<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 06 Aug 2026 06:41:03 +0530</lastBuildDate>
        <atom:link href="https://kannada.asianetnews.com/rss/hassan" rel="self" type="application/rss+xml"/>
        <item>
            <title><![CDATA[ಬ್ಯಾಂಕಿಂಗ್ ಕ್ಷೇತ್ರದ ಕರಾಳ ಮುಖ ಬಯಲು! - ನಿಗದಿತ ಸಮಯ ಮುಗಿದರೂ ಸಿಬ್ಬಂದಿಗೆ ಆಫೀಸ್‌ನಲ್ಲೇ 'ಅಕ್ರಮ ಬಂಧನ']]></title>
            <link>https://kannada.asianetnews.com/karnataka-districts/karnataka-bank-manager-locks-staff-inside-to-force-overtime-viral-video-sparks-outrage/articleshow-16xhsg8</link>
            <guid isPermaLink="true">https://kannada.asianetnews.com/karnataka-districts/karnataka-bank-manager-locks-staff-inside-to-force-overtime-viral-video-sparks-outrage/articleshow-16xhsg8</guid>
            <pubDate>Mon, 20 Jul 2026 20:18:05 +0530</pubDate>
            <description><![CDATA[&lt;p&gt;ಹಾಸನದ ಅರಕಲಗೂಡಿನ ಕರ್ನಾಟಕ ಗ್ರಾಮೀಣ ಬ್ಯಾಂಕ್&zwnj;ನಲ್ಲಿ ನಿಗದಿತ ಅವಧಿ ಮುಗಿದರೂ ಮನೆಗೆ ತೆರಳಲು ಯತ್ನಿಸಿದ ಕಿರಿಯ ಉದ್ಯೋಗಿಗೆ, ಶಾಖೆಯ ಗೇಟ್&zwnj;ಗೆ ಬೀಗ ಹಾಕಿ ಒವರ್&zwnj;ಟೈಮ್ ಮಾಡುವಂತೆ ಮ್ಯಾನೇಜರ್ ಕಿರುಕುಳ ನೀಡಿದ ವೀಡಿಯೋ ವೈರಲ್ ಆಗಿದೆ. ಆರ್&zwnj;ಬಿಐ ನಿಯಮಗಳನ್ನು ಉಲ್ಲಂಘಿಸಿ ನೌಕರನನ್ನು ಅಕ್ರಮವಾಗಿ ಬಂಧಿಸಿದ ಮ್ಯಾನೇಜರ್ ನಡವಳಿಕೆ ಹಾಗೂ ಬ್ಯಾಂಕಿಂಗ್ ವಲಯದ ಟಾಕ್ಸಿಕ್ ಸಂಸ್ಕೃತಿಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzzgctj1n79ewx4hk7qw5y6,imgname-karnataka-grameen-bank-manager-locking-a-junior-employee-inside-the-office-to-demand-overtime-work-1784558400338.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸದ ಒತ್ತಡ ಮತ್ತು ಹಿರಿಯ ಅಧಿಕಾರಿಗಳ ಕಿರುಕುಳ ಮಿತಿಮೀರುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಹಾಸನ ಜಿಲ್ಲೆಯ ಅರಕಲಗೂಡು ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್&zwnj;ನಲ್ಲಿ ನಡದಿರುವ ಘಟನೆ ಇಡೀ ವಲಯವನ್ನು ಬೆಚ್ಚಿಬೀಳಿಸಿದೆ. ಜುಲೈ 18ರಂದು ಸಂಜೆ ನಿಗದಿತ ಕೆಲಸದ ಸಮಯ ಮುಗಿದಿದ್ದರೂ, ಕಸ್ಟಮರ್ ಸರ್ವಿಸ್ ಅಸೋಸಿಯೇಟ್ (CSA) ಉದ್ಯೋಗಿಯನ್ನು ಹೊರಗೆ ಹೋಗಲು ಬಿಡದೆ, ಶಾಖೆಯ ಮುಖ್ಯ ಗೇಟ್&zwnj;ಗೆ ಮ್ಯಾನೇಜರ್ ಬೀಗ ಜಡಿದಿದ್ದಾರೆ. ಈ ಅಕ್ರಮ ಬಂಧನದ ವೀಡಿಯೋ ಸದ್ಯ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;&quot;ಓವರ್&zwnj;ಟೈಮ್ ಕಡ್ಡಾಯ&quot;: ಬೆದರಿಕೆ ಹಾಕಿ ಅಧಿಕಾರಿಯ ದೌರ್ಜನ್ಯ:&lt;/strong&gt;&lt;/p&gt;&lt;p&gt;ಸಂಜೆ 5 ಗಂಟೆಗೆ ಶಿಫ್ಟ್ ಮುಗಿದಿದ್ದರೂ, ಉದ್ಯೋಗಿ 6 ಗಂಟೆಯವರೆಗೂ ಹೆಚ್ಚುವರಿಯಾಗಿ ಕೆಲಸ ಮಾಡಿದ್ದರು. ನಂತರ ಮನೆಗೆ ತೆರಳಲು ಅನುಮತಿ ಕೇಳಿದಾಗ, ಮ್ಯಾನೇಜರ್ &quot;ನಹಿ ಜನ ಹೈ ತೋ ನಹಿ ಜನ ಹೈ&quot; (ಹೋಗಬಾರದು ಎಂದರೆ ಹೋಗಬಾರದು) ಎಂದು ಉದ್ಧಟತನ ತೋರಿದ್ದಾರೆ. ಉದ್ಯೋಗ ಒಪ್ಪಂದದ ಪ್ರಕಾರ ನಿಗದಿತ ಕೆಲಸ ಮುಗಿಸಿದ್ದೇನೆ ಎಂದು ಸಿಬ್ಬಂದಿ ವಾದಿಸಿದರೂ, &quot;ಓವರ್&zwnj;ಟೈಮ್ ಮಾಡುವುದು ಕಡ್ಡಾಯ&quot; ಎಂದು ಬೆದರಿಸಿ ಗೇಟ್ ಮುಚ್ಚಿ ಕ್ರಿಮಿನಲ್ ಕೃತ್ಯದಂತೆ ವರ್ತಿಸಿದ್ದಾರೆ.&lt;/p&gt;&lt;p&gt;&lt;strong&gt;ಆರ್&zwnj;ಬಿಐ ನಿಯಮಗಳ ಉಲ್ಲಂಘನೆ ಮತ್ತು ಹೆಚ್ಚಿನ ಕೆಲಸದ ಒತ್ತಡ!&lt;/strong&gt;&lt;/p&gt;&lt;p&gt;ಸಿಬ್ಬಂದಿಯನ್ನು ಬಂಧಿತ ಗುಲಾಮರಂತೆ ನಡೆಸಿಕೊಳ್ಳುವ ಈ ನಡವಳಿಕೆಯು ಭಾರತೀಯ ರಿಸರ್ವ್ ಬ್ಯಾಂಕ್&zwnj; (RBI) ನಿಗದಿಪಡಿಸಿರುವ ಉದ್ಯೋಗಿ ಕಲ್ಯಾಣ ನೀತಿಗಳ ನೇರ ಉಲ್ಲಂಘನೆಯಾಗಿದೆ. ಸಾಲ ಮತ್ತು ಇನ್ಶೂರೆನ್ಸ್ ಟಾರ್ಗೆಟ್&zwnj;ಗಳನ್ನು ಪೂರೈಸಲು ಹಿರಿಯ ಅಧಿಕಾರಿಗಳು ಕಿರಿಯ ಸಿಬ್ಬಂದಿಯ ಮೇಲೆ ನಿರಂತರ ಮಾನಸಿಕ ಸವಾರ ನಡೆಸುತ್ತಿದ್ದಾರೆ. ಸೂಕ್ತ ಸಿಬ್ಬಂದಿ ಬಲ ನೀಡದೆ, ಅತಿಯಾದ ಗುರಿಗಳನ್ನು ಹೇರಿ ಬ್ಯಾಂಕರ್&zwnj;ಗಳ ಜೀವನವನ್ನು ನರಕ ಸದೃಶಗೊಳಿಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Bank Manager locks gate and forces staff to stay in branch till late night pic.twitter.com/oSFLwa5O4o&lt;/p&gt;&lt;p&gt;&mdash; Hellobanker (@Hellobanker_in) July 19, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ನೆಟ್ಟಿಗರ ಆಗ್ರಹ:&lt;/strong&gt;&lt;/p&gt;&lt;p&gt;ಈ ಕರಾಳ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಉದ್ಯೋಗಿಯನ್ನು ಬಂಧಿಸಿಡುವುದು ಸ್ಪಷ್ಟವಾಗಿ ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ಕೇವಲ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಲು ಕಿರಿಯ ಸಿಬ್ಬಂದಿಯನ್ನು ಬಲಿಪಶು ಮಾಡುತ್ತಿರುವ ಇಂತಹ ಮ್ಯಾನೇಜರ್&zwnj;ಗಳ ವಿರುದ್ಧ ತಕ್ಷಣವೇ ಅಮಾನತು ಶಿಕ್ಷೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕರು ಹಾಗೂ ಬ್ಯಾಂಕಿಂಗ್ ಒಕ್ಕೂಟಗಳು ಒತ್ತಾಯಿಸಿವೆ.&lt;/p&gt;]]></content:encoded>
            <category>hassan</category>
            <dc:creator>Chandrashekar GS</dc:creator>
            <atom:link href="https://kannada.asianetnews.com/karnataka-districts/karnataka-bank-manager-locks-staff-inside-to-force-overtime-viral-video-sparks-outrage/articleshow-16xhsg8"/>
        </item>
        <item>
            <title><![CDATA[ಆಸ್ತಿ ಕೊಡದ ತಂದೆಯನ್ನೇ ಕೊಂದ ಮಗ! ಮುಂದೇನು ತೋಚದೇ  ಮಗನ ಈ ನಿರ್ಧಾರದಿಂದ ಆಸ್ತಿ ಯಾರಿಗೆ ಸಿಕ್ತು?]]></title>
            <link>https://kannada.asianetnews.com/karnataka-districts/hassan-shocking-incident-son-kills-father-for-not-giving-him-property-rav/articleshow-31x9lal</link>
            <guid isPermaLink="true">https://kannada.asianetnews.com/karnataka-districts/hassan-shocking-incident-son-kills-father-for-not-giving-him-property-rav/articleshow-31x9lal</guid>
            <pubDate>Sun, 19 Jul 2026 08:18:18 +0530</pubDate>
            <description><![CDATA[&lt;p&gt;ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಆಸ್ತಿ ಕೊಡುವಂತೆ ಪೀಡಿಸುತ್ತಿದ್ದ ಮಗನೊಬ್ಬ ತನ್ನ ತಂದೆಯನ್ನೇ ಕೊಂದು ಕಡೆಗೆ ತಾನೂ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಪಟ್ಟಣದ ಗುರನಹಳ್ಳಿಯಲ್ಲಿ ಶನಿವಾರ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jyqjyjexqxz8bdnbbp9q6hq3,imgname-----------------------2025-06-27t074911.273-1750990801373.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚನ್ನರಾಯಪಟ್ಟಣ (ಜು.19):&lt;/strong&gt; ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಆಸ್ತಿ ಕೊಡುವಂತೆ ಪೀಡಿಸುತ್ತಿದ್ದ ಮಗನೊಬ್ಬ ತನ್ನ ತಂದೆಯನ್ನೇ ಕೊಂದು ಕಡೆಗೆ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಗುರನಹಳ್ಳಿಯಲ್ಲಿ ಶನಿವಾರ ನಡೆದಿದೆ.&lt;/p&gt;&lt;h2&gt;ಮೈತುಂಬಾ ಸಾಲ, ಆಸ್ತಿ ಕೊಡದ ತಂದೆ, ನಡೆದೇಹೋಯ್ತು ಕೊಲೆ&lt;/h2&gt;&lt;p&gt;ನಿವೃತ್ತ ಶಿಕ್ಷಕರಾಗಿದ್ದ ಚನ್ನೇಗೌಡ ಎಂಬುವವರು ಮಗನಿಂದ ಹತ್ಯೆಗೀಡಾಗಿದ್ದು, ತಂದೆಯನ್ನು ಕೊಂದ ಮಗ ಬಿಂದುಕುಮಾರ ಅದೇ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಹಲವು ಕಾರಣಗಳಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮೈತುಂಬಾ ಸಾಲ ಮಾಡಿಕೊಂಡಿದ್ದ ಬಿಂದುಕುಮಾರ ಅದರಿಂದ ಹೊರಬರಲು ತನ್ನ ತಂದೆಯ ಬಳಿ ಆಸ್ತಿ ಕೊಡುವಂತೆ ದಂಬಾಲು ಬಿದ್ದಿದ್ದ. ಮಗನ ಬುದ್ದಿ ತಿಳಿದಿದ್ದ ತಂದೆ ಚನ್ನೇಗೌಡರು ಆಸ್ತಿ ಕೊಡಲು ನಿರಾಕರಿಸುತ್ತಿದ್ದರು.&amp;nbsp;&lt;/p&gt;&lt;h3&gt;ಆಸ್ತಿ ಕೊಡದ ತಂದೆಯನ್ನ ಕೊಂದು ತಾನೂ ಇಲ್ಲವಾದ!&lt;/h3&gt;&lt;p&gt;ಇದರಿಂದ ತಂದೆಯ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದ ಬಿಂದುಕುಮಾರ ತನ್ನ ತಂದೆಯ ಮನೆಗೆ ಬಂದು ಇದೇ ವಿಚಾರವಾಗಿ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ತನ್ನ ಮೇಲೆ ನಿಯಂತ್ರಣ ಕಳೆದುಕೊಂಡ ಮಗ ತನ್ನ ತಂದೆಯನ್ನು ಕೊಂದಿದ್ದಾನೆ. ನಂತರ ಏನು ಮಾಡಬೇಕೆಂದು ಗೊತ್ತಾಗದೆ ಅದೇ ಮನೆಯಲ್ಲಿ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾನೆ.&lt;/p&gt;&lt;p&gt;ವಿಷಯ ತಿಳಿದು ಚನ್ನರಾಯಪಟ್ಟಣ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಎಸ್ಪಿ ಶುಭನ್ವಿತಾ ಕೂಡ ಭೇಟಿ ನೀಡಿದ್ದರು. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-shocking-incident-son-kills-father-for-not-giving-him-property-rav/articleshow-31x9lal"/>
        </item>
        <item>
            <title><![CDATA[ಮಂಗಳೂರು-ಬೆಂಗಳೂರು ರೈಲ್ವೆ ಸಂಚಾರ ರದ್ದು, ಪೊಲೀಸ್‌ ಪರೀಕ್ಷೆ ತಪ್ಪಿಸಿಕೊಂಡ ಅಭ್ಯರ್ಥಿಗಳು, ಮತ್ತೆ ರೈಲು ಆರಂಭ ಯಾವಾಗ?]]></title>
            <link>https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu</link>
            <guid isPermaLink="true">https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu</guid>
            <pubDate>Mon, 03 Aug 2026 11:05:23 +0530</pubDate>
            <description><![CDATA[&lt;p&gt;ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಕಲೇಶಪುರ ಸಮೀಪದ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿ, ಬದಲಿ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ರೈಲ್ವೆ ಇಲಾಖೆ ಹಳಿ ದುರಸ್ತಿ ಕಾರ್ಯ ಕೈಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz31cs273a27mdbahsh3pqps,imgname-mangaluru-bengaluru-trains--1--1785734784068.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಬೆಟ್ಟಗಳ ಇಳಿಜಾರು ಭಾಗಗಳಲ್ಲಿ ಮಣ್ಣು ಸಡಿಲಗೊಂಡ ಪರಿಣಾಮ ಈ ಭೂಕುಸಿತ ಸಂಭವಿಸುತ್ತಿದೆ. ಸಕಲೇಶಪುರ ಸಮೀಪ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಸಿರಿಬಾಗಿಲು ನಡುವೆ ಶನಿವಾರ ರಾತ್ರಿ ರಾತ್ರಿ 9 ಗಂಟೆಗೆ ಮಣ್ಣು ಕುಸಿದಿದ್ದು, ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾಝಿಕ್ಕೋಡ್&zwnj;- ಬೆಂಗಳೂರು ರೈಲನ್ನು ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದಿಂದ ವಾಪಸ್&zwnj; ಕಳುಹಿಸಲಾದರೆ, ಮಂಗಳೂರಿಗೆ ತೆರಳುತ್ತಿದ್ದ ಕಾರವಾರ ಎಕ್ಸ್&zwnj;ಪ್ರೆಸ್&zwnj; ರೈಲನ್ನು ಹಾಸನ ರೈಲ್ವೆ ನಿಲ್ದಾಣದಿಂದ ಬದಲಿ ಮಾರ್ಗದಲ್ಲಿ ಕಳುಹಿಸಿಕೊಡಲಾಯಿತು. ಭೂಕುಸಿತದಿಂದ ಈ ಮಾರ್ಗದಲ್ಲಿ ಸಂಚರಿಸುವ ಏಳು ರೈಲುಗಳ ಸಂಚಾರವನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಇಲಾಖೆ ಅಧಿಕಾರಿಗಳು ಮೈಸೂರಿನಿಂದ ಇನ್ನೂರಕ್ಕೂ ಅಧಿಕ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿ ಮಧ್ಯರಾತ್ರಿಯಿಂದಲೆ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ ಘಟನಾ ಪ್ರದೇಶದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಸಮರೋಪಾಧಿ ಕಾರ್ಯಚರಣೆಗೆ ಅಡ್ಡಿಯಾಗಿದೆ.&lt;/p&gt;&lt;h2&gt;ಸಂಚಾರ ಪುನರಾರಂಭಕ್ಕೆ ಸಮಯ ಬೇಕು:&lt;/h2&gt;&lt;p&gt;ಹಳಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಾಂತ್ರಿಕ ತಂಡ ದೃಢಪಡಿಸಿದ ಬಳಿಕವೇ ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸಲು ಉದ್ದೇಶಿಸಿರುವ ಪ್ರಯಾಣಿಕರು ರೈಲುಗಳ ಸ್ಥಿತಿಗತಿ ಕುರಿತು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿಕೊಂಡು ಪ್ರಯಾಣ ಕೈಗೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಮಲೆನಾಡಿನಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆ ಪಶ್ಚಿಮ ಘಟ್ಟ ಪ್ರದೇಶದ ರೈಲ್ವೆ ಮಾರ್ಗಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.&lt;/p&gt;&lt;h2&gt;ತಪ್ಪಿದ ಬಾರೀ ಅನಾಹುತ&lt;/h2&gt;&lt;p&gt;ರೈಲು ಸಂಚಾರ ಆರಂಭಕ್ಕೂ ಮುನ್ನವೇ ಹಳಿ ಮೇಲೆ ಮಣ್ಣು ಕುಸಿದಿರುವುದು ಪತ್ತೆಯಾಗಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸುರಕ್ಷತಾ ದೃಷ್ಟಿಯಿಂದ ರೈಲ್ವೆ ಅಧಿಕಾರಿಗಳು ತಕ್ಷಣವೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ತಡೆದು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿದರು. ಭೂಕುಸಿತದ ಪರಿಣಾಮ ಬೆಂಗಳೂರು- ಮುರುಡೇಶ್ವರ, ಬೆಂಗಳೂರು- ಕೋಝಿಕೋಡ್ ಹಾಗೂ ವಿಜಯಪುರ- ಮಂಗಳೂರು ರೈಲುಗಳನ್ನು ಹಾಸನ ರೈಲು ನಿಲ್ದಾಣದಲ್ಲೇ ನಿಲ್ಲಿಸಲಾಯಿತು. ಬೆಂಗಳೂರು- ಕಾರವಾರ ಎಕ್ಸ್&zwnj;ಪ್ರೆಸ್ ರೈಲು ಸಕಲೇಶಪುರದಲ್ಲಿ ಸ್ಥಗಿತಗೊಂಡರೆ, ಮುರುಡೇಶ್ವರ- ಬೆಂಗಳೂರು ಹಾಗೂ ಮಂಗಳೂರು- ವಿಜಯಪುರ ರೈಲುಗಳನ್ನು ಸುಬ್ರಹ್ಮಣ್ಯ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಕೋಝಿಕೋಡ್- ಬೆಂಗಳೂರು ರೈಲು ಪುತ್ತೂರು ನಿಲ್ದಾಣದಲ್ಲಿ ನಿಂತಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರೆ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.