<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 25 Jun 2026 12:50:49 +0530</lastBuildDate>
        <atom:link href="https://kannada.asianetnews.com/rss/gadag" rel="self" type="application/rss+xml"/>
        <item>
            <title><![CDATA[ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ, ಗದಗ-ಮುಂಬೈ ವಂದೇ ಭಾರತ್ ಎಕ್ಸಪ್ರೆಸ್‌ಗೆ ಡಿಮ್ಯಾಂಡ್]]></title>
            <link>https://kannada.asianetnews.com/karnataka-districts/north-karnataka-railway-upgrades-and-gadag-mumbai-vande-bharat-proposed-gdp/articleshow-01rx96f</link>
            <guid isPermaLink="true">https://kannada.asianetnews.com/karnataka-districts/north-karnataka-railway-upgrades-and-gadag-mumbai-vande-bharat-proposed-gdp/articleshow-01rx96f</guid>
            <pubDate>Sun, 24 May 2026 16:02:36 +0530</pubDate>
            <description><![CDATA[&lt;p&gt;ಹುಬ್ಬಳ್ಳಿಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಮಹಾ ವ್ಯವಸ್ಥಾಪಕರ ಸಭೆಯಲ್ಲಿ, ರಾಜ್ಯಸಭಾ ಸಂಸದ ನಾರಾಯಣಸಾ ಭಾಂಡಗೆ ಅವರು ಉತ್ತರ ಕರ್ನಾಟಕದ ರೈಲು ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು. ಹೊಸ ವಂದೇ ಭಾರತ್, ಬಾಗಲಕೋಟೆ-ಕುಡಚಿ ಮಾರ್ಗ, ಮತ್ತು ವಿಜಯಪುರ-ತಿರುಪತಿ ರೈಲು ಸೇರಿದಂತೆ ಹಲವು ಯೋಜನೆಗಳ ಕುರಿತು ಚರ್ಚಿಸಲಾಗಿದ್ದು, ಈ ಯೋಜನೆಗಳು ಪ್ರಾದೇಶಿಕ ಸಂಪರ್ಕ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk9bp62qv9cthntcjy9jaten,imgname-chittur-railway-station-1773062002775.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ:&lt;/strong&gt; ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಕುರಿತು ಮಹತ್ವದ ಸಭೆಯು ಹುಬ್ಬಳ್ಳಿಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಮಹಾ ವ್ಯವಸ್ಥಾಪಕರೊಂದಿಗೆ ಶುಕ್ರವಾರ ನಡೆಯಿತು.&lt;/p&gt;&lt;p&gt;ಹುಬ್ಬಳ್ಳಿಯಲ್ಲಿ ಮಹಾ ವ್ಯವಸ್ಥಾಪಕ ಪಿ.ಅನಂತ್ ಅವರೊಂದಿಗೆ ಉತ್ತರ ಕರ್ನಾಟಕದ ರೈಲು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೊಸ ರೈಲು ಸೇವೆಗಳ ವಿಸ್ತರಣೆ ಕುರಿತು ಮಹತ್ವದ ಚರ್ಚೆ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯ ಇಂಜಿನಿಯರ್ ಹಾಗೂ ಹೆಚ್ಚುವರಿ ಮುಖ್ಯ ಎಂಜಿನಿಯರ್ ಉಪಸ್ಥಿತರಿದ್ದರು. ರಾಜ್ಯಸಭಾ ಸಂಸದರಾದ ನಾರಾಯಣಸಾ ಭಾಂಡಗೆ ಅವರು ಉತ್ತರ ಕರ್ನಾಟಕದ ಪ್ರಮುಖ ರೈಲು ಯೋಜನೆಗಳು ಮತ್ತು ಸಾರ್ವಜನಿಕ ಬೇಡಿಕೆಗಳಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಮಂಡಿಸಿದರು.&lt;/p&gt;&lt;h2&gt;ಹಲವು ರೈಲುಗಳ ವೆಚ್ಚ&lt;/h2&gt;&lt;p&gt;ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು, ಗದಗ-ಮುಂಬೈ ನಡುವೆ ಬಾಗಲಕೋಟೆ-ಸೊಲ್ಲಾಪುರ ಮಾರ್ಗವಾಗಿ ಹೊಸ ವಂದೇ ಭಾರತ್ ಎಕ್ಸಪ್ರೆಸ್&zwnj; ಆರಂಭಿಸುವುದು, ವಿಜಯಪುರ-ತಿರುಪತಿ ನೇರ ರೈಲು ಸೇವೆ ಆರಂಭಿಸುವ ಕುರಿತು, ಗೋಲ್ ಗುಂಬಜ್ ಎಕ್ಸ್ಪ್ರೆಸ್ (16535/16536) ರೈಲಿನ ವೇಗ ಹೆಚ್ಚಿಸುವುದು, ಸವದತ್ತಿ ಮಾರ್ಗವಾಗಿ ಲೋಕಾಪುರ-ಧಾರವಾಡ ಹೊಸ ರೈಲು ಮಾರ್ಗ ನಿರ್ಮಾಣ, ಹುಬ್ಬಳ್ಳಿ-ಹಜ್ರತ್ ನಿಜಾಮುದ್ದೀನ್ ಎಕ್ಸಪ್ರೆಸ್&zwnj; (20647) ಸೇವೆಯನ್ನು ವಾರಕ್ಕೆ ಎರಡು ಬಾರಿ ವಿಸ್ತರಿಸುವುದು, ಬಸವ ಎಕ್ಸಪ್ರೆಸ್&zwnj; ರೈಲನ್ನು ಲೋಕಾಪುರವರೆಗೆ ವಿಸ್ತರಿಸುವುದು, ಬಾಗಲಕೋಟೆ ರೈಲು ನಿಲ್ದಾಣದ ಪ್ಲಾಟ್&zwnj; ಫಾರ್ಮ್&zwnj; ಸಂಖ್ಯೆ 2 ಮತ್ತು 3ರಲ್ಲಿ ಲಿಫ್ಟ್ ಅಳವಡಿಸುವ ಕುರಿತು ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡಗೆ ಅವರು ಮಾತನಾಡಿದರು.&lt;/p&gt;&lt;h2&gt;ಪ್ರಯಾಣಿಕರ ಸೌಲಭ್ಯ ವೃದ್ಧಿಗೆ ಮಹತ್ವದ ಪಾತ್ರ&lt;/h2&gt;&lt;p&gt;ಈ ಯೋಜನೆಗಳು ಉತ್ತರ ಕರ್ನಾಟಕದ ಪ್ರಾದೇಶಿಕ ಸಂಪರ್ಕ, ಆರ್ಥಿಕ ಬೆಳವಣಿಗೆ, ಕೈಗಾರಿಕೆ ಅಭಿವೃದ್ಧಿ ಹಾಗೂ ಪ್ರಯಾಣಿಕರ ಸೌಲಭ್ಯ ವೃದ್ಧಿಗೆ ಮಹತ್ವದ ಪಾತ್ರ ವಹಿಸಲಿವೆ ಎಂದು ತಿಳಿಸಿದರು. ದಕ್ಷಿಣ ಪಶ್ಚಿಮ ರೈಲ್ವೆ ಮಹಾ ವ್ಯವಸ್ಥಾಪಕ ಪಿ. ಅನಂತ್ ಅವರು ಮಂಡಿಸಲಾದ ಪ್ರಸ್ತಾವನೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.&lt;/p&gt;]]></content:encoded>
            <category>gadag</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/north-karnataka-railway-upgrades-and-gadag-mumbai-vande-bharat-proposed-gdp/articleshow-01rx96f"/>
        </item>
        <item>
            <title><![CDATA[Gadag: ಅಪಾಯದಂಚಿನ ಮಾರ್ಗ: ಜೀವ ಪಣಕ್ಕಿಟ್ಟು ಸಾಗುವ 1 ಕಿ.ಮೀ ರಸ್ತೆ ಪಯಣ, ಆಟೋಗಷ್ಟೇ ದಾರಿ]]></title>
            <link>https://kannada.asianetnews.com/karnataka-districts/gadag-hole-alur-amaragol-road-deteriorated-severely-1-km-of-the-road-is-at-point-of-cracking-collapsing-fear-mrq/articleshow-3sfkdwc</link>
            <guid isPermaLink="true">https://kannada.asianetnews.com/karnataka-districts/gadag-hole-alur-amaragol-road-deteriorated-severely-1-km-of-the-road-is-at-point-of-cracking-collapsing-fear-mrq/articleshow-3sfkdwc</guid>
            <pubDate>Sat, 30 May 2026 08:02:28 +0530</pubDate>
            <description><![CDATA[2019ರಿಂದ ಮಲಪ್ರಭಾ ಮತ್ತು ಬೆಣ್ಣಿಹಳ್ಳ ಪ್ರವಾಹದಿಂದಾಗಿ ಹೊಳೆಆಲೂರು-ಅಮರಗೋಳ ಸಂಪರ್ಕ ರಸ್ತೆ ತೀವ್ರವಾಗಿ ಹದಗೆಟ್ಟಿದೆ. ಸುಮಾರು 1 ಕಿ.ಮೀ ರಸ್ತೆಯು ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಜೀವ ಭಯದಿಂದ ಸಂಚರಿಸುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರವಾಗಿ ತಡೆಗೋಡೆ ಅಥವಾ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvbf9vwqw3n21hcga61mxb0,imgname-road--1--1780108207996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಜೀವಕುಮಾರ ಹಿರೇಮಠ&lt;/strong&gt;&lt;/p&gt;&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಹೊಳೆಆಲೂರು: &amp;nbsp;&lt;/strong&gt;2019ರಿಂದ ಮಲಪ್ರಭಾ ಮತ್ತು ಬೆಣ್ಣಿಹಳ್ಳ ಪ್ರವಾಹಕ್ಕೆ ಪ್ರತಿವರ್ಷ ರಸ್ತೆಗಳು ಸಂಪೂರ್ಣ ಹಾಳಾಗುತ್ತಾ ಬರುತ್ತಿದ್ದು, ಅಮರಗೋಳದ 1 ಕಿಮೀ ರಸ್ತೆ ಬಿರುಕು ಬಿಟ್ಟು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.&lt;/p&gt;&lt;p&gt;ಹೊಳೆಆಲೂರಿನಿಂದ ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಹೊಳೆಆಲೂರು ಹಾಗೂ ಅಮರಗೋಳ ನಡುವೆ 1 ಕಿಮೀ ರಸ್ತೆ ಪಕ್ಕ ಮಲಪ್ರಭಾ ನದಿ ನೀರು ಹರಿಯುತ್ತಿದ್ದು, 2019ರಿಂದ 3- 4 ಬಾರಿ ತಡೆ ಕಟ್ಟಿ ಮಣ್ಣು ಹಾಕಿದರೂ ಪ್ರಯೋಜನವಾಗಿಲ್ಲ. ಅರ್ಧ ರಸ್ತೆ ಮಾತ್ರ ಉಳಿದುಕೊಂಡಿದ್ದು, ಪ್ರಯಾಣಿಕರಿಗೆ ಜೀವ ಕಂಟಕವಾಗಿದೆ.&lt;/p&gt;&lt;p&gt;ಈಗ ದೊಡ್ಡ ಸೇತುವೆ ಆಗಿದೆ ಸರಿ, ಮೊದಲು ಸಣ್ಣ ಸೇತುವೆ ಇದ್ದ ಸಂದರ್ಭದಲ್ಲಿ ಮುಳುಗಡೆ ಆದರೆ 10ರಿಂದ 15 ಕಿಮೀ ವ್ಯತ್ಯಾಸವಾಗಬಹುದು ಅಷ್ಟೇ. ಬಿಟ್ಟರೆ ಹೊಳೆಆಲೂರಿನಿಂದ ರೈತರಿಗೆ ಬೇಲೂರು(ಜಾಲಿಹಾಳ) ಸಂತೆಗೆ, ನೈನಾಪುರ, ಮಣ್ಣೀರಿ, ಬಾದಾಮಿ ತಾಲೂಕಿನ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.&lt;/p&gt;&lt;p&gt;ಈ ಮಾರ್ಗದಲ್ಲಿ ಬರುವ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಒಂದು ಆಟೋ ಹೋಗುವಷ್ಟು ಮಾತ್ರ ರಸ್ತೆ ಉಳಿದಿದ್ದು, ಅದು ರಸ್ತೆ ಬುಡದ ಮಣ್ಣು ಹಸಿಯಾಗಿದ್ದು, ಟಾರು ರಸ್ತೆ ಸಹ ಬಿರುಕು ಬಿಡುತ್ತಿದೆ. ಪ್ರಯಾಣಿಕರು ತುಂಬಿದ ವಾಹನ, ವಸ್ತುಗಳು ಲೋಡ್ ಆದ ವಾಹನದ ಚಾಲಕರು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ಇದೆ. ಮಲಪ್ರಭಾ ನದಿ ಸ್ವಲ್ಪ ಏರಿಕೆಯಾಗಿ ಬಂದರೂ ಇಲ್ಲಿಯ ರಸ್ತೆ ಸಂಪೂರ್ಣ ಕುಸಿದು ಬಿದ್ದು, ನದಿ ಸೇರುವ ಸ್ಥಿತಿಯಲ್ಲಿದೆ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳಿಗೆ ಸಮಸ್ಯೆ&lt;/strong&gt;&lt;/h2&gt;&lt;p&gt;ಹೊಳೆಆಲೂರಿಗೆ ಶಿಕ್ಷಣಕ್ಕೆ ಎಲ್ಕೆಜಿಯಿಂದ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಡಿಪ್ಲೊಮಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಪಾಡು ನೋಡುವಂತಿಲ್ಲ. ಬಸ್ ವ್ಯವಸ್ಥೆ ಇಲ್ಲದೆ, ಗ್ರಾಮಗಳಲ್ಲಿ ಆಟೋ ಹಿಡಿದು ಬರಬೇಕು. ಇಲ್ಲವಾದರೆ ನಡೆದು ಬರಬೇಕು. ಆಟೋಗಳಲ್ಲಿ ಬಂದ ವಿದ್ಯಾರ್ಥಿಗಳು 1 ಕಿಮೀ ರಸ್ತೆಯಲ್ಲಿ ಭಯದಿಂದ ಸಂಚರಿಸಬೇಕಿದೆ.&lt;/p&gt;&lt;h3&gt;&lt;strong&gt;ಶಾಶ್ವತ ಪರಿಹಾರ ಅವಶ್ಯ:&lt;/strong&gt;&lt;/h3&gt;&lt;p&gt;2019ರಿಂದ ಇಲ್ಲಿಯವರೆಗೆ 3- 4 ಬಾರಿ ಕಿತ್ತ ರಸ್ತೆ ಹಾಗೆ 3- 4 ಬಾರಿ ಮಣ್ಣು ಹಾಕಲಾಗಿದೆ. ಆದರೂ ರಸ್ತೆ ಕೊರೆತ ಹೆಚ್ಚಾಗಿದ್ದು, ನಾಲ್ಕೈದು ಗ್ರಾಮಗಳ ಜನರು, ವಿದ್ಯಾರ್ಥಿಗಳು, ರೈತರ ಪಾಡು ಹೇಳಲಾಗದು. ಅದೇ ಪರಿಸ್ಥಿತಿ ನಡುವೆಯೇ ಪ್ರಯಾಣಿಸುತ್ತಾರೆ. ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ವ್ಯವಸ್ಥಿತ ಕಾಮಗಾರಿ ಕೈಗೊಂಡು ಸುರಕ್ಷಿತ ಸೇತುವೆ ಇಲ್ಲವೇ ತಡೆಗೋಡೆ ನಿರ್ಮಾಣ ಮಾಡಬೇಕಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಕುಷ್ಟಗಿಯವರೆಗೆ ವಿಸ್ತರಿಸಲು ಹೆಚ್ಚಿದ ಒತ್ತಾಯ, ಪ್ರಯೋಜನವೇನು?&lt;/strong&gt;&lt;/p&gt;&lt;p&gt;ಸುರಕ್ಷಿತ ಸೇತುವೆ ಇಲ್ಲವೇ ತಡೆಗೋಡೆ ನಿರ್ಮಾಣ ಮಾಡಿದರೆ ತುಂಬಾ ಅನುಕೂಲ ಆಗುತ್ತದೆ. ನಾವು ಆಟೋರಿಕ್ಷಾ ಓಡಿಸುತ್ತೇವೆ. ಆದರೆ ಬಸ್, ಟ್ರ್ಯಾಕ್ಟರ್, ರೈತರು ಕಾಳು ಕಡಿ ತುಂಬಿ ಸಂಚರಿಸಿದರೆ ಸಮಸ್ಯೆ ಆಗುತ್ತದೆ. ರಸ್ತೆ ಸಂಪೂರ್ಣ ಹಾಳಾದರೆ ಇಲ್ಲಿಯ ರೈತರಿಗೆ ನದಿಯಿಂದ ತುಂಬಾ ಸಮಸ್ಯೆ ಆಗುತ್ತದೆ. ನದಿಯಲ್ಲಿ ನಿತ್ಯ ಹರಿಯುವ ಸ್ವಲ್ಪ ನೀರು ರೈತರ ಜಮೀನಿನ ಮೇಲೆ ಹರಿಯುತ್ತದೆ ಎಂದು ಸ್ಥಳೀಯ ಆಟೋ ಚಾಲಕರು ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ, ಗದಗ-ಮುಂಬೈ ವಂದೇ ಭಾರತ್ ಎಕ್ಸಪ್ರೆಸ್&zwnj;ಗೆ ಡಿಮ್ಯಾಂಡ್&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-hole-alur-amaragol-road-deteriorated-severely-1-km-of-the-road-is-at-point-of-cracking-collapsing-fear-mrq/articleshow-3sfkdwc"/>
        </item>
        <item>
            <title><![CDATA[ಅಪ್ಪಾ ಐ ಲವ್ ಯೂ ಪಾ.., ಅನ್ನೋ ಮಗುವನ್ನ ಬೈಕ್ ಸೈಡ್ ಬ್ಯಾಗ್‌ನಲ್ಲಿ ಕೂರಿಸಿದ ಬೆಪ್ಪ! ಮುಂದೇನಾಯ್ತು ನೀವೇ ನೋಡ್ರಪ್ಪ..]]></title>
            <link>https://kannada.asianetnews.com/viral/gadag-father-puts-child-in-bike-side-bag-karnataka-police-case-viral-photo/articleshow-55nnuk9</link>
            <guid isPermaLink="true">https://kannada.asianetnews.com/viral/gadag-father-puts-child-in-bike-side-bag-karnataka-police-case-viral-photo/articleshow-55nnuk9</guid>
            <pubDate>Thu, 25 Jun 2026 12:50:43 +0530</pubDate>
            <description><![CDATA[ಗದಗದಲ್ಲಿ ತಂದೆಯೊಬ್ಬ ತನ್ನ ಮಗುವನ್ನು ಬೈಕ್&zwnj;ನ ಸೈಡ್ ಬ್ಯಾಗ್&zwnj;ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ದೃಶ್ಯ ವೈರಲ್ ಆಗಿದೆ. ಈ ಬೇಜವಾಬ್ದಾರಿ ಕೃತ್ಯಕ್ಕಾಗಿ ಪೊಲೀಸರು ಆತನನ್ನು ಪತ್ತೆಹಚ್ಚಿ, ದಂಡ ವಿಧಿಸಿ, ಮಗುವಿನ ಸುರಕ್ಷತೆಯ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvytd2n4rzvwxbvmb5zy3k9b,imgname-gadag-father-puts-child-in-bike-side-bag-1782372010660.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜೂ.25): ಹೆ&lt;/strong&gt;ತ್ತವರಿಗೆ ತಮ್ಮ ಮಕ್ಕಳೇ ಪ್ರಾಣಕ್ಕಿಂತ ಹೆಚ್ಚು. ಮಕ್ಕಳ ಸುರಕ್ಷತೆಗಾಗಿ ಪೋಷಕರು ಎಷ್ಟೇ ಕಷ್ಟ ಬಂದರೂ ಎದುರಿಸುತ್ತಾರೆ. ಆದರೆ, ಗದಗ ಜಿಲ್ಲೆಯಲ್ಲಿ ತಂದೆಯೊಬ್ಬನ ಅತಿರೇಕದ ವರ್ತನೆ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವನ್ನು ಪ್ರೀತಿಯಿಂದ ಎತ್ತಿಕೊಳ್ಳುವ ಬದಲು, ಬೈಕ್&zwnj;ನ ಲಗೇಜ್ ಇಡುವ ಸೈಡ್ ಬ್ಯಾಗ್&zwnj;ನಲ್ಲಿ ಮಗುವನ್ನು ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಗದಗ ನಗರದ ಟಿಪ್ಪು ಸರ್ಕಲ್&zwnj;ನಿಂದ ಡಿಸಿ ಕಚೇರಿ ಕಡೆಗೆ ತೆರಳುತ್ತಿದ್ದ ಬೈಕ್ ಸವಾರನೊಬ್ಬ, ತನ್ನ ಪುಟ್ಟ ಕಂದಮ್ಮನನ್ನು ಬೈಕ್&zwnj;ನ ಸೈಡ್ ಪ್ಯಾಕೆಟ್&zwnj;ನಲ್ಲಿ (ಲಗೇಜ್ ಬ್ಯಾಗ್) ಲಗೇಜಿನಂತೆ ತುರುಕಿದ್ದನು. ಮಗು ಆ ಬ್ಯಾಗ್&zwnj;ನೊಳಗೆ ಇಕ್ಕಟ್ಟಿನಲ್ಲಿ ಕುಳಿತಿದ್ದು, ಮಗುವಿನ ತಲೆ ಮಾತ್ರ ಹೊರಗೆ ಕಾಣುತ್ತಿತ್ತು. ಈ ದೃಶ್ಯವನ್ನು ನೋಡಿದ ದಾರಿಹೋಕರು ತಕ್ಷಣ ಇದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ವೈರಲ್ ಆದ ಫೋಟೋ, ಪೊಲೀಸರ ಎಂಟ್ರಿ:&lt;/strong&gt;&lt;/h2&gt;&lt;p&gt;ಈ ಬೇಜವಾಬ್ದಾರಿ ತಂದೆಯ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗದಗ ಪೊಲೀಸರು, ಬೈಕ್ ಸಂಖ್ಯೆಯ ಆಧಾರದ ಮೇಲೆ ವ್ಯಕ್ತಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಪೇಟೆಗೆ ಹೋಗಿ ವಾಪಸ್ ಬರುವಾಗ ಈ ರೀತಿ ಮಾಡಿರುವುದಾಗಿ ವ್ಯಕ್ತಿ ಸಮರ್ಥನೆ ನೀಡಿದ್ದಾನೆ ಎನ್ನಲಾಗಿದೆ. ಆದರೆ, ಮಗುವಿನ ಜೀವದ ಜೊತೆ ಚೆಲ್ಲಾಟವಾಡಿದ ಈತನಿಗೆ ಪೊಲೀಸರು ಸರಿಯಾಗಿ ಬುದ್ಧಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ದಂಡ ಮತ್ತು ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಪೊಲೀಸರು ಈ 'ಬೆಪ್ಪ' ಅಪ್ಪನಿಗೆ ಭಾರೀ ದಂಡ ವಿಧಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯವೆಸಗಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸಣ್ಣದೊಂದು ಆಯತಪ್ಪಿದರೂ ಮಗುವಿನ ಜೀವಕ್ಕೆ ಅಪಾಯವಿತ್ತು ಎಂದು ಸಾರ್ವಜನಿಕರು ಈತನ ಹುಚ್ಚಾಟದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೋಟಾರು ವಾಹನ ಕಾಯ್ದೆ ಮಾತ್ರವಲ್ಲದೆ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಇದೊಂದು ಗಂಭೀರ ಅಪರಾಧವಾಗಿದೆ.&lt;/p&gt;]]></content:encoded>
