<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 20 May 2026 08:17:55 +0530</lastBuildDate>
        <atom:link href="https://kannada.asianetnews.com/rss/food" rel="self" type="application/rss+xml"/>
        <item>
            <title><![CDATA[ಮಜ್ಜಿಗೆಗೆ ಈ ಒಂದು ಪುಡಿ ಹಾಕಿ ಕುಡಿದು ನೋಡಿ, ಶುಗರ್‌ ಲೆವಲ್ ಕಂಟ್ರೋಲ್ ಜೊತೆಗೆ ಯಂಗ್ ಆಗ್ತೀರಾ!]]></title>
            <link>https://kannada.asianetnews.com/gallery/health-life/drinking-buttermilk-with-a-pinch-of-cumin-powder-not-only-regulates-blood-sugar-levels-but-also-boosts-digestion-20ir0ln</link>
            <guid isPermaLink="true">https://kannada.asianetnews.com/gallery/health-life/drinking-buttermilk-with-a-pinch-of-cumin-powder-not-only-regulates-blood-sugar-levels-but-also-boosts-digestion-20ir0ln</guid>
            <pubDate>Sun, 17 May 2026 21:26:01 +0530</pubDate>
            <description><![CDATA[&lt;p&gt;ಮಜ್ಜಿಗೆ ಒಂದು ನೈಸರ್ಗಿಕ ಪ್ರೋಬಯಾಟಿಕ್ ಪಾನೀಯ. ಇದು ಮಧುಮೇಹಿಗಳಿಗೆ ಸಂಪೂರ್ಣವಾಗಿ ಸುರಕ್ಷಿತ. ಆದರೆ, ಬರಿ ಮಜ್ಜಿಗೆ ಕುಡಿಯುವುದಕ್ಕಿಂತ ಅದಕ್ಕೆ ಒಂದು ವಿಶೇಷವಾದ ಪುಡಿಯನ್ನು ಬೆರೆಸಿ ಕುಡಿದರೆ ಅದರ ಶಕ್ತಿ ಇಮ್ಮಡಿಯಾಗುತ್ತದೆ. ಆ ಮ್ಯಾಜಿಕ್ ಪುಡಿ ಇದೇ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krv9q8ex1abp1tt2yvktbd53,imgname-butter-milk-1779032629725.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಜ್ಜಿಗೆ ಒಂದು ನೈಸರ್ಗಿಕ ಪ್ರೋಬಯಾಟಿಕ್ ಪಾನೀಯ. ಇದು ಮಧುಮೇಹಿಗಳಿಗೆ ಸಂಪೂರ್ಣವಾಗಿ ಸುರಕ್ಷಿತ. ಆದರೆ, ಬರಿ ಮಜ್ಜಿಗೆ ಕುಡಿಯುವುದಕ್ಕಿಂತ ಅದಕ್ಕೆ ಒಂದು ವಿಶೇಷವಾದ ಪುಡಿಯನ್ನು ಬೆರೆಸಿ ಕುಡಿದರೆ ಅದರ ಶಕ್ತಿ ಇಮ್ಮಡಿಯಾಗುತ್ತದೆ. ಆ ಮ್ಯಾಜಿಕ್ ಪುಡಿ ಇದೇ ನೋಡಿ..&lt;/p&gt;&lt;img&gt;&lt;p&gt;ಮಧುಮೇಹಕ್ಕೆ ಮದ್ದಾಗುತ್ತೆ ಮಜ್ಜಿಗೆಯ ಈ 'ಮ್ಯಾಜಿಕ್ ಪಾನೀಯ'! ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಮಜ್ಜಿಗೆಗೆ ಈ ಒಂದು ಪುಡಿ ಬೆರೆಸಿ ಕುಡಿಯಿರಿ ಸಾಕು..&lt;/p&gt;&lt;p&gt;ಇಂದಿನ ಆಧುನಿಕ ಜೀವನಶೈಲಿಯಲ್ಲಿ ಒತ್ತಡದ ಬದುಕು ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಮಧುಮೇಹ (Diabetes) ಎಂಬುದು ಬಹುತೇಕ ಮನೆಗಳ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಒಮ್ಮೆ ಈ ಸಕ್ಕರೆ ಕಾಯಿಲೆ ಅಂಟಿಕೊಂಡರೆ, ಅದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ, ಆದರೆ ಸರಿಯಾದ ಆಹಾರ ಮತ್ತು ಜೀವನಶೈಲಿಯ ಮೂಲಕ ಖಂಡಿತವಾಗಿಯೂ ನಿಯಂತ್ರಣದಲ್ಲಿಡಬಹುದು. ಮಧುಮೇಹಿಗಳು ತಾವು ತಿನ್ನುವ ಪ್ರತಿ ತುತ್ತಿನ ಬಗ್ಗೆಯೂ ಯೋಚಿಸಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ನಮ್ಮ ಮನೆಯಲ್ಲೇ ಇರುವ ಅತ್ಯಂತ ಸರಳ ಮತ್ತು ಹಳೆಯ ಕಾಲದ ಒಂದು ಪಾನೀಯ ಮಧುಮೇಹಿಗಳಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಅದೇ ನಮ್ಮ ಪ್ರೀತಿಯ 'ಮಜ್ಜಿಗೆ'.&lt;/p&gt;&lt;img&gt;&lt;p&gt;ಮಧುಮೇಹ ಮತ್ತು ಮಜ್ಜಿಗೆಯ ಸಂಬಂಧ:&lt;/p&gt;&lt;p&gt;ಮಜ್ಜಿಗೆ ಒಂದು ನೈಸರ್ಗಿಕ ಪ್ರೋಬಯಾಟಿಕ್ ಪಾನೀಯ. ಇದರಲ್ಲಿ ಕ್ಯಾಲೋರಿಗಳು ಮತ್ತು ಕೊಬ್ಬಿನಂಶ ಅತ್ಯಂತ ಕಡಿಮೆ ಇರುವುದರಿಂದ ಇದು ಮಧುಮೇಹಿಗಳಿಗೆ ಸಂಪೂರ್ಣವಾಗಿ ಸುರಕ್ಷಿತ. ಆದರೆ, ಬರಿ ಮಜ್ಜಿಗೆ ಕುಡಿಯುವುದಕ್ಕಿಂತ ಅದಕ್ಕೆ ಒಂದು ವಿಶೇಷವಾದ ಪುಡಿಯನ್ನು ಬೆರೆಸಿ ಕುಡಿದರೆ ಅದರ ಶಕ್ತಿ ಇಮ್ಮಡಿಯಾಗುತ್ತದೆ. ಆ ಮ್ಯಾಜಿಕ್ ಪುಡಿಯೇ 'ಜೀರಿಗೆ ಪುಡಿ'.&lt;/p&gt;&lt;img&gt;&lt;p&gt;ಜೀರಿಗೆಯಲ್ಲಿದೆ ಆರೋಗ್ಯದ ರಹಸ್ಯ:&lt;/p&gt;&lt;p&gt;ಜೀರಿಗೆ ಕೇವಲ ಅಡುಗೆಯ ರುಚಿ ಹೆಚ್ಚಿಸುವ ಸಾಂಬಾರ ಪದಾರ್ಥವಲ್ಲ, ಇದು ಔಷಧೀಯ ಗುಣಗಳ ಗಣಿ. ಜೀರಿಗೆಯಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಸತು, ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ, ಕೆ, ಇ ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಸಂಶೋಧನೆಗಳ ಪ್ರಕಾರ, ಜೀರಿಗೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಗುಣಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತವೆ. ಇನ್ಸುಲಿನ್ ಹಾರ್ಮೋನ್ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಜೀರಿಗೆ ಪ್ರಮುಖ ಪಾತ್ರವಹಿಸುತ್ತದೆ.&lt;/p&gt;&lt;img&gt;&lt;p&gt;ಪಾನೀಯ ತಯಾರಿಸುವುದು ಹೇಗೆ ಮತ್ತು ಯಾವಾಗ ಕುಡಿಯಬೇಕು?&lt;/p&gt;&lt;p&gt;ಪ್ರತಿದಿನ ಬೆಳಿಗ್ಗೆ ಒಂದು ಲೋಟ ತಾಜಾ ಮಜ್ಜಿಗೆಗೆ ಅರ್ಧ ಟೀ ಚಮಚ ಹುರಿದ ಜೀರಿಗೆ ಪುಡಿಯನ್ನು ಬೆರೆಸಿ ಕುಡಿಯುವುದು ಅತ್ಯುತ್ತಮ. ಸಾಧ್ಯವಾದರೆ ಜೀರಿಗೆಯನ್ನು ಸ್ವಲ್ಪ ಅಗಿದು ತಿನ್ನುವುದು ಇನ್ನೂ ಒಳ್ಳೆಯದು. ಈ ಪಾನೀಯವು ಕೇವಲ ಶುಗರ್ ಕಂಟ್ರೋಲ್ ಮಾಡುವುದು ಮಾತ್ರವಲ್ಲದೆ, ದೇಹದ ಹೆಚ್ಚುವರಿ ತೂಕವನ್ನು ಇಳಿಸಲು ಕೂಡ ಸಹಾಯ ಮಾಡುತ್ತದೆ. ಮಧುಮೇಹ ಮತ್ತು ಬೊಜ್ಜು ಎರಡೂ ಸಮಸ್ಯೆ ಇರುವವರಿಗೆ ಇದೊಂದು ಹೇಳಿ ಮಾಡಿಸಿದ ಪಾನೀಯ.&lt;/p&gt;&lt;img&gt;&lt;p&gt;ಇತರ ಅದ್ಭುತ ಪ್ರಯೋಜನಗಳು:&lt;/p&gt;&lt;p&gt;ಜೀರ್ಣಕ್ರಿಯೆ: ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯಿಂದ ಬಳಲುವವರಿಗೆ ಇದು ರಾಮಬಾಣ.&lt;/p&gt;&lt;p&gt;ರಕ್ತದೊತ್ತಡ ನಿಯಂತ್ರಣ: ಮಜ್ಜಿಗೆಯಲ್ಲಿರುವ ಪೊಟ್ಯಾಸಿಯಮ್ ಅಂಶವು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು (BP) ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.&lt;/p&gt;&lt;p&gt;ಮೂಳೆಗಳ ಆರೋಗ್ಯ: ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಮತ್ತು ರಂಜಕ ಅಧಿಕವಾಗಿರುವುದರಿಂದ ಇದು ಮೂಳೆಗಳನ್ನು ಬಲಪಡಿಸುತ್ತದೆ.&lt;/p&gt;&lt;p&gt;ಗಾಯ ಗುಣಪಡಿಸುವುದು: ಮಧುಮೇಹಿಗಳಲ್ಲಿ ಗಾಯಗಳು ಬೇಗನೆ ಒಣಗುವುದಿಲ್ಲ. ಮಜ್ಜಿಗೆಯಲ್ಲಿರುವ ಸತುವಿನ (Zinc) ಅಂಶವು ಗಾಯಗಳನ್ನು ಬೇಗನೆ ಗುಣಪಡಿಸಲು ನೆರವಾಗುತ್ತದೆ.&lt;/p&gt;&lt;img&gt;&lt;p&gt;ಗಮನಿಸಬೇಕಾದ ಅಂಶ:&lt;/p&gt;&lt;p&gt;ಮಜ್ಜಿಗೆಯು ಗರ್ಭಿಣಿಯರಿಗೂ ಮತ್ತು ವೃದ್ಧರಿಗೂ ಸುರಕ್ಷಿತವಾದ ಪಾನೀಯವಾಗಿದೆ. ಆದರೂ, ಮಧುಮೇಹವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದರಿಂದ, ಯಾವುದೇ ಹೊಸ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಯಾವಾಗಲೂ ಉತ್ತಮ.&lt;/p&gt;&lt;p&gt;ಒಟ್ಟಾರೆಯಾಗಿ ಹೇಳುವುದಾದರೆ, ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ದುಬಾರಿ ಉತ್ಪನ್ನಗಳಿಗಿಂತ ನಮ್ಮ ಮನೆಯ ಮಜ್ಜಿಗೆ ಮತ್ತು ಜೀರಿಗೆಯನ್ನು ಬಳಸುವ ಮೂಲಕ ನೈಸರ್ಗಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ವೀಕೆಂಡ್&zwnj;ನಿಂದಲೇ ಈ ಆರೋಗ್ಯಕರ ಅಭ್ಯಾಸವನ್ನು ನಿಮ್ಮದಾಗಿಸಿಕೊಳ್ಳಿ!&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/health-life/drinking-buttermilk-with-a-pinch-of-cumin-powder-not-only-regulates-blood-sugar-levels-but-also-boosts-digestion-20ir0ln"/>
        </item>
        <item>
            <title><![CDATA[ರಾಜ್ಯದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಕೈಗೆಟುಕುವ ಬೆಲೆಯಲ್ಲಿ ಬಿಯರ್, ಗರಿಷ್ಠ 75 ರೂ ಇಳಿಕೆ]]></title>
            <link>https://kannada.asianetnews.com/gallery/state/good-news-for-beer-lovers-prices-slashed-by-up-to-rs-75-in-karnataka-2yn5gus</link>
            <guid isPermaLink="true">https://kannada.asianetnews.com/gallery/state/good-news-for-beer-lovers-prices-slashed-by-up-to-rs-75-in-karnataka-2yn5gus</guid>
            <pubDate>Mon, 18 May 2026 08:17:54 +0530</pubDate>
            <description><![CDATA[&lt;p&gt;ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.ಎಲ್ಲಾ ಬಿಯರ್ ದರದಲ್ಲಿ ಭಾರಿ ಇಳಿಕೆಯಾಗಿದೆ. 185 ರೂ ಆಗಿದ್ದ ಕಿಂಗ್&zwnj;ಫಿಶರ್ ಬಿಯರ್ ಇದೀಗ 110 ರೂಪಾಯಿಗೆ ಲಭ್ಯವಿದೆ. ಎಲ್ಲಾ ಬಿಯರ್ ಮೇಲೆ ಗರಿಷ್ಠ 75 ರೂಪಾಯಿ ಇಳಿಕೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcs5rymg7a62a3jcxdynh66,imgname-whatsapp-image-2026-04-29-at-7.37.24-pm-1777471775700.jpeg" type="image/jpeg" height="390" width="690"/>
            <content:encoded><![CDATA[&lt;p&gt;ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.ಎಲ್ಲಾ ಬಿಯರ್ ದರದಲ್ಲಿ ಭಾರಿ ಇಳಿಕೆಯಾಗಿದೆ. 185 ರೂ ಆಗಿದ್ದ ಕಿಂಗ್&zwnj;ಫಿಶರ್ ಬಿಯರ್ ಇದೀಗ 110 ರೂಪಾಯಿಗೆ ಲಭ್ಯವಿದೆ. ಎಲ್ಲಾ ಬಿಯರ್ ಮೇಲೆ ಗರಿಷ್ಠ 75 ರೂಪಾಯಿ ಇಳಿಕೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಕ್ಕಿ ತೊಗರಿಬೇಳೆ ಬೆಲೆ ಏರಿಕೆ, ಸಾರಿಗೆ ಬೆಲೆ ಏರಿಕೆ ಸೇರಿದಂತೆ ದುಬಾರಿ ದುನಿಯಾದಲ್ಲಿ ರಾಜ್ಯದ ಮದ್ಯಪ್ರಿಯರಿಗೆ ಗುಡ್ ನ್ಯೂಸ್. ರಾಜ್ಯದಲ್ಲಿ ಎಲ್ಲಾ ಬಿಯರ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. 20 ರಿಂದ ಗರಿಷ್ಠ 75 ರೂಪಾಯಿವರೆಗೆ ಬಿಯರ್ ಬೆಲೆಯಲ್ಲಿ ಇಳಿಕೆಯಾಗಿದೆ. ವಿಶೇಷ ಅಂದರೆ ಹಲವು ಬ್ರ್ಯಾಂಡ್ ಇದೀಗ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.&lt;/p&gt;&lt;img&gt;&lt;p&gt;ಬಿಯರ್ ಬೆಲೆ ಇಳಿಕೆಯಿಂದ ಇದೀಗ ಬಿಯರ್ ಪ್ರಿಯರಿಗೆ ಬಂಪರ್. ಬಿಸಿಲ ಬೇಗೆಯಲ್ಲಿ ಇದೀಗ ಚಿಲ್ಡ್ ಬಿಯರ್ ಇಷ್ಟಪಡುವ ಹಲವರು ಈ ಬೆಲೆ ಇಳಿಕೆಯಿಂದ ಸಂಭ್ರಮಿಸುತ್ತಿದ್ದಾರೆ.&lt;/p&gt;&lt;ul&gt; &lt;li&gt;ಕಿಂಗ್ ಫಿಶರ್ ಪ್ರಿಮಿಯಂ 185 ರೂ. ಯಿಂದ&zwnj; 110 ರೂ ಇಳಿಕೆ.( ಒಟ್ಟು 75 ರೂ ಇಳಿಕೆ)&lt;/li&gt; &lt;li&gt;ಹೈನೆಕೆನ್ ಸಿಲ್ವರ್( 650 ml) ಮೊದಲು 270 ರೂ. ಈಗ 195 ರೂ. ( ಒಟ್ಟು 75 ರೂ.ಇಳಿಕೆ&lt;/li&gt; &lt;li&gt;ಅಲ್ಟ್ರಾ ಬಿಯರ್ ಮೊದಲು 225 ರೂ. ಈಗ 150 ರೂ. ( ಒಟ್ಟು 75 ರೂ.ಇಳಿಕೆ)&lt;/li&gt; &lt;li&gt;ಬಡ್ ವೈಸರ್ ಪ್ರಿಮಿಯಂ ಮೊದಲು 225 ರೂ. ಈಗ 205 ರೂ. ( ಒಟ್ಟು 20 ರೂಪಾಯಿ ಇಳಿಕೆ.&lt;/li&gt;&lt;/ul&gt;&lt;img&gt;&lt;p&gt;ಮದ್ಯಕ್ಕೆ ತೆರಿಗೆ ವಿಧಿಸುವ ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಎಐಬಿಯಿಂದ ಇದೀಗ ಮಧ್ಯದ ಪ್ರಮಾಣ ಆಧರಿಸಿ ತೆರಿಗೆ ವಿಧಿಸುವ ಪದ್ಧತಿಯನ್ನು ಜಾರಿಗೊಳಿಸಿದೆ. ಇದರ ಪರಿಣಾಮ ಎಲ್ಲಾ ಬಿಯರ್ ಬೆಲೆ ಇಳಿಕೆಯಾಗಿದೆ. ಹೊಸ ತೆರಿಗೆ ಪದ್ಧತಿಯಿಂದ ಬಿಯರ್ ಕಂಪನಿಗಳು ತಮ್ಮ ಬ್ರ್ಯಾಂಡ್&zwnj;ಗಳ ಬೆಲೆ ಇಳಿಸಿದೆ.&lt;/p&gt;&lt;img&gt;&lt;p&gt;ಮದ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದು ಜನರನ್ನು ಕಂಗಾಲು ಮಾಡಿದೆ. ಜನಸಾಮಾನ್ಯರ ಬದುಕು ದುಬಾರಿಯಾಗುತ್ತಿದೆ. ಇದರ ನಡುವೆ ಬಿಯರ್ ಪ್ರಿಯರು ನಿರಾಳರಾಗಿದ್ದಾರೆ.&lt;/p&gt;&lt;img&gt;&lt;p&gt;ಬಿಯರ್ ಬೆಲೆ ಇಳಿಕೆಯಾಗಿದೆ. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರ ವಿಸ್ಕಿ ಸೇರಿದಂತೆ ಇತರ ಮದ್ಯಗಳ ಮೇಲಿನ ಬೆಲೆ ಏರಿಕೆ ಮಾಡಿದೆ. ಅದರಲ್ಲೂ ಕಡಿಮೆ ಬೆಲೆಯ ಮದ್ಯಗಳ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟಿತ್ತು. ಇದೀಗ ಬಿಯರ್ ಬೆಲೆ ಇಳಿಕೆಯಿಂದ ಮದ್ಯ ಪ್ರಿಯರಿಗೆ ಕೊಂಚ ರಿಲೀಫ್ ಸಿಕ್ಕಿದೆ.&lt;/p&gt;]]></content:encoded>
            <category>food</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/good-news-for-beer-lovers-prices-slashed-by-up-to-rs-75-in-karnataka-2yn5gus"/>
        </item>
