<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 09 Jun 2026 18:51:20 +0530</lastBuildDate>
        <atom:link href="https://kannada.asianetnews.com/rss/food" rel="self" type="application/rss+xml"/>
        <item>
            <title><![CDATA[ಫಿಕಲ್ ಇನ್‌ಸ್ಟಂಟ್ ಪೌಡರ್; ಬೇಕೆನಿಸಿದಾಗ 5 ನಿಮಿಷದಲ್ಲಿ ಮಾಡ್ಕೊಳ್ಳಿ ಫ್ರೆಶ್ ಉಪ್ಪಿನಕಾಯಿ]]></title>
            <link>https://kannada.asianetnews.com/gallery/food/south-indian-style-recipe-homemade-instant-pickle-powder-using-mustard-fenugreek-and-black-pepper-mrq-0mbxpm9</link>
            <guid isPermaLink="true">https://kannada.asianetnews.com/gallery/food/south-indian-style-recipe-homemade-instant-pickle-powder-using-mustard-fenugreek-and-black-pepper-mrq-0mbxpm9</guid>
            <pubDate>Sun, 07 Jun 2026 12:32:09 +0530</pubDate>
            <description><![CDATA[&lt;p&gt;ಮನೆಯಲ್ಲಿಯೇ ಇನ್&zwnj;ಸ್ಟಂಟ್ ಉಪ್ಪಿನಕಾಯಿ ಪುಡಿಯನ್ನು ಸುಲಭವಾಗಿ ತಯಾರಿಸಬಹುದು. ಈ ಸಿದ್ಧಪಡಿಸಿದ ಪುಡಿಯಿಂದ ಮಾವಿನಕಾಯಿ, ನೆಲ್ಲಿಕಾಯಿ, ಕ್ಯಾರೆಟ್&zwnj;ನಂತಹ ತರಕಾರಿಗಳನ್ನು ಬಳಸಿ ಬೇಕೆಂದಾಗ ರುಚಿಕರವಾದ ಮತ್ತು ತಾಜಾ ಉಪ್ಪಿನಕಾಯಿಯನ್ನು ನಿಮಿಷಗಳಲ್ಲಿ ಮಾಡಿಕೊಳ್ಳಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktgdv04yb3ke06tksbz3xp1c,imgname-pickle--5--1780815331486.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆಯಲ್ಲಿಯೇ ಇನ್&zwnj;ಸ್ಟಂಟ್ ಉಪ್ಪಿನಕಾಯಿ ಪುಡಿಯನ್ನು ಸುಲಭವಾಗಿ ತಯಾರಿಸಬಹುದು. ಈ ಸಿದ್ಧಪಡಿಸಿದ ಪುಡಿಯಿಂದ ಮಾವಿನಕಾಯಿ, ನೆಲ್ಲಿಕಾಯಿ, ಕ್ಯಾರೆಟ್&zwnj;ನಂತಹ ತರಕಾರಿಗಳನ್ನು ಬಳಸಿ ಬೇಕೆಂದಾಗ ರುಚಿಕರವಾದ ಮತ್ತು ತಾಜಾ ಉಪ್ಪಿನಕಾಯಿಯನ್ನು ನಿಮಿಷಗಳಲ್ಲಿ ಮಾಡಿಕೊಳ್ಳಬಹುದು.&lt;/p&gt;&lt;img&gt;&lt;p&gt;ಇಂದು ಮಾರುಕಟ್ಟೆಯಲ್ಲಿ ಬಗೆ ಬಗೆಯ ಉಪ್ಪಿನಕಾಯಿಗಳು ಸಿಗುತ್ತವೆ. ಕೆಲವರು ಮನೆಯಲ್ಲಿಯೇ ಉಪ್ಪಿನಕಾಯಿ ಹಾಕಿಕೊಂಡು ಸ್ಟೋರ್ ಮಾಡಿಕೊಂಡು ವರ್ಷಗಟ್ಟಲೇ ತಿಂತಾರೆ. ಆದ್ರೆ ಕೆಲವರಿಗೆ ಸ್ಟೋರ್ ಮಾಡುವ ವಿಧಾನ ತಿಳಿಯದ ಹಿನ್ನೆಲೆ ಅಂಗಡಿಯಿಂದ ತರಿಸಿಕೊಳ್ಳುತ್ತಾರೆ. ಈ ಇನ್&zwnj;ಸ್ಟಂಟ್ ಪೌಡರ್ ಇದ್ರೆ ಬೇಕೆನಿಸಿದಾಗ ರುಚಿಯಾದ ಬಗೆ ಬಗೆಯ ಫ್ರೆಶ್ ಉಪ್ಪಿನಕಾಯಿ ಮಾಡಿಕೊಳ್ಳಬಹುದು.&lt;/p&gt;&lt;img&gt;&lt;p&gt;ಸಾಸವೆ: 100 ಗ್ರಾಂ, ಮೆಂತ್ಯೆ: 50 ಗ್ರಾಂ, ಬ್ಯಾಡಗಿ ಮೆಣಸಿನಕಾಯಿ: 10 ರಿಂದ 12, ಅರಿಶಿಣ ಪುಡಿ: 1 ಟೀ ಸ್ಪೂನ್, ಇಂಗು: 1/2 ಟೀ ಸ್ಪೂನ್, ಉಪ್ಪು: ರುಚಿಗೆ ತಕ್ಕಷ್ಟು&lt;/p&gt;&lt;img&gt;&lt;p&gt;ಮೊದಲಿಗೆ ಸಾಸವೆ ಮತ್ತು ಮೆಂತ್ಯೆಯನ್ನು ಪರಿಮಳ ಬರೋವರೆಗೂ ಹುರಿದುಕೊಳ್ಳಿ. ನಂತರ ಇದೇ ಕಾವಲಿ ಮೇಲೆ ಹಾಕಿ ಬ್ಯಾಡಗಿ ಮೆಣಸಿನಕಾಯಿಯನ್ನು ಸಹ ಹುರಿದುಕೊಳ್ಳಬೇಕು. ಮೂರು ಪದಾರ್ಥಗಳನ್ನು ಸಂಪೂರ್ಣವಾಗಿ ತಣ್ಣಗಾದ ಮೇಲೆ ಮಿಕ್ಸಿ ಜಾರ್&zwnj;ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.&lt;/p&gt;&lt;img&gt;&lt;p&gt;ಸಾಸವೆ, ಮೆಂತ್ಯೆ ಮತ್ತು ಮೆಣಸಿನಕಾಯಿ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಇಂಗು ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ನಿಮಗೆ ಇನ್&zwnj;ಸ್ಟಂಟ್ ಉಪ್ಪಿನಕಾಯಿ ಪೌಡರ್ ಸಿದ್ಧವಾಗುತ್ತದೆ. ಈ ಉಪ್ಪಿನಕಾಯಿ ಪೌಡರ್&zwnj;ನನ್ನು ಗಾಳಿಯಾಡದ ಗಾಜಿನ ಜಾರ್&zwnj;ನಲ್ಲಿ ತುಂಬಿಸಿಕೊಂಡ್ರೆ ಬೇಕೆನಿಸಿದಾಗ ಫ್ರೆಶ್ ಉಪ್ಪಿನಕಾಯಿ ಮಾಡಿಕೊಂಡು ಸವಿಯಬಹುದು.&lt;/p&gt;&lt;img&gt;&lt;p&gt;ಬೆಳ್ಳುಳ್ಳಿ, ಕ್ಯಾರೆಟ್, ನೆಲ್ಲಿಕಾಯಿ, ಮಾವಿನಕಾಯಿ, ನಿಂಬೆಹಣ್ಣು ಸೇರಿದಂತೆ ನಿಮ್ಮಿಷ್ಟದ ತರಕಾರಿ ಬಳಸಿಕೊಂಡು ಉಪ್ಪಿನಕಾಯಿ ಮಾಡಿಕೊಳ್ಳಬಹುದು. ಉದಾಹರಣೆಗೆ ಮಾವಿನಕಾಯಿ ಸಣ್ಣ ತುಂಡುಗಳನ್ನು ಮಾಡಿಕೊಳ್ಳಿ. ಒಲೆ ಮೇಲೆ ಬಾಣಲೆ ಇಟ್ಕೊಂಡು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ನಿಮ್ಮ ಇನ್&zwnj;ಸ್ಟಂಟ್ ಪೌಡರ್ ಸೇರಿಸಿ. ನಂತರ ಒಲೆ ಆಫ್ ಮಾಡಿ ಮಾವಿನಕಾಯಿ ತುಂಡು ಸೇರಿಸಿದ್ರೆ ಇನ್&zwnj;ಸ್ಟಂಟ್ ಪಿಕಲ್ ರೆಡಿಯಾಗುತ್ತದೆ.&lt;/p&gt;&lt;img&gt;&lt;p&gt;ಈ ರೀತಿ ಮಾಡಿರುವ ಉಪ್ಪಿನಕಾಯಿ ಹೆಚ್ಚು ದಿನ ಸ್ಟೋರ್ ಮಾಡಲು ಆಗಲ್ಲ. ಹಾಗಾಗಿ ಬೇಕಾದಷ್ಟು ಮಾತ್ರವನ್ನು ರೆಡಿ ಮಾಡಿಕೊಳ್ಳಿ. ಇನ್ನು ತರಕಾರಿ ಉಪ್ಪಿನಕಾಯಿ ಹಾಕುವ ಸಂದರ್ಭದಲ್ಲಿ ಹುಳಿಗೆ ನಿಂಬೆಹಣ್ಣು ಮಾಡಿಕೊಳ್ಳಿ. ಒಗ್ಗರಣೆ ಸಮಯದಲ್ಲಿ ಬೇಕಿದ್ರೆ ಮತ್ತೊಂದಿಷ್ಟು ಸಾಸವೆ, ಕೊಂಚ ಜೀರಿಗೆ ಸೇರಿಸಿಕೊಳ್ಳಬಹುದು. ಗೆಸ್ಟ್&zwnj;ಗಳು ಬಂದಾಗ ಈ ರೀತಿಯಲ್ಲಿ ಉಪ್ಪಿನಕಾಯಿ ಮಾಡಿಕೊಳ್ಳಬಹುದು.&lt;/p&gt;]]></content:encoded>
            <category>food</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/food/south-indian-style-recipe-homemade-instant-pickle-powder-using-mustard-fenugreek-and-black-pepper-mrq-0mbxpm9"/>
        </item>
        <item>
            <title><![CDATA[ಬಜ್ಜಿ, ಪಕೋಡಾ, ಪೂರಿ ಕರಿದ ನಂತ್ರ ಕಪ್ಪಾಗುವ ಅಡುಗೆ ಎಣ್ಣೆಯನ್ನ ಈ ಟ್ರಿಕ್ ಬಳಸಿ 1 ನಿಮಿಷದಲ್ಲಿ ಕ್ಲೀನ್ ಮಾಡಿ]]></title>
            <link>https://kannada.asianetnews.com/gallery/kitchen/how-to-clean-reused-cooking-oil-using-a-slice-of-bread-easy-kitchen-hack-0owzlgl</link>
            <guid isPermaLink="true">https://kannada.asianetnews.com/gallery/kitchen/how-to-clean-reused-cooking-oil-using-a-slice-of-bread-easy-kitchen-hack-0owzlgl</guid>
            <pubDate>Sat, 06 Jun 2026 12:11:23 +0530</pubDate>
            <description><![CDATA[&lt;p&gt;Tips To Clean Cooking Oil: ಯಾವುದೇ ರೆಸಿಪಿ ಡೀಪ್ ಫ್ರೈ ಮಾಡಿದ ನಂತರ ಅಡುಗೆ ಎಣ್ಣೆ ಹೆಚ್ಚಾಗಿ ಕಪ್ಪಾಗಿ, ಕೊಳೆಯಾದಂತೆ ಕಾಣಲಾರಂಭಿಸುತ್ತದೆ. ಅಂತಹ ಸಂದರ್ಭದಲ್ಲಿ ಬ್ರೆಡ್ ಮತ್ತು ಫಿಲ್ಟರಿಂಗ್&zwnj;ನಂತಹ ಸುಲಭವಾದ ಟ್ರಿಕ್ಸ್&zwnj;ಗಳು ಎಣ್ಣೆಯಲ್ಲಿರುವ ಸೀದುಹೋದ ಕಣಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktdtbrvqp6930yr5yq3bjc63,imgname-thumbnail---2026-06-06t120518.635-1780727800695.jpg" type="image/jpeg" height="390" width="690"/>
            <content:encoded><![CDATA[&lt;p&gt;Tips To Clean Cooking Oil: ಯಾವುದೇ ರೆಸಿಪಿ ಡೀಪ್ ಫ್ರೈ ಮಾಡಿದ ನಂತರ ಅಡುಗೆ ಎಣ್ಣೆ ಹೆಚ್ಚಾಗಿ ಕಪ್ಪಾಗಿ, ಕೊಳೆಯಾದಂತೆ ಕಾಣಲಾರಂಭಿಸುತ್ತದೆ. ಅಂತಹ ಸಂದರ್ಭದಲ್ಲಿ ಬ್ರೆಡ್ ಮತ್ತು ಫಿಲ್ಟರಿಂಗ್&zwnj;ನಂತಹ ಸುಲಭವಾದ ಟ್ರಿಕ್ಸ್&zwnj;ಗಳು ಎಣ್ಣೆಯಲ್ಲಿರುವ ಸೀದುಹೋದ ಕಣಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.&lt;/p&gt;&lt;img&gt;&lt;p&gt;&lt;strong&gt;ಪದೇ ಪದೇ ಬಳಸಿದ ಎಣ್ಣೆ ಆರೋಗ್ಯಕ್ಕೆ ಹಾನಿಕಾರಕ&lt;/strong&gt;ಮನೆಯಲ್ಲಿ ಪಕೋಡಾ, ಪೂರಿ, ಸಮೋಸಾ ಅಥವಾ ಇತರ ಕರಿದ ಪದಾರ್ಥಗಳನ್ನು ಮಾಡಿದ ನಂತರ ಹೆಚ್ಚಾಗಿ ಅಡುಗೆ ಎಣ್ಣೆಯ ಬಣ್ಣ ಕಪ್ಪಾಗುತ್ತದೆ. ಎಣ್ಣೆಯಲ್ಲಿ ಸೀದುಹೋದ ಕಣಗಳು ಮತ್ತು ಆಹಾರದ ಸಣ್ಣ ಸಣ್ಣ ತುಂಡುಗಳು ಸಂಗ್ರಹವಾಗುತ್ತವೆ. ಇದರಿಂದಾಗಿ ಎಣ್ಣೆ ಕೊಳೆಯಾಗಿ ಕಾಣಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಲವರು ಇಡೀ ಎಣ್ಣೆಯನ್ನು ಎಸೆದುಬಿಡುತ್ತಾರೆ, ಇನ್ನು ಕೆಲವರು ಅದೇ ಎಣ್ಣೆಯನ್ನು ಬಳಸುತ್ತಲೇ ಇರುತ್ತಾರೆ. ಒಂದು ಸಣ್ಣ ಟ್ರಿಕ್ ಮೂಲಕ ನೀವು ಕಪ್ಪಾದ ಎಣ್ಣೆಯನ್ನು ನಿಮಿಷಗಳಲ್ಲಿ ಸ್ವಚ್ಛಗೊಳಿಸಬಹುದು ಎಂಬುದು ನಿಮಗೆ ಗೊತ್ತೇ? ಆರೋಗ್ಯ ತಜ್ಞರ ಪ್ರಕಾರ, ಪದೇ ಪದೇ ಬಳಸಿದ ಎಣ್ಣೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಯಾವುದೇ ಎಣ್ಣೆಯನ್ನು ಪದೇ ಪದೇ ಬಳಸುವುದನ್ನು ತಪ್ಪಿಸಬೇಕು.&lt;/p&gt;&lt;img&gt;&lt;p&gt;&lt;strong&gt;ಕರಿದ ನಂತರ ಎಣ್ಣೆ ಏಕೆ ಕಪ್ಪಾಗುತ್ತದೆ?&lt;/strong&gt;ಯಾವುದೇ ಆಹಾರ ಪದಾರ್ಥವನ್ನು ಬಿಸಿ ಎಣ್ಣೆಯಲ್ಲಿ ಕರಿದಾಗ, ಅದರ ಸಣ್ಣ ಸಣ್ಣ ಕಣಗಳು ಎಣ್ಣೆಯಲ್ಲಿ ಉಳಿದುಕೊಳ್ಳುತ್ತವೆ. ಎಣ್ಣೆ ನಿರಂತರವಾಗಿ ಕಾಯುವುದರಿಂದ ಈ ಕಣಗಳು ಸೀದುಹೋಗಲು ಪ್ರಾರಂಭಿಸುತ್ತವೆ ಮತ್ತು ಎಣ್ಣೆಯ ಬಣ್ಣ ಗಾಢ ಅಥವಾ ಕಪ್ಪಾಗಿ ಕಾಣಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಒಂದೆರಡು ಬಾರಿ ಬಳಸಿದ ನಂತರ ಎಣ್ಣೆ ಮೊದಲಿನಂತೆ ಸ್ವಚ್ಛವಾಗಿ ಕಾಣುವುದಿಲ್ಲ. ಕರಿದ ನಂತರ ಕಪ್ಪಾಗಿ ಕಾಣುವ ಅಡುಗೆ ಎಣ್ಣೆಯು ಹಲವು ಬಾರಿ ಕೇವಲ ಸೀದುಹೋದ ಕಣಗಳಿಂದಾಗಿ ಕೊಳೆಯಾಗಿ ಕಾಣುತ್ತದೆ ಮತ್ತು ಇದನ್ನು ಸ್ವಚ್ಛಗೊಳಿಸಿ ಮತ್ತೆ ಬಳಸಬಹುದು.&lt;/p&gt;&lt;img&gt;&lt;p&gt;&lt;strong&gt;ಈ ಟ್ರಿಕ್ ಬಳಸಿ ಸೆಕೆಂಡುಗಳಲ್ಲಿ ಎಣ್ಣೆಯನ್ನು ಸ್ವಚ್ಛಗೊಳಿಸಿ&lt;/strong&gt;ಹಲವಾರು ಬಾಣಸಿಗರು (Chefs) ಬಳಸುವ ಒಂದು ಸುಲಭವಾದ ಟ್ರಿಕ್ ಎಂದರೆ ಬ್ರೆಡ್ ಬಳಕೆ. ಇದಕ್ಕಾಗಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಅದರಲ್ಲಿ ಬ್ರೆಡ್&zwnj;ನ ಒಂದು ಸಣ್ಣ ತುಂಡನ್ನು ಹಾಕಿ. ಬ್ರೆಡ್ ಎಣ್ಣೆಯಲ್ಲಿರುವ ಸೀದುಹೋದ ಸಣ್ಣ ಕಣಗಳನ್ನು ಮತ್ತು ಕಲ್ಮಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕೆಲವು ಸೆಕೆಂಡುಗಳ ನಂತರ ಬ್ರೆಡ್ ಅನ್ನು ಹೊರಗೆ ತೆಗೆಯಿರಿ. ಇದರಿಂದ ಎಣ್ಣೆ ಮೊದಲಿಗಿಂತ ಹೆಚ್ಚು ಸ್ವಚ್ಛವಾಗಿ ಕಾಣಿಸಬಹುದು. ಎಣ್ಣೆ ತಣ್ಣಗಾದ ನಂತರ ಅದನ್ನು ಸಣ್ಣ ರಂಧ್ರವಿರುವ ಚಹಾ ಸೋಸುವ ಜರಡಿ, ಮಸ್ಲಿನ್ ಬಟ್ಟೆ (ಮೃದುವಾದ ಹತ್ತಿ ಬಟ್ಟೆ) ಅಥವಾ ಕಾಫಿ ಫಿಲ್ಟರ್ ಸಹಾಯದಿಂದ ಸೋಸಿಕೊಳ್ಳಬೇಕು. ಇದರಿಂದ ಎಣ್ಣೆಯಲ್ಲಿ ಉಳಿದಿರುವ ಕಣಗಳು ಬೇರೆಯಾಗುತ್ತವೆ ಮತ್ತು ಎಣ್ಣೆ ಹೆಚ್ಚು ಸ್ವಚ್ಛವಾಗಿ ಕಾಣುತ್ತದೆ.&lt;/p&gt;&lt;img&gt;&lt;p&gt;ಈ ಎಣ್ಣೆಯನ್ನು ಪದೇ ಪದೇ ಬಳಸುವುದು ಸರಿಯೇ?ಆರೋಗ್ಯ ತಜ್ಞರ ಪ್ರಕಾರ, ಒಂದೇ ಎಣ್ಣೆಯನ್ನು ಪದೇ ಪದೇ ಅತಿ ಹೆಚ್ಚು ತಾಪಮಾನದಲ್ಲಿ ಕಾಯಿಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ಎಣ್ಣೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಸಂಯುಕ್ತಗಳು (compounds) ರೂಪುಗೊಳ್ಳಬಹುದು. ಎಣ್ಣೆಯಿಂದ ತೀಕ್ಷ್ಣವಾದ ವಾಸನೆ ಬರಲು ಪ್ರಾರಂಭಿಸಿದರೆ, ಅದರಲ್ಲಿ ಧೂಮ (ಹೊಗೆ) ಹೆಚ್ಚಾಗಿ ಬರಲಾರಂಭಿಸಿದರೆ ಅಥವಾ ಬಣ್ಣ ತುಂಬಾ ಗಾಢವಾದರೆ, ಅದನ್ನು ಮತ್ತೆ ಬಳಸುವುದನ್ನು ತಪ್ಪಿಸಬೇಕು. ಬ್ರೆಡ್ ಮತ್ತು ಸೋಸುವಿಕೆಯಂತಹ ಸುಲಭವಾದ ಟ್ರಿಕ್ಸ್&zwnj;ಗಳಿಂದ ಇದನ್ನು ಸ್ವಲ್ಪ ಮಟ್ಟಿಗೆ ಸ್ವಚ್ಛಗೊಳಿಸಬಹುದು. ಆದರೆ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತುಂಬಾ ಹಳೆಯ ಅಥವಾ ಪದೇ ಪದೇ ಕಾಯಿಸಿದ ಎಣ್ಣೆಯನ್ನು ಬಳಸುವುದನ್ನು ತಪ್ಪಿಸಬೇಕು. ಸುರಕ್ಷಿತ ಮತ್ತು ಸಮತೋಲಿತ ಬಳಕೆಯೇ ಅತ್ಯುತ್ತಮ ಆಯ್ಕೆಯಾಗಿದೆ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/how-to-clean-reused-cooking-oil-using-a-slice-of-bread-easy-kitchen-hack-0owzlgl"/>
        </item>
        <item>
            <title><![CDATA[ಬೆಂಡೆಕಾಯಿ ಪಲ್ಯ ಮಾಡುವಾಗ ಈ 1 ಕೆಲಸ ಮಾಡಿ.. ಲೋಳೆನೂ ಆಗಲ್ಲ, ಚೆನ್ನಾಗಿ ಬೇಯುತ್ತೆ, ತುಂಬಾ ಟೇಸ್ಟಿಯಾಗಿರುತ್ತೆ!]]></title>
            <link>https://kannada.asianetnews.com/gallery/food/how-to-make-hotel-style-kurkuri-bhindi-sabzi-at-home-easy-tips-for-beginners-0ragws5</link>
            <guid isPermaLink="true">https://kannada.asianetnews.com/gallery/food/how-to-make-hotel-style-kurkuri-bhindi-sabzi-at-home-easy-tips-for-beginners-0ragws5</guid>
            <pubDate>Fri, 05 Jun 2026 21:02:27 +0530</pubDate>
            <description><![CDATA[&lt;p&gt;How to make kurkuri bhindi at home: ಬೆಂಡೆಕಾಯಿ ಪಲ್ಯ ಮಾಡುವಾಗ ಎದುರಾಗುವ ಅತಿ ದೊಡ್ಡ ಸಮಸ್ಯೆ ಎಂದರೆ ಅದರ ಲೋಳೆ. ಸರಿಯಾಗಿ ಮಾಡದಿದ್ದರೆ ಪಲ್ಯ ಮುದ್ದೆಯಾಗಿ ತಿನ್ನಲು ಚೆನ್ನ ಅನಿಸುವುದಿಲ್ಲ. ಆದರೆ ಪಲ್ಯ ಉದುರು ಉದುರಾಗಿ, ಕ್ರಿಸ್ಪಿಯಾಗಿ ಬರಬೇಕಾದರೆ ಒಂದು ಅದ್ಭುತ ಕಿಚನ್ ಟ್ರಿಕ್ ಇದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktc699rmspk6dpcddafmr7v1,imgname-thumbnail---2026-06-05t205002.069-1780673193748.jpg" type="image/jpeg" height="390" width="690"/>