            <category>gadag</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/gadag-father-puts-child-in-bike-side-bag-karnataka-police-case-viral-photo/articleshow-55nnuk9"/>
        </item>
        <item>
            <title><![CDATA[ಮಂಡ್ಯ ಬಳಿಕ ಗದಗನಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಗುತ್ತಿಗೆ ಪಡಿತೀರೋ ಹೊರರಾಜ್ಯದ ಉದ್ಯಮಿಗಳು]]></title>
            <link>https://kannada.asianetnews.com/karnataka-districts/businessmen-from-other-states-are-leasing-thousands-of-acres-of-agriculture-land-in-gadag-mundaragi-mrq/articleshow-63y9avs</link>
            <guid isPermaLink="true">https://kannada.asianetnews.com/karnataka-districts/businessmen-from-other-states-are-leasing-thousands-of-acres-of-agriculture-land-in-gadag-mundaragi-mrq/articleshow-63y9avs</guid>
            <pubDate>Sat, 13 Jun 2026 10:53:46 +0530</pubDate>
            <description><![CDATA[ಮುಂಡರಗಿ ತಾಲೂಕಿನಲ್ಲಿ, ಹೊರರಾಜ್ಯದ ಉದ್ಯಮಿಗಳು ರೈತರಿಗೆ ಅಧಿಕ ಹಣದಾಸೆ ತೋರಿಸಿ ದಾಳಿಂಬೆ ಬೆಳೆಯಲು ಸಾವಿರಾರು ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆಯುತ್ತಿದ್ದಾರೆ. ಈ ಬೆಳವಣಿಗೆಯು ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ನಾಶ, ಜಲ ಮಾಲಿನ್ಯ ಮತ್ತು ಪರಿಸರ ಹಾನಿಯಂತಹ ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kty6gn0k768wafqk9kmrt61p,imgname-gadag-farmers-1781277414419.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಿಯಾಜಅಹ್ಮದ ಎಂ. ದೊಡ್ಡಮನಿ&lt;/strong&gt;&lt;/p&gt;&lt;p&gt;&lt;strong&gt;ಗದಗ: &lt;/strong&gt;ಬಡತನವನ್ನೇ ಬಂಡವಾಳ ಮಾಡಿಕೊಂಡಿರುವ ಹೊರರಾಜ್ಯದ ಉದ್ಯಮಿಗಳು ರೈತರಿಗೆ ಹಣದಾಸೆ ತೋರಿಸಿ ಭೂಮಿಯ ಫಲವತ್ತತೆಯನ್ನು ನುಂಗುವ ದಾಳಿಂಬೆಯನ್ನು ಮುಂಡರಗಿ ತಾಲೂಕಿನಾದ್ಯಂತ ಸುಮಾರು 2500 ಎಕರೆಯಲ್ಲಿ ಬೆಳೆಯಲು ಮುಂದಾಗಿದ್ದಾರೆ. ಇದರ ಅರಿವಿಲ್ಲದ ರೈತರು ದಾಳಿಂಬೆ ಬೆಳೆ ಬೆಳೆಯುವುದಕ್ಕೆ ಭೂಮಿಯನ್ನು ಗುತ್ತಿಗೆ ಕೊಡಲಾರಂಭಿಸಿದ್ದಾರೆ.&lt;/p&gt;&lt;p&gt;ಡಂಬಳ ಹೋಬಳಿಯ ಗ್ರಾಮಗಳು ಮಳೆಯಾಶ್ರಿತ ಮತ್ತು ಸಣ್ಣನೀರಾವರಿ ಆಶ್ರಿತ ಪ್ರದೇಶವಾಗಿರುವುದರ ಜತೆಗೆ ಫಲವತ್ತತೆಯ ಕೆಂಪು, ಕಪ್ಪುಮಣ್ಣಿನಿಂದ ಕೂಡಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಈ ಪ್ರದೇಶದಲ್ಲಿ ಉತ್ತಮ ವಾತಾವರಣವಿದೆ. ಕೊಳವೆ ಬಾವಿ ನೀರಿನಿಂದ ಹಲವಾರು ರೈತರು ಡ್ರ್ಯಾಗನ್ ಫ್ರುಟ್, ಮಾವು, ಅಡಕೆ, ಬಾಳೆ, ಟೊಮೇಟೊ, ಬದನೆಕಾಯಿ ಸೇರಿ ಹಲವು ಮಾದರಿಯ ಬೆಳೆ ಬೆಳೆದು ಜೀವನ ಕಟ್ಟಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಬೇರೆ ರಾಜ್ಯದವರ ಕೈಯಲ್ಲಿ ಭೂಮಿ&lt;/strong&gt;&lt;/h2&gt;&lt;p&gt;ಶ್ರಮ ಪಡದೆ ಇರುವವರು ಮತ್ತು ಆಳು ಸಿಗದೆ ಇರುವುದರಿಂದ, ನೀರು, ಹಣದ ಅಭಾವ ಹಾಗೂ ಬೆಳೆ ಬೆಳೆಯಲು ಸಾಧ್ಯವಾಗದ ರೈತರ ಅಸಹಾಯಕತೆಯನ್ನು ಮನಗಂಡಿರುವ ಬೇರೆ ರಾಜ್ಯದ ಉದ್ಯಮಿಗಳು ಡಂಬಳ ಹೋಬಳಿಯ ನೂರಾರು ರೈತರ ಮನವೊಲಿಸಿ ದಾಳಿಂಬೆ ಬೆಳೆಯುವುದಕ್ಕೆ ಭೂಮಿಯನ್ನು ಪಡೆದುಕೊಳ್ಳುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಹಣದ ಆಮಿಷ&lt;/strong&gt;&lt;/h3&gt;&lt;p&gt;ಸ್ಥಳಿಯ ರೈತರು ಎಕರೆಗೆ ₹5 ಸಾವಿರದಿಂದ ₹10 ಸಾವಿರದವರೆಗೆ ವಾರ್ಷಿಕ ಗುತ್ತಿಗೆ ಕೊಡುತ್ತಿದ್ದರು. ಆದರೆ ಬೇರೆ ರಾಜ್ಯದವರು ರೈತರ ಜಮೀನಿನಲ್ಲಿ ಅವರೇ ಕೊಳವೆಬಾವಿ ಕೊರೆಸಿ ಎಕರೆಗೆ ₹25 ಸಾವಿರ ₹30ಸಾವಿರದ ವರೆಗೆ ಹಣ ನೀಡುವ ಆಮಿಷಕ್ಕೆ ಒಳಪಡಿಸಿ ದಾಳಿಂಬೆ ಬೆಳೆಯಲು ಭೂಮಿ ನೀಡುವಂತೆ ಮಾಡುತ್ತಿದ್ದಾರೆ. ಇದಕ್ಕೆ ಒಪ್ಪಿ ರೈತರು ಜಮೀನಿನಲ್ಲಿ ದಾಳಿಂಬೆ ಬೆಳೆಯಲು ಭೂಮಿ ಬಿಟ್ಟು ಕೊಡುತ್ತಿದ್ದಾರೆ. ಈಗಾಗಲೇ ಮುಂಡರಗಿ ತಾಲೂಕಿನಾದ್ಯಂತ ನೂರಾರು ಹೆಕ್ಟೇರ್ ಜಮೀನಿನಲ್ಲಿ ದಾಳಿಂಬೆ ಬೆಳೆಯಲಾಗಿದೆ.&lt;/p&gt;&lt;p&gt;ಪೂರ್ವಜರಿಂದ ಹಿಡಿದು ತಮ್ಮ ಕುಟುಂಬಕ್ಕೆ ವಿವಿಧ ಧಾನ್ಯ, ಕಾಳುಕಡಿ, ದನಕರುಗಳಿಗೆ ಮೇವು ಬೆಳೆದು ಜೀವನಕ್ಕೆ ಆಶ್ರಯವಾಗಿದ್ದ ಫಲವತ್ತಾದ ಭೂಮಿಯನ್ನು ಬೇರೆ ರಾಜ್ಯದವರಿಗೆ ದಾಳಿಂಬೆ ಬೆಳೆಯಲು ಹಣದಾಸೆಗೆ 10 ವರ್ಷ, 20 ವರ್ಷ, 30 ವರ್ಷಗಳ ಗುತ್ತಿಗೆ ನೀಡುತ್ತಿದ್ದಾರೆ. ಕೆಲವೆಡೆ ಜಮೀನನ್ನೆ ಮಾರುತ್ತಿರುವುದು ವಿಪರ್ಯಾಸದ ಸಂಗತಿ.&lt;/p&gt;&lt;h3&gt;&lt;strong&gt;ಬೇರೆ ರಾಜ್ಯದ ಕೂಲಿ ಆಳು&lt;/strong&gt;&lt;/h3&gt;&lt;p&gt;ದಾಳಿಂಬೆ ಬೆಳೆ ಬೆಳೆಯಲು ರೈತರು ಭೂಮಿ ಬಿಟ್ಟು ಕೊಟ್ಟರಷ್ಟೇ ಸಾಕು. ಹೊರ ರಾಜ್ಯಗಳಿಂದ ಕೂಲಿಯಾಳುಗಳನ್ನು ಕರೆತಂದು ಇಲ್ಲಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಸ್ಥಳೀಯ ರೈತರಿಗೆ ದಾಳಿಂಬೆ ಬೆಳೆ ಬೆಳೆಯುವ ಜ್ಞಾನವಿಲ್ಲ. ಬೆಳೆಗಳಿಗೆ ಬರುವ ರೋಗದ ಬಗ್ಗೆ ಎಚ್ಚರ ವಹಿಸುವುದಿಲ್ಲ. ಕೀಟನಾಶಕಗಳನ್ನು ಸಿಂಪರಣೆ ಮಾಡುವ ಅರಿವಿರುವುದಿಲ್ಲವೆಂಬ ಕಾರಣಕ್ಕೆ ಹೊರರಾಜ್ಯದಿಂದಲೇ ಕೂಲಿಯಾಳುಗಳನ್ನು ಇಲ್ಲಿಗೆ ಕರೆತಂದು ಕೆಲಸ ಮಾಡಿಸುವುದಕ್ಕೆ ಆಸಕ್ತಿ ವಹಿಸಿದ್ದಾರೆ.&lt;/p&gt;&lt;p&gt;&lt;strong&gt;ಅಡ್ಡ ಪರಿಣಾಮ&lt;/strong&gt;&lt;/p&gt;&lt;p&gt;ದಾಳಿಂಬೆ ಬೆಳೆಗಳಲ್ಲಿ ಕೀಟ ಹಾಗೂ ರೋಗ ನಿಯಂತ್ರಣಕ್ಕಾಗಿ ವ್ಯಾಪಕವಾಗಿ ರಾಸಾಯನಿಕ ಔಷಧಗಳನ್ನು ಸಿಂಪಡಿಸಲಾಗುತ್ತಿದೆ. ಆದರೆ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುವುದು, ಭೂಗರ್ಭ ಜಲ ಮಾಲಿನ್ಯಗೊಳ್ಳುವುದು ಹಾಗೂ ಬೆಳೆಗಳ ಪರಾಗಸ್ಪರ್ಶ ಮಾಡುವ ಜೇನುನೊಣಗಳಂತಹ ಉಪಯುಕ್ತ ಕೀಟಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಔಷಧ ಬಳಕೆಯನ್ನು ನಿಯಂತ್ರಿತವಾಗಿ ನಡೆಸಬೇಕು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ರೈತರ ಹೇಳಿಕೆ&lt;/strong&gt;&lt;/p&gt;&lt;p&gt;ಡಂಬಳ ಹೋಬಳಿಯಾದ್ಯಂತ ಹಲವು ಕೆರೆಗಳಿವೆ. ಕೆಲವೆಡೆ ಬೋರವೆಲ್&zwnj;ಗಳೂ ಇದ್ದು, ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿದ್ದು, ಇದರಿಂದ ನೀರಿನ ಕೊರತೆ ಇಲ್ಲ. ಹಣದ ಆಸೆಗೆ ರೈತರು ಬೇರೆ ರಾಜ್ಯದಿಂದ ಬಂದು ದಾಳಿಂಬೆ ಬೆಳೆಯುವ ಉದ್ಯಮಿಗಳಿಗೆ ಫಲವತ್ತಾದ ಭೂಮಿ ಕೊಡುತ್ತಿರುವುದು ಖೇದಕರ.&lt;/p&gt;&lt;p&gt;ಮಂಜುನಾಥ ಬಿಸನಳ್ಳಿ, ರಾಜಪ್ಪ ಯಪ್ಪೇರಿ, ವೆಂಕಟೇಶ ತಳವಾರ, ಡಂಬಳ ಗ್ರಾಮದ ರೈತರು&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/businessmen-from-other-states-are-leasing-thousands-of-acres-of-agriculture-land-in-gadag-mundaragi-mrq/articleshow-63y9avs"/>
        </item>
        <item>
            <title><![CDATA[ಲಕ್ಕುಂಡಿ ಮಣ್ಣಲ್ಲಿ ಅಡಗಿದ್ದ ಚಾಲುಕ್ಯರ ರಹಸ್ಯ ಪತ್ತೆ! 13 ಸಾಲುಗಳಲ್ಲಿ ಕನ್ನಡ ಶಾಸನ, ಜಗದೇಕಮಲ್ಲನ ಆಳ್ವಿಕೆ ಉಲ್ಲೇಖ]]></title>
            <link>https://kannada.asianetnews.com/karnataka-districts/12th-century-kalyana-chalukya-jagadekamalla-inscription-found-in-lakkundi-gdp/articleshow-66yqrmh</link>
            <guid isPermaLink="true">https://kannada.asianetnews.com/karnataka-districts/12th-century-kalyana-chalukya-jagadekamalla-inscription-found-in-lakkundi-gdp/articleshow-66yqrmh</guid>
            <pubDate>Tue, 26 May 2026 14:14:28 +0530</pubDate>
            <description><![CDATA[ಗದಗದ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ, 2ನೇ ಜಗದೇಕಮಲ್ಲನ ಆಳ್ವಿಕೆಯನ್ನು ಉಲ್ಲೇಖಿಸುವ ಹೊಸ ತುಂಡು ಶಾಸನ ಪತ್ತೆಯಾಗಿದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವು 12ನೇ ಶತಮಾನದ ಕುಂತಳನಾಡು ಹಾಗೂ ಮಾಸವಾಡಿ ಆಡಳಿತ ಘಟಕಗಳ ಬಗ್ಗೆ ಮಾಹಿತಿ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kshq7sxn9xw0t06hqpy43j5m,imgname-inscription-found-in-lakkundi--1--1779785000885.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ಐತಿಹಾಸಿಕ ತಾಣವಾದ ಲಕ್ಕುಂಡಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ಶಾಸನ ಪತ್ತೆಯಾಗಿದ್ದು, ಇತಿಹಾಸ ಸಂಶೋಧಕರಲ್ಲಿ ಕುತೂಹಲ ಮೂಡಿಸಿದೆ. ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿರುವ ಈ ತುಂಡು ಶಾಸನವು 13 ಸಾಲುಗಳನ್ನು ಒಳಗೊಂಡಿದ್ದು, ಚಾಲುಕ್ಯ ಚಕ್ರವರ್ತಿ 2ನೇ ಜಗದೇಕಮಲ್ಲನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಶಾಸನದಲ್ಲಿ ಕುಂತಳನಾಡು ಹಾಗೂ ಮಾಸವಾಡಿ ಆಡಳಿತ ಘಟಕಗಳ ಕುರಿತು ಪ್ರಸ್ತಾಪವಿದ್ದು, ಜಗದೇಕಮಲ್ಲದೇವನ ಕಾಲದ ಒಬ್ಬ ಮಹಾಮಂಡಳೇಶ್ವರನ ಪ್ರಶಸ್ತಿಯನ್ನು ಹೊಗಳಲಾಗಿದೆ. ಆದರೆ ಶಾಸನದ ಬಹುತೇಕ ಭಾಗ ತುಂಡಾಗಿ ಹಾನಿಗೊಳಗಾಗಿರುವುದರಿಂದ ಹೆಚ್ಚಿನ ವಿವರ ಲಭ್ಯವಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.&lt;/p&gt;&lt;h2&gt;ಜಗದೇಕಮಲ್ಲನ ಆಳ್ವಿಕೆಯ ಅವಧಿಯೆಂದು ಶಂಕೆ&lt;/h2&gt;&lt;p&gt;ಶಾಸನದ ಆರಂಭದಲ್ಲಿ ಶಿವಸ್ತುತಿ ಇರುವುದರಿಂದ ಇದು ಶಿವಾಲಯಕ್ಕೆ ಭೂದಾನ ನೀಡಿದ ಕುರಿತು ಇರಬಹುದೆಂದು ಅಂದಾಜಿಸಲಾಗಿದೆ. ಶಾಸನದಲ್ಲಿ ಸ್ಪಷ್ಟ ಕಾಲದ ಉಲ್ಲೇಖ ಇಲ್ಲದಿದ್ದರೂ, ಜಗದೇಕಮಲ್ಲನ ಆಳ್ವಿಕೆಯ ಅವಧಿಯಾದ ಕ್ರಿಶ 1139ರಿಂದ 1149ರ ನಡುವಿನ ಕಾಲಘಟ್ಟದಲ್ಲಿ ಇದು ರಚನೆಯಾಗಿರಬಹುದು ಎಂದು ಹೇಳಲಾಗಿದೆ. ಲಿಪಿ ಶೈಲಿಯ ಆಧಾರದ ಮೇಲೂ ಇದನ್ನು 12ನೇ ಶತಮಾನದ ಶಾಸನವೆಂದು ಗುರುತಿಸಲಾಗಿದೆ. ಬಸಪ್ಪ ಮುಸುಕಿನಬಾವಿ ಅವರು ಶಾಸನವನ್ನು ಗುರುತಿಸಿದ್ದು, ಶಾಸನವನ್ನು ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ. ಆರ್. ಶೇಜೇಶ್ವರ ಹಾಗೂ ಶಾಸನ ಸಂಶೋಧಕ ಡಾ. ರವಿಕುಮಾರ ಕೆ. ನವಲಗುಂದ ಅವರು ಅಧ್ಯಯನ ಮಾಡಿ ವಿವರಗಳನ್ನು ನೀಡಿದ್ದಾರೆ ಎಂದು ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಹಾಗೂ ಆಯುಕ್ತ ಡಾ. ಶರಣು ಗೋಗೇರಿ ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/12th-century-kalyana-chalukya-jagadekamalla-inscription-found-in-lakkundi-gdp/articleshow-66yqrmh"/>
        </item>
        <item>
            <title><![CDATA[ಗದಗದಲ್ಲಿ ಇಂಧನಕ್ಕೆ ಹಾಹಾಕಾರ, ಬಂಕ್‌ಗಳೇ ಖಾಲಿ, ರೈತರು ಮತ್ತು ಸವಾರರ ಕಿಲೋಮೀಟರ್ ಉದ್ದದ ಕ್ಯೂ!]]></title>
            <link>https://kannada.asianetnews.com/karnataka-districts/fuel-crisis-hits-gadag-massive-shortage-no-stock-signs-put-up-as-panicked-farmers-queue-up-for-diesel-gdp/articleshow-753yho9</link>
            <guid isPermaLink="true">https://kannada.asianetnews.com/karnataka-districts/fuel-crisis-hits-gadag-massive-shortage-no-stock-signs-put-up-as-panicked-farmers-queue-up-for-diesel-gdp/articleshow-753yho9</guid>
            <pubDate>Mon, 25 May 2026 17:14:02 +0530</pubDate>
