂಭಿಕ ವರ್ಷಗಳಲ್ಲಿ ನಿರ್ಮಾಣಗೊಂಡ ಸಾಧನ ಚಿತ್ರಮಂದಿರವು ಆ ಕಾಲದ ಆಧುನಿಕ ಪ್ರೊಜೆಕ್ಟರ್&zwnj; ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡ ಸೇರಿದಂತೆ ಪಂಚಭಾಷೆಗಳ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿತ್ತು. ನಗರದ ಪ್ರಮುಖ ರಸ್ತೆಯಾದ ಬಿ. ಎಚ್. ರಸ್ತೆಯ ಪಕ್ಕದಲ್ಲಿದ್ದ ಈ ಚಿತ್ರಮಂದಿರವು ಹೊಸ ಚಿತ್ರಗಳ ಪ್ರದರ್ಶನಕ್ಕೆ ಹೆಸರಾಗಿದ್ದು, ಸಿನಿರಸಿಕರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿತ್ತು. ಅಂದಿನ ದಿನಗಳಲ್ಲಿ ರತ್ನ ಹಾಗೂ ಶ್ರೀ ವೆಂಕಟೇಶ್ವರ ಚಿತ್ರಮಂದಿರಗಳಿಗೆ ಸಮಾನ ಪೈಪೋಟಿ ನೀಡುತ್ತಿದ್ದ ಸಾಧನ ಚಿತ್ರಮಂದಿರವು ತಮಿಳು, ಹಿಂದಿ ಮತ್ತು ಕನ್ನಡ ಚಿತ್ರಗಳ ಪ್ರದರ್ಶನದಿಂದ ವಿಶಿಷ್ಟ ಸ್ಥಾನವನ್ನು ಗಳಿಸಿತ್ತು.&amp;nbsp;&lt;/p&gt;&lt;p&gt;ವಿಶೇಷವಾಗಿ ತಮಿಳು ಚಿತ್ರಗಳು ಬಿಡುಗಡೆಯಾದ ಸಂದರ್ಭಗಳಲ್ಲಿ ಹಾಸನ ರಸ್ತೆಯ ಭಾಗದ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದರೆ, ಹಿಂದಿ ಚಿತ್ರಗಳ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ಹಿಂದಿ ಭಾಷಾ ಅಭಿಮಾನಿಗಳು ಚಿತ್ರಮಂದಿರವನ್ನು ತುಂಬಿಸುತ್ತಿದ್ದರು.&lt;/p&gt;&lt;h2&gt;&lt;strong&gt;ಹಲವು ಕಲಾವಿದರು ಭೇಟಿ ನೀಡಿರುವ ಚಿತ್ರಮಂದಿರ&lt;/strong&gt;&lt;/h2&gt;&lt;p&gt;ಕನ್ನಡ ಚಿತ್ರರಂಗದ ಅನೇಕ ಯಶಸ್ವಿ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿದ್ದು, &lsquo;ಭಾಗ್ಯದ ಬಾಗಿಲು &rsquo; ಚಿತ್ರವು ಶತದಿನೋತ್ಸವ ಆಚರಿಸಿದ್ದ ನೆನಪು ಇಂದಿಗೂ ಸಿನಿಪ್ರಿಯರ ಮನಸ್ಸಿನಲ್ಲಿ ಉಳಿದಿದೆ. ಈ ಸಂದರ್ಭದಲ್ಲಿ ವರನಟ ಡಾ. ರಾಜ್&zwnj;ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಹಾಗೂ ಇತ್ತೀಚಿನ ದಿನಗಳಲ್ಲಿ ನಟ ಸುದೀಪ್ ಸೇರಿದಂತೆ ಹಲವು ಕಲಾವಿದರು ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರೆಂದು ಸ್ಥಳೀಯರು ಸ್ಮರಿಸುತ್ತಾರೆ. ಆದರೆ ಕಾಲ ಬದಲಾದಂತೆ ಮಲ್ಟಿಪ್ಲೆಕ್ಸ್ ಸಂಸ್ಕೃತಿ, ಡಿಜಿಟಲ್ ತಂತ್ರಜ್ಞಾನ, ಇಂಟರ್&zwnj;ನೆಟ್ ಹಾಗೂ ಮೊಬೈಲ್ ಆಧಾರಿತ ಮನರಂಜನಾ ವೇದಿಕೆಗಳ ಪ್ರಭಾವದಿಂದ ಏಕಪರದೆ ಚಿತ್ರಮಂದಿರಗಳ ಅಸ್ತಿತ್ವಕ್ಕೆ ಸವಾಲು ಎದುರಾಯಿತು. ಪ್ರೇಕ್ಷಕರ ಸಂಖ್ಯೆ ಕುಸಿಯುತ್ತಾ ಬಂದ ಪರಿಣಾಮ ನಿರ್ವಹಣಾ ವೆಚ್ಚ ಹಾಗೂ ವಿದ್ಯುತ್ ಬಿಲ್&zwnj;ಗಳ ಹೊರೆ ಹೆಚ್ಚಾಗಿದ್ದು, ಚಿತ್ರಮಂದಿರವನ್ನು ಮುಂದುವರಿಸುವುದು ಕಷ್ಟಕರವಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೆಪಿಎಸ್ ಬೇಡ, ನಮ್ಮೂರ ಸರ್ಕಾರಿ ಶಾಲೆ ನಮ್ಮೂರಲ್ಲೇ ಉಳಿಯಲಿ: ಗ್ರಾಮಸ್ಥರ ಪ್ರತಿಭಟನೆ&lt;/strong&gt;&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಚಿತ್ರಮಂದಿರದ ಮಾಲೀಕರು ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅದರ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಅರಸೀಕೆರೆಯ ಸಿನಿ ಸಂಸ್ಕೃತಿಯ ಒಂದು ಮಹತ್ವದ ಅಧ್ಯಾಯಕ್ಕೆ ಅಧಿಕೃತವಾಗಿ ತೆರೆ ಬಿದ್ದಂತಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶೇಖಿ ಅಣ್ಣನ ಅಂಗಡಿಗೆ ಬೀಗ; ಅಕ್ಷರಗಳ ಯುಗಕ್ಕೆ ತೆರೆ ಓದುಗರ ಮನದಲ್ಲಿ ಉಳಿದ ಅಯ್ನೋರ ನೆನಪು&lt;/strong&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-district-arasikere-75-year-old-sadhana-theatre-building-demolition-mrq/articleshow-aw2adw3"/>
        </item>
        <item>
            <title><![CDATA[ಮಲೆನಾಡಿನಲ್ಲಿ ಮಳೆ ಆರ್ಭಟ: ನಾಳೆ ಮಂಗಳವಾರ ಸಾಗರ ಮತ್ತು ಸಕಲೇಶಪುರ ತಾಲೂಕಿನ ಶಾಲೆಗಳಿಗೂ ರಜೆ ಘೋಷಣೆ!]]></title>
            <link>https://kannada.asianetnews.com/karnataka-districts/karnataka-monsoon-shivamogga-sagar-hassan-sakaleshpura-school-holiday-due-to-heavy-rain-news/articleshow-aygx97w</link>
            <guid isPermaLink="true">https://kannada.asianetnews.com/karnataka-districts/karnataka-monsoon-shivamogga-sagar-hassan-sakaleshpura-school-holiday-due-to-heavy-rain-news/articleshow-aygx97w</guid>
            <pubDate>Mon, 06 Jul 2026 22:08:03 +0530</pubDate>
            <description><![CDATA[ರಾಜ್ಯದ ಮಲೆನಾಡು ಭಾಗವಾದ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಮುಂಗಾರು ಮಳೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸಾಗರ ಮತ್ತು ಸಕಲೇಶಪುರ ತಾಲೂಕುಗಳ ಶಾಲೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k31dk8cz4ayn748s4brxzard,imgname-dharwad-school-holiday-declare-1755615699359.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ/ಹಾಸನ (ಜು.07): ರಾ&lt;/strong&gt;ಜ್ಯದ ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ (ಜುಲೈ 07) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಸಾಗರ ತಾಲೂಕಿನಲ್ಲಿ ರಜೆ:&lt;/strong&gt;&lt;/h2&gt;&lt;p&gt;ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಂದ ಪ್ರೌಢಶಾಲೆಯವರೆಗೆ ರಜೆ ಘೋಷಿಸಲಾಗಿದೆ. ಸಾಗರ ತಹಸಿಲ್ದಾರ್ ಪ್ರತಿಭಾ ಅವರ ಸೂಚನೆಯ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸದಾನಂದ ಸ್ವಾಮಿ ಅವರು ಈ ಅಧಿಕೃತ ಆದೇಶ ಹೊರಡಿಸಿದ್ದಾರೆ. ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಪೋಷಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.&lt;/p&gt;&lt;p&gt;&lt;strong&gt;School holiday: ಕರ್ನಾಟಕ ಮಳೆ ಆರ್ಭಟ: ಉತ್ತರ ಕನ್ನಡ, ಬೆಳಗಾವಿ ಸೇರಿ ಈ ಜಿಲ್ಲೆಗಳ ಶಾಲೆಗಳಿಗೆ ನಾಳೆ ರಜೆ ಘೋಷಣೆ&lt;/strong&gt;&lt;/p&gt;&lt;h2&gt;&lt;strong&gt;ಸಕಲೇಶಪುರ ತಾಲೂಕಿನಲ್ಲೂ ರಜೆ:&lt;/strong&gt;&lt;/h2&gt;&lt;p&gt;ಇತ್ತ ಹಾಸನ ಜಿಲ್ಲೆಯ ಮಲೆನಾಡು ಭಾಗವಾದ ಸಕಲೇಶಪುರ ತಾಲೂಕಿನಲ್ಲೂ ವರುಣನ ಅಬ್ಬರ ಜೋರಾಗಿದೆ. ಸಕಲೇಶಪುರ ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಕಾರಣ, ಶಾಲಾ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ನಾಳೆ ತಾಲೂಕಿನ ಎಲ್ಲಾ ಶಾಲೆಗಳಿಗೆ ರಜೆ ನೀಡಿ ತಹಸಿಲ್ದಾರ್ ಸುಪ್ರೀತಾ ಅವರು ಆದೇಶಿಸಿದ್ದಾರೆ. ಸಕಲೇಶಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಮಣ್ಣು ಕುಸಿಯುವ ಭೀತಿ ಇರುವುದರಿಂದ ಮತ್ತು ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;ಇದನ್ನೂ ಓದಿ: &lt;strong&gt;Shivamogga Heavy Rain: ಶಿವಮೊಗ್ಗದಲ್ಲಿ ಮಳೆಯ ಆರ್ಭಟ: ಮಾಲತಿ ನದಿಯಲ್ಲಿ ಕೊಚ್ಚಿಹೋದ ವೃದ್ಧ, ಶವಕ್ಕಾಗಿ ಶೋಧ!&lt;/strong&gt;&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-monsoon-shivamogga-sagar-hassan-sakaleshpura-school-holiday-due-to-heavy-rain-news/articleshow-aygx97w"/>
        </item>
        <item>
            <title><![CDATA[ಅಬಕಾರಿ ಅಧಿಕಾರಿಯ ಅಕ್ರಮ ಸಾಮ್ರಾಜ್ಯಕ್ಕೆ ಇಡಿ ಶಾಕ್, ಜಾರಕಿಹೊಳಿ ಭಾವ ಮಂಜುನಾಥ್ ವಶಕ್ಕೆ, ಲೆಕ್ಕವಿಲ್ಲದ ಬೇನಾಮಿ ಬಾರ್ ಲೈಸೆನ್ಸ್!]]></title>
            <link>https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt</link>
            <guid isPermaLink="true">https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt</guid>
            <pubDate>Wed, 24 Jun 2026 14:44:49 +0530</pubDate>
