<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 19 Jul 2026 20:03:29 +0530</lastBuildDate>
        <atom:link href="https://kannada.asianetnews.com/rss/food" rel="self" type="application/rss+xml"/>
        <item>
            <title><![CDATA['ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ' ಎಂಬ ಸೋಷಿಯಲ್ ಮೀಡಿಯಾ ಪಾಠ ಎಷ್ಟು ಸರಿ? ತಜ್ಞರು ಹೇಳೋದೇನು?]]></title>
            <link>https://kannada.asianetnews.com/health-life/is-the-social-media-trend-of-drinking-liters-of-water-every-morning-actually-healthy-and-what-experts-think/articleshow-0mmrmpl</link>
            <guid isPermaLink="true">https://kannada.asianetnews.com/health-life/is-the-social-media-trend-of-drinking-liters-of-water-every-morning-actually-healthy-and-what-experts-think/articleshow-0mmrmpl</guid>
            <pubDate>Fri, 17 Jul 2026 14:23:20 +0530</pubDate>
            <description><![CDATA[&lt;p&gt;ಸೋಶಿಯಲ್ ಮೀಡಿಯಾದಲ್ಲಿ ಕೆಲವರು &quot;ಬೆಳಗ್ಗೆ ನೀರು ಕುಡಿದರೆ ಕ್ಯಾನ್ಸರ್ ವಾಸಿಯಾಗುತ್ತದೆ, ಒಂದೇ ವಾರದಲ್ಲಿ 10 ಕೆಜಿ ತೂಕ ಇಳಿಯುತ್ತದೆ&quot; ಅಂತ ಏನೇನೋ ಹೇಳ್ತಾರೆ. ಆದರೆ, ಅದರಲ್ಲಿ ಸತ್ಯ ಎಷ್ಟು? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kh9659241e6zvnz9k891hh5y,imgname-drinking-water-1770908722244.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯೋದು ಮ್ಯಾಜಿಕ್ ಡ್ರಿಂಕಾ ಅಥವಾ ಬರಿ ಸೋಶಿಯಲ್ ಮೀಡಿಯಾ ಟ್ರೆಂಡಾ? ಇಲ್ಲಿದೆ ಫುಲ್ ಡಿಟೇಲ್ಸ್!&lt;/strong&gt;&lt;/p&gt;&lt;p&gt;Water Drinking Tips: ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಫೋನ್ ಚಾರ್ಜ್ ಮಾಡ್ತೀವೋ ಇಲ್ಲವೋ ಗೊತ್ತಿಲ್ಲ, ಆದರೆ ನಮ್ಮ ಬಾಡಿಯನ್ನು ಮಾತ್ರ 'ಹೈಡ್ರೇಟ್' ಮಾಡಲೇಬೇಕು ಅನ್ನೋ ಕ್ರೇಜ್ ಎಲ್ಲೆಡೆ ಶುರುವಾಗಿದೆ. ಇನ್ಸ್ಟಾಗ್ರಾಮ್ ರೀಲ್ಸ್ ಇರಲಿ, ವಾಟ್ಸಾಪ್ ಯುನಿವರ್ಸಿಟಿ ಇರಲಿ, &quot;ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ನಿಮ್ಮ ಆಯಸ್ಸು ನೂರು ವರ್ಷ&quot; ಅನ್ನೋ ಮಾತುಗಳು ಗಾಳಿಗಿಂತ ವೇಗವಾಗಿ ಹರಡುತ್ತಿವೆ. ಆದರೆ, ನಿಜಕ್ಕೂ ಈ 'ಜಲ ಚಿಕಿತ್ಸೆ' ನಮ್ಮ ದೇಹಕ್ಕೆ ಮಾಡುವ ಮ್ಯಾಜಿಕ್ ಏನು? ಅಥವಾ ಇದು ಕೇವಲ ಗಾಳಿ ಸುದ್ದಿಯೇ? ಈ ಬಗ್ಗೆ ವೈದ್ಯರು ಹೇಳೋ ಸೀಕ್ರೆಟ್ ಇಲ್ಲಿದೆ ನೋಡಿ!&lt;/p&gt;&lt;p&gt;ದೇಹವೆಂಬ ಇಂಜಿನ್ ಗೆ 'ವಾಟರ್ ಸರ್ವಿಸ್'!&lt;/p&gt;&lt;p&gt;ನೋಡಿ, ನಾವು ರಾತ್ರಿ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡ್ತೀವಿ. ಆ ಸಮಯದಲ್ಲಿ ನಮ್ಮ ದೇಹಕ್ಕೆ ಒಂದು ಹನಿ ನೀರು ಕೂಡ ಸಿಗೋದಿಲ್ಲ. ಅಂದ್ರೆ, ಬೆಳಗ್ಗೆ ಏಳುವಾಗ ನಮ್ಮ ಬಾಡಿ ಒಂದು ರೀತಿ 'ಡ್ರೈ' ಆಗಿರುತ್ತೆ. ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ನೀರು ಕುಡಿಯೋದು ಅಂದ್ರೆ, ಆರಿ ಹೋಗಿರೋ ಗಿಡಕ್ಕೆ ನೀರು ಸುರಿದಂತೆ! ಇದು ನಿಮ್ಮ ದೇಹಕ್ಕೆ ತಕ್ಷಣ ಚೈತನ್ಯ ಕೊಡುತ್ತೆ ಮತ್ತು ರಾತ್ರಿಯಿಡೀ ಮಲಗಿದ್ದ ನಿಮ್ಮ ಅಂಗಾಂಗಗಳಿಗೆ &quot;ಹೇ ಎದ್ದೇಳಿ, ಕೆಲಸ ಶುರು ಮಾಡೋಣ&quot; ಅಂತ ಅಲಾರಾಂ ಹೊಡೆದಂತೆ ಕೆಲಸ ಮಾಡುತ್ತೆ.&lt;/p&gt;&lt;h2&gt;ಜೀರ್ಣಕ್ರಿಯೆಗೆ ನೀರೇ ಬಾಸ್!&lt;/h2&gt;&lt;p&gt;ಹಲವರು ಬೆಳಗ್ಗೆ ಬಾತ್&zwnj;ರೂಮ್&zwnj;ನಲ್ಲಿ ಗಂಟೆಗಟ್ಟಲೆ ಕಷ್ಟಪಡೋದನ್ನ ನಾವು ನೋಡ್ತೀವಿ. ಅಂತಹವರಿಗೆ ಈ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯೋ ಅಭ್ಯಾಸ ಒಂದು ರೀತಿ 'ಲಬ್ರಿಕೆಂಟ್' ಇದ್ದಂತೆ. ಇದು ಕರುಳಿನ ಚಲನೆಯನ್ನು ಸುಗಮಗೊಳಿಸಿ, ಮಲಬದ್ಧತೆ ಅನ್ನೋ ವಿಲನ್&zwnj;ನನ್ನು ಕಿತ್ತೊಗೆಯಲು ಸಹಾಯ ಮಾಡುತ್ತೆ. ನಿಮ್ಮ ಹೊಟ್ಟೆ ಕ್ಲೀನ್ ಆಗಿದ್ರೆ, ಇಡೀ ದಿನ ನಿಮ್ಮ ಮೂಡ್ ಕೂಡ ಫ್ರೆಶ್ ಆಗಿರುತ್ತೆ ಅಲ್ವಾ?&lt;/p&gt;&lt;p&gt;ವೈರಲ್ ಸುಳ್ಳುಗಳಿಗೆ ಬೀಳಬೇಡಿ!&lt;/p&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ಕೆಲವರು &quot;ಬೆಳಗ್ಗೆ ನೀರು ಕುಡಿದರೆ ಕ್ಯಾನ್ಸರ್ ವಾಸಿಯಾಗುತ್ತದೆ, ಒಂದೇ ವಾರದಲ್ಲಿ 10 ಕೆಜಿ ತೂಕ ಇಳಿಯುತ್ತದೆ&quot; ಅಂತ ಏನೇನೋ ಹೇಳ್ತಾರೆ. ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಎಷ್ಟು ನಿಜವೋ, ಅದು ಎಲ್ಲಾ ರೋಗಗಳಿಗೂ 'ರಾಮಬಾಣ' ಅಲ್ಲ ಅನ್ನೋದು ಕೂಡ ಅಷ್ಟೇ ಸತ್ಯ. ಇದು ಕೇವಲ ಆರೋಗ್ಯಕರ ಜೀವನಶೈಲಿಯ ಒಂದು ಭಾಗವಷ್ಟೇ ಹೊರತು, ಇದೊಂದೇ ಮ್ಯಾಜಿಕ್ ಮಾಡೋದಿಲ್ಲ ಅಂತ ವೈದ್ಯರು ಎಚ್ಚರಿಸುತ್ತಾರೆ.&lt;/p&gt;&lt;h3&gt;ಯಾರಿಗೆ ಡೇಂಜರ್?&lt;/h3&gt;&lt;p&gt;ಎಲ್ಲರೂ ಲೋಟಗಟ್ಟಲೆ ನೀರು ಕುಡಿಯಬಾರದು! ಮುಖ್ಯವಾಗಿ ಕಿಡ್ನಿ ಸಮಸ್ಯೆ ಇರೋರು ಅಥವಾ ಹಾರ್ಟ್ ಪ್ರಾಬ್ಲಮ್ ಇರೋರು ವೈದ್ಯರನ್ನ ಕೇಳದೆ ನೀರು ಕುಡಿಯೋ ಸಾಹಸ ಮಾಡಬೇಡಿ. ಯಾಕಂದ್ರೆ, ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಜಾಸ್ತಿಯಾದ್ರೆ ಆರೋಗ್ಯಕ್ಕೆ ಅದು ಪೂರಕ ಆಗುವ ಬದಲು ಮಾರಕ ಆಗಬಹುದು!&lt;/p&gt;&lt;p&gt;ದಿನಚರಿ ಹೇಗಿರಲಿ?&lt;/p&gt;&lt;p&gt;ಬೆಳಗ್ಗೆ ಎದ್ದ ತಕ್ಷಣ 1 ಅಥವಾ 2 ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಅದಾದ ಮೇಲೆ ಒಂದು 20 ನಿಮಿಷ ವಾಕಿಂಗ್ ಅಥವಾ ವ್ಯಾಯಾಮ ಮಾಡಿ. ಆಮೇಲೆ ಒಂದು ಪೌಷ್ಟಿಕವಾದ ತಿಂಡಿ ತಿಂದ್ರೆ, ನೀವು ಆ ದಿನದ 'ಸೂಪರ್ ಸ್ಟಾರ್'!&lt;/p&gt;&lt;p&gt;ಒಟ್ಟಿನಲ್ಲಿ, ನೀರು ಕುಡಿಯೋದು ಒಳ್ಳೆಯ ಅಭ್ಯಾಸವೇ. ಆದರೆ ಅದನ್ನು 'ಫ್ಯಾಷನ್' ಅಥವಾ 'ಮ್ಯಾಜಿಕ್' ಅಂತ ಅಂದುಕೊಳ್ಳದೆ, ದೇಹದ ಅವಶ್ಯಕತೆ ಅಂತ ಭಾವಿಸಿ ಪಾಲಿಸೋದು ಜಾಣತನ. ಪ್ರತಿಯೊಬ್ಬರ ದೇಹವೂ ವಿಭಿನ್ನ. ಆದ್ದರಿಂದ ದೇಹದ ಅಗತ್ಯಕ್ಕೆ ತಕ್ಕಂತೆ ಬಾಯಾರಿಕೆ ಆದಾಗ ನೀರು ಕುಡಿಯುವುದು ಒಳ್ಳೆಯದು. ಸುಖಾಸುಮ್ಮನೇ ಲೀಟರ್ ಗಟ್ಟಲೇ ನೀರು ಕುಡಿಯುವುದು ಮುರ್ಖತನ ಎನ್ನಬಹುದು.&lt;/p&gt;&lt;p&gt;&lt;strong&gt;(ಸೂಚನೆ: ಯಾವುದೇ ಸೋಷಿಯಲ್ ಮೀಡಿಯಾ ಟಿಪ್ಸ್ ಅನುಸರಿಸುವ ಮೊದಲು ನೀವು ನಿಮ್ಮ ಕುಟುಂಬದ ವೈದ್ಯರ ಸಲಹೆ ಪಡೆಯವುದು ಉತ್ತಮ)&lt;/strong&gt;&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/is-the-social-media-trend-of-drinking-liters-of-water-every-morning-actually-healthy-and-what-experts-think/articleshow-0mmrmpl"/>
        </item>
        <item>
            <title><![CDATA[ಕರಿಬೇವು ಫ್ರಿಡ್ಜ್‌ನಲ್ಲಿಟ್ಟರೂ ಕಪ್ಪಾಗುತ್ತಿದೆಯೇ? ಈ ಮ್ಯಾಜಿಕ್ ಟ್ರಿಕ್ ಫಾಲೋ ಮಾಡಿದ್ರೆ ತಿಂಗಳುಗಟ್ಟಲೆ ಫ್ರೆಶ್ ಆಗಿರುತ್ತೆ!]]></title>
            <link>https://kannada.asianetnews.com/gallery/kitchen/avoid-blackening-of-curry-leaves-easy-kitchen-hacks-to-keep-them-fresh-for-months-2c1iwur</link>
            <guid isPermaLink="true">https://kannada.asianetnews.com/gallery/kitchen/avoid-blackening-of-curry-leaves-easy-kitchen-hacks-to-keep-them-fresh-for-months-2c1iwur</guid>
            <pubDate>Sat, 18 Jul 2026 17:35:37 +0530</pubDate>
            <description><![CDATA[&lt;p&gt;How to freeze curry leaves: ಕರಿಬೇವು ಫ್ರಿಡ್ಜ್&zwnj;ನಲ್ಲಿಟ್ಟರೂ ಎರಡೇ ದಿನಕ್ಕೆ ಕಪ್ಪಾಗುತ್ತಿದೆಯೇ? ಇನ್ಮುಂದೆ ಆ ಚಿಂತೆ ಬೇಡ! ಅಡುಗೆಯ ಘಮ ಹೆಚ್ಚಿಸುವ ಕರಿಬೇವು ತಿಂಗಳುಗಳ ಕಾಲ ಫ್ರೆಶ್ ಆಗಿಡಲು ಇಲ್ಲಿವೆ ಕೆಲವು ಟ್ರಿಕ್ಸ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxthcxtwz0pwv0fmrykga3ry,imgname-thumbnail---2026-07-18t172120.206-1784375834460.jpg" type="image/jpeg" height="390" width="690"/>
            <content:encoded><![CDATA[&lt;p&gt;How to freeze curry leaves: ಕರಿಬೇವು ಫ್ರಿಡ್ಜ್&zwnj;ನಲ್ಲಿಟ್ಟರೂ ಎರಡೇ ದಿನಕ್ಕೆ ಕಪ್ಪಾಗುತ್ತಿದೆಯೇ? ಇನ್ಮುಂದೆ ಆ ಚಿಂತೆ ಬೇಡ! ಅಡುಗೆಯ ಘಮ ಹೆಚ್ಚಿಸುವ ಕರಿಬೇವು ತಿಂಗಳುಗಳ ಕಾಲ ಫ್ರೆಶ್ ಆಗಿಡಲು ಇಲ್ಲಿವೆ ಕೆಲವು ಟ್ರಿಕ್ಸ್.&lt;/p&gt;&lt;img&gt;&lt;p&gt;ದೀರ್ಘಕಾಲದವರೆಗೆ ಹೇಗೆ ಸಂರಕ್ಷಿಸಿಡಬಹುದು?.ಅಡುಗೆಯ ಘಮ ಹೆಚ್ಚಿಸಲು ಕರಿಬೇವು ಅತ್ಯಗತ್ಯ. ಆದರೆ ಮಾರುಕಟ್ಟೆಯಿಂದ ತಂದ ತಾಜಾ ಕರಿಬೇವು ಫ್ರಿಡ್ಜ್&zwnj;ನಲ್ಲಿಟ್ಟ ಎರಡೇ ದಿನಕ್ಕೆ ಕಪ್ಪಾಗುವುದು ಅಥವಾ ಬಾಡಿ ಹೋಗುವುದು ಸಾಮಾನ್ಯ ಸಮಸ್ಯೆ. ಆದ್ದರಿಂದ ಮನೆಯಲ್ಲಿ ಕರಿಬೇವು ಗಿಡ ಇಲ್ಲದವರು ಮಾರುಕಟ್ಟೆಯಿಂದ ತಂದ ಕರಿಬೇವನ್ನು ದೀರ್ಘಕಾಲದವರೆಗೆ ಹೇಗೆ ಸಂರಕ್ಷಿಸಿಡಬಹುದು? ಇಲ್ಲಿದೆ ನೋಡಿ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಕರಿಬೇವು ಕಪ್ಪಾಗಲು ಕಾರಣವೇನು?&lt;/strong&gt;ಕರಿಬೇವಿನಲ್ಲಿರುವ ಅತಿಯಾದ ತೇವಾಂಶವೇ (Moisture) ಅದು ಕಪ್ಪಾಗಲು ಮುಖ್ಯ ಕಾರಣ. ತೊಳೆದ ನಂತರ ಸರಿಯಾಗಿ ಒಣಗಿಸದೆ ಅಥವಾ ಹಾಗೆಯೇ ಫ್ರಿಡ್ಜ್&zwnj;ನಲ್ಲಿ ಇಡುವುದರಿಂದ ಅದರಲ್ಲಿ ನೀರು ಶೇಖರಣೆಯಾಗಿ ಎಲೆಗಳು ಕೊಳೆಯಲು ಪ್ರಾರಂಭಿಸುತ್ತವೆ.&lt;/p&gt;&lt;img&gt;&lt;p&gt;&lt;strong&gt;ಕರಿಬೇವನ್ನು ಸ್ಟೋರ್ ಮಾಡಲು ಇಲ್ಲಿದೆ ಸುಲಭ ವಿಧಾನ&lt;/strong&gt;&lt;strong&gt;1. ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ (Airtight Container Hack)&lt;/strong&gt;ಕರಿಬೇವನ್ನು ಮಾರುಕಟ್ಟೆಯಿಂದ ತಂದ ತಕ್ಷಣ ಅದರ ಕಟ್ಟು ಬಿಡಿಸಿ. ಕಡ್ಡಿಗಳಿಂದ ಎಲೆಗಳನ್ನು ಪ್ರತ್ಯೇಕಿಸಿ ಚೆನ್ನಾಗಿ ತೊಳೆಯಿರಿ. ನಂತರ ಒಂದು ಕಾಟನ್ ಬಟ್ಟೆಯ ಮೇಲೆ ಹರಡಿ ಅದರ ಮೇಲಿರುವ ನೀರು ಪೂರ್ತಿ ಒಣಗುವಂತೆ ಮಾಡಿ. ಈಗ ಒಂದು ಏರ್ ಟೈಟ್ ಡಬ್ಬದ ಅಡಿಯಲ್ಲಿ ಟಿಶ್ಯೂ ಪೇಪರ್ ಹಾಸಿ, ಅದರ ಮೇಲೆ ಒಣಗಿದ ಎಲೆಗಳನ್ನು ಹಾಕಿಡಿ. ಮೇಲೆ ಮತ್ತೊಂದು ಟಿಶ್ಯೂ ಪೇಪರ್ ಇಟ್ಟು ಮುಚ್ಚಳ ಮುಚ್ಚಿ. ಇದು ವಾರಗಳ ಕಾಲ ಫ್ರೆಶ್ ಆಗಿರುತ್ತದೆ.&lt;/p&gt;&lt;img&gt;&lt;p&gt;&lt;strong&gt;2. ಹಗುರವಾಗಿ ಬಿಸಿ ಮಾಡಿ ಸಂಗ್ರಹಿಸಿ (Light Crisping Method)&lt;/strong&gt;ಇದು ಕರಿಬೇವನ್ನು ದೀರ್ಘಕಾಲ ಇಡಲು ಉತ್ತಮ ಹ್ಯಾಕ್. ಎಲೆಗಳನ್ನು ತೊಳೆದು ಒಣಗಿಸಿದ ನಂತರ, ಒಂದು ನಾನ್-ಸ್ಟಿಕ್ ಪ್ಯಾನ್&zwnj;ನಲ್ಲಿ 1-2 ನಿಮಿಷಗಳ ಕಾಲ ಹಗುರವಾಗಿ ಬಿಸಿ ಮಾಡಿ (ಎಲೆಗಳು ಅತಿ ಹೆಚ್ಚು ಒಣಗಬಾರದು, ಕೇವಲ ತೇವಾಂಶ ಹೋದರೆ ಸಾಕು). ಇದು ಪೂರ್ತಿ ತಣ್ಣಗಾದ ಮೇಲೆ ಏರ್ ಟೈಟ್ ಡಬ್ಬದಲ್ಲಿ ತುಂಬಿಸಿಡಿ.&lt;/p&gt;&lt;img&gt;&lt;p&gt;&lt;strong&gt;3. ಐಸ್ ಕ್ಯೂಬ್ ವಿಧಾನ (Ice Cube Storage)&lt;/strong&gt;ನೀವು ತಿಂಗಳುಗಳ ಕಾಲ ಕರಿಬೇವನ್ನು ಸಂಗ್ರಹಿಸಬೇಕೆಂದರೆ ಇದು ಬೆಸ್ಟ್ ಐಡಿಯಾ. ಕರಿಬೇವು ಎಲೆಗಳನ್ನು ತೊಳೆದು ಒಣಗಿಸಿ. ನಂತರ ಐಸ್ ಟ್ರೇನ ಒಂದೊಂದು ಗುಂಡಿಯಲ್ಲಿ ಕೆಲವು ಎಲೆಗಳನ್ನು ಹಾಕಿ ಸ್ವಲ್ಪ ನೀರು ತುಂಬಿಸಿ ಫ್ರೀಜರ್&zwnj;ನಲ್ಲಿಡಿ. ಕರಿಬೇವು ಮಂಜುಗಡ್ಡೆಯಂತಾದ ಮೇಲೆ ಆ ಕ್ಯೂಬ್&zwnj;ಗಳನ್ನು ತೆಗೆದು ಒಂದು ಜಿಪ್&zwnj;ಲಾಕ್ ಬ್ಯಾಗ್&zwnj;ನಲ್ಲಿ ಇಡಿ. ಅಡುಗೆಗೆ ಬೇಕಾದಾಗ ಒಂದು ಕ್ಯೂಬ್ ತೆಗೆದು ನೇರವಾಗಿ ಸಾಂಬಾರ್ ಅಥವಾ ಒಗ್ಗರಣೆಗೆ ಬಳಸಬಹುದು.&lt;/p&gt;&lt;img&gt;&lt;p&gt;&lt;strong&gt;4. ಜಿಪ್ ಲಾಕ್ ಬ್ಯಾಗ್ ಮತ್ತು ಕಿಚನ್ ಟವಲ್&lt;/strong&gt;ನಿಮ್ಮ ಬಳಿ ಬಾಕ್ಸ್ ಇಡಲು ಜಾಗವಿಲ್ಲದಿದ್ದರೆ, ಎಲೆಗಳನ್ನು ಕಿಚನ್ ಟವಲ್ ಅಥವಾ ಪೇಪರ್&zwnj;ನಲ್ಲಿ ಸುತ್ತಿ ಜಿಪ್ ಲಾಕ್ ಬ್ಯಾಗ್&zwnj;ನಲ್ಲಿ ಗಾಳಿಯಾಡದಂತೆ ಪ್ಯಾಕ್ ಮಾಡಿ ಫ್ರಿಡ್ಜ್&zwnj;ನಲ್ಲಿಡಿ. ಇದು ಕೂಡ ಕರಿಬೇವು ಕಪ್ಪಾಗದಂತೆ ತಡೆಯುತ್ತದೆ. ಈ ಸರಳ ವಿಧಾನಗಳನ್ನು ಪಾಲಿಸುವ ಮೂಲಕ ನೀವು ಮಾರುಕಟ್ಟೆಯಿಂದ ತಂದ ಕರಿಬೇವನ್ನು ತಿಂಗಳುಗಳ ಕಾಲ ಬಳಸಬಹುದು ಮತ್ತು ಹಣವನ್ನು ಉಳಿಸಬಹುದು.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/avoid-blackening-of-curry-leaves-easy-kitchen-hacks-to-keep-them-fresh-for-months-2c1iwur"/>
        </item>
        <item>
            <title><![CDATA[ಗ್ಯಾಸ್ ಉರಿಯ ಮೇಲೆ ನೇರವಾಗಿ ಚಪಾತಿ ಬೇಯಿಸಿದರೆ ಕ್ಯಾನ್ಸರ್ ಬರುತ್ತದೆಯೇ? ಇಲ್ಲಿದೆ ಡಾಕ್ಟರ್ ಉತ್ತರ]]></title>
            <link>https://kannada.asianetnews.com/health-life/does-cooking-chapati-on-a-gas-flame-cause-cancer-expert-reveals-the-truth/articleshow-2o2s4sk</link>
            <guid isPermaLink="true">https://kannada.asianetnews.com/health-life/does-cooking-chapati-on-a-gas-flame-cause-cancer-expert-reveals-the-truth/articleshow-2o2s4sk</guid>
            <pubDate>Wed, 15 Jul 2026 21:32:25 +0530</pubDate>
            <description><![CDATA[&lt;p&gt;&lt;strong&gt;Cooking roti on gas flame safety: &lt;/strong&gt;ಬ್ರೆಡ್ ಸೇವನೆ ಮತ್ತು ಗ್ಯಾಸ್ ಮೇಲೆ ನೇರವಾಗಿ ಸುಟ್ಟ ಚಪಾತಿ ತಿನ್ನುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆಯೇ? ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಅಸಲಿ ಸತ್ಯವೇನು? ಖ್ಯಾತ ಕ್ಯಾನ್ಸರ್ ತಜ್ಞರು ನೀಡಿರುವ ವೈಜ್ಞಾನಿಕ ವಿವರಣೆ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jgng7g89hsnkzsxfpc8emhrk,imgname-Tips-for-soft-roti-in-winters-1735888453897.jpg" type="image/jpeg" height="390" width="690"/>