            <description><![CDATA[ಗದಗ ಜಿಲ್ಲೆಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ತೀವ್ರಗೊಂಡಿದ್ದು, ಪ್ರಮುಖ ಬಂಕ್&zwnj;ಗಳು 'ನೋ ಸ್ಟಾಕ್' ಬೋರ್ಡ್ ಹಾಕಿವೆ. ಮುಂಗಾರು ಹಂಗಾಮಿನ ಹೊತ್ತಲ್ಲಿ ಡೀಸೆಲ್&zwnj;ಗಾಗಿ ರೈತರು ಪರದಾಡುತ್ತಿದ್ದು, ಹುಬ್ಬಳ್ಳಿ ಡಿಪೋದಿಂದ ಸರಬರಾಜು ಸ್ಥಗಿತಗೊಂಡಿರುವುದೇ ಈ ಬಿಕ್ಕಟ್ಟಿಗೆ ಕಾರಣ ಎನ್ನಲಾಗಿದೆ. ಈ ಸಮಸ್ಯೆಯು ನಗರದಿಂದ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksff3ktkep4q5sn0tcvhvxe2,imgname-fuel-crisis-hits-gadag-1779709366099.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ಗದಗ ಜಿಲ್ಲೆಯಾದ್ಯಂತ ಇಂಧನ ಅಭಾವ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾರ್ವಜನಿಕರು ಹಾಗೂ ರೈತರು ಪೆಟ್ರೋಲ್ ಮತ್ತು ಡೀಸೆಲ್&zwnj;ಗಾಗಿ ತೀವ್ರ ಪರದಾಡುವಂತಾಗಿದೆ. ಒಂದು ಕಡೆ ದಿನೇ ದಿನೆ ಏರಿಕೆಯಾಗುತ್ತಿರುವ ಇಂಧನ ಬೆಲೆಯಿಂದ ಕಂಗಾಲಾಗಿದ್ದ ಜನರಿಗೆ, ಇದೀಗ ಜಿಲ್ಲೆಯ ಪ್ರಮುಖ ಪೆಟ್ರೋಲ್ ಬಂಕ್&zwnj;ಗಳು ಇಂಧನವಿಲ್ಲದೆ ಬಂದ್ ಆಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯಾದ್ಯಂತ &lsquo;ನೋ ಸ್ಟಾಕ್&rsquo; (No Stock) ಶಾಕ್ ಎದುರಾಗಿದ್ದು, ವಾಹನ ಸವಾರರು ತೈಲಕ್ಕಾಗಿ ಅಲೆದಾಡುತ್ತಿದ್ದಾರೆ.&lt;/p&gt;&lt;h2&gt;ಗಜೇಂದ್ರಗಡದಲ್ಲಿ ಡೀಸೆಲ್ ಭೀತಿ: ಕ್ಯಾನ್ ಹಿಡಿದು ಮುಗಿಬಿದ್ದ ರೈತರು&lt;/h2&gt;&lt;p&gt;ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲೂ ಡೀಸೆಲ್ ಪಡೆಯಲು ಗ್ರಾಹಕರು ಮುಗಿಬಿದ್ದಿದ್ದಾರೆ. ಮಳೆಗಾಲದ ಮುನ್ನ ಮುಂಗಾರು ಹಂಗಾಮಿಗೆ ಜಮೀನು ಹದಗೊಳಿಸಲು ಟ್ರ್ಯಾಕ್ಟರ್&zwnj;ಗಳಿಗೆ ಡೀಸೆಲ್ ಸಂಗ್ರಹಿಸಿಟ್ಟುಕೊಳ್ಳಲು ರೈತರು ಮುಂದಾಗಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಡೀಸೆಲ್ ಸಂಪೂರ್ಣ ಖಾಲಿಯಾಗಲಿದೆ ಎಂಬ ಭೀಕರ ವದಂತಿ ಹರಡಿರುವ ಹಿನ್ನೆಲೆಯಲ್ಲಿ, ಗಜೇಂದ್ರಗಡ ಪಟ್ಟಣದ ಸುತ್ತಮುತ್ತಲಿನ ರಾಜೂರು, ಕಾಲಕಾಲೇಶ್ವರ ಸೇರಿದಂತೆ ಹಲವು ಹಳ್ಳಿಗಳ ರೈತರು ಟ್ರ್ಯಾಕ್ಟರ್&zwnj;ಗಳನ್ನು ಬಿಟ್ಟು ಕೇವಲ ಪ್ಲಾಸ್ಟಿಕ್ ಕ್ಯಾನ್&zwnj;ಗಳನ್ನು ಹಿಡಿದುಕೊಂಡು ಪೆಟ್ರೋಲ್ ಬಂಕ್&zwnj;ಗಳ ಮುಂದೆ ಜಮಾಯಿಸಿದ್ದಾರೆ.&lt;/p&gt;&lt;p&gt;ಗಜೇಂದ್ರಗಡ ಪಟ್ಟಣದಲ್ಲಿರುವ ಒಟ್ಟು 8 ಪೆಟ್ರೋಲ್ ಬಂಕ್&zwnj;ಗಳ ಪೈಕಿ ಸದ್ಯಕ್ಕೆ ಕೇವಲ 2 ಬಂಕ್&zwnj;ಗಳಲ್ಲಿ ಮಾತ್ರ ಅಲ್ಪಸ್ವಲ್ಪ ಇಂಧನ ಲಭ್ಯವಿದ್ದು, ಅಲ್ಲಿ ಕಿಲೋಮೀಟರ್&zwnj; ಗಟ್ಟಲೆ ಸಾಲು ಕಂಡುಬಂದಿದೆ. ವಿಶೇಷವಾಗಿ ಕುಷ್ಟಗಿ ರಸ್ತೆಯ ರಾಯಬಾಗಿ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ರೈತರು ಕ್ಯಾನ್&zwnj;ಗಳ ಸಮೇತ ಸರದಿಸಾಲಿನಲ್ಲಿ ನಿಂತಿರುವುದು ಪರಿಸ್ಥಿತಿಯ ಗಂಭೀರತೆಗೆ ಕೈಗನ್ನಡಿಯಾಗಿದೆ.&lt;/p&gt;&lt;h2&gt;ನಗರದ ಪ್ರಮುಖ ವೃತ್ತಗಳ ಬಂಕ್&zwnj;ಗಳು ಬಂದ್&lt;/h2&gt;&lt;p&gt;ಕಳೆದ ಮೂರು ದಿನಗಳಿಂದಲೇ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಇಂಧನ ಕೊರತೆ, ಇದೀಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಗದಗ ನಗರದ ಅತ್ಯಂತ ಜನದಟ್ಟಣೆಯ ಪ್ರಮುಖ ವೃತ್ತಗಳಲ್ಲಿರುವ ಮೂರು ಪ್ರಮುಖ ಪೆಟ್ರೋಲ್ ಬಂಕ್&zwnj;ಗಳು ಸಂಪೂರ್ಣವಾಗಿ ಖಾಲಿಯಾಗಿವೆ. ನಗರದ ಮುಳಗುಂದ ನಾಕಾ, ಹಳೆಯ ಡಿಸಿ ಆಫೀಸ್ ಸರ್ಕಲ್ ಹಾಗೂ ಹೊಸ ಬಸ್ ನಿಲ್ದಾಣದ ಬಳಿ ಇರುವ ಪೆಟ್ರೋಲ್ ಬಂಕ್&zwnj;ಗಳಲ್ಲಿ ಇಂಧನ ಸಂಪೂರ್ಣ ಖಾಲಿಯಾಗಿದೆ. ತೈಲ ಮುಗಿದ ಕಾರಣ ಬಂಕ್ ಸಿಬ್ಬಂದಿ ಮುಂಭಾಗದಲ್ಲೇ &lsquo;ನೋ ಸ್ಟಾಕ್&rsquo; ಬೋರ್ಡ್ ತೂಗುಹಾಕಿದ್ದು, ಸವಾರರನ್ನು ವಾಪಸ್ ಕಳುಹಿಸುತ್ತಿದ್ದಾರೆ.&lt;/p&gt;&lt;h2&gt;ಹುಬ್ಬಳ್ಳಿ ಡಿಪೋದಿಂದ ಸರಬರಾಜು ಸ್ಥಗಿತ?&lt;/h2&gt;&lt;p&gt;ವಿಶ್ವಾಸಾರ್ಹ ಮೂಲಗಳ ಪ್ರಕಾರ, ಹುಬ್ಬಳ್ಳಿಯ ಮುಖ್ಯ ತೈಲ ಡಿಪೋದಿಂದ ಗದಗ ಜಿಲ್ಲೆಗೆ ಬರಬೇಕಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಸರಕು ಸಾಗಣೆ (ಸ್ಟಾಕ್) ಸಕಾಲಕ್ಕೆ ತಲುಪದ ಹಿನ್ನೆಲೆಯಲ್ಲಿ ಈ ತೀವ್ರ ಅಭಾವ ಸೃಷ್ಟಿಯಾಗಿದೆ ಎನ್ನಲಾಗಿದೆ. ಗದಗ ನಗರ ಮಾತ್ರವಲ್ಲದೆ, ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಗಳಾದ ಹುಬ್ಬಳ್ಳಿ ರಸ್ತೆ, ಕೊಪ್ಪಳ ರಸ್ತೆ ಹಾಗೂ ಬಾಗಲಕೋಟೆ ರಸ್ತೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಬಂಕ್&zwnj;ಗಳಲ್ಲಿಯೂ ಇದೇ ಸಮಸ್ಯೆ ಎದುರಾಗಿದೆ. ಇದರಿಂದಾಗಿ ದೂರದ ಊರುಗಳಿಗೆ ಸಂಚರಿಸುವ ಲಾರಿ, ಬಸ್ ಹಾಗೂ ಅಗತ್ಯ ವಸ್ತುಗಳ ಸರಕು ಸಾಗಣೆ ವಾಹನಗಳ ಚಾಲಕರು ರಸ್ತೆಯಲ್ಲೇ ನಿಲ್ಲುವಂತಾಗಿದ್ದು, ಕಂಗಾಲಾಗಿದ್ದಾರೆ.&lt;/p&gt;&lt;h2&gt;ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ ಇಂಧನ ಗಂಡಾಂತರ&lt;/h2&gt;&lt;p&gt;ಈ ಇಂಧನ ಅಭಾವದ ಬಿಸಿ ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿರದೆ, ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಾದ ಶಿರಹಟ್ಟಿ, ಬೆಳ್ಳಟ್ಟಿ, ರೋಣ ಹಾಗೂ ನರಗುಂದ ಭಾಗಗಳಿಗೂ ವ್ಯಾಪಿಸಿದೆ. ಗ್ರಾಮೀಣ ಭಾಗದ ಸಾರ್ವಜನಿಕರು ತಾಲೂಕು ಕೇಂದ್ರಗಳಿಗೆ ಅಲೆಯುತ್ತಿದ್ದಾರೆ. ಕೃಷಿ ಚಟುವಟಿಕೆಗಳ ವೇಗ ಪಡೆದುಕೊಳ್ಳುವ ಈ ಪ್ರಮುಖ ಅವಧಿಯಲ್ಲೇ ಡೀಸೆಲ್ ಸಿಗದೆ ಇರುವುದು ರೈತರ ಆತಂಕವನ್ನು ದುಪ್ಪಟ್ಟು ಮಾಡಿದೆ.&lt;/p&gt;&lt;p&gt;ಸತತ ಮೂರು ದಿನಗಳಿಂದ ತೈಲ ಅಭಾವ ತಲೆದೋರಿರುವುದು ಮತ್ತು ಬಂಕ್&zwnj;ಗಳ ಮುಂದೆ ಸಾಲು ಸಾಲಾಗಿ &lsquo;ನೋ ಸ್ಟಾಕ್&rsquo; ಬೋರ್ಡ್&zwnj;ಗಳು ಕಾಣಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಮುಂದಿನ ದಿನಗಳಲ್ಲಿ ಇಂಧನ ಸಂಪೂರ್ಣ ಕೈಕೊಡಲಿದೆಯೇ ಎಂಬ ಭೀತಿ ಆವರಿಸಿದೆ. ಹೀಗಾಗಿ, ಸಿಕ್ಕ ಸಿಕ್ಕ ಬಂಕ್&zwnj;ಗಳ ಮುಂದೆ ಸವಾರರು ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಿದ್ದಾರೆ. ಜಿಲ್ಲಾಡಳಿತ, ಸಂಬಂಧಪಟ್ಟ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ತೈಲ ಕಂಪನಿಗಳು ತಕ್ಷಣವೇ ಮಧ್ಯಪ್ರವೇಶಿಸಿ ತೈಲ ಸರಬರಾಜನ್ನು ಸುಗಮಗೊಳಿಸಬೇಕೆಂದು ಸಾರ್ವಜನಿಕರು ಮತ್ತು ರೈತ ಸಂಘಟನೆಗಳು ತೀವ್ರ ಆಗ್ರಹ ಮಾಡಿವೆ.&lt;/p&gt;]]></content:encoded>
            <category>gadag</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/fuel-crisis-hits-gadag-massive-shortage-no-stock-signs-put-up-as-panicked-farmers-queue-up-for-diesel-gdp/articleshow-753yho9"/>
        </item>
        <item>
            <title><![CDATA[17 ಲಕ್ಷಕ್ಕೆ ಕೋಟ್ಯಂತರ ಮೌಲ್ಯದ 5 ಎಕರೆ ಕೃಷಿಭೂಮಿ ಕಬಳಿಕೆ? ದೂರು ದಾಖಲಿಸಿದ ನೊಂದ ರೈತ]]></title>
            <link>https://kannada.asianetnews.com/karnataka-districts/gadag-farmer-accused-of-grabbing-5-acres-of-agricultural-land-worth-crores-for-rs-17-lakhs-mrq/articleshow-7i48i8t</link>
            <guid isPermaLink="true">https://kannada.asianetnews.com/karnataka-districts/gadag-farmer-accused-of-grabbing-5-acres-of-agricultural-land-worth-crores-for-rs-17-lakhs-mrq/articleshow-7i48i8t</guid>
            <pubDate>Tue, 23 Jun 2026 08:11:55 +0530</pubDate>
            <description><![CDATA[&lt;p&gt;17 ಲಕ್ಷ ಸಾಲ ಪಡೆದ ರೈತನಿಗೆ ವಂಚಿಸಿ ಕೋಟ್ಯಂತರ ಮೌಲ್ಯದ 5 ಎಕರೆ ಜಮೀನನ್ನು ಬಡ್ಡಿ ದಂಧೆಕೋರರು ಕಬಳಿಸಿದ್ದಾರೆ. ಅಡಮಾನ ಪತ್ರದ ಬದಲು ಖರೀದಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಈ ಮೋಸ ಎಸಗಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs5c41phfdm780q6w04jgw2,imgname-agriculture-1782182187062.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ:&lt;/strong&gt; 17 ಲಕ್ಷ ಸಾಲ ಪಡೆದ ರೈತನ 5 ಎಕರೆ ಜಮೀನನ್ನೇ ಕಬಳಿಸಿದ ಘಟನೆಯೊಂದು ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹೊಸ ಮುಖ ಇದಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.&lt;/p&gt;&lt;p&gt;ಬೆಳಹೋಡ ಗ್ರಾಮದ ರೈತ ಮಹ್ಮದ್ ರಫೀಕ್ ದೊಡ್ಡಮನಿ ಹಾಗೂ ಅವರ ಸಹೋದರರು ಆರ್ಥಿಕ ಸಂಕಷ್ಟದ ಹಿನ್ನೆಲೆ ಖಾಸಗಿ ಬಡ್ಡಿ ದಂಧೆಕೋರರಲ್ಲಿ ₹17 ಲಕ್ಷ ಸಾಲ ಕೇಳಿದ್ದರು. ಅದಕ್ಕೆ ಒಪ್ಪಿದ ಅವರು ಮುಂಗಡವಾಗಿಯೇ ₹5 ಲಕ್ಷ ಬಡ್ಡಿ ಕಡಿತ ಮಾಡಿಕೊಂಡು ಕೇವಲ ₹12 ಲಕ್ಷ ಮಾತ್ರ ನೀಡಿದ್ದಾರೆ.&lt;/p&gt;&lt;p&gt;ಸಾಲದ ಭದ್ರತೆಯಾಗಿ ರೈತನ 5 ಎಕರೆ ಜಮೀನಿನ ದಾಖಲೆಗಳನ್ನು ಪಡೆದುಕೊಂಡ ಆರೋಪಿಗಳು, ಅಡಮಾನ ನೋಂದಣಿ ಮಾಡಿಕೊಳ್ಳುವುದಾಗಿ ನಂಬಿಸಿ, ಅಡಮಾನ ಪತ್ರದ ಬದಲಿಗೆ ಖರೀದಿ ಪತ್ರ ಸಿದ್ಧಪಡಿಸಿ, ಶೇಷಗಿರಿಸಾ ಬಾಕಳೆ ಹೆಸರಿಗೆ ಜಮೀನಿನ ಖರೀದಿ ಪತ್ರ ಮಾಡಿಸಲಾಗಿದೆ. ಈ ಬಡ್ಡಿ ದಂದೆಕೋರರು ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.&lt;/p&gt;&lt;p&gt;ಕೋಟ್ಯಂತರ ಮೌಲ್ಯದ 5 ಎಕರೆ ಜಮೀನನ್ನು ಕಳೆದುಕೊಂಡ ರೈತ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಸಂಪರ್ಕಿಸಿ ದೂರು ಸಲ್ಲಿಸಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಎಸ್&zwnj;ಪಿ ತಕ್ಷಣ ತನಿಖೆಗೆ ಸೂಚನೆ ನೀಡಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;&lt;strong&gt;ರೌಡಿಶೀಟರ್ &amp;nbsp;ಬಂಧನ&lt;/strong&gt;&lt;/h2&gt;&lt;p&gt;ಈ ವಂಚನೆಯ ಹಿಂದೆ ಬೆಟಗೇರಿ ಮೂಲದ ರೌಡಿಶೀಟರ್ ಹಾಗೂ ಬಡ್ಡಿ ದಂಧೆಕೋರ ಯುವರಾಜ ಕೊರವರನ ಕೈವಾಡವಿದೆ ಎಂದು ರೈತ ಕುಟುಂಬ ಆರೋಪಿಸಿದ ಹಿನ್ನೆಲೆಯಲ್ಲಿ ಪೊಲೀಸರು ರೌಡಿಶೀಟರ್ ಯುವರಾಜ ಕೊರವರ ಹಾಗೂ ರವಿ ಕೌಜಗೇರಿ ಅವರನ್ನು ಬಂಧಿಸಿದ್ದಾರೆ. ಇನ್ನುಳಿದ ಬಸನಗೌಡ ಕರಮುಡಿ, ಶೇಷಗೀರಿಸಾ ಬಾಕಳೆ ಹಾಗೂ ಜಗದೀಶ ಅಯ್ಯನಗೌಡ ಎಂಬವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.&lt;/p&gt;&lt;h3&gt;&lt;strong&gt;ಹೆಚ್ಚುತ್ತಿದೆ ಅಕ್ರಮ ಬಡ್ಡಿ ದಂಧೆ&lt;/strong&gt;&lt;/h3&gt;&lt;p&gt;ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆ ಹಾಗೂ ಜಮೀನು ಕಬಳಿಕೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಾರದ ಹಿಂದಷ್ಟೇ ಬಡ್ಡಿ ಹಣಕ್ಕಾಗಿ ಮನೆಯ ಕಾಂಪೌಂಡ್ ಧ್ವಂಸಗೊಳಿಸಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ರೈತನ ಜಮೀನನ್ನೇ ಕಬಳಿಸಿರುವ ಆರೋಪ ಬೆಳಕಿಗೆ ಬಂದಿರುವುದು ಬಡ್ಡಿ ದಂಧೆಕೋರರ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;ಅಪರಾಧ ಹಿನ್ನೆಲೆ&lt;/strong&gt;&lt;/p&gt;&lt;p&gt;ಈ ಪ್ರಕರಣದಲ್ಲಿ ತೊಂದರೆಗೊಳಗಾದ ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ತಮ್ಮ ಅಳಲನ್ನು ತೋಡಿಕೊಂಡು, ಆರೋಪಿತರು ನಮಗೆ ನಂಬಿಸಿ ಮೋಸ ಮಾಡಿ ಜಮೀನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. ನಂತರ ಪರಿಶೀಲನೆ ಮಾಡಿದಾಗ ಆ ವ್ಯಕ್ತಿ ಅಪರಾಧ ಹಿನ್ನೆಲೆ ತಿಳಿದು ಬಂದಿದೆ. ಅದಕ್ಕಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; 1600 ಕಾನ್ಸ್&zwnj;ಟಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೊನೆ ದಿನಾಂಕ, ಅರ್ಹತೆ, ವಯೋಮಿತಿ ಎಷ್ಟಿರಬೇಕು?&lt;/strong&gt;&lt;/p&gt;&lt;h3&gt;&lt;strong&gt;ನ್ಯಾಯ ಬೇಕು&lt;/strong&gt;&lt;/h3&gt;&lt;p&gt;ನಮಗೆ ಅಡಚಣೆ ಇತ್ತು. ಅದಕ್ಕಾಗಿ ಹಣವನ್ನು ಪಡೆದಿರುತ್ತೇವೆ. ಆದರೆ ನಂಬಿಸಿ ಮೋಸ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಅತ್ಯಂತ ಬೆಲೆಬಾಳುವ ಜಮೀನು ಕಿತ್ತುಕೊಂಡು ನಮ್ಮನ್ನು ಬೀದಿಪಾಲು ಮಾಡಿದ್ದಾರೆ ಎಂದು ಮಹ್ಮದ್ ರಫೀಕ್ ದೊಡ್ಡಮನಿ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅನ್ನಭಾಗ್ಯ ಯೋಜನೆಗೂ &lsquo;ಸರ್ಜರಿ&rsquo;: 14 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದು? ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-farmer-accused-of-grabbing-5-acres-of-agricultural-land-worth-crores-for-rs-17-lakhs-mrq/articleshow-7i48i8t"/>
        </item>
        <item>
            <title><![CDATA[ಗದಗದಲ್ಲಿ ರಾಷ್ಟ್ರಕೂಟ ಕಾಲದ ವಿಶಿಷ್ಟ ವೀರಗಲ್ಲು ಪತ್ತೆ, ರಾಜನ ಮೇಲಿನ ಪ್ರೀತಿಗೆ ಪ್ರಾಣತ್ಯಾಗದ 'ಕೀಲುಗುಂಟೆ' ಪದ್ಧತಿ!]]></title>
            <link>https://kannada.asianetnews.com/karnataka-districts/rare-rashtrakuta-era-hero-stone-inscription-found-in-gadag-mevundi-village-reveals-ancient-ritual-of-kilugunte-gdp/articleshow-7x8lnkr</link>
            <guid isPermaLink="true">https://kannada.asianetnews.com/karnataka-districts/rare-rashtrakuta-era-hero-stone-inscription-found-in-gadag-mevundi-village-reveals-ancient-ritual-of-kilugunte-gdp/articleshow-7x8lnkr</guid>
            <pubDate>Tue, 09 Jun 2026 17:25:36 +0530</pubDate>
