<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 13 May 2026 18:15:11 +0530</lastBuildDate>
        <atom:link href="https://kannada.asianetnews.com/rss/hassan" rel="self" type="application/rss+xml"/>
        <item>
            <title><![CDATA[ಹಾಸನದಲ್ಲಿ ಕರುಳು ಹಿಂಡುವ ದುರಂತ: ಧರ್ಮಸ್ಥಳದಿಂದ ಹಿಂತಿರುಗುತ್ತಿದ್ದ ತಾಯಿ-ಮಗುವನ್ನು ಬಲಿ ಪಡೆದ ನಾಲೆ!]]></title>
            <link>https://kannada.asianetnews.com/karnataka-districts/hassan-tragedy-mother-and-baby-killed-as-car-falls-into-canal-on-nh-75-gdp/articleshow-0ctznd9</link>
            <guid isPermaLink="true">https://kannada.asianetnews.com/karnataka-districts/hassan-tragedy-mother-and-baby-killed-as-car-falls-into-canal-on-nh-75-gdp/articleshow-0ctznd9</guid>
            <pubDate>Wed, 29 Apr 2026 16:43:51 +0530</pubDate>
            <description><![CDATA[ಹಾಸನದ ಚನ್ನರಾಯಪಟ್ಟಣ ಬಳಿ ಕಾರೊಂದು ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಉರುಳಿಬಿದ್ದ ಪರಿಣಾಮ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧರ್ಮಸ್ಥಳದಿಂದ ದೇವನಹಳ್ಳಿಗೆ ತೆರಳುತ್ತಿದ್ದ ಕುಟುಂಬದ ಇತರ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqcew8bb6ag25zfqt39rfehk,imgname-hassan-tragedy-1777460978027.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಜಿಲ್ಲೆಯಲ್ಲಿ ದಾರುಣ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಾರೊಂದು ನಿಯಂತ್ರಣ ತಪ್ಪಿ ನಾಲೆಗೆ ಪಲ್ಟಿಯಾದ ಪರಿಣಾಮ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ಚನ್ನರಾಯಪಟ್ಟಣ&ndash;ಹಿರೀಸಾವೆ ಮಾರ್ಗದ ಎನ್&zwnj;ಹೆಚ್ 75ರಲ್ಲಿ ನಡೆದಿದೆ.&lt;/p&gt;&lt;p&gt;ಮಲ್ಲವನಘಟ್ಟ ಗ್ರಾಮದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳದಿಂದ ದೇವನಹಳ್ಳಿ ಕಡೆಗೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೇಮಾವತಿ ನಾಲೆಗೆ ಉರುಳಿ ಬಿದ್ದಿದೆ. ಕಾರು ಪಲ್ಟಿಯಾದ ಪರಿಣಾಮ ಒಳಗಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;h2&gt;ತಾಯಿ ಮತ್ತು ಮಗು ಬಲಿ&lt;/h2&gt;&lt;p&gt;ಅಪಘಾತದಲ್ಲಿ ಪ್ರಿಯಾಂಕ (20) ಹಾಗೂ ಅವರ ಒಂದೂವರೆ ವರ್ಷದ ಮಗು ವೈಭವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ . ತಾಯಿ ಮತ್ತು ಮಗುವಿನ ಸಾವು ಕುಟುಂಬ ಸದಸ್ಯರು ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿದೆ.&lt;/p&gt;&lt;p&gt;ಕಾರುದಲ್ಲಿ ಪ್ರಯಾಣಿಸುತ್ತಿದ್ದ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;ಧರ್ಮಸ್ಥಳದಿಂದ ದೇವನೂರಿನತ್ತ ಪ್ರಯಾಣ&lt;/h2&gt;&lt;p&gt;ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಕುಟುಂಬ ಧರ್ಮಸ್ಥಳದಿಂದ ದೇವನಹಳ್ಳಿ ಪ್ರಯಾಣಿಸುತ್ತಿತ್ತು. ವೇಗ ಮತ್ತು ಚಾಲಕನ ನಿಯಂತ್ರಣ ತಪ್ಪಿರುವುದು ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ರಸ್ತೆ ಸುರಕ್ಷತೆ ಬಗ್ಗೆ ಮತ್ತೊಮ್ಮೆ &amp;nbsp;ಯೋಚಿಸುಚಂತೆ ಮಾಡಿದೆ. ಚಾಲಕರು ವೇಗ ನಿಯಂತ್ರಣದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಅತ್ಯಗತ್ಯ ಎಂಬುದನ್ನು ಈ ಘಟನೆ ಸಾರಿ ಹೇಳಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hassan-tragedy-mother-and-baby-killed-as-car-falls-into-canal-on-nh-75-gdp/articleshow-0ctznd9"/>
        </item>
        <item>
            <title><![CDATA['ಯಾಕಪ್ಪ ಹೊಡೆಯುತ್ತಿದ್ದೀರಿ...' ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡುತ್ತಿದ್ದವರ ಮೇಲೆ ಸ್ಥಳೀಯ ಪುಂಡರು ಹಲ್ಲೆ!]]></title>
            <link>https://kannada.asianetnews.com/karnataka-districts/pre-wedding-shoot-turns-violent-locals-attack-photographer-at-sakleshpur-bettada-bhairaveshwara-temple-rav/articleshow-72e8q6v</link>
            <guid isPermaLink="true">https://kannada.asianetnews.com/karnataka-districts/pre-wedding-shoot-turns-violent-locals-attack-photographer-at-sakleshpur-bettada-bhairaveshwara-temple-rav/articleshow-72e8q6v</guid>
            <pubDate>Fri, 27 Mar 2026 13:39:29 +0530</pubDate>
            <description><![CDATA[ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇಗುಲದ ಬಳಿ ಪ್ರೀ-ವೆಡ್ಡಿಂಗ್ ಶೂಟಿಂಗ್ ಮಾಡುತ್ತಿದ್ದ ಫೋಟೋಗ್ರಾಫರ್&zwnj;ಗಳ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದಾರೆ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದು, ಗಲಾಟೆ ತಾರಕಕ್ಕೇರಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmq2emgnxw2dh8c1t4dxp03b,imgname----------------------1--1774595822101.gif" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮಾ. 27): &lt;/strong&gt;ಪ್ರವಾಸಕ್ಕೆ ಬಂದು ಫೋಟೋ ಶೂಟಿಂಗ್ ಮಾಡುತ್ತಿದ್ದವರ ಮೇಲೆ ಸ್ಥಳೀಯ ಕೆಲವು ಪುಂಡರು ವಿನಾಕಾರಣ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇಗುಲದ ಆವರಣದಲ್ಲಿ ನಡೆದಿದೆ.&lt;/p&gt;&lt;p&gt;ಪ್ರೀ-ವೆಡ್ಡಿಂಗ್ ಶೂಟ್ ಮಾಡಲು ಬಂದಿದ್ದ ಫೋಟೋಗ್ರಾಫರ್&zwnj;ಗಳ ಮೇಲೆ ಸ್ಥಳೀಯ ಯುವಕರು ಎನ್ನಲಾದ ಗುಂಪೊಂದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.&lt;/p&gt;&lt;h2&gt;ಸ್ಥಳೀಯ ಪುಂಡರು ಹಲ್ಲೆ ಮಾಡಿದ್ದು ಯಾಕೆ?&lt;/h2&gt;&lt;p&gt;ಬೆಳ್ಳಂಬೆಳಗ್ಗೆ ದೇವಸ್ಥಾನದ ಸುಂದರ ಪರಿಸರದಲ್ಲಿ ಫೋಟೋಗ್ರಾಫರ್&zwnj;ಗಳು ಪ್ರೀ-ವೆಡ್ಡಿಂಗ್ ಶೂಟಿಂಗ್&zwnj; ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅಲ್ಲಿಗೆ ಬಂದ ಕೆಲವು ಸ್ಥಳೀಯರು, 'ಇಲ್ಲಿ ಯಾಕೆ ಶೂಟಿಂಗ್ ಮಾಡುತ್ತಿದ್ದೀರಿ? ಯಾರು ಹೇಳಿದ್ದು ಎಂದು ಪ್ರಶ್ನಿಸಿದ್ದಾರೆ. ದೇವಸ್ಥಾನದಲ್ಲಿ ಫೋಟೋ ತೆಗೆಯಲು ಯಾರ ಅನುಮತಿ ಬೇಕು, ಪ್ರವಾಸಕ್ಕೆ ಬಂದಿದ್ದೇವೆ ಫೋಟೋ ತೆಗೆದರೆ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.&lt;/p&gt;&lt;h3&gt;ಫೋಟೋಗ್ರಾಫರ್&zwnj;ಗಳ ಮೇಲೆ ಗೂಂಡಾಗಿರಿ&lt;/h3&gt;&lt;p&gt;ಮಾತಿನ ಚಕಮಕಿ ತಾರಕಕ್ಕೇರಿದಾಗ ಸ್ಥಳೀಯರು ಎಂದು ಹೇಳಿಕೊಂಡ ಯುವಕರ ಗುಂಪು ಫೋಟೋಗ್ರಾಫರ್&zwnj;ಗಳ ಮೇಲೆ ಏಕಾಏಕಿ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. 'ಯಾಕಪ್ಪಾ ಹೊಡೆಯುತ್ತಿದ್ದೀರಿ, ಏನಾಗಿದೆ?' ಎಂದು ಕೇಳಿದರೂ ಫೋಟೋಗ್ರಾಫರ್&zwnj;ಗಳಿಗೆ ಮನಬಂದಂತೆ ಥಳಿಸಿದ್ದಾರೆ. ಅವರು ಯಾಕೆ ಹೊಡೆಯುತ್ತಿದ್ದಾರೆಂದೇ ತಿಳಿದಿಲ್ಲ. ಪ್ರಶ್ನಿಸಿದಷ್ಟೂ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಕಾಣಬಹುದು.&lt;/p&gt;&lt;p&gt;ಶಾಂತಿಯುತವಾಗಿದ್ದ ದೇವಸ್ಥಾನದ ಆವರಣ ಪುಂಡರಿಂದಾಗಿ ಕೆಲಕಾಲ ಪ್ರವಾಸಿಗರಲ್ಲಿ ಆತಂಕ ತರಿಸಿತು. ಪ್ರವಾಸಿಗರ ಮೇಲೆ ಸ್ಥಳೀಯರು ಎನ್ನಲಾದ ವ್ಯಕ್ತಿಗಳು ಗೂಂಡಾಗಿರಿ ನಡೆಸುತ್ತಿರುವುದನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಉಪಕರಣಗಳನ್ನು ಹಾನಿಗೊಳಿಸಲು ಯತ್ನಿಸಿದ ಘಟನೆಯೂ ನಡೆದಿದೆ ಎನ್ನಲಾಗಿದೆ.&lt;/p&gt;&lt;h3&gt;ಪೊಲೀಸ್ ಮೆಟ್ಟಿಲೇರಿದ ಪ್ರಕರಣ&lt;/h3&gt;&lt;p&gt;ಈ ಗಲಾಟೆಗೆ ಸಂಬಂಧಿಸಿದಂತೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎರಡೂ ಕಡೆಯವರು ಪರಸ್ಪರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ನಡುವಿನ ಇಂತಹ ಘರ್ಷಣೆಗಳು ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀರುತ್ತಿವೆ.&lt;/p&gt;]]></content:encoded>
            <category>hassan</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/pre-wedding-shoot-turns-violent-locals-attack-photographer-at-sakleshpur-bettada-bhairaveshwara-temple-rav/articleshow-72e8q6v"/>
        </item>
        <item>
            <title><![CDATA[ಹಾಸನ ಜಿಮ್‌ನಲ್ಲಿ ಬಾಡಿ ಬಿಲ್ಡರ್ ಅಬ್ಬರ! ಭುಜ ತಗುಲಿಸಿದ ಕೀರ್ತನ, ಒಂದು ಪಂಚ್ ಕೊಟ್ಟು 'ಕೋಮಾ'ಗೆ ಕಳಿಸಿದ ವರುಣ!]]></title>
            <link>https://kannada.asianetnews.com/karnataka-districts/hassan-mj-fitness-gym-assault-kirthan-coma-varun-brutal-attack-video-viral-sat/articleshow-a5ghvnc</link>
            <guid isPermaLink="true">https://kannada.asianetnews.com/karnataka-districts/hassan-mj-fitness-gym-assault-kirthan-coma-varun-brutal-attack-video-viral-sat/articleshow-a5ghvnc</guid>
            <pubDate>Wed, 13 May 2026 18:11:52 +0530</pubDate>
            <description><![CDATA[ಹಾಸನ ನಗರದ 'ಎಂ.ಜೆ. ಫಿಟ್&zwnj;ನೆಸ್' ಜಿಮ್&zwnj;ನಲ್ಲಿ, ಸಣ್ಣ ವಿಚಾರಕ್ಕೆ ನಡೆದ ಜಗಳದಲ್ಲಿ ವರುಣ್ ಎಂಬಾತ ಕಿರ್ತನ್ ಎಂಬ ಯುವಕನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಈ ದಾಳಿಯಿಂದ ಕಿರ್ತನ್ ತಲೆಗೆ ಗಂಭೀರ ಪೆಟ್ಟಾಗಿದ್ದು, ಪ್ರಸ್ತುತ ಕೋಮಾದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krgnhb6kwawyrxd23a1gtwq9,imgname-hassan-gym-incident-1778675920083.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮೇ 13): ವ್ಯಾ&lt;/strong&gt;ಯಾಮ ಮಾಡುವ ಜಾಗದಲ್ಲಿ ನಡೆದ ಸಣ್ಣದೊಂದು ಆಕಸ್ಮಿಕ ಘಟನೆ ಇಂದು ಯುವಕನೊಬ್ಬ ಸಾವು-ಬದುಕಿನ ನಡುವೆ ಹೋರಾಡುವಂತೆ ಮಾಡಿದೆ. ಹಾಸನ ನಗರದ 'ಎಂ.ಜೆ. ಫಿಟ್&zwnj;ನೆಸ್' (M.J. Fitness) ಜಿಮ್&zwnj;ನಲ್ಲಿ ನಡೆದ ಈ ಭೀಕರ ಹಲ್ಲೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿವೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಜಿಮ್&zwnj;ನಲ್ಲಿ ವರ್ಕೌಟ್ ಮಾಡುತ್ತಿದ್ದ ಕಿರ್ತನ್ ಎಂಬ ಯುವಕನ ಭುಜ, ಅಲ್ಲಿಯೇ ಇದ್ದ ವರುಣ್ ಎಂಬಾತನಿಗೆ ಆಕಸ್ಮಿಕವಾಗಿ ತಗುಲಿದೆ. ಈ ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕ್ಷಣಾರ್ಧದಲ್ಲಿ ಕೋಪೋದ್ರಿಕ್ತನಾದ ವರುಣ್, ಕಿರ್ತನ್ ಮೇಲೆ ಅನಿರೀಕ್ಷಿತವಾಗಿ ಮತ್ತು ಅತ್ಯಂತ ಬರ್ಬರವಾಗಿ ದಾಳಿ ಮಾಡಿದ್ದಾನೆ.&lt;/p&gt;&lt;h2&gt;&lt;strong&gt;ಬರ್ಬರ ಹಲ್ಲೆ ಮತ್ತು ಸಿಸಿಟಿವಿ ದೃಶ್ಯ:&lt;/strong&gt;&lt;/h2&gt;&lt;p&gt;ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಭೀಕರ ಕೃತ್ಯ ಸೆರೆಯಾಗಿದೆ. ಮಾತಿನ ಚಕಮಕಿ ನಡೆಯುತ್ತಿರುವಾಗಲೇ ವರುಣ್ ಕಿರ್ತನ್&zwnj;ನ ತಲೆಗೆ ಅತ್ಯಂತ ಬಲವಾಗಿ ಒದ್ದಿದ್ದಾನೆ (Powerful Blow/Kick). ಈ ಬಲವಾದ ಪೆಟ್ಟಿಗೆ ಕಿರ್ತನ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ. ಹಲ್ಲೆಯ ತೀವ್ರತೆಗೆ ಕಿರ್ತನ್ ತಲೆಬುರುಡೆಗೆ ಗಂಭೀರ ಪೆಟ್ಟಾಗಿದ್ದು, ತಕ್ಷಣವೇ ಜಿಮ್&zwnj;ನಲ್ಲಿದ್ದ ಇತರ ಸದಸ್ಯರು ಆತನ ರಕ್ಷಣೆಗೆ ಧಾವಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಾವು-ಬದುಕಿನ ನಡುವೆ ಹೋರಾಟ:&lt;/strong&gt;&lt;/h3&gt;&lt;p&gt;ಹಲ್ಲೆಗೊಳಗಾದ ಕಿರ್ತನ್ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ತಪಾಸಣೆಯ ಪ್ರಕಾರ, ಕಿರ್ತನ್&zwnj;ನ ತಲೆಬುರುಡೆ ಮುರಿದಿದ್ದು (Skull Fracture), ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದೆ. ಪ್ರಸ್ತುತ ಕಿರ್ತನ್ ಕೋಮಾಗೆ ಜಾರಿದ್ದು, ತೀವ್ರ ನಿಗಾ ಘಟಕದಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆತನ 3D ಸ್ಕ್ಯಾನ್ ಮತ್ತು ಸಿಟಿ ಸ್ಕ್ಯಾನ್ ವರದಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲ್ಲೆಯ ಭೀಕರತೆಯನ್ನು ಸಾರಿ ಹೇಳುತ್ತಿವೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Shocking Incident at M.J. Fitness Gym, Hassan.A small accidental shoulder touch in the gym turned into a nightmare. One man unleashed brutal kicks to the head, leaving the victim with a severe skull fracture and fighting for life in ICU.Watch the CCTV video to see exactly what&hellip; pic.twitter.com/Nv2uCZ4dZT&lt;/p&gt;&lt;p&gt;&mdash; Aparajite (@amshilparaghu) May 13, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಸಾರ್ವಜನಿಕರ ಆಕ್ರೋಶ ಮತ್ತು ಪೊಲೀಸ್ ಕ್ರಮ:&lt;/strong&gt;&lt;/h3&gt;&lt;p&gt;ಸಣ್ಣದೊಂದು ಕಾರಣಕ್ಕೆ ಮನುಷ್ಯ ಇಷ್ಟೊಂದು ಕ್ರೂರವಾಗಿ ವರ್ತಿಸಬಹುದೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. &quot;ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಿ, ಒಂದು ಕ್ಷಣದ ಸಿಟ್ಟು ಇಡೀ ಜೀವನವನ್ನೇ ನಾಶ ಮಾಡಬಹುದು&quot; ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಾಸನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವರುಣ್ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ.&lt;/p&gt;&lt;p&gt;ಈ ಘಟನೆಯು ಜಿಮ್&zwnj;ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿನ ಸುರಕ್ಷತೆ ಮತ್ತು ಜನರ ಮಾನಸಿಕ ಸ್ಥಿತಿಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಕಿರ್ತನ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನೂರಾರು ಜನರು ಪ್ರಾರ್ಥಿಸುತ್ತಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hassan-mj-fitness-gym-assault-kirthan-coma-varun-brutal-attack-video-viral-sat/articleshow-a5ghvnc"/>
