<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 24 Aug 2026 12:08:07 +0530</lastBuildDate>
        <atom:link href="https://kannada.asianetnews.com/rss/hassan" rel="self" type="application/rss+xml"/>
        <item>
            <title><![CDATA[ಬ್ಯಾಂಕಿಂಗ್ ಕ್ಷೇತ್ರದ ಕರಾಳ ಮುಖ ಬಯಲು! - ನಿಗದಿತ ಸಮಯ ಮುಗಿದರೂ ಸಿಬ್ಬಂದಿಗೆ ಆಫೀಸ್‌ನಲ್ಲೇ 'ಅಕ್ರಮ ಬಂಧನ']]></title>
            <link>https://kannada.asianetnews.com/karnataka-districts/karnataka-bank-manager-locks-staff-inside-to-force-overtime-viral-video-sparks-outrage/articleshow-16xhsg8</link>
            <guid isPermaLink="true">https://kannada.asianetnews.com/karnataka-districts/karnataka-bank-manager-locks-staff-inside-to-force-overtime-viral-video-sparks-outrage/articleshow-16xhsg8</guid>
            <pubDate>Mon, 20 Jul 2026 20:18:05 +0530</pubDate>
            <description><![CDATA[&lt;p&gt;ಹಾಸನದ ಅರಕಲಗೂಡಿನ ಕರ್ನಾಟಕ ಗ್ರಾಮೀಣ ಬ್ಯಾಂಕ್&zwnj;ನಲ್ಲಿ ನಿಗದಿತ ಅವಧಿ ಮುಗಿದರೂ ಮನೆಗೆ ತೆರಳಲು ಯತ್ನಿಸಿದ ಕಿರಿಯ ಉದ್ಯೋಗಿಗೆ, ಶಾಖೆಯ ಗೇಟ್&zwnj;ಗೆ ಬೀಗ ಹಾಕಿ ಒವರ್&zwnj;ಟೈಮ್ ಮಾಡುವಂತೆ ಮ್ಯಾನೇಜರ್ ಕಿರುಕುಳ ನೀಡಿದ ವೀಡಿಯೋ ವೈರಲ್ ಆಗಿದೆ. ಆರ್&zwnj;ಬಿಐ ನಿಯಮಗಳನ್ನು ಉಲ್ಲಂಘಿಸಿ ನೌಕರನನ್ನು ಅಕ್ರಮವಾಗಿ ಬಂಧಿಸಿದ ಮ್ಯಾನೇಜರ್ ನಡವಳಿಕೆ ಹಾಗೂ ಬ್ಯಾಂಕಿಂಗ್ ವಲಯದ ಟಾಕ್ಸಿಕ್ ಸಂಸ್ಕೃತಿಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzzgctj1n79ewx4hk7qw5y6,imgname-karnataka-grameen-bank-manager-locking-a-junior-employee-inside-the-office-to-demand-overtime-work-1784558400338.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸದ ಒತ್ತಡ ಮತ್ತು ಹಿರಿಯ ಅಧಿಕಾರಿಗಳ ಕಿರುಕುಳ ಮಿತಿಮೀರುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಹಾಸನ ಜಿಲ್ಲೆಯ ಅರಕಲಗೂಡು ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್&zwnj;ನಲ್ಲಿ ನಡದಿರುವ ಘಟನೆ ಇಡೀ ವಲಯವನ್ನು ಬೆಚ್ಚಿಬೀಳಿಸಿದೆ. ಜುಲೈ 18ರಂದು ಸಂಜೆ ನಿಗದಿತ ಕೆಲಸದ ಸಮಯ ಮುಗಿದಿದ್ದರೂ, ಕಸ್ಟಮರ್ ಸರ್ವಿಸ್ ಅಸೋಸಿಯೇಟ್ (CSA) ಉದ್ಯೋಗಿಯನ್ನು ಹೊರಗೆ ಹೋಗಲು ಬಿಡದೆ, ಶಾಖೆಯ ಮುಖ್ಯ ಗೇಟ್&zwnj;ಗೆ ಮ್ಯಾನೇಜರ್ ಬೀಗ ಜಡಿದಿದ್ದಾರೆ. ಈ ಅಕ್ರಮ ಬಂಧನದ ವೀಡಿಯೋ ಸದ್ಯ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;&quot;ಓವರ್&zwnj;ಟೈಮ್ ಕಡ್ಡಾಯ&quot;: ಬೆದರಿಕೆ ಹಾಕಿ ಅಧಿಕಾರಿಯ ದೌರ್ಜನ್ಯ:&lt;/strong&gt;&lt;/p&gt;&lt;p&gt;ಸಂಜೆ 5 ಗಂಟೆಗೆ ಶಿಫ್ಟ್ ಮುಗಿದಿದ್ದರೂ, ಉದ್ಯೋಗಿ 6 ಗಂಟೆಯವರೆಗೂ ಹೆಚ್ಚುವರಿಯಾಗಿ ಕೆಲಸ ಮಾಡಿದ್ದರು. ನಂತರ ಮನೆಗೆ ತೆರಳಲು ಅನುಮತಿ ಕೇಳಿದಾಗ, ಮ್ಯಾನೇಜರ್ &quot;ನಹಿ ಜನ ಹೈ ತೋ ನಹಿ ಜನ ಹೈ&quot; (ಹೋಗಬಾರದು ಎಂದರೆ ಹೋಗಬಾರದು) ಎಂದು ಉದ್ಧಟತನ ತೋರಿದ್ದಾರೆ. ಉದ್ಯೋಗ ಒಪ್ಪಂದದ ಪ್ರಕಾರ ನಿಗದಿತ ಕೆಲಸ ಮುಗಿಸಿದ್ದೇನೆ ಎಂದು ಸಿಬ್ಬಂದಿ ವಾದಿಸಿದರೂ, &quot;ಓವರ್&zwnj;ಟೈಮ್ ಮಾಡುವುದು ಕಡ್ಡಾಯ&quot; ಎಂದು ಬೆದರಿಸಿ ಗೇಟ್ ಮುಚ್ಚಿ ಕ್ರಿಮಿನಲ್ ಕೃತ್ಯದಂತೆ ವರ್ತಿಸಿದ್ದಾರೆ.&lt;/p&gt;&lt;p&gt;&lt;strong&gt;ಆರ್&zwnj;ಬಿಐ ನಿಯಮಗಳ ಉಲ್ಲಂಘನೆ ಮತ್ತು ಹೆಚ್ಚಿನ ಕೆಲಸದ ಒತ್ತಡ!&lt;/strong&gt;&lt;/p&gt;&lt;p&gt;ಸಿಬ್ಬಂದಿಯನ್ನು ಬಂಧಿತ ಗುಲಾಮರಂತೆ ನಡೆಸಿಕೊಳ್ಳುವ ಈ ನಡವಳಿಕೆಯು ಭಾರತೀಯ ರಿಸರ್ವ್ ಬ್ಯಾಂಕ್&zwnj; (RBI) ನಿಗದಿಪಡಿಸಿರುವ ಉದ್ಯೋಗಿ ಕಲ್ಯಾಣ ನೀತಿಗಳ ನೇರ ಉಲ್ಲಂಘನೆಯಾಗಿದೆ. ಸಾಲ ಮತ್ತು ಇನ್ಶೂರೆನ್ಸ್ ಟಾರ್ಗೆಟ್&zwnj;ಗಳನ್ನು ಪೂರೈಸಲು ಹಿರಿಯ ಅಧಿಕಾರಿಗಳು ಕಿರಿಯ ಸಿಬ್ಬಂದಿಯ ಮೇಲೆ ನಿರಂತರ ಮಾನಸಿಕ ಸವಾರ ನಡೆಸುತ್ತಿದ್ದಾರೆ. ಸೂಕ್ತ ಸಿಬ್ಬಂದಿ ಬಲ ನೀಡದೆ, ಅತಿಯಾದ ಗುರಿಗಳನ್ನು ಹೇರಿ ಬ್ಯಾಂಕರ್&zwnj;ಗಳ ಜೀವನವನ್ನು ನರಕ ಸದೃಶಗೊಳಿಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Bank Manager locks gate and forces staff to stay in branch till late night pic.twitter.com/oSFLwa5O4o&lt;/p&gt;&lt;p&gt;&mdash; Hellobanker (@Hellobanker_in) July 19, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ನೆಟ್ಟಿಗರ ಆಗ್ರಹ:&lt;/strong&gt;&lt;/p&gt;&lt;p&gt;ಈ ಕರಾಳ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಉದ್ಯೋಗಿಯನ್ನು ಬಂಧಿಸಿಡುವುದು ಸ್ಪಷ್ಟವಾಗಿ ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ಕೇವಲ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಲು ಕಿರಿಯ ಸಿಬ್ಬಂದಿಯನ್ನು ಬಲಿಪಶು ಮಾಡುತ್ತಿರುವ ಇಂತಹ ಮ್ಯಾನೇಜರ್&zwnj;ಗಳ ವಿರುದ್ಧ ತಕ್ಷಣವೇ ಅಮಾನತು ಶಿಕ್ಷೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕರು ಹಾಗೂ ಬ್ಯಾಂಕಿಂಗ್ ಒಕ್ಕೂಟಗಳು ಒತ್ತಾಯಿಸಿವೆ.&lt;/p&gt;]]></content:encoded>
            <category>hassan</category>
            <dc:creator>Chandrashekar GS</dc:creator>
            <atom:link href="https://kannada.asianetnews.com/karnataka-districts/karnataka-bank-manager-locks-staff-inside-to-force-overtime-viral-video-sparks-outrage/articleshow-16xhsg8"/>
        </item>
        <item>
            <title><![CDATA[ಮಂಗಳೂರು-ಬೆಂಗಳೂರು ರೈಲ್ವೆ ಸಂಚಾರ ರದ್ದು, ಪೊಲೀಸ್‌ ಪರೀಕ್ಷೆ ತಪ್ಪಿಸಿಕೊಂಡ ಅಭ್ಯರ್ಥಿಗಳು, ಮತ್ತೆ ರೈಲು ಆರಂಭ ಯಾವಾಗ?]]></title>
            <link>https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu</link>
            <guid isPermaLink="true">https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu</guid>
            <pubDate>Mon, 03 Aug 2026 11:05:23 +0530</pubDate>
            <description><![CDATA[&lt;p&gt;ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಕಲೇಶಪುರ ಸಮೀಪದ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿ, ಬದಲಿ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ರೈಲ್ವೆ ಇಲಾಖೆ ಹಳಿ ದುರಸ್ತಿ ಕಾರ್ಯ ಕೈಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz31cs273a27mdbahsh3pqps,imgname-mangaluru-bengaluru-trains--1--1785734784068.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಬೆಟ್ಟಗಳ ಇಳಿಜಾರು ಭಾಗಗಳಲ್ಲಿ ಮಣ್ಣು ಸಡಿಲಗೊಂಡ ಪರಿಣಾಮ ಈ ಭೂಕುಸಿತ ಸಂಭವಿಸುತ್ತಿದೆ. ಸಕಲೇಶಪುರ ಸಮೀಪ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಸಿರಿಬಾಗಿಲು ನಡುವೆ ಶನಿವಾರ ರಾತ್ರಿ ರಾತ್ರಿ 9 ಗಂಟೆಗೆ ಮಣ್ಣು ಕುಸಿದಿದ್ದು, ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾಝಿಕ್ಕೋಡ್&zwnj;- ಬೆಂಗಳೂರು ರೈಲನ್ನು ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದಿಂದ ವಾಪಸ್&zwnj; ಕಳುಹಿಸಲಾದರೆ, ಮಂಗಳೂರಿಗೆ ತೆರಳುತ್ತಿದ್ದ ಕಾರವಾರ ಎಕ್ಸ್&zwnj;ಪ್ರೆಸ್&zwnj; ರೈಲನ್ನು ಹಾಸನ ರೈಲ್ವೆ ನಿಲ್ದಾಣದಿಂದ ಬದಲಿ ಮಾರ್ಗದಲ್ಲಿ ಕಳುಹಿಸಿಕೊಡಲಾಯಿತು. ಭೂಕುಸಿತದಿಂದ ಈ ಮಾರ್ಗದಲ್ಲಿ ಸಂಚರಿಸುವ ಏಳು ರೈಲುಗಳ ಸಂಚಾರವನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಇಲಾಖೆ ಅಧಿಕಾರಿಗಳು ಮೈಸೂರಿನಿಂದ ಇನ್ನೂರಕ್ಕೂ ಅಧಿಕ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿ ಮಧ್ಯರಾತ್ರಿಯಿಂದಲೆ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ ಘಟನಾ ಪ್ರದೇಶದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಸಮರೋಪಾಧಿ ಕಾರ್ಯಚರಣೆಗೆ ಅಡ್ಡಿಯಾಗಿದೆ.&lt;/p&gt;&lt;h2&gt;ಸಂಚಾರ ಪುನರಾರಂಭಕ್ಕೆ ಸಮಯ ಬೇಕು:&lt;/h2&gt;&lt;p&gt;ಹಳಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಾಂತ್ರಿಕ ತಂಡ ದೃಢಪಡಿಸಿದ ಬಳಿಕವೇ ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸಲು ಉದ್ದೇಶಿಸಿರುವ ಪ್ರಯಾಣಿಕರು ರೈಲುಗಳ ಸ್ಥಿತಿಗತಿ ಕುರಿತು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿಕೊಂಡು ಪ್ರಯಾಣ ಕೈಗೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಮಲೆನಾಡಿನಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆ ಪಶ್ಚಿಮ ಘಟ್ಟ ಪ್ರದೇಶದ ರೈಲ್ವೆ ಮಾರ್ಗಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.&lt;/p&gt;&lt;h2&gt;ತಪ್ಪಿದ ಬಾರೀ ಅನಾಹುತ&lt;/h2&gt;&lt;p&gt;ರೈಲು ಸಂಚಾರ ಆರಂಭಕ್ಕೂ ಮುನ್ನವೇ ಹಳಿ ಮೇಲೆ ಮಣ್ಣು ಕುಸಿದಿರುವುದು ಪತ್ತೆಯಾಗಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸುರಕ್ಷತಾ ದೃಷ್ಟಿಯಿಂದ ರೈಲ್ವೆ ಅಧಿಕಾರಿಗಳು ತಕ್ಷಣವೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ತಡೆದು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿದರು. ಭೂಕುಸಿತದ ಪರಿಣಾಮ ಬೆಂಗಳೂರು- ಮುರುಡೇಶ್ವರ, ಬೆಂಗಳೂರು- ಕೋಝಿಕೋಡ್ ಹಾಗೂ ವಿಜಯಪುರ- ಮಂಗಳೂರು ರೈಲುಗಳನ್ನು ಹಾಸನ ರೈಲು ನಿಲ್ದಾಣದಲ್ಲೇ ನಿಲ್ಲಿಸಲಾಯಿತು. ಬೆಂಗಳೂರು- ಕಾರವಾರ ಎಕ್ಸ್&zwnj;ಪ್ರೆಸ್ ರೈಲು ಸಕಲೇಶಪುರದಲ್ಲಿ ಸ್ಥಗಿತಗೊಂಡರೆ, ಮುರುಡೇಶ್ವರ- ಬೆಂಗಳೂರು ಹಾಗೂ ಮಂಗಳೂರು- ವಿಜಯಪುರ ರೈಲುಗಳನ್ನು ಸುಬ್ರಹ್ಮಣ್ಯ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಕೋಝಿಕೋಡ್- ಬೆಂಗಳೂರು ರೈಲು ಪುತ್ತೂರು ನಿಲ್ದಾಣದಲ್ಲಿ ನಿಂತಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರೆ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.&lt;/p&gt;&lt;h2&gt;ಪೊಲೀಸ್&zwnj; ಕಾನ್&zwnj;ಸ್ಟೇಬಲ್&zwnj; ನೇಮಕಾತಿ ಪರೀಕ್ಷೆಗೆ ಹೊರಟಿದ್ದವರಿಗೆ ಶಾಕ್&lt;/h2&gt;&lt;p&gt;ರಾಜ್ಯದಲ್ಲಿ ಭಾನುವಾರ ನಡೆದ ಸಿವಿಲ್&zwnj; ಪೊಲೀಸ್&zwnj; ಕಾನ್&zwnj;ಸ್ಟೇಬಲ್&zwnj; ನೇಮಕಾತಿ ಪರೀಕ್ಷೆಯಲ್ಲಿ ಕರಾವಳಿ ಸೇರಿ ಪಶ್ಚಿಮ ಘಟ್ಟದ ಭಾಗಗಳಿಂದ ಪರೀಕ್ಷೆ ಬರೆಯಲು ಬರಬೇಕಿದ್ದ ಹಲವು ಮಂದಿ ಬರಲಾಗದೆ ನಿರಾಸೆಗೊಂಡರು. ಕಾರಣ ರೈಲು ಸಂಚಾರ ಸಡನ್ ಸ್ಥಗಿತಗೊಂಡಿತು. ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದ ಅಭ್ಯರ್ಥಿಗಳ ರೈಲು ಸುಬ್ರಹ್ಮಣ್ಯ ರೋಡ್&zwnj;ನಲ್ಲಿ ರದ್ದುಗೊಂಡಿದ್ದು, ಅವರಿಗೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ. ಮಾನವೀಯ ನೆಲೆಯಲ್ಲಿ ರೈಲು ರದ್ದತಿಯಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಎಲ್ಲ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್&zwnj; ವೈರಲ್&zwnj; ಆಗಿದೆ.&lt;/p&gt;&lt;h2&gt;ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ:&lt;/h2&gt;&lt;p&gt;ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಹಾಗೂ ಪುತ್ತೂರು ರೈಲು ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ರಾತ್ರಿ ಪೂರ್ತಿ ಸಿಲುಕಿಕೊಂಡರು. ಹಲವರು ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದರೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸಿದರು. ನಡುರಾತ್ರಿ ವೇಳೆಯಲ್ಲೇ ಪ್ರಯಾಣ ಮುಂದುವರಿಸಲು ಟಿಕೆಟ್ ಹಣ ವಾಪಸ್ ಪಡೆದು ಬಸ್ ಸೇರಿದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಹುಡುಕುತ್ತಾ ಪ್ರಯಾಣಿಕರು ಲಗೇಜ್ ಹೊತ್ತು ಬಸ್ ನಿಲ್ದಾಣಗಳತ್ತ ತೆರಳಿದ ದೃಶ್ಯಗಳು ಕಂಡುಬಂದವು.&lt;/p&gt;&lt;h2&gt;ಪರ್ಯಾಯ ವ್ಯವಸ್ಥೆ ಬಗ್ಗೆ ಅಸಮಾಧಾನ&lt;/h2&gt;&lt;p&gt;ರೈಲುಗಳ ರದ್ದತಿ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿದರೂ, ತಕ್ಷಣದ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸದ ಹಿನ್ನೆಲೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ರೈಲು ನಿಲ್ದಾಣದಲ್ಲಿ ಟಿಕೆಟ್ ಹಣ ಮರುಪಾವತಿಗಾಗಿ ಉದ್ದ ಸಾಲುಗಳು ಕಂಡುಬಂದವು. ಹಲವು ಮಂದಿ ತಮ್ಮ ಪ್ರಯಾಣವನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವರು ಖಾಸಗಿ ವಾಹನ ಹಾಗೂ ಬಸ್&zwnj;ಗಳ ಮೊರೆ ಹೋಗಬೇಕಾಯಿತು. ಪ್ರಯಾಣಿಕರ ಅನುಕೂಲ್ಕಕಾಗಿ ಹಾಸನ, ಸುಬ್ರಹ್ಮಣ್ಯ ರೋಡ್&zwnj; ಮತ್ತು ಬಂಟ್ವಾಳ ರೈಲು ನಿಲ್ದಾಣಗಳಲ್ಲಿ ಅಡುಗೆ ವ್ಯವಸ್ಥೆ ಮಾಡಲಾಯಿತು. ಭೂಕುಸಿತ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ವಿಜಯಪುರ ಎಕ್ಸ್&zwnj;ಪ್ರೆಸ್&zwnj; ಪ್ರಯಾಣಿಕರಿಗೆ ಉಪಹಾರಗಳನ್ನು ಸರಬರಾಜು ಮಾಡಲಾಯಿತು.&lt;/p&gt;&lt;h2&gt;ಭಾನುವಾರ ರದ್ದಾದ ರೈಲು ಮತ್ತು ಬದಲಿ ಮಾರ್ಗ&lt;/h2&gt;&lt;ul&gt; &lt;li&gt;ಭಾನುವಾರದ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್&zwnj;ಪ್ರೆಸ್ ಪ್ರಯಾಣ, ರೈಲು ಸಂಖ್ಯೆ 16575 ಯಶವಂತಪುರ - ಮಂಗಳೂರು ಜಂಕ್ಷನ್ ಎಕ್ಸ್&zwnj;ಪ್ರೆಸ್ ಪ್ರಯಾಣ ರದ್ದುಗೊಳಿಸಲಾಯಿತು.&lt;/li&gt; &lt;li&gt;ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಎಸ್&zwnj;ಎಸ್&zwnj;ಎಸ್&zwnj; ಹುಬ್ಬಳ್ಳಿ - ಲೋಂಡಾ - ಕ್ಯಾಸಲ್ ರಾಕ್ - ಮಡಗಾಂವ್ - ಕಾರವಾರ - ತೋಕೂರು ಮೂಲಕ ಮಂಗಳೂರು ಜಂಕ್ಷನ್&zwnj;ಗೆ ಸಂಚಾರಕ್ಕೆ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್&zwnj;ಪ್ರೆಸ್&zwnj;ನ್ನು ಮಂಗಳೂರು ಜಂಕ್ಷನ್ - ತೋಕೂರು - ಕಾರವಾರ - ಮಡಗಾಂವ್ - ಕ್ಯಾಸಲ್ ರಾಕ್ - ಲೋಂಡಾ - ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ಮೂಲಕ ಸಂಚಾರಕ್ಕೆ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16586 ಮುರ್ಡೇಶ್ವರ - ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಮುರ್ಡೇಶ್ವರ - ತೋಕೂರು - ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೋದನೂರು - ಜೋಲಾರ್&zwnj;ಪೆಟ್ಟೈ - ಎಸ್&zwnj;ಎಂವಿಟಿ ಬೆಂಗಳೂರಿಗೆ ಸಂಚಾರ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16512 ಕೋಝಿಕ್ಕೋಡ್ - ಕೆಎಸ್ಆರ್ ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೊದನೂರು - ಜೋಲಾರ್ಪೆಟ್ಟೈ - ಎಸ್&zwnj;ಎಂವಿಟಿ ಬೆಂಗಳೂರಿಗೆ ಸಂಚಾರಕ್ಕೆ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ. 