            <content:encoded><![CDATA[&lt;p&gt;How to make kurkuri bhindi at home: ಬೆಂಡೆಕಾಯಿ ಪಲ್ಯ ಮಾಡುವಾಗ ಎದುರಾಗುವ ಅತಿ ದೊಡ್ಡ ಸಮಸ್ಯೆ ಎಂದರೆ ಅದರ ಲೋಳೆ. ಸರಿಯಾಗಿ ಮಾಡದಿದ್ದರೆ ಪಲ್ಯ ಮುದ್ದೆಯಾಗಿ ತಿನ್ನಲು ಚೆನ್ನ ಅನಿಸುವುದಿಲ್ಲ. ಆದರೆ ಪಲ್ಯ ಉದುರು ಉದುರಾಗಿ, ಕ್ರಿಸ್ಪಿಯಾಗಿ ಬರಬೇಕಾದರೆ ಒಂದು ಅದ್ಭುತ ಕಿಚನ್ ಟ್ರಿಕ್ ಇದೆ!&lt;/p&gt;&lt;img&gt;&lt;p&gt;&lt;strong&gt;ಹೀಗೆ ಏಕೆ ಮಾಡುತ್ತಾರೆ ಎಂದು ನಿಮಗೆ ಗೊತ್ತೇ?&lt;/strong&gt;ಬೆಂಡೆಕಾಯಿ ಪಲ್ಯ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಅದರಲ್ಲೂ ಪ್ರತಿ ಅಡುಗೆಗೂ ಮೂಗು ಮುರಿಯುವ ಮಕ್ಕಳು ಸಹ ಪರಾಠ ಜೊತೆ ಒಣ ಬೆಂಡೆಕಾಯಿ ಪಲ್ಯವನ್ನು ಆರಾಮವಾಗಿ ತಿನ್ನುತ್ತಾರೆ. ಪ್ರತಿಯೊಬ್ಬರ ಮನೆಯಲ್ಲೂ ಇದನ್ನು ಮಾಡುವ ವಿಧಾನ ಬೇರೆ ಬೇರೆಯಾಗಿರುತ್ತದೆ. ಕೆಲವರು ಹೆಚ್ಚು ಮಸಾಲೆಯುಕ್ತ ಬೆಂಡೆಕಾಯಿ ಇಷ್ಟಪಟ್ಟರೆ, ಇನ್ನು ಕೆಲವರಿಗೆ ಉಪ್ಪು-ಮೆಣಸಿನಕಾಯಿ ಮತ್ತು ಸಿಂಪಲ್ ಒಗ್ಗರಣೆಯ ಒಣ ಪಲ್ಯ ಇಷ್ಟವಾಗುತ್ತದೆ.&amp;nbsp;&lt;/p&gt;&lt;p&gt;ಆದರೆ ಅನೇಕ ಗೃಹಿಣಿಯರು ಮತ್ತೊಂದು ಕೆಲಸವನ್ನು ಮಾಡುತ್ತಾರೆ, ಇದರಿಂದ ಬೆಂಡೆಕಾಯಿ ಪಲ್ಯ ಇನ್ನೂ ಹೆಚ್ಚು ಪರ್ಫೆಕ್ಟ್ ಆಗಿ ಮೂಡಿಬರುತ್ತದೆ. ಆ ಟ್ರಿಕ್ ಏನೆಂದರೆ, ಬೆಂಡೆಕಾಯಿ ಪಲ್ಯ ಮಾಡುವಾಗ ಅದಕ್ಕೆ ಸ್ವಲ್ಪ ನಿಂಬೆರಸವನ್ನು ಹಿಂಡುವುದು. ಹೀಗೆ ಏಕೆ ಮಾಡುತ್ತಾರೆ ಎಂದು ನಿಮಗೆ ಗೊತ್ತೇ? ಗೊತ್ತಿಲ್ಲದಿದ್ದರೆ, ಇದರ ಪ್ರಯೋಜನಗಳನ್ನು ತಿಳಿದುಕೊಂಡ ನಂತರ ನೀವು ಮುಂದಿನ ಬಾರಿ ಬೆಂಡೆಕಾಯಿ ಪಲ್ಯ ಮಾಡುವಾಗ ಪ್ರತಿ ಬಾರಿಯೂ ಈ ಟ್ರಿಕ್ ಅನ್ನು ಖಂಡಿತ ಫಾಲೋ ಮಾಡುತ್ತೀರಿ. ಹಾಗಾದರೆ ಬನ್ನಿ, ಬೆಂಡೆಕಾಯಿ ಪಲ್ಯ ಮಾಡುವಾಗ ನಿಂಬೆರಸವನ್ನು ಏಕೆ ಸೇರಿಸುತ್ತಾರೆ ಎಂದು ತಿಳಿಯೋಣ.&lt;/p&gt;&lt;img&gt;&lt;p&gt;&lt;strong&gt;ಬೆಂಡೆಕಾಯಿಯ ಜಿಗುಟುತನವನ್ನು ಕಡಿಮೆ ಮಾಡುತ್ತದೆ ನಿಂಬೆ&lt;/strong&gt;ಬೆಂಡೆಕಾಯಿ ಪಲ್ಯ ಮಾಡುವಾಗ ಎದುರಾಗುವ ಅತಿ ದೊಡ್ಡ ಸಮಸ್ಯೆ ಎಂದರೆ ಅದರ ಜಿಗುಟುತನ (ಲೋಳೆ). ಹಲವು ಬಾರಿ ಒಣ ಪಲ್ಯ ಮಾಡುವಾಗ ಬೆಂಡೆಕಾಯಿ ಜಿಗುಟಾಗಿಬಿಡುತ್ತದೆ, ಇದರಿಂದ ಪಲ್ಯದ ಟೆಕ್ಸ್ಚರ್ (ರಚನೆ) ಮತ್ತು ರುಚಿ ಎರಡೂ ಹಾಳಾಗುತ್ತವೆ. ಇಂತಹ ಸಂದರ್ಭದಲ್ಲಿ ನೀವು ಸ್ವಲ್ಪ ನಿಂಬೆರಸವನ್ನು ಸೇರಿಸಿದರೆ, ಬೆಂಡೆಕಾಯಿಯ ಜಿಗುಟುತನ ಸಂಪೂರ್ಣವಾಗಿ ಇಲ್ಲವಾಗುತ್ತದೆ. ಇದರಿಂದ ಬೆಂಡೆಕಾಯಿಯ ಪ್ರತಿಯೊಂದು ಪೀಸ್ ಬಿಡಿಬಿಡಿಯಾಗಿ ಕಾಣುತ್ತದೆ ಮತ್ತು ಪಲ್ಯದ ಟೆಕ್ಸ್ಚರ್ ಹಾಗೂ ರುಚಿ ತುಂಬಾ ಚೆನ್ನಾಗಿ ಬರುತ್ತದೆ.&lt;/p&gt;&lt;img&gt;&lt;p&gt;&lt;strong&gt;ರುಚಿಯಲ್ಲಿ ಹಗುರವಾದ ಹುಳಿ ಮತ್ತು ಬ್ಯಾಲೆನ್ಸ್ ಸಿಗುತ್ತದೆ&lt;/strong&gt;ಬೆಂಡೆಕಾಯಿ ಪಲ್ಯಕ್ಕೆ ಸ್ವಲ್ಪ ನಿಂಬೆರಸ ಹಾಕುವುದರಿಂದ ಅದರ ರುಚಿ (ಟೇಸ್ಟ್) ಕೂಡ ಸಾಕಷ್ಟು ಹೆಚ್ಚುತ್ತದೆ. ಸಾಮಾನ್ಯವಾಗಿ ಬೆಂಡೆಕಾಯಿ ಪಲ್ಯದ ರುಚಿ ಸ್ವಲ್ಪ ಸಪ್ಪೆಯಾಗಿ ಅನಿಸಬಹುದು, ವಿಶೇಷವಾಗಿ ನೀವು ಕಡಿಮೆ ಮಸಾಲೆ ಬಳಸಿ ಪಲ್ಯ ಮಾಡಿದಾಗ ಇದು ಹೆಚ್ಚು ತಿಳಿಯುತ್ತದೆ. ಅಂತಹ ಸಂದರ್ಭದಲ್ಲಿ ಸ್ವಲ್ಪ ನಿಂಬೆ ಹಣ್ಣನ್ನು ಹಿಂಡಿದರೆ, ಪಲ್ಯಕ್ಕೆ ಹಗುರವಾದ ಫ್ರೆಶ್ ಮತ್ತು ಟ್ಯಾಂಗಿ (ಹುಳಿ) ಫ್ಲೇವರ್ ಸೇರ್ಪಡೆಯಾಗುತ್ತದೆ, ಇದು ತಿನ್ನಲು ತುಂಬಾ ಟೇಸ್ಟಿಯಾಗಿರುತ್ತದೆ. ಇದರಿಂದ ಒಟ್ಟಾರೆ ಬೆಂಡೆಕಾಯಿ ಪಲ್ಯದ ರುಚಿ ಚೆನ್ನಾಗಿ ಬ್ಯಾಲೆನ್ಸ್ ಆಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಬೆಂಡೆಕಾಯಿ ಕ್ರಿಸ್ಪಿ ಮತ್ತು ಹೊಳಪಿನಿಂದ ಕೂಡಿರುತ್ತದೆ&lt;/strong&gt;ಬೆಂಡೆಕಾಯಿ ಪಲ್ಯಕ್ಕೆ ಸ್ವಲ್ಪ ನಿಂಬೆರಸ ಸೇರಿಸುವುದರಿಂದ ಅದು ಹೆಚ್ಚು ಕ್ರಿಸ್ಪಿಯಾಗಿ (ಕುರುಕಲಾಗಿ) ಆಗುತ್ತದೆ ಮತ್ತು ಇದರಿಂದ ರುಚಿ ಹೆಚ್ಚುತ್ತದೆ ಎಂದು ಕೆಲವರು ನಂಬುತ್ತಾರೆ. ಅಷ್ಟೇ ಅಲ್ಲದೆ, ಇದು ಉತ್ತಮ ರೀತಿಯಲ್ಲಿ ಬೇಯುತ್ತದೆ ಮತ್ತು ಪಲ್ಯದ ಬಣ್ಣವು ಸಾಕಷ್ಟು ಹೊಳಪಿನಿಂದ (ಬ್ರೈಟ್ ಆಗಿ) ಕೂಡಿರುತ್ತದೆ. ಆದರೆ ಇದು ನೀವು ಎಷ್ಟು ಪ್ರಮಾಣದ ನಿಂಬೆರಸವನ್ನು ಹಾಕಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ; ಹೆಚ್ಚು ನಿಂಬೆರಸ ಹಾಕಿದರೆ ಪಲ್ಯದ ರುಚಿ ಮತ್ತು ಟೆಕ್ಸ್ಚರ್ ಎರಡೂ ಹಾಳಾಗಬಹುದು.&lt;/p&gt;&lt;img&gt;&lt;p&gt;&lt;strong&gt;ಯಾವಾಗ ಮತ್ತು ಎಷ್ಟು ನಿಂಬೆರಸ ಹಾಕಬೇಕು?&lt;/strong&gt;ಬೆಂಡೆಕಾಯಿ ಪಲ್ಯ ಮಾಡುವಾಗ ನಿಂಬೆರಸದ ಈ ಟ್ರಿಕ್ ಕೆಲಸ ಮಾಡಬೇಕಾದರೆ, ನೀವು ಅದನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ವಿಧಾನದಲ್ಲಿ ಬಳಸಬೇಕು. ಪಲ್ಯದ ಟೇಸ್ಟ್ ಹಾಳಾಗದಂತೆ ಇರಲು ನೀವು ಯಾವಾಗಲೂ ಸ್ವಲ್ಪ ಪ್ರಮಾಣದ ನಿಂಬೆರಸವನ್ನು ಮಾತ್ರ ಬಳಸಬೇಕು, ಕೇವಲ ಕೆಲವು ಹನಿಗಳು ಸಾಕು. ಇನ್ನು ಟೈಮಿಂಗ್ ವಿಷಯಕ್ಕೆ ಬಂದರೆ, ನಿಂಬೆರಸವನ್ನು ಎಂದಿಗೂ ಪಲ್ಯದ ಆರಂಭದಲ್ಲೇ ಹಾಕಬಾರದು. ಇದರಿಂದ ಪಲ್ಯದಲ್ಲಿ ಕಹಿ ಬರಬಹುದು. ಪಲ್ಯ ಸಂಪೂರ್ಣವಾಗಿ ಬೆಂದ ನಂತರ ಅಥವಾ ಮುಗಿಯುವ ಹಂತಕ್ಕೆ ಬಂದಾಗ ನಿಂಬೆರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಒಂದು ಸಣ್ಣ ಟ್ರಿಕ್ ನಿಮ್ಮ ಬೆಂಡೆಕಾಯಿ ಪಲ್ಯದ ರುಚಿ ಮತ್ತು ಟೆಕ್ಸ್ಚರ್ ಅನ್ನು ಅದ್ಭುತವಾಗಿ ಹೆಚ್ಚಿಸುತ್ತದೆ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/how-to-make-hotel-style-kurkuri-bhindi-sabzi-at-home-easy-tips-for-beginners-0ragws5"/>
        </item>
        <item>
            <title><![CDATA[ಬ್ಲಡ್ ಥಿನ್ನರ್ ಮಾತ್ರೆ ಸೇವಿಸುತ್ತಿದ್ದೀರಾ? ಜೊತೆಗೆ, ಬೆಳ್ಳುಳ್ಳಿನೂ ತಿಂತೀರಾ..? ಹಾಗಿದ್ರೆ ಜೋಕೆ, ಈ ಸ್ಟೋರಿ ನಿಮಗಾಗಿ!]]></title>
            <link>https://kannada.asianetnews.com/health-life/eating-raw-garlic-on-an-empty-stomach-usefull-remedy-for-heart-health-and-cholesterol-problem/articleshow-1gk7yxd</link>
            <guid isPermaLink="true">https://kannada.asianetnews.com/health-life/eating-raw-garlic-on-an-empty-stomach-usefull-remedy-for-heart-health-and-cholesterol-problem/articleshow-1gk7yxd</guid>
            <pubDate>Sun, 07 Jun 2026 21:55:36 +0530</pubDate>
            <description><![CDATA[&lt;p&gt;ಬೆಳ್ಳುಳ್ಳಿಯನ್ನು ದಿನಕ್ಕೆ 1-2 ಎಸಳುಗಳಿಗಿಂತ ಹೆಚ್ಚು ಸೇವಿಸಬೇಡಿ. ಅತಿಯಾದ ಸೇವನೆಯಿಂದ ಎದೆಯುರಿ ಅಥವಾ ಹೊಟ್ಟೆ ಉರಿ ಉಂಟಾಗಬಹುದು. ವಿಶೇಷವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಅಥವಾ ರಕ್ತ ತೆಳುವಾಗಿಸುವ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವವರು ತಪ್ಪದೇ ಈ ಸ್ಟೋರಿ ನೋಡಿ..!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngsrvnzfpt5wdw1jn0dz3c9,imgname-garlic-peel-1775459135167.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿ: ನಿಮ್ಮ ದೇಹದಲ್ಲಿ ನಡೆಯುವ ಚಮತ್ಕಾರಗಳೇನು ಗೊತ್ತಾ?&lt;/strong&gt;&lt;/p&gt;&lt;p&gt;ಭಾರತೀಯ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ (Garlic) ಇಲ್ಲದ ಮಸಾಲೆಯೇ ಇಲ್ಲ. ಕೇವಲ ರುಚಿಗಷ್ಟೇ ಅಲ್ಲದೆ, ಸಾವಿರಾರು ವರ್ಷಗಳಿಂದ ಆಯುರ್ವೇದದಲ್ಲಿ ಬೆಳ್ಳುಳ್ಳಿಯನ್ನು ಒಂದು ಶಕ್ತಿಯುತ ಔಷಧಿಯಾಗಿ ಬಳಸಲಾಗುತ್ತಿದೆ. ಆದರೆ, ಹೆಚ್ಚಿನವರು ಇದನ್ನು ಕೇವಲ ಒಗ್ಗರಣೆಗೆ ಮಾತ್ರ ಸೀಮಿತಗೊಳಿಸುತ್ತಾರೆ. ಇತ್ತೀಚಿನ ಆಧುನಿಕ ಸಂಶೋಧನೆಗಳ ಪ್ರಕಾರ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಮ್ಮ ದೇಹದ ಹತ್ತಾರು ಆರೋಗ್ಯ ಸಮಸ್ಯೆಗಳು ಬುಡ ಸಮೇತ ಮಾಯವಾಗಬಹುದು.&lt;/p&gt;&lt;p&gt;&lt;img&gt;&lt;/p&gt;&lt;p&gt;ಬೆಳ್ಳುಳ್ಳಿಯಲ್ಲಿ ಅಡಗಿರುವ ಆ ರಹಸ್ಯವೇನು? ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಿಗುವ ಲಾಭಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;&lt;p&gt;1. 'ಅಲಿಸಿನ್' ಎಂಬ ಸಂಜೀವಿನಿ:&lt;/p&gt;&lt;p&gt;ಬೆಳ್ಳುಳ್ಳಿಯನ್ನು ಜಗಿದಾಗ ಅಥವಾ ಜಜ್ಜಿದಾಗ ಅದರಿಂದ 'ಅಲಿಸಿನ್' (Allicin) ಎಂಬ ಸಕ್ರಿಯ ಸಂಯುಕ್ತ ಬಿಡುಗಡೆಯಾಗುತ್ತದೆ. ಇದು ಅತ್ಯುತ್ತಮ ಆಂಟಿ-ಬ್ಯಾಕ್ಟೀರಿಯಲ್, ಆಂಟಿ-ವೈರಲ್ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದಾಗ, ಈ ಅಲಿಸಿನ್ ನೇರವಾಗಿ ರಕ್ತವನ್ನು ಸೇರಿ ದೇಹದಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಪ್ರಾರಂಭಿಸುತ್ತದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;2. ಹೃದಯದ ಆರೋಗ್ಯಕ್ಕೆ ರಕ್ಷಾಕವಚ:&lt;/h2&gt;&lt;p&gt;ಇಂದಿನ ಒತ್ತಡದ ಜೀವನದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಬೆಳ್ಳುಳ್ಳಿ ನೈಸರ್ಗಿಕವಾಗಿ ರಕ್ತವನ್ನು ತೆಳುವಾಗಿಸುವ (Blood Thinner) ಗುಣವನ್ನು ಹೊಂದಿದೆ. ಇದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ, ರಕ್ತದೊತ್ತಡವನ್ನು (BP) ನಿಯಂತ್ರಿಸುತ್ತದೆ ಮತ್ತು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯಾಘಾತದ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆ.&lt;/p&gt;&lt;p&gt;3. ರೋಗನಿರೋಧಕ ಶಕ್ತಿಯ ಹೆಚ್ಚಳ:&lt;/p&gt;&lt;p&gt;ಪದೇ ಪದೇ ಶೀತ, ಕೆಮ್ಮು ಅಥವಾ ಜ್ವರದಿಂದ ಬಳಲುವವರಿಗೆ ಬೆಳ್ಳುಳ್ಳಿ ಒಂದು ವರದಾನ. ಇದು ದೇಹದ ರೋಗನಿರೋಧಕ ಶಕ್ತಿಯನ್ನು (Immunity) ಬಲಪಡಿಸುತ್ತದೆ. ಋತುಮಾನ ಬದಲಾದಾಗ ಬರುವ ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;4. ಜೀರ್ಣಕ್ರಿಯೆ ಮತ್ತು ಡಿಟಾಕ್ಸ್:&lt;/p&gt;&lt;p&gt;ಬೆಳ್ಳುಳ್ಳಿ ದೇಹದ ಒಳಗಿರುವ ವಿಷಕಾರಿ ಅಂಶಗಳನ್ನು (Toxins) ಹೊರಹಾಕಲು ಸಹಾಯ ಮಾಡುತ್ತದೆ. ಇದು ಯಕೃತ್ತಿನ (Liver) ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಲ್ಲದೆ, ಕರುಳಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗಿ ಜೀರ್ಣಕ್ರಿಯೆ ಸುಗಮವಾಗುತ್ತದೆ.&lt;/p&gt;&lt;h3&gt;5. ಮಧುಮೇಹ ಮತ್ತು ತೂಕ ಇಳಿಕೆ:&lt;/h3&gt;&lt;p&gt;ಹಲವು ಅಧ್ಯಯನಗಳ ಪ್ರಕಾರ, ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಕಾರಿ. ಇದು ಮೆಟಾಬಾಲಿಸಂ ಪ್ರಕ್ರಿಯೆಯನ್ನು ವೇಗಗೊಳಿಸುವುದರಿಂದ ದೇಹದಲ್ಲಿರುವ ಅನಗತ್ಯ ಕೊಬ್ಬು ಕರಗಲು ಶುರುವಾಗಿ ತೂಕ ಇಳಿಕೆಗೆ ನೆರವಾಗುತ್ತದೆ.&lt;/p&gt;&lt;p&gt;ಬಳಸುವ ಸರಿಯಾದ ವಿಧಾನ:&lt;/p&gt;&lt;p&gt;ಬೆಳ್ಳುಳ್ಳಿಯನ್ನು ಹಾಗೆಯೇ ಜಗಿದು ತಿನ್ನಲು ಕಷ್ಟವಾದರೆ, ಒಂದು ಎಸಳು ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಅದನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಅಥವಾ ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬಹುದು. ಹೀಗೆ ಮಾಡುವುದರಿಂದ ಬೆಳ್ಳುಳ್ಳಿಯ ತೀಕ್ಷ್ಣವಾದ ವಾಸನೆ ಮತ್ತು ರುಚಿ ಸ್ವಲ್ಪ ಕಡಿಮೆಯಾಗುತ್ತದೆ.&lt;/p&gt;&lt;p&gt;ಎಚ್ಚರಿಕೆ:&lt;/p&gt;&lt;p&gt;ಯಾವುದೇ ಪದಾರ್ಥ ಅತಿಯಾದರೆ ಅಮೃತವೂ ವಿಷ. ಬೆಳ್ಳುಳ್ಳಿಯನ್ನು ದಿನಕ್ಕೆ 1-2 ಎಸಳುಗಳಿಗಿಂತ ಹೆಚ್ಚು ಸೇವಿಸಬೇಡಿ. ಅತಿಯಾದ ಸೇವನೆಯಿಂದ ಎದೆಯುರಿ ಅಥವಾ ಹೊಟ್ಟೆ ಉರಿ ಉಂಟಾಗಬಹುದು. ವಿಶೇಷವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಅಥವಾ ರಕ್ತ ತೆಳುವಾಗಿಸುವ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವವರು ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.&lt;/p&gt;&lt;p&gt;ಆರೋಗ್ಯಕರ ಜೀವನಶೈಲಿಗೆ ಬರಿ ಜಿಮ್ ಅಥವಾ ಡಯಟ್ ಸಾಕಾಗುವುದಿಲ್ಲ, ಇಂತಹ ಸಣ್ಣ ಪುಟ್ಟ ನೈಸರ್ಗಿಕ ಬದಲಾವಣೆಗಳು ದೊಡ್ಡ ವ್ಯತ್ಯಾಸವನ್ನು ತರುತ್ತವೆ. ಇಂದೇ ಬೆಳ್ಳುಳ್ಳಿ ಸೇವನೆ ಆರಂಭಿಸಿ, ಆರೋಗ್ಯವಾಗಿರಿ!&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/eating-raw-garlic-on-an-empty-stomach-usefull-remedy-for-heart-health-and-cholesterol-problem/articleshow-1gk7yxd"/>
        </item>
        <item>
            <title><![CDATA[Zomato ಅಪ್ಲಿಕೇಶನ್‌ಗೆ ಟೋಪಿ ಹಾಕಿದ ಗ್ರಾಹಕರು, ರೆಸ್ಟೋರೆಂಟ್‌: ಕಮಿಷನ್, ಪ್ಲಾಟ್‌ಫಾರ್ಮ್ ಫೀಸ್‌ನಿಂದ ಬಚಾವ್‌ ಆಗಲು ಸಿಕ್ತು ಟ್ರಿಕ್‌]]></title>
            <link>https://kannada.asianetnews.com/gallery/business/zomato-users-1-roti-trick-to-bypass-platform-fees-and-commissions-san-1p31vxk</link>
            <guid isPermaLink="true">https://kannada.asianetnews.com/gallery/business/zomato-users-1-roti-trick-to-bypass-platform-fees-and-commissions-san-1p31vxk</guid>
            <pubDate>Mon, 08 Jun 2026 22:04:26 +0530</pubDate>
            <description><![CDATA[&lt;p&gt;ಜೊಮ್ಯಾಟೊದ ಪ್ಲಾಟ್&zwnj;ಫಾರ್ಮ್ ಶುಲ್ಕ ಮತ್ತು ಕಮಿಷನ್ ತಪ್ಪಿಸಲು ಗ್ರಾಹಕರು ಹಾಗೂ ರೆಸ್ಟೋರೆಂಟ್&zwnj;ಗಳು '1 ರೋಟಿ ಟ್ರಿಕ್' ಎಂಬ ಹೊಸ ಉಪಾಯವನ್ನು ಬಳಸುತ್ತಿದ್ದಾರೆ. ಆ್ಯಪ್&zwnj;ನಲ್ಲಿ ಸಣ್ಣ ಆರ್ಡರ್ ಮಾಡಿ, ನೇರವಾಗಿ ರೆಸ್ಟೋರೆಂಟ್&zwnj;ಗೆ ಕರೆ ಮಾಡಿ ದೊಡ್ಡ ಆರ್ಡರ್ ನೀಡುವ ಟ್ರಿಕ್&zwnj; ಮಾಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktbcnawgx4xd3561r4jszf9e,imgname-new-project---2026-06-05t132651.152-1780646325136.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೊಮ್ಯಾಟೊದ ಪ್ಲಾಟ್&zwnj;ಫಾರ್ಮ್ ಶುಲ್ಕ ಮತ್ತು ಕಮಿಷನ್ ತಪ್ಪಿಸಲು ಗ್ರಾಹಕರು ಹಾಗೂ ರೆಸ್ಟೋರೆಂಟ್&zwnj;ಗಳು '1 ರೋಟಿ ಟ್ರಿಕ್' ಎಂಬ ಹೊಸ ಉಪಾಯವನ್ನು ಬಳಸುತ್ತಿದ್ದಾರೆ. ಆ್ಯಪ್&zwnj;ನಲ್ಲಿ ಸಣ್ಣ ಆರ್ಡರ್ ಮಾಡಿ, ನೇರವಾಗಿ ರೆಸ್ಟೋರೆಂಟ್&zwnj;ಗೆ ಕರೆ ಮಾಡಿ ದೊಡ್ಡ ಆರ್ಡರ್ ನೀಡುವ ಟ್ರಿಕ್&zwnj; ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಆನ್&zwnj;ಲೈನ್ ಆಹಾರ ವಿತರಣಾ ಆ್ಯಪ್ ಆದ ಜೊಮ್ಯಾಟೊದ ಪ್ಲಾಟ್&zwnj;ಫಾರ್ಮ್ ಶುಲ್ಕ ಹಾಗೂ ಕಮಿಷನ್ ದರಗಳನ್ನು ತಪ್ಪಿಸಲು ಗ್ರಾಹಕರು ಮತ್ತು ರೆಸ್ಟೋರೆಂಟ್&zwnj;ಗಳು ಜಂಟಿಯಾಗಿ ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್ ಆಗಿರುವ &lsquo;1 ರೋಟಿ ಟ್ರಿಕ್&rsquo; (1 Roti Trick) ಎಂಬ ಈ ರಹಸ್ಯ ಐಡಿಯಾ ಈಗ ಸ್ಟಾರ್ಟ್&zwnj;ಅಪ್ ವಲಯ ಹಾಗೂ ಆನ್&zwnj;ಲೈನ್ ಮಾರುಕಟ್ಟೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇಡೀ ಆನ್&zwnj;ಲೈನ್ ಫುಡ್ ಡೆಲಿವರಿ ವ್ಯವಸ್ಥೆಯ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಮುನ್ಸೂಚನೆ ನೀಡಿದೆ.&lt;/p&gt;&lt;img&gt;&lt;p&gt;ಹೂಡಿಕೆದಾರರಾದ ಪ್ರೇಮ್ ಸೋನಿ ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಗ್ರಾಹಕರು ಮೊದಲು ಜೊಮ್ಯಾಟೊ ಆ್ಯಪ್&zwnj;ನಲ್ಲಿ ಕೇವಲ ₹40 ರೂಪಾಯಿಗೆ ಒಂದು ರೋಟಿಯಂತಹ ಸಣ್ಣ ಆರ್ಡರ್ ಅನ್ನು ಪ್ಲೇಸ್ ಮಾಡುತ್ತಾರೆ. ಆರ್ಡರ್ ಆದ ತಕ್ಷಣ, ಗ್ರಾಹಕರು ನೇರವಾಗಿ ಆ ರೆಸ್ಟೋರೆಂಟ್&zwnj;ಗೆ ಫೋನ್ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿ, ತಮಗೆ ಬೇಕಾದ ಉಳಿದ ದೊಡ್ಡ ಮೊತ್ತದ ಆಹಾರದ ಆರ್ಡರ್ ಅನ್ನು ಆ್ಯಪ್&zwnj;ನಿಂದ ಹೊರಗಡೆಯೇ (Off-platform) ನೀಡುತ್ತಾರೆ.