<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 15 Sep 2026 13:05:41 +0530</lastBuildDate>
        <atom:link href="https://kannada.asianetnews.com/rss/hassan" rel="self" type="application/rss+xml"/>
        <item>
            <title><![CDATA[ರಾತ್ರಿ ಶುಂಠಿ ಬೆಳೆಗೆ ನೀರು ಹಾಯಿಸಲು ಹೋದವನ ಶವ ಪತ್ತೆ! ತನಿಖೆ ವೇಳೆ  ಪತ್ನಿಯ  ಹಖೀಖತ್ ಬಯಲು!]]></title>
            <link>https://kannada.asianetnews.com/karnataka-districts/arasikere-mohan-death-case-crime-committed-by-his-own-wife-gandasi-police-arrest-the-accused-rav/articleshow-1iwq85e</link>
            <guid isPermaLink="true">https://kannada.asianetnews.com/karnataka-districts/arasikere-mohan-death-case-crime-committed-by-his-own-wife-gandasi-police-arrest-the-accused-rav/articleshow-1iwq85e</guid>
            <pubDate>Thu, 10 Sep 2026 06:55:58 +0530</pubDate>
            <description><![CDATA[ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಅರಸೀಕೆರೆಯ ವ್ಯಕ್ತಿಯೊಬ್ಬನನ್ನು ಕಬ್ಬಿಣದ ರಾಡ್&zwnj;ನಿಂದ ಹೊಡೆದು ಕೊಲೆ ಮಾಡಲಾಗಿದೆ. ಈ ಪ್ರಕರಣವನ್ನು ಭೇದಿಸಿರುವ ಗಂಡಸಿ ಪೊಲೀಸರು, ಮೃತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24epzdanc52mv4yec65cdzb,imgname-arasikere-mohan-death-case-1789003529642.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅರಸೀಕೆರೆ (ಸೆ.10): &lt;/strong&gt;ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕಬ್ಬಿಣದ ರಾಡ್&zwnj;ನಿಂದ ಹೊಡೆದು ಕೊ ಲೆ ಮಾಡಿದ್ದ ಪ್ರಕರಣವನ್ನು ಗಂಡಸಿ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;ಶುಂಠಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮೋಹನ್&lt;/h2&gt;&lt;p&gt;ಅರಸೀಕೆರೆ ಗ್ರಾಮಾಂತರ ವ್ಯಾಪ್ತಿಯ ಬಸವನಟ್ಟಿ ಗ್ರಾಮದ ನಿವಾಸಿ ಚೋತ ಬೋವಿ ಅವರ ಪುತ್ರ ಮೋಹನ್ ಕೊಲೆಯಾದ ವ್ಯಕ್ತಿ. ಮೋಹನ್ ಅವರು ಬಸವೇಶ್ವರ ನಗರದ ರಂಗಪ್ಪ ಎಂಬುವರ ಜಮೀನಿನಲ್ಲಿ ಶುಂಠಿ ಬೆಳೆ ಬೆಳೆದಿದ್ದರು. ಪ್ರತಿದಿನ ರಾತ್ರಿ ಜಮೀನಿಗೆ ತೆರಳಿ ನೀರು ಹಾಯಿಸುತ್ತಿದ್ದರು. ಅದೇ ರೀತಿ ಸೆಪ್ಟೆಂಬರ್ 4ರಂದು ರಾತ್ರಿ ಸುಮಾರು 9 ಗಂಟೆಗೆ ಮನೆಯಿಂದ ಜಮೀನಿನತ್ತ ತೆರಳಿದ್ದ ಮೋಹನ್, ರಾತ್ರಿ 9.45ರ ವೇಳೆಗೆ ಜಮೀನಿನ ಸಮೀಪ ತಲೆಗೆ ತೀವ್ರವಾಗಿ ಹೊಡೆದ ಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಕುರಿತು ಮೋಹನ್ ಅವರ ಪತ್ನಿ ಜಯಲಕ್ಷ್ಮಿ ಗಂಡಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪೊಲೀಸರು ಮೃತದೇಹವನ್ನು ಹಾಸನದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ವಿಧಿವಿಜ್ಞಾನ ತಜ್ಞರ ತಂಡದೊಂದಿಗೆ ಸ್ಥಳ ಮಹಜರು ನಡೆಸಿ, ವಿವಿಧ ಸಾಕ್ಷ್ಯ ಹಾಗೂ ಮಾದರಿಗಳನ್ನು ಸಂಗ್ರಹಿಸಿದ್ದರು.&lt;/p&gt;&lt;h3&gt;ಪತ್ನಿ ಮೇಲೆ ಅನುಮಾನ ಮೋಹನ್ ಸಹೋದರನಿಗೆ&lt;/h3&gt;&lt;p&gt;ಈ ನಡುವೆ ಸೆಪ್ಟೆಂಬರ್ 7ರಂದು ಮೋಹನ್ ಅವರ ಸಹೋದರ ಗಂಡಸಿ ಪೊಲೀಸ್ ಠಾಣೆಗೆ ಮತ್ತೊಂದು ದೂರು ಸಲ್ಲಿಸಿದ್ದರು. ಮೋಹನ್ ಅವರ ಪತ್ನಿ ಜಯಲಕ್ಷ್ಮಿಗೆ ಧನಂಜಯಮೂರ್ತಿ ಎಂಬುವರೊಂದಿಗೆ ಅಕ್ರಮ ಸಂಬಂಧವಿತ್ತು ಎಂಬ ಅನುಮಾನ ಹಾಗೂ ಈ ವಿಚಾರವಾಗಿ ಧನಂಜಯಮೂರ್ತಿ ಮತ್ತು ಆತನ ಸ್ನೇಹಿತ ಜಗದೀಶ್ ಸೇರಿ ಮೋಹನ್ ಅವರನ್ನು ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಧನಂಜಯಮೂರ್ತಿ ಮತ್ತು ಜಗದೀಶ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಪ್ರಕರಣದ ಕುರಿತು ಮಹತ್ವದ ಮಾಹಿತಿ ಹೊರಬಂದಿದೆ ಎನ್ನಲಾಗಿದೆ.&lt;/p&gt;&lt;h3&gt;ಕೈಹಿಡಿದವಳೇ ಹಂತಕಿ!&lt;/h3&gt;&lt;p&gt;ವಿಚಾರಣೆಯಲ್ಲಿ ಧನಂಜಯಮೂರ್ತಿ, ಜಗದೀಶ್, ಪುಟ್ಟರಾಜು ಹಾಗೂ ಮೃತ ಮೋಹನ್ ಅವರ ಪತ್ನಿ ಜಯಲಕ್ಷ್ಮಿ ಸೇರಿ ನಾಲ್ವರು ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳು ಜಮೀನಿನಲ್ಲಿದ್ದ ಶೆಡ್&zwnj;ನಲ್ಲಿ ಕುಳಿತು ಮೋಹನ್ ಅವರನ್ನು ಕೊಲೆ ಮಾಡುವ ಬಗ್ಗೆ ಚರ್ಚಿಸಿದ್ದರು. ಸೆಪ್ಟೆಂಬರ್ 3ರಂದು ಕೊಲೆ ಮಾಡಲು ಯೋಜನೆ ರೂಪಿಸಿದ್ದರೂ, ಅಂದು ಜಮೀನಿನಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದ ಕಾರಣ ಯೋಜನೆಯನ್ನು ಮುಂದೂಡಿದ್ದರು ಎನ್ನಲಾಗಿದೆ.&lt;/p&gt;&lt;h3&gt;ಆರೋಪಿಗಳನ್ನ ಪತ್ತೆ ಹಚ್ಚಿದ್ದು ಹೇಗೆ ಪೊಲೀಸರು&lt;/h3&gt;&lt;p&gt;ನಂತರ ಸೆಪ್ಟೆಂಬರ್ 4ರಂದು ಪೂರ್ವನಿಯೋಜಿತ ಯೋಜನೆಯಂತೆ ಜಗದೀಶ್, ಮೋಹನ್ ಶುಂಠಿ ತೋಟಕ್ಕೆ ಬರುವುದನ್ನು ಕಾಯ್ದು, ಅವರೊಂದಿಗೆ ಮಾತನಾಡುತ್ತಾ ಗಮನ ಬೇರೆಡೆ ಸೆಳೆದಿದ್ದಾನೆ. ಇದೇ ಸಂದರ್ಭದಲ್ಲಿ ಪುಟ್ಟರಾಜು ಮತ್ತು ಧನಂಜಯಮೂರ್ತಿ ಕಬ್ಬಿಣದ ರಾಡ್&zwnj;ನಿಂದ ಮೋಹನ್ ಅವರ ತಲೆಗೆ ಹೊಡೆದಿದ್ದಾರೆ. ಬಳಿಕ ಜಗದೀಶ್ ಕೂಡ ಅದೇ ಕಬ್ಬಿಣದ ರಾಡ್&zwnj;ನಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮೋಹನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಇದೀಗ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ಪ್ರಕರಣದ ತನಿಖೆಯಲ್ಲಿ ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್ ಎಚ್.ವಿ.,ಗಂಡಸಿ ಪೊಲೀಸ್ ಠಾಣೆಯ ಪಿಎಸ್ಐ ಅರುಣ್,ಹಾಗೂ ಸಿಬ್ಬಂದಿಗಳಾದ ರಘು, ಗುರುಪ್ರಸಾದ್, ಪಾಂಡು, ಜಗದೀಶ್ ಮೂರ್ತಿ, ಬಸವರಾಜ್, ನಾಗೇಂದ್ರ ಸೇರಿದಂತೆ ಪೊಲೀಸ್ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆರೋಪಿಗಳನ್ನು ತ್ವರಿತವಾಗಿ ಪತ್ತೆಹಚ್ಚಿ ಪ್ರಕರಣ ಭೇದಿಸುವಲ್ಲಿ ತಂಡದ ಕಾರ್ಯಾಚರಣೆ ಯಶಸ್ವಿಯಾಗಿದೆ.&lt;/p&gt;]]></content:encoded>
            <category>hassan</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/arasikere-mohan-death-case-crime-committed-by-his-own-wife-gandasi-police-arrest-the-accused-rav/articleshow-1iwq85e"/>
        </item>
        <item>
            <title><![CDATA[ಬೆಂಗಳೂರು–ಮಂಗಳೂರು ವಂದೇ ಭಾರತ್‌:  2ನೇ ಸಂಚಾರ, ಪುತ್ತೂರಿನಲ್ಲೂ ಸ್ಟಾಪ್! ನಿಮ್ಮ ನಿಲ್ದಾಣಕ್ಕೆ ಎಷ್ಟು ಗಂಟೆಗೆ ರೀಚ್?]]></title>
            <link>https://kannada.asianetnews.com/dakshina-kannada/yashwantpur-mangaluru-vande-bharat-express-2nd-trial-run-begins-with-kabaka-puttur-halt-route-and-trial-run-details-gdp/articleshow-47c73rn</link>
            <guid isPermaLink="true">https://kannada.asianetnews.com/dakshina-kannada/yashwantpur-mangaluru-vande-bharat-express-2nd-trial-run-begins-with-kabaka-puttur-halt-route-and-trial-run-details-gdp/articleshow-47c73rn</guid>
            <pubDate>Thu, 10 Sep 2026 08:58:10 +0530</pubDate>
            <description><![CDATA[ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್&zwnj;ಪ್ರೆಸ್&zwnj;ನ ಎರಡನೇ ಪ್ರಾಯೋಗಿಕ ಸಂಚಾರ ಇಂದು ನಡೆಯಲಿದೆ. ಈ ಬಾರಿ ಕಬಕ&ndash;ಪುತ್ತೂರು ನಿಲ್ದಾಣದಲ್ಲಿಯೂ ನಿಲುಗಡೆ ನೀಡಲಾಗಿದ್ದು, ಶಿರಾಡಿ ಘಾಟ್ ವಿಭಾಗದಲ್ಲಿ ರೈಲಿನ ವೇಗ ಮತ್ತು ಸುರಕ್ಷತೆಯನ್ನು ತಾಂತ್ರಿಕ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kztcgw9rpvaxbtnt7d54hkbt,imgname-vande-bharat-express-sakaleshpur-1786518204728.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಶೀಘ್ರದಲ್ಲೇ ಆರಂಭವಾಗಲಿರುವ ಬಹುನಿರೀಕ್ಷಿತ 'ವಂದೇ ಭಾರತ್ ಎಕ್ಸ್&zwnj;ಪ್ರೆಸ್' ರೈಲಿನ 16 ಬೋಗಿಗಳ ಎರಡನೇ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಇಂದು (ಗುರುವಾರ) ನಡೆಯಲಿದೆ.&lt;/p&gt;&lt;p&gt;ರೈಲ್ವೆ ಮಂಡಳಿಯು ಸೆಪ್ಟೆಂಬರ್ 2ರಂದು ನೀಡಿದ್ದ ನಿರ್ದೇಶನದಂತೆ, ಯಶವಂತಪುರದಿಂದ ಮಂಗಳೂರು ಜಂಕ್ಷನ್&zwnj;ವರೆಗೆ ಹಾಗೂ ಅಲ್ಲಿಂದ ಮರಳಿ ಯಶವಂತಪುರಕ್ಕೆ ಖಾಲಿ ವಂದೇ ಭಾರತ್ ರೈಲನ್ನು (ರೇಕ್ ಸಂಖ್ಯೆ: IC2015) ಓಡಿಸಿ, ಒಟ್ಟು ಸಂಚಾರ ಸಮಯವನ್ನು ಪರಿಶೀಲಿಸಲಾಗುತ್ತಿದೆ. ವಿಶೇ&zwj;ಷವೆಂದರೆ, ಈ ಬಾರಿಯ ಪ್ರಾಯೋಗಿಕ ಸಂಚಾರದಲ್ಲಿ ಕಬಕ&ndash;ಪುತ್ತೂರು ನಿಲ್ದಾಣಕ್ಕೂ ನಿಲುಗಡೆ ನೀಡಲಾಗಿದೆ.&lt;/p&gt;&lt;h2&gt;ರೈಲಿನ ಪ್ರಾಯೋಗಿಕ ವೇಳಾಪಟ್ಟಿ:&lt;/h2&gt;&lt;p&gt;ಯಶವಂತಪುರದಿಂದ ಮಂಗಳೂರು ಜಂಕ್ಷನ್&zwnj;ಗೆ:&lt;/p&gt;&lt;p&gt;ಯಶವಂತಪುರ: ಬೆಳಿಗ್ಗೆ 6.50ಕ್ಕೆ ನಿರ್ಗಮನ&lt;/p&gt;&lt;p&gt;ಹಾಸನ: ಬೆಳಿಗ್ಗೆ 9.33ಕ್ಕೆ ಆಗಮನ | 9.35ಕ್ಕೆ ನಿರ್ಗಮನ&lt;/p&gt;&lt;p&gt;ಸಕಲೇಶಪುರ: ಬೆಳಿಗ್ಗೆ 10.25ಕ್ಕೆ ಆಗಮನ | 10.30ಕ್ಕೆ ನಿರ್ಗಮನ&lt;/p&gt;&lt;p&gt;ಸುಬ್ರಹ್ಮಣ್ಯ ರೋಡ್: ಮಧ್ಯಾಹ್ನ 12.50ಕ್ಕೆ ಆಗಮನ | 12.55ಕ್ಕೆ ನಿರ್ಗಮನ&lt;/p&gt;&lt;p&gt;ಕಬಕ&ndash;ಪುತ್ತೂರು: ಮಧ್ಯಾಹ್ನ 2.34ಕ್ಕೆ ಆಗಮನ | 2.36ಕ್ಕೆ ನಿರ್ಗಮನ&lt;/p&gt;&lt;p&gt;ಪಡೀಲ್: ಮಧ್ಯಾಹ್ನ 2.40&lt;/p&gt;&lt;p&gt;ಮಂಗಳೂರು ಜಂಕ್ಷನ್: ಮಧ್ಯಾಹ್ನ 2.50ಕ್ಕೆ ತಲುಪಲಿದೆ.&lt;/p&gt;&lt;h2&gt;ಮಂಗಳೂರು ಜಂಕ್ಷನ್&zwnj;ನಿಂದ ಯಶವಂತಪುರಕ್ಕೆ (ಮರಳಿ ಸಂಚಾರ):&lt;/h2&gt;&lt;p&gt;ಮಂಗಳೂರು ಜಂಕ್ಷನ್: ಮಧ್ಯಾಹ್ನ 3.10ಕ್ಕೆ ನಿರ್ಗಮನ&lt;/p&gt;&lt;p&gt;ಪಡೀಲ್: ಮಧ್ಯಾಹ್ನ 3.20&lt;/p&gt;&lt;p&gt;ಕಬಕ&ndash;ಪುತ್ತೂರು: ಮಧ್ಯಾಹ್ನ 3.38ಕ್ಕೆ ಆಗಮನ | 3.40ಕ್ಕೆ ನಿರ್ಗಮನ&lt;/p&gt;&lt;p&gt;ಸುಬ್ರಹ್ಮಣ್ಯ ರೋಡ್: ಸಂಜೆ 4.35ಕ್ಕೆ ಆಗಮನ | 4.40ಕ್ಕೆ ನಿರ್ಗಮನ&lt;/p&gt;&lt;p&gt;ಸಕಲೇಶಪುರ: ಸಂಜೆ 6.50ಕ್ಕೆ ಆಗಮನ | 6.55ಕ್ಕೆ ನಿರ್ಗಮನ&lt;/p&gt;&lt;p&gt;ಹಾಸನ: ರಾತ್ರಿ 7.45ಕ್ಕೆ ಆಗಮನ | 7.47ಕ್ಕೆ ನಿರ್ಗಮನ&lt;/p&gt;&lt;p&gt;ಯಶವಂತಪುರ: ರಾತ್ರಿ 10.30ಕ್ಕೆ ತಲುಪುವ ನಿರೀಕ್ಷೆಯಿದೆ.&lt;/p&gt;&lt;p&gt;&lt;strong&gt;ತಾಂತ್ರಿಕ ಪರಿಶೀಲನೆ ಮತ್ತು ಸುರಕ್ಷತೆ:&lt;/strong&gt; ಈ ಪ್ರಾಯೋಗಿಕ ಸಂಚಾರದ ಸಮಯದಲ್ಲಿ ರೈಲಿನ ಮೂಲ ಹಾಗೂ ಅಂತಿಮ ನಿಲ್ದಾಣಗಳ ಸಮಯ, ವಿವಿಧ ವಿಭಾಗಗಳ ನಡುವಿನ ಇಂಟರ್&zwnj;ಚೇಂಜ್&zwnj;ಗಳು ಮತ್ತು ನಿಲುಗಡೆ ಅವಧಿಯನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ. ವಿಶೇಷವಾಗಿ ಕಠಿಣವಾದ ಶಿರಾಡಿ ಘಾಟ್ ವಿಭಾಗದಲ್ಲಿ ರೈಲಿನ ವೇಗ ಮತ್ತು ಸಂಚಾರ ವ್ಯವಸ್ಥೆಯನ್ನು ತಾಂತ್ರಿಕ ಅಧಿಕಾರಿಗಳು ಹತ್ತಿರದಿಂದ ನಿಗಾವಹಿಸಲಿದ್ದಾರೆ.&lt;/p&gt;&lt;p&gt;ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ಹಿರಿಯ ವಿಭಾಗೀಯ ಅಧಿಕಾರಿಗಳು, ಟೈಮ್&zwnj;ಟೇಬಲ್ ನಿಯಂತ್ರಕರು, ವಿದ್ಯುತ್, ಎಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ವಿಭಾಗಗಳ ಜಂಟಿ ಸಿಬ್ಬಂದಿ ಈ ಪ್ರಾಯೋಗಿಕ ಸಂಚಾರದಲ್ಲಿ ಭಾಗವಹಿಸಿ ಸಂಪೂರ್ಣ ವರದಿ ಸಿದ್ಧಪಡಿಸಲಿದ್ದಾರೆ. ಪ್ರಯಾಣಿಕರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ಸಂಚಾರ ಸಮಯವನ್ನು ಆದಷ್ಟು ಕಡಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/yashwantpur-mangaluru-vande-bharat-express-2nd-trial-run-begins-with-kabaka-puttur-halt-route-and-trial-run-details-gdp/articleshow-47c73rn"/>
        </item>
        <item>
            <title><![CDATA[ಇಟಿಎಫ್‌ ಸಿಬ್ಬಂದಿಯನ್ನೇ ಅಟ್ಟಾಡಿಸಿದ ದೈತ್ಯಾಕಾರದ ಕಾಡಾನೆ! ಗಂಗಾವರ ಗ್ರಾಮದ ಶಾಲೆಗಳಿಗೆ ರಜೆ ಘೋಷಣೆ!]]></title>
            <link>https://kannada.asianetnews.com/karnataka-districts/hassan-wild-elephant-attacked-etf-staff-gangavara-village-hassan-district-rav/articleshow-4bfdyoa</link>
            <guid isPermaLink="true">https://kannada.asianetnews.com/karnataka-districts/hassan-wild-elephant-attacked-etf-staff-gangavara-village-hassan-district-rav/articleshow-4bfdyoa</guid>
            <pubDate>Tue, 08 Sep 2026 12:56:44 +0530</pubDate>
            <description><![CDATA[ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗಂಗಾವರ ಗ್ರಾಮಕ್ಕೆ ಎರಡು ಮದವೇರಿದ ಕಾಡಾನೆಗಳು ನುಗ್ಗಿ ಆತಂಕ ಸೃಷ್ಟಿಸಿವೆ. ಅವುಗಳನ್ನು ಓಡಿಸಲು ಬಂದ ಇಟಿಎಫ್ ಸಿಬ್ಬಂದಿ ಹಾಗೂ ಗ್ರಾಮಸ್ಥರನ್ನೇ ಅಟ್ಟಾಡಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1zy3pbg426jdza4h5w0fd75,imgname-hassan-wild-elephont-attack-1788851902832.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನ (ಸೆ.8): ಮದವೇರಿದ ಎರಡು ದೈತ್ಯಾಕಾರದ ಕಾಡಾನೆಗಳು ಘೀಳಿಡುತ್ತಾ ಇಟಿಎಫ್ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗಂಗಾವರ ಗ್ರಾಮದಲ್ಲಿ ನಡೆದಿದೆ.&lt;/p&gt;&lt;h2&gt;ಕಾರ್ಯಾಚರಣೆಗೆ ಬಂದಿದ್ದ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ!&lt;/h2&gt;&lt;p&gt;ಮದವೇರಿದ ಎರಡು ದೈತ್ಯಕಾರಾದ ಆನೆಗಳು ಗಂಗಾವರ ಗ್ರಾಮಕ್ಕೆ ನುಗ್ಗಿ ಆತಂಕ ಸೃಷ್ಟಿಸಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಇಟಿಎಫ್&zwnj; ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಲು ಬಂದಿದ್ದ ಸಿಬ್ಬಂದಿಯನ್ನೇ ಕಾಡಾನೆ ಅಟ್ಟಾಡಿಸಿ ಓಡಿಸಿದೆ. ಕಾಡಾನೆ ದಾಳಿಗೆ ಕಕ್ಕಾಬಿಕ್ಕಿಯಾದ ಇಟಿಎಫ್ ಸಿಬ್ಬಂದಿ ಎದ್ನೋ ಬಿದ್ನೋ ಅಂತಾ ಓಡಿಹೋಗಿದ್ದಾರೆ.&lt;/p&gt;&lt;p&gt;ಇತ್ತ ಕಾಡಾನೆ ಬಂದ ಸುದ್ದಿ ಕೇಳಿ ಗುಂಪುಗೊಂಡಿದ್ದ ಗ್ರಾಮಸ್ಥರ ಮೇಲೂ ಕಾಡಾನೆ ದಾಳಿ ನಡೆಸಲು ಮುಂದಾದಾಗ ಭಯದಿಂದ ನೆರೆದಿದ್ದ ಸ್ಥಳೀಯರು ಕೂಡ ದಿಕ್ಕಪಾಲಾಗಿ ಓಡಿಹೋಗಿದ್ದಾರೆ.&lt;/p&gt;&lt;h3&gt;ಪಾಟಕಿಗೆ ಜಗ್ಗದ ಕಾಡಾನೆಗಳು&lt;/h3&gt;&lt;p&gt;ಕಾಡಿನಿಂದ ಗ್ರಾಮಕ್ಕೆ ನುಗ್ಗಿರುವ ಎರಡು ಆನೆಗಳನ್ನು ಓಡಿಸಲು ಇಟಿಎಫ್ ಸಿಬ್ಬಂದಿ ಸ್ಥಳೀಯರು ಪಟಾಕಿ ಸಿಡಿಸಿದರೂ ಓಡಿಸಲೆತ್ನಿಸಿದರೂ ಜಗ್ಗದ ಮದಗಜಗಳು. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಲೇ ಇದ್ದಾರೆ.&lt;/p&gt;&lt;h3&gt;ಶಾಲೆಗಳಿಗೆ ರಜೆ ಘೋಷಣೆ&lt;/h3&gt;&lt;p&gt;ಗ್ರಾಮಕ್ಕೆ ನುಗ್ಗಿರುವ ಕಾಡಾನೆಗಳು ಶಾಲೆ, ಮನೆಗಳ ಮುಂದೆ ಓಡಾಡುತ್ತಿವೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಗಂಗಾವರ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಾಡಾನೆಗಳು ನುಗ್ಗಿರುವುದರಿಂದ ಗ್ರಾಮಸ್ಥರು, ಕಾರ್ಮಿಕರು ಹಾಗೂ ಮಹಿಳೆಯರಲ್ಲಿ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ ಈ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/hassan-wild-elephant-attacked-etf-staff-gangavara-village-hassan-district-rav/articleshow-4bfdyoa"/>
