<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 27 Apr 2026 20:17:54 +0530</lastBuildDate>
        <atom:link href="https://kannada.asianetnews.com/rss/gadag" rel="self" type="application/rss+xml"/>
        <item>
            <title><![CDATA[ಲಕ್ಕುಂಡಿ ಚಿನ್ನದ ನಿಧಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್​: ಇದು ಎಂಟು ಕೋಟಿಯ ರಹಸ್ಯ! 2 ತಿಂಗಳ ಬಳಿಕ ನಡೆದದ್ದೇನು?]]></title>
            <link>https://kannada.asianetnews.com/karnataka-districts/lakkundi-gold-case-new-demand-from-ritti-family-for-giving-one-5th-of-money-in-8-crores-suc/articleshow-07a0fhy</link>
            <guid isPermaLink="true">https://kannada.asianetnews.com/karnataka-districts/lakkundi-gold-case-new-demand-from-ritti-family-for-giving-one-5th-of-money-in-8-crores-suc/articleshow-07a0fhy</guid>
            <pubDate>Thu, 12 Mar 2026 14:16:42 +0530</pubDate>
            <description><![CDATA[&lt;p&gt;ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕಿದ್ದ ಚಿನ್ನದ ನಿಧಿಯ ಮೌಲ್ಯ 8 ಕೋಟಿ ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರಾಮಾಣಿಕವಾಗಿ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ರಿತ್ತಿ ಕುಟುಂಬ, ಇದೀಗ ಕಾನೂನಿನ ಪ್ರಕಾರ ಹೊಸ ಬೇಡಿಕೆ ಇಟ್ಟಿದ್ದಾರೆ. ಏನದು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkgkk0nsyawcqjcp46zmpmr6,imgname-lakkundi-1773305168569.jpg" type="image/jpeg" height="390" width="690"/>
            <content:encoded><![CDATA[&lt;p&gt;ಎರಡು ತಿಂಗಳ ಹಿಂದೆ ಗದಗ ಜಿಲ್ಲೆಯ ಲಕ್ಕುಂಡಿ ಸಕತ್​ ಸದ್ದು ಮಾಡಿತ್ತು. ಇಲ್ಲಿ ಪ್ರಜ್ವಲ್ ರಿತ್ತಿ ಅವರ ಮನೆಯ ಕೆಲಸವನ್ನು ಮಾಡುವ ಸಂದರ್ಭದಲ್ಲಿ ಚಿನ್ನದ ನಿಧಿಯೇ ಸಿಕ್ಕಿತ್ತು. ಅಂದಿನಿಂದ ಲಕ್ಕುಂಡಿ ಕರ್ನಾಟಕ ಮಾತ್ರವಲ್ಲದೇ ಕರ್ನಾಟಕದ ಹೊರಗೂ ಸಕತ್​ ಸೌಂಡ್​ ಮಾಡುತ್ತಲೇ ಇದೆ. ಈಗಲೂ ಲಕ್ಕುಂಡಿಗೆ ಬೇರೆ ಬೇರೆ ಭಾಗಗಳಿಂದ ಜನರು ಬರುತ್ತಲೇ ಇದ್ದಾರೆ. ಎರಡು ತಿಂಗಳಿನಿಂದ ತುಂಬಾ ಸದ್ದು ಮಾಡಿದ್ದ ಲಕ್ಕುಂಡಿ ಸದ್ಯ ಮೌನವಾಗಿತ್ತು. ಆದರೆ ಇದೀಗ ಮತ್ತೆ ಪುಟಿದೆದ್ದಿದೆ. ಇದಕ್ಕೆ ಕಾರಣ, 8 ಕೋಟಿಯ ರಹಸ್ಯ! ಈ ನಿಧಿ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿರುವುದೇ ಇದಕ್ಕೆ ಕಾರಣ.&lt;/p&gt;&lt;h2&gt;&lt;strong&gt;ಸಿಕ್ಕಿದ್ದೆಷ್ಟು?&lt;/strong&gt;&lt;/h2&gt;&lt;p&gt;ಅಷ್ಟಕ್ಕೂ ಆಗಿದ್ದು ಏನೆಂದರೆ, ಇಲ್ಲಿ ಸಿಕ್ಕಿರುವ ಚಿನ್ನಾಭರಣಗಳು ಮತ್ತು ಇತರ ಸಾಮಗ್ರಿಗಳ ಬೆಲೆಯನ್ನು ಕಂಡುಹಿಡಿಯಲು ನೇಮಕ ಮಾಡಿರುವ ತಜ್ಞರು ಇದು ಸುಮಾರು 8 ಕೋಟಿ ಬೆಲೆ ಬಾಳುವಂಥದ್ದು ಎಂದು ವರದಿ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಅದರ ನಿಖರ ಬೆಲೆ ತಿಳಿದಿರಲಿಲ್ಲ. ಅಷ್ಟಕ್ಕೂ ರಿತ್ತಿ ಕುಟುಂಬಕ್ಕೆ ಸಿಕ್ಕಿದ್ದು ಸುಮಾರು 466 ಗ್ರಾಂ ತೂಕದ ಪುರಾತನ ಚಿನ್ನದ ಆಭರಣಗಳು ಮತ್ತು ಇತರ 22 ವಸ್ತುಗಳು. ಅವುಗಳನ್ನು ಸಂಪೂರ್ಣವಾಗಿ ಸರ್ಕಾರದ ವಶಕ್ಕೆ ಕೊಟ್ಟಿತ್ತು ಕುಟುಂಬ. ಪ್ರಾಮಾಣಿಕವಾಗಿ ಮೆರೆದಿದ್ದರು ಅವರು. ಅದರ ಬಳಿಕ ಲಕ್ಕುಂಡಿ ಗ್ರಾಮದ ಇತಿಹಾಸದ ಬಗ್ಗೆ ಸಂಶೋಧನೆಗಳೇ ನಡೆದವು. ಆ ಚಿನ್ನಾಭರಣಗಳನ್ನು ಪರಿಶೀಲನೆ ಮಾಡಿದಾಗ, ಅವು ಸುಮಾರು 500-600 ವರ್ಷಗಳಷ್ಟು ಹಳೆಯದ್ದು ಎಂದು ಕಂಡು ಹಿಡಿಯಲಾಗಿದೆ. ಇದು ವಿಜಯನಗರ ಅಥವಾ ಚಾಲುಕ್ಯ ಕಾಲದ್ದು ಎನ್ನುವುದು ತಿಳಿದುಬಂದಿದೆ.&lt;/p&gt;&lt;h3&gt;&lt;strong&gt;8 ಕೋಟಿಯ ಅಂದಾಜು&lt;/strong&gt;&lt;/h3&gt;&lt;p&gt;ಇದೀಗ ಅದರ ಮೌಲ್ಯಮಾಪನ ಮಾಡಿದಾಗ ಈ ಆ್ಯಂಟಿಕ್ ಆಭರಣಗಳು ಸುಮಾರು 8 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಆದ್ದರಿಂದ ಇದೀಗ ರಿತ್ತಿ ಕುಟುಂಬ ತಜ್ಞರು ವ್ಯಕ್ತಪಡಿಸಿದ ಬೆಲೆಯಲ್ಲಿ ನಮಗೆ ಒಂದು ಭಾಗ ಬೇಕು. 8 ಕೋಟಿ ಮೊತ್ತದಲ್ಲಿ ಐದರ ಒಂದು ಭಾಗ ತಮಗೆ ಬೇಕು ಎಂದು ಕೇಳುತ್ತಿದ್ದಾರೆ. ಅಷ್ಟಕ್ಕೂ ಕಾನೂನಿನ ಅಡಿಯಲ್ಲಿಯೂ ಕೆಲವೊಂದು ಅವಕಾಶಗಳು ಇವೆ. ನಿಧಿಯ ಬಗ್ಗೆ ಕೆಲವೊಂದು ನಿಯಮಗಳು ಇದ್ದು, ಕೆಲವು ಸಂದರ್ಭಗಳಲ್ಲಿ ಸಂಪೂರ್ಣ ಚಿನ್ನಾಭರಣ ಯಾರಿಗೆ ಸಿಕ್ಕಿದೆಯೋ ಅವರ ಪಾಲಾಗುತ್ತದೆ ಎಂದು ಇದ್ದರೆ, ಕೆಲವು ಸಂದರ್ಭಗಳಲ್ಲಿ ಇಷ್ಟು ಪಾಲನ್ನು ಅವರಿಗೆ ನೀಡಬೇಕು ಎಂದು ಇದೆ. ಈಗ ನಮಗೆ ಐದರ ಒಂದು ಭಾಗ ಬೇಕು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಪ್ರಾಮಾಣಿಕ ಕೆಲಸ ಮಾಡಿದ್ದೇವೆ&lt;/strong&gt;&lt;/h3&gt;&lt;p&gt;ನಾವು ಪ್ರಾಮಾಣಿಕವಾಗಿ ಭೂಮಿಯಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಈಗ ಸರ್ಕಾರ ಕೂಡ ಪ್ರಾಮಾಣಿಕವಾಗಿ ನಮಗೆ ಇಷ್ಟು ಹಣವನ್ನು ನೋಡಬೇಕು. ಐದರಲ್ಲಿ ಒಂದು ಭಾಗ ಎಂದರೆ ಸುಮಾರು 1.6 ಕೋಟಿ ರೂಪಾಯಿ ನೀಡಬೇಕು. ಈಗಿನ ಬೆಲೆಗೆ ನಾವು ಅದನ್ನು ಒಪ್ಪಲ್ಲ, ಆ್ಯಂಟಿಕ್ ಮೌಲ್ಯ ಎಷ್ಟಿದೆಯೋ ಅಷ್ಟೇ ಬೇಕು ಎಂದಿದ್ದಾರೆ. ಏಕೆಂದರೆ, ಇದು ಆ್ಯಂಟಿಕ್​ ಪೀಸ್ ಆಗಿರುವುದರಿಂದ ಇದರ ಮೌಲ್ಯ 8-10 ಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಸರ್ಕಾರ, ಈ ಹಿಂದೆ ನೀಡಿದ್ದ ಭರವಸೆಯಂತೆ ಮನೆ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನವನ್ನು ರಿಕ್ತಿ ಕುಟುಂಬಕ್ಕೆ ಮುಂಜೂರು ಮಾಡಿದೆ. ಈಗ ಈ ಹೊಸ ಬೇಡಿಕೆಯನ್ನು ಕುಟುಂಬ ಮುಂದಿಟ್ಟಿದೆ.&lt;/p&gt;]]></content:encoded>
            <category>gadag</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/lakkundi-gold-case-new-demand-from-ritti-family-for-giving-one-5th-of-money-in-8-crores-suc/articleshow-07a0fhy"/>
        </item>
        <item>
            <title><![CDATA[ಗದಗ: ಜಮೀನಿನಲ್ಲಿ ನೀರು ಕುಡಿದ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಗಲಾಟೆ: ಕಲ್ಲು ತೂರಾಟ..]]></title>
            <link>https://kannada.asianetnews.com/state/gadag-news-clashes-between-two-communities-over-drinking-water-on-a-farm/articleshow-23l1g8d</link>
            <guid isPermaLink="true">https://kannada.asianetnews.com/state/gadag-news-clashes-between-two-communities-over-drinking-water-on-a-farm/articleshow-23l1g8d</guid>
            <pubDate>Mon, 23 Mar 2026 22:49:47 +0530</pubDate>
            <description><![CDATA[&lt;p&gt;ಜಮೀನಿನಲ್ಲಿ ನೀರು ಕುಡಿದ ವಿಚಾರಕ್ಕೆ ಎಸ್&zwnj;ಸಿ ಮತ್ತು ಎಸ್&zwnj;ಟಿ ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ಈ ಘರ್ಷಣೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದ್ದು, ಎರಡೂ ಕಡೆಯ 15 ಜನರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmdvazsbgy81a251fyern41p,imgname-gadag-casteism-dispute-1774286372651.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಜಮೀನಿನಲ್ಲಿ ನೀರು ಕುಡಿದ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಗಲಾಟೆ&lt;/strong&gt;&lt;/h2&gt;&lt;p&gt;ಗದಗ: 21 ಶತಮಾನದಲ್ಲಿ ನಾವು ವಾಸ ಮಾಡುತ್ತಿದ್ದರು ಜಾತಿಯ ಭೂತ ನಮ್ಮ ಹಳ್ಳಿಗಳನ್ನೂ ಇನ್ನೂ ಬಿಟ್ಟಿಲ್ಲ, ಅಂತರ್ಜಾತಿ ವಿವಾಹವಾದವರನ್ನು ಬೇರೆ ಜಾತಿಯ ಯುವಕ/ಯುವತಿಯನ್ನು ಪ್ರೀತಿ ಮಾಡಿದವರ ಕತೆಯನ್ನೇ ಮುಗಿಸಿದಂತಹ ಹಲವು ಘಟನೆಯಗಳು ನಮ್ಮ ರಾಜ್ಯದಲ್ಲಿ ನಡೆದಿವೆ. ಕಾನೂನುಗಳು ಎಷ್ಟೇ ಮುಂದುವರೆದರೂ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಹಾಗೆಯೇ ಈಗ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿಯಲ್ಲಿ ನೀರು ಕುಡಿದ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಗಲಾಟೆ ನಡೆದಿದ್ದು, ಈ ಗಲಾಟೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಂತಹ ನಾಚಿಕೆಗೇಡಿನ ಘಟನೆ ನಡೆದಿದೆ.&lt;/p&gt;&lt;h3&gt;&lt;strong&gt;ಎರಡು ಸಮುದಾಯಗಳ ಮಧ್ಯೆ ಹೊಡೆದಾಟ: ಕಲ್ಲು ತೂರಾಟ:&lt;/strong&gt;&lt;/h3&gt;&lt;p&gt;ಹೌದು ಎಸ್&zwnj;ಸಿ ಹಾಗೂ ಎಸ್&zwnj;ಟಿ ಸಮುದಾಯದ ಮಧ್ಯೆ ಈ ಗಲಾಟೆ ನಡೆದಿದ್ದು, ವಾಲ್ಮೀಕಿ ಸಮುದಾಯದ ರೈತನ ಜಮೀನಲ್ಲಿ ಯುವಕನೋರ್ವ ನೀರು ಕುಡಿದಿದ್ದಾನೆ. ಆತ ಮಾದಿಗ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂದು ವಾಲ್ಮೀಕಿ ಸಮುದಾಯದ ರೈತ ಆಕ್ಷೇಪ ವ್ಯಕ್ತಪಡಿಸಿದ್ದು, ಇದೇ ವಿಚಾರ ಊರೆಲ್ಲಾ ಹಬ್ಬಿ ಈ ಎರಡು ಸಮುದಾಯಗಳ ನಡುವೆ ದೊಡ್ಡ ಗಲಾಟೆ ನಡೆದಿದೆ. ಪರಸ್ಪರ ಹೊಡೆದಾಡಿಕೊಂಡ ಎರಡು ಗುಂಪುಗಳ ಜನ ಕಲ್ಲು ತೂರಾಟವನ್ನು ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯಲ್ಲಿ ಎರಡೂ ಗುಂಪಿನ 15 ಜನರಿಗೆ ಗಾಯಗಳಾಗಿದ್ದು, ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ&zwnj; ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಎಸ್&zwnj;ಪಿ ರೋಹನ್ ಜಗದೀಶ್ ಅವರು ಭೇಟಿ ನೀಡಿದ್ದು, ಸ್ಥಳದಲ್ಲಿ ಮಾಹಿತಿ ಪೊಲೀಸರನ್ನು ನಿಯೋಜಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತುತ್ತು ಅನ್ನಕ್ಕಾಗಿ ಸುರಿಯುವ ಮಳೆ ಲೆಕ್ಕಿಸದೇ ಚಳಿಯಲ್ಲೇ ನಡುಗುತ್ತಾ ಸಾಲುಗಟ್ಟಿ ನಿಂತ ಪುಟ್ಟ ಪುಟ್ಟ ಮಕ್ಕಳು&lt;/strong&gt;&lt;/p&gt;&lt;p&gt;ನೀರನ್ನು ಯಾರಿಂದಲೂ ಸೃಷ್ಟಿಸಲಾಗದು, ಅದು ಪ್ರಕೃತಿಯ ಕೊಡುಗೆ ಇಂದು ಜಮೀನಿನಲ್ಲಿರುವ ನೀರು ನಾಳೆಯೂ ಇರುವುದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ, ಇಲ್ಲದೇ ಹೋದರೇ ಮನುಷ್ಯರು ಅದನ್ನೂ ಸೃಷ್ಟಿಸಲಾಗದು ಅದೆಲ್ಲವೂ ಪ್ರಕೃತಿಯ ಆಶೀರ್ವಾದ ಹೀಗಿದ್ದೂ ಮನುಷ್ಯರು ಜಾತಿ ಈ ಜಾತಿ ಎಂದು ಹೊಡೆದಾಡುವುದರ ಜೊತೆಗೆ ಕೇವಲ ನೀರು ಕುಡಿದಿದ್ದಕ್ಕೆ ಇಡೀ ಊರಲ್ಲಿ ಜಾತಿ ದ್ವೇಷದ ಬೆಂಕಿ ಹಚ್ಚಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯುಗಾದಿಗೆ ತಂದ ಮಟನ್ ತಲೆಮಾಂಸ ಬೆಂದಿಲ್ಲ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Anusha Kb</dc:creator>
            <atom:link href="https://kannada.asianetnews.com/state/gadag-news-clashes-between-two-communities-over-drinking-water-on-a-farm/articleshow-23l1g8d"/>
        </item>
        <item>
            <title><![CDATA[ರಾಜ್ಯದಲ್ಲಿ ಮಳೆ ಆರ್ಭಟ, 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್; ಮುಂಡರಗಿ ಟವರ್ ಢಮಾರ್, ಯಾದಗಿರಿ ಸಿಡಿಲಿಗೆ 50 ಕುರಿ ಬಲಿ!]]></title>
            <link>https://kannada.asianetnews.com/state/karnataka-rain-update-yadagir-lightning-50-sheeps-death-gadag-airtel-tower-collapse-sat/articleshow-3s61bah</link>
            <guid isPermaLink="true">https://kannada.asianetnews.com/state/karnataka-rain-update-yadagir-lightning-50-sheeps-death-gadag-airtel-tower-collapse-sat/articleshow-3s61bah</guid>
            <pubDate>Mon, 27 Apr 2026 20:15:43 +0530</pubDate>