&lt;/p&gt;&lt;h2&gt;ಪೊಲೀಸ್&zwnj; ಕಾನ್&zwnj;ಸ್ಟೇಬಲ್&zwnj; ನೇಮಕಾತಿ ಪರೀಕ್ಷೆಗೆ ಹೊರಟಿದ್ದವರಿಗೆ ಶಾಕ್&lt;/h2&gt;&lt;p&gt;ರಾಜ್ಯದಲ್ಲಿ ಭಾನುವಾರ ನಡೆದ ಸಿವಿಲ್&zwnj; ಪೊಲೀಸ್&zwnj; ಕಾನ್&zwnj;ಸ್ಟೇಬಲ್&zwnj; ನೇಮಕಾತಿ ಪರೀಕ್ಷೆಯಲ್ಲಿ ಕರಾವಳಿ ಸೇರಿ ಪಶ್ಚಿಮ ಘಟ್ಟದ ಭಾಗಗಳಿಂದ ಪರೀಕ್ಷೆ ಬರೆಯಲು ಬರಬೇಕಿದ್ದ ಹಲವು ಮಂದಿ ಬರಲಾಗದೆ ನಿರಾಸೆಗೊಂಡರು. ಕಾರಣ ರೈಲು ಸಂಚಾರ ಸಡನ್ ಸ್ಥಗಿತಗೊಂಡಿತು. ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದ ಅಭ್ಯರ್ಥಿಗಳ ರೈಲು ಸುಬ್ರಹ್ಮಣ್ಯ ರೋಡ್&zwnj;ನಲ್ಲಿ ರದ್ದುಗೊಂಡಿದ್ದು, ಅವರಿಗೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ. ಮಾನವೀಯ ನೆಲೆಯಲ್ಲಿ ರೈಲು ರದ್ದತಿಯಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಎಲ್ಲ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್&zwnj; ವೈರಲ್&zwnj; ಆಗಿದೆ.&lt;/p&gt;&lt;h2&gt;ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ:&lt;/h2&gt;&lt;p&gt;ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಹಾಗೂ ಪುತ್ತೂರು ರೈಲು ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ರಾತ್ರಿ ಪೂರ್ತಿ ಸಿಲುಕಿಕೊಂಡರು. ಹಲವರು ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದರೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸಿದರು. ನಡುರಾತ್ರಿ ವೇಳೆಯಲ್ಲೇ ಪ್ರಯಾಣ ಮುಂದುವರಿಸಲು ಟಿಕೆಟ್ ಹಣ ವಾಪಸ್ ಪಡೆದು ಬಸ್ ಸೇರಿದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಹುಡುಕುತ್ತಾ ಪ್ರಯಾಣಿಕರು ಲಗೇಜ್ ಹೊತ್ತು ಬಸ್ ನಿಲ್ದಾಣಗಳತ್ತ ತೆರಳಿದ ದೃಶ್ಯಗಳು ಕಂಡುಬಂದವು.&lt;/p&gt;&lt;h2&gt;ಪರ್ಯಾಯ ವ್ಯವಸ್ಥೆ ಬಗ್ಗೆ ಅಸಮಾಧಾನ&lt;/h2&gt;&lt;p&gt;ರೈಲುಗಳ ರದ್ದತಿ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿದರೂ, ತಕ್ಷಣದ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸದ ಹಿನ್ನೆಲೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ರೈಲು ನಿಲ್ದಾಣದಲ್ಲಿ ಟಿಕೆಟ್ ಹಣ ಮರುಪಾವತಿಗಾಗಿ ಉದ್ದ ಸಾಲುಗಳು ಕಂಡುಬಂದವು. ಹಲವು ಮಂದಿ ತಮ್ಮ ಪ್ರಯಾಣವನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವರು ಖಾಸಗಿ ವಾಹನ ಹಾಗೂ ಬಸ್&zwnj;ಗಳ ಮೊರೆ ಹೋಗಬೇಕಾಯಿತು. ಪ್ರಯಾಣಿಕರ ಅನುಕೂಲ್ಕಕಾಗಿ ಹಾಸನ, ಸುಬ್ರಹ್ಮಣ್ಯ ರೋಡ್&zwnj; ಮತ್ತು ಬಂಟ್ವಾಳ ರೈಲು ನಿಲ್ದಾಣಗಳಲ್ಲಿ ಅಡುಗೆ ವ್ಯವಸ್ಥೆ ಮಾಡಲಾಯಿತು. ಭೂಕುಸಿತ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ವಿಜಯಪುರ ಎಕ್ಸ್&zwnj;ಪ್ರೆಸ್&zwnj; ಪ್ರಯಾಣಿಕರಿಗೆ ಉಪಹಾರಗಳನ್ನು ಸರಬರಾಜು ಮಾಡಲಾಯಿತು.&lt;/p&gt;&lt;h2&gt;ಭಾನುವಾರ ರದ್ದಾದ ರೈಲು ಮತ್ತು ಬದಲಿ ಮಾರ್ಗ&lt;/h2&gt;&lt;ul&gt; &lt;li&gt;ಭಾನುವಾರದ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್&zwnj;ಪ್ರೆಸ್ ಪ್ರಯಾಣ, ರೈಲು ಸಂಖ್ಯೆ 16575 ಯಶವಂತಪುರ - ಮಂಗಳೂರು ಜಂಕ್ಷನ್ ಎಕ್ಸ್&zwnj;ಪ್ರೆಸ್ ಪ್ರಯಾಣ ರದ್ದುಗೊಳಿಸಲಾಯಿತು.&lt;/li&gt; &lt;li&gt;ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಎಸ್&zwnj;ಎಸ್&zwnj;ಎಸ್&zwnj; ಹುಬ್ಬಳ್ಳಿ - ಲೋಂಡಾ - ಕ್ಯಾಸಲ್ ರಾಕ್ - ಮಡಗಾಂವ್ - ಕಾರವಾರ - ತೋಕೂರು ಮೂಲಕ ಮಂಗಳೂರು ಜಂಕ್ಷನ್&zwnj;ಗೆ ಸಂಚಾರಕ್ಕೆ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್&zwnj;ಪ್ರೆಸ್&zwnj;ನ್ನು ಮಂಗಳೂರು ಜಂಕ್ಷನ್ - ತೋಕೂರು - ಕಾರವಾರ - ಮಡಗಾಂವ್ - ಕ್ಯಾಸಲ್ ರಾಕ್ - ಲೋಂಡಾ - ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ಮೂಲಕ ಸಂಚಾರಕ್ಕೆ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16586 ಮುರ್ಡೇಶ್ವರ - ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಮುರ್ಡೇಶ್ವರ - ತೋಕೂರು - ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೋದನೂರು - ಜೋಲಾರ್&zwnj;ಪೆಟ್ಟೈ - ಎಸ್&zwnj;ಎಂವಿಟಿ ಬೆಂಗಳೂರಿಗೆ ಸಂಚಾರ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16512 ಕೋಝಿಕ್ಕೋಡ್ - ಕೆಎಸ್ಆರ್ ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೊದನೂರು - ಜೋಲಾರ್ಪೆಟ್ಟೈ - ಎಸ್&zwnj;ಎಂವಿಟಿ ಬೆಂಗಳೂರಿಗೆ ಸಂಚಾರಕ್ಕೆ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ. 16511 ಕೆಎಸ್&zwnj;ಆರ್&zwnj; ಬೆಂಗಳೂರು - ಕೋಝಿಕೋಡ್ ಎಕ್ಸ್&zwnj;ಪ್ರೆಸ್&zwnj;ನ್ನು ಬೆಂಗಳೂರು ಎಸ್&zwnj;ಎಂವಿಬಿನಲ್ಲಿ ಪ್ರಯಾಣ ಆರಂಭಿಸಿ ಎಸ್&zwnj;ಎಂವಿಟಿ ಬೆಂಗಳೂರು ಜೋಲಾರ್&zwnj;ಪೇಟ್ಟೈ ಜಂಕ್ಷನ್ - ಪೊದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕೋಝಿಕ್ಕೋಡ್ - ಮಂಗಳೂರು ಸೆಂಟ್ರಲ್&zwnj;ಗೆ ಸಂಚಾರ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16585 ಎಸ್&zwnj;ಎಂವಿಟಿ ಬೆಂಗಳೂರು - ಮುರ್ಡೇಶ್ವರ ಎಕ್ಸ್&zwnj;ಪ್ರೆಸ್&zwnj;ನ್ನು ಎಸ್&zwnj;ಎಂವಿಟಿ ಬೆಂಗಳೂರು - ಓಮಲೂರು ಜಂಕ್ಷನ್ - ಪೋದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕಣ್ಣೂರು - ತೋಕೂರು - ಮುರ್ಡೇಶ್ವರಕ್ಕೆ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.&lt;/li&gt;&lt;/ul&gt;&lt;h2&gt;ಶನಿವಾರ ರದ್ದಾದ ರೈಲುಗಳು&lt;/h2&gt;&lt;ul&gt; &lt;li&gt;ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್&zwnj;- ವಿಜಯಪುರ ಎಕ್ಸ್&zwnj;ಪ್ರೆಸ್ ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ.&lt;/li&gt; &lt;li&gt;ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್&zwnj;ಎಂವಿಟಿ ಬೆಂಗಳುರು ಎಕ್ಸ್&zwnj;ಪ್ರೆಸ್&zwnj; ನ್ನು ರಾತ್ರಿ ಸಿರಿಬಾಗಿಲು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16512 ಕೋಝಿಕ್ಕೋಡ್&zwnj;-ಕೆಎಸ್&zwnj;ಆರ್&zwnj; ಬೆಂಗಳೂರು ಕಬಕ ಪುತ್ತೂರಿನಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ&lt;/li&gt; &lt;li&gt;ರೈಲು ಸಂಖ್ಯೆ 16596 ಕಾರವಾರ-ಕೆಎಸ್&zwnj;ಆರ್&zwnj; ಬೆಂಗಳೂರಿಗೆ ರಾತ್ರಿ ಬಾರ್ಕೂರಿನಿಂದ ಹೊರಟು ಸಂಚಾರ ವ್ಯತ್ಯಯವಾಯಿತು. ಅದನ್ನು ಮಂಗಳೂರು ಜಂಕ್ಷನ್&zwnj;, ಶೊರನೂರು ಜಂಕ್ಷನ್&zwnj;, ಪಾಲಕ್ಕಾಡ್&zwnj; ಜಂಕ್ಷನ್&zwnj;, ಇರೊಡೆ ಜಂಕ್ಷನ್&zwnj; ಮೂಲಕ ಕೆಎಸ್&zwnj;ಆರ್&zwnj; ಬೆಂಗಳೂರಿಗೆ ಮಾರ್ಗ ಬದಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16595 ಕೆಎಸ್&zwnj;ಆರ್&zwnj; ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj;ನ್ನು ಹಾಸನ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16585 ಎಸ್&zwnj;ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಹಾಸನ ತಲುಪಿದ್ದು, ಹಾಸನ-ಮುರುಡೇಶ್ವರ ಪ್ರಯಾಣ ಭಾಗಶಃ ರದ್ದು ಮಾಡಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16511 ಕೆಎಸ್&zwnj;ಆರ್&zwnj; ಬೆಂಗಳೂರು-ಕೋಝಿಕೋ ಎಕ್ಸ್&zwnj;ಪ್ರೆಸ್ ರೈಲು ಕೆಎಸ್&zwnj;ಆರ್ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ್ದು, ಹಾಸನದಲ್ಲಿ ಅಲ್ಪಾವಧಿಗೆ ಸಂಚಾರ ಕೊನೆಗೊಂಡಿತು.&lt;/li&gt; &lt;li&gt;ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್&zwnj;ಪ್ರೆಸ್ ಸಂಚಾರ ಹಾಸನದಲ್ಲಿ ಮುಕ್ತಾಯಗೊಂಡಿದೆ.&lt;/li&gt; &lt;li&gt;ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್ ಸುಬ್ರಹ್ಮಣ್ಯ ರೋಡ್&zwnj; ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ.&lt;/li&gt;&lt;/ul&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu"/>
        </item>
        <item>
            <title><![CDATA[School Holiday: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ; ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ!]]></title>
            <link>https://kannada.asianetnews.com/karnataka-districts/former-prime-minister-hd-deve-gowda-wife-chennamma-mortal-remains-hassan-holenarasipura-schools-holiday-declare/articleshow-51lvskk</link>
            <guid isPermaLink="true">https://kannada.asianetnews.com/karnataka-districts/former-prime-minister-hd-deve-gowda-wife-chennamma-mortal-remains-hassan-holenarasipura-schools-holiday-declare/articleshow-51lvskk</guid>
            <pubDate>Sun, 19 Jul 2026 21:20:37 +0530</pubDate>
            <description><![CDATA[ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದ ಹಿನ್ನೆಲೆಯಲ್ಲಿ, ಅವರ ಅಂತಿಮ ದರ್ಶನಕ್ಕಾಗಿ ಹಾಸನ ಜಿಲ್ಲೆಯಲ್ಲಿ ಜನಸಾಗರವೇ ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಹೊಳೆನರಸೀಪುರ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxxh3gpackrd9eqe17gezasn,imgname-hd-deve-gowda-wife-chennamma-death-1784476189385.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.19): ಮಾ&lt;/strong&gt;ಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D. Deve Gowda) ಅವರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ನಿಧನದ ಹಿನ್ನೆಲೆಯಲ್ಲಿ, ಹಾಸನ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.&lt;/p&gt;&lt;h2&gt;&lt;strong&gt;ಹೊಳೆನರಸೀಪುರ ಶಾಲಾ-ಕಾಲೇಜುಗಳಿಗೆ ರಜೆ:&lt;/strong&gt;&lt;/h2&gt;&lt;p&gt;ಚೆನ್ನಮ್ಮನವರ ಅಂತ್ಯಕ್ರಿಯೆ ಮತ್ತು ಪಾರ್ಥಿವ ಶರೀರದ ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ (Law and Order) ಕಾಪಾಡುವ ದೃಷ್ಟಿಯಿಂದ ಹಾಸನ ಜಿಲ್ಲಾಧಿಕಾರಿ (DC) ಲತಾಕುಮಾರಿ ಕೆ.ಎಸ್. ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಹೊಳೆನರಸೀಪುರ (Holenarasipura) ತಾಲೂಕಿನ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಾರ್ವಜನಿಕರ ಸಂಚಾರ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಮುನ್ನೆಚ್ಚರಿಕೆ ಕ್ರಮ (Precautionary Measure) ಕೈಗೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಗಡಿ ಭಾಗದಲ್ಲಿ ಅಭಿಮಾನಿಗಳ ದಂಡು:&lt;/strong&gt;&lt;/h2&gt;&lt;p&gt;ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಹೊತ್ತ ವಾಹನವು ಬೆಂಗಳೂರಿನಿಂದ ಹಾಸನ ಜಿಲ್ಲೆಯ ಗಡಿ ಭಾಗವಾದ ಹಿರೀಸಾವೆಗೆ (Hirisave) ಆಗಮಿಸುತ್ತಿದ್ದಂತೆ, ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಸಂಜೆ ವೇಳೆಗೆ ಹಾಸನ ತಲುಪಬೇಕಿದ್ದ ವಾಹನವು, ಅಭಿಮಾನಿಗಳ ಜನಸಾಗರದಿಂದಾಗಿ ತಡವಾಗುತ್ತಿದೆ. ರಾತ್ರಿಯಾದರೂ ಗಡಿ ಭಾಗದ ರಸ್ತೆಗಳಲ್ಲಿ ಜನ ಅಂತಿಮ ದರ್ಶನಕ್ಕಾಗಿ (Final Darshan) ಕಾದು ನಿಂತಿದ್ದಾರೆ.&lt;/p&gt;&lt;h2&gt;&lt;strong&gt;ಗಣ್ಯರ ಉಪಸ್ಥಿತಿ:&lt;/strong&gt;&lt;/h2&gt;&lt;p&gt;ಹಿರೀಸಾವೆ ಗಡಿಯಲ್ಲಿ ಪಾರ್ಥಿವ ಶರೀರವನ್ನು ಸಂಸದ ಶ್ರೇಯಸ್ ಪಟೇಲ್ (Shreyas Patel), ಶಾಸಕರಾದ ಸಿ.ಎನ್. ಬಾಲಕೃಷ್ಣ ಮತ್ತು ಕೆ.ಎಂ. ಶಿವಲಿಂಗೇಗೌಡ ಅವರು ಬರಮಾಡಿಕೊಂಡರು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಮತ್ತು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಪಾರ್ಥಿವ ಶರೀರದ ಜೊತೆಯಲ್ಲೇ ಆಗಮಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಿಗಿ ಪೊಲೀಸ್ ಬಂದೋಬಸ್ತ್ :&lt;/strong&gt;&lt;/h2&gt;&lt;p&gt;ಅತಿಯಾದ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ರಸ್ತೆಯಲ್ಲಿ ಹಗ್ಗಗಳನ್ನು ಹಿಡಿದುಕೊಳ್ಳುವ ಮೂಲಕ ಅಭಿಮಾನಿಗಳು ವಾಹನದ ಹತ್ತಿರ ಬರದಂತೆ ತಡೆದು ಬಿಗಿ ಪೊಲೀಸ್ ಬಂದೋಬಸ್ತ್ (Security Arrangement) ಕಲ್ಪಿಸಲಾಗಿದೆ. ಇಡೀ ಜಿಲ್ಲೆಯು ದೇವೇಗೌಡರ ಕುಟುಂಬದ ದೊಡ್ಡಮ್ಮನ ಅಗಲಿಕೆಗೆ ಕಂಬನಿ ಮಿಡಿಯುತ್ತಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/former-prime-minister-hd-deve-gowda-wife-chennamma-mortal-remains-hassan-holenarasipura-schools-holiday-declare/articleshow-51lvskk"/>
        </item>
        <item>
            <title><![CDATA['ಆ ಪ್ರಸಾದ ಕಟ್ಟಿದ್ರೆ ಅಮ್ಮ ಬದುಕಿರ್ತಿದ್ರೇನೋ..': ತಾಯಿ ಚನ್ನಮ್ಮನ ನೆನೆದು ಕಣ್ಣೀರಿಟ್ಟ ಹೆಚ್.ಡಿ. ರೇವಣ್ಣ!]]></title>
            <link>https://kannada.asianetnews.com/karnataka-districts/hassan-hd-revanna-gets-emotional-remembering-god-prasada-mother-chennamma-devegowda/articleshow-6colm4z</link>
            <guid isPermaLink="true">https://kannada.asianetnews.com/karnataka-districts/hassan-hd-revanna-gets-emotional-remembering-god-prasada-mother-chennamma-devegowda/articleshow-6colm4z</guid>
            <pubDate>Thu, 23 Jul 2026 14:05:57 +0530</pubDate>