        </item>
        <item>
            <title><![CDATA[Kodi Shree Prediction: 'ಸಮುದ್ರಗಳು ನುಗ್ಗ್ಯಾವು, ಊರುಗಳು ಮುಳುಗ್ಯಾವು'; ಭೀಕರ ಭವಿಷ್ಯ ನುಡಿದ ಕೋಡಿ ಶ್ರೀಗಳು]]></title>
            <link>https://kannada.asianetnews.com/karnataka-districts/oceans-will-surge-towns-will-be-submerged-kodi-shree-makes-prediction-in-hassan-sns/articleshow-4dt74bx</link>
            <guid isPermaLink="true">https://kannada.asianetnews.com/karnataka-districts/oceans-will-surge-towns-will-be-submerged-kodi-shree-makes-prediction-in-hassan-sns/articleshow-4dt74bx</guid>
            <pubDate>Thu, 10 Sep 2026 10:07:59 +0530</pubDate>
            <description><![CDATA[ಕೋಡಿಮಠದ ಶ್ರೀಗಳು ನೇಪಾಳದಂತೆ ದಕ್ಷಿಣ ಭಾರತದಲ್ಲೂ ಪ್ರವಾಹದಂತಹ ಭೀಕರ ಘಟನೆಗಳು ನಡೆಯುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಮುದ್ರಗಳು ನುಗ್ಗಿ ಊರುಗಳು ಮುಳುಗುವ ಎಚ್ಚರಿಕೆ ನೀಡಿದ ಅವರು, ಹಿಂಗಾರು ಮಳೆ ಸಮೃದ್ಧವಾಗಿ ರೈತರಿಗೆ ಪರಿಹಾರ ಸಿಗಲಿದೆ ಎಂದೂ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24sdham1cq8j0t25hgh61b9,imgname-kodi-sri--1789014754644.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬೆನ್ನಲ್ಲೇ ಭೀಕರ ಭವಿಷ್ಯ ನುಡಿದಿರುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು, ಉತ್ತರ ಭಾರತದ ನೇಪಾಳದಲ್ಲಿ ನಡೆದ ಘಟನೆಯಂತೆ ದಕ್ಷಿಣ ಭಾರತದಲ್ಲೂ ಆಗುವ ಲಕ್ಷಣ ಇದೆ. ಸಾವು-ನೋವು, ದುಃಖ, ಊರುಗಳು ಕೊಚ್ಚಿ ಹೋಗುವ ಘಟನೆಗಳು ಇವೆ. ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.&lt;/p&gt;&lt;h2&gt;ಕೋಡಿ ಶ್ರೀಗಳ ಭೀಕರ ಭವಿಷ್ಯ: ದಕ್ಷಿಣ ಭಾರತಕ್ಕೆ ಎಚ್ಚರಿಕೆ?&lt;/h2&gt;&lt;p&gt;ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಈ ವರ್ಷದ ಭವಿಷ್ಯವನ್ನು ನಾನು ಮೊದಲೇ ಹೇಳಿದ್ದೆ. ಮುಂಗಾರು ಮಳೆ ವಿರಳ, ಹಿಂಗಾರು ಮಳೆ ಆಗುತ್ತದೆ. ಜನ ಜಂಗುಳಿಯಾಗುತ್ತದೆ, ಅನ್ನ, ಆಹಾರ, ನೀರಿಗೆ ಕೊರತೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.&lt;/p&gt;&lt;h2&gt;'ಹಿಂಗಾರು ಮಳೆ ಆಗುತ್ತೆ, ಶೇ.90 ಜನರಿಗೆ ಪರಿಹಾರ ಸಿಗುತ್ತೆ'&lt;/h2&gt;&lt;p&gt;ಅಲ್ಲದೇ, ಸಾವು-ನೋವುಗಳು ಹೆಚ್ಚಾಗುತ್ತದೆ. ವಿಪರೀತವಾದ ಪ್ರವಾಹ ಆಗುತ್ತೆ ಅಂಥ ಹೇಳಿದ್ದೆ, ಈಗ ಅದು ನಡೆಯುತ್ತಿದೆ. ಈಗ ಇಲ್ಲಿಂದ ಕಷ್ಟ ಮುಂದುವರೆಯುತ್ತೆ, ಆದರೂ ಹಿಂಗಾರು ಮಳೆ ಶುಭವಾಗುವ ಲಕ್ಷಣ ಇದೆ. ಕೆರೆ, ಕಟ್ಟೆಗಳು ತುಂಬುತ್ತವೆ, ಅದರ ಬಗ್ಗೆ ತೊಂದರೆಯಿಲ್ಲ. ಹಿಂಗಾರು ಮಳೆ ಸಮೃದ್ದಿಯಾಗುತ್ತದೆ. ಹಿಂಗಾರು ಮಳೆ ಆಗುತ್ತೆ, ಶೇಕಡಾ 90 ಜನರಿಗೆ ಪರಿಹಾರ ಸಿಗುತ್ತೆ ಎಂದು ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.&lt;/p&gt;&lt;p&gt;ನಾನು ಎರಡ್ಮೂರು ವರ್ಷಗಳಿಂದ ಹೇಳುತ್ತಲೇ ಇದ್ದೇನೆ. ದೇಶಗಳು ಮುಳುಗುತ್ತವೆ, ವಿಪರೀತವಾದ ನೀರು, ಜನಜಂಗುಳಿ, ಯುದ್ಧವಾಗುತ್ತದೆ. ಜನನಿಯಂತ್ರಣ ತಪ್ತಾರೆ, ಆಳುವವರು ಅತೃಪ್ತರಾಗುತ್ತಾರೆ. ದಿನ ಕ್ರಮೇಣ ಪ್ರಕೃತಿ ವಿರೋಧವಾಗಿದ್ದರಿಂದ ನೀರು ಸಿಗಲಿಲ್ಲ. ಜಗತ್ತಿನಾದ್ಯಾಂತ ಮಿಲಿಯನ್&zwnj;ಗಟ್ಟಲೆ ಬೋರ್&zwnj;ವೆಲ್&zwnj;ಗಳನ್ನು ಕೊರೆದರು. ಬಂಡೆ ಮೇಲೆ ಭೂಮಿ ನಿಂತಿರುವುದು, ಅದರಿಂದ ಬೇಸ್&zwnj;ಮೆಂಟ್ ಲೂಸ್ ಆಯಿತು. ಇದರಿಂದ ಪ್ರವಾಹ, ಭೂಮಿ ಕಂಪನ ಜಾಸ್ತಿಯಾಯಿತು. ಯಾವುದೇ ವಿಚಾರ ಮಾಡಬೇಕಾದರೂ ನೈಜ ಕಾರಣ ಬೇಕು. ಯಾವುದೇ ಮನೆ ಕಟ್ಟುವಾಗ ಭೂಮಿ ನಿಲ್ಲಬೇಕಾದರೆ ತಳಪಾಯ ಮುಖ್ಯ ಎಂದು ವಿವರಿಸಿದರು.&lt;/p&gt;&lt;h2&gt;'ನಾವು ನಂಬಿರುವ ಭಗವಂತನನ್ನು ಪ್ರಾರ್ಥನೆ ಮಾಡಬೇಕು'&lt;/h2&gt;&lt;p&gt;ಕಾಲಜ್ಞಾನದಲ್ಲಿ ಒಂದು ಮಾತಿದೆ, ಕಟ್ಟೆ ಇಲ್ಲದ ಬಾವಿ ಹುಟ್ಟಿ, ನೆಟ್ಟ ನೀ ಸುರಂಗವ ಕೊರೆದು, ಗಟ್ಟಿ ಭೂಮಿ ಬಟ್ಟ ಬಯಲಾಯಿತು. ಹಿಂದಿನ ಕಾಲದಲ್ಲಿ ನಲವತ್ತು, ಐವತ್ತು ಅಡಿ ಬಾವಿ ತೆಗೆಯುತ್ತಿದ್ದರು, ಅದನ್ನು ಜಿನುಗುವ (ಸೀಪೇಜ್ ವಾಟರ್) ಅಂಥ ಕರೆಯುತ್ತಿದ್ದರು. ಆ ನೀರು ತಂದು ಕುಡಿದರೆ ಮನುಷ್ಯನಿಗೆ ಆರೋಗ್ಯವಿತ್ತು, ಈಗ ಸಾವಿರಾರು ಅಡಿ ಕೊರೆದು ಗಡಸು ನೀರು. ಮನುಷ್ಯನಿಗೆ ಆರೋಗ್ಯ ಇಲ್ಲ, ನರಗಳ ಕೊರತೆ, ಹಲ್ಲುಗಳು ಬಿದ್ದು ಹೋದವು, ಜ್ಞಾನ ಇಲ್ಲ, ಊಟ ಮಾಡಲು ಆಗಲ್ಲ, ಬಾರಿ ಹೊಡೆತ ಬಿದ್ದಿತು ಎಂದು ತಿಳಿಸಿದರು.&lt;/p&gt;&lt;p&gt;ಭೂಮಿ ಕೊರೆದಿದ್ದರಿಂದ ಗಟ್ಟಿ ಭೂಮಿ ಬಟ್ಟ ಬಯಲಾಯಿತು. ನೀರು ಸ್ಥಿರವಾಗಲಿಲ್ಲ, ಅದು ಎಲ್ಲಿ ಬೇಕು ಹರಿದುಬಂತು, ಹಾಗಾಗಿ ಸಾವು-ನೋವುಗಳಾದವು. ಇದಕ್ಕೆ ಪರಿಹಾರ ಎಂದರೆ ನಾವು ನಂಬಿರುವ ಭಗವಂತನನ್ನು ಪ್ರಾರ್ಥನೆ ಮಾಡುವುದು. ಆ ಭಗವಂತನ ಪ್ರಾರ್ಥನೆಯಿಂದ ಮುಂದೆ ಆಗುವುದು ತಪ್ಪಲಿ ಎಂದು ಪ್ರಾರ್ಥನೆ ಮಾಡಲು ಸೂಚಿಸಿದರು.&lt;/p&gt;&lt;p&gt;ದಕ್ಷಿಣ ಭಾರತ, ಇಲ್ಲಿಯೂ ಆಗುವ ಲಕ್ಷಣ ಇದೆ. ಸಮುದ್ರಗಳು ನುಗ್ಗ್ಯಾವು, ಊರುಗಳು ಮುಳುಗ್ಯಾವು, ಅದೇ ರೀತಿ ಆಗುತ್ತೆ. ಇಲ್ಲಿಯೂ ಜನ ಜಂಗುಳಿ ಆಗುತ್ತದೆ. ಅದೆಲ್ಲಾ ಅಳಿಯಲಿ ಎಂದು ಭಗವಂತನ ಪ್ರಾರ್ಥನೆ ಮಾಡಬೇಕು ಎಂದರು.&lt;/p&gt;&lt;h2&gt;'ಮುಖ್ಯಮಂತ್ರಿ ಆಗ್ತೀಯಾ ಎಂದು ಹೇಳಿದ್ದೆ'&lt;/h2&gt;&lt;p&gt;ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಆಗಿರುವುದು ಒಳ್ಳೆಯದು, ಪ್ರೋತ್ಸಾಹ ಕೊಡಬೇಕು. ಯುವಕರು, ಅನುಭವಿಗಳಿಗೆ, ಅಧಿಕಾರ ಸಿಕ್ಕಿದೆ, ಅದು ಯಾವ ಜನ್ಮದ ಪುಣ್ಯ. ಅದಕ್ಕೆ ನಾವು ಹೆಚ್ಚು ಪ್ರೋತ್ಸಾಹ ಕೊಡಬೇಕು, ಆಶೀರ್ವಾದ ಮಾಡಬೇಕು. ಇವರು ಮುಖ್ಯಮಂತ್ರಿ ಆದಮೇಲೆ ಬದಲಾವಣೆ ಕಾಣುತ್ತಿದೆ. ಸರಳವಾಗಿದ್ದಾರೆ, ಸಜ್ಜನರಾಗಿದ್ದಾರೆ, ಬಡವರ ನೋಡುವ ಶಕ್ತಿ ಮೊದಲಿಗೂ ಇತ್ತು, ಮುಂದುವರೆಯಲಿ ಎಂದು ಹಾರೈಸುತ್ತೇವೆ. ನಮ್ಮ ಬಳಿ ಬಂದಾಗ ಮುಖ್ಯಮಂತ್ರಿ ಆಗ್ತೀಯಾ ಎಂದು ಹೇಳಿದ್ದೆ, ಹಾಗಾಗಿ ಅವರಿಗೆ ಆಶೀರ್ವಾದ ಕೊಡೋಣ, ಅಶುಭ ಹೇಳುವುದು ಬೇಡ ಎಂದು ಹೇಳಿದರು.&lt;/p&gt;&lt;p&gt;&lt;/p&gt;]]></content:encoded>
            <category>hassan</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/oceans-will-surge-towns-will-be-submerged-kodi-shree-makes-prediction-in-hassan-sns/articleshow-4dt74bx"/>
        </item>
        <item>
            <title><![CDATA['ಭೀಕರ ಬರಗಾಲದಲ್ಲಿ ಒಂದೇ ಪೂಜೆಗೆ 5 ಗಂಟೆ ಸುರಿದಿತ್ತು ಮಳೆ!': ರಂಗನಾಥನ ಪವಾಡ ಬಿಚ್ಚಿಟ್ಟ ದೇವೇಗೌಡರು!]]></title>
            <link>https://kannada.asianetnews.com/gallery/karnataka-districts/former-pm-hd-deve-gowda-recalls-mavinakere-betta-rain-miracle-during-severe-drought-6vyggyx</link>
            <guid isPermaLink="true">https://kannada.asianetnews.com/gallery/karnataka-districts/former-pm-hd-deve-gowda-recalls-mavinakere-betta-rain-miracle-during-severe-drought-6vyggyx</guid>
            <pubDate>Sat, 29 Aug 2026 12:39:41 +0530</pubDate>
            <description><![CDATA[&lt;p&gt;ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಬಾಲ್ಯದಲ್ಲಿ ನಡೆದ ಮಾವಿನಕೆರೆ ಕ್ಷೇತ್ರದ ಪವಾಡವನ್ನು ಸ್ಮರಿಸಿದ್ದಾರೆ. ಭೀಕರ ಬರಗಾಲದ ವೇಳೆ 18 ಹಳ್ಳಿಗಳ ಜನರು ಸೇರಿ ಶ್ರೀ ರಂಗನಾಥ ಸ್ವಾಮಿಗೆ ಸಹಸ್ರ ಕುಂಭಾಭಿಷೇಕ ಮಾಡಿದಾಗ, 5 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ದೈವಿಕ ಘಟನೆಯನ್ನು ಅವರು ವಿವರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m165af9vsnwefz9cwk8np04j,imgname-hd-deve-gowda-1787987049787.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಬಾಲ್ಯದಲ್ಲಿ ನಡೆದ ಮಾವಿನಕೆರೆ ಕ್ಷೇತ್ರದ ಪವಾಡವನ್ನು ಸ್ಮರಿಸಿದ್ದಾರೆ. ಭೀಕರ ಬರಗಾಲದ ವೇಳೆ 18 ಹಳ್ಳಿಗಳ ಜನರು ಸೇರಿ ಶ್ರೀ ರಂಗನಾಥ ಸ್ವಾಮಿಗೆ ಸಹಸ್ರ ಕುಂಭಾಭಿಷೇಕ ಮಾಡಿದಾಗ, 5 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ದೈವಿಕ ಘಟನೆಯನ್ನು ಅವರು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಭೀಕರ ಬರಗಾಲ ಬಿದ್ದಾಗ 18 ಹಳ್ಳಿಯ ಜನರು ಒಗ್ಗೂಡಿ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವರ ಮೇಲೆ ಕುಂಭಾಭಿಷೇಕ ನೆರವೇರಿಸುತ್ತಿದ್ದಂತೆಯೇ, ದೇವಾಲಯದ ಗೋಪುರದ ಮೇಲೆ ಒಂದು ಚಾಪೆಯಗಲದಷ್ಟು ಸಣ್ಣ ಕಪ್ಪು ಮೋಡ ಪ್ರತ್ಯಕ್ಷವಾಯಿತು! ನೋಡನೋಡುತ್ತಿದ್ದಂತೆಯೇ ಆಕಾಶವೆಲ್ಲಾ ಮೋಡ ಕವಿದು, ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬರೋಬ್ಬರಿ 5 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಿತು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪವಾಡ ಸದೃಶ ಘಟನೆಯನ್ನು ಬಿಚ್ಚಿಟ್ಟರು.&lt;/p&gt;&lt;img&gt;&lt;p&gt;ಹಾಸನ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಗೆ ಶ್ರಾವಣ ಶನಿವಾರದ ಪ್ರಯುಕ್ತ ಭೇಟಿ ನೀಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (H.D. Deve Gowda), ಈ ಪುಣ್ಯಕ್ಷೇತ್ರದ ಪವಾಡ ಸದೃಶ ಶಕ್ತಿಯ ಕುರಿತು ತಮ್ಮ ಬಾಲ್ಯದ ರೋಚಕ ಘಟನೆಯೊಂದನ್ನು ಸ್ಮರಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;18 ಹಳ್ಳಿಗಳು ಒಂದಾಗಿ ಮಾಡಿದ &lsquo;ಸಹಸ್ರ ಕುಂಭಾಭಿಷೇಕ&rsquo;:&lt;/strong&gt;&lt;/p&gt;&lt;p&gt;ಮಾವಿನಕೆರೆ ಕ್ಷೇತ್ರದ ಮಹಿಮೆಯನ್ನು ವಿವರಿಸಿದ ದೇವೇಗೌಡರು, 'ಇದು ಅತ್ಯಂತ ಪುರಾತನ ಹಾಗೂ ಜಾಗೃತ ಪವಿತ್ರ ಕ್ಷೇತ್ರ. ಈ ಭಾಗದಲ್ಲಿ ಅತ್ಯಂತ ಭೀಕರ ಬರಗಾಲ ಎದುರಾಗಿದ್ದ ಸಂದರ್ಭವನ್ನು ನಾನು ಕಣ್ಣಾರೆ ನೋಡಿದ್ದೇನೆ. ಆ ಕಾಲದಲ್ಲಿ ಮಳೆ ಬಾರದೆ ಜನ-ಜಾನುವಾರುಗಳು ಕಂಗಾಲಾಗಿದ್ದರು. ಆಗ ಸುತ್ತಮುತ್ತಲಿನ ಸುಮಾರು 18 ಹಳ್ಳಿಗಳ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಈ ಬೆಟ್ಟದ ರಂಗನಾಥ ಸ್ವಾಮಿಗೆ 'ಸಹಸ್ರ ಕುಂಭಾಭಿಷೇಕ' ಮಾಡಲು ತೀರ್ಮಾನಿಸಿದರು' ಎಂದರು.&lt;/p&gt;&lt;img&gt;&lt;p&gt;&lt;strong&gt;ಗೋಪುರದ ಮೇಲೆ ಬಂದ ಕಪ್ಪು ಮೋಡ, 5 ಗಂಟೆ ಸುರಿದ ಧಾರಾಕಾರ ಮಳೆ!&lt;/strong&gt;&lt;/p&gt;&lt;p&gt;ಆ ಪವಾಡದ ಕ್ಷಣವನ್ನು ಮೆಲುಕು ಹಾಕಿದ ಮಾಜಿ ಪ್ರಧಾನಿಗಳು, 'ಹತ್ತಾರು ಹಳ್ಳಿಗಳಿಂದ ಜನರು ಬಿಂದಿಗೆಗಳಲ್ಲಿ ನೀರು ತಂದು ಬಂಡೆಯ ಮೇಲಿರುವ ದೇವಸ್ಥಾನದ ಗೋಪುರಕ್ಕೆ ಭಕ್ತಿಯಿಂದ ಅಭಿಷೇಕ ಮಾಡಿದರು. ಊರುಗಳಿಂದ ಬಗೆಬಗೆಯ ತಿಂಡಿ-ತಿನಿಸುಗಳನ್ನು ತಂದು ಬೆಟ್ಟದ ಮೇಲೆ ರಾಶಿ ಹಾಕಿದ್ದರು.&lt;/p&gt;&lt;img&gt;&lt;p&gt;ಅಚ್ಚರಿಯೆಂದರೆ, ದೇವರ ಮೇಲೆ ಕುಂಭಾಭಿಷೇಕ ನೆರವೇರುತ್ತಿದ್ದಂತೆಯೇ, ದೇವಾಲಯದ ಗೋಪುರದ ಮೇಲೆ ಕೇವಲ ಒಂದು ಚಾಪೆಯಗಲದಷ್ಟು ಸಣ್ಣ ಕಪ್ಪು ಮೋಡ ಪ್ರತ್ಯಕ್ಷವಾಯಿತು! ನೋಡನೋಡುತ್ತಿದ್ದಂತೆಯೇ ಆಕಾಶವೆಲ್ಲಾ ಮೋಡ ಕವಿದು, ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬರೋಬ್ಬರಿ 5 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಿತು. ಮಳೆ ಸಂಪೂರ್ಣ ನಿಂತ ಮೇಲೆಯೇ ನಾವೆಲ್ಲರೂ ಬೆಟ್ಟದಿಂದ ಮನೆಗಳಿಗೆ ಮರಳಿದ್ದು' ಎಂದು ಆ ದೈವಿಕ ಪವಾಡವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.&lt;/p&gt;&lt;img&gt;&lt;p&gt;&lt;strong&gt;ವಿದೇಶದಲ್ಲಿರುವ ಭಕ್ತರಿಗೂ ದೇವೇಗೌಡರ ವಿಶೇಷ ಕರೆ:&lt;/strong&gt;&lt;/p&gt;&lt;p&gt;'ಮಾವಿನಕೆರೆ ಬೆಟ್ಟ ಅಷ್ಟೊಂದು ಅದ್ಭುತ ಶಕ್ತಿಯುಳ್ಳ ಪುಣ್ಯಕ್ಷೇತ್ರ. ಈ ಸ್ವಾಮಿಯನ್ನು ಕುಲದೇವರನ್ನಾಗಿ ಹೊಂದಿರುವವರು ಪ್ರಸ್ತುತ ವಿದೇಶಗಳಲ್ಲಿದ್ದರೂ ಸಹ, ಈ ಪವಿತ್ರ ಶ್ರಾವಣ ಮಾಸದಲ್ಲಿ ತಮ್ಮ ಮನೆ ದೇವರಿಗೆ ಬಂದು ಪೂಜೆ ಸಲ್ಲಿಸಬೇಕು. ನಾನಂತೂ ಪ್ರತಿ ವರ್ಷವೂ ತಪ್ಪದೇ ಇಲ್ಲಿಗೆ ಬಂದು ದೇವರ ಆಶೀರ್ವಾದ ಪಡೆಯುತ್ತೇನೆ' ಎಂದು ದೇವೇಗೌಡರು ಭಕ್ತರಿಗೆ ಕರೆ ನೀಡಿದರು.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/former-pm-hd-deve-gowda-recalls-mavinakere-betta-rain-miracle-during-severe-drought-6vyggyx"/>
        </item>
        <item>
            <title><![CDATA[ಹಾಸನ-ಬೇಲೂರು ಪ್ರಯಾಣಿಕರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್; 470.85 ಕೋಟಿ ಮಂಜೂರು]]></title>
            <link>https://kannada.asianetnews.com/karnataka-districts/rs-470-crore-sanctioned-for-hassan-to-belur-four-lane-road-project-union-ministry-of-road-transport-and-highways-mrq/articleshow-886arpb</link>