            <description><![CDATA[&lt;p&gt;ಹವಾಮಾನ ಇಲಾಖೆಯು ಕರ್ನಾಟಕದ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಯಾದಗಿರಿಯಲ್ಲಿ ಸಿಡಿಲು ಬಡಿದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದರೆ, ಗದಗದಲ್ಲಿ ಬಿರುಗಾಳಿಗೆ ಮೊಬೈಲ್ ಟವರ್ ಕುಸಿದುಬಿದ್ದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq7pcmhj9phzabq7y5zf6te3,imgname-karnataka-rain-orange-alert-1777301082673.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಗದಗ/ಯಾದಗಿರಿ (ಏ.27): ರಾ&lt;/strong&gt;ಜ್ಯದಲ್ಲಿ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ಹವಾಮಾನ ಇಲಾಖೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಮುಂದಿನ ಮೂರು ಗಂಟೆಗಳಲ್ಲಿ ರಾಜ್ಯದ ಒಟ್ಟು ಎಂಟು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಯಾವ ಯಾವ ಜಿಲ್ಲೆಗಳಲ್ಲಿ ಮಳೆ?&lt;/strong&gt;&lt;/h2&gt;&lt;p&gt;ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಎರಡು ಪ್ರತ್ಯೇಕ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ:&lt;/p&gt;&lt;p&gt;&lt;strong&gt;ಹೆಚ್ಚಿನ ತೀವ್ರತೆಯ ಮಳೆ (ಗಂಟೆಗೆ 40-50 ಕಿ.ಮೀ ವೇಗದ ಗಾಳಿ):&lt;/strong&gt;&lt;/p&gt;&lt;p&gt;ಚಿಕ್ಕಮಗಳೂರು, ಹಾಸನ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇಲ್ಲಿ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋಮೀಟರ್ ಇರಲಿದ್ದು, ಗುಡುಗು ಸಹಿತ ಮಿಂಚಿನ ಅಬ್ಬರ ಜೋರಾಗಿರಲಿದೆ.&lt;/p&gt;&lt;p&gt;&lt;strong&gt;ಸಾಧಾರಣ ಮಳೆ (ಗಂಟೆಗೆ 30-40 ಕಿ.ಮೀ ವೇಗದ ಗಾಳಿ):&lt;/strong&gt;&lt;/p&gt;&lt;p&gt;ಚಾಮರಾಜನಗರ, ಮೈಸೂರು, ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇಲ್ಲಿ ಗಾಳಿಯು ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.&lt;/p&gt;&lt;p&gt;ರಾಜ್ಯದ ಹಲವು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಧಾರಾಕಾರ ಮಳೆ ಮತ್ತು ಬಿರುಗಾಳಿ ಭಾರೀ ಅನಾಹುತಗಳನ್ನು ಸೃಷ್ಟಿಸಿದೆ. ಯಾದಗಿರಿ ಜಿಲ್ಲೆಯಲ್ಲಿ ಸಿಡಿಲು ಬಡಿದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದರೆ, ಗದಗ ಜಿಲ್ಲೆಯಲ್ಲಿ ಬೃಹತ್ ಮೊಬೈಲ್ ಟವರ್ ನೆಲಕ್ಕಪ್ಪಳಿಸಿದೆ. ಈ ಬೆನ್ನಲ್ಲೇ ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ.&lt;/p&gt;&lt;h2&gt;&lt;strong&gt;ಯಾದಗಿರಿ: ಕುರಿಗಾಹಿಗಳ ಬದುಕು ಬೀದಿಗೆ&lt;/strong&gt;&lt;/h2&gt;&lt;p&gt;ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೂದೂರು ಗ್ರಾಮದಲ್ಲಿ ಪ್ರಕೃತಿ ವಿಕೋಪಕ್ಕೆ ರೈತರು ತತ್ತರಿಸಿದ್ದಾರೆ. ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು ಮಲ್ಲಪ್ಪ, ಆಶಪ್ಪ, ಜಾಲ್ಲಪ್ಪ, ಲಕ್ಸಮಪ್ಪ ಮತ್ತು ಹನುಮಂತ ಎಂಬ ರೈತರಿಗೆ ಸೇರಿದ 50ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ತಮ್ಮ ಜೀವನಾಧಾರವಾಗಿದ್ದ ಕುರಿಗಳ ಮಾರಣಹೋಮ ಕಂಡು ಕುರಿಗಾಹಿಗಳು ಕಣ್ಣೀರು ಹಾಕುತ್ತಿದ್ದಾರೆ. ನೊಂದ ರೈತರಿಗೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸ್ಥಳೀಯ ಹೋರಾಟಗಾರರು ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಗದಗ: ಗಾಳಿ ಮಳೆಗೆ ಉರುಳಿದ ಮೊಬೈಲ್ ಟವರ್&lt;/strong&gt;&lt;/h2&gt;&lt;p&gt;ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಜಾಗೃತಿ ಸರ್ಕಲ್ ಬಳಿ ಬಿರುಗಾಳಿ ಮಳೆಯ ರಭಸಕ್ಕೆ ಏರ್&zwnj;ಟೆಲ್ ಮೊಬೈಲ್ ಟವರ್&zwnj;ವೊಂದು ಬಿಲ್ಡಿಂಗ್ ಮೇಲಿಂದ ಕೆಳಕ್ಕೆ ಬಿದ್ದಿದೆ. ಸವಣೂರು ಎಂಬುವವರಿಗೆ ಸೇರಿದ ಕಟ್ಟಡದ ಮೇಲೆ ಈ ಟವರ್ ಅಳವಡಿಸಲಾಗಿತ್ತು. ಅದೃಷ್ಟವಶಾತ್ ಟವರ್ ಬೀಳುವ ಸಮಯದಲ್ಲಿ ಜನಸಂಚಾರ ವಿರಳವಾಗಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಸ್ಥಳಕ್ಕೆ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಭವನೀಯ ಹಾನಿಗಳು:&lt;/strong&gt;&lt;/h2&gt;&lt;ul&gt; &lt;li&gt;ಈ ಹಠಾತ್ ಹವಾಮಾನ ಬದಲಾವಣೆಯಿಂದ ಕೆಲವು ಸಮಸ್ಯೆಗಳು ಎದುರಾಗಬಹುದು ಎಂದು ಇಲಾಖೆ ಎಚ್ಚರಿಸಿದೆ:&lt;/li&gt; &lt;li&gt;ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಉಂಟಾಗಬಹುದು.&lt;/li&gt; &lt;li&gt;ರಸ್ತೆಗಳಲ್ಲಿ ಸಣ್ಣಪುಟ್ಟ ಸಂಚಾರ ದಟ್ಟಣೆ ಹಾಗೂ ಮರಗಳ ಕೊಂಬೆಗಳು ಮುರಿದು ಬೀಳುವ ಸಾಧ್ಯತೆಯಿದೆ.&lt;/li&gt; &lt;li&gt;ದುರ್ಬಲವಾದ ಕಟ್ಟಡಗಳು ಅಥವಾ ಕಚ್ಚಾ ಮನೆಗಳಿಗೆ ಹಾನಿಯಾಗಬಹುದು.&lt;/li&gt; &lt;li&gt;ವಿಶೇಷವಾಗಿ ರೈತರು ಕೊಯ್ಲು ಮಾಡಿ ತೆರೆದ ಜಾಗದಲ್ಲಿಟ್ಟಿರುವ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ.&lt;/li&gt; &lt;li&gt;ಸಾರ್ವಜನಿಕರಿಗೆ ಸೂಚನೆಗಳು:&lt;/li&gt; &lt;li&gt;ಮಳೆಯ ಸಮಯದಲ್ಲಿ ಸುರಕ್ಷಿತವಾಗಿರಲು ಹವಾಮಾನ ಇಲಾಖೆಯು ಕೆಲವು ಕ್ರಮಗಳನ್ನು ಸೂಚಿಸಿದೆ:&lt;/li&gt; &lt;li&gt;ಮಳೆಯ ಸಂದರ್ಭದಲ್ಲಿ ಮನೆಯೊಳಗೆ ಇರಿ, ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ.&lt;/li&gt; &lt;li&gt;ಸಾಧ್ಯವಾದರೆ ಪ್ರಯಾಣವನ್ನು ಮುಂದೂಡಿ. ಒಂದು ವೇಳೆ ಪ್ರಯಾಣಿಸುವುದು ಅನಿವಾರ್ಯವಾದರೆ ಎಚ್ಚರಿಕೆಯಿಂದ ವಾಹನ ಚಲಾಯಿಸಿ.&lt;/li&gt; &lt;li&gt;ಗುಡುಗು ಸಿಡಿಲು ಇರುವಾಗ ಮರಗಳ ಕೆಳಗೆ ಆಶ್ರಯ ಪಡೆಯಬೇಡಿ.&lt;/li&gt; &lt;li&gt;ಮನೆಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಅನ್&zwnj;ಪ್ಲಗ್ (Unplug) ಮಾಡಿ.&lt;/li&gt; &lt;li&gt;ಜಲಮೂಲಗಳಿಂದ (ಕೆರೆ, ನದಿ) ತಕ್ಷಣ ಹೊರಬನ್ನಿ ಮತ್ತು ವಿದ್ಯುತ್ ಕಂಬಗಳಿಂದ ದೂರವಿರಿ.&lt;/li&gt; &lt;li&gt;ರೈತರು ತಮ್ಮ ಬೆಳೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿಡಿ.&lt;/li&gt; &lt;li&gt;ಮುಂದಿನ ಮೂರು ಗಂಟೆಗಳ ಕಾಲ ಈ ಜಿಲ್ಲೆಗಳ ಜನರು ಜಾಗರೂಕರಾಗಿರಬೇಕು ಎಂದು ಹವಾಮಾನ ಇಲಾಖೆಯ ಕರ್ತವ್ಯನಿರತ ಅಧಿಕಾರಿಗಳು ತಿಳಿಸಿದ್ದಾರೆ.&lt;/li&gt;&lt;/ul&gt;]]></content:encoded>
            <category>gadag</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-rain-update-yadagir-lightning-50-sheeps-death-gadag-airtel-tower-collapse-sat/articleshow-3s61bah"/>
        </item>
        <item>
            <title><![CDATA[ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರ ಕಾರಣ: ಸಚಿವ ಕೆ.ಜೆ.ಜಾರ್ಜ್ ಆಕ್ರೋಶ]]></title>
            <link>https://kannada.asianetnews.com/politics/gas-cylinder-shortage-india-kj-george-blames-central-govt-gvd/articleshow-4li8qum</link>
            <guid isPermaLink="true">https://kannada.asianetnews.com/politics/gas-cylinder-shortage-india-kj-george-blames-central-govt-gvd/articleshow-4li8qum</guid>
            <pubDate>Tue, 17 Mar 2026 22:35:12 +0530</pubDate>
            <description><![CDATA[&lt;p&gt;ಸಿಲಿಂಡರ್ ಅಭಾವದ ಬಗ್ಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವುದು ಸರಿಯಲ್ಲ. ಮುನ್ನೆಚ್ಚರಿಕೆ ವಹಿಸಿ ಸಿದ್ಧತೆ ಮಾಡಿಕೊಳ್ಳದ ಕಾರಣವೇ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx0ahssbk7ecsx5n1a1wyzt1,imgname-bgnng-1749136500523.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಮಾ.17): &lt;/strong&gt;ದೇಶದಲ್ಲಿ ಉಂಟಾಗಿರುವ ಸಿಲಿಂಡರ್ ಅಭಾವದ ಬಗ್ಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ವಹಿಸಿ ಸಿದ್ಧತೆ ಮಾಡಿಕೊಳ್ಳದ ಕಾರಣವೇ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಲಿಂಡರ್ ಕೊರತೆ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.&lt;/p&gt;&lt;p&gt;ಈ ಬಿಕ್ಕಟ್ಟನ್ನು ನಿವಾರಿಸಲು ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ ಎಂದರು. ಅಧಿವೇಶನದ ಬಳಿಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದೆ ಎಂಬ ಸಂಸದ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಜಾರ್ಜ್, ರಾಜ್ಯ ಸರ್ಕಾರದಲ್ಲಿ ಯಾವುದೇ ಬದಲಾವಣೆ ಅಥವಾ ಗೊಂದಲಗಳಿಲ್ಲ. ಬೊಮ್ಮಾಯಿ ಅವರ ಮಾತಿನಂತೆ ನಾವು ಸರ್ಕಾರ ನಡೆಸಲು ಸಾಧ್ಯವಿಲ್ಲ.&lt;/p&gt;&lt;p&gt;ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಬಿಜೆಪಿಯ ಒಳಗಿನ ಪರಿಸ್ಥಿತಿ ಏನಿದೆ ಎಂಬುದು ಅವರಿಗೇ ಚೆನ್ನಾಗಿ ತಿಳಿದಿದೆ. ನಮ್ಮಲ್ಲಿ ಯಾವುದೇ ಅಲ್ಲೋಲ ಕಲ್ಲೋಲವಿಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸಂಪೂರ್ಣವಾಗಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ. ಆ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.&lt;/p&gt;&lt;h2&gt;&lt;strong&gt;ಆಪರೇಷನ್ ಕಮಲ ಬಿಜೆಪಿಯ ಕೆಟ್ಟ ರಾಜಕಾರಣ&lt;/strong&gt;&lt;/h2&gt;&lt;p&gt;ದೇಶದ ರಾಜಕಾರಣದಲ್ಲಿ ಬಿಜೆಪಿ ಆಪರೇಷನ್ ಕಮಲ ಎಂಬ ರಾಜಕೀಯ ಪ್ರಯೋಗದ ಮೂಲಕ ಪ್ರಜಾಪ್ರಭುತ್ವವನ್ನು ಹಳಿ ತಪ್ಪಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಗಳನ್ನು ಬೀಳಿಸುವುದು, ಅಡ್ಡ ಮತದಾನಕ್ಕೆ ಪ್ರೇರೇಪಿಸುವುದು ಮತ್ತು ಶಾಸಕರಿಗೆ ಆಮಿಷವೊಡ್ಡುವ ಮೂಲಕ ಅಧಿಕಾರ ಹಿಡಿಯುವುದು ಬಿಜೆಪಿಯ ಏಕೈಕ ಗುರಿಯಾಗಿದೆ.&lt;/p&gt;&lt;p&gt;ರಾಜ್ಯಸಭಾ ಚುನಾವಣೆಯಲ್ಲಿಯೂ ಇದೇ ಮಾರ್ಗ ಅನುಸರಿಸಿದ್ದಾರೆ. ಇತ್ತೀಚೆಗೆ ಬಿಡದಿಯಲ್ಲಿ ನಮ್ಮ ಶಾಸಕರಿಗೆ ಹಣದ ಆಮಿಷವೊಡ್ಡಿದ ಪ್ರಕರಣವೇ ಇದಕ್ಕೆ ಸಾಕ್ಷಿ. ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದು ಬಿಜೆಪಿಯ ಅನೈತಿಕ ಪದ್ಧತಿಗೆ ಮತ್ತೊಂದು ಉದಾಹರಣೆ ಎಂದರು.&lt;/p&gt;]]></content:encoded>
            <category>gadag</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/gas-cylinder-shortage-india-kj-george-blames-central-govt-gvd/articleshow-4li8qum"/>
        </item>
        <item>
            <title><![CDATA[ಇಡೀ ದೇಶದ ಗಮನ ಸೆಳೆದಿದ್ದ ಲಕ್ಕುಂಡಿಯ 47 ದಿನಗಳ ಉತ್ಖನನಕ್ಕೆ ತೆರೆ; ಇಷ್ಟು ದಿನ ಸಿಕ್ಕಿದ್ದೇನು?]]></title>
            <link>https://kannada.asianetnews.com/gallery/karnataka-districts/gadag-lakkundi-excavation-which-had-captured-the-attention-of-the-entire-country-is-complete-mrq-5o5gpye</link>
            <guid isPermaLink="true">https://kannada.asianetnews.com/gallery/karnataka-districts/gadag-lakkundi-excavation-which-had-captured-the-attention-of-the-entire-country-is-complete-mrq-5o5gpye</guid>
            <pubDate>Thu, 12 Mar 2026 10:15:22 +0530</pubDate>
            <description><![CDATA[&lt;p&gt;ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ, ರಿತ್ತಿ ಕುಟುಂಬಕ್ಕೆ ವಿಜಯನಗರ ಕಾಲದ ಚಿನ್ನದ ನಿಧಿ ಸಿಕ್ಕಿದ ನಂತರ ಆರಂಭವಾದ 47 ದಿನಗಳ ಉತ್ಖನನ ಕಾರ್ಯವು ಅಂತ್ಯಗೊಂಡಿದೆ. &amp;nbsp;ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬವನ್ನು ಗೌರವಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkg5ctqhmxscxz3tptxkdqtb,imgname-lakkundi-1773290285809.jpg" type="image/jpeg" height="390" width="690"/>
