<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 17 Sep 2026 12:30:31 +0530</lastBuildDate>
        <atom:link href="https://kannada.asianetnews.com/rss/gadag" rel="self" type="application/rss+xml"/>
        <item>
            <title><![CDATA[ಮನೆ ಮುಂದಿನ ಕಸ ಕೂಡ ಒಮ್ಮೊಮ್ಮೆ ಅನಾಹುತ ತಂದೊಡ್ಡುತ್ತೆ! ಗದಗನಲ್ಲಿ ರಾತ್ರಿಹೊತ್ತಿನಲ್ಲಿ ನಡೆದಿದ್ದೇನು?]]></title>
            <link>https://kannada.asianetnews.com/karnataka-districts/clash-between-two-families-over-a-garbage-issue-in-mundaragi-gadag-district-rav/articleshow-19atvlp</link>
            <guid isPermaLink="true">https://kannada.asianetnews.com/karnataka-districts/clash-between-two-families-over-a-garbage-issue-in-mundaragi-gadag-district-rav/articleshow-19atvlp</guid>
            <pubDate>Sun, 06 Sep 2026 09:59:37 +0530</pubDate>
            <description><![CDATA[ಗದಗ ಜಿಲ್ಲೆಯ ಮುಂಡರಗಿಯಲ್ಲಿ ಕಸದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಪೊಲೀಸ್ ಠಾಣೆಗೆ ದೂರು ನೀಡಿದ್ದಕ್ಕೆ ಕೋಪಗೊಂಡ ಒಂದು ಕುಟುಂಬ, ಮತ್ತೊಂದು ಕುಟುಂಬದ ಮನೆಗೆ ರಾತ್ರಿ ನುಗ್ಗಿ ಹಲ್ಲೆಗೆ ಯತ್ನಿಸಿದೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1tfe7qr09tmk8zrf8rq1j8x,imgname-gadag-incident-1788668747512.jpg" type="image/jpeg" height="390" width="690"/>
            <content:encoded><![CDATA[&lt;p&gt;ಗದಗ (ಸೆ.6): ಕಸದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆಯಾದ ಘಟನೆ ಗದಗ ಜಿಲ್ಲೆಯ ಮುಂಡರಗಿಯ ವಿವೇಕಾನಂದನಗರ ನಡೆದಿದ್ದು, ರಾತ್ರಿ ವೇಳೆ ಪಕ್ಕದ ಮನೆಯ ಕುಟುಂಬದವರು ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;h2&gt;ಕಸದ ವಿಚಾರಕ್ಕೆ ಗಲಾಟೆ&lt;/h2&gt;&lt;p&gt;ಧನಪ್ಪ ಲಮಾಣಿ ಹಲ್ಲೆಗೆ ಯತ್ನಿದ ಆರೋಪ. ಹನಮಂತ ಚೆನ್ನದಾರ್ ಎಂಬುವವರ ಮೇಲೆ ಹಲ್ಲೆಗೆ ಯತ್ನ.ರಾತ್ರಿ ಮನೆಯಲ್ಲಿರುವಾಗಲೇ ಧನಪ್ಪ ಕುಟುಂಬಸ್ಥರು ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ.&lt;/p&gt;&lt;h3&gt;ಪೊಲೀಸ್ ಠಾಣೆಗೆ ದೂರು ನೀಡಿದ್ದಕ್ಕೆ ಹಲ್ಲೆಗೆ ಯತ್ನ&lt;/h3&gt;&lt;p&gt;ಧನಪ್ಪ ಲಮಾಣಿ, ಹನಮಂತ ಚೆನ್ನದಾಸರ್ ಎರಡು ಕುಟುಂಬಗಳು ವಿವೇಕಾನಂದನಗರದ ಅಕ್ಕಪಕ್ಕದ ಮನೆಯವರು. ಅನ್ಯೋನ್ಯವಾಗಿರಬೇಕಿದ್ದ ಕುಟುಂಬ ಕಸದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಆಗಾಗ ಕಿರಿಕ್ ಆಗುತ್ತಿದೆ. ಕಸ ಸ್ವಚ್ಛಗೊಳಿಸುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಪದೇಪದೆ ಕಿರಿಕ್ ಆಗ್ತಿದೆ. ಇದರಿಂದ ಮಾನಸಿಕ ಹಿಂಸೆಗೆ ಒಳಗಾದ ಹನಮಂತ ಚೆನ್ನದಾಸರ್ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.&lt;/p&gt;&lt;p&gt;ತಮ್ಮ ವಿರುದ್ಧ ದೂರು ನೀಡಲು ಹೋಗಿದ್ದರು ಎಂಬ ಕಾರಣಕ್ಕೆ ಕೋಪಗೊಂಡಿದ್ದ ಧನಪ್ಪ ಕುಟುಂಬಸ್ಥರು ರಾತ್ರಿ ಹನಮಂತ ಚೆನ್ನದಾಸರ್ ಮನೆಯಲ್ಲಿರುವ ದಾಳಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಐದಾರು ಜನರು ಕೈಯಲ್ಲಿ ಬ್ಯಾಟ್, ಬಾಟಲ್, ಕಲ್ಲಿನಿಂದ ದಾಳಿಗೆ ಯತ್ನಿಸಿದ್ದಾರೆ. ಹನಮಂತ ಚೆನ್ನದಾಸರ್ ಮನೆಯ ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ. ಬಾಗಿಲು ಮುಚ್ಚಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹನಮಂತ ಕುಟುಂಬಸ್ಥರ ಮೇಲೆಯೇ ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿದ್ದಾರೆ ಆರೋಪಿಸಲಾಗಿದೆ. ಸದ್ಯ ಘಟನೆ ಸಂಬಂಧ ದೂರು ದಾಖಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪೊಲೀಸ್ ವಿಚಾರಣೆ ಬಳಿಕ ಸತ್ಯಾಂಶ ಏನೆಂಬುದು ತಿಳಿಯಲಿದೆ.&lt;/p&gt;]]></content:encoded>
            <category>gadag</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/clash-between-two-families-over-a-garbage-issue-in-mundaragi-gadag-district-rav/articleshow-19atvlp"/>
        </item>
        <item>
            <title><![CDATA[Gadag: ಗದುಗಿನ ಐತಿಹಾಸಿಕ ಸರಸ್ವತಿ ದೇಗುಲದಲ್ಲಿ ದೇವಿ ಮೂರ್ತಿ ಭಗ್ನಗೊಳಿಸಿ ವಿಕೃತಿ!]]></title>
            <link>https://kannada.asianetnews.com/karnataka-districts/gadag-histroric-saraswati-temple-idol-of-goddess-vandalism-by-miscreants-rav/articleshow-2kyud4a</link>
            <guid isPermaLink="true">https://kannada.asianetnews.com/karnataka-districts/gadag-histroric-saraswati-temple-idol-of-goddess-vandalism-by-miscreants-rav/articleshow-2kyud4a</guid>
            <pubDate>Mon, 13 Jul 2026 06:47:22 +0530</pubDate>
            <description><![CDATA[&lt;p&gt;ಗದಗದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಸರಸ್ವತಿ ದೇವಿಯ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. 8ನೇ ಶತಮಾನಕ್ಕೆ ಸೇರಿದ ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಲ್ಲಿದ್ದು, ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxcg4qqdtxdx54hxkzxxq8y0,imgname-----------------------2026-07-13t063152.456-1783904755437.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜು.13): &lt;/strong&gt;ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಸರಸ್ವತಿ ದೇವಿಯ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h2&gt;ಗದಗ ಐತಿಹಾಸಿಕ ಸರಸ್ವತಿ ದೇಗುಲದ ದೇವಿ ಮೂರ್ತಿ ಭಗ್ನ!&lt;/h2&gt;&lt;p&gt;ಐತಿಹಾಸಿಕ ಮಹತ್ವವುಳ್ಳ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಸರಸ್ವತಿ ದೇವಸ್ಥಾನದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ದುಷ್ಕರ್ಮಿಗಳು ದೇವಿಯ ಮೂರ್ತಿಯ ಎದೆಭಾಗವನ್ನು ಹಾನಿಗೊಳಿಸಿ ವಿಕೃತಿ ಮೆರೆದಿದ್ದಾರೆ. ಕಳೆದ ರಾತ್ರಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಶನಿವಾರ ಮಧ್ಯಾಹ್ನ ವಿಷಯ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;8ನೇ ಶತಮಾನದ ಗದಗನ ಸರಸ್ವತಿ ದೇವಾಲಯ&lt;/h3&gt;&lt;p&gt;ಈ ದೇವಾಲಯವು ಸುಮಾರು 8ನೇ ಶತಮಾನಕ್ಕೆ ಸೇರಿದ್ದು, ತನ್ನ ವಾಸ್ತುಶಿಲ್ಪ ವೈಭವಕ್ಕೆ ಹೆಸರುವಾಸಿಯಾಗಿದೆ. ಪ್ರಸ್ತುತ ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಲ್ಲಿದೆ. ಇಂತಹ ಸೂಕ್ಷ್ಮ ಹಾಗೂ ಐತಿಹಾಸಿಕ ಮಹತ್ವದ ಸ್ಥಳದಲ್ಲಿ ಭದ್ರತಾಲೋಪ ಉಂಟಾಗಿರುವುದು ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ಘಟನೆ ನಡೆದ ತಕ್ಷಣವೇ ಗದಗ ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿರುವ ಕುರುಹುಗಳನ್ನು ಸಂಗ್ರಹಿಸಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ಅಡವೀಂದ್ರಸ್ವಾಮಿ ಮಠದಲ್ಲಿ ಶಿವಾನುಭವ&lt;/strong&gt;&lt;/p&gt;&lt;p&gt;ಗದಗ: \Bಪುಣ್ಯಕ್ಷೇತ್ರಗಳ ದರ್ಶನದಿಂದ ಮಾನವ ಜನ್ಮ ಸಾರ್ಥಕವಾಗುತ್ತದೆ. ಕೈಕಾಲು ಗಟ್ಟಿ ಇರುವಾಗಲೇ ಯಾತ್ರೆ ಮಾಡಬೇಕೆಂದು ಅಡ್ನೂರು ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ತಿಳಿಸಿದರು.&lt;/p&gt;&lt;p&gt;ನಗರದ ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಜರುಗಿದ 349ನೇ ಶಿವಾನುಭವ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.&lt;/p&gt;&lt;p&gt;ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಮಾತನಾಡಿ, ಲಿಂ. ಗಂಗಾಧರ ಸ್ವಾಮಿಗಳು, ಕೆ. ಸುಧಾಕರ್ ರಾವ್, ಡಾ. ಬಿ.ಎಫ್. ದಂಡಿ ಹಾಗೂ ಲಿಂ. ಪಾಂಡುರಂಗ ಕುರ್ತುಕೋಟಿ ಅವರ ಸೇವೆಯನ್ನು ಸ್ಮರಿಸಿ, ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ವಿರೂಪಾಕ್ಷಯ್ಯ ಹೊಸಳ್ಳಿಮಠ್ ಕೇದಾರ, ಬದರಿನಾಥ್ ಮಹಿಮೆ ಕುರಿತು ಉಪನ್ಯಾಸ ನೀಡಿದರು.&lt;/p&gt;&lt;p&gt;ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಯಾತ್ರೆಯು ಮನಸ್ಸಿಗೆ ಶಾಂತಿ ನೀಡುತ್ತದೆ ಎಂದರು. ಸುಜಾತಾ ದೊಡ್ಡಮನಿ ಹಾಗೂ ಚನ್ನಬಸಯ್ಯ ಹೇಮಗಿರಿಮಠ ನುಡಿನಮನ ಸಲ್ಲಿಸಿದರು.&lt;/p&gt;&lt;p&gt;ಇದೇ ವೇಳೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿದ ವಿರೂಪಾಕ್ಷಯ್ಯ ಹೊಸಳ್ಳಿಮಠ, ವಿಜಯಕುಮಾರ ಹಿರೇಮಠ, ಡಾ. ರಾಜೇಂದ್ರ ಎಸ್. ಗಡಾದ, ಜ್ಯೋತಿ ಗಡಾದ, ಕಬಾಡಿ ಸಹೋದರ ದಂಪತಿಗಳನ್ನು ಹಾಗೂ ಸವಿತಾ ಹೊಸಳ್ಳಿಮಠ, ಗುರಪ್ಪ ನಿಡಗುಂದಿ ದಂಪತಿ ಮತ್ತು ಶ್ರೀಮತಿ ಬಳಿಗಾರ ಅವರನ್ನು ಸತ್ಕರಿಸಲಾಯಿತು.&lt;/p&gt;&lt;p&gt;ವೀರೇಶ್ವರ ಸ್ವಾಮಿಗಳಿಂದ ವೇದಘೋಷ ನಡೆಯಿತು. ಪ್ರಕಾಶ ಬಂಡಿ ಸ್ವಾಗತಿಸಿದರು, ವಿ.ಎಂ. ಕುಂದ್ರಾಳಹಿರೇಮಠ ನಿರೂಪಿಸಿದರು, ಎಂ.ಎಂ. ಜೋಗಿನ ವಂದಿಸಿದರು. ಚನ್ನಬಸಪ್ಪ ಕಾಳಗಿ, ಪ್ರೊ. ಸಿ. ಲಿಂಗಾರೆಡ್ಡಿ ಉಪಸ್ಥಿತರಿದ್ದರು. ಬಿ.ಎಂ. ಬಿಳೆಯಲಿ, ಜಿ.ಎಂ. ಯಾನಂ ಶೆಟ್ಟಿ, ಡಾ. ಎಲ್.ವಿ. ಪಾಟೀಲ್, ಸುಶೀಲಾ ಕೋಟಿ ಮತ್ತಿತರರು ಪಾಲ್ಗೊಂಡಿದ್ದರು.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-histroric-saraswati-temple-idol-of-goddess-vandalism-by-miscreants-rav/articleshow-2kyud4a"/>
        </item>
        <item>
            <title><![CDATA[Basavaraj Rayareddi ಇಸ್ಲಾಂ ಹೊಗಳಿದ ರಾಯರೆಡ್ಡಿಗೆ ಮುಸ್ಲಿಂ ಪೋಷಾಕು! ಹಜ್‌ ಯಾತ್ರೆಗೆ ದೇಣಿಗೆ ಅಭಿಯಾನಕ್ಕೆ ಮುಂದಾದ ಕಾರ್ಯಕರ್ತರು!]]></title>
            <link>https://kannada.asianetnews.com/karnataka-districts/rayareddy-islam-statement-muslim-attire-hajj-pilgrimage-donation-campaign-karnataka-political-controversy-bmk/articleshow-2nm55h0</link>
            <guid isPermaLink="true">https://kannada.asianetnews.com/karnataka-districts/rayareddy-islam-statement-muslim-attire-hajj-pilgrimage-donation-campaign-karnataka-political-controversy-bmk/articleshow-2nm55h0</guid>
            <pubDate>Thu, 03 Sep 2026 18:14:43 +0530</pubDate>
            <description><![CDATA[&lt;p&gt;ಶಾಸಕ ಬಸವರಾಜ್ ರಾಯರೆಡ್ಡಿ ಅವರ ಇಸ್ಲಾಂ ಪರ ಹೇಳಿಕೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ವಿನೂತನ ಪ್ರತಿಭಟನೆ ನಡೆಸಿವೆ. ರಾಯರೆಡ್ಡಿ ಅವರ ಹಜ್ ಯಾತ್ರೆಗೆ ಹಣ ಸಂಗ್ರಹಿಸಲು ಭಿಕ್ಷಾಟನೆ ಅಭಿಯಾನ ನಡೆಸಿದ ಕಾರ್ಯಕರ್ತರು, ಅವರ ರಾಜೀನಾಮೆಗೆ ಆಗ್ರಹಿಸಿದರು. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9vfzgqzjnp1xsk0eq8yd0d3,imgname-basvaraj-rayareddi-1762933064447.jpeg" type="image/jpeg" height="390" width="690"/>
            <content:encoded><![CDATA[&lt;p&gt;ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ್ ರಾಯರೆಡ್ಡಿ ಅವರು ಇಸ್ಲಾಂ ಧರ್ಮ ಹಾಗೂ ಹಜ್ ಯಾತ್ರೆ ಕುರಿತು ನೀಡಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆ ಈಗ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಯರೆಡ್ಡಿ ಅವರ ಹೇಳಿಕೆಯನ್ನು ಖಂಡಿಸಿ ಗದಗ ನಗರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಿಕ್ಷಾಟನೆ ನಡೆಸುವ ಮೂಲಕ ವಿಶಿಷ್ಟ ಹಾಗೂ ವಿನೂತನ ಪ್ರತಿಭಟನೆ ನಡೆಸಿ ಸಾಂಕೇತಿಕ ಟಾಂಗ್ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಹುಯಿಲಗೋಳ ವೃತ್ತದಲ್ಲಿ ಭಿಕ್ಷಾಪಾತ್ರೆ ಹಿಡಿದು ಪ್ರತಿಭಟನೆ!&lt;/strong&gt;&lt;/h2&gt;&lt;p&gt;ಗದಗ ನಗರದ ಪ್ರಮುಖ ಕೇಂದ್ರವಾದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಜಮಾಯಿಸಿದ ಹಿಂದೂ ಸಂಘಟನೆಯ ನೂರಾರು ಕಾರ್ಯಕರ್ತರು, ಬಸವರಾಜ್ ರಾಯರೆಡ್ಡಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುಸ್ಲಿಂ ಧರ್ಮವೇ ಶ್ರೇಷ್ಠ ಹಾಗೂ ತಮಗೂ ಹಜ್ ಯಾತ್ರೆಗೆ ಹೋಗುವ ಆಸೆಯಿದೆ ಎಂದು ರಾಯರೆಡ್ಡಿ ಹೇಳಿಕೆ ನೀಡಿದ್ದರು ಎನ್ನಲಾಗಿದ್ದು, ಇದನ್ನು ಖಂಡಿಸಿ ಕಾರ್ಯಕರ್ತರು ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದು ಬೀದಿಗಿಳಿದರು. ರಾಯರೆಡ್ಡಿ ಅವರಿಗೆ ಹಜ್ ಯಾತ್ರೆಗೆ ಹೋಗಲು ಹಣದ ಅಭಾವವಿದ್ದರೆ ನಾವು ಸಾರ್ವಜನಿಕರಿಂದ ಧನ ಸಂಗ್ರಹಿಸಿ ಕೊಡುತ್ತೇವೆ ಎಂದು ವ್ಯಂಗ್ಯವಾಡಿದರು.&lt;/p&gt;&lt;h3&gt;&lt;strong&gt;ರಾಯರೆಡ್ಡಿಗೆ ಮುಸ್ಲಿಂ ಪೋಷಾಕು ತೊಡಿಸಿದ ಪೋಸ್ಟರ್&zwnj; ಪ್ರದರ್ಶನ!&lt;/strong&gt;&lt;/h3&gt;&lt;p&gt;ಹಿಂದೂ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಗದಗ ನಗರದ ಮಾರುಕಟ್ಟೆ ಭಾಗದ ಅಂಗಡಿ ಮುಂಗಟ್ಟುಗಳಿಗೆ, ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರ ಬಳಿ ತೆರಳಿ ಹಣ ಸಂಗ್ರಹಿಸಿದರು. ಈ ವೇಳೆ ಬಸವರಾಜ್ ರಾಯರೆಡ್ಡಿ ಅವರಿಗೆ ಮುಸ್ಲಿಂ ಸಾಂಪ್ರದಾಯಿಕ ಪೋಷಾಕು (ಕುರ್ತಾ, ಟೋಪಿ) ತೊಡಿಸಿರುವಂತೆ ವಿನ್ಯಾಸಗೊಳಿಸಿದ ಪೋಸ್ಟರ್&zwnj;ಗಳನ್ನು ಪ್ರದರ್ಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯೊಬ್ಬ ವ್ಯಾಪಾರಿಯಿಂದಲೂ ಸಾಂಕೇತಿಕವಾಗಿ ಹಣ ಪಡೆಯುವ ಮೂಲಕ ರಾಯರೆಡ್ಡಿ ಅವರ ಹಜ್ ಯಾತ್ರೆಗೆ ಧನ ಸಂಗ್ರಹಣಾ ಅಭಿಯಾನ ನಡೆಸಿದರು.