        <item>
            <title><![CDATA[ಪ್ರತಿದಿನ ಈ ಆಹಾರ ತಗೋತಿದ್ರೆ ಕೂದಲು ಉದುರೋದು ಪಕ್ಕಾ ನಿಲ್ಲುತ್ತೆ!]]></title>
            <link>https://kannada.asianetnews.com/webstories/food/6-biotin-rich-foods-for-strong-and-healthy-hair-tips-3m3mnfr</link>
            <guid isPermaLink="true">https://kannada.asianetnews.com/webstories/food/6-biotin-rich-foods-for-strong-and-healthy-hair-tips-3m3mnfr</guid>
            <pubDate>Sun, 17 May 2026 16:43:02 +0530</pubDate>
            <description><![CDATA[ಕೂದಲಿನ ಆರೋಗ್ಯಕ್ಕೆ ಬಯೋಟಿನ್&zwnj; ಅತ್ಯಗತ್ಯ. ನಿಮ್ಮ ಕೂದಲನ್ನು ಬಲಪಡಿಸಲು ಸಹಾಯ ಮಾಡುವ ಬಯೋಟಿನ್&zwnj; ಸಮೃದ್ಧವಾಗಿರುವ ಆರು ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krtmf0hd7fa5zrz559ay2fkp,imgname-mixcollage-17-may-2026-03-01-pm-945-1779010339373.jpg" type="image/jpeg" height="390" width="690"/>
            <category>food</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/food/6-biotin-rich-foods-for-strong-and-healthy-hair-tips-3m3mnfr"/>
        </item>
        <item>
            <title><![CDATA[Idli Dosa Batter: ಐಸ್‌ಕ್ಯೂಬ್‌ನಿಂದ ಹಿಟ್ಟು ಹುಳಿಯಾಗಲ್ಲ; ದೋಸೆ ಗರಿಯಾಗುತ್ತೆ; ಇಡ್ಲಿ ಮೃದುವಾಗುತ್ತೆ; ಹೇಗೆ ಬಳಸೋದು?]]></title>
            <link>https://kannada.asianetnews.com/gallery/food/idli-dosa-batter-recipe-in-kannada-ice-cube-advantages-53mdxrx</link>
            <guid isPermaLink="true">https://kannada.asianetnews.com/gallery/food/idli-dosa-batter-recipe-in-kannada-ice-cube-advantages-53mdxrx</guid>
            <pubDate>Fri, 15 May 2026 15:03:26 +0530</pubDate>
            <description><![CDATA[&lt;p&gt;Idli And Dosa Recipe: ದೋಸೆ ಗರಿಗರಿ ಆಗಬೇಕು, ಇಡ್ಲಿ ಮೃದು ಆಗಬೇಕು ಎಂದು ಏನೇನೋ ಪ್ರಯತ್ನಪಡೋದುಂಟು. ಹೀಗಿರುವಾಗ ಐಸ್&zwnj;ಕ್ಯೂಬ್&zwnj;ನಿಂದ ದೋಸೆ, ಇಡ್ಲಿ ಹಿಟ್ಟು ಹುಳಿ ಆಗೋದಿಲ್ಲ, ರುಚಿಯೂ ಕೆಡೋದಿಲ್ಲ. ಹಾಗಿದ್ದರೆ ಇದನ್ನು ಹೇಗೆ ಬಳಸೋದು? &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krnfpea5fv67ecatebfdk0c6,imgname-new-project---2026-05-15t150215.419-1778837567813.jpg" type="image/jpeg" height="390" width="690"/>
            <content:encoded><![CDATA[&lt;p&gt;Idli And Dosa Recipe: ದೋಸೆ ಗರಿಗರಿ ಆಗಬೇಕು, ಇಡ್ಲಿ ಮೃದು ಆಗಬೇಕು ಎಂದು ಏನೇನೋ ಪ್ರಯತ್ನಪಡೋದುಂಟು. ಹೀಗಿರುವಾಗ ಐಸ್&zwnj;ಕ್ಯೂಬ್&zwnj;ನಿಂದ ದೋಸೆ, ಇಡ್ಲಿ ಹಿಟ್ಟು ಹುಳಿ ಆಗೋದಿಲ್ಲ, ರುಚಿಯೂ ಕೆಡೋದಿಲ್ಲ. ಹಾಗಿದ್ದರೆ ಇದನ್ನು ಹೇಗೆ ಬಳಸೋದು? &amp;nbsp;&lt;/p&gt;&lt;img&gt;&lt;p&gt;ಮಿಕ್ಸರ್ ಗ್ರೈಂಡರ್&zwnj;ನಲ್ಲಿ ಹಿಟ್ಟು ರುಬ್ಬುವಾಗ ಶಾಖಕ್ಕೆ ಹಿಟ್ಟು ಬೇಗನೆ ಬಿಸಿಯಾಗುತ್ತದೆ. ಹಿಟ್ಟು ಬಿಸಿಯಾದಾಗ, ಅದರಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾಗಳು ನಾಶವಾಗಬಹುದು. ಐಸ್ ಕ್ಯೂಬ್ ಹಾಕುವುದರಿಂದ ಹಿಟ್ಟು ತಂಪಾಗುವುದು. ಮಿಕ್ಸಿ ಜಾರ್ ಕೂಡ ಅಷ್ಟು ಬಿಸಿಯಾಗುವುದಿಲ್ಲ.&lt;/p&gt;&lt;img&gt;&lt;p&gt;ಹಿಟ್ಟು ತಂಪಾದರೆ ಉದ್ದಿನಬೇಳೆ ಚೆನ್ನಾಗಿ ಉಬ್ಬುತ್ತದೆ (Fluffy). ಆಗ ಇಡ್ಲಿಗಳು ಮಲ್ಲಿಗೆಯಂತೆ ಮೃದುವಾಗಿ ಬರುತ್ತವೆ&lt;/p&gt;&lt;img&gt;&lt;p&gt;ಹಿಟ್ಟು ಬಿಸಿಯಾದಾಗ ಅದರ ರುಚಿ ಬದಲಾಗುತ್ತದೆ, ಬೇಗ ಹುಳಿ ಬರಬಹುದು. ಐಸ್ ಕ್ಯೂಬ್ ಬಳಸುವುದರಿಂದ ಹಿಟ್ಟಿನ ಅಸಲಿ ರುಚಿ, ಬಿಳಿ ಬಣ್ಣ ಹಾಗೆಯೇ ಇರುತ್ತದೆ&lt;/p&gt;&lt;img&gt;&lt;p&gt;ಹಿಟ್ಟು ರುಬ್ಬುವಾಗಲೇ ಬಿಸಿಯಾದರೆ, ಅದು ಹುದುಗಲು ಆರಂಭ ಆಗುತ್ತದೆ. ಆಗ ಹಿಟ್ಟು ಸರಿಯಾಗಿ ಉಬ್ಬುವುದಿಲ್ಲ. ಐಸ್ ಕ್ಯೂಬ್ ಹಾಕಿದಾಗ, ಹಿಟ್ಟು ನಿಧಾನವಾಗಿ ಹುದುಗುತ್ತದೆ.&lt;/p&gt;&lt;img&gt;&lt;p&gt;ತಣ್ಣನೆ ನೀರು ಹಾಕಿದಾಗ ಅಕ್ಕಿ, ಬೇಳೆಗಳು ಬೇಗನೆ ನುಣ್ಣಗೆ ಆಗುತ್ತವೆ. ಐಸ್ ಕ್ಯೂಬ್&zwnj;ಗಳು ನೀರಿನಂಶ ಕೊಟ್ಟು, ಹಿಟ್ಟಿನ ಸಾಂದ್ರತೆಯನ್ನು ಕಾಪಾಡುತ್ತದೆ.&lt;/p&gt;]]></content:encoded>
            <category>food</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/food/idli-dosa-batter-recipe-in-kannada-ice-cube-advantages-53mdxrx"/>
        </item>
        <item>
            <title><![CDATA[Tamarind Water: ಪ್ರತಿದಿನ ಹುಣಸೆ ರಸ ಕುಡಿಬಹುದಾ? ಮ್ಯಾಜಿಕ್ ಮಾಡುತ್ತಾ ಅಥವಾ ಡ್ಯಾಮೇಜ್ ಆಗುತ್ತಾ?]]></title>
            <link>https://kannada.asianetnews.com/health-life/kitchen-itemtamarind-water-daily-usage-is-benificial-for-health-and-how-much-to-use/articleshow-5sax8qq</link>
            <guid isPermaLink="true">https://kannada.asianetnews.com/health-life/kitchen-itemtamarind-water-daily-usage-is-benificial-for-health-and-how-much-to-use/articleshow-5sax8qq</guid>
            <pubDate>Sun, 17 May 2026 21:03:09 +0530</pubDate>
            <description><![CDATA[&lt;p&gt;ಸೌಂದರ್ಯದ ಬಗ್ಗೆ ಕಾಳಜಿ ಇರುವವರಿಗೆ ಹುಣಸೆ ರಸ ಒಂದು ವರದಾನ. ಇದರಲ್ಲಿರುವ ಆ್ಯಂಟಿ-ಆಕ್ಸಿಡೆಂಟ್&zwnj;ಗಳು ಚರ್ಮವನ್ನು ಸೂರ್ಯನ ಕಿರಣಗಳಿಂದ ಆಗುವ ಹಾನಿಯಿಂದ ರಕ್ಷಿಸುತ್ತವೆ. ವಯಸ್ಸಾದಂತೆ ಕಂಡುಬರುವ ಸುಕ್ಕುಗಳು ಮತ್ತು ಕಪ್ಪು ಕಲೆಗಳನ್ನು ತಡೆಗಟ್ಟಿ ಸೌಂದರ್ಯ ಹೆಚ್ಚಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krv8aznqwd6qwtq9xk91d8r9,imgname-tamarind-water-1779031178935.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಳಿ ಹುಣಸೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು!&lt;/strong&gt;&lt;/p&gt;&lt;p&gt;ನಮ್ಮ ಭಾರತೀಯ ಅಡುಗೆಮನೆಯಲ್ಲಿ ಹುಣಸೆಹಣ್ಣಿಗೆ ವಿಶೇಷ ಸ್ಥಾನವಿದೆ. ಸಾರು, ಸಾಂಬಾರ್ ಅಥವಾ ಚಟ್ನಿ ಏನೇ ಇರಲಿ, ಸ್ವಲ್ಪ ಹುಣಸೆ ಹಣ್ಣು ಸೇರಿಸಿದರೆ ಅದರ ರುಚಿಯೇ ಬೇರೆ. ಆದರೆ, ಹುಣಸೆಹಣ್ಣು ಕೇವಲ ರುಚಿಗೆ ಮಾತ್ರ ಸೀಮಿತವಲ್ಲ, ಇದು ಅದ್ಭುತವಾದ ಆರೋಗ್ಯ ಗುಣಗಳನ್ನು ಹೊಂದಿರುವ ಒಂದು 'ಸೂಪರ್ ಫುಡ್'. ಇತ್ತೀಚಿನ ದಿನಗಳಲ್ಲಿ ಜನರು ಗ್ರೀನ್ ಟೀ ಅಥವಾ ಡಿಟಾಕ್ಸ್ ಪಾನೀಯಗಳ ಹಿಂದೆ ಬೀಳುತ್ತಿದ್ದಾರೆ, ಆದರೆ ನಮ್ಮ ಮನೆಯಲ್ಲೇ ಇರುವ ಹುಣಸೆ ರಸವು ಇವೆಲ್ಲಕ್ಕಿಂತ ಮಿಗಿಲಾದ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ನಿಮಗೆ ಗೊತ್ತೇ?&lt;/p&gt;&lt;p&gt;ಪೋಷಕಾಂಶಗಳ ಗಣಿ ಈ ಹುಣಸೆ:&lt;/p&gt;&lt;p&gt;ಹುಣಸೆಹಣ್ಣಿನಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್&zwnj;ನಂತಹ ಅಗತ್ಯ ಖನಿಜಗಳು ಸಮೃದ್ಧವಾಗಿವೆ. ಇದಲ್ಲದೆ, ಇದರಲ್ಲಿ ಥಯಾಮಿನ್, ರಿಬೋಫ್ಲಾವಿನ್ ಮತ್ತು ನಿಯಾಸಿನ್&zwnj;ನಂತಹ ಬಿ-ಕಾಂಪ್ಲೆಕ್ಸ್ ವಿಟಮಿನ್&zwnj;ಗಳಿವೆ. ಇವು ನಾವು ಸೇವಿಸುವ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವಲ್ಲಿ ಮತ್ತು ನರಮಂಡಲದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.&lt;/p&gt;&lt;h2&gt;ಚರ್ಮದ ಕಾಂತಿಗೆ ರಾಮಬಾಣ:&lt;/h2&gt;&lt;p&gt;ಸೌಂದರ್ಯದ ಬಗ್ಗೆ ಕಾಳಜಿ ಇರುವವರಿಗೆ ಹುಣಸೆ ರಸ ಒಂದು ವರದಾನ. ಇದರಲ್ಲಿರುವ ಆ್ಯಂಟಿ-ಆಕ್ಸಿಡೆಂಟ್&zwnj;ಗಳು ಚರ್ಮವನ್ನು ಸೂರ್ಯನ ಕಿರಣಗಳಿಂದ ಆಗುವ ಹಾನಿಯಿಂದ ರಕ್ಷಿಸುತ್ತವೆ. ವಯಸ್ಸಾದಂತೆ ಕಂಡುಬರುವ ಸುಕ್ಕುಗಳು ಮತ್ತು ಕಪ್ಪು ಕಲೆಗಳನ್ನು ತಡೆಗಟ್ಟಿ, ಚರ್ಮವನ್ನು ಯಾವಾಗಲೂ ಯೌವನಯುತವಾಗಿ ಮತ್ತು ಕಾಂತಿಯುತವಾಗಿರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಮಿತವಾಗಿ ಹುಣಸೆ ರಸ ಸೇವಿಸುವುದರಿಂದ ಒಳಗಿನಿಂದಲೇ ಚರ್ಮಕ್ಕೆ ಹೊಳಪು ಸಿಗುತ್ತದೆ.&lt;/p&gt;&lt;p&gt;ಜೀರ್ಣಕ್ರಿಯೆಯ ಮಿತ್ರ:&lt;/p&gt;&lt;p&gt;ಇಂದಿನ ಆಧುನಿಕ ಜೀವನಶೈಲಿಯಲ್ಲಿ ಅನೇಕರು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರ. ಊಟದ ನಂತರ ಸ್ವಲ್ಪ ಹುಣಸೆ ರಸ ಸೇವಿಸುವುದರಿಂದ ಹೊಟ್ಟೆಯಲ್ಲಿನ ಜೀರ್ಣರಸಗಳು ಚುರುಕುಗೊಳ್ಳುತ್ತವೆ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗಿ, ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು (Detox) ಇದು ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದೆ.&lt;/p&gt;&lt;h3&gt;ರೋಗನಿರೋಧಕ ಶಕ್ತಿ ಹೆಚ್ಚಳ:&lt;/h3&gt;&lt;p&gt;ಹುಣಸೆಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸಾಮಾನ್ಯ ಶೀತ, ಕೆಮ್ಮು ಮತ್ತು ಜ್ವರದಂತಹ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಿಸಿಲಿನಲ್ಲಿ ಕೆಲಸ ಮಾಡಿ ದಣಿದಾಗ ಅಥವಾ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ (Dehydration), ಸ್ವಲ್ಪ ಹುಣಸೆ ರಸಕ್ಕೆ ಬೆಲ್ಲ ಅಥವಾ ಉಪ್ಪು ಸೇರಿಸಿ ಕುಡಿದರೆ ದೇಹಕ್ಕೆ ತಕ್ಷಣವೇ ಎಲೆಕ್ಟ್ರೋಲೈಟ್ಸ್&zwnj;ಗಳು ಸಿಕ್ಕಿ ಚೈತನ್ಯ ಬರುತ್ತದೆ.&lt;/p&gt;&lt;p&gt;ಗಮನಿಸಬೇಕಾದ ಅಂಶಗಳು:&lt;/p&gt;&lt;p&gt;ಹುಣಸೆ ರಸ ಆರೋಗ್ಯಕ್ಕೆ ಒಳ್ಳೆಯದಾದರೂ, ಅತಿಯಾದರೆ ಅಮೃತವೂ ವಿಷ ಎಂಬ ಮಾತನ್ನು ನೆನಪಿನಲ್ಲಿಡಬೇಕು. ತೀವ್ರವಾದ ಗ್ಯಾಸ್ಟ್ರಿಕ್ ಅಥವಾ ಅಲ್ಸರ್ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬಾರದು. ಅತಿಯಾದ ಸೇವನೆಯು ಹಲ್ಲುಗಳ ಎನಾಮೆಲ್&zwnj;ಗೆ ಹಾನಿ ಮಾಡಬಹುದು ಅಥವಾ ಅತಿಸಾರಕ್ಕೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವ ಮುನ್ನ ಅಥವಾ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮ.&lt;/p&gt;&lt;p&gt;ಒಟ್ಟಾರೆಯಾಗಿ ಹೇಳುವುದಾದರೆ, ಹುಣಸೆ ರಸವು ರುಚಿಯ ಜೊತೆಗೆ ಆರೋಗ್ಯವನ್ನೂ ನೀಡುವ ನೈಸರ್ಗಿಕ ಔಷಧಿಯಾಗಿದೆ. ನಿಮ್ಮ ದೈನಂದಿನ ಜೀವನದಲ್ಲಿ ಇದನ್ನು ಮಿತವಾಗಿ ಬಳಸುವ ಮೂಲಕ ಉತ್ತಮ ಆರೋಗ್ಯ ಮತ್ತು ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/kitchen-itemtamarind-water-daily-usage-is-benificial-for-health-and-how-much-to-use/articleshow-5sax8qq"/>
        </item>
        <item>
            <title><![CDATA[Milk Combinations: ಆರೋಗ್ಯಕ್ಕೆ ಹಾಲು ಒಳ್ಳೇದು ಆದ್ರೆ ಹಾಲಿನೊಂದಿಗೆ ಈ 5 ಆಹಾರ ತಿಂದರೆ ಡೇಂಜರ್!]]></title>
            <link>https://kannada.asianetnews.com/gallery/food/foods-you-should-never-mix-with-milk-for-better-digestion-70g30i0</link>
            <guid isPermaLink="true">https://kannada.asianetnews.com/gallery/food/foods-you-should-never-mix-with-milk-for-better-digestion-70g30i0</guid>
            <pubDate>Sat, 16 May 2026 12:58:26 +0530</pubDate>
