<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 29 Aug 2026 20:20:26 +0530</lastBuildDate>
        <atom:link href="https://kannada.asianetnews.com/rss/food" rel="self" type="application/rss+xml"/>
        <item>
            <title><![CDATA[ಚರ್ಮದ ಆರೋಗ್ಯಕ್ಕೆ ಗಂಜಿ ನೀರು ಕುಡಿಯಿರಿ; ಇದರಲ್ಲಿರೋ ಅದ್ಭುತ ಸತ್ವಗಳು ನಿಮ್ಗೆ ಗೊತ್ತಿಲ್ಲ!]]></title>
            <link>https://kannada.asianetnews.com/gallery/life/drink-porridge-water-to-get-healthy-skin-here-are-the-benefits-to-know-21fvwm2</link>
            <guid isPermaLink="true">https://kannada.asianetnews.com/gallery/life/drink-porridge-water-to-get-healthy-skin-here-are-the-benefits-to-know-21fvwm2</guid>
            <pubDate>Sat, 29 Aug 2026 20:19:41 +0530</pubDate>
            <description><![CDATA[&lt;p&gt;ಅನ್ನ ಬಸಿದ ಗಂಜಿಯನ್ನು ಸುಮ್ಮನೆ ಚೆಲ್ಲುತ್ತೇವೆ. ಆದರೆ ಗಂಜಿ ನೀರಿನಲ್ಲಿ ಹಲವಾರು ಪ್ರಯೋಜನಗಳಿವೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸಲು ತುಂಬಾ ಒಳ್ಳೆಯದು. ಇದರ ಪ್ರಯೋಜನಗಳೇನು ಎಂದು ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m16ycph6r8d1qn6sen840983,imgname-porridge-water-1788013337126.jpg" type="image/jpeg" height="390" width="690"/>
            <content:encoded><![CDATA[&lt;p&gt;ಅನ್ನ ಬಸಿದ ಗಂಜಿಯನ್ನು ಸುಮ್ಮನೆ ಚೆಲ್ಲುತ್ತೇವೆ. ಆದರೆ ಗಂಜಿ ನೀರಿನಲ್ಲಿ ಹಲವಾರು ಪ್ರಯೋಜನಗಳಿವೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸಲು ತುಂಬಾ ಒಳ್ಳೆಯದು. ಇದರ ಪ್ರಯೋಜನಗಳೇನು ಎಂದು ತಿಳಿಯೋಣ.&lt;/p&gt;&lt;img&gt;&lt;p&gt;ಗಂಜಿ ನೀರು ಪಿಷ್ಟದಿಂದ ಸಮೃದ್ಧವಾಗಿದೆ. ಇದು ಚರ್ಮದಲ್ಲಿನ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆಯು ಹೊಳಪನ್ನು ಪಡೆಯುತ್ತದೆ.&lt;/p&gt;&lt;img&gt;&lt;p&gt;ಗಂಜಿ ನೀರಿನಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಹೇರಳವಾಗಿವೆ. ಇದು ಫ್ರೀ ರಾಡಿಕಲ್&zwnj;ಗಳ ವಿರುದ್ಧ ಹೋರಾಡುತ್ತದೆ. ಇದರಿಂದ ಕಾಂತಿಯುತ ಚರ್ಮವನ್ನು ಪಡೆಯಲು ಸಾಧ್ಯವಾಗುತ್ತದೆ.&lt;/p&gt;&lt;img&gt;&lt;p&gt;ಗಂಜಿ ನೀರು ಆ್ಯಂಟಿ-ಇನ್&zwnj;ಫ್ಲಮೇಟರಿ ಗುಣಗಳನ್ನು ಹೊಂದಿದೆ. ಇದು ಚರ್ಮದ ಕೋಶಗಳನ್ನು ರಕ್ಷಿಸುತ್ತದೆ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುವ ಸಂಯುಕ್ತಗಳು ಗಂಜಿ ನೀರಿನಲ್ಲಿವೆ. ಇದು ಮುಖದ ಕಪ್ಪು ಕಲೆ, ಟ್ಯಾನ್ ತೆಗೆದುಹಾಕಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.&lt;/p&gt;&lt;img&gt;&lt;p&gt;ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಕೊಲಾಜೆನ್ ಅತ್ಯಗತ್ಯ. ಪ್ರತಿದಿನ ಗಂಜಿ ನೀರನ್ನು ಕುಡಿಯುವುದರಿಂದ ಕೊಲಾಜೆನ್ ಉತ್ಪಾದನೆಯು ಹೆಚ್ಚಾಗುತ್ತದೆ.&lt;/p&gt;&lt;img&gt;&lt;p&gt;ಗಂಜಿ ನೀರಿನಿಂದ ಅಥವಾ ಅಕ್ಕಿ ಗಂಜಿಯಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಹಲವರಿಗೆ ಈ ಬಗ್ಗೆ ಗೊತ್ತಿಲ್ಲ.. ಅದೊಂದು ಉಪಯುಕ್ತ ಆಹಾರ ಎಂಬುದು ಯಾವತ್ತೂ ನೆನಪಿರಲಿ!&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/life/drink-porridge-water-to-get-healthy-skin-here-are-the-benefits-to-know-21fvwm2"/>
        </item>
        <item>
            <title><![CDATA[ಕಿಡ್ನಿ ಸ್ಟೋನ್, ಬೊಜ್ಜು ಕರಗಿಸಲು ಈ ಕಾಳು ಸೇವಿಸಿ ಎಂದ ಸದ್ಗುರು]]></title>
            <link>https://kannada.asianetnews.com/webstories/food/sadhguru-why-you-need-horse-gram-33xe0h6</link>
            <guid isPermaLink="true">https://kannada.asianetnews.com/webstories/food/sadhguru-why-you-need-horse-gram-33xe0h6</guid>
            <pubDate>Fri, 28 Aug 2026 16:24:42 +0530</pubDate>
            <description><![CDATA[&lt;p&gt;Sadhguru health tips: ಸದ್ಗುರುಗಳು ತಮ್ಮ ಫಿಟ್&zwnj;ನೆಸ್ ಟಿಪ್ಸ್&zwnj;ಗಳಲ್ಲಿ ಹುರುಳಿ ಕಾಳನ್ನು ಅತ್ಯಂತ ಶಕ್ತಿಶಾಲಿ ಧಾನ್ಯ ಎಂದು ಕರೆದಿದ್ದಾರೆ. ಇದರ ಹಿಂದಿನ ಕಾರಣ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jtqjx26jv4k5fspmct2frjdj,imgname-parents-1-1746695784658.jpg" type="image/jpeg" height="390" width="690"/>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/food/sadhguru-why-you-need-horse-gram-33xe0h6"/>
        </item>
        <item>
            <title><![CDATA[ಇಡ್ಲಿ ಹಿಟ್ಟು ಉಳಿತಾ? ಡೋಂಟ್‌ವರಿ.. ಅದರಲ್ಲೇ ದೋಸೆ ಮಾಡಲು ನೀರು ಹಾಕ್ಬೇಡಿ, ಈ ಟ್ರಿಕ್ಸ್ ಬಳಸಿ]]></title>
            <link>https://kannada.asianetnews.com/gallery/food/dont-waste-thick-idli-batter-instead-convert-it-into-dosa-batter-and-make-crispy-dosas-suh-bmibbl4</link>
            <guid isPermaLink="true">https://kannada.asianetnews.com/gallery/food/dont-waste-thick-idli-batter-instead-convert-it-into-dosa-batter-and-make-crispy-dosas-suh-bmibbl4</guid>
            <pubDate>Fri, 28 Aug 2026 12:54:04 +0530</pubDate>
            <description><![CDATA[&lt;p&gt;ಮನೆಗೆ ಇಡ್ಲಿ ಮಾಡಲು ತಯಾರಿಸಿದ ಹಿಟ್ಟು ಉಳಿದುಕೊಂಡಿದೆಯಾ? ಹಿಟ್ಟು ಸ್ವಲ್ಪ ದಪ್ಪವಾಗಿದ್ದು, ಇಡ್ಲಿಗೆ ಮಾತ್ರ ಸೂಕ್ತವಾಗಿರುವಂತೆ ಕಾಣುತ್ತಿದೆಯಾ? ಹಾಗಾದರೆ ಅದೇ ಹಿಟ್ಟಿನಿಂದ ರುಚಿಯಾದ, ತೆಳ್ಳಗಿನ ಹಾಗೂ ಗರಿಗರಿಯಾದ ದೋಸೆಯನ್ನು ಸುಲಭವಾಗಿ ತಯಾರಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m13kp5byrvsv5s1tbty7r7gx,imgname-dont-waste-thick-idli-batter-instead-convert-it-into-dosa-batter-and-make-crispy-dosas-1787901449598.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆಗೆ ಇಡ್ಲಿ ಮಾಡಲು ತಯಾರಿಸಿದ ಹಿಟ್ಟು ಉಳಿದುಕೊಂಡಿದೆಯಾ? ಹಿಟ್ಟು ಸ್ವಲ್ಪ ದಪ್ಪವಾಗಿದ್ದು, ಇಡ್ಲಿಗೆ ಮಾತ್ರ ಸೂಕ್ತವಾಗಿರುವಂತೆ ಕಾಣುತ್ತಿದೆಯಾ? ಹಾಗಾದರೆ ಅದೇ ಹಿಟ್ಟಿನಿಂದ ರುಚಿಯಾದ, ತೆಳ್ಳಗಿನ ಹಾಗೂ ಗರಿಗರಿಯಾದ ದೋಸೆಯನ್ನು ಸುಲಭವಾಗಿ ತಯಾರಿಸಬಹುದು.&lt;/p&gt;&lt;img&gt;&lt;p&gt;ಮನೆಗೆ ಇಡ್ಲಿ ಮಾಡಲು ತಯಾರಿಸಿದ ಹಿಟ್ಟು ಉಳಿದುಕೊಂಡಿದೆಯಾ? ಹಿಟ್ಟು ಸ್ವಲ್ಪ ದಪ್ಪವಾಗಿದ್ದು, ಇಡ್ಲಿಗೆ ಮಾತ್ರ ಸೂಕ್ತವಾಗಿರುವಂತೆ ಕಾಣುತ್ತಿದೆಯಾ? ಹಾಗಾದರೆ ಅದೇ ಹಿಟ್ಟಿನಿಂದ ರುಚಿಯಾದ, ತೆಳ್ಳಗಿನ ಹಾಗೂ ಗರಿಗರಿಯಾದ ದೋಸೆಯನ್ನು ಸುಲಭವಾಗಿ ತಯಾರಿಸಬಹುದು. ಇಡ್ಲಿ ಹಿಟ್ಟನ್ನು ದೋಸೆ ಹಿಟ್ಟಾಗಿ ಪರಿವರ್ತಿಸಲು ಮುಖ್ಯವಾಗಿ ಸರಿಯಾದ ಪ್ರಮಾಣದಲ್ಲಿ ನೀರು ಸೇರಿಸಿ ಹಿಟ್ಟಿನ ಹದವನ್ನು ಸರಿಪಡಿಸುವುದು ಮುಖ್ಯ. ಆದರೆ ಒಂದೇ ಬಾರಿಗೆ ಹೆಚ್ಚು ನೀರು ಹಾಕಿದರೆ ಹಿಟ್ಟು ತುಂಬಾ ತೆಳುವಾಗಬಹುದು. ಹಾಗಾಗಿ ಹಂತ ಹಂತವಾಗಿ ನೀರು ಸೇರಿಸುವುದು ಉತ್ತಮ.&lt;/p&gt;&lt;p&gt;&lt;strong&gt;1 ಲೀಟರ್ ಇಡ್ಲಿ ಹಿಟ್ಟಿಗೆ ಎಷ್ಟು ನೀರು?&lt;/strong&gt;&lt;/p&gt;&lt;p&gt;ಸುಮಾರು 1 ಲೀಟರ್ ಇಡ್ಲಿ ಹಿಟ್ಟಿಗೆ 200 ಮಿಲಿ ಅಥವಾ ಸುಮಾರು ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಕಲಸಬಹುದು. ಆದರೆ ಹಿಟ್ಟಿನ ದಪ್ಪಕ್ಕೆ ಅನುಗುಣವಾಗಿ ನೀರಿನ ಪ್ರಮಾಣ ಸ್ವಲ್ಪ ಬದಲಾಗಬಹುದು. ಹಿಟ್ಟು ಇನ್ನೂ ಗಟ್ಟಿಯಾಗಿ ಅಥವಾ ದಟ್ಟವಾಗಿ ಅನಿಸಿದರೆ, ಅಗತ್ಯಕ್ಕೆ ತಕ್ಕಂತೆ ಸ್ವಲ್ಪ ಹೆಚ್ಚುವರಿ ನೀರು ಸೇರಿಸಿ. ದೋಸೆ ಹಿಟ್ಟು ಹೇಗಿರಬೇಕು ಎಂದರೆ, ಸೌಟಿನಲ್ಲಿ ತೆಗೆದುಕೊಂಡಾಗ ಸುಲಭವಾಗಿ ಹರಿಯುವಷ್ಟು ತೆಳುವಾಗಿರಬೇಕು.&lt;/p&gt;&lt;img&gt;&lt;p&gt;ಮೊದಲು ಬೇಕಾದಷ್ಟು ಹಿಟ್ಟು ತೆಗೆದುಕೊಳ್ಳಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಸಂಪೂರ್ಣವಾಗಿ ಸಂಗ್ರಹಿಸಿಟ್ಟಿರುವ ಇಡ್ಲಿ ಹಿಟ್ಟಿನ ಪಾತ್ರೆಗೆ ನೇರವಾಗಿ ನೀರು ಹಾಕಬೇಡಿ. ನಿಮಗೆ ಎಷ್ಟು ದೋಸೆ ಬೇಕೋ ಅಷ್ಟು ಹಿಟ್ಟನ್ನು ಪ್ರತ್ಯೇಕ ಪಾತ್ರೆಗೆ ತೆಗೆದುಕೊಳ್ಳಿ. ಇದರಿಂದ ಉಳಿದ ಹಿಟ್ಟನ್ನು ಮತ್ತೆ ಇಡ್ಲಿಗೆ ಬಳಸಬಹುದು.&lt;/p&gt;&lt;p&gt;&lt;strong&gt;ಸ್ವಲ್ಪ ಸ್ವಲ್ಪ ನೀರು ಸೇರಿಸಿ&lt;/strong&gt;&lt;/p&gt;&lt;p&gt;ಒಂದೇ ಬಾರಿ ಹೆಚ್ಚು ನೀರು ಸುರಿಯುವ ಬದಲು, ಸುಮಾರು &frac14; ಕಪ್&zwnj;ನಷ್ಟು ನೀರನ್ನು ಒಂದೊಂದೇ ಹಂತದಲ್ಲಿ ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ನಯವಾಗಿ, ತೆಳುವಾಗಿ ಮತ್ತು ಸೌಟಿನಿಂದ ಸುಲಭವಾಗಿ ಹರಿಯುವ ಸ್ಥಿತಿಗೆ ಬಂದಾಗ ನೀರು ಸೇರಿಸುವುದನ್ನು ನಿಲ್ಲಿಸಿ.&lt;/p&gt;&lt;img&gt;&lt;p&gt;ಇಡ್ಲಿ ಹಿಟ್ಟಿಗೆ ಹಾಕಿರುವ ಉಪ್ಪು ದೋಸೆಗೆ ಸಾಕಾಗದೇ ಇರಬಹುದು. ಆದ್ದರಿಂದ ಹಿಟ್ಟಿನ ರುಚಿ ನೋಡಿ, ಅಗತ್ಯವಿದ್ದರೆ ಸ್ವಲ್ಪ ಹೆಚ್ಚುವರಿ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ದೋಸೆಯ ರುಚಿ ಸರಿಯಾಗಿರಲು ಉಪ್ಪಿನ ಪ್ರಮಾಣವೂ ಮುಖ್ಯ.&lt;/p&gt;&lt;img&gt;&lt;p&gt;ನಿಮ್ಮ ಇಡ್ಲಿ ಹಿಟ್ಟು ತುಂಬಾ ದಟ್ಟವಾಗಿದ್ದರೆ ಅಥವಾ ಹಿಟ್ಟು ಹಳೆಯದಾಗಿದ್ದರೆ, ದೋಸೆ ನಿರೀಕ್ಷಿಸಿದಷ್ಟು ಗರಿಗರಿಯಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಹಿಟ್ಟಿಗೆ ಒಂದು ಚಮಚ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಕಲಸಬಹುದು. ಇದು ದೋಸೆಗೆ ಹೆಚ್ಚುವರಿ ಕ್ರಿಸ್ಪಿನೆಸ್ ನೀಡಲು ಸಹಾಯ ಮಾಡಬಹುದು. ಇನ್ನೊಂದು ಆಯ್ಕೆಯಾಗಿ, ಸ್ವಲ್ಪ ನೆನೆಸಿದ ರವೆಯನ್ನು ರುಬ್ಬಿ ಹಿಟ್ಟಿಗೆ ಸೇರಿಸಬಹುದು.&lt;/p&gt;&lt;img&gt;&lt;p&gt;ತವಾ ಬಿಸಿಯಾದ ನಂತರ ಸ್ವಲ್ಪ ಹಿಟ್ಟನ್ನು ಹಾಕಿ ಪರೀಕ್ಷಿಸಿ. ಹಿಟ್ಟು ತವಾದ ಮೇಲೆ ಸುಲಭವಾಗಿ ಹರಡಬೇಕು. ಹಿಟ್ಟು ತುಂಬಾ ದಪ್ಪವಾಗಿದ್ದರೆ ದೋಸೆ ದಪ್ಪವಾಗಿ ಬರುತ್ತದೆ. ತುಂಬಾ ತೆಳುವಾಗಿದ್ದರೆ ತವಾದ ಮೇಲೆ ಹರಡಲು ಕಷ್ಟವಾಗಬಹುದು. ಆದ್ದರಿಂದ ಹಿಟ್ಟು ಸುಲಭವಾಗಿ ಹರಿಯುವಷ್ಟು, ಆದರೆ ಸಂಪೂರ್ಣ ನೀರಿನಂತಿರದಷ್ಟು ಹದದಲ್ಲಿರುವುದು ಉತ್ತಮ. ಹೀಗೆ ಉಳಿದ ಇಡ್ಲಿ ಹಿಟ್ಟನ್ನು ವ್ಯರ್ಥ ಮಾಡದೆ, ಅದೇ ಹಿಟ್ಟಿನಿಂದ ಬೆಳಗಿನ ಉಪಾಹಾರಕ್ಕೆ ರುಚಿಯಾದ ಮತ್ತು ಗರಿಗರಿಯಾದ ದೋಸೆ ತಯಾರಿಸಬಹುದು.&lt;/p&gt;&lt;p&gt;ಸಣ್ಣ ಟಿಪ್ಸ್: ನೀರನ್ನು ಯಾವಾಗಲೂ ಸ್ವಲ್ಪ ಸ್ವಲ್ಪವಾಗಿ ಸೇರಿಸಿ. ಹಿಟ್ಟಿನ ಹದವನ್ನು ನೋಡಿಕೊಂಡು ಪ್ರಮಾಣವನ್ನು ಹೊಂದಿಸುವುದೇ ಉತ್ತಮ ಫಲಿತಾಂಶದ ಗುಟ್ಟು.&lt;/p&gt;]]></content:encoded>
