<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 16 Jul 2026 12:16:26 +0530</lastBuildDate>
        <atom:link href="https://kannada.asianetnews.com/rss/gadag" rel="self" type="application/rss+xml"/>
        <item>
            <title><![CDATA[Gadag: ಗದುಗಿನ ಐತಿಹಾಸಿಕ ಸರಸ್ವತಿ ದೇಗುಲದಲ್ಲಿ ದೇವಿ ಮೂರ್ತಿ ಭಗ್ನಗೊಳಿಸಿ ವಿಕೃತಿ!]]></title>
            <link>https://kannada.asianetnews.com/karnataka-districts/gadag-histroric-saraswati-temple-idol-of-goddess-vandalism-by-miscreants-rav/articleshow-2kyud4a</link>
            <guid isPermaLink="true">https://kannada.asianetnews.com/karnataka-districts/gadag-histroric-saraswati-temple-idol-of-goddess-vandalism-by-miscreants-rav/articleshow-2kyud4a</guid>
            <pubDate>Mon, 13 Jul 2026 06:47:22 +0530</pubDate>
            <description><![CDATA[&lt;p&gt;ಗದಗದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಸರಸ್ವತಿ ದೇವಿಯ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. 8ನೇ ಶತಮಾನಕ್ಕೆ ಸೇರಿದ ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಲ್ಲಿದ್ದು, ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxcg4qqdtxdx54hxkzxxq8y0,imgname-----------------------2026-07-13t063152.456-1783904755437.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜು.13): &lt;/strong&gt;ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಸರಸ್ವತಿ ದೇವಿಯ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h2&gt;ಗದಗ ಐತಿಹಾಸಿಕ ಸರಸ್ವತಿ ದೇಗುಲದ ದೇವಿ ಮೂರ್ತಿ ಭಗ್ನ!&lt;/h2&gt;&lt;p&gt;ಐತಿಹಾಸಿಕ ಮಹತ್ವವುಳ್ಳ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಸರಸ್ವತಿ ದೇವಸ್ಥಾನದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ದುಷ್ಕರ್ಮಿಗಳು ದೇವಿಯ ಮೂರ್ತಿಯ ಎದೆಭಾಗವನ್ನು ಹಾನಿಗೊಳಿಸಿ ವಿಕೃತಿ ಮೆರೆದಿದ್ದಾರೆ. ಕಳೆದ ರಾತ್ರಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಶನಿವಾರ ಮಧ್ಯಾಹ್ನ ವಿಷಯ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;8ನೇ ಶತಮಾನದ ಗದಗನ ಸರಸ್ವತಿ ದೇವಾಲಯ&lt;/h3&gt;&lt;p&gt;ಈ ದೇವಾಲಯವು ಸುಮಾರು 8ನೇ ಶತಮಾನಕ್ಕೆ ಸೇರಿದ್ದು, ತನ್ನ ವಾಸ್ತುಶಿಲ್ಪ ವೈಭವಕ್ಕೆ ಹೆಸರುವಾಸಿಯಾಗಿದೆ. ಪ್ರಸ್ತುತ ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಲ್ಲಿದೆ. ಇಂತಹ ಸೂಕ್ಷ್ಮ ಹಾಗೂ ಐತಿಹಾಸಿಕ ಮಹತ್ವದ ಸ್ಥಳದಲ್ಲಿ ಭದ್ರತಾಲೋಪ ಉಂಟಾಗಿರುವುದು ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ಘಟನೆ ನಡೆದ ತಕ್ಷಣವೇ ಗದಗ ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿರುವ ಕುರುಹುಗಳನ್ನು ಸಂಗ್ರಹಿಸಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ಅಡವೀಂದ್ರಸ್ವಾಮಿ ಮಠದಲ್ಲಿ ಶಿವಾನುಭವ&lt;/strong&gt;&lt;/p&gt;&lt;p&gt;ಗದಗ: \Bಪುಣ್ಯಕ್ಷೇತ್ರಗಳ ದರ್ಶನದಿಂದ ಮಾನವ ಜನ್ಮ ಸಾರ್ಥಕವಾಗುತ್ತದೆ. ಕೈಕಾಲು ಗಟ್ಟಿ ಇರುವಾಗಲೇ ಯಾತ್ರೆ ಮಾಡಬೇಕೆಂದು ಅಡ್ನೂರು ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ತಿಳಿಸಿದರು.&lt;/p&gt;&lt;p&gt;ನಗರದ ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಜರುಗಿದ 349ನೇ ಶಿವಾನುಭವ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.&lt;/p&gt;&lt;p&gt;ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಮಾತನಾಡಿ, ಲಿಂ. ಗಂಗಾಧರ ಸ್ವಾಮಿಗಳು, ಕೆ. ಸುಧಾಕರ್ ರಾವ್, ಡಾ. ಬಿ.ಎಫ್. ದಂಡಿ ಹಾಗೂ ಲಿಂ. ಪಾಂಡುರಂಗ ಕುರ್ತುಕೋಟಿ ಅವರ ಸೇವೆಯನ್ನು ಸ್ಮರಿಸಿ, ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ವಿರೂಪಾಕ್ಷಯ್ಯ ಹೊಸಳ್ಳಿಮಠ್ ಕೇದಾರ, ಬದರಿನಾಥ್ ಮಹಿಮೆ ಕುರಿತು ಉಪನ್ಯಾಸ ನೀಡಿದರು.&lt;/p&gt;&lt;p&gt;ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಯಾತ್ರೆಯು ಮನಸ್ಸಿಗೆ ಶಾಂತಿ ನೀಡುತ್ತದೆ ಎಂದರು. ಸುಜಾತಾ ದೊಡ್ಡಮನಿ ಹಾಗೂ ಚನ್ನಬಸಯ್ಯ ಹೇಮಗಿರಿಮಠ ನುಡಿನಮನ ಸಲ್ಲಿಸಿದರು.&lt;/p&gt;&lt;p&gt;ಇದೇ ವೇಳೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿದ ವಿರೂಪಾಕ್ಷಯ್ಯ ಹೊಸಳ್ಳಿಮಠ, ವಿಜಯಕುಮಾರ ಹಿರೇಮಠ, ಡಾ. ರಾಜೇಂದ್ರ ಎಸ್. ಗಡಾದ, ಜ್ಯೋತಿ ಗಡಾದ, ಕಬಾಡಿ ಸಹೋದರ ದಂಪತಿಗಳನ್ನು ಹಾಗೂ ಸವಿತಾ ಹೊಸಳ್ಳಿಮಠ, ಗುರಪ್ಪ ನಿಡಗುಂದಿ ದಂಪತಿ ಮತ್ತು ಶ್ರೀಮತಿ ಬಳಿಗಾರ ಅವರನ್ನು ಸತ್ಕರಿಸಲಾಯಿತು.&lt;/p&gt;&lt;p&gt;ವೀರೇಶ್ವರ ಸ್ವಾಮಿಗಳಿಂದ ವೇದಘೋಷ ನಡೆಯಿತು. ಪ್ರಕಾಶ ಬಂಡಿ ಸ್ವಾಗತಿಸಿದರು, ವಿ.ಎಂ. ಕುಂದ್ರಾಳಹಿರೇಮಠ ನಿರೂಪಿಸಿದರು, ಎಂ.ಎಂ. ಜೋಗಿನ ವಂದಿಸಿದರು. ಚನ್ನಬಸಪ್ಪ ಕಾಳಗಿ, ಪ್ರೊ. ಸಿ. ಲಿಂಗಾರೆಡ್ಡಿ ಉಪಸ್ಥಿತರಿದ್ದರು. ಬಿ.ಎಂ. ಬಿಳೆಯಲಿ, ಜಿ.ಎಂ. ಯಾನಂ ಶೆಟ್ಟಿ, ಡಾ. ಎಲ್.ವಿ. ಪಾಟೀಲ್, ಸುಶೀಲಾ ಕೋಟಿ ಮತ್ತಿತರರು ಪಾಲ್ಗೊಂಡಿದ್ದರು.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-histroric-saraswati-temple-idol-of-goddess-vandalism-by-miscreants-rav/articleshow-2kyud4a"/>
        </item>
        <item>
            <title><![CDATA[ಅಪ್ಪಾ ಐ ಲವ್ ಯೂ ಪಾ.., ಅನ್ನೋ ಮಗುವನ್ನ ಬೈಕ್ ಸೈಡ್ ಬ್ಯಾಗ್‌ನಲ್ಲಿ ಕೂರಿಸಿದ ಬೆಪ್ಪ! ಮುಂದೇನಾಯ್ತು ನೀವೇ ನೋಡ್ರಪ್ಪ..]]></title>
            <link>https://kannada.asianetnews.com/viral/gadag-father-puts-child-in-bike-side-bag-karnataka-police-case-viral-photo/articleshow-55nnuk9</link>
            <guid isPermaLink="true">https://kannada.asianetnews.com/viral/gadag-father-puts-child-in-bike-side-bag-karnataka-police-case-viral-photo/articleshow-55nnuk9</guid>
            <pubDate>Thu, 25 Jun 2026 12:50:43 +0530</pubDate>
            <description><![CDATA[ಗದಗದಲ್ಲಿ ತಂದೆಯೊಬ್ಬ ತನ್ನ ಮಗುವನ್ನು ಬೈಕ್&zwnj;ನ ಸೈಡ್ ಬ್ಯಾಗ್&zwnj;ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ದೃಶ್ಯ ವೈರಲ್ ಆಗಿದೆ. ಈ ಬೇಜವಾಬ್ದಾರಿ ಕೃತ್ಯಕ್ಕಾಗಿ ಪೊಲೀಸರು ಆತನನ್ನು ಪತ್ತೆಹಚ್ಚಿ, ದಂಡ ವಿಧಿಸಿ, ಮಗುವಿನ ಸುರಕ್ಷತೆಯ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvytd2n4rzvwxbvmb5zy3k9b,imgname-gadag-father-puts-child-in-bike-side-bag-1782372010660.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜೂ.25): ಹೆ&lt;/strong&gt;ತ್ತವರಿಗೆ ತಮ್ಮ ಮಕ್ಕಳೇ ಪ್ರಾಣಕ್ಕಿಂತ ಹೆಚ್ಚು. ಮಕ್ಕಳ ಸುರಕ್ಷತೆಗಾಗಿ ಪೋಷಕರು ಎಷ್ಟೇ ಕಷ್ಟ ಬಂದರೂ ಎದುರಿಸುತ್ತಾರೆ. ಆದರೆ, ಗದಗ ಜಿಲ್ಲೆಯಲ್ಲಿ ತಂದೆಯೊಬ್ಬನ ಅತಿರೇಕದ ವರ್ತನೆ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವನ್ನು ಪ್ರೀತಿಯಿಂದ ಎತ್ತಿಕೊಳ್ಳುವ ಬದಲು, ಬೈಕ್&zwnj;ನ ಲಗೇಜ್ ಇಡುವ ಸೈಡ್ ಬ್ಯಾಗ್&zwnj;ನಲ್ಲಿ ಮಗುವನ್ನು ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಗದಗ ನಗರದ ಟಿಪ್ಪು ಸರ್ಕಲ್&zwnj;ನಿಂದ ಡಿಸಿ ಕಚೇರಿ ಕಡೆಗೆ ತೆರಳುತ್ತಿದ್ದ ಬೈಕ್ ಸವಾರನೊಬ್ಬ, ತನ್ನ ಪುಟ್ಟ ಕಂದಮ್ಮನನ್ನು ಬೈಕ್&zwnj;ನ ಸೈಡ್ ಪ್ಯಾಕೆಟ್&zwnj;ನಲ್ಲಿ (ಲಗೇಜ್ ಬ್ಯಾಗ್) ಲಗೇಜಿನಂತೆ ತುರುಕಿದ್ದನು. ಮಗು ಆ ಬ್ಯಾಗ್&zwnj;ನೊಳಗೆ ಇಕ್ಕಟ್ಟಿನಲ್ಲಿ ಕುಳಿತಿದ್ದು, ಮಗುವಿನ ತಲೆ ಮಾತ್ರ ಹೊರಗೆ ಕಾಣುತ್ತಿತ್ತು. ಈ ದೃಶ್ಯವನ್ನು ನೋಡಿದ ದಾರಿಹೋಕರು ತಕ್ಷಣ ಇದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ವೈರಲ್ ಆದ ಫೋಟೋ, ಪೊಲೀಸರ ಎಂಟ್ರಿ:&lt;/strong&gt;&lt;/h2&gt;&lt;p&gt;ಈ ಬೇಜವಾಬ್ದಾರಿ ತಂದೆಯ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗದಗ ಪೊಲೀಸರು, ಬೈಕ್ ಸಂಖ್ಯೆಯ ಆಧಾರದ ಮೇಲೆ ವ್ಯಕ್ತಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಪೇಟೆಗೆ ಹೋಗಿ ವಾಪಸ್ ಬರುವಾಗ ಈ ರೀತಿ ಮಾಡಿರುವುದಾಗಿ ವ್ಯಕ್ತಿ ಸಮರ್ಥನೆ ನೀಡಿದ್ದಾನೆ ಎನ್ನಲಾಗಿದೆ. ಆದರೆ, ಮಗುವಿನ ಜೀವದ ಜೊತೆ ಚೆಲ್ಲಾಟವಾಡಿದ ಈತನಿಗೆ ಪೊಲೀಸರು ಸರಿಯಾಗಿ ಬುದ್ಧಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ದಂಡ ಮತ್ತು ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಪೊಲೀಸರು ಈ 'ಬೆಪ್ಪ' ಅಪ್ಪನಿಗೆ ಭಾರೀ ದಂಡ ವಿಧಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯವೆಸಗಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸಣ್ಣದೊಂದು ಆಯತಪ್ಪಿದರೂ ಮಗುವಿನ ಜೀವಕ್ಕೆ ಅಪಾಯವಿತ್ತು ಎಂದು ಸಾರ್ವಜನಿಕರು ಈತನ ಹುಚ್ಚಾಟದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೋಟಾರು ವಾಹನ ಕಾಯ್ದೆ ಮಾತ್ರವಲ್ಲದೆ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಇದೊಂದು ಗಂಭೀರ ಅಪರಾಧವಾಗಿದೆ.&lt;/p&gt;]]></content:encoded>
            <category>gadag</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/gadag-father-puts-child-in-bike-side-bag-karnataka-police-case-viral-photo/articleshow-55nnuk9"/>
        </item>
        <item>
            <title><![CDATA[ಮಂಡ್ಯ ಬಳಿಕ ಗದಗನಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಗುತ್ತಿಗೆ ಪಡಿತೀರೋ ಹೊರರಾಜ್ಯದ ಉದ್ಯಮಿಗಳು]]></title>
            <link>https://kannada.asianetnews.com/karnataka-districts/businessmen-from-other-states-are-leasing-thousands-of-acres-of-agriculture-land-in-gadag-mundaragi-mrq/articleshow-63y9avs</link>
            <guid isPermaLink="true">https://kannada.asianetnews.com/karnataka-districts/businessmen-from-other-states-are-leasing-thousands-of-acres-of-agriculture-land-in-gadag-mundaragi-mrq/articleshow-63y9avs</guid>
            <pubDate>Sat, 13 Jun 2026 10:53:46 +0530</pubDate>
            <description><![CDATA[ಮುಂಡರಗಿ ತಾಲೂಕಿನಲ್ಲಿ, ಹೊರರಾಜ್ಯದ ಉದ್ಯಮಿಗಳು ರೈತರಿಗೆ ಅಧಿಕ ಹಣದಾಸೆ ತೋರಿಸಿ ದಾಳಿಂಬೆ ಬೆಳೆಯಲು ಸಾವಿರಾರು ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆಯುತ್ತಿದ್ದಾರೆ. ಈ ಬೆಳವಣಿಗೆಯು ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ನಾಶ, ಜಲ ಮಾಲಿನ್ಯ ಮತ್ತು ಪರಿಸರ ಹಾನಿಯಂತಹ ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kty6gn0k768wafqk9kmrt61p,imgname-gadag-farmers-1781277414419.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಿಯಾಜಅಹ್ಮದ ಎಂ. ದೊಡ್ಡಮನಿ&lt;/strong&gt;&lt;/p&gt;&lt;p&gt;&lt;strong&gt;ಗದಗ: &lt;/strong&gt;ಬಡತನವನ್ನೇ ಬಂಡವಾಳ ಮಾಡಿಕೊಂಡಿರುವ ಹೊರರಾಜ್ಯದ ಉದ್ಯಮಿಗಳು ರೈತರಿಗೆ ಹಣದಾಸೆ ತೋರಿಸಿ ಭೂಮಿಯ ಫಲವತ್ತತೆಯನ್ನು ನುಂಗುವ ದಾಳಿಂಬೆಯನ್ನು ಮುಂಡರಗಿ ತಾಲೂಕಿನಾದ್ಯಂತ ಸುಮಾರು 2500 ಎಕರೆಯಲ್ಲಿ ಬೆಳೆಯಲು ಮುಂದಾಗಿದ್ದಾರೆ. ಇದರ ಅರಿವಿಲ್ಲದ ರೈತರು ದಾಳಿಂಬೆ ಬೆಳೆ ಬೆಳೆಯುವುದಕ್ಕೆ ಭೂಮಿಯನ್ನು ಗುತ್ತಿಗೆ ಕೊಡಲಾರಂಭಿಸಿದ್ದಾರೆ.