&lt;/p&gt;&lt;img&gt;&lt;p&gt;ಹೀಗೆ ಆ್ಯಪ್&zwnj;ನಿಂದ ಹೊರಗೆ ನೀಡಲಾದ ಆರ್ಡರ್&zwnj;ಗೆ ಗ್ರಾಹಕರು ನೇರವಾಗಿ ರೆಸ್ಟೋರೆಂಟ್&zwnj;ಗೆ ಯುಪಿಐ (UPI) ಮೂಲಕ ಹಣ ಪಾವತಿಸುತ್ತಾರೆ. ರೆಸ್ಟೋರೆಂಟ್&zwnj;ನವರು ಆ ದೊಡ್ಡ ಆರ್ಡರ್ ಮತ್ತು ಜೊಮ್ಯಾಟೊ ಆ್ಯಪ್ ಮೂಲಕ ಬಂದ 1 ರೋಟಿಯ ಆರ್ಡರ್ ಎರಡನ್ನೂ ಸೇರಿಸಿ ಒಂದೇ ಪ್ಯಾಕೆಟ್&zwnj;ನಲ್ಲಿ ಪ್ಯಾಕ್ ಮಾಡುತ್ತಾರೆ. ಜೊಮ್ಯಾಟೊದ ಡೆಲಿವರಿ ಪಾರ್ಟ್&zwnj;ನರ್ ಬಂದು, ಈ ಇಡೀ ದೊಡ್ಡ ಪ್ಯಾಕೆಟ್ ಅನ್ನು ಆ್ಯಪ್&zwnj;ನಲ್ಲಿ ಬಿಲ್ ಆಗದೆಯೇ ಗ್ರಾಹಕರ ಮನೆಗೆ ತಲುಪಿಸುತ್ತಾನೆ. ಇದರಿಂದ ಡೆಲಿವರಿ ಹುಡುಗನಿಗೂ ಪ್ಯಾಕೆಟ್ ಒಳಗೇನಿದೆ ಎಂಬ ಸತ್ಯ ತಿಳಿಯುವುದೇ ಇಲ್ಲ.&lt;/p&gt;&lt;img&gt;&lt;p&gt;ಈ ಹೊಸ ಲೂಪ್&zwnj;ಹೋಲ್ ಟ್ರಿಕ್&zwnj;ನಿಂದಾಗಿ ಗ್ರಾಹಕರು ಪ್ಲಾಟ್&zwnj;ಫಾರ್ಮ್ ಶುಲ್ಕ (Platform Fees) ಮತ್ತು ಸರ್ಜ್ ಚಾರ್ಜ್&zwnj;ಗಳಿಂದ ಸುಲಭವಾಗಿ ಬಚಾವಾಗುತ್ತಿದ್ದಾರೆ. ಇನ್ನು ರೆಸ್ಟೋರೆಂಟ್&zwnj;ಗಳು ಜೊಮ್ಯಾಟೊಗೆ ನೀಡಬೇಕಾದ ಭಾರಿ ಮೊತ್ತದ ಅಗ್ರಿಗೇಟರ್ ಕಮಿಷನ್ ಅನ್ನು ಸಂಪೂರ್ಣವಾಗಿ ತಪ್ಪಿಸುತ್ತಿವೆ. ಮುಖ್ಯವಾಗಿ, ಇಡೀ ಆರ್ಡರ್&zwnj;ನ ಪೂರ್ಣ ಬಿಲ್ಲಿಂಗ್ ಆ್ಯಪ್&zwnj;ನಲ್ಲಿ ನಡೆಯದಿದ್ದರೂ, ಜೊಮ್ಯಾಟೊದ ಡೆಲಿವರಿ ನೆಟ್&zwnj;ವರ್ಕ್ ಮತ್ತು ಮೂಲಸೌಕರ್ಯ ಇಲ್ಲಿ ಉಚಿತವಾಗಿ ಬಳಕೆಯಾಗುತ್ತಿದೆ. ಜೊಮ್ಯಾಟೊ ತನ್ನ ಲಾಭದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಇತ್ತೀಚೆಗಷ್ಟೇ ತನ್ನ ಪ್ಲಾಟ್&zwnj;ಫಾರ್ಮ್ ಶುಲ್ಕವನ್ನು ₹12.50 ರಿಂದ ₹14.90 ಕ್ಕೆ ಏರಿಸಿತ್ತು. ಇಂತಹ ಸಮಯದಲ್ಲಿ ಈ ಟ್ರಿಕ್ ವ್ಯಾಪಕವಾಗಿ ಬಳಕೆಯಾದರೆ ಕಂಪನಿಯ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ.&lt;/p&gt;&lt;img&gt;&lt;p&gt;ಈ ವಿಷಯ ಆನ್&zwnj;ಲೈನ್&zwnj;ನಲ್ಲಿ ಸಖತ್ ವೈರಲ್ ಆಗಿದ್ದರೂ, ಇದು ದೀರ್ಘಕಾಲದವರೆಗೆ ಅಥವಾ ದೊಡ್ಡ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರಲು ಸಾಧ್ಯವೇ ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲವರ ಪ್ರಕಾರ ಎಲ್ಲಾ ರೆಸ್ಟೋರೆಂಟ್&zwnj;ಗಳು ಇಂತಹ ಆಫ್&zwnj; ಫ್ಲಾಟ್&zwnj;ಫಾರ್ಮ್&zwnj; ವಿನಂತಿಗಳಿಗೆ ಒಪ್ಪುವುದಿಲ್ಲ. ತೀರಾ ಸಣ್ಣ ಆರ್ಡರ್&zwnj;ಗೆ ಭಾರಿ ದೊಡ್ಡ ಪ್ಯಾಕೇಜ್ ಇರುವುದನ್ನು ಡೆಲಿವರಿ ಪಾರ್ಟ್&zwnj;ನರ್&zwnj;ಗಳು ಸುಲಭವಾಗಿ ಪತ್ತೆಹಚ್ಚಬಹುದು. ಆರ್ಡರ್&zwnj;ನಲ್ಲಿ ಏನಾದರೂ ತಪ್ಪುಗಳಾದರೆ ಅಥವಾ ಐಟಂ ಮಿಸ್ಸಿಂಗ್ ಆದಲ್ಲಿ ಗ್ರಾಹಕರಿಗೆ ದೂರು ನೀಡಲು ಯಾವುದೇ ವೇದಿಕೆ ಇರುವುದಿಲ್ಲ. ಅಲ್ಲದೆ, ಇಂತಹ ಸಣ್ಣ ಮೌಲ್ಯದ ಆರ್ಡರ್&zwnj;ಗಳು ಪದೇ ಪದೇ ಬಂದರೆ ಜೊಮ್ಯಾಟೊದ ಡೇಟಾ ಅನಾಲಿಟಿಕ್ಸ್ ಸಿಸ್ಟಮ್ ಅದನ್ನು ಸುಲಭವಾಗಿ ಪತ್ತೆಹಚ್ಚಬಲ್ಲದು ಎಂದು ಚರ್ಚಿಸಿದ್ದಾರೆ.&lt;/p&gt;&lt;img&gt;&lt;p&gt;ಜೊಮ್ಯಾಟೊ ಮತ್ತು ಸ್ವಿಗ್ಗಿಯಂತಹ ಪ್ಲಾಟ್&zwnj;ಫಾರ್ಮ್ ಆಧಾರಿತ ಉದ್ಯಮಗಳಿಗೆ ತಮ್ಮ ಲಾಜಿಸ್ಟಿಕ್ಸ್ ನೆಟ್&zwnj;ವರ್ಕ್ ದುರುಪಯೋಗವಾಗದಂತೆ ತಡೆಯುವುದು ಈಗ ದೊಡ್ಡ ಸವಾಲಾಗಿದೆ. ಒಂದು ವೇಳೆ ಈ ವಂಚನೆ ಹೆಚ್ಚಾದರೆ ಕಂಪನಿಗಳು ಭವಿಷ್ಯದಲ್ಲಿ ಕಠಿಣ ನಿಯಮಗಳನ್ನು ತರಬೇಕಾಗುತ್ತದೆ. ರೆಸ್ಟೋರೆಂಟ್&zwnj;ಗಳ ತಪಾಸಣೆ, ಆರ್ಡರ್ ತೂಕದ ಪರಿಶೀಲನೆ (Weight Verification), ಪ್ಯಾಕೇಜ್ ಸ್ಕ್ಯಾನಿಂಗ್ ಸಿಸ್ಟಮ್ ಮತ್ತು ಹೆಚ್ಚಿನ ಕಂಟ್ರೋಲ್ ಹೇರಬೇಕಾಗುತ್ತದೆ. ಆದರೆ ಇದರಿಂದ ಸಾಮಾನ್ಯ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆಯೂ ಇದೆ. ಸದ್ಯಕ್ಕೆ ಈ ವೈರಲ್ ಸುದ್ದಿಯ ಬಗ್ಗೆ ಜೊಮ್ಯಾಟೊ ಸಂಸ್ಥೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೂ ಭಾರತದ ಆನ್&zwnj;ಲೈನ್ ಫುಡ್ ಮಾರುಕಟ್ಟೆಯಲ್ಲಿ ಲಾಭ ಮತ್ತು ಗ್ರಾಹಕರ ಅನುಕೂಲತೆಯ ನಡುವಿನ ಸಮತೋಲನದ ಬಗ್ಗೆ ಈ ಘಟನೆ ಹೊಸ ಸಂಚಲನ ಮೂಡಿಸಿದೆ.&lt;/p&gt;]]></content:encoded>
            <category>food</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/zomato-users-1-roti-trick-to-bypass-platform-fees-and-commissions-san-1p31vxk"/>
        </item>
        <item>
            <title><![CDATA[ಮಳೆಗಾಲಕ್ಕೆ ಸುಟ್ಟ ಜೋಳ ಮನೆಯಲ್ಲೇ ಮಾಡಿ, ಮರಳಿಲ್ದೆ ಕುಕ್ಕರ್ ನಲ್ಲಿ ಬೇಯಿಸೋದು ಹೀಗೆ]]></title>
            <link>https://kannada.asianetnews.com/gallery/food/how-to-roast-corn-in-pressure-cooker-without-sand-4475rmg</link>
            <guid isPermaLink="true">https://kannada.asianetnews.com/gallery/food/how-to-roast-corn-in-pressure-cooker-without-sand-4475rmg</guid>
            <pubDate>Sat, 06 Jun 2026 13:52:33 +0530</pubDate>
            <description><![CDATA[&lt;p&gt;ಮಳೆಗಾಲ ಶುರು ಆಗ್ತಿದ್ದಂತೆ ಬೀದಿ ಬದಿಯಲ್ಲಿ ಕೆಂಡದಲ್ಲಿ ಸುಡ್ತಿರುವ ಬಿಸಿ ಬಿಸಿ ಜೋಳ ಕಣ್ಣಿಗೆ ಬೀಳುತ್ತೆ. ನಿಂಬೆ ರಸ, ಮಸಾಲೆ ಜೊತೆ ಈ ಹಸುಟ್ಟ ಜೋಳ ತಿನ್ನುವ ಮಜವೇ ಬೇರೆ. ಆದ್ರೆ ಬೇಕೆನಿಸಿದಾಗ ಅಂಗಡಿ ಹುಡುಕಿಕೊಂಡು ಹೋಗೋಕೆ ಸಾಧ್ಯ ಇಲ್ಲ. ಟೆನ್ಷನ್ ಬೇಡ, ಮನೆಯಲ್ಲೇ ಇದನ್ನು ನೀವು ಮಾಡ್ಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktdzzdfaatf3twc2e6vg7kt4,imgname-roasted-corn-1780733687274.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಳೆಗಾಲ ಶುರು ಆಗ್ತಿದ್ದಂತೆ ಬೀದಿ ಬದಿಯಲ್ಲಿ ಕೆಂಡದಲ್ಲಿ ಸುಡ್ತಿರುವ ಬಿಸಿ ಬಿಸಿ ಜೋಳ ಕಣ್ಣಿಗೆ ಬೀಳುತ್ತೆ. ನಿಂಬೆ ರಸ, ಮಸಾಲೆ ಜೊತೆ ಈ ಹಸುಟ್ಟ ಜೋಳ ತಿನ್ನುವ ಮಜವೇ ಬೇರೆ. ಆದ್ರೆ ಬೇಕೆನಿಸಿದಾಗ ಅಂಗಡಿ ಹುಡುಕಿಕೊಂಡು ಹೋಗೋಕೆ ಸಾಧ್ಯ ಇಲ್ಲ. ಟೆನ್ಷನ್ ಬೇಡ, ಮನೆಯಲ್ಲೇ ಇದನ್ನು ನೀವು ಮಾಡ್ಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈಗ ಮಾರ್ಕೆಟ್ ನಲ್ಲಿ ಜೋಳ ಸಿಗೋದೇ ಅಪರೂಪ. ಅಮೆರಿಕನ್ ಕಾರ್ನ್ ಜೋಳದ ಜಾಗ ಆವರಿಸಿದೆ. ಆದ್ರೆ ಅಮೆರಿಕನ್ ಕಾರ್ನ್, ಜೋಳದ ಜಾಗ ತುಂಬೋಕೆ ಸಾಧ್ಯವೇ ಇಲ್ಲ. ಕೆಂಡದಲ್ಲಿ ಸುಟ್ಟ ಜೋಳದ ರುಚಿಯೇ ಬೇರೆ. ಮಳೆಗಾಲದಲ್ಲಿ ಸುಟ್ಟ ಜೋಳ ನೆನಪು ಮಾಡ್ಕೊಂಡ್ರೆ ಬಾಯಲ್ಲಿ ನೀರು ಬರುತ್ತೆ.&lt;/p&gt;&lt;img&gt;&lt;p&gt;ಅನೇಕರು ಮನೆಯಲ್ಲೇ ಜೋಳ ಸುಟ್ಟು ತಿಂತಾರೆ. ಅದಕ್ಕೆ ಪ್ರೆಶರ್ ಕುಕ್ಕರ್ ಬಳಸ್ತಾರೆ. ಪ್ರೆಶರ್ ಕುಕ್ಕರ್ ಗೆ ಮರಳು, ಉಪ್ಪು ಸೇರಿಸಿ ಹುರಿಯೋರ ಸಂಖ್ಯೆ ಹೆಚ್ಚು. ಇದ್ರಿಂದ ಕುಕ್ಕರ್ ಹಾಳಾಗೋ ಸಾಧ್ಯತೆ ಇದೆ. ಮರಳಿಲ್ದೆ ನೀವು ಕುಕ್ಕರ್ ನಲ್ಲಿ ಸುಲಭವಾಗಿ ಜೋಳ ಹುರಿಯಬಹುದು.&lt;/p&gt;&lt;img&gt;&lt;p&gt;ಪ್ರೆಶರ್ ಕುಕ್ಕರ್ ನಲ್ಲಿ ಹುರಿದ ಜೋಳ ತಯಾರಿಸಲು ತಾಜಾ ಜೋಳ&ndash; 1, ದೇಸಿ ತುಪ್ಪ ಅಥವಾ ಬೆಣ್ಣೆ &ndash; 1 ಟೀಚಮಚ, ಒಂದು ಸಣ್ಣ ಹತ್ತಿ ಟವಲ್, ನಿಂಬೆ ಹಣ್ಣು, ಕಪ್ಪು ಉಪ್ಪು ಮತ್ತು ಕೆಂಪು ಮೆಣಸಿನ ಪುಡಿಯ ಅವಶ್ಯಕತೆ ಇದೆ.&lt;/p&gt;&lt;img&gt;&lt;p&gt;ಮೊದಲು, ಪ್ರೆಶರ್ ಕುಕ್ಕರ್ ತೆಗೆದುಕೊಳ್ಳಿ. ಕುಕ್ಕರ್ನ ಒಳಭಾಗಕ್ಕೆ (ಕೆಳಭಾಗ) ಸ್ವಲ್ಪ ದೇಸಿ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ ಚೆನ್ನಾಗಿ ಗ್ರೀಸ್ ಮಾಡಿ. ತುಪ್ಪವನ್ನು ಹಚ್ಚುವುದರಿಂದ ಜೋಳಕ್ಕೆ ಅದ್ಭುತವಾದ ಪರಿಮಳ ಬರುತ್ತದೆ. ಕೆಳಗೆ ಹಿಡಿಯುವುದಿಲ್ಲ. ನಂತ್ರ ಒಂದು ಸಣ್ಣ ಹತ್ತಿ ಟವಲ್ ಅಥವಾ ಸ್ವಚ್ಛವಾದ ಹತ್ತಿ ಕರವಸ್ತ್ರವನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ ನಂತರ ಅದನ್ನು ಹಿಂಡಿ, ಒದ್ದೆಯಾದ ಟವಲ್ ಅನ್ನು ಕುಕ್ಕರ್ನ ಕೆಳಭಾಗದಲ್ಲಿ ಸಮವಾಗಿ ಹರಡಿ. ಟವಲ್ ಕುಕ್ಕರ್ ಒಳಗೆ ಉಗಿ ಮತ್ತು ಹೊಗೆಯ ಪರಿಪೂರ್ಣ ಸಮತೋಲನವನ್ನು ಸೃಷ್ಟಿಸುತ್ತದೆ. ಜೋಳ ಉರಿಯುವುದನ್ನು ಮತ್ತು ಸಂಪೂರ್ಣವಾಗಿ ಬೇಯಿಸುವುದನ್ನು ತಡೆಯುತ್ತದೆ.&lt;/p&gt;&lt;img&gt;&lt;p&gt;ಜೋಳವನ್ನು ಈ ಒದ್ದೆಯಾದ ಟವಲ್ ಮೇಲೆ ಇಡಿ. ಜೋಳವು ದೊಡ್ಡದಾಗಿದ್ದರೆ, ನೀವು ಅದನ್ನು ಎರಡು ತುಂಡುಗಳಾಗಿ ಕತ್ತರಿಸಿ ಇಡಬೇಕು. ಕುಕ್ಕರ್ನ ಮುಚ್ಚಳವನ್ನು ಮುಚ್ಚಿ. ಸೀಟಿ ಮತ್ತು ಗ್ಯಾಸ್ಕೆಟ್ ಇಡಬಾರದು. ಕುಕ್ಕರ್ ಅನ್ನು ಗ್ಯಾಸ್ ಮೇಲೆ ಇರಿಸಿ. 2 ನಿಮಿಷ ಗ್ಯಾಸ್ ಮಧ್ಯಮ ಜ್ವಾಲೆಯಲ್ಲಿರಲಿ. ನಂತ್ರ ಜ್ವಾಲೆ ಕಡಿಮೆ ಮಾಡಿ 5 ನಿಮಿಷಗಳ ಕಾಲ ಬಿಡಿ. 5 ನಿಮಿಷಗಳ ನಂತ್ರ ಗ್ಯಾಸ್ ಆಫ್ ಮಾಡಿ ಮತ್ತು ಕುಕ್ಕರ್ನ ಮುಚ್ಚಳವನ್ನು ಎಚ್ಚರಿಕೆಯಿಂದ ತೆರೆಯಿರಿ. ಕುಕ್ಕರ್ ಒಳಗೆ ಯಾವುದೇ ಮರಳು ಇಲ್ಲದೆ, ಕಾರ್ನ್ ಸಂಪೂರ್ಣವಾಗಿ ಹುರಿದಿರುತ್ತದೆ.&lt;/p&gt;&lt;img&gt;&lt;p&gt;ಕುಕ್ಕರ್&zwnj; ನ ಮುಚ್ಚಳವನ್ನು ಮುಚ್ಚುವ ಮೊದಲು ಸೀಟಿ ಮತ್ತು ರಬ್ಬರ್ ಅನ್ನು ತೆಗೆದುಹಾಕಲು ಮರೆಯದಿರಿ. ಕುಕ್ಕರ್ನ ಕೆಳಭಾಗದಲ್ಲಿಇಡಲು ಶೇಕಡಾ 100 ರಷ್ಟು ಶುದ್ಧ ಹತ್ತಿ ಟವೆಲ್ಗಳು ಅಥವಾ ಕರವಸ್ತ್ರಗಳನ್ನು ಮಾತ್ರ ಬಳಸಿ. ಎಂದಿಗೂ ಸಿಂಥೆಟಿಕ್ ಬೇಡ. ಟವೆಲ್ ಒದ್ದೆಯಾಗಿರುವಂತೆ ನೋಡಿಕೊಳ್ಳಿ. ಬಿಸಿ ಹುರಿದ ಕಾರ್ನ್ಗೆ ನಿಂಬೆ ರಸ, ಕಪ್ಪು ಉಪ್ಪು ಮತ್ತು ಸ್ವಲ್ಪ ಕೆಂಪು ಮೆಣಸಿನ ಪುಡಿಯನ್ನು ಉಜ್ಜಿ ತಿನ್ನಬೇಕು.&lt;/p&gt;]]></content:encoded>
            <category>food</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/food/how-to-roast-corn-in-pressure-cooker-without-sand-4475rmg"/>
        </item>
        <item>
            <title><![CDATA[ಆರೋಗ್ಯಕ್ಕೆ ಅತ್ತಿಹಣ್ಣು.. ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಇದನ್ನು ತಿನ್ನಿ, ಜೊತೆಗೆ ಕೀಲು ನೋವು, ಸಂಧಿವಾತಕ್ಕೂ ರಾಮಬಾಣ!]]></title>
            <link>https://kannada.asianetnews.com/health-life/cluster-fig-is-a-panacea-for-diabetes-and-consuming-before-meals-reduces-blood-sugar-levels-and-improves-health/articleshow-9ygwsy4</link>
            <guid isPermaLink="true">https://kannada.asianetnews.com/health-life/cluster-fig-is-a-panacea-for-diabetes-and-consuming-before-meals-reduces-blood-sugar-levels-and-improves-health/articleshow-9ygwsy4</guid>
            <pubDate>Sun, 07 Jun 2026 21:05:30 +0530</pubDate>
            <description><![CDATA[&lt;p&gt;ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಕೀಲು ನೋವು ಮತ್ತು ಸಂಧಿವಾತಕ್ಕೆ ಅತ್ತಿ ಹಣ್ಣು ಒಂದು ಅತ್ಯುತ್ತಮ ನೈಸರ್ಗಿಕ ಮದ್ದು. ಅತ್ತಿ ಹಣ್ಣಿನ ರಸವನ್ನು ಸ್ವಲ್ಪ ಗೋಧಿ ಹಿಟ್ಟಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ, ನೋವಿರುವ ಅಥವಾ ಊತವಿರುವ ಜಾಗಕ್ಕೆ ಹಚ್ಚಿದರೆ ನೋವು ತಕ್ಷಣವೇ ಕಡಿಮೆಯಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kthbh3d8jj0tbs2dn3ga0n74,imgname-cluster-fig-1780846464424.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಧುಮೇಹಕ್ಕೆ ರಾಮಬಾಣ ಈ 'ಅತ್ತಿ ಹಣ್ಣು'! ಊಟಕ್ಕೂ ಮುನ್ನ ಇದನ್ನು ಸೇವಿಸಿದರೆ ಬ್ಲಡ್ ಶುಗರ್ ಮಟಾಷ್!&lt;/strong&gt;&lt;/p&gt;&lt;p&gt;ಇಂದಿನ ಧಾವಂತದ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯಿಂದಾಗಿ 'ಮಧುಮೇಹ' (Diabetes) ಎನ್ನುವುದು ಪ್ರತಿಯೊಬ್ಬರ ಮನೆಯ ಸದಸ್ಯನಂತೆ ಆಗಿಬಿಟ್ಟಿದೆ. ಒಂದು ಕಾಲದಲ್ಲಿ ಕೇವಲ ವಯಸ್ಸಾದವರನ್ನು ಮಾತ್ರ ಕಾಡುತ್ತಿದ್ದ ಈ ಸಕ್ಕರೆ ಕಾಯಿಲೆ, ಇಂದು ಚಿಕ್ಕ ವಯಸ್ಸಿನ ಯುವಕರನ್ನೂ ಬಿಡುತ್ತಿಲ್ಲ. ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏರುಪೇರಾದಾಗ ದೇಹದಲ್ಲಿ ಸುಸ್ತು, ದೃಷ್ಟಿ ದೋಷ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಮಧುಮೇಹಿಗಳು ಹಣ್ಣುಗಳನ್ನು ತಿನ್ನಲು ಹೆದರುತ್ತಾರೆ. ಆದರೆ, ಪ್ರಕೃತಿಯಲ್ಲಿ ಅಂತಹ ಒಂದು ಅದ್ಭುತ ಹಣ್ಣಿದೆ, ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಬದಲು ನಿಯಂತ್ರಣಕ್ಕೆ ತರುತ್ತದೆ. ಅದೇ 'ಅತ್ತಿ ಹಣ್ಣು' (Cluster Fig).&lt;/p&gt;&lt;h2&gt;ಮಧುಮೇಹ ನಿಯಂತ್ರಣಕ್ಕೆ ಅತ್ತಿ ಹಣ್ಣು ಹೇಗೆ ಸಹಕಾರಿ?&lt;/h2&gt;&lt;p&gt;ನಮ್ಮ ಹಳ್ಳಿಗಳಲ್ಲಿ, ರಸ್ತೆ ಬದಿಯಲ್ಲಿ ಹೇರಳವಾಗಿ ಸಿಗುವ ಅತ್ತಿ (Athi) ಮರಗಳನ್ನು ನೀವು ನೋಡಿರಬಹುದು. ಮಳೆಗಾಲದಲ್ಲಿ ನೆಲದ ತುಂಬಾ ಬಿದ್ದಿರುವ ಈ ಹಣ್ಣುಗಳ ಔಷಧೀಯ ಗುಣದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಅತ್ತಿ ಹಣ್ಣನ್ನು ದಿನನಿತ್ಯದ ಊಟಕ್ಕೂ ಮುನ್ನ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಅತ್ಯಂತ ವೇಗವಾಗಿ ಸಹಜ ಸ್ಥಿತಿಗೆ ಬರುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಕಾರ್ಯಕ್ಷಮತೆಯನ್ನು ಸುಧಾರಿಸುವ ಶಕ್ತಿ ಹೊಂದಿದೆ. ಕೇವಲ ಹಣ್ಣು ಮಾತ್ರವಲ್ಲದೆ, ಅತ್ತಿ ಮರದ ತೊಗಟೆಯನ್ನು ಒಣಗಿಸಿ ನಯವಾದ ಪುಡಿ ಮಾಡಿ, ಅದನ್ನು ಬಿಸಿ ನೀರಿಗೆ ಹಾಕಿ ಕುಡಿಯುತ್ತಾ ಬಂದರೆ ಎಂತಹ ಹಳೆಯ ಮಧುಮೇಹವೂ ಹತೋಟಿಗೆ ಬರುತ್ತದೆ.&lt;/p&gt;&lt;p&gt;ಸಂಧಿವಾತ ಮತ್ತು ಕೀಲು ನೋವಿಗೆ ಮುಕ್ತಿ:&lt;/p&gt;&lt;p&gt;ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಕೀಲು ನೋವು ಮತ್ತು ಸಂಧಿವಾತಕ್ಕೆ ಅತ್ತಿ ಹಣ್ಣು ಒಂದು ಅತ್ಯುತ್ತಮ ನೈಸರ್ಗಿಕ ಮದ್ದು. ಅತ್ತಿ ಹಣ್ಣಿನ ರಸವನ್ನು ಸ್ವಲ್ಪ ಗೋಧಿ ಹಿಟ್ಟಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ, ನೋವಿರುವ ಅಥವಾ ಊತವಿರುವ ಜಾಗಕ್ಕೆ ಹಚ್ಚಿದರೆ ನೋವು ತಕ್ಷಣವೇ ಕಡಿಮೆಯಾಗುತ್ತದೆ. ಇದರಲ್ಲಿರುವ ಉರಿಯೂತ ವಿರೋಧಿ (Anti-inflammatory) ಗುಣಗಳು ಕೀಲುಗಳ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.&lt;/p&gt;&lt;h3&gt;ರಕ್ತಹೀನತೆ ಮತ್ತು ಕಣ್ಣಿನ ಆರೋಗ್ಯ:&lt;/h3&gt;&lt;p&gt;ಅತ್ತಿ ಹಣ್ಣಿನಲ್ಲಿ ವಿಟಮಿನ್ ಬಿ 2 (Riboflavin) ಸಮೃದ್ಧವಾಗಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳ (RBC) ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ರಕ್ತಹೀನತೆ (Anemia) ಸಮಸ್ಯೆ ದೂರವಾಗುತ್ತದೆ. ಅಲ್ಲದೆ, ದೃಷ್ಟಿ ದೋಷವಿರುವವರು ಅಥವಾ ಕಣ್ಣಿನ ಸಮಸ್ಯೆ ಎದುರಿಸುತ್ತಿರುವವರು ಅತ್ತಿ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.&lt;/p&gt;&lt;p&gt;ಮಹಿಳೆಯರ ಆರೋಗ್ಯಕ್ಕೂ ಹಿತಕಾರಿ:&lt;/p&gt;&lt;p&gt;ಮಹಿಳೆಯರಲ್ಲಿ ಕಾಡುವ ಮುಟ್ಟಿನ ಸಮಯದ ತೀವ್ರವಾದ ಹೊಟ್ಟೆ ನೋವು ಮತ್ತು ಅಧಿಕ ರಕ್ತಸ್ರಾವವನ್ನು ನಿಯಂತ್ರಿಸಲು ಅತ್ತಿ ಹಣ್ಣು ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದು ಹಾರ್ಮೋನ್&zwnj;ಗಳ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ.&lt;/p&gt;&lt;p&gt;ಬಳಸುವುದು ಹೇಗೆ?&lt;/p&gt;&lt;p&gt;ತಾಜಾ ಅತ್ತಿ ಹಣ್ಣುಗಳನ್ನು ಚೆನ್ನಾಗಿ ತೊಳೆದು ಊಟಕ್ಕೆ ಅರ್ಧ ಗಂಟೆ ಮೊದಲು ಸೇವಿಸಿ.&lt;/p&gt;&lt;p&gt;ಅತ್ತಿ ಮರದ ತೊಗಟೆಯ ಪುಡಿಯನ್ನು ಆಯುರ್ವೇದ ಅಂಗಡಿಗಳಿಂದ ತರಬಹುದು ಅಥವಾ ಮನೆಯಲ್ಲೇ ತಯಾರಿಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.&lt;/p&gt;&lt;p&gt;ಕೊನೆಯದಾಗಿ, ಮಧುಮೇಹವನ್ನು ನಿಯಂತ್ರಿಸಲು ಕೇವಲ ಮಾತ್ರೆಗಳ ಮೇಲೆ ಅವಲಂಬಿತವಾಗುವ ಬದಲು, ನಮ್ಮ ಸುತ್ತಮುತ್ತಲೇ ಸಿಗುವ ಇಂತಹ ನೈಸರ್ಗಿಕ ಮದ್ದುಗಳನ್ನು ಬಳಸುವುದರಿಂದ ದೀರ್ಘಕಾಲದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇಂದೇ ಅತ್ತಿ ಹಣ್ಣಿನ ಈ 'ಮ್ಯಾಜಿಕ್' ಪ್ರಯತ್ನಿಸಿ ನೋಡಿ!&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/cluster-fig-is-a-panacea-for-diabetes-and-consuming-before-meals-reduces-blood-sugar-levels-and-improves-health/articleshow-9ygwsy4"/>