            <guid isPermaLink="true">https://kannada.asianetnews.com/karnataka-districts/rs-470-crore-sanctioned-for-hassan-to-belur-four-lane-road-project-union-ministry-of-road-transport-and-highways-mrq/articleshow-886arpb</guid>
            <pubDate>Thu, 10 Sep 2026 07:32:54 +0530</pubDate>
            <description><![CDATA[&lt;p&gt;ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಾಸನ-ಬೇಲೂರು ರಾಷ್ಟ್ರೀಯ ಹೆದ್ದಾರಿ 373ರ ಚತುಷ್ಪಥ ರಸ್ತೆ ಕಾಮಗಾರಿಗೆ ₹470.85 ಕೋಟಿ ಪರಿಷ್ಕೃತ ಅನುದಾನವನ್ನು ಅನುಮೋದಿಸಿದೆ. ಇದು ಜಿಲ್ಲೆಯ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m24gr6pfqh61p22xs6m3fbve,imgname-hassan-beluru-1789005667023.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಹೆದ್ದಾರಿ 373ರ ಹಾಸನ-ಬೇಲೂರು ಮಾರ್ಗವನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ₹470.85 ಕೋಟಿ ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ-ತಾಂತ್ರಿಕ ಜೊತೆಗೆ ಆರ್ಥಿಕ ಅನುಮೋದನೆ ನೀಡಿದೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ&lt;/strong&gt;&lt;/h2&gt;&lt;p&gt;ಹಾಸನ-ಬೇಲೂರು ಹೆದ್ದಾರಿಯ ಅಭಿವೃದ್ಧಿಗೆ ಶೀಘ್ರ ಅನುಮೋದನೆ ನೀಡಿ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳುವಂತೆ ಶ್ರೇಯಸ್ ಎಂ.ಪಟೇಲ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದರು. ಬಳಿಕ ಸಂಬಂಧಪಟ್ಟ ಸಚಿವಾಲಯ ಮತ್ತು ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಯೋಜನೆಯ ತ್ವರಿತ ಅನುಮೋದನೆಗೆ ಒತ್ತಾಯಿಸಿದ್ದರು. ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ 373ರ ವಿನ್ಯಾಸ ಸರಪಳಿ ಕಿ.ಮೀ. 27.280ರಿಂದ ಕಿ.ಮೀ. 57.320ರವರೆಗಿನ ಒಟ್ಟು 29.54 ಕಿ.ಮೀ. ಹಾಸನ-ಬೇಲೂರು ರಸ್ತೆ ಭಾಗವನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ೪೭೦.೮೫ ಕೋಟಿ ಮಂಜೂರು ಮಾಡಿದೆ.&lt;/p&gt;&lt;p&gt;ಈ ಯೋಜನೆಯನ್ನು ಇಪಿಸಿ ಮಾದರಿಯಲ್ಲಿ ಎನ್&zwnj;ಎಚ್(ಒ) ವಾರ್ಷಿಕ ಯೋಜನೆ 2022-23ರ ಪ್ಯಾಕೇಜ್-11 ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ. ಪರಿಷ್ಕೃತ ಯೋಜನೆಯಡಿ ಭೂಸ್ವಾಧೀನಕ್ಕಾಗಿ 115.30 ಕೋಟಿ ಹಾಗೂ ಭೂಸ್ವಾಧೀನ ಸೇರಿದಂತೆ ಪೂರ್ವ ನಿರ್ಮಾಣ ಚಟುವಟಿಕೆಗಳಿಗೆ ಒಟ್ಟು 128.90 ಕೋಟಿ ಮೀಸಲಿಡಲಾಗಿದೆ.&lt;/p&gt;&lt;p&gt;ರಾಜ್ಯ ಲೋಕೋಪಯೋಗಿ ಇಲಾಖೆ ಭೂ ಸ್ವಾಧೀನ ಪರಿಹಾರ ವಿತರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ೨೦೨೬ರ ಅಕ್ಟೋಬರ್&zwnj; ೩೧ರೊಳಗೆ ಕಾಮಗಾರಿಯ ನಿಗದಿತ ಪ್ರಾರಂಭ ದಿನಾಂಕವನ್ನು ಅಂತಿಮಗೊಳಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಯೋಜನೆಯ ಕಾಮಗಾರಿಯನ್ನು 2029-30ನೇ ಆರ್ಥಿಕ ವರ್ಷದೊಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಕೇಂದ್ರಕ್ಕೆ ಧನ್ಯವಾದ ಸಲ್ಲಿಸಿದ ಶ್ರೇಯಸ್ ಪಟೇಲ್&lt;/strong&gt;&lt;/h3&gt;&lt;p&gt;ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ 470.85 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ.&lt;/p&gt;&lt;p&gt;ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;ಕುರಿತು ಪ್ರತಿಕ್ರಿಯಿಸಿರುವ ಶ್ರೇಯಸ್ ಎಂ. ಪಟೇಲ್ ಅವರು, ಹಾಸನ-ಬೇಲೂರು ಮಾರ್ಗವು ಜಿಲ್ಲೆಯ ಜನರು, ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಅತ್ಯಂತ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯನ್ನು ನಾಲ್ಕು ಪಥವಾಗಿ ಅಗಲೀಕರಣ ಮಾಡುವುದರಿಂದ ಸಂಚಾರ ದಟ್ಟಣೆ ಮತ್ತು ಪ್ರಯಾಣದ ಸಮಯ ಕಡಿಮೆಯಾಗುವುದರ ಜೊತೆಗೆ ರಸ್ತೆ ಸುರಕ್ಷತೆ, ವ್ಯಾಪಾರ, ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/rs-470-crore-sanctioned-for-hassan-to-belur-four-lane-road-project-union-ministry-of-road-transport-and-highways-mrq/articleshow-886arpb"/>
        </item>
        <item>
            <title><![CDATA[ಕರ್ತವ್ಯದೂರಿನಲ್ಲೇ ಅನಾಥ ಶವವಾದ ಸರ್ಕಾರಿ ಅಧಿಕಾರಿ! ಸಾಯುವ ಕೊನೆ ಗಳಿಗೆಯಲ್ಲೂ ಸಿಗಲಿಲ್ಲ ಕುಟುಂಬದ ಆಸರೆ!]]></title>
            <link>https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri</link>
            <guid isPermaLink="true">https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri</guid>
            <pubDate>Fri, 11 Sep 2026 12:38:45 +0530</pubDate>
            <description><![CDATA[&lt;p&gt;ಹಾಸನದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ ಅವರು ತಾವು ವಾಸವಿದ್ದ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬ ಬೆಂಗಳೂರಿನಲ್ಲಿದ್ದ ಕಾರಣ ಒಬ್ಬರೇ ವಾಸಿಸುತ್ತಿದ್ದ ಅವರ ಸಾವು, ಕಚೇರಿ ಸಿಬ್ಬಂದಿ ಕರೆ ಮಾಡಿದಾಗ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m27mnfzax8ddnmabz9jdswyw,imgname-hassan-govt-officer-death-1789110435817.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಸೆ.11): ಇ&lt;/strong&gt;ಡೀ ಕುಟುಂಬವು ಚೆನ್ನಾಗಿರಲೆಂದು ಬೆಂಗಳೂರಿನಲ್ಲಿ ಬಿಟ್ಟು ಸರ್ಕಾರಿ ಕೆಲಸದ ನಿಮಿತ್ತ ದೂರದ ಊರಿನಲ್ಲಿ ವಾಸವಾಗಿದ್ದ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ ಅವರು ತಾವು ವಾಸವಾಗಿದ್ದ ಮನೆಯಲ್ಲಿ ಅನಾಥವಾಗಿ ಶವವಾಗಿದ್ದಾರೆ. ಜೀವನ ಪೂರ್ತಿ ಕುಟುಂಬ ನೆಮ್ಮದಿಗಾಗಿ ದುಡಿಯುತ್ತಿದ್ದ ಸರ್ಕಾರಿ ಅಧಿಕಾರಿ ತಮ್ಮ ಸಾವಿನ ಕೊನೆಯ ಕ್ಷಣಗಳಲ್ಲಿ ಕುಟುಂಬದ ಒಬ್ಬರೇ ಒಬ್ಬ ಸದಸ್ಯರೂ ಆಸರೆಯೂ ಸಿಗಲಿಲ್ಲ.&lt;/p&gt;&lt;p&gt;ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಸರ್ಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ (55) ಅವರು ತೀವ್ರ ಹೃದಯಾಘಾತದಿಂದ ಏಕಾಏಕಿ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಫೋನ್ ರಿಸೀವ್ ಮಾಡದಿದ್ದಾಗ ಬೆಳಕಿಗೆ ಬಂತು ದುರಂತ:&lt;/strong&gt;&lt;/h2&gt;&lt;p&gt;ಡಾ.ವೆಂಕಟೇಶ್ ಅವರು ಎಂದಿನಂತೆ ನಿನ್ನೆ ಸಂಜೆ ಕಚೇರಿ ಕೆಲಸ ಮುಗಿಸಿ ತಮ್ಮ ಬಾಡಿಗೆ ಮನೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಕಚೇರಿಯ ಸಿಬ್ಬಂದಿ ಅಗತ್ಯ ಕೆಲಸದ ನಿಮಿತ್ತ ಹಲವು ಬಾರಿ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಮೊಬೈಲ್ ಕರೆ ಸ್ವೀಕರಿಸದ ಕಾರಣ ಅನುಮಾನಗೊಂಡ ಸಿಬ್ಬಂದಿ ನೇರವಾಗಿ ಸಕಲೇಶಪುರದಲ್ಲಿರುವ ಅವರ ಮನೆಗೆ ತೆರಳಿ ನೋಡಿದ್ದಾರೆ. ಈ ವೇಳೆ ಡಾ.ವೆಂಕಟೇಶ್ ಅವರು ಮನೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಪರಿಶೀಲಿಸಿದಾಗ, ಅವರು ರಾತ್ರಿಯೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.&lt;/p&gt;&lt;h2&gt;&lt;strong&gt;ಮೂಲತಃ ಚಿಕ್ಕಬಳ್ಳಾಪುರದವರು:&lt;/strong&gt;&lt;/h2&gt;&lt;p&gt;ಮೃತ ಡಾ.ವೆಂಕಟೇಶ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಕಳೆದ ಐದಾರು ವರ್ಷಗಳಿಂದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದ ಅವರು, ಸಕಲೇಶಪುರ ಪಟ್ಟಣದಲ್ಲಿ ಒಬ್ಬರೇ ವಾಸವಿದ್ದರು.&lt;/p&gt;&lt;h3&gt;ಕಂಬನಿ ಮಿಡಿದ ಸಿಬ್ಬಂದಿ, ರೈತರು:&lt;/h3&gt;&lt;p&gt;ಸರಳ ಸಜ್ಜನಿಕೆಯ ಅಧಿಕಾರಿಯಾಗಿದ್ದ ಡಾ.ವೆಂಕಟೇಶ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಇಲಾಖೆಯ ಸಹೋದ್ಯೋಗಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ತಾಲೂಕಿನ ರೈತರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri"/>
        </item>
        <item>
            <title><![CDATA[Hassan: ಮೂರು ಮಕ್ಕಳಿದ್ದರೂ ಸಲಹುವವರಿಲ್ಲ, ಅನಾಥಾಶ್ರಮಕ್ಕೆ ಕಳಿಸಿ: ವೃದ್ಧ ದಂಪತಿ]]></title>
            <link>https://kannada.asianetnews.com/karnataka-districts/hassan-elderly-couple-from-nittur-village-appeal-to-be-admitted-to-orphanage-child-abuse-mrq/articleshow-dz14ng2</link>
            <guid isPermaLink="true">https://kannada.asianetnews.com/karnataka-districts/hassan-elderly-couple-from-nittur-village-appeal-to-be-admitted-to-orphanage-child-abuse-mrq/articleshow-dz14ng2</guid>
            <pubDate>Tue, 01 Sep 2026 09:08:53 +0530</pubDate>
            <description><![CDATA[ಹಾಸನದ ನಿಟ್ಟೂರು ಗ್ರಾಮದ ವೃದ್ಧ ದಂಪತಿ, ಮೂವರು ಮಕ್ಕಳಿದ್ದರೂ ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂದು ನೋವು ತೋಡಿಕೊಂಡಿದ್ದಾರೆ. ಪತ್ನಿ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದು, ಮಗನ ಕಿರುಕುಳದಿಂದ ಬೇಸತ್ತಿರುವ ದಂಪತಿ, ತಮ್ಮನ್ನು ವೃದ್ಧಾಶ್ರಮಕ್ಕಾದರೂ ಸೇರಿಸಿ ಎಂದು ಕಣ್ಣೀರಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1dgpe5ws01eb7dqmdkk6xd3,imgname-hassan--1--1788233857212.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಮೂವರು ಮಕ್ಕಳಿದ್ದರೂ ನಮ್ಮನ್ನು ನೋಡಿಕೊಳ್ಳುವವರಿಲ್ಲ. 6 ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಪತ್ನಿಯ ಆರೈಕೆಯ ಜತೆಗೆ ಹಸಿವು, ಅನಾರೋಗ್ಯ, ಮನೆಯ ದುಸ್ಥಿತಿ ಹಾಗೂ ಮಗನ ಹಿಂಸೆಯನ್ನು ಎದುರಿಸುತ್ತಿದ್ದೇನೆ. ಕಡೆಪಕ್ಷ ನಮ್ಮನ್ನು ವೃದ್ಧಾಶ್ರಮಕ್ಕಾದರೂ ಕಳುಹಿಸಿ, ಉಳಿದ ಜೀವನವನ್ನಾದರೂ ನೆಮ್ಮದಿಯಿಂದ ಕಳೆಯಲು ಅವಕಾಶ ಮಾಡಿಕೊಡಿ ಎಂದು ಹಾಸನ ತಾಲೂಕಿನ ನಿಟ್ಟೂರು ಗ್ರಾಮದ ವೃದ್ಧರಾದ ರೆವಣ್ಣ ಸಿದ್ಧಪ್ಪ ಕಣ್ಣೀರಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಈಗ ನಮ್ಮ ಬದುಕಿಗೆ ಮಕ್ಕಳೇ ಭಾರ&lt;/strong&gt;&lt;/h2&gt;&lt;p&gt;ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ನಿಟ್ಟೂರು ಗ್ರಾಮದ ರೇವಣ್ಣ ಸಿದ್ದಪ್ಪ (86) ಹಾಗೂ ಅವರ ಪತ್ನಿ ಜಯಮ್ಮ (76) ತಮ್ಮ ನೋವು ತೋಡಿಕೊಂಡಿದ್ದು, ಮಕ್ಕಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟೆವು. ಆದರೆ ಈಗ ನಮ್ಮ ಬದುಕಿಗೆ ಮಕ್ಕಳೇ ಭಾರವಾಗಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯಿದ್ದು, ಎಲ್ಲರಿಗೂ ಮದುವೆ ಮಾಡಿ ಜವಾಬ್ದಾರಿ ಮುಗಿಸಿದ್ದೇವೆ. ಆದರೆ ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ.&lt;/p&gt;&lt;p&gt;ಪತ್ನಿ ಜಯಮ್ಮ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಕಳೆದ ಆರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವರ ಆರೈಕೆ ಮಾಡುವುದು ವಯಸ್ಸಾದ ತನಗೆ ಅತ್ಯಂತ ಕಷ್ಟವಾಗುತ್ತಿದೆ. ಒಂದು ಕಡೆ ಪತ್ನಿಯ ಅನಾರೋಗ್ಯ ಮತ್ತೊಂದೆಡೆ ತನ್ನ ವೃದ್ಧಾಪ್ಯ ಎರಡನ್ನೂ ನಿಭಾಯಿಸಲಾಗದೆ ಸಂಕಷ್ಟದಲ್ಲಿದ್ದೇನೆ ಎಂದು ರೇವಣ್ಣ ಸಿದ್ದಪ್ಪ ನೋವು ತೋಡಿಕೊಂಡರು.&lt;/p&gt;&lt;h3&gt;&lt;strong&gt;ಅಡುಗೆ ಮಾಡಿಕೊಳ್ಳುವ ಶಕ್ತಿಯೂ ಇಲ್ಲ&lt;/strong&gt;&lt;/h3&gt;&lt;p&gt;ವಾಸಿಸುತ್ತಿರುವ ಮನೆಯೂ ಶಿಥಿಲಾವಸ್ಥೆಯಲ್ಲಿದ್ದು, ವಯಸ್ಸಿನ ಕಾರಣ ಅಡುಗೆ ಮಾಡಿಕೊಳ್ಳುವ ಶಕ್ತಿಯೂ ಇಲ್ಲವಾಗಿದೆ. ಕೆಲವೊಮ್ಮೆ ಹೋಟೆಲ್&zwnj;ನಿಂದ ಊಟ ತಂದುಕೊಳ್ಳಬೇಕಾಗುತ್ತದೆ. ಹಣವಿಲ್ಲದ ಸಂದರ್ಭದಲ್ಲಿ ಎರಡು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾತ್ರಿ ಹಸಿವಿನಿಂದಲೇ ಮಲಗಿರುವ ದಿನಗಳೂ ಇವೆ ಎಂದು ಅವರು ಕಣ್ಣೀರಿಟ್ಟರು.&lt;/p&gt;&lt;p&gt;ತಮ್ಮ ಬದುಕಿಗೆ ಕೊನೆಯ ಆಸರೆಯಾಗಿರುವ ಎರಡು ಎಕರೆ ಜಮೀನನ್ನು ಹಂಚಿಕೆ ಮಾಡಿಕೊಡುವಂತೆ ಮಕ್ಕಳು ಒತ್ತಡ ಹೇರುತ್ತಿದ್ದಾರೆ. ನಮ್ಮನ್ನು ನೋಡಿಕೊಳ್ಳುವ ಬದಲು ಆಸ್ತಿಯ ಮೇಲೆಯೇ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಿರಿಯ ಮಗ ಕುಮಾರ ಪ್ರತಿನಿತ್ಯ ಮದ್ಯ ಸೇವಿಸಿ ಬಂದು ತಮ್ಮ ಮೇಲೆ ಹಲ್ಲೆ ನಡೆಸುತ್ತಾನೆ. ಈ ಕುರಿತು ಹಲವು ಬಾರಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸೂಕ್ತ ರಕ್ಷಣೆ ದೊರೆತಿಲ್ಲ. ವಯಸ್ಸಾದ ನಾವು ಯಾರ ಮೊರೆ ಹೋಗಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಮನೆಯಲ್ಲಿ ನೆಮ್ಮದಿ ಇಲ್ಲ, ಹೊರಗೆ ಹೋಗಿ ಬದುಕುವ ಶಕ್ತಿಯೂ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.&lt;/p&gt;&lt;h3&gt;&lt;strong&gt;ಪೊಲೀಸ್ ರಕ್ಷಣೆ ನೀಡುವಂತೆ ವೃದ್ದ ದಂಪತಿ ಮನವಿ&lt;/strong&gt;&lt;/h3&gt;&lt;p&gt;ದೈನಂದಿನ ಜೀವನ ನಿರ್ವಹಣೆಗೆ ಹಣದ ಅಗತ್ಯವಿರುವುದರಿಂದ ತಾವು ಕ್ರಯಕ್ಕೆ ಪಡೆದಿರುವ 20 ಗುಂಟೆ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದೇವೆ. ಆದರೆ ಮಗನಿಂದ ತೊಂದರೆಯಾಗುವ ಭಯವಿದ್ದು, ಜಮೀನು ಮಾರಾಟ ಮಾಡುವ ಸಂದರ್ಭದಲ್ಲಿ ಪೊಲೀಸ್ ರಕ್ಷಣೆ ನೀಡಬೇಕು ಎಂದು ದಂಪತಿ ಮನವಿ ಮಾಡಿದರು.&lt;/p&gt;&lt;p&gt;ತಮ್ಮ ಮೇಲೆ ಹಲ್ಲೆ ನಡೆಸುತ್ತಿರುವ ಮಗನ ವಿರುದ್ಧ ಎಫ್&zwnj;ಐಆರ್ ದಾಖಲಿಸಿ ಕಾನೂನು ರಕ್ಷಣೆ ಒದಗಿಸಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಗೆ ಅಗತ್ಯ ಆರೈಕೆ ಹಾಗೂ ತಮ್ಮಿಬ್ಬರಿಗೂ ಸುರಕ್ಷಿತ ಜೀವನ ಕಲ್ಪಿಸಬೇಕು ಎಂದು ಅಧಿಕಾರಿಗಳಲ್ಲಿ ಕೋರಿಕೊಂಡರು. ಮಕ್ಕಳಿಂದ ಹಿಂಸೆ ಅನುಭವಿಸಿ ಬದುಕುವುದಕ್ಕಿಂತ ವೃದ್ಧಾಶ್ರಮಕ್ಕಾದರೂ ಕಳುಹಿಸಿ. ಅಲ್ಲಾದರೂ ನೆಮ್ಮದಿಯಾಗಿ ಬದುಕುತ್ತೇವೆ. ನಮ್ಮನ್ನು ಹೀಗೆಯೇ ಬಿಟ್ಟರೆ ನಾವಿಬ್ಬರೂ ಸತ್ತು ಹೋಗುವ ಪರಿಸ್ಥಿತಿ ಬರುತ್ತದೆ ಎಂದು ರೇವಣ್ಣ ಸಿದ್ದಪ್ಪ ಕಣ್ಣೀರಿಟ್ಟರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;₹46.33 ಲಕ್ಷ ವೇತನದ ಉದ್ಯೋಗ ಪಡೆದ ಆಳ್ವಾಸ್ ಕಾಲೇಜಿನ ಹಾವೇರಿ ರೈತನ ಮಗಳು ಸೃಷ್ಟಿ ಉಳ್ಳಾಗಡ್ಡಿ&lt;/strong&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-elderly-couple-from-nittur-village-appeal-to-be-admitted-to-orphanage-child-abuse-mrq/articleshow-dz14ng2"/>