&lt;/p&gt;&lt;h3&gt;&lt;strong&gt;ಮುಸ್ಲಿಂ ಓಲೈಕೆ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ!&lt;/strong&gt;&lt;/h3&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮುಖಂಡ ರಾಜು ಖಾನಪ್ಪನವರು, &quot;ಕಾಂಗ್ರೆಸ್ ನಾಯಕರು ಮುಸ್ಲಿಂ ಓಲೈಕೆ ರಾಜಕಾರಣದ ಭರದಲ್ಲಿ ಮಿತಿಮೀರಿ ವರ್ತಿಸುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಾಸಕ ರಾಯರೆಡ್ಡಿ ಅವರು ಇಸ್ಲಾಂ ಧರ್ಮವನ್ನು ಶ್ರೇಷ್ಠ ಎಂದು ಹೊಗಳುವ ನೆಪದಲ್ಲಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದ್ದಾರೆ. ಕಾಂಗ್ರೆಸ್ ನಾಯಕರ ಈ ರೀತಿಯ ನಡೆಗಳನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ&quot; ಎಂದು ಎಚ್ಚರಿಸಿದರು.&lt;/p&gt;&lt;h3&gt;&lt;strong&gt;ರಾಜೀನಾಮೆ ಹಾಗೂ ಬೇಷರತ್ ಕ್ಷಮೆಗೆ ಆಗ್ರಹ!&lt;/strong&gt;&lt;/h3&gt;&lt;p&gt;ರಾಯರೆಡ್ಡಿ ಅವರು ತಕ್ಷಣವೇ ತಾವು ನೀಡಿರುವ ಹೇಳಿಕೆಯನ್ನು ಹಿಂಪಡೆದು, ರಾಜ್ಯದ ಸಾರ್ವಜನಿಕರಲ್ಲಿ ಹಾಗೂ ಹಿಂದೂ ಸಮಾಜದ ಬಳಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಅಷ್ಟೇ ಅಲ್ಲದೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೆಲಸ ಮಾಡುತ್ತಿರುವ ಬಸವರಾಜ್ ರಾಯರೆಡ್ಡಿ ಅವರು ಕೂಡಲೇ ತಮ್ಮ ಶಾಸಕ ಸ್ಥಾನ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಗಡುವು ನೀಡಿದರು. ಗದಗದಲ್ಲಿ ನಡೆದ ಈ ವಿನೂತನ ಭಿಕ್ಷಾಟನಾ ಅಭಿಯಾನವು ಈಗ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರಿ ಕೂತುಹಲಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>gadag</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/rayareddy-islam-statement-muslim-attire-hajj-pilgrimage-donation-campaign-karnataka-political-controversy-bmk/articleshow-2nm55h0"/>
        </item>
        <item>
            <title><![CDATA[Gadag: ಮಧ್ಯರಾತ್ರಿ, ಬಸ್‌ನಲ್ಲಿ ಸಿಕ್ತು ಕಂತೆ ಕಂತೆ ನೋಟು; ಮಾಲೀಕರಿಗೆ ಹಣ ಹಿಂದಿರುಗಿಸಿ ಸಾರಿಗೆ ಸಿಬ್ಬಂದಿ ಪ್ರಮಾಣಿಕತೆ]]></title>
            <link>https://kannada.asianetnews.com/karnataka-districts/bundles-of-currency-notes-found-on-bus-at-ksrtc-staff-demonstrate-honesty-by-returning-money-sns/articleshow-3g4sbhg</link>
            <guid isPermaLink="true">https://kannada.asianetnews.com/karnataka-districts/bundles-of-currency-notes-found-on-bus-at-ksrtc-staff-demonstrate-honesty-by-returning-money-sns/articleshow-3g4sbhg</guid>
            <pubDate>Wed, 02 Sep 2026 17:11:29 +0530</pubDate>
            <description><![CDATA[ಗದಗದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಶಾಂತಾರಾಮ್ ಶೆಟ್ಟಿ ಎಂಬುವವರು ಬಸ್&zwnj;ನಲ್ಲಿ 1.10 ಲಕ್ಷ ರೂ. ಇದ್ದ ಬ್ಯಾಗ್ ಮರೆತಿದ್ದರು. ಬಸ್ ನಿರ್ವಾಹಕ ಮತ್ತು ಚಾಲಕನ ಪ್ರಾಮಾಣಿಕತೆಯಿಂದ, ಹಣವನ್ನು ಸುರಕ್ಷಿತವಾಗಿ ಗದಗ ಡಿಪೋ ಸಿಬ್ಬಂದಿಗೆ ತಲುಪಿಸಿ, ನಂತರ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಮೂಲ ಮಾಲೀಕರಿಗೆ ಹಿಂತಿರುಗಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m1gyhfmbt12hp09ja9hpp293,imgname-gadag-ksrtc-staff-1788349038219.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ:&lt;/strong&gt; ಬಸ್ ಸೀಟ್ ಮೇಲೆ ದುಡ್ಡು ತುಂಬಿದ್ದ ಬ್ಯಾಗ್ ಇಟ್ಟು ಮರೆತು ಇಳಿದು ಹೋಗಿದ್ದ ವ್ಯಕ್ತಿಗೆ ಸಾರಿಗೆ ಸಿಬ್ಬಂದಿ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.&lt;/p&gt;&lt;p&gt;ಉಡುಪಿ ಮೂಲದ ಶಾಂತಾರಾಮ್ ಶೆಟ್ಟಿ ಎಂಬ ವ್ಯಕ್ತಿ, ಹುಬ್ಬಳಿಗೆ ತೆರಳುವ ಉದ್ದೇಶದಿಂದ ಗದಗ ನಿಲ್ದಾಣದಿಂದ ತಿರುಪತಿ-ಹುಬ್ಬಳ್ಳಿ ಬಸ್ ಏರಿದ್ದರು. ಮಧ್ಯರಾತ್ರಿ ಗಡಿಬಿಡಿಯಲ್ಲಿ ಬಸ್ ನಲ್ಲಿ 1 ಲಕ್ಷ 10 ಸಾವಿರ ರೂಪಾಯಿ ಇರಿಸಿದ್ದ ಬ್ಯಾಗ್ ಮರೆತು ಇಳಿದಿದ್ದರು. ಬಸ್ ಇಳಿದಾಗಲೇ ಹಣದ ಬ್ಯಾಗ್ ಜೊತೆಯಲ್ಲಿ ಇಲ್ಲ ಅನ್ನೋ ವಿಷಯ ಶಾಂತಾರಾಮ್ ಅವರಿಗೆ ಗೊತ್ತಾಗಿತ್ತು.&lt;/p&gt;&lt;h2&gt;ಬಸ್&zwnj;ನಲ್ಲಿ ಮರೆತ ಲಕ್ಷಾಂತರ ಹಣ: ಮುಂದೇನಾಯ್ತು?&lt;/h2&gt;&lt;p&gt;ಅಸಹಾಯಕರಂತೆ ನಿಂತಿದ್ದ ಶಾಂತಾರಾಮ್, ಕೂಡಲೇ ಟಿಕೆಟ್ ಪರೀಕ್ಷಿಸಿದ್ದರು. ಟಿಕೆಟ್ ನೋಡಿದಾಗ ತಾನು ಬಂದಿರೋ ಬಸ್ ಗದಗ ಡಿಪೋಗೆ ಸೇರಿದ್ದು ಅನ್ನೋ ಮಾಹಿತಿ ಅವರಿಗೆ ತಿಳಿದಿರುತ್ತೆ. ಕೂಡಲೇ ಹುಬ್ಬಳ್ಳಿಯಿಂದ ಗದಗ ಬಸ್ ನಿಲ್ದಾಣಕ್ಕೆ ಬಂದು ವಿಚಾರಿಸಿದಾಗ ಹಣ ತುಂಬಿದ್ದ ಬ್ಯಾಗ್ ಸುರಕ್ಷಿತವಾಗಿ ಇರುವ ಬಗ್ಗೆ ಸಾರಿಗೆ ಸಿಬ್ಬಂದಿ ಖಾತ್ರಿ ಮಾಡಿದ್ದರು. ಹಣದ ಬ್ಯಾಗ್ ಕಂಡು ಶಾಂತಾರಾಮ್ ನಿಟ್ಟುಸಿರು ಬಿಟ್ಟಿದ್ದರು.&lt;/p&gt;&lt;p&gt;ಲಕ್ಕುಂಡಿಯಲ್ಲಿ ವ್ಯಾಪಾರ ಮಾಡ್ಕೊಂಡಿರೋ ಶಾಂತಾರಾಮ್, ಮನೆ ನಿರ್ಮಾಣಕ್ಕಾಗಿ ಹಣ ಹೊಂದಿಸಿಕೊಂಡು ಊರಿಗೆ ಹೊರಟಿದ್ದರು. ಮಧ್ಯರಾತ್ರಿಯಾಗಿದ್ದರಿಂದ ಲಾಂಗ್ ರೂಟ್ ಬಸ್ ಹತ್ತಿದ್ರಂತೆ. ಹುಬ್ಬಳ್ಳಿ ಸಮೀಪಿಸ್ತಿದ್ದಂತೆ ಬಸ್ ನಿಂದ ಶಾಂತಾರಾಮ್ ಇಳಿದಿದ್ದರು. ಬಸ್ ಸೀಟ್ ಪರೀಕ್ಷಿಸುವಾಗ ನಿರ್ವಾಹಕ ಪ್ರಭು ಹಿರೇಮಠ ಅವರ ಕಣ್ಣಿಗೆ ಹಣ ತುಂಬಿದ ಬ್ಯಾಗ್ ಕಂಡಿತ್ತು. ಈ ವಿಚಾರವನ್ನು ಬಸ್ ಚಾಲಕ ಯಲ್ಲಪ್ಪ ಜಗ್ಗಲ್ ಅವರಿಗೆ ತಿಳಿಸಿದ್ದರು.&lt;/p&gt;&lt;p&gt;ಹಣದ ಬ್ಯಾಗ್ ವಿಷ್ಯವನ್ನ ಇಬ್ಬರು ಡೀಪೋ ಸಿಬ್ಬಂದಿ ತಿಳಿಸಿ, ಹಣವನ್ನ ಸೆಕ್ಯೂರಿಟಿ ಸೆಕ್ಷನ್&zwnj;ನಲ್ಲಿ ಇಟ್ಟಿದ್ದರು. ಸಹಾಯಕ ಸಂಚಾರ ನಿರೀಕ್ಷಕರು ಎಂಬಿ ತಿಮ್ಮಗೌಡರ್ ಮತ್ತು ತಂಡ ಹಣ ತುಂಬಿದ್ದ ಬ್ಯಾಗ್ ನ್ನ ಭದ್ರವಾಗಿ ಇರಿಸಿದ್ದರು. ಸೂಕ್ತ ದಾಖಲೆ ಪರೀಕ್ಷಿಸಿ ಮೂಲ ಮಾಲೀಕ ಶಾಂತಾರಾಮ್ ಅವರಿಗೆ ಹಣ ಹಿಂತಿರುಗಿಸಿದ್ದಾರೆ.&lt;/p&gt;&lt;p&gt;ಹಣ ಹಿಂತಿರುಗಿಸುವಾಗ ಸಹಾಯಕ ಸಂಚಾರ ಅಧೀಕ್ಷಕರು ಶಾಂತಾಬಾಯಿ ಕದಾಂಪುರ, ಘಟಕ ವ್ಯವಸ್ಥಾಪಕ ಶರಣಬಸಪ್ಪ, ಡಿವಿಜನಲ್ ಮೆಕ್ಯಾನಿಕಲ್ ಇಂಜಿನಿಯರ್ ಬಿಎಲ್ ಗೆಣ್ಣೂರು ಹಾಜರಿದ್ದರು.&lt;/p&gt;]]></content:encoded>
            <category>gadag</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/bundles-of-currency-notes-found-on-bus-at-ksrtc-staff-demonstrate-honesty-by-returning-money-sns/articleshow-3g4sbhg"/>
        </item>
        <item>
            <title><![CDATA[ಗ್ರಾಪಂಗೆ ಕಸದ ಉಡುಗೊರೆ; ಗ್ರಾಮಸ್ಥರ ವಿರುದ್ಧವೇ ದೂರು ದಾಖಲಿಸಲು ಸೂಚಿಸಿದ ಅಧಿಕಾರಿ]]></title>
            <link>https://kannada.asianetnews.com/karnataka-districts/gadag-condemning-the-negligence-of-cleanliness-people-poured-sewage-waste-in-front-of-gram-panchayat-mrq/articleshow-52c4f6l</link>
            <guid isPermaLink="true">https://kannada.asianetnews.com/karnataka-districts/gadag-condemning-the-negligence-of-cleanliness-people-poured-sewage-waste-in-front-of-gram-panchayat-mrq/articleshow-52c4f6l</guid>
            <pubDate>Wed, 29 Jul 2026 07:57:01 +0530</pubDate>
            <description><![CDATA[&lt;p&gt;ಸ್ವಚ್ಛತಾ ನಿರ್ಲಕ್ಷ್ಯವನ್ನು ಖಂಡಿಸಿ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಗ್ರಾಮ ಪಂಚಾಯಿತಿ ಕಚೇರಿ ಎದುರು ಚರಂಡಿಯ ಕಸವನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸದ ಕಾರಣ ಈ ರೀತಿಯ ಪ್ರತಿಭಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kynty9z43x6zm6cc52m3f7k6,imgname-soodi-gram-panchayat-1785291810788.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ಬಡಾವಣೆಯಲ್ಲಿ ಸ್ವಚ್ಛತೆಗೆ ಗ್ರಾಮ ಪಂಚಾಯಿತಿಯವರು ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಚರಂಡಿಯ ಗಲೀಜು ಹಾಗೂ ಮಣ್ಣು, ಕಸವನ್ನು ಗ್ರಾಪಂ ಮುಂದೆ ಸುರಿದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ತಾಲೂಕಿನ ಸೂಡಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಕಳೆದ ಕೆಲ ತಿಂಗಳಿನಿಂದ ಗ್ರಾಮದ ರಾಜೀವ್ ಗಾಂಧಿ ಬಡಾವಣೆಯಲ್ಲಿನ ಚರಂಡಿಗಳಲ್ಲಿ ನೀರು, ಕಸ ಹಾಗೂ ಕಡ್ಡಿ ನಿಂತು ಗಬ್ಬು ವಾಸನೆ ಹರಡುತ್ತಿದೆ. ಪರಿಣಾಮ ಸಂಜೆಯಾದರೆ ಮನೆಯಲ್ಲಿ ಸೊಳ್ಳೆಗಳ ಹಾವಳಿ, ಗಬ್ಬು ವಾಸನೆ ಹರಡಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು.&lt;/p&gt;&lt;h2&gt;&lt;strong&gt;ಗ್ರಾಮ ಪಂಚಾಯಿತಿ ಎದುರು ಕಸ ಸುರಿದು ಆಕ್ರೋಶ&lt;/strong&gt;&lt;/h2&gt;&lt;p&gt;ಬಡಾವಣೆಯ ಚರಂಡಿ ಸ್ವಚ್ಛತೆಗೆ ಮುಂದಾಗಬೇಕೆಂದು ಆಗ್ರಹಿಸಿ ನಿವಾಸಿಗಳು ಗ್ರಾಪಂ ಅಧಿಕಾರಿಗಳ ಎದುರು ಹಲವಾರು ಬಾರಿ ಗೋಗರೆದರೂ ಸ್ಪಂದಿಸಿರಲಿಲ್ಲ. ಇದರಿಂದ ಬೇಸತ್ತ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಮಂಗಳವಾರ ಬೆಳಗ್ಗೆ ಬಡಾವಣೆಯಲ್ಲಿನ ಚರಂಡಿಗಳಲ್ಲಿನ ಗಲೀಜು ಸೇರಿ ಕಸ, ಮಣ್ಣು ತಂದು ಗ್ರಾಮ ಪಂಚಾಯಿತಿ ಎದುರು ಸುರಿದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮ, ಪಟ್ಟಣ ಸೇರಿ ನಗರ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಸಾಕಷ್ಟು ಪ್ರಚಾರ ಮಾಡುತ್ತಿವೆ. ಆದರೆ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡದೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಘಟನೆ ಕುರಿತು ಪಿಡಿಒ ಬಸವಂತಪ್ಪ ವಡ್ಡರ ಅವರನ್ನು ದೂರವಾಣಿ ಮೂಲಕ ಅನೇಕ ಬಾರಿ ಸಂರ್ಪಕಿಸಿದರೂ ಕರೆ ಸ್ವೀಕರಿಸಲಿಲ್ಲ.&lt;/p&gt;&lt;p&gt;ಗ್ರಾಮದ ರಾಜೀವ್ ಗಾಂಧಿ ಬಡಾವಣೆಯಲ್ಲಿನ ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಪರಿಣಾಮ ಚರಂಡಿಗಳಲ್ಲಿ ತುಂಬಿದ್ದ ಕಸ, ಕಡ್ಡಿಯನ್ನು ತಂದು ಸೂಡಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸುರಿಯಲಾಗಿದೆ. ಇನ್ನಾದರೂ ಗ್ರಾಮದ ನಿವಾಸಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲು ಗ್ರಾಪಂ ಮುಂದಾಗಲಿ ಎಂದು ಸೂಡಿ ಗ್ರಾಮದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಗಸ್ಟ್ ಮೊದಲ ದಿನವೇ ಮೈಸೂರಿಗೆ ಪ್ರಧಾನಿ ಮೋದಿ! ಸಮಯ, ಸ್ಥಳ, ವಿಶೇಷತೆ ಸಂಪೂರ್ಣ ವಿವರ ಇಲ್ಲಿದೆ&lt;/strong&gt;&lt;/p&gt;&lt;h3&gt;&lt;strong&gt;ದೂರು ದಾಖಲಿಸಲು ಸೂಚನೆ&lt;/strong&gt;&lt;/h3&gt;&lt;p&gt;ತಾಲೂಕಿನ ಸೂಡಿ ಗ್ರಾಮ ಪಂಚಾಯಿತಿ ಎದುರು ದಿಢೀರನೇ ಕಸ ತಂದು ಹಾಕಿದ್ದು ತಪ್ಪು. ಮೇಲಧಿಕಾರಿಗಳಿಗೆ ತಿಳಿಸಬಹುದಿತ್ತು. ಕಸ ತಂದು ಹಾಕಿರುವವರ ಮೇಲೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತಿಳಿಸಲಾಗುವುದು. ಜತೆಗೆ ಸುರಿದಿರುವ ಕಸವನ್ನು ಸ್ವಚ್ಛಗೊಳಿಸಲು ತಿಳಿಸಿದ್ದೇನೆ ಎಂದು ತಾಪಂ ಇಒ ಚಂದ್ರಶೇಖರ ಕಂದಕೂರ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತುಂಗಭದ್ರಾ ಎಥೆನಾಲ್ ಘಟಕ ನಮ್ಮೂರಿಗೆ ಬೇಡ, ಕೂಡಲೇ ಸ್ಥಗಿತಗೊಳಿಸಿ; ಗ್ರಾಮಸ್ಥರ ಬೇಡಿಕೆ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-condemning-the-negligence-of-cleanliness-people-poured-sewage-waste-in-front-of-gram-panchayat-mrq/articleshow-52c4f6l"/>
        </item>
        <item>
            <title><![CDATA[ಲಕ್ಕುಂಡಿ ಗ್ರಾ. ಪಂಚಾಯಿತಿಯಲ್ಲಿ ದಿಢೀರ್ ಬದಲಾವಣೆ; ಆಡಳಿತಾಧಿಕಾರಿ, PDO ವರ್ಗಾವಣೆ]]></title>
            <link>https://kannada.asianetnews.com/karnataka-districts/gadag-taluk-lakkundi-gram-panchayat-administrator-pdo-transfer-mrq/articleshow-52kq8gq</link>
            <guid isPermaLink="true">https://kannada.asianetnews.com/karnataka-districts/gadag-taluk-lakkundi-gram-panchayat-administrator-pdo-transfer-mrq/articleshow-52kq8gq</guid>
            <pubDate>Thu, 13 Aug 2026 07:48:04 +0530</pubDate>
            <description><![CDATA[&lt;p&gt;ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೂಲ ಸೌಲಭ್ಯಗಳ ವೈಫಲ್ಯವನ್ನು ಖಂಡಿಸಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಯಶಸ್ವಿಯಾಗಿದೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಡಳಿತಾಧಿಕಾರಿ ಹಾಗೂ ಪಿಡಿಒ ಅವರನ್ನು ವರ್ಗಾವಣೆಗೊಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzwed1mv7ear02dbcyksv2ge,imgname-lakkundi-1786587285147.jpg" type="image/jpeg" height="390" width="690"/>
