<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 08 Sep 2026 09:00:15 +0530</lastBuildDate>
        <atom:link href="https://kannada.asianetnews.com/rss/entertainment" rel="self" type="application/rss+xml"/>
        <item>
            <title><![CDATA[ಅಂದಕ್ಕೇ ಅಸೂಯೆ ಹುಟ್ಟಿಸೋ ಲುಕ್.. ಅಚ್ಚು ಗೋಪಿಕೆಯಂತೆ ಕಂಗೊಳಿಸಿದ ನಟಿ ಶ್ರೀಲೀಲಾ!]]></title>
            <link>https://kannada.asianetnews.com/gallery/entertainment/sandalwood-actress-sreeleela-looks-like-a-gopika-in-her-stunning-radha-avatar-goes-viral-gvd-k2ggi3d</link>
            <guid isPermaLink="true">https://kannada.asianetnews.com/gallery/entertainment/sandalwood-actress-sreeleela-looks-like-a-gopika-in-her-stunning-radha-avatar-goes-viral-gvd-k2ggi3d</guid>
            <pubDate>Tue, 08 Sep 2026 09:00:11 +0530</pubDate>
            <description><![CDATA[&lt;p&gt;ಚಿತ್ರರಂಗದ ಕ್ಯೂಟ್ ಬ್ಯೂಟಿ, ಗ್ಲಾಮರಸ್ ಬೆಡಗಿ ನಟಿ ಶ್ರೀಲೀಲಾ ರಾಧೆಯ ರೂಪದಲ್ಲಿ ಅಚ್ಚು ಗೋಪಿಕೆಯಂತೆ ಕಂಗೊಳಿಸಿದ್ದು, ಅವರ ಹೊಸ ಲುಕ್ ಹಾಗೂ ಗ್ಲಾಮರಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ybyjrnd011p7qsh4zqgdfz,imgname-sre--1--1788799306517.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗದ ಕ್ಯೂಟ್ ಬ್ಯೂಟಿ, ಗ್ಲಾಮರಸ್ ಬೆಡಗಿ ನಟಿ ಶ್ರೀಲೀಲಾ ರಾಧೆಯ ರೂಪದಲ್ಲಿ ಅಚ್ಚು ಗೋಪಿಕೆಯಂತೆ ಕಂಗೊಳಿಸಿದ್ದು, ಅವರ ಹೊಸ ಲುಕ್ ಹಾಗೂ ಗ್ಲಾಮರಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.&lt;/p&gt;&lt;img&gt;&lt;p&gt;ಚಿತ್ರರಂಗದ ಕ್ಯೂಟ್ ಬ್ಯೂಟಿ, ಗ್ಲಾಮರಸ್ ಬೆಡಗಿ ನಟಿ ಶ್ರೀಲೀಲಾ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಸೌಂದರ್ಯದ ಜೊತೆಗೆ ಅದ್ಭುತ ಅಭಿನಯ ಹಾಗೂ ಸಖತ್ ಡ್ಯಾನ್ಸ್&zwnj;ನಿಂದಲೂ ಗಮನ ಸೆಳೆದಿರುವ ಈ ಚೆಲುವೆ, ತಮ್ಮ ಸ್ಟೈಲ್ ಮತ್ತು ಗ್ಲಾಮರ್&zwnj;ನಿಂದಲೇ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. &lsquo;ಕಿಸ್&rsquo; ಸಿನಿಮಾದ ಮೂಲಕ ಸ್ಯಾಂಡಲ್&zwnj;ವುಡ್&zwnj;ಗೆ ಎಂಟ್ರಿ ಕೊಟ್ಟ ಶ್ರೀಲೀಲಾ, ಮೊದಲ ಚಿತ್ರದಲ್ಲೇ ಕನ್ನಡಿಗರ ಪ್ರೇಕ್ಷಕರ ಮನಗೆದ್ದಿದ್ದರು.&lt;/p&gt;&lt;img&gt;&lt;p&gt;ಈ ಸಿನಿಮಾ ಮೂಲಕವೇ ತಮ್ಮ ಕ್ಯೂಟ್ ಲುಕ್ ಮತ್ತು ನಟನೆ ಮೂಲಕ ಎಲ್ಲರ ಗಮನ ಸೆಳೆದ ಈ ನಟಿಗೆ ಬಳಿಕ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು. ಗ್ಲಾಮರ್ ಮಾತ್ರವಲ್ಲದೆ ತಮ್ಮ ಅದ್ಭುತ ಡ್ಯಾನ್ಸ್&zwnj;ನಿಂದಲೂ ಶ್ರೀಲೀಲಾ ಸಖತ್ ಫೇಮಸ್ ಆದರು. ಒಂದೇ ಸಿನಿಮಾದ ಮೂಲಕ ಸ್ಟಾರ್ ಹೀರೋಯಿನ್&zwnj;ಗಳ ಸಾಲಿನಲ್ಲಿ ಗುರುತಿಸಿಕೊಂಡ ಈ ಬೆಡಗಿ, ಬಳಿಕ ಮಾಸ್ ಮಹಾರಾಜ ರವಿತೇಜ ಅವರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.&lt;/p&gt;&lt;img&gt;&lt;p&gt;ರವಿತೇಜ ಜೊತೆಗಿನ &lsquo;ಧಮಾಕಾ&rsquo; ಸಿನಿಮಾ ಶ್ರೀಲೀಲಾ ವೃತ್ತಿಜೀವನಕ್ಕೆ ಮತ್ತಷ್ಟು ಬೂಸ್ಟ್ ನೀಡಿತು. ಈ ಚಿತ್ರದಲ್ಲಿ ನಟನೆ ಜೊತೆಗೆ ತಮ್ಮ ಮಾಸ್ ಡ್ಯಾನ್ಸ್&zwnj;ನಿಂದ ಯುವಕರ ಗಮನ ಸೆಳೆದ ಅವರು, ಒಂದೇ ಸಿನಿಮಾದಲ್ಲಿ ಯೂತ್ ಫೇವರಿಟ್ ಹೀರೋಯಿನ್ ಆಗಿ ಗುರುತಿಸಿಕೊಂಡರು. &lsquo;ಧಮಾಕಾ&rsquo; ಕೂಡ ಸೂಪರ್&zwnj;ಹಿಟ್ ಆಗುತ್ತಿದ್ದಂತೆ ಶ್ರೀಲೀಲಾ ಕೈತುಂಬಾ ಸಿನಿಮಾಗಳನ್ನು ಪಡೆದುಕೊಂಡರು. ಸಾಲು ಸಾಲಾಗಿ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ಟಾಲಿವುಡ್&zwnj;ನ ಬ್ಯುಸಿ ನಟಿಯರ ಪಟ್ಟಿಯಲ್ಲೂ ಸ್ಥಾನ ಪಡೆದರು.&lt;/p&gt;&lt;img&gt;&lt;p&gt;ಮಹೇಶ್ ಬಾಬು ಜೊತೆ &lsquo;ಗುಂಟೂರು ಖಾರಂ&rsquo;, ನಿತಿನ್ ಜೊತೆ &lsquo;ಎಕ್ಸ್&zwnj;ಟ್ರಾ ಆರ್ಡಿನರಿ ಮ್ಯಾನ್&rsquo;, &lsquo;ರಾಬಿನ್&zwnj;ಹುಡ್&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಇದರ ಜೊತೆಗೆ ಪವರ್&zwnj;ಸ್ಟಾರ್ ಪವನ್ ಕಲ್ಯಾಣ್ ಅಭಿನಯದ &lsquo;ಉಸ್ತಾದ್ ಭಗತ್ ಸಿಂಗ್&rsquo; ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲೂ ಶ್ರೀಲೀಲಾ ತಮ್ಮದೇ ಛಾಪು ಮೂಡಿಸಿದ್ದಾರೆ.&lt;/p&gt;&lt;img&gt;&lt;p&gt;&lsquo;ಕಿಸ್&rsquo; ಹಾಗೂ &lsquo;ಭರಾಟೆ&rsquo; ಸಿನಿಮಾಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೂ ಪರಿಚಿತರಾದ ಈ ಚೆಲುವೆ, ಇದೀಗ ತಮಿಳಿನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ತಮಿಳಿನಲ್ಲಿ &lsquo;ಪರಾಶಕ್ತಿ&rsquo; ಸಿನಿಮಾದಲ್ಲಿ ನಟಿಸಿರುವ ಶ್ರೀಲೀಲಾ, ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ತಮ್ಮ ಜನಪ್ರಿಯತೆಯನ್ನು ವಿಸ್ತರಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಶ್ರೀಲೀಲಾ ಅವರ ಹೊಸ ಲುಕ್&zwnj;ಗಳು ಹಾಗೂ ಗ್ಲಾಮರಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಅವರ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಧೆಯ ರೂಪದಲ್ಲಿ ಅಚ್ಚು ಗೋಪಿಕೆಯಂತೆ ಕಾಣುತ್ತಿರುವ ಈ ಚೆಲುವೆಯ ಲುಕ್&zwnj;ಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/sandalwood-actress-sreeleela-looks-like-a-gopika-in-her-stunning-radha-avatar-goes-viral-gvd-k2ggi3d"/>
        </item>
        <item>
            <title><![CDATA[ಸದ್ಗುರುಗಳ ಸನ್ನಿಧಿಯಲ್ಲಿ ನಟಿ ಸಮಂತಾ; ಮದ್ವೆಯಾದ ಜಾಗದಲ್ಲೇ ಬೇಬಿ ಬಂಪ್ ಸಂಭ್ರಮ]]></title>
            <link>https://kannada.asianetnews.com/gallery/entertainment/samanthas-spiritual-pregnancy-tour-actress-revisits-isha-foundation-to-reflect-on-life-and-motherhood-d0glk59</link>
            <guid isPermaLink="true">https://kannada.asianetnews.com/gallery/entertainment/samanthas-spiritual-pregnancy-tour-actress-revisits-isha-foundation-to-reflect-on-life-and-motherhood-d0glk59</guid>
            <pubDate>Mon, 07 Sep 2026 22:57:27 +0530</pubDate>
            <description><![CDATA[&lt;p&gt;ನಟಿ ಸಮಂತಾ ರುತ್ ಪ್ರಭು ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಆಧ್ಯಾತ್ಮಿಕ ಪಯಣವನ್ನು ಮುಂದುವರಿಸಿದ್ದಾರೆ. ಮದುವೆಯಾದ ಪವಿತ್ರ ಜಾಗದಲ್ಲೇ ಕಾಲ ಕಳೆಯುತ್ತಿರುವ ಸಮಂತಾ, ಇದು ತಮ್ಮ ಜೀವನದ ಹೊಸ ಸಾಧ್ಯತೆಗಳಿಗೆ ದಾರಿಯಾಗಿದೆ ಎಂದು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ye8h0t1rdcr5g8aca63a23,imgname-samantha-ruth-prabhu--5--1788801729562.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಸಮಂತಾ ರುತ್ ಪ್ರಭು ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಆಧ್ಯಾತ್ಮಿಕ ಪಯಣವನ್ನು ಮುಂದುವರಿಸಿದ್ದಾರೆ. ಮದುವೆಯಾದ ಪವಿತ್ರ ಜಾಗದಲ್ಲೇ ಕಾಲ ಕಳೆಯುತ್ತಿರುವ ಸಮಂತಾ, ಇದು ತಮ್ಮ ಜೀವನದ ಹೊಸ ಸಾಧ್ಯತೆಗಳಿಗೆ ದಾರಿಯಾಗಿದೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸ್ಟಾರ್ ನಟಿ ಸಮಂತಾ ರುತ್ ಪ್ರಭು ಸದ್ಯ ತಮ್ಮ ಜೀವನದ ಅತ್ಯಂತ ಸುಂದರ ಮತ್ತು ಮಹತ್ವದ ಘಟ್ಟದಲ್ಲಿದ್ದಾರೆ. ಒಂದೆಡೆ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಮನಸ್ಸಿನ ಶಾಂತಿಗಾಗಿ ಆಧ್ಯಾತ್ಮದ ಹಾದಿ ಹಿಡಿದಿದ್ದಾರೆ. ಇತ್ತೀಚೆಗೆ ಸಮಂತಾ ಕೊಯಮತ್ತೂರಿನ ಸದ್ಗುರುಗಳ ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದು ಈ ಭೇಟಿಯನ್ನು ತಮ್ಮ 'ಸ್ಪಿರಿಚುವಲ್ ಪ್ರೆಗ್ನೆನ್ಸಿ ಟೂರ್' (Spiritual Pregnancy Tour) ಎಂಬಂತೆ ಆನಂದಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೂ ಸಮಂತಾ ಅವರಿಗೂ ಒಂದು ಅವಿನಾಭಾವ ಸಂಬಂಧವಿದೆ. 2025ರ ಡಿಸೆಂಬರ್&zwnj;ನಲ್ಲಿ ಸಮಂತಾ ಮತ್ತು ನಿರ್ದೇಶಕ ರಾಜ್ ನಿಡಿಮೋರು ಇದೇ ಕೇಂದ್ರದಲ್ಲಿ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ತಾಯಿಯಾಗುತ್ತಿರುವ ಹೊಸ್ತಿಲಲ್ಲಿರುವ ಸಮಂತಾ, ತಾವು ಮದುವೆಯಾದ ಅದೇ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿರುವುದು ವಿಶೇಷ.&lt;/p&gt;&lt;img&gt;&lt;p&gt;ತಮ್ಮ ಭೇಟಿಯ ಫೋಟೋಗಳನ್ನು ಹಂಚಿಕೊಂಡಿರುವ ಸಮಂತಾ, ಕಳೆದ ಐದು ವರ್ಷಗಳಲ್ಲಿ ತಮ್ಮಲ್ಲಾದ ಬದಲಾವಣೆಯ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. ನನ್ನ ಬಗ್ಗೆ ನನಗೆ ಎಲ್ಲವೂ ತಿಳಿದಿದೆ, ಇಷ್ಟೇ ನನ್ನ ಸಾಮರ್ಥ್ಯ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಕಳೆದ ಐದು ವರ್ಷಗಳು ನನಗೆ ಬೇರೆಯದ್ದೇ ಪಾಠ ಕಲಿಸಿವೆ. ಪ್ರತಿ ಬಾರಿ ನಾನು ಇಲ್ಲಿಗೆ ಬಂದಾಗಲೂ ಹೊಸ ಸಾಧ್ಯತೆಗಳೊಂದಿಗೆ ಹೊರಹೋಗುತ್ತೇನೆ. ಇನ್ನೂ ಕಲಿಯುವುದು ತುಂಬಾ ಇದೆ ಎಂಬ ಹಸಿವು ನನ್ನಲ್ಲಿ ಮೂಡುತ್ತದೆ ಎಂದು ಸಮಂತಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಇಶಾ ಕೇಂದ್ರದಲ್ಲಿ ಸಮಂತಾ ಕರುಗಳ ಜೊತೆ ಸಮಯ ಕಳೆಯುವುದು, ಮೌನವಾಗಿ ಪವಿತ್ರ ಆವರಣದಲ್ಲಿ ನಡಿಗೆ ಮಾಡುವುದು ಮತ್ತು ಲಿಂಗ ಭೈರವಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದರಲ್ಲಿ ಮಗ್ನರಾಗಿದ್ದಾರೆ. ಕಳೆದ ಜೂನ್&zwnj;ನಲ್ಲಿ ತಮ್ಮ ಗರ್ಭಾವಸ್ಥೆಯ ವಿಚಾರ ತಿಳಿಸಿದ್ದ ಸಮಂತಾ, ಇತ್ತೀಚೆಗೆ ಬೇಬಿ ಬಂಪ್&zwnj;ನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈಗ ಈ ಆಧ್ಯಾತ್ಮಿಕ ಪ್ರವಾಸವು ಅವರ ಮನಸ್ಸು ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ಸಮಂತಾ ಸದ್ಯ ತಮಗೆ ಇಷ್ಟವಾದ ಜಾಗದಲ್ಲಿ ಇಷ್ಟವಾದ ಜನರ ನಡುವೆ ಪ್ರಶಾಂತವಾಗಿ ಕಾಲ ಕಳೆಯುತ್ತಿದ್ದಾರೆ. ನಿಮ್ಮನ್ನು ಬೆಳೆಸುವಂತಹ ವ್ಯಕ್ತಿಗಳು ಮತ್ತು ಸ್ಥಳಗಳನ್ನು ಹುಡುಕಿಕೊಳ್ಳಿ ಎಂಬ ಕಿವಿಮಾತನ್ನು ಅವರು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/entertainment/samanthas-spiritual-pregnancy-tour-actress-revisits-isha-foundation-to-reflect-on-life-and-motherhood-d0glk59"/>
        </item>
        <item>
            <title><![CDATA[ನಿಂಗೆ ಯಾರೂ ಹೆಣ್ಮಕ್ಕಳು ಇಲ್ವಾ: ಪಾಂಡ್ಯ ವಿಚಾರದಲ್ಲಿ ರೊಚ್ಚಿಗೆದ್ದ ನಟಿ]]></title>
            <link>https://kannada.asianetnews.com/cricket-sports/you-do-not-have-a-girl-ameesha-patel-roasts-netizen-for-spreading-dating-rumors-with-hardik-pandya-gkn/articleshow-70qhbql</link>
            <guid isPermaLink="true">https://kannada.asianetnews.com/cricket-sports/you-do-not-have-a-girl-ameesha-patel-roasts-netizen-for-spreading-dating-rumors-with-hardik-pandya-gkn/articleshow-70qhbql</guid>