            <description><![CDATA[ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲೆ ಅಕ್ರಮ ಆಸ್ತಿ ಮತ್ತು ಹವಾಲಾ ಆರೋಪದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ನಡೆದ ಶೋಧಕಾರ್ಯದಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್&zwnj;ಗಳು ಪತ್ತೆಯಾಗಿದ್ದು, ಅಧಿಕಾರಿ ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವು ರಾಜ್ಯ ಅಬಕಾರಿ ಇಲಾಖೆಯಲ್ಲಿ ದೊಡ್ಡ ಹಗರಣವನ್ನು ಬಯಲುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvwebjrzd71hqnf1qes1avxc,imgname-karnataka-excise-scam-y-manjunath-1782292269854.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು / ಬೆಳಗಾವಿ: &lt;/strong&gt;ರಾಜ್ಯ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಹಗರಣವೊಂದು ಬೆಳಕಿಗೆ ಬಂದಿದ್ದು, ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ (Additional Commissioner) ವೈ. ಮಂಜುನಾಥ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿ ಪತಿ ಹಾಗೂ ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ. ಮಂಜುನಾಥ್ ಅವರನ್ನು ಕೊನೆಗೂ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ವಿದೇಶಿ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ಲಿಂಕ್ ಹಾಗೂ ಅಕ್ರಮ ಆಸ್ತಿ ಸಂಪಾದನೆ (Disproportionate Assets) ಆರೋಪದ ಹಿನ್ನೆಲೆಯಲ್ಲಿ ಈ ಜಂಟಿ ಕಾರ್ಯಾಚರಣೆ ನಡೆದಿದೆ. ಕರ್ನಾಟಕ, ಗೋವಾ ಮತ್ತು ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಭಾಗಗಳ ಇಡಿ ಅಧಿಕಾರಿಗಳನ್ನೊಳಗೊಂಡ ಜಂಟಿ ಪಡೆಗಳು, 10ಕ್ಕೂ ಹೆಚ್ಚು ಅರೆಸೇನಾ ಪಡೆ (CRPF) ಸಿಬ್ಬಂದಿಗಳ ಬಿಗಿ ಭದ್ರತೆಯಲ್ಲಿ ಈ ದಾಳಿ ನಡೆಸಿವೆ.&lt;/p&gt;&lt;h2&gt;ರಾಜ್ಯದ 6 ಪ್ರಮುಖ ಕೇಂದ್ರಗಳಲ್ಲಿ ಏಕಕಾಲಕ್ಕೆ ಇಡಿ ರೇಡ್!&lt;/h2&gt;&lt;p&gt;ಬೆಳ್ಳಂಬೆಳಗ್ಗೆ 5:30ರ ಸುಮಾರಿಗೆ ಇಡಿ ಅಧಿಕಾರಿಗಳು ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿ ವೈ. ಮಂಜುನಾಥ್ ಹಾಗೂ ಅವರ ಆಪ್ತ ಜಾಲವನ್ನು ಗುರಿಯಾಗಿಸಿಕೊಂಡು ಬೆಂಗಳೂರು, ಬೆಳಗಾವಿ, ಮೈಸೂರು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಮತ್ತು ಅಥಣಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರು:&lt;/strong&gt; ರೇಸ್&zwnj;ಕೋರ್ಸ್ ರಸ್ತೆಯ (ಸ್ಯಾಂಕಿ ರಸ್ತೆ) ಪ್ರತಿಷ್ಠಿತ 'ದಿ ಸಮ್ಮಿಟ್' ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಮಂಜುನಾಥ್ ಅವರ ಐಷಾರಾಮಿ ಫ್ಲಾಟ್ ಮೇಲೆ ಮಹಿಳಾ ಇಡಿ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ, ಅಲ್ಲಿಯೇ ಇದ್ದ ಮಂಜುನಾಥ್ ಅವರನ್ನು ಸುದೀರ್ಘ ವಿಚಾರಣೆಯ ಬಳಿಕ ವಶಕ್ಕೆ ಪಡೆದಿದೆ.&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ಮಂಜುನಾಥ್ ಅವರ ಮುಖ್ಯ ನಿವಾಸದ ಮೇಲೆ ದಾಳಿ ನಡೆದಿದೆ. ಮಹತ್ವದ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಡಿ ಡಿವೈಎಸ್&zwnj;ಪಿ (DySP) ದರ್ಜೆಯ ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ದೌಡಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ವಿಜಯನಗರ (ಅರಸೀಕೆರೆ):&lt;/strong&gt; ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಮಂಜುನಾಥ್ ಅವರಿಗೆ ಸೇರಿದ ಎರಡು ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.&lt;/p&gt;&lt;p&gt;&lt;strong&gt;ಮೈಸೂರು:&lt;/strong&gt; ದಟ್ಟಗಳ್ಳಿ 3ನೇ ಹಂತದ 5ನೇ ಕ್ರಾಸ್&zwnj;ನಲ್ಲಿರುವ #3638 'ಸ್ವಯಂಭು' ನಿವಾಸದ ಮೇಲೆ ದಾಳಿ ನಡೆದಿದೆ. ಇದು ಕೂಡ ಮಂಜುನಾಥ್ ಅವರ ಆಸ್ತಿಯಾಗಿದ್ದು, ಇಲ್ಲಿ ಅವರ ಆತ್ಮೀಯ ಸ್ನೇಹಿತೆ ಹಾಗೂ ಪ್ರಸ್ತುತ ಅಬಕಾರಿ ಇಲಾಖೆ ಇನ್ಸ್&zwnj;ಪೆಕ್ಟರ್ ಆಗಿರುವ ಯಮುನಾ ಮತ್ತು ಅವರ ತಾಯಿ ಸುಲೋಚನಾ ವಾಸವಾಗಿದ್ದರು. ಇಡಿ ಅಧಿಕಾರಿಗಳು ತೀವ್ರ ದಾಖಲೆ ಪರಿಶೀಲನೆ ನಡೆಸಿ, ಹೆಚ್ಚಿನ ವಿಚಾರಣೆಗಾಗಿ ಯಮುನಾ ಅವರನ್ನು ಮುಖ ಮುಚ್ಚಿಕೊಂಡು ವಾಹನದಲ್ಲಿ ಕರೆದೊಯ್ದಿದ್ದಾರೆ.&lt;/p&gt;&lt;h2&gt;ಮಂಜುನಾಥ್ ಆಪ್ತ ಅಧಿಕಾರಿಗಳಿಗೂ ಇಡಿ ಶಾಕ್!&lt;/h2&gt;&lt;p&gt;ವೈ. ಮಂಜುನಾಥ್ ಅವರ ಅಕ್ರಮ ಜಾಲದಲ್ಲಿ ಶಾಮೀಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಅವರ ಆಪ್ತ ವಲಯದ ಇತರ ಅಧಿಕಾರಿಗಳ ಮೇಲೂ ಇಡಿ ಅಧಿಕಾರಿಗಳು ಮುಗಿಬಿದ್ದಿದ್ದಾರೆ:&lt;/p&gt;&lt;p&gt;ಸತೀಶ್ ಶಿವಶಂಕರ ಕಾಗಲೆ (ಎಸ್ಪಿ, ತುಮಕೂರು ಅಬಕಾರಿ ಇಲಾಖೆ): ಮಂಜುನಾಥ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರ ಬೆಳಗಾವಿಯ ಶ್ರೀನಗರದಲ್ಲಿರುವ ಅಪಾರ್ಟ್&zwnj;ಮೆಂಟ್ ಹಾಗೂ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಐದಾರು ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.&lt;/p&gt;&lt;p&gt;ವಿಶ್ವನಾಥ್ ಗಾಣಿಗೇರ (ಡಿವೈಎಸ್ಪಿ, ಚಿಕ್ಕೋಡಿ ಅಬಕಾರಿ ಇಲಾಖೆ): ಬೆಳಗಾವಿ ನಗರದ ಬಸವ ಕಾಲೋನಿಯಲ್ಲಿರುವ ಇವರ ನಿವಾಸದ ಮೇಲೂ ದಾಳಿ ನಡೆದಿದ್ದು, ಇವರೂ ಸಹ ಅಕ್ರಮ ವ್ಯವಹಾರಕ್ಕೆ ಸಾಥ್ ನೀಡಿದ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;h2&gt;ದಾಳಿ ವೇಳೆ ಪತ್ತೆಯಾದವು ನೂರಾರು 'ಬೇನಾಮಿ ಬಾರ್ ಲೈಸೆನ್ಸ್'ಗಳು!&lt;/h2&gt;&lt;p&gt;ಇಡಿ ನಡೆಸಿದ ಸುದೀರ್ಘ ಪರಿಶೀಲನೆಯ ವೇಳೆ ಮಂಜುನಾಥ್ ಅವರ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ನಿವಾಸಗಳಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್&zwnj;ಗಳು ಹಾಗೂ ಅವುಗಳ ಅಗ್ರಿಮೆಂಟ್&zwnj; ಬಾಂಡ್&zwnj;ಗಳು ಪತ್ತೆಯಾಗಿವೆ.&lt;/p&gt;&lt;p&gt;ಅಕ್ರಮದ ನೆಟ್&zwnj;ವರ್ಕ್: ಮಂಜುನಾಥ್ ಅವರು ಬೆಳಗಾವಿ, ದಾವಣಗೆರೆ, ಬಳ್ಳಾರಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬೇನಾಮಿ ಹೆಸರಿನಲ್ಲಿ ದೊಡ್ಡ ಪ್ರಮಾಣದ ಬಾರ್ ಮತ್ತು ರೆಸ್ಟೋರೆಂಟ್&zwnj;ಗಳನ್ನು ಸ್ಥಾಪಿಸಿದ್ದರು. ಈ ಬೇನಾಮಿ ಬಾರ್&zwnj;ಗಳಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಇವರು ವಿದೇಶಗಳಿಗೆ ಅಕ್ರಮವಾಗಿ ವರ್ಗಾವಣೆ (ಹವಾಲಾ ದಂಧೆ) ಮಾಡಿ, ಅಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;2013ರ ಲೋಕಾಯುಕ್ತ ಕೇಸ್; ಪ್ರಭಾವ ಬಳಸಿ ಹುದ್ದೆ ಸೃಷ್ಟಿ!&lt;/h2&gt;&lt;p&gt;ವೈ. ಮಂಜುನಾಥ್ ಅವರ ಅಕ್ರಮಗಳ ಇತಿಹಾಸ ಇಂದಿನದ್ದಲ್ಲ. ಈ ಹಿಂದೆ 2013ರಲ್ಲಿ ಮೈಸೂರು ಅಬಕಾರಿ ಡಿಸಿ (DC) ಆಗಿದ್ದಾಗ ಇವರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಬಾರ್ ಲೈಸೆನ್ಸ್ ನವೀಕರಣದಲ್ಲಿ (Renewal) ಕೋಟ್ಯಂತರ ರೂಪಾಯಿ ಲಂಚ ಹಾಗೂ ಸಂಬಳಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ (Disproportionate Assets) ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಲಾಖಾ ತನಿಖೆ (DE) ನಡೆದು ಪ್ರಸ್ತುತ ಅದು ಮುಚ್ಚಲ್ಪಟ್ಟಿತ್ತಾದರೂ, ಲೋಕಾಯುಕ್ತದ ಅದೇ ಅಕ್ರಮ ಆಸ್ತಿ ಗಳಿಕೆಯ ಮೂಲ ಕೇಸ್ ಅನ್ನು ಆಧರಿಸಿ ಈಗ ಇಡಿ ಅಖಾಡಕ್ಕಿಳಿದಿದೆ.&lt;/p&gt;&lt;h2&gt;ರಾಜಕೀಯ ಪ್ರಭಾವದ ಆರೋಪ:&amp;nbsp;&lt;/h2&gt;&lt;p&gt;ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ಕೇವಲ ಬೆಂಗಳೂರು ರೇಂಜ್ ಮಾತ್ರ ಇತ್ತು. ಆದರೆ ಮಂಜುನಾಥ್ ಅವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ವಿಶೇಷವಾಗಿ 'ಬೆಳಗಾವಿ ಅಬಕಾರಿ ರೇಂಜ್' ಅನ್ನು ಸೃಷ್ಟಿಸಿಕೊಂಡಿದ್ದರು. ಇದರ ಮೂಲಕ ರಾಜ್ಯದ ಅರ್ಧದಷ್ಟು ಜಿಲ್ಲೆಗಳ ಅಬಕಾರಿ ನಿಯಂತ್ರಣದ ಸರ್ವಾಧಿಕಾರವನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡು, ಕರಾವಳಿ ಮತ್ತು ಗಡಿ ಭಾಗದಲ್ಲಿ ವ್ಯಾಪಕ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಸದ್ಯ ಇಡಿ ಅಧಿಕಾರಿಗಳ ವಶದಲ್ಲಿರುವ ವೈ. ಮಂಜುನಾಥ್ ಹಾಗೂ ವಶಪಡಿಸಿಕೊಳ್ಳಲಾದ ಲೈಸೆನ್ಸ್ ದಾಖಲೆಗಳಿಂದ ಇಲಾಖೆಯ ಇನ್ನೂ ಹಲವು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt"/>
        </item>
        <item>
            <title><![CDATA[Varanasi train emergency delivery: ರೈಲಲ್ಲಿ ಹೆರಿಗೆ ಮಾಡಿಸಿದ ಹಾಸನ ಆಯುರ್ವೇದ ವಿದ್ಯಾರ್ಥಿನಿಯರು (ವಿಡಿಯೋ)]]></title>
            <link>https://kannada.asianetnews.com/karnataka-districts/hassan-ayurveda-research-students-assist-for-woman-s-safe-delivery-on-varanasi-train-rav/articleshow-l4xbbrb</link>
            <guid isPermaLink="true">https://kannada.asianetnews.com/karnataka-districts/hassan-ayurveda-research-students-assist-for-woman-s-safe-delivery-on-varanasi-train-rav/articleshow-l4xbbrb</guid>
            <pubDate>Thu, 09 Jul 2026 06:48:42 +0530</pubDate>