        </item>
        <item>
            <title><![CDATA[ಯಾರದ್ದೋ ಜಾಗದಲ್ಲಿ ಇನ್ನ್ಯಾರಿಗೋ ಮನೆ ಕಟ್ಟಲು ಪರವಾನಗಿ; ಅಕ್ರಮದಲ್ಲಿ ಪಿಡಿಒ ಕೈವಾಡ?]]></title>
            <link>https://kannada.asianetnews.com/karnataka-districts/hassan-sakaleshpur-building-permit-obtained-by-illegally-creating-an-account-for-the-disputed-land-mrq/articleshow-gkpwwu4</link>
            <guid isPermaLink="true">https://kannada.asianetnews.com/karnataka-districts/hassan-sakaleshpur-building-permit-obtained-by-illegally-creating-an-account-for-the-disputed-land-mrq/articleshow-gkpwwu4</guid>
            <pubDate>Tue, 01 Sep 2026 06:07:04 +0530</pubDate>
            <description><![CDATA[&lt;p&gt;ನ್ಯಾಯಾಲಯದ ಆದೇಶವಿದ್ದರೂ ವಿವಾದಿತ ಜಾಗಕ್ಕೆ ಅಕ್ರಮ ಖಾತೆ ಸೃಷ್ಟಿಸಿ ಕಟ್ಟಡ ಪರವಾನಗಿ ನೀಡಲಾಗಿದೆ ಎಂದು ಹಕ್ಕುದಾರ ಎಚ್. ಆರ್&zwnj;. ಅಶೋಕ್ ಆರೋಪಿಸಿದ್ದಾರೆ. ಈ ಅಕ್ರಮದಲ್ಲಿ ಪಿಡಿಒಗಳ ಕೈವಾಡವಿದ್ದು, ತಕ್ಷಣ ಕಾಮಗಾರಿ ನಿಲ್ಲಿಸಿ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಅವರು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1d67gvnrpsbzjahhza835je,imgname-hassan-1788222882676.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ವಿವಾದಿತ ಜಾಗಕ್ಕೆ ಅಕ್ರಮವಾಗಿ ಖಾತೆ ಸೃಷ್ಟಿಸಿ ಕಟ್ಟಡ ಪರವಾನಗಿ ನೀಡಲಾಗಿದೆ ಎಂದು ಭೂಮಿಯ ಹಕ್ಕುದಾರ ಎಚ್. ಆರ್&zwnj;. ಅಶೋಕ್ ಆರೋಪಿಸಿದರು.&lt;/p&gt;&lt;p&gt;ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಹಾನುಬಾಳು ಗ್ರಾಮದ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದಿಗೆ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಅನುಮತಿ ಪಡೆದು ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಹಾದಿಗೆ ಗ್ರಾಮದ ಸರ್ವೆ ನಂ.10/4ಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಹಿರಿಯ ಸಿವಿಲ್ ನ್ಯಾಯಾಲಯದ 10/2008ರ ಪ್ರಕರಣದ ಆದೇಶದಂತೆ ತಮಗೆ ಹಕ್ಕು ದೊರೆತಿದ್ದು, ಆರ್&zwnj;ಟಿಸಿಯಲ್ಲಿಯೂ ತಮ್ಮ ಹೆಸರು ದಾಖಲಾಗಿತ್ತು. ಈ ಜಾಗಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದು ತಿಳಿಸಿದರು. ಉಮೇಶ್ ಕೆ.ಎಸ್. ಹಾಗೂ ತುಳಸಿ ಅವರು ಮಂಜಪ್ಪ ಅವರ ಹೆಸರಿನಲ್ಲಿ ಈ ಜಾಗಕ್ಕೆ ಅಕ್ರಮ ಖಾತೆಯನ್ನು ಸೃಷ್ಟಿಸಿ ನಂತರ ಕಾನೂನು ದುರುಪಯೋಗಪಡಿಸಿಕೊಂಡು ಕಾನೂನುಬಾಹಿರವಾಗಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;h2&gt;&lt;strong&gt;ತೆರಿಗೆ ಸ್ವೀಕರಿಸಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ&lt;/strong&gt;&lt;/h2&gt;&lt;p&gt;ಈ ಕುರಿತು ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆಯೇ ನಡವಳಿ ನಡೆದಿದ್ದರೂ, ಅದನ್ನು ಗಣನೆಗೆ ತೆಗೆದುಕೊಳ್ಳದೆ, ಪಂಚಾಯತ್ ಕಾಯ್ದೆಯ ವಿರುದ್ದವಾಗಿ ತೆರಿಗೆ ಸ್ವೀಕರಿಸಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿರುವುದು ನಿಯಮಬಾಹಿರ ಎಂದು ದೂರಿದರು.&lt;/p&gt;&lt;p&gt;ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಬಾಕಿ ಇರುವಾಗಲೇ ಕಟ್ಟಡ ಕಾಮಗಾರಿಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಹಾಗೂ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ವಿವಾದಿತ ಜಾಗದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಒತ್ತಾಯಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ. ಜೊತೆಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗುವುದು ಎಂದು ಹೇಳಿದರು. ಇದೆಲ್ಲಾ ಅಕ್ರಮದಲ್ಲಿ ಹಾಲಿ ಪಿಡಿಒ ಮತ್ತು ಈ ಹಿಂದಿನ ಪಿಡಿಒ ಕೈವಾಡ ಇದೆ ಎಂದು ಆರೋಪಿಸಿದರು.&lt;/p&gt;&lt;h3&gt;&lt;strong&gt;ಅಕ್ರಮ ಆಗಿದ್ದು ಹೇಗೆ? ಮಂಜಪ್ಪ ಅವರ ಆರೋಪ ಏನು?&lt;/strong&gt;&lt;/h3&gt;&lt;p&gt;ಇದೇ ವೇಳೆ ಮಾತನಾಡಿದ ಮಂಜಪ್ಪ, ತಾನು ಅನಕ್ಷರಸ್ಥನಾಗಿದ್ದು, ಕೆಲವರು ನೀಡಿದ ಮಾಹಿತಿಯ ಮೇರೆಗೆ ದಾಖಲೆಗಳಿಗೆ ಸಹಿ ಮಾಡಿದ್ದೆ. ಬಳಿಕ ತನ್ನ ಹೆಸರಿನಲ್ಲಿ ಖಾತೆ ಮಾಡಿಸಿ, ನಂತರ ತನ್ನ ಹೆಸರಿನಿಂದ ಉಮೇಶ್ ಹಾಗೂ ತುಳಸಿ ಅವರ ಹೆಸರಿಗೆ ಖಾತೆ ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ. ಈ ಪ್ರಕ್ರಿಯೆ ಬಗ್ಗೆ ತನಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ನನ್ನ ಮುಗ್ಧತೆ ಹಾಗೂ ಸಾಮಾನ್ಯ ಜ್ಞಾನದ ಕೊರತೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ನಾನು ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದೆ, ನನಗೆ ಅಶೋಕ್ ಅವರ ತಂದೆಯವರು ವಾಸ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದರು ಎಂದು ವಿವರಿಸಿದ್ದರು ನಾನು ವಾಸವಾಗಿದ್ದನ್ನೇ ಆಧಾರವಾಗಿರಿಸಿಕೊಂಡು ಈ ರೀತಿಯ ಅಕ್ರಮ ಮಾಡಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;&lt;strong&gt;ಹೆಸರಿಗೆ ಮಾಡಿರುವ ಖಾತೆ ಕಾನೂನುಬಾಹಿರ&lt;/strong&gt;&lt;/p&gt;&lt;p&gt;ಗ್ರಾಮ ಪಂಚಾಯಿತಿ ಸದಸ್ಯ ಆಕಾಶ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿಯಲ್ಲಿ ನಡವಳಿ ನಡೆಸಲಾಗಿದ್ದು, ತುಳಸಿ ಹಾಗೂ ಉಮೇಶ್ ಅವರ ಹೆಸರಿಗೆ ಮಾಡಿರುವ ಖಾತೆ ಕಾನೂನುಬಾಹಿರವಾಗಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸುವಂತೆ ಸೂಚಿಸಲಾಗಿದೆ. ಇಂತಹ ವಿವಾದಿತ ಆಸ್ತಿಗೆ ಕಟ್ಟಡ ಪರವಾನಗಿ ನೀಡುವುದು ನಿಯಮಬಾಹಿರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Chikkaballapur: ತೋಟಗಳಲ್ಲಿಯೇ ಸೊರಗುತ್ತಿರುವ ಕೊತ್ತಂಬರಿ ಸೊಪ್ಪು; ರೈತರಿಗೆ ಭಾರೀ ನಷ್ಟ&lt;/strong&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-sakaleshpur-building-permit-obtained-by-illegally-creating-an-account-for-the-disputed-land-mrq/articleshow-gkpwwu4"/>
        </item>
        <item>
            <title><![CDATA[ನಾಳೆ ಯಶವಂತಪುರ-ಮಂಗಳೂರು ಸೆಂಟ್ರಲ್‌ ನಡುವೆ ವಂದೇ ಭಾರತ್‌ ಪರೀಕ್ಷಾರ್ಥ ಸಂಚಾರ]]></title>
            <link>https://kannada.asianetnews.com/karnataka-districts/yeshwantpur-mangaluru-vande-bharat-express-trial-run-schedule-san/articleshow-gqtcblt</link>
            <guid isPermaLink="true">https://kannada.asianetnews.com/karnataka-districts/yeshwantpur-mangaluru-vande-bharat-express-trial-run-schedule-san/articleshow-gqtcblt</guid>
            <pubDate>Fri, 04 Sep 2026 07:52:55 +0530</pubDate>
            <description><![CDATA[&lt;p&gt;ಮಂಗಳೂರು ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್&zwnj;ನ ಪರೀಕ್ಷಾರ್ಥ ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ. ಯಶವಂತಪುರ ಜಂಕ್ಷನ್&zwnj;ನಿಂದ ಮಂಗಳೂರು ಸೆಂಟ್ರಲ್&zwnj;ವರೆಗೆ ನಡೆಯಲಿರುವ ಈ ಪ್ರಾಯೋಗಿಕ ಓಟದ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1n3gjr8ad0469j3sye1ph47,imgname-vande-bharat-train-1788488469256.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಸೆ.4): &lt;/strong&gt;ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ಸಂಚಾರ ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಘಾಟ್ ವಿಭಾಗದಲ್ಲಿ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಿರುವ ವಂದೇ ಭಾರತ್ ಇದೀಗ ಬೆಂಗಳೂರು-ಮಂಗಳೂರು ನಡುವೆ ಇಡೀ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರಕ್ಕೆ ದಿನ ನಿಗದಿಪಡಿಸಿದೆ. ಶನಿವಾರ ಬೆಂಗಳೂರಿನ ಯಶವಂತಪುರ ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ಪರೀಕ್ಷಾರ್ಥ ಸಂಚಾರ ನಡೆಸಲಿದೆ.&lt;/p&gt;&lt;h2&gt;&lt;strong&gt;ತಾತ್ಕಾಲಿಕ ಪ್ರಾಯೋಗಿಕ ಸಂಚಾರದ ವೇಳಾಪಟ್ಟಿ&lt;/strong&gt;&lt;/h2&gt;&lt;p&gt;ಯಶವಂತಪುರ ಜಂಕ್ಷನ್&zwnj;ನಿಂದ ಮಂಗಳೂರಿಗೆ ಬೆಳಗ್ಗೆ 6.05ಕ್ಕೆ ರೈಲು ಹೊರಡಲಿದ್ದು, ಹಾಸನಕ್ಕೆ 9 ಗಂಟೆಗೆ ಬರಲಿದೆ, ಅಲ್ಲಿಂದ 9.05ಕ್ಕೆ ಹೊರಡಲಿದ್ದು, ಸಕಲೇಶಪುರಕ್ಕೆ 9.55ಕ್ಕೆ ತಲುಪಲಿದೆ. ಅಲ್ಲಿಂದ 10 ಗಂಟೆಗೆ ಹೊರಡಲಿರುವ ರೈಲು ಸುಬ್ರಹ್ಮಣ್ಯ ರಸ್ತೆಗೆ ಮಧ್ಯಾಹ್ನ 12.30ಕ್ಕೆ ತಲುಪಲಿದೆ. ಅಲ್ಲಿಂದ 12.35ಕ್ಕೆ ಹೊರಡುವ ರೈಲು, ಮಧ್ಯಾಹ್ನ 2.25ಕ್ಕೆ ಮಂಗಳೂರು ಸೆಂಟ್ರಲ್&zwnj; ತಲುಪಲಿದೆ.&lt;/p&gt;&lt;p&gt;ಇನ್ನು ಮಂಗಳೂರು ಸೆಂಟ್ರಲ್&zwnj;ನಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿರುವ ರೈಲು ಸುಬ್ರಹ್ಮಣ್ಯ ರಸ್ತೆ ರೈಲ್ವೇ ಸ್ಟೇಷಲ್&zwnj;ನೆ ಸಂಜೆ 4.30ಕ್ಕೆ ತಲುಪಲಿದೆ. ಸಕಲೇಶಪುರಕ್ಕೆ ಸಂಜೆ 6.30, ಹಾಸನಕ್ಕೆ ರಾತ್ರಿ 9.20 ಹಾಗೂ ಯಶವಂತಪುರ ಜಂಕ್ಷನ್&zwnj;ಗೆ ರಾತ್ರಿ 11 ಗಂಟೆಗೆ ತಲುಪಲಿದೆ.&lt;/p&gt;&lt;p&gt;ಯಶವಂತಪುರ - ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಅಧಿಕೃತ ಟಿಕೆಟ್ ದರವನ್ನು ರೈಲ್ವೆ ಇಲಾಖೆ ಇನ್ನು ಪ್ರಕಟಿಸಿಲ್ಲ. ಸದ್ಯಕ್ಕೆ ಕೇವಲ ಪ್ರಾಯೋಗಿಕ ಸಂಚಾರ (Trial Run) ಮಾತ್ರ ನಡೆಯುತ್ತಿರುವುದರಿಂದ, ವಾಣಿಜ್ಯ ಸಂಚಾರ ಆರಂಭವಾಗುವ ಮುನ್ನ ದರ ಪಟ್ಟಿ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/yeshwantpur-mangaluru-vande-bharat-express-trial-run-schedule-san/articleshow-gqtcblt"/>
        </item>
        <item>
            <title><![CDATA['ಚೆನ್ನಮ್ಮನ ಸಮಾಧಿ ಬಳಿ ಅನಾಥಾಶ್ರಮ, ಸಂಸ್ಕೃತ ಕೇಂದ್ರ' ಹತ್ತಾರು ಸೇವೆ; 2 ತಿಂಗಳಲ್ಲಿ ಯೋಜನೆ ಆರಂಭ- ದೇವೇಗೌಡ್ರು!]]></title>
            <link>https://kannada.asianetnews.com/karnataka-districts/hd-deve-gowda-chennamma-memorial-mavinakere-orphanage-sanskrit-centre-social-project-sat/articleshow-hznp80t</link>
            <guid isPermaLink="true">https://kannada.asianetnews.com/karnataka-districts/hd-deve-gowda-chennamma-memorial-mavinakere-orphanage-sanskrit-centre-social-project-sat/articleshow-hznp80t</guid>
            <pubDate>Sat, 29 Aug 2026 13:21:16 +0530</pubDate>
            <description><![CDATA[ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ತಮ್ಮ ದಿವಂಗತ ಪತ್ನಿ ಚೆನ್ನಮ್ಮ ಅವರ ಸ್ಮರಣಾರ್ಥ ಹಾಸನದ ಮಾವಿನಕೆರೆಯಲ್ಲಿ ಬೃಹತ್ ಸಾಮಾಜಿಕ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಅನಾಥಾಶ್ರಮ, ಬಡ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕೃತ ಅಧ್ಯಯನ ಕೇಂದ್ರವನ್ನು ನಿರ್ಮಿಸಲು ಅವರ ಕುಟುಂಬ ನಿರ್ಧರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyspnsb25v7e62jbfx66cg8y,imgname-chennamma-devegowda-1785421555042.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಆ.29): ತ&lt;/strong&gt;ಮ್ಮ ಧರ್ಮಪತ್ನಿ ದಿವಂಗತ ಚೆನ್ನಮ್ಮ ಅವರ ಪುಣ್ಯಭೂಮಿಯಲ್ಲಿ ಬಡ ಮಕ್ಕಳ ಏಳಿಗೆಗಾಗಿ ಬೃಹತ್ ಸಾಮಾಜಿಕ ಮತ್ತು ಧಾರ್ಮಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (H.D. Deve Gowda) ತಿಳಿಸಿದ್ದಾರೆ.&lt;/p&gt;&lt;p&gt;ಶ್ರಾವಣ ಶನಿವಾರದ ಪ್ರಯುಕ್ತ ಹಾಸನದ ಮಾವಿನಕೆರೆ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪತ್ನಿ ಚೆನ್ನಮ್ಮ ಅವರ ಸ್ಮರಣಾರ್ಥ ಮಾವಿನಕೆರೆಯ ಸಮಾಧಿ ಜಾಗದಲ್ಲಿ ಕೈಗೊಳ್ಳಲಿರುವ ಮಹತ್ವದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು.&lt;/p&gt;&lt;h2&gt;&lt;strong&gt;ಪಡುವಲಹಿಪ್ಪೆ ಬದಲು ಮಾವಿನಕೆರೆಯಲ್ಲೇಕೆ ಸಮಾಧಿ?&lt;/strong&gt;&lt;/h2&gt;&lt;p&gt;'ನನ್ನ ಹೆಂಡತಿ ಚೆನ್ನಮ್ಮ ದೈವಾಧೀನರಾದಾಗ ನಮ್ಮ ಹುಟ್ಟೂರಾದ ಪಡುವಲಹಿಪ್ಪೆಯ ತೋಟದಲ್ಲಿ ಸಮಾಧಿ ಮಾಡಬೇಕೆಂದು ನಾನು ತೀರ್ಮಾನಿಸಿದ್ದೆ. ಆದರೆ, ನನ್ನ ಮಕ್ಕಳು ರಂಗನಾಥ ಸ್ವಾಮಿಯ ಸನ್ನಿಧಿಯಲ್ಲೇ ಸಮಾಧಿ ಮಾಡಲು ನಿರ್ಧಾರ ಮಾಡಿದರು. ಆ ಜಾಗದಲ್ಲಿ ಬಡ ಜನರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ದೊಡ್ಡ ಯೋಜನೆಯೊಂದನ್ನು ರೂಪಿಸಲು ಮಕ್ಕಳು ತೀರ್ಮಾನಿಸಿದ್ದಾರೆ. ಈ ಸೇವಾ ಕಾರ್ಯಕ್ಕೆ ನಾನು ಸಂಪೂರ್ಣ ಒಪ್ಪಿಗೆ ನೀಡಿದ್ದೇನೆ' ಎಂದು ದೇವೇಗೌಡರು ಹೇಳಿದರು.&lt;/p&gt;&lt;h2&gt;&lt;strong&gt;ಏನೆಲ್ಲಾ ಯೋಜನೆಗಳು ನಿರ್ಮಾಣವಾಗಲಿವೆ?&lt;/strong&gt;&lt;/h2&gt;&lt;p&gt;ಮಾವಿನಕೆರೆಯ ಸಮಾಧಿ ಸ್ಥಳದಲ್ಲಿ ಕೇವಲ ಸ್ಮಾರಕ ನಿರ್ಮಿಸದೆ, ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ:&lt;/p&gt;&lt;p&gt;&lt;strong&gt;ಅನಾಥಾಶ್ರಮ ನಿರ್ಮಾಣ: &lt;/strong&gt;ಅಸಹಾಯಕ ಮಕ್ಕಳಿಗೆ ಆಸರೆಯಾಗಲು ಅನಾಥಾಶ್ರಮ.