            <pubDate>Mon, 07 Sep 2026 22:25:00 +0530</pubDate>
            <description><![CDATA[&lt;p&gt;ಹಾರ್ದಿಕ್ ಪಾಂಡ್ಯ ಜೊತೆಗಿನ ಡೇಟಿಂಗ್ ವದಂತಿಯನ್ನ ಅಮೀಷಾ ಪಟೇಲ್ ವ್ಯಂಗ್ಯವಾಗಿ ತಳ್ಳಿಹಾಕಿದ್ದಾರೆ. ಕೇವಲ ಸ್ನೇಹದ ಸಂಕೇತವಾಗಿ ಹೆಗಲ ಮೇಲೆ ಕೈ ಇರಿಸಿದ್ದನ್ನ ರೋಮ್ಯಾಂಟಿಕ್ ಎಂದು ಬಿಂಬಿಸಿದ ನೆಟ್ಟಿಗನಿಗೆ ಅವರು ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ycmhrsqyafjmjmn39yddwg,imgname-hardik-pandya-1788800026393.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟಿ ಅಮೀಷಾ ಪಟೇಲ್ ಮತ್ತು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಗುಸುಗುಸು ಶುರುವಾಗಿದೆ. ಇತ್ತೀಚೆಗೆ ಮುಂಬೈನ ಹೋಟೆಲ್ ಒಂದರಲ್ಲಿ ಇವರಿಬ್ಬರು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನೇ ಇಟ್ಟುಕೊಂಡು ನೆಟ್ಟಿಗನೊಬ್ಬ ಇವರಿಬ್ಬರ ನಡುವೆ ಪ್ರೀತಿ ನಡೀತಿದೆ ಅಂತ ಪೋಸ್ಟ್ ಹಾಕಿದ್ದ. ಇದಕ್ಕೆ ಅಮೀಷಾ ಕೊಟ್ಟಿರೋ ಖಡಕ್ ಉತ್ತರ ಈಗ ಸಖತ್ ಸೌಂಡ್ ಮಾಡ್ತಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಮುಂಬೈನ ತಾಜ್ ಮಹಲ್ ಪ್ಯಾಲೇಸ್&zwnj;ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೀಷಾ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಭೇಟಿಯಾಗಿದ್ದರು. ಈ ವೇಳೆ ಅಮೀಷಾ, ಹಾರ್ದಿಕ್ ಅವರನ್ನ ತನ್ನ ಸ್ನೇಹಿತರಿಗೆ ಪರಿಚಯಿಸುತ್ತಿದ್ದರು. ಮಾತನಾಡುತ್ತಾ ಹಾರ್ದಿಕ್ ಹೆಗಲ ಮೇಲೆ ಅಮೀಷಾ ಕೈ ಇರಿಸಿದ್ದರು. ಈ ದೃಶ್ಯವನ್ನು ವಿಡಿಯೋ ಮಾಡಿದ್ದ ಎಕ್ಸ್ (ಟ್ವಿಟರ್) ಬಳಕೆದಾರನೊಬ್ಬ, ಅಮೀಷಾ ಪಟೇಲ್ ಅವರು ಹಾರ್ದಿಕ್ ಹೆಗಲ ಮೇಲೆ ಕೈ ಇಟ್ಟ ರೀತಿ ನೋಡಿದರೆ, ಇವರ ಡೇಟಿಂಗ್ ವದಂತಿ ನಿಜವಿರಬಹುದು ಎನಿಸುತ್ತಿದೆ ಎಂದು ಬರೆದುಕೊಂಡಿದ್ದ.&lt;/p&gt;&lt;p&gt;ಈ ಪೋಸ್ಟ್ ನೋಡಿ ಸುಮ್ಮನಾಗದ ನಟಿ ಅಮೀಷಾ, ಅದನ್ನು ಸ್ಕ್ರೀನ್ ಶಾಟ್ ತೆಗೆದು ತಮ್ಮ ಇನ್&zwnj;ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಹೌದು ಹೌದು.. ನೀನು ಹೇಳ್ತಿರೋದು ನೂರಕ್ಕೆ ನೂರು ನಿಜ! ನಾನು ಅವನ ಹೆಗಲ ಮೇಲೆ ಕೈ ಇಟ್ಟಿರೋದು ಅದೆಷ್ಟು ರೋಮ್ಯಾಂಟಿಕ್ ಆಗಿದೆ ಅಲ್ವಾ? ಎಂದು ಸಖತ್ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಅಷ್ಟಕ್ಕೇ ಸುಮ್ಮನಾಗದ ಅಮೀಷಾ, ನಿನಗೆ ಯಾರೂ ಹೆಣ್ಣುಮಕ್ಕಳು ಫ್ರೆಂಡ್ಸ್ ಇಲ್ಲ ಅನ್ಸುತ್ತೆ. ಇಂತಹ ಪೋಸ್ಟ್ ಹಾಕೋ ಬದಲು ಮೊದಲು ಯಾರಾದ್ರೂ ಹುಡುಗಿ ಜೊತೆ ಸ್ನೇಹ ಬೆಳೆಸು, ಆಗ ನಿನಗೆ ಗೆಳೆತನಕ್ಕೂ ರೋಮ್ಯಾನ್ಸ್&zwnj;ಗೂ ಇರೋ ವ್ಯತ್ಯಾಸ ಗೊತ್ತಾಗುತ್ತೆ ಎಂದು ಟಾಂಗ್ ಕೊಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಪಾಂಡ್ಯ ಈಗ ಯಾರ ಜೊತೆಗಿದ್ದಾರೆ?&lt;/strong&gt;&lt;/h2&gt;&lt;p&gt;ಅಂದಹಾಗೆ ಹಾರ್ದಿಕ್ ಪಾಂಡ್ಯ ಸದ್ಯ ಮಾಡೆಲ್ ಮಹೇಕಾ ಶರ್ಮಾ ಜೊತೆ ರಿಲೇಷನ್&zwnj;ಶಿಪ್&zwnj;ನಲ್ಲಿದ್ದಾರೆ. ಕಳೆದ ವರ್ಷವಷ್ಟೇ ಅವರು ಈ ವಿಷಯವನ್ನ ಅಫಿಷಿಯಲ್ ಆಗಿ ಹೇಳಿಕೊಂಡಿದ್ದರು. ನತಾಶಾ ಸ್ಟ್ಯಾಂಕೋವಿಕ್ ಜೊತೆ ವಿಚ್ಛೇದನ ಪಡೆದ ನಂತರ ಹಾರ್ದಿಕ್ ಅವರ ಹೆಸರು ಹಲವು ನಟಿಯರ ಜೊತೆ ಕೇಳಿ ಬರುತ್ತಿದೆಯಾದರೂ ಅಮೀಷಾ ಪಟೇಲ್ ಜೊತೆ ಇರುವುದು ಕೇವಲ ಸ್ನೇಹ ಮಾತ್ರ ಎಂದು ಈಗ ಸ್ಪಷ್ಟವಾಗಿದೆ.&lt;/p&gt;&lt;p&gt;The way Ameesha Patel put her hand on Hardik Pandya&rsquo;s shoulder during the party at a hotel in Bengaluru. All the Reddit rumours seem to be coming true. #india #bcci #hardikpandya #reddit pic.twitter.com/W2bOi9ZCRE&lt;/p&gt;&lt;p&gt;&mdash; CricTalkies (@CricTalkie) September 6, 2026&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/you-do-not-have-a-girl-ameesha-patel-roasts-netizen-for-spreading-dating-rumors-with-hardik-pandya-gkn/articleshow-70qhbql"/>
        </item>
        <item>
            <title><![CDATA[ವಿಚ್ಛೇದನ ವಿವಾದದ ನಡುವೆಯೇ ವೈರಲ್ ಆಯ್ತು ಸಿಗರೇಟ್ ವಿಡಿಯೋ: ಕೆನಿಶಾ ಜೊತೆ ಜಯಂ ರವಿ]]></title>
            <link>https://kannada.asianetnews.com/entertainment/kollywood-actor-ravi-mohan-and-keneeshaa-spotted-sharing-a-cigarette-viral-video-grabs-attention-gvd/articleshow-23mzd6k</link>
            <guid isPermaLink="true">https://kannada.asianetnews.com/entertainment/kollywood-actor-ravi-mohan-and-keneeshaa-spotted-sharing-a-cigarette-viral-video-grabs-attention-gvd/articleshow-23mzd6k</guid>
            <pubDate>Mon, 07 Sep 2026 21:07:00 +0530</pubDate>
            <description><![CDATA[&lt;p&gt;ತಮಿಳು ನಟ ಜಯಂ ರವಿ ಹಾಗೂ ಗಾಯಕಿ ಕೆನಿಶಾ ಮತ್ತೆ ಸುದ್ದಿಯಾಗಿದ್ದಾರೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಜಯಂ ರವಿ ಸಿಗರೇಟ್ ಸೇದಿ ಬಳಿಕ ಕೆನಿಶಾಗೆ ನೀಡಿದಂತೆ ಕಾಣಿಸುವ ದೃಶ್ಯವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y7gdmsh6z8d7fqp9203ajy,imgname-nk-1788794648217.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳು ನಟ-ನಿರ್ಮಾಪಕ ರವಿ ಮೋಹನ್ ಅಲಿಯಾಸ್ ಜಯಂ ರವಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟನಿಗೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದನ್ನು ಕಂಡ ನೆಟ್ಟಿಗರು ಜಯಂ ರವಿ ವಿರುದ್ಧ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;ಸ್ಟಾರ್ ಹೀರೋ ಆಗಿ ಕಾಲಿವುಡ್&zwnj;ನಲ್ಲಿ ಗುರುತಿಸಿಕೊಂಡಿರುವ ಜಯಂ ರವಿ, ಕಳೆದ ಕೆಲ ಸಮಯದಿಂದ ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ವಿಶೇಷವಾಗಿ ಪತ್ನಿ ಆರ್ತಿ ಅವರೊಂದಿಗಿನ ವಿಚ್ಛೇದನ ವಿವಾದದ ಬಳಿಕ ಜಯಂ ರವಿ ಹೆಸರು ಪದೇಪದೇ ಚರ್ಚೆಗೆ ಬರುತ್ತಿದೆ. ಪ್ರೀತಿಸಿ ಮದುವೆಯಾಗಿ, ಇಬ್ಬರು ಗಂಡು ಮಕ್ಕಳಿರುವ ಜಯಂ ರವಿ-ಆರ್ತಿ ದಂಪತಿ ವಿಚ್ಛೇದನದ ವಿಚಾರ ಇದೀಗ ಕೋರ್ಟ್ ಮೆಟ್ಟಿಲೇರಿದೆ.&lt;/p&gt;&lt;p&gt;ಈ ನಡುವೆ ಖ್ಯಾತ ಗಾಯಕಿ ಕೆನಿಶಾ ಅವರೊಂದಿಗೆ ಜಯಂ ರವಿ ಆತ್ಮೀಯವಾಗಿ ಕಾಣಿಸಿಕೊಳ್ಳುತ್ತಿರುವುದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇಬ್ಬರ ಸಂಬಂಧದ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡಿದ್ದವು. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಯಂ ರವಿ, ವಿಚ್ಛೇದನ ಪ್ರಕರಣ ಇತ್ಯರ್ಥವಾಗುವವರೆಗೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿಕೊಂಡಿದ್ದರು. ಅದೇ ಸಮಯದಲ್ಲಿ ಕೆನಿಶಾ ಕೂಡ ಜಯಂ ರವಿ ಅವರೊಂದಿಗಿನ ತಮ್ಮ ಸಂಬಂಧಕ್ಕೆ ಬ್ರೇಕ್ ಹಾಕುತ್ತಿರುವುದಾಗಿ ಹೇಳಿದ್ದರು.&lt;/p&gt;&lt;p&gt;ಆದರೆ ಆ ಹೇಳಿಕೆಗಳ ಬೆನ್ನಲ್ಲೇ ಇಬ್ಬರೂ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ತಿರುಮಲಕ್ಕೆ ತೆರಳಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದ ಜಯಂ ರವಿ ಹಾಗೂ ಕೆನಿಶಾ ಅವರ ಫೋಟೋಗಳು ಕೂಡ ಗಮನ ಸೆಳೆದಿದ್ದವು. ಇದೀಗ ಈ ಜೋಡಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.&lt;/p&gt;&lt;p&gt;&lt;strong&gt;ಒಂದೇ ಸಿಗರೇಟ್ ಇಬ್ಬರೂ ಹಂಚಿಕೊಂಡ್ರಾ?&lt;/strong&gt;&lt;/p&gt;&lt;p&gt;ವೈರಲ್ ಆಗಿರುವ ವಿಡಿಯೋದಲ್ಲಿ ಜಯಂ ರವಿ ಮತ್ತು ಕೆನಿಶಾ ಇಬ್ಬರೂ ಕ್ಯಾಶುಯಲ್ ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಇನ್ನೂ ಕೆಲವರು ಇದ್ದು, ಯಾವುದೋ ಗ್ರೂಪ್ ಮೀಟಿಂಗ್&zwnj;ನಲ್ಲಿ ಗಂಭೀರವಾಗಿ ಚರ್ಚೆ ನಡೆಸುತ್ತಿರುವಂತೆ ವಿಡಿಯೋದಲ್ಲಿ ಕಾಣಿಸುತ್ತದೆ.&lt;/p&gt;&lt;p&gt;ಈ ವೇಳೆ ಜಯಂ ರವಿ ಸಿಗರೇಟ್ ಸೇದುತ್ತಿರುವುದು, ಬಳಿಕ ಅದನ್ನು ಕೆನಿಶಾಗೆ ನೀಡುವುದು ಹಾಗೂ ಅವರು ಕೂಡ ಅದೇ ಸಿಗರೇಟ್ ಸೇದುತ್ತಿರುವ ದೃಶ್ಯ ಕಂಡುಬಂದಿದೆ ಎಂದು ವರದಿಯಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಿದಾಡುತ್ತಿದ್ದು, ಇಬ್ಬರನ್ನೂ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಜಯಂ ರವಿ ಮೇಲಿದ್ದ ಗೌರವವೇ ಕಳೆದುಹೋಯಿತು&lt;/strong&gt;&lt;/h2&gt;&lt;p&gt;ವಿಡಿಯೋಗೆ ಪ್ರತಿಕ್ರಿಯಿಸಿರುವ ಕೆಲ ನೆಟ್ಟಿಗರು ಜಯಂ ರವಿ ಅವರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಚ್ಛೇದನದ ಸುದ್ದಿ ಹೊರಬಂದಾಗ ಜಯಂ ರವಿ ಅವರ ಹೇಳಿಕೆಯನ್ನು ನಂಬಿ ತಾವು ಅವರಿಗೆ ಬೆಂಬಲ ನೀಡಿದ್ದಾಗಿ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡಿದ ಬಳಿಕ ತಮ್ಮ ಅಭಿಪ್ರಾಯ ಬದಲಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;p&gt;ವಿಚ್ಛೇದನದ ಸುದ್ದಿ ಹೊರಬಂದಾಗ ನಾವು ಜಯಂ ರವಿಗೆ ಬೆಂಬಲವಾಗಿ ನಿಂತಿದ್ದೆವು. ಅವರ ವಾದವನ್ನು ಮನಸಾರೆ ನಂಬಿದ್ದೆವು. ಆದರೆ ಈಗ ಅವರ ವಿಡಿಯೋಗಳನ್ನು ನೋಡಿದ ಬಳಿಕ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತಿದೆ. ಇಂತಹ ಘಟನೆಗಳಿಂದ ಜಯಂ ರವಿ ಅವರ ಮೇಲಿದ್ದ ಗೌರವವೂ ಕಳೆದುಹೋಗಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಪತ್ನಿ ಆರ್ತಿ ಅವರೊಂದಿಗಿನ ವಿಚ್ಛೇದನ ಪ್ರಕರಣ ಇನ್ನೂ ಕೋರ್ಟ್&zwnj;ನಲ್ಲಿ ನಡೆಯುತ್ತಿರುವ ಸಂದರ್ಭದಲ್ಲೇ ಜಯಂ ರವಿ ಮತ್ತು ಕೆನಿಶಾ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಇಬ್ಬರೂ ಒಂದೇ ಸಿಗರೇಟ್ ಹಂಚಿಕೊಂಡಿರುವಂತೆ ಕಾಣುವ ವಿಡಿಯೋ ವೈರಲ್ ಆಗಿರುವುದು ನೆಟ್ಟಿಗರ ಗಮನ ಸೆಳೆದಿದೆ. ಇನ್ನು ಈ ವಿಡಿಯೋ ಕುರಿತು ಜಯಂ ರವಿ ಅಥವಾ ಕೆನಿಶಾ ಯಾವುದೇ ಪ್ರತಿಕ್ರಿಯೆ ನೀಡುತ್ತಾರಾ ಎಂಬುದು ಸದ್ಯ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kollywood-actor-ravi-mohan-and-keneeshaa-spotted-sharing-a-cigarette-viral-video-grabs-attention-gvd/articleshow-23mzd6k"/>
        </item>
        <item>
            <title><![CDATA[ದುನಿಯಾ ವಿಜಯ್ ‘ಸಿಟಿ ಲೈಟ್ಸ್’ನಲ್ಲಿ ಅಲಖ್ ನಿರಂಜನ್: ಜನಪದ ಸೊಗಡಿಗೆ ರ‍್ಯಾಪ್ ಟಚ್]]></title>
            <link>https://kannada.asianetnews.com/sandalwood/kannada-actor-vinay-rajkumar-city-lights-unveils-unique-folk-rap-song-alakh-niranjan-gvd/articleshow-z1lhkq2</link>
            <guid isPermaLink="true">https://kannada.asianetnews.com/sandalwood/kannada-actor-vinay-rajkumar-city-lights-unveils-unique-folk-rap-song-alakh-niranjan-gvd/articleshow-z1lhkq2</guid>
            <pubDate>Mon, 07 Sep 2026 19:31:47 +0530</pubDate>