            <content:encoded><![CDATA[&lt;p&gt;ಗದಗ: ತಾಲೂಕಿನ ಲಕ್ಕುಂಡಿ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಆಡಳಿತಾಧಿಕಾರಿಗಳು ಮತ್ತು ಪಿಡಿಒ ಅವರ ವೈಫಲ್ಯ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆ ಆಡಳಿತಾಧಿಕಾರಿಯ ಕರ್ತವ್ಯ ಬಿಡುಗಡೆ ಹಾಗೂ ಪಿಡಿಒ ಅವರ ವರ್ಗಾವಣೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಜನಗಿ ಆದೇಶಿಸಿದರು.&lt;/p&gt;&lt;p&gt;ಈ ಕುರಿತು ಕಳೆದ ಎರಡು ದಿನಗಳಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತ ಆಡಳಿತಾಧಿಕಾರಿಗಳ ಬದಲಾವಣೆಗೆ ಪಟ್ಟು ಹಿಡಿದಿದ್ದರು. ತಾಪಂ ಇಒ ಡಾ. ಎಚ್.ಎಸ್. ಜನಗಿ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು.&lt;/p&gt;&lt;h2&gt;&lt;strong&gt;ಆಡಳಿತ ನಡೆಸುವ ವಿಫಲತೆ&lt;/strong&gt;&lt;/h2&gt;&lt;p&gt;ಅಸಮರ್ಪಕ ಕುಡಿಯುವ ನೀರು, ಅವೈಜ್ಞಾನಿಕ ಜೆಜೆಎಂ ಕಾಮಗಾರಿ, ರಸ್ತೆಗಳ ಅಸ್ವಚ್ಛತೆ, ಬೀದಿದೀಪ, ರಾಜಬೀದಿ ದುರಸ್ತಿ, ಸಿಬ್ಬಂದಿಯ ವಿಳಂಬ ವೇತನ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಆಡಳಿತ ನಡೆಸುವ ವಿಫಲತೆಯನ್ನು ಎತ್ತಿ ತೋರಿಸಿದಾಗ ಮನವೊಲಿಕೆಗೆ ಆಗಮಿಸಿದ್ದ ಅಧಿಕಾರಿಗಳು ತಕ್ಷಣವೇ ಆಡಳಿತಾಧಿಕಾರಿ ಶರಣು ಗೋಗೇರಿ ಅವರಿಂದ ಕರ್ತವ್ಯ ಬಿಡುಗಡೆಯ ಪತ್ರ ಹಾಗೂ ಪಿಡಿಒ ಅಮೀರನಾಯಕ ಅವರಿಂದ ವರ್ಗಾವಣೆ ಮನವಿ ಪತ್ರವನ್ನು ಪಡೆದರು.&lt;/p&gt;&lt;p&gt;ನಂತರ ಮಾತನಾಡಿದ ಅವರು, ಜಿಪಂ ಹಾಗೂ ತಾಪಂನಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿ ಸೇರಿದಂತೆ ಅಧಿಕ ಅನುದಾನವಿದ್ದು, ಅವುಗಳನ್ನು ಸಮರ್ಪಕ ಬಳಕೆ ಮಾಡುವುದರೊಂದಿಗೆ ಐತಿಹಾಸಿಕ ಲಕ್ಕುಂಡಿ ಗ್ರಾಮದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದರು.&lt;/p&gt;&lt;h3&gt;&lt;strong&gt;6 ತಿಂಗಳಿಂದ ಗ್ರಾಮದ ಅಭಿವೃದ್ಧಿ ಹಿನ್ನಡೆ&lt;/strong&gt;&lt;/h3&gt;&lt;p&gt;ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ತಾಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ ಹಾಗೂ ನಜೀರಅಹ್ಮದ ಕಿರಿಟಗೇರಿ ಮಾತನಾಡಿ, ಕಳೆದ 6 ತಿಂಗಳಿಂದ ಗ್ರಾಮದ ಅಭಿವೃದ್ಧಿ ಹಿನ್ನಡೆ ಹಾಗೂ ಇಬ್ಬರು ಅಧಿಕಾರಿಗಳ ಸಮನ್ವಯ ಕೊರತೆ ಕುರಿತು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.&lt;/p&gt;&lt;p&gt;ಹಲವಾರು ಸಲ ಗ್ರಾಮದ ಹಲವಾರು ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳಿಗೂ ಸಹ ತಿಳಿಸಿದರೂ ಕಾಳಜಿ ವಹಿಸಿರಲಿಲ್ಲ. ಆದ್ದರಿಂದ ಆಡಳಿತ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕೆಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸ್ಥಳಕ್ಕೆ ಆಗಮಿಸಿದ ತಾಪಂ ಅಧಿಕಾರಿಗಳು ಪರಿಸ್ಥಿತಿಯ ಗಂಭಿರತೆಯನ್ನು ಅರಿತು ಇಬ್ಬರು ಅಧಿಕಾರಿಗಳನ್ನು ಹಿಂಪಡೆದು ನೂತನ ಅಧಿಕಾರಿಗಳನ್ನು ನೇಮಕ ಮಾಡುವ ಭರವಸೆ ನೀಡಿದ್ದಾರೆ. ಲಕ್ಕುಂಡಿ ಗ್ರಾಮದ ಅಭಿವೃದ್ಧಿಗೆ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.&lt;/p&gt;&lt;p&gt;ಶಿವಪ್ಪ ಸಜ್ಜನರ, ಗ್ರಾಪಂ ಮಾಜಿ ಸದಸ್ಯ ಬಿ.ಬಿ. ಮಾಡಲಗೇರಿ, ಮರಿಯಪ್ಪ ವಡ್ಡರ, ಕಳಕೇಶ ಟೆಂಗಿನಕಾಯಿ, ಚಂದ್ರಗೌಡ ಪಾಟೀಲ, ಚನ್ನಪ್ಪ ಹುಬ್ಬಳ್ಳಿ, ಬಸವರಾಜ ಮುಳ್ಳಾಳ, ಬಸವರಾಜ ಕವಲೂರು, ಪ್ರವೀಣ ಕಲಾಲ, ವಿನಾಯಕ ಡಿಗ್ಗಾವಿ, ಮಂಜುನಾಥ ತಡಹಾಳ, ಬಸವರಾಜ ಕುಂಬಾರ, ವೀರಣ್ಣ ಅರಹುಣಶಿ, ಶಿವಪ್ಪ ಭಜಂತ್ರಿ, ರವಿ ಕವಲೂರು ಇತರರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗ್ರಾಮವನ್ನು ದೇವಸ್ಥಾನಕ್ಕೆ ದಾನ ನೀಡಿದ ಮಾಹಿತಿ ವಿಜಯನಗರ ಕಾಲದ ಶಾಸನ ಕಂಪ್ಲಿಯಲ್ಲಿ ಪತ್ತೆ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-taluk-lakkundi-gram-panchayat-administrator-pdo-transfer-mrq/articleshow-52kq8gq"/>
        </item>
        <item>
            <title><![CDATA[ಮಳೆಗಾಲದಲ್ಲೇ ಬರಿದಾಗುತ್ತಿದೆ ಗದಗಿನ ಐತಿಹಾಸಿಕ ಭೀಷ್ಮ ಕೆರೆ; ತುಂಗಭದ್ರಾ ನದಿ ತುಂಬಿದ್ದರೂ ನೀರಿನ ದಾಹ ನೀಗುತ್ತಿಲ್ಲ]]></title>
            <link>https://kannada.asianetnews.com/karnataka-districts/gadag-historic-bhishma-lake-running-dry-even-during-monsoon-irrigation-corporation-failure-sat/articleshow-6iixn4s</link>
            <guid isPermaLink="true">https://kannada.asianetnews.com/karnataka-districts/gadag-historic-bhishma-lake-running-dry-even-during-monsoon-irrigation-corporation-failure-sat/articleshow-6iixn4s</guid>
            <pubDate>Thu, 17 Sep 2026 09:34:26 +0530</pubDate>
            <description><![CDATA[ಗದಗ ನಗರದ ಐತಿಹಾಸಿಕ ಭೀಷ್ಮ ಕೆರೆಯು ಮಳೆಗಾಲದಲ್ಲಿಯೇ ಬರಿದಾಗುವ ಆತಂಕ ಎದುರಾಗಿದೆ. ಅನುದಾನದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರೆತ್ತುವ ಮೋಟರ್&zwnj;ಗಳು ಕೆಟ್ಟು ನಿಂತಿವೆ. ಇದರಿಂದಾಗಿ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿದ್ದರೂ ಕೆರೆಗೆ ನೀರು ಹರಿಯದೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2pr4g8n7gvayjxagefn1b85,imgname-gadag-bheeshma-kere-1789617389845.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ-ಶಿವಕುಮಾರ ಕುಷ್ಟಗಿ&lt;/strong&gt;&lt;/p&gt;&lt;p&gt;&lt;strong&gt;ಗದಗ (ಸೆ.17): ಗ&lt;/strong&gt;ದಗ ನಗರದ ಐತಿಹಾಸಿಕ ಭೀಷ್ಮ ಕೆರೆ ಮಳೆಗಾಲದಲ್ಲಿಯೇ ಬರಿದಾಗುವ ಆತಂಕ ಎದುರಾಗಿದೆ. 0.12 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಕೆರೆಗೆ ನದಿ ಪಾತ್ರದಿಂದ ನೀರು ಹರಿಸಿ ತುಂಬಿಸುವ ಮಹತ್ವಾಕಾಂಕ್ಷೆಯ ವ್ಯವಸ್ಥೆ ಇದ್ದರೂ, ಅದನ್ನು ಸಮರ್ಪಕವಾಗಿ ನಿರ್ವಹಿಸದ ಪರಿಣಾಮ ನೀರೆತ್ತುವ ಜಾಕ್&zwnj; ವೆಲ್&zwnj; ಗಳ ಬೃಹತ್ ಮೋಟರ್&zwnj;ಗಳು ಒಂದೊಂದಾಗಿ ಸ್ಥಗಿತಗೊಂಡಿವೆ. ಪರಿಣಾಮ ಕೆರೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.&lt;/p&gt;&lt;p&gt;ಮೋಟರ್&zwnj;ಗಳ ದುರಸ್ತಿಗೆ ಅಗತ್ಯವಿರುವ ಹಣ ಇಲ್ಲ ಎನ್ನುವ ಕಾರಣ ಮುಂದಿಟ್ಟುಕೊಂಡು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸರ್ಕಾರದ ಮಾನವನ್ನೇ ಹರಾಜು ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ನೀರಿನ ಹರಿವು ಕುಂಠಿತ:&lt;/strong&gt;&lt;/h2&gt;&lt;p&gt;ಯೋಜನೆ ರೂಪಿಸುವ ವೇಳೆಯಲ್ಲಿ ನಿರ್ಮಿಸಲಾಗಿರುವ ನದಿಪಾತ್ರದ ಜಾಕ್ ವೆಲ್, ಕಲಕೇರಿ ಜಾಕ್ ವೆಲ್ ಹಾಗೂ ಚುರ್ಚಿಹಾಳ ಜಾಕ್&zwnj;ವೆಲ್&zwnj;ನಲ್ಲಿ ಒಟ್ಟು 22 ಮೋಟರ್&zwnj;ಗಳಿವೆ. ಅದರಲ್ಲಿ ಸದ್ಯ 6 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದರ ಪರಿಣಾಮ ನದಿಯಿಂದ ನೀರು ಎತ್ತಿ ಭೀಷ್ಮ ಕೆರೆಗೆ ತಲುಪಿಸುವ ಸಂಪೂರ್ಣ ಸರಪಳಿಯಲ್ಲೇ ನೀರಿನ ಹರಿವು ಕುಂಠಿತವಾಗಿದೆ.&lt;/p&gt;&lt;h2&gt;&lt;strong&gt;6ರಿಂದ 7 ಗಂಟೆ ಮಾತ್ರ ಮೋಟರ್&zwnj; ಚಾಲು:&lt;/strong&gt;&lt;/h2&gt;&lt;p&gt;ನದಿ ಪಾತ್ರದಿಂದ ಲಿಫ್ಟ್ ವ್ಯವಸ್ಥೆ ಮೂಲಕ ನೀರು ಹರಿಸಿದರೂ, ಚುರ್ಚಿಹಾಳ ಲಿಫ್ಟ್&zwnj;ವರೆಗೆ ನೀರು ತಲುಪಿ ಅಲ್ಲಿಂದ ಗದಗದ ಭೀಷ್ಮ ಕೆರೆಗೆ ಬರಲು ಅಂದಾಜು 12 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ ಪ್ರಸ್ತುತ ಸೀಸನ್&zwnj;ನಲ್ಲಿ ಮೋಟರ್&zwnj;ಗಳನ್ನು ದಿನಕ್ಕೆ ಕೇವಲ 6ರಿಂದ 7 ಗಂಟೆಗಳಷ್ಟು ಮಾತ್ರ ಚಾಲನೆ ಮಾಡಲಾಗುತ್ತಿದೆ. ಒಮ್ಮೆ ಮೋಟರ್&zwnj;ಗಳನ್ನು ಸ್ಥಗಿತಗೊಳಿಸಿದರೆ, ಪೈಪ್&zwnj; ಲೈನ್&zwnj;ನಲ್ಲಿ ನೀರು ಹಿಂದಕ್ಕೆ ಹರಿಯದಂತೆ ತಡೆಯಲು ಅಗತ್ಯವಿರುವ ನಾನ್ ರಿಟರ್ನ್ ವ್ಯವಸ್ಥೆಯಲ್ಲಿನ ಸಮಸ್ಯೆಯೂ ಗಂಭೀರವಾಗಿದ್ದು ನಾಲ್ಕೈದು ಗಂಟೆ ಪಂಪ್ ಆದ ನಂತರ ನೀರು ಮರಳಿ ಹೋಗುತ್ತಿದೆ, ಹಾಗಾಗಿ ಈ ವರ್ಷ ಭೀಷ್ಮಕೆರೆಗೆ ನೀರು ಹರಿಸುವುದು ಕಷ್ಟ ಸಾಧ್ಯವಾಗಿದೆ.&lt;/p&gt;&lt;p&gt;ಲಿಫ್ಟ್ ವ್ಯವಸ್ಥೆಯಲ್ಲಿ 3500 ಎಚ್&zwnj;ಪಿ ಬೃಹತ್ ಮೋಟಾರ್&zwnj;ಗಳನ್ನು ಅಳವಡಿಸಲಾಗಿದ್ದು ಅವುಗಳ ನಿರ್ವಹಣೆ ಕೂಡಾ ಇಲ್ಲದೇ ಇರುವುದರಿಂದಾಗಿ ಅವೆಲ್ಲಾ ದುರಸ್ತಿಯಿಂದಾಗಿ ಸ್ಥಗಿತಗೊಂಡಿವೆ. ಅವುಗಳನ್ನು ದುರಸ್ತಿ ಮಾಡಲು ಈವರೆಗೆ ಸಾಧ್ಯವಾಗಿಲ್ಲ, ದೂರದ ಪೂನಾ, ಮುಂಬೈನಿಂದಲೇ ತಜ್ಞರು ಬರಬೇಕಿದೆ. ಈಗಾಗಲೇ ನಿರ್ವಹಣೆಗೆ ನೀಡಲಾಗಿದ್ದ ಗುತ್ತಿಗೆ ಅವಧಿ ಮುಗಿದು ಹೋಗಿದ್ದು, ಹೊಸದಾಗಿ ನಿರ್ವಹಣೆ ಮಾಡಬೇಕಾದಲ್ಲಿ ಕೋಟ್ಯಾಂತರ ರು. ಬೇಕಿದೆ, ಆದರೆ ಇಲಾಖೆ ಮೂಲಗಳ ಮಾಹಿತಿ ಆಧಾರದಲ್ಲಿ ಅನುದಾನದ ಕೊರತೆಯಿಂದ ಹೀಗಾಗುತ್ತಿದೆ ಎನ್ನಲಾಗುತ್ತಿದೆ.&lt;/p&gt;&lt;h2&gt;&lt;strong&gt;ಜನರಲ್ಲಿ ಆತಂಕ:&lt;/strong&gt;&lt;/h2&gt;&lt;p&gt;ಮಳೆಗಾಲದಲ್ಲಿಯೇ ಭೀಷ್ಮ ಕೆರೆಯ ನೀರಿನ ಮಟ್ಟ ಕುಸಿಯುತ್ತಿರುವುದು ಗದಗ-ಬೆಟಗೇರಿ ಅವಳಿ ನಗರದ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಕೆರೆ ಭರ್ತಿಯಾಗಿದ್ದರೆ ಅಂತರ್ಜಲ ಹೆಚ್ಚಳವಾಗಿ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗುತ್ತದೆ. ನೀರಾವರಿ ಇಲಾಖೆ ಅಧಿಕಾರಿಗಳು ಜೂನ್ ತಿಂಗಳಲ್ಲಿ ತುಂಗಭದ್ರಾ ನದಿಯಲ್ಲಿ 1 ಲಕ್ಷ ಕ್ಯೂಸೆಕ್ಸ್ ಒಳಹರಿವು ಇದ್ದಾಗಲೇ ಕೆರೆಗಳನ್ನು ಭರ್ತಿ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಪ್ರಸ್ತುತ ಒಳಹರಿವು ಕೇವಲ 1500 ಕ್ಯೂಸೆಕ್ಸ್ ಮಾತ್ರ ಇದೆ.&lt;/p&gt;&lt;p&gt;ಈ ಕುರಿತು ಈಗಾಗಲೇ ನಿಗಮದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕೆಲವು ಟೆಂಡರ್ ಹಂತದಲ್ಲಿವೆ. ಇನ್ನು ಕೆಲವು ಪ್ರಸ್ತಾವನೆ ಹಂತದಲ್ಲಿವೆ ಎನ್ನುತ್ತಾರೆ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಇಇ ಶಿವಮೂರ್ತಿ.&lt;/p&gt;&lt;h2&gt;&lt;strong&gt;ನೀರಿದ್ದರೂ ನೀಗದ ದಾಹ&lt;/strong&gt;&lt;/h2&gt;&lt;p&gt;ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್&zwnj;ನಲ್ಲಿ ನೀರಿದ್ದರೂ, ರೈತರ ಹೊಲಗಳಿಗೆ ನೀರು ತಲುಪಿಸಲು ಆಡಳಿತ ವ್ಯವಸ್ಥೆ ವಿಫಲವಾಗಿದೆ ಎನ್ನುವುದು ರೈತರ ಆರೋಪವಾಗಿದೆ. ರಿಪೇರಿಯಾಗದ ನೀರೆತ್ತುವ ಮೋಟರ್&zwnj;ಗಳು, ದುರಸ್ತಿಯನ್ನೇ ಕಾಣದ ಕಾಲುವೆಗಳು, ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಹೀಗೆ ಯೋಜನೆಗೆ ನಿರ್ಲಕ್ಷ್ಯದ ಬರ ಕಾಡುತ್ತಿದೆ. ಬರಗಾಲದಂತಹ ವಿಷಮ ಪರಿಸ್ಥಿತಿಯಲ್ಲೂ ಅನುದಾನವಿಲ್ಲ ಎಂಬ ನೆಪ, ನೀರು ಇದ್ದರೂ ಜನರು ದಾಹದಿಂದ ಬಳಲುವುದೇಕೆ? ಈ ವೈಫಲ್ಯಕ್ಕೆ ಹೊಣೆ ಯಾರು? ಸಿಂಗಟಾಲೂರು ಯೋಜನೆಯ ಒಳನೋಟದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕನ್ನಡಪ್ರಭ ಇಂದಿನಿಂದ ಸರಣಿ ವರದಿಗಳನ್ನು ಆರಂಭಿಸುತ್ತಿದೆ.&lt;/p&gt;]]></content:encoded>
            <category>gadag</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/gadag-historic-bhishma-lake-running-dry-even-during-monsoon-irrigation-corporation-failure-sat/articleshow-6iixn4s"/>
        </item>
        <item>
            <title><![CDATA[KPSC ಹಗರಣದ ಆರೋಪಿ‌ ಜೊತೆ ಗದಗ DYSP ಮುರ್ತುಜಾ ಖಾದ್ರಿ ಸೇರಿ 9 ಅಧಿಕಾರಿಗಳ ಫೋಟೋ ವೈರಲ್!]]></title>
            <link>https://kannada.asianetnews.com/karnataka-districts/photos-of-nine-officials-including-gadag-dysp-murtuza-khadri-with-an-accused-in-the-kpsc-scandal-have-gone-viral-sns/articleshow-cqeocfs</link>
            <guid isPermaLink="true">https://kannada.asianetnews.com/karnataka-districts/photos-of-nine-officials-including-gadag-dysp-murtuza-khadri-with-an-accused-in-the-kpsc-scandal-have-gone-viral-sns/articleshow-cqeocfs</guid>
            <pubDate>Sat, 05 Sep 2026 12:01:12 +0530</pubDate>