16511 ಕೆಎಸ್&zwnj;ಆರ್&zwnj; ಬೆಂಗಳೂರು - ಕೋಝಿಕೋಡ್ ಎಕ್ಸ್&zwnj;ಪ್ರೆಸ್&zwnj;ನ್ನು ಬೆಂಗಳೂರು ಎಸ್&zwnj;ಎಂವಿಬಿನಲ್ಲಿ ಪ್ರಯಾಣ ಆರಂಭಿಸಿ ಎಸ್&zwnj;ಎಂವಿಟಿ ಬೆಂಗಳೂರು ಜೋಲಾರ್&zwnj;ಪೇಟ್ಟೈ ಜಂಕ್ಷನ್ - ಪೊದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕೋಝಿಕ್ಕೋಡ್ - ಮಂಗಳೂರು ಸೆಂಟ್ರಲ್&zwnj;ಗೆ ಸಂಚಾರ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16585 ಎಸ್&zwnj;ಎಂವಿಟಿ ಬೆಂಗಳೂರು - ಮುರ್ಡೇಶ್ವರ ಎಕ್ಸ್&zwnj;ಪ್ರೆಸ್&zwnj;ನ್ನು ಎಸ್&zwnj;ಎಂವಿಟಿ ಬೆಂಗಳೂರು - ಓಮಲೂರು ಜಂಕ್ಷನ್ - ಪೋದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕಣ್ಣೂರು - ತೋಕೂರು - ಮುರ್ಡೇಶ್ವರಕ್ಕೆ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.&lt;/li&gt;&lt;/ul&gt;&lt;h2&gt;ಶನಿವಾರ ರದ್ದಾದ ರೈಲುಗಳು&lt;/h2&gt;&lt;ul&gt; &lt;li&gt;ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್&zwnj;- ವಿಜಯಪುರ ಎಕ್ಸ್&zwnj;ಪ್ರೆಸ್ ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ.&lt;/li&gt; &lt;li&gt;ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್&zwnj;ಎಂವಿಟಿ ಬೆಂಗಳುರು ಎಕ್ಸ್&zwnj;ಪ್ರೆಸ್&zwnj; ನ್ನು ರಾತ್ರಿ ಸಿರಿಬಾಗಿಲು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16512 ಕೋಝಿಕ್ಕೋಡ್&zwnj;-ಕೆಎಸ್&zwnj;ಆರ್&zwnj; ಬೆಂಗಳೂರು ಕಬಕ ಪುತ್ತೂರಿನಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ&lt;/li&gt; &lt;li&gt;ರೈಲು ಸಂಖ್ಯೆ 16596 ಕಾರವಾರ-ಕೆಎಸ್&zwnj;ಆರ್&zwnj; ಬೆಂಗಳೂರಿಗೆ ರಾತ್ರಿ ಬಾರ್ಕೂರಿನಿಂದ ಹೊರಟು ಸಂಚಾರ ವ್ಯತ್ಯಯವಾಯಿತು. ಅದನ್ನು ಮಂಗಳೂರು ಜಂಕ್ಷನ್&zwnj;, ಶೊರನೂರು ಜಂಕ್ಷನ್&zwnj;, ಪಾಲಕ್ಕಾಡ್&zwnj; ಜಂಕ್ಷನ್&zwnj;, ಇರೊಡೆ ಜಂಕ್ಷನ್&zwnj; ಮೂಲಕ ಕೆಎಸ್&zwnj;ಆರ್&zwnj; ಬೆಂಗಳೂರಿಗೆ ಮಾರ್ಗ ಬದಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16595 ಕೆಎಸ್&zwnj;ಆರ್&zwnj; ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj;ನ್ನು ಹಾಸನ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16585 ಎಸ್&zwnj;ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಹಾಸನ ತಲುಪಿದ್ದು, ಹಾಸನ-ಮುರುಡೇಶ್ವರ ಪ್ರಯಾಣ ಭಾಗಶಃ ರದ್ದು ಮಾಡಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16511 ಕೆಎಸ್&zwnj;ಆರ್&zwnj; ಬೆಂಗಳೂರು-ಕೋಝಿಕೋ ಎಕ್ಸ್&zwnj;ಪ್ರೆಸ್ ರೈಲು ಕೆಎಸ್&zwnj;ಆರ್ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ್ದು, ಹಾಸನದಲ್ಲಿ ಅಲ್ಪಾವಧಿಗೆ ಸಂಚಾರ ಕೊನೆಗೊಂಡಿತು.&lt;/li&gt; &lt;li&gt;ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್&zwnj;ಪ್ರೆಸ್ ಸಂಚಾರ ಹಾಸನದಲ್ಲಿ ಮುಕ್ತಾಯಗೊಂಡಿದೆ.&lt;/li&gt; &lt;li&gt;ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್ ಸುಬ್ರಹ್ಮಣ್ಯ ರೋಡ್&zwnj; ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ.&lt;/li&gt;&lt;/ul&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu"/>
        </item>
        <item>
            <title><![CDATA['ಆ ಪ್ರಸಾದ ಕಟ್ಟಿದ್ರೆ ಅಮ್ಮ ಬದುಕಿರ್ತಿದ್ರೇನೋ..': ತಾಯಿ ಚನ್ನಮ್ಮನ ನೆನೆದು ಕಣ್ಣೀರಿಟ್ಟ ಹೆಚ್.ಡಿ. ರೇವಣ್ಣ!]]></title>
            <link>https://kannada.asianetnews.com/karnataka-districts/hassan-hd-revanna-gets-emotional-remembering-god-prasada-mother-chennamma-devegowda/articleshow-6colm4z</link>
            <guid isPermaLink="true">https://kannada.asianetnews.com/karnataka-districts/hassan-hd-revanna-gets-emotional-remembering-god-prasada-mother-chennamma-devegowda/articleshow-6colm4z</guid>
            <pubDate>Thu, 23 Jul 2026 14:05:57 +0530</pubDate>
            <description><![CDATA[ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ತಮ್ಮ ತಾಯಿ ಚನ್ನಮ್ಮ ಅವರ ಅಗಲಿಕೆಯಿಂದ ದುಃಖಿತರಾಗಿದ್ದಾರೆ. ತಾವು ಧರ್ಮಸ್ಥಳದ ಪ್ರಸಾದವನ್ನು ತಾಯಿಗೆ ಕಟ್ಟಿದ್ದರೆ ಅವರು ಬದುಕುತ್ತಿದ್ದರೇನೋ ಎಂಬ ಕೊರಗು ಕಾಡುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಕಷ್ಟದ ಸಮಯದಲ್ಲಿ ಜೊತೆ ನಿಂತ ಎಲ್ಲಾ ರಾಜಕೀಯ ನಾಯಕರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky71nqnmgehg410jn9f0tatz,imgname-hd-revanna-tears-mother-chennamma-deve-gowda-passed-away-1784795553460.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಜು.23): ಮಾ&lt;/strong&gt;ಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ (HD Revanna) ಅವರು ತಮ್ಮ ತಾಯಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ (Chennamma) ಅವರ ಅಗಲಿಕೆಯ ನೋವಿನಿಂದ ಇನ್ನೂ ಹೊರಬಂದಿಲ್ಲ. ನಾನು 'ಆ ಪ್ರಸಾದ ಕಟ್ಟಿದ್ರೆ ಅಮ್ಮ ಬದುಕಿರ್ತಿದ್ರೇನೋ..'ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ತಾಯಿಯನ್ನು ನೆನೆದು ರೇವಣ್ಣ ಕಣ್ಣೀರು ಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಜೀವಮಾನವಿಡೀ ಕಾಡಲಿದೆ ಆ ಒಂದು ಕೊರಗು!&lt;/strong&gt;&lt;/h2&gt;&lt;p&gt;ತಾಯಿಯೊಂದಿಗಿನ ತಮ್ಮ ಕೊನೆಯ ದಿನಗಳನ್ನು ನೆನಪಿಸಿಕೊಂಡ ರೇವಣ್ಣ, 'ನಾನು ಪ್ರತಿದಿನ ಮನೆಯಿಂದ ಹೊರಡುವಾಗ ತಂದೆ-ತಾಯಿಗೆ ದೇವರ ಪ್ರಸಾದ (God's Prasada) ಮತ್ತು ಹೂವು ಕೊಟ್ಟು ಆಶೀರ್ವಾದ ಪಡೆದು ಹೋಗುತ್ತಿದ್ದೆ. ಕಳೆದ ಸೋಮವಾರ ನನ್ನ ಬಳಿ ಧರ್ಮಸ್ಥಳ (Dharmasthala) ಹಾಗೂ ಕುಕ್ಕೆ ಸುಬ್ರಹ್ಮಣ್ಯದ (Kukke Subramanya) ಪ್ರಸಾದ ಇತ್ತು. ಅಂದು ನಾನು ಬೆಂಗಳೂರಿಗೆ (Bengaluru) ಹೋಗಿದ್ದೆ, ಆದರೆ ಅಮ್ಮನನ್ನು ನೋಡಲು ಹೋಗಲಿಲ್ಲ. ಅದೇನಾಯ್ತೋ ನನಗೆ ಗೊತ್ತಿಲ್ಲ. ಒಂದು ವೇಳೆ ಆ ದೇವರ ಪ್ರಸಾದವನ್ನು ತಾಯಿಗೆ ಕಟ್ಟಿದ್ದರೆ ಅವರು ಬದುಕುತ್ತಿದ್ದರೋ ಏನೋ? ಆ ಕೊರಗು (Regret) ನನ್ನನ್ನು ಇನ್ನೂ ಕಾಡುತ್ತಿದೆ' ಎಂದು ಗದ್ಗದಿತರಾದರು.&lt;/p&gt;&lt;h2&gt;&lt;strong&gt;ಇಂತಹ ಪುಣ್ಯ ಯಾರಿಗೂ ಸಿಗಲ್ಲ:&lt;/strong&gt;&lt;/h2&gt;&lt;p&gt;ತಾಯಿಯ ಕೊನೆಯ ಕ್ಷಣಗಳ ಬಗ್ಗೆ ಮಾತನಾಡಿದ ಅವರು, 'ನಮ್ಮ ತಂದೆ (HD Devegowda) ಅವರು ತಾಯಿಗೆ ಕುಂಕುಮ ಇಟ್ಟು, ಹೂವು ಮುಡಿಸಿದ ಮೇಲೆಯೇ ಅಮ್ಮ ತಮ್ಮ ಜೀವ ಬಿಟ್ಟರು. ಇಂತಹ ಪುಣ್ಯ ಯಾರಿಗೂ ಬರುವುದಿಲ್ಲ' ಎಂದು ಕಣ್ಣೀರು ಹಾಕಿದರು. ಜೊತೆಗೆ, ದುಃಖದ ಸಮಯದಲ್ಲಿ ಕುಟುಂಬದ ಜೊತೆ ನಿಂತ ಎಲ್ಲಾ ಪಕ್ಷದ ನಾಯಕರಿಗೂ ರೇವಣ್ಣ ಧನ್ಯವಾದ (Thanks) ತಿಳಿಸಿದರು.&lt;/p&gt;&lt;h2&gt;&lt;strong&gt;ಎಲ್ಲಾ ನಾಯಕರಿಗೂ ಕೃತಜ್ಞತೆ:&lt;/strong&gt;&lt;/h2&gt;&lt;p&gt;'ರಾಜ್ಯ ಸರ್ಕಾರದ ಪರವಾಗಿ ಬಂದು ಕೃತಜ್ಞತೆ ಹಾಗೂ ಸಾಂತ್ವನ ಹೇಳಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ಧನ್ಯವಾದಗಳು. ಕಷ್ಟದ ಸಮಯದಲ್ಲಿ ಪಕ್ಷಭೇದ ಮರೆತು ಕೆ.ಜೆ. ಜಾರ್ಜ್ (K.J. George), ಜಮೀರ್ ಅಹ್ಮದ್, ವಿ. ಸೋಮಣ್ಣ (V. Somanna) ಸೇರಿದಂತೆ ಎಲ್ಲಾ ಶಾಸಕರು, ನಾಯಕರು ಭಾಗವಹಿಸಿದ್ದರು. ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇಂದು ವಿಶೇಷ ಪ್ರಸಾದ (Food distribution/Anna Santarpane) ವ್ಯವಸ್ಥೆ ಮಾಡಿಸಿದ್ದೇನೆ' ಎಂದು ರೇವಣ್ಣ ತಿಳಿಸಿದರು.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hassan-hd-revanna-gets-emotional-remembering-god-prasada-mother-chennamma-devegowda/articleshow-6colm4z"/>
        </item>
        <item>
            <title><![CDATA[ಹೆತ್ತ ಕರುಳನ್ನೇ ಕತ್ತು ಹಿಸುಕಿ ಕೊಂದ ತಾಯಿ.. ಪ್ರೀತಿಸಿ ಮದ್ವೆ ಆಗಿದ್ದ ಜೋಡಿಗೆ ಆಗಿದ್ದೇನು?]]></title>
            <link>https://kannada.asianetnews.com/hassan/a-woman-killed-her-cute-child-and-then-ended-her-own-life-in-alur-town-of-hassan-gkn/articleshow-783mt2k</link>
            <guid isPermaLink="true">https://kannada.asianetnews.com/hassan/a-woman-killed-her-cute-child-and-then-ended-her-own-life-in-alur-town-of-hassan-gkn/articleshow-783mt2k</guid>
            <pubDate>Wed, 19 Aug 2026 22:18:36 +0530</pubDate>
            <description><![CDATA[&lt;p&gt;ಹಾಸನದ ಆಲೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ಮಗುವಿನ ಕತ್ತು ಹಿಸುಕಿ ಜೀವ ತೆಗೆದಿದ್ದಾಳೆ. ನಂತರ ತಾನೂ ಸಾವಿಗೆ ಶರಣಾಗಿದ್ದಾಳೆ. ಕಾರಣ ಮಾತ್ರ ನಿಗೂಢವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0derwrhhsdwrz80j5sj23wd,imgname-hassan-anushree-died-1787158098705.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆಲೂರು (ಹಾಸನ): &lt;/strong&gt;ಹೆತ್ತ ತಾಯಿಯೇ ತನ್ನ ಮಗುವನ್ನು ಕೊಂದಿರುವ ಘಟನೆ ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಡೆದಿದೆ. ತನ್ನ ಎರಡು ವರ್ಷದ ಕಂದಮ್ಮನ ಕತ್ತು ಹಿಸುಕಿ ಕೊಂದ ತಾಯಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮ*ತ್ಯೆಗೆ ಶರಣಾಗಿದ್ದಾಳೆ.&lt;/p&gt;&lt;p&gt;ಈ ಹೃದಯವಿದ್ರಾವಕ ಘಟನೆ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್&zwnj;ನಲ್ಲಿರುವ ಬಾಡಿಗೆ ಮನೆಯಲ್ಲಿ ನಡೆದಿದೆ. ಮೃತರನ್ನು ತಾಯಿ ಅನುಶ್ರೀ (28 ವರ್ಷ) ಹಾಗೂ ಮಗು ಆರ್ಯನ್ (2 ವರ್ಷ) ಎಂದು ಗುರುತಿಸಲಾಗಿದೆ.&lt;/p&gt;&lt;h2&gt;&lt;strong&gt;ಪ್ರೀತಿಸಿ ಮದುವೆಯಾಗಿದ್ದ ದಂಪತಿ&lt;/strong&gt;&lt;/h2&gt;&lt;p&gt;ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ನಿವಾಸಿಗಳಾದ ಶ್ರೀನಿವಾಸ್ ಮತ್ತು ಅನುಶ್ರೀ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಶ್ರೀನಿವಾಸ್ ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಈ ಕುಟುಂಬ ಕೇವಲ ಎರಡು ತಿಂಗಳ ಹಿಂದೆಯಷ್ಟೇ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್&zwnj; ಬಡಾವಣೆಯಲ್ಲಿ ಬಾಡಿಗೆ ಮನೆಗೆ ಬಂದು ವಾಸಿಸುತ್ತಿತ್ತು.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಪತಿ ಶ್ರೀನಿವಾಸ್ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ ದುರಂತ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಅನುಶ್ರೀ, ಮೊದಲು ತನ್ನ 2 ವರ್ಷದ ಮಗುವಿನ ಕತ್ತು ಹಿಸುಕಿ ಸಾಯಿಸಿದ್ದಾಳೆ. ಬಳಿಕ ಮಗುವಿನ ಮೃತದೇಹವನ್ನು ಬೆಡ್ ಮೇಲೆ ಮಲಗಿಸಿ ಅದೇ ಕೋಣೆಯಲ್ಲಿದ್ದ ಫ್ಯಾನ್&zwnj;ಗೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.&lt;/p&gt;&lt;p&gt;ಪ್ರೀತಿಸಿ ಮದುವೆಯಾಗಿದ್ದ ದಂಪತಿಯ ನಡುವೆ ಏನಾದರೂ ಕೌಟುಂಬಿಕ ಕಲಹವಿತ್ತೇ? ಅಥವಾ ಅನುಶ್ರೀ ಬೇರಾವುದಾದರೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳೇ? ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ವಿಷಯ ತಿಳಿಯುತ್ತಿದ್ದಂತೆ ಆಲೂರು ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/hassan/a-woman-killed-her-cute-child-and-then-ended-her-own-life-in-alur-town-of-hassan-gkn/articleshow-783mt2k"/>
        </item>
        <item>
            <title><![CDATA[ಅವನನ್ನು ಯಾವಾಗ ಕರ್ಕೊಂಡು ಬರ್ತೀಯಪ್ಪಾ ಅಂತ ಕೇಳ್ತಿದ್ರು ತಾಯಿ, ಪರೋಕ್ಷವಾಗಿ ಪ್ರಜ್ವಲ್ ಪ್ರಕರಣ ಪ್ರಸ್ತಾಪಿಸಿದ HDK]]></title>
            <link>https://kannada.asianetnews.com/state/when-will-you-bring-him-back-hd-kumaraswamy-breaks-down-remembering-mother-chennamma-hints-at-prajwal-revanna-case-gdp/articleshow-bmhdhro</link>
            <guid isPermaLink="true">https://kannada.asianetnews.com/state/when-will-you-bring-him-back-hd-kumaraswamy-breaks-down-remembering-mother-chennamma-hints-at-prajwal-revanna-case-gdp/articleshow-bmhdhro</guid>
            <pubDate>Wed, 22 Jul 2026 15:48:19 +0530</pubDate>