            <content:encoded><![CDATA[&lt;p&gt;ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ, ರಿತ್ತಿ ಕುಟುಂಬಕ್ಕೆ ವಿಜಯನಗರ ಕಾಲದ ಚಿನ್ನದ ನಿಧಿ ಸಿಕ್ಕಿದ ನಂತರ ಆರಂಭವಾದ 47 ದಿನಗಳ ಉತ್ಖನನ ಕಾರ್ಯವು ಅಂತ್ಯಗೊಂಡಿದೆ. &amp;nbsp;ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬವನ್ನು ಗೌರವಿಸಲಾಗಿದೆ.&lt;/p&gt;&lt;img&gt;&lt;p&gt;ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿದ್ದ 47 ದಿನಗಳ ಉತ್ಖನನ ಕಾರ್ಯಕ್ಕೆ ತೆರೆ ಎಳೆಯಲಾಗಿದೆ. ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ ಜನವರಿ 16ರಿಂದ ಉತ್ಖನನ ಕಾರ್ಯ ನಡೆಸಲಾಗುತ್ತಿತ್ತು. ಇದೀಗ ಉತ್ಖನನ ಕಾರ್ಯವನ್ನು ನಿಲ್ಲಿಸಲಾಗಿದೆ.&lt;/p&gt;&lt;img&gt;&lt;p&gt;ಜನವರಿ 10ರಂದು ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬ ತಮ್ಮ ಹಳೆಮನೆಯನ್ನು ಕೆಡವಲಾಗಿತ್ತು. ಈ ವೇಳೆ 470 ಗ್ರಾಂದಷ್ಟು ತೂಕದ ಚಿನ್ನ ಸಿಕ್ಕಿತ್ತು. ಈ ಎಲ್ಲಾ ಚಿನ್ನ ವಿಜಯನಗರ ಕಾಲದ ಆಭರಣ. ಈ ಚಿನ್ನದ ನಿಧಿ ಸುಮಾರು 500ರಿಂದ 600 ವರ್ಷಗಳ ಹಿಂದಿನ ವಿಜಯನಗರ ಕಾಲದ ಅರಸರ ಅವಧಿಯ ಆಭರಣಗಳು ಇರಬಹುದು ಎಂದು ತಜ್ಞ ಡಾ. ಎಂ.ಎಸ್. ಕೃಷ್ಣಮೂರ್ತಿ ಅನುಮಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ ಸುಮಾರು 13 ಅಡಿ ಆಳದವರೆಗೂ ಗುಂಡಿ ತೆಗೆದು ಉತ್ಖನನ ನಡೆಸಲಾಗಿತ್ತು. ಉತ್ಖನನ ಸಂದರ್ಭದಲ್ಲಿ ಶಿವಲಿಂಗ, ಪಾಣಿಪೀಠ, ನಾಗರ&zwnj; ಶಿಲೆಗಳು, ಬಿಲ್ಲೆ, ಮೂಳೆ ತುಣುಕುಗಳು, ಪಚ್ಚೆ ಕಲ್ಲು, ಹವಳ, ಕವಡೆ, ಮಡಿಕೆ ಚೂರು ಸೇರಿದಂತೆ ವಿಧ ರೀತಿಯ ವಿಗ್ರಹಗಳು ಸೇರಿದಂತೆ 50ಕ್ಕೂ ಅಧಿಕ ಪ್ರಾಚ್ಯಾವಶೇಷ ಪತ್ತೆಯಾಗಿದ್ದವು.&lt;/p&gt;&lt;img&gt;&lt;p&gt;ಇಂದು ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP - Standard Operating Procedure) ಮೂಲಕ ಗುಂಡಿ ಮುಚ್ಚುವ ಕಾರ್ಯವನ್ನು ನಡೆಸಲಾಗುತ್ತಿದೆ. ಕೆಳಭಾಗದಲ್ಲಿ ತಾಡಪತ್ರೆ, ಮರಳು, ಇಟ್ಟಿಗೆ ಇಟ್ಟು ಅವುಗಳ ಮೇಲೆ ಮಣ್ಣು ಹಾಕಲಾಗುತ್ತದೆ. ನಂತರ ಜೆಸಿಬಿ ಮೂಲಕ ಗುಂಡಿಗಳನ್ನು ಮುಚ್ಚಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಲಕ್ಕುಂಡಿ ಹಳೇ ಹಂಡೆಯಲ್ಲಿ ಗೋಲ್ಡನ್ ಕವರ್ ಚಾಕ್ಲೆಟ್ ಹಾಕಿ 22 ಲಕ್ಷ ದೋಚಿದ್ದ ಮೌಲ್ವಿ ಅರೆಸ್ಟ್&lt;/strong&gt;&lt;/p&gt;&lt;img&gt;&lt;p&gt;ತಮಗೆ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಬಹುಮಾನದೊಂದಿಗೆ ನಿವೇಶನ ನೀಡಲಾಗಿತ್ತು. ಇತ್ತೀಚೆಗಷ್ಟೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿವೇಶನ ಪತ್ರ ಹಸ್ತಾಂತರಿಸಿದ್ದರು. ಗಣರಾಜ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ರಿತ್ತಿ ಕುಟುಂಬದ ಸದಸ್ಯರನ್ನು ಗೌರವಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, 17000 ವರ್ಷ ಹಿಂದಿನ ಅಮೂಲ್ಯ ಸಂಪತ್ತು ಪತ್ತೆ ಹಚ್ಚಿದ್ದ ನಾಯಿ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/gadag-lakkundi-excavation-which-had-captured-the-attention-of-the-entire-country-is-complete-mrq-5o5gpye"/>
        </item>
        <item>
            <title><![CDATA[Gadag printing industry crisis ಮಧ್ಯಪ್ರಾಚ್ಯ ಯುದ್ಧಕ್ಕೆ ಮುದ್ರಣ ಕಾಶಿ ಗದಗ ತತ್ತರ]]></title>
            <link>https://kannada.asianetnews.com/karnataka-districts/printing-kashi-gadag-in-crisis-middle-east-war-hits-raw-material-supply-rav/articleshow-7k1671u</link>
            <guid isPermaLink="true">https://kannada.asianetnews.com/karnataka-districts/printing-kashi-gadag-in-crisis-middle-east-war-hits-raw-material-supply-rav/articleshow-7k1671u</guid>
            <pubDate>Sun, 05 Apr 2026 09:15:51 +0530</pubDate>
            <description><![CDATA[ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಕರ್ನಾಟಕದ ಮುದ್ರಣ ಕಾಶಿ ಗದಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಚ್ಚಾ ವಸ್ತುಗಳ ಬೆಲೆ ಶೇ. 25ರಷ್ಟು ಹೆಚ್ಚಾಗಿದ್ದು, ಜಿಎಸ್&zwnj;ಟಿ ತೆರಿಗೆಯ ಹೊರೆಯೂ ಸೇರಿ ಮುದ್ರಣ ಸಂಸ್ಥೆಗಳು ಬಾಗಿಲು ಮುಚ್ಚುವ ಆತಂಕದಲ್ಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kndvck17h9zc75rpkwy4bg9h,imgname----------------------70--1775360166951.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಗದಗ (ಏ.5):&lt;/strong&gt; ಕರ್ನಾಟಕದ ಮುದ್ರಣ ಕಾಶಿ ಗದಗ ಮುದ್ರಣ ಉದ್ಯಮಕ್ಕೆ ಈಗ ಜಾಗತಿಕ ಯುದ್ಧದ ಭೀತಿ ಮತ್ತು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷ ಗದಗಿನ ನೂರಾರು ಮುದ್ರಣ ಸಂಸ್ಥೆಗಳ ಬದುಕನ್ನು ಬೀದಿಗೆ ತಳ್ಳುವ ಆತಂಕ ಮೂಡಿಸಿದೆ.&lt;/p&gt;&lt;p&gt;ಮಧ್ಯಪ್ರಾಚ್ಯ ದೇಶಗಳಿಂದ ಆಮದಾಗುವ ಪೆಟ್ರೋಲಿಯಂ ಉಪ ಉತ್ಪನ್ನಗಳು ಮುದ್ರಣ ಉದ್ಯಮಕ್ಕೆ ಅತ್ಯಗತ್ಯ. ಆದರೆ, ಯುದ್ಧದ ಕಾರಣದಿಂದಾಗಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಲೆಗಳು ಗಗನಕ್ಕೇರಿವೆ.&lt;/p&gt;&lt;h2&gt;ಬೆಲೆ ಏರಿಕೆ:&lt;/h2&gt;&lt;p&gt;ಪೆಟ್ರೋಲಿಯಂ ಆಧಾರಿತ ಇಂಕ್ ಮತ್ತು ಪ್ಲೇಟ್&zwnj;ಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಕಳೆದ ಕೇವಲ ಎರಡು ತಿಂಗಳ ಅವಧಿಯಲ್ಲಿ ವಿವಿಧ ಕಚ್ಚಾ ವಸ್ತುಗಳ ಬೆಲೆ ಶೇ. 10ರಿಂದ ಶೇ. 25ರಷ್ಟು ಏರಿಕೆಯಾಗಿದೆ.&lt;/p&gt;&lt;h3&gt;​ಕೃತಕ ಅಭಾವದ ಆತಂಕ:&lt;/h3&gt;&lt;p&gt;ಯುದ್ಧದ ನೆಪವನ್ನಿಟ್ಟುಕೊಂಡು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಸಂಶಯವನ್ನು ಮುದ್ರಕರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರ್ಕಾರಗಳು ಕೂಡಲೇ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮುದ್ರಣ ಕ್ಷೇತ್ರ ಸಂಪೂರ್ಣ ಬಂದ್ ಆಗುವ ಸ್ಥಿತಿ ನಿರ್ಮಾಣವಾಗಲಿದೆ.&lt;/p&gt;&lt;p&gt;ಟ್ಯಾಕ್ಸ್ ಹೊಡೆತ:&lt;/p&gt;&lt;p&gt;ಈಗಾಗಲೇ ಜಿಎಸ್&zwnj;ಟಿ ಹೊರೆಯಿಂದ ನಲುಗಿದ್ದ ಉದ್ಯಮಕ್ಕೆ ಹೊಸ ತೆರಿಗೆ ನೀತಿಗಳು ಮತ್ತಷ್ಟು ಪೆಟ್ಟು ನೀಡಿವೆ. 2024ರಿಂದ ಜಾರಿಗೆ ಬರುವಂತೆ ಮುದ್ರಣ ಕಚ್ಚಾ ವಸ್ತುಗಳ ಮೇಲೆ ಸರ್ಕಾರ ಶೇ. 18ರಷ್ಟು ತೆರಿಗೆ ವಿಧಿಸಿದೆ. ​ತೆರಿಗೆಯಿಂದಾಗಿ ತತ್ತರಿಸಿದ್ದ ಮುದ್ರಕರಿಗೆ ಈಗ ಯುದ್ಧದಿಂದ ಉಂಟಾದ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.&lt;/p&gt;&lt;p&gt;ಅಂಕಿ-ಅಂಶಗಳು:&lt;/p&gt;&lt;p&gt;ಗದಗ ಜಿಲ್ಲೆಯಲ್ಲಿ ಮುದ್ರಣ ಉದ್ಯಮವನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಮಿಕರಿದ್ದಾರೆ. 30ಕ್ಕೂ ಹೆಚ್ಚು ಪ್ರಕಾಶಕರು, 100ಕ್ಕೂ ಹೆಚ್ಚು ಮುದ್ರಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಖ್ಯವಾಗಿ ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಬೇಕಾಗುವ ಕ್ಯಾಲೆಂಡರ್, ಪಂಚಾಂಗ, ಪಠ್ಯಪುಸ್ತಕ, ಧಾರ್ಮಿಕ ಗ್ರಂಥಗಳು, ಸಾಹಿತ್ಯಿಕ ಪುಸ್ತಕಗಳು ಪ್ರಮುಖವಾಗಿವೆ. ಇದರೊಟ್ಟಿಗೆ ಮಕ್ಕಳ ಆಟಿಕೆ ಚಾರ್ಟ್&zwnj;ಗಳು. ಅಂಕಲಿಪಿ, ಕಥೆ, ಕವನ ಸಂಕಲನಗಳ ಮುದ್ರಣದಲ್ಲಿ ಗದಗ ಜಿಲ್ಲೆ ಮೊದಲ ಸ್ಥಾನದಲ್ಲಿದೆ.&lt;/p&gt;&lt;p&gt;ರಾಜ್ಯಾದ್ಯಂತ ಪಂಚಾಂಗ ಮತ್ತು ಕ್ಯಾಲೆಂಡರ್&zwnj;ಗಳಿಗೆ ಗದಗ ಹೆಸರುವಾಸಿ. ಆದರೆ, ಪೇಪರ್ ಮತ್ತು ಇಂಕ್ ಬೆಲೆ ಏರಿಕೆಯಿಂದಾಗಿ ಮುದ್ರಣ ವೆಚ್ಚ ದುಪ್ಪಟ್ಟಾಗಿದೆ. ಮುಂಚಿತವಾಗಿ ಆರ್ಡರ್ ಪಡೆದ ಮುದ್ರಕರಿಗೆ ಈಗಿನ ಬೆಲೆಯಲ್ಲಿ ಮುದ್ರಣ ಮಾಡಿಕೊಡುವುದು ನಷ್ಟದ ಕೆಲಸವಾಗಿ ಪರಿಣಮಿಸಿದೆ.&lt;/p&gt;&lt;p&gt;&lt;strong&gt;ಚೇತನ ಖಟವಟೆ. ಎನ್&zwnj;.ಆರ್. ಪ್ರಿಂಟರ್ಸ್ ಮಾಲೀಕ, ಗದಗ&lt;/strong&gt;&lt;/p&gt;&lt;p&gt;ಸರ್ಕಾರ ತಕ್ಷಣವೇ ಮುದ್ರಕರ ಅಳಲನ್ನು ಕೇಳಬೇಕು. ಕಚ್ಚಾ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡಿದರೆ ಮಾತ್ರ ಈ ಉದ್ಯಮ ಉಳಿಯಲು ಸಾಧ್ಯ. ಇಲ್ಲದಿದ್ದರೆ ಮುದ್ರಣ ಕಾಶಿಯ ಈ ಪರಂಪರೆ ಇತಿಹಾಸ ಪುಟ ಸೇರಲಿದೆ.&lt;/p&gt;&lt;p&gt;&lt;strong&gt;ವಿವಿಧ ಸಂಸ್ಥೆಯ ಪ್ರಕಾಶಕರು&lt;/strong&gt;&lt;/p&gt;&lt;p&gt;ಬೆಲೆ ಏರಿಕೆ ವಿವರ&lt;/p&gt;&lt;p&gt;ಇಂಕ್&lt;/p&gt;&lt;ul&gt; &lt;li&gt;ಹಿಂದಿನ ರೇಟ್ : ಕೆಜಿಗೆ ₹440&lt;/li&gt; &lt;li&gt;ಇಂದಿನ ರೇಟ್ : ಕೆಜಿಗೆ ₹470&lt;/li&gt; &lt;li&gt;ಹೆಚ್ಚಳ : 9/10 %&lt;/li&gt; &lt;li&gt;ಅಲ್ಯೂಮಿನಿಯಂ ಪ್ಲೇಟ್&lt;/li&gt;&lt;/ul&gt;&lt;p&gt;ಹಿಂದಿನ ರೇಟ್ : (ಪ್ಲೇಟ್&zwnj;ಗೆ ) ₹170&lt;/p&gt;&lt;p&gt;ಇಂದಿನ ರೇಟ್ : ₹195&lt;/p&gt;&lt;p&gt;ಹೆಚ್ಚಳ: 15 %&lt;/p&gt;&lt;p&gt;ಲ್ಯಾಮಿನೇಷನ್ ಫಿಲಂ&lt;/p&gt;&lt;p&gt;ಹಿಂದಿನ ರೇಟ್ : ಕೆಜಿಗೆ ₹190&lt;/p&gt;&lt;p&gt;ಇಂದಿನ ರೇಟ್ : ಕೆಜಿಗೆ ₹240&lt;/p&gt;&lt;p&gt;ಹೆಚ್ಚಳ : 25 %&lt;/p&gt;&lt;p&gt;ಲ್ಯಾಮಿನೇಷನ್ ಅಂಟು&lt;/p&gt;&lt;p&gt;ಹಿಂದಿನ ರೇಟ್ : ಕೆಜಿಗೆ ₹130&lt;/p&gt;&lt;p&gt;ಇಂದಿನ ರೇಟ್ : ಕೆಜಿಗೆ ₹150&lt;/p&gt;&lt;p&gt;ಹೆಚ್ಚಳ: 15%&lt;/p&gt;&lt;p&gt;ಆರ್ಟ್ ಪೇಪರ್ (ಪ್ರಿಂಟ್&zwnj;ಗೆ ಬಳಸುವ)&lt;/p&gt;&lt;p&gt;ಹಿಂದಿನ ರೇಟ್ : ಕೆಜಿಗೆ ₹72&lt;/p&gt;&lt;p&gt;ಇಂದಿನ ರೇಟ್ : ಕೆಜಿಗೆ ₹80&lt;/p&gt;&lt;p&gt;ಹೆಚ್ಚಳ: 10%&lt;/p&gt;&lt;p&gt;ಮಷಿನ್ ತೊಳೆಯುವ ಕೆಮಿಕಲ್&lt;/p&gt;&lt;p&gt;ಹಿಂದಿ&zwnj;ನ ರೇಟ್ : ಲೀಟರ್&zwnj;ಗೆ ₹160&lt;/p&gt;&lt;p&gt;ಇಂದಿನ ರೇಟ್ : ಲೀಟರ್&zwnj;ಗೆ 200&lt;/p&gt;&lt;p&gt;ಹೆಚ್ಚಳ: 25%&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/printing-kashi-gadag-in-crisis-middle-east-war-hits-raw-material-supply-rav/articleshow-7k1671u"/>
        </item>
        <item>
            <title><![CDATA[ಅಪ್ಪನಿಗೆ ಅನಾರೋಗ್ಯ ಮನೆಯಲ್ಲಿ ಬಡತನ SSLC ಪರೀಕ್ಷೆ ಬಿಟ್ಟು ಕೂಲಿಗೆ ಹೋದ ಬಾಲಕಿ: ಆಮೇಲಾಗಿದ್ದೇನು?]]></title>
            <link>https://kannada.asianetnews.com/state/gadag-student-skipped-sslc-exam-and-went-to-work-as-labourer-what-happened-next/articleshow-bxdgrtm</link>
            <guid isPermaLink="true">https://kannada.asianetnews.com/state/gadag-student-skipped-sslc-exam-and-went-to-work-as-labourer-what-happened-next/articleshow-bxdgrtm</guid>
            <pubDate>Mon, 23 Mar 2026 23:53:00 +0530</pubDate>
            <description><![CDATA[&lt;p&gt;ಗದಗ ಜಿಲ್ಲೆಯಲ್ಲಿ, ಬಡತನ ಮತ್ತು ತಂದೆಯ ಅನಾರೋಗ್ಯದ ಕಾರಣ: ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದು ಮತ್ತೆ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆ ಬರೆಸಿದಂತಹ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರು ಗ್ರಾಮದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmdyq3xs4ydcv9pty6bme5vp,imgname-gadag-student-skipped-sslc-exam-1774289915833.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪರೀಕ್ಷೆ ಬಿಟ್ಟು ಕೂಲಿಗೆ ಹೋದ ವಿದ್ಯಾರ್ಥಿನಿ&lt;/strong&gt;&lt;/h2&gt;&lt;p&gt;ಗದಗ: ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದು ಮತ್ತೆ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆ ಬರೆಸಿದಂತಹ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರು ಗ್ರಾಮದಲ್ಲಿ ನಡೆದಿದೆ. ಬಾಲಕಿಯ ತಂದೆ ಅನಾರೋಗ್ಯ ಪೀಡಿತರಾಗಿದ್ದರು. ಮನೆಯಲ್ಲಿ ಬಡತನವೂ ತುಂಬಿ ತುಳುಕಾಡುತ್ತಿತ್ತು. ಈ ಹಿನ್ನೆಲೆ ಬಾಲಕಿ ಪರೀಕ್ಷೆ ತೊರೆದು ಕೂಲಿ ಕೆಲಸಕ್ಕೆಂದು ದ್ರಾಕ್ಷಿ ತೋಟದಲ್ಲಿ ಕೆಲಸಕ್ಕೆ ಹೋಗಿದ್ದಳು. ಆದರೆ ಈ ವಿಚಾರ ತಿಳಿದ ಸರ್ಕಾರಿ ಶಿಕ್ಷಣ ಇಲಾಖೆ ಅಧಿಕಾರಿಗಳು ಆಕೆಯನ್ನು ವಾಪಸ್ ಕರೆಸಿ ಆಕೆಗೆ ಮರು ಪರೀಕ್ಷೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಎಸ್&zwnj;ಎಸ್&zwnj;ಎಲ್&zwnj;ಸಿ ವಿಜ್ಞಾನ ಪರೀಕ್ಷೆಯನ್ನು ಬಿಟ್ಟು ಬಾಲಕಿ ಕೂಲಿ ಕೆಲಸಕ್ಕೆ&lt;/strong&gt;&lt;/h3&gt;&lt;p&gt;ಎಸ್&zwnj;ಎಸ್&zwnj;ಎಲ್&zwnj;ಸಿ ವಿಜ್ಞಾನ ಪರೀಕ್ಷೆಯನ್ನು ಬಿಟ್ಟು ಬಾಲಕಿ ಕೂಲಿ ಕೆಲಸಕ್ಕೆ ಹೋಗಿದ್ದಳು. ಬಾಲಕಿಯನ್ನುಪಲ್ಲವಿ ಹಳ್ಳಿಕೇರಿ ಎಂದು ಗುರುತಿಸಲಾಗಿದ್ದು, ಈಕೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ವಿದ್ಯಾರ್ಥಿನಿಯಾಗಿದ್ದು, ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದಳು.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;ಜಮೀನಿನಲ್ಲಿ ನೀರು ಕುಡಿದ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಗಲಾಟೆ: ಕಲ್ಲು ತೂರಾಟ..&lt;/p&gt;&lt;p&gt;ಆದರೆ ಮನೆಯಲ್ಲಿದ್ದ ದುಸ್ಥಿತಿ ನೆನೆದು ಆಕೆ ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದಳು. ಈ ವಿಚಾರ ಕ್ಷೇತ್ರ ಶಿಕ್ಷಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರ ಗಮನಕ್ಕೆ ಬರುತ್ತಿದ್ದಂತೆ ಹುಡುಗಿಯನ್ನು ವಾಪಸ್ ಕರೆಸಿದ ಅವರು ಮುಂಡರಗಿ ಪಟ್ಟಣದ ವಿಜಿ ಲಿಂಬಿಕಾಯಿ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಆಕೆಗೆ ಪರೀಕ್ಷೆ ಬರೆಸಿದ್ದಾರೆ. ವಿದ್ಯಾರ್ಥಿನಿ ಮನವೊಲಿಸಿ ವಿಜ್ಞಾನ ಪರೀಕ್ಷೆ ಬರೆಸಿದ ಕ್ಷೇತ್ರ ಶಿಕ್ಷಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರ ಕಾರ್ಯಕ್ಕೆ ಈಗ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತುತ್ತು ಅನ್ನಕ್ಕಾಗಿ ಸುರಿಯುವ ಮಳೆ ಲೆಕ್ಕಿಸದೇ ಚಳಿಯಲ್ಲೇ ನಡುಗುತ್ತಾ ಸಾಲುಗಟ್ಟಿ ನಿಂತ ಪುಟ್ಟ ಪುಟ್ಟ ಮಕ್ಕಳು&lt;/strong&gt;&lt;/p&gt;]]></content:encoded>