            <description><![CDATA[&lt;p&gt;ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅದೇ ರೈಲಿನಲ್ಲಿದ್ದ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ 3 ಸ್ನಾತಕೋತ್ತರ ವಿದ್ಯಾರ್ಥಿನಿಯರು &amp;nbsp;ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಹಾಗೂ ನವಜಾತ ಶಿಶುವಿನ ಜೀವ ಉಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx26m084mm3cya4t5fj6ym0d,imgname-----------------------2026-07-09t063305.127-1783559225604.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.9):&lt;/strong&gt; ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆ ದೂರವಿದ್ದರಿಂದ ಅದೇ ರೈಲಿನಲ್ಲಿದ್ದ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ 3 ಸ್ನಾತಕೋತ್ತರ ವಿದ್ಯಾರ್ಥಿನಿಯರು ತಮ್ಮ ಸಮಯಪ್ರಜ್ಞೆ ಮತ್ತು ಸೇವಾ ಮನೋಭಾವದ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಹಾಗೂ ನವಜಾತ ಶಿಶುವಿನ ಜೀವ ಉಳಿಸಿದ್ದಾರೆ.&lt;/p&gt;&lt;h2&gt;ಎಸ್&zwnj;ಡಿಎಂ ವಿದ್ಯಾರ್ಥಿನಿಯರ ಕಾರ್ಯಕ್ಕೆ ಮೆಚ್ಚುಗೆ&lt;/h2&gt;&lt;p&gt;ನಗರದ ತಣ್ಣೀರುಹಳ್ಳದಲ್ಲಿರುವ ಎಸ್&zwnj;ಡಿಎಂ ವಿದ್ಯಾರ್ಥಿನಿಯರಾದ ಡಾ.ರಶ್ಮಿ ಬಿಳಗಿ, ಡಾ.ಲತಾಶ್ರೀ ಎನ್. ಮತ್ತು ಡಾ.ಶಾಹಿನ್ ಎಂ. ಅವರು ರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನದಿಂದ ವಾರಣಾಸಿಗೆ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಅವರಿದ್ದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹಠಾತ್ತನೆ ತೀವ್ರ ಹೆರಿಗೆ ನೋವು ಆರಂಭವಾಗಿದ್ದು, ಮೂವರು ಮಹಿಳೆಯ ನೆರವಿಗೆ ಧಾವಿಸಿ ಸಹ ಪ್ರಯಾಣಿಕರ ಸಹಕಾರದೊಂದಿಗೆ ಹೆರಿಗೆ ಪ್ರಕ್ರಿಯೆಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿದ್ದಾರೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Shachiee 2.0 (@shachiee_2.0)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-ayurveda-research-students-assist-for-woman-s-safe-delivery-on-varanasi-train-rav/articleshow-l4xbbrb"/>
        </item>
        <item>
            <title><![CDATA[ಹಾಸನ: ಮನೆ ಮುಂದೆ ಜಾನುವಾರು ಕಟ್ಟುವಾಗ ಕಾಡಾನೆ ದಾಳಿ! ಸೊಂಡಿಲಿನಿಂದ ಎತ್ತಿ ಬಿಸಾಡಿದ ಸಲಗ, ರೈತ ಗಂಭೀರ ಗಾಯ!]]></title>
            <link>https://kannada.asianetnews.com/karnataka-districts/wild-elephant-attacks-farmer-in-hassan-siddashetti-critically-injured-rav/articleshow-lwiiz3c</link>
            <guid isPermaLink="true">https://kannada.asianetnews.com/karnataka-districts/wild-elephant-attacks-farmer-in-hassan-siddashetti-critically-injured-rav/articleshow-lwiiz3c</guid>
            <pubDate>Thu, 09 Jul 2026 14:48:48 +0530</pubDate>
            <description><![CDATA[ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ, ಮನೆಯ ಮುಂದೆ ಜಾನುವಾರು ಕಟ್ಟುತ್ತಿದ್ದ ಸಿದ್ದಶೆಟ್ಟಿ ಎಂಬ ರೈತನ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಆನೆಯು ಸೊಂಡಿಲಿನಿಂದ ಎತ್ತಿ ಬಿಸಾಡಿದ್ದರಿಂದ ತೀವ್ರವಾಗಿ ಗಾಯಗೊಂಡ ರೈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx32p3rmp4cpa5a5zw8ey3j8,imgname-----------------------2026-07-09t144715.812-1783588654867.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.9)&lt;/strong&gt;: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಹೆಚ್ಚುತ್ತಿದ್ದು ರೈತರು, ಕಾರ್ಮಿಕರು ಕೃಷಿ ಕೆಲಸಕ್ಕೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ತಡರಾತ್ರಿ ವಿದ್ಯುತ್ ದುರಸ್ತಿ ಕಾರ್ಯ ಮುಗಿಸಿ ವಾಪಸ್ ಆಗುತ್ತಿದ್ದ ಚೆಸ್ಕಾಂ ಸಿಬ್ಬಂದಿ ವಾಹನದ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ ಬೆನ್ನಲ್ಲೇ ಇದೀಗ ಜಾನುವಾರುಗಳನ್ನು ಕಟ್ಟುತ್ತಿದ್ದ ವೇಳೆ ರೈತನ ಮೇಲೆ ದಾಳಿ ನಡೆಸಿದ ಘಟನೆ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಜಾನುವಾರು ಕಟ್ಟುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ!&lt;/h2&gt;&lt;p&gt;ರೈತ ಸಿದ್ದಶೆಟ್ಟಿ ಎಂಬುವವರು ಮನೆಯ ಮುಂದಿನ ಜಾನುವಾರುಗಳನ್ನು ಕಟ್ಟುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದ ಒಂಟಿ ಸಲಗ, ರೈತ ಸಿದ್ಧಶೆಟ್ಟಿ(65) ತಪ್ಪಿಸಿಕೊಳ್ಳಲು ಅವಕಾಶ ಕೊಡದೆ ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಆನೆಯ ಅನಿರೀಕ್ಷಿತ ದಾಳಿಯಿಂದಾಗಿ ತೀವ್ರ ಗಾಯಗೊಂಡಿರುವ ರೈತ ಸಿದ್ಧಶೆಟ್ಟಿ ಅವರಿಗೆ ಬೇಲೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ, ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಮಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ಅಧಿಕಾರಿಗಳು ನಾಗರಿಕರು ಓಡಾಡಲು ಸುರಕ್ಷಿತ ಕ್ರಮ ಕೈಗೊಳ್ಳುವಂತೆ ನಾಗರಿರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/wild-elephant-attacks-farmer-in-hassan-siddashetti-critically-injured-rav/articleshow-lwiiz3c"/>
        </item>
        <item>
            <title><![CDATA[ಅಡ್ಡಮತದಾನದ ಆರೋಪ: ಬೇಲೂರು ಚನ್ನಕೇಶವ , ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಶಾಸಕ ಸುರೇಶ್ ಆಣೆ ಪ್ರಮಾಣ!]]></title>
            <link>https://kannada.asianetnews.com/politics/mlc-cross-voting-controversy-beluru-mla-hk-suresh-visit-dharmasthala-manjunatha-temple-gdp/articleshow-mfgqn2r</link>
            <guid isPermaLink="true">https://kannada.asianetnews.com/politics/mlc-cross-voting-controversy-beluru-mla-hk-suresh-visit-dharmasthala-manjunatha-temple-gdp/articleshow-mfgqn2r</guid>
            <pubDate>Tue, 30 Jun 2026 15:53:42 +0530</pubDate>
            <description><![CDATA[ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್, ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮ ನಿಷ್ಠೆಯನ್ನು ಸಾಬೀತುಪಡಿಸಲು, ಅವರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಿ, ತನಿಖೆಗಾಗಿ ಮಂಪರು ಪರೀಕ್ಷೆಗೂ ಸಿದ್ಧ ಎಂದು ಸವಾಲು ಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwc0phjxf6r5h3ma2ejsmc1k,imgname-hk-suresh-1782814819932.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ/ಮಂಗಳೂರು: &lt;/strong&gt;ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ಅಡ್ಡ ಮತದಾನ (Cross Voting) ಮಾಡಿದ್ದಾರೆ ಎನ್ನಲಾದ ವಿವಾದ ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ವಿವಾದದಲ್ಲಿ ಪ್ರಮುಖವಾಗಿ ಕೇಳಿಬಂದಿರುವ ಹಾಸನ ಜಿಲ್ಲೆಯ ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ (ಹುಲ್ಲಳ್ಳಿ ಸುರೇಶ್) ಅವರ ಹೆಸರು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಮೇಲಿನ ಈ ಗಂಭೀರ ಆರೋಪವನ್ನು ಕಟುವಾಗಿ ನಿರಾಕರಿಸಿರುವ ಶಾಸಕರು, ಇದೀಗ ದೇವರ ಸನ್ನಿಧಿಯಲ್ಲಿ 'ಆಣೆ ಪ್ರಮಾಣ' ಮಾಡಿದ್ದಾರೆ.&lt;/p&gt;&lt;h2&gt;ಬೇಲೂರು ಚನ್ನಕೇಶವ ಸನ್ನಿಧಿ ಮೊದಲ ಭೇಟಿ&lt;/h2&gt;&lt;p&gt;ತಮ್ಮ ವಿರುದ್ಧ ಕೇಳಿಬಂದ ಅಡ್ಡ ಮತದಾನದ ಆರೋಪದಿಂದ ತೀವ್ರ ಅಸಮಾಧಾನಗೊಂಡಿದ್ದ ಶಾಸಕ ಹೆಚ್.ಕೆ. ಸುರೇಶ್, ಮೊದಲು ತಮ್ಮದೇ ಕ್ಷೇತ್ರದ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಆಣೆ ಪ್ರಮಾಣ ಮಾಡಿದರು. ತದನಂತರ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.&lt;/p&gt;&lt;p&gt;ಧರ್ಮಸ್ಥಳದಲ್ಲಿ, ಮಂಜುನಾಥ ಸ್ವಾಮಿಯ ದರ್ಶನಕ್ಕೂ ಮುನ್ನ ಪವಿತ್ರ ನೇತ್ರಾವತಿ ನದಿಯ ಸ್ನಾನಘಟ್ಟಕ್ಕೆ ಭೇಟಿ ನೀಡಿ, ಮೈಮೇಲೆ ನೀರು ಪ್ರೋಕ್ಷಣೆ ಮಾಡಿಕೊಂಡು ಬಳಿಕ ಸಾಂಪ್ರದಾಯಿಕ ಪದ್ಧತಿಯಂತೆ ಮೊದಲು ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ತೆರಳಿ ದರ್ಶನ ಪಡೆದ ಅವರು, ನಂತರ ಮಂಜುನಾಥ ಸ್ವಾಮಿಯ ಒಳಾಂಗಣಕ್ಕೆ ತೆರಳಿ ದೇವರ ಸನ್ನಿಧಿಯಲ್ಲಿ &quot;ನಾನು ಅಡ್ಡ ಮತದಾನ ಮಾಡಿಲ್ಲ&quot; ಎಂದು ಆಣೆ ಪ್ರಮಾಣ ಮಾಡಿದರು.&lt;/p&gt;&lt;h2&gt;ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ: ಹಣಕ್ಕೆ ಮಾರಾಟವಾಗುವವನಲ್ಲ ನಾನು&lt;/h2&gt;&lt;p&gt;ಧರ್ಮಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹೆಚ್.ಕೆ. ಸುರೇಶ್, ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. &quot;ನನ್ನ ವಿರುದ್ಧ ರಾಜಕೀಯವಾಗಿ ದೊಡ್ಡ ಷಡ್ಯಂತ್ರ ರೂಪಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಕ್ಷೇತ್ರಕ್ಕೆ ಬಂದು ನನಗಾಗಿ ಪ್ರಚಾರ ಮಾಡಿದ್ದಾರೆ. ಅಂತಹ ನಾಯಕರಿಗೆ ಮತ್ತು ಪಕ್ಷಕ್ಕೆ ನಾನು ಮೋಸ ಮಾಡಿದರೆ ಭಗವಂತ ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ, ಮೆಚ್ಚುವುದೂ ಇಲ್ಲ. ಹಣದ ಆಮಿಷ ಒಡ್ಡಿ ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಭಗವಂತ ನನ್ನನ್ನು ಆರ್ಥಿಕವಾಗಿ ಸಮೃದ್ಧವಾಗಿ ಇಟ್ಟಿದ್ದಾನೆ. ನನ್ನ ಕ್ಷೇತ್ರದ ಜನತೆ ಮಾತ್ರ ನನ್ನನ್ನು ಪ್ರೀತಿಯಿಂದ ಕೊಂಡುಕೊಳ್ಳಬಹುದೇ ವಿನಃ, ಕೋಟಿ ಕೋಟಿ ಹಣ ನೀಡಿ ನನ್ನ ನಿಷ್ಠೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.