            <description><![CDATA[ತಮ್ಮ ತಾಯಿ ಚೆನ್ನಮ್ಮ ಅವರ ಹಾಲು-ತುಪ್ಪ ಕಾರ್ಯದಲ್ಲಿ ಭಾವುಕರಾದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕುಟುಂಬದಲ್ಲಿ ನಡೆದ ಆಘಾತಕಾರಿ ಘಟನೆಗಳಿಂದಲೇ ಅವರು ತೀವ್ರ ಮಾನಸಿಕ ಯಾತನೆ ಅನುಭವಿಸಿ ನಿಧನರಾದರು ಎಂದು ಪರೋಕ್ಷವಾಗಿ ಉಲ್ಲೇಖಿಸಿದರು. ತಾಯಿಯ ಕೊನೆಯ ದಿನಗಳ ನೋವನ್ನು ಮತ್ತು ಅವರ ತಾಯ್ತನದ ಗುಣವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01ky4mz38q7235zhyz1ge0h1cf,imgname-hd-kumaraswamy-breaks-down-remembering-mother-chennamma-1784715119894.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ&lt;/strong&gt;: &quot;ನಮ್ಮ ಕುಟುಂಬದಲ್ಲಿ ನಡೆದ ಕೆಲವು ಆಘಾತಕಾರಿ ಘಟನೆಗಳಿಂದ ತಾಯಿ ಚೆನ್ನಮ್ಮ ಅವರು ತೀವ್ರ ಮಾನಸಿಕ ಯಾತನೆಗೆ ಒಳಗಾಗಿದ್ದರು. ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲೂ ಅವರು &lsquo;ಅವನನ್ನು ಯಾವಾಗ ಕರ್ಕೊಂಡು ಬರ್ತೀಯಪ್ಪಾ&rsquo; ಎಂದು ಪದೇ ಪದೇ ಕೇಳುತ್ತಿದ್ದರು. ಆ ಮಾತು ಇಂದಿಗೂ ನನ್ನನ್ನು ಕಾಡುತ್ತಿದೆ, ಎದೆಯೊಳಗೆ ತೀವ್ರ ನೋವುಂಟು ಮಾಡುತ್ತಿದೆ,&quot; ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅತ್ಯಂತ ಭಾವುಕರಾಗಿ ನುಡಿದರು.&lt;/p&gt;&lt;p&gt;ಜುಲೈ 18ರಂದು ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಮೂರನೇ ದಿನದ &lsquo;ಹಾಲು-ತುಪ್ಪ&rsquo; ಕಾರ್ಯವು ಮಂಗಳವಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ನೆರವೇರಿತು. ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಕಳೆದ ಒಂದೂವರೆ ವರ್ಷದಿಂದ ತಮ್ಮ ತಾಯಿ ಅನುಭವಿಸಿದ ಹಿಂಸೆ ಮತ್ತು ಮಾನಸಿಕ ಸಂಕಟವನ್ನು ನೆನೆದು ಭಾವುಕರಾದರು.&lt;/p&gt;&lt;h2&gt;ಪ್ರಜ್ವಲ್ ರೇವಣ್ಣ ಪ್ರಕರಣದತ್ತ ಪರೋಕ್ಷ ಉಲ್ಲೇಖ&lt;/h2&gt;&lt;p&gt;ಕುಟುಂಬದ ಘಟನೆಗಳನ್ನು ಪ್ರಸ್ತಾಪಿಸುವಾಗ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಅವರ ವಿವಾದಾತ್ಮಕ ಪ್ರಕರಣವನ್ನು ಉಲ್ಲೇಖಿಸಿದರು. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಬಹುಶಃ ನಮ್ಮ ತಾಯಿ ಇನ್ನೂ ಕೆಲವು ವರ್ಷ ಬದುಕಿರುತ್ತಿದ್ದರು. ಆದರೆ ಕುಟುಂಬದಲ್ಲಿ ವಯಸ್ಸಾಗಿದ್ದ ಇಬ್ಬರು ಹಿರಿಯರು (ದೇವೇಗೌಡರು ಮತ್ತು ಚೆನ್ನಮ್ಮ) ತೀವ್ರ ಮಾನಸಿಕ ಯಾತನೆಗೆ ಒಳಗಾಗುವಂತಹ ಘಟನೆಗಳು ಜರುಗಿದವು. ಮುಂದಿನ ದಿನಗಳಲ್ಲಿ ಯಾರಾದರೂ ಇತಿಹಾಸ ಬರೆಯುವವರು ಇದ್ದರೆ ಈ ಬಗ್ಗೆ ಬರೆಯುತ್ತಾರೆ. ಆದರೆ, ಕುಟುಂಬದಲ್ಲಾದ ಆ ಎರಡು-ಮೂರು ಘಟನೆಗಳ ನಂತರ ತಾಯಿಗೆ ಸದಾ ಕಾಡುತ್ತಿದ್ದ ಪ್ರಶ್ನೆ ಅದೊಂದೇ ಆಗಿತ್ತು. ಆ ಕಠಿಣ ಪರಿಸ್ಥಿತಿಯನ್ನು ತಡೆದುಕೊಳ್ಳಲು ಸಾಧ್ಯವಾಗದೆಯೇ ಇಂದು ನಾವು ಇಂತಹದೊಂದು ದಿನವನ್ನು ನೋಡಬೇಕಾಗಿ ಬಂದಿದೆ. ಇಲ್ಲದಿದ್ದರೆ ಇನ್ನೂ 3-4 ವರ್ಷಗಳ ಕಾಲ ಅವರು ನಮ್ಮೊಂದಿಗಿರುತ್ತಿದ್ದರು. ಆದರೆ ದೇವರ ತೀರ್ಮಾನವೇ ಬೇರೆಯಾಗಿತ್ತು, ಆ ವಿಧಿಯ ಆಟಕ್ಕೆ ನಾವು ತಲೆಬಾಗಲೇಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h2&gt;ಕೊನೆ ದಿನಗಳ ನೋವು ಹಂಚಿಕೊಂಡ ಪುತ್ರ&lt;/h2&gt;&lt;p&gt;ಕಳೆದ ಒಂದೂವರೆ ವರ್ಷದಿಂದ ತಾಯಿ ಹಾಸಿಗೆ ಹಿಡಿದಿದ್ದ ದಿನಗಳನ್ನು ನೆನೆದ ಕುಮಾರಸ್ವಾಮಿ, &quot;ಕೊನೆಯ ದಿನಗಳಲ್ಲಿ ಅವರಿಗೆ ನೆನಪಿನ ಶಕ್ತಿ ಸಂಪೂರ್ಣವಾಗಿ ಕುಂದಿ ಹೋಗಿತ್ತು. ಯಾರನ್ನೂ ಗುರುತಿಸಲಾಗದ ಪರಿಸ್ಥಿತಿಗೆ ತಲುಪಿದ್ದರು. ಆದರೂ ಅಂತಹ ಸ್ಥಿತಿಯಲ್ಲೂ ಅವರಲ್ಲಿದ್ದ ತಾಯಿತನ ಮಾಸಿರಲಿಲ್ಲ. ಮನೆಗೆ ಯಾರೇ ಬಂದರೂ &lsquo;ಊಟ ಮಾಡಿದೀರಾ? ಊಟ ಮಾಡಿ&rsquo; ಎಂಬ ಎರಡು ಮಾತುಗಳನ್ನು ಬಿಟ್ಟರೆ ಅವರು ಬೇರೇನೂ ಮಾತನಾಡುತ್ತಿರಲಿಲ್ಲ. ನೆನಪುಗಳು ಮರೆಯಾಗುತ್ತಿದ್ದ ಸಂದರ್ಭದಲ್ಲೂ ನನ್ನನ್ನು ಹಾಗೂ ನನ್ನಿಬ್ಬರು ತಂಗಿಯರನ್ನು ಅವರು ನೆನಪಿನಲ್ಲಿ ಇಟ್ಟುಕೊಂಡಿದ್ದರು ಎನ್ನುತ್ತಾ ಭಾವುಕರಾದರು.&lt;/p&gt;&lt;p&gt;ಅಲ್ಲದೆ, ಹಿಂದೆ ತಾಯಿಯ ಮೇಲೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದ ಹಳೆಯ ಕಹಿ ನೆನಪನ್ನೂ ಸಹ ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಹರದನಹಳ್ಳಿಯಲ್ಲಿ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ಗೌಡರ ಕುಟುಂಬದ ಆಪ್ತರು ಹಾಗೂ ನಾಯಕರು ಭಾಗವಹಿಸಿದ್ದರು.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/state/when-will-you-bring-him-back-hd-kumaraswamy-breaks-down-remembering-mother-chennamma-hints-at-prajwal-revanna-case-gdp/articleshow-bmhdhro"/>
        </item>
        <item>
            <title><![CDATA[ಆ.11ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಟ್ರಯಲ್, 57 ಸುರಂಗ, 226 ಸೇತುವೆ 108 ವಕ್ರಾಕೃತಿ ತಿರುವು ದಾಟಲಿದೆ ರೈಲು!]]></title>
            <link>https://kannada.asianetnews.com/karnataka-districts/indian-railways-swr-bengaluru-mangaluru-vande-bharat-express-trial-run-to-begin-on-august-11-gdp/articleshow-cov2r0i</link>
            <guid isPermaLink="true">https://kannada.asianetnews.com/karnataka-districts/indian-railways-swr-bengaluru-mangaluru-vande-bharat-express-trial-run-to-begin-on-august-11-gdp/articleshow-cov2r0i</guid>
            <pubDate>Fri, 07 Aug 2026 10:27:12 +0530</pubDate>
            <description><![CDATA[ನೈಋತ್ಯ ರೈಲ್ವೆಯು ಬೆಂಗಳೂರು-ಮಂಗಳೂರು ಮಾರ್ಗದಲ್ಲಿ 'ವಂದೇ ಭಾರತ್ ಎಕ್ಸ್&zwnj;ಪ್ರೆಸ್' ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧತೆ ನಡೆಸಿದೆ. ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಡಿದಾದ ಮತ್ತು ನೈಸರ್ಗಿಕ ಸೌಂದರ್ಯದ ಘಟ್ಟ ಪ್ರದೇಶದಲ್ಲಿ ಈ ಪರೀಕ್ಷಾರ್ಥ ಓಟ ನಡೆಯಲಿದ್ದು, ಯಶಸ್ವಿಯಾದರೆ ಸೇವೆಯನ್ನು ಮಡಗಾಂವ್&zwnj;ವರೆಗೆ ವಿಸ್ತರಿಸುವ ಚಿಂತನೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsg4t8bkpejxqmnd4qj3ycp,imgname----------------------64--1782193481995.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ನಿರೀಕ್ಷೆ ಕೊನೆಗೂ ಈಡೇರುವ ಸಮಯ ಬಂದಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಆ.11 ರಿಂದ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ &lsquo;ವಂದೇ ಭಾರತ್ ಎಕ್ಸ್&zwnj;ಪ್ರೆಸ್&rsquo; ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧತೆ ನಡೆಸಿದೆ.&amp;nbsp;&lt;/p&gt;&lt;p&gt;ಕೆಲವು ವರದಿಗಳ ಪ್ರಕಾರ ಆಗಸ್ಟ್ 18 ರಿಂದ 22ರವರೆಗೆ ಪರಿಕ್ಷಾರ್ಥ ಪ್ರಯೋಗ ನಡೆಯಲಿದೆ ಎನ್ನಲಾಗಿದೆ. ಕಾರಣ ಯಡಕುಮೇರಿಯಲ್ಲಿ ಕಳೆದವಾರ ಗುಡ್ಡಕುಸಿತದ ಪರಿಣಾಮ ವಿಳಂಭವಾಗಿದೆ ಎನ್ನಲಾಗಿದೆ. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಜೂನ್ ತಿಂಗಳೊಳಗೆ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭಿಸುವುದಾಗಿ ಈ ಹಿಂದೆ ತಿಳಿಸಿದ್ದರು. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಡಿದಾದ ಘಾಟ್ ಪ್ರದೇಶದಲ್ಲಿ ಕಡಿದಾದ ಇಳಿಜಾರು ಇರುವುದರಿಂದ, ಸಾಮಾನ್ಯ ರೈಲುಗಳಿಗೆ ಬ್ಯಾಂಕರ್ ಇಂಜಿನ್&zwnj;ಗಳನ್ನು ಜೋಡಿಸಬೇಕಿತ್ತು. ಆದರೆ ವಂದೇ ಭಾರತ್ ರೈಲಿನ ಸ್ವಯಂಚಾಲಿತ ವೇಗ ನಿಯಂತ್ರಣಕ್ಕಾಗಿ ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ತಂತ್ರಜ್ಞಾನ ಹೊಂದಿರುವ 20 ಕೋಚ್&zwnj;ಗಳ ವಂದೇ ಭಾರತ್ ರೇಕ್ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ಆಗಮಿಸಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಪಾಂಡವಪುರ ನಿಲ್ದಾಣದಲ್ಲಿದೆ.&lt;/p&gt;&lt;p&gt;ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುವ 55 ಕಿ.ಮೀ. ಉದ್ದದ ಈ ರೈಲು ಭಾರತೀಯ ರೈಲ್ವೆಯ ತಾಂತ್ರಿಕವಾಗಿ ಹೆಚ್ಚು ಬೇಡಿಕೆಯಿರುವ ಪರ್ವತ ಆಗಿರುವುದರಿಂದ ಇದು ಒಂದು ಪ್ರಮುಖ ಪರೀಕ್ಷಾರ್ಥ ಓಟವಾಗಿದೆ. ಮಾರ್ಪಡಿಸಿದ ವಂದೇ ಭಾರತ್ ರೈಲು ಕಡಿದಾದ ಇಳಿಜಾರುಗಳು ಮತ್ತು ಸುರಂಗಗಳನ್ನು ಸುರಕ್ಷಿತವಾಗಿ ದಾಟಬಹುದೇ ಎಂದು ರೈಲ್ವೆ ಎಂಜಿನಿಯರ್&zwnj;ಗಳು ಮೌಲ್ಯಮಾಪನ ಮಾಡುತ್ತಾರೆ. ಕೆಲವು ಸೇತುವೆಗಳು ಮತ್ತು ತೀಕ್ಷ್ಣವಾದ ವಕ್ರಾಕೃತಿಗಳು ಕೂಡ ಈ ಮಾರ್ಗದಲ್ಲಿ ಇದೆ.&lt;/p&gt;&lt;h2&gt;57 ಸುರಂಗಗಳು, 226 ಸೇತುವೆಗಳು ಮತ್ತು 108 ಚೂಪಾದ ತಿರುವು&lt;/h2&gt;&lt;p&gt;ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆಯಲ್ಲಿ ಹಲವು ಅದ್ಭುತಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಈ ಮಾರ್ಗ ಹೆಸರುವಾಸಿಯಾಗಿದೆ. ಈ ರೈಲು ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳ ಮೂಲಕ ಚಲಿಸುತ್ತದೆ. ಈ ಹಳಿಗಳಲ್ಲಿ 50 ರಲ್ಲಿ 1 ರಷ್ಟು ಕಡಿದಾದ ಇಳಿಜಾರು, 57 ಸುರಂಗಗಳು, 226 ಸೇತುವೆಗಳು ಮತ್ತು 108 ಚೂಪಾದ ತಿರುವುಗಳು ಸೇರಿವೆ. ಈ ಪ್ರದೇಶವು ಭೂಕುಸಿತಗಳಿಗೆ ಹೆಚ್ಚು ಒಳಗಾಗುತ್ತದೆ. ಕಳೆದವಾರ ಅಂದರೆ ವಿಪರೀತ ಮಳೆಗೆ ಜುಲೈ ಅಂತ್ಯದಲ್ಲಿ ಭೂಕುಸಿತವಾಗಿ ರೈಲು ಸಂಚಾರ 3 ದಿನಗಳ ಕಾಲ ರದ್ದಾಗಿತ್ತು.&lt;/p&gt;&lt;p&gt;ವರದಿ ಪ್ರಕಾರ ಮಂಗಳೂರು ಮತ್ತು ಮಡಗಾಂವ್ ನಡುವೆ ಪ್ರಸ್ತುತ ಚಾಲನೆಯಲ್ಲಿರುವ ಸೇವೆಯನ್ನು (20645/20646) ವಿಸ್ತರಿಸುವ ಮೂಲಕ ಬೆಂಗಳೂರು-ಮಂಗಳೂರು ವಂದೇ ಭಾರತ್ ಅನ್ನು ಪರಿಚಯಿಸುವ ಚಿಂತನೆ ಇದೆ. ಯೋಜನೆಗಳು ಕಾರ್ಯರೂಪಕ್ಕೆ ಬಂದರೆ, ರೈಲು ಬೆಳಿಗ್ಗೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ ಮಂಗಳೂರಿಗೆ ಮತ್ತು ಸಂಜೆ ಮಡಗಾಂವ್ ತಲುಪುತ್ತದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ರೈಲು ಬೆಳಿಗ್ಗೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ ಮಂಗಳೂರಿಗೆ ಮತ್ತು ಸಂಜೆ ಮಡಗಾಂವ್ ತಲುಪುತ್ತದೆ. ಮಡ್ಗಾಂವ್ ನಿಂದ ರೈಲು ಬೆಳಿಗ್ಗೆ ಹೊರಟು ಮಧ್ಯಾಹ್ನ ಮಂಗಳೂರು ಮತ್ತು ಸಂಜೆ ಬೆಂಗಳೂರು ತಲುಪಲಿದೆ. ಇದಕ್ಕಾಗಿ ಎರಡು ಪ್ರತ್ಯೇಕ ರೇಕ್&zwnj;ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಬೆಂಗಳೂರು-ಮಂಗಳೂರು ವಂದೇ ಭಾರತ್ ಪೂರ್ಣಗೊಂಡಾಗ, ಭಾರತದ ಅತ್ಯಂತ ಸುಂದರವಾದ ರೈಲು ಪ್ರಯಾಣಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.&lt;/p&gt;&lt;p&gt;ಇದು ದಟ್ಟವಾದ ಕಾಡುಗಳು, ಮಳೆಗಾಲದಲ್ಲಿ ಜಲಪಾತಗಳು, ಮಂಜಿನಿಂದ ಆವೃತವಾದ ಕಣಿವೆಗಳು, ಆಳವಾದ ಕಂದಕಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಹಲವಾರು ಸುರಂಗಗಳ ಮೂಲಕ ಹಾದುಹೋಗುತ್ತದೆ. ಇಲ್ಲಿ ಪ್ರಯಾಣಿಸುವುದೇ ಒಂದು ಅಧ್ಭುತ ಅನುಭವ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ ಪ್ರಯಾಣವನ್ನು ದಕ್ಷಿಣ ಭಾರತದ ಅತ್ಯಂತ ಅದ್ಭುತ ರೈಲ್ವೆ ಪ್ರಯಾಣಗಳಲ್ಲಿ ಒಂದೆಂದು ದೀರ್ಘಕಾಲದಿಂದ ಪರಿಗಣಿಸಲಾಗಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/indian-railways-swr-bengaluru-mangaluru-vande-bharat-express-trial-run-to-begin-on-august-11-gdp/articleshow-cov2r0i"/>
        </item>
        <item>
            <title><![CDATA[Vande Bharat Express: ಸಕಲೇಶಪುರದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ ಬೆನ್ನಲ್ಲೇ ಸಿಕ್ಕಿತು ಮತ್ತೊಂದು ಗುಡ್‌ನ್ಯೂಸ್]]></title>
            <link>https://kannada.asianetnews.com/gallery/karnataka-districts/sakaleshapura-mla-cement-manju-welcomed-vande-bharat-express-train-while-trial-run-sns-gwuypwe</link>
            <guid isPermaLink="true">https://kannada.asianetnews.com/gallery/karnataka-districts/sakaleshapura-mla-cement-manju-welcomed-vande-bharat-express-train-while-trial-run-sns-gwuypwe</guid>
            <pubDate>Wed, 12 Aug 2026 12:50:26 +0530</pubDate>
            <description><![CDATA[&lt;p&gt;ಹಾಸನ: ಮಂಗಳೂರು ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಇದರೊಂದಿಗೆ ಬಹುದಿನ ಕನಸು ನನಸಾಗಿದೆ. ಇಂದು ಬೆಳ್ಳಂಬೆಳಗ್ಗೆ ಸಕಲೇಶ್ವರಪುರಕ್ಕೆ ಆಗಮಿಸಿದ್ದ ವಂದೇ ಭಾರತ್ ರೈಲಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kztcgw9nftn2nrtr8m2qzh99,imgname-vande-bharat-express-sakaleshpur--6--1786518204725.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನ: ಮಂಗಳೂರು ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಇದರೊಂದಿಗೆ ಬಹುದಿನ ಕನಸು ನನಸಾಗಿದೆ. ಇಂದು ಬೆಳ್ಳಂಬೆಳಗ್ಗೆ ಸಕಲೇಶ್ವರಪುರಕ್ಕೆ ಆಗಮಿಸಿದ್ದ ವಂದೇ ಭಾರತ್ ರೈಲಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.&lt;/p&gt;&lt;img&gt;&lt;p&gt;ಶಿರಾಡಿಘಾಟ್ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಆಗಸ್ಟ್ 11ರಿಂದ ಆರಂಭವಾಗಿದೆ. ಸಕಲೇಶಪುರದವರೆಗೆ ವಿದ್ಯುಧೀಕರಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ.&lt;/p&gt;&lt;img&gt;&lt;p&gt;ಇಂದು ಬೆಳ್ಳಂ ಬೆಳಗ್ಗೆ ಸಕಲೇಶಪುರಕ್ಕೆ ಆಗಮಿಸಿದ ವಂದೇ ಭಾರತ್ ರೈಲಿಗೆ ಶಾಸಕ ಸಿಮೆಂಟ್ ಮಂಜು ಅವರು ಸ್ವಾಗತ ಮಾಡಿ ಪೂಜೆ ಸಲ್ಲಿಕೆ ಮಾಡಿದರು. 20 ಬೋಗಿಗಳ ವಂದೇ ಭಾರತ್ ರೈಲಿನಲ್ಲಿ 1,080 ಪ್ರಯಾಣಿಕರಿಗೆ ಅವಕಾಶ ಇದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.&lt;/p&gt;&lt;img&gt;&lt;p&gt;ವಂದೇ ಭಾರತ್ ರೈಲು ಸ್ವಾಗತಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಅವರು, ವಂದೇ ಭಾರತ್ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇಂಟರ್&zwnj;ಸಿಟಿ ಸೇರಿದಂತೆ ಮತ್ತಷ್ಟು ರೈಲು ಸೇವೆ ಸಕಲೇಶಪುರಕ್ಕೆ ವಿಸ್ತರಣೆಯಾಗಲಿದೆ ಎಂಬ ಗುಡ್ನ್ಯೂಸ್ ನೀಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ನೆರೆದಿದ್ದ ಹಲವು ಸಾರ್ವಜನಿಕರು ವಂದೇ ಭಾರತ್ ರೈಲನ್ನು ಸ್ವಾಗತಿಸಿದರು.&lt;/p&gt;&lt;img&gt;&lt;p&gt;ರೈಲು ಬೆಳಗ್ಗೆ 6:42ಕ್ಕೆ ಸಕಲೇಶಪುರ ನಿಲ್ದಾಣಕ್ಕೆ ಆಗಮಿಸಿತ್ತು. ಆ ಬಳಿಕ 10.55ರ ವೇಳೆಗೆ ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣ ತಲುಪಿತ್ತು. ಈ ಪ್ರಯೋಗಿಕ ಪರೀಕ್ಷೆ ಆಗಸ್ಟ್ 20ರ ವರೆಗೂ ನಡೆಯಲಿದ್ದು, ಈ ಪ್ರಯೋಗ ಯಶಸ್ವಿಯಾದ ಬಳಿಕ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭವಾಗಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜೂನ್ ತಿಂಗಳೊಳಗೆ ರೈಲು ಸಂಚಾರ ನಡೆಸಲಿದೆ ಎಂದು ಈ ಹಿಂದೆ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರು ತಿಳಿಸಿದ್ದರು, ಆದರೆ ಈ ಗುರಿ ಮಿಸ್ ಆಗಿತ್ತು.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸಕಲೇಶಪುರದ ಜನರಿಗೆ ಇದು ಸುದಿನ, ನಾನು ಶಾಸಕನಾದ ಸಂದರ್ಭದಲ್ಲಿ ವಿ ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ದೇಶದ ಪ್ರಧಾನಿಗಳ ಕನಸು ಸ್ವಾವಲಂಬಿ ಭಾರತ, ಇದರಂತೆ ವಂದೇ ಭಾರತ ರೈಲು ದೇಶದಾದ್ಯಂತಹ ಮೂಲೆ ಮೂಲೆಗಳಲ್ಲಿ ಸಂಚಾರ ಮಾಡುತ್ತಿದೆ. ಬೆಂಗಳೂರಿಗೆ ಪ್ರಯಾಣಿಸುವವರಿಗೆ ಇದು ಬಹಳ ಆರಾಮಾದಾಯಕ ಅವಕಾಶವನ್ನು ನೀಡುತ್ತದೆ. ರಾತ್ರಿ ವೇಳೆ ಘಾಟ್ ಪ್ರದೇಶದಲ್ಲಿ ಬಸ್ನಲ್ಲಿ ಬರುವುದು ಅಥವಾ ವಿಮಾನ ಮೂಲಕ ಬರುವುದಕ್ಕಿಂತ ವಂದೇ ಭಾರತ್ ರೈಲು ಉತ್ತಮ ಆಯ್ಕೆ. ಈ ರೈಲಿನಲ್ಲಿ ಪ್ರಯಾಣಿಸುವವರಿಗೆ ವಿಮಾನದಲ್ಲಿ ಹೋಗುತ್ತಿರುವ ಅನುಭವ ಆಗುತ್ತದೆ. ಮುಂದಿನ ದಿನಗಳಲ್ಲಿ ಸ್ಲೀಪರ್ ಸೇವೆ ಕೂಡ ಸಿಗಲಿದೆ. ಒಮ್ಮೆ 1080 ಮಂದಿ ಪ್ರಯಾಣಿಸಬಹುದು, ಈ ಭಾಗದ ಜನರಿಗೆ ಸರ್ಕಾರ ನೀಡಿದ ಮಹತ್ವದ ಯೋಜನೆ ಇದಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ವಿಶೇಷ 8 ಕೋಚ್&zwnj;ಗಳ ವಂದೇ ಭಾರತ್ ರೈಲಿನ ಮೂಲಕ ಪ್ರಯೋಗಿಕ ಸಂಚಾರ ನಡೆಯುತ್ತಿದ್ದು, ಪಶ್ಚಿಮ ಘಟ್ಟಗಳ ನಡುವೆ ಸಾಗುವ ಹಾದಿಯಲ್ಲಿ ಬ್ರೇಕಿಂಗ್ ಸಿಸ್ಟಮ್, ಸುರಕ್ಷತೆ ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿಕಾರಿಗಳ ತೀವ್ರ ನಿಗಾ ಇಟ್ಟಿದ್ದಾರೆ. ಈ ಪೈಕಿ ಸಕಲೇಶಪುರದಿಂದ ಸುಬ್ರಹ್ಮಣ್ಯದ ನಡುವಿನ 55 ಕಿಲೋಮೀಟರ್ ಮಾರ್ಗ ಅತ್ಯಂತ ಸವಾಲಿನಿಂದ ಕೂಡಿದೆ. ವಂದೇ ಭಾರತ್ ರೈಲು 180 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡುವ ಸಾಮರ್ಥ್ಯವಿದ್ದರು, ಸಕಲೇಶಪುರದಿಂದ ಪಶ್ಚಿಮ ಘಟ್ಟಗಳ ನಡುವೆ ಸಂಚಾರದ ವೇಳೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ವೇಗ ಪ್ರತಿ ಗಂಟೆಗೆ 30 ಕಿಲೋಮೀಟರ್ ವೇಗ ನಿಗದಿ ಮಾಡಲಾಗಿದೆ.&lt;/p&gt;&lt;img&gt;&lt;p&gt;ಇನ್ನು, ಮಂಗಳೂರು ಸೆಂಟ್ರಲ್ ರೈಲಿ ನಿಲ್ದಾಣದಲ್ಲಿ ನಿಲುಗಡೆಯನ್ನು ಕೈಬಿಡಲಾಗಿದೆ ಎಂಬ ಊಹಾಪೋಹಗಳು ಹರಿದಾಡಿತ್ತು. ಆದರೆ ಇದನ್ನು ರೈಲ್ವೆ ಇಲಾಖೆ ಇದುವರೆಗೂ ದೃಢಪಡಿಸಿಲ್ಲ. ಬೆಂಗಳೂರು-ಮಂಗಳೂರು ನಡುವೆ ಮಾತ್ರ ರೈಲು ಓಡಬೇಕು ಎಂಬ ಬೇಡಿಕೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ ನೀಡುವ ನಿರೀಕ್ಷೆ ಇದೆ.&lt;/p&gt;&lt;img&gt;&lt;p&gt;ಬೆಂಗಳೂರು ಮಂಗಳೂರು ವಂದೇ ಭಾರತ್ ರೈಲು ಪ್ರಯಾಣ ಟ್ರಯಲ್ ರನ್ ವೇಳೆ 8.5 ಗಂಟೆ ತೆಗೆದುಕೊಳ್ಳುವ ಸಾಧ್ಯತ ಇದೆ. ಇನ್ನು ನಿಲ್ದಾಣಗಳ ನಿಲುಗಡೆ ಸೇರಿದಂತೆ ಇತರ ಸಮಯಗಳ ಕುರಿತು ಟ್ರಯಲ್ ರನ್ ಬಳಿಕ ಸೂಕ್ತ ಮಾಹಿತಿ ಹೊರಬೀಳಲಿದೆ. ಟೆಸ್ಟ್ ಬಳಿಕ ವಂದೇ ಭಾರತ್ ಬೆಂಗಳೂರು ಮಂಗಳೂರು ಪ್ರಯಾಣ ಸಮಯದ ಸಂಪೂರ್ಣ ಚಿತ್ರಣ ಹೊರಬೀಳಲಿದೆ.&lt;/p&gt;]]></content:encoded>