&lt;/p&gt;&lt;p&gt;&lt;strong&gt;ಬಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ:&lt;/strong&gt; ನಿರ್ಗತಿಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ.&lt;/p&gt;&lt;p&gt;&lt;strong&gt;ಸಂಸ್ಕೃತ ಅಧ್ಯಯನ ಕೇಂದ್ರ: &lt;/strong&gt;ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತ ಭಾಷಾ ಅಧ್ಯಯನಕ್ಕೆ ವಿಶೇಷ ಕೇಂದ್ರ.&lt;/p&gt;&lt;p&gt;ಇದರೊಂದಿಗೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನೀಲನಕ್ಷೆ ಸಿದ್ಧಪಡಿಸಲಾಗಿದೆ.&lt;/p&gt;&lt;h2&gt;&lt;strong&gt;ನಾನು ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ:&lt;/strong&gt;&lt;/h2&gt;&lt;p&gt;ತಮ್ಮ ಇಳಿವಯಸ್ಸನ್ನು ನೆನೆದು ಭಾವುಕರಾದ ಮಾಜಿ ಪ್ರಧಾನಿಗಳು, 'ಇನ್ನೊಂದು-ಎರಡು ತಿಂಗಳಲ್ಲಿ ಕುಟುಂಬಸ್ಥರೆಲ್ಲರೂ ದೆಹಲಿಯಿಂದ ಬಂದು ಈ ಪ್ರಾಜೆಕ್ಟ್ ಕಾಮಗಾರಿಯನ್ನು ಅಧಿಕೃತವಾಗಿ ಶುರು ಮಾಡುತ್ತಾರೆ. ನಾನು ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ. ಈ ಯೋಜನೆ ಪೂರ್ಣಗೊಳ್ಳುವವರೆಗೂ ನಾನು ಇರ್ತಿನೋ ಅಥವಾ ಮುಂಚೆಯೇ ಹೋಗ್ತಿನೋ ತಿಳಿಯದು. ಆದರೆ, ನಾನು ಇದ್ದರೂ ಈ ಯೋಜನೆ ನಡೆಯುತ್ತೆ, ಇಲ್ಲದಿದ್ದರೂ ನಡೆಯುತ್ತೆ. ಯೋಜನೆ ಖಂಡಿತ ಯಶಸ್ವಿಯಾಗುತ್ತದೆ' ಎಂದು ಕಣ್ಣೀರಾದರು.&lt;/p&gt;&lt;h2&gt;&lt;strong&gt;ರಾಷ್ಟ್ರದ ನಾಯಕರಿಗೆ ಮತ್ತು ಜನತೆಗೆ ಧನ್ಯವಾದ:&lt;/strong&gt;&lt;/h2&gt;&lt;p&gt;'ನಾವಿಬ್ಬರೂ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದವರು. ಆದರೆ ಚೆನ್ನಮ್ಮನವರ ಅಗಲಿಕೆಯ ವೇಳೆ ನಾಡಿನ ಜನತೆ ಮತ್ತು ಮಾಧ್ಯಮಗಳು ತೋರಿದ ಪ್ರೀತಿ, ಗೌರವವನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರಧಾನಿ ಸೇರಿದಂತೆ ದೇಶದ ಅನೇಕ ರಾಷ್ಟ್ರ ಮಟ್ಟದ ಗಣ್ಯರು ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ನಮ್ಮ ಇಡೀ ಕುಟುಂಬದ ಪರವಾಗಿ ಎಲ್ಲರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ದೇವೇಗೌಡರು ಹೇಳಿದರು.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hd-deve-gowda-chennamma-memorial-mavinakere-orphanage-sanskrit-centre-social-project-sat/articleshow-hznp80t"/>
        </item>
        <item>
            <title><![CDATA[Hassan: ದಿನಕ್ಕೆ 5 ಸಾವಿರ ರೂ ಸಂಪಾದನೆ, 26 ಲಕ್ಷದ ಮನೆ ಕಟ್ಟಿಕೊಂಡ ರೈತ ಮಹಿಳೆ ಆಶಾ]]></title>
            <link>https://kannada.asianetnews.com/gallery/karnataka-districts/hassan-shravanabelagola-asha-a-farmer-from-parama-village-has-found-success-in-dairy-farming-with-12-cows-mrq-myq9syo</link>
            <guid isPermaLink="true">https://kannada.asianetnews.com/gallery/karnataka-districts/hassan-shravanabelagola-asha-a-farmer-from-parama-village-has-found-success-in-dairy-farming-with-12-cows-mrq-myq9syo</guid>
            <pubDate>Tue, 01 Sep 2026 11:20:33 +0530</pubDate>
            <description><![CDATA[&lt;p&gt;ಹಾಸನದ ರೈತ ಮಹಿಳೆ ಆಶಾ, 12 ಹಸುಗಳಿಂದ ಹೈನುಗಾರಿಕೆ ಮಾಡಿ ಯಶಸ್ಸು ಕಂಡಿದ್ದಾರೆ. ತಿಂಗಳಿಗೆ ಒಂದೂವರೆ ಲಕ್ಷ ಸಂಪಾದಿಸುವ ಅವರು, ಆಧುನಿಕ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಸೇರಿದಂತೆ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1dqpxbx9b0b7nbzrgxqe8dg,imgname-dairy-farming---3--1788241212797.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನದ ರೈತ ಮಹಿಳೆ ಆಶಾ, 12 ಹಸುಗಳಿಂದ ಹೈನುಗಾರಿಕೆ ಮಾಡಿ ಯಶಸ್ಸು ಕಂಡಿದ್ದಾರೆ. ತಿಂಗಳಿಗೆ ಒಂದೂವರೆ ಲಕ್ಷ ಸಂಪಾದಿಸುವ ಅವರು, ಆಧುನಿಕ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಸೇರಿದಂತೆ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸಾಧಿಸುವ ಛಲವೊಂದಿದ್ದರೆ ಏನು ಬೇಕಾದ್ರೂ ಸಾಧಿಸಬಹುದು ಎಂಬುದಕ್ಕೆ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಪರಮ ಗ್ರಾಮದ ನಿವಾಸಿ ಆಶಾ ಸಾಕ್ಷಿಯಾಗಿದ್ದಾರೆ. ಆಶಾ ಅವರು ಹಾಲು ಕೃಷಿಯಲ್ಲಿ ಯಶಸ್ಸು ಕಂಡ ರೈತ ಮಹಿಳೆಯಾಗಿದ್ದಾರೆ. ಕಳೆದ 10 ವರ್ಷದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಆಶಾ ಅವರ ಒಂದು ದಿನದ ಸಂಪಾದನೆ 5 ಸಾವಿರ ರೂಪಾಯಿ ಆಗಿದೆ.&lt;/p&gt;&lt;img&gt;&lt;p&gt;ಸುಮಾರು 4 ಎಕರೆ ಭೂಮಿಯಲ್ಲಿ ಕೃಷಿ ಜೊತೆ 12 ಹಸುಗಳನ್ನಿಟ್ಟುಕೊಂಡು ಹೈನುಗಾರಿಕೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಸುಮಾರು 8 ಲಕ್ಷ ಮೌಲ್ಯದಲ್ಲಿ ತಮ್ಮದೇ ಸ್ವಂತ ಡೈರಿಯೊಂದನ್ನು ಆರಂಭಿಸಿದ್ದಾರೆ. 12 ಹಸುಗಳಿಂದ ಪ್ರತಿನಿತ್ಯ ಅಂದಾಜು 38 ರಿಂದ 40 ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ದಿನಕ್ಕೆ 5 ಸಾವಿರ ರೂಪಾಯಿ ಅಂದ್ರೆ ತಿಂಗಳಿಗೆ ನನ್ನ ಸಂಬಳ ಒಂದರಿಂದ ಒಂದೂವರೆ ಲಕ್ಷದಷ್ಟು ಸಂಬಳ ಆಗುತ್ತದೆ. ಎಲ್ಲಿಯೂ ಹೋಗದೇ ಮನೆಯಲ್ಲಿದ್ದುಕೊಂಡು ಲಕ್ಷ ಲಕ್ಷ ಹಣವನ್ನು ಆಶಾ ಸಂಪಾದಿಸುತ್ತಾರೆ.&lt;/p&gt;&lt;img&gt;&lt;p&gt;ಹೈನುಗಾರಿಕೆಯಲ್ಲಿ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡ್ರೆ ಯಾವುದೇ ಹೊರೆಯಾಗಲ್ಲ. ನಾವು ಮನೆಯವರೇ ಈ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತವೆ. ಬೆಳಗ್ಗೆ ಎರಡ್ಮೂರು ಗಂಟೆ ಮತ್ತು ಸಂಜೆ ಒಂದೆರಡು ಗಂಟೆ ಕೆಲಸ ಮಾಡಿದ್ರೆ ಸಾಕಾಗುತ್ತದೆ. ಒಂದು ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ರೂ ನಾನು ಒಬ್ಬಳೇ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇನೆ ಅಂತಾರೆ ಸಾಧಕಿ ಆಶಾ.&lt;/p&gt;&lt;img&gt;&lt;p&gt;ನನ್ನೊಂದಿಗೆ ನನ್ನ ಸೋದರ ಸಹ 20 ಹಸುಗಳಿಂದ ಹೈನುಗಾರಿಗೆ ಆರಂಭಿಸಿದನು. ಆದ್ರೆ ನಿರ್ವಹಣೆ ಸೇರಿದಂತೆ ಕೆಲಸದ ಒತ್ತಡ ಹೆಚ್ಚಾಗಿದ್ದರಿಂದ ಅರ್ಧಕ್ಕೆ ನಿಲ್ಲಿಸಿದ. ತಾಳ್ಮೆ ಮತ್ತು ಕ್ರಮಬದ್ಧವಾಗಿ ಕೆಲಸ ಮಾಡಿದ್ರೆ ಯಾವುದೂ ಸಹ ಹೊರೆಯಾಗಲ್ಲ. ಸುಮಾರು 40 ಟನ್&zwnj;ನಷ್ಟು ಮೇವು ಸ್ಟೋರ್ ಮಾಡಿಕೊಂಡ್ರೆ ಮನೆಯಲ್ಲಿಯೇ 6 ತಿಂಗಳವರೆಗೆ ಹಸುಗಳನ್ನು ಮೇಯಿಸಿಕೊಳ್ಳಬಹುದು. ನಾಲ್ಕು ಎಕರೆಯ ಒಂದು ಭಾಗದಲ್ಲಿ ಮೇವು ಬೆಳೆದುಕೊಳ್ಳುತ್ತೇನೆ ಎಂದು ಆಶಾ ಹೇಳುತ್ತಾರೆ.&lt;/p&gt;&lt;img&gt;&lt;p&gt;ಈ ಪ್ರಶ್ನೆಗೆ ಉತ್ತರಿಸಿದ ಆಶಾ, ಇಬ್ಬರು ಮಕ್ಕಳನ್ನು ಓದಿಸುತ್ತಿದ್ದೇವೆ. ದೊಡ್ಡವಳದು ಡಿಗ್ರಿ ಆಗಿದ್ದು, ನನ್ನೊಂದಿಗೆ ಕೆಲಸ ಮಾಡಿಕೊಂಡಿದ್ದಾಳೆ. ಚಿಕ್ಕವಳು ಫಸ್ಟ್ ಇರ್ ಡಿಗ್ರಿ ಓದುತ್ತಿದ್ದಾಳೆ. ಹೈನುಗಾರಿಕೆಯಿಂದ ಬಂದ ಹಣದಿಂದಲೇ ಒಂದಿಷ್ಟು ಚಿನ್ನದೊಡವೆ ಮಾಡಿಸಿಕೊಂಡಿದ್ದೇನೆ. ಎರಡು ಬೈಕ್ ಖರೀದಿಸಿದ್ದೇವೆ. ಸುಮಾರು 26 ಲಕ್ಷ ಖರ್ಚು ಮಾಡಿ ಮನೆ ಕಟ್ಟಿಸುತ್ತಿದ್ದೇವೆ. ಹಸುಗಳಿಗಾಗಿ ದೊಡ್ಡ ಶೆಡ್ ನಿರ್ಮಾಣ ಮಾಡಿಕೊಂಡಿದ್ದೇವೆ ಎಂದು ಆಶಾ ತಿಳಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/hassan-shravanabelagola-asha-a-farmer-from-parama-village-has-found-success-in-dairy-farming-with-12-cows-mrq-myq9syo"/>
        </item>
        <item>
            <title><![CDATA['ನಾನು 2ನೇ ಹೆಂಡತಿ ಮಗ, ಮೊದಲ ಪತ್ನಿಯ 3 ಮಕ್ಕಳೂ ತೀರಿಕೊಂಡ್ರು': ಬಾಲ್ಯ ನೆನೆದು ಭಾವುಕರಾದ ದೇವೇಗೌಡ್ರು!]]></title>
            <link>https://kannada.asianetnews.com/karnataka-districts/hd-deve-gowda-shares-childhood-memories-mavinakere-betta-hassan-family-history-sat/articleshow-nzf98n5</link>
            <guid isPermaLink="true">https://kannada.asianetnews.com/karnataka-districts/hd-deve-gowda-shares-childhood-memories-mavinakere-betta-hassan-family-history-sat/articleshow-nzf98n5</guid>
            <pubDate>Sat, 29 Aug 2026 12:24:34 +0530</pubDate>
            <description><![CDATA[ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಶ್ರಾವಣ ಶನಿವಾರದಂದು ಹಾಸನದ ಮಾವಿನಕೆರೆ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ತಮ್ಮ ಜನನದ ಹಿಂದಿನ ಕಣ್ಣೀರ ಕಥೆ ಹಾಗೂ ತಮ್ಮ ತಂದೆಯೊಂದಿಗೆ ಬೆಟ್ಟಕ್ಕೆ ಬರುತ್ತಿದ್ದ ಬಾಲ್ಯದ ದಿನಗಳನ್ನು ಭಾವುಕರಾಗಿ ಸ್ಮರಿಸಿಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01m164jevn2b6wf26zc7yqk2mz,imgname-hd-deve-gowda-ranganathswamy-temple-1787986262901.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಆ.29): ತ&lt;/strong&gt;ಮ್ಮ ರಾಜಕೀಯ ಹಾಗೂ ವೈಯಕ್ತಿಕ ಜೀವನದ ಶಕ್ತಿ ಕೇಂದ್ರ ಎಂದೇ ಭಾವಿಸುವ ಹಾಸನ ಜಿಲ್ಲೆಯ ಪವಿತ್ರ ಕ್ಷೇತ್ರ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (H.D. Deve Gowda) ಅವರು ಶ್ರಾವಣ ಶನಿವಾರದ ಪ್ರಯುಕ್ತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಬಾಲ್ಯದ ನೆನಪುಗಳು ಹಾಗೂ ಕುಟುಂಬದ ಅಪರೂಪದ ಹಳೆಯ ಇತಿಹಾಸವನ್ನು ಅತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;50 ವರ್ಷಗಳ ಭಕ್ತಿ, ತಂದೆಯ ಹೆಗಲೇರಿ ಬಂದ ದಿನಗಳು:&lt;/strong&gt;&lt;/h2&gt;&lt;p&gt;ಮಾವಿನಕೆರೆ ಬೆಟ್ಟದೊಂದಿಗಿನ ತಮ್ಮ ಅವಿನಾಭಾವ ನಂಟನ್ನು ಸ್ಮರಿಸಿದ ದೇವೇಗೌಡರು, 'ಯಾವುದಾದರೂ ಒಂದು ಶ್ರಾವಣ ಶನಿವಾರ ಈ ಪವಿತ್ರ ಕ್ಷೇತ್ರಕ್ಕೆ ಬರುವ ಸಂಪ್ರದಾಯವನ್ನು ಕಳೆದ 50 ವರ್ಷಗಳಿಂದ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇನೆ. ನನಗೆ ಒಂಬತ್ತು ವರ್ಷ ವಯಸ್ಸಿದ್ದಾಗಿನಿಂದಲೂ ನನ್ನ ತಂದೆಯವರ ಜೊತೆ ಇಲ್ಲಿಗೆ ಬರುತ್ತಿದ್ದೆ. ಆ ಕಾಲದಲ್ಲಿ ಬೆಟ್ಟ ಹತ್ತಲು ಮೆಟ್ಟಿಲುಗಳೇ ಇರಲಿಲ್ಲ. ನಮ್ಮ ಹಳ್ಳಿಯಿಂದ ಕಾಲುದಾರಿಯ ಮೂಲಕ ನನ್ನ ತಂದೆ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಈ ಬೆಟ್ಟಕ್ಕೆ ಕರೆದುಕೊಂಡು ಬರುತ್ತಿದ್ದರು' ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.&lt;/p&gt;&lt;h2&gt;&lt;strong&gt;ಮೊದಲ ಪತ್ನಿಯ ಮೂವರು ಮಕ್ಕಳು ಸಾವನ್ನಪ್ಪಿದ್ದರು:&lt;/strong&gt;&lt;/h2&gt;&lt;p&gt;ತಮ್ಮ ಜನನದ ಹಿಂದಿನ ಕಣ್ಣೀರ ಕಥೆಯನ್ನು ಬಿಚ್ಚಿಟ್ಟ ಮಾಜಿ ಪ್ರಧಾನಿಗಳು, 'ನಮ್ಮ ತಂದೆಯ ಮೊದಲ ಹೆಂಡತಿಗೆ ಹುಟ್ಟಿದ ಮೂವರು ಮಕ್ಕಳೂ ಅಕಾಲಿಕವಾಗಿ ತೀರಿಹೋದರು. ಮಕ್ಕಳ ಸಾವಿನ ಬಳಿಕ ತಂದೆಯವರು ಎರಡನೇ ಮದುವೆಯಾದರು (ದೇವೇಗೌಡರ ತಾಯಿ). ಪುತ್ರ ಸಂತಾನಕ್ಕಾಗಿ ನಮ್ಮ ತಂದೆ-ತಾಯಿ ಊರಿನ ದೇವಸ್ಥಾನ ಹಾಗೂ ಈ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿಯ ಸನ್ನಿಧಿಗೆ ಬಂದು ಹರಕೆ ಹೊತ್ತು ಪೂಜೆ ಸಲ್ಲಿಸುತ್ತಿದ್ದರು. ಅವರ ಪ್ರಾರ್ಥನೆಯ ಫಲವಾಗಿ ನಾನು ಜನಿಸಿದೆ. ಹಾಗಾಗಿ ನಾನು ಎರಡನೇ ಹೆಂಡತಿಯ ಮಗ' ಎಂದು ಭಾವುಕರಾಗಿ ತಿಳಿಸಿದರು.&lt;/p&gt;&lt;h2&gt;&lt;strong&gt;ಅತ್ಯಂತ ಪುರಾತನ ಮತ್ತು ಶಕ್ತಿಶಾಲಿ ಪುಣ್ಯಕ್ಷೇತ್ರ:&lt;/strong&gt;&lt;/h2&gt;&lt;p&gt;ಮಾವಿನಕೆರೆ ಬೆಟ್ಟವು ಅತ್ಯಂತ ಪುರಾತನ ಹಾಗೂ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ. ಇಲ್ಲಿನ ರಂಗನಾಥ ಸ್ವಾಮಿಯ ಕೃಪೆಯಿಂದಲೇ ನಮ್ಮ ಕುಟುಂಬ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂಬ ಅಚಲ ನಂಬಿಕೆ ನನಗಿದೆ. ಆ ಕಾರಣಕ್ಕಾಗಿಯೇ ಎಷ್ಟೇ ವಯಸ್ಸಾದರೂ, ಯಾವುದೇ ಪರಿಸ್ಥಿತಿಯಲ್ಲೂ ಪ್ರತಿ ವರ್ಷ ಇಲ್ಲಿಗೆ ಬಂದು ದೇವರ ದರ್ಶನ ಪಡೆಯುವುದನ್ನು ಮುಂದುವರಿಸಿದ್ದೇನೆ ಎಂದು ದೇವೇಗೌಡರು ಹೇಳಿದರು.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hd-deve-gowda-shares-childhood-memories-mavinakere-betta-hassan-family-history-sat/articleshow-nzf98n5"/>
        </item>
        <item>
            <title><![CDATA[ನೈಋತ್ಯಕ್ಕೆ ಮಂಗಳೂರು ವಿವಾದದ ನಡುವೆಯೇ ಕೊಂಕಣ ರೈಲ್ವೆ ವಿಲೀನ ಪ್ರಸ್ತಾಪ, ಕರಾವಳಿಯ ರೈಲ್ವೆ ಭವಿಷ್ಯ ಸವಾಲು!]]></title>
            <link>https://kannada.asianetnews.com/india-news/mangaluru-railway-jurisdiction-shift-konkan-railway-merger-and-swr-integration-explained-gdp/articleshow-o7auq1x</link>
            <guid isPermaLink="true">https://kannada.asianetnews.com/india-news/mangaluru-railway-jurisdiction-shift-konkan-railway-merger-and-swr-integration-explained-gdp/articleshow-o7auq1x</guid>
            <pubDate>Sat, 29 Aug 2026 19:34:53 +0530</pubDate>