            <category>food</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/food/dont-waste-thick-idli-batter-instead-convert-it-into-dosa-batter-and-make-crispy-dosas-suh-bmibbl4"/>
        </item>
        <item>
            <title><![CDATA['ಫ್ರಿಡ್ಜ್'ನಲ್ಲಿ ತರಕಾರಿ-ಹಣ್ಣುಗಳು ಬೇಗ ಕೊಳೆಯುತ್ತಿವೆಯೇ? ಹೀಗೆ ಇಟ್ಟರೆ ಫ್ರೆಶ್ ಇರುತ್ತವೆ ನೋಡಿ!]]></title>
            <link>https://kannada.asianetnews.com/kitchen/are-your-refrigerated-vegetables-rotting-fast-and-here-is-how-to-keep-them-fresh/articleshow-cg43q6m</link>
            <guid isPermaLink="true">https://kannada.asianetnews.com/kitchen/are-your-refrigerated-vegetables-rotting-fast-and-here-is-how-to-keep-them-fresh/articleshow-cg43q6m</guid>
            <pubDate>Sat, 29 Aug 2026 13:27:32 +0530</pubDate>
            <description><![CDATA[&lt;p&gt;ನಾವು ತರಕಾರಿಗಳನ್ನು ತಂದ ಪ್ಲಾಸ್ಟಿಕ್ ಕವರ್&zwnj;ಗಳಲ್ಲೇ ಗಂಟು ಹಾಕಿ ಫ್ರಿಡ್ಜ್&zwnj;ನಲ್ಲಿ ತುರುಕುತ್ತೇವೆ. ಇದು ತರಕಾರಿಗಳ ಪಾಲಿಗೆ ಉಸಿರುಗಟ್ಟಿಸುವ ಜೈಲಿದ್ದಂತೆ! ಪ್ಲಾಸ್ಟಿಕ್ ಬದಲಿಗೆ ಕಾಟನ್ ಬ್ಯಾಗ್ ಅಥವಾ ರಂಧ್ರಗಳಿರುವ ಬ್ಯಾಗ್&zwnj;ಗಳನ್ನು ಬಳಸಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0t2fh4tx622xdgwyvf6hw8y,imgname-fridge-hacks-1787581416601.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;How to keep vegetables fresh-Fruit storage tips-Prevent vegetable rotting in fridge-ನಿಮ್ಮ ಫ್ರಿಡ್ಜ್ ತರಕಾರಿಗಳ 'ಸ್ಮಶಾನ'ವಾಗುತ್ತಿದೆಯೇ? ತರಕಾರಿಗಳನ್ನು 'ಎವರ್&zwnj;ಗ್ರೀನ್' ಆಗಿಡಲು ಇಲ್ಲಿದೆ ಕಿಲಾಡಿ ಟಿಪ್ಸ್!&lt;/strong&gt;&lt;/p&gt;&lt;p&gt;ನಮಸ್ಕಾರ ಗೃಹಿಣಿಯರೇ ಮತ್ತು ಅಡುಗೆ ಮನೆಯ ಅಧಿಪತಿಗಳೇ! ನೀವೆಲ್ಲರೂ ಎದುರಿಸುವ ಒಂದು ಸಾಮಾನ್ಯ 'ಹೃದಯ ವಿದ್ರಾವಕ' ದೃಶ್ಯವೆಂದರೆ - ಭಾನುವಾರ ತಂದ ತಾಜಾ ತರಕಾರಿಗಳು ಬುಧವಾರದ ಹೊತ್ತಿಗೆ ಫ್ರಿಡ್ಜ್ ಒಳಗೆ ಮಲಗಿದಲ್ಲೇ ಮುದುಡಿ, ಪ್ರಾಣ ಬಿಟ್ಟಿರುವುದು! ಹೌದು, ನೂರಾರು ರೂಪಾಯಿ ಸುರಿದು ತಂದ ಕ್ಯಾರೆಟ್, ಬೆಂಡೆಕಾಯಿಗಳು ಫ್ರಿಡ್ಜ್&zwnj;ನಲ್ಲಿದ್ದರೂ ಯಾಕೆ ಬೇಗ 'ಮುದಿ'ಯಾಗುತ್ತವೆ? ನಿಮ್ಮ ಫ್ರಿಡ್ಜ್ ಅನ್ನು ತರಕಾರಿಗಳ ಪಾಲಿಗೆ 'ನರಕ' ಮಾಡುವ ಬದಲು 'ಸ್ವರ್ಗ' ಮಾಡುವುದು ಹೇಗೆ? ಇಲ್ಲಿದೆ ನೋಡಿ ಮಸ್ತ್ ಐಡಿಯಾಗಳು!&lt;/p&gt;&lt;p&gt;1. ಸ್ನಾನ ಮಾಡಿಸಬೇಡಿ, ಪ್ಲೀಸ್!&lt;/p&gt;&lt;p&gt;ನಾವು ಫ್ರಿಡ್ಜ್&zwnj;ಗೆ ತರಕಾರಿಗಳನ್ನು ಇಡುವ ಮುನ್ನ &quot;ಸ್ವಚ್ಛವಾಗಿರಲಿ&quot; ಎಂದು ಸ್ನಾನ ಮಾಡಿಸಿ (ತೊಳೆದು) ಇಡುತ್ತೇವೆ. ಆದರೆ ನೆನಪಿಡಿ, ತರಕಾರಿಗಳ ಪಾಲಿಗೆ ಆ ತೇವಾಂಶವೇ ದೊಡ್ಡ ವೈರಿ! ತೇವಾಂಶವಿದ್ದರೆ ಬ್ಯಾಕ್ಟೀರಿಯಾಗಳಿಗೆ ಹಬ್ಬ. ಹಾಗಾಗಿ, ತರಕಾರಿಗಳನ್ನು ತಂದ ತಕ್ಷಣ ತೊಳೆಯುವ ಸಾಹಸ ಮಾಡಬೇಡಿ. ಒಂದು ವೇಳೆ ತೊಳೆದರೆ, ಅವುಗಳನ್ನು ಚೆನ್ನಾಗಿ ಒಣಗಿಸಿ ಆಮೇಲೆ ಫ್ರಿಡ್ಜ್&zwnj;ಗೆ ಕಳುಹಿಸಿ. ಇಲ್ಲದಿದ್ದರೆ ಅವು ಕೇವಲ ಎರಡೇ ದಿನದಲ್ಲಿ 'ಸೋಜಿಗ'ದಂತೆ ಕರಗಿ ಹೋಗುತ್ತವೆ!&lt;/p&gt;&lt;h2&gt;2. ಕಟ್ ಮಾಡೋ ಮುನ್ನ ಯೋಚಿಸಿ!&lt;/h2&gt;&lt;p&gt;ನಮಗೆ ಸಮಯ ಉಳಿಸಲು ತರಕಾರಿಗಳನ್ನು ಮೊದಲೇ ಕತ್ತರಿಸಿ ಇಡುವ ಅಭ್ಯಾಸವಿರುತ್ತದೆ. ಆದರೆ ತರಕಾರಿಗಳಿಗೆ ಅವುಗಳ 'ಚರ್ಮ'ವೇ ರಕ್ಷಾ ಕವಚ. ಒಮ್ಮೆ ಕತ್ತರಿಸಿದರೆ ಅವುಗಳ ತಾಜಾತನ ಗಾಳಿಯಲ್ಲಿ ಹಾರಿ ಹೋಗುತ್ತದೆ. ಅನಿವಾರ್ಯವಾದರೆ ಮಾತ್ರ ಕತ್ತರಿಸಿ, ಏರ್-ಟೈಟ್ ಬಾಕ್ಸ್&zwnj;ನಲ್ಲಿ ಹಾಕಿಡಿ. ಇಲ್ಲದಿದ್ದರೆ ಅಡುಗೆ ಮಾಡುವ ಮುನ್ನವೇ ಅವುಗಳ 'ಆಯಸ್ಸು' ಮುಗಿದಿರುತ್ತದೆ!&lt;/p&gt;&lt;p&gt;3. ತರಕಾರಿಗಳ ನಡುವೆ 'ಸೋಶಿಯಲ್ ಡಿಸ್ಟೆನ್ಸಿಂಗ್' ಇರಲಿ!&lt;/p&gt;&lt;p&gt;ನೋಡಿ, ಮನುಷ್ಯರಂತೆ ತರಕಾರಿಗಳಿಗೂ ವೈಮನಸ್ಸು ಇರುತ್ತದೆ! ಕೆಲವು ಹಣ್ಣುಗಳು ಮತ್ತು ತರಕಾರಿಗಳು (ಉದಾಹರಣೆಗೆ ಸೇಬು, ಬಾಳೆಹಣ್ಣು) 'ಎಥಿಲೀನ್' ಎಂಬ ಗ್ಯಾಸ್ ಬಿಡುಗಡೆ ಮಾಡುತ್ತವೆ. ಇದು ಪಕ್ಕದಲ್ಲಿರುವ ಸೊಪ್ಪು ಅಥವಾ ಇತರ ತರಕಾರಿಗಳನ್ನು ಬೇಗನೆ ಹಣ್ಣಾಗಿಸಿ, ಕೊಳೆಯುವಂತೆ ಮಾಡುತ್ತದೆ. ಹಾಗಾಗಿ, ಫ್ರಿಡ್ಜ್&zwnj;ನಲ್ಲಿ ಎಲ್ಲವನ್ನೂ ಗುಂಪು ಗುಂಪಾಗಿ ತುಂಬಬೇಡಿ. ಪ್ರತಿಯೊಂದಕ್ಕೂ ಅದರದ್ದೇ ಆದ ಜಾಗ ಕೊಡಿ.&lt;/p&gt;&lt;p&gt;4. ಪ್ಲಾಸ್ಟಿಕ್ ಜೈಲಿನಿಂದ ಮುಕ್ತಿ ನೀಡಿ!&lt;/p&gt;&lt;p&gt;ನಾವು ತರಕಾರಿಗಳನ್ನು ತಂದ ಪ್ಲಾಸ್ಟಿಕ್ ಕವರ್&zwnj;ಗಳಲ್ಲೇ ಗಂಟು ಹಾಕಿ ಫ್ರಿಡ್ಜ್&zwnj;ನಲ್ಲಿ ತುರುಕುತ್ತೇವೆ. ಇದು ತರಕಾರಿಗಳ ಪಾಲಿಗೆ ಉಸಿರುಗಟ್ಟಿಸುವ ಜೈಲಿದ್ದಂತೆ! ಪ್ಲಾಸ್ಟಿಕ್ ಬದಲಿಗೆ ಕಾಟನ್ ಬ್ಯಾಗ್ ಅಥವಾ ರಂಧ್ರಗಳಿರುವ ಬ್ಯಾಗ್&zwnj;ಗಳನ್ನು ಬಳಸಿ. ಅಣಬೆಗಳಂತ (Mushroom) ಸೂಕ್ಷ್ಮ ಜೀವಿಗಳಿಗೆ ಪೇಪರ್ ಬ್ಯಾಗ್ ಅತ್ಯುತ್ತಮ. ಗಾಳಿಯಾಡಿದರೆ ಮಾತ್ರ ತರಕಾರಿ ಚೈತನ್ಯದಿಂದ ಇರುತ್ತದೆ.&lt;/p&gt;&lt;p&gt;5. ಫ್ರಿಡ್ಜ್ ಒಳಗೊಬ್ಬ 'ಡಾಕ್ಟರ್' ಆಗಿ!&lt;/p&gt;&lt;p&gt;ಫ್ರಿಡ್ಜ್&zwnj;ನಲ್ಲಿ ತರಕಾರಿ ಇಟ್ಟ ಮೇಲೆ ಅದರ ಕಥೆ ಮುಗಿಯಿತು ಅಂದುಕೊಳ್ಳಬೇಡಿ. ವಾರಕ್ಕೆ ಎರಡು ಬಾರಿಯಾದರೂ 'ರೌಂಡ್ಸ್' ಹಾಕಿ. ಯಾವುದಾದರೂ ಒಂದು ಟೊಮೆಟೊ ಅಥವಾ ಮೆಣಸಿನಕಾಯಿ ಕೊಳೆಯಲು ಶುರುವಾಗಿದ್ದರೆ, ಕೂಡಲೇ ಅದನ್ನು ಹೊರಹಾಕಿ. ಏಕೆಂದರೆ, &quot;ಒಂದು ಕೊಳೆತ ಹಣ್ಣು ಇಡೀ ಬುಟ್ಟಿಯನ್ನೇ ಹಾಳು ಮಾಡುತ್ತದೆ&quot; ಎಂಬ ಗಾದೆ ಮಾತು ಫ್ರಿಡ್ಜ್ ಒಳಗೂ ಅನ್ವಯಿಸುತ್ತದೆ!&lt;/p&gt;&lt;h3&gt;6. ಎಲ್ಲರಿಗೂ ಫ್ರಿಡ್ಜ್ ಭಾಗ್ಯವಿಲ್ಲ!&lt;/h3&gt;&lt;p&gt;ಗಮನಿಸಿ, ಕೆಲವು ತರಕಾರಿಗಳಿಗೆ ಫ್ರಿಡ್ಜ್ ಅಂದರೆ ಅಲರ್ಜಿ! ಟೊಮೆಟೊವನ್ನು ಫ್ರಿಡ್ಜ್&zwnj;ನಲ್ಲಿಟ್ಟರೆ ಅದರ ರುಚಿ ಕೆಡುತ್ತದೆ. ಆಲೂಗಡ್ಡೆ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಫ್ರಿಡ್ಜ್ ಹೊರಗಿನ ತಂಪಾದ, ಕತ್ತಲೆಯ ಜಾಗದಲ್ಲಿ ಇಟ್ಟರೆ ಅವು ಖುಷಿಯಾಗಿರುತ್ತವೆ.&lt;/p&gt;&lt;p&gt;ಕೊನೆಯ ಮಾತು: ತರಕಾರಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಿ, ಆಗ ಅವು ನಿಮ್ಮ ಅಡುಗೆಗೆ ಅದ್ಭುತ ರುಚಿ ನೀಡುತ್ತವೆ. ಈ ಟಿಪ್ಸ್ ಫಾಲೋ ಮಾಡಿದರೆ ನಿಮ್ಮ ಮನೆಯ ಫ್ರಿಡ್ಜ್ ಯಾವತ್ತೂ 'ತಾಜಾ' ತರಕಾರಿಗಳ ಖಜಾನೆಯಾಗಿರುತ್ತದೆ!&lt;/p&gt;&lt;p&gt;ಈಗ ಅಡುಗೆ ಮನೆಗೆ ಹೋಗಿ ನಿಮ್ಮ ಫ್ರಿಡ್ಜ್ ಒಮ್ಮೆ ಚೆಕ್ ಮಾಡಿ ಬನ್ನಿ!&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/kitchen/are-your-refrigerated-vegetables-rotting-fast-and-here-is-how-to-keep-them-fresh/articleshow-cg43q6m"/>
        </item>
        <item>
            <title><![CDATA[ಗಂಟೆಗಟ್ಟಲೇ ಕಾಯೋ ಬದಲು ಜಸ್ಟ್ 10-15 ನಿಮಿಷಗಳಲ್ಲಿ ಮಾಡ್ಕೊಳ್ಳಿ ಅವಲಕ್ಕಿ-ರವೆ ದೋಸೆ]]></title>
            <link>https://kannada.asianetnews.com/gallery/food/kannada-instant-recipe-made-with-rava-poha-curd-mixed-this-instant-dosa-is-soft-a-great-choice-for-breakfast-mrq-cvfw4mz</link>
            <guid isPermaLink="true">https://kannada.asianetnews.com/gallery/food/kannada-instant-recipe-made-with-rava-poha-curd-mixed-this-instant-dosa-is-soft-a-great-choice-for-breakfast-mrq-cvfw4mz</guid>
            <pubDate>Sat, 29 Aug 2026 13:22:00 +0530</pubDate>
            <description><![CDATA[ದೋಸೆ ಮಾಡಲು ಗಂಟೆಗಟ್ಟಲೆ ಕಾಯುವ ಬದಲು, ಕೇವಲ 10-15 ನಿಮಿಷಗಳಲ್ಲಿ ದೋಸೆ ಹಿಟ್ಟು ತಯಾರಿಸಬಹುದು. ರವೆ, ಅವಲಕ್ಕಿ ಮತ್ತು ಮೊಸರನ್ನು ಬಳಸಿ ಮಾಡುವ ಈ ದಿಢೀರ್ ದೋಸೆಯು ಮೃದುವಾಗಿದ್ದು, ಬೆಳಗಿನ ತಿಂಡಿಗೆ ಉತ್ತಮ ಆಯ್ಕೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m167n7fyfbqjv2271wwts0hh,imgname-suji-rava-dosa--2--1787989499390.jpg" type="image/jpeg" height="390" width="690"/>
            <content:encoded><![CDATA[ದೋಸೆ ಮಾಡಲು ಗಂಟೆಗಟ್ಟಲೆ ಕಾಯುವ ಬದಲು, ಕೇವಲ 10-15 ನಿಮಿಷಗಳಲ್ಲಿ ದೋಸೆ ಹಿಟ್ಟು ತಯಾರಿಸಬಹುದು. ರವೆ, ಅವಲಕ್ಕಿ ಮತ್ತು ಮೊಸರನ್ನು ಬಳಸಿ ಮಾಡುವ ಈ ದಿಢೀರ್ ದೋಸೆಯು ಮೃದುವಾಗಿದ್ದು, ಬೆಳಗಿನ ತಿಂಡಿಗೆ ಉತ್ತಮ ಆಯ್ಕೆಯಾಗಿದೆ.&lt;img&gt;&lt;p&gt;ದೋಸೆ ಬೇಕು ಅಂದ್ರೆ ಒಂದು ದಿನ ಮುಂಚಿತವಾಗಿ ಸಿದ್ಧತೆ ಆರಂಭಿಸಬೇಕು. ಅಕ್ಕಿ ಮತ್ತು ಉದ್ದಿನಬೇಳೆಯನ್ನು ಕನಿಷ್ಠ 7-8 ಗಂಟೆ ನೆನೆಸಿಟ್ಟುಕೊಂಡು ರುಬ್ಬಿಕೊಳ್ಳಬೇಕು. ನಂತರ ಈ ಹಿಟ್ಟನ್ನು ಮತ್ತೆ ಕನಿಷ್ಠವಾದ್ರೂ 6 ಗಂಟೆ ನೆನೆಸಬೇಕು. ಸಮಯಕ್ಕೆ ಸರಿಯಾಗಿ ಹಿಟ್ಟು ಹುದುಗಿದ್ರೆ ದೋಸೆ ಕಾವಲಿಯಿಂದ ಮೇಲೆ ಬರುತ್ತೆ. ಇಲ್ಲವಾದ್ರೆ ಕಾವಲಿಯಿಂದ ಬರೋದೇ ಇಲ್ಲ.&lt;/p&gt;&lt;img&gt;&lt;p&gt;ಇಂದು ನಾವು ನಿಮಗೆ ಕಡಿಮೆ ಸಮಯದಲ್ಲಿ ದೋಸೆ ಮಾಡೋದು ಹೇಗೆ ಎಂದು ಹೇಳುತ್ತಿದ್ದೇವೆ. 10 ರಿಂದ 15 ನಿಮಿಷಗಳಲ್ಲಿ ದೋಸೆ ಹಿಟ್ಟು ಸಿದ್ಧವಾಗುತ್ತದೆ. ನಂತರ ನಿಮಗೆ ಬೇಕಾದ ರೀತಿಯಲ್ಲಿ ದೋಸೆಯನ್ನು ಹಾಕಿಕೊಳ್ಳಬಹುದು. ಈ ದಿಢೀರ್ ದೋಸೆ ಮಾಡೋದು ಹೇಗೆ ಮತ್ತು ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಏನು ಎಂದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ರವೆ: 200 ಗ್ರಾಂ, ಅವಲಕ್ಕಿ: 100 ಗ್ರಾಂ, ಮೊಸರು: 200 ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಎಣ್ಣೆ (ಬೇಕಿದ್ರೆ ಚಿಟಿಕೆಯಷ್ಟು ಅಡುಗೆ ಸೋಡಾ ಅಥವಾ ಇನೋ), ಮಕ್ಕಳಿಗಾಗಿ ದೋಸೆ ಮಾಡುತ್ತಿದ್ರೆ ಸಣ್ಣದಾಗಿ ಕತ್ತರಿಸಿದ ತರಕಾರಿಗಳನ್ನು (ಕ್ಯಾರಟ್, ಕೋತಂಬರಿ, ಕರೀಬೇವು, ಹಸಿಮೆಣಸಿನಕಾಯಿ) ಸೇರಿಸಿಕೊಳ್ಳಬಹುದು.&lt;/p&gt;&lt;img&gt;&lt;p&gt;ಮೊದಲಿಗೆ ಅವಲಕ್ಕಿಯನ್ನು ಎರಡು ನೀರಿನಲ್ಲಿ ತೊಳೆದುಕೊಂಡು ಎತ್ತಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್&zwnj;ಗೆ ರವೆ, ನೆನೆಸಿದ ಅವಲಕ್ಕಿ ಮತ್ತು ಮೊಸರು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈ ವೇಳೆ ಬೇಕಿದ್ರೆ ಸ್ವಲ್ಪ ನೀರು ಸೇರಿಸಿಕೊಳ್ಳಬಹುದು. ರುಬ್ಬಿದ ನಂತ್ರ ಹಿಟ್ಟು ನೆನೆಯಲು 10 ರಿಂದ 15 ನಿಮಿಷ ಬಿಡಬೇಕು.&lt;/p&gt;&lt;img&gt;&lt;p&gt;ಈಗ ಒಲೆ ಆನ್ ಮಾಡ್ಕೊಂಡು ಕಾವಲಿ ಇಟ್ಕೊಳ್ಳಿ. ಈಗ ರುಬ್ಬಿಕೊಂಡಿರುವ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಕಿದ್ರೆ ಚಿಟಿಕೆಯಷ್ಟು ಅಡುಗೆಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕಾವಲಿ ಮೇಲೆ ಹಿಟ್ಟು ಹಾಕಿ ಎರಡೂ ಬದಿಯಲ್ಲಿ ಹದವಾಗಿ ಬೇಯಿಸಿಕೊಂಡ್ರೆ ಮೃದುವಾದ ದೋಸೆ ಸವಿಯಲು ಸಿದ್ಧವಾಗುತ್ತದೆ. ತೆಂಗಿನಕಾಯಿ, ಟೊಮೆಟೋ ಚಟ್ನಿ ಈ ದೋಸೆಗೆ ಒಳ್ಳೆಯ ಕಾಂಬಿನೇಷನ್.&lt;/p&gt;]]></content:encoded>