            <category>hassan</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/karnataka-districts/sakaleshapura-mla-cement-manju-welcomed-vande-bharat-express-train-while-trial-run-sns-gwuypwe"/>
        </item>
        <item>
            <title><![CDATA[Sakleshpur: ಹೊಸಳ್ಳಿ ಬೆಟ್ಟ- ಕಾಗಿನಹರೆಗೆ ಪ್ರವಾಸಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ]]></title>
            <link>https://kannada.asianetnews.com/karnataka-districts/hassan-sakaleshpur-restriction-on-entry-of-tourist-vehicles-to-hosalli-hill-and-kaginahare-mrq/articleshow-nmo6wce</link>
            <guid isPermaLink="true">https://kannada.asianetnews.com/karnataka-districts/hassan-sakaleshpur-restriction-on-entry-of-tourist-vehicles-to-hosalli-hill-and-kaginahare-mrq/articleshow-nmo6wce</guid>
            <pubDate>Thu, 06 Aug 2026 06:40:59 +0530</pubDate>
            <description><![CDATA[ಮಲೆನಾಡಿನ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ, ಸಕಲೇಶಪುರದ ಹೆತ್ತೂರು ಹೋಬಳಿಯ ಹೊಸಹಳ್ಳಿ ಬೆಟ್ಟ ಹಾಗೂ ಕಾಗಿಹರೆ ವೀಕ್ಷಣಾ ಸ್ಥಳಗಳಿಗೆ ಪ್ರವಾಸಿಗರ ವಾಹನಗಳ ಪ್ರವೇಶವನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ. ವಾಹನಗಳ ಅಡ್ಡಾದಿಡ್ಡಿ ಸಂಚಾರದಿಂದ ಪರಿಸರಕ್ಕೆ ಹಾನಿಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರವಾಸಿಗರು ಕಾಲ್ನಡಿಗೆಯಲ್ಲಿ ಈ ಸ್ಥಳಗಳನ್ನು ವೀಕ್ಷಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kza9tcaqbsf5rmfr06sgwz6s,imgname--hosalli-hill-and-kaginahare-1785978499415.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಸಕಲೇಶಪುರ): &lt;/strong&gt;ಮಲೆನಾಡಿನ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಹೆತ್ತೂರು ಹೋಬಳಿಯ ಹೊಸಹಳ್ಳಿ ಬೆಟ್ಟ ಹಾಗೂ ಕಾಗಿಹರೆ ವೀಕ್ಷಣಾ ಸ್ಥಳಗಳಿಗೆ ಪ್ರವಾಸಿಗರ ವಾಹನಗಳ ಪ್ರವೇಶವನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಹೊಸಹಳ್ಳಿ ಬೆಟ್ಟ ಮತ್ತು ಕಾಗಿಹರೆ ಸೇರಿದಂತೆ ಮಲೆನಾಡಿನ ಪ್ರವಾಸಿ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವೇಳೆ ಕೆಲವರು ಅರಣ್ಯ ಪ್ರದೇಶದೊಳಗೆ ಅನಧಿಕೃತವಾಗಿ ವಾಹನಗಳನ್ನು ಚಲಾಯಿಸಿ ಆಫ್&zwnj; ರೋಡ್ ಚಾಲನೆ ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿತ್ತು. ಇದರಿಂದ ಅರಣ್ಯ ಪರಿಸರ ಮತ್ತು ವನ್ಯಜೀವಿಗಳಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.&amp;nbsp;&lt;/p&gt;&lt;h2&gt;&lt;strong&gt;ಭೂಮಿಯ ಸ್ವಾಭಾವಿಕ ರಚನೆಗೆ ಧಕ್ಕೆ&lt;/strong&gt;&lt;/h2&gt;&lt;p&gt;ಅರಣ್ಯ ಪ್ರದೇಶದಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರದಿಂದ ಮೇಲ್ಮಣ್ಣು ಸಡಿಲಗೊಂಡು ಭೂಮಿಯ ಸ್ವಾಭಾವಿಕ ರಚನೆಗೆ ಧಕ್ಕೆಯಾಗುತ್ತದೆ. ಮಳೆಗಾಲದಲ್ಲಿ ಇದು ಭೂಕುಸಿತದಂತಹ ಅಪಾಯಗಳಿಗೆ ಕಾರಣವಾಗುವ ಸಾಧ್ಯತೆಯಿದ್ದು, ವಾಹನಗಳ ಹೊಗೆ ಹಾಗೂ ಶಬ್ದದಿಂದ ವನ್ಯಜೀವಿಗಳು ಮತ್ತು ಪಕ್ಷಿಗಳ ಸಹಜ ವಾಸಸ್ಥಾನಕ್ಕೂ ತೊಂದರೆಯಾಗುತ್ತದೆ ಎಂದು ಇಲಾಖೆ ತಿಳಿಸಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಹೊಸಹಳ್ಳಿ ಬೆಟ್ಟ ಹಾಗೂ ಕಾಗಿಹರೆ ವೀಕ್ಷಣಾ ಸ್ಥಳಗಳಲ್ಲಿ ವಾಹನ ಪ್ರವೇಶ ನಿಷೇಧದ ನಾಮಫಲಕಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರು ತಮ್ಮ ವಾಹನಗಳನ್ನು ಬೆಟ್ಟದ ಕೆಳಭಾಗದಲ್ಲಿ ನಿಲ್ಲಿಸಿ ಕಾಲ್ನಡಿಗೆಯ ಮೂಲಕ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಪ್ರವಾಸಿಗರ ಪ್ರವೇಶಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ; ಕೇವಲ ವಾಹನಗಳ ಸಂಚಾರಕ್ಕೆ ಮಾತ್ರ ನಿಷೇಧ ಹೇರಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ. ಪ್ರವಾಸಿಗರು ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯ ಎಸೆಯದಂತೆ, ಅರಣ್ಯ ಪರಿಸರಕ್ಕೆ ಹಾನಿಯಾಗದಂತೆ ಹಾಗೂ ವನ್ಯಜೀವಿಗಳಿಗೆ ತೊಂದರೆ ಉಂಟುಮಾಡುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದಂತೆ ಇಲಾಖೆ ಮನವಿ ಮಾಡಿದೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ವೆಂಕಟೇಶ್ ಹಾಗೂ ಸಿಬ್ಬಂದಿಯಾದ ಪ್ರೇಮ್&zwnj; ಕುಮಾರ್&zwnj;, ಅಕಿಲ್, ಪರಮೇಶ್, ಆಕರ್ಷ, ಮುರಗನ್ ಮತ್ತು ವಿಶ್ವನಾಥ್ ಉಪಸ್ಥಿತರಿದ್ದರು.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-sakaleshpur-restriction-on-entry-of-tourist-vehicles-to-hosalli-hill-and-kaginahare-mrq/articleshow-nmo6wce"/>
        </item>
        <item>
            <title><![CDATA[ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ: ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತ]]></title>
            <link>https://kannada.asianetnews.com/karnataka-districts/bengaluru-mangaluru-train-service-completely-suspended-after-hill-collapses-on-railway-tracks-near-yadakumari-hassan-mrq/articleshow-pce28di</link>
            <guid isPermaLink="true">https://kannada.asianetnews.com/karnataka-districts/bengaluru-mangaluru-train-service-completely-suspended-after-hill-collapses-on-railway-tracks-near-yadakumari-hassan-mrq/articleshow-pce28di</guid>
            <pubDate>Sun, 02 Aug 2026 07:20:09 +0530</pubDate>
            <description><![CDATA[ಹಾಸನ ಜಿಲ್ಲೆಯ ಯಡಕುಮರಿ ಬಳಿ ಭಾರಿ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದೆ. ಈ ಕಾರಣದಿಂದ ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಹಲವು ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz02gb6cqkwv4p609yrc1zew,imgname-indian-railways-1785635286220.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಯಡಕುಮರಿ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.&lt;/p&gt;&lt;p&gt;ಘಟನಾ ಸ್ಥಳಕ್ಕೆ ಆಗಮಿಸಿರುವ ರೈಲ್ವೆ ಇಲಾಖೆ ಸಿಬ್ಬಂದಿ ಗುಡ್ಡ ತೆರವು ಕಾಮಗಾರಿಯನ್ನು ಭರದಿಂದ ನಡೆಸುತ್ತಿದ್ದಾರೆ. ಆದರೆ, ಸಂಚಾರ ರದ್ದತಿಯಿಂದಾಗಿ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಗಿದೆ. ಬೆಂಗಳೂರು-ಮುರಡೇಶ್ವರ, ಬೆಂಗಳೂರು-ಕೋಝಿಕ್ಕೋಡ್ ಹಾಗೂ ವಿಜಯಪುರ-ಮಂಗಳೂರು ರೈಲುಗಳನ್ನು ಹಾಸನದಲ್ಲಿ ನಿಲ್ಲಿಸಲಾಗಿದ್ದರೆ, ಬೆಂಗಳೂರು-ಕಾರವಾರ ಎಕ್ಸ್&zwnj;ಪ್ರೆಸ್ ರೈಲನ್ನು ಸಕಲೇಶಪುರದಲ್ಲಿ ತಡೆಯಲಾಗಿದೆ.&lt;/p&gt;&lt;h2&gt;&lt;strong&gt;ಹಾಸನದಲ್ಲಿಯೇ ನಿಲುಗಡೆಯಾದ ಕೆಲ ರೈಲುಗಳು&lt;/strong&gt;&lt;/h2&gt;&lt;p&gt;ಅದೇ ರೀತಿ, ಮುರಡೇಶ್ವರ-ಬೆಂಗಳೂರು ಮತ್ತು ಮಂಗಳೂರು-ವಿಜಯಪುರ ರೈಲುಗಳು ಸುಬ್ರಹ್ಮಣ್ಯದಲ್ಲಿ ಸ್ಥಗಿತಗೊಂಡಿದ್ದರೆ, ಕೋಝಿಕ್ಕೋಡ್-ಬೆಂಗಳೂರು ರೈಲನ್ನು ಪುತ್ತೂರಿನಲ್ಲಿ ನಿಲ್ಲಿಸಲಾಗಿದೆ. ರೈಲು ಸಂಚಾರ ರದ್ದತಿಯ ಕುರಿತು ಇಲಾಖೆಯು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದು, ನಿನ್ನೆ ರಾತ್ರಿಯಿಂದಲೇ ಕಾಯುತ್ತಿದ್ದ ಹಲವು ಪ್ರಯಾಣಿಕರು ನಡುರಾತ್ರಿಯಲ್ಲಿ ಪರ್ಯಾಯವಾಗಿ ಬಸ್ ಮತ್ತು ಕಾರುಗಳ ವ್ಯವಸ್ಥೆ ಮಾಡಿಕೊಂಡು ಪ್ರಯಾಣ ಬೆಳೆಸಿದ್ದಾರೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ಇಂದು ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ಇಂದು ಎರಡು ರೈಲು ಸೇವೆ ರದ್ದು&lt;/strong&gt;&lt;/h3&gt;&lt;p&gt;ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್&zwnj;ಪ್ರೆಸ್&zwnj; ರೈಲಿನ (ಸಂಖ್ಯೆ 16540 ) ಭಾನುವಾರದ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.&lt;/p&gt;&lt;p&gt;ಯಶವಂತಪುರ - ಮಂಗಳೂರು ಜಂಕ್ಷನ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ (16575) ಭಾನುವಾರದ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.&lt;/p&gt;&lt;h3&gt;&lt;strong&gt;ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ&lt;/strong&gt;&lt;/h3&gt;&lt;p&gt;ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶೃಂಗೇರಿ ತಾಲೂಕು ನೆರೆ ಹೊಸ್ತಿಲಲ್ಲಿದೆ. ಗುರುವಾರ ರಾತ್ರಿಯಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದು ನದಿ ಜಲಾನಯನ ಪ್ರದೇಶದ ಜನರಲ್ಲಿ ನೆರೆ ಭೀತಿ ಮೂಡಿಸಿದೆ. ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ತುಂಗಾ ನದಿಯ ಈ ಭೋರ್ಗರೆತದ ದೃಶ್ಯ ಮನಮೋಹಕವಾಗಿದ್ದರೂ, ನೆರೆ ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ.&lt;/p&gt;&lt;p&gt;&lt;strong&gt;ತುಂಬಿದ ನದಿ, ಕೆರೆ-ಕಟ್ಟೆಗಳು&lt;/strong&gt;&lt;/p&gt;&lt;p&gt;ಮಳೆ ಕೊರತೆಯಿಂದ ಒಣಗಿದ್ದ ಮಲೆನಾಡು ಕೇವಲ ಎರಡು ದಿನಗಳ ಮಳೆಗೆ ಸಂಪೂರ್ಣವಾಗಿ ಬದಲಾಗಿದೆ. ನದಿ, ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಶೃಂಗೇರಿ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ.&lt;/p&gt;]]></content:encoded>
            <category>hassan</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/bengaluru-mangaluru-train-service-completely-suspended-after-hill-collapses-on-railway-tracks-near-yadakumari-hassan-mrq/articleshow-pce28di"/>
        </item>
        <item>
            <title><![CDATA[ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ: ಹಲವು ಟ್ರೈನ್‌ ವ್ಯಾಪ್ತಿ ಬದಲಾವಣೆ, ಇಲ್ಲಿದೆ ರೈಲುಗಳ ಪಟ್ಟಿ]]></title>
            <link>https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s</link>
            <guid isPermaLink="true">https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s</guid>
            <pubDate>Mon, 24 Aug 2026 12:07:57 +0530</pubDate>
            <description><![CDATA[ಅಕ್ಟೋಬರ್ 1 ರಿಂದ ಮಂಗಳೂರು ರೈಲ್ವೆ ಪ್ರದೇಶವು ಕೇರಳದ ಪಾಲಕ್ಕಾಡ್ ವಿಭಾಗದಿಂದ ಬೇರ್ಪಟ್ಟು ನೈಋತ್ಯ ರೈಲ್ವೆಯ ಮೈಸೂರು ವಿಭಾಗದೊಂದಿಗೆ ವಿಲೀನಗೊಳ್ಳಲಿದೆ. ಈ ಬದಲಾವಣೆಯಿಂದಾಗಿ ವಂದೇ ಭಾರತ್ ಸೇರಿದಂತೆ 12ಕ್ಕೂ ಹೆಚ್ಚು ಪ್ರಮುಖ ರೈಲುಗಳು ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿದ್ದು, ಇದು ಕರಾವಳಿ ಕರ್ನಾಟಕದ ರೈಲ್ವೆ ಸುಧಾರಣೆಗೆ ಮಹತ್ವದ ಹೆಜ್ಜೆ ಎನ್ನಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0s7qsr6n5jzhp6e5j4qs5xx,imgname-railway--1--1787553376005.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಮಂಗಳೂರು ನೈಋತ್ಯ ರೈಲ್ವೆ ವಲಯದ ಜೊತೆ ವಿಲೀನಗೊಂಡ ಬಳಿಕ ಅ.1 ರಿಂದ ಕೇರಳ ಪಾಲಕ್ಕಡ್ ವಿಭಾಗದ ಬದಲು ಮೈಸೂರು ವಿಭಾಗದ ವ್ಯಾಪ್ತಿಗೆ 12ಕ್ಕೂ ಅಧಿಕ ಪ್ರಮುಖ ರೈಲುಗಳು ಒಳಪಡಲಿವೆ. ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದಿಂದ ಉಳ್ಳಾಲ ವರೆಗಿನ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಿದ ಬಳಿಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಸಂಚರಿಸುವ ಹಾಗೂ ಅದರ ನಿರ್ವಹಣಾ ಸೌಲಭ್ಯಗಳಿಗೆ ಸಂಬಂಧಿಸಿದ ಹಲವು ರೈಲುಗಳು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿವೆ.&lt;/p&gt;&lt;h2&gt;ಪ್ರಮುಖ ರೈಲುಗಳು:&lt;/h2&gt;&lt;p&gt;12619/12620-ಮಂಗಳೂರು ಸೆಂಟ್ರಲ್-ಎಲ್&zwnj;ಟಿಟಿ ಮುಂಬೈ ಮತ್ಸ್ಯಗಂಧ ಎಕ್ಸ್&zwnj;ಪ್ರೆಸ್, 20645/20646- ಮಂಗಳೂರು ಸೆಂಟ್ರಲ್&ndash;ಮಡಗಾಂವ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್, 20631/20632-ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್, 16649/16650-ಕನ್ಯಾಕುಮಾರಿ-ಮಂಗಳೂರು ಸೆಂಟ್ರಲ್ ಪರಶುರಾಮ್ ಎಕ್ಸ್&zwnj;ಪ್ರೆಸ್, 16605/16606-ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಎರ್ನಾಡ್ ಎಕ್ಸ್&zwnj;ಪ್ರೆಸ್, 16603/16604- ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್&zwnj;ಪ್ರೆಸ್, 16629/16630- ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್&zwnj;ಪ್ರೆಸ್, 16323/16324-ಮಂಗಳೂರು ಸೆಂಟ್ರಲ್-ಕೊಯಮತ್ತೂರು ಎಕ್ಸ್&zwnj;ಪ್ರೆಸ್, 22609/22610- ಮಂಗಳೂರು ಸೆಂಟ್ರಲ್-ಕೊಯಮತ್ತೂರು ಇಂಟರ್&zwnj;ಸಿಟಿ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್, 12601/12602-ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್&zwnj;ಫಾಸ್ಟ್ ಮೇಲ್ ಎಕ್ಸ್&zwnj;ಪ್ರೆಸ್, 16621/16622- ಮಂಗಳೂರು ಸೆಂಟ್ರಲ್-ರಾಮೇಶ್ವರಂ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್, 22637/22638-ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲುಗಳು ಮೈಸೂರು ವಿಭಾಗಕ್ಕೆ ಒಳಪಡಲಿದೆ.