&lt;/p&gt;&lt;p&gt;ಡಂಬಳ ಹೋಬಳಿಯ ಗ್ರಾಮಗಳು ಮಳೆಯಾಶ್ರಿತ ಮತ್ತು ಸಣ್ಣನೀರಾವರಿ ಆಶ್ರಿತ ಪ್ರದೇಶವಾಗಿರುವುದರ ಜತೆಗೆ ಫಲವತ್ತತೆಯ ಕೆಂಪು, ಕಪ್ಪುಮಣ್ಣಿನಿಂದ ಕೂಡಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಈ ಪ್ರದೇಶದಲ್ಲಿ ಉತ್ತಮ ವಾತಾವರಣವಿದೆ. ಕೊಳವೆ ಬಾವಿ ನೀರಿನಿಂದ ಹಲವಾರು ರೈತರು ಡ್ರ್ಯಾಗನ್ ಫ್ರುಟ್, ಮಾವು, ಅಡಕೆ, ಬಾಳೆ, ಟೊಮೇಟೊ, ಬದನೆಕಾಯಿ ಸೇರಿ ಹಲವು ಮಾದರಿಯ ಬೆಳೆ ಬೆಳೆದು ಜೀವನ ಕಟ್ಟಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಬೇರೆ ರಾಜ್ಯದವರ ಕೈಯಲ್ಲಿ ಭೂಮಿ&lt;/strong&gt;&lt;/h2&gt;&lt;p&gt;ಶ್ರಮ ಪಡದೆ ಇರುವವರು ಮತ್ತು ಆಳು ಸಿಗದೆ ಇರುವುದರಿಂದ, ನೀರು, ಹಣದ ಅಭಾವ ಹಾಗೂ ಬೆಳೆ ಬೆಳೆಯಲು ಸಾಧ್ಯವಾಗದ ರೈತರ ಅಸಹಾಯಕತೆಯನ್ನು ಮನಗಂಡಿರುವ ಬೇರೆ ರಾಜ್ಯದ ಉದ್ಯಮಿಗಳು ಡಂಬಳ ಹೋಬಳಿಯ ನೂರಾರು ರೈತರ ಮನವೊಲಿಸಿ ದಾಳಿಂಬೆ ಬೆಳೆಯುವುದಕ್ಕೆ ಭೂಮಿಯನ್ನು ಪಡೆದುಕೊಳ್ಳುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಹಣದ ಆಮಿಷ&lt;/strong&gt;&lt;/h3&gt;&lt;p&gt;ಸ್ಥಳಿಯ ರೈತರು ಎಕರೆಗೆ ₹5 ಸಾವಿರದಿಂದ ₹10 ಸಾವಿರದವರೆಗೆ ವಾರ್ಷಿಕ ಗುತ್ತಿಗೆ ಕೊಡುತ್ತಿದ್ದರು. ಆದರೆ ಬೇರೆ ರಾಜ್ಯದವರು ರೈತರ ಜಮೀನಿನಲ್ಲಿ ಅವರೇ ಕೊಳವೆಬಾವಿ ಕೊರೆಸಿ ಎಕರೆಗೆ ₹25 ಸಾವಿರ ₹30ಸಾವಿರದ ವರೆಗೆ ಹಣ ನೀಡುವ ಆಮಿಷಕ್ಕೆ ಒಳಪಡಿಸಿ ದಾಳಿಂಬೆ ಬೆಳೆಯಲು ಭೂಮಿ ನೀಡುವಂತೆ ಮಾಡುತ್ತಿದ್ದಾರೆ. ಇದಕ್ಕೆ ಒಪ್ಪಿ ರೈತರು ಜಮೀನಿನಲ್ಲಿ ದಾಳಿಂಬೆ ಬೆಳೆಯಲು ಭೂಮಿ ಬಿಟ್ಟು ಕೊಡುತ್ತಿದ್ದಾರೆ. ಈಗಾಗಲೇ ಮುಂಡರಗಿ ತಾಲೂಕಿನಾದ್ಯಂತ ನೂರಾರು ಹೆಕ್ಟೇರ್ ಜಮೀನಿನಲ್ಲಿ ದಾಳಿಂಬೆ ಬೆಳೆಯಲಾಗಿದೆ.&lt;/p&gt;&lt;p&gt;ಪೂರ್ವಜರಿಂದ ಹಿಡಿದು ತಮ್ಮ ಕುಟುಂಬಕ್ಕೆ ವಿವಿಧ ಧಾನ್ಯ, ಕಾಳುಕಡಿ, ದನಕರುಗಳಿಗೆ ಮೇವು ಬೆಳೆದು ಜೀವನಕ್ಕೆ ಆಶ್ರಯವಾಗಿದ್ದ ಫಲವತ್ತಾದ ಭೂಮಿಯನ್ನು ಬೇರೆ ರಾಜ್ಯದವರಿಗೆ ದಾಳಿಂಬೆ ಬೆಳೆಯಲು ಹಣದಾಸೆಗೆ 10 ವರ್ಷ, 20 ವರ್ಷ, 30 ವರ್ಷಗಳ ಗುತ್ತಿಗೆ ನೀಡುತ್ತಿದ್ದಾರೆ. ಕೆಲವೆಡೆ ಜಮೀನನ್ನೆ ಮಾರುತ್ತಿರುವುದು ವಿಪರ್ಯಾಸದ ಸಂಗತಿ.&lt;/p&gt;&lt;h3&gt;&lt;strong&gt;ಬೇರೆ ರಾಜ್ಯದ ಕೂಲಿ ಆಳು&lt;/strong&gt;&lt;/h3&gt;&lt;p&gt;ದಾಳಿಂಬೆ ಬೆಳೆ ಬೆಳೆಯಲು ರೈತರು ಭೂಮಿ ಬಿಟ್ಟು ಕೊಟ್ಟರಷ್ಟೇ ಸಾಕು. ಹೊರ ರಾಜ್ಯಗಳಿಂದ ಕೂಲಿಯಾಳುಗಳನ್ನು ಕರೆತಂದು ಇಲ್ಲಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಸ್ಥಳೀಯ ರೈತರಿಗೆ ದಾಳಿಂಬೆ ಬೆಳೆ ಬೆಳೆಯುವ ಜ್ಞಾನವಿಲ್ಲ. ಬೆಳೆಗಳಿಗೆ ಬರುವ ರೋಗದ ಬಗ್ಗೆ ಎಚ್ಚರ ವಹಿಸುವುದಿಲ್ಲ. ಕೀಟನಾಶಕಗಳನ್ನು ಸಿಂಪರಣೆ ಮಾಡುವ ಅರಿವಿರುವುದಿಲ್ಲವೆಂಬ ಕಾರಣಕ್ಕೆ ಹೊರರಾಜ್ಯದಿಂದಲೇ ಕೂಲಿಯಾಳುಗಳನ್ನು ಇಲ್ಲಿಗೆ ಕರೆತಂದು ಕೆಲಸ ಮಾಡಿಸುವುದಕ್ಕೆ ಆಸಕ್ತಿ ವಹಿಸಿದ್ದಾರೆ.&lt;/p&gt;&lt;p&gt;&lt;strong&gt;ಅಡ್ಡ ಪರಿಣಾಮ&lt;/strong&gt;&lt;/p&gt;&lt;p&gt;ದಾಳಿಂಬೆ ಬೆಳೆಗಳಲ್ಲಿ ಕೀಟ ಹಾಗೂ ರೋಗ ನಿಯಂತ್ರಣಕ್ಕಾಗಿ ವ್ಯಾಪಕವಾಗಿ ರಾಸಾಯನಿಕ ಔಷಧಗಳನ್ನು ಸಿಂಪಡಿಸಲಾಗುತ್ತಿದೆ. ಆದರೆ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುವುದು, ಭೂಗರ್ಭ ಜಲ ಮಾಲಿನ್ಯಗೊಳ್ಳುವುದು ಹಾಗೂ ಬೆಳೆಗಳ ಪರಾಗಸ್ಪರ್ಶ ಮಾಡುವ ಜೇನುನೊಣಗಳಂತಹ ಉಪಯುಕ್ತ ಕೀಟಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಔಷಧ ಬಳಕೆಯನ್ನು ನಿಯಂತ್ರಿತವಾಗಿ ನಡೆಸಬೇಕು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ರೈತರ ಹೇಳಿಕೆ&lt;/strong&gt;&lt;/p&gt;&lt;p&gt;ಡಂಬಳ ಹೋಬಳಿಯಾದ್ಯಂತ ಹಲವು ಕೆರೆಗಳಿವೆ. ಕೆಲವೆಡೆ ಬೋರವೆಲ್&zwnj;ಗಳೂ ಇದ್ದು, ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿದ್ದು, ಇದರಿಂದ ನೀರಿನ ಕೊರತೆ ಇಲ್ಲ. ಹಣದ ಆಸೆಗೆ ರೈತರು ಬೇರೆ ರಾಜ್ಯದಿಂದ ಬಂದು ದಾಳಿಂಬೆ ಬೆಳೆಯುವ ಉದ್ಯಮಿಗಳಿಗೆ ಫಲವತ್ತಾದ ಭೂಮಿ ಕೊಡುತ್ತಿರುವುದು ಖೇದಕರ.&lt;/p&gt;&lt;p&gt;ಮಂಜುನಾಥ ಬಿಸನಳ್ಳಿ, ರಾಜಪ್ಪ ಯಪ್ಪೇರಿ, ವೆಂಕಟೇಶ ತಳವಾರ, ಡಂಬಳ ಗ್ರಾಮದ ರೈತರು&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/businessmen-from-other-states-are-leasing-thousands-of-acres-of-agriculture-land-in-gadag-mundaragi-mrq/articleshow-63y9avs"/>
        </item>
        <item>
            <title><![CDATA[17 ಲಕ್ಷಕ್ಕೆ ಕೋಟ್ಯಂತರ ಮೌಲ್ಯದ 5 ಎಕರೆ ಕೃಷಿಭೂಮಿ ಕಬಳಿಕೆ? ದೂರು ದಾಖಲಿಸಿದ ನೊಂದ ರೈತ]]></title>
            <link>https://kannada.asianetnews.com/karnataka-districts/gadag-farmer-accused-of-grabbing-5-acres-of-agricultural-land-worth-crores-for-rs-17-lakhs-mrq/articleshow-7i48i8t</link>
            <guid isPermaLink="true">https://kannada.asianetnews.com/karnataka-districts/gadag-farmer-accused-of-grabbing-5-acres-of-agricultural-land-worth-crores-for-rs-17-lakhs-mrq/articleshow-7i48i8t</guid>
            <pubDate>Tue, 23 Jun 2026 08:11:55 +0530</pubDate>
            <description><![CDATA[&lt;p&gt;17 ಲಕ್ಷ ಸಾಲ ಪಡೆದ ರೈತನಿಗೆ ವಂಚಿಸಿ ಕೋಟ್ಯಂತರ ಮೌಲ್ಯದ 5 ಎಕರೆ ಜಮೀನನ್ನು ಬಡ್ಡಿ ದಂಧೆಕೋರರು ಕಬಳಿಸಿದ್ದಾರೆ. ಅಡಮಾನ ಪತ್ರದ ಬದಲು ಖರೀದಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಈ ಮೋಸ ಎಸಗಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs5c41phfdm780q6w04jgw2,imgname-agriculture-1782182187062.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ:&lt;/strong&gt; 17 ಲಕ್ಷ ಸಾಲ ಪಡೆದ ರೈತನ 5 ಎಕರೆ ಜಮೀನನ್ನೇ ಕಬಳಿಸಿದ ಘಟನೆಯೊಂದು ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹೊಸ ಮುಖ ಇದಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.&lt;/p&gt;&lt;p&gt;ಬೆಳಹೋಡ ಗ್ರಾಮದ ರೈತ ಮಹ್ಮದ್ ರಫೀಕ್ ದೊಡ್ಡಮನಿ ಹಾಗೂ ಅವರ ಸಹೋದರರು ಆರ್ಥಿಕ ಸಂಕಷ್ಟದ ಹಿನ್ನೆಲೆ ಖಾಸಗಿ ಬಡ್ಡಿ ದಂಧೆಕೋರರಲ್ಲಿ ₹17 ಲಕ್ಷ ಸಾಲ ಕೇಳಿದ್ದರು. ಅದಕ್ಕೆ ಒಪ್ಪಿದ ಅವರು ಮುಂಗಡವಾಗಿಯೇ ₹5 ಲಕ್ಷ ಬಡ್ಡಿ ಕಡಿತ ಮಾಡಿಕೊಂಡು ಕೇವಲ ₹12 ಲಕ್ಷ ಮಾತ್ರ ನೀಡಿದ್ದಾರೆ.&lt;/p&gt;&lt;p&gt;ಸಾಲದ ಭದ್ರತೆಯಾಗಿ ರೈತನ 5 ಎಕರೆ ಜಮೀನಿನ ದಾಖಲೆಗಳನ್ನು ಪಡೆದುಕೊಂಡ ಆರೋಪಿಗಳು, ಅಡಮಾನ ನೋಂದಣಿ ಮಾಡಿಕೊಳ್ಳುವುದಾಗಿ ನಂಬಿಸಿ, ಅಡಮಾನ ಪತ್ರದ ಬದಲಿಗೆ ಖರೀದಿ ಪತ್ರ ಸಿದ್ಧಪಡಿಸಿ, ಶೇಷಗಿರಿಸಾ ಬಾಕಳೆ ಹೆಸರಿಗೆ ಜಮೀನಿನ ಖರೀದಿ ಪತ್ರ ಮಾಡಿಸಲಾಗಿದೆ. ಈ ಬಡ್ಡಿ ದಂದೆಕೋರರು ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.&lt;/p&gt;&lt;p&gt;ಕೋಟ್ಯಂತರ ಮೌಲ್ಯದ 5 ಎಕರೆ ಜಮೀನನ್ನು ಕಳೆದುಕೊಂಡ ರೈತ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಸಂಪರ್ಕಿಸಿ ದೂರು ಸಲ್ಲಿಸಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಎಸ್&zwnj;ಪಿ ತಕ್ಷಣ ತನಿಖೆಗೆ ಸೂಚನೆ ನೀಡಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;&lt;strong&gt;ರೌಡಿಶೀಟರ್ &amp;nbsp;ಬಂಧನ&lt;/strong&gt;&lt;/h2&gt;&lt;p&gt;ಈ ವಂಚನೆಯ ಹಿಂದೆ ಬೆಟಗೇರಿ ಮೂಲದ ರೌಡಿಶೀಟರ್ ಹಾಗೂ ಬಡ್ಡಿ ದಂಧೆಕೋರ ಯುವರಾಜ ಕೊರವರನ ಕೈವಾಡವಿದೆ ಎಂದು ರೈತ ಕುಟುಂಬ ಆರೋಪಿಸಿದ ಹಿನ್ನೆಲೆಯಲ್ಲಿ ಪೊಲೀಸರು ರೌಡಿಶೀಟರ್ ಯುವರಾಜ ಕೊರವರ ಹಾಗೂ ರವಿ ಕೌಜಗೇರಿ ಅವರನ್ನು ಬಂಧಿಸಿದ್ದಾರೆ. ಇನ್ನುಳಿದ ಬಸನಗೌಡ ಕರಮುಡಿ, ಶೇಷಗೀರಿಸಾ ಬಾಕಳೆ ಹಾಗೂ ಜಗದೀಶ ಅಯ್ಯನಗೌಡ ಎಂಬವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.&lt;/p&gt;&lt;h3&gt;&lt;strong&gt;ಹೆಚ್ಚುತ್ತಿದೆ ಅಕ್ರಮ ಬಡ್ಡಿ ದಂಧೆ&lt;/strong&gt;&lt;/h3&gt;&lt;p&gt;ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆ ಹಾಗೂ ಜಮೀನು ಕಬಳಿಕೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಾರದ ಹಿಂದಷ್ಟೇ ಬಡ್ಡಿ ಹಣಕ್ಕಾಗಿ ಮನೆಯ ಕಾಂಪೌಂಡ್ ಧ್ವಂಸಗೊಳಿಸಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ರೈತನ ಜಮೀನನ್ನೇ ಕಬಳಿಸಿರುವ ಆರೋಪ ಬೆಳಕಿಗೆ ಬಂದಿರುವುದು ಬಡ್ಡಿ ದಂಧೆಕೋರರ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;ಅಪರಾಧ ಹಿನ್ನೆಲೆ&lt;/strong&gt;&lt;/p&gt;&lt;p&gt;ಈ ಪ್ರಕರಣದಲ್ಲಿ ತೊಂದರೆಗೊಳಗಾದ ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ತಮ್ಮ ಅಳಲನ್ನು ತೋಡಿಕೊಂಡು, ಆರೋಪಿತರು ನಮಗೆ ನಂಬಿಸಿ ಮೋಸ ಮಾಡಿ ಜಮೀನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. ನಂತರ ಪರಿಶೀಲನೆ ಮಾಡಿದಾಗ ಆ ವ್ಯಕ್ತಿ ಅಪರಾಧ ಹಿನ್ನೆಲೆ ತಿಳಿದು ಬಂದಿದೆ. ಅದಕ್ಕಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; 1600 ಕಾನ್ಸ್&zwnj;ಟಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೊನೆ ದಿನಾಂಕ, ಅರ್ಹತೆ, ವಯೋಮಿತಿ ಎಷ್ಟಿರಬೇಕು?&lt;/strong&gt;&lt;/p&gt;&lt;h3&gt;&lt;strong&gt;ನ್ಯಾಯ ಬೇಕು&lt;/strong&gt;&lt;/h3&gt;&lt;p&gt;ನಮಗೆ ಅಡಚಣೆ ಇತ್ತು. ಅದಕ್ಕಾಗಿ ಹಣವನ್ನು ಪಡೆದಿರುತ್ತೇವೆ. ಆದರೆ ನಂಬಿಸಿ ಮೋಸ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಅತ್ಯಂತ ಬೆಲೆಬಾಳುವ ಜಮೀನು ಕಿತ್ತುಕೊಂಡು ನಮ್ಮನ್ನು ಬೀದಿಪಾಲು ಮಾಡಿದ್ದಾರೆ ಎಂದು ಮಹ್ಮದ್ ರಫೀಕ್ ದೊಡ್ಡಮನಿ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅನ್ನಭಾಗ್ಯ ಯೋಜನೆಗೂ &lsquo;ಸರ್ಜರಿ&rsquo;: 14 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದು? ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-farmer-accused-of-grabbing-5-acres-of-agricultural-land-worth-crores-for-rs-17-lakhs-mrq/articleshow-7i48i8t"/>
        </item>
        <item>
            <title><![CDATA[ಗದಗದಲ್ಲಿ ರಾಷ್ಟ್ರಕೂಟ ಕಾಲದ ವಿಶಿಷ್ಟ ವೀರಗಲ್ಲು ಪತ್ತೆ, ರಾಜನ ಮೇಲಿನ ಪ್ರೀತಿಗೆ ಪ್ರಾಣತ್ಯಾಗದ 'ಕೀಲುಗುಂಟೆ' ಪದ್ಧತಿ!]]></title>
            <link>https://kannada.asianetnews.com/karnataka-districts/rare-rashtrakuta-era-hero-stone-inscription-found-in-gadag-mevundi-village-reveals-ancient-ritual-of-kilugunte-gdp/articleshow-7x8lnkr</link>
            <guid isPermaLink="true">https://kannada.asianetnews.com/karnataka-districts/rare-rashtrakuta-era-hero-stone-inscription-found-in-gadag-mevundi-village-reveals-ancient-ritual-of-kilugunte-gdp/articleshow-7x8lnkr</guid>
            <pubDate>Tue, 09 Jun 2026 17:25:36 +0530</pubDate>
            <description><![CDATA[ಗದಗ ಜಿಲ್ಲೆಯ ಮೇವುಂಡಿಯಲ್ಲಿ ರಾಷ್ಟ್ರಕೂಟರ ಕಾಲದ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದೆ. ಇದು ತನ್ನ ಅರಸನ ಸಾವಿನ ನಂತರ, ರಾಜಭಕ್ತಿಯಿಂದ ಸ್ವಯಂಪ್ರೇರಿತವಾಗಿ ಪ್ರಾಣತ್ಯಾಗ ಮಾಡಿದ ರಟ್ಟೆಯಣ್ಣ ಎಂಬ ಸೇವಕನ ಕಥೆಯನ್ನು ಹೇಳುತ್ತದೆ. ಈ ವಿಶಿಷ್ಟ ಆಚರಣೆಯನ್ನು 'ಕೀಲುಗುಂಟೆ' ಎಂದು ಕರೆಯಲಾಗುತ್ತಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01ktp3rh08x8w3a853ve403675,imgname-rashtrakuta-inscription-in-gadag-1781006091272.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ:&lt;/strong&gt; ಕರ್ನಾಟಕದ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಗೆ ಮತ್ತೊಂದು ಅದ್ಭುತ ಮೈಲಿಗಲ್ಲು ಸೇರ್ಪಡೆಯಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ಅತ್ಯಂತ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದೆ. ಇದು ಕೇವಲ ಯುದ್ಧ ಭೂಮಿಯಲ್ಲಿ ಮಡಿದ ವೀರನ ನೆನಪಿನ ಕಲ್ಲಲ್ಲ. ಬದಲಿಗೆ ತನ್ನ ಅರಸನ ಮೇಲಿನ ಅಪ್ರತಿಮ ಭಕ್ತಿ ಮತ್ತು ನಿಷ್ಠೆಗಾಗಿ ಸ್ವಯಂಪ್ರೇರಿತವಾಗಿ ಪ್ರಾಣತ್ಯಾಗ ಮಾಡಿದ ಶ್ರೇಷ್ಠ ಸೈನಿಕನ ಕಥೆಯನ್ನು ವಿವರಿಸುತ್ತದೆ.&lt;/p&gt;&lt;h2&gt;ಸಂಶೋಧಕಿ ಶ್ವೇತಾ ಭಸ್ಮೆ ತಂಡದ ಸಾಧನೆ&lt;/h2&gt;&lt;p&gt;ರಾಜ್ಯದ ವಿವಿಧ ಭಾಗಗಳಲ್ಲಿ ಹರಡಿಕೊಂಡಿರುವ ವಿಶಿಷ್ಟ ವೀರಗಲ್ಲುಗಳ (Memorial Stones) ಕುರಿತು ಇತಿಹಾಸಾಸಕ್ತರ ತಂಡವೊಂದು ಸುದೀರ್ಘ ಅಧ್ಯಯನ ನಡೆಸುತ್ತಿತ್ತು. ಈ ವೇಳೆ ವೀರಗಲ್ಲುಗಳ ಕುರಿತಾಗಿಯೇ ವಿಶೇಷ ಸಂಶೋಧನಾ ಪ್ರಬಂಧ (Thesis) ಸಿದ್ಧಪಡಿಸುತ್ತಿದ್ದ ಪ್ರಮುಖ ಸಂಶೋಧಕಿ ಶ್ವೇತಾ ಭಸ್ಮೆ ಹಾಗೂ ಅವರ ತಂಡಕ್ಕೆ ಮೇವುಂಡಿ ಗ್ರಾಮದಲ್ಲಿ ಈ ವಿಭಿನ್ನ ಶಿಲಾಶಾಸನ ಸಿಕ್ಕಿದೆ. ಮೇಲ್ನೋಟಕ್ಕೆ ಸಾಮಾನ್ಯ ಸ್ಮಾರಕದಂತೆ ಕಂಡರೂ, ಅದರ ಮೇಲಿನ ಬರಹಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕರ್ನಾಟಕದ ಮಧ್ಯಕಾಲೀನ ಇತಿಹಾಸದ ರೋಚಕ ಆಚರಣೆಯೊಂದು ಬೆಳಕಿಗೆ ಬಂದಿದೆ.&lt;/p&gt;&lt;h2&gt;ಏನಿದು ಶಾಸನದ ಇತಿಹಾಸ?&lt;/h2&gt;&lt;p&gt;ಶಾಸನದಲ್ಲಿ ಕೆತ್ತಲಾಗಿರುವ ವಿವರಗಳ ಪ್ರಕಾರ, ರಾಷ್ಟ್ರಕೂಟರ ಆಡಳಿತಾವಧಿಯಲ್ಲಿ ಇಂದಿನ ಲಕ್ಷ್ಮೇಶ್ವರ ಭಾಗದ 'ಪುಲಿಗೆರೆ' ಎಂಬ ಪ್ರದೇಶವನ್ನು ಕುಪ್ಪೆ ಅರಸ ಎಂಬ ರಾಜನು ಆಳುತ್ತಿದ್ದನು. ದುರದೃಷ್ಟವಶಾತ್, ಆತ ತೀವ್ರ ಅನಾರೋಗ್ಯದಿಂದ ನಿಧನ ಹೊಂದಿದನು. ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಸಲಹಿದ್ದ ಅರಸನ ಅಗಲಿಕೆಯನ್ನು ತಡೆದುಕೊಳ್ಳಲಾಗದ ಆತನ ಆಪ್ತ ಸೇವಕ ರಟ್ಟೆಯಣ್ಣ ಎಂಬಾತ, ರಾಜನ ಮೇಲಿನ ಅಚಲ ಭಕ್ತಿಯ ಸಂಕೇತವಾಗಿ ತಾನೂ ಆತ್ಮತ್ಯಾಗ (Self-Sacrifice) ಮಾಡಲು ನಿರ್ಧರಿಸಿದನು.&lt;/p&gt;&lt;p&gt;ಅಚ್ಚರಿಯ ವಿಷಯವೆಂದರೆ, ರಟ್ಟೆಯಣ್ಣನು ಅರಸನ ಚಿತೆ ಅಥವಾ ಸಮಾಧಿಯನ್ನು ಹುಡುಕುತ್ತಾ ನೂರಾರು ಮೈಲುಗಳ ದೂರದ ದಾರಿಯನ್ನು ಸವೆಸಿ, ಇಂದಿನ ಮೇವುಂಡಿ ಪ್ರದೇಶಕ್ಕೆ ಬಂದು ತಲುಪಿದ್ದನು. ಅಲ್ಲಿ ಸ್ಥಾಪಿತವಾಗಿದ್ದ ತನ್ನ ಒಡೆಯನ ಸಮಾಧಿಯ (ಸ್ಮಾರಕ) ಮುಂಭಾಗದಲ್ಲೇ ನಿಂತು ತನ್ನ ಪ್ರಾಣವನ್ನು ಅರ್ಪಿಸಿಕೊಂಡಿದ್ದನು. ರಟ್ಟೆಯಣ್ಣನ ಈ ಅಸಾಮಾನ್ಯ ಸ್ವಾಮಿಭಕ್ತಿಯನ್ನು ಮುಂದಿನ ಪೀಳಿಗೆಗೆ ಸಾರುವ ಸಲುವಾಗಿಯೇ ಅಂದು ಈ ವಿಶಿಷ್ಟ ವೀರಗಲ್ಲನ್ನು ಪ್ರತಿಷ್ಠಾಪಿಸಲಾಗಿತ್ತು ಎಂದು ಶಾಸನದಲ್ಲಿ ಉಲ್ಲೇಖವಿದೆ.&lt;/p&gt;&lt;h2&gt;ಏನಿದು 'ಕೀಲುಗುಂಟೆ' ಸಂಪ್ರದಾಯ?&lt;/h2&gt;&lt;p&gt;ಇತಿಹಾಸ ತಜ್ಞರ ಪ್ರಕಾರ, ಪ್ರಾಚೀನ ಕರ್ನಾಟಕದಲ್ಲಿ ಪ್ರಚಲಿತದಲ್ಲಿದ್ದ ಈ ರೀತಿಯ ಪ್ರಾಣತ್ಯಾಗದ ವಿಶಿಷ್ಟ ಆಚರಣೆಯನ್ನು &quot;ಕೀಲುಗುಂಟೆ&quot; ಎಂದು ಕರೆಯಲಾಗುತ್ತಿತ್ತು. ಭಾಷಾಶಾಸ್ತ್ರದ ಪ್ರಕಾರ, ಇಲ್ಲಿ 'ಕೀಲು' ಎಂದರೆ ಎಳೆಯುವುದು ಅಥವಾ ಸೆಳೆಯುವುದು ಮತ್ತು 'ಗುಂಟೆ' (ಅಥವಾ ಕುಂಟೆ/ಕುಂದಿ) ಎಂದರೆ ಸಮಾಧಿ ಅಥವಾ ಹೂಳುವ ಸ್ಥಳ ಎಂಬ ಅರ್ಥವಿದೆ. ಅರಸನು ಮರಣ ಹೊಂದಿದಾಗ ಆತನ ಆಪ್ತರು ಅಥವಾ ಅಂಗರಕ್ಷಕರು ತಾವೂ ಜೀವತ್ಯಾಗ ಮಾಡುವ ಇಂತಹ ಆಚರಣೆಗಳು ಗಂಗರು ಮತ್ತು ರಾಷ್ಟ್ರಕೂಟರ ಕಾಲದಲ್ಲಿ ಚಾಲ್ತಿಯಲ್ಲಿದ್ದವು ಎಂಬುದಕ್ಕೆ ಈ ಶಾಸನವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.&lt;/p&gt;&lt;h2&gt;ಸಾಮಾನ್ಯ ವೀರಗಲ್ಲುಗಳಿಗಿಂತ ಇದು ಹೇಗೆ ಭಿನ್ನ?&lt;/h2&gt;&lt;p&gt;ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡುಬರುವ ವೀರಗಲ್ಲುಗಳು ಯುದ್ಧದಲ್ಲಿ ಶತ್ರುಗಳ ಎದುರು ವೀರಾವೇಶದಿಂದ ಹೋರಾಡಿ ಮಡಿದ ಯೋಧರು, ಊರಿನ ಹೆಣ್ಣುಮಕ್ಕಳನ್ನು ಅಥವಾ ಗೋವುಗಳನ್ನು ಕಾಪಾಡುವಾಗ ಪ್ರಾಣ ಬಿಟ್ಟ ವೀರರ ನೆನಪಿಗಾಗಿ ಕೆತ್ತಲ್ಪಟ್ಟಿರುತ್ತವೆ. ಆದರೆ, ಮೇವುಂಡಿಯ ಈ ವೀರಗಲ್ಲು ಸಂಪೂರ್ಣ ಭಿನ್ನವಾದ ಶೈಲಿಯನ್ನು ಹೊಂದಿದೆ. ಯಾವುದೇ ಯುದ್ಧವಿಲ್ಲದೆ, ಕೇವಲ ಭಾವನಾತ್ಮಕ ನಿಷ್ಠೆ ಮತ್ತು ಒಡೆಯನ ಮೇಲಿನ ಗೌರವಕ್ಕಾಗಿ, ನೂರಾರು ಮೈಲು ನಡೆದು ಬಂದು ಸಮಾಧಿಯ ಮುಂದೆ ಸ್ವಯಂಪ್ರೇರಿತವಾಗಿ ಪ್ರಾಣತ್ಯಾಗ ಮಾಡಿದ ಅಪೂರ್ವ ಕಥೆಯನ್ನು ತಿಳಿಸುತ್ತದೆ.&lt;/p&gt;&lt;h2&gt;ಇತಿಹಾಸ ಅಧ್ಯಯನಕ್ಕೆ ಹೊಸ ದಿಕ್ಸೂಚಿ&lt;/h2&gt;&lt;p&gt;ಈ ಹೊಸ ಶೋಧನೆಯು ರಾಷ್ಟ್ರಕೂಟರ ಕಾಲದ ಸಾಮಾಜಿಕ ಚೌಕಟ್ಟು, ರಾಜಪ್ರಭುತ್ವ ಮತ್ತು ರಾಜ-ಸೇವಕರ ನಡುವೆ ಇದ್ದ ನಂಬಿಕೆಯ ಸಂಬಂಧಗಳು, ಅಂದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಂಬಿಕೆಗಳ ಮೇಲೆ ಹೊಸ ಬೆಳಕು ಚೆಲ್ಲಿದೆ. ಕರ್ನಾಟಕದ ಮಧ್ಯಕಾಲೀನ ಇತಿಹಾಸದ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಈ ಶಾಸನವು ಅತ್ಯಂತ ಅಮೂಲ್ಯ ಆಕರ ಗ್ರಂಥವಾಗಿದ್ದು, ಮುಂದಿನ ದಿನಗಳಲ್ಲಿ ಇತಿಹಾಸ ಇಲಾಖೆ ಹಾಗೂ ಪುರಾತತ್ವ ಇಲಾಖೆಯಿಂದ ಮತ್ತಷ್ಟು ಆಳವಾದ ಸಂಶೋಧನೆಗಳಿಗೆ ಇದು ದಾರಿ ಮಾಡಿಕೊಡಲಿದೆ ಎಂದು ತಜ್ಞರು ಆಶಿಸಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-rashtrakuta-era-hero-stone-inscription-found-in-gadag-mevundi-village-reveals-ancient-ritual-of-kilugunte-gdp/articleshow-7x8lnkr"/>
        </item>
        <item>
            <title><![CDATA[ಎಚ್.ಕೆ. ಪಾಟೀಲ ಹೆಸರಿನಲ್ಲೇ ಮೂರು ಮತ: ಸಂಸದ ಬೊಮ್ಮಾಯಿ ಸ್ಫೋಟಕ ಆರೋಪ]]></title>
            <link>https://kannada.asianetnews.com/karnataka-districts/mp-basavaraj-bommai-voter-list-duplicate-votes-hk-patil-gvd/articleshow-8ca5fqr</link>
            <guid isPermaLink="true">https://kannada.asianetnews.com/karnataka-districts/mp-basavaraj-bommai-voter-list-duplicate-votes-hk-patil-gvd/articleshow-8ca5fqr</guid>
            <pubDate>Sat, 04 Jul 2026 20:51:29 +0530</pubDate>
            <description><![CDATA[&lt;p&gt;ಮಾಜಿ ಸಚಿವ ಎಚ್.ಕೆ.ಪಾಟೀಲರ ಹೆಸರಿನಲ್ಲೇ ಮೂರು ಮತಗಳಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಬಾಂಬ್ ಸಿಡಿಸಿದ್ರು. ಗದಗನಲ್ಲಿ ಮಾತನಾಡಿದ ಅವ್ರು, ಮ್ಯಾಪಿಂಗ್ ಆದಾಗಿಯೂ ಕೂಡ ಕೆಲ ಹೆಸರುಗಳು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwpvdd5y524eh8yd74vmka8q,imgname-vj-1783178376382.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜು.04): &lt;/strong&gt;ಮಾಜಿ ಸಚಿವ ಎಚ್.ಕೆ.ಪಾಟೀಲರ ಹೆಸರಿನಲ್ಲೇ ಮೂರು ಮತಗಳಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಬಾಂಬ್ ಸಿಡಿಸಿದ್ರು. ಗದಗನಲ್ಲಿ ಮಾತನಾಡಿದ ಅವ್ರು, ಮ್ಯಾಪಿಂಗ್ ಆದಾಗಿಯೂ ಕೂಡ ಕೆಲ ಹೆಸರುಗಳು ಮತ್ತೆ ಮತದಾರರ ಪಟ್ಟಿಯಲ್ಲಿ ಕಂಡು ಬಂದಿವೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ತಿಳಿಸಿದರೂ ಗಂಭೀರವಾಗಿ ತೆಗೆದುಕೊಂಡಿಲ್ಲ.&lt;/p&gt;&lt;p&gt;ಹುಲಕೋಟಿಯ ಬೂತ್ ನಂಬರ್ 143ರ ಕ್ರಮ ಸಂಖ್ಯೆ 161, 183 ಹಾಗೂ 153 ನೇ ಬೂತ್ ನಂಬರ್ ನಲ್ಲಿ 393 ಕ್ರಮ ಸಂಖ್ಯೆಯಲ್ಲಿ ಹನಂಮತಗೌಡ ಕೃಷ್ಣಗೌಡ ಪಾಟೀಲ ಅಂತಾ ಹೆಸರಿದೆ. ಒಬ್ಬ ಪ್ರಖ್ಯಾತ ಹೆಸರೇ ಮೂರು ಬಾರಿ ಬಂದ್ರೆ ಯಾವ ರೀತಿ ಪರಿಷ್ಕರಣೆ ಆಗ್ತಿದೆ ಅಂತಾ ಪ್ರಶ್ನೆ ಮೂಡಿದೆ ಅಂತಾ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಇನ್ನು ರೋಣ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲೂ ಹೆಸರು ರಿಪೀಟ್ ಆಗಿದೆ. ರೋಣದಲ್ಲಿ ಅಲ್ಲಾ ಸಾಬ್ ಎಂಬ ವ್ಯಕ್ತಿಯ ಹೆಸರು ಐದು ಕಡೆ ನಮೂದಿದೆ.&lt;/p&gt;&lt;h2&gt;&lt;strong&gt;ಬಿಎಲ್&zwnj;ಒಗಳು ಸರಿಯಾಗಿ ಬರ್ತಿಲ್ಲ&lt;/strong&gt;&lt;/h2&gt;&lt;p&gt;ನಮಗೆ ಕಂಡಂತೆ ರೋಣ ಮತಕ್ಷೇತ್ರದಲ್ಲಿ 3084 ಹೆಸರುಗಳು ರಿಪೀಟ್ ಆಗಿವೆ. ಗದಗ ಮತ ಕ್ಷೇತ್ರದಲ್ಲಿ 2305 ಹೆಸರುಗಳು ಡಬಲ್ ತ್ರಿಬಲ್ ಇದೆ. ಮತದಾನ ಪರಿಷ್ಕರಣೆಯ ಕೆಲಸ ಆಗ್ಬೇಕು. ಆದ್ರೆ ಸಮರ್ಪಕವಾಗಿ ಕೆಲಸ ಆಗಿಲ್ಲ. ಬಿಎಲ್&zwnj;ಒಗಳು ಸರಿಯಾಗಿ ಬರ್ತಿಲ್ಲ. ಅಧಿಕಾರಿಗಳಿಗೆ ಸರಿಯಾಗಿ ಟ್ರೇನಿಂಗ್ ಕೂಡ ಆಗಿಲ್ಲ. ಜನರನ್ನ ಬಿಟ್ಟು ಅಂಜುಮನ್ ಇಸ್ಲಾಂ ಮಸೀದಿಯಲ್ಲಿ ನಮೂನೆಗಳನ್ನ ತುಂಬಿಸ್ತಿದ್ದಾರೆ. ಒಂದು ವರ್ಗದ ಜನಕ್ಕೆ ಫ್ರೀ ಬಿಟ್ಟಿದ್ದಾರೆ ಅಂತಾ ಬೊಮ್ಮಾಯಿ ಆರೋಪಿಸಿದ್ರು.&lt;/p&gt;]]></content:encoded>
            <category>gadag</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-basavaraj-bommai-voter-list-duplicate-votes-hk-patil-gvd/articleshow-8ca5fqr"/>
        </item>
        <item>
            <title><![CDATA[ಗದಗ: ಈ ಊರಿನಲ್ಲಿ ಯಾರೇ ಮೃತಪಟ್ಟರು ಮನೆ ಮುಂದೆ ಹಾಜರಾಗೋ ನಾಯಿ, ಸ್ಮಶಾನದವರೆಗೂ ಬಂದು ವಿಧಿವಿಧಾನದಲ್ಲಿ ಭಾಗಿ!]]></title>
            <link>https://kannada.asianetnews.com/viral/karnataka-news-beyond-human-empathy-the-extraordinary-stray-dog-of-gadag-that-attends-every-village-funeral-gdp/articleshow-92741up</link>
            <guid isPermaLink="true">https://kannada.asianetnews.com/viral/karnataka-news-beyond-human-empathy-the-extraordinary-stray-dog-of-gadag-that-attends-every-village-funeral-gdp/articleshow-92741up</guid>
            <pubDate>Thu, 11 Jun 2026 18:23:31 +0530</pubDate>
            <description><![CDATA[ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಬೀದಿ ನಾಯಿಯೊಂದು ವಿಶಿಷ್ಟ ವರ್ತನೆಯಿಂದ ಗಮನ ಸೆಳೆದಿದೆ. ಗ್ರಾಮದಲ್ಲಿ ಯಾರೇ ಮೃತಪಟ್ಟರೂ, ಈ ಶ್ವಾನವು ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ವಿಧಿವಿಧಾನಗಳು ಮುಗಿಯುವವರೆಗೂ ಸ್ಮಶಾನದಲ್ಲಿಯೇ ಇರುತ್ತದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ನಡವಳಿಕೆಯನ್ನು ಪ್ರದರ್ಶಿಸುತ್ತಿರುವ ಈ ಮೂಕಪ್ರಾಣಿಯ ಸಂಸ್ಕಾರ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktvbtwz8qx7sm4v8y6j5j4r5,imgname-dog-attending-funeral-procession-in-gadag-1781182329832.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ&lt;/strong&gt;: ಪ್ರಾಣಿಗಳಲ್ಲಿ ನಾಯಿ ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠಾವಂತ ಪ್ರಾಣಿ ಎಂಬುದು ನಮಗೆಲ್ಲ ಗೊತ್ತು. ಆದರೆ ಇಲ್ಲೊಂದು ಬೀದಿ ನಾಯಿ ಕೇವಲ ನಿಷ್ಠೆಯನ್ನಷ್ಟೇ ಅಲ್ಲ, ಮನುಷ್ಯರೇ ಬೆರಗಾಗುವಂತಹ ವಿಶಿಷ್ಟ ಸಂಸ್ಕಾರ ಹಾಗೂ ವಿಚಿತ್ರ ವರ್ತನೆಯನ್ನು ಪ್ರದರ್ಶಿಸುವ ಮೂಲಕ ಇಡೀ ಜಿಲ್ಲೆಯ ಗಮನ ಸೆಳೆದಿದೆ. ಯಾಕೆಂದರೆ ಈ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಮೊದಲಿಗೆ ಅವರ ಮನೆ ಬಾಗಿಲಿಗೆ ಹೋಗೋ ನಾಯಿ. ಬಳಿಕ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ಸ್ಮಶಾನದವರೆಗೆ ನಡೆದು ಬರುತ್ತಿದ್ದು ಈಗ ಭಾರಿ ಸುದ್ದಿಯಾಗಿದೆ. ಈ ಅಚ್ಚರಿಯ ಘಟನೆ ವರದಿಯಾಗಿರುವುದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಐತಿಹಾಸಿಕ ಡಂಬಳ ಗ್ರಾಮದಲ್ಲಿ.&lt;/p&gt;&lt;h2&gt;ಸೂತಕದ ಮನೆಯ ಮುಂದೆ ಮೊದಲು ಹಾಜರ್!&lt;/h2&gt;&lt;p&gt;ಸಾಮಾನ್ಯವಾಗಿ ಪ್ರಾಣಿಗಳಿಗೆ ಸಾವು-ನೋವುಗಳ ಮುನ್ಸೂಚನೆ ಬೇಗ ಸಿಗುತ್ತದೆ ಎನ್ನಲಾಗುತ್ತದೆ. ಅದಕ್ಕೆ ಪೂರಕವೆಂಬಂತೆ ಡಂಬಳ ಗ್ರಾಮದ ಈ ಮೂಕಪ್ರಾಣಿ ನಡೆದುಕೊಳ್ಳುತ್ತಿದೆ. ಗ್ರಾಮದಲ್ಲಿ ಯಾವುದೇ ಧರ್ಮ, ಜಾತಿಯ ವ್ಯಕ್ತಿ ಮೃತಪಟ್ಟರೂ ಸಾಕು, ಈ ಶ್ವಾನವು ಯಾರೂ ಕರೆಯದಿದ್ದರೂ ತಾನಾಗಿಯೇ ಆ ಸೂತಕದ ಮನೆಯ ಮುಂದೆ ಬಂದು ಹಾಜರಾಗುತ್ತದೆ. ಮೃತರ ಶವಯಾತ್ರೆ ಆರಂಭವಾಗುತ್ತಿದ್ದಂತೆ, ಗ್ರಾಮಸ್ಥರ ಗುಂಪಿನೊಂದಿಗೆ ಈ ಶ್ವಾನವೂ ಕೂಡ ಹೆಜ್ಜೆ ಹಾಕುತ್ತಾ ಸಾಗುತ್ತದೆ. ಇಡೀ ಅಂತಿಮ ಯಾತ್ರೆಯುದ್ದಕ್ಕೂ ಅತ್ಯಂತ ಗಂಭೀರವಾಗಿ ಜನರ ಜೊತೆಗೇ ನಡೆದುಕೊಂಡು ಹೋಗುವುದು ಇದರ ವೈಶಿಷ್ಟ್ಯ.&lt;/p&gt;&lt;h2&gt;ವಿಧಿವಿಧಾನ ಮುಗಿಯುವವರೆಗೂ ಸ್ಮಶಾನದಲ್ಲೇ ವಾಸ್ತವ್ಯ!&lt;/h2&gt;&lt;p&gt;ಮೃತದೇಹಕ್ಕೆ ಅಂತಿಮ ವಿಧಿವಿಧಾನಗಳು ಪ್ರಕ್ರಿಯೆಗಳು ಮುಗಿಯುವವರೆಗೂ ಈ ಶ್ವಾನವು ಸ್ಮಶಾನದಲ್ಲೇ ಶಾಂತವಾಗಿ ಕುಳಿತುಕೊಳ್ಳುತ್ತದೆ. ಎಲ್ಲ ಪ್ರಕ್ರಿಯೆಗಳು ಮುಗಿದು ಗ್ರಾಮಸ್ಥರು ತಮ್ಮ ಮನೆಗಳತ್ತ ಮುಖ ಮಾಡಿದಾಗ, ಅವರ ಜೊತೆಯಲ್ಲೇ ಮರಳಿ ಗ್ರಾಮಕ್ಕೆ ವಾಪಸ್ ಆಗುತ್ತದೆ.&lt;/p&gt;&lt;p&gt;ಗುರುವಾರವಾದ ಇಂದು ಕೂಡ ಗ್ರಾಮದ ಹಿರಿಯರಾದ ಪಾರಮ್ಮ ಎಂಬುವವರು ವೃದ್ಧಾಪ್ಯದಿಂದ ನಿಧನರಾಗಿದ್ದರು.ಪಾರಮ್ಮ ಅವರ ಅಂತಿಮ ಯಾತ್ರೆಯಲ್ಲೂ ಈ ಶ್ವಾನವು ಎಂದಿನಂತೆ ಭಾಗಿಯಾಗಿ, ಸ್ಮಶಾನದವರೆಗೆ ಬಂದು ತನ್ನ ಮೂಕ ನಮನ ಸಲ್ಲಿಸಿದೆ.&lt;/p&gt;&lt;h2&gt;ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ರೀತಿ ಇರುವ ನಾಯಿ&lt;/h2&gt;&lt;p&gt;ಗ್ರಾಮಸ್ಥರ ಪ್ರಕಾರ, ಈ ನಾಯಿ ಯಾವುದೋ ಒಂದು ದಿನ ಅಥವಾ ಕೇವಲ ಪರಿಚಿತರ ಸಾವಿನ ಮನೆಗೆ ಮಾತ್ರ ಹೀಗೆ ಮಾಡುತ್ತಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಗ್ರಾಮದಲ್ಲಿ ಯಾವುದೇ ಸಾವು ಸಂಭವಿಸಿದರೂ ಇದೇ ರೀತಿ ವರ್ತಿಸುತ್ತಿದೆ. ತನಗೆ ನಿತ್ಯ ಅನ್ನ ಹಾಕುವವರಷ್ಟೇ ಅಲ್ಲದೆ, ಇಡೀ ಗ್ರಾಮದ ಪ್ರತಿಯೊಬ್ಬರೊಂದಿಗೂ ಇದು ಆತ್ಮೀಯ ಭಾವನೆ ಹೊಂದಿರುವಂತೆ ತೋರುತ್ತಿದೆ. ಮನುಷ್ಯರೇ ಸಂಬಂಧಗಳನ್ನು ಮರೆಯುತ್ತಿರುವ ಈ ಕಲಿಯುಗದಲ್ಲಿ, ಮನುಷ್ಯನ ಸಾವಿಗೆ ಮರುಗುವ ಈ ಶ್ವಾನದ ಸಂಸ್ಕಾರ ನಿಜಕ್ಕೂ ಶ್ಲಾಘನೀಯ. ಪ್ರಾಣಿ ಪ್ರಪಂಚದ ಈ ಅಚ್ಚರಿಯ ನಡವಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ.&lt;/p&gt;]]></content:encoded>
            <category>gadag</category>
            <dc:creator>Gowthami K</dc:creator>
            <atom:link href="https://kannada.asianetnews.com/viral/karnataka-news-beyond-human-empathy-the-extraordinary-stray-dog-of-gadag-that-attends-every-village-funeral-gdp/articleshow-92741up"/>
        </item>
        <item>
            <title><![CDATA[ಗದಗದಲ್ಲಿ ವೀರೇಶ್ವರ ಪುಣ್ಯಾಶ್ರಮ ಜಾತ್ರೆ ಸಂಭ್ರಮ: ಮಳೆಯ ನಡುವೆ ರಥೋತ್ಸವಕ್ಕೆ ಭಕ್ತರ ಜಯಘೋಷ]]></title>