            <description><![CDATA[ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ತಮ್ಮ ತಾಯಿ ಚನ್ನಮ್ಮ ಅವರ ಅಗಲಿಕೆಯಿಂದ ದುಃಖಿತರಾಗಿದ್ದಾರೆ. ತಾವು ಧರ್ಮಸ್ಥಳದ ಪ್ರಸಾದವನ್ನು ತಾಯಿಗೆ ಕಟ್ಟಿದ್ದರೆ ಅವರು ಬದುಕುತ್ತಿದ್ದರೇನೋ ಎಂಬ ಕೊರಗು ಕಾಡುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಕಷ್ಟದ ಸಮಯದಲ್ಲಿ ಜೊತೆ ನಿಂತ ಎಲ್ಲಾ ರಾಜಕೀಯ ನಾಯಕರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky71nqnmgehg410jn9f0tatz,imgname-hd-revanna-tears-mother-chennamma-deve-gowda-passed-away-1784795553460.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.23): ಮಾ&lt;/strong&gt;ಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ (HD Revanna) ಅವರು ತಮ್ಮ ತಾಯಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ (Chennamma) ಅವರ ಅಗಲಿಕೆಯ ನೋವಿನಿಂದ ಇನ್ನೂ ಹೊರಬಂದಿಲ್ಲ. ನಾನು 'ಆ ಪ್ರಸಾದ ಕಟ್ಟಿದ್ರೆ ಅಮ್ಮ ಬದುಕಿರ್ತಿದ್ರೇನೋ..'ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ತಾಯಿಯನ್ನು ನೆನೆದು ರೇವಣ್ಣ ಕಣ್ಣೀರು ಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಜೀವಮಾನವಿಡೀ ಕಾಡಲಿದೆ ಆ ಒಂದು ಕೊರಗು!&lt;/strong&gt;&lt;/h2&gt;&lt;p&gt;ತಾಯಿಯೊಂದಿಗಿನ ತಮ್ಮ ಕೊನೆಯ ದಿನಗಳನ್ನು ನೆನಪಿಸಿಕೊಂಡ ರೇವಣ್ಣ, 'ನಾನು ಪ್ರತಿದಿನ ಮನೆಯಿಂದ ಹೊರಡುವಾಗ ತಂದೆ-ತಾಯಿಗೆ ದೇವರ ಪ್ರಸಾದ (God's Prasada) ಮತ್ತು ಹೂವು ಕೊಟ್ಟು ಆಶೀರ್ವಾದ ಪಡೆದು ಹೋಗುತ್ತಿದ್ದೆ. ಕಳೆದ ಸೋಮವಾರ ನನ್ನ ಬಳಿ ಧರ್ಮಸ್ಥಳ (Dharmasthala) ಹಾಗೂ ಕುಕ್ಕೆ ಸುಬ್ರಹ್ಮಣ್ಯದ (Kukke Subramanya) ಪ್ರಸಾದ ಇತ್ತು. ಅಂದು ನಾನು ಬೆಂಗಳೂರಿಗೆ (Bengaluru) ಹೋಗಿದ್ದೆ, ಆದರೆ ಅಮ್ಮನನ್ನು ನೋಡಲು ಹೋಗಲಿಲ್ಲ. ಅದೇನಾಯ್ತೋ ನನಗೆ ಗೊತ್ತಿಲ್ಲ. ಒಂದು ವೇಳೆ ಆ ದೇವರ ಪ್ರಸಾದವನ್ನು ತಾಯಿಗೆ ಕಟ್ಟಿದ್ದರೆ ಅವರು ಬದುಕುತ್ತಿದ್ದರೋ ಏನೋ? ಆ ಕೊರಗು (Regret) ನನ್ನನ್ನು ಇನ್ನೂ ಕಾಡುತ್ತಿದೆ' ಎಂದು ಗದ್ಗದಿತರಾದರು.&lt;/p&gt;&lt;h2&gt;&lt;strong&gt;ಇಂತಹ ಪುಣ್ಯ ಯಾರಿಗೂ ಸಿಗಲ್ಲ:&lt;/strong&gt;&lt;/h2&gt;&lt;p&gt;ತಾಯಿಯ ಕೊನೆಯ ಕ್ಷಣಗಳ ಬಗ್ಗೆ ಮಾತನಾಡಿದ ಅವರು, 'ನಮ್ಮ ತಂದೆ (HD Devegowda) ಅವರು ತಾಯಿಗೆ ಕುಂಕುಮ ಇಟ್ಟು, ಹೂವು ಮುಡಿಸಿದ ಮೇಲೆಯೇ ಅಮ್ಮ ತಮ್ಮ ಜೀವ ಬಿಟ್ಟರು. ಇಂತಹ ಪುಣ್ಯ ಯಾರಿಗೂ ಬರುವುದಿಲ್ಲ' ಎಂದು ಕಣ್ಣೀರು ಹಾಕಿದರು. ಜೊತೆಗೆ, ದುಃಖದ ಸಮಯದಲ್ಲಿ ಕುಟುಂಬದ ಜೊತೆ ನಿಂತ ಎಲ್ಲಾ ಪಕ್ಷದ ನಾಯಕರಿಗೂ ರೇವಣ್ಣ ಧನ್ಯವಾದ (Thanks) ತಿಳಿಸಿದರು.&lt;/p&gt;&lt;h2&gt;&lt;strong&gt;ಎಲ್ಲಾ ನಾಯಕರಿಗೂ ಕೃತಜ್ಞತೆ:&lt;/strong&gt;&lt;/h2&gt;&lt;p&gt;'ರಾಜ್ಯ ಸರ್ಕಾರದ ಪರವಾಗಿ ಬಂದು ಕೃತಜ್ಞತೆ ಹಾಗೂ ಸಾಂತ್ವನ ಹೇಳಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ಧನ್ಯವಾದಗಳು. ಕಷ್ಟದ ಸಮಯದಲ್ಲಿ ಪಕ್ಷಭೇದ ಮರೆತು ಕೆ.ಜೆ. ಜಾರ್ಜ್ (K.J. George), ಜಮೀರ್ ಅಹ್ಮದ್, ವಿ. ಸೋಮಣ್ಣ (V. Somanna) ಸೇರಿದಂತೆ ಎಲ್ಲಾ ಶಾಸಕರು, ನಾಯಕರು ಭಾಗವಹಿಸಿದ್ದರು. ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇಂದು ವಿಶೇಷ ಪ್ರಸಾದ (Food distribution/Anna Santarpane) ವ್ಯವಸ್ಥೆ ಮಾಡಿಸಿದ್ದೇನೆ' ಎಂದು ರೇವಣ್ಣ ತಿಳಿಸಿದರು.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hassan-hd-revanna-gets-emotional-remembering-god-prasada-mother-chennamma-devegowda/articleshow-6colm4z"/>
        </item>
        <item>
            <title><![CDATA[ಅವನನ್ನು ಯಾವಾಗ ಕರ್ಕೊಂಡು ಬರ್ತೀಯಪ್ಪಾ ಅಂತ ಕೇಳ್ತಿದ್ರು ತಾಯಿ, ಪರೋಕ್ಷವಾಗಿ ಪ್ರಜ್ವಲ್ ಪ್ರಕರಣ ಪ್ರಸ್ತಾಪಿಸಿದ HDK]]></title>
            <link>https://kannada.asianetnews.com/state/when-will-you-bring-him-back-hd-kumaraswamy-breaks-down-remembering-mother-chennamma-hints-at-prajwal-revanna-case-gdp/articleshow-bmhdhro</link>
            <guid isPermaLink="true">https://kannada.asianetnews.com/state/when-will-you-bring-him-back-hd-kumaraswamy-breaks-down-remembering-mother-chennamma-hints-at-prajwal-revanna-case-gdp/articleshow-bmhdhro</guid>
            <pubDate>Wed, 22 Jul 2026 15:48:19 +0530</pubDate>
            <description><![CDATA[ತಮ್ಮ ತಾಯಿ ಚೆನ್ನಮ್ಮ ಅವರ ಹಾಲು-ತುಪ್ಪ ಕಾರ್ಯದಲ್ಲಿ ಭಾವುಕರಾದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕುಟುಂಬದಲ್ಲಿ ನಡೆದ ಆಘಾತಕಾರಿ ಘಟನೆಗಳಿಂದಲೇ ಅವರು ತೀವ್ರ ಮಾನಸಿಕ ಯಾತನೆ ಅನುಭವಿಸಿ ನಿಧನರಾದರು ಎಂದು ಪರೋಕ್ಷವಾಗಿ ಉಲ್ಲೇಖಿಸಿದರು. ತಾಯಿಯ ಕೊನೆಯ ದಿನಗಳ ನೋವನ್ನು ಮತ್ತು ಅವರ ತಾಯ್ತನದ ಗುಣವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01ky4mz38q7235zhyz1ge0h1cf,imgname-hd-kumaraswamy-breaks-down-remembering-mother-chennamma-1784715119894.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ&lt;/strong&gt;: &quot;ನಮ್ಮ ಕುಟುಂಬದಲ್ಲಿ ನಡೆದ ಕೆಲವು ಆಘಾತಕಾರಿ ಘಟನೆಗಳಿಂದ ತಾಯಿ ಚೆನ್ನಮ್ಮ ಅವರು ತೀವ್ರ ಮಾನಸಿಕ ಯಾತನೆಗೆ ಒಳಗಾಗಿದ್ದರು. ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲೂ ಅವರು &lsquo;ಅವನನ್ನು ಯಾವಾಗ ಕರ್ಕೊಂಡು ಬರ್ತೀಯಪ್ಪಾ&rsquo; ಎಂದು ಪದೇ ಪದೇ ಕೇಳುತ್ತಿದ್ದರು. ಆ ಮಾತು ಇಂದಿಗೂ ನನ್ನನ್ನು ಕಾಡುತ್ತಿದೆ, ಎದೆಯೊಳಗೆ ತೀವ್ರ ನೋವುಂಟು ಮಾಡುತ್ತಿದೆ,&quot; ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅತ್ಯಂತ ಭಾವುಕರಾಗಿ ನುಡಿದರು.&lt;/p&gt;&lt;p&gt;ಜುಲೈ 18ರಂದು ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಮೂರನೇ ದಿನದ &lsquo;ಹಾಲು-ತುಪ್ಪ&rsquo; ಕಾರ್ಯವು ಮಂಗಳವಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ನೆರವೇರಿತು. ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಕಳೆದ ಒಂದೂವರೆ ವರ್ಷದಿಂದ ತಮ್ಮ ತಾಯಿ ಅನುಭವಿಸಿದ ಹಿಂಸೆ ಮತ್ತು ಮಾನಸಿಕ ಸಂಕಟವನ್ನು ನೆನೆದು ಭಾವುಕರಾದರು.&lt;/p&gt;&lt;h2&gt;ಪ್ರಜ್ವಲ್ ರೇವಣ್ಣ ಪ್ರಕರಣದತ್ತ ಪರೋಕ್ಷ ಉಲ್ಲೇಖ&lt;/h2&gt;&lt;p&gt;ಕುಟುಂಬದ ಘಟನೆಗಳನ್ನು ಪ್ರಸ್ತಾಪಿಸುವಾಗ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಅವರ ವಿವಾದಾತ್ಮಕ ಪ್ರಕರಣವನ್ನು ಉಲ್ಲೇಖಿಸಿದರು. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಬಹುಶಃ ನಮ್ಮ ತಾಯಿ ಇನ್ನೂ ಕೆಲವು ವರ್ಷ ಬದುಕಿರುತ್ತಿದ್ದರು. ಆದರೆ ಕುಟುಂಬದಲ್ಲಿ ವಯಸ್ಸಾಗಿದ್ದ ಇಬ್ಬರು ಹಿರಿಯರು (ದೇವೇಗೌಡರು ಮತ್ತು ಚೆನ್ನಮ್ಮ) ತೀವ್ರ ಮಾನಸಿಕ ಯಾತನೆಗೆ ಒಳಗಾಗುವಂತಹ ಘಟನೆಗಳು ಜರುಗಿದವು. ಮುಂದಿನ ದಿನಗಳಲ್ಲಿ ಯಾರಾದರೂ ಇತಿಹಾಸ ಬರೆಯುವವರು ಇದ್ದರೆ ಈ ಬಗ್ಗೆ ಬರೆಯುತ್ತಾರೆ. ಆದರೆ, ಕುಟುಂಬದಲ್ಲಾದ ಆ ಎರಡು-ಮೂರು ಘಟನೆಗಳ ನಂತರ ತಾಯಿಗೆ ಸದಾ ಕಾಡುತ್ತಿದ್ದ ಪ್ರಶ್ನೆ ಅದೊಂದೇ ಆಗಿತ್ತು. ಆ ಕಠಿಣ ಪರಿಸ್ಥಿತಿಯನ್ನು ತಡೆದುಕೊಳ್ಳಲು ಸಾಧ್ಯವಾಗದೆಯೇ ಇಂದು ನಾವು ಇಂತಹದೊಂದು ದಿನವನ್ನು ನೋಡಬೇಕಾಗಿ ಬಂದಿದೆ. ಇಲ್ಲದಿದ್ದರೆ ಇನ್ನೂ 3-4 ವರ್ಷಗಳ ಕಾಲ ಅವರು ನಮ್ಮೊಂದಿಗಿರುತ್ತಿದ್ದರು. ಆದರೆ ದೇವರ ತೀರ್ಮಾನವೇ ಬೇರೆಯಾಗಿತ್ತು, ಆ ವಿಧಿಯ ಆಟಕ್ಕೆ ನಾವು ತಲೆಬಾಗಲೇಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h2&gt;ಕೊನೆ ದಿನಗಳ ನೋವು ಹಂಚಿಕೊಂಡ ಪುತ್ರ&lt;/h2&gt;&lt;p&gt;ಕಳೆದ ಒಂದೂವರೆ ವರ್ಷದಿಂದ ತಾಯಿ ಹಾಸಿಗೆ ಹಿಡಿದಿದ್ದ ದಿನಗಳನ್ನು ನೆನೆದ ಕುಮಾರಸ್ವಾಮಿ, &quot;ಕೊನೆಯ ದಿನಗಳಲ್ಲಿ ಅವರಿಗೆ ನೆನಪಿನ ಶಕ್ತಿ ಸಂಪೂರ್ಣವಾಗಿ ಕುಂದಿ ಹೋಗಿತ್ತು. ಯಾರನ್ನೂ ಗುರುತಿಸಲಾಗದ ಪರಿಸ್ಥಿತಿಗೆ ತಲುಪಿದ್ದರು. ಆದರೂ ಅಂತಹ ಸ್ಥಿತಿಯಲ್ಲೂ ಅವರಲ್ಲಿದ್ದ ತಾಯಿತನ ಮಾಸಿರಲಿಲ್ಲ. ಮನೆಗೆ ಯಾರೇ ಬಂದರೂ &lsquo;ಊಟ ಮಾಡಿದೀರಾ? ಊಟ ಮಾಡಿ&rsquo; ಎಂಬ ಎರಡು ಮಾತುಗಳನ್ನು ಬಿಟ್ಟರೆ ಅವರು ಬೇರೇನೂ ಮಾತನಾಡುತ್ತಿರಲಿಲ್ಲ. ನೆನಪುಗಳು ಮರೆಯಾಗುತ್ತಿದ್ದ ಸಂದರ್ಭದಲ್ಲೂ ನನ್ನನ್ನು ಹಾಗೂ ನನ್ನಿಬ್ಬರು ತಂಗಿಯರನ್ನು ಅವರು ನೆನಪಿನಲ್ಲಿ ಇಟ್ಟುಕೊಂಡಿದ್ದರು ಎನ್ನುತ್ತಾ ಭಾವುಕರಾದರು.&lt;/p&gt;&lt;p&gt;ಅಲ್ಲದೆ, ಹಿಂದೆ ತಾಯಿಯ ಮೇಲೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದ ಹಳೆಯ ಕಹಿ ನೆನಪನ್ನೂ ಸಹ ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಹರದನಹಳ್ಳಿಯಲ್ಲಿ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ಗೌಡರ ಕುಟುಂಬದ ಆಪ್ತರು ಹಾಗೂ ನಾಯಕರು ಭಾಗವಹಿಸಿದ್ದರು.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/state/when-will-you-bring-him-back-hd-kumaraswamy-breaks-down-remembering-mother-chennamma-hints-at-prajwal-revanna-case-gdp/articleshow-bmhdhro"/>
        </item>
        <item>
            <title><![CDATA['ನನ್ನ ದೇವ್ರನ್ನ ಕಳ್ಕೊಂಡೆ ಸಾರ್..' ಅಮ್ಮನ ನೆನೆದು ಬಿಕ್ಕಿ ಬಿಕ್ಕಿ ಅತ್ತ ರೇವಣ್ಣ]]></title>
            <link>https://kannada.asianetnews.com/karnataka-districts/former-pm-h-d-deve-gowda-s-wife-chenamma-dies-at-89-today-final-rites-at-mavinakere-haradanahalli-rav/articleshow-d406e0p</link>
            <guid isPermaLink="true">https://kannada.asianetnews.com/karnataka-districts/former-pm-h-d-deve-gowda-s-wife-chenamma-dies-at-89-today-final-rites-at-mavinakere-haradanahalli-rav/articleshow-d406e0p</guid>
            <pubDate>Sun, 19 Jul 2026 10:00:51 +0530</pubDate>
            <description><![CDATA[ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದಿಂದ ಆಘಾತಕ್ಕೊಳಗಾಗಿರುವ ಹೆಚ್.ಡಿ. ರೇವಣ್ಣ, 'ಆಕೆ ನನ್ನ ತಾಯಿಯಷ್ಟೇ ಅಲ್ಲ, ದೇವತೆ ಸಮಾನ' ಎಂದು ಹೇಳುತ್ತಾ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತಾಯಿಗೆ ತಿರುಪತಿ ಪ್ರಸಾದ ನೀಡಿದ್ದ ಕೊನೆಯ ಕ್ಷಣವನ್ನು ನೆನೆದು ಅವರು ಕಣ್ಣೀರಿಟ್ಟರು.]]></description>
            <media:content url="https://static.asianetnews.com/images/w-1280,h-720,format-jpg,imgid-01kxwa2s8b0hq83j8fpkxangww,imgname-----------------------2026-07-19t095113.698-1784435270923.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.19):&lt;/strong&gt; 'ಆಕೆ ತಾಯಿ ಅಷ್ಟೇ ಅಲ್ಲ ಸಾರ್.. ನನಗೆ ದೇವತೆ ಸಮಾನ ಸಾರ್.. ನನ್ನ ದೇವರನ್ನು ಕಳ್ಕೊಂಡೆ...' ತಾಯಿ ಚೆನ್ನಮ್ಮ ನಿಧನದಿಂದ ಆಘಾತಕ್ಕೊಳಗಾಗಿರುವ ಹೆಚ್&zwnj;ಡಿ ರೇವಣ್ಣ ಕಣ್ಣೀರಾಕುತ್ತಾ ಹೇಳಿದ ಮಾತುಗಳಿವು.&lt;/p&gt;&lt;p&gt;ಮಾಜಿ ಪ್ರಧಾನಿ ಹೆಚ್&zwnj;ಡಿ ದೇವೇಗೌಡ ಅವರ ಧರ್ಮಪತ್ನಿ, ಹೆಚ್&zwnj;ಡಿ ರೇವಣ್ಣ ಅವರ ತಾಯಿ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಗ್ಯ ಸ್ಥಿರವಾಗಿದೆ ಎಂದಿದ್ದ ವೈದ್ಯರು, ಹುಷಾರಾಗಿ ಮನೆಗೆ ವಾಪಸ್ ಬರುತ್ತಾಳೆ ಎಂದು ನಂಬಿದ್ದ ಕುಟುಂಬಕ್ಕೆ ಚೆನ್ನಮ್ಮ ಅವರ ಸಾವು ಬರಸಿಡಿಲು ಬಡಿದಂತಾಗಿದೆ.. ಪತ್ನಿಯ ನಿಧನದಿಂದ ಹೆಚ್&zwnj;ಡಿ ದೇವೇಗೌಡರು ಮೌನವಾಗಿ ರೋದಿಸುತ್ತಿದ್ದರೆ, ಇತ್ತ ಮಕ್ಕಳು ಅಮ್ಮನ ಸಾವು ಕೇಳಿದಾಗಿಂದ ಕಣ್ಣೀರು ಹಾಕುತ್ತಲೇ ಇದ್ದಾರೆ.&lt;/p&gt;&lt;h2&gt;ತಾಯಿ ನೆನೆದು ಹೆಚ್&zwnj;ಡಿ ರೇವಣ್ಣ ಕಣ್ಣೀರು&lt;/h2&gt;&lt;p&gt;ಇಂದು ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯುವುದರಿಂದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ರೇವಣ್ಣ, ತಾಯಿ ನೆನಪಾಗುತ್ತಿದ್ದಂತೆ ದುಃಖ ಉಮ್ಮಳಿಸಿ ಬಂದು ತಡೆಯಲಾರದೆ ಕಣ್ಣೀರಿಟ್ಟರು. ಹಸಿವು ಅಂತಾ ಬಂದ ಎಷ್ಟೋ ಜನರಿಗೆ ಅನ್ನ ಹಾಕಿದ್ದಾಳೆ ಸರ್. ನನ್ನ ದೇವರು ಅವ್ರು ಅವರನ್ನ ಕಳ್ಕೊಂಡುಬಿಟ್ಟೆ ಸಾರ್&zwnj;... ಎಂದು ಕಣ್ಣೀರು ಹಾಕಿದ್ರು.&lt;/p&gt;&lt;h3&gt;ಕೊನೆಯದಾಗಿ ತಿರುಪತಿ ಪ್ರಸಾದ್ ಸೇವಿಸಿದ ಚೆನ್ನಮ್ಮ&lt;/h3&gt;&lt;p&gt;ಕೊನೆಯದಾಗಿ ತಿರುಪತಿಯಿಂದ ತಂದ ಪ್ರಸಾದ ಕೊಟ್ಟು ಮಾತನಾಡಿಸಿ ಆರೋಗ್ಯ ವಿಚಾರಿದ್ದೆ. ಕೆಲವು ದಿನಗಳಿಂದಲೂ ವಯೋಸಹಜ ಅನಾರೋಗ್ಯ ಕಾಡುತ್ತಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಬೆಳಗ್ಗೆಯೂ ವೈದ್ಯರು ಅಮ್ಮನ ಆರೋಗ್ಯ ಚೆನ್ನಾಗಿದೆ ಗುಣವಾಗ್ತಾರೆ ಅಂತಾ ಹೇಳಿದ್ರು ನಮಗೆ ಅದೇ ನಂಬಿಕೆ ಇತ್ತು. ಅಮ್ಮ ಎಂದಿನಂತೆ ಚಿಕಿತ್ಸೆ ಪಡೆದು ವಾಪಸ್ ಬರುತ್ತಾಳೆ ಎಂದೇ ನಂಬಿದ್ದೆವು. ಆದರೆ ಅವರು ಬರಲಿಲ್ಲ ಸಾರ್.. ಎಂದು ರೋದಿಸಿದರು.&lt;/p&gt;]]></content:encoded>
            <category>hassan</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/former-pm-h-d-deve-gowda-s-wife-chenamma-dies-at-89-today-final-rites-at-mavinakere-haradanahalli-rav/articleshow-d406e0p"/>
        </item>
        <item>
            <title><![CDATA[ತವರೂರು ಅಂದರೆ ಚೆನ್ನಮ್ಮಗೆ ತಾಯಿಯಂಥ ಪ್ರೀತಿ.. 3 ದೇವಸ್ಥಾನ, ಹೈಸ್ಕೂಲ್, ಆಸ್ಪತ್ರೆ ಏನೆಲ್ಲ ಕಟ್ಟಿಸಿಕೊಟ್ಟಿದ್ದರು?]]></title>
            <link>https://kannada.asianetnews.com/gallery/hassan/chennamma-devegowda-and-muttige-hirehalli-chennamma-had-a-very-strong-emotional-connection-to-her-hometown-gkn-dqo0qhm</link>