            <description><![CDATA[ಗದಗ ಜಿಲ್ಲೆಯ ಮೇವುಂಡಿಯಲ್ಲಿ ರಾಷ್ಟ್ರಕೂಟರ ಕಾಲದ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದೆ. ಇದು ತನ್ನ ಅರಸನ ಸಾವಿನ ನಂತರ, ರಾಜಭಕ್ತಿಯಿಂದ ಸ್ವಯಂಪ್ರೇರಿತವಾಗಿ ಪ್ರಾಣತ್ಯಾಗ ಮಾಡಿದ ರಟ್ಟೆಯಣ್ಣ ಎಂಬ ಸೇವಕನ ಕಥೆಯನ್ನು ಹೇಳುತ್ತದೆ. ಈ ವಿಶಿಷ್ಟ ಆಚರಣೆಯನ್ನು 'ಕೀಲುಗುಂಟೆ' ಎಂದು ಕರೆಯಲಾಗುತ್ತಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01ktp3rh08x8w3a853ve403675,imgname-rashtrakuta-inscription-in-gadag-1781006091272.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ:&lt;/strong&gt; ಕರ್ನಾಟಕದ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಗೆ ಮತ್ತೊಂದು ಅದ್ಭುತ ಮೈಲಿಗಲ್ಲು ಸೇರ್ಪಡೆಯಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ಅತ್ಯಂತ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದೆ. ಇದು ಕೇವಲ ಯುದ್ಧ ಭೂಮಿಯಲ್ಲಿ ಮಡಿದ ವೀರನ ನೆನಪಿನ ಕಲ್ಲಲ್ಲ. ಬದಲಿಗೆ ತನ್ನ ಅರಸನ ಮೇಲಿನ ಅಪ್ರತಿಮ ಭಕ್ತಿ ಮತ್ತು ನಿಷ್ಠೆಗಾಗಿ ಸ್ವಯಂಪ್ರೇರಿತವಾಗಿ ಪ್ರಾಣತ್ಯಾಗ ಮಾಡಿದ ಶ್ರೇಷ್ಠ ಸೈನಿಕನ ಕಥೆಯನ್ನು ವಿವರಿಸುತ್ತದೆ.&lt;/p&gt;&lt;h2&gt;ಸಂಶೋಧಕಿ ಶ್ವೇತಾ ಭಸ್ಮೆ ತಂಡದ ಸಾಧನೆ&lt;/h2&gt;&lt;p&gt;ರಾಜ್ಯದ ವಿವಿಧ ಭಾಗಗಳಲ್ಲಿ ಹರಡಿಕೊಂಡಿರುವ ವಿಶಿಷ್ಟ ವೀರಗಲ್ಲುಗಳ (Memorial Stones) ಕುರಿತು ಇತಿಹಾಸಾಸಕ್ತರ ತಂಡವೊಂದು ಸುದೀರ್ಘ ಅಧ್ಯಯನ ನಡೆಸುತ್ತಿತ್ತು. ಈ ವೇಳೆ ವೀರಗಲ್ಲುಗಳ ಕುರಿತಾಗಿಯೇ ವಿಶೇಷ ಸಂಶೋಧನಾ ಪ್ರಬಂಧ (Thesis) ಸಿದ್ಧಪಡಿಸುತ್ತಿದ್ದ ಪ್ರಮುಖ ಸಂಶೋಧಕಿ ಶ್ವೇತಾ ಭಸ್ಮೆ ಹಾಗೂ ಅವರ ತಂಡಕ್ಕೆ ಮೇವುಂಡಿ ಗ್ರಾಮದಲ್ಲಿ ಈ ವಿಭಿನ್ನ ಶಿಲಾಶಾಸನ ಸಿಕ್ಕಿದೆ. ಮೇಲ್ನೋಟಕ್ಕೆ ಸಾಮಾನ್ಯ ಸ್ಮಾರಕದಂತೆ ಕಂಡರೂ, ಅದರ ಮೇಲಿನ ಬರಹಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕರ್ನಾಟಕದ ಮಧ್ಯಕಾಲೀನ ಇತಿಹಾಸದ ರೋಚಕ ಆಚರಣೆಯೊಂದು ಬೆಳಕಿಗೆ ಬಂದಿದೆ.&lt;/p&gt;&lt;h2&gt;ಏನಿದು ಶಾಸನದ ಇತಿಹಾಸ?&lt;/h2&gt;&lt;p&gt;ಶಾಸನದಲ್ಲಿ ಕೆತ್ತಲಾಗಿರುವ ವಿವರಗಳ ಪ್ರಕಾರ, ರಾಷ್ಟ್ರಕೂಟರ ಆಡಳಿತಾವಧಿಯಲ್ಲಿ ಇಂದಿನ ಲಕ್ಷ್ಮೇಶ್ವರ ಭಾಗದ 'ಪುಲಿಗೆರೆ' ಎಂಬ ಪ್ರದೇಶವನ್ನು ಕುಪ್ಪೆ ಅರಸ ಎಂಬ ರಾಜನು ಆಳುತ್ತಿದ್ದನು. ದುರದೃಷ್ಟವಶಾತ್, ಆತ ತೀವ್ರ ಅನಾರೋಗ್ಯದಿಂದ ನಿಧನ ಹೊಂದಿದನು. ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಸಲಹಿದ್ದ ಅರಸನ ಅಗಲಿಕೆಯನ್ನು ತಡೆದುಕೊಳ್ಳಲಾಗದ ಆತನ ಆಪ್ತ ಸೇವಕ ರಟ್ಟೆಯಣ್ಣ ಎಂಬಾತ, ರಾಜನ ಮೇಲಿನ ಅಚಲ ಭಕ್ತಿಯ ಸಂಕೇತವಾಗಿ ತಾನೂ ಆತ್ಮತ್ಯಾಗ (Self-Sacrifice) ಮಾಡಲು ನಿರ್ಧರಿಸಿದನು.&lt;/p&gt;&lt;p&gt;ಅಚ್ಚರಿಯ ವಿಷಯವೆಂದರೆ, ರಟ್ಟೆಯಣ್ಣನು ಅರಸನ ಚಿತೆ ಅಥವಾ ಸಮಾಧಿಯನ್ನು ಹುಡುಕುತ್ತಾ ನೂರಾರು ಮೈಲುಗಳ ದೂರದ ದಾರಿಯನ್ನು ಸವೆಸಿ, ಇಂದಿನ ಮೇವುಂಡಿ ಪ್ರದೇಶಕ್ಕೆ ಬಂದು ತಲುಪಿದ್ದನು. ಅಲ್ಲಿ ಸ್ಥಾಪಿತವಾಗಿದ್ದ ತನ್ನ ಒಡೆಯನ ಸಮಾಧಿಯ (ಸ್ಮಾರಕ) ಮುಂಭಾಗದಲ್ಲೇ ನಿಂತು ತನ್ನ ಪ್ರಾಣವನ್ನು ಅರ್ಪಿಸಿಕೊಂಡಿದ್ದನು. ರಟ್ಟೆಯಣ್ಣನ ಈ ಅಸಾಮಾನ್ಯ ಸ್ವಾಮಿಭಕ್ತಿಯನ್ನು ಮುಂದಿನ ಪೀಳಿಗೆಗೆ ಸಾರುವ ಸಲುವಾಗಿಯೇ ಅಂದು ಈ ವಿಶಿಷ್ಟ ವೀರಗಲ್ಲನ್ನು ಪ್ರತಿಷ್ಠಾಪಿಸಲಾಗಿತ್ತು ಎಂದು ಶಾಸನದಲ್ಲಿ ಉಲ್ಲೇಖವಿದೆ.&lt;/p&gt;&lt;h2&gt;ಏನಿದು 'ಕೀಲುಗುಂಟೆ' ಸಂಪ್ರದಾಯ?&lt;/h2&gt;&lt;p&gt;ಇತಿಹಾಸ ತಜ್ಞರ ಪ್ರಕಾರ, ಪ್ರಾಚೀನ ಕರ್ನಾಟಕದಲ್ಲಿ ಪ್ರಚಲಿತದಲ್ಲಿದ್ದ ಈ ರೀತಿಯ ಪ್ರಾಣತ್ಯಾಗದ ವಿಶಿಷ್ಟ ಆಚರಣೆಯನ್ನು &quot;ಕೀಲುಗುಂಟೆ&quot; ಎಂದು ಕರೆಯಲಾಗುತ್ತಿತ್ತು. ಭಾಷಾಶಾಸ್ತ್ರದ ಪ್ರಕಾರ, ಇಲ್ಲಿ 'ಕೀಲು' ಎಂದರೆ ಎಳೆಯುವುದು ಅಥವಾ ಸೆಳೆಯುವುದು ಮತ್ತು 'ಗುಂಟೆ' (ಅಥವಾ ಕುಂಟೆ/ಕುಂದಿ) ಎಂದರೆ ಸಮಾಧಿ ಅಥವಾ ಹೂಳುವ ಸ್ಥಳ ಎಂಬ ಅರ್ಥವಿದೆ. ಅರಸನು ಮರಣ ಹೊಂದಿದಾಗ ಆತನ ಆಪ್ತರು ಅಥವಾ ಅಂಗರಕ್ಷಕರು ತಾವೂ ಜೀವತ್ಯಾಗ ಮಾಡುವ ಇಂತಹ ಆಚರಣೆಗಳು ಗಂಗರು ಮತ್ತು ರಾಷ್ಟ್ರಕೂಟರ ಕಾಲದಲ್ಲಿ ಚಾಲ್ತಿಯಲ್ಲಿದ್ದವು ಎಂಬುದಕ್ಕೆ ಈ ಶಾಸನವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.&lt;/p&gt;&lt;h2&gt;ಸಾಮಾನ್ಯ ವೀರಗಲ್ಲುಗಳಿಗಿಂತ ಇದು ಹೇಗೆ ಭಿನ್ನ?&lt;/h2&gt;&lt;p&gt;ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡುಬರುವ ವೀರಗಲ್ಲುಗಳು ಯುದ್ಧದಲ್ಲಿ ಶತ್ರುಗಳ ಎದುರು ವೀರಾವೇಶದಿಂದ ಹೋರಾಡಿ ಮಡಿದ ಯೋಧರು, ಊರಿನ ಹೆಣ್ಣುಮಕ್ಕಳನ್ನು ಅಥವಾ ಗೋವುಗಳನ್ನು ಕಾಪಾಡುವಾಗ ಪ್ರಾಣ ಬಿಟ್ಟ ವೀರರ ನೆನಪಿಗಾಗಿ ಕೆತ್ತಲ್ಪಟ್ಟಿರುತ್ತವೆ. ಆದರೆ, ಮೇವುಂಡಿಯ ಈ ವೀರಗಲ್ಲು ಸಂಪೂರ್ಣ ಭಿನ್ನವಾದ ಶೈಲಿಯನ್ನು ಹೊಂದಿದೆ. ಯಾವುದೇ ಯುದ್ಧವಿಲ್ಲದೆ, ಕೇವಲ ಭಾವನಾತ್ಮಕ ನಿಷ್ಠೆ ಮತ್ತು ಒಡೆಯನ ಮೇಲಿನ ಗೌರವಕ್ಕಾಗಿ, ನೂರಾರು ಮೈಲು ನಡೆದು ಬಂದು ಸಮಾಧಿಯ ಮುಂದೆ ಸ್ವಯಂಪ್ರೇರಿತವಾಗಿ ಪ್ರಾಣತ್ಯಾಗ ಮಾಡಿದ ಅಪೂರ್ವ ಕಥೆಯನ್ನು ತಿಳಿಸುತ್ತದೆ.&lt;/p&gt;&lt;h2&gt;ಇತಿಹಾಸ ಅಧ್ಯಯನಕ್ಕೆ ಹೊಸ ದಿಕ್ಸೂಚಿ&lt;/h2&gt;&lt;p&gt;ಈ ಹೊಸ ಶೋಧನೆಯು ರಾಷ್ಟ್ರಕೂಟರ ಕಾಲದ ಸಾಮಾಜಿಕ ಚೌಕಟ್ಟು, ರಾಜಪ್ರಭುತ್ವ ಮತ್ತು ರಾಜ-ಸೇವಕರ ನಡುವೆ ಇದ್ದ ನಂಬಿಕೆಯ ಸಂಬಂಧಗಳು, ಅಂದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಂಬಿಕೆಗಳ ಮೇಲೆ ಹೊಸ ಬೆಳಕು ಚೆಲ್ಲಿದೆ. ಕರ್ನಾಟಕದ ಮಧ್ಯಕಾಲೀನ ಇತಿಹಾಸದ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಈ ಶಾಸನವು ಅತ್ಯಂತ ಅಮೂಲ್ಯ ಆಕರ ಗ್ರಂಥವಾಗಿದ್ದು, ಮುಂದಿನ ದಿನಗಳಲ್ಲಿ ಇತಿಹಾಸ ಇಲಾಖೆ ಹಾಗೂ ಪುರಾತತ್ವ ಇಲಾಖೆಯಿಂದ ಮತ್ತಷ್ಟು ಆಳವಾದ ಸಂಶೋಧನೆಗಳಿಗೆ ಇದು ದಾರಿ ಮಾಡಿಕೊಡಲಿದೆ ಎಂದು ತಜ್ಞರು ಆಶಿಸಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-rashtrakuta-era-hero-stone-inscription-found-in-gadag-mevundi-village-reveals-ancient-ritual-of-kilugunte-gdp/articleshow-7x8lnkr"/>
        </item>
        <item>
            <title><![CDATA[ಗದಗ: ಈ ಊರಿನಲ್ಲಿ ಯಾರೇ ಮೃತಪಟ್ಟರು ಮನೆ ಮುಂದೆ ಹಾಜರಾಗೋ ನಾಯಿ, ಸ್ಮಶಾನದವರೆಗೂ ಬಂದು ವಿಧಿವಿಧಾನದಲ್ಲಿ ಭಾಗಿ!]]></title>
            <link>https://kannada.asianetnews.com/viral/karnataka-news-beyond-human-empathy-the-extraordinary-stray-dog-of-gadag-that-attends-every-village-funeral-gdp/articleshow-92741up</link>
            <guid isPermaLink="true">https://kannada.asianetnews.com/viral/karnataka-news-beyond-human-empathy-the-extraordinary-stray-dog-of-gadag-that-attends-every-village-funeral-gdp/articleshow-92741up</guid>
            <pubDate>Thu, 11 Jun 2026 18:23:31 +0530</pubDate>
            <description><![CDATA[ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಬೀದಿ ನಾಯಿಯೊಂದು ವಿಶಿಷ್ಟ ವರ್ತನೆಯಿಂದ ಗಮನ ಸೆಳೆದಿದೆ. ಗ್ರಾಮದಲ್ಲಿ ಯಾರೇ ಮೃತಪಟ್ಟರೂ, ಈ ಶ್ವಾನವು ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ವಿಧಿವಿಧಾನಗಳು ಮುಗಿಯುವವರೆಗೂ ಸ್ಮಶಾನದಲ್ಲಿಯೇ ಇರುತ್ತದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ನಡವಳಿಕೆಯನ್ನು ಪ್ರದರ್ಶಿಸುತ್ತಿರುವ ಈ ಮೂಕಪ್ರಾಣಿಯ ಸಂಸ್ಕಾರ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktvbtwz8qx7sm4v8y6j5j4r5,imgname-dog-attending-funeral-procession-in-gadag-1781182329832.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ&lt;/strong&gt;: ಪ್ರಾಣಿಗಳಲ್ಲಿ ನಾಯಿ ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠಾವಂತ ಪ್ರಾಣಿ ಎಂಬುದು ನಮಗೆಲ್ಲ ಗೊತ್ತು. ಆದರೆ ಇಲ್ಲೊಂದು ಬೀದಿ ನಾಯಿ ಕೇವಲ ನಿಷ್ಠೆಯನ್ನಷ್ಟೇ ಅಲ್ಲ, ಮನುಷ್ಯರೇ ಬೆರಗಾಗುವಂತಹ ವಿಶಿಷ್ಟ ಸಂಸ್ಕಾರ ಹಾಗೂ ವಿಚಿತ್ರ ವರ್ತನೆಯನ್ನು ಪ್ರದರ್ಶಿಸುವ ಮೂಲಕ ಇಡೀ ಜಿಲ್ಲೆಯ ಗಮನ ಸೆಳೆದಿದೆ. ಯಾಕೆಂದರೆ ಈ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಮೊದಲಿಗೆ ಅವರ ಮನೆ ಬಾಗಿಲಿಗೆ ಹೋಗೋ ನಾಯಿ. ಬಳಿಕ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ಸ್ಮಶಾನದವರೆಗೆ ನಡೆದು ಬರುತ್ತಿದ್ದು ಈಗ ಭಾರಿ ಸುದ್ದಿಯಾಗಿದೆ. ಈ ಅಚ್ಚರಿಯ ಘಟನೆ ವರದಿಯಾಗಿರುವುದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಐತಿಹಾಸಿಕ ಡಂಬಳ ಗ್ರಾಮದಲ್ಲಿ.&lt;/p&gt;&lt;h2&gt;ಸೂತಕದ ಮನೆಯ ಮುಂದೆ ಮೊದಲು ಹಾಜರ್!&lt;/h2&gt;&lt;p&gt;ಸಾಮಾನ್ಯವಾಗಿ ಪ್ರಾಣಿಗಳಿಗೆ ಸಾವು-ನೋವುಗಳ ಮುನ್ಸೂಚನೆ ಬೇಗ ಸಿಗುತ್ತದೆ ಎನ್ನಲಾಗುತ್ತದೆ. ಅದಕ್ಕೆ ಪೂರಕವೆಂಬಂತೆ ಡಂಬಳ ಗ್ರಾಮದ ಈ ಮೂಕಪ್ರಾಣಿ ನಡೆದುಕೊಳ್ಳುತ್ತಿದೆ. ಗ್ರಾಮದಲ್ಲಿ ಯಾವುದೇ ಧರ್ಮ, ಜಾತಿಯ ವ್ಯಕ್ತಿ ಮೃತಪಟ್ಟರೂ ಸಾಕು, ಈ ಶ್ವಾನವು ಯಾರೂ ಕರೆಯದಿದ್ದರೂ ತಾನಾಗಿಯೇ ಆ ಸೂತಕದ ಮನೆಯ ಮುಂದೆ ಬಂದು ಹಾಜರಾಗುತ್ತದೆ. ಮೃತರ ಶವಯಾತ್ರೆ ಆರಂಭವಾಗುತ್ತಿದ್ದಂತೆ, ಗ್ರಾಮಸ್ಥರ ಗುಂಪಿನೊಂದಿಗೆ ಈ ಶ್ವಾನವೂ ಕೂಡ ಹೆಜ್ಜೆ ಹಾಕುತ್ತಾ ಸಾಗುತ್ತದೆ. ಇಡೀ ಅಂತಿಮ ಯಾತ್ರೆಯುದ್ದಕ್ಕೂ ಅತ್ಯಂತ ಗಂಭೀರವಾಗಿ ಜನರ ಜೊತೆಗೇ ನಡೆದುಕೊಂಡು ಹೋಗುವುದು ಇದರ ವೈಶಿಷ್ಟ್ಯ.&lt;/p&gt;&lt;h2&gt;ವಿಧಿವಿಧಾನ ಮುಗಿಯುವವರೆಗೂ ಸ್ಮಶಾನದಲ್ಲೇ ವಾಸ್ತವ್ಯ!&lt;/h2&gt;&lt;p&gt;ಮೃತದೇಹಕ್ಕೆ ಅಂತಿಮ ವಿಧಿವಿಧಾನಗಳು ಪ್ರಕ್ರಿಯೆಗಳು ಮುಗಿಯುವವರೆಗೂ ಈ ಶ್ವಾನವು ಸ್ಮಶಾನದಲ್ಲೇ ಶಾಂತವಾಗಿ ಕುಳಿತುಕೊಳ್ಳುತ್ತದೆ. ಎಲ್ಲ ಪ್ರಕ್ರಿಯೆಗಳು ಮುಗಿದು ಗ್ರಾಮಸ್ಥರು ತಮ್ಮ ಮನೆಗಳತ್ತ ಮುಖ ಮಾಡಿದಾಗ, ಅವರ ಜೊತೆಯಲ್ಲೇ ಮರಳಿ ಗ್ರಾಮಕ್ಕೆ ವಾಪಸ್ ಆಗುತ್ತದೆ.&lt;/p&gt;&lt;p&gt;ಗುರುವಾರವಾದ ಇಂದು ಕೂಡ ಗ್ರಾಮದ ಹಿರಿಯರಾದ ಪಾರಮ್ಮ ಎಂಬುವವರು ವೃದ್ಧಾಪ್ಯದಿಂದ ನಿಧನರಾಗಿದ್ದರು.ಪಾರಮ್ಮ ಅವರ ಅಂತಿಮ ಯಾತ್ರೆಯಲ್ಲೂ ಈ ಶ್ವಾನವು ಎಂದಿನಂತೆ ಭಾಗಿಯಾಗಿ, ಸ್ಮಶಾನದವರೆಗೆ ಬಂದು ತನ್ನ ಮೂಕ ನಮನ ಸಲ್ಲಿಸಿದೆ.&lt;/p&gt;&lt;h2&gt;ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ರೀತಿ ಇರುವ ನಾಯಿ&lt;/h2&gt;&lt;p&gt;ಗ್ರಾಮಸ್ಥರ ಪ್ರಕಾರ, ಈ ನಾಯಿ ಯಾವುದೋ ಒಂದು ದಿನ ಅಥವಾ ಕೇವಲ ಪರಿಚಿತರ ಸಾವಿನ ಮನೆಗೆ ಮಾತ್ರ ಹೀಗೆ ಮಾಡುತ್ತಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಗ್ರಾಮದಲ್ಲಿ ಯಾವುದೇ ಸಾವು ಸಂಭವಿಸಿದರೂ ಇದೇ ರೀತಿ ವರ್ತಿಸುತ್ತಿದೆ. ತನಗೆ ನಿತ್ಯ ಅನ್ನ ಹಾಕುವವರಷ್ಟೇ ಅಲ್ಲದೆ, ಇಡೀ ಗ್ರಾಮದ ಪ್ರತಿಯೊಬ್ಬರೊಂದಿಗೂ ಇದು ಆತ್ಮೀಯ ಭಾವನೆ ಹೊಂದಿರುವಂತೆ ತೋರುತ್ತಿದೆ. ಮನುಷ್ಯರೇ ಸಂಬಂಧಗಳನ್ನು ಮರೆಯುತ್ತಿರುವ ಈ ಕಲಿಯುಗದಲ್ಲಿ, ಮನುಷ್ಯನ ಸಾವಿಗೆ ಮರುಗುವ ಈ ಶ್ವಾನದ ಸಂಸ್ಕಾರ ನಿಜಕ್ಕೂ ಶ್ಲಾಘನೀಯ. ಪ್ರಾಣಿ ಪ್ರಪಂಚದ ಈ ಅಚ್ಚರಿಯ ನಡವಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ.&lt;/p&gt;]]></content:encoded>
            <category>gadag</category>
            <dc:creator>Gowthami K</dc:creator>
            <atom:link href="https://kannada.asianetnews.com/viral/karnataka-news-beyond-human-empathy-the-extraordinary-stray-dog-of-gadag-that-attends-every-village-funeral-gdp/articleshow-92741up"/>
        </item>
        <item>
            <title><![CDATA[ಕಾಂಗ್ರೆಸ್ ಸರ್ಕಾರಕ್ಕೆ ಇನ್ನೆರಡು ವರ್ಷ ಅಸ್ಥಿರತೆ ಕಾಡಲಿದೆ: ಸಂಸದ ಬೊಮ್ಮಾಯಿ]]></title>
            <link>https://kannada.asianetnews.com/karnataka-districts/basavaraj-bommai-on-congress-internal-rift-dk-shivakumar-gvd/articleshow-bftb4pi</link>
            <guid isPermaLink="true">https://kannada.asianetnews.com/karnataka-districts/basavaraj-bommai-on-congress-internal-rift-dk-shivakumar-gvd/articleshow-bftb4pi</guid>
            <pubDate>Wed, 10 Jun 2026 21:52:16 +0530</pubDate>