            <link>https://kannada.asianetnews.com/festivals/veereshwara-punyashrama-jatre-gadag-music-devotional-festival-gvd/articleshow-arxci08</link>
            <guid isPermaLink="true">https://kannada.asianetnews.com/festivals/veereshwara-punyashrama-jatre-gadag-music-devotional-festival-gvd/articleshow-arxci08</guid>
            <pubDate>Sun, 05 Jul 2026 23:50:24 +0530</pubDate>
            <description><![CDATA[&lt;p&gt;Gadag: ಇಲ್ಲಿನ ವೀರೇಶ್ವರ ಪುಣ್ಯಾಶ್ರಮದ ಜಾತ್ರೆ ಅಂದ್ರೆ ಅದು ಬರೀ ಜನ ಜಂಗುಳಿಯ ಜಾತ್ರೆಯಲ್ಲ. ಅದು ಸಂಗೀತದ ಜಾತ್ರೆ. ಕಲಾವಿದರ, ಕಲೆಯ ಸಂಭ್ರಮದ ಉತ್ಸವ&zwnj;. ಹೌದು! ಐದು ದಿನಗಳ ಕಾಲ ನಡೆಯುವ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwspteyrxkhv08pkmmk023t1,imgname-vjv-1783274224600.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ&lt;/strong&gt;&lt;/p&gt;&lt;p&gt;&lt;strong&gt;ಗದಗ (ಜು.05):&lt;/strong&gt; ಇಲ್ಲಿನ ವೀರೇಶ್ವರ ಪುಣ್ಯಾಶ್ರಮದ ಜಾತ್ರೆ ಅಂದ್ರೆ ಅದು ಬರೀ ಜನ ಜಂಗುಳಿಯ ಜಾತ್ರೆಯಲ್ಲ. ಅದು ಸಂಗೀತದ ಜಾತ್ರೆ. ಕಲಾವಿದರ, ಕಲೆಯ ಸಂಭ್ರಮದ ಉತ್ಸವ&zwnj;. ಹೌದು! ಐದು ದಿನಗಳ ಕಾಲ ನಡೆಯುವ ಜಾತ್ರೆಯುದ್ದಕ್ಕೂ ಆದ್ಮ್ಯಾತ್ಮದ ಜೊತೆಗೆ ರಂಗಭೂಮಿ, ಹಿಂದೂಸ್ತಾನಿ ಸಂಗೀತದ ಘಮ ಪಸರಿಸಿರುತ್ತೆ. ಗಾನಗಂಧರ್ವ ಪಂಡಿತ ಪುಟ್ಟರಾಜರ ತಪೋ ಭೂಮಿ ಗದಗದಲ್ಲಿ ಈ ಬಾರಿ ಮಳೆ ಮಧ್ಯೆ ನಡೆದ ಜಾತ್ರೆ ವಿಶೇಷ ಅನುಭೂತಿ ನೀಡಿದೆ.&lt;/p&gt;&lt;p&gt;ಪ್ರತಿ ವರ್ಷ ಲಿಂಗೈಕ್ಯ ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಲಿಂಗೈಕ್ಯ ಪಂಡಿತ ಪುಟ್ಟರಾಜ ಕವಿಗವಾಯಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಈ ಜಾತ್ರೆ ನಡೆಸಲಾಗುತ್ತೆ. ಈ ಬಾರಿ ರಥ ಸಾಗುತ್ತಿದ್ದಂತೆ ಮಳೆಯ ಸಿಂಚನವಾಗಿದ್ದು ಭಕ್ತರನ್ನ ಪುಳಕಿತಗೊಳಿಸಿದೆ. ಜನ ರಥದತ್ತ ಉತ್ತತ್ತಿ ಎಸೆದು ಭಕ್ತಿ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಜೊತೆ ಮಾತನಾಡಿದ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ನಾಡಿಗೆ ಮಳೆ ಬೆಳೆಯೊಂದಿಗೆ ಸುಖ ಸಮೃದ್ಧಿ ಸಿಗಲಿ ಅಂತಾ ಪ್ರಾರ್ಥಿಸುತ್ತೇನೆ ಎಂದ್ರು&zwnj;.&lt;/p&gt;&lt;p&gt;ಪಂಚಾಕ್ಷರ ಗವಾಯಿಗಳು, ಪುಟ್ಟರಾಜ ಗವಾಯಿಗಳ ಗದ್ದಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು ಗಮನ ಸೆಳೆಯುವಂತಿದೆ&zwnj;. ರಥ ಸಾಗಿ ಬಂದ ನಂತರ ನಿರಂತರ ಸಂಗೀತ ಸೇವೆ ಆರಂಭವಾಗುತ್ತೆ. ಅಂದ್ರೆ ಮರುದಿನ ಬೆಳಗಿನ ಜಾವದವರೆಗೂ ಅಖಂಡ ಸಂಗೀತ ಸೇವೆಯನ್ನ ನಾಡಿನ ಹೆಸರಾಂತ ಕಲಾವಿದರು ನಡೆಸಿಕೊಡುತ್ತಾರೆ. ಹಿಂದೂಸ್ತಾನಿ ಸಂಗೀತ ಕ್ಷೇತ್ರ ಹಾಗೂ ರಂಗಭೂಮಿಗೆ ವೀರೇಶ್ವರ ಪುಣ್ಯಾಶ್ರಮ ಮುತ್ತು ರತ್ನಗಳಂಥ ಕಲಾವಿದರನ್ನ ನೀಡಿ, ಪೋಷಿಸಿದೆ.&lt;/p&gt;&lt;h2&gt;&lt;strong&gt;ಗಂಧರ್ವ ಲೋಕ ಸೃಷ್ಟಿ&lt;/strong&gt;&lt;/h2&gt;&lt;p&gt;ಹೀಗಾಗಿ ಈ ಜಾತ್ರೆಯಲ್ಲಿ ಕಲಾವಿದರ ದಂಡೆ ಹರಿದು ಬರುತ್ತದೆ. ಒಂದ್ಕಡೆ ಕಲಾಮೇಳಗಳ ಮಧ್ಯೆ ರಥ ಸಾಗ್ತಿದ್ರೆ ಮತ್ತೊಂದ್ಕಡೆ ಸಂಗೀತ ಕಲಾವಿದರು ತಮ್ಮ ಕಲೆಯನ್ನ ಪ್ರದರ್ಶನ ಮಾಡ್ತಾರೆ. ವೃತ್ತಿರಂಗ ಭೂಮಿಯ ದಿಗ್ಗಜ ಕಲಾವಿದರೂ ಜಾತ್ರೆಗೆ ಬಂದು ಸಂಭ್ರಮಿಸಿದರು. ಅಜ್ಜನ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಷ್ಟೇ ಅಲ್ದೆ ಮುಂಬೈ, ಪುಣೆ, ದೆಹಲಿ, ಕೊಲ್ಕತ್ತಾ, ಗೋವಾ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳ ಹೆಸರಾಂತ ಸಂಗೀತ ಕಲಾವಿದ್ರು, ಅಪಾರ ಸಂಖ್ಯೆಯ ಭಕ್ತರು ಆಗಮಿಸ್ತಾರೆ. ಕಲಾವಿದರ ಸಂಚಾರದಿಂದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಂಧರ್ವ ಲೋಕ ಸೃಷ್ಟಿಯಾಗಿರುತ್ತೆ.&lt;/p&gt;]]></content:encoded>
            <category>gadag</category>
            <dc:creator>Govindaraj S</dc:creator>
            <atom:link href="https://kannada.asianetnews.com/festivals/veereshwara-punyashrama-jatre-gadag-music-devotional-festival-gvd/articleshow-arxci08"/>
        </item>
        <item>
            <title><![CDATA[ಕಾಂಗ್ರೆಸ್ ಸರ್ಕಾರಕ್ಕೆ ಇನ್ನೆರಡು ವರ್ಷ ಅಸ್ಥಿರತೆ ಕಾಡಲಿದೆ: ಸಂಸದ ಬೊಮ್ಮಾಯಿ]]></title>
            <link>https://kannada.asianetnews.com/karnataka-districts/basavaraj-bommai-on-congress-internal-rift-dk-shivakumar-gvd/articleshow-bftb4pi</link>
            <guid isPermaLink="true">https://kannada.asianetnews.com/karnataka-districts/basavaraj-bommai-on-congress-internal-rift-dk-shivakumar-gvd/articleshow-bftb4pi</guid>
            <pubDate>Wed, 10 Jun 2026 21:52:16 +0530</pubDate>
            <description><![CDATA[&lt;p&gt;ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳಬೇಗುದಿ ಇನ್ನೂ ಕೆಂಡದಂತೆ ಜೀವಂತವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jm7p0pc71btv3jp590krtgmj,imgname-basavaraj-bommai--1-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜೂ.10): &lt;/strong&gt;ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳಬೇಗುದಿ ಇನ್ನೂ ಕೆಂಡದಂತೆ ಜೀವಂತವಾಗಿದೆ. ಇನ್ನೂ ಎರಡು ವರ್ಷ ರಾಜಕೀಯ ಅಸ್ಥಿರತೆ, ಅಸಮಾಧಾನ, ಆಡಳಿತ ಕುಸಿದುಹೋಗುತ್ತದೆ. ಸಾಮಾನ್ಯ ಜನರ ಬದುಕು ದುಸ್ತರವಾಗುವುದು ಖಚಿತ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾಯಕತ್ವ ಒಪ್ಪಿಕೊಂಡಂತೆ ಕಾಂಗ್ರೆಸ್ ನ ಶಾಸಕರು, ಮಂತ್ರಿಗಳು ಡಿ.ಕೆ. ಶಿವಕುಮಾರ ಅವರನ್ನು ಒಪ್ಪಿಕೊಂಡಿಲ್ಲ. ಕಾಂಗ್ರೆಸ್&zwnj;ನಲ್ಲಿ ಸಚಿವರಾಗಲು ಬಹಳ ಒತ್ತಡ ಇದೆ. ಯಾಕೆಂದರೆ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಆ ಪಕ್ಷದ ಶಾಸಕರಿಗೆ ಗೊತ್ತಾಗಿದೆ. ಹೀಗಾಗಿ ಈಗಲೇ ಮಂತ್ರಿ ಆಗಬೇಕೆಂದು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಬಹಳ ಸವಾಲುಗಳಿವೆ. ರಾಜಕೀಯವಾಗಿ ಸ್ಥಿರವಾಗಿದ್ದರೆ ಮಾತ್ರ ಒಳ್ಳೆಯ ಆಡಳಿತ ಕೊಡಲು ಸಾಧ್ಯ ಎಂದರು.&lt;/p&gt;&lt;p&gt;ಸಿದ್ದರಾಮಯ್ಯ ಸುಮ್ಮನೆ ಕುಳಿತಿಲ್ಲ. ಮೊದಲ ಹಂತದ ಸಚಿವ ಸಂಪುಟದಲ್ಲಿ ಯಾರ ಪ್ರಭಾವ ಕಾಣುತ್ತಿದೆ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಪ್ರಭಾವ ಮಾತ್ರ ಕಾಣಿಸುತ್ತಿದೆ. ಮುಂದಿನ&zwnj; ಕಂತಿನಲ್ಲಿ ಡಿ.ಕೆ. ಶಿವಕುಮಾರ ನಂಬಿದವರನ್ನು ಮಂತ್ರಿ&zwnj; ಮಾಡಿದರೆ ಅವರ ಛಾಪು ಇದೆ ಎನ್ನಬಹುದು. ಇಲ್ಲವಾದರೆ ಡಿಕೆಶಿ ಛಾಪು ಇಲ್ಲ ಅಂತ ಅರ್ಥ ಎಂದರು.&lt;/p&gt;&lt;h2&gt;&lt;strong&gt;ಯುದ್ಧ ಮುಗಿಯಲಿದೆ&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಎರಡು ವಾರದಲ್ಲಿ ಯುದ್ಧ ಮುಗಿಯಲಿದೆ. ಎಲ್ಲವೂ ಸರಿಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬಿಕ್ಕಟ್ಟು ಉಂಟಾಗಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಿ ದರ ಇಳಿಸಬೇಕು. ನಾನು ಸಿಎಂ ಆಗಿದ್ದಾಗ ₹7 ಕಡಿತ ಮಾಡಿದ್ದೆ. ಅದೇ ರೀತಿ ರಾಜ್ಯ ಸರ್ಕಾರ ಕಡಿಮೆ&zwnj; ಮಾಡಬೇಕು ಎಂದು ಒತ್ತಾಯಿಸಿದರು.&lt;/p&gt;]]></content:encoded>
            <category>gadag</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basavaraj-bommai-on-congress-internal-rift-dk-shivakumar-gvd/articleshow-bftb4pi"/>
        </item>
        <item>
            <title><![CDATA[Rahul Gandhi Missing: ರಾಹುಲ್ ಗಾಂಧಿ ನಾಪತ್ತೆಯಾಗಿರೋಕೆ ಸಂಪುಟ ವಿಸ್ತರಣೆ ವಿಳಂಭ? ಪ್ರಲ್ಹಾದ್ ಜೋಶಿ ಹೇಳಿಕೆ ವೈರಲ್]]></title>
            <link>https://kannada.asianetnews.com/politics/karnataka-govt-cabinet-expansion-delayed-due-to-rahul-missing-pralhad-joshi-criticizes-rav/articleshow-bgtxke4</link>
            <guid isPermaLink="true">https://kannada.asianetnews.com/politics/karnataka-govt-cabinet-expansion-delayed-due-to-rahul-missing-pralhad-joshi-criticizes-rav/articleshow-bgtxke4</guid>
            <pubDate>Sun, 12 Jul 2026 05:25:46 +0530</pubDate>
            <description><![CDATA[ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ರಾಹುಲ್ ಗಾಂಧಿ 40 ದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾರಣ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮತದಾರರ ಪರಿಷ್ಕರಣೆ ಮತ್ತು ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಸರ್ಕಾರದ ಕ್ರಮವನ್ನು ಅವರು ಟೀಕಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knhhjx5p4f2zsycpnn9zjadz,imgname-pralhad-joshi-1775484105909.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜು.12) : &lt;/strong&gt;ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul gandhi) ಕಳೆದ 40 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಕಾಣೆ ಆಗಿದ್ದರಿಂದಲೇ ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಆದರೆ, ರಾಜ್ಯ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲೇ ಮಗ್ನರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.&lt;/p&gt;&lt;h2&gt;SIR ಗೆ ಕರ್ನಾಟಕ ಸರ್ಕಾರ ಅನಗತ್ಯ ಗೊಂದಲ&lt;/h2&gt;&lt;p&gt;ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಮತದಾರರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ರಾಜ್ಯ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಕಷ್ಟದ ಪರಿಸ್ಥಿತಿಯಲ್ಲೂ ಬಿಎಲ್&zwnj;ಒಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಮತದಾರರ ನೋಂದಣಿ ನಮೂನೆಗಳು ಮನೆ ಮನೆಗೆ ತಲುಪುವಂತೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದರು.&lt;/p&gt;&lt;h3&gt;ಶಾಶ್ವತ ನಿವಾಸ ಪ್ರಮಾಣಪತ್ರ ಕಾನೂನು ಬಾಹಿರ&lt;/h3&gt;&lt;p&gt;ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದೆ. ನುಸುಳುಕೋರರಿಗೆ ಮತದಾರರ ಗುರುತಿನ ಚೀಟಿ ದೊರಕಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಮಾಣಪತ್ರ ನೀಡಲು ಸರ್ಕಾರ ವಿಧಿಸಿರುವ 11 ಷರತ್ತುಗಳೂ ಸಮಂಜಸವಾಗಿಲ್ಲ ಎಂದು ಜೋಶಿ ಆಕ್ಷೇಪ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-govt-cabinet-expansion-delayed-due-to-rahul-missing-pralhad-joshi-criticizes-rav/articleshow-bgtxke4"/>
        </item>
        <item>
            <title><![CDATA[Bidadi Township Row: ಡಿಕೆಶಿ ರಾಜ್ಯದ ಸಿಎಂ ಆಗಿ ಯೋಜನೆ ರೂಪಿಸಬೇಕು, ರಿಯಲ್ ಎಸ್ಟೇಟ್ ಏಜಂಟರಾಗಿ ಅಲ್ಲ: ವಿಜಯೇಂದ್ರ ಕಿಡಿ]]></title>
            <link>https://kannada.asianetnews.com/politics/by-vijayendra-slams-cm-dk-shivakumar-bidadi-township-protest-rav/articleshow-dxbmw6b</link>
            <guid isPermaLink="true">https://kannada.asianetnews.com/politics/by-vijayendra-slams-cm-dk-shivakumar-bidadi-township-protest-rav/articleshow-dxbmw6b</guid>
            <pubDate>Thu, 16 Jul 2026 12:16:20 +0530</pubDate>