            <description><![CDATA[&lt;p&gt;ಹಾಲು ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದೆ. ಆದರೆ, ಕೆಲವೊಂದು ಆಹಾರಗಳ ಜೊತೆ ಇದನ್ನು ಸೇವಿಸಿದರೆ ಹೊಟ್ಟೆ ಉಬ್ಬರ, ಅಸಿಡಿಟಿ ಅಥವಾ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ತಜ್ಞರು ಹೇಳಿರುವ ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jz2431bk0gmn9e85wbws1x6v,imgname-citrus-fruits-1751344317811.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಲು ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದೆ. ಆದರೆ, ಕೆಲವೊಂದು ಆಹಾರಗಳ ಜೊತೆ ಇದನ್ನು ಸೇವಿಸಿದರೆ ಹೊಟ್ಟೆ ಉಬ್ಬರ, ಅಸಿಡಿಟಿ ಅಥವಾ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ತಜ್ಞರು ಹೇಳಿರುವ ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.&lt;/p&gt;&lt;img&gt;&lt;p&gt;ಹಾಲು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಅಗತ್ಯ ವಿಟಮಿನ್&zwnj;ಗಳಿಂದ ತುಂಬಿದ ಆರೋಗ್ಯಕರ ಮತ್ತು ಪೌಷ್ಟಿಕ ಪಾನೀಯವಾಗಿದೆ. ಆದರೂ, ಸಾಂಪ್ರದಾಯಿಕ ಆಹಾರ ಪದ್ಧತಿಗಳು ಮತ್ತು ಕೆಲವು ಆರೋಗ್ಯ ತಜ್ಞರ ಪ್ರಕಾರ, ಹಾಲನ್ನು ಕೆಲವು ಆಹಾರಗಳೊಂದಿಗೆ ಸೇರಿಸುವುದರಿಂದ ಕೆಲವರಲ್ಲಿ ಜೀರ್ಣಕ್ರಿಯೆಯ ಸಮಸ್ಯೆಗಳು, ಹೊಟ್ಟೆ ಉಬ್ಬರ ಅಥವಾ ಅಸ್ವಸ್ಥತೆ ಉಂಟಾಗಬಹುದು. ಉತ್ತಮ ಜೀರ್ಣಕ್ರಿಯೆಗಾಗಿ ಹಾಲಿನೊಂದಿಗೆ ಸೇವಿಸಬಾರದ ಐದು ಆಹಾರಗಳ ಪಟ್ಟಿ ಇಲ್ಲಿದೆ.&lt;/p&gt;&lt;p&gt;&lt;strong&gt;1. ಸಿಟ್ರಸ್ ಹಣ್ಣುಗಳು&lt;/strong&gt;&lt;/p&gt;&lt;p&gt;ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿಯಂತಹ ಹಣ್ಣುಗಳು ಹೆಚ್ಚು ಆಮ್ಲೀಯ ಗುಣಗಳನ್ನು ಹೊಂದಿರುತ್ತವೆ. ಇವುಗಳನ್ನು ಹಾಲಿನೊಂದಿಗೆ ಸೇವಿಸಿದಾಗ, ಹಾಲು ಹೊಟ್ಟೆಯಲ್ಲಿ ಒಡೆಯಬಹುದು. ಇದರಿಂದ ಕೆಲವರಿಗೆ ಅಸಿಡಿಟಿ, ಅಜೀರ್ಣ ಅಥವಾ ಹೊಟ್ಟೆ ಭಾರವಾದಂತೆ ಅನಿಸಬಹುದು. ಹಾಲು ಮತ್ತು ಸಿಟ್ರಸ್ ಹಣ್ಣುಗಳ ಸೇವನೆಯ ನಡುವೆ ಅಂತರ ಕಾಯ್ದುಕೊಳ್ಳಲು ತಜ್ಞರು ಸಲಹೆ ನೀಡುತ್ತಾರೆ.&lt;/p&gt;&lt;img&gt;&lt;p&gt;ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳಲ್ಲಿ ಹಾಲು ಮತ್ತು ಮೀನಿನ ಸೇವನೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ. ಈ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎನ್ನಲು ವೈಜ್ಞಾನಿಕ ಪುರಾವೆಗಳು ಸೀಮಿತವಾಗಿವೆ. ಆದರೂ, ಕೆಲವರಿಗೆ ಇವೆರಡರ ಸೇವನೆಯಿಂದ ಜೀರ್ಣಕ್ರಿಯೆಯಲ್ಲಿ ಅಲರ್ಜಿ ಉಂಟಾಗಬಹುದು. ನಿಮಗೆ ಈ ರೀತಿಯ ತೊಂದರೆಯಾದರೆ, ಇವೆರಡನ್ನು ಒಟ್ಟಿಗಗೆ ಸೇವಿಸಬಾರದು ಎಂದು ಪೌಷ್ಟಿಕಾಂಶ ತಜ್ಞರು ಸಲಹೆ ನೀಡುತ್ತಾರೆ.&lt;/p&gt;&lt;img&gt;&lt;p&gt;ಹಾಲಿನೊಂದಿಗೆ ಉಪ್ಪಿನಾಂಶ ಹೆಚ್ಚಿರುವ ಅಥವಾ ಹೆಚ್ಚು ಸಂಸ್ಕರಿಸಿದ ತಿಂಡಿಗಳನ್ನು ತಿನ್ನುವುದು ಜೀರ್ಣಕ್ರಿಯೆ ಮತ್ತು ದೇಹದ ಜಲಸಂಚಯನ (hydration) ಸಮತೋಲನಕ್ಕೆ ಅಡ್ಡಿಪಡಿಸಬಹುದು. ಹೆಚ್ಚು ಉಪ್ಪಿರುವ ಆಹಾರಗಳು ದೇಹವು ಕೆಲವು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಚಿಪ್ಸ್, ನಮ್ಕೀನ್ ಅಥವಾ ಪ್ಯಾಕೇಜ್ ಮಾಡಿದ ಉಪ್ಪಿನ ತಿಂಡಿಗಳೊಂದಿಗೆ ಹಾಲು ಕುಡಿಯುವುದು ಆರೋಗ್ಯಕರವಲ್ಲ.&lt;/p&gt;&lt;img&gt;&lt;p&gt;ಮೊಸರು, ಉಪ್ಪಿನಕಾಯಿ ಅಥವಾ ವಿನೆಗರ್ ಆಧಾರಿತ ಖಾದ್ಯಗಳಂತಹ ಹುದುಗಿಸಿದ (fermented) ಅಥವಾ ಹುಳಿ ಪದಾರ್ಥಗಳು ಕೆಲವರ ಆರೋಗ್ಯಕ್ಕೆ ಹಾಲಿನೊಂದಿಗೆ ಸರಿಹೊಂದುವುದಿಲ್ಲ. ಈ ಸಂಯೋಜನೆಯು ಕೆಲವೊಮ್ಮೆ ಹೊಟ್ಟೆ ಉಬ್ಬರ, ಹೊಟ್ಟೆ ನೋವು ಅಥವಾ ಜೀರ್ಣಾಂಗ ವ್ಯವಸ್ಥೆಯಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು. ಸೂಕ್ಷ್ಮ ಜೀರ್ಣಕ್ರಿಯೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚು.&lt;/p&gt;&lt;img&gt;&lt;p&gt;ಬನಾನಾ ಶೇಕ್ ಜನಪ್ರಿಯವಾಗಿದ್ದರೂ, ಕೆಲವು ಸಾಂಪ್ರದಾಯಿಕ ಆಹಾರ ಪದ್ಧತಿಗಳು ಬಾಳೆಹಣ್ಣು ಮತ್ತು ಹಾಲಿನ ಸಂಯೋಜನೆಯನ್ನು ನಿಯಮಿತವಾಗಿ ಸೇವಿಸುವುದನ್ನು ತಪ್ಪಿಸಲು ಹೇಳುತ್ತವೆ. ಕೆಲವರಿಗೆ, ಈ ಮಿಶ್ರಣವು ಹೊಟ್ಟೆಗೆ ಭಾರವೆನಿಸಬಹುದು. ಇದು ನಿಧಾನ ಜೀರ್ಣಕ್ರಿಯೆ ಅಥವಾ ಕಫದ ರಚನೆಗೆ ಕಾರಣವಾಗಬಹುದು.&lt;/p&gt;]]></content:encoded>
            <category>food</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/food/foods-you-should-never-mix-with-milk-for-better-digestion-70g30i0"/>
        </item>
        <item>
            <title><![CDATA[ಅನ್ನ ಉಳಿತಾ? ಒಂದು ಪೈಸೆ ಖರ್ಚು ಮಾಡದೆ ಗರಿಗರಿಯಾದ ಸಂಡಿಗೆ ಮಾಡಿ.. ಅಜ್ಜಿ ಕಾಲದ ಉಳಿತಾಯದ ಉಪಾಯವಿದು]]></title>
            <link>https://kannada.asianetnews.com/food/dont-waste-leftover-rice-make-crispy-rice-sandige-at-zero-cost/articleshow-8g2pnb5</link>
            <guid isPermaLink="true">https://kannada.asianetnews.com/food/dont-waste-leftover-rice-make-crispy-rice-sandige-at-zero-cost/articleshow-8g2pnb5</guid>
            <pubDate>Wed, 20 May 2026 08:17:49 +0530</pubDate>
            <description><![CDATA[&lt;p&gt;&lt;strong&gt;How to use leftover rice: &lt;/strong&gt;ರಾತ್ರಿ ಉಳಿದ ಅನ್ನ ಎಸೆಯುವ ಬದಲು ಅಥವಾ ದಿನವೂ ಚಿತ್ರಾನ್ನ ಮಾಡುವ ಬದಲು ಮನೆಯಲ್ಲೇ ಸಂಡಿಗೆಯನ್ನೇಕೆ ಮಾಡಬಾರದು? ಹಳೆಯ ಕಾಲದ ಈ ಅದ್ಭುತ ಕಿಚನ್ ಟ್ರಿಕ್ ಬಳಸಿ, ಒಂದು ರೂಪಾಯಿ ಖರ್ಚಿಲ್ಲದೆ ವರ್ಷವಿಡೀ ಬಾಳಿಕೆ ಬರುವ ರುಚಿಕರವಾದ ಅನ್ನದ ಸಂಡಿಗೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks1mes79yr6zv1bwkv2ct2ff,imgname-thumbnail---2026-05-20t080625.290-1779245212905.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನ&lt;/strong&gt;ಮ್ಮ ಮನೆಗಳಲ್ಲಿ ರಾತ್ರಿ ಮಾಡಿದ ಅನ್ನ ಸ್ವಲ್ಪ ಉಳಿಯುವುದು ಸಾಮಾನ್ಯ. ಆ ಅನ್ನವನ್ನು ಅನೇಕರು ಎಸೆಯುತ್ತಾರೆ ಅಥವಾ ಮರುದಿನ ಬೆಳಗ್ಗೆ ಚಿತ್ರಾನ್ನ, ಎಗ್ ರೈಸ್&zwnj;ನಂತಹವುಗಳನ್ನು ಮಾಡುತ್ತಾರೆ. ಆದರೆ, ಇವೆಲ್ಲಕ್ಕಿಂತ ಭಿನ್ನವಾಗಿ ಉಳಿದ ಅನ್ನದಿಂದ ದೀರ್ಘಕಾಲ ಬಾಳಿಕೆ ಬರುವಂತೆ ಅತ್ಯಂತ ರುಚಿಕರವಾದ, ಕ್ರಿಸ್ಪಿಯಾಗಿರುವ ಅನ್ನದ ಸಂಡಿಗೆ ತಯಾರಿಸಬಹುದು. ಇದು ನಮ್ಮ ಅಜ್ಜಿ ಕಾಲದ ಉಳಿತಾಯದ ಉಪಾಯ. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಸ್ನಾಕ್ಸ್ ಕೊಳ್ಳುವ ಬದಲು, ಮನೆಯಲ್ಲೇ ರೂಪಾಯಿ ಖರ್ಚಿಲ್ಲದೆ ಇವುಗಳನ್ನು ಸಿದ್ಧಪಡಿಸಬಹುದು.&lt;/p&gt;&lt;p&gt;ರಾತ್ರಿ ಹೊತ್ತು ಅನ್ನ ಉಳಿದರೆ ಎಸೆಯದೆ ಅಥವಾ ರೊಟೀನ್ ಆಗಿ ಚಿತ್ರಾನ್ನ ಮಾಡದೆ, ಅತ್ಯಂತ ರುಚಿಕರವಾದ ಅನ್ನದ ಸಂಡಿಗೆ ತಯಾರಿಸಬಹುದು. ಇದು ಒಂದು ರೂಪಾಯಿ ಖರ್ಚಿಲ್ಲದೆ ಮನೆಯಲ್ಲೇ ಸ್ನಾಕ್ಸ್ ತಯಾರಿಸುವ ಅದ್ಭುತ ಉಪಾಯ. ಬೇಳೆ ಸಾರು, ಸಾಂಬಾರ್ ಅನ್ನದ ಜೊತೆ ನೆಂಚಿಕೊಳ್ಳಲು ಅಥವಾ ಸಾಯಂಕಾಲದ ಸ್ನಾಕ್ ಆಗಿ ಎಣ್ಣೆಯಲ್ಲಿ ಕರಿದು ತಿನ್ನಲು ಈ ಸಂಡಿಗೆಗಳು ಅದ್ಭುತವಾಗಿರುತ್ತವೆ. ತಯಾರಿಸುವ ವಿಧಾನ ಮತ್ತು ಬೇಕಾಗುವ ಪದಾರ್ಥಗಳ ಪೂರ್ಣ ವಿವರವನ್ನು ತಿಳಿಯೋಣ.&lt;/p&gt;&lt;h2&gt;&lt;strong&gt;ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;ಉಳಿದ ಅನ್ನ-1 ಕಪ್ನೀರು-1 ಕಪ್ಟೊಮೆಟೊ ಪೇಸ್ಟ್-ಅರ್ಧ ಕಪ್ಜೀರಿಗೆ-ಕಾಲು ಟೀ ಚಮಚಎಳ್ಳು-ಅರ್ಧ ಟೀ ಚಮಚಕಾರದ ಪುಡಿ-ಅರ್ಧ ಟೀ ಚಮಚಅರಿಶಿನ ಸ್ವಲ್ಪಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು.&lt;/p&gt;&lt;h3&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h3&gt;&lt;p&gt;ಮೊದಲು ಸ್ಟವ್ ಮೇಲೆ ಒಂದು ಪಾತ್ರೆ ಇಟ್ಟು ಒಂದು ಕಪ್ ನೀರು ಹಾಕಿ ಕುದಿಸಬೇಕು. ನೀರು ಕುದಿಯಲು ಆರಂಭಿಸಿದಾಗ ಅದರಲ್ಲಿ ಒಂದು ಕಪ್ ಉಳಿದ ಅನ್ನ ಹಾಕಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಬೇಕು. ಅನ್ನ ಮೆತ್ತಗಾದ ನಂತರ ಅದಕ್ಕೆ ಅರ್ಧ ಕಪ್ ಟೊಮೆಟೊ ಪೇಸ್ಟ್ ಹಾಕಿ ಚೆನ್ನಾಗಿ ಬೆರೆಸಬೇಕು.&lt;/p&gt;&lt;p&gt;ಆ ನಂತರ ಅದರಲ್ಲಿಯೇ ಸ್ವಲ್ಪ ಅರಿಶಿನ, ಜೀರಿಗೆ, ಎಳ್ಳು, ಖಾರದ ಪುಡಿ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸುತ್ತಾ ಇನ್ನೆರಡು ನಿಮಿಷಗಳ ಕಾಲ ಬೇಯಿಸಬೇಕು. ಈ ಅನ್ನದ ಮಿಶ್ರಣವು ಚೆನ್ನಾಗಿ ಗಟ್ಟಿಯಾದ ಮೇಲೆ ಸ್ಟವ್ ಆಫ್ ಮಾಡಿ ಆರಲು ಬಿಡಬೇಕು.&lt;/p&gt;&lt;p&gt;ಈಗ ಒಂದು ಪಾಲಿಥಿನ್ ಕವರ್ ಅನ್ನು ಬಿಸಿಲಿನಲ್ಲಿ ಹರಡಿ, ಕೈಗೆ ಸ್ವಲ್ಪ ನೀರು ಹಚ್ಚಿಕೊಳ್ಳುತ್ತಾ, ಈ ಅನ್ನದ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಹಪ್ಪಳ ಅಥವಾ ಸಂಡಿಗೆಯಂತೆ ಕವರ್ ಮೇಲೆ ಒತ್ತಬೇಕು. ಇವುಗಳನ್ನು ಕಡು ಬಿಸಿಲಿನಲ್ಲಿ ಎರಡು ಮೂರು ದಿನಗಳ ಕಾಲ ಎರಡೂ ಬದಿ ತಿರುಗಿಸುತ್ತಾ ಚೆನ್ನಾಗಿ ಒಣಗಿಸಬೇಕು. ಗಲಗಲ ಎಂದು ಶಬ್ದ ಬರುವಂತೆ ಒಣಗಿದ ಸಂಡಿಗೆಗಳನ್ನು ಏರ್ ಟೈಟ್ ಡಬ್ಬದಲ್ಲಿ ಶೇಖರಿಸಿಟ್ಟರೆ ವರ್ಷಪೂರ್ತಿ ಬಳಸಬಹುದು.&lt;/p&gt;&lt;h3&gt;&lt;strong&gt;ಉತ್ತಮ ರುಚಿಗಾಗಿ ಟಿಪ್ಸ್&lt;/strong&gt;&lt;/h3&gt;&lt;p&gt;&lt;strong&gt;ಮಿಕ್ಸಿ ಬಳಕೆ: &lt;/strong&gt;ಅನ್ನವನ್ನು ನೀರಿನಲ್ಲಿ ಬೇಯಿಸುವ ಮೊದಲು, ಮಿಕ್ಕಿದ ಅನ್ನಕ್ಕೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಆಮೇಲೆ ಬಿಸಿ ನೀರಿನಲ್ಲಿ ಕುದಿಸಿದರೆ ಸಂಡಿಗೆಗಳು ಇನ್ನು ಸಾಫ್ಟ್ ಆಗಿ ಬರುತ್ತವೆ.&lt;strong&gt;ಟೊಮೆಟೊ ಫ್ಲೇವರ್: &lt;/strong&gt;ನೀವು ಹಾಕುವ ಟೊಮೆಟೊ ಪೇಸ್ಟ್ ಜೊತೆಗೆ ಒಂದು ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಶುಂಠಿ ಸೇರಿಸಿ ರುಬ್ಬಿಕೊಂಡರೆ ಹೋಟೆಲ್ ಶೈಲಿಯ ರುಚಿ ಸಂಡಿಗೆ ಸಿಗುತ್ತದೆ.&lt;strong&gt;ಇಂಗು ಬಳಸಿ: &lt;/strong&gt;ಜೀರಿಗೆ ಜೊತೆಗೆ ಒಂದು ಚಿಟಿಕೆ ಇಂಗು ಸೇರಿಸಿದರೆ ಸಂಡಿಗೆಯ ಪರಿಮಳ ಅದ್ಭುತವಾಗಿರುತ್ತದೆ ಮತ್ತು ಇದು ಜೀರ್ಣಶಕ್ತಿಗೂ ಒಳ್ಳೆಯದು.&lt;/p&gt;&lt;h3&gt;&lt;strong&gt;ಒಣಗಿಸುವ ಮತ್ತು ಶೇಖರಿಸುವ ಟಿಪ್ಸ್&lt;/strong&gt;&lt;/h3&gt;&lt;p&gt;&lt;strong&gt;ಎಣ್ಣೆ ಹಚ್ಚಬೇಡಿ: &lt;/strong&gt;ಪ್ಲಾಸ್ಟಿಕ್ ಕವರ್ ಮೇಲೆ ಸಂಡಿಗೆ ಹಾಕುವಾಗ ಎಣ್ಣೆ ಹಚ್ಚಬೇಡಿ. ಎಣ್ಣೆ ಹಚ್ಚಿದರೆ ಕೆಲವು ತಿಂಗಳ ನಂತರ ಸಂಡಿಗೆಯಿಂದ ಕೆಟ್ಟ ವಾಸನೆ ಬರಲು ಪ್ರಾರಂಭವಾಗುತ್ತದೆ. ಬದಲಾಗಿ ಕವರ್ ಅನ್ನು ಸ್ವಲ್ಪ ನೀರಿನಿಂದ ಒದ್ದೆ ಮಾಡಿ ಸಾಕು.&lt;strong&gt;ಸರಿಯಾಗಿ ಒಣಗಿಸಿ: &lt;/strong&gt;ಸಂಡಿಗೆಗಳು ಮೇಲ್ನೋಟಕ್ಕೆ ಒಣಗಿದಂತೆ ಕಂಡರೂ, ಕನಿಷ್ಠ 3 ದಿನಗಳ ಕಾಲ ಕಡು ಬಿಸಿಲಿನಲ್ಲಿ ಒಣಗಿಸಬೇಕು. ಇಲ್ಲದಿದ್ದರೆ ಡಬ್ಬದಲ್ಲಿ ಇಟ್ಟಾಗ ಬೂಸ್ಟ್ (fungus) ಬರುವ ಸಾಧ್ಯತೆ ಇರುತ್ತದೆ.&lt;strong&gt;ಸಣ್ಣ ಸೈಜ್:&lt;/strong&gt; ಸಂಡಿಗೆಗಳನ್ನು ತುಂಬಾ ದಪ್ಪಗೆ ಹಾಕಬೇಡಿ. ಒಣಗಿದ ಮೇಲೆ ಅವು ಸಣ್ಣದಾಗುತ್ತವೆ, ಆದರೆ ಎಣ್ಣೆಯಲ್ಲಿ ಕರಿದಾಗ ಚೆನ್ನಾಗಿ ಉಬ್ಬುತ್ತವೆ. ದಪ್ಪಗಿದ್ದರೆ ಒಳಭಾಗ ಸರಿಯಾಗಿ ಒಣಗುವುದಿಲ್ಲ.&lt;/p&gt;&lt;h3&gt;&lt;strong&gt;ಗಮನಿಸಿ&lt;/strong&gt;&lt;/h3&gt;&lt;p&gt;ಒಂದು ವೇಳೆ ನಿಮಗೆ ಟೊಮೆಟೊ ಇಷ್ಟವಿಲ್ಲದಿದ್ದರೆ, ಕೇವಲ ಬಿಳಿ ಎಳ್ಳು ಮತ್ತು ಓಂ ಕಾಳು (Ajwain) ಹಾಕಿ ಕೂಡ ಮಾಡಬಹುದು. ಇದು ಅನ್ನದ ಜೊತೆ ನೆಂಚಿಕೊಳ್ಳಲು ಬಹಳ ರುಚಿಯಾಗಿರುತ್ತದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Anitha&rsquo;s Kitchen (@anithakomaravelly)&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/food/dont-waste-leftover-rice-make-crispy-rice-sandige-at-zero-cost/articleshow-8g2pnb5"/>
        </item>
        <item>
            <title><![CDATA[ಹಾಲು ಪದೇ ಪದೇ ಒಡೆಯುತ್ತಿದೆಯೇ? ಹಾಗಾದ್ರೆ ಈ ಒಂದು ಪದಾರ್ಥ ಸೇರಿಸಿ!]]></title>
            <link>https://kannada.asianetnews.com/webstories/kitchen/kitchen-hacks-simple-tips-to-prevent-milk-from-curdling-in-summer-a10ufh5</link>
            <guid isPermaLink="true">https://kannada.asianetnews.com/webstories/kitchen/kitchen-hacks-simple-tips-to-prevent-milk-from-curdling-in-summer-a10ufh5</guid>
            <pubDate>Thu, 14 May 2026 21:52:25 +0530</pubDate>
