<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 06 Jun 2026 17:18:26 +0530</lastBuildDate>
        <atom:link href="https://kannada.asianetnews.com/rss/hassan" rel="self" type="application/rss+xml"/>
        <item>
            <title><![CDATA[ಹಾಸನದಲ್ಲಿ ಕರುಳು ಹಿಂಡುವ ದುರಂತ: ಧರ್ಮಸ್ಥಳದಿಂದ ಹಿಂತಿರುಗುತ್ತಿದ್ದ ತಾಯಿ-ಮಗುವನ್ನು ಬಲಿ ಪಡೆದ ನಾಲೆ!]]></title>
            <link>https://kannada.asianetnews.com/karnataka-districts/hassan-tragedy-mother-and-baby-killed-as-car-falls-into-canal-on-nh-75-gdp/articleshow-0ctznd9</link>
            <guid isPermaLink="true">https://kannada.asianetnews.com/karnataka-districts/hassan-tragedy-mother-and-baby-killed-as-car-falls-into-canal-on-nh-75-gdp/articleshow-0ctznd9</guid>
            <pubDate>Wed, 29 Apr 2026 16:43:51 +0530</pubDate>
            <description><![CDATA[ಹಾಸನದ ಚನ್ನರಾಯಪಟ್ಟಣ ಬಳಿ ಕಾರೊಂದು ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಉರುಳಿಬಿದ್ದ ಪರಿಣಾಮ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧರ್ಮಸ್ಥಳದಿಂದ ದೇವನಹಳ್ಳಿಗೆ ತೆರಳುತ್ತಿದ್ದ ಕುಟುಂಬದ ಇತರ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqcew8bb6ag25zfqt39rfehk,imgname-hassan-tragedy-1777460978027.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಜಿಲ್ಲೆಯಲ್ಲಿ ದಾರುಣ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಾರೊಂದು ನಿಯಂತ್ರಣ ತಪ್ಪಿ ನಾಲೆಗೆ ಪಲ್ಟಿಯಾದ ಪರಿಣಾಮ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ಚನ್ನರಾಯಪಟ್ಟಣ&ndash;ಹಿರೀಸಾವೆ ಮಾರ್ಗದ ಎನ್&zwnj;ಹೆಚ್ 75ರಲ್ಲಿ ನಡೆದಿದೆ.&lt;/p&gt;&lt;p&gt;ಮಲ್ಲವನಘಟ್ಟ ಗ್ರಾಮದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳದಿಂದ ದೇವನಹಳ್ಳಿ ಕಡೆಗೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೇಮಾವತಿ ನಾಲೆಗೆ ಉರುಳಿ ಬಿದ್ದಿದೆ. ಕಾರು ಪಲ್ಟಿಯಾದ ಪರಿಣಾಮ ಒಳಗಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;h2&gt;ತಾಯಿ ಮತ್ತು ಮಗು ಬಲಿ&lt;/h2&gt;&lt;p&gt;ಅಪಘಾತದಲ್ಲಿ ಪ್ರಿಯಾಂಕ (20) ಹಾಗೂ ಅವರ ಒಂದೂವರೆ ವರ್ಷದ ಮಗು ವೈಭವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ . ತಾಯಿ ಮತ್ತು ಮಗುವಿನ ಸಾವು ಕುಟುಂಬ ಸದಸ್ಯರು ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿದೆ.&lt;/p&gt;&lt;p&gt;ಕಾರುದಲ್ಲಿ ಪ್ರಯಾಣಿಸುತ್ತಿದ್ದ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;ಧರ್ಮಸ್ಥಳದಿಂದ ದೇವನೂರಿನತ್ತ ಪ್ರಯಾಣ&lt;/h2&gt;&lt;p&gt;ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಕುಟುಂಬ ಧರ್ಮಸ್ಥಳದಿಂದ ದೇವನಹಳ್ಳಿ ಪ್ರಯಾಣಿಸುತ್ತಿತ್ತು. ವೇಗ ಮತ್ತು ಚಾಲಕನ ನಿಯಂತ್ರಣ ತಪ್ಪಿರುವುದು ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ರಸ್ತೆ ಸುರಕ್ಷತೆ ಬಗ್ಗೆ ಮತ್ತೊಮ್ಮೆ &amp;nbsp;ಯೋಚಿಸುಚಂತೆ ಮಾಡಿದೆ. ಚಾಲಕರು ವೇಗ ನಿಯಂತ್ರಣದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಅತ್ಯಗತ್ಯ ಎಂಬುದನ್ನು ಈ ಘಟನೆ ಸಾರಿ ಹೇಳಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hassan-tragedy-mother-and-baby-killed-as-car-falls-into-canal-on-nh-75-gdp/articleshow-0ctznd9"/>
        </item>
        <item>
            <title><![CDATA[ಬಕ್ರೀದ್ ದಿನವೇ ಪತ್ನಿಯನ್ನ ಕೊಂದ ಪಾಪಿ ಪತಿ... ಚನ್ನರಾಯಪಟ್ಟಣದಲ್ಲಿ ನಿಜಕ್ಕೂ ಏನಾಯ್ತು?]]></title>
            <link>https://kannada.asianetnews.com/crime/channarayapatna-husband-kills-wife-crime-news-police-gvd/articleshow-1izvm2e</link>
            <guid isPermaLink="true">https://kannada.asianetnews.com/crime/channarayapatna-husband-kills-wife-crime-news-police-gvd/articleshow-1izvm2e</guid>
            <pubDate>Thu, 28 May 2026 22:08:43 +0530</pubDate>
            <description><![CDATA[&lt;p&gt;ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣದ ಕಂಚಗಾರ ಬೀದಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಬಕ್ರೀದ್ ಹಬ್ಬದ ದಿನವೇ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯನ್ನು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5p48hs215m8hwn7vvxgyt5p,imgname-fotojet---2025-09-21t180335.851-1758458038050.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮೇ.28): &lt;/strong&gt;ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣದ ಕಂಚಗಾರ ಬೀದಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಬಕ್ರೀದ್ ಹಬ್ಬದ ದಿನವೇ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯನ್ನು ಗುಲ್&zwnj;ಶರ್ ಬಾನು ಎಂದು ಗುರುತಿಸಲಾಗಿದ್ದು, ಪತಿ ಸೈಫ್ ಉಲ್ಲಾ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ.&lt;/p&gt;&lt;p&gt;ಕುಟುಂಬದವರ ಮಾಹಿತಿ ಪ್ರಕಾರ, ಸೈಫ್ ಉಲ್ಲಾ ಮೊದಲಿನಿಂದಲೂ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಹಣಕ್ಕಾಗಿ ಪತ್ನಿಯ ಮನೆಯವರನ್ನು ನಿರಂತರವಾಗಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಹಬ್ಬದ ದಿನವೂ ಜಗಳ ನಡೆಸಿ ಹಲ್ಲೆ ಮಾಡಿದ ಬಳಿಕ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಈ ಪ್ರಕರಣದಲ್ಲಿ ಸೈಫ್ ಉಲ್ಲಾ ಕುಟುಂಬದವರ ಪಾತ್ರವೂ ಇದೆ ಎಂದು ಮೃತಳ ಕುಟುಂಬದವರು ಆರೋಪಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/channarayapatna-husband-kills-wife-crime-news-police-gvd/articleshow-1izvm2e"/>
        </item>
        <item>
            <title><![CDATA[ರಾಜ್ಯದಲ್ಲಿ 60 ಕಿ.ಮೀ ವೇಗದ ಸುಂಟರಗಾಳಿ ಅಬ್ಬರ, ಈ 5 ಜಿಲ್ಲೆಗಳ ಜನರೇ ಎಚ್ಚರ; ಹವಾಮಾನ ಇಲಾಖೆ 'ಡೇಂಜರ್' ಅಲರ್ಟ್!]]></title>
            <link>https://kannada.asianetnews.com/gallery/state/karnataka-weather-report-60-kmph-wind-and-heavy-rain-alert-for-interior-5-districts-sat-2sd2i21</link>
            <guid isPermaLink="true">https://kannada.asianetnews.com/gallery/state/karnataka-weather-report-60-kmph-wind-and-heavy-rain-alert-for-interior-5-districts-sat-2sd2i21</guid>
            <pubDate>Tue, 19 May 2026 15:41:05 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಬಿರುಸುಗೊಂಡಿದ್ದು, ಮೇ 26ರ ಸುಮಾರಿಗೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krztsbbp092nn12as0can513,imgname-screenshot-2026-05-17-202159-1779184741749.png" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಬಿರುಸುಗೊಂಡಿದ್ದು, ಮೇ 26ರ ಸುಮಾರಿಗೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: ರಾ&lt;/strong&gt;ಜ್ಯದಲ್ಲಿ ಮುಂಗಾರು ಪೂರ್ವ ಮಳೆ (Pre-monsoon Rain) ಬಿರುಸುಗೊಂಡಿದ್ದು, ಜನತೆಗೆ ತಂಪಾದ ಅನುಭವದ ಜೊತೆಗೆ ಆತಂಕವೂ ಎದುರಾಗಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ನೈರುತ್ಯ ಮುಂಗಾರು (Southwest Monsoon) ಮಾರುತಗಳು ವೇಗವಾಗಿ ಚಲಿಸುತ್ತಿದ್ದು, ಮೇ 26ರ ಸುಮಾರಿಗೆ ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರಿ ಗುಡುಗು ಸಹಿತ ಮಳೆ ಮತ್ತು ಅತಿ ವೇಗದ ಗಾಳಿ ಬೀಸುವ ಕುರಿತು ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;ಹವಾಮಾನ ಇಲಾಖೆಯ ವರದಿಯಂತೆ, ಇಂದು (ಮೇ 19) ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ 40 ರಿಂದ 50 ಕಿ.ಮೀ ಇರಲಿದೆ. ಗುಡುಗು ಸಿಂಚನದ ಜೊತೆಗೆ ಈ ಬಲವಾದ ಗಾಳಿಯು ಮರಗಳು ಮತ್ತು ವಿದ್ಯುತ್ ಕಂಬಗಳಿಗೆ ಹಾನಿ ಮಾಡುವ ಸಂಭವವಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಇಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ (Heavy Rainfall) ಮುನ್ಸೂಚನೆಯಿದೆ. ವಿಶೇಷವಾಗಿ &lt;strong&gt;ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು&lt;/strong&gt; ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸಲಿದೆ.&amp;nbsp;&lt;/p&gt;&lt;p&gt;ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಉತ್ತರ ಒಳನಾಡಿನ ಜಿಲ್ಲೆಗಳಾದ &lt;strong&gt;ಬೆಳಗಾವಿ, ಧಾರವಾಡ, ಗದಗ, ಕಲಬುರಗಿ ಮತ್ತು ಹಾವೇರಿ&lt;/strong&gt; ಜಿಲ್ಲೆಗಳಲ್ಲಿ ಇಂದು ಚದುರಿದಂತೆ ಮಳೆಯಾಗಲಿದ್ದು, ಇಲ್ಲಿಯೂ ಕೂಡ 50-60 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ವರದಿ ತಿಳಿಸಿದೆ.&lt;/p&gt;&lt;img&gt;&lt;p&gt;ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ವ್ಯಾಪಕವಾಗಿ ಮಳೆಯಾಗಲಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ. ಮೀನುಗಾರರು ಮತ್ತು ಪ್ರವಾಸಿಗರು ಜಾಗರೂಕರಾಗಿರಲು ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡಕವಿದ ವಾತಾವರಣವಿರಲಿದ್ದು, ಮಧ್ಯಾಹ್ನ ಅಥವಾ ಸಂಜೆಯ ನಂತರ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಗರದ ಗರಿಷ್ಠ ತಾಪಮಾನ 33&deg;C ಹಾಗೂ ಕನಿಷ್ಠ ತಾಪಮಾನ 21&deg;C ದಾಖಲಾಗುವ ಸಂಭವವಿದೆ.&lt;/p&gt;&lt;img&gt;&lt;p&gt;ಸದ್ಯ ಮುಂಗಾರು ಮಾರುತಗಳು ಆಗ್ನೇಯ ಅರಬ್ಬೀ ಸಮುದ್ರ, ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಹಲವು ಭಾಗಗಳಲ್ಲಿ ಆವರಿಸಿವೆ. ಮುಂದಿನ 3-4 ದಿನಗಳಲ್ಲಿ ಇವು ಕೇರಳದ ಕಡೆಗೆ ಮುನ್ನಡೆಯಲು ಪೂರಕವಾದ ವಾತಾವರಣವಿದೆ. ಉತ್ತರ ಪ್ರದೇಶದಿಂದ ಕೇರಳದವರೆಗೆ ಹರಡಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ಮಳೆ ಮುಂದುವರಿಯಲಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-report-60-kmph-wind-and-heavy-rain-alert-for-interior-5-districts-sat-2sd2i21"/>
        </item>
        <item>
            <title><![CDATA[ಆಘಾತಕಾರಿ! ಏನಾಗಿದೆ ಯುವ ಸಮೂಹಕ್ಕೆ? ಕನ್ಯೆ ಸಿಗಲಿಲ್ಲವೆಂದು ಯುವಕ ದುರಂತ ಅಂತ್ಯ, ಬಿಎಸ್ಸಿಯಲ್ಲಿ ಒಂದು ವಿಷಯ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿನಿಯೂ ಜೀವ ಕಳೆದುಕೊಂಡಳು!]]></title>
            <link>https://kannada.asianetnews.com/karnataka-districts/two-shocking-tragedies-haveri-young-man-dies-over-marriage-setback-hassan-student-found-dead-after-fail-bsc-rav/articleshow-3w4ioy1</link>
            <guid isPermaLink="true">https://kannada.asianetnews.com/karnataka-districts/two-shocking-tragedies-haveri-young-man-dies-over-marriage-setback-hassan-student-found-dead-after-fail-bsc-rav/articleshow-3w4ioy1</guid>
            <pubDate>Fri, 05 Jun 2026 04:26:27 +0530</pubDate>