            <content:encoded><![CDATA[&lt;p&gt;ಬ್ರೆಡ್ ತಿನ್ನುವುದರಿಂದ ಅಥವಾ ಗ್ಯಾಸ್ ಉರಿಯ (Gas flame) ಮೇಲೆ ನೇರವಾಗಿ ಚಪಾತಿ ಸುಡುವುದರಿಂದ ಕ್ಯಾನ್ಸರ್ ಬರುತ್ತದೆಯೇ ಎಂಬ ಆತಂಕ ಅನೇಕರಲ್ಲಿದೆ. ಈ ಕುರಿತು ಖ್ಯಾತ ಕ್ಯಾನ್ಸರ್ ತಜ್ಞ ಡಾ. ಜಯೇಶ್ ಶರ್ಮಾ ಅವರು ನೀಡಿರುವ ವೈಜ್ಞಾನಿಕ ವಿವರಣೆ ಇಲ್ಲಿದೆ.&lt;/p&gt;&lt;h2&gt;&lt;strong&gt;ಇಲ್ಲಿದೆ ಸತ್ಯಾಸತ್ಯತೆ&lt;/strong&gt;&lt;/h2&gt;&lt;p&gt;ಕಳೆದ ಒಂದು ದಶಕದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದು ನಿಜ. ಇದಕ್ಕೆ ಕೆಟ್ಟ ಜೀವನಶೈಲಿ, ಕಲಬೆರಕೆ ಆಹಾರ ಮತ್ತು ಒತ್ತಡ ಕಾರಣ ಎಂದು ವೈದ್ಯರು ಹೇಳುತ್ತಾರೆ. ಆದರೆ, ಬ್ರೆಡ್ ಮತ್ತು ಗ್ಯಾಸ್ ಮೇಲೆ ಸುಟ್ಟ ಚಪಾತಿಯ ಬಗ್ಗೆ ಸಮಾಜದಲ್ಲಿ ಕೆಲವು ತಪ್ಪು ಕಲ್ಪನೆಗಳಿವೆ. ಅವುಗಳ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ.&lt;/p&gt;&lt;h2&gt;&lt;strong&gt;1. ಬ್ರೆಡ್ ತಿಂದರೆ ಕ್ಯಾನ್ಸರ್ ಬರುತ್ತದೆಯೇ?&lt;/strong&gt;&lt;/h2&gt;&lt;p&gt;ಬ್ರೆಡ್&zwnj;ನಲ್ಲಿ 'ಅಕ್ರಿಲಮೈಡ್' (Acrylamide) ಎಂಬ ಅಂಶವಿರುತ್ತದೆ, ಇದು ಕ್ಯಾನ್ಸರ್&zwnj;ಗೆ ಕಾರಣವಾಗಬಹುದು ಎಂಬುದು ಅನೇಕರ ವಾದ. ಆದರೆ ಡಾ. ಜಯೇಶ್ ಅವರ ಪ್ರಕಾರ:&lt;/p&gt;&lt;p&gt;ಅಕ್ರಿಲಮೈಡ್ ಅನ್ನು ಪ್ರಾಣಿಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀಡಿದಾಗ ಕ್ಯಾನ್ಸರ್ ಕಂಡುಬಂದಿದೆ. ಆದರೆ ಮನುಷ್ಯರಲ್ಲಿ ಬ್ರೆಡ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬುದಕ್ಕೆ ಈವರೆಗೆ ಯಾವುದೇ ಪುರಾವೆಗಳಿಲ್ಲ.&lt;/p&gt;&lt;p&gt;ವಾಸ್ತವವಾಗಿ, ಬ್ರೆಡ್&zwnj;ಗಿಂತ ಸಮೋಸಾ, ಕಚೋರಿ ಮತ್ತು ಫ್ರೆಂಚ್ ಫ್ರೈಸ್&zwnj;ಗಳಂತಹ ಕರಿದ ಪದಾರ್ಥಗಳಲ್ಲಿ ಅಕ್ರಿಲಮೈಡ್ ಪ್ರಮಾಣ ಹೆಚ್ಚಿರುತ್ತದೆ.&lt;/p&gt;&lt;p&gt;ಬ್ರೆಡ್&zwnj;ನಲ್ಲಿರುವ ಮೈದಾದಿಂದ ಸಕ್ಕರೆಯ ಮಟ್ಟ (Sugar Spike) ಹೆಚ್ಚಾಗಬಹುದು ಮತ್ತು ಬೊಜ್ಜು ಬರಬಹುದು. ಆದ್ದರಿಂದ ಸಮತೋಲಿತ ಪ್ರಮಾಣದಲ್ಲಿ ತಿಂದರೆ ಯಾವುದೇ ತೊಂದರೆಯಿಲ್ಲ.&lt;/p&gt;&lt;h2&gt;&lt;strong&gt;2. ವೈಟ್ ಬ್ರೆಡ್ ಅಥವಾ ಬ್ರೌನ್ ಬ್ರೆಡ್: ಯಾವುದು ಉತ್ತಮ?&lt;/strong&gt;&lt;/h2&gt;&lt;p&gt;ಹೆಚ್ಚಿನ ಜನರು ಬ್ರೌನ್ ಬ್ರೆಡ್ ಆರೋಗ್ಯಕರ ಎಂದು ಭಾವಿಸುತ್ತಾರೆ. ಆದರೆ ಸತ್ಯವೇನೆಂದರೆ, ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಬ್ರೌನ್ ಬ್ರೆಡ್&zwnj;ಗಳು ಕೇವಲ ಬಣ್ಣ ಸೇರಿಸಿದ ವೈಟ್ ಬ್ರೆಡ್&zwnj;ಗಳೇ ಆಗಿರುತ್ತವೆ. ವೈಟ್ ಬ್ರೆಡ್&zwnj;ಗಿಂತ ಹೋಲ್ ವೀಟ್ (Whole Wheat) ಅಥವಾ ಮಲ್ಟಿಗ್ರೇನ್ ಬ್ರೆಡ್&zwnj;ಗಳು ಸ್ವಲ್ಪ ಉತ್ತಮ ಆಯ್ಕೆಯಾಗಿವೆ.&lt;/p&gt;&lt;h2&gt;&lt;strong&gt;3. ಗ್ಯಾಸ್ ಉರಿಯ ಮೇಲೆ ಚಪಾತಿ ಸುಟ್ಟರೆ ಕ್ಯಾನ್ಸರ್ ಬರುತ್ತಾ?&lt;/strong&gt;&lt;/h2&gt;&lt;p&gt;ಗ್ಯಾಸ್ ಜ್ವಾಲೆಯ ಮೇಲೆ ನೇರವಾಗಿ ಚಪಾತಿ ಸುಡುವುದರಿಂದ ಗ್ಯಾಸ್&zwnj;ನಲ್ಲಿರುವ ರಾಸಾಯನಿಕಗಳು ಚಪಾತಿಯೊಳಗೆ ಸೇರುತ್ತವೆ ಎಂಬ ಭಯ ಅನೇಕರಲ್ಲಿದೆ. ಆದರೆ ಇದು ಕೇವಲ ಭ್ರಮೆ ಎನ್ನುತ್ತಾರೆ ಡಾಕ್ಟರ್.&lt;/p&gt;&lt;p&gt;ಗ್ಯಾಸ್ ಉರಿಯುವಾಗ ರಾಸಾಯನಿಕಗಳು ನಾಶವಾಗುತ್ತವೆ. ಒಂದು ವೇಳೆ ಗ್ಯಾಸ್ ಚಪಾತಿಯೊಳಗೆ ಸೇರುತ್ತಿದ್ದರೆ ಅದರಿಂದ ಗ್ಯಾಸ್ ವಾಸನೆ ಬರಬೇಕಿತ್ತು. ಆದರೆ ನಮಗೆ ಅಂತಹ ಯಾವುದೇ ವಾಸನೆ ಬರುವುದಿಲ್ಲ.&lt;/p&gt;&lt;p&gt;&lt;strong&gt;ಎಚ್ಚರಿಕೆ: &lt;/strong&gt;ಚಪಾತಿಯನ್ನು ಅತಿಯಾಗಿ ಸುಟ್ಟು ಅದರಲ್ಲಿ ಕಪ್ಪು ಕಲೆಗಳು (Charred spots) ಮೂಡುವಂತೆ ಮಾಡಿದರೆ ಅದರಲ್ಲಿ ಅಕ್ರಿಲಮೈಡ್ ಉತ್ಪತ್ತಿಯಾಗುತ್ತದೆ. ಇದು ದೀರ್ಘಕಾಲದ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಚಪಾತಿಯನ್ನು ಹಗುರವಾಗಿ ಮತ್ತು ಮಂದ ಉರಿಯಲ್ಲಿ ಬೇಯಿಸಿ ತಿನ್ನುವುದು ಉತ್ತಮ.&lt;/p&gt;&lt;p&gt;ಬ್ರೆಡ್ ಅಥವಾ ಗ್ಯಾಸ್ ಮೇಲೆ ಸುಟ್ಟ ಚಪಾತಿಯಿಂದ ಕ್ಯಾನ್ಸರ್ ಬರುವುದಿಲ್ಲ. ಇವು ಕೇವಲ ವದಂತಿಗಳಷ್ಟೇ. ಆದರೆ ಅತಿಯಾಗಿ ಸುಟ್ಟ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಿ ಮತ್ತು ಬ್ರೆಡ್ ಅನ್ನು ಮಿತವಾಗಿ ಸೇವಿಸಿ.&lt;/p&gt;&lt;h3&gt;&lt;strong&gt;ಇಲ್ಲಿದೆ ನೋಡಿ ಡಾಕ್ಟರ್ ವಿಡಿಯೋ&amp;nbsp;&lt;/strong&gt;&lt;/h3&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Jayesh Sharma (@drjayeshsharma)&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/health-life/does-cooking-chapati-on-a-gas-flame-cause-cancer-expert-reveals-the-truth/articleshow-2o2s4sk"/>
        </item>
        <item>
            <title><![CDATA[ಒಂದು ಪ್ಲೇಟ್ ಪಾನಿಪುರಿ ಬೆಲೆ 830 ರೂಪಾಯಿ.. ಆಸೆಯಿಂದ ಬಂದವ್ರಿಗೆ ಕಾದಿತ್ತು ಶಾಕ್..!]]></title>
            <link>https://kannada.asianetnews.com/food/one-plate-pani-puri-rat-is-rs-830-and-pav-bhaji-price-is-1270-in-london-haldirams-branch-gkn/articleshow-3mwli3r</link>
            <guid isPermaLink="true">https://kannada.asianetnews.com/food/one-plate-pani-puri-rat-is-rs-830-and-pav-bhaji-price-is-1270-in-london-haldirams-branch-gkn/articleshow-3mwli3r</guid>
            <pubDate>Thu, 16 Jul 2026 13:08:22 +0530</pubDate>
            <description><![CDATA[&lt;p&gt;ಒಂದು ಪ್ಲೇಟ್ ಪಾನಿಪುರಿಗೆ 830 ರೂಪಾಯಿ. ಒಂದು ಪಾವ್ ಭಾಜಿಗೆ 1270 ರೂಪಾಯಿ. ತವರು ಮನೆಯ ನೆಚ್ಚಿನ ಸ್ನ್ಯಾಕ್ ಸವಿಯಲು ಬಂದಿದ್ದ NRIಗಳಿಗೆ ಆಘಾತ ತಂದ ಕತೆ ಇದು!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxak8tzm2jrd8t3d746hkgpa,imgname-pani-puri-1783840926708.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್:&lt;/strong&gt; ಪಾನಿಪುರಿ ಅಂದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಸಂಜೆ ಟೈಂನಲ್ಲಿ ಸ್ನೇಹಿತರ ಜೊತೆ ತಿನ್ನೋ ಮಜಾನೇ ಬೇರೆ. ಅದ್ರಲ್ಲೂ ಹೆಣ್ಮಕ್ಕಳು ಪಾನಿಪುರಿನ ಸಿಕ್ಕಾಪಟ್ಟೆ ಇಷ್ಟಪಡ್ತಾರೆ. ಸಾಮಾನ್ಯ ಜನರಿಂದ ಹಿಡಿದು ಹೈಕ್ಲಾಸ್ ಜನರ ಅಚ್ಚುಮೆಚ್ಚಿನ ಈ ಸ್ನ್ಯಾಕ್ಸ್&zwnj; ಬೆಲೆ ಎಲ್ಲರಿಗೂ ಕೈಗೆಟಕುವಂತದ್ದೇ. ಭಾರತದಲ್ಲಿ 20 ರೂಪಾಯಿಂದ 80 ರೂಪಾಯಿ ಒಳಗೆ ಎಲ್ಲೆಡೆ ಸಿಗುತ್ತಿದೆ. ಅದೇ ಹಲ್ದಿರಾಮ್ಸ್&zwnj;ನಂತಹ ಪ್ರೀಮಿಯಂ ಹೋಟೆಲ್&zwnj;ಗಳಲ್ಲಿ 100 ರೂಪಾಯಿಯವರೆಗೆ ಇರಬಹುದು. ಆದರೆ ಆ ಒಂದು ನಗರದಲ್ಲಿ ಪಾನಿಪುರಿ ಬೆಲೆ ಭಾರತೀಯರ ನಿದ್ದೆಗೆಡಿಸಿದೆ.&lt;/p&gt;&lt;p&gt;ಹೌದು, ಲಂಡನ್&zwnj;ನಲ್ಲಿ ಒಂದು ಪ್ಲೇಟ್ ಪಾನಿಪುರಿ ಬೆಲೆ ಬರೋಬ್ಬರಿ 830 ರೂಪಾಯಿ! ಕೇಳೋಕೆ ಶಾಕ್ ಆದ್ರೂ ಅದರ ಬೆಲೆ ಮಾತ್ರ ಅಷ್ಟೇ ಇರೋದು. ಭಾರತದ ಪ್ರಸಿದ್ಧ ಸ್ನಾಕ್ಸ್ ಬ್ರ್ಯಾಂಡ್ 'ಹಲ್ದಿರಾಮ್ಸ್' (Haldiram's) ಇತ್ತೀಚೆಗೆ ಲಂಡನ್&zwnj;ನಲ್ಲಿ ತನ್ನ ಹೊಸ ಶಾಖೆ ತೆರೆದಿದೆ. ಅಪ್ಪಟ ಭಾರತೀಯ ಚಾಟ್ಸ್ ರುಚಿಯನ್ನು ಸವಿಯಲು ಅಲ್ಲಿನ ಅನಿವಾಸಿ ಭಾರತೀಯರು (NRIs) ಮುಗಿಬೀಳುತ್ತಿದ್ದಾರೆ. ಆದರೆ ಅಲ್ಲಿನ ಮೆನುವಿನಲ್ಲಿರುವ ದರಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.&lt;/p&gt;&lt;h2&gt;&lt;strong&gt;ದೆಹಲಿ vs ಲಂಡನ್&lt;/strong&gt;&lt;/h2&gt;&lt;p&gt;ದೆಹಲಿಯ ಹಲ್ದಿರಾಮ್ಸ್ ಔಟ್&zwnj;ಲೆಟ್&zwnj;ಗೆ ಹೋಲಿಸಿದರೆ ಲಂಡನ್&zwnj;ನಲ್ಲಿನ ಬೆಲೆಗಳು ಆಕಾಶ ಮುಟ್ಟಿವೆ. ದೆಹಲಿಯಲ್ಲಿ ಒಂದು ಪ್ಲೇಟ್ ಪಾನಿಪುರಿ ಬೆಲೆ ಸುಮಾರು 75 ರೂ. ಇದ್ದರೆ, ಲಂಡನ್&zwnj;ನಲ್ಲಿ ಇದು 6.50 ಪೌಂಡ್ (ಸುಮಾರು 830 ರೂಪಾಯಿ). ದೆಹಲಿಯಲ್ಲಿ ಪಾವ್ ಬಾಜಿ 198 ರೂ. ಇರುವ ಪಾವ್ ಬಾಜಿ ಬೆಲೆ ಲಂಡನ್&zwnj;ನಲ್ಲಿ 9.90 ಪೌಂಡ್ (ಸುಮಾರು 1,270 ರೂಪಾಯಿ). ದೆಹಲಿಯಲ್ಲಿ ಗಾರ್ಲಿಕ್ ನಾನ್ 95 ರೂ. ಇದ್ದರೆ, ಲಂಡನ್&zwnj;ನಲ್ಲಿ ಇದರ ಬೆಲೆ 5 ಪೌಂಡ್ (ಸುಮಾರು 640 ರೂಪಾಯಿ) ಇದೆ.&lt;/p&gt;&lt;p&gt;ಇಷ್ಟೊಂದು ಬೆಲೆ ಏಕೆ ಎಂದು ನೀವು ಕೇಳಬಹುದು. ಲಂಡನ್&zwnj;ನಲ್ಲಿ ಕಟ್ಟಡದ ಬಾಡಿಗೆ, ನಿರ್ವಹಣಾ ವೆಚ್ಚ, ಸ್ಥಳೀಯ ತೆರಿಗೆಗಳು ಮತ್ತು ಭಾರತದಿಂದ ಮಸಾಲೆ ಅಥವಾ ಇತರ ಪದಾರ್ಥಗಳ ಆಮದು ವೆಚ್ಚ ಹೆಚ್ಚಾಗಿರುವುದರಿಂದ ಬೆಲೆಗಳು ಈ ಮಟ್ಟದಲ್ಲಿವೆ ಎನ್ನಲಾಗುತ್ತಿದೆ. ಭಾರತದಲ್ಲಿ ಹಲ್ದಿರಾಮ್ಸ್ ಮೆನುವಿನಲ್ಲಿ ಸೌತ್ ಇಂಡಿಯನ್, ಚೈನೀಸ್ ಸೇರಿದಂತೆ 80ಕ್ಕೂ ಹೆಚ್ಚು ಖಾದ್ಯಗಳಿರುತ್ತವೆ. ಲಂಡನ್ ಶಾಖೆಯಲ್ಲಿ ಕೇವಲ ಆಯ್ದ 40 ಖಾದ್ಯಗಳನ್ನು ಮಾತ್ರ ಇರಿಸಲಾಗಿದೆ.&amp;nbsp;&lt;/p&gt;&lt;p&gt;ಇಲ್ಲಿ ಮುಖ್ಯವಾಗಿ ಉತ್ತರ ಭಾರತದ ಸ್ಟ್ರೀಟ್ ಫುಡ್&zwnj;ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದಕ್ಷಿಣ ಭಾರತದ ದೋಸೆ, ಇಡ್ಲಿ ಹಾಗೂ ಸ್ಯಾಂಡ್&zwnj;ವಿಚ್ ವಿಭಾಗಗಳನ್ನು ಅಲ್ಲಿನ ಮೆನುವಿನಿಂದ ಕೈಬಿಡಲಾಗಿದೆ. ಬೆಲೆ ಎಷ್ಟೇ ಹೆಚ್ಚಿದ್ದರೂ, ತಾಯ್ನಾಡಿನ ರುಚಿಯನ್ನು ಮಿಸ್ ಮಾಡಿಕೊಳ್ಳುವ ಅನಿವಾಸಿ ಭಾರತೀಯರು ಮತ್ತು ಮೊದಲ ಬಾರಿ ಭಾರತೀಯ ಖಾದ್ಯಗಳನ್ನು ಸವಿಯುವ ಬ್ರಿಟಿಷರು ಹಲ್ದಿರಾಮ್ಸ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಈಗ ಇಂಟರ್ನೆಟ್&zwnj;ನಲ್ಲಿ ವೈರಲ್ ಆಗುತ್ತಿವೆ.&lt;/p&gt;]]></content:encoded>
            <category>food</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/food/one-plate-pani-puri-rat-is-rs-830-and-pav-bhaji-price-is-1270-in-london-haldirams-branch-gkn/articleshow-3mwli3r"/>
        </item>
        <item>
            <title><![CDATA[₹3,500 ಹೂಡಿಕೆ ಇಂದು ₹1.5 ಕೋಟಿ ವ್ಯವಹಾರ, ಮನೆಯಿಂದ ಶುರುವಾದ ಬ್ರ್ಯಾಂಡ್‌ಗೆ ಸಾವಿರಾರು ಗ್ರಾಹಕರು ಫಿದಾ]]></title>
            <link>https://kannada.asianetnews.com/viral/nashik-engineer-tushar-talware-turns-rs-3500-investment-into-a-rs-1-5-crore-millet-business-suh/articleshow-3yfqtmo</link>
            <guid isPermaLink="true">https://kannada.asianetnews.com/viral/nashik-engineer-tushar-talware-turns-rs-3500-investment-into-a-rs-1-5-crore-millet-business-suh/articleshow-3yfqtmo</guid>
            <pubDate>Fri, 17 Jul 2026 14:56:03 +0530</pubDate>
            <description><![CDATA[&lt;p&gt;ಕೊರೊನಾ ಲಾಕ್&zwnj;ಡೌನ್&zwnj;ನಲ್ಲಿ ಕೇವಲ ₹3,500 ಹೂಡಿಕೆಯಿಂದ ಸಿರಿಧಾನ್ಯ ಉದ್ಯಮ ಆರಂಭಿಸಿದ ನಾಸಿಕ್&zwnj;ನ ಎಂಜಿನಿಯರ್ ತುಷಾರ್ ತಲ್ವಾರೆ, ಇಂದು ವರ್ಷಕ್ಕೆ ₹1.5 ಕೋಟಿ ವಹಿವಾಟು ನಡೆಸುವ ಯಶಸ್ವಿ 'ಫುಡೋನಿಕ್' ಬ್ರ್ಯಾಂಡ್ ನಿರ್ಮಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqp8kkbs7cv63fgv9dn6ag8,imgname-nashik-engineer-tushar-talware-turns-rs-3500-investment-into-a-rs-1-5-crore-millet-business-1784280272491.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊರೊನಾ ಲಾಕ್&zwnj;ಡೌನ್&zwnj;ನಲ್ಲಿ ಕೇವಲ ₹3,500 ಹೂಡಿಕೆಯಿಂದ ಸಿರಿಧಾನ್ಯ ಉದ್ಯಮ ಆರಂಭಿಸಿದ ನಾಸಿಕ್&zwnj;ನ ಎಂಜಿನಿಯರ್ ತುಷಾರ್ ತಲ್ವಾರೆ, ಇಂದು ವರ್ಷಕ್ಕೆ ₹1.5 ಕೋಟಿ ವಹಿವಾಟು ನಡೆಸುವ ಯಶಸ್ವಿ 'ಫುಡೋನಿಕ್' ಬ್ರ್ಯಾಂಡ್ ನಿರ್ಮಿಸಿದ್ದಾರೆ.&lt;/p&gt;&lt;p&gt;ಕೊರೊನಾ ಲಾಕ್&zwnj;ಡೌನ್&zwnj; ವೇಳೆ ಅನೇಕರು ಉದ್ಯೋಗಕ್ಕಾಗಿ ಕಾಯುತ್ತಿದ್ದರೆ, ನಾಸಿಕ್&zwnj;ನ ಮೆಕ್ಯಾನಿಕಲ್ ಎಂಜಿನಿಯರ್ ತುಷಾರ್ ತಲ್ವಾರೆ ತಮ್ಮದೇ ಉದ್ಯಮ ಆರಂಭಿಸುವ ನಿರ್ಧಾರ ಕೈಗೊಂಡರು. ಕೇವಲ ₹3,500 ಹೂಡಿಕೆ ಮಾಡಿ ಮನೆಯಿಂದಲೇ ಸಿರಿಧಾನ್ಯ (ಮಿಲ್ಲೆಟ್) ಮಾರಾಟ ಆರಂಭಿಸಿದ ಅವರು, ಇಂದು ವಾರ್ಷಿಕ ₹1.5 ಕೋಟಿ ವಹಿವಾಟು ನಡೆಸುವ 'ಫುಡೋನಿಕ್ (Fudonik)' ಬ್ರ್ಯಾಂಡ್&zwnj; ನಿರ್ಮಿಸಿದ್ದಾರೆ.&lt;/p&gt;&lt;h2&gt;ಕಾಲೇಜಿನ ಸ್ನೇಹಿತನ ಸಲಹೆ ಜೀವನವನ್ನೇ ಬದಲಿಸಿತು&lt;/h2&gt;&lt;p&gt;ನವಿ ಮುಂಬೈನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ವೇಳೆ ಆರೋಗ್ಯಕರ ಆಹಾರ ಕ್ಷೇತ್ರದಲ್ಲಿ ಭವಿಷ್ಯ ಇದೆ ಎಂದು ಸ್ನೇಹಿತನೊಬ್ಬ ನೀಡಿದ ಸಲಹೆ ತುಷಾರ್ ಅವರ ಉದ್ಯಮಶೀಲತೆಯ ಮೊದಲ ಹೆಜ್ಜೆಯಾಯಿತು. ಬಳಿಕ ಐಐಟಿ ಬಾಂಬೆದಲ್ಲಿ ಸಿರಿಧಾನ್ಯ ತಜ್ಞ ಡಾ. ಖಾದರ್ ವಲಿ ಅವರ ಉಪನ್ಯಾಸ ಕೇಳಿದ ನಂತರ ಮಿಲ್ಲೆಟ್ ಉದ್ಯಮ ಆರಂಭಿಸುವ ನಿರ್ಧಾರಕ್ಕೆ ಬಂದರು.&lt;/p&gt;&lt;p&gt;ಮಾರುಕಟ್ಟೆಯಲ್ಲಿ ಆರೋಗ್ಯಕರ ಸಿರಿಧಾನ್ಯ ಉತ್ಪನ್ನಗಳ ಕೊರತೆ ಇರುವುದನ್ನು ಗಮನಿಸಿದ ಅವರು, ರಾಗಿ ಕೃಷಿ, ಪೌಷ್ಟಿಕಾಂಶ ಹಾಗೂ ಮಾರುಕಟ್ಟೆ ಕುರಿತು ಹಲವು ಸೆಮಿನಾರ್&zwnj;ಗಳು ಮತ್ತು ಆನ್&zwnj;ಲೈನ್ ಕೋರ್ಸ್&zwnj;ಗಳ ಮೂಲಕ ಸಂಪೂರ್ಣ ಮಾಹಿತಿ ಸಂಗ್ರಹಿಸಿದರು.&lt;/p&gt;&lt;h2&gt;₹3,500ರಿಂದ ಆರಂಭವಾದ ಉದ್ಯಮ&lt;/h2&gt;&lt;p&gt;2020ರ ಲಾಕ್&zwnj;ಡೌನ್ ಸಂದರ್ಭದಲ್ಲಿ ಡಾ. ಖಾದರ್ ವಲಿ ಅವರ ಸಂಪರ್ಕದ ಮೂಲಕ ತಮಿಳುನಾಡಿನ ರೈತನಿಂದ ಐದು ಬಗೆಯ ಸಿರಿಧಾನ್ಯಗಳನ್ನು ತಲಾ 5 ಕೆ.ಜಿ. ಖರೀದಿಸಲು ₹3,500 ಹೂಡಿಕೆ ಮಾಡಿದರು. ಮೊದಲಿಗೆ ಕುಟುಂಬ, ಸ್ನೇಹಿತರು ಮತ್ತು ಪರಿಚಯಸ್ಥರಿಗೆ ಮಾರಾಟ ಮಾಡಿದಾಗ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ನಂತರ ಆರ್ಡರ್ ಪ್ರಮಾಣವನ್ನು 20 ಕೆ.ಜಿಗೆ ಹೆಚ್ಚಿಸಿದರು.&lt;/p&gt;&lt;h2&gt;ವಾಟ್ಸ್ಆಪ್&zwnj; ಮತ್ತು ಇಂಡಿಯಾ ಪೋಸ್ಟ್&zwnj;ನಿಂದ ದೇಶಾದ್ಯಂತ ಮಾರಾಟ&lt;/h2&gt;&lt;p&gt;ಲಾಕ್&zwnj;ಡೌನ್ ಸಮಯದಲ್ಲಿ ಸಾರಿಗೆ ವ್ಯವಸ್ಥೆ ಸೀಮಿತವಾಗಿದ್ದ ಕಾರಣ, ತುಷಾರ್ ತಮ್ಮ ಉತ್ಪನ್ನಗಳನ್ನು ವಾಟ್ಸ್ಆಪ್ ಗುಂಪುಗಳು ಮತ್ತು ಬಾಯಿಮಾತಿನ ಪ್ರಚಾರದ ಮೂಲಕ ಮಾರಾಟ ಮಾಡಿದರು. ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂಡಿಯಾ ಪೋಸ್ಟ್ ಸೇವೆಯನ್ನು ಬಳಸಿಕೊಂಡು, ಮನೆಯಲ್ಲೇ ಒಂದು ಕೆ.