            <description><![CDATA[&lt;p&gt;Milk Saving Tips: ಬೇಸಿಗೆಯಲ್ಲಿ ಹಾಲನ್ನು ಸುರಕ್ಷಿತವಾಗಿಡುವುದು ದೊಡ್ಡ ಸವಾಲು. ಸ್ವಲ್ಪ ಅಜಾಗರೂಕತೆಯಿಂದ ಹಾಲು ಪೂರ್ತಿ ಹಾಳಾಗಿ ಚೆಲ್ಲುವಂತಾಗುತ್ತದೆ. ಹಾಲನ್ನು ಕೆಡದಂತೆ ಉಳಿಸಿಕೊಳ್ಳಲು ಇಲ್ಲಿವೆ ಕೆಲವು ಸರಳ ಮನೆಮದ್ದುಗಳು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kknas1psmg4zpm3m1xk2fzvw,imgname-fotojet--9--1773463701209.jpg" type="image/jpeg" height="390" width="690"/>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/kitchen/kitchen-hacks-simple-tips-to-prevent-milk-from-curdling-in-summer-a10ufh5"/>
        </item>
        <item>
            <title><![CDATA[Food: ನಾಯಿಗಾಗಿ ಇಟ್ಟಿದ್ದ ಹಳಸಿದ ಚಿಕನ್ ಕರಿ ತಿಂದು 3 ವರ್ಷದ ಕಂದಮ್ಮ ಸಾವು!]]></title>
            <link>https://kannada.asianetnews.com/india-news/tamil-nadu-three-year-old-girl-dies-eating-chicken-curry-meant-for-dog-sat/articleshow-a2l9gxg</link>
            <guid isPermaLink="true">https://kannada.asianetnews.com/india-news/tamil-nadu-three-year-old-girl-dies-eating-chicken-curry-meant-for-dog-sat/articleshow-a2l9gxg</guid>
            <pubDate>Sun, 17 May 2026 21:30:12 +0530</pubDate>
            <description><![CDATA[&lt;p&gt;ಮನೆಯಲ್ಲಿ ನಾಯಿಗಾಗಿ ಇಟ್ಟಿದ್ದ ಹಳಸಿದ ಚಿಕನ್ ಕರಿಯನ್ನು ತಿಳಿಯದೆ ತಿಂದ 3 ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಗುವಿನ ಜೊತೆ ಆಹಾರ ಸೇವಿಸಿದ್ದ ಆಕೆಯ ಒಂದು ವರ್ಷದ ತಂಗಿ ಅಪಾಯದಿಂದ ಪಾರಾಗಿದ್ದಾಳೆ. ಈ ಘಟನೆ ಪೋಷಕರ ಅಜಾಗರೂಕತೆಯ ಭೀಕರ ಪರಿಣಾಮಕ್ಕೆ ಸಾಕ್ಷಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krrehpg7szaracw5y8v2bqfs,imgname-3-1778937027079.jpg" type="image/jpeg" height="390" width="690"/>
            <content:encoded><![CDATA[&lt;p&gt;ಪೋಷಕರ ಸಣ್ಣ ಅಜಾಗರೂಕತೆ ಎಂತಹ ಭೀಕರ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮನೆಯ ಸಾಕು ನಾಯಿಗಾಗಿ ಇಟ್ಟಿದ್ದ ಹಳಸಿದ ಚಿಕನ್ ಕರಿಯನ್ನು ತಿಳಿಯದೇ ಸೇವಿಸಿದ ಮೂರು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಅಂಬೂರು ಸಮೀಪದ ಮಧಗಡಪ್ಪು ಗ್ರಾಮದ ನಿವಾಸಿ, ಮರ ಹತ್ತುವ ಕಾರ್ಮಿಕ ಸತೀಶ್ ಮತ್ತು ಶ್ರೇಯಾ ದಂಪತಿಯ ಪುತ್ರಿ ಭೂಮಿಕಾ (3) ಮೃತಪಟ್ಟ ಮಗು. ಸತೀಶ್ ದಂಪತಿಗೆ ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ಭಾನುವಾರ ರಜೆಯ ದಿನವಾಗಿದ್ದರಿಂದ ಮನೆಯಲ್ಲಿ ಚಿಕನ್ ಅಡುಗೆ ಮಾಡಲಾಗಿತ್ತು. ಅಂದು ಉಳಿದಿದ್ದ ಚಿಕನ್ ಕರಿಯನ್ನು ಮನೆಯ ನಾಯಿಗೆ ಹಾಕಲೆಂದು ಸೋಮವಾರ (ಮೇ 11) ಪ್ರತ್ಯೇಕವಾಗಿ ಎತ್ತಿಡಲಾಗಿತ್ತು.&lt;/p&gt;&lt;h2&gt;&lt;strong&gt;ಹಳಸಿದ ಚಿಕನ್ ಕರಿ ತಿಂದ ಮಕ್ಕಳು:&lt;/strong&gt;&lt;/h2&gt;&lt;p&gt;ಮನೆಯೊಳಗೆ ಆಟವಾಡುತ್ತಿದ್ದ ಮೂರು ವರ್ಷದ ಭೂಮಿಕಾ ಮತ್ತು ಆಕೆಯ ಒಂದು ವರ್ಷದ ತಂಗಿ ರೇಣುಕಾ, ನಾಯಿಗಾಗಿ ಇಟ್ಟಿದ್ದ ಆ ಹಳಸಿದ ಚಿಕನ್ ಕರಿಯನ್ನ ಪೋಷಕರ ಗಮನಕ್ಕೆ ಬಾರದಂತೆ ಸೇವಿಸಿದ್ದಾರೆ. ಆಹಾರ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಇಬ್ಬರೂ ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ ಮತ್ತು ತೀವ್ರ ಅಸ್ವಸ್ಥರಾಗಿದ್ದಾರೆ. ಇದನ್ನು ಗಮನಿಸಿದ ಪೋಷಕರು ತಕ್ಷಣವೇ ಮಕ್ಕಳನ್ನು ಅಂಬೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;&lt;h3&gt;&lt;strong&gt;ಚಿಕಿತ್ಸೆ ಫಲಕಾರಿಯಾಗದ ಸಾವು:&lt;/strong&gt;&lt;/h3&gt;&lt;p&gt;ಭೂಮಿಕಾಳ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕಳೆದ ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಭೂಮಿಕಾ, ಮೇ 15 ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಅದೃಷ್ಟವಶಾತ್, ಒಂದು ವರ್ಷದ ಮಗು ರೇಣುಕಾ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ತನಿಖೆ:&lt;/strong&gt;&lt;/h3&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಅಂಬೂರು ಗ್ರಾಮಾಂತರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದು ಆಹಾರ ವಿಷಾಹಾರವಾದ (Food Poisoning) ಪ್ರಕರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.&lt;/p&gt;&lt;h3&gt;&lt;strong&gt;ತಜ್ಞರ ಎಚ್ಚರಿಕೆ:&lt;/strong&gt;&lt;/h3&gt;&lt;p&gt;ಪ್ರಾಣಿಗಳಿಗಾಗಿ ಇಟ್ಟಿರುವ ಆಹಾರ ಅಥವಾ ಹಳಸಿದ ಮಾಂಸಾಹಾರವನ್ನು ಮನುಷ್ಯರು, ವಿಶೇಷವಾಗಿ ಮಕ್ಕಳು ಸೇವಿಸುವುದು ಅತ್ಯಂತ ಅಪಾಯಕಾರಿ. ಪ್ರಾಣಿಗಳ ಆಹಾರದ ಗುಣಮಟ್ಟ ಮತ್ತು ಅವುಗಳನ್ನು ತಯಾರಿಸುವ ವಿಧಾನಗಳು ಮನುಷ್ಯರ ಆಹಾರಕ್ಕಿಂತ ಭಿನ್ನವಾಗಿರುತ್ತದೆ. ಹಳಸಿದ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುವುದರಿಂದ ಅದು ಜೀವಕ್ಕೆ ಕುತ್ತು ತರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಘಟನೆ ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದ್ದು, ಪೋಷಕರಲ್ಲಿ ಜಾಗೃತಿ ಮೂಡಿಸುವಂತಿದೆ.&lt;/p&gt;]]></content:encoded>
            <category>food</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/tamil-nadu-three-year-old-girl-dies-eating-chicken-curry-meant-for-dog-sat/articleshow-a2l9gxg"/>
        </item>
        <item>
            <title><![CDATA[ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಭಾರತದ ಬಿಯರ್ ಬ್ರ್ಯಾಂಡ್, ಸವಾಲಿನ ಜೊತೆ ಕೋಟಿ ಕೋಟಿ ಆದಾಯ]]></title>
            <link>https://kannada.asianetnews.com/gallery/food/indian-brewery-eyes-global-success-with-multi-crore-revenue-potential-c95u0x7</link>
            <guid isPermaLink="true">https://kannada.asianetnews.com/gallery/food/indian-brewery-eyes-global-success-with-multi-crore-revenue-potential-c95u0x7</guid>
            <pubDate>Sat, 16 May 2026 16:04:02 +0530</pubDate>
            <description><![CDATA[&lt;p&gt;ಭಾರತದ ಪ್ರಮುಖ ಬಿಯರ್ ಬ್ರ್ಯಾಂಡ್&zwnj;ಗಳು ಈಗ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ. ಬದಲಾಗುತ್ತಿರುವ ಗ್ರಾಹಕರ ಅಭಿರುಚಿ ಮತ್ತು ಅನಿವಾಸಿ ಭಾರತೀಯರ ಬೆಂಬಲ ಇದಕ್ಕೆ ದೊಡ್ಡ ಶಕ್ತಿಯಾಗಿದೆ. ಇದರೊಂದಿಗೆ ಭಾರತದ ಬ್ರ್ಯಾಂಡ್ ಇನ್ನು ಪ್ರಮುಖ ದೇಶಗಳಲ್ಲಿ ಲಭ್ಯವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g405qz9vr5s8qyw6yynj65dg,imgname-beer-3711733-1920.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಪ್ರಮುಖ ಬಿಯರ್ ಬ್ರ್ಯಾಂಡ್&zwnj;ಗಳು ಈಗ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ. ಬದಲಾಗುತ್ತಿರುವ ಗ್ರಾಹಕರ ಅಭಿರುಚಿ ಮತ್ತು ಅನಿವಾಸಿ ಭಾರತೀಯರ ಬೆಂಬಲ ಇದಕ್ಕೆ ದೊಡ್ಡ ಶಕ್ತಿಯಾಗಿದೆ. ಇದರೊಂದಿಗೆ ಭಾರತದ ಬ್ರ್ಯಾಂಡ್ ಇನ್ನು ಪ್ರಮುಖ ದೇಶಗಳಲ್ಲಿ ಲಭ್ಯವಾಗಲಿದೆ.&lt;/p&gt;&lt;img&gt;&lt;p&gt;ಭಾರತದ ಬಿಯರ್ ಬ್ರ್ಯಾಂಡ್&zwnj;ಗಳು ಈಗ ಗ್ಲೋಬಲ್ ಮಾರುಕಟ್ಟೆಗೆ ಕಾಲಿಡುತ್ತಿದೆ. ನಮ್ಮ ದೇಶದ ಕಿಂಗ್&zwnj;ಫಿಶರ್, ಬಿರಾ 91, ಬೀಯಂಗ್, ಗಾಡ್&zwnj;ಫಾದರ್, ಮತ್ತು ಮೆಡೂಸಾದಂತಹ ಪ್ರಸಿದ್ಧ ಬ್ರ್ಯಾಂಡ್&zwnj;ಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧತೆ ನಡೆಸುತ್ತಿವೆ. ಸದ್ಯ ಜಾಗತಿಕ ಬಿಯರ್ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗಳಾಗುತ್ತಿವೆ. ಇದರ ಬೆನ್ನಲ್ಲೇ ಭಾರತದ ಬಿಯರ್ ಬ್ರ್ಯಾಂಡ್ ಗ್ಲೋಬಲ್ ಮಾರ್ಕೆಟ್&zwnj;ಗೆ ಲಗ್ಗೆ ಇಡುತ್ತಿದೆ.&lt;/p&gt;&lt;img&gt;&lt;p&gt;2024ರಲ್ಲಿ ಸುಮಾರು 839.31 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದ ಈ ಮಾರುಕಟ್ಟೆ, 2030ರ ವೇಳೆಗೆ 1,248.3 ಬಿಲಿಯನ್ ಡಾಲರ್&zwnj;ಗೆ ತಲುಪುವ ನಿರೀಕ್ಷೆಯಿದೆ. ಅಂದರೆ, ವಾರ್ಷಿಕವಾಗಿ ಈ ಕ್ಷೇತ್ರ 6.8% ರಷ್ಟು ಬೆಳೆಯಲಿದೆ. ಇಷ್ಟು ದೊಡ್ಡ ಮಾರುಕಟ್ಟೆಯ ಮೇಲೆ ಭಾರತದ ಕಂಪನಿಗಳು ಕಣ್ಣಿಟ್ಟಿವೆ. ಇಷ್ಟೇ ಅಲ್ಲ ಸಾವಿರಾರು ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ.&lt;/p&gt;&lt;img&gt;&lt;p&gt;ಈ ಹೊಸ ನಡೆಯ ಹಿಂದೆ ಇರುವುದು ಭಾರತೀಯ ಗ್ರಾಹಕರ ಟೇಸ್ಟ್&zwnj;ನಲ್ಲಿ ಆದ ಬದಲಾವಣೆ. ಮೊದಲೆಲ್ಲಾ 'ಸ್ಟ್ರಾಂಗ್' ಬಿಯರ್ ಇಷ್ಟಪಡುತ್ತಿದ್ದ ಜನ, ಈಗ ಪ್ರೀಮಿಯಂ, ಸ್ಮೂತ್ ಮತ್ತು ಕ್ರಾಫ್ಟ್ ಬಿಯರ್&zwnj;ಗಳತ್ತ ವಾಲುತ್ತಿದ್ದಾರೆ. ಗುಣಮಟ್ಟದ ಬಿಯರ್ ತಯಾರಿಸುವುದರಲ್ಲಿ ಮತ್ತು ಬ್ರ್ಯಾಂಡಿಂಗ್ ಮಾಡುವುದರಲ್ಲಿ ಭಾರತೀಯ ಕಂಪನಿಗಳು ಪರಿಣಿತಿ ಸಾಧಿಸಿವೆ. ಇದೇ ಆತ್ಮವಿಶ್ವಾಸದಿಂದ ವಿದೇಶಿ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿವೆ.&lt;/p&gt;&lt;img&gt;&lt;p&gt;ವಿದೇಶಿ ಮಾರುಕಟ್ಟೆಗೆ ಕಾಲಿಡುವಾಗ ಭಾರತೀಯ ಬ್ರ್ಯಾಂಡ್&zwnj;ಗಳು ಮೊದಲು ಆಯ್ಕೆ ಮಾಡಿಕೊಳ್ಳುತ್ತಿರುವುದು ಗಲ್ಫ್ ರಾಷ್ಟ್ರಗಳನ್ನು. ಅಲ್ಲಿರುವ ಅನಿವಾಸಿ ಭಾರತೀಯರೊಂದಿಗಿನ ಭಾವನಾತ್ಮಕ ಸಂಬಂಧ ಮತ್ತು ಬಹುತೇಕ ಒಂದೇ ರೀತಿಯ ರುಚಿ ಇದಕ್ಕೆ ಮುಖ್ಯ ಕಾರಣ&lt;/p&gt;&lt;img&gt;&lt;p&gt;ಪ್ರಪಂಚದಾದ್ಯಂತ ಇರುವ ಅನಿವಾಸಿ ಭಾರತೀಯರು ಈ ಬ್ರ್ಯಾಂಡ್&zwnj;ಗಳ ಮೊದಲ ರಾಯಭಾರಿಗಳಾಗುತ್ತಿದ್ದಾರೆ. ಇದು ಹೊಸ ಮಾರುಕಟ್ಟೆಗಳಲ್ಲಿ ಬೇಗನೆ ನೆಲೆಯೂರಲು ಕಂಪನಿಗಳಿಗೆ ಸಹಾಯ ಮಾಡುತ್ತಿದೆ. ಇದರ ಜೊತೆಗೆ ವ್ಯಾಪಾರ, ಜಾಲ ವಿಸ್ತರಿಸುತ್ತಾ ವಿಶ್ವದಲ್ಲೆಡೆ ಪ್ರಬಲ ಬ್ರ್ಯಾಂಡ್ ಆಗಿ ಮಾಡಲು ಸಜ್ಜಾಗಿದೆ.&lt;/p&gt;&lt;img&gt;&lt;p&gt;ವಿದೇಶಗಳಿಗೆ ಮದ್ಯ ರಫ್ತು ಮಾಡುವುದು ಅಷ್ಟು ಸುಲಭದ ಮಾತಲ್ಲ. ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಕಾನೂನು ಮತ್ತು ನಿಯಮಗಳಿವೆ. ಲೈಸೆನ್ಸ್, ಲೇಬಲಿಂಗ್, ಆಮದು ಸುಂಕ ಮತ್ತು ಜಾಹೀರಾತುಗಳ ಮೇಲಿನ ನಿರ್ಬಂಧಗಳು ದೊಡ್ಡ ಸವಾಲುಗಳನ್ನು ಒಡ್ಡುತ್ತವೆ. ಇದನ್ನು ನಿಭಾಯಿಸಲು ಭಾರತೀಯ ಬ್ರ್ಯಾಂಡ್&zwnj;ಗಳು ಅಲ್ಲಿನ ಸ್ಥಳೀಯ ಕಂಪನಿಗಳೊಂದಿಗೆ ಕೈಜೋಡಿಸಬೇಕಾಗುತ್ತದೆ. ಬಿಯರ್&zwnj;ನ ಗುಣಮಟ್ಟ ಕೆಡದಂತೆ ವಿದೇಶಿ ಮಾರುಕಟ್ಟೆಗಳಿಗೆ ತಲುಪಿಸಲು ಒಂದು ಬಲಿಷ್ಠ ಸರಬರಾಜು ವ್ಯವಸ್ಥೆ (ಸಪ್ಲೈ ಚೈನ್) ಕೂಡ ಅತ್ಯಗತ್ಯ.&lt;/p&gt;&lt;h2&gt;ಸವಾಲುಗಳ ನಡುವೆ ಕೋಟಿ ಕೋಟಿ ಆದಾಯ&lt;/h2&gt;]]></content:encoded>
            <category>food</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/food/indian-brewery-eyes-global-success-with-multi-crore-revenue-potential-c95u0x7"/>
        </item>
        <item>
            <title><![CDATA[ಅಡುಗೆಗೆ ತಂದ ಶುಂಠಿ ಬೇಗನೆ ಒಣಗುತ್ತಿದೆಯಾ? ಮರಳು ಬಳಸಿ.. ನಮ್ಮ ಅಜ್ಜಿಯಂದಿರು ಇದನ್ನೇ ಫಾಲೋ ಮಾಡ್ತಿದ್ರು!]]></title>
            <link>https://kannada.asianetnews.com/gallery/food/ginger-storage-hacks-keep-ginger-fresh-and-juicy-for-months-this-summer-clmnmix</link>
            <guid isPermaLink="true">https://kannada.asianetnews.com/gallery/food/ginger-storage-hacks-keep-ginger-fresh-and-juicy-for-months-this-summer-clmnmix</guid>
            <pubDate>Fri, 15 May 2026 12:04:51 +0530</pubDate>