            <description><![CDATA[&lt;p&gt;ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮದುವೆಗೆ ಕನ್ಯೆ ಸಿಗದಿದ್ದಕ್ಕೆ ಯುವಕನೊಬ್ಬ ಆತ್ಮ೧ಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಹಾಸನದ ಹೊಳೆನರಸೀಪುರದಲ್ಲಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಫೇಲ್ ಆದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktad9jh06mxxkpq1jbdxev0d,imgname-----------------------2026-06-05t042011.797-1780613433888.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾವೇರಿ (ಜೂ.5):&lt;/strong&gt; ಮದುವೆಗೆ ಕನ್ಯೆ ಸಿಗದಿದ್ದಕ್ಕೆ ಬೇಸತ್ತು ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ೧ಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ನಡೆದಿದೆ. ಮ್ಯಾಗೇರಿ ಓಣಿ ನಿವಾಸಿ ಮನೋಜ ಬಸವರಾಜ ಹಡಪದ(Manoj Basavaraj Hadapad) (27) ಮೃತ ಯುವಕ. ಈತ ಸಲೂನ್&zwnj; ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಹಲವು ದಿನಗಳಿಂದ ನಾನಾ ಕಡೆ ಕನ್ಯೆ ಹುಡುಕಿದರೂ ಯಾರೂ ಸಿಕ್ಕಿರಲಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದ. ಬುಧವಾರ ಅಡುಗೆಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.&lt;/p&gt;&lt;p&gt;ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ&lt;/p&gt;&lt;h2&gt;ಬಿಎಸ್ಸಿಯಲ್ಲಿ 1 ವಿಷಯ ಫೇಲ್&zwnj; ಆಗಿದ್ದಕ್ಕೆ ವಿದ್ಯಾರ್ಥಿನಿ ನೇಣಿಗೆ&lt;/h2&gt;&lt;p&gt;ಇನ್ನೊಂದೆಡೆ ಹೊಳೆನರಸೀಪುರ(ಹಾಸನ ಬಿಎಸ್&zwnj;ಸ್ಸಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮ೧ಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಹಳಿಯೂರು ಗ್ರಾಮದ ಶ್ರೀರಕ್ಷಾ (21) ಮೃತ ವಿದ್ಯಾರ್ಥಿನಿ.&lt;/p&gt;&lt;p&gt;ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿಯಲ್ಲಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದು, 2 ವರ್ಷದಿಂದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಇದ್ದರು. ಒಂದು ವಿಷಯದಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ನಗರ ಪೊಲೀಸ್&zwnj; ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/two-shocking-tragedies-haveri-young-man-dies-over-marriage-setback-hassan-student-found-dead-after-fail-bsc-rav/articleshow-3w4ioy1"/>
        </item>
        <item>
            <title><![CDATA[ಕರ್ನಾಟಕದಿಂದ ಸೋಲಾಪುರ ಮಾರ್ಗವಾಗಿ ಹೋಗುವ ಹಲವು ರೈಲು ಸಂಚಾರ ನಿರ್ಬಂಧ, ಜೂ. 5ರಿಂದ10ರವರೆಗೆ ಹಲವು ಟ್ರೈನ್ ರದ್ದು!]]></title>
            <link>https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</link>
            <guid isPermaLink="true">https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</guid>
            <pubDate>Fri, 05 Jun 2026 12:14:53 +0530</pubDate>
            <description><![CDATA[ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ನಡೆಯುತ್ತಿರುವ ಮೇಲ್ದರ್ಜೆ ಕಾಮಗಾರಿಯಿಂದಾಗಿ ಕೇಂದ್ರ ರೈಲ್ವೆಯು ಜೂನ್ 5 ರಿಂದ 10 ರವರೆಗೆ ಹಲವು ರೈಲುಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ಕೆಲವು ರೈಲುಗಳ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ ಹಾಗೂ ಸೋಲಾಪುರ-ಕಲಬುರಗಿ ವಿಶೇಷ ರೈಲು ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks4rgymmydvxhdywfct5zw88,imgname-indian-railways--2--1779350141588.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ಮೇಲ್ದರ್ಜೆ ಕಾಮಗಾರಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಇಂಟರ್&zwnj;ಲಾಕಿಂಗ್&zwnj;ನ್ನು ನಿಯೋಜಿಸಲು ಪೂರ್ವ-ಇಂಟರ್&zwnj;ಲಾಕಿಂಗ್ ಅಲ್ಲದ ಮತ್ತು ಇಂಟರ್&zwnj;ಲಾಕಿಂಗ್ ಅಲ್ಲದ ಕೆಲಸದಿಂದಾಗಿ ಜೂನ್ 5ರಿಂದ 10ರವರೆಗೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಹಲವು ರೈಲುಗಳ ಮೇಲೆ ಸಂಚಾರ ನಿರ್ಬಂಧ ವಿಧಿಸಿದೆ.&lt;/p&gt;&lt;h2&gt;ನಿಯಂತ್ರಣ ಯಾವ ರೈಲುಗಳ ಮೇಲೆ ?&lt;/h2&gt;&lt;p&gt;ಜೂನ್&zwnj; 5 ರಂದು ರೈಲು ಸಂಖ್ಯೆ 11311 ಸೋಲಾಪುರ-ಹಾಸನ ಎಕ್ಸ್&zwnj;ಪ್ರೆಸ್ ಹಾಗೂ ರೈಲು ಸಂಖ್ಯೆ 17308 ಬಾಗಲಕೋಟೆ- ಮೈಸೂರು ಬಸವಾ ಎಕ್ಸ್&zwnj;ಪ್ರೆಸ್ ಸಂಚಾರದ ಮೇಲೆ 45 ನಿಮಿಷಗಳ ನಿಯಂತ್ರಣವಿರಲಿದೆ. ಜೂ. 8 ರಂದು ರೈಲು ಸಂಖ್ಯೆ 18520 ಎಲ್&zwnj;ಟಿಟಿ ಮುಂಬೈ- ವಿಶಾಖಪಟ್ಟಣ ಎಕ್ಸ್&zwnj;ಪ್ರೆಸ್ಜೂ 2 ಗಂಟೆ, ರೈಲು ಸಂಖ್ಯೆ 01465 ಸೋಲಾಪುರ-ಕಲಬುರಗಿ ವಿಶೇಷ 1 ಗಂಟೆ 30 ನಿಮಿಷ, ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ 30 ನಿಮಿಷ, ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 30 ನಿಮಿಷ ನಿಯಂತ್ರಣದಲ್ಲಿರಲಿವೆ.&lt;/p&gt;&lt;p&gt;ಜೂನ್&zwnj; 9 ರಂದು ರೈಲು ಸಂಖ್ಯೆ 16382 ಕನ್ಯಾಕುಮಾರಿ-ಪುಣೆ ಎಕ್ಸ್&zwnj;ಪ್ರೆಸ್ 1 ಗಂಟೆ 15 ನಿಮಿಷ, ರೈಲು ಸಂಖ್ಯೆ 11020 ಭುವನೇಶ್ವರ- ಸಿಎಸ್&zwnj;ಎಂಟಿ ಮುಂಬೈ ಎಕ್ಸ್&zwnj;ಪ್ರೆಸ್ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.&lt;/p&gt;&lt;h2&gt;ಕೆಲವು ರೈಲು ಮಾರ್ಗ ಬದಲಾವಣೆ:&lt;/h2&gt;&lt;p&gt;ರೈಲು ಸಂಖ್ಯೆ 57662 ವಿಜಯಪುರ-ರಾಯಚೂರು ಪ್ಯಾಸೆಂಜರ್ ಜೂ. 5 ರಿಂದ 10 ರ ವರೆಗೆ ವಿಜಯಪುರ-ಹೋಟ್ಗಿ-ವಾಡಿ ಮಾರ್ಗ, ರೈಲು ಸಂಖ್ಯೆ 57661 ರಾಯಚೂರು-ವಿಜಯಪುರ ಪ್ಯಾಸೆಂಜರ್ ವಾಡಿ-ಹೋಟ್ಗಿ-ವಿಜಯಪುರ ಮೂಲಕ ಮಾರ್ಗ ಬದಲಾವಣೆ ಮಾಡಲಾಗುತ್ತದೆ.&lt;/p&gt;&lt;p&gt;ಕೆಳಗಿನ ರೈಲುಗಳನ್ನು ನಿರ್ದಿಷ್ಟಪಡಿಸಿದಂತೆ ಮರುಹೊಂದಿಸಲಾಗುತ್ತದೆ. ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ ಜೂ. 10 ರಂದು 2 ಗಂಟೆ 20 ನಿಮಿಷಗಳ ಕಾಲ ಮತ್ತು ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 2 ಗಂಟೆ 15 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ.&lt;/p&gt;&lt;p&gt;ರೈಲು ಸಂಖ್ಯೆ 01465 ಸೋಲಾಪುರ- ಕಲಬುರಗಿ ಮತ್ತು ರೈಲು ಸಂಖ್ಯೆ 01466 ಕಲಬುರಗಿ- ಸೋಲಾಪುರ ಈ ರೈಲು ಜೂ. 10 ರಂದು ರದ್ದು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep"/>
        </item>
        <item>
            <title><![CDATA[ಬಿಜೆಪಿ ಮುಖಂಡ ದೇವರಾಜೇಗೌಡ ಲೈಂಗಿಕ ದೌರ್ಜನ್ಯ ಕೇಸ್: ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್  ಸೂಚನೆ!]]></title>
            <link>https://kannada.asianetnews.com/karnataka-districts/hassan-news-karnataka-hc-greenlights-chargesheet-against-bjp-leader-g-devarajegowda-in-assault-case-gdp/articleshow-7cceo5x</link>
            <guid isPermaLink="true">https://kannada.asianetnews.com/karnataka-districts/hassan-news-karnataka-hc-greenlights-chargesheet-against-bjp-leader-g-devarajegowda-in-assault-case-gdp/articleshow-7cceo5x</guid>
            <pubDate>Fri, 05 Jun 2026 15:10:17 +0530</pubDate>
            <description><![CDATA[ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಜಿ. ದೇವರಾಜೇಗೌಡ ಅವರಿಗೆ ಹೈಕೋರ್ಟ್&zwnj;ನಲ್ಲಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧದ ಎಫ್&zwnj;ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದ ನ್ಯಾಯಾಲಯ, ಪೊಲೀಸರಿಗೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಿದೆ. ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktbjb5b4m8s0t1088kcq4f73,imgname-devarajegowda-case-chargesheet-high-court-1780652283236.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾ*ಚಾರದ ಗಂಭೀರ ಆರೋಪ ಎದುರಿಸುತ್ತಿರುವ ಹಾಸನದ ವಕೀಲ ಮತ್ತು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರಿಗೆ ಹೈಕೋರ್ಟ್&zwnj;ನಲ್ಲಿ ಭಾರಿ ಮುಖಭಂಗವಾಗಿದೆ. ದೇವರಾಜೇಗೌಡ ವಿರುದ್ಧ ಸಿದ್ಧವಾಗಿರುವ ದೋಷಾರೋಪ ಪಟ್ಟಿಯನ್ನು (ಅಂತಿಮ ತನಿಖಾ ವರದಿ) ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್ ಮುಕ್ತ ಅನುಮತಿ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್&zwnj;ಐಆರ್ (FIR) ರದ್ದುಪಡಿಸುವಂತೆ ಕೋರಿ ಜಿ. ದೇವರಾಜೇಗೌಡ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ಹೊರಡಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿದೆ.&lt;/p&gt;&lt;h2&gt;ಸರ್ಕಾರದ ತೀವ್ರ ವಾದ ಮತ್ತು ಹಳೇ ಆದೇಶ ತೆರವು&lt;/h2&gt;&lt;p&gt;ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿ, ಪ್ರಬಲ ವಾದ ಮಂಡಿಸಿದರು. ಈ ಹಿಂದೆ ಹೈಕೋರ್ಟ್, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ತನಿಖೆಯ ಅಂತಿಮ ವರದಿಯನ್ನು (ಚಾರ್ಜ್&zwnj;ಶೀಟ್) ಸಲ್ಲಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು. ಆದರೆ, ಪ್ರಸ್ತುತ ಪೊಲೀಸರು ಪ್ರಕರಣದ ಸಮಗ್ರ ತನಿಖೆಯನ್ನು ಪೂರ್ಣಗೊಳಿಸಿದ್ದು, ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿದ್ಧವಾಗಿದೆ. ಆದ್ದರಿಂದ ಹಳೇ ಮಧ್ಯಂತರ ಆದೇಶವನ್ನು ತೆರವುಗೊಳಿಸಿ, ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಅನುಮತಿ ನೀಡಬೇಕು ಎಂದು ಕೋರಿದರು.&lt;/p&gt;&lt;h2&gt;&lsquo;ಇದು ರಾಜಕೀಯ ಪ್ರೇರಿತ ಕೇಸ್&rsquo;: ದೇವರಾಜೇಗೌಡ ಪರ ವಕೀಲರ ವಾದ&lt;/h2&gt;&lt;p&gt;ದೇವರಾಜೇಗೌಡ ಪರ ವಕೀಲರು, &quot;ಈ ಪ್ರಕರಣವು ಕಾನೂನು ದುರ್ಬಳಕೆಗೆ ಅತ್ಯಂತ ಸ್ಪಷ್ಟ ಉದಾಹರಣೆಯಾಗಿದೆ. ಆರಂಭದಲ್ಲಿ ದೂರುದಾರೆ ಮಹಿಳೆ ಅತ್ಯಾ*ಚಾರದ ಯಾವುದೇ ಆರೋಪ ಮಾಡಿರಲಿಲ್ಲ. ಮೊದಲಿಗೆ ಆಕೆಯ ಪತಿ ಎನ್ನಲಾದ ವ್ಯಕ್ತಿ ಅರ್ಜಿದಾರರ ವಿರುದ್ಧ ಅಟ್ರಾಸಿಟಿ (ಪರಿಶಿಷ್ಟ ಜಾತಿ/ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ) ಪ್ರಕರಣ ದಾಖಲಿಸಿದ್ದರು. ಪೊಲೀಸರು ಅದಕ್ಕೆ 'ಬಿ-ರಿಪೋರ್ಟ್' (ಸಾಕ್ಷ್ಯಾಧಾರಗಳಿಲ್ಲದ ವರದಿ) ಸಲ್ಲಿಸಿ ಆ ಪ್ರಕರಣ ಮುಕ್ತಾಯಗೊಳಿಸಿದ್ದರು. ಅದು ವಿಫಲವಾದ ಕಾರಣಕ್ಕೆ, ಈಗ ರಾಜಕೀಯ ಪ್ರೇರಿತವಾಗಿ ಅರ್ಜಿದಾರರನ್ನು ಸಿಲುಕಿಸಲು ಮಹಿಳೆಯ ಕೈಯಿಂದ ಸುಳ್ಳು ಅತ್ಯಾ*ಚಾರದ ಆರೋಪ ಹೊರಿಸಲಾಗಿದೆ&quot; ಎಂದು ವಾದಿಸಿದರು.&lt;/p&gt;&lt;h2&gt;ಆರೋಪಗಳು ಅತ್ಯಂತ ಗಂಭೀರ!&lt;/h2&gt;&lt;p&gt;ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಪೀಠ, ದೇವರಾಜೇಗೌಡ ಪರ ವಕೀಲರ ವಾದವನ್ನು ಪುರಸ್ಕರಿಸಲು ನಿರಾಕರಿಸಿತು. &quot;ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಕೇಳಿಬಂದಿರುವ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ. ಸದ್ಯ ಪೊಲೀಸರ ತನಿಖೆ ಮುಗಿದು ದೋಷಾರೋಪ ಪಟ್ಟಿ ಸಿದ್ಧವಾಗಿರುವುದರಿಂದ, ಅದನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಅವಕಾಶ ನೀಡಬೇಕಾಗುತ್ತದೆ. ಪೊಲೀಸರು ಮೊದಲು ಚಾರ್ಜ್&zwnj;ಶೀಟ್ ಸಲ್ಲಿಸಲಿ, ಆ ಬಳಿಕ ಅರ್ಜಿದಾರರು ಆ ದೋಷಾರೋಪ ಪಟ್ಟಿಯನ್ನೇ ಪ್ರಶ್ನಿಸಿ ಮತ್ತೆ ಹೈಕೋರ್ಟ್&zwnj;ಗೆ ಹೊಸ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.&lt;/p&gt;&lt;p&gt;ನ್ಯಾಯಾಲಯದ ಈ ನಿಲುವಿಗೆ ದೇವರಾಜೇಗೌಡ ಪರ ವಕೀಲರು ಸಹಮತಿ ಸೂಚಿಸಿದ ಹಿನ್ನೆಲೆಯಲ್ಲಿ, ಪೊಲೀಸರಿಗೆ ಚಾರ್ಜ್&zwnj;ಶೀಟ್ ಸಲ್ಲಿಸಲು ಅನುಮತಿ ನೀಡಿದ ಹೈಕೋರ್ಟ್, ಅದನ್ನು ಮುಂದೆ ಪ್ರಶ್ನಿಸಲು ಅರ್ಜಿದಾರರಿಗೆ ಕಾನೂನಾತ್ಮಕ ಸ್ವಾತಂತ್ರ್ಯ ಕಲ್ಪಿಸಿ ಸದ್ಯದ ಅರ್ಜಿಯನ್ನು ಇತ್ಯರ್ಥಪಡಿಸಿತು.