ಜಿ. ಪ್ಯಾಕ್&zwnj;ಗಳನ್ನು ತಯಾರಿಸಿ ದೇಶದ ವಿವಿಧ ಭಾಗಗಳಿಗೆ ಕಳುಹಿಸುತ್ತಿದ್ದರು.&lt;/p&gt;&lt;h2&gt;ಕಡಿಮೆ ಬೆಲೆ, ಹೆಚ್ಚು ಗ್ರಾಹಕರು&lt;/h2&gt;&lt;p&gt;ಮಾರುಕಟ್ಟೆಯಲ್ಲಿ 5 ಕೆ.ಜಿ. ಸಿರಿಧಾನ್ಯಕ್ಕೆ ಸುಮಾರು ₹1,200 ದರ ಇದ್ದಾಗ, ತಮ್ಮ ಖರೀದಿ ವೆಚ್ಚ ಕೇವಲ ₹400 ಆಗಿದ್ದರಿಂದ ಅವರು ₹700ಕ್ಕೆ ಮಾರಾಟ ಮಾಡುವ ನಿರ್ಧಾರ ಕೈಗೊಂಡರು. ಕೈಗೆಟುಕುವ ಬೆಲೆ ಹಾಗೂ ಉತ್ತಮ ಗುಣಮಟ್ಟದ ಕಾರಣ ದೇಶದ ವಿವಿಧ ರಾಜ್ಯಗಳಿಂದ ಆರ್ಡರ್&zwnj;ಗಳು ಬರತೊಡಗಿದವು.&lt;/p&gt;&lt;h2&gt;ಬಾಡಿಗೆ ಕೊಠಡಿಯಿಂದ ಕೋಟಿಗಳ ಕಂಪನಿ&lt;/h2&gt;&lt;p&gt;ಬೇಡಿಕೆ ಹೆಚ್ಚಾಗುತ್ತಿದ್ದಂತೆ ನಾಸಿಕ್&zwnj;ನಲ್ಲಿ ತಿಂಗಳಿಗೆ ₹2,000 ಬಾಡಿಗೆಯ ಕೊಠಡಿ ಪಡೆದು ಕಾರ್ಯಾಚರಣೆ ವಿಸ್ತರಿಸಿದರು. ಬಳಿಕ ಗುತ್ತಿಗೆ ಉತ್ಪಾದಕರ ಸಹಾಯದಿಂದ ಮಿಲ್ಲೆಟ್ ಹಿಟ್ಟು, ಪಾಸ್ತಾ, ನೂಡಲ್ಸ್, ಫ್ಲೇಕ್ಸ್ ಹಾಗೂ ಇತರೆ ಆರೋಗ್ಯಕರ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದರು. 2020ರಲ್ಲಿ ₹1.5 ಲಕ್ಷ ವಹಿವಾಟು ನಡೆಸಿದ ಕಂಪನಿ, 2021ರಲ್ಲಿ ₹12 ಲಕ್ಷಕ್ಕೆ ಏರಿತು. ನಂತರ ವ್ಯವಹಾರ ವೇಗವಾಗಿ ಬೆಳೆಯತೊಡಗಿತು.&lt;/p&gt;&lt;h2&gt;₹10 ಲಕ್ಷ ಸರ್ಕಾರಿ ಸಬ್ಸಿಡಿ&lt;/h2&gt;&lt;p&gt;ಕೇಂದ್ರ ಸರ್ಕಾರದ PMFME ಯೋಜನೆಯಡಿ ₹10 ಲಕ್ಷ ಸಬ್ಸಿಡಿ ಪಡೆದು 2025ರಲ್ಲಿ ಸ್ವಂತ ಉತ್ಪಾದನಾ ಘಟಕ ಆರಂಭಿಸಿದರು. ಅಲ್ಲಿ 15 ವಿಧದ ಮಿಲ್ಲೆಟ್ ಖಾಖ್ರಾಗಳನ್ನು ತಯಾರಿಸುವ ಪ್ರಯತ್ನ ಆರಂಭವಾಯಿತು. 2,000 ಕೆಜಿ ಹಿಟ್ಟು ವ್ಯರ್ಥ... ಕೊನೆಗೆ ಸಿಕ್ಕ ಯಶಸ್ಸು ಖಾಖ್ರಾ ತಯಾರಿಸುವುದು ಸುಲಭವಾಗಿರಲಿಲ್ಲ. ಆರಂಭದಲ್ಲಿ ಹಿಟ್ಟು ಯಂತ್ರಗಳಿಗೆ ಅಂಟಿಕೊಳ್ಳುತ್ತಿದ್ದು, ಉತ್ಪಾದನೆ ಪದೇ ಪದೇ ವಿಫಲವಾಗುತ್ತಿತ್ತು.&lt;/p&gt;&lt;p&gt;ಆಹಾರ ತಜ್ಞರು ಬೈಂಡರ್ ಹಾಗೂ ಕೃತಕ ಪದಾರ್ಥ ಸೇರಿಸಲು ಸಲಹೆ ನೀಡಿದರೂ, ತುಷಾರ್ ನೈಸರ್ಗಿಕ ಉತ್ಪನ್ನವನ್ನೇ ತಯಾರಿಸುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಸುಮಾರು 2,000 ಕೆ.ಜಿ. ಹಿಟ್ಟು ಬಳಸಿದ ಬಳಿಕ, ಯಾವುದೇ ಪ್ರಿಸರ್ವೇಟಿವ್, ಸೇರ್ಪಡೆ ಅಥವಾ ಕೃತಕ ಬೈಂಡರ್ ಇಲ್ಲದೆ ಖಾಖ್ರಾ ತಯಾರಿಸುವಲ್ಲಿ ಯಶಸ್ವಿಯಾದರು.&lt;/p&gt;&lt;h2&gt;ಇಂದು 8 ಮಹಿಳೆಯರಿಗೆ ಉದ್ಯೋಗ&lt;/h2&gt;&lt;p&gt;ನಾಸಿಕ್&zwnj;ನಲ್ಲಿರುವ ಫುಡೋನಿಕ್ ಘಟಕದಲ್ಲಿ ಇಂದು 8 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಕಂಪನಿ ಈಗ ಮಿಲ್ಲೆಟ್ ಖಾಖ್ರಾ, ಚಿವ್ಡಾ, ನೂಡಲ್ಸ್, ಪಾಸ್ತಾ, ಹಿಟ್ಟು ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸಿ 2,500ಕ್ಕೂ ಹೆಚ್ಚು ಚಿಲ್ಲರೆ ಗ್ರಾಹಕರಿಗೆ ಪೂರೈಸುತ್ತಿದೆ. B2B ಮಾರುಕಟ್ಟೆಯಲ್ಲೂ ವೇಗವಾಗಿ ವಿಸ್ತರಿಸುತ್ತಿದೆ.&lt;/p&gt;]]></content:encoded>
            <category>food</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/nashik-engineer-tushar-talware-turns-rs-3500-investment-into-a-rs-1-5-crore-millet-business-suh/articleshow-3yfqtmo"/>
        </item>
        <item>
            <title><![CDATA[Milk with Cumin Powder: ಜೀರಿಗೆ ಪುಡಿಯನ್ನು ಹಾಲಿಗೆ ಹಾಕಿ ದಿನಾಲೂ ರಾತ್ರಿ ಕುಡಿದರೆ ಆಗೋ ಮ್ಯಾಜಿಕ್ ಗೊತ್ತಾ? ಜೊತೆಗೆ ಈ ಕೆಲಸ ಮಾಡಲೇಬೇಕು!]]></title>
            <link>https://kannada.asianetnews.com/health-life/if-you-drink-milk-with-cumin-powder-every-night-even-high-blood-sugar-levels-can-be-regulated/articleshow-5wdpvrr</link>
            <guid isPermaLink="true">https://kannada.asianetnews.com/health-life/if-you-drink-milk-with-cumin-powder-every-night-even-high-blood-sugar-levels-can-be-regulated/articleshow-5wdpvrr</guid>
            <pubDate>Sun, 19 Jul 2026 15:53:33 +0530</pubDate>
            <description><![CDATA[&lt;p&gt;ದಿನವಿಡೀ ಕೆಲಸದ ಒತ್ತಡ, ಟೆನ್ಷನ್&zwnj;ನಿಂದ ತಲೆನೋವು ಬರುವುದು ಸಹಜ. ಇಂತಹ ಸಮಯದಲ್ಲಿ ನಿದ್ದೆ ಬರುವುದೂ ಕಷ್ಟವಾಗುತ್ತದೆ. ಜೀರಿಗೆ ಹಾಲಿನಲ್ಲಿರುವ ಗುಣಗಳು ಮಿದುಳನ್ನು ಶಾಂತಗೊಳಿಸುತ್ತವೆ. ರಾತ್ರಿ ಈ ಹಾಲು ಕುಡಿದರೆ ಒತ್ತಡ ಕಡಿಮೆಯಾಗಿ, ಯಾವುದೇ ಮಾತ್ರೆಗಳ ಸಹಾಯವಿಲ್ಲದೆ ನೀವು ಮಗುವಿನಂತೆ ಗಾಢವಾಗಿ ನಿದ್ರಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsd6w48yx10jymhfax3m2ct,imgname-milk-1782190403720.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಲಿಗೆ ಒಂದು ಚಿಟಿಕೆ ಜೀರಿಗೆ ಸೇರಿಸಿ ನೋಡಿ: ಆರೋಗ್ಯ ಅರಳಿ ನೀವು 'ಸೂಪರ್ ಮ್ಯಾನ್' ಆಗೋದು ಗ್ಯಾರಂಟಿ!&lt;/strong&gt;&lt;/p&gt;&lt;p&gt;ನಮ್ಮ ದಿನನಿತ್ಯದ ಬದುಕಿನಲ್ಲಿ ಹಾಲು ಕುಡಿಯುವುದು ಒಂದು ಹಳೆಯ ಸಂಪ್ರದಾಯ. ಕ್ಯಾಲ್ಸಿಯಂ ಸಿಗುತ್ತೆ, ಮೂಳೆ ಬಲವಾಗುತ್ತೆ ಅಂತ ನಾವೆಲ್ಲರೂ ಹಾಲು ಕುಡಿಯುತ್ತೇವೆ. ಆದರೆ, ಅದೇ ಹಾಲಿಗೆ ನಿಮ್ಮ ಅಡುಗೆ ಮನೆಯಲ್ಲಿರುವ ಪುಟ್ಟ ಸಾಂಬಾರ ಪದಾರ್ಥ 'ಜೀರಿಗೆ'ಯನ್ನು ಸೇರಿಸಿದರೆ ಏನಾಗಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಈ ಒಂದು ಕಾಂಬಿನೇಷನ್ ನಿಮ್ಮ ದೇಹಕ್ಕೆ ನೀಡುವ ಶಕ್ತಿ ಅಂತಿಂತದ್ದಲ್ಲ! ಇದನ್ನು 'ಆರೋಗ್ಯದ ಅಮೃತ' ಎನ್ನಬಹುದು. ಬನ್ನಿ, ಜೀರಿಗೆ ಮಿಶ್ರಿತ ಹಾಲಿನ ಕಿಕ್ ಹಾಗೂ ಲಾಭ ಏನೆಂದು ತಿಳಿಯೋಣ.&lt;/p&gt;&lt;h2&gt;1. ಹೊಟ್ಟೆಯ ಸಮಸ್ಯೆಗೆ ಬ್ರೇಕ್!&lt;/h2&gt;&lt;p&gt;ಇತ್ತೀಚಿನ ಫಾಸ್ಟ್ ಫುಡ್ ಜಮಾನಾದಲ್ಲಿ ಗ್ಯಾಸ್ಟ್ರಿಕ್, ಮಲಬದ್ಧತೆ ಮತ್ತು ಜೀರ್ಣಕ್ರಿಯೆಯ ತೊಂದರೆ ಸಾಮಾನ್ಯವಾಗಿದೆ. ನೀವು ದಿನವಿಡೀ ಏನೇ ತಿಂದರೂ, ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಸ್ವಲ್ಪ ಜೀರಿಗೆ ಪುಡಿ ಬೆರೆಸಿ ಕುಡಿದರೆ ಸಾಕು. ಇದು ನಿಮ್ಮ ಜೀರ್ಣಾಂಗವ್ಯೂಹವನ್ನು ಕ್ಲೀನ್ ಮಾಡುವುದಷ್ಟೇ ಅಲ್ಲದೆ, ಬೆಳಿಗ್ಗೆ ಹೊಟ್ಟೆ ಹಗುರವಾಗುವಂತೆ ಮಾಡುತ್ತದೆ. ಮಲಬದ್ಧತೆಯ ಕಿರಿಕಿರಿಯಿಂದ ನಿಮಗೆ ಶಾಶ್ವತ ಮುಕ್ತಿ ಸಿಗಲಿದೆ. ತನ್ಮೂಲಕ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಆಗುತ್ತದೆ.&lt;/p&gt;&lt;p&gt;2. ತೂಕ ಇಳಿಕೆಗೆ ಇದುವೇ ಸುಲಭ ಮದ್ದು!&lt;/p&gt;&lt;p&gt;ಜಿಮ್&zwnj;ಗೆ ಹೋಗಿ ಬೆವರಿಸಲು ಸಮಯವಿಲ್ಲವೇ? ಚಿಂತೆ ಬಿಡಿ. ಜೀರಿಗೆ ಮತ್ತು ಹಾಲಿನ ಮಿಶ್ರಣವು ದೇಹದ ಮೆಟಬಾಲಿಸಂ ಅನ್ನು ಹೆಚ್ಚಿಸುತ್ತದೆ. ಇದು ಶೇಖರಣೆಯಾದ ಕೆಟ್ಟ ಕೊಬ್ಬನ್ನು ಕರಗಿಸಲು ಮತ್ತು ಬೊಜ್ಜನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು (Toxins) ಹೊರಹಾಕಿ, ಒಳಗಿನಿಂದ ನಿಮ್ಮನ್ನು ಶುಚಿಗೊಳಿಸುತ್ತದೆ. ಇದು ನ್ಯಾಚುರಲ್ ಡಿಟಾಕ್ಸ್ ಡ್ರಿಂಕ್ ಆಗಿ ಕೆಲಸ ಮಾಡುತ್ತದೆ.&lt;/p&gt;&lt;p&gt;3. ಒತ್ತಡಕ್ಕೆ ಗುಡ್ ಬೈ, ಸುಖ ನಿದ್ರೆಗೆ ಹಲೋ!&lt;/p&gt;&lt;p&gt;ದಿನವಿಡೀ ಕೆಲಸದ ಒತ್ತಡ, ಟೆನ್ಷನ್&zwnj;ನಿಂದ ತಲೆನೋವು ಬರುವುದು ಸಹಜ. ಇಂತಹ ಸಮಯದಲ್ಲಿ ನಿದ್ದೆ ಬರುವುದೂ ಕಷ್ಟವಾಗುತ್ತದೆ. ಜೀರಿಗೆ ಹಾಲಿನಲ್ಲಿರುವ ಗುಣಗಳು ಮಿದುಳನ್ನು ಶಾಂತಗೊಳಿಸುತ್ತವೆ. ರಾತ್ರಿ ಈ ಹಾಲು ಕುಡಿದರೆ ಒತ್ತಡ ಕಡಿಮೆಯಾಗಿ, ಯಾವುದೇ ಮಾತ್ರೆಗಳ ಸಹಾಯವಿಲ್ಲದೆ ನೀವು ಮಗುವಿನಂತೆ ಗಾಢವಾಗಿ ನಿದ್ರಿಸಬಹುದು. ನಿದ್ದೆ ಚೆನ್ನಾಗಿ ಆದರೆ ನಮ್ಮ ಆರೋಗ್ಯ ಸಾಕಷ್ಟು ಉತ್ತಮವಾಗಿರುತ್ತದೆ.&lt;/p&gt;&lt;h3&gt;4. ರೋಗನಿರೋಧಕ ಶಕ್ತಿಯ 'ಬಾಡಿಗಾರ್ಡ್'&lt;/h3&gt;&lt;p&gt;ಜೀರಿಗೆ ಪುಡಿಯಲ್ಲಿ ಆಂಟಿ-ಆಕ್ಸಿಡೆಂಟ್ ಗುಣಗಳು ಸಮೃದ್ಧವಾಗಿವೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಎಷ್ಟು ಹೆಚ್ಚಿಸುತ್ತದೆ ಎಂದರೆ, ಸಣ್ಣಪುಟ್ಟ ಶೀತ, ಕೆಮ್ಮು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಜೊತೆಗೆ ಸ್ನಾಯುಗಳ ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಿ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಸಕ್ಕರೆ ಕಾಯಿಲೆ ಅಥವಾ ಬ್ಲಡ್ ಶುಗರ್ ಇರುವವರಿಗೂ ಇದು ಅತ್ಯುತ್ತಮ ಮನೆಮದ್ದಾಗಿದೆ.&lt;/p&gt;&lt;p&gt;ತಯಾರಿಸುವುದು ಹೇಗೆ?&lt;/p&gt;&lt;p&gt;ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಜೀರಿಗೆ ಪುಡಿ ಅಥವಾ ಜೀರಿಗೆಯನ್ನು ಕುದಿಸಿ ಸೋಸಿಕೊಂಡು ಕುಡಿಯಬಹುದು. ರುಚಿಗೆ ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಅಥವಾ ಬೆಲ್ಲ ಸೇರಿಸಿಕೊಳ್ಳಬಹುದು.&lt;/p&gt;&lt;p&gt;ಇನ್ನೇಕೆ ತಡ? ಇಂದೇ ನಿಮ್ಮ ರಾತ್ರಿಯ ಡಯಟ್&zwnj;ನಲ್ಲಿ ಈ 'ಮ್ಯಾಜಿಕ್ ಡ್ರಿಂಕ್' ಸೇರಿಸಿಕೊಳ್ಳಿ ಮತ್ತು ಆರೋಗ್ಯಕರ ಬದಲಾವಣೆಯನ್ನು ಅನುಭವಿಸಿ. ನೆನಪಿಡಿ, ಆರೋಗ್ಯವೇ ಭಾಗ್ಯ!&lt;/p&gt;&lt;p&gt;ಸೂಚನೆ: ಈ ಸಲಹೆ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಪ್ರತಿಯೊಬ್ಬರ ದೇಹಪ್ರಕೃತಿ ವಿಭಿನ್ನ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/if-you-drink-milk-with-cumin-powder-every-night-even-high-blood-sugar-levels-can-be-regulated/articleshow-5wdpvrr"/>
        </item>
        <item>
            <title><![CDATA[ಮನೆಯ ಗಿಡದಲ್ಲಿ ಟೊಮೆಟೊ ಬಿಡುತ್ತಿಲ್ಲವೇ? ಚಿಂತೆ ಬೇಡ, ಇಲ್ಲಿದೆ ಸಿಂಪಲ್ ಟಿಪ್ಸ್]]></title>
            <link>https://kannada.asianetnews.com/webstories/food/simple-tips-for-growing-tomatoes-at-home-all-you-need-to-know-kvn-64u4rdz</link>
            <guid isPermaLink="true">https://kannada.asianetnews.com/webstories/food/simple-tips-for-growing-tomatoes-at-home-all-you-need-to-know-kvn-64u4rdz</guid>
            <pubDate>Thu, 16 Jul 2026 18:03:36 +0530</pubDate>
            <description><![CDATA[&lt;p&gt;ಮನೆಯ ಕೈತೋಟ ಅಥವಾ ಗ್ರೋ ಬ್ಯಾಗ್&zwnj;ಗಳಲ್ಲಿ ಬೆಳೆಸಿದ ಟೊಮೆಟೊ ಗಿಡದಲ್ಲಿ ಹಣ್ಣುಗಳು ಸಿಗುತ್ತಿಲ್ಲವೇ? ಹಾಗಾದರೆ ನೀವು ಗಮನಿಸಬೇಕಾದ ಕೆಲವು ವಿಷಯಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshvpfgpvtpj1641wxapv06q,imgname-new-project---2026-05-26t152815.016-1779789676054.jpg" type="image/jpeg" height="390" width="690"/>
            <category>food</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/food/simple-tips-for-growing-tomatoes-at-home-all-you-need-to-know-kvn-64u4rdz"/>
        </item>
        <item>
            <title><![CDATA[ಮಾಡಿಟ್ಟ ಚಪಾತಿ ಗಟ್ಟಿಯಾದ್ರೆ, ಪುನಃ ಸಾಫ್ಟ್​ ಮಾಡೋದು ತುಂಬಾ ಸುಲಭ: ಈ ಟಿಪ್ಸ್​ ಫಾಲೋ ಮಾಡಿ]]></title>
            <link>https://kannada.asianetnews.com/gallery/life/if-chapati-become-hard-after-few-hours-its-very-easy-to-make-it-soft-follow-these-tips-suc-7v3ocqg</link>
            <guid isPermaLink="true">https://kannada.asianetnews.com/gallery/life/if-chapati-become-hard-after-few-hours-its-very-easy-to-make-it-soft-follow-these-tips-suc-7v3ocqg</guid>
            <pubDate>Fri, 17 Jul 2026 17:32:52 +0530</pubDate>
            <description><![CDATA[ಕೆಲಸದ ಒತ್ತಡದಲ್ಲಿ ಮೊದಲೇ ಮಾಡಿಟ್ಟ ಅಥವಾ ಉಳಿದುಹೋದ ಚಪಾತಿಗಳು ಗಟ್ಟಿಯಾಗುವುದು ಸಾಮಾನ್ಯ. ಆದರೆ, ಈ ಗಟ್ಟಿಯಾದ ಚಪಾತಿಗಳನ್ನು ಎಸೆಯುವ ಬದಲು, ಹಿರಿಯರು ಹೇಳಿಕೊಟ್ಟ ಸುಲಭ ಉಪಾಯ ಬಳಸಿ ಮತ್ತೆ ಬಿಸಿಬಿಸಿ ಮೃದುವಾದ ಚಪಾತಿಯಂತೆ ಮಾಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kxqz4h6wp9451cx0hg1jkb16,imgname-chapati-tips-1784289576156.jpg" type="image/jpeg" height="390" width="690"/>
            <content:encoded><![CDATA[ಕೆಲಸದ ಒತ್ತಡದಲ್ಲಿ ಮೊದಲೇ ಮಾಡಿಟ್ಟ ಅಥವಾ ಉಳಿದುಹೋದ ಚಪಾತಿಗಳು ಗಟ್ಟಿಯಾಗುವುದು ಸಾಮಾನ್ಯ. ಆದರೆ, ಈ ಗಟ್ಟಿಯಾದ ಚಪಾತಿಗಳನ್ನು ಎಸೆಯುವ ಬದಲು, ಹಿರಿಯರು ಹೇಳಿಕೊಟ್ಟ ಸುಲಭ ಉಪಾಯ ಬಳಸಿ ಮತ್ತೆ ಬಿಸಿಬಿಸಿ ಮೃದುವಾದ ಚಪಾತಿಯಂತೆ ಮಾಡಬಹುದು.&lt;img&gt;&lt;p&gt;ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಉಂಟು ಎನ್ನುವಂತೆ, ಅಡುಗೆ ಮನೆಯಲ್ಲಿನ ಹಲವಾರು ಸಮಸ್ಯೆಗಳಿಗೆ ವಿವಿಧ ರೀತಿಯ ಪರಿಹಾರಗಳು ಇದ್ದೇ ಇವೆ. ಅಡುಗೆ ಮಾಡುವಾಗ ಆಗುವ ಎಡವಟ್ಟುಗಳನ್ನು ಸರಿಪಡಿಸಲು ಹಿರಿಯರು ಹೇಳಿಕೊಟ್ಟಿರುವ ಟಿಪ್ಸ್​ಗಳು ನಿಜಕ್ಕೂ ಅಡುಗೆ ಮನೆಯಲ್ಲಿ ಉಪಯೋಗ ಆಗುತ್ತವೆ.&lt;/p&gt;&lt;img&gt;&lt;p&gt;ಇದೀಗ ಅಂಥದ್ದೇ ಒಂದು ಟಿಪ್ಸ್​ ಚಪಾತಿಯದ್ದು. ಸಾಮಾನ್ಯವಾಗಿ ಚಪಾತಿ ಬಿಸಿಬಿಸಿ ತಿಂದರೇನೇ ರುಚಿ ಹೆಚ್ಚು. ಹಾಗೆಂದು ಕೆಲಸಕ್ಕೆ ಹೋಗುವ ಮಹಿಳೆಯರು ಅಥವಾ ಮನೆಯಲ್ಲಿ ಬೇರೆ ಕೆಲಸ ಇರುವ ಗೃಹಿಣಿಯರು ಚಪಾತಿ ಮಾಡುವಾಗ ಎಲ್ಲರೂ ಬರಲಿ ಎಂದು ಕಾಯುತ್ತಾ ಕುಳಿತುಕೊಳ್ಳುವುದು ಕಷ್ಟ. ಆದ್ದರಿಂದ ಮೊದಲೇ ಒಂದಿಷ್ಟು ಚಪಾತಿ ಮಾಡಿಡಲೇಬೇಕಾಗುತ್ತದೆ. ಇನ್ನು ಕೆಲವೊಮ್ಮೆ ಮಾಡಿದ ಚಪಾತಿ ಹೆಚ್ಚಾಗಿ ಅದನ್ನು ಹಾಗೆಯೇ ಇಡುವ ಸಂದರ್ಭವೂ ಬರಹುದು.&lt;/p&gt;&lt;img&gt;&lt;p&gt;ಆ ಸಮಯದಲ್ಲಿ ಸ್ವಲ್ಪ ಗಂಟೆ ಬಿಟ್ಟು ನೋಡಿದರೆ ಚಪಾತಿ ಗಟ್ಟಿಯಾಗಿರುತ್ತದೆ. ಆಗ ಅದನ್ನು ಬಿಸಿ ಮಾಡಲು ಹೋದರೆ ಮತ್ತಷ್ಟು ಗಟ್ಟಿಯಾಗುತ್ತದೆ. ಆಗ ಅದನ್ನು ಎಸೆಯುವ ಪರಿಸ್ಥಿತಿ ಬರಬಹುದು, ಇಲ್ಲವೇ ವೇಸ್ಟ್​ ಆಗಬಾರದು ಎಂದು ಮಹಿಳೆಯರೇ ಕಷ್ಟಪಟ್ಟು ತಿನ್ನುವುದೂ ಹಲವು ಮನೆಗಳಲ್ಲಿ ನಡೆದೇ ಇರುತ್ತದೆ.&lt;/p&gt;&lt;img&gt;&lt;p&gt;ಆದ್ದರಿಂದ ಈ ಸಮಸ್ಯೆಗೆ ಸುಲಭದ ಉಪಾಯವೊಂದಿದೆ. ಅದು ಗಟ್ಟಿಯಾದ ಚಪಾತಿಯನ್ನು ಮೃದು ಮಾಡುವ ಉಪಾಯವದು. ಇದು ತುಂಬಾ ಸುಲಭವೂ, ಪರಿಣಾಮಕಾರಿಯೂ ಆಗಿದೆ.&lt;/p&gt;&lt;img&gt;&lt;p&gt;ಮೊದಲ ಹಾಗೂ ತುಂಬಾ ಪರಿಣಾಮಕಾರಿಯಾಗಿರುವ ಟಿಪ್ಸ್​ ಎಂದರೆ, ಗಟ್ಟಿಯಾಗಿರುವ ಹಳೆಯ ಚಪಾತಿಯ ಮೇಲೆ ಸ್ವಲ್ಪ ನೀರು ಹಚ್ಚಿ, ಬಿಸಿ ತವಾ ಮೇಲೆ ಎರಡೂ ಕಡೆ ತುಪ್ಪ ಅಥವಾ ಎಣ್ಣೆ ಹಾಕಿ ಮೃದುವಾಗಿ ಬಿಸಿ ಮಾಡಿಕೊಳ್ಳಬೇಕು. ಆಗ ಚಪಾತಿ ಗಟ್ಟಿಯಾಗಿದ್ದರೂ ಮೃದುವಾಗಿಬಿಡುತ್ತದೆ.&lt;/p&gt;&lt;img&gt;&lt;p&gt;ಸಣ್ಣ ಉರಿಯಲ್ಲಿ ಎರಡೂ ಬದಿಗಳನ್ನು ಸ್ವಲ್ಪ ಹೊತ್ತು ಬಿಸಿ ಮಾಡಬೇಕು. ಹೀಗೆ ಮಾಡುವುದರಿಂದ ಚಪಾತಿಗೆ ಹಬೆಯ ತೇವಾಂಶ ಸಿಕ್ಕು ಮತ್ತೆ ಮೃದುವಾಗುತ್ತದೆ.&lt;/p&gt;]]></content:encoded>