        </item>
        <item>
            <title><![CDATA[ಮಂಗಳೂರು-ಸುಬ್ರಹ್ಮಣ್ಯ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ರದ್ದಾಗಿದ್ದ ಪ್ಯಾಸೆಂಜರ್‌ ರೈಲು  ಮತ್ತೆ ಆರಂಭ]]></title>
            <link>https://kannada.asianetnews.com/karnataka-districts/mangaluru-subrahmanya-road-passenger-train-services-restored-revised-schedule-announced-gdp/articleshow-aglc24b</link>
            <guid isPermaLink="true">https://kannada.asianetnews.com/karnataka-districts/mangaluru-subrahmanya-road-passenger-train-services-restored-revised-schedule-announced-gdp/articleshow-aglc24b</guid>
            <pubDate>Thu, 16 Apr 2026 20:03:16 +0530</pubDate>
            <description><![CDATA[ನಿರ್ವಹಣಾ ಕಾಮಗಾರಿ ಹಿನ್ನೆಲೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಇದೀಗ ಮರುಸ್ಥಾಪಿಸಲಾಗಿದೆ. ರೈಲ್ವೆ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಕೆಲವು ರೈಲುಗಳ ವಿಳಂಬದ ಅವಧಿಯನ್ನು ಕಡಿಮೆ ಮಾಡಿದೆ ಮತ್ತು ಇತರ ರೈಲುಗಳ ಸಂಚಾರಕ್ಕೆ ಹೊಸ ದಿನಾಂಕಗಳನ್ನು ನಿಗದಿಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km4xsq1xkfvyypbsnr1ny7hr,imgname-mangaluru-subrahmanya-passenger-trains-1773986962493.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಸುಬ್ರಹ್ಮಣ್ಯ ರೋಡ್&zwnj;, ಎಡಮಂಗಲ ಮತ್ತು ನರಿಮೊಗರು ರೈಲು ಮಾರ್ಗಗಳ ನಡುವೆ ಹಳಿ ಹಾಗೂ ವಿದ್ಯುತ್ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಹಾಗೂ ಮರುನಿಗದಿಗೊಳಿಸಲಾಗಿದ್ದ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಇದೀಗ ಮರುಸ್ಥಾಪಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.&lt;/p&gt;&lt;p&gt;ಈ ಕುರಿತು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ ನೀಡಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ವೇಳಾಪಟ್ಟಿಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಯಾವ ರೈಲು?&lt;/h2&gt;&lt;p&gt;ಮೊದಲು ಜೂನ್&zwnj; 10ರಿಂದ 21ರವರೆಗೆ ರದ್ದುಪಡಿಸಲಾಗಿದ್ದ ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್&ndash;ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ಹಾಗೂ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್&ndash;ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲುಗಳು ಈಗ ಮರುಸ್ಥಾಪನೆಯಾಗಿದ್ದು, ನಿಗದಿತ ಮಾರ್ಗ ಮತ್ತು ಸಮಯದಂತೆ ಸಂಚರಿಸಲಿವೆ.&lt;/p&gt;&lt;p&gt;ಇನ್ನು ರೈಲು ಸಂಖ್ಯೆ 56229 ಮಂಗಳೂರು ಸೆಂಟ್ರಲ್&ndash;ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲಿಗೆ ಮೊದಲು ಏಪ್ರಿಲ್&zwnj; 21ರಿಂದ ಜೂನ್&zwnj; 9ರವರೆಗೆ 55 ನಿಮಿಷಗಳ ವಿಳಂಬ ಇರಲಿದೆ ಎಂದು ತಿಳಿಸಲಾಗಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್&zwnj; 16ರಿಂದ ಜೂನ್&zwnj; 4ರವರೆಗೆ ಆರಂಭವಾಗುವ ಪ್ರಯಾಣಗಳಲ್ಲಿ ಈ ರೈಲು ಕೇವಲ 35 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ. ಜೂನ್&zwnj; 5ರಿಂದ 9ರವರೆಗೆ ಉಳಿದ ದಿನಗಳಲ್ಲಿ ರೈಲು ತನ್ನ ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸುವುದಾಗಿ ತಿಳಿಸಲಾಗಿದೆ.&lt;/p&gt;&lt;h2&gt;ಮರುನಿಗದಿ ದಿನಾಂಕಗಳಲ್ಲಿಯೂ ಬದಲಾವಣೆ&lt;/h2&gt;&lt;p&gt;ಅದೇ ರೀತಿ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್&ndash;ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಮರುನಿಗದಿ ದಿನಾಂಕಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಏಪ್ರಿಲ್&zwnj; 16, 18, 21, 23, 25, 28, 30 ಹಾಗೂ ಮೇ 2, 5, 7, 9, 12, 14, 16, 19, 21, 23, 26, 28, 30 ಮತ್ತು ಜೂನ್&zwnj; 2 ಹಾಗೂ 4ರಂದು ಈ ರೈಲು 15 ನಿಮಿಷ ತಡವಾಗಿ ಸಂಚರಿಸಲಿದೆ. ಹಿಂದೆ ಸೂಚಿಸಲಾಗಿದ್ದಂತೆ ಜೂನ್&zwnj; 6 ಮತ್ತು 9ರಂದು ಈ ರೈಲುಗಳು ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾಗಿದ್ದ ಅಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಈ ಪರಿಷ್ಕರಣೆಗಳನ್ನು ಮಾಡಿದ್ದು, ಈಗ ಬಹುತೇಕ ಸೇವೆಗಳು ಮರುಸ್ಥಾಪನೆಯಾಗಿರುವುದರಿಂದ ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಲಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-subrahmanya-road-passenger-train-services-restored-revised-schedule-announced-gdp/articleshow-aglc24b"/>
        </item>
        <item>
            <title><![CDATA[ಜಮೀರ್‌ರಂತಹ ವ್ಯಕ್ತಿಯನ್ನು ಸೇರಿಸಿಕೊಳ್ಳುವ ಅಗತ್ಯ ನಮಗಿಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ]]></title>
            <link>https://kannada.asianetnews.com/karnataka-districts/hd-kumaraswamy-rejects-zameer-entry-jds-karnataka-politics-gvd/articleshow-anh7pkw</link>
            <guid isPermaLink="true">https://kannada.asianetnews.com/karnataka-districts/hd-kumaraswamy-rejects-zameer-entry-jds-karnataka-politics-gvd/articleshow-anh7pkw</guid>
            <pubDate>Fri, 24 Apr 2026 00:25:36 +0530</pubDate>
            <description><![CDATA[&lt;p&gt;ಯಾವುದೇ ಕಾರಣಕ್ಕೂ ಆ ಸಬ್ಜೆಕ್ಟ್&zwnj;ನೇ ರೈಜ್ ಮಾಡಬೇಡಿ. ಅದರ ಅವಶ್ಯಕತೆನೂ ಇಲ್ಲಾ ನಮಗೆ, ನಾನು ಅನುಭವಿಸಿದ್ದೀನಿ, ಆ ಸಬ್ಜೆಕ್ಟ್ ನೇ ರೈಸ್&zwnj;&quot; ಮಾಡಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶದಿಂದ ನುಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kndcqgkv5vhpfjpbtyptw1w7,imgname----------------------60--1775344796283.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಳೆನರಸೀಪುರ (ಏ.24):&lt;/strong&gt; ನಮ್ಮ ಪಕ್ಷದಲ್ಲಿ ಅಧಿಕಾರಕ್ಕೋಸ್ಕರವಾಗಿ ಜಮೀರ್&zwnj; ಅಂತಹ ಜನಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲಾ, ನಮಗೆ ಅದರ ಎಲ್ಲಾ ಅನುಭವಗಳಾಗಿದೆ. ಯಾವುದೇ ಕಾರಣಕ್ಕೂ ಆ ಸಬ್ಜೆಕ್ಟ್&zwnj;ನೇ ರೈಜ್ ಮಾಡಬೇಡಿ. ಅದರ ಅವಶ್ಯಕತೆನೂ ಇಲ್ಲಾ ನಮಗೆ, ನಾನು ಅನುಭವಿಸಿದ್ದೀನಿ, ಆ ಸಬ್ಜೆಕ್ಟ್ ನೇ ರೈಸ್&zwnj;&quot; ಮಾಡಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶದಿಂದ ನುಡಿದರು.&lt;/p&gt;&lt;p&gt;ಸಚಿವ ಜಮೀರ್ ಅಹಮದ್ ಜೆಡಿಎಸ್ ಸೇರ್ಪಡೆ ಕುರಿತಂತೆ ಕೇಳಿದ ಪಶ್ನೆಗೆ ಕಾರವಾಗಿ ಉತ್ತರಿಸಿದರು. ಯಾವುದೇ ಕಾರಣಕ್ಕೂ ರಾಜಕೀಯದಲ್ಲಿ ಏನೋ ಶಕ್ತಿ ಬರುತ್ತೆ ಅಂಥೇಳಿ ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲವೆಂದರು. ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವುದು, ಕಾಂಗ್ರೆಸ್ ನಾಯಕರು ಅನ್ನ ತಿನ್ನುತ್ತಿರುವುದು ಆ ವರ್ಗದ ಜನಗಳಿಂದಲೇ ಅಂಥ ಹೇಳುತ್ತಿದ್ದಾರೆ. ಇವತ್ತು ಆ ಪರಿಸ್ಥಿತಿ ರಾಜ್ಯಕ್ಕೆ ತಂದು ಇಟ್ಟಿದ್ದಾರೆ. ಪ್ರತಿನಿತ್ಯ ಅನ್ನ ತಿನ್ನುತ್ತಿರುವುದೇ ಆ ಒಂದು ವರ್ಗದಿಂದ ಅಂಥ ಹೇಳುತ್ತಿದ್ದಾರೆ. ಇವತ್ತು ಕಾಂಗ್ರೆಸ್&zwnj;ನವರು ಯಾರದರೂ ಅದನ್ನು ವಿರೋಧ ಮಾಡಿದ್ದೀರಾ ಎಂದು ಪ್ರಶ್ನಿಸಿದರು.ಎಲ್ಲೆಲ್ಲಿಗೆ ಹೋಗುತ್ತೋ ನೋಡೋಣ ಬನ್ನಿ ಎಂದು ಬಹಳ ಅರ್ಥಗರ್ಭಿತವಾಗಿ ನುಡಿದರು.&lt;/p&gt;&lt;p&gt;ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ಪ್ರಕ್ರಿಯೆಗಳು ಮುಗಿಯುವ ಹಂತಕ್ಕೆ ಬರುತ್ತಿದೆ. ಜತೆಗೆ ರಾಜಕೀಯದಲ್ಲಿ ಅನುಭವಸ್ಥರು, ಹಿರಿತನದಿಂದ ಬಂದವರು ಬಳಸಿರುವ ಪದಬಳಕೆ ನೋಡಿದಾಗ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಯುವ ಜನಾಂಗಕ್ಕೆ ಯಾವ ರೀತಿ ದಾರಿ ತೋರಿಸುತ್ತಾರೆ ಎಂದು ಯೋಚನೆ ಮಾಡಬೇಕು. ಕಾಂಗ್ರೆಸ್&zwnj;ನ ರಾಷ್ಟ್ರೀಯ ಅಧ್ಯಕ್ಷರು ಕರ್ನಾಟಕದವರು, ಅವರ ಮನಸ್ಸಿನಲ್ಲಿ ಯಾವ ರೀತಿಯ ಭಾವನೆಗಳನ್ನು ಇಟ್ಟುಕೊಂಡಿದ್ದಾರೆ ಎಂಬುದು ಗೌರವಾನ್ವಿತ ಪ್ರಧಾನಮಂತ್ರಿಗಳನ್ನ ಟೆರೆರಿಸ್ಟ್ ಅಂಥಾ ಕರೀತಾರೆ ಎಂದರೆ ಎಷ್ಟು ಉದ್ಧಟತನ ಇರಬಹುದು ಅರ್ಥೈಸಿಕೊಳ್ಳಬೇಕು.&lt;/p&gt;&lt;h2&gt;&lt;strong&gt;ಕಮಿಟ್&zwnj;ಮೆಂಟ್ ಇಲ್ಲ&lt;/strong&gt;&lt;/h2&gt;&lt;p&gt;ಅಭಿವೃದ್ಧಿ ಹೆಸರಿನಲ್ಲಿ ಯಾರು ಚುನಾವಣೆಯಲ್ಲಿ ಮತ ಕೇಳಲಿಲ್ಲ. ದೇಶಕ್ಕೆ ಏನು ಕೊಡ್ತಿವಿ ಅನ್ನೋದನ್ನು ಬಿಟ್ಟು ಫ್ರೀ ಕೊಡಲು ಕಾಂಪಿಟೇಷನ್ ಮಾಡುತ್ತಾ, ನೀನು ಅದು ಕೊಟ್ಟರೆ ನಾನು ಇದು ಕೊಡ್ತಿನಿ ಅಂತಾರೆ. ಇದು ಸ್ವಲ್ಪ ಆಘಾತ ತರುವ ವಿಷಯ. ಹಿಮಾಚಲ ಪ್ರದೇಶದಲ್ಲಿ ಚೀಫ್ ಸೆಕ್ರೆಟರಿಗೆ ಸಂಬಳ ಕಟ್ ಮಾಡಿದ್ದಾರೆ. ಇವತ್ತಿನ ಸರ್ಕಾರ ಜನಸಾಮಾನ್ಯರ ಬದುಕು ಸರಿಪಡಿಸುವುದು ಇರಲಿ, ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟ ಆಡ್ತಿದ್ದಾರೆ. ಜತೆಗೆ 2028ಕ್ಕೆ ನಾವೇ ಅಧಿಕಾರಕ್ಕೆ ಬರ್ತೀವಿ ಅಂಥ ಹೇಳ್ತಾರೆ. ಕಳೆದ ಮೂರು ವರ್ಷ ನಿರಂತರವಾಗಿ ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆ ನಡೆಯುತ್ತಿದೆ.&lt;/p&gt;&lt;p&gt;ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದರ ಬಗ್ಗೆ ಒಬ್ಬನೇ ಒಬ್ಬ ಮಂತ್ರಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿಲ್ಲ. ಇವರಿಗೆ ಈ ಸಮಸ್ಯೆಗಳಿಗೆ ಪರಿಹಾರ ತಂದು ಕೊಡುವ ಕಮಿಟ್&zwnj;ಮೆಂಟ್ ಇಲ್ಲ. ಕಳೆದ ಮೂರು ವರ್ಷದಿಂದ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಅವರ ಮೇಲೆ ಇವರು ಇವರ ಮೇಲೆ ಅವರು ಹೇಳುತ್ತಿದ್ದರು. ಇನ್ನೊಬ್ಬರು ದೇವರ ಮೊರೆ ಹೋಗುತ್ತಿದ್ದಾರೆ. ಇದೀಗ ಮಾಟಮಂತ್ರದ್ದು ಪ್ರಾರಂಭವಾಗಿದೆ. ಮುಖ್ಯಮಂತ್ರಿಗಳ ಮೇಲೆ ಮಾಟ ಮಾಡ್ದಿದ್ದಾರೆ ಅಂಥ ಆ ಪಕ್ಷದ ಶಾಸಕರೇ ಹೇಳ್ತಾರೆ. ಇದನ್ನು ನೋಡಿದರೆ ಇವರೇನು ಹುಡುಗಾಟದ ರಾಜಕಾರಣ ಮಾಡ್ತಿದ್ದಾರ ಎಂದು ಚಿಂತಿಸಬೇಕಿದೆ ಎಂದರು.&lt;/p&gt;]]></content:encoded>
            <category>hassan</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/hd-kumaraswamy-rejects-zameer-entry-jds-karnataka-politics-gvd/articleshow-anh7pkw"/>
        </item>
        <item>
            <title><![CDATA[ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವ ಅಳಿಯ ಇಬ್ಬರೂ ನೀರುಪಾಲು]]></title>
            <link>https://kannada.asianetnews.com/state/man-and-his-nephew-both-died-while-trying-to-save-his-nephew-from-drowning/articleshow-fwtuwrc</link>
            <guid isPermaLink="true">https://kannada.asianetnews.com/state/man-and-his-nephew-both-died-while-trying-to-save-his-nephew-from-drowning/articleshow-fwtuwrc</guid>
            <pubDate>Mon, 20 Apr 2026 09:23:21 +0530</pubDate>