            <description><![CDATA[&lt;p&gt;ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳಬೇಗುದಿ ಇನ್ನೂ ಕೆಂಡದಂತೆ ಜೀವಂತವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jm7p0pc71btv3jp590krtgmj,imgname-basavaraj-bommai--1-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜೂ.10): &lt;/strong&gt;ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳಬೇಗುದಿ ಇನ್ನೂ ಕೆಂಡದಂತೆ ಜೀವಂತವಾಗಿದೆ. ಇನ್ನೂ ಎರಡು ವರ್ಷ ರಾಜಕೀಯ ಅಸ್ಥಿರತೆ, ಅಸಮಾಧಾನ, ಆಡಳಿತ ಕುಸಿದುಹೋಗುತ್ತದೆ. ಸಾಮಾನ್ಯ ಜನರ ಬದುಕು ದುಸ್ತರವಾಗುವುದು ಖಚಿತ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾಯಕತ್ವ ಒಪ್ಪಿಕೊಂಡಂತೆ ಕಾಂಗ್ರೆಸ್ ನ ಶಾಸಕರು, ಮಂತ್ರಿಗಳು ಡಿ.ಕೆ. ಶಿವಕುಮಾರ ಅವರನ್ನು ಒಪ್ಪಿಕೊಂಡಿಲ್ಲ. ಕಾಂಗ್ರೆಸ್&zwnj;ನಲ್ಲಿ ಸಚಿವರಾಗಲು ಬಹಳ ಒತ್ತಡ ಇದೆ. ಯಾಕೆಂದರೆ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಆ ಪಕ್ಷದ ಶಾಸಕರಿಗೆ ಗೊತ್ತಾಗಿದೆ. ಹೀಗಾಗಿ ಈಗಲೇ ಮಂತ್ರಿ ಆಗಬೇಕೆಂದು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಬಹಳ ಸವಾಲುಗಳಿವೆ. ರಾಜಕೀಯವಾಗಿ ಸ್ಥಿರವಾಗಿದ್ದರೆ ಮಾತ್ರ ಒಳ್ಳೆಯ ಆಡಳಿತ ಕೊಡಲು ಸಾಧ್ಯ ಎಂದರು.&lt;/p&gt;&lt;p&gt;ಸಿದ್ದರಾಮಯ್ಯ ಸುಮ್ಮನೆ ಕುಳಿತಿಲ್ಲ. ಮೊದಲ ಹಂತದ ಸಚಿವ ಸಂಪುಟದಲ್ಲಿ ಯಾರ ಪ್ರಭಾವ ಕಾಣುತ್ತಿದೆ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಪ್ರಭಾವ ಮಾತ್ರ ಕಾಣಿಸುತ್ತಿದೆ. ಮುಂದಿನ&zwnj; ಕಂತಿನಲ್ಲಿ ಡಿ.ಕೆ. ಶಿವಕುಮಾರ ನಂಬಿದವರನ್ನು ಮಂತ್ರಿ&zwnj; ಮಾಡಿದರೆ ಅವರ ಛಾಪು ಇದೆ ಎನ್ನಬಹುದು. ಇಲ್ಲವಾದರೆ ಡಿಕೆಶಿ ಛಾಪು ಇಲ್ಲ ಅಂತ ಅರ್ಥ ಎಂದರು.&lt;/p&gt;&lt;h2&gt;&lt;strong&gt;ಯುದ್ಧ ಮುಗಿಯಲಿದೆ&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಎರಡು ವಾರದಲ್ಲಿ ಯುದ್ಧ ಮುಗಿಯಲಿದೆ. ಎಲ್ಲವೂ ಸರಿಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬಿಕ್ಕಟ್ಟು ಉಂಟಾಗಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಿ ದರ ಇಳಿಸಬೇಕು. ನಾನು ಸಿಎಂ ಆಗಿದ್ದಾಗ ₹7 ಕಡಿತ ಮಾಡಿದ್ದೆ. ಅದೇ ರೀತಿ ರಾಜ್ಯ ಸರ್ಕಾರ ಕಡಿಮೆ&zwnj; ಮಾಡಬೇಕು ಎಂದು ಒತ್ತಾಯಿಸಿದರು.&lt;/p&gt;]]></content:encoded>
            <category>gadag</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basavaraj-bommai-on-congress-internal-rift-dk-shivakumar-gvd/articleshow-bftb4pi"/>
        </item>
        <item>
            <title><![CDATA[ಡಿಕೆಶಿ ಸಂಪುಟಕ್ಕೆ ಮೊದಲು ಮ್ಯಾನೇಜ್ಮೆಂಟ್ ಕೋಟಾ ಸಚಿವರು; ಭಾರೀ ಚರ್ಚೆಗೆ ಕಾರಣವಾದ ಕಾಂಗ್ರೆಸ್ ಮುಖಂಡನ ಪೋಸ್ಟ್!]]></title>
            <link>https://kannada.asianetnews.com/gallery/state/gadag-congress-controversy-hk-patil-supporters-management-quota-post-sat-gdcvuis</link>
            <guid isPermaLink="true">https://kannada.asianetnews.com/gallery/state/gadag-congress-controversy-hk-patil-supporters-management-quota-post-sat-gdcvuis</guid>
            <pubDate>Fri, 05 Jun 2026 15:18:38 +0530</pubDate>
            <description><![CDATA[&lt;p&gt;ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಗದಗ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲರು 'ಮ್ಯಾನೇಜ್ಮೆಂಟ್ ಕೋಟಾ' ಸಚಿವರು ಎಂದು ಪೋಸ್ಟ್ ಹಾಕಿ ಡಿಲೀಟ್ ಮಾಡಿದ್ದಾರೆ. ಈ ಪೋಸ್ಟ್&zwnj;ನ ಸ್ಕ್ರೀನ್&zwnj;ಶಾಟ್ ವೈರಲ್ ಆಗಿದ್ದು, ಕಾಂಗ್ರೆಸ್&zwnj;ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktbjkyvrfgav2y6zbg458r58,imgname-hk-patil-post-1780652571512.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಗದಗ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲರು 'ಮ್ಯಾನೇಜ್ಮೆಂಟ್ ಕೋಟಾ' ಸಚಿವರು ಎಂದು ಪೋಸ್ಟ್ ಹಾಕಿ ಡಿಲೀಟ್ ಮಾಡಿದ್ದಾರೆ. ಈ ಪೋಸ್ಟ್&zwnj;ನ ಸ್ಕ್ರೀನ್&zwnj;ಶಾಟ್ ವೈರಲ್ ಆಗಿದ್ದು, ಕಾಂಗ್ರೆಸ್&zwnj;ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಗದಗ (ಜೂ.05): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗೆ ಪ್ರಮಾಣ ವಚನ ಸ್ವೀರಿಸಿರುವ ನಾಯಕರು ಮ್ಯಾನೇಜ್ಮೆಂಟ್ ಕೋಟಾ (ದುಡ್ಡು ಕೊಟ್ಟ) ಸಚಿವರು ಎಂಬರ್ಥದ ಪೋಸ್ಟ್ ಅನ್ನು ಗದಗ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಹಾಕಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ&zwnj;. ಈ ಪೋಸ್ಟ್ ಮಾಡಿ ಕೆಲವೇ ನಿಮಿಷದಲ್ಲಿ ಡಿಲೀಟ್ ಮಾಡಿದರೂ ಅವರು ಹಾಕಿದ್ದ ಪೋಸ್ಟ್&zwnj;ನ ಸ್ಕ್ರೀನ್ ಶಾಟ್ ಗಳು ಸಾಮಾಜಿಕ&zwnj; ಜಾಲತಾಣದಲ್ಲಿ ವೈರಲ್ ಆಗುತ್ತಿವೆ.&lt;/p&gt;&lt;img&gt;&lt;p&gt;ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ ಅವರನ್ನು ಮೊದಲ ಪಟ್ಟಿಯಿಂದ ಕೈ ಬಿಡಲಾಗಿದ್ದು, ಸ್ಥಳೀಯ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ&zwnj;. ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಅಂತೆಲ್ಲ ತರಹೇವಾರಿ ಪೋಸ್ಟ್ ಗಳನ್ನ ಬೆಂಬಲಿಗರು ಹರಿಬಿಟ್ಟಿದ್ದಾರಾದರೂ ಈ ಒಂದು ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮ್ಯಾನೇಜ್ಮೆಂಟ್ ಕೋಟಾ ಅಂತಾ ಬರೆಯುವುದಲ್ಲದೇ ದುಡ್ಡಿನ ಚೀಲದ ಚಿಹ್ನೆಯನ್ನ ಹಾಕಲಾಗಿದೆ.&lt;/p&gt;&lt;img&gt;&lt;p&gt;ಮೊದಲು ಮ್ಯಾನೇಜ್ಮೆಂಟ್ ಕೋಟಾ ಮುಗೀಬೇಕು ಆಮೇಲೆ ಸರ್ಕಾರಿ ಕೋಟಾ ಅಂತಾ ಫೊಸ್ಟ್ ಮಾಡಿದ್ದಾರೆ. ಅಲ್ಲದೇ ಕಲಿಯುಗದ ಅಧಿಕಾರ ಅಂತಾ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದ್ದು, ಮ್ಯಾನೇಜ್ಮೆಂಟ್ ಕೋಟಾದವರು ಯಾರು, ಯಾರು, ಯಾರಿಗೆ ಹಣ ಕೊಟ್ಟಿದ್ದು? ಎನ್ನುವ ಚರ್ಚೆ ಶುರುವಾಗಿದೆ.&lt;/p&gt;&lt;img&gt;&lt;p&gt;ಮೊದಲ ಪಟ್ಟಿಯಲ್ಲಿ ಹೆಸರು ಇಲ್ಲದನ್ನ ಗಮನಿಸಿದ್ದ ಮಾಜಿ ಸಚಿವ ಎಚ್.ಕೆ. ಪಾಟೀಲರು, ಸಿದ್ಧಾಂತ ನಿಷ್ಠರಿಗೆ ಯಾವಾಗಲೂ ಹಾದಿ ಕಠಿಣವೇ, ಹೈಕಮಾಂಡ್ ನಿರ್ಧಾರ ಕ್ಕೆ ಒಪ್ಪೋಣ ಅಂತಾ ಕಾರ್ಯಕರ್ತರಿಗೆ ಟ್ವಿಟರ್ ಪೋಸ್ಟ್ ಮೂಲಕ ಸಂದೇಶ ನೀಡಿದ್ದರು. ಆದರೆ, ಕೆಲವೇ ನಿಮಿಷದಲ್ಲಿ ಆ ಸಂದೇಶವನ್ನೂ ಡಿಲೀಟ್ ಮಾಡಲಾಗಿತ್ತು.&lt;/p&gt;&lt;img&gt;&lt;p&gt;ಇತ್ತ ಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ಸೈಯದ್ ಖಾಲಿದ್ ಕೊಪ್ಪಳ ರಾಜೀನಾಮೆ ಎಚ್ಚರಿಗೆ ನೀಡಿದ್ದಾರೆ. ಮಾಜಿ ಸಚಿವ ಎಚ್.ಕೆ. ಪಾಟೀಲರು ಯಾವುದೇ ಪ್ರತಿಭಟನೆ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ ಆದ್ರೂ ನಾವು ರಸ್ತೆಗಿಳಿದಿದ್ದೇವೆ&zwnj;. ಉತ್ತರ ಕರ್ನಾಟಕ ಧೀಮಂತ ನಾಯಕ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದ ನಾಯಕನ ಕಡೆಗಣನೆಯಾಗಿದೆ. ಮೊದಲ ಪಟ್ಟಿಯಲ್ಲಿ ನಿರ್ಲಕ್ಷಿಸಲಾಗಿದೆ.. ಆದರೆ ಎರಡನೇ ಪಟ್ಟಿಯಲ್ಲಿ ಪರಿಗಣಿಸದಿದ್ದರೆ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆಗೆ ಸಿದ್ಧ ಅಂತಾ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಗದಗ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಎಚ್ ಕೆ ಪಾಟೀಲರು ಆರು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.. ಅಲ್ದೆ, ಪಶ್ಚಿಮ ಪದವಿಧರರ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದರು. 40 ವರ್ಷದ ಸುಧೀರ್ಘ ರಾಜಕೀಯ ಪಯಣದಲ್ಲಿ ಜವಳಿ, ಕಾನೂನು, ಕೃಷಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಸಚಿವರಾಗಿ ತನ್ನದೇಯಾದ ಛಾಪುಮೂಡಿಸಿದ್ದಾರೆ. 'ಹುಲಕೋಟಿಯ ಹುಲಿ' ಅಂತಾನೇ ಖ್ಯಾತರಾಗಿರೋ ಪಾಟೀಲರಿಗೆ ಈ ಬಾರಿ ಸಚಿವ ನೀಡದಿರೋದು ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>gadag</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/gadag-congress-controversy-hk-patil-supporters-management-quota-post-sat-gdcvuis"/>
        </item>
        <item>
            <title><![CDATA[ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಕುಷ್ಟಗಿಯವರೆಗೆ ವಿಸ್ತರಿಸಲು ಹೆಚ್ಚಿದ ಒತ್ತಾಯ, ಪ್ರಯೋಜನವೇನು?]]></title>
            <link>https://kannada.asianetnews.com/gallery/karnataka-districts/demand-mounts-to-extend-bengaluru-hubballi-superfast-express-to-kushtagi-gdp-kiasa7k</link>
            <guid isPermaLink="true">https://kannada.asianetnews.com/gallery/karnataka-districts/demand-mounts-to-extend-bengaluru-hubballi-superfast-express-to-kushtagi-gdp-kiasa7k</guid>
            <pubDate>Wed, 27 May 2026 09:37:44 +0530</pubDate>
            <description><![CDATA[&lt;p&gt;ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯು ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk9bp62qv9cthntcjy9jaten,imgname-chittur-railway-station-1773062002775.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯು ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಕುಷ್ಟಗಿ: ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಒತ್ತಾಯಿಸಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ಅವರಿಗೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದರು. ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿರೇಶ ಬಂಗಾರಶೆಟ್ಟರ ಮಾತನಾಡಿ, ಬೆಂಗಳೂರು ಹುಬ್ಬಳ್ಳಿ ಚಲಿಸುವ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸಬೇಕು ಎಂದರು.&lt;/p&gt;&lt;img&gt;&lt;p&gt;ಗದಗ ರೈಲ್ವೆ ಹೋರಾಟ ಸಮಿತಿಯವರು ಈಗಾಗಲೇ ಆಂದೋಲನ ಪ್ರಾರಂಭಿಸಿದ್ದು, ಈ ರೈಲನ್ನು ಗದಗಕ್ಕೆ ವಿಸ್ತರಿಸುವಂತೆ ಒತ್ತಾಯಿಸಿ ಹಲವಾರು ಮನವಿ ಸಲ್ಲಿಸಿದ್ದಾರೆ. ಮುಂದಿನ ಹಂತವಾಗಿ, ಈ ರೈಲನ್ನು ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಗೆ ವಿಸ್ತರಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.ಈ ಸೌಲಭ್ಯ ಕುಷ್ಟಗಿ ತಾಲೂಕು ಮಾತ್ರವಲ್ಲದೆ,ಗಜೇಂದ್ರಗಡ, ಇಲಕಲ್, ಯಲಬುರ್ಗಾ, ಕುಕನೂರು ಮತ್ತು ಗದಗ ಜಿಲ್ಲೆಯ ಜನರಿಗೂ ಪ್ರಯೋಜನ ನೀಡುತ್ತದೆ. ಇದು ವೈದ್ಯಕೀಯ ಅಗತ್ಯ, ಹೈಕೋರ್ಟ್, ಶಿಕ್ಷಣ ಮತ್ತು ವ್ಯವಹಾರಕ್ಕೆ ಅನುಕೂಲಕರವಾಗಲಿದೆ ಕಾರ್ಮಿಕರಿಗೂ ಇದು ಪ್ರಯೋಜನ ನೀಡುತ್ತದೆ ಎಂದರು.&lt;/p&gt;&lt;img&gt;&lt;p&gt;ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್&zwnj;ಗಳಿಂದ ಅಕ್ರಮವಾಗಿ ಅಧಿಕ ಶುಲ್ಕ ವಿಧಿಸುವುದನ್ನು ಇದು ತಡೆಯುತ್ತದೆ. ಬೆಂಗಳೂರು-ಹುಬ್ಬಳ್ಳಿ ರೈಲನ್ನು ಗದಗ ಮೂಲಕ ಕುಷ್ಟಗಿಗೆ ವಿಸ್ತರಿಸುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಸರ್ಕಾರಿ ಮತ್ತು ಖಾಸಗಿ ಬಸ್&zwnj;ಗಳಲ್ಲಿ ಬೆಂಗಳೂರಿಗೆ ಪ್ರತಿ ದಿನ ಪ್ರಯಾಣಿಸುವ ಜನರಿಗೆ ಸಹಕಾರಿಯಾಗಲಿದೆ ಎಂದರು. ಕಳೆದ ವರ್ಷ ಮೇ 15ರಂದು ಗದಗ-ವಾಡಿ ರೈಲ್ವೆ ಯೋಜನೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಪರ್ಕ ಸಕ್ರಿಯಗೊಳಿಸಿದ ನಂತರ, ಕುಷ್ಟಗಿ-ಬೆಂಗಳೂರು ಸಂಪರ್ಕದ ಬೇಡಿಕೆ ಬಲವಾಗಿ ಕೇಳಿಬರುತ್ತಿದ್ದು, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಹಲವಾರು ಮನವಿ ಸಲ್ಲಿಸಲಾಗಿದೆ. ಕುಷ್ಟಗಿಗೆ ರೈಲು ಸೇವೆ ಆರಂಭವಾಗಿ ವರ್ಷ ಕಳೆದರೂ ಮತ್ತೊಂದು ರೈಲು ಸಂಪರ್ಕ ಪಡೆಯುವ ಕನಸು ಇನ್ನೂ ನನಸಾಗಿಲ್ಲ ಎಂದರು.&lt;/p&gt;&lt;img&gt;&lt;p&gt;ಕುಷ್ಟಗಿಯಿಂದ ಹುಬ್ಬಳ್ಳಿಗೆ ಒಂದೇ ಒಂದು ರೈಲು ಚಲಿಸುತ್ತದೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ನಿಲ್ದಾಣ ಬೆಳಗ್ಗೆ 6-7 ಮತ್ತು ರಾತ್ರಿ 8-9 ರವರೆಗೆ ಮಾತ್ರ ಪ್ರಯಾಣಿಕರು ಇರುತ್ತಿದ್ದು ಉಳಿದ ಸಮಯಗಳಲ್ಲಿ ನಿರ್ಜನ ಪ್ರದೇಶವಾಗಿರುತ್ತದೆ. ಆದ್ದರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ಮತ್ತೊಂದು ರೈಲು ಮತ್ತು ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಪರ್ಕದ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಈ ಕುರಿತು ಈಗಾಗಲೆ ಸಂಬಂಧಿಸಿದ ಸಚಿವರಿಗೆ ಹಾಗೂ ಸಂಸದರಿಗೂ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಶ್ರೀಧರ ಘೋರ್ಪಡೆ, ಮಂಜುನಾಥ ಮಹಾಲಿಂಗಪೂರ, ಬಸವರಾಜ ಸಾಲಿಮಠ ಸೇರಿದಂತೆ ಅನೇಕರು ಇದ್ದರು.&lt;/p&gt;&lt;img&gt;&lt;p&gt;ಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಕುಡಿಯುವ ನೀರಿನ ಸೌಲಭ್ಯ, ಕಳ್ಳತನ ಪ್ರಕರಣಗಳ ತಡೆಗೆ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಬೇಕಿದೆ, ರೈಲ್ವೆ ಪೊಲೀಸರನ್ನು ನಿಯೋಜಿಸಬೇಕು ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ, ನಿರಂತರ ವಿದ್ಯುತ್ ಒದಗಿಸುವುದು, ಕುಷ್ಟಗಿಯಿಂದ ಹುಬ್ಬಳ್ಳಿಗೆ ಬೆಳಗ್ಗೆ 7 ಗಂಟೆಗೆ ರೈಲು ಓಡಿಸಬೇಕಿದೆ, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮೊದಲನೆ ಪ್ಲಾಟ್ ಫಾರಂಗೆ ನಿಲ್ಲುವಂತೆ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.&lt;/p&gt;&lt;p&gt;ಕುಷ್ಟಗಿ ಬೆಂಗಳೂರು ರೈಲು ಸೇವೆ ಹಾಗೂ ಕುಷ್ಟಗಿ ಹುಬ್ಬಳ್ಳಿ ಇನ್ನೊಂದು ರೈಲು ಸೇವೆ ಜತೆಗೆ ಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಕುರಿತು ಕೊಪ್ಪಳ ಸಂಸದರು ಒತ್ತಾಯಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ತುರ್ತು ಸಭೆ ಮಾಡಿ ಸಾಧಕ ಭಾಧಕ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ತಿಳಿಸಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/demand-mounts-to-extend-bengaluru-hubballi-superfast-express-to-kushtagi-gdp-kiasa7k"/>