&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು &amp;nbsp;2024ರ ಏಪ್ರಿಲ್ 1ರಂದು ಜಿ. ದೇವರಾಜೇಗೌಡ ವಿರುದ್ಧ ಗಂಭೀರ ದೂರು ದಾಖಲಿಸಿದ್ದರು. &quot;ದೇವ ರಾಜೇಗೌಡ ಅವರು ನನ್ನ ಮೈಕೈ ಮುಟ್ಟಿ ದೈಹಿಕ ಹಿಂಸೆ ನೀಡಿದ್ದಾರೆ. ಅಲ್ಲದೆ ನನ್ನನ್ನು ತಮಗೊತ್ತಿರುವ ಮನೆಗೆ ಬಲವಂತವಾಗಿ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಆ ನಂತರ ಆ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಹೆದರಿಸಿ, ಜೀವ ಬೆದರಿಕೆ ಹಾಕಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ&quot; ಎಂದು ಮಹಿಳೆ ಆರೋಪಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಹಾಗೂ ಮಹಿಳೆಗೆ ಅಪಮಾನ ಮಾಡಿದ ಆರೋಪದಡಿ (IPC ಸೆಕ್ಷನ್ ಅಡಿ) ಎಫ್ಐಆರ್ ದಾಖಲಿಸಿದ್ದರು.&lt;/p&gt;&lt;p&gt;ಈ ಎಫ್&zwnj;ಐಆರ್ ರದ್ದು ಕೋರಿ ದೇವರಾಜೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂದು ಅಕ್ಟೋಬರ್ ೨೨, ೨೦೨೪ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ದೇವರಾಜೇಗೌಡ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಮತ್ತು ಕೋರ್ಟ್ ಅನುಮತಿಯಿಲ್ಲದೆ ಅಂತಿಮ ವರದಿ ಸಲ್ಲಿಸಬಾರದು ಎಂದು ತನಿಖೆಗೆ ತಡೆಯೊಡ್ಡಿತ್ತು. ಆದರೆ ಈಗ ತನಿಖಾ ವರದಿಯನ್ನು ಕೋರ್ಟ್&zwnj;ಗೆ ಸಲ್ಲಿಸಲು ಅನುಮತಿ ಸಿಕ್ಕಿರುವುದರಿಂದ ದೇವರಾಜೇಗೌಡ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಗೊಂಡಿದೆ.&lt;/p&gt;&lt;h2&gt;ವಕೀಲನ ಹಿನ್ನೆಲೆ:&lt;/h2&gt;&lt;p&gt;ಪ್ರಜ್ವಲ್​ ರೇವಣ್ಣ ಅಶ್ಲೀಲ ಪೆನ್​ ಡ್ರೈವ್ ಪ್ರಕರಣದಲ್ಲಿ ಕೂಡ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಬಂಧಿಸಿದ್ದರು.ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅವರು ಪ್ರಮುಖ ಮಾಹಿತಿದಾರರಾದ್ದರಿಂದ ದೇವರಾಜೇಗೌಡ ಹೆಸರು ಬೆಳಕಿಗೆ ಬಂದಿದೆ. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದ ದೇವರಾಜೇಗೌಡರು, ಹಾಸನದಿಂದ ಜೆಡಿಎಸ್ ಸಂಸದರಿಗೆ ಲೋಕಸಭೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿದ್ದ ದೇವರಾಜೇಗೌಡ, ಲೈಂಗಿಕ ಕಿರುಕುಳದ ವೀಡಿಯೊಗಳನ್ನು ಸೋರಿಕೆ ಮಾಡಿದ್ದಾರೆಂದು ರಾಜ್ಯದ ಕಾಂಗ್ರೆಸ್ ನಾಯಕರನ್ನು ದೂಷಿಸಿದ್ದರು.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hassan-news-karnataka-hc-greenlights-chargesheet-against-bjp-leader-g-devarajegowda-in-assault-case-gdp/articleshow-7cceo5x"/>
        </item>
        <item>
            <title><![CDATA[ಹಾಸನ ಜಿಮ್‌ನಲ್ಲಿ ಬಾಡಿ ಬಿಲ್ಡರ್ ಅಬ್ಬರ! ಭುಜ ತಗುಲಿಸಿದ ಕೀರ್ತನ, ಒಂದು ಪಂಚ್ ಕೊಟ್ಟು 'ಕೋಮಾ'ಗೆ ಕಳಿಸಿದ ವರುಣ!]]></title>
            <link>https://kannada.asianetnews.com/karnataka-districts/hassan-mj-fitness-gym-assault-kirthan-coma-varun-brutal-attack-video-viral-sat/articleshow-a5ghvnc</link>
            <guid isPermaLink="true">https://kannada.asianetnews.com/karnataka-districts/hassan-mj-fitness-gym-assault-kirthan-coma-varun-brutal-attack-video-viral-sat/articleshow-a5ghvnc</guid>
            <pubDate>Wed, 13 May 2026 18:11:52 +0530</pubDate>
            <description><![CDATA[ಹಾಸನ ನಗರದ 'ಎಂ.ಜೆ. ಫಿಟ್&zwnj;ನೆಸ್' ಜಿಮ್&zwnj;ನಲ್ಲಿ, ಸಣ್ಣ ವಿಚಾರಕ್ಕೆ ನಡೆದ ಜಗಳದಲ್ಲಿ ವರುಣ್ ಎಂಬಾತ ಕಿರ್ತನ್ ಎಂಬ ಯುವಕನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಈ ದಾಳಿಯಿಂದ ಕಿರ್ತನ್ ತಲೆಗೆ ಗಂಭೀರ ಪೆಟ್ಟಾಗಿದ್ದು, ಪ್ರಸ್ತುತ ಕೋಮಾದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krgnhb6kwawyrxd23a1gtwq9,imgname-hassan-gym-incident-1778675920083.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮೇ 13): ವ್ಯಾ&lt;/strong&gt;ಯಾಮ ಮಾಡುವ ಜಾಗದಲ್ಲಿ ನಡೆದ ಸಣ್ಣದೊಂದು ಆಕಸ್ಮಿಕ ಘಟನೆ ಇಂದು ಯುವಕನೊಬ್ಬ ಸಾವು-ಬದುಕಿನ ನಡುವೆ ಹೋರಾಡುವಂತೆ ಮಾಡಿದೆ. ಹಾಸನ ನಗರದ 'ಎಂ.ಜೆ. ಫಿಟ್&zwnj;ನೆಸ್' (M.J. Fitness) ಜಿಮ್&zwnj;ನಲ್ಲಿ ನಡೆದ ಈ ಭೀಕರ ಹಲ್ಲೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿವೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಜಿಮ್&zwnj;ನಲ್ಲಿ ವರ್ಕೌಟ್ ಮಾಡುತ್ತಿದ್ದ ಕಿರ್ತನ್ ಎಂಬ ಯುವಕನ ಭುಜ, ಅಲ್ಲಿಯೇ ಇದ್ದ ವರುಣ್ ಎಂಬಾತನಿಗೆ ಆಕಸ್ಮಿಕವಾಗಿ ತಗುಲಿದೆ. ಈ ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕ್ಷಣಾರ್ಧದಲ್ಲಿ ಕೋಪೋದ್ರಿಕ್ತನಾದ ವರುಣ್, ಕಿರ್ತನ್ ಮೇಲೆ ಅನಿರೀಕ್ಷಿತವಾಗಿ ಮತ್ತು ಅತ್ಯಂತ ಬರ್ಬರವಾಗಿ ದಾಳಿ ಮಾಡಿದ್ದಾನೆ.&lt;/p&gt;&lt;h2&gt;&lt;strong&gt;ಬರ್ಬರ ಹಲ್ಲೆ ಮತ್ತು ಸಿಸಿಟಿವಿ ದೃಶ್ಯ:&lt;/strong&gt;&lt;/h2&gt;&lt;p&gt;ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಭೀಕರ ಕೃತ್ಯ ಸೆರೆಯಾಗಿದೆ. ಮಾತಿನ ಚಕಮಕಿ ನಡೆಯುತ್ತಿರುವಾಗಲೇ ವರುಣ್ ಕಿರ್ತನ್&zwnj;ನ ತಲೆಗೆ ಅತ್ಯಂತ ಬಲವಾಗಿ ಒದ್ದಿದ್ದಾನೆ (Powerful Blow/Kick). ಈ ಬಲವಾದ ಪೆಟ್ಟಿಗೆ ಕಿರ್ತನ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ. ಹಲ್ಲೆಯ ತೀವ್ರತೆಗೆ ಕಿರ್ತನ್ ತಲೆಬುರುಡೆಗೆ ಗಂಭೀರ ಪೆಟ್ಟಾಗಿದ್ದು, ತಕ್ಷಣವೇ ಜಿಮ್&zwnj;ನಲ್ಲಿದ್ದ ಇತರ ಸದಸ್ಯರು ಆತನ ರಕ್ಷಣೆಗೆ ಧಾವಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಾವು-ಬದುಕಿನ ನಡುವೆ ಹೋರಾಟ:&lt;/strong&gt;&lt;/h3&gt;&lt;p&gt;ಹಲ್ಲೆಗೊಳಗಾದ ಕಿರ್ತನ್ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ತಪಾಸಣೆಯ ಪ್ರಕಾರ, ಕಿರ್ತನ್&zwnj;ನ ತಲೆಬುರುಡೆ ಮುರಿದಿದ್ದು (Skull Fracture), ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದೆ. ಪ್ರಸ್ತುತ ಕಿರ್ತನ್ ಕೋಮಾಗೆ ಜಾರಿದ್ದು, ತೀವ್ರ ನಿಗಾ ಘಟಕದಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆತನ 3D ಸ್ಕ್ಯಾನ್ ಮತ್ತು ಸಿಟಿ ಸ್ಕ್ಯಾನ್ ವರದಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲ್ಲೆಯ ಭೀಕರತೆಯನ್ನು ಸಾರಿ ಹೇಳುತ್ತಿವೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Shocking Incident at M.J. Fitness Gym, Hassan.A small accidental shoulder touch in the gym turned into a nightmare. One man unleashed brutal kicks to the head, leaving the victim with a severe skull fracture and fighting for life in ICU.Watch the CCTV video to see exactly what&hellip; pic.twitter.com/Nv2uCZ4dZT&lt;/p&gt;&lt;p&gt;&mdash; Aparajite (@amshilparaghu) May 13, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಸಾರ್ವಜನಿಕರ ಆಕ್ರೋಶ ಮತ್ತು ಪೊಲೀಸ್ ಕ್ರಮ:&lt;/strong&gt;&lt;/h3&gt;&lt;p&gt;ಸಣ್ಣದೊಂದು ಕಾರಣಕ್ಕೆ ಮನುಷ್ಯ ಇಷ್ಟೊಂದು ಕ್ರೂರವಾಗಿ ವರ್ತಿಸಬಹುದೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. &quot;ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಿ, ಒಂದು ಕ್ಷಣದ ಸಿಟ್ಟು ಇಡೀ ಜೀವನವನ್ನೇ ನಾಶ ಮಾಡಬಹುದು&quot; ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಾಸನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವರುಣ್ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ.&lt;/p&gt;&lt;p&gt;ಈ ಘಟನೆಯು ಜಿಮ್&zwnj;ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿನ ಸುರಕ್ಷತೆ ಮತ್ತು ಜನರ ಮಾನಸಿಕ ಸ್ಥಿತಿಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಕಿರ್ತನ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನೂರಾರು ಜನರು ಪ್ರಾರ್ಥಿಸುತ್ತಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hassan-mj-fitness-gym-assault-kirthan-coma-varun-brutal-attack-video-viral-sat/articleshow-a5ghvnc"/>
        </item>
        <item>
            <title><![CDATA[ಜಮೀರ್‌ರಂತಹ ವ್ಯಕ್ತಿಯನ್ನು ಸೇರಿಸಿಕೊಳ್ಳುವ ಅಗತ್ಯ ನಮಗಿಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ]]></title>
            <link>https://kannada.asianetnews.com/karnataka-districts/hd-kumaraswamy-rejects-zameer-entry-jds-karnataka-politics-gvd/articleshow-anh7pkw</link>
            <guid isPermaLink="true">https://kannada.asianetnews.com/karnataka-districts/hd-kumaraswamy-rejects-zameer-entry-jds-karnataka-politics-gvd/articleshow-anh7pkw</guid>
            <pubDate>Fri, 24 Apr 2026 00:25:36 +0530</pubDate>
            <description><![CDATA[&lt;p&gt;ಯಾವುದೇ ಕಾರಣಕ್ಕೂ ಆ ಸಬ್ಜೆಕ್ಟ್&zwnj;ನೇ ರೈಜ್ ಮಾಡಬೇಡಿ. ಅದರ ಅವಶ್ಯಕತೆನೂ ಇಲ್ಲಾ ನಮಗೆ, ನಾನು ಅನುಭವಿಸಿದ್ದೀನಿ, ಆ ಸಬ್ಜೆಕ್ಟ್ ನೇ ರೈಸ್&zwnj;&quot; ಮಾಡಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶದಿಂದ ನುಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kndcqgkv5vhpfjpbtyptw1w7,imgname----------------------60--1775344796283.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಳೆನರಸೀಪುರ (ಏ.24):&lt;/strong&gt; ನಮ್ಮ ಪಕ್ಷದಲ್ಲಿ ಅಧಿಕಾರಕ್ಕೋಸ್ಕರವಾಗಿ ಜಮೀರ್&zwnj; ಅಂತಹ ಜನಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲಾ, ನಮಗೆ ಅದರ ಎಲ್ಲಾ ಅನುಭವಗಳಾಗಿದೆ. ಯಾವುದೇ ಕಾರಣಕ್ಕೂ ಆ ಸಬ್ಜೆಕ್ಟ್&zwnj;ನೇ ರೈಜ್ ಮಾಡಬೇಡಿ. ಅದರ ಅವಶ್ಯಕತೆನೂ ಇಲ್ಲಾ ನಮಗೆ, ನಾನು ಅನುಭವಿಸಿದ್ದೀನಿ, ಆ ಸಬ್ಜೆಕ್ಟ್ ನೇ ರೈಸ್&zwnj;&quot; ಮಾಡಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶದಿಂದ ನುಡಿದರು.&lt;/p&gt;&lt;p&gt;ಸಚಿವ ಜಮೀರ್ ಅಹಮದ್ ಜೆಡಿಎಸ್ ಸೇರ್ಪಡೆ ಕುರಿತಂತೆ ಕೇಳಿದ ಪಶ್ನೆಗೆ ಕಾರವಾಗಿ ಉತ್ತರಿಸಿದರು. ಯಾವುದೇ ಕಾರಣಕ್ಕೂ ರಾಜಕೀಯದಲ್ಲಿ ಏನೋ ಶಕ್ತಿ ಬರುತ್ತೆ ಅಂಥೇಳಿ ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲವೆಂದರು. ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವುದು, ಕಾಂಗ್ರೆಸ್ ನಾಯಕರು ಅನ್ನ ತಿನ್ನುತ್ತಿರುವುದು ಆ ವರ್ಗದ ಜನಗಳಿಂದಲೇ ಅಂಥ ಹೇಳುತ್ತಿದ್ದಾರೆ. ಇವತ್ತು ಆ ಪರಿಸ್ಥಿತಿ ರಾಜ್ಯಕ್ಕೆ ತಂದು ಇಟ್ಟಿದ್ದಾರೆ. ಪ್ರತಿನಿತ್ಯ ಅನ್ನ ತಿನ್ನುತ್ತಿರುವುದೇ ಆ ಒಂದು ವರ್ಗದಿಂದ ಅಂಥ ಹೇಳುತ್ತಿದ್ದಾರೆ. ಇವತ್ತು ಕಾಂಗ್ರೆಸ್&zwnj;ನವರು ಯಾರದರೂ ಅದನ್ನು ವಿರೋಧ ಮಾಡಿದ್ದೀರಾ ಎಂದು ಪ್ರಶ್ನಿಸಿದರು.ಎಲ್ಲೆಲ್ಲಿಗೆ ಹೋಗುತ್ತೋ ನೋಡೋಣ ಬನ್ನಿ ಎಂದು ಬಹಳ ಅರ್ಥಗರ್ಭಿತವಾಗಿ ನುಡಿದರು.&lt;/p&gt;&lt;p&gt;ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ಪ್ರಕ್ರಿಯೆಗಳು ಮುಗಿಯುವ ಹಂತಕ್ಕೆ ಬರುತ್ತಿದೆ. ಜತೆಗೆ ರಾಜಕೀಯದಲ್ಲಿ ಅನುಭವಸ್ಥರು, ಹಿರಿತನದಿಂದ ಬಂದವರು ಬಳಸಿರುವ ಪದಬಳಕೆ ನೋಡಿದಾಗ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಯುವ ಜನಾಂಗಕ್ಕೆ ಯಾವ ರೀತಿ ದಾರಿ ತೋರಿಸುತ್ತಾರೆ ಎಂದು ಯೋಚನೆ ಮಾಡಬೇಕು. ಕಾಂಗ್ರೆಸ್&zwnj;ನ ರಾಷ್ಟ್ರೀಯ ಅಧ್ಯಕ್ಷರು ಕರ್ನಾಟಕದವರು, ಅವರ ಮನಸ್ಸಿನಲ್ಲಿ ಯಾವ ರೀತಿಯ ಭಾವನೆಗಳನ್ನು ಇಟ್ಟುಕೊಂಡಿದ್ದಾರೆ ಎಂಬುದು ಗೌರವಾನ್ವಿತ ಪ್ರಧಾನಮಂತ್ರಿಗಳನ್ನ ಟೆರೆರಿಸ್ಟ್ ಅಂಥಾ ಕರೀತಾರೆ ಎಂದರೆ ಎಷ್ಟು ಉದ್ಧಟತನ ಇರಬಹುದು ಅರ್ಥೈಸಿಕೊಳ್ಳಬೇಕು.