            <description><![CDATA[ಹಾಸನದಲ್ಲಿ ಕೆರೆಗೆ ಬಿದ್ದ ಅಳಿಯನನ್ನು ರಕ್ಷಿಸಲು ಹೋಗಿ ಮಾವ ಪ್ರಾಣ ಕಳೆದುಕೊಂಡರೆ, ರಬಕವಿ-ಬನಹಟ್ಟಿ ಹಾಗೂ ಕೊಪ್ಪಳದಲ್ಲಿ ಈಜಲು ಹೋದ ಬಾಲಕ ಮತ್ತು ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೇಸಿಗೆ ರಜೆಯಲ್ಲಿ ನಡೆದ ಈ ಸರಣಿ ದುರಂತಗಳು ಹಲವು ಕುಟುಂಬಗಳಲ್ಲಿ ಶೋಕವನ್ನುಂಟು ಮಾಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpmfymcyktdaj8182pfj8jba,imgname-hassan-alia-and-sodara-mava-death-1776656798110.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವನೂ ಸಾವು&lt;/strong&gt;&lt;/h2&gt;&lt;p&gt;ಹಾಸನ: ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವನೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಮನಕಲುಕುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಎನ್&zwnj;.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು 12 ವರ್ಷದ ಬಾಲಕ ಪ್ರತೀಕ್ ಹಾಗೂ ಬಾಲಕನ ಮಾವ 45 ವರ್ಷದ ಪ್ರಭಾಕರ್ ಎಂದು ಗುರುತಿಸಲಾಗಿದೆ.&lt;/p&gt;&lt;h3&gt;&lt;strong&gt;ಆಗಿದ್ದೇನು?&lt;/strong&gt;&lt;/h3&gt;&lt;p&gt;ಬಾಲಕ ಪ್ರತೀಕ್ ಬೇಸಿಗೆ ರಜೆಯ ಹಿನ್ನೆಲೆ ಮಾವ ಪ್ರಭಾಕರ್ ಅವರ ಮನೆಗೆ ಬಂದಿದ್ದ. ಮಾವನ ಜೊತೆಗೆ ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರತೀಕ್ ಆಯತಪ್ಪಿ ಕೆರೆಗೆ ಬಿದ್ದಿದ್ದಾನೆ. ಕಾಲು ಜಾರಿ ಕೆರೆಗೆ ಬಿದ್ದ ಪ್ರತೀಕ್&zwnj;ನನ್ನು ರಕ್ಷಿಸಲು ಮಾವ ಪ್ರಭಾಕರ್&zwnj; ಕೆರೆಗೆ ಹಾರಿದ್ದು,&lt;/p&gt;&lt;p&gt;ಈಜು ಬಾರದ ಕಾರಣ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಪ್ರತೀಕ್ ಪ್ರಭಾಕರ್ ಅವರ ಸೋದರಿಯ ಮಗನಾಗಿದ್ದು, ಬೇಸಿಗೆ ರಜೆ ಹಿನ್ನೆಲೆ ಸೋದರ ಮಾವನ ಮನೆಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ. ಇಬ್ಬರ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದು, ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮಾವ ಅಳಿಯ ಇಬ್ಬರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;h3&gt;&lt;strong&gt;ಕೃಷ್ಣಾ ನದಿಯಲ್ಲಿ ಮುಳುಗಿ ಬಾಲಕ ಸಾವು&lt;/strong&gt;&lt;/h3&gt;&lt;p&gt;ರಬಕವಿ-ಬನಹಟ್ಟಿ ತಾಲೂಕಿನ ಕೃಷ್ಣಾ ನದಿ ಜಾಕವೆಲ್ ಹತ್ತಿರ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಹುಬ್ಬಳ್ಳಿಯ ರಾಹುಲ್ ಪ್ರಕಾಶ ಅಜ್ಜನವರ(11) ಮೃತ ಬಾಲಕ. ಶಾಲೆಗೆ ರಜೆಯ ಕಾರಣ ಬಾಲಕ ರಬಕವಿಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ. ಬೆಳಗಿನ ಜಾವ ಸ್ನಾನಕ್ಕೆಂದು ತೆರಳಿದಾಗ ನೂರಾರು ಜನರ ಮಧ್ಯೆ ಬಾಲಕ ನೀರಿಗಿಳಿದು ಮುಳುಗಿರುವುದು ಯಾರ ಗಮನಕ್ಕೂ ಬಂದಿಲ್ಲ. ಬಾಲಕನ ಜೊತೆಗೆ ಬಂದಿದ್ದ ಸಂಬಂಧಿ ಹುಡುಕಾಟ ನಡೆಸಿದಾಗ ಬಾಲಕ ನೀರಿಗಿಳಿದ ವಿಚಾರ ತಿಳಿದಿದ್ದು,ಸ್ಥಳದಲ್ಲಿದ್ದ ಜನರು ಹುಡುಕಾಡಿದರೂ ಸಿಕ್ಕಿಲ್ಲ. ನಂತರ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರಿನಿಂದ ಶವ ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h3&gt;&lt;strong&gt;ಈಜಲು ಹೋಗಿ ವಿದ್ಯಾರ್ಥಿ ಸಾವು&lt;/strong&gt;&lt;/h3&gt;&lt;p&gt;ಹಾಗೆಯೇ ಇದೇ ರೀತಿಯ ಮತ್ತೊಂದು ಘಟನೆ ಕೊಪ್ಪಳ ಜಿಲ್ಲೆಯಲ್ಲಿಯೂ ನಡೆದಿದೆ. ದದೇಗಲ್ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ ಕುಕನೂರು ತಾಲೂಕಿನ ಮನ್ನಾಪುರ ಗ್ರಾಮದ ಆಕಾಶ ಹರಿಜನ(18) ಎಂಬ ವಿದ್ಯಾರ್ಥಿ ಕಾಲೇಜ್ ಬಳಿಯ ಕೆರೆಯೊಂದರಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಬೆಳಗ್ಗೆ 11 ಗಂಟೆಗೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೃತದೇಹ ಮಧ್ಯಾಹ್ನ 3.30ಕ್ಕೆ ಪತ್ತೆಯಾಗಿದೆ. ಇಷ್ಟೆಲ್ಲ ಆದರೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಶವವಿಟ್ಟು ಪ್ರತಿಭಟನೆಗೆ ಮುಂದಾಗಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪತಿಯ ಅಕ್ರಮ ಸಂಬಂಧ ಪತ್ತೆ ಮಾಡಿದ್ದ ಪತ್ನಿ ನಿಗೂಢ ಸಾವು: ಪೋಷಕರಿಂದ ಕೊಲೆ ಆರೋಪ&lt;/strong&gt;&lt;/p&gt;]]></content:encoded>
            <category>hassan</category>
            <dc:creator>Anusha Kb</dc:creator>
            <atom:link href="https://kannada.asianetnews.com/state/man-and-his-nephew-both-died-while-trying-to-save-his-nephew-from-drowning/articleshow-fwtuwrc"/>
        </item>
        <item>
            <title><![CDATA[ಹಾಸನ: ಹಸೆಮಣೆ ಏರಲು 10 ದಿನ ಇರುವಾಗಲೇ ವರ ಮೃತ್ಯು, ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದಾಗ ಭೀಕರ ಅಪಘಾತ!]]></title>
            <link>https://kannada.asianetnews.com/karnataka-districts/groom-to-be-dies-in-tragic-sakleshpura-road-accident-in-hassan-days-before-wedding-gdp/articleshow-i8hln10</link>
            <guid isPermaLink="true">https://kannada.asianetnews.com/karnataka-districts/groom-to-be-dies-in-tragic-sakleshpura-road-accident-in-hassan-days-before-wedding-gdp/articleshow-i8hln10</guid>
            <pubDate>Thu, 30 Apr 2026 11:38:04 +0530</pubDate>
            <description><![CDATA[ಹಾಸನ ಜಿಲ್ಲೆಯಲ್ಲಿ ಮದುವೆಗೆ ಕೇವಲ 10 ದಿನಗಳಿರುವಾಗ ಭೀಕರ ದುರಂತವೊಂದು ಸಂಭವಿಸಿದೆ. ಬೇಲೂರು ತಾಲ್ಲೂಕಿನ ಮನು ಎಂಬ ಯುವಕ, ಪ್ರೀ-ವೆಡ್ಡಿಂಗ್ ಶೂಟ್&zwnj;ಗೆ ತೆರಳುತ್ತಿದ್ದಾಗ ಸಕಲೇಶಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqefyb61rb5fz0aw18e2fshr,imgname-hassan-road-accident-1777529203905.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಮದುವೆ ಸಂಭ್ರಮದ ನಡುವೆ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಹಸೆಮಣೆ ಏರಬೇಕಿದ್ದ ವರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ &amp;nbsp;ನಡೆದಿದೆ &amp;nbsp;ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದ ಬಳಿ ಇಂದು ಬೆಳಿಗ್ಗೆ ಈ ಭೀಕರ ಅಪಘಾತ ಸಂಭವಿಸಿ ವರ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು. ಎಲ್&zwnj;.ಎನ್&zwnj;. (29) ಅಲಿಯಾಸ್ ಗಿರೀಶ್ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;ಮದುವೆಗಿನ್ನು 10 ದಿನವಷ್ಟೇ ಇತ್ತು&lt;/h2&gt;&lt;p&gt;ಮನು. ಎಲ್&zwnj;.ಎನ್&zwnj;. ಅವರ ವಿವಾಹ ಮೇ 10, 2026ರಂದು ನಿಗದಿಯಾಗಿತ್ತು. ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ, ಪ್ರೀ-ವೆಡ್ಡಿಂಗ್ ಶೂಟ್&zwnj;ಗೆ ವಧುವನ್ನು ಕರೆತರಲು ಅವರು ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ.&lt;/p&gt;&lt;p&gt;ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ಜಜ್ಜಿಹೋಗಿದ್ದು, ಮನು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ಕುಟುಂಬದವರನ್ನು ಹಾಗೂ ಗ್ರಾಮಸ್ಥರನ್ನು ಶೋಕ ಸಾಗರದಲ್ಲಿ &amp;nbsp;ಮುಳುಗುವಂತೆ ಮಾಡಿದೆ. ಕೆಲವೇ ದಿನಗಳಲ್ಲಿ ಮದುವೆ ನಡೆಯಬೇಕಿದ್ದ ಮನೆಯಲ್ಲೀಗ ಸಂತಸದ ಬದಲಿಗೆ ಸೂತಕದ ಛಾಯೆ ಆವರಿಸಿದೆ. ಸಂಬಂಧಿಕರು ಹಾಗೂ ಸ್ನೇಹಿತರು ಈ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ&lt;/h2&gt;&lt;p&gt;ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ದುರಂತವು ಮತ್ತೊಮ್ಮೆ ರಸ್ತೆ ಸುರಕ್ಷತೆಯ ಮಹತ್ವವನ್ನು ನೆನಪಿಸುತ್ತಿದ್ದು, ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕೆಂಬ ಸಂದೇಶವನ್ನು ಸಾರುತ್ತಿದೆ&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/groom-to-be-dies-in-tragic-sakleshpura-road-accident-in-hassan-days-before-wedding-gdp/articleshow-i8hln10"/>
        </item>
        <item>
            <title><![CDATA[ಡಿಎಂಕೆ-ಎಐಎಡಿಎಂಕೆ ಸೇರಿ ಸರ್ಕಾರ ಮಾಡೋ ನಂಬಿಕೆ ನನಗಿಲ್ಲ: ಎಚ್.ಡಿ.ಕುಮಾರಸ್ವಾಮಿ]]></title>
            <link>https://kannada.asianetnews.com/karnataka-districts/hd-kumaraswamy-on-tamil-nadu-politics-congress-tvk-govt-gvd/articleshow-ithupmd</link>
            <guid isPermaLink="true">https://kannada.asianetnews.com/karnataka-districts/hd-kumaraswamy-on-tamil-nadu-politics-congress-tvk-govt-gvd/articleshow-ithupmd</guid>
            <pubDate>Sat, 09 May 2026 00:26:33 +0530</pubDate>
            <description><![CDATA[&lt;p&gt;ಕೆಲವೊಂದು ಸಂದರ್ಭದಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಅವರದ್ದೇ ಆದ ಕಾನೂನು ಪಂಡಿತರ ಸಲಹೆ ಮೇರೆಗೆ ನಿರ್ಧಾರವನ್ನು ತೆಗೆದುಕೊಂಡಿದ್ದನ್ನು ಕಂಡಿದ್ದೇವೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjh4e3cpb1nh2cfx2c6c52gr,imgname-hd-kumaraswamy-1772249091477.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಳೆನರಸೀಪುರ (ಮೇ.09): &lt;/strong&gt;ಕೆಲವೊಂದು ಸಂದರ್ಭದಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಅವರದ್ದೇ ಆದ ಕಾನೂನು ಪಂಡಿತರ ಸಲಹೆ ಮೇರೆಗೆ ನಿರ್ಧಾರವನ್ನು ತೆಗೆದುಕೊಂಡಿದ್ದನ್ನು ಕಂಡಿದ್ದೇವೆ. ಅವರು ಸ್ಪಷ್ಟ ಬಹುಮತದ ಸಂಖ್ಯೆ ಸ್ಪಷ್ಟಪಡಿಸಿ ಎಂದಿದ್ದಾರೆ. ಡಿಎಂಕೆ-ಎಐಎಡಿಎಂಕೆ ಎರಡು ಪಕ್ಷಗಳು ಸೇರಿ ಸರ್ಕಾರ ಮಾಡುವುದನ್ನು ನಾನಂತೂ ನಿರೀಕ್ಷೆ ಮಾಡಲ್ಲ. ಅದೆಲ್ಲಾ ಉಹಾಪೋಹ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.&lt;/p&gt;&lt;p&gt;ತಾಲೂಕಿನ ಹಳೇಕೋಟೆಯ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು. ವಿಜಯ್ ಅವರು ಸಹ ಬಹುಮತ ಸಾಬೀತುಪಡಿಸಲು ಪ್ರಯತ್ನ ಮಾಡುತ್ತಿದ್ದಾರೆ ಮತ್ತು ಎರಡು ದಿನದಲ್ಲಿ ಅಸ್ಪಷ್ಟತೆ ಸರಿಪಡಿಸುವ ಸಾಧ್ಯತೆ ಇದೆ. ಜತೆಗೆ ಸ್ಟಾಲಿನ್ ಅವರು ಆರು ತಿಂಗಳು ಸರ್ಕಾರ ನಡೆಸಲಿ ತೊಂದರೆ ಕೊಡಲ್ಲ ಎಂದಿದ್ದಾರೆ. ಟಿವಿಕೆಗೆ ಕಾಂಗ್ರೆಸ್ ಬೆಂಬಲ ಕುರಿತು ಮಾತನಾಡಿ, ಕಾಂಗ್ರೆಸ್ ಪಕ್ಷದ ನಡವಳಿಕೆ ಬಗ್ಗೆ ಸಾಕಷ್ಟು ಕಂಡಿದ್ದೇವೆ, ಕಾಂಗ್ರೆಸ್ ಪಕ್ಷ ಯಾವ್ಯಾವ ಸಂದರ್ಭದಲ್ಲಿ, ಯಾವ್ಯಾವ್ಯ ರೀತಿ ಸರ್ಕಾರಗಳನ್ನು ಅಸ್ಥಿರಗೊಳಿಸಿದ್ದಾರೆ.&lt;/p&gt;&lt;p&gt;ಕೇಂದ್ರದಲ್ಲಿದ್ದಂತಹ ಚರಣ್ ಸಿಂಗ್ ಅವರಿಂದ ಪ್ರಾರಂಭವಾಗಿ ವಿಪಿ ಸಿಂಗ್, ಚಂದ್ರಶೇಖರ್, ಅದೇ ರೀತಿ ದೇವೇಗೌಡರು ಅಧಿಕಾರದಲ್ಲಿದ್ದಾಗ ಯಾವ ಕಾರಣಗಳನ್ನು ಕೊಟ್ಟು ಸರ್ಕಾರ ತೆಗೆದರು. ಕಾಂಗ್ರೆಸ್&zwnj;ನಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ತೀರ್ಮಾನ ಮಾಡುವ ಹಲವಾರು ಉಧಾಹರಣೆಗಳನ್ನು ಕೊಡಬಹುದು. ಇವತ್ತು ಡಿಎಂಕೆ ಜೊತೆ ಇಪ್ಪತ್ತು ವರ್ಷದ ಸಂಬಂಧ ಕಡಿದು ವಿಜಯ್ ಅವರ ಜೊತೆ ಸೇರಿದ್ದಾರೆ. ಅವರ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಅದರ ಬಗ್ಗೆ ನಾನೇಕೆ ಚರ್ಚೆ ಮಾಡಲಿ. ಕಾಲ ಅದಕ್ಕೆ ಉತ್ತರ ಕೊಡುತ್ತದೆ ಎಂದರು.&lt;/p&gt;&lt;p&gt;&lt;strong&gt;ಗ್ಯಾರಂಟಿ ನೀಡಲು 6ರಿಂದ 7 ಲಕ್ಷ ಕೋಟಿ ಬೇಕು: &lt;/strong&gt;ತಮಿಳುನಾಡಿನಲ್ಲಿ ನಾನಂತೂ ನಿರೀಕ್ಷೆ ಮಾಡಿದ್ದೆ, ಒಂದು ತಿಂಗಳ ಹಿಂದೆ ನಮ್ಮ ಸ್ನೇಹಿತರಿಗೆ ಹೇಳಿದ್ದೆ. ಕಳೆದ ಐವತ್ತು ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳ ಆಡಳಿತ ಏನೆಂದು ಅಲ್ಲಿಯ ಜನ ನೋಡಿದ್ರು, ಆದ್ದರಿಂದ ಒಂದು ಹೊಸ ವ್ಯವಸ್ಥೆ ತರಲು ಜನಸಾಮಾನ್ಯರು ನಿರ್ಧಾರ ಮಾಡ್ತಾರೆ ಎನ್ನುವ ನಿರೀಕ್ಷೆ ಇಟ್ಟಿದ್ದೆ ಎಂದರು. ತಮಿಳುನಾಡಿನಲ್ಲಿ ಸ್ವಲ್ಪ ಸಿನಿಮಾದ ಪ್ರಭಾವಕ್ಕೆ ಒಳಗಾಗುತ್ತಾರೆ, ಹಲವಾರು ಸಂದರ್ಭದಲ್ಲಿ ನಡೆದಿದೆ, ಈಗಲೂ ನಡೆದಿದೆ. ಒಂದು ಹೊಸ ಮುಖ, ವ್ಯಕ್ತಿ ಅಧಿಕಾರ ಕೊಡಬೇಕು ಎಂದು ಕೊಟ್ಟಿದ್ದಾರೆ.&lt;/p&gt;&lt;p&gt;ಉಚಿತ ಗ್ಯಾರಂಟಿಗಳ ಬಗ್ಗೆ ದೇವರು ಕಾಪಾಡಬೇಕು, ವಿಜಯ್ ಅವರಿಗೆ ಯಾರು ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಲು ಯಾರು ಪ್ರಭಾವ ಬೀರಿದ್ರೊ ಗೊತ್ತಿಲ್ಲ, ಅಲ್ಲಿಯ ಬಜೆಟ್ ವರ್ಷಕ್ಕೆ 3.40 ಲಕ್ಷ ಕೋಟಿ ಇದೆ ಮತ್ತು ಅವರ ಉಚಿತ ಗ್ಯಾರಂಟಿಗಳನ್ನು ನೀಡಲು 6 ರಿಂದ 7 ಲಕ್ಷ ಕೋಟಿ ಬೇಕು ಎಂದು ತಿಳಿಸಿ, ಅದ್ಯಾವ ತರ ಹಣ ಹೊಂದಿಸುತ್ತಾರೆ ಕಾದು ನೋಡಬೇಕು ಎಂದು ಮಾರ್ಮಿಕವಾಗಿ ನುಡಿದರು. ಈಗೀನ ಪಂಚರಾಜ್ಯಗಳ ಫಲಿತಾಂಶವನ್ನು ಬಹಳ ಜನ ನಿರೀಕ್ಷೆ ಮಾಡಿದ್ರು. ಆದರೆ ತಮಿಳುನಾಡಿನಲ್ಲಿ ಡಿಎಂಕೆ ಬರುತ್ತೆ ಅಂಥ ಮಾಧ್ಯಮಗಳಲ್ಲಿ ಬರುತ್ತಿತ್ತು, ಆದರೆ ಯಾರೂ ಸಹ ವಿಜಯ್ ಅವರ ಈಗೀನ ಸಾಧನೆಯನ್ನು ನಿರೀಕ್ಷೆ ಮಾಡಿರಲಿಲ್ಲ, ಅದೊಂದು ಮಾತ್ರ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ ಎಂದರು.&lt;/p&gt;&lt;p&gt;ಶೃಂಗೇರಿ ಮರುಎಣಿಕೆ ಸಂಬಂಧ ಪ್ರತಿಕ್ರಿಯಿಸಿ, ಎಫ್&zwnj;ಐಆರ್ ಆಗಿದೆ, ರಾಜೇಗೌಡ್ರು ಚುನಾವಣೆ ಆಯೋಗಕ್ಕೆ ಮತ್ತೊಂದು ದೂರು ಕೊಟ್ಟಿದ್ದಾರೆ. ಏನೇನು ಬೆಳವಣಿಗೆ ಆಗುತ್ತೆ ಅಂಥ ಮುಂದೆ ನೋಡೋಣ. ಈಗಿನ ಪರಿಸ್ಥಿತಿಯಲ್ಲಿ ಓಟ್ ಚೋರಿ ಬಗ್ಗೆ ಚರ್ಚೆ ಮಾಡ್ತರಲ್ಲಾ ಅದಕ್ಕೆ ಯಾವುದೇ ಅರ್ಥ ಇಲ್ಲ. ಓಟ್ ಚೋರಿ ಬಗ್ಗೆ ಚರ್ಚೆ ಮಾಡುವ ನೈತಿಕತೆಯೂ ಇಲ್ಲ. ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಬದಲಾವಣೆ ಆಗಬಹುದು ಎಂಬುದು ಜನಸಾಮಾನ್ಯರ ಚರ್ಚೆ ಇದೆ. ಕಾದು ನೋಡೋಣ ಏನೇನು ಆಗುತ್ತೆ ಅಂಥ ಮತ್ತು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಾತಾವರಣ ಇಲ್ಲ, ಇಲ್ಲಿಯ ರಾಜಕಾರಣಕ್ಕೂ, ಬೇರೆ ರಾಜ್ಯಗಳ ರಾಜಕಾರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದರು.&lt;/p&gt;&lt;h2&gt;&lt;strong&gt;ದೀದಿಯದ್ದು ಬಾಲಿಶ ಹೇಳಿಕೆ&lt;/strong&gt;&lt;/h2&gt;&lt;p&gt;ಇಡಿ, ಐಟಿ ದುರುಪಯೋಗ ಎಂಬ ಕಾಂಗ್ರೆಸ್ ಆರೋಪ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರಿಗೆ ಬೇಕಾದಂತೆ ಕಾಂಗ್ರೆಸ್&zwnj;ನವರು ವ್ಯಾಖ್ಯಾನ ಮಾಡ್ತಾರೆ, ಅವರಿಗೆ ಬೇಕಾದಾಗ ಚೆನ್ನಾಗಿದೆ ಅಂತರೆ, ಸೋತಾಗ ಚೆನ್ನಾಗಿಲ್ಲ ಅಂತಾರೆ, ಪಶ್ಚಿಮ ಬಂಗಾಳದಲ್ಲಿ ಸ್ಪಷ್ಟ ಬಹುಮತ ಬಂದಿದೆ ಎಂದು ಎಲೆಕ್ಷನ್ ಕಮಿಷನ್&zwnj;ನಿಂದ ಘೋಷಣೆ ಆದ ಮೇಲೆ ಮುಗಿತು, ಮಮತಾ ಬ್ಯಾನರ್ಜಿಯವರು ರಾಜೀನಾಮೆ ಕೊಡಲ್ಲ ಎನ್ನುವುದು ಬಾಲಿಶವಾದ ಹೇಳಿಕೆ, ಆ ರೀತಿಯ ವಾತಾವರಣ ನಮ್ಮ ಸಂವಿಧಾನದಲ್ಲಿ ಇಲ್ಲ ಮದು ಮಮತ ಬ್ಯಾನರ್ಜಿ ವರ್ತನೆಗೆ ಬೇಸರ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ವಿಚಾರದಲ್ಲಿ ಮಾತನಾಡಿ, ಯಡಿಯೂರಪ್ಪ ಅವರ ಐವತ್ತು ವರ್ಷದ ಸಾಧನೆ ಬಗ್ಗೆ, ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ಬಿಜೆಪಿ ಪಕ್ಷದಿಂದ ಕಾರ್ಯಕ್ರಮ ನಡೀತಿದೆ ಮತ್ತು ಬೇರೆ ಕಾರ್ಯಕ್ರಮ ಇರುವುದರಿಂದ ಹೋಗ್ತಾ ಇಲ್ಲ ಎಂದು ತಿಳಿಸಿದರು.&lt;/p&gt;]]></content:encoded>