            <guid isPermaLink="true">https://kannada.asianetnews.com/gallery/hassan/chennamma-devegowda-and-muttige-hirehalli-chennamma-had-a-very-strong-emotional-connection-to-her-hometown-gkn-dqo0qhm</guid>
            <pubDate>Sun, 19 Jul 2026 10:45:56 +0530</pubDate>
            <description><![CDATA[&lt;p&gt;ನಾವು ಅನಾಥರಾದೇವು ಅಂತಾ ಮುತ್ತಿಗೆ ಹಿರೇಹಳ್ಳಿ ಗ್ರಾಮದ ಜನರು ಚೆನ್ನಮ್ಮ ಅವರನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದಾರೆ. ಗ್ರಾಮದ ಜನರ ಈ ಕಣ್ಣೀರಿಗೆ ಚೆನ್ನಮ್ಮ ಜೊತೆಗಿನ ಭಾವನಾತ್ಮಕ ಸಂಬಂಧ ಇದೆ. ಅದೇ ಕಾರಣಕ್ಕೆ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.. ಈ ಕುರಿತ ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwbstw471rchvn5t7ysyg8r,imgname-chennamma-deve-gowda-photo--7--1784437074820.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾವು ಅನಾಥರಾದೇವು ಅಂತಾ ಮುತ್ತಿಗೆ ಹಿರೇಹಳ್ಳಿ ಗ್ರಾಮದ ಜನರು ಚೆನ್ನಮ್ಮ ಅವರನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದಾರೆ. ಗ್ರಾಮದ ಜನರ ಈ ಕಣ್ಣೀರಿಗೆ ಚೆನ್ನಮ್ಮ ಜೊತೆಗಿನ ಭಾವನಾತ್ಮಕ ಸಂಬಂಧ ಇದೆ. ಅದೇ ಕಾರಣಕ್ಕೆ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.. ಈ ಕುರಿತ ಸ್ಟೋರಿ ಇಲ್ಲಿದೆ.&lt;/p&gt;&lt;img&gt;&lt;p&gt;ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಅಗಲಿಕೆ ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿ ಗ್ರಾಮವನ್ನು ಅಕ್ಷರಶಃ ಶೋಕಸಾಗರದಲ್ಲಿ ಮುಳುಗಿಸಿದೆ. ಆ ಗ್ರಾಮಕ್ಕೆ ಅವರು ಕೇವಲ ಒಬ್ಬ ಗಣ್ಯ ವ್ಯಕ್ತಿಯಾಗಿರಲಿಲ್ಲ. ಬದಲಿಗೆ ಇಡೀ ಊರನ್ನು ಸಲಹುವ ತಾಯಿಯಾಗಿದ್ದರು. ತವರು ಊರೆಂದರೆ ಅತಿಯಾದ ಪ್ರೀತಿ ಹೊಂದಿದ್ದ ಚೆನ್ನಮ್ಮ ಅವರು, ಗ್ರಾಮದ ಅಭಿವೃದ್ಧಿಗಾಗಿ ಮಾಡಿದ ಕೆಲಸಗಳು ಇಂದು ಕಣ್ಣಮುಂದೆ ಬಂದು ನಿಂತಿವೆ.&lt;/p&gt;&lt;img&gt;&lt;p&gt;ಚೆನ್ನಮ್ಮನವರಿಗೆ ತಮ್ಮ ಹುಟ್ಟೂರು ಮುತ್ತಿಗೆ ಹಿರೇಹಳ್ಳಿ ಎಂದರೆ ಎಲ್ಲಿಲ್ಲದ ಪ್ರೀತಿ. ಊರಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಗ್ರಾಮದಲ್ಲಿ ಸುಸಜ್ಜಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪಶು ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯನ್ನು ಕಟ್ಟಿಸುವಲ್ಲಿ ಅವರ ಶ್ರಮ ದೊಡ್ಡದಿದೆ. ಅಷ್ಟೇ ಅಲ್ಲದೆ, ಭಕ್ತಿಯ ಸಂಕೇತವಾಗಿ ಗ್ರಾಮದಲ್ಲಿ ಮೂರು ಭವ್ಯ ದೇವಸ್ಥಾನಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಊರಿನವರು ಯಾವುದೇ ಸಮಸ್ಯೆ ಹೊತ್ತು ಬಂದರೆ ತಕ್ಷಣ ಸ್ಪಂದಿಸುತ್ತಿದ್ದ ಅವರು, ಗ್ರಾಮಸ್ಥರ ಪಾಲಿನ ಧೀಶಕ್ತಿಯಾಗಿದ್ದರು.&lt;/p&gt;&lt;img&gt;&lt;p&gt;ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದ ಸಂಬಂಧಿಕರು ದುಃಖತಪ್ತರಾಗಿದ್ದಾರೆ. ಚೆನ್ನಮ್ಮನವರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈಗ ನಾವು ಅಕ್ಷರಶಃ ಅನಾಥರಾಗಿದ್ದೇವೆ ಎಂದು ಸಂಬಂಧಿಯೊಬ್ಬರು ಅಳುತ್ತಾ ನೆನಪಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಎಷ್ಟೇ ಅಂತಸ್ತು ಇದ್ದರೂ ಚೆನ್ನಮ್ಮನವರಿಗೆ ಕಿಂಚಿತ್ತೂ ಅಹಂಕಾರವಿರಲಿಲ್ಲ. ತವರು ಊರಿನಿಂದ ಯಾರೇ ಅವರ ಮನೆಗೆ ಹೋದರೂ, ಕೆಲಸದವರ ಕೈಯಲ್ಲಿ ಊಟ ಹಾಕಿಸುತ್ತಿರಲಿಲ್ಲ. ಸ್ವತಃ ತಾವೇ ಅಡುಗೆ ಮಾಡಿ, ಕೈಯಾರೆ ಬಡಿಸಿ ಸಂಭ್ರಮಿಸುತ್ತಿದ್ದರು. ನಮ್ಮ ಮನೆಗೆ ಹೋದರೆ ಅವರೇ ಊಟ ಬಡಿಸಬೇಕಿತ್ತು, ಅಷ್ಟು ಪ್ರೀತಿ ಅವರಿಗೆ ಸಂಬಂಧಗಳ ಮೇಲೆ ಎಂದು ಗ್ರಾಮಸ್ಥರು ಸ್ಮರಿಸುತ್ತಿದ್ದಾರೆ. ಹಬ್ಬ ಹರಿದಿನ ಹಾಗೂ ಜಾತ್ರೆಗೆ ಬಂದಾಗ ಬಡಬಗ್ಗರಿಗೆ ಹಣ ನೀಡಿ ಸಹಾಯ ಮಾಡುತ್ತಿದ್ದರು.&lt;/p&gt;&lt;img&gt;&lt;p&gt;ಚೆನ್ನಮ್ಮ ಅವರ ದೈವಭಕ್ತಿಗೆ ಮುತ್ತಿಗೆ ಹಿರೇಹಳ್ಳಿಯೇ ಸಾಕ್ಷಿ. ಗ್ರಾಮದ ಐದು ಊರುಗಳು ಸೇರಿ ಮಾಡುವ ವರ್ಷದ ದೊಡ್ಡ ಜಾತ್ರೆಯಲ್ಲಿ ಚೆನ್ನಾಂಬಿಕಾ ದೇವಿಗೆ ಮೊದಲ ಪೂಜೆ ಸಲ್ಲಿಕೆಯಾಗುವುದೇ ಚೆನ್ನಮ್ಮ ಅವರಿಗೆ. ಅವರು ಪೂಜೆ ಮುಗಿಸಿ ಹೊರಬರುವವರೆಗೂ ಯಾರೂ ಒಳಗೆ ಹೋಗುವಂತಿರಲಿಲ್ಲ. ಅಂತಹ ಗೌರವ ಮತ್ತು ಭಕ್ತಿ ಆ ಗ್ರಾಮದಲ್ಲಿ ಅವರಿಗಿತ್ತು.&lt;/p&gt;&lt;img&gt;&lt;p&gt;ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದ, ಊರಿನ ಪ್ರತಿಯೊಬ್ಬರ ಕಷ್ಟಕ್ಕೆ ಹೆಗಲಾಗುತ್ತಿದ್ದ ಒಬ್ಬ ಮಹಾನ್ ಚೇತನ ಇಂದು ಮರೆಯಾಗಿದೆ. ಮುತ್ತಿಗೆ ಹಿರೇಹಳ್ಳಿ ಗ್ರಾಮದ ಪ್ರತಿಯೊಂದು ಮಗು, ಹಿರಿಯರು ಇಂದು ನಮ್ಮಮ್ಮ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;img&gt;&lt;p&gt;ಚೆನ್ನಮ್ಮನವರ ಭೌತಿಕ ಕಾಯ ಮರೆಯಾದರೂ, ಅವರು ನಿರ್ಮಿಸಿದ ಶಾಲೆ, ಆಸ್ಪತ್ರೆ ಮತ್ತು ದೇವಸ್ಥಾನಗಳ ರೂಪದಲ್ಲಿ ಅವರು ಆ ಗ್ರಾಮದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.&lt;/p&gt;]]></content:encoded>
            <category>hassan</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/hassan/chennamma-devegowda-and-muttige-hirehalli-chennamma-had-a-very-strong-emotional-connection-to-her-hometown-gkn-dqo0qhm"/>
        </item>
        <item>
            <title><![CDATA[ಮಳೆ ನಡುವೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಮಧ್ಯರಾತ್ರಿಯಿಂದಲೇ ಹರಿದು ಬಂದ ಜನಸಾಗರ]]></title>
            <link>https://kannada.asianetnews.com/karnataka-districts/massive-turnout-in-rain-for-the-final-farewell-to-hd-deve-gowda-wife-chennamma/articleshow-gcgcv0s</link>
            <guid isPermaLink="true">https://kannada.asianetnews.com/karnataka-districts/massive-turnout-in-rain-for-the-final-farewell-to-hd-deve-gowda-wife-chennamma/articleshow-gcgcv0s</guid>
            <pubDate>Mon, 20 Jul 2026 05:51:10 +0530</pubDate>
            <description><![CDATA[&lt;p&gt;ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನದಿಂದ ಇಡೀ ಕರ್ನಾಟಕ ಹಾಗೂ ಪ್ರಮುಖವಾಗಿ ಹಾಸನ ಜಿಲ್ಲೆ ಜನರು ತೀವ್ರ ದುಃಖತಪ್ತರಾಗಿದ್ದಾರೆ. ಮಳೆಯ ನಡುವೆಯೂ ಮಧ್ಯರಾತ್ರಿಯಿಂದಲೇ ಅಂತಿಮ ದರ್ಶನಕ್ಕಾಗಿ ಜನಸಾಗರವೇ ಹರಿದು ಬಂದಿದೆ. ಇದೇ ವೇಳೆ ಪೊಲೀಸರ ಜೊತೆ ವಾಗ್ವಾದವೂ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxyeb9tgf28wf3d173gfgc19,imgname-chennamma-final-darshan-1784506853200.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.20) &lt;/strong&gt;ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ ವಾರ್ತೆ ಕರ್ನಾಟಕದಲ್ಲಿ ಪ್ರಮುಖವಾಗಿ ಹಾಸನ ಜಿಲ್ಲೆ ಜನರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇಂದು ಮಧ್ಯರಾತ್ರಿ ಚೆನ್ನೆಮ್ಮ ಪಾರ್ಥೀವ ಶರೀರ ಹಾಸನ ಜಿಲ್ಲೆಗೆ ತಲುಪಿದೆ. ಮಧ್ಯರಾತ್ರಿಯಿಂದಲೇ ಹಾಸನ ಜನರು ಚೆನ್ನಮ್ಮ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಕಾದು ನಿಂತಿದ್ದರು. ಹೊಳೆನರಸೀಪುರದ ಮನೆಯತ್ತ ಪಾರ್ಥೀವ ಶರೀರ ಆಗಮಿಸುತ್ತಿದ್ದಂತ ಮಳೆ ಶುರುವಾಗಿದೆ. ಮಳೆಯನ್ನು ಲೆಕ್ಕಿಸಿದ ಜನರು ಅಂತಿಮ ದರ್ಶನಕ್ಕಾಕಿ ನಿಂತಿದ್ದರು. ಇದೇ ವೇಳೆ ಮಳೆ ಕಾರಣದಿಂದ ಎಕ್ಸಿಟ್ ಗೇಟ್ ಮೂಲಕ ಅಂತಿಮ ದರ್ಶನ ಪಡೆಯಲು ಹಲವರು ಪ್ರಯತ್ನಿಸಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡದೆ, ಪ್ರವೇಶ ಗೇಟ್ ಮೂಲಕ ಅಂತಿಮ ದರ್ಶನ ಪಡೆಯುವಂತೆ ಮನವಿ ಮಾಡಿದ್ದಾರೆ.&lt;/p&gt;&lt;h2&gt;ಮಳೆ ಕಾರಣ ಅವಕಾಶ ನೀಡಿ&lt;/h2&gt;&lt;p&gt;ಮಳೆ ಕಾರಣ ನೀಡಿ ಎಕ್ಸಿಟ್ ಕಡೆಯಿಂದ ಅಂತಿಮ ದರ್ಶನಕ್ಕೆ ಬರಲು ಕೆಲವರ ಯತ್ನ ನಡೆಸಿದ್ದಾರೆ. ಪೊಲೀಸರು ಅವಕಾಶ ನೀಡದ ಕಾರಣ ವಾಗ್ವಾದ ನಡೆದಿದೆ. ಮಳೆಯಲ್ಲಿ ನಿಲ್ಲಲು ಆಗುತ್ತಿಲ್ಲ, ಎಗ್ಸಿಟ್ ಗೇಟ್ ಮೂಲಕ ಅಂತಿಮ ದರ್ಶನಕ್ಕೆ ಅವಕಾಶ ನೀಡುವಂತೆ ಪೊಲೀಸರ ಕೇಳಿದ್ದಾರೆ. ಎಕ್ಸಿಟ್ ಗೇಟ್ ಮೂಲಕ ಯಾರಿಗೂ ಅವಕಾಶವಿಲ್ಲ. ಇದರಿಂದ ಎಲ್ಲರಿಗೂ ಸಮಸ್ಯೆಯಾಗಲಿದೆ. ದಯವಿಟ್ಟು ಪ್ರವೇಶ ದ್ವಾರದ ಮೂಲಕ ಅಂತಿಮ ದರ್ಶನ ಪಡೆಯುವಂತೆ ಪೊಲೀಸರು ಮನವಿ ಮಾಡಿದ್ದಾರೆ.&lt;/p&gt;&lt;h2&gt;ಕುಟುಂಬಸ್ಥರಿಂದ ಚೆನ್ನಮ್ಮನ ಮೃತದೇಹಕ್ಕೆ ಪೂಜೆ&lt;/h2&gt;&lt;p&gt;ಹೊಳೆನರಸೀಪುರ ರೇವಣ್ಣನ ಮನೆಯಲ್ಲಿ ಚೆನ್ನಮ್ಮನ ಮೃತದೇಹ ಆಗಮಿಸಿದ ಬಳಿಕ ಮನೆಯೊಳಗೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಲಾಗಿದೆ. ಕುಟುಂಬಸ್ಥರ ಪೂಜೆ ಬಳಿಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ತಾಯಿ ಮೃತದೇಹದ ಜೊತೆಯೇ ಗಾಡಿಯಲ್ಲಿ ಬಂದಿದ್ದ ಪುತ್ರ ಹಾಗೂ ಕೇಂದ್ರ ಸಚಿವ ಹೆಚ್&zwnj;ಡಿ ಕುಮಾರಸ್ವಾಮಿ, ರೇವಣ್ಣನ ಮನೆಯಲ್ಲಿ ತಾಯಿ ಮೃತದೇಹಕ್ಕೆ ಪೂಜೆ ಸಲ್ಲಿಸಿದ್ದಾರೆ.&lt;/p&gt;&lt;h2&gt;16 ಗಂಟೆಗಳ ಬಳಿಕ ಹೊಳೆನರಸೀಪುರ ತಲುಪಿದ ಪಾರ್ಥಿವ ಶರೀರ&lt;/h2&gt;&lt;p&gt;ಬೆಂಗಳೂರಿನಿಂದ ಹೊಳೆನರಸಿಪುರದತ್ತ ಹೊರಟ ಚೆನ್ನಮ್ಮ ಪಾರ್ಥೀವ ಶರೀರ ವಾಹನ ರೇವಣ್ಣ ಮನೆ ತಲಪಲು ಬರೋಬ್ಬರಿ 16 ಗಂಟೆ ಕಾಲ ತೆಗೆದುಕೊಂಡಿದೆ. ಬೆಂಗಳೂರಿನಿಂದ ಹೊಳೆನರಸೀಪುರದ ರಸ್ತೆಯ ಇಕ್ಕೆಲಗಳಲ್ಲಿ ಜನರು ಅಂತಿಮ ದರ್ಶನ ಪಡೆದಿದ್ದಾರೆ. ದಾರಿಯೂದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಚನ್ನಮ್ಮ ಅಂತಿಮ ದರ್ಶನ ಪಡೆದಿದ್ದಾರೆ. ಹಲವೆಡೆ ಕೆಲಕಾಲ ವಾಹನ ನಿಲ್ಲಿಸಿ ನೆರೆದಿದ್ದ ಜನರು ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಇಂದು ಮಧ್ಯಾಹ್ನ 12 ಗಂಟೆವರೆಗೂ ರೇವಣ್ಣ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>hassan</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/massive-turnout-in-rain-for-the-final-farewell-to-hd-deve-gowda-wife-chennamma/articleshow-gcgcv0s"/>
        </item>
        <item>
            <title><![CDATA[ಅಜ್ಜಿ ಚೆನ್ನಮ್ಮ ನಿಧನರಾದರೂ ಪ್ರಜ್ವಲ್‌ಗೆ ಪೆರೋಲ್ ಅರ್ಜಿ ಸಲ್ಲಿಸಲು ಈ ಕಾರಣಕ್ಕೆ ಅವಕಾಶ ಸಿಗಲಿಲ್ಲ;  ಟಿವಿ ವೀಕ್ಷಣೆ!]]></title>
            <link>https://kannada.asianetnews.com/karnataka-districts/chennamma-deve-gowda-funeral-will-prajwal-revanna-watch-grandmother-s-last-rites-from-jail/articleshow-m3tsfux</link>
            <guid isPermaLink="true">https://kannada.asianetnews.com/karnataka-districts/chennamma-deve-gowda-funeral-will-prajwal-revanna-watch-grandmother-s-last-rites-from-jail/articleshow-m3tsfux</guid>
            <pubDate>Mon, 20 Jul 2026 09:36:55 +0530</pubDate>
            <description><![CDATA[ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಹೊಳೆನರಸೀಪುರ ಶೋಕಸಾಗರದಲ್ಲಿ ಮುಳುಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಪೆರೋಲ್ ಸಿಗುವುದು ಅನುಮಾನವಾಗಿದ್ದು, ಜೈಲಿನಲ್ಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತ್ಯಕ್ರಿಯೆ ವೀಕ್ಷಿಸಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxyv75vrnc2f5t645yey7xy6,imgname-prajwal-revanna-grand-mother-chennamma-1784520349558.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಹಾಸನ (ಜು.20): ಮಾ&lt;/strong&gt;ಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ (Former PM HD Deve Gowda) ಪತ್ನಿ ಚೆನ್ನಮ್ಮ ಅವರ ನಿಧನದಿಂದಾಗಿ ದೊಡ್ಡಗೌಡರ ಕುಟುಂಬ ಮಾತ್ರವಲ್ಲದೆ ಇಡೀ ಹೊಳೆನರಸೀಪುರ ಶೋಕಸಾಗರದಲ್ಲಿ ಮುಳುಗಿದೆ. ಇಂದು (ಭಾನುವಾರ) ಮಧ್ಯಾಹ್ನ ಚೆನ್ನಮ್ಮ ಅವರ ಅಂತ್ಯಕ್ರಿಯೆ (Funeral) ನೆರವೇರಲಿದ್ದು, ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Central Jail) ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಸ್ಥಿತಿ ಏನಾಗಲಿದೆ ಎಂಬ ಕುತೂಹಲ ಮೂಡಿದೆ.&lt;/p&gt;&lt;h2&gt;&lt;strong&gt;ಜೈಲಿನಲ್ಲೇ ದರ್ಶನಕ್ಕೆ ವ್ಯವಸ್ಥೆ?&lt;/strong&gt;&lt;/h2&gt;&lt;p&gt;ಪ್ರಜ್ವಲ್ ರೇವಣ್ಣ ಪ್ರಸ್ತುತ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪದ (Serious Misconduct Allegations) ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಾನೂನು ಪ್ರಕ್ರಿಯೆಗಳ ಪ್ರಕಾರ, ಸಜಾ ಕೈದಿಯಾಗಿದ್ದರೆ ಪೆರೋಲ್ (Parole) ಪಡೆಯಲು ಕನಿಷ್ಠ 2 ವರ್ಷಗಳ ಶಿಕ್ಷೆ ಪೂರೈಸಿರಬೇಕು. ಆದರೆ ಪ್ರಜ್ವಲ್&zwnj;ಗೆ ಶಿಕ್ಷೆ ಪ್ರಕಟವಾಗಿ ಎರಡು ವರ್ಷ ಪೂರ್ಣಗೊಳ್ಳದ ಮತ್ತು ಪ್ರಕರಣದ ಗಂಭೀರತೆಯನ್ನು (Severity of Case) ಪರಿಗಣಿಸಿ ನ್ಯಾಯಾಲಯವು ಹೊರಗೆ ಹೋಗಲು ಅನುಮತಿ ನೀಡುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಪೆರೋಲ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ, ಪ್ರಜ್ವಲ್ ರೇವಣ್ಣ ಅವರು ಮಾನವೀಯತೆಯ ಆಧಾರದ ಮೇಲೆ (Humanitarian Grounds) ಅಜ್ಜಿಯ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ವೀಕ್ಷಿಸಲು ಜೈಲು ಅಧಿಕಾರಿಗಳಿಗೆ ಮನವಿ ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಅವರು ಮನವಿ ಸಲ್ಲಿಸಿದರೆ, ಜೈಲಿನಲ್ಲೇ ಟಿವಿ ಅಥವಾ ವಿಡಿಯೋ ಕಾನ್ಫರೆನ್ಸ್ (Video Conference) ಮೂಲಕ ಅಂತ್ಯಕ್ರಿಯೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಕಾರಾಗೃಹ ಇಲಾಖೆ ಡಿಜಿ ಅಲೋಕ್ ಕುಮಾರ್ (DG Prisons Alok Kumar) ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಅಂತ್ಯಕ್ರಿಯೆಯ ವೇಳಾಪಟ್ಟಿ&lt;/strong&gt;&lt;/h2&gt;&lt;p&gt;ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಕುಟುಂಬ ಸದಸ್ಯರಿಂದ ಅಂತಿಮ ಪೂಜೆ (Final Rituals) ನೆರವೇರಲಿದೆ. ತದನಂತರ ಪಾರ್ಥಿವ ಶರೀರವನ್ನು ಮಧ್ಯಾಹ್ನ 12 ಗಂಟೆಗೆ ಹೊಳೆನರಸೀಪುರ ಹೊರವಲಯದ ಅಂತ್ಯಕ್ರಿಯೆ ಜಾಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅವರ ಕಿರಿಯ ಪುತ್ರ ರಮೇಶ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ ಎಂದು ಅವರ 2ನೇ ಪುತ್ರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಹೊಳೆನರಸೀಪುರ ಬಂದ್:&lt;/strong&gt;&lt;/h2&gt;&lt;p&gt;ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಹೊಳೆನರಸೀಪುರದಲ್ಲಿ (Holenarasipura) ಇಂದು ಸ್ವಯಂಪ್ರೇರಿತ ಬಂದ್ ಆಚರಿಸಲಾಗುತ್ತಿದೆ. ಈ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ, ಅಮ್ಮನಂತಿದ್ದ ಚೆನ್ನಮ್ಮ ಅವರ ಅಗಲಿಕೆಗೆ ಸಂತಾಪ ಸೂಚಿಸಿ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ್ದಾರೆ. ಇಡೀ ತಾಲೂಕಿನ ಜನತೆ ತಮ್ಮ ಪ್ರೀತಿಯ 'ದೊಡ್ಡಮ್ಮ'ನ ಅಂತಿಮ ದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಇದುವರೆಗೆ ನ್ಯಾಯಾಲಯಕ್ಕಾಗಲಿ ಅಥವಾ ಜೈಲು ಅಧಿಕಾರಿಗಳಿಗಾಗಲಿ ಯಾವುದೇ ಅಧಿಕೃತ ಅರ್ಜಿ ಸಲ್ಲಿಸಿಲ್ಲ. ಆದರೆ ಸೆಲ್&zwnj;ನಲ್ಲಿಯೇ (Cell) ಅಂತ್ಯಕ್ರಿಯೆ ವೀಕ್ಷಿಸಲು ಅವರಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chennamma-deve-gowda-funeral-will-prajwal-revanna-watch-grandmother-s-last-rites-from-jail/articleshow-m3tsfux"/>