            <description><![CDATA[&lt;p&gt;How to keep ginger from drying: ಮಾರುಕಟ್ಟೆಯಿಂದ ತಂದ ಎರಡೇ ದಿನಕ್ಕೆ ನಿಮ್ಮ ಮನೆಯ ಶುಂಠಿ ಒಣಗಿದ ಕಟ್ಟಿಗೆಯಂತಾಗುತ್ತಿದೆಯೇ? ಫ್ರಿಡ್ಜ್&zwnj;ನಲ್ಲಿಟ್ಟರೂ ಅದರ ರಸ ಬತ್ತಿ ಹೋಗುತ್ತಿದೆಯೇ? ಚಿಂತೆ ಬೇಡ! ಶುಂಠಿಯನ್ನು ತಿಂಗಳುಗಟ್ಟಲೆ ತಾಜಾವಾಗಿ ಮತ್ತು ರಸಭರಿತವಾಗಿ ಇಡಲು ಅದ್ಭುತ ಟಿಪ್ಸ್ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krn59d4g12x8e3c3qzfg09d5,imgname-thumbnail---2026-05-15t120028.331-1778826654862.jpg" type="image/jpeg" height="390" width="690"/>
            <content:encoded><![CDATA[&lt;p&gt;How to keep ginger from drying: ಮಾರುಕಟ್ಟೆಯಿಂದ ತಂದ ಎರಡೇ ದಿನಕ್ಕೆ ನಿಮ್ಮ ಮನೆಯ ಶುಂಠಿ ಒಣಗಿದ ಕಟ್ಟಿಗೆಯಂತಾಗುತ್ತಿದೆಯೇ? ಫ್ರಿಡ್ಜ್&zwnj;ನಲ್ಲಿಟ್ಟರೂ ಅದರ ರಸ ಬತ್ತಿ ಹೋಗುತ್ತಿದೆಯೇ? ಚಿಂತೆ ಬೇಡ! ಶುಂಠಿಯನ್ನು ತಿಂಗಳುಗಟ್ಟಲೆ ತಾಜಾವಾಗಿ ಮತ್ತು ರಸಭರಿತವಾಗಿ ಇಡಲು ಅದ್ಭುತ ಟಿಪ್ಸ್ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಶುಂಠಿ ಇಲ್ಲದಿದ್ದರೆ ಯಾವುದೇ ಅಡುಗೆಯಾಗಲಿ ಅಥವಾ ಟೀಯಾಗಲಿ ಸರಿಯಾದ ರುಚಿ ಬರುವುದಿಲ್ಲ. ಕೇವಲ ರುಚಿಗಷ್ಟೇ ಅಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶುಂಠಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಚಳಿಗಾಲದಲ್ಲಿ ತಾಜಾವಾಗಿರುವ ಶುಂಠಿ, ಬೇಸಿಗೆಯ ತಾಪಮಾನ ಹೆಚ್ಚಾದಂತೆ ಬೇಗನೆ ಒಣಗಿ ಹೋಗುತ್ತದೆ ಮತ್ತು ಸುಕ್ಕುಗಟ್ಟುತ್ತದೆ. ಆದರೆ ಕೆಲವು ಸಣ್ಣ ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಶುಂಠಿಯನ್ನು ದೀರ್ಘಕಾಲ ತಾಜಾವಾಗಿಡಬಹುದು.&lt;/p&gt;&lt;img&gt;&lt;p&gt;ಶುಂಠಿ ಹಾಳಾಗಲು ಪ್ರಮುಖ ಕಾರಣ ಅದರ ಮೇಲಿರುವ ಅತಿಯಾದ ತೇವಾಂಶ ಅಥವಾ ಗಾಳಿಯ ಸಂಚಾರ ಇಲ್ಲದಿರುವುದು. ಶುಂಠಿಯನ್ನು ಖರೀದಿಸಿದ ನಂತರ ಚೆನ್ನಾಗಿ ತೊಳೆದು, ನೀರಿಲ್ಲದಂತೆ ಸಂಪೂರ್ಣವಾಗಿ ಒಣಗಿಸಿ. ನಂತರ ಅದನ್ನು ಒಂದು ಟಿಶ್ಯೂ ಅಥವಾ ಮೃದುವಾದ ಕಾಟನ್ ಬಟ್ಟೆಯಲ್ಲಿ ಸುತ್ತಿ. ಗಾಳಿಯಾಡದ ಡಬ್ಬದಲ್ಲಿ (Air-tight container) ಇಟ್ಟು ಫ್ರಿಡ್ಜ್&zwnj;ನಲ್ಲಿಟ್ಟರೆ ವಾರದಿಂದ ಹತ್ತು ದಿನಗಳವರೆಗೆ ಮಾರುಕಟ್ಟೆಯಿಂದ ತಂದಂತೆಯೇ ತಾಜಾವಾಗಿರುತ್ತದೆ.&lt;/p&gt;&lt;img&gt;&lt;p&gt;ನೀವು ಶುಂಠಿಯನ್ನು ಸಂಗ್ರಹಿಸುವಾಗ ಸಾಮಾನ್ಯ ಪ್ಲಾಸ್ಟಿಕ್ ಕವರ್&zwnj;ಗಳ ಬದಲು ಜಿಪ್&zwnj;ಲಾಕ್ ಬ್ಯಾಗ್&zwnj;ಗಳನ್ನು ಬಳಸುವುದು ಉತ್ತಮ. ಶುಂಠಿಯನ್ನು ಬ್ಯಾಗ್&zwnj;ನಲ್ಲಿ ಇರಿಸಿದ ನಂತರ ಅದರಲ್ಲಿ ಗಾಳಿ ಇಲ್ಲದಂತೆ ಎಚ್ಚರಿಕೆಯಿಂದ ಒತ್ತಿ ಸೀಲ್ ಮಾಡಿ. ಗಾಳಿ ತಗಲದಿದ್ದರೆ ಶುಂಠಿ ಸುಕ್ಕುಗಟ್ಟುವುದಿಲ್ಲ. ಇದನ್ನು ಫ್ರಿಡ್ಜ್&zwnj;ನಲ್ಲಿ ಇಡುವುದರಿಂದ ಬೇಸಿಗೆಯ ಶಾಖದಿಂದ ರಕ್ಷಿಸಬಹುದು.&lt;/p&gt;&lt;img&gt;&lt;p&gt;ಒಂದು ವೇಳೆ ನಿಮ್ಮ ಬಳಿ ಶುಂಠಿ ಹೆಚ್ಚಾಗಿದ್ದು, ಅದು ಹಾಳಾಗಬಹುದು ಎಂಬ ಭಯವಿದ್ದರೆ ಫ್ರೀಜಿಂಗ್ ವಿಧಾನ ಅತ್ಯುತ್ತಮ. ಶುಂಠಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಒಂದು ಬಾಕ್ಸ್&zwnj;ನಲ್ಲಿ ಹಾಕಿ ಫ್ರೀಜರ್&zwnj;ನಲ್ಲಿಡಿ. ಅಥವಾ ಶುಂಠಿಯನ್ನು ಮಿಕ್ಸಿ ಮಾಡಿ ಐಸ್ ಟ್ರೇಗಳಲ್ಲಿ ಹಾಕಿ ಕ್ಯೂಬ್&zwnj;ಗಳಂತೆ ಮಾಡಿ. ಆ ಕ್ಯೂಬ್&zwnj;ಗಳು ಗಟ್ಟಿಯಾದ ನಂತರ ಅವುಗಳನ್ನು ಒಂದು ಜಿಪ್&zwnj;ಲಾಕ್ ಬ್ಯಾಗ್&zwnj;ನಲ್ಲಿ ಹಾಕಿ ಇಡಬಹುದು. ಅಡುಗೆ ಮಾಡುವಾಗ ಒಂದು ಕ್ಯೂಬ್ ತೆಗೆದು ನೇರವಾಗಿ ಬಳಸಬಹುದು. ಇದು ತಿಂಗಳುಗಟ್ಟಲೆ ತಾಜಾವಾಗಿರುತ್ತದೆ.&lt;/p&gt;&lt;img&gt;&lt;p&gt;ಶುಂಠಿಯ ಸಿಪ್ಪೆ ತೆಗೆದು, ತುಂಡುಗಳಾಗಿ ಕತ್ತರಿಸಿ ಒಂದು ಗಾಜಿನ ಸೀಸೆಯಲ್ಲಿ ಹಾಕಿ. ಅದಕ್ಕೆ ಶುಂಠಿ ಮುಳುಗುವಷ್ಟು ವಿನೆಗರ್ ಅಥವಾ ಲಿಂಬೆ ರಸವನ್ನು ಸುರಿದು ಫ್ರಿಡ್ಜ್&zwnj;ನಲ್ಲಿಡಿ. ಹೀಗೆ ಮಾಡುವುದರಿಂದ ಶುಂಠಿ ಹಾಳಾಗುವುದಿಲ್ಲ ಮತ್ತು ಅದರ ರುಚಿ ಕೂಡ ಹೆಚ್ಚುತ್ತದೆ. ಉಪ್ಪಿನಕಾಯಿ ಬಳಸುವವರಿಗೆ ಇದು ತುಂಬಾ ಉಪಯುಕ್ತ.&lt;/p&gt;&lt;img&gt;&lt;p&gt;ಒಂದು ವೇಳೆ ನಿಮಗೆ ಫ್ರಿಡ್ಜ್ ಲಭ್ಯವಿಲ್ಲದಿದ್ದರೆ, ಒಂದು ಅಗಲವಾದ ಪಾತ್ರೆಯಲ್ಲಿ ಒಣ ಮರಳನ್ನು ಹಾಕಿ ಅದರಲ್ಲಿ ಶುಂಠಿಯನ್ನು ಹೂತು ಇಡಿ. ಇದು ಶುಂಠಿಗೆ ಬೇಕಾದ ತಂಪನ್ನು ನೀಡುತ್ತಾ ಹೊರಗಿನ ಶಾಖದಿಂದ ರಕ್ಷಿಸುತ್ತದೆ. ಹಳೆಯ ಕಾಲದಲ್ಲಿ ನಮ್ಮ ಅಜ್ಜಿಯಂದಿರು ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರು.&lt;/p&gt;&lt;img&gt;&lt;p&gt;ಅತಿ ಹೆಚ್ಚು ನೀರಿರುವ ಜಾಗದಲ್ಲಿ ಅಥವಾ ಪೂರ್ತಿ ಒಣಗಿಸದ ಹಸಿ ಶುಂಠಿಯನ್ನು ಹಾಗೆಯೇ ಇಟ್ಟರೆ ಅದು ಬೇಗನೆ ಕೊಳೆಯುವ ಸಾಧ್ಯತೆ ಇರುತ್ತದೆ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/ginger-storage-hacks-keep-ginger-fresh-and-juicy-for-months-this-summer-clmnmix"/>
        </item>
        <item>
            <title><![CDATA[ಕೊಳಕಾಗಿರುವ ಕಪ್ಪು ಮಣೆ-ಲಟ್ಟಣಿಗೆ ಹೊಳಿಬೇಕಾ? ನೀರಿನಲ್ಲಿ ಈ 2 ವಸ್ತು ಬೆರೆಸಿ ಕ್ಲೀನ್ ಮಾಡಿ]]></title>
            <link>https://kannada.asianetnews.com/gallery/kitchen/how-to-clean-dirty-rolling-boards-and-pins-using-just-two-simple-ingredients-f3hddkp</link>
            <guid isPermaLink="true">https://kannada.asianetnews.com/gallery/kitchen/how-to-clean-dirty-rolling-boards-and-pins-using-just-two-simple-ingredients-f3hddkp</guid>
            <pubDate>Tue, 19 May 2026 17:49:35 +0530</pubDate>
            <description><![CDATA[&lt;p&gt;&lt;strong&gt;How to remove black stains from rolling board: &lt;/strong&gt;ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಲಟ್ಟಣಿಗೆ ಮತ್ತು ಮಣೆಗಳು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಕಪ್ಪಾಗಿ, ಜಿಡ್ಡಿನಿಂದ ಕೂಡಿ ಹಳೆಯದಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಅವುಗಳ ಮೇಲೆ ಬ್ಯಾಕ್ಟೀರಿಯಾಗಳು ಜಮೆಯಾಗಿ ಆರೋಗ್ಯಕ್ಕೂ ಅಪಾಯಕಾರಿ ಆಗಬಹುದು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks02ejp50jjh6nn7qg35kwd7,imgname-thumbnail---2026-05-19t173952.473-1779192777412.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;How to remove black stains from rolling board: &lt;/strong&gt;ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಲಟ್ಟಣಿಗೆ ಮತ್ತು ಮಣೆಗಳು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಕಪ್ಪಾಗಿ, ಜಿಡ್ಡಿನಿಂದ ಕೂಡಿ ಹಳೆಯದಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಅವುಗಳ ಮೇಲೆ ಬ್ಯಾಕ್ಟೀರಿಯಾಗಳು ಜಮೆಯಾಗಿ ಆರೋಗ್ಯಕ್ಕೂ ಅಪಾಯಕಾರಿ ಆಗಬಹುದು. &amp;nbsp;&lt;/p&gt;&lt;img&gt;&lt;p&gt;ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಲಟ್ಟಣಿಗೆ ಮತ್ತು ಮಣೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅದರ ಮೇಲೆ ಹಿಟ್ಟಿನ ಪದರ ಜಮೆಯಾಗಲು ಪ್ರಾರಂಭಿಸುತ್ತದೆ. ಮೆಲ್ಲಮೆಲ್ಲನೆ ಈ ಗಲೀಜು ಕಪ್ಪು ಕಲೆಗಳಾಗಿ ಬದಲಾಗುತ್ತದೆ. ಇದರಿಂದ ಮಣೆ-ಲಟ್ಟಣಿಗೆ ಹಳೆಯದಾಗಿ ಮತ್ತು ಹಾಳಾದಂತೆ ಕಾಣಲಾರಂಭಿಸುತ್ತದೆ. ಅಷ್ಟೇ ಅಲ್ಲ, ಹಳೆಯ ಹಿಟ್ಟು ಮತ್ತು ತೇವಾಂಶದ ಕಾರಣದಿಂದ ಬ್ಯಾಕ್ಟೀರಿಯಾ ಹಾಗೂ ಇನ್ಫೆಕ್ಷನ್ ಅಪಾಯವೂ ಹೆಚ್ಚಾಗಬಹುದು. ನಿಮ್ಮ ಮಣೆ-ಲಟ್ಟಣಿಗೆ ಮರದ್ದಾಗಿರಲಿ ಅಥವಾ ಕಲ್ಲಿನದಾಗಿರಲಿ, ಅದನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಒಂದು ವೇಳೆ ನೀವು ಕೂಡ ಕಪ್ಪು ಮತ್ತು ಕೊಳಕಾದ ಮಣೆ-ಲಟ್ಟಣಿಗೆಯನ್ನು ಹೊಸದರಂತೆ ಹೊಳೆಯುವಂತೆ ಮಾಡಲು ಬಯಸಿದರೆ, ಈ ಸುಲಭ ಕಿಚನ್ ಟಿಪ್ಸ್ ನಿಮಗೆ ತುಂಬಾ ಉಪಯೋಗಕ್ಕೆ ಬರುತ್ತವೆ.&lt;/p&gt;&lt;img&gt;&lt;p&gt;ಅವಶ್ಯಕತೆ ಬಿದ್ದಾಗ ಮೊದಲು ನಿಮ್ಮ ಮಣೆ-ಲಟ್ಟಣಿಗೆಯನ್ನು 10-15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನೀರಿನಲ್ಲಿ ನೆನೆಸಿಡುವುದರಿಂದ ಅದರ ಮೇಲೆ ಜಮೆಯಾದ ಗಲೀಜು ಮೆತ್ತಗಾಗಿ ಸುಲಭವಾಗಿ ಹೊರಬರಲು ಪ್ರಾರಂಭಿಸುತ್ತದೆ. ನೀವು ಬೇಕಿದ್ದರೆ ಉಗುರುಬೆಚ್ಚಗಿನ ನೀರಿನಲ್ಲಿ ಮುಳುಗಿಸಿ ಇಡಬಹುದು. ಅಂದಹಾಗೆ ನಿಮಗೆ ಮಣೆ-ಲಟ್ಟಣಿಗೆ ಸ್ವಚ್ಛಗೊಳಿಸಲು ನಿಂಬೆ ರಸ, ಡಿಟರ್ಜೆಂಟ್ ಮತ್ತು ವಿನೆಗರ್ (Sirka) ಬೇಕಾಗುತ್ತದೆ.&lt;/p&gt;&lt;img&gt;&lt;p&gt;ಮಣೆ-ಲಟ್ಟಣಿಗೆಯ ಕಪ್ಪು ಕಲೆಗಳು ಮತ್ತು ಜಮೆಯಾದ ಗಲೀಜನ್ನು ಹೋಗಲಾಡಿಸಲು ನಿಂಬೆ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ಮೊದಲು ಸ್ವಲ್ಪ ನೀರನ್ನು ಉಗುರುಬೆಚ್ಚಗೆ ಮಾಡಿಕೊಳ್ಳಿ ಮತ್ತು ಅದರಲ್ಲಿ 1 ನಿಂಬೆ ಹಣ್ಣಿನ ರಸವನ್ನು ಹಿಂಡಿ. ಈಗ ಇದೇ ನೀರಿಗೆ ಸ್ವಲ್ಪ ಡಿಟರ್ಜೆಂಟ್ ಪೌಡರ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ಪಂಜ್ ಅಥವಾ ಸ್ಕ್ರಬ್ಬರ್ ಅನ್ನು ಈ ಮಿಶ್ರಣದಲ್ಲಿ ಅದ್ದಿ ಮಣೆ ಮತ್ತು ಲಟ್ಟಣಿಗೆಯನ್ನು ಉಜ್ಜಿ ಸ್ವಚ್ಛಗೊಳಿಸಿ. ಕಲೆಗಳು ತುಂಬಾ ಹಳೆಯದಾಗಿದ್ದರೆ ಮತ್ತು ಹಠಮಾರಿಯಾಗಿದ್ದರೆ ಸ್ಟೀಲ್ ಸ್ಕ್ರಬ್ಬರ್ (Steel scrubber) ಕೂಡ ಬಳಸಬಹುದು. ನಿಂಬೆಯಲ್ಲಿರುವ ನೈಸರ್ಗಿಕ ಆಮ್ಲವು ಕಪ್ಪು ಕಲೆ ಮತ್ತು ಜಿಡ್ಡನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ, ಹಾಗೆಯೇ ಡಿಟರ್ಜೆಂಟ್ ಜಮೆಯಾದ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಕೆಲವೇ ನಿಮಿಷಗಳಲ್ಲಿ ನಿಮ್ಮ ಹಳೆಯ ಮತ್ತು ಕೊಳಕಾದ ಮಣೆ-ಲಟ್ಟಣಿಗೆ ಸ್ವಚ್ಛವಾಗಿ ಹೊಳೆಯಲು ಪ್ರಾರಂಭಿಸುತ್ತದೆ.&lt;/p&gt;&lt;img&gt;&lt;p&gt;ಮಣೆ-ಲಟ್ಟಣಿಗೆ ಸ್ವಚ್ಛಗೊಳಿಸಲು ಎರಡನೇ ಸುಲಭ ಮತ್ತು ಪರಿಣಾಮಕಾರಿ ಮಾರ್ಗವೆಂದರೆ ವಿನೆಗರ್ ಬಳಕೆ. ಇದಕ್ಕಾಗಿ ಉಗುರುಬೆಚ್ಚಗಿನ ನೀರಿಗೆ 2-3 ಚಮಚ ವಿನೆಗರ್ ಬೆರೆಸಿ ಮತ್ತು ಈ ಮಿಶ್ರಣದಲ್ಲಿ ಮಣೆ-ಲಟ್ಟಣಿಗೆಯನ್ನು ಸುಮಾರು 5 ನಿಮಿಷಗಳ ಕಾಲ ಮುಳುಗಿಸಿಡಿ. ವಿನೆಗರ್ ಹಳೆಯ ಕಲೆಗಳು, ಜಿಡ್ಡು ಮತ್ತು ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರ ನಂತರ ಸ್ಪಂಜ್, ಬ್ರಷ್ ಅಥವಾ ಸ್ಕ್ರಬ್ಬರ್ ಸಹಾಯದಿಂದ ಮಣೆ-ಲಟ್ಟಣಿಗೆಯನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಕಲೆಗಳು ತುಂಬಾ ಜಾಸ್ತಿ ಇದ್ದರೆ ಈ ನೀರಿಗೆ ಸ್ವಲ್ಪ ಉಪ್ಪನ್ನು ಕೂಡ ಬೆರೆಸಿ. ಉಪ್ಪು ನೈಸರ್ಗಿಕ ಕ್ಲೀನರ್ ಆಗಿ ಕೆಲಸ ಮಾಡುತ್ತದೆ ಮತ್ತು ಹಠಮಾರಿ ಕಲೆಗಳನ್ನು ಬೇಗನೆ ತೆಗೆಯಲು ಸಹಾಯ ಮಾಡುತ್ತದೆ. ಜೊತೆಗೆ ಇದು ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಕೂಡ ಪರಿಣಾಮಕಾರಿ ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;ಸ್ವಚ್ಛಗೊಳಿಸಿದ ನಂತರ ಮಣೆ-ಲಟ್ಟಣಿಗೆಯನ್ನು ಶುದ್ಧ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ ಮತ್ತು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಡಿ. ಇದರಿಂದ ತೇವಾಂಶ ಸಂಪೂರ್ಣವಾಗಿ ಇಲ್ಲವಾಗುತ್ತದೆ ಮತ್ತು ಮಣೆ-ಲಟ್ಟಣಿಗೆ ದೀರ್ಘಕಾಲದವರೆಗೆ ಸ್ವಚ್ಛವಾಗಿ ಹಾಗೂ ಸುರಕ್ಷಿತವಾಗಿರುತ್ತದೆ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/how-to-clean-dirty-rolling-boards-and-pins-using-just-two-simple-ingredients-f3hddkp"/>
        </item>
        <item>
            <title><![CDATA[ಕೊನೆ ರೊಟ್ಟಿಯನ್ನ ಕುಟುಂಬದ ಸದಸ್ಯರಿಗೆ ನೀಡಬಾರದು.. ಯಮರಾಜನೊಂದಿಗೆ ಇದೆ ಇದರ ನಂಟು!]]></title>
            <link>https://kannada.asianetnews.com/gallery/food/last-roti-rules-why-you-should-feed-the-last-roti-to-a-dog-fyx7ual</link>
            <guid isPermaLink="true">https://kannada.asianetnews.com/gallery/food/last-roti-rules-why-you-should-feed-the-last-roti-to-a-dog-fyx7ual</guid>
            <pubDate>Thu, 14 May 2026 14:31:04 +0530</pubDate>