            <category>food</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/if-chapati-become-hard-after-few-hours-its-very-easy-to-make-it-soft-follow-these-tips-suc-7v3ocqg"/>
        </item>
        <item>
            <title><![CDATA['ಮಾವುಗಳ ರಾಜ' ಖಾನ್​ ಸಾಹೇಬ್ರು: ನರೇಂದ್ರ ಮೋದಿ, ಐಶ್ವರ್ಯ ರೈ, ತೆಂಡೂಲ್ಕರ್​ ಸೇರಿ ಒಂದೇ ಮರದಲ್ಲಿ 135 ತಳಿಗಳ ಅಚ್ಚರಿ]]></title>
            <link>https://kannada.asianetnews.com/india-news/kalimullah-khan-spent-decades-perfecting-grafting-to-grow-350-mango-varieties-suc/articleshow-9zn99d1</link>
            <guid isPermaLink="true">https://kannada.asianetnews.com/india-news/kalimullah-khan-spent-decades-perfecting-grafting-to-grow-350-mango-varieties-suc/articleshow-9zn99d1</guid>
            <pubDate>Sun, 19 Jul 2026 17:29:40 +0530</pubDate>
            <description><![CDATA[84 ವರ್ಷದ ಪದ್ಮಶ್ರೀ ಪುರಸ್ಕೃತ ಕಲೀಮುಲ್ಲಾ ಖಾನ್, 'ಭಾರತದ ಮಾವಿನ ಮನುಷ್ಯ' ಎಂದೇ ಖ್ಯಾತರು. ತಮ್ಮ 125 ವರ್ಷ ಹಳೆಯ ಮರದಲ್ಲಿ ಕಸಿ ತಂತ್ರದ ಮೂಲಕ 350ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣುಗಳನ್ನು ಬೆಳೆದು, ವಿಜ್ಞಾನ ಲೋಕವನ್ನೇ ಬೆರಗುಗೊಳಿಸಿದ್ದಾರೆ. ಅವರ ಈ ಸಾಧನೆಯು ಪರಿಶ್ರಮ ಮತ್ತು ಪ್ರಕೃತಿಯೊಂದಿಗಿನ ಅವರ ಆಳವಾದ ಸಂಬಂಧಕ್ಕೆ ಸಾಕ್ಷಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxx3seje7fxk8z4x9cvrdkhr,imgname-kalimullah-khan-1784462228046.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾವು ಹಣ್ಣುಗಳ ರಾಜನಾಗಿದ್ದರೆ, ಕಲೀಮುಲ್ಲಾ ಖಾನ್ ನಿಸ್ಸಂದೇಹವಾಗಿ ಆ ರಾಜನ ವೈಭವವನ್ನು ಹೆಚ್ಚಿಸುವ ಮಾವುಗಳ ರಾಜ. 84 ವರ್ಷದ ಕಲೀಮುಲ್ಲಾ ಖಾನ್ ಕಥೆಯು ವಿಜ್ಞಾನ ಪ್ರಯೋಗಾಲಯದಲ್ಲಿ ಪ್ರಾರಂಭವಾಗುವುದಿಲ್ಲ, ಬದಲಾಗಿ ಉತ್ತರ ಪ್ರದೇಶದ ಮಾವಿನ ತೋಟದಲ್ಲಿ ಪ್ರಾರಂಭವಾಗುತ್ತದೆ. ಏಳನೇ ತರಗತಿಯಲ್ಲಿ ಅನುತ್ತೀರ್ಣನಾಗಿ, ಶಾಲೆಯನ್ನು ತೊರೆದು, ತೋಟಗಳಲ್ಲಿ ಸಮಯ ಕಳೆಯಲು ಪ್ರಾರಂಭಿಸಿದ ಹುಡುಗ, ಇಂದು &quot;ಭಾರತದ ಮಾವಿನ ಮನುಷ್ಯ&quot; ಎಂದು ಕರೆಯಲ್ಪಡುತ್ತಿದ್ದಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.&lt;/p&gt;&lt;p&gt;ಜನರು ಇವರನ್ನು ವಿಜ್ಞಾನಿ ಅಥವಾ ಸೆಲೆಬ್ರಿಟಿ ಎಂದು ಪರಿಗಣಿಸಿದರೂ ನಯವಾಗಿಯೇ ಅಲ್ಲಗಳೆಯುವ ಖಾನ್​ ಸಾಹೇಬ್ರು ಮಾತ್ರ ಈಗ ಪದ್ಮಶ್ರೀ ಪುರಸ್ಕೃತರಾಗಿ ಇಡೀ ದೇಶದ ಗಮನ ಸೆಳೆದಿದ್ದಾರೆ. ಮಲಿಹಾಬಾದ್&zwnj;ನಲ್ಲಿರುವ ತಮ್ಮ ತೋಟದಲ್ಲಿ, ಕಲೀಮುಲ್ಲಾ ಖಾನ್ ಯಾರೂ ಊಹಿಸಿರದ ಸಾಧನೆ ಮಾಡಿದ್ದಾರೆ. ಒಂದೇ ಮರದಲ್ಲಿ 350 ಕ್ಕೂ ಹೆಚ್ಚು ವಿಧದ ಮಾವಿನ ಹಣ್ಣುಗಳನ್ನು ಬೆಳೆಸಿದ್ದಾರೆ. ಹಾಗೆಂದು ಇದೇನೂ ಮ್ಯಾಜಿಕ್ ಅಲ್ಲ, ಬದಲಾಗಿ ಶತಮಾನಗಳಷ್ಟು ಹಳೆಯದಾದ ಕಸಿ ಮಾಡುವ ತಂತ್ರ. ಕಲೀಮುಲ್ಲಾ ಖಾನ್ ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಯೋಗಗಳ ಮೂಲಕ ಅದನ್ನು ಹೊಸ ಎತ್ತರಕ್ಕೆ ಏರಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರವಾಹದಿಂದ ನಾಶವೇ ಇಂದು ಸಾಧನೆಯ ಉತ್ತುಂಗದತ್ತ...&lt;/strong&gt;&lt;/h2&gt;&lt;p&gt;1957 ರಲ್ಲಿ, ಅವರು ಮೊದಲು ಒಂದೇ ಮರದಲ್ಲಿ ಏಳು ವಿಧದ ಮಾವಿನ ಹಣ್ಣುಗಳನ್ನು ಬೆಳೆಯಲು ಪ್ರಯತ್ನಿಸಿದರು, ಆದರೆ ಪ್ರವಾಹವು ಎಲ್ಲವನ್ನೂ ನಾಶಮಾಡಿತು. ಆ ವಿನಾಶದಿಂದ, ಅವರು ಭೂಮಿ ಮತ್ತು ನೀರನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂದು ಕಲಿತರು. ಅವರು ವೈಫಲ್ಯವನ್ನು ಪ್ರಯೋಗಾಲಯವನ್ನಾಗಿ ಪರಿವರ್ತಿಸಿದರು ಮತ್ತು ಪ್ರಕೃತಿಯೊಂದಿಗೆ ಸಂವಾದವನ್ನು ಪ್ರಾರಂಭಿಸಿದರು. ಇಂದು ಕಲೀಮುಲ್ಲಾ ಖಾನ್ ಅವರ ತೋಟಕ್ಕೆ ಕಿರೀಟಧಾರಣೆ ಮಾಡುವ ಮರವು 125 ವರ್ಷ ಹಳೆಯದು, ಅವರ ಅಜ್ಜನ ಕಾಲದಿಂದಲೂ ಬಂದಿದೆ. ಇದು ದಸರಾಹ್ರಿ, ಲ್ಯಾಂಗ್ರಾ, ಕೇಸರ್, ಚೌಸಾ ಮತ್ತು ಅಲ್ಫೋನ್ಸೊದಂತಹ ಸಾಂಪ್ರದಾಯಿಕ ಪ್ರಭೇದಗಳನ್ನು ಹೊಂದಿದೆ. ಇದರ ಜೊತೆಗೆ, ಇದು 'ನರೇಂದ್ರ ಮೋದಿ', 'ಐಶ್ವರ್ಯ ರೈ', 'ಸಚಿನ್ ತೆಂಡೂಲ್ಕರ್' ಮತ್ತು 'ಅನಾರ್ಕಲಿ' ನಂತಹ ವಿಶಿಷ್ಟ ಹೆಸರುಗಳನ್ನು ಹೊಂದಿರುವ ಪ್ರಭೇದಗಳನ್ನು ಸಹ ಬೆಳೆಯುತ್ತದೆ. ಈ ಹೆಸರುಗಳು ಕೇವಲ ಪ್ರಚಾರಕ್ಕಾಗಿ ಅಲ್ಲ, ಆದರೆ ಅವರ ಆಳವಾದ ಭಾವನೆಗಳಲ್ಲಿ ಬೇರೂರಿವೆ.&lt;/p&gt;&lt;p&gt;ದಿ ಬೆಟರ್ ಇಂಡಿಯಾ ಜೊತೆ ಮಾತನಾಡಿದ ಕಲೀಮುಲ್ಲಾ, &quot;ಜನರು ನನ್ನನ್ನು ಸ್ವಯಂ-ಕಲಿತ ವಿಜ್ಞಾನಿ ಎಂದು ಕರೆಯುತ್ತಾರೆ. ಆದರೆ ಅದು ನಿಜವಲ್ಲ. ಸತ್ಯವೆಂದರೆ, ಮರಗಳು ನನಗೆ ಕಲಿಸಿದವು ಎನ್ನುತ್ತಾರೆ. ಕಸಿ ಮಾಡುವುದು ಸುಲಭದ ಕೆಲಸವಲ್ಲ. ಈ ಪ್ರಕ್ರಿಯೆಯು ಇತರ ಪ್ರಭೇದಗಳ ಕೊಂಬೆಗಳನ್ನು ಮರದ ಬಲವಾದ ಕಾಂಡಕ್ಕೆ ಜೋಡಿಸುವುದನ್ನು ಒಳಗೊಂಡಿರುತ್ತದೆ. ಇದಕ್ಕೆ ವೈಜ್ಞಾನಿಕ ತಿಳಿವಳಿಕೆ ಮಾತ್ರವಲ್ಲದೆ ಹೆಚ್ಚಿನ ತಾಳ್ಮೆಯೂ ಬೇಕಾಗುತ್ತದೆ, ಏಕೆಂದರೆ ಹೊಸ ತಳಿಯನ್ನು ಅಭಿವೃದ್ಧಿಪಡಿಸಲು 10-12 ವರ್ಷಗಳು ತೆಗೆದುಕೊಳ್ಳಬಹುದು. ಉದಾಹರಣೆಗೆ, 'ದಸ್ಸೆಹ್ರಿ-ಕಲಿಮ್' ವಿಧವನ್ನು ಅಭಿವೃದ್ಧಿಪಡಿಸಲು 12 ವರ್ಷಗಳು ಬೇಕಾಯಿತು ಎನ್ನುತ್ತಾರೆ ಖಾನ್​ ಸಾಹೇಬ್ರು.&lt;/p&gt;&lt;h3&gt;&lt;strong&gt;ವಿಭಿನ್ನ ಕಥೆ ಹೇಳುವ ಮರಗಳು&lt;/strong&gt;&lt;/h3&gt;&lt;p&gt;ಅವರ ಮರವು 9 ಮೀಟರ್ ಎತ್ತರವಾಗಿದೆ ಮತ್ತು ಪ್ರತಿ ಶಾಖೆಯು ವಿಭಿನ್ನ ಕಥೆಯನ್ನು ಹೇಳುತ್ತದೆ. ವಿಭಿನ್ನ ರುಚಿ, ಬಣ್ಣ ಮತ್ತು ಪರಿಮಳ. ಇಂದು, ಕಲಿಮುಲ್ಲಾ ಅವರ ತೋಟದ ಸುಗಂಧವು ಭಾರತವನ್ನು ಮಾತ್ರವಲ್ಲದೆ ದುಬೈ ಮತ್ತು ಇರಾನ್ ಅನ್ನು ಸಹ ತಲುಪಿದೆ. ಅಲ್ಲಿನ ರೈತರು ಮತ್ತು ಸಂಶೋಧಕರು ಮರವನ್ನು ನೋಡಲು ಮತ್ತು ಕಸಿ ತಂತ್ರವನ್ನು ಕಲಿಯಲು ಬರುತ್ತಾರೆ. &quot;ಅವಕಾಶ ಸಿಕ್ಕರೆ, ನಾನು ಮರುಭೂಮಿಯಲ್ಲಿಯೂ ಮಾವಿನ ಹಣ್ಣುಗಳನ್ನು ಬೆಳೆಯಬಲ್ಲೆ&quot; ಎನ್ನುವ ಟ್ಯಾಲೆಂಟ್​ ಇವರದ್ದು.&lt;/p&gt;&lt;p&gt;ಕಲಿಮುಲ್ಲಾ ಖಾನ್ ಅವರ ಕಥೆ ಕೇವಲ ತೋಟಗಾರಿಕೆಯ ಬಗ್ಗೆ ಅಲ್ಲ. ಇದು ಭೂಮಿಯೊಂದಿಗಿನ ಸಂಪರ್ಕವನ್ನು ಎಂದಿಗೂ ಮುರಿಯದ ವ್ಯಕ್ತಿಯ ಕಥೆ. ಅವರು ಪದವಿಗಳು ಅಥವಾ ಸವಲತ್ತುಗಳ ಬಗ್ಗೆ ಕಾಳಜಿ ವಹಿಸಲಿಲ್ಲ; ಅವರು ತಮ್ಮ ಉತ್ಸಾಹ ಮತ್ತು ಮರಗಳ ಭಾಷೆಯನ್ನು ಮಾತ್ರ ಕೇಳುತ್ತಿದ್ದರು. ಇಂದು, ಅವರ ಮಾವಿನ ಮರಗಳು ಕೇವಲ ಫಲ ನೀಡುತ್ತಿಲ್ಲ, ಬದಲಿಗೆ ಅವರ ಸಂಪ್ರದಾಯ ಮತ್ತು ಪ್ರಯೋಗಗಳು ಜೀವಂತ ಉದಾಹರಣೆಯಾಗಿವೆ.&lt;/p&gt;]]></content:encoded>
            <category>food</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/kalimullah-khan-spent-decades-perfecting-grafting-to-grow-350-mango-varieties-suc/articleshow-9zn99d1"/>
        </item>
        <item>
            <title><![CDATA[ಚಪಾತಿ, ದೋಸೆ, ಇಡ್ಲಿಗೆ ಮಾತ್ರವಲ್ಲ.. ಬಿಸಿ ಬಿಸಿ ಅನ್ನಕ್ಕೂ ಒಳ್ಳೆಯ ಕಾಂಬಿನೇಶನ್ ಉದ್ದಿನಬೇಳೆ ಚಟ್ನಿ]]></title>
            <link>https://kannada.asianetnews.com/food/how-to-make-spicy-urad-dal-chutney-recipe-kannada/articleshow-buis35d</link>
            <guid isPermaLink="true">https://kannada.asianetnews.com/food/how-to-make-spicy-urad-dal-chutney-recipe-kannada/articleshow-buis35d</guid>
            <pubDate>Wed, 15 Jul 2026 16:52:07 +0530</pubDate>
            <description><![CDATA[&lt;p&gt;&lt;strong&gt;Healthy breakfast side dish urad dal: &lt;/strong&gt;ಉದ್ದಿನಬೇಳೆಯನ್ನು ಕೇವಲ ದೋಸೆ, ಇಡ್ಲಿಗೆ ಮಾತ್ರ ಬಳಸಲ್ಲ.. ಇದರಿಂದ ಬಿಸಿಬಿಸಿ ಅನ್ನಕ್ಕೆ ಹಳ್ಳಿಯ ಶೈಲಿಯ ರುಚಿಕರವಾದ ಚಟ್ನಿ ಕೂಡ ಮಾಡಬಹುದು! ಪ್ರೋಟೀನ್ ಮತ್ತು ಫೈಬರ್&zwnj;ನಿಂದ ಕೂಡಿದ ಈ ಉದ್ದಿನಬೇಳೆ ಚಟ್ನಿ ಮಾಡುವುದು ಬಹಳ ಸುಲಭ. ಮಾಡುವುದು ಹೇಗೆಂದು ವಿಡಿಯೋ ಸಮೇತ ಮಾಹಿತಿ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjr57t3d4rqbjjzxzpzme1k,imgname-thumbnail---2026-07-15t164247.324-1784114487107.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನೀವು &lt;/strong&gt;ಎಂದಾದರೂ ಉದ್ದಿನಬೇಳೆಯ ಚಟ್ನಿಯನ್ನು ಟ್ರೈ ಮಾಡಿದ್ದೀರಾ? ಟೊಮೆಟೊ, ಗೋಂಗೂರ ಅಥವಾ ಈರುಳ್ಳಿ ಚಟ್ನಿಗಿಂತ ಇದು ವಿಭಿನ್ನ ರುಚಿ ನೀಡುವುದಲ್ಲದೆ ಆರೋಗ್ಯಕ್ಕೂ ಅತ್ಯಂತ ಪ್ರಯೋಜನಕಾರಿಯಾಗಿದೆ.&lt;/p&gt;&lt;h2&gt;&lt;strong&gt;ಉದ್ದಿನಬೇಳೆಯ ಆರೋಗ್ಯ ಗುಣಗಳು&lt;/strong&gt;&lt;/h2&gt;&lt;p&gt;ಉದ್ದಿನಬೇಳೆಯಲ್ಲಿ ಪ್ರೋಟೀನ್, ನಾರಿನಂಶ (Fiber), ವಿಟಮಿನ್ ಮತ್ತು ಮಿನರಲ್ಸ್ ಸಮೃದ್ಧವಾಗಿವೆ. ಇದು ಸ್ನಾಯುಗಳ ಬೆಳವಣಿಗೆಗೆ, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲಬದ್ಧತೆ ನಿವಾರಣೆಗೆ ಸಹಕಾರಿ. ಇದರಲ್ಲಿರುವ ಕಬ್ಬಿಣದಂಶವು ರಕ್ತಹೀನತೆಯನ್ನು ತಡೆಯುತ್ತದೆ ಹಾಗೂ ಮೂಳೆ ಮತ್ತು ಹಲ್ಲುಗಳನ್ನು ಸದೃಢಗೊಳಿಸುತ್ತದೆ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ಮಧುಮೇಹಿಗಳಿಗೆ ಇದು ಅತ್ಯುತ್ತಮ ಆಹಾರ. ಸಿಪ್ಪೆಯುಳ್ಳ ಉದ್ದಿನಬೇಳೆಯನ್ನು ಬಳಸಿದರೆ ಹೆಚ್ಚಿನ ಫೈಬರ್ ಮತ್ತು ಪೋಷಕಾಂಶಗಳು ದೊರೆಯುತ್ತವೆ.&lt;/p&gt;&lt;h2&gt;&lt;strong&gt;ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;ಎಣ್ಣೆ - 2 ಟೇಬಲ್ ಸ್ಪೂನ್ಒಣಮೆಣಸಿನಕಾಯಿ - 40 (ಖಾರಕ್ಕೆ ತಕ್ಕಂತೆ)ಉದ್ದಿನಬೇಳೆ - 300 ಗ್ರಾಂಧನಿಯಾ - 4 ಟೀಸ್ಪೂನ್ಜೀರಿಗೆ - 2 ಟೀಸ್ಪೂನ್ಬೆಳ್ಳುಳ್ಳಿ - 20 ಎಸಳುಕರಿಬೇವು - ಸ್ವಲ್ಪಹುಣಸೆಹಣ್ಣು - ನಿಂಬೆಹಣ್ಣಿನ ಗಾತ್ರದಷ್ಟುಉಪ್ಪು - ರುಚಿಗೆ ತಕ್ಕಷ್ಟುಈರುಳ್ಳಿ - ಅರ್ಧ ಕಪ್ (ಸಣ್ಣಗೆ ಹೆಚ್ಚಿದ್ದು)&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;*ಮೊದಲು ಹುಣಸೆಹಣ್ಣನ್ನು ಸ್ವಲ್ಪ ನೀರಿನಲ್ಲಿ ನೆನೆಸಿಡಿ.*ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಣಮೆಣಸಿನಕಾಯಿಯನ್ನು ಹುರಿದು ತೆಗೆದಿಡಿ.*ಅದೇ ಬಾಣಲೆಯಲ್ಲಿ ಉದ್ದಿನಬೇಳೆ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಧನಿಯಾ ಮತ್ತು ಜೀರಿಗೆ ಸೇರಿಸಿ.*ಕೊನೆಯಲ್ಲಿ ಬೆಳ್ಳುಳ್ಳಿ ಎಸಳು ಮತ್ತು ಕರಿಬೇವು ಸೇರಿಸಿ ಘಮ ಬರುವವರೆಗೆ ಹುರಿದು ತಣ್ಣಗಾಗಲು ಬಿಡಿ.*ಸಾಂಪ್ರದಾಯಿಕ ಕಲ್ಲಿನಲ್ಲಿ ಅಥವಾ ಮಿಕ್ಸಿಯಲ್ಲಿ ಮೊದಲು ಒಣಮೆಣಸಿನಕಾಯಿಯನ್ನು ಅರೆಯಿರಿ.*ನಂತರ ಹುರಿದ ಉದ್ದಿನಬೇಳೆ ಮಿಶ್ರಣ ಮತ್ತು ಉಪ್ಪು ಸೇರಿಸಿ ರುಬ್ಬಿ.*ಆ ನಂತರ ಸ್ವಲ್ಪ ನೀರು ಮತ್ತು ನೆನೆಸಿದ ಹುಣಸೆಹಣ್ಣಿನ ರಸ ಸೇರಿಸಿ ಮತ್ತೊಮ್ಮೆ ಹದವಾಗಿ ರುಬ್ಬಿಕೊಳ್ಳಿ.*ಕೊನೆಯಲ್ಲಿ ಹಸಿ ಈರುಳ್ಳಿ ಸೇರಿಸಿ ಲಘುವಾಗಿ ಜಜ್ಜಿದರೆ ರುಚಿಕರವಾದ ಚಟ್ನಿ ಸಿದ್ಧ. ಇಷ್ಟವಿದ್ದರೆ ಸಾಸಿವೆ-ಕರಿಬೇವಿನ ಒಗ್ಗರಣೆ ನೀಡಬಹುದು.&lt;/p&gt;&lt;p&gt;ಈ ಉದ್ದಿನಬೇಳೆ ಚಟ್ನಿ ಬಿಸಿ ಬಿಸಿ ಅನ್ನ ಮತ್ತು ತುಪ್ಪದ ಜೊತೆಗೆ ಅದ್ಭುತವಾಗಿ ರುಚಿಸುತ್ತದೆ. ಚಪಾತಿ, ದೋಸೆ ಅಥವಾ ಇಡ್ಲಿಗೂ ಇದು ಉತ್ತಮ ಕಾಂಬಿನೇಷನ್. ಸಸ್ಯಾಹಾರಿಗಳಿಗೆ ಪ್ರೋಟೀನ್ ಪಡೆಯಲು ಇದು ಅತ್ಯುತ್ತಮ ಆಯ್ಕೆಯಾಗಿದೆ.&lt;/p&gt;&lt;h2&gt;&lt;strong&gt;ಇದೆಲ್ಲಾ ಗಮನದಲ್ಲಿರಲಿ&lt;/strong&gt;&lt;/h2&gt;&lt;p&gt;&lt;strong&gt;ಸಣ್ಣ ಉರಿಯಲ್ಲಿ ಹುರಿಯಿರಿ: &lt;/strong&gt;ಉದ್ದಿನಬೇಳೆಯನ್ನು ಹುರಿಯುವಾಗ ಉರಿ ಅತಿ ಸಣ್ಣದಾಗಿರಲಿ. ಅದು ಸಮವಾಗಿ ಕೆಂಪಗಾಗಬೇಕು ಮತ್ತು ಅದರಿಂದ ಹಸಿ ವಾಸನೆ ಹೋಗಿ ಒಳ್ಳೆಯ ಘಮ ಬರಬೇಕು. ಅತಿಯಾಗಿ ಬೆಂದು ಕಪ್ಪಾದರೆ ಚಟ್ನಿ ಕಹಿಯಾಗುತ್ತದೆ.&lt;/p&gt;&lt;p&gt;&lt;strong&gt;ತರಿತರಿಯಾಗಿರಲಿ (Coarse Texture): &lt;/strong&gt;ಈ ಚಟ್ನಿಯನ್ನು ತುಂಬಾ ನುಣ್ಣಗೆ ಪೇಸ್ಟ್&zwnj;ನಂತೆ ರುಬ್ಬಬೇಡಿ. ಸ್ವಲ್ಪ ತರಿತರಿಯಾಗಿದ್ದರೆ (ಬೇಳೆ ಸಣ್ಣಗೆ ಹಲ್ಲಿಗೆ ಸಿಗುವಂತಿದ್ದರೆ) ಬಿಸಿ ಅನ್ನದ ಜೊತೆ ತಿನ್ನಲು ಅತಿ ಹೆಚ್ಚು ರುಚಿ ನೀಡುತ್ತದೆ.&lt;/p&gt;&lt;p&gt;&lt;strong&gt;ನೀರಿನ ಹದ: &lt;/strong&gt;ಅನ್ನಕ್ಕೆ ಬೇಕಿದ್ದರೆ ಚಟ್ನಿ ಸ್ವಲ್ಪ ಗಟ್ಟಿಯಾಗಿರಲಿ. ಇಡ್ಲಿ ಅಥವಾ ದೋಸೆಗೆ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಬಹುದು. ಚಟ್ನಿ ಗಟ್ಟಿಯಾಗಿದ್ದರೆ 2 ದಿನಗಳ ಕಾಲ ಕೆಡದೆ ಇರುತ್ತದೆ.&lt;/p&gt;&lt;p&gt;ಈ ಟಿಪ್ಸ್&zwnj;ಗಳನ್ನು ಪಾಲಿಸಿದರೆ ನಿಮ್ಮ ಉದ್ದಿನಬೇಳೆ ಚಟ್ನಿ ಮನೆಯಲ್ಲಿ ಎಲ್ಲರ ಮೆಚ್ಚಿನ ಖಾದ್ಯವಾಗುವುದರಲ್ಲಿ ಸಂಶಯವಿಲ್ಲ!&lt;/p&gt;&lt;h3&gt;&lt;strong&gt;ಇಲ್ಲಿದೆ ನೋಡಿ ವಿಡಿಯೋ&amp;nbsp;&lt;/strong&gt;&lt;/h3&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Anusha Chenna (@anushachennaa)&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/food/how-to-make-spicy-urad-dal-chutney-recipe-kannada/articleshow-buis35d"/>
        </item>
        <item>
            <title><![CDATA[ಇಡ್ಲಿ ದೋಸೆಗಿಂತ ಚಟ್ನಿಗೇ ಡಿಮ್ಯಾಂಡ್! ತೆಳ್ಳನೆಯ ಚಟ್ನಿ ಮಾಡಲು ಟಿಫನ್ ಸೆಂಟರ್‌ನಲ್ಲಿ ಬಳಸುವ 2 ಸೀಕ್ರೆಟ್ ಪದಾರ್ಥಗಳಿವು]]></title>