            <category>hassan</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/hd-kumaraswamy-on-tamil-nadu-politics-congress-tvk-govt-gvd/articleshow-ithupmd"/>
        </item>
        <item>
            <title><![CDATA[ಬೆಟ್ಟದ ಬೈರವೇಶ್ವರ ಟೆಂಪಲ್ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಶೂಟ್; ಫೋಟೋಗ್ರಾಫರ್‌ಗಳ ಹಲ್ಲೆಗೆ ಹೊರಬಿತ್ತು ಕಾರಣ!]]></title>
            <link>https://kannada.asianetnews.com/karnataka-districts/sakaleshpura-photographers-attacked-during-pre-wedding-shoot-at-bettada-bhairaveshwara-temple-sat/articleshow-k59zrbr</link>
            <guid isPermaLink="true">https://kannada.asianetnews.com/karnataka-districts/sakaleshpura-photographers-attacked-during-pre-wedding-shoot-at-bettada-bhairaveshwara-temple-sat/articleshow-k59zrbr</guid>
            <pubDate>Fri, 27 Mar 2026 20:57:42 +0530</pubDate>
            <description><![CDATA[&lt;p&gt;ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಬೈರವೇಶ್ವರ ದೇವಸ್ಥಾನದ ಬಳಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸುತ್ತಿದ್ದ ಫೋಟೋಗ್ರಾಫರ್&zwnj;ಗಳ ಮೇಲೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ದೇವಾಲಯದ ಆವರಣದಲ್ಲಿ ನಿಯಮ ಉಲ್ಲಂಘಿಸಿದ್ದೇ ಗಲಾಟೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmqya0hbfb82radr6346rfmz,imgname-hassan-temple-1774625030698.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮಾ.27): ಪ್ರ&lt;/strong&gt;ಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಂದರ ಪ್ರವಾಸಿ ತಾಣವೊಂದು ಇಂದು ಬೆಳ್ಳಂಬೆಳಗ್ಗೆ ರಣರಂಗವಾಗಿ ಮಾರ್ಪಟ್ಟಿತ್ತು. ಪ್ರಸಿದ್ಧ ಬೆಟ್ಟದ ಬೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ (Pre-wedding shoot) ನಡೆಸುತ್ತಿದ್ದ ಫೋಟೋಗ್ರಾಫರ್&zwnj;ಗಳ ಮೇಲೆ ಸ್ಥಳೀಯರು ಎಂದು ಹೇಳಿಕೊಂಡ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಮಲೆನಾಡಿನ ಸುಂದರ ಪರಿಸರದಲ್ಲಿ ತಮ್ಮ ಮದುವೆಯ ನೆನಪುಗಳನ್ನು ಸೆರೆಹಿಡಿಯಲು ನವಜೋಡಿಯೊಂದು ಫೋಟೋಗ್ರಾಫರ್&zwnj;ಗಳ ತಂಡದೊಂದಿಗೆ ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಸ್ಥಾನಕ್ಕೆ ಬಂದಿತ್ತು. ಮುಂಜಾನೆಯ ಮಂಜಿನ ನಡುವೆ ಶೂಟಿಂಗ್ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಕೆಲ ಸ್ಥಳೀಯ ಯುವಕರು, 'ಇಲ್ಲಿ ಯಾಕೆ ಶೂಟಿಂಗ್ ಮಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಫೋಟೋಗ್ರಾಫರ್&zwnj;ಗಳು ಮತ್ತು ಸ್ಥಳೀಯ ಯುವಕರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.&lt;/p&gt;&lt;h2&gt;&lt;strong&gt;ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುವು:&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಕೇವಲ ಮಾತಿನ ಚಕಮಕಿಯಾಗಿದ್ದ ಈ ಘಟನೆ, ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿದೆ. ಸ್ಥಳೀಯರು ಎಂದು ಹೇಳಿಕೊಂಡ ಗುಂಪು ಫೋಟೋಗ್ರಾಫರ್&zwnj;ಗಳ ಮೇಲೆ ಏಕಾಏಕಿ ಹಲ್ಲೆ ನಡೆಸಲು ಮುಂದಾಗಿದೆ. 'ಯಾಕಪ್ಪ ಹೊಡಿತಾ ಇದ್ದೀರಿ? ನಮ್ಮ ತಪ್ಪೇನಿದೆ?' ಎಂದು ಫೋಟೋಗ್ರಾಫರ್&zwnj;ಗಳು ಅಸಹಾಯಕತೆಯಿಂದ ಪ್ರಶ್ನಿಸಿದರೂ ಕೇಳದ ಉದ್ರಿಕ್ತ ಗುಂಪು, ಗೂಂಡಾಗಿರಿ ಪ್ರದರ್ಶಿಸಿ ಅವರ ಮೇಲೆ ಹಿಗ್ಗಾಮುಗ್ಗಾ ಕೈ ಮಾಡಿದೆ ಎನ್ನಲಾಗಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ದೇವಸ್ಥಾನದ ಪವಿತ್ರ ಆವರಣದಲ್ಲಿ ಗಲಾಟೆಯ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;h2&gt;&lt;strong&gt;ಹಲ್ಲೆಗೆ ಅಸಲಿ ಕಾರಣವೇನು?&lt;/strong&gt;&lt;/h2&gt;&lt;p&gt;ಹಲ್ಲೆಯ ಬಳಿಕ ಎರಡೂ ಕಡೆಯವರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಧಾವಿಸಿದ್ದು, ಪರಸ್ಪರ ದೂರು ನೀಡಿದ್ದಾರೆ. ಫೋಟೋಗ್ರಾಫರ್&zwnj;ಗಳು ತಮಗೆ ಅನ್ಯಾಯವಾಗಿ ಹೊಡೆದಿದ್ದಾರೆ ಎಂದು ದೂರಿದ್ದಾರೆ. ಆದರೆ, ಸ್ಥಳೀಯರು ತಾವು ಹಲ್ಲೆ ಮಾಡುವುದಕ್ಕೆ ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. ಈ ಪ್ರಸಿದ್ಧ ದೇವಸ್ಥಾನದ ಬಳಿ ನಿಯಮ ಎಲ್ಲಿಂದಲೋ ಬರುವ ಫೋಟೋ ಶೂಟ್ ಮಾಡಿಸಿಕೊಳ್ಳುವವರು ಇಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಇನ್ನು ಫೋಟೋಗ್ರಾಫರ್&zwnj;ಗಳಿಗೆ ನಿಯಮ ಪಾಲನೆಗೆ ಹೇಳಿದರೂ ಕೇಳದೆ ಪುನಃ ಹೊಸ ಆರ್ಡರ್&zwnj;ಗಳನ್ನು ತೆಗೆದುಕೊಂಡು ವಾಪಸ್ ಇಲ್ಲಿಗೇ ಬರುತ್ತಾರೆ. ಇದೀಗ ಹಲ್ಲೆಗೆ ಒಳಗಾದ ಫೋಟೋಗ್ರಾಫರ್&zwnj;ಗಳು ಹೊಸ ಜೋಡಿಗಳಿಗೆ ದೇವಾಲಯ ಆವರಣದಲ್ಲಿ ಚಪ್ಪಲಿ ಹಾಗೂ ಶೂ ಹಾಕಿಕೊಂಡು ಫೋಟೋ ಶೂಟಿಂಗ್ ಮಾಡಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಹೀಗಾಗಿ, ಹಲ್ಲೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಪ್ರವಾಸಿಗರಲ್ಲಿ ಆತಂಕ:&lt;/strong&gt;&lt;/h3&gt;&lt;p&gt;ಸಕಲೇಶಪುರ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಪ್ರೀ ವೆಡ್ಡಿಂಗ್ ಶೂಟಿಂಗ್&zwnj;ಗೆ ಹೇಳಿ ಮಾಡಿಸಿದ ಜಾಗಗಳಾಗಿವೆ. ಪ್ರತಿ ದಿನ ನೂರಾರು ತಂಡಗಳು ಇಲ್ಲಿಗೆ ಆಗಮಿಸುತ್ತವೆ. ಆದರೆ, ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಇಂತಹ ಸಂಘರ್ಷಗಳು ಮರುಕಳಿಸುತ್ತಿರುವುದು ಪ್ರವಾಸಿಗರಲ್ಲಿ ಭೀತಿ ಮೂಡಿಸಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಇಂತಹ ಜಾಗಗಳಲ್ಲಿ ಸೂಕ್ತ ನಿಯಮಗಳನ್ನು ರೂಪಿಸಿ, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/sakaleshpura-photographers-attacked-during-pre-wedding-shoot-at-bettada-bhairaveshwara-temple-sat/articleshow-k59zrbr"/>
        </item>
        <item>
            <title><![CDATA[ಹಾಸನ: ಪ್ರೀತಿಸಿದ ವಿವಾಹಿತೆ ಜೊತೆ ಓಡಿ ಹೋಗಿ ಕಾರಲ್ಲಿ ತಾಳಿ ಕಟ್ಟಿದ ಪ್ರಿಯಕರ! 8 ವರ್ಷದ ವಿವಾಹ ತ್ಯಜಿಸಿದ ಮಹಿಳೆ!]]></title>
            <link>https://kannada.asianetnews.com/karnataka-districts/hassan-shocker-married-woman-elopes-with-lover-marries-him-inside-car-video-goes-viral-gdp/articleshow-kbkha5z</link>
            <guid isPermaLink="true">https://kannada.asianetnews.com/karnataka-districts/hassan-shocker-married-woman-elopes-with-lover-marries-him-inside-car-video-goes-viral-gdp/articleshow-kbkha5z</guid>
            <pubDate>Mon, 13 Apr 2026 19:22:49 +0530</pubDate>
            <description><![CDATA[ಹಾಸನದಲ್ಲಿ ಎಂಟು ವರ್ಷಗಳ ವಿವಾಹಿತ ಮಹಿಳೆಯೊಬ್ಬಳು, ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಸಾಂತ್ವನ ಕೇಂದ್ರದಿಂದ ಬಂದ ಕೆಲವೇ ಸಮಯದಲ್ಲಿ ಆಕೆ ಪರಾರಿಯಾಗಿ, ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp3htb3qd7cyc94wy4x4ctzx,imgname-married-woman-elopes-with-lover-in-hassan-karnataka-1776088329335.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ಜಿಲ್ಲೆಯಲ್ಲಿ ಅಚ್ಚರಿಗೊಳಿಸುವಂತೆಯೇ ಚರ್ಚೆಗೆ ಕಾರಣವಾದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆಯೊಬ್ಬಳು ತನ್ನ ಗಂಡನನ್ನು ಬಿಟ್ಟು, ರಾತ್ರೋರಾತ್ರಿ ಪ್ರಿಯಕರನೊಂದಿಗೆ ಪರಾರಿಯಾಗಿ, ಕಾರಿನಲ್ಲೇ ಮದುವೆಯಾಗಿರುವ ಘಟನೆ ಹಾಸನದ ಗೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಮೂಲಗಳ ಪ್ರಕಾರ, ಈ ಮಹಿಳೆಗೆ ಸುಮಾರು ಎಂಟು ವರ್ಷಗಳ ಹಿಂದೆ ತನ್ನ ಸಂಬಂಧಿಕನೊಬ್ಬನೊಂದಿಗೆ ವಿವಾಹವಾಗಿತ್ತು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆಯಾಗದೆ ಗಂಡ-ಹೆಂಡತಿ ನಡುವೆ ಪದೇಪದೇ ಕಲಹಗಳು ನಡೆಯುತ್ತಿದ್ದವು. ಈ ನಡುವೆ ಮಹಿಳೆಗೆ ಮತ್ತೊಬ್ಬನೊಂದಿಗೆ ಪ್ರೇಮ ಸಂಬಂಧವೂ ಇತ್ತು.&lt;/p&gt;&lt;h2&gt;ಕುಟುಂಬ ಮಧ್ಯಸ್ಥಿಕೆ ಮಾಡಿದ್ರು ಸರಿ ಹೋಗಿಲ್ಲ&lt;/h2&gt;&lt;p&gt;ಈ ಸಂಬಂಧ ಕುಟುಂಬಸ್ಥರು ಹಲವು ಬಾರಿ ಮಧ್ಯಸ್ಥಿಕೆ ವಹಿಸಿ ರಾಜಿ ಪಂಚಾಯಿತಿ ನಡೆಸಿ, ಮಹಿಳೆಯನ್ನು ಗಂಡನೊಂದಿಗೆ ಜೀವನ ಮುಂದುವರಿಸಲು ಮನವೊಲಿಸಲು ಪ್ರಯತ್ನಿಸಿದ್ದರು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿ ಗೆರೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ನಡುವೆ ಮಾತುಕತೆ ನಡೆಸಲಾಗಿತ್ತು. ಬಳಿಕ ಪೊಲೀಸರೇ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೂ ಕಳುಹಿಸಿ, ಕುಟುಂಬ ಜೀವನ ಸರಿಪಡಿಸುವ ಪ್ರಯತ್ನ ಮಾಡಿದ್ದರು.&lt;/p&gt;&lt;h2&gt;ರಾತ್ರೋ ರಾತ್ರಿ ಪರಾರಿ!&lt;/h2&gt;&lt;p&gt;ಈ ಎಲ್ಲ ಸತತ ಪ್ರಯತ್ನಗಳ ಬಳಿಕವೂ ಮಹಿಳೆ &ldquo;ನಾನು ಗಂಡನೊಂದಿಗೆ ಬದುಕುತ್ತೇನೆ&rdquo; ಎಂದು ನಂಬಿಕೆ ಮೂಡಿಸಿದಳು. ಆದರೆ ಅದು ಕೇವಲ ನಾಟಕವಾಗಿದ್ದು, ಸಾಂತ್ವನ ಕೇಂದ್ರದಿಂದ ಗಂಡನ ಮನೆಗೆ ಮರಳಿದ ಕೆಲವೇ ಸಮಯದಲ್ಲಿ ತನ್ನ ಪ್ರಿಯಕರನನ್ನು ಸಂಪರ್ಕಿಸಿ, ರಾತ್ರೋರಾತ್ರಿ ಆತನೊಂದಿಗೆ ಪರಾರಿಯಾಗಿದ್ದಾಳೆ.&lt;/p&gt;&lt;p&gt;ಪರಾರಿಯಾದ ನಂತರ, ಮಹಿಳೆ ತನ್ನ ಪ್ರಿಯಕರನೊಂದಿಗೆ ಕಾರಿನಲ್ಲೇ ಮದುವೆಯಾಗಿದ್ದಾಳೆ. ಕಾರಿನೊಳಗೇ ಪ್ರಿಯಕರನು ಆಕೆಗೆ ತಾಳಿ ಕಟ್ಟಿದ್ದು, ಕಾಲಿಗೆ ಕಾಲುಂಗುರ ತೊಡಿಸಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದ್ದು, ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಈ ಘಟನೆಯಿಂದ ಮಹಿಳೆಯ ಕುಟುಂಬಸ್ಥರು ಮತ್ತು ಗಂಡ ಪ್ರಕಾಶ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ತನ್ನನ್ನು ಮೋಸಗೊಳಿಸಲಾಗಿದೆ ಎಂದು ಪತಿ ಆರೋಪಿಸಿದ್ದು, ಈ ಪ್ರಕರಣದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಹಾಸನದಲ್ಲಿ ನಡೆದ ಈ ಘಟನೆ ದಾಂಪತ್ಯ ಸಂಬಂಧಗಳ ವಿಶ್ವಾಸ, ಕುಟುಂಬ ವ್ಯವಸ್ಥೆ ಹಾಗೂ ಸಾಮಾಜಿಕ ಮೌಲ್ಯಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hassan-shocker-married-woman-elopes-with-lover-marries-him-inside-car-video-goes-viral-gdp/articleshow-kbkha5z"/>
        </item>
        <item>
            <title><![CDATA[ಹಾಸನ: ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳ ಫೈಟ್! ಹೆಚ್‌ಆರ್‌ಪಿ ಕಚೇರಿಯಲ್ಲಿ ಹೈಡ್ರಾಮಾ!]]></title>
            <link>https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0</link>
            <guid isPermaLink="true">https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0</guid>
            <pubDate>Fri, 01 May 2026 13:29:55 +0530</pubDate>