            <description><![CDATA[&lt;p&gt;ಕೆಪಿಎಸ್ ಸಿ ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಜೊತೆ 9 ಡಿವೈಎಸ್ ಪಿಗಳು ಫೋಟೋ ತೆಗೆಸಿಕೊಂಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಮೈಸೂರು ಪೊಲೀಸ್ ಅಕಾಡಮಿಯಲ್ಲಿ ತೆಗೆದ ಈ ಫೋಟೋ, ಇತ್ತೀಚೆಗೆ ಸಿಐಡಿ ವಶದಲ್ಲಿರುವ ಕನ್ನಾಳೆಯ ಪ್ರಭಾವ ಪೊಲೀಸ್ ಇಲಾಖೆಯಲ್ಲೂ ಇದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. (ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ)&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1r3xxa57bav0bv56fwyhjm0,imgname-gadag-police-1788589569348.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ವಿಪವಿಭಾಗದ ಡಿವೈಎಸ್ ಪಿ ಮುರ್ತುಜಾ ಖಾದ್ರಿ ಸೇರಿದಂತೆ 9 ಜನ ಡಿವೈಎಸ್ ಪಿ ಹಂತದ ಅಧಿಕಾರಿಗಳು ಕೆಪಿಎಸ್ ಸಿ ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಜೊತೆ ಫೋಟೋಗೆ ಪೋಸ್ ನೀಡಿದ್ದು, ಸದ್ಯ ಈ ಫೋಟೋ ಹೊಸ ಚರ್ಚೆಗೆ ಕಾರಣವಾಗಿದೆ. ಮೈಸೂರಿನ ಪೊಲೀಸ್ ಅಕಾಡಮಿಯಲ್ಲಿ ಈ ಫೋಟೋ ಸೆರೆಹಿಡಿಯಲಾಗಿತ್ತು ಎನ್ನಲಾಗ್ತಿದೆ. 2023/24 ಪಾಸಿಂಗ್ ಔಟ್ ಪರೇಡ್ ನಲ್ಲಿ ಪ್ರತ್ಯಕ್ಷವಾಗಿದ್ದ ಬಸವರಾಜ್ ಕನ್ನಾಳೆ ಸಮವಸ್ತ್ರಧಾರಿ ಅಧಿಕಾರಿಗಳ ಮಧ್ಯೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ.&lt;/p&gt;&lt;h2&gt;ಹಗರಣದ ಕಿಂಗ್&zwnj;ಪಿನ್ ಜೊತೆ ಡಿವೈಎಸ್ ಪಿಗಳು: ಫೋಟೋ ಹಿಂದಿನ ಕಥೆ ಏನು?&lt;/h2&gt;&lt;p&gt;ಫೋಟೋದಲ್ಲಿ (ಎಡದಿಂದ ಬಲಕ್ಕೆ) ಡೆಪ್ಯೂಟಿ ಸುಪ್ರಿಡೆಂಟ್ ಆಫ್ ಎಕ್ಸೈಸ್ ಹರ್ಷ, ಡಿವೈಎಸ್ ಪಿ ಗೀತಾ ಪಾಟೀಲ, ಡಿವೈಎಸ್ ಪಿ ಮುರ್ತುಜಾ ಖಾದ್ರಿ, ಡಿವೈಎಸ್ ಸಿ ಗಾಯತ್ರಿ, ಡಿವೂಎಸ್ ಪಿ ವಿಶ್ವನಾಥ್, ಮುಡೋಳಪ್ಪ, ಸಂತೋಷ್, ವಿಜಯ ಕ್ರಾಂತಿ, ಮತ್ತೋರ್ವ ಡಿವೈಎಸ್ ಸಿ ಅಧಿಕಾರಿ ಇದ್ದಾರೆ. ಅಧಿಕಾರಿಗಳ ಫೋಟೋ ವಿಷಯವಾಗಿ ಇಲಾಖೆಯ ವಲಯದಲ್ಲೇ ದೊಡ್ಡಮಟ್ಟದ ಚರ್ಚೆ ನಡೆದಿದೆ. ಕನ್ನಾಳೆಗೆ ಪೊಲೀಸ್ ಇಲಾಖೆಯಲ್ಲಾದ ಪರಿಕ್ಷೆಯಲ್ಲೂ ಕೈವಾಡಿ ಇದ್ದಿರಬಹುದು ಎಂಬ ಚರ್ಚೆಯೂ ಹುಟ್ಟುಹಾಕಿದೆ.&lt;/p&gt;&lt;p&gt;ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಸಂಬಂಧಿಸಿದಂತೆ CID ಅಧಿಕಾರಿಗಳು 5 ದಿನದ ಹಿಂದೆಯಷ್ಟೇ ಬಸವರಾಜ್ ಕನ್ನಾಳೆಯನ್ನ ವಶಕ್ಕೆ ಪಡೆದಿದ್ದಾರೆ. ಬೀದರ್ ಜಿಲ್ಲೆ ಬಾಲ್ಕಿ ಮೂಲದ ಬಸವರಾಜ್ ಕನ್ನಾಳೆ, ತುಮಕೂರು ವಿಶ್ವವಿದ್ಯಾಲಯ ಸಿಡಿಕೆಟ್ ಸದಸ್ಯನೂ ಆಗಿದ್ದ. ರಾಜಕೀಯ ನಾಯಕರ ಜೊತೆಗೂ ಕನ್ನಾಳೆ ಸಂಪರ್ಕಹೊಂದಿದ್ದ. ಕೆಪಿಎಸ್ ಸಿ ಪರೀಕ್ಷಾ ನಿಯಂತ್ರಕ ಐಎಸ್ ಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಅವರೊಂದಿಗೂ ಕನ್ನಾಳೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಬಸವರಾಜ್ ಕನ್ನಾಳೆ ಅಕ್ರಮದ ಮಧ್ಯವರ್ತಿಯಾಗಿದ್ದ ಅಂತಾ ತನಿಖೆಯಿಂದ ಹೊರಬಿದ್ದಿದೆ.&lt;/p&gt;&lt;p&gt;ಆರೋಪ ಇರೋ ವ್ಯಕ್ತಿಯ ಜೊತೆ ಅಧಿಕಾರಿಗಳ ನಂಟೇನು? ಫೋಟೋ ತೆಗೆಸಿಕೊಂಡ ಸಂದರ್ಭ ಏನು? ಪೊಲೀಸ್ ಇಲಾಖೆಯಲ್ಲೂ ಕನ್ನಾಳೆ ಪ್ರಭಾವಿ ಇದೆಯಾ ಎನ್ನುವ ಪ್ರಶ್ನೆ ಮೂಡಿಸಿದೆ.&lt;/p&gt;&lt;p&gt;&lt;/p&gt;]]></content:encoded>
            <category>gadag</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/photos-of-nine-officials-including-gadag-dysp-murtuza-khadri-with-an-accused-in-the-kpsc-scandal-have-gone-viral-sns/articleshow-cqeocfs"/>
        </item>
        <item>
            <title><![CDATA[Bidadi Township Row: ಡಿಕೆಶಿ ರಾಜ್ಯದ ಸಿಎಂ ಆಗಿ ಯೋಜನೆ ರೂಪಿಸಬೇಕು, ರಿಯಲ್ ಎಸ್ಟೇಟ್ ಏಜಂಟರಾಗಿ ಅಲ್ಲ: ವಿಜಯೇಂದ್ರ ಕಿಡಿ]]></title>
            <link>https://kannada.asianetnews.com/politics/by-vijayendra-slams-cm-dk-shivakumar-bidadi-township-protest-rav/articleshow-dxbmw6b</link>
            <guid isPermaLink="true">https://kannada.asianetnews.com/politics/by-vijayendra-slams-cm-dk-shivakumar-bidadi-township-protest-rav/articleshow-dxbmw6b</guid>
            <pubDate>Thu, 16 Jul 2026 12:16:20 +0530</pubDate>
            <description><![CDATA[&lt;p&gt;BY Vijayendra Slams CM DK Shivakumar ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಸಿಎಂ ತಮ್ಮ ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಕನಕಪುರಕ್ಕೆ ವಿಮಾನ ನಿಲ್ದಾಣ ನಿರ್ಮಿಸುತ್ತಿದ್ದಾರೆ ಮತ್ತು ಬಿಡದಿ ಟೌನ್&zwnj;ಶಿಪ್&zwnj;ಗಾಗಿ ರೈತರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmt2saz27q505eqzvymsnnn,imgname-----------------------2026-07-16t120308.182-1784183612767.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜು.16)&lt;/strong&gt;: ಸಿಎಂ ತಮ್ಮ ರಿಯಲ್ ಎಸ್ಟೇಟ್ ದಂಧೆಗಾಗಿ ಕನಕಪುರಕ್ಕೆ ಏರ್ ಪೋರ್ಟ್ ತೆಗೆದುಕೊಂಡು ಹೊರಟಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ(BJP State president BY Vijayendra) ಆರೋಪಿಸಿದ್ರು..&lt;/p&gt;&lt;p&gt;ಗದಗನಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯಕ್ಕೆ ಎರಡನೇ ಏರ್ ಪೋರ್ಟ್ ಬೇಕು ಅಂತಾ ಅದನ್ನೂ ಕನಕಪುರಕ್ಕೆ ತೆಗೆದುಕೊಂಡಿದ್ದಾರೆ. ಕನಕಪುರದ ಬದಲು ತುಮಕೂತು ಆಸುಪಾಸು ಏರ್ ಪೋರ್ಟ್ ತಂದಲ್ಲಿ ಮಧ್ಯ ಕರ್ನಾಟಕಕ್ಕೆ ಲಾಭ. ಜೊತೆಗೆ ಉತ್ತರ ಕರ್ನಾಟಕಕ್ಕೂ ಲಾಭವಾಗಲಿದೆ. ಕೈಗಾರಿಗೆ ಬರುತ್ತೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ ಅಂತಾ ಅಭಿಪ್ರಾಯ ಪಟ್ಟರು.&lt;/p&gt;&lt;h2&gt;ತುಂಗಭದ್ರಾ ಗೇಟ್ ರಿಪೇರಿಗೆ 24 ತಿಂಗಳು, ಟೌನ್&zwnj;ಶಿಪ್&zwnj;ಗೆ 24 ಗಂಟೆಯೊಳಗೆ!&lt;/h2&gt;&lt;p&gt;ಇನ್ನು ಬಿಡದಿ ಟೌನ್ ಶಿಪ್ ಬಗ್ಗೆ ಮಾತ್ನಾಡಿದ ಬಿವೈವಿ, ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ರಿಪೇರಿ 24 ತಿಂಗಳು ಬೇಕಾಯ್ತು, ಆದ್ರೆ ಅಧಿಕಾರ ವಹಿಸಿಕೊಂಡು 24 ಗಂಟೆಯಲ್ಲೇ ಬಿಡದಿ ಫಲವತ್ತಾದ ಜಮೀನು ಕಿತ್ತುಕೊಳ್ಳುವ ದುಸ್ಸಾಹಸ ಮಾಡಿದ್ದಾರೆ ಅಂದ್ರು..&lt;/p&gt;&lt;h3&gt;ರೈತರ ಮನೆಗಳಿಗೆ ನುಗ್ಗಿ ಗೂಂಡಾಗಳಿಂದ ಬೆದರಿಕೆ!&lt;/h3&gt;&lt;p&gt;ರೈತರಿಂದ ಬಲವಂತವಾಗಿ ಜಮೀನು ಕಸೆಯುವುದಿಲ್ಲ ಅಂತಾ ಹೇಳ್ತಾರೆ ಸಿಎಂ ಹೇಳ್ತಾರೆ.. ಆದ್ರೆ ವಾಸ್ತವವಾಗಿ ರೈತರ ಮನೆಗೆ ರಾತ್ರಿ ಗೂಂಡಾಗಳು ನುಗ್ಗಿ, ಜಮೀನನ್ನ ಬಿಟ್ಟುಕೊಡಬೇಕು ಅಂತಾ ಧಮ್ಕಿ ಹಾಕ್ತಾರೆ ಅಂತಾ ರೈತರು ಹೇಳ್ತಿದ್ದಾರೆ.. ಆದ್ರೆ ಈ ಮಧ್ಯೆ ರೈತರು ಕೊಟ್ಟರೇ ಪಾತ್ರ ಜಮೀನು ಪಡೀತೆವೆ ಅಂತಾ ಸಿಎಂ ಕಪಟ ನಾಟಕ ಮಾಡ್ತಾರೆ ಅಂತಾ ಆಕ್ರೋಶಹೊರ ಹಾಕಿದ್ರು.. ಸಿಎಂ ಆದಮೇಲೂ ಡಿಕೆಶಿ ರಿಯಲ್ ಎಸ್ಟೇಟ್ ಧೋರಣೆಯಿಂದ ಹೊರಬರದಿರೋದು ಗೊತ್ತಾಗ್ತಿದೆ.. ನಾವು ಟೌನ್ ಶಿಪ್ ವಿರೋಧಿಸಲ್ಲ.. 70% ರೈತರು ಒಪ್ಪಿದಲ್ಲಿ ಮಾಡಬಹುದು ಎಂದರು.&lt;/p&gt;&lt;p&gt;&lt;strong&gt;ಡಿಕೆಶಿಯವ್ರೇ ರೈತರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡ್ಬೇಡಿ&lt;/strong&gt;&lt;/p&gt;&lt;p&gt;ಸಿಎಂ ಬಂಧುಬಳಗವೇ ಬಿಡದಿಯಲ್ಲಿ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ ಅಂತಾ ರೈತರು ಮಾತನಾಡಿಕೊಳ್ಳುತ್ತಿದ್ದಾರೆ ಸಣ್ಣ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಅಂತಾನೂ ರೈತರು ಹೇಳ್ತಿದ್ದಾರೆ ಅಂತಾ ಹೇಳಿದ ಬಿವೈವಿ, ರೈತರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡ್ಬೇಡಿ ಅಂತಾ ಸಿಎಂಗೆ ಆಗ್ರಹಿಸುತ್ತೇನೆ.. ಕುಮಾರಸ್ವಾಮಿ ಕಾಲದಲ್ಲಿ ಆರಂಭವಾಗಿದೆ ಅಂತಾ ನೆಪವೊಡ್ಡಿ ಭೂಮಿ ಕಸೆಯಬೇಡಿ.. ಹೀಗೆ ಮಾಡಿದಲ್ಲಿ, ರೈತರ ಶಾಪಕ್ಕೆ ಸರ್ಕಾರ ಬಲಿಯಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ರು..&lt;/p&gt;&lt;p&gt;ರಾಜ್ಯದಲ್ಲಿ ಇಂಥ ಸಮಸ್ಯೆ ಇದ್ದರೂ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ.. ರಾಹುಲ್ ಗಾಂಧಿ ರೈತರ ಸಂಕಷ್ಟ ಅರಿಯಬೇಕು.. ರೈತರ ಪರ ನಿಲುವನ್ನ ರಾಹುಲ್ ಗಾಂಧಿಯವರೂ ತೆಗೆದುಕೊಳ್ಳಬೇಕು ಅಂತಾ ಆಗ್ರಹಿಸಿದ್ರು.. ಜೊತೆಗೆ ನಾಳೆ ಫ್ರೀಡಮ್ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಅಂತಾ ಹೇಳಿದ್ರು..&lt;/p&gt;&lt;p&gt;&lt;strong&gt;ರಾಜ್ಯದ ಕೃಷಿ ಸಚಿವರು ಯಾರು?&lt;/strong&gt;&lt;/p&gt;&lt;p&gt;ಕೃಷಿ ಸಚಿವರೇ ಇಲ್ಲದಿರೋದು ರಾಜ್ಯದಲ್ಲಿ ಕೃಷಿಗೆ ಆಧ್ಯತೆ ಇಲ್ಲ ಎನ್ನುವುದನ್ನ ತೋರಿಸುತ್ತದೆ.. ಬೀಕರ ಬರ ಇದೆ.. ಬಿತ್ತನೆ ಮಾಡಿದರೂ ಮೊಳಕೆಯೊಡದಿಲ್ಲ.. ಆದ್ರೆ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರು ಸಿಎಂ ಸುಮ್ಮನಾಗಿದ್ದಾರೆ.. ಸಿಎಂ, ಸಚಿವರನ್ನ ಜಿಲ್ಲೆಗಳಿಗೆ ಕಳುಹಿಸಬೇಕು.. ವಾಸ್ತವಿಕ ಪರಿಸ್ಥಿತಿ ಅರಿತು ರಾಜ್ಯ ಸರ್ಕಾರ ಸ್ಪಂದಿಸಲಿ ಅಂತಾ ಇತ್ತಾಯಿಸಿದ ಬಿವೈವಿ, ಪತ್ರಬರೆದು ಸುಮ್ಮನೆ ಕೂತರೆ ರೈತರ ಕಣ್ಣೀರು ವರೆಸಿದಂತಾಗುವುದಿಲ್ಲ ಅಂತಾ ಹೇಳಿದ್ರು.&lt;/p&gt;&lt;p&gt;&lt;strong&gt;ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ&lt;/strong&gt;&lt;/p&gt;&lt;p&gt;ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೀತಿದೆ.. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮತೀಯ ಶಕ್ತಿಗಳಿಗೆ ಸ್ವರ್ಗದ ಹಾಗಿದೆ.. ಕೊಲೆ ದೌರ್ಜನ್ಯ ನಡೆದರೂ ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡುತ್ತಿದೆ ಎನ್ನುವಂತಾಗಿದೆ&zwnj;. ಇತ್ತೀಚೆಗೆ ಹಾವೇರಿಯಲ್ಲಿ ಪಟಾಕಿ ಸಿಡಿಸಿದ್ದರು ಅಂತಾ ಹಿಂದೂಗಳ ಮೇಲೆ ಮಾರಣಾಂತಿ ಹಲ್ಲೆ ಮಾಡಿದ್ದರು ನಡೆದಿತ್ತು.. ರಟ್ಟಿಹಳ್ಳಿಯಲ್ಲಿ ಶಿವಾಜಿ ರಾವ್ ಎನ್ನುವವರ ಹತ್ಯೆಯಾಗಿರೋದನ್ನ ನೋಡಿದ್ದೇವೆ.. ಯಲ್ಲಾಪುರದ ದಲಿತ ಮಹಿಳೆ ಹತ್ಯೆ.. ಕೊಪ್ಪಳ ಹತ್ಯೆಯಾದ ಗವಿಸಿದ್ಧಪ್ಪನಿಗೆ ನ್ಯಾಯಕ್ಕಾಗಿ ತಂದೆ ತಾಯಿ ಪ್ರತಿಭಟಿಸಿದರೇ ಮೃತ ವ್ಯಕ್ತಿಯ ಮೇಲೆ ಪೋಕ್ಸೋ ಕೇಸ್ ದಾಖಲಿಸಲಾಗಿತ್ತು.&lt;/p&gt;&lt;p&gt;ಕಾಂಗ್ರೆಸ್ ಸರ್ಕಾರ ಸಚಿವರ ಹೇಳಿಕೆಗಳು ಮತೀಯ ಶಕ್ತಿಗಳಿಗೆ ಧೈರ್ಯ ತಂದುಕೊಡುತ್ತಿದೆ.. ಅಲ್ಪ ಸಂಖ್ಯಾತರ ಓಲೈಕೆ ರಾಜಕಾರಣ ವಿರೋಧಿಸಿ ಹಾವೇರಿಯಲ್ಲಿ ಹೋರಾಟ ಹಮ್ಮಿಕೊಂಡಿದ್ದೇವೆ&zwnj; ಅಂತಾ ಮಾಹಿತಿ ನೀಡಿದ್ರು.. ಎಸ್ ಐಆರ್ ನ್ನ ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿದ್ದಾರೆ..ಈ ಮಧ್ಯೆ ರಾಜ್ಯ ಸರ್ಕಾರ ಖಾಯಂ ನಿವಾಸಿ ಪತ್ರ ನೀಡುತ್ತಿರುವುದು ಖಂಡನಾರ್ಹ.. ನಿನ್ನೆ ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು&zwnj;..&lt;/p&gt;]]></content:encoded>
            <category>gadag</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/by-vijayendra-slams-cm-dk-shivakumar-bidadi-township-protest-rav/articleshow-dxbmw6b"/>
        </item>
        <item>
            <title><![CDATA[ಸಿಎಂ ಬರ ವೀಕ್ಷಣೆ ನಂತರ ಅಳಿದುಳಿದ ಬೆಳೆಯೂ ಹಾಳಾಯ್ತು ಅಂತ ರೈತನ ಗೋಳಾಟ]]></title>
            <link>https://kannada.asianetnews.com/karnataka-districts/gadag-farmer-grieves-as-cm-drought-inspection-convoy-destroys-remaining-crops-gkn/articleshow-dzzl48z</link>
            <guid isPermaLink="true">https://kannada.asianetnews.com/karnataka-districts/gadag-farmer-grieves-as-cm-drought-inspection-convoy-destroys-remaining-crops-gkn/articleshow-dzzl48z</guid>
            <pubDate>Tue, 01 Sep 2026 18:01:28 +0530</pubDate>
            <description><![CDATA[&lt;p&gt;ಗದಗ ಜಿಲ್ಲೆಯಲ್ಲಿ ಸಿಎಂ ಬರ ವೀಕ್ಷಣೆ ವೇಳೆ ಅಧಿಕಾರಿಗಳು ಮತ್ತು ಪೊಲೀಸರ ಕಾಲ್ತುಳಿತಕ್ಕೆ ರೈತನ ಅಳಿದುಳಿದ ಸೂರ್ಯಕಾಂತಿ ಬೆಳೆ ನಾಶವಾಗಿದೆ ಎಂದು ರೈತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ef3kcyqajt2je3rtv5jj9x,imgname-dk-shivaumar-1788265745821.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ:&lt;/strong&gt; ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇವತ್ತು ಗದಗ ಜಿಲ್ಲೆಯ ಬರಗಾಲ ಪರಿಸ್ಥಿತಿಯನ್ನು ಅವಲೋಕಿಸಿದರು. ಬರಪೀಡಿತ ಸ್ಥಳಗಳಿಗೆ ಅಧಿಕಾರಿಗಳ ಜೊತೆ ಖುದ್ದು ಭೇಟಿ ನೀಡಿ, ರೈತರ ಸಂಕಷ್ಟಗಳನ್ನು ಆಲಿಸಿದರು. ಈ ವೇಳೆ ಸೂರ್ಯಕಾಂತಿ ಬೆಳೆಯುವ ರೈತರೊಬ್ಬರು ಗಂಭೀರ ಆರೋಪ ಮಾಡಿದರು.&lt;/p&gt;&lt;p&gt;ಬರದಿಂದ ಕಂಗಾಲಾಗಿದ್ದ ರೈತನ ಜಮೀನಿಗೆ ಸಿಎಂ ಮತ್ತು ಅಧಿಕಾರಿಗಳ ದಂಡು ಲಗ್ಗೆ ಇಟ್ಟಿದ್ದರಿಂದ, ಕೈಗೆ ಬರಬೇಕಿದ್ದ ಅಲ್ಪಸ್ವಲ್ಪ ಬೆಳೆಯೂ ನಾಶವಾಗಿದೆ ಅನ್ನೋದು ಈ ರೈತನ ಆರೋಪವಾಗಿದೆ. ಜಿಲ್ಲೆಯ ಕದಾಂಪೂರದ ರೈತ ಮಂಜುನಾಥ ಗಾವರವಾಡ ಮಾಡಿದ ಆರೋಪದ ಪ್ರಕಾರ, ಮಂಜುನಾಥ್ ಅವರು ಮೂರು ಎಕರೆಯಲ್ಲಿ ಸೂರ್ಯಕಾಂತಿ ಬೆಳೆದಿದ್ದರು. ಮಳೆ ಇಲ್ಲದೆ ಬೆಳೆ ಒಣಗುತ್ತಿದ್ದರೂ, ಕನಿಷ್ಠ 4 ಕ್ವಿಂಟಲ್ ಆದರೂ ಫಸಲು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು.&lt;/p&gt;&lt;p&gt;&lt;img&gt;&lt;/p&gt;&lt;p&gt;ಆದರೆ ಸಿಎಂ ಬರ ವೀಕ್ಷಣೆ ವೇಳೆ ಅವರ ಜೊತೆ ಬಂದಿದ್ದ ಅಧಿಕಾರಿಗಳು ಮತ್ತು ಪೊಲೀಸರ ಕಾಲ್ತುಳಿತಕ್ಕೆ ಸಿಕ್ಕಿ ಸೂರ್ಯಕಾಂತಿ ಬೆಳೆಗೆ ಹಾನಿಯಾಗಿದೆ. ಬರದಿಂದ ಈಗಾಗಲೇ ಬೆಳೆ ಕಳೆದುಕೊಂಡಿದ್ದೇವೆ. ಈಗ ಅಳಿದುಳಿದ ಬೆಳೆಯೂ ಇವರ ಕಾಲ್ತುಳಿತಕ್ಕೆ ಸಿಕ್ಕಿ ಹೋಯಿತು ಎಂದು ರೈತ ಮಂಜುನಾಥ್ ಗೋಳು ತೋಡಿಕೊಂಡಿದ್ದಾರೆ. ಅಚ್ಚರಿಯೆಂದರೆ.. ಜಮೀನಿಗೆ ಭೇಟಿ ನೀಡಿದ ಡಿಕೆಶಿ ಅವರು ಅಲ್ಲಿನ ರೈತರೊಂದಿಗೆ ಮಾತನಾಡದೆ ತೆರಳಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.&lt;/p&gt;&lt;h2&gt;&lt;strong&gt;ಅಧಿಕಾರಿಗಳ ಜೊತೆ ಸಭೆ&lt;/strong&gt;&lt;/h2&gt;&lt;p&gt;ಬರ ವೀಕ್ಷಣೆಯ ನಂತರ ಸಿಎಂ ಗದಗ ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರು ಮತ್ತು ಮೇವಿನ ಲಭ್ಯತೆಯ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ ಉಸ್ತುವಾರಿ ಸಚಿವ ಬಸವರಾಜ್ ರಾಯರೆಡ್ಡಿ, ಶಾಸಕರಾದ ಎಚ್.ಕೆ. ಪಾಟೀಲ್, ಸಿ.ಸಿ. ಪಾಟೀಲ್, ಚಂದ್ರು ಲಮಾಣಿ, ಎನ್.ಎಚ್. ಕೋನರೆಡ್ಡಿ ಹಾಗೂ ಎಸ್.ವಿ. ಸಂಕನೂರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.&lt;/p&gt;&lt;p&gt;ಒಂದೆಡೆ ಅಧಿಕಾರಿಗಳು ಸಭೆಯಲ್ಲಿ ಅಂಕಿ-ಅಂಶಗಳನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಬೆಳೆ ಕಳೆದುಕೊಂಡ ರೈತ ಮಂಜುನಾಥ್ ತನ್ನ ಜಮೀನಿನ ಮುಂದೆ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಬರ ವೀಕ್ಷಣೆಗೆ ಬಂದ ಸರ್ಕಾರ ರೈತರಿಗೆ ನ್ಯಾಯ ಒದಗಿಸುತ್ತದೆಯೇ ಅಥವಾ ಕೇವಲ ಪ್ರಚಾರಕ್ಕೆ ಸೀಮಿತವಾಗುತ್ತದೆಯೇ ಎಂದು ಕಾದು ನೋಡಬೇಕಿದೆ.&lt;/p&gt;&lt;p&gt;ಗದಗ ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ಮತ್ತು ವೀಕ್ಷಣೆಕುರ್ತಕೋಟಿ ಗ್ರಾಮ pic.twitter.com/3Pn6Jgy849&lt;/p&gt;&lt;p&gt;&mdash; DK Shivakumar (@DKShivakumar) September 1, 2026&lt;/p&gt;&lt;p&gt;&lt;/p&gt;]]></content:encoded>