            <description><![CDATA[&lt;p&gt;BY Vijayendra Slams CM DK Shivakumar ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಸಿಎಂ ತಮ್ಮ ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಕನಕಪುರಕ್ಕೆ ವಿಮಾನ ನಿಲ್ದಾಣ ನಿರ್ಮಿಸುತ್ತಿದ್ದಾರೆ ಮತ್ತು ಬಿಡದಿ ಟೌನ್&zwnj;ಶಿಪ್&zwnj;ಗಾಗಿ ರೈತರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmt2saz27q505eqzvymsnnn,imgname-----------------------2026-07-16t120308.182-1784183612767.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜು.16)&lt;/strong&gt;: ಸಿಎಂ ತಮ್ಮ ರಿಯಲ್ ಎಸ್ಟೇಟ್ ದಂಧೆಗಾಗಿ ಕನಕಪುರಕ್ಕೆ ಏರ್ ಪೋರ್ಟ್ ತೆಗೆದುಕೊಂಡು ಹೊರಟಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ(BJP State president BY Vijayendra) ಆರೋಪಿಸಿದ್ರು..&lt;/p&gt;&lt;p&gt;ಗದಗನಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯಕ್ಕೆ ಎರಡನೇ ಏರ್ ಪೋರ್ಟ್ ಬೇಕು ಅಂತಾ ಅದನ್ನೂ ಕನಕಪುರಕ್ಕೆ ತೆಗೆದುಕೊಂಡಿದ್ದಾರೆ. ಕನಕಪುರದ ಬದಲು ತುಮಕೂತು ಆಸುಪಾಸು ಏರ್ ಪೋರ್ಟ್ ತಂದಲ್ಲಿ ಮಧ್ಯ ಕರ್ನಾಟಕಕ್ಕೆ ಲಾಭ. ಜೊತೆಗೆ ಉತ್ತರ ಕರ್ನಾಟಕಕ್ಕೂ ಲಾಭವಾಗಲಿದೆ. ಕೈಗಾರಿಗೆ ಬರುತ್ತೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ ಅಂತಾ ಅಭಿಪ್ರಾಯ ಪಟ್ಟರು.&lt;/p&gt;&lt;h2&gt;ತುಂಗಭದ್ರಾ ಗೇಟ್ ರಿಪೇರಿಗೆ 24 ತಿಂಗಳು, ಟೌನ್&zwnj;ಶಿಪ್&zwnj;ಗೆ 24 ಗಂಟೆಯೊಳಗೆ!&lt;/h2&gt;&lt;p&gt;ಇನ್ನು ಬಿಡದಿ ಟೌನ್ ಶಿಪ್ ಬಗ್ಗೆ ಮಾತ್ನಾಡಿದ ಬಿವೈವಿ, ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ರಿಪೇರಿ 24 ತಿಂಗಳು ಬೇಕಾಯ್ತು, ಆದ್ರೆ ಅಧಿಕಾರ ವಹಿಸಿಕೊಂಡು 24 ಗಂಟೆಯಲ್ಲೇ ಬಿಡದಿ ಫಲವತ್ತಾದ ಜಮೀನು ಕಿತ್ತುಕೊಳ್ಳುವ ದುಸ್ಸಾಹಸ ಮಾಡಿದ್ದಾರೆ ಅಂದ್ರು..&lt;/p&gt;&lt;h3&gt;ರೈತರ ಮನೆಗಳಿಗೆ ನುಗ್ಗಿ ಗೂಂಡಾಗಳಿಂದ ಬೆದರಿಕೆ!&lt;/h3&gt;&lt;p&gt;ರೈತರಿಂದ ಬಲವಂತವಾಗಿ ಜಮೀನು ಕಸೆಯುವುದಿಲ್ಲ ಅಂತಾ ಹೇಳ್ತಾರೆ ಸಿಎಂ ಹೇಳ್ತಾರೆ.. ಆದ್ರೆ ವಾಸ್ತವವಾಗಿ ರೈತರ ಮನೆಗೆ ರಾತ್ರಿ ಗೂಂಡಾಗಳು ನುಗ್ಗಿ, ಜಮೀನನ್ನ ಬಿಟ್ಟುಕೊಡಬೇಕು ಅಂತಾ ಧಮ್ಕಿ ಹಾಕ್ತಾರೆ ಅಂತಾ ರೈತರು ಹೇಳ್ತಿದ್ದಾರೆ.. ಆದ್ರೆ ಈ ಮಧ್ಯೆ ರೈತರು ಕೊಟ್ಟರೇ ಪಾತ್ರ ಜಮೀನು ಪಡೀತೆವೆ ಅಂತಾ ಸಿಎಂ ಕಪಟ ನಾಟಕ ಮಾಡ್ತಾರೆ ಅಂತಾ ಆಕ್ರೋಶಹೊರ ಹಾಕಿದ್ರು.. ಸಿಎಂ ಆದಮೇಲೂ ಡಿಕೆಶಿ ರಿಯಲ್ ಎಸ್ಟೇಟ್ ಧೋರಣೆಯಿಂದ ಹೊರಬರದಿರೋದು ಗೊತ್ತಾಗ್ತಿದೆ.. ನಾವು ಟೌನ್ ಶಿಪ್ ವಿರೋಧಿಸಲ್ಲ.. 70% ರೈತರು ಒಪ್ಪಿದಲ್ಲಿ ಮಾಡಬಹುದು ಎಂದರು.&lt;/p&gt;&lt;p&gt;&lt;strong&gt;ಡಿಕೆಶಿಯವ್ರೇ ರೈತರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡ್ಬೇಡಿ&lt;/strong&gt;&lt;/p&gt;&lt;p&gt;ಸಿಎಂ ಬಂಧುಬಳಗವೇ ಬಿಡದಿಯಲ್ಲಿ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ ಅಂತಾ ರೈತರು ಮಾತನಾಡಿಕೊಳ್ಳುತ್ತಿದ್ದಾರೆ ಸಣ್ಣ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಅಂತಾನೂ ರೈತರು ಹೇಳ್ತಿದ್ದಾರೆ ಅಂತಾ ಹೇಳಿದ ಬಿವೈವಿ, ರೈತರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡ್ಬೇಡಿ ಅಂತಾ ಸಿಎಂಗೆ ಆಗ್ರಹಿಸುತ್ತೇನೆ.. ಕುಮಾರಸ್ವಾಮಿ ಕಾಲದಲ್ಲಿ ಆರಂಭವಾಗಿದೆ ಅಂತಾ ನೆಪವೊಡ್ಡಿ ಭೂಮಿ ಕಸೆಯಬೇಡಿ.. ಹೀಗೆ ಮಾಡಿದಲ್ಲಿ, ರೈತರ ಶಾಪಕ್ಕೆ ಸರ್ಕಾರ ಬಲಿಯಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ರು..&lt;/p&gt;&lt;p&gt;ರಾಜ್ಯದಲ್ಲಿ ಇಂಥ ಸಮಸ್ಯೆ ಇದ್ದರೂ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ.. ರಾಹುಲ್ ಗಾಂಧಿ ರೈತರ ಸಂಕಷ್ಟ ಅರಿಯಬೇಕು.. ರೈತರ ಪರ ನಿಲುವನ್ನ ರಾಹುಲ್ ಗಾಂಧಿಯವರೂ ತೆಗೆದುಕೊಳ್ಳಬೇಕು ಅಂತಾ ಆಗ್ರಹಿಸಿದ್ರು.. ಜೊತೆಗೆ ನಾಳೆ ಫ್ರೀಡಮ್ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಅಂತಾ ಹೇಳಿದ್ರು..&lt;/p&gt;&lt;p&gt;&lt;strong&gt;ರಾಜ್ಯದ ಕೃಷಿ ಸಚಿವರು ಯಾರು?&lt;/strong&gt;&lt;/p&gt;&lt;p&gt;ಕೃಷಿ ಸಚಿವರೇ ಇಲ್ಲದಿರೋದು ರಾಜ್ಯದಲ್ಲಿ ಕೃಷಿಗೆ ಆಧ್ಯತೆ ಇಲ್ಲ ಎನ್ನುವುದನ್ನ ತೋರಿಸುತ್ತದೆ.. ಬೀಕರ ಬರ ಇದೆ.. ಬಿತ್ತನೆ ಮಾಡಿದರೂ ಮೊಳಕೆಯೊಡದಿಲ್ಲ.. ಆದ್ರೆ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರು ಸಿಎಂ ಸುಮ್ಮನಾಗಿದ್ದಾರೆ.. ಸಿಎಂ, ಸಚಿವರನ್ನ ಜಿಲ್ಲೆಗಳಿಗೆ ಕಳುಹಿಸಬೇಕು.. ವಾಸ್ತವಿಕ ಪರಿಸ್ಥಿತಿ ಅರಿತು ರಾಜ್ಯ ಸರ್ಕಾರ ಸ್ಪಂದಿಸಲಿ ಅಂತಾ ಇತ್ತಾಯಿಸಿದ ಬಿವೈವಿ, ಪತ್ರಬರೆದು ಸುಮ್ಮನೆ ಕೂತರೆ ರೈತರ ಕಣ್ಣೀರು ವರೆಸಿದಂತಾಗುವುದಿಲ್ಲ ಅಂತಾ ಹೇಳಿದ್ರು.&lt;/p&gt;&lt;p&gt;&lt;strong&gt;ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ&lt;/strong&gt;&lt;/p&gt;&lt;p&gt;ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೀತಿದೆ.. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮತೀಯ ಶಕ್ತಿಗಳಿಗೆ ಸ್ವರ್ಗದ ಹಾಗಿದೆ.. ಕೊಲೆ ದೌರ್ಜನ್ಯ ನಡೆದರೂ ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡುತ್ತಿದೆ ಎನ್ನುವಂತಾಗಿದೆ&zwnj;. ಇತ್ತೀಚೆಗೆ ಹಾವೇರಿಯಲ್ಲಿ ಪಟಾಕಿ ಸಿಡಿಸಿದ್ದರು ಅಂತಾ ಹಿಂದೂಗಳ ಮೇಲೆ ಮಾರಣಾಂತಿ ಹಲ್ಲೆ ಮಾಡಿದ್ದರು ನಡೆದಿತ್ತು.. ರಟ್ಟಿಹಳ್ಳಿಯಲ್ಲಿ ಶಿವಾಜಿ ರಾವ್ ಎನ್ನುವವರ ಹತ್ಯೆಯಾಗಿರೋದನ್ನ ನೋಡಿದ್ದೇವೆ.. ಯಲ್ಲಾಪುರದ ದಲಿತ ಮಹಿಳೆ ಹತ್ಯೆ.. ಕೊಪ್ಪಳ ಹತ್ಯೆಯಾದ ಗವಿಸಿದ್ಧಪ್ಪನಿಗೆ ನ್ಯಾಯಕ್ಕಾಗಿ ತಂದೆ ತಾಯಿ ಪ್ರತಿಭಟಿಸಿದರೇ ಮೃತ ವ್ಯಕ್ತಿಯ ಮೇಲೆ ಪೋಕ್ಸೋ ಕೇಸ್ ದಾಖಲಿಸಲಾಗಿತ್ತು.&lt;/p&gt;&lt;p&gt;ಕಾಂಗ್ರೆಸ್ ಸರ್ಕಾರ ಸಚಿವರ ಹೇಳಿಕೆಗಳು ಮತೀಯ ಶಕ್ತಿಗಳಿಗೆ ಧೈರ್ಯ ತಂದುಕೊಡುತ್ತಿದೆ.. ಅಲ್ಪ ಸಂಖ್ಯಾತರ ಓಲೈಕೆ ರಾಜಕಾರಣ ವಿರೋಧಿಸಿ ಹಾವೇರಿಯಲ್ಲಿ ಹೋರಾಟ ಹಮ್ಮಿಕೊಂಡಿದ್ದೇವೆ&zwnj; ಅಂತಾ ಮಾಹಿತಿ ನೀಡಿದ್ರು.. ಎಸ್ ಐಆರ್ ನ್ನ ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿದ್ದಾರೆ..ಈ ಮಧ್ಯೆ ರಾಜ್ಯ ಸರ್ಕಾರ ಖಾಯಂ ನಿವಾಸಿ ಪತ್ರ ನೀಡುತ್ತಿರುವುದು ಖಂಡನಾರ್ಹ.. ನಿನ್ನೆ ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು&zwnj;..&lt;/p&gt;]]></content:encoded>
            <category>gadag</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/by-vijayendra-slams-cm-dk-shivakumar-bidadi-township-protest-rav/articleshow-dxbmw6b"/>
        </item>
        <item>
            <title><![CDATA[ಬೆಳೆ ಸಮೀಕ್ಷೆ ಕಳ್ಳಾಟಕ್ಕೆ ಬ್ರೇಕ್: ಇಸ್ರೋದಿಂದ ಹೊಸ ಅಸ್ತ್ರ, ತಂತ್ರಜ್ಞಾನ ಆಧಾರಿತ ಸಮೀಕ್ಷೆ]]></title>
            <link>https://kannada.asianetnews.com/karnataka-districts/fasal-bima-yojana-the-government-has-implemented-new-crop-survey-guidelines-with-the-help-of-isro-mrq/articleshow-gxvlgo0</link>
            <guid isPermaLink="true">https://kannada.asianetnews.com/karnataka-districts/fasal-bima-yojana-the-government-has-implemented-new-crop-survey-guidelines-with-the-help-of-isro-mrq/articleshow-gxvlgo0</guid>
            <pubDate>Mon, 06 Jul 2026 05:50:54 +0530</pubDate>
            <description><![CDATA[ಫಸಲ್ ಬಿಮಾ ಯೋಜನೆಯಲ್ಲಿನ ಅಕ್ರಮಗಳನ್ನು ತಡೆಯಲು ಸರ್ಕಾರವು ಇಸ್ರೋ ನೆರವಿನೊಂದಿಗೆ ಹೊಸ ಬೆಳೆ ಸಮೀಕ್ಷೆ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ತಂತ್ರಜ್ಞಾನ ಆಧಾರಿತ ಸಮೀಕ್ಷೆಯು ಜಿಯೋ-ಟ್ಯಾಗಿಂಗ್ ಮತ್ತು ಸ್ಥಳದಲ್ಲೇ ಪರಿಶೀಲನೆಯ ಮೂಲಕ ಪಾರದರ್ಶಕತೆಯನ್ನು ಖಚಿತಪಡಿಸಿ, ನೈಜ ರೈತರಿಗೆ ಮಾತ್ರ ಬೆಳೆ ವಿಮೆ ಮತ್ತು ಪರಿಹಾರ ಸಿಗುವಂತೆ ಮಾಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khwbs7t7pg83mt03hg4kkd9e,imgname-----------------------2026-02-20t071854.430-1771552153415.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಕುಮಾರ ಕುಷ್ಟಗಿ&lt;/strong&gt;&lt;/p&gt;&lt;p&gt;&lt;strong&gt;ಗದಗ: &lt;/strong&gt;ಫಸಲ್ ಬಿಮಾ ಯೋಜನೆಯಲ್ಲಿ ನಡೆಯುತ್ತಿದ್ದ ಅಕ್ರಮ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆವಿಮೆಗೆ ಹೊಸ ಅಗತ್ಯ ಮಾರ್ಗಸೂಚಿಗಳನ್ನು ಒಳಗೊಂಡಿರುವ ಆದೇಶವನ್ನು ಜೂ.30ರಂದು ಹೊರಡಿಸಿದ್ದು, ಇದರಿಂದಾಗಿ ಬೆಳೆ ಸಮೀಕ್ಷೆ ಪ್ರಕ್ರಿಯೆ ಮತ್ತಷ್ಟು ಪಾರದರ್ಶಕ, ತಾಂತ್ರಿಕವಾಗಿ ಸಶಕ್ತವಾಗಲಿದೆ.&lt;/p&gt;&lt;p&gt;ಬೆಳೆ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ದಾಖಲಿಸುವುದು, ಬೆಳೆ ಬೆಳೆಯದ ಜಮೀನಿನಲ್ಲೂ ಬೆಳೆ ತೋರಿಸುವುದು, ಒಂದೇ ಜಮೀನನ್ನು ಹಲವು ಬಾರಿ ದಾಖಲಿಸುವುದು, ಬೆಳೆ ವಿಮೆ ಹಾಗೂ ಪರಿಹಾರ ಪಡೆಯಲು ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದು ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ದೂರುಗಳು ಬರುತ್ತಿದ್ದವು. ಇದರಿಂದ ಸರ್ಕಾರದ ಕೋಟ್ಯಂತರ ರುಪಾಯಿ ಸಬ್ಸಿಡಿ, ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ಇತರ ಕೃಷಿ ಯೋಜನೆಗಳಲ್ಲಿ ದುರುಪಯೋಗವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ತಂತ್ರಜ್ಞಾನ ಆಧಾರಿತ ಸಮೀಕ್ಷೆಗೆ ಹೆಚ್ಚಿನ ಒತ್ತು ನೀಡಿದೆ.&lt;/p&gt;&lt;h2&gt;&lt;strong&gt;ನೂತನ ಆದೇಶದಲ್ಲೇನಿದೆ?&lt;/strong&gt;&lt;/h2&gt;&lt;p&gt;ಮೊಬೈಲ್ ಆಧಾರಿತ ಡಿಜಿಟಲ್ ಬೆಳೆ ಸಮೀಕ್ಷೆ ಮಾಡಬೇಕು, ಪ್ರತಿ ದಾಖಲೆಗೆ ಜಿಯಾಗ್ರಾಫಿಕಲ್ ರೆಫರೆನ್ಸ್&zwnj; ಫೋಟೋ ಕಡ್ಡಾಯ. ಅಲ್ಲದೇ ಸ್ಥಳದಲ್ಲೇ ರೈತರ ಹಾಗೂ ಜಮೀನಿನ ಮಾಹಿತಿಯನ್ನು ಪರಿಶೀಲಿಸಿ ದಾಖಲಿಸುವ ವ್ಯವಸ್ಥೆ ರೂಪಿಸಲಾಗಿದೆ. ಇಸ್ರೋ ಸಹಾಯದಲ್ಲಿ ಕೇವಲ 5 ಮೀಟರ್ ಎತ್ತರದಿಂದ ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳ ಫೋಟೋಗಳನ್ನು ತೆಗೆಯಲಾಗುತ್ತದೆ. ಇವುಗಳನ್ನು ಜಿಐಎಸ್ ಮಾಹಿತಿಯೊಂದಿಗೆ ಸಮನ್ವಯ ಮಾಡಿ ಸ್ಥಳದಲ್ಲಿಯೇ ಪರಿಶೀಲನೆ ಮಾಡಲಾಗುತ್ತದೆ. ಇದರಿಂದಾಗಿ ಬೆಳೆ ಬೆಳೆಯದ ಜಮೀನನ್ನು ಬೆಳೆ ಪ್ರದೇಶ ಎಂದು ದಾಖಲಿಸುವ ಅವಕಾಶ ಇರುವುದಿಲ್ಲ. ಜತೆಗೆ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸಿದ್ದು, ತಪ್ಪು ದಾಖಲೆಗಳಿಗೆ ಸಹಿ ಮಾಡಿದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಸಮೀಕ್ಷೆ ಪೂರ್ಣಗೊಂಡ ಬಳಿಕ ಬಹುಹಂತದ ಪರಿಶೀಲನೆ ಮತ್ತು ದೃಢೀಕರಣ ಕಡ್ಡಾಯಗೊಳಿಸಲಾಗಿದೆ.&lt;/p&gt;&lt;h3&gt;&lt;strong&gt;ಹಲವು ರೀತಿಯಲ್ಲಿ ಲಾಭ:&lt;/strong&gt;&lt;/h3&gt;&lt;p&gt;ನಕಲಿ ಬೆಳೆ ದಾಖಲೆಗಳನ್ನು ಸೃಷ್ಟಿಸುವುದು ಕಷ್ಟವಾಗುತ್ತದೆ. ಒಂದೇ ಜಮೀನಿಗೆ ಹಲವು ಬಾರಿ ದಾಖಲಾತಿ ಮಾಡುವ ಸಾಧ್ಯತೆ ಕಡಿಮೆ ಆಗುತ್ತದೆ. ಬೆಳೆ ವಿಮೆ ಹಾಗೂ ಪರಿಹಾರಕ್ಕೆ ಸಲ್ಲಿಸುವ ಸುಳ್ಳು ಮಾಹಿತಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ನೈಜವಾಗಿ ಬೆಳೆ ಬೆಳೆದ ರೈತರಿಗೆ ಮಾತ್ರ ಸರ್ಕಾರಿ ಸೌಲಭ್ಯಗಳು ತಲುಪುವ ಸಾಧ್ಯತೆ ಹೆಚ್ಚುತ್ತದೆ. ಉಪಗ್ರಹ ಮಾಹಿತಿ, ಜಿಯೋ ಟ್ಯಾಗ್ ಹಾಗೂ ಸ್ಥಳ ಪರಿಶೀಲನೆ ಒಂದಕ್ಕೊಂದು ಹೊಂದಾಣಿಕೆ ಆಗದಿದ್ದರೆ ತಕ್ಷಣವೇ ವ್ಯತ್ಯಾಸ ಪತ್ತೆಯಾಗಲಿದೆ.&lt;/p&gt;&lt;h3&gt;&lt;strong&gt;ಬೇರೆ ಬ್ಯಾಂಕಲ್ಲಿ ಸಾಲ ಪಡೆದಿಲ್ಲ ಎಂದು ಸ್ವಯಂ ಘೋಷಣೆ ಕಡ್ಡಾಯ&lt;/strong&gt;&lt;/h3&gt;&lt;p&gt;ಫಸಲ್ ಬಿಮಾ ಯೋಜನೆ ಬೆಳೆಸಾಲ ಪಡೆದುಕೊಂಡ ರೈತರು ಬೇರೆ ಬ್ಯಾಂಕ್&zwnj;ಗಳಲ್ಲಿ ಸಾಲ ಪಡೆದಿಲ್ಲ ಎಂಬುದನ್ನು ಸ್ವಯಂ ಘೋಷಿಸುವುದು ಕಡ್ಡಾಯ. ಆದರೆ ಯಾವ ಹೊಲದ ಮೇಲೆ ಬೆಳೆಸಾಲ ಪಡೆದಿರುತ್ತಾರೆಯೋ ಅದೇ ಬೆಳೆಗೆ ಸಹಜವಾಗಿಯೇ ಸಾಲಕೊಟ್ಟ ಬ್ಯಾಂಕ್&zwnj;ನಲ್ಲಿ ಬೆಳೆ ವಿಮೆ ಭರಣ ಮಾಡಲಾಗುತ್ತಿತ್ತು. ಅದೇ ಜಮೀನನ್ನು ರೈತರು ಗ್ರಾಮ ಒನ್ ಅಥವಾ ನೆಟ್ ಸೆಂಟರ್&zwnj;ಗಳಲ್ಲಿ ತಮಗೆ ಬೇಕಾದ ಬೆಳೆಗೆ ಇದುವರೆಗೂ ವಿಮೆ ಭರಣ ಮಾಡುತ್ತಿದ್ದರು. ಆದರೆ ಈ ಬಾರಿ ಬೆಳೆಸಾಲ ಪಡೆದುಕೊಂಡಿರುವ ರೈತರು ಕಡ್ಡಾಯವಾಗಿ ನಾನು ಬೇರೆಡೆ ಎಲ್ಲಿಯೂ ಸಾಲ ಪಡೆದುಕೊಂಡಿಲ್ಲ ಎಂದು ಸ್ವಯಂ ಧೃಢೀಕರಣ ಕೊಡಬೇಕಿದೆ. ಬ್ಯಾಂಕ್ ಸಾಲ, ಸ್ವಯಂ ಧೃಢೀಕರಣ ಪತ್ರ ಮತ್ತು ಹೊಲದಲ್ಲಿನ ಬೆಳೆ ಎಲ್ಲವೂ ತಾಳೆ ಆದಾಗ ಮಾತ್ರ ರೈತರಿಗೆ ವಿಮೆ ಪರಿಹಾರ ಸಿಗಲಿದೆ.&lt;/p&gt;&lt;p&gt;&lt;strong&gt;ತಪ್ಪು ಮಾಹಿತಿಗೆ ಕಡಿವಾಣ&lt;/strong&gt;&lt;/p&gt;&lt;p&gt;ಸರ್ಕಾರದ ನೂತನ ನಿಯಮಗಳ ಅಡಿಯಲ್ಲಿ ನೈಜ ರೈತರಿಗೆ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಇನ್&zwnj;ಪುಟ್ ಸಬ್ಸಿಡಿ, ಕೃಷಿ ಯೋಜನೆಗಳ ಲಾಭ ಹಾಗೂ ಬ್ಯಾಂಕ್ ಸಾಲದ ಪ್ರಕ್ರಿಯೆಯಲ್ಲಿ ನಿಖರ ದಾಖಲೆಗಳು ಲಭ್ಯವಾಗಲಿವೆ. ತಪ್ಪು ಮಾಹಿತಿ ಹಾಗೂ ದಾಖಲೆಗಳನ್ನು ನೀಡುವುದಕ್ಕೆ ಕಡಿವಾಣ ಬೀಳಲಿದೆ. ಪ್ರಾಮಾಣಿಕ ರೈತರು ವಂಚಿತರಾಗುವ ಸಾಧ್ಯತೆಯೂ ಕಡಿಮೆಯಾಗಲಿದೆ.&lt;/p&gt;&lt;p&gt;-ಚೇತನಾ ಪಾಟೀಲ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/fasal-bima-yojana-the-government-has-implemented-new-crop-survey-guidelines-with-the-help-of-isro-mrq/articleshow-gxvlgo0"/>
        </item>
        <item>
            <title><![CDATA[ಗದಗ: ಗೋಡಂಬಿ ಎಂದು ಔಡಲ ಕಾಯಿ ತಿಂದ 25ಕ್ಕೂ ಹೆಚ್ಚು ಶಾಲಾ ಮಕ್ಕಳು ತೀವ್ರ ಅಸ್ವಸ್ಥ!]]></title>