            <category>gadag</category>
            <dc:creator>Anusha Kb</dc:creator>
            <atom:link href="https://kannada.asianetnews.com/state/gadag-student-skipped-sslc-exam-and-went-to-work-as-labourer-what-happened-next/articleshow-bxdgrtm"/>
        </item>
        <item>
            <title><![CDATA[ರಾಜ್ಯದ 12 ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್': ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಸಾಧ್ಯತೆ!]]></title>
            <link>https://kannada.asianetnews.com/karnataka-districts/karnataka-weather-update-yellow-alert-12-districts-hailstorm-warning-imd-san/articleshow-eoax3kv</link>
            <guid isPermaLink="true">https://kannada.asianetnews.com/karnataka-districts/karnataka-weather-update-yellow-alert-12-districts-hailstorm-warning-imd-san/articleshow-eoax3kv</guid>
            <pubDate>Thu, 16 Apr 2026 19:23:32 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು (IMD) ಕರ್ನಾಟಕದ 12 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ 'ಎಲ್ಲೋ ಅಲರ್ಟ್' ಘೋಷಿಸಿದೆ. ಈ ಅವಧಿಯಲ್ಲಿ ಗುಡುಗು, ಮಿಂಚು, ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knds8w34zxderfy8e77w0egc,imgname-delhi-ncr-weather-alert-rain-hailstorm-thunderstorm-western-disturbance-imd-warning-wind-speed-storm-india-4-1775357948004.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.16): &lt;/strong&gt;ರಾಜ್ಯದ ಹಲವೆಡೆ ಮಳೆಯ ಅಬ್ಬರ ಜೋರಾಗಲಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಮೂರು ಗಂಟೆಗಳ ಕಾಲ 12 ಜಿಲ್ಲೆಗಳಲ್ಲಿ 'ಎಲ್ಲೋ ಅಲರ್ಟ್' ಘೋಷಿಸಿದೆ. ವಾತಾವರಣದಲ್ಲಿನ ದಿಢೀರ್ ಬದಲಾವಣೆಯಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ಅಲರ್ಟ್ ಘೋಷಿಸಲಾಗಿದೆ?&lt;/strong&gt;&lt;/h2&gt;&lt;p&gt;ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದಕ್ಷಿಣ ಕನ್ನಡ, ಬಾಗಲಕೋಟೆ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಈ ಎಚ್ಚರಿಕೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ಆಲಿಕಲ್ಲು ಮಳೆಯ ಮುನ್ನೆಚ್ಚರಿಕೆ&lt;/strong&gt;&lt;/h2&gt;&lt;p&gt;ಕೇವಲ ಸಾಧಾರಣ ಮಳೆಯಲ್ಲದೆ, ಗಾಳಿಯ ವೇಗ ಹೆಚ್ಚಿರಲಿದ್ದು ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆ ಸಂಭವಿಸುವ ಸಾಧ್ಯತೆಯಿದೆ. ಇದರಿಂದ ಕೃಷಿ ಭೂಮಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ. ಗುಡುಗು ಸಹಿತ ಮಳೆ ಬರುವಾಗ ಸಾರ್ವಜನಿಕರು ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಲಾಗಿದೆ. ಬಿರುಗಾಳಿಯ ತೀವ್ರತೆಗೆ ಹಳೆಯ ಕಟ್ಟಡಗಳು ಹಾಗೂ ದುರ್ಬಲ ಮರಗಳು ಉರುಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಲು ಜಿಲ್ಲಾಡಳಿತಗಳು ಸೂಚಿಸಿವೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>gadag</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-weather-update-yellow-alert-12-districts-hailstorm-warning-imd-san/articleshow-eoax3kv"/>
        </item>
        <item>
            <title><![CDATA[ಉನ್ನತ ಶಿಕ್ಷಣಕ್ಕಾಗಿ ಗಜೇಂದ್ರಗಡ, ರೋಣ ತಾಲೂಕಿನ ವಿದ್ಯಾರ್ಥಿಗಳ ಪರದಾಟ; ಪೋಷಕರಿಗೆ ಆರ್ಥಿಕ ಹೊರೆ]]></title>
            <link>https://kannada.asianetnews.com/karnataka-districts/gadag-students-from-gajendragada-and-rona-taluks-march-for-higher-education-mrq/articleshow-fczcnoa</link>
            <guid isPermaLink="true">https://kannada.asianetnews.com/karnataka-districts/gadag-students-from-gajendragada-and-rona-taluks-march-for-higher-education-mrq/articleshow-fczcnoa</guid>
            <pubDate>Mon, 27 Apr 2026 07:59:04 +0530</pubDate>
            <description><![CDATA[&lt;p&gt;ಗಜೇಂದ್ರಗಡ ತಾಲೂಕಿನ ವಿದ್ಯಾರ್ಥಿಗಳು SSLCಯಲ್ಲಿ ಉತ್ತಮ ಅಂಕ ಗಳಿಸುತ್ತಿದ್ದರೂ, ಉನ್ನತ ವ್ಯಾಸಂಗಕ್ಕೆ ಸ್ಥಳೀಯವಾಗಿ ಉತ್ತಮ ಕಾಲೇಜುಗಳಿಲ್ಲ. ಈ ಕಾರಣದಿಂದ ಪ್ರವೀಣಕುಮಾರ ಸೊಬಗಿನರಂತಹ ಪ್ರತಿಭೆಗಳು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದು ಪಾಲಕರಿಗೆ ಆರ್ಥಿಕ ಹೊರೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq6c6ta1a4bxaqa1nry52wbq,imgname-students--1777256851777.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಸ್.ಎಂ. ಸೈಯದ್&lt;/strong&gt;&lt;/p&gt;&lt;p&gt;&lt;strong&gt;ಗದಗ : &lt;/strong&gt;ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಛಾಪು ಮೂಡಿಸಿದ ತಾಲೂಕಿನ ಸೂಡಿ ಗ್ರಾಮದ ಪ್ರವೀಣಕುಮಾರ ಸೊಬಗಿನ ಸಾಧನೆಗೆ ಶಹಭಾಶ್&zwnj;ಗಿರಿ ಜತೆಗೆ ಜಿಲ್ಲೆ ಸೇರಿ ನೆರೆಯ ಜಿಲ್ಲೆಗಳಿಂದ ಉಚಿತ ಪ್ರವೇಶದ ಆಹ್ವಾನಗಳು ಬರುತ್ತಿವೆ. ಆದರೆ, ಉತ್ತಮ ಅಂಕ ಪಡೆದರೂ ಗಜೇಂದ್ರಗಡ ಹಾಗೂ ರೋಣ ತಾಲೂಕಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅನ್ಯ ಜಿಲ್ಲೆಗಳಿಗೆ ತೆರಳುವ ದುಸ್ಥಿತಿಯಿದೆ.&lt;/p&gt;&lt;p&gt;ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿಯಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಫಲಿತಾಂಶವನ್ನು ತಾಲೂಕು ದಾಖಲಿಸುತ್ತಿದೆ. ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕಿನ ಇಟಗಿ ಗ್ರಾಮದ ಪಿಎಂಶ್ರೀ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಪ್ರವೀಣಕುಮಾರ ಸೊಬಗಿನ 625ಕ್ಕೆ 622 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿಭೆಗಳ ಸಾಲು&lt;/strong&gt;&lt;/h2&gt;&lt;p&gt;2021ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗಜೇಂದ್ರಗಡದ ಕಿರಣ ತಾಳಿಕೋಟಿ 625ಕ್ಕೆ 625 ಅಂಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಗೋಗೇರಿ ಗ್ರಾಮದ ಸರ್ಕಾರಿ ಶಾಲೆಯ ಪ್ರತಿಭಾ ಮುತ್ತಪ್ಪ ಸೊಬರದ ವಿದ್ಯಾರ್ಥಿನಿ 2022ನೇ ಸಾಲಿನಲ್ಲಿ 625ಕ್ಕೆ 622 ಅಂಕ ಗಳಿಸಿದ್ದರು. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕಿರಣ ತಾಳಿಕೋಟಿ ಬೆಳಗಾವಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರೆ, ಪ್ರತಿಭಾ ಮುತ್ತಪ್ಪ ಸೊಬರದ ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಟ್ಟಿ ಹೆಚ್ಚಾಗುತ್ತದೆ.&lt;/p&gt;&lt;p&gt;ಆದರೆ ಜಿಲ್ಲೆ ಹಾಗೂ ರಾಜ್ಯವೇ ತಿರುಗಿ ತಾಲೂಕಿನತ್ತ ನೋಡುವ ಫಲಿತಾಂಶ ಬಂದರೂ ಉನ್ನತ ವ್ಯಾಸಂಗದ ಕನಸನ್ನು ಈಡೇರಿಸಿಕೊಳ್ಳಲು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಅನೇಕ ವಿದ್ಯಾರ್ಥಿಗಳ ಕನಸನ್ನು ಕಮರುವಂತೆ ಮಾಡುತ್ತಿದೆ.&lt;/p&gt;&lt;h3&gt;&lt;strong&gt;ಆರ್ಥಿಕ ಸಂಕಷ್ಟ&lt;/strong&gt;&lt;/h3&gt;&lt;p&gt;ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಗನಿಗೆ ಉಚಿತ ಪ್ರವೇಶ ನೀಡಲು ಅನೇಕ ಕಾಲೇಜುಗಳು ಸಂಪರ್ಕಿಸುತ್ತಿವೆ. ಆದರೆ ಮುಂದಿನ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಂಕಷ್ಟ ಚಿಂತೆಗೆ ದೂಡಿದೆ ಎಂದು ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದ ವಿದ್ಯಾರ್ಥಿಯ ತಾಯಿ ಲಲಿತಾ ಈರಪ್ಪ ಸೊಬಗಿನ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಜೇಂದ್ರಗಡದಲ್ಲಿ ಯುರೋಪ್, ಮಧ್ಯ ಏಷ್ಯಾದ ವಲಸೆ ಹಕ್ಕಿ 'ಸಣ್ಣ ಕೊಂಬಿನ ಗೂಬೆ' ಗೋಚರ!&lt;/strong&gt;&lt;/p&gt;&lt;h3&gt;&lt;strong&gt;ಅನುಕೂಲ&lt;/strong&gt;&lt;/h3&gt;&lt;p&gt;2022ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 622 ಅಂಕ ಪಡೆದ ನನ್ನ ಮಗಳು ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ತಾಲೂಕಿನಲ್ಲಿಯೇ ಉನ್ನತ ವ್ಯಾಸಂಗ ಕೇಂದ್ರಗಳಿದ್ದರೆ ಮತ್ತಷ್ಟು ಪಾಲಕರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ಗೋಗೇರಿ ಗ್ರಾಮದ ಮುತ್ತಪ್ಪ ಸೊಬರದ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಜೇಂದ್ರಗಡದಲ್ಲಿ 'ಥರ್ಡ್ ಐ' ತಪ್ಪಿಸಲು ವಾಹನ ಸವಾರರ ವಾಮಮಾರ್ಗ! ಸಫಲವಾಗದ ಸುಗಮ ಸಂಚಾರ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-students-from-gajendragada-and-rona-taluks-march-for-higher-education-mrq/articleshow-fczcnoa"/>
        </item>
        <item>
            <title><![CDATA[NWKRTC: ಹುಬ್ಬಳ್ಳಿ-ಗದಗ ನಡುವೆ ತಡೆ ರಹಿತ ರಾಜಹಂಸ ಬಸ್ ಸಂಚಾರ; ವೇಳಾ ಪಟ್ಟಿ ಹೀಗಿದೆ]]></title>
            <link>https://kannada.asianetnews.com/karnataka-districts/non-stop-rajahamsa-bus-service-between-hubballi-and-gadag-nwkrtc-service-mrq/articleshow-gi8p3n6</link>
            <guid isPermaLink="true">https://kannada.asianetnews.com/karnataka-districts/non-stop-rajahamsa-bus-service-between-hubballi-and-gadag-nwkrtc-service-mrq/articleshow-gi8p3n6</guid>
            <pubDate>Mon, 13 Apr 2026 17:01:53 +0530</pubDate>
            <description><![CDATA[&lt;p&gt;ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ ಮತ್ತು ಗದಗ ನಡುವೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ತಡೆ ರಹಿತ ರಾಜಹಂಸ ಬಸ್ ಸಂಚಾರವನ್ನು ಆರಂಭಿಸಿದೆ. ಈ ಹೊಸ ಸೇವೆಯು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp39d0s11arefqj2bysmzs9r,imgname-hubblalli-gadag-1776079504161.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ: ವಿವಿಧ ಕೆಲಸ ಕಾರ್ಯಗಳಿಗಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ಗದಗ ನಡುವೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ-ಗದಗ ನಡುವೆ ತಡೆ ರಹಿತ ರಾಜಹಂಸ ಬಸ್&zwnj; ಸಂಚಾರ ಆರಂಭಿಸಲಾಗಿದೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿರುವ ಸಂಸ್ಥೆ&lt;/strong&gt;&lt;/h2&gt;&lt;p&gt;ವಾಣಿಜ್ಯ, ಉದ್ಯೋಗ, ವಿದ್ಯಾಭ್ಯಾಸ ಮತ್ತಿತರ ಕೆಲಸ ಕಾರ್ಯಗಳಿಗಾಗಿ ಪ್ರತಿ ದಿನ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ಗದಗ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡುತ್ತಾರೆ. ಅವರಿಗೆ ಅನುಕೂಲವಾಗುವಂತೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳಿ-ಗದಗ ನಡುವೆ ಪ್ರಾಯೋಗಿಕವಾಗಿ ತಡೆ ರಹಿತ ರಾಜಹಂಸ ಬಸ್&zwnj;ಗಳ ಸಂಚಾರವನ್ನು ಆರಂಭಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಏರಿಕೆ ಇಲ್ಲ: ಸಚಿವ ಡಾ.ಎಂ.ಸಿ.ಸುಧಾಕರ್ ಅಧ್ಯಕ್ಷತೆ ಸಭೆಯಲ್ಲಿ ತೀರ್ಮಾನ&lt;/strong&gt;&lt;/p&gt;&lt;h3&gt;&lt;strong&gt;ವೇಳಾ ಪಟ್ಟಿ&lt;/strong&gt;&lt;/h3&gt;&lt;p&gt;ಹುಬ್ಬಳ್ಳಿಯಿಂದ ಗದಗಗೆ ಬೆಳಗ್ಗೆ 8, 8-30, 9 ಮಧ್ಯಾಹ್ನ 12, 12-30, 1 ಸಂಜೆ 4, 4-30 ಹಾಗೂ 5. ಗದಗದಿಂದ ಹುಬ್ಬಳ್ಳಿಗೆ ಬೆಳಗ್ಗೆ 10, 10-30, 11 ಮಧ್ಯಾಹ್ನ 2, 2-30, 3 ಸಂಜೆ 5-30, 6 ಹಾಗೂ 6-30. ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ ₹100 ನಿಗದಿಪಡಿಸಲಾಗಿದೆ. ಈ ಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಂಪುಟ ಪುನಾರಚನೆ ಮಾಡೋದು ಹೈಕಮಾಂಡ್&zwnj;ಗೆ ಬಿಟ್ಟಿದ್ದು: ಸಿಎಂ ಸಿದ್ದರಾಮಯ್ಯ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ದೂದಿಹಳ್ಳಿ ಗ್ರಾಮದ ಬಾಳೆ ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ ಪುರಾತನ ಕಾಲದ ನಂದಿ ಮೂರ್ತಿ ಪತ್ತೆಯಾಗಿದೆ. ಮೂರ್ತಿ 3 ಅಡಿ ಎತ್ತರವಿದೆ. ಮೂರ್ತಿ ಸಿಗುತ್ತಿದ್ದಂತೆ ಗ್ರಾಮಸ್ಥರು ಶುಚಿಗೊಳಿಸಿದ್ದಾರೆ. ನಂತರ ಮೂರ್ತಿಗೆ ಗ್ರಾಮದ ಜನರು ಪೂಜೆ ಸಲ್ಲಿಸಿದ್ದಾರೆ.#Haveri #Lake #NandiIdol https://t.co/1wWrifi7TJ&lt;/p&gt;&lt;p&gt;&mdash; Asianet Suvarna News (@AsianetNewsSN) April 13, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/non-stop-rajahamsa-bus-service-between-hubballi-and-gadag-nwkrtc-service-mrq/articleshow-gi8p3n6"/>