            <link>https://kannada.asianetnews.com/food/hotel-style-thin-chutney-recipe-kannada/articleshow-f644a3e</link>
            <guid isPermaLink="true">https://kannada.asianetnews.com/food/hotel-style-thin-chutney-recipe-kannada/articleshow-f644a3e</guid>
            <pubDate>Sat, 18 Jul 2026 16:13:32 +0530</pubDate>
            <description><![CDATA[&lt;p&gt;&lt;strong&gt;Idli Dosa chutney hacks: &lt;/strong&gt;ಮನೆಯಲ್ಲಿ ಎಷ್ಟೇ ಚೆನ್ನಾಗಿ ಟಿಫನ್ ಮಾಡಿದರೂ ಹೋಟೆಲ್ ಅಥವಾ ಟಿಫನ್ ಸೆಂಟರ್&zwnj;ಗಳಲ್ಲಿ ನೀಡುವ ಆ ತೆಳ್ಳನೆಯ ಚಟ್ನಿಯ ರುಚಿಯೇ ಬೇರೆ! ಇಡ್ಲಿ, ದೋಸೆಗಿಂತ ಹೆಚ್ಚಾಗಿ ಆ ಚಟ್ನಿಗಾಗಿಯೇ ಹೋಟೆಲ್&zwnj;ಗೆ ಹೋಗುವವರಿದ್ದಾರೆ. ಅಂತಹ ಹೋಟೆಲ್ ಶೈಲಿಯ ಚಟ್ನಿಯ ಅಸಲಿ ರಹಸ್ಯ ಮತ್ತು ಅದಕ್ಕೆ ಬಳಸುವ ಆ ಎರಡು 'ಸೀಕ್ರೆಟ್' ಪದಾರ್ಥಗಳು ಯಾವುವು? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxtck23hpqrgjax6ch5mea26,imgname-thumbnail---2026-07-18t155705.892-1784370792560.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆ&lt;/strong&gt;ಳಗಿನ ಉಪಹಾರಕ್ಕೆ ಇಡ್ಲಿ, ದೋಸೆ, ವಡೆ ಅಥವಾ ಉಪ್ಮಾ ಏನೇ ಇರಲಿ, ಅವುಗಳ ರುಚಿ ಹೆಚ್ಚುವುದೇ ಅದರ ಜೊತೆಗಿರುವ ಚಟ್ನಿಯಿಂದ. ನಾವು ಮನೆಯಲ್ಲಿ ಎಷ್ಟೇ ಚೆನ್ನಾಗಿ ಚಟ್ನಿ ಮಾಡಿದರೂ, ಹೋಟೆಲ್&zwnj;ಗಳಲ್ಲಿ ಅಥವಾ ರಸ್ತೆ ಬದಿಯ ಟಿಫನ್ ಸೆಂಟರ್&zwnj;ಗಳಲ್ಲಿ ನೀಡುವ ಆ ತೆಳ್ಳನೆಯ ಚಟ್ನಿಯ ರುಚಿ ಬರುವುದಿಲ್ಲ. ಅನೇಕರು ಇಡ್ಲಿಗಿಂತ ಆ ಚಟ್ನಿಗಾಗಿಯೇ ಹೋಟೆಲ್&zwnj;ಗೆ ಹೋಗುತ್ತಾರೆ. ಹೋಟೆಲ್&zwnj;ನವರು ಚಟ್ನಿಗೆ ಬಳಸುವ ಆ ಎರಡು ಸೀಕ್ರೆಟ್ ಪದಾರ್ಥಗಳು ಮತ್ತು ರುಚಿಕರ ಚಟ್ನಿ ಮಾಡುವ ವಿಧಾನ ಇಲ್ಲಿದೆ.&lt;/p&gt;&lt;h2&gt;&lt;strong&gt;ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;ಶೇಂಗಾ: 1 ಕಪ್ಹುರಿಗಡಲೆ: 1 ಕಪ್ಹಸಿಮೆಣಸಿನಕಾಯಿ:7-8 (ಖಾರಕ್ಕೆ ತಕ್ಕಂತೆ)ಶುಂಠಿ: 1 ಇಂಚುಪುದೀನಾ ಮತ್ತು ಕರಿಬೇವು: ಸ್ವಲ್ಪಜೀರಿಗೆ: 1/4 ಟೀಸ್ಪೂನ್ಹುಣಸೆಹಣ್ಣು: ಸ್ವಲ್ಪಕೊತ್ತಂಬರಿ ಸೊಪ್ಪು: ಸ್ವಲ್ಪಉಪ್ಪು: ರುಚಿಗೆ ತಕ್ಕಷ್ಟು&lt;strong&gt;ಸೀಕ್ರೆಟ್ ಪದಾರ್ಥಗಳು: &lt;/strong&gt;ಒಂದು ಸಣ್ಣ ತುಂಡು ಹಸಿ ಈರುಳ್ಳಿ ಮತ್ತು ಒಂದು ಸಣ್ಣ ತುಂಡು ಬೆಲ್ಲ.&lt;/p&gt;&lt;h3&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h3&gt;&lt;p&gt;*ಮೊದಲು ಬಾಂಡ್ಲಿಯಲ್ಲಿ ಒಂದು ಕಪ್ ಶೇಂಗಾವನ್ನು ಸಣ್ಣ ಉರಿಯಲ್ಲಿ (Low to Medium Flame) ಚೆನ್ನಾಗಿ ಹುರಿಯಿರಿ. ಜೋರು ಉರಿಯಲ್ಲಿ ಹುರಿದರೆ ಶೇಂಗಾ ಮೇಲೆ ಮಾತ್ರ ಬೆಂದಿರುತ್ತದೆ, ಒಳಗೆ ಹಸಿಯಾಗಿದ್ದು ಚಟ್ನಿ ಹಸಿ ವಾಸನೆ ಬರುತ್ತದೆ. ಹುರಿದ ಶೇಂಗಾವನ್ನು ತಣ್ಣಗಾಗಲು ಬಿಡಿ.&lt;/p&gt;&lt;p&gt;*ಅದೇ ಬಾಂಡ್ಲಿಗೆ ಒಂದು ಚಮಚ ಎಣ್ಣೆ ಹಾಕಿ. ಹಸಿಮೆಣಸಿನಕಾಯಿ, ಶುಂಠಿ ಚೂರುಗಳನ್ನು ಹುರಿಯಿರಿ. ನಂತರ ಅದಕ್ಕೆ ತಾಜಾ ಪುದೀನಾ, ಸ್ವಲ್ಪ ಕರಿಬೇವು ಮತ್ತು ಜೀರಿಗೆ ಹಾಕಿ ಫ್ರೈ ಮಾಡಿ. ಕೊನೆಯಲ್ಲಿ ಹುರಿಗಡಲೆ ಮತ್ತು ಸ್ವಲ್ಪ ಹುಣಸೆಹಣ್ಣು ಸೇರಿಸಿ ಅರ್ಧ ನಿಮಿಷ ಬಾಡಿಸಿ ಸ್ಟೌವ್ ಆಫ್ ಮಾಡಿ.&lt;/p&gt;&lt;p&gt;*ಹುರಿದ ಶೇಂಗಾ ಸಿಪ್ಪೆ ತೆಗೆದ ನಂತರ ಅಡಿಯಲ್ಲಿ ಉಳಿಯುವ ಸಣ್ಣ ಪುಡಿ ಅಥವಾ ನೂಕನ್ನು ಸಂಪೂರ್ಣವಾಗಿ ತೆಗೆಯಿರಿ. ಇಲ್ಲದಿದ್ದರೆ ಚಟ್ನಿ ಸ್ವಲ್ಪ ಕಹಿ ಬರುವ ಸಾಧ್ಯತೆ ಇರುತ್ತದೆ.&lt;/p&gt;&lt;p&gt;*ಈಗ ಮಿಕ್ಸಿ ಜಾರ್&zwnj;ಗೆ ಶೇಂಗಾ, ಹುರಿದ ಮೆಣಸಿನಕಾಯಿ ಮಿಶ್ರಣ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.&lt;/p&gt;&lt;p&gt;*ಇಲ್ಲಿ ಒಂದು ಸಣ್ಣ ತುಂಡು ಹಸಿ ಈರುಳ್ಳಿ ಮತ್ತು ಒಂದು ಸಣ್ಣ ತುಂಡು ಬೆಲ್ಲವನ್ನು ಸೇರಿಸಿ. ಬೆಲ್ಲ ಚಟ್ನಿಯನ್ನು ಸಿಹಿ ಮಾಡುವುದಿಲ್ಲ, ಬದಲಾಗಿ ಎಲ್ಲಾ ರುಚಿಗಳನ್ನು ಸಮತೋಲನಗೊಳಿಸುತ್ತದೆ. ಹೋಟೆಲ್&zwnj;ಗಳಲ್ಲಿ ಇದನ್ನು ಖಂಡಿತ ಬಳಸುತ್ತಾರೆ.&lt;/p&gt;&lt;p&gt;*ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕಾಂಡ ಸಮೇತ ಹಾಕಿ, ಬೇಕಾದಷ್ಟು ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ಚಟ್ನಿ ಹೋಟೆಲ್ ಸ್ಟೈಲ್&zwnj;ನಲ್ಲಿ ಬರಬೇಕೆಂದರೆ ಸ್ವಲ್ಪ ತೆಳ್ಳಗೆ ಇರುವಂತೆ ನೀರು ಸೇರಿಸಿ.&lt;/p&gt;&lt;h3&gt;&lt;strong&gt;ಒಗ್ಗರಣೆ&lt;/strong&gt;&lt;/h3&gt;&lt;p&gt;ಸಣ್ಣ ಪ್ಯಾನ್&zwnj;ನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಮೆಂತ್ಯ, ಕಡ್ಲೆಬೇಳೆ, ಜೀರಿಗೆ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಒಣಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಒಗ್ಗರಣೆಯನ್ನು ಚಟ್ನಿಯ ಮೇಲೆ ಸುರಿಯಿರಿ.&lt;/p&gt;&lt;p&gt;ಈಗ ನಿಮ್ಮ ಮುಂದೆ ಹೋಟೆಲ್ ಶೈಲಿಯ ಘಮಘಮಿಸುವ ತೆಳ್ಳನೆಯ ಚಟ್ನಿ ಸಿದ್ಧ!&lt;/p&gt;&lt;h3&gt;&lt;strong&gt;ಗಮನಿಸಿ..&lt;/strong&gt;&lt;/h3&gt;&lt;p&gt;&lt;strong&gt;ರುಬ್ಬುವಾಗ ತಣ್ಣೀರು ಬಳಸಿ : &lt;/strong&gt;ಮಿಕ್ಸಿ ಜಾರ್ ವೇಗವಾಗಿ ಸುತ್ತುವಾಗ ಶಾಖ (Heat) ಉತ್ಪತ್ತಿಯಾಗುತ್ತದೆ. ಇದರಿಂದ ಚಟ್ನಿಯ ಬಣ್ಣ ಮಸುಕಾಗಬಹುದು. ರುಬ್ಬುವಾಗ ಐಸ್ ವಾಟರ್ ಅಥವಾ ತಣ್ಣೀರು ಬಳಸಿದರೆ ಚಟ್ನಿ ದೀರ್ಘಕಾಲದವರೆಗೆ ಹಸಿರಾಗಿ ಮತ್ತು ತಾಜಾವಾಗಿ ಕಾಣುತ್ತದೆ.&lt;/p&gt;&lt;p&gt;&lt;strong&gt;ಒಗ್ಗರಣೆಗೆ ತೆಂಗಿನ ಎಣ್ಣೆ: &lt;/strong&gt;ಹೋಟೆಲ್&zwnj;ನ ಚಟ್ನಿ ಘಮಘಮಿಸಲು ಕಾರಣ ಅವರು ನೀಡುವ ಒಗ್ಗರಣೆ. ಸಾಧ್ಯವಾದರೆ ಒಗ್ಗರಣೆಗೆ ತೆಂಗಿನ ಎಣ್ಣೆ (Coconut Oil) ಬಳಸಿ ನೋಡಿ, ಅದರ ರುಚಿಯೇ ಅದ್ಭುತವಾಗಿರುತ್ತದೆ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/food/hotel-style-thin-chutney-recipe-kannada/articleshow-f644a3e"/>
        </item>
        <item>
            <title><![CDATA[ಮೈದಾ, ಗೋಧಿ, ರವೆ ಬೇಡವೇ ಬೇಡ! ಈ ವಿಶೇಷ ಹಿಟ್ಟಿನಿಂದ ಮಾಡಿ ಗರಿಗರಿ ಸ್ನ್ಯಾಕ್ಸ್!]]></title>
            <link>https://kannada.asianetnews.com/food/crispy-mathri-snack-recipe-without-maida-wheat-or-semolina-rav/articleshow-f8c98lp</link>
            <guid isPermaLink="true">https://kannada.asianetnews.com/food/crispy-mathri-snack-recipe-without-maida-wheat-or-semolina-rav/articleshow-f8c98lp</guid>
            <pubDate>Wed, 15 Jul 2026 12:24:19 +0530</pubDate>
            <description><![CDATA[&lt;p&gt;ಮೈದಾ, ಗೋಧಿ ಹಿಟ್ಟು ಅಥವಾ ರವೆ ಬಳಸದೆ ಆರೋಗ್ಯಕರ ಹಾಗೂ ಗರಿಗರಿಯಾದ ಮಠಾರಿ ಸ್ನ್ಯಾಕ್ಸ್ ಮಾಡಬೇಕೆ? ಹಾಗಿದ್ದರೆ ಬೇಳೆಕಾಳು ಮತ್ತು ಅಕ್ಕಿಯಿಂದ ತಯಾರಿಸುವ ಈ ವಿಶೇಷ ರೆಸಿಪಿ ನಿಮಗಾಗಿ. ಇದು ಹೆಚ್ಚು ಕಾಲ ತಾಜಾ ಆಗಿ ಉಳಿಯುವುದಲ್ಲದೆ, ರುಚಿಯಲ್ಲೂ ಅದ್ಭುತವಾಗಿರುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxj7vrgt69rt8e27jerj3zwh,imgname-----------------------2026-07-15t120447.496-1784097399322.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂಜೆ ಚಹಾ ಜೊತೆಗೆ ಏನಾದರೂ ಗರಿಗರಿಯಾದ ಸ್ನ್ಯಾಕ್ಸ್ ತಿನ್ನಬೇಕು ಅನಿಸೋದು ಸಹಜ. ಅದರಲ್ಲೂ ಬೆಂಗಳೂರಿನಂಥ ಐಟಿಬಿಟಿ ನಗರದಲ್ಲಿನ ಯುವಕ-ಯುವತಿಯರಿಗೆ ಇಂಥ ಅಭ್ಯಾಸ ತುಸು ಹೆಚ್ಚೆನ್ನಿ. ಸಂಜೆ ಚಹಾದೊಂದಿಗೆ ಏನಾದರೂ ತಿಂದರೆ ಮುಂದಿನ ಕೆಲಸ ಶುರುವಾಗೋದು. ಆದರೆ ಬಹುತೇಕ ಟೀ ಸ್ಟಾಲ್&zwnj;ಗಳಲ್ಲಿ, ನಿಪ್ಪಟ್ಟು, ಕೋಡುಬಳೆ, ಚಕ್ಕುಲಿ ಸಿಗುತ್ತೆ. ಆದರೆ ಇವುಗಳಲ್ಲಿ ಹೆಚ್ಚಿನವರು ಮೈದಾ ಬಳಸಿ ತಯಾರಿಸಿರ್ತಾರೆ. ಇದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಇನ್ಮುಂದೆ ಅವುಗಳಿಗೆಲ್ಲ ಗುಡ್&zwnj;ಬೈ ಹೇಳಿ. ಇನ್ನು ಆ ಚಿಂತೆ ಬೇಡ, ಏಕೆಂದರೆ ಮೈದಾ, ಗೋಧಿ ಹಿಟ್ಟು ಅಥವಾ ರವೆ ಇಲ್ಲದೆಯೂ ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರವಾದ ಮಠರಿ(Mathari snacks)ಯನ್ನು ಮನೆಯಲ್ಲೇ ತಯಾರಿಸಬಹುದು.&lt;/p&gt;&lt;h2&gt;ಮಠಾರಿ ಸ್ನ್ಯಾಕ್ಸ್ ತಯಾರಿಸುವುದು ಹೇಗೆ?&lt;/h2&gt;&lt;p&gt;ಈ ವಿಶೇಷ ಮಠರಿ(ಉತ್ತರ ಭಾರತದ ಜನಪ್ರಿಯ ತಿನಿಸು) ಮಾಡಲು ಬೇಕಾಗಿರುವುದು ಕೆಲವು ಬಗೆಯ ಬೇಳೆಕಾಳುಗಳು ಮತ್ತು ಅಕ್ಕಿ. ಇವುಗಳನ್ನು ಮಿಕ್ಸರ್&zwnj;ನಲ್ಲಿ ಹಾಕಿ ಮಾಡುವ ಹಿಟ್ಟು, ಮಠರಿಗೆ ವಿಶಿಷ್ಟವಾದ ರುಚಿ ಮತ್ತು ಗರಿಗರಿತನವನ್ನು ನೀಡುತ್ತದೆ. ಒಮ್ಮೆ ಮಾಡಿಟ್ಟರೆ, ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟು ಹಲವು ದಿನಗಳ ತಿನ್ನಬಹುದು. ಹಾಗಾದರೆ, ತಡಮಾಡದೆ ಈ ಹೊಸ ಬಗೆಯ ಮಠರಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.&lt;/p&gt;&lt;h3&gt;ಬೇಕಾಗುವ ಸಾಮಗ್ರಿಗಳು&lt;/h3&gt;&lt;p&gt;ಈ ಮಠರಿ(Mathari snacks) ತಯಾರಿಸಲು ಒಂದು ಕಪ್ ಕಡಲೆ ಬೇಳೆ, ಅರ್ಧ ಕಪ್ ಉದ್ದಿನ ಬೇಳೆ, ಅರ್ಧ ಕಪ್ ಹೆಸರು ಬೇಳೆ ಮತ್ತು ಕಾಲು ಕಪ್ ಅಕ್ಕಿ ಬೇಕಾಗುತ್ತದೆ. ಇವುಗಳ ಜೊತೆಗೆ, ಹಿಟ್ಟು ಕಲಸಲು 2-3 ಚಮಚ ತುಪ್ಪ, ಒಂದು ಚಮಚ ಓಂಕಾಳು (ಅಜ್ವೈನ್), ಒಂದು ಚಮಚ ಕಸೂರಿ ಮೇಥಿ, ಅರ್ಧ ಚಮಚ ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೇಕು. ಕರಿಯಲು ಎಣ್ಣೆಯನ್ನು ಸಿದ್ಧವಾಗಿಟ್ಟುಕೊಳ್ಳಿ.&lt;/p&gt;&lt;p&gt;&lt;strong&gt;ಮಾಡುವ ವಿಧಾನ&lt;/strong&gt;&lt;/p&gt;&lt;p&gt;ಮೊದಲಿಗೆ, ತೆಗೆದುಕೊಂಡ ಎಲ್ಲಾ ಬೇಳೆಕಾಳುಗಳು ಮತ್ತು ಅಕ್ಕಿಯನ್ನು ಒದ್ದೆ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಿ. ನಂತರ ಪ್ರತಿಯೊಂದನ್ನು ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಸುವಾಸನೆ ಬರುವವರೆಗೆ ಹುರಿದುಕೊಳ್ಳಿ. ಹುರಿದ ಪದಾರ್ಥಗಳು ತಣ್ಣಗಾದ ಮೇಲೆ, ಮಿಕ್ಸರ್ ಜಾರ್&zwnj;ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ, ಜರಡಿ ಹಿಡಿದುಕೊಳ್ಳಿ. ಈಗ ನಿಮ್ಮ ಮಠರಿ ಹಿಟ್ಟು ಸಿದ್ಧ. ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ತುಪ್ಪ, ಓಂಕಾಳು, ಕಸೂರಿ ಮೇಥಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ. ಈ ಹಿಟ್ಟನ್ನು ಒಂದು ಬಟ್ಟೆಯಿಂದ ಮುಚ್ಚಿ 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಹಿಟ್ಟನ್ನು ಮತ್ತೊಮ್ಮೆ ನಾದಿಕೊಂಡು, ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಪ್ರತಿ ಉಂಡೆಯನ್ನು ಸ್ವಲ್ಪ ದಪ್ಪಗೆ ಲಟ್ಟಿಸಿ, ಫೋರ್ಕ್&zwnj;ನಿಂದ ಅಲ್ಲಲ್ಲಿ ಚುಚ್ಚಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಲಟ್ಟಿಸಿದ ಮಠರಿಗಳನ್ನು ಸಣ್ಣ ಉರಿಯಲ್ಲಿ ಎರಡೂ ಬದಿ ಹೊಂಬಣ್ಣ ಬರುವವರೆಗೆ ಗರಿಗರಿಯಾಗುವಂತೆ ಕರಿಯಿರಿ. ಎಣ್ಣೆಯಿಂದ ತೆಗೆದು ತಣ್ಣಗಾದ ಮೇಲೆ ಡಬ್ಬದಲ್ಲಿ ಸಂಗ್ರಹಿಸಿಟ್ಟರೆ, ಚಹಾ ಸಮಯಕ್ಕೆ ಗರಿಗರಿ ಮಠರಿ ಸವಿಯಲು ಸಿದ್ಧ.&lt;/p&gt;]]></content:encoded>
            <category>food</category>
            <dc:creator>Ravi Janekal</dc:creator>
            <atom:link href="https://kannada.asianetnews.com/food/crispy-mathri-snack-recipe-without-maida-wheat-or-semolina-rav/articleshow-f8c98lp"/>
        </item>
        <item>
            <title><![CDATA[ತುಂಬಾ ಸಿಂಪಲ್, ವಾರವಿಡೀ ಇರುತ್ತೆ.. ತಿಂಡಿಗೆ ಸೈಡ್ ಡಿಶ್‌ ರುಚಿ ರುಚಿಯಾದ ಟೊಮೆಟೊ ತೊಕ್ಕು]]></title>
            <link>https://kannada.asianetnews.com/food/quick-and-tasty-tomato-thokku-recipe-perfect-side-dish-for-idli-and-dosa/articleshow-gicgz65</link>
            <guid isPermaLink="true">https://kannada.asianetnews.com/food/quick-and-tasty-tomato-thokku-recipe-perfect-side-dish-for-idli-and-dosa/articleshow-gicgz65</guid>
            <pubDate>Fri, 17 Jul 2026 11:08:23 +0530</pubDate>