            <description><![CDATA[&lt;p&gt;ವಿನಯ್ ರಾಜ್&zwnj;ಕುಮಾರ್ ಹಾಗೂ ಮೋನಿಷಾ ವಿಜಯ್ ಕುಮಾರ್ ಅಭಿನಯದ &lsquo;ಸಿಟಿ ಲೈಟ್ಸ್&rsquo; ಸಿನಿಮಾದ ಹೊಸ ಹಾಡು &lsquo;ಅಲಖ್ ನಿರಂಜನ್&rsquo; ಬಿಡುಗಡೆಯಾಗಿದೆ. ಸಾಂಪ್ರದಾಯಿಕ ಜನಪದ ಸಂಗೀತದ ಸೊಗಡಿಗೆ ರ&zwj;್ಯಾಪ್..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y2rtc9kq470byz53t370c6,imgname-vhjv-1788789680490.png" type="image/jpeg" height="390" width="690"/>
            <content:encoded><![CDATA[&lt;p&gt;ಚಂದನವನದ ಜನಪದ ಸಂಗೀತದ ಸೊಗಡಿಗೆ ಸಮಕಾಲೀನ ರ&zwj;್ಯಾಪ್ ಬೀಟ್ ಬೆರೆತರೆ ಹೇಗಿರಬಹುದು? ದುನಿಯಾ ವಿಜಯ್ &lsquo;ಸಿಟಿ ಲೈಟ್ಸ್&rsquo; ಸಿನಿಮಾದ ಹೊಸ ಹಾಡು &lsquo;ಅಲಖ್ ನಿರಂಜನ್&rsquo; ಇದಕ್ಕೆ ವಿಭಿನ್ನ ಉತ್ತರ ನೀಡಿದೆ. ಸಾಂಪ್ರದಾಯಿಕ ಜನಪದ ಹಾಗೂ ಆಧ್ಯಾತ್ಮಿಕ ಸಂಗೀತದ ಸ್ಪರ್ಶದ ಜೊತೆಗೆ ರ&zwj;್ಯಾಪ್ ಮತ್ತು ಶಾಸ್ತ್ರೀಯ ಗಾಯನವನ್ನು ಒಂದೇ ಟ್ರ್ಯಾಕ್&zwnj;ನಲ್ಲಿ ಬೆರೆಸಿರುವುದು ಹಾಡಿನ ವಿಶೇಷತೆ.&lt;/p&gt;&lt;p&gt;&lt;strong&gt;ಜನಪದ ಗೀತೆಗೆ ಹೊಸ ರೂಪ&lt;/strong&gt;&lt;/p&gt;&lt;p&gt;&lsquo;ಅಲಖ್ ನಿರಂಜನ್&rsquo; ಹಾಡಿನಲ್ಲಿ ಮಾಳವಳ್ಳಿ ಎಂ. ಮಹದೇವಸ್ವಾಮಿ, ವೀರ ಹಾಗೂ ವಿಜಯ್ ಕುಮಾರ್ ಅವರ ಧ್ವನಿಯೊಂದಿಗೆ ರ&zwj;್ಯಾಪರ್ ಪಾಶಾ ಭಾಯ್ ಮತ್ತು ಶಾಸ್ತ್ರೀಯ ಗಾಯಕ ಕೀರ್ತನ್ ಹೊಳ್ಳ ಕೂಡ ಧ್ವನಿ ನೀಡಿದ್ದಾರೆ. ಹಾಡಿನ ಸಾಹಿತ್ಯದ ಪ್ರಮುಖ ಭಾಗವು ಸಾಂಪ್ರದಾಯಿಕ ಜನಪದ ಗೀತೆಯಿಂದ ಪ್ರೇರಣೆ ಪಡೆದಿದ್ದು, ಪಾಶಾ ಭಾಯ್ ರ&zwj;್ಯಾಪ್ ಭಾಗಗಳನ್ನು ಬರೆದಿದ್ದಾರೆ. ಹೀಗಾಗಿ ಹಳೆಯ ಜನಪದ ಸೊಗಡಿನೊಂದಿಗೆ ಇಂದಿನ ಯುವಜನರ ಸಂಗೀತ ಶೈಲಿಯನ್ನೂ ಹಾಡು ಒಟ್ಟಿಗೆ ಕಟ್ಟಿಕೊಟ್ಟಿದೆ.&lt;/p&gt;&lt;p&gt;&lt;strong&gt;ಚರಣ್ ರಾಜ್ ಸಂಗೀತದಲ್ಲಿ ವಿಭಿನ್ನ ಪ್ರಯೋಗ&lt;/strong&gt;&lt;/p&gt;&lt;p&gt;ಸಂಗೀತ ನಿರ್ದೇಶಕ ಚರಣ್ ರಾಜ್ ಎಂ.ಆರ್. ಅವರು ಈ ವಿಭಿನ್ನ ಸಂಗೀತ ಪ್ರಕಾರಗಳನ್ನು ಒಟ್ಟಿಗೆ ಬೆಸೆದಿದ್ದಾರೆ. ಹಾಡಿನಲ್ಲಿ ಒಂದು ಕಡೆ ಮಣ್ಣಿನ ಸೊಗಡನ್ನು ಹೊತ್ತ ಜನಪದ ಸಂಗೀತ ಕೇಳಿಬಂದರೆ, ಮತ್ತೊಂದೆಡೆ ರ&zwj;್ಯಾಪ್&zwnj;ನ ವೇಗ ಮತ್ತು ಆಧುನಿಕ ಎನರ್ಜಿ ಗಮನ ಸೆಳೆಯುತ್ತದೆ. &lsquo;ಸಿಟಿ ಲೈಟ್ಸ್&rsquo; ಸಿನಿಮಾದ ಕಥೆಯ ಹಿನ್ನೆಲೆಯಲ್ಲೂ ಈ ಸಂಗೀತ ಪ್ರಯೋಗ ವಿಶೇಷವಾಗಿ ಹೊಂದಿಕೊಳ್ಳುತ್ತದೆ. ಹಳ್ಳಿಯಿಂದ ಬೆಂಗಳೂರಿಗೆ ಬರುವ ಇಬ್ಬರು ಯುವಕರ ಬದುಕು, ನಗರ ಜೀವನದ ಒತ್ತಡ, ಹೋರಾಟ ಹಾಗೂ ಅನಿಶ್ಚಿತತೆಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ.&lt;/p&gt;&lt;p&gt;&lt;strong&gt;ಹಳ್ಳಿ ಬಿಟ್ಟು ಸಿಟಿಗೆ ಬರುವ ಯುವಕರ ಕಥೆ&lt;/strong&gt;&lt;/p&gt;&lt;p&gt;ವಿಜಯ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ವಿನಯ್ ರಾಜ್&zwnj;ಕುಮಾರ್ ಹಾಗೂ ಮೋನಿಷಾ ವಿಜಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಕಥೆ ಮತ್ತು ಚಿತ್ರಕಥೆಯನ್ನೂ ವಿಜಯ್ ಕುಮಾರ್ ಅವರೇ ಬರೆದಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಬೆಳೆದ ಯುವಕರ ಬದುಕು ನಗರಕ್ಕೆ ಬಂದ ಬಳಿಕ ಹೇಗೆ ಬದಲಾಗುತ್ತದೆ? ಹೊಸ ವಾತಾವರಣದ ಒತ್ತಡಗಳಿಗೆ ಅವರು ಹೇಗೆ ಹೊಂದಿಕೊಳ್ಳುತ್ತಾರೆ? ಎಂಬ ಅಂಶಗಳನ್ನು &lsquo;ಸಿಟಿ ಲೈಟ್ಸ್&rsquo; ತೆರೆಗೆ ತರುತ್ತಿದೆ.&lt;/p&gt;&lt;p&gt;&lt;strong&gt;ಕಥೆಯಂತೆಯೇ ಸಂಗೀತದಲ್ಲೂ ಎರಡು ಲೋಕಗಳ ಸಂಘರ್ಷ&lt;/strong&gt;&lt;/p&gt;&lt;p&gt;ಸಿನಿಮಾದ ಕಥೆಯಲ್ಲಿ ಹಳ್ಳಿ ಮತ್ತು ನಗರದ ಎರಡು ವಿಭಿನ್ನ ಜಗತ್ತುಗಳ ನಡುವೆ ಯುವಕರು ಸಿಲುಕಿಕೊಳ್ಳುವ ಚಿತ್ರಣವಿದ್ದರೆ, ಚಿತ್ರದ ಸಂಗೀತದಲ್ಲೂ ಅದೇ ರೀತಿಯ ವಿಭಿನ್ನತೆಯನ್ನು ಕಾಣಬಹುದು. &lsquo;ಅಲಖ್ ನಿರಂಜನ್&rsquo; ಮೂಲಕ ಹಳೆಯ ಜನಪದ ಪರಂಪರೆಯನ್ನು ಸಮಕಾಲೀನ ರ&zwj;್ಯಾಪ್ ಶೈಲಿಯೊಂದಿಗೆ ಬೆರೆಸುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ ಸಿನಿಮಾದ ಪಾತ್ರಗಳು ಎದುರಿಸುವ ಎರಡು ವಿಭಿನ್ನ ಲೋಕಗಳ ಸಂಘರ್ಷವನ್ನು ಸಂಗೀತದ ಮೂಲಕವೂ ಕಟ್ಟಿಕೊಡುವ ಪ್ರಯತ್ನ ಚಿತ್ರತಂಡ ಮಾಡಿದೆ.&lt;/p&gt;&lt;h2&gt;&lt;strong&gt;ಸೆಪ್ಟೆಂಬರ್ 18ಕ್ಕೆ &lsquo;ಸಿಟಿ ಲೈಟ್ಸ್&rsquo; ಬಿಡುಗಡೆ&lt;/strong&gt;&lt;/h2&gt;&lt;p&gt;ಶಿವಸೇನ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ದುನಿಯಾ ಟಾಕೀಸ್ ಮತ್ತು ಯಂತ್ರೋದ್ಧಾರಕ ಬ್ಯಾನರ್&zwnj;ಗಳ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಮ್ ಆರ್ಯ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು &lsquo;ಅಲಖ್ ನಿರಂಜನ್&rsquo; ಹಾಡಿನ ಮೂಲಕವೇ ವಿಭಿನ್ನ ಸಂಗೀತ ಪ್ರಯೋಗಕ್ಕೆ ಮುನ್ನುಡಿ ಬರೆದಿರುವ &lsquo;ಸಿಟಿ ಲೈಟ್ಸ್&rsquo;, ಹಳ್ಳಿ-ನಗರದ ನಡುವಿನ ಯುವ ಬದುಕಿನ ಕಥೆಯನ್ನು ಪ್ರೇಕ್ಷಕರಿಗೆ ಹೇಗೆ ಕಟ್ಟಿಕೊಡಲಿದೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-actor-vinay-rajkumar-city-lights-unveils-unique-folk-rap-song-alakh-niranjan-gvd/articleshow-z1lhkq2"/>
        </item>
        <item>
            <title><![CDATA[Bigg Boss 13: 'ಭಾಗ್ಯಲಕ್ಷ್ಮಿ' ತಾಂಡವ್​ಗಾಗಿ ರಿಯಲ್​ ಮತ್ತು ರೀಲ್​ ಹೆಂಡ್ತೀರ ನಡುವೆ ಶುರುವಾಗೇ ಬಿಟ್ಟಿತು ಸಮರ]]></title>
            <link>https://kannada.asianetnews.com/gallery/tv-talk/bigg-boss-13-the-battle-between-the-real-and-reel-wives-of-bhagya-lakshmi-tandav-suc-9v7imfh</link>
            <guid isPermaLink="true">https://kannada.asianetnews.com/gallery/tv-talk/bigg-boss-13-the-battle-between-the-real-and-reel-wives-of-bhagya-lakshmi-tandav-suc-9v7imfh</guid>
            <pubDate>Mon, 07 Sep 2026 20:03:37 +0530</pubDate>
            <description><![CDATA[&lt;p&gt;'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ತಾಂಡವ್ ಪಾತ್ರಧಾರಿ ಸುದರ್ಶನ್, ಅವರ ರಿಯಲ್ ಪತ್ನಿ ಸಂಗೀತಾ ಮತ್ತು ರೀಲ್ ಪತ್ನಿ ಕಾವ್ಯಾ ಗೌಡ ಬಿಗ್&zwnj;ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ 'ತಾಂಡವ್ ಯಾರ ಗಂಡ' ಎಂಬ ವಿಷಯವಾಗಿ ಇಬ್ಬರು ಪತ್ನಿಯರ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y4f5w5fvpk1207ywrhw5rq,imgname-bigg-boss-13-1788791461765.jpg" type="image/jpeg" height="390" width="690"/>
            <content:encoded><![CDATA[&lt;p&gt;'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ತಾಂಡವ್ ಪಾತ್ರಧಾರಿ ಸುದರ್ಶನ್, ಅವರ ರಿಯಲ್ ಪತ್ನಿ ಸಂಗೀತಾ ಮತ್ತು ರೀಲ್ ಪತ್ನಿ ಕಾವ್ಯಾ ಗೌಡ ಬಿಗ್&zwnj;ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ 'ತಾಂಡವ್ ಯಾರ ಗಂಡ' ಎಂಬ ವಿಷಯವಾಗಿ ಇಬ್ಬರು ಪತ್ನಿಯರ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ನಡೆದಿದೆ.&lt;/p&gt;&lt;img&gt;&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ತಾಂಡವ್​ನ ರೀಲ್​ ಹೆಂಡ್ತಿ ಶ್ರೇಷ್ಠಾ ಉರ್ಫ್​ ಕಾವ್ಯಾ ಗೌಡ ಮತ್ತು ರಿಯಲ್​ ಹೆಂಡ್ತಿ ಸಂಗೀತಾ ಇಬ್ಬರನ್ನೂ ಬಿಗ್​ಬಾಸ್​ಗೆ ಕರೆಸಲಾಗಿದ್ದು, ಇವರ ನಡುವೆ ಮಾತಿನ ಸಮರ ಶುರುವಾಗಿಬಿಟ್ಟಿದೆ!&lt;/p&gt;&lt;img&gt;&lt;p&gt;ತಾಂಡವ್​ ಪಾತ್ರಧಾರಿ ಉರ್ಫ್​ ಸುದರ್ಶನ್​ ರಂಗಪ್ರಸಾದ್​ ಅವರು ಮೊದಲ ದಿನ ಇಬ್ಬರೂ ಈ ಷೋನಲ್ಲಿ ಇರೋದನ್ನು ನೋಡಿ, ಅಯ್ಯಯ್ಯೋ ಇಬ್ಬರೂ ಕಚ್ಚಾಡಿಕೊಂಡರೆ ಏನು ಮಾಡೋದು ಎಂದು ಪ್ರಶ್ನೆ ಮಾಡಿದ್ದರು. ಇದೀಗ ಇಲ್ಲಿ ರಿಯಲ್​ ಆಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಆಗಿದ್ದೇನೆಂದರೆ, ಕಾವ್ಯಾ ಗೌಡ ಅವರು, ಸುದರ್ಶನ್​ ನನ್ನ ಫ್ರೆಂಡ್​ ಅಷ್ಟೇ. ತಾಂಡವ್​ ಮೊದಲು ನನಗೆ ಫ್ರೆಂಡ್​ ಆಗಿದ್ರು, ಆಮೇಲೆ ಲವ್​ ಆಯ್ತು, ಆಮೇಲೆ ಮದುವೆಯಾದೆ. ಈಗ ಸುದರ್ಶನ್​ ನನ್ನ ಫ್ರೆಂಡ್​ ಅಷ್ಟೇ ಎಂದಿದ್ದಾರೆ.&lt;/p&gt;&lt;img&gt;&lt;p&gt;ಆದರೆ ಅಲ್ಲಿದ್ದವರು ಎಲ್ಲರೂ ಇಬ್ಬರ ಕಾಲೆಳೆದಿದ್ದಾರೆ. ಸಂಗೀತಾ ಅವರು, ಸುದರ್ಶನ್​ ಈಗ ನನ್ನ ರಿಯಲ್​ ಗಂಡ ಎಂದಿದ್ದರೆ, ಅಲ್ಲಿರುವ ಸ್ಪರ್ಧಿಗಳು, ಇಬ್ಬರಲ್ಲಿ ಅವರು ಯಾರ ಗಂಡ ಎನ್ನೋದನ್ನು ಮೊದಲು ಸರಿಯಾಗಿ ಕನ್​ಫರ್ಮ್​ ಮಾಡಿಕೊಳ್ಳಿ ಎಂದರು.&lt;/p&gt;&lt;img&gt;&lt;p&gt;ಹಾಸ್ಯದ ರೂಪದಲ್ಲಿ ಈ ಸಂಭಾಷಣೆ ನಡೆದಿದೆ. ಕಾವ್ಯಾ ಅವರು, ಸುದರ್ಶನ್​ ಅಲ್ಲಿ ನನ್ನ ಗಂಡ ಆಗಿದ್ರು, ಈಗ ನನ್ನ ಗಂಡ ಅಲ್ಲ ಅಂತಿದ್ರೆ, ಸಂಗೀತಾ ಅವರು ಈಗ ನನ್ನ ಗಂಡ ಎಂದಿದ್ದಾರೆ. ಅಲ್ಲಿದ್ದೋರು ಅವರು ಯಾರ ಗಂಡನಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಈ ಸಂಭಾಷಣೆ ಹಾಸ್ಯದ ರೂಪದಲ್ಲಿ ನಡೆದಿದ್ದು, ಮುಂದೆ ಹೋಗುತ್ತಾ ಯಾರ ನಡುವೆ ದ್ವೇಷ ಹುಟ್ಟುತ್ತದೆ, ರಿಯಲ್​ ಆಗಿ ಯಾರು ಕಿತ್ತಾಟ ಮಾಡುತ್ತಾರೆ ಎಂದು ನೋಡಬೇಕಿದೆಯಷ್ಟೇ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-13-the-battle-between-the-real-and-reel-wives-of-bhagya-lakshmi-tandav-suc-9v7imfh"/>
        </item>
        <item>
            <title><![CDATA[ಸ್ವತಃ ನಾನೇ ಆ ಡ್ರೆಸ್ ಆಯ್ಕೆ ಮಾಡಿದ್ದೆ: ಟ್ರೋಲಿಂಗ್ ಬಗ್ಗೆ ನಟಿ ಐಶ್ವರ್ಯ ಲಕ್ಷ್ಮಿ ಹೇಳಿದ್ದೇನು?]]></title>
            <link>https://kannada.asianetnews.com/entertainment/malayalam-actress-aishwarya-lekshmi-breaks-silence-on-dress-trolling-it-was-my-choice-gvd/articleshow-ltagutm</link>
            <guid isPermaLink="true">https://kannada.asianetnews.com/entertainment/malayalam-actress-aishwarya-lekshmi-breaks-silence-on-dress-trolling-it-was-my-choice-gvd/articleshow-ltagutm</guid>
            <pubDate>Mon, 07 Sep 2026 19:58:50 +0530</pubDate>
            <description><![CDATA[&lt;p&gt;ನಟಿ ಐಶ್ವರ್ಯ ಲಕ್ಷ್ಮಿ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಕುರಿತು ಎದುರಿಸಿದ ಟ್ರೋಲಿಂಗ್ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಡ್ರೆಸ್ ಆಯ್ಕೆಯಲ್ಲಿ ತಮ್ಮ ತಪ್ಪೂ ಇದೆ ಎಂದು ಒಪ್ಪಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y3p9vvx5gt906jtd3x7yyw,imgname-jv-1788790646651.png" type="image/jpeg" height="390" width="690"/>