            <description><![CDATA[&lt;p&gt;ಹಾಸನದ ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ವರ್ಗಾವಣೆಗೊಂಡ ಅಧಿಕಾರಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಮರಳಿದ್ದಾರೆ. ನೂತನವಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿ ಮತ್ತು ಹಿಂದಿನ ಅಧಿಕಾರಿಯ ನಡುವೆ ಒಂದೇ ಕುರ್ಚಿಗಾಗಿ ಜಿದ್ದಾಜಿದ್ದಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqh8mg8gax28d8zxrky28cpr,imgname-hassan-govt-officials-1777622204688.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮೇ 01): &lt;/strong&gt;ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಹೇಮಾವತಿ ಜಲಾಶಯ ಯೋಜನೆಯ (HRP) ವಿಶೇಷ ಭೂಸ್ವಾಧೀನಾಧಿಕಾರಿ (SLAO) ಕಚೇರಿ ಈಗ ಹೈಡ್ರಾಮಾದ ಕೇಂದ್ರಬಿಂದುವಾಗಿದೆ. ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಸಾರ್ವಜನಿಕರು ಮತ್ತು ಸಿಬ್ಬಂದಿ ಕಣ್ಣರಳಿಸಿ ನೋಡುವಂತಾಗಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಕಳೆದ ಒಂದು ವಾರದ ಹಿಂದೆಯಷ್ಟೇ ಹೇಮಾವತಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ಜಾಗಕ್ಕೆ ಮಹೇಶ್ ಎಂಬ ಅಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದಂತೆ ನೂತನ ಅಧಿಕಾರಿ ಮಹೇಶ್ ಅವರು ಈಗಾಗಲೇ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿ, ಅಧಿಕಾರಿಯ ಕುರ್ಚಿಯ ಮೇಲೆ ಕುಳಿತಿದ್ದಾರೆ.&lt;/p&gt;&lt;h2&gt;&lt;strong&gt;ಕೆಎಟಿ ಮೊರೆ ಹೋದ ಮಂಜುನಾಥ್:&lt;/strong&gt;&lt;/h2&gt;&lt;p&gt;ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಹಿಂದಿನ ಅಧಿಕಾರಿ ಮಂಜುನಾಥ್ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಮೆಟ್ಟಿಲೇರಿದ್ದರು. ಮಂಜುನಾಥ್ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮಂಡಳಿಯು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ (Stay) ನೀಡಿದೆ. ನ್ಯಾಯಾಲಯದಿಂದ ಸ್ಟೇ ತಂದ ಬೆನ್ನಲ್ಲೇ ಮಂಜುನಾಥ್ ಅವರು ಕಚೇರಿಗೆ ಹಾಜರಾಗಿದ್ದಾರೆ.&lt;/p&gt;&lt;h3&gt;&lt;strong&gt;ಚೇರ್ ಮೇಲೆ ಹೊಸಬರು, ಪಕ್ಕದಲ್ಲೇ ನಿಂತ ಹಳಬರು!&lt;/strong&gt;&lt;/h3&gt;&lt;p&gt;ಸದ್ಯ ಕಚೇರಿಯಲ್ಲಿ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನವಾಗಿ ಅಧಿಕಾರ ಸ್ವೀಕರಿಸಿರುವ ಮಹೇಶ್ ಅವರು ಅಧಿಕೃತವಾಗಿ ಕುರ್ಚಿಯ ಮೇಲೆ ಕುಳಿತಿದ್ದರೆ, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಮಂಜುನಾಥ್ ಅವರು ಪಕ್ಕದಲ್ಲೇ ನಿಂತು ತಮಗೆ ಕುರ್ಚಿ ಬಿಟ್ಟುಕೊಡುವಂತೆ ಆಗ್ರಹಿಸುತ್ತಿದ್ದಾರೆ. &quot;ನನ್ನ ವರ್ಗಾವಣೆಗೆ ಕೋರ್ಟ್ ತಡೆ ನೀಡಿದೆ, ಹಾಗಾಗಿ ಈ ಸ್ಥಾನ ನನಗೆ ಸೇರಬೇಕು&quot; ಎಂಬುದು ಮಂಜುನಾಥ್ ವಾದ. ಆದರೆ, &quot;ನಾನು ಸರ್ಕಾರದ ಆದೇಶದಂತೆ ಅಧಿಕಾರ ಸ್ವೀಕರಿಸಿದ್ದೇನೆ&quot; ಎನ್ನುವುದು ಮಹೇಶ್ ಅವರ ನಿಲುವು.&lt;/p&gt;&lt;h3&gt;&lt;strong&gt;ಗೊಂದಲದಲ್ಲಿ ಕಚೇರಿ ಸಿಬ್ಬಂದಿ:&lt;/strong&gt;&lt;/h3&gt;&lt;p&gt;ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಪಟ್ಟು ಹಿಡಿದಿರುವುದರಿಂದ ಕಚೇರಿಯ ಕಡತಗಳ ವಿಲೇವಾರಿ ಮತ್ತು ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗಿದೆ. ಯಾವ ಅಧಿಕಾರಿಯ ಆದೇಶ ಪಾಲಿಸಬೇಕು ಎಂಬ ಗೊಂದಲದಲ್ಲಿ ಸಿಬ್ಬಂದಿ ವರ್ಗದವರಿದ್ದಾರೆ. ಹೇಮಾವತಿ ಜಲಾಶಯ ಯೋಜನೆಯಂತಹ ಪ್ರಮುಖ ವಿಭಾಗದಲ್ಲಿ ಈ ರೀತಿ ಅಧಿಕಾರಿಗಳ ನಡುವಿನ ಕಿತ್ತಾಟ ಸಾರ್ವಜನಿಕರ ಟೀಕೆಗೂ ಗುರಿಯಾಗಿದೆ.&lt;/p&gt;&lt;p&gt;ಸದ್ಯ ಈ ಕುರ್ಚಿ ಸಮರ ಜಿಲ್ಲಾಡಳಿತದ ಅಂಗಳ ತಲುಪಿದ್ದು, ಈ ಹಗ್ಗಜಗ್ಗಾಟಕ್ಕೆ ಯಾರು ಬ್ರೇಕ್ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>hassan</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0"/>
        </item>
        <item>
            <title><![CDATA[ಶೇಖಿ ಅಣ್ಣನ ಅಂಗಡಿಗೆ ಬೀಗ; ಅಕ್ಷರಗಳ ಯುಗಕ್ಕೆ ತೆರೆ ಓದುಗರ ಮನದಲ್ಲಿ ಉಳಿದ ಅಯ್ನೋರ ನೆನಪು]]></title>
            <link>https://kannada.asianetnews.com/karnataka-districts/hassan-district-arasikete-shekhi-anna-shop-closed-the-end-of-a-chapter-in-reading-culture-and-journalism-heritage-mrq/articleshow-mkfgcaa</link>
            <guid isPermaLink="true">https://kannada.asianetnews.com/karnataka-districts/hassan-district-arasikete-shekhi-anna-shop-closed-the-end-of-a-chapter-in-reading-culture-and-journalism-heritage-mrq/articleshow-mkfgcaa</guid>
            <pubDate>Fri, 10 Apr 2026 18:34:55 +0530</pubDate>
            <description><![CDATA[&lt;p&gt;ನಾಲ್ಕು ದಶಕಗಳ ಕಾಲ ಅಕ್ಷರ ಸೇವೆ ಸಲ್ಲಿಸಿದ, ಓದುಗರ ಸಾಂಸ್ಕೃತಿಕ ಕೇಂದ್ರವಾಗಿದ್ದ 'ಅಯ್ನೋರು ಅಂಗಡಿ' (ಶೇಖಿ ಅಣ್ಣನ ಅಂಗಡಿ) ಇದೀಗ ಇತಿಹಾಸದ ಪುಟ ಸೇರಿದೆ. ಈ ಅಂಗಡಿಯ ಮುಚ್ಚುವಿಕೆಯು ನಗರದ ಓದು ಸಂಸ್ಕೃತಿ ಮತ್ತು ಪತ್ರಿಕಾ ಪರಂಪರೆಯ ಒಂದು ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knvqmrbgwcnevyrd2hvq97tc,imgname-arasikere-1775826002288.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&amp;nbsp;&lt;/strong&gt; ಅರಸೀಕೆರೆ ನಗರದ ಹೃದಯ ಭಾಗದಲ್ಲಿ ನಾಲ್ಕು ದಶಕಗಳ ಕಾಲ ಅಕ್ಷರಗಳ ಪರಿಮಳ ಹರಡುತ್ತಿದ್ದ, ಸಾವಿರಾರು ಓದುಗರ ಬೆಳಗಿನ ಅಭ್ಯಾಸಕ್ಕೆ ಜೀವ ತುಂಬುತ್ತಿದ್ದ, ಪತ್ರಿಕಾ ಲೋಕದ ಅನೇಕ ನೆನಪುಗಳನ್ನು ಹೊತ್ತಿದ್ದ &lsquo;ಅಯ್ನೋರು ಅಂಗಡಿ(ಶೇಖಿಅಣ್ಣನ ಅಂಗಡಿ)&rsquo; ಇದೀಗ ಇತಿಹಾಸದ ಪುಟ ಸೇರಿದೆ.&lt;/p&gt;&lt;p&gt;ದಿವಂಗತ ಮರುಳ ಸಿದ್ದಯ್ಯ ಅವರ ಮಾಲೀಕತ್ವದಲ್ಲಿ ಆರಂಭವಾಗಿ, ನಂತರ ಕುಟುಂಬದ ಸದಸ್ಯರ ಶ್ರಮದಿಂದ ಮುಂದುವರಿದ ಈ ಅಕ್ಷರ ಮನೆ ಇಂದು ಬಾಗಿಲು ಮುಚ್ಚಿರುವುದು ಕೇವಲ ಒಂದು ಅಂಗಡಿ ಮುಚ್ಚಿದ ಘಟನೆ ಮಾತ್ರವಲ್ಲ; ಅರಸೀಕೆರೆಯ ಓದು ಸಂಸ್ಕೃತಿ, ಪತ್ರಿಕಾ ಪರಂಪರೆ ಮತ್ತು ಮಾನವೀಯ ಸಂಬಂಧಗಳ ಒಂದು ಅಧ್ಯಾಯವೇ ಅಂತ್ಯ ಕಂಡಂತಾಗಿದೆ.&lt;/p&gt;&lt;h2&gt;&lt;strong&gt;ಅಕ್ಷರ ಭಂಡಾರ&lt;/strong&gt;&lt;/h2&gt;&lt;p&gt;ಒಂದು ಕಾಲದಲ್ಲಿ ಬೆಳಗಿನ ಜಾವವೇ ನಗರದ ನಾಡಿಯಂತೆ ಚುರುಕುಗೊಂಡು, ರಾಜ್ಯ, ಪ್ರಾದೇಶಿಕ ಹಾಗೂ ಜಿಲ್ಲಾ ಮಟ್ಟದ ದಿನಪತ್ರಿಕೆಗಳು, ವಾರಪತ್ರಿಕೆಗಳು, ಸಂಚಿಕೆಗಳು, ಸಾಹಿತ್ಯ ಕೃತಿಗಳು ಮತ್ತು ಸುದ್ದಿಯ ಹೊಸಹೊಸ ಹರಿವುಗಳನ್ನು ಓದುಗರ ಕೈಗೆ ತಲುಪಿಸುತ್ತಿದ್ದ ಈ ಮಳಿಗೆ, ಅನೇಕ ಮಂದಿಗೆ &lsquo;ಅಂಗಡಿ&rsquo;ಗಿಂತ ಹೆಚ್ಚಾಗಿ &lsquo;ಅಕ್ಷರ ಭಂಡಾರ&rsquo;ವಾಗಿತ್ತು. ಪತ್ರಿಕೆ ಖರೀದಿಸಲು ಬಂದವರಿಗಷ್ಟೇ ಅಲ್ಲ, ಲೇಖಕರು, ವರದಿಗಾರರು, ಪತ್ರಿಕಾ ಪ್ರತಿನಿಧಿಗಳು, ಸಾಹಿತ್ಯಾಸಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ರಾಜಕೀಯ ಆಸಕ್ತರಿಗೂ ಇದು ಪ್ರತಿದಿನದ ತಂಗುದಾಣವಾಗಿತ್ತು.&lt;/p&gt;&lt;p&gt;ಸಾರ್ವಜನಿಕ ವಲಯದಲ್ಲಿ ಪ್ರೀತಿಯಿಂದ ಅಯ್ನೋರು ಎಂದೇ ಪರಿಚಿತರಾಗಿದ್ದ ದಿವಂಗತ ಮರುಳ ಸಿದ್ದಯ್ಯ ಅವರು, ಪತ್ರಿಕೆ ಮಾರಾಟವನ್ನು ಕೇವಲ ವೃತ್ತಿಯಾಗಿ ನೋಡಲಿಲ್ಲ. ಜನರಿಗೆ ಸುದ್ದಿ ತಲುಪಿಸುವ ಕೆಲಸವನ್ನು ಅವರು ಒಂದು ಸಾಮಾಜಿಕ ಜವಾಬ್ದಾರಿಯಂತೆ ನಿರ್ವಹಿಸಿದ್ದರು. ಬಳಿಕ ಪುತ್ರಿ ಟಿ.ಎಂ. ರೇಣುಕ ಅವರೊಂದಿಗೆ ಈ ಕಾರ್ಯವನ್ನು ಮುಂದುವರಿಸಿದ ಕುಟುಂಬ, ಕಳೆದ ಸುಮಾರು 25 ವರ್ಷಗಳಿಂದ ಕಿರಿಯ ಪುತ್ರ ಟಿ.ಎಂ. ಚಂದ್ರಶೇಖರ್ ಮತ್ತು ಸೊಸೆ ಟಿ.ಎಸ್. ಪ್ರತಿಭಾ ಅವರ ಕೈಯಲ್ಲಿ ಈ ಅಕ್ಷರ ಪರಂಪರೆಯನ್ನು ಜೀವಂತವಾಗಿಟ್ಟಿತ್ತು.&lt;/p&gt;&lt;p&gt;ಈ ಅಂಗಡಿಗೆ ಬಂದವರು ಕೇವಲ ಪತ್ರಿಕೆಗಳನ್ನು ಖರೀದಿಸಿ ತೆರಳುವುದಷ್ಟೇ ಆಗಿರಲಿಲ್ಲ. ಇಲ್ಲಿ ಪ್ರತಿದಿನ ಸುದ್ದಿಗಳ ವಿನಿಮಯ ನಡೆಯುತ್ತಿತ್ತು. ರಾಜ್ಯ ರಾಜಕೀಯದಿಂದ ಹಿಡಿದು ಸ್ಥಳೀಯ ಸಮಸ್ಯೆಗಳವರೆಗೆ, ರಾಷ್ಟ್ರದ ಬೆಳವಣಿಗೆಗಳಿಂದ ಹಿಡಿದು ಊರ ಜಾತ್ರೆಯವರೆಗೆ, ಒಂದು ಕಪ್ ಚಹಾ ಜೊತೆಗೆ ಚರ್ಚೆಗಳು ಹೊಮ್ಮುತ್ತಿದ್ದವು. ಅನೇಕ ಹಿರಿಯ ಪತ್ರಕರ್ತರು, ಸ್ಥಳೀಯ ವರದಿಗಾರರು ತಮ್ಮ ವೃತ್ತಿ ಜೀವನದ ಆರಂಭಿಕ ಹೆಜ್ಜೆಗಳನ್ನು ಇದೇ ಅಂಗಡಿಯ ಸುತ್ತಮುತ್ತ ಇಟ್ಟಿದ್ದರೆ, ಹಲವು ಸುದ್ದಿಗಳು ಇಲ್ಲಿ ಹುಟ್ಟಿ ನಂತರ ಪತ್ರಿಕೆಯ ಪುಟ ಸೇರಿದ್ದವು ಎಂಬುದು ಹಿರಿಯರ ನೆನಪು.&lt;/p&gt;&lt;h3&gt;&lt;strong&gt;ಸಾಮಾನ್ಯ ವ್ಯಾಪಾರ ಮಳಿಗೆ&lt;/strong&gt;&lt;/h3&gt;&lt;p&gt;ತಂತ್ರಜ್ಞಾನ ಇಷ್ಟಾಗಿ ಬೆಳೆದಿರದ ಕಾಲದಲ್ಲಿ, ಕೈಬರಹದ ಸುದ್ದಿಗಳನ್ನು ಕಳುಹಿಸುವ ವ್ಯವಸ್ಥೆ ಇದ್ದಾಗ, ಪತ್ರಿಕಾ ಪ್ರತಿನಿಧಿಗಳ ಅಡ್ಡೆಯಾಗಿಯೂ, ಮಾಹಿತಿ ವಿನಿಮಯ ಕೇಂದ್ರವಾಗಿಯೂ ಈ ಅಂಗಡಿ ಕೆಲಸ ಮಾಡಿತ್ತು. ಪತ್ರಿಕೆ ತಲುಪಿಸುವುದು, ಹೊಸ ಸಂಚಿಕೆಗಳನ್ನು ಪರಿಚಯಿಸುವುದು, ಸಾಹಿತ್ಯ ಪುಸ್ತಕಗಳನ್ನು ಶಿಫಾರಸು ಮಾಡುವುದು ಇವೆಲ್ಲವೂ ಇಲ್ಲಿ ನಿತ್ಯದ ಬದುಕಿನ ಭಾಗವಾಗಿದ್ದವು. ಅಕ್ಷರ ಜಗತ್ತಿನ ಮೇಲಿನ ನಿಷ್ಠೆ ಮತ್ತು ಓದುಗರೊಂದಿಗೆ ಬೆಸೆದ ಮಾನವೀಯ ಬಾಂಧವ್ಯವೇ ಈ ಅಂಗಡಿಯನ್ನು ಸಾಮಾನ್ಯ ವ್ಯಾಪಾರ ಮಳಿಗೆಯಿಂದ ವಿಶಿಷ್ಟ ಸ್ಥಾನಕ್ಕೆ ಎತ್ತಿತ್ತು.&lt;/p&gt;&lt;p&gt;ಪ್ರತಿ ದಿನ ಯಾವುದೇ ಜಂಜಾಟವಿದ್ದರೂ, ಮನೆಯಲ್ಲೇನಾದರೂ ಕಾರ್ಯಕ್ರಮವಿದ್ದರೂ, ಆರೋಗ್ಯದಲ್ಲಿ ಏನೇ ತೊಂದರೆ ಇದ್ದರೂ, ಅಥವಾ ಬೇರೆ ಯಾವುದೇ ಕಮಿಟ್ಮೆಂಟ್&zwnj;ಗಳಿದ್ದರೂ &ldquo;ಶೇಕಿ ಅಣ್ಣ&rdquo; ಮಾತ್ರ ಬೆಳಿಗ್ಗೆ 5 ಗಂಟೆಗೆ ಸರಿಯಾಗಿ ಅಂಗಡಿ ಬಾಗಿಲು ತೆರೆಯುತ್ತಿದ್ದರು.&lt;/p&gt;&lt;p&gt;ನಗರ ಇನ್ನೂ ನಿದ್ದೆಯಲ್ಲಿರುವ ಹೊತ್ತಿಗೆ, ರಸ್ತೆಗಳು ಮೌನದಲ್ಲಿರುವ ಹೊತ್ತಿಗೆ, ಪತ್ರಿಕೆಗಳ ಕಟ್ಟೆಗಳು ಬರುವ ಸಮಯಕ್ಕೆ ಕಾಯುತ್ತಾ, ದಿನದ ಆರಂಭವನ್ನು ಅಕ್ಷರಗಳೊಂದಿಗೆ ಶುರು ಮಾಡುತ್ತಿದ್ದ ಆ ಶಿಸ್ತಿನ ಬದುಕು ಈಗ ನೆನಪಾಗಿ ಉಳಿದಿದೆ.&lt;/p&gt;&lt;p&gt;ಬೆಳಗಿನ ಜಾವ ಪತ್ರಿಕೆಗಾಗಿ ಬರುವ ಓದುಗರಿಗೆ, ವಿತರಕರಿಗೆ, ಪತ್ರಿಕಾ ಪ್ರತಿನಿಧಿಗಳಿಗೆ &ldquo;ಅಂಗಡಿ ತೆರೆದಿದೆಯಾ?&rdquo; ಎಂಬ ಪ್ರಶ್ನೆಯೇ ಇರಲಿಲ್ಲ. ಏಕೆಂದರೆ ಅಂಗಡಿ ಎಂದರೆ ಶೇಕಿ ಅಣ್ಣ, ಶೇಕಿ ಅಣ್ಣ ಎಂದರೆ ಸಮಯಪಾಲನೆ ಎಂಬ ನಂಬಿಕೆ ಎಲ್ಲರ ಮನದಲ್ಲೂ ಗಟ್ಟಿಯಾಗಿ ನೆಲಸಿತ್ತು. ಮಳೆ ಬಂದರೂ, ಚಳಿ ಕಚ್ಚಿದರೂ, ಹಬ್ಬದ ದಿನವಾದರೂ, ನಗರದ ಬದುಕು ಶುರುವಾಗುವ ಮೊದಲು ಅಕ್ಷರಗಳ ಬದುಕನ್ನು ಶುರು ಮಾಡುತ್ತಿದ್ದ ಆ ವ್ಯಕ್ತಿತ್ವವೇ ಇಂದು ಜನರ ಕಣ್ಣಲ್ಲಿ ನೀರೂರಿಸುವ ನೆನಪಾಗಿದೆ.&lt;/p&gt;&lt;p&gt;ಇದೀಗ ಬಾಡಿಗೆ ಒಪ್ಪಂದದ ಅವಧಿ, ವಾಣಿಜ್ಯ ಸಂಕೀರ್ಣದ ಮಾಲಿಕತ್ವ ಬದಲಾವಣೆ ಮತ್ತು ಬದಲಾಗುತ್ತಿರುವ ಪರಿಸ್ಥಿತಿಗಳ ನಡುವಲ್ಲಿ ಈ ಅಂಗಡಿ ಮುಚ್ಚಬೇಕಾದ ಅನಿವಾರ್ಯತೆ ಎದುರಾದ ಹಿನ್ನೆಲೆ, ಅರಸೀಕೆರೆಯ ಅನೇಕ ಓದುಗರ ಮನದಲ್ಲಿ ಖಾಲಿತನ ಮೂಡಿದೆ. ಪ್ರತಿದಿನ ಬೆಳಿಗ್ಗೆ ಪತ್ರಿಕೆ ಹಿಡಿದು ದಿನವನ್ನು ಆರಂಭಿಸುತ್ತಿದ್ದ ಹಿರಿಯರು, ವಾರಪತ್ರಿಕೆಗಾಗಿ ಕಾಯುತ್ತಿದ್ದ ಓದುಗರು, ಪುಸ್ತಕ ಪ್ರಿಯರು ಮತ್ತು ಸುದ್ದಿಯೊಂದಿಗೆ ಬದುಕು ಕಟ್ಟಿಕೊಂಡಿದ್ದ ಪತ್ರಿಕಾ ವಲಯದವರಿಗೆ ಇದು ಮನಕಲುಕುವ ಕ್ಷಣವಾಗಿದೆ.&lt;/p&gt;&lt;p&gt;&lsquo;ಶೇಖಿಅಣ್ಣನ ಅಂಗಡಿ&rsquo; ಇರದ ಅರಸೀಕೆರೆ ಇಂದು ಅನೇಕ ಮಂದಿಗೆ ಅಪೂರ್ಣವಾಗಿ ಕಾಣುತ್ತಿದೆ. ಅಕ್ಷರಗಳ ಗದ್ದಲ, ಪತ್ರಿಕೆ ಕಟ್ಟುವ ಸದ್ದು, ಸುದ್ದಿಯ ಚರ್ಚೆಗಳು, ಪರಿಚಿತ ಮುಖಗಳ ನಗು&mdash;ಇವೆಲ್ಲವೂ ಈಗ ನೆನಪುಗಳಾಗಿ ಉಳಿದಿವೆ. ಓದುಗರ ಮನದಲ್ಲಿ ಈ ಅಂಗಡಿ ಕೇವಲ ಮಾರಾಟ ಕೇಂದ್ರವಾಗಿರಲಿಲ್ಲ; ಅದು ಒಂದು ಬದುಕಿನ ಭಾಗ, ಒಂದು ಭಾವನಾತ್ಮಕ ಸಂಬಂಧ, ಒಂದು ಕಾಲಘಟ್ಟದ ಸಾಕ್ಷಿಯಾಗಿತ್ತು.&lt;/p&gt;&lt;p&gt;ಅರಸೀಕೆರೆಯ ಅನೇಕ ಪೀಳಿಗೆಗಳಿಗೆ ಅಕ್ಷರ ಪ್ರೀತಿ, ಓದು ಅಭ್ಯಾಸ ಮತ್ತು ಸುದ್ದಿ ಜಗತ್ತಿನ ನಂಟು ಬೆಳೆಸಿದ &lsquo;ಅಯ್ನೋರ ಅಂಗಡಿ&rsquo; ಈಗ ಬಾಗಿಲು ಮುಚ್ಚಿದರೂ, ಅದು ಮೂಡಿಸಿದ ನೆನಪುಗಳು ಮತ್ತು ಅಕ್ಷರಗಳ ಬೆಳಕು ನಗರದ ಮನಸ್ಸಿನಲ್ಲಿ ಇನ್ನೂ ದೀರ್ಘಕಾಲ ಉಳಿಯಲಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;20 ವರ್ಷಗಳಿಂದ ಸ್ಥಗಿತಗೊಂಡಿದ್ದ ಸೇವೆಗೆ ಮರುಜೀವ; ಮೆಜೆಸ್ಟಿಕ್&zwnj;ಗೆ ಡೈರೆಕ್ಟ್ 4 ಬಸ್&lt;/strong&gt;&lt;/p&gt;&lt;p&gt;----&lt;/p&gt;&lt;p&gt;&lt;strong&gt;ಹೇಳಿಕೆ: ಬಾಲಕೃಷ್ಣ, ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ&lt;/strong&gt;&lt;/p&gt;&lt;p&gt;&ldquo;ದಿನಪತ್ರಿಕಾ ರಂಗದಲ್ಲಿ ಪೈಪೋಟಿ ಹೆಚ್ಚಾದ ಈ ದಿನಗಳಲ್ಲಿ &lsquo;ಶೇಖಿ ಅಣ್ಣನ ಅಂಗಡಿ&rsquo; ನಮಗೆ ಕೇವಲ ವಿತರಣೆ ಕೇಂದ್ರವಾಗಿರಲಿಲ್ಲ. ಅದು ಅಕ್ಷರಕ್ಷಃ ಆಶ್ರಯ ತಾಣವಾಗಿತ್ತು. ದಿನಪತ್ರಿಕೆಗಳನ್ನು ಕೊಟ್ಟು-ತೆಗೆದುಕೊಳ್ಳುವ ದೈನಂದಿನ ಚಟುವಟಿಕೆಗಳು ಇಲ್ಲದಂತಾಗಿರುವುದು ತುಂಬಾ ಬೇಸರದ ಸಂಗತಿ. ಈ ಅಂಗಡಿ ಮುಚ್ಚಿದ ನಂತರ ಅರಸೀಕೆರೆಯ ಪತ್ರಿಕಾ ವಲಯದಲ್ಲಿ ಒಂದು ಖಾಲಿತನ ಮೂಡಿದೆ,&rdquo;.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 425 ಉಪಗ್ರಾಮಗಳ ರಚನೆ! ಜನರಿಗೆ ಇದರಿಂದ ಏನು ಲಾಭ?&lt;/strong&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-district-arasikete-shekhi-anna-shop-closed-the-end-of-a-chapter-in-reading-culture-and-journalism-heritage-mrq/articleshow-mkfgcaa"/>
        </item>
        <item>
            <title><![CDATA[ಒಂದು ದಿನವೂ ರಜೆ ತೆಗೆದುಕೊಳ್ಳದೇ ಸದಾ ಕೆಲಸ ಮಾಡುತ್ತಿದ್ದ ಶ್ವೇತಾ : ಟೆಕ್ಕಿ ಸಾವಿನ ಬಗ್ಗೆ ಸಹೋದ್ಯೋಗಿ ಹೇಳಿದ್ದೇನು?]]></title>
            <link>https://kannada.asianetnews.com/state/hassan-techie-shweta-death-case-what-her-colleagues-said/articleshow-pwwbc69</link>
            <guid isPermaLink="true">https://kannada.asianetnews.com/state/hassan-techie-shweta-death-case-what-her-colleagues-said/articleshow-pwwbc69</guid>
            <pubDate>Mon, 27 Apr 2026 16:56:05 +0530</pubDate>