&lt;/p&gt;&lt;h2&gt;ಪ್ಯಾಸೆಂಜರ್ ರೈಲುಗಳು:&lt;/h2&gt;&lt;p&gt;56625/56626 -ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56627/56628- ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56629/56630-ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56615/56616- ಮಂಗಳೂರು ಸೆಂಟ್ರಲ್-ಮಡಗಾಂವ್ ಪ್ಯಾಸೆಂಜರ್ ಮತ್ತು ಮಂಗಳೂರು ಸೆಂಟ್ರಲ್ ಹಾಗೂ ಅದರ ನಿರ್ವಹಣಾ ಸೌಲಭ್ಯಗಳಿಗೆ ಸಂಬಂಧಿಸಿದ ಇತರೆ ರೈಲುಗಳು ಒಳಗೊಳ್ಳಲಿವೆ.&lt;/p&gt;&lt;h2&gt;ಇಂಟರ್&zwnj; ಚೇಂಜ್&zwnj; ಪಾಯಿಂಟ್&zwnj;:&lt;/h2&gt;&lt;p&gt;ಅ. 1 ರಿಂದ ಪ್ರಮುಖ ಇಂಟರ್&zwnj;ಚೇಂಜ್ ಪಾಯಿಂಟ್&zwnj;ಗಳು (ರೈಲ್ವೆ ವಲಯ ಬದಲಾವಣೆ ಕೇಂದ್ರಗಳು)ಕೂಡ ಬದಲಾಗಲಿವೆ. ಈವರೆಗೆ ಪಡೀಲ್ ಬದಲಿಗೆ &lsquo;ಉಳ್ಳಾಲ&rsquo; ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್&zwnj;ಚೇಂಜ್ ಪಾಯಿಂಟ್ ಆಗಿರಲಿದೆ. ತೋಕೂರು ಕೊಂಕಣ ರೈಲ್ವೆಯ ಅಡಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್&zwnj;ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.&lt;/p&gt;&lt;h2&gt;ಈಡೇರಿಸಬೇಕಾದ ಬೇಡಿಕೆ:&lt;/h2&gt;&lt;p&gt;ಮಂಗಳೂರು ಸೆಂಟ್ರಲ್- ಜಂಕ್ಷನ್ ಹಳಿ ಡಬ್ಲಿಂಗ್ ( ನೈಋತ್ಯ ರೈಲ್ವೆ), ತೋಕೂರು- ಸುರತ್ಕಲ್ 4 ಕಿ.ಮೀ. ಡಬ್ಲಿಂಗ್ (ಕೊಂಕಣ ರೈಲ್ವೆ), ಸಕಲೇಶಪುರ- ಹಾಸನ- ಬೆಂಗಳೂರು ಮತ್ತು ಸುಬ್ರಹ್ಮಣ್ಯ- ಪಡೀಲ್ ನಡುವಿನ ಹಳಿಯ ವೇಗಧಾರಣ ಸಾಮರ್ಥ್ಯ ಹೆಚ್ಚಳ. (ಘಾಟ್ ಪ್ರದೇಶದ ಅನಿವಾರ್ಯ ವಿಳಂಬ ನಿವಾರಣೆಗಾಗಿ) ಹಾಗೂ ಮಂಗಳೂರು ಸೆಂಟ್ರಲ್&zwnj;ನಲ್ಲಿ ಫ್ಲಾಟ್ ಫಾರಂ ಹೆಚ್ಚಳ ಬೇಡಿಕೆ ಈಡೇರಿಸುವ ಅಗತ್ಯವನ್ನು ರೈಲ್ವೆ ಸಂಘಟನೆಗಳು ಹೇಳುತ್ತಿವೆ.&lt;/p&gt;&lt;h2&gt;ಕೊಂಕಣ ರೈಲ್ವೆ ವಿಲೀನಕ್ಕೆ ಮುನ್ನುಡಿ&lt;/h2&gt;&lt;p&gt;ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುತ್ತಿರುವಂತೆಯೇ ಕೊಂಕಣ ರೈಲ್ವೆ ಜಾಲ ಕೂಡ ಭಾರತೀಯ ರೈಲ್ವೆ ಜೊತೆ ವಿಲೀನಕ್ಕೆ ಮುನ್ನುಡಿ ಬರೆದಂತಾಗಿದೆ. ಕರಾವಳಿ ಕರ್ನಾಟಕದಲ್ಲಿ ರೈಲ್ವೆ ವಿಳಂಬ ಪ್ರಯಾಣ ನಿವಾರಣೆಗೆ ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಯತ್ನ ಕರಾವಳಿಯ ಸಂಸದರಿಂದ ನಡೆಯುತ್ತಿದೆ.&lt;/p&gt;&lt;p&gt;ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳ್ಳುವುದಕ್ಕೆ ಗೋವಾ ಯಾವುದೇ ಶರತ್ತು ಇಲ್ಲದೆ ಒಪ್ಪಿಗೆ ನೀಡಿದೆ, ಆದರೆ ಕರ್ನಾಟಕ, ಕೇರಳ, ಮಹಾರಾಷ್ಟ್ರ ನಿರ್ಧಾರ ಬಾಕಿಯಿದೆ. ಆದರೆ ಮಂಗಳೂರು ಪ್ರದೇಶ ಮೈಸೂರು ವಿಭಾಗದಲ್ಲಿ ವಿಲೀನಕ್ಕೆ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.&lt;/p&gt;&lt;p&gt;ಆಡಳಿತಾತ್ಮಕ ಮತ್ತು ಕಾರ್ಯಾಚರಣೆ ಸುಗಮಕ್ಕಾಗಿ ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದು ಕರಾವಳಿ ಕರ್ನಾಟಕದ ರೈಲ್ವೆ ಸುಧಾರಣೆಗೆ ಅತ್ಯಂತ ಮಹತ್ವದ ಐತಿಹಾಸಿಕ ಹೆಜ್ಜೆಯಾಗಿದೆ. ಇದರಿಂದ ಮಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಆಡಳಿತಾತ್ಮಕ, ಕಾರ್ಯಾಚರಣೆಗಳಿಗೆ ಬಹಳ ಅನುಕೂಲವಾಗಲು ಕೇಂದ್ರ ರೈಲ್ವೆ ಸಚಿವಾಲಯ ಈ ತೀರ್ಮಾನ ಕೈಗೊಂಡಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s"/>
        </item>
        <item>
            <title><![CDATA[ನಮ್ಮ ತಾಯಿ ಭೂಮಿಯ ಒಡಲು ಸೇರಿದ್ದಾರೆ -ಅಮ್ಮನ ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ]]></title>
            <link>https://kannada.asianetnews.com/hassan/emotional-kumaraswamy-amma-hd-kumaraswamy-has-gone-to-join-mother-earth-gkn/articleshow-r1v1oru</link>
            <guid isPermaLink="true">https://kannada.asianetnews.com/hassan/emotional-kumaraswamy-amma-hd-kumaraswamy-has-gone-to-join-mother-earth-gkn/articleshow-r1v1oru</guid>
            <pubDate>Tue, 21 Jul 2026 15:18:34 +0530</pubDate>
            <description><![CDATA[&lt;p&gt;ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಅಗಲಿದ ತಮ್ಮ ತಾಯಿಯನ್ನು ನೆನೆದು ಭಾವುಕರಾದರು. ನಮ್ಮ ತಾಯಿ ಎಂದೂ ಮಾಧ್ಯಮಗಳ ಮುಂದೆ ಬಂದವಳಲ್ಲ. ಅವರೀಗ ಭೂಮಿ ತಾಯಿಯ ಒಡಲು ಸೇರಿದ್ದಾರೆ, ಶಿವ-ವಿಷ್ಣುವಿನ ಪಾದ ಸೇರಿದ್ದಾರೆ ಎಂದು ಭಾವುಕರಾದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky2168mvrpj6sdyczz2dgj5t,imgname-hd-kumaraswamy--1--1784627274395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಹರದನಹಳ್ಳಿ):&lt;/strong&gt; ನಮ್ಮ ತಾಯಿ ಪರಮ ದೈವಭಕ್ತೆ, ಅವರ ಆತ್ಮಕ್ಕೆ ಖಂಡಿತ ಶಾಂತಿ ದೊರೆಯಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ. ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ತಮ್ಮ ತಾಯಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನಂತರದ ವಿಧಿವಿಧಾನಗಳ ಬಗ್ಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.&lt;/p&gt;&lt;h2&gt;&lt;strong&gt;11 ದಿನಗಳ ಕಾಲ ಪಾರಾಯಣ&lt;/strong&gt;&lt;/h2&gt;&lt;p&gt;ಚೆನ್ನಮ್ಮನವರು ಪ್ರತಿದಿನವೂ ತಪ್ಪದೇ ವಿಷ್ಣು ಸಹಸ್ರನಾಮ ಪಠಿಸುತ್ತಿದ್ದರು. ಅವರ ಅದೇ ಆಸೆಯಂತೆ ಸಮಾಧಿಯ ಬಳಿ ಮೂವರು ಪುರೋಹಿತರಿಂದ ಸತತ 11 ದಿನಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ ಏರ್ಪಡಿಸಲಾಗಿದೆ. ಮೂರನೇ ದಿನದ ಹಾಲು-ತುಪ್ಪದ ಕಾರ್ಯ ನಡೆಯಲಿದೆ. ಇನ್ನು 11ನೇ ದಿನದ ಪುಣ್ಯತಿಥಿಯಂದು ಲಕ್ಷಾಂತರ ಜನರಿಗೆ ಅನ್ನಸಂತರ್ಪಣೆ ಮಾಡಲು ಕುಟುಂಬ ನಿರ್ಧರಿಸಿದೆ ಎಂದು ಹೆಚ್&zwnj;ಡಿಕೆ ಮಾಹಿತಿ ನೀಡಿದರು.&lt;/p&gt;&lt;h3&gt;&lt;strong&gt;ಬಡವರಿಗೆ ನೆರವಾಗುವ ವಿಶಿಷ್ಟ ಸ್ಮಾರಕ&lt;/strong&gt;&lt;/h3&gt;&lt;p&gt;ನಮ್ಮ ತಾಯಿಯ ಸಮಾಧಿ ಸ್ಥಳವನ್ನು ಕೇವಲ ಕಲ್ಲಿನ ಸ್ಮಾರಕವನ್ನಾಗಿ ಮಾಡುವುದಿಲ್ಲ. ಅಲ್ಲಿ ಬಡ ಕುಟುಂಬಗಳಿಗೆ ಮತ್ತು ಸಮಾಜಕ್ಕೆ ಅನುಕೂಲವಾಗುವಂತಹ ಯಾವುದಾದರೂ ಯೋಜನೆಯನ್ನು ರೂಪಿಸಲಿದ್ದೇವೆ. ನಮ್ಮ ತಾಯಿ ಎಂದೂ ಮಾಧ್ಯಮಗಳ ಮುಂದೆ ಬಂದವಳಲ್ಲ. ಅವರು ಈಗ ಭೂಮಿ ತಾಯಿಯ ಒಡಲು ಸೇರಿದ್ದಾರೆ, ಶಿವ-ವಿಷ್ಣುವಿನ ಪಾದ ಸೇರಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು. ತಮ್ಮ ತಾಯಿಯನ್ನು 'ಅನ್ನಪೂರ್ಣೇಶ್ವರಿ' ಎಂದು ಕರೆದ ಮಾಧ್ಯಮಗಳ ಬಗ್ಗೆ ಅವರು ಕೃತಜ್ಞತೆ ಸಲ್ಲಿಸಿದರು.&lt;/p&gt;&lt;p&gt;ತಮ್ಮ ಜೀವನದುದ್ದಕ್ಕೂ ಜೊತೆಯಾಗಿದ್ದ ಪತ್ನಿಯ ಅಗಲಿಕೆಯಿಂದ ನೊಂದಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಚೆನ್ನಮ್ಮನವರ ಸಮಾಧಿಗೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ನಮಿಸಿದರು. ಬಳಿಕ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕುಟುಂಬದ ಇತರ ಸದಸ್ಯರಾದ ಹೆಚ್.ಡಿ. ರೇವಣ್ಣ, ಪುತ್ರಿಯರಾದ ಅನುಸೂಯ, ಶೈಲಜಾ, ಸೊಸೆಯಂದಿರಾದ ಭವಾನಿ ಮತ್ತು ಕವಿತಾ ಅವರು ಸಮಾಧಿಗೆ ಪ್ರಣಾಮ ಸಲ್ಲಿಸಿದರು.&lt;/p&gt;]]></content:encoded>
            <category>hassan</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/hassan/emotional-kumaraswamy-amma-hd-kumaraswamy-has-gone-to-join-mother-earth-gkn/articleshow-r1v1oru"/>
        </item>
        <item>
            <title><![CDATA[9 ರೂಪಾಯಿಗೆ ಸತಾಯಿಸಿದ ಬ್ಯಾಂಕ್​ಗೇ ಬುದ್ಧಿ ಕಲಿಸಿದ ಹಾಸನದ ರೈತ: ಅಭಿನಂದನೆಗಳ ಸುರಿಮಳೆ]]></title>
            <link>https://kannada.asianetnews.com/viral/hassan-dist-farmer-tought-lesson-to-the-bank-that-tortured-him-for-rs-9-rupees-suc/articleshow-rp2y30p</link>
            <guid isPermaLink="true">https://kannada.asianetnews.com/viral/hassan-dist-farmer-tought-lesson-to-the-bank-that-tortured-him-for-rs-9-rupees-suc/articleshow-rp2y30p</guid>
            <pubDate>Mon, 10 Aug 2026 12:36:11 +0530</pubDate>
            <description><![CDATA[&lt;p&gt;ಹಾಸನ ಜಿಲ್ಲೆ ಸಕಲೇಶಪುರದ ರೈತರೊಬ್ಬರು ತಾವು ಪಡೆದಿದ್ದ ಸಾಲ ಮರುಪಾವತಿಸಿದರೂ, ಬಾಕಿ ಉಳಿದಿದ್ದ 9.34 ರೂ. ಪಾವತಿಸುವಂತೆ ಬ್ಯಾಂಕ್ ಸಿಬ್ಬಂದಿ ಪೀಡಿಸಿದರು. ಇದಕ್ಕೆ ಪ್ರತಿಯಾಗಿ, ರೈತ 10 ರೂ. ನೀಡಿ 66 ಪೈಸೆ ಚಿಲ್ಲರೆ ಕೇಳುವ ಮೂಲಕ ಬ್ಯಾಂಕ್ ಸಿಬ್ಬಂದಿಗೆ ತಕ್ಕ ಪಾಠ ಕಲಿಸಿದ್ದು, ಈ ಘಟನೆ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzn7vyqmcncaam0hr58nq22a,imgname-chokkanna-gowda-1786345552627.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನ: ಕೆಲವೊಮ್ಮೆ, ನಮ್ಮ ಕರ್ನಾಟಕದ ಕೆಲವೊಂದು ರಾಷ್ಟ್ರೀಕೃತ ಬ್ಯಾಂಕ್​ಗಳ ವ್ಯವಹಾರಕ್ಕೆ ಹೋಗುವುದು ಎಂದರೆ ಇನ್ನಿಲ್ಲದ ತಲೆನೋವು. ಅಲ್ಲಿಯ ಸಿಬ್ಬಂದಿ ನಡೆದುಕೊಳ್ಳುವ ರೀತಿ, ಕನ್ನಡವೇ ಬರದಂತೆ ವರ್ತಿಸುವುದು, ಏನಾದರೂ ಮಾಹಿತಿ ಕೇಳಿದರೆ, ತಲೆ ಎತ್ತಿ ನೋಡುವುದಕ್ಕಾಗಿಯೇ ಗಂಟೆಗಟ್ಟಲೆ ಮಾಡುವುದು, ಯಾವುದಕ್ಕೂ ಸರಿಯಾಗಿ ಉತ್ತರ ಕೊಡದೇ ಬೇಜವಾಬ್ದಾರಿಯಿಂದ ವರ್ತಿಸುವುದು, ಅದರಲ್ಲಿಯೂ ಮಧ್ಯಮ ವರ್ಗದವರು ಹೋದರಂತೂ ಅವರನ್ನು ಕೆಲವು ಬ್ಯಾಂಕ್​ಗಳ ಕೆಲವು ಶಾಖೆಗಳ ಸಿಬ್ಬಂದಿ ವರ್ತಿಸುವ ಪರಿ ರೋಸಿಹೋಗುವಂಥದ್ದು. ಇದೇ ಕಾರಣಕ್ಕೆ ಬ್ಯಾಂಕ್​ಗಳ ವಿರುದ್ಧ ಯಾರಾದರೂ ದನಿ ಎತ್ತಿದರೆ, ಅದಕ್ಕೆ ಬೆಂಬಲ ವ್ಯಕ್ತಪಡಿಸುವ ಅಸಂಖ್ಯ ಜನರು ಸಿಗುತ್ತಾರೆ. ಅಂಥದ್ದೇ ಒಂದು ಸುದ್ದಿ ಇದೀಗ ಹಾಸನ ಜಿಲ್ಲೆಯ ಸಕಲೇಶಪುರದ ಬ್ಯಾಂಕ್​ ಒಂದರಿಂದ ವೈರಲ್​ ಆಗಿದ್ದು, ಬ್ಯಾಂಕ್​ಗೆ ಬುದ್ಧಿ ಕಲಿಸಿದ ರೈತನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಕೆಲವು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಇದು ಬೆಳಕಿಗೆ ಬಂದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಸಕಲೇಶಪುರದ ರಾಷ್ಟ್ರೀಕೃತ ಬ್ಯಾಂಕ್​ ಒಂದರಲ್ಲಿ, ಸಕಲೇಶಪುರ ತಾಲ್ಲೂಕಿನ, ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಅದನ್ನು ಅವರು ನಿಗದಿತ ಅವಧಿಯಲ್ಲಿ ಮರುಪಾವತಿಯನ್ನೂ ಮಾಡಿದ್ದರು. ಆದರೆ ಬ್ಯಾಂಕ್​ ಸಿಬ್ಬಂದಿ ಅಲ್ಲಿಗೇ ಸುಮ್ಮನಾಗಲಿಲ್ಲ. ಆ ಸಾಲದ ಖಾತೆಯನ್ನು ಮುಚ್ಚಲು ಬಾಕಿ ಇದ್ದ 9.34 ಅರ್ಥಾತ್​ 9 ರೂಪಾಯಿ 34 ಪೈಸೆಯನ್ನು ಪಾವತಿಸುವಂತೆ ಹೇಳಿದರು. ರೈತನಿಗೆ ಇದು ಸವಾಲಿನ ಕೆಲಸವಾಯಿತು. 9 ರೂಪಾಯಿ ಕೊಡಬಹುದು. 34 ಪೈಸೆ ಎಲ್ಲಿಂದ ತರುವುದು ಎನ್ನುವ ತಲೆಬಿಸಿ ಉಂಟಾಯಿತು. ಆದರೆ, ಬ್ಯಾಂಕ್ ಸಿಬ್ಬಂದಿ ಬಿಡಬೇಕಲ್ಲ. ಒಂದೇ ಸಮನೆ ಈ ಹಣಕ್ಕಾಗಿ ಪೀಡಿಸುತ್ತಿದ್ದರು.&lt;/p&gt;&lt;p&gt;ಉಳಿದವರಾದರೆ 10 ರೂಪಾಯಿ ಕೊಟ್ಟು ಸಾಕಪ್ಪ ಈ ಬ್ಯಾಂಕ್​ ಸಹವಾಸ ಎಂದು ಸುಮ್ಮನಾಗಿಬಿಡುತ್ತದ್ದರೋ ಏನೋ. ಆದರೆ ಈ ಬ್ಯಾಂಕ್​ ಸಿಬ್ಬಂದಿಯ ವರ್ತನೆಗೆ ಬೇಸತ್ತು ಹೋಗಿದ್ದ ರೈತ, ಇವರನ್ನು ಸುಮ್ಮನೇ ಬಿಡಬಾರದು ಎಂದುಕೊಂಡು ಪಟ್ಟುಹಿಡಿದರು. ಬುದ್ಧಿ ಕಲಿಸಲೇಬೇಕು ಎಂದು ಪಣತೊಟ್ಟರು. ಕೊನೆಯದಾಗಿ, ಸರಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಪಾವತಿ ಮಾಡಲು ಹೋದ ಅವರು ಸುಮ್ಮನೇ ಹೋಗಲಿಲ್ಲ. ಹೋಗುವಾಗ 10 ರೂಪಾಯಿ ನೋಟನ್ನು ತೆಗೆದುಕೊಂಡು ಹೋದರು.&lt;/p&gt;&lt;h3&gt;&lt;strong&gt;66 ಪೈಸೆ ವಾಪಸ್​ ಕೊಡಲು ಡಿಮಾಂಡ್​&lt;/strong&gt;&lt;/h3&gt;&lt;p&gt;ಆ ನೋಟನ್ನು ಬ್ಯಾಂಕ್​ನವರಿಗೆ ಕೊಟ್ಟು, ಇದರಲ್ಲಿ ನಿಮಗೆ ಬಾಕಿ ಬರಬೇಕಿರುವ 9.34 ರೂಪಾಯಿ ತೆಗೆದುಕೊಂಡು ನನಗೆ 66 ಪೈಸೆಯನ್ನು ಕ್ಯಾಷ್​ ರೂಪದಲ್ಲಿಯೇ ಕೊಡಿ ಎಂದು ಪಟ್ಟು ಹಿಡಿದರು. ಒಂದು ವೇಳೆ, ಸರಿಯಾದ ಚಿಲ್ಲರೆ ಹಣ ನೀಡದೇ ಹೋದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಕೊನೆಗೆ ಬ್ಯಾಂಕ್​ ಸಿಬ್ಬಂದಿ ಸುಸ್ತಾಗಿ ಹೋದರು. ಅಲ್ಲಿಯವರೆಗೆ, ಸಾಲ ಕೇಳಲು ಬರುವ ಗ್ರಾಹಕರನ್ನು ಏನೋ ತಮ್ಮ ಜೇಬಿನಿಂದ ಹಣ ನೀಡುತ್ತಿರುವಂತೆ ಸತಾಯಿಸುವ ಈ ಸಿಬ್ಬಂದಿಗೆ ರೈತ ಬೆವರಿಳಿಸಿ, ಈ ವಿಷಯವನ್ನು ದಾಖಲೆ ಸಹಿತ ಮಾಧ್ಯಮದವರ ಎದುರೂ ಹೇಳಿಕೊಂಡರು. ಕೊನೆಗೂ ಬ್ಯಾಂಕ್​ 66 ಪೈಸೆಯನ್ನು ಹಾಕಿದೆಯಂತೆ. ಇದು ರಾತ್ರೋರಾತ್ರಿ ವೈರಲ್​ ಆಗಿದ್ದು, ಕೆಲವು ರಾಷ್ಟ್ರೀಕೃತ ಬ್ಯಾಂಕ್​ಗಳು ಕೆಲವು ಶಾಖೆಗಳ ಸಿಬ್ಬಂದಿಯ ವರ್ತನೆಗಳಿಂದ ಬೇಸತ್ತ ಗ್ರಾಹಕರು ರೈತನಿಗೆ ಶಹಬ್ಬಾಸ್​ ಎನ್ನುತ್ತಿದ್ದಾರೆ. ತಾವು ಮಾಡದ ಕಾರ್ಯವನ್ನು ಈ ರೈತ ಮಾಡಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Suchethana D</dc:creator>
            <atom:link href="https://kannada.asianetnews.com/viral/hassan-dist-farmer-tought-lesson-to-the-bank-that-tortured-him-for-rs-9-rupees-suc/articleshow-rp2y30p"/>
        </item>
        <item>
            <title><![CDATA[ದೆಹಲಿ ಅಧಿಕೃತ ಪ್ರಧಾನಿ ನಿವಾಸದಲ್ಲಿ ಕನ್ನಡದ ಕಂಪು, ತುಳಸಿ ಕಟ್ಟೆ ಕಟ್ಟಿಸಿದ ಪ್ರಪ್ರಥಮ ಮಹಿಳೆ ಚೆನ್ನಮ್ಮ ದೇವೇಗೌಡ!]]></title>
            <link>https://kannada.asianetnews.com/food/chennamma-devegowda-passes-away-remembering-the-woman-who-introduced-tulsi-katte-to-delhi-prime-minister-residence-gdp/articleshow-rpb27mx</link>
            <guid isPermaLink="true">https://kannada.asianetnews.com/food/chennamma-devegowda-passes-away-remembering-the-woman-who-introduced-tulsi-katte-to-delhi-prime-minister-residence-gdp/articleshow-rpb27mx</guid>
            <pubDate>Mon, 20 Jul 2026 16:41:33 +0530</pubDate>