            <category>food</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/food/kannada-instant-recipe-made-with-rava-poha-curd-mixed-this-instant-dosa-is-soft-a-great-choice-for-breakfast-mrq-cvfw4mz"/>
        </item>
        <item>
            <title><![CDATA[ಬೇಯಿಸದೇ ಕುದಿಸದೇ 5 ನಿಮಿಷದಲ್ಲಿ ಮಾಡಿ ಚಟ್‌ಪಟ್ ರಸಂ! ಇದು ಬಿಸಿ ರೈಸ್‌ಗೆ ಬೆಸ್ಟ್]]></title>
            <link>https://kannada.asianetnews.com/gallery/food/south-indian-style-traditional-cumin-garlic-coriander-curry-leaves-green-chili-tamarind-juice-chopped-onion-rasam-mrq-d89i68d</link>
            <guid isPermaLink="true">https://kannada.asianetnews.com/gallery/food/south-indian-style-traditional-cumin-garlic-coriander-curry-leaves-green-chili-tamarind-juice-chopped-onion-rasam-mrq-d89i68d</guid>
            <pubDate>Sat, 29 Aug 2026 16:48:20 +0530</pubDate>
            <description><![CDATA[&lt;p&gt;Instant Rasam Making: ಅಡುಗೆ ಮಾಡಲು ಬೇಸರವಾದಾಗ, ಕೇವಲ 5 ನಿಮಿಷದಲ್ಲಿ ಕುದಿಸದೆ, ಬೇಯಿಸದೆ ರುಚಿಕರವಾದ ಚಟ್&zwnj;ಪಟ್ ರಸಂ ತಯಾರಿಸಬಹುದು. ಈ ತ್ವರಿತ ರಸಂ ಅನ್ನದೊಂದಿಗೆ ಸವಿಯಲು ಅದ್ಭುತವಾಗಿರುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m16kdskcgzt3j4a4zn62the2,imgname-rasam--3--1788001838700.jpg" type="image/jpeg" height="390" width="690"/>
            <content:encoded><![CDATA[&lt;p&gt;Instant Rasam Making: ಅಡುಗೆ ಮಾಡಲು ಬೇಸರವಾದಾಗ, ಕೇವಲ 5 ನಿಮಿಷದಲ್ಲಿ ಕುದಿಸದೆ, ಬೇಯಿಸದೆ ರುಚಿಕರವಾದ ಚಟ್&zwnj;ಪಟ್ ರಸಂ ತಯಾರಿಸಬಹುದು. ಈ ತ್ವರಿತ ರಸಂ ಅನ್ನದೊಂದಿಗೆ ಸವಿಯಲು ಅದ್ಭುತವಾಗಿರುತ್ತದೆ.&lt;/p&gt;&lt;img&gt;&lt;p&gt;ಕೆಲವೊಮ್ಮೆ ಅಡುಗೆ ಏನು ಮಾಡಬೇಕು ಅಂತ ಹೊಳೆಯಲ್ಲ. ಒಲೆ ಆನ್ ಮಾಡು, ಒಗ್ಗರಣೆ ಹಾಕಿ 10-15 ನಿಮಿಷ ಕುದಿಸಿಕೊಂಡು ಸಾಂಬಾರ್ ಅಥವಾ ರಸಂ ಮಾಡಿಕೊಳ್ಳಲು ಸಹ ಕೆಲವೊಮ್ಮೆ ಬೇಸರವಾಗುತ್ತದೆ. ಇಂದು ನಾವು ನಿಮಗೆ ಬೇಯಿಸದೇ ಕುದಿಸದೇ 5 ನಿಮಿಷದಲ್ಲಿ ಮಾಡಿ ಚಟ್&zwnj;ಪಟ್ ರಸಂ ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ.&lt;/p&gt;&lt;img&gt;&lt;p&gt;ಅಡಿಕೆ ಗಾತ್ರದಷ್ಟಯ ಹುಣಸೆಹಣ್ಣು, ಜೀರಿಗೆ: ಅರ್ಧ ಟೀ ಸ್ಪೂನ್, ಬೆಳ್ಳುಳ್ಳಿ ಎಸಳು: 4 ರಿಂದ 5, ಕೋತಂಬರಿ ಸೊಪ್ಪು, ಕರೀಬೇವು: 4 ರಿಂದ 5 ಎಲೆ, ಹಸಿಮೆಣಸಿನಕಾಯಿ: 4, ಈರುಳ್ಳಿ: ಚಿಕ್ಕ ಗಾತ್ರದ್ದು ಒಂದು, ರುಚಿಗೆ ತಕ್ಕಷ್ಟು ಉಪ್ಪು&lt;/p&gt;&lt;img&gt;&lt;p&gt;ಮೊದಲಿಗೆ ಒಂದು ಬೌಲ್&zwnj;ನಲ್ಲಿ ನೀರು ಹಾಕಿಕೊಂಡು ಹುಣಸೆ ಸೇರಿಸಿ ಚೆನ್ನಾಗಿ ಕಿವುಚಿಕೊಳ್ಳಿ. ನಂತರ ಹುಣಸೆ ಸಿಪ್ಪೆ ಬೇರ್ಪಡಿಸಿಕೊಂಡು ಹುಳಿಯಾದ ನೀರನ್ನು ಎತ್ತಿಟ್ಟುಕೊಳ್ಳಿ. ನಂತರ ಒಂದು ಈರುಳ್ಳಿ ಚಿಕ್ಕ ಗಾತ್ರದಲ್ಲಿ ಕತ್ತರಿಸಿಕೊಳ್ಳಬೇಕು.&lt;/p&gt;&lt;img&gt;&lt;p&gt;ಈಗ ಒಂದು ಮಿಕ್ಸಿ ಜಾರ್&zwnj;ಗೆ ಜೀರಿಗೆ, ಬೆಳ್ಳುಳ್ಳಿ, ಕೋತಂಬರಿ ಸೊಪ್ಪು, ಕರೀಬೇಬು, ಹಸಿಮೆಣಸಿನಕಾಯಿಯನ್ನು ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ. ಈ ವೇಳೆ ಸ್ಪಲ್ವ ನೀರು ಸೇರಿಸಿಕೊಂಡು ರುಬ್ಬಿಕೊಳ್ಳೋದು ಉತ್ತಮ.&lt;/p&gt;&lt;img&gt;&lt;p&gt;ಈಗ ಹುಣಸೆ ನೀರಿನ ಬೌಲ್&zwnj;ಗೆ ರುಬ್ಬಿಕೊಂಡಿರುವ ಮಸಾಲೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಬೌಲ್&zwnj;ಗೆ ಕತ್ತರಿಸಿದ ಈರುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದ್ರೆ ರುಚಿಯಾದ ಚಟ್&zwnj;ಪಟ್ ರಸಂ ಅಥವಾ ಸಾಂಪ್ರದಾಯಿಕ ಶೈಲಿಯ ಹುಣಸೆ ಗೊಜ್ಜಿನ ರಸಂ ಸವಿಯಲು ಸಿದ್ಧವಾಗುತ್ತದೆ.&lt;/p&gt;]]></content:encoded>
            <category>food</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/food/south-indian-style-traditional-cumin-garlic-coriander-curry-leaves-green-chili-tamarind-juice-chopped-onion-rasam-mrq-d89i68d"/>
        </item>
        <item>
            <title><![CDATA[ಅಜ್ಜಿ ಕಾಲದ ಟ್ರಿಕ್ಸ್.. ಈ ರೀತಿ ವೀಳ್ಯದೆಲೆ ಬಳಸಿದ್ರೆ ಇಡ್ಲಿ ಹಿಟ್ಟು 3 ದಿನವಾದ್ರೂ ಹುಳಿಯಾಗಲ್ಲ]]></title>
            <link>https://kannada.asianetnews.com/life/stop-your-idli-batter-from-getting-sour/articleshow-dr9pdi4</link>
            <guid isPermaLink="true">https://kannada.asianetnews.com/life/stop-your-idli-batter-from-getting-sour/articleshow-dr9pdi4</guid>
            <pubDate>Fri, 28 Aug 2026 18:30:19 +0530</pubDate>
            <description><![CDATA[&lt;p&gt;&lt;strong&gt;Idli batter tips: &lt;/strong&gt;ಮನೆಯಲ್ಲಿ ರುಬ್ಬಿದ ಇಡ್ಲಿ ಹಿಟ್ಟು ಎರಡೇ ದಿನಕ್ಕೆ ಅತಿಯಾಗಿ ಹುಳಿಯಾಗಿ ರುಚಿ ಕೆಡುತ್ತಿದೆಯೇ? ಹಾಗಿದ್ದರೆ ಚಿಂತಿಸಬೇಡಿ. ಇಡ್ಲಿ ಹಿಟ್ಟನ್ನು ದೀರ್ಘಕಾಲ ಫ್ರೆಶ್ ಆಗಿರಿಸಲು ಮತ್ತು ಅದು ಬೇಗನೆ ಹುಳಿಯಾಗದಂತೆ ತಡೆಯಲು ನಮ್ಮ ಅಡುಗೆಮನೆಯಲ್ಲಿಯೇ ಇರುವ ಕೆಲವು ಸರಳ ಹಾಗೂ ಪರಿಣಾಮಕಾರಿ ಮ್ಯಾಜಿಕ್ ಟಿಪ್ಸ್&zwnj; ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m14766b3z0z6h0nq8m9eahhz,imgname-thumbnail---2026-08-28t182519.108-1787921897825.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದ&lt;/strong&gt;ಕ್ಷಿಣ ಭಾರತದ ಬಹುತೇಕ ಮನೆಗಳಲ್ಲಿ ಇಡ್ಲಿ ಅತ್ಯಂತ ಜನಪ್ರಿಯ ಮತ್ತು ನೆಚ್ಚಿನ ಉಪಹಾರ. ಮೃದುವಾದ, ಬಿಸಿಬಿಸಿ ಇಡ್ಲಿಗಳ ಜೊತೆಗೆ ಚಟ್ನಿ ಅಥವಾ ಸಾಂಬಾರ್ ಇದ್ದರೆ ಆ ದಿನದ ಆರಂಭವೇ ಅದ್ಭುತವಾಗಿರುತ್ತದೆ. ಆದರೆ, ಇಡ್ಲಿ ಹಿಟ್ಟು ತಯಾರಿಸುವುದು ಒಂದು ಸಮಯ ತೆಗೆದುಕೊಳ್ಳುವ ಕೆಲಸ. ಈ ಕಾರಣಕ್ಕಾಗಿ ಹೆಚ್ಚಿನ ಗೃಹಿಣಿಯರು ವಾರಕ್ಕೆ ಬೇಕಾಗುವಷ್ಟು ಹಿಟ್ಟನ್ನು ಒಟ್ಟಿಗೆ ರುಬ್ಬಿ ಫ್ರಿಡ್ಜ್&zwnj;ನಲ್ಲಿ ಶೇಖರಿಸಿಡುತ್ತಾರೆ.&lt;/p&gt;&lt;p&gt;ಆದರೆ ಇಲ್ಲಿ ಎದುರಾಗುವ ಮುಖ್ಯ ಸಮಸ್ಯೆ ಎಂದರೆ ಹಿಟ್ಟಿನ ಹುಳಿ. ಹಿಟ್ಟು ರುಬ್ಬಿದ ಮೊದಲ ದಿನ ಇಡ್ಲಿಗಳು ಚೆನ್ನಾಗಿ ಬರುತ್ತವೆ. ಆದರೆ ಎರಡನೇ ಅಥವಾ ಮೂರನೇ ದಿನಕ್ಕೆ ಹಿಟ್ಟು ಅತಿಯಾಗಿ ಹುಳಿಯಾಗಿಬಿಡುತ್ತದೆ. ಅತಿಯಾದ ಹುಳಿ ಹಿಟ್ಟಿನಿಂದ ತಯಾರಿಸಿದ ಇಡ್ಲಿಗಳು ರುಚಿಯನ್ನು ಕಳೆದುಕೊಳ್ಳುವುದಲ್ಲದೆ, ಹೊಟ್ಟೆಯಲ್ಲಿ ಅಸಿಡಿಟಿಯಂತಹ ಸಮಸ್ಯೆಗಳನ್ನೂ ಉಂಟುಮಾಡಬಹುದು. ಈ ಸಮಸ್ಯೆಗೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಒಂದು ಪುರಾತನ ಮತ್ತು ಅತ್ಯಂತ ಸರಳವಾದ ಮ್ಯಾಜಿಕ್ ಟ್ರಿಕ್ ಇಲ್ಲಿದೆ, ಅದೇ &quot;ವೀಳ್ಯದೆಲೆ&quot; (Betel Leaf).&lt;/p&gt;&lt;h2&gt;&lt;strong&gt;ವೀಳ್ಯದೆಲೆಯನ್ನು ಬಳಸುವುದು ಹೇಗೆ?&lt;/strong&gt;&lt;/h2&gt;&lt;p&gt;&lt;strong&gt;ಇಡ್ಲಿ ಹಿಟ್ಟು ತಾಜಾವಾಗಿರಲು ಈ ಕೆಳಗಿನ ಹಂತಗಳನ್ನು ಅನುಸರಿಸಿ..&lt;/strong&gt;&lt;/p&gt;&lt;p&gt;*ಮೊದಲು ಒಂದು ತಾಜಾ ಮತ್ತು ಹಸಿರಾಗಿರುವ ವೀಳ್ಯದೆಲೆಯನ್ನು ಆರಿಸಿಕೊಳ್ಳಿ. ಎಲೆ ಬಾಡಿರಬಾರದು ಅಥವಾ ಹರಿದಿರಬಾರದು.&lt;/p&gt;&lt;p&gt;*ಈ ಎಲೆಯನ್ನು ಶುದ್ಧವಾದ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಒಣ ಬಟ್ಟೆಯಿಂದ ಎಲೆಯ ಮೇಲಿರುವ ನೀರನ್ನು ಸಂಪೂರ್ಣವಾಗಿ ಒರೆಸಿ.&lt;/p&gt;&lt;p&gt;*ಇಡ್ಲಿ ಹಿಟ್ಟನ್ನು ರುಬ್ಬಿದ ನಂತರ, ಅದನ್ನು ಒಂದು ಪಾತ್ರೆಗೆ ಹಾಕಿ. ಈಗ ಆ ವೀಳ್ಯದೆಲೆಯ ಹಿಂಭಾಗ (ಅಂದರೆ ಎಲೆಯ ನರಗಳು ಕಾಣಿಸುವ ಭಾಗ) ಮೇಲ್ಮುಖವಾಗಿರುವಂತೆ, ಅಂದರೆ ಎಲೆಯನ್ನು ಉಲ್ಟಾ ಮಾಡಿ ಹಿಟ್ಟಿನ ಮೇಲೆ ಇಡಿ.&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ಎಲೆಯನ್ನು ಹಿಟ್ಟಿನೊಳಗೆ ಒತ್ತಬೇಡಿ ಅಥವಾ ಮಿಶ್ರಣ ಮಾಡಬೇಡಿ. ಅದು ಹಿಟ್ಟಿನ ಮೇಲ್ಮೈ ಮೇಲೆ ಹಾಗೆಯೇ ತೇಲುತ್ತಿರಲಿ. ನಂತರ ಪಾತ್ರೆಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ ಫ್ರಿಡ್ಜ್&zwnj;ನಲ್ಲಿ ಇಡಿ.&lt;/p&gt;&lt;h2&gt;&lt;strong&gt;ಇದು ಹೇಗೆ ಕೆಲಸ ಮಾಡುತ್ತದೆ?&lt;/strong&gt;&lt;/h2&gt;&lt;p&gt;ವೀಳ್ಯದೆಲೆಯಲ್ಲಿ ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ (Anti-bacterial) ಮತ್ತು ಆಂಟಿ-ಫಂಗಲ್ ಗುಣಗಳಿವೆ. ಇಡ್ಲಿ ಹಿಟ್ಟು ಹುಳಿಯಾಗಲು ಅದರಲ್ಲಿರುವ ಕಿಣ್ವಗಳ ಹುದುಗುವಿಕೆ (Fermentation) ಪ್ರಕ್ರಿಯೆಯೇ ಕಾರಣ. ವೀಳ್ಯದೆಲೆಯು ಈ ಪ್ರಕ್ರಿಯೆಯ ವೇಗವನ್ನು ನಿಯಂತ್ರಿಸುತ್ತದೆ. ಇದು ಹಿಟ್ಟನ್ನು ಸಂಪೂರ್ಣವಾಗಿ ಹುಳಿಯಾಗದಂತೆ ತಡೆಯುವುದಿಲ್ಲ, ಬದಲಾಗಿ ಅತಿಯಾಗಿ ಹುಳಿಯಾಗುವುದನ್ನು ನಿಧಾನಗೊಳಿಸುತ್ತದೆ. ಇದರಿಂದ ಹಿಟ್ಟು ಎರಡು ದಿನಗಳ ನಂತರವೂ ರುಬ್ಬಿದ ದಿನದಷ್ಟೇ ತಾಜಾವಾಗಿರುತ್ತದೆ.&lt;/p&gt;&lt;h2&gt;&lt;strong&gt;ಇತರ ಕೆಲವು ಉಪಯುಕ್ತ ಟಿಪ್ಸ್&lt;/strong&gt;&lt;/h2&gt;&lt;p&gt;*ಹಿಟ್ಟಿಗೆ ಉಪ್ಪನ್ನು ಮೊದಲೇ ಸೇರಿಸುವ ಬದಲು, ಇಡ್ಲಿ ಮಾಡುವ ಸ್ವಲ್ಪ ಸಮಯದ ಮುಂಚೆ ಸೇರಿಸಿದರೆ ಹಿಟ್ಟು ದೀರ್ಘಕಾಲ ಹುಳಿಯಾಗದೆ ಇರುತ್ತದೆ.&lt;/p&gt;&lt;p&gt;ಹಿಟ್ಟನ್ನು ಶೇಖರಿಸಿಡಲು ಯಾವಾಗಲೂ ಗಾಳಿಯಾಡದ (Airtight) ಪಾತ್ರೆಯನ್ನೇ ಬಳಸಿ.&lt;/p&gt;&lt;p&gt;ಈ ಸರಳ ಮತ್ತು ನೈಸರ್ಗಿಕ ವಿಧಾನವನ್ನು ಬಳಸುವುದರಿಂದ ನೀವು ಯಾವುದೇ ರಾಸಾಯನಿಕಗಳ ಭಯವಿಲ್ಲದೆ, ಪ್ರತಿ ಬಾರಿಯೂ ರುಚಿಯಾದ ಮತ್ತು ಮೃದುವಾದ ಇಡ್ಲಿಗಳನ್ನು ಆನಂದಿಸಬಹುದು. ಮುಂದಿನ ಬಾರಿ ಹಿಟ್ಟು ರುಬ್ಬಿದಾಗ ಈ ವೀಳ್ಯದೆಲೆಯ ಟ್ರಿಕ್ ಬಳಸಲು ಮರೆಯಬೇಡಿ!&lt;/p&gt;&lt;h3&gt;&lt;strong&gt;ಇದು ಗಮನದಲ್ಲಿರಲಿ&lt;/strong&gt;&lt;/h3&gt;&lt;p&gt;&lt;strong&gt;ಹಸಿಮೆಣಸಿನಕಾಯಿ ತೊಟ್ಟಿನ ಬಳಕೆ (Green Chilli Stalks)&lt;/strong&gt;&lt;/p&gt;&lt;p&gt;ಇದು ಹಿರಿಯರು ಅನುಸರಿಸುತ್ತಿದ್ದ ಮತ್ತೊಂದು ಅದ್ಭುತ ವಿಧಾನ. ಇಡ್ಲಿ ಹಿಟ್ಟು ರುಬ್ಬಿದ ನಂತರ ಅದರ ಮೇಲ್ಭಾಗದಲ್ಲಿ 2-3 ಹಸಿಮೆಣಸಿನಕಾಯಿಯ ತೊಟ್ಟುಗಳನ್ನು (ತೊಟ್ಟು ಕೆಳಮುಖವಾಗಿರುವಂತೆ) ಇಡಿ. ಮೆಣಸಿನಕಾಯಿಯ ತೊಟ್ಟಿನಲ್ಲಿರುವ ಕೆಲವು ನೈಸರ್ಗಿಕ ಅಂಶಗಳು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ನಿಯಂತ್ರಿಸಿ ಹಿಟ್ಟು ಬೇಗನೆ ಹುಳಿಯಾಗದಂತೆ ನೋಡಿಕೊಳ್ಳುತ್ತವೆ.&lt;/p&gt;&lt;p&gt;ಒಂದು ವೇಳೆ ಹಿಟ್ಟು ಅತಿಯಾಗಿ ಹುಳಿಯಾಗಿದ್ದರೆ, ಅದಕ್ಕೆ ಸ್ವಲ್ಪ ಹಸಿ ಹಾಲು ಅಥವಾ ಒಂದು ಚಮಚ ಸಕ್ಕರೆ ಸೇರಿಸಿ ಕಲಸಿ. ಇದು ಹಿಟ್ಟಿನ ಹುಳಿ ಅಂಶವನ್ನು ಸಮತೋಲನಗೊಳಿಸಿ ಇಡ್ಲಿ ರುಚಿಯಾಗಿ ಬರುವಂತೆ ಮಾಡುತ್ತದೆ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/life/stop-your-idli-batter-from-getting-sour/articleshow-dr9pdi4"/>