        </item>
        <item>
            <title><![CDATA[ಗುಲಾಬ್ ಜಾಮೂನು ಸಾಫ್ಟ್ ಆಗಲು ಈ ಟ್ರಿಕ್ಸ್ ಬಳಸಿ; ಹಿಟ್ಟು ಕಲಿಸಿಕೊಳ್ಳುವಾಗ ಸೇರಿಸಿಕೊಳ್ಳಿ]]></title>
            <link>https://kannada.asianetnews.com/gallery/food/kannada-kitchen-recipe-hacks-use-these-tricks-to-make-gulab-jamun-soft-mrq-cdu2g00</link>
            <guid isPermaLink="true">https://kannada.asianetnews.com/gallery/food/kannada-kitchen-recipe-hacks-use-these-tricks-to-make-gulab-jamun-soft-mrq-cdu2g00</guid>
            <pubDate>Mon, 08 Jun 2026 11:40:54 +0530</pubDate>
            <description><![CDATA[ಮನೆಯಲ್ಲಿ ರೆಡಿಮೇಡ್ ಪೌಡರ್ ಬಳಸಿ ಮಾಡುವ ಗುಲಾಬ್ ಜಾಮೂನು ಮೃದುವಾಗಿರುವುದಿಲ್ಲ ಎಂಬ ಚಿಂತೆಯೇ? ಹಿಟ್ಟನ್ನು ನೀರಿನ ಬದಲು, ಹಾಲು ಮತ್ತು ತುಪ್ಪದ ವಿಶೇಷ ಮಿಶ್ರಣದಿಂದ ಕಲಸುವ ರಹಸ್ಯ ವಿಧಾನವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ವಿಧಾನದಿಂದ ಹೋಟೆಲ್&zwnj;ನಂತಹ ಸಾಫ್ಟ್ ಜಾಮೂನು ತಯಾರಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01k7prxr99h0ekf81zyb6r6784,imgname-indian-sweet-371357-1280-1760627188009.jpg" type="image/jpeg" height="390" width="690"/>
            <content:encoded><![CDATA[ಮನೆಯಲ್ಲಿ ರೆಡಿಮೇಡ್ ಪೌಡರ್ ಬಳಸಿ ಮಾಡುವ ಗುಲಾಬ್ ಜಾಮೂನು ಮೃದುವಾಗಿರುವುದಿಲ್ಲ ಎಂಬ ಚಿಂತೆಯೇ? ಹಿಟ್ಟನ್ನು ನೀರಿನ ಬದಲು, ಹಾಲು ಮತ್ತು ತುಪ್ಪದ ವಿಶೇಷ ಮಿಶ್ರಣದಿಂದ ಕಲಸುವ ರಹಸ್ಯ ವಿಧಾನವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ವಿಧಾನದಿಂದ ಹೋಟೆಲ್&zwnj;ನಂತಹ ಸಾಫ್ಟ್ ಜಾಮೂನು ತಯಾರಿಸಬಹುದು.&lt;img&gt;&lt;p&gt;ನೀವು ಸಿಹಿ ಪ್ರಿಯರಾಗಿದ್ರೆ, ಗುಲಾಬ್ ಜಾಮೂನು ನಿಮಗೆ ಖಂಡಿತ ಇಷ್ಟವಾಗುತ್ತದೆ. ಮನೆಯಲ್ಲಿ ಮಾಡುವ ಗುಲಾಬ್ ಜಾಮೂನು ಸಾಫ್ಟ್ ಅಗಲ್ಲ ಎಂದು ಹಲವರು ಹೇಳುತ್ತಾರೆ. ಆದ್ರೆ ಒಂದು ವಿಧಾನದಿಂದ ಗುಲಾಬ್ ಜಾಮೂನು ಸಾಫ್ಟ್ ಆಗಿ ಮಾಡಬಹುದು.&lt;/p&gt;&lt;img&gt;&lt;p&gt;ಇಂದು ಮಾರುಕಟ್ಟೆಯಲ್ಲಿ ರೆಡಿಮೇಡ್ ಗುಲಾಬ್ ಜಾಮೂನು ಪೌಡರ್ ಪ್ಯಾಕೇಟ್ ಸಿಗುತ್ತದೆ. ಈ ಪೌಡರ್ ಬಳಸಿ ಜಾಮೂನು ಮಾಡಿದ್ರೂ ಹೋಟೆಲ್&zwnj;ನಂತೆ ಆಗಲ್ಲ ಎಂಬುವುದು ಹಲವರ ಬೇಸರವಾಗಿದೆ. ಈ ಲೇಖನದಲ್ಲಿ ಗುಲಾಬ್ ಜಾಮೂನು ತಯಾರಿಸುವ ಹಿಟ್ಟನ್ನು ಹೇಗೆ ಹದವಾಗಿ ಕಲಿಸಬೇಕು ಎಂಬುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಅಂಗಡಿಯಿಂದ ತೆಗೆದುಕೊಂಡು ಬಂದ ಇನ್&zwnj;ಸ್ಟಂಟ್ ಗುಲಾಬ್ ಜಾಮೂನು ಪೌಡರ್&zwnj;ನ್ನು ಅಗಲವಾದ ಪಾತ್ರೆಗೆ ಹಾಕಿಕೊಳ್ಳಿ. ಈ ಹಿಟ್ಟನ್ನು ತುಂಬಾ ಜನರು ನೀರಿನಿಂದ ಕಲಿಸಿಕೊಳ್ಳುತ್ತಾರೆ. ಇದರಿಂದ ಜಾಮೂನು ಸಾಫ್ಟ್ ಆಗಲ್ಲ. ನೀರಿನ ಬದಲಾಗಿ ಹಿಟ್ಟು ಕಲಿಸಿಕೊಳ್ಳಲು ಹಾಲು ಬಳಸಬೇಕು.&lt;/p&gt;&lt;img&gt;&lt;p&gt;ಮೊದಲಿಗೆ ಒಂದು ಬೌಲ್&zwnj;ನಲ್ಲಿ ಹಾಲಿಗೆ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಹಾಲು ಬಿಸಿಯಾದ ನಂತರ ಚಿಟಿಕೆಯಷ್ಟು ಬೇಕಿಂಗ್ ಸೋಡಾ ಸೇರಿಸಿಕೊಳ್ಳಿ. ಈಗ ಈ ಹಾಲು ಬಳಸಿಕೊಂಡು ಗುಲಾಬ್ ಜಾಮೂನು ಹಿಟ್ಟನ್ನು ಕಲಿಸಿಕೊಂಡು ಕಾಟನ್ ಬಟ್ಟೆ ಮುಚ್ಚಿ 30 ನಿಮಿಷ ಎತ್ತಿಟ್ಟುಕೊಳ್ಳಿ. 30 ನಿಮಿಷದ ನಂತರ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಡೀಪ್ ಫ್ರೈ ಮಾಡಿಕೊಳ್ಳಿ.&lt;/p&gt;&lt;img&gt;&lt;p&gt;ಈಗ ಸಕ್ಕರೆ, ಏಲಕ್ಕಿ ಮಿಶ್ರಿತ ಪಾಕದಲ್ಲಿ ಡೀಪ್ ಫ್ರೈ ಮಾಡಿಕೊಂಡಿರುವ ಗುಲಾಬ್ ಜಾಮೂನು ಉಂಡೆಗಳನ್ನು ಹಾಕಿಕೊಳ್ಳಬೇಕು. ಗುಲಾಬ್ ಜಾಮೂನ್&zwnj;ಗಳನ್ನು ಸುಮಾರು 2 ಗಂಟೆಗಳ ಕಾಲ ಸಿರಪ್&zwnj;ನಲ್ಲಿ ನೆನೆಯಲು ಬಿಡಬೇಕು. ಆಗ ನಿಮಗೆ ಅಂತಿಮವಾಗಿ ಸಾಫ್ಟ್ ಜಾಮೂನು ಸಿಗುತ್ತದೆ.&lt;/p&gt;]]></content:encoded>
            <category>food</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/food/kannada-kitchen-recipe-hacks-use-these-tricks-to-make-gulab-jamun-soft-mrq-cdu2g00"/>
        </item>
        <item>
            <title><![CDATA[ಭಾರತದ ಮಾವಿನ ಹಣ್ಣು ಆಮದಿಗೆ ನಿಷೇಧ ಹೇರಿದ ನೇಪಾಳ, ಅತೀ ರುಚಿಕರ ಹಣ್ಣು ಬ್ಯಾನ್ ಆಗಿದ್ದೇಕೆ?]]></title>
            <link>https://kannada.asianetnews.com/gallery/food/nepal-bans-import-of-indian-mangoes-why-was-the-popular-fruit-restricted-hzqexr2</link>
            <guid isPermaLink="true">https://kannada.asianetnews.com/gallery/food/nepal-bans-import-of-indian-mangoes-why-was-the-popular-fruit-restricted-hzqexr2</guid>
            <pubDate>Tue, 09 Jun 2026 14:49:08 +0530</pubDate>
            <description><![CDATA[&lt;p&gt;ಭಾರತದದ ಮಾವಿನ ಹಣ್ಣಿಗೆ ನೇಪಾಳ ನಿಷೇಧ ಹೇರಿದೆ. ಭಾರತದಿಂದ ಯಾವುದೇ ಮಾವಿನ ಹಣ್ಣ ಆಮದು ಮಾಡಿಕೊಳ್ಳದಿರಲು ನಿರ್ಧರಿಸಿದೆ. ನೇಪಾಳ ಈ ನಿರ್ಧಾರ ಮಾಡಿದ್ದೇಕೆ? ಭಾರತದ ರೈತರಿಗೆ ಎದುರಾಯ್ಕು ಸಂಕಷ್ಟ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksv7fb5kecpvd5cgdpwpp0ba,imgname-5-1780104015027.webp" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದದ ಮಾವಿನ ಹಣ್ಣಿಗೆ ನೇಪಾಳ ನಿಷೇಧ ಹೇರಿದೆ. ಭಾರತದಿಂದ ಯಾವುದೇ ಮಾವಿನ ಹಣ್ಣ ಆಮದು ಮಾಡಿಕೊಳ್ಳದಿರಲು ನಿರ್ಧರಿಸಿದೆ. ನೇಪಾಳ ಈ ನಿರ್ಧಾರ ಮಾಡಿದ್ದೇಕೆ? ಭಾರತದ ರೈತರಿಗೆ ಎದುರಾಯ್ಕು ಸಂಕಷ್ಟ&lt;/p&gt;&lt;img&gt;&lt;p&gt;ಭಾರತದ ಪ್ರತಿ ರಾಜ್ಯದಲ್ಲಿ ವಿವಿದ ತಳಿಯ ಮಾವಿನ ಹಣ್ಣುಗಳು ಲಭ್ಯವಿದೆ. ಅತೀ ಹೆಚ್ಚು ತಳಿ, ಅತ್ಯಂತ ರುಚಿಕರ ಮಾವಿಗೆ ಜನರು ಮುಗಿಬಿದ್ದು ಖರೀದಿಸುತ್ತಾರೆ. ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗದಲ್ಲಿ ಮಾವು ಮೇಳ, ಹಲಸು ಮೇಳ ಸೇರಿದಂತೆ ಹಲವು ಮೇಳಗಳ ಮೂಲಕ ಮತ್ತಷ್ಟು ಜನರನ್ನು ಆಕರ್ಷಿಸುತ್ತದೆ. ಭಾರಿ ಬೇಡಿಕೆಯ ಈ ಮಾವಿನ ಹಣ್ಣಿಗೆ ನೇಪಾಳ ನಿಷೇಧ ಹೇರಿದೆ.&lt;/p&gt;&lt;img&gt;&lt;p&gt;ಭಾರತದ ಮಾವಿನ ಹಣ್ಣಿಗೆ ವಿಪರೀತ ಕೀಟನಾಶಗಳನ್ನು ಸಿಂಪಡಿಸುತ್ತಿದ್ದಾರೆ. ನೇಪಾಳದ ಆಹಾರ ಸುರಕ್ಷತಾ ಇಲಾಖೆ ಪರಿಶೀಲನೆಯಲ್ಲಿ ಭಾರತದ ಮಾವಿನ ಹಣ್ಣ ಕ್ಯಾನ್ಸರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದೆ. ಇದರ ಬೆನ್ನಲ್ಲೇ ನೇಪಾಳ ಭಾರತದ ಮಾವಿನ ಹಣ್ಣು ಆಮದು ಬ್ಯಾನ್ ಮಾಡಿದೆ.&lt;/p&gt;&lt;img&gt;&lt;p&gt;ನೇಪಾಳ ನಿಷೇಧ ಹೇರಿದ ಬೆನ್ನಲ್ಲೇ ಭಾರತದ ಗಡಿ ಮೂಲಕ ನೇಪಾಳ ಗಡಿಯತ್ತ ಸಾಗಿದ ಬರೋಬ್ಬರಿ 15.8 ಮೆಟ್ರಿಕ್ ಟನ್ ಮಾವಿನ ಹಣ್ಣು ಚೆಕ್&zwnj;ಪೋಸ್ಟ್&zwnj;ನಲ್ಲೇ ಬಾಕಿಯಾಗಿದೆ. ನೇಪಾಳದ ಒಳ ಬಿಡಲು ನಿಷೇಧವಿದೆ. ವಾಪಸ್ ತರುವ ಪರಿಸ್ಥಿತಿಯಲ್ಲಿ ವಿತರಕರು ಇಲ್ಲ.&lt;/p&gt;&lt;img&gt;&lt;p&gt;ಭಾರತದ ಮಾವಿನ ಹಣ್ಣಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ರಾಸಾಯನಿಕ ಹಾಗೂ ಕೀಟನಾಶಗಳು ಪತ್ತೆಯಾಗಿದೆ. ಭಾರತದಿಂದ ಆಮದ್ದಾಗಿರುವ ಮಾವಿನ ಹಣ್ಣುಗಳನ್ನು ನೇಪಾಲ ಅಧಿಕಾರಿಗಳು ವಶಕ್ಕೆ ಪಡೆದು ನಾಶ ಪಡಿಸಿದ್ದಾರೆ. ಇದರಿಂದ ನೇಪಾಳದಲ್ಲಿ ಮಾವಿನ ಹಣ್ಣಿನ ಕೊರತೆ ಎದುರಾಗಿದೆ.&lt;/p&gt;&lt;img&gt;&lt;p&gt;ನೇಪಾಳಕ್ಕೂ ಮೊದಲು ಜಪಾನ್ ಕೂಡ ಭಾರತದ ಮಾವಿನ ಹಣ್ಣುಗಳನ್ನು ನಿಷೇಧಿಸಿತ್ತು. ಉತ್ತರ ಪ್ರದೇಶದ ಸಂಸ್ಕಾರಣ ಘಟಕದಲ್ಲಿ ಕೀಟ ನಿಯಂತ್ರಕ ಬಳಕೆ ಮಾವಿನಲ್ಲೂ ಪತ್ತೆಯಾಗಿತ್ತು. ಪರಿಣಾಮ ಭಾರತದ ಅಲ್ಫಾನ್ಸೋ, ಕೇಸರ್ ಸೇರಿದಂತೆ ಪ್ರಮುಖ ತಳಿಗಳ ಆಮದು ಜಪಾನ್ ನಿಷೇಧಿಸಿದೆ.&lt;/p&gt;&lt;img&gt;&lt;p&gt;ಭಾರತದ ಸಂಸ್ಕರಣ ಘಟಕಗಳಲ್ಲಿ ರಾಸಾಯನಿಕ ಬಳಸಿ ಮಾವು ಶೇಖರಿಸಲಾಗುತ್ತಿದೆ. ಜೊತೆಗೆ ರಫ್ತು ವೇಳೆ ಮಾವು ಫ್ರೆಶ್ ಆಗಿ ಕಾಣಲು ರಾಸಾಯನಿಕ ಬಳಸಲಾಗುತ್ತದೆ. ಇತ್ತ ಕೆಲವರು ಬೆಳೆಗೂ ಕೀಟನಾಶ, ರಾಸಾಯನಿಕ ಬಳಕ ಮಾಡುತ್ತಿದ್ದಾರೆ. ಇದರಿಂದ ಮಾವು ಬೆಳಗಾರರಿಗೆ ಸಂಕಷ್ಟ ಎದುರಾಗಿದೆ. ಸಾವಯವ ಮೂಲಕ ಮಾವು ಬೆಳೆದು ರಫ್ತು ಮಾಡಲು ನಿರ್ಧರಿಸಿರುವ ರೈತರು ನಿಷೇಧದಿಂದ ಕಂಗಾಲಾಗಿದ್ದಾರೆ.&lt;/p&gt;]]></content:encoded>
            <category>food</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/food/nepal-bans-import-of-indian-mangoes-why-was-the-popular-fruit-restricted-hzqexr2"/>
        </item>
        <item>
            <title><![CDATA[ಬರೀ ಅಕ್ಕಿ-ಬೇಳೆ ಮಾತ್ರವಲ್ಲ, ದೋಸೆ ಹಿಟ್ಟಿಗೆ ಈ 5 ಪದಾರ್ಥವನ್ನೂ ಮಿಕ್ಸ್ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ!]]></title>
            <link>https://kannada.asianetnews.com/food/how-to-make-restaurant-style-crispy-dosa-batter-at-home-perfect-ratio-and-fermentation-tips/articleshow-i4lknv3</link>
            <guid isPermaLink="true">https://kannada.asianetnews.com/food/how-to-make-restaurant-style-crispy-dosa-batter-at-home-perfect-ratio-and-fermentation-tips/articleshow-i4lknv3</guid>
            <pubDate>Sun, 07 Jun 2026 13:48:12 +0530</pubDate>
            <description><![CDATA[&lt;p&gt;&lt;strong&gt;Secret to crispy dosa batter: &lt;/strong&gt;ಪರ್ಫೆಕ್ಟ್ ದೋಸೆಗೆ ಕೇವಲ ಅಕ್ಕಿ-ಬೇಳೆ ಮಾತ್ರ ಸಾಲದು! ದೋಸೆ ಹಿಟ್ಟು ಸೂಪರ್ ಆಗಿ ಉಬ್ಬಿ ಬರಲು ಮತ್ತು ಸಖತ್ ಕ್ರಿಸ್ಪಿಯಾಗಲು ಹಿಟ್ಟು ರುಬ್ಬುವಾಗ ಇನ್ನು 5 ಸೀಕ್ರೆಟ್ ಪದಾರ್ಥಗಳನ್ನು ಸೇರಿಸಬೇಕಾಗುತ್ತದೆ. ಆ ಪದಾರ್ಥಗಳು ಯಾವುವು ಮತ್ತು ಹಿಟ್ಟಿನ ಸರಿಯಾದ ಅಳತೆ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktgjgshee9zapz53djzwxdv9,imgname-thumbnail---2026-06-07t134005.826-1780820239918.jpg" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಉಪಹಾರವಾದ ದೋಸೆ, ಇಂದು ಇಡೀ ಭಾರತದ ಅತ್ಯಂತ ಜನಪ್ರಿಯ ಬ್ರೇಕ್&zwnj;ಫಾಸ್ಟ್&zwnj;ಗಳಲ್ಲಿ ಒಂದಾಗಿದೆ. ಇದರ ಕ್ರಿಸ್ಪಿ ರುಚಿ ಎಂಥದ್ದು ಎಂದರೆ, ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತೆ. ಹಿಟ್ಟು ಮೊದಲೇ ರೆಡಿಯಾಗಿದ್ದರೆ ಬೆಳಗ್ಗಿನ ಉಪಹಾರಕ್ಕೆ ಇದನ್ನು ಸುಲಭವಾಗಿ ಮಾಡಬಹುದು. ಇದು ಟೇಸ್ಟಿ ಆಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.&lt;/p&gt;&lt;p&gt;ಆದರೆ ಮನೆಯಲ್ಲಿ ದೋಸೆ ಮಾಡುವಾಗ ಹಲವರಿಗೆ ಅದರ ಹಿಟ್ಟಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳಿರುತ್ತವೆ. ಉದಾಹರಣೆಗೆ- ದೋಸೆ ಕ್ರಿಸ್ಪಿಯಾಗಿ ಬರಲು ಹಿಟ್ಟಿಗೆ ಏನೇನು ಹಾಕಬೇಕು? ಇದನ್ನು ಪರ್ಫೆಕ್ಟ್ ಆಗಿ ಫರ್ಮೆಂಟ್ (ಹುದುಗು ಭರಿಸುವುದು) ಮಾಡುವುದು ಹೇಗೆ? ಇತ್ಯಾದಿ. ಒಂದು ವೇಳೆ ನೀವು ದೋಸೆ ಹಿಟ್ಟನ್ನು ಪರ್ಫೆಕ್ಟ್ ಆಗಿ ಮಾಡುವುದನ್ನು ಕಲಿತರೆ, ನಿಮ್ಮ ಮನೆಯ ದೋಸೆಯೂ ಹೋಟೆಲ್ ಸ್ಟೈಲ್&zwnj;ನಲ್ಲಿ ಕ್ರಿಸ್ಪಿಯಾಗಿ ಕರುಂ ಕರುಂ ಅಂತ ಬರುತ್ತದೆ.&lt;/p&gt;&lt;p&gt;ಇನ್&zwnj;ಸ್ಟಾಗ್ರಾಮ್ ಪೋಸ್ಟ್ ಒಂದರಲ್ಲಿ ಬಿಂದೇಶ್ವರಿ ಸಿಂಗ್ ಅವರು ಪರ್ಫೆಕ್ಟ್ ದೋಸೆ ಹಿಟ್ಟಿಗೆ ಸಂಬಂಧಿಸಿದ ಕೆಲವು ಟಿಪ್ಸ್&zwnj;ಗಳನ್ನು ಹಂಚಿಕೊಂಡಿದ್ದಾರೆ, ಬನ್ನಿ ಅದೇನೆಂದು ತಿಳಿಯೋಣ.&lt;/p&gt;&lt;h3&gt;&lt;strong&gt;ದೋಸೆ ಹಿಟ್ಟಿಗೆ ಅಕ್ಕಿ ಮತ್ತು ಬೇಳೆಯ ಅಳತೆ ಎಷ್ಟಿರಬೇಕು?&lt;/strong&gt;&lt;/h3&gt;&lt;p&gt;ಪರ್ಫೆಕ್ಟ್ ದೋಸೆ ಹಿಟ್ಟು ತಯಾರಿಸಲು 3:1 ಅನುಪಾತವನ್ನು ಫಾಲೋ ಮಾಡಿ. ಅಂದರೆ, ನೀವು 3 ಕಪ್ ಅಕ್ಕಿ ತೆಗೆದುಕೊಳ್ಳುತ್ತಿದ್ದರೆ, 1 ಕಪ್ ಉದ್ದಿನಬೇಳೆ ಹಾಕಿ. ಸಾಂಪ್ರದಾಯಿಕವಾಗಿ ದೋಸೆ ಮಾಡಲು ಇಡ್ಲಿ ಅಕ್ಕಿಯನ್ನು ಬಳಸಲಾಗುತ್ತದೆ, ಆದರೆ ನೀವು ಯಾವುದೇ ಅಕ್ಕಿಯನ್ನು ಬಳಸಬಹುದು. ಇನ್ನು ಬೇಳೆಯ ವಿಷಯಕ್ಕೆ ಬಂದರೆ, ಸಿಪ್ಪೆ ಇಲ್ಲದ ಬಿಳಿ ಉದ್ದಿನಬೇಳೆಯನ್ನು ಬಳಸಲಾಗುತ್ತದೆ.&lt;/p&gt;&lt;h3&gt;&lt;strong&gt;ದೋಸೆ ಹಿಟ್ಟಿಗೆ ಇನ್ನು ಏನೇನು ಪದಾರ್ಥ ಸೇರಿಸಬೇಕು?&lt;/strong&gt;&lt;/h3&gt;&lt;p&gt;ಅಕ್ಕಿ ಮತ್ತು ಉದ್ದಿನಬೇಳೆಯ ಹೊರತಾಗಿ ದೋಸೆ ಹಿಟ್ಟಿಗೆ ಇನ್ನು ಕೆಲವು ಪದಾರ್ಥಗಳನ್ನು ಸೇರಿಸಲಾಗುತ್ತದೆ. ನೀವು 3 ಕಪ್ ಅಕ್ಕಿ ಮತ್ತು 1 ಕಪ್ ಉದ್ದಿನಬೇಳೆ ತೆಗೆದುಕೊಳ್ಳುತ್ತಿದ್ದರೆ, ಆ ಲೆಕ್ಕಾಚಾರದ ಪ್ರಕಾರ ಅದಕ್ಕೆ 1/4 ಕಪ್ ಕಡಲೆಬೇಳೆ, ತೊಗರಿಬೇಳೆ (2 ಚಮಚ) ಮತ್ತು ಒಂದು ಚಮಚ ಮೆಂತ್ಯ ಕಾಳುಗಳನ್ನು ಸೇರಿಸಬಹುದು. ನೀವು ಎಷ್ಟು ಪ್ರಮಾಣದಲ್ಲಿ ಅಕ್ಕಿ-ಬೇಳೆ ತೆಗೆದುಕೊಳ್ಳುತ್ತೀರೋ, ಉಳಿದ ಪದಾರ್ಥಗಳ ಪ್ರಮಾಣವನ್ನೂ ಅದೇ ರೀತಿ ಅಡ್ಜಸ್ಟ್ ಮಾಡಿಕೊಳ್ಳಿ. ಈಗ ಈ ಎಲ್ಲಾ ಪದಾರ್ಥಗಳನ್ನು ಎರಡರಿಂದ ಮೂರು ಬಾರಿ ಚೆನ್ನಾಗಿ ತೊಳೆದು, ನಂತರ 5-6 ಗಂಟೆಗಳ ಕಾಲ ನೆನೆಯಲು ಇಡಿ. ಅವಲಕ್ಕಿ (ಪೋಹಾ) ಸೇರಿಸುವುದರಿಂದ ದೋಸೆ ಲೈಟ್ ಮತ್ತು ಫ್ಲಫಿ ಆಗುತ್ತದೆ. ಅಕ್ಕಿ-ಬೇಳೆಯನ್ನು 5-6 ಗಂಟೆಗಳ ಕಾಲ ನೆನೆಸಿದ ನಂತರ, ಹಿಟ್ಟನ್ನು ರುಬ್ಬುವ ಮುನ್ನ ನೀವು ಒಂದೂವರೆ ಕಪ್ ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ ಸ್ವಲ್ಪ ಸಮಯ ಇಡಬೇಕು. 