&quot;&lt;/p&gt;&lt;h2&gt;ಮಂಜುನಾಥನ ಮೇಲೆ ಆಣೆ ಮಾಡಿದ್ದೇನೆ, ಧೈರ್ಯವಿದ್ದರೆ ಮಂಪರು ಪರೀಕ್ಷೆ ಮಾಡಿಸಲಿ!&lt;/h2&gt;&lt;p&gt;ಅಡ್ಡ ಮತದಾನದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಅವರು ನೀಡಿರುವ ವರದಿಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ ಸುರೇಶ್, ಈ ವಿವಾದದ ಸತ್ಯಾಸತ್ಯತೆ ಹೊರಬರಲು ಮುಕ್ತ ಸವಾಲೊಂದನ್ನು ಹಾಕಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬ ಧೈರ್ಯದಿಂದಲೇ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಎದುರು ಆಣೆ ಮಾಡಿದ್ದೇನೆ. ಇನ್ನುಳಿದಿದ್ದನ್ನು ಆ ಮಂಜುನಾಥನೇ ನೋಡಿಕೊಳ್ಳುತ್ತಾನೆ. ನನ್ನ ವಿರುದ್ಧ ಸುಮ್ಮನೆ ಅಪಪ್ರಚಾರ ಮಾಡುವ ಬದಲು, ಧೈರ್ಯವಿದ್ದರೆ ನನಗೆ ಮಂಪರು ಪರೀಕ್ಷೆ (Narco-Analysis Test) ಮಾಡಿಸಲಿ. ಕೇವಲ ನನಗಷ್ಟೇ ಅಲ್ಲ, ನನ್ನೊಂದಿಗೆ ಬಿಜೆಪಿಯ ಎಲ್ಲಾ ಶಾಸಕರಿಗೂ ಮಂಪರು ಪರೀಕ್ಷೆ ಮಾಡಿಸಲಿ. ಆಗ ಸತ್ಯ ಏನೆಂಬುದು ಇಡೀ ರಾಜ್ಯಕ್ಕೆ ತಿಳಿಯುತ್ತದೆ. ಇದರಲ್ಲಿ ನಮ್ಮವರ ಕೈವಾಡವಿದೆಯೋ ಅಥವಾ ಹೊರಗಿನವರ ಪಿತೂರಿಯೋ ಎನ್ನುವುದು ಜಗಜ್ಜಾಹೀರಾಗಲಿ&quot; ಎಂದು ಸವಾಲು ಹಾಕಿದರು.&lt;/p&gt;&lt;h2&gt;ಟಾರ್ಗೆಟ್ ಮಾಡಲು ಡಿಕೆಶಿ ಭವಿಷ್ಯದ ಸಿಎಂ ಎಂದಿದ್ದೇ ಕಾರಣವೇ?&lt;/h2&gt;&lt;p&gt;ತಮ್ಮನ್ನು ರಾಜಕೀಯವಾಗಿ ಟಾರ್ಗೆಟ್ ಮಾಡುತ್ತಿರುವುದರ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟ ಶಾಸಕ ಸುರೇಶ್, ಕಳೆದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಯ ಅನುದಾನದ ವಿಷಯವಾಗಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದೆ. ಕ್ಷೇತ್ರದ ಹಿತದೃಷ್ಟಿಯಿಂದ ಅನುದಾನ ಕೇಳುವಾಗ, ಅವರನ್ನು 'ಭಾವಿ ಮುಖ್ಯಮಂತ್ರಿ' ಎಂದು ಕರೆದಿದ್ದೆ. ನನ್ನ ಕ್ಷೇತ್ರದ ಕೆಲಸಕ್ಕಾಗಿ ನಾನು ಆಡಿದ ಆ ಒಂದು ಮಾತು ಈಗ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರಬಹುದು. ಅದೇ ಕಾರಣವನ್ನು ಇಟ್ಟುಕೊಂಡು ಕೆಲವರು ನನ್ನ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h2&gt;ಧರ್ಮಾಧಿಕಾರಿಗಳ ಭೇಟಿ&lt;/h2&gt;&lt;p&gt;ದೇವಸ್ಥಾನದಲ್ಲಿ ಆಣೆ ಪ್ರಮಾಣ ಮತ್ತು ವಿಶೇಷ ಪೂಜೆ ನೆರವೇರಿಸಿದ ನಂತರ, ಶಾಸಕ ಹೆಚ್.ಕೆ. ಸುರೇಶ್ ಅವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು. ಹೆಗ್ಗಡೆಯವರಿಗೆ ಹಾರ ಹಾಕಿ ಗೌರವ ಸಲ್ಲಿಸಿದ ಶಾಸಕರು, ಕೆಲಕಾಲ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿ ಅವರ ಆಶೀರ್ವಾದ ಪಡೆದರು. ಒಟ್ಟಾರೆಯಾಗಿ, ಬಿಜೆಪಿಯ ಒಳಜಗಳ ಹಾಗೂ ಅಡ್ಡ ಮತದಾನದ ವಿವಾದವು ಇದೀಗ ಧರ್ಮಸ್ಥಳದ ಅಂಗಳ ತಲುಪಿದ್ದು, ಮುಂದೇನಾಗಲಿದೆ ಎಂದು ಜಾದು ನೋಡಬೇಕಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/politics/mlc-cross-voting-controversy-beluru-mla-hk-suresh-visit-dharmasthala-manjunatha-temple-gdp/articleshow-mfgqn2r"/>
        </item>
        <item>
            <title><![CDATA[ನಾಳೆಯಿಂದ ಯಲಹಂಕ-ಅರಸೀಕೆರೆ ನಡುವೆ Memu Train ಸರ್ವೀಸ್‌ ಆರಂಭ, ಈ ಸ್ಟೇಷನ್‌ಗಳಲ್ಲಿ ಇರಲಿದೆ ಸ್ಟಾಪ್‌]]></title>
            <link>https://kannada.asianetnews.com/gallery/bengaluru-urban/yelahanka-arsikere-memu-train-service-starts-july-14-timetable-stoppages-san-op7hr1o</link>
            <guid isPermaLink="true">https://kannada.asianetnews.com/gallery/bengaluru-urban/yelahanka-arsikere-memu-train-service-starts-july-14-timetable-stoppages-san-op7hr1o</guid>
            <pubDate>Mon, 13 Jul 2026 11:32:37 +0530</pubDate>
            <description><![CDATA[&lt;p&gt;ಯಲಹಂಕ ಮತ್ತು ಅರಸೀಕೆರೆ ನಡುವೆ ಹೊಸ ಮೇಮು (MEMU) ರೈಲು ಸೇವೆ ಜುಲೈ 14 ರಿಂದ ಆರಂಭವಾಗಲಿದೆ. ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲು, ಯಶವಂತಪುರ, ತುಮಕೂರು, ಮತ್ತು ತಿಪಟೂರಿನಂತಹ ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd0t4yhbyg2axjmk5vpadr9,imgname-railway-board-approves-yelahanka-arsikere-memu-train-service-starting-july-14--2--1783922234321.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಲಹಂಕ ಮತ್ತು ಅರಸೀಕೆರೆ ನಡುವೆ ಹೊಸ ಮೇಮು (MEMU) ರೈಲು ಸೇವೆ ಜುಲೈ 14 ರಿಂದ ಆರಂಭವಾಗಲಿದೆ. ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲು, ಯಶವಂತಪುರ, ತುಮಕೂರು, ಮತ್ತು ತಿಪಟೂರಿನಂತಹ ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸಲಿದೆ.&lt;/p&gt;&lt;img&gt;&lt;p&gt;ಯಲಹಂಕ ಮತ್ತು ಅರಸೀಕೆರೆ ನಡುವೆ ದೈನಂದಿನ ಪ್ರಯಾಣ ಬೆಳೆಸುವ ಸಾರ್ವಜನಿಕರಿಗೆ ರೈಲ್ವೆ ಮಂಡಳಿಯು ಭರ್ಜರಿ ಕೊಡುಗೆ ನೀಡಿದೆ. ಈ ಎರಡು ಪ್ರಮುಖ ನಿಲ್ದಾಣಗಳ ಮಧ್ಯೆ ಹೊಸ ಮೇಮು (MEMU) ರೈಲು ಸೇವೆಗೆ ಅಧಿಕೃತ ಅನುಮೋದನೆ ದೊರೆತಿದ್ದು, ಜುಲೈ 14 ರಿಂದ (ಮಂಗಳವಾರ) ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.&lt;/p&gt;&lt;img&gt;&lt;p&gt;ರೈಲು ಸಂಖ್ಯೆ 66505 ಯಲಹಂಕ-ಅರಸೀಕೆರೆ ಮೇಮು ರೈಲು ಪ್ರತಿದಿನ ಬೆಳಿಗ್ಗೆ 6:45 ಕ್ಕೆ ಯಲಹಂಕದಿಂದ ಹೊರಟು, 11:00 ಗಂಟೆಗೆ ಅರಸೀಕೆರೆಯನ್ನು ತಲುಪಲಿದೆ. ಅದೇ ರೀತಿ ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 66506 ಅರಸೀಕೆರೆ-ಯಲಹಂಕ ಮೇಮು ರೈಲು ಮಧ್ಯಾಹ್ನ 2:10 ಕ್ಕೆ ಅರಸೀಕೆರೆಯಿಂದ ನಿರ್ಗಮಿಸಿ, ಸಂಜೆ 7:15 ಕ್ಕೆ ಯಲಹಂಕ ನಿಲ್ದಾಣಕ್ಕೆ ಬಂದು ತಲುಪಲಿದೆ.&lt;/p&gt;&lt;img&gt;&lt;p&gt;ಈ ಹೊಸ ರೈಲು ಸೇವೆಯು ಒಟ್ಟು 8 ಮೇಮು (MEMU) ಕೋಚ್&zwnj;ಗಳನ್ನು ಒಳಗೊಂಡಿರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ರೈಲು ವಾರದಲ್ಲಿ ಒಟ್ಟು 6 ದಿನಗಳ ಕಾಲ (ಭಾನುವಾರವನ್ನು ಹೊರತುಪಡಿಸಿ) ನಿಯಮಿತವಾಗಿ ಸಂಚರಿಸಲಿದೆ.&lt;/p&gt;&lt;img&gt;&lt;p&gt;ಹೊಸ ಯೋಜನೆಯ ಅಧಿಕೃತ ಚಾಲನೆಗಾಗಿ ಜುಲೈ 13 ರಂದು (ಸೋಮವಾರ) ವಿಶೇಷ ಉದ್ಘಾಟನಾ ರೈಲನ್ನು ಓಡಿಸಲಾಗುತ್ತಿದೆ. ನೈಋತ್ಯ ರೈಲ್ವೆಯ (SWR) ಪ್ರಕಟಣೆಯ ಪ್ರಕಾರ, ಈ ಸೇವೆಯು ಯಲಹಂಕ, ಯಶವಂತಪುರ, ತುಮಕೂರು, ತಿಪಟೂರು ಮತ್ತು ಅರಸೀಕೆರೆ ನಡುವೆ ಸಂಚರಿಸುವ ಮಧ್ಯಮ ವರ್ಗದ ಪ್ರಯಾಣಿಕರಿಗೆ ಅತ್ಯಂತ ಆರ್ಥಿಕ, ಆರಾಮದಾಯಕ ಮತ್ತು ನಂಬಿಕಸ್ಥ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಿದೆ.&lt;/p&gt;&lt;img&gt;&lt;p&gt;ಈ ರೈಲು ಮಾರ್ಗವು ಬೆಂಗಳೂರಿನ ಹೊರವಲಯ ಹಾಗೂ ಗ್ರಾಮಾಂತರ ಪ್ರದೇಶಗಳ ನಡುವಿನ ಸಂಪರ್ಕವನ್ನು ಗಣನೀಯವಾಗಿ ಸುಧಾರಿಸಲಿದೆ. ಯಲಹಂಕದಿಂದ ಹೊರಡುವ ರೈಲು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಯಶವಂತಪುರ, ತುಮಕೂರು ಹಾಗೂ ತಿಪಟೂರು ನಗರಗಳನ್ನು ಜೋಡಿಸುವ ಮೂಲಕ ಸಾವಿರಾರು ದೈನಂದಿನ ಉದ್ಯೋಗಿಗಳಿಗೆ ನೆರವಾಗಲಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲು ಮಾರ್ಗದ ಮಧ್ಯೆ ಬರುವ ಒಟ್ಟು 26 ಸಣ್ಣ ಮತ್ತು ದೊಡ್ಡ ನಿಲ್ದಾಣಗಳಲ್ಲಿ ನಿಲ್ಲಲಿದೆ. ನಿಲ್ದಾಣಗಳ ವಿವರ ಹೀಗಿದೆ:&lt;/p&gt;&lt;p&gt;ಕೊಡಿಗೆಹಳ್ಳಿ, ಯಶವಂತಪುರ, ಚಿಕ್ಕಬಾಣಾವರ, ಗೊಲ್ಲಹಳ್ಳಿ, ಬೈರನಾಯಕನಹಳ್ಳಿ, ದೊಡ್ಡಬೆಲೆ, ಮುದ್ದಲಿಂಗನಹಳ್ಳಿ, ನಿಡವಂದ, ದಾಬಸ್&zwnj;ಪೇಟೆ, ಹಿರೇಹಳ್ಳಿ, ಕ್ಯಾತ್ಸಂದ್ರ, ತುಮಕೂರು, ಹೆಗ್ಗರೆ ಹಾಲ್ಟ್, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ, ಕರ್ಡಿ, ಬನಶಂಕರಿ ಹಾಲ್ಟ್, ತಿಪಟೂರು, ಶ್ರೀ ಶಾರದಾನಗರ, ಹೊನ್ನವಳ್ಳಿ ರೋಡ್ ಮತ್ತು ಆದಿಹಳ್ಳಿ.&lt;/p&gt;]]></content:encoded>
            <category>hassan</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/yelahanka-arsikere-memu-train-service-starts-july-14-timetable-stoppages-san-op7hr1o"/>
        </item>
        <item>
            <title><![CDATA[ಅಮ್ಮನೆದುರೇ ಪುನೀತ್ ಕೆರೆಹಳ್ಳಿ ಮತ್ತೆ ಬಂಧನ; ತಮ್ಮನ ಮದುವೆಗೆ ಬಂದವನನ್ನ ಬಂಧಿಸಿದ್ದಕ್ಕೆ ತಾಯಿ ಕಣ್ಣೀರು!]]></title>