            <description><![CDATA[ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮನವರು, 1996ರಲ್ಲಿ ದೆಹಲಿಯ ಪ್ರಧಾನಿ ನಿವಾಸದಲ್ಲಿ 'ತುಳಸಿ ಕಟ್ಟೆ' ನಿರ್ಮಿಸಿ ಮತ್ತು 'ರಾಗಿ ಮುದ್ದೆ'ಯನ್ನು ಪರಿಚಯಿಸಿ ವಿಶಿಷ್ಟ ಸಾಂಸ್ಕೃತಿಕ ಛಾಪು ಮೂಡಿಸಿದ್ದರು. ಅವರ ಈ ಸರಳತೆಯ ಹೆಜ್ಜೆಗಳು, ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಆತ್ಮವನ್ನು ಪ್ರತಿಷ್ಠಾಪಿಸಿದ ಐತಿಹಾಸಿಕ ಕ್ಷಣಗಳಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxzkf2yrz4ytsd2ym42hedmv,imgname-chennamma-deve-gowda-tulasi-katte-1784545774552.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡರು (89) ಜುಲೈ 18 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ನಿಧನವು ಕೇವಲ ಒಂದು ಕುಟುಂಬದ ನಷ್ಟವಲ್ಲ. ಅದು ಮೌನ, ಅಚಲ ಭಕ್ತಿ ಮತ್ತು ಆಡಂಬರವಿಲ್ಲದ ಸರಳತೆಯ ಯುಗವೊಂದರ ಅಂತ್ಯವನ್ನು ಸೂಚಿಸುತ್ತದೆ. ಇಂದು ಚೆನ್ನಮ್ಮ ಜೀವಂತವಿಲ್ಲ. ಆದರೆ ಅವರು ರಾಷ್ಟ್ರ ರಾಜಧಾನಿ ನವದೆಹಲಿಯ ಅಧಿಕೃತ ಪ್ರಧಾನಿ ನಿವಾಸದಲ್ಲಿ ಮೂಡಿಸಿದ್ದ ವಿಶಿಷ್ಟ ಸಾಂಸ್ಕೃತಿಕ ಛಾಪು ಮತ್ತು ಮರೆತುಹೋದ ಆ ಐತಿಹಾಸಿಕ ಮೈಲಿಗಲ್ಲುಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದೆ.&lt;/p&gt;&lt;h2&gt;1996ರ ಸಾಂಸ್ಕೃತಿಕ ಕ್ರಾಂತಿ: ಲುಟ್ಯೆನ್ಸ್ ಏಕತಾನತೆಯನ್ನು ಮುರಿದ ತುಳಸಿಕಟ್ಟೆ&lt;/h2&gt;&lt;p&gt;1996 ರಲ್ಲಿ ದೇವೇಗೌಡರು ಅನಿರೀಕ್ಷಿತವಾಗಿ ಭಾರತದ 11 ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ, ಇಡೀ ದೇಶದ ಗಮನ ನವದೆಹಲಿಯಲ್ಲಿ ಬದಲಾಗುತ್ತಿದ್ದ ರಾಜಕೀಯ ಒಕ್ಕೂಟಗಳ ಮೇಲಿತ್ತು. ಆದರೆ, ತೀವ್ರವಾದ ರಾಜಕೀಯ ಚದುರಂಗದಾಟದಿಂದ ದೂರವಾಗಿ, ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸದ (ಆಗಿನ 7, ರೇಸ್ ಕೋರ್ಸ್ ರಸ್ತೆ) ಬಿಗಿ ಭದ್ರತೆಯ ಕೋಟೆಗಳ ಒಳಗೆ ಒಂದು ಶಾಂತ ಹಾಗೂ ಐತಿಹಾಸಿಕ ಸಾಂಸ್ಕೃತಿಕ ಮತ್ತು ದೈವಭಕ್ತಿಯ ಕ್ರಾಂತಿ ನಡೆಯುತ್ತಿತ್ತು. ಈ ರೂಪಾಂತರದ ಸೂತ್ರಧಾರಿಯೇ ಚೆನ್ನಮ್ಮ ದೇವೇಗೌಡರು.&lt;/p&gt;&lt;p&gt;ಜೂನ್ 1996 ಕ್ಕಿಂತ ಮೊದಲು, ನವದೆಹಲಿಯ ಅಧಿಕೃತ ಪ್ರಧಾನಿ ಬಂಗಲೆಗಳು ಕಟ್ಟುನಿಟ್ಟಾದ ವಸಾಹತುಶಾಹಿ ಯುಗದ ವಾಸ್ತುಶಿಲ್ಪ ಮತ್ತು ಬ್ರಿಟಿಷ್ ಶೈಲಿಯ ಆಡಳಿತಶಾಹಿ ಸೌಂದರ್ಯಶಾಸ್ತ್ರದಿಂದ ಪ್ರಾಬಲ್ಯ ಹೊಂದಿದ್ದವು. ಈ ಗಣ್ಯ ವಲಯಗಳಲ್ಲಿ ಸಾಂಪ್ರದಾಯಿಕ ದಕ್ಷಿಣ ಭಾರತದ ಗ್ರಾಮೀಣ ಸಂಸ್ಕೃತಿಗೆ ಜಾಗವಿರಲಿಲ್ಲ. ಆದರೆ, ಚೆನ್ನಮ್ಮನವರು ದೆಹಲಿಗೆ ಬಂದ ತಕ್ಷಣ ಆ ವಾತಾವರಣವನ್ನು ಬದಲಾಯಿಸಿದರು. ಅವರು ಪ್ರಧಾನಿ ನಿವಾಸದ ಅಂಗಳದಲ್ಲಿ ಮೊಟ್ಟಮೊದಲ ಬಾರಿಗೆ ಸಾಂಪ್ರದಾಯಿಕ ಇಟ್ಟಿಗೆಯ 'ತುಳಸಿ ಕಟ್ಟೆ'ಯನ್ನು ಕಟ್ಟಿಸಿದ್ದರು. ಅದು ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಸುದ್ದಿಯಾಗುತ್ತು.&lt;/p&gt;&lt;p&gt;ಅವರಿಗೆ ತುಳಸಿ ಕಟ್ಟೆ ಕೇವಲ ಬೆಳಗಿನ ಪ್ರಾರ್ಥನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಭವ್ಯವಾದ, ಅಪರಿಚಿತ ಮಹಾನಗರದಲ್ಲಿ ವಾಸಿಸುತ್ತಿದ್ದಾಗಲೂ ತಮ್ಮ ಕುಟುಂಬವನ್ನು ತಾಯ್ನಾಡಿನ ಬೇರುಗಳಲ್ಲಿ ನೆಲೆಗೊಳಿಸುವ ಒಂದು ಆತ್ಮೀಯ ಮಾರ್ಗವಾಗಿತ್ತು. ಗ್ರಾಮೀಣ ಭಾರತದ ಆಧ್ಯಾತ್ಮಿಕತೆ ಮತ್ತು ದೇಶೀಯತೆಯ ಸಾಂಪ್ರದಾಯಿಕ ಸಂಕೇತವನ್ನು ಕಾರ್ಯಾಂಗ ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿ ಭೌತಿಕವಾಗಿ ನಿರ್ಮಿಸಿದ್ದು ದೇಶದ ಇತಿಹಾಸದಲ್ಲೇ ಮೊದಲ ಬಾರಿಯಾಗಿತ್ತು. ಅನೇಕ ಪ್ರಧಾನಿಗಳು ತಮ್ಮ ಸರ್ಕಾರದ ಅಧಿಕೃತ ನಿವಾಸದಲ್ಲಿ ಹಣ್ಣು, ತರಕಾರಿ, ಹೂವು ಬೆಳೆಸಿದರ ಬಗ್ಗೆ ಉಲ್ಲೇಖವಿದೆ. ಆದರೆ ದೇವೇ ಗೌಡರ ಪತ್ನಿ ಚೆನ್ನಮ್ಮ ಅಪಾರ ದೈವಭಕ್ತೆ ಹೀಗಾಗಿ ತುಳಸಿ ಕಟ್ಟೆಯನ್ನು ಕಟ್ಟಿ ದಿನಬೆಳಗಾದರೆ ಪೂಜೆ ಮಾಡುತ್ತಿದ್ದರು.&lt;/p&gt;&lt;h2&gt;ದೆಹಲಿಯ ಪತ್ರಕರ್ತರಿಗೆ ರಾಗಿ ಮುದ್ದೆ ರುಚಿ ಉಣಿಸಿದ ಮಹಾತಾಯಿ!&lt;/h2&gt;&lt;p&gt;ಚೆನ್ನಮ್ಮನವರು ಪ್ರಧಾನಿ ನಿವಾಸದ ಅಂಗಳದಲ್ಲಿ ಮೂಡಿಸಿದ ಆಧ್ಯಾತ್ಮಿಕ ಮುದ್ರೆ, ಪ್ರಧಾನಿ ಕಚೇರಿಯ (PMO) ಅಡುಗೆಮನೆಯಲ್ಲಿ ಆಗುತ್ತಿದ್ದ ಪಾಕಶಾಲೆಯ ಬದಲಾವಣೆಗೆ ಪೂರಕವಾಗಿತ್ತು. 90 ರ ದಶಕದ ಮಧ್ಯಭಾಗದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವರದಿಗಾರಿಕೆ ಮಾಡುತ್ತಿದ್ದ ಹಿರಿಯ ದೆಹಲಿ ಪತ್ರಕರ್ತರು, ಕರ್ನಾಟಕದ ಹೆಮ್ಮೆಯ 'ರಾಗಿ ಮುದ್ದೆ' ಹೇಗೆ ಪ್ರಧಾನಿ ನಿವಾಸಕ್ಕೆ ಭವ್ಯವಾಗಿ ಪಾದಾರ್ಪಣೆ ಮಾಡಿತು ಎಂಬುದನ್ನು ಇಂದಿಗೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ನಾವು ಅಧಿಕೃತ ಪತ್ರಿಕಾಗೋಷ್ಠಿಗಳಲ್ಲಿ ಸಮೋಸಾ, ಧೋಕ್ಲಾ ಮತ್ತು ಪ್ರಮಾಣಿತ ಉತ್ತರ ಭಾರತದ ಮೊಘಲಾಯಿ ತಿನಿಸುಗಳಿಗೆ ಒಗ್ಗಿಕೊಂಡಿದ್ದೆವು. ಆದರೆ ಇದ್ದಕ್ಕಿದ್ದಂತೆ, ದೇವೇಗೌಡರ ಅಧಿಕಾರಾವಧಿಯಲ್ಲಿ ನಮಗೆ ಸಾಂಪ್ರದಾಯಿಕ ಬೇಳೆ ಸಾರು ಜೊತೆ ಬಿಸಿಬಿಸಿ ರಾಗಿ ಮುದ್ದೆಯನ್ನು ಬಡಿಸಲಾಯಿತು! ಎಂದು ಅನುಭವಿ ರಾಜಕೀಯ ವರದಿಗಾರರೊಬ್ಬರು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ಅಂಗಳದಲ್ಲಿ ಚೆನ್ನಮ್ಮನವರ ತುಳಸಿ ಕಟ್ಟೆ ಮತ್ತು ಊಟದ ಕೋಣೆಗಳಲ್ಲಿ ಅಪ್ಪಟ ಕನ್ನಡ ಸಂಸ್ಕೃತಿಯ ಪಾಕಪದ್ಧತಿಯ ಘಮ. ಈ ಎರಡರ ಸಂಯೋಜನೆಯು 7, ರೇಸ್ ಕೋರ್ಸ್ ರಸ್ತೆಯ ವಾತಾವರಣವನ್ನು ಸಂಪೂರ್ಣವಾಗಿ ಹೊಸತನಕ್ಕೆ ತಿರುಗಸಿತ್ತು. ತಮ್ಮ ನೆಲದ ಸಂಸ್ಕೃತಿ ಪರಂಪರೆಯ ಬಗ್ಗೆ ಹೆಮ್ಮೆಯಿರುವ ಪ್ರಾದೇಶಿಕ ಕುಟುಂಬವೊಂದು ದೇಶದ ಚುಕ್ಕಾಣಿ ಹಿಡಿದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಕರ್ನಾಟಕದ ಜನತೆಗೆ ಇದು ಎಂದಿಗೂ ಹೆಮ್ಮೆಯ ಕ್ಷಣ ಮತ್ತು ಮರೆಯಲಾರದ ಇತಿಹಾಸ ಬರೆದಿದ್ದಾರೆ. ಕನ್ನಡದ ನೆಲದ ಸರಳ ಯಜಮಾನಿಯೊಬ್ಬರು ದೇಶದ ಅತ್ಯುನ್ನತ ನಿವಾಸದಲ್ಲೂ ತನ್ನ ತನವನ್ನು ಬಿಟ್ಟುಕೊಡದೆ, ರಾಜಧಾನಿಗೆ ಕರ್ನಾಟಕದ ಆತ್ಮವನ್ನು ಉಡುಗೊರೆಯಾಗಿ ನೀಡಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ಎಂದಿಗೂ ಅಮರ.&lt;/p&gt;&lt;h2&gt;ಹಾಸನದ ಮಣ್ಣಿನ ಬೇರುಗಳು ಮತ್ತು ಮರೆತುಹೋದ ಪರಂಪರೆ&lt;/h2&gt;&lt;p&gt;ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ 1939 ರಲ್ಲಿ ಜನಿಸಿದ ಚೆನ್ನಮ್ಮನವರು, ಒಕ್ಕಲಿಗ ಕೃಷಿ ಸಂಪ್ರದಾಯದಲ್ಲಿ ಬೇರೂರಿರುವ ಸಾಧಾರಣ ಕೃಷಿ ಕುಟುಂಬದಿಂದ ಬಂದವರು. ಅವರು ಮೇ 1954 ರಲ್ಲಿ 21 ವರ್ಷದ ದೇವೇಗೌಡರನ್ನು ವಿವಾಹವಾದರು. ಅಂದಿನಿಂದ ದೇವೇಗೌಡರ ರಾಜಕೀಯ ಏಳುಬೀಳುಗಳ ಸುದೀರ್ಘ ಪಯಣದಲ್ಲಿ ಅವರು ನೆರಳಾಗಿ ಜೊತೆಗಿದ್ದರು. 72 ವರ್ಷಗಳ ಸುದೀರ್ಘ ದಾಂಪತ್ಯದ ಬಳಿಕ ಮುತೈದೆ ಸಾವು ಕಂಡಿದ್ದಾರೆ. ಆತ್ಮಕ್ಕೆ ಸದ್ಗತಿ ಸಿಗಲಿ.&lt;/p&gt;&lt;p&gt;&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/food/chennamma-devegowda-passes-away-remembering-the-woman-who-introduced-tulsi-katte-to-delhi-prime-minister-residence-gdp/articleshow-rpb27mx"/>
        </item>
        <item>
            <title><![CDATA[ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬ್ಯಾನರ್, ಕಟೌಟ್ಸ್; ಅತ್ಯಾ**ರ ಅಪರಾಧಿಯನ್ನ ಆರಾಧಿಸಿದರೆ ಪಶ್ಚಾತ್ತಾಪಕ್ಕೆಲ್ಲಿದೆ ಅವಕಾಶ!]]></title>
            <link>https://kannada.asianetnews.com/karnataka-districts/prajwal-revanna-birthday-fans-put-up-flexes-in-holenarasipura-despite-rape-conviction/articleshow-rttn085</link>
            <guid isPermaLink="true">https://kannada.asianetnews.com/karnataka-districts/prajwal-revanna-birthday-fans-put-up-flexes-in-holenarasipura-despite-rape-conviction/articleshow-rttn085</guid>
            <pubDate>Wed, 05 Aug 2026 19:26:33 +0530</pubDate>
            <description><![CDATA[&lt;p&gt;ಹಾಸನ ಅತ್ಯಾ**ರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಸನದ ಹೊಳೆನರಸೀಪುರದಲ್ಲಿ ಫ್ಲೆಕ್ಸ್&zwnj;ಗಳನ್ನು ಹಾಕಿ ಆಚರಿಸುತ್ತಿದ್ದಾರೆ. ಅಪರಾಧಿಯೊಬ್ಬನ ಈ ಸಂಭ್ರಮಾಚರಣೆಯು ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಮಾಜದ ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz93b4xhmppm7trb59ff94a4,imgname-prajwal-revanna-banner-hassan-1785938154417.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಆ.05): ಹಾ&lt;/strong&gt;ಸನದಲ್ಲಿ ಅತ್ಯಾ**ರ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಲಾಗುತ್ತಿದೆ. ಪ್ರಜ್ವಲ್ ರೇವಣ್ಣನ ಅಭಿಮಾನಿಗಳು ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಾದ್ಯಂತ ಶುಭಾಶಯ ಕೋರುವ ಬೃಹತ್ ಫ್ಲೆಕ್ಸ್ (Flex) ಹಾಗೂ ಕಟೌಟ್&zwnj;ಗಳನ್ನು ಅಳವಡಿಸಿದ್ದಾರೆ.&lt;/p&gt;&lt;p&gt;ಲೈಂಗಿಕ ದೌರ್ಜನ್ಯ ಮತ್ತು ಅತ್ಯಾ**ರ ಆರೋಪ ಸಾಬೀತಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದರೂ, ಪ್ರಜ್ವಲ್ ರೇವಣ್ಣ ಅವರ ಮೇಲಿನ ಅಭಿಮಾನವನ್ನು ಕಾರ್ಯಕರ್ತರು ಹಾಗೂ ಬೆಂಬಲಿಗರು ಫ್ಲೆಕ್ಸ್ ಹಾಕುವ ಮೂಲಕ ಮೆರೆದಿದ್ದಾರೆ. ಹೊಳೆನರಸೀಪುರ ಪಟ್ಟಣದ ಮುಖ್ಯ ರಸ್ತೆ ಹಾಗೂ ಪ್ರಮುಖ ವೃತ್ತಗಳಲ್ಲಿ 'ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದಿರುವ ಫ್ಲೆಕ್ಸ್&zwnj;ಗಳು ರಾರಾಜಿಸುತ್ತಿದ್ದು, ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.&lt;/p&gt;&lt;h2&gt;&lt;strong&gt;ಪಶ್ಚಾತ್ತಪಕ್ಕೂ ಬಿಡದೇ ಮೆರೆಸುತ್ತಿರುವ ಅಂದಾಭಿಮಾನಿಗಳು:&lt;/strong&gt;&lt;/h2&gt;&lt;p&gt;ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಕೆಟ್ಟ ಕೆಲಸ ಮಾಡಿದರೆ ಅಂಥವರನ್ನು ದೂಷಣೆ ಮಾಡುವ ಮೂಲಕ ಆತನಿಗೆ ಪಶ್ಚಾತ್ತಾಪ ಅನುಭವಿಸುವಂತೆ ಮಾಡಬೇಕು. ಆದರೆ, ಇಲ್ಲಿ ಒಬ್ಬ ಅಪರಾಧಿ ಜೈಲು ಶಿಕ್ಷೆಯಾಗಿ ಮುದ್ದೆ ಮುರಿಯುತ್ತಿದ್ದರೂ, ತಪ್ಪಿತಸ್ಥನನ್ನು ಬೆಂಬಲಿಸಿ ಅಭಿಮಾನಿಗಳ ಸಂಘವನ್ನು ಕಟ್ಟಿಕೊಂಡು ಸಂಭ್ರಮಾಚರಣೆ ಮಾಡುತ್ತಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಶ್ರೀರಾಮನನ್ನು ಪೂಜಿಸುವ ನಾಡಿನಲ್ಲಿ ಒಬ್ಬ ಅಪರಾಧಿಯನ್ನು ಆರಾಧನೆ ಮಾಡುತ್ತಿರುವುದು ಸಮಾಜದ ದಿಕ್ಕು ಎತ್ತ ಸಾಗುತ್ತಿದೆ ಎಂಬುದು ಚಿಂತಕರ ನಿದ್ದೆಗೆಡಿಸಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/prajwal-revanna-birthday-fans-put-up-flexes-in-holenarasipura-despite-rape-conviction/articleshow-rttn085"/>
        </item>
        <item>
            <title><![CDATA[ಬಡವರ ಮಕ್ಕಳು ವಿಮಾನ ಹಾರಿಸೋದಕ್ಕೆ ಬೆಸ್ಟ್ ಚಾನ್ಸ್; ಮೈಸೂರು, ಹಾಸನದಲ್ಲೂ ಸ್ಯಾಟಲೈಟ್ ಫ್ಲೈಟ್ ಟ್ರೈನಿಂಗ್ ಸೆಂಟರ್]]></title>
            <link>https://kannada.asianetnews.com/karnataka-districts/karnataka-govt-plans-to-establish-satellite-base-flight-training-institutes-in-mysuru-and-hassan/articleshow-x4xeho2</link>
            <guid isPermaLink="true">https://kannada.asianetnews.com/karnataka-districts/karnataka-govt-plans-to-establish-satellite-base-flight-training-institutes-in-mysuru-and-hassan/articleshow-x4xeho2</guid>
            <pubDate>Fri, 24 Jul 2026 16:43:31 +0530</pubDate>
            <description><![CDATA[ರಾಜ್ಯ ಸರ್ಕಾರವು ಪೈಲಟ್ ಆಗುವ ಕನಸು ಹೊತ್ತ ಯುವಕ-ಯುವತಿಯರಿಗಾಗಿ ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಯನ್ನು ವಿಸ್ತರಿಸಲು ಮುಂದಾಗಿದೆ. ಈ ಯೋಜನೆಯ ಭಾಗವಾಗಿ ಮೈಸೂರು ಹಾಗೂ ಹಾಸನದಲ್ಲಿ 'ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ'ಗಳನ್ನು ಆರಂಭಿಸುವ ಮೂಲಕ, ಹೆಚ್ಚುತ್ತಿರುವ ಪೈಲಟ್&zwnj;ಗಳ ಬೇಡಿಕೆಯನ್ನು ಪೂರೈಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಯೋಜಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky9x7wqcvsxe1na53ztprkf6,imgname-mysuru-and-hassan-satellite-base-flight-training-institutes-1784891568875.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.24): ಆ&lt;/strong&gt;ಕಾಶದಲ್ಲಿ ವಿಮಾನ ಹಾರಿಸಬೇಕು, ಪೈಲಟ್ (Pilot) ಆಗಬೇಕು ಎಂಬ ಕನಸು ಹೊತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಲ್ಲಿರುವ (Bengaluru) ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಯ (Jakkur Government Flying Training School) ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿರುವ ಸರ್ಕಾರ, ಮೈಸೂರು (Mysuru) ಹಾಗೂ ಹಾಸನದಲ್ಲಿ (Hassan) 'ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ' (Satellite Base Training Institute) ಆರಂಭಿಸಲು ಚಿಂತನೆ ನಡೆಸಿದೆ.&lt;/p&gt;&lt;p&gt;ಈ ಕುರಿತು ಜಕ್ಕೂರು ಏರೋಡ್ರೋಮ್&zwnj;ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಸ್ಯಾಟಲೈಟ್ ಬೇಸ್ ತರಬೇತಿ?&lt;/strong&gt;&lt;/h2&gt;&lt;p&gt;ಮೈಸೂರಿನಲ್ಲಿ ಸ್ಯಾಟಲೈಟ್ ಬೇಸ್ ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವಿದ್ದು, ಪರಿಶೀಲನೆ ನಡೆಯುತ್ತಿದೆ. ತರಬೇತಿಯ ಅಂಗವಾಗಿ ವಿಮಾನ ಇಲ್ಲಿಂದ ಟೇಕ್ ಆಫ್ (Take-off) ಆದರೆ, ಮೈಸೂರಿನಲ್ಲಿ ಲ್ಯಾಂಡ್ ಆಗುತ್ತದೆ. ಇದನ್ನು ವಿಮಾನಯಾನ ಭಾಷೆಯಲ್ಲಿ 'ಟಚ್ ಆ್ಯಂಡ್ ಗೋ' (Touch and Go) ಎನ್ನಲಾಗುತ್ತದೆ. ಮೈಸೂರಿನಲ್ಲಿ ಇದಕ್ಕೆ ಪೂರಕ ವಾತಾವರಣವಿದ್ದು, ಇದೇ ಮಾದರಿಯಲ್ಲಿ ಹಾಸನದಲ್ಲೂ ಸ್ಯಾಟಲೈಟ್ ಬೇಸ್ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.&lt;/p&gt;&lt;h2&gt;&lt;strong&gt;ಇಲಾಖೆ ಹೆಸರು ಬದಲಾವಣೆ ಹಾಗೂ ಹೊಸ ಕೋರ್ಸ್&zwnj;ಗಳು!&lt;/strong&gt;&lt;/h2&gt;&lt;p&gt;ಪ್ರಸ್ತುತ ಇರುವ 'ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ'ಯನ್ನು, 'ಕ್ರೀಡಾ, ಯುವ ಸಬಲೀಕರಣ ಮತ್ತು ನಾಗರಿಕ ವಿಮಾನಯಾನ ಇಲಾಖೆ' (Civil Aviation Department) ಎಂದು ಮರುನಾಮಕರಣ ಮಾಡಲು ಕ್ಯಾಬಿನೆಟ್&zwnj;ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಇನ್ನು ಮೆಟ್ರೋಪಾಲಿಟನ್ ನಗರಗಳಲ್ಲಿ (Metropolitan cities) ವಿಮಾನ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ದಟ್ಟಣೆ ಹೆಚ್ಚಿರುವುದರಿಂದ, ವರ್ಟಿಕಲ್ ಟೇಕ್ ಆಫ್ (Vertical take-off) ತರಬೇತಿ ನೀಡುವ ಬಗ್ಗೆ ಚಿಂತನೆ ನಡೆದಿದೆ. ಜೊತೆಗೆ ಹೊಸದಾಗಿ 'ಸಿವಿಲ್ ಏರ್ ಕ್ರಾಫ್ಟ್ ಮೇಂಟೆನೆನ್ಸ್ ಅಕಾಡೆಮಿ' (Civil Aircraft Maintenance Academy) ಸ್ಥಾಪಿಸುವ ಉದ್ದೇಶವೂ ಇದೆ.