            <link>https://kannada.asianetnews.com/karnataka-districts/over-25-children-rushed-to-gadag-gims-hospital-after-consuming-wild-castor-beans-during-school-playtime-gdp/articleshow-ka6ng64</link>
            <guid isPermaLink="true">https://kannada.asianetnews.com/karnataka-districts/over-25-children-rushed-to-gadag-gims-hospital-after-consuming-wild-castor-beans-during-school-playtime-gdp/articleshow-ka6ng64</guid>
            <pubDate>Thu, 02 Jul 2026 13:31:15 +0530</pubDate>
            <description><![CDATA[ಗದಗ ತಾಲೂಕಿನ ಬೆಳಧಡಿ ತಾಂಡಾದಲ್ಲಿ, ಶಾಲಾ ಆಟದ ಸಮಯದಲ್ಲಿ ಗೋಡಂಬಿ ಬೀಜವೆಂದು ತಪ್ಪಾಗಿ ಭಾವಿಸಿ ವಿಷಕಾರಿ 'ಔಡಲ ಕಾಯಿ' ತಿಂದ ಪರಿಣಾಮ 25ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ವಾಂತಿ, ಭೇದಿ, ತಲೆಸುತ್ತಿನಿಂದ ಬಳಲುತ್ತಿದ್ದ ಮಕ್ಕಳನ್ನು ತಕ್ಷಣವೇ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01fr7tdsbev8jw5gex6xf32qqk,imgname-images--2--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ:&lt;/strong&gt; ಶಾಲಾ ಆಟದ ಸಮಯದಲ್ಲಿ ಮಕ್ಕಳಿಬ್ಬರು ಮಾಡಿದ ಸಣ್ಣದೊಂದು ಯಡವಟ್ಟು ಈಗ ಆತಂಕ ತಂದಿಟ್ಟಿದೆ . ಗಿಡದಲ್ಲಿದ್ದ ಕಾಯನ್ನು ಗೋಡಂಬಿ ಬೀಜ ಎಂದು ತಪ್ಪಾಗಿ ಭಾವಿಸಿ ತಿಂದ ಪರಿಣಾಮ 25ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಗದಗ ತಾಲೂಕಿನ ಬೆಳಧಡಿ ತಾಂಡಾದಲ್ಲಿ ಸಂಭವಿಸಿದೆ.&lt;/p&gt;&lt;h2&gt;ಆಟದ ಸಮಯ ಜವರಾಯನಾದ 'ಔಡಲ ಕಾಯಿ'!&lt;/h2&gt;&lt;p&gt;ಸ್ಥಳೀಯ ಮೂಲಗಳ ಪ್ರಕಾರ, ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಧಡಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ಶಾಲಾ ಆಟದ ಅವಧಿಯಲ್ಲಿ (Sports time) 2, 3 ಮತ್ತು 4ನೇ ತರಗತಿಯ ಪುಟಾಣಿ ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಶಾಲೆಯ ಆವರಣದ ಪಕ್ಕದಲ್ಲೇ ಇದ್ದ ಗಿಡವೊಂದರಲ್ಲಿ ಬಿಟ್ಟಿದ್ದ ಕಾಯಿಗಳನ್ನು ಗಮನಿಸಿದ ಮಕ್ಕಳು, ಅವುಗಳನ್ನು ಗೋಡಂಬಿ ಬೀಜ ಎಂದು ಭಾವಿಸಿ ತಿಂದಿದ್ದಾರೆ.&lt;/p&gt;&lt;p&gt;ಇದು ಒಬ್ಬರಿಂದ ಒಬ್ಬರಿಗೆ ವಿಷಯ ಮುಟ್ಟಿ ಒಟ್ಟು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆ ಬೀಜಗಳನ್ನು ಕಿತ್ತು ತಿಂದಿದ್ದಾರೆ. ಆದರೆ, ಆ ಮಕ್ಕಳು ತಿಂದಿದ್ದು ಗೋಡಂಬಿಯನ್ನಲ್ಲ, ಬದಲಿಗೆ ವಿಷಕಾರಿ ಅಂಶವಿರುವ 'ಔಡಲ ಕಾಯಿ' (Castor Seeds - ಹರಳೆಣ್ಣೆ ಕಾಯಿ) ಎಂಬುದು ಬಳಿಕ ಬೆಳಕಿಗೆ ಬಂದಿದೆ&lt;/p&gt;&lt;h2&gt;ವಾಂತಿ, ಭೇದಿ, ತಲೆಸುತ್ತು, ಮಕ್ಕಳ ಆರೋಗ್ಯದಲ್ಲಿ ಏರುಪೇರು!&lt;/h2&gt;&lt;p&gt;ಬೀಜ ತಿಂದ ಕೆಲವೇ ನಿಮಿಷಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದೆ. ಒಂದಾದ ಮೇಲೊಂದರಂತೆ ಮಕ್ಕಳಿಗೆ ತೀವ್ರ ಹೊಟ್ಟೆನೋವು, ವಾಂತಿ, ಭೇದಿ ಹಾಗೂ ತಲೆಸುತ್ತುವಿಕೆ ಕಾಣಿಸಿಕೊಂಡಿದೆ. ಏಕಾಏಕಿ ಇಷ್ಟೊಂದು ಸಂಖ್ಯೆಯ ಮಕ್ಕಳು ಅಸ್ವಸ್ಥಗೊಂಡದನ್ನು ನೋಡಿ ಶಾಲಾ ಶಿಕ್ಷಕರು ಹಾಗೂ ಸ್ಥಳೀಯ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಸ್ವಸ್ಥಗೊಂಡವರಲ್ಲಿ ಸುಮಾರು 18 ಬಾಲಕಿಯರು ಹಾಗೂ 9 ಬಾಲಕರು ಸೇರಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;ಗದಗ ಜಿಮ್ಸ್ (GIMS) ಆಸ್ಪತ್ರೆಗೆ ದಾಖಲು:&lt;/h2&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಪರಿಸ್ಥಿತಿಯ ಗಂಭೀರತೆ ಅರಿತ ಶಾಲಾ ಮಂಡಳಿ ಮತ್ತು ಪೋಷಕರು, ಅಸ್ವಸ್ಥಗೊಂಡ ಎಲ್ಲಾ 25ಕ್ಕೂ ಹೆಚ್ಚು ಮಕ್ಕಳನ್ನು ತಕ್ಷಣವೇ ಗದಗದ ಜಿಮ್ಸ್ (GIMS) ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಜಿಮ್ಸ್ ಆಸ್ಪತ್ರೆಯ ಮಕ್ಕಳ ತುರ್ತು ಚಿಕಿತ್ಸಾ ವಿಭಾಗದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ತಂಡ ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದೆ. ಸದ್ಯಕ್ಕೆ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಶಾಲಾ ಆವರಣದ ಸುತ್ತಮುತ್ತ ಇಂತಹ ವಿಷಕಾರಿ ಗಿಡ-ಗಂಟೆಗಳು ಇರಬಾರದು ಹಾಗೂ ಅಪರಿಚಿತ ಕಾಯಿಗಳನ್ನು ತಿನ್ನಬಾರದು ಎಂದು ಮಕ್ಕಳಿಗೆ ಜಾಗೃತಿ ಮೂಡಿಸಬೇಕಾದ ಅಗತ್ಯವನ್ನು ಈ ಘಟನೆ ನೆನಪಿಸಿದೆ.&lt;/p&gt;]]></content:encoded>
            <category>gadag</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/over-25-children-rushed-to-gadag-gims-hospital-after-consuming-wild-castor-beans-during-school-playtime-gdp/articleshow-ka6ng64"/>
        </item>
        <item>
            <title><![CDATA[3 ಬೂತ್‌ನಲ್ಲಿ ನನ್ನ ಹೆಸರಿದೆ ಎಂದ ಬಸವರಾಜ್ ಬೊಮ್ಮಾಯಿ ಕ್ಷಮೆ ಕೇಳಲಿ: ಎಚ್‌ಕೆ ಪಾಟೀಲ್]]></title>
            <link>https://kannada.asianetnews.com/karnataka-districts/basavaraj-bommai-should-apologize-for-saying-my-name-is-in-booth-3-hk-patil-mrq/articleshow-m6t7zqx</link>
            <guid isPermaLink="true">https://kannada.asianetnews.com/karnataka-districts/basavaraj-bommai-should-apologize-for-saying-my-name-is-in-booth-3-hk-patil-mrq/articleshow-m6t7zqx</guid>
            <pubDate>Mon, 06 Jul 2026 05:42:59 +0530</pubDate>
            <description><![CDATA[ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಎಚ್.ಕೆ. ಪಾಟೀಲರ ಹೆಸರು 3 ಬೂತ್&zwnj;ಗಳಲ್ಲಿದೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಆಧಾರರಹಿತ ಎಂದು ತಳ್ಳಿಹಾಕಿದ ಪಾಟೀಲರು, ಅದು ಬೇರೆ ವ್ಯಕ್ತಿಗಳ ಹೆಸರು ಎಂದು ಸ್ಪಷ್ಟನೆ ನೀಡಿ ಕ್ಷಮೆಗೆ ಆಗ್ರಹಿಸಿದ್ದಾರೆ. ಆದರೆ, ದಾಖಲೆ ಆಧರಿಸಿ ಮಾತನಾಡಿದ್ದೇನೆ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwtc4j5svgcv1vakdage0nzw,imgname-hk-patil-1783296575673.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ಉತ್ತಮ ರಾಜಕೀಯ ಕುಟುಂಬದಿಂದ ಬಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಲವಾರು ದಶಕಗಳ ಕಾಲ ರಾಜಕೀಯದಲ್ಲಿ ಇದ್ದವರು. 3 ಬೂತ್&zwnj;ಗಳಲ್ಲಿ ನನ್ನ ಹೆಸರು ಇದೇ ಎಂದು ಅವರು ಮಾಡಿರುವ ಆರೋಪ ಸಂಪೂರ್ಣ ಆಧಾರರಹಿತ. ಅವರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಆಗ್ರಹಿಸಿದ್ದಾರೆ.&lt;/p&gt;&lt;p&gt;ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೊಮ್ಮಾಯಿ ಅವರು ಯಾವುದೇ ದಾಖಲೆಗಳಿಲ್ಲದೆ ಸಾರ್ವಜನಿಕವಾಗಿ ಆರೋಪ ಮಾಡುವುದು ಶೋಭೆ ತರುವುದಿಲ್ಲ ಎಂದರು.&lt;/p&gt;&lt;p&gt;ಹುಲಕೋಟಿ ಗ್ರಾಮದಲ್ಲಿ ಒಂದೇ ಹೆಸರಿನ ಇಬ್ಬರು ಎಚ್.ಕೆ.ಪಾಟೀಲರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಅವರವರ ಭಾವಚಿತ್ರ ಹಾಗೂ ವಿವರಗಳು ಸ್ಪಷ್ಟವಾಗಿ ದಾಖಲಾಗಿವೆ. ಹುಲಕೋಟಿ ಗ್ರಾಮದ ಬೂತ್ ಸಂಖ್ಯೆ 143ರ ಕ್ರಮ ಸಂಖ್ಯೆ 183ರಲ್ಲಿ ನನ್ನ ಹೆಸರಿದೆ. ಅದೇ ಬೂತ್&zwnj;ನ ಕ್ರಮ ಸಂಖ್ಯೆ 161ರಲ್ಲಿ ತಮ್ಮ ಸಹೋದರ ಸಂಬಂಧಿಯಾಗಿರುವರ ಹೆಸರಿದ್ದು, ಅವರು ಕೂಡಾ ಎಚ್.ಕೆ.ಪಾಟೀಲ ಆಗಿದ್ದಾರೆ. ಅದೇ ರೀತಿ ಬೂತ್ ಸಂಖ್ಯೆ 153 ಅಸುಂಡಿ ಗ್ರಾಮಕ್ಕೆ ಸಂಬಂಧಿಸಿದ್ದರೂ ಅದನ್ನು ಹುಲಕೋಟಿ ಎಂದು ಉಲ್ಲೇಖಿಸಿದ್ದಲ್ಲದೇ ಕ್ರಮ ಸಂಖ್ಯೆ 393ರಲ್ಲಿ ಎಚ್.ಕೆ.ಪಾಟೀಲರ ಹೆಸರಿದೆ ಎಂದು ಆರೋಪಿಸಿದ್ದಾರೆ. ಆದರೆ ಆ ಹೆಸರು ನನ್ನದಲ್ಲ, ಅಲ್ಲಿಯೂ ಒಬ್ಬರು ಎಚ್.ಕೆ.ಪಾಟೀಲ ಎನ್ನುವ ಬೇರೆ ಮತದಾರರಿದ್ದಾರೆ. ಬೊಮ್ಮಾಯಿ ಅವರು ಈ ವಾಸ್ತವಾಂಶವನ್ನು ಪರಿಶೀಲಿಸದೇ ಇನ್ನೊಬ್ಬರ ಬಗ್ಗೆ ಹೇಳಿಕೆ ನೀಡಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು.&lt;/p&gt;&lt;p&gt;ನನ್ನ 40 ವರ್ಷ ಸಾರ್ವಜನಿಕ ಜೀವನವನ್ನು ಅವರೂ ನೋಡಿದ್ದಾರೆ. ಆದರೆ ಭಾನುವಾರ ಅವರು ವೈಯಕ್ತಿಕವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಿ ಆರೋಪಿಸಿರುವುದು ನೋವು ತಂದಿದೆ. ಪ್ರಜಾಪ್ರಭುತ್ವದಲ್ಲಿ ಸಿಎಂ ಹುದ್ದೆ ಅಲಂಕರಿಸಿದ ವ್ಯಕ್ತಿ ಯಾವುದೇ ವಿಷಯವನ್ನು ಹೇಳುವ ಮೊದಲು ವಾಸ್ತವಾಂಶಗಳನ್ನು ಪರಿಶೀಲಿಸಬೇಕು. ಆದರೆ, ಬೊಮ್ಮಾಯಿ ಅವರು ಸುಳ್ಳು ಆರೋಪ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ದಾಖಲೆ ಇಟ್ಟುಕೊಂಡೇ ಹೇಳಿದ್ದೇನೆ, ಕ್ಷಮೆ ಪ್ರಶ್ನೆಯೇ ಇಲ್ಲ: ಬೊಮ್ಮಾಯಿ&lt;/strong&gt;&lt;/h2&gt;&lt;p&gt;ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಕುರಿತು ಹಾಗೂ ಮಾಜಿ ಸಚಿವ ಎಚ್&zwnj;.ಕೆ.ಪಾಟೀಲ ಅವರ ಹೆಸರು 3 ಬೂತ್&zwnj;ಗಳಲ್ಲಿ ಇದೇ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈ ಬಗ್ಗೆ ಮುಖ್ಯ ಚುನಾವಣಾ ಅಧಿಕಾರಿ ಪರಿಶೀಲನೆ ನಡೆಸಬೇಕು. ನಾನು ವೈಯಕ್ತಿಕವಾಗಿ ಆಪಾದನೆ ಮಾಡಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ​ಮತಪಟ್ಟಿಯಲ್ಲಿರುವ ಅಧಿಕೃತ ದಾಖಲೆಗಳ ಅನುಗುಣವಾಗಿಯೇ ಶನಿವಾರ ಎಚ್.ಕೆ.ಪಾಟೀಲ ಅವರ ಹೆಸರಿನಲ್ಲಿ 3 ಮತಗಳಿರುವ ಕುರಿತು ಹೇಳಿಕೆ ನೀಡಲಾಗಿತ್ತು. ಒಂದೇ ಕ್ಷೇತ್ರದಲ್ಲಿ, ಒಂದೇ ಊರಿನಲ್ಲಿ ಹಾಗೂ ಪಕ್ಕದ ಊರಿನಲ್ಲಿ ವ್ಯಕ್ತಿಯ ಹೆಸರು ಮತ್ತು ತಂದೆಯ ಹೆಸರು ಒಂದೇ ತರ ಇರುವುದರಿಂದ ಪಕ್ಷದ ಮುಖಂಡರು ಸಂಶಯ ವ್ಯಕ್ತಪಡಿಸಿದ್ದರು. ಆ ಮಾಹಿತಿಯ ಆಧಾರದ ಮೇಲೆಯೇ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದರು.&lt;/p&gt;&lt;p&gt;ಈ ಗೊಂದಲಕ್ಕೆ ಸಂಬಂಧಿಸಿದಂತೆ ಎಚ್.ಕೆ.ಪಾಟೀಲ ಅವರು ಭಾನುವಾರ ನೀಡಿರುವ ಸ್ಪಷ್ಟೀಕರಣವನ್ನು ಚುನಾವಣಾ ಅಧಿಕಾರಿಗಳು ಸೂಕ್ತವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಬೇಕು. ಇದು ಕೇವಲ ಎಚ್.ಕೆ.ಪಾಟೀಲ ಅವರಿಗೆ ಮಾತ್ರ ಸೀಮಿತವಾಗಿಲ್ಲ. ಒಂದೇ ಹೆಸರಿನಲ್ಲಿ 4 ರಿಂದ 5 ಮತಗಳಿರುವ ಹಲವಾರು ಪ್ರಕರಣಗಳಿದ್ದು, ಈಗಾಗಲೇ 3- 4 ಉದಾಹರಣೆಗಳನ್ನು ನೀಡಲಾಗಿದೆ. ಮ್ಯಾಪಿಂಗ್ ಮಾಡಿದ ನಂತರವೂ ಇಂತಹ ತಪ್ಪುಗಳು ಮರುಕಳಿಸುತ್ತಿರುವುದು ಗಂಭೀರ ವಿಚಾರ ಎಂದರು.&lt;/p&gt;&lt;h3&gt;&lt;strong&gt;ವೈಯಕ್ತಿಕ ಆಪಾದನೆ ಮಾಡಿಲ್ಲ:&lt;/strong&gt;&lt;/h3&gt;&lt;p&gt;ನನ್ನ ಬಳಿ ಇದ್ದ ಮಾಹಿತಿಯನ್ನಷ್ಟೇ ಬಹಿರಂಗಪಡಿಸಿದ್ದೇನೆ ಹೊರತು, ಎಚ್.ಕೆ.ಪಾಟೀಲ ಅವರ ಮೇಲೆ ವೈಯಕ್ತಿಕವಾಗಿ ಯಾವುದೇ ಆಪಾದನೆ ಮಾಡಿಲ್ಲ. ಹೀಗಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ಷಮೆ ಕೇಳುವಂತಹ ತಪ್ಪೇನೂ ನಡೆದಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/basavaraj-bommai-should-apologize-for-saying-my-name-is-in-booth-3-hk-patil-mrq/articleshow-m6t7zqx"/>
        </item>
        <item>
            <title><![CDATA[ಗದಗ ಬೈಪಾಸ್ ಎಫೆಕ್ಟ್? ನಾವು ಹೋಗಬೇಕಲ್ವಾ ? ನಾವೇನು ಮಾಡೋದು? ರೈಲು ಪ್ರಯಾಣಿಕರ ಆಕ್ರೋಶ]]></title>
            <link>https://kannada.asianetnews.com/karnataka-districts/indian-railways-no-16535-16536-mysuru-pandharpur-gol-gumbaz-express-diverted-from-gadag-bypass-passengers-outraged-mrq/articleshow-p4uyygi</link>
            <guid isPermaLink="true">https://kannada.asianetnews.com/karnataka-districts/indian-railways-no-16535-16536-mysuru-pandharpur-gol-gumbaz-express-diverted-from-gadag-bypass-passengers-outraged-mrq/articleshow-p4uyygi</guid>
            <pubDate>Tue, 23 Jun 2026 13:02:06 +0530</pubDate>