            <description><![CDATA[&lt;p&gt;Last Roti Rules: ಹಿಂದೂ ಧರ್ಮ, ಶಾಸ್ತ್ರಗಳ ಪ್ರಕಾರ, ಅಡುಗೆ ಮನೆಯಲ್ಲಿ ಮಾಡುವ ಮೊದಲ ಮತ್ತು ಕೊನೆಯ ರೊಟ್ಟಿಗೆ ವಿಶೇಷ ಮಹತ್ವವಿದೆ. ಸಾಮಾನ್ಯವಾಗಿ ಮೊದಲ ರೊಟ್ಟಿಯನ್ನು ಹಸುವಿಗೆ ನೀಡುವ ಸಂಪ್ರದಾಯ ಎಲ್ಲರಿಗೂ ತಿಳಿದಿದೆ, ಆದರೆ ಕೊನೆಯ ರೊಟ್ಟಿಯನ್ನು ಯಾರಿಗೆ ನೀಡಬೇಕು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jwr4ym6dtbr8ar3cq6dse588,imgname-2-june-ki-roti-ka-sach-kya-hai-1748862193868.jpg" type="image/jpeg" height="390" width="690"/>
            <content:encoded><![CDATA[&lt;p&gt;Last Roti Rules: ಹಿಂದೂ ಧರ್ಮ, ಶಾಸ್ತ್ರಗಳ ಪ್ರಕಾರ, ಅಡುಗೆ ಮನೆಯಲ್ಲಿ ಮಾಡುವ ಮೊದಲ ಮತ್ತು ಕೊನೆಯ ರೊಟ್ಟಿಗೆ ವಿಶೇಷ ಮಹತ್ವವಿದೆ. ಸಾಮಾನ್ಯವಾಗಿ ಮೊದಲ ರೊಟ್ಟಿಯನ್ನು ಹಸುವಿಗೆ ನೀಡುವ ಸಂಪ್ರದಾಯ ಎಲ್ಲರಿಗೂ ತಿಳಿದಿದೆ, ಆದರೆ ಕೊನೆಯ ರೊಟ್ಟಿಯನ್ನು ಯಾರಿಗೆ ನೀಡಬೇಕು. &amp;nbsp;&lt;/p&gt;&lt;img&gt;&lt;p&gt;ಹಿಂದೂ ಧರ್ಮದ ಶಾಸ್ತ್ರಗಳ ಪ್ರಕಾರ, ಅಡುಗೆ ಮನೆಯಲ್ಲಿ ಮಾಡುವ ರೊಟ್ಟಿಗೆ ಸಂಬಂಧಿಸಿದಂತೆ ಕೆಲವು ವಿಶೇಷ ನಿಯಮಗಳಿವೆ. ಸಾಮಾನ್ಯವಾಗಿ ಅನೇಕ ಮನೆಗಳಲ್ಲಿ ಮೊದಲ ರೊಟ್ಟಿಯನ್ನು ಹಸುವಿಗೆ ನೀಡಲಾಗುತ್ತದೆ. ಹಸುವಿನಲ್ಲಿ 33 ಕೋಟಿ ದೇವತೆಗಳ ವಾಸವಿರುತ್ತದೆ ಎಂಬ ನಂಬಿಕೆಯಿರುವುದರಿಂದ, ಮೊದಲ ರೊಟ್ಟಿಯನ್ನ ಹಸುವಿಗೆ ನೀಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಮತ್ತು ಅನ್ನದ ಭಂಡಾರ ಎಂದಿಗೂ ಖಾಲಿಯಾಗುವುದಿಲ್ಲ ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;ಶಾಸ್ತ್ರಗಳ ಪ್ರಕಾರ, ಅಡುಗೆಯ ಕೊನೆಯ ರೊಟ್ಟಿಯನ್ನು ನಾಯಿಗೆ ನೀಡಬೇಕು. ಹೀಗೆ ಮಾಡುವುದರಿಂದ ಮನೆಯ ವಾತಾವರಣವು ಸಂತೋಷದಿಂದ ಕೂಡಿರುತ್ತದೆ ಮತ್ತು ಪುಣ್ಯ ಲಭಿಸುತ್ತದೆ. ಅಲ್ಲದೆ, ಇದು ಕುಟುಂಬದ ಸದಸ್ಯರ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಯಮರಾಜನ ದೂತ: &lt;/strong&gt;ನಾಯಿಯನ್ನು ಯಮರಾಜನ ದೂತ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕೊನೆಯ ರೊಟ್ಟಿಯನ್ನು ನಾಯಿಗೆ ನೀಡುವುದರಿಂದ ಅಕಾಲಿಕ ಮರಣದ ಭಯ ಇರುವುದಿಲ್ಲ.&lt;strong&gt;ಭೈರವನ ವಾಹನ: &lt;/strong&gt;ನಾಯಿಯು ಭಗವಾನ್ ಕಾಲಭೈರವನ ವಾಹನವೂ ಆಗಿದೆ.&lt;strong&gt;ಗ್ರಹ ದೋಷ ನಿವಾರಣೆ: &lt;/strong&gt;ನಿಯಮಿತವಾಗಿ ನಾಯಿಗೆ ರೊಟ್ಟಿ ನೀಡುವುದರಿಂದ ಶನಿ, ರಾಹು ಮತ್ತು ಕೇತುಗಳಂತಹ ಕ್ರೂರ ಗ್ರಹಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.&lt;/p&gt;&lt;img&gt;&lt;p&gt;ಕೊನೆಯ ರೊಟ್ಟಿಯನ್ನು ಎಂದಿಗೂ ಕುಟುಂಬದ ಸದಸ್ಯರಿಗೆ ನೀಡಬಾರದು ಅಥವಾ ಕಸಕ್ಕೆ ಎಸೆಯಬಾರದು. ಅದನ್ನು ನಾಯಿಗೆ ನೀಡುವುದು ಶ್ರೇಯಸ್ಕರ.&lt;/p&gt;&lt;img&gt;&lt;p&gt;ಕುಟುಂಬದ ಸದಸ್ಯರ ಸಂಖ್ಯೆಯನ್ನು ಎಣಿಸಿ ರೊಟ್ಟಿಗಳನ್ನು ಮಾಡಬಾರದು. ಇದು ಧನ-ಧಾನ್ಯದ ಕೊರತೆಗೆ ಕಾರಣವಾಗಬಹುದು. ಯಾವಾಗಲೂ 2-3 ರೊಟ್ಟಿಗಳನ್ನು ಹೆಚ್ಚುವರಿಯಾಗಿ ಮಾಡಿ ಪ್ರಾಣಿಗಳಿಗೆ ನೀಡಬೇಕು.ರಾತ್ರಿಯ ಉಳಿದ ಹಿಟ್ಟನ್ನು ಬಳಸುವುದನ್ನು ತಪ್ಪಿಸಬೇಕು, ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.ಊಟದ ತಟ್ಟೆಯಲ್ಲಿ ಎಂದಿಗೂ 3 ರೊಟ್ಟಿಗಳನ್ನು ಒಟ್ಟಿಗೆ ಬಡಿಸಬಾರದು.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/last-roti-rules-why-you-should-feed-the-last-roti-to-a-dog-fyx7ual"/>
        </item>
        <item>
            <title><![CDATA[Crispy Dosa Tips: ಪೇಪರ್‌ನಂತೆ ತೆಳುವಾಗಿರುವ ದೋಸೆ ಬೇಕಾ?, ಇಲ್ಲಿದೆ ಸುಲಭ ಟಿಪ್ಸ್‌]]></title>
            <link>https://kannada.asianetnews.com/gallery/food/how-to-make-restaurant-style-crispy-dosa-at-home-tips-and-tricks-g08y0qg</link>
            <guid isPermaLink="true">https://kannada.asianetnews.com/gallery/food/how-to-make-restaurant-style-crispy-dosa-at-home-tips-and-tricks-g08y0qg</guid>
            <pubDate>Fri, 15 May 2026 11:15:15 +0530</pubDate>
            <description><![CDATA[&lt;p&gt;&lt;strong&gt;Crispy Dosa Secret Ingredients:&lt;/strong&gt; ಪೇಪರ್&zwnj;ನಷ್ಟೇ ತೆಳುವಾಗಿರುವ, ಗರಿಗರಿಯಾದ ಮತ್ತು ಹೋಟೆಲ್ ಶೈಲಿಯ ದೋಸೆ ಮನೆಯಲ್ಲೇ ಮಾಡಲು ಇಲ್ಲಿದೆ ಸುಲಭವಾದ ಟಿಪ್ಸ್ ಮತ್ತು ಟ್ರಿಕ್ಸ್. ಸರಿಯಾದ ಹಿಟ್ಟು ಮತ್ತು ಹಂಚಿನ ತಾಪಮಾನದ ರಹಸ್ಯ ತಿಳಿಯಿರಿ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krn23hxd2bwjtbwfaanwjz7g,imgname-thumbnail---2026-05-15t110039.347-1778823317421.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Crispy Dosa Secret Ingredients:&lt;/strong&gt; ಪೇಪರ್&zwnj;ನಷ್ಟೇ ತೆಳುವಾಗಿರುವ, ಗರಿಗರಿಯಾದ ಮತ್ತು ಹೋಟೆಲ್ ಶೈಲಿಯ ದೋಸೆ ಮನೆಯಲ್ಲೇ ಮಾಡಲು ಇಲ್ಲಿದೆ ಸುಲಭವಾದ ಟಿಪ್ಸ್ ಮತ್ತು ಟ್ರಿಕ್ಸ್. ಸರಿಯಾದ ಹಿಟ್ಟು ಮತ್ತು ಹಂಚಿನ ತಾಪಮಾನದ ರಹಸ್ಯ ತಿಳಿಯಿರಿ.&amp;nbsp;&lt;/p&gt;&lt;img&gt;&lt;p&gt;ದೋಸೆ ತಯಾರಿಸುವಾಗ ಅದು ಹಂಚಿಗೆ ಅಂಟಿಕೊಳ್ಳುತ್ತಿದ್ದರೆ ಅಥವಾ ಹೋಟೆಲ್ ಶೈಲಿಯಲ್ಲಿ ಗರಿಗರಿಯಾಗಿ ಬರುತ್ತಿಲ್ಲವೆಂದರೆ, ಈ ಕೆಳಗಿನ ಕಿಚನ್ ಟಿಪ್ಸ್ ನಿಮಗೆ ಖಂಡಿತ ಸಹಾಯ ಮಾಡುತ್ತವೆ.&lt;/p&gt;&lt;img&gt;&lt;p&gt;ದೋಸೆ ಹಿಟ್ಟು ಸರಿಯಾಗಿ ಹುದುಗುವುದು ಬಹಳ ಮುಖ್ಯ. ಹಿಟ್ಟು ಚೆನ್ನಾಗಿ ಉಬ್ಬಿ ಬಂದಿದ್ದರೆ ಮಾತ್ರ ದೋಸೆ ಹಗುರವಾಗಿ ಮತ್ತು ಗರಿಗರಿಯಾಗಿ ಬರುತ್ತದೆ. ನೆನಪಿಡಿ, ಹಿಟ್ಟು ಅತಿ ಗಟ್ಟಿಯೂ ಇರಬಾರದು, ತೆಳುವೂ ಇರಬಾರದು.&lt;/p&gt;&lt;img&gt;&lt;p&gt;ಹಂಚು ಅತಿಯಾಗಿ ಕಾಯ್ದಿದ್ದರೆ ಹಿಟ್ಟನ್ನು ಹರಡಲು ಬರುವುದಿಲ್ಲ, ಒಂದು ವೇಳೆ ಹಂಚು ತಣ್ಣಗಿದ್ದರೆ ದೋಸೆ ಅಂಟಿಕೊಳ್ಳುತ್ತದೆ. ಹಿಟ್ಟು ಹಾಕುವ ಮೊದಲು ಹಂಚಿನ ಮೇಲೆ ಸ್ವಲ್ಪ ನೀರು ಚಿಮುಕಿಸಿ. ನೀರು ತಕ್ಷಣ ಆವಿಯಾದರೆ ಹಂಚು ದೋಸೆ ಹಾಕಲು ಸಿದ್ಧವಾಗಿದೆ ಎಂದರ್ಥ.&lt;/p&gt;&lt;img&gt;&lt;p&gt;ದೋಸೆ ಹಾಕುವ ಮೊದಲು ಹಂಚಿಗೆ ಸ್ವಲ್ಪ ಎಣ್ಣೆ ಹಾಕಿ ಅರ್ಧ ಕತ್ತರಿಸಿದ ಈರುಳ್ಳಿಯಿಂದ ಉಜ್ಜಿ. ನೀವು ಬೇಕಿದ್ದರೆ ಸ್ವಲ್ಪ ಉಪ್ಪನ್ನೂ ಉಜ್ಜಬಹುದು. ಇದರಿಂದ ದೋಸೆ ಹಂಚಿಗೆ ಅಂಟಿಕೊಳ್ಳದೆ ಸುಲಭವಾಗಿ ಏಳುತ್ತದೆ.&lt;/p&gt;&lt;img&gt;&lt;p&gt;ಹಂಚಿನ ಮಧ್ಯಭಾಗಕ್ಕೆ ಹಿಟ್ಟು ಹಾಕಿ, ಹಗುರವಾದ ಕೈಯಿಂದ ವೃತ್ತಾಕಾರದಲ್ಲಿ ತೆಳುವಾಗಿ ಹರಡಿ. ದೋಸೆ ಎಷ್ಟು ತೆಳುವಾಗಿರುತ್ತದೆಯೋ ಅಷ್ಟು ಗರಿಗರಿಯಾಗಿ ಬರುತ್ತದೆ.&lt;/p&gt;&lt;img&gt;&lt;p&gt;ದೋಸೆಯ ಅಂಚುಗಳಿಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿ. ಇದು ದೋಸೆಗೆ ಬಂಗಾರದ ಬಣ್ಣ ನೀಡುತ್ತದೆ ಮತ್ತು ಕ್ರಿಸ್ಪಿಯಾಗಿ ಮಾಡುತ್ತದೆ.&lt;/p&gt;&lt;img&gt;&lt;p&gt;ಹಳೆಯ ಮತ್ತು ಸರಿಯಾಗಿ ಸೀಸನಿಂಗ್ (Seasoning) ಮಾಡಿದ ಕಾಸ್ಟ್ ಐರನ್ (ಕಬ್ಬಿಣದ) ಹಂಚು ದೋಸೆ ಮಾಡಲು ಅತ್ಯುತ್ತಮ. ಇದರಲ್ಲಿ ದೋಸೆ ಹೆಚ್ಚು ಕ್ರಿಸ್ಪಿಯಾಗಿ ಬರುತ್ತದೆ.&lt;/p&gt;&lt;img&gt;&lt;p&gt;ದೋಸೆ ಹಿಟ್ಟು ರುಬ್ಬುವಾಗ ಸ್ವಲ್ಪ ಅವಲಕ್ಕಿ ಅಥವಾ ನೆನೆಸಿದ ಮೆಂತ್ಯ ಕಾಳುಗಳನ್ನು ಹಾಕುವುದರಿಂದ ದೋಸೆಯ ಟೆಕ್ಸ್ಚರ್ ಚೆನ್ನಾಗಿ ಬರುತ್ತದೆ ಮತ್ತು ದೋಸೆ ಕೆಂಪಗೆ ಗರಿಗರಿಯಾಗುತ್ತದೆ.&lt;/p&gt;&lt;img&gt;&lt;p&gt;ದೋಸೆ ಹಾಕುವ ಮೊದಲು ಪ್ರತಿ ಬಾರಿ ಹಂಚಿನ ತಾಪಮಾನವನ್ನು ಪರೀಕ್ಷಿಸಿ ನೀರು ಚಿಮುಕಿಸುವುದನ್ನು ಮರೆಯಬೇಡಿ. ಇದು ದೋಸೆ ಸುಡದಂತೆ ತಡೆಯುತ್ತದೆ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/how-to-make-restaurant-style-crispy-dosa-at-home-tips-and-tricks-g08y0qg"/>
        </item>
        <item>
            <title><![CDATA[ಜಿಮ್‌ ಇಲ್ಲ, ಫ್ಯಾನ್ಸಿ ಡಯೆಟ್‌ ಮಾಡದೆ 20kg ತೂಕ ಇಳಿಸಿಕೊಂಡ್ರು; ಹುಬ್ಬಳ್ಳಿಯ ಪ್ರವೀಣ್‌ ಗುಡಿ ಸೀಕ್ರೇಟ್‌ ಇದು!]]></title>
            <link>https://kannada.asianetnews.com/gallery/health-life/life-coach-motivational-speaker-praveen-gudi-weight-loss-diet-and-walking-tips-ghr0m54</link>
            <guid isPermaLink="true">https://kannada.asianetnews.com/gallery/health-life/life-coach-motivational-speaker-praveen-gudi-weight-loss-diet-and-walking-tips-ghr0m54</guid>
            <pubDate>Tue, 19 May 2026 07:30:38 +0530</pubDate>
            <description><![CDATA[&lt;p&gt;Praveen Gudi Weight Loss: ಲೈಫ್&zwnj;ಕೋಚ್&zwnj;, ಮೋಟಿವೇಶನಲ್&zwnj; ಸ್ಪೀಕರ್&zwnj;, ಹುಬ್ಬಳ್ಳಿಯ ಪ್ರವೀಣ್&zwnj; ಗುಡಿ ಅವರು ಜಿಮ್&zwnj;ಗೆ ಹೋಗದೆ, ಫ್ಯಾನ್ಸಿ ಡಯೆಟ್&zwnj; ಮಾಡದೆ ಸಣ್ಣ ಆಗಿದ್ದಾರೆ. ಒಟ್ಟಾರೆಯಾಗಿ 20kg ತೂಕ ಇಳಿಸಿಕೊಂಡಿದ್ದು ಹೇಗೆ ಎಂದು ಅವರು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kry41xj7nqqb5cgt180khpzm,imgname-new-project---2026-05-18t233159.120-1779127350855.jpg" type="image/jpeg" height="390" width="690"/>
            <content:encoded><![CDATA[&lt;p&gt;Praveen Gudi Weight Loss: ಲೈಫ್&zwnj;ಕೋಚ್&zwnj;, ಮೋಟಿವೇಶನಲ್&zwnj; ಸ್ಪೀಕರ್&zwnj;, ಹುಬ್ಬಳ್ಳಿಯ ಪ್ರವೀಣ್&zwnj; ಗುಡಿ ಅವರು ಜಿಮ್&zwnj;ಗೆ ಹೋಗದೆ, ಫ್ಯಾನ್ಸಿ ಡಯೆಟ್&zwnj; ಮಾಡದೆ ಸಣ್ಣ ಆಗಿದ್ದಾರೆ. ಒಟ್ಟಾರೆಯಾಗಿ 20kg ತೂಕ ಇಳಿಸಿಕೊಂಡಿದ್ದು ಹೇಗೆ ಎಂದು ಅವರು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನನ್ನ ತಂದೆ-ತಾಯಿ ಇಬ್ಬರಿಗೂ ಶುಗರ್&zwnj; ಕಾಯಿಲೆ ಇತ್ತು. ತಂದೆ ಶುಗರ್&zwnj; ಕಾಯಿಲೆಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಅವರು 22 ಬಾರಿ ಆಸ್ಪತ್ರೆಗೆ ಅಡ್ಮಿಟ್&zwnj; ಆಗಿದ್ದರು. ತಂದೆ ಅನುಭವಿಸಿದ ಕಷ್ಟ ಒಂದುಕಡೆಯಾದರೆ, ಇನ್ನೊಂದು ಕಡೆ ಅವರನ್ನು ನೋಡಿಕೊಳ್ಳಲು ನಾವು ಸಮಯ ಕೊಡಬೇಕು, ಹಣದ ವ್ಯಯ ಕೂಡ ಆಗುವುದು. ಆಸ್ಪತ್ರೆಯಲ್ಲಿ ರೋಗಿ ಅನುಭವಿಸುವ ನೋವು ಒಂದುಕಡೆಯಾದರೆ, ಅವರನ್ನು ನೋಡಿಕೊಳ್ಳುವವರು ಕೂಡ ಇನ್ನೊಂದಿಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;ಲೈಫ್&zwnj; ಕೋಚ್&zwnj;, ಮೋಟಿವೇಶನ್&zwnj; ಸ್ಪೀಕರ್&zwnj; ಆಗಿರುವ ನಾನು ತಿಂಗಳಲ್ಲಿ ಹದಿನೈದು ದಿನ ನಾನು ಟ್ರಾವೆಲ್&zwnj; ಮಾಡಲೇಬೇಕಿತ್ತು. ಕೆಲಸದಲ್ಲಿ ನಿಷ್ಠೆಯಲ್ಲಿದ್ದ ನಾನು ಊಟ, ತಿಂಡಿ- ವ್ಯಾಯಾಮದ ಕಡೆ ಗಮನ ಕೊಡಲಿಲ್ಲ. ಕ್ಯಾಲರಿ ಬಗ್ಗೆ ಅರಿಯದೆ, ನನ್ನ ಹೊಟ್ಟೆಯನ್ನು ಕಸದ ಬುಟ್ಟಿ ಥರ ಮಾಡ್ಕೊಂಡಿದ್ದೆ, ಸಿಕ್ಕಿದ್ದೆಲ್ಲವನ್ನು ತಿನ್ನುತ್ತಿದ್ದೆ. ಹೀಗಾಗಿ ನಾನು 88kg ತೂಕ ದಪ್ಪ ಆಗಿದ್ದೆ. ಇದರಿಂದ ಒಂದಿಷ್ಟು ಆರೋಗ್ಯ ಸಮಸ್ಯೆಗಳು ಆದವು. ಇನ್ನು ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಬಿಪಿ, ಶುಗರ್&zwnj; ಕಾಯಿಲೆಗಳು ಬರೋದು ಸಹಜ. ಇವುಗಳು ಬರದಂತೆ ತಡೆಯಲು ನಮ್ಮ ಲೈಫ್&zwnj;ಸ್ಟೈಲ್&zwnj;ನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾಗುತ್ತದೆ.&lt;/p&gt;&lt;img&gt;&lt;p&gt;ಯಾವುದೇ ಫಂಕ್ಷನ್&zwnj;ಗೆ ಹೋದರೂ, ಹೊರಗಡೆ ಹೋದರೂ ಕೂಡ ಪ್ರೋಟೀನ್&zwnj;ಯುಕ್ತ ಆಹಾರವನ್ನು ಸೇವನೆ ಮಾಡ್ತೀನಿ. ಇದರಲ್ಲಿ ನಾನು ರಾಜಿ ಆಗುವುದಿಲ್ಲ. ನನಗೋಸ್ಕರ ನಾನು ದಿನದಲ್ಲಿ ಒಂದಿಷ್ಟು ಸಮಯ ಮೀಸಲಿಟ್ಟು ವಾಕಿಂಗ ಮಾಡ್ತೀನಿ, ಡಯೆಟ್&zwnj; ಮಾಡ್ತೀನಿ. ಇದನ್ನು ಬೇರೆಯವರು ಕೂಡ ಗೌರವಿಸಬೇಕು. ಆರಂಭದಲ್ಲಿ ಕೆಲವರು ಇದನ್ನು ಟೀಕೆ ಮಾಡಿದರೂ, ನೆಗೆಟಿವ್&zwnj; ಮಾತನಾಡಿದರೂ ಕೂಡ ನಾನು ಮಾತ್ರ ತಲೆ ಕೆಡಿಸಿಕೊಳ್ಳದೆ ನಿರಂತರತೆ ಕಾಪಾಡಿಕೊಂಡು ಬಂದಿದ್ದಕ್ಕೆ ಇಂದು 38 ವರ್ಷವಾದರೂ ಕೂಡ 30ರ ಹುಡುಗನ ಥರ ಕಾಣ್ತೀನಿ. ಎಲ್ಲದಕ್ಕಿಂತ ಹೆಚ್ಚಾಗಿ ಕಳೆದ ಎರಡು ವರ್ಷಗಳಿಂದ ನಾನು ಅನಾರೋಗ್ಯ ಎಂದು ಡಾಕ್ಟರ್&zwnj; ಬಳಿ ಹೋಗಿಲ್ಲ, ಸಣ್ಣ ಪುಟ್ಟ ನೆಗಡಿ, ಜ್ವರ ಬಂದಿರಬಹುದೇ ವಿನಃ ನನಗೆ ದೊಡ್ಡ ಆರೋಗ್ಯ ಸಮಸ್ಯೆ ಬಂದಿಲ್ಲ.