        </item>
        <item>
            <title><![CDATA[ರಾಜ್ಯದಲ್ಲಿ ಬೇಸಿಗೆ ಮಳೆ ಅವಾಂತರ: ಹೊತ್ತಿ ಉರಿದ ತೆಂಗಿನ ಮರ, ವ್ಯಕ್ತಿ ಸಿಡಿಲಿಗೆ ಬಲಿ, ಆಲಿಕಲ್ಲು ಮಳೆಗೆ ಭಾರಿ ಬೆಳೆ ಹಾನಿ]]></title>
            <link>https://kannada.asianetnews.com/gallery/state/summer-rains-wreak-havoc-in-the-state-raichur-bidar-chamarajanagar-rain-damage-kl5c680</link>
            <guid isPermaLink="true">https://kannada.asianetnews.com/gallery/state/summer-rains-wreak-havoc-in-the-state-raichur-bidar-chamarajanagar-rain-damage-kl5c680</guid>
            <pubDate>Wed, 18 Mar 2026 10:23:18 +0530</pubDate>
            <description><![CDATA[&lt;p&gt;ಕರ್ನಾಟಕದ &amp;nbsp;ಹಲವೆಡೆ ಗುಡುಗು, ಸಿಡಿಲು ಸಹಿತ ಸುರಿದ ಭಾರೀ ಮಳೆಯು ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಗದಗದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟರೆ, ರಾಯಚೂರಿನಲ್ಲಿ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಚಾಮರಾಜನಗರದಲ್ಲಿ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkzh3db8vzk9hdyt39nf4dwa,imgname-coconut-tree-fire-after-lightning-strike-1773805876584.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ &amp;nbsp;ಹಲವೆಡೆ ಗುಡುಗು, ಸಿಡಿಲು ಸಹಿತ ಸುರಿದ ಭಾರೀ ಮಳೆಯು ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಗದಗದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟರೆ, ರಾಯಚೂರಿನಲ್ಲಿ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಚಾಮರಾಜನಗರದಲ್ಲಿ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.&lt;/p&gt;&lt;img&gt;&lt;p&gt;ರಾಯಚೂರು: ನಿನ್ನೆ ಗುಡುಗು ಮಿಂಚು ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆಗೆ ರಾಜ್ಯದ ಹಲವು ಕಡೆಗಳಲ್ಲಿ ಕೆಲವೊಂದು ಅನಾಹುತಗಳು ಸಂಭವಿಸಿದೆ. ರಾಯಚೂರು ಜಿಲ್ಲೆ ಅರಕೇರಾ ತಾ. ಹಾಳಜಾಡಲದಿನ್ನಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ರೈತ ಶರೀಫ್ ಸಾಬ್ ಎಂಬುವರಿಗೆ ಸೇರಿದ ತೆಂಗಿನ ಮರ ಇದಾಗಿದೆ. ಸಿಡಿಲು ಬಡಿದ ಪರಿಣಾಮ ತೆಂಗಿನಮರ ಸಂಪೂರ್ಣ ಸುಟ್ಟು ಹೋಗಿದ್ದು, ಮರ ಹೊತ್ತಿ ಉರಿಯುತ್ತಿರುವ ದೃಶ್ಯ ಈಗ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಒಡೆದ ತುಂಗಭದ್ರಾ ಎಡದಂಡೆ ಕಾಲುವೆ: ಅಪಾರ ಪ್ರಮಾಣ ನೀರು ಪೋಲು: ರೈತರ ಜಮೀನಿಗೆ ನುಗ್ಗಿದ ನೀರು&lt;/strong&gt;&lt;/p&gt;&lt;img&gt;&lt;p&gt;ಚಾಮರಾಜನಗರ: ನಿನ್ನೆ ಸುರಿದ ಆಲಿಕಲ್ಲು ಮಳೆ ಚಾಮರಾಜನಗರದಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದು, ಬೆಳೆದ ಬೆಳೆ ಕೈಗೆ ಸಿಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದ್ದು, ಮೆಣಸಿನಕಾಯಿ,ಟೊಮ್ಯಾಟೊ, ಕಲ್ಲಂಗಡಿ, ಬಾಳೆ ಸೇರಿ ಹಲವು ಬೆಳೆಗೆ ಹಾನಿಯಾಗಿದೆ. ಚಾಮರಾಜನಗರ ಗ್ರಾಮಾಂತರ ಪ್ರದೇಶದಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ,ಕಾಡಳ್ಳಿ,ಸಂತೇಮರಹಳ್ಳಿ, ಬಸವಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೌಟುಂಬಿಕ ಕಲಹ ಎರಡು ಮಕ್ಕಳಾದ ಬಳಿಕ ಸನ್ಯಾಸಿಯಾದ ಪತಿಗೆ ಬೀದಿಯಲ್ಲೇ ಥಳಿಸಿದ ಮಹಿಳೆ: ವೀಡಿಯೋ&lt;/strong&gt;&lt;/p&gt;&lt;img&gt;&lt;p&gt;ಚಾಮರಾಜನಗರ ಜಿಲ್ಲೆಯ ನಂಜೇದೇವನಪುರ ಹಾಗು ಜಿಲ್ಲೆಯ ಗಡಿಭಾಗದ ತಾಳವಾಡಿಯಲ್ಲಿ ಕಂಡೂ ಕೇಳರಿಯದ ರೀತಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ಈ ಗ್ರಾಮಗಳ ಬೀದಿಬೀದಿಗಳಲ್ಲಿ ಹಾಗು ಜಮೀನು, ತೋಟಗಳಲ್ಲಿ ಆಲಿಕಲ್ಲು ರಾಶಿರಾಶಿಯಾಗಿ ಬಿದ್ದಿದ್ದು ಗ್ರಾಮಸ್ಥರು ಆಶ್ಚರ್ಯ ಚಿಕಿತರಾಗಿದ್ದಾರೆ..&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;ರಾಜ್ಯದಲ್ಲಿ ಬೇಸಿಗೆ ಮಳೆಗೆ ಮತ್ತೊಂದು ಬಲಿ: ಮನೆ ಗೋಡೆ ಕುಸಿದು ಪತ್ನಿ ಸಾವು, ಪತಿ ಜಸ್ಟ್ ಮಿಸ್&lt;/p&gt;&lt;img&gt;&lt;p&gt;ಬೀದರ್: ಗಡಿ ಜಿಲ್ಲೆ ಬೀದರ್&zwnj;ನಲ್ಲಿಯೂ ಆಕಾಲಿಕ ಮಳೆಗೆ ಜನ ಹೈರಾಣಾಗಿದ್ದಾರೆ.ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸತತ ಎರಡು ಗಂಟೆ ಕಾಲ ಆಲಿಕಲ್ಲು ಮಳೆ ಸುರಿದಿದೆ. ಕಳೆದ ಮೂರು ದಿನಗಳಿಂದ ಇಲ್ಲಿ ರಾತ್ರಿ ನಿರಂತರ ಮಳೆಯಾಗಿದೆ.ಬೀದರ್ ಜಿಲ್ಲೆಯ ಹುಮನಾಬಾದ್&zwnj;, ಔರಾದ್, ಬಸವಕಲ್ಯಾಣ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಚಿಕ್ಕಮಗಳೂರು : 50 ಅಡಿ ಆಳದ ಕಂದಕಕ್ಕೆ ಬಿದ್ದ &zwnj;ಕಾರು: ಅನುಮಾನ ಹುಟ್ಟಿಸಿದ ಅಪಘಾತ ಪ್ರಕರಣ&lt;/p&gt;&lt;img&gt;&lt;p&gt;ಗದಗ: ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ನಿಂಗಪ್ಪ ಅಮಾತ್ಯ (58) ಮೃತಪಟ್ಟಿದ್ದಾರೆ. ಬೆಣ್ಣೆಹಳ್ಳ ಸಮೀಪ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದ ಅವರು ಕೆಲಸ ಮುಗಿಸಿ ವಾಪಾಸ್ ಬರುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹಾಗೆಯೇ ಗದಗ ಜಿಲ್ಲೆಯ ರೋಣ ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರೈತರ ಕೈಗೆ ಸಿಕ್ಕ ಪಂಪ್&zwnj;ಸೆಟ್ ಕೇಬಲ್ ಕಳ್ಳರು: ಕದ್ದ ಕೇಬಲ್&zwnj;ನಿಂದ ಮರಕ್ಕೆ ಕಟ್ಟಿ ಥಳಿಸಿದ ರೈತರು&lt;/strong&gt;&lt;/p&gt;]]></content:encoded>
            <category>gadag</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/summer-rains-wreak-havoc-in-the-state-raichur-bidar-chamarajanagar-rain-damage-kl5c680"/>
        </item>
        <item>
            <title><![CDATA[ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆ ಆಸೆ;  ತಲೆಮೇಲೆ ಕಲ್ಲು ಹಾಕಿ ಕೊಂದ ಅಣ್ಣ!]]></title>
            <link>https://kannada.asianetnews.com/gallery/karnataka-districts/brother-killed-his-own-younger-brother-by-throwing-a-stone-at-his-head-for-the-sake-of-a-girl-gadag-mrq-ksy0d6u</link>
            <guid isPermaLink="true">https://kannada.asianetnews.com/gallery/karnataka-districts/brother-killed-his-own-younger-brother-by-throwing-a-stone-at-his-head-for-the-sake-of-a-girl-gadag-mrq-ksy0d6u</guid>
            <pubDate>Wed, 18 Mar 2026 07:29:41 +0530</pubDate>
            <description><![CDATA[&lt;p&gt;ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆ ಆಸೆಪಟ್ಟು ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ. ಆರೋಪಿ ಅಶೋಕ, ತನ್ನ ತಮ್ಮ ಫಕೀರಪ್ಪನನ್ನು ಹತ್ಯೆ ಮಾಡಿ, ಅಪರಿಚಿತರು ಕೊಂದಿದ್ದಾರೆಂದು ನಾಟಕವಾಡಿದ್ದ. ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkza9fp2b072ksbqj1wprx4x,imgname-gadag-murder-1773798735554.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆ ಆಸೆಪಟ್ಟು ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ. ಆರೋಪಿ ಅಶೋಕ, ತನ್ನ ತಮ್ಮ ಫಕೀರಪ್ಪನನ್ನು ಹತ್ಯೆ ಮಾಡಿ, ಅಪರಿಚಿತರು ಕೊಂದಿದ್ದಾರೆಂದು ನಾಟಕವಾಡಿದ್ದ. ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.&lt;/p&gt;&lt;img&gt;&lt;p&gt;ತಮ್ಮನಿಗೆ ನಿಶ್ಚಯಿಸಲಾಗಿದ್ದ ಕನ್ಯೆಗಾಗಿ ಆಸೆಪಟ್ಟಿದ ಅಣ್ಣನೊಬ್ಬ ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಹತ್ಯೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕಮೂಲಂಗಿ ಗ್ರಾಮದ ಕುರಿಗಾಹಿ ಫಕೀರಪ್ಪ ಕುರವಿನಕೊಪ್ಪ (19) ಮೃತ. ಈತನ ಅಣ್ಣ ಅಶೋಕ ಬಂಧಿತ ಆರೋಪಿ. ಹತ್ಯೆ ಬಳಿಕ ಪೊಲೀಸರಿಗೆ ಕರೆ ಮಾಡಿದ್ದ ಅಶೋಕ್, ಯಾರೋ ದುಷ್ಕರ್ಮಿಗಳು ತಮ್ಮನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆಂದು ಸುಳ್ಳು ಹೇಳಿ ಪಾರಾಗಲು ಯತ್ನಿಸಿದ್ದ.&lt;/p&gt;&lt;img&gt;&lt;p&gt;ಪೊಲೀಸರು ಅನುಮಾನದ ಮೇಲೆ ಅಶೋಕನನ್ನು ವಶಕ್ಕೆ ಪಡೆದು ವಿಚಾಸಿದಾಗ ಸತ್ಯ ಬಯಲಾಗಿದೆ. ಹುಡುಗಿ ವಿಷಯವಾಗಿ ಫಕ್ಕೀರಪ್ಪನ ಜೊತೆಗೆ ಗಲಾಟೆಯಾಗಿತ್ತು. ತಮ್ಮನನ್ನು ಕೊಲೆ ಮಾಡಿದರೆ ಆ ಹುಡುಗಿ ನನಗೆ ಸಿಗುತ್ತಾಳೆ ಎಂದು ಕೃತ್ಯ ಮಾಡಿರುವುದಾಗಿ ಆರೋಪಿ ಅಶೋಕ್ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಅಶೋಕನಿಗೂ ಹಿರಿಯರು ಕನ್ಯೆ ಹುಡುಕಿದ್ದರು. ಆದರೆ, ಆ ಹುಡುಗಿ ಆತನಿಗೆ ಇಷ್ಟ ಇರಲಿಲ್ಲ. ಫಕೀರಪ್ಪನ ಹುಡುಗಿಗೆ ಆಸೆಪಟ್ಟು ತಮ್ಮನನ್ನೇ ಕೊಲೆ ಮಾಡ್ತಾನೆ ಅಂದುಕೊಂಡಿರಲಿಲ್ಲ ಎಂದು ತಾಯಿ ಯಲ್ಲಮ್ಮ ಅಳಲು ತೊಡಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Jai Bangla Slogan Case: 'ಜೈ ಬಾಂಗ್ಲಾ' ಘೋಷಣೆ ಕೂಗಿ ಜೈಲು ಸೇರಿದ್ದ ಮಹಿಳೆಗೆ ಹೈಕೋರ್ಟ್ ಜಾಮೀನು&lt;/strong&gt;&lt;/p&gt;&lt;img&gt;&lt;p&gt;ಸುದ್ದಿ ತಿಳಿಯುತ್ತಿದ್ದಂತೆ ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪೊಲೀಸರ ತನಿಖೆ ವೇಳೆ ಆರೋಪಿ ಅಶೋಕ್ ಸತ್ಯ ಬಾಯಿಬಿಟ್ಡಿದ್ದಾನೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪ್ರೀತಿಗೆ ಅಡ್ಡಿಯಾದ ಜಾತಿ; ಪೊಲೀಸ್&zwnj; ಭದ್ರತೆ ಪಡೆದು, ದೇವಸ್ಥಾನದಲ್ಲಿ ಮದುವೆಯಾದ ಬೆಂಗಳೂರಿನ ಜೋಡಿ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/brother-killed-his-own-younger-brother-by-throwing-a-stone-at-his-head-for-the-sake-of-a-girl-gadag-mrq-ksy0d6u"/>
        </item>
        <item>
            <title><![CDATA[ಗ್ಯಾಸ್ ಸಿಲಿಂಡರ್ ಉಳಿಸಲು ಹಸಿ ತರಕಾರಿ, ಮೊಳಕೆ ಕಾಳು, ಹಣ್ಣುಗಳನ್ನು ತಿನ್ನಿ; ಜಗದ್ಗುರು ತೋಂಟದಾರ್ಯ ಸ್ವಾಮೀಜಿ!]]></title>
            <link>https://kannada.asianetnews.com/karnataka-districts/gadag-tontadarya-siddarama-swamiji-urges-people-to-eat-raw-veggies-soaked-grains-to-combat-lpg-crisis-sat/articleshow-n84n1xs</link>
            <guid isPermaLink="true">https://kannada.asianetnews.com/karnataka-districts/gadag-tontadarya-siddarama-swamiji-urges-people-to-eat-raw-veggies-soaked-grains-to-combat-lpg-crisis-sat/articleshow-n84n1xs</guid>
            <pubDate>Thu, 12 Mar 2026 18:01:08 +0530</pubDate>