        </item>
        <item>
            <title><![CDATA[Sakleshpur: ಹೊಸಳ್ಳಿ ಬೆಟ್ಟ- ಕಾಗಿನಹರೆಗೆ ಪ್ರವಾಸಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ]]></title>
            <link>https://kannada.asianetnews.com/karnataka-districts/hassan-sakaleshpur-restriction-on-entry-of-tourist-vehicles-to-hosalli-hill-and-kaginahare-mrq/articleshow-nmo6wce</link>
            <guid isPermaLink="true">https://kannada.asianetnews.com/karnataka-districts/hassan-sakaleshpur-restriction-on-entry-of-tourist-vehicles-to-hosalli-hill-and-kaginahare-mrq/articleshow-nmo6wce</guid>
            <pubDate>Thu, 06 Aug 2026 06:40:59 +0530</pubDate>
            <description><![CDATA[ಮಲೆನಾಡಿನ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ, ಸಕಲೇಶಪುರದ ಹೆತ್ತೂರು ಹೋಬಳಿಯ ಹೊಸಹಳ್ಳಿ ಬೆಟ್ಟ ಹಾಗೂ ಕಾಗಿಹರೆ ವೀಕ್ಷಣಾ ಸ್ಥಳಗಳಿಗೆ ಪ್ರವಾಸಿಗರ ವಾಹನಗಳ ಪ್ರವೇಶವನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ. ವಾಹನಗಳ ಅಡ್ಡಾದಿಡ್ಡಿ ಸಂಚಾರದಿಂದ ಪರಿಸರಕ್ಕೆ ಹಾನಿಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರವಾಸಿಗರು ಕಾಲ್ನಡಿಗೆಯಲ್ಲಿ ಈ ಸ್ಥಳಗಳನ್ನು ವೀಕ್ಷಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kza9tcaqbsf5rmfr06sgwz6s,imgname--hosalli-hill-and-kaginahare-1785978499415.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಸಕಲೇಶಪುರ): &lt;/strong&gt;ಮಲೆನಾಡಿನ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಹೆತ್ತೂರು ಹೋಬಳಿಯ ಹೊಸಹಳ್ಳಿ ಬೆಟ್ಟ ಹಾಗೂ ಕಾಗಿಹರೆ ವೀಕ್ಷಣಾ ಸ್ಥಳಗಳಿಗೆ ಪ್ರವಾಸಿಗರ ವಾಹನಗಳ ಪ್ರವೇಶವನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಹೊಸಹಳ್ಳಿ ಬೆಟ್ಟ ಮತ್ತು ಕಾಗಿಹರೆ ಸೇರಿದಂತೆ ಮಲೆನಾಡಿನ ಪ್ರವಾಸಿ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವೇಳೆ ಕೆಲವರು ಅರಣ್ಯ ಪ್ರದೇಶದೊಳಗೆ ಅನಧಿಕೃತವಾಗಿ ವಾಹನಗಳನ್ನು ಚಲಾಯಿಸಿ ಆಫ್&zwnj; ರೋಡ್ ಚಾಲನೆ ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿತ್ತು. ಇದರಿಂದ ಅರಣ್ಯ ಪರಿಸರ ಮತ್ತು ವನ್ಯಜೀವಿಗಳಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.&amp;nbsp;&lt;/p&gt;&lt;h2&gt;&lt;strong&gt;ಭೂಮಿಯ ಸ್ವಾಭಾವಿಕ ರಚನೆಗೆ ಧಕ್ಕೆ&lt;/strong&gt;&lt;/h2&gt;&lt;p&gt;ಅರಣ್ಯ ಪ್ರದೇಶದಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರದಿಂದ ಮೇಲ್ಮಣ್ಣು ಸಡಿಲಗೊಂಡು ಭೂಮಿಯ ಸ್ವಾಭಾವಿಕ ರಚನೆಗೆ ಧಕ್ಕೆಯಾಗುತ್ತದೆ. ಮಳೆಗಾಲದಲ್ಲಿ ಇದು ಭೂಕುಸಿತದಂತಹ ಅಪಾಯಗಳಿಗೆ ಕಾರಣವಾಗುವ ಸಾಧ್ಯತೆಯಿದ್ದು, ವಾಹನಗಳ ಹೊಗೆ ಹಾಗೂ ಶಬ್ದದಿಂದ ವನ್ಯಜೀವಿಗಳು ಮತ್ತು ಪಕ್ಷಿಗಳ ಸಹಜ ವಾಸಸ್ಥಾನಕ್ಕೂ ತೊಂದರೆಯಾಗುತ್ತದೆ ಎಂದು ಇಲಾಖೆ ತಿಳಿಸಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಹೊಸಹಳ್ಳಿ ಬೆಟ್ಟ ಹಾಗೂ ಕಾಗಿಹರೆ ವೀಕ್ಷಣಾ ಸ್ಥಳಗಳಲ್ಲಿ ವಾಹನ ಪ್ರವೇಶ ನಿಷೇಧದ ನಾಮಫಲಕಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರು ತಮ್ಮ ವಾಹನಗಳನ್ನು ಬೆಟ್ಟದ ಕೆಳಭಾಗದಲ್ಲಿ ನಿಲ್ಲಿಸಿ ಕಾಲ್ನಡಿಗೆಯ ಮೂಲಕ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಪ್ರವಾಸಿಗರ ಪ್ರವೇಶಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ; ಕೇವಲ ವಾಹನಗಳ ಸಂಚಾರಕ್ಕೆ ಮಾತ್ರ ನಿಷೇಧ ಹೇರಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ. ಪ್ರವಾಸಿಗರು ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯ ಎಸೆಯದಂತೆ, ಅರಣ್ಯ ಪರಿಸರಕ್ಕೆ ಹಾನಿಯಾಗದಂತೆ ಹಾಗೂ ವನ್ಯಜೀವಿಗಳಿಗೆ ತೊಂದರೆ ಉಂಟುಮಾಡುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದಂತೆ ಇಲಾಖೆ ಮನವಿ ಮಾಡಿದೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ವೆಂಕಟೇಶ್ ಹಾಗೂ ಸಿಬ್ಬಂದಿಯಾದ ಪ್ರೇಮ್&zwnj; ಕುಮಾರ್&zwnj;, ಅಕಿಲ್, ಪರಮೇಶ್, ಆಕರ್ಷ, ಮುರಗನ್ ಮತ್ತು ವಿಶ್ವನಾಥ್ ಉಪಸ್ಥಿತರಿದ್ದರು.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-sakaleshpur-restriction-on-entry-of-tourist-vehicles-to-hosalli-hill-and-kaginahare-mrq/articleshow-nmo6wce"/>
        </item>
        <item>
            <title><![CDATA[ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ: ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತ]]></title>
            <link>https://kannada.asianetnews.com/karnataka-districts/bengaluru-mangaluru-train-service-completely-suspended-after-hill-collapses-on-railway-tracks-near-yadakumari-hassan-mrq/articleshow-pce28di</link>
            <guid isPermaLink="true">https://kannada.asianetnews.com/karnataka-districts/bengaluru-mangaluru-train-service-completely-suspended-after-hill-collapses-on-railway-tracks-near-yadakumari-hassan-mrq/articleshow-pce28di</guid>
            <pubDate>Sun, 02 Aug 2026 07:20:09 +0530</pubDate>
            <description><![CDATA[ಹಾಸನ ಜಿಲ್ಲೆಯ ಯಡಕುಮರಿ ಬಳಿ ಭಾರಿ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದೆ. ಈ ಕಾರಣದಿಂದ ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಹಲವು ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz02gb6cqkwv4p609yrc1zew,imgname-indian-railways-1785635286220.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಯಡಕುಮರಿ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.&lt;/p&gt;&lt;p&gt;ಘಟನಾ ಸ್ಥಳಕ್ಕೆ ಆಗಮಿಸಿರುವ ರೈಲ್ವೆ ಇಲಾಖೆ ಸಿಬ್ಬಂದಿ ಗುಡ್ಡ ತೆರವು ಕಾಮಗಾರಿಯನ್ನು ಭರದಿಂದ ನಡೆಸುತ್ತಿದ್ದಾರೆ. ಆದರೆ, ಸಂಚಾರ ರದ್ದತಿಯಿಂದಾಗಿ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಗಿದೆ. ಬೆಂಗಳೂರು-ಮುರಡೇಶ್ವರ, ಬೆಂಗಳೂರು-ಕೋಝಿಕ್ಕೋಡ್ ಹಾಗೂ ವಿಜಯಪುರ-ಮಂಗಳೂರು ರೈಲುಗಳನ್ನು ಹಾಸನದಲ್ಲಿ ನಿಲ್ಲಿಸಲಾಗಿದ್ದರೆ, ಬೆಂಗಳೂರು-ಕಾರವಾರ ಎಕ್ಸ್&zwnj;ಪ್ರೆಸ್ ರೈಲನ್ನು ಸಕಲೇಶಪುರದಲ್ಲಿ ತಡೆಯಲಾಗಿದೆ.&lt;/p&gt;&lt;h2&gt;&lt;strong&gt;ಹಾಸನದಲ್ಲಿಯೇ ನಿಲುಗಡೆಯಾದ ಕೆಲ ರೈಲುಗಳು&lt;/strong&gt;&lt;/h2&gt;&lt;p&gt;ಅದೇ ರೀತಿ, ಮುರಡೇಶ್ವರ-ಬೆಂಗಳೂರು ಮತ್ತು ಮಂಗಳೂರು-ವಿಜಯಪುರ ರೈಲುಗಳು ಸುಬ್ರಹ್ಮಣ್ಯದಲ್ಲಿ ಸ್ಥಗಿತಗೊಂಡಿದ್ದರೆ, ಕೋಝಿಕ್ಕೋಡ್-ಬೆಂಗಳೂರು ರೈಲನ್ನು ಪುತ್ತೂರಿನಲ್ಲಿ ನಿಲ್ಲಿಸಲಾಗಿದೆ. ರೈಲು ಸಂಚಾರ ರದ್ದತಿಯ ಕುರಿತು ಇಲಾಖೆಯು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದು, ನಿನ್ನೆ ರಾತ್ರಿಯಿಂದಲೇ ಕಾಯುತ್ತಿದ್ದ ಹಲವು ಪ್ರಯಾಣಿಕರು ನಡುರಾತ್ರಿಯಲ್ಲಿ ಪರ್ಯಾಯವಾಗಿ ಬಸ್ ಮತ್ತು ಕಾರುಗಳ ವ್ಯವಸ್ಥೆ ಮಾಡಿಕೊಂಡು ಪ್ರಯಾಣ ಬೆಳೆಸಿದ್ದಾರೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ಇಂದು ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ಇಂದು ಎರಡು ರೈಲು ಸೇವೆ ರದ್ದು&lt;/strong&gt;&lt;/h3&gt;&lt;p&gt;ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್&zwnj;ಪ್ರೆಸ್&zwnj; ರೈಲಿನ (ಸಂಖ್ಯೆ 16540 ) ಭಾನುವಾರದ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.&lt;/p&gt;&lt;p&gt;ಯಶವಂತಪುರ - ಮಂಗಳೂರು ಜಂಕ್ಷನ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ (16575) ಭಾನುವಾರದ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.&lt;/p&gt;&lt;h3&gt;&lt;strong&gt;ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ&lt;/strong&gt;&lt;/h3&gt;&lt;p&gt;ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶೃಂಗೇರಿ ತಾಲೂಕು ನೆರೆ ಹೊಸ್ತಿಲಲ್ಲಿದೆ. ಗುರುವಾರ ರಾತ್ರಿಯಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದು ನದಿ ಜಲಾನಯನ ಪ್ರದೇಶದ ಜನರಲ್ಲಿ ನೆರೆ ಭೀತಿ ಮೂಡಿಸಿದೆ. ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ತುಂಗಾ ನದಿಯ ಈ ಭೋರ್ಗರೆತದ ದೃಶ್ಯ ಮನಮೋಹಕವಾಗಿದ್ದರೂ, ನೆರೆ ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ.&lt;/p&gt;&lt;p&gt;&lt;strong&gt;ತುಂಬಿದ ನದಿ, ಕೆರೆ-ಕಟ್ಟೆಗಳು&lt;/strong&gt;&lt;/p&gt;&lt;p&gt;ಮಳೆ ಕೊರತೆಯಿಂದ ಒಣಗಿದ್ದ ಮಲೆನಾಡು ಕೇವಲ ಎರಡು ದಿನಗಳ ಮಳೆಗೆ ಸಂಪೂರ್ಣವಾಗಿ ಬದಲಾಗಿದೆ. ನದಿ, ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಶೃಂಗೇರಿ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ.&lt;/p&gt;]]></content:encoded>
            <category>hassan</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/bengaluru-mangaluru-train-service-completely-suspended-after-hill-collapses-on-railway-tracks-near-yadakumari-hassan-mrq/articleshow-pce28di"/>
        </item>
        <item>
            <title><![CDATA[ನಮ್ಮ ತಾಯಿ ಭೂಮಿಯ ಒಡಲು ಸೇರಿದ್ದಾರೆ -ಅಮ್ಮನ ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ]]></title>
            <link>https://kannada.asianetnews.com/hassan/emotional-kumaraswamy-amma-hd-kumaraswamy-has-gone-to-join-mother-earth-gkn/articleshow-r1v1oru</link>
            <guid isPermaLink="true">https://kannada.asianetnews.com/hassan/emotional-kumaraswamy-amma-hd-kumaraswamy-has-gone-to-join-mother-earth-gkn/articleshow-r1v1oru</guid>
            <pubDate>Tue, 21 Jul 2026 15:18:34 +0530</pubDate>