        </item>
        <item>
            <title><![CDATA[ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ; ಜೊತೆಯಾಗಿಯೇ ಇಬ್ಬರ ಅಂತ್ಯಕ್ರಿಯೆ]]></title>
            <link>https://kannada.asianetnews.com/karnataka-districts/vijayanagar-gadag-sister-also-has-heart-attack-after-hearing-news-of-her-brother-s-death-both-are-cremated-together-mrq/articleshow-lakd8er</link>
            <guid isPermaLink="true">https://kannada.asianetnews.com/karnataka-districts/vijayanagar-gadag-sister-also-has-heart-attack-after-hearing-news-of-her-brother-s-death-both-are-cremated-together-mrq/articleshow-lakd8er</guid>
            <pubDate>Tue, 02 Jun 2026 08:13:00 +0530</pubDate>
            <description><![CDATA[&lt;p&gt;ಗದಗ ಜಿಲ್ಲೆಯ ಬೂದಿಹಾಳ ಗ್ರಾಮದಲ್ಲಿ ನಡೆದ ದಾರುಣ ಘಟನೆಯಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ಅಕ್ಕನಿಗೆ ಚಿಕಿತ್ಸೆ ಕೊಡಿಸಿ ಮರಳುತ್ತಿದ್ದ ತಮ್ಮ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈ ಸುದ್ದಿ ಕೇಳಿದ ಆಘಾತಕ್ಕೆ ಅಕ್ಕ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt338n0exf5h3cdgm6q7gwnk,imgname-death-1780368036878.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ/ಗದಗ: &lt;/strong&gt;ಅನಾರೋಗ್ಯದಿಂದ ಬಳಲುತ್ತಿದ್ದ ತನಗೆ (ಸಹೋದರಿ) ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಮರಳಿ ತೆರಳುವಾಗ ಬೈಕ್&zwnj; ಅಪಘಾತದಲ್ಲಿ ಸಹೋದರ ಮೃತಪಟ್ಟ ಘಟನೆಯ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತವಾಗಿ ಮೃತಪಟ್ಟ ದಾರುಣ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಭಾನುವಾರ ನಡೆದಿದೆ.&lt;/p&gt;&lt;p&gt;ಹೂವಿನಹಡಗಲಿ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಮ್ಮ (48) ಮೃತ ಮಹಿಳೆ. ಇವರ ತಮ್ಮ ನಿಂಗಪ್ಪ ಇಲ್ಲಿನ ಜೆಸ್ಕಾಂ ಕಚೇರಿಯ ಲೈನ್&zwnj;ಮ್ಯಾನ್&zwnj; ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗದಗ: 101 ವರ್ಷ ಹಳೆಯ ಅಪರೂಪದ ಔಷಧಿ ಗುಣದ ಮಡ್ಡಿ ಮರ ಪತ್ತೆ; ಮಧುಮೇಹ ನಿಯಂತ್ರಣಕ್ಕೆ ರಾಮಬಾಣ&lt;/strong&gt;&lt;/p&gt;&lt;h2&gt;&lt;strong&gt;ಅಪಘಾತದಲ್ಲಿ ತಮ್ಮನ ಸಾವು&lt;/strong&gt;&lt;/h2&gt;&lt;p&gt;ಮಲ್ಲಮ್ಮ ಅನಾರೋಗ್ಯದಿಂದಾಗಿ ಕಳೆದೊಂದು ವಾರದಿಂದ ರಜೆ ಪಡೆದಿದ್ದರು. ಅವರನ್ನು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೂದಿಹಾಳದಲ್ಲಿ ಬಿಟ್ಟು ಬರುವಾಗ ತಾಲೂಕಿನ ಕಾಗನೂರು ಬಳಿ ನಿಂಗಪ್ಪನ ಬೈಕ್&zwnj;ಗೆ ನಾಯಿಯೊಂದು ಅಡ್ಡ ಬಂದು ಬೈಕ್ ಅಪಘಾತವಾಗಿ ಅಸುನೀಗಿದರು. ಸಹೋದರ ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಮಲ್ಲಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಬ್ಬರ ಅಂತ್ಯಕ್ರಿಯೆ ಬೂದಿಹಾಳದಲ್ಲಿ ಭಾನುವಾರ ನಡೆಯಿತು.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Gadag: ಅಪಾಯದಂಚಿನ ಮಾರ್ಗ: ಜೀವ ಪಣಕ್ಕಿಟ್ಟು ಸಾಗುವ 1 ಕಿ.ಮೀ ರಸ್ತೆ ಪಯಣ, ಆಟೋಗಷ್ಟೇ ದಾರಿ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagar-gadag-sister-also-has-heart-attack-after-hearing-news-of-her-brother-s-death-both-are-cremated-together-mrq/articleshow-lakd8er"/>
        </item>
        <item>
            <title><![CDATA[ವಿಂಡ್ ಫ್ಯಾನ್, ಸೋಲಾರ್ ಆದಾಯ ರೈತರಿಗೆ ಸಿಕ್ಕರೆ ಗದಗ ದೇಶದಲ್ಲೇ ನಂ.1: ಸಚಿವ ಎಚ್.ಕೆ.ಪಾಟೀಲ]]></title>
            <link>https://kannada.asianetnews.com/karnataka-districts/gadag-gdp-growth-hk-patil-wind-solar-income-farmers-gvd/articleshow-mg4w613</link>
            <guid isPermaLink="true">https://kannada.asianetnews.com/karnataka-districts/gadag-gdp-growth-hk-patil-wind-solar-income-farmers-gvd/articleshow-mg4w613</guid>
            <pubDate>Tue, 26 May 2026 19:45:48 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ಜಿಲ್ಲೆಗಳ ನೈಸರ್ಗಿಕ ಸಂಪನ್ಮೂಲಗಳಿಂದ ಸಿಗುವ ಆದಾಯ ಸ್ಥಳೀಯ ರೈತರಿಗೆ ದೊರೆತಿಲ್ಲ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpa1nj39qnqjbg1k3cs1nfvn,imgname-----------------------2026-04-16t075418.441-1776306276457.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಮೇ.26):&lt;/strong&gt; ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ಜಿಲ್ಲೆಗಳ ನೈಸರ್ಗಿಕ ಸಂಪನ್ಮೂಲಗಳಿಂದ ಸಿಗುವ ಆದಾಯ ಸ್ಥಳೀಯ ರೈತರಿಗೆ ದೊರೆತಿಲ್ಲ. ಜಿಲ್ಲೆಯಲ್ಲಿರುವ ವಿಂಡ್ ಫ್ಯಾನ್ ಹಾಗೂ ಸೋಲಾರ್ ವಿದ್ಯುತ್ ಘಟಕಗಳಿಂದ ಲಭಿಸುವ ಆದಾಯ ರೈತರಿಗೆ ಸಿಗುವಂತಾದರೆ ಜಿಲ್ಲೆಯ ಜಿಡಿಪಿ ದೇಶದಲ್ಲೇ 5 ಅಥವಾ 6ನೇ ಸ್ಥಾನಕ್ಕೆ ಏರಿಕೆಯಾಗುವ ಸಾಮರ್ಥ್ಯ ಹೊಂದಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.&lt;/p&gt;&lt;p&gt;ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಸಮಿತಿ ಹಾಗೂ 2027- 28ನೇ ಸಾಲಿನ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನರ ಯೋಜನೆ ರೂಪಿಸುವ ಕುರಿತು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿ ಗದಗ ಹೆಸರು ಇಲ್ಲದಿರಬಹುದು. ಆದರೆ ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳಲ್ಲಿ ಸಾಲಿನಲ್ಲಿ ಗದಗ ಜಿಲ್ಲೆ ನಂಬರ್ 1 ಸ್ಥಾನದಲ್ಲಿರಲಿದೆ ಎಂದರು.&lt;/p&gt;&lt;h2&gt;&lt;strong&gt;ದೊಡ್ಡ ಉತ್ತೇಜನ&lt;/strong&gt;&lt;/h2&gt;&lt;p&gt;ಸಭೆಯಲ್ಲಿ ಜಲತಜ್ಞ ರಾಜೇಂದ್ರ ಸಿಂಗ್ ಮಾತನಾಡಿ, 1992ರ ಮೊದಲು ದೇಶದಲ್ಲಿ ಪರಿಸರ ಹಾಗೂ ಸಂಸ್ಕೃತಿಯನ್ನು ಒಳಗೊಂಡ ಅಭಿವೃದ್ಧಿ ಮಾದರಿ ಇತ್ತು. ಈಗ ಅಭಿವೃದ್ಧಿ ಎಂಬುದು ಕೇವಲ ಮೂಲ ಸೌಕರ್ಯ ನಿರ್ಮಾಣಕ್ಕೆ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜಸ್ಥಾನದ ಅನೇಕ ಜಿಲ್ಲೆಗಳಿಗಿಂತ ಗದಗ ಭಾಗದಲ್ಲಿ ಮಳೆಯ ಪ್ರಮಾಣ ಉತ್ತಮವಾಗಿದೆ. ಹೀಗಾಗಿ ಇಲ್ಲಿನ ಮಣ್ಣು ಹಾಗೂ ನೀರನ್ನು ಸಂರಕ್ಷಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಉತ್ತೇಜನ ಸಿಗುತ್ತದೆ ಎಂದರು.&lt;/p&gt;&lt;p&gt;ಸಿರಿಧಾನ್ಯಗಳ ಮಹತ್ವ ಕುರಿತು ಮಾತನಾಡಿದ ಡಾ. ಖಾದರ ಅವರು, ಜನರಿಗೆ ಅಕ್ಕಿ ನೀಡುವ ಬಗ್ಗೆ ಮಾತ್ರ ಸರ್ಕಾರಗಳು ಯೋಚಿಸುತ್ತಿವೆ. ಆದರೆ ಅಕ್ಕಿ ಬೆಳೆಯುವ ಮಣ್ಣಿನ ಸಂರಕ್ಷಣೆ ಕುರಿತು ಚರ್ಚೆಯಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಹಸಿರು ಕ್ರಾಂತಿಯ ನಂತರ ವಿಶ್ವದ ಶೇ. 42ರಷ್ಟು ಭೂಮಿ ಬರಡಾಗಿದೆ. ಕಾರ್ಪೊರೇಟ್ ಕಂಪನಿಗಳ ಪ್ರಭಾವದಿಂದ ಕರ್ನಾಟಕದಲ್ಲಿ ಪಂಜಾಬ್&zwnj;ಗಿಂತಲೂ ಹೆಚ್ಚು ಗೋದಿ ಸೇವನೆ ನಡೆಯುತ್ತಿದೆ ಎಂದ ಅವರು, ನಮ್ಮ ಆಹಾರವನ್ನು ನಾವೇ ಬೆಳೆದು ಸೇವಿಸುವಂತಾದಾಗ ಮಾತ್ರ ಸ್ವಾಭಿಮಾನಿ ಬದುಕು ಸಾಧ್ಯ. ಇದರಿಂದ ನಾವು ರೋಗ ಮುಕ್ತರಾಗಲು ಕೂಡಾ ಸಾಧ್ಯವಿದೆ. ವೈದ್ಯರು, ಔಷಧ ಗುಳಿಗೆಗಳಿಗೆ ಖರ್ಚು ಮಾಡುವ ಹಣವೆಲ್ಲ ಉಳಿಯುತ್ತದೆ ಎಂದರು.&lt;/p&gt;]]></content:encoded>
            <category>gadag</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/gadag-gdp-growth-hk-patil-wind-solar-income-farmers-gvd/articleshow-mg4w613"/>
        </item>
        <item>
            <title><![CDATA[ಘಟಪ್ರಭಾ ಕುಷ್ಟಗಿ ರೈಲ್ವೆ ಮಾರ್ಗ ಆರಂಭಿಸಲು ಆಗ್ರಹ: ಸಚಿವ ಜೋಶಿ ನೀಡಿದ ಭರವಸೆ ಏನು?]]></title>
            <link>https://kannada.asianetnews.com/karnataka-districts/demand-to-start-ghataprabha-kushtagi-railway-line-what-is-the-promise-made-by-minister-pralhad-joshi-mrq/articleshow-nawspys</link>
            <guid isPermaLink="true">https://kannada.asianetnews.com/karnataka-districts/demand-to-start-ghataprabha-kushtagi-railway-line-what-is-the-promise-made-by-minister-pralhad-joshi-mrq/articleshow-nawspys</guid>
            <pubDate>Tue, 09 Jun 2026 07:00:58 +0530</pubDate>
            <description><![CDATA[&lt;p&gt;ಹೋರಾಟದ ನಾಡು ನರಗುಂದಕ್ಕೆ ಘಟಪ್ರಭಾದಿಂದ ಕುಷ್ಟಗಿಯವರೆಗೆ ಹೊಸ ರೈಲ್ವೆ ಮಾರ್ಗವನ್ನು ಪ್ರಾರಂಭಿಸಬೇಕೆಂದು ರೈಲ್ವೆ ಹೋರಾಟ ಸಮಿತಿಯು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿತು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktmzyzmd39ap2e1mfxw0cnx8,imgname-pralhad-joshi-1780968554125.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ಉತ್ತರ ಕರ್ನಾಟಕದಲ್ಲಿ ಹೋರಾಟದ ನಾಡು ಎಂದು ಕರೆಯುವ ನರಗುಂದಕ್ಕೆ ಹೊಸ ರೈಲ್ವೆ ಮಾರ್ಗ ಪ್ರಾರಂಭ ಮಾಡಬೇಕೆಂದು ರೈಲ್ವೆ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಚನ್ನು ನಂದಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.&lt;/p&gt;&lt;p&gt;ಭಾನುವಾರ ಪಟ್ಟಣದ ಶಾಸಕ ಸಿ.ಸಿ. ಪಾಟೀಲರ ನಿವಾಸಕ್ಕೆ ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ನೀಡಿ ಮಾತನಾಡಿ, 1857ರಲ್ಲಿ ಈ ಭಾಗದ ವೀರ ಬಾಬಾಸಾಹೇಬರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. 1980ರಲ್ಲಿ ರೈತ ವಿರೋಧಿ ಸರ್ಕಾರಗಳ ವಿರುದ್ಧ ರೈತರು ರೈತ ಹೋರಾಟ ಮಾಡಿದ ನಾಡು ನರಗುಂದವಾಗಿದೆ.&lt;/p&gt;&lt;h2&gt;&lt;strong&gt;ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣ&lt;/strong&gt;&lt;/h2&gt;&lt;p&gt;ಮೇಲಾಗಿ ಕರ್ನಾಟಕ ಕೇಸರಿ ಎಂದು ಕರೆಯುವ ಜಗನ್ನಾಥರಾವ ಜೋಶಿ ಅವರ ಜನ್ಮಸ್ಥಳವಾಗಿದೆ. ಈ ಭಾಗದಲ್ಲಿ ಪ್ರಸಿದ್ಧ ದೇವಾಲಯಗಳಾದ ಯಲ್ಲಮ್ಮನಗುಡ್ಡ, ಗೊಡಚಿ ವೀರಭದ್ರಶ್ವರ ದೇವಸ್ಥಾನ, ರೋಣ ತಾಲೂಕಿನ ಇಟಗಿ ಭೀಮಾಂಬಿಕಾದೇವಿ ದೇವಸ್ಥಾನಗಳಿಗೆ ಪ್ರತಿವರ್ಷ ಲಕ್ಷಾಂತರ ಭಕ್ತರು ಬರುತ್ತಾರೆ.&lt;/p&gt;&lt;p&gt;ಸದ್ಯ ನರಗುಂದವು ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಘಟಪ್ರಭಾದಿಂದ ನರಗುಂದ ಮಾರ್ಗವಾಗಿ ಕುಷ್ಟಗಿಯವರೆಗೆ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ಮನವಿ ಮಾಡಿದರು.&lt;/p&gt;&lt;p&gt;ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರೈಲ್ವೆ ಹೋರಾಟಗಾರರ ಮನವಿ ಸ್ವೀಕರಿಸಿ, ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ ಎಂದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಶಾಸಕ ಸಿ.ಸಿ. ಪಾಟೀಲ, ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳಾದ ರಾಘವೇಂದ್ರ ಗುಜಮಾಗಡಿ, ನಾಗೇಶ ಅಪೋಜಿ, ಜೆ.ಆರ್. ಕದಂ, ಮಾರುತಿ ಭೋಸಲೆ, ವಿಠಲ ಮುಧೋಳೆ, ವಾಸು ಜೋಗಣ್ಣವರ, ಶಿವಾನಂದ ಮುತ್ತವಾಡ, ಉಮೇಶಗೌಡ ಪಾಟೀಲ, ಇದ್ದರು.&lt;/p&gt;&lt;h3&gt;&lt;strong&gt;ಪ್ರತಿಭಾ ಪುರಸ್ಕಾರ: ನಾಳೆ ಪೂರ್ವಭಾವಿ ಸಭೆ&lt;/strong&gt;&lt;/h3&gt;&lt;p&gt;ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ತಾಲೂಕು ಘಟಕದ ಆಶ್ರಯದಲ್ಲಿ ಎಸ್&zwnj;ಎಸ್&zwnj;ಎಲ್&zwnj;ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆ ಹೊಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮವನ್ನು ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ತುಳಿ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ.&lt;/p&gt;&lt;p&gt;ಜೂ. ೧೦ರಂದು ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾ ಭವನದಲ್ಲಿ ಮಧ್ಯಾಹ್ನ ೩ ಗಂಟೆಗೆ ಈ ಕಾರ್ಯಕ್ರಮದ ಕುರಿತು ಚರ್ಚಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ. ತಾಲೂಕಿನ ಕಮಿಟಿಯ ಎಲ್ಲ ಪದಾಧಿಕಾರಿಗಳು, ಸಮಾಜದ ಹಿರಿಯರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಲಹೆ. ಸೂಚನೆ ನೀಡಬೇಕು ಎಂದು ಸಂಘದ ಕಾರ್ಯದರ್ಶಿ ಶರಣಪ್ಪ ಹೊಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/demand-to-start-ghataprabha-kushtagi-railway-line-what-is-the-promise-made-by-minister-pralhad-joshi-mrq/articleshow-nawspys"/>
        </item>
        <item>
            <title><![CDATA[ಗದಗ ಬೈಪಾಸ್ ಎಫೆಕ್ಟ್? ನಾವು ಹೋಗಬೇಕಲ್ವಾ ? ನಾವೇನು ಮಾಡೋದು? ರೈಲು ಪ್ರಯಾಣಿಕರ ಆಕ್ರೋಶ]]></title>