&lt;/p&gt;&lt;h2&gt;&lt;strong&gt;ಕಮಿಟ್&zwnj;ಮೆಂಟ್ ಇಲ್ಲ&lt;/strong&gt;&lt;/h2&gt;&lt;p&gt;ಅಭಿವೃದ್ಧಿ ಹೆಸರಿನಲ್ಲಿ ಯಾರು ಚುನಾವಣೆಯಲ್ಲಿ ಮತ ಕೇಳಲಿಲ್ಲ. ದೇಶಕ್ಕೆ ಏನು ಕೊಡ್ತಿವಿ ಅನ್ನೋದನ್ನು ಬಿಟ್ಟು ಫ್ರೀ ಕೊಡಲು ಕಾಂಪಿಟೇಷನ್ ಮಾಡುತ್ತಾ, ನೀನು ಅದು ಕೊಟ್ಟರೆ ನಾನು ಇದು ಕೊಡ್ತಿನಿ ಅಂತಾರೆ. ಇದು ಸ್ವಲ್ಪ ಆಘಾತ ತರುವ ವಿಷಯ. ಹಿಮಾಚಲ ಪ್ರದೇಶದಲ್ಲಿ ಚೀಫ್ ಸೆಕ್ರೆಟರಿಗೆ ಸಂಬಳ ಕಟ್ ಮಾಡಿದ್ದಾರೆ. ಇವತ್ತಿನ ಸರ್ಕಾರ ಜನಸಾಮಾನ್ಯರ ಬದುಕು ಸರಿಪಡಿಸುವುದು ಇರಲಿ, ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟ ಆಡ್ತಿದ್ದಾರೆ. ಜತೆಗೆ 2028ಕ್ಕೆ ನಾವೇ ಅಧಿಕಾರಕ್ಕೆ ಬರ್ತೀವಿ ಅಂಥ ಹೇಳ್ತಾರೆ. ಕಳೆದ ಮೂರು ವರ್ಷ ನಿರಂತರವಾಗಿ ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆ ನಡೆಯುತ್ತಿದೆ.&lt;/p&gt;&lt;p&gt;ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದರ ಬಗ್ಗೆ ಒಬ್ಬನೇ ಒಬ್ಬ ಮಂತ್ರಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿಲ್ಲ. ಇವರಿಗೆ ಈ ಸಮಸ್ಯೆಗಳಿಗೆ ಪರಿಹಾರ ತಂದು ಕೊಡುವ ಕಮಿಟ್&zwnj;ಮೆಂಟ್ ಇಲ್ಲ. ಕಳೆದ ಮೂರು ವರ್ಷದಿಂದ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಅವರ ಮೇಲೆ ಇವರು ಇವರ ಮೇಲೆ ಅವರು ಹೇಳುತ್ತಿದ್ದರು. ಇನ್ನೊಬ್ಬರು ದೇವರ ಮೊರೆ ಹೋಗುತ್ತಿದ್ದಾರೆ. ಇದೀಗ ಮಾಟಮಂತ್ರದ್ದು ಪ್ರಾರಂಭವಾಗಿದೆ. ಮುಖ್ಯಮಂತ್ರಿಗಳ ಮೇಲೆ ಮಾಟ ಮಾಡ್ದಿದ್ದಾರೆ ಅಂಥ ಆ ಪಕ್ಷದ ಶಾಸಕರೇ ಹೇಳ್ತಾರೆ. ಇದನ್ನು ನೋಡಿದರೆ ಇವರೇನು ಹುಡುಗಾಟದ ರಾಜಕಾರಣ ಮಾಡ್ತಿದ್ದಾರ ಎಂದು ಚಿಂತಿಸಬೇಕಿದೆ ಎಂದರು.&lt;/p&gt;]]></content:encoded>
            <category>hassan</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/hd-kumaraswamy-rejects-zameer-entry-jds-karnataka-politics-gvd/articleshow-anh7pkw"/>
        </item>
        <item>
            <title><![CDATA[ಹಾಸನ: ಹಸೆಮಣೆ ಏರಲು 10 ದಿನ ಇರುವಾಗಲೇ ವರ ಮೃತ್ಯು, ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದಾಗ ಭೀಕರ ಅಪಘಾತ!]]></title>
            <link>https://kannada.asianetnews.com/karnataka-districts/groom-to-be-dies-in-tragic-sakleshpura-road-accident-in-hassan-days-before-wedding-gdp/articleshow-i8hln10</link>
            <guid isPermaLink="true">https://kannada.asianetnews.com/karnataka-districts/groom-to-be-dies-in-tragic-sakleshpura-road-accident-in-hassan-days-before-wedding-gdp/articleshow-i8hln10</guid>
            <pubDate>Thu, 30 Apr 2026 11:38:04 +0530</pubDate>
            <description><![CDATA[ಹಾಸನ ಜಿಲ್ಲೆಯಲ್ಲಿ ಮದುವೆಗೆ ಕೇವಲ 10 ದಿನಗಳಿರುವಾಗ ಭೀಕರ ದುರಂತವೊಂದು ಸಂಭವಿಸಿದೆ. ಬೇಲೂರು ತಾಲ್ಲೂಕಿನ ಮನು ಎಂಬ ಯುವಕ, ಪ್ರೀ-ವೆಡ್ಡಿಂಗ್ ಶೂಟ್&zwnj;ಗೆ ತೆರಳುತ್ತಿದ್ದಾಗ ಸಕಲೇಶಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqefyb61rb5fz0aw18e2fshr,imgname-hassan-road-accident-1777529203905.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಮದುವೆ ಸಂಭ್ರಮದ ನಡುವೆ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಹಸೆಮಣೆ ಏರಬೇಕಿದ್ದ ವರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ &amp;nbsp;ನಡೆದಿದೆ &amp;nbsp;ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದ ಬಳಿ ಇಂದು ಬೆಳಿಗ್ಗೆ ಈ ಭೀಕರ ಅಪಘಾತ ಸಂಭವಿಸಿ ವರ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು. ಎಲ್&zwnj;.ಎನ್&zwnj;. (29) ಅಲಿಯಾಸ್ ಗಿರೀಶ್ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;ಮದುವೆಗಿನ್ನು 10 ದಿನವಷ್ಟೇ ಇತ್ತು&lt;/h2&gt;&lt;p&gt;ಮನು. ಎಲ್&zwnj;.ಎನ್&zwnj;. ಅವರ ವಿವಾಹ ಮೇ 10, 2026ರಂದು ನಿಗದಿಯಾಗಿತ್ತು. ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ, ಪ್ರೀ-ವೆಡ್ಡಿಂಗ್ ಶೂಟ್&zwnj;ಗೆ ವಧುವನ್ನು ಕರೆತರಲು ಅವರು ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ.&lt;/p&gt;&lt;p&gt;ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ಜಜ್ಜಿಹೋಗಿದ್ದು, ಮನು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ಕುಟುಂಬದವರನ್ನು ಹಾಗೂ ಗ್ರಾಮಸ್ಥರನ್ನು ಶೋಕ ಸಾಗರದಲ್ಲಿ &amp;nbsp;ಮುಳುಗುವಂತೆ ಮಾಡಿದೆ. ಕೆಲವೇ ದಿನಗಳಲ್ಲಿ ಮದುವೆ ನಡೆಯಬೇಕಿದ್ದ ಮನೆಯಲ್ಲೀಗ ಸಂತಸದ ಬದಲಿಗೆ ಸೂತಕದ ಛಾಯೆ ಆವರಿಸಿದೆ. ಸಂಬಂಧಿಕರು ಹಾಗೂ ಸ್ನೇಹಿತರು ಈ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ&lt;/h2&gt;&lt;p&gt;ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ದುರಂತವು ಮತ್ತೊಮ್ಮೆ ರಸ್ತೆ ಸುರಕ್ಷತೆಯ ಮಹತ್ವವನ್ನು ನೆನಪಿಸುತ್ತಿದ್ದು, ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕೆಂಬ ಸಂದೇಶವನ್ನು ಸಾರುತ್ತಿದೆ&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/groom-to-be-dies-in-tragic-sakleshpura-road-accident-in-hassan-days-before-wedding-gdp/articleshow-i8hln10"/>
        </item>
        <item>
            <title><![CDATA[ಡಿಎಂಕೆ-ಎಐಎಡಿಎಂಕೆ ಸೇರಿ ಸರ್ಕಾರ ಮಾಡೋ ನಂಬಿಕೆ ನನಗಿಲ್ಲ: ಎಚ್.ಡಿ.ಕುಮಾರಸ್ವಾಮಿ]]></title>
            <link>https://kannada.asianetnews.com/karnataka-districts/hd-kumaraswamy-on-tamil-nadu-politics-congress-tvk-govt-gvd/articleshow-ithupmd</link>
            <guid isPermaLink="true">https://kannada.asianetnews.com/karnataka-districts/hd-kumaraswamy-on-tamil-nadu-politics-congress-tvk-govt-gvd/articleshow-ithupmd</guid>
            <pubDate>Sat, 09 May 2026 00:26:33 +0530</pubDate>
            <description><![CDATA[&lt;p&gt;ಕೆಲವೊಂದು ಸಂದರ್ಭದಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಅವರದ್ದೇ ಆದ ಕಾನೂನು ಪಂಡಿತರ ಸಲಹೆ ಮೇರೆಗೆ ನಿರ್ಧಾರವನ್ನು ತೆಗೆದುಕೊಂಡಿದ್ದನ್ನು ಕಂಡಿದ್ದೇವೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjh4e3cpb1nh2cfx2c6c52gr,imgname-hd-kumaraswamy-1772249091477.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಳೆನರಸೀಪುರ (ಮೇ.09): &lt;/strong&gt;ಕೆಲವೊಂದು ಸಂದರ್ಭದಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಅವರದ್ದೇ ಆದ ಕಾನೂನು ಪಂಡಿತರ ಸಲಹೆ ಮೇರೆಗೆ ನಿರ್ಧಾರವನ್ನು ತೆಗೆದುಕೊಂಡಿದ್ದನ್ನು ಕಂಡಿದ್ದೇವೆ. ಅವರು ಸ್ಪಷ್ಟ ಬಹುಮತದ ಸಂಖ್ಯೆ ಸ್ಪಷ್ಟಪಡಿಸಿ ಎಂದಿದ್ದಾರೆ. ಡಿಎಂಕೆ-ಎಐಎಡಿಎಂಕೆ ಎರಡು ಪಕ್ಷಗಳು ಸೇರಿ ಸರ್ಕಾರ ಮಾಡುವುದನ್ನು ನಾನಂತೂ ನಿರೀಕ್ಷೆ ಮಾಡಲ್ಲ. ಅದೆಲ್ಲಾ ಉಹಾಪೋಹ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.&lt;/p&gt;&lt;p&gt;ತಾಲೂಕಿನ ಹಳೇಕೋಟೆಯ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು. ವಿಜಯ್ ಅವರು ಸಹ ಬಹುಮತ ಸಾಬೀತುಪಡಿಸಲು ಪ್ರಯತ್ನ ಮಾಡುತ್ತಿದ್ದಾರೆ ಮತ್ತು ಎರಡು ದಿನದಲ್ಲಿ ಅಸ್ಪಷ್ಟತೆ ಸರಿಪಡಿಸುವ ಸಾಧ್ಯತೆ ಇದೆ. ಜತೆಗೆ ಸ್ಟಾಲಿನ್ ಅವರು ಆರು ತಿಂಗಳು ಸರ್ಕಾರ ನಡೆಸಲಿ ತೊಂದರೆ ಕೊಡಲ್ಲ ಎಂದಿದ್ದಾರೆ. ಟಿವಿಕೆಗೆ ಕಾಂಗ್ರೆಸ್ ಬೆಂಬಲ ಕುರಿತು ಮಾತನಾಡಿ, ಕಾಂಗ್ರೆಸ್ ಪಕ್ಷದ ನಡವಳಿಕೆ ಬಗ್ಗೆ ಸಾಕಷ್ಟು ಕಂಡಿದ್ದೇವೆ, ಕಾಂಗ್ರೆಸ್ ಪಕ್ಷ ಯಾವ್ಯಾವ ಸಂದರ್ಭದಲ್ಲಿ, ಯಾವ್ಯಾವ್ಯ ರೀತಿ ಸರ್ಕಾರಗಳನ್ನು ಅಸ್ಥಿರಗೊಳಿಸಿದ್ದಾರೆ.&lt;/p&gt;&lt;p&gt;ಕೇಂದ್ರದಲ್ಲಿದ್ದಂತಹ ಚರಣ್ ಸಿಂಗ್ ಅವರಿಂದ ಪ್ರಾರಂಭವಾಗಿ ವಿಪಿ ಸಿಂಗ್, ಚಂದ್ರಶೇಖರ್, ಅದೇ ರೀತಿ ದೇವೇಗೌಡರು ಅಧಿಕಾರದಲ್ಲಿದ್ದಾಗ ಯಾವ ಕಾರಣಗಳನ್ನು ಕೊಟ್ಟು ಸರ್ಕಾರ ತೆಗೆದರು. ಕಾಂಗ್ರೆಸ್&zwnj;ನಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ತೀರ್ಮಾನ ಮಾಡುವ ಹಲವಾರು ಉಧಾಹರಣೆಗಳನ್ನು ಕೊಡಬಹುದು. ಇವತ್ತು ಡಿಎಂಕೆ ಜೊತೆ ಇಪ್ಪತ್ತು ವರ್ಷದ ಸಂಬಂಧ ಕಡಿದು ವಿಜಯ್ ಅವರ ಜೊತೆ ಸೇರಿದ್ದಾರೆ. ಅವರ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಅದರ ಬಗ್ಗೆ ನಾನೇಕೆ ಚರ್ಚೆ ಮಾಡಲಿ. ಕಾಲ ಅದಕ್ಕೆ ಉತ್ತರ ಕೊಡುತ್ತದೆ ಎಂದರು.&lt;/p&gt;&lt;p&gt;&lt;strong&gt;ಗ್ಯಾರಂಟಿ ನೀಡಲು 6ರಿಂದ 7 ಲಕ್ಷ ಕೋಟಿ ಬೇಕು: &lt;/strong&gt;ತಮಿಳುನಾಡಿನಲ್ಲಿ ನಾನಂತೂ ನಿರೀಕ್ಷೆ ಮಾಡಿದ್ದೆ, ಒಂದು ತಿಂಗಳ ಹಿಂದೆ ನಮ್ಮ ಸ್ನೇಹಿತರಿಗೆ ಹೇಳಿದ್ದೆ. ಕಳೆದ ಐವತ್ತು ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳ ಆಡಳಿತ ಏನೆಂದು ಅಲ್ಲಿಯ ಜನ ನೋಡಿದ್ರು, ಆದ್ದರಿಂದ ಒಂದು ಹೊಸ ವ್ಯವಸ್ಥೆ ತರಲು ಜನಸಾಮಾನ್ಯರು ನಿರ್ಧಾರ ಮಾಡ್ತಾರೆ ಎನ್ನುವ ನಿರೀಕ್ಷೆ ಇಟ್ಟಿದ್ದೆ ಎಂದರು. ತಮಿಳುನಾಡಿನಲ್ಲಿ ಸ್ವಲ್ಪ ಸಿನಿಮಾದ ಪ್ರಭಾವಕ್ಕೆ ಒಳಗಾಗುತ್ತಾರೆ, ಹಲವಾರು ಸಂದರ್ಭದಲ್ಲಿ ನಡೆದಿದೆ, ಈಗಲೂ ನಡೆದಿದೆ. ಒಂದು ಹೊಸ ಮುಖ, ವ್ಯಕ್ತಿ ಅಧಿಕಾರ ಕೊಡಬೇಕು ಎಂದು ಕೊಟ್ಟಿದ್ದಾರೆ.&lt;/p&gt;&lt;p&gt;ಉಚಿತ ಗ್ಯಾರಂಟಿಗಳ ಬಗ್ಗೆ ದೇವರು ಕಾಪಾಡಬೇಕು, ವಿಜಯ್ ಅವರಿಗೆ ಯಾರು ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಲು ಯಾರು ಪ್ರಭಾವ ಬೀರಿದ್ರೊ ಗೊತ್ತಿಲ್ಲ, ಅಲ್ಲಿಯ ಬಜೆಟ್ ವರ್ಷಕ್ಕೆ 3.40 ಲಕ್ಷ ಕೋಟಿ ಇದೆ ಮತ್ತು ಅವರ ಉಚಿತ ಗ್ಯಾರಂಟಿಗಳನ್ನು ನೀಡಲು 6 ರಿಂದ 7 ಲಕ್ಷ ಕೋಟಿ ಬೇಕು ಎಂದು ತಿಳಿಸಿ, ಅದ್ಯಾವ ತರ ಹಣ ಹೊಂದಿಸುತ್ತಾರೆ ಕಾದು ನೋಡಬೇಕು ಎಂದು ಮಾರ್ಮಿಕವಾಗಿ ನುಡಿದರು. ಈಗೀನ ಪಂಚರಾಜ್ಯಗಳ ಫಲಿತಾಂಶವನ್ನು ಬಹಳ ಜನ ನಿರೀಕ್ಷೆ ಮಾಡಿದ್ರು. ಆದರೆ ತಮಿಳುನಾಡಿನಲ್ಲಿ ಡಿಎಂಕೆ ಬರುತ್ತೆ ಅಂಥ ಮಾಧ್ಯಮಗಳಲ್ಲಿ ಬರುತ್ತಿತ್ತು, ಆದರೆ ಯಾರೂ ಸಹ ವಿಜಯ್ ಅವರ ಈಗೀನ ಸಾಧನೆಯನ್ನು ನಿರೀಕ್ಷೆ ಮಾಡಿರಲಿಲ್ಲ, ಅದೊಂದು ಮಾತ್ರ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ ಎಂದರು.&lt;/p&gt;&lt;p&gt;ಶೃಂಗೇರಿ ಮರುಎಣಿಕೆ ಸಂಬಂಧ ಪ್ರತಿಕ್ರಿಯಿಸಿ, ಎಫ್&zwnj;ಐಆರ್ ಆಗಿದೆ, ರಾಜೇಗೌಡ್ರು ಚುನಾವಣೆ ಆಯೋಗಕ್ಕೆ ಮತ್ತೊಂದು ದೂರು ಕೊಟ್ಟಿದ್ದಾರೆ. ಏನೇನು ಬೆಳವಣಿಗೆ ಆಗುತ್ತೆ ಅಂಥ ಮುಂದೆ ನೋಡೋಣ. ಈಗಿನ ಪರಿಸ್ಥಿತಿಯಲ್ಲಿ ಓಟ್ ಚೋರಿ ಬಗ್ಗೆ ಚರ್ಚೆ ಮಾಡ್ತರಲ್ಲಾ ಅದಕ್ಕೆ ಯಾವುದೇ ಅರ್ಥ ಇಲ್ಲ. ಓಟ್ ಚೋರಿ ಬಗ್ಗೆ ಚರ್ಚೆ ಮಾಡುವ ನೈತಿಕತೆಯೂ ಇಲ್ಲ. ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಬದಲಾವಣೆ ಆಗಬಹುದು ಎಂಬುದು ಜನಸಾಮಾನ್ಯರ ಚರ್ಚೆ ಇದೆ. ಕಾದು ನೋಡೋಣ ಏನೇನು ಆಗುತ್ತೆ ಅಂಥ ಮತ್ತು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಾತಾವರಣ ಇಲ್ಲ, ಇಲ್ಲಿಯ ರಾಜಕಾರಣಕ್ಕೂ, ಬೇರೆ ರಾಜ್ಯಗಳ ರಾಜಕಾರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದರು.&lt;/p&gt;&lt;h2&gt;&lt;strong&gt;ದೀದಿಯದ್ದು ಬಾಲಿಶ ಹೇಳಿಕೆ&lt;/strong&gt;&lt;/h2&gt;&lt;p&gt;ಇಡಿ, ಐಟಿ ದುರುಪಯೋಗ ಎಂಬ ಕಾಂಗ್ರೆಸ್ ಆರೋಪ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರಿಗೆ ಬೇಕಾದಂತೆ ಕಾಂಗ್ರೆಸ್&zwnj;ನವರು ವ್ಯಾಖ್ಯಾನ ಮಾಡ್ತಾರೆ, ಅವರಿಗೆ ಬೇಕಾದಾಗ ಚೆನ್ನಾಗಿದೆ ಅಂತರೆ, ಸೋತಾಗ ಚೆನ್ನಾಗಿಲ್ಲ ಅಂತಾರೆ, ಪಶ್ಚಿಮ ಬಂಗಾಳದಲ್ಲಿ ಸ್ಪಷ್ಟ ಬಹುಮತ ಬಂದಿದೆ ಎಂದು ಎಲೆಕ್ಷನ್ ಕಮಿಷನ್&zwnj;ನಿಂದ ಘೋಷಣೆ ಆದ ಮೇಲೆ ಮುಗಿತು, ಮಮತಾ ಬ್ಯಾನರ್ಜಿಯವರು ರಾಜೀನಾಮೆ ಕೊಡಲ್ಲ ಎನ್ನುವುದು ಬಾಲಿಶವಾದ ಹೇಳಿಕೆ, ಆ ರೀತಿಯ ವಾತಾವರಣ ನಮ್ಮ ಸಂವಿಧಾನದಲ್ಲಿ ಇಲ್ಲ ಮದು ಮಮತ ಬ್ಯಾನರ್ಜಿ ವರ್ತನೆಗೆ ಬೇಸರ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ವಿಚಾರದಲ್ಲಿ ಮಾತನಾಡಿ, ಯಡಿಯೂರಪ್ಪ ಅವರ ಐವತ್ತು ವರ್ಷದ ಸಾಧನೆ ಬಗ್ಗೆ, ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ಬಿಜೆಪಿ ಪಕ್ಷದಿಂದ ಕಾರ್ಯಕ್ರಮ ನಡೀತಿದೆ ಮತ್ತು ಬೇರೆ ಕಾರ್ಯಕ್ರಮ ಇರುವುದರಿಂದ ಹೋಗ್ತಾ ಇಲ್ಲ ಎಂದು ತಿಳಿಸಿದರು.&lt;/p&gt;]]></content:encoded>