            <description><![CDATA[&lt;p&gt;ಜಾಗತಿಕ ಯುದ್ಧ ಮತ್ತು ಇಂಧನ ಕೊರತೆ ಹಿನ್ನೆಲೆಯಲ್ಲಿ, ಗದಗ ತೋಂಟದಾರ್ಯ ಮಠದ ಶ್ರೀ ಸಿದ್ಧರಾಮ ಸ್ವಾಮೀಜಿಗಳು ಗ್ಯಾಸ್ ಉಳಿಸಲು ಬೇಯಿಸಿದ ಆಹಾರ ಕಡಿಮೆ ಮಾಡಿ ಹಸಿ ತರಕಾರಿ, ನೆನೆಸಿದ ಕಾಳುಗಳನ್ನು ಸೇವಿಸಲು ಹಾಗೂ ಅನಗತ್ಯ ವಾಹನ ಬಳಕೆ ನಿಲ್ಲಿಸಲು ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkh07tf61s9b8cqr4675z4v7,imgname-gadag-tontadarya-siddarama-swamiji-1773318433254.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಮಾ.12): ಜಾ&lt;/strong&gt;ಗತಿಕ ಮಟ್ಟದಲ್ಲಿ ಉಂಟಾಗಿರುವ ಯುದ್ಧದ ಭೀತಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ತೀವ್ರ ಕೊರತೆಯ ಹಿನ್ನೆಲೆಯಲ್ಲಿ, ಗದಗದ ಜಗದ್ಗುರು ತೋಂಟದಾರ್ಯ ಮಠದ ಶ್ರೀ ಸಿದ್ಧರಾಮ ಸ್ವಾಮೀಜಿ ಅವರು ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅತ್ಯಂತ ವಿಶಿಷ್ಟ ಹಾಗೂ ಸಮಯೋಚಿತ ಸಲಹೆಗಳನ್ನು ನೀಡಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಉಳಿತಾಯಕ್ಕಾಗಿ ಜನರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಆಹಾರ ಪದ್ಧತಿಯಲ್ಲಿ ಬದಲಾವಣೆಗೆ ಶ್ರೀಗಳ ಸಲಹೆ:&lt;/strong&gt;&lt;/h2&gt;&lt;p&gt;ನಗರದ ತೋಂಟದಾರ್ಯ ಮಠದಲ್ಲಿ ಮಾತನಾಡಿದ ಶ್ರೀಗಳು, &lsquo;ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳಿಂದಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್&zwnj;ಪಿಜಿ ಗ್ಯಾಸ್ ಸರಬರಾಜಿನಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಗ್ಯಾಸ್ ಉಳಿತಾಯ ಮಾಡಲು ಜನರು ಬೇಯಿಸಿದ ಆಹಾರದ ಸೇವನೆಯನ್ನು ತುಸು ಕಡಿಮೆ ಮಾಡಬೇಕು. ಬದಲಾಗಿ, ಆರೋಗ್ಯಕ್ಕೂ ಉತ್ತಮವಾಗಿರುವ ನೆನೆಸಿದ ಕಾಳುಗಳು ಹಾಗೂ ಹಸಿ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಇದರಿಂದ ಇಂಧನ ಉಳಿತಾಯವಾಗುವುದಲ್ಲದೆ, ಆರೋಗ್ಯವೂ ವೃದ್ಧಿಸುತ್ತದೆ&rsquo; ಎಂದು ತಿಳಿಸಿದರು.&lt;/p&gt;&lt;h3&gt;&lt;strong&gt;ದಾಸೋಹ ಮಠಗಳಿಗೂ ತಟ್ಟಿದ ಬಿಸಿ:&lt;/strong&gt;&lt;/h3&gt;&lt;p&gt;ಕರ್ನಾಟಕದಲ್ಲಿ ಸಾವಿರಾರು ಮಠಗಳು ನಿತ್ಯವೂ ದಾಸೋಹ (ಅನ್ನದಾನ) ನಡೆಸುತ್ತವೆ. ಆದರೆ ಇಂಧನ ಮತ್ತು ಗ್ಯಾಸ್ ಬೆಲೆ ಏರಿಕೆ ಹಾಗೂ ಕೊರತೆಯಿಂದಾಗಿ ಈ ದಾಸೋಹ ವ್ಯವಸ್ಥೆಗೂ ತುಸು ವ್ಯತ್ಯಯ ಉಂಟಾಗುತ್ತಿದೆ. ಇದನ್ನು ರಾಷ್ಟ್ರದ ಸಮಸ್ಯೆ ಎಂದು ಪರಿಗಣಿಸಿ ಪ್ರತಿಯೊಬ್ಬ ನಾಗರಿಕನೂ ಇಂಧನ ಉಳಿತಾಯಕ್ಕೆ ಕೈಜೋಡಿಸಬೇಕು ಎಂದು ಶ್ರೀಗಳು ಕರೆ ನೀಡಿದರು.&lt;/p&gt;&lt;h2&gt;&lt;strong&gt;ವಾಹನ ಬಳಕೆ ಮಿತವಾಗಿರಲಿ:&lt;/strong&gt;&lt;/h2&gt;&lt;p&gt;ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯ ಬಗ್ಗೆ ಎಚ್ಚರಿಸಿದ ಶ್ರೀಗಳು, &lsquo;ಜನರು ಅನಗತ್ಯವಾಗಿ ವಾಹನಗಳನ್ನು ತೆಗೆದುಕೊಂಡು ಓಡಾಡುವುದನ್ನು ನಿಲ್ಲಿಸಬೇಕು. ಅತ್ಯಂತ ಅವಶ್ಯಕತೆ ಇದ್ದಾಗ ಮಾತ್ರ ವಾಹನಗಳನ್ನು ಬಳಸಬೇಕು. ಸಣ್ಣಪುಟ್ಟ ಕೆಲಸಗಳಿಗೆ ನಡಿಗೆ ಅಥವಾ ಸೈಕಲ್ ಬಳಸುವುದು ಉತ್ತಮ. ನಾವೆಲ್ಲಾ ಭಾರತೀಯರು ಒಟ್ಟಾಗಿ ಈ ಸಮಸ್ಯೆಯನ್ನು ಅರಿತು ಮಿತವ್ಯಯ ಪಾಲಿಸಿದರೆ ಮಾತ್ರ ಈ ಸಂಕಷ್ಟದಿಂದ ಪಾರಾಗಲು ಸಾಧ್ಯ&rsquo; ಎಂದರು.&lt;/p&gt;&lt;h3&gt;&lt;strong&gt;ಜಾಗತಿಕ ನಾಯಕರಿಗೆ ಶಾಂತಿ ಸಂದೇಶ:&lt;/strong&gt;&lt;/h3&gt;&lt;p&gt;ಇದೇ ಸಂದರ್ಭದಲ್ಲಿ ಜಾಗತಿಕ ರಾಜಕೀಯದ ಕುರಿತು ಮಾತನಾಡಿದ ಸಿದ್ಧರಾಮ ಶ್ರೀಗಳು, &quot;ಅಮೆರಿಕದಂತಹ ರಾಷ್ಟ್ರಗಳು ಇತರ ದೇಶಗಳ ಮೇಲೆ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತಿರುವುದು ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧಗಳು ಜಗತ್ತಿಗೆ ಮಾರಕವಾಗಿವೆ. ಯುದ್ಧದಿಂದ ಯಾರಿಗೂ ಪ್ರಯೋಜನವಿಲ್ಲ, ಕೇವಲ ವಿನಾಶ ಮಾತ್ರ ಸಾಧ್ಯ. ಕೂಡಲೇ ವಿಶ್ವದ ನಾಯಕರು ಮಾತುಕತೆಯ ಮೂಲಕ ಯುದ್ಧಕ್ಕೆ ವಿರಾಮ ಹಾಡಬೇಕು. ಭಾರತದ ರಾಜಕೀಯ ನಾಯಕರೂ ಸಹ ಈ ಇಂಧನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕು&quot; ಎಂದು ಒತ್ತಿ ಹೇಳಿದರು.&lt;/p&gt;&lt;p&gt;ಗದಗ ಶ್ರೀಗಳ ಈ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪರಿಸರ ಪ್ರೇಮಿಗಳು ಮತ್ತು ಆರ್ಥಿಕ ತಜ್ಞರು ಶ್ರೀಗಳ ಈ 'ಮಿತವ್ಯಯದ ಮಂತ್ರ'ವನ್ನು ಸ್ವಾಗತಿಸಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/gadag-tontadarya-siddarama-swamiji-urges-people-to-eat-raw-veggies-soaked-grains-to-combat-lpg-crisis-sat/articleshow-n84n1xs"/>
        </item>
        <item>
            <title><![CDATA[ಕಾಂಗ್ರೆಸ್‌ಗೆ ತಟ್ಟಲಿದೆ ಮಹಿಳೆಯರ ಶಾಪ: ಶಾಸಕ ಸಿ.ಸಿ.ಪಾಟೀಲ ವಿವಾದಾತ್ಮಕ ಹೇಳಿಕೆ!]]></title>
            <link>https://kannada.asianetnews.com/karnataka-districts/cc-patil-slams-congress-women-reservation-bill-issue-gvd/articleshow-p82aomp</link>
            <guid isPermaLink="true">https://kannada.asianetnews.com/karnataka-districts/cc-patil-slams-congress-women-reservation-bill-issue-gvd/articleshow-p82aomp</guid>
            <pubDate>Wed, 22 Apr 2026 18:30:54 +0530</pubDate>
            <description><![CDATA[&lt;p&gt;ಮಹಿಳಾ ಮೀಸಲಾತಿ ವಿಧೇಯಕವನ್ನು ಸೋಲಿಸಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ದೇಶದ ಮಹಿಳೆಯರು ತೀವ್ರ ಆಕ್ರೋಶ ಹೊಂದಿದ್ದು, ಅವರಿಗೆ ಮಹಿಳೆಯರ ಶಾಪ ತಟ್ಟಲಿದೆ ಎಂದು ಶಾಸಕ ಸಿ.ಸಿ.ಪಾಟೀಲ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g6dzg777vb0zyjcygn17rz1r,imgname-cc-patil.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಏ.22):&lt;/strong&gt; ಮಹಿಳಾ ಮೀಸಲಾತಿ ವಿಧೇಯಕವನ್ನು ಸೋಲಿಸಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ದೇಶದ ಮಹಿಳೆಯರು ತೀವ್ರ ಆಕ್ರೋಶ ಹೊಂದಿದ್ದು, ಅವರಿಗೆ ಮಹಿಳೆಯರ ಶಾಪ ತಟ್ಟಲಿದೆ ಎಂದು ಶಾಸಕ ಸಿ.ಸಿ.ಪಾಟೀಲ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ಸಮಾನ ಹಕ್ಕು, ಪ್ರಾತಿನಿಧ್ಯ ಹೆಚ್ಚಿಸುವ ಮೂಲಕ ರಾಷ್ಟ್ರದಲ್ಲಿ ಮಹಿಳೆಯರ ಶಕ್ತಿಯನ್ನು ಉಪಯೋಗ ಮಾಡಿಕೊಳ್ಳುವ ಕನಸು ಕಂಡಿದ್ದರು.&lt;/p&gt;&lt;p&gt;ಆದರೆ, ಮಹಿಳಾ ಮೀಸಲಾತಿ ವಿಧೇಯಕವನ್ನು ಸೋಲಿಸುವ ಮೂಲಕ ಹರ್ಷ ವ್ಯಕ್ತಪಡಿಸಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದರು. ದೇಶದ ಜನಸಂಖ್ಯೆ 140 ಕೋಟಿ ದಾಟುತ್ತಿರುವುದರಿಂದ ಸಂಸದರ ಸಂಖ್ಯೆ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಆದರೆ, ಕಾಂಗ್ರೆಸ್&zwnj; ಹಾಗೂ ಅದರ ಮೈತ್ರಿ ಪಕ್ಷಗಳು ಕ್ಷೇತ್ರ ಮರುವಿಂಗಡಣೆ ಜತೆಗೆ ಮಹಿಳೆಯರಿಗೆ ಸಿಗಬೇಕಿದ್ದ ಶೇ. 33ರಷ್ಟು ಮೀಸಲಾತಿಗೂ ವಿರೋಧ ವ್ಯಕ್ತಪಡಿಸುವ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ.&lt;/p&gt;&lt;p&gt;ಅಲ್ಲದೇ, ತಾಯಂದಿರ ಕನಸನ್ನು ಭಗ್ನಗೊಳಿಸಿದ್ದಾರೆ ಎಂದು ಕಾಂಗ್ರೆಸ್&zwnj; ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಜಾರಿಗೆ ತಂದ ಅನೇಕ ಯೋಜನೆಗಳಿಗೆ ಕಾಂಗ್ರೆಸ್&zwnj; ಹಾಗೂ ಅದರ ಮೈತ್ರಿ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ ಎಂದು ಪಟ್ಟಿಯನ್ನೇ ಓದಿ ಹೇಳಿದರು.&lt;/p&gt;&lt;h2&gt;&lt;strong&gt;ರಾಜಕೀಯ ಕಿಚ್ಚು&lt;/strong&gt;&lt;/h2&gt;&lt;p&gt;ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್&zwnj;ವಿಂಗಡಣೆ ವಿಷಯವನ್ನು ಪ್ರತ್ಯೇಕವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮಹಿಳಾ ಮೀಸಲಾತಿ ವಿಧೇಯಕವನ್ನು ಸೋಲಿಸುವ ಮೂಲಕ ಮಹಿಳೆಯರ ಜತೆಗೆ ವಿವಿಧ ರಾಜ್ಯಗಳ ಜನರಿಗೂ ಅನ್ಯಾಯವಾಗಿದೆ. ಆದರೆ, ಬಿಜೆಪಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲವಾಗಿ ಮಹಿಳಾ ಮೀಸಲಾತಿ ಬಿಲ್ಲನ್ನು ಜಾರಿಗೆ ತರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>gadag</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cc-patil-slams-congress-women-reservation-bill-issue-gvd/articleshow-p82aomp"/>
        </item>
        <item>
            <title><![CDATA[ಗದಗ: ರಥೋತ್ಸವದ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ದಾರಿ ಬಿಡುವಂತೆ ಹೇಳಿದ್ದಕ್ಕೆ ಹಲ್ಲೆ? ಸಲೀಂ ಗ್ಯಾಂಗ್ ಅರೆಸ್ಟ್!]]></title>
            <link>https://kannada.asianetnews.com/gallery/karnataka-districts/gadag-chariot-festival-clash-accused-arrested-after-attacking-devotees-over-car-parking-dispute-tegkxqx</link>
            <guid isPermaLink="true">https://kannada.asianetnews.com/gallery/karnataka-districts/gadag-chariot-festival-clash-accused-arrested-after-attacking-devotees-over-car-parking-dispute-tegkxqx</guid>
            <pubDate>Fri, 20 Mar 2026 09:58:16 +0530</pubDate>
            <description><![CDATA[&lt;p&gt;Gadag Chariot Festival Clash ಗದಗ ರಥೋತ್ಸವ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ತೆಗೆಯೋಕೆ ಹೇಳಿದ್ದಕ್ಕೆ ಹಲ್ಲೆ ಭಕ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಅರೆಸ್ಟ್ ಮಾಡಲಾಗಿದೆ. ಘಟನೆ ನಡೆದಿದ್ದು ಹೇಗೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km4pkpmaksdemmtkn2c7y3p1,imgname-whatsapp-image-2026-03-20-at-9.10.14-am-1773979425418.jpeg" type="image/jpeg" height="390" width="690"/>
            <content:encoded><![CDATA[&lt;p&gt;Gadag Chariot Festival Clash ಗದಗ ರಥೋತ್ಸವ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ತೆಗೆಯೋಕೆ ಹೇಳಿದ್ದಕ್ಕೆ ಹಲ್ಲೆ ಭಕ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಅರೆಸ್ಟ್ ಮಾಡಲಾಗಿದೆ. ಘಟನೆ ನಡೆದಿದ್ದು ಹೇಗೆ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಗದಗ ಜಿಲ್ಲೆಯ ಮಲ್ಲಸಮುದ್ರ ಗ್ರಾಮದಲ್ಲಿ ಬಸವೇಶ್ವರ ಜಾತ್ರೆಯ ರಥೋತ್ಸವದ ಸಂಭ್ರಮದ ನಡುವೆಯೇ ಕಿರಿಕ್ ನಡೆದಿದ್ದು, ಕಾರು ತೆರವುಗೊಳಿಸುವ ವಿಚಾರವಾಗಿ ಆರಂಭವಾದ ಜಗಳ ಹಲ್ಲೆಯಲ್ಲಿ ಅಂತ್ಯವಾಗಿದೆ.&lt;/p&gt;&lt;img&gt;&lt;p&gt;ಇದನ್ನು ಕಂಡ ಜಾತ್ರಾ ಕಮಿಟಿಯ ಯುವಕರು, ರಥ ಬರಲು ದಾರಿ ಮಾಡಿಕೊಡುವಂತೆ ಮತ್ತು ಕಾರನ್ನು ಪಕ್ಕಕ್ಕೆ ಸರಿಸುವಂತೆ ವಿನಂತಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.&lt;/p&gt;&lt;img&gt;&lt;p&gt;ಕಾರು ಸರಿಸಲು ನಿರಾಕರಿಸಿದ ಸಲೀಂ ತಂಡದವರು, ಜಾತ್ರಾ ಕಮಿಟಿಯ ಸದಸ್ಯರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಥೋತ್ಸವದಂತಹ ದೇವರ ಆಚರಣೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;img&gt;&lt;p&gt;ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರು ಮತ್ತು ಕಮಿಟಿಯವರು ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ.&lt;/p&gt;&lt;img&gt;&lt;p&gt;ಜಾತ್ರಾ ಕಮಿಟಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಗ್ರಾಮದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ಬಂಧಿತ ಕಿಡಿಗೇಡಿಗಳು&lt;/strong&gt;&lt;/p&gt;&lt;ul&gt; &lt;li&gt;ಸಲೀಂ ಬಡೇಖಾನ್&lt;/li&gt; &lt;li&gt;ಲೋಕೇಶ್ ರಾಮಜಿ&lt;/li&gt; &lt;li&gt;ಮಂಜುನಾಥ್ ಹಾದಿಮನಿ&lt;/li&gt;&lt;/ul&gt;&lt;img&gt;&lt;p&gt;ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಥವಾ ಧಾರ್ಮಿಕ ಮೆರವಣಿಗೆಗಳ ವೇಳೆ ಸಂಯಮ ಮತ್ತು ಪರಸ್ಪರ ಗೌರವ ಬಹಳ ಮುಖ್ಯ. ಪೊಲೀಸರ ಈ ತ್ವರಿತ ಕ್ರಮದಿಂದ ಹೆಚ್ಚಿನ ಅಹಿತಕರ ಘಟನೆಗಳು ತಪ್ಪಿದಂತಾಗಿದೆ.&lt;/p&gt;]]></content:encoded>
            <category>gadag</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/gadag-chariot-festival-clash-accused-arrested-after-attacking-devotees-over-car-parking-dispute-tegkxqx"/>