&lt;/p&gt;&lt;img&gt;&lt;p&gt;ನನ್ನ ಮಗ ಕೂಡ ಅವನ ವಯಸ್ಸಿಗಿಂತ ಜಾಸ್ತಿ ದಪ್ಪ ಇದ್ದನು. 12 ವರ್ಷದ ನನ್ನ ಮಗ 68kg ತೂಕ ಇದ್ದನು. ಅವನು ಕೂಡ ಈಗ ಸಮತೋಲಿತ ಆಹಾರ ತಿಂದು ಎರಡು ತಿಂಗಳಲ್ಲಿ 9kg ತೂಕ ಇಳಿಸಿಕೊಂಡಿದ್ದಾನೆ. ಅವನ ಶ್ರದ್ಧೆಯಿಂದ ಇಷ್ಟು ಡಯೆಟ್&zwnj; ಮಾಡಲು ಸಾಧ್ಯವಾಗಿದೆ. ಚಿಕ್ಕ ಮಕ್ಕಳಲ್ಲಿ ಕೂಡ obscenity ಬರುತ್ತಿದೆ. ಪಾಲಕರು ಕೂಡ ಮಕ್ಕಳಿಗೆ ಸಮತೋಲನ ಆಹಾರ ಸೇವನೆ ಮಾಡುವಂತೆ ಮಾಡಬೇಕು, ಜಾಗೃತಿ ಮೂಢಿಸಬೇಕು.&amp;nbsp;&lt;/p&gt;&lt;img&gt;&lt;p&gt;ನನ್ನ ಹೈಟ್ ಎಷ್ಟಿದೆಯೋ, ಅದಕ್ಕಿಂತ ಹೆಚ್ಚಿನ ತೂಕ ಇದ್ದಿದ್ದಕ್ಕೆ ನನಗೆ ಕಾಲು ನೋವು ಇತ್ತು, ಅಷ್ಟೇ ಅಲ್ಲದೆ ಡಿಸ್ಕ್&zwnj; ಸಮಸ್ಯೆ ಕೂಡ ಇತ್ತು. ಇಂದು ಅದೆಲ್ಲವೂ ಮಾಯವಾಗಿದೆ, ಅಷ್ಟು ಸಮಸ್ಯೆ ಮಾಡ್ತಿಲ್ಲ. ಸಿಹಿ ತಿಂಡಿ, ಕರಿದ ತಿಂಡಿ, ಮೈದಾ ಬಿಟ್ಟಿರುವುದಕ್ಕೆ ನನಗೆ ಎಸಿಡಿಟಿ ಸಮಸ್ಯೆ ಕೂಡ ಇಲ್ಲ. ನಮ್ಮ ನಾಲಿಗೆಗೆ ರುಚಿ ಕೊಡಬೇಕು ಎಂದು ಬೇಕಾಗಿದ್ದನ್ನೆಲ್ಲ ತಿಂದರೆ, ನಮ್ಮ ಹೊಟ್ಟೆಗೆ ಮೋಸ ಮಾಡಿದ ಹಾಗೆ ಆಗುತ್ತದೆ. ನಮ್ಮ ಹೊಟ್ಟೆಗೆ ರುಚಿ ಗೊತ್ತಾಗೋದಿಲ್ಲ ಎಂದು ನಾನು ನಂಬ್ತೀನಿ. ಈಗ ನಾನು ನನ್ನ ಆರು ವರ್ಷದ ಮಗಳ ಜೊತೆ ಆರಾಮಾಗಿ ಆಟ ಆಡ್ತೀನಿ, ನಿತ್ಯವೂ ಆಕ್ಟಿವ್&zwnj; ಆಗಿರ್ತೀನಿ. ಒಟ್ಟಿನಲ್ಲಿ ಆರೋಗ್ಯಯುತ ಜೀವನವನ್ನು ಮಾಡ್ತಿದ್ದೀನಿ.&lt;/p&gt;&lt;img&gt;&lt;p&gt;ಎರಡು ವರ್ಷಗಳ ಹಿಂದೆ ಅಂಡಮಾನ್&zwnj;ನಲ್ಲಿದ್ದೆ. ಆಗ ಮನಸ್ಸು ಮಾಡಿ ಯಾವಾಗ? ಎಷ್ಟು? ಏನು? ಆಹಾರ ತಗೋಬೇಕು ಎಂದು ರಿಸರ್ಚ್&zwnj; ಮಾಡಿದೆ. ಈ ಹಿಂದೆ ಪಠ್ಯದಲ್ಲಿದ್ದರೂ ಕೂಡ ನಾವು ಸಮತೋಲನ ಆಹಾರದ ಬಗ್ಗೆ ಓದಿ ಸುಮ್ಮನಾಗಿರುತ್ತೇವೆ. ಆ ಜ್ಞಾನವನ್ನು ನಾನು ಈಗ ನನ್ನ ಜೀವನಕ್ಕೆ ಅಳವಡಿಸಿದೆ.&lt;/p&gt;&lt;p&gt;ಸಸ್ಯಾಹಾರಿಯಾಗಿದ್ದು ನನ್ನ ಆಹಾರದಲ್ಲಿ ಬದಲಾವಣೆ ಮಾಡಿಕೊಂಡೆ. ನಿತ್ಯವೂ ನನ್ನ ದೇಹಕ್ಕೆ ಎಷ್ಟು ಕ್ಯಾಲರಿ ಆಹಾರ ಬೇಕು? ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಇದರ ಮಧ್ಯೆ ತಿಂಡಿ ತಿಂದಾಗ ಎಷ್ಟು ಕ್ಯಾಲರಿ ಸೇವನೆ ಮಾಡುತ್ತೇನೆ ಎಂದು ಲೆಕ್ಕ ಹಾಕಿದೆ. ಇದರ ಆಧಾರದ ಮೇಲೆ ಆಹಾರ ಸೇವನೆ ಮಾಡುತ್ತ ಬಂದೆ. ನನ್ನ ದೇಹಕ್ಕೆ 1600 ಕ್ಯಾಲರಿ ಬೇಕು ಎಂದಾಗ, ಅದಕ್ಕಿಂತ ಸ್ವಲ್ಪ ಕಡಿಮೆ ಸೇವನೆ ಮಾಡಿರುತ್ತೇವೆ. ಇದರ ಜೊತೆಗೆ ವ್ಯಾಯಾಮ ಮಾಡಿದಾಗ ಒಂದಿಷ್ಟು ಕ್ಯಾಲರಿ ಬರ್ನ್&zwnj; ಆಗುತ್ತದೆ. ಇದನ್ನು ನಿರಂತರವಾಗಿ ಮಾಡಿಕೊಂಡು ಬಂದಾಗ, ನಮ್ಮ ದೇಹದಲ್ಲಿರುವ ಫ್ಯಾಟ್&zwnj; ಬರ್ನ್&zwnj; ಆಗಿ ಸಣ್ಣ ಆಗುತ್ತೇವೆ. ನಾನು ಜಿಮ್&zwnj;ಗೆ ಹೋಗದೆ, ನಿತ್ಯವೂ 15 ಸಾವಿರದಿಂದ 20 ಸಾವಿರದವರೆಗೆ Steps ವಾಕಿಂಗ್&zwnj; ಮಾಡ್ತೀನಿ. ಇದರಿಂದ ಸರಿಸುಮಾರು 800 ಕ್ಯಾಲರಿ ಬರ್ನ್&zwnj; ಆಗುವುದು. ಇದರ ಜೊತೆಗೆ ನಿತ್ಯವೂ 4 ಲೀಟರ್&zwnj; ನೀರು ಕುಡಿಯುತ್ತೇನೆ.&lt;/p&gt;&lt;p&gt;ನಾನು ಕಡಿಮೆ ತಿಂತೀನಿ, ಆದರೂ ಸಣ್ಣ ಆಗ್ತಿಲ್ಲ ಎಂದು ಕೆಲವರು ಹೇಳೋದುಂಟು. ಒಂದು ಚಾಕೋಲೇಟ್&zwnj; ಸಣ್ಣದಾಗಿ ಕಂಡರೂ ಅದರಲ್ಲಿ ಎಷ್ಟು ಕ್ಯಾಲರಿ ಇರುತ್ತದೆ, ಒಂದು ಚಪಾತಿಯಲ್ಲಿ ಎಷ್ಟು ಕ್ಯಾಲರಿ ಇರುತ್ತದೆ ಎಂದು ಅರಿವು ಇರಬೇಕು. ಆಗ ನಿಜಕ್ಕೂ ನಾವು ನಿಜಕ್ಕೂ ಕಡಿಮೆ ತಿನ್ನುತ್ತಿದ್ದೇವೋ ಅಥವಾ ಹೆಚ್ಚು ತಿನ್ನುತ್ತೇವೆಯೋ ಎಂದು ಗೊತ್ತಾಗುತ್ತದೆ.&lt;/p&gt;&lt;img&gt;&lt;p&gt;ಇಂದು ಸಾಕಷ್ಟು ಕಂಪೆನಿಗಳು ತೂಕ ಇಳಿಕೆ, ತೂಕ ಏರಿಕೆ ಎಂದು ಒಂದಿಷ್ಟು ಪ್ರಾಡಕ್ಟ್&zwnj;ಗಳನ್ನು ಕೊಡುತ್ತವೆ, ಅವುಗಳ ಮೊರೆ ಹೋಗದೆ, ವೇಟ್&zwnj; ಲಾಸ್&zwnj;ನ್ನು ಒಂದು ತಿಂಗಳು ಅಥವಾ ಮೂರು ತಿಂಗಳು ಎಂದು ಸೀಮಿತ ಮಾಡಬಾರದು. ಬದಲಿಗೆ ಇದನ್ನು ನಾವು ಜೀವನದಾದ್ಯಂತ ರೂಢಿ ಮಾಡಿಕೊಂಡು ಹೋಗಬೇಕು. ಅಂದು ಸಣ್ಣ ಆಗು ಎಂದ ಡಾಕ್ಟರ್&zwnj;, ಇಂದು ನನ್ನ ಬಳಿ ಹೇಗೆ ಸಣ್ಣ ಆದೆ ಎಂದು ಟಿಪ್ಸ್&zwnj; ಕೇಳ್ತಾರೆ. ಕೆಲ ಡಾಕ್ಟರ್&zwnj;ಗಳು ಅವರು ಯಾವ ವಿಷಯದಲ್ಲಿ ಅಧ್ಯಯನ ಮಾಡಿರುತ್ತಾರೋ ಅವರಿಗೆ, ಅದರ ಜ್ಞಾನ ಇರುತ್ತದೆ, ಆದರೆ ಸಮತೋಲನ ಆಹಾರದ ಬಗ್ಗೆ ಕೆಲವರಿಗೆ ಗೊತ್ತಿರೋದಿಲ್ಲ.&lt;/p&gt;&lt;p&gt;ಜಿಮ್&zwnj; ಬಿಟ್ಟೆ, ದಪ್ಪ ಆದೆ ಎನ್ನುತ್ತಾರೆ. ಅದು ಜಿಮ್&zwnj; ತಪ್ಪಲ್ಲ. ಇದನ್ನೆಲ್ಲ ಮೂರು ತಿಂಗಳು ಎಂದು ಕೋರ್ಸ್&zwnj; ರೀತಿ ಮಾಡದೆ, ಜೀವನಪೂರ್ತಿ ಲೈಫ್&zwnj;ಸ್ಟೈಲ್&zwnj; ಆಗಿ ರೂಢಿಸಿಕೊಳ್ಳಬೇಕು, ಫಾಲೋ ಮಾಡಬೇಕು.&amp;nbsp;&lt;/p&gt;]]></content:encoded>
            <category>food</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/health-life/life-coach-motivational-speaker-praveen-gudi-weight-loss-diet-and-walking-tips-ghr0m54"/>
        </item>
        <item>
            <title><![CDATA[Gen Z: ಯುವಕ-ಯುವತಿಯರೇ.. ಹೆಚ್ಚುತ್ತಿದೆ ಹೃದಯಾಘಾತ, ದೊಡ್ಡ ತಪ್ಪು ಮಾಡ್ತಿದ್ದೀರಾ; ಈಗಲೇ ಎಚ್ಚುತ್ತುಕೊಳ್ಳಿ!]]></title>
            <link>https://kannada.asianetnews.com/health-life/major-causes-for-heart-attacks-in-young-adults-and-zen-g-reasons-and-ideas-to-avoid/articleshow-i9i64wn</link>
            <guid isPermaLink="true">https://kannada.asianetnews.com/health-life/major-causes-for-heart-attacks-in-young-adults-and-zen-g-reasons-and-ideas-to-avoid/articleshow-i9i64wn</guid>
            <pubDate>Fri, 15 May 2026 11:27:06 +0530</pubDate>
            <description><![CDATA[&lt;p&gt;ಕೇವಲ ವಯಸ್ಸಾದವರಲ್ಲಿ ಮಾತ್ರವಲ್ಲ, ಈಗೀಗ ಯುವಕರಲ್ಲಿಯೂ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಭಾರತದಾದ್ಯಂತ 20, 30 ಹಾಗೂ 40ರ ವಯಸ್ಸಿನವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕಾರಣಗಳು ಹಾಗೂ ಪರಿಹಾರವನ್ನು ಈಗಲೇ ತಿಳಿದುಕೊಳ್ಳಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krn295sha4tv4e33653m44mn,imgname-heart-attack-1778823501617.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯುವಜನತೆಯಲ್ಲಿ ಹೃದಯಾಘಾತಕ್ಕೆ ಕಾರಣಗಳು ಇವು..&lt;/strong&gt;&lt;/p&gt;&lt;p&gt;ಕೇವಲ ವಯಸ್ಸಾದವರಲ್ಲಿ ಮಾತ್ರವಲ್ಲ, ಈಗ ಯುವಕರಲ್ಲಿಯೂ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಭಾರತದಾದ್ಯಂತ 20, 30 ಹಾಗೂ 40ರ ವಯಸ್ಸಿನವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬದಲಾದ ಜೀವನಶೈಲಿಯೇ ಯುವಕರಲ್ಲಿ ಹೃದಯಾಘಾತ ಹೆಚ್ಚಲು ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇತರ ದೇಶಗಳ ಜನರಿಗೆ ಹೋಲಿಸಿದರೆ ಭಾರತೀಯರಿಗೆ ಆನುವಂಶಿಕವಾಗಿ ಹೃದ್ರೋಗದ ಅಪಾಯ ಹೆಚ್ಚು. ಹಾಗಾಗಿ, ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ಹೃದಯದ ತಪಾಸಣೆ ಮಾಡಿಸುವುದು ಉತ್ತಮ. 30 ವರ್ಷ ದಾಟಿದವರು ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು.&lt;/p&gt;&lt;p&gt;ಇತರ ದೇಶಗಳ ಜನರಿಗೆ ಹೋಲಿಸಿದರೆ ಭಾರತೀಯರಿಗೆ ಆನುವಂಶಿಕವಾಗಿ ಹೃದ್ರೋಗದ ಅಪಾಯ ಹೆಚ್ಚು. ಹಾಗಾಗಿ, ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ಹೃದಯದ ತಪಾಸಣೆ ಮಾಡಿಸುವುದು ಉತ್ತಮ. 30 ವರ್ಷ ದಾಟಿದವರು ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು.&lt;/p&gt;&lt;p&gt;&lt;img&gt;&lt;/p&gt;&lt;h2&gt;ನಿದ್ರಾಹೀನತೆ ಹೃದಯದ ಆರೋಗ್ಯಕ್ಕೆ ಅಪಾಯಕಾರಿ&lt;/h2&gt;&lt;p&gt;ನಿದ್ರಾಹೀನತೆ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಿನಕ್ಕೆ 8 ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು ಎಂದೇನಿಲ್ಲ. 4 ಗಂಟೆಗಳ ಕಾಲವಾದರೂ ಉತ್ತಮ ನಿದ್ದೆ ಮಾಡಿದರೆ ದೇಹವು ಚೇತರಿಸಿಕೊಳ್ಳುತ್ತದೆ. ರಾತ್ರಿ ಊಟವಾದ 2 ಗಂಟೆಗಳ ನಂತರವೇ ಮಲಗುವುದು ಉತ್ತಮ.&lt;/p&gt;&lt;p&gt;&lt;img&gt;&lt;/p&gt;&lt;p&gt;ಪ್ರತಿದಿನ ಸ್ವಲ್ಪ ಸಮಯದವರೆಗೆ ಮಧ್ಯಮ ಪ್ರಮಾಣದ ವ್ಯಾಯಾಮ ಮಾಡಿದರೆ ಸಾಕು. ನಿಯಮಿತ ವ್ಯಾಯಾಮವು ಹೃದಯ ಸ್ನಾಯುಗಳನ್ನು ಬಲಪಡಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಪ್ರತಿ ಬಡಿತದಲ್ಲೂ ಹೆಚ್ಚು ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಸಹಾಯ ಮಾಡುತ್ತದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ನಿಕೋಟಿನ್ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸುತ್ತದೆ. ಯುವಕರಲ್ಲಿ ಸಂಭವಿಸುವ ಸುಮಾರು ಶೇ. 36ರಷ್ಟು ಹೃದಯಾಘಾತಗಳಿಗೆ ಧೂಮಪಾನವೇ ಪ್ರಮುಖ ಕಾರಣವಾಗಿದೆ.&lt;/p&gt;&lt;h3&gt;ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆ&lt;/h3&gt;&lt;p&gt;&lt;img&gt;&lt;/p&gt;&lt;p&gt;ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆಯು ಬೊಜ್ಜು, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್&zwnj;ಗೆ ಕಾರಣವಾಗುತ್ತದೆ. ಕರಿದ ಆಹಾರಗಳು, ಪ್ಯಾಕ್ ಮಾಡಿದ ಕೇಕ್&zwnj;ಗಳು ಮತ್ತು ಬೇಕರಿ ಪದಾರ್ಥಗಳಲ್ಲಿ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್&zwnj;ಗಳು ಅಧಿಕವಾಗಿರುತ್ತವೆ. ಇವು ಎಲ್&zwnj;ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ, ಅಥೆರೋಸ್ಕ್ಲೆರೋಸಿಸ್&zwnj;ಗೆ (ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹ) ಕಾರಣವಾಗುತ್ತವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/major-causes-for-heart-attacks-in-young-adults-and-zen-g-reasons-and-ideas-to-avoid/articleshow-i9i64wn"/>
        </item>
        <item>
            <title><![CDATA[ಅಡುಗೆಮನೆಯಲ್ಲಿ ನೀರಿನಲ್ಲೇ ಬೆಳೆಸಬಹುದಾದ 6 ಔಷಧೀಯ ಸಸ್ಯಗಳಿವು]]></title>
            <link>https://kannada.asianetnews.com/webstories/kitchen/six-medicinal-herbs-you-can-easily-grow-in-water-at-home-kitchen-opnefst</link>
            <guid isPermaLink="true">https://kannada.asianetnews.com/webstories/kitchen/six-medicinal-herbs-you-can-easily-grow-in-water-at-home-kitchen-opnefst</guid>
            <pubDate>Fri, 15 May 2026 17:58:21 +0530</pubDate>
            <description><![CDATA[ಔಷಧೀಯ ಸಸ್ಯಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇವು ಅಡುಗೆಯ ರುಚಿಯನ್ನು ಹೆಚ್ಚಿಸುತ್ತವೆ. ಅಡುಗೆಮನೆಯಲ್ಲಿ ಕಡಿಮೆ ಆರೈಕೆಯಲ್ಲಿ ಸುಲಭವಾಗಿ ಬೆಳೆಸಬಹುದಾದ ಕೆಲವು ಸಸ್ಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k0rze7dhj4h50adkvh11wnrt,imgname-fotojet--16--1753184935345.jpg" type="image/jpeg" height="390" width="690"/>
            <category>food</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/kitchen/six-medicinal-herbs-you-can-easily-grow-in-water-at-home-kitchen-opnefst"/>
        </item>
        <item>
            <title><![CDATA[Exclu Interview: ಮಗು ಆದ್ಮೇಲೆ ತೂಕ ಇಳಿಸ್ಕೊಂಡು ಮತ್ತೆ ಮೊದಲಿನಂತಾದ Lakshmi Baramma Serial Kavitha Gowda]]></title>
            <link>https://kannada.asianetnews.com/gallery/tv-talk/lakshmi-baramma-serial-kavitha-gowda-weight-loss-journey-after-baby-birth-qew3www</link>
            <guid isPermaLink="true">https://kannada.asianetnews.com/gallery/tv-talk/lakshmi-baramma-serial-kavitha-gowda-weight-loss-journey-after-baby-birth-qew3www</guid>