            <category>hassan</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/hd-kumaraswamy-on-tamil-nadu-politics-congress-tvk-govt-gvd/articleshow-ithupmd"/>
        </item>
        <item>
            <title><![CDATA[ಹಾಸನ: ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳ ಫೈಟ್! ಹೆಚ್‌ಆರ್‌ಪಿ ಕಚೇರಿಯಲ್ಲಿ ಹೈಡ್ರಾಮಾ!]]></title>
            <link>https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0</link>
            <guid isPermaLink="true">https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0</guid>
            <pubDate>Fri, 01 May 2026 13:29:55 +0530</pubDate>
            <description><![CDATA[&lt;p&gt;ಹಾಸನದ ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ವರ್ಗಾವಣೆಗೊಂಡ ಅಧಿಕಾರಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಮರಳಿದ್ದಾರೆ. ನೂತನವಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿ ಮತ್ತು ಹಿಂದಿನ ಅಧಿಕಾರಿಯ ನಡುವೆ ಒಂದೇ ಕುರ್ಚಿಗಾಗಿ ಜಿದ್ದಾಜಿದ್ದಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqh8mg8gax28d8zxrky28cpr,imgname-hassan-govt-officials-1777622204688.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮೇ 01): &lt;/strong&gt;ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಹೇಮಾವತಿ ಜಲಾಶಯ ಯೋಜನೆಯ (HRP) ವಿಶೇಷ ಭೂಸ್ವಾಧೀನಾಧಿಕಾರಿ (SLAO) ಕಚೇರಿ ಈಗ ಹೈಡ್ರಾಮಾದ ಕೇಂದ್ರಬಿಂದುವಾಗಿದೆ. ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಸಾರ್ವಜನಿಕರು ಮತ್ತು ಸಿಬ್ಬಂದಿ ಕಣ್ಣರಳಿಸಿ ನೋಡುವಂತಾಗಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಕಳೆದ ಒಂದು ವಾರದ ಹಿಂದೆಯಷ್ಟೇ ಹೇಮಾವತಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ಜಾಗಕ್ಕೆ ಮಹೇಶ್ ಎಂಬ ಅಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದಂತೆ ನೂತನ ಅಧಿಕಾರಿ ಮಹೇಶ್ ಅವರು ಈಗಾಗಲೇ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿ, ಅಧಿಕಾರಿಯ ಕುರ್ಚಿಯ ಮೇಲೆ ಕುಳಿತಿದ್ದಾರೆ.&lt;/p&gt;&lt;h2&gt;&lt;strong&gt;ಕೆಎಟಿ ಮೊರೆ ಹೋದ ಮಂಜುನಾಥ್:&lt;/strong&gt;&lt;/h2&gt;&lt;p&gt;ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಹಿಂದಿನ ಅಧಿಕಾರಿ ಮಂಜುನಾಥ್ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಮೆಟ್ಟಿಲೇರಿದ್ದರು. ಮಂಜುನಾಥ್ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮಂಡಳಿಯು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ (Stay) ನೀಡಿದೆ. ನ್ಯಾಯಾಲಯದಿಂದ ಸ್ಟೇ ತಂದ ಬೆನ್ನಲ್ಲೇ ಮಂಜುನಾಥ್ ಅವರು ಕಚೇರಿಗೆ ಹಾಜರಾಗಿದ್ದಾರೆ.&lt;/p&gt;&lt;h3&gt;&lt;strong&gt;ಚೇರ್ ಮೇಲೆ ಹೊಸಬರು, ಪಕ್ಕದಲ್ಲೇ ನಿಂತ ಹಳಬರು!&lt;/strong&gt;&lt;/h3&gt;&lt;p&gt;ಸದ್ಯ ಕಚೇರಿಯಲ್ಲಿ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನವಾಗಿ ಅಧಿಕಾರ ಸ್ವೀಕರಿಸಿರುವ ಮಹೇಶ್ ಅವರು ಅಧಿಕೃತವಾಗಿ ಕುರ್ಚಿಯ ಮೇಲೆ ಕುಳಿತಿದ್ದರೆ, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಮಂಜುನಾಥ್ ಅವರು ಪಕ್ಕದಲ್ಲೇ ನಿಂತು ತಮಗೆ ಕುರ್ಚಿ ಬಿಟ್ಟುಕೊಡುವಂತೆ ಆಗ್ರಹಿಸುತ್ತಿದ್ದಾರೆ. &quot;ನನ್ನ ವರ್ಗಾವಣೆಗೆ ಕೋರ್ಟ್ ತಡೆ ನೀಡಿದೆ, ಹಾಗಾಗಿ ಈ ಸ್ಥಾನ ನನಗೆ ಸೇರಬೇಕು&quot; ಎಂಬುದು ಮಂಜುನಾಥ್ ವಾದ. ಆದರೆ, &quot;ನಾನು ಸರ್ಕಾರದ ಆದೇಶದಂತೆ ಅಧಿಕಾರ ಸ್ವೀಕರಿಸಿದ್ದೇನೆ&quot; ಎನ್ನುವುದು ಮಹೇಶ್ ಅವರ ನಿಲುವು.&lt;/p&gt;&lt;h3&gt;&lt;strong&gt;ಗೊಂದಲದಲ್ಲಿ ಕಚೇರಿ ಸಿಬ್ಬಂದಿ:&lt;/strong&gt;&lt;/h3&gt;&lt;p&gt;ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಪಟ್ಟು ಹಿಡಿದಿರುವುದರಿಂದ ಕಚೇರಿಯ ಕಡತಗಳ ವಿಲೇವಾರಿ ಮತ್ತು ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗಿದೆ. ಯಾವ ಅಧಿಕಾರಿಯ ಆದೇಶ ಪಾಲಿಸಬೇಕು ಎಂಬ ಗೊಂದಲದಲ್ಲಿ ಸಿಬ್ಬಂದಿ ವರ್ಗದವರಿದ್ದಾರೆ. ಹೇಮಾವತಿ ಜಲಾಶಯ ಯೋಜನೆಯಂತಹ ಪ್ರಮುಖ ವಿಭಾಗದಲ್ಲಿ ಈ ರೀತಿ ಅಧಿಕಾರಿಗಳ ನಡುವಿನ ಕಿತ್ತಾಟ ಸಾರ್ವಜನಿಕರ ಟೀಕೆಗೂ ಗುರಿಯಾಗಿದೆ.&lt;/p&gt;&lt;p&gt;ಸದ್ಯ ಈ ಕುರ್ಚಿ ಸಮರ ಜಿಲ್ಲಾಡಳಿತದ ಅಂಗಳ ತಲುಪಿದ್ದು, ಈ ಹಗ್ಗಜಗ್ಗಾಟಕ್ಕೆ ಯಾರು ಬ್ರೇಕ್ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0"/>
        </item>
        <item>
            <title><![CDATA[BREAKING: ಬೆಂಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಿಗೆ ಮುಂದಿನ 3 ಗಂಟೆ 'ಯಲ್ಲೋ ಅಲರ್ಟ್'; ಹಾಸನಕ್ಕೆ ಆರೆಂಜ್ ಅಲರ್ಟ್]]></title>
            <link>https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</link>
            <guid isPermaLink="true">https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</guid>
            <pubDate>Mon, 25 May 2026 18:03:58 +0530</pubDate>
            <description><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzxjj84544nkh17j6s99v9v,imgname-karnataka-rain-alert-1779187665156.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.&lt;img&gt;&lt;p&gt;ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಹತ್ವದ ಮುನ್ಸೂಚನೆಯೊಂದನ್ನು ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರು ನಗರದಲ್ಲಿ ಮುಂದಿನ 3 ಗಂಟೆಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, 'ಯಲ್ಲೋ ಅಲರ್ಟ್' (Yellow Alert) ಘೋಷಿಸಲಾಗಿದೆ. ಕಚೇರಿ ಮುಗಿಸಿ ಮನೆಗೆ ಮರಳುವ ಐಟಿ ಉದ್ಯೋಗಿಗಳು ಹಾಗೂ ವಾಹನ ಸವಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಕೇವಲ ಸಾಧಾರಣ ಮಳೆಯಷ್ಟೇ ಅಲ್ಲದೆ, ಗಂಟೆಗೆ ಭಾರಿ ವೇಗದಲ್ಲಿ ಬೀಸಲಿರುವ ಸುಂಟರಗಾಳಿ ಹಾಗೂ ಗುಡುಗು-ಮಿಂಚಿನ ಸಹಿತ ವರುಣ ಆರ್ಭಟಿಸಲಿದ್ದಾನೆ. ಹೀಗಾಗಿ ಸಾರ್ವಜನಿಕರು ಮರಗಳ ಕೆಳಗೆ ಹಾಗೂ ದುರ್ಬಲ ಕಟ್ಟಡಗಳ ಬಳಿ ಆಶ್ರಯ ಪಡೆಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;img&gt;&lt;p&gt;ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಅತ್ಯಂತ ಹೆಚ್ಚಾಗಿರಲಿದ್ದು, ಹವಾಮಾನ ಇಲಾಖೆಯು ಹಾಸನಕ್ಕೆ ಕಟ್ಟುನಿಟ್ಟಿನ 'ಆರೆಂಜ್ ಅಲರ್ಟ್' (Orange Alert) ಜಾರಿಗೊಳಿಸಿದೆ. ಇಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು ನಗರದ ಜೊತೆಗೆ ರಾಜ್ಯದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಯಾದಗಿರಿ, ರಾಮನಗರ, ಚಾಮರಾಜನಗರ ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಗಳಿಗೂ ಮುಂದಿನ 3 ಗಂಟೆಗಳ ಕಾಲ 'ಯಲ್ಲೋ ಅಲರ್ಟ್' ನಿಯೋಜಿಸಲಾಗಿದೆ. ಈ ಜಿಲ್ಲೆಗಳಲ್ಲೂ ದಿಢೀರ್ ಮಳೆ ಸುರಿಯುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಮುಂದಿನ 3 ಗಂಟೆಗಳ ಅವಧಿ ಅತ್ಯಂತ ನಿರ್ಣಾಯಕವಾಗಿದ್ದು, ಆಯಾ ಜಿಲ್ಲಾಡಳಿತಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಅಲರ್ಟ್ ಆಗಿವೆ. ತಗ್ಗು ಪ್ರದೇಶದ ಜನರಿಗೆ ಮತ್ತು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಕೋರಿದೆ.&lt;/p&gt;]]></content:encoded>
            <category>hassan</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4"/>
        </item>
        <item>
            <title><![CDATA[ಒಂದು ದಿನವೂ ರಜೆ ತೆಗೆದುಕೊಳ್ಳದೇ ಸದಾ ಕೆಲಸ ಮಾಡುತ್ತಿದ್ದ ಶ್ವೇತಾ : ಟೆಕ್ಕಿ ಸಾವಿನ ಬಗ್ಗೆ ಸಹೋದ್ಯೋಗಿ ಹೇಳಿದ್ದೇನು?]]></title>
            <link>https://kannada.asianetnews.com/state/hassan-techie-shweta-death-case-what-her-colleagues-said/articleshow-pwwbc69</link>
            <guid isPermaLink="true">https://kannada.asianetnews.com/state/hassan-techie-shweta-death-case-what-her-colleagues-said/articleshow-pwwbc69</guid>
            <pubDate>Mon, 27 Apr 2026 16:56:05 +0530</pubDate>
            <description><![CDATA[&lt;p&gt;ಹಾಸನದ 25 ವರ್ಷದ ಸಾಫ್ಟ್&zwnj;ವೇರ್ ಉದ್ಯೋಗಿ ಶ್ವೇತಾ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ ವಿಚಾರ ಅನೇಕರನ್ನು ದಂಗಾಗುವಂತೆ ಮಾಡಿದೆ. ಕೆಲಸವನ್ನು ನಿರಂತರವಾಗಿ ಪ್ರೀತಿಸುತ್ತಿದ್ದ, ಶ್ವೇತಾ ತಲೆನೋವನ್ನು ನಿರ್ಲಕ್ಷಿಸಿದ್ದಳು ಎಂದು ಅವರ ಸಹೋದ್ಯೋಗಿ ಹೇಳಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq7abgp04bg1hye4wkqpar35,imgname-software-enginear-death-1777288463039.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಹಾಸನದ ಸಾಫ್ಟ್&zwnj;ವೇರ್ ಉದ್ಯೋಗಿ ಶ್ವೇತಾ ಹಠಾತ್ ಕುಸಿದು ಬಿದ್ದು ಸಾವು&lt;/strong&gt;&lt;/h2&gt;&lt;p&gt;ಹಾಸನ: ನಗರದ ಸಾಫ್ಟ್&zwnj;ವೇರ್ ಉದ್ಯೋಗಿ ಶ್ವೇತಾ ಸಾವಿನ ಬಗ್ಗೆ ಅವರ ಸಹೋದ್ಯೋಗಿ ಮಾತನಾಡಿದ್ದು ಶ್ವೇತಾ ಅವರ ಹಠಾತ್ ಸಾವಿಗೆ ತೀವ್ರ ಆಘಾತ ವ್ಯಕ್ತಪಪಡಿಸಿದ್ದಾರೆ. ಶ್ವೇತಾ ಜೊತೆಗೆ ಕೆಲಸ ಮಾಡುತ್ತಿದ್ದ ನಿಹಾಲ್ ಎಂಬುವವರು ಮಾತನಾಡಿ, ನಾನು ಹಾಗೂ ಶ್ವೇತಾ ಜೊತೆಯಾಗಿ ಕೆಲಸಕ್ಕೆ ಸೇರಿದ್ದೇವು. ಕೆಲಸಕ್ಕೆ ಸೇರಿ 3 ವರ್ಷ ಆಗಿತ್ತು. ಶುಕ್ರವಾರದವರೆಗೆ ಆಕೆ ನಮ್ಮ ಜೊತೆ ಚೆನ್ನಾಗಿಯೇ ಇದ್ದರು. ಕಳೆದ ಮೂರು ತಿಂಗಳಿನಿಂದ ಆಕೆ ತನಗೆ ತುಸು ತಲೆನೋವು ಇದೆ ಎಂದು ಹೇಳುತ್ತಿದ್ದಳು. ಆದರೆ ಊಟ ಮಾಡಿದರೆ ಸರಿ ಹೋಗುತ್ತೆ ಎಂದು ಹೇಳುತ್ತಿದ್ದರು. ಆದರೆ ಈ ರೀತಿ ಆಗಬಹುದು ಎಂದು ನಾವು ಊಹೆಯೂ ಮಾಡಿರಲಿಲ್ಲ.&lt;/p&gt;&lt;p&gt;&lt;strong&gt;ಆರೋಗ್ಯ ನಿರ್ಲಕ್ಷಿಸಿ ಕೆಲಸದ ಮೇಲೇಯೇ ಗಮನ&lt;/strong&gt;&lt;/p&gt;&lt;p&gt;ಹೆಚ್ಚಾಗಿ ಕೆಲಸದ ಮೇಲೆಯೇ ಗಮನ ಹರಿಸುತ್ತಿದ್ದರು. ಯಾವತ್ತು ಅವರು ರಜೆ ತೆಗೆದುಕೊಂಡಿದ್ದೆ ಇಲ್ಲ. ಒಂದೂವರೆ ವರ್ಷಗಳಿಂದ ಅವರು ರಜೆ ತೆಗೆದುಕೊಂಡಿದ್ದೆ ಇರಲಾರದು. ನಾನು ಚೆನ್ನಾಗಿ ಕೆಲಸ ಮಾಡಬೇಕು ಎಂಬ ಆಶಯ ಅವರದಾಗಿತ್ತು. ಬಹುಶಃ ಅದೇ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದೇನೋ ಎಂದು ಅವರ ಸಹೋದ್ಯೋಗಿ ಹೇಳಿದ್ದಾರೆ. ಕೆಲಸವನ್ನು ಹೆಚ್ಚು ತಲೆಗೆ ಹಾಕಿಕೊಂಡಿದ್ದರು. ಕೆಲಸವನ್ನು ತುಂಬಾ ಪ್ರೀತಿಸುತ್ತಿದ್ದ ಆಕೆ ತಾನು ಎಲ್ಲರಿಗಿಂತ ಕೆಲಸದಲ್ಲಿ ಮುಂದಿರಬೇಕು ಎನ್ನುತ್ತಿದ್ದರೂ ಹಾಗೂ ಹಾಗೆಯೇ ಇದ್ದರೂ ಕೂಡ.