            <description><![CDATA[&lt;p&gt;ಹಾಸನದ 25 ವರ್ಷದ ಸಾಫ್ಟ್&zwnj;ವೇರ್ ಉದ್ಯೋಗಿ ಶ್ವೇತಾ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ ವಿಚಾರ ಅನೇಕರನ್ನು ದಂಗಾಗುವಂತೆ ಮಾಡಿದೆ. ಕೆಲಸವನ್ನು ನಿರಂತರವಾಗಿ ಪ್ರೀತಿಸುತ್ತಿದ್ದ, ಶ್ವೇತಾ ತಲೆನೋವನ್ನು ನಿರ್ಲಕ್ಷಿಸಿದ್ದಳು ಎಂದು ಅವರ ಸಹೋದ್ಯೋಗಿ ಹೇಳಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq7abgp04bg1hye4wkqpar35,imgname-software-enginear-death-1777288463039.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಹಾಸನದ ಸಾಫ್ಟ್&zwnj;ವೇರ್ ಉದ್ಯೋಗಿ ಶ್ವೇತಾ ಹಠಾತ್ ಕುಸಿದು ಬಿದ್ದು ಸಾವು&lt;/strong&gt;&lt;/h2&gt;&lt;p&gt;ಹಾಸನ: ನಗರದ ಸಾಫ್ಟ್&zwnj;ವೇರ್ ಉದ್ಯೋಗಿ ಶ್ವೇತಾ ಸಾವಿನ ಬಗ್ಗೆ ಅವರ ಸಹೋದ್ಯೋಗಿ ಮಾತನಾಡಿದ್ದು ಶ್ವೇತಾ ಅವರ ಹಠಾತ್ ಸಾವಿಗೆ ತೀವ್ರ ಆಘಾತ ವ್ಯಕ್ತಪಪಡಿಸಿದ್ದಾರೆ. ಶ್ವೇತಾ ಜೊತೆಗೆ ಕೆಲಸ ಮಾಡುತ್ತಿದ್ದ ನಿಹಾಲ್ ಎಂಬುವವರು ಮಾತನಾಡಿ, ನಾನು ಹಾಗೂ ಶ್ವೇತಾ ಜೊತೆಯಾಗಿ ಕೆಲಸಕ್ಕೆ ಸೇರಿದ್ದೇವು. ಕೆಲಸಕ್ಕೆ ಸೇರಿ 3 ವರ್ಷ ಆಗಿತ್ತು. ಶುಕ್ರವಾರದವರೆಗೆ ಆಕೆ ನಮ್ಮ ಜೊತೆ ಚೆನ್ನಾಗಿಯೇ ಇದ್ದರು. ಕಳೆದ ಮೂರು ತಿಂಗಳಿನಿಂದ ಆಕೆ ತನಗೆ ತುಸು ತಲೆನೋವು ಇದೆ ಎಂದು ಹೇಳುತ್ತಿದ್ದಳು. ಆದರೆ ಊಟ ಮಾಡಿದರೆ ಸರಿ ಹೋಗುತ್ತೆ ಎಂದು ಹೇಳುತ್ತಿದ್ದರು. ಆದರೆ ಈ ರೀತಿ ಆಗಬಹುದು ಎಂದು ನಾವು ಊಹೆಯೂ ಮಾಡಿರಲಿಲ್ಲ.&lt;/p&gt;&lt;p&gt;&lt;strong&gt;ಆರೋಗ್ಯ ನಿರ್ಲಕ್ಷಿಸಿ ಕೆಲಸದ ಮೇಲೇಯೇ ಗಮನ&lt;/strong&gt;&lt;/p&gt;&lt;p&gt;ಹೆಚ್ಚಾಗಿ ಕೆಲಸದ ಮೇಲೆಯೇ ಗಮನ ಹರಿಸುತ್ತಿದ್ದರು. ಯಾವತ್ತು ಅವರು ರಜೆ ತೆಗೆದುಕೊಂಡಿದ್ದೆ ಇಲ್ಲ. ಒಂದೂವರೆ ವರ್ಷಗಳಿಂದ ಅವರು ರಜೆ ತೆಗೆದುಕೊಂಡಿದ್ದೆ ಇರಲಾರದು. ನಾನು ಚೆನ್ನಾಗಿ ಕೆಲಸ ಮಾಡಬೇಕು ಎಂಬ ಆಶಯ ಅವರದಾಗಿತ್ತು. ಬಹುಶಃ ಅದೇ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದೇನೋ ಎಂದು ಅವರ ಸಹೋದ್ಯೋಗಿ ಹೇಳಿದ್ದಾರೆ. ಕೆಲಸವನ್ನು ಹೆಚ್ಚು ತಲೆಗೆ ಹಾಕಿಕೊಂಡಿದ್ದರು. ಕೆಲಸವನ್ನು ತುಂಬಾ ಪ್ರೀತಿಸುತ್ತಿದ್ದ ಆಕೆ ತಾನು ಎಲ್ಲರಿಗಿಂತ ಕೆಲಸದಲ್ಲಿ ಮುಂದಿರಬೇಕು ಎನ್ನುತ್ತಿದ್ದರೂ ಹಾಗೂ ಹಾಗೆಯೇ ಇದ್ದರೂ ಕೂಡ.&lt;/p&gt;&lt;p&gt;ವಾರದ ಹಿಂದೆ ಅವರಿಗೆ ತಲೆನೋವು ಕಾಣಿಸಿಕೊಂಡಾಗ ಇಲ್ಲೇ ಸಮೀಪದ ಕ್ಲಿನಿಕ್&zwnj;ಗೆ ತೋರಿಸಿದ್ದರು. ಆಗ ಅಲ್ಲಿ ಆಮೂಲಿ ಜ್ವರ ಇದೆ ಎಂದು ಆಕೆಗೆ ಮಾತ್ರೆ ನೀಡಿದ್ದರು. ಸ್ವಲ್ಪ ನಿರ್ಲಕ್ಷ್ಯದಿಂದ ಈ ರೀತಿ ಆಗಿರಬಹುದೇನೋ? ಆಕೆಯ ತಲೆನೋವನ್ನು ಯಾರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕ್ಲಿನಿಕ್&zwnj;ಗೆ ಹೋಗಿಯೂ ಮತ್ತೆ ಕಚೇರಿಗೆ ಬಂದು ಕೆಲಸ ಮಾಡಿದ್ದರು. ಹೀಗಾಗಿ ನಮಗೂ ಅದರ ಬಗ್ಗೆ ಹೆಚ್ಚಿನ ಗಮನ ಇರಲಿಲ್ಲ. ಚೆನ್ನಾಗಿದ್ದಾಳಲ್ಲ ಮಾಮೂಲಿ ಎಲ್ಲರಿಗೂ ಜ್ವರ ಬಂದಂತೆ ಈಕೆಗೂ ಬಂದಿದೆ ಎಂದುಕೊಂಡಿದ್ದೆವು. ಘಟನೆ ನಡೆದಂದು ಕೂಡ ಶುಕ್ರವಾರ ಸಂಜೆಯವರೆಗೂ ಆಕೆ ಕಚೇರಿಯಲ್ಲೇ ಇದ್ದಳು. ಆದರೆ ಮನೆಗೆ ಹೋದ ಮೇಲೆ ಆ ರೀತಿ ಆಗಿದೆ. ನಮಗೆ ಆ ಬಗ್ಗೆ ಗೊತ್ತಿರಲಿಲ್ಲ. ಆದರೆ ಶನಿವಾರ ಅವರು ಕಚೇರಿಗೆ ಬಂದಿರಲಿಲ್ಲ, ಆದರೆ ಆಕೆ ರಜೆಯೇ ಹಾಕುವ ಹುಡುಗಿ ಅಲ್ಲ, ಹೀಗಾಗಿ ಆಕೆ ಹೇಗೆ ರಜೆ ಹಾಕಿದಳು ಎಂದು ಸಹೋದ್ಯೋಗಿಗಳೆಲ್ಲಾ ಆಕೆಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಲಿಲ್ಲ. ಆದರೆ ನಂತರ ಅವರ ತಾಯಿಗೆ ಕರೆ ಮಾಡಿದಾಗಲೇ ಹೀಗಾಗಿದೆ ಎಂಬ ವಿಚಾರ ತಿಳಿಯಿತು.&lt;/p&gt;&lt;p&gt;ಆದರೆ ಆಕೆ ಹುಷಾರಾಗಿ ಬರುತ್ತಾಳೆ ಎಂದು ನಾವು ನಿರೀಕ್ಷೆ ಇಟ್ಟುಕೊಂಡಿದ್ದೆವು. ಲೋಬಿಪಿಯಾಗಿದೆ ಮತ್ತೆ ಪ್ರಜ್ಞೆ ಬರಬಹುದು ಎಂದು ಭಾವಿಸಿದೆವು. ಆದರೆ ಅವರು ಹಠಾತ್ ಆಗಿ ಸಾವನ್ನಪ್ಪಿದ್ದಾರೆ ಎಂದು ಶ್ವೇತಾ ಅವರ ಸಹೋದ್ಯೋಗಿ ನಿಹಾಲ್ ಅಲೆಕ್ಸ್ ಎಂಬುವವರು ನೋವಿನಿಂದ ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಆರೋಗ್ಯ ನಿರ್ಲಕ್ಷಿಸಿ ನಿರಂತರ ಕೆಲಸ: ಹಾಸನದಲ್ಲಿ ಸಾಫ್ಟ್&zwnj;ವೇರ್ ಇಂಜಿನಿಯರ್ ಹಠಾತ್ ಸಾವು&lt;/p&gt;&lt;p&gt;ಹಾಸನದಲ್ಲಿ ಇಂದು 25 ವರ್ಷದ ಸಾಫ್ಟ್&zwnj;ವೇರ್ ಉದ್ಯೋಗಿ ಶ್ವೇತಾ ಎಂಬುವವರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಶ್ವೇತಾ ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯ ಹಾಸನ ಶಾಖೆಯಲ್ಲಿ ಮೂರು ವರ್ಷದಿಂದ&zwnj; ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 25 ರ ಶುಕ್ರವಾರ ಸಂಜೆ ಮನೆಯಲ್ಲಿ ಕುಸಿದು ಬಿದ್ದಿದ್ದ ಅವರು ಬಳಿಕ ಕೋಮಾಗೆ ಜಾರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಶ್ವೇತಾ ಕುಸಿದು ಬಿದ್ದ ಕೂಡಲೇ ಮನೆಯವರು ಅವರನ್ನು ಚಿಕಿತ್ಸೆಗೆ ಕರೆದೊಯ್ದಿದ್ದರು. ಆದರೆ ಆಗಲೇ ಶ್ವೇತಾ ಕೋಮಾಗೆ ಜಾರಿ ಸಾವನ್ನಪ್ಪಿದ್ದರು.&lt;/p&gt;&lt;p&gt;ಮೆದುಳಿನಲ್ಲಿ ತೀವ್ರ ರಕ್ತಶ್ರಾವದಿಂದಾಗಿ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಶ್ವೇತಾ ಅವರಿಗೆ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಪೋಷಕರು ಮುಂದಾಗಿದ್ದರು. ಆದರೆ ಅಂಗಾಂಗ ದಾನ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಯುವತಿ ಅಂತ್ಯಕ್ರಿಯೆ ನಡೆದಿದೆ. ಶ್ವೇತಾ ಅವರು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಯುವತಿಯಾಗಿದ್ದಾರೆ. ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಹಾಗೂ ಸರೋಜ ದಂಪತಿ ಪುತ್ರಿಯಾಗಿದ್ದು, ಶ್ವೇತಾ ಅವರ ಹಠಾತ್ ಸಾವಿನಿಂದ ಕುಟುಂಬದವರು ತೀವ್ರ ಆಘಾತಕ್ಕೀಡಾಗಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೀದಿ ಬದಿ ಪಾನಿಪುರಿ ಸೇವಿಸಿದ್ದ 8 ವರ್ಷದ ಬಾಲಕ ಸಾವು: 18ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು&lt;/strong&gt;&lt;/p&gt;]]></content:encoded>
            <category>hassan</category>
            <dc:creator>Anusha Kb</dc:creator>
            <atom:link href="https://kannada.asianetnews.com/state/hassan-techie-shweta-death-case-what-her-colleagues-said/articleshow-pwwbc69"/>
        </item>
        <item>
            <title><![CDATA[ನುಗ್ಗೇಹಳ್ಳಿಯಲ್ಲಿ ವರ್ಷದ ಉತ್ತಮ ಮಳೆಗಾಗಿ ತಿಂಗಳ ಮಾಮನ ತೇರು ಹಬ್ಬ; ಮದುವೆ ಮಾಡಿ ಆಚರಣೆ]]></title>
            <link>https://kannada.asianetnews.com/karnataka-districts/channarayapatna-tingala-mama-teru-festival-in-nuggehalli-for-good-rains-of-the-year-mrq/articleshow-twroytm</link>
            <guid isPermaLink="true">https://kannada.asianetnews.com/karnataka-districts/channarayapatna-tingala-mama-teru-festival-in-nuggehalli-for-good-rains-of-the-year-mrq/articleshow-twroytm</guid>
            <pubDate>Mon, 06 Apr 2026 08:41:49 +0530</pubDate>
            <description><![CDATA[ಹಾಸನದ ನುಗ್ಗೇಹಳ್ಳಿಯಲ್ಲಿ ಮಳೆಗಾಗಿ 'ತಿಂಗಳಮಾಮನ ತೇರು' ಎಂಬ ವಿಶಿಷ್ಟ ಹಬ್ಬವನ್ನು ಆಚರಿಸಿದರೆ, ಸಕಲೇಶಪುರದಲ್ಲಿ 16 ಅಡಿ ಎತ್ತರದ ಏಕಶಿಲಾ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಇದರೊಂದಿಗೆ, ಮದ್ದೂರಿನಲ್ಲಿ ಸಾಯಿಬಾಬಾರ 21ನೇ ವರ್ಷದ ಪಲ್ಲಕ್ಕಿ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kngc7yg8ts70sy5kh1fzna35,imgname-channarayapatna-1775444949512.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ: &lt;/strong&gt;ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯಲ್ಲಿ ತಿಂಗಳ ಮಾಮನ ತೇರು ಹಬ್ಬವನ್ನು 9 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.&lt;/p&gt;&lt;p&gt;ಕಾರ್ಯಕ್ರಮವನ್ನು ಮಾಡುವ ಉದ್ದೇಶವೇನೆಂದರೆ ಮಳೆಗಾಗಿ ಮಾಡುವಂತ ಹಬ್ಬ, ಈ ಹಬ್ಬವನ್ನು ಗ್ರಾಮದ ಮಹಿಳೆಯರು ಪುರುಷರು ಸೇರಿ ಮಾಡುವಂತಹ ಹಬ್ಬವಾಗಿದ್ದು ಹಬ್ಬದಲ್ಲಿ ಮೊದಲನೇ ದಿನ ತಿಂಗಳ ಮಾವನ ತೇರನ್ನು ಬಿಡಿಸಿ ಆಂಜನೇಯನ ಪ್ರತಿಮೆಯನ್ನು ರಂಗೋಲಿಯಲ್ಲಿ ಬಿಡಿಸಿ ಪ್ರತಿದಿನ ಪೂಜೆ ಮಾಡಿ ಒಂದು ರೊಟ್ಟಿಯಿಂದ ಒಂಬತ್ತು ರೊಟ್ಟಿವರೆಗೆ ಇಟ್ಟು ಪೂಜಿಸಲಾಗುವುದು. ವಿಶೇಷವೇನೆಂದರೆ ಪೂಜೆ ಮುಗಿದ ನಂತರ ಒಂದು ರೊಟ್ಟಿಗೆ ಪೂಜೆ ಮಾಡಿ ಪೂಜೆ ಮುಗಿದ ನಂತರ ರೊಟ್ಟಿಯನ್ನು ಇಟ್ಟಿ ಕದ್ದಂಥವರಿಗೆ ನೀರನ್ನು ಎರಚುವ ಪದ್ಧತಿ. ಅಂದರೆ ಕೊನೆ ದಿನ ಒಂಬತ್ತು ರೊಟ್ಟಿಯನ್ನು ಇಟ್ಟು ಪೂಜಿಸಿ ಸೋಬಾನೆ ಪದ ಹಾಡಿ ಹೆಣ್ಣು-ಗಂಡಿಗೆ ಮದುವೆ ಮಾಡಿ ಆಚರಣೆ ಮಾಡಲಾಗುವುದು. ಈ ಕೊನೆ ದಿನ ಗ್ರಾಮಸ್ಥರೆಲ್ಲ ಸೇರಿ ಸಂತೋಷದಿಂದ ಆಚರಣೆ ಮಾಡಲಾಗುವುದು. ಈ ಆಚರಣೆಯ ಉದ್ದೇಶ ಮಳೆರಾಯನನ್ನು ಒಲಿಸುವುದು.&lt;/p&gt;&lt;p&gt;ಗ್ರಾಮದ ಮಹಿಳೆಯರಾದ ಸಣ್ಣಮ್ಮ, ಗೌರಮ್ಮ, ಪೂರ್ಣಿಮಾ, ಸುಜಾತ, ಮಂಜಮ್ಮ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪ್ರತಿದಿನ ಭಾಗವಹಿಸಿ ಸೋಬಾನೆ ಪದ ಹಾಡಿ ರಂಜಿಸಿದರು. ಸೋಮನಾಥ್, ಕಲಾನಾಥ್, ಗೋಪಿನಾಥ್, ನಾಗೇಶ್ ಅವರು ಗ್ರಾಮದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಂದಂತ ಸಾರ್ವಜನಿಕರಿಗೆ ಕೊನೆಯ ದಿನ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.&lt;/p&gt;&lt;h2&gt;&lt;strong&gt;ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ&lt;/strong&gt;&lt;/h2&gt;&lt;p&gt;ಸಕಲೇಶಪುರ ತಾಲೂಕಿನ ಕರಗೂರು ಕೂಡಿಗೆ ಪಾಲಹಳ್ಳಿಯಲ್ಲಿ ಶ್ರೀ ಆಂಜನೇಯ ಸ್ವಾವಿ 16 ಅಡಿ ಎತ್ತರದ ಕಲ್ಲಿನ ಏಕಶಿಲಾ ನೂತನ ವಿಗ್ರಹದ ಪ್ರತಿಷ್ಠಾಪನೆ ಮಹೋತ್ಸವ ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ನಡೆಯಿತು.&lt;/p&gt;&lt;p&gt;ಕಾರ್ಯಕ್ರಮಕ್ಕೆ ಹಾಸನ ಹಾಗೂ ಕೊಡಗು ಜಿಲ್ಲೆಯ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಂಜನೇಯ ಸ್ವಾಮಿ ಸೇವೆಯ ಪ್ರತೀಕವಾಗಿದ್ದು, ಎಲ್ಲಾ ಯುಗಗಳಲ್ಲೂ ಭಕ್ತರ ಪಾಲಿಗೆ ಶಕ್ತಿಯ ಮೂಲವಾಗಿದ್ದಾರೆ. ಭಕ್ತರು ನಿರಂತರ ರಾಮನಾಮ ಜಪ ಮಾಡಬೇಕು ಎಂದು ಹೇಳಿದರು. ತುಳಸಿ ಪೂಜೆ, ಗೋ ಪೂಜೆ ಮಾಡುವ ಮನೆಗಳು ಪವಿತ್ರವಾಗುತ್ತವೆ ಎಂದೂ ಅವರು ತಿಳಿಸಿದರು. ಆಂಜನೇಯನು ಬ್ರಹ್ಮಚಾರಿ, ಜಾಗೃತಿಯ ಪ್ರತೀಕವಾಗಿದ್ದು, ಯುವಜನತೆಗೆ ಆದರ್ಶ ಎಂದರು.&lt;/p&gt;&lt;p&gt;ಹೆಗ್ಗಡಹಳ್ಳಿ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಳೆದ ಮೂರು ದಿನಗಳಿಂದ ಯಜ್ಞ, ಹೋಮ-ಹವನ ಸೇರಿದಂತೆ ಸನಾತನ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಈ ವಿಗ್ರಹದ ಮುಂದೆ ಕೆಲ ಕ್ಷಣ ಪ್ರಾರ್ಥನೆ ಮಾಡಿದರೂ ಆತ್ಮಶಕ್ತಿ ಹೆಚ್ಚುತ್ತದೆ. ಕರಗೂರಿನ ಇತಿಹಾಸದಲ್ಲಿ ಇದು ಸುವರ್ಣ ಕ್ಷಣವಾಗಿದ್ದು, ಗ್ರಾಮಸ್ಥರಿಗೆ ಆರೋಗ್ಯ ಹಾಗೂ ಆಯುಷ್ಯ ಲಭಿಸಲಿ ಎಂದು ಆಶಿಸಿದರು.&lt;/p&gt;&lt;h3&gt;&lt;strong&gt;ಸಾಯಿಬಾಬಾರ 21ನೇ ವರ್ಷದ ಪಲ್ಲಕ್ಕಿ ಮಹೋತ್ಸವ&lt;/strong&gt;&lt;/h3&gt;&lt;p&gt;ಮದ್ದೂರು ತಾಲೂಕಿನ ವಳಗೆರೆಹಳ್ಳಿಯಲ್ಲಿ ಶ್ರೀ ಸಮರ್ಥ ಸದ್ಗುರು ಸಾಯಿಬಾಬಾರ 21ನೇ ವರ್ಷದ ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಶನಿವಾರ ಬೆಳಗ್ಗೆಯಿಂದಲೇ ಬಾಬಾರಿಗೆ ಹೋಮ ಹವನ ಪೂಜಾ ವಿಧಿ ವಿಧಾನಗಳು ಜರುಗಿದವು. ಸಾಯಂಕಾಲ ಬಾಬಾರ ಪಲ್ಲಕ್ಕಿ ಉತ್ಸವ ಮಂಗಳವಾದ್ಯ ತಮಟೆ ನಗಾರಿಗಳ ಝೇಂಕಾರಗಳು ಮೊಳಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿ ಮನೆಯಲ್ಲೂ ಪೂಜೆ ಸಲ್ಲಿಸಿ ಬಾಬಾರವರ ದಿವ್ಯ ದರ್ಶನ ಪಡೆದು ಪುನೀತರಾದರು.&lt;/p&gt;&lt;p&gt;ಗ್ರಾಮದ ಪ್ರಮುಖ ಬೀದಿಗಳು ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದವು. ಭಾನುವಾರ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಿತು. ಸಂಜೆ ಗೋವಿನ ಪೂಜೆ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ನಡೆಯಿತು.&lt;/p&gt;&lt;p&gt;&lt;img&gt;&lt;/p&gt;&lt;p&gt;ಕಲಾವಿದ ಗೌತಮ್ ವಳಗೆರೆಹಳ್ಳಿ ತಂಡದವರಿಂದ ಭಕ್ತಿ ಗೀತೆಗಳ ಗೀತ ಗಾಯನ ಕಾರ್ಯಕ್ರಮ ಮನಸೂರೆಗೊಂಡಿತು. ಪೂಜಾ ವಿಧಿ ವಿಧಾನಗಳನ್ನು ಬಾಬಾಸೇವಕ ಮುನಿ ಶಂಕರಯ್ಯ ನೆರವೇರಿಸಿದರು. ವಳಗೆರೆಹಳ್ಳಿ ಸೊಳ್ಳೆಪುರ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಬಾಬಾರವರ ದಿವ್ಯ ದರ್ಶನ ಪಡೆದರು.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/channarayapatna-tingala-mama-teru-festival-in-nuggehalli-for-good-rains-of-the-year-mrq/articleshow-twroytm"/>
        </item>
        <item>
            <title><![CDATA[ಹಾಸನ: ಕುಸಿದು ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ 25 ವರ್ಷದ ಶ್ವೇತಾ ಹಠಾತ್ ಸಾವು: ಆಘಾತದಲ್ಲಿ ಪೋಷಕರು]]></title>
            <link>https://kannada.asianetnews.com/gallery/state/hassan-young-software-engineer-dies-suddenly-after-collapsing-tyyk8og</link>
            <guid isPermaLink="true">https://kannada.asianetnews.com/gallery/state/hassan-young-software-engineer-dies-suddenly-after-collapsing-tyyk8og</guid>
            <pubDate>Mon, 27 Apr 2026 15:38:00 +0530</pubDate>