            <description><![CDATA[&lt;p&gt;ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಅಗಲಿದ ತಮ್ಮ ತಾಯಿಯನ್ನು ನೆನೆದು ಭಾವುಕರಾದರು. ನಮ್ಮ ತಾಯಿ ಎಂದೂ ಮಾಧ್ಯಮಗಳ ಮುಂದೆ ಬಂದವಳಲ್ಲ. ಅವರೀಗ ಭೂಮಿ ತಾಯಿಯ ಒಡಲು ಸೇರಿದ್ದಾರೆ, ಶಿವ-ವಿಷ್ಣುವಿನ ಪಾದ ಸೇರಿದ್ದಾರೆ ಎಂದು ಭಾವುಕರಾದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky2168mvrpj6sdyczz2dgj5t,imgname-hd-kumaraswamy--1--1784627274395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಹರದನಹಳ್ಳಿ):&lt;/strong&gt; ನಮ್ಮ ತಾಯಿ ಪರಮ ದೈವಭಕ್ತೆ, ಅವರ ಆತ್ಮಕ್ಕೆ ಖಂಡಿತ ಶಾಂತಿ ದೊರೆಯಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ. ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ತಮ್ಮ ತಾಯಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನಂತರದ ವಿಧಿವಿಧಾನಗಳ ಬಗ್ಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.&lt;/p&gt;&lt;h2&gt;&lt;strong&gt;11 ದಿನಗಳ ಕಾಲ ಪಾರಾಯಣ&lt;/strong&gt;&lt;/h2&gt;&lt;p&gt;ಚೆನ್ನಮ್ಮನವರು ಪ್ರತಿದಿನವೂ ತಪ್ಪದೇ ವಿಷ್ಣು ಸಹಸ್ರನಾಮ ಪಠಿಸುತ್ತಿದ್ದರು. ಅವರ ಅದೇ ಆಸೆಯಂತೆ ಸಮಾಧಿಯ ಬಳಿ ಮೂವರು ಪುರೋಹಿತರಿಂದ ಸತತ 11 ದಿನಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ ಏರ್ಪಡಿಸಲಾಗಿದೆ. ಮೂರನೇ ದಿನದ ಹಾಲು-ತುಪ್ಪದ ಕಾರ್ಯ ನಡೆಯಲಿದೆ. ಇನ್ನು 11ನೇ ದಿನದ ಪುಣ್ಯತಿಥಿಯಂದು ಲಕ್ಷಾಂತರ ಜನರಿಗೆ ಅನ್ನಸಂತರ್ಪಣೆ ಮಾಡಲು ಕುಟುಂಬ ನಿರ್ಧರಿಸಿದೆ ಎಂದು ಹೆಚ್&zwnj;ಡಿಕೆ ಮಾಹಿತಿ ನೀಡಿದರು.&lt;/p&gt;&lt;h3&gt;&lt;strong&gt;ಬಡವರಿಗೆ ನೆರವಾಗುವ ವಿಶಿಷ್ಟ ಸ್ಮಾರಕ&lt;/strong&gt;&lt;/h3&gt;&lt;p&gt;ನಮ್ಮ ತಾಯಿಯ ಸಮಾಧಿ ಸ್ಥಳವನ್ನು ಕೇವಲ ಕಲ್ಲಿನ ಸ್ಮಾರಕವನ್ನಾಗಿ ಮಾಡುವುದಿಲ್ಲ. ಅಲ್ಲಿ ಬಡ ಕುಟುಂಬಗಳಿಗೆ ಮತ್ತು ಸಮಾಜಕ್ಕೆ ಅನುಕೂಲವಾಗುವಂತಹ ಯಾವುದಾದರೂ ಯೋಜನೆಯನ್ನು ರೂಪಿಸಲಿದ್ದೇವೆ. ನಮ್ಮ ತಾಯಿ ಎಂದೂ ಮಾಧ್ಯಮಗಳ ಮುಂದೆ ಬಂದವಳಲ್ಲ. ಅವರು ಈಗ ಭೂಮಿ ತಾಯಿಯ ಒಡಲು ಸೇರಿದ್ದಾರೆ, ಶಿವ-ವಿಷ್ಣುವಿನ ಪಾದ ಸೇರಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು. ತಮ್ಮ ತಾಯಿಯನ್ನು 'ಅನ್ನಪೂರ್ಣೇಶ್ವರಿ' ಎಂದು ಕರೆದ ಮಾಧ್ಯಮಗಳ ಬಗ್ಗೆ ಅವರು ಕೃತಜ್ಞತೆ ಸಲ್ಲಿಸಿದರು.&lt;/p&gt;&lt;p&gt;ತಮ್ಮ ಜೀವನದುದ್ದಕ್ಕೂ ಜೊತೆಯಾಗಿದ್ದ ಪತ್ನಿಯ ಅಗಲಿಕೆಯಿಂದ ನೊಂದಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಚೆನ್ನಮ್ಮನವರ ಸಮಾಧಿಗೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ನಮಿಸಿದರು. ಬಳಿಕ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕುಟುಂಬದ ಇತರ ಸದಸ್ಯರಾದ ಹೆಚ್.ಡಿ. ರೇವಣ್ಣ, ಪುತ್ರಿಯರಾದ ಅನುಸೂಯ, ಶೈಲಜಾ, ಸೊಸೆಯಂದಿರಾದ ಭವಾನಿ ಮತ್ತು ಕವಿತಾ ಅವರು ಸಮಾಧಿಗೆ ಪ್ರಣಾಮ ಸಲ್ಲಿಸಿದರು.&lt;/p&gt;]]></content:encoded>
            <category>hassan</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/hassan/emotional-kumaraswamy-amma-hd-kumaraswamy-has-gone-to-join-mother-earth-gkn/articleshow-r1v1oru"/>
        </item>
        <item>
            <title><![CDATA[ದೆಹಲಿ ಅಧಿಕೃತ ಪ್ರಧಾನಿ ನಿವಾಸದಲ್ಲಿ ಕನ್ನಡದ ಕಂಪು, ತುಳಸಿ ಕಟ್ಟೆ ಕಟ್ಟಿಸಿದ ಪ್ರಪ್ರಥಮ ಮಹಿಳೆ ಚೆನ್ನಮ್ಮ ದೇವೇಗೌಡ!]]></title>
            <link>https://kannada.asianetnews.com/food/chennamma-devegowda-passes-away-remembering-the-woman-who-introduced-tulsi-katte-to-delhi-prime-minister-residence-gdp/articleshow-rpb27mx</link>
            <guid isPermaLink="true">https://kannada.asianetnews.com/food/chennamma-devegowda-passes-away-remembering-the-woman-who-introduced-tulsi-katte-to-delhi-prime-minister-residence-gdp/articleshow-rpb27mx</guid>
            <pubDate>Mon, 20 Jul 2026 16:41:33 +0530</pubDate>
            <description><![CDATA[ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮನವರು, 1996ರಲ್ಲಿ ದೆಹಲಿಯ ಪ್ರಧಾನಿ ನಿವಾಸದಲ್ಲಿ 'ತುಳಸಿ ಕಟ್ಟೆ' ನಿರ್ಮಿಸಿ ಮತ್ತು 'ರಾಗಿ ಮುದ್ದೆ'ಯನ್ನು ಪರಿಚಯಿಸಿ ವಿಶಿಷ್ಟ ಸಾಂಸ್ಕೃತಿಕ ಛಾಪು ಮೂಡಿಸಿದ್ದರು. ಅವರ ಈ ಸರಳತೆಯ ಹೆಜ್ಜೆಗಳು, ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಆತ್ಮವನ್ನು ಪ್ರತಿಷ್ಠಾಪಿಸಿದ ಐತಿಹಾಸಿಕ ಕ್ಷಣಗಳಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxzkf2yrz4ytsd2ym42hedmv,imgname-chennamma-deve-gowda-tulasi-katte-1784545774552.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡರು (89) ಜುಲೈ 18 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ನಿಧನವು ಕೇವಲ ಒಂದು ಕುಟುಂಬದ ನಷ್ಟವಲ್ಲ. ಅದು ಮೌನ, ಅಚಲ ಭಕ್ತಿ ಮತ್ತು ಆಡಂಬರವಿಲ್ಲದ ಸರಳತೆಯ ಯುಗವೊಂದರ ಅಂತ್ಯವನ್ನು ಸೂಚಿಸುತ್ತದೆ. ಇಂದು ಚೆನ್ನಮ್ಮ ಜೀವಂತವಿಲ್ಲ. ಆದರೆ ಅವರು ರಾಷ್ಟ್ರ ರಾಜಧಾನಿ ನವದೆಹಲಿಯ ಅಧಿಕೃತ ಪ್ರಧಾನಿ ನಿವಾಸದಲ್ಲಿ ಮೂಡಿಸಿದ್ದ ವಿಶಿಷ್ಟ ಸಾಂಸ್ಕೃತಿಕ ಛಾಪು ಮತ್ತು ಮರೆತುಹೋದ ಆ ಐತಿಹಾಸಿಕ ಮೈಲಿಗಲ್ಲುಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದೆ.&lt;/p&gt;&lt;h2&gt;1996ರ ಸಾಂಸ್ಕೃತಿಕ ಕ್ರಾಂತಿ: ಲುಟ್ಯೆನ್ಸ್ ಏಕತಾನತೆಯನ್ನು ಮುರಿದ ತುಳಸಿಕಟ್ಟೆ&lt;/h2&gt;&lt;p&gt;1996 ರಲ್ಲಿ ದೇವೇಗೌಡರು ಅನಿರೀಕ್ಷಿತವಾಗಿ ಭಾರತದ 11 ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ, ಇಡೀ ದೇಶದ ಗಮನ ನವದೆಹಲಿಯಲ್ಲಿ ಬದಲಾಗುತ್ತಿದ್ದ ರಾಜಕೀಯ ಒಕ್ಕೂಟಗಳ ಮೇಲಿತ್ತು. ಆದರೆ, ತೀವ್ರವಾದ ರಾಜಕೀಯ ಚದುರಂಗದಾಟದಿಂದ ದೂರವಾಗಿ, ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸದ (ಆಗಿನ 7, ರೇಸ್ ಕೋರ್ಸ್ ರಸ್ತೆ) ಬಿಗಿ ಭದ್ರತೆಯ ಕೋಟೆಗಳ ಒಳಗೆ ಒಂದು ಶಾಂತ ಹಾಗೂ ಐತಿಹಾಸಿಕ ಸಾಂಸ್ಕೃತಿಕ ಮತ್ತು ದೈವಭಕ್ತಿಯ ಕ್ರಾಂತಿ ನಡೆಯುತ್ತಿತ್ತು. ಈ ರೂಪಾಂತರದ ಸೂತ್ರಧಾರಿಯೇ ಚೆನ್ನಮ್ಮ ದೇವೇಗೌಡರು.&lt;/p&gt;&lt;p&gt;ಜೂನ್ 1996 ಕ್ಕಿಂತ ಮೊದಲು, ನವದೆಹಲಿಯ ಅಧಿಕೃತ ಪ್ರಧಾನಿ ಬಂಗಲೆಗಳು ಕಟ್ಟುನಿಟ್ಟಾದ ವಸಾಹತುಶಾಹಿ ಯುಗದ ವಾಸ್ತುಶಿಲ್ಪ ಮತ್ತು ಬ್ರಿಟಿಷ್ ಶೈಲಿಯ ಆಡಳಿತಶಾಹಿ ಸೌಂದರ್ಯಶಾಸ್ತ್ರದಿಂದ ಪ್ರಾಬಲ್ಯ ಹೊಂದಿದ್ದವು. ಈ ಗಣ್ಯ ವಲಯಗಳಲ್ಲಿ ಸಾಂಪ್ರದಾಯಿಕ ದಕ್ಷಿಣ ಭಾರತದ ಗ್ರಾಮೀಣ ಸಂಸ್ಕೃತಿಗೆ ಜಾಗವಿರಲಿಲ್ಲ. ಆದರೆ, ಚೆನ್ನಮ್ಮನವರು ದೆಹಲಿಗೆ ಬಂದ ತಕ್ಷಣ ಆ ವಾತಾವರಣವನ್ನು ಬದಲಾಯಿಸಿದರು. ಅವರು ಪ್ರಧಾನಿ ನಿವಾಸದ ಅಂಗಳದಲ್ಲಿ ಮೊಟ್ಟಮೊದಲ ಬಾರಿಗೆ ಸಾಂಪ್ರದಾಯಿಕ ಇಟ್ಟಿಗೆಯ 'ತುಳಸಿ ಕಟ್ಟೆ'ಯನ್ನು ಕಟ್ಟಿಸಿದ್ದರು. ಅದು ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಸುದ್ದಿಯಾಗುತ್ತು.&lt;/p&gt;&lt;p&gt;ಅವರಿಗೆ ತುಳಸಿ ಕಟ್ಟೆ ಕೇವಲ ಬೆಳಗಿನ ಪ್ರಾರ್ಥನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಭವ್ಯವಾದ, ಅಪರಿಚಿತ ಮಹಾನಗರದಲ್ಲಿ ವಾಸಿಸುತ್ತಿದ್ದಾಗಲೂ ತಮ್ಮ ಕುಟುಂಬವನ್ನು ತಾಯ್ನಾಡಿನ ಬೇರುಗಳಲ್ಲಿ ನೆಲೆಗೊಳಿಸುವ ಒಂದು ಆತ್ಮೀಯ ಮಾರ್ಗವಾಗಿತ್ತು. ಗ್ರಾಮೀಣ ಭಾರತದ ಆಧ್ಯಾತ್ಮಿಕತೆ ಮತ್ತು ದೇಶೀಯತೆಯ ಸಾಂಪ್ರದಾಯಿಕ ಸಂಕೇತವನ್ನು ಕಾರ್ಯಾಂಗ ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿ ಭೌತಿಕವಾಗಿ ನಿರ್ಮಿಸಿದ್ದು ದೇಶದ ಇತಿಹಾಸದಲ್ಲೇ ಮೊದಲ ಬಾರಿಯಾಗಿತ್ತು. ಅನೇಕ ಪ್ರಧಾನಿಗಳು ತಮ್ಮ ಸರ್ಕಾರದ ಅಧಿಕೃತ ನಿವಾಸದಲ್ಲಿ ಹಣ್ಣು, ತರಕಾರಿ, ಹೂವು ಬೆಳೆಸಿದರ ಬಗ್ಗೆ ಉಲ್ಲೇಖವಿದೆ. ಆದರೆ ದೇವೇ ಗೌಡರ ಪತ್ನಿ ಚೆನ್ನಮ್ಮ ಅಪಾರ ದೈವಭಕ್ತೆ ಹೀಗಾಗಿ ತುಳಸಿ ಕಟ್ಟೆಯನ್ನು ಕಟ್ಟಿ ದಿನಬೆಳಗಾದರೆ ಪೂಜೆ ಮಾಡುತ್ತಿದ್ದರು.&lt;/p&gt;&lt;h2&gt;ದೆಹಲಿಯ ಪತ್ರಕರ್ತರಿಗೆ ರಾಗಿ ಮುದ್ದೆ ರುಚಿ ಉಣಿಸಿದ ಮಹಾತಾಯಿ!&lt;/h2&gt;&lt;p&gt;ಚೆನ್ನಮ್ಮನವರು ಪ್ರಧಾನಿ ನಿವಾಸದ ಅಂಗಳದಲ್ಲಿ ಮೂಡಿಸಿದ ಆಧ್ಯಾತ್ಮಿಕ ಮುದ್ರೆ, ಪ್ರಧಾನಿ ಕಚೇರಿಯ (PMO) ಅಡುಗೆಮನೆಯಲ್ಲಿ ಆಗುತ್ತಿದ್ದ ಪಾಕಶಾಲೆಯ ಬದಲಾವಣೆಗೆ ಪೂರಕವಾಗಿತ್ತು. 90 ರ ದಶಕದ ಮಧ್ಯಭಾಗದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವರದಿಗಾರಿಕೆ ಮಾಡುತ್ತಿದ್ದ ಹಿರಿಯ ದೆಹಲಿ ಪತ್ರಕರ್ತರು, ಕರ್ನಾಟಕದ ಹೆಮ್ಮೆಯ 'ರಾಗಿ ಮುದ್ದೆ' ಹೇಗೆ ಪ್ರಧಾನಿ ನಿವಾಸಕ್ಕೆ ಭವ್ಯವಾಗಿ ಪಾದಾರ್ಪಣೆ ಮಾಡಿತು ಎಂಬುದನ್ನು ಇಂದಿಗೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ನಾವು ಅಧಿಕೃತ ಪತ್ರಿಕಾಗೋಷ್ಠಿಗಳಲ್ಲಿ ಸಮೋಸಾ, ಧೋಕ್ಲಾ ಮತ್ತು ಪ್ರಮಾಣಿತ ಉತ್ತರ ಭಾರತದ ಮೊಘಲಾಯಿ ತಿನಿಸುಗಳಿಗೆ ಒಗ್ಗಿಕೊಂಡಿದ್ದೆವು. ಆದರೆ ಇದ್ದಕ್ಕಿದ್ದಂತೆ, ದೇವೇಗೌಡರ ಅಧಿಕಾರಾವಧಿಯಲ್ಲಿ ನಮಗೆ ಸಾಂಪ್ರದಾಯಿಕ ಬೇಳೆ ಸಾರು ಜೊತೆ ಬಿಸಿಬಿಸಿ ರಾಗಿ ಮುದ್ದೆಯನ್ನು ಬಡಿಸಲಾಯಿತು! ಎಂದು ಅನುಭವಿ ರಾಜಕೀಯ ವರದಿಗಾರರೊಬ್ಬರು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ಅಂಗಳದಲ್ಲಿ ಚೆನ್ನಮ್ಮನವರ ತುಳಸಿ ಕಟ್ಟೆ ಮತ್ತು ಊಟದ ಕೋಣೆಗಳಲ್ಲಿ ಅಪ್ಪಟ ಕನ್ನಡ ಸಂಸ್ಕೃತಿಯ ಪಾಕಪದ್ಧತಿಯ ಘಮ. ಈ ಎರಡರ ಸಂಯೋಜನೆಯು 7, ರೇಸ್ ಕೋರ್ಸ್ ರಸ್ತೆಯ ವಾತಾವರಣವನ್ನು ಸಂಪೂರ್ಣವಾಗಿ ಹೊಸತನಕ್ಕೆ ತಿರುಗಸಿತ್ತು. ತಮ್ಮ ನೆಲದ ಸಂಸ್ಕೃತಿ ಪರಂಪರೆಯ ಬಗ್ಗೆ ಹೆಮ್ಮೆಯಿರುವ ಪ್ರಾದೇಶಿಕ ಕುಟುಂಬವೊಂದು ದೇಶದ ಚುಕ್ಕಾಣಿ ಹಿಡಿದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಕರ್ನಾಟಕದ ಜನತೆಗೆ ಇದು ಎಂದಿಗೂ ಹೆಮ್ಮೆಯ ಕ್ಷಣ ಮತ್ತು ಮರೆಯಲಾರದ ಇತಿಹಾಸ ಬರೆದಿದ್ದಾರೆ. ಕನ್ನಡದ ನೆಲದ ಸರಳ ಯಜಮಾನಿಯೊಬ್ಬರು ದೇಶದ ಅತ್ಯುನ್ನತ ನಿವಾಸದಲ್ಲೂ ತನ್ನ ತನವನ್ನು ಬಿಟ್ಟುಕೊಡದೆ, ರಾಜಧಾನಿಗೆ ಕರ್ನಾಟಕದ ಆತ್ಮವನ್ನು ಉಡುಗೊರೆಯಾಗಿ ನೀಡಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ಎಂದಿಗೂ ಅಮರ.&lt;/p&gt;&lt;h2&gt;ಹಾಸನದ ಮಣ್ಣಿನ ಬೇರುಗಳು ಮತ್ತು ಮರೆತುಹೋದ ಪರಂಪರೆ&lt;/h2&gt;&lt;p&gt;ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ 1939 ರಲ್ಲಿ ಜನಿಸಿದ ಚೆನ್ನಮ್ಮನವರು, ಒಕ್ಕಲಿಗ ಕೃಷಿ ಸಂಪ್ರದಾಯದಲ್ಲಿ ಬೇರೂರಿರುವ ಸಾಧಾರಣ ಕೃಷಿ ಕುಟುಂಬದಿಂದ ಬಂದವರು. ಅವರು ಮೇ 1954 ರಲ್ಲಿ 21 ವರ್ಷದ ದೇವೇಗೌಡರನ್ನು ವಿವಾಹವಾದರು. ಅಂದಿನಿಂದ ದೇವೇಗೌಡರ ರಾಜಕೀಯ ಏಳುಬೀಳುಗಳ ಸುದೀರ್ಘ ಪಯಣದಲ್ಲಿ ಅವರು ನೆರಳಾಗಿ ಜೊತೆಗಿದ್ದರು. 72 ವರ್ಷಗಳ ಸುದೀರ್ಘ ದಾಂಪತ್ಯದ ಬಳಿಕ ಮುತೈದೆ ಸಾವು ಕಂಡಿದ್ದಾರೆ. ಆತ್ಮಕ್ಕೆ ಸದ್ಗತಿ ಸಿಗಲಿ.&lt;/p&gt;&lt;p&gt;&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/food/chennamma-devegowda-passes-away-remembering-the-woman-who-introduced-tulsi-katte-to-delhi-prime-minister-residence-gdp/articleshow-rpb27mx"/>
        </item>
        <item>
            <title><![CDATA[ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬ್ಯಾನರ್, ಕಟೌಟ್ಸ್; ಅತ್ಯಾ**ರ ಅಪರಾಧಿಯನ್ನ ಆರಾಧಿಸಿದರೆ ಪಶ್ಚಾತ್ತಾಪಕ್ಕೆಲ್ಲಿದೆ ಅವಕಾಶ!]]></title>
            <link>https://kannada.asianetnews.com/karnataka-districts/prajwal-revanna-birthday-fans-put-up-flexes-in-holenarasipura-despite-rape-conviction/articleshow-rttn085</link>
            <guid isPermaLink="true">https://kannada.asianetnews.com/karnataka-districts/prajwal-revanna-birthday-fans-put-up-flexes-in-holenarasipura-despite-rape-conviction/articleshow-rttn085</guid>
            <pubDate>Wed, 05 Aug 2026 19:26:33 +0530</pubDate>
            <description><![CDATA[&lt;p&gt;ಹಾಸನ ಅತ್ಯಾ**ರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಸನದ ಹೊಳೆನರಸೀಪುರದಲ್ಲಿ ಫ್ಲೆಕ್ಸ್&zwnj;ಗಳನ್ನು ಹಾಕಿ ಆಚರಿಸುತ್ತಿದ್ದಾರೆ. ಅಪರಾಧಿಯೊಬ್ಬನ ಈ ಸಂಭ್ರಮಾಚರಣೆಯು ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಮಾಜದ ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz93b4xhmppm7trb59ff94a4,imgname-prajwal-revanna-banner-hassan-1785938154417.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಆ.05): ಹಾ&lt;/strong&gt;ಸನದಲ್ಲಿ ಅತ್ಯಾ**ರ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಲಾಗುತ್ತಿದೆ. ಪ್ರಜ್ವಲ್ ರೇವಣ್ಣನ ಅಭಿಮಾನಿಗಳು ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಾದ್ಯಂತ ಶುಭಾಶಯ ಕೋರುವ ಬೃಹತ್ ಫ್ಲೆಕ್ಸ್ (Flex) ಹಾಗೂ ಕಟೌಟ್&zwnj;ಗಳನ್ನು ಅಳವಡಿಸಿದ್ದಾರೆ.&lt;/p&gt;&lt;p&gt;ಲೈಂಗಿಕ ದೌರ್ಜನ್ಯ ಮತ್ತು ಅತ್ಯಾ**ರ ಆರೋಪ ಸಾಬೀತಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದರೂ, ಪ್ರಜ್ವಲ್ ರೇವಣ್ಣ ಅವರ ಮೇಲಿನ ಅಭಿಮಾನವನ್ನು ಕಾರ್ಯಕರ್ತರು ಹಾಗೂ ಬೆಂಬಲಿಗರು ಫ್ಲೆಕ್ಸ್ ಹಾಕುವ ಮೂಲಕ ಮೆರೆದಿದ್ದಾರೆ. ಹೊಳೆನರಸೀಪುರ ಪಟ್ಟಣದ ಮುಖ್ಯ ರಸ್ತೆ ಹಾಗೂ ಪ್ರಮುಖ ವೃತ್ತಗಳಲ್ಲಿ 'ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದಿರುವ ಫ್ಲೆಕ್ಸ್&zwnj;ಗಳು ರಾರಾಜಿಸುತ್ತಿದ್ದು, ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.&lt;/p&gt;&lt;h2&gt;&lt;strong&gt;ಪಶ್ಚಾತ್ತಪಕ್ಕೂ ಬಿಡದೇ ಮೆರೆಸುತ್ತಿರುವ ಅಂದಾಭಿಮಾನಿಗಳು:&lt;/strong&gt;&lt;/h2&gt;&lt;p&gt;ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಕೆಟ್ಟ ಕೆಲಸ ಮಾಡಿದರೆ ಅಂಥವರನ್ನು ದೂಷಣೆ ಮಾಡುವ ಮೂಲಕ ಆತನಿಗೆ ಪಶ್ಚಾತ್ತಾಪ ಅನುಭವಿಸುವಂತೆ ಮಾಡಬೇಕು. ಆದರೆ, ಇಲ್ಲಿ ಒಬ್ಬ ಅಪರಾಧಿ ಜೈಲು ಶಿಕ್ಷೆಯಾಗಿ ಮುದ್ದೆ ಮುರಿಯುತ್ತಿದ್ದರೂ, ತಪ್ಪಿತಸ್ಥನನ್ನು ಬೆಂಬಲಿಸಿ ಅಭಿಮಾನಿಗಳ ಸಂಘವನ್ನು ಕಟ್ಟಿಕೊಂಡು ಸಂಭ್ರಮಾಚರಣೆ ಮಾಡುತ್ತಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಶ್ರೀರಾಮನನ್ನು ಪೂಜಿಸುವ ನಾಡಿನಲ್ಲಿ ಒಬ್ಬ ಅಪರಾಧಿಯನ್ನು ಆರಾಧನೆ ಮಾಡುತ್ತಿರುವುದು ಸಮಾಜದ ದಿಕ್ಕು ಎತ್ತ ಸಾಗುತ್ತಿದೆ ಎಂಬುದು ಚಿಂತಕರ ನಿದ್ದೆಗೆಡಿಸಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/prajwal-revanna-birthday-fans-put-up-flexes-in-holenarasipura-despite-rape-conviction/articleshow-rttn085"/>
        </item>
        <item>
            <title><![CDATA[ಚೆನ್ನಮ್ಮ ನಿಧನ ಹಿನ್ನಲೆಯಲ್ಲಿ ಹೊಳೆನರಸೀಪುರದಲ್ಲಿ ಸ್ವಯಂಪ್ರೇರಿತ ಬಂದ್,  ಕಷ್ಟಕ್ಕೆ ಸ್ಪಂದಿಸುತ್ತಿದ್ದ ಅಮ್ಮ]]></title>
            <link>https://kannada.asianetnews.com/karnataka-districts/holenarasipura-shuts-down-to-mourn-former-pm-hd-deve-gowda-wife-chennamma-demise/articleshow-wixg12v</link>