        </item>
        <item>
            <title><![CDATA[ಬೇಸಿಗೆ ಸೆಖೆಗೆ ಮನೆ ಹೊರಗೆ ಮಲಗಿದ್ದವರ ಮೇಲೆ 'ಸೈಕೋ' ದಾಳಿ: ಆರು ಜನರ ತಲೆ ಒಡೆದ ಮಾನಸಿಕ ಅಸ್ವಸ್ಥ]]></title>
            <link>https://kannada.asianetnews.com/state/gadag-six-people-seriously-injuired-after-mentally-ill-man-fatally-attacked-them/articleshow-xro7rff</link>
            <guid isPermaLink="true">https://kannada.asianetnews.com/state/gadag-six-people-seriously-injuired-after-mentally-ill-man-fatally-attacked-them/articleshow-xro7rff</guid>
            <pubDate>Wed, 08 Apr 2026 14:19:52 +0530</pubDate>
            <description><![CDATA[ಗದಗ ಜಿಲ್ಲೆಯ ದೋಣಿ ತಾಂಡಾದಲ್ಲಿ, ಮಾನಸಿಕ ಅಸ್ವಸ್ಥನೋರ್ವ ಮನೆಯಿಂದ ಹೊರಗೆ ಮಲಗಿದ್ದ ಆರು ಜನರ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmdvazsbgy81a251fyern41p,imgname-gadag-casteism-dispute-1774286372651.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ದೋಣಿ ತಾಂಡಾದಲ್ಲಿ ರಕ್ತಸಿಕ್ತ ಬೇಸಿಗೆ ರಾತ್ರಿ&lt;/strong&gt;&lt;/h2&gt;&lt;p&gt;ಗದಗ: ಬೇಸಿಗೆಯ ಸೆಖೆ ಅಂತ ಮನೆಯಿಂದ ಹೊರಗೆ ಮಲಗಿದವರ ಮೇಲೆ ಮಾನಸಿಕ ಅಸ್ವಸ್ಥನೋರ್ವ ಹಲ್ಲೆ ಮಾಡಿದ್ದು, ದೊಣ್ಣೆಯಿಂದ ಹಲವರ ತಲೆ ಒಡೆದಿದ್ದಾನೆ. ಪರಿಣಾಮ ಹಲವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ದೋಣಿ ತಾಂಡಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.&lt;/p&gt;&lt;h3&gt;&lt;strong&gt;ಮಾನಸಿಕ ಅಸ್ವಸ್ಥನಿಂದ ದೊಣ್ಣೆ ಪ್ರಹಾರ, ಆಸ್ಪತ್ರೆಗೆ ದಾಖಲಾದ ಆರು ಜನ&lt;/strong&gt;&lt;/h3&gt;&lt;p&gt;ಮನೆ ಆಚೆ ಮಲಗಿದ್ದವರ ಮೇಲೆ ಮಾನಸಿಕ ಅಸ್ವಸ್ಥ ಹಲ್ಲೆ ಮಾಡಿದ್ದು, ಹಲ್ಲೆಯ ಬಳಿ ಆತ ಬೀದಿಯಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್&zwnj; ಆಗಿದೆ. ಹರ್ಜಪ್ಪ ಲಮಾಣಿ ಎಂಬಾತನೇ ಮನೆ ಹೊರಗೆ ಮಲಗಿದವರ ಮೇಲೆ ಹಲ್ಲೆ ಮಾಡಿದ ಮಾನಸಿಕ ಅಸ್ವಸ್ಥ. ಮಧ್ಯರಾತ್ರಿ ಆರು ಜನರ ಮೇಲೆ ಈತ ಏಕಾಏಕಿ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಈತನ ಹಲ್ಲೆಯಿಂದಾಗಿ ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶಾಲೆಗಳಿಗೆ ಲಕ್ಷ ಲಕ್ಷ ವೆಚ್ಚ ಮಾಡಿದರೆ ಏನು ಪ್ರಯೋಜನ: ಪಾಠ ಮಾಡುವ ಟೀಚರ್&zwnj;ಗೆ ಗೊತ್ತಿಲ್ಲ ಕನಿಷ್ಟ ಗ್ರ್ಯಾಮರ್&lt;/strong&gt;&lt;/p&gt;&lt;p&gt;&lt;strong&gt;ಸೆಖೆ ತಾಳಲಾರದೆ ಹೊರಗೆ ಮಲಗಿದ್ದವರಿಗೆ ಕಾದಿತ್ತು ಗಂಡಾಂತರ&lt;/strong&gt;&lt;/p&gt;&lt;p&gt;1 ಗಂಟೆಯ ವೇಳೆ ಮನೆ ಮುಂದೆ ಮಲಗಿದ್ದವರ ಮೇಲೆ ದೊಣ್ಣೆಯಿಂದ ಆರೋಪಿ ಹರ್ಜಪ್ಪ ಲಮಾಣಿ ಹಲ್ಲೆ ಮಾಡಿದ್ದು, ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡ ಗಾಯಾಳುಗಳು ಏನಾಯಿತು ಎಂಬುದು ತಿಳಿಯದೇ ಜೋರಾಗಿ ಕೂಗಾಡಿ ಬೊಬ್ಬೆ ಹೊಡೆದಿದ್ದಾರೆ. ಇವರ ಬೊಬ್ಬೆ ಕೂಗಾಟ ಕೇಳಿ ತಾಂಡಾದ ಇತರ ಜನರು ಸ್ಥಳಕ್ಕೆ ಧಾವಿಸಿದ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಗಾಯಾಳುಗಳ ತಲೆ, ಕಣ್ಣು ಹಾಗೂ ಮುಖದ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾನಸಿಕ ಅಸ್ವಸ್ಥ ದಾಳಿ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಾಗಲಕೋಟೆ: ಯುವ ಪ್ರೇಮಿಗಳು ಸಾವಿಗೆ ಶರಣು: ಗೆಳತಿ ಮೃತಪಟ್ಟ ವಿಚಾರ ತಿಳಿದು ಗೆಳೆಯನೂ ಸಾವು&lt;/strong&gt;&lt;/p&gt;]]></content:encoded>
            <category>gadag</category>
            <dc:creator>Anusha Kb</dc:creator>
            <atom:link href="https://kannada.asianetnews.com/state/gadag-six-people-seriously-injuired-after-mentally-ill-man-fatally-attacked-them/articleshow-xro7rff"/>
        </item>
        <item>
            <title><![CDATA[ಗಜೇಂದ್ರಗಡದಲ್ಲಿ 'ಥರ್ಡ್ ಐ' ತಪ್ಪಿಸಲು ವಾಹನ ಸವಾರರ ವಾಮಮಾರ್ಗ! ಸಫಲವಾಗದ ಸುಗಮ ಸಂಚಾರ]]></title>
            <link>https://kannada.asianetnews.com/karnataka-districts/motorists-turn-left-to-avoid-the-third-eye-traffic-police-cctv-camera-in-gajendragadh-gadag-mrq/articleshow-xxon7r5</link>
            <guid isPermaLink="true">https://kannada.asianetnews.com/karnataka-districts/motorists-turn-left-to-avoid-the-third-eye-traffic-police-cctv-camera-in-gajendragadh-gadag-mrq/articleshow-xxon7r5</guid>
            <pubDate>Sun, 19 Apr 2026 15:21:00 +0530</pubDate>
            <description><![CDATA[&lt;p&gt;ಗಜೇಂದ್ರಗಡದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಥರ್ಡ್ ಐ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು, ಕೆಲ ವಾಹನ ಸವಾರರು ತಮ್ಮ ನೋಂದಣಿ ಸಂಖ್ಯೆಯನ್ನು ಮರೆಮಾಚುತ್ತಿದ್ದಾರೆ ಅಥವಾ ನಂಬರ್ ಪ್ಲೇಟ್&zwnj;ಗಳನ್ನೇ ತೆಗೆದುಹಾಕುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpjhyhbvggp086zst68mfdmy,imgname-gajendragadh-1776591783290.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಸ್.ಎಂ. ಸೈಯದ್&amp;nbsp;&lt;/strong&gt;&lt;/p&gt;&lt;p&gt;&lt;strong&gt;ಗಜೇಂದ್ರಗಡ: &lt;/strong&gt;ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಥರ್ಡ್ ಐ ಜಾರಿಗೆ ತಂದಿದ್ದು, ಪಟ್ಟಣದಲ್ಲಿ ಥರ್ಡ್ ಐ ಕಣ್ಣಿಗೆ ಮಸಿ ರಾಚಲು ಕೆಲವರು ವಾಹನದ ನೋಂದಣಿ ಸಂಖ್ಯೆ ಮರೆಮಾಚಿದರೆ ಇನ್ನೂ ಕೆಲವರು ಬೈಕ್&zwnj;ಗಳ ಹಿಂಬದಿಯ ನಂಬರ್ ಪ್ಲೇಟ್ ತೆಗೆಯುತ್ತಿದ್ದು, ಅಪಘಾತ ಅಥವಾ ಅವಘಡ ವೇಳೆ ವಾಹನ ನೋಂದಣಿ ಸಂಖ್ಯೆ ಪತ್ತೆ ಹೇಗೆ ಎಂಬ ಪ್ರಶ್ನೆಗಳನ್ನು ನಾಗರಿಕರು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;p&gt;ಜಿಲ್ಲೆಯ ದೊಡ್ಡ ಪಟ್ಟಣವಾಗಿರುವ ಪಟ್ಟಣಕ್ಕೆ ಪ್ರತಿದಿನ ನೆರೆಯ ತಾಲೂಕಿನ ಅನೇಕ ಗ್ರಾಮಗಳ ನೂರಾರು ವಾಹನಗಳು ಸ್ಥಳೀಯ ರಸ್ತೆ ಸೇರಿ ಪ್ರಮುಖ ವೃತ್ತಗಳಲ್ಲಿ ಸಂಚಾರ ಮಾಡುತ್ತವೆ. ಆದರೆ ಸರಾಸರಿ ಹತ್ತು ವಾಹನಗಳಲ್ಲಿ 1 ವಾಹನದ ನೋಂದಣಿ ಸಂಖ್ಯೆ ಮರೆಮಾಚಿದ್ದು ಹಾಗೂ ಮತ್ತೊಂದು ಬೈಕ್ ನಂಬರ್ ಪ್ಲೇಟ್ ಇಲ್ಲದಿರುವುದು ಕಂಡುಬರುತ್ತಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ವಾಹನ ನೋಂದಣಿ ಸಂಖ್ಯೆ ತಿರುಚುತ್ತಿರುವವ ವಾಹನಗಳತ್ತ ಗಮನ ಹರಿಸುತ್ತಿಲ್ಲ. ಪರಿಣಾಮ ವಾಹನ ನೋಂದಣಿ ಸಂಖ್ಯೆ ತಿರುಚುವ ಕ್ರಿಯೆ ಸಾಂಕ್ರಾಮಿಕದಂತೆ ಹರಡುವ ಸಾಧ್ಯತೆ ದಟ್ಟವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಸಫಲವಾಗದ ಸುಗಮ ಸಂಚಾರ&lt;/strong&gt;&lt;/h2&gt;&lt;p&gt;ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ, ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಪಟ್ಟಣದ ಹೃದಯ ಭಾಗವಾಗಿರುವ ಕಾಲಕಾಲೇಶ್ವರ ವೃತ್ತ ಸೇರಿ, ದುರ್ಗಾ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಮುಂಭಾಗ ಹಾಗೂ ಪ್ರಮುಖ ರಸ್ತೆ ಸೇರಿ ಅಂದಾಜು 19 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.&lt;/p&gt;&lt;p&gt;ಹೀಗಾಗಿ ಪಟ್ಟಣದ ಪ್ರಮುಖ ವೃತ್ತ, ರಸ್ತೆ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಸೇರುವ ಜನದಟ್ಟನೆ ಮತ್ತು ಉಂಟಾಗುವ ವಾಹನ ದಟ್ಟಣೆಯ ದೃಶ್ಯಗಳನ್ನು ಪೊಲೀಸ್ ಠಾಣೆಯಲ್ಲಿನ ಟಿವಿ ಪರದೆಯಲ್ಲಿ ವೀಕ್ಷಿಸಲಾಗುತ್ತಿದೆ. ಜನದಟ್ಟಣೆ ಹಾಗೂ ವಾಹನ ದಟ್ಟಣೆ ನಿವಾರಣೆಗೆ ಅಗತ್ಯ ಸಂದೇಶವನ್ನು ಕ್ಷಣಾರ್ಧದಲ್ಲಿ ಪೊಲೀಸ್ ಠಾಣೆಯ ಮೂಲಕ ಕರ್ತವ್ಯದಲ್ಲಿನ ಸಿಬ್ಬಂದಿಗೆ ರವಾನಿಸಿ ಸುಗಮ ಸಂಚಾರಕ್ಕೆ ಪರಿಹಾರ ಕಂಡುಕೊಳ್ಳಲು ಸಿಟಿ ಕ್ಯಾಮೆರಾ ದೃಶ್ಯಗಳು ಸಹಕಾರಿಯಾಗಿವೆ. ಆದರೆ ಕಾಲಕಾಲೇಶ್ವರ ವೃತ್ತ ಸೇರಿ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅಡ್ಡಾದಿಡ್ಡಿ ನಿಲ್ಲುವ ವಾಹನಗಳು ಹಾಗೂ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಪರಿಣಾಮ ಪಟ್ಟಣದಲ್ಲಿ ಸುಗಮ ಸಂಚಾರದ ಅರ್ಥ ತಿಳಿಯುತ್ತಿಲ್ಲ ಎಂದು ವಾಹನ ಸವಾರರು ಗೋಳಿಡುತ್ತಿದ್ದಾರೆ.&lt;/p&gt;&lt;h3&gt;&lt;strong&gt;ರಸ್ತೆ ಅತಿಕ್ರಮಣ&lt;/strong&gt;&lt;/h3&gt;&lt;p&gt;ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಯಾವಾಗ ಆರಂಭ ಇರುತ್ತದೆ, ಯಾವಾಗ ಬಂದ್ ಆಗುತ್ತದೆ ಎಂಬುದು ವಾಹನ ಸವಾರರಿಗೆ ತಿಳಿಯದಂತಾಗಿದೆ. ರೋಣ, ಕುಷ್ಟಗಿ, ಬಸ್ ನಿಲ್ದಾಣ ಸೇರಿ ಜೋಡು ರಸ್ತೆಯಲ್ಲಿನ ಪಾದಚಾರಿಗಳ ರಸ್ತೆಯನ್ನು ಮನಸೋ ಇಚ್ಛೆ ಅಂಗಡಿಕಾರರು ಅತಿಕ್ರಮಣ ಮಾಡಿದ್ದು, ಪಾದಚಾರಿಗಳ ರಸ್ತೆ ಮಾಯವಾಗಿದೆ.&lt;/p&gt;&lt;p&gt;ಪಟ್ಟಣದ ಪ್ರಮುಖ ವೃತ್ತಗಳಲ್ಲಿಯೇ ಅಡ್ಡಾದಿಡ್ಡಿ ವಾಹನ ನಿಲುಗಡೆ ಹಾಗೂ ವಾಣಿಜ್ಯ ಮಳಿಗೆಗಳ ಕಚ್ಚಾವಸ್ತುಗಳು ಫುಟ್&zwnj;ಪಾತ್ ಮೇಲೆ ಹಾಕುವ ಪರಿಣಾಮ ಪಟ್ಟಣದ ಪ್ರಮುಖ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿದೆ. ತುರ್ತು ವೈದ್ಯಕೀಯ ಸೇರಿ ಅಗತ್ಯ ಕೆಲಸಗಳಿಗೆ ತೆರಳುವ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ವಾಹನ ನೋಂದಣಿ ತಿದ್ದುಪಡಿ ಮಾಡಿದ ವಾಹನ ಮಾಲೀಕರ ಮೇಲೆ ಕ್ರಮಕ್ಕೆ ಮುಂದಾಗಬೇಕು. ಅಲ್ಲದೆ ಅಪ್ರಾಪ್ತ ಯುವಕರ ಕರ್ಕಶ ಶಬ್ದದೊಂದಿಗೆ ವೇಗವಾಗಿ ಹಾಗೂ ತ್ರಿಬಲ್ ರೈಡಿಂಗ್ ವಾಹನ ಚಾಲನೆಗೆ ನಿರ್ಬಂಧ ಹೇರಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಆಡಳಿತ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Gadag: ಜಲಸಂಕಷ್ಟಕ್ಕೆ ಮುಕ್ತಿ; ಬರೋಬ್ಬರಿ ₹115 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮಹಾ ಯೋಜನೆ&lt;/strong&gt;&lt;/p&gt;&lt;p&gt;ಪಟ್ಟಣದಲ್ಲಿ ಕೆಲವರು ಬೈಕ್ ಗಳ ನೋಂದಣಿ ಸಂಖ್ಯೆ ತಿರುಚುವುದು ಹಾಗೂ ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೆ ಇದರಿಂದ ಆಗುವ ತಪ್ಪುಗಳ ಬಗ್ಗೆ ಜಾಗೃತಿ ಜತೆಗೆ ಅಂತಹ ವಾಹನಗಳ ಮಾಲೀಕರ ಮೇಲೆ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು. ಅಲ್ಲದೆ ಸಂಚಾರ ನಿಯಮಗಳ ಪಾಲನೆ ವಿಷಯದಲ್ಲಿ ಪೊಲೀಸರು ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ರಾಜಕೀಯ ವ್ಯಕ್ತಿಗಳು ಹಾಗೂ ಪ್ರತಿಯೊಬ್ಬರೂ ಪೊಲೀಸರಿಗೆ ಸಹಕರಿಸಬೇಕು ಎಂದು ಗಜೇಂದ್ರಗಡ ವಕೀಲ ಎಂ.ಎಸ್. ಹಡಪದ ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಜೇಂದ್ರಗಢದಲ್ಲಿ ಕ್ವಿಂಟಾಲ್ ಶೇಂಗಾ 11 ಸಾವಿರಕ್ಕೂ ಅಧಿಕ ದರಕ್ಕೆ ಮಾರಾಟ: ರೈತರು ಖುಷ್&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/motorists-turn-left-to-avoid-the-third-eye-traffic-police-cctv-camera-in-gajendragadh-gadag-mrq/articleshow-xxon7r5"/>
        </item>
        <item>
            <title><![CDATA[ಲಂಚ ಪ್ರಕರಣ: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಾಸಕ ಡಾ. ಚಂದ್ರು ಲಮಾಣಿಗೆ ಬೇಲ್!]]></title>
            <link>https://kannada.asianetnews.com/state/conditional-bail-granted-to-mla-dr-chandru-lamani-who-was-caught-in-lokayukta-trap/articleshow-y13ohw9</link>
            <guid isPermaLink="true">https://kannada.asianetnews.com/state/conditional-bail-granted-to-mla-dr-chandru-lamani-who-was-caught-in-lokayukta-trap/articleshow-y13ohw9</guid>
            <pubDate>Thu, 12 Mar 2026 06:17:21 +0530</pubDate>