            <category>gadag</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/gadag-farmer-grieves-as-cm-drought-inspection-convoy-destroys-remaining-crops-gkn/articleshow-dzzl48z"/>
        </item>
        <item>
            <title><![CDATA[ಗದಗ: ಹಾಸ್ಟೆಲ್‌ನಲ್ಲಿ ವೈದ್ಯೆ ವಿದ್ಯಾರ್ಥಿನಿ ಶವ ಪತ್ತೆ, ಅನುಮಾನ ಹುಟ್ಟಿಸಿದ ಡೆತ್ ನೋಟ್! ಕೊರಳಿಗೆ ಹಾಕಿದ ಬಟ್ಟೆ!]]></title>
            <link>https://kannada.asianetnews.com/karnataka-districts/gadag-medical-student-dr-veena-hanapur-body-found-rural-development-university-hostel/articleshow-gqbzwhz</link>
            <guid isPermaLink="true">https://kannada.asianetnews.com/karnataka-districts/gadag-medical-student-dr-veena-hanapur-body-found-rural-development-university-hostel/articleshow-gqbzwhz</guid>
            <pubDate>Fri, 24 Jul 2026 15:03:48 +0530</pubDate>
            <description><![CDATA[&lt;p&gt;ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಹಾಸ್ಟೆಲ್&zwnj;ನಲ್ಲಿ, ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಡಾ. ವೀಣಾ ಹಾನಾಪುರ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ. ಇದು ಆತ್ಮ೧ಹತ್ಯೆಯಲ್ಲ, ಕೊಲೆ ಎಂದು ಪೋಷಕರು ಆರೋಪಿಸಿದ್ದು, ಸಾವಿನ ಸುತ್ತ ಅನುಮಾನಗಳು ದಟ್ಟವಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9q5xtjk84x64dbc9w40kyz,imgname-----------------------2026-07-24t145631.216-1784885213010.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜು.24):&lt;/strong&gt; ಹಾಸ್ಟೆಲ್ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಶವ ಪತ್ತೆಯಾದ ಆಘಾತಕಾರಿ ಘಟನೆ ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ನಡೆದಿದೆ.&lt;/p&gt;&lt;p&gt;ಮೃತ ವಿದ್ಯಾರ್ಥಿನಿಯನ್ನ ಡಾ ವೀಣಾ ಹಾನಾಪುರ(25) ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಮೂಲದವರಾದ ವಿದ್ಯಾರ್ಥಿನಿ ವೀಣಾ ಹಾಸ್ಟೆಲ್&zwnj;ನಲ್ಲಿದ್ದುಕೊಂಡು ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್(MPH) ಕೋರ್ಸ್ ಓದುತ್ತಿದ್ದರು. ಆದರೆ ಅನುಮಾನಸ್ಪದ ರೀತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.&lt;/p&gt;&lt;h2&gt;ಕೊಲೆಯೋ ಆತ್ಮ*ಹತ್ಯೆಯೋ?&lt;/h2&gt;&lt;p&gt;ನಿನ್ನೆ ರಾತ್ರಿ ಹಾಸ್ಟೆಲ್ ರೂಮ್&zwnj;ಗೆ ಹೋಗಿದ್ದ ವೀಣಾ. ರಾತ್ರಿ 11 ಗಂಟೆಯಾದರೂ ಆಚೆ ಬಾರದ ಹಿನ್ನೆಲೆ ಅನುಮಾನಗೊಂಡು ವಾರ್ಡ್ ರೂಂ ಬಾಗಿಲು ಬಡಿದ್ದಾರೆ. ಬಾಗಿಲು ತೆರೆಯದ ಹಿನ್ನೆಲೆ ಬಾಗಿಲು ಮುರಿದು ಕೋಣೆಯೊಳಗೆ ಹೋದಾಗ ಮಂಚದ ಕಂಬಿಗೆ ನೇಣುಬಿಗಿದ ಸ್ಥಿತಿ ಶವ ಪತ್ತೆಯಾಗಿದೆ.&lt;/p&gt;&lt;h3&gt;ಸಾವಿನ ಬಗ್ಗೆ ತನಿಖೆ ನಡೆಸಲು ಪೋಷಕರು ಆಗ್ರಹ&lt;/h3&gt;&lt;p&gt;ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಮಗಳು ವೈದ್ಯಳಾಬೇಕಿದ್ದು ಅವಳು ಸಾಯುವವಳಲ್ಲ. ಯಾವುದೆ ಸಮಸ್ಯೆ ಇರಲಿಲ್ಲ. ಕಾಲು ನೆಲಕ್ಕೆ ತಾಗುವಂತೆ ನೇಣುಬಿಗಿಯಲಿದೆ. ಮಗಳ ಮುಖದ ಮೇಲೆ ಗಾಯಗಳಾಗಿವೆ. ಅಲ್ಲದೆ ನೇಣುಬಿಗಿದ ಬಟ್ಟೆಯೂ ಮಗಳಿಗೆ ಸರಿದ್ದಲ್ಲ. ಮಗಳ ಶವದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು ಅದು ಮಗಳ ಹಸ್ತಾಕ್ಷರವಲ್ಲ ಎಂದು ಪೋಷಕರು ಸ್ಪಷ್ಟಪಡಿಸಿದ್ದು ಮಗಳು ಆತ್ಮ*ಹತ್ಯೆ ಮಾಡಿಕೊಂಡಿಲ್ಲ, ಕೊಲೆ ಮಾಡಲಾಗಿದೆ. ಮಗಳ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ವಿದ್ಯಾರ್ಥಿನಿಯ ತಂದೆ ರಾಮಪ್ಪ ಹಾನಾಪೂರ್ ಆಗ್ರಹಿಸಿದರು.&lt;/p&gt;&lt;p&gt;ಸದ್ಯ ಶವವನ್ನ ಮರಣೋತ್ತರ ಪರೀಕ್ಷೆಗೆ ಜಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದ್ದು ಪೊಲೀಸರು ಮುಂದಿನ ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/gadag-medical-student-dr-veena-hanapur-body-found-rural-development-university-hostel/articleshow-gqbzwhz"/>
        </item>
        <item>
            <title><![CDATA[ಗಜೇಂದ್ರಗಡದ 23 ವಾರ್ಡ್‌ಗಳಿಂದ ಪ್ರತಿದಿನ 11 ಟನ್ ಕಸ ಉತ್ಪಾದನೆ;  ಸ್ವಚ್ಛತೆಗೆ ಸಿಗದ ಆದ್ಯತೆ]]></title>
            <link>https://kannada.asianetnews.com/karnataka-districts/11-tons-of-garbage-generated-daily-from-23-wards-of-gajendragad-city-cleanliness-not-given-priority-mrq/articleshow-guvo4v3</link>
            <guid isPermaLink="true">https://kannada.asianetnews.com/karnataka-districts/11-tons-of-garbage-generated-daily-from-23-wards-of-gajendragad-city-cleanliness-not-given-priority-mrq/articleshow-guvo4v3</guid>
            <pubDate>Sat, 08 Aug 2026 08:27:48 +0530</pubDate>
            <description><![CDATA[ಗಜೇಂದ್ರಗಡ ಪಟ್ಟಣದಲ್ಲಿ ಪುರಸಭೆಯು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ ಎಂದರೂ, ಹಲವೆಡೆ ಹೂಳು ತುಂಬಿದ ಚರಂಡಿಗಳು ಮತ್ತು ಕಸದ ರಾಶಿಗಳು ಗಬ್ಬೆದ್ದು ನಾರುತ್ತಿವೆ. ಪೌರಕಾರ್ಮಿಕರ ಕೊರತೆ ಮತ್ತು ಸಮರ್ಪಕ ತ್ಯಾಜ್ಯ ವಿಲೇವಾರಿಯ ಅಭಾವದಿಂದಾಗಿ ಪಟ್ಟಣದ ಸ್ವಚ್ಛತೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfms6vqtm3ndtyqnp5394cy,imgname--gajendragad--1786157767543.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಸ್.ಎಂ. ಸೈಯದ್&lt;/strong&gt;&lt;/p&gt;&lt;p&gt;&lt;strong&gt;ಗಜೇಂದ್ರಗಡ:&lt;/strong&gt; ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಪುರಸಭೆಯವರು ಹೇಳುತ್ತಿದ್ದರೂ ಪಟ್ಟಣದ ಹಲವೆಡೆ ಕಣ್ಣಿಗೆ ಕಸದ ರಾಶಿ ರಾಚುತ್ತಿವೆ. ಬಹುತೇಕ ಚರಂಡಿಗಳು ಹೂಳು ತುಂಬಿದ್ದು, ಗಬ್ಬೆದ್ದು ನಾರುತ್ತಿವೆ.&lt;/p&gt;&lt;p&gt;ಪಟ್ಟಣದ 23 ವಾರ್ಡ್&zwnj;ಗಳಿಂದ ಪ್ರತಿದಿನ 11 ಟನ್ ಕಸ ಉತ್ಪಾದನೆ ಆಗುತ್ತಿದೆ. ನಿತ್ಯ ಪುರಸಭೆಯಿಂದ ಅಂದಾಜು 9 ಟನ್ ಕಸ ವಿಲೇವಾರಿ ಆಗುತ್ತಿದೆ. ಇನ್ನುಳಿದ 2 ಟನ್ ಕಸದಲ್ಲಿ ಚರಂಡಿಯಿಂದ ಹಾಗೂ ರಸ್ತೆಯಲ್ಲಿ ಬಿಸಾಕುವ ಕಸವಾಗಿದೆ. ಈ ಕಸ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.&lt;/p&gt;&lt;p&gt;ಪಟ್ಟಣದ ಬಹುತೇಕ ವಾರ್ಡಗಳಲ್ಲಿ ಕಸ ಸಂಗ್ರಹಣೆಗೆ ವಾಹನಗಳು ತೆರಳಿದರೂ ರಸ್ತೆ ಪಕ್ಕದಲ್ಲಿ ಕಸ ಎಸೆಯುವುದು ನಿಲ್ಲುತ್ತಿಲ್ಲ. ಪರಿಣಾಮ ಪಟ್ಟಣದ ಕೆಲ ಬಡಾವಣೆ ಹಾಗೂ ಜೋಡುರಸ್ತೆಯಲ್ಲಿ ಸಂಜೆ ಹಾಗೂ ಬೆಳಗ್ಗೆ ಕಸ ರಾಶಿಗಳು ಕಾಣುವುದು ಸಾಮಾನ್ಯ.&lt;/p&gt;&lt;h2&gt;&lt;strong&gt;ಪಟ್ಟಣದಲ್ಲಿ ಯಥೇಚ್ಛವಾಗಿ ಪ್ಲಾಸ್ಟಿಕ್ ಬಳಕೆ&lt;/strong&gt;&lt;/h2&gt;&lt;p&gt;ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಪಟ್ಟಣದಲ್ಲಿ ಸ್ವಚ್ಛತೆಗೆ ಪುರಸಭೆ ಜಾಗೃತಿ ಜತೆಗೆ ಆದ್ಯತೆ ನೀಡುತ್ತಿದೆ. ಆದರೆ ಪ್ಲಾಸ್ಟಿಕ್ ಬಳಕೆ ಯಥೇಚ್ಛವಾಗಿ ನಡೆಯುತ್ತಿದೆ. ಇತ್ತ ಜೋಡುರಸ್ತೆ ಸೇರಿ ಕೊಳ್ಳಿಯವರ ಕತ್ರಿಯಲ್ಲಿ ನಡೆಯುವ ಬೀದಿಬದಿ ವ್ಯಾಪಾರ ಬಳಿಕ ಉಳಿದ ಕಸವನ್ನು ರಸ್ತೆಯಲ್ಲಿ ಎಸೆಯುವುದರಿಂದ ಚರಂಡಿಗಳಲ್ಲಿ ವ್ಯಾಪಕ ಪ್ರಮಾಣದ ಪ್ಲಾಸ್ಟಿಕ್ ಚೀಲ, ಬಾಟಲಿ ಸೇರಿ ಇತರ ತ್ಯಾಜ್ಯ ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಾಡಾಗಿದೆ. ಮಳೆಗಾಲದಲ್ಲಿ ಚರಂಡಿಯಲ್ಲಿನ ಕೊಳಚೆ ನೀರು ರಸ್ತೆ ಮೇಲೆ ಹರಿದು ಗಬ್ಬುವಾಸನೆ ಬೀರುತ್ತದೆ.&lt;/p&gt;&lt;p&gt;ಪಟ್ಟಣದ 23 ವಾರ್ಡಗಳಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಣೆ ವಿಲೇವಾರಿಗೆ 7 ಟಾಟಾ ಎಸ್&zwnj;, 3 ಟ್ರ್ಯಾಕ್ಟರ್, 1 ಡೋಜರ್, 1 ಸ್ವೀಪಿಂಗ್ ಮಷಿನ್, 1 ಟಿಪ್ಪರ್ ಸೇರಿ 17 ವಾಹನಗಳಿದ್ದು,7೭ ಜನ ವಾಹನ ಚಾಲಕರಿದ್ದಾರೆ. ಅಲ್ಲದೆ ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ 56 ಪೌರಕಾರ್ಮಿಕರ ಅಗತ್ಯವಿದೆ. ಆದರೆ 38 ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮ ಕಾರ್ಮಿಕರು ಹಾಗೂ ವಾಹನ ಚಾಲಕರ ಕೊರತೆ ಮೇಲ್ನೋಟಕ್ಕೆ ಕಾಣುತ್ತಿದೆ.&lt;/p&gt;&lt;p&gt;ಅಮೃತ್ 2.0 ಯೋಜನೆ ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ಮನಸೋ ಇಚ್ಛೆ ರಸ್ತೆಗಳನ್ನು ಒಡೆದಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಆದರೆ ಪಟ್ಟಣದಲ್ಲಿ ಪೂರ್ಣ ಪ್ರಮಾಣದ ಸ್ವಚ್ಛತೆಗೆ ಪುರಸಭೆ ಪರದಾಡುತ್ತಿದೆ. ಘನತ್ಯಾಜ್ಯ ಘಟಕದಲ್ಲಿ ಸಂಗ್ರಹಿಸಿದ ಕಸದಿಂದ ಉತ್ಪಾದನೆಯಾದ ಎರೆಹುಳು ಗೊಬ್ಬರ 18 ಟನ್ ಮಾರಾಟಕ್ಕೆ ಸಿದ್ಧವಾಗಿದೆ.&lt;/p&gt;&lt;p&gt;ಸ್ವಚ್ಛತೆಗೆ ಕೈಜೋಡಿಸಿ&lt;/p&gt;&lt;p&gt;ಪಟ್ಟಣದ 23 ವಾರ್ಡಗಳಲ್ಲಿ ಪುರಸಭೆಯ ಕಸದ ವಾಹನಗಳು ತೆರಳಿ ಕಸ ಸಂಗ್ರಹಣೆ ಮಾಡುತ್ತಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಕಸದ ವಾಹನಗಳಲ್ಲಿ ಕಸ ಹಾಕುವ ಮೂಲಕ ಪುರಸಭೆಗೆ ಸಹಕಾರ ನೀಡಿ ಸುಂದರ ಪಟ್ಟಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಶಿವಕುಮಾರ ಇಲಾಳ ತಿಳಿಸಿದರು.&lt;/p&gt;&lt;p&gt;ಸ್ವಚ್ಛ ಪಟ್ಟಣ&lt;/p&gt;&lt;p&gt;ಪುರಸಭೆಯವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಆದರೆ ಸಚಿವರು ಸೇರಿ ಗಣ್ಯರು ಆಗಮಿಸುವ ವೇಳೆ ಸ್ವಚ್ಛತೆಗಾಗಿ ಆದ್ಯತೆಯನ್ನು ನೀಡುತ್ತಾರೆ. ಉಳಿದ ಸಮಯದಲ್ಲಿ ಅದೇ ರಾಗ, ಅದೇ ತಾಳ ಎನ್ನುವಂಥ ಧೋರಣೆ ಕೈಬಿಟ್ಟರೆ ಸ್ವಚ್ಛ ಪಟ್ಟಣವಾಗುವುದರಲ್ಲಿ ಸಂದೇಹವಿಲ್ಲ ಎಂದು ನಿವಾಸಿಗಳು ತಿಳಿಸಿದರು.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/11-tons-of-garbage-generated-daily-from-23-wards-of-gajendragad-city-cleanliness-not-given-priority-mrq/articleshow-guvo4v3"/>
        </item>
        <item>
            <title><![CDATA[ಗದಗ ಜಿಲ್ಲೆ ಜನರಿಗೆ ಜಲಸಂಕಟ: ಒಂದು ಹನಿ ನೀರಿಲ್ಲದಂತೆ ಬತ್ತಿ ಹೋದ 237 ಕೊಳವೆಬಾವಿಗಳು!]]></title>
            <link>https://kannada.asianetnews.com/karnataka-districts/lack-of-rain-karnataka-draught-gadag-district-237-borewells-are-fully-dry-no-water-for-drink/articleshow-nbvvxgz</link>
            <guid isPermaLink="true">https://kannada.asianetnews.com/karnataka-districts/lack-of-rain-karnataka-draught-gadag-district-237-borewells-are-fully-dry-no-water-for-drink/articleshow-nbvvxgz</guid>
            <pubDate>Tue, 28 Jul 2026 15:19:25 +0530</pubDate>