5 ರಿಂದ 10 ನಿಮಿಷಗಳಲ್ಲಿ ಇದು ಚೆನ್ನಾಗಿ ಉಬ್ಬಿಕೊಳ್ಳುತ್ತದೆ. ಅವಲಕ್ಕಿ ಹಾಕುವುದರಿಂದ ದೋಸೆ ತುಂಬಾ ಲೈಟ್ ಮತ್ತು ಸಾಫ್ಟ್ ಆಗಿ ಬರುತ್ತದೆ.&lt;/p&gt;&lt;h3&gt;&lt;strong&gt;ದೋಸೆ ಹಿಟ್ಟನ್ನು ಈ ರೀತಿ ರುಬ್ಬಿಕೊಳ್ಳಿ&lt;/strong&gt;&lt;/h3&gt;&lt;p&gt;ಈಗ ನೆನೆಸಿಟ್ಟ ಅಕ್ಕಿ-ಬೇಳೆ ಮತ್ತು ಅವಲಕ್ಕಿಯನ್ನು ಮಿಕ್ಸರ್ ಜಾರ್&zwnj;ಗೆ ಹಾಕಿ. ಹಿಟ್ಟು ರುಬ್ಬಲು ನೀವು ಅಕ್ಕಿ-ಬೇಳೆ ನೆನೆಸಿಟ್ಟಿದ್ದ ಅದೇ ನೀರನ್ನೇ ಬಳಸಿ. ಇಷ್ಟು ಹಿಟ್ಟಿಗೆ ಸುಮಾರು 1.25 ರಿಂದ 1.75 ಕಪ್ ವರೆಗೆ ನೀರು ಬೇಕಾಗುತ್ತದೆ. ಆದರೆ ನೆನಪಿಡಿ, ನೀರನ್ನು ಒಂದೇ ಬಾರಿಗೆ ಹಾಕಬೇಡಿ, ಬದಲಿಗೆ ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ರುಬ್ಬಿಕೊಳ್ಳಿ. ಹಿಟ್ಟಿನ ಹದ (Consistency) ಮೀಡಿಯಂ ಆಗಿರಬೇಕು; ಅಂದರೆ ತುಂಬಾ ಗಟ್ಟಿಯಾಗಿಯೂ ಇರಬಾರದು, ತುಂಬಾ ತೆಳ್ಳಗೂ ಇರಬಾರದು. ಜೊತೆಗೆ ಅದರ ಟೆಕ್ಸ್ಚರ್ ಸ್ವಲ್ಪ ತರಿತರಿಯಾಗಿರಬೇಕು (ರವೆಯಂತೆ). ಇದನ್ನು ನೀವು ಪಾತ್ರೆಗೆ ಸುರಿಯುವಾಗ ರಿಬ್ಬನ್ ಬಿದ್ದಂತೆ ಮಡಿಕೆಗಳಾಗಿ ಬೀಳಬೇಕು.&lt;/p&gt;&lt;h2&gt;&lt;strong&gt;ಫಾಸ್ಟ್ ಫರ್ಮೆಂಟೇಶನ್&zwnj;ಗಾಗಿ ಈ 1 ಸೀಕ್ರೆಟ್ ಪದಾರ್ಥ ಮಿಕ್ಸ್ ಮಾಡಿ&lt;/strong&gt;&lt;/h2&gt;&lt;p&gt;ಈಗ ರುಬ್ಬಿದ ಹಿಟ್ಟನ್ನು ಒಂದು ದೊಡ್ಡ ಬೌಲ್&zwnj;ಗೆ ತೆಗೆದುಕೊಳ್ಳಿ. ಇದಕ್ಕೆ ಒಂದು ಚಿಟಿಕೆ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಸೇರಿಸುವುದರಿಂದ ಫರ್ಮೆಂಟೇಶನ್ (ಹಿಟ್ಟು ಹುದುಗುವ) ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ. ಹಿಟ್ಟನ್ನು 2-3 ನಿಮಿಷಗಳ ಕಾಲ ಕೈಯಿಂದಲೇ ಚೆನ್ನಾಗಿ ಕೈಯಾಡಿಸಿ (ಫೆಂಟಿ). ನಂತರ ಹಿಟ್ಟನ್ನು ಮುಚ್ಚಿ ಯಾವುದೇ ಬೆಚ್ಚಗಿನ ಜಾಗದಲ್ಲಿ 10-12 ಗಂಟೆಗಳ ಕಾಲ ಇಡಿ. ಇದು ಕಂಪ್ಲೀಟ್ ಆಗಿ ಪರ್ಫೆಕ್ಟ್ ಆಗಿ ಫರ್ಮೆಂಟ್ ಆಗುತ್ತದೆ.&lt;/p&gt;&lt;h3&gt;&lt;strong&gt;ಫ್ರಿಡ್ಜ್&zwnj;ನಲ್ಲಿ ಈ ಹಿಟ್ಟನ್ನು ಎಷ್ಟು ದಿನ ಸ್ಟೋರ್ ಮಾಡಬಹುದು?&lt;/strong&gt;&lt;/h3&gt;&lt;p&gt;ನಿಮಗೆ ಎಷ್ಟು ಹಿಟ್ಟು ಬೇಕೋ ಅಷ್ಟನ್ನು ಮಾತ್ರ ಬೇರೆ ಪಾತ್ರೆಗೆ ತೆಗೆದುಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದೋಸೆ ಸವಿಯಬಹುದು. ಬಾಕಿ ಉಳಿದ ಹಿಟ್ಟಿಗೆ ಉಪ್ಪು ಸೇರಿಸಬೇಡಿ. ಉಪ್ಪು ಹಾಕದ ಈ ಹಿಟ್ಟನ್ನು ಫ್ರಿಡ್ಜ್&zwnj;ನಲ್ಲಿ ಆರಾಮವಾಗಿ 5 ರಿಂದ 7 ದಿನಗಳವರೆಗೆ ಸ್ಟೋರ್ ಮಾಡಿ ಇಡಬಹುದು.&lt;/p&gt;&lt;p&gt;&lt;strong&gt;ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ&amp;nbsp;&lt;/strong&gt;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Bindeshwari Singh (@cookingguardians)&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/food/how-to-make-restaurant-style-crispy-dosa-batter-at-home-perfect-ratio-and-fermentation-tips/articleshow-i4lknv3"/>
        </item>
        <item>
            <title><![CDATA[ಚಂದ್ರಮುಖಿ ಚಿಕನ್ ಫ್ರೈ: ಖಾರ ಖಾರವಾದ ಟೇಸ್ಟಿ ಆಂಧ್ರ-ತಮಿಳುನಾಡು ಶೈಲಿಯ ಸೂಪರ್ ರೆಸಿಪಿ]]></title>
            <link>https://kannada.asianetnews.com/gallery/food/chandramukhi-chicken-fry-a-spicy-and-tasty-andhra-pradesh-tamil-nadu-style-super-recipe-mrq-mldcz93</link>
            <guid isPermaLink="true">https://kannada.asianetnews.com/gallery/food/chandramukhi-chicken-fry-a-spicy-and-tasty-andhra-pradesh-tamil-nadu-style-super-recipe-mrq-mldcz93</guid>
            <pubDate>Tue, 09 Jun 2026 10:16:10 +0530</pubDate>
            <description><![CDATA[ಖಾರವಾದ ಬಾಡೂಟ ಇಷ್ಟಪಡುವವರಿಗಾಗಿ ಆಂಧ್ರ-ತಮಿಳುನಾಡು ಶೈಲಿಯ ಚಂದ್ರಮುಖಿ ಚಿಕನ್ ಫ್ರೈ ಮಾಡುವ ವಿಧಾನ ಇಲ್ಲಿದೆ. ವಿಶೇಷ ಮಸಾಲೆಗಳನ್ನು ಬಳಸಿ ತಯಾರಿಸುವ ಈ ಖಾದ್ಯವು ವಿಭಿನ್ನ ರುಚಿಯನ್ನು ನೀಡುತ್ತದೆ ಮತ್ತು ಇದನ್ನು ಚಪಾತಿ, ರೊಟ್ಟಿ ಅಥವಾ ದೋಸೆಯೊಂದಿಗೆ ಸವಿಯಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01ktk1yvwycpxf0pq5cckwf6de,imgname-vismai-6-1780903538590.png" type="image/jpeg" height="390" width="690"/>
            <content:encoded><![CDATA[ಖಾರವಾದ ಬಾಡೂಟ ಇಷ್ಟಪಡುವವರಿಗಾಗಿ ಆಂಧ್ರ-ತಮಿಳುನಾಡು ಶೈಲಿಯ ಚಂದ್ರಮುಖಿ ಚಿಕನ್ ಫ್ರೈ ಮಾಡುವ ವಿಧಾನ ಇಲ್ಲಿದೆ. ವಿಶೇಷ ಮಸಾಲೆಗಳನ್ನು ಬಳಸಿ ತಯಾರಿಸುವ ಈ ಖಾದ್ಯವು ವಿಭಿನ್ನ ರುಚಿಯನ್ನು ನೀಡುತ್ತದೆ ಮತ್ತು ಇದನ್ನು ಚಪಾತಿ, ರೊಟ್ಟಿ ಅಥವಾ ದೋಸೆಯೊಂದಿಗೆ ಸವಿಯಬಹುದು.&lt;img&gt;&lt;p&gt;ಕೆಲವರಿಗೆ ಬಾಡೂಟ ಅಂದ್ರೆ ಖಾರ ಖಾರವಾಗಿರಬೇಕು ಮತ್ತು ನೋಡಿದ್ರೆ ಬಾಯಲ್ಲಿ ನೀರೂರಿಸುವಂತಿರಬೇಕಾಗುತ್ತದೆ. ಒಂದೇ ರೀತಿಯ ಚಿಕನ್ ಅಡುಗೆ ತಿಂದು ಬೇಸರವಾಗಿದ್ರೆ ಇಂದು ಆಂಧ್ರ-ತಮಿಳುನಾಡು ಶೈಲಿಯ ಚಂದ್ರಮುಖಿ ಚಿಕನ್ ಫ್ರೈ ಟ್ರೈ ಮಾಡಿ. ಖಂಡಿತ ಈ ಶೈಲಿಯ ಚಿಕನ್ ಅಡುಗೆ ನಿಮಗೆ ಇಷ್ಟವಾಗುತ್ತೆ ಮತ್ತು ಒಮ್ಮೆ ರುಚಿ ನೋಡಿದ್ಮೇಲೆ ನೀವೇ ಪದೇ ಪದೇ ಮಾಡಿಕೊಳ್ಳಲು ಆರಂಭಿಸುತ್ತೀರಿ. ಈ ಚಿಕನ್ ಫ್ರೈನಲ್ಲಿರುವ ವಿಶೇಷವಾದ ರುಚಿ ನಿಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.&lt;/p&gt;&lt;img&gt;&lt;p&gt;750 ಗ್ರಾಂ ಚಿಕನ್, ಒಂದೂವರೆ ಕಪ್ ನೀರು, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, 2-3 ಟೀ ಸ್ಪೂನ್ ಎಣ್ಣೆ, 3 ಲವಂಗ, ಅರ್ಧ ತುಂಡು ಅನಾನಸ್ ಹೂವು, ಎರಡು ಏಲಕ್ಕಿ, ಒಂದೂವರೆ ಇಂಚು ದಾಲ್ಚಿನ್ನಿ, ಒಂದು ಚಮಚ ಮೆಣಸು, ಒಂದು ಚಮಚ ಜೀರಿಗೆ, ಮೂರು ಒಣ ಮೆಣಸಿನಕಾಯಿ, ಎರಡು ಚಮಚ ಕೊತ್ತಂಬರಿ, ಸ್ವಲ್ಪ ಸೋಂಪು, ಒಂದು ಈರುಳ್ಳಿ, 2-3 ಹಸಿಮೆಣಸಿನಕಾಯಿ, ಒಂದು ಹಿಡಿಯಷ್ಟು ಗೋಡಂಬಿ, ಸ್ವಲ್ಪ ಕರಿಬೇವು, ಒಂದೂವರೆ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದು ಟೀ ಸ್ಪೂನ್ ಕಸೂರಿ ಮೇಥಿ, 2 ಟೀ ಸ್ಪೂನ್ ಅಚ್ಚ ಖಾರದ ಪುಡಿ, 2 ಟೀ ಸ್ಪೂನ್ ಒಣ ತೆಂಗಿನಕಾಯಿ ಪುಡಿ, ಸ್ವಲ್ಪ ಕೊತ್ತಂಬರಿ, ನಿಂಬೆ ರಸ ಮತ್ತು ಚೆಟ್ಟಿನಾಡು ಮಸಾಲ&lt;/p&gt;&lt;img&gt;&lt;p&gt;ಒಂದು ಪಾತ್ರೆಯಲ್ಲಿ ಚಿಕನ್ ತೆಗೆದುಕೊಂಡು ಅರ್ಧ ಕಪ್&zwnj;ನಷ್ಟು ನೀರು ಹಾಕಿಕೊಳ್ಳಿ. ಇದಕ್ಕೆ ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿಕೊಂಡು ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಚಿಕನ್ ಶೇ.80ರಷ್ಟು ಬೆಂದಾಗ ಒಲೆ ಆಫ್ ಮಾಡಿ, ಹೆಚ್ಚುವರಿ ನೀರನ್ನು ಬೇರ್ಪಡಿಸಿಕೊಂಡು ಎತ್ತಿಟ್ಟುಕೊಳ್ಳಿ. ಶೇ.80ರಷ್ಟು ಚಿಕನ್ ಬೇಯಲು ಗರಿಷ್ಠ 5 ನಿಮಿಷ ಸಾಕು.&lt;/p&gt;&lt;img&gt;&lt;p&gt;ಮಸಾಲೆ ಪೇಸ್ಟ್ ಮಾಡಿಕೊಳ್ಳಲು ಒಲೆ ಆನ್ ಮಾಡ್ಕೊಂಡು ಬಾಣಲೆ ಇಟ್ಕೊಳ್ಳಿ. ಈಗ ಇದಕ್ಕೆ ಲವಂಗ, ಅನಾನಸ್ ಹೂವು, ಏಲಕ್ಕಿ, ದಾಲ್ಚಿನ್ನಿ, ಮೆಣಸು ಸೇರಿಸಿಕೊಳ್ಳಿ. ಈ ಎಲ್ಲಾ ಮಸಾಲೆ ಪದಾರ್ಥಕ್ಕೆ 2 ಟೀ ಸ್ಪೂನ್&zwnj;ನಷ್ಟು ಎಣ್ಣೆ ಸೇರಿಸಿ ಪರಿಮಳ ಬರೋವರೆಗೂ ಹುರಿದುಕೊಳ್ಳಿ. ಪರಿಮಳ ಬಂದ ನಂತರ ಇದೇ ಬಾಣಲೆಗೆ ಒಣಮೆಣಸಿಕಾಯಿ, ಜೀರಿಗೆ, ಧನಿಯಾ, ಸೋಂಪು ಸೇರಿಸಿಕೊಂಡು ಸ್ವಲ್ಪ ಹುರಿದುಕೊಂಡು ಬೇರೊಂದು ಪಾತ್ರೆಗೆ ಹಾಕಿಕೊಳ್ಳಿ.&lt;/p&gt;&lt;img&gt;&lt;p&gt;ನಂತರ ಇದೇ ಬಾಣಲೆಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಫ್ರೈ ಮಾಡಿಕೊಳ್ಳಬೇಕು. ಕೊನೆಗೆ ಎಲ್ಲಾ ಮಸಾಲೆ ಪದಾರ್ಥ ಮತ್ತು ಈರುಳ್ಳಿ-ಹಸಿಮೆಣಸಿನಕಾಯಿ ತಣ್ಣಗಾದ ಮೇಲೆ ಜಾರ್&zwnj;ನಲ್ಲಿ ಹಾಕಿಕೊಂಡು ಸಣ್ಣದಾಗಿ ರುಬ್ಬಿಕೊಳ್ಳಿ.&lt;/p&gt;&lt;img&gt;&lt;p&gt;ತದನಂತರ ಒಲೆ ಮೇಲೆ ಮತ್ತೊಂದು ಪ್ಯಾನ್ ಇಟ್ಕೊಂಡು ಎಣ್ಣೆ ಹಾಕಿಕೊಳ್ಳಿ. ಇದಕ್ಕೆ ಏಲಕ್ಕಿ, ಲವಂಗ, ದಾಲ್ಚಿನ್ನಿ ಸೇರಿಸಿ ಹುರಿಯಿರಿ. ತದನಂತರ ಗೋಡಂಬಿ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರೀಬೇವು ಸೇರಿಸಿಕೊಂಡು ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಬೇಕು.&amp;nbsp;&lt;/p&gt;&lt;img&gt;&lt;p&gt;ಈಗ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆ ಹಾಕಿ ತಳಕ್ಕೆ ಅಂಟಿಕೊಳ್ಳದಂತೆ ಎರಡು ನಿಮಿಷ ಬೇಯಿಸಿಕೊಳ್ಳಬೇಕು. ಕೊನೆಗೆ ಇದಕ್ಕೆ ಬೇಯಿಸಿಕೊಂಡಿರುವ ಚಿಕನ್ ಸೇರಿಸಿ ಚೆನ್ನಾಗಿ ಮಸಾಲೆಯಲ್ಲಿ ಮಿಕ್ಸ್ ಮಾಡಿಕೊಳ್ಳಿ.&lt;/p&gt;&lt;img&gt;&lt;p&gt;ಅಂತಿಮವಾಗಿ ಕಸೂರಿ ಮೇಥಿ, ಅಚ್ಚ ಖಾರದ ಪುಡಿ, ಒಣತೆಂಗಿನಕಾಯಿ ಪುಡಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎರಡು ನಿಮಿಷ ಬೇಯಿಸಿಕೊಂಡ್ರೆ ಚಿಕನ್ ರೆಡಿಯಾಗುತ್ತದೆ. ಅಂತಿಮವಾಗಿ ಒಲೆ ಆಫ್ ಮಾಡಿ ಕೋತಂಬರಿ ಸೊಪ್ಪು, ನಿಂಬೆರಸ ಮತ್ತು ಚೆಟ್ಟಿನಾಡ್ ಮಸಾಲೆ ಸೇರಿಸಿದ್ರೆ ರುಚಿಯಾದ ಚಂದ್ರಮುಖಿ ಚಿಕನ್ ಫ್ರೈ ಸವಿಯಲು ಸಿದ್ಧವಾಗುತ್ತದೆ. ಚಪಾತಿ, ರೊಟ್ಟಿ, ದೋಸೆಕ್ಕೆ ಇದು ಒಳ್ಳೆಯ ಕಾಂಬಿನೇಷನ್ ಆಗುತ್ತದೆ.&lt;/p&gt;]]></content:encoded>
            <category>food</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/food/chandramukhi-chicken-fry-a-spicy-and-tasty-andhra-pradesh-tamil-nadu-style-super-recipe-mrq-mldcz93"/>
        </item>
        <item>
            <title><![CDATA[ಅದೇ ರುಚಿ, ಅದೇ ಲುಕ್… ಆದ್ರೆ ಇದು ಮೊಟ್ಟೆ ಇಲ್ಲದೆ ತಯಾರಿಸೋ ವೆಜ್ ಆಮ್ಲೆಟ್]]></title>
            <link>https://kannada.asianetnews.com/food/try-this-veg-omelette-recipe-made-with-soya-chunks/articleshow-n5st4lv</link>
            <guid isPermaLink="true">https://kannada.asianetnews.com/food/try-this-veg-omelette-recipe-made-with-soya-chunks/articleshow-n5st4lv</guid>
            <pubDate>Tue, 09 Jun 2026 18:51:16 +0530</pubDate>
            <description><![CDATA[&lt;p&gt;Veg Omelette Recipe: ನೀವು ಮೊಟ್ಟೆಯದೇ ಟೆಕ್ಚರ್ ಮತ್ತು ರುಚಿ ಹೊಂದಿರುವ ಮೊಟ್ಟೆ ರಹಿತ ಆಮ್ಲೆಟ್ ಮಾಡೋದು ಹೇಗೆ ಎಂದು ಯೋಚನೆ ಮಾಡುತ್ತಿದ್ದರೆ, ನೀವು ಸೋಯಾ ವೆಜ್ ಆಮ್ಲೆಟ್ ಟ್ರೈ ಮಾಡಿ. ಸೋಯಾ ಚಂಕ್ಸ್, ಕಡಲೆ ಹಿಟ್ಟಿನಿಂದ ತಯಾರಿಸುವ ಆಮ್ಲೆಟ್ ಹೇಗೆ ತಯಾರಿಸೋದು ಎಂದು ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk443903kfv0mvrztkrdzyvg,imgname-eggless-omlate-1-1772886270979.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮೊಟ್ಟೆ ಇಲ್ಲದೇ ತಯಾರಿಸುವ ವೆಜ್ ಆಮ್ಲೆಟ್&lt;/strong&gt;&lt;/h2&gt;&lt;p&gt;ನೀವು ಸಸ್ಯಾಹಾರಿಯೇ? ಕೆಲವೊಮ್ಮೆ ಸ್ನೇಹಿತರು ಆಮ್ಲೆಟ್ ತಿನ್ನುವುದನ್ನು ನೋಡಿ ಸಸ್ಯಾಹಾರಿ ಪರ್ಯಾಯ ಏನಾದ್ರು ಇದ್ರೆ ಚೆನ್ನಾಗಿರುತ್ತಿತ್ತು ಎಂದು ಬಯಸಿದ್ದೀರಾ? ಜನರು ಹೆಚ್ಚಾಗಿ ಬೇಸನ್ ಚಿಲ್ಲಾ ತಯಾರಿಸುತ್ತಾರೆ. ಅದನ್ನು &quot;ಸಸ್ಯಾಹಾರಿ ಆಮ್ಲೆಟ್&quot; ಎಂದು ಕರೆಯುತ್ತಾರೆ, ಆದರೆ ಅದು ಮೊಟ್ಟೆಯ ಆಮ್ಲೆಟ್&zwnj;ನ ರುಚಿ, ವಿನ್ಯಾಸ ಮತ್ತು ಮೃದುತ್ವವನ್ನು ಹೊಂದಿರುವುದಿಲ್ಲ. ಹಾಗಾದರೆ, ಆಮ್ಲೆಟ್&zwnj;ನಂತೆ ಕಾಣುವ, ರುಚಿಕರವಾದ ಮತ್ತು ಪ್ರೋಟೀನ್&zwnj;ನಿಂದ ತುಂಬಿರುವ ಆಮ್ಲೆಟ್ ಯಾವುದು ಎಂದು ನೀವು ಯೋಚನೆ ಮಾಡುತ್ತಿದ್ದರೆ. ಇಲ್ಲಿದೆ ಸೋಯಾ ಆಮ್ಲೆಟ್ ರೆಸಿಪಿ.&lt;/p&gt;&lt;h3&gt;&lt;strong&gt;ಸೋಯಾ ಚಂಕ್ಸ್ ಆಮ್ಲೆಟ್ ತಯಾರಿಸುವುದು ಹೇಗೆ?&lt;/strong&gt;&lt;/h3&gt;&lt;p&gt;ಸೋಯಾ ಚಂಕ್ಸ್ ಆಮ್ಲೆಟ್ ತಯಾರಿಸಲು, ಸುಮಾರು 10 ಸೋಯಾ ಚಂಕ್ಸ್ ಅನ್ನು ಬಿಸಿ ನೀರಿನಲ್ಲಿ ಎರಡು ನಿಮಿಷಗಳ ಕಾಲ ನೆನೆಸಿಡಿ. ಮೃದುವಾದ ನಂತರ, ಎಲ್ಲಾ ನೀರನ್ನು ಹೊರಹಾಕಿ ಮತ್ತು ಮಿಕ್ಸರ್&zwnj;ನಲ್ಲಿ ಒರಟಾಗಿ ಪುಡಿಮಾಡಿ.(ಇದು ಪೇಸ್ಟ್ ಆಗದಂತೆ ಎಚ್ಚರವಿರಲಿ). ಸ್ವಲ್ಪ ಒರಟಾದ ರಚನೆಯು ಆಮ್ಲೆಟ್ ಗೆ ಪರ್ಫೆಕ್ಟ್ ರುಚಿ, ವಿನ್ಯಾಸವನ್ನು ನೀಡುತ್ತದೆ.&lt;/p&gt;&lt;h3&gt;&lt;strong&gt;ಮಸಾಲೆಯುಕ್ತ ಸೋಯಾ ಮಿಕ್ಸ್ ಹೀಗೆ ತಯಾರಿಸಿ&lt;/strong&gt;&lt;/h3&gt;&lt;ul&gt; &lt;li&gt;ಒಂದು ಪ್ಯಾನ್&zwnj;ನಲ್ಲಿ ಎರಡು ಟೀ ಚಮಚ ಎಣ್ಣೆಯನ್ನು ಬಿಸಿ ಮಾಡಿ.&lt;/li&gt; &lt;li&gt;ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ, ಲೈಟ್ ಆಗಿ ಹುರಿಯಿರಿ.&lt;/li&gt; &lt;li&gt;ನಂತರ, ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಮತ್ತು ಕೊತ್ತಂಬರಿ ಪುಡಿಯನ್ನು ಸೇರಿಸಿ.&lt;/li&gt; &lt;li&gt;ಈಗ, ಒರಟಾಗಿ ಪುಡಿಮಾಡಿದ ಸೋಯಾ ಮತ್ತು ಸಣ್ಣಗೆ ಹೆಚ್ಚಿದ ಟೊಮೆಟೊವನ್ನು ಸೇರಿಸಿ. ಕೈ ಬಿಡದೆ ಮಿಕ್ಸ್ ಮಾಡಿ, ಕೆಲವು ನಿಮಿಷ ಬೇಯಿಸಿ.&lt;/li&gt; &lt;li&gt;ಮಸಾಲೆಗಳು ಚೆನ್ನಾಗಿ ಸೇರಿದ ನಂತರ, ಉರಿಯನ್ನು ಆಫ್ ಮಾಡಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ.&lt;/li&gt;&lt;/ul&gt;&lt;h3&gt;&lt;strong&gt;ಎಗ್ ಲೆಸ್ ಆಮ್ಲೆಟ್ ತಯಾರಿಸುವುದು ಸುಲಭ&lt;/strong&gt;&lt;/h3&gt;&lt;ul&gt; &lt;li&gt;ಆಮ್ಲೆಟ್ ತರಹದ ನೋಟ ಮತ್ತು ಸಾಫ್ಟ್&rsquo;ನೆಸ್ ಪಡೆಯಲು ಬ್ಯಾಟರ್ ಅನ್ನು ಸರಿಯಾಗಿ ತಯಾರಿಸುವುದು ಬಹಳ ಮುಖ್ಯ.&lt;/li&gt; &lt;li&gt;ಒಂದು ಬಟ್ಟಲಿನಲ್ಲಿ, 4 ಚಮಚ ಕಡಲೆ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು ಮತ್ತು 1 ಚಮಚ ಮೈದಾ ಸೇರಿಸಿ. ನಂತರ, ಉಪ್ಪು, ಅರಿಶಿನ ಮತ್ತು ಸ್ವಲ್ಪ ಬೇಕಿಂಗ್ ಪೌಡರ್ ಸೇರಿಸಿ&lt;/li&gt; &lt;li&gt;ಹಿಟ್ಟು ಲೈಟ್ ಮತ್ತು ಗಾಳಿಯಾಡುವಂತೆ ಮಾಡಲು ಬೇಕಿಂಗ್ ಪೌಡರ್ ಸೇರಿಸಿ.&lt;/li&gt; &lt;li&gt;ಈಗ, ನಯವಾದ ಬ್ಯಾಟರ್ ತಯಾರಿಸಲು ನಿಧಾನವಾಗಿ ನೀರನ್ನು ಸೇರಿಸಿ.&lt;/li&gt; &lt;li&gt;ಹಿಟ್ಟು ತುಂಬಾ ದಪ್ಪವಾಗಿರಬಾರದು ಅಥವಾ ತುಂಬಾ ತೆಳ್ಳಗಿರಬಾರದು; ಪ್ಯಾನ್ ನಲ್ಲಿ ಹರಿದಾಡುವ ಹದಕ್ಕೆ ಹಿಟ್ಟು ತಯಾರಿಸಿ.&lt;/li&gt; &lt;li&gt;ತಯಾರಾದ ಹಿಟ್ಟಿಗೆ ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ಕರಿಬೇವು ಮತ್ತು ತಾಜಾ ಕೊತ್ತಂಬರಿ ಸೊಪ್ಪು ಸೇರಿಸಿ. ಈಗ, ಹಿಂದೆ ತಯಾರಿಸಿದ ಸೋಯಾ ಮಸಾಲಾವನ್ನು ಸಹ ಮಿಶ್ರಣ ಮಾಡಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ; ಅಗತ್ಯವಿದ್ದರೆ ನೀವು ಸ್ವಲ್ಪ ಹೆಚ್ಚು ನೀರನ್ನು ಸೇರಿಸಬಹುದು. ಈಗ ನಿಮ್ಮ ಪರ್ಫೆಕ್ಟ್ ವೆಜ್ ಆಮ್ಲೆಟ್ ಬ್ಯಾಟರ್ ಕೆಲವೇ ನಿಮಿಷಗಳಲ್ಲಿ ರೆಡಿ.&lt;/li&gt;&lt;/ul&gt;&lt;h3&gt;&lt;strong&gt;ಕೊನೆಯದಾಗಿ ಇದನ್ನು ಮಾಡಿ&lt;/strong&gt;&lt;/h3&gt;&lt;ul&gt; &lt;li&gt;ನಾನ್-ಸ್ಟಿಕ್ ತವಾ ಬಿಸಿ ಮಾಡಿ ಮತ್ತು ಅದಕ್ಕೆ ಎಣ್ಣೆಯನ್ನು ಗ್ರೀಸ್ ಮಾಡಿ. ತವಾ ಮೇಲೆ ಒಂದು ಹಿಟ್ಟನ್ನು ಹರಡಿ.&lt;/li&gt; &lt;li&gt;ಆಮ್ಲೆಟ್ ಅನ್ನು ಕಡಿಮೆ ಉರಿಯಲ್ಲಿ ಬೇಯಿಸುವುದು ಬಹಳ ಮುಖ್ಯ; ಹೆಚ್ಚಿನ ಉರಿಯಲ್ಲಿ ಬೇಯಿಸುವುದರಿಂದ ಹೊರ ಪದರವು ಬೇಗನೆ ಬೇಯಬಹುದು ಮತ್ತು ಒಳಭಾಗವು ಹಸಿಯಾಗಿಯೇ ಉಳಿಯಬಹುದು. ಆದ್ದರಿಂದ, ಗೋಲ್ಡನ್ ಬ್ರೌನ್ ಆಗುವವರೆಗೆ ತಾಳ್ಮೆಯಿಂದ ಎರಡೂ ಬದಿಗಳಲ್ಲಿ ಬೇಯಿಸಿ.&lt;/li&gt; &lt;li&gt;ಆಮ್ಲೆಟ್ ಮೇಲೆ ಸ್ವಲ್ಪ ಕಾದ ಬಳಿಕ ಅದರ ಮೇಲೆ ಕರಿಮೆಣಸಿನ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆಗಳನ್ನು ಸಿಂಪಡಿಸಿ. ಇದು ಥೇಟ್ ಅಮ್ಲೆಟ್ ನಂತೆ ಕಾಣುತ್ತೆ.&lt;/li&gt; &lt;li&gt;ಕೊನೆಯದಾಗಿ ನೀವು ಅದನ್ನು ಟೊಮೆಟೊ ಸಾಸ್, ಹಸಿರು ಚಟ್ನಿ ಜೊತೆಗೆ ಸರ್ವ್ ಮಾಡಿ.&lt;/li&gt;&lt;/ul&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by VIJI SHARON PHILIP (@samayalwithsharon)&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>food</category>