            <description><![CDATA[&lt;p&gt;&lt;strong&gt;Tomato Thokku recipe in Kannada: &lt;/strong&gt;ಬೆಳಗಿನ ಉಪಹಾರಕ್ಕೆ ಪ್ರತಿದಿನ ಶೇಂಗಾ ಅಥವಾ ತೆಂಗಿನಕಾಯಿ ಚಟ್ನಿ ತಿಂದು ಬೋರ್ ಆಗಿದ್ದರೆ, ಈ ರುಚಿಕರ 'ಟೊಮೆಟೊ ತೊಕ್ಕು' ಟ್ರೈ ಮಾಡಿ. ಇಡ್ಲಿ, ದೋಸೆ ಮಾತ್ರವಲ್ಲದೆ ಬಿಸಿ ಅನ್ನಕ್ಕೂ ಅಮೃತದಂತೆ ರುಚಿ ನೀಡುವ ಈ ತೊಕ್ಕನ್ನು ಒಮ್ಮೆ ತಯಾರಿಸಿ ಇಟ್ಟರೆ ವಾರವಿಡೀ ಬಳಸಬಹುದು. ಬೆಳಗಿನ ವೇಳೆಗೆ ಸಮಯ ಉಳಿಸುವ ಈ ಸ್ಪೆಷಲ್ ರೆಸಿಪಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq97bcy184x35swn89jbq9h,imgname-thumbnail---2026-07-17t110140.935-1784266599838.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರ&lt;/strong&gt;ತಿದಿನ ಶೇಂಗಾ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿ ತಿಂದು ಬೋರ್ ಆಗಿದೆಯೇ? ಇಡ್ಲಿ-ದೋಸೆಗೆ ಸೈಡ್ ಡಿಶ್ ಏನು ಮಾಡಬೇಕೆಂದು ತಿಳಿಯುತ್ತಿಲ್ಲವೇ? ಹಾಗಾದರೆ ಇನ್ಮುಂದೆ ಚಿಂತಿಸಬೇಡಿ. ಮನೆಯಲ್ಲಿ ಟೊಮೆಟೊಗಳು ಹೆಚ್ಚಿದ್ದರೆ ಅವುಗಳಿಂದ ನಾಲಿಗೆಯಲ್ಲಿ ನೀರೂರಿಸುವ 'ಟೊಮೆಟೊ ತೊಕ್ಕು' ತಯಾರಿಸಿಕೊಳ್ಳಿ. ಈ ತೊಕ್ಕು ಕೇವಲ ಇಡ್ಲಿ, ದೋಸೆಗೆ ಮಾತ್ರವಲ್ಲದೆ, ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತಿಂದರೆ ಅಮೃತದಂತಿರುತ್ತದೆ. ಇದನ್ನು ಒಂದು ಬಾರಿ ಮಾಡಿಟ್ಟರೆ, ಒಂದು ವಾರದವರೆಗೆ ಫ್ರಿಡ್ಜ್&zwnj;ನಲ್ಲಿಟ್ಟು ಬಳಸಬಹುದು. ಬೆಳಗಿನ ವೇಳೆ ಅವಸರದಲ್ಲಿ ಇರುವವರಿಗೆ ಸಮಯ ಉಳಿಸಲು ಇದು ಬೆಸ್ಟ್ ರೆಸಿಪಿ.&lt;/p&gt;&lt;h2&gt;&lt;strong&gt;ಟೊಮೆಟೊ ತೊಕ್ಕು ತಯಾರಿಸಲು ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;ಎಳ್ಳೆಣ್ಣೆ (ಅಥವಾ ಆಲಿವ್ ಆಯಿಲ್): 3 ಟೇಬಲ್ ಚಮಚ (ಎಳ್ಳೆಣ್ಣೆ ಬಳಸಿದರೆ ರುಚಿ ಮತ್ತು ಬಾಳಿಕೆ ಹೆಚ್ಚು)ಸಾಸಿವೆ: 1/2 ಟೀಸ್ಪೂನ್ಉದ್ದಿನ ಬೇಳೆ: 1 ಟೀಸ್ಪೂನ್ಈರುಳ್ಳಿ: 250 ಗ್ರಾಂ (ಸಣ್ಣಗೆ ಹೆಚ್ಚಿದ್ದು)ಕರಿಬೇವು: 1 ಕಟ್ಟುಬೆಳ್ಳುಳ್ಳಿ: 25 ಎಸಳು (ಸಣ್ಣಗೆ ಹೆಚ್ಚಿದ್ದು)ಟೊಮೆಟೊ: ಅರ್ಧ ಕೆಜಿ (ಸಣ್ಣಗೆ ಹೆಚ್ಚಿದ್ದು)ಖಾರದ ಪುಡಿ: 3 ರಿಂದ 4 ಟೇಬಲ್ ಚಮಚ (ನಿಮ್ಮ ಖಾರಕ್ಕೆ ತಕ್ಕಂತೆ)ಗರಂ ಮಸಾಲಾ: 1/2 ಟೀಸ್ಪೂನ್ಉಪ್ಪು: ರುಚಿಗೆ ತಕ್ಕಷ್ಟುಕೊನೆಯಲ್ಲಿ ಒಗ್ಗರಣೆಗೆ: 1 ಟೇಬಲ್ ಚಮಚ ಎಣ್ಣೆ ಮತ್ತು 2 ಕಟ್ಟು ಕರಿಬೇವು&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;*ಮೊದಲು ಸ್ಟೌವ್ ಹಚ್ಚಿ ದಪ್ಪ ತಳದ ಬಾಂಡ್ಲಿ ಅಥವಾ ಕಡಾಯಿ ಇಟ್ಟುಕೊಳ್ಳಿ. ಅದಕ್ಕೆ ಎಳ್ಳೆಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಸಾಸಿವೆ, ಉದ್ದಿನ ಬೇಳೆ ಹಾಕಿ ಕೆಂಪಾಗುವವರೆಗೆ ಹುರಿಯಿರಿ.&lt;/p&gt;&lt;p&gt;*ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ. ಉರಿಯನ್ನು ಮೀಡಿಯಂ ಫ್ಲೇಮ್&zwnj;ನಲ್ಲಿಟ್ಟು, ಈರುಳ್ಳಿ ಹಸಿ ವಾಸನೆ ಹೋಗಿ ಮೆತ್ತಗಾಗುವವರೆಗೆ ಹುರಿಯಿರಿ. ಈಗ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.&lt;/p&gt;&lt;p&gt;*ಈರುಳ್ಳಿ ಮತ್ತು ಬೆಳ್ಳುಳ್ಳಿ ಚೆನ್ನಾಗಿ ಬೆಂದ ನಂತರ, ಕತ್ತರಿಸಿದ ಟೊಮೆಟೊ ಪೀಸ್&zwnj; ಸೇರಿಸಿ ಚೆನ್ನಾಗಿ ಕೈಯಾಡಿಸಿ. ಸ್ವಲ್ಪ ಸಮಯದ ನಂತರ ಟೊಮೆಟೊದಿಂದ ನೈಸರ್ಗಿಕವಾಗಿ ನೀರು ಹೊರಬರುತ್ತದೆ. ಆ ಸಮಯದಲ್ಲಿ ಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಸುಮಾರು 5 ನಿಮಿಷ ಬೇಯಿಸಿ.&lt;/p&gt;&lt;p&gt;*ನಂತರ ಮುಚ್ಚಳ ತೆಗೆದು ಅಡಿ ಹಿಡಿಯದಂತೆ ಒಮ್ಮೆ ಕಲಕಿ. ಮತ್ತೆ ಮುಚ್ಚಳ ಮುಚ್ಚಿ ಉರಿಯನ್ನು ಪೂರ್ತಿ ಕಡಿಮೆ ಮಾಡಿ (Low Flame) 10 ನಿಮಿಷ ಬೇಯಿಸಿ. ಮಧ್ಯಮಧ್ಯದಲ್ಲಿ ಕಲಕುತ್ತಿರಿ.&lt;/p&gt;&lt;p&gt;*ಹತ್ತು ನಿಮಿಷದ ನಂತರ ಟೊಮೆಟೊ ಪೂರ್ತಿ ಮೆತ್ತಗಾಗಿ, ಗೊಜ್ಜಿನಿಂದ ಎಣ್ಣೆ ಸೈಡ್&zwnj;ಗಳಲ್ಲಿ ಬಿಟ್ಟುಕೊಳ್ಳಲು ಶುರುವಾಗುತ್ತದೆ. ಇದು ತೊಕ್ಕು ಸರಿಯಾಗಿ ಬೆಂದಿದೆ ಎಂಬುದಕ್ಕೆ ಸಂಕೇತ.&lt;/p&gt;&lt;p&gt;*ಈಗ ಅರ್ಧ ಟೀಸ್ಪೂನ್ ಗರಂ ಮಸಾಲಾ ಸಿಂಪಡಿಸಿ ಚೆನ್ನಾಗಿ ಕಲಕಿ, ಮತ್ತೆ 2-3 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಸ್ಟೌವ್ ಆಫ್ ಮಾಡಿ.&lt;/p&gt;&lt;p&gt;*ಇದಕ್ಕೆ ಮತ್ತಷ್ಟು ರುಚಿ ನೀಡಲು, ಒಂದು ಸಣ್ಣ ಪ್ಯಾನ್&zwnj;ನಲ್ಲಿ ಒಂದು ಚಮಚ ಎಣ್ಣೆ ಕಾಯಿಸಿ, ಅದಕ್ಕೆ ಕರಿಬೇವು ಹಾಕಿ ಗರಿಗರಿಯಾಗುವಂತೆ ಹುರಿದು, ಆ ಒಗ್ಗರಣೆಯನ್ನು ಸಿದ್ಧವಾದ ಟೊಮೆಟೊ ತೊಕ್ಕಿಗೆ ಸೇರಿಸಿ.&lt;/p&gt;&lt;p&gt;ಅಷ್ಟೇ! ಘಮಘಮಿಸುವ ರುಚಿಕರವಾದ ಟೊಮೆಟೊ ತೊಕ್ಕು ರೆಡಿ. ಇದು ಪೂರ್ತಿ ತಣ್ಣಗಾದ ನಂತರ ಗಾಳಿಯಾಡದ ಗಾಜಿನ ಸೀಸೆಯಲ್ಲಿ (Airtight glass jar) ತುಂಬಿಟ್ಟರೆ ವಾರವಿಡೀ ಬಳಸಬಹುದು.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/food/quick-and-tasty-tomato-thokku-recipe-perfect-side-dish-for-idli-and-dosa/articleshow-gicgz65"/>
        </item>
        <item>
            <title><![CDATA[ಪಾನ್‌ಗೆ ಹಿಟ್ಟು ಸುರಿದ್ರೆ ರೆಡಿ ಆಗುತ್ತೆ ಆಂಧ್ರದ ಪ್ರಸಿದ್ಧ ದಿಬ್ಬ ರೊಟ್ಟಿ; ಇದರ ಗ್ಲಾಸ್ ವಿಧಾನವೇ ಅತ್ಯಂತ ಭಿನ್ನ!]]></title>
            <link>https://kannada.asianetnews.com/food/andhra-special-dibba-rotti-recipe-with-glass-method-san/articleshow-h28oflw</link>
            <guid isPermaLink="true">https://kannada.asianetnews.com/food/andhra-special-dibba-rotti-recipe-with-glass-method-san/articleshow-h28oflw</guid>
            <pubDate>Thu, 16 Jul 2026 19:46:36 +0530</pubDate>
            <description><![CDATA[ಆಂಧ್ರದ ಜನಪ್ರಿಯ ತಿಂಡಿ 'ದಿಬ್ಬ ರೊಟ್ಟಿ'ಯನ್ನು ಇಡ್ಲಿ ಅಥವಾ ದೋಸೆ ಹಿಟ್ಟಿನಿಂದಲೇ ತಯಾರಿಸಲಾಗುತ್ತದೆ. ದಪ್ಪ ತಳದ ಪಾನ್&zwnj;ನಲ್ಲಿ ಹಿಟ್ಟಿನ ಮಧ್ಯೆ ನೀರಿನ ಲೋಟ ಇಟ್ಟು ಬೇಯಿಸುವ ವಿಶಿಷ್ಟ ವಿಧಾನದಿಂದ ಇದು ಹೊರಗೆ ಗರಿಗರಿಯಾಗಿ ಮತ್ತು ಒಳಗೆ ಸ್ಪಂಜಿನಂತೆ ಮೃದುವಾಗಿರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxnme74p81hfch5jghgrcec0,imgname-dibba-roti-andhra-pradesh-1784211250326.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.16):&lt;/strong&gt; ದಕ್ಷಿಣ ಭಾರತೀಯ ಖಾದ್ಯ ಪ್ರಿಯರಿಗೆ 'ದಿಬ್ಬ ರೊಟ್ಟಿ' ಅತ್ಯಂತ ಅಪರೂಪದ ಹಾಗೂ ರುಚಿಕರವಾದ ತಿಂಡಿ. ಇದು ನಾವಿಲ್ಲಿ ಸವಿಯುವ ಸಾಮಾನ್ಯ ಪರೋಟ ಅಥವಾ ದೋಸೆಯಂತಲ್ಲ; ಬದಲಿಗೆ ಹೊರಭಾಗದಲ್ಲಿ ಅತ್ಯಂತ ಗರಿಗರಿಯಾಗಿ (Super Crispy) ಮತ್ತು ಒಳಗಡೆ ಅಷ್ಟೇ ಮೃದುವಾಗಿ, ಸ್ಪಂಜಿನಂತೆ (Fluffy) ಇರುತ್ತದೆ. ಇದರ ಅತ್ಯಂತ ಆಕರ್ಷಕ ವಿಷಯವೆಂದರೆ, ಈ ರೊಟ್ಟಿಯನ್ನು ತಯಾರಿಸಲು ಗೋಧಿ ಅಥವಾ ಮೈದಾ ಹಿಟ್ಟನ್ನು ನಾದಬೇಕಾದ ಅಗತ್ಯವೇ ಇಲ್ಲ! ನೀವು ಪ್ರತಿದಿನ ಅದೇ ನೀರಸ ಇಡ್ಲಿ, ದೋಸೆ ತಿಂದು ಬೇಸತ್ತಿದ್ದರೆ ಮತ್ತು ಏನಾದರೂ ಹೊಸದನ್ನು ಪ್ರಯತ್ನಿಸಲು ಬಯಸಿದರೆ, ಆಂಧ್ರಪ್ರದೇಶದ ಅತ್ಯಂತ ಜನಪ್ರಿಯ 'ದಿಬ್ಬ ರೊಟ್ಟಿ' ಬೆಸ್ಟ್&zwnj; ಆಪ್ಶನ್&zwnj;. ಈ ರೊಟ್ಟಿಯನ್ನು ಸಾಮಾನ್ಯ ಇಡ್ಲಿ ಅಥವಾ ದೋಸೆ ಹಿಟ್ಟಿನಿಂದಲೇ ತಯಾರಿಸಲಾಗುತ್ತದೆ. ಆದರೆ, ಇದನ್ನು ಬೇಯಿಸುವ ವಿಶಿಷ್ಟ ಹಾಗೂ ಕುತೂಹಲಕಾರಿ ವಿಧಾನವೇ ಇದನ್ನು ಉಳಿದೆಲ್ಲಾ ತಿಂಡಿಗಳಿಗಿಂತ ಭಿನ್ನವಾಗಿಸುತ್ತದೆ.&lt;/p&gt;&lt;p&gt;ದಪ್ಪ ತಳದ ಪಾನ್&zwnj;ಗೆ ಹೆಚ್ಚಿನ ಪ್ರಮಾಣದಲ್ಲಿ ಇಡ್ಲಿ ಹಿಟ್ಟನ್ನು ಸುರಿದು, ಅದರ ಮಧ್ಯದಲ್ಲಿ ನೀರು ತುಂಬಿದ ಸಣ್ಣ ಲೋಟವನ್ನು ಇಟ್ಟು ಸಣ್ಣ ಉರಿಯಲ್ಲಿ ಬೇಯಿಸಲಾಗುತ್ತದೆ. ಇದರ ಪರಿಣಾಮವೇನು ಗೊತ್ತೇ? ಈ ರೊಟ್ಟಿಯ ಹೊರಪದರವು ಚಿನ್ನದ ಬಣ್ಣಕ್ಕೆ ತಿರುಗಿ ಕ್ರಿಸ್ಪಿ ಆಗುತ್ತದೆ, ಆದರೆ ಒಳಗಿನ ಭಾಗವು ಸಂಪೂರ್ಣವಾಗಿ ಜಾಲರಿ ರೂಪದಲ್ಲಿ ಮೃದುವಾಗಿ ಅರಳುತ್ತದೆ. ಈ ಸಾಂಪ್ರದಾಯಿಕ ದಕ್ಷಿಣ ಭಾರತದ ಸ್ಪೆಷಲ್ ರೊಟ್ಟಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.&lt;/p&gt;&lt;h2&gt;&lt;strong&gt;ಮೊದಲು ತಿಳಿಯಿರಿ: 'ದಿಬ್ಬ ರೊಟ್ಟಿ' ಯಾಕೆ ಇಷ್ಟು ವಿಶೇಷ?&lt;/strong&gt;&lt;/h2&gt;&lt;p&gt;ದಿಬ್ಬ ರೊಟ್ಟಿಯು ತನ್ನ ವಿಶಿಷ್ಟ ವಿನ್ಯಾಸ ಮತ್ತು ಸಾಂಪ್ರದಾಯಿಕ ತಯಾರಿಕಾ ಶೈಲಿಯಿಂದಾಗಿ ಹೆಚ್ಚು ಜನಪ್ರಿಯವಾಗಿದೆ. ಇದು ಪೂರ್ಣ ಪ್ರಮಾಣದಲ್ಲಿ ದೋಸೆಯೂ ಅಲ್ಲ ಅಥವಾ ಉತ್ತಪ್ಪಂ ಕೂಡ ಅಲ್ಲ. ಇದನ್ನು ಬೇಯಿಸುವಾಗ ಹಿಟ್ಟಿನ ಮಧ್ಯದಲ್ಲಿ ನೀರು ತುಂಬಿದ ಗ್ಲಾಸ್ ಅನ್ನು ಇಡಲಾಗುತ್ತದೆ. ಇದು ರೊಟ್ಟಿಯ ಒಳಗಿನ ಭಾಗವು ಚೆನ್ನಾಗಿ ಬೇಯಲು ಮತ್ತು ರೊಟ್ಟಿಗೆ ಒಂದು ಸುಂದರವಾದ ಡೋನಟ್ ಮಾದರಿಯ ಆಕಾರ (Ring Shape) ನೀಡಲು ಸಹಾಯ ಮಾಡುತ್ತದೆ. ಹಿಟ್ಟು ನಾದದೆ ಕೇವಲ ದೋಸೆ ಹಿಟ್ಟಿನಿಂದಲೇ ಮಾಡುವ ರೊಟ್ಟಿ ಇದಾಗಿದೆ.&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;ul&gt; &lt;li&gt;ಇಡ್ಲಿ ಅಥವಾ ದೋಸೆ ಹಿಟ್ಟು (ಗಟ್ಟಿಯಾಗಿರಬೇಕು) &ndash; 2 ಕಪ್&lt;/li&gt; &lt;li&gt;ಎಣ್ಣೆ &ndash; 3 ರಿಂದ 4 ದೊಡ್ಡ ಚಮಚ&lt;/li&gt; &lt;li&gt;ಜೀರಿಗೆ &ndash; 1 ಸಣ್ಣ ಚಮಚ&lt;/li&gt; &lt;li&gt;ನೀರು &ndash; ಅಗತ್ಯವಿರುವಷ್ಟು&lt;/li&gt;&lt;/ul&gt;&lt;h2&gt;&lt;strong&gt;ದಿಬ್ಬ ರೊಟ್ಟಿ ತಯಾರಿಸುವ ಹಂತ-ಹಂತದ ರೆಸಿಪಿ&lt;/strong&gt;&lt;/h2&gt;&lt;ul&gt; &lt;li&gt;ಮೊದಲಿಗೆ ಇಡ್ಲಿ ಅಥವಾ ದೋಸೆಯ ದಪ್ಪನೆಯ ಹಿಟ್ಟನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ (ಹಿಟ್ಟಿನಲ್ಲಿ ಮೊದಲೇ ಉಪ್ಪನ್ನು ಬೆರೆಸಿರಬೇಕು).&lt;/li&gt; &lt;li&gt;ಈಗ ಗ್ಯಾಸ್ ಒಲೆಯ ಮೇಲೆ ಒಂದು ಆಳವಾದ ಮತ್ತು ದಪ್ಪ ತಳವಿರುವ ಕಡಾಯಿ ಅಥವಾ ಪ್ಯಾನ್ ಇಟ್ಟು, ಅದಕ್ಕೆ 2-3 ದೊಡ್ಡ ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ.&lt;/li&gt; &lt;li&gt;ಎಣ್ಣೆ ಕಾದ ನಂತರ ಉರಿಯನ್ನು ಸಣ್ಣದಾಗಿಸಿ (Low Flame), ಕಡಾಯಿಯ ಮಧ್ಯಭಾಗಕ್ಕೆ ದಪ್ಪಗೆ ಇಡ್ಲಿ ಹಿಟ್ಟನ್ನು ಸುರಿಯಿರಿ. ನೆನಪಿಡಿ, ಈ ಹಿಟ್ಟನ್ನು ದೋಸೆಯಂತೆ ಹರಡಬಾರದು, ದಪ್ಪಗೇ ಇರಬೇಕು.&lt;/li&gt; &lt;li&gt;ಹಿಟ್ಟನ್ನು ಸುರಿದ ತಕ್ಷಣ, ಒಂದು ಸಣ್ಣ ಹಿತ್ತಾಳೆ ಅಥವಾ ಸ್ಟೀಲ್ ಗ್ಲಾಸ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀರು ತುಂಬಿಸಿಕೊಳ್ಳಿ.&lt;/li&gt; &lt;li&gt;ಈ ನೀರು ತುಂಬಿದ ಗ್ಲಾಸ್ ಅನ್ನು ಕಡಾಯಿಯಲ್ಲಿರುವ ಹಿಟ್ಟಿನ ಸರಿಯಾಗಿ ಮಧ್ಯಭಾಗದಲ್ಲಿ ನೇರವಾಗಿ ನಿಲ್ಲಿಸಿ ಇಡಿ. ಇದರಿಂದ ರೊಟ್ಟಿಯ ಮಧ್ಯದಲ್ಲಿ ರಂಧ್ರ (Hole) ಉಂಟಾಗುತ್ತದೆ ಹಾಗೂ ರೊಟ್ಟಿಯು ಒಳಭಾಗದಿಂದಲೂ ಚೆನ್ನಾಗಿ ಬೇಯುತ್ತದೆ.&lt;/li&gt; &lt;li&gt;ಈಗ ಹಿಟ್ಟಿನ ಮೇಲ್ಭಾಗದಲ್ಲಿ ಸುತ್ತಲೂ ಸ್ವಲ್ಪ ಜೀರಿಗೆಯನ್ನು ಉದುರಿಸಿ. ಇದರಿಂದ ರೊಟ್ಟಿಯ ರುಚಿ ಮತ್ತು ಪರಿಮಳ ಇನ್ನಷ್ಟು ಹೆಚ್ಚುತ್ತದೆ.&lt;/li&gt; &lt;li&gt;ನಂತರ ಕಡಾಯಿಗೆ ಒಂದು ಮುಚ್ಚಳವನ್ನು ಮುಚ್ಚಿ, ಸಣ್ಣ ಉರಿಯಲ್ಲಿ 8 ರಿಂದ 10 ನಿಮಿಷಗಳ ಕಾಲ ಬೇಯಲು ಬಿಡಿ. ಇದರಿಂದ ರೊಟ್ಟಿಯ ಕೆಳಭಾಗವು ಚಿನ್ನದ ಬಣ್ಣಕ್ಕೆ ತಿರುಗಿ ಗರಿಗರಿಯಾಗುತ್ತದೆ.&lt;/li&gt; &lt;li&gt;ರೊಟ್ಟಿಯ ಮೇಲ್ಭಾಗವು ಸ್ವಲ್ಪ ಒಣಗಿದಂತೆ ಹಾಗೂ ಉಬ್ಬಿದಂತೆ ಕಂಡಾಗ, ಇಕ್ಕಳದ ಸಹಾಯದಿಂದ ಅತ್ಯಂತ ಜಾಗರೂಕತೆಯಿಂದ ಮಧ್ಯದಲ್ಲಿದ್ದ ನೀರಿನ ಗ್ಲಾಸ್ ಅನ್ನು ಹೊರಗೆ ತೆಗೆಯಿರಿ.&lt;/li&gt; &lt;li&gt;ಈಗ ರೊಟ್ಟಿಯನ್ನು ಜಾಗರೂಕತೆಯಿಂದ ಮಗುಚಿ ಹಾಕಿ (ತಿರುಗಿಸಿ), ಇನ್ನೊಂದು ಬದಿಯೂ ಲಘು ಚಿನ್ನದ ಬಣ್ಣಕ್ಕೆ ಬರುವವರೆಗೆ 2 ರಿಂದ 3 ನಿಮಿಷಗಳ ಕಾಲ ಬೇಯಿಸಿ.&lt;/li&gt; &lt;li&gt;ಎರಡು ಬದಿಗಳಲ್ಲಿ ಚೆನ್ನಾಗಿ ಬೆಂದ ನಂತರ, ಬಿಸಿಬಿಸಿಯಾದ ದಿಬ್ಬ ರೊಟ್ಟಿಯನ್ನು ಕಡಾಯಿಯಿಂದ ಹೊರತೆಗೆಯಿರಿ. ಈಗ ನಿಮ್ಮ ಮುಂದಿರುವ ಗರಿಗರಿಯಾದ ಆಂಧ್ರ ಶೈಲಿಯ ದಿಬ್ಬ ರೊಟ್ಟಿಯನ್ನು ಕಾಯಿ ಚಟ್ನಿ ಅಥವಾ ಶುಂಠಿ ಚಟ್ನಿಯೊಂದಿಗೆ ಸವಿಯಲು ನೀಡಿ.&lt;/li&gt;&lt;/ul&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Aishwarya sonvane (@myflavourfuljourney)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>food</category>
            <dc:creator>Santosh Naik</dc:creator>
            <atom:link href="https://kannada.asianetnews.com/food/andhra-special-dibba-rotti-recipe-with-glass-method-san/articleshow-h28oflw"/>
        </item>
        <item>
            <title><![CDATA[ರುಬ್ಬುವಾಗ ಇದೊಂದು ಹಾಕಿದ್ರೆ ಸಾಕು, ರೆಸ್ಟೋರೆಂಟ್ ನಂತೆ ಹಸಿರಾಗಿರುತ್ತೆ ನೀವು ಮಾಡೋ ಚಟ್ನಿ]]></title>
            <link>https://kannada.asianetnews.com/gallery/food/what-should-i-do-to-make-coriander-chutney-turn-green-in-restaurant-style-ilgwcgo</link>
            <guid isPermaLink="true">https://kannada.asianetnews.com/gallery/food/what-should-i-do-to-make-coriander-chutney-turn-green-in-restaurant-style-ilgwcgo</guid>
            <pubDate>Thu, 16 Jul 2026 18:28:07 +0530</pubDate>
            <description><![CDATA[&lt;p&gt;ಸಮೋಸಾ, ಪಕೋಡಾ ಎಲ್ಲದಕ್ಕೂ ಹಸಿರು ಚಟ್ನಿ ಇದ್ರೆ ರುಚಿ. ಮನೆಯಲ್ಲಿ ತಯಾರಿಸಿದ ಚಟ್ನಿ, ಹೊಟೇಲ್ ನಷ್ಟು ಹಸಿರಾಗಿ ಬರೋದಿಲ್ಲ. ಮನೆಯಲ್ಲಿ ಮಾಡಿದ ಚಟ್ನಿ ಬೇಗ ಕಪ್ಪಾಗುತ್ತೆ. ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ನೀವೂ ಮನೆಯಲ್ಲಿ ರುಚಿಯಾದ ಹಾಗೂ ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಹಸಿರಾದ ಚಟ್ನಿ ತಯಾರಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxnfy2552fzrkhbpxn926fdz,imgname-green-chutney-recipe-1784206526629.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಮೋಸಾ, ಪಕೋಡಾ ಎಲ್ಲದಕ್ಕೂ ಹಸಿರು ಚಟ್ನಿ ಇದ್ರೆ ರುಚಿ. ಮನೆಯಲ್ಲಿ ತಯಾರಿಸಿದ ಚಟ್ನಿ, ಹೊಟೇಲ್ ನಷ್ಟು ಹಸಿರಾಗಿ ಬರೋದಿಲ್ಲ. ಮನೆಯಲ್ಲಿ ಮಾಡಿದ ಚಟ್ನಿ ಬೇಗ ಕಪ್ಪಾಗುತ್ತೆ. ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ನೀವೂ ಮನೆಯಲ್ಲಿ ರುಚಿಯಾದ ಹಾಗೂ ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಹಸಿರಾದ ಚಟ್ನಿ ತಯಾರಿಸಬಹುದು.&lt;/p&gt;&lt;img&gt;&lt;p&gt;1 ಕಪ್ ತಾಜಾ ಕೊತ್ತಂಬರಿ ಸೊಪ್ಪು, 1/2 ಕಪ್ ಪುದೀನ ಎಲೆಗಳು, 2 ಹಸಿರು ಮೆಣಸಿನಕಾಯಿ, 4-5 ಬೆಳ್ಳುಳ್ಳಿ ಎಸಳು, 1 ಸಣ್ಣ ಶುಂಠಿ, 1 ಚಮಚ ನಿಂಬೆ ರಸ, 1/2 ಟೀಚಮಚ ಹುರಿದ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, 2-3 ಐಸ್ ಕ್ಯೂಬ್ಗಳು, 1-2 ಟೇಬಲ್ಸ್ಪೂನ್ ನೀರು.&lt;/p&gt;&lt;img&gt;&lt;p&gt;ನೀವು ಚಟ್ನಿಗೆ ಬಳಸುವ ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪು ತಾಜಾ ಆಗಿರಬೇಕು. ಹಳದಿ ಬಣ್ಣಕ್ಕೆ ತಿರುಗಿದ ಇಲ್ಲವೆ ಒಣಗಿದ ಸೊಪ್ಪನ್ನು ಬಳಸಬೇಡಿ. ಇದ್ರಿಂದ ಚಟ್ನಿ ಕಪ್ಪಾಗುತ್ತದೆ. ಎಲೆಗಳನ್ನು ಚೆನ್ನಾಗಿ ತೊಳೆದು ಹೆಚ್ಚುವರಿ ನೀರನ್ನು ತೆಗೆಯಲು ಮರೆಯಬೇಡಿ.&lt;/p&gt;&lt;img&gt;&lt;p&gt;ರೆಸ್ಟೋರೆಂಟ್ ಶೈಲಿಯ ಹಸಿರು ಚಟ್ನಿಯ ದೊಡ್ಡ ರಹಸ್ಯವೆಂದರೆ ಐಸ್ ಕ್ಯೂಬ್ಗಳು. ಚಟ್ನಿಯನ್ನು ರುಬ್ಬುವಾಗ ಮಿಕ್ಸರ್ಗೆ 2-3 ಐಸ್ ಕ್ಯೂಬ್ಗಳನ್ನು ಸೇರಿಸಿ. ಇದು ಮಿಕ್ಸರ್ನ ಶಾಖವನ್ನು ಕಡಿಮೆ ಮಾಡುತ್ತದೆ ಮತ್ತು ಎಲೆಗಳ ನೈಸರ್ಗಿಕ ಹಸಿರು ಬಣ್ಣವನ್ನು ಸಂರಕ್ಷಿಸುತ್ತದೆ.&lt;/p&gt;&lt;img&gt;&lt;p&gt;ಕೊತ್ತಂಬರಿ, ಪುದೀನ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಹುರಿದ ಜೀರಿಗೆ ಮತ್ತು ಉಪ್ಪನ್ನು ಮಿಕ್ಸರ್ ಜಾರ್ನಲ್ಲಿ ಹಾಕಿ. ಈಗ ನಿಂಬೆ ರಸ ಮತ್ತು ಐಸ್ ಕ್ಯೂಬ್ಗಳನ್ನು ಸೇರಿಸಿ. ಅಗತ್ಯವಿರುವಂತೆ ಸ್ವಲ್ಪ ತಣ್ಣೀರು ಸೇರಿಸಿ ಮತ್ತು ನುಣ್ಣಗೆ ರುಬ್ಬಿಕೊಳ್ಳಿ. ಒಂದೇ ಬಾರಿ ಹೆಚ್ಚು ನೀರು ಹಾಕದೆ ನಿಧಾನವಾಗಿ ಅಗತ್ಯವಿರುಷ್ಟೇ ನೀರನ್ನು ಹಾಕಿ&lt;/p&gt;&lt;img&gt;&lt;p&gt;ನಿಂಬೆ ರಸವು ರುಚಿಯನ್ನು ಹೆಚ್ಚಿಸುವುದಲ್ಲದೆ, ಚಟ್ನಿಯ ಹಸಿರು ಬಣ್ಣವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚಟ್ನಿಗೆ ಸ್ವಲ್ಪ ಖಾರದ ರುಚಿ ನೀಡುತ್ತದೆ.&lt;/p&gt;&lt;img&gt;&lt;p&gt;ಚಟ್ನಿಯನ್ನು ರುಬ್ಬುವಾಗ ಯಾವುದೇ ಕಾರಣಕ್ಕೂ ಬಿಸಿನೀರನ್ನು ಬಳಸಬೇಡಿ. ದೀರ್ಘಕಾಲದವರೆಗೆ ಮಿಕ್ಸರ್ ಅನ್ನು ನಿರಂತರವಾಗಿ ಚಲಾಯಿಸಬೇಡಿ. ಹೆಚ್ಚು ನೀರು ಸೇರಿಸುವುದನ್ನು ತಪ್ಪಿಸಿ.&lt;/p&gt;]]></content:encoded>