            <guid isPermaLink="true">https://kannada.asianetnews.com/karnataka-districts/holenarasipura-shuts-down-to-mourn-former-pm-hd-deve-gowda-wife-chennamma-demise/articleshow-wixg12v</guid>
            <pubDate>Mon, 20 Jul 2026 08:23:02 +0530</pubDate>
            <description><![CDATA[&lt;p&gt;ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ ಹಿನ್ನಲೆಯಲ್ಲಿ ಹೊಳೆನರಸೀಪುರದಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಚೆನ್ನಮ್ಮ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxyq1ps2fqnj034anx918k32,imgname-holenarasipura-bandh-1784515975970.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.20) &lt;/strong&gt;ಮಾಜಿ ಪ್ರಧಾನಿ ಹೆಚ್&zwnj;ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಪಾರ್ಥಿವ ಶರೀರದ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ರಂಗನಾಥ ಸ್ವಾಮಿ ತಪ್ಪಲು ಜಾಗದಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ ನಡೆಯಲಿದೆ. ಹೊಳೆನರಸಿಪುರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚೆನ್ನಮ್ಮ ನಿಧನ ಹಿನ್ನಲೆಯಲ್ಲಿ ಹೊಳೆನರಸೀಪುರದಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಲಾಗಿದೆ. ವ್ಯಾಪಾರಿಗಳು, ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ತಮ್ಮ ಸಂತಾಪ ಸೂಚಿಸಿದ್ದಾರೆ.&lt;/p&gt;&lt;p&gt;ಹೊಳೆನರಸೀಪುರ ಜನರು ಅಮ್ಮಾ ಎಂದೆ ಕರೆಯುತ್ತಿದ್ದ ಚೆನ್ನಮ್ಮ ಅಗಲಿಕೆಯಿಂದ ತೀವ್ರ ದುಃಖತಪ್ತರಾಗಿದ್ದಾರೆ. ಚೆನ್ನಮ್ಮ ಹೊಳೆನರಸೀಪುರ ಜನರ ಕಷ್ಟ, ಸಮಸ್ಯೆಗಳಿಗೆ ಪರಿಹಾರ ಕೊಡಿಸುತ್ತಿದ್ದರು. ಚೆನ್ನಮ್ಮ ಅವರನ್ನ ಕಳೆದುಕೊಂಡ ಹೊಳೆನರಸೀಪುರ ಜನ ಇದೀಗ ಅಂಗಡಿ ಬಂದ್ ಮಾಡಿ ಬಂದ್ ಆಚರಿಸಿದ್ದಾರೆ. ಈ ಮೂಲಕ ಗೌರವ ನಮನ ಹಾಗೂ ಸಂತಾಪ ಸೂಚಿಸಿದ್ದಾರೆ.&lt;/p&gt;&lt;h2&gt;ಹಾಸನ ತಾಲೂಕಿನ ಶಾಲಾ ಕಾಲೇಜಿಗೆ ರಜೆ&lt;/h2&gt;&lt;p&gt;ಚೆನ್ನಮ್ಮ ನಿಧನ ಹಾಗೂ ಇಂದು ಹೊಳೇನರಸಿಪುರದಲ್ಲಿ ಅಂತ್ಯಕ್ರಿಯೆ ನಡೆಯುವ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು (ಜುಲೈ 20) ರಜೆ ಘೋಷಿಸಲಾಗಿದೆ. ಹಾಸನ ಜಿಲ್ಲಾಧಿಕಾರಿ ಕೆಎಸ್ ಲತಾ ಕುಮಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಭಾನುವಾರವೇ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದರು. ಹೊಳೆನರಸೀಪುರದಲ್ಲಿ ನಡೆಯುವ ಅಂತಿಮ ದರ್ಶನ ಹಾಗೂ ಅಂತಕ್ರಿಯೆಗೆ ಹೆಚ್ಚಿನ ಜನ ಸೇರುತ್ತಿದ್ದಾರೆ.&lt;/p&gt;&lt;h2&gt;ಮಧ್ಯಾಹ್ನ 2 ರಿಂದ 4ರ ಒಳಗೆ ಅಂತ್ಯಕ್ರಿಯೆ&lt;/h2&gt;&lt;p&gt;ಇಂದು ಮಧ್ಯಾಹ್ನ 2 ಗಂಟೆಯ ನಂತರ 4 ಗಂಟೆ ಒಳಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಹೆಚ್&zwnj;ಡಿ ರೇವಣ್ಣ ಹೇಳಿದ್ದಾರೆ. ಪಡುವಲ ಹಿಪ್ಪೆ ಗ್ರಾಮ,ಹಾಗೂ ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ, ಸೇರಿದಂತೆ ಮೂರು ದೇವಸ್ಥಾನಗಳಲ್ಲಿ ಅಭಿಷೇಕ ಮಾಡಿಸಿ ನಂತರ ತೀರ್ಥ ಪ್ರಸಾದ ಚನ್ನಮ್ಮ ಪಾರ್ಥಿವ ಶರೀರಕ್ಕೆ ಪ್ರೋಕ್ಷಣೆ ಮಾಡಲಾಗುತ್ತದೆ. ಚನ್ನಮ್ಮ ಪಾರ್ಥಿವ ಶರೀರ ಹೊಳೆನರಸೀಪುರ ಲಕ್ಷ್ಮಿ ದೇಗುಲದ ಮುಂಭಾಗಕ್ಕೂ ತೆರಳಲಿದೆ. ಚನ್ನಮ್ಮ ದೇವೇಗೌಡರು ವಾಸವಿದ್ದ ಪಡುವಲಹಿಪ್ಪೆ ಸಣ್ಣ ಮನೆ ಬಳಿಗೂ ತೆರಳಲಿದೆ. ನಂತರ ಹರದನಹಳ್ಳಿ(ಕ್ಯಾತನಹಳ್ಳಿ) ಅಂತ್ಯಕ್ರಿಯೆ ಸ್ಥಳಕ್ಕೆ ಬರಲಿದೆ ಎಂದು ರೇವಣ್ಣ ಹೇಳಿದ್ದಾರೆ.&lt;/p&gt;&lt;p&gt;ಜೆಪಿ ನಗರದ ಕಣ್ಣನ್ ಶರ್ಮಾ ಅರ್ಚಕರ ಮಾರ್ಗದರ್ಶನದಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿದೆ. ದಕ್ಷಿಣ ದಿಕ್ಕಿಗೆ ತಲೆ ಇರಿಸಿ ಅಂತ್ಯಕ್ರಿಯೆ ಮಾಡುತ್ತೇವೆ. ಕಿರಿಯ ಮಗ ಅಮ್ಮನ ಅಂತ್ಯಕ್ರಿಯೆ ವಿಧಿ ವಿಧಾನ ಮಾಡುತ್ತಾನೆ. ಎಲ್ಲಾ ಗಂಡುಮಕ್ಕಳು, ಹೆಣ್ಣುಮಕ್ಕಳು ಜೊತೆಯಲ್ಲಿದ್ದು ಕಾರ್ಯ ಮಾಡುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>hassan</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/holenarasipura-shuts-down-to-mourn-former-pm-hd-deve-gowda-wife-chennamma-demise/articleshow-wixg12v"/>
        </item>
        <item>
            <title><![CDATA[ಅಜ್ಜಿ ಅಗಲಿಕೆ ಸುದ್ದಿ ತಿಳಿದು ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ..]]></title>
            <link>https://kannada.asianetnews.com/bengaluru-rural/prajwal-revanna-crying-in-jail-for-his-grand-mother-chennamma-gkn/articleshow-wwur664</link>
            <guid isPermaLink="true">https://kannada.asianetnews.com/bengaluru-rural/prajwal-revanna-crying-in-jail-for-his-grand-mother-chennamma-gkn/articleshow-wwur664</guid>
            <pubDate>Sun, 19 Jul 2026 09:29:02 +0530</pubDate>
            <description><![CDATA[&lt;p&gt;ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿ ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ ಭಾವುಕರಾಗಿದ್ದಾರೆ. ಅಜ್ಜಿಯ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೋರಿ ಅವರು ತುರ್ತು ಪೆರೋಲ್&zwnj;ಗಾಗಿ ಅರ್ಜಿ ಸಲ್ಲಿಸಿದ್ದು, ಜೈಲು ಅಧಿಕಾರಿಗಳ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxw7hvn48jeck3yqq6cbgk2a,imgname-prajwal-revanna-crying-1784432619172.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ನಿ ಚೆನ್ನಮ್ಮ ಅವರು ನಿನ್ನೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಜ್ಜಿಯ ಅಗಲಿಕೆಯ ಸುದ್ದಿ ಕೇಳಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಅಜ್ಜಿಯನ್ನ ನೆನೆದು ಕಣ್ಣೀರು&lt;/strong&gt;&lt;/h2&gt;&lt;p&gt;ಅಜ್ಜಿ ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ತೀವ್ರ ಭಾವುಕರಾಗಿದ್ದಾರೆ ಎನ್ನಲಾಗಿದೆ. ಅಜ್ಜಿಯ ಒಡನಾಟವನ್ನು ನೆನೆದು ಜೈಲಿನ ಕೊಠಡಿಯಲ್ಲಿ ಪ್ರಜ್ವಲ್ ಕಣ್ಣೀರು ಹಾಕಿದ್ದಾರೆ. ಅಜ್ಜಿಯ ಸಾವಿನಿಂದ ತೀವ್ರ ಬೇಸರಗೊಂಡಿರುವ ಅವರು, ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡದೆ ಚಡಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ಅಂತಿಮ ದರ್ಶನಕ್ಕಾಗಿ ಪೆರೋಲ್ ಅರ್ಜಿ&lt;/strong&gt;&lt;/h2&gt;&lt;p&gt;ತಮ್ಮ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಅವರ ಅಂತಿಮ ದರ್ಶನ ಪಡೆಯಲು ಪ್ರಜ್ವಲ್ ರೇವಣ್ಣ ಈಗ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಅಜ್ಜಿಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರಿ ಪ್ರಜ್ವಲ್ ಪರ ವಕೀಲರು ಜೈಲು ಅಧಿಕಾರಿಗಳಿಗೆ ತುರ್ತು ಪೆರೋಲ್ ಅರ್ಜಿಯನ್ನು ಸಲ್ಲಿಸಿದ್ದಾರೆ.&lt;/p&gt;&lt;p&gt;ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಅನ್ಶು ಕುಮಾರ್ ಅವರಿಗೆ ಪೆರೋಲ್ ಕೋರಿ ಅರ್ಜಿ ಸಲ್ಲಿಸಲಾಗಿದೆ. ಜೈಲು ನಿಯಮಾವಳಿಗಳ ಪ್ರಕಾರ ಈ ಅರ್ಜಿಯನ್ನು ಪರಿಶೀಲಿಸಲಿರುವ ಅನ್ಶು ಕುಮಾರ್, ಪ್ರಜ್ವಲ್&zwnj;ಗೆ ಪೆರೋಲ್ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅಧೀಕ್ಷಕರ ನಿರ್ಧಾರದ ಮೇಲೆ ಪ್ರಜ್ವಲ್ ರೇವಣ್ಣ ಅಜ್ಜಿಯ ಅಂತಿಮ ದರ್ಶನ ಪಡೆಯುತ್ತಾರೋ ಇಲ್ಲವೋ ಎಂಬುದು ನಿರ್ಧಾರವಾಗಲಿದೆ.&lt;/p&gt;&lt;p&gt;ಸದ್ಯ ಅಜ್ಜಿಯ ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಪ್ರಜ್ವಲ್ ರೇವಣ್ಣ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ತಂದೆ ಹೆಚ್.ಡಿ. ರೇವಣ್ಣ ಹಾಗೂ ತಾಯಿ ಭವಾನಿ ರೇವಣ್ಣ ಅವರನ್ನೂ ಭೇಟಿಯಾಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಪ್ರಜ್ವಲ್&zwnj;ಗೆ, ಅಜ್ಜಿಯ ಸಾವು ಮತ್ತಷ್ಟು ಆಘಾತ ತಂದಿದೆ.&lt;/p&gt;]]></content:encoded>
            <category>hassan</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-rural/prajwal-revanna-crying-in-jail-for-his-grand-mother-chennamma-gkn/articleshow-wwur664"/>
        </item>
        <item>
            <title><![CDATA[ಬಡವರ ಮಕ್ಕಳು ವಿಮಾನ ಹಾರಿಸೋದಕ್ಕೆ ಬೆಸ್ಟ್ ಚಾನ್ಸ್; ಮೈಸೂರು, ಹಾಸನದಲ್ಲೂ ಸ್ಯಾಟಲೈಟ್ ಫ್ಲೈಟ್ ಟ್ರೈನಿಂಗ್ ಸೆಂಟರ್]]></title>
            <link>https://kannada.asianetnews.com/karnataka-districts/karnataka-govt-plans-to-establish-satellite-base-flight-training-institutes-in-mysuru-and-hassan/articleshow-x4xeho2</link>
            <guid isPermaLink="true">https://kannada.asianetnews.com/karnataka-districts/karnataka-govt-plans-to-establish-satellite-base-flight-training-institutes-in-mysuru-and-hassan/articleshow-x4xeho2</guid>
            <pubDate>Fri, 24 Jul 2026 16:43:31 +0530</pubDate>
            <description><![CDATA[ರಾಜ್ಯ ಸರ್ಕಾರವು ಪೈಲಟ್ ಆಗುವ ಕನಸು ಹೊತ್ತ ಯುವಕ-ಯುವತಿಯರಿಗಾಗಿ ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಯನ್ನು ವಿಸ್ತರಿಸಲು ಮುಂದಾಗಿದೆ. ಈ ಯೋಜನೆಯ ಭಾಗವಾಗಿ ಮೈಸೂರು ಹಾಗೂ ಹಾಸನದಲ್ಲಿ 'ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ'ಗಳನ್ನು ಆರಂಭಿಸುವ ಮೂಲಕ, ಹೆಚ್ಚುತ್ತಿರುವ ಪೈಲಟ್&zwnj;ಗಳ ಬೇಡಿಕೆಯನ್ನು ಪೂರೈಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಯೋಜಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky9x7wqcvsxe1na53ztprkf6,imgname-mysuru-and-hassan-satellite-base-flight-training-institutes-1784891568875.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.24): ಆ&lt;/strong&gt;ಕಾಶದಲ್ಲಿ ವಿಮಾನ ಹಾರಿಸಬೇಕು, ಪೈಲಟ್ (Pilot) ಆಗಬೇಕು ಎಂಬ ಕನಸು ಹೊತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಲ್ಲಿರುವ (Bengaluru) ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಯ (Jakkur Government Flying Training School) ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿರುವ ಸರ್ಕಾರ, ಮೈಸೂರು (Mysuru) ಹಾಗೂ ಹಾಸನದಲ್ಲಿ (Hassan) 'ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ' (Satellite Base Training Institute) ಆರಂಭಿಸಲು ಚಿಂತನೆ ನಡೆಸಿದೆ.&lt;/p&gt;&lt;p&gt;ಈ ಕುರಿತು ಜಕ್ಕೂರು ಏರೋಡ್ರೋಮ್&zwnj;ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಸ್ಯಾಟಲೈಟ್ ಬೇಸ್ ತರಬೇತಿ?&lt;/strong&gt;&lt;/h2&gt;&lt;p&gt;ಮೈಸೂರಿನಲ್ಲಿ ಸ್ಯಾಟಲೈಟ್ ಬೇಸ್ ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವಿದ್ದು, ಪರಿಶೀಲನೆ ನಡೆಯುತ್ತಿದೆ. ತರಬೇತಿಯ ಅಂಗವಾಗಿ ವಿಮಾನ ಇಲ್ಲಿಂದ ಟೇಕ್ ಆಫ್ (Take-off) ಆದರೆ, ಮೈಸೂರಿನಲ್ಲಿ ಲ್ಯಾಂಡ್ ಆಗುತ್ತದೆ. ಇದನ್ನು ವಿಮಾನಯಾನ ಭಾಷೆಯಲ್ಲಿ 'ಟಚ್ ಆ್ಯಂಡ್ ಗೋ' (Touch and Go) ಎನ್ನಲಾಗುತ್ತದೆ. ಮೈಸೂರಿನಲ್ಲಿ ಇದಕ್ಕೆ ಪೂರಕ ವಾತಾವರಣವಿದ್ದು, ಇದೇ ಮಾದರಿಯಲ್ಲಿ ಹಾಸನದಲ್ಲೂ ಸ್ಯಾಟಲೈಟ್ ಬೇಸ್ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.&lt;/p&gt;&lt;h2&gt;&lt;strong&gt;ಇಲಾಖೆ ಹೆಸರು ಬದಲಾವಣೆ ಹಾಗೂ ಹೊಸ ಕೋರ್ಸ್&zwnj;ಗಳು!&lt;/strong&gt;&lt;/h2&gt;&lt;p&gt;ಪ್ರಸ್ತುತ ಇರುವ 'ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ'ಯನ್ನು, 'ಕ್ರೀಡಾ, ಯುವ ಸಬಲೀಕರಣ ಮತ್ತು ನಾಗರಿಕ ವಿಮಾನಯಾನ ಇಲಾಖೆ' (Civil Aviation Department) ಎಂದು ಮರುನಾಮಕರಣ ಮಾಡಲು ಕ್ಯಾಬಿನೆಟ್&zwnj;ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಇನ್ನು ಮೆಟ್ರೋಪಾಲಿಟನ್ ನಗರಗಳಲ್ಲಿ (Metropolitan cities) ವಿಮಾನ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ದಟ್ಟಣೆ ಹೆಚ್ಚಿರುವುದರಿಂದ, ವರ್ಟಿಕಲ್ ಟೇಕ್ ಆಫ್ (Vertical take-off) ತರಬೇತಿ ನೀಡುವ ಬಗ್ಗೆ ಚಿಂತನೆ ನಡೆದಿದೆ. ಜೊತೆಗೆ ಹೊಸದಾಗಿ 'ಸಿವಿಲ್ ಏರ್ ಕ್ರಾಫ್ಟ್ ಮೇಂಟೆನೆನ್ಸ್ ಅಕಾಡೆಮಿ' (Civil Aircraft Maintenance Academy) ಸ್ಥಾಪಿಸುವ ಉದ್ದೇಶವೂ ಇದೆ.&lt;/p&gt;&lt;h2&gt;&lt;strong&gt;ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಅಪ್&zwnj;ಡೇಟ್ಸ್:&lt;/strong&gt;&lt;/h2&gt;&lt;p&gt;1940ರಲ್ಲಿ ಆರಂಭವಾದ ಜಕ್ಕೂರು ತರಬೇತಿ ಶಾಲೆಯು ಸಾವಿರಾರು ಪೈಲಟ್&zwnj;ಗಳನ್ನು ಸೃಷ್ಟಿಸಿದೆ. ಇತ್ತೀಚೆಗೆ ರದ್ದಾಗಿದ್ದ ಶಾಲೆಯ ಲೈಸೆನ್ಸ್ ಅನ್ನು ಡಿಜಿಸಿಎ (DGCA - Directorate General of Civil Aviation) ಮುಂದಿನ ಐದು ವರ್ಷಗಳ ಕಾಲ ರಿನಿವಲ್ (License Renewal) ಮಾಡಿದೆ. ಪ್ರಸ್ತುತ ಇಲ್ಲಿ 5 ಏರ್&zwnj;ಕ್ರಾಫ್ಟ್&zwnj;ಗಳಿದ್ದು (Aircrafts), ಹೊಸದಾಗಿ ಮತ್ತೇ 2 ವಿಮಾನಗಳನ್ನು ಖರೀದಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.&lt;/p&gt;&lt;h2&gt;&lt;strong&gt;ಉದ್ಯೋಗಾವಕಾಶ ಮತ್ತು ತರಬೇತಿ ಶುಲ್ಕ :&lt;/strong&gt;&lt;/h2&gt;&lt;p&gt;ಭಾರತದಲ್ಲಿ ಇಂಡಿಗೋ (IndiGo) ಸೇರಿದಂತೆ ಹಲವು ಸಂಸ್ಥೆಗಳು ಸಾವಿರಾರು ಹೊಸ ವಿಮಾನಗಳನ್ನು ಖರೀದಿಸುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ದೇಶಾದ್ಯಂತ ಸುಮಾರು 35 ಸಾವಿರ ಪೈಲಟ್&zwnj;ಗಳ ಅಗತ್ಯವಿದೆ. ಹೀಗಾಗಿ ಇಲ್ಲಿ ತರಬೇತಿ ಪಡೆದವರಿಗೆ ನೂರಕ್ಕೆ ನೂರರಷ್ಟು ಉದ್ಯೋಗ (Job opportunities) ಗ್ಯಾರಂಟಿ.&lt;/p&gt;&lt;p&gt;ಪ್ರೈವೇಟ್ ಪೈಲಟ್ ಲೈಸೆನ್ಸ್ (PPL - Private Pilot License): 40 ಗಂಟೆಗಳ ಹಾರಾಟದ ತರಬೇತಿ ಅಗತ್ಯ. ಕನ್ನಡಿಗರಿಗೆ ಶುಲ್ಕ 10 ಲಕ್ಷ ರೂ. ಇದ್ದರೆ, ಹೊರಗಿನವರಿಗೆ 15 ಲಕ್ಷ ರೂ. ಇರಲಿದೆ.&lt;/p&gt;&lt;p&gt;ವಾಣಿಜ್ಯ ಪೈಲಟ್ ಲೈಸೆನ್ಸ್ (CPL - Commercial Pilot License): 180 ಗಂಟೆಗಳ ಹಾರಾಟದ ತರಬೇತಿ ಅಗತ್ಯ. ಕರ್ನಾಟಕದವರಿಗೆ 37 ಲಕ್ಷ ರೂ. ಮತ್ತು ಹೊರಗಿನವರಿಗೆ 42 ಲಕ್ಷ ರೂ. ಶುಲ್ಕ ನಿಗದಿಪಡಿಸಲಾಗಿದೆ.&lt;/p&gt;&lt;h2&gt;&lt;strong&gt;ರನ್&zwnj;ವೇ ವಿಸ್ತರಣೆ- ಬಿಲ್ಡರ್&zwnj;ಗಳಿಗೆ ಎಚ್ಚರಿಕೆ!&lt;/strong&gt;&lt;/h2&gt;&lt;p&gt;ಜಕ್ಕೂರು ಶಾಲೆಯ ರನ್&zwnj;ವೇ (Runway) ಪ್ರಸ್ತುತ 954 ಮೀಟರ್ ಇದ್ದು, ಇದನ್ನು 160 ಮೀಟರ್ ಹೆಚ್ಚಿಸಲು 10 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಸ್ತಾವನೆ ಇದೆ. &quot;ಶಾಲೆಯ ಸುತ್ತಮುತ್ತಲಿನ 2.7 ಕಿ.ಮೀ ವ್ಯಾಪ್ತಿಯಲ್ಲಿ 45 ಮೀಟರ್&zwnj;ಗಿಂತ ಎತ್ತರದ ಕಟ್ಟಡಗಳನ್ನು (High-rise buildings) ನಿರ್ಮಿಸುವಂತಿಲ್ಲ. ನಿಯಮ ಉಲ್ಲಂಘನೆಗೆ ನಾವು ಆಸ್ಪದ ನೀಡುವುದಿಲ್ಲ. ಎಷ್ಟೇ ಒತ್ತಡ ಬಂದರೂ, ಸಾವಿರಾರು ಜನರಿಗೆ ಉದ್ಯೋಗ ನೀಡುವ ಈ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ&quot; ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-govt-plans-to-establish-satellite-base-flight-training-institutes-in-mysuru-and-hassan/articleshow-x4xeho2"/>