            <dc:creator>Pavna Das</dc:creator>
            <atom:link href="https://kannada.asianetnews.com/food/try-this-veg-omelette-recipe-made-with-soya-chunks/articleshow-n5st4lv"/>
        </item>
        <item>
            <title><![CDATA[ಫ್ರಿಡ್ಜ್ ನಲ್ಲಿಟ್ಟ ಅನ್ನ ತಿನ್ನುವುದು ಡೇಂಜರಾ? ಕ್ಯಾನ್ಸರ್ ತಜ್ಞರು ಕೊಟ್ರು 4 Tips]]></title>
            <link>https://kannada.asianetnews.com/gallery/health-life/eating-refrigerated-rice-follow-these-4-essential-rules-to-avoid-food-poisoning-nw041vf</link>
            <guid isPermaLink="true">https://kannada.asianetnews.com/gallery/health-life/eating-refrigerated-rice-follow-these-4-essential-rules-to-avoid-food-poisoning-nw041vf</guid>
            <pubDate>Sat, 06 Jun 2026 22:38:00 +0530</pubDate>
            <description><![CDATA[&lt;p&gt;Can leftover rice cause cancer: ಈಗೆಲ್ಲಾ ಸಮಯ ಉಳಿಸಲು ಅಥವಾ ಅನ್ನ ಉಳಿದಿದೆ ಎಂಬ ಕಾರಣಕ್ಕೆ ಅದನ್ನು ಫ್ರಿಡ್ಜ್&zwnj;ನಲ್ಲಿಟ್ಟು, ಮರುದಿನ ಮತ್ತೆ ಬಿಸಿ ಮಾಡಿ ತಿನ್ನುವುದು ಸಾಮಾನ್ಯವಾಗಿದೆ. ಆದರೆ ಹೀಗೆ ಮಾಡುವುದರಿಂದ ಕ್ಯಾನ್ಸರ್ ಬರುತ್ತಾ ಅಥವಾ ಫುಡ್ ಪಾಯ್ಸನಿಂಗ್ ಆಗುತ್ತಾ ಎಂಬ ಭಯ ಹಲವರಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssfee4wnrrvtkkergt5g09m,imgname-rice-recipe--2--1780045265052.jpg" type="image/jpeg" height="390" width="690"/>
            <content:encoded><![CDATA[&lt;p&gt;Can leftover rice cause cancer: ಈಗೆಲ್ಲಾ ಸಮಯ ಉಳಿಸಲು ಅಥವಾ ಅನ್ನ ಉಳಿದಿದೆ ಎಂಬ ಕಾರಣಕ್ಕೆ ಅದನ್ನು ಫ್ರಿಡ್ಜ್&zwnj;ನಲ್ಲಿಟ್ಟು, ಮರುದಿನ ಮತ್ತೆ ಬಿಸಿ ಮಾಡಿ ತಿನ್ನುವುದು ಸಾಮಾನ್ಯವಾಗಿದೆ. ಆದರೆ ಹೀಗೆ ಮಾಡುವುದರಿಂದ ಕ್ಯಾನ್ಸರ್ ಬರುತ್ತಾ ಅಥವಾ ಫುಡ್ ಪಾಯ್ಸನಿಂಗ್ ಆಗುತ್ತಾ ಎಂಬ ಭಯ ಹಲವರಲ್ಲಿದೆ.&amp;nbsp;&lt;/p&gt;&lt;img&gt;&lt;p&gt;ಇಂದಿನ ಬ್ಯುಸಿ ಲೈಫ್&zwnj;ಸ್ಟೈಲ್&zwnj;ನಲ್ಲಿ ಟೈಂ ಟು ಟೈಂ ಅಡುಗೆ ಮಾಡಿಕೊಂಡು ತಿನ್ನುವುದು ಎಲ್ಲರಿಗೂ ಸಾಧ್ಯವಾಗುವ ಮಾತಲ್ಲ. ಕೆಲವರು ಸಮಯ ಉಳಿಸುವುದಕ್ಕೋ ಅಥವಾ ರಾತ್ರಿ ಮಾಡಿದ ಅನ್ನ ಉಳಿದುಹೋಗಿದೆ ಎಂದೋ ಅನ್ನವನ್ನು ಫ್ರಿಡ್ಜ್&zwnj;ನಲ್ಲಿಟ್ಟು, ಮರುದಿನ ಹಸಿವಾದಾಗ ಮತ್ತೊಮ್ಮೆ ಬಿಸಿ ಮಾಡಿಕೊಂಡು ತಿನ್ನುತ್ತಿರುತ್ತಾರೆ. ಆದರೆ ಹೀಗೆ ಫ್ರಿಡ್ಜ್&zwnj;ನಲ್ಲಿ ಸಂಗ್ರಹಿಸಿಟ್ಟ ಅನ್ನವನ್ನು ಮತ್ತೆ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಇದರಿಂದ ಫುಡ್ ಪಾಯ್ಸನಿಂಗ್ ಆಗುತ್ತದೆಯೇ? ಫ್ರಿಡ್ಜ್&zwnj;ನಲ್ಲಿಟ್ಟು ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆಯೇ? ಎಂಬ ಅನುಮಾನಗಳು ಅನೇಕರನ್ನು ಕಾಡುತ್ತಿರುತ್ತವೆ.&lt;/p&gt;&lt;img&gt;&lt;p&gt;ಕೆಲವರು ಇದು ಅತ್ಯಂತ ಅಪಾಯಕಾರಿ ಎಂದು ಹೆದರಿಸಿದರೆ, ಇನ್ನು ಕೆಲವರು &quot;ನಾವು ಎಷ್ಟೋ ದಿನಗಳಿಂದ ತಿನ್ನುತ್ತಿದ್ದೇವೆ ನಮಗೇನೂ ಆಗಿಲ್ಲ&quot; ಎಂದು ಹಗುರವಾಗಿ ತಳ್ಳಿಹಾಕುತ್ತಾರೆ. ಪ್ರಖ್ಯಾತ ಕ್ಯಾನ್ಸರ್ ಸರ್ಜನ್ ಡಾ. ಜಯೇಶ್ ಶರ್ಮಾ ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಪ್ರಕಾರ... ಫ್ರಿಡ್ಜ್&zwnj;ನಲ್ಲಿಟ್ಟ ಅನ್ನವನ್ನು ಮತ್ತೊಮ್ಮೆ ಬಿಸಿ ಮಾಡಿಕೊಂಡು ತಿನ್ನುವುದು ನೂರಕ್ಕೆ ನೂರರಷ್ಟು ಸುರಕ್ಷಿತ. ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ. ನೀವು ಆ ಅನ್ನವನ್ನು ಯಾವುದೇ ಇನ್&zwnj;ಫೆಕ್ಷನ್ ಇಲ್ಲದೆ ಸುರಕ್ಷಿತವಾಗಿ ತಿನ್ನಬೇಕಾದರೆ ಕಡ್ಡಾಯವಾಗಿ 4 ಪ್ರಮುಖ ನಿಯಮಗಳನ್ನು ಪಾಲಿಸಲೇಬೇಕು.&lt;/p&gt;&lt;img&gt;&lt;p&gt;ತುಂಬಾ ಜನ ಅನ್ನ ಮಾಡಿದ ನಂತರ ಅಥವಾ ಊಟ ಮುಗಿದ ಮೇಲೆ ಉಳಿದ ಅನ್ನವನ್ನು ಗಂಟೆಗಟ್ಟಲೆ ಹೊರಗೇ ಇಟ್ಟುಬಿಡುತ್ತಾರೆ. ಇದು ತೀರಾ ತಪ್ಪು. ಅನ್ನವು ರೂಮ್ ಟೆಂಪರೇಚರ್ (ಗಡಿ ಉಷ್ಣಾಂಶ) ನಲ್ಲಿ ಹೆಚ್ಚು ಸಮಯ ಇದ್ದಾಗ ಬ್ಯಾಕ್ಟೀರಿಯಾಗಳು ವೇಗವಾಗಿ ವೃದ್ಧಿಯಾಗಿ ವಿಷಪದಾರ್ಥಗಳನ್ನು ಉತ್ಪತ್ತಿ ಮಾಡುತ್ತವೆ. ಆದ್ದರಿಂದ ಅನ್ನ ಮಾಡಿದ ನಂತರ ಅದು ಸಾಮಾನ್ಯ ಉಷ್ಣಾಂಶಕ್ಕೆ ಬರುತ್ತಿದ್ದಂತೆ.. ಅಂದರೆ ಅಡುಗೆಯಾದ ಎರಡು ಗಂಟೆಗಳ ಒಳಗಾಗಿ ಕಡ್ಡಾಯವಾಗಿ ಫ್ರಿಡ್ಜ್&zwnj;ನಲ್ಲಿ ಇಡಬೇಕು. ಎಷ್ಟು ಬೇಗ ಫ್ರಿಡ್ಜ್&zwnj;ನಲ್ಲಿ ಇಡುತ್ತೀರೋ ಅಷ್ಟು ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯಬಹುದು.&lt;/p&gt;&lt;img&gt;&lt;p&gt;ಅನ್ನವನ್ನು ಫ್ರಿಡ್ಜ್&zwnj;ನಲ್ಲಿ ಇಟ್ಟಾಯಿತಲ್ಲ ಎಂದು ನಿಶ್ಚಿಂತರಾಗಬಾರದು. ನಿಮ್ಮ ಫ್ರಿಡ್ಜ್ ಟೆಂಪರೇಚರ್ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಆಗಾಗ ಪರಿಶೀಲಿಸುತ್ತಿರಬೇಕು. ಅನ್ನವನ್ನು ಸಂಗ್ರಹಿಸಿಡುವ ಫ್ರಿಡ್ಜ್&zwnj;ನ ಉಷ್ಣಾಂಶ ಯಾವಾಗಲೂ 4&deg;C (ಡಿಗ್ರಿ ಸೆಲ್ಸಿಯಸ್) ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಇಷ್ಟು ತಂಪಾದ ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳು ವೃದ್ಧಿಯಾಗಲು ಸಾಧ್ಯವಿಲ್ಲ. ಹಾಗೆಯೇ ಅನ್ನವನ್ನು ಗಾಳಿಯಾಡದ ಒಂದು ಒಳ್ಳೆಯ ಏರ್ ಟೈಟ್ ಕಂಟೈನರ್&zwnj;ನಲ್ಲಿಟ್ಟು ಫ್ರಿಡ್ಜ್&zwnj;ನಲ್ಲಿ ಸ್ಟೋರ್ ಮಾಡುವುದು ತುಂಬಾ ಮುಖ್ಯ.&lt;/p&gt;&lt;img&gt;&lt;p&gt;ಫ್ರಿಡ್ಜ್&zwnj;ನಿಂದ ಅನ್ನವನ್ನು ಹೊರಗೆ ತೆಗೆದ ತಕ್ಷಣ, ತುಂಬಾ ಜನ ಆತುರಾತುರವಾಗಿ ಕೇವಲ ಉಗುರುಬೆಚ್ಚಗಾಗುವಷ್ಟು ಮಾತ್ರ ಬಿಸಿ ಮಾಡಿ ತಿಂದುಬಿಡುತ್ತಾರೆ. ಇದು ಹೊಟ್ಟೆಗೆ ತುಂಬಾ ಅಪಾಯಕಾರಿ. ಫ್ರಿಡ್ಜ್&zwnj;ನಿಂದ ತೆಗೆದ ಅನ್ನವನ್ನು ಮತ್ತೆ ಬಿಸಿ ಮಾಡುವಾಗ, ಅದರಿಂದ ಹಬೆ ಅಥವಾ ಹೊಗೆ ಬರುವಷ್ಟು, ಸಂಪೂರ್ಣವಾಗಿ ಒಳಗಿನವರೆಗೂ ಬಿಸಿಯಾಗಬೇಕು. ಮೈಕ್ರೋವೇವ್ ಅಥವಾ ಸ್ಟವ್ ಮೇಲೆ ಹೇಗೆ ಬಿಸಿ ಮಾಡಿದರೂ, ಅನ್ನವೆಲ್ಲಾ ಒಂದೇ ಸಮನಾಗಿ ಚೆನ್ನಾಗಿ ಬಿಸಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ತಿನ್ನಬೇಕು. ಹೀಗೆ ಸಂಪೂರ್ಣವಾಗಿ ಬಿಸಿ ಮಾಡುವುದರಿಂದ ಅದರಲ್ಲಿ ಏನಾದರೂ ಬ್ಯಾಕ್ಟೀರಿಯಾ ಇದ್ದರೂ ತಕ್ಷಣ ಸತ್ತುಹೋಗುತ್ತದೆ.&lt;/p&gt;&lt;img&gt;&lt;p&gt;ಇದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅತ್ಯಂತ ಮುಖ್ಯವಾದ ನಿಯಮ. ಫ್ರಿಡ್ಜ್&zwnj;ನಿಂದ ಅನ್ನದ ಪಾತ್ರೆಯನ್ನು ಪೂರ್ತಿಯಾಗಿ ಹೊರಗೆ ತೆಗೆದು, ಬಿಸಿ ಮಾಡಿ, ಸ್ವಲ್ಪ ತಿಂದು.. ಉಳಿದಿದ್ದನ್ನು ಮತ್ತೆ ಫ್ರಿಡ್ಜ್&zwnj;ನಲ್ಲಿ ಇಡುತ್ತಿರುತ್ತಾರೆ. ಹೀಗೆ ಪದೇ ಪದೇ ಬಿಸಿ ಮಾಡುವುದು, ಮತ್ತೆ ಫ್ರಿಡ್ಜ್&zwnj;ನಲ್ಲಿಟ್ಟು ತಣ್ಣಗಾಗಿಸುವುದರಿಂದ ಅನ್ನದಲ್ಲಿ ವಿಷಪೂರಿತ ಬ್ಯಾಕ್ಟೀರಿಯಾಗಳು ವಿಪರೀತವಾಗಿ ಹೆಚ್ಚಾಗುತ್ತವೆ. ಆದ್ದರಿಂದ ನಿಮಗೆ ತಿನ್ನಲು ಎಷ್ಟು ಅನ್ನ ಬೇಕೋ ಅಷ್ಟನ್ನು ಮಾತ್ರ ಫ್ರಿಡ್ಜ್&zwnj;ನಿಂದ ಹೊರಗೆ ತೆಗೆದು ಬಿಸಿ ಮಾಡಿಕೊಳ್ಳಿ. ಒಂದು ಬಾರಿ ಬಿಸಿ ಮಾಡಿದ ಅನ್ನವನ್ನು ಯಾವುದೇ ಕಾರಣಕ್ಕೂ ಮತ್ತೆ ಫ್ರಿಡ್ಜ್&zwnj;ನಲ್ಲಿ ಇಡಬೇಡಿ.&lt;/p&gt;&lt;img&gt;&lt;p&gt;ಒಂದು ವೇಳೆ ಮೇಲೆ ಹೇಳಿದ 4 ನಿಯಮಗಳನ್ನು ನಿರ್ಲಕ್ಷಿಸಿದರೆ.. ಹೊಟ್ಟೆಯಲ್ಲಿ ಭೀಕರವಾದ ಇನ್&zwnj;ಫೆಕ್ಷನ್, ವಾಂತಿ, ಭೇದಿ, ತೀವ್ರವಾದ ಹೊಟ್ಟೆನೋವಿನಂತಹ ಸಮಸ್ಯೆಗಳು ಖಂಡಿತವಾಗಿಯೂ ಬರುತ್ತವೆ.&lt;/p&gt;&lt;p&gt;&lt;strong&gt;Disclaimer: &lt;/strong&gt;ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ. ಇದನ್ನು ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವೆಂದು ಪರಿಗಣಿಸಬಾರದು. ಆರೋಗ್ಯದ ಸ್ಥಿತಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ನಿಮ್ಮ ವೈದ್ಯರನ್ನು ಅಥವಾ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/eating-refrigerated-rice-follow-these-4-essential-rules-to-avoid-food-poisoning-nw041vf"/>
        </item>
        <item>
            <title><![CDATA[ಕುಡಿಯೋದು ಓಕೆ, ಚಹಾ, ಕಾಫಿ ಕುಡಿಯದಿದ್ದರೆ ಏನಾಗುತ್ತದೆ? ಜಸ್ಟ್‌ 10 ದಿನ ಇವನ್ನು ಬಿಟ್ಟು ನೋಡಿ, ಹೀಗೆಲ್ಲಾ ಆಗುತ್ತದೆ!]]></title>
            <link>https://kannada.asianetnews.com/gallery/health-life/health-benefits-of-quitting-tea-or-coffee-for-just-10-days-and-know-the-health-conditions-remaining-o2ge3fg</link>
            <guid isPermaLink="true">https://kannada.asianetnews.com/gallery/health-life/health-benefits-of-quitting-tea-or-coffee-for-just-10-days-and-know-the-health-conditions-remaining-o2ge3fg</guid>
            <pubDate>Sun, 07 Jun 2026 18:12:11 +0530</pubDate>
            <description><![CDATA[&lt;p&gt;ಒಂದು ವೇಳೆ ನೀವು ಕೇವಲ ಹತ್ತು ದಿನಗಳ ಕಾಲ ಈ ಚಹಾ-ಕಾಫಿ ಅಭ್ಯಾಸಕ್ಕೆ ವಿರಾಮ ನೀಡಿದರೆ ನಿಮ್ಮ ದೇಹದಲ್ಲಿ ಯಾವೆಲ್ಲಾ ವಿಶೇ&zwj;ಷ ಬದಲಾವಣೆಗಳು ಆಗುತ್ತವೆ ಗೊತ್ತಾ? ಈ ಬಗ್ಗೆ ಆರೋಗ್ಯ ತಜ್ಞರು ನೀಡಿರುವ ಮಹತ್ವದ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kth1b17bkwn6m3v32p16s1ce,imgname-tea-coffee-1780835779819.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ವೇಳೆ ನೀವು ಕೇವಲ ಹತ್ತು ದಿನಗಳ ಕಾಲ ಈ ಚಹಾ-ಕಾಫಿ ಅಭ್ಯಾಸಕ್ಕೆ ವಿರಾಮ ನೀಡಿದರೆ ನಿಮ್ಮ ದೇಹದಲ್ಲಿ ಯಾವೆಲ್ಲಾ ವಿಶೇ&zwj;ಷ ಬದಲಾವಣೆಗಳು ಆಗುತ್ತವೆ ಗೊತ್ತಾ? ಈ ಬಗ್ಗೆ ಆರೋಗ್ಯ ತಜ್ಞರು ನೀಡಿರುವ ಮಹತ್ವದ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಚಹಾ-ಕಾಫಿ ಬಿಟ್ಟ 10 ದಿನಗಳಲ್ಲಿ ನಿಮ್ಮ ದೇಹದಲ್ಲಿ ಆಗುವ ಅದ್ಭುತ ಬದಲಾವಣೆಗಳಿವು!&lt;/p&gt;&lt;p&gt;ಭಾರತೀಯ ಮನೆಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಕೇಳಿಬರುವ ಮೊದಲ ಶಬ್ದವೆಂದರೆ ಅದು ಅಡುಗೆ ಮನೆಯಲ್ಲಿ ಚಹಾ ಪಾತ್ರೆ ಕುದಿಯುವ ಸದ್ದು. ನಮ್ಮ ಸಂಸ್ಕೃತಿಯಲ್ಲಿ ಚಹಾ ಮತ್ತು ಕಾಫಿ ಎನ್ನುವುದು ಕೇವಲ ಪಾನೀಯಗಳಲ್ಲ, ಅವು ದಿನಚರಿಯ ಅವಿಭಾಜ್ಯ ಅಂಗ. ಅದೆಷ್ಟೋ ಜನರಿಗೆ ಒಂದು ಕಪ್ ಬಿಸಿ ಬಿಸಿ ಚಹಾ ಅಥವಾ ಕಾಫಿ ಸಿಗದಿದ್ದರೆ ತಲೆ ಕೆಲಸ ಮಾಡುವುದಿಲ್ಲ, ದಿನವೇ ಆರಂಭವಾಗುವುದಿಲ್ಲ ಎನ್ನುವಷ್ಟು ಇವುಗಳಿಗೆ ದಾಸರಾಗಿದ್ದಾರೆ. ಆದರೆ, ಈ ಕೆಫೀನ್ (Caffeine) ವ್ಯಸನವು ನಿಧಾನವಾಗಿ ನಮ್ಮ ದೇಹದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದು ನಮಗೆ ಅರಿವಿರುವುದಿಲ್ಲ.&lt;/p&gt;&lt;img&gt;&lt;p&gt;ಒಂದು ವೇಳೆ ನೀವು ಕೇವಲ ಹತ್ತು ದಿನಗಳ ಕಾಲ ಈ ಚಹಾ-ಕಾಫಿ ಅಭ್ಯಾಸಕ್ಕೆ ವಿರಾಮ ನೀಡಿದರೆ ನಿಮ್ಮ ದೇಹದಲ್ಲಿ ಯಾವೆಲ್ಲಾ ಸಕಾರಾತ್ಮಕ ಬದಲಾವಣೆಗಳಾಗುತ್ತವೆ ಗೊತ್ತಾ? ಈ ಬಗ್ಗೆ ಆರೋಗ್ಯ ತಜ್ಞರು ನೀಡಿರುವ ಮಹತ್ವದ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಆರಂಭಿಕ ಸವಾಲುಗಳು (ಮೊದಲ 1-3 ದಿನಗಳು):&lt;/p&gt;&lt;p&gt;ಚಹಾ ಅಥವಾ ಕಾಫಿ ಕುಡಿಯುವುದನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದಾಗ ಮೊದಲ ಎರಡು-ಮೂರು ದಿನಗಳು ನಿಮ್ಮ ದೇಹಕ್ಕೆ ದೊಡ್ಡ ಸವಾಲಾಗಿರಬಹುದು. ಈ ಸಂದರ್ಭದಲ್ಲಿ ತೀವ್ರವಾದ ತಲೆನೋವು, ಆಲಸ್ಯ, ಸುಸ್ತು ಮತ್ತು ಕಿರಿಕಿರಿ ಉಂಟಾಗುವುದು ಸಹಜ. ಏಕೆಂದರೆ ನಿಮ್ಮ ಮೆದುಳು ಮತ್ತು ನರಮಂಡಲವು ಪ್ರತಿನಿತ್ಯ ಪಡೆಯುವ ಕೆಫೀನ್ ಕಿಕ್&zwnj;ಗೆ ಒಗ್ಗಿಕೊಂಡಿರುತ್ತದೆ. ದೇಹವು ಈ ಕೆಫೀನ್ ಅಂಶವನ್ನು ಹೊರಹಾಕುವ ಪ್ರಕ್ರಿಯೆಯಲ್ಲಿ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಹಂತವನ್ನು ನೀವು ಧೈರ್ಯವಾಗಿ ದಾಟಿದರೆ, ಮುಂದಿನ ಬದಲಾವಣೆಗಳು ನಿಮ್ಮನ್ನು ಅಚ್ಚರಿಗೊಳಿಸುತ್ತವೆ.