            <pubDate>Sun, 17 May 2026 15:30:58 +0530</pubDate>
            <description><![CDATA[&lt;p&gt;Actress Kavitha Gowda: ಲಕ್ಷ್ಮೀ ಬಾರಮ್ಮ, ವಿದ್ಯಾ ವಿನಾಯಕ ಧಾರಾವಾಹಿ ನಟಿ ಕವಿತಾ ಗೌಡ, ತಾಯ್ತನದ ಖುಷಿಯಲ್ಲಿದ್ದಾನೆ. ಮನೆಗೆ ಮುದ್ದಾದ ಮಗ ಬಂದಿದಾನೆ, ಇದರ ಜೊತೆಗೆ ಫಿಟ್&zwnj;ನೆಸ್&zwnj; ಕಾಪಾಡಿಕೊಳ್ಳುವತ್ತ ಗಮನ ಕೊಡುತ್ತಿದ್ದಾರೆ. ಈ ಬಗ್ಗೆ ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್ ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krtnnm5aqfbwwj85kjszqtre,imgname-new-project---2026-05-17t151730.599-1779011604650.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Kavitha Gowda: ಲಕ್ಷ್ಮೀ ಬಾರಮ್ಮ, ವಿದ್ಯಾ ವಿನಾಯಕ ಧಾರಾವಾಹಿ ನಟಿ ಕವಿತಾ ಗೌಡ, ತಾಯ್ತನದ ಖುಷಿಯಲ್ಲಿದ್ದಾನೆ. ಮನೆಗೆ ಮುದ್ದಾದ ಮಗ ಬಂದಿದಾನೆ, ಇದರ ಜೊತೆಗೆ ಫಿಟ್&zwnj;ನೆಸ್&zwnj; ಕಾಪಾಡಿಕೊಳ್ಳುವತ್ತ ಗಮನ ಕೊಡುತ್ತಿದ್ದಾರೆ. ಈ ಬಗ್ಗೆ ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್ ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಳೆದ ಎಂಟು ತಿಂಗಳಿನಿಂದ ಅವರು ಡಯೆಟ್&zwnj;, ಫಿಟ್&zwnj;ನೆಸ್&zwnj; ಕಡೆಗೆ ಇನ್ನಷ್ಟು ಗಮನ ಕೊಡುತ್ತಿದ್ದಾರೆ. ಈ ವೇಳೆ ಅವರು 8kg ತೂಕ ಇಳಿಸಿಕೊಂಡಿದ್ದಾರಂತೆ. ಫಿಟ್&zwnj;ನೆಸ್&zwnj;, ವರ್ಕೌಟ್&zwnj;, ಡಯೆಟ್&zwnj;, ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;p&gt;ತಾಯಿಯಾದ್ಮೇಲೆ ದೇಹದಲ್ಲಿ ಒಂದೇ ಅಲ್ಲದೆ, ಮಹಿಳೆಯ ಜೀವನವೇ ಬದಲಾಗುತ್ತದೆ. ಒಂದು ಮಗು ಬಂದರೆ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆಯಾದರೆ, ತಾಯಿಗೆ ಮಾತ್ರ ಅವಳ ಬದುಕೇ ಬದಲಾಗುತ್ತದೆ. ಈಗ ನನಗೆ ಮಗನಿದ್ದು, ನನ್ನ ಪತಿ ಚಂದನ್&zwnj; ಕುಮಾರ್&zwnj;, ಮನೆಯವರು ಸಹಾಯ ಮಾಡೋದರಿಂದ ಮಗು ನೋಡಿಕೊಳ್ಳೋದು ಅಷ್ಟು ಕಷ್ಟ ಆಗುತ್ತಿಲ್ಲ. ಆದರೆ ತಾಯಿಯಾಗಿ ಅವನಿಗೆ ಎಷ್ಟು ಆದ್ಯತೆ ಕೊಡಬೇಕೋ ಅಷ್ಟನ್ನು ನಾನು ಕೊಡ್ತಿದ್ದೀನಿ. ಮಗನ ವಿಚಾರದಲ್ಲಿ ಕೆಲ ವಿಷಯಗಳಿವೆ. ಅವನಿಗೆ ಬೆಳಿಗ್ಗೆ ತಿಂಡಿ ನಾನೇ ಮಾಡಿಸಬೇಕು ಎಂದಿದೆ, ಅದಕ್ಕೆ ನಾನೇ ಇರಬೇಕು. ಉಳಿದ ವಿಷಯಗಳನ್ನು ಮನೆಯವರು ನೋಡಿಕೊಳ್ತಾರೆ.&lt;/p&gt;&lt;img&gt;&lt;p&gt;ಈ ಹಿಂದೆ ನನಗೆ ಕೋಪ ಬರುತ್ತಿರಲಿಲ್ಲ. ಯಾರಾದರೂ ಏನಾದರೂ ಹೇಳಿಕೊಳ್ಳಲಿ? ಏನಾದರೂ ಮಾಡಿಕೊಳ್ಳಲಿ ಎಂದುಕೊಳ್ತಿದ್ದೆ. ಮಗು ಆದ್ಮೇಲೆ ಯಾರು ಏನು ಹೇಳಿದರೂ ಕೂಡ, ಅವರಿಗೆ ಏನಾದರೂ ಹೇಳಿ ಬೇಸರ ಮಾಡೋದು ಬೇಡ, ನನಗೂ ಬೇಸರ ಮಾಡಿಕೊಳ್ಳೋದು ಬೇಡ ಎಂದುಕೊಂಡು ಸುಮ್ಮನಾಗಿರುತ್ತೇನೆ. ಫಂಕ್ಷನ್&zwnj; ಇರಲೀ, ಬೇರೆ ಕೆಲಸ ಇರಲಿ, ಎಲ್ಲೇ ಹೋಗಬೇಕು ಎಂದ್ರೂ ಕೂಡ, ಈ ಟೈಮ್&zwnj;ನಲ್ಲಿ ಬರೋಕೆ ಆಗೋದಿಲ್ಲ,ಆ ಟೈಮ್&zwnj;ನಲ್ಲಿ ಬರೋಕೆ ಆಗೋದಿಲ್ಲ ಎಂದು ಮೊದಲೇ ತಿಳಿಸಿರುತ್ತೇನೆ. ಕೆಲವರು ಅರ್ಥ ಮಾಡಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಪ್ರಗ್ನೆಂಟ್&zwnj; ಆದಾಗ, ತಾಯಿ ಆದಾಗ ಮಹಿಳೆಗೆ ಮಾನಸಿಕವಾಗಿ, ದೈಹಿಕವಾಗಿ ಬದಲಾವಣೆ ಆಗುತ್ತದೆ. ಇದನ್ನು ಗಂಡ ಅಥವಾ ಪುರುಷರು ಅರ್ಥ ಮಾಡಿಕೊಳ್ಳಬೇಕು. ಮಹಿಳೆಗೆ ಬೆನ್ನು ನೋವು ಬಂತು, ಕಾಲು ನೋವು ಬಂತು ಎಂದಾಗ ಡ್ರಾಮಾ ಮಾಡ್ತಾರೆ ಎಂದು ಪುರುಷರು ಎಂದುಕೊಳ್ಳೋದು ತಪ್ಪು. ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಸ್ಥಿತಿ ಬದಲಾಗುತ್ತದೆ ಎಂದು ಪುರುಷರು ಅರ್ಥಮಾಡಿಕೊಳ್ಳಬೇಕು. ನನ್ನ ಮಗನಿಗೆ ನಾನು ಇದನ್ನೆಲ್ಲ ಕಲಿಸುತ್ತೇನೆ, ಇಂದಿನ ಮಹಿಳೆಯರು ಕೂಡ ಮಕ್ಕಳಿಗೆ ಇದನ್ನೆಲ್ಲ ಕಲಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ.&lt;/p&gt;&lt;img&gt;&lt;p&gt;ನನಗೆ ಪ್ರಗ್ನೆನ್ಸಿ ಟೈಮ್&zwnj;ನಲ್ಲಿ ಅದನ್ನು ತಿನ್ನಬೇಕು, ಇದನ್ನು ತಿನ್ನಬೇಕು ಎಂದು ಅನಿಸಿರಲಿಲ್ಲ. ಮೊದಲೇ ಫಿಟ್&zwnj;ನೆಸ್&zwnj; ಕಡೆಗೆ ಗಮನ ಕೊಟ್ಟಿದ್ದಕ್ಕೆ ಗರ್ಭಿಣಿಯಾದಾಗ, ನಂಗೆ ಬೆನ್ನು ನೋವು, ಕಾಲು ನೋವು ಅಂತ ಬಂದಿರಲಿಲ್ಲ. ಮಗು ಡೆಲಿವರಿಗೆ ಆದ್ಮೇಲೆ ಸಮಸ್ಯೆಯಾದರೂ ಕೂಡ, ಅದಕ್ಕೆ ಬೇಕಾದ ಆರೈಕೆ ಮಾಡಿಕೊಂಡೆ. ಕ್ರೇವಿಂಗ್ಸ್&zwnj; ಬಂದಿದೆ ಎಂದರೆ ನಿಮ್ಮಲ್ಲಿ ಏನಾದರೊಂದು ಕೊರತೆ ಇರುತ್ತದೆ ಎಂದರ್ಥ. ಆಗ ಡಾಕ್ಟರ್&zwnj; ಬಳಿ ಕೇಳಿದಾಗ ಏನು ಸಮಸ್ಯೆ ಆಗಿದೆ ಎಂದು ಗೊತ್ತಾಗುತ್ತದೆ. ಇಂದು ಇಂಟರ್&zwnj;ನೆಟ್&zwnj;ನಲ್ಲಿ ಕೂಡ ಸಾಕಷ್ಟು ಮಾಹಿತಿ ಸಿಗುತ್ತಿದೆ.&lt;/p&gt;&lt;img&gt;&lt;p&gt;ಅನ್ನದ ಜೊತೆಗೆ ತರಕಾರಿ, ಪ್ರೋಟೀನ್&zwnj; ಇರಬೇಕು. ಕೇವಲ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರೋಟೀನ್&zwnj; ಮೊದಲು ತಿಂದು, ಆಮೇಲೆ ತರಕಾರಿ ತಿನ್ನೇಕು, ಇದಾದ ಬಳಿಕ ಅನ್ನ, ಚಪಾತಿ, ರೊಟ್ಟಿ ತಿಂದರೆ ಊಟ ಬ್ಯಾಲೆನ್ಸ್&zwnj; ಆಗುತ್ತದೆ. ಸ್ವೀಟ್&zwnj; ತಿನ್ನಬೇಕು ಎನಿಸಿದಾಗ, ಇದಕ್ಕೆ ಬದಲಾಗಿ ಏನು ತಿನ್ನಬಹುದು ಎಂದು ಯೋಚಿಸಿ. ಹೀಗೆ ಎಣ್ಣೆ ತಿಂಡಿ, ಸ್ವೀಟ್&zwnj; ಅಥವಾ ಆರೋಗ್ಯಕ್ಕೆ ಒಳ್ಳೆಯದಲ್ಲದ ಆಹಾರಗಳನ್ನು ತ್ಯಜಿಸಿ.&lt;/p&gt;&lt;p&gt;ಯಾವಾಗ ಎಷ್ಟು? ಏನು ತಿನ್ನಬೇಕು ಎನ್ನೋದು ಡಯೆಟ್.&zwnj; ಇದನ್ನು ಪಾಲಿಸಬೇಕು.&amp;nbsp;&lt;/p&gt;&lt;img&gt;&lt;p&gt;ವರ್ಕೌಟ್&zwnj; ಮಾಡಬೇಕು ಎಂದು ಏನೇನೋ ಮಾಡಿದರೆ ಪ್ರಯೋಜನ ಇಲ್ಲ. ದಪ್ಪ ಇದ್ದು ಯಾವುದ್ಯಾವುದೋ ವರ್ಕೌಟ್&zwnj; ಮಾಡಿದರೆ, ಆಮೇಲೆ ಮೊಣಕಾಲು ನೋವು ಬರುತ್ತದೆ, ಎಲುಬಿಗೆ ಸಮಸ್ಯೆ ಆಗುತ್ತದೆ. ತಾಯಿಯಾದ್ಮೇಲೆ ಮಹಿಳೆಗೆ ಯಾವ ರೀತಿ ವರ್ಕೌಟ್&zwnj; ಮುಖ್ಯ ಆಗುತ್ತದೆ ಎಂದು ತಿಳಿದುಕೊಳ್ಳಬೇಕು. ಹೀಗಾಗಿ ಡಾಕ್ಟರ್&zwnj; ಸಲಹೆ, ಟ್ರೇನರ್&zwnj; ಸಲಹೆ ಮುಖ್ಯ ಆಗುತ್ತದೆ.&lt;/p&gt;]]></content:encoded>
            <category>food</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/lakshmi-baramma-serial-kavitha-gowda-weight-loss-journey-after-baby-birth-qew3www"/>
        </item>
        <item>
            <title><![CDATA[ಪ್ರತಿದಿನ ಮಾವಿನಹಣ್ಣು ತಿಂದರೆ ದಪ್ಪ ಆಗ್ತಾರಾ? ಅಸಲಿ ಸತ್ಯ ಎಲ್ರಿಗೂ ಗೊತ್ತಿಲ್ಲ!]]></title>
            <link>https://kannada.asianetnews.com/webstories/food/do-mangoes-cause-weight-gain-facts-vs-myths-health-tips-vi34m7n</link>
            <guid isPermaLink="true">https://kannada.asianetnews.com/webstories/food/do-mangoes-cause-weight-gain-facts-vs-myths-health-tips-vi34m7n</guid>
            <pubDate>Sun, 17 May 2026 16:35:44 +0530</pubDate>
            <description><![CDATA[ಬೇಸಿಗೆ ಅಂದ್ರೆನೇ ಮಾವಿನ ಹಣ್ಣಿನ ಸೀಸನ್. ಮಾವನ್ನು ಇಷ್ಟಪಡದವರೇ ಇಲ್ಲ. ಈ ಸೀಸನ್&zwnj;ನಲ್ಲಿ ಮಾವಿನ ಹಣ್ಣು ತಿನ್ನದೇ ಇದ್ದರೆ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಆದರೆ, 'ಮಾವಿನ ಹಣ್ಣು ತಿಂದರೆ ದಪ್ಪ ಆಗ್ತೀವಿ' ಅನ್ನೋ ಭಯ ಹಲವರಲ್ಲಿದೆ. ಇದರಲ್ಲಿ ನಿಜ ಎಷ್ಟು? ಸುಳ್ಳೆಷ್ಟು? ಇಲ್ಲಿದೆ ಮಾಹಿತಿ.]]></description>
            <media:content url="https://static.asianetnews.com/images/w-1280,h-720,format-jpg,imgid-01jr9qz8at3zyqsmhnygqrw7m1,imgname-mango-1744083853658.jpg" type="image/jpeg" height="390" width="690"/>
            <category>food</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/food/do-mangoes-cause-weight-gain-facts-vs-myths-health-tips-vi34m7n"/>
        </item>
        <item>
            <title><![CDATA[Kidney Health: ಕಿಡ್ನಿ ಆರೋಗ್ಯವಾಗಿರಬೇಕಾ? ವೈದ್ಯರು ಹೇಳುವ ಈ ಸರಳ ಹ್ಯಾಬಿಟ್ಸ್ ನಿಮ್ಮ ಜೀವ ಉಳಿಸಬಹುದು!]]></title>
            <link>https://kannada.asianetnews.com/gallery/health-life/protect-your-kidneys-7-daily-habits-for-better-renal-health-rav-yrk38po</link>
            <guid isPermaLink="true">https://kannada.asianetnews.com/gallery/health-life/protect-your-kidneys-7-daily-habits-for-better-renal-health-rav-yrk38po</guid>
            <pubDate>Fri, 15 May 2026 11:14:02 +0530</pubDate>
            <description><![CDATA[ಮನುಷ್ಯನ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕುವ ಪ್ರಮುಖ ಅಂಗವೇ ಕಿಡ್ನಿ. ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕಿಡ್ನಿ ಆರೋಗ್ಯಕ್ಕಾಗಿ ನಾವು ಪಾಲಿಸಬೇಕಾದ ಕೆಲವು ಸರಳ ಅಭ್ಯಾಸಗಳ ಬಗ್ಗೆ ಇಲ್ಲಿ ನೋಡೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01k5t8496b5hnfqbkw7zebadks,imgname-fotojet-1758596310219.jpg" type="image/jpeg" height="390" width="690"/>
            <content:encoded><![CDATA[ಮನುಷ್ಯನ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕುವ ಪ್ರಮುಖ ಅಂಗವೇ ಕಿಡ್ನಿ. ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕಿಡ್ನಿ ಆರೋಗ್ಯಕ್ಕಾಗಿ ನಾವು ಪಾಲಿಸಬೇಕಾದ ಕೆಲವು ಸರಳ ಅಭ್ಯಾಸಗಳ ಬಗ್ಗೆ ಇಲ್ಲಿ ನೋಡೋಣ.&lt;img&gt;ಕಿಡ್ನಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಏನು ಮಾಡಬೇಕು ಎಂಬುದನ್ನು ಇಲ್ಲಿ ನೋಡೋಣ.&lt;img&gt;ಕಿಡ್ನಿಗಳು ಸರಿಯಾಗಿ ಕೆಲಸ ಮಾಡಲು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಬರುವ ಅಪಾಯ ಕಡಿಮೆಯಾಗುತ್ತದೆ. ಜೊತೆಗೆ, ಇದು ಕಿಡ್ನಿಗಳಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.&lt;img&gt;ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್&zwnj;ಗಳನ್ನು ಒಳಗೊಂಡ ಸಮತೋಲಿತ ಆಹಾರವನ್ನು ಸೇವಿಸಿ. ಸಂಸ್ಕರಿಸಿದ ಆಹಾರಗಳು ಮತ್ತು ಅನಾರೋಗ್ಯಕರ ಕೊಬ್ಬು ಇರುವ ಆಹಾರಗಳನ್ನು ನಿಮ್ಮ ಡಯಟ್&zwnj;ನಿಂದ ದೂರವಿಡಿ.&lt;img&gt;ಆಹಾರದಲ್ಲಿ ಉಪ್ಪು ಮತ್ತು ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಯಾಕೆಂದರೆ, ಉಪ್ಪು ಮತ್ತು ಸಕ್ಕರೆಯ ಅತಿಯಾದ ಸೇವನೆಯು ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.&lt;img&gt;ಧೂಮಪಾನವು ದೇಹದಲ್ಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದು ರಕ್ತದ ಹರಿವನ್ನು ನಿಧಾನಗೊಳಿಸಿ, ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು. ಆದ್ದರಿಂದ, ಧೂಮಪಾನವನ್ನು ಸಂಪೂರ್ಣವಾಗಿ ಬಿಟ್ಟುಬಿಡಿ.&lt;img&gt;ಮದ್ಯಪಾನವನ್ನು ತ್ಯಜಿಸುವುದು ಕಿಡ್ನಿಗಳ ಆರೋಗ್ಯಕ್ಕೆ ಮತ್ತು ದೇಹದ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.&lt;img&gt;ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಕೆಲವೊಮ್ಮೆ ಕಿಡ್ನಿ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ.&lt;img&gt;ಅತಿಯಾದ ತೂಕ ಹೊಂದಿರುವವರಲ್ಲಿ ಕಿಡ್ನಿ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚು. ಆದ್ದರಿಂದ, ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.&lt;img&gt;ಪ್ರತಿದಿನ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ವ್ಯಾಯಾಮವು ಕಿಡ್ನಿಗಳ ಆರೋಗ್ಯಕ್ಕೆ ಪ್ರಯೋಜನಕಾರಿ. ಜೊತೆಗೆ, ಇದು ದೇಹದ ಒಟ್ಟಾರೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.]]></content:encoded>
            <category>food</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/health-life/protect-your-kidneys-7-daily-habits-for-better-renal-health-rav-yrk38po"/>
        </item>
    </channel>
</rss>