            <link>https://kannada.asianetnews.com/karnataka-districts/hindu-activist-puneeth-kerehalli-arrested-in-hassan-mother-breaks-down-as-police-take-him-away-sat/articleshow-os2w903</link>
            <guid isPermaLink="true">https://kannada.asianetnews.com/karnataka-districts/hindu-activist-puneeth-kerehalli-arrested-in-hassan-mother-breaks-down-as-police-take-him-away-sat/articleshow-os2w903</guid>
            <pubDate>Fri, 03 Jul 2026 18:58:29 +0530</pubDate>
            <description><![CDATA[&lt;p&gt;ಮುಸ್ಲಿಂ ಧರ್ಮಗುರುಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಯನ್ನು ಬೆಂಗಳೂರಿನ ಪೊಲೀಸರು ಹಾಸನದಲ್ಲಿ ಬಂಧಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಪುನೀತ್ ಆರೋಪಿಸಿದ್ದು, ಈ ವೇಳೆ ಅವರ ತಾಯಿ ಕಣ್ಣೀರಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwm2kkmzagn9tyvd9ksa00qz,imgname-hindu-activist-puneeth-kerehalli-arrested-1783085256351.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.03): &lt;/strong&gt;ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕೆರೆಹಳ್ಳಿ ಗ್ರಾಮದ ನಿವಾಸದಲ್ಲಿ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಯನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರಜಾಕ್ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/p&gt;&lt;p&gt;ಮುಸ್ಲಿಂ ಧರ್ಮಗುರುಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅಬ್ದುಲ್ ರಜಾಕ್ ಎಂಬುವವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು, ಇಂದು ಬೆಳ್ಳಂಬೆಳಿಗ್ಗೆ ಹಾಸನ ಜಿಲ್ಲೆಯ ಕೆರೆಹಳ್ಳಿಯಲ್ಲಿರುವ ಪುನೀತ್ ಅವರ ಮನೆಗೆ ತೆರಳಿ ಅವರನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;&lt;strong&gt;ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ:&lt;/strong&gt;&lt;/h2&gt;&lt;p&gt;ಬಂಧನದ ವೇಳೆ ಪುನೀತ್ ಕೆರೆಹಳ್ಳಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು. 'ಇದು ರಾಜಕೀಯ ಪ್ರೇರಿತ ಬಂಧನ. ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಬ್ದುಲ್ ರಜಾಕ್ ವಿರುದ್ಧ ನಾನು ಈಗಾಗಲೇ ದೂರು ನೀಡಿದ್ದರೂ, ಪೊಲೀಸರು ಅವನನ್ನು ಬಂಧಿಸದೆ ನನ್ನನ್ನು ಬಂಧಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಮತ್ತು ನನಗೆ ಜೀವ ಬೆದರಿಕೆ ಇದೆ' ಎಂದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಕಣ್ಣೀರಿಟ್ಟ ತಾಯಿ:&lt;/strong&gt;&lt;/h2&gt;&lt;p&gt;ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಕರೆದೊಯ್ಯುತ್ತಿದ್ದಾಗ ಮನೆಯಲ್ಲಿದ್ದ ಅವರ ತಾಯಿ ಕಣ್ಣೀರಿಟ್ಟರು. ಮಗನ ಬಂಧನದಿಂದ ಆಘಾತಕ್ಕೊಳಗಾದ ಅವರು ಮಗನನ್ನು ಬಿಡುವಂತೆ ಪೊಲೀಸರ ಬಳಿ ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಪುನೀತ್ ಬಂಧನವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ವಿಚಾರಣೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Hindu activist Puneeth Kerehalli has been arrested based on false accusations.After recently filing a complaint at Basavanagudi Police Station over threats to his life, he now questions why the complainant has become the accused.He said that action is politically motivated. pic.twitter.com/hnvx9x3w54&lt;/p&gt;&lt;p&gt;&mdash; Mohan Gowda (@Mohan_HJS) July 3, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hindu-activist-puneeth-kerehalli-arrested-in-hassan-mother-breaks-down-as-police-take-him-away-sat/articleshow-os2w903"/>
        </item>
        <item>
            <title><![CDATA[ಹಾಸನ ನಗರದ ರೈಲ್ವೆ ಸೇತುವೆ ಎರಡೂ ಬದಿ ಸಂಚಾರ ಯಾವಾಗ? ಸಂಸದ ಶ್ರೇಯಸ್ ಪಟೇಲ್ ಮಹತ್ವದ ಘೋಷಣೆ]]></title>
            <link>https://kannada.asianetnews.com/karnataka-districts/mp-shreyas-patel-said-that-work-on-railway-flyover-in-hassan-city-will-be-completed-by-the-end-of-november-mrq/articleshow-uo6d4el</link>
            <guid isPermaLink="true">https://kannada.asianetnews.com/karnataka-districts/mp-shreyas-patel-said-that-work-on-railway-flyover-in-hassan-city-will-be-completed-by-the-end-of-november-mrq/articleshow-uo6d4el</guid>
            <pubDate>Thu, 18 Jun 2026 07:42:57 +0530</pubDate>
            <description><![CDATA[ಹಾಸನ ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದ್ದಾರೆ. ಜೊತೆಗೆ, ಗೃಹಲಕ್ಷ್ಮೀ ಯೋಜನೆಯು ಸ್ಥಗಿತಗೊಳ್ಳುವುದಿಲ್ಲ, ಬದಲಿಗೆ ಪರಿಷ್ಕರಣೆಗಾಗಿ ಮರು-ನೋಂದಣಿ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvc7s9w40194sw1e4swsxvm9,imgname-shreyas-patel-1781748508548.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ನಗರದ ಹೃದಯಭಾಗದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಶಿವಲಿಂಗೇಗೌಡರು ಸಚಿವರಾಗುವುದು ಬಹುತೇಕ ಖಚಿತ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.&lt;/p&gt;&lt;p&gt;ನಗರದ ಎನ್. ಆರ್&zwnj;. ವೃತ್ತದಿಂದ ಜಿಲ್ಲಾ ನ್ಯಾಯಾಲಯದವರೆಗೂ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬುಧವಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅಗತ್ಯ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು ಕಾಮಗಾರಿ ವೇಗವಾಗಿ ಸಾಗುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಮುಗಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.&amp;nbsp;&lt;/p&gt;&lt;h2&gt;&lt;strong&gt;ಗ್ಯಾರಂಟಿ ಯೋಜನೆ ಪರಿಷ್ಕರಣೆ&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಪ್ರತಿಕ್ರಿಯಿಸಿದ ಶ್ರೇಯಸ್ ಪಟೇಲ್, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಯಾವುದೇ ರೀತಿಯ ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು. ಮತದಾರರ ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಿಸುವಂತೆ ಸರ್ಕಾರದ ಯೋಜನೆಗಳಿಗೂ ಪರಿಷ್ಕರಣೆ ಅಗತ್ಯವಾಗುತ್ತದೆ. ಮುಖ್ಯಮಂತ್ರಿಗಳು ಮತ್ತೊಮ್ಮೆ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಿದ್ದು, ದಾಖಲೆಗಳನ್ನು ಸಲ್ಲಿಸಿದ ಪ್ರತಿಯೊಬ್ಬ ಅರ್ಹ ಫಲಾನುಭವಿಯ ಖಾತೆಗೆ ಹಣ ಜಮೆಯಾಗಲಿದೆ ಎಂದರು.&lt;/p&gt;&lt;p&gt;ಮಹಿಳೆಯರು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಯೇ ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ನಡೆಸಲಿದ್ದಾರೆ. ಗೃಹಲಕ್ಷ್ಮೀ ಹಣ ಸ್ಥಗಿತಗೊಳ್ಳಲಿದೆ ಎಂಬ ಸುಳ್ಳು ಸುದ್ದಿಗಳನ್ನು ವಿರೋಧ ಪಕ್ಷದವರು ಹರಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಡವರು, ದೀನ ದಲಿತರು ಹಾಗೂ ಸಾಮಾನ್ಯ ವರ್ಗದ ಜನರ ಪರವಾಗಿ ಕೆಲಸ ಮಾಡುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹2.56 ಲಕ್ಷ ಕೋಟಿ ವೆಚ್ಚ ಮಾಡಿದೆ. ಮುಂದೆಯೂ ಜನಪರ ಕಾರ್ಯಕ್ರಮಗಳು ಮುಂದುವರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.&amp;nbsp;&lt;/p&gt;&lt;h3&gt;&lt;strong&gt;ಪಿಂಚಣಿ ಹಣ ಸ್ಥಗಿತ&lt;/strong&gt;&lt;/h3&gt;&lt;p&gt;ಕೆಲವರಿಗೆ ಪಿಂಚಣಿ ಹಣ ಸ್ಥಗಿತಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಧಾರ್&zwnj; ಸೇರಿದಂತೆ ವಿವಿಧ ದಾಖಲೆಗಳಲ್ಲಿ ವಯಸ್ಸು ಹಾಗೂ ಇತರ ಮಾಹಿತಿಗಳ ಹೊಂದಾಣಿಕೆ ಇಲ್ಲದ ಕಾರಣ ತಾತ್ಕಾಲಿಕವಾಗಿ ಪಾವತಿ ಸ್ಥಗಿತಗೊಂಡಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ತಕ್ಷಣ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಪರಿಶೀಲನೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಡೆಯುತ್ತಿದೆ ಎಂದು ತಿಳಿಸಿದರು.&lt;/p&gt;&lt;p&gt;ಇದೆ ವೇಳೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು, ಕಾಂಗ್ರೆಸ್ ಮುಖಂಡರಾದ ತಾರಾಚಂದನ್, ರಘು ದಾಸರಕೊಪ್ಪಲು, ಇಸ್ಮಾಯಿಲ್, ರಾಮಚಂದ್ರ, ವೆಂಕಟೇಗೌಡ ಇತರರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mp-shreyas-patel-said-that-work-on-railway-flyover-in-hassan-city-will-be-completed-by-the-end-of-november-mrq/articleshow-uo6d4el"/>