        </item>
        <item>
            <title><![CDATA[ಬೆಣ್ಣೆ-ತುಪ್ಪ ಏನೂ ಬೇಡ.. ಎರಡೇ ಪದಾರ್ಥ ಬಳಸಿ ಮಾಡಿ ಗರಿಗರಿಯಾದ ಚಕ್ಕುಲಿ, ಬಾಯಲ್ಲಿಟ್ಟರೆ ಕರಗುತ್ತೆ]]></title>
            <link>https://kannada.asianetnews.com/food/crispy-ganesh-chaturthi-special-chakli-recipe-easy-and-crunchy/articleshow-etix1g3</link>
            <guid isPermaLink="true">https://kannada.asianetnews.com/food/crispy-ganesh-chaturthi-special-chakli-recipe-easy-and-crunchy/articleshow-etix1g3</guid>
            <pubDate>Fri, 28 Aug 2026 19:32:32 +0530</pubDate>
            <description><![CDATA[&lt;p&gt;&lt;strong&gt;Chakli recipe Kannada: &lt;/strong&gt;ಗಣೇಶ ಚತುರ್ಥಿ ಸಡಗರಕ್ಕೆ ಅತಿ ಕಡಿಮೆ ಸಮಯದಲ್ಲಿ ಮತ್ತು ಕನಿಷ್ಠ ಪದಾರ್ಥಗಳನ್ನು ಬಳಸಿ ಗರಿಗರಿಯಾದ ಚಕ್ಕುಲಿ ಮಾಡುವ ಸುಲಭ ವಿಧಾನ ಇಲ್ಲಿದೆ. ಉತ್ತರ ಕರ್ನಾಟಕ ಶೈಲಿಯ ಈ ಚಕ್ಕುಲಿ ಬಾಯಲ್ಲಿಟ್ಟರೆ ಕರಗುವಂತಿರುತ್ತವೆ ಮತ್ತು ಸಾಯಂಕಾಲದ ಟೀ ಜೊತೆ ಸವಿಯಲು ಕೂಡ ಅತ್ಯುತ್ತಮ ಸ್ನ್ಯಾಕ್ಸ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m14avjw9728w06spn7vrc3qz,imgname-thumbnail---2026-08-28t192528.100-1787925744521.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇ&lt;/strong&gt;ನ್ನೇನು ಗಣೇಶ ಚತುರ್ಥಿ ಬರಲಿದೆ. ಹಬ್ಬ ಅಂದಮೇಲೆ ತರಹೇವಾರಿ ತಿಂಡಿಗಳು ಇರಲೇಬೇಕು. ಅದರಲ್ಲೂ ಉತ್ತರ ಕರ್ನಾಟಕದ ಕಡೆ ಚಕ್ಕುಲಿ ಇಲ್ಲದೆ ಹಬ್ಬ ಪೂರ್ಣವಾಗುವುದಿಲ್ಲ. ಹಾಗಾಗಿ ಹೋಟೆಲ್&zwnj;ನಲ್ಲಿ ಸಿಗುವಂತೆ ಅತಿ ರುಚಿಯಾಗಿ, ಅಷ್ಟೇ ಗರಿಗರಿಯಾಗಿ ಮನೆಯಲ್ಲೇ ಚಕ್ಕುಲಿ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಕೇವಲ ಅಕ್ಕಿ ಹಿಟ್ಟು ಮತ್ತು ಪುಟಾಣಿ (ಹುರಿಗಡಲೆ) ಬಳಸಿ, ಬೆಣ್ಣೆ-ತುಪ್ಪ ಯಾವುದೂ ಇಲ್ಲದಿದ್ದರೂ ಅತಿ ಸುಲಭವಾಗಿ ಚಕ್ಕುಲಿ ಮಾಡುವ ವಿಧಾನ ಇಲ್ಲಿದೆ.&lt;/p&gt;&lt;h2&gt;&lt;strong&gt;ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;ಅಕ್ಕಿ ಹಿಟ್ಟು - 2 ಕಪ್ಪುಟಾಣಿ ಹಿಟ್ಟು (ಹುರಿಗಡಲೆ ಹಿಟ್ಟು) - 1 ಕಪ್ಜೀರಿಗೆ - ಸ್ವಲ್ಪಅಜ್ವೈನ್ (ಓಂ ಕಾಳು) - ಸ್ವಲ್ಪಬಿಳಿ ಎಳ್ಳು - ಸ್ವಲ್ಪಅಚ್ಚಖಾರದ ಪುಡಿ - ರುಚಿಗೆ ತಕ್ಕಷ್ಟುಉಪ್ಪು - ರುಚಿಗೆ ತಕ್ಕಷ್ಟು&quot;ಎಣ್ಣೆ - ಹಿಟ್ಟು ಕಲಸಲು 2 ಚಮಚ ಮತ್ತು ಕರಿಯಲು ಬೇಕಾದಷ್ಟುಉಗುರು ಬೆಚ್ಚಗಿನ ನೀರು - ಹಿಟ್ಟು ಕಲಸಲು&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;&lt;strong&gt;ಹಿಟ್ಟಿನ ಮಿಶ್ರಣ&lt;/strong&gt;ಒಂದು ಅಗಲವಾದ ಪಾತ್ರೆಯಲ್ಲಿ 2 ಕಪ್ ಅಕ್ಕಿ ಹಿಟ್ಟು ಮತ್ತು 1 ಕಪ್ ಪುಟಾಣಿ ಹಿಟ್ಟನ್ನು ಹಾಕಿಕೊಳ್ಳಿ. ಇದಕ್ಕೆ ಉಪ್ಪು, ಜೀರಿಗೆ, ಓಂ ಕಾಳು, ಎಳ್ಳು ಮತ್ತು ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.&lt;/p&gt;&lt;p&gt;&lt;strong&gt;ಬಿಸಿ ಎಣ್ಣೆಯ ಮ್ಯಾಜಿಕ್&lt;/strong&gt;ಎರಡು ಚಮಚ ಎಣ್ಣೆಯನ್ನು ಚೆನ್ನಾಗಿ ಕಾಯಿಸಿ, ಹಿಟ್ಟಿನ ಮೇಲೆ ಹಾಕಿ. ಎಣ್ಣೆ ಹಾಕಿದಾಗ ಹಿಟ್ಟು ನೊರೆ ಬರಬೇಕು, ಆಗಲೇ ಚಕ್ಕುಲಿ ಗರಿಗರಿಯಾಗಿ ಬರುವುದು. ಎಣ್ಣೆ ಬಿಸಿ ಇರುವುದರಿಂದ ಸ್ವಲ್ಪ ಹೊತ್ತು ಬಿಟ್ಟು ಕೈಯಿಂದ ಹಿಟ್ಟನ್ನು ಚೆನ್ನಾಗಿ ನಾದಿ.&lt;/p&gt;&lt;p&gt;&lt;strong&gt;ಹಿಟ್ಟು ಕಲಸುವುದು&lt;/strong&gt;ಉಗುರು ಬೆಚ್ಚಗಿನ ನೀರನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಹಿಟ್ಟನ್ನು ಕಲಸಿ. ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ತೀರಾ ಮೆತ್ತಗಾದರೆ ಎಣ್ಣೆ ಕುಡಿಯುತ್ತದೆ, ತೀರಾ ಗಟ್ಟಿಯಾದರೆ ಚಕ್ಕುಲಿ ಕಟ್ ಆಗುತ್ತದೆ.&lt;/p&gt;&lt;p&gt;&lt;strong&gt;ಆಕಾರ ನೀಡುವುದು&lt;/strong&gt;ಚಕ್ಕುಲಿ ಒರಳಿಗೆ (ಹೊರಳು) ಹಿಟ್ಟು ತುಂಬಿಸಿ. ಒಂದು ತಟ್ಟೆ ಅಥವಾ ಪೇಪರ್ ಮೇಲೆ ನಿಮಗೆ ಬೇಕಾದ ಗಾತ್ರದಲ್ಲಿ ಚಕ್ಕುಲಿ ಒತ್ತಿಕೊಳ್ಳಿ. ಚಕ್ಕುಲಿ ತುದಿಗಳನ್ನು ಲೈಟಾಗಿ ಪ್ರೆಸ್ ಮಾಡಿ, ಇದರಿಂದ ಎಣ್ಣೆಯಲ್ಲಿ ಹಾಕಿದಾಗ ಅವು ಬಿಟ್ಟುಕೊಳ್ಳುವುದಿಲ್ಲ.&lt;/p&gt;&lt;p&gt;&lt;strong&gt;ಕರಿಯುವುದು&lt;/strong&gt;ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಉರಿಯನ್ನು ಮಧ್ಯಮ ಹಂತದಲ್ಲಿಡಿ (Medium Flame). ಚಕ್ಕುಲಿ ಎಣ್ಣೆಗೆ ಬಿಟ್ಟು ಎರಡು ಕಡೆ ಹೊಂಬಣ್ಣ ಬರುವವರೆಗೆ ಕರಿಯಿರಿ. ಎಣ್ಣೆಯ ನೊರೆ ಸಂಪೂರ್ಣ ಕಡಿಮೆಯಾದಾಗ ಚಕ್ಕುಲಿ ಬೆಂದಿದೆ ಎಂದರ್ಥ.&lt;/p&gt;&lt;h3&gt;ಈಗ ನಿಮ್ಮ ಮುಂದೆ ಬಿಸಿಬಿಸಿ, ಕರುಂ ಕುರುಂ ಎನ್ನುವ ಚಕ್ಕುಲಿ ಸಿದ್ಧ..&lt;/h3&gt;&lt;h2&gt;&lt;strong&gt;ಇದು ಗಮನದಲ್ಲಿರಲಿ..&lt;/strong&gt;&lt;/h2&gt;&lt;p&gt;&lt;strong&gt;ಹಿಟ್ಟನ್ನು ಜರಡಿ ಹಿಡಿಯಿರಿ (Sifting)&lt;/strong&gt;ಅಕ್ಕಿ ಹಿಟ್ಟು ಮತ್ತು ಪುಟಾಣಿ ಹಿಟ್ಟನ್ನು ಬಳಸುವ ಮೊದಲು ಕಡ್ಡಾಯವಾಗಿ ಜರಡಿ ಹಿಡಿಯಿರಿ. ಹಿಟ್ಟಿನಲ್ಲಿ ಸಣ್ಣ ನುಚ್ಚು ಅಥವಾ ಕಣಗಳಿದ್ದರೆ, ಚಕ್ಕುಲಿ ಒರಳಿನ (ಮೋಲ್ಡ್) ರಂಧ್ರಗಳಲ್ಲಿ ಸಿಲುಕಿಕೊಂಡು ಚಕ್ಕುಲಿ ಕಟ್ ಆಗುವ ಸಾಧ್ಯತೆ ಇರುತ್ತದೆ. ಜರಡಿ ಹಿಡಿದರೆ ಹಿಟ್ಟು ಸಾಫ್ಟ್ ಆಗಿ ಬರುತ್ತದೆ.&lt;/p&gt;&lt;p&gt;&lt;strong&gt;ಒದ್ದೆ ಬಟ್ಟೆ ಮುಚ್ಚಿಡಿ&lt;/strong&gt;ನಾವು ಒಮ್ಮೆಲೇ ಎಲ್ಲಾ ಹಿಟ್ಟನ್ನು ಒರಳಿನಲ್ಲಿ ಹಾಕಲು ಸಾಧ್ಯವಿಲ್ಲ. ಉಳಿದ ಹಿಟ್ಟು ಗಾಳಿಗೆ ಆರಿದರೆ ಗಟ್ಟಿಯಾಗಿ ಚಕ್ಕುಲಿ ಒತ್ತಲು ಕಷ್ಟವಾಗುತ್ತದೆ. ಆದ್ದರಿಂದ ಕಲಸಿದ ಹಿಟ್ಟಿನ ಮೇಲೆ ಯಾವಾಗಲೂ ಒಂದು ಒದ್ದೆ ಬಟ್ಟೆಯನ್ನು ಮುಚ್ಚಿಡಿ. ಇದರಿಂದ ಹಿಟ್ಟು ಕೊನೆಯವರೆಗೂ ತಾಜಾವಾಗಿರುತ್ತದೆ.&lt;/p&gt;&lt;p&gt;&lt;strong&gt;ಒಡೆಯುತ್ತಿದ್ದರೆ ಏನು ಮಾಡಬೇಕು?&lt;/strong&gt;ಒಂದು ವೇಳೆ ಚಕ್ಕುಲಿ ಒತ್ತಲು ಹೋದಾಗ ಕಟ್ ಆಗುತ್ತಿದ್ದರೆ, ಹಿಟ್ಟಿಗೆ ಸ್ವಲ್ಪ ನೀರು ಚಿಮುಕಿಸಿ ಮತ್ತೆ ನಾದಿಕೊಳ್ಳಿ. ಒಂದು ವೇಳೆ ಚಕ್ಕುಲಿ ಎಣ್ಣೆಯಲ್ಲಿ ಬಿಟ್ಟುಕೊಳ್ಳುತ್ತಿದ್ದರೆ (ಕರಗುತ್ತಿದ್ದರೆ) ಹಿಟ್ಟಿಗೆ ಸ್ವಲ್ಪ ಒಣ ಅಕ್ಕಿ ಹಿಟ್ಟು ಸೇರಿಸಿ ಸರಿಪಡಿಸಿಕೊಳ್ಳಿ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/food/crispy-ganesh-chaturthi-special-chakli-recipe-easy-and-crunchy/articleshow-etix1g3"/>
        </item>
        <item>
            <title><![CDATA[ಬೆಳಗ್ಗೆ ಎದ್ದಕೂಡಲೇ ಈ ಚಹಾ ಕುಡಿದು ನೋಡಿ.. ಆರೋಗ್ಯದಲ್ಲಿ ಭಾರೀ ಬದಲಾವಣೆ ಬರುತ್ತೆ!]]></title>
            <link>https://kannada.asianetnews.com/webstories/health-life/7-healthy-herbal-teas-for-your-morning-routine-to-know-here-gnahlny</link>
            <guid isPermaLink="true">https://kannada.asianetnews.com/webstories/health-life/7-healthy-herbal-teas-for-your-morning-routine-to-know-here-gnahlny</guid>
            <pubDate>Sat, 29 Aug 2026 19:24:24 +0530</pubDate>
            <description><![CDATA[&lt;p&gt;ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿಯೋದು ಹೆಚ್ಚಿನವರ ಅಭ್ಯಾಸ. ದಿನವನ್ನು ಚೈತನ್ಯದಿಂದ ಆರಂಭಿಸಲು ಹಾಗೂ ಆರೋಗ್ಯ ವೃದ್ಧಿಗಾಗಿ ಈ ಗಿಡಮೂಲಿಕೆ ಚಹಾಗಳನ್ನು ಟ್ರೈ ಮಾಡಬಹುದು.7 Healthy Herbal Teas for Your Morning Routine to know here.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m16w23dvb5sz2p0xg68had18,imgname-herbal-tea--2--1788010892731.jpg" type="image/jpeg" height="390" width="690"/>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/webstories/health-life/7-healthy-herbal-teas-for-your-morning-routine-to-know-here-gnahlny"/>
        </item>
        <item>
            <title><![CDATA[500ಕ್ಕೂ ಹೆಚ್ಚು ಕೆಲಸ ಮಾಡುವ ಲಿವರ್ ಆರೋಗ್ಯಕ್ಕೆ ಈ 5 ಪದಾರ್ಥ ವರದಾನ!]]></title>
            <link>https://kannada.asianetnews.com/webstories/health-life/natural-liver-detox-5-spices-and-vegetables-you-must-eat-gque8xu</link>
            <guid isPermaLink="true">https://kannada.asianetnews.com/webstories/health-life/natural-liver-detox-5-spices-and-vegetables-you-must-eat-gque8xu</guid>
            <pubDate>Sat, 29 Aug 2026 18:35:58 +0530</pubDate>
            <description><![CDATA[&lt;p&gt;Liver health foods: ನಮ್ಮ ದೇಹದಲ್ಲಿ 500ಕ್ಕೂ ಹೆಚ್ಚು ಪ್ರಮುಖ ಕೆಲಸಗಳನ್ನು ಮಾಡುವ ಲಿವರ್ ಅನ್ನು ಕೆಮಿಕಲ್ ಫ್ಯಾಕ್ಟರಿ ಎನ್ನಲಾಗುತ್ತದೆ. ಇದರ ಆರೋಗ್ಯಕ್ಕಾಗಿ ಡಾ. ಸಲೀಂ ಜೈದಿ ಅವರ ಸಲಹೆಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyqgrtyz00ry0n6s13whh43,imgname-liver-1783442727774.jpg" type="image/jpeg" height="390" width="690"/>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/health-life/natural-liver-detox-5-spices-and-vegetables-you-must-eat-gque8xu"/>