&lt;/p&gt;&lt;h2&gt;&lt;strong&gt;ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಅಪ್&zwnj;ಡೇಟ್ಸ್:&lt;/strong&gt;&lt;/h2&gt;&lt;p&gt;1940ರಲ್ಲಿ ಆರಂಭವಾದ ಜಕ್ಕೂರು ತರಬೇತಿ ಶಾಲೆಯು ಸಾವಿರಾರು ಪೈಲಟ್&zwnj;ಗಳನ್ನು ಸೃಷ್ಟಿಸಿದೆ. ಇತ್ತೀಚೆಗೆ ರದ್ದಾಗಿದ್ದ ಶಾಲೆಯ ಲೈಸೆನ್ಸ್ ಅನ್ನು ಡಿಜಿಸಿಎ (DGCA - Directorate General of Civil Aviation) ಮುಂದಿನ ಐದು ವರ್ಷಗಳ ಕಾಲ ರಿನಿವಲ್ (License Renewal) ಮಾಡಿದೆ. ಪ್ರಸ್ತುತ ಇಲ್ಲಿ 5 ಏರ್&zwnj;ಕ್ರಾಫ್ಟ್&zwnj;ಗಳಿದ್ದು (Aircrafts), ಹೊಸದಾಗಿ ಮತ್ತೇ 2 ವಿಮಾನಗಳನ್ನು ಖರೀದಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.&lt;/p&gt;&lt;h2&gt;&lt;strong&gt;ಉದ್ಯೋಗಾವಕಾಶ ಮತ್ತು ತರಬೇತಿ ಶುಲ್ಕ :&lt;/strong&gt;&lt;/h2&gt;&lt;p&gt;ಭಾರತದಲ್ಲಿ ಇಂಡಿಗೋ (IndiGo) ಸೇರಿದಂತೆ ಹಲವು ಸಂಸ್ಥೆಗಳು ಸಾವಿರಾರು ಹೊಸ ವಿಮಾನಗಳನ್ನು ಖರೀದಿಸುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ದೇಶಾದ್ಯಂತ ಸುಮಾರು 35 ಸಾವಿರ ಪೈಲಟ್&zwnj;ಗಳ ಅಗತ್ಯವಿದೆ. ಹೀಗಾಗಿ ಇಲ್ಲಿ ತರಬೇತಿ ಪಡೆದವರಿಗೆ ನೂರಕ್ಕೆ ನೂರರಷ್ಟು ಉದ್ಯೋಗ (Job opportunities) ಗ್ಯಾರಂಟಿ.&lt;/p&gt;&lt;p&gt;ಪ್ರೈವೇಟ್ ಪೈಲಟ್ ಲೈಸೆನ್ಸ್ (PPL - Private Pilot License): 40 ಗಂಟೆಗಳ ಹಾರಾಟದ ತರಬೇತಿ ಅಗತ್ಯ. ಕನ್ನಡಿಗರಿಗೆ ಶುಲ್ಕ 10 ಲಕ್ಷ ರೂ. ಇದ್ದರೆ, ಹೊರಗಿನವರಿಗೆ 15 ಲಕ್ಷ ರೂ. ಇರಲಿದೆ.&lt;/p&gt;&lt;p&gt;ವಾಣಿಜ್ಯ ಪೈಲಟ್ ಲೈಸೆನ್ಸ್ (CPL - Commercial Pilot License): 180 ಗಂಟೆಗಳ ಹಾರಾಟದ ತರಬೇತಿ ಅಗತ್ಯ. ಕರ್ನಾಟಕದವರಿಗೆ 37 ಲಕ್ಷ ರೂ. ಮತ್ತು ಹೊರಗಿನವರಿಗೆ 42 ಲಕ್ಷ ರೂ. ಶುಲ್ಕ ನಿಗದಿಪಡಿಸಲಾಗಿದೆ.&lt;/p&gt;&lt;h2&gt;&lt;strong&gt;ರನ್&zwnj;ವೇ ವಿಸ್ತರಣೆ- ಬಿಲ್ಡರ್&zwnj;ಗಳಿಗೆ ಎಚ್ಚರಿಕೆ!&lt;/strong&gt;&lt;/h2&gt;&lt;p&gt;ಜಕ್ಕೂರು ಶಾಲೆಯ ರನ್&zwnj;ವೇ (Runway) ಪ್ರಸ್ತುತ 954 ಮೀಟರ್ ಇದ್ದು, ಇದನ್ನು 160 ಮೀಟರ್ ಹೆಚ್ಚಿಸಲು 10 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಸ್ತಾವನೆ ಇದೆ. &quot;ಶಾಲೆಯ ಸುತ್ತಮುತ್ತಲಿನ 2.7 ಕಿ.ಮೀ ವ್ಯಾಪ್ತಿಯಲ್ಲಿ 45 ಮೀಟರ್&zwnj;ಗಿಂತ ಎತ್ತರದ ಕಟ್ಟಡಗಳನ್ನು (High-rise buildings) ನಿರ್ಮಿಸುವಂತಿಲ್ಲ. ನಿಯಮ ಉಲ್ಲಂಘನೆಗೆ ನಾವು ಆಸ್ಪದ ನೀಡುವುದಿಲ್ಲ. ಎಷ್ಟೇ ಒತ್ತಡ ಬಂದರೂ, ಸಾವಿರಾರು ಜನರಿಗೆ ಉದ್ಯೋಗ ನೀಡುವ ಈ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ&quot; ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-govt-plans-to-establish-satellite-base-flight-training-institutes-in-mysuru-and-hassan/articleshow-x4xeho2"/>
        </item>
        <item>
            <title><![CDATA[ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿ ಬಿಜೆಪಿ-ಕಾಂಗ್ರೆಸ್ ಜಂಗೀ ಕುಸ್ತಿ; ಹಾಸನದಲ್ಲಿ ಮಾತ್ರ ಭರ್ಜರಿ ದೋಸ್ತಿ!]]></title>
            <link>https://kannada.asianetnews.com/karnataka-districts/congress-mp-shreyas-patel-praises-bjp-leader-preetham-gowda-in-hassan-event/articleshow-xic7m6i</link>
            <guid isPermaLink="true">https://kannada.asianetnews.com/karnataka-districts/congress-mp-shreyas-patel-praises-bjp-leader-preetham-gowda-in-hassan-event/articleshow-xic7m6i</guid>
            <pubDate>Sun, 09 Aug 2026 22:24:03 +0530</pubDate>
            <description><![CDATA[ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ವೈರತ್ವವಿದ್ದರೂ, ಹಾಸನದಲ್ಲಿ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಮತ್ತು ಬಿಜೆಪಿ ನಾಯಕ ಪ್ರೀತಂಗೌಡ ತಮ್ಮ ಪಕ್ಷದ ಗಡಿ ಮೀರಿ ಆತ್ಮೀಯತೆ ಪ್ರದರ್ಶಿಸಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಪ್ರೀತಂಗೌಡರ ಅಭಿವೃದ್ಧಿ ಕಾರ್ಯಗಳನ್ನು ಶ್ರೇಯಸ್ ಪಟೇಲ್ ಮುಕ್ತವಾಗಿ ಶ್ಲಾಘಿಸಿದ್ದು, ಜಿಲ್ಲೆಯಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzkq2mj1vcf4f3g541x2z8vg,imgname-congress-mp-shreyas-patel-bjp-leader-preetham-gowda-1786294391361.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಆ.09): ರಾ&lt;/strong&gt;ಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ರಾಜಕೀಯ ಕಾದಾಟ ನಡೆಯುತ್ತಿದ್ದರೆ, ಹಾಸನ ಜಿಲ್ಲೆಯಲ್ಲಿ ಮಾತ್ರ ತೀರಾ ಭಿನ್ನ ಹಾಗೂ ಕುತೂಹಲಕಾರಿ ರಾಜಕೀಯ ಸಮೀಕರಣ ಕಂಡುಬರುತ್ತಿದೆ. ಪಕ್ಷದ ಗೆರೆಗಳನ್ನು ಮೀರಿ ಕಾಂಗ್ರೆಸ್&zwnj;ನ ನವ ಉದಯೋನ್ಮುಖ ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಅವರ ನಡುವಿನ ಆತ್ಮೀಯ ದೋಸ್ತಿ ಮತ್ತೊಮ್ಮೆ ಬಹಿರಂಗವಾಗಿ ಸಾಬೀತಾಗಿದೆ.&lt;/p&gt;&lt;p&gt;ಹಾಸನ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಈ ಇಬ್ಬರೂ ಮುಖಂಡರು ಭಾಗವಹಿಸಿದ್ದರು. ವೇದಿಕೆಯಲ್ಲಿ ಅಕ್ಕಪಕ್ಕದಲ್ಲೇ ಆಸೀನರಾಗಿದ್ದ ಇಬ್ಬರೂ ನಾಯಕರು ಸುದೀರ್ಘ ಸಮಯ ಪಿಸುಪಿಸು ಮಾತನಾಡುತ್ತಾ, ಅತ್ಯಂತ ಆತ್ಮೀಯವಾಗಿ ಕಳೆಯುವ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ್ದವರ ಗಮನ ಸೆಳೆದರು.&lt;/p&gt;&lt;h2&gt;&lt;strong&gt;ಪ್ರೀತಂಗೌಡ ಕಾರ್ಯವೈಖರಿಗೆ ಸಂಸದ ಶ್ರೇಯಸ್ ಶಹಬ್ಬಾಸ್:&lt;/strong&gt;&lt;/h2&gt;&lt;p&gt;ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಶ್ರೇಯಸ್ ಎಂ. ಪಟೇಲ್, ಪ್ರೀತಂಗೌಡ್ರು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಕ್ತವಾಗಿ ಪ್ರಶಂಸಿಸಿದರು. &quot;ಪಕ್ಷಗಳು ಬೇರೆಬೇರೆಯಾಗಿರಬಹುದು, ಆದರೆ ಸಮಾಜದ ಹಿತಕ್ಕಾಗಿ ಶ್ರಮಿಸಿದವರನ್ನು ಪಕ್ಷಾತೀತವಾಗಿ ಗುರುತಿಸುವುದು ನಮ್ಮ ಕರ್ತವ್ಯ. ಪ್ರೀತಂಗೌಡರು ಹಾಸನ ನಗರದ ಶಾಸಕರಾಗಿದ್ದಾಗ ನಗರದ ಸ್ವಚ್ಛತೆ, ಸೌಂದರ್ಯೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ&quot; ಎಂದು ಬಹಿರಂಗವಾಗಿಯೇ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು.&lt;/p&gt;&lt;h3&gt;&lt;strong&gt;ಲೋಕಸಭಾ ಚುನಾವಣೆಯ ನಂತರ ಗಟ್ಟಿಯಾದ ಸಂಬಂಧ:&lt;/strong&gt;&lt;/h3&gt;&lt;p&gt;ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಿಂದಲೂ ಈ ಇಬ್ಬರೂ ನಾಯಕರ ನಡುವೆ ಸೌಹಾರ್ದಯುತ ಬಾಂಧವ್ಯ ಬೆಳೆದುಬಂದಿದೆ. ಚುನಾವಣೆ ಮುಗಿದ ಮೇಲೆಯೂ ಅವಕಾಶ ಸಿಕ್ಕಾಗಲೆಲ್ಲಾ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಪರಸ್ಪರ ಪ್ರಶಂಸಿಸಿಕೊಳ್ಳುವ ಮೂಲಕ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದಾರೆ. ರಾಜ್ಯದಲ್ಲಿ ರಾಜಕೀಯ ವೈರತ್ವ ಉನ್ನತ ಮಟ್ಟದಲ್ಲಿದ್ದರೂ, ಹಾಸನದಲ್ಲಿ ಅಭಿವೃದ್ಧಿ ಹಾಗೂ ಸಮಾಜದ ಹಿತಾಸಕ್ತಿಗಾಗಿ ಇಬ್ಬರೂ ಯುವ ನಾಯಕರು ತೋರುತ್ತಿರುವ ಈ ಸೌಹಾರ್ದತೆ ಸ್ಥಳೀಯವಾಗಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/congress-mp-shreyas-patel-praises-bjp-leader-preetham-gowda-in-hassan-event/articleshow-xic7m6i"/>
        </item>
        <item>
            <title><![CDATA[ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!]]></title>
            <link>https://kannada.asianetnews.com/crime/hassan-couple-death-missing-wife-found-dead-a-week-after-husbands-su-icide-gvd-videoshow-xng2hdz</link>
            <guid isPermaLink="true">https://kannada.asianetnews.com/crime/hassan-couple-death-missing-wife-found-dead-a-week-after-husbands-su-icide-gvd-videoshow-xng2hdz</guid>
            <pubDate>Sat, 08 Aug 2026 19:31:22 +0530</pubDate>
            <description><![CDATA[&lt;p&gt;ಮೊನ್ನೆ ಹಾಸನದ ಒಂದು ಸ್ಟೋರಿ ಹೇಳಿದ್ವಿ. ಬೇಕರಿ ಇಟ್ಟುಕೊಂಡಿದ್ದ ಕೋಟ್ಯಾಧೀಶ ಸೂಸೈಡ್​ ಮಾಡಿಕೊಂಡ ಅಂತ. ಆವತ್ತು ಆತ ಒಂದು ಸೆಲ್ಫಿ ವಿಡಿಯೋ ಮಾಡಿಟ್ಟು ತನ್ನದೇ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದ.&lt;/p&gt;]]></description>
            <media:content url="https://geo.dailymotion.com/player/x1tbu.html?video=xavze02" medium="video" height="768" width="1024"/>
            <content:encoded><![CDATA[&lt;p&gt;ಮೊನ್ನೆ ಹಾಸನದ ಒಂದು ಸ್ಟೋರಿ ಹೇಳಿದ್ವಿ. ಬೇಕರಿ ಇಟ್ಟುಕೊಂಡಿದ್ದ ಕೋಟ್ಯಾಧೀಶ ಸೂಸೈಡ್​ ಮಾಡಿಕೊಂಡ ಅಂತ. ಆವತ್ತು ಆತ ಒಂದು ಸೆಲ್ಫಿ ವಿಡಿಯೋ ಮಾಡಿಟ್ಟು ತನ್ನದೇ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದ. ಆತ ಸತ್ತ ನಂತರ ಹೆಂಡತಿಯೂ ನಾಪತ್ತೆಯಾಗಿದ್ದಳು. ಇನ್ನೂ ಕೊನೆ ವಿಡಿಯೋದಲ್ಲಿ ಆತ ತನ್ನ ಹೆಂಡತಿಯನ್ನ ಹುಡುಕಬೇಡಿ ಅಂತಲೂ ಹೇಳಿದ್ದ. ಆದ್ರೆ ಇವತ್ತು ಆ ಕೇಸ್​ಗೆ ಮತ್ತೊಂದು ಟ್ವಿಸ್ಟ್​​ ಸಿಕ್ಕಿದೆ. ಆವತ್ತು ನಾಪತ್ತೆಯಾಗಿದ್ದ ಹೆಂಡತಿ ಇವತ್ತು ಸಿಕ್ಕಿದ್ದಾಳೆ. ಅದೂ ಕೂಡ ಹೆಣವಾಗಿ. ಅಷ್ಟಕ್ಕೂ ಆ ಗಂಡ ಹೆಂಡತಿ ಇಬ್ಬರಿಗೂ ಏನಾಗಿತ್ತು.? ಆ ರಾತ್ರಿ ಹಾಸನದಲ್ಲಿ ನಡೆದಿದ್ದೇನು.?&lt;/p&gt;&lt;p&gt;ಒಂದು ಮುದ್ದು ಸಂಸಾರದ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್​.ಐ.ಆರ್​​. ರಘು ಯಾರ ಬಳಿಯೂ ತನ್ನ ಫ್ಯಾಮಿಲಿ ಮ್ಯಾಟರ್​ ಅನ್ನ ಹೆಳಿಕೊಂಡಿರಲಿಲ್ಲ. ಆದ್ರೆ ತನ್ನ ಕೊನೆಯ ವಿಡಿಯೋದಲ್ಲಿ ತನ್ನ ಹೆಂಡತಿಯ ಇಂಚಿಂಚು ಮಾಹಿತಿಯನ್ನೂ ಕೊಟ್ಟಿದ್ದ. ಇನ್ನೂ ಪೊಲೀಸರು ಈತ ಸತ್ತ ಮೇಲೆ ಆಕೆಯನ್ನ ಹುಡುಕಾಡಿದ್ರು. ಬಟ್​​ ಆಕೆ ಎಲ್ಲೂ ಸಿಗೋದಿಲ್ಲ. ಆದ್ರೆ ಒಂದು ವಾರದ ನಂತರ ಇವತ್ತು ಆಕೆಯ ಮೃತದೇಹ ಸಿಕ್ಕಿದೆ. ಹಾಗಾದ್ರೆ ರಘುನೇ ಆಕೆಯನ್ನ ಕೊಂದುಬಿಟ್ಟನಾ.?&lt;/p&gt;&lt;p&gt;ಆವತ್ತು ಮಧ್ಯರಾತ್ರಿಯಲ್ಲಿ ನಡುರಸ್ತೆಯಲ್ಲಿ ನಡೆದಿದ್ದೇನು.? ಊರಿಗೆ ಹೋಗಿ ಬರೋಣ ಅಂತ ಕರೆದುಕೊಂಡು ಹೋದ ಗಂಡ ಮಾರ್ಗ ಮಧ್ಯೆಯೇ ಅವಳ ಕತ್ತು ಹಿಸುಕಿದ ನಂತರ ತನ್ನ ಊರಿಗೆ ತಗೆದುಕೊಂಡು ಬಂದು ಹೆಣವನ್ನ ಎಸೆದು ಅಪ್ಪನಿಗೆ ಕಾಲ್​ ಮಾಡಿದ. ಬಳಿಕ ವಿಡಿಯೋ ಮಾಡಿ ವರ್ಷಗಳಿಂದ ಬಚ್ಚಿಟ್ಟಿದ್ದ ಎಲ್ಲಾ ಕಹಿ ಸತ್ಯವನ್ನ ರೆಕಾರ್ಡ್​ ಮಾಡಿದ. ಬಳಿಕ ತನ್ನದೇ ಜಮೀನಿಗೆ ಹೋಗಿ ನೇಣಿಗೆ ಶರಣಾಗಿಬಿಟ್ಟ. ಹೆತ್ತವರು ಮಗಳು ಹಾಗಲ್ಲ ಅಂತಿದ್ದಾರೆ. ಗಂಡ ತನ್ನ ಹೆಂಡತಿ ಸರಿ ಇರಲಿಲ್ಲ ಅಂತ ನೇಣು ಹಾಕಿಕೊಂಡಿದ್ದಾನೆ. ಆದ್ರೆ ಒಂದು ಸಂಸಾರದಲ್ಲಿ ಮೂರನೇ ವ್ಯಕ್ತಿ ಎಂಟ್ರಿ ಆದ್ರೆ ಏನಾಗುತ್ತೆ.&lt;/p&gt;]]></content:encoded>
            <category>hassan</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/hassan-couple-death-missing-wife-found-dead-a-week-after-husbands-su-icide-gvd-videoshow-xng2hdz"/>
        </item>
        <item>
            <title><![CDATA[ಚೆಂದದ ಊರು, ಆದ್ರೆ ಮೊಬೈಲ್ ನೆಟ್‌ವರ್ಕ್ ಇಲ್ಲ; ಕಾಲ್ ಮಾಡ್ಲು 1.5 km ದೂರ ಬರ್ಬೇಕು]]></title>
            <link>https://kannada.asianetnews.com/karnataka-districts/life-in-byadane-village-has-been-disrupted-for-the-past-20-years-without-mobile-network/articleshow-ybwk7q4</link>
            <guid isPermaLink="true">https://kannada.asianetnews.com/karnataka-districts/life-in-byadane-village-has-been-disrupted-for-the-past-20-years-without-mobile-network/articleshow-ybwk7q4</guid>
            <pubDate>Sat, 22 Aug 2026 10:37:10 +0530</pubDate>
            <description><![CDATA[&lt;p&gt;ಬ್ಯಾದನೆ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಮೊಬೈಲ್ ನೆಟ್&zwnj;ವರ್ಕ್ ಇಲ್ಲದೆ ಜನಜೀವನ ಅಸ್ತವ್ಯಸ್ತವಾಗಿದೆ. ತುರ್ತು ಸೇವೆ, ವಿದ್ಯಾರ್ಥಿಗಳ ಶಿಕ್ಷಣ ಮತ್ತು ದೈನಂದಿನ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಮೊಬೈಲ್ ಟವರ್ ಸ್ಥಾಪನೆಗೆ ಆಗ್ರಹಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0j4zj3nyp1dnevjmmyewk20,imgname-byadane-1787315603573.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಸಕಲೇಶಪುರ ತಾಲೂಕಿನ ಗಡಿಭಾಗದಲ್ಲಿರುವ ಬ್ಯಾದನೆ ಗ್ರಾಮದಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಮೊಬೈಲ್ ನೆಟ್&zwnj;ವರ್ಕ್&zwnj; ಸಂಪರ್ಕ ಸಮರ್ಪಕವಾಗಿ ಲಭ್ಯವಾಗದೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.&lt;/p&gt;&lt;p&gt;ಸುಮಾರು 150 ಕುಟುಂಬಗಳಿದ್ದು, 600ಕ್ಕೂ ಹೆಚ್ಚು ಜನರು ವಾಸಿಸುತ್ತಿರುವ ಗ್ರಾಮದಲ್ಲಿ ಇಂದಿಗೂ ಸಮರ್ಪಕ ಮೊಬೈಲ್ ಸಂಪರ್ಕ ವ್ಯವಸ್ಥೆ ಇಲ್ಲದಂತಾಗಿದೆ. ಗ್ರಾಮದಲ್ಲಿ ಮೊಬೈಲ್ ನೆಟ್&zwnj;ವರ್ಕ್ ಸಂಪರ್ಕದ ಕೊರತೆಯಿಂದಾಗಿ ದಿನನಿತ್ಯದ ಹಲವು ಕೆಲಸಗಳಿಗೆ ಗ್ರಾಮಸ್ಥರು ಪರದಾಡುವಂತಾಗಿದೆ. ಯಾರಿಗಾದರೂ ದೂರವಾಣಿ ಕರೆ ಮಾಡಬೇಕಾದರೆ ಅಥವಾ ಮೊಬೈಲ್ ಮೂಲಕ ಅಗತ್ಯ ಮಾಹಿತಿ ಪಡೆಯಬೇಕಾದರೆ ಗ್ರಾಮದಿಂದ ಸುಮಾರು ಒಂದರಿಂದ ಎರಡು ಕಿ. ಮೀ. ದೂರ ತೆರಳಿದ ನಂತರವಷ್ಟೇ ನೆಟ್&zwnj;ವರ್ಕ್ ಲಭ್ಯವಾಗುತ್ತದೆ. ಇದರಿಂದ ವಯೋವೃದ್ಧರು, ಮಹಿಳೆಯರು ಹಾಗೂ ಇತರ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಗ್ರಾಮದಿಂದ ದೂರ ಹೋದ್ರೆ ಮಾತ್ರ ಸಿಗುವ ನೆಟ್&zwnj;ವರ್ಕ್&amp;nbsp;&lt;/strong&gt;&lt;/h2&gt;&lt;p&gt;ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ನೆಟ್&zwnj;ವರ್ಕ್ ಸಮಸ್ಯೆ ಹೇಳತೀರದು. ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದಾಗ, ಅಪಘಾತ ಸಂಭವಿಸಿದಾಗ ಅಥವಾ ಇತರ ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣ ಆಂಬ್ಯುಲೆನ್ಸ್, ಆಸ್ಪತ್ರೆ, ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗದೆ ಸಮಸ್ಯೆ ಎದುರಾಗುತ್ತಿದೆ. ತುರ್ತು ಸಹಾಯಕ್ಕಾಗಿ ದೂರವಾಣಿ ಕರೆ ಮಾಡಬೇಕಾದ ಸಂದರ್ಭದಲ್ಲೂ ನೆಟ್&zwnj;ವರ್ಕ್ ಇರುವ ಪ್ರದೇಶಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.