            <description><![CDATA[ಗದಗ ಜಿಲ್ಲೆಯಲ್ಲಿ ಮಳೆಯ ತೀವ್ರ ಅಭಾವ ಮತ್ತು ಅಂತರ್ಜಲ ಮಟ್ಟದ ಕುಸಿತದಿಂದಾಗಿ, 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 1253 ಕೊಳವೆಬಾವಿಗಳ ಪೈಕಿ 237 ಸಂಪೂರ್ಣವಾಗಿ ಬತ್ತಿ ಹೋಗಿವೆ. ಈ ನೀರಿನ ಬಿಕ್ಕಟ್ಟು ಜನರ ಬದುಕುವ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದ್ದು, ಸ್ಥಗಿತಗೊಂಡ ಬೋರ್&zwnj;ವೆಲ್&zwnj;ಗಳನ್ನು ದುರಸ್ತಿಪಡಿಸಲು ಅಥವಾ ಪರ್ಯಾಯ ವ್ಯವಸ್ಥೆ ಮಾಡಲು ಒತ್ತಾಯ ಕೇಳಿಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksd0vy6e2ykzt8srfp82nksd,imgname-borewell--2--1779627325646.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ-ಶಿವಕುಮಾರ ಕುಷ್ಟಗಿ&lt;/strong&gt;&lt;/p&gt;&lt;p&gt;&lt;strong&gt;ಗದಗ (ಜು.28): ಮ&lt;/strong&gt;ಳೆಯ ತೀವ್ರ ಅಭಾವ, ಅಂತರ್ಜಲ ಮಟ್ಟದ ನಿರಂತರ ಕುಸಿತದಿಂದಾಗಿ ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿದ್ದ ಕೊಳವೆಬಾವಿಗಳು (ಬೋರ್&zwnj;ವೆಲ್) ಬತ್ತುತ್ತಿವೆ. ಭೂಮಿಯ ಆಳದಲ್ಲಿದ್ದ ನೀರು ಸಂಪೂರ್ಣ ಬರಿದಾಗುತ್ತಿದ್ದು, ಆತಂಕ ಎದುರಾಗಿದೆ.&lt;/p&gt;&lt;p&gt;ಜಿಲ್ಲೆಯ ಒಟ್ಟು 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ವತಿಯಿಂದ ನಿರ್ವಹಿಸಲ್ಪಡುವ ಒಟ್ಟು 1253 ಕೊಳವೆಬಾವಿಗಳಿವೆ. ಪ್ರಸ್ತುತ ಭೀಕರ ಬರಗಾಲದ ಸನ್ನಿವೇಶದಲ್ಲಿ ಬರೋಬ್ಬರಿ 237 ಕೊಳವೆಬಾವಿಗಳು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದ್ದು, ಪ್ರಸ್ತುತ 1016 ಕೊಳವೆಬಾವಿಗಳು ಮಾತ್ರ ಜನರ ಬಾಯಾರಿಕೆ ತಣಿಸುತ್ತಿವೆ.&lt;/p&gt;&lt;h2&gt;&lt;strong&gt;ಹಲವು ಸಮಸ್ಯೆ, ಒಂದೇ ಕಾರಣ:&lt;/strong&gt;&lt;/h2&gt;&lt;p&gt;ಮಳೆ ಕೊರತೆಯ ಪರಿಣಾಮದಿಂದಾಗಿ ಅಂತರ್ಜಲ ಮಟ್ಟ 350ರಿಂದ 500 ಅಡಿಗಳಿಗೂ ಆಳಕ್ಕೆ ಕುಸಿದಿರುವುದರಿಂದ ನೀರೆತ್ತುವ ಮೋಟರ್&zwnj;ಗಳ ಮೇಲೆ ತೀವ್ರ ಒತ್ತಡ ಬಿದ್ದು ಸುಟ್ಟುಹೋಗುತ್ತಿರುವುದು ಮತ್ತು ನೀರಿಲ್ಲದೆ ಬೋರ್&zwnj;ವೆಲ್&zwnj;ಗಳು ಖಾಲಿಯಾಗುತ್ತಿರುವುದು ಈ ತಾಂತ್ರಿಕ ಬಿಕ್ಕಟ್ಟಿಗೆ ಮುಖ್ಯ ಕಾರಣವಾಗಿದ್ದು, ಅವುಗಳ ದುರಸ್ತಿ ನಿಗದಿತ ಸಮಯದಲ್ಲಿ ಆಗುತ್ತಿಲ್ಲ. ಇದಕ್ಕೆ ಒಂದೆಡೆ ಅನುದಾನದ ಕೊರತೆ, ಇನ್ನೊಂದೆಡೆ ಇಚ್ಛಾಶಕ್ತಿಯ ಕೊರತೆ ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಕೊಳವೆಬಾವಿ ವಿವರ:&amp;nbsp;&lt;/strong&gt;&lt;/h2&gt;&lt;p&gt;ಗದಗ- ಬೆಟಗೇರಿ ಅವಳಿ ನಗರದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು 834 ಕೊಳವೆಬಾವಿಗಳನ್ನು ಹೊಂದಿದೆ. ಅದರೊಟ್ಟಿಗೆ 136 ಬೋರ್&zwnj;ವೆಲ್&zwnj;ಗಳು ಬಂದ್ ಆಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಕೊಳವೆಬಾವಿಗಳು ಬಂದ್ ಆಗಿರುವುದು ಗದಗ ಬೆಟಗೇರಿ ಅವಳಿ ನಗರದಲ್ಲಿ. ಉಳಿದಂತೆ ನರಗುಂದ ಪುರಸಭೆಯ 54 ಕೊಳವೆಬಾವಿಗಳಲ್ಲಿ 35 ಬೋರ್&zwnj;ವೆಲ್&zwnj;ಗಳಲ್ಲಿ ಬತ್ತಿವೆ. ಕೆಲವು ದುರಸ್ತಿಗಾಗಿ ಕಾಯುತ್ತಿವೆ. ರೋಣ ಪುರಸಭೆಯ 42ರಲ್ಲಿ 22 ಹಾಗೂ ಲಕ್ಷ್ಮೇಶ್ವರ ಪುರಸಭೆಯ 104ರಲ್ಲಿ 22 ಕೊಳವೆಬಾವಿಗಳು ದುರಸ್ತಿಯಲ್ಲಿವೆ. ಗಜೇಂದ್ರಗಡದಲ್ಲಿ 8, ಮುಂಡರಗಿಯಲ್ಲಿ 4, ನರೇಗಲ್ಲನಲ್ಲಿ 4, ಶಿರಹಟ್ಟಿಯಲ್ಲಿ 4 ಹಾಗೂ ಮುಳಗುಂದ ಪಟ್ಟಣ ಪಂಚಾಯ್ತಿಯಲ್ಲಿ 2 ಕೊಳವೆಬಾವಿಗಳು ಸಂಪೂರ್ಣ ಸ್ಥಗಿತಗೊಂಡಿವೆ.&lt;/p&gt;&lt;p&gt;&lt;strong&gt;ಕುಡಿಯುವ ನೀರು ಮಾನವ ಹಕ್ಕು:&amp;nbsp;&lt;/strong&gt; ಕುಡಿಯುವ ನೀರು ಮೂಲಭೂತ ಹಾಗೂ ಪ್ರತಿಯೊಬ್ಬ ನಾಗರಿಕನ ನೈಸರ್ಗಿಕ ಹಕ್ಕಾಗಿದೆ. ಭಾರತೀಯ ಸಂವಿಧಾನದ ವಿಧಿ 21ರ (ಬದುಕುವ ಹಕ್ಕು) ಅಡಿಯಲ್ಲಿ ಸ್ವಚ್ಛ ಹಾಗೂ ಅಗತ್ಯ ಕುಡಿಯುವ ನೀರನ್ನು ಪಡೆಯುವುದು ಮೂಲಭೂತ ಹಕ್ಕಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ಜತೆಗೆ ವಿಶ್ವಸಂಸ್ಥೆಯು 2010ರಲ್ಲಿ ಅಂಗೀಕರಿಸಿದ ನಿರ್ಣಯದಂತೆ ಪ್ರತಿಯೊಬ್ಬ ಮಾನವನಿಗೂ ಸುರಕ್ಷಿತ ಕುಡಿಯುವ ನೀರು ಪಡೆಯುವ ಮಾನವ ಹಕ್ಕಿದೆ. ಪ್ರಸ್ತುತ ಕೊಳವೆಬಾವಿಗಳನ್ನು ಸಕಾಲಕ್ಕೆ ದುರಸ್ತಿ ಮಾಡದೆ ಸಾರ್ವಜನಿಕರಿಗೆ ನೀರು ನಿರಾಕರಿಸುತ್ತಿರುವುದು ಸಂವಿಧಾನ ನೀಡಿದ ಜೀವಿಸುವ ಹಕ್ಕು ಹಾಗೂ ಮಾನವ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ.&lt;/p&gt;&lt;h2&gt;&lt;strong&gt;ಹೆಚ್ಚು ನೀರಿರುವ ಕೊಳವೆಬಾವಿ ವಿವರ&lt;/strong&gt;&lt;/h2&gt;&lt;p&gt;ಗದಗ ಬೆಟಗೇರಿ 4, ಗಜೇಂದ್ರಗಡ 5, ಲಕ್ಷ್ಮೇಶ್ವರ 4, ನರಗುಂದ 3, ರೋಣ 4, ಮುಳಗುಂದ 3, ನರೇಗಲ್ಲ 3, ಶಿರಹಟ್ಟಿ 3 ಹೆಚ್ಚು ನೀರಿರುವ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಮುಂಡರಗಿಯಲ್ಲಿ ಯಾವುದೇ ಹೆಚ್ಚಿನ ಇಳುವರಿ ಹೊಂದಿದ ಬೋರ್&zwnj;ವೆಲ್&zwnj;ಗಳನ್ನು ಇದುವರೆಗೂ ಗುರುತಿಸಿಲ್ಲ.&lt;/p&gt;&lt;p&gt;&lt;strong&gt;ದುರಸ್ತಿ ಮಾಡಿ:&lt;/strong&gt;&lt;/p&gt;&lt;p&gt;ಪ್ರಸಕ್ತ ಮಳೆ ಕೊರತೆಯಿಂದಾಗಿ ಇರುವ ಬೋರ್&zwnj;ವೆಲ್&zwnj;ಗಳು ಬತ್ತುತ್ತಿವೆ. ಕೆಲವು ಸ್ಥಗಿತಗೊಂಡಿವೆ. ಅವುಗಳನ್ನು ದುರಸ್ತಿ ಮಾಡಿಸಬೇಕು ಇಲ್ಲವೇ ಹೆಚ್ಚು ನೀರು ಹೊಂದಿರುವ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಜನರಿಗೆ ಸಕಾಲದಲ್ಲಿ ಅಗತ್ಯವಿರುವಷ್ಟು ನೀರು ಪೂರೈಕೆ ಮಾಡಬೇಕು ಎಂದು ಕಾರ್ಮಿಕ ಮುಖಂಡ ಎಂ.ಎಸ್. ಹಡಪದ ತಿಳಿಸಿದರು.&lt;/p&gt;]]></content:encoded>
            <category>gadag</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/lack-of-rain-karnataka-draught-gadag-district-237-borewells-are-fully-dry-no-water-for-drink/articleshow-nbvvxgz"/>
        </item>
        <item>
            <title><![CDATA[ಮಸೀದಿಯಲ್ಲಿ ಗಣೇಶ ಪ್ರತಿಷ್ಠಾಪನೆ; ಚಾದರ್ ಮೇಲೆ ಕೂರಿಸಿದ ಗಣಪತಿಗೆ ಮುಸ್ಲಿಂ ಯುವಕರಿಂದಲೇ ಪೂಜೆ!]]></title>
            <link>https://kannada.asianetnews.com/gallery/karnataka-districts/ganesha-installed-in-mosque-gadag-muslim-youths-perform-puja-to-ganapati-sat-rnz4hpo</link>
            <guid isPermaLink="true">https://kannada.asianetnews.com/gallery/karnataka-districts/ganesha-installed-in-mosque-gadag-muslim-youths-perform-puja-to-ganapati-sat-rnz4hpo</guid>
            <pubDate>Thu, 17 Sep 2026 12:30:27 +0530</pubDate>
            <description><![CDATA[&lt;p&gt;ಗದಗಿನ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಂದಾಗಿ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಮುಸ್ಲಿಂ ಯುವಕರೇ ಮಸೀದಿಯೊಳಗೆ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಗ್ರಾಮಸ್ಥರು ಇಡೀ ರಾಜ್ಯಕ್ಕೆ ಧರ್ಮ ಸಾಮರಸ್ಯದ ಮಾದರಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2q1tynqpd7821sz4knebpem,imgname-gadag-ganesha-festival-in-masjid-1789627562679.jpg" type="image/jpeg" height="390" width="690"/>
            <content:encoded><![CDATA[&lt;p&gt;ಗದಗಿನ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಂದಾಗಿ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಮುಸ್ಲಿಂ ಯುವಕರೇ ಮಸೀದಿಯೊಳಗೆ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಗ್ರಾಮಸ್ಥರು ಇಡೀ ರಾಜ್ಯಕ್ಕೆ ಧರ್ಮ ಸಾಮರಸ್ಯದ ಮಾದರಿಯಾಗಿದ್ದಾರೆ.&lt;/p&gt;&lt;img&gt;&lt;p&gt;ರಾಜ್ಯದ ಕೆಲವು ಕಡೆಗಳಲ್ಲಿ ಧರ್ಮದ ಹೆಸರಿನಲ್ಲಿ ಅಶಾಂತಿ ಮೂಡಿಸಲು ಯತ್ನಿಸುವವರಿಗೆ ಇಲ್ಲೊಂದು ಕಣ್ಣು ತೆರೆಸುವಂತಹ ಮಾದರಿ ಘಟನೆ ನಡೆಯುತ್ತಿದೆ. ರಾಜ್ಯದ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಸೀದಿಗಳ ಮುಂದೆ ಗಣಪತಿ ಮೆರವಣಿಗೆ ಮಾಡುವುದಕ್ಕೂ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲಾಗುತ್ತದೆ.&lt;/p&gt;&lt;p&gt;ಆದರೆ, ಇದಕ್ಕೆ ತದ್ವಿರುದ್ಧವಾಗಿ ಉತ್ತರ ಕರ್ನಾಟಕದಲ್ಲಿ ಮಸೀದಿಯ ಒಳಗಡೆಯೇ ಹಿಂದೂಗಳ ಆರಾಧ್ಯ ದೈವ ಗಣೇಶ ಮೂರ್ತಿಯನ್ನು ಕೂರಿಸಿ, ವಿನಾಯಕ ಚತುರ್ಥಿಯನ್ನು ಅತ್ಯಂತ ಸೌಹಾರ್ದತೆಯಿಂದ ಆಚರಿಸಲಾಗಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಈ ಗ್ರಾಮಸ್ಥರು ನಿಜವಾದ 'ಧರ್ಮ ಸಾಮರಸ್ಯ'ದ ಪಾಠ ಕಲಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಗದಗ ಜಿಲ್ಲೆಯಲ್ಲಿ ಭಾವೈಕ್ಯತೆಯ ಅಲೆ:&lt;/strong&gt;&lt;/p&gt;&lt;p&gt;ಗದಗ ಜಿಲ್ಲೆಯ ರೋಣ ತಾಲೂಕಿನ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಂದಾಗಿ ಗಣೇಶೋತ್ಸವ ಆಚರಿಸುತ್ತಿದ್ದಾರೆ. ವಿಶೇಷವೆಂದರೆ, ಕಳೆದ ನಾಲ್ಕು ವರ್ಷಗಳಿಂದ ಈ ಗ್ರಾಮಸ್ಥರು ಮಸೀದಿಯ ಒಳಗಡೆಯೇ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಮುಸ್ಲಿಂ ಯುವಕರಿಂದಲೇ ಪೂಜೆ, ಪ್ರಾರ್ಥನೆ:&lt;/strong&gt;&lt;/p&gt;&lt;p&gt;ಈ ಕೋಮು ಸೌಹಾರ್ದತೆಯ ವಿಶೇಷತೆಯೆಂದರೆ, ಮಸೀದಿಯಲ್ಲಿ ಕೂರಿಸಿರುವ ಗಣೇಶ ಮೂರ್ತಿಗೆ ಬೇರೆ ಯಾರೂ ಅಲ್ಲ, ಸ್ವತಃ ಮುಸ್ಲಿಂ ಯುವಕರೇ ನಿಂತು ಪೂಜೆ ಮತ್ತು ಪ್ರಾರ್ಥನೆ ನೆರವೇರಿಸುತ್ತಾರೆ. ಐದು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಮುಸ್ಲಿಂ ಯುವಕರು ದಿನಕ್ಕೆರಡು ಹೊತ್ತು ಗಣಪನಿಗೆ ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಹಿಂದೂ ಯುವಕರು ಹಾಗೂ ಗ್ರಾಮದ ಹಿರಿಯರು ಸಂಪೂರ್ಣ ಸಾಥ್ ನೀಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಹಿಂದೂ ಮತ್ತು ಮುಸ್ಲಿಂ ಧರ್ಮದ ಹಬ್ಬಗಳನ್ನು ಯಾವುದೇ ಭೇದಭಾವವಿಲ್ಲದೆ, ಪರಸ್ಪರ ಸಹಕಾರದೊಂದಿಗೆ ಇಲ್ಲಿನ ಗ್ರಾಮಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಧರ್ಮಗಳ ನಡುವೆ ಗೋಡೆಗಳನ್ನು ಕಟ್ಟುತ್ತಿರುವವರಿಗೆ, ಸಂದಿಗವಾಡ ಗ್ರಾಮದ ಈ ಭಾವೈಕ್ಯತೆಯ ನಡೆ ಇಡೀ ರಾಜ್ಯಕ್ಕೇ ಮಾದರಿಯಾಗಿದೆ. 'ಅಭಿವೃದ್ಧಿಯಲ್ಲಿ ನಮ್ಮನ್ನು ಮೂಲೆಗುಂಪು ಮಾಡಿದವರೇ, ನಮ್ಮ ಧರ್ಮ ಸಾಮರಸ್ಯವನ್ನು ನೋಡಿ ಕಲಿಯಿರಿ' ಎಂಬ ಸಂದೇಶವನ್ನು ಈ ಗ್ರಾಮದ ಜನತೆ ಇಡೀ ಸಮಾಜಕ್ಕೆ ಸಾರುತ್ತಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/ganesha-installed-in-mosque-gadag-muslim-youths-perform-puja-to-ganapati-sat-rnz4hpo"/>
        </item>
        <item>
            <title><![CDATA[Revenue Department: ಕಂದಾಯ ಇಲಾಖೆ ನಿರ್ಲಕ್ಷ್ಯ; ಹಾವೇರಿ ಸಮಾವೇಶ ಕಳೆದು 6 ತಿಂಗಳಾದ್ರೂ ಶೇ. 50 ಬಡವರ ಕೈಗೆ ಸಿಕ್ಕಿಲ್ಲ ಹಕ್ಕು ಪತ್ರ?]]></title>
            <link>https://kannada.asianetnews.com/karnataka-districts/karnataka-e-swathu-title-deed-revenue-villages-delay-poor-people-property-rights-bmk/articleshow-sfam3yl</link>
            <guid isPermaLink="true">https://kannada.asianetnews.com/karnataka-districts/karnataka-e-swathu-title-deed-revenue-villages-delay-poor-people-property-rights-bmk/articleshow-sfam3yl</guid>
            <pubDate>Fri, 28 Aug 2026 20:06:44 +0530</pubDate>
            <description><![CDATA[ಹಾವೇರಿಯಲ್ಲಿ ನಡೆದ ಬೃಹತ್ ಸಮಾವೇಶದ ಆರು ತಿಂಗಳ ನಂತರವೂ, ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ 9 ಜಿಲ್ಲೆಗಳ ಶೇ. 50ರಷ್ಟು ಬಡವರಿಗೆ 'ಇ-ಸ್ವತ್ತು' ಹಕ್ಕು ಪತ್ರಗಳು ತಲುಪಿಲ್ಲ. ಈ ವಿಳಂಬದಿಂದಾಗಿ ಬಡವರು ಬ್ಯಾಂಕ್ ಸಾಲ ಪಡೆಯಲು ಮತ್ತು ತಮ್ಮ ಮನೆಯ ಕನಸನ್ನು ನನಸಾಗಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m14csv070brgzrwcxambea92,imgname-e-swattu--1787927784455.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ಸರ್ಕಾರವು ದಾಖಲೆ ರಹಿತ ವಾಸಸ್ಥಳಗಳಾಗಿದ್ದ 6,500 ಹಳ್ಳಿಗಳ ಪೈಕಿ 4,500 ಗ್ರಾಮಗಳನ್ನು &lsquo;ಕಂದಾಯ ಗ್ರಾಮ&rsquo;ಗಳನ್ನಾಗಿ ಪರಿವರ್ತಿಸಿ, ತಲೆತಲಾಂತರದಿಂದ ಸ್ವಂತ ಮನೆಯಿದ್ದರೂ ಕಾಗದಪತ್ರಗಳಿಲ್ಲದೆ ಬದುಕುತ್ತಿದ್ದ ಬಡಜನರಿಗೆ ಭೂಮಿಯ ಹಕ್ಕನ್ನು ಒದಗಿಸಿರುವುದು ನಿಜಕ್ಕೂ ಅಭಿನಂದನಾರ್ಹ ಮತ್ತು ಕ್ರಾಂತಿಕಾರಿ ಹೆಜ್ಜೆ. ಈ ಮಹತ್ಕಾರ್ಯದ ಭಾಗವಾಗಿ ಕಳೆದ ಫೆಬ್ರವರಿಯಲ್ಲಿ ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಿ, 9 ಜಿಲ್ಲೆಗಳ ಜನರಿಗೆ ಸಾಂಕೇತಿಕವಾಗಿ ಹಕ್ಕು ಪತ್ರಗಳನ್ನು ವಿತರಿಸಲಾಗಿತ್ತು. ಆದರೆ, ವೇದಿಕೆಯ ಭಾಷಣ, ಚಪ್ಪಾಳೆ ಮತ್ತು ಫೋಟೋ ಪೋಸ್&zwnj;ಗಳು ಮುಗಿದ ನಂತರ ಕಂದಾಯ ಇಲಾಖೆಯ ಅಸಲಿ ನಾಟಕ ಮತ್ತು ಆಡಳಿತ ವೈಫಲ್ಯ ಬಯಲಾಗಿದೆ.&lt;/p&gt;&lt;h2&gt;&lt;strong&gt;ಡಿಜಿಟಲ್ ಕಾಗದದ ಶಕ್ತಿ ಮತ್ತು ವಾಸ್ತವ ಸ್ಥಿತಿ!&lt;/strong&gt;&lt;/h2&gt;&lt;p&gt;ಕಂದಾಯ ಇಲಾಖೆ ರೂಪಿಸಿರುವ ಈ ಇ-ಸ್ವತ್ತು ಆಧಾರಿತ ಡಿಜಿಟಲ್ ಹಕ್ಕು ಪತ್ರವು ಬರಿ ಬಿಳಿ ಕಾಗದವಲ್ಲ. ಇದು ಆನ್&zwnj;ಲೈನ್&zwnj;ನಲ್ಲಿ ಲಭ್ಯವಿರುವ ಫಾರಂ 9 ಮತ್ತು 11 ರನ್ನೊಳಗೊಂಡ ಅತ್ಯಂತ ಶಕ್ತಿಶಾಲಿ ಹಾಗೂ ಅಧಿಕೃತ ದಾಖಲೆಯಾಗಿದೆ. ಈ ದಾಖಲೆ ಕೈಯಲ್ಲಿದ್ದರೆ ಒಬ್ಬ ಸಾಮಾನ್ಯ ಬಡವ ಬ್ಯಾಂಕಿನಿಂದ ಗೌರವಯುತವಾಗಿ ಸಾಲ ಪಡೆದು ಮನೆ ಕಟ್ಟಿಕೊಳ್ಳಬಹುದು, ಮಕ್ಕಳ ಹೆಸರಿಗೆ ಆಸ್ತಿ ಹಸ್ತಾಂತರಿಸಬಹುದು ಮತ್ತು ತಲೆತಲಾಂತರದ ಆಸ್ತಿ ವಿವಾದಗಳಿಗೆ ಮುಕ್ತಿ ಕಾಣಬಹುದು. ಅಂದರೆ, ಯೋಜನೆ ರೂಪಿಸಿ ಕಾಗದ ಸಿದ್ಧಪಡಿಸಿದ ಸರ್ಕಾರದ ಕೆಲಸ ನೂರಕ್ಕೆ ನೂರರಷ್ಟು ಮುಗಿದಿದೆ. ಆದರೆ, ಅದನ್ನು ಅರ್ಹರ ಕೈಗೆ ತಲುಪಿಸಬೇಕಾದ ಇಲಾಖೆಯ ಅಧಿಕಾರಿಗಳು ಮತ್ತು ಸಿಸ್ಟಮ್ ಮಾತ್ರ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;6 ತಿಂಗಳು ಕಳೆದರೂ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ ಹಕ್ಕು ಪತ್ರಗಳು!&lt;/strong&gt;&lt;/h3&gt;&lt;p&gt;ಕಳೆದ 6 ತಿಂಗಳಿಂದ ಆನ್&zwnj;ಲೈನ್&zwnj;ನಲ್ಲಿ ಇ-ಸ್ವತ್ತು ಜನರೇಟ್ ಆಗಿ, ಕಂಪ್ಯೂಟರ್&zwnj;ನಿಂದ ಮುದ್ರಿತಗೊಂಡ ಹಕ್ಕು ಪತ್ರಗಳು ಕಂದಾಯ ಕಚೇರಿಗಳ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ. ಅರ್ಧ ವರ್ಷ ಕಳೆದರೂ ಆ 9 ಜಿಲ್ಲೆಗಳಲ್ಲಿ ಅಂದ್ರೆ, ಹಾವೇರಿ, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ಚಿತ್ರದುರ್ಗ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಶೇಕಡಾ 50 ರಷ್ಟು ಬಡಜನರಿಗೆ ಇಂದಿಗೂ ಹಕ್ಕು ಪತ್ರಗಳು ತಲುಪಿಲ್ಲ. ಧಾರವಾಡ ತಾಲೂಕಿನ ಉದಾಹರಣೆಯನ್ನೇ ತೆಗೆದುಕೊಂಡರೆ, ಆಶ್ರಯ ಪೋರ್ಟಲ್&zwnj;ನಲ್ಲಿ ಬರೀ ಎರಡೇ ಗ್ರಾಮಗಳ ಹೆಸರು ಕಾಣಿಸುತ್ತಿದೆ. ಸರ್ವರ್&zwnj;ನ ಗೊಂದಲ ಹಾಗೂ ಮಾಹಿತಿ ಕೊರತೆಯಿಂದಾಗಿ ಇಡೀ ತಾಲೂಕಿನ ನೂರಾರು ಹಳ್ಳಿಗಳ ಬಡಜನರು ಪ್ರತಿದಿನ ಕಂದಾಯ ಕಚೇರಿಗಳ ಮುಂದೆ ಸಾಲಿನಲ್ಲಿ ನಿಲ್ಲುವಂತಾಗಿದೆ.&lt;/p&gt;&lt;h3&gt;&lt;strong&gt;ಇರುವ ಅನುಮಾನವೇನು?&lt;/strong&gt;&lt;/h3&gt;&lt;p&gt;ಜಿಲ್ಲಾಧಿಕಾರಿಗಳು (DC) ಅಥವಾ ಉಪವಿಭಾಗಾಧಿಕಾರಿಗಳು (AC) ಹೋಬಳಿ ಮಟ್ಟದಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿ ವಿತರಿಸೋಣ ಎಂಬ ಸಬೂಬು ಹೇಳಿ ಇವುಗಳನ್ನು ತಡೆಹಿಡಿದಿದ್ದಾರೆಯೇ ಎಂಬ ಬಲವಾದ ಅನುಮಾನ ಮೂಡುತ್ತಿದೆ. ಕಾನೂನುಬದ್ಧವಾಗಿ 15 ದಿನದೊಳಗೆ ಸಾರ್ವಜನಿಕ ಸೇವೆ ಒದಗಿಸಬೇಕಾದ &lsquo;ಸಕಾಲ&rsquo; ಕಾಯ್ದೆಯ ನಿಯಮಗಳಿರುವಾಗ, ಬಡವನ ಹಕ್ಕು ಪತ್ರವನ್ನು ಕಾಯ್ದಿರಿಸಲು ಅಧಿಕಾರಿಗಳಿಗಿರುವ ಅಡೆತಡೆಯಾದರೂ ಏನು? ಜನಪ್ರತಿನಿಧಿಗಳ ಕಾಲ್-ಶೀಟ್ ಹಾಗೂ ಪ್ರೋಟೋಕಾಲ್ ನಾಟಕಕ್ಕಾಗಿ ಬಡಜನರು 6 ತಿಂಗಳಿಂದ ಅಲೆಯಬೇಕೇ? ಬ್ಯಾಂಕ್ ಸಾಲ ಸಿಗದೆ ಬಡವನ ಸ್ವಂತ ಮನೆಯ ಕನಸು ಕರಗಿಹೋಗುತ್ತಿದ್ದು, ಅಧಿಕಾರಿಗಳ &lsquo;ಶೋ ಆಫ್&rsquo; ಸಂಸ್ಕೃತಿಗೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಯೋಜನೆಗಳನ್ನು ಪ್ರಕಟಿಸುವುದು ಸರ್ಕಾರದ ಕೆಲಸವಾದರೆ, ಅದನ್ನು ಕಾಲಮಿತಿಯಲ್ಲಿ ಬಡವನ ಕೈಗೆ ತಲುಪಿಸುವುದು ಆಡಳಿತ ಯಂತ್ರದ ಹೊಣೆ. ಆದ್ದರಿಂದ ಇನ್ನಾದರೂ ಹಕ್ಕು ಪತ್ರ ಸಿಗುತ್ತೋ ಏನೋ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>gadag</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/karnataka-e-swathu-title-deed-revenue-villages-delay-poor-people-property-rights-bmk/articleshow-sfam3yl"/>