            <description><![CDATA[ಹಾಸನದಲ್ಲಿ 25 ವರ್ಷದ ಸಾಫ್ಟ್&zwnj;ವೇರ್ ಇಂಜಿನಿಯರ್ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ಅವರು, ಮೆದುಳಿನ ತೀವ್ರ ರಕ್ತಸ್ರಾವದಿಂದಾಗಿ ಕೋಮಾಗೆ ಜಾರಿ ಮೃತಪಟ್ಟಿದ್ದಾರೆ. ಅಂಗಾಂಗ ದಾನಕ್ಕೆ ಪೋಷಕರು ಮುಂದಾದರೂ ಅದು ಸಾಧ್ಯವಾಗಲಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kq763xpkn06th3pnc2kttqtc,imgname-hasana-girl-death--5--1777284019923.jpeg" type="image/jpeg" height="390" width="690"/>
            <content:encoded><![CDATA[ಹಾಸನದಲ್ಲಿ 25 ವರ್ಷದ ಸಾಫ್ಟ್&zwnj;ವೇರ್ ಇಂಜಿನಿಯರ್ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ಅವರು, ಮೆದುಳಿನ ತೀವ್ರ ರಕ್ತಸ್ರಾವದಿಂದಾಗಿ ಕೋಮಾಗೆ ಜಾರಿ ಮೃತಪಟ್ಟಿದ್ದಾರೆ. ಅಂಗಾಂಗ ದಾನಕ್ಕೆ ಪೋಷಕರು ಮುಂದಾದರೂ ಅದು ಸಾಧ್ಯವಾಗಲಿಲ್ಲ.&lt;img&gt;&lt;p&gt;ಹಾಸನ: ಸಾಫ್ಟ್&zwnj;ವೇರ್ ಇಂಜಿನಿಯರ್ ಒಬ್ಬರು ಕುಸಿದು ಬಿದ್ದು ಹಠಾತ್ ಸಾವಿಗೀಡಾದಂತಹ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;25 ವರ್ಷದ ಸಾಫ್ಟ್&zwnj;ವೇರ್ ಉದ್ಯೋಗಿ ಶ್ವೇತಾ ಮೃತಪಟ್ಟ ಯುವತಿ. ಶ್ವೇತಾ ಮನೆಯಲ್ಲೇ ಕುಸಿದು ಬಿದ್ದು ಕೋಮಾಗೆ ಜಾರಿದ್ದರು.&lt;/p&gt;&lt;img&gt;&lt;p&gt;ಶ್ವೇತಾ ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯ ಹಾಸನ ಶಾಖೆಯಲ್ಲಿ ಮೂರು ವರ್ಷದಿಂದ&zwnj; ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 25 ರ ಶುಕ್ರವಾರ ಸಂಜೆ ಮನೆಯಲ್ಲಿ ಅವರು ಕುಸಿದು ಬಿದ್ದಿದ್ದರು.&lt;/p&gt;&lt;img&gt;&lt;p&gt;ಕೂಡಲೇ ಮನೆಯವರು ಅವರನ್ನು ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಆಗಲೇ ಶ್ವೇತಾ ಕೋಮಾಗೆ ಜಾರಿದ್ದು, ಸಾವನ್ನಪ್ಪಿದ್ದಾರೆ.&lt;/p&gt;&lt;img&gt;&lt;p&gt;ಮೆದುಳಿನಲ್ಲಿ ತೀವ್ರ ರಕ್ತಶ್ರಾವದಿಂದಾಗಿ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಶ್ವೇತಾ ಮೆದುಳು ನಿಷ್ಕ್ರಿಯ ಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಪೋಷಕರು ಮುಂದಾಗಿದ್ದರು.&lt;/p&gt;&lt;img&gt;&lt;p&gt;ಆದರೆ ಅಂಗಾಂಗ ದಾನ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಯುವತಿ ಅಂತ್ಯಕ್ರಿಯೆ ನಡೆದಿದೆ. ಶ್ವೇತಾ ಅವರು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಯುವತಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಹಾಗೂ ಸರೋಜ ದಂಪತಿ ಪುತ್ರಿಯಾಗಿದ್ದು, ಶ್ವೇತಾ ಅವರ ಹಠಾತ್ ಸಾವಿನಿಂದ ಕುಟುಂಬದವರು ತೀವ್ರ ಆಘಾತಕ್ಕೀಡಾಗಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/hassan-young-software-engineer-dies-suddenly-after-collapsing-tyyk8og"/>
        </item>
        <item>
            <title><![CDATA[Hassan: ಕಲ್ಯಾಣಕ್ಕೆ ವಧು ಸಿಗದ್ದಕ್ಕೆ ಕಲ್ಯಾಣಿಗೆ ಬಿದ್ದು ಪ್ರಾಣ ಬಿಟ್ಟ ಹಾಸನದ ಯುವಕ]]></title>
            <link>https://kannada.asianetnews.com/gallery/karnataka-districts/hassan-district-belur-youth-harm-self-after-being-heartbroken-over-not-being-able-to-find-a-woman-to-marry-mrq-vf311mg</link>
            <guid isPermaLink="true">https://kannada.asianetnews.com/gallery/karnataka-districts/hassan-district-belur-youth-harm-self-after-being-heartbroken-over-not-being-able-to-find-a-woman-to-marry-mrq-vf311mg</guid>
            <pubDate>Wed, 29 Apr 2026 12:03:31 +0530</pubDate>
            <description><![CDATA[ಹಾಸನ ಜಿಲ್ಲೆಯ ಬೇಲೂರಿನಲ್ಲಿ, ಮದುವೆಯಾಗಲು ಹೆಣ್ಣು ಸಿಗದ ಕಾರಣಕ್ಕೆ ಮನನೊಂದು 35 ವರ್ಷದ ಯುವಕನೊಬ್ಬ ಕಲ್ಯಾಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ವಧು ಹುಡುಕಾಟದಲ್ಲಿದ್ದ ಪದವೀಧರ ವಿನಯ್, ಪೋಷಕರು ಬೈದಿದ್ದರಿಂದಲೂ ನೊಂದಿದ್ದ ಎಂದು ಹೇಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbynnys12b6yevp26zxd39h,imgname-beluru-suicide--2--1777443985368.jpg" type="image/jpeg" height="390" width="690"/>
            <content:encoded><![CDATA[ಹಾಸನ ಜಿಲ್ಲೆಯ ಬೇಲೂರಿನಲ್ಲಿ, ಮದುವೆಯಾಗಲು ಹೆಣ್ಣು ಸಿಗದ ಕಾರಣಕ್ಕೆ ಮನನೊಂದು 35 ವರ್ಷದ ಯುವಕನೊಬ್ಬ ಕಲ್ಯಾಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ವಧು ಹುಡುಕಾಟದಲ್ಲಿದ್ದ ಪದವೀಧರ ವಿನಯ್, ಪೋಷಕರು ಬೈದಿದ್ದರಿಂದಲೂ ನೊಂದಿದ್ದ ಎಂದು ಹೇಳಲಾಗಿದೆ.&lt;img&gt;&lt;p&gt;ನಾಲ್ಕು ವರ್ಷದಿಂದ ಮದುವೆಯಾಗಲು ಹೆಣ್ಣು ಹುಡುಕಿದ್ರೂ ಯುವಕನಿಗೆ ಹುಡುಗಿ ಸಿಕ್ಕಿರಲಿಲ್ಲ. ಇದರಿಂದ ನೊಂದ ಯುವಕ ಕಲ್ಯಾಣಿಗೆ ಧುಮುಕಿ ಪ್ರಾಣ ಕಳೆದುಕೊಂಡಿದ್ದಾನೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ನಾಗರಾಜ್-ಪದ್ಮಾ ಎಂಬವರು ಪುತ್ರ 35 ವರ್ಷದ ವಿನಯ್ ಆತ್ಮಹ*ತ್ಯೆಗೆ ಶರಣಾದ ಯುವಕ. ವಿಷ್ಣು ಸಮುದ್ರ ಕೆರೆಯ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಗುಡ್ದೂರು ಗ್ರಾಮದ ನಿವಾಸಿಯಾಗಿದ್ದ ವಿನಯ್, ಕಳೆದ ಹತ್ತು ವರ್ಷಗಳಿಂದ ಬೇಲೂರು ಪಟ್ಟಣದ ಶಂಕರದೇವರ ಪೇಟೆಯಲ್ಲಿ ವಾಸವಿದ್ದನು.&lt;/p&gt;&lt;img&gt;&lt;p&gt;ಪದವಿಧರನಾಗಿದ್ದ ವಿನಯ್, ಬೇಲೂರಿನಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಮದುವೆಯಾಗಲು ಹೆಣ್ಣು ಹುಡುಕುತ್ತಿದ್ದನು. ಹುಡುಗಿ ಸಿಗದ ಹಿನ್ನೆಲೆಯಲ್ಲಿ ವಿನಯ್ ಮನನೊಂದಿದ್ದ ಎಂದು ತಿಳಿದು ಬಂದಿದೆ. ಇದರಿಂದ ಕಳೆದ ಒಂದು ವಾರದಿಂದ ಕೆಲಸಕ್ಕೂ ಹೋಗದೇ ವಿನಯ್ ಮನೆಯಲ್ಲಿದ್ದನು.&lt;/p&gt;&lt;img&gt;&lt;p&gt;ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದಿದ್ರರಿಂದ ಪೋಷಕರು ಬೈದಿದ್ದರು. ಈ ಎಲ್ಲಾ ಘಟನೆಗಳಿಂದ ನೊಂದ ವಿನಯ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳೀಯ ಮೀನುಗಾರರ ಸಹಾಯದಿಂದ ಮೃತದೇಹ ಹೊರತೆಗೆದಿದ್ದಾರೆ.&amp;nbsp;&lt;/p&gt;&lt;p&gt;ಸ್ಥಳಕ್ಕೆ ಪಿಎಸ್ಐ ಪಾಟೀಲ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;]]></content:encoded>
            <category>hassan</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/hassan-district-belur-youth-harm-self-after-being-heartbroken-over-not-being-able-to-find-a-woman-to-marry-mrq-vf311mg"/>
        </item>
        <item>
            <title><![CDATA['ದೇಶದಲ್ಲಿ ಅನ್ನ, ನೀರಿಗೆ ಹಾಹಾಕಾರ' ಕೋಡಿ ಶ್ರೀಗಳ ಎಚ್ಚರಿಕೆ: ದೇಶಕ್ಕೆ ಕಾದಿದೆಯೇ ಮಹಾ ಸಂಕಷ್ಟ?]]></title>
            <link>https://kannada.asianetnews.com/karnataka-districts/food-and-water-crisis-warning-amid-climate-change-says-shivayogi-rajendra-swamiji-kvn/articleshow-wg6q7zh</link>
            <guid isPermaLink="true">https://kannada.asianetnews.com/karnataka-districts/food-and-water-crisis-warning-amid-climate-change-says-shivayogi-rajendra-swamiji-kvn/articleshow-wg6q7zh</guid>
            <pubDate>Mon, 27 Apr 2026 17:20:37 +0530</pubDate>
            <description><![CDATA[ಮದ್ದೂರಿನಲ್ಲಿ ಕೋಡಿ ಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹವಾಮಾನ ವೈಪರಿತ್ಯದಿಂದ ದೇಶಕ್ಕೆ ಅನ್ನ, ನೀರಿನ ಹಾಹಾಕಾರ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಈ ಸಂಕಷ್ಟದಿಂದ ಕರ್ನಾಟಕಕ್ಕೆ ಯಾವುದೇ ದೊಡ್ಡ ಸಮಸ್ಯೆ ಉಲ್ಬಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kdjj16tj38aqx5r8gy6mjrhe,imgname-----------------------2025-12-28t181908.273-1766928194386.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದ್ದೂರು: ಹವಾಮಾನ ವೈಪರಿತ್ಯಗಳಿಂದಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿಗೆ ಹಾಹಾಕಾರ ಎದುರಾಗಲಿದೆ ಎಂದು ಶ್ರೀ ಕೋಡಿ ಮಠದ ಮಹಾ ಸಂಸ್ಥಾನದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.&lt;/p&gt;&lt;p&gt;ತಾಲೂಕಿನ ಚಾಮನಹಳ್ಳಿಯಲ್ಲಿ ನಡೆದ ಶ್ರೀಬಂಡೆ ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಮಹಾ ರಾಜಗೋಪುರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದಿನದಿಂದ ದಿನಕ್ಕೆ ಹವಾಮಾನ ವೈಪರಿತ್ಯರಿಂದ ಪ್ರಕೃತಿಯಲ್ಲಿ ಏರುಪೇರಾಗುತ್ತಿದೆ. ಅಪಮೃತ್ಯುಗಳು ಹೆಚ್ಚಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿನ ಹಾಹಾಕಾರದ ಸಮಸ್ಯೆಯಾಗಲಿದೆ. ಆದರೆ, ಕರ್ನಾಟಕಕ್ಕೆ ಯಾವುದೇ ರೀತಿಯ ಸಮಸ್ಯೆ ಉಲ್ಬಣವಾಗುವುದಿಲ್ಲ ಎಂದರು.&lt;/p&gt;&lt;h2&gt;&lt;strong&gt;ಶ್ರೀಬಂಡೆ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಕೋಡಿಶ್ರೀ&lt;/strong&gt;&lt;/h2&gt;&lt;p&gt;ಚಾಮನಹಳ್ಳಿಯ ಶ್ರೀಬಂಡೆ ಶನೇಶ್ವರಸ್ವಾಮಿಯ ಕ್ಷೇತ್ರಕ್ಕೆ ಆಗಮಿಸಿರುವುದು ನನ್ನ ಪುಣ್ಯ. ಶನೇಶ್ವರ ಸ್ವಾಮಿಯೂ ಪ್ರತಿಯೊಬ್ಬ ಮನುಷ್ಯನಿಗೂ ಗುರು ಸ್ಥಾನದಲ್ಲಿದ್ದು, ಸರಿ ತಪ್ಪುಗಳನ್ನು ತಿದ್ದಿ ಬುದ್ಧಿ ಸನ್ಮಾರ್ಗದಲ್ಲಿ ನಡೆಸಲಿದ್ದಾರೆ. ಈ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿ ಹೊಂದಲು ದೇವರ ಅನುಗ್ರಹ ಮುಖ್ಯವಾಗಿದೆ ಎಂದರು.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ದೈವಾರಾಧನೆಗಳು ನಡೆಯುತ್ತಿರುವ ಪರಿಣಾಮ ಮಳೆ, ಬೆಳೆಯಿಂದ ರಾಜ್ಯದ ಜನರು ದೈವಾರಾಧನೆಯ ಮೂಲಕ ಸಮೃದ್ಧಿ ಜೀವನ ನಡೆಸಲಿದ್ದಾರೆ ಎಂದರು.&lt;/p&gt;&lt;p&gt;ಬಂಡೆ ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಮಹಾ ರಾಜಗೋಪುರ ಉದ್ಘಾಟನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು..&lt;/p&gt;&lt;p&gt;ಶನಿವಾರ ಬೆಳಗ್ಗೆಯಿಂದ ಅಭಿಷೇಕ, ಸುಪ್ರಭಾತ, ವೇದಪಾರಾಯಣ, ಕಲಶರಾಧನೆ, ಫಲ ಪಂಚಾಮೃತ ಹೋಮ, ಏಕವಾರ ರುದ್ರಾಭಿಷೇಕ ಮಧ್ಯಾಹ್ನ 12 ಗಂಟೆಗೆ ಮಹಾಕುಂಭಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆದವು. ರಾತ್ರಿ ಶ್ರೀ ಛಾಯಾದೇವಿ ಅಮ್ಮ ಅವರ ಪುಜಾ ಕುಣಿತ, ಅಮ್ಮನವರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮದ ನಂತರ ಗೀತಾ ಗಾಯನ ನಡೆಯಿತು.&lt;/p&gt;&lt;p&gt;ಇಂದು ಬೆಳಗ್ಗೆ 4 ಗಂಟೆಗೆ ಶನೇಶ್ವರಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ಬೆಳಗ್ಗೆ 7 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಏ.27ರ ಸೋಮವಾರ ಮರುಹಬ್ಬದ ಪ್ರಯುಕ್ತ ಆಶ್ರಯ ಬಡಾವಣೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಶ್ರೀ ಛಾಯಾದೇವಿ ಅಮ್ಮನವರ ಪೂಜಾ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ರಸಮಂಜರಿ ಹಾಗೂ ಅನ್ನ ಸಂತರ್ಪಣೆಯಲ್ಲಿ ಭಕ್ತಾದಿಗಳು ಆಗಮಿಸುವಂತೆ ಪ್ರಧಾನ ಅರ್ಚಕ ಕೃಷ್ಣಪ್ಪ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/food-and-water-crisis-warning-amid-climate-change-says-shivayogi-rajendra-swamiji-kvn/articleshow-wg6q7zh"/>
        </item>
        <item>
            <title><![CDATA[ಬೇರೊಬ್ಬರ ವರದಿಯನ್ನು ಮತ್ತ್ಯಾರಿಗೋ ನೀಡಿ ರೋಗಿಯ ಪತಿಯನ್ನೇ ನಿಂದಿಸಿದ ಸ್ಕ್ಯಾನಿಂಗ್‌ ಸೆಂಟರ್‌ ಸಿಬ್ಬಂದಿ]]></title>
            <link>https://kannada.asianetnews.com/karnataka-districts/hassan-sakaleshpur-medical-negligence-scanning-center-staff-scolded-for-giving-someone-else-s-report-mrq/articleshow-x1bp7pi</link>
            <guid isPermaLink="true">https://kannada.asianetnews.com/karnataka-districts/hassan-sakaleshpur-medical-negligence-scanning-center-staff-scolded-for-giving-someone-else-s-report-mrq/articleshow-x1bp7pi</guid>
            <pubDate>Sun, 10 May 2026 08:44:41 +0530</pubDate>