            <description><![CDATA[ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಲಾಗಿದೆ, ಇದು ಪ್ರತ್ಯೇಕ ಮಂಗಳೂರು ವಿಭಾಗ ರಚನೆಯ ಮೊದಲ ಹೆಜ್ಜೆಯಾಗಿದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯು ಷೇರುದಾರ ರಾಜ್ಯಗಳೊಂದಿಗಿನ ಮಾತುಕತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಸವಾಲುಗಳನ್ನು ಎದುರಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf6fzpgk0wjxhndqarech1m,imgname-konkan-railways--4--1781847817936.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸುವ ನಿರ್ಧಾರವು ಕೇವಲ ಆಡಳಿತಾತ್ಮಕ ಬದಲಾವಣೆಯಷ್ಟೇ ಅಲ್ಲ; ಇದು ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಹೊಸ ಶಕೆಯ ಆರಂಭವಾಗಿದೆ. ಈ ಚ ಕೊಂಕಣ ರೈಲ್ವೆಯನ್ನು ಪೂರ್ಣಪ್ರಮಾಣದಲ್ಲಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಮತ್ತು ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗವನ್ನು ಸ್ಥಾಪಿಸುವ ಪ್ರಕ್ರಿಯೆಯು ಪ್ರಮುಖ ಘಟ್ಟ ತಲುಪಿದೆ.&lt;/p&gt;&lt;h2&gt;ವಲಯ ಪುನರ್ರಚನೆ ಮತ್ತು ನೂತನ ಮಂಗಳೂರು ವಿಭಾಗ&lt;/h2&gt;&lt;p&gt;ಉಳ್ಳಾಲ ಸೇರಿದಂತೆ ಮಂಗಳೂರು ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಅಡಿಯಲ್ಲಿ ಮೈಸೂರು ವಿಭಾಗಕ್ಕೆ ಸ್ಥಳಾಂತರಿಸುವುದರೊಂದಿಗೆ ಪ್ರಮುಖ ಮೊದಲ ಹಂತ ಪೂರ್ಣಗೊಂಡಿದೆ. ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿ ವಿಭಾಗಗಳ ಮಾದರಿಯಲ್ಲೇ ನೈಋತ್ಯ ರೈಲ್ವೆಯ ಅಡಿಯಲ್ಲಿ ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗವನ್ನು ರಚಿಸುವ ಪ್ರಯತ್ನಗಳು ಸಾಗಿವೆ.&lt;/p&gt;&lt;p&gt;ಕೊಂಕಣ ರೈಲ್ವೆ ವ್ಯಾಪ್ತಿಯ ತೋಕೂರಿನಿಂದ ಗೋವಾದ ತಿವಿಮ್ ನಿಲ್ದಾಣದವರೆಗೆ 30 ನಿಲ್ದಾಣಗಳನ್ನೊಳಗೊಂಡ ಭಾಗವನ್ನು ನೈಋತ್ಯ ರೈಲ್ವೆಗೆ ಸೇರಿಸುವ ಯೋಜನೆ ಇದೆ. ರೋಹಾದಿಂದ ತಿವಿಮ್&zwnj;ವರೆಗಿನ 38 ನಿಲ್ದಾಣಗಳನ್ನು ಒಳಗೊಂಡ ಮಾರ್ಗವನ್ನು ಕೇಂದ್ರ ರೈಲ್ವೆಯ ಅಡಿಯಲ್ಲಿ ತರಲು ಉದ್ದೇಶಿಸಲಾಗಿದೆ. ಮಡಗಾಂವ್ ನಿಲ್ದಾಣವನ್ನು ಯಾವ ವಲಯಕ್ಕೆ ಸೇರಿಸಬೇಕೆಂಬ ಕುರಿತು ಎರಡು ವಲಯಗಳ ನಡುವೆ ಇರುವ ಭಿನ್ನಾಭಿಪ್ರಾಯದಿಂದಾಗಿ ಹೊಸ ವಿಭಾಗ ರಚನೆಯ ಕ್ರಮ ತುಸು ವಿಳಂಬವಾಗಿದೆ.&lt;/p&gt;&lt;h2&gt;ಕೊಂಕಣ ರೈಲ್ವೆ ಕಾರ್ಪೊರೇಷನ್ ಷೇರು&lt;/h2&gt;&lt;p&gt;ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಅನ್ನು 1990 ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ರೈಲ್ವೆ ಸಚಿವಾಲಯ ಮತ್ತು ನಾಲ್ಕು ರಾಜ್ಯಗಳು ಇದರಲ್ಲಿ ಷೇರುಗಳನ್ನು ಹೊಂದಿವೆ. ಕೇಂದ್ರ ರೈಲ್ವೆ ಸಚಿವಾಲಯ (ಶೇ. 66.79), ಮಹಾರಾಷ್ಟ್ರ (ಶೇ. 14.91), ಕರ್ನಾಟಕ (ಶೇ. 10.17), ಗೋವಾ ಹಾಗೂ ಕೇರಳ (ತಲಾ ಶೇ. 4.07).&lt;/p&gt;&lt;h2&gt;ವಿಲೀನ ಪ್ರಕ್ರಿಯೆ ಮತ್ತು ಎದುರಾಗಿರುವ ಸವಾಲುಗಳು&lt;/h2&gt;&lt;p&gt;ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ಸಂಪೂರ್ಣವಾಗಿ ವಿಲೀನಗೊಳಿಸಲು ಸಂಸ್ಥೆಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನಕ್ಕೆ ಬರಬೇಕಿದೆ. ಲೋಕಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ರೈಲ್ವೆ ಸಚಿವಾಲಯವು ಈ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿಯನ್ನು ಸ್ಪಷ್ಟಪಡಿಸಿದೆ.&lt;/p&gt;&lt;p&gt;ಷೇರುದಾರ ರಾಜ್ಯಗಳು ಅಗತ್ಯವಿರುವ ಬಂಡವಾಳ ವೆಚ್ಚಕ್ಕೆ ಕೊಡುಗೆ ನೀಡಬೇಕು ಅಥವಾ ತಮ್ಮ ಷೇರುಗಳನ್ನು ರೈಲ್ವೆ ಸಚಿವಾಲಯಕ್ಕೆ ವರ್ಗಾಯಿಸಬೇಕು ಎಂದು ಸೂಚಿಸಲಾಗಿದೆ. ಮಹಾರಾಷ್ಟ್ರ ತನ್ನ ಷೇರು ಹಿಂತೆಗೆತಕ್ಕೆ ಪ್ರತಿಯಾಗಿ ₹396.54 ಕೋಟಿ ಪರಿಹಾರ ಕೋರಿದೆ. ಕೇರಳ ತನ್ನ ಪಾಲಿನ (ಅಂದಾಜು ₹90 ಕೋಟಿ) ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಕರ್ನಾಟಕವು ಕೆಆರ್&zwnj;ಸಿಎಲ್&zwnj;ನಿಂದ ನಿರ್ಗಮಿಸಲು ವಿಭಿನ್ನ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದು, ಈ ಬೇಡಿಕೆಗಳ ಅಂತಿಮ ಪರಿಹಾರ ಇನ್ನೂ ಕಂಡುಕೊಳ್ಳಬೇಕಿದೆ.&lt;/p&gt;&lt;h2&gt;ಮೂಲಸೌಕರ್ಯ ಮತ್ತು ರೈಲು ಸೇವೆಗಳು&lt;/h2&gt;&lt;p&gt;ಮೂರು ದಶಕಗಳಷ್ಟು ಹಳೆಯದಾದ ಕೊಂಕಣ ರೈಲ್ವೆಯ ಹಳಿ ದ್ವಿಗುಣಗೊಳಿಸುವಿಕೆ, ಸುರಂಗ ನವೀಕರಣ ಮತ್ತು ಸುರಕ್ಷತಾ ಕಾರ್ಯಗಳಿಗೆ ಭಾರಿ ಬಂಡವಾಳದ ಅಗತ್ಯವಿದೆ. ಸಂಸ್ಥೆಯ ಸೀಮಿತ ಆದಾಯ ಮೂಲಗಳಿಂದಾಗಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿದ್ದು, ವಿಲೀನದ ಮೂಲಕವೇ ಈ ಮೂಲಸೌಕರ್ಯಗಳನ್ನು ಆಧುನೀಕರಿಸಲು ಸಾಧ್ಯ.&lt;/p&gt;&lt;p&gt;ಪ್ರಸ್ತುತ ಈ ಮಾರ್ಗದಲ್ಲಿ ದಿನನಿತ್ಯ 114 ಮೇಲ್, ಎಕ್ಸ್&zwnj;ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿದ್ದು, ಬಹುತೇಕ ರೈಲುಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರ ನಿರಂತರ ಬೇಡಿಕೆಯನ್ನು ಪರಿಗಣಿಸಿ ಹೊಸ ರೈಲು ಸೇವೆ, ಸಂಚಾರ ವಿಸ್ತರಣೆ ಮತ್ತು ತಾತ್ಕಾಲಿಕ ಅಥವಾ ಶಾಶ್ವತ ಬೋಗಿಗಳ ಹೆಚ್ಚಳದ ಮೂಲಕ ಸೇವೆಯನ್ನು ಸುಧಾರಿಸುವ ಪ್ರಯತ್ನಗಳು ಮುಂದುವರಿದಿವೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/mangaluru-railway-jurisdiction-shift-konkan-railway-merger-and-swr-integration-explained-gdp/articleshow-o7auq1x"/>
        </item>
        <item>
            <title><![CDATA[ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ: ಹಲವು ಟ್ರೈನ್‌ ವ್ಯಾಪ್ತಿ ಬದಲಾವಣೆ, ಇಲ್ಲಿದೆ ರೈಲುಗಳ ಪಟ್ಟಿ]]></title>
            <link>https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s</link>
            <guid isPermaLink="true">https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s</guid>
            <pubDate>Mon, 24 Aug 2026 12:07:57 +0530</pubDate>
            <description><![CDATA[ಅಕ್ಟೋಬರ್ 1 ರಿಂದ ಮಂಗಳೂರು ರೈಲ್ವೆ ಪ್ರದೇಶವು ಕೇರಳದ ಪಾಲಕ್ಕಾಡ್ ವಿಭಾಗದಿಂದ ಬೇರ್ಪಟ್ಟು ನೈಋತ್ಯ ರೈಲ್ವೆಯ ಮೈಸೂರು ವಿಭಾಗದೊಂದಿಗೆ ವಿಲೀನಗೊಳ್ಳಲಿದೆ. ಈ ಬದಲಾವಣೆಯಿಂದಾಗಿ ವಂದೇ ಭಾರತ್ ಸೇರಿದಂತೆ 12ಕ್ಕೂ ಹೆಚ್ಚು ಪ್ರಮುಖ ರೈಲುಗಳು ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿದ್ದು, ಇದು ಕರಾವಳಿ ಕರ್ನಾಟಕದ ರೈಲ್ವೆ ಸುಧಾರಣೆಗೆ ಮಹತ್ವದ ಹೆಜ್ಜೆ ಎನ್ನಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0s7qsr6n5jzhp6e5j4qs5xx,imgname-railway--1--1787553376005.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಮಂಗಳೂರು ನೈಋತ್ಯ ರೈಲ್ವೆ ವಲಯದ ಜೊತೆ ವಿಲೀನಗೊಂಡ ಬಳಿಕ ಅ.1 ರಿಂದ ಕೇರಳ ಪಾಲಕ್ಕಡ್ ವಿಭಾಗದ ಬದಲು ಮೈಸೂರು ವಿಭಾಗದ ವ್ಯಾಪ್ತಿಗೆ 12ಕ್ಕೂ ಅಧಿಕ ಪ್ರಮುಖ ರೈಲುಗಳು ಒಳಪಡಲಿವೆ. ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದಿಂದ ಉಳ್ಳಾಲ ವರೆಗಿನ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಿದ ಬಳಿಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಸಂಚರಿಸುವ ಹಾಗೂ ಅದರ ನಿರ್ವಹಣಾ ಸೌಲಭ್ಯಗಳಿಗೆ ಸಂಬಂಧಿಸಿದ ಹಲವು ರೈಲುಗಳು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿವೆ.&lt;/p&gt;&lt;h2&gt;ಪ್ರಮುಖ ರೈಲುಗಳು:&lt;/h2&gt;&lt;p&gt;12619/12620-ಮಂಗಳೂರು ಸೆಂಟ್ರಲ್-ಎಲ್&zwnj;ಟಿಟಿ ಮುಂಬೈ ಮತ್ಸ್ಯಗಂಧ ಎಕ್ಸ್&zwnj;ಪ್ರೆಸ್, 20645/20646- ಮಂಗಳೂರು ಸೆಂಟ್ರಲ್&ndash;ಮಡಗಾಂವ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್, 20631/20632-ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್, 16649/16650-ಕನ್ಯಾಕುಮಾರಿ-ಮಂಗಳೂರು ಸೆಂಟ್ರಲ್ ಪರಶುರಾಮ್ ಎಕ್ಸ್&zwnj;ಪ್ರೆಸ್, 16605/16606-ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಎರ್ನಾಡ್ ಎಕ್ಸ್&zwnj;ಪ್ರೆಸ್, 16603/16604- ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್&zwnj;ಪ್ರೆಸ್, 16629/16630- ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್&zwnj;ಪ್ರೆಸ್, 16323/16324-ಮಂಗಳೂರು ಸೆಂಟ್ರಲ್-ಕೊಯಮತ್ತೂರು ಎಕ್ಸ್&zwnj;ಪ್ರೆಸ್, 22609/22610- ಮಂಗಳೂರು ಸೆಂಟ್ರಲ್-ಕೊಯಮತ್ತೂರು ಇಂಟರ್&zwnj;ಸಿಟಿ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್, 12601/12602-ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್&zwnj;ಫಾಸ್ಟ್ ಮೇಲ್ ಎಕ್ಸ್&zwnj;ಪ್ರೆಸ್, 16621/16622- ಮಂಗಳೂರು ಸೆಂಟ್ರಲ್-ರಾಮೇಶ್ವರಂ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್, 22637/22638-ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲುಗಳು ಮೈಸೂರು ವಿಭಾಗಕ್ಕೆ ಒಳಪಡಲಿದೆ.&lt;/p&gt;&lt;h2&gt;ಪ್ಯಾಸೆಂಜರ್ ರೈಲುಗಳು:&lt;/h2&gt;&lt;p&gt;56625/56626 -ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56627/56628- ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56629/56630-ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56615/56616- ಮಂಗಳೂರು ಸೆಂಟ್ರಲ್-ಮಡಗಾಂವ್ ಪ್ಯಾಸೆಂಜರ್ ಮತ್ತು ಮಂಗಳೂರು ಸೆಂಟ್ರಲ್ ಹಾಗೂ ಅದರ ನಿರ್ವಹಣಾ ಸೌಲಭ್ಯಗಳಿಗೆ ಸಂಬಂಧಿಸಿದ ಇತರೆ ರೈಲುಗಳು ಒಳಗೊಳ್ಳಲಿವೆ.&lt;/p&gt;&lt;h2&gt;ಇಂಟರ್&zwnj; ಚೇಂಜ್&zwnj; ಪಾಯಿಂಟ್&zwnj;:&lt;/h2&gt;&lt;p&gt;ಅ. 1 ರಿಂದ ಪ್ರಮುಖ ಇಂಟರ್&zwnj;ಚೇಂಜ್ ಪಾಯಿಂಟ್&zwnj;ಗಳು (ರೈಲ್ವೆ ವಲಯ ಬದಲಾವಣೆ ಕೇಂದ್ರಗಳು)ಕೂಡ ಬದಲಾಗಲಿವೆ. ಈವರೆಗೆ ಪಡೀಲ್ ಬದಲಿಗೆ &lsquo;ಉಳ್ಳಾಲ&rsquo; ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್&zwnj;ಚೇಂಜ್ ಪಾಯಿಂಟ್ ಆಗಿರಲಿದೆ. ತೋಕೂರು ಕೊಂಕಣ ರೈಲ್ವೆಯ ಅಡಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್&zwnj;ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.&lt;/p&gt;&lt;h2&gt;ಈಡೇರಿಸಬೇಕಾದ ಬೇಡಿಕೆ:&lt;/h2&gt;&lt;p&gt;ಮಂಗಳೂರು ಸೆಂಟ್ರಲ್- ಜಂಕ್ಷನ್ ಹಳಿ ಡಬ್ಲಿಂಗ್ ( ನೈಋತ್ಯ ರೈಲ್ವೆ), ತೋಕೂರು- ಸುರತ್ಕಲ್ 4 ಕಿ.ಮೀ. ಡಬ್ಲಿಂಗ್ (ಕೊಂಕಣ ರೈಲ್ವೆ), ಸಕಲೇಶಪುರ- ಹಾಸನ- ಬೆಂಗಳೂರು ಮತ್ತು ಸುಬ್ರಹ್ಮಣ್ಯ- ಪಡೀಲ್ ನಡುವಿನ ಹಳಿಯ ವೇಗಧಾರಣ ಸಾಮರ್ಥ್ಯ ಹೆಚ್ಚಳ. (ಘಾಟ್ ಪ್ರದೇಶದ ಅನಿವಾರ್ಯ ವಿಳಂಬ ನಿವಾರಣೆಗಾಗಿ) ಹಾಗೂ ಮಂಗಳೂರು ಸೆಂಟ್ರಲ್&zwnj;ನಲ್ಲಿ ಫ್ಲಾಟ್ ಫಾರಂ ಹೆಚ್ಚಳ ಬೇಡಿಕೆ ಈಡೇರಿಸುವ ಅಗತ್ಯವನ್ನು ರೈಲ್ವೆ ಸಂಘಟನೆಗಳು ಹೇಳುತ್ತಿವೆ.&lt;/p&gt;&lt;h2&gt;ಕೊಂಕಣ ರೈಲ್ವೆ ವಿಲೀನಕ್ಕೆ ಮುನ್ನುಡಿ&lt;/h2&gt;&lt;p&gt;ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುತ್ತಿರುವಂತೆಯೇ ಕೊಂಕಣ ರೈಲ್ವೆ ಜಾಲ ಕೂಡ ಭಾರತೀಯ ರೈಲ್ವೆ ಜೊತೆ ವಿಲೀನಕ್ಕೆ ಮುನ್ನುಡಿ ಬರೆದಂತಾಗಿದೆ. ಕರಾವಳಿ ಕರ್ನಾಟಕದಲ್ಲಿ ರೈಲ್ವೆ ವಿಳಂಬ ಪ್ರಯಾಣ ನಿವಾರಣೆಗೆ ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಯತ್ನ ಕರಾವಳಿಯ ಸಂಸದರಿಂದ ನಡೆಯುತ್ತಿದೆ.&lt;/p&gt;&lt;p&gt;ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳ್ಳುವುದಕ್ಕೆ ಗೋವಾ ಯಾವುದೇ ಶರತ್ತು ಇಲ್ಲದೆ ಒಪ್ಪಿಗೆ ನೀಡಿದೆ, ಆದರೆ ಕರ್ನಾಟಕ, ಕೇರಳ, ಮಹಾರಾಷ್ಟ್ರ ನಿರ್ಧಾರ ಬಾಕಿಯಿದೆ. ಆದರೆ ಮಂಗಳೂರು ಪ್ರದೇಶ ಮೈಸೂರು ವಿಭಾಗದಲ್ಲಿ ವಿಲೀನಕ್ಕೆ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.&lt;/p&gt;&lt;p&gt;ಆಡಳಿತಾತ್ಮಕ ಮತ್ತು ಕಾರ್ಯಾಚರಣೆ ಸುಗಮಕ್ಕಾಗಿ ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದು ಕರಾವಳಿ ಕರ್ನಾಟಕದ ರೈಲ್ವೆ ಸುಧಾರಣೆಗೆ ಅತ್ಯಂತ ಮಹತ್ವದ ಐತಿಹಾಸಿಕ ಹೆಜ್ಜೆಯಾಗಿದೆ. ಇದರಿಂದ ಮಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಆಡಳಿತಾತ್ಮಕ, ಕಾರ್ಯಾಚರಣೆಗಳಿಗೆ ಬಹಳ ಅನುಕೂಲವಾಗಲು ಕೇಂದ್ರ ರೈಲ್ವೆ ಸಚಿವಾಲಯ ಈ ತೀರ್ಮಾನ ಕೈಗೊಂಡಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s"/>
        </item>
        <item>
            <title><![CDATA[HD Kumaraswamy: ಅಮೆರಿಕದಿಂದ ವಾಪಸಾದ ಬೆನ್ನಲ್ಲೇ ಡಿಕೆಶಿ, ಪ್ರಿಯಾಂಕ್ ವಿರುದ್ಧ ಮುಗಿಬಿದ್ದ ಹೆಚ್‌ಡಿಕೆ,  ಸ್ಫೋಟಕ ಹೇಳಿಕೆ!]]></title>
            <link>https://kannada.asianetnews.com/politics/hdk-returns-from-the-us-serious-allegation-on-state-government-over-prajwal-pendrive-case-rav/articleshow-qlsf710</link>
            <guid isPermaLink="true">https://kannada.asianetnews.com/politics/hdk-returns-from-the-us-serious-allegation-on-state-government-over-prajwal-pendrive-case-rav/articleshow-qlsf710</guid>
            <pubDate>Tue, 15 Sep 2026 13:03:16 +0530</pubDate>