        </item>
        <item>
            <title><![CDATA[ಸಿಎಂ ಡಿಕೆ ಶಿವಕುಮಾರ್‌ಗೆ ರಂಭಾಪುರಿ ಶ್ರೀಗಳ ಮೇಲೇಕೆ ಅಷ್ಟೊಂದು ಭಕ್ತಿ?: ರಹಸ್ಯ ಬಿಚ್ಚಿಟ್ಟ ಜಗದ್ಗುರುಗಳು!]]></title>
            <link>https://kannada.asianetnews.com/gadag/dk-shivakumar-rambhapuri-mutt-secret-revealed-by-vireeshwara-swamiji-gadag-san/articleshow-tdkq05g</link>
            <guid isPermaLink="true">https://kannada.asianetnews.com/gadag/dk-shivakumar-rambhapuri-mutt-secret-revealed-by-vireeshwara-swamiji-gadag-san/articleshow-tdkq05g</guid>
            <pubDate>Tue, 21 Jul 2026 21:58:40 +0530</pubDate>
            <description><![CDATA[&lt;p&gt;ಸಿಎಂ ಡಿ.ಕೆ. ಶಿವಕುಮಾರ್ ಅವರ ರಂಭಾಪುರಿ ಪೀಠದ ಮೇಲಿನ ಅಪಾರ ಭಕ್ತಿಗೆ ಕಾರಣವನ್ನು ಹಾಲಿ ರಂಭಾಪುರಿ ಶ್ರೀಗಳು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಡಿ.ಕೆ. ಶಿವಕುಮಾರ್&zwnj;ಗೆ ಅವರ ಬಾಲ್ಯದ ಘಟನೆಯನ್ನು ಅವರು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky2r0r1334qgmxsf1qzfha8b,imgname-rambhapuri-swamiji-on-dk-shivakumar-1784651210786.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜು.21): &lt;/strong&gt;ಸಿಎಂ ಡಿಕೆ. ಶಿವಕುಮಾರ್ ಅವರಿಗೆ ಶ್ರೀ ರಂಭಾಪುರಿ ಪೀಠ ಮತ್ತು ವೀರಗಂಗಾಧರ ಶ್ರೀಗಳ ಮೇಲೆ ಇರುವ ಅಪಾರ ಭಕ್ತಿ-ಗೌರವದ ಹಿಂದಿರುವ ರೋಚಕ ರಹಸ್ಯವೊಂದನ್ನು ರಂಭಾಪುರಿ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಗದಗದಲ್ಲಿ ಬಿಚ್ಚಿಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ತಾವು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೂ ರಂಭಾಪುರಿ ಪೀಠದ ಪೂರ್ವಾಚಾರ್ಯರಾದ ಶ್ರೀ ವೀರಗಂಗಾಧರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದರು. ಒಕ್ಕಲಿಗ ಸಮುದಾಯದ ನಾಯಕರಾಗಿರುವ ಡಿಕೆಶಿಗೆ ವೀರಶೈವ ಲಿಂಗಾಯತ ಪರಂಪರೆಯ ರಂಭಾಪುರಿ ಪೀಠದ ಮೇಲೇಕೆ ಈ ಮಟ್ಟದ ಭಕ್ತಿ ಎಂಬ ಕುತೂಹಲಕ್ಕೆ ರಂಭಾಪುರಿ ಶ್ರೀಗಳು ತೆರೆ ಎಳೆದಿದ್ದಾರೆ.&lt;/p&gt;&lt;h2&gt;&lt;strong&gt;ಬಾಲ್ಯದಲ್ಲಿ ತಾಯಿ ಹೊಡೆಯುವಾಗ ತಡೆದಿದ್ದ ಶ್ರೀಗಳು!&lt;/strong&gt;&lt;/h2&gt;&lt;p&gt;ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಚಿಕ್ಕವರಿದ್ದಾಗ, ಅವರ ತಾಯಿ ಯಾವುದೋ ವಿಷಯಕ್ಕೆ ಸಿಟ್ಟು ಮಾಡಿಕೊಂಡು ಅವರಿಗೆ ಹೊಡೆಯಲು ಮುಂದಾಗಿದ್ದರು. ಆ ಸಮಯದಲ್ಲಿ ಆ ಜಾಗದಲ್ಲೇ ಇದ್ದ ರಂಭಾಪುರಿ ಪೀಠದ ಪೂರ್ವಾಚಾರ್ಯರಾದ ಶ್ರೀ ವೀರಗಂಗಾಧರ ಶ್ರೀಗಳು ತಕ್ಷಣವೇ ಮಧ್ಯಪ್ರವೇಶಿಸಿ, &quot;ಆ ಮಗುವಿಗೆ ಹೊಡೆಯಬೇಡಿ&quot; ಎಂದು ತಾಯಿಯನ್ನು ತಡೆದಿದ್ದರು.&lt;/p&gt;&lt;p&gt;ಅಂದು ಮಗುವಾಗಿದ್ದ ಡಿಕೆಶಿಯವರನ್ನು ತಡೆದ ಶ್ರೀಗಳು, ತಾಯಿಗೆ ಅಭಯ ನೀಡುತ್ತಾ, &quot;ಈ ಮಗುವನ್ನು ಹೊಡೆಯಬೇಡಿ, ಈತ ಮುಂದೆ ದೊಡ್ಡ ಸ್ಥಾನವನ್ನು ಅಲಂಕರಿಸುತ್ತಾನೆ. ಈತ ಭಾರಿ ಹಠವಾದಿ ಹಾಗೂ ಚಲವಾದಿ. ತನ್ನ ಜೀವನದಲ್ಲಿ ಅತ್ಯಂತ ಉತ್ತಮ ಶ್ರೇಯಸ್ಸು ಮತ್ತು ಉನ್ನತ ಹಂತವನ್ನು ತಲುಪುತ್ತಾನೆ&quot; ಎಂದು ಭವಿಷ್ಯ ನುಡಿದು ಆಶೀರ್ವಾದ ಮಾಡಿದ್ದರು.&lt;/p&gt;&lt;h2&gt;&lt;strong&gt;ಭಾವಚಿತ್ರಕ್ಕೆ ನಮಿಸದೇ ಯಾವುದೇ ಕೆಲಸ ಆರಂಭಿಸೋದಿಲ್ಲ ಡಿಕೆಶಿ&lt;/strong&gt;&lt;/h2&gt;&lt;p&gt;ಶ್ರೀಗಳ ಆ ನುಡಿಗಳು ಡಿಕೆಶಿಯವರ ಜೀವನದಲ್ಲಿ ಸತ್ಯವಾಗಿ ಪರಿಣಮಿಸಿವೆ. ಹೀಗಾಗಿ, ಡಿ.ಕೆ. ಶಿವಕುಮಾರ್ ಅವರು ಶ್ರೀ ವೀರಗಂಗಾಧರ ಶ್ರೀಗಳ ಭಾವಚಿತ್ರವಿಲ್ಲದೆ ಮತ್ತು ಅವರಿಗೆ ಮನಸ್ಸಿನಲ್ಲೇ ನಮಿಸದೇ ಯಾವುದೇ ಪ್ರಮುಖ ಕಾರ್ಯವನ್ನು ಆರಂಭಿಸುವುದಿಲ್ಲ. ಸ್ವತಃ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ನಾಯಕರೇ ಶ್ರೀಗಳ ಭಾವಚಿತ್ರವನ್ನು ಇಟ್ಟುಕೊಂಡಿರುವುದನ್ನು ನಾನು ಕಂಡಿಲ್ಲ, ಆದರೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿಕೆ ಶಿವಕುಮಾರ್ ಅವರು ರಂಭಾಪುರಿ ಶ್ರೀಗಳಿಗೆ ಈ ಮಟ್ಟದ ಗೌರವ ಸಲ್ಲಿಸುವುದು ನಿಜಕ್ಕೂ ವಿಶೇಷ ಎಂದು ಹಾಲಿ ರಂಭಾಪುರಿ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಕಷ್ಟ ಬಂದಾಗ ನೆನೆದರೆ ಮಂಜಿನಂತೆ ಕರಗುವ ಸಮಸ್ಯೆಗಳು&lt;/strong&gt;&lt;/h2&gt;&lt;p&gt;ತಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟ, ಸವಾಲು ಅಥವಾ ತೊಂದರೆಗಳು ಎದುರಾದಾಗ ಡಿಕೆ ಶಿವಕುಮಾರ್ ಅವರು ರಂಭಾಪುರಿ ಶ್ರೀಗಳನ್ನು ನೆನೆದರೆ ಸಾಕು, ಆ ಎಲ್ಲಾ ಸಮಸ್ಯೆಗಳು ಮಂಜಿನಂತೆ ಕರಗಿಹೋಗುತ್ತವೆ. ಇದು ಅವರ ಜೀವನದಲ್ಲಿ ನಡೆದಿರುವ ಅಕ್ಷರಶಃ ಸತ್ಯವಾಗಿದೆ. ಇದೇ ಕಾರಣಕ್ಕಾಗಿ ರಂಭಾಪುರಿ ಪೀಠ ಎಂದರೆ ಅವರಿಗೆ ಅತ್ಯಂತ ಅಚ್ಚುಮೆಚ್ಚು ಹಾಗೂ ಪೂಜ್ಯ ಭಾವನೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>gadag</category>
            <dc:creator>Santosh Naik</dc:creator>
            <atom:link href="https://kannada.asianetnews.com/gadag/dk-shivakumar-rambhapuri-mutt-secret-revealed-by-vireeshwara-swamiji-gadag-san/articleshow-tdkq05g"/>
        </item>
        <item>
            <title><![CDATA[Gadag ನಿಲ್ದಾಣದಲ್ಲಿ ಶೇಂಗಾ ಮಾರೋ ತಿಪ್ಪಮ್ಮ ಅಜ್ಜಿಯ ಆದಾಯ, ಮಾಡಿದ ಆಸ್ತಿ ಎಷ್ಟು?]]></title>
            <link>https://kannada.asianetnews.com/gallery/karnataka-districts/gadag-how-much-is-the-income-and-assets-of-thippamma-ajji-who-sells-peanuts-at-junction-railway-station-mrq-w22lg8m</link>
            <guid isPermaLink="true">https://kannada.asianetnews.com/gallery/karnataka-districts/gadag-how-much-is-the-income-and-assets-of-thippamma-ajji-who-sells-peanuts-at-junction-railway-station-mrq-w22lg8m</guid>
            <pubDate>Thu, 27 Aug 2026 14:01:48 +0530</pubDate>
            <description><![CDATA[&lt;p&gt;Gadag Railway Station: ಬೆಟಗೇರಿಯ ತಿಪ್ಪಮ್ಮ ಅಜ್ಜಿ ಕಳೆದ 30 ವರ್ಷಗಳಿಂದ ಗದಗ ರೈಲು ನಿಲ್ದಾಣದಲ್ಲಿ ಶೇಂಗಾ, ಹುರಿಗಡಲೆ ಮಾರಾಟ ಮಾಡುತ್ತಿದ್ದಾರೆ. ಪತಿಯ ನಿಧನದ ನಂತರ ಕುಟುಂಬದ ಜವಾಬ್ದಾರಿ ಹೊತ್ತು, ಇಂದಿಗೂ ಸ್ವಾಭಿಮಾನದಿಂದ ಕೆಲಸ ಮಾಡುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1150drtk9bkarez8m4czpct,imgname-gadag--3--1787818948378.jpg" type="image/jpeg" height="390" width="690"/>
            <content:encoded><![CDATA[&lt;p&gt;Gadag Railway Station: ಬೆಟಗೇರಿಯ ತಿಪ್ಪಮ್ಮ ಅಜ್ಜಿ ಕಳೆದ 30 ವರ್ಷಗಳಿಂದ ಗದಗ ರೈಲು ನಿಲ್ದಾಣದಲ್ಲಿ ಶೇಂಗಾ, ಹುರಿಗಡಲೆ ಮಾರಾಟ ಮಾಡುತ್ತಿದ್ದಾರೆ. ಪತಿಯ ನಿಧನದ ನಂತರ ಕುಟುಂಬದ ಜವಾಬ್ದಾರಿ ಹೊತ್ತು, ಇಂದಿಗೂ ಸ್ವಾಭಿಮಾನದಿಂದ ಕೆಲಸ ಮಾಡುತ್ತಾರೆ.&lt;/p&gt;&lt;img&gt;&lt;p&gt;ಗದಗ ಮಾರ್ಗವಾಗಿ ಅಥವಾ ಈ ರೈಲು ನಿಲ್ದಾಣದಿಂದ ನೀವು ಪ್ರಯಾಣ ಮಾಡುತ್ತಿದ್ದರೆ ನೀವು ಖಂಡಿತ ಈ ಅಜ್ಜಿಯನ್ನು ನೋಡಿರುತ್ತೀರಿ. ಪ್ಲಾಟ್&zwnj;ಫಾರಂ ಮೂರರ ಮೆಟ್ಟಿಲ ಬಳಿ ಕುಳಿತುಕೊಳ್ಳುವ ಈ ಅಜ್ಜಿ, ಶೇಂಗಾ, ಹುರಿಗಡಲೆ, ಬಟಾಣಿ, ಸೂರ್ಯಕಾಂತಿ ಮಾರಾಟ ಮಾಡುತ್ತಾರೆ. ಸದ್ಯ ಈ ಅಜ್ಜಿಯ ಸಂದರ್ಶನವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಅಜ್ಜಿ ಯಾರು? ಎಲ್ಲಿಯವರು? ಇವರ ದಿನದ ಆದಾಯ ಎಷ್ಟು ಎಂಬುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಈ ಅಜ್ಜಿಯ ಹೆಸರು ತಿಪ್ಪಮ್ಮ, ಬೆಟಗೇರಿಯ ನಿವಾಸಿ. ಕಳೆದ ಮೂವತ್ತು ವರ್ಷಗಳಿಂದ ಗದಗ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಗಂಡನ ನಿಧನದ ಬಳಿಕ ಕುಟುಂಬದ ಜವಾಬ್ದಾರಿಯೆಲ್ಲಾ ತಿಪ್ಪಮ್ಮ ಅವರ ಮೇಲೆ ಬಿತ್ತು. ಅಂದು ಊರಿನಲ್ಲಿಯೇ ಕೂಲಿ ಕೆಲಸ ಮಾಡಿದ್ರೆ ದಿನಕ್ಕೆ 25 ರಿಂದ 50 ಪೈಸೆ ಸಿಗುತ್ತಿತ್ತು. ಇಷ್ಟು ಹಣದಿಂದ ಮಕ್ಕಳ ಹೊಟ್ಟೆ ತುಂಬಿಸಲು ಆಗಲ್ಲ ಎಂದು ತಿಳಿದ ತಿಪ್ಪಮ್ಮಜ್ಜಿ ತಮ್ಮೂರಿನ ಮಹಿಳೆಯ ಸಹಾಯದಿಂದ ವ್ಯಾಪಾರಕ್ಕಾಗಿ ಗದಗ ನಗರಕ್ಕೆ ಬರುತ್ತಾರೆ.&lt;/p&gt;&lt;img&gt;&lt;p&gt;ವ್ಯಾಪಾರ ಆರಂಭಿಸಿದಾಗ ಊರಿನವರು ಏನಾದ್ರೆ ಅಂದ್ರೆ ಹೇಗೆ ಎಂಬ ಭಯವಿತ್ತು. ಒಂದು ದಿನ ನಮ್ಮೂರಿನ ಹಿರಿಯ ವ್ಯಕ್ತಿ ಇಲ್ಲಿಯೇ ಬಂದ್ರು. ಭಯದಿಂದ ಚೀಲ, ಪುಟ್ಟಿಯನ್ನು ಎತ್ಕೊಂಡು ಒಂದ್ಕೆಡೆ ಕುಳಿತೆ. ಆಗ ನನ್ನ ಬಳಿಗೆ ಬಂದ ಅವರು, ಯಾಕೆ ಹೆದರುತ್ತೀಯಾ? ನ್ಯಾಯವಾಗಿ ವ್ಯಾಪಾರ ಮಾಡುತ್ತಿದ್ದೀಯಾ. ವ್ಯಾಪಾರ ಮುಂದುವರಿಸುವಂತೆ ಪ್ರೋತ್ಸಾಹಿಸಿದರು. ಅಂದಿನಿಂದ ಧೈರ್ಯವಾಗಿ ವ್ಯಾಪಾರ ಮಾಡುತ್ತಿದ್ದೇನೆ ಎಂದು ತಿಪ್ಪಮ್ಮಾ ಅಜ್ಜಿ ಹೇಳುತ್ತಾರೆ.&lt;/p&gt;&lt;img&gt;&lt;p&gt;ಸುಮಾರು 75 ರಿಂದ 80 ವಯಸ್ಸಿನ ತಿಪ್ಪಮ್ಮಾ ಅಜ್ಜಿ, ಈ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಇಂದು ತಿಪ್ಪಮ್ಮಾ ಅಜ್ಜಿ ದಿನಕ್ಕೆ 200 ರಿಂದ 300 ರೂಪಾಯಿ ಸಂಪಾದನೆ ಮಾಡುತ್ತಾರೆ. ಪ್ರತಿದಿನ ಮೊಮ್ಮಗ ನಿಲ್ದಾಣಕ್ಕೆ ಕರೆದುಕೊಂಡು ಬರುತ್ತಾನೆ. ಸಂಜೆ ಬಂದು ಕರೆದುಕೊಂಡು ಹೋಗುತ್ತಾರೆ. ಮೊಮ್ಮಕ್ಕಳು, ಸೊಸೆ ಎಲ್ಲರೂ ಒಳ್ಳೆಯವರು. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳೋದಕ್ಕಿಂತ ಇಲ್ಲಿಗೆ ಬಂದು ವ್ಯಾಪಾರ ಮಾಡುತ್ತೇನೆ ಎಂದು ಅಜ್ಜಿ ಹೇಳುತ್ತಾರೆ.&lt;/p&gt;&lt;img&gt;&lt;p&gt;ಇನ್ನು ರೈಲು ನಿಲ್ದಾಣದಲ್ಲಿ ಅನುಮತಿ ಇಲ್ಲದೇ ವ್ಯಾಪಾರ ಮಾಡುವಂತಿಲ್ಲ. ಆದ್ರೂ ಈ ತಿಪ್ಪಮ್ಮಾ ಅಜ್ಜಿಗೆ ಗದಗ ರೈಲು ನಿಲ್ದಾಣದ ಪೊಲೀಸರು ಯಾವುದೇ ರೀತಿಯಲ್ಲಿ ಅಡ್ಡಿಯನ್ನುಂಟು ಮಾಡಿಲ್ಲ. ಈ ವ್ಯಾಪಾರದಿಂದ ಯಾವುದೇ ಆಸ್ತಿಯನ್ನು ಮಾಡಿಕೊಂಡಿಲ್ಲಪ್ಪ. ಮಕ್ಕಳು-ಮೊಮ್ಮಕ್ಕಳನ್ನು ಓದಿಸಿದ್ದೇನೆ. ಮೊಮ್ಮಗನೇ ಮಾರುಕಟ್ಟೆಗೆ ಹೋಗಿ ಈ ವಸ್ತುಗಳನ್ನು ತೆಗೆದುಕೊಂಡು ಬರುತ್ತಾನೆ.&lt;/p&gt;&lt;p&gt;ಸೊಸೆ ಬೆಳಗ್ಗೆ ಬುತ್ತಿ ಮಾಡಿ ಕಳಿಸುತ್ತಾಳೆ. ಇರೋ ಒಬ್ಬನು ಮಗ ಸತ್ತ. ಮಲಗಿದ್ದಲ್ಲಿಯೇ ಸಾವು ಬರಬೇಕು ಅನ್ನೋದು ನನ್ನ ಕೊನೆಯ ಆಸೆ ಎಂದು ತಿಪ್ಪಮ್ಮಾ ಅಜ್ಜಿ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಂದು ಮನೆಗಾಗಿ 1 ಹಸು ಖರೀದಿ, ಇಂದು 100 ಎಮ್ಮೆಗಳ ಒಡತಿ ಕಲಬುರಗಿ ಮಹಿಳೆ; Dairy Farming&lt;/strong&gt;&lt;/p&gt;]]></content:encoded>
            <category>gadag</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/gadag-how-much-is-the-income-and-assets-of-thippamma-ajji-who-sells-peanuts-at-junction-railway-station-mrq-w22lg8m"/>
        </item>
        <item>
            <title><![CDATA[2028ಕ್ಕೂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ? ನೊಣವಿನಕೆರೆ ಶ್ರೀಗಳ ಸ್ಫೋಟಕ ಭವಿಷ್ಯ!]]></title>
            <link>https://kannada.asianetnews.com/karnataka-districts/will-dk-shivakumar-continue-as-chief-minister-beyond-2028-nonavinakere-sri-s-explosive-prediction-sns/articleshow-xf0eavc</link>
            <guid isPermaLink="true">https://kannada.asianetnews.com/karnataka-districts/will-dk-shivakumar-continue-as-chief-minister-beyond-2028-nonavinakere-sri-s-explosive-prediction-sns/articleshow-xf0eavc</guid>
            <pubDate>Wed, 02 Sep 2026 10:45:24 +0530</pubDate>