            <content:encoded><![CDATA[&lt;p&gt;ಮಾಲಿವುಡ್&zwnj;ನ ಖ್ಯಾತ ನಟಿ ಐಶ್ವರ್ಯ ಲಕ್ಷ್ಮಿ ಸಿನಿಮಾಗಳಷ್ಟೇ ಅಲ್ಲದೆ ತಮ್ಮ ಫ್ಯಾಷನ್ ಹಾಗೂ ಡ್ರೆಸ್ಸಿಂಗ್ ಸ್ಟೈಲ್&zwnj;ನಿಂದಲೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಆದರೆ ಕೆಲವೊಮ್ಮೆ ಅವರು ಧರಿಸುವ ಉಡುಪುಗಳ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲಿಂಗ್ ಕೂಡ ಎದುರಿಸಿದ್ದಾರೆ. ವಿಶೇಷವಾಗಿ ಅವರ ಡ್ರೆಸ್ಸಿಂಗ್ ಆಯ್ಕೆಯ ಬಗ್ಗೆ ನೆಟ್ಟಿಗರು ಮಾಡಿರುವ ಕಾಮೆಂಟ್&zwnj;ಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಇದೀಗ ಸಂದರ್ಶನವೊಂದರಲ್ಲಿ ಐಶ್ವರ್ಯ ಲಕ್ಷ್ಮಿ ಈ ಟ್ರೋಲಿಂಗ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;&lt;p&gt;ತಮ್ಮ ಡ್ರೆಸ್ಸಿಂಗ್ ವಿಚಾರದಲ್ಲಿ ನಡೆದ ಕೆಲವು ಘಟನೆಗಳಲ್ಲಿ ತಪ್ಪು ತಮ್ಮದೂ ಇದೆ ಎಂದು ಐಶ್ವರ್ಯ ಲಕ್ಷ್ಮಿ ಒಪ್ಪಿಕೊಂಡಿದ್ದಾರೆ. ಆದರೆ ಅದು ಬಹುತೇಕ ತಮ್ಮ ಫ್ಯಾಷನ್ ಸೆನ್ಸ್&zwnj;ಗೆ ಸಂಬಂಧಿಸಿದ ವಿಚಾರ ಎಂದು ಅವರು ಹೇಳಿದ್ದಾರೆ. ತಾವು ಧರಿಸುವ ಉಡುಪುಗಳು ತಮಗೆ ಇಷ್ಟವಾಗಿರುತ್ತವೆ. ಯಾರಿಗೂ ತೊಂದರೆ ನೀಡಬೇಕು ಎಂಬ ಉದ್ದೇಶದಿಂದ ಅವುಗಳನ್ನು ಆಯ್ಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಮ್ಮೆ ತಾವು ಧರಿಸಿದ್ದ ಡ್ರೆಸ್ ಕುರಿತು ನಡೆದ ಟ್ರೋಲಿಂಗ್ ಬಗ್ಗೆ ಮಾತನಾಡಿದ ಐಶ್ವರ್ಯ ಲಕ್ಷ್ಮಿ, ಸತತ ಏಳು-ಎಂಟು ದಿನಗಳ ಕಾಲ ನೈಟ್ ಶೂಟಿಂಗ್&zwnj;ನಲ್ಲಿ ಭಾಗವಹಿಸಿದ ಬಳಿಕ ಆ ಉಡುಪನ್ನು ಧರಿಸಿದ್ದಾಗಿ ಹೇಳಿದ್ದಾರೆ.&lt;/p&gt;&lt;p&gt;ಏನಾದರೂ ಆಗಬಹುದೇನೋ ಎಂಬ ನಿರೀಕ್ಷೆಯಲ್ಲಿ ಆ ಡ್ರೆಸ್ ಹಾಕಿಕೊಂಡೆ. ನಾನು ಸ್ನಾನ ಮಾಡುತ್ತಿದ್ದಾಗ ಮಧ್ಯದಲ್ಲೇ ಬಂದು ಡ್ರೆಸ್ ಹಾಕಿಕೊಂಡೇನಾ ಎಂದು ಹಲವರು ಕೇಳಿದರು. ನಿಜವಾಗಿಯೂ ಅದೇ ಆಗಿತ್ತು ಎಂದು ಐಶ್ವರ್ಯ ನಗುತ್ತಾ ಹೇಳಿದ್ದಾರೆ. ಆದರೆ ಆ ಡ್ರೆಸ್ ಆಯ್ಕೆ ಮಾಡುವಾಗ ತಮ್ಮ ಸುತ್ತ ಸ್ಟೈಲಿಸ್ಟ್, ಸ್ನೇಹಿತರು ಹಾಗೂ ಮ್ಯಾನೇಜರ್&zwnj;ಗಳು ಎಲ್ಲರೂ ಇದ್ದರು ಎಂದು ಅವರು ತಿಳಿಸಿದ್ದಾರೆ. ಮತ್ತೊಂದು ಚೋಕರ್ ಧರಿಸುವಂತೆ ಹಾಗೂ ಕೂದಲನ್ನು ಬಿಟ್ಟುಕೊಳ್ಳುವಂತೆ ತಮ್ಮ ಸ್ಟೈಲಿಸ್ಟ್ ಸಲಹೆ ನೀಡಿದ್ದರು. ಸ್ನೇಹಿತರು ಮತ್ತು ಮ್ಯಾನೇಜರ್&zwnj;ಗಳು ಕೂಡ ಡ್ರೆಸ್&zwnj;ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಸೂಚಿಸಿದ್ದರು.&lt;/p&gt;&lt;p&gt;ಆದರೆ ಕೊನೆಗೆ ಆ ಉಡುಪನ್ನು ಆಯ್ಕೆ ಮಾಡಿದ್ದು ಮಾತ್ರ ತಾವೇ ಎಂದು ಐಶ್ವರ್ಯ ಸ್ಪಷ್ಟಪಡಿಸಿದ್ದಾರೆ. ನನಗೆ ಬೇರೆ ದಾರಿ ಇರಲಿಲ್ಲ ಅಂತಲ್ಲ. ಯಾರೂ ನನ್ನನ್ನು ಒತ್ತಾಯಿಸಿರಲಿಲ್ಲ. ನಾನೇ ಸ್ವತಃ ಆ ಡ್ರೆಸ್ ಆಯ್ಕೆ ಮಾಡಿದ್ದೆ. ಇದೇ ಫ್ಯಾಷನ್, ಇದರ ಬಗ್ಗೆ ನನಗೆ ನಂಬಿಕೆ ಇದೆ ಎಂದು ಅಂದುಕೊಂಡಿದ್ದೆ ಎಂದು ಅವರು ಹೇಳಿದ್ದಾರೆ. ಆದರೆ ಆ ಡ್ರೆಸ್ ವಿಚಾರದಲ್ಲಿ ತಾವು ಮಾಡಿದ ತಪ್ಪು ತಮಗೇ ಮೊದಲೇ ಅರ್ಥವಾಗಿತ್ತು ಎಂದು ಐಶ್ವರ್ಯ ತಿಳಿಸಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಅದು ತಿಳಿದಿತ್ತು. ಆದರೂ ಆ ಡ್ರೆಸ್ ತಮ್ಮನ್ನು ಬಹಳ ಆಕರ್ಷಿಸಿತ್ತು ಎಂದು ಅವರು ನಗುತ್ತಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಮತ್ತೊಂದು ಡ್ರೆಸ್&zwnj;ಗೂ ಬಂದಿತ್ತು ಟ್ರೋಲಿಂಗ್&lt;/strong&gt;&lt;/h2&gt;&lt;p&gt;ಇನ್ನೊಂದು ಸಂದರ್ಭದಲ್ಲಿ ತಾವು ಧರಿಸಿದ್ದ ಉಡುಪಿನ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್ ನಡೆದಿತ್ತು ಎಂದು ಐಶ್ವರ್ಯ ಲಕ್ಷ್ಮಿ ನೆನಪಿಸಿಕೊಂಡಿದ್ದಾರೆ. ಆ ಡ್ರೆಸ್&zwnj;ನಲ್ಲಿ ಕ್ಲೀವೇಜ್ ಕಾಣಿಸುವ ರೀತಿಯ ದೊಡ್ಡ ಕೀಹೋಲ್ ವಿನ್ಯಾಸವಿತ್ತು. ಆದರೆ ಅದು ಅಷ್ಟು ದೊಡ್ಡದಾಗಿರುತ್ತದೆ ಎಂದು ತಾವು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ಆ ಡ್ರೆಸ್ ನನಗೆ ತುಂಬಾ ಇಷ್ಟವಾಗಿತ್ತು. ನನ್ನ ಸ್ನೇಹಿತರಿಗೂ ಅದು ಇಷ್ಟವಾಗಿತ್ತು. ಆದರೆ ಅದರಿಂದ ಇಂತಹ ಟ್ರೋಲಿಂಗ್ ಎದುರಿಸಬೇಕಾಗುತ್ತದೆ ಎಂದು ಮಾತ್ರ ನಾನು ಊಹಿಸಿರಲಿಲ್ಲ ಎಂದು ಐಶ್ವರ್ಯ ಲಕ್ಷ್ಮಿ ಹೇಳಿದ್ದಾರೆ.&lt;/p&gt;&lt;p&gt;ಇನ್ನು ಫ್ಯಾಷನ್ ಆಯ್ಕೆಗಳ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳುವುದಾಗಿ ಹೇಳಿರುವ ಐಶ್ವರ್ಯ ಲಕ್ಷ್ಮಿ, ಟ್ರೋಲಿಂಗ್&zwnj;ಗಳನ್ನು ಎದುರಿಸುವ ಅನುಭವವನ್ನೂ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದೀಗ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿವೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/malayalam-actress-aishwarya-lekshmi-breaks-silence-on-dress-trolling-it-was-my-choice-gvd/articleshow-ltagutm"/>
        </item>
        <item>
            <title><![CDATA[ಲವ್​ ಬ್ರೇಕಪ್​, ಮದುವೆ, ಡಿಪ್ರೆಷನ್​, ಮೋಸ: Lakshmi Nivasa ನಟಿ ಅನಿಕಾ ಸಿಂಧ್ಯಾ ಓಪನ್​ ಮಾತು]]></title>
            <link>https://kannada.asianetnews.com/gallery/entertainment/real-life-love-breakup-depression-cheating-lakshmi-nivasa-actress-anika-sindhya-suc-7vnco2r</link>
            <guid isPermaLink="true">https://kannada.asianetnews.com/gallery/entertainment/real-life-love-breakup-depression-cheating-lakshmi-nivasa-actress-anika-sindhya-suc-7vnco2r</guid>
            <pubDate>Mon, 07 Sep 2026 19:29:05 +0530</pubDate>
            <description><![CDATA[&lt;p&gt;'ಲಕ್ಷ್ಮೀ ನಿವಾಸ' ಖ್ಯಾತಿಯ ನಟಿ ಅನಿಕಾ ಸಿಂಧ್ಯ ಅವರು ತಮ್ಮ ಪ್ರೀತಿಯಲ್ಲಿನ ಮೋಸ ಮತ್ತು ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರೀತಿಸಿದ ವ್ಯಕ್ತಿಗಿಂತ, ಆತನಿಗಾಗಿ ವ್ಯರ್ಥ ಮಾಡಿದ ಸಮಯದ ಬಗ್ಗೆ ಹೆಚ್ಚು ಪಶ್ಚಾತ್ತಾಪವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y29t9nfked1wree9bmsem6,imgname-anikha-sindya-1788789188917.jpg" type="image/jpeg" height="390" width="690"/>
            <content:encoded><![CDATA[&lt;p&gt;'ಲಕ್ಷ್ಮೀ ನಿವಾಸ' ಖ್ಯಾತಿಯ ನಟಿ ಅನಿಕಾ ಸಿಂಧ್ಯ ಅವರು ತಮ್ಮ ಪ್ರೀತಿಯಲ್ಲಿನ ಮೋಸ ಮತ್ತು ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರೀತಿಸಿದ ವ್ಯಕ್ತಿಗಿಂತ, ಆತನಿಗಾಗಿ ವ್ಯರ್ಥ ಮಾಡಿದ ಸಮಯದ ಬಗ್ಗೆ ಹೆಚ್ಚು ಪಶ್ಚಾತ್ತಾಪವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಲಕ್ಷ್ಮೀ ಬಾರಮ್ಮ ಸೇರಿದಂತೆ 50ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟಿಸಿ, ಸುಮಾರು ಎಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರೊ ನಟಿ ಅನಿಕಾ ಸಿಂಧ್ಯ. ಯಾಹೂ, ಜೊತೆಜೊತೆಯಲಿ, ನೆನಪಿರಲಿ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ್ದರೂ, ನನ್ನಂಥವಳಿಗೆ ಸಿನಿಮಾ ಇಂಡಸ್ಟ್ರಿ ಉಸಾಬರಿಯೇ ಬೇಡ ಎಂದುಕೊಂಡು ಸಿನಿಮಾದಿಂದ ಹೊರಕ್ಕೆ ಬಂದು ಸೀರಿಯಲ್​ಗಳಲ್ಲಿಯೇ ಮಿಂಚುತ್ತಿರುವ ಅನಿಕಾ ಅವರು ಸೀರಿಯಲ್​ ಪ್ರೇಮಿಗಳ ಫೆವರೆಟ್​ ವಿಲನ್​ ಕೂಡ ಹೌದು. ಸದ್ಯ ಅವರು ಲಕ್ಷ್ಮೀ ನಿವಾಸದಲ್ಲಿ (Lakshmi Nivasa Serial) ನೀಲು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಈಗ ನಟಿಸಿರುವ ಹಲವಾರು ಸೀರಿಯಲ್​ಗಳಲ್ಲಿ ಇವರದ್ದು ನೆಗೆಟಿವ್​ ರೋಲ್​ಗಳೇ. ಒಂದು ನೆಗೆಟಿವ್​ ರೋಲ್​ ಹಿಟ್​ ಆಯಿತು ಎಂದಾಕ್ಷಣ ಸಹಜವಾಗಿ ಅದೇ ರೋಲ್​ಗಳು ನಟ-ನಟಿಯರನ್ನು ಹುಡುಕಿ ಬರುವುದು ಇದೆ. ಅವರಿಗೆ ಇಷ್ಟ ಇರಲಿ, ಇಲ್ಲದೇ ಇರಲಿ, ಇಂಥ ರೋಲ್​ ಮಾಡುವುದು ಅನಿವಾರ್ಯ ಎನ್ನುವ ಸನ್ನಿವೇಶವೂ ಎದುರಾಗಿಬಿಡುತ್ತದೆ. ಅಂಥವರಲ್ಲಿ ಒಬ್ಬರು ಅನಿಕಾ.&lt;/p&gt;&lt;img&gt;&lt;p&gt;ಇದೀಗ ನಟಿ, ತಮ್ಮ ಲವ್​ ಫೇಲ್ಯೂರ್​ ಮತ್ತು ಡಿಪ್ರೆಷನ್​ ಬಗ್ಗೆ ಮಾತನಾಡಿದ್ದಾರೆ. SumanTv Kannada Entertainmentಗೆ ನೀಡಿರುವ ಸಂದರ್ಶನದಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ. ನಾನು ಪ್ರೀತಿಯಲ್ಲಿ ಮೋಸ ಹೋದೆ. ಆದರೆ ಆ ಹುಡುಗನನ್ನು ಕಳೆದುಕೊಂಡೆ ಅಂತ ಡಿಪ್ರೆಷನ್​ಗೆ ನಾನು ಹೋಗಲಿಲ್ಲ. ಆದರೆ ನನ್ನ ಜೀವನದ ಅಮೂಲ್ಯ ವರ್ಷಗಳನ್ನು ಆತನಿಗಾಗಿ ಕಳೆದುಬಿಟ್ಟೆನಲ್ಲ ಎಂದು ಒಂದು ರೀತಿ ಡಿಪ್ರೆಷನ್​ ಆಯ್ತು. ಅದನ್ನು ಖಿನ್ನತೆ ಎನ್ನಲು ಆಗದು. ನನ್ನನ್ನು ನಾನು ಹೀಲ್​ ಮಾಡಿಕೊಳ್ಳಲು ಕೊಟ್ಟಿರುವ ಟೈಮ್​ ಅದು ಎಂದಿದ್ದಾರೆ ನಟಿ ಅನಿಕಾ.&lt;/p&gt;&lt;img&gt;&lt;p&gt;ನಾನು ಅರ್ಜೆಂಟ್​ನಲ್ಲಿ ಯಾಕೆ ಟೈಂ ವೇಸ್ಟ್​ ಮಾಡಿಕೊಂಡೆ. ಆ ಬಾವಿಯೊಳಗೆ ತರಾತುರಿಯಲ್ಲಿ ಯಾಕೆ ಬಿದ್ದೆ, ಈಗಿರುವ ಮೈಂಡ್​ಸೆಟ್​, ಕೂಲ್​ ಆಗಿ ಯೋಚನೆ ಮಾಡುವುದು ಯಾಕೆ ಆ ಟೈಮ್​ನಲ್ಲಿ ನನಗೆ ಬರಲಿಲ್ಲ ಎನ್ನುವ ಬಗ್ಗೆ ನೋವಾಗ್ತಿದೆ. ಇದರಿಂದ ನನಗೆ ರಿಗ್ರೇಟ್​ ಇದೆಯೇ ವಿನಾ ಆ ವ್ಯಕ್ತಿ ಹೋದ ಎನ್ನುವ ಬಗ್ಗೆ ಬೇಸರ ಇಲ್ಲ ಎಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಪಾರ್ಟನರ್​ಗಳಿಗೆ ಬ್ರಾಡ್​ ಮೈಂಡೆಡ್​ ಮುಖ್ಯ. ಅವರಿಗೆ ಅದೇ ರೀತಿಯ ಮೆಂಟ್ಯಾಲಿಟಿ ಇರಬೇಕು. ಇಲ್ಲದಿದ್ದರೆ ಜೀವನ ತುಂಬಾ ಕಷ್ಟ ಎಂದಿದ್ದಾರೆ ನಟಿ. ಪತ್ನಿ ಆ್ಯಕ್ಟ್​ ಮಾಡಿದರೆ ಓಕೆ ಅನ್ನಬೇಕು, ಸಪೋರ್ಟ್​ ಮಾಡಬೇಕು. ಇಲ್ಲದಿದ್ದರೆ, ನಟಿಯಾದವಳು ನನಗೆ ಆ್ಯಕ್ಟಿಂಗ್​ ಬೇಡ, ಗೃಹಿಣಿಯಾಗಿ ಇರ್ತೇನೆ ಎಂದು ಒಪ್ಪಿಕೊಳ್ಳಬೇಕು. ಹೀಗೆ ಇಬ್ಬರ ಮನಸ್ಥಿತಿ ಇದ್ದರಷ್ಟೇ ಲೈಫ್​ ಸಕ್ಸಸ್​ ಆಗುತ್ತದೆ ಎಂದಿದ್ದಾರೆ ಅನಿಕಾ.&lt;/p&gt;&lt;img&gt;&lt;p&gt;ಇನ್ನು ನಟಿಯ ಕುರಿತು ಹೇಳುವುದಾದರೆ, ಕಾದಂಬರಿ ಸೀಡಿಯಲ್​ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ, ಹೆಚ್ಚಾಗಿ ಕಾಣಿಸಿಕೊಂಡದ್ದು ನೆಗೆಟಿವ್ ಪಾತ್ರಗಳಲ್ಲಿ. ಡಾಕ್ಟರ್ ಆಗಬೇಕೆಂದುಕೊಂಡಿದ್ದ ಅನಿಕಾ ಅವರಿಗೆ ಬಣ್ಣದ ಲೋಕ ಒಲಿದಿದ್ದೂ ಅಚಾನಕ್​ ಆಗಿಯೇ. ಖಳನಾಯಕಿಯಾಗಿಯೇ ಗುರುತಿಸಿಕೊಂಡಿರುವ ಅನಿಕಾ ತಾವು ಯಾವ ರೋಲ್​ಗೂ ಇದುವರೆಗೆ ಆಡಿಶನ್ ಕೊಟ್ಟಿಲ್ಲ ಎಂದು ಈ ಹಿಂದೆ ಹೇಳಿದ್ದರು. ಮೊದಲೆಲ್ಲಾ ಡೈಲಾಗ್ ಡೆಲಿವರಿ ಬಗ್ಗೆ ನಿರ್ದೇಶಕರು ಗಮನ ಕೊಡುತ್ತಿದ್ದರು. ಈಗ ಆಡಿಷನ್​ ಹೆಚ್ಚಾಗಿ ಮಾಡ್ತಾರೆ ಜೊತೆಗೆ ಲುಕ್ ಟೆಸ್ಟಿಗೆ ಪ್ರಾಮುಖ್ಯತೆ ಇದೆ. ಆದರೆ ನಾನು ಶುರು ಮಾಡಿದಾಗ ಹೀಗೆಲ್ಲಾ ಇರಲಿಲ್ಲ ಎಂದು ನಟಿ ಹೇಳಿದ್ದಾರೆ. ಆಕಾಶದೀಪ, ಗುಪ್ತಗಾಮಿನಿ, ಕುಂಕುಮಭಾಗ್ಯ, ಕಂಕಣ, ನನ್ನವಳು, ಆಕಾಶದೀಪ, ಸುಕನ್ಯಾ, ಮನೆಮಗಳು, ಶುಭಮಂಗಳ, ಮಂದಾರ, ಸೂರ್ಯಕಾಂತಿ, ಲಕ್ಷ್ಮಿ ಬಾರಮ್ಮ ಹೀಗೆ ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಲಕ್ಷ್ಮಿ ಬಾರಮ್ಮ ಸೀರಿಯಲ್​ನಲ್ಲಿ ವಿಲನ್​ ಕುಮುದಾ ರೋಲ್​ ಸಕತ್​ ಹೆಸರು ತಂದುಕೊಟ್ಟಿತು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/real-life-love-breakup-depression-cheating-lakshmi-nivasa-actress-anika-sindhya-suc-7vnco2r"/>
        </item>
        <item>
            <title><![CDATA[ವಿಮಾನದ ಒಳಕ್ಕೆ ಬಂದ ಮಗುವಿಗೆ ಲಾಲಿ ಹಾಡಿದ ಸಂಗೀತಾ, ಬಿಗ್ ಬಾಸ್ ಮೊದಲ ದಿನವೇ ಟ್ವಿಸ್ಟ್]]></title>
            <link>https://kannada.asianetnews.com/tv-talk/bigg-boss-kannada-day-1-twist-contestant-sangeetha-cuddles-baby-inside-the-flight/articleshow-smn7rgg</link>
            <guid isPermaLink="true">https://kannada.asianetnews.com/tv-talk/bigg-boss-kannada-day-1-twist-contestant-sangeetha-cuddles-baby-inside-the-flight/articleshow-smn7rgg</guid>