        </item>
        <item>
            <title><![CDATA[ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪ: ಯುವಕನ ಅಪಹರಿಸಿ ಹಲ್ಲೆ, ಬೇಲೂರಲ್ಲಿ ಭಾರೀ ಘರ್ಷಣೆ]]></title>
            <link>https://kannada.asianetnews.com/crime/love-marriage-assault-clash-police-case-hassan-belur-gvd/articleshow-vwgfn02</link>
            <guid isPermaLink="true">https://kannada.asianetnews.com/crime/love-marriage-assault-clash-police-case-hassan-belur-gvd/articleshow-vwgfn02</guid>
            <pubDate>Wed, 15 Jul 2026 22:11:53 +0530</pubDate>
            <description><![CDATA[&lt;p&gt;Hassan News: ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದಿದ್ದು, ಬಳಿಕ ಎರಡು ಗುಂಪುಗಳ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxk9bd6v9wt0m8qavad2c0at,imgname-bjb-1784132515035.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.15): &lt;/strong&gt;ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿ ನಗರದಲ್ಲಿ ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದಿದ್ದು, ಬಳಿಕ ಎರಡು ಗುಂಪುಗಳ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ. ಘರ್ಷಣೆ ವೇಳೆ ಮೂರು ಕಾರುಗಳು ಜಖಂಗೊಂಡಿದ್ದು, ಜಗಳ ಬಿಡಿಸಲು ಮುಂದಾದ ಪೊಲೀಸರ ಮೇಲೂ ಹಲ್ಲೆ ನಡೆದ ಪರಿಣಾಮ ಸಿಪಿಐ ಹಾಗೂ ಎಎಸ್&zwnj;ಐ ಗಾಯಗೊಂಡಿದ್ದಾರೆ.&lt;/p&gt;&lt;p&gt;ಹಲ್ಲೆಗೊಳಗಾದ ಯುವಕನನ್ನು ರೋಷನ್ ಎಂದು ಗುರುತಿಸಲಾಗಿದೆ. ಜುಲೈ 1ರಂದು ಬಂಟೇನಹಳ್ಳಿ ಗ್ರಾಮದ ಸಾನಿಯಾ ಹಾಗೂ ಮುದಿಗೆರೆ ಗ್ರಾಮದ ಆಸೀಫ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಈ ವಿವಾಹಕ್ಕೆ ರೋಷನ್ ಬೆಂಬಲ ನೀಡಿದ್ದಾನೆ ಎಂಬ ಆರೋಪದ ಜೊತೆಗೆ, ಜೆಪಿ ನಗರದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಶಾಹೀಂ ಜೊತೆಗಿನ ಹಳೆಯ ವೈಷಮ್ಯವೂ ಘಟನೆಯ ಹಿನ್ನೆಲೆಯಾಗಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ಘಟನೆಯ ದಿನ ರೆಫ್ರಿಜರೇಟರ್ ರಿಪೇರಿ ಕೆಲಸ ಮಾಡುತ್ತಿದ್ದ ರೋಷನ್ ಅವರನ್ನು &quot;ಮಾತನಾಡಬೇಕಿದೆ&quot; ಎಂದು ಹೇಳಿ ಇನ್ನೋವಾ ಕಾರಿನಲ್ಲಿ ಕರೆದೊಯ್ದ ಶಾಹೀಂ ಹಾಗೂ ಶಿವಮೊಗ್ಗ ಮತ್ತು ಮಂಗಳೂರು ಮೂಲದ ಕೆಲ ಯುವಕರು, ನಾಗೇನಹಳ್ಳಿ ಗ್ರಾಮದ ಸಮೀಪ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಹಲ್ಲೆಗೊಳಗಾದ ರೋಷನ್ ಅವರನ್ನು ಅದೇ ಕಾರಿನಲ್ಲಿ ಮತ್ತೆ ಜೆಪಿ ನಗರಕ್ಕೆ ಕರೆತಂದು ಬಿಟ್ಟು ಹೋಗಲು ಯತ್ನಿಸಿದ್ದಾರೆ.&lt;/p&gt;&lt;p&gt;ಇದನ್ನು ಗಮನಿಸಿದ ರೋಷನ್ ಸ್ನೇಹಿತರು ಹಾಗೂ ಸ್ಥಳೀಯರು ಆಕ್ರೋಶಗೊಂಡು ಕಾರನ್ನು ಅಡ್ಡಗಟ್ಟಿದ್ದಾರೆ. ಕಾರಿನಲ್ಲಿದ್ದ ಶಾಹೀಂ, ಮಹಮದ್ ಆಸೀಂ, ಮಹಮದ್ ಆಸೀಫ್, ಶಹಬಾಸ್ ಸೇರಿದಂತೆ ಹಲವರನ್ನು ಕೆಳಗಿಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂರು ಕಾರುಗಳು ಜಖಂಗೊಂಡಿದ್ದು, ಕೆಲಕಾಲ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;h2&gt;&lt;strong&gt;ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು&lt;/strong&gt;&lt;/h2&gt;&lt;p&gt;ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬೇಲೂರು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರೂ, ಜಗಳ ಬಿಡಿಸಲು ಯತ್ನಿಸಿದ ವೇಳೆ ಪುಂಡರು ಪೊಲೀಸರನ್ನೇ ತಳ್ಳಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಪಿಐ ರೇವಣ್ಣ ಹಾಗೂ ಎಎಸ್&zwnj;ಐ ಸೋಮಶೇಖರ್ ಗಾಯಗೊಂಡಿದ್ದು, ಅವರ ಮೊಬೈಲ್ ಫೋನ್&zwnj;ಗಳೂ ಜಖಂಗೊಂಡಿವೆ.&lt;/p&gt;&lt;p&gt;ಘರ್ಷಣೆಯಲ್ಲಿ ಗಾಯಗೊಂಡಿರುವ ರೋಷನ್, ಶಾಹೀಂ, ಮಹಮದ್ ಆಸೀಂ, ಮಹಮದ್ ಆಸೀಫ್, ಶಹಬಾಸ್ ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರೇಮ ವಿವಾಹದ ವಿಚಾರವಾಗಿ ಆರಂಭವಾದ ವಿವಾದ ಎರಡು ಗುಂಪುಗಳ ಹಿಂಸಾತ್ಮಕ ಘರ್ಷಣೆಗೆ ತಿರುಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.&lt;/p&gt;]]></content:encoded>
            <category>hassan</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/love-marriage-assault-clash-police-case-hassan-belur-gvd/articleshow-vwgfn02"/>
        </item>
        <item>
            <title><![CDATA[ಕಾಡಂಚಿನ ಶಾಲಾ ಶಿಕ್ಷಕರಿಗೆ ಕಂಠಕ ತಂದ 'ಕರ್ತವ್ಯ' ಆ್ಯಪ್‌; ಆನ್‌ಲೈನ್ ಹಾಜರಾತಿ ದುಸ್ತರ]]></title>
            <link>https://kannada.asianetnews.com/karnataka-districts/teachers-online-attendance-registration-is-difficult-in-rural-parts-of-hill-area-network-problems-lack-of-transport-mrq/articleshow-y7v5uo8</link>
            <guid isPermaLink="true">https://kannada.asianetnews.com/karnataka-districts/teachers-online-attendance-registration-is-difficult-in-rural-parts-of-hill-area-network-problems-lack-of-transport-mrq/articleshow-y7v5uo8</guid>
            <pubDate>Mon, 06 Jul 2026 07:57:42 +0530</pubDate>
            <description><![CDATA[ಸಕಲೇಶಪುರ ತಾಲೂಕಿನ ಶಿಕ್ಷಕರಿಗೆ ಸರ್ಕಾರದ 'ಕರ್ತವ್ಯ' ಮತ್ತು 'ನಿರಂತರ' ಆ್ಯಪ್&zwnj;ಗಳು ತೀವ್ರ ಸಂಕಷ್ಟ ತಂದೊಡ್ಡಿವೆ. ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿನ ನೆಟ್&zwnj;ವರ್ಕ್ ಸಮಸ್ಯೆ, ಸಾರಿಗೆ ಕೊರತೆ ಮತ್ತು ಕಾಡಾನೆಗಳ ಭಯದಿಂದಾಗಿ ಆನ್&zwnj;ಲೈನ್ ಹಾಜರಾತಿ ದಾಖಲಿಸುವುದು ದುಸ್ತರವಾಗಿದ್ದು, ಇದು ಶಿಕ್ಷಕರ ಮನೋಸ್ಥೈರ್ಯವನ್ನು ಕುಗ್ಗಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwtkyxwn298zm0mhyng4kvzt,imgname-govt-school-1783304779669.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿದ್ಯಾಕಾಂತರಾಜ್&lt;/strong&gt;&lt;/p&gt;&lt;p&gt;&lt;strong&gt;ಹಾಸನ: &lt;/strong&gt;ಶಿಕ್ಷಕರ ಕಳ್ಳಾಟಕ್ಕೆ ಬ್ರೇಕ್ ಹಾಕಲು ಸರಕಾರ ಹೊಸದಾಗಿ ಜಾರಿಗೊಳಿಸಿರುವ ನಿಯಮಗಳು ತಾಲೂಕಿನ ಶಿಕ್ಷಕರ ಪಾಲಿಗೆ ಉರುಳಾಗಿ ಪರಿಣಮಿಸಿವೆ.&lt;/p&gt;&lt;p&gt;ಪ್ರಸ್ತುತ ಶೈಕ್ಷಣಿಕ ವರ್ಷದ ಮಾರ್ಚ್ ತಿಂಗಳಿನಿಂದ ಜಾರಿಗೊಳಿಸಿರುವ ಕರ್ತವ್ಯ ಆ್ಯಪ್ ಹಾಗೂ ನಿರಂತರ ಆಪ್&zwnj;ಗಳು ಮಲೆನಾಡಿನ ಶಿಕ್ಷಕರ ಮನೋಸ್ಥೈರ್ಯವನ್ನು ಕುಸಿಯುವಂತೆ ಮಾಡಿವೆ.&lt;/p&gt;&lt;p&gt;ಶಿಕ್ಷಕರ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿರುವುದನ್ನು ದೃಢಪಡಿಸಲು ಸರಕಾರ ಜಾರಿಗೊಳಿಸಿರುವ ಕರ್ತವ್ಯ ಆ್ಯಪ್ ಮೂಲಕ ಹಾಜರಾತಿಯನ್ನು ಹಾಕಬೇಕಿದೆ. ಆದರೆ, ಇದು ಮಲೆನಾಡಿನ ಗ್ರಾಮೀಣ ಭಾಗದ ಶಿಕ್ಷಕರ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದರೆ, ಮಕ್ಕಳ ಹಾಜರಾತಿ ದಾಖಲಿಸಲು ಜಾರಿಗೊಳಿಸಿರುವ ನಿರಂತರ ಆ್ಯಪ್ ಸಹ ಶಿಕ್ಷಕರ ಬೋಧನ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂಬ ಆರೋಪ ದಟ್ಟವಾಗಿ ಕೇಳಿಬರುತ್ತಿದೆ.&lt;/p&gt;&lt;p&gt;ಶಿಕ್ಷಕರು ಬೆಳಗ್ಗೆ 9.45ಕ್ಕೆ ಶಾಲೆಗೆ ಕರ್ತವ್ಯಕ್ಕೆ ಆಗಮಿಸಿ ಆನ್&zwnj;ಲೈನ್ ಮೂಲಕ ಹಾಜುರಾತಿ ದಾಖಲಿಸಬೇಕಿದೆ. ಆದರೆ, ಹಾಜುರಾತಿ ಹಾಕುವುದು ಐದು ನಿಮಿಷ ವಿಳಂಬವಾದರೂ ಗೈರುಹಾಜರಿ ದಾಖಲಾಗುವುದರಿಂದ ಕರ್ತವ್ಯದಲ್ಲಿದ್ದರೂ ಸಂಬಳವಿಲ್ಲದೆ ಕೆಲಸ ಮಾಡಬೇಕಿದೆ. ಇದು ಶಿಕ್ಷಕರ ಒತ್ತಡ ಹೆಚ್ಚಿಸುತ್ತಿದೆ. ತಾಲೂಕಿನ 150 ಪ್ರಾಥಮಿಕ ಶಾಲೆಗಳ ಪೈಕಿ ಶೇ. 95ರಷ್ಟು ಶಾಲೆಗಳು ಗ್ರಾಮೀಣ ಭಾಗದಲ್ಲಿವೆ. ಅದರಲ್ಲೂ ಪಶ್ಚಿಮಘಟ್ಟದಂಚಿನ ಕುಗ್ರಾಮಗಳಲ್ಲಿ ಶೇ. 30ರಷ್ಟು ಶಾಲೆಗಳಿದ್ದು, ಈ ಶಾಲೆಗಳಿಗೆ ತಲುಪಲು ಇಂದಿಗೂ ಸರ್ಕಾರಿ ಸಾರಿಗೆ ಇಲ್ಲದೆ ಇರುವುದರಿಂದ ನಾಲ್ಕರಿಂದ ಐದು ಕಿ. ಮೀ. ನಡೆದು ಶಾಲೆಗಳನ್ನು ತಲುಪಬೇಕಿದೆ. ಅಲ್ಲದೆ ಸಾರಿಗೆ ವ್ಯವಸ್ಥೆ ಇದ್ದರು ಶಾಲೆಯ ಸಮಯಕ್ಕೆ ಬಸ್&zwnj;ಗಳಿಲ್ಲದೆ ಇರುವುದು, ಇದ್ದರೂ ಸರಿಯಾದ ಸಮಯಕ್ಕೆ ಬಸ್ಸುಗಳು ಆಗಮಿಸದಿರುವುದರಿಂದ ಶಿಕ್ಷಕರು ಶಾಲೆಗೆ ತಲುಪುವುದು ವಿಳಂಭವಾಗುತ್ತಿದೆ.