            <link>https://kannada.asianetnews.com/karnataka-districts/indian-railways-no-16535-16536-mysuru-pandharpur-gol-gumbaz-express-diverted-from-gadag-bypass-passengers-outraged-mrq/articleshow-p4uyygi</link>
            <guid isPermaLink="true">https://kannada.asianetnews.com/karnataka-districts/indian-railways-no-16535-16536-mysuru-pandharpur-gol-gumbaz-express-diverted-from-gadag-bypass-passengers-outraged-mrq/articleshow-p4uyygi</guid>
            <pubDate>Tue, 23 Jun 2026 13:02:06 +0530</pubDate>
            <description><![CDATA[ಮೈಸೂರು-ಪಂಢರಪುರ ಗೋಲ್ ಗುಂಬಜ್ ಎಕ್ಸ್&zwnj;ಪ್ರೆಸ್ ರೈಲನ್ನು ಗದಗ ಬೈಪಾಸ್ ಮೂಲಕ ಸಂಚರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ನಿರ್ಧಾರದಿಂದ ಪಂಢರಪುರಕ್ಕೆ ಹೋಗುವ ಭಕ್ತರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsp1aqyprych72hgbtv30zq,imgname-gadag-railway-station-1782199659262.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಕುಮಾರ ಕುಷ್ಟಗಿ&lt;/strong&gt;&lt;/p&gt;&lt;p&gt;&lt;strong&gt;ಗದಗ: &lt;/strong&gt;ವಿಜಯಪುರ, ಯಶವಂತಪುರ ನಂತರ ಈಗ ಮೈಸೂರು, ಪಂಢರಪುರ ಗೋಲ್ ಗುಂಬಜ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16535/36) ಸಂಚಾರವನ್ನೂ ಗದಗ ಮತ್ತು ಹುಬ್ಬಳ್ಳಿ ಬೈಪಾಸ್ ಮೂಲಕ ಕಾರ್ಯಾಚರಣೆ ನಡೆಸಲು ರೈಲ್ವೆ ಇಲಾಖೆ ಅಣಿಯಾಗುತ್ತಿದ್ದು, ಆ ಮೂಲಕ ಗದಗ ಜಿಲ್ಲೆಯ ಜನರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ.&lt;/p&gt;&lt;p&gt;ಪಂಢರಪುರದ ವಿಠ್ಠಲನ ದರ್ಶನಕ್ಕೆ ಹೋಗುವ ಸಾವಿರಾರು ಭಕ್ತರಿಗೆ ಈ ರೈಲು ಆಸರೆಯಾಗಿತ್ತು. ಆದರೆ, ಈಗ ತರಾತುರಿಯಲ್ಲಿ ಈ ರೈಲನ್ನು ಮುಖ್ಯ ನಿಲ್ದಾಣಗಳ ಬದಲಿಗೆ ಬೈಪಾಸ್ ಲೈನ್ ಮೂಲಕ ಓಡಿಸಲು ನಿರ್ಧರಿಸಿರುವುದು ಯಾವ ಉದ್ದೇಶಕ್ಕಾಗಿ ಮತ್ತು ಯಾರ ಹಿತಕ್ಕಾಗಿ ಎನ್ನುವುದನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ.&lt;/p&gt;&lt;p&gt;ಇತ್ತೀಚೆಗಷ್ಟೇ ಆರಂಭವಾದ ವಿಜಯಪುರ, ಯಶವಂತಪುರ ರೈಲು ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಸಂಚರಿಸುವಾಗ ಗದಗ ಬೈಪಾಸ್ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಅದನ್ನು ರದ್ದುಗೊಳಿಸಿದ್ದ ಇಲಾಖೆ ಈಗ ಪಂಢರಪುರ, ಮೈಸೂರು ರೈಲಿಗೆ ಗದಗ ಮತ್ತು ಹುಬ್ಬಳ್ಳಿ ಬೈಪಾಸ್ ನಲ್ಲಿ ಮಾತ್ರ ನಿಲುಗಡೆಗೆ ಅವಕಾಶ ನೀಡಿದೆ. ಆದರೆ, ಬೈಪಾಸ್ ರೈಲು ನಿಲ್ದಾಣಗಳಿಗೆ ತಲುಪಲು ಸಾರ್ವಜನಿಕರಿಗೆ ಸಾಧ್ಯವಾಗದ ಸ್ಥಿತಿ ಇದೆ. ಇದು ಇಲಾಖೆ ಅಧಿಕಾರಿಗಳಿಗೆ ಯಾಕೆ ಗೊತ್ತಾಗುತ್ತಿಲ್ಲ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ.&lt;/p&gt;&lt;h2&gt;&lt;strong&gt;ಕಿಂಚಿತ್ತು ಗಮನ ನೀಡದ ಸಂಸದರು&lt;/strong&gt;&lt;/h2&gt;&lt;p&gt;ಹಾವೇರಿ-ಗದಗ ಸಂಸದರಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ನಂತರ ರೈಲು ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ಸಿಗುತ್ತದೆ. ಇವರು ಮಾಜಿ ಸಿಎಂ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ಪ್ರಧಾನಿ ಮೋದಿ ಅವರೊಂದಿಗೆ ಬೊಮ್ಮಾಯಿ ಅತ್ಯಂತ ಆತ್ಮೀಯ ಸಂಪರ್ಕ ಹೊಂದಿದ್ದಾರೆ. ಇದನ್ನು ಬಳಕೆ ಮಾಡಿಕೊಂಡು ಗದಗ ಜಿಲ್ಲೆಯ ಜನತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದರು ಜಿಲ್ಲೆಯ ಜನತೆ. ಸಧ್ಯ ಸಂಸದರು ಜಿಲ್ಲೆಯ ರೈಲು ಬಳಕೆದಾರರ ಸಮಸ್ಯೆಗಳಿಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ ಎನ್ನುವ ಬೇಸರ ಜನ ವ್ಯಕ್ತಪಡಿಸುತ್ತಾರೆ.&lt;/p&gt;&lt;p&gt;ಗದಗ ಬೈಪಾಸ್ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕ ರೈಲುಗಳನ್ನು ನಿಲ್ಲಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಆರಂಭದಿಂದಲೂ ಜನರಿಗೆ ಭರವಸೆ ನೀಡುತ್ತ ಬಂದಿತ್ತು. ವಿಜಯಪುರ-ಯಶವಂತಪುರ ರೈಲು ಸಂಚಾರದ ವೇಳೆಯೂ ಇದೇ ಮಾತನ್ನು ಪುನರುಚ್ಚರಿಸಿತ್ತು. ಆದರೆ, ಕೊಟ್ಟ ಮಾತಿಗೆ ತಪ್ಪಿ ಕೆಲವೇ ದಿನಗಳಲ್ಲಿ ಹೊಸ ರೈಲನ್ನು ಇದೇ ಮಾರ್ಗದಲ್ಲಿ ಓಡಿಸುತ್ತಿದೆ. ಇದರಿಂದ ಕೇವಲ ಗದಗ ಜಿಲ್ಲೆ ಮಾತ್ರವಲ್ಲ ಅಕ್ಕ ಪಕ್ಕದ ಜಿಲ್ಲೆಯ ನಿತ್ಯವೂ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ರೈಲ್ವೆ ಹೋರಾಟಗಾರ ಗಣೇಶಸಿಂಗ್ ಬ್ಯಾಳಿ ಹೇಳಿದರು.&lt;/p&gt;&lt;p&gt;ಈ ಬಗ್ಗೆ ನೈಋತ್ಯ ರೈಲ್ವೆ ವಲಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರೈಲ್ವೆ ಮಂಡಳಿ ಆದೇಶ ಈಗಷ್ಟೆ ಬಂದಿದೆ ಎಂದು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ಪಿ.ಆರ್.ಓ. ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indian-railways-no-16535-16536-mysuru-pandharpur-gol-gumbaz-express-diverted-from-gadag-bypass-passengers-outraged-mrq/articleshow-p4uyygi"/>
        </item>
        <item>
            <title><![CDATA[ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು: ಗಜೇಂದ್ರಗಡ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ!]]></title>
            <link>https://kannada.asianetnews.com/karnataka-districts/gadag-mass-construction-work-undertaken-under-narega-project-was-successful-in-gajendragad-s-13-gram-panchayat-mrq/articleshow-p6o0gvw</link>
            <guid isPermaLink="true">https://kannada.asianetnews.com/karnataka-districts/gadag-mass-construction-work-undertaken-under-narega-project-was-successful-in-gajendragad-s-13-gram-panchayat-mrq/articleshow-p6o0gvw</guid>
            <pubDate>Wed, 10 Jun 2026 07:40:09 +0530</pubDate>
            <description><![CDATA[ಗಜೇಂದ್ರಗಡ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಿಂದಾಗಿ, ಇತ್ತೀಚಿನ ಮಳೆಗೆ ಸಾವಿರಾರು ಕಂದಕಗಳು ಜಲಾವೃತಗೊಂಡಿವೆ. ಇದು ಮಣ್ಣಿನ ಸವಕಳಿಯನ್ನು ತಡೆಯುವುದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktqmaxk3vdxhtbs4rdtppvqj,imgname-gajendragad-nrega-1781057025635.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಸ್.ಎಂ. ಸೈಯದ್&lt;/strong&gt;&lt;/p&gt;&lt;p&gt;&lt;strong&gt;ಗದಗ: &lt;/strong&gt;ಗಜೇಂದ್ರಗಡ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿದ್ದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಪರಿಣಾಮ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಕಂದಕಗಳು ತುಂಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.&lt;/p&gt;&lt;p&gt;ತಾಲೂಕಿನಾದ್ಯಂತ ಮೇ ಮತ್ತು ಜೂನ್ ತಿಂಗಳಲ್ಲಿ &quot;ವಲಸೆ ಯಾಕೆ ನಿಮ್ಮೂರಲ್ಲಿಯೇ ಕೆಲಸ&quot; ಅಭಿಯಾನದಡಿ 13 ಗ್ರಾಪಂಗಳಲ್ಲಿ ಕೈಗೊಂಡಿದ್ದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ರೈತ ಕಾರ್ಮಿಕರಿಗೆ ಕೆಲಸ ಕೊಡುವುದರ ಜತೆಗೆ ಜಮೀನುಗಳಲ್ಲಿ ಬದು ನಿರ್ಮಿಸಿಕೊಂಡಿದ್ದರು. ಪರಿಣಾಮ ಸದ್ಯ ಮಳೆ ನೀರು ಬದು ಬದಿಯ ಕಂದಕಗಳಲ್ಲಿ ತುಂಬಿ ಹರಿಯುತ್ತಿವೆ.&lt;/p&gt;&lt;p&gt;ತಾಲೂಕಿನ ಶಾಂತಗೇರಿ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅನುಮೋದನೆಗೊಂಡ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾರ್ಯ ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಬದು ನಿರ್ಮಾಣ ಕಾಮಗಾರಿ ಅಂದಾಜು 9 ಲಕ್ಷ ರು. ಮೊತ್ತದಲ್ಲಿ 2675 ಮಾನವ ದಿನಗಳ ಸೃಜಿಸಿ, ಬರೊಬ್ಬರಿ 1337ಕ್ಕೂ ಅಧಿಕ ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು!&lt;/strong&gt;&lt;/h2&gt;&lt;p&gt;ಶಾಂತಗೇರಿ ಗ್ರಾಮದಲ್ಲಿ ಈಗಾಗಲೇ 5350 ಕಂದಕಗಳನ್ನು ನಿರ್ಮಾಣ ಮಾಡಿದ್ದು, ಭಾನುವಾರ, ಸೋಮವಾರ ಸುರಿದ ಮಳೆಯಿಂದಾಗಿ ಕಂದಕಗಳು ಭರ್ತಿಯಾಗಿವೆ. 95 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 456 ಜನ ಅಕುಶಲ ಕೂಲಿಕಾರರು ಸೇರಿ ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ಕೆಲಸ ಮಾಡಿದ್ದಾರೆ. 5350 ಕಂದಕಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಜಮೀನಿನ ಸುತ್ತ ಬದು ನಿರ್ಮಾಣವಾಗಿದೆ. ಮಳೆಯಿಂದ ನೀರು ಭೂಮಿಯಲ್ಲಿ ಇಂಗಿದ ನಂತರ ಕಂದಕಗಳಲ್ಲಿ ಸಂಗ್ರಹಗೊಂಡಿವೆ. ಇದರಿಂದಾಗಿ ತಮ್ಮ ಜಮೀನಿನಲ್ಲಿನ ಮಣ್ಣಿನ ಸವಕಳಿ ತಪ್ಪಿದೆ. ಬದುವಿನ ಹತ್ತಿರ ಕಂದಕಗಳನ್ನು ನಿರ್ಮಾಣ ಮಾಡಿದ್ದರಿಂದ ಬದು ಬೇಸಾಯ ಮಾಡಲು ಉಪಯುಕ್ತವಾಗಲಿದೆ.&lt;/p&gt;&lt;h3&gt;&lt;strong&gt;ಎಲ್ಲೆಲ್ಲಿ ಕಂದಕಗಳಲ್ಲಿ ನೀರು?&lt;/strong&gt;&lt;/h3&gt;&lt;p&gt;ತಾಲೂಕಿನ ರಾಜೂರು, ಸೂಡಿ, ಕುಂಟೋಜಿ, ರಾಂಪೂರು, ನಿಡಗುಂದಿ, ಇಟಗಿ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಯೋಜನೆ ರೂಪಿಸಿ ಭೌಗೊಳಿಕವಾಗಿ ಮೇಲ್ಮಟ್ಟದಿಂದ ಕೆಳಮಟ್ಟದವರೆಗೂ ಹಂತ- ಹಂತವಾಗಿ ಜಮೀನಿನಲ್ಲಿ ಸಾಮೂಹಿಕ ಬದು ನಿರ್ಮಾಣ ಕಾರ್ಯ ನಡೆಸಲಾಗಿದೆ. ಹೀಗಾಗಿ ಮುಂಗಾರು ಬಿತ್ತನೆಯಲ್ಲಿ ಮಗ್ನವಾಗಿರುವ ರೈತರಿಗೆ ಜಮೀನುಗಳಲ್ಲಿ ನಿಂತ ಮಳೆ ನೀರು ಹರ್ಷ ತಂದಿದೆ.&lt;/p&gt;&lt;h3&gt;&lt;strong&gt;ಮಳೆನೀರು ಸಂಗ್ರಹ&lt;/strong&gt;&lt;/h3&gt;&lt;p&gt;ನರೇಗಾ ಯೋಜನೆಯಡಿ ಬದು ನಿರ್ಮಾಣ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಾರಂಭಗೊಂಡಿವೆ. ಕೂಲಿಕಾರರು ರೈತರ ಜಮೀನಿನಲ್ಲಿ ಕಂದಕ ಬದುಗಳನ್ನು ನಿರ್ಮಾಣ ಮಾಡಿದ್ದರಿಂದ ಮುಂಗಾರು ಹಂಗಾಮಿನ ಮಳೆಗೆ ಕಂದಕಗಳಲ್ಲಿ ಮಳೆನೀರು ಸಂಗ್ರಹವಾಗಿದೆ. ಸರ್ಕಾರದ ಯೋಜನೆ ಈಡೇರಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಶರಣಪ್ಪ ನರೇಗಲ್ ಸಂತಸ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಜೇಂದ್ರಗಡದಲ್ಲಿ 'ಥರ್ಡ್ ಐ' ತಪ್ಪಿಸಲು ವಾಹನ ಸವಾರರ ವಾಮಮಾರ್ಗ! ಸಫಲವಾಗದ ಸುಗಮ ಸಂಚಾರ&lt;/strong&gt;&lt;/p&gt;&lt;p&gt;ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಯೋಜನೆ ರೂಪಿಸಿ ಭೌಗೊಳಿಕವಾಗಿ ಮೇಲ್ಮಟ್ಟದಿಂದ ಸಮುದಾಯ ಬದು ನಿರ್ಮಾಣ ಮಾಡಲಾಗುವುದು. ಬೇಸಿಗೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವುದರ ಜತೆಗೆ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕಂದಕದಲ್ಲಿ ಮಳೆನೀರು ತುಂಬಿರುವುದು ಯೋಜನೆ ಯಶಸ್ವಿಯಾಗಿದೆ &amp;nbsp;ಎಂದು ಗಜೇಂದ್ರಗಡ ತಾ.ಪಂ. ಇಒ &amp;nbsp;ಚಂದ್ರಶೇಖರ ಬಿ. ಕಂದಕೂರು ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Gadag: ಜಲಸಂಕಷ್ಟಕ್ಕೆ ಮುಕ್ತಿ; ಬರೋಬ್ಬರಿ ₹115 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮಹಾ ಯೋಜನೆ&lt;/strong&gt;&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-mass-construction-work-undertaken-under-narega-project-was-successful-in-gajendragad-s-13-gram-panchayat-mrq/articleshow-p6o0gvw"/>
        </item>
        <item>
            <title><![CDATA[15,500 ಅಡಿ ಎತ್ತರದ ಶಿಖರ ಏರಿದ ಸೃಷ್ಟಿ ಮೇಟಿ; ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ]]></title>
            <link>https://kannada.asianetnews.com/karnataka-districts/gadag-ncc-cadet-srishti-meti-a-student-from-jakkali-village-has-scaled-a-15500-foot-peak-mfq/articleshow-qzo8xqp</link>
            <guid isPermaLink="true">https://kannada.asianetnews.com/karnataka-districts/gadag-ncc-cadet-srishti-meti-a-student-from-jakkali-village-has-scaled-a-15500-foot-peak-mfq/articleshow-qzo8xqp</guid>
            <pubDate>Mon, 22 Jun 2026 06:32:14 +0530</pubDate>