            <pubDate>Mon, 07 Sep 2026 18:57:24 +0530</pubDate>
            <description><![CDATA[&lt;p&gt;ಬಿಗ್ ಬಾಸ್ 13ನೇ ಸೀಸನ್ ಆರಂಭದಲ್ಲೇ ಟ್ವಿಸ್ಟ್. ಪ್ರತಿ ಬಾರಿ ವೇದಿಕೆ ಮೇಲೆ ಬಂದ ಸ್ಪರ್ಧಿಗಳು ಮನೆಯೊಳಗೆ ಹೋದರೆ ಈ ಬಾರಿ ವಿಮಾನದಲ್ಲೇ ಉಳಿದಿದ್ದಾರೆ. ಇದರ ನಡುವೆ ವಿಮಾನ ಒಳಗೆ ಬಂದ ಪುಟ್ಟ ಕಂದನಿಗೆ ಸಂಗೀತಾ ಲಾಲಿ ಹಾಡಿದ್ದಾರೆ. ಮಗುವಿನ ನಗಿಸಿದ್ದು ಯಾರು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y0sxa7trbwt68xwjp401zh,imgname-big-boss-1788787619143.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.07)&lt;/strong&gt; ಬಿಗ್ ಬಾಸ್ 13ನೇ ಆವೃತ್ತಿ ಅದ್ಧೂರಿಯಾಗಿ ಆರಂಭಗೊಂಡಿದೆ. ಗ್ರ್ಯಾಂಡ್ ಪ್ರೀಮಿಯರ್ ಮೂಲಕ 16 ಸ್ಪರ್ಧಿಗಳು ಕಣದಲ್ಲಿದ್ದಾರೆ. ವಿಶೇಷ ಅಂದರೆ ಈ ಬಾರಿ ವಿಮಾನ ಪರಿಕಲ್ಪನೆ ಮೂಲಕ ಹೊಸತನ ನೀಡಲಾಗಿದೆ. 16 ಸ್ಪರ್ಧಿಗಳು ವಿಮಾನದೊಳಗೆ ಉಳಿದುಕೊಂಡಿದ್ದಾರೆ. ಇನ್ನು ಮನೆ ಸೇರಿಲ್ಲ, ಇಷ್ಟೇ ಅಲ್ಲ ಆರಂಭದಲ್ಲೇ ಟ್ವಿಸ್ಟ್ ಕೊಟ್ಟು ವಿಮಾನದಲ್ಲೇ ಟಾಸ್ಕ್ ನೀಡಲಾಗಿದೆ. ವಿಮಾನದೊಳಕ್ಕೆ ಪುಟ್ಟ ಕಂದನ ಆಗಮನವಾಗಿದೆ. ಮಗುವನ್ನು ನಗಿಸಲು ಟಾಸ್ಕ್ ನೀಡಲಾಗಿದ್ದು, ಸಂಗೀತಾ ಲಾಲಿ ಹಾಡಿದ್ದಾರೆ. ಲಾಲಿ ಹಾಡಿ ಮುದ್ದು ಮಾಡಿದ ಸಂಗೀತಾ ಮಗುವನ್ನು ನೇರವಾಗಿ ಓಂ ಪ್ರಕಾಶ್ ಕೈಗೆ ನೀಡಿದ್ದಾರೆ. ಓಂ ಪ್ರಕಾಶ್ ಮ್ಯಾಜಿಕ್ ಮಾಡಿದ್ದಾರೆ.&lt;/p&gt;&lt;h2&gt;ಮಗುವಿನ ಮುದ್ದು ಮಾಡಿದ ಸಂಗೀತಾ&lt;/h2&gt;&lt;p&gt;ಪ್ರತಿ ಬಾರಿ ಕಿಚ್ಚು ಸುದೀಪ್ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡ ಬಳಿಕ ನೇರವಾಗಿ ಮನೆಯೊಳಗೆ ಪ್ರವೇಶ ಮಾಡುತ್ತಿದ್ದರು. ಆದರೆ ಈ ಬಾರಿ ಎಲ್ಲರು ವಿಮಾನದಲ್ಲೇ ಉಳಿಯಬೇಕಾಗಿದೆ. ವಿಮಾನದೊಳಗೆ ಬಂದ ಪುಟ್ಟ ಕಂದನ ಒಬ್ಬೊಬ್ಬೊರೆ ಎತ್ತಿಕೊಂಡು ಮುದ್ದಾಡಿದ್ದಾರೆ. ಆದರೆ ಮಗುವಿನ ಅಳು ನಿಲ್ಲಲಿಲ್ಲ. ಕೊನೆಗೆ ಸಂಗೀತಾ ಮಗುವನ್ನು ಎತ್ತಿ ಮುದ್ದಾಡಿದ್ದಾರೆ. ಲಾಲಿ ಹಾಡಿದ್ದಾರೆ. ಸಂಗೀತಾ ಪ್ರೀತಿ, ಆರೈಕೆಗೆ ಮಗು ಅಳು ನಿಲ್ಲಿಸಿ ನಗಲು ಆರಂಭಿಸಿದೆ. ಅಲ್ಲಿಗೆ ಸ್ಪರ್ಧಿಗಳ ಪ್ರಯತ್ನ ಯಶಸ್ವಿಯಾಗಿದೆ.&lt;/p&gt;&lt;p&gt;ಸಂಗೀತಾ ಮಗುವಿನ ಅಳು ನಿಲ್ಲಿಸಿದ ನಗುವಂತೆ ಮಾಡಿದ್ದಾರೆ. ಇದೇ ವೇಳೆ ಸಂಗೀತಾ ಕೈಯಿಂದ ಮಗುವನ್ನು ಎತ್ತಿಕೊಂಡ ಓಂ ಪ್ರಕಾಶ್ ಹಣೆಗೆ ಮುತ್ತಿಕ್ಕಿದ್ದಾರೆ. ಓಂ ಪ್ರಕಾಶ್ ಕೈಗಳ ಸ್ಪರ್ಶಕ್ಕೆ ಮಗು ನಗಲು ಆರಂಭಿಸಿದೆ. ಇತ್ತ ಸಹ ಸ್ಪರ್ಧಿಗಳು ತಾತನ ಕೈಯಲ್ಲಿ ಮಗು ನಗುತ್ತಿದೆ ಎಂದು ಸಂಭ್ರಮಿಸಿದ್ದಾರೆ. ಆದರೆ ಈ ಟಾಸ್ಕ್ ಇಲ್ಲಿಗೆ ಮುಗಿದಿಲ್ಲ. ಈ ಟಾಸ್ಕ್&zwnj;ನಲ್ಲಿ ಕೆಲ ಟ್ವಿಸ್ಟ್ ನೀಡಲಾಗಿದೆ. ಈ ಕುತೂಹಲ ಇಂದು ರಾತ್ರಿ ತಣಿಯಲಿದೆ.&lt;/p&gt;&lt;h2&gt;ಬಿಗ್ ಬಾಸ್ 13ರ ಸ್ಪರ್ಧಿಗಳು&lt;/h2&gt;&lt;p&gt;ಬಿಗ್ ಬಾಸ್ 13ನೇ ಆವೃತ್ತಿ ಹಲವು ವಿಶೇಷತೆಗಳಿಂದ ಕೂಡಿದೆ. 16 ಸ್ಪರ್ಧಿಗಳು ಯಾರು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಅದ್ದೂರಿ ಪ್ರೀಮಿಯರ್&zwnj;ನಲ್ಲಿ 16 ಸ್ಪರ್ಧಿಗಳು ವೇದಿಕೆ ಮೇಲೆ ಬಂದಿದ್ದಾರೆ.ಸೆಲೆಬ್ರೆಟಿಗಳಾದ ಜಗದೀಶ್ ಎಂಬಿ, ಸೌಂದರ್ಯ ಶೆಟ್ಟಿ, ಅವಿನಾಶ್ ಶತಮರ್ಶನ್, ಪ್ರಥಮ ಪ್ರಸಾದ್, ಗಗನ್ ಚಿನ್ನಪ್ಪ, ಸಂಗೀತಾ, ಕಾವ್ಯ ಗೌಡ, ಓಂ ಪ್ರಕಾಶ್ ರಾವ್, ಅಸಿಯಾ ಫಿರ್ಡೋಸ್, ತಾಂಡವ್ ರಾಮ್, ವೈಷ್ಣವಿ, ಯಶಸ್ ಕೃಷ್ಣ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಅಗ್ನಿಪರೀಕ್ಷೆ ಮೂಲಕ ಲಿಖಿತ್ ಗೊಂಡಿ, ಧನುಷ್, ಕೃಷ್ಣ ಶಾಸ್ತ್ರಿ ಹಾಗೂ ಮಂಜಾ ಬಿಗ್ ಬಾಸ್ 13ನೇ ಆವೃತ್ತಿಗೆ ಸೇರಿಕೊಂಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Chethan Kumar</dc:creator>
            <atom:link href="https://kannada.asianetnews.com/tv-talk/bigg-boss-kannada-day-1-twist-contestant-sangeetha-cuddles-baby-inside-the-flight/articleshow-smn7rgg"/>
        </item>
        <item>
            <title><![CDATA[ನೀವು ಈ ತರಹದ 'ನ್ಯೂ ಏಜ್ ಲವ್ ಸ್ಟೋರಿ' ಸಿನಿಮಾ ನೋಡೋಕೆ ಚಾನ್ಸೇ ಇಲ್ಲ.. ಊಹಿಸಲಾಗದ ಟ್ವಿಸ್ಟ್!]]></title>
            <link>https://kannada.asianetnews.com/gallery/entertainment/kannada-dubbed-chennai-love-story-ott-release-where-to-watch-kiran-abbavaram-s-hit-movie-gvd-1vciadx</link>
            <guid isPermaLink="true">https://kannada.asianetnews.com/gallery/entertainment/kannada-dubbed-chennai-love-story-ott-release-where-to-watch-kiran-abbavaram-s-hit-movie-gvd-1vciadx</guid>
            <pubDate>Mon, 07 Sep 2026 18:23:13 +0530</pubDate>
            <description><![CDATA[&lt;p&gt;ಕಿರಣ್ ಅಬ್ಬವರಂ ಹಾಗೂ ಶ್ರೀ ಗೌರಿ ಪ್ರಿಯಾ ಅಭಿನಯದ &lsquo;ಚೆನ್ನೈ ಲವ್ ಸ್ಟೋರಿ&rsquo; ಸಿನಿಮಾ ಇದೀಗ OTTಗೆ ಎಂಟ್ರಿ ಕೊಟ್ಟಿದೆ. ಥಿಯೇಟರ್&zwnj;ನಲ್ಲಿ ಸಕ್ಸಸ್ ಕಂಡ ಈ ನ್ಯೂ ಏಜ್ ಲವ್ ಸ್ಟೋರಿ 15 ಕೋಟಿ ರೂ. ಬಜೆಟ್&zwnj;ನಲ್ಲಿ ನಿರ್ಮಾಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xy6tqyspfn7mn0yj90xnwb,imgname-1-1788784896766.png" type="image/jpeg" height="390" width="690"/>
            <content:encoded><![CDATA[&lt;p&gt;ಕಿರಣ್ ಅಬ್ಬವರಂ ಹಾಗೂ ಶ್ರೀ ಗೌರಿ ಪ್ರಿಯಾ ಅಭಿನಯದ &lsquo;ಚೆನ್ನೈ ಲವ್ ಸ್ಟೋರಿ&rsquo; ಸಿನಿಮಾ ಇದೀಗ OTTಗೆ ಎಂಟ್ರಿ ಕೊಟ್ಟಿದೆ. ಥಿಯೇಟರ್&zwnj;ನಲ್ಲಿ ಸಕ್ಸಸ್ ಕಂಡ ಈ ನ್ಯೂ ಏಜ್ ಲವ್ ಸ್ಟೋರಿ 15 ಕೋಟಿ ರೂ. ಬಜೆಟ್&zwnj;ನಲ್ಲಿ ನಿರ್ಮಾಣವಾಗಿದೆ.&lt;/p&gt;&lt;img&gt;&lt;p&gt;ಓಟಿಟಿ ಪ್ರೇಕ್ಷಕರು ಬಹುದಿನಗಳಿಂದ ಕಾತರದಿಂದ ಕಾಯುತ್ತಿದ್ದ &lsquo;ಚೆನ್ನೈ ಲವ್ ಸ್ಟೋರಿ&rsquo; ಸಿನಿಮಾ ಇದೀಗ ಡಿಜಿಟಲ್ ಸ್ಟ್ರೀಮಿಂಗ್&zwnj; ಆಗುತ್ತಿದೆ. ಥಿಯೇಟರ್&zwnj;ನಲ್ಲಿ ಯುವ ಪ್ರೇಕ್ಷಕರನ್ನು ಸೆಳೆದಿದ್ದ ಈ ನ್ಯೂ ಏಜ್ ಲವ್ ಸ್ಟೋರಿ ಈಗಾಗಲೇ ಓಟಿಟಿಯಲ್ಲಿ ಲಭ್ಯವಾಗಿದೆ. ಹೀಗಾಗಿ ಈ ವೀಕೆಂಡ್&zwnj;ನಲ್ಲಿ ಒಂದು ವಿಭಿನ್ನ ಪ್ರೇಮಕಥೆ ನೋಡಬೇಕು ಎನ್ನುವವರಿಗೆ &lsquo;ಚೆನ್ನೈ ಲವ್ ಸ್ಟೋರಿ&rsquo; ಉತ್ತಮ ಆಯ್ಕೆಯಾಗಬಹುದು.&lt;/p&gt;&lt;img&gt;&lt;p&gt;ಸತತ ಯಶಸ್ಸಿನಲ್ಲಿರುವ ನಟ ಕಿರಣ್ ಅಬ್ಬವರಂ ಅಭಿನಯದ ಇತ್ತೀಚಿನ ಸಿನಿಮಾ &lsquo;ಚೆನ್ನೈ ಲವ್ ಸ್ಟೋರಿ&rsquo;. ರವಿ ನಂಬೂರಿ ನಿರ್ದೇಶನದ ಈ ಪ್ರೇಮಕಥೆಯಲ್ಲಿ ತೆಲುಗು ನಟಿ ಶ್ರೀ ಗೌರಿ ಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಜುಲೈ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಸಕ್ಸಸ್ ಕಂಡಿತ್ತು. ಕಿರಣ್ ಅಬ್ಬವರಂ ಹಾಗೂ ಶ್ರೀ ಗೌರಿ ಪ್ರಿಯಾ ಅವರ ಅಭಿನಯ, ಕೆಮಿಸ್ಟ್ರಿ ಮತ್ತು ಸ್ಕ್ರೀನ್ ಪ್ರೆಸೆನ್ಸ್&zwnj;ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಜೊತೆಗೆ ಮಣಿಶರ್ಮ ಅವರ ಹಾಡುಗಳು ಹಾಗೂ ಹಿನ್ನೆಲೆ ಸಂಗೀತವೂ ಸಿನಿಮಾದ ಪ್ರಮುಖ ಆಕರ್ಷಣೆಯಾಗಿತ್ತು.&lt;/p&gt;&lt;img&gt;&lt;p&gt;ಕೇವಲ 15 ಕೋಟಿ ರೂಪಾಯಿ ಬಜೆಟ್&zwnj;ನಲ್ಲಿ ನಿರ್ಮಾಣವಾಗಿದ್ದ &lsquo;ಚೆನ್ನೈ ಲವ್ ಸ್ಟೋರಿ&rsquo;, ವಿಶ್ವಾದ್ಯಂತ 50 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ. ಥಿಯೇಟರ್&zwnj;ನಲ್ಲಿ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಓಟಿಟಿ ಬಿಡುಗಡೆಗಾಗಿ ಪ್ರೇಕ್ಷಕರು ಕಾದಿದ್ದರು. ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಜನಪ್ರಿಯ ಓಟಿಟಿ ಪ್ಲಾಟ್&zwnj;ಫಾರ್ಮ್ SonyLIV ಪಡೆದುಕೊಂಡಿದ್ದು, ಅದರಂತೆ ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟಿದೆ. ತೆಲುಗು, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿದೆ.&lt;/p&gt;&lt;img&gt;&lt;p&gt;&lsquo;ಚೆನ್ನೈ ಲವ್ ಸ್ಟೋರಿ&rsquo; ಸಿನಿಮಾಗೆ &lsquo;ಬೇಬಿ&rsquo; ಚಿತ್ರದ ಮೂಲಕ ಬ್ಲಾಕ್&zwnj;ಬಸ್ಟರ್ ಯಶಸ್ಸು ಕಂಡ ಸಾಯಿ ರಾಜೇಶ್ ಕಥೆ ಹಾಗೂ ಸ್ಕ್ರೀನ್&zwnj;ಪ್ಲೇ ಬರೆದಿದ್ದಾರೆ. ಖ್ಯಾತ ನಿರ್ಮಾಪಕರಾದ ಎಸ್&zwnj;ಕೆಎನ್ ಮತ್ತು ಸಾಯಿ ರಾಜೇಶ್ ಜಂಟಿಯಾಗಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಕಿರಣ್ ಅಬ್ಬವರಂ ಮತ್ತು ಶ್ರೀ ಗೌರಿ ಪ್ರಿಯಾ ಜೊತೆಗೆ ತ್ರಿಗುಣ್, ದೇವಿ ಪ್ರಸಾದ್, ಸಿರಿ ಹನುಮಂತು, ಪಿ. ವಾಸು ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹೆಸರೇ ಹೇಳುವಂತೆ ಸಿನಿಮಾದ ಕಥೆ ಚೆನ್ನೈ ನಗರದ ಹಿನ್ನೆಲೆಯಲ್ಲೇ ಸಾಗುತ್ತದೆ. ನಿರ್ದೇಶಕನಾಗಬೇಕೆಂಬ ಕನಸು ಹೊತ್ತ ಅನಾಥ ಯುವಕನೊಬ್ಬ ಹಾಗೂ ಮದುವೆ ನಿಶ್ಚಯವಾಗಿ ಕೊನೆಯ ಕ್ಷಣದಲ್ಲಿ ಅದು ಮುರಿದುಬಿದ್ದ ಯುವತಿಯೊಬ್ಬಳ ನಡುವೆ ಮೂಡುವ ಸ್ನೇಹ, ಪ್ರೀತಿ ಹಾಗೂ ನಂತರ ಎದುರಾಗುವ ಭಾವನಾತ್ಮಕ ಸನ್ನಿವೇಶಗಳೇ ಕಥೆಯ ಪ್ರಮುಖ ಅಂಶ. ಸಾಮಾನ್ಯ ಪ್ರೇಮಕಥೆಗಳಿಗಿಂತ ವಿಭಿನ್ನವಾಗಿ ನಿರೂಪಿಸಲಾಗಿದೆ ಎಂಬ ಕಾರಣಕ್ಕೆ ಸಿನಿಮಾ ಥಿಯೇಟರ್ ಬಿಡುಗಡೆಯ ಸಂದರ್ಭದಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/kannada-dubbed-chennai-love-story-ott-release-where-to-watch-kiran-abbavaram-s-hit-movie-gvd-1vciadx"/>
        </item>
        <item>
            <title><![CDATA[ಸಿನಿಮಾಗಳ ಮಧ್ಯೆ ಇಂಟರ್ವಲ್ ಯಾಕೆ ಬರುತ್ತೆ ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ!]]></title>
            <link>https://kannada.asianetnews.com/gallery/entertainment/why-do-movies-have-intervals-there-s-an-interesting-story-behind-this-mrq-rfuqnaq</link>
            <guid isPermaLink="true">https://kannada.asianetnews.com/gallery/entertainment/why-do-movies-have-intervals-there-s-an-interesting-story-behind-this-mrq-rfuqnaq</guid>
            <pubDate>Mon, 07 Sep 2026 18:00:06 +0530</pubDate>