            <description><![CDATA[ಮೈಸೂರು-ಪಂಢರಪುರ ಗೋಲ್ ಗುಂಬಜ್ ಎಕ್ಸ್&zwnj;ಪ್ರೆಸ್ ರೈಲನ್ನು ಗದಗ ಬೈಪಾಸ್ ಮೂಲಕ ಸಂಚರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ನಿರ್ಧಾರದಿಂದ ಪಂಢರಪುರಕ್ಕೆ ಹೋಗುವ ಭಕ್ತರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsp1aqyprych72hgbtv30zq,imgname-gadag-railway-station-1782199659262.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಕುಮಾರ ಕುಷ್ಟಗಿ&lt;/strong&gt;&lt;/p&gt;&lt;p&gt;&lt;strong&gt;ಗದಗ: &lt;/strong&gt;ವಿಜಯಪುರ, ಯಶವಂತಪುರ ನಂತರ ಈಗ ಮೈಸೂರು, ಪಂಢರಪುರ ಗೋಲ್ ಗುಂಬಜ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16535/36) ಸಂಚಾರವನ್ನೂ ಗದಗ ಮತ್ತು ಹುಬ್ಬಳ್ಳಿ ಬೈಪಾಸ್ ಮೂಲಕ ಕಾರ್ಯಾಚರಣೆ ನಡೆಸಲು ರೈಲ್ವೆ ಇಲಾಖೆ ಅಣಿಯಾಗುತ್ತಿದ್ದು, ಆ ಮೂಲಕ ಗದಗ ಜಿಲ್ಲೆಯ ಜನರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ.&lt;/p&gt;&lt;p&gt;ಪಂಢರಪುರದ ವಿಠ್ಠಲನ ದರ್ಶನಕ್ಕೆ ಹೋಗುವ ಸಾವಿರಾರು ಭಕ್ತರಿಗೆ ಈ ರೈಲು ಆಸರೆಯಾಗಿತ್ತು. ಆದರೆ, ಈಗ ತರಾತುರಿಯಲ್ಲಿ ಈ ರೈಲನ್ನು ಮುಖ್ಯ ನಿಲ್ದಾಣಗಳ ಬದಲಿಗೆ ಬೈಪಾಸ್ ಲೈನ್ ಮೂಲಕ ಓಡಿಸಲು ನಿರ್ಧರಿಸಿರುವುದು ಯಾವ ಉದ್ದೇಶಕ್ಕಾಗಿ ಮತ್ತು ಯಾರ ಹಿತಕ್ಕಾಗಿ ಎನ್ನುವುದನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ.&lt;/p&gt;&lt;p&gt;ಇತ್ತೀಚೆಗಷ್ಟೇ ಆರಂಭವಾದ ವಿಜಯಪುರ, ಯಶವಂತಪುರ ರೈಲು ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಸಂಚರಿಸುವಾಗ ಗದಗ ಬೈಪಾಸ್ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಅದನ್ನು ರದ್ದುಗೊಳಿಸಿದ್ದ ಇಲಾಖೆ ಈಗ ಪಂಢರಪುರ, ಮೈಸೂರು ರೈಲಿಗೆ ಗದಗ ಮತ್ತು ಹುಬ್ಬಳ್ಳಿ ಬೈಪಾಸ್ ನಲ್ಲಿ ಮಾತ್ರ ನಿಲುಗಡೆಗೆ ಅವಕಾಶ ನೀಡಿದೆ. ಆದರೆ, ಬೈಪಾಸ್ ರೈಲು ನಿಲ್ದಾಣಗಳಿಗೆ ತಲುಪಲು ಸಾರ್ವಜನಿಕರಿಗೆ ಸಾಧ್ಯವಾಗದ ಸ್ಥಿತಿ ಇದೆ. ಇದು ಇಲಾಖೆ ಅಧಿಕಾರಿಗಳಿಗೆ ಯಾಕೆ ಗೊತ್ತಾಗುತ್ತಿಲ್ಲ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ.&lt;/p&gt;&lt;h2&gt;&lt;strong&gt;ಕಿಂಚಿತ್ತು ಗಮನ ನೀಡದ ಸಂಸದರು&lt;/strong&gt;&lt;/h2&gt;&lt;p&gt;ಹಾವೇರಿ-ಗದಗ ಸಂಸದರಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ನಂತರ ರೈಲು ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ಸಿಗುತ್ತದೆ. ಇವರು ಮಾಜಿ ಸಿಎಂ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ಪ್ರಧಾನಿ ಮೋದಿ ಅವರೊಂದಿಗೆ ಬೊಮ್ಮಾಯಿ ಅತ್ಯಂತ ಆತ್ಮೀಯ ಸಂಪರ್ಕ ಹೊಂದಿದ್ದಾರೆ. ಇದನ್ನು ಬಳಕೆ ಮಾಡಿಕೊಂಡು ಗದಗ ಜಿಲ್ಲೆಯ ಜನತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದರು ಜಿಲ್ಲೆಯ ಜನತೆ. ಸಧ್ಯ ಸಂಸದರು ಜಿಲ್ಲೆಯ ರೈಲು ಬಳಕೆದಾರರ ಸಮಸ್ಯೆಗಳಿಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ ಎನ್ನುವ ಬೇಸರ ಜನ ವ್ಯಕ್ತಪಡಿಸುತ್ತಾರೆ.&lt;/p&gt;&lt;p&gt;ಗದಗ ಬೈಪಾಸ್ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕ ರೈಲುಗಳನ್ನು ನಿಲ್ಲಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಆರಂಭದಿಂದಲೂ ಜನರಿಗೆ ಭರವಸೆ ನೀಡುತ್ತ ಬಂದಿತ್ತು. ವಿಜಯಪುರ-ಯಶವಂತಪುರ ರೈಲು ಸಂಚಾರದ ವೇಳೆಯೂ ಇದೇ ಮಾತನ್ನು ಪುನರುಚ್ಚರಿಸಿತ್ತು. ಆದರೆ, ಕೊಟ್ಟ ಮಾತಿಗೆ ತಪ್ಪಿ ಕೆಲವೇ ದಿನಗಳಲ್ಲಿ ಹೊಸ ರೈಲನ್ನು ಇದೇ ಮಾರ್ಗದಲ್ಲಿ ಓಡಿಸುತ್ತಿದೆ. ಇದರಿಂದ ಕೇವಲ ಗದಗ ಜಿಲ್ಲೆ ಮಾತ್ರವಲ್ಲ ಅಕ್ಕ ಪಕ್ಕದ ಜಿಲ್ಲೆಯ ನಿತ್ಯವೂ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ರೈಲ್ವೆ ಹೋರಾಟಗಾರ ಗಣೇಶಸಿಂಗ್ ಬ್ಯಾಳಿ ಹೇಳಿದರು.&lt;/p&gt;&lt;p&gt;ಈ ಬಗ್ಗೆ ನೈಋತ್ಯ ರೈಲ್ವೆ ವಲಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರೈಲ್ವೆ ಮಂಡಳಿ ಆದೇಶ ಈಗಷ್ಟೆ ಬಂದಿದೆ ಎಂದು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ಪಿ.ಆರ್.ಓ. ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indian-railways-no-16535-16536-mysuru-pandharpur-gol-gumbaz-express-diverted-from-gadag-bypass-passengers-outraged-mrq/articleshow-p4uyygi"/>
        </item>
        <item>
            <title><![CDATA[ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು: ಗಜೇಂದ್ರಗಡ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ!]]></title>
            <link>https://kannada.asianetnews.com/karnataka-districts/gadag-mass-construction-work-undertaken-under-narega-project-was-successful-in-gajendragad-s-13-gram-panchayat-mrq/articleshow-p6o0gvw</link>
            <guid isPermaLink="true">https://kannada.asianetnews.com/karnataka-districts/gadag-mass-construction-work-undertaken-under-narega-project-was-successful-in-gajendragad-s-13-gram-panchayat-mrq/articleshow-p6o0gvw</guid>
            <pubDate>Wed, 10 Jun 2026 07:40:09 +0530</pubDate>
            <description><![CDATA[ಗಜೇಂದ್ರಗಡ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಿಂದಾಗಿ, ಇತ್ತೀಚಿನ ಮಳೆಗೆ ಸಾವಿರಾರು ಕಂದಕಗಳು ಜಲಾವೃತಗೊಂಡಿವೆ. ಇದು ಮಣ್ಣಿನ ಸವಕಳಿಯನ್ನು ತಡೆಯುವುದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktqmaxk3vdxhtbs4rdtppvqj,imgname-gajendragad-nrega-1781057025635.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಸ್.ಎಂ. ಸೈಯದ್&lt;/strong&gt;&lt;/p&gt;&lt;p&gt;&lt;strong&gt;ಗದಗ: &lt;/strong&gt;ಗಜೇಂದ್ರಗಡ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿದ್ದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಪರಿಣಾಮ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಕಂದಕಗಳು ತುಂಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.&lt;/p&gt;&lt;p&gt;ತಾಲೂಕಿನಾದ್ಯಂತ ಮೇ ಮತ್ತು ಜೂನ್ ತಿಂಗಳಲ್ಲಿ &quot;ವಲಸೆ ಯಾಕೆ ನಿಮ್ಮೂರಲ್ಲಿಯೇ ಕೆಲಸ&quot; ಅಭಿಯಾನದಡಿ 13 ಗ್ರಾಪಂಗಳಲ್ಲಿ ಕೈಗೊಂಡಿದ್ದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ರೈತ ಕಾರ್ಮಿಕರಿಗೆ ಕೆಲಸ ಕೊಡುವುದರ ಜತೆಗೆ ಜಮೀನುಗಳಲ್ಲಿ ಬದು ನಿರ್ಮಿಸಿಕೊಂಡಿದ್ದರು. ಪರಿಣಾಮ ಸದ್ಯ ಮಳೆ ನೀರು ಬದು ಬದಿಯ ಕಂದಕಗಳಲ್ಲಿ ತುಂಬಿ ಹರಿಯುತ್ತಿವೆ.&lt;/p&gt;&lt;p&gt;ತಾಲೂಕಿನ ಶಾಂತಗೇರಿ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅನುಮೋದನೆಗೊಂಡ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾರ್ಯ ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಬದು ನಿರ್ಮಾಣ ಕಾಮಗಾರಿ ಅಂದಾಜು 9 ಲಕ್ಷ ರು. ಮೊತ್ತದಲ್ಲಿ 2675 ಮಾನವ ದಿನಗಳ ಸೃಜಿಸಿ, ಬರೊಬ್ಬರಿ 1337ಕ್ಕೂ ಅಧಿಕ ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು!&lt;/strong&gt;&lt;/h2&gt;&lt;p&gt;ಶಾಂತಗೇರಿ ಗ್ರಾಮದಲ್ಲಿ ಈಗಾಗಲೇ 5350 ಕಂದಕಗಳನ್ನು ನಿರ್ಮಾಣ ಮಾಡಿದ್ದು, ಭಾನುವಾರ, ಸೋಮವಾರ ಸುರಿದ ಮಳೆಯಿಂದಾಗಿ ಕಂದಕಗಳು ಭರ್ತಿಯಾಗಿವೆ. 95 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 456 ಜನ ಅಕುಶಲ ಕೂಲಿಕಾರರು ಸೇರಿ ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ಕೆಲಸ ಮಾಡಿದ್ದಾರೆ. 5350 ಕಂದಕಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಜಮೀನಿನ ಸುತ್ತ ಬದು ನಿರ್ಮಾಣವಾಗಿದೆ. ಮಳೆಯಿಂದ ನೀರು ಭೂಮಿಯಲ್ಲಿ ಇಂಗಿದ ನಂತರ ಕಂದಕಗಳಲ್ಲಿ ಸಂಗ್ರಹಗೊಂಡಿವೆ. ಇದರಿಂದಾಗಿ ತಮ್ಮ ಜಮೀನಿನಲ್ಲಿನ ಮಣ್ಣಿನ ಸವಕಳಿ ತಪ್ಪಿದೆ. ಬದುವಿನ ಹತ್ತಿರ ಕಂದಕಗಳನ್ನು ನಿರ್ಮಾಣ ಮಾಡಿದ್ದರಿಂದ ಬದು ಬೇಸಾಯ ಮಾಡಲು ಉಪಯುಕ್ತವಾಗಲಿದೆ.&lt;/p&gt;&lt;h3&gt;&lt;strong&gt;ಎಲ್ಲೆಲ್ಲಿ ಕಂದಕಗಳಲ್ಲಿ ನೀರು?&lt;/strong&gt;&lt;/h3&gt;&lt;p&gt;ತಾಲೂಕಿನ ರಾಜೂರು, ಸೂಡಿ, ಕುಂಟೋಜಿ, ರಾಂಪೂರು, ನಿಡಗುಂದಿ, ಇಟಗಿ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಯೋಜನೆ ರೂಪಿಸಿ ಭೌಗೊಳಿಕವಾಗಿ ಮೇಲ್ಮಟ್ಟದಿಂದ ಕೆಳಮಟ್ಟದವರೆಗೂ ಹಂತ- ಹಂತವಾಗಿ ಜಮೀನಿನಲ್ಲಿ ಸಾಮೂಹಿಕ ಬದು ನಿರ್ಮಾಣ ಕಾರ್ಯ ನಡೆಸಲಾಗಿದೆ. ಹೀಗಾಗಿ ಮುಂಗಾರು ಬಿತ್ತನೆಯಲ್ಲಿ ಮಗ್ನವಾಗಿರುವ ರೈತರಿಗೆ ಜಮೀನುಗಳಲ್ಲಿ ನಿಂತ ಮಳೆ ನೀರು ಹರ್ಷ ತಂದಿದೆ.&lt;/p&gt;&lt;h3&gt;&lt;strong&gt;ಮಳೆನೀರು ಸಂಗ್ರಹ&lt;/strong&gt;&lt;/h3&gt;&lt;p&gt;ನರೇಗಾ ಯೋಜನೆಯಡಿ ಬದು ನಿರ್ಮಾಣ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಾರಂಭಗೊಂಡಿವೆ. ಕೂಲಿಕಾರರು ರೈತರ ಜಮೀನಿನಲ್ಲಿ ಕಂದಕ ಬದುಗಳನ್ನು ನಿರ್ಮಾಣ ಮಾಡಿದ್ದರಿಂದ ಮುಂಗಾರು ಹಂಗಾಮಿನ ಮಳೆಗೆ ಕಂದಕಗಳಲ್ಲಿ ಮಳೆನೀರು ಸಂಗ್ರಹವಾಗಿದೆ. ಸರ್ಕಾರದ ಯೋಜನೆ ಈಡೇರಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಶರಣಪ್ಪ ನರೇಗಲ್ ಸಂತಸ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಜೇಂದ್ರಗಡದಲ್ಲಿ 'ಥರ್ಡ್ ಐ' ತಪ್ಪಿಸಲು ವಾಹನ ಸವಾರರ ವಾಮಮಾರ್ಗ! ಸಫಲವಾಗದ ಸುಗಮ ಸಂಚಾರ&lt;/strong&gt;&lt;/p&gt;&lt;p&gt;ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಯೋಜನೆ ರೂಪಿಸಿ ಭೌಗೊಳಿಕವಾಗಿ ಮೇಲ್ಮಟ್ಟದಿಂದ ಸಮುದಾಯ ಬದು ನಿರ್ಮಾಣ ಮಾಡಲಾಗುವುದು. ಬೇಸಿಗೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವುದರ ಜತೆಗೆ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕಂದಕದಲ್ಲಿ ಮಳೆನೀರು ತುಂಬಿರುವುದು ಯೋಜನೆ ಯಶಸ್ವಿಯಾಗಿದೆ &amp;nbsp;ಎಂದು ಗಜೇಂದ್ರಗಡ ತಾ.ಪಂ. ಇಒ &amp;nbsp;ಚಂದ್ರಶೇಖರ ಬಿ. ಕಂದಕೂರು ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Gadag: ಜಲಸಂಕಷ್ಟಕ್ಕೆ ಮುಕ್ತಿ; ಬರೋಬ್ಬರಿ ₹115 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮಹಾ ಯೋಜನೆ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-mass-construction-work-undertaken-under-narega-project-was-successful-in-gajendragad-s-13-gram-panchayat-mrq/articleshow-p6o0gvw"/>
        </item>
        <item>
            <title><![CDATA[15,500 ಅಡಿ ಎತ್ತರದ ಶಿಖರ ಏರಿದ ಸೃಷ್ಟಿ ಮೇಟಿ; ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ]]></title>
            <link>https://kannada.asianetnews.com/karnataka-districts/gadag-ncc-cadet-srishti-meti-a-student-from-jakkali-village-has-scaled-a-15500-foot-peak-mfq/articleshow-qzo8xqp</link>
            <guid isPermaLink="true">https://kannada.asianetnews.com/karnataka-districts/gadag-ncc-cadet-srishti-meti-a-student-from-jakkali-village-has-scaled-a-15500-foot-peak-mfq/articleshow-qzo8xqp</guid>
            <pubDate>Mon, 22 Jun 2026 06:32:14 +0530</pubDate>
            <description><![CDATA[ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಉಮೇಶ್ ಮೇಟಿ ಅವರು ಉತ್ತರಾಖಂಡದಲ್ಲಿ 15,500 ಅಡಿ ಎತ್ತರದ ಹುರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ. ಎನ್&zwnj;ಸಿಸಿ ಕೆಡೆಟ್ ಆಗಿರುವ ಅವರು, ಶಿಖರದ ತುದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ತಮ್ಮ ಗ್ರಾಮ, ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvpdfyjs74mr4cmwgxxrn6hg,imgname-srishti-meti-1782090037849.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ಉತ್ತರಾಖಂಡದ ಉತ್ತರ ಕಾಶಿಯಲ್ಲಿರುವ ನೆಹರು ಇನ್&zwnj;ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್(ಎನ್&zwnj;ಐಎಂ) ವತಿಯಿಂದ ಆಯೋಜಿಸಿದ್ದ ಪ್ರತಿಷ್ಠಿತ ಪರ್ವತಾರೋಹಣ ಶಿಬಿರದಲ್ಲಿ ಭಾಗವಹಿಸಿದ್ದ ಸಮೀಪದ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಉಮೇಶ್ ಮೇಟಿ ಅವರು 15500 ಅಡಿ ಎತ್ತರದ ಹುರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ಸಾಹಸ, ಸಾಧನೆ ಮೆರೆದಿದ್ದಾರೆ.&lt;/p&gt;&lt;h2&gt;&lt;strong&gt;ಎನ್&zwnj;ಸಿಸಿ ಘಟಕದ ಕೆಡೆಟ್ ಸೃಷ್ಟಿ&lt;/strong&gt;&lt;/h2&gt;&lt;p&gt;ಗದುಗಿನ ಜೆಟಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಹಾಗೂ 38 ಕೆಎಆರ್ ಬಿಎನ್ ಎನ್&zwnj;ಸಿಸಿ ಘಟಕದ ಕೆಡೆಟ್ ಆಗಿರುವ ಸೃಷ್ಟಿ ಅವರು ಶಿಖರದ ತುದಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುವ ಮೂಲಕ ದೇಶಭಕ್ತಿ, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಅನಾವರಣಗೊಳಿಸಿದ್ದಾರೆ. ಸಾಧನೆಯ ಮೂಲಕ ಅವರು ತಮ್ಮ ಕಾಲೇಜು, ಕೆಎಲ್ಇ ಸಂಸ್ಥೆ, ಗದಗ ಜಿಲ್ಲೆ ಹಾಗೂ ಜಕ್ಕಲಿ ಗ್ರಾಮಕ್ಕೆ ವಿಶೇಷ ಕೀರ್ತಿ ತಂದಿದ್ದಾರೆ.&lt;/p&gt;&lt;p&gt;ಸೃಷ್ಟಿ ಅವರ ಈ ಅಪೂರ್ವ ಸಾಧನೆಗೆ ಜೆಟಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್&zwnj;ಸಿಸಿ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಶಿಖರಗಳನ್ನು ಏರಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-ncc-cadet-srishti-meti-a-student-from-jakkali-village-has-scaled-a-15500-foot-peak-mfq/articleshow-qzo8xqp"/>