&amp;nbsp;&lt;/p&gt;&lt;p&gt;ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದ್ದು ಮಳೆಗಾಲದ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬೀಳುವ ಮರಗಳು ಸಹ ಸಮಸ್ಯೆ ತಂದೊಡ್ಡುತ್ತಿವೆ. ಇದರಿಂದಾಗಿ ವಾರದ ಕನಿಷ್ಠ ಎರಡರಿಂದ ಮೂರು ದಿನಗಳು ಶಿಕ್ಷಕರ ಗೈರನ್ನು ತೊರುತ್ತಿದೆ.&lt;/p&gt;&lt;h2&gt;&lt;strong&gt;ಶಿಕ್ಷಕಿಯರ ಕಣ್ಣೀರು&lt;/strong&gt;&lt;/h2&gt;&lt;p&gt;ಅದರಲ್ಲೂ ಮಹಿಳಾ ಶಿಕ್ಷಕರ ಗೋಳು ಹೇಳತೀರದಾಗಿದ್ದು, ಮಳೆಗಾಲದಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸುವುದು ಅಸಾಧ್ಯ. ಸಾರಿಗೆ ಬಸ್&zwnj;ಗಳು ಸಹ ಸಕಾಲಕ್ಕೆ ಬಾರದೆ ಇರುವುದರಿಂದ ಮಹಿಳಾ ಶಿಕ್ಷಕರು ಕಣ್ಣೀರು ಹಾಕುತ್ತಿದ್ದಾರೆ. ಹರಸಾಹಸ ಪಟ್ಟು ಸಕಾಲಕ್ಕೆ ಶಾಲೆ ತಲುಪಿದರು ವಾರಗಳ ಕಾಲ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯದಿಂದ ನೆಟ್&zwnj;ವರ್ಕ್ ಸಮಸ್ಯೆ ತಲೆದೊರುತ್ತಿದ್ದು ನೆಟ್&zwnj;ವರ್ಕ್ ಸಮಸ್ಯೆಯಿಂದ ಆನ್&zwnj;ಲೈನ್ ಮೂಲಕ ಹಾಜರಾತಿ ಹಾಕಲು ಸಾಧ್ಯವಾಗುತ್ತಿಲ್ಲ. ಸಂಜೆ 4.30 ಕ್ಕೆ ಮತ್ತೆ ಕರ್ತವ್ಯದಿಂದ ಬಿಡುಗಡೆ ಹಾಜರಾತಿ ಹಾಕಬೇಕಿದೆ. ಆದರೆ, ಸಾಕಷ್ಟು ಗ್ರಾಮೀಣ ಶಾಲೆಗಳ ನೆಟ್&zwnj;ವರ್ಕ್ ಸಮಸ್ಯೆಯಿಂದ ಹಾಜುರಾತಿ ಹಾಕಲು ತೀರ ವಿಳಂಬವಾಗುತ್ತಿದ್ದು, ತಾಲೂಕಿನ ಅಚ್ಚನಹಳ್ಳಿ ಶಾಲೆಯಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕಳೆದೊಂದು ವಾರದಿಂದ ಸಂಜೆ ಆರು ಗಂಟೆಯಾದರೂ ಹಾಜರಾತಿ ಹಾಕಲು ಸಾಧ್ಯವಾಗದೆ ಶಿಕ್ಷಕರು ಪರದಾಟ ನಡೆಸಿದ್ದು ಹಾಜರಾತಿ ಹಾಕದೆ ತೆರಳಿದರೆ ಸಂಬಳ ಕಡಿತಗೊಳ್ಳುವ ಭಯ ಕಾಡುತ್ತಿದೆ.&lt;/p&gt;&lt;p&gt;ಅಚ್ಚನಹಳ್ಳಿ ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ಸಂಜೆ 4.30ಕ್ಕೆ ಬಸ್ಸಿನ ವ್ಯವಸ್ಥೆ ಇದೆ. ಆದರೆ ಶಿಕ್ಷಕರಿಗೆ ಹಾಜರಾತಿ ಹಾಕಲು ವಿಳಂಬವಾಗುವುದರಿಂದ ಬಸ್&zwnj; ಸಹ ಮಿಸ್ ಆಗುವುದರಿಂದ ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ರೀತಿಯಾದ ಸಮಸ್ಯೆ ಬಹುತೇಕ ಗ್ರಾಮೀಣ ಭಾಗದ ಶಿಕ್ಷಕರನ್ನು ಕಾಡುತ್ತಿದೆ.&lt;/p&gt;&lt;h3&gt;&lt;strong&gt;ವಿದ್ಯಾರ್ಥಿಗಳ ಹಾಜರಾತಿ ಕಷ್ಟ&lt;/strong&gt;&lt;/h3&gt;&lt;p&gt;ಶಿಕ್ಷಕರ ಕರ್ತವ್ಯ ಹಾಜರಾತಿ ಹಾಕಿದರು ವಿದ್ಯಾರ್ಥಿಗಳ ಹಾಜುರಾತಿಗೆ ನೆಟ್&zwnj;ವರ್ಕ್ ಸಮಸ್ಯೆಯಿಂದ ಹಾಜರಾತಿ ವಿಳಂಬವಾಗುತ್ತಿದ್ದು ಶಾಲೆಯ ಪ್ರತಿ ತರಗತಿಯ ವಿದ್ಯಾರ್ಥಿಗಳ ಹಾಜರಾತಿಯನ್ನು ಹಾಕಲು ಕನಿಷ್ಠ ಗಂಟೆಗಳ ಕಾಲ ಸಮಯ ಹಿಡಿಯುವುದರಿಂದ ಭೋದನೆಗೆ ಸಮಯವೇ ದೊರೆಯುತ್ತಿಲ್ಲ. ಗಂಟೆಗಳ ಕಾಲ ಕೈಯಲ್ಲಿ ಮೊಬೈಲ್ ಹಿಡಿದು ಕೆಲಸ ಮಾಡ ಬೇಕಿರುವುದರಿಂದ ಸರಕಾರದ ಮೊಬೈಲ್ ಇಡಿ ಪುಸ್ತಕ ಹಿಡಿ ಎಂಬ ತತ್ವ ಪಾಲಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಸರಕಾರದ ೧೦ಕ್ಕೂ ಅಧಿಕ ಆ್ಯಪ್ ಮೂಲಕ ನಿರಂತರವಾಗಿ ಇಲಾಖೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸ ಬೇಕಿರುವುದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತಿದ್ದು ಶಿಕ್ಷಕರ ವೃತ್ತಿ ಹೊರತುಪಡಿಸಿ ಬೇರೆ ಎಲ್ಲ ಕೆಲಸ ಮಾಡಲು ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆಳಲು ಶಿಕ್ಷಕ ವರ್ಗದ್ದು.&lt;/p&gt;&lt;p&gt;ಸರಕಾರ ೯.೪೫ ಕ್ಕೆ ಶಾಲೆ ತಲುಪಿ ಹಾಜುರಾತಿ ಹಾಕಬೇಕು ಎಂಬ ನಿಯಮ ಕಡ್ಡಾಯಗೊಳಿಸಿದೆ. ಈ ಮಧ್ಯೆ ಶಿಕ್ಷಕರು ಶಾಲೆಯ ಬಿಸಿಯೂಟಕ್ಕೆ ಬೇಕಿರುವ ತರಕಾರಿ ಹಾಗೂ ಮೊಟ್ಟೆಗಳನ್ನು ಖರೀದಿಸಿ ಶಾಲೆ ತಲುಪ ಬೇಕಿರುವುದರಿಂದ ಶಿಕ್ಷಕರ ಒತ್ತಡವನ್ನು ದ್ವಿಗುಣಗೊಳಿಸಿದೆ. ಕರ್ತವ್ಯ, ನಿರಂತರ ಹಾಗೂ ಇತರೆ ಆ್ಯಪ್ ಬಳಕೆಯನ್ನು ಶಿಕ್ಷಕರು ತಮ್ಮ ಸ್ವಂತ ಮೊಬೈಲ್&zwnj;ಗಳ ಮೂಲಕ ಮಾಡಬೇಕಿದೆ. ಇದಕ್ಕೆ ವೆಚ್ಚವಾಗುವ ಖರ್ಚನ್ನು ಶಿಕ್ಷಕರೆ ಭರಿಸಬೇಕಿದ್ದು ಕನಿಷ್ಠ ಟ್ಯಾಬ್ ವ್ಯವಸ್ಥೆ ಕಲ್ಪಿಸಿ ಎಂಬ ಶಿಕ್ಷಕರ ಬೇಡಿಕೆಗೂ ಯಾವುದೇ ಬೆಲೆ ಇಲ್ಲ ಎಂಬ ಬೇಸರ ಶಿಕ್ಷಕರದ್ದು.&lt;/p&gt;&lt;p&gt;&lt;strong&gt;ಮೊಟ್ಟೆ ಹೊರೆ&lt;/strong&gt;&lt;/p&gt;&lt;p&gt;ವಿದ್ಯಾರ್ಥಿಗಳಿಗೆ ಬಿಸಿಯೂಟದೊಂದಿಗೆ ನೀಡಲಾಗುವ ಮೊಟ್ಟೆಗೆ ಸರಕಾರ 5.30 ರು. ಗಳನ್ನು ನೀಡುತ್ತಿದೆ. ಆದರೆ, ಕಳೆದ ಒಂದು ವರ್ಷದ ಹಿಂದೆಯೆ ಮೊಟ್ಟೆಯ ಬೆಲೆ ಪರಿಷ್ಕರಣೆಗೊಂಡಿದೆ. ಪಟ್ಟಣದಲ್ಲಿ ಪ್ರತಿಮೊಟ್ಟೆಯ ಬೆಲೆ ೮ ರೂಗಳಾಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ 9 ರೂಗಳಾಗಿದೆ. ಆದ್ದರಿಂದ ಪ್ರತಿಮೊಟ್ಟೆಗೆ ಶಿಕ್ಷಕರು 3 ರೂಗಳಿಂದ 4 ರೂಗಳನ್ನು ಹೆಚ್ಚುವರಿಯಾಗಿ ತಮ್ಮ ಸಂಬಳದ ಹಣದಿಂದ ಪಾವತಿಸಬೇಕಿದೆ. ಕನಿಷ್ಠ 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ಮೊಟ್ಟೆಗಾಗಿ ಶಿಕ್ಷಕರು ತಮ್ಮ ಹಣದಿಂದ ಮುನ್ನೂರುರೂಗಳಿಂದ ನಾಲ್ಕನೂರುರೂಗಳವರಗೆ ಪ್ರತಿದಿನ ಪಾವತಿಸ ಬೇಕಿರುವುದು ಶಿಕ್ಷಕರಿಗೆ ಹೊರೆಯಾಗಿ ಪರಿಣಮಿಸಿದೆ.&lt;/p&gt;&lt;h3&gt;&lt;strong&gt;ಕಾಡಾನೆ ಸಮಸ್ಯೆ&lt;/strong&gt;&lt;/h3&gt;&lt;p&gt;ತಾಲೂಕಿನ ಹಾನುಬಾಳ್, ಹೆತ್ತೂರು,ಯಸಳೂರು ಹಾಗೂ ಬೆಳಗೋಡು ಹೋಬಳಿಯಲ್ಲಿ ಕಾಡಾನೆ ಕಾಟ ಅತಿಯಾಗಿದ್ದು ಮುಸ್ಸಾಂಜೆ ಮುನ್ನವೆ ರಸ್ತೆಗೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಶಿಕ್ಷಕರು ತಮ್ಮ ಕರ್ತವ್ಯ ಮಗಿಸಿ ಮನೆಗೆ ತೆರಳುವ ವೇಳೆಗೆ ಮುಸ್ಸಂಜೆಯಾಗುತ್ತಿದ್ದು ಕಾಡಾನೆ ಕಾಟದ ನಡುವೆ ಜೀವಭಯದಲ್ಲಿ ನಿತ್ಯ ಕರ್ತವ್ಯ ನಿರ್ವಹಿಸ ಬೇಕಿದೆ.&lt;/p&gt;&lt;p&gt;&lt;strong&gt;ಕಾರಿನ ವ್ಯವಸ್ಥೆ&lt;/strong&gt;&lt;/p&gt;&lt;p&gt;ತಾಲೂಕಿನ ಬೆಳಗೋಡು ಹೋಬಳಿಯ ಹಳೇಕೆರೆ ಗ್ರಾಮ ಕಾಫಿತೋಟದ ನಡುವೆ ಅವೃತ್ತಗೊಂಡಿದ್ದು ಕಾಡಾನೆ ತವರು ಎಂದು ಈ ಗ್ರಾಮ ಖ್ಯಾತಿ ಪಡೆದಿದ್ದು ಕಳೆದ ಅರ್ಧ ದಶಕದಲ್ಲಿ ಈ ಗ್ರಾಮದ ಇಬ್ಬರು ಕಾಡಾನೆಗೆ ಬಲಿಯಾಗಿರುವುದು ಗ್ರಾಮದಲ್ಲಿ ಕಾಡಾನೆ ಹಾವಳಿಯ ಪ್ರಮಾಣವನ್ನು ಸೂಚಿಸುತ್ತಿದೆ. ಇದೆ ಕಾರಣಕ್ಕೆ ಇಲ್ಲಿರುವ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತ ತಲುಪಿತ್ತು. ಶಾಲೆಯನ್ನು ಉಳಿಸಿ ಕೊಳ್ಳಲೇ ಬೇಕು ಎಂಬ ಪಣ ತೊಟ್ಟ ಶಾಲೆಯ ತಮ್ಮಣ್ಣಶೆಟ್ಟಿ ಮತ್ತೊರ್ವ ಶಿಕ್ಷಕರು ತಮ್ಮ ಸ್ವಂತ ಹಣದಿಂದ ಕಾರು ಖರೀಧಿಸಿ ಹಳೇಕೆರೆ ಗ್ರಾಮ ಸಮೀಪದ ಗ್ರಾಮಗಳಿಂದ ಮಕ್ಕಳನ್ನು ಕರೆತರುವ ಮೂಲಕ ಶಾಲೆ ಉಳಿವಿಗೆ ಕಾರಣಿಭೂತರಾಗಿದ್ದಾರೆ.&lt;/p&gt;&lt;p&gt;ರಾಜ್ಯಾದ್ಯಂತ ಜಾರಿಯಾಗಿರುವ ನಿಯಮವನ್ನು ನಮ್ಮ ತಾಲೂಕಿಗೆ ಸಡಿಲಗೊಳಿಸಿ ಎನ್ನಲು ಸಾದ್ಯವಿಲ್ಲ. ಕೆಲವೊಂದು ಸಮಸ್ಯೆಗಳಿದ್ದು ಮುಂದಿನ ದಿನಗಳಲ್ಲಿ ಸರಿಹೋಗುವ ಆಶಾಭಾವನೆ ಇದೆ. ಹಾಜರಾತಿಯಾಗದಿದ್ದರೆ ಸಂಬಳ ಕಡಿತಗೊಳ್ಳಲಿದೆ ಎಂಬದಕ್ಕೆ ಇದುವರಗೆ ಪುರಾವೆ ದೊರೆಯದಾಗಿದೆ ಎಂದು ಸಕಲೇಶಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಹೇಳಿದ್ದಾರೆ.&lt;/p&gt;&lt;p&gt;ಸರಕಾರ ಹೊಸದಾಗಿ ಜಾರಿಮಾಡಿರುವ ಕರ್ತವ್ಯ ಹಾಗೂ ನಿರಂತ ಆಪ್&zwnj;ಗಳು ಮಲೆನಾಡಿನ ಆದರಲ್ಲೂ ಗ್ರಾಮೀಣ ಭಾಗದ ಶಿಕ್ಷಕರ ಮನಸ್ಥೈರ್ಯವನ್ನು ಕಸಿಯುತ್ತಿದೆ. ದಯವಿಟ್ಟು ಮಲೆನಾಡಿಗೆ ಈ ನಿಯಮದಿಂದ ವಿನಾಯಿತಿ ನೀಡಬೇಕು ಎಂದು ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್&zwnj; ಕುಮಾರ್ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/teachers-online-attendance-registration-is-difficult-in-rural-parts-of-hill-area-network-problems-lack-of-transport-mrq/articleshow-y7v5uo8"/>
        </item>
        <item>
            <title><![CDATA[ಹಾಸನ ಲೈಂಗಿಕ ಹಗರಣಕ್ಕೆ ಭರ್ತಿ 2 ವರ್ಷ:  ಪೆನ್‌ಡ್ರೈವ್ ಸ್ಫೋಟದಿಂದ ಜೀವಾವಧಿಯವರೆಗೆ ಪ್ರಜ್ವಲ್ ರೇವಣ್ಣ ಜೈಲು ಜೀವನ]]></title>
            <link>https://kannada.asianetnews.com/state/two-years-of-hassan-case-the-timeline-from-infamous-pen-drive-leak-to-prajwal-revanna-life-imprisonment-gdp/articleshow-yo5cdd9</link>
            <guid isPermaLink="true">https://kannada.asianetnews.com/state/two-years-of-hassan-case-the-timeline-from-infamous-pen-drive-leak-to-prajwal-revanna-life-imprisonment-gdp/articleshow-yo5cdd9</guid>
            <pubDate>Fri, 12 Jun 2026 11:15:11 +0530</pubDate>