        </item>
        <item>
            <title><![CDATA[₹1 ಕೊಟ್ರೆ ಸಾಕು ಬಿಸಿ-ಬಿಸಿ ಇಡ್ಲಿ, ಹಸಿದವರಿಗೆ ದೇವರಾದ ‘ಇಡ್ಲಿ ಅಮ್ಮ’]]></title>
            <link>https://kannada.asianetnews.com/life/meet-the-80-year-old-idli-amma-sold-idlis-for-rs-1-suh/articleshow-h0qrt6q</link>
            <guid isPermaLink="true">https://kannada.asianetnews.com/life/meet-the-80-year-old-idli-amma-sold-idlis-for-rs-1-suh/articleshow-h0qrt6q</guid>
            <pubDate>Fri, 28 Aug 2026 15:27:20 +0530</pubDate>
            <description><![CDATA[&lt;p&gt;Idli ಮುಂಜಾನೆ ಎದ್ದ ತಕ್ಷಣ ಬಿಸಿ ಬಿಸಿ ಇಡ್ಲಿಯ ಸುವಾಸನೆ, ಒಂದು ಕಡೆ ಸೌದೆ ಒಲೆಯ ಮೇಲೆ ಹಬೆಯಾಡುವ ಇಡ್ಲಿ, ಮತ್ತೊಂದೆಡೆ ಹಸಿದ ಹೊಟ್ಟೆಗಳಿಗೆ ಕೈಗೆಟುಕುವ ದರದಲ್ಲಿ ಊಟ ನೀಡುವ ವೃದ್ಧೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m13wkt96cz83dwfsc1cse9f8,imgname-meet-the-80-year-old-idli-amma-who-sold-idlis-for-rs-1-1787910809893.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಜಾನೆ ಎದ್ದ ತಕ್ಷಣ ಬಿಸಿ ಬಿಸಿ ಇಡ್ಲಿಯ ಸುವಾಸನೆ, ಒಂದು ಕಡೆ ಸೌದೆ ಒಲೆಯ ಮೇಲೆ ಹಬೆಯಾಡುವ ಇಡ್ಲಿ, ಮತ್ತೊಂದೆಡೆ ಹಸಿದ ಹೊಟ್ಟೆಗಳಿಗೆ ಕೈಗೆಟುಕುವ ದರದಲ್ಲಿ ಊಟ ನೀಡುವ ವೃದ್ಧೆ. ಕೊಯಮತ್ತೂರು ಬಳಿಯ ವಡಿವೇಲಂಪಾಳಯಂನಲ್ಲಿ ವರ್ಷಗಳಿಂದ ಇದೇ ದೃಶ್ಯ ಕಂಡುಬರುತ್ತಿತ್ತು. ಈ ಸರಳ ಸೇವೆಯ ಹಿಂದಿರುವ ಮಹಿಳೆಯೇ ಕೆ. ಕಮಲಥಾಲ್, ತಮಿಳುನಾಡಿನ ಜನರ ಪ್ರೀತಿಯ &lsquo;ಇಡ್ಲಿ ಅಮ್ಮ&rsquo;. ಇಡ್ಲಿಯನ್ನು ಕೇವಲ ಆಹಾರವನ್ನಾಗಿ ನೋಡದೆ, ಕಷ್ಟಪಟ್ಟು ದುಡಿಯುವ ಜನರಿಗೆ ಅದು ದಿನದ ಅಗತ್ಯ ಎಂದು ಭಾವಿಸಿದ ಕಮಲಥಾಲ್, ವರ್ಷಗಳಿಂದ ಅತ್ಯಂತ ಕಡಿಮೆ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಾ ಬಂದಿದ್ದಾರೆ. ಒಂದು ಹಂತದಲ್ಲಿ ಒಂದು ಇಡ್ಲಿಯ ಬೆಲೆ ಕೇವಲ ₹1 ಆಗಿತ್ತು.&lt;/p&gt;&lt;h2&gt;ಹಸಿದವರು ಯಾರೂ ಮಲಗಬಾರದು ಎಂಬುದೇ ಉದ್ದೇಶ&lt;/h2&gt;&lt;p&gt;ಕಮಲಥಾಲ್ ಅವರ ಇಡ್ಲಿ ವ್ಯಾಪಾರದ ಉದ್ದೇಶ ದೊಡ್ಡ ಲಾಭ ಗಳಿಸುವುದಾಗಿರಲಿಲ್ಲ. ಕೆಲಸಗಾರರು, ವಿದ್ಯಾರ್ಥಿಗಳು ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಕಡಿಮೆ ಹಣದಲ್ಲಿ ಹೊಟ್ಟೆತುಂಬ ಊಟ ಮಾಡಬೇಕು ಎಂಬುದೇ ಅವರ ಆಶಯವಾಗಿತ್ತು. ಬೆಲೆ ಏರಿಕೆಯ ನಡುವೆಯೂ ಅವರು ತಮ್ಮ ಇಡ್ಲಿಯ ದರವನ್ನು ಹೆಚ್ಚಿಸಲು ಮುಂದಾಗಲಿಲ್ಲ. ಲಾಕ್&zwnj;ಡೌನ್ ಸಮಯದಲ್ಲಿ ಅಡುಗೆ ಸಾಮಗ್ರಿಗಳ ಬೆಲೆ ಏರಿಕೆಯಾದರೂ, ಬಡವರ ಮೇಲಿನ ಹೊರೆ ಹೆಚ್ಚಿಸಬಾರದು ಎಂಬ ಕಾರಣಕ್ಕೆ ತಮ್ಮ ದರವನ್ನು ಸಾಧ್ಯವಾದಷ್ಟು ಕಡಿಮೆ ಇಟ್ಟುಕೊಂಡಿದ್ದರು. ಇದೇ ಸರಳವಾದ ಮಾನವೀಯ ನಡೆ ಅವರನ್ನು ಸಾಮಾನ್ಯ ಇಡ್ಲಿ ಮಾರಾಟಗಾರ್ತಿಯಿಂದ ದೇಶದ ಗಮನ ಸೆಳೆದ ಇಡ್ಲಿ ಅಮ್ಮ ನನ್ನಾಗಿ ಮಾಡಿತು.&lt;/p&gt;&lt;h2&gt;2019ರಲ್ಲಿ ಆನಂದ್ ಮಹೀಂದ್ರಾ ಗಮನ ಸೆಳೆದ ಕಥೆ&lt;/h2&gt;&lt;p&gt;2019ರಲ್ಲಿ ಉದ್ಯಮಿ ಆನಂದ್ ಮಹೀಂದ್ರಾ ಅವರು ಕಮಲಥಾಲ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅವರ ಸೇವೆಯಿಂದ ಪ್ರಭಾವಿತರಾದ ಮಹೀಂದ್ರಾ, ಕಮಲಥಾಲ್ ಅವರ ಕೆಲಸಕ್ಕೆ ಬೆಂಬಲ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಇದು ಕೇವಲ ಸಾಮಾಜಿಕ ಜಾಲತಾಣದ ಮೆಚ್ಚುಗೆಯಾಗಿ ಉಳಿಯಲಿಲ್ಲ. ಮುಂದೆ ಅವರ ಜೀವನಕ್ಕೆ ನಿಜವಾದ ಬದಲಾವಣೆಯೇ ಬರಲು ಆರಂಭಿಸಿತು. ಕಮಲಥಾಲ್ ಅವರಿಗೆ ಸುರಕ್ಷಿತವಾದ ಮನೆ ಮಾತ್ರವಲ್ಲದೆ, ಅವರು ತಮ್ಮ ಇಡ್ಲಿ ತಯಾರಿಸುವ ಕೆಲಸವನ್ನು ಮುಂದುವರಿಸಲು ಅನುಕೂಲವಾಗುವಂತಹ ಮನೆ-ಕಮ್-ಕಾರ್ಯಸ್ಥಳ ನಿರ್ಮಿಸುವ ಯೋಜನೆ ರೂಪಿಸಲಾಯಿತು.&lt;/p&gt;&lt;h2&gt;ಮನೆ ಜೊತೆಗೆ ವಿಶೇಷ ಅಡುಗೆಮನೆಯೂ ಸಿಕ್ಕಿತು&lt;/h2&gt;&lt;p&gt;2021ರ ವೇಳೆಗೆ ಅವರ ಹೆಸರಿನಲ್ಲಿ ಭೂಮಿ ನೋಂದಣಿ ಮಾಡಿ, ಹಳೆಯ ಅಂಗಡಿಯ ಸಮೀಪದಲ್ಲೇ ಮನೆ ಮತ್ತು ಕೆಲಸದ ಸ್ಥಳ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಅಂತಿಮವಾಗಿ 2022ರ ಮದರ್ಸ್ ಡೇ ಸಂದರ್ಭದಲ್ಲಿ ಕಮಲಥಾಲ್ ಅವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಅಡುಗೆಮನೆಯೊಂದಿಗೆ ಹೊಸ ಮನೆಯನ್ನು ಹಸ್ತಾಂತರಿಸಲಾಯಿತು. ಅಡುಗೆ ಮಾಡಲು ಅನುಕೂಲವಾಗುವಂತೆ ಎಲ್&zwnj;ಪಿಜಿ ಸಿಲಿಂಡರ್ ಸಂಪರ್ಕವನ್ನೂ ಒದಗಿಸಲಾಯಿತು. ಆದರೆ ಹೊಸ ಮನೆ ಸಿಕ್ಕಿತು ಎಂದು ಕಮಲಥಾಲ್ ತಮ್ಮ ಹಳೆಯ ಕೆಲಸವನ್ನು ನಿಲ್ಲಿಸಲಿಲ್ಲ.&lt;/p&gt;&lt;h2&gt;ಇಂದಿಗೂ ಮುಂದುವರಿದಿದೆ ಇಡ್ಲಿ ಸೇವೆ&lt;/h2&gt;&lt;p&gt;ಇತ್ತೀಚಿನ ವರದಿಗಳ ಪ್ರಕಾರ, ಕಮಲಥಾಲ್ ಅವರು ತಮ್ಮ ಪ್ರಸಿದ್ಧ ಇಡ್ಲಿ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ವಡಿವೇಲಂಪಾಳಯಂನಲ್ಲೇ ಇಡ್ಲಿ ತಯಾರಿಸಿ, ಜನರಿಗೆ ಕೈಗೆಟುಕುವ ದರದಲ್ಲಿ ಊಟ ನೀಡುವುದು ಅವರ ದಿನಚರಿಯಾಗಿದೆ. ಅಂದರೆ, ಅವರ ಕಥೆ ಹೊಸ ಮನೆ ಸಿಕ್ಕಾಗ ಮುಗಿಯಲಿಲ್ಲ. ಬದಲಾಗಿ, ಅದೇ ಮನೆಯಿಂದ ಇನ್ನಷ್ಟು ಅನುಕೂಲಕರವಾಗಿ ಅವರ ಸೇವೆ ಮುಂದುವರಿಯಿತು. ವೈರಲ್ ಆಗುವ ಅನೇಕ ಕಥೆಗಳು ಕೆಲವು ದಿನಗಳ ನಂತರ ಮರೆಯಾಗುತ್ತವೆ. ಆದರೆ &lsquo;ಇಡ್ಲಿ ಅಮ್ಮ&rsquo; ಅವರ ಕಥೆ ಹಾಗಲ್ಲ. ವರ್ಷಗಳು ಕಳೆದರೂ ಅವರ ಹೆಸರನ್ನು ಜನರು ನೆನಪಿಸಿಕೊಳ್ಳುವುದಕ್ಕೆ ಕಾರಣ, ಅವರ ಕೆಲಸದಲ್ಲಿ ಬದಲಾವಣೆ ಬಂದಿಲ್ಲ ಎಂಬುದೇ.&lt;/p&gt;]]></content:encoded>
            <category>food</category>
            <dc:creator>Sushma Hegde</dc:creator>
            <atom:link href="https://kannada.asianetnews.com/life/meet-the-80-year-old-idli-amma-sold-idlis-for-rs-1-suh/articleshow-h0qrt6q"/>
        </item>
        <item>
            <title><![CDATA[ಕೇಸರಿಬಾತ್ ಮಾಡುವಾಗ ಪದೇ ಪದೇ ಗಟ್ಟಿಯಾಗುತ್ತಿದ್ಯಾ? ಈ ಅಳತೆ ಸೀಕ್ರೆಟ್ ಗೊತ್ತಾದ್ರೆ ಯಾರೂ ಬೇಕಾದ್ರೂ ಮಾಡ್ಬೋದು]]></title>
            <link>https://kannada.asianetnews.com/food/the-easiest-way-to-make-flawless-kesaribath-at-home/articleshow-hvzz19x</link>
            <guid isPermaLink="true">https://kannada.asianetnews.com/food/the-easiest-way-to-make-flawless-kesaribath-at-home/articleshow-hvzz19x</guid>
            <pubDate>Thu, 27 Aug 2026 20:21:19 +0530</pubDate>
            <description><![CDATA[&lt;p&gt;&lt;strong&gt;Kesaribath recipe Kannada: &lt;/strong&gt;ಕೇಸರಿಬಾತ್ ಮಾಡುವಾಗ ಪದೇ ಪದೇ ಅಳತೆ ತಪ್ಪಿ ಗಟ್ಟಿಯಾಗುತ್ತಿದೆಯೇ ಅಥವಾ ಸಪ್ಪೆಯಾಗುತ್ತಿದೆಯೇ? ಇನ್ಮೇಲೆ ಆ ಚಿಂತೆ ಬೇಡ! ಕೇವಲ 1-2-3-4 ಎಂಬ ಸರಳ ಅಳತೆಯನ್ನು ನೆನಪಿಟ್ಟುಕೊಂಡರೆ ಸಾಕು, ಎಂಥವರೂ ಕೂಡ ಫರ್ಫೆಕ್ಟ್ ಕೇಸರಿಬಾತ್ ಮಾಡಬಹುದು. ಆ ರಹಸ್ಯ ಸೂತ್ರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11v6rzf82t5052m3fydkmgv,imgname-thumbnail---2026-08-27t201557.355-1787842225134.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೇ&lt;/strong&gt;ಸರಿಬಾತ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಅದನ್ನು ಮಾಡುವಾಗ ರವೆ ಎಷ್ಟು ಹಾಕಬೇಕು, ನೀರು ಎಷ್ಟು ಬೇಕು ಅಥವಾ ಸಕ್ಕರೆ ಪ್ರಮಾಣ ಎಷ್ಟಿರಬೇಕು ಎಂಬ ಗೊಂದಲ ಅನೇಕರನ್ನು ಕಾಡುತ್ತದೆ. ವಿಶೇಷವಾಗಿ ಅಡುಗೆ ಕಲಿಯುತ್ತಿರುವ ಬಿಗಿನರ್ಸ್ ಪಾಲಿಗೆ ಕೇಸರಿಬಾತ್ ಮಾಡುವುದು ಒಂದು ದೊಡ್ಡ ಸವಾಲೇ ಸರಿ. ಈ ಎಲ್ಲಾ ಗೊಂದಲಗಳಿಗೆ ಉತ್ತರ ಇಲ್ಲಿದೆ. ಇದನ್ನು ಫಾಲೋ ಮಾಡಿದ್ರೆ ಕೇಸರಿಬಾತ್ ಫೇಲ್ ಆಗುವ ಸಾಧ್ಯತೆಯೇ ಇಲ್ಲ!&lt;/p&gt;&lt;h2&gt;&lt;strong&gt;ಏನಿದು 1-2-3-4 ಸೂತ್ರ?&lt;/strong&gt;&lt;/h2&gt;&lt;p&gt;ಕೇಸರಿಬಾತ್ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ ಅಳತೆ ಮತ್ತು ಕ್ರಮ ಬಹಳ ಸುಲಭವಾಗಿದೆ.1 ಕಪ್ ತುಪ್ಪ2 ಕಪ್ ರವೆ (ಮೀಡಿಯಂ ರವೆ)3 ಕಪ್ ಸಕ್ಕರೆ4 ಕಪ್ ಕುದಿಯುತ್ತಿರುವ ನೀರು&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ ಮತ್ತು ಮುಖ್ಯ ಹಂತಗಳು&lt;/strong&gt;&lt;/h2&gt;&lt;p&gt;&lt;strong&gt;ದಪ್ಪ ತಳದ ಪಾತ್ರೆ ಬಳಸಿ&lt;/strong&gt;ಕೇಸರಿಬಾತ್ ತಳ ಹಿಡಿಯದಂತೆ (ಸೀಯದಂತೆ) ಇರಲು ಯಾವಾಗಲೂ ದಪ್ಪ ತಳದ ಪಾತ್ರೆಯನ್ನೇ ಆಯ್ಕೆ ಮಾಡಿ.&lt;/p&gt;&lt;p&gt;&lt;strong&gt;ರವೆ ಹುರಿಯುವ ಕ್ರಮ&lt;/strong&gt;ಮೊದಲು 1 ಕಪ್ ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಗೋಡಂಬಿ ಹುರಿದುಕೊಳ್ಳಿ. ನಂತರ ಅದಕ್ಕೆ 2 ಕಪ್ ರವೆ ಸೇರಿಸಿ ಕಡಿಮೆ ಉರಿಯಲ್ಲಿ (Low Flame) ಸುಮಾರು 5 ರಿಂದ 7 ನಿಮಿಷ ಹುರಿಯಿರಿ. ರವೆಯು ತುಪ್ಪವನ್ನು ಹೊರಬಿಡಲು ಪ್ರಾರಂಭಿಸಿದಾಗ ಅದು ಸರಿಯಾಗಿ ಹುರಿಯಲ್ಪಟ್ಟಿದೆ ಎಂದರ್ಥ.&lt;/p&gt;&lt;p&gt;&lt;strong&gt;ಸಕ್ಕರೆ ಸೇರಿಸಿ&lt;/strong&gt;ರವೆ ಚೆನ್ನಾಗಿ ಹುರಿದ ನಂತರ 3 ಕಪ್ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಇದೇ ಸಮಯದಲ್ಲಿ ಕೇಸರಿ ಬಣ್ಣ ಸೇರಿಸಬಹುದು.&lt;/p&gt;&lt;p&gt;&lt;strong&gt;ಕುದಿಯುವ ನೀರು&lt;/strong&gt;ಸಕ್ಕರೆ ಸೇರಿಸಿದ ತಕ್ಷಣವೇ 4 ಕಪ್ ಚೆನ್ನಾಗಿ ಕುದಿಯುತ್ತಿರುವ (Boiling Water) ನೀರನ್ನು ಸೇರಿಸಿ. ಇದು ಅತಿ ಮುಖ್ಯವಾದ ಹಂತ. ತಣ್ಣೀರು ಅಥವಾ ಸಾಧಾರಣ ಬಿಸಿ ನೀರು ಬಳಸಿದರೆ ರವೆ ಸರಿಯಾಗಿ ಬೇಯುವುದಿಲ್ಲ.&lt;/p&gt;&lt;p&gt;&lt;strong&gt;ಫೈನಲ್ ಟಚ್&amp;nbsp;&lt;/strong&gt;ನೀರು ಸೇರಿಸಿ ಮಿಕ್ಸ್ ಮಾಡಿದ ನಂತರ ಏಲಕ್ಕಿ ಪುಡಿ ಸೇರಿಸಿ, ಮುಚ್ಚಳ ಮುಚ್ಚಿ 1 ರಿಂದ 2 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಯಾದ, ಮೃದುವಾದ ಕೇಸರಿಬಾತ್ ಸಿದ್ಧ!&lt;/p&gt;&lt;h2&gt;&lt;strong&gt;ಬಿಗಿನರ್ಸ್&zwnj;ಗಾಗಿ ವಿಶೇಷ ಟಿಪ್ಸ್&lt;/strong&gt;&lt;/h2&gt;&lt;p&gt;*ಯಾವುದೇ ಒಂದು ಕಪ್ ಅಥವಾ ಲೋಟವನ್ನು ಅಳತೆಗೆ ಫಿಕ್ಸ್ ಮಾಡಿಕೊಳ್ಳಿ, ಕೊನೆಯವರೆಗೆ ಅದೇ ಪಾತ್ರೆಯಲ್ಲಿ ಎಲ್ಲವನ್ನೂ ಅಳೆಯಿರಿ.