            <description><![CDATA[ಮುಖ್ಯಮಂತ್ರಿಯಾಗಬೇಕೆಂಬ ಪ್ರಾರ್ಥನೆ ಈಡೇರಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮುಕ್ತಿ ಮಂದಿರಕ್ಕೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ, ನೊಣವಿನಕೆರೆ ಶ್ರೀಗಳು ಪೂಜೆ ನಡೆಸಿ, 2028ರ ನಂತರವೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1g8h6p3h7nwqa9bf9gzj0k2,imgname-dk-shivakumar-1788325960387.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ಸಿಎಂ ಡಿಕೆ ಶಿವಕುಮಾರ್ ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರದ ಲಿಂಗೈಕ್ಯ ವೀರಗಂಗಾಧರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದು ಪೂಜೆ ಪ್ರಾರ್ಥನೆ ಸಲ್ಲಿಸಿದರು. ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಪ್ರಾರ್ಥನೆ ಈಡೇರಿದ ಹಿನ್ನಲೆ ಮುಕ್ತಿ ಮಂದಿರದಲ್ಲಿ ಅರ್ಧ ಗಂಟೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ.&lt;/p&gt;&lt;h2&gt;ಮುಕ್ತಿ ಮಂದಿರದಲ್ಲಿ ಡಿಕೆಶಿ: ಶ್ರೀಗಳು ನುಡಿದ ಆ ಸ್ಪೋಟಕ ಭವಿಷ್ಯವೇನು?&lt;/h2&gt;&lt;p&gt;ಪೂಜೆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಸಿಎಂ, ಗದಗ ಜಿಲ್ಲೆಗೆ ಬರಗಾಲದ ಪ್ರವಾಸಕ್ಕೆ ಬಂದಿದ್ದೆ. ರಾಜ್ಯಾದ್ಯಂತ ಮಳೆ ಬೆಳೆ ಆಗಬೇಕು. ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ಬರ ಇದೆ, ಹೀಗಾಗಿ ಇಲ್ಲೇ ಬರಬೇಕು ಅಂತ ಬಂದಿದ್ದೀನಿ. ಹತ್ತಿ, ಮೆಣಸಿನಕಾಯಿ ,ಕಡಲೆ ಕಾಯಿ, ಯಾವ ಬೆಳೆಗಳೂ ರೈತರ ಕೈಗೆ ಸಿಗ್ತಾ ಇಲ್ಲ. ಬರುವಾಗ ಹೆಲಿಕಾಪ್ಟರ್ ನಲ್ಲಿ ನೋಡ್ತಾ ಬಂದೆ, ಎಲ್ಲಾ ಹೊಲ ಖಾಲಿ ಇದೆ. ಭೀಕರ ಬರಗಾಲ ಇದೆ. ಆಲಮಟ್ಟಿ ಬಿಟ್ಟರೆ ಎಲ್ಲೂ ನೀರಿಲ್ಲ. ನನಗೆ ಮುಕ್ತಿ ಮಂದಿರ ಹೃದಯಕ್ಕೆ ಹತ್ತಿರದವಾದ ಸ್ಥಳ, ವೀರ ಗಂಗಾದರ ಅಜ್ಜನವರ ಐಕ್ಯ ಸ್ಥಳ. ನಮ್ಮದು ಸಂಕಲ್ಪ ಅಲ್ಲ ಪ್ರಾರ್ಥನೆ ಮಾಡಿದ್ದೆ, ಪ್ರಾರ್ಥನೆ ಏನಾಯ್ತು ನಿಮಗೆಲ್ಲಾ ಗೊತ್ತಿದೆ. ಹೀಗಾಗಿ ಬಂದು ಋಣ ತೀರಿಸಬೇಕಲ್ಲಾ? ಸೇವೆ ಮಾಡಬೇಕು, ಸ್ಮರಿಸಬೇಕು, ಇದೆಲ್ಲಾ ನಮ್ಮ ಧರ್ಮ. ಎಲ್ಲಾ ಧರ್ಮನೂ ಕಾಪಾಡಬೇಕು, ಅವರವರ ಧರ್ಮ ಅವರನ್ನ ಕಾಪಾಡಬೇಕು. ಬಹಳ ವಿಶೇಷವಾಗಿ ಕಾಡಸಿದ್ದೇಶ್ವರ ಮಠದ ಶ್ರೀಗಳು, ಶಾಸಕರು, ಸ್ಥಳೀಯ ಶಾಸಕರು ಎಲ್ಲ ಬಂದಿದ್ದರು. ಬಿಲ್ಪತ್ರೆ ಹಾಕಿ ಪ್ರಾರ್ಥನೆ ಮಾಡಿದೆವು. ರಾಜ್ಯಕ್ಕೆ ಒಳ್ಳೆಯ ಮಳೆ ಬೆಳೆ ಆಗಬೇಕು ಅಂತ ಪ್ರಾರ್ಥನೆ ಮಾಡಿದ್ದೀನಿ ಎಂದು ತಿಳಿಸಿದರು.&lt;/p&gt;&lt;h2&gt;ರಾಜಾ ಪ್ರತ್ಯಕ್ಷ ದೇವತಾ!&lt;/h2&gt;&lt;p&gt;ಸಿಎಂ ಡಿಕೆಶಿ ಪೂಜೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೊಣವಿನಕೆರೆ ಶ್ರೀಗಳು, 2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತರಾ? ಎಂಬ ಬಗ್ಗೆ ಸ್ಪೋಟಕ&zwnj; ಭವಿಷ್ಯ ನುಡಿದಿದ್ದಾರೆ. ಇಂದು ಆರೋಗ್ಯ, ಆಯುಷ್ಯ ಹಾಗೂ ಮುಂದಿನ ಅಭಿವೃದ್ಧಿಗೆ ಸಂಕಲ್ಪ&zwnj; ಮಾಡಿದ್ದಾರೆ. ಅಷ್ಟೋತ್ತರ ಪೂಜೆ, ಆರೋಗ್ಯ ಭಾಗ್ಯದ ಸಂಕಲ್ಪ, ರಾಜಾ ಪ್ರತ್ಯಕ್ಷ ದೇವತಾ ಎಂದು ಹೇಳಿದರು.&lt;/p&gt;&lt;h2&gt;ಧರ್ಮದಂಡ ಕೊಟ್ಟು ಆರ್ಶೀವಾದ!&lt;/h2&gt;&lt;p&gt;ಮುಂದಿನ&zwnj; 2028ರಿಂದಲೂ ಆಳ್ವಿಕೆಯಲ್ಲಿ ಡಿಕೆ ಶಿವಕುಮಾರ್ ಇರುವಂತೆ ಪೂಜೆ ನಡೆಸಲಾಗಿದೆ. ಇವತ್ತಿನ ಪ್ರಕೃತಿ ಧರ್ಮದಲ್ಲಿ ಮಳೆ, ಬೆಳೆ ಬರುವದು&zwnj; ನಿಧಾನವಿದೆ. ಸಮಯಕ್ಕೆ ತಕ್ಕಂತೆ&zwnj; ಮಳೆ ಆಗುತ್ತೆ. ಡಿಕೆ ಶಿವಕುಮಾರ್ ಅವರಿಗೆ ಹಲವಾರು ಅಡೆತಡೆಗಳಿವೆ. ಉತ್ತಮವಾದ ಆಳ್ವಿಕೆ ಎಂದ ಮೇಲೆ ಹಲವಾರು&zwnj; ಜನರ ನ್ಯೂನ್ಯತೆ ಇದ್ದೇ ಇರುತ್ತದೆ. ಆದರೂ ರಾಜಾ ಪ್ರತ್ಯಕ್ಷ ದೇವತಾ. ನಮ್ಮ ಗುರುಗಳು ಹೇಳಿದಂತೆ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳಿದ್ದಾರೆ.&lt;/p&gt;&lt;p&gt;ಆ ಧರ್ಮದಂಡವನ್ನ ನಾವು ಅವರಿಗೆ ಕೊಟ್ಟು ಆರ್ಶೀವಾದ ಮಾಡಿದ್ದೇವೆ. ಹೀಗಾಗಿ ಅವರು ಎಂದಿಂದಿಗೂ ಜಯಶೀಲರಾಗ್ತಾರೆ. ಎಂತಹ ಸಮಸ್ಯೆ ಬಂದರೂ ಅವರ ಹಿಂದೆ ನಾವಿದ್ದೇವೆ, ನಮ್ಮ ಸ್ಮರಣೆ ಅವರಿಗಿದೆ. ರಕ್ಷಾಕವಚವಾಗಿ ಅವರನ್ನ ನಾವು ಕಾಪಾಡುತ್ತೇವೆ. 2028ರ ನಂತರವೂ ಅವರೇ ಸಿಎಂ ಆಗಿರ್ತಾರೆ. ಅವರ ಬದುಕನ್ನು ಅವರು ರೂಪಿಸಿಕೊಂಡು ಹೋಗ್ತಾರೆ ಎಂದು ಲಕ್ಷ್ಮೇಶ್ವರದ ಮುಕ್ತಿಮಂದಿರದಲ್ಲಿ ನೊಣವಿನಕೆರೆ ಶ್ರೀ ಭವಿಷ್ಯ ನುಡಿದಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/will-dk-shivakumar-continue-as-chief-minister-beyond-2028-nonavinakere-sri-s-explosive-prediction-sns/articleshow-xf0eavc"/>
        </item>
        <item>
            <title><![CDATA[ಅನುಮೋದನೆ ಸಿಕ್ಕರೂ ಗದಗ-ಯಲವಿಗಿ ರೈಲು ಮಾರ್ಗದ ಯೋಜನೆ ವಿಳಂಬಕ್ಕೆ ಕಾರಣ ಏನು? ಮನವಿ ಸಲ್ಲಿಕೆ]]></title>
            <link>https://kannada.asianetnews.com/karnataka-districts/land-acquisition-process-for-the-gadag-yalavigi-indian-railway-line-project-has-been-delayed-work-has-been-halted-mrq/articleshow-xfdomw4</link>
            <guid isPermaLink="true">https://kannada.asianetnews.com/karnataka-districts/land-acquisition-process-for-the-gadag-yalavigi-indian-railway-line-project-has-been-delayed-work-has-been-halted-mrq/articleshow-xfdomw4</guid>
            <pubDate>Sat, 29 Aug 2026 09:54:32 +0530</pubDate>
            <description><![CDATA[ಗದಗ-ಯಲವಿಗಿ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರೈಲ್ವೆ ಮಾರ್ಗ ಹೋರಾಟ ಸಮಿತಿಯು ನೂತನ ಸಭಾಪತಿ ಜಿ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m15vv21qe1y9vgb62ze6zarg,imgname-gadag-yalavigi-1787977107511.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ಬಹುದಿನಗಳ ಬೇಡಿಕೆಯಾಗಿರುವ ಗದಗ-ಯಲವಿಗಿ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಕಾಮಗಾರಿಗೆ ವೇಗ ನೀಡಬೇಕು ಎಂದು ಗುರುವಾರ ಶಿರಹಟ್ಟಿ ಫಕೀರೇಶ್ವರ ಮಠದಲ್ಲಿ ನೂತನ ಸಭಾಪತಿ ಜಿ.ಎಸ್. ಪಾಟೀಲ ಅವರಿಗೆ ಗದಗ-ಶಿರಹಟ್ಟಿ-ಯಲವಿಗಿ ರೈಲ್ವೆ ಮಾರ್ಗ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.&lt;/p&gt;&lt;h2&gt;&lt;strong&gt;2021-22ನೇ ಸಾಲಿನ ಬಜೆಟ್&zwnj;ನಲ್ಲಿಯೇ ಅನುಮೋದನೆ&lt;/strong&gt;&lt;/h2&gt;&lt;p&gt;ಈ ವೇಳೆ ರೈಲ್ವೆ ಮಾರ್ಗ ಹೋರಾಟ ಸಮಿತಿ ಅಧ್ಯಕ್ಷ ಈರಣ್ಣ ಕೋಟಿ ಹಾಗೂ ಉಪಾಧ್ಯಕ್ಷ ರಾಯೇಸಾಬ್ ಢಾಲಯತ ಮಾತನಾಡಿ, 2021-22ನೇ ಸಾಲಿನ ಬಜೆಟ್&zwnj;ನಲ್ಲಿ ಅಂದಿನ ಮುಖ್ಯಮಂತ್ರಿಗಳು ಗದಗ ಯಲವಿಗಿ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಅನುಮೋದನೆ ಘೋಷಿಸಿದ್ದರು. ಆದರೆ ಆರ್ಥಿಕ ಅನುಮೋದನೆ ದೊರೆತು 4-5 ವರ್ಷಗಳೆ ಗತಿಸಿದರೂ ಭೂ ಸ್ವಾಧೀನ ಪ್ರಕ್ರಿಯೆ ಕಾರ್ಯರೂಪಕ್ಕೆ ಬಂದಿಲ್ಲ. ಕಾರಣ ತಮ್ಮ ಅನುಭವ ಮತ್ತು ಮಾರ್ಗದರ್ಶನದ ಮೂಲಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಯೋಜನೆ ಅನುಷ್ಠಾನದ ಅಗತ್ಯತೆ ಮನವರಿಕೆ ಮಾಡಿಕೊಡುವ ಮೂಲಕ ಈ ಭಾಗದ ಜನರ ದಶಕಗಳ ಆಸೆಗೆ ಕಾರ್ಯರೂಪ ನೀಡಬೇಕು ಎಂದರು.&lt;/p&gt;&lt;h3&gt;&lt;strong&gt;ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ&lt;/strong&gt;&lt;/h3&gt;&lt;p&gt;ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ ಕಾಮಗಾರಿಯ ಪ್ರಗತಿಗೆ ಅಡಚಣೆಯಾಗುತ್ತಿದೆ. ಭೂಮಿಯನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಂಡು, ಭೂಮಾಲೀಕರಿಗೆ ನಿಯಮಾನುಸಾರ ಪರಿಹಾರ ಒದಗಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ..&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತದಡಿ-ಅಘನಾಶಿನಿ ಬಾರ್ಜ್&zwnj;ನ ಪ್ರಯಾಣದ ದರ ಪಟ್ಟಿ ಅಳವಡಿಸಲು ಸಿದ್ಧತೆ; ಪ್ರಯಾಣಿಕರಲ್ಲಿ ಗೊಂದಲ&lt;/strong&gt;&lt;/p&gt;&lt;p&gt;ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮುಖಂಡರಾದ ವಿ.ವಿ. ಕಪ್ಪತ್ತನವರ, ಹುಮಾಯೂನ ಮಾಗಡಿ, ಸಿ.ಸಿ. ನೂರಶೆಟ್ಟರ, ಬಾಬಣ್ಣ ಮುಂಡವಾಡ, ಡಾ. ಸುನೀಲ ಬುರಬುರೆ ಹಾಗೂ ರೈಲು ಮಾರ್ಗ ಹೋರಾಟ ಸಮಿತಿ ಸದಸ್ಯರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಿ ನಾಗೇಂದ್ರ ರಾಜೀನಾಮೆ ಆಯ್ತು, ಕೆಪಿಎಸ್&zwnj;ಸಿ ಎಇಇ ನೇಮಕಾತಿ ಹಗರಣದಲ್ಲಿ ಈಗ ಪ್ರಿಯಾಂಕ್ ಖರ್ಗೆ ಸರದಿ! ಹೆಚ್&zwnj;ಡಿಕೆ ಗಂಭೀರ ಆರೋಪ!&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/land-acquisition-process-for-the-gadag-yalavigi-indian-railway-line-project-has-been-delayed-work-has-been-halted-mrq/articleshow-xfdomw4"/>
        </item>
        <item>
            <title><![CDATA[ಗದಗ ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಶವ ಪತ್ತೆ! ಸಾವಿನ ಸುತ್ತ ಹಬ್ಬಿದೆ ಹತ್ತಾರು ಅನುಮಾನ!]]></title>
            <link>https://kannada.asianetnews.com/state/female-student-found-dead-rural-development-university-hostel-bmk/articleshow-y5aq8ng</link>
            <guid isPermaLink="true">https://kannada.asianetnews.com/state/female-student-found-dead-rural-development-university-hostel-bmk/articleshow-y5aq8ng</guid>
            <pubDate>Fri, 24 Jul 2026 18:20:06 +0530</pubDate>
            <description><![CDATA[ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಾಸ್ಟೆಲ್&zwnj;ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ವೀಣಾ ಹಾನಾಪುರ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kya2raws5mdqy1m7y2a7keb3,imgname-gadag-1784897350553.jpg" type="image/jpeg" height="390" width="690"/>
            <content:encoded><![CDATA[&lt;p&gt;ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಮೂಲದ ಡಾ. ವೀಣಾ ಹಾನಾಪುರ (25) ಎಂದು ಗುರುತಿಸಲಾಗಿದೆ.&lt;/p&gt;&lt;h2&gt;&lt;strong&gt;ಎಂಪಿಎಚ್&zwnj; ಕೋರ್ಸ್ ವ್ಯಾಸಾಂಗ!&lt;/strong&gt;&lt;/h2&gt;&lt;p&gt;ಮೃತ ವೀಣಾ ಅವರು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ (MPH) ಕೋರ್ಸ್&zwnj;ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ರಾತ್ರಿ ವಾಡಿಕೆಯಂತೆ ತಮ್ಮ ಹಾಸ್ಟೆಲ್ ರೂಮ್&zwnj;ಗೆ ತೆರಳಿದ್ದ ವೀಣಾ, ರಾತ್ರಿ 11 ಗಂಟೆಯಾದರೂ ಹೊರಬಾರದೇ ಇದ್ದಾಗ ಅನುಮಾನಗೊಂಡ ಹಾಸ್ಟೆಲ್ ವಾರ್ಡನ್ ಕೊಠಡಿಯ ಬಳಿ ತೆರಳಿ ತಪಾಸಣೆ ನಡೆಸಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಸಿಬ್ಬಂದಿ ಸಹಾಯದಿಂದ ಕೊಠಡಿಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಮಂಚದ ಕಂಬಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವೀಣಾ ಅವರ ಶವ ಪತ್ತೆಯಾಗಿದೆ.&lt;/p&gt;&lt;p&gt;ಸಾವು ಅಲ್ಲ, ಎಂದು ಪೋಷಕರ ಗಂಭೀರ ಆರೋಪ!&lt;/p&gt;&lt;p&gt;ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ವೀಣಾ ಅವರ ಕುಟುಂಬಸ್ಥರು ಮಗಳ ಸಾವಿನ ಹಿಂದೆ ಅಪಾರ ಅನುಮಾನಗಳಿವೆ ಎಂದು ಆರೋಪಿಸಿದ್ದಾರೆ. ಇದು ಆತ್ಮಹತ್ಯೆಯಲ್ಲ, ಬದಲಿಗೆ ಭೀಕರ ಕೊಲೆ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಪೋಷಕರು ವ್ಯಕ್ತಪಡಿಸಿರುವ ಪ್ರಮುಖ ಅನುಮಾನಗಳೇನು?&lt;/strong&gt;&lt;/h3&gt;&lt;p&gt;&lt;strong&gt;ನೆಲಕ್ಕೆ ತಾಗಿದ್ದ ಕಾಲುಗಳು:&lt;/strong&gt; ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿದ್ದ ಶವದ ಕಾಲುಗಳು ನೆಲಕ್ಕೆ ತಾಗುತ್ತಿದ್ದವು. ಮಂಚದ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಯಾರೋ ಕೊಲೆ ಮಾಡಿ ತೂಗಾಕಿದ್ದಾರೆ ಎಂಬುದು ಪೋಷಕರ ಮುಖ್ಯ ಆರೋಪ.&lt;/p&gt;&lt;p&gt;&lt;strong&gt;ಅಪರಿಚಿತ ಬಟ್ಟೆ ಹಾಗೂ ಗಾಯದ ಗುರುತು:&lt;/strong&gt; ನೇಣು ಬಿಗಿದುಕೊಳ್ಳಲು ಬಳಸಿರುವ ಬಟ್ಟೆ ಮಗಳಿಗೆ ಸೇರಿದ್ದಲ್ಲ. ಜೊತೆಗೆ ಮಗಳ ಮುಖದ ಮೇಲೆ ತೀವ್ರ ಗಾಯದ ಗುರುತುಗಳಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆಯಿದೆ.&lt;/p&gt;&lt;p&gt;ಡೆತ್ ನೋಟ್ ಮೇಲಿನ ಅನುಮಾನ: ಘಟನಾ ಸ್ಥಳದಲ್ಲಿ ಸಿಕ್ಕಿದೆ ಎನ್ನಲಾದ ಡೆತ್ ನೋಟ್&zwnj;ನಲ್ಲಿರುವ ಹಸ್ತಾಕ್ಷರ ತಮ್ಮ ಮಗಳದ್ದಲ್ಲ ಎಂದು ಪೋಷಕರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಜಿಮ್ಸ್ ಶವಾಗಾರಕ್ಕೆ ಶವ ರವಾನೆ!&lt;/strong&gt;&lt;/h3&gt;&lt;p&gt;ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಮ್ಸ್ (GIMS) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. &quot;ನಮ್ಮ ಮಗಳ ಸಾವಿನ ಹಿಂದೆ ದೊಡ್ಡ ಸಂಚಿದೆ, ನಮಗೆ ನ್ಯಾಯ ಸಿಗಬೇಕು ಮತ್ತು ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆಯಾಗಬೇಕು&quot; ಎಂದು ಕಣ್ಣೀರಿಡುತ್ತಾ ಪೋಷಕರು ಪೊಲೀಸರನ್ನು ಆಗ್ರಹಿಸಿದ್ದಾರೆ. ವಿದ್ಯಾರ್ಥಿನಿಯ ಸಾವಿನ ನಿಜವಾದ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ತಿಳಿದುಬರಬೇಕಿದ್ದು, ಈ ಘಟನೆಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.&lt;/p&gt;]]></content:encoded>
            <category>gadag</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/female-student-found-dead-rural-development-university-hostel-bmk/articleshow-y5aq8ng"/>
        </item>
    </channel>
</rss>