&lt;/p&gt;&lt;p&gt;ವಾರದ ಹಿಂದೆ ಅವರಿಗೆ ತಲೆನೋವು ಕಾಣಿಸಿಕೊಂಡಾಗ ಇಲ್ಲೇ ಸಮೀಪದ ಕ್ಲಿನಿಕ್&zwnj;ಗೆ ತೋರಿಸಿದ್ದರು. ಆಗ ಅಲ್ಲಿ ಆಮೂಲಿ ಜ್ವರ ಇದೆ ಎಂದು ಆಕೆಗೆ ಮಾತ್ರೆ ನೀಡಿದ್ದರು. ಸ್ವಲ್ಪ ನಿರ್ಲಕ್ಷ್ಯದಿಂದ ಈ ರೀತಿ ಆಗಿರಬಹುದೇನೋ? ಆಕೆಯ ತಲೆನೋವನ್ನು ಯಾರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕ್ಲಿನಿಕ್&zwnj;ಗೆ ಹೋಗಿಯೂ ಮತ್ತೆ ಕಚೇರಿಗೆ ಬಂದು ಕೆಲಸ ಮಾಡಿದ್ದರು. ಹೀಗಾಗಿ ನಮಗೂ ಅದರ ಬಗ್ಗೆ ಹೆಚ್ಚಿನ ಗಮನ ಇರಲಿಲ್ಲ. ಚೆನ್ನಾಗಿದ್ದಾಳಲ್ಲ ಮಾಮೂಲಿ ಎಲ್ಲರಿಗೂ ಜ್ವರ ಬಂದಂತೆ ಈಕೆಗೂ ಬಂದಿದೆ ಎಂದುಕೊಂಡಿದ್ದೆವು. ಘಟನೆ ನಡೆದಂದು ಕೂಡ ಶುಕ್ರವಾರ ಸಂಜೆಯವರೆಗೂ ಆಕೆ ಕಚೇರಿಯಲ್ಲೇ ಇದ್ದಳು. ಆದರೆ ಮನೆಗೆ ಹೋದ ಮೇಲೆ ಆ ರೀತಿ ಆಗಿದೆ. ನಮಗೆ ಆ ಬಗ್ಗೆ ಗೊತ್ತಿರಲಿಲ್ಲ. ಆದರೆ ಶನಿವಾರ ಅವರು ಕಚೇರಿಗೆ ಬಂದಿರಲಿಲ್ಲ, ಆದರೆ ಆಕೆ ರಜೆಯೇ ಹಾಕುವ ಹುಡುಗಿ ಅಲ್ಲ, ಹೀಗಾಗಿ ಆಕೆ ಹೇಗೆ ರಜೆ ಹಾಕಿದಳು ಎಂದು ಸಹೋದ್ಯೋಗಿಗಳೆಲ್ಲಾ ಆಕೆಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಲಿಲ್ಲ. ಆದರೆ ನಂತರ ಅವರ ತಾಯಿಗೆ ಕರೆ ಮಾಡಿದಾಗಲೇ ಹೀಗಾಗಿದೆ ಎಂಬ ವಿಚಾರ ತಿಳಿಯಿತು.&lt;/p&gt;&lt;p&gt;ಆದರೆ ಆಕೆ ಹುಷಾರಾಗಿ ಬರುತ್ತಾಳೆ ಎಂದು ನಾವು ನಿರೀಕ್ಷೆ ಇಟ್ಟುಕೊಂಡಿದ್ದೆವು. ಲೋಬಿಪಿಯಾಗಿದೆ ಮತ್ತೆ ಪ್ರಜ್ಞೆ ಬರಬಹುದು ಎಂದು ಭಾವಿಸಿದೆವು. ಆದರೆ ಅವರು ಹಠಾತ್ ಆಗಿ ಸಾವನ್ನಪ್ಪಿದ್ದಾರೆ ಎಂದು ಶ್ವೇತಾ ಅವರ ಸಹೋದ್ಯೋಗಿ ನಿಹಾಲ್ ಅಲೆಕ್ಸ್ ಎಂಬುವವರು ನೋವಿನಿಂದ ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಆರೋಗ್ಯ ನಿರ್ಲಕ್ಷಿಸಿ ನಿರಂತರ ಕೆಲಸ: ಹಾಸನದಲ್ಲಿ ಸಾಫ್ಟ್&zwnj;ವೇರ್ ಇಂಜಿನಿಯರ್ ಹಠಾತ್ ಸಾವು&lt;/p&gt;&lt;p&gt;ಹಾಸನದಲ್ಲಿ ಇಂದು 25 ವರ್ಷದ ಸಾಫ್ಟ್&zwnj;ವೇರ್ ಉದ್ಯೋಗಿ ಶ್ವೇತಾ ಎಂಬುವವರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಶ್ವೇತಾ ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯ ಹಾಸನ ಶಾಖೆಯಲ್ಲಿ ಮೂರು ವರ್ಷದಿಂದ&zwnj; ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 25 ರ ಶುಕ್ರವಾರ ಸಂಜೆ ಮನೆಯಲ್ಲಿ ಕುಸಿದು ಬಿದ್ದಿದ್ದ ಅವರು ಬಳಿಕ ಕೋಮಾಗೆ ಜಾರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಶ್ವೇತಾ ಕುಸಿದು ಬಿದ್ದ ಕೂಡಲೇ ಮನೆಯವರು ಅವರನ್ನು ಚಿಕಿತ್ಸೆಗೆ ಕರೆದೊಯ್ದಿದ್ದರು. ಆದರೆ ಆಗಲೇ ಶ್ವೇತಾ ಕೋಮಾಗೆ ಜಾರಿ ಸಾವನ್ನಪ್ಪಿದ್ದರು.&lt;/p&gt;&lt;p&gt;ಮೆದುಳಿನಲ್ಲಿ ತೀವ್ರ ರಕ್ತಶ್ರಾವದಿಂದಾಗಿ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಶ್ವೇತಾ ಅವರಿಗೆ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಪೋಷಕರು ಮುಂದಾಗಿದ್ದರು. ಆದರೆ ಅಂಗಾಂಗ ದಾನ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಯುವತಿ ಅಂತ್ಯಕ್ರಿಯೆ ನಡೆದಿದೆ. ಶ್ವೇತಾ ಅವರು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಯುವತಿಯಾಗಿದ್ದಾರೆ. ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಹಾಗೂ ಸರೋಜ ದಂಪತಿ ಪುತ್ರಿಯಾಗಿದ್ದು, ಶ್ವೇತಾ ಅವರ ಹಠಾತ್ ಸಾವಿನಿಂದ ಕುಟುಂಬದವರು ತೀವ್ರ ಆಘಾತಕ್ಕೀಡಾಗಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೀದಿ ಬದಿ ಪಾನಿಪುರಿ ಸೇವಿಸಿದ್ದ 8 ವರ್ಷದ ಬಾಲಕ ಸಾವು: 18ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು&lt;/strong&gt;&lt;/p&gt;]]></content:encoded>
            <category>hassan</category>
            <dc:creator>Anusha Kb</dc:creator>
            <atom:link href="https://kannada.asianetnews.com/state/hassan-techie-shweta-death-case-what-her-colleagues-said/articleshow-pwwbc69"/>
        </item>
        <item>
            <title><![CDATA[ಗೃಹಪ್ರವೇಶಕ್ಕೆ ಮಲ್ಲಘಟ್ಟದ ನೀರು ತೆಗೆದುಕೊಂಡಿದ್ದ ಡಿಕೆಶಿ: ಕಾರಣ ಬಿಚ್ಚಿಟ್ಟ ಸಿಎಂ!]]></title>
            <link>https://kannada.asianetnews.com/karnataka-districts/cm-dk-shivakumar-mallaghatta-gangadhareshwara-temple-visit-gvd/articleshow-s9gb5qa</link>
            <guid isPermaLink="true">https://kannada.asianetnews.com/karnataka-districts/cm-dk-shivakumar-mallaghatta-gangadhareshwara-temple-visit-gvd/articleshow-s9gb5qa</guid>
            <pubDate>Sat, 06 Jun 2026 17:18:20 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಲ್ಲಘಟ್ಟದ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt5a00y8g1zvdg9c2qfdge1g,imgname-----------------------2026-06-03t043419.302-1780442203080.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜೂ.06):&lt;/strong&gt; ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಲ್ಲಘಟ್ಟದ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ಪವಿತ್ರ ಕ್ಷೇತ್ರಕ್ಕೆ ಬಂದಿರುವುದಾಗಿ ತಿಳಿಸಿದರು.&lt;/p&gt;&lt;p&gt;ಮಲ್ಲಘಟ್ಟ ಗಂಗಾಧರೇಶ್ವರ ಕ್ಷೇತ್ರವು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಸ್ಥಳವಾಗಿದ್ದು, ಹಲವು ವರ್ಷಗಳಿಂದ ಈ ಪ್ರದೇಶದೊಂದಿಗೆ ತಮ್ಮ ಆತ್ಮೀಯ ನಂಟಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. &quot;ಸುಮಾರು 25 ವರ್ಷಗಳಿಂದ ಈ ಜಾಗವನ್ನು ಗಮನಿಸುತ್ತಾ ಬಂದಿದ್ದೇನೆ. ಇಲ್ಲಿ ಬಂದಾಗ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ಸಿಗುತ್ತದೆ. ಈ ಕ್ಷೇತ್ರದ ಮೇಲಿನ ಭಕ್ತಿ ಮತ್ತು ಗೌರವ ನನಗೆ ವಿಶೇಷವಾಗಿದೆ&quot; ಎಂದು ಹೇಳಿದರು.&lt;/p&gt;&lt;p&gt;ತಮ್ಮ ಗೃಹಪ್ರವೇಶದ ಸಂದರ್ಭದಲ್ಲಿ ರಾಜ್ಯದ ವಿವಿಧ ಪವಿತ್ರ ಸ್ಥಳಗಳಿಂದ ನೀರು ತರಿಸಿಕೊಂಡಿದ್ದೆ. ಅದರಲ್ಲಿ ಮಲ್ಲಘಟ್ಟ ಕೆರೆಯ ನೀರೂ ಒಂದಾಗಿತ್ತು ಎಂದು ಅವರು ನೆನಪಿಸಿಕೊಂಡರು. &quot;ಈ ಕೆರೆ ಸದಾ ತುಂಬಿ ತುಳುಕುತ್ತಿರಲಿ, ಈ ಭಾಗದ ಜನರು ಸುಖ-ಶಾಂತಿಯಿಂದ ಬದುಕಲಿ ಎಂಬುದು ನನ್ನ ಆಶಯ&quot; ಎಂದರು.&lt;/p&gt;&lt;p&gt;ಈ ಭಾಗದ ಅಭಿವೃದ್ಧಿಗಾಗಿ ಸುಮಾರು 35 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದ ಅವರು, ರೈತರಿಗೆ ಅನುಕೂಲವಾಗುವಂತೆ ಕಾಲುವೆ ವ್ಯವಸ್ಥೆ, ಸಂಪನ್ನ ಮಂಟಪ, ಅತಿಥಿ ಗೃಹ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು. ಈ ಸಂಬಂಧ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಾಡಸಿದ್ಧೇಶ್ವರ ಮಠದವರೊಂದಿಗೆ ಚರ್ಚೆ ನಡೆಸಿರುವುದಾಗಿಯೂ ಹೇಳಿದರು.&lt;/p&gt;&lt;h2&gt;&lt;strong&gt;ರಾಜಕಾರಣಕ್ಕಿಂತ ಮಾನವೀಯತೆ ಮತ್ತು ಭಕ್ತಿ ಮುಖ್ಯ&lt;/strong&gt;&lt;/h2&gt;&lt;p&gt;ಇತ್ತೀಚೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಿವಿಧ ಧರ್ಮಗಳ ಪೀಠಾಧಿಪತಿಗಳನ್ನು ಆಹ್ವಾನಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, &quot;ನನಗೆ ರಾಜಕಾರಣಕ್ಕಿಂತ ಮಾನವೀಯತೆ ಮತ್ತು ಭಕ್ತಿ ಮುಖ್ಯ. ರಾಜ್ಯದ ಹಿತ ಕಾಪಾಡುವ ಜವಾಬ್ದಾರಿ ಹೊತ್ತಾಗ ಎಲ್ಲ ಧರ್ಮಗಳ ಆಶೀರ್ವಾದ ಪಡೆಯುವುದು ಅಗತ್ಯ. ಅದಕ್ಕಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ ಸೇರಿದಂತೆ ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನು ಆಹ್ವಾನಿಸಿದ್ದೆ&quot; ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ತಾವು ಯಾವುದೇ ಹರಕೆ ಹೊತ್ತು ಈ ಕ್ಷೇತ್ರಕ್ಕೆ ಬಂದಿಲ್ಲ ಎಂದು ಹೇಳಿದ ಡಿ.ಕೆ.ಶಿವಕುಮಾರ್, &quot;ಇದು ನನ್ನ ಭಕ್ತಿ ಮತ್ತು ನಂಬಿಕೆಯ ಅಭಿವ್ಯಕ್ತಿ ಮಾತ್ರ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲಿ, ಜನರು ಸುಖಶಾಂತಿಯಿಂದ ಬದುಕಲಿ, ನನಗೆ ಸಿಕ್ಕಿರುವ ಅಧಿಕಾರವನ್ನು ಜನರ ಸೇವೆಗೆ ಸಮರ್ಪಿಸಲು ಶಕ್ತಿ ಸಿಗಲಿ ಎಂಬ ಪ್ರಾರ್ಥನೆಯೊಂದಿಗೆ ದೇವರ ದರ್ಶನಕ್ಕೆ ಬಂದಿದ್ದೇನೆ&quot; ಎಂದು ಹೇಳಿದರು.&lt;/p&gt;&lt;p&gt;ಮಲ್ಲಘಟ್ಟದ ಗಂಗಾಧರೇಶ್ವರ ಸ್ವಾಮಿಯ ಆಶೀರ್ವಾದದಿಂದ ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ ಹಾಗೂ ಈ ಭಾಗದ ಕೆರೆಗಳು ಸದಾ ನೀರಿನಿಂದ ಕಂಗೊಳಿಸಲಿ ಎಂಬ ಆಶಯವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>hassan</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-dk-shivakumar-mallaghatta-gangadhareshwara-temple-visit-gvd/articleshow-s9gb5qa"/>
        </item>
        <item>
            <title><![CDATA[ಹಾಸನ: ಕುಸಿದು ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ 25 ವರ್ಷದ ಶ್ವೇತಾ ಹಠಾತ್ ಸಾವು: ಆಘಾತದಲ್ಲಿ ಪೋಷಕರು]]></title>
            <link>https://kannada.asianetnews.com/gallery/state/hassan-young-software-engineer-dies-suddenly-after-collapsing-tyyk8og</link>
            <guid isPermaLink="true">https://kannada.asianetnews.com/gallery/state/hassan-young-software-engineer-dies-suddenly-after-collapsing-tyyk8og</guid>
            <pubDate>Mon, 27 Apr 2026 15:38:00 +0530</pubDate>
            <description><![CDATA[ಹಾಸನದಲ್ಲಿ 25 ವರ್ಷದ ಸಾಫ್ಟ್&zwnj;ವೇರ್ ಇಂಜಿನಿಯರ್ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ಅವರು, ಮೆದುಳಿನ ತೀವ್ರ ರಕ್ತಸ್ರಾವದಿಂದಾಗಿ ಕೋಮಾಗೆ ಜಾರಿ ಮೃತಪಟ್ಟಿದ್ದಾರೆ. ಅಂಗಾಂಗ ದಾನಕ್ಕೆ ಪೋಷಕರು ಮುಂದಾದರೂ ಅದು ಸಾಧ್ಯವಾಗಲಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kq763xpkn06th3pnc2kttqtc,imgname-hasana-girl-death--5--1777284019923.jpeg" type="image/jpeg" height="390" width="690"/>
            <content:encoded><![CDATA[ಹಾಸನದಲ್ಲಿ 25 ವರ್ಷದ ಸಾಫ್ಟ್&zwnj;ವೇರ್ ಇಂಜಿನಿಯರ್ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ಅವರು, ಮೆದುಳಿನ ತೀವ್ರ ರಕ್ತಸ್ರಾವದಿಂದಾಗಿ ಕೋಮಾಗೆ ಜಾರಿ ಮೃತಪಟ್ಟಿದ್ದಾರೆ. ಅಂಗಾಂಗ ದಾನಕ್ಕೆ ಪೋಷಕರು ಮುಂದಾದರೂ ಅದು ಸಾಧ್ಯವಾಗಲಿಲ್ಲ.&lt;img&gt;&lt;p&gt;ಹಾಸನ: ಸಾಫ್ಟ್&zwnj;ವೇರ್ ಇಂಜಿನಿಯರ್ ಒಬ್ಬರು ಕುಸಿದು ಬಿದ್ದು ಹಠಾತ್ ಸಾವಿಗೀಡಾದಂತಹ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;25 ವರ್ಷದ ಸಾಫ್ಟ್&zwnj;ವೇರ್ ಉದ್ಯೋಗಿ ಶ್ವೇತಾ ಮೃತಪಟ್ಟ ಯುವತಿ. ಶ್ವೇತಾ ಮನೆಯಲ್ಲೇ ಕುಸಿದು ಬಿದ್ದು ಕೋಮಾಗೆ ಜಾರಿದ್ದರು.&lt;/p&gt;&lt;img&gt;&lt;p&gt;ಶ್ವೇತಾ ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯ ಹಾಸನ ಶಾಖೆಯಲ್ಲಿ ಮೂರು ವರ್ಷದಿಂದ&zwnj; ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 25 ರ ಶುಕ್ರವಾರ ಸಂಜೆ ಮನೆಯಲ್ಲಿ ಅವರು ಕುಸಿದು ಬಿದ್ದಿದ್ದರು.&lt;/p&gt;&lt;img&gt;&lt;p&gt;ಕೂಡಲೇ ಮನೆಯವರು ಅವರನ್ನು ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಆಗಲೇ ಶ್ವೇತಾ ಕೋಮಾಗೆ ಜಾರಿದ್ದು, ಸಾವನ್ನಪ್ಪಿದ್ದಾರೆ.&lt;/p&gt;&lt;img&gt;&lt;p&gt;ಮೆದುಳಿನಲ್ಲಿ ತೀವ್ರ ರಕ್ತಶ್ರಾವದಿಂದಾಗಿ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಶ್ವೇತಾ ಮೆದುಳು ನಿಷ್ಕ್ರಿಯ ಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಪೋಷಕರು ಮುಂದಾಗಿದ್ದರು.&lt;/p&gt;&lt;img&gt;&lt;p&gt;ಆದರೆ ಅಂಗಾಂಗ ದಾನ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಯುವತಿ ಅಂತ್ಯಕ್ರಿಯೆ ನಡೆದಿದೆ. ಶ್ವೇತಾ ಅವರು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಯುವತಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಹಾಗೂ ಸರೋಜ ದಂಪತಿ ಪುತ್ರಿಯಾಗಿದ್ದು, ಶ್ವೇತಾ ಅವರ ಹಠಾತ್ ಸಾವಿನಿಂದ ಕುಟುಂಬದವರು ತೀವ್ರ ಆಘಾತಕ್ಕೀಡಾಗಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/hassan-young-software-engineer-dies-suddenly-after-collapsing-tyyk8og"/>