&lt;/p&gt;&lt;p&gt;*ರವೆ ಹುರಿಯುವಾಗ ಉರಿ ಹೆಚ್ಚಿಸಬೇಡಿ, ತಾಳ್ಮೆಯಿಂದ ಹುರಿದಷ್ಟೂ ರುಚಿ ಹೆಚ್ಚು.&lt;/p&gt;&lt;p&gt;*ಈ ಪ್ರಮಾಣದಲ್ಲಿ ಮಾಡಿದರೆ ಸುಮಾರು 10 ರಿಂದ 12 ಜನರಿಗೆ ಸಾಕಾಗುವಷ್ಟು ಕೇಸರಿಬಾತ್ ಸಿದ್ಧವಾಗುತ್ತದೆ.&lt;/p&gt;&lt;p&gt;ಈ ಸುಲಭವಾದ 1-2-3-4 ಫಾರ್ಮುಲಾ ಪಾಲಿಸಿದರೆ ಕೇಸರಿಬಾತ್ ಮಾಡುವಾಗ ಯಾವುದೇ ಗೊಂದಲವಿರುವುದಿಲ್ಲ ಮತ್ತು ಹೋಟೆಲ್ ಶೈಲಿಯ ಅದ್ಭುತ ರುಚಿ ನಿಮ್ಮದಾಗುತ್ತದೆ.&lt;/p&gt;&lt;h2&gt;&lt;strong&gt;ಈ ಟಿಪ್ಸ್ ಸಹ ನೆನಪಿರಲಿ&lt;/strong&gt;&lt;/h2&gt;&lt;p&gt;&lt;strong&gt;ಚಿಟಿಕೆ ಉಪ್ಪು: &lt;/strong&gt;ಯಾವುದೇ ಸಿಹಿ ಪದಾರ್ಥಕ್ಕೆ ಒಂದು ಚಿಟಿಕೆ ಉಪ್ಪು ಸೇರಿಸಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ನೀರು ಕುದಿಯುವಾಗ ಒಂದು ಚಿಟಿಕೆ ಉಪ್ಪು ಸೇರಿಸಿ, ಇದು ಸಕ್ಕರೆಯ ಸಿಹಿಯನ್ನು ಸಮತೋಲನಗೊಳಿಸುತ್ತದೆ.&lt;/p&gt;&lt;p&gt;&lt;strong&gt;ಎಣ್ಣೆ ಮತ್ತು ತುಪ್ಪದ ಮಿಶ್ರಣ (Hotel Style Secret): &lt;/strong&gt;ಕೇವಲ ತುಪ್ಪ ಬಳಸುವ ಬದಲು, ಅರ್ಧ ಭಾಗ ತುಪ್ಪ ಮತ್ತು ಅರ್ಧ ಭಾಗ ವಾಸನೆ ಇಲ್ಲದ ಅಡುಗೆ ಎಣ್ಣೆ ಬಳಸಿ. ಇದರಿಂದ ಕೇಸರಿಬಾತ್ ತಣ್ಣಗಾದ ಮೇಲೂ ಮುದ್ದೆಯಾಗದೆ, ಮೃದುವಾಗಿ ಮತ್ತು ಹೊಳೆಯುವಂತೆ (Shine) ಕಾಣುತ್ತದೆ.&lt;/p&gt;&lt;p&gt;&lt;strong&gt;ಲವಂಗದ ಘಮ:&lt;/strong&gt; ತುಪ್ಪದಲ್ಲಿ ಗೋಡಂಬಿ ಹುರಿಯುವಾಗ ಎರಡು ಲವಂಗಗಳನ್ನು ಹಾಕಿ. ಇದು ಕೇಸರಿಬಾತ್&zwnj;ಗೆ ಮದುವೆ ಮನೆಯ ಸಮಾರಂಭಗಳಲ್ಲಿ ಸಿಗುವಂತಹ ಅದ್ಭುತ ಪರಿಮಳವನ್ನು ನೀಡುತ್ತದೆ.&lt;/p&gt;&lt;p&gt;&lt;strong&gt;ಕೇಸರಿ ದಳಗಳು: &lt;/strong&gt;ಆರ್ಟಿಫಿಷಿಯಲ್ ಕಲರ್ ಬಳಸುವ ಬದಲು, ಕೇಸರಿ ದಳಗಳನ್ನು ಹಾಲಿನಲ್ಲಿ ನೆನೆಸಿ ಬಳಸಿ. ಇದು ಬಣ್ಣದ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಮತ್ತು ನೈಸರ್ಗಿಕವಾದ ಸುವಾಸನೆ ನೀಡುತ್ತದೆ.&lt;/p&gt;&lt;p&gt;&lt;strong&gt;ತಳ ಹಿಡಿಯದಂತೆ ತಡೆಯಲು: &lt;/strong&gt;ಕೇಸರಿಬಾತ್ ಪೂರ್ತಿ ಸಿದ್ಧವಾದ ಮೇಲೆ ಒಲೆಯನ್ನು ಆರಿಸಿ 5 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಹಾಗೆಯೇ ಬಿಡಿ (Steam cooking). ಇದರಿಂದ ರವೆ ಹಬೆಯಲ್ಲೇ ಚೆನ್ನಾಗಿ ಸೆಟ್ ಆಗುತ್ತದೆ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/food/the-easiest-way-to-make-flawless-kesaribath-at-home/articleshow-hvzz19x"/>
        </item>
        <item>
            <title><![CDATA[Vastu Tips: ಬಿಸಿ ಪ್ಯಾನ್ ಮೇಲೆ ಹಾಲು ಚಿಮುಕಿಸುವುದೇಕೆ? ಇಲ್ಲಿದೆ ಈ ಪದ್ಧತಿಯ ಮಹತ್ವ]]></title>
            <link>https://kannada.asianetnews.com/vaastu/why-you-should-sprinkle-milk-on-a-hot-tawa/articleshow-ilmawa2</link>
            <guid isPermaLink="true">https://kannada.asianetnews.com/vaastu/why-you-should-sprinkle-milk-on-a-hot-tawa/articleshow-ilmawa2</guid>
            <pubDate>Thu, 27 Aug 2026 16:06:11 +0530</pubDate>
            <description><![CDATA[&lt;p&gt;&lt;strong&gt;Vastu tips for home peace: &lt;/strong&gt;ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯ ತವಾ ಮತ್ತು ಹಾಲಿನ ಹನಿಗಳ ನಡುವೆ ಒಂದು ಅದ್ಭುತ ಸಂಬಂಧವಿದ್ದು, ಇಲ್ಲಿ ಮನೆಯ ಅಶಾಂತಿ ದೂರ ಮಾಡಿ ಸುಖ-ಸಮೃದ್ಧಿ ತರುವ ಸರಳ ವಾಸ್ತು ಪರಿಹಾರಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11cdw33gajhz7yyxjgmy7wg,imgname-thumbnail---2026-08-27t160122.926-1787826729057.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮ&lt;/strong&gt;ನೆಯಲ್ಲಿ ಸುಖ-ಶಾಂತಿ ನೆಲೆಸಬೇಕೆಂಬುದು ಪ್ರತಿಯೊಬ್ಬರ ಆಶಯ. ಆದರೆ ಕೆಲವು ಬಾರಿ ಕಾರಣವಿಲ್ಲದೆ ಮನೆಯಲ್ಲಿ ಜಗಳಗಳು, ಅಶಾಂತಿ ಅಥವಾ ನಕಾರಾತ್ಮಕತೆ ಎದುರಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ದೈನಂದಿನ ಜೀವನದ ಸಣ್ಣಪುಟ್ಟ ಅಭ್ಯಾಸಗಳು ಮನೆಯ ವಾತಾವರಣದ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ. ಮನೆಯಲ್ಲಿ ಸಮೃದ್ಧಿ ಹೆಚ್ಚಿಸಲು ಮತ್ತು ವಾದ-ವಿವಾದಗಳನ್ನು ಕಡಿಮೆ ಮಾಡಲು ಅನುಸರಿಸಬೇಕಾದ ಕೆಲವು ವಿಶೇಷ ವಾಸ್ತು ಪರಿಹಾರಗಳು ಇಲ್ಲಿವೆ.&lt;/p&gt;&lt;h2&gt;&lt;strong&gt;ಬಿಸಿ ಹಂಚಿನ (ತವಾ) ಮೇಲೆ ಹಾಲಿನ ಹನಿಗಳನ್ನು ಏಕೆ ಚಿಮುಕಿಸಬೇಕು?&lt;/strong&gt;&lt;/h2&gt;&lt;p&gt;ಅಡುಗೆ ಮಾಡುವಾಗ ಹಂಚು (ತವಾ) ಕಾದ ನಂತರ ಅದರ ಮೇಲೆ ಹಾಲಿನ ಹನಿಗಳನ್ನು ಚಿಮುಕಿಸುವುದು ವಾಸ್ತುವಿನಲ್ಲಿ ಬಹಳ ಮಂಗಳಕರ ಎಂದು ಪರಿಗಣಿಸಲಾಗಿದೆ.&lt;/p&gt;&lt;p&gt;&lt;strong&gt;ಕಾರಣ: &lt;/strong&gt;ವಾಸ್ತುವಿನ ಪ್ರಕಾರ, ಬಿಸಿ ಹಂಚು 'ಮಂಗಳ'ನ (ಶಕ್ತಿ) ಸಂಕೇತವಾದರೆ, ಹಾಲು 'ಚಂದ್ರ'ನ ಸಂಕೇತವಾಗಿದೆ. ಮಂಗಳನ ತೀವ್ರತೆಯನ್ನು (ಶಾಖ) ಚಂದ್ರನ ಹಾಲಿನ ಮೂಲಕ ಶಾಂತಗೊಳಿಸುವುದರಿಂದ ಮನೆಯಲ್ಲಿ ನಕಾರಾತ್ಮಕತೆ ದೂರವಾಗುತ್ತದೆ.&lt;/p&gt;&lt;p&gt;&lt;strong&gt;ಫಲಿತಾಂಶ: &lt;/strong&gt;ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಮತ್ತು ಸದಸ್ಯರ ನಡುವಿನ ಜಗಳಗಳು ಕಡಿಮೆಯಾಗುತ್ತವೆ.&lt;/p&gt;&lt;h2&gt;&lt;strong&gt;ಮುಖ್ಯ ದ್ವಾರದ ತೋರಣದ ಬಗ್ಗೆ ಎಚ್ಚರ&lt;/strong&gt;&lt;/h2&gt;&lt;p&gt;ಮನೆಯ ಮುಖ್ಯ ದ್ವಾರಕ್ಕೆ ಹಾಕುವ ತೋರಣವು ಸದಾ ಫ್ರೆಶ್ ಆಗಿರಬೇಕು. ಹಳೆಯದಾದ, ಧೂಳು ಹಿಡಿದ ಅಥವಾ ಒಣಗಿದ ಹೂವು-ಎಲೆಗಳ ತೋರಣವು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಆದ್ದರಿಂದ, ಹೂವಿನ ತೋರಣವನ್ನು ನಿಯಮಿತವಾಗಿ ಬದಲಾಯಿಸಿ ಅಥವಾ ತೋರಣವು ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.&lt;/p&gt;&lt;h2&gt;&lt;strong&gt;ಹಳೆಯ ಬಟ್ಟೆಗಳನ್ನು ಸ್ಟೋರ್ ರೂಮ್&zwnj;ನಿಂದ ಹೊರಹಾಕಿ&lt;/strong&gt;&lt;/h2&gt;&lt;p&gt;ಅನೇಕರು ತಮ್ಮ ಪೂರ್ವಜರ ಹಳೆಯ ಬಟ್ಟೆಗಳನ್ನು ಸ್ಟೋರ್ ರೂಮ್&zwnj;ನಲ್ಲಿ ಹಾಗೆಯೇ ಇಟ್ಟಿರುತ್ತಾರೆ. ವಾಸ್ತು ಪ್ರಕಾರ, ಈ ರೀತಿ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ. ಇವುಗಳನ್ನು ಮನೆಯೊಳಗೆ ಇಟ್ಟುಕೊಳ್ಳುವ ಬದಲು ವಿಲೇವಾರಿ ಮಾಡುವುದು ಉತ್ತಮ.&lt;/p&gt;&lt;h2&gt;&lt;strong&gt;ಕುಟುಂಬದಲ್ಲಿ ಪ್ರೀತಿ ಹೆಚ್ಚಿಸಲು ಪರಿಹಾರಗಳು&lt;/strong&gt;&lt;/h2&gt;&lt;p&gt;&lt;strong&gt;ಫೋಟೋ ಫ್ರೇಮ್: &lt;/strong&gt;ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿರುವ ಫೋಟೋವನ್ನು ಮುತ್ತುಗಳಿಂದ ಅಲಂಕರಿಸಿದ ಫ್ರೇಮ್&zwnj;ನಲ್ಲಿ ಹಾಕಿ ಮನೆಯ ವಾಯುವ್ಯ (North-West) ಮೂಲೆಯಲ್ಲಿ ತೂಗು ಹಾಕಿ. ಇದು ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ.&lt;/p&gt;&lt;p&gt;&lt;strong&gt;ಗಂಗಾಜಲ ಮತ್ತು ಅರಿಶಿನ:&lt;/strong&gt; ಮನೆಯಲ್ಲಿ ಸದಾ ಕಲಹಗಳಿದ್ದರೆ, ಸತತ 21 ದಿನಗಳ ಕಾಲ ಗಂಗಾಜಲಕ್ಕೆ ಸ್ವಲ್ಪ ಅರಿಶಿನ ಬೆರೆಸಿ ಮನೆಯ ಮೂಲೆ ಮೂಲೆಗಳಿಗೆ ಚಿಮುಕಿಸಿ.&lt;/p&gt;&lt;h2&gt;&lt;strong&gt;ಮನೆಯ ಸಮೃದ್ಧಿಗಾಗಿ ಇತರ ಸರಳ ಕ್ರಮಗಳು&lt;/strong&gt;&lt;/h2&gt;&lt;p&gt;&lt;strong&gt;ಬಿಳಿ ಎಕ್ಕದ ಹೂವು: &lt;/strong&gt;ಮನೆಯ ನಾಲ್ಕೂ ಮೂಲೆಗಳಲ್ಲಿ ಎಕ್ಕದ (ಆಂಕಡೆ) ಮೂರು ಬಿಳಿ ಹೂವುಗಳನ್ನು ಇಡಿ. ಮೂರು ದಿನಗಳ ನಂತರ ಅವುಗಳನ್ನು ತೆಗೆದು ಹೊರಗೆ ಎಸೆಯಿರಿ. ಇದು ಮನೆಯಲ್ಲಿ ಶಾಂತಿ ತರುತ್ತದೆ.&lt;/p&gt;&lt;p&gt;&lt;strong&gt;ಗೆಜ್ಜೆಗಳ ನಾದ: &lt;/strong&gt;ಮುಖ್ಯ ದ್ವಾರದ ಪರದೆಯ ಕೆಳಗೆ ಸಣ್ಣ ಗೆಜ್ಜೆಗಳನ್ನು ಕಟ್ಟಿ. ಯಾರೇ ಬಂದರೂ ಉಂಟಾಗುವ ಸಂಗೀತದ ನಾದವು ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಂತೋಷವನ್ನು ತರುತ್ತದೆ.&lt;/p&gt;&lt;p&gt;&lt;strong&gt;ಹಾಲಿನ ನೀರಿನ ಮಿಶ್ರಣ: &lt;/strong&gt;ಪ್ರತಿದಿನ ಬೆಳಗ್ಗೆ ಸ್ವಲ್ಪ ಹಾಲು ಮತ್ತು ನೀರನ್ನು ಬೆರೆಸಿ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಹಾಕುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.&lt;/p&gt;&lt;p&gt;&lt;strong&gt;ತುಳಸಿ ಪೂಜೆ: &lt;/strong&gt;ಪ್ರತಿ ಗುರುವಾರ ತುಳಸಿ ಗಿಡಕ್ಕೆ ಸ್ವಲ್ಪ ಹಾಲು ಬೆರೆಸಿದ ನೀರನ್ನು ಅರ್ಪಿಸುವುದು ಬಹಳ ಶ್ರೇಯಸ್ಕರ.&lt;/p&gt;&lt;p&gt;&lt;strong&gt;ಕಲ್ಲು ಉಪ್ಪಿನ ಪವಾಡ&lt;/strong&gt;&lt;/p&gt;&lt;p&gt;ಯಾವುದೇ ಶುಭ ಮುಹೂರ್ತದಲ್ಲಿ 5 ಕೆಜಿ ಕಲ್ಲು ಉಪ್ಪನ್ನು ತಂದು ಮನೆಯ ಒಂದು ಸುರಕ್ಷಿತ ಮೂಲೆಯಲ್ಲಿ (ನೀರು ತಾಗದ ಜಾಗದಲ್ಲಿ) ಇಡಿ. ಇದು ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಪ್ರಭಾವಗಳನ್ನು ಹೀರಿಕೊಂಡು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಒಂದು ವೇಳೆ ಉಪ್ಪು ಒದ್ದೆಯಾದರೆ ಅದನ್ನು ಬದಲಾಯಿಸಿ ಹೊಸ ಉಪ್ಪನ್ನು ಇಡಿ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/vaastu/why-you-should-sprinkle-milk-on-a-hot-tawa/articleshow-ilmawa2"/>
        </item>
        <item>
            <title><![CDATA[ಊಟದ ನಂತರ ಪ್ರತಿದಿನ ಬೆಲ್ಲ-ತುಪ್ಪ ತಿನ್ನಿ... ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?]]></title>
            <link>https://kannada.asianetnews.com/health-life/what-are-the-health-benefits-of-eating-jaggery-and-ghee-together-every-day-after-a-meal/articleshow-luo5kaf</link>
            <guid isPermaLink="true">https://kannada.asianetnews.com/health-life/what-are-the-health-benefits-of-eating-jaggery-and-ghee-together-every-day-after-a-meal/articleshow-luo5kaf</guid>
            <pubDate>Thu, 27 Aug 2026 16:01:10 +0530</pubDate>