&lt;/p&gt;&lt;img&gt;&lt;p&gt;1. ನಿದ್ರೆಯ ಗುಣಮಟ್ಟದಲ್ಲಿ ಅಮೂಲಾಗ್ರ ಸುಧಾರಣೆ:&lt;/p&gt;&lt;p&gt;ಕೆಫೀನ್ ನಮ್ಮ ಮೆದುಳಿನಲ್ಲಿರುವ 'ಅಡೆನೊಸಿನ್' ಎಂಬ ನಿದ್ರೆಯನ್ನು ಪ್ರಚೋದಿಸುವ ರಾಸಾಯನಿಕವನ್ನು ತಡೆಯುತ್ತದೆ. ಇದರಿಂದಾಗಿ ಅನೇಕರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ ಅಥವಾ ನಿದ್ರೆ ಬಂದರೂ ಪದೇ ಪದೇ ಎಚ್ಚರವಾಗುತ್ತದೆ. ನೀವು 10 ದಿನಗಳ ಕಾಲ ಕೆಫೀನ್ ತ್ಯಜಿಸಿದರೆ, ನಿಮ್ಮ ದೇಹದ ನೈಸರ್ಗಿಕ ನಿದ್ರೆಯ ಚಕ್ರ (Circadian Rhythm) ಸುಧಾರಿಸುತ್ತದೆ. ರಾತ್ರಿ ಮಲಗಿದ ಕೂಡಲೇ ಗಾಢವಾದ ನಿದ್ರೆ ಬರುತ್ತದೆ ಮತ್ತು ಬೆಳಿಗ್ಗೆ ಎದ್ದಾಗ ಯಾವುದೇ ಹ್ಯಾಂಗೋವರ್ ಅಥವಾ ಸುಸ್ತಿಲ್ಲದೆ ಹೆಚ್ಚು ಚೈತನ್ಯದಿಂದ ಇರುತ್ತೀರಿ.&lt;/p&gt;&lt;img&gt;&lt;p&gt;2. ಜೀರ್ಣಾಂಗ ವ್ಯವಸ್ಥೆಯ ಶುದ್ಧೀಕರಣ:&lt;/p&gt;&lt;p&gt;ಹೆಚ್ಚಿನ ಪ್ರಮಾಣದ ಚಹಾ ಮತ್ತು ಕಾಫಿ ಸೇವನೆಯು ಹೊಟ್ಟೆಯಲ್ಲಿ ಆಮ್ಲೀಯತೆ (Acidity) ಮತ್ತು ಎದೆಯುರಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುವುದು ಗ್ಯಾಸ್ಟ್ರಿಕ್ ಸಮಸ್ಯೆಗೆ ನೇರ ಆಹ್ವಾನ ನೀಡಿದಂತೆ. 10 ದಿನಗಳ ಕಾಲ ಇವುಗಳಿಂದ ದೂರವಿದ್ದರೆ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗುತ್ತವೆ.&lt;/p&gt;&lt;img&gt;&lt;p&gt;3. ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟದ ನಿಯಂತ್ರಣ:&lt;/p&gt;&lt;p&gt;ನಾವು ಚಹಾ ಅಥವಾ ಕಾಫಿ ಕುಡಿಯುವಾಗ ಅದರೊಂದಿಗೆ ನಮಗೆ ತಿಳಿಯದಂತೆ ಅತಿಯಾದ ಸಕ್ಕರೆಯನ್ನು ಸೇವಿಸುತ್ತೇವೆ. ಇದನ್ನು ನಿಲ್ಲಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ, ಕೆಫೀನ್ ಹೃದಯದ ಬಡಿತವನ್ನು ಮತ್ತು ರಕ್ತದೊತ್ತಡವನ್ನು ತಾತ್ಕಾಲಿಕವಾಗಿ ಹೆಚ್ಚಿಸುವ ಗುಣ ಹೊಂದಿದೆ. 10 ದಿನಗಳ ಈ 'ಡಿಟಾಕ್ಸ್' ಪ್ರಯೋಗವು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಿ, ರಕ್ತದೊತ್ತಡವನ್ನು ಸಹಜ ಸ್ಥಿತಿಗೆ ತರಲು ಸಹಕರಿಸುತ್ತದೆ.&lt;/p&gt;&lt;img&gt;&lt;p&gt;4. ಚರ್ಮದ ಕಾಂತಿ ಮತ್ತು ಹಲ್ಲಿನ ಆರೋಗ್ಯ:&lt;/p&gt;&lt;p&gt;ಕೆಫೀನ್ ಅಂಶವು ದೇಹದಲ್ಲಿನ ನೀರಿನಂಶವನ್ನು ಕಡಿಮೆ ಮಾಡುತ್ತದೆ (Dehydration). ಹತ್ತು ದಿನಗಳ ಕಾಲ ಚಹಾ-ಕಾಫಿ ಬಿಟ್ಟಾಗ ದೇಹದಲ್ಲಿ ಹೈಡ್ರೇಶನ್ ಮಟ್ಟ ಸುಧಾರಿಸಿ, ನಿಮ್ಮ ಚರ್ಮವು ನೈಸರ್ಗಿಕವಾಗಿ ಹೊಳೆಯಲು ಪ್ರಾರಂಭಿಸುತ್ತದೆ. ಜೊತೆಗೆ, ಚಹಾ-ಕಾಫಿಯಿಂದ ಹಲ್ಲುಗಳ ಮೇಲೆ ಉಂಟಾಗುವ ಹಳದಿ ಕಲೆಗಳು ಕಡಿಮೆಯಾಗಿ ಹಲ್ಲಿನ ಆರೋಗ್ಯವೂ ಸುಧಾರಿಸುತ್ತದೆ.&lt;/p&gt;&lt;img&gt;&lt;p&gt;ತಜ್ಞರ ಸಲಹೆ:&lt;/p&gt;&lt;p&gt;ಒಮ್ಮೆಯೇ ಸಂಪೂರ್ಣವಾಗಿ ನಿಲ್ಲಿಸುವುದು ಕಷ್ಟ ಎನಿಸಿದರೆ, ಹಂತಹಂತವಾಗಿ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬನ್ನಿ. ಹತ್ತು ದಿನಗಳ ನಂತರ ನಿಮ್ಮ ದೇಹದಲ್ಲಿ ಉಂಟಾಗುವ ಹಗುರವಾದ ಅನುಭವ ಮತ್ತು ನೈಸರ್ಗಿಕ ಲವಲವಿಕೆ ನಿಮ್ಮನ್ನು ಚಹಾ-ಕಾಫಿಯಿಂದ ದೂರವಿರಲು ಪ್ರೇರೇಪಿಸುತ್ತದೆ. ಆರೋಗ್ಯವೇ ಭಾಗ್ಯ ಎಂಬಂತೆ, ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಲು ಈ '10 ದಿನಗಳ ಚಾಲೆಂಜ್' ಇಂದೇ ಶುರು ಮಾಡಿ!&lt;/p&gt;]]></content:encoded>
            <category>food</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/health-life/health-benefits-of-quitting-tea-or-coffee-for-just-10-days-and-know-the-health-conditions-remaining-o2ge3fg"/>
        </item>
        <item>
            <title><![CDATA[ಡಯೆಟ್‌ ಅಂತ ಕಷ್ಟಪಡೋದು ಬೇಡ; ಈ ಬದಲಾವಣೆ ಮಾಡ್ಕೊಂಡ್ರೆ ನೀವು ಸಣ್ಣ ಆಗೋದು ಪಕ್ಕಾ!]]></title>
            <link>https://kannada.asianetnews.com/gallery/health-life/how-to-lose-weight-without-diet-and-exercise-orn9a5t</link>
            <guid isPermaLink="true">https://kannada.asianetnews.com/gallery/health-life/how-to-lose-weight-without-diet-and-exercise-orn9a5t</guid>
            <pubDate>Sat, 06 Jun 2026 16:47:23 +0530</pubDate>
            <description><![CDATA[&lt;p&gt;How to lose weight without exercise in a week: ವಾಕಿಂಗ್, ಜಿಮ್ ಅಂತ ಕಸರತ್ತು ಮಾಡದೆ ಸುಲಭವಾಗಿ ತೂಕ ಇಳಿಸಬೇಕಾ? ಹಾಗಿದ್ರೆ ನಿಮಗಾಗಿಯೇ ಕೆಲವು ಸಿಂಪಲ್ ಟಿಪ್ಸ್ ಇಲ್ಲಿವೆ. ಇವುಗಳನ್ನು ಪಾಲಿಸಿದರೆ, ನೀವು ಊಹಿಸದಷ್ಟು ಸುಲಭವಾಗಿ ನಿಮ್ಮ ತೂಕದಲ್ಲಿ ಬದಲಾವಣೆ ಕಾಣಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7zn4wrq3ns4hk469t4y5te,imgname-mix-aswagandha-powder-in-water-it-will-melt-away-the-hanging-belly-fat-1778384540568.jpg" type="image/jpeg" height="390" width="690"/>
            <content:encoded><![CDATA[&lt;p&gt;How to lose weight without exercise in a week: ವಾಕಿಂಗ್, ಜಿಮ್ ಅಂತ ಕಸರತ್ತು ಮಾಡದೆ ಸುಲಭವಾಗಿ ತೂಕ ಇಳಿಸಬೇಕಾ? ಹಾಗಿದ್ರೆ ನಿಮಗಾಗಿಯೇ ಕೆಲವು ಸಿಂಪಲ್ ಟಿಪ್ಸ್ ಇಲ್ಲಿವೆ. ಇವುಗಳನ್ನು ಪಾಲಿಸಿದರೆ, ನೀವು ಊಹಿಸದಷ್ಟು ಸುಲಭವಾಗಿ ನಿಮ್ಮ ತೂಕದಲ್ಲಿ ಬದಲಾವಣೆ ಕಾಣಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹೌದು! ನೀವು ಸಾಮಾನ್ಯವಾಗಿ ಬಲಗೈಯಲ್ಲಿ ತಿನ್ನುವವರಾಗಿದ್ದರೆ, ಎಡಗೈಯಲ್ಲಿ ತಿನ್ನಲು ಪ್ರಯತ್ನಿಸಿ. ಇದು ನಿಮ್ಮನ್ನು ನಿಧಾನವಾಗಿ ತಿನ್ನುವಂತೆ ಮಾಡುತ್ತದೆ. ಹೊಟ್ಟೆ ತುಂಬಿದೆ ಎಂಬ ಸಿಗ್ನಲ್ ಮೆದುಳಿಗೆ ತಲುಪಲು 20 ನಿಮಿಷ ಬೇಕು. ನಿಧಾನವಾಗಿ ತಿಂದರೆ, ಅತಿಯಾಗಿ ತಿನ್ನುವುದನ್ನು ತಾನಾಗಿಯೇ ತಡೆಯಬಹುದು.&lt;/p&gt;&lt;img&gt;&lt;p&gt;ಕೆಂಪು, ಹಳದಿ ಬಣ್ಣದ ಪ್ಲೇಟ್&zwnj;ಗಳು ಹಸಿವನ್ನು ಹೆಚ್ಚಿಸುತ್ತವೆ (ಅದಕ್ಕೇ ಹೋಟೆಲ್&zwnj;ಗಳಲ್ಲಿ ಈ ಬಣ್ಣ ಬಳಸುತ್ತಾರೆ!). ಆದರೆ, ನೀವು ನೀಲಿ ಬಣ್ಣದ (Blue) ಪ್ಲೇಟ್&zwnj; ಬಳಸಿ ಊಟ ಮಾಡಿ ನೋಡಿ. ವೈಜ್ಞಾನಿಕವಾಗಿ, ನೀಲಿ ಬಣ್ಣವು ಹಸಿವನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸುತ್ತದೆ. ಇದರಿಂದ ಊಟದ ಪ್ರಮಾಣವೂ ತಾನಾಗಿಯೇ ಕಡಿಮೆಯಾಗುತ್ತದೆ. ಇದೊಂದು ಸಿಂಪಲ್ ಸೈಕಾಲಜಿ ಟ್ರಿಕ್!&lt;/p&gt;&lt;img&gt;&lt;p&gt;ಊಟಕ್ಕೆ ಕೂರುವ 15 ನಿಮಿಷಗಳ ಮೊದಲು ಒಂದು ದೊಡ್ಡ ಲೋಟ ಬಿಸಿ ನೀರು ಕುಡಿಯಿರಿ. ಇದು ನಿಮ್ಮ ಹೊಟ್ಟೆಯನ್ನು ಸ್ವಲ್ಪ ಮಟ್ಟಿಗೆ ತುಂಬಿಸಿ, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಹಾಗೆಯೇ, ಪ್ರತಿ ತುತ್ತು ಊಟದ ನಂತರವೂ ಒಂದು ಸಿಪ್ ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ.&lt;/p&gt;&lt;img&gt;&lt;p&gt;ರೀಲ್ಸ್ ನೋಡುತ್ತಾ ತಿಂದರೆ, ಎಷ್ಟು ತಿನ್ನುತ್ತಿದ್ದೇವೆ ಎಂಬುದೇ ತಿಳಿಯುವುದಿಲ್ಲ! ಮೊಬೈಲ್, ಟಿವಿ ಆಫ್ ಮಾಡಿ, ಆಹಾರದ ಪರಿಮಳ ಮತ್ತು ರುಚಿಯನ್ನು ಆಸ್ವಾದಿಸುತ್ತಾ, ಚೆನ್ನಾಗಿ ಜಗಿದು ತಿನ್ನಿ (Mindful Eating). ಹೀಗೆ ತಿಂದರೆ, ಕಡಿಮೆ ಆಹಾರವೇ ನಿಮಗೆ ಹೆಚ್ಚಿನ ತೃಪ್ತಿ ನೀಡುತ್ತದೆ.&lt;/p&gt;&lt;img&gt;&lt;p&gt;ಹೆವಿ ಊಟವನ್ನು ನೇರವಾಗಿ ತಿನ್ನಬೇಡಿ. ಮೊದಲು ಒಂದು ಕಪ್ ತರಕಾರಿ ಸೂಪ್ ಅಥವಾ ಸೌತೆಕಾಯಿ ಸಲಾಡ್ ಸೇವಿಸಿ. ನಂತರ ಮುಖ್ಯ ಊಟವನ್ನು ಸೇವಿಸಿದರೆ, ಹೊಟ್ಟೆ ಬೇಗನೆ ತುಂಬುತ್ತದೆ. ಇದರಿಂದ ಅನಗತ್ಯ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್&zwnj;ಗಳು ದೇಹ ಸೇರುವುದನ್ನು ತಡೆಯಬಹುದು.&lt;/p&gt;]]></content:encoded>
            <category>food</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/health-life/how-to-lose-weight-without-diet-and-exercise-orn9a5t"/>
        </item>
        <item>
            <title><![CDATA[ಆಹಾರದಲ್ಲಿ ಸಿಕ್ಕಿತು ಕೀಟ, ಗ್ರಾಹಕನಿಗೆ 5 ಭಾನುವಾರ 10 ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶ]]></title>
            <link>https://kannada.asianetnews.com/gallery/food/insect-found-in-food-court-orders-restaurant-to-provide-10-free-biryanis-for-5-sundays-oybyy9k</link>
            <guid isPermaLink="true">https://kannada.asianetnews.com/gallery/food/insect-found-in-food-court-orders-restaurant-to-provide-10-free-biryanis-for-5-sundays-oybyy9k</guid>
            <pubDate>Mon, 08 Jun 2026 22:56:17 +0530</pubDate>
            <description><![CDATA[&lt;p&gt;ಬಿರಿಯಾನಿಯಲ್ಲಿ ಸತ್ತ ಕೀಟ ಸಿಕ್ಕಿತ್ತು. ರೊಚ್ಚಿಗೆದ್ದ ಗ್ರಾಹಕ ಕೋರ್ಟ್ ಮೆಟ್ಟಿಲೇರಿದ್ದ. ಪರಿಣಾಮ ಗ್ರಾಹಕನಿಗೆ ಐದು ಭಾನುವಾರ ಒಟ್ಟು 10 ಹೈದರಾಬಾದಿ ಚಿಕನ್ ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jrwwkzxasavqr1bdyk2e66jb,imgname-hyderabad-biryani-4--1-.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿರಿಯಾನಿಯಲ್ಲಿ ಸತ್ತ ಕೀಟ ಸಿಕ್ಕಿತ್ತು. ರೊಚ್ಚಿಗೆದ್ದ ಗ್ರಾಹಕ ಕೋರ್ಟ್ ಮೆಟ್ಟಿಲೇರಿದ್ದ. ಪರಿಣಾಮ ಗ್ರಾಹಕನಿಗೆ ಐದು ಭಾನುವಾರ ಒಟ್ಟು 10 ಹೈದರಾಬಾದಿ ಚಿಕನ್ ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಆಹಾರದಲ್ಲಿ ಹುಳ ಸಿಕ್ಕ ಘಟನೆಗಳು ಭಾರತದಲ್ಲಿ ಹೊಸದೇನಲ್ಲ. ಆದರೆ ಈ ಬಾರಿ ಕೋರ್ಟ್ ನೀಡಿದ ಆದೇಶ ಎಲ್ಲರ ಗಮನಸೆಳೆದಿದೆ. ಇಬ್ಬರು ಗೆಳೆಯರು ಹೈದರಾಬಾದಿ ಚಿಕನ್ ಬಿರಿಯಾನಿ ತಿನ್ನುವಾಗ ಸತ್ತ ಕೀಟವೊಂದು ಪತ್ತೆಯಾಗಿದೆ. ರೊಚ್ಚಿಗೆದ್ದು ಕೋರ್ಟ್ ಮೆಟ್ಟಿಲೇರಿದ್ದ ಇಬ್ಬರು ಗೆಳೆಯರ ಪರ ಕೋರ್ಟ್ ಆದೇಶ ನೀಡಿದೆ. ರೆಸ್ಟೋರೆಂಟ್ ಇದೀಗ ಇಬ್ಬರಿಗೆ ಪ್ರತಿ ಭಾನುವಾರ 2 ಹೈದರಾಬಾದಿ ಬಿರಿಯಾನಿಯಂತೆ ಐದು ಭಾನುವಾರ ಒಟ್ಟು 10 ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ರೆಸ್ಟೋರೆಂಟ್&zwnj;ಗೆ ಸೂಚಿಸಿದೆ.&lt;/p&gt;&lt;img&gt;&lt;p&gt;ಪುದುಚೇರಿ ಗ್ರಾಹಕ ಕೋರ್ಟ್ ಈ ಆದೇಶ ನೀಡಿದೆ. ಪುದುಚೇರಿಯ ಸುಂದರ ಕುಮಾರ್ ಮಣಿಕಂದನ್ ಹಾಗೂ ಆತನ ಸ್ನೇಹಿತ ಮೊಹಮ್ಮದ್ ನಿಯಾಸುದ್ದೀನ್ ಪುದುಚೇರಿಯ ಬಿರಿಯಾನಿ ಆ್ಯಂಡ್ ಕೋ ರೆಸ್ಟೋರೆಂಟ್&zwnj;ಗೆ ಬಿರಿಯಾನಿ ತಿನ್ನಲು ತೆರಳಿದ್ದಾರೆ. ಊಟದ ಪ್ಲೇಟ್&zwnj;ನಲ್ಲಿ ಸತ್ತ ನೊಣ ಪತ್ತೆಯಾಗಿತ್ತು. ಬಿರಿಯಾನಿಯಲ್ಲಿ ಸತ್ತ ನೊಣ ಪತ್ತೆಯಾಗಿ ಇಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.&lt;/p&gt;&lt;img&gt;&lt;p&gt;ಫೋಟೋ, ವಿಡಿಯೋ ರೆಕಾರ್ಡ್ ಮಾಡಿ ಹೊಟೆಲ್ ತರಾಟೆಗೆ ತೆಗೆದುಕೊಂಡಿದ್ದರು. ಇತ್ತ ಗೂಗಲ್ ರಿವ್ಯೂವ್&zwnj;ನಲ್ಲಿ ಫೋಟೋ ಪೋಸ್ಟ್ ಮಾಡಿ ಕೆಟ್ಟ ರಿವ್ಯೂವ್ ಹಾಕಿದ್ದರು. ಇತ್ತ ರೆಸ್ಟೋರೆಂಟ್ ತಪ್ಪು ಒಪ್ಪಿಕೊಂಡು ಬಹಿರಂಗ ಕ್ಷಮೆಯಾಚಿಸಿತ್ತು. ಆದರೆ ಇಷ್ಟಕ್ಕೆ ಸುಮ್ಮನಾಗದ ಇಬ್ಬರು ಗ್ರಾಹಕರ ಕೋರ್ಟ್ ಮೆಟ್ಟಿಲೇರಿದ್ದರು. ಗೂಗಲ್ ರಿವ್ಯೂವ್&zwnj;ನಲ್ಲಿ ರೆಸ್ಟೋರೆಂಟ್ ಬಹಿರಂಗ ಕ್ಷಮೆಯಾಚನೆಯನ್ನೇ ಪ್ರಮುಖ ಸಾಕ್ಷ್ಯವಾಗಿ ಮುಂದಿಟ್ಟಿದ್ದರು.&lt;/p&gt;&lt;img&gt;&lt;p&gt;ವಿಚಾರಣೆ ನಡೆಸಿದ ಕೋರ್ಟ್ ಇಬ್ಬರು ಸ್ನೇಹಿತರ ಪರವಾಗಿ ತೀರ್ಪು ನೀಡಿದೆ. ಶುಚಿ ಇಲ್ಲದ, ಆರೋಗ್ಯಕ್ಕೆ ಹಾನಿಕಾರಕ ಆಹಾರ ಹಾಗೂ ಮಾನಿಸಿಕ ಹಿಂಸೆ ನೀಡಿದ ಕಾರಣ ರೆಸ್ಟೋರೆಂಟ್&zwnj;ಗೆ 10 ಸಾವಿರ ರೂಪಾಯಿ ದಂಡ, ಕಾನೂನು ಹೋರಾಟದ ವೆಚ್ಚ 3000 ರೂಪಾಯಿ ಒಟ್ಟು 13 ಸಾವಿರ ರೂಪಾಯಿ ದಂಡ ವಿಧಿಸಿದೆ.&lt;/p&gt;&lt;img&gt;&lt;p&gt;ದುಬಾರಿ ದಂಡದ ಜೊತೆಗೆ ಇಬ್ಬರು ಸ್ನೇಹಿತರಿಗೆ ಪ್ರತಿ ಭಾನುವಾರ 2 ಹೈದರಾಬಾದ್ ಚಿಕನ್ ಬಿರಿಯಾನಿ ಉಚಿತವಾಗಿ ನೀಡಬೇಕು. ಈ ಬಿರಿಯಾನಿ ತಾಜಾ ಆಗಿರಬೇಕು. ಎಲ್ಲಾ ಸುರಕ್ಷತಾ ಮಾನದಂಡಕ್ಕೆ ಒಳಪಟ್ಟಿರಬೇಕು. ಹೀಗೆ ಒಟ್ಟು 5 ಭಾನುವಾರ ಇಬ್ಬರಿಗೆ 10 ಹೈದರಾಬಾದಿ ಚಿಕನ್ ಬಿರಿಯಾನಿ ನೀಡಬೇಕು ಎಂದು ಕೋರ್ಟ್ ಹೇಳಿದೆ.&lt;/p&gt;&lt;img&gt;&lt;p&gt;ಗ್ರಾಹಕರ ರಕ್ಷಣಾ ಕಾಯ್ದೆ 2019 ರ ಅಡಿಯಲ್ಲಿ ಕಲುಷಿತ ಹಾಗೂ ಅಶುದ್ಧ ಆಹಾರವನ್ನು ನೀಡುವುದು ಅತ್ಯಂತ ಗಂಭೀರ ಎಂದು ಪರಿಗಣಿಸಲಾಗುತ್ತದೆ. ಪುದುಚೇರಿ ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗ ಅಧ್ಯಕ್ಷ ಮುತ್ತುವೇಲ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.&lt;/p&gt;]]></content:encoded>
            <category>food</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/food/insect-found-in-food-court-orders-restaurant-to-provide-10-free-biryanis-for-5-sundays-oybyy9k"/>
        </item>
        <item>
            <title><![CDATA[52ನೇ ವಯಸ್ಸಿನಲ್ಲಿ ಯೂಟ್ಯೂಬ್ ಆರಂಭಿಸಿದ ಗೃಹಿಣಿ ಇಂದು ₹43 ಕೋಟಿ ಒಡತಿ]]></title>
            <link>https://kannada.asianetnews.com/gallery/business/from-homemaker-at-52-to-rupees-43-crore-youtube-star-an-inspiring-journey-of-nisha-madhulika-suh-v1nkmrq</link>
            <guid isPermaLink="true">https://kannada.asianetnews.com/gallery/business/from-homemaker-at-52-to-rupees-43-crore-youtube-star-an-inspiring-journey-of-nisha-madhulika-suh-v1nkmrq</guid>
            <pubDate>Tue, 09 Jun 2026 15:14:24 +0530</pubDate>