            <category>food</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/food/what-should-i-do-to-make-coriander-chutney-turn-green-in-restaurant-style-ilgwcgo"/>
        </item>
        <item>
            <title><![CDATA[ಪಕೋಡಾ ಮಾಡುವಾಗ ನೊರೆ ಬರತ್ತಾ, ಪೂರಿ ಎಣ್ಣೆ ಹೀರಿಕೊಳ್ಳತ್ತಾ? ಬೆಂಡೆ ಲೋಳೆ ಆಗತ್ತಾ? ಈ  ಟ್ರಿಕ್ಸ್​ ಫಾಲೋ ಮಾಡಿ]]></title>
            <link>https://kannada.asianetnews.com/gallery/kitchen/kitchen-tips-for-oily-foods-like-pakoda-poori-ect-suc-lirwize</link>
            <guid isPermaLink="true">https://kannada.asianetnews.com/gallery/kitchen/kitchen-tips-for-oily-foods-like-pakoda-poori-ect-suc-lirwize</guid>
            <pubDate>Sun, 19 Jul 2026 20:03:25 +0530</pubDate>
            <description><![CDATA[ಕರಿದ ಪದಾರ್ಥ ಮಾಡುವಾಗ ಎಣ್ಣೆಯಲ್ಲಿ ನೊರೆ ಬರದಂತೆ ತಡೆಯಲು, ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳದೆ ಕ್ರಿಸ್ಪಿಯಾಗಿ ಬರಲು ಮತ್ತು ಬೆಂಡೇಕಾಯಿ ಕತ್ತರಿಸುವಾಗ ಲೊಳೆ ಬರದಂತೆ ಮಾಡಲು ಸುಲಭವಾದ ಅಡುಗೆಮನೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxxcdvr192m2hhsbmvea4r0v,imgname-tips-06-1784471285505.jpg" type="image/jpeg" height="390" width="690"/>
            <content:encoded><![CDATA[ಕರಿದ ಪದಾರ್ಥ ಮಾಡುವಾಗ ಎಣ್ಣೆಯಲ್ಲಿ ನೊರೆ ಬರದಂತೆ ತಡೆಯಲು, ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳದೆ ಕ್ರಿಸ್ಪಿಯಾಗಿ ಬರಲು ಮತ್ತು ಬೆಂಡೇಕಾಯಿ ಕತ್ತರಿಸುವಾಗ ಲೊಳೆ ಬರದಂತೆ ಮಾಡಲು ಸುಲಭವಾದ ಅಡುಗೆಮನೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.&lt;img&gt;&lt;p&gt;ಸಾಮಾನ್ಯವಾಗಿ ಪಕೋಡ, ಬೋಂಡಾ ಅಥವಾ ಇನ್ನಾವುದೇ ಕರಿದ ಪದಾರ್ಥಗಳನ್ನು ಮಾಡುವ ಸಮಯದಲ್ಲಿ ಎಣ್ಣೆಯಲ್ಲಿ ನೊರೆ ಹೆಚ್ಚು ಬರುವುದು ಉಂಟು.&lt;/p&gt;&lt;img&gt;&lt;p&gt;ಆ ಸಮಯದಲ್ಲಿ, ಪಕೋಡಾ ಅಥವಾ ಬೋಂಡಾಕ್ಕೆ ಎಣ್ಣೆ ಹೆಚ್ಚಿಗೆ ಹೀರಿಕೊಳ್ಳುತ್ತದೆ. ಇದರಿಂದ ಎಣ್ಣೆ ಲಾಸ್​ ಕೂಡ ಆಗುತ್ತದೆ ಜೊತೆಗೆ ಹೆಚ್ಚು ಎಣ್ಣೆ ಡೇಂಜರ್​ ಕೂಡ ಆಗಬಹುದು.&lt;/p&gt;&lt;img&gt;&lt;p&gt;ಇದನ್ನು ತೆಗೆಯಲು ಸುಲಭದ ಉಪಾಯ ಎಂದರೆ, ಪಕೋಡಾ, ಬೋಂಡಾ ಈ ರೀತಿಯ ಕರಿದ ಪದಾರ್ಥ ಮಾಡುವಾಗ ಮೊದಲಿಗೆ ಎಣ್ಣೆ ಬಿಸಿ ಮಾಡುತ್ತೀರಲ್ಲ, ಆ ಸಮಯದಲ್ಲಿ ಅದಕ್ಕೆ ಚಿಕ್ಕ ಉಂಡೆಯಷ್ಟು ಹುಣಸೆಹಣ್ಣನ್ನು ಹಾಕಿ. ಇದರಿಂದ ನೊರೆ ಬರುವ ಸಮಸ್ಯೆ ಇರುವುದಿಲ್ಲ.&lt;/p&gt;&lt;img&gt;&lt;p&gt;ಇನ್ನು ಪೂರಿ ಮಾಡುವ ಸಮಯದಲ್ಲಿ ಎಣ್ಣೆಯನ್ನು ಕೆಲವೊಮ್ಮೆ ಪೂರಿ ಹೆಚ್ಚು ಹೀರಿಕೊಳ್ಳುವುದು ಇದೆ. ಇದರಿಂದ ತಿನ್ನುವ ಸಮಯದಲ್ಲಿ ಎಣ್ಣೆಯನ್ನೇ ಸವಿಯಬೇಕಾದ ಪರಿಸ್ಥಿತಿ ಬರುತ್ತದೆ. ಇಲ್ಲದೇ ಹೋದರೆ, ಎಷ್ಟೇ ಮಾಡಿದರೂ ಹೋಟೆಲ್​ ಸ್ಟೈಲ್​ನಲ್ಲಿ ಪೂರಿ ಚೆನ್ನಾಗಿ ಕ್ರಿಸ್ಪಿ ಆಗಿ ಬರುವುದಿಲ್ಲ ಎನ್ನುವ ಚಿಂತೆಯೇ?&lt;/p&gt;&lt;img&gt;&lt;p&gt;ಈಗ ಆ ಚಿಂತೆಯನ್ನು ಬಿಟ್ಟುಬಿಡಿ. ಪೂರಿ ಕಲಸುವ ಸಮಯದಲ್ಲಿ ಹಿಟ್ಟಿನ ಜೊತೆ ಸ್ವಲ್ಪವೇ ರವೆಯನ್ನು ಸೇರಿಸಿ. ನೋಡಿ ಮ್ಯಾಜಿಕ್​. ಪುರಿ ಎಣ್ಣೆಯನ್ನು ಹೆಚ್ಚಿಗೆ ಹೀರಿಕೊಳ್ಳುವುದಿಲ್ಲ, ಜೊತೆಗೆ ಪೂರಿ ಕ್ರಿಸ್ಪಿಯಾಗಿಯೂ ಬರುತ್ತದೆ.&lt;/p&gt;&lt;img&gt;&lt;p&gt;ಅದೇ ರೀತಿ ಬೆಂಡೆಕಾಯಿಯನ್ನು ಕತ್ತರಿಸುವಾಗ ಲೊಳೆ ಬರುತ್ತದೆಯಲ್ಲವೆ, ಈ ಚಿಂತೆಯೂ ಬೇಡ. ಬೆಂಡೇಕಾಯಿ ಕತ್ತರಿಸುವ ಸಮಯದಲ್ಲಿ ಚಾಕುವಿಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಉಜ್ಜಿ. ಈಗ ನೋಡಿ ಮ್ಯಾಜಿಕ್​&lt;/p&gt;]]></content:encoded>
            <category>food</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/kitchen/kitchen-tips-for-oily-foods-like-pakoda-poori-ect-suc-lirwize"/>
        </item>
        <item>
            <title><![CDATA[ಒಂದು ಹನಿ ಎಣ್ಣೆ, ಸೋಡಾ ಬೇಡ.. ಮಗುಚಿ ಹಾಕೋದೂ ಬೇಡ.. ಫಾಸ್ಟಾಗಿ ಮಾಡಿ ಮೆತ್ತನೆಯ ಸ್ಪಾಂಜ್ ದೋಸೆ]]></title>
            <link>https://kannada.asianetnews.com/food/super-soft-sponge-dosa-with-just-2-spoons-of-urad-dal-and-coconut/articleshow-maa948a</link>
            <guid isPermaLink="true">https://kannada.asianetnews.com/food/super-soft-sponge-dosa-with-just-2-spoons-of-urad-dal-and-coconut/articleshow-maa948a</guid>
            <pubDate>Sun, 19 Jul 2026 12:57:39 +0530</pubDate>
            <description><![CDATA[&lt;p&gt;&lt;strong&gt;Sponge Dosa recipe in Kannada: &lt;/strong&gt;ಬೆಳಗ್ಗೆ ಬ್ರೇಕ್&zwnj;ಫಾಸ್ಟ್&zwnj;ಗೆ ಏನು ಮಾಡೋದು ಎಂಬ ಚಿಂತೆನಾ? ಹಾಗಿದ್ದರೆ ಎಣ್ಣೆ ಮತ್ತು ಸೋಡಾವಿಲ್ಲದೆ ಕೇವಲ 2 ಚಮಚ ಉದ್ದಿನಬೇಳೆ ಬಳಸಿ ಹತ್ತಿಯಂತಹ ಸಾಫ್ಟ್ ಸ್ಪಾಂಜ್ ದೋಸೆ ತಯಾರಿಸುವ ವಿಧಾನ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwmb7kd6bnkw3wya969tgm8,imgname-thumbnail---2026-07-19t124753.349-1784446033517.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆ&lt;/strong&gt;ಳಗಿನ ಉಪಹಾರಕ್ಕೆ ಮೃದುವಾದ ದೋಸೆ ಇಷ್ಟಪಡುವವರಿಗೆ ಇಲ್ಲಿದೆ ಒಂದು ವಿಶೇಷ ರೆಸಿಪಿ. ಕೇವಲ 2 ಟೇಬಲ್ ಚಮಚ ಉದ್ದಿನಬೇಳೆ ಮತ್ತು ತೆಂಗಿನಕಾಯಿ ಬಳಸಿ, ಒಂದು ಹನಿ ಎಣ್ಣೆ ಅಥವಾ ಸೋಡಾ ಇಲ್ಲದೆ ಮೆತ್ತನೆಯ ಸ್ಪಾಂಜ್ ದೋಸೆಗಳನ್ನು ನೀವು ತಯಾರಿಸಬಹುದು. ಇದಕ್ಕೆ ಸಖತ್ ಕಾಂಬಿನೇಶನ್ ಆಗಿರುವ ಖಾರವಾದ ಈರುಳ್ಳಿ ಚಟ್ನಿ ಮಾಡುವ ವಿಧಾನವನ್ನೂ ಇಲ್ಲಿ ವಿವರಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇಡ್ಲಿ ದೋಸೆಗಿಂತ ಚಟ್ನಿಗೇ ಡಿಮ್ಯಾಂಡ್! ತೆಳ್ಳನೆಯ ಚಟ್ನಿ ಮಾಡಲು ಟಿಫನ್ ಸೆಂಟರ್&zwnj;ನಲ್ಲಿ ಬಳಸುವ 2 ಸೀಕ್ರೆಟ್ ಪದಾರ್ಥಗಳಿವು&lt;/strong&gt;&lt;/p&gt;&lt;h2&gt;&lt;strong&gt;ಮೊದಲಿಗೆ ಸ್ಪೈಸಿ ಈರುಳ್ಳಿ ಚಟ್ನಿ ತಯಾರಿಸುವ ವಿಧಾನ ನೋಡೋಣ&lt;/strong&gt;&lt;/h2&gt;&lt;p&gt;&lt;strong&gt;ನೆನೆಸಿಡಿ:&lt;/strong&gt; ಮೊದಲು ಚಟ್ನಿಗಾಗಿ 10 ಒಣಮೆಣಸಿನಕಾಯಿಯನ್ನು (ಬಣ್ಣಕ್ಕಾಗಿ ಬ್ಯಾಡಗಿ ಅಥವಾ ಕಾಶ್ಮೀರಿ ಮೆಣಸಿನಕಾಯಿ ಬಳಸಬಹುದು) 15 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಡಿ.&lt;/p&gt;&lt;p&gt;&lt;strong&gt;ರುಬ್ಬಿಕೊಳ್ಳಿ:&lt;/strong&gt; ಮಿಕ್ಸಿ ಜಾರ್&zwnj;ಗೆ ನೆನೆಸಿದ ಮೆಣಸಿನಕಾಯಿ, 2 ದೊಡ್ಡ ಈರುಳ್ಳಿ, 2 ಟೊಮೆಟೊ, 10 ಬೆಳ್ಳುಳ್ಳಿ ಎಸಳು, ಸ್ವಲ್ಪ ಅರಿಶಿನ, ಉಪ್ಪು ಮತ್ತು ಸ್ವಲ್ಪ ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.&lt;/p&gt;&lt;p&gt;&lt;strong&gt;ಒಗ್ಗರಣೆ: &lt;/strong&gt;ಬಾಂಡ್ಲಿಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಜೀರಿಗೆ ಹಾಕಿ ಹುರಿಯಿರಿ. ನಂತರ ಕರಿಬೇವು ಸೇರಿಸಿ, ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಕಿ.&lt;/p&gt;&lt;p&gt;&lt;strong&gt;ಬೇಯಿಸಿ: &lt;/strong&gt;ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಎಣ್ಣೆ ಸೈಡ್&zwnj;ನಲ್ಲಿ ಬಿಡುವವರೆಗೆ ಬೇಯಿಸಿ. ಈ ಚಟ್ನಿಯನ್ನು 4 ದಿನಗಳವರೆಗೆ ಸ್ಟೋರ್ ಮಾಡಿ ಬಳಸಬಹುದು.&lt;/p&gt;&lt;h2&gt;&lt;strong&gt;ಈಗ ಸ್ಪಾಂಜ್ ದೋಸೆಗೆ ಹಿಟ್ಟನ್ನು ಮಾಡುವ ವಿಧಾನ ನೋಡೋಣ&lt;/strong&gt;&lt;/h2&gt;&lt;p&gt;&lt;strong&gt;ನೆನೆಸಿಡಿ: &lt;/strong&gt;ಒಂದು ಪಾತ್ರೆಲ್ಲಿ 1 ಕಪ್ ಇಡ್ಲಿ ಅಕ್ಕಿ, 1/2 ಕಪ್ ಗಟ್ಟಿ ಅವಲಕ್ಕಿ ಮತ್ತು 2 ಟೇಬಲ್ ಚಮಚ ಉದ್ದಿನಬೇಳೆಯನ್ನು ಹಾಕಿ ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೆನೆಸಿಡಿ.&lt;/p&gt;&lt;p&gt;&lt;strong&gt;ರುಬ್ಬುವ ವಿಧಾನ:&lt;/strong&gt; ನೆನೆಸಿದ ಪದಾರ್ಥಗಳನ್ನು ಮಿಕ್ಸಿ ಜಾರ್&zwnj;ಗೆ ಹಾಕಿ. ಅದರ ಜೊತೆಗೆ 1 ಕಪ್ ಹಸಿ ತೆಂಗಿನಕಾಯಿ ತುರಿ ಮತ್ತು 1 ಚಮಚ ಸಕ್ಕರೆ ಸೇರಿಸಿ. ರುಬ್ಬುವಾಗ ಹಿಟ್ಟು ಬಿಸಿಯಾಗದಂತೆ ತಣ್ಣೀರನ್ನು ಬಳಸಿ ನುಣ್ಣಗೆ ರುಬ್ಬಿಕೊಳ್ಳಿ.&lt;/p&gt;&lt;p&gt;&lt;strong&gt;ಹುದುಗುವಿಕೆ (Fermentation):&lt;/strong&gt; ಈ ಹಿಟ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ ಮುಚ್ಚಳ ಮುಚ್ಚಿ ರಾತ್ರಿಯಿಡೀ ಹುದುಗಲು ಬಿಡಿ.&lt;/p&gt;&lt;p&gt;&lt;strong&gt;ಇದನ್ನೂ ಓದಿ: ತುಂಬಾ ಸಿಂಪಲ್, ವಾರವಿಡೀ ಇರುತ್ತೆ.. ತಿಂಡಿಗೆ ಸೈಡ್ ಡಿಶ್&zwnj; ರುಚಿ ರುಚಿಯಾದ ಟೊಮೆಟೊ ತೊಕ್ಕು&lt;/strong&gt;&lt;/p&gt;&lt;h3&gt;&lt;strong&gt;ದೋಸೆ ಮಾಡುವ ಕ್ರಮ&lt;/strong&gt;&lt;/h3&gt;&lt;p&gt;*ಮರುದಿನ ಬೆಳಗ್ಗೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಗುರವಾಗಿ ಕಲಕಿ (ಹಿಟ್ಟಿನ ಒಳಗಿನ ಗಾಳಿ ಹೋಗದಂತೆ ಎಚ್ಚರವಹಿಸಿ).&lt;/p&gt;&lt;p&gt;*ದೋಸೆ ಹಂಚನ್ನು ಚೆನ್ನಾಗಿ ಬಿಸಿ ಮಾಡಿ. ಒಂದು ಸೌಟು ಹಿಟ್ಟನ್ನು ಹಂಚಿನ ಮಧ್ಯದಲ್ಲಿ ಹಾಕಿ, ಅತೀ ಹೆಚ್ಚು ಹರಡದೆ ಲಘುವಾಗಿ ಸ್ಪ್ರೆಡ್ ಮಾಡಿ.&lt;/p&gt;&lt;p&gt;ಕೂಡಲೇ ಮುಚ್ಚಳ ಮುಚ್ಚಿ ಮೀಡಿಯಂ ಫ್ಲೇಮ್&zwnj;ನಲ್ಲಿ ಆವಿಯಲ್ಲಿ ಬೇಯಿಸಿ. ಈ ದೋಸೆಗೆ ಎಣ್ಣೆ ಹಾಕುವ ಅಗತ್ಯವಿಲ್ಲ.&lt;/p&gt;&lt;p&gt;*ಸುಮಾರು 2 ನಿಮಿಷದ ನಂತರ ಮುಚ್ಚಳ ತೆಗೆದು ನೋಡಿ. ಮೇಲೆ ಕೈ ತಾಕಿದಾಗ ಹಿಟ್ಟು ಅಂಟದಿದ್ದರೆ ದೋಸೆ ರೆಡಿ ಎಂದರ್ಥ. ಈ ದೋಸೆಯನ್ನು ಮಗುಚಿ ಹಾಕುವ ಅಗತ್ಯವಿಲ್ಲ.&lt;/p&gt;&lt;p&gt;*ತೆಂಗಿನಕಾಯಿ ಮತ್ತು ಅವಲಕ್ಕಿ ಬಳಸಿರುವುದರಿಂದ ಈ ದೋಸೆಗಳು ಸ್ಪಾಂಜ್&zwnj;ನಂತೆ ಮೆತ್ತಗಿರುತ್ತವೆ ಮತ್ತು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ತಯಾರಿಸಿ ನೋಡಿ ಮತ್ತು ಈ ರುಚಿಕರ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/food/super-soft-sponge-dosa-with-just-2-spoons-of-urad-dal-and-coconut/articleshow-maa948a"/>
        </item>
        <item>
            <title><![CDATA[Foods for healthy gut: ಈ ಆಹಾರವು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸಲು ಸಹಾಯ ಮಾಡುತ್ತೆ]]></title>
            <link>https://kannada.asianetnews.com/gallery/health-life/5-kitchen-ingredients-to-boost-good-gut-bacteria-naturally-p5f8bfv</link>
            <guid isPermaLink="true">https://kannada.asianetnews.com/gallery/health-life/5-kitchen-ingredients-to-boost-good-gut-bacteria-naturally-p5f8bfv</guid>
            <pubDate>Fri, 17 Jul 2026 16:48:04 +0530</pubDate>
            <description><![CDATA[&lt;p&gt;Foods for healthy gut: ಹೊಟ್ಟೆಯ ಆರೋಗ್ಯವೇ ಇಡೀ ದೇಹದ ಆರೋಗ್ಯದ ರಹಸ್ಯ. ನಿಮ್ಮ ಜೀರ್ಣಾಂಗವ್ಯೂಹದಲ್ಲಿ ಗುಡ್ ಬ್ಯಾಕ್ಟೀರಿಯಾಗಳನ್ನು ನೈಸರ್ಗಿಕವಾಗಿ ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸಲು ಅಡುಗೆ ಮನೆಯಲ್ಲಿರುವ ಈ 5 ಪದಾರ್ಥ ಅತ್ಯಂತ ಸಹಕಾರಿ. ಅವು ಯಾವುವು, ಹೇಗೆ ಬಳಸಬೇಕೆಂಬ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvwbhcqvjbwvgfkzbsyw68n0,imgname-regular-meal-timings--1--1782289314555.jpg" type="image/jpeg" height="390" width="690"/>