        </item>
        <item>
            <title><![CDATA[Hassan: ಕಲ್ಯಾಣಕ್ಕೆ ವಧು ಸಿಗದ್ದಕ್ಕೆ ಕಲ್ಯಾಣಿಗೆ ಬಿದ್ದು ಪ್ರಾಣ ಬಿಟ್ಟ ಹಾಸನದ ಯುವಕ]]></title>
            <link>https://kannada.asianetnews.com/gallery/karnataka-districts/hassan-district-belur-youth-harm-self-after-being-heartbroken-over-not-being-able-to-find-a-woman-to-marry-mrq-vf311mg</link>
            <guid isPermaLink="true">https://kannada.asianetnews.com/gallery/karnataka-districts/hassan-district-belur-youth-harm-self-after-being-heartbroken-over-not-being-able-to-find-a-woman-to-marry-mrq-vf311mg</guid>
            <pubDate>Wed, 29 Apr 2026 12:03:31 +0530</pubDate>
            <description><![CDATA[ಹಾಸನ ಜಿಲ್ಲೆಯ ಬೇಲೂರಿನಲ್ಲಿ, ಮದುವೆಯಾಗಲು ಹೆಣ್ಣು ಸಿಗದ ಕಾರಣಕ್ಕೆ ಮನನೊಂದು 35 ವರ್ಷದ ಯುವಕನೊಬ್ಬ ಕಲ್ಯಾಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ವಧು ಹುಡುಕಾಟದಲ್ಲಿದ್ದ ಪದವೀಧರ ವಿನಯ್, ಪೋಷಕರು ಬೈದಿದ್ದರಿಂದಲೂ ನೊಂದಿದ್ದ ಎಂದು ಹೇಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbynnys12b6yevp26zxd39h,imgname-beluru-suicide--2--1777443985368.jpg" type="image/jpeg" height="390" width="690"/>
            <content:encoded><![CDATA[ಹಾಸನ ಜಿಲ್ಲೆಯ ಬೇಲೂರಿನಲ್ಲಿ, ಮದುವೆಯಾಗಲು ಹೆಣ್ಣು ಸಿಗದ ಕಾರಣಕ್ಕೆ ಮನನೊಂದು 35 ವರ್ಷದ ಯುವಕನೊಬ್ಬ ಕಲ್ಯಾಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ವಧು ಹುಡುಕಾಟದಲ್ಲಿದ್ದ ಪದವೀಧರ ವಿನಯ್, ಪೋಷಕರು ಬೈದಿದ್ದರಿಂದಲೂ ನೊಂದಿದ್ದ ಎಂದು ಹೇಳಲಾಗಿದೆ.&lt;img&gt;&lt;p&gt;ನಾಲ್ಕು ವರ್ಷದಿಂದ ಮದುವೆಯಾಗಲು ಹೆಣ್ಣು ಹುಡುಕಿದ್ರೂ ಯುವಕನಿಗೆ ಹುಡುಗಿ ಸಿಕ್ಕಿರಲಿಲ್ಲ. ಇದರಿಂದ ನೊಂದ ಯುವಕ ಕಲ್ಯಾಣಿಗೆ ಧುಮುಕಿ ಪ್ರಾಣ ಕಳೆದುಕೊಂಡಿದ್ದಾನೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ನಾಗರಾಜ್-ಪದ್ಮಾ ಎಂಬವರು ಪುತ್ರ 35 ವರ್ಷದ ವಿನಯ್ ಆತ್ಮಹ*ತ್ಯೆಗೆ ಶರಣಾದ ಯುವಕ. ವಿಷ್ಣು ಸಮುದ್ರ ಕೆರೆಯ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಗುಡ್ದೂರು ಗ್ರಾಮದ ನಿವಾಸಿಯಾಗಿದ್ದ ವಿನಯ್, ಕಳೆದ ಹತ್ತು ವರ್ಷಗಳಿಂದ ಬೇಲೂರು ಪಟ್ಟಣದ ಶಂಕರದೇವರ ಪೇಟೆಯಲ್ಲಿ ವಾಸವಿದ್ದನು.&lt;/p&gt;&lt;img&gt;&lt;p&gt;ಪದವಿಧರನಾಗಿದ್ದ ವಿನಯ್, ಬೇಲೂರಿನಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಮದುವೆಯಾಗಲು ಹೆಣ್ಣು ಹುಡುಕುತ್ತಿದ್ದನು. ಹುಡುಗಿ ಸಿಗದ ಹಿನ್ನೆಲೆಯಲ್ಲಿ ವಿನಯ್ ಮನನೊಂದಿದ್ದ ಎಂದು ತಿಳಿದು ಬಂದಿದೆ. ಇದರಿಂದ ಕಳೆದ ಒಂದು ವಾರದಿಂದ ಕೆಲಸಕ್ಕೂ ಹೋಗದೇ ವಿನಯ್ ಮನೆಯಲ್ಲಿದ್ದನು.&lt;/p&gt;&lt;img&gt;&lt;p&gt;ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದಿದ್ರರಿಂದ ಪೋಷಕರು ಬೈದಿದ್ದರು. ಈ ಎಲ್ಲಾ ಘಟನೆಗಳಿಂದ ನೊಂದ ವಿನಯ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳೀಯ ಮೀನುಗಾರರ ಸಹಾಯದಿಂದ ಮೃತದೇಹ ಹೊರತೆಗೆದಿದ್ದಾರೆ.&amp;nbsp;&lt;/p&gt;&lt;p&gt;ಸ್ಥಳಕ್ಕೆ ಪಿಎಸ್ಐ ಪಾಟೀಲ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;]]></content:encoded>
            <category>hassan</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/hassan-district-belur-youth-harm-self-after-being-heartbroken-over-not-being-able-to-find-a-woman-to-marry-mrq-vf311mg"/>
        </item>
        <item>
            <title><![CDATA['ದೇಶದಲ್ಲಿ ಅನ್ನ, ನೀರಿಗೆ ಹಾಹಾಕಾರ' ಕೋಡಿ ಶ್ರೀಗಳ ಎಚ್ಚರಿಕೆ: ದೇಶಕ್ಕೆ ಕಾದಿದೆಯೇ ಮಹಾ ಸಂಕಷ್ಟ?]]></title>
            <link>https://kannada.asianetnews.com/karnataka-districts/food-and-water-crisis-warning-amid-climate-change-says-shivayogi-rajendra-swamiji-kvn/articleshow-wg6q7zh</link>
            <guid isPermaLink="true">https://kannada.asianetnews.com/karnataka-districts/food-and-water-crisis-warning-amid-climate-change-says-shivayogi-rajendra-swamiji-kvn/articleshow-wg6q7zh</guid>
            <pubDate>Mon, 27 Apr 2026 17:20:37 +0530</pubDate>
            <description><![CDATA[ಮದ್ದೂರಿನಲ್ಲಿ ಕೋಡಿ ಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹವಾಮಾನ ವೈಪರಿತ್ಯದಿಂದ ದೇಶಕ್ಕೆ ಅನ್ನ, ನೀರಿನ ಹಾಹಾಕಾರ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಈ ಸಂಕಷ್ಟದಿಂದ ಕರ್ನಾಟಕಕ್ಕೆ ಯಾವುದೇ ದೊಡ್ಡ ಸಮಸ್ಯೆ ಉಲ್ಬಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kdjj16tj38aqx5r8gy6mjrhe,imgname-----------------------2025-12-28t181908.273-1766928194386.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದ್ದೂರು: ಹವಾಮಾನ ವೈಪರಿತ್ಯಗಳಿಂದಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿಗೆ ಹಾಹಾಕಾರ ಎದುರಾಗಲಿದೆ ಎಂದು ಶ್ರೀ ಕೋಡಿ ಮಠದ ಮಹಾ ಸಂಸ್ಥಾನದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.&lt;/p&gt;&lt;p&gt;ತಾಲೂಕಿನ ಚಾಮನಹಳ್ಳಿಯಲ್ಲಿ ನಡೆದ ಶ್ರೀಬಂಡೆ ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಮಹಾ ರಾಜಗೋಪುರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದಿನದಿಂದ ದಿನಕ್ಕೆ ಹವಾಮಾನ ವೈಪರಿತ್ಯರಿಂದ ಪ್ರಕೃತಿಯಲ್ಲಿ ಏರುಪೇರಾಗುತ್ತಿದೆ. ಅಪಮೃತ್ಯುಗಳು ಹೆಚ್ಚಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿನ ಹಾಹಾಕಾರದ ಸಮಸ್ಯೆಯಾಗಲಿದೆ. ಆದರೆ, ಕರ್ನಾಟಕಕ್ಕೆ ಯಾವುದೇ ರೀತಿಯ ಸಮಸ್ಯೆ ಉಲ್ಬಣವಾಗುವುದಿಲ್ಲ ಎಂದರು.&lt;/p&gt;&lt;h2&gt;&lt;strong&gt;ಶ್ರೀಬಂಡೆ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಕೋಡಿಶ್ರೀ&lt;/strong&gt;&lt;/h2&gt;&lt;p&gt;ಚಾಮನಹಳ್ಳಿಯ ಶ್ರೀಬಂಡೆ ಶನೇಶ್ವರಸ್ವಾಮಿಯ ಕ್ಷೇತ್ರಕ್ಕೆ ಆಗಮಿಸಿರುವುದು ನನ್ನ ಪುಣ್ಯ. ಶನೇಶ್ವರ ಸ್ವಾಮಿಯೂ ಪ್ರತಿಯೊಬ್ಬ ಮನುಷ್ಯನಿಗೂ ಗುರು ಸ್ಥಾನದಲ್ಲಿದ್ದು, ಸರಿ ತಪ್ಪುಗಳನ್ನು ತಿದ್ದಿ ಬುದ್ಧಿ ಸನ್ಮಾರ್ಗದಲ್ಲಿ ನಡೆಸಲಿದ್ದಾರೆ. ಈ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿ ಹೊಂದಲು ದೇವರ ಅನುಗ್ರಹ ಮುಖ್ಯವಾಗಿದೆ ಎಂದರು.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ದೈವಾರಾಧನೆಗಳು ನಡೆಯುತ್ತಿರುವ ಪರಿಣಾಮ ಮಳೆ, ಬೆಳೆಯಿಂದ ರಾಜ್ಯದ ಜನರು ದೈವಾರಾಧನೆಯ ಮೂಲಕ ಸಮೃದ್ಧಿ ಜೀವನ ನಡೆಸಲಿದ್ದಾರೆ ಎಂದರು.&lt;/p&gt;&lt;p&gt;ಬಂಡೆ ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಮಹಾ ರಾಜಗೋಪುರ ಉದ್ಘಾಟನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು..&lt;/p&gt;&lt;p&gt;ಶನಿವಾರ ಬೆಳಗ್ಗೆಯಿಂದ ಅಭಿಷೇಕ, ಸುಪ್ರಭಾತ, ವೇದಪಾರಾಯಣ, ಕಲಶರಾಧನೆ, ಫಲ ಪಂಚಾಮೃತ ಹೋಮ, ಏಕವಾರ ರುದ್ರಾಭಿಷೇಕ ಮಧ್ಯಾಹ್ನ 12 ಗಂಟೆಗೆ ಮಹಾಕುಂಭಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆದವು. ರಾತ್ರಿ ಶ್ರೀ ಛಾಯಾದೇವಿ ಅಮ್ಮ ಅವರ ಪುಜಾ ಕುಣಿತ, ಅಮ್ಮನವರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮದ ನಂತರ ಗೀತಾ ಗಾಯನ ನಡೆಯಿತು.&lt;/p&gt;&lt;p&gt;ಇಂದು ಬೆಳಗ್ಗೆ 4 ಗಂಟೆಗೆ ಶನೇಶ್ವರಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ಬೆಳಗ್ಗೆ 7 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಏ.27ರ ಸೋಮವಾರ ಮರುಹಬ್ಬದ ಪ್ರಯುಕ್ತ ಆಶ್ರಯ ಬಡಾವಣೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಶ್ರೀ ಛಾಯಾದೇವಿ ಅಮ್ಮನವರ ಪೂಜಾ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ರಸಮಂಜರಿ ಹಾಗೂ ಅನ್ನ ಸಂತರ್ಪಣೆಯಲ್ಲಿ ಭಕ್ತಾದಿಗಳು ಆಗಮಿಸುವಂತೆ ಪ್ರಧಾನ ಅರ್ಚಕ ಕೃಷ್ಣಪ್ಪ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/food-and-water-crisis-warning-amid-climate-change-says-shivayogi-rajendra-swamiji-kvn/articleshow-wg6q7zh"/>
        </item>
        <item>
            <title><![CDATA[ಬೇರೊಬ್ಬರ ವರದಿಯನ್ನು ಮತ್ತ್ಯಾರಿಗೋ ನೀಡಿ ರೋಗಿಯ ಪತಿಯನ್ನೇ ನಿಂದಿಸಿದ ಸ್ಕ್ಯಾನಿಂಗ್‌ ಸೆಂಟರ್‌ ಸಿಬ್ಬಂದಿ]]></title>
            <link>https://kannada.asianetnews.com/karnataka-districts/hassan-sakaleshpur-medical-negligence-scanning-center-staff-scolded-for-giving-someone-else-s-report-mrq/articleshow-x1bp7pi</link>
            <guid isPermaLink="true">https://kannada.asianetnews.com/karnataka-districts/hassan-sakaleshpur-medical-negligence-scanning-center-staff-scolded-for-giving-someone-else-s-report-mrq/articleshow-x1bp7pi</guid>
            <pubDate>Sun, 10 May 2026 08:44:41 +0530</pubDate>
            <description><![CDATA[&lt;p&gt;ಸ್ಕ್ಯಾನಿಂಗ್ ಸೆಂಟರ್&zwnj;ನಲ್ಲಿ ಬೇರೊಬ್ಬರ ವರದಿಯನ್ನು ಮಹಿಳೆಯೊಬ್ಬರಿಗೆ ನೀಡಿದ ಪರಿಣಾಮ, ತಪ್ಪಾದ ಚಿಕಿತ್ಸೆಯಿಂದ ಅವರ ಆರೋಗ್ಯ ಹದಗೆಟ್ಟಿದೆ. ಕೇಂದ್ರದ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದು, ಈ ಘಟನೆಯು ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರದ ದುಸ್ಥಿತಿಯನ್ನು ಸಹ ಬೆಳಕಿಗೆ ತಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7xqk57bagfgtta6gp9ja0x,imgname-scanning--report-exchange-1778382523559.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ಸಕಲೇಶಪುರ ಪಟ್ಟಣದ ಟೋಲ್ ಗೇಟ್ ಸಮೀಪ ಕಾರ್ಯನಿರ್ವಹಿಸುತ್ತಿರುವ &ldquo;ಸ್ಕಂದ ಸ್ಕ್ಯಾನಿಂಗ್ ಸೆಂಟರ್&rdquo;ನ ಬೇಜವಾಬ್ದಾರಿತನದಿಂದ ಮಹಿಳೆಯೊಬ್ಬರು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ತಾಲೂಕಿನ ಮಠಸಾಗರ ಗ್ರಾಮದ ಹಸೈನಾರ್ ಹಾಜಿ ಅವರ ಪತ್ನಿ ಸಂಶಿಯಾ ಎಂಬುವವರು ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಗುರುವಾರ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ವೈದ್ಯರು ಸ್ಕ್ಯಾನಿಂಗ್ ಮಾಡುವಂತೆ ಸೂಚಿಸಿದ್ದು, ಅವರನ್ನು ಪಟ್ಟಣದ ಟೋಲ್ ಗೇಟ್ ಸಮೀಪದ ಸ್ಕಂದ ಸ್ಕ್ಯಾನಿಂಗ್ ಸೆಂಟರ್&zwnj;ಗೆ ಕಳುಹಿಸಲಾಗಿತ್ತು. ಸ್ಕ್ಯಾನಿಂಗ್ ಮಾಡಿದ ಬಳಿಕ ಕೇಂದ್ರದ ಸಿಬ್ಬಂದಿ ನೀಡಿದ ವರದಿಯನ್ನು ವೈದ್ಯರಿಗೆ ತೋರಿಸಿದಾಗ, ಅದರ ಆಧಾರದ ಮೇಲೆ ಔಷಧಿ ನೀಡಲಾಗಿತ್ತು. ಆದರೆ ಔಷಧಿ ಸೇವಿಸಿದ ಬಳಿಕವೂ ಮಹಿಳೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಿಸದೇ, ಮತ್ತಷ್ಟು ಅಸ್ವಸ್ಥಗೊಂಡು ನಿಶಕ್ತರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ರೋಗಿಯ ಆರೋಗ್ಯದಲ್ಲಿ ವ್ಯತ್ಯಾಸ&lt;/strong&gt;&lt;/h2&gt;&lt;p&gt;ಈ ನಡುವೆ ಶುಕ್ರವಾರ ಸ್ಕಂದ ಸ್ಕ್ಯಾನಿಂಗ್ ಸೆಂಟರ್ ಸಿಬ್ಬಂದಿ ದೂರವಾಣಿ ಮೂಲಕ ಸಂಪರ್ಕಿಸಿ &ldquo;ನಿಮ್ಮ ರಿಪೋರ್ಟ್ ಬದಲಾಗಿ ವೈಶಾಲಿ ಎಂಬುವವರ ವರದಿ ನಿಮ್ಮ ಕೈ ಸೇರಿದೆ, ಬಂದು ಹೊಸ ವರದಿ ಪಡೆದುಕೊಳ್ಳಿ&rdquo; ಎಂದು ತಿಳಿಸಿದ್ದಾರೆ. ಇದರಿಂದ ಕೇಂದ್ರದ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಬಹಿರಂಗವಾಗಿದ್ದು, ತಪ್ಪಾದ ವರದಿ ನೀಡಿದ ಪರಿಣಾಮ ರೋಗಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಕೇಂದ್ರದ ಸಿಬ್ಬಂದಿ &ldquo;ಇಂತಹದ್ದು ಕೆಲವೊಮ್ಮೆ ಆಗುತ್ತದೆ, ಬೇಕಾದರೆ ಹೊಸ ರಿಪೋರ್ಟ್ ತೆಗೆದುಕೊಂಡು ಹೋಗಿ, ಇಲ್ಲವಾದರೆ ಬಿಡಿ&rdquo; ಎಂದು ನಿರ್ಲಕ್ಷ್ಯವಾಗಿ ಉತ್ತರಿಸಿ, ರೋಗಿ ಹಾಗೂ ಅವರ ಪತಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.