            <description><![CDATA[&lt;p&gt;ಹಿಂದೆ ಫಿಲ್ಮ್ ರೀಲ್&zwnj;ಗಳನ್ನು ಬದಲಿಸಲು ಶುರುವಾದ ಇಂಟರ್ವಲ್ ಪದ್ಧತಿ, ಡಿಜಿಟಲ್ ಯುಗದಲ್ಲೂ ಭಾರತೀಯ ಚಿತ್ರರಂಗದಲ್ಲಿ ಮುಂದುವರೆದಿದೆ. ಭಾರತದಲ್ಲಿ ಇಂಟರ್ವಲ್ ಪ್ರೇಕ್ಷಕರ ನಿರೀಕ್ಷೆಯಾಗಿ ಮತ್ತು ಥಿಯೇಟರ್&zwnj;ಗಳ ವ್ಯಾಪಾರ ಪದ್ಧತಿಯಾಗಿ ಮುಂದುವರಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xx68prz7jd9kwkbrzsnhcn,imgname-theatre--3--1788783829720.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಿಂದೆ ಫಿಲ್ಮ್ ರೀಲ್&zwnj;ಗಳನ್ನು ಬದಲಿಸಲು ಶುರುವಾದ ಇಂಟರ್ವಲ್ ಪದ್ಧತಿ, ಡಿಜಿಟಲ್ ಯುಗದಲ್ಲೂ ಭಾರತೀಯ ಚಿತ್ರರಂಗದಲ್ಲಿ ಮುಂದುವರೆದಿದೆ. ಭಾರತದಲ್ಲಿ ಇಂಟರ್ವಲ್ ಪ್ರೇಕ್ಷಕರ ನಿರೀಕ್ಷೆಯಾಗಿ ಮತ್ತು ಥಿಯೇಟರ್&zwnj;ಗಳ ವ್ಯಾಪಾರ ಪದ್ಧತಿಯಾಗಿ ಮುಂದುವರಿದಿದೆ.&lt;/p&gt;&lt;img&gt;&lt;p&gt;ಥಿಯೇಟರ್&zwnj;ನಲ್ಲಿ ಸಿನಿಮಾ ನೋಡುವಾಗ ಕಥೆ ಸಖತ್ ಸಸ್ಪೆನ್ಸ್&zwnj;ನಲ್ಲಿ ಸಾಗುತ್ತಿರುತ್ತದೆ. ಆಗ ಇದ್ದಕ್ಕಿದ್ದಂತೆ ಪರದೆ ಮೇಲೆ &quot;INTERVAL&quot; ಅಂತ ಬರುತ್ತೆ. ಕೆಲವರಿಗೆ ಇದು ಪಾಪ್&zwnj;ಕಾರ್ನ್ ಸಮಯ, ಇನ್ನು ಕೆಲವರಿಗೆ ವಾಶ್&zwnj;ರೂಮ್ ಬ್ರೇಕ್. ಆದರೆ ಇಂಟರ್ವಲ್ ಕೇವಲ ವಿರಾಮವಷ್ಟೇ ಅಲ್ಲ. ಭಾರತೀಯ ಸಿನಿಮಾದ ಕಥೆ ಹೇಳುವ ಶೈಲಿಯಲ್ಲಿ ಇದಕ್ಕೊಂದು ಪ್ರಮುಖ ಕಾರಣವಿದೆ.&lt;/p&gt;&lt;img&gt;&lt;p&gt;ಈಗಿನ ಡಿಜಿಟಲ್ ಪ್ರೊಜೆಕ್ಟರ್ ಕಾಲದಲ್ಲಿ, ಸಿನಿಮಾ ಓಡಿಸಲು ರೀಲ್ ಬದಲಿಸುವ ಅಗತ್ಯವಿಲ್ಲ. ಆದರೆ, ಹಿಂದೆಲ್ಲಾ ಸಿನಿಮಾಗಳನ್ನು ದೊಡ್ಡ ದೊಡ್ಡ film reels-ಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಉದ್ದನೆಯ ಸಿನಿಮಾಗಳಲ್ಲಿ ಒಂದು ರೀಲ್ ಮುಗಿದಾಗ, ಇನ್ನೊಂದು ರೀಲ್ ಹಾಕಲು projectionist-ಗೆ ಸಮಯ ಬೇಕಿತ್ತು. ಇದಕ್ಕಾಗಿಯೇ ಸಿನಿಮಾದ ಮಧ್ಯೆ ವಿರಾಮ ನೀಡುವ ಪದ್ಧತಿ ಶುರುವಾಯಿತು. ತಂತ್ರಜ್ಞಾನ ಬೆಳೆದು ಡಿಜಿಟಲ್ ಯುಗ ಬಂದರೂ, ಭಾರತದಲ್ಲಿ ಇಂಟರ್ವಲ್ ಪದ್ಧತಿ ಮಾತ್ರ ಬದಲಾಗಲಿಲ್ಲ. ಈಗ ಇದು ನಮ್ಮ ಸಿನಿಮಾ ಸಂಸ್ಕೃತಿಯ ಭಾಗವಾಗಿದೆ.&lt;/p&gt;&lt;img&gt;&lt;p&gt;ಇದು ಸಿನಿಮಾ ಪ್ರೇಮಿಗಳಿಗೆ ಬಹಳ ಇಂಟ್ರೆಸ್ಟಿಂಗ್ ವಿಚಾರ. ಹೆಚ್ಚಿನ ಭಾರತೀಯ ಸಿನಿಮಾಗಳಲ್ಲಿ ಇಂಟರ್ವಲ್&zwnj;ಗೆ ಕೆಲವು ನಿಮಿಷಗಳ ಮೊದಲು ಒಂದು ದೊಡ್ಡ ಟ್ವಿಸ್ಟ್, ಆಘಾತಕಾರಿ ಘಟನೆ, ಫೈಟ್ ಅಥವಾ ಅನಿರೀಕ್ಷಿತ ದೃಶ್ಯವನ್ನು ಇಟ್ಟಿರುತ್ತಾರೆ. ಇದನ್ನೇ ಅಭಿಮಾನಿಗಳು &quot;Interval Block&quot; ಎಂದು ಕರೆಯುತ್ತಾರೆ. ಮುಂದೆ ಏನಾಗಬಹುದು? ಎಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಬಿಟ್ಟು ಕಳುಹಿಸುವುದೇ ಇದರ ಉದ್ದೇಶ.&lt;/p&gt;&lt;img&gt;&lt;p&gt;ಇಂಟರ್ವಲ್ ಕೇವಲ ಪ್ರೇಕ್ಷಕರು ರೆಸ್ಟ್ ಮಾಡುವ ಸಮಯವಲ್ಲ. ಇದು ಥಿಯೇಟರ್&zwnj;ಗಳಿಗೆ ಆದಾಯ ತರುವ ಪ್ರಮುಖ ಸಮಯವೂ ಹೌದು. ಈ ವಿರಾಮದ ಸಮಯದಲ್ಲಿ ಜನರು ಪಾಪ್&zwnj;ಕಾರ್ನ್, ಜ್ಯೂಸ್, ಕಾಫಿ, ಸಮೋಸಾದಂತಹ ತಿಂಡಿ-ತಿನಿಸುಗಳನ್ನು ಖರೀದಿಸುತ್ತಾರೆ. ಇದರಿಂದ ಥಿಯೇಟರ್&zwnj;ಗಳ ವ್ಯಾಪಾರ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ದೀರ್ಘಕಾಲ ಕುಳಿತ ಪ್ರೇಕ್ಷಕರಿಗೆ ಸ್ವಲ್ಪ ವಿಶ್ರಾಂತಿ, ವಾಶ್&zwnj;ರೂಮ್&zwnj;ಗೆ ಹೋಗಲು ಮತ್ತು ಆಹಾರ ಖರೀದಿಸಲು ಈ ವಿರಾಮ ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಹಲವು ದೇಶಗಳಲ್ಲಿ ಆಧುನಿಕ ಸಿನಿಮಾಗಳನ್ನು ಸಾಮಾನ್ಯವಾಗಿ ವಿರಾಮವಿಲ್ಲದೆ ಪ್ರದರ್ಶಿಸಲಾಗುತ್ತದೆ. ಡಿಜಿಟಲ್ ಪ್ರೊಜೆಕ್ಟರ್ ಬಂದ ಮೇಲೆ ರೀಲ್ ಬದಲಿಸುವ ಅಗತ್ಯವೂ ಇಲ್ಲವಾಯಿತು. ಆದರೆ, ಭಾರತದಲ್ಲಿ ಇಂಟರ್ವಲ್ ಪ್ರೇಕ್ಷಕರ ನಿರೀಕ್ಷೆಯಾಗಿ ಮತ್ತು ಥಿಯೇಟರ್&zwnj;ಗಳ ವ್ಯಾಪಾರ ಪದ್ಧತಿಯಾಗಿ ಮುಂದುವರಿದಿದೆ.&lt;/p&gt;&lt;p&gt;ಇದೇ ಕಾರಣಕ್ಕೆ ಕೆಲವು Hollywood ಸಿನಿಮಾಗಳಿದ್ರೂ ಭಾರತೀಯ ಥಿಯೇಟರ್&zwnj;ಗಳಲ್ಲಿ ಇಂಟರ್ವಲ್ ಸೇರಿಸಲಾಗುತ್ತದೆ. ಆದರೆ ಆ ಸಿನಿಮಾಗಳನ್ನು ಇಂಟರ್ವಲ್ ಗಮನದಲ್ಲಿಟ್ಟುಕೊಂಡು ಮಾಡಿರುವುದಿಲ್ಲ. ಹೀಗಾಗಿ, ಕೆಲವೊಮ್ಮೆ ಪ್ರಮುಖ ದೃಶ್ಯದ ಮಧ್ಯೆಯೇ ಸಿನಿಮಾ ನಿಲ್ಲಿಸಿದಾಗ ಪ್ರೇಕ್ಷಕರಿಗೆ ಕಿರಿಕಿರಿಯಾಗುತ್ತದೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/entertainment/why-do-movies-have-intervals-there-s-an-interesting-story-behind-this-mrq-rfuqnaq"/>
        </item>
        <item>
            <title><![CDATA[ಯಶ್ ಟಾಕ್ಸಿಕ್ ಸಿನಿಮಾಗೆ ಒಟಿಟಿಯಿಂದ ಹೊಸ ಆಫರ್,  ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಯಾವಾಗಾ ರಿಲೀಸ್?]]></title>
            <link>https://kannada.asianetnews.com/gallery/entertainment/yash-toxic-gets-new-ott-offer-when-will-the-film-release-on-digital-platform-r65xpql</link>
            <guid isPermaLink="true">https://kannada.asianetnews.com/gallery/entertainment/yash-toxic-gets-new-ott-offer-when-will-the-film-release-on-digital-platform-r65xpql</guid>
            <pubDate>Mon, 07 Sep 2026 17:59:42 +0530</pubDate>
            <description><![CDATA[&lt;p&gt;ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್&zwnj;ಗೂ ಮೊದಲು 200 ಕೋಟಿ ರೂಪಾಯಿ ವರೆಗೆ ಒಟಿಟಿ ಆಫರ್ ಮಾಡಿತ್ತು. ಇದೀಗ ಒಟಿಟಿಯಿಂದ ಹೊಸ ಆಫರ್ ನೀಡಲಾಗಿದೆ. ರಿಲೀಸ್ ಆಗಿ ಕೆಲ ದಿನಗಳ ಬಳಿಕ ಒಟಿಟಿ ಕೊಟ್ಟ ಆಫರ್ ಮೊತ್ತವೆಷ್ಟು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m10n1tdvcn2fd2d7r57tjxtc,imgname-toxic-day-1-collection-1787802216891.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್&zwnj;ಗೂ ಮೊದಲು 200 ಕೋಟಿ ರೂಪಾಯಿ ವರೆಗೆ ಒಟಿಟಿ ಆಫರ್ ಮಾಡಿತ್ತು. ಇದೀಗ ಒಟಿಟಿಯಿಂದ ಹೊಸ ಆಫರ್ ನೀಡಲಾಗಿದೆ. ರಿಲೀಸ್ ಆಗಿ ಕೆಲ ದಿನಗಳ ಬಳಿಕ ಒಟಿಟಿ ಕೊಟ್ಟ ಆಫರ್ ಮೊತ್ತವೆಷ್ಟು?&lt;/p&gt;&lt;img&gt;&lt;p&gt;ಯಶ್ ಅಭಿನಯದ ಟಾಕ್ಸಿಕ್ ದೇಶ ವಿದೇಶಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿ ಕೆಲ ದಿನಗಳು ಉರುಳಿದೆ. ಬಾಕ್ಸ್ ಆಫೀಸ್&zwnj;ನಲ್ಲಿ ಟಾಕ್ಸಿಕ್ ಸಿನಿಮಾ 350 ಕೋಟಿ ರೂಪಾಯಿ ದಾಟಿದೆ. ಬಹುನಿರೀಕ್ಷಿತ ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ನಿರೀಕ್ಷಿತ ಗಳಿಕೆ ಕಾಣದಿದ್ದರೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಒಟಿಟಿ ಹೊಸ ಆಫರ್ ಮುಂದಿಟ್ಟಿದೆ.&lt;/p&gt;&lt;img&gt;&lt;p&gt;ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್&zwnj;ಗೂ ಮೊದಲು ಒಟಿಟಿ ಪ್ಲಾಟ್&zwnj;ಫಾರ್ಮ್ 200 ಕೋಟಿ ರೂಪಾಯಿ ಆಫರ್ ನೀಡಿತ್ತು. 150 ಕೋಟಿ ರೂಪಾಯಿಯಿಂದ ಆರಂಭಗೊಂಡಿದ್ದ ಮಾತುಕತೆ 200 ಕೋಟಿ ರೂಪಾಯಿವರೆಗೂ ತಲುಪಿತ್ತು. ಆದರೆ ಟಾಕ್ಸಿಕ್ ಟೀಂ ಈ ಆಫರ್ ತಿರಸ್ಕರಿಸಿತ್ತು. ಆದರೆ ಇದೀಗ ಟಾಕ್ಸಿಕ್ ನಿರೀಕ್ಷಿತ ಪ್ರದರ್ಶನ ಕಾಣದ ಕಾರಣ ಒಟಿಟಿ ಹೊಸ ಆಫರ್ ಟಾಕ್ಸಿಕ್ ತಂಡಕ್ಕೆ ನಿರಾಸೆ ತಂದಿದೆ.&lt;/p&gt;&lt;img&gt;&lt;p&gt;ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಿ ಎರಡು ವಾರ ಕಳೆದಿದೆ. ಹಲವು ಸಿನಿಮಾಗಳ ಪೈಪೋಟಿಗಳ ನಡುವೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಹಂಗಾಮಾ ವರದಿ ಪ್ರಕಾರ ಟಾಕ್ಸಿಕ್ ಸಿನಿಮಾಗೆ ಒಟಿಟಿ 30 ಕೋಟಿ ರೂಪಾಯಿ ಆಫರ್ ಮಾಡಿದೆ ಎಂದು ವರದಿಯಾಗಿದೆ. ಬಾಕ್ಸ್ ಆಫೀಸ್&zwnj;ನಲ್ಲಿ ನಿರೀಕ್ಷಿತ ಗಳಿಕೆ ಕಾಣದ ಕಾರಣ ಒಟಿಟಿ ಟಾಕ್ಸಿಕ್ ಸಿನಿಮಾಗೆ ಬೆಲೆ ಕಡಿಮೆ ಮಾಡಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ವರದಿಗಳ ಪ್ರಕಾರ ಟಾಕ್ಸಿಕ್ ಒಟಿಟಿ ಡೀಲ್ ಅಂತಿಮಗೊಂಡಿಲ್ಲ. ಈ ಕುರಿತು ಟಾಕ್ಸಿಕ್ ಟೀಂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಮೂಲಗಳ ಪ್ರಕಾರ ಟಾಕ್ಸಿಕ್ ಸಿನಿಮಾಗೆ ಹಲವು ಡಿಜಿಟಲ್ ಪ್ಲಾಟ್&zwnj;ಫಾರ್ಮ್ ಉತ್ತಮ ಮೊತ್ತ ಆಫರ್ ಮಾಡಿದೆ ಎಂದು ವರದಿಯಾಗುತ್ತಿದೆ. ಡೀಲ್ ಅಂತಿಮಗೊಳ್ಳದ ಕಾರಣ ಒಟಿಟಿ ರೀಲಿಸ್ ಸೇರಿದಂತೆ ಯಾವುದೇ ದಿನಾಂಕ, ಮೊತ್ತಗಳು ಫೈನಲ್ ಆಗಿಲ್ಲ.&lt;/p&gt;&lt;img&gt;&lt;p&gt;ಟಾಕ್ಸಿಕ್ ಬಿಡುಗಡೆಯಾಗಿ ಎರಡು ವಾರ ಉರುಳಿದೆ. ಮೊದಲ ದಿನ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಸಿನಿಮಾ ಬಳಿಕ ನಿಧಾನವಾಗಿ ಗಳಿಕೆ ಇಳಿಕೆ ಕಂಡಿತು. 12 ದಿನಗಳ ಬಳಿಕ ಟಾಕ್ಸಿಕ್ ಒಟ್ಟು 337.80 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ನೆಟ್ ಟೋಟಲ್ 245.75 ಕೋಟಿ ರೂಪಾಯಿ ಗಳಿಕೆ ಕಂಡಿದೆ.&lt;/p&gt;]]></content:encoded>
            <category>entertainment</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/entertainment/yash-toxic-gets-new-ott-offer-when-will-the-film-release-on-digital-platform-r65xpql"/>
        </item>
        <item>
            <title><![CDATA[ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ ನೆನಪಿದೆಯಾ? ಈಗ ಅವರ ಜೀವನದಲ್ಲಿ ಏನಾಗ್ತಿದೆ?]]></title>
            <link>https://kannada.asianetnews.com/gallery/entertainment/sandalwood-film-kirik-party-actress-samyuktha-hegde-heres-what-she-is-doing-now-gvd-gg5z6d6</link>
            <guid isPermaLink="true">https://kannada.asianetnews.com/gallery/entertainment/sandalwood-film-kirik-party-actress-samyuktha-hegde-heres-what-she-is-doing-now-gvd-gg5z6d6</guid>
            <pubDate>Mon, 07 Sep 2026 17:48:45 +0530</pubDate>
            <description><![CDATA[&lt;p&gt;ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಹಾಗೂ ತೆಲುಗು ಪ್ರೇಕ್ಷಕರ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫಿಟ್&zwnj;ನೆಸ್ ವಿಡಿಯೋಗಳು ಹಾಗೂ ಗ್ಲಾಮರಸ್ ಫೋಟೋಗಳಿಂದ ಅವರು ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xwb6p89staak8rz2nng2sj,imgname-sam--5--1788782942920.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಹಾಗೂ ತೆಲುಗು ಪ್ರೇಕ್ಷಕರ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫಿಟ್&zwnj;ನೆಸ್ ವಿಡಿಯೋಗಳು ಹಾಗೂ ಗ್ಲಾಮರಸ್ ಫೋಟೋಗಳಿಂದ ಅವರು ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾ ರಂಗದಲ್ಲಿ ಕೆಲ ನಟಿಯರು ಒಂದೆರಡು ಸಿನಿಮಾಗಳಲ್ಲೇ ಪ್ರೇಕ್ಷಕರ ಗಮನ ಸೆಳೆದು ಬಳಿಕ ಚಿತ್ರರಂಗದಿಂದ ದೂರವಾಗುತ್ತಾರೆ. ಕೆಲವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಸಂಪರ್ಕದಲ್ಲೇ ಇರುತ್ತಾರೆ. ಗ್ಲಾಮರಸ್ ಫೋಟೋಗಳು, ಫಿಟ್&zwnj;ನೆಸ್ ವಿಡಿಯೋಗಳ ಮೂಲಕ ಆಗಾಗ್ಗೆ ಸದ್ದು ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಬ್ಬ ನಟಿಯ ಬಗ್ಗೆ ಚರ್ಚೆ ಶುರುವಾಗಿದೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಯುವಕರ ಮನ ಗೆದ್ದಿದ್ದ ಈ ನಟಿ, ಬಳಿಕ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇದರ ನಡುವೆಯೇ ಕೆಲವು ವಿವಾದಗಳಲ್ಲೂ ಸಿಲುಕಿಕೊಂಡಿದ್ದರು. ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ, ಕನ್ನಡದ ಬೆಡಗಿ ಸಂಯುಕ್ತಾ ಹೆಗ್ಡೆ.&lt;/p&gt;&lt;img&gt;&lt;p&gt;ಸಂಯುಕ್ತಾ ಹೆಗ್ಡೆ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಪರಿಚಿತ ಹೆಸರು. ತೆಲುಗಿನಲ್ಲಿ ಯಂಗ್ ಹೀರೋ ನಿಖಿಲ್ ಸಿದ್ಧಾರ್ಥ್ ಅಭಿನಯದ &lsquo;ಕಿರಿಕ್ ಪಾರ್ಟಿ&rsquo; ಚಿತ್ರದ ಮೂಲಕ ಟಾಲಿವುಡ್&zwnj;ಗೆ ಎಂಟ್ರಿ ಕೊಟ್ಟಿದ್ದರು. ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ, ಸಂಯುಕ್ತಾ ಅವರ ಲುಕ್ ಮತ್ತು ಅಭಿನಯ ಪ್ರೇಕ್ಷಕರ ಗಮನ ಸೆಳೆದಿತ್ತು. &lsquo;ಕಿರಿಕ್ ಪಾರ್ಟಿ&rsquo; ಬಳಿಕ ಸಂಯುಕ್ತಾ ತೆಲುಗಿನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಲಿಲ್ಲ.&lt;/p&gt;&lt;img&gt;&lt;p&gt;ಒಂದೇ ಒಂದು ಟಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಂಡರೂ, ಆ ಮೂಲಕವೇ ಅವರು ತೆಲುಗು ಪ್ರೇಕ್ಷಕರಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಟಾಲಿವುಡ್&zwnj;ನಲ್ಲಿ ಅವಕಾಶಗಳು ಹೆಚ್ಚಾಗಿ ಸಿಗದಿದ್ದರೂ, ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಮಾತ್ರ ಸಂಯುಕ್ತಾ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರಗಳು ಹಾಗೂ ತಮ್ಮದೇ ಆದ ಸ್ಟೈಲ್&zwnj;ನಿಂದ ಅವರು ಪ್ರೇಕ್ಷಕರ ಗಮನ ಸೆಳೆಯುತ್ತಲೇ ಬಂದಿದ್ದಾರೆ.&lt;/p&gt;&lt;img&gt;&lt;p&gt;ಸಂಯುಕ್ತಾ ಹೆಗ್ಡೆ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲು ಬಿಗ್&zwnj;ಬಾಸ್ ಕೂಡ ಪ್ರಮುಖ ಕಾರಣ. ಕನ್ನಡ ಬಿಗ್&zwnj;ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಳಿಕ ಅವರ ಫ್ಯಾನ್ ಫಾಲೋಯಿಂಗ್ ಮತ್ತಷ್ಟು ವಿಸ್ತರಿಸಿತು. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಸಂಯುಕ್ತಾ, ತಮ್ಮ ಅಭಿಮಾನಿಗಳಿಗಾಗಿ ಆಗಾಗ್ಗೆ ಹೊಸ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ವಿಶೇಷವಾಗಿ ಅವರ ಫಿಟ್&zwnj;ನೆಸ್ ಕುರಿತ ಪೋಸ್ಟ್&zwnj;ಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತವೆ. ಗ್ಲಾಮರಸ್ ಫೋಟೋಗಳನ್ನು ಕೂಡ ಹಂಚಿಕೊಳ್ಳುವ ಅವರು, ತಮ್ಮ ಸ್ಟೈಲಿಶ್ ಲುಕ್&zwnj;ನಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಅವರ ಪೋಸ್ಟ್&zwnj;ಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್&zwnj;ಗಳನ್ನು ಮಾಡುತ್ತಿದ್ದು, ಸಂಯುಕ್ತಾ ಅವರ ಸೋಶಿಯಲ್ ಮೀಡಿಯಾ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಟಾಲಿವುಡ್&zwnj;ನಲ್ಲಿ ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡರೂ ಸಂಯುಕ್ತಾ ಹೆಗ್ಡೆ ಅವರನ್ನು ತೆಲುಗು ಪ್ರೇಕ್ಷಕರು ಇನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಸದ್ಯ ಸಿನಿಮಾಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಈ ಕನ್ನಡದ ಬೆಡಗಿ, ಮತ್ತೆ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/sandalwood-film-kirik-party-actress-samyuktha-hegde-heres-what-she-is-doing-now-gvd-gg5z6d6"/>
        </item>
        <item>
            <title><![CDATA[Bigg Boss : ದೊಡ್ಮನೆಗೆ ಎಂಟ್ರಿಕೊಟ್ಟ ಬಿಜೆಪಿ ನಾಯಕನ ಮಗಳು; ಯಾರು ಈ ಸುಂದರಿ?]]></title>
            <link>https://kannada.asianetnews.com/entertainment/rita-tiwari-daughter-of-bjp-leader-manoj-tiwari-has-entered-the-bigg-boss-house-gkn/articleshow-gy8sb2r</link>
            <guid isPermaLink="true">https://kannada.asianetnews.com/entertainment/rita-tiwari-daughter-of-bjp-leader-manoj-tiwari-has-entered-the-bigg-boss-house-gkn/articleshow-gy8sb2r</guid>
            <pubDate>Mon, 07 Sep 2026 17:43:00 +0530</pubDate>
            <description><![CDATA[&lt;p&gt;ರಿಯಾಲಿಟಿ ಶೋನ ಅತಿದೊಡ್ಡ ಶೋ ಬಿಗ್&zwnj; ಬಾಸ್&zwnj; ಭಾರೀ ಟ್ರೆಂಡಿಂಗ್&zwnj;ನಲ್ಲಿದೆ. ಈಗಾಲೇ ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಿದ್ದು, ಅವರ ವ್ಯಕ್ತಿತ್ವ ಅನಾವರಣ ಆಗೋದೊಂದೇ ಭಾಕಿ ಇದೆ. ಇದರ ನಡುವೆ ಹಿಂದಿ ಬಿಗ್&zwnj;ಬಾಸ್&zwnj;ಗೆ ಬಿಜೆಪಿ ನಾಯಕನ ಮಗಳೊಬ್ಬರು ಎಂಟ್ರಿಯಾಗಿದ್ದಾರೆ. ಯಾರು ಅವರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xwgmvxg13n2vhartd4atxw,imgname-manoj-tiwari-daughter-riti-tiwari-1788783121276.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: &lt;/strong&gt;ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 20ಕ್ಕೆ ಅದ್ಧೂರಿ ಚಾಲನೆ ಸಿಗುತ್ತಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿಕೊಟ್ಟಿರುವ ಸ್ಪರ್ಧಿಗಳ ಪೈಕಿ ಒಬ್ಬರು ಸಖತ್ ಸದ್ದು ಮಾಡುತ್ತಿದ್ದಾರೆ. ಅವರು ಮತ್ಯಾರೂ ಅಲ್ಲ, ಖ್ಯಾತ ಭೋಜ್&zwnj;ಪುರಿ ನಟ ಮತ್ತು ಬಿಜೆಪಿ ಸಂಸದ ಮನೋಜ್ ತಿವಾರಿ ಅವರ ಹಿರಿಯ ಪುತ್ರಿ ರಿತಿ ತಿವಾರಿ.&lt;/p&gt;&lt;h2&gt;&lt;strong&gt;ಯಾರು ಈ ರಿತಿ ತಿವಾರಿ?&lt;/strong&gt;&lt;/h2&gt;&lt;p&gt;ಹಿಂದಿ ಬಿಗ್ ಬಾಸ್ ಮನೆ ಪ್ರವೇಶಿಸಿರುವ ರಿತಿ ತಿವಾರಿ ಕೇವಲ ಒಬ್ಬ ರಾಜಕಾರಣಿಯ ಮಗಳಷ್ಟೇ ಅಲ್ಲ, ಅವರು ಬಹುಮುಖ ಪ್ರತಿಭೆ. ಗಾಯಕಿ, ಸಂಗೀತ ಸಂಯೋಜಕಿ ಮತ್ತು ಉದ್ಯಮಿಯಾಗಿ ಗುರುತಿಸಿಕೊಂಡಿರುವ ರಿತಿ, ಇಲ್ಲಿಯವರೆಗೆ ಮಾಧ್ಯಮಗಳ ಕಣ್ಣಿನಿಂದ ಸ್ವಲ್ಪ ದೂರವೇ ಉಳಿದಿದ್ದರು. ಆದರೆ ಈಗ ಬಿಗ್ ಬಾಸ್ ಮೂಲಕ ದೇಶದಾದ್ಯಂತ ಮನೆಮಾತಾಗಲು ಸಿದ್ಧರಾಗಿದ್ದಾರೆ.&lt;/p&gt;&lt;h2&gt;&lt;strong&gt;ವೈಯಕ್ತಿಕ ಜೀವನ ಮತ್ತು ಶಿಕ್ಷಣ&lt;/strong&gt;&lt;/h2&gt;&lt;p&gt;ಜೂನ್ 23, 2001 ರಂದು ಮುಂಬೈನಲ್ಲಿ ಜನಿಸಿದ ರಿತಿ, ಮನೋಜ್ ತಿವಾರಿ ಮತ್ತು ಅವರ ಮೊದಲ ಪತ್ನಿ ರಾಣಿ ತಿವಾರಿ ಅವರ ಪುತ್ರಿ. 2011 ರಲ್ಲಿ ಇವರ ಪೋಷಕರು ವಿಚ್ಛೇದನ ಪಡೆದ ನಂತರ, ರಿತಿ ಮುಂಬೈನಲ್ಲಿ ತಾಯಿಯ ಜೊತೆ ಬೆಳೆದರು. ಆದರೂ ತಂದೆ ಮನೋಜ್ ತಿವಾರಿ ಮತ್ತು ಅವರ ಎರಡನೇ ಕುಟುಂಬದೊಂದಿಗೆ ರಿತಿ ಅತ್ಯಂತ ನಿಕಟ ಸಂಬಂಧ ಹೊಂದಿದ್ದಾರೆ. ಮುಂಬೈನ ಪ್ರತಿಷ್ಠಿತ ಜಮ್ನಾಬಾಯಿ ನಾರ್ಸಿ ಶಾಲೆಯಲ್ಲಿ ಇವರು ವ್ಯಾಸಂಗ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಸಂಗೀತ ಲೋಕದ ಉದಯೋನ್ಮುಖ ತಾರೆ&lt;/strong&gt;&lt;/h2&gt;&lt;p&gt;ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ರಿತಿ, ತರಬೇತಿ ಪಡೆದ ಗಿಟಾರ್ ವಾದಕಿ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. 2020 ರಲ್ಲಿ ಇವರ 'ಚಲೇ ಆವೋ' ಎಂಬ ಹಾಡು ಬಿಡುಗಡೆಯಾಗಿ ಗಮನ ಸೆಳೆದಿತ್ತು. ಇತ್ತೀಚೆಗೆ ಅಂದರೆ ಡಿಸೆಂಬರ್ 2024 ರಲ್ಲಿ 'ಝೂಥಿ ಬೇಬಿ' ಎಂಬ ಸಿಂಥ್-ಪಾಪ್ ಟ್ರ್ಯಾಕ್ ಬಿಡುಗಡೆ ಮಾಡಿ ಸದ್ದು ಮಾಡಿದ್ದರು. ಈ ಹಾಡನ್ನು ಅವರೇ ಬರೆದು, ಹಾಡಿ, ಸಂಯೋಜಿಸಿದ್ದಾರೆ ಎಂಬುದು ವಿಶೇಷ.&lt;/p&gt;&lt;h2&gt;&lt;strong&gt;ತಂದೆಯ ಹಾದಿಯಲ್ಲೇ ರಾಜಕೀಯಕ್ಕೆ ಎಂಟ್ರಿ&lt;/strong&gt;&lt;/h2&gt;&lt;p&gt;ತಂದೆ ಮನೋಜ್ ತಿವಾರಿ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದರೆ, ಮಗಳು ರಿತಿ ಕೂಡ ಅದೇ ಹಾದಿ ತುಳಿದಿದ್ದಾರೆ. ಮೇ 2024 ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿಯೇ ರಿತಿ ಅಧಿಕೃತವಾಗಿ ಬಿಜೆಪಿ ಸೇರುವ ಮೂಲಕ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲೂ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.&lt;/p&gt;&lt;p&gt;ಇಲ್ಲಿಯವರೆಗೆ ಸಾರ್ವಜನಿಕ ಜೀವನದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ರಿತಿ ತಿವಾರಿ, ಈಗ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಲ್ಮಾನ್ ಖಾನ್ ಅವರ ಈ ಶೋನಲ್ಲಿ ರಿತಿ ಅವರ ಅಸಲಿ ವ್ಯಕ್ತಿತ್ವ ಹೇಗೆ ಅನಾವರಣಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/entertainment/rita-tiwari-daughter-of-bjp-leader-manoj-tiwari-has-entered-the-bigg-boss-house-gkn/articleshow-gy8sb2r"/>
        </item>
        <item>
            <title><![CDATA[10ನೇ ವಯಸ್ಸಲ್ಲೇ ಉದ್ಯಮಿಯಾದ ಮಗನ ಜೊತೆ ಬಾಲಿವುಡ್​ ಬ್ಯೂಟಿ ಶಿಲ್ಪಾ ಶೆಟ್ಟಿ: ಅಪರೂಪದ ವಿಡಿಯೋ ವೈರಲ್​]]></title>
            <link>https://kannada.asianetnews.com/gallery/life/shilpa-shetty-with-her-son-who-became-a-businessman-at-the-age-of-10-rare-video-goes-viral-suc-mfggckl</link>
            <guid isPermaLink="true">https://kannada.asianetnews.com/gallery/life/shilpa-shetty-with-her-son-who-became-a-businessman-at-the-age-of-10-rare-video-goes-viral-suc-mfggckl</guid>
            <pubDate>Mon, 07 Sep 2026 17:14:34 +0530</pubDate>
            <description><![CDATA[&lt;p&gt;ನಟಿ ಶಿಲ್ಪಾ ಶೆಟ್ಟಿ 10 ವರ್ಷದ ಮಗ ವಿಯಾನ್ ಜೊತೆಗೆ ಕಾಣಿಸಿಕೊಂಡಿರುವ ಅಪರೂಪದ ವಿಡಿಯೋ ವೈರಲ್​ ಆಗಿದೆ. ತಮ್ಮ ಎರಡನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ ನಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xtssega1txen90z11mgge3,imgname-shilpa-shetty-1788781323728.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಶಿಲ್ಪಾ ಶೆಟ್ಟಿ 10 ವರ್ಷದ ಮಗ ವಿಯಾನ್ ಜೊತೆಗೆ ಕಾಣಿಸಿಕೊಂಡಿರುವ ಅಪರೂಪದ ವಿಡಿಯೋ ವೈರಲ್​ ಆಗಿದೆ. ತಮ್ಮ ಎರಡನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ ನಟಿ.&lt;/p&gt;&lt;img&gt;&lt;p&gt;ನಟಿ ಶಿಲ್ಪಾ ಶೆಟ್ಟಿ ಎಂದರೇನೇ ವಯಸ್ಸೇ ಆಗದ ನಟಿಯ ಪೈಕಿ ಒಬ್ಬರು ಎಂದು ಗುರುತಿಸಿಕೊಳ್ಳುವವರು. ಕಳೆದ ಜೂನ್​ಗೆ ನಟಿಗೆ 51 ವರ್ಷ ಮುಗಿದಿದೆ. ಇದರ ಹೊರತಾಗಿಯೂ ನಟಿ ಇನ್ನೂ 25-30ರ ಚೆಲುವೆಯಂತೆ ಕಂಗೊಳಿಸುತ್ತಾರೆ. ಮೇಕಪ್​ಗಿಂತಲೂ ಹೆಚ್ಚಾಗಿ ನಟಿಯ ಸೌಂದರ್ಯದ ರಹಸ್ಯ ಡಯೆಟ್​ ಜೊತೆ ಯೋಗ ಮತ್ತು ಧ್ಯಾನ. ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ದಂಪತಿ ಮದುವೆಗೆ ಈಗ 17 ವರ್ಷಗಳ ಸಂಭ್ರಮ. 2009ರಲ್ಲಿ ಮದುವೆಯಾಗಿದ್ದ ಜೋಡಿ 2012 ರಲ್ಲಿ ತಮ್ಮ ಮೊದಲ ಮಗು ವಿಯಾನ್&zwnj;ಗೆ ಅಪ್ಪ-ಅಮ್ಮ ಆದರು. ವಿಯಾನ್​ಗೆ ಈಗ 14 ವರ್ಷ. ಬಳಿಕ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸಮೀಶಾ ಎಂಬ ಮಗಳನ್ನು ದಂಪತಿ ಪಡೆದುಕೊಂಡಿದ್ದಾರೆ. ಈ ಪುಟಾಣಿಗೆ ಈಗ ಆರು ವರ್ಷ ವಯಸ್ಸು.&lt;/p&gt;&lt;img&gt;&lt;p&gt;ಶಿಲ್ಪಾ ಶೆಟ್ಟಿ ಅವರು ಮಕ್ಕಳ ಜೊತೆ ಓಪನ್​ ಆಗಿ ಕಾಣಿಸಿಕೊಳ್ಳುವುದು ಅಪರೂಪ. ಕೆಲ ದಿನಗಳ ಹಿಂದೆ ಅವರು ಮಗಳ ಜೊತೆ ಕಾಣಿಸಿಕೊಂಡಿದ್ದ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಇದೀಗ ಅವರು ಮಗ ವಿಯಾನ್​ ಜೊತೆ ಕಾಣಿಸಿಕೊಂಡಿದ್ದು, ಇದರ ವಿಡಿಯೋಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮಗ ವಿಯಾನ್ ತನ್ನ 10ನೇ ವಯಸ್ಸಿನಲ್ಲಿಯೇ ಬಿಜಿನೆಸ್​ ಪ್ರಾರಂಭಿಸಿದ್ದಾನೆ. ಶಿಲ್ಪಾ ಅವರು ಈ ಕುರಿತು ಅಂದು ಪೋಸ್ಟ್​ ಶೇರ್​ ಮಾಡಿಕೊಂಡಿದ್ದರು. ತನ್ನ ಮಗನ ಸ್ಟಾರ್ಟ್ಅಪ್ ಕಲ್ಪನೆಯನ್ನು ಘೋಷಿಸುವ ಮತ್ತು ಅವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ನೀಕರ್ಸ್ ಜೋಡಿಯನ್ನು ಪ್ರದರ್ಶಿಸುವ ವಿಡಿಯೋ ಪೋಸ್ಟ್ ಮಾಡಿದ್ದರು.