            <description><![CDATA[&lt;p&gt;ಅಮೆರಿಕ ಪ್ರವಾಸದಿಂದ ಮರಳಿರುವ ಕೇಂದ್ರ ಸಚಿವ ಹೆಚ್&zwnj;ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ಹೊಸ ಸಮರ ಸಾರಿದ್ದಾರೆ. ಕೆಪಿಎಸ್&zwnj;ಸಿ ಹಗರಣ, ನೈಸ್ ವಿಚಾರ ಸೇರಿದಂತೆ ಹಲವು ವಿಷಯಗಳ ದಾಖಲೆ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದ್ದು, ಪ್ರಜ್ವಲ್ ರೇವಣ್ಣ ಕೇಸ್ ವಿಚಾರವಾಗಿಯೂ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2hzg6f1ka54rzhsvbgp1jnx,imgname-hd-kumaraswamy-1789457340897.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನ (ಸೆ.15):ನಮ್ಮ ತಾಯಿಯ ಎರಡನೇ ತಿಂಗಳ ಆರಾಧನೆ ಇದೆ. ಹೀಗಾಗಿ ರೇವಣ್ಣನವರ ಮನೆಯಲ್ಲಿ ಪೂಜೆ ಇರುವುದರಿಂದ ಭಾಗಿಯಾಗಿದ್ದೇನೆ ಎಂದು ಕೇಂದ್ರ ಸಚಿವ ಹೆಚ್&zwnj;ಡಿ ಕುಮಾರಸ್ವಾಮಿ ತಿಳಿಸಿದರು.&lt;/p&gt;&lt;h2&gt;ನಾನು ಅಮೆರಿಕಕ್ಕೆ ಹೋದ್ಮೇಲೆ ಕೆಲವರು ನಿದ್ದೆಗೆಟ್ಟಿದ್ದಾರೆ&lt;/h2&gt;&lt;p&gt;ಇಂದು ಮಾವಿನಕೆರೆ ಬೆಟ್ಟದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕುಮಾರಸ್ವಾಮಿಯವರು, ಕಳೆದ ಹದಿನೈದು ದಿನಗಳಿಂದ ಅಮೆರಿಕ ಪ್ರವಾಸದಲ್ಲಿದ್ದೆ. ಮೊನ್ನೆಯಷ್ಟೇ ಬಂದಿದ್ದೇನೆ. ಅದಕ್ಕೂ ಮುನ್ನ ಸಾಕಷ್ಟು ವಿಚಾರಗಳನ್ನ ಚರ್ಚೆ ಮಾಡಿದ್ದೆ. ಕೆಲವು ವಿಷಯಗಳನ್ನ ದಾಖಲೆ ಸಮೇತ ಸಾರ್ವಜನಿಕರ ಮುಂದೆ ಇಡುತ್ತೇನೆ ಎಂದು ಹೇಳಿದ್ದೆ. ನಾನು ಅಮೆರಿಕಕ್ಕೆ ಹೋದಮೇಲೆ ಯಾರಾರು ನಿದ್ದೆಗೆಟ್ಟಿದ್ದಾರೋ ಅದು ಅವರವರಿಗೆ ಗೊತ್ತಿರುತ್ತೆ. ನಾನು ಅನ್ಯಾಯದ ವಿರುದ್ಧ ಹೋರಾಟ ಮಾಡ್ತೇನೆ, ದಾಖಲೆ ಸಮೇತವಾಗಿ ಬಿಚ್ಚಿಡುತ್ತೇನೆ ಎಂದು ಗುಡುಗಿದರು.&lt;/p&gt;&lt;p&gt;ನಮ್ಮ ವಿರೋಧಿಗಳು ಎಷ್ಟೇ ಲಘುವಾಗಿ ಮಾತನಾಡಿದ್ರೂ ನಾನು ಉದ್ರೇಕಕ್ಕೆ ಒಳಗಾಗೋದಿಲ್ಲ. ಒಂದು ಚಾನಲ್&zwnj;ನಲ್ಲಿ ಕೂತು ಹತ್ತೊಂಬತ್ತು ಗಂಟೆ ಸುದ್ದಿ ಮಾಡಿದ್ದಾರೆ. ನಮ್ಮ ಕುಟುಂಬದ ವಿರುದ್ಧ ಮಾತನಾಡಲೆಂದೇ ಚಾನೆಲ್ ಮಾಡಿಕೊಂಡಿದ್ದಾರೆ. ಎಷ್ಟಾದರೂ ಮಾತನಾಡಿಕೊಳ್ಳಲಿ. ನಾನು ಆ ಚಾನೆಲ್ ಬಗ್ಗೆ ಮಾತನಾಡೋಲ್ಲ. ಉದ್ರೇಕಕ್ಕೆ ಒಳಗಾಗೊಲ್ಲ. ಇದನ್ನ ನಮ್ಮ ತಂದೆಯಿಂದ ನೋಡಿ ಕಲಿತಿದ್ದೇನೆ.ಎಲ್ಲವನ್ನೂ ದಾಖಲೆ ಸಮೇತ ಜನರ ಮುಂದೆ ಇಡುತ್ತೇನೆ. ನೈಸ್ ಗುತ್ತಿಗೆದಾರ ಮತ್ತು ಮುಖ್ಯಮಂತ್ರಿ ಭೇಟಿ ಮಾಡಿರೋದನ್ನ ನೋಡಿದ್ದೇನೆ. ಬೇರೆಯವರ ರೀತಿ ಜನ ಬಿಟ್ಟು ಹೊಡೆಸೋ ಕೆಲಸ ಮಾಡೋಲ್ಲ. ಇದಕ್ಕೆಲ್ಲಾ ಕಾಲವೇ ಉತ್ತರ ಕೊಡುತ್ತೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್&zwnj;ಗೆ ತಿರುಗೇಟು ನೀಡಿದರು.&lt;/p&gt;&lt;p&gt;ರಾಜ್ಯದಲ್ಲಿ ನಾಲ್ಕು ಅಂಗಗಳು ಕೆಲಸ ಮಾಡುತ್ತಿವೆ. ನಾಲ್ಕನೇ ಅಂಗ ಮಾಧ್ಯಮ. ಇವುಗಳಲ್ಲಿ ಯಾವುದೇ ಒಂದು ಅಂಗ ಅಲುಗಾಡಿದ್ರೂ ಸಂವಿಧಾನಕ್ಕೆ ಮೋಸ ಮಾಡಿದ ಹಾಗೆಯೇ ಲೆಕ್ಕ. ಅಂಬೇಡ್ಕರ್ ಕೊಟ್ಟಿರೋ ಸಂವಿಧಾನಕ್ಕೆ ತಲೆಬಾಗಿ ಕೆಲಸ ಮಾಡಬೇಕಿದೆ. ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡು ಜನರ ಮುಂದಿಡಲಿದ್ದೇನೆ. ನಾಡಿನ ಜನತೆಯೇ ಇದಕ್ಕೆಲ್ಲ ಒಂದು ಕ್ರಮ ಕೈಗೊಳ್ಳಬೇಕಿದೆ ಎಂದರು.&lt;/p&gt;&lt;h3&gt;&lt;strong&gt;ಅಧಿಕಾರ ದುರುಪಯೋಗ ಮಾಡಿಕೊಂಡ್ರೆ ಸುಮ್ನಿರಲ್ಲ&lt;/strong&gt;&lt;/h3&gt;&lt;p&gt;ಅಂದಹಾಗೆ ನನಗೆ ಯಾರ ಮೇಲೂ ಅಸೂಯೆ ಆಗಲಿ, ಈರ್ಶೆ ಆಗಲಿ ಇಲ್ಲ. ನಮ್ಮ ಜಾತಿಯವನೊಬ್ಬ ಮುಖ್ಯಮಂತ್ರಿ ಇದ್ದಾನೆ ಅವನಿಗೆ ಯಾಕೆ ತೊಂದರೆ ಕೊಡಬೇಕು ಅನ್ನುತ್ತಾರೆ. ನಾನು ಅವರಿಗೆ ತೊಂದರೆ ಕೊಡಬೇಕು ಎಂದು ಬಯಸಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ನಾನು ಬೆಂಬಲ ಕೊಡುತ್ತೇನೆ. ಆದರೆ ಸಿಕ್ಕಿರೋ ಅಧಿಕಾರ ದುರುಪಯೋಗ ಮಾಡಿಕೊಂಡು ಹೋಗ್ತಿನಿ ಅಂದ್ರೆ ನಾನು ಸಹಿಸೋದಿಲ್ಲ. ರಾಜಕೀಯ ಜೀವನದಲ್ಲಿ ಪರ-ವಿರೋಧ ಎರಡೂ ಇರುತ್ತವೆ. ಸತ್ಯ ಏನೆಂಬುದು ಜನರು ತೀರ್ಮಾನ ಮಾಡ್ತಾರೆ ಎಂದರು.&lt;/p&gt;&lt;p&gt;ಇನ್ನು ಕೆಪಿಎಸ್&zwnj;ಸಿ ಹಗರಣ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ಕೆಪಿಎಸ್ಸಿಯಲ್ಲಿ ಆದ ಹಗರಣದ ಹಣವನ್ನು ಸೀಜ್ ಮಾಡಿದ್ದೇವೆ ಎನ್ನುತ್ತಾರೆ. ಅದು ಯಾರ ಹಣ ಅಂತಾ ಉತ್ತರ ಕೊಡಬೇಕಲ್ವಾ? ನಾನು ಮಾತನಾಡೋದಲ್ಲ ಅದನ್ನ ಸಾಕ್ಷಿಗಳು ಹೇಳಬೇಕಿದೆ. ನಾನು ಸಾಕ್ಷಿ ಸಮೇತ ಜನರ ಮುಂದೆ ಇಡೋದು ನನ್ನ ಜವಾಬ್ದಾರಿ. ಅದನ್ನ ತೀರ್ಮಾನ ಮಾಡೋದು ಜನರಿಗೆ ಬಿಡುತ್ತೇನೆ. ಇವರು(ಕಾಂಗ್ರೆಸ್ ಸರ್ಕಾರ) ರಾಜ್ಯದ ವ್ಯವಸ್ಥೆಗೆ ಕಪ್ಪು ಮಸಿ ಬಳಿಯುವಂತೆ ಅಧಿಕಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.&lt;/p&gt;&lt;h3&gt;&lt;strong&gt;ಆ ಹುಡುಗ ಜೈಲಿಗೆ ಹೋಗಿ ಎರಡು ವರ್ಷಾಯ್ತು!&lt;/strong&gt;&lt;/h3&gt;&lt;p&gt;ಇನ್ನು ಕೆಪಿಎಸ್&zwnj;ಸಿ, ಬಿಡದಿ ಹೋರಾಟದ ನಡುವೆಯೂ ಪ್ರಜ್ವಲ್ ರೇವಣ್ಣ ವಿಚಾರ ಮತ್ತೆ ಮುನ್ನಲೆಗೆ ತಂದ ಕುಮಾರಸ್ವಾಮಿಯವರು,'ಆ ಹುಡುಗ ಜೈಲಿಗೆ ಹೋಗಿ ಎರಡು ವರ್ಷಾಯ್ತು. ನ್ಯಾಯಾಂಗ ತೀರ್ಮಾನಕ್ಕೆ ತಲೆಬಾಗುತ್ತೇವೆ. ನಮ್ಮ ಕುಟುಂಬ ಮುಗಿಸಲು ಏನೆಲ್ಲ ಪ್ಲಾನ್ ಮಾಡಿದ್ರಿ? ನಿಮ್ಮಿಂದ ಅದು ಸಾಧ್ಯವಾ?ಜೈಲಿನಲ್ಲಿ ಪ್ರಜ್ವಲ್&zwnj;ಗೆ ಮೊಬೈಲ್ ಎಲ್ಲಿ ಸಿಕ್ತು? ತಲುಪಿಸಿದ್ದು ಯಾರು? ಅವನಿಗೆ ಮೊಬೈಲ್ ಕೊಟ್ಟಿದ್ದು ನಾವಾ? ಜೈಲಿನೊಳಗೆ ಅಶ್ಲೀಲ ಚಿತ್ರಗಳ ಪೆನ್&zwnj;ಡ್ರೈವ್ ಅವನಿಗೆ ಸಿಕ್ಕಿದ್ದಾದರೂ ಹೇಗೆ? ಇಲ್ಲಿ ಈ ಸರ್ಕಾರದ್ದೇ ಕುತಂತ್ರ ಇರಬಹುದಾ? ಹೆಚ್&zwnj;ಡಿಕೆ ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;ಇನ್ನು ಮಹಿಳೆಯರ ಮಾನ ಹರಾಜಾಯ್ತು ಅಂತೀರಲ್ಲ. ಆ ಸಂತ್ರಸ್ತ ಮಹಿಳೆಯರಿಗೆ ನಿಜವಾಗಿಯೂ ಸರ್ಕಾರ ನ್ಯಾಯ ಕೊಡಿಸ್ತಾ? ಕೊಡಿಸುತ್ತಾ? ಎಂದು ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ನೇರವಾಗಿ ಪ್ರಶ್ನಿಸದ್ದಾರೆ. ಹೆಚ್&zwnj;ಡಿಕೆ ಅವರ ಹೇಳಿಕೆಗೆ ಸರ್ಕಾರ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕಾದು ನೋಡಬೇಕು. ಸದ್ಯ ರಾಜ್ಯ ರಾಜಕೀಯದಲ್ಲಿ ಮತ್ತೆ ಪೆನ್&zwnj;ಡ್ರೈವ್ ಪ್ರಕರಣ ಕಾವೇರಿದೆ. ಸಿಎಂ ವಿರುದ್ಧ ಕೇಂದ್ರ ಸಚಿವ ಹೆಚ್&zwnj;ಡಿ ಕುಮಾರಸ್ವಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/hdk-returns-from-the-us-serious-allegation-on-state-government-over-prajwal-pendrive-case-rav/articleshow-qlsf710"/>
        </item>
        <item>
            <title><![CDATA[​Karnataka school: ಮಕ್ಕಳೋ ಅಥವಾ ಕೊಟ್ಟಿಗೆಯ ದನಗಳೋ? ಹಾಸನದ ವಸತಿ ಶಾಲೆಯ ಕರಾಳ ಮುಖ ಬಯಲು]]></title>
            <link>https://kannada.asianetnews.com/karnataka-districts/karnataka-school-students-cowshed-for-5-years-video-viral-suh/articleshow-qy61nv2</link>
            <guid isPermaLink="true">https://kannada.asianetnews.com/karnataka-districts/karnataka-school-students-cowshed-for-5-years-video-viral-suh/articleshow-qy61nv2</guid>
            <pubDate>Mon, 07 Sep 2026 17:03:04 +0530</pubDate>
            <description><![CDATA[&lt;p&gt;ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿಗಳು ಸುಮಾರು ಐದು ವರ್ಷಗಳ ಕಾಲ ಗೋಶಾಲೆಯೊಂದರಲ್ಲೇ ವಾಸವಿದ್ದು, ಅಲ್ಲಿಯೇ ತರಗತಿಗೂ ಹಾಜರಾಗುತ್ತಿದ್ದ ಆಘಾತಕಾರಿ ಘಟನೆ ಕರ್ನಾಟಕದಲ್ಲಿ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xt34nbv10qc77dsq06rch8,imgname-karnataka-school-students-cowshed-for-5-years-video-viral-1788780581547.jpg" type="image/jpeg" height="390" width="690"/>
            <content:encoded><![CDATA[&lt;p&gt;ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿಗಳು ಸುಮಾರು ಐದು ವರ್ಷಗಳ ಕಾಲ ಗೋಶಾಲೆಯೊಂದರಲ್ಲೇ ವಾಸವಿದ್ದು, ಅಲ್ಲಿಯೇ ತರಗತಿಗೂ ಹಾಜರಾಗುತ್ತಿದ್ದ ಆಘಾತಕಾರಿ ಘಟನೆ ಕರ್ನಾಟಕದಲ್ಲಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ದುಸ್ಥಿತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್&zwnj; ಆದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ಮಕ್ಕಳನ್ನು ಬೇರೆ ವಸತಿ ನಿಲಯಗಳಿಗೆ ಸ್ಥಳಾಂತರಿಸಿದ್ದಾರೆ. ಹಾಸನ ಜಿಲ್ಲೆಯ ಶಾಂತಿಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್&zwnj; ವಸತಿ ಶಾಲೆಯ ವಿದ್ಯಾರ್ಥಿಗಳು ಈ ಸಂಕಷ್ಟವನ್ನು ಎದುರಿಸುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಈ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಒಟ್ಟು 172 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ 92 ಬಾಲಕರು ಹಾಗೂ 80 ಬಾಲಕಿಯರಿದ್ದಾರೆ.&lt;/p&gt;&lt;h2&gt;ಗೋಶಾಲೆಯಲ್ಲೇ ತರಗತಿ, ಅಲ್ಲೇ ವಾಸ&lt;/h2&gt;&lt;p&gt;ಸುಮಾರು ಐದು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸದೆ ಗೋಶಾಲೆಯ ಕಟ್ಟಡದಲ್ಲೇ ವಾಸಿಸುವಂತೆ ಮಾಡಲಾಗಿತ್ತು ಎಂದು ವರದಿಯಾಗಿದೆ. ವಿದ್ಯಾರ್ಥಿಗಳು ಮಲಗುವ ಸ್ಥಳ ಹಾಗೂ ತರಗತಿ ನಡೆಸುವ ಸ್ಥಳ ಒಂದೇ ಆಗಿತ್ತು. ಮೂಲಸೌಕರ್ಯಗಳ ಕೊರತೆಯ ನಡುವೆಯೇ ಮಕ್ಕಳು ಶಿಕ್ಷಣ ಮುಂದುವರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಈ ಕಟ್ಟಡಕ್ಕೆ ತಿಂಗಳಿಗೆ ಬರೋಬ್ಬರಿ ₹1.08 ಲಕ್ಷ ಬಾಡಿಗೆ ಪಾವತಿಸಲಾಗುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 172 ವಿದ್ಯಾರ್ಥಿಗಳಿಗೆ ಕೇವಲ ಐದು ಶೌಚಾಲಯಗಳಿದ್ದವು ಎನ್ನಲಾಗಿದೆ.&lt;/p&gt;&lt;h2&gt;ವಿಡಿಯೋ ವೈರಲ್&zwnj; ಆಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು&lt;/h2&gt;&lt;p&gt;ವಿದ್ಯಾರ್ಥಿಗಳು ವಾಸಿಸುತ್ತಿದ್ದ ಸ್ಥಳದ ದುಸ್ಥಿತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್&zwnj; ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ವಿಷಯ ಸರ್ಕಾರ ಹಾಗೂ ಅಧಿಕಾರಿಗಳ ಗಮನಕ್ಕೂ ಬಂದಿದೆ. ಬಳಿಕ ವಿದ್ಯಾರ್ಥಿಗಳನ್ನು ಎರಡು ಪ್ರತ್ಯೇಕ ವಸತಿ ನಿಲಯಗಳಿಗೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಿಗೆ ಸುರಕ್ಷಿತ ಹಾಗೂ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ.&lt;/p&gt;&lt;h2&gt;ಸಚಿವರಿಂದ ವರದಿ ಕೇಳಿದ ಸರ್ಕಾರ&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವ್ಯವಸ್ಥೆ ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ಅವರು, ಈ ಕುರಿತು ವರದಿ ಕೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಕೂಡ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳನ್ನು ತಕ್ಷಣ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;ವಿದ್ಯಾರ್ಥಿಗಳ ದುಸ್ಥಿತಿಗೆ ಯಾರು ಹೊಣೆ?&lt;/h2&gt;&lt;p&gt;ಸಮಾಜದ ದುರ್ಬಲ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ವಸತಿ ಕಲ್ಪಿಸುವ ಉದ್ದೇಶದಿಂದ ನಡೆಯುತ್ತಿರುವ ಸರ್ಕಾರಿ ವಸತಿ ಶಾಲೆಯಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿದ್ಯಾರ್ಥಿಗಳ ಸುರಕ್ಷತೆ, ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಬಗ್ಗೆ ಅಧಿಕಾರಿಗಳು ಇಷ್ಟು ವರ್ಷಗಳ ಕಾಲ ಗಮನ ಹರಿಸದಿರುವುದು ಹೇಗೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್&zwnj; ಆದ ಬಳಿಕವೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮಕ್ಕಳನ್ನು ಇದೀಗ ಬೇರೆ ವಸತಿ ನಿಲಯಗಳಿಗೆ ಸ್ಥಳಾಂತರಿಸಲಾಗಿದ್ದರೂ, ಐದು ವರ್ಷಗಳ ಕಾಲ ವಿದ್ಯಾರ್ಥಿಗಳು ಇಂತಹ ಪರಿಸ್ಥಿತಿಯಲ್ಲಿ ವಾಸಿಸುವಂತಾದದ್ದು ಹೇಗೆ? ಇದಕ್ಕೆ ಹೊಣೆ ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.&lt;/p&gt;]]></content:encoded>
            <category>hassan</category>
            <dc:creator>Sushma Hegde</dc:creator>
            <atom:link href="https://kannada.asianetnews.com/karnataka-districts/karnataka-school-students-cowshed-for-5-years-video-viral-suh/articleshow-qy61nv2"/>
        </item>
        <item>
            <title><![CDATA[Social Welfare Dept: ಅಲ್ಲೇ ಊಟ, ಅಲ್ಲೇ ನಿದ್ರೆ, ಅಲ್ಲೇ ಪಾಠ! ಸಮಾಜ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಗೆ ನೂರಾರು ಮಕ್ಕಳು ಬಲಿ!]]></title>
            <link>https://kannada.asianetnews.com/karnataka-districts/hassan-ambedkar-residential-school-172-students-social-welfare-department-negligence-building-infrastructure-crisis-bmk/articleshow-uqigtbw</link>
            <guid isPermaLink="true">https://kannada.asianetnews.com/karnataka-districts/hassan-ambedkar-residential-school-172-students-social-welfare-department-negligence-building-infrastructure-crisis-bmk/articleshow-uqigtbw</guid>
            <pubDate>Sat, 05 Sep 2026 12:33:43 +0530</pubDate>
            <description><![CDATA[&lt;p&gt;ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯು ಕಳೆದ ಐದು ವರ್ಷಗಳಿಂದ ಸೂಕ್ತ ಕಟ್ಟಡವಿಲ್ಲದೆ, ಸಣ್ಣ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ. ಇಲ್ಲಿನ 172 ವಿದ್ಯಾರ್ಥಿಗಳು ಒಂದೇ ಜಾಗದಲ್ಲಿ ಊಟ, ನಿದ್ರೆ, ಪಾಠ ಕಲಿಯುತ್ತಿದ್ದು, ಶೌಚಾಲಯದಂತಹ ಮೂಲಭೂತ ಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1r62eyjdp6j958yqf817zyb,imgname-dr-ambedker-1788591815633.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಡತನದ ನಡುವೆಯೂ ತಮ್ಮ ಮಕ್ಕಳು ಚಂದಗೆ ಓದಿ, ದೊಡ್ಡ ಅಧಿಕಾರಿಗಳಾಗಲಿ ಎಂದು ಹೆತ್ತವರು ಕನಸು ಕಾಣುತ್ತಾರೆ. ಆ ಕನಸಿಗೆ ಆಸರೆಯಾಗಬೇಕಿದ್ದ ಸರ್ಕಾರಿ ವಸತಿ ಶಾಲೆಯೇ ಇವತ್ತು ಕಂದಮ್ಮಗಳಿಗೆ ಜೀವಂತ ನರಕವಾಗಿ ಬದಲಾಗಿದೆ. ಹಾಸನ ತಾಲೂಕಿನ ಶಾಂತಿಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಕರುಳು ಹಿಂಡುವ ಸ್ಥಿತಿ ಇದು.&lt;/p&gt;&lt;h2&gt;&lt;strong&gt;5 ವರ್ಷದಿಂದ ಸೂಕ್ತ ಕಟ್ಟಡವಿಲ್ಲ!&lt;/strong&gt;&lt;/h2&gt;&lt;p&gt;ಕಳೆದ ಐದು ವರ್ಷಗಳಿಂದ ಈ ವಸತಿ ಶಾಲೆಯು ಸೂಕ್ತ ಕಟ್ಟಡವಿಲ್ಲದೆ, ಅಮಾನವೀಯ ವಾತಾವರಣವಿರುವ ಸಣ್ಣ ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿದೆ. ಇಲ್ಲಿ 6 ರಿಂದ 10 ನೇ ತರಗತಿಯವರೆಗೆ ಕಲಿಯುತ್ತಿರುವ ಒಟ್ಟು 172 ಬಡ ವಿದ್ಯಾರ್ಥಿಗಳು (92 ಬಾಲಕರು ಹಾಗೂ 80 ಬಾಲಕಿಯರು) ದಿನನಿತ್ಯ ಅನುಭವಿಸುತ್ತಿರುವ ನರಕಯಾತನೆ ಕಂಡರೆ ಎಂತವರ ಕಣ್ಣಲ್ಲೂ ನೀರು ಉಕ್ಕಿ ಹರಿಯುತ್ತದೆ.&lt;/p&gt;&lt;h3&gt;&lt;strong&gt;ಗಾಳಿ-ಬೆಳಕಿಲ್ಲದ 'ಕೊಟ್ಟಿಗೆ'ಯಲ್ಲಿ ಅಕ್ಷರ ಅಭ್ಯಾಸ!&lt;/strong&gt;&lt;/h3&gt;&lt;p&gt;ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದ ಈ ಜಾಗವು ದನದ ಶೆಡ್&zwnj;ಗಿಂತಲೂ ಕಡೆಯಾಗಿದೆ. ಒಂದೇ ಒಂದು ಸಣ್ಣ ಜಾಗದಲ್ಲಿ ಮಕ್ಕಳು ಕುಳಿತು ಊಟ ಮಾಡಬೇಕು, ಅದೇ ಕಿರಿದಾದ ನೆಲದಲ್ಲಿ ನಿದ್ರಿಸಬೇಕು ಮತ್ತು ಅದೇ ಜಾಗದಲ್ಲೇ ಕುಳಿತು ಪಾಠವನ್ನೂ ಕೇಳಬೇಕು! ಆರನೇ ತರಗತಿಯ ಮುಗ್ಧ ಮಕ್ಕಳು ಯಾವುದೇ ಬೆಂಚ್, ಡೆಸ್ಕ್ ಇಲ್ಲದೆ ತಂಪಾದ ನೆಲದಲ್ಲೇ ಗಂಟೆಗಟ್ಟಲೆ ಕುಳಿತು ಅಕ್ಷರ ಕಲಿಯುವ ದೃಶ್ಯ ಮನಸ್ಸನ್ನು ಕಲಕುತ್ತದೆ. ಸ್ವಚ್ಛ ಗಾಳಿ ಮತ್ತು ಬೆಳಕಿನ ಸುಳಿವೇ ಇಲ್ಲದ ಈ ಕತ್ತಲ ಕೋಣೆಯಲ್ಲಿ ಮಕ್ಕಳು ಕಾಯಿಲೆಗಳ ಗೂಡಾಗುವ ಭೀತಿಯಲ್ಲಿದ್ದಾರೆ.&lt;/p&gt;&lt;h3&gt;&lt;strong&gt;ಹೆಣ್ಣುಮಕ್ಕಳಿಗೆ ಕನಿಷ್ಠ ಸೌಕರ್ಯವಿಲ್ಲ, 92 ಗಂಡುಮಕ್ಕಳಿಗೆ ಐದೇ ಶೌಚಾಲಯ!&lt;/strong&gt;&lt;/h3&gt;&lt;p&gt;ಶುಚಿತ್ವ ಮತ್ತು ನೈರ್ಮಲ್ಯದ ವಿಷಯದಲ್ಲಂತೂ ಈ ಶಾಲೆ ಅಮಾನವೀಯತೆಯ ಎಲ್ಲ ಎಲ್ಲೆಗಳನ್ನೂ ಮೀರಿದೆ. 92 ಬೆಳೆಯುವ ಗಂಡು ಮಕ್ಕಳಿಗೆ ಇರುವುದು ಕೇವಲ 5 ಶೌಚಾಲಯಗಳು! ಪ್ರತಿದಿನ ಬೆಳಿಗ್ಗೆ ಶೌಚಾಲಯಕ್ಕೆ ಸಾಲು ನಿಲ್ಲುವುದರಲ್ಲೇ ಮಕ್ಕಳ ಅರ್ಧ ಸಮಯ ವ್ಯರ್ಥವಾಗುತ್ತಿದೆ. ಇನ್ನು 80 ಬಾಲಕಿಯರ ಸ್ಥಿತಿಯಂತೂ ಹೇಳತೀರದಾಗಿದೆ. ಹೆಣ್ಣುಮಕ್ಕಳಿಗೆ ಅಗತ್ಯವಿರುವ ಕನಿಷ್ಠ ಖಾಸಗಿತನ ಮತ್ತು ನೈರ್ಮಲ್ಯದ ವ್ಯವಸ್ಥೆಯೂ ಇಲ್ಲದೆ, ಆ ಕಂದಮ್ಮಗಳು ಪ್ರತಿದಿನ ಪಡುತ್ತಿರುವ ಯಾತನೆ ವರ್ಣಿಸಲು ಸಾಧ್ಯವಿಲ್ಲ.&lt;/p&gt;&lt;h3&gt;&lt;strong&gt;ಸರ್ಕಾರದ ಹಣ ಪೋಲು, ಇಲಾಖೆಯ ನಿರ್ದಯಿ ಮೌನ!&lt;/strong&gt;&lt;/h3&gt;&lt;p&gt;ಖಾಸಗಿ ಬಾಡಿಗೆ ಕಟ್ಟಡದ ಮಾಲೀಕರಿಗೆ ಸಮಾಜ ಕಲ್ಯಾಣ ಇಲಾಖೆಯು ಪ್ರತಿ ತಿಂಗಳು ಭಾರಿ ಮೊತ್ತದ 1 ಲಕ್ಷದ 8 ಸಾವಿರ ರೂಪಾಯಿ ಬಾಡಿಗೆಯನ್ನು ಪಾವತಿಸುತ್ತಿದೆ. ಲಕ್ಷ ಲಕ್ಷ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ನೀರಲ್ಲಿ ಹೋಮ ಮಾಡಿದಂತೆ ಪೋಲಾಗುತ್ತಿದ್ದರೂ, ಮಕ್ಕಳಿಗೆ ಮಾತ್ರ ಮಾನವೀಯ ವಾತಾವರಣ ಸಿಗುತ್ತಿಲ್ಲ. ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯನ್ನು ಕೇಳಿದರೆ, &quot;ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ, ಸದ್ಯಕ್ಕೆ ಬೇರೆ ಎಲ್ಲೂ ಸೂಕ್ತ ಜಾಗ ಸಿಗುತ್ತಿಲ್ಲ&quot; ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಪೋಷಕರಿಂದ ತೀವ್ರ ಆಕ್ರೋಶ!&lt;/strong&gt;&lt;/h3&gt;&lt;p&gt;ಅಧಿಕಾರಿಗಳ ಈ ಬೇಜವಾಬ್ದಾರಿ ಮತ್ತು ಕ್ರೂರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳು ಬಡವರಾಗಿ ಹುಟ್ಟಿದ್ದೇ ತಪ್ಪಾ? ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರಿನ ಶಾಲೆಯಲ್ಲೇ ಮಕ್ಕಳಿಗೆ ಈ ಮಟ್ಟದ ಅನ್ಯಾಯವಾಗುತ್ತಿರುವುದು ನಾಚಿಕೆಗೇಡು&quot; ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು, ಅಪಾಯಕಾರಿ ವಾತಾವರಣದಲ್ಲಿರುವ ಈ 172 ಮಕ್ಕಳನ್ನು ಸುಸಜ್ಜಿತ ಹಾಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/hassan-ambedkar-residential-school-172-students-social-welfare-department-negligence-building-infrastructure-crisis-bmk/articleshow-uqigtbw"/>
        </item>
        <item>
            <title><![CDATA[ಮಂಗಳೂರು ರೈಲ್ವೆ ಶೀಘ್ರವೇ ಮೈಸೂರು ವಿಭಾಗ:  ಸೆ.11ಕ್ಕೆ DRMಗಳ ಜಂಟಿ ಸಭೆ, ಕುಡ್ಲ ವಲಯದ ರೈಲ್ವೆ ಆಸ್ತಿ ಎಷ್ಟಿದೆ?]]></title>
            <link>https://kannada.asianetnews.com/dakshina-kannada/mangaluru-railway-zone-merges-with-swr-mysuru-division-handover-starts-sept-11-key-details-and-route-map-gdp/articleshow-v7lcb9z</link>
            <guid isPermaLink="true">https://kannada.asianetnews.com/dakshina-kannada/mangaluru-railway-zone-merges-with-swr-mysuru-division-handover-starts-sept-11-key-details-and-route-map-gdp/articleshow-v7lcb9z</guid>
            <pubDate>Thu, 10 Sep 2026 09:32:08 +0530</pubDate>
            <description><![CDATA[ಅಕ್ಟೋಬರ್ 1 ರಿಂದ ಮಂಗಳೂರು ರೈಲ್ವೆ ವಲಯವು ಅಧಿಕೃತವಾಗಿ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಟ್ಟು, ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳಲಿದೆ. ಈ ಆಡಳಿತಾತ್ಮಕ ಬದಲಾವಣೆಯ ಭಾಗವಾಗಿ ಆಸ್ತಿ, ಸಿಬ್ಬಂದಿ ಹಾಗೂ ಕಾರ್ಯಾಚರಣೆಗಳ ಹಸ್ತಾಂತರ ಪ್ರಕ್ರಿಯೆ ಅಂತಿಮಗೊಳ್ಳಲಿದ್ದು, ಉಳ್ಳಾಲ ಮತ್ತು ತೋಕೂರು ಹೊಸ ಗಡಿಗಳಾಗಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24qhnerrvhg4x2t7mkjjwy3,imgname-mangaluru-railway-1789012792788.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ವಲಯವು ಅಕ್ಟೋಬರ್ 1ರಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ. ಈ ಮಹತ್ವದ ಆಡಳಿತಾತ್ಮಕ ಬದಲಾವಣೆಯ ಹಸ್ತಾಂತರ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಉಭಯ ವಿಭಾಗಗಳ ಹಿರಿಯ ಅಧಿಕಾರಿಗಳು ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (DRM) ಶುಕ್ರವಾರ ಅಂದರೆ ಸೆಪ್ಟೆಂಬರ್ 11 ರಂದು ಮಂಗಳೂರಿನಲ್ಲಿ ಜಂಟಿ ಸಭೆ ನಡೆಸಲಿದ್ದಾರೆ.&lt;/p&gt;&lt;p&gt;ಆಗಸ್ಟ್ 21ರಂದು ರೈಲ್ವೆ ಸಚಿವಾಲಯ ಹೊರಡಿಸಿದ ಆದೇಶದಂತೆ, ರೈಲುಗಳ ಸುಗಮ ಕಾರ್ಯಾಚರಣೆ ಹಾಗೂ ಆಡಳಿತಾತ್ಮಕ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಆಸ್ತಿ-ಪಾಸ್ತಿ, ಕಾರ್ಯನಿರ್ವಹಿಸುತ್ತಿರುವ ಸುಮಾರು 2,000 ಸಿಬ್ಬಂದಿಯ ಜವಾಬ್ದಾರಿ ಹಾಗೂ ದೈನಂದಿನ ಕಾರ್ಯಾಚರಣೆಗಳ ಹಸ್ತಾಂತರದ ಕುರಿತು ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು.&lt;/p&gt;&lt;h2&gt;ಗಡಿ ಬದಲಾವಣೆ ಮತ್ತು ವ್ಯಾಪ್ತಿ:&lt;/h2&gt;&lt;p&gt;&lt;strong&gt;ಹೊಸ ಗಡಿ: &lt;/strong&gt;ದಕ್ಷಿಣದ ಕಡೆಗೆ ಪಾಲಕ್ಕಾಡ್ ವಿಭಾಗದ ಗಡಿಯು ಉಳ್ಳಾಲ ನಿಲ್ದಾಣದ ಮೊದಲು ಕೊನೆಗೊಳ್ಳಲಿದ್ದು, ಹಾಲಿ ಪಡೀಲ್&zwnj;ನಲ್ಲಿದ್ದ ಗಡಿಯು ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.&lt;/p&gt;&lt;p&gt;&lt;strong&gt;ಉತ್ತರದ ಗಡಿ: &lt;/strong&gt;ಕೊಂಕಣ ರೈಲ್ವೆ ನಿಗಮಕ್ಕೆ ಸೇರುವ ತೋಕೂರು ನಿಲ್ದಾಣದವರೆಗೆ ನೈಋತ್ಯ ರೈಲ್ವೆಯ ವ್ಯಾಪ್ತಿ ಇರಲಿದೆ.&lt;/p&gt;&lt;p&gt;&lt;strong&gt;ಒಟ್ಟು ಮಾರ್ಗ&lt;/strong&gt;: ಮಂಗಳೂರು ರೈಲ್ವೆ ಪ್ರದೇಶದ ಒಟ್ಟು 39 ಕಿ.ಮೀ. ಪೈಕಿ ಸುಮಾರು 30 ಕಿ.ಮೀ. ಭಾಗವು ಇನ್ಮುಂದೆ ಮೈಸೂರು ವಿಭಾಗದ ಆಡಳಿತಕ್ಕೆ ಒಳಪಡಲಿದೆ.&lt;/p&gt;&lt;h2&gt;ಸಿಬ್ಬಂದಿ ಮತ್ತು ಕಾರ್ಯಾಚರಣೆಯಲ್ಲಿ ಯಥಾಸ್ಥಿತಿ:&lt;/h2&gt;&lt;p&gt;ಹಸ್ತಾಂತರದ ಆರಂಭಿಕ ಹಂತದಲ್ಲಿ ರೈಲು ಸಂಚಾರ ಮತ್ತು ಸಿಬ್ಬಂದಿ ವ್ಯವಸ್ಥೆಯಲ್ಲಿ ಯಾವುದೇ ತಕ್ಷಣದ ದೊಡ್ಡ ಬದಲಾವಣೆಗಳಿರುವುದಿಲ್ಲ. ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ತಕ್ಷಣಕ್ಕೆ ವರ್ಗಾವಣೆ ಅಥವಾ ಸ್ಥಳಾಂತರ ಮಾಡದೆ ಹಾಲಿ ವ್ಯವಸ್ಥೆಯನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ.&lt;/p&gt;&lt;h2&gt;ಮಂಗಳೂರು ವಲಯದ ಪ್ರಮುಖ ರೈಲ್ವೆ ಆಸ್ತಿಗಳು ಹಾಗೂ ಸೌಲಭ್ಯಗಳು:&lt;/h2&gt;&lt;p&gt;&lt;strong&gt;ಮಂಗಳೂರು ಸೆಂಟ್ರಲ್&lt;/strong&gt;: 6 ಪ್ಲಾಟ್&zwnj;ಫಾರ್ಮ್&zwnj;ಗಳು ಹಾಗೂ 1 ಬೇ ಪ್ಲಾಟ್&zwnj;ಫಾರ್ಮ್. 3 ಪಿಟ್&zwnj;ಲೈನ್&zwnj;ಗಳು (24 ಕೋಚ್&zwnj;ಗಳ ಸಾಮರ್ಥ್ಯ, ಹೈ-ಪ್ರೆಶರ್ ಜೆಟ್ ಸೌಲಭ್ಯ) ಮತ್ತು 1 ಸಿಕ್&zwnj;ಲೈನ್. ಪಾಲಕ್ಕಾಡ್ ವಿಭಾಗದ ಪ್ರಮುಖ ಕೋಚಿಂಗ್ ಡಿಪೋ ಹೊಂದಿದ್ದು, 17 ಜೋಡಿ ರೈಲುಗಳ (450 ಕೋಚ್&zwnj;ಗಳು) ಪ್ರಾಥಮಿಕ ನಿರ್ವಹಣೆ ಇಲ್ಲೇ ನಡೆಯುತ್ತದೆ. ದಿನಕ್ಕೆ ಸರಾಸರಿ 30 ರೈಲುಗಳ ಸಂಚಾರ ಹಾಗೂ 63 ಹಾಸಿಗೆಗಳುಳ್ಳ (ಮಹಿಳಾ ಸಿಬ್ಬಂದಿಗೆ 4) ರನ್ನಿಂಗ್ ರೂಂ ಸೌಲಭ್ಯ ಇದೆ.&lt;/p&gt;&lt;p&gt;&lt;strong&gt;ಮಂಗಳೂರು ಜಂಕ್ಷನ್: &lt;/strong&gt;3 ಪ್ಲಾಟ್&zwnj;ಫಾರ್ಮ್ ಹಾಗೂ 7 ರೈಲು ಮಾರ್ಗಗಳು (4 ಪ್ರಯಾಣಿಕ ರೈಲುಗಳಿಗೆ, 2 ಸರಕು ರೈಲುಗಳಿಗೆ, 1 ಸಿಕ್&zwnj;ಲೈನ್&zwnj;ಗೆ). ಪ್ರಮುಖ ವ್ಯಾಗನ್ ತಪಾಸಣಾ ಡಿಪೋ ಮತ್ತು ಡೀಸೆಲ್ ಲೋಕೋಮೋಟಿವ್ ಇಂಧನ ಪೂರೈಕೆ ಕೇಂದ್ರ. ಪ್ರತಿದಿನ 70 ನಿಲುಗಡೆ ರೈಲುಗಳು ಹಾಗೂ 10 ಆರಂಭಿಕ/ಅಂತಿಮ ರೈಲುಗಳ ನಿರ್ವಹಣೆ. ಕಾರ್ಯಾಚರಣೆ ಸಿಬ್ಬಂದಿಗೆ 64 ಹಾಸಿಗೆಗಳ ರನ್ನಿಂಗ್ ರೂಂ ಸೌಲಭ್ಯ ಇದೆ.&lt;/p&gt;&lt;h2&gt;ಕಾಸರಗೋಡು ಪ್ರಯಾಣಿಕರ ಬೇಡಿಕೆ:&lt;/h2&gt;&lt;p&gt;ಈ ಆಡಳಿತಾತ್ಮಕ ಗಡಿ ಬದಲಾವಣೆಯಿಂದ ಪಾಲಕ್ಕಾಡ್ ವಿಭಾಗದ ಆದಾಯ ಮತ್ತು ಕಾರ್ಯಾಚರಣೆ ಸಾಮರ್ಥ್ಯಕ್ಕೆ ಧಕ್ಕೆಯಾಗಲಿದೆ ಎಂದು ಸ್ಥಳೀಯ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಮಂಜೇಶ್ವರ ಹಾಗೂ ಕುಂಬ್ಳ ರೈಲು ನಿಲ್ದಾಣಗಳು ದಕ್ಷಿಣ ರೈಲ್ವೆಯ ಕೊನೆಯ ನಿಲ್ದಾಣಗಳಾಗುವುದರಿಂದ, ಅಲ್ಲಿ ಸೂಕ್ತ ಕೋಚಿಂಗ್ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಕಾಸರಗೋಡಿನ ರೈಲು ಬಳಕೆದಾರರ ವೇದಿಕೆಗಳು ಒತ್ತಾಯಿಸಿವೆ. ಒಟ್ಟಿನಲ್ಲಿ ಮಂಗಳೂರು ವಿಭಾಗವು ಮೈಸೂರು ಡಿವಿಜನ್ ಸೇರುವುದು ಪಕ್ಕಾ ಆಗಿದ್ದು, ದಾಖಲೆಗಳ ಹಸ್ತಾಂತರ ನಡೆಯಲಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/mangaluru-railway-zone-merges-with-swr-mysuru-division-handover-starts-sept-11-key-details-and-route-map-gdp/articleshow-v7lcb9z"/>
        </item>
        <item>
            <title><![CDATA[ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ವಿಚಾರಣೆಗೆ ತೆರಳಿದ ಪೊಲೀಸರಿಗೆ ಪ್ರಜ್ವಲ್ ಅವಾಜ್, ನಾನ್ಯಾರು ಗೊತ್ತಾ? ಮಾಜಿ ಸಂಸದ]]></title>
            <link>https://kannada.asianetnews.com/bengaluru-urban/prajwal-revanna-mobile-phone-case-former-mp-threatens-police-during-interrogation-at-parappana-agrahara-jail-gdp/articleshow-xedbv7l</link>
            <guid isPermaLink="true">https://kannada.asianetnews.com/bengaluru-urban/prajwal-revanna-mobile-phone-case-former-mp-threatens-police-during-interrogation-at-parappana-agrahara-jail-gdp/articleshow-xedbv7l</guid>
            <pubDate>Thu, 10 Sep 2026 16:42:35 +0530</pubDate>
            <description><![CDATA[ಹಾಸನ ಪೆನ್&zwnj;ಡ್ರೈವ್ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ತೆರಳಿದ ಪೊಲೀಸರ ಮುಂದೆ ಉಡಾಫೆಯಿಂದ ವರ್ತಿಸಿದ್ದಾರೆ. 'ನಾನು ಮಾಜಿ ಸಂಸದ, ಮಾಜಿ ಪ್ರಧಾನಿ ಮೊಮ್ಮಗ' ಎಂದು ದಬಾಯಿಸಿ, ಮೌನವಾಗಿರುವ ಹಕ್ಕಿದೆ ಎಂದು ಹೇಳಿ ತನಿಖೆಗೆ ಸಹಕರಿಸಲು ನಿರಾಕರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k1sd0b4hc577dd40n7mnb108,imgname-prajwal-revanna-1754272902289.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಹಾಸನ ಪೆನ್&zwnj;ಡ್ರೈವ್ ಪ್ರಕರಣದಲ್ಲಿ ಅಪರಾಧಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ತೆರಳಿದ ಪೊಲೀಸರ ಮುಂದೆ ಪ್ರಜ್ವಲ್ ರೇವಣ್ಣ ಉಡಾಫೆ ರೀತಿ ವರ್ತಿಸಿ, ತನ್ನ ಬಾಲ ಬಿಚ್ಚಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ಗೆ ಮಾಹಿತಿ ಲಭ್ಯವಾಗಿದೆ.&lt;/p&gt;&lt;p&gt;ಜೈಲಿನಲ್ಲಿ ಮೊಬೈಲ್ ಬಳಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪೊಲೀಸರು ಜೈಲಿಗೆ ತೆರಳಿದಾಗ ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ಇದರ ಜೊತೆಗೆ ಕೃತ್ಯಕ್ಕೆ ಸಹಕಾರ ನೀಡಿದ್ದ ವಿಚಾರಣಾಧೀನ ಕೈದಿ ಪ್ರತಾಪ್ ರಾಯ್&zwnj; ಹೇಳಿಕೆಯನ್ನು ಕೂಡ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪ್ರಜ್ವಲ್ ಜೈಲಿನಲ್ಲಿದ್ದರೂ ತಂದೆ ಎಚ್.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಹಾಗೂ ಸ್ನೇಹಿತರ ಜತೆಗೆ ನಿರಂತರವಾಗಿ ಮೊಬೈಲ್ ಫೋನ್ ಮೂಲಕ ಸಂಭಾಷಣೆ ನಡೆಸಿರುವುದು ಪತ್ತೆಯಾಗಿದ್ದು, ಆ ಬಗ್ಗೆ ಪ್ರಶ್ನೆಗಳನ್ನು ಪ್ರಜ್ವಲ್&zwnj; ಅವರಿಗೆ ಕೇಳಲಾಗಿದೆ&lt;/p&gt;&lt;h2&gt;ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಹೈಡ್ರಾಮಾ:&lt;/h2&gt;&lt;p&gt;ತನ್ನ ಬಳಿ ಮೊಬೈಲ್ ಪತ್ತೆಯಾದ ಕುರಿತು ಪರಪ್ಪನ ಅಗ್ರಹಾರ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಜ್ವಲ್ ರೇವಣ್ಣ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಒಪ್ಪಲಿಲ್ಲ. ಬದಲಿಗೆ, ಕಾನೂನಿನ ಹಕ್ಕನ್ನು ಮುಂದಿಟ್ಟು &quot;ಐ ಹ್ಯಾವ್ ರೈಟ್ಸ್ ಟು ರಿಮೇನ್ ಸೈಲೆಂಟ್&quot; (ಮೌನವಾಗಿರುವ ಹಕ್ಕು ನನಗೆ ಇದೆ) ಎಂದು ಹೇಳಿ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.&lt;/p&gt;&lt;h2&gt;ಪೊಲೀಸರಿಗೆ ಅವಮಾನ ಮಾಡಿದ ಪ್ರಜ್ವಲ್&lt;/h2&gt;&lt;p&gt;ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳ ಮುಂದೆ ಏರು ಧ್ವನಿಯಲ್ಲಿ, &quot;ನೀವು ಯಾರ ಜೊತೆಗೆ ಮಾತನಾಡುತ್ತಿದ್ದೀರಿ ಎಂಬುದು ನಿಮಗೆ ಗೊತ್ತಾ? ನಾನು ಮಾಜಿ ಸಂಸದ ಹಾಗೂ ಮಾಜಿ ಪ್ರಧಾನಿಯ ಮೊಮ್ಮಗ, ನಾನು ಕೋರ್ಟ್ ಗೆ ಅಪೀಲು ಹೋಗ್ತೀನಿ.&quot; ಎಂದು ದಬಾಯಿಸಿದ್ದಾರೆ. ಉದ್ದೇಶಪೂರ್ವಕವಾಗಿ ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರಜ್ವಲ್, ತಮ್ಮ ಜಾಮೀನು ರದ್ದುಪಡಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಕೂಗಾಡಿದ್ದಾರಂತೆ. &lsquo;ನಾನು ಏನು ಹೇಳುವುದಿಲ್ಲ, ಯಾವುದೇ ವಿಚಾರಕ್ಕೂ ಬಾಯಿಬಿಡುವುದಿಲ್ಲ, ಏನು ಬೇಕಾದರೂ ಮಾಡಿಕೊಳ್ಳಿ ಯಾರ ಜೊತೆಗೆ ಮಾತನಾಡ್ತಿದ್ದೀರಾ ನೀವು&rsquo; ಎಂದು ಪೊಲೀಸರ ಮುಂದೆ ಉಡಾಫೆಯಾಗಿ ವರ್ತಿಸಿ ತನಿಖೆಗೆ ಸಹಕರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಆ.11ರಂದು ಸಿಸಿಬಿ ನಡೆಸಿದ ದಾಳಿಯ ವೇಳೆ ಪ್ರಜ್ವಲ್ ಬ್ಯಾರಕ್&zwnj;ನಲ್ಲಿ ಮೊಬೈಲ್&zwnj;, ಪೆನ್&zwnj;ಡ್ರೈವ್&zwnj;, ಪತ್ತೆಯಾಗಿತ್ತು. ಜೈಲು ಅಧಿಕಾರಿಗಳು ನೀಡಿದ ದೂರಿನ ಮೇಲೆ ಪ್ರಜ್ವಲ್ ಹಾಗೂ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/bengaluru-urban/prajwal-revanna-mobile-phone-case-former-mp-threatens-police-during-interrogation-at-parappana-agrahara-jail-gdp/articleshow-xedbv7l"/>
        </item>
    </channel>
</rss>