        </item>
        <item>
            <title><![CDATA[ಪತ್ನಿ ಚೆನ್ನಮ್ಮ ಸಾವು, ಆಸ್ಪತ್ರೆ ಎದುರಲ್ಲೇ ಕಣ್ಣೀರಿಟ್ಟು ಮೌನವಾದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ]]></title>
            <link>https://kannada.asianetnews.com/bengaluru-urban/hd-deve-gowda-weeps-at-hospital-wife-chennamma-death-pm-modi-call-san/articleshow-z4f76pt</link>
            <guid isPermaLink="true">https://kannada.asianetnews.com/bengaluru-urban/hd-deve-gowda-weeps-at-hospital-wife-chennamma-death-pm-modi-call-san/articleshow-z4f76pt</guid>
            <pubDate>Sat, 18 Jul 2026 21:39:58 +0530</pubDate>
            <description><![CDATA[ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು. 72 ವರ್ಷಗಳ ಕಾಲ ದೇವೇಗೌಡರ ನೆರಳಾಗಿದ್ದ ಪತ್ನಿಯ ಅಗಲಿಕೆಯಿಂದ ದೇವೇಗೌಡರು ಮೂಕವಿಸ್ಮಿತರಾಗಿ ಕಣ್ಣೀರು ಹಾಕಿದರು. ಕುಟುಂಬದ ಸದಸ್ಯರು ಕೂಡ ದುಃಖದಲ್ಲಿ ಮುಳುಗಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kxtzs0jt2jth7r5zgxze7kmq,imgname-hd-devegowda-on-chennamma-1784390910554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.18): &lt;/strong&gt;ಎಲ್ಲೇ ಹೋಗಲಿ ದೇವೇಗೌಡರ ನೆರಳಿನಂತೆ ಅವರೊಂದಿಗೆ ಹೋಗುತ್ತಿದ್ದ ಚೆನ್ನಮ್ಮ ಶನಿವಾರ ವಿಧಿವಶರಾಗಿದ್ದಾರೆ. 72 ವರ್ಷಗಳ ಕಾಲ ಸಂಸಾರದ ನೊಗ ಹೊತ್ತುಕೊಂಡು, ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಆಡಿ ಬೆಳೆಸಿದ್ದ ಚೆನ್ನಮ್ಮ ಶನಿವಾರ ಸಂಜೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಸ್ವತಃ ಎಚ್&zwnj;ಡಿ ಕುಮಾರಸ್ವಾಮಿ ಹೇಳಿರುವಂತೆ, ಕಳೆದ ಒಂದು ವರ್ಷದಿಂದ ಚೆನ್ನಮ್ಮ ಅವರಿಗೆ ಅನಾರೋಗ್ಯ ಬಾಧಿಸುತ್ತಿತ್ತು. ಆಸ್ಪತ್ರೆಗೆ ಹೋಗುವುದು ಬರುವುದು ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಆಸ್ಪತ್ರೆಗೆ ಹೋದವರು ಬರಲೇ ಇಲ್ಲ. ತಾಯಿ ಚೇತರಿಕೆ ಕಂಡು ವಾಪಾಸ್ಸು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ, ಪತ್ನಿ ವಾಪಾಸ್ಸು ಬರ್ತಾಳೆ ಅಂತಾ ಕಾದಿಡ್ಡ ದೊಡ್ಡಗೌಡರಿಗೆ ಸಂಜೆಯ ವೇಳೆಗೆ ಆಘಾತ ಎದುರಾಗಿತ್ತು.&lt;/p&gt;&lt;p&gt;ಇಳಿವಯಸ್ಸಲ್ಲಿ ಪತ್ನಿಯನ್ನು ಕಳೆದುಕೊಂಡು ದೇವೇಗೌಡರ ದೊಡ್ಡ ದುಃಖ ಹೇಗಿರಬಹುದು ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇತ್ತು. ಸಂಜೆಯ ವೇಳೆಗೆ ಆಸ್ಪತ್ರೆಯ ಎಲ್ಲಾ ಕಾರ್ಯಗಳನ್ನು ಮುಗಿಸಿಕೊಂಡು ಪಾರ್ಥಿವ ಶರೀರವನ್ನು ಆಂಬುಲೆನ್ಸ್&zwnj;ನಲ್ಲಿ ಇಡುವ ಮುನ್ನ ದೇವೇಗೌಡರು ಆಸ್ಪತ್ರೆಯ ಮುಂಭಾಗದಿಂದ ವೀಲ್&zwnj;ಚೇರ್&zwnj;ನಲ್ಲಿ ಹೊರಬಂದರು. ಈ ವೇಳೆಗಾಗಲೇ ಪೊಲೀಸರು, ಕಾರ್ಯಕರ್ತರು ಹಾಗೂ ಮಾಧ್ಯಮದವರು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ದೇವೇಗೌಡರ ಮುಖವನ್ನು ಸೆರೆ ಹಿಡಿಯುವ ಇರಾದೆಯಲ್ಲಿ ಎಲ್ಲರೂ ಇದ್ದರು.&lt;/p&gt;&lt;p&gt;ಆರಂಭದಲ್ಲಿ ಮಾಧ್ಯಮದ ಕ್ಯಾಮೆರಾವನ್ನು ಆರಾಮವಾಗಿಯೇ ಎದುರಿಸಿದ ದೇವೇಗೌಡರ ಮುಖದಲ್ಲಿ ದುಃಖ ಇರುವುದು ಕಾಣುತ್ತಿತ್ತು. ಆದಷ್ಟು ದುಃಖವನ್ನು ತಡೆಹಿಡಿದು ನಗುವ ಪ್ರಯತ್ನ ಮಾಡಿದರಾದರೂ, ಸಾಧ್ಯವಾಗಲಿಲ್ಲ. ಕ್ಯಾಮೆರಾ ಲೆನ್ಸ್&zwnj;ಗಳು ದೇವೇಗೌಡರ ಮುಖವನ್ನು ಜೂಮ್&zwnj; ಮಾಡುತ್ತಿದ್ದಂತೆ ದೊಡ್ಡಗೌಡರ ಕಣ್ಣಾಲಿಗಳು ತೇವವಾಗಿದ್ದು ಕಂಡಿತ್ತು.&lt;/p&gt;&lt;p&gt;ಅದಾದ ಕೆಲವೇ ಹೊತ್ತಲ್ಲಿ ಪತ್ನಿ ನೆನಪು ಉಮ್ಮಳಿಸಿ ಬಂದಂತಾಗಿ ಕಣ್ಣಂಚಲ್ಲಿ ತುಂಬಿದ್ದ ನೀರು ಹೊರಬಂದಿತು. ಅದನ್ನು ಒರೆಸಿಕೊಳ್ಳುವ ಕೆಲಸಕ್ಕೂ ದೇವೇಗೌಡರು ಇಳಿಯಲಿಲ್ಲ. ಕೊನೆಗೆ ಅವರು ಹೊರಡುವ ಕಾರ್&zwnj; ಬಂದಾಗ, ಬಲಗೈಯಿಂದ ಕಣ್ಣೀರು ಒರೆಸಿಕೊಂಡು ಕಾರ್&zwnj; ಹತ್ತಿದರು. ಎಲ್ಲಿಯೂ ಅವರು ಒಂದಕ್ಷರ ಕೂಡ ಮಾತನಾಡದೇ ಮೌನವಾಗಿದ್ದರು.&lt;/p&gt;&lt;h2&gt;&lt;strong&gt;ರೇವಣ್ಣ, ನಿಖಿಲ್ ಕುಮಾರಸ್ವಾಮಿ ಕಣ್ಣೀರು&lt;/strong&gt;&lt;/h2&gt;&lt;p&gt;ಆಸ್ಪತ್ರೆಯಿಂದ ಎಚ್&zwnj;ಡಿ ರೇವಣ್ಣ ಹಾಗೂ ನಿಖಿಲ್&zwnj; ಕುಮಾರಸ್ವಾಮಿ ಹೊರಬರುವ ವೇಳೆಗೆ ಕಣ್ಣೀರು ಹಾಕುತ್ತಿದ್ದರು. ತಾಯಿಯ ಪಾರ್ಥೀವವನ್ನು ಕಂಡು ರೇವಣ್ಣ ಅತೀವ ಭಾವುಕರಾಗಿದ್ದರು. ಭಾವನಿ ರೇವಣ್ಣ ಸೇರಿದಂತೆ ಕುಟುಂಬದವರು ಮೃತದೇಹ ಶಿಫ್ಟ್&zwnj; ಮಾಡಿದ ಆಂಬುಲೆನ್ಸ್&zwnj;ನಲ್ಲಿಯೇ ಪ್ರಯಾಣ ಮಾಡಿದರೆ, ದೇವೇಗೌಡರು ಕಾರ್&zwnj;ನಲ್ಲಿ ಇದನ್ನು ಹಿಂಬಾಲಿಸಿದರು.&lt;/p&gt;&lt;h2&gt;&lt;strong&gt;ಪ್ರಧಾನಿ ಮೋದಿ ಕರೆ&lt;/strong&gt;&lt;/h2&gt;&lt;p&gt;ದೇವೇಗೌಡರ ಪತ್ನಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>hassan</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/hd-deve-gowda-weeps-at-hospital-wife-chennamma-death-pm-modi-call-san/articleshow-z4f76pt"/>
        </item>
        <item>
            <title><![CDATA[ತನ್ನಿಚ್ಚೆಯಂತೆಯೇ ರಂಗನಾಥನ ತಪ್ಪಲಲ್ಲಿ ಮಣ್ಣಾದ ಚೆನ್ನಮ್ಮ, ಆಕೆ ಅನ್ನಪೂರ್ಣೆ ನಗುತ್ತಲೇ ವಿದಾಯ ಹೇಳಿದ್ದಾಳೆ: ದೇವೇಗೌಡ]]></title>
            <link>https://kannada.asianetnews.com/state/chennamma-funeral-husband-hd-devegowda-and-son-hd-kumaraswamy-emotional-speech-buried-with-state-honors-in-hassan-gdp/articleshow-zot0om2</link>
            <guid isPermaLink="true">https://kannada.asianetnews.com/state/chennamma-funeral-husband-hd-devegowda-and-son-hd-kumaraswamy-emotional-speech-buried-with-state-honors-in-hassan-gdp/articleshow-zot0om2</guid>
            <pubDate>Mon, 20 Jul 2026 18:18:12 +0530</pubDate>
            <description><![CDATA[ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯು ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತಮ್ಮ ಪತ್ನಿ 'ಅನ್ನಪೂರ್ಣೆ' ಎಂದು ಭಾವುಕರಾಗಿ ಸ್ಮರಿಸಿದ ದೇವೇಗೌಡರು, ಅವರ ಯಶಸ್ಸಿನ ಹಿಂದಿನ ಶಕ್ತಿಯನ್ನು ಕೊಂಡಾಡಿದರು. ಕುಟುಂಬಸ್ಥರು, ರಾಜಕೀಯ ಗಣ್ಯರು ಹಾಗೂ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು.]]></description>
            <media:content url="https://static.asianetnews.com/images/w-1280,h-720,format-jpg,imgid-01kxyjg9we215yna5vxtyhz5jd,imgname-tearful-goodbye-to-chennamma-1784511211385.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಹೊಳೆನರಸೀಪುರ): &lt;/strong&gt;ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ, ಸರಳತೆಯ ಸಾಕಾರಮೂರ್ತಿ ಶ್ರೀಮತಿ ಚೆನ್ನಮ್ಮ &amp;nbsp;ದೇವೇಗೌಡ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಬಳಿಯ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು. ಈ ಮೂಲಕ ಚೆನ್ನಮ್ಮ ಮರಳಿ ಭೂ ತಾಯಿ ಒಡಲು ಸೇರಿದರು. ಅಂತಿಮ ಸಂಸ್ಕಾರದ ವೇಳೆ 4 ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ನೆಂಟರು, ಕುಟುಂಬಸ್ಥರು. ರಾಜಕೀಯ ನಾಯಕರು ಸೇರಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಊರ ಮತ್ತು ಪರವೂರು ಜನ ಜಾತಿ ಬೇದವೆನ್ನದೆ ನೆರೆದಿದ್ದರು. ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಪಾರ್ಥಿವ ಶರೀರವನ್ನು ತರುವಾಗಲೂ ಮಾರ್ಗದುದ್ದಕ್ಕೂ ಸಹಸ್ರಾರು ಅಭಿಮಾನಿಗಳು ಭಾವುಕರಾಗಿ ತಮ್ಮ ನೆಚ್ಚಿನ 'ಅಮ್ಮ'ನಿಗೆ ಅಂತಿಮ ನಮನ ಸಲ್ಲಿಸಿದರು.&lt;/p&gt;&lt;h2&gt;&quot;ನನ್ನ ಹೆಂಡತಿ ಅನ್ನಪೂರ್ಣೆ, ಆಕೆ ನಗುನಗುತ್ತಲೇ ವಿದಾಯ ಹೇಳಿದ್ದಾಳೆ&quot; - ಎಚ್.ಡಿ. ದೇವೇಗೌಡ&lt;/h2&gt;&lt;p&gt;ಅಂತ್ಯಕ್ರಿಯೆಯ ವಿಧಿವಿಧಾನಗಳ ಬಳಿಕ ಭಾವುಕರಾಗಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ತಮ್ಮ ಸುದೀರ್ಘ 72 ವರ್ಷಗಳ ದಾಂಪತ್ಯದ ಒಡನಾಟ ಹಾಗೂ ಪತ್ನಿಯ ಮೌನ ಹೋರಾಟವನ್ನು ನೆನೆದು ಕಣ್ಣೀರು ಹಾಕಿದರು. ಹರದನಹಳ್ಳಿ ಬೆಟ್ಟದ ರಂಗನಾಥಸ್ವಾಮಿಯ ಆಶೀರ್ವಾದದಿಂದ ನಾನು ದೇಶದ ಪ್ರಧಾನಮಂತ್ರಿಯಾಗಲು ಸಾಧ್ಯವಾಯಿತು. ಆ ಉನ್ನತ ಸ್ಥಾನದ ಯಶಸ್ಸಿನ ಹಿಂದೆ ನನ್ನ ಅಗಲಿ ಹೋಗಿರುವ ಹೆಂಡತಿ ಚೆನ್ನಮ್ಮಳ ಶ್ರಮ ಹಾಗೂ ತ್ಯಾಗವೂ ಅಡಗಿದೆ. ನನ್ನ ಹೆಂಡತಿ ಅನ್ನಪೂರ್ಣೆ. ನನ್ನ ಶ್ರೀಮತಿ ಆತ್ಮಕ್ಕೆ ಶಾಂತಿ ಇದೆ. ನಗು ನಗುತಾ ಹೋಗ್ತಾರೆ. ನನ್ನ ಮಕ್ಕಳು ಮತ್ತು ಅಳಿಯಂದಿರ ಇಚ್ಛೆಯಂತೆ ಅವಳ ನೆನಪು ಸದಾ ಹಸಿರಾಗಿರಲು ಇಲ್ಲಿಯೇ ಸಮಾಧಿ ಮಾಡಲಾಗುತ್ತಿದೆ. ಅವಳ ಆತ್ಮಕ್ಕೆ ಖಂಡಿತ ಶಾಂತಿ ಸಿಗುತ್ತದೆ. 11ನೇ ದಿನದ ಕಾರ್ಯವನ್ನು ಎಲ್ಲರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಿದ್ದೇವೆ. ಪ್ರಕೃತಿ ಸಹಕಾರ ಮಾಡಬೇಕು. ಮುಂದಿನ ಎಲ್ಲ ಕಾರ್ಯಗಳನ್ನು ರಮೇಶ್ ಅವರು ನೋಡಿಕೊಳ್ಳಲಿದ್ದಾರೆ ಎಂದು ಗದ್ಗದಿತರಾಗಿ ನುಡಿದರು.&lt;/p&gt;&lt;h2&gt;&quot;ನಮಗೆ ಮಾತ್ರವಲ್ಲ, ಇಡೀ ನಾಡಿಗೆ ಅವಳು ಅಮ್ಮ&quot; - ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ&lt;/h2&gt;&lt;p&gt;ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರವನ್ನು ಕಂಡು ಭಾವುಕರಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಹಾಗೂ ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಮಧ್ಯರಾತ್ರಿಯಿಂದ ಹಿಡಿದು ಮುಂಜಾನೆಯವರೆಗೂ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಅಮ್ಮನ ದರ್ಶನ ಪಡೆದಿದ್ದಾರೆ. ನಮ್ಮ ಕುಟುಂಬಕ್ಕೆ ಅಮ್ಮ ಅಲ್ಲ, ಎಲ್ಲರಿಗೂ ಅಮ್ಮ ಎಂದು ಭಾವಿಸಿ ಬಂದಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ರಾಜ್ಯ ಸರ್ಕಾರವು ಸರ್ಕಾರಿ ಗೌರವ ಸಲ್ಲಿಕೆ ಮಾಡಿದೆ. ರಾಜ್ಯ ಸರ್ಕಾರಕ್ಕೂ ವಂದನೆ ಸಲ್ಲಿಸುತ್ತೇನೆ. ನಮ್ಮ ತಂದೆ ತಾಯಿ ಬದುಕು ಎಷ್ಟು ಆದರ್ಶ ವಾಗಿತ್ತು ಎಂಬುದನ್ನು ಮಾಧ್ಯಮಗಳು ತೋರಿಸಿವೆ. ಎಲ್ಲಾ ಮಾಧ್ಯಮಗಳಿಗೂ ಧನ್ಯವಾದ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅಂತಿಮ ವಿಧಿ ವಿಧಾನಗಳ ಸಮಯದಲ್ಲಿ ಹೇಳಿಕೆ ನೀಡಿದರು.&lt;/p&gt;&lt;p&gt;ಪಕ್ಷಾತೀತ ನಮನ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಹೊತ್ತ ವಾಹನವು ಸಾಗಿದ ರಾಷ್ಟ್ರೀಯ ಹೆದ್ದಾರಿಯ ದಾರಿಯುದ್ದಕ್ಕೂ ಭಾರಿ ಜನಸ್ತೋಮ ಜಮಾಯಿಸಿತ್ತು. ನೆಲಮಂಗಲ, ಕುಣಿಗಲ್ ವ್ಯಾಪ್ತಿಯ ನಾಗಮಂಗಲ, ಬೆಳ್ಳೂರು ಕ್ರಾಸ್ ಹಾಗೂ ಹಾಸನ ಜಿಲ್ಲೆಯ ಗಡಿಯಾದ ಹಿರಿಸಾವೆ ಸೇರಿದಂತೆ ಹಲವೆಡೆ ಅಭಿಮಾನಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಂಬನಿ ಮಿಡಿದರು.ದೇವೇಗೌಡರ ಕಾರನ್ನು ಸುತ್ತುವರಿದ ಅಭಿಮಾನಿಗಳು ಮತ್ತು ಮಹಿಳೆಯರು ತೀವ್ರ ಭಾವುಕರಾಗಿ ಮುಖಂಡರಿಗೆ ಸಾಂತ್ವನ ಹೇಳಿದರು. ಪಕ್ಷದ ಭೇದ-ಭಾವ ಮರೆತು ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಹೊಳೆನರಸೀಪುರಕ್ಕೆ ಧಾವಿಸಿ ಬಂದು ಚೆನ್ನಮ್ಮ &amp;nbsp;ಅವರಿಗೆ ಅಂತಿಮ ನಮನ ಸಲ್ಲಿಸುವ ಮೂಲಕ ನಾಡಿನ ಹಿರಿಯ ಚೇತನಕ್ಕೆ ಗೌರವ ಸೂಚಿಸಿದರು. ಕೌಟುಂಬಿಕ ಧಾರ್ಮಿಕ ವಿಧಿವಿಧಾನಗಳ ನಂತರ ಅರ್ಚಕರ ಮಾರ್ಗದರ್ಶನದಲ್ಲಿ ಚೆನ್ನಮ್ಮ &amp;nbsp;ಅವರ ಅಂತ್ಯಕ್ರಿಯೆಯ ಮಹಾ ಪೂಜೆ ನೆರವೇರಿತು. ಆಡಂಬರವಿಲ್ಲದೆ ಬದುಕಿದ 'ದೊಡ್ಡಗೌಡರ ಮನೆ ಯಜಮಾನಿ' ಮಣ್ಣಿನ ಮಗಳಾಗಿ ಹಾಸನದ ಮಣ್ಣಿನಲ್ಲಿಯೇ ಲೀನವಾದರು.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/state/chennamma-funeral-husband-hd-devegowda-and-son-hd-kumaraswamy-emotional-speech-buried-with-state-honors-in-hassan-gdp/articleshow-zot0om2"/>
        </item>
    </channel>
</rss>