            <description><![CDATA[ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಉಮೇಶ್ ಮೇಟಿ ಅವರು ಉತ್ತರಾಖಂಡದಲ್ಲಿ 15,500 ಅಡಿ ಎತ್ತರದ ಹುರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ. ಎನ್&zwnj;ಸಿಸಿ ಕೆಡೆಟ್ ಆಗಿರುವ ಅವರು, ಶಿಖರದ ತುದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ತಮ್ಮ ಗ್ರಾಮ, ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvpdfyjs74mr4cmwgxxrn6hg,imgname-srishti-meti-1782090037849.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ: &lt;/strong&gt;ಉತ್ತರಾಖಂಡದ ಉತ್ತರ ಕಾಶಿಯಲ್ಲಿರುವ ನೆಹರು ಇನ್&zwnj;ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್(ಎನ್&zwnj;ಐಎಂ) ವತಿಯಿಂದ ಆಯೋಜಿಸಿದ್ದ ಪ್ರತಿಷ್ಠಿತ ಪರ್ವತಾರೋಹಣ ಶಿಬಿರದಲ್ಲಿ ಭಾಗವಹಿಸಿದ್ದ ಸಮೀಪದ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಉಮೇಶ್ ಮೇಟಿ ಅವರು 15500 ಅಡಿ ಎತ್ತರದ ಹುರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ಸಾಹಸ, ಸಾಧನೆ ಮೆರೆದಿದ್ದಾರೆ.&lt;/p&gt;&lt;h2&gt;&lt;strong&gt;ಎನ್&zwnj;ಸಿಸಿ ಘಟಕದ ಕೆಡೆಟ್ ಸೃಷ್ಟಿ&lt;/strong&gt;&lt;/h2&gt;&lt;p&gt;ಗದುಗಿನ ಜೆಟಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಹಾಗೂ 38 ಕೆಎಆರ್ ಬಿಎನ್ ಎನ್&zwnj;ಸಿಸಿ ಘಟಕದ ಕೆಡೆಟ್ ಆಗಿರುವ ಸೃಷ್ಟಿ ಅವರು ಶಿಖರದ ತುದಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುವ ಮೂಲಕ ದೇಶಭಕ್ತಿ, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಅನಾವರಣಗೊಳಿಸಿದ್ದಾರೆ. ಸಾಧನೆಯ ಮೂಲಕ ಅವರು ತಮ್ಮ ಕಾಲೇಜು, ಕೆಎಲ್ಇ ಸಂಸ್ಥೆ, ಗದಗ ಜಿಲ್ಲೆ ಹಾಗೂ ಜಕ್ಕಲಿ ಗ್ರಾಮಕ್ಕೆ ವಿಶೇಷ ಕೀರ್ತಿ ತಂದಿದ್ದಾರೆ.&lt;/p&gt;&lt;p&gt;ಸೃಷ್ಟಿ ಅವರ ಈ ಅಪೂರ್ವ ಸಾಧನೆಗೆ ಜೆಟಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್&zwnj;ಸಿಸಿ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಶಿಖರಗಳನ್ನು ಏರಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-ncc-cadet-srishti-meti-a-student-from-jakkali-village-has-scaled-a-15500-foot-peak-mfq/articleshow-qzo8xqp"/>
        </item>
        <item>
            <title><![CDATA[ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತವನ್ನು ಮುನ್ನಡೆಸಬಲ್ಲವರು ಮೋದಿ ಮಾತ್ರ: ಸಂಸದ ಬೊಮ್ಮಾಯಿ]]></title>
            <link>https://kannada.asianetnews.com/karnataka-districts/basavaraj-bommai-says-modi-essential-for-viksit-bharat-2047-gvd/articleshow-x8ogfl4</link>
            <guid isPermaLink="true">https://kannada.asianetnews.com/karnataka-districts/basavaraj-bommai-says-modi-essential-for-viksit-bharat-2047-gvd/articleshow-x8ogfl4</guid>
            <pubDate>Thu, 11 Jun 2026 22:57:58 +0530</pubDate>
            <description><![CDATA[&lt;p&gt;ಯುದ್ಧದಿಂದಾಗಿ ಉಂಟಾಗಿರುವ ಜಾಗತಿಕ ಬಿಕ್ಕಟ್ಟಿನಿಂದ ಭಾರತಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನಡೆಸುವಂತ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಇದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j2p4510rqpbn68jenf8jms4h,imgname-basavaraj-bommai--5-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗದಗ (ಜೂ.11): &lt;/strong&gt;ಪ್ರಸ್ತುತ ಜಗತ್ತು ಎದುರಿಸುತ್ತಿರುವ ಯುದ್ಧದಿಂದಾಗಿ ಉಂಟಾಗಿರುವ ಜಾಗತಿಕ ಬಿಕ್ಕಟ್ಟಿನಿಂದ ಭಾರತಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನಡೆಸುವಂತ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಇದೆ. 2047ರಲ್ಲಿ ಆತ್ಮನಿರ್ಭರ ಭಾರತ, ವಿಕಸಿತ ಭಾರತ ಆಗಲು ನರೇಂದ್ರ ಮೋದಿಯವರ ಅವಶ್ಯಕತೆ ಬಹಳ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.&lt;/p&gt;&lt;p&gt;ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿಗಳಾಗಿ 4399 ದಿನ ಪೂರೈಸಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದ ಹಿನ್ನೆಲೆ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.&lt;/p&gt;&lt;p&gt;ದೇಶವೇ ಮೆಚ್ಚಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಪ್ರತಿಮ ನಾಯಕರು. ಪ್ರಧಾನಮಂತ್ರಿಯಾಗಿ 12 ವರ್ಷ ಪೂರೈಸಿದ್ದಾರೆ. ಅತಿ ಹೆಚ್ಚು ಅವಧಿಗೆ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ ಎನ್ನುವ ದಾಖಲೆ ಮಾಡಿದ್ದಾರೆ. ಆಧುನಿಕ ಕಾಲದಲ್ಲಿ ಇಷ್ಟೊಂದು ಜನಜಾಗೃತಿಯಾಗಿರುವ ಸಂದರ್ಭದಲ್ಲಿ ಸುದೀರ್ಘವಾಗಿ ದೇಶವನ್ನು ಮುನ್ನಡೆಸುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು.&lt;/p&gt;&lt;p&gt;ಜನರ ಹಿತಕ್ಕಾಗಿ ದಿನಕ್ಕೆ 18 ತಾಸು ಕೆಲಸ ಮಾಡಿದ್ದಾರೆ. ನಿರಂತರ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರು ಮಾಡಿರುವ ಹಲವಾರು ಯೋಜನೆಗಳು ಭಾರತವನ್ನು ವಿಶ್ವದಲ್ಲಿಯೇ ಮೂರನೇ ಆರ್ಥಿಕ ಶಕ್ತಿಯಾಗಿ ತೆಗೆದುಕೊಂಡು ಹೋಗಿದೆ. ಭಾರತದ ಅಭಿವೃದ್ಧಿಯಲ್ಲಿ ಅತ್ಯಂತ ಕೆಳವರ್ಗದವರೂ ಅದರ ಲಾಭ ಮುಟ್ಟುವಂತೆ ಮಾಡಿದ್ದಾರೆ ಎಂದರು.&lt;/p&gt;&lt;p&gt;ಬಡವರಿಗೆ ಮನೆಗಳನ್ನು ನೀಡುವ ಮುಖಾಂತರ ಆರೋಗ್ಯ ವಿಮೆ, ಶಿಕ್ಷಣ, ಉದ್ಯೋಗ ಕೊಡುವ ಮುಖಾಂತರ ಅವರು ಮೂರು ಕೆಲಸಗಳನ್ನು ಬಹಳ ಸ್ಪಷ್ಟವಾಗಿ ಮಾಡಿದ್ದಾರೆ. ಜನಸಾಮಾನ್ಯರು, ಬಡವರು, ದೀನದಲಿತರಿಗೆ, ಹೆಣ್ಣುಮಕ್ಕಳಿಗೆ ಮತ್ತು ಯುವಕರಿಗೆ, ಶಿಕ್ಷಣ, ಉದ್ಯೋಗ, ಸಬಲೀಕರಣ ನೀಡಿದ್ದಾರೆ ಎಂದರು.&lt;/p&gt;&lt;h2&gt;&lt;strong&gt;ಸುದೀರ್ಘ ಇತಿಹಾಸ&lt;/strong&gt;&lt;/h2&gt;&lt;p&gt;ಆರ್ ಎಸ್ ಎಸ್ ಕುರಿತ ವಿರೋಧ ಪಕ್ಷದವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಆರ್ ಎಸ್ ಎಸ್ ಗೆ ಸುದೀರ್ಘ ಇತಿಹಾಸ ಇದೆ. ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯಹೋರಾಟವನ್ನು ಪ್ರಾರಂಭ ಮಾಡಿದರು. ಅದು ಒಂದು ಚಳವಳಿಯಾಗಿ ರೂಪುಗೊಂಡಿತು. ಕಾಂಗ್ರೆಸ್ ವಿದೇಶಿಯರಿಂದ ಸ್ಥಾಪನೆಯಾಗಿದ್ದು, ಆರ್ ಎಸ್ ಎಸ್ ಸ್ವದೇಶಿಯರಿಂದ ಸ್ಥಾಪನೆಯಾಗಿದ್ದು, ಹೀಗಾಗಿ ಇದಕ್ಕೆ ಮನ್ನಣೆ ಪ್ರಶ್ನೆ ಬರುವುದಿಲ್ಲ ಎಂದರು.&lt;/p&gt;&lt;p&gt;ದೇಶದಲ್ಲಿ ಸಾಕಷ್ಟು ನೋಂದಾಯಿತ ಮತ್ತು ನೋಂದಣಿಯಾಗದ ಅನೇಕ ಸಂಸ್ಥೆಗಳಿವೆ. ದೇಶದಲ್ಲಿ ಎಲ್ಲದಕ್ಕೂ ಕಾನೂನಿನಲ್ಲಿ ಅವಕಾಶ ಇದೆ. ಆರ್ ಎಸ್ ಎಸ್ ಇಡಿ ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಸ್ಥೆ ಮತ್ತು ಜನಸೇವೆಯಲ್ಲಿ ಶ್ರೇಷ್ಠವಾದ ಕೆಲಸ ಮಾಡುತ್ತ ಬಂದಿದೆ. ಹೀಗಾಗಿ ಆಗಾಗ ಕೆಲವರು ಈ ರೀತಿಯ ಮಾತುಗಳನ್ನು ಆಡುತ್ತಾರೆ. ಆರ್ ಎಸ್ ಎಸ್ ಜನ ಸೇವೆಯಲ್ಲಿ ಮುಂದುವರಿಯುತ್ತದೆ ಎಂದರು.&lt;/p&gt;]]></content:encoded>
            <category>gadag</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basavaraj-bommai-says-modi-essential-for-viksit-bharat-2047-gvd/articleshow-x8ogfl4"/>
        </item>
        <item>
            <title><![CDATA[ಗದಗ: 101 ವರ್ಷ ಹಳೆಯ ಅಪರೂಪದ ಔಷಧಿ ಗುಣದ ಮಡ್ಡಿ ಮರ ಪತ್ತೆ; ಮಧುಮೇಹ ನಿಯಂತ್ರಣಕ್ಕೆ ರಾಮಬಾಣ]]></title>
            <link>https://kannada.asianetnews.com/karnataka-districts/101-year-old-rare-medicinal-maddi-tree-indian-mulberry-discovered-in-naragunda-gadag-helps-controlling-diabetes-mrq/articleshow-y1v4w5t</link>
            <guid isPermaLink="true">https://kannada.asianetnews.com/karnataka-districts/101-year-old-rare-medicinal-maddi-tree-indian-mulberry-discovered-in-naragunda-gadag-helps-controlling-diabetes-mrq/articleshow-y1v4w5t</guid>
            <pubDate>Mon, 01 Jun 2026 06:38:49 +0530</pubDate>
            <description><![CDATA[&lt;p&gt;ರೈತರೊಬ್ಬರ ಜಮೀನಿನಲ್ಲಿ 101 ವರ್ಷ ಹಳೆಯ, ಅಪರೂಪದ ಔಷಧಿ ಗುಣಗಳನ್ನು ಹೊಂದಿರುವ ಮಡ್ಡಿ ಮರ (ಇಂಡಿಯನ್ ಮಲ್ಬೆರಿ) ಪತ್ತೆಯಾಗಿದೆ. ಆಯುರ್ವೇದದಲ್ಲಿ ಮಹತ್ವ ಪಡೆದಿರುವ ಈ ಮರವು ಕೀಲು ನೋವು, ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದ್ದು, ಇದರ ಬೇರಿನಿಂದ ನೈಸರ್ಗಿಕ ಬಣ್ಣವನ್ನೂ ತಯಾರಿಸಲಾಗುತ್ತದೆ. ಈ ಮರವು ಜೀವವೈವಿಧ್ಯ ಸಂರಕ್ಷಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt0bb7e4z5nfkvv8fg5brmgk,imgname-maddi-mara-1780275846596.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಸ್.ಜಿ. ತೆಗ್ಗಿನಮನಿ&lt;/strong&gt;&lt;/p&gt;&lt;p&gt;&lt;strong&gt;ಗದಗ: &lt;/strong&gt;ನರಗುಂದ ಪಟ್ಟಣದ ಅಜ್ಜಪ್ಪಗೌಡ ಪಾಟೀಲ ಎಂಬವರ ಕುರ್ಲಗೇರಿ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಔಷಧಿ ಗುಣ ಹೊಂದಿರುವ ಅಪರೂಪದ ಮಡ್ಡಿ ಮರ ಪತ್ತೆಯಾಗಿದೆ.&lt;/p&gt;&lt;p&gt;ಇದು ಮೊರಿಂಡಾ ಕೊರಿಯಾ ರುಬಿಯೇಶಿ ಕುಟುಂಬಕ್ಕೆ ಸೇರಿದೆ. ಈ ಮರವು ಸುಮಾರು 101 ವರ್ಷ ಹಳೆಯದಾಗಿದ್ದು, ಇದರ ಕಾಂಡ 6 ಅಡಿ ಅಗಲ ಮತ್ತು ಸುಮಾರು 45 ಅಡಿ ಎತ್ತರವಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಮಡ್ಡಿ, ಹಳದಿಪಾವಟೆ, ತಗಸಿ ಎಂಬ ಹೆಸರಿಂದ ಕರೆಯಲಾಗುತ್ತದೆ.&lt;/p&gt;&lt;p&gt;ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಸಣ್ಣ ಅಥವಾ ಮಧ್ಯಮ ಗಾತ್ರದ ಮರವಾಗಿದೆ. ಇದನ್ನು ಇಂಗ್ಲಿಷಿನಲ್ಲಿ ಇಂಡಿಯನ್ ಮಲ್ಬೆರಿ ಅಥವಾ ನೋನಿ ಎಂದು ಕರೆಯುತ್ತಾರೆ. ಇದು ಕರ್ನಾಟಕದ ಒಣ ಮತ್ತು ಅರೆ- ಒಣ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.&lt;/p&gt;&lt;h2&gt;&lt;strong&gt;ಮಡ್ಡಿ ಮರದಲ್ಲಿರುವ ಔಷಧೀಯ ಗುಣಗಳಿಂದ ಏನು ಲಾಭ?&lt;/strong&gt;&lt;/h2&gt;&lt;p&gt;ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧಿ ಪದ್ಧತಿಯಲ್ಲಿ ಈ ಸಸ್ಯದ ಪ್ರತಿಯೊಂದು ಭಾಗವೂ (ಬೇರು, ತೊಗಟೆ, ಎಲೆಗಳು ಮತ್ತು ಹಣ್ಣು) ಅತ್ಯಂತ ಮೌಲ್ಯಯುತವಾಗಿದೆ. ಉರಿಯೂತ ನಿವಾರಕ, ಕೀಲು ನೋವು ಮತ್ತು ಸಂಧಿವಾತದ ಚಿಕಿತ್ಸೆಗೆ ಇದರ ಎಲೆಗಳು ಮತ್ತು ಬೇರುಗಳನ್ನು ಬಳಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಗಾಯಗಳು ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.&lt;/p&gt;&lt;p&gt;ರಕ್ತದೊತ್ತಡ, ಮಧುಮೇಹವನ್ನು ನಿಯಂತ್ರಿಸುತ್ತದೆ. ಹಣ್ಣುಗಳಲ್ಲಿ ವಿಟಮಿನ್ ಸಿ ಹೊಂದಿದೆ. ಮರದ ಬೇರುಗಳು ಮೊರಿಂಡೋನ್ ಎಂಬ ನೈಸರ್ಗಿಕ ವರ್ಣದ್ರವ್ಯವನ್ನು ನೀಡುತ್ತವೆ. ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಗೆ ಹಳದಿ, ಕೆಂಪು ಮತ್ತು ಕಂದು ಬಣ್ಣಗಳನ್ನು ನೀಡಲು ಇದರ ಬೇರಿನ ತೊಗಟೆಯನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಈಗಲೂ ಖಾದಿ ಬಟ್ಟೆಗಳಿಗೆ ಇದರಿಂದ ತಯಾರಿಸಿದ ಬಣ್ಣವನ್ನು ಬಳಸಲಾಗುತ್ತದೆ.&lt;/p&gt;&lt;h3&gt;&lt;strong&gt;5 ರಿಂದ 35 ಅಡಿ ಎತ್ತರದ ಮರ&lt;/strong&gt;&lt;/h3&gt;&lt;p&gt;ಈ ಮರವು ಸುಮಾರು 5 ರಿಂದ 35 ಅಡಿ ಎತ್ತರಕ್ಕೆ ಬೆಳೆಯುವ ಸದಾ ಹಸಿರಿನ ಸಣ್ಣ ಮರ ಅಥವಾ ಪೊದೆ ಗಿಡವಾಗಿದೆ. ಚಿಕ್ಕದಾದ, ಸುಕ್ಕುಗಟ್ಟಿದ ಮತ್ತು ಒರಟಾದ ಕಾಂಡವನ್ನು ಹೊಂದಿದೆ. ಪತ್ತೆಯಾಗಿರುವ ಈ ಮರದ ಎತ್ತರ 45 ಅಡಿ ಇದೆ. ಎಲೆಗಳು ಗಾಢ ಹಸಿರು ಬಣ್ಣದಲ್ಲಿದ್ದು, ಉದ್ದವಾಗಿವೆ. ಹೂವುಗಳು ಗುಂಡಗಿನ ಆಕಾರದಲ್ಲಿ ಬಿಳಿ ಬಣ್ಣದಲ್ಲಿ ಮತ್ತು ಸುವಾಸನೆಯಿಂದ ಕೂಡಿವೆ.&lt;/p&gt;&lt;p&gt;ಮರದ ಹಣ್ಣುಗಳು ಪೋಷಕಾಂಶದಿಂದ ಕೂಡಿವೆ. ಹಣ್ಣುಗಳು ನೈಸರ್ಗಿಕ ಆಸ್ಕೋರ್ಬಿಕ್ ಆಮ್ಲ (ವಿಟಮಿನ್ ಸಿ) ಮತ್ತು ಇತರ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ.&lt;/p&gt;&lt;p&gt;ಸ್ಥಳೀಯವಾಗಿ ಈ ಮರಕ್ಕೆ ಬಣ್ಣದ ಮಾರಿ ಮರವೆಂದು ಕರೆಯುತ್ತಾರೆಂದು ರೈತ ರಾಚನಗೌಡ ಪಾಟೀಲ ಮತ್ತು ಪರಿಸರ ಸಂರಕ್ಷರಾದ ದೇವರಾಜ ಮಲ್ಲಸರ್ಜ ದೇಸಾಯಿ ಅವರು ತಿಳಿಸಿದರು.&lt;/p&gt;&lt;p&gt;ಈ ಮರವು ಭಾರತೀಯ ಮೂಲದ ಮರವಾಗಿದ್ದು, ಸಾಂಪ್ರದಾಯಿಕ ವೈದ್ಯಕೀಯದಲ್ಲಿ ಹಾಗೂ ಪ್ರಸ್ತುತ ಕಾಲದಲ್ಲಿಯೂ ಬಳಸಲಾಗುತ್ತಿದೆ. ಇಂತಹ ಅಪರೂಪದ ಸ್ಥಳೀಯ ಜಾತಿಯ ಮರಗಳನ್ನು ಸಂರಕ್ಷಿಸಬೇಕು. ಇದರ ಹೂವು, ಕಾಯಿ ಮತ್ತು ಹಣ್ಣುಗಳು ಹಲವಾರು ಕೀಟ ಹಾಗೂ ಪಕ್ಷಿಗಳಿಗೆ ಆಹಾರ ಮತ್ತು ಸೂರನ್ನು ಒದಗಿಸುತ್ತವೆ ಎಂದು ಪರಿಸರ ಸಂರಕ್ಷಕ ಮಲ್ಲಸರ್ಜ ದೇಸಾಯಿ ಹೇಳಿದರು.&lt;/p&gt;&lt;h3&gt;&lt;strong&gt;ಜೀವವೈವಿಧ್ಯ ಸಮತೋಲನ&lt;/strong&gt;&lt;/h3&gt;&lt;p&gt;ಮರದ ಹೂವುಗಳು, ಕಾಯಿ ಮತ್ತು ಹಣ್ಣುಗಳು ಹಲವಾರು ಕೀಟ ಹಾಗೂ ಪಕ್ಷಿಗಳಿಗೆ ಆಹಾರ ಮತ್ತು ಸೂರನ್ನು ಒದಗಿಸುತ್ತದೆ. ವಯಸ್ಸಾದ ಮರದ ಪೂಟರೆಗಳಲ್ಲಿ ಹಾಲಕ್ಕಿ, ಮರಕುಟುಕ ಮತ್ತು ಮಂಗಟ್ಟೆಯಂತಹ ಪಕ್ಷಿಗಳು ಗೂಡು ಕಟ್ಟುತ್ತವೆ. ಜೀವವೈವಿಧ್ಯ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ ತಿಳಿಸಿದರು.&lt;/p&gt;]]></content:encoded>
            <category>gadag</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/101-year-old-rare-medicinal-maddi-tree-indian-mulberry-discovered-in-naragunda-gadag-helps-controlling-diabetes-mrq/articleshow-y1v4w5t"/>
        </item>
    </channel>
</rss>