&lt;/p&gt;&lt;p&gt;ಇತ್ತೀಚಿನ ವರ್ಷಗಳಲ್ಲಿ ಬ್ಯಾದನೆ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳವೂ ಹೆಚ್ಚಾಗಿದೆ. ಕಾಡಾನೆಗಳು ಗ್ರಾಮಗಳತ್ತ ಬಂದ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಹಾಗೂ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡುವುದು ಅಗತ್ಯವಾಗಿರುತ್ತದೆ. ಆದರೆ ಮೊಬೈಲ್ ನೆಟ್&zwnj;ವರ್ಕ್ ಇಲ್ಲದಿರುವುದರಿಂದ ಇಂತಹ ಸಂದರ್ಭದಲ್ಲಿ ತಕ್ಷಣ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದೆ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ವಿದ್ಯಾರ್ಥಿಗಳಿಗೂ ತೊಂದರೆ&lt;/strong&gt;&lt;/h3&gt;&lt;p&gt;ಮೊಬೈಲ್ ನೆಟ್&zwnj;ವರ್ಕ್ ಕೊರತೆಯಿಂದ ಗ್ರಾಮದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೊಂದರೆಯಾಗಿದೆ. ಕಾಲೇಜು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆನ್&zwnj;ಲೈನ್ ತರಗತಿಗಳು, ಪರೀಕ್ಷಾ ವೇಳಾಪಟ್ಟಿ, ಶೈಕ್ಷಣಿಕ ಸೂಚನೆಗಳು, ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಆನ್&zwnj;ಲೈನ್ ಸೇವೆಗಳನ್ನು ಬಳಸಲು ನೆಟ್&zwnj;ವರ್ಕ್ ಇರುವ ಪ್ರದೇಶಗಳಿಗೆ ತೆರಳಬೇಕಾಗಿದೆ. ಗ್ರಾಮದಲ್ಲಿಯೇ ಮೊಬೈಲ್ ಸಂಪರ್ಕ ಲಭ್ಯವಿದ್ದರೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಗ್ರಾಮಸ್ಥರ ದೈನಂದಿನ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ನೆಟ್&zwnj;ವರ್ಕ್ ಕೇವಲ ದೂರವಾಣಿ ಕರೆಗಳಿಗಷ್ಟೇ ಸೀಮಿತವಾಗಿಲ್ಲ. ಬ್ಯಾಂಕಿಂಗ್, ಆನ್&zwnj;ಲೈನ್ ಪಾವತಿ, ಸರ್ಕಾರಿ ಸೇವೆಗಳು, ಆರೋಗ್ಯ ಸೇವೆಗಳು, ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಇಂಟರ್&zwnj;ನೆಟ್ ಅಗತ್ಯವಾಗಿದೆ. ಆದರೆ ಗ್ರಾಮದಲ್ಲಿ ನೆಟ್&zwnj;ವರ್ಕ್ ಸಮಸ್ಯೆಯಿಂದಾಗಿ ಈ ಎಲ್ಲ ಸೇವೆಗಳನ್ನು ಪಡೆಯಲು ಗ್ರಾಮಸ್ಥರು ಪರದಾಡುವಂತಾಗಿದೆ.&lt;/p&gt;&lt;h3&gt;&lt;strong&gt;ಸಿಕ್ಕಿಲ್ಲ ಶಾಶ್ವತ ಪರಿಹಾರ&lt;/strong&gt;&lt;/h3&gt;&lt;p&gt;ಕಳೆದ ಎರಡು ದಶಕಗಳಿಂದ ಸಮಸ್ಯೆ ಮುಂದುವರಿದಿದ್ದರೂ ಇದುವರೆಗೆ ಶಾಶ್ವತ ಪರಿಹಾರ ದೊರಕಿಲ್ಲ. ಹೀಗಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮೊಬೈಲ್ ಸೇವಾಸಂಸ್ಥೆಗಳು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಗ್ರಾಮದಲ್ಲಿ ಮೊಬೈಲ್ ಟವರ್&zwnj; ಸ್ಥಾಪಿಸುವುದು ಅಥವಾ ಪರ್ಯಾಯ ತಾಂತ್ರಿಕ ವ್ಯವಸ್ಥೆ ಕಲ್ಪಿಸುವ ಮೂಲಕ ಸಮರ್ಪಕ ಮೊಬೈಲ್ ಹಾಗೂ ಇಂಟರ್&zwnj;ನೆಟ್ ಸಂಪರ್ಕ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Vande Bharat Express: ಸಕಲೇಶಪುರದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ ಬೆನ್ನಲ್ಲೇ ಸಿಕ್ಕಿತು ಮತ್ತೊಂದು ಗುಡ್&zwnj;ನ್ಯೂಸ್&lt;/strong&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/life-in-byadane-village-has-been-disrupted-for-the-past-20-years-without-mobile-network/articleshow-ybwk7q4"/>
        </item>
        <item>
            <title><![CDATA[Police: ಲಂಚದ ಹಣ ಕೈಸೇರುತ್ತಿದ್ದಂತೆ ರೇಡ್; ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಮಂಜುನಾಥ್!]]></title>
            <link>https://kannada.asianetnews.com/karnataka-districts/haleebeedu-psi-manjunath-caught-by-lokayukta-while-accepting-bribe-bmk/articleshow-ze42wu1</link>
            <guid isPermaLink="true">https://kannada.asianetnews.com/karnataka-districts/haleebeedu-psi-manjunath-caught-by-lokayukta-while-accepting-bribe-bmk/articleshow-ze42wu1</guid>
            <pubDate>Thu, 13 Aug 2026 20:22:41 +0530</pubDate>
            <description><![CDATA[&lt;p&gt;ಹಾಸನ ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣೆಯ ಪಿಎಸ್&zwnj;ಐ ಮಂಜುನಾಥ್, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರರ ದೂರಿನ ಮೇರೆಗೆ ಪಕ್ಕಾ ಪ್ಲಾನ್ ಮಾಡಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಲಂಚದ ಹಣದ ಸಮೇತ ಅಧಿಕಾರಿಯನ್ನು ರೆಡ್-ಹ್ಯಾಂಡಾಗಿ ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzxsprebtqsx4fyrx2ergs9x,imgname-police-1-1786632692170.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನ; ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಕಟ್ಟುನಿಟ್ಟಿನ ಸಮರವನ್ನು ಮುಂದುವರಿಸಿದ್ದು, ಹಾಸನ ಜಿಲ್ಲೆಯಲ್ಲಿ ಮತ್ತೊಂದು ದೊಡ್ಡ 'ಲೋಕಾ' ಕಾರ್ಯಾಚರಣೆ ನಡೆದಿದೆ. ದೂರುದಾರರಿಂದ ಹಸನ್ಮುಖಿಯಾಗಿ ಬರೋಬ್ಬರಿ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಹಳೇಬೀಡು ಪೊಲೀಸ್ ಠಾಣೆಯ ಸಬ್&zwnj;ಇನ್&zwnj;ಸ್ಪೆಕ್ಟರ್ (PSI) ಮಂಜುನಾಥ್ ಅವರು ಲೋಕಾಯುಕ್ತ ಪೊಲೀಸರ ರೆಡ್-ಹ್ಯಾಂಡ್ ಬಲೆಗೆ ಬಿದ್ದಿದ್ದಾರೆ. ಖಾಕಿ ಉಡುಪಿನಲ್ಲಿದ್ದುಕೊಂಡೇ ಲಂಚದಾಸೆಗೆ ಬಿದ್ದು ಕಾನೂನು ಬಾಹಿರವಾಗಿ ಹಣ ಪಡೆಯುತ್ತಿದ್ದ ಅಧಿಕಾರಿಯೊಬ್ಬರು ಈಗ ಕಂಬಿ ಎಣಿಸುವಂತಾಗಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ; ಏನಿದು ಘಟನೆ?&lt;/strong&gt;&lt;/h2&gt;&lt;p&gt;ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಐತಿಹಾಸಿಕ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ಅವರು ಸಬ್&zwnj;ಇನ್&zwnj;ಸ್ಪೆಕ್ಟರ್ (PSI) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟ್ಟದಹಳ್ಳಿ ಗ್ರಾಮದ ನಿವಾಸಿ ಸಂತೋಷ್ ಎಂಬುವವರಿಗೆ ಸಂಬಂಧಿಸಿದ ವಿಷಯವೊಂದರಲ್ಲಿ ಅಥವಾ ಪ್ರಕರಣವೊಂದರ ಸಹಾಯಕ್ಕಾಗಿ ಪಿಎಸ್&zwnj;ಐ ಮಂಜುನಾಥ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ. ಕೆಲಸ ಮಾಡಿಕೊಡಲು ಪಿಎಸ್&zwnj;ಐ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಬೇಸತ್ತ ಘಟ್ಟದಹಳ್ಳಿಯ ಸಂತೋಷ್, ಭ್ರಷ್ಟ ಅಧಿಕಾರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದರು. ಈ ಸಂಬಂಧ ಅವರು ತಡಮಾಡದೇ ಹಾಸನ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಅಧಿಕೃತವಾಗಿ ದೂರು ನೀಡಿದ್ದರು.&lt;/p&gt;&lt;h3&gt;&lt;strong&gt;ಲೋಕಾಯುಕ್ತ ಮಾಸ್ಟರ್ ಪ್ಲಾನ್: ರೆಡ್-ಹ್ಯಾಂಡ್ ರೇಡ್!&lt;/strong&gt;&lt;/h3&gt;&lt;p&gt;ದೂರುದಾರ ಸಂತೋಷ್ ಅವರಿಂದ ಸತ್ಯಾಸತ್ಯತೆ ಅರಿತ ಲೋಕಾಯುಕ್ತ ಪೊಲೀಸರು, ಪಿಎಸ್&zwnj;ಐ ಮಂಜುನಾಥ್ ಅವರನ್ನು ಹಿಡಿಯಲು ಪಕ್ಕಾ ಸ್ಕೆಚ್ ಹಾಕಿದರು. ಪ್ಲಾನ್ ಪ್ರಕಾರ, ಸಂತೋಷ್ ಅವರು 20,000 ರೂಪಾಯಿ ಲಂಚದ ಹಣವನ್ನು ನೀಡಲು ಹಳೇಬೀಡು ಠಾಣೆಯ ವ್ಯಾಪ್ತಿಯಲ್ಲಿ ಪಿಎಸ್&zwnj;ಐ ಅವರನ್ನು ಭೇಟಿಯಾಗಿದ್ದರು. ಮಂಜುನಾಥ್ ಅವರು ಸಂತೋಷ್ ಅವರಿಂದ 20 ಸಾವಿರ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದಂತೆಯೇ, ಸುತ್ತಲೂ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಪೊಲೀಸರು ಕ್ಷಣಾರ್ಧದಲ್ಲಿ ದಾಳಿ (Trap) ನಡೆಸಿದರು. ಪಿಎಸ್&zwnj;ಐ ಮಂಜುನಾಥ್ ಚೇತರಿಸಿಕೊಳ್ಳುವಷ್ಟರಲ್ಲಿ, ಲಂಚದ ಹಣದೊಂದಿಗೆ ಅವರನ್ನು ರೆಡ್-ಹ್ಯಾಂಡಾಗಿ ವಶಕ್ಕೆ ಪಡೆದರು.&lt;/p&gt;&lt;h3&gt;&lt;strong&gt;ಲಂಚದ ಹಣ ಜಪ್ತಿ, ಪಿಎಸ್&zwnj;ಐ ಬಂಧನ!&lt;/strong&gt;&lt;/h3&gt;&lt;p&gt;ದಾಳಿಯ ವೇಳೆ ಪಿಎಸ್&zwnj;ಐ ಮಂಜುನಾಥ್ ಅವರಿಂದ ಲಂಚವಾಗಿ ಪಡೆದ 20,000 ರೂಪಾಯಿ ನಗದು ಹಣವನ್ನು ಲೋಕಾಯುಕ್ತ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ತಕ್ಷಣವೇ ಮಂಜುನಾಥ್ ಅವರನ್ನು ವಶಕ್ಕೆ ಪಡೆದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಚೇರಿ ಹಾಗೂ ಠಾಣೆಯ ದಾಖಲೆಗಳ ಮಹಜರು ಪ್ರಕ್ರಿಯೆ ನಡೆಸಿದರು. ಬಂಧಿತ ಪಿಎಸ್&zwnj;ಐ ಮಂಜುನಾಥ್ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/haleebeedu-psi-manjunath-caught-by-lokayukta-while-accepting-bribe-bmk/articleshow-ze42wu1"/>
        </item>
        <item>
            <title><![CDATA[ತನ್ನಿಚ್ಚೆಯಂತೆಯೇ ರಂಗನಾಥನ ತಪ್ಪಲಲ್ಲಿ ಮಣ್ಣಾದ ಚೆನ್ನಮ್ಮ, ಆಕೆ ಅನ್ನಪೂರ್ಣೆ ನಗುತ್ತಲೇ ವಿದಾಯ ಹೇಳಿದ್ದಾಳೆ: ದೇವೇಗೌಡ]]></title>
            <link>https://kannada.asianetnews.com/state/chennamma-funeral-husband-hd-devegowda-and-son-hd-kumaraswamy-emotional-speech-buried-with-state-honors-in-hassan-gdp/articleshow-zot0om2</link>
            <guid isPermaLink="true">https://kannada.asianetnews.com/state/chennamma-funeral-husband-hd-devegowda-and-son-hd-kumaraswamy-emotional-speech-buried-with-state-honors-in-hassan-gdp/articleshow-zot0om2</guid>
            <pubDate>Mon, 20 Jul 2026 18:18:12 +0530</pubDate>
            <description><![CDATA[ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯು ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತಮ್ಮ ಪತ್ನಿ 'ಅನ್ನಪೂರ್ಣೆ' ಎಂದು ಭಾವುಕರಾಗಿ ಸ್ಮರಿಸಿದ ದೇವೇಗೌಡರು, ಅವರ ಯಶಸ್ಸಿನ ಹಿಂದಿನ ಶಕ್ತಿಯನ್ನು ಕೊಂಡಾಡಿದರು. ಕುಟುಂಬಸ್ಥರು, ರಾಜಕೀಯ ಗಣ್ಯರು ಹಾಗೂ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು.]]></description>
            <media:content url="https://static.asianetnews.com/images/w-1280,h-720,format-jpg,imgid-01kxyjg9we215yna5vxtyhz5jd,imgname-tearful-goodbye-to-chennamma-1784511211385.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಹೊಳೆನರಸೀಪುರ): &lt;/strong&gt;ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ, ಸರಳತೆಯ ಸಾಕಾರಮೂರ್ತಿ ಶ್ರೀಮತಿ ಚೆನ್ನಮ್ಮ &amp;nbsp;ದೇವೇಗೌಡ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಬಳಿಯ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು. ಈ ಮೂಲಕ ಚೆನ್ನಮ್ಮ ಮರಳಿ ಭೂ ತಾಯಿ ಒಡಲು ಸೇರಿದರು. ಅಂತಿಮ ಸಂಸ್ಕಾರದ ವೇಳೆ 4 ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ನೆಂಟರು, ಕುಟುಂಬಸ್ಥರು. ರಾಜಕೀಯ ನಾಯಕರು ಸೇರಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಊರ ಮತ್ತು ಪರವೂರು ಜನ ಜಾತಿ ಬೇದವೆನ್ನದೆ ನೆರೆದಿದ್ದರು. ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಪಾರ್ಥಿವ ಶರೀರವನ್ನು ತರುವಾಗಲೂ ಮಾರ್ಗದುದ್ದಕ್ಕೂ ಸಹಸ್ರಾರು ಅಭಿಮಾನಿಗಳು ಭಾವುಕರಾಗಿ ತಮ್ಮ ನೆಚ್ಚಿನ 'ಅಮ್ಮ'ನಿಗೆ ಅಂತಿಮ ನಮನ ಸಲ್ಲಿಸಿದರು.&lt;/p&gt;&lt;h2&gt;&quot;ನನ್ನ ಹೆಂಡತಿ ಅನ್ನಪೂರ್ಣೆ, ಆಕೆ ನಗುನಗುತ್ತಲೇ ವಿದಾಯ ಹೇಳಿದ್ದಾಳೆ&quot; - ಎಚ್.ಡಿ. ದೇವೇಗೌಡ&lt;/h2&gt;&lt;p&gt;ಅಂತ್ಯಕ್ರಿಯೆಯ ವಿಧಿವಿಧಾನಗಳ ಬಳಿಕ ಭಾವುಕರಾಗಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ತಮ್ಮ ಸುದೀರ್ಘ 72 ವರ್ಷಗಳ ದಾಂಪತ್ಯದ ಒಡನಾಟ ಹಾಗೂ ಪತ್ನಿಯ ಮೌನ ಹೋರಾಟವನ್ನು ನೆನೆದು ಕಣ್ಣೀರು ಹಾಕಿದರು. ಹರದನಹಳ್ಳಿ ಬೆಟ್ಟದ ರಂಗನಾಥಸ್ವಾಮಿಯ ಆಶೀರ್ವಾದದಿಂದ ನಾನು ದೇಶದ ಪ್ರಧಾನಮಂತ್ರಿಯಾಗಲು ಸಾಧ್ಯವಾಯಿತು. ಆ ಉನ್ನತ ಸ್ಥಾನದ ಯಶಸ್ಸಿನ ಹಿಂದೆ ನನ್ನ ಅಗಲಿ ಹೋಗಿರುವ ಹೆಂಡತಿ ಚೆನ್ನಮ್ಮಳ ಶ್ರಮ ಹಾಗೂ ತ್ಯಾಗವೂ ಅಡಗಿದೆ. ನನ್ನ ಹೆಂಡತಿ ಅನ್ನಪೂರ್ಣೆ. ನನ್ನ ಶ್ರೀಮತಿ ಆತ್ಮಕ್ಕೆ ಶಾಂತಿ ಇದೆ. ನಗು ನಗುತಾ ಹೋಗ್ತಾರೆ. ನನ್ನ ಮಕ್ಕಳು ಮತ್ತು ಅಳಿಯಂದಿರ ಇಚ್ಛೆಯಂತೆ ಅವಳ ನೆನಪು ಸದಾ ಹಸಿರಾಗಿರಲು ಇಲ್ಲಿಯೇ ಸಮಾಧಿ ಮಾಡಲಾಗುತ್ತಿದೆ. ಅವಳ ಆತ್ಮಕ್ಕೆ ಖಂಡಿತ ಶಾಂತಿ ಸಿಗುತ್ತದೆ. 11ನೇ ದಿನದ ಕಾರ್ಯವನ್ನು ಎಲ್ಲರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಿದ್ದೇವೆ. ಪ್ರಕೃತಿ ಸಹಕಾರ ಮಾಡಬೇಕು. ಮುಂದಿನ ಎಲ್ಲ ಕಾರ್ಯಗಳನ್ನು ರಮೇಶ್ ಅವರು ನೋಡಿಕೊಳ್ಳಲಿದ್ದಾರೆ ಎಂದು ಗದ್ಗದಿತರಾಗಿ ನುಡಿದರು.&lt;/p&gt;&lt;h2&gt;&quot;ನಮಗೆ ಮಾತ್ರವಲ್ಲ, ಇಡೀ ನಾಡಿಗೆ ಅವಳು ಅಮ್ಮ&quot; - ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ&lt;/h2&gt;&lt;p&gt;ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರವನ್ನು ಕಂಡು ಭಾವುಕರಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಹಾಗೂ ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಮಧ್ಯರಾತ್ರಿಯಿಂದ ಹಿಡಿದು ಮುಂಜಾನೆಯವರೆಗೂ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಅಮ್ಮನ ದರ್ಶನ ಪಡೆದಿದ್ದಾರೆ. ನಮ್ಮ ಕುಟುಂಬಕ್ಕೆ ಅಮ್ಮ ಅಲ್ಲ, ಎಲ್ಲರಿಗೂ ಅಮ್ಮ ಎಂದು ಭಾವಿಸಿ ಬಂದಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ರಾಜ್ಯ ಸರ್ಕಾರವು ಸರ್ಕಾರಿ ಗೌರವ ಸಲ್ಲಿಕೆ ಮಾಡಿದೆ. ರಾಜ್ಯ ಸರ್ಕಾರಕ್ಕೂ ವಂದನೆ ಸಲ್ಲಿಸುತ್ತೇನೆ. ನಮ್ಮ ತಂದೆ ತಾಯಿ ಬದುಕು ಎಷ್ಟು ಆದರ್ಶ ವಾಗಿತ್ತು ಎಂಬುದನ್ನು ಮಾಧ್ಯಮಗಳು ತೋರಿಸಿವೆ. ಎಲ್ಲಾ ಮಾಧ್ಯಮಗಳಿಗೂ ಧನ್ಯವಾದ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅಂತಿಮ ವಿಧಿ ವಿಧಾನಗಳ ಸಮಯದಲ್ಲಿ ಹೇಳಿಕೆ ನೀಡಿದರು.&lt;/p&gt;&lt;p&gt;ಪಕ್ಷಾತೀತ ನಮನ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಹೊತ್ತ ವಾಹನವು ಸಾಗಿದ ರಾಷ್ಟ್ರೀಯ ಹೆದ್ದಾರಿಯ ದಾರಿಯುದ್ದಕ್ಕೂ ಭಾರಿ ಜನಸ್ತೋಮ ಜಮಾಯಿಸಿತ್ತು. ನೆಲಮಂಗಲ, ಕುಣಿಗಲ್ ವ್ಯಾಪ್ತಿಯ ನಾಗಮಂಗಲ, ಬೆಳ್ಳೂರು ಕ್ರಾಸ್ ಹಾಗೂ ಹಾಸನ ಜಿಲ್ಲೆಯ ಗಡಿಯಾದ ಹಿರಿಸಾವೆ ಸೇರಿದಂತೆ ಹಲವೆಡೆ ಅಭಿಮಾನಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಂಬನಿ ಮಿಡಿದರು.ದೇವೇಗೌಡರ ಕಾರನ್ನು ಸುತ್ತುವರಿದ ಅಭಿಮಾನಿಗಳು ಮತ್ತು ಮಹಿಳೆಯರು ತೀವ್ರ ಭಾವುಕರಾಗಿ ಮುಖಂಡರಿಗೆ ಸಾಂತ್ವನ ಹೇಳಿದರು. ಪಕ್ಷದ ಭೇದ-ಭಾವ ಮರೆತು ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಹೊಳೆನರಸೀಪುರಕ್ಕೆ ಧಾವಿಸಿ ಬಂದು ಚೆನ್ನಮ್ಮ &amp;nbsp;ಅವರಿಗೆ ಅಂತಿಮ ನಮನ ಸಲ್ಲಿಸುವ ಮೂಲಕ ನಾಡಿನ ಹಿರಿಯ ಚೇತನಕ್ಕೆ ಗೌರವ ಸೂಚಿಸಿದರು. ಕೌಟುಂಬಿಕ ಧಾರ್ಮಿಕ ವಿಧಿವಿಧಾನಗಳ ನಂತರ ಅರ್ಚಕರ ಮಾರ್ಗದರ್ಶನದಲ್ಲಿ ಚೆನ್ನಮ್ಮ &amp;nbsp;ಅವರ ಅಂತ್ಯಕ್ರಿಯೆಯ ಮಹಾ ಪೂಜೆ ನೆರವೇರಿತು. ಆಡಂಬರವಿಲ್ಲದೆ ಬದುಕಿದ 'ದೊಡ್ಡಗೌಡರ ಮನೆ ಯಜಮಾನಿ' ಮಣ್ಣಿನ ಮಗಳಾಗಿ ಹಾಸನದ ಮಣ್ಣಿನಲ್ಲಿಯೇ ಲೀನವಾದರು.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/state/chennamma-funeral-husband-hd-devegowda-and-son-hd-kumaraswamy-emotional-speech-buried-with-state-honors-in-hassan-gdp/articleshow-zot0om2"/>
        </item>
    </channel>
</rss>