            <description><![CDATA[&lt;p&gt;ಒಂದು ಪುಟ್ಟ ಬೆಲ್ಲದ ತುಂಡಿನಲ್ಲಿ ಎಷ್ಟೊಂದು ಶಕ್ತಿ ಇದೆ! ಇಂದೇ ಸಕ್ಕರೆ ಅಥವಾ ಆರ್ಟಿಫಿಶಿಯಲ್ ಸ್ವೀಟ್ಸ್&zwnj;ಗೆ ಬೈ-ಬೈ ಹೇಳಿ, ಈ ನೈಸರ್ಗಿಕ ಸಿಹಿಯನ್ನು ನಿಮ್ಮ ಊಟದ ಭಾಗವಾಗಿಸಿಕೊಳ್ಳಿ. ಆರೋಗ್ಯವೂ ಸಿಹಿ, ಜೀವನವೂ ಸಿಹಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11caye0d86kw4tnckd99mve,imgname-jaggery-and-ghee-1787826633152.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Jaggery and Ghee benefits-Health benefits of jaggery-Eating jaggery after meals- ಸಿಹಿ ತಿನ್ನುವ ಆಸೆಯೇ? ಹಾಗಾದ್ರೆ ಈ 'ಬೆಲ್ಲ'ದ ರಹಸ್ಯ ನಿಮಗೊತ್ತಾ? ಇಲ್ಲಿದೆ ನೋಡಿ ಆರೋಗ್ಯದ ಖಜಾನೆ!&lt;/strong&gt;&lt;/p&gt;&lt;p&gt;ನಮ್ಮ ಭಾರತೀಯ ಮನೆಗಳಲ್ಲಿ ಊಟ ಮುಗಿದ ತಕ್ಷಣ &quot;ಏನಾದರೂ ಸ್ವಲ್ಪ ಸಿಹಿ ಬೇಕು&quot; ಎನ್ನುವ ಹಂಬಲ ಎಲ್ಲರಿಗೂ ಇದ್ದೇ ಇರುತ್ತದೆ. ಸಾಮಾನ್ಯವಾಗಿ ನಾವು ಚಾಕೊಲೇಟ್ ಅಥವಾ ಐಸ್&zwnj;ಕ್ರೀಂ ಹುಡುಕುತ್ತೇವೆ. ಆದರೆ, ನಮ್ಮ ಹಿರಿಯರು ಊಟದ ನಂತರ ಒಂದು ಪುಟ್ಟ &quot;ಬೆಲ್ಲದ ತುಂಡು&quot; ತಿನ್ನುತ್ತಿದ್ದರಲ್ಲವೇ? ಅದರ ಹಿಂದೆ ಒಂದು ದೊಡ್ಡ ಆರೋಗ್ಯದ ರಹಸ್ಯವೇ ಅಡಗಿದೆ! ಬೆಲ್ಲ ಕೇವಲ ಸಿಹಿಯಲ್ಲ, ಅದೊಂದು ಅದ್ಭುತ 'ಸೂಪರ್ ಫುಡ್'.&lt;/p&gt;&lt;p&gt;ಹೊಟ್ಟೆಯ ಗಲಾಟೆಗೆ ಫುಲ್ ಸ್ಟಾಪ್!&lt;/p&gt;&lt;p&gt;ನೀವು ಊಟ ಮಾಡಿದ ಮೇಲೆ ಹೊಟ್ಟೆ ಭಾರ ಅನಿಸುತ್ತಿದೆಯೇ? ಹಾಗಿದ್ದರೆ ಬೆಲ್ಲ ನಿಮಗಾಗಿ ಇದೆ. ಬೆಲ್ಲ ಸೇವಿಸಿದ ಕೂಡಲೇ ಅದು ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಳನ್ನು (Enzymes) 'ಆಕ್ಟಿವೇಟ್' ಮಾಡುತ್ತದೆ. ಇದರಿಂದ ತಿಂದ ಆಹಾರ ಬೇಗನೆ ಜೀರ್ಣವಾಗಿ, ಗ್ಯಾಸ್ಟಿಕ್ ಅಥವಾ ಅಜೀರ್ಣದಂತಹ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ.&lt;/p&gt;&lt;h2&gt;ಮಲಬದ್ಧತೆಗೆ ಇದು 'ರಾಮಬಾಣ'&lt;/h2&gt;&lt;p&gt;ಇಂದಿನ ಕಾಲದ ಫಾಸ್ಟ್ ಫುಡ್ ಜಗತ್ತಿನಲ್ಲಿ ಮಲಬದ್ಧತೆ ದೊಡ್ಡ ಸಮಸ್ಯೆ. ಇದಕ್ಕೆ ಬೆಲ್ಲ ಮತ್ತು ತುಪ್ಪದ ಕಾಂಬಿನೇಷನ್ ಬೆಸ್ಟ್ ಮೆಡಿಸಿನ್! ಬೆಲ್ಲದಲ್ಲಿರುವ ವಿರೇಚಕ ಗುಣಗಳು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತವೆ. ರಾತ್ರಿ ಊಟದ ನಂತರ ಒಂದು ಚೂರು ಬೆಲ್ಲದ ಜೊತೆ ತುಪ್ಪ ಸೇರಿಸಿ ತಿಂದರೆ, ಮರುದಿನ ಬೆಳಿಗ್ಗೆ ನಿಮ್ಮ ಹೊಟ್ಟೆ ಹಗುರವಾಗುವುದು ಗ್ಯಾರಂಟಿ.&lt;/p&gt;&lt;p&gt;ತೂಕ ಇಳಿಸೋಕೆ 'ಸ್ವೀಟ್' ಐಡಿಯಾ!&lt;/p&gt;&lt;p&gt;&quot;ಸಿಹಿ ತಿಂದರೆ ತೂಕ ಹೆಚ್ಚಾಗುತ್ತೆ&quot; ಎನ್ನುವ ಮಾತು ಬೆಲ್ಲಕ್ಕೆ ಅನ್ವಯಿಸುವುದಿಲ್ಲ. ಬೆಲ್ಲವು ದೇಹದ ಚಯಾಪಚಯ ಕ್ರಿಯೆಯನ್ನು (Metabolism) ಚುರುಕುಗೊಳಿಸುತ್ತದೆ. ಇದು ದೇಹದಲ್ಲಿರುವ ಬೇಡದ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುವ ಮೂಲಕ ಪರೋಕ್ಷವಾಗಿ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.&lt;/p&gt;&lt;p&gt;ರಕ್ತಹೀನತೆಗೆ ಗುಡ್ ಬೈ ಹೇಳಿ&lt;/p&gt;&lt;p&gt;ಬೆಲ್ಲದಲ್ಲಿ ಕಬ್ಬಿಣದ ಅಂಶ (Iron) ಹೇರಳವಾಗಿದೆ. ಯಾರು ರಕ್ತಹೀನತೆಯಿಂದ ಬಳಲುತ್ತಿದ್ದಾರೋ ಅಥವಾ ಯಾರಿಗಾದರೂ ಸದಾ ಸುಸ್ತು ಅನ್ನಿಸುತ್ತದೋ, ಅಂಥವರಿಗೆ ಬೆಲ್ಲ ಒಂದು ಶಕ್ತಿವರ್ಧಕ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಿಮ್ಮನ್ನು ದಿನವಿಡೀ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.&lt;/p&gt;&lt;h3&gt;ಬಿಪಿ ಕಂಟ್ರೋಲ್ ಮಾಡುವ 'ಕೂಲ್' ಮ್ಯಾಜಿಕ್&lt;/h3&gt;&lt;p&gt;ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಇರುವವರು ದಿನವೂ ಸ್ವಲ್ಪ ಬೆಲ್ಲ ಸೇವಿಸುವುದು ಉತ್ತಮ. ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.&lt;/p&gt;&lt;p&gt;ನೋಡಿದ್ರಲ್ಲ, ಒಂದು ಪುಟ್ಟ ಬೆಲ್ಲದ ತುಂಡಿನಲ್ಲಿ ಎಷ್ಟೊಂದು ಶಕ್ತಿ ಇದೆ! ಇಂದೇ ಸಕ್ಕರೆ ಅಥವಾ ಆರ್ಟಿಫಿಶಿಯಲ್ ಸ್ವೀಟ್ಸ್&zwnj;ಗೆ ಬೈ-ಬೈ ಹೇಳಿ, ಈ ನೈಸರ್ಗಿಕ ಸಿಹಿಯನ್ನು ನಿಮ್ಮ ಊಟದ ಭಾಗವಾಗಿಸಿಕೊಳ್ಳಿ. ಆರೋಗ್ಯವೂ ಸಿಹಿ, ಜೀವನವೂ ಸಿಹಿ!&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/what-are-the-health-benefits-of-eating-jaggery-and-ghee-together-every-day-after-a-meal/articleshow-luo5kaf"/>
        </item>
        <item>
            <title><![CDATA[ಹಳ್ಳಿ ಹುಡ್ಗೀರ ಸುಂದರ ತ್ವಚೆಯ ರಹಸ್ಯ, ಈ ಬಡವರ ಬಾದಾಮಿ ಶೇಂಗಾ! ಮಕ್ಕಳಿಗೂ ಕೊಡಿ ಪೀನಟ್ ಬಟರ್!]]></title>
            <link>https://kannada.asianetnews.com/gallery/food/amazing-health-benefits-of-eating-peanuts-daily-kannada-sat-pszqvso</link>
            <guid isPermaLink="true">https://kannada.asianetnews.com/gallery/food/amazing-health-benefits-of-eating-peanuts-daily-kannada-sat-pszqvso</guid>
            <pubDate>Fri, 28 Aug 2026 15:40:38 +0530</pubDate>
            <description><![CDATA[ಬಡವರ ಬಾದಾಮಿ ಎಂದೇ ಖ್ಯಾತವಾದ ಕಡಲೆಕಾಯಿಯು ಹೃದಯದ ಆರೋಗ್ಯ, ತೂಕ ಇಳಿಕೆ, ಮತ್ತು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ಇದು ಪ್ರೋಟೀನ್&zwnj;ನ ಉತ್ತಮ ಮೂಲವಾಗಿದ್ದು, ತ್ವಚೆ ಮತ್ತು ಮೆದುಳಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m13x12darvncbcdnws6v6w31,imgname-groundnut-benefits-1787911244202.jpg" type="image/jpeg" height="390" width="690"/>
            <content:encoded><![CDATA[ಬಡವರ ಬಾದಾಮಿ ಎಂದೇ ಖ್ಯಾತವಾದ ಕಡಲೆಕಾಯಿಯು ಹೃದಯದ ಆರೋಗ್ಯ, ತೂಕ ಇಳಿಕೆ, ಮತ್ತು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ಇದು ಪ್ರೋಟೀನ್&zwnj;ನ ಉತ್ತಮ ಮೂಲವಾಗಿದ್ದು, ತ್ವಚೆ ಮತ್ತು ಮೆದುಳಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.&lt;img&gt;&lt;p&gt;ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಕಡಲೆಕಾಯಿ ಅಥವಾ ಶೇಂಗಾ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ? ಮುಂದೆ ಓದಿ.&lt;/p&gt;&lt;img&gt;&lt;p&gt;ಕಡಲೆಕಾಯಿಯಲ್ಲಿ ಉತ್ತಮ ಕೊಬ್ಬು (Monounsaturated Fats) ಸಮೃದ್ಧವಾಗಿದ್ದು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯಾಘಾತದ ಅಪಾಯವನ್ನು ತಡೆಯುತ್ತದೆ.&lt;/p&gt;&lt;img&gt;&lt;p&gt;ಸಸ್ಯಹಾರಿಗಳಿಗೆ ಕಡಲೆಕಾಯಿ ಅತ್ಯುತ್ತಮ ಪ್ರೋಟೀನ್ ಮೂಲವಾಗಿದೆ. ದಿನವಿಡೀ ದೇಹಕ್ಕೆ ಅಗತ್ಯವಿರುವ ಶಕ್ತಿ ಮತ್ತು ಸ್ನಾಯುಗಳ ಬೆಳವಣಿಗೆಗೆ ಇದು ಸಹಕಾರಿ.&lt;/p&gt;&lt;img&gt;&lt;p&gt;ಇದರಲ್ಲಿರುವ ನಾರಿನಂಶ (Fiber) ಮತ್ತು ಪ್ರೋಟೀನ್ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದು ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಬರುತ್ತದೆ.&lt;/p&gt;&lt;img&gt;&lt;p&gt;ಕಡಲೆಕಾಯಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ (GI) ಕಡಿಮೆಯಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿಢೀರ್ ಏರಿಕೆಯಾಗದಂತೆ ನಿಯಂತ್ರಿಸುತ್ತದೆ.&lt;/p&gt;&lt;img&gt;&lt;p&gt;ಕಡಲೆಕಾಯಿಯಲ್ಲಿರುವ ವಿಟಮಿನ್ &lsquo;ಇ&rsquo; (Vitamin E) ಮತ್ತು ಬಯೋಟಿನ್ ಚರ್ಮವನ್ನು ಕಾಂತಿಯುತವಾಗಿಸಿ, ಕೂದಲು ಉದುರುವುದನ್ನು ತಡೆಯುತ್ತದೆ.&lt;/p&gt;&lt;img&gt;&lt;p&gt;ಇದರಲ್ಲಿರುವ ನಿಯಾಸಿನ್ ಮತ್ತು ರೆಸ್ವೆರಾಟ್ರೋಲ್ ಅಂಶಗಳು ಮೆದುಳಿಗೆ ರಕ್ತ ಪರಿಚಲನೆ ಹೆಚ್ಚಿಸಿ, ಜ್ಞಾಪಕ ಶಕ್ತಿ ಮತ್ತು ಚುರುಕುತನವನ್ನು ಹೆಚ್ಚಿಸುತ್ತವೆ.&lt;/p&gt;&lt;img&gt;&lt;p&gt;ದಿನಕ್ಕೆ ಒಂದು ಸಣ್ಣ ಹಿಡಿಯಷ್ಟು (25-30 ಗ್ರಾಂ) ನೆನೆಸಿದ ಅಥವಾ ಹುರಿದ ಕಡಲೆಕಾಯಿ ತಿಂದರೆ ಆರೋಗ್ಯಕ್ಕೆ ಅತ್ಯಂತ ಹಿತಕರ. ಅತಿಯಾದ ಸೇವನೆ ಬೇಡ!&lt;/p&gt;]]></content:encoded>
            <category>food</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/food/amazing-health-benefits-of-eating-peanuts-daily-kannada-sat-pszqvso"/>
        </item>
        <item>
            <title><![CDATA[ಪಲಾವ್  ಮುದ್ದೆಯಂತೆ ಆಗ್ತಿದ್ಯಾ? ಉದುರು ಉದುರಾಗಿ ಬರಲು 2 ಸೀಕ್ರೆಟ್ ಇಲ್ಲಿದೆ]]></title>
            <link>https://kannada.asianetnews.com/webstories/food/secrets-to-make-fluffy-non-sticky-pulao-every-time-s1seok8</link>
            <guid isPermaLink="true">https://kannada.asianetnews.com/webstories/food/secrets-to-make-fluffy-non-sticky-pulao-every-time-s1seok8</guid>
            <pubDate>Fri, 28 Aug 2026 17:31:53 +0530</pubDate>
            <description><![CDATA[&lt;p&gt;Pulao making hacks: ಪಲಾವ್ ಅಥವಾ ಬಿರಿಯಾನಿ ಮಾಡುವಾಗ ಅನ್ನ ಸರಿಯಾಗಿ ಬಾರದೆ ಬೇಸರವಾಗಿದೆಯೇ? ಈ ಟಿಪ್ಸ್ ನಿಮಗಾಗಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m142t1hq2a9pky0gd40xehn8,imgname-pulao-tips-1787917305397.jpg" type="image/jpeg" height="390" width="690"/>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/food/secrets-to-make-fluffy-non-sticky-pulao-every-time-s1seok8"/>
        </item>
        <item>
            <title><![CDATA[5 ನಿಮಿಷದಲ್ಲಿ ಹಾಗಲಕಾಯಿ ಕಹಿ ಮಾಯ! ಈ ಉಪ್ಪಿನ ಟ್ರಿಕ್ ನಿಮಗೂ ತಿಳಿದಿರಲಿ]]></title>
            <link>https://kannada.asianetnews.com/webstories/food/easy-kitchen-hack-no-more-bitter-bitter-gourd-tt8t59e</link>
            <guid isPermaLink="true">https://kannada.asianetnews.com/webstories/food/easy-kitchen-hack-no-more-bitter-bitter-gourd-tt8t59e</guid>
            <pubDate>Fri, 28 Aug 2026 14:18:36 +0530</pubDate>
            <description><![CDATA[&lt;p&gt;Remove bitterness from bitter gourd: ಹಾಗಲಕಾಯಿ ಆರೋಗ್ಯಕ್ಕೆ ಬಹಳ ಒಳ್ಳೇದು. ಆದರೆ ಅನೇಕರಿಗೆ ಅದರ ಕಹಿಯದ್ದೇ ಭಯ. ಇನ್ಮೇಲೆ ಈ ಚಿಂತೆ ಬೇಡ. ಇದನ್ನು ಹೋಗಲಾಡಿಸುವುದು ತುಂಬಾ ಸುಲಭ. &amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jvc59s9xgpkb6r3tr1tfns87,imgname-uses-of-bitter-gourd-peel-2-1747386164541.jpg" type="image/jpeg" height="390" width="690"/>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/food/easy-kitchen-hack-no-more-bitter-bitter-gourd-tt8t59e"/>