            <description><![CDATA[ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣವು ಪೆನ್&zwnj;ಡ್ರೈವ್ ಸ್ಫೋಟದಿಂದ ಆರಂಭವಾಗಿ, ಎಸ್&zwnj;ಐಟಿ ತನಿಖೆಯ ನಂತರ ಆರೋಪಿಗೆ ಜೀವಾವಧಿ ಶಿಕ್ಷೆಯಾಗುವುದರೊಂದಿಗೆ ಅಂತ್ಯಗೊಂಡಿದೆ. ಈ ಪ್ರಕರಣವು ರೇವಣ್ಣ ಕುಟುಂಬವನ್ನೂ ಕಾನೂನಿನ ಸುಳಿಯಲ್ಲಿ ಸಿಲುಕಿಸಿ, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01k1qv5qp1b0fpxtc1wgp2m0hh,imgname-prajwal-revanna--3--1754220650177.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದೇಶಾದ್ಯಂತ ತೀವ್ರ ಆಕ್ರೋಶ ಮತ್ತು ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಬೆಳಕಿಗೆ ಬಂದು ಭರ್ತಿ ಎರಡು ವರ್ಷಗಳು ಕಳೆದಿವೆ. ಕೇವಲ ಒಂದು ರಾಜಕೀಯ ಹಗರಣವಾಗಿ ಆರಂಭವಾದ ಈ ಪ್ರಕರಣ, ತನಿಖೆಯ ಹಂತಗಳಲ್ಲಿ ದೇಶದ ಅತ್ಯಂತ ಗಂಭೀರ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಒಂದಾಗಿ ಮಾರ್ಪಟ್ಟು, ಅಂತಿಮವಾಗಿ ಆರೋಪಿಗೆ ಜೀವಾವಧಿ ಜೈಲು ಶಿಕ್ಷೆಯಾಗುವಲ್ಲಿ ಕೊನೆಗೊಂಡಿದೆ.&lt;/p&gt;&lt;h2&gt;ಹಾಸನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದ ಪೆನ್&zwnj;ಡ್ರೈವ್ ಸ್ಫೋಟ&lt;/h2&gt;&lt;p&gt;ಎರಡು ವರ್ಷಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯ ಅಂತಿಮ ಹಂತದಲ್ಲಿ ಹಾಸನ ಕ್ಷೇತ್ರದಲ್ಲಿ ಅಭೂತಪೂರ್ವ ವಿದ್ಯಮಾನವೊಂದು ಜರುಗಿತು. ಹಾಸನದ ಅಂದಿನ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದವು ಎನ್ನಲಾದ ಸಾವಿರಾರು ಅಶ್ಲೀಲ ವಿಡಿಯೋಗಳು ಒಳಗೊಂಡಿದ್ದ &lsquo;ಪೆನ್&zwnj;ಡ್ರೈವ್&zwnj;&rsquo;ಗಳು ಮತದಾನಕ್ಕೆ ಕೇವಲ 24 ಗಂಟೆಗಳ ಮುನ್ನ ಜಿಲ್ಲಾದ್ಯಂತ ಹಂಚಿಕೆಯಾಗಿ ತೀವ್ರ ಸಂಚಲನ ಮೂಡಿಸಿದವು. ಈ ಘಟನೆಯಿಂದ ಇಡೀ ರಾಜ್ಯ ರಾಜಕಾರಣವೇ ಬೆಚ್ಚಿಬಿದ್ದಿತ್ತು. ಮತದಾನ ಪ್ರಕ್ರಿಯೆ ಮುಗಿದ ಕೆಲವೇ ತಾಸುಗಳಲ್ಲಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್&zwnj;ಪೋರ್ಟ್ ಬಳಸಿ ದೇಶ ತೊರೆದು ಜರ್ಮನಿಗೆ ಪರಾರಿಯಾಗಿದ್ದರು.&lt;/p&gt;&lt;h2&gt;ಎಸ್&zwnj;ಐಟಿ ರಚನೆ ಮತ್ತು ತಲೆಮರೆಸಿಕೊಂಡಿದ್ದ ಸಂಸದನ ಬಂಧನ&lt;/h2&gt;&lt;p&gt;ಸಾರ್ವಜನಿಕವಾಗಿ ವ್ಯಕ್ತವಾದ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಈ ಬೃಹತ್ ಲೈಂಗಿಕ ಹಗರಣದ ಸಮಗ್ರ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಯಿತು. ತನಿಖೆ ಚುರುಕುಗೊಳ್ಳುತ್ತಿದ್ದಂತೆ ಮಾಜಿ ಸಂಸದನ ವಿರುದ್ಧ ಸಂತ್ರಸ್ತೆಯರು ಧ್ವನಿ ಎತ್ತಲಾರಂಭಿಸಿದರು ಮತ್ತು ಒಟ್ಟು ಮೂರು ಪ್ರತ್ಯೇಕ ಅತ್ಯಾ*ಚಾರ ಪ್ರಕರಣಗಳು ದಾಖಲಾದವು. ಸುಮಾರು ಒಂದು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ವಿರುದ್ಧ ಲುಕ್&zwnj;ಔಟ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಯಿತು. ಅಂತಿಮವಾಗಿ ತಾಯ್ನಾಡಿಗೆ ಮರಳಿದ ಕೂಡಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್&zwnj;ಐಟಿ ಅಧಿಕಾರಿಗಳು ಅವರನ್ನು ಬಂಧಿಸಿ ಕಠಿಣ ಕಾನೂನು ಪ್ರಕ್ರಿಯೆಗೆ ಒಳಪಡಿಸಿದರು.&lt;/p&gt;&lt;h2&gt;ರೇವಣ್ಣ ಕುಟುಂಬಕ್ಕೆ ತಟ್ಟಿದ ಕಾನೂನು ಬಿಸಿ&lt;/h2&gt;&lt;p&gt;ಈ ಹಗರಣವು ಕೇವಲ ಪ್ರಜ್ವಲ್ ರೇವಣ್ಣ ಅವರಿಗೆ ಮಾತ್ರ ಸೀಮಿತವಾಗದೆ ಇಡೀ ರೇವಣ್ಣ ಕುಟುಂಬವನ್ನು ಕಾನೂನಿನ ಸುಳಿಗೆ ಸಿಲುಕಿಸಿತು. ಪುತ್ರನ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಅಪಹರಣದ ಆರೋಪದ ಮೇರೆಗೆ ಪ್ರಜ್ವಲ್ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಬಂಧನಕ್ಕೊಳಗಾಗಿ ಜೈಲು ಸೇರಬೇಕಾಯಿತು. ಸಂತ್ರಸ್ತೆಯರ ಮೇಲೆ ಪ್ರಭಾವ ಬೀರಲು ಮತ್ತು ಅಪಹರಣಕ್ಕೆ ಸಹಕರಿಸಿದ ಆರೋಪದ ಅಡಿಯಲ್ಲಿ ತಾಯಿ ಭವಾನಿ ರೇವಣ್ಣ ಅವರೂ ಸಹ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಕಾನೂನು ಹೋರಾಟ ಎದುರಿಸುವಂತಾಯಿತು.&lt;/p&gt;&lt;h2&gt;ಕೋರ್ಟ್&zwnj;ನಿಂದ ಐತಿಹಾಸಿಕ ತೀರ್ಪು: ಪ್ರಜ್ವಲ್&zwnj;ಗೆ ಜೀವಾವಧಿ ಶಿಕ್ಷೆ&lt;/h2&gt;&lt;p&gt;ಎಸ್&zwnj;ಐಟಿ ಅಧಿಕಾರಿಗಳು ಸಲ್ಲಿಸಿದ ಬಲಿಷ್ಠ ಸಾಕ್ಷ್ಯಾಧಾರಗಳು, ಸಂತ್ರಸ್ತೆಯರ ಹೇಳಿಕೆಗಳು ಹಾಗೂ ಡಿಜಿಟಲ್ ಪುರಾವೆಗಳನ್ನು ಪುರಸ್ಕರಿಸಿದ ನ್ಯಾಯಾಲಯವು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿತು. ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾ*ಚಾರ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಜ್ವಲ್&zwnj;ಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿತು. ಪ್ರಸ್ತುತ ಕಂಬಿ ಎಣಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವು, ಎಷ್ಟೇ ಪ್ರಭಾವಿ ರಾಜಕಾರಣಿಯಾಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದಕ್ಕೆ ಮತ್ತು ಸಂತ್ರಸ್ತೆಯರ ಸುದೀರ್ಘ ಹೋರಾಟಕ್ಕೆ ಸಂದ ಜಯವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/state/two-years-of-hassan-case-the-timeline-from-infamous-pen-drive-leak-to-prajwal-revanna-life-imprisonment-gdp/articleshow-yo5cdd9"/>
        </item>
        <item>
            <title><![CDATA[ಕಚೇರಿ ಆರಂಭಕ್ಕೂ ಮುನ್ನವೇ ಕುಸಿದ ತೋಟಗಾರಿಕೆ ಇಲಾಖೆ ಕಟ್ಟಡ ; ಚಾಯ್‌ವಾಲಾನಿಂದ ಉಳಿತು ಜೀವ]]></title>
            <link>https://kannada.asianetnews.com/karnataka-districts/hassan-sakaleshpura-the-horticulture-department-office-building-collapsed-due-to-heavy-rain-mrq/articleshow-zfwg6ig</link>
            <guid isPermaLink="true">https://kannada.asianetnews.com/karnataka-districts/hassan-sakaleshpura-the-horticulture-department-office-building-collapsed-due-to-heavy-rain-mrq/articleshow-zfwg6ig</guid>
            <pubDate>Tue, 14 Jul 2026 07:23:41 +0530</pubDate>
            <description><![CDATA[&lt;p&gt;ಭಾರೀ ಮಳೆಗೆ ತೋಟಗಾರಿಕೆ ಇಲಾಖೆಯ ಕಚೇರಿ ಕಟ್ಟಡ ಕುಸಿದುಬಿದ್ದಿದೆ. ಕಟ್ಟಡ ಕುಸಿಯುವ ಮುನ್ಸೂಚನೆ ನೀಡಿದ ಚಾಯ್&zwnj;ವಾಲಾ ಆದಂ ಅವರ ಎಚ್ಚರಿಕೆಯಿಂದಾಗಿ, ಸಿಬ್ಬಂದಿ ಪ್ರಮುಖ ದಾಖಲೆಗಳನ್ನು ಸ್ಥಳಾಂತರಿಸಿ ದೂರ ಉಳಿದಿದ್ದರಿಂದ ಏಳು ಮಂದಿಯ ಪ್ರಾಣ ಉಳಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxf4yd3c3ajnw5sj7x2b2dps,imgname-hassan-1783993676908.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ಜಿಲ್ಲೆಯ ಸಕಲೇಶಪುರ ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿ ಕಟ್ಟಡ ಭಾನುವಾರ ಸಂಪೂರ್ಣ ಕುಸಿದು ಬಿದ್ದಿದ್ದು, ಕಚೇರಿ ಆರಂಭಕ್ಕೂ ಮುನ್ನವೇ ಘಟನೆ ನಡೆದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಚಾಯ್&zwnj;ವಾಲ್ ಆದಂ ನೀಡಿದ್ರು ಎಚ್ಚರಿಕೆ&lt;/strong&gt;&lt;/h2&gt;&lt;p&gt;ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಕಟ್ಟಡ ಶಿಥಿಲಗೊಂಡಿತ್ತು. ಕಟ್ಟಡದಲ್ಲಿ ಐವರು ಖಾಯಂ ಸಿಬ್ಬಂದಿ ಹಾಗೂ ಇಬ್ಬರು ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಕಚೇರಿಗೆ ಟೀ ನೀಡಲು ಬಂದಿದ್ದ ಆದಂ ಎಂಬುವವರು ಕಟ್ಟಡ ಕುಸಿಯುವ ಹಂತದಲ್ಲಿದ್ದು ಅಪಾಯವಿದೆ ಎಂದು ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ ಶನಿವಾರ ಸಂಜೆ ಕಚೇರಿಯ ಪ್ರಮುಖ ಕಡತಗಳು ಹಾಗೂ ದಾಖಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಭಾನುವಾರ ಮಧ್ಯರಾತ್ರಿ ಕಟ್ಟಡದ ಒಂದು ಭಾಗ ಕುಸಿಯಲಾರಂಭಿಸಿದ್ದು, ಸಿಬ್ಬಂದಿ ಮತ್ತಷ್ಟು ಎಚ್ಚರಿಕೆಯಿಂದ ಕಚೇರಿಯನ್ನು ತೆರೆಯದೆ ಇರಲು ನಿರ್ಧರಿಸಿದ್ದರು. ಬಳಿಕ ಬೆಳಗಿನ ಜಾವ ಕಟ್ಟಡ ಹಂತಹಂತವಾಗಿ ಸಂಪೂರ್ಣ ನೆಲಸಮವಾಗಿದೆ.&lt;/p&gt;&lt;p&gt;ಕಚೇರಿ ಆರಂಭವಾಗುವ ಮುನ್ನವೇ ಕಟ್ಟಡ ಕುಸಿದಿರುವುದು ಹಾಗೂ ಟೀ ಅಂಗಡಿಯ ನೀಡಿದ ಮುನ್ನೆಚ್ಚರಿಕೆಯಿಂದ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದಂತಾಗಿದೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವಸತಿ ಉದ್ದೇಶಕ್ಕಾಗಿ ಮನೆ ಪರವಾನಗಿ ಪಡೆದು ಮಸೀದಿ ನಿರ್ಮಾಣದ ಆರೋಪ; ಸ್ಥಳೀಯರಿಂದ ದೂರು ದಾಖಲು&lt;/strong&gt;&lt;/p&gt;&lt;p&gt;ಕಳೆದ 30 ವರ್ಷಗಳಿಂದ ಕಾಫಿ, ಟೀ ಅಂಗಡಿ ನಡೆಸುತ್ತಿರುವ ಆದಮ್ ಅವರು ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳಿಗೆ ಟೀ ಹಾಗೂ ಕಾಫಿ ಪೂರೈಸುತ್ತಾ ಬಂದಿದ್ದಾರೆ. ಕಟ್ಟಡದ ಸ್ಥಿತಿಯನ್ನು ಚೆನ್ನಾಗಿ ಅರಿತಿದ್ದ ಅವರು ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿ ಎಚ್ಚರಿಕೆ ನೀಡಿದರು. ಇದರ ಪರಿಣಾಮವಾಗಿ ಏಳು ಸಿಬ್ಬಂದಿಯ ಜೀವಗಳೊಂದಿಗೆ ಕಚೇರಿಯಲ್ಲಿದ್ದ ಎಲ್ಲಾ ದಾಖಲೆಗಳು ಸುರಕ್ಷಿತವಾಗಿ ಉಳಿದವು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಂಜನಾದ್ರಿ, ಗೋಕಾಕ್, ಮಧುಗಿರಿ ಸೇರಿದಂತೆ ರಾಜ್ಯದ 13 ಕಡೆಯಲ್ಲಿ ರೋಪ್&zwnj;ವೇ: ಜಾರ್ಜ್&lt;/strong&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-sakaleshpura-the-horticulture-department-office-building-collapsed-due-to-heavy-rain-mrq/articleshow-zfwg6ig"/>
        </item>
    </channel>
</rss>