            <content:encoded><![CDATA[&lt;p&gt;Foods for healthy gut: ಹೊಟ್ಟೆಯ ಆರೋಗ್ಯವೇ ಇಡೀ ದೇಹದ ಆರೋಗ್ಯದ ರಹಸ್ಯ. ನಿಮ್ಮ ಜೀರ್ಣಾಂಗವ್ಯೂಹದಲ್ಲಿ ಗುಡ್ ಬ್ಯಾಕ್ಟೀರಿಯಾಗಳನ್ನು ನೈಸರ್ಗಿಕವಾಗಿ ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸಲು ಅಡುಗೆ ಮನೆಯಲ್ಲಿರುವ ಈ 5 ಪದಾರ್ಥ ಅತ್ಯಂತ ಸಹಕಾರಿ. ಅವು ಯಾವುವು, ಹೇಗೆ ಬಳಸಬೇಕೆಂಬ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಗುಡ್ ಬ್ಯಾಕ್ಟೀರಿಯಾ ನೈಸರ್ಗಿಕವಾಗಿ ಹೆಚ್ಚುತ್ತೆ&lt;/strong&gt;ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಬಹುತೇಕ ಕಾಯಿಲೆಗಳಿಗೆ ಮೂಲ ಕಾರಣ ನಮ್ಮ ಹೊಟ್ಟೆಯ ಆರೋಗ್ಯ (Gut Health) ಹದಗೆಟ್ಟಿರುವುದು. ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾದ 'ಗುಡ್ ಬ್ಯಾಕ್ಟೀರಿಯಾ'ಗಳ ಸಂಖ್ಯೆ ಹೆಚ್ಚಿದ್ದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಅಂತಹ ಗುಡ್ ಬ್ಯಾಕ್ಟೀರಿಯಾಗಳನ್ನು ನೈಸರ್ಗಿಕವಾಗಿ ಹೆಚ್ಚಿಸಲು ನಮ್ಮ ಅಡುಗೆ ಮನೆಯಲ್ಲಿರುವ ಈ 5 ಪದಾರ್ಥಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಪೌಷ್ಟಿಕತಜ್ಞೆ ಲವನೀತ್ ಬಾತ್ರಾ ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;1. ಬೆಳ್ಳುಳ್ಳಿ (Garlic)&lt;/strong&gt;ಬೆಳ್ಳುಳ್ಳಿ ಒಂದು ಅದ್ಭುತವಾದ 'ಪ್ರೀಬಯೋಟಿಕ್' ಆಗಿದೆ. ಇದರಲ್ಲಿರುವ ಫ್ರಕ್ಟನ್ ಫೈಬರ್ ಅನ್ನು ಮನುಷ್ಯರು ನೇರವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ, ಇದು ಹೊಟ್ಟೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಕೆಲಸ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಒಂದು ಎಸಳು ಹಸಿ ಬೆಳ್ಳುಳ್ಳಿ ತಿನ್ನುವುದು ಅಥವಾ ಚಟ್ನಿ, ಸಲಾಡ್&zwnj;ಗಳಲ್ಲಿ ಇದನ್ನು ಬಳಸುವುದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.&lt;/p&gt;&lt;img&gt;&lt;p&gt;&lt;strong&gt;2. ಈರುಳ್ಳಿ (Onion)&lt;/strong&gt;ಈರುಳ್ಳಿಯಲ್ಲಿ ಫ್ರಕ್ಟೂಲಿಗೋಸ್ಯಾಕರೈಡ್ಸ್ ಸಮೃದ್ಧವಾಗಿದ್ದು, ಇದು ಮಲವಿಸರ್ಜನೆಯನ್ನು ಸುಲಭಗೊಳಿಸಲು ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಸಲಾಡ್ ರೂಪದಲ್ಲಿ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;3. ಹಸಿ ಬಾಳೆಕಾಯಿ (Raw Banana)&lt;/strong&gt;ಆರೋಗ್ಯಕರ ಜೀರ್ಣಾಂಗವ್ಯೂಹಕ್ಕಾಗಿ ಹಸಿ ಬಾಳೆಕಾಯಿ ಸೇವಿಸುವುದು ಉತ್ತಮ. ಇದರಲ್ಲಿ 'ರೆಸಿಸ್ಟೆಂಟ್ ಸ್ಟಾರ್ಚ್' ಹೆಚ್ಚಿರುತ್ತದೆ. ಇದು ಕೊಲೊನ್ (ದೊಡ್ಡ ಕರುಳು) ಕೋಶಗಳನ್ನು ಬಲಪಡಿಸುತ್ತದೆ. ಬಾಳೆಕಾಯಿ ಹಣ್ಣಾಗುವ ಮುನ್ನ ಅದು ಹಸಿವಿರುವಾಗಲೇ ಸೇವಿಸಿದರೆ ಮಾತ್ರ ಇದರ ಪೂರ್ಣ ಪ್ರಯೋಜನ ಸಿಗುತ್ತದೆ. ಏಕೆಂದರೆ ಹಣ್ಣಾದ ಮೇಲೆ ಅದು ಸಕ್ಕರೆಯಾಗಿ ಮಾರ್ಪಡುತ್ತದೆ.&lt;/p&gt;&lt;img&gt;&lt;p&gt;&lt;strong&gt;4. ಹೆಸರು ಬೇಳೆ (Moong Dal)&lt;/strong&gt;ಹೆಸರು ಬೇಳೆಯಲ್ಲಿ ವಿಲೇಯಕಾರಿ ಫೈಬರ್ (Soluble Fiber) ಮತ್ತು ರೆಸಿಸ್ಟೆಂಟ್ ಸ್ಟಾರ್ಚ್ ಇರುತ್ತದೆ. ಇದು ಹೊಟ್ಟೆಯಲ್ಲಿರುವ ಸೂಕ್ಷ್ಮಾಣುಜೀವಿಗಳಿಗೆ ಉತ್ತಮ ಪೋಷಣೆ ನೀಡುತ್ತದೆ ಮತ್ತು ಉರಿಯೂತದ ಸಮಸ್ಯೆಯನ್ನು ತಡೆಯುತ್ತದೆ. ಹೆಸರು ಬೇಳೆಯನ್ನು ಮೊಳಕೆ ಬರಿಸುವುದರಿಂದ ಅದರ ಪೋಷಕಾಂಶಗಳು ಹೆಚ್ಚುತ್ತವೆ. ಇದನ್ನು ಸಲಾಡ್ ಅಥವಾ ಚಾಟ್ ರೂಪದಲ್ಲಿ ಸೇವಿಸಬಹುದು.&lt;/p&gt;&lt;img&gt;&lt;p&gt;&lt;strong&gt;5. ರಾಗಿ (Ragi)&lt;/strong&gt;ರಾಗಿ ಕೂಡ ರೆಸಿಸ್ಟೆಂಟ್ ಸ್ಟಾರ್ಚ್ ಅನ್ನು ಹೊಂದಿದ್ದು, ಇದು ಕರುಳಿನಲ್ಲಿರುವ ವಿವಿಧ ರೀತಿಯ ಬ್ಯಾಕ್ಟೀರಿಯಾಗಳಿಗೆ ಪೋಷಣೆ ನೀಡುತ್ತದೆ. ರಾಗಿ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲದೆ, ಹಾರ್ಮೋನ್ ಸಮತೋಲನ ಮತ್ತು ತೂಕ ಇಳಿಕೆಗೂ ಸಹಕಾರಿ. ದಿನದ ಆರಂಭವನ್ನು ರಾಗಿ ಗಂಜಿಯೊಂದಿಗೆ ಮಾಡುವುದು ಅತ್ಯುತ್ತಮ ಅಭ್ಯಾಸ.&lt;/p&gt;&lt;p&gt;ನಿಮ್ಮ ದಿನನಿತ್ಯದ ಆಹಾರದಲ್ಲಿ ಈ ಪದಾರ್ಥಗಳನ್ನು ಸೇರಿಸಿಕೊಳ್ಳುವ ಮೂಲಕ ಜೀರ್ಣಕ್ರಿಯೆಯ ಸಮಸ್ಯೆಗಳಿಂದ ದೂರವಿರಬಹುದು.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/5-kitchen-ingredients-to-boost-good-gut-bacteria-naturally-p5f8bfv"/>
        </item>
        <item>
            <title><![CDATA[Antiliaನಲ್ಲಿ ಕೆಲಸ ಮಾಡಬೇಕಾ? ಅಂಬಾನಿ ಮನೆಯ ಉದ್ಯೋಗಕ್ಕೆ ಬೇಕಾದ ಅರ್ಹತೆಗಳಿವು]]></title>
            <link>https://kannada.asianetnews.com/gallery/business/how-to-get-a-job-at-mukesh-ambani-antilia-suh-vgkcexz</link>
            <guid isPermaLink="true">https://kannada.asianetnews.com/gallery/business/how-to-get-a-job-at-mukesh-ambani-antilia-suh-vgkcexz</guid>
            <pubDate>Thu, 16 Jul 2026 11:34:44 +0530</pubDate>
            <description><![CDATA[&lt;p&gt;ಅಂಬಾನಿ ಮನೆಯಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಾರೆ. ನಿಮಗೂ ಅಂಬಾನಿ ಕುಟುಂಬದ ಜೊತೆ ಕೆಲಸ ಮಾಡುವ ಆಸೆ ಇದೆಯಾ? ಹಾಗಾದರೆ, ಅಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಯಾವೆಲ್ಲಾ ಅರ್ಹತೆಗಳು ಇರಬೇಕು? ಯಾವ ಗುಣಗಳನ್ನು ನೋಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ? ಈ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxj048577z7eewr3pg9amz3z,imgname-do-you-know-how-much-mukesh-ambanis-house-would-be-worth-if-sold-now-no-one-will-buy-it-1784089288871.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಂಬಾನಿ ಮನೆಯಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಾರೆ. ನಿಮಗೂ ಅಂಬಾನಿ ಕುಟುಂಬದ ಜೊತೆ ಕೆಲಸ ಮಾಡುವ ಆಸೆ ಇದೆಯಾ? ಹಾಗಾದರೆ, ಅಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಯಾವೆಲ್ಲಾ ಅರ್ಹತೆಗಳು ಇರಬೇಕು? ಯಾವ ಗುಣಗಳನ್ನು ನೋಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ? ಈ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;ಮಾಧ್ಯಮ ವರದಿಗಳ ಪ್ರಕಾರ, ಅಂಬಾನಿ ಮನೆಯಲ್ಲಿ ಆರಂಭಿಕ ಹಂತದ ಬಾಣಸಿಗರಿಗೆ ತಿಂಗಳಿಗೆ ಸುಮಾರು ₹1.5 ಲಕ್ಷದಿಂದ ₹2 ಲಕ್ಷದವರೆಗೆ ಸಂಬಳ ನೀಡುತ್ತಾರೆ. ಅದೇ ಅನುಭವಿ ಸೀನಿಯರ್ ಅಥವಾ ಎಕ್ಸಿಕ್ಯೂಟಿವ್ ಬಾಣಸಿಗರಿಗೆ ತಿಂಗಳಿಗೆ ₹3 ಲಕ್ಷದಿಂದ ₹5 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಬಳ ಸಿಗುತ್ತದೆ.&lt;/p&gt;&lt;img&gt;&lt;p&gt;ಇಲ್ಲಿ ಬಾಣಸಿಗರಾಗಲು ಹೋಟೆಲ್ ಮ್ಯಾನೇಜ್&zwnj;ಮೆಂಟ್ ಅಥವಾ ಕ್ಯುಲಿನರಿ ಆರ್ಟ್ಸ್&zwnj;ನಲ್ಲಿ ಡಿಗ್ರಿ/ಡಿಪ್ಲೊಮಾ ಮಾಡಿರಬೇಕು. 5 ಸ್ಟಾರ್ ಹೋಟೆಲ್&zwnj;ನಲ್ಲಿ ಕೆಲಸ ಮಾಡಿದ ಅನುಭವ, ಭಾರತೀಯ ಮತ್ತು ಅಂತಾರಾಷ್ಟ್ರೀಯ ಅಡುಗೆಗಳ ಜ್ಞಾನ ಇರಬೇಕು. ಜೊತೆಗೆ, ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಬಗ್ಗೆ ತಿಳಿದಿರಬೇಕು ಹಾಗೂ ಎಲ್ಲಾ ವಿಷಯಗಳನ್ನು ಗೌಪ್ಯವಾಗಿಡಬೇಕು.&lt;/p&gt;&lt;img&gt;&lt;p&gt;ಅಂಬಾನಿ ಮನೆಯಲ್ಲಿ ಬಾಣಸಿಗನ ಕೆಲಸಕ್ಕೆ ಕೇವಲ ಅಡುಗೆ ಬಂದರೆ ಸಾಲದು, ಸಂದರ್ಶನ ಬಹಳ ಕಠಿಣವಾಗಿರುತ್ತದೆ. ರುಚಿಕರ ಅಡುಗೆಯ ಜೊತೆಗೆ, ಅದನ್ನು ಅಂದವಾಗಿ ಪ್ರೆಸೆಂಟ್ ಮಾಡುವ ಕಲೆ ತಿಳಿದಿರಬೇಕು. ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ನಿಮ್ಮ ನಡವಳಿಕೆ ಮತ್ತು ಹಿನ್ನೆಲೆಯನ್ನು ಪರಿಶೀಲಿಸುತ್ತಾರೆ.&lt;/p&gt;&lt;img&gt;&lt;p&gt;ಇವೆಲ್ಲವೂ ಸರಿ ಎನಿಸಿದ ನಂತರವೇ ಕೆಲಸ ಖಚಿತವಾಗುತ್ತದೆ. ಮುಕೇಶ್ ಅಂಬಾನಿ ಹೆಚ್ಚಾಗಿ ಗುಜರಾತಿ, ದಕ್ಷಿಣ ಭಾರತದ ಸಾಂಪ್ರದಾಯಿಕ ಮತ್ತು ಆರೋಗ್ಯಕರ ಆಹಾರವನ್ನು ಇಷ್ಟಪಡುತ್ತಾರೆ. ಇಲ್ಲಿನ ಉದ್ಯೋಗಿಗಳಿಗೆ ಸಂಬಳದ ಜೊತೆಗೆ ವೈದ್ಯಕೀಯ ಸೌಲಭ್ಯ ಮತ್ತು ವಿಮೆಯಂತಹ ಹೆಚ್ಚುವರಿ ಪ್ರಯೋಜನಗಳೂ ಸಿಗುತ್ತವೆ.&lt;/p&gt;]]></content:encoded>
            <category>food</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/how-to-get-a-job-at-mukesh-ambani-antilia-suh-vgkcexz"/>
        </item>
        <item>
            <title><![CDATA[ಹಸಿರು-ಕೆಂಪು ಮೆಣಸಿನಕಾಯಿಯಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ಇಲ್ಲಿದೆ ತಿಳಿಯಲೇಬೇಕಾದ ಮಾಹಿತಿ!]]></title>
            <link>https://kannada.asianetnews.com/health-life/which-is-better-for-health-in-between-green-vs-red-chili-is-the-information-to-know-here/articleshow-xep0x9l</link>
            <guid isPermaLink="true">https://kannada.asianetnews.com/health-life/which-is-better-for-health-in-between-green-vs-red-chili-is-the-information-to-know-here/articleshow-xep0x9l</guid>
            <pubDate>Sat, 18 Jul 2026 16:00:31 +0530</pubDate>
            <description><![CDATA[&lt;p&gt;ಹೃದಯದ ಆರೋಗ್ಯ: ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಹೃದಯದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಯಾವುದು ಬೆಸ್ಟ್? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxtccqkjtat858dp0sj9sw6q,imgname-red-vs-green-chilli-1784370585201.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Green Chilli V/S Red Chilli: ಹಸಿರು ಮೆಣಸಿನಕಾಯಿ vs ಕೆಂಪು ಮೆಣಸಿನಕಾಯಿ: ಆರೋಗ್ಯದ ದೃಷ್ಟಿಯಿಂದ ಯಾವುದು ಬೆಸ್ಟ್? ಇಲ್ಲಿದೆ ಕಂಪ್ಲೀಟ್ ಗೈಡ್!&lt;/strong&gt;&lt;/p&gt;&lt;p&gt;ನಮ್ಮ ಭಾರತೀಯ ಅಡುಗೆಮನೆಯಲ್ಲಿ ಮೆಣಸಿನಕಾಯಿ ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. &quot;ಖಾರವಿಲ್ಲದ ಊಟ ಸಪ್ಪೆ&quot; ಎಂಬ ಮಾತಿನಂತೆ, ನಮ್ಮ ರುಚಿಯನ್ನು ಹೆಚ್ಚಿಸುವಲ್ಲಿ ಮೆಣಸಿನಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಮೆಣಸಿನಕಾಯಿ ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಒಂದು ಪವರ್&zwnj;ಹೌಸ್ ಎಂಬುದು ನಿಮಗೆ ಗೊತ್ತೇ? ಅದರಲ್ಲೂ ಹಸಿರು ಮತ್ತು ಕೆಂಪು ಮೆಣಸಿನಕಾಯಿಗಳ ನಡುವಿನ ಯುದ್ಧದಲ್ಲಿ ಯಾವುದು ಹೆಚ್ಚು ಲಾಭದಾಯಕ ಎಂಬ ಗೊಂದಲ ಅನೇಕರಲ್ಲಿದೆ.&lt;/p&gt;&lt;h2&gt;ಪೌಷ್ಟಿಕಾಂಶದ ಕಿಂಗ್ ಯಾರು?&lt;/h2&gt;&lt;p&gt;ಪ್ರಸಿದ್ಧ ಪೌಷ್ಟಿಕತಜ್ಞರಾದ ರುಜುತಾ ದಿವೇಕರ್ ಅವರ ಪ್ರಕಾರ, ಕೆಂಪು ಮೆಣಸಿನಕಾಯಿಯಲ್ಲಿ ಶೇಕಡಾ 88 ರಷ್ಟು ನೀರಿದೆ. ಒಂದು ಚಮಚ ಕೆಂಪು ಮೆಣಸಿನಲ್ಲಿ ಪ್ರೋಟೀನ್, ಫೈಬರ್ ಮತ್ತು ಅತ್ಯಲ್ಪ ಪ್ರಮಾಣದ ಕೊಬ್ಬು ಇರುತ್ತದೆ. ಇದರಲ್ಲಿ ವಿಟಮಿನ್ ಸಿ, ಬಿ6, ಮತ್ತು ಕೆ1 ಹೇರಳವಾಗಿದೆ.&lt;/p&gt;&lt;p&gt;ಇನ್ನೊಂದೆಡೆ, ಹಸಿರು ಮೆಣಸಿನಕಾಯಿ ವಿಟಮಿನ್ ಸಿ ಯ ಭಂಡಾರವೇ ಸರಿ. ಒಂದು ಕಪ್ ಹಸಿರು ಮೆಣಸಿನಕಾಯಿಯಲ್ಲಿ ಶೇ. 52.76 ರಷ್ಟು ವಿಟಮಿನ್ ಸಿ ಇದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅದ್ಭುತವಾಗಿ ಕೆಲಸ ಮಾಡುತ್ತದೆ. ಜೊತೆಗೆ ಇದರಲ್ಲಿ ಕಬ್ಬಿಣದ ಅಂಶ, ವಿಟಮಿನ್ ಬಿ9 ಮತ್ತು ಮೆಗ್ನೀಸಿಯಮ್ ಕೂಡ ಸಮೃದ್ಧವಾಗಿದೆ.&lt;/p&gt;&lt;p&gt;ಹೃದಯದ ಆರೋಗ್ಯ: ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಹೃದಯದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ.&lt;/p&gt;&lt;p&gt;ಆರೋಗ್ಯ ತಜ್ಞರ ಪ್ರಕಾರ, ಕೆಂಪು ಮೆಣಸಿನಕಾಯಿಗಿಂತ ಹಸಿರು ಮೆಣಸಿನಕಾಯಿ ಹೆಚ್ಚು ಪ್ರಯೋಜನಕಾರಿ. ಏಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ:&lt;/p&gt;&lt;p&gt;ತೂಕ ಇಳಿಕೆಗೆ ಸಹಕಾರಿ (Weight Loss): ನೀವು ತೂಕ ಇಳಿಸಿಕೊಳ್ಳುವ ಪ್ಲಾನ್&zwnj;ನಲ್ಲಿದ್ದರೆ ಹಸಿರು ಮೆಣಸಿನಕಾಯಿ ನಿಮ್ಮ ಬೆಸ್ಟ್ ಫ್ರೆಂಡ್. ಇದು ಶೂನ್ಯ ಕ್ಯಾಲೋರಿಯನ್ನು ಹೊಂದಿದೆ ಮತ್ತು ದೇಹದ ಚಯಾಪಚಯ ಕ್ರಿಯೆಯನ್ನು (Metabolism) ವೇಗಗೊಳಿಸುತ್ತದೆ. ಇದರಿಂದ ಕ್ಯಾಲೋರಿಗಳು ಬೇಗನೆ ಬರ್ನ್ ಆಗುತ್ತವೆ.&lt;/p&gt;&lt;p&gt;ಜೀರ್ಣಕ್ರಿಯೆಗೆ ರಾಮಬಾಣ: ಹಸಿರು ಮೆಣಸಿನಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಇದು ಮಲಬದ್ಧತೆಯನ್ನು ತಡೆಯುತ್ತದೆ. ಅಲ್ಲದೆ, ಇದನ್ನು ತಿನ್ನುವಾಗ ಲಾಲಾರಸ ಹೆಚ್ಚು ಉತ್ಪತ್ತಿಯಾಗುವುದರಿಂದ ಜೀರ್ಣಕ್ರಿಯೆ ಸುಗಮಗೊಳ್ಳುತ್ತದೆ.&lt;/p&gt;&lt;p&gt;ಮಧುಮೇಹಿಗಳಿಗೆ ವರ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಹಸಿರು ಮೆಣಸಿನಕಾಯಿ ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ.&lt;/p&gt;&lt;p&gt;ಹೃದಯದ ಆರೋಗ್ಯ: ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಹೃದಯದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ.&lt;/p&gt;&lt;p&gt;ಕೆಂಪು ಮೆಣಸಿನಕಾಯಿಯ ಅಪಾಯಗಳೇನು?&lt;/p&gt;&lt;p&gt;ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮೆಣಸಿನಕಾಯಿ ಅಥವಾ ಅದರ ಪುಡಿಯನ್ನು ಬಳಸುವುದರಿಂದ ಎದೆಯುರಿ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯಲ್ಲಿ ಹುಣ್ಣು (Ulcers) ಉಂಟಾಗುವ ಸಾಧ್ಯತೆ ಇರುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಸಿಗುವ ಕೆಂಪು ಮೆಣಸಿನ ಪುಡಿಗಳಲ್ಲಿ ಕೃತಕ ಬಣ್ಣಗಳನ್ನು ಬೆರೆಸುವ ಸಾಧ್ಯತೆ ಹೆಚ್ಚಿರುವುದರಿಂದ, ಅದು ಆರೋಗ್ಯಕ್ಕೆ ಹಾನಿಕಾರಕ.&lt;/p&gt;&lt;p&gt;ಲೈಫ್&zwnj;ಸ್ಟೈಲ್ ಟಿಪ್ಸ್&zwnj;&lt;/p&gt;&lt;p&gt;ನಿಮ್ಮ ದೈನಂದಿನ ಆಹಾರದಲ್ಲಿ ಕೆಂಪು ಮೆಣಸಿನ ಪುಡಿಯ ಬದಲಾಗಿ ಹಸಿರು ಮೆಣಸಿನಕಾಯಿಯನ್ನು ಬಳಸಲು ರೂಢಿಸಿಕೊಳ್ಳಿ. ಇದು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೆ, ಎಂಡಾರ್ಫಿನ್&zwnj;ಗಳನ್ನು ಬಿಡುಗಡೆ ಮಾಡುವ ಮೂಲಕ ನಿಮ್ಮ ಮೂಡ್ ಅನ್ನು ಕೂಡ ಫ್ರೆಶ್ ಆಗಿಡುತ್ತದೆ. ಈ ಮೂಲಕ ನಿಮ್ಮ ಲೈಫ್&zwnj; ಖುಷಿಯಿಂದ ಕೂಡಿರುವ ಚಾನ್ಸ್ ಹೆಚ್ಚು!&lt;/p&gt;&lt;p&gt;ಆದರೆ ನೆನಪಿಡಿ, ಯಾವುದೂ ಅತಿಯಾದರೆ ವಿಷ. ಹಸಿರು ಮೆಣಸಿನಕಾಯಿಯನ್ನೂ ಕೂಡ ಮಿತವಾಗಿ ಬಳಸುವುದು ಕ್ಷೇಮ!&lt;/p&gt;&lt;p&gt;&lt;strong&gt;ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನಿಮ್ಮ ದೇಹದ ಪ್ರಕೃತಿಗೆ ಅನುಗುಣವಾಗಿ ಯಾವುದೇ ಮೆಣಸಿಕಾಯಿಯನ್ನಾಗಲೀ ಹಿತಮಿತವಾಗಿ ತಿನ್ನಿ.&lt;/strong&gt;&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/which-is-better-for-health-in-between-green-vs-red-chili-is-the-information-to-know-here/articleshow-xep0x9l"/>
        </item>
    </channel>
</rss>