            <description><![CDATA[&lt;p&gt;ಬಹುತೇಕ ಜನರು 50 ವರ್ಷ ದಾಟಿದ ಬಳಿಕ ಹೊಸದಾಗಿ ಏನನ್ನಾದರೂ ಆರಂಭಿಸಲು ಹಿಂಜರಿಯುತ್ತಾರೆ. ವಯಸ್ಸು ಆಯ್ತು ಎಂದು ಕನಸುಗಳಿಗೆ ಪೂರ್ಣವಿರಾಮ ಹಾಕುತ್ತಾರೆ. ಆದರೆ ಒಬ್ಬ ಸಾಮಾನ್ಯ ಗೃಹಿಣಿ ಈ ಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಿದರು. ಇಂದು ಕೋಟ್ಯಂತರ ಜನರ ಹೃದಯ ಗೆದ್ದಿರುವ ಆ ಮಹಿಳೆ ನಿಶಾ ಮಧುಲಿಕಾ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktnvhxj3ydvfy8kx06wr8csk,imgname-your-paragraph-text--2--1780997486146.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಹುತೇಕ ಜನರು 50 ವರ್ಷ ದಾಟಿದ ಬಳಿಕ ಹೊಸದಾಗಿ ಏನನ್ನಾದರೂ ಆರಂಭಿಸಲು ಹಿಂಜರಿಯುತ್ತಾರೆ. ವಯಸ್ಸು ಆಯ್ತು ಎಂದು ಕನಸುಗಳಿಗೆ ಪೂರ್ಣವಿರಾಮ ಹಾಕುತ್ತಾರೆ. ಆದರೆ ಒಬ್ಬ ಸಾಮಾನ್ಯ ಗೃಹಿಣಿ ಈ ಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಿದರು. ಇಂದು ಕೋಟ್ಯಂತರ ಜನರ ಹೃದಯ ಗೆದ್ದಿರುವ ಆ ಮಹಿಳೆ ನಿಶಾ ಮಧುಲಿಕಾ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮಕ್ಕಳು ದೊಡ್ಡವರಾಗಿ ತಮ್ಮ ಜೀವನದಲ್ಲಿ ಬ್ಯುಸಿಯಾಗುತ್ತಿದ್ದಂತೆ ನಿಶಾ ಮಧುಲಿಕಾ ಅವರ ಜೀವನದಲ್ಲಿ ಒಂದು ಖಾಲಿತನ ಮೂಡಿತು. ಅನೇಕರು ಈ ಸಮಯವನ್ನು ದುಃಖದಲ್ಲಿ ಕಳೆಯುತ್ತಿದ್ದರೆ, ನಿಶಾ ಅದನ್ನು ಅವಕಾಶವನ್ನಾಗಿ ಮಾಡಿಕೊಂಡರು.&lt;/p&gt;&lt;p&gt;2007ರಲ್ಲಿ ತಮ್ಮ ಅಡುಗೆ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಸಣ್ಣ ಫುಡ್ ಬ್ಲಾಗ್ ಆರಂಭಿಸಿದರು. ಆಗ ಯೂಟ್ಯೂಬ್ ಭಾರತದಲ್ಲಿ ಅಷ್ಟಾಗಿ ಜನಪ್ರಿಯವಾಗಿರಲಿಲ್ಲ. ಆದರೆ ತಮ್ಮ ರೆಸಿಪಿಗಳನ್ನು ವಿಡಿಯೋ ರೂಪದಲ್ಲಿ ಹಂಚಿಕೊಳ್ಳಲು ಆರಂಭಿಸಿದ ಬಳಿಕ ಅವರ ಜೀವನವೇ ಬದಲಾಗಿತು.&lt;/p&gt;&lt;img&gt;&lt;p&gt;ಯಾವುದೇ ದೊಡ್ಡ ಸ್ಟುಡಿಯೋ ಇಲ್ಲ, ದುಬಾರಿ ಕ್ಯಾಮೆರಾಗಳಿಲ್ಲ, ಸೆಲೆಬ್ರಿಟಿ ಇಮೇಜ್ ಇಲ್ಲ. ಕೇವಲ ಮನೆಯ ಅಡುಗೆಮನೆ, ಸರಳ ಮಾತು ಮತ್ತು ರುಚಿಕರವಾದ ಸಸ್ಯಾಹಾರಿ ಅಡುಗೆಗಳು.&lt;/p&gt;&lt;p&gt;ಅವರ ವಿಡಿಯೋಗಳಲ್ಲಿ ಕಾಣುತ್ತಿದ್ದ ಸರಳತೆ ಮತ್ತು ಸ್ಪಷ್ಟ ವಿವರಣೆ ಲಕ್ಷಾಂತರ ಜನರನ್ನು ಸೆಳೆಯಿತು. ಅಡುಗೆ ಕಲಿಯಲು ಬಯಸುವ ಗೃಹಿಣಿಯರು, ವಿದ್ಯಾರ್ಥಿಗಳು, ಹೊಸದಾಗಿ ಮದುವೆಯಾದವರು ಎಲ್ಲರಿಗೂ ನಿಶಾ ಮಧುಲಿಕಾ ಮಾರ್ಗದರ್ಶಕರಾದರು.&lt;/p&gt;&lt;img&gt;&lt;p&gt;ಇಂದು ಅವರ ಯೂಟ್ಯೂಬ್ ಚಾನೆಲ್&zwnj;ಗೆ 14 ಮಿಲಿಯನ್&zwnj;ಗಿಂತ ಹೆಚ್ಚು ಸಬ್&zwnj;ಸ್ಕ್ರೈಬರ್&zwnj;ಗಳಿದ್ದಾರೆ. ಸಾವಿರಾರು ರೆಸಿಪಿ ವಿಡಿಯೋಗಳು, ಜನಪ್ರಿಯ ವೆಬ್&zwnj;ಸೈಟ್ ಮತ್ತು ಬೃಹತ್ ಡಿಜಿಟಲ್ ಬ್ರ್ಯಾಂಡ್ ಮೂಲಕ ಅವರು ಭಾರತೀಯ ಅಡುಗೆ ಲೋಕದ ಅಗ್ರ ಕ್ರಿಯೇಟರ್&zwnj;ಗಳಲ್ಲಿ ಒಬ್ಬರಾಗಿದ್ದಾರೆ.&lt;/p&gt;&lt;img&gt;&lt;p&gt;ವರದಿಗಳ ಪ್ರಕಾರ, ನಿಶಾ ಮಧುಲಿಕಾ ಅವರ ಒಟ್ಟು ಆಸ್ತಿ ಮೌಲ್ಯ ₹43 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಯೂಟ್ಯೂಬ್ ಆದಾಯ, ಬ್ರ್ಯಾಂಡ್ ಸಹಭಾಗಿತ್ವಗಳು, ವೆಬ್&zwnj;ಸೈಟ್ ಟ್ರಾಫಿಕ್ ಮತ್ತು ಡಿಜಿಟಲ್ ಕಂಟೆಂಟ್ ಮೂಲಕ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ.&lt;/p&gt;&lt;img&gt;&lt;p&gt;ವಯಸ್ಸು ಕನಸುಗಳಿಗೆ ಅಡ್ಡಿಯಲ್ಲ. 52ನೇ ವಯಸ್ಸಿನಲ್ಲಿ ಆರಂಭಿಸಿದ ಮಹಿಳೆ ಇಂದು ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಯಶಸ್ಸು ಸಾಧಿಸಲು ಬೇಕಾಗಿರುವುದು ವಯಸ್ಸಲ್ಲ, ನಿಮ್ಮ ಆಸಕ್ತಿ, ಪರಿಶ್ರಮ ಮತ್ತು ನಿರಂತರತೆ ಎಂಬುದನ್ನು ನಿಶಾ ಮಧುಲಿಕಾ ಅವರ ಜೀವನ ಸಾಬೀತುಪಡಿಸಿದೆ.&lt;/p&gt;]]></content:encoded>
            <category>food</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/from-homemaker-at-52-to-rupees-43-crore-youtube-star-an-inspiring-journey-of-nisha-madhulika-suh-v1nkmrq"/>
        </item>
        <item>
            <title><![CDATA[ನೇರಳೆ ಹಣ್ಣು ಕೇವಲ ಹಣ್ಣಲ್ಲ, ಆಯುರ್ವೇದದ ಅಮೃತ! ನಿಮ್ಮನೆ ಹತ್ತಿರದ ಮಾರ್ಕೆಟ್‌ಗೆ ಬಂದರೆ ತಿನ್ನದೇ ಬಿಡಬೇಡಿ!]]></title>
            <link>https://kannada.asianetnews.com/gallery/food/jamun-fruits-amazing-health-benefits-from-diabetes-control-to-digestive-health-ayurveda-tips-sat-v201fgi</link>
            <guid isPermaLink="true">https://kannada.asianetnews.com/gallery/food/jamun-fruits-amazing-health-benefits-from-diabetes-control-to-digestive-health-ayurveda-tips-sat-v201fgi</guid>
            <pubDate>Fri, 05 Jun 2026 19:43:45 +0530</pubDate>
            <description><![CDATA[&lt;p&gt;ನೇರಳೆ ಹಣ್ಣು, ಅದರ ಬೀಜ, ಎಲೆ ಮತ್ತು ತೊಗಟೆಯು ಆಯುರ್ವೇದದಲ್ಲಿ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಪ್ರಾಚೀನ ಭಾರತವನ್ನು 'ಜಂಬೂದ್ವೀಪ' ಎಂದು ಕರೆಯಲು ಈ ಹಣ್ಣೇ ಕಾರಣವಾಗಿತ್ತು. ಇದನ್ನು ಆಯುರ್ವೇದದ ಅಮೃತ ಎಂದು ಏಕೆ ಕರೆಯುತ್ತಾರೆ? ನೀವೇ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktc1q3zg334ebh75rdgvhd9y,imgname-jamun-fruits-amazing-health-benefits--2--1780668403696.jpg" type="image/jpeg" height="390" width="690"/>
            <content:encoded><![CDATA[&lt;p&gt;ನೇರಳೆ ಹಣ್ಣು, ಅದರ ಬೀಜ, ಎಲೆ ಮತ್ತು ತೊಗಟೆಯು ಆಯುರ್ವೇದದಲ್ಲಿ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಪ್ರಾಚೀನ ಭಾರತವನ್ನು 'ಜಂಬೂದ್ವೀಪ' ಎಂದು ಕರೆಯಲು ಈ ಹಣ್ಣೇ ಕಾರಣವಾಗಿತ್ತು. ಇದನ್ನು ಆಯುರ್ವೇದದ ಅಮೃತ ಎಂದು ಏಕೆ ಕರೆಯುತ್ತಾರೆ? ನೀವೇ ನೋಡಿ.&lt;/p&gt;&lt;img&gt;&lt;p&gt;ನೇರಳೆ ಹಣ್ಣನ್ನು ಸಂಸ್ಕೃತದಲ್ಲಿ 'ಜಂಬೂ' ಎಂದು ಕರೆಯಲಾಗುತ್ತದೆ. ಇದರ ಹಣ್ಣು ಮಾತ್ರವಲ್ಲದೆ ಬೀಜ, ಎಲೆ, ಮತ್ತು ಮರದ ತೊಗಟೆಯೂ ಔಷಧೀಯ ಗುಣಗಳಿಂದ ಕೂಡಿದೆ.&lt;/p&gt;&lt;p&gt;ಇದು ರಕ್ತ ಶುದ್ಧೀಕರಣ ಮತ್ತು ಮಧುಮೇಹ ನಿಯಂತ್ರಣಕ್ಕೆ ಜಗತ್ತಿನಲ್ಲೇ ಪ್ರಸಿದ್ಧವಾದ ನೈಸರ್ಗಿಕ ಹಣ್ಣು.&lt;/p&gt;&lt;img&gt;&lt;p&gt;ಮಧುಮೇಹ (Diabetes) ನಿಯಂತ್ರಣದಲ್ಲಿ ನೇರಳೆ ಬೀಜದ ಪುಡಿ ಪ್ರಮುಖ ಪಾತ್ರ ವಹಿಸುತ್ತದೆ.&lt;/p&gt;&lt;p&gt;ಒಣಗಿಸಿದ ನೇರಳೆ ಬೀಜದ ಪುಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಎಂದು ಆಯುರ್ವೇದ ಹೇಳುತ್ತದೆ.&lt;/p&gt;&lt;img&gt;&lt;p&gt;ನೇರಳೆಯಲ್ಲಿ ಹೇರಳವಾದ ಕಬ್ಬಿಣಾಂಶ (Iron) ಮತ್ತು ವಿಟಮಿನ್ ಸಿ ಇರುವುದರಿಂದ ರಕ್ತಹೀನತೆಯನ್ನು (Anemia) ಹೋಗಲಾಡಿಸುತ್ತದೆ.&lt;/p&gt;&lt;p&gt;ಊಟದ ನಂತರ ಸ್ವಲ್ಪ ನೇರಳೆ ಹಣ್ಣು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಅಜೀರ್ಣ, ಹೊಟ್ಟೆನೋವಿನಂತಹ ಸಮಸ್ಯೆಗಳು ದೂರವಾಗುತ್ತವೆ.&lt;/p&gt;&lt;img&gt;&lt;p&gt;ಇದರ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ. ತೊಗಟೆಯ ಪುಡಿಯಿಂದ ಹಲ್ಲುಜ್ಜಿದರೆ ಒಸಡುಗಳು ಗಟ್ಟಿಯಾಗುತ್ತವೆ.&lt;/p&gt;&lt;p&gt;ನೇರಳೆ ತೊಗಟೆಯ ಕಷಾಯದಿಂದ ಮುಖ ತೊಳೆಯುವುದರಿಂದ ಮೊಡವೆಗಳು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.&lt;/p&gt;&lt;img&gt;&lt;p&gt;ನೇರಳೆ ಹಣ್ಣನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ, ಇದು ಅಸಿಡಿಟಿಗೆ ಕಾರಣವಾಗಬಹುದು.&lt;/p&gt;&lt;p&gt;ನೇರಳೆ ಹಣ್ಣು ತಿಂದ ತಕ್ಷಣ ಹಾಲು ಅಥವಾ ಮೊಸರನ್ನು ಸೇವಿಸಬಾರದು. ದಿನಕ್ಕೆ 100-150 ಗ್ರಾಂ ಮಿತಿಯಲ್ಲಿ ತಿನ್ನುವುದು ಉತ್ತಮ.&lt;/p&gt;&lt;img&gt;&lt;p&gt;ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ನೇರಳೆ ಮರಗಳು ಹೇರಳವಾಗಿದ್ದರಿಂದ ಭಾರತಕ್ಕೆ 'ಜಂಬೂದ್ವೀಪ' ಎಂಬ ಹೆಸರು ಬಂದಿತ್ತು.&lt;/p&gt;&lt;p&gt;ಉಪ್ಪು (ಸೈಂಧವ ಲವಣ) ಸೇರಿಸಿ ನೇರಳೆ ಹಣ್ಣು ತಿನ್ನುವ ಪದ್ಧತಿಯು ರುಚಿಯ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುವ ಪುರಾತನ ಸಂಪ್ರದಾಯವಾಗಿದೆ.&lt;/p&gt;&lt;p&gt;&lt;strong&gt;ಲೇಖನ ಕೃಪೆ: ಡಾ. ರವಿಕಿರಣ ಪಟವರ್ಧನ, ಶಿರಸಿ.&lt;/strong&gt;&lt;/p&gt;]]></content:encoded>
            <category>food</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/food/jamun-fruits-amazing-health-benefits-from-diabetes-control-to-digestive-health-ayurveda-tips-sat-v201fgi"/>
        </item>
        <item>
            <title><![CDATA[ಮಳೆಗಾಲದ ಚಳಿಗೆ ಪರಿಪೂರ್ಣವಾದ ಮಸಾಲೆ ಟೀ ಮಾಡೋದು ಹೇಗೆ?]]></title>
            <link>https://kannada.asianetnews.com/webstories/food/how-to-make-strong-masala-tea-easily-for-the-rainy-season-mrq-xkamiqp</link>
            <guid isPermaLink="true">https://kannada.asianetnews.com/webstories/food/how-to-make-strong-masala-tea-easily-for-the-rainy-season-mrq-xkamiqp</guid>
            <pubDate>Sat, 06 Jun 2026 10:36:54 +0530</pubDate>
            <description><![CDATA[ಮಳೆಗಾಲದಲ್ಲಿ ದಿನವನ್ನು ಉಲ್ಲಾಸಕರವಾಗಿಸಲು ಪರಿಮಳಯುಕ್ತ ಮತ್ತು ರುಚಿಕರವಾದ ಮಸಾಲೆ ಟೀ ಉತ್ತಮ ಆಯ್ಕೆಯಾಗಿದೆ. ಶುಂಠಿ, ಏಲಕ್ಕಿ, ಲವಂಗದಂತಹ ಮಸಾಲೆಗಳನ್ನು ಬಳಸಿ ಮನೆಯಲ್ಲಿಯೇ ಸುಲಭವಾಗಿ ಸ್ಟ್ರಾಂಗ್ ಟೀ ತಯಾರಿಸುವ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr62r96wbc19fcn5nztg9et3,imgname-kajal--25--1778320680156.jpg" type="image/jpeg" height="390" width="690"/>
            <category>food</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/food/how-to-make-strong-masala-tea-easily-for-the-rainy-season-mrq-xkamiqp"/>
        </item>
        <item>
            <title><![CDATA[ಟೀ ಮಾಡುವಾಗ ಕೊನೆಯಲ್ಲಿ ಈ ಎಲೆ ಸೇರಿಸಿ.. ಖಡಕ್ ಚಾಯ್ ರೆಡಿ]]></title>
            <link>https://kannada.asianetnews.com/gallery/food/add-just-this-one-secret-green-leaf-to-your-tea-and-experience-the-magic-xvrrco2</link>
            <guid isPermaLink="true">https://kannada.asianetnews.com/gallery/food/add-just-this-one-secret-green-leaf-to-your-tea-and-experience-the-magic-xvrrco2</guid>
            <pubDate>Sun, 07 Jun 2026 17:03:41 +0530</pubDate>
            <description><![CDATA[&lt;p&gt;How to make perfect masala chai: ದಿನಾಲೂ ಒಂದೇ ತರಹದ ಚಹಾ ಕುಡಿದು ಬೇಜಾರಾಗಿದ್ಯಾ? ಹಾಗಾದ್ರೆ ಟೀ ಅಂಗಡಿ ಅಥವಾ ಡಾಬಾಗಳಲ್ಲಿ ಸಿಗೋ ತರಹದ್ದೇ ಸೂಪರ್ ಖಡಕ್ ಚಹಾವನ್ನು ಮನೆಯಲ್ಲೇ ಮಾಡೋಕೆ ಇಲ್ಲಿದೆ ಒಂದು ಸಿಂಪಲ್ ಸೀಕ್ರೆಟ್ ಟ್ರಿಕ್!&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktgx38x7ksbn23y3r9jhmcy7,imgname-thumbnail---2026-06-07t162034.005-1780831331238.jpg" type="image/jpeg" height="390" width="690"/>
            <content:encoded><![CDATA[&lt;p&gt;How to make perfect masala chai: ದಿನಾಲೂ ಒಂದೇ ತರಹದ ಚಹಾ ಕುಡಿದು ಬೇಜಾರಾಗಿದ್ಯಾ? ಹಾಗಾದ್ರೆ ಟೀ ಅಂಗಡಿ ಅಥವಾ ಡಾಬಾಗಳಲ್ಲಿ ಸಿಗೋ ತರಹದ್ದೇ ಸೂಪರ್ ಖಡಕ್ ಚಹಾವನ್ನು ಮನೆಯಲ್ಲೇ ಮಾಡೋಕೆ ಇಲ್ಲಿದೆ ಒಂದು ಸಿಂಪಲ್ ಸೀಕ್ರೆಟ್ ಟ್ರಿಕ್!&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕೈಗಾಡಿ, ಟೀ ಅಂಗಡಿ ಮತ್ತು ಡಾಬಾಗಳಲ್ಲಿ ಸಿಗುವ ಚಹಾ ಸೂಪರ್ ಖಡಕ್ ಆಗಿರುತ್ತದೆ. ನೀವು ಈಗ ಅದನ್ನೇ ಬಯಸಿದರೆ ಅಂತಹದ್ದೇ ಚಹಾವನ್ನು ಮನೆಯಲ್ಲಿಯೂ ತಯಾರಿಸಬಹುದು. ಹಾಗಾದರೆ ಬನ್ನಿ, ಇವತ್ತು ನಿಮಗೆ ಪರ್ಫೆಕ್ಟ್ ಚಹಾ ಮಾಡುವ ರೆಸಿಪಿಯನ್ನು ತಿಳಿಸಿಕೊಡುತ್ತೇವೆ. ಈ ರೆಸಿಪಿಯ ವಿಶೇಷತೆ ಏನೆಂದರೆ, ಚಹಾ ತಯಾರಾಗುವ ತೀರ ಕೊನೆಯಲ್ಲಿ ಒಂದು ಹಸಿರು ಎಲೆಯನ್ನು ಹಾಕಬೇಕು. ಇದು ಚಹಾದ ರುಚಿ ಮತ್ತು ಸುವಾಸನೆ ಎರಡನ್ನೂ ದುಪ್ಪಟ್ಟು ಮಾಡುತ್ತದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಚಹಾ ಕೇವಲ ಕುಡಿಯುವ ಪಾನೀಯವಲ್ಲ, ಅದೊಂದು ಎಮೋಷನ್. ಬೆಳಗ್ಗೆ ಇರಲಿ ಅಥವಾ ಸಂಜೆ ಇರಲಿ, ಯಾರಾದರೂ ಅತಿಥಿಗಳು ಬರಲಿ ಅಥವಾ ಗಂಭೀರವಾದ ಚರ್ಚೆ ನಡೆಯುತ್ತಿರಲಿ ಒಂದು ಕಪ್ ಖಡಕ್ ಚಹಾ ಪ್ರತಿಯೊಂದು ಸಂದರ್ಭವನ್ನು ವಿಶೇಷವಾಗಿಸುತ್ತದೆ. ಕೆಲವರು ಲೈಟ್ ಆಗಿ ಚಹಾ ಕುಡಿಯಲು ಇಷ್ಟಪಟ್ಟರೆ, ಇನ್ನು ಕೆಲವರಿಗೆ ಖಡಕ್ ಮಸಾಲಾ ಚಹಾ ಬೇಕಿರುತ್ತದೆ. ಮತ್ಯಾಕೆ ತಡ ಖಡಕ್ ಚಹಾ ಮಾಡುವುದು ಹೇಗೆಂದು ನೋಡೋಣ..&lt;/p&gt;&lt;img&gt;&lt;p&gt;ಚಹಾ ಮಾಡುವ ಪ್ರಕ್ರಿಯೆ ಹಾಲಿನಿಂದ ಆರಂಭವಾಗುತ್ತದೆ. ಇದಕ್ಕಾಗಿ ಮೊದಲಿಗೆ ಚಹಾ ಪಾತ್ರೆಯಲ್ಲಿ 2 ಕಪ್ ಹಾಲು ತಗೆದುಕೊಂಡು ಅದನ್ನು ಸಣ್ಣ ಅಥವಾ ಮಧ್ಯಮ ಉರಿಯಲ್ಲಿ ಚೆನ್ನಾಗಿ ಕಾಯಲು ಇಡಿ. ಹಾಲನ್ನು ಮೊದಲೇ ಕಾಯಿಸುವುದರಿಂದ ಚಹಾದ ಟೆಕ್ಸ್ಚರ್ (ರಚನೆ) ತುಂಬಾ ಕೆನೆಯುಕ್ತ ಮತ್ತು ಅದ್ಭುತವಾಗಿ ಬರುತ್ತದೆ.&lt;/p&gt;&lt;img&gt;&lt;p&gt;ಹಾಲಿನಲ್ಲಿ ಕುದಿ ಬರಲು ಆರಂಭಿಸಿದಾಗ, ಅದಕ್ಕೆ ಸುಮಾರು 2 ಸಣ್ಣ ಚಮಚ ಚಹಾಪುಡಿಯನ್ನು ಹಾಕಿ. ಇದನ್ನು ಸ್ವಲ್ಪ ಸಮಯದವರೆಗೆ ಕುದಿಯಲು ಬಿಡಿ, ಇದರಿಂದ ಚಹಾಪುಡಿಯ ಕಡು ಬಣ್ಣ ಹಾಲಿನಲ್ಲಿ ಸಂಪೂರ್ಣವಾಗಿ ಬೆರೆಯುತ್ತದೆ.&lt;/p&gt;&lt;img&gt;&lt;p&gt;ಈಗ ಸುಮಾರು 1 ಇಂಚಿನಷ್ಟು ಶುಂಠಿ ತುಂಡನ್ನು ಜಜ್ಜಿ ಅಥವಾ ತುರಿದು ಹಾಕಿ ಮತ್ತು ಶುಂಠಿಯನ್ನು ಹಾಕಿ 2-3 ಕುದಿ ಬರುವವರೆಗೆ ಬೇಯಿಸಿ.&lt;/p&gt;&lt;img&gt;&lt;p&gt;ಶುಂಠಿ ಬೆಂದ ನಂತರವೇ ಚಹಾಕ್ಕೆ ನಿಮ್ಮ ರುಚಿಗೆ ತಕ್ಕಂತೆ ಸಕ್ಕರೆ ಹಾಕಿ. ನೆನಪಿರಲಿ, ಆರಂಭದಲ್ಲೇ ಸಕ್ಕರೆ ಹಾಕುವುದರಿಂದ ಚಹಾ ತೆಳುವಾಗಬಹುದು. ಆದ್ದರಿಂದ ಸಕ್ಕರೆಯನ್ನು ಯಾವಾಗಲೂ ಶುಂಠಿ ಬೆಂದ ನಂತರವೇ ಹಾಕಲಾಗುತ್ತದೆ.&lt;/p&gt;&lt;img&gt;&lt;p&gt;ಈಗ ಈ ರೆಸಿಪಿಯ ಅತ್ಯಂತ ಪ್ರಮುಖ ಮತ್ತು ಕೊನೆಯ ಹಂತ ಬರುತ್ತದೆ. ನಿಮ್ಮ ಚಹಾ ಸಂಪೂರ್ಣವಾಗಿ ಬೆಂದು, ಸೋಸಲು ಸಿದ್ಧವಾಗಿರುವಾಗ, ಗ್ಯಾಸ್ ಆಫ್ ಮಾಡುವ ತಕ್ಷಣ ಮುನ್ನ ಅದಕ್ಕೆ 6 ರಿಂದ 7 ತಾಜಾ ತುಳಸಿ ಎಲೆಗಳನ್ನು ಹರಿದು ಹಾಕಿ. ತುಳಸಿ ಎಲೆಗಳನ್ನು ಹಾಕಿದ ನಂತರ ಚಹಾವನ್ನು ಕೇವಲ 2 ರಿಂದ 3 ಬಾರಿ ಮಾತ್ರ ಕುದಿಸಿ. ಕುದ್ದ ನಂತರ ಗ್ಯಾಸ್ ಆಫ್ ಮಾಡಿ ಮತ್ತು ಚಹಾವನ್ನು ಕಪ್&zwnj;ಗೆ ಸೋಸಿಕೊಳ್ಳಿ. ಈ ಚಹಾದ ರುಚಿ ಸಾಮಾನ್ಯ ಚಹಾಕ್ಕಿಂತ 4 ಪಟ್ಟು ಹೆಚ್ಚು ಟೇಸ್ಟಿ ಆಗಿರುತ್ತದೆ.&lt;/p&gt;]]></content:encoded>
            <category>food</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/add-just-this-one-secret-green-leaf-to-your-tea-and-experience-the-magic-xvrrco2"/>
        </item>
    </channel>
</rss>