        </item>
        <item>
            <title><![CDATA[33 ದಿನ ಯೋಗಸಮಾಧಿಗೆ ಹೋಗಿದ್ದ ರಾಚೋಟೇಶ್ವರ ಶ್ರೀಗಳ ಆರೋಗ್ಯ ಹೇಗಿದೆ? ವೈದ್ಯರಿಂದ ಮಾಹಿತಿ]]></title>
            <link>https://kannada.asianetnews.com/karnataka-districts/gadag-how-is-the-health-of-rachoteshwar-sri-who-went-to-yoga-samadhi-for-33-days-information-from-the-doctor-mrq/articleshow-tixtcok</link>
            <guid isPermaLink="true">https://kannada.asianetnews.com/karnataka-districts/gadag-how-is-the-health-of-rachoteshwar-sri-who-went-to-yoga-samadhi-for-33-days-information-from-the-doctor-mrq/articleshow-tixtcok</guid>
            <pubDate>Tue, 07 Jul 2026 08:10:34 +0530</pubDate>
            <description><![CDATA[&lt;p&gt;ಗದಗ ಜಿಲ್ಲೆಯ ಡಾ.ರಾಚೋಟೇಶ್ವರ ಸ್ವಾಮೀಜಿ ಅವರು 33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನವನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwrsgvt2g0avn5wg03e4j59a,imgname-gadag-swamiji---3--1783243501378.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ಸತತ 33 ದಿನಗಳ ಕಾಲ ಶಿವಯೋಗ ಸಮಾಧಿ ಅನುಷ್ಠಾನ ಕೈಗೊಂಡು ಪೂರ್ಣಗೊಳಿಸಿರುವ ಗದಗ ಜಿಲ್ಲೆಯ ಅಂತೂರ- ಬೆಂತೂರ ಗ್ರಾಮದ ಬೂದೀಶ್ವರ ಮಠದ ಡಾ.ರಾಚೋಟೇಶ್ವರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಗದಗ ಆಸ್ಪತ್ರೆಯಿಂದಲೇ ವೀಡಿಯೋ ಸಂದೇಶದ ಮೂಲಕ ಭಕ್ತರಿಗೆ ಧೈರ್ಯ ತುಂಬಿದ್ದಾರೆ.&lsquo;ಯಾರೂ ಆತಂಕಪಡುವ ಅಗತ್ಯವಿಲ್ಲ. ನಾನು ಆರೋಗ್ಯವಾಗಿದ್ದೇನೆ&rsquo; ಎಂದಿದ್ದಾರೆ. ಸುದೀರ್ಘ ಯೋಗಸಮಾಧಿಯ ಬಳಿಕವೂ ಸ್ವಾಮೀಜಿ ದೇಹದ ಸ್ಥಿತಿ ಸಹಜವಾಗಿರುವುದು ವೈದ್ಯರನ್ನು ಅಚ್ಚರಿಗೊಳಿಸಿದೆ ಎನ್ನಲಾಗಿದೆ.&lt;/p&gt;&lt;p&gt;ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲ ಭಕ್ತರು ನೆಮ್ಮದಿಯಿಂದಿರಿ&rsquo; ಎಂದು ಮನವಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ತೀವ್ರ ನಿಗಾಘಟಕದಲ್ಲಿರಿಸಿ ಚಿಕಿತ್ಸೆ&lt;/strong&gt;&lt;/h2&gt;&lt;p&gt;ಅಗತ್ಯ ಚಿಕಿತ್ಸೆ ಬಳಿಕ ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗುವ ನಿರೀಕ್ಷೆ ಇದೆ . ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ಸ್ವಾಮೀಜಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತೀವ್ರ ನಿಗಾಘಟಕದಲ್ಲಿರಿಸಿ ಸಲೈನ್ ನೀಡಲಾಗಿದೆ. ಅವರ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಲೋಕ ಕಲ್ಯಾಣಕ್ಕಾಗಿ ಯೋಗಸಮಾಧಿ&lt;/strong&gt;&lt;/h3&gt;&lt;p&gt;ಮಹದಾಯಿ ಯೋಜನೆ ಜಾರಿ ಸೇರಿದಂತೆ ಜಗತ್ತಿನ ಕಲ್ಯಾಣಕ್ಕಾಗಿ ಜೂನ್ 3ರ ಮಧ್ಯರಾತ್ರಿ ಗದಗದ ಜಿಲ್ಲೆಯಲ್ಲಿರುವ ರಾಚೂಟೇಶ್ವರ ಸ್ವಾಮೀಜಿಯವರು ಸಮಾಧಿ ಸ್ಥಿತಿಗೆ ಹೋಗಿದ್ದರು. 33 ದಿನಗಳ ಬಳಿಕ ಸಮಾಧಿಯಿಂದ ಹೊರಗೆ ಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ. ಅನ್ನ, ನೀರು, ಗಾಳಿ ಮತ್ತು ಬೆಳಕಿಲ್ಲದೆ ಸತತ 775 ಗಂಟೆಗಳ ಕಾಲ ಸ್ವಾಮೀಜಿಗಳು ಯೋಗಸಮಾಧಿಯಲ್ಲಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-how-is-the-health-of-rachoteshwar-sri-who-went-to-yoga-samadhi-for-33-days-information-from-the-doctor-mrq/articleshow-tixtcok"/>
        </item>
        <item>
            <title><![CDATA[33 ದಿನಗಳ ಬಳಿಕ ಸಮಾಧಿಯಿಂದ ಹೊರಬಂದು ದರ್ಶನ ನೀಡಿದ ಸ್ವಾಮೀಜಿ; 775 ಗಂಟೆಯ ಯೋಗಸಮಾಧಿ]]></title>
            <link>https://kannada.asianetnews.com/gallery/karnataka-districts/gadag-swamiji-came-out-of-samadhi-and-gave-darshan-after-33-days-775-hours-of-yoga-samadhi-mrq-w7xc0ik</link>
            <guid isPermaLink="true">https://kannada.asianetnews.com/gallery/karnataka-districts/gadag-swamiji-came-out-of-samadhi-and-gave-darshan-after-33-days-775-hours-of-yoga-samadhi-mrq-w7xc0ik</guid>
            <pubDate>Sun, 05 Jul 2026 14:57:11 +0530</pubDate>
            <description><![CDATA[ಗದಗ ಜಿಲ್ಲೆಯ ರಾಚೂಟೇಶ್ವರ ಸ್ವಾಮೀಜಿಯವರು ಮಹದಾಯಿ ಯೋಜನೆ ಮತ್ತು ಲೋಕ ಕಲ್ಯಾಣಕ್ಕಾಗಿ 33 ದಿನಗಳ ಕಾಲ ಯೋಗಸಮಾಧಿಯಲ್ಲಿದ್ದರು. ಅನ್ನ, ನೀರು, ಗಾಳಿ, ಬೆಳಕಿಲ್ಲದೆ 775 ಗಂಟೆಗಳ ಕಠಿಣ ಅನುಷ್ಠಾನದ ನಂತರ, ಅವರು ಸಮಾಧಿಯಿಂದ ಯಶಸ್ವಿಯಾಗಿ ಹೊರಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrsgvt2g0avn5wg03e4j59a,imgname-gadag-swamiji---3--1783243501378.jpg" type="image/jpeg" height="390" width="690"/>
            <content:encoded><![CDATA[ಗದಗ ಜಿಲ್ಲೆಯ ರಾಚೂಟೇಶ್ವರ ಸ್ವಾಮೀಜಿಯವರು ಮಹದಾಯಿ ಯೋಜನೆ ಮತ್ತು ಲೋಕ ಕಲ್ಯಾಣಕ್ಕಾಗಿ 33 ದಿನಗಳ ಕಾಲ ಯೋಗಸಮಾಧಿಯಲ್ಲಿದ್ದರು. ಅನ್ನ, ನೀರು, ಗಾಳಿ, ಬೆಳಕಿಲ್ಲದೆ 775 ಗಂಟೆಗಳ ಕಠಿಣ ಅನುಷ್ಠಾನದ ನಂತರ, ಅವರು ಸಮಾಧಿಯಿಂದ ಯಶಸ್ವಿಯಾಗಿ ಹೊರಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ.&lt;img&gt;&lt;p&gt;ಮಹದಾಯಿ ಯೋಜನೆ ಜಾರಿ ಸೇರಿದಂತೆ ಜಗತ್ತಿನ ಕಲ್ಯಾಣಕ್ಕಾಗಿ ಜೂನ್ 3ರ ಮಧ್ಯರಾತ್ರಿ ಗದಗದ ಜಿಲ್ಲೆಯಲ್ಲಿರುವ ರಾಚೂಟೇಶ್ವರ ಸ್ವಾಮೀಜಿಯವರು ಸಮಾಧಿ ಸ್ಥಿತಿಗೆ ಹೋಗಿದ್ದರು. 33 ದಿನಗಳ ಬಳಿಕ ಸಮಾಧಿಯಿಂದ ಹೊರಗೆ ಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ. ಅನ್ನ, ನೀರು, ಗಾಳಿ ಮತ್ತು ಬೆಳಕಿಲ್ಲದೆ ಸತತ 775 ಗಂಟೆಗಳ ಕಾಲ ಸ್ವಾಮೀಜಿಗಳು ಯೋಗಸಮಾಧಿಯಲ್ಲಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಿಮೆಂಟ್&zwnj;ನಿಂದ ಸಂಪೂರ್ಣವಾಗಿ ಪ್ಯಾಕ್ ಮಾಡಲಾಗಿದ್ದ ಕಲ್ಲಿನ ಮಂಟಪದೊಳಗೆ ಸ್ವಾಮೀಜಿಯವರು 33 ದಿನಗಳ ಕಾಲ ಕಳೆದಿದ್ದಾರೆ. ಇಂದು ಆ 33 ದಿನಗಳ ಶಿವಯೋಗ ಸಮಾಧಿ ಅಂತ್ಯಗೊಂಡಿದ್ದು, ಸ್ವಾಮೀಜಿಯವರು ಸಮಾಧಿಯಿಂದ ಯಶಸ್ವಿಯಾಗಿ ಆಚೆ ಬಂದಿದ್ದಾರೆ. ಸಮಾಧಿಯಿಂದ ಹೊರಬಂದ ನಂತರ ಅಭ್ಯಂಗ (ಸ್ನಾನ) ಮುಗಿಸಿ, ಅಪಾರ ಭಕ್ತ ಸಮೂಹಕ್ಕೆ ರಾಚೂಟೇಶ್ವರ ಸ್ವಾಮೀಜಿಯವರು ದರ್ಶನ ನೀಡಿದರು.&lt;/p&gt;&lt;img&gt;&lt;p&gt;ಮೊದಲು ನಮಗೆ ತುಂಬಾ ಆತಂಕ ಇತ್ತು. ಆದ್ರೀಗ ಸ್ವಾಮಿಗಳನ್ನು ಜೀವಂತವಾಗಿ ಮತ್ತು ಆರೋಗ್ಯವಾಗಿ ನೋಡಿ ತುಂಬಾ ಖುಷಿಯಾಗುತ್ತಿದೆ ಎಂದು ಗ್ರಾಮಸ್ಥರು ಭಾವುಕರಾಗಿ ನುಡಿದಿದ್ದಾರೆ. ಸ್ವಾಮೀಜಿಯವರು ಈ ಹಿಂದೆಯೂ ಶಿವಯೋಗ ಸಮಾಧಿ ಹಾಗೂ ಮೌನಾನುಷ್ಠಾನಗಳನ್ನು ಮಾಡಿದ್ದರಾದರೂ, ಇಷ್ಟು ಸುದೀರ್ಘವಾಗಿ (33 ದಿನಗಳ ಕಾಲ) ಸಮಾಧಿಯಾಗಿದ್ದು ಇದೇ ಮೊದಲ ಬಾರಿ.&lt;/p&gt;&lt;img&gt;&lt;p&gt;ಈ ಯೋಗದ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಮತ್ತು ಸ್ವಾಮಿಗಳ ದರ್ಶನ ಪಡೆಯಲು ತೆಲಂಗಾಣ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದ ಬೂದೀಶ್ವರ ಮಠದತ್ತ ಆಗಮಿಸುತ್ತಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/gadag-swamiji-came-out-of-samadhi-and-gave-darshan-after-33-days-775-hours-of-yoga-samadhi-mrq-w7xc0ik"/>
        </item>
        <item>
            <title><![CDATA[ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತವನ್ನು ಮುನ್ನಡೆಸಬಲ್ಲವರು ಮೋದಿ ಮಾತ್ರ: ಸಂಸದ ಬೊಮ್ಮಾಯಿ]]></title>
            <link>https://kannada.asianetnews.com/karnataka-districts/basavaraj-bommai-says-modi-essential-for-viksit-bharat-2047-gvd/articleshow-x8ogfl4</link>
            <guid isPermaLink="true">https://kannada.asianetnews.com/karnataka-districts/basavaraj-bommai-says-modi-essential-for-viksit-bharat-2047-gvd/articleshow-x8ogfl4</guid>
            <pubDate>Thu, 11 Jun 2026 22:57:58 +0530</pubDate>
            <description><![CDATA[&lt;p&gt;ಯುದ್ಧದಿಂದಾಗಿ ಉಂಟಾಗಿರುವ ಜಾಗತಿಕ ಬಿಕ್ಕಟ್ಟಿನಿಂದ ಭಾರತಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನಡೆಸುವಂತ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಇದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j2p4510rqpbn68jenf8jms4h,imgname-basavaraj-bommai--5-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜೂ.11): &lt;/strong&gt;ಪ್ರಸ್ತುತ ಜಗತ್ತು ಎದುರಿಸುತ್ತಿರುವ ಯುದ್ಧದಿಂದಾಗಿ ಉಂಟಾಗಿರುವ ಜಾಗತಿಕ ಬಿಕ್ಕಟ್ಟಿನಿಂದ ಭಾರತಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನಡೆಸುವಂತ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಇದೆ. 2047ರಲ್ಲಿ ಆತ್ಮನಿರ್ಭರ ಭಾರತ, ವಿಕಸಿತ ಭಾರತ ಆಗಲು ನರೇಂದ್ರ ಮೋದಿಯವರ ಅವಶ್ಯಕತೆ ಬಹಳ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.&lt;/p&gt;&lt;p&gt;ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿಗಳಾಗಿ 4399 ದಿನ ಪೂರೈಸಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದ ಹಿನ್ನೆಲೆ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.&lt;/p&gt;&lt;p&gt;ದೇಶವೇ ಮೆಚ್ಚಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಪ್ರತಿಮ ನಾಯಕರು. ಪ್ರಧಾನಮಂತ್ರಿಯಾಗಿ 12 ವರ್ಷ ಪೂರೈಸಿದ್ದಾರೆ. ಅತಿ ಹೆಚ್ಚು ಅವಧಿಗೆ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ ಎನ್ನುವ ದಾಖಲೆ ಮಾಡಿದ್ದಾರೆ. ಆಧುನಿಕ ಕಾಲದಲ್ಲಿ ಇಷ್ಟೊಂದು ಜನಜಾಗೃತಿಯಾಗಿರುವ ಸಂದರ್ಭದಲ್ಲಿ ಸುದೀರ್ಘವಾಗಿ ದೇಶವನ್ನು ಮುನ್ನಡೆಸುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು.&lt;/p&gt;&lt;p&gt;ಜನರ ಹಿತಕ್ಕಾಗಿ ದಿನಕ್ಕೆ 18 ತಾಸು ಕೆಲಸ ಮಾಡಿದ್ದಾರೆ. ನಿರಂತರ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರು ಮಾಡಿರುವ ಹಲವಾರು ಯೋಜನೆಗಳು ಭಾರತವನ್ನು ವಿಶ್ವದಲ್ಲಿಯೇ ಮೂರನೇ ಆರ್ಥಿಕ ಶಕ್ತಿಯಾಗಿ ತೆಗೆದುಕೊಂಡು ಹೋಗಿದೆ. ಭಾರತದ ಅಭಿವೃದ್ಧಿಯಲ್ಲಿ ಅತ್ಯಂತ ಕೆಳವರ್ಗದವರೂ ಅದರ ಲಾಭ ಮುಟ್ಟುವಂತೆ ಮಾಡಿದ್ದಾರೆ ಎಂದರು.&lt;/p&gt;&lt;p&gt;ಬಡವರಿಗೆ ಮನೆಗಳನ್ನು ನೀಡುವ ಮುಖಾಂತರ ಆರೋಗ್ಯ ವಿಮೆ, ಶಿಕ್ಷಣ, ಉದ್ಯೋಗ ಕೊಡುವ ಮುಖಾಂತರ ಅವರು ಮೂರು ಕೆಲಸಗಳನ್ನು ಬಹಳ ಸ್ಪಷ್ಟವಾಗಿ ಮಾಡಿದ್ದಾರೆ. ಜನಸಾಮಾನ್ಯರು, ಬಡವರು, ದೀನದಲಿತರಿಗೆ, ಹೆಣ್ಣುಮಕ್ಕಳಿಗೆ ಮತ್ತು ಯುವಕರಿಗೆ, ಶಿಕ್ಷಣ, ಉದ್ಯೋಗ, ಸಬಲೀಕರಣ ನೀಡಿದ್ದಾರೆ ಎಂದರು.&lt;/p&gt;&lt;h2&gt;&lt;strong&gt;ಸುದೀರ್ಘ ಇತಿಹಾಸ&lt;/strong&gt;&lt;/h2&gt;&lt;p&gt;ಆರ್ ಎಸ್ ಎಸ್ ಕುರಿತ ವಿರೋಧ ಪಕ್ಷದವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಆರ್ ಎಸ್ ಎಸ್ ಗೆ ಸುದೀರ್ಘ ಇತಿಹಾಸ ಇದೆ. ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯಹೋರಾಟವನ್ನು ಪ್ರಾರಂಭ ಮಾಡಿದರು. ಅದು ಒಂದು ಚಳವಳಿಯಾಗಿ ರೂಪುಗೊಂಡಿತು. ಕಾಂಗ್ರೆಸ್ ವಿದೇಶಿಯರಿಂದ ಸ್ಥಾಪನೆಯಾಗಿದ್ದು, ಆರ್ ಎಸ್ ಎಸ್ ಸ್ವದೇಶಿಯರಿಂದ ಸ್ಥಾಪನೆಯಾಗಿದ್ದು, ಹೀಗಾಗಿ ಇದಕ್ಕೆ ಮನ್ನಣೆ ಪ್ರಶ್ನೆ ಬರುವುದಿಲ್ಲ ಎಂದರು.&lt;/p&gt;&lt;p&gt;ದೇಶದಲ್ಲಿ ಸಾಕಷ್ಟು ನೋಂದಾಯಿತ ಮತ್ತು ನೋಂದಣಿಯಾಗದ ಅನೇಕ ಸಂಸ್ಥೆಗಳಿವೆ. ದೇಶದಲ್ಲಿ ಎಲ್ಲದಕ್ಕೂ ಕಾನೂನಿನಲ್ಲಿ ಅವಕಾಶ ಇದೆ. ಆರ್ ಎಸ್ ಎಸ್ ಇಡಿ ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಸ್ಥೆ ಮತ್ತು ಜನಸೇವೆಯಲ್ಲಿ ಶ್ರೇಷ್ಠವಾದ ಕೆಲಸ ಮಾಡುತ್ತ ಬಂದಿದೆ. ಹೀಗಾಗಿ ಆಗಾಗ ಕೆಲವರು ಈ ರೀತಿಯ ಮಾತುಗಳನ್ನು ಆಡುತ್ತಾರೆ. ಆರ್ ಎಸ್ ಎಸ್ ಜನ ಸೇವೆಯಲ್ಲಿ ಮುಂದುವರಿಯುತ್ತದೆ ಎಂದರು.&lt;/p&gt;]]></content:encoded>
            <category>gadag</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basavaraj-bommai-says-modi-essential-for-viksit-bharat-2047-gvd/articleshow-x8ogfl4"/>
        </item>
    </channel>
</rss>