&lt;/p&gt;&lt;p&gt;ಈ ಕುರಿತು ರೋಗಿಯ ಪತಿ ಹಸನ್ ಹಾಜಿ ಮಾತನಾಡಿ, ನಾವು ಅನಕ್ಷರಸ್ಥರು. ವೈದ್ಯಕೀಯ ವರದಿಗಳ ಬಗ್ಗೆ ಅರಿವು ಇಲ್ಲ. ಆದರೆ ಸ್ಕ್ಯಾನಿಂಗ್ ಕೇಂದ್ರದ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ನಮ್ಮ ಮೇಲೆಯೇ ದರ್ಪ ತೋರಿಸುತ್ತಿದ್ದಾರೆ. ಇಂತಹ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯ ಉಂಟಾಗಬಹುದು. ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.&lt;/p&gt;&lt;h3&gt;&lt;strong&gt;ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರ ಬಳಕೆಯಾಗದ ಸ್ಥಿತಿ&lt;/strong&gt;&lt;/h3&gt;&lt;p&gt;ಸಕಲೇಶಪುರ ಕ್ರಾಫರ್ಡ್&zwnj; ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದರೂ, ನುರಿತ ತಜ್ಞರ ಕೊರತೆಯಿಂದ ಅದು ಬಳಕೆಯಾಗದೇ ತುಕ್ಕು ಹಿಡಿಯುತ್ತಿದೆ. ಖಾಸಗಿ ಕೇಂದ್ರಗಳ ಅವಲಂಬನೆ ತಪ್ಪಿಸಲು ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಘಟಕವನ್ನು ಶೀಘ್ರ ದುರಸ್ತಿ ಮಾಡಿ, ತಜ್ಞರನ್ನು ನೇಮಿಸಿ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-sakaleshpur-medical-negligence-scanning-center-staff-scolded-for-giving-someone-else-s-report-mrq/articleshow-x1bp7pi"/>
        </item>
        <item>
            <title><![CDATA[ಕೆಪಿಎಸ್ ಬೇಡ, ನಮ್ಮೂರ ಸರ್ಕಾರಿ ಶಾಲೆ ನಮ್ಮೂರಲ್ಲೇ ಉಳಿಯಲಿ: ಗ್ರಾಮಸ್ಥರ ಪ್ರತಿಭಟನೆ]]></title>
            <link>https://kannada.asianetnews.com/karnataka-districts/hassan-massive-protest-by-villagers-to-save-government-school-kerekodihalli-dhananjaypur-of-araseikere-taluk-mrq/articleshow-xlo45sg</link>
            <guid isPermaLink="true">https://kannada.asianetnews.com/karnataka-districts/hassan-massive-protest-by-villagers-to-save-government-school-kerekodihalli-dhananjaypur-of-araseikere-taluk-mrq/articleshow-xlo45sg</guid>
            <pubDate>Thu, 21 May 2026 12:59:59 +0530</pubDate>
            <description><![CDATA[&lt;p&gt;ತಮ್ಮೂರಿನ ಸರ್ಕಾರಿ ಶಾಲೆಯನ್ನು ಜಾವಗಲ್ ಕೆಪಿಎಸ್ ಶಾಲೆಯೊಂದಿಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಸಾರಿಗೆ ವ್ಯವಸ್ಥೆಯ ಕೊರತೆ ಮತ್ತು ಮಕ್ಕಳ ಸುರಕ್ಷತೆಯ ಕಾರಣ ನೀಡಿ, &quot;ನಮ್ಮೂರ ಶಾಲೆ ನಮ್ಮೂರಲ್ಲೇ ಉಳಿಯಲಿ&quot; ಎಂದು ಆಗ್ರಹಿಸಿ, ಶಾಲೆಯನ್ನು ಮುಚ್ಚುವ ಬದಲು ಮೂಲಸೌಕರ್ಯ ಒದಗಿಸಲು ಸರ್ಕಾರವನ್ನು ಒತ್ತಾಯಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks4pxsyejx6vp52dbjdn1d4r,imgname-hassan-school-1779348465614.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಕೆಪಿಎಸ್-ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೆರೆಕೋಡಿಹಳ್ಳಿ-ಧನಂಜಯಪುರ ಗ್ರಾಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಬೃಹತ್ ಪ್ರತಿಭಟನಾ ಸಭೆ ನಡೆಸಿದರು.&lt;/p&gt;&lt;p&gt;ಜಾವಗಲ್ ಕೆಪಿಎಸ್ ಶಾಲೆಗೆ ಧನಂಜಯಪುರ ಸರ್ಕಾರಿ ಶಾಲೆಯನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನು ತಕ್ಷಣ ಕೈಬಿಡಬೇಕು. &ldquo;ನಮ್ಮೂರ ಶಾಲೆ ನಮ್ಮೂರಲ್ಲೇ ಉಳಿಯಲಿ&rdquo; ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು.&lt;/p&gt;&lt;h2&gt;&lt;strong&gt;ಗ್ರಾಮೀಣ ಶಾಲೆಗಳ ರಕ್ಷಣೆಗೆ ಹೋರಾಟ&lt;/strong&gt;&lt;/h2&gt;&lt;p&gt;ಪ್ರತಿಭಟನಾ ಸಭೆಯನ್ನು ಎ.ಐ.ಡಿ.ಎಸ್.ಓ. ಜಿಲ್ಲಾಧ್ಯಕ್ಷೆ ಚೈತ್ರ ಉದ್ದೇಶಿಸಿ ಮಾತನಾಡಿ, ಕರ್ನಾಟಕದಾದ್ಯಂತ ಕೆಪಿಎಸ್-ಮ್ಯಾಗ್ನೆಟ್ ಯೋಜನೆ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಶಿಕ್ಷಣವನ್ನು ಜನರಿಂದ ದೂರ ಮಾಡುವ ಕೆಲಸ ನಡೆಯುತ್ತಿದೆ ಎಂದರು.&lt;/p&gt;&lt;p&gt;ಕಳೆದ ಐದು ತಿಂಗಳುಗಳಿಂದ ಎಐಡಿಎಸ್&zwnj;ಓ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳನ್ನು ರಚಿಸಿ ಗ್ರಾಮೀಣ ಶಾಲೆಗಳ ರಕ್ಷಣೆಗೆ ಹೋರಾಟ ನಡೆಸುತ್ತಿದ್ದೇವೆ. ಈಗಾಗಲೇ ಅರಸೀಕೆರೆ ತಾಲೂಕಿನ ದೊಡ್ಡಮೇಟಿ-ಕುರ್ಕೆ ಭಾಗದ ಪೋಷಕರು ಕೂಡ &lsquo;ನಮಗೆ ಕೆಪಿಎಸ್ ಶಾಲೆ ಬೇಡ, ನಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ&rsquo; ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ಮನವಿ ನೀಡಿದ್ದಾರೆ. ಆದರೂ ಸರ್ಕಾರ ಜನರ ಅಭಿಪ್ರಾಯವನ್ನು ಪರಿಗಣಿಸದೇ ಶಾಲೆ ಮುಚ್ಚುವ ಪಟ್ಟಿಯನ್ನು ಪ್ರಕಟಿಸಿರುವುದು ಖಂಡನೀಯ ಎಂದರು.&amp;nbsp;&lt;/p&gt;&lt;h3&gt;&lt;strong&gt;ಶಾಲೆಯನ್ನು ಉಳಿಸಿಕೊಳ್ಳಲು ಕರೆ&lt;/strong&gt;&lt;/h3&gt;&lt;p&gt;ಸರ್ಕಾರದ ಈ ಕ್ರಮವನ್ನು ಜನವಿರೋಧಿ ಮತ್ತು ನಿರಂಕುಶ ನೀತಿ ಎಂದು ಟೀಕಿಸಿದ ಅವರು, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಸಮೀಪದಲ್ಲಿರುವ ಸರ್ಕಾರಿ ಶಾಲೆಯೇ ಶಿಕ್ಷಣದ ಆಶಾಕಿರಣ. ಅದನ್ನೇ ಕಿತ್ತುಕೊಂಡರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯ ಇದೆ. ಹೀಗಾಗಿ ಕೊನೆಯವರೆಗೂ ಹೋರಾಟ ನಡೆಸಿ ನಮ್ಮೂರಿನ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಗ್ರಾಮಸ್ಥರಾದ ಹಿತೇಂದ್ರ ಮಾತನಾಡಿ, ನಮ್ಮ ಊರಿಗೆ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಬಸ್ ಮಾತ್ರ ಬರುತ್ತದೆ. ಜಾವಗಲ್&zwnj;ಗೆ ಹೋಗಬೇಕಾದರೆ ಕೆರೆ ಏರಿ ಮೇಲಿನಿಂದ ಹೋಗಬೇಕು. ಮಳೆಗಾಲದಲ್ಲಿ ಅದು ಇನ್ನಷ್ಟು ಅಪಾಯಕರವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚಿಕ್ಕಮಕ್ಕಳನ್ನು ಪ್ರತಿದಿನ ದೂರದ ಶಾಲೆಗೆ ಹೇಗೆ ಕಳುಹಿಸಬೇಕು ಎಂದು ಪ್ರಶ್ನಿಸಿದರು. ಈಗಾಗಲೇ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೇ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ವರ್ಷಗಳಿಂದ ಮೂಲಭೂತ ಸಾರಿಗೆ ಸೌಲಭ್ಯ ಕಲ್ಪಿಸದ ಸರ್ಕಾರ ಈಗ ಮಕ್ಕಳನ್ನು ದೂರದ ಶಾಲೆಗೆ ಕಳುಹಿಸುತ್ತೇವೆ ಎಂದು ಹೇಳುವುದನ್ನು ನಾವು ಹೇಗೆ ನಂಬಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶಾಲೆ-ಕಾಲೇಜಿನಲ್ಲಿ ಹಿಜಾಬ್ ನಿಷೇಧ ರದ್ದು, ಕೇಸರಿ ಶಾಲು ಧರಿಸುವಂತಿಲ್ಲ, ಶಿಕ್ಷಣ ಸಚಿವರ ಎಚ್ಚರಿಕೆ ಏನು?&amp;nbsp;&lt;/strong&gt;&lt;/p&gt;&lt;p&gt;ನಮ್ಮೂರಿನ ಶಾಲೆಯನ್ನು ಮುಚ್ಚುವ ಬದಲು ಸರ್ಕಾರ ಶಾಲೆಗೆ ಅಗತ್ಯ ಶಿಕ್ಷಕರು, ಕಟ್ಟಡ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಬೇಕು. ನಮ್ಮ ಮಕ್ಕಳ ಭವಿಷ್ಯ ಉಳಿಯಬೇಕಾದರೆ ಶಾಲೆ ನಮ್ಮೂರಲ್ಲೇ ಇರಬೇಕು. ಶಾಲೆ ಮುಚ್ಚುವುದು ಎಂದರೆ ಗ್ರಾಮೀಣ ಮಕ್ಕಳ ಶಿಕ್ಷಣದ ಮೇಲೆ ಬೀಗ ಹಾಕಿದಂತಾಗುತ್ತದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಮುಚ್ಚಿದ ಪರಿಣಾಮ ಶಾಲೆಬಿಟ್ಟು ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು. ವಿಶೇಷವಾಗಿ ಪ್ರಾಥಮಿಕ ಹಂತದ ಮಕ್ಕಳಿಗೆ ದೂರದ ಪ್ರಯಾಣ ಕಷ್ಟಕರವಾಗಿದ್ದು, ಬಾಲಕಿಯರ ಶಿಕ್ಷಣಕ್ಕೂ ಧಕ್ಕೆಯಾಗಬಹುದು ಎಂದು ತಿಳಿಸಿದರು.&lt;/p&gt;&lt;p&gt;ಪ್ರತಿಭಟನೆಯಲ್ಲಿ ಗ್ರಾಮಸ್ಥರು ನಮ್ಮೂರ ಶಾಲೆ ಉಳಿಸಿ ಗ್ರಾಮೀಣ ಶಿಕ್ಷಣ ಉಳಿಸಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂಪಡಿ ಎಂಬ ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಪ್ರತಿಭಟನೆಯಲ್ಲಿ ಎಐಡಿಎಸ್&zwnj;ಒ ಕಾರ್ಯದರ್ಶಿ ಸುಷ್ಮಾ, ಗ್ರಾಮ ಪಂಚಾಯಿತಿ ಸದಸ್ಯರಾದ ಕಾವ್ಯ ಹಿತೇಂದ್ರ, ಎಸ್&zwnj;ಡಿಎಂ ಅಧ್ಯಕ್ಷ ನರಸಿಂಹ ಮೂರ್ತಿ, ಗ್ರಾಮಸ್ಥರಾದ ಗಿರೀಶ್, ಚೇತನ್, ಶರತ್, ತಿಮ್ಮಪ್ಪ, ಲಕ್ಷ್ಮಣ್, ಮಲ್ಲೇಶ್, ಬೀರಣ್ಣ, ದೇವರಾಜು, ವಿಶ್ವನಾಥ್, ಸುನೀಲ್, ಹರೀಶ್, ಗಂಗಾಧರ್&zwnj; ಇತರರು ಭಾಗವಹಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ : &lt;/strong&gt;&lt;strong&gt;ಬಹಳ ಒಳ್ಳೇವ್ರು ಕುಂದಾಪುರದ ಈ ಮಿಸ್ಸು; ಹೊಡೆಯಲ್ಲ, ಶಿಕ್ಷೆ ಕೊಡಲ್ಲ, ರಜೆ ಹಾಕಲ್ಲ: ಎಲ್ಲದಕ್ಕೂ ಎಸ್ಸೆಸ್ಸು&lt;/strong&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-massive-protest-by-villagers-to-save-government-school-kerekodihalli-dhananjaypur-of-araseikere-taluk-mrq/articleshow-xlo45sg"/>
        </item>
        <item>
            <title><![CDATA[Umesh Meti Kodimath visit: ಕೋಡಿಮಠ ಶ್ರೀಗಳಗೆ ಬೆಳ್ಳಿ ಕೀರಿಟ ಅರ್ಪಿಸಿದ ಶಾಸಕ ಉಮೇಶ್ ಮೇಟಿ]]></title>
            <link>https://kannada.asianetnews.com/karnataka-districts/bagalkote-new-mla-umesh-meti-presents-silver-crown-to-kodimath-sri-rav/articleshow-y03eqi4</link>
            <guid isPermaLink="true">https://kannada.asianetnews.com/karnataka-districts/bagalkote-new-mla-umesh-meti-presents-silver-crown-to-kodimath-sri-rav/articleshow-y03eqi4</guid>
            <pubDate>Sat, 09 May 2026 07:43:12 +0530</pubDate>
            <description><![CDATA[ಬಾಗಲಕೋಟೆ ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕ ಉಮೇಶ್ ಮೇಟಿ, ಅರಸೀಕೆರೆಯ ಹಾರನಹಳ್ಳಿ ಕೋಡಿಮಠಕ್ಕೆ ಭೇಟಿ ನೀಡಿದರು. ಅವರು ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರಿಗೆ ಬೆಳ್ಳಿ ಕಿರೀಟ ಅರ್ಪಿಸಿ, ಗಂಟೆಗೂ ಹೆಚ್ಚು ಕಾಲ ಗೋಪ್ಯ ಸಮಾಲೋಚನೆ ನಡೆಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr57tap3vw5q41d5wtdxz274,imgname-----------------------2026-05-09t073644.901-1778292435651.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಅರಸೀಕೆರೆ ಮೇ.9): &lt;/strong&gt;ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ನೂತನ ಶಾಸಕ ಉಮೇಶ್ ಮೇಟಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟ ಅರ್ಪಿಸಿ ಆಶೀರ್ವಾದ ಪಡೆದರು.&lt;/p&gt;&lt;p&gt;ಗುರುವಾರ ರಾತ್ರಿ ಮಠಕ್ಕೆ ಆಗಮಿಸಿದ ಉಮೇಶ್ ಮೇಟಿ ಮಠದಲ್ಲಿನ ಗದ್ದುಗೆಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಸ್ವಾಮೀಜಿಗೆ ರಜತ ಕಿರೀಟ ಧಾರಣೆ ಮಾಡಿ ಭಕ್ತಿಭಾವ ಸಮರ್ಪಿಸಿದರು. ಉಮೇಶ್ ಮೇಟಿ ಹಾಗೂ ಶ್ರೀಗಳ ನಡುವೆ 1 ಗಂಟೆಗೂ ಹೆಚ್ಚು ಕಾಲ ಗೋಪ್ಯ ಸಮಾಲೋಚನೆ ನಡೆದಿರುವುದು ವಿಶೇಷ ಗಮನ ಸೆಳೆಯಿತು.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Blackmail Utsav: ಯಾವ ಪುರುಷಾರ್ಥಕ್ಕೆ ಯಡಿಯೂರಪ್ಪ ಅಭಿಮಾನೋತ್ಸವ? ಯತ್ನಾಳ್ ಟೀಕೆ&lt;/p&gt;&lt;p&gt;ರಾಜಕೀಯವಾಗಿ ತಮ್ಮ ಮುಂದಿನ ನಡೆ, ಕ್ಷೇತ್ರದ ಅಭಿವೃದ್ಧಿ ಹಾಗೂ ಭವಿಷ್ಯದ ವಿಚಾರಗಳ ಕುರಿತು ಶ್ರೀಗಳ ಮಾರ್ಗದರ್ಶನ ಪಡೆದಿದ್ದಾರೆ ಎಂಬ ಮಾಹಿತಿ ಮಠದ ಮೂಲಗಳಿಂದ ತಿಳಿದುಬಂದಿದೆ.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkote-new-mla-umesh-meti-presents-silver-crown-to-kodimath-sri-rav/articleshow-y03eqi4"/>
        </item>
    </channel>
</rss>