            <description><![CDATA[&lt;p&gt;MLA Chandru Lamani bribery case ಲಂಚ ಪ್ರಕರಣದಲ್ಲಿ ಲೋಕಾಯುಕ್ತರಿಂದ ಬಂಧಿತರಾಗಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಇತರ ಇಬ್ಬರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj7cd9xccsy0scggmm10f4b9,imgname-chandru-lamani--2--1771921909676.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಕ್ಷ್ಮೇಶ್ವರ (ಮಾ.12):&lt;/strong&gt; ಲಂಚ ಪ್ರಕರಣದ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಇತರ ಇಬ್ಬರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿದೆ.&lt;/p&gt;&lt;p&gt;ಫೆ. 21ರಂದು ಲೋಕಾಯುಕ್ತ ದಾಳಿ ವೇಳೆ ಬಂಧನಕ್ಕೆ ಒಳಗಾಗಿದ್ದ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅವರ ಆಪ್ತ ಸಹಾಯಕ ಮಂಜುನಾಥ ವಾಲ್ಮೀಕಿ, ಗುರು ಲಮಾಣಿ ಅವರಿಗೆ ಷರತ್ತುಬದ್ಧ ಜಾಮೀನು ದೊರೆತಿದೆ.&lt;/p&gt;&lt;p&gt;&lt;strong&gt;ಪ್ರಕರಣದ ಹಿನ್ನೆಲೆ&lt;/strong&gt;: ಕಳೆದ ಫೆ. 21ರಂದು ಲಕ್ಷ್ಮೇಶ್ವರದ ಶಾಸಕರ ಒಡೆತನದ ಆಸ್ಪತ್ರೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅವರ ಆಪ್ತ ಸಹಾಯಕ ಮಂಜುನಾಥ ವಾಲ್ಮೀಕಿ, ಗುರು ಲಮಾಣಿ ಅವರು ಕಾಮಗಾರಿಯೊಂದಕ್ಕೆ ಸಂಬಂಧಿಸಿದಂತೆ ₹5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದರು. ಬಳಿಕ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.&lt;/p&gt;&lt;p&gt;&lt;strong&gt;ಇಂದು ಸಿಲಿಂಡರ್ ದರ&zwnj; ಏರಿಕೆ ವಿರೋಧಿಸಿ ಪ್ರತಿಭಟನೆ&lt;/strong&gt;&lt;/p&gt;&lt;p&gt;ಗದಗ: \Bಸಿಲಿಂಡರ್ ದರ&zwnj; ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್&zwnj; ಸಮಿತಿ ವತಿಯಿಂದ ಮಾ. 12ರಂದು ಸಂಜೆ 4ಕ್ಕೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.&lt;/p&gt;&lt;p&gt;ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಪ್ರತಿಭಟನೆ ನೇತೃತ್ವ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಪಕ್ಷದ ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ, ಸುಜಾತಾ ದೊಡ್ಡಮನಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/conditional-bail-granted-to-mla-dr-chandru-lamani-who-was-caught-in-lokayukta-trap/articleshow-y13ohw9"/>
        </item>
        <item>
            <title><![CDATA[ಗದಗ: ಮುಂಡರಗಿಯ ಉದ್ಯಾನದಲ್ಲಿ ಹಸಿರೇ ಇಲ್ಲ! ಹೀಗೆ ಮಾಡಿದ್ರೆ ಕಳೆದುಹೋದ ಆ ವೈಭವ ಮರಳೋದು ಹೇಗೆ?]]></title>
            <link>https://kannada.asianetnews.com/karnataka-districts/gadag-mundargi-park-falls-into-neglect-once-vibrant-public-space-now-lies-abandoned-gdp/articleshow-yrgglg7</link>
            <guid isPermaLink="true">https://kannada.asianetnews.com/karnataka-districts/gadag-mundargi-park-falls-into-neglect-once-vibrant-public-space-now-lies-abandoned-gdp/articleshow-yrgglg7</guid>
            <pubDate>Wed, 15 Apr 2026 21:06:56 +0530</pubDate>
            <description><![CDATA[ಒಂದು ಕಾಲದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದ ಮುಂಡರಗಿಯ ಪುರಸಭೆ ಉದ್ಯಾನವನವು ಇಂದು ನಿರ್ಲಕ್ಷ್ಯದಿಂದಾಗಿ ಬಿಕೋ ಎನ್ನುತ್ತಿದೆ. ಹಸಿರು, ಕಾರಂಜಿ, ಮಕ್ಕಳ ಆಟಿಕೆಗಳಿಲ್ಲದೆ ಪಾಳುಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಉದ್ಯಾನವನ್ನು ಪುನಶ್ಚೇತನಗೊಳಿಸಿ, ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp8wjfq899qcbsvm92vrtfd0,imgname-mundargi-municipal-park-1776267378408.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಶರಣು ಸೊಲಗಿ&lt;/p&gt;&lt;p&gt;&lt;strong&gt;ಮುಂಡರಗಿ&lt;/strong&gt;: ಒಂದು ಕಾಲದಲ್ಲಿ ಕಾರಂಜಿ, ರಂಗುರಂಗಿನ ವಿದ್ಯುತ್ ದೀಪಾಲಂಕಾರ ಹಾಗೂ ಹಚ್ಚ ಹಸುರಿನ ಗಿಡ-ಮರಗಳು, ಮಕ್ಕಳ ಜಾರುಬಂಡಿ, ಜೋಕಾಲಿಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದ ಪುರಸಭೆ ಪಕ್ಕದ ಉದ್ಯಾನ ಈಗ ಬಿಕೋ ಎನ್ನುತ್ತಿದೆ.&lt;/p&gt;&lt;p&gt;ಪಟ್ಟಣದ ಮಧ್ಯವರ್ತಿ ಸ್ಥಳವಾದ ಹೇಮರಡ್ಡಿ ಮಲ್ಲಮ್ಮ ವೃತ್ತಕ್ಕೆ (ಬೃಂದಾವನ ಸರ್ಕಲ್) ಸಮೀಪ ಹಾಗೂ ಪುರಸಭೆ ಉದ್ಯಾನ ಎಂದೇ ಖ್ಯಾತವಾಗಿರುವ ಈ ಉದ್ಯಾನ ಪಟ್ಟಣಕ್ಕೆ ಬರುವ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ನಿತ್ಯ ಮಧ್ಯಾಹ್ನ ಬಂದು ಕುಳಿತುಕೊಳ್ಳಲು ವಿಶ್ರಾಂತಿ ತಾಣವಾಗಿತ್ತು. ವಿದ್ಯಾರ್ಥಿಗಳು ಮಧ್ಯಾಹ್ನ ಇಲ್ಲಿಯೇ ಕುಳಿತು ಊಟ ಮಾಡುತ್ತಿದ್ದರು. ಹೀಗಾಗಿ ಇದನ್ನು ಆಶ್ರಯಿಸಿದ್ದ ಎಲ್ಲರಿಗೂ ತೊಂದರೆಯಾದಂತಾಗಿದೆ.&lt;/p&gt;&lt;h2&gt;ಉದ್ಯಾನ ಒಳಗಡೆಗೆ ಅನೈತಿಕ ಚಟುವಟಿಕೆ&lt;/h2&gt;&lt;p&gt;ಈ ಉದ್ಯಾನದಲ್ಲಿ ಈಗ ಯಾವುದೇ ಗಿಡ-ಮರಗಳಿಲ್ಲ, ನೆಲದಲ್ಲಿ ಹುಲ್ಲಿಲ್ಲ. ಕುಳಿತಕೊಳ್ಳೋಣ ಎಂದರೆ ಮಣ್ಣು-ಧೂಳು. ಹುಲ್ಲುಹಾಸು ಇಲ್ಲದ ಕಾರಣ ಉದ್ಯಾನದಲ್ಲಿ ಈಗ ಕೆಲವು ಹುಡುಗರು ಕ್ರಿಕೆಟ್&zwnj; ಆಡುತ್ತಾರೆ. ಅಲ್ಲದೇ ಉದ್ಯಾನ ಒಳಗಡೆಗೆ ಅನೈತಿಕ ಚಟುವಟಿಕೆಯೂ ನಡೆಯುತ್ತಿರುವುದು ಕಂಡು ಬರುತ್ತಿದೆ. ಕಾರಂಜಿ ಸ್ಥಗಿತಗೊಂಡಿದೆ. ಮಕ್ಕಳಿಗೆ ಜೋಕಾಲಿ, ಜಾರು ಬಂಡಿ ಯಾವುದೂ ಕಾಣುತ್ತಿಲ್ಲ.&lt;/p&gt;&lt;p&gt;ಇದೀಗ ಬೇಸಿಗೆ ಪ್ರಾರಂಭವಾಗಿದ್ದು, ಒಂದಿಷ್ಟು ಹುಲ್ಲುಹಾಸು ನಿರ್ಮಿಸಿ, ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಟ್ಟು, ನಿತ್ಯ ಅವುಗಳಿಗೆ ನೀರಿನ ವ್ಯವಸ್ಥೆ ಮಾಡಿ ಬೆಳೆಸುವ ಜತೆಗೆ ಇಲ್ಲಿಗೆ ಬಂದು ಊಟ ಮಾಡಿ ವಿಶ್ರಾಂತಿ ಪಡೆಯುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ.&lt;/p&gt;&lt;p&gt;ಪುರಸಭೆಯಿಂದ ಹಸಿರು ಹೆಚ್ಚಿಸುವ ಕೆಲಸ ಮಾಡಿ, ಕಾರಂಜಿ ಪ್ರಾರಂಭಿಸಿ, ಬೆಳಗ್ಗೆ ಹಾಗೂ ಸಂಜೆ ಪಟ್ಟಣದ ಹಿರಿಯ ನಾಗರಿಕರು, ಮಹಿಳೆಯರು ಬಂದು ವಾಯು ವಿಹಾರ ಮಾಡಿ, ವಿಶ್ರಾಂತಿ ಪಡೆಯುವಂತೆ ಅನುಕೂಲ ಮಾಡಿಕೊಡಬೇಕೆನ್ನುವುದು ಸ್ಥಳೀಯರ ಒತ್ತಾಯವಾಗಿದೆ.&lt;/p&gt;&lt;h2&gt;ಗಮನ ಹರಿಸಲಿ&lt;/h2&gt;&lt;p&gt;1992ರಲ್ಲಿ ತಾವು ಪುರಸಭೆ ಅಧ್ಯಕ್ಷರಾಗಿದ್ದಾಗ ಸಾರ್ವಜನಿಕರ ವಂತಿಕೆ ಹಣದಿಂದ ಕಾರಂಜಿ ವ್ಯವಸ್ಥೆ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಇಂದು ಈ ಉದ್ಯಾನ ಹಸಿರಿಲ್ಲದೇ ಬಿಕೋ ಎನ್ನುತ್ತಿರುವುದು ವಿಷಾದನೀಯ. ಪುರಸಭೆ ಅಧಿಕಾರಿಗಳು ಗಮನಹರಿಸಿ ಮತ್ತೆ ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ವೈ.ಎನ್. ಗೌಡರ್ ತಿಳಿಸಿದರು.&lt;/p&gt;]]></content:encoded>
            <category>gadag</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/gadag-mundargi-park-falls-into-neglect-once-vibrant-public-space-now-lies-abandoned-gdp/articleshow-yrgglg7"/>
        </item>
        <item>
            <title><![CDATA[ಬೆಲೆ ಏರಿಕೆ ನಡುವೆಯೂ ಗದಗ ಜಿಲ್ಲೆಯಲ್ಲಿ ಬರೋಬ್ಬರಿ ₹340 ಕೋಟಿ ಮೊತ್ತದ ಮದ್ಯ ಬಿಕರಿ]]></title>
            <link>https://kannada.asianetnews.com/karnataka-districts/despite-price-hike-liquor-worth-rs-340-crore-sold-in-gadag-district-mrq/articleshow-zszhg1t</link>
            <guid isPermaLink="true">https://kannada.asianetnews.com/karnataka-districts/despite-price-hike-liquor-worth-rs-340-crore-sold-in-gadag-district-mrq/articleshow-zszhg1t</guid>
            <pubDate>Tue, 24 Mar 2026 05:40:06 +0530</pubDate>
            <description><![CDATA[&lt;p&gt;2025-26ನೇ ಆರ್ಥಿಕ ವರ್ಷದಲ್ಲಿ, ಸರ್ಕಾರದ ಬೆಲೆ ಏರಿಕೆಯ ಹೊರತಾಗಿಯೂ ಗದಗ ಜಿಲ್ಲೆಯಲ್ಲಿ ಮದ್ಯ ಮಾರಾಟದಿಂದ ದಾಖಲೆಯ ಆದಾಯ ಸಂಗ್ರಹವಾಗಿದೆ. ಲಿಕ್ಕರ್ ಮಾರಾಟದ ಪ್ರಮಾಣ ಸ್ವಲ್ಪ ಕುಸಿದರೂ ಆದಾಯದಲ್ಲಿ ₹35 ಕೋಟಿ ಹೆಚ್ಚಳವಾಗಿದ್ದರೆ, ಬಿಯರ್ ಮಾರಾಟ ಮತ್ತು ಆದಾಯ ಎರಡರಲ್ಲೂ ಕುಸಿತ ಕಂಡುಬಂದಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdvmsxf25phepk7k0rwc66ts,imgname-liquor-sales-1767233091042.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಕುಮಾರ ಕುಷ್ಟಗಿ&lt;/strong&gt;&lt;/p&gt;&lt;p&gt;&lt;strong&gt;ಗದಗ: &lt;/strong&gt;ಸರ್ಕಾರದ ಪ್ರಮುಖ ಆದಾಯದ ಮೂಲವಾದ ಅಬಕಾರಿ ಇಲಾಖೆಯಲ್ಲಿ 2025- 26ನೇ ಆರ್ಥಿಕ ವರ್ಷದಲ್ಲಿ ದಾಖಲೆ ಪ್ರಮಾಣದ ಮದ್ಯ ವಹಿವಾಟು ನಡೆದಿದ್ದು, ಶಾಶ್ವತ ಬರಪೀಡಿತ ಜಿಲ್ಲೆಯಿಂದಲೇ ಸುಮಾರು ₹400 ಕೋಟಿ ಮದ್ಯ ಮಾರಾಟವಾಗಿದೆ.&lt;/p&gt;&lt;p&gt;2025ರ ಏಪ್ರಿಲ್&zwnj;ನಿಂದ ಅನೇಕ ಮದ್ಯಗಳ ಮತ್ತು ಬಿಯರ್&zwnj;ಗಳ ಬೆಲೆಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದ್ದರೂ ಜಿಲ್ಲೆಯ ಮದ್ಯಪ್ರಿಯರು ಮಾತ್ರ ಇದ್ಯಾವುದಕ್ಕೂ ತಲೆಬಿಸಿ ಮಾಡಿಕೊಳ್ಳದೇ ಹೆಚ್ಚೆಚ್ಚು ಖರೀದಿ ಮಾಡಿದ ಹಿನ್ನೆಲೆ 2024- 25ನೇ ಸಾಲಿಗಿಂತ 2025- 26ನೇ ಸಾಲಿನಲ್ಲಿ ಲಿಕ್ಕರ್ ಮತ್ತು ಬಿಯರ್ (ಬಾಕ್ಸ್&zwnj;ಗಳ ಲೆಕ್ಕದಲ್ಲಿ) ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡಿದ್ದರೂ ಬೆಲೆಗಳಲ್ಲಿ ಭಾರಿ ಏರಿಕೆಯಿಂದಾಗಿ ಅಬಕಾರಿ ಆದಾಯ ಅಧಿಕವಾಗಿದೆ.&lt;/p&gt;&lt;h2&gt;&lt;strong&gt;ಮಾರಾಟ ವಿವರ&lt;/strong&gt;&lt;/h2&gt;&lt;p&gt;B2024- 25ನೇ ಸಾಲಿನಲ್ಲಿ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) 8.40 ಲಕ್ಷ ಬಾಕ್ಸ್ ಮಾರಾಟದಿಂದ ₹306.34 ಕೋಟಿ ವ್ಯವಹಾರ ನಡೆದಿತ್ತು. 2025- 26ನೇ ಸಾಲಿನಲ್ಲಿ ಬೆಲೆ ಏರಿಕೆ ಹಾಗೂ ನಾನಾ ಕಾರಣದಿಂದ 8.35 ಲಕ್ಷ ಬಾಕ್ಸ್ (ಕಳೆದ ಬಾರಿಗಿಂತ 5 ಲಕ್ಷ ಕಡಿಮೆ) ಮಾರಾಟವಾಗಿದೆ. ಆದರೆ, ₹340.54 ಕೋಟಿ ಮೊತ್ತದ ವ್ಯವಹಾರ ದಾಖಲಾಗಿದೆ. ಕಳೆದ ಬಾರಿಗಿಂತ ಲಿಕ್ಕರ್ ಮಾರಾಟದಲ್ಲಿ ₹35 ಕೋಟಿ ಮೊತ್ತದ ವ್ಯವಹಾರ ಅಧಿಕವಾಗಿದೆ.&lt;/p&gt;&lt;h3&gt;&lt;strong&gt;ಬೆಲೆ ಏರಿಕೆ ಬಿಸಿ ಬಿಯರ್&zwnj;ಗೆ&lt;/strong&gt;&lt;/h3&gt;&lt;p&gt;ಬಿಯರ್ ಮಾರಾಟದಲ್ಲಿ ಅಬಕಾರಿ ಇಲಾಖೆ ಕಳೆದ ಬಾರಿಗಿಂತ ಪ್ರಸಕ್ತ ಸಾಲಿನಲ್ಲಿ ₹3 ಕೋಟಿ ಮೊತ್ತದ ಕಡಿಮೆ ಪ್ರಗತಿ ಸಾಧಿಸಿದೆ. ಬಿಯರ್ ದರದಲ್ಲಿ ಸರ್ಕಾರ ಮಾಡಿರುವ ಭಾರಿ ಪ್ರಮಾಣದ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣವಾಗಿದೆ. 2024- 25ನೇ ಸಾಲಿನಲ್ಲಿ 4.09 ಲಕ್ಷ ಬಾಕ್ಸ್ ಮಾರಾಟವಾಗಿ, 50.05 ಕೋಟಿ ಆರ್ಥಿಕ ಸಂಪನ್ಮೂಲ ಹರಿದು ಬಂದಿತ್ತು. 2025- 26ನೇ ಸಾಲಿನಲ್ಲಿ 3.38 ಲಕ್ಷ ಬಾಕ್ಸ್(ಕಳೆದ ಬಾರಿಗಿಂತ 71 ಸಾವಿರ ಬಾಕ್ಸ್ ಕಡಿಮೆ) ಮಾರಾಟವಾಗಿ ₹47.05 ಕೋಟಿ ಮೊತ್ತದ ವಹಿವಾಟು ಬಿಯರ್ ಮಾರಾಟದಿಂದ ನಡೆದಿದೆ.&lt;/p&gt;&lt;p&gt;ಅಲ್ಪ ಕುಸಿತ: ಜಿಲ್ಲೆಯಲ್ಲಿ ಇಲಾಖೆ ನಿಗದಿ ಮಾಡಿದ ಗುರಿ ಸಾಧಿಸಲಾಗಿದೆ. ಮದ್ಯ ಮಾರಾಟದಲ್ಲಿ ಅಲ್ಪ ಕುಸಿತವಾಗಿದೆ. ಆದರೆ ಉತ್ತಮ ಆರ್ಥಿಕ ವಹಿವಾಟು ನಡೆದಿದ್ದು ಸಂಪನ್ಮೂಲವೂ ಹರಿದು ಬಂದಿದೆ ಎಂದು ಅಬಕಾರಿ ಡಿಸಿ ಲಕ್ಷ್ಮಿ ಎನ್. ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಮದ್ಯ ಮಾರಾಟದ ವಿವರ(ಬಾಕ್ಸ್&zwnj;ಗಳ ಲೆಕ್ಕದಲ್ಲಿ)&lt;/strong&gt;&lt;/p&gt;&lt;p&gt;ವಲಯ- 2025- 26 -2024-25&lt;/p&gt;&lt;p&gt;ಗದಗ- &amp;nbsp;293535 -294012&lt;/p&gt;&lt;p&gt;ಮುಂಡರಗಿ -104099- 106798&lt;/p&gt;&lt;p&gt;ನರಗುಂದ -97085- 98484&lt;/p&gt;&lt;p&gt;ರೋಣ -173831- 171667&lt;/p&gt;&lt;p&gt;ಶಿರಹಟ್ಟಿ- 166109 -169667&lt;/p&gt;&lt;p&gt;&lt;strong&gt;ಬಿಯರ್ ಮಾರಾಟ(ಬಾಕ್ಸ್&zwnj;ಗಳಲ್ಲಿ)&lt;/strong&gt;&lt;/p&gt;&lt;p&gt;ವಲಯ -2025-26 - 2024- 25&lt;/p&gt;&lt;p&gt;ಗದಗ- 141172- 170509&lt;/p&gt;&lt;p&gt;ಮುಂಡರಗಿ- 30782-36198&lt;/p&gt;&lt;p&gt;ನರಗುಂದ- 28748- 34537&lt;/p&gt;&lt;p&gt;ರೋಣ-79671- 96839&lt;/p&gt;&lt;p&gt;ಶಿರಹಟ್ಟಿ- 62433- 73635&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/despite-price-hike-liquor-worth-rs-340-crore-sold-in-gadag-district-mrq/articleshow-zszhg1t"/>
        </item>
    </channel>
</rss>