            <description><![CDATA[&lt;p&gt;ಸ್ಕ್ಯಾನಿಂಗ್ ಸೆಂಟರ್&zwnj;ನಲ್ಲಿ ಬೇರೊಬ್ಬರ ವರದಿಯನ್ನು ಮಹಿಳೆಯೊಬ್ಬರಿಗೆ ನೀಡಿದ ಪರಿಣಾಮ, ತಪ್ಪಾದ ಚಿಕಿತ್ಸೆಯಿಂದ ಅವರ ಆರೋಗ್ಯ ಹದಗೆಟ್ಟಿದೆ. ಕೇಂದ್ರದ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದು, ಈ ಘಟನೆಯು ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರದ ದುಸ್ಥಿತಿಯನ್ನು ಸಹ ಬೆಳಕಿಗೆ ತಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7xqk57bagfgtta6gp9ja0x,imgname-scanning--report-exchange-1778382523559.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ:&lt;/strong&gt; ಸಕಲೇಶಪುರ ಪಟ್ಟಣದ ಟೋಲ್ ಗೇಟ್ ಸಮೀಪ ಕಾರ್ಯನಿರ್ವಹಿಸುತ್ತಿರುವ &ldquo;ಸ್ಕಂದ ಸ್ಕ್ಯಾನಿಂಗ್ ಸೆಂಟರ್&rdquo;ನ ಬೇಜವಾಬ್ದಾರಿತನದಿಂದ ಮಹಿಳೆಯೊಬ್ಬರು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ತಾಲೂಕಿನ ಮಠಸಾಗರ ಗ್ರಾಮದ ಹಸೈನಾರ್ ಹಾಜಿ ಅವರ ಪತ್ನಿ ಸಂಶಿಯಾ ಎಂಬುವವರು ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಗುರುವಾರ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ವೈದ್ಯರು ಸ್ಕ್ಯಾನಿಂಗ್ ಮಾಡುವಂತೆ ಸೂಚಿಸಿದ್ದು, ಅವರನ್ನು ಪಟ್ಟಣದ ಟೋಲ್ ಗೇಟ್ ಸಮೀಪದ ಸ್ಕಂದ ಸ್ಕ್ಯಾನಿಂಗ್ ಸೆಂಟರ್&zwnj;ಗೆ ಕಳುಹಿಸಲಾಗಿತ್ತು. ಸ್ಕ್ಯಾನಿಂಗ್ ಮಾಡಿದ ಬಳಿಕ ಕೇಂದ್ರದ ಸಿಬ್ಬಂದಿ ನೀಡಿದ ವರದಿಯನ್ನು ವೈದ್ಯರಿಗೆ ತೋರಿಸಿದಾಗ, ಅದರ ಆಧಾರದ ಮೇಲೆ ಔಷಧಿ ನೀಡಲಾಗಿತ್ತು. ಆದರೆ ಔಷಧಿ ಸೇವಿಸಿದ ಬಳಿಕವೂ ಮಹಿಳೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಿಸದೇ, ಮತ್ತಷ್ಟು ಅಸ್ವಸ್ಥಗೊಂಡು ನಿಶಕ್ತರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ರೋಗಿಯ ಆರೋಗ್ಯದಲ್ಲಿ ವ್ಯತ್ಯಾಸ&lt;/strong&gt;&lt;/h2&gt;&lt;p&gt;ಈ ನಡುವೆ ಶುಕ್ರವಾರ ಸ್ಕಂದ ಸ್ಕ್ಯಾನಿಂಗ್ ಸೆಂಟರ್ ಸಿಬ್ಬಂದಿ ದೂರವಾಣಿ ಮೂಲಕ ಸಂಪರ್ಕಿಸಿ &ldquo;ನಿಮ್ಮ ರಿಪೋರ್ಟ್ ಬದಲಾಗಿ ವೈಶಾಲಿ ಎಂಬುವವರ ವರದಿ ನಿಮ್ಮ ಕೈ ಸೇರಿದೆ, ಬಂದು ಹೊಸ ವರದಿ ಪಡೆದುಕೊಳ್ಳಿ&rdquo; ಎಂದು ತಿಳಿಸಿದ್ದಾರೆ. ಇದರಿಂದ ಕೇಂದ್ರದ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಬಹಿರಂಗವಾಗಿದ್ದು, ತಪ್ಪಾದ ವರದಿ ನೀಡಿದ ಪರಿಣಾಮ ರೋಗಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಕೇಂದ್ರದ ಸಿಬ್ಬಂದಿ &ldquo;ಇಂತಹದ್ದು ಕೆಲವೊಮ್ಮೆ ಆಗುತ್ತದೆ, ಬೇಕಾದರೆ ಹೊಸ ರಿಪೋರ್ಟ್ ತೆಗೆದುಕೊಂಡು ಹೋಗಿ, ಇಲ್ಲವಾದರೆ ಬಿಡಿ&rdquo; ಎಂದು ನಿರ್ಲಕ್ಷ್ಯವಾಗಿ ಉತ್ತರಿಸಿ, ರೋಗಿ ಹಾಗೂ ಅವರ ಪತಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.&lt;/p&gt;&lt;p&gt;ಈ ಕುರಿತು ರೋಗಿಯ ಪತಿ ಹಸನ್ ಹಾಜಿ ಮಾತನಾಡಿ, ನಾವು ಅನಕ್ಷರಸ್ಥರು. ವೈದ್ಯಕೀಯ ವರದಿಗಳ ಬಗ್ಗೆ ಅರಿವು ಇಲ್ಲ. ಆದರೆ ಸ್ಕ್ಯಾನಿಂಗ್ ಕೇಂದ್ರದ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ನಮ್ಮ ಮೇಲೆಯೇ ದರ್ಪ ತೋರಿಸುತ್ತಿದ್ದಾರೆ. ಇಂತಹ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯ ಉಂಟಾಗಬಹುದು. ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.&lt;/p&gt;&lt;h3&gt;&lt;strong&gt;ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರ ಬಳಕೆಯಾಗದ ಸ್ಥಿತಿ&lt;/strong&gt;&lt;/h3&gt;&lt;p&gt;ಸಕಲೇಶಪುರ ಕ್ರಾಫರ್ಡ್&zwnj; ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದರೂ, ನುರಿತ ತಜ್ಞರ ಕೊರತೆಯಿಂದ ಅದು ಬಳಕೆಯಾಗದೇ ತುಕ್ಕು ಹಿಡಿಯುತ್ತಿದೆ. ಖಾಸಗಿ ಕೇಂದ್ರಗಳ ಅವಲಂಬನೆ ತಪ್ಪಿಸಲು ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಘಟಕವನ್ನು ಶೀಘ್ರ ದುರಸ್ತಿ ಮಾಡಿ, ತಜ್ಞರನ್ನು ನೇಮಿಸಿ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hassan-sakaleshpur-medical-negligence-scanning-center-staff-scolded-for-giving-someone-else-s-report-mrq/articleshow-x1bp7pi"/>
        </item>
        <item>
            <title><![CDATA[Umesh Meti Kodimath visit: ಕೋಡಿಮಠ ಶ್ರೀಗಳಗೆ ಬೆಳ್ಳಿ ಕೀರಿಟ ಅರ್ಪಿಸಿದ ಶಾಸಕ ಉಮೇಶ್ ಮೇಟಿ]]></title>
            <link>https://kannada.asianetnews.com/karnataka-districts/bagalkote-new-mla-umesh-meti-presents-silver-crown-to-kodimath-sri-rav/articleshow-y03eqi4</link>
            <guid isPermaLink="true">https://kannada.asianetnews.com/karnataka-districts/bagalkote-new-mla-umesh-meti-presents-silver-crown-to-kodimath-sri-rav/articleshow-y03eqi4</guid>
            <pubDate>Sat, 09 May 2026 07:43:12 +0530</pubDate>
            <description><![CDATA[ಬಾಗಲಕೋಟೆ ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕ ಉಮೇಶ್ ಮೇಟಿ, ಅರಸೀಕೆರೆಯ ಹಾರನಹಳ್ಳಿ ಕೋಡಿಮಠಕ್ಕೆ ಭೇಟಿ ನೀಡಿದರು. ಅವರು ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರಿಗೆ ಬೆಳ್ಳಿ ಕಿರೀಟ ಅರ್ಪಿಸಿ, ಗಂಟೆಗೂ ಹೆಚ್ಚು ಕಾಲ ಗೋಪ್ಯ ಸಮಾಲೋಚನೆ ನಡೆಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr57tap3vw5q41d5wtdxz274,imgname-----------------------2026-05-09t073644.901-1778292435651.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಅರಸೀಕೆರೆ ಮೇ.9): &lt;/strong&gt;ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ನೂತನ ಶಾಸಕ ಉಮೇಶ್ ಮೇಟಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟ ಅರ್ಪಿಸಿ ಆಶೀರ್ವಾದ ಪಡೆದರು.&lt;/p&gt;&lt;p&gt;ಗುರುವಾರ ರಾತ್ರಿ ಮಠಕ್ಕೆ ಆಗಮಿಸಿದ ಉಮೇಶ್ ಮೇಟಿ ಮಠದಲ್ಲಿನ ಗದ್ದುಗೆಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಸ್ವಾಮೀಜಿಗೆ ರಜತ ಕಿರೀಟ ಧಾರಣೆ ಮಾಡಿ ಭಕ್ತಿಭಾವ ಸಮರ್ಪಿಸಿದರು. ಉಮೇಶ್ ಮೇಟಿ ಹಾಗೂ ಶ್ರೀಗಳ ನಡುವೆ 1 ಗಂಟೆಗೂ ಹೆಚ್ಚು ಕಾಲ ಗೋಪ್ಯ ಸಮಾಲೋಚನೆ ನಡೆದಿರುವುದು ವಿಶೇಷ ಗಮನ ಸೆಳೆಯಿತು.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Blackmail Utsav: ಯಾವ ಪುರುಷಾರ್ಥಕ್ಕೆ ಯಡಿಯೂರಪ್ಪ ಅಭಿಮಾನೋತ್ಸವ? ಯತ್ನಾಳ್ ಟೀಕೆ&lt;/p&gt;&lt;p&gt;ರಾಜಕೀಯವಾಗಿ ತಮ್ಮ ಮುಂದಿನ ನಡೆ, ಕ್ಷೇತ್ರದ ಅಭಿವೃದ್ಧಿ ಹಾಗೂ ಭವಿಷ್ಯದ ವಿಚಾರಗಳ ಕುರಿತು ಶ್ರೀಗಳ ಮಾರ್ಗದರ್ಶನ ಪಡೆದಿದ್ದಾರೆ ಎಂಬ ಮಾಹಿತಿ ಮಠದ ಮೂಲಗಳಿಂದ ತಿಳಿದುಬಂದಿದೆ.&lt;/p&gt;]]></content:encoded>
            <category>hassan</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkote-new-mla-umesh-meti-presents-silver-crown-to-kodimath-sri-rav/articleshow-y03eqi4"/>
        </item>
        <item>
            <title><![CDATA[ಹಾಸನ: ರಾಯರ ದರ್ಶನಕ್ಕೂ ಮುನ್ನವೇ ಮಸಣ ಸೇರಿದ 8 ಮಂದಿ ಸಂಬಂಧಿಕರು, ಸಾವನ್ನಪ್ಪಿದ ಒಂದೊಂದು ಕುಟುಂಬದ್ದು ಒಂದೊಂದು ಕಥೆ!]]></title>
            <link>https://kannada.asianetnews.com/karnataka-districts/mantralayam-road-accident-8-from-hassan-and-chikkamagaluru-killed-in-tragic-crash-near-raichur-gdp/articleshow-z5sp26i</link>
            <guid isPermaLink="true">https://kannada.asianetnews.com/karnataka-districts/mantralayam-road-accident-8-from-hassan-and-chikkamagaluru-killed-in-tragic-crash-near-raichur-gdp/articleshow-z5sp26i</guid>
            <pubDate>Thu, 16 Apr 2026 16:52:43 +0530</pubDate>
            <description><![CDATA[ಮಂತ್ರಾಲಯದ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ರಾಯರ ದರ್ಶನಕ್ಕೆ ತೆರಳುತ್ತಿದ್ದ ಹಾಸನ ಮತ್ತು ಚಿಕ್ಕಮಗಳೂರು ಮೂಲದ ಒಂದೇ ಕುಟುಂಬದ ಎಂಟು ಮಂದಿ ಮೃತಪಟ್ಟಿದ್ದಾರೆ. ಗೂಡ್ಸ್ ವಾಹನ ಮತ್ತು ಟ್ಯಾಂಕರ್ ನಡುವಿನ ಈ ಮುಖಾಮುಖಿ ಡಿಕ್ಕಿಯಲ್ಲಿ ಹಲವರು ಗಾಯಗೊಂಡಿದ್ದು, ಈ ದುರ್ಘಟನೆ ಗ್ರಾಮಗಳಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpb0b1kczs7ryf7d827z9qb8,imgname-mantralaya-road-accident-1776338437740.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು/ಹಾಸನ: &lt;/strong&gt;ಮಂತ್ರಾಲಯದ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಎಂಟು ಮಂದಿ ಮೃತಪಟ್ಟಿರುವ ದುರ್ಘಟನೆ ಕುಟುಂಬಗಳನ್ನೇ ನಡುಗಿಸಿದೆ. ರಾಯರ ದರ್ಶನಕ್ಕಾಗಿ ಹೊರಟಿದ್ದ ಒಂದೇ ಕುಟುಂಬದ ಸದಸ್ಯರು ಮಸಣ ಸೇರಿರುವುದು ಹೃದಯವಿದ್ರಾವಕ ಘಟನೆ ಇಡೀ ಜಿಲ್ಲೆಯ ಜನರನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಒಬ್ಬೊಬ್ಬರದು ಒದೊಂದು ಕಥೆ ಹೇಳುತ್ತಿದೆ.&lt;/p&gt;&lt;p&gt;ಗುರುವಾರ ಬೆಳಗ್ಗೆ ಮಂತ್ರಾಲಯದತ್ತ ಸಾಗುತ್ತಿದ್ದ KA-46-9745 ಸಂಖ್ಯೆಯ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನ ಮತ್ತು KA-32-AC-1117 ಸಂಖ್ಯೆಯ ಟ್ಯಾಂಕರ್ ನಡುವೆ ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಈ ಭೀಕರ ಅಪಘಾತ ಮಂತ್ರಾಲಯ ಮಠದಿಂದ ಸುಮಾರು 7 ಕಿ.ಮೀ ದೂರದಲ್ಲಿ ಸಂಭವಿಸಿದ್ದು, ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.&lt;/p&gt;&lt;p&gt;ಈ ಗೂಡ್ಸ್ ವಾಹನದಲ್ಲಿ ಹಾಸನ ಹಾಗೂ ಚಿಕ್ಕಮಗಳೂರು ಮೂಲದ ಒಟ್ಟು 21 ಜನ ಪ್ರಯಾಣಿಸುತ್ತಿದ್ದು, ಅದರಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಕರ್ನೂಲ್ ಜಿಲ್ಲಾ ಆಸ್ಪತ್ರೆ ಹಾಗೂ ಏಮಿಗನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h2&gt;ಒಂದೇ ಕುಟುಂಬದ ದುರಂತ&lt;/h2&gt;&lt;p&gt;ಮೃತರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶೆಟ್ಟಿಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗ್ರಾಮಸ್ಥರಾಗಿದ್ದಾರೆ. ಸಂಬಂಧಿಕರೆಲ್ಲರೂ ಒಟ್ಟಾಗಿ ಮಂತ್ರಾಲಯ ಪ್ರವಾಸ ಕೈಗೊಂಡಿದ್ದರು. ಆದರೆ ಈ ಪ್ರಯಾಣವೇ ಅವರ ಜೀವನದ ಕೊನೆಯ ಪ್ರಯಾಣವಾಗಿರುವುದು ದೊಡ್ಡ ದುರಂತ&lt;/p&gt;&lt;h2&gt;ಮೃತರ ಪಟ್ಟಿ:&lt;/h2&gt;&lt;p&gt;ಕುಮಾರ್ (51)&lt;/p&gt;&lt;p&gt;ಜಯಮ್ಮ (60) &ndash; ಕುಮಾರ್ ಅವರ ಅತ್ತೆ&lt;/p&gt;&lt;p&gt;ಸುನೀಲ್ (27) &ndash; ಕುಮಾರ್ ಪುತ್ರ&lt;/p&gt;&lt;p&gt;ವೀಣಾ (25) &ndash; ಕುಮಾರ್ ಪುತ್ರಿ&lt;/p&gt;&lt;p&gt;ನಿಶಿತಾ (3) &ndash; ವೀಣಾ ಮಗಳು&lt;/p&gt;&lt;p&gt;ಲೋಲಾಕ್ಷಿ (38) &ndash; ಕುಮಾರ್ ತಮ್ಮನ ಪತ್ನಿ&lt;/p&gt;&lt;p&gt;ಪುಟ್ಟಮ್ಮ (60) &ndash; ತರೀಕೆರೆ ತಾಲೂಕು ಉಡೇವಾ ಗ್ರಾಮ&lt;/p&gt;&lt;p&gt;ಮೀನಾಕ್ಷಮ್ಮ (54) &ndash; ತರೀಕೆರೆ ತಾಲೂಕು ಉಡೇವಾ ಗ್ರಾಮ&lt;/p&gt;&lt;h2&gt;ಕನಸು ಕಂಡಿದ್ದ ಜಯಮ್ಮ&hellip; ಕನಸೇ ಉಳಿಯಿತು&lt;/h2&gt;&lt;p&gt;ಈ ದುರಂತದಲ್ಲಿ ಮೃತಪಟ್ಟ ಜಯಮ್ಮ ಅವರ ಕಥೆ ಎಲ್ಲರನ್ನೂ ಕಣ್ಣೀರಿಟ್ಟಿದೆ. 65ನೇ ವಯಸ್ಸಿನಲ್ಲಿ ಒಂದು ಮನೆ ಕಟ್ಟಬೇಕೆಂಬ ಕನಸು ಕಂಡಿದ್ದ ಅವರು, ಎಲ್ಲರೂ ಮನೆ ಕಟ್ಟಿಕೊಂಡು ಹೋಗಿದ್ದಾರೆ, ನಾವು ಕೂಡ ಕಟ್ಟೋಣ ಎಂದು ಕುಟುಂಬದವರೊಂದಿಗೆ ಹೇಳಿಕೊಂಡಿದ್ದರಂತೆ. ಧರ್ಮಸ್ಥಳ ಸಂಘದಿಂದ 3 ಲಕ್ಷ ರೂಪಾಯಿ ಸಾಲ ಪಡೆದು ಮನೆ ಕಟ್ಟುವ ಯೋಚನೆ ಮಾಡಿದ್ದ ಅವರು, ಕೂಲಿ ಕೆಲಸ ಮಾಡಿ ಸಾಲ ತೀರಿಸೋಣ ಎಂದು ನಿರ್ಧರಿಸಿದ್ದರು. ಮಂತ್ರಾಲಯದಿಂದ ಹಿಂದಿರುಗಿದ ಬಳಿಕ ಈ ಕುರಿತು ಚಿಂತನೆ ನಡೆಸಬೇಕೆಂದು ಕೊಂಡಿದ್ದರು, ಅದಕ್ಕೆ ಅವಕಾಶವೇ ಸಿಕ್ಕಿಲ್ಲ. ಮಂತ್ರಾಲಯಕ್ಕೆ ಹೊರಡುವ ಮುನ್ನ ರಾಯರಿಗೆ ಕಾಣಿಕೆ ಎಂದು ₹100 ಪಡೆದುಕೊಂಡು ಹೋಗಿದ್ದ ಜಯಮ್ಮ, ಬದುಕಿನ ಕೊನೆಯ ಪ್ರಯಾಣ ಮುಗಿಸಿರುವುದು ಅತ್ಯಂತ ದುಃಖಕರ ಸಂಗತಿ.&lt;/p&gt;&lt;h2&gt;ಹೋಗಬೇಕಿತ್ತು&hellip; ಆದರೆ ಹಣ ಇರಲಿಲ್ಲ&lt;/h2&gt;&lt;p&gt;ಕುಟುಂಬದ ಶೋಭಾ ಎಂಬವರು ಕೂಡ ಈ ಪ್ರವಾಸಕ್ಕೆ ಹೋಗಬೇಕಾಗಿತ್ತು. ಆದರೆ ಹಣದ ಅಭಾವದಿಂದ ಅವರು ಹೋಗಿರಲಿಲ್ಲ. ಹೋಗಿದ್ದರೆ ನನ್ನ ಸ್ಥಿತಿಯೂ ಇದೇ ಆಗುತ್ತಿತ್ತು ಎಂದು ಅತ್ತೆಯ ಮಾತು ನೆನೆದು ಕಣ್ಣೀರಿಟ್ಟಿದ್ದಾರೆ ಸೊಸೆ.&lt;/p&gt;&lt;h2&gt;ಗಾಯಾಳುಗಳ ಸ್ಥಿತಿ ಗಂಭೀರ&lt;/h2&gt;&lt;p&gt;ತರೀಕೆರೆ ತಾಲೂಕಿನ ಉಡೇವಾ ಗ್ರಾಮದಿಂದ ಒಟ್ಟು 9 ಜನ ತೆರಳಿದ್ದು, ಅದರಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;h2&gt;ಅಧಿಕಾರಿಗಳ ಭೇಟಿ, ಪ್ರಕರಣ ದಾಖಲು&lt;/h2&gt;&lt;p&gt;ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರ್&zwnj;ಟಿಒ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಿ ಘಟನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದರು.&lt;/p&gt;&lt;p&gt;ಈ ಸಂಬಂಧ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ಮೃತದೇಹಗಳನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಏಮಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ. ಮೃತರ ಬಂಧುಗಳು ಸ್ಥಳಕ್ಕೆ ಆಗಮಿಸುತ್ತಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.&lt;/p&gt;&lt;h2&gt;ಗ್ರಾಮಗಳಲ್ಲಿ ನೀರವ ಮೌನ&lt;/h2&gt;&lt;p&gt;ಒಂದೇ ಕುಟುಂಬದ ಹಲವು ಮಂದಿ ಪ್ರಾಣ ಕಳೆದುಕೊಂಡಿರುವುದು ಗ್ರಾಮಗಳಲ್ಲಿ ಬಾರೀ ನೋವು ತರಿಸಿದೆ. ಬದುಕಿನ ಕನಸುಗಳನ್ನು ಹೊತ್ತು ಹೊರಟವರು ಮರಣದ ಕದ ತಟ್ಟಿದ ಈ ಘಟನೆ, ರಸ್ತೆ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಚಿಂತನೆಗೆ ದಾರಿ ಮಾಡಿಕೊಟ್ಟಿದೆ.&lt;/p&gt;]]></content:encoded>
            <category>hassan</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mantralayam-road-accident-8-from-hassan-and-chikkamagaluru-killed-in-tragic-crash-near-raichur-gdp/articleshow-z5sp26i"/>
        </item>
    </channel>
</rss>