        </item>
        <item>
            <title><![CDATA[ಅದೇ ಇಡ್ಲಿ ತಿಂದೂ ತಿಂದೂ ಬೇಜಾರ್​ ಆಗಿದ್ಯಾ? ಕೇರಳದ ರಾಮಸೆರ್ರಿ ಟ್ರೈ ಮಾಡಿ- ಸಕತ್​ ಟೇಸ್ಟಿ ಟೇಸ್ಟಿ]]></title>
            <link>https://kannada.asianetnews.com/life/keralas-special-ramaserri-idli-recipe-on-matka-suc/articleshow-u6fe9u4</link>
            <guid isPermaLink="true">https://kannada.asianetnews.com/life/keralas-special-ramaserri-idli-recipe-on-matka-suc/articleshow-u6fe9u4</guid>
            <pubDate>Thu, 27 Aug 2026 22:07:09 +0530</pubDate>
            <description><![CDATA[ಕೇರಳದ ಪಾಲಕ್ಕಾಡ್ ಬಳಿಯ ರಾಮಸೆರ್ರಿ ಊರಿನಲ್ಲಿ ಮಾಡುವ ವಿಶಿಷ್ಟ ಶೈಲಿಯ ಇಡ್ಲಿ ಇದು. ಇದನ್ನು ಸಾಂಪ್ರದಾಯಿಕ ಇಡ್ಲಿ ತಟ್ಟೆಗಳ ಬದಲು, ಮಣ್ಣಿನ ಮಡಿಕೆ ಮತ್ತು ಬಟ್ಟೆಯನ್ನು ಬಳಸಿ ವಿಶಿಷ್ಟವಾಗಿ ತಯಾರಿಸಲಾಗುತ್ತದೆ. ಈ ಲೇಖನದಲ್ಲಿ ಅದರ ಸಂಪೂರ್ಣ ಮಾಡುವ ವಿಧಾನವನ್ನು ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1219ppdzjecxqgzdta1eqhr,imgname-ramaserri-idli-1787848612557.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿಮಗೆ ಒಂದಿಷ್ಟು ಬಗೆಯ ಇಡ್ಲಿಗಳು ಗೊತ್ತಿರಬಹುದು. ಆದರೆ ಕೇರಳದ ರಾಮಸೆರ್ರಿ (Ramaserri Idli) ಎನ್ನುವ ಊರಿನಲ್ಲಿ ಮಾಡುವ ಇಡ್ಲಿ ಸಕತ್​ ಟೇಸ್ಟಿಯೂ ಆಗಿದ್ದು, ಡಿಫರೆಂಟ್​ ಆಗಿದೆ. ರಾಮಸೆರ್ರಿ ಪಾಲಕ್ಕಾಡ್ ಬಳಿಯ ಒಂದು ಸ್ಥಳವಾಗಿದ್ದು, ಅಲ್ಲಿ ಈ ಶೈಲಿಯ ಇಡ್ಲಿಗಳು ಪ್ರಸಿದ್ಧವಾಗಿವೆ. ಇಡ್ಲಿಗಳನ್ನು ಮಣ್ಣಿನ ಮಡಿಕೆಗಳಲ್ಲಿ ತಯಾರಿಸಲಾಗುತ್ತದೆ. ಈ ಶೈಲಿಯ ಇಡ್ಲಿಗಳನ್ನು ಇಡ್ಲಿ ತಟ್ಟೆಗಳ ಬದಲಿಗೆ ಬಟ್ಟೆಯ ಮೇಲೆ ನೇರವಾಗಿ ಆವಿಯಲ್ಲಿ ಬೇಯಿಸಲಾಗುತ್ತದೆ.&lt;/p&gt;&lt;p&gt;ಇದನ್ನು ಮಾಡುವ ವಿಧಾನದ ಬಗ್ಗೆ ತಿಳಿಸಲಾಗಿದೆ. ಮೊದಲಿಗೆ ಯಾವ ಯಾವ ಸಾಮಗ್ರಿ ಬೇಕು ನೋಡಿ&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;p&gt;2 ಕಪ್ ಇಡ್ಲಿ ಅಕ್ಕಿ (ಬೇಯಿಸಿದ ಅಕ್ಕಿ)&lt;/p&gt;&lt;p&gt;2 ಕಪ್ ಅನ್ನದ ಅಕ್ಕಿ (Raw Rice)&lt;/p&gt;&lt;p&gt;1 ಕಪ್ ಉದ್ದಿನ ಬೇಳೆ (ಕಪ್ಪು)&lt;/p&gt;&lt;p&gt;1 ಟೀ ಸ್ಪೂನ್ ಮೆಂತ್ಯ ಬೀಜಗಳು&lt;/p&gt;&lt;p&gt;ರುಚಿಗೆ ತಕ್ಕಷ್ಟು ಉಪ್ಪು&lt;/p&gt;&lt;p&gt;ನೆನೆಸಿ ರುಬ್ಬಲು ನೀರು&lt;/p&gt;&lt;h3&gt;&lt;strong&gt;ಮಾಡುವ ವಿಧಾನ&lt;/strong&gt;&lt;/h3&gt;&lt;p&gt;* ಎರಡೂ ಅಕ್ಕಿಗಳನ್ನು ತೊಳೆದು 4 ರಿಂದ 5 ಗಂಟೆಗಳ ನೆನೆಸಿ,&lt;/p&gt;&lt;p&gt;* ಉದ್ದಿನ ಬೇಳೆ ಮತ್ತು ಮೆಂತ್ಯ ಬೀಜಗಳನ್ನು ಪ್ರತ್ಯೇಕವಾಗಿ 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.&lt;/p&gt;&lt;p&gt;* ಉದ್ದಿನ ಬೇಳೆಯನ್ನು ನಯವಾದ ನುಣ್ಣಗೆ ರುಬ್ಬಿಕೊಲ್ಳಿ.&lt;/p&gt;&lt;p&gt;* ನೆನೆಸಿದ ಅಕ್ಕಿಯನ್ನು ಸ್ವಲ್ಪ ಒರಟಾಗಿ ರುಬ್ಬಿ, ಇದು ತೀರಾ ನುಣ್ಣಗಾಗಬಾರದು.&lt;/p&gt;&lt;p&gt;* ಎಲ್ಲವನ್ನೂ ಚೆನ್ನಾಗಿ ಮಿಕ್ಸ್​ ಮಾಡಿ ರುಚಿಗೆ ತಕ್ಕ ಉಪ್ಪು ಹಾಕಿ ಕಲಕಿ.&lt;/p&gt;&lt;p&gt;* ಇದನ್ನು 6 ರಿಂದ 8 ಗಂಟೆಗಳ ಕಾಲ ಬೆಚ್ಚಗಿನ ಸ್ಥಳದಲ್ಲಿ ಹುದುಗಲು ಬಿಡಿ.&lt;/p&gt;&lt;p&gt;* ಆಳವಾದ ಪಾತ್ರೆಯಲ್ಲಿ ಅಥವಾ ಸಾಂಪ್ರದಾಯಿಕ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಕುದಿಸಿ.&lt;/p&gt;&lt;h3&gt;&lt;strong&gt;ಬೇಯಿಸುವ ವಿಧಾನ&lt;/strong&gt;&lt;/h3&gt;&lt;p&gt;* ಒದ್ದೆಯಾದ ಹತ್ತಿ ಅಥವಾ ಮಸ್ಲಿನ್ ಬಟ್ಟೆಯಿಂದ ಮುಚ್ಚಿದ ಸ್ಟೀಮರ್ ಇನ್ಸರ್ಟ್ ಅಥವಾ ಜರಡಿಯನ್ನು ಮಡಕೆಯ ಮೇಲೆ ಇರಿಸಿ.&lt;/p&gt;&lt;p&gt;* ಬಟ್ಟೆಯ ಮೇಲೆ ಒಂದು ಕಪ್​ನಷ್ಟು ಹಿಟ್ಟನ್ನು ಸುರಿಯಿರಿ, ಅದನ್ನು ಸ್ವಲ್ಪ ಅಗಲವಾಗಿ ಮತ್ತು ಚಪ್ಪಟೆಯಾಗಿ ಹರಡಿ.&lt;/p&gt;&lt;p&gt;* ಮುಚ್ಚಳದಿಂದ ಮುಚ್ಚಿ ಮತ್ತು ಬೇಯಿಸುವವರೆಗೆ 6 ರಿಂದ 7 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ.&lt;/p&gt;&lt;p&gt;* ಬಟ್ಟೆಯನ್ನು ಎಚ್ಚರಿಕೆಯಿಂದ ತಟ್ಟೆ ಅಥವಾ ಬಾಳೆ ಎಲೆಯ ಮೇಲೆ ತಿರುಗಿಸಿ ಮತ್ತು ಬಟ್ಟೆಯಿಂದ ತೆಗೆಯಿರಿ.&lt;/p&gt;]]></content:encoded>
            <category>food</category>
            <dc:creator>Suchethana D</dc:creator>
            <atom:link href="https://kannada.asianetnews.com/life/keralas-special-ramaserri-idli-recipe-on-matka-suc/articleshow-u6fe9u4"/>
        </item>
        <item>
            <title><![CDATA[Strawberry Benefits: ಸ್ಟ್ರಾಬೆರಿ ತಿಂದರೆ ಸಿಗುವ ಆರು ಅದ್ಭುತ ಆರೋಗ್ಯ ಪ್ರಯೋಜನಗಳಿವು]]></title>
            <link>https://kannada.asianetnews.com/webstories/food/six-powerful-health-benefits-of-including-strawberries-in-your-diet-gvd-xu9l16t</link>
            <guid isPermaLink="true">https://kannada.asianetnews.com/webstories/food/six-powerful-health-benefits-of-including-strawberries-in-your-diet-gvd-xu9l16t</guid>
            <pubDate>Fri, 28 Aug 2026 18:30:52 +0530</pubDate>
            <description><![CDATA[ಸ್ಟ್ರಾಬೆರಿ ಹಣ್ಣನ್ನು ತಿನ್ನುವುದರಿಂದ ಸಿಗುವ ಆರು ಪ್ರಮುಖ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಹಣ್ಣು ನಿಮ್ಮ ಡಯಟ್&zwnj;ನಲ್ಲಿ ಯಾಕೆ ಇರಬೇಕು ಎಂದು ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01jzqhx27bf02g8v5t6k8z81xk,imgname-fotojet--8--1752063445227.jpg" type="image/jpeg" height="390" width="690"/>
            <category>food</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/food/six-powerful-health-benefits-of-including-strawberries-in-your-diet-gvd-xu9l16t"/>
        </item>
        <item>
            <title><![CDATA[ಕತ್ತರಿಸಿದ ಅರ್ಧ ನಿಂಬು ತಾಜಾ ಇರ್ಬೇಕಾ? ಫ್ರಿಡ್ಜ್ ನಲ್ಲಿಡುವ ಮುನ್ನ ಹೀಗೆ ಮಾಡಿ]]></title>
            <link>https://kannada.asianetnews.com/kitchen/half-lemon-storing-leftover-half-lemon-keep-it-fresh-for-a-long-time-with-this-trick/articleshow-z2k3xva</link>
            <guid isPermaLink="true">https://kannada.asianetnews.com/kitchen/half-lemon-storing-leftover-half-lemon-keep-it-fresh-for-a-long-time-with-this-trick/articleshow-z2k3xva</guid>
            <pubDate>Sat, 29 Aug 2026 15:38:14 +0530</pubDate>
            <description><![CDATA[&lt;p&gt;Half Lemon Storing : ನಿಂಬೆ ಹಣ್ಣು ತಾಜಾ ಇದ್ರೆ ಹೆಚ್ಚಿನ ರಸವನ್ನು ನಾವು ತೆಗೆಯಬಹುದು. ಅರ್ಧ ಕತ್ತರಿಸಿದ ನಿಂಬೆ ಹಣ್ಣು ಒಣಗುವ ಸಾಧ್ಯತೆ ಹೆಚ್ಚು. ಹಾಗಾಗಬಾರದು ಅಂದ್ರೆ ಹೀಗೆ ಮಾಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m16fsc40j2sst3pcx99b83z2,imgname-lemon-1787998023808.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿಂಬೆ ಹಣ್ಣನ್ನು ನಾವು ಒಂದೇ ಬಾರಿ ಪೂರ್ತಿಯಾಗಿ ಬಳಸೋದಿಲ್ಲ. ಟೀ, ಅಡುಗೆ ಅಥವಾ ಸಲಾಡ್ಗೆ ಕೆಲವೇ ಹನಿಗಳು ಬೇಕಾಗುತ್ತವೆ. ಹೀಗಾಗಿ ಅರ್ಧ ನಿಂಬೆ ಉಳಿಯೋದು ಸಾಮಾನ್ಯ. ಆದರೆ ಅದನ್ನು ಹಾಗೇ ಫ್ರಿಡ್ಜ್&zwnj; ನಲ್ಲಿ ಇಟ್ಟರೆ, ಕತ್ತರಿಸಿದ ಭಾಗ ಒಣಗಿ ನಿಂಬೆ ಬೇಗ ಹಾಳಾಗಬಹುದು. ಹಾಗಾದರೆ ಉಳಿದ ಅರ್ಧ ನಿಂಬೆಯನ್ನು ತಾಜಾವಾಗಿ ಇಡೋದು ಹೇಗೆ?&lt;/p&gt;&lt;h2&gt;ಅಲ್ಯೂಮಿನಿಯಂ ಫಾಯಿಲ್ ಬಳಸಿ&lt;/h2&gt;&lt;p&gt;ಕತ್ತರಿಸಿದ ನಿಂಬೆ ಹಣ್ಣನ್ನು ನೇರವಾಗಿ ನೀವು ಫ್ರಿಡ್ಜ್ ನಲ್ಲಿ ಇಡಬಾರದು. ಕತ್ತರಿಸಿದ ನಿಂಬೆ ಹಣ್ಣು ತಾಜಾ ಇರಬೇಕು ಅಂದ್ರೆ ನೀವು ಅಲ್ಯೂಮಿನಿಯಂ ಫಾಯಿಲ್&zwnj; ಬಳಸಬೇಕು. ಅರ್ಧ ನಿಂಬೆ ಉಳಿದಾಗ, ಅದರ ಕತ್ತರಿಸಿದ ಭಾಗವನ್ನು ಅಲ್ಯೂಮಿನಿಯಂ ಫಾಯಿಲ್ನಿಂದ ಬಿಗಿಯಾಗಿ ಮುಚ್ಚಿ. ನಂತರ ಅದನ್ನು ಫ್ರಿಡ್ಜ್ ನಲ್ಲಿ ಇಡಬೇಕು.&lt;/p&gt;&lt;p&gt;ನಿಂಬೆಯನ್ನು ಕತ್ತರಿಸಿದಾಗ ಅದರ ಒಳಭಾಗ ನೇರವಾಗಿ ಗಾಳಿಗೆ ಒಡ್ಡಿಕೊಳ್ಳುತ್ತದೆ. ಇದರಿಂದ ತೇವಾಂಶ ಕಡಿಮೆಯಾಗಿ ಕತ್ತರಿಸಿದ ಭಾಗ ಒಣಗಬಹುದು. ಫಾಯಿಲ್ನಿಂದ ಮುಚ್ಚುವುದರಿಂದ ಗಾಳಿಯ ನೇರ ಸಂಪರ್ಕ ಕಡಿಮೆಯಾಗುತ್ತದೆ. ಜೊತೆಗೆ ಫ್ರಿಡ್ಜ್ ನಲ್ಲಿರುವ ಈರುಳ್ಳಿ, ಬೆಳ್ಳುಳ್ಳಿ ಮತ್ತು ಇತರ ಆಹಾರಗಳ ವಾಸನೆ ನಿಂಬೆಗೆ ತಾಗುವುದೂ ಕಡಿಮೆಯಾಗುತ್ತದೆ.&lt;/p&gt;&lt;p&gt;ನಿಂಬೆಯ ವಿಶೇಷತೆ ಅದರ ತಾಜಾ ಹುಳಿ ಸುವಾಸನೆ. ಮುಚ್ಚದೆ ಫ್ರಿಡ್ಜ್ ನಲ್ಲಿ ಇಟ್ಟರೆ, ಅದರ ವಾಸನೆ ಮತ್ತು ರುಚಿಯ ಮೇಲೆ ಸುತ್ತಮುತ್ತಲಿನ ಆಹಾರಗಳ ಪ್ರಭಾವ ಬೀಳಬಹುದು. ಕತ್ತರಿಸಿದ ಭಾಗವನ್ನು ಮುಚ್ಚಿಡುವುದರಿಂದ ಅದರ ನೈಸರ್ಗಿಕ ಸುವಾಸನೆಯನ್ನು ಸ್ವಲ್ಪ ಸಮಯದವರೆಗೆ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.&lt;/p&gt;&lt;h3&gt;ಫಾಯಿಲ್ ಬದಲು ಇದನ್ನು ಬಳಸಿ&lt;/h3&gt;&lt;p&gt;ಅಲ್ಯೂಮಿನಿಯಂ ಫಾಯಿಲ್ ಬಳಸಲು ಇಷ್ಟವಿಲ್ಲದಿದ್ದರೆ, ಗಾಳಿಯಾಡದ ಆಹಾರ ಸಂಗ್ರಹಿಸುವ ಪಾತ್ರೆಯಲ್ಲಿ ಅರ್ಧ ನಿಂಬೆಯನ್ನು ಇಟ್ಟು ಮುಚ್ಚಳವನ್ನು ಬಿಗಿಯಾಗಿ ಹಾಕಬಹುದು. ಇದು ಕೂಡ ನಿಂಬೆ ತಾಜಾ ಇರುವಂತೆ ಮಾಡುತ್ತದೆ. ಮರುಬಳಕೆ ಮಾಡಬಹುದಾದ ಸಿಲಿಕೋನ್ ಫುಡ್ ಕವರ್ಗಳನ್ನೂ ಕೂಡ ನೀವು ಬಳಸಬಹುದು. ಫಾಯಿಲ್ನಲ್ಲಿ ಸುತ್ತಿದ ನಿಂಬೆ ಯಾವಾಗಲೂ ತಾಜಾವಾಗಿರುತ್ತದೆ ಎಂದಲ್ಲ. ಕತ್ತರಿಸಿದ ನಿಂಬೆಯನ್ನು ಸಾಧ್ಯವಾದಷ್ಟು ಬೇಗ ಬಳಸಿ ಮತ್ತು ಯಾವಾಗಲೂ ಫ್ರಿಡ್ಜ್ ನಲ್ಲಿ ಸಂಗ್ರಹಿಸಿ.&lt;/p&gt;]]></content:encoded>
            <category>food</category>
            <dc:creator>Roopa Hegde</dc:creator>
            <atom:link href="https://kannada.asianetnews.com/kitchen/half-lemon-storing-leftover-half-lemon-keep-it-fresh-for-a-long-time-with-this-trick/articleshow-z2k3xva"/>
        </item>
    </channel>
</rss>