&lt;/p&gt;&lt;img&gt;&lt;p&gt;ವಿಯಾನ್ 4,999 ರೂಪಾಯಿಂದ ಪ್ರಾರಂಭವಾಗುವ VR KICKSS ಹೆಸರಿನಲ್ಲಿ ಕಸ್ಟಮೈಸ್ ಮಾಡಿದ ಸರಕುಗಳನ್ನು ಮಾರಾಟ ಮಾಡುತ್ತಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿರುವ ಶಿಲ್ಪಾ &quot;ನನ್ನ ಮಗ ವಿಯಾನ್ ರಾಜ್, ಬಿಜಿನೆಸ್​ ಆರಂಭಿಸಿದ್ದಾನೆ. ಪುಟ್ಟ ಮಕ್ಕಳು ಮತ್ತು ಅವರ ದೊಡ್ಡ ಕನಸುಗಳನ್ನು ಯಾವಾಗಲೂ ಪ್ರೋತ್ಸಾಹಿಸಬೇಕು ಎನ್ನುವುದು ಇದರ ಉದ್ದೇಶ. ಸಾಹಸೋದ್ಯಮದ ಕಲ್ಪನೆ ಮತ್ತು ಪರಿಕಲ್ಪನೆಯಿಂದ ವಿನ್ಯಾಸಗಳವರೆಗೆ, ಮತ್ತು ವಿಡಿಯೋ ಕೂಡ ಎಲ್ಲವೂ ಮಗನದ್ದೇ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟಿ ಬಾಡಿಗೆ ತಾಯ್ತನದ ಮೂಲಕ ಇನ್ನೊಂದು ಮಗುವನ್ನು ಪಡೆದಿರುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಎರಡನೇ ಮಗು ಪಡೆಯಲು 5 ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಬಾಡಿಗೆ ತಾಯ್ತನತದ ಮೂಲಕ ಮಗುವನ್ನು ಪಡೆದುಕೊಂಡೆ ಎಂದಿದ್ದರು. 2012ರಲ್ಲಿ ವಿಹಾನ್ ಹುಟ್ಟಿದ ಬಳಿಕ ನಾವೆಲ್ಲರೂ ತುಂಬಾ ಖುಷಿಯಾಗಿದ್ದೆವು. ಆದಾದ ಬಳಿಕ ನಾವು ಪ್ಲಾನಿಂಗ್ ಮಾಡುತ್ತಿದ್ದೆವು. ಮತ್ತೊಂದು ಮಗು ಪಡೆಯಲು ನಾನು 5 ವರ್ಷ ಪ್ರಯತ್ನಿಸುತ್ತಿದ್ದೆ. ನಾನು ಆ ಸಮಯದಲ್ಲಿ &lsquo;ನಿಕಮ್ಮಾ&rsquo; ಹಾಗೂ &lsquo;ಹಂಗಾಮ&rsquo; ಚಿತ್ರದ ಚಿತ್ರೀಕರಣವನ್ನು ಸೈನ್ ಮಾಡಿ ಡೇಟ್ಸ್ ಮುಂದೂಡಿದ್ದೆ. ಆದರೆ ಮಗು ಹುಟ್ಟುವುದು ಸಾಧ್ಯವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ನನ್ನ ದೇಹವು ಗರ್ಭಧಾರಣೆಗೆ ಸ್ಪಂದಿಸುತ್ತಿರಲಿಲ್ಲ. ಇನ್ನೊಂದು ಮಗುವನ್ನು ಪಡೆಯಲು ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆ ಅಡ್ಡಿಯಾಯಿತು. ಈ ಸಮಸ್ಯೆಯಿಂದ ಹಲವಾರು ಬಾರಿ ಗರ್ಭಪಾತವಾಗಿತ್ತು ಎಂದು ಶಿಲ್ಪಾ ಶೆಟ್ಟಿ ತಿಳಿಸಿದರು.&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟಿ ಬಾಡಿಗೆ ತಾಯ್ತನದ ಮೂಲಕ ಇನ್ನೊಂದು ಮಗುವನ್ನು ಪಡೆದಿರುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಎರಡನೇ ಮಗು ಪಡೆಯಲು 5 ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಬಾಡಿಗೆ ತಾಯ್ತನತದ ಮೂಲಕ ಮಗುವನ್ನು ಪಡೆದುಕೊಂಡೆ ಎಂದಿದ್ದರು. 2012ರಲ್ಲಿ ವಿಹಾನ್ ಹುಟ್ಟಿದ ಬಳಿಕ ನಾವೆಲ್ಲರೂ ತುಂಬಾ ಖುಷಿಯಾಗಿದ್ದೆವು. ಆದಾದ ಬಳಿಕ ನಾವು ಪ್ಲಾನಿಂಗ್ ಮಾಡುತ್ತಿದ್ದೆವು. ಮತ್ತೊಂದು ಮಗು ಪಡೆಯಲು ನಾನು 5 ವರ್ಷ ಪ್ರಯತ್ನಿಸುತ್ತಿದ್ದೆ. ನಾನು ಆ ಸಮಯದಲ್ಲಿ &lsquo;ನಿಕಮ್ಮಾ&rsquo; ಹಾಗೂ &lsquo;ಹಂಗಾಮ&rsquo; ಚಿತ್ರದ ಚಿತ್ರೀಕರಣವನ್ನು ಸೈನ್ ಮಾಡಿ ಡೇಟ್ಸ್ ಮುಂದೂಡಿದ್ದೆ. ಆದರೆ ಮಗು ಹುಟ್ಟುವುದು ಸಾಧ್ಯವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ನನ್ನ ದೇಹವು ಗರ್ಭಧಾರಣೆಗೆ ಸ್ಪಂದಿಸುತ್ತಿರಲಿಲ್ಲ. ಇನ್ನೊಂದು ಮಗುವನ್ನು ಪಡೆಯಲು ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆ ಅಡ್ಡಿಯಾಯಿತು. ಈ ಸಮಸ್ಯೆಯಿಂದ ಹಲವಾರು ಬಾರಿ ಗರ್ಭಪಾತವಾಗಿತ್ತು ಎಂದು ಶಿಲ್ಪಾ ಶೆಟ್ಟಿ ತಿಳಿಸಿದರು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/shilpa-shetty-with-her-son-who-became-a-businessman-at-the-age-of-10-rare-video-goes-viral-suc-mfggckl"/>
        </item>
        <item>
            <title><![CDATA['ಒಳ್ಳೆಯ ಸ್ನೇಹಿತನಾಗಿರುವ ಸಂಗಾತಿ ಸಿಕ್ಕರೆ..': ಮದುವೆ ಬಗ್ಗೆ ನಟಿ ರಮ್ಯಾ ನಿಲುವೇನು?]]></title>
            <link>https://kannada.asianetnews.com/sandalwood/kannada-actress-ramya-divya-spandana-talks-marriage-and-relationships-i-haven-t-found-that-person-yet-gvd/articleshow-i52fgud</link>
            <guid isPermaLink="true">https://kannada.asianetnews.com/sandalwood/kannada-actress-ramya-divya-spandana-talks-marriage-and-relationships-i-haven-t-found-that-person-yet-gvd/articleshow-i52fgud</guid>
            <pubDate>Mon, 07 Sep 2026 17:11:46 +0530</pubDate>
            <description><![CDATA[&lt;p&gt;ಸ್ಯಾಂಡಲ್&zwnj;ವುಡ್ ನಟಿ ರಮ್ಯಾ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಮದುವೆಗಿಂತ ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ ಎಂದಿದ್ದಾರೆ. ಸೂಕ್ತ ಸಂಗಾತಿ ಸಿಕ್ಕರೆ ಮದುವೆ ಉತ್ತಮ ಎಂದು ಹೇಳಿರುವ ಅವರು, ಸದ್ಯ ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xt5593gdwn0w7zhhw8y643,imgname-mlmn-1788780647715.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಮೋಹಕ ತಾರೆ ರಮ್ಯಾ ಅವರ ಮದುವೆ ವಿಚಾರ ಆಗಾಗ್ಗೆ ಚರ್ಚೆಗೆ ಬರುತ್ತಲೇ ಇರುತ್ತದೆ. ಅಭಿಮಾನಿಗಳು ಕೂಡ &lsquo;ರಮ್ಯಾ ಯಾವಾಗ ಮದುವೆಯಾಗುತ್ತಾರೆ?&rsquo; ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿರುತ್ತಾರೆ. ಇದೀಗ ಇದೇ ಪ್ರಶ್ನೆಗೆ ಸ್ವತಃ ರಮ್ಯಾ ಉತ್ತರಿಸಿದ್ದು, ಅವರ ಮಾತುಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.&lt;/p&gt;&lt;p&gt;ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ನಬಿಲಾ ಜಮಾಲ್ ಅವರು ನಟಿ ರಮ್ಯಾ ಅವರಿಗೆ ಮದುವೆ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಮ್ಯಾ, ಮದುವೆಯನ್ನು ಜೀವನದ ಅನಿವಾರ್ಯ ಗುರಿಯಂತೆ ನೋಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. &lsquo;ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ&rsquo; ಎಂದು ಹೇಳಿದ ರಮ್ಯಾ, ವ್ಯಕ್ತಿಯ ಗುರುತು ಅಥವಾ ಸಂತೋಷವನ್ನು ಮದುವೆಯೇ ನಿರ್ಧರಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lsquo;ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗುವುದಿಲ್ಲ. ಮದುವೆಯಾಗದೇ ಇದ್ದರೂ ನಾವು ಖುಷಿಯಾಗಿರಬಹುದು. ಜೀವನದಲ್ಲಿ ಖುಷಿಯಾಗಿರುವುದೇ ಎಲ್ಲಕ್ಕಿಂತ ಮುಖ್ಯ. ಒಂದೋ ಮದುವೆಯಾಗಿರಬೇಕು ಅಥವಾ ಖುಷಿಯಾಗಿರಬೇಕು ಎಂಬ ರೀತಿಯಲ್ಲಿ ಸಮಾಜ ನೋಡುವುದು ಸರಿಯಲ್ಲ. ನಿಮಗೆ ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು&rsquo; ಎಂದು ರಮ್ಯಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಒಳ್ಳೆಯ ಸ್ನೇಹಿತನಾಗಿರುವ ಸಂಗಾತಿ ಸಿಕ್ಕರೆ..&rsquo;&lt;/strong&gt;&lt;/p&gt;&lt;p&gt;ಮದುವೆಯ ಬಗ್ಗೆ ಸಂಪೂರ್ಣವಾಗಿ ನಕಾರಾತ್ಮಕವಾಗಿ ಮಾತನಾಡದ ರಮ್ಯಾ, ಸೂಕ್ತ ಸಂಗಾತಿ ಸಿಕ್ಕರೆ ವೈವಾಹಿಕ ಜೀವನವೂ ಸುಂದರವಾಗಿರಬಹುದು ಎಂದು ಹೇಳಿದ್ದಾರೆ. &lsquo;ಮದುವೆಯಾಗಿಯೂ ಖುಷಿಯಾಗಿ ಇರಬಹುದು. ನಿಮಗೆ ಹೊಂದಿಕೆಯಾಗುವಂತಹ ಸಂಗಾತಿ ಸಿಕ್ಕರೆ ಅದು ಚೆನ್ನಾಗಿರುತ್ತದೆ. ಅವರು ನಿಮ್ಮ ಉತ್ತಮ ಸ್ನೇಹಿತರಾಗಿದ್ದು, ಅವರೊಂದಿಗೆ ಇಡೀ ಜೀವನ ಕಳೆಯಲು ನೀವು ಬಯಸಿದರೆ ಮದುವೆ ಉತ್ತಮ ನಿರ್ಧಾರವಾಗಬಹುದು&rsquo; ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಮನುಷ್ಯರ ಬದುಕಿನಲ್ಲಿ ಬದಲಾವಣೆ ಸಹಜ. ಕಾಲ ಕಳೆದಂತೆ ನಮ್ಮ ಆಲೋಚನೆಗಳು, ಮೌಲ್ಯಗಳು ಮತ್ತು ಆದ್ಯತೆಗಳು ಬದಲಾಗುತ್ತವೆ. ಹೀಗಾಗಿ ಮದುವೆಯಲ್ಲಿ ಇಬ್ಬರ ನಡುವಿನ ಹೊಂದಾಣಿಕೆ ಮತ್ತು ಒಂದೇ ರೀತಿಯ ಮೌಲ್ಯಗಳು ಮುಖ್ಯ ಎಂದು ರಮ್ಯಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ&rsquo;&lt;/strong&gt;&lt;/h2&gt;&lt;p&gt;ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ರಮ್ಯಾ, ಸದ್ಯಕ್ಕೆ ಮದುವೆ ಅಥವಾ ಸಂಬಂಧದ ಬಗ್ಗೆ ತಾವು ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ. &lsquo;ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ. ನಾನು ಆ ಬಗ್ಗೆ ಗಮನ ಕೂಡ ಹರಿಸುತ್ತಿಲ್ಲ. ಕೆಲಸ ಮಾಡುವುದರಲ್ಲಿ ಬ್ಯುಸಿ ಆಗಿದ್ದೇನೆ. ರಿಲೇಷನ್&zwnj;ಶಿಪ್&zwnj;ಗೆ ಸಮಯ ಬೇಕು&rsquo; ಎಂದು ರಮ್ಯಾ ಹೇಳಿದ್ದಾರೆ.&lt;/p&gt;&lt;p&gt;ರಮ್ಯಾ ಅವರ ಈ ಮಾತುಗಳು ಇದೀಗ ಅಭಿಮಾನಿಗಳಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿವೆ. ಸದ್ಯ ಮದುವೆಯ ವಿಚಾರದಲ್ಲಿ ಯಾವುದೇ ಆತುರವಿಲ್ಲ ಎಂಬುದನ್ನು ನಟಿ ಸ್ಪಷ್ಟಪಡಿಸಿದ್ದು, ಸೂಕ್ತ ವ್ಯಕ್ತಿ ಸಿಕ್ಕಾಗ ಮಾತ್ರ ಆ ಬಗ್ಗೆ ಯೋಚಿಸುವ ಮನಸ್ಥಿತಿಯಲ್ಲಿರುವಂತೆ ಕಾಣಿಸುತ್ತಿದೆ. ಇನ್ನೊಂದೆಡೆ, ರಮ್ಯಾ ಅವರು ಸಿನಿಮಾಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವರ ಅಭಿಮಾನಿಗಳ ಬಹುಕಾಲದ ಬೇಡಿಕೆಯಾಗಿದೆ. ಮದುವೆಗಿಂತ ತಮ್ಮ ಸಂತೋಷ ಮತ್ತು ವೃತ್ತಿಜೀವನಕ್ಕೆ ಆದ್ಯತೆ ನೀಡುತ್ತಿರುವ ರಮ್ಯಾ ಅವರ ನಿಲುವಿಗೆ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-actress-ramya-divya-spandana-talks-marriage-and-relationships-i-haven-t-found-that-person-yet-gvd/articleshow-i52fgud"/>
        </item>
        <item>
            <title><![CDATA[Bigg Boss ​ ಮನೆಯಲ್ಲಿ ಮೊದಲ ದಿನವೇ ಹೊತ್ತಿಕೊಂಡ ಕಿಡಿ! ಗಗನ್​-ಮಂಜು ನಡುವೆ ಕಿತ್ತಾಟ, ಓಪನ್ ಚಾಲೆಂಜ್​]]></title>
            <link>https://kannada.asianetnews.com/gallery/tv-talk/bigg-boss-kannada-13-first-day-fight-between-manjunath-and-gagan-suc-ovl00yv</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-13-first-day-fight-between-manjunath-and-gagan-suc-ovl00yv</guid>
            <pubDate>Mon, 07 Sep 2026 16:58:25 +0530</pubDate>
            <description><![CDATA[ಬಿಗ್​ಬಾಸ್​ ಕನ್ನಡ 13ರ ಮೊದಲ ದಿನವೇ, ಟಾಸ್ಕ್ ವಿಚಾರವಾಗಿ ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ಮಂಜುನಾಥ್ ನಡುವೆ ತೀವ್ರ ಜಗಳ ಶುರುವಾಗಿದೆ. ಮಂಜುನಾಥ್ ಅವರ 'ಧಗ ಧಗ ಧಗ' ಎಂಬ ಡೈಲಾಗ್ ವೈರಲ್ ಆಗಿದ್ದು, ಇಬ್ಬರ ನಡುವಿನ ಕಿತ್ತಾಟ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1xss82j921vbvkh83sgjxn7,imgname-bb-13-01-1788780257362.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​ ಕನ್ನಡ 13ರ ಮೊದಲ ದಿನವೇ, ಟಾಸ್ಕ್ ವಿಚಾರವಾಗಿ ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ಮಂಜುನಾಥ್ ನಡುವೆ ತೀವ್ರ ಜಗಳ ಶುರುವಾಗಿದೆ. ಮಂಜುನಾಥ್ ಅವರ 'ಧಗ ಧಗ ಧಗ' ಎಂಬ ಡೈಲಾಗ್ ವೈರಲ್ ಆಗಿದ್ದು, ಇಬ್ಬರ ನಡುವಿನ ಕಿತ್ತಾಟ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.&lt;img&gt;&lt;p&gt;ಬಿಗ್​ಬಾಸ್​ 13 (Bigg Boss Kannada 13) ಆರಂಭಗೊಂಡ ಬೆನ್ನಲ್ಲೇ, ಮೊದಲ ದಿನವೇ ಇಬ್ಬರು ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಅದು ಸೀತಾರಾಮ ಸೀರಿಯಲ್​​ ಖ್ಯಾತಿಯ ರಾಮ ಉರ್ಫ್​ ಗಗನ್​ ಚಿನ್ನಪ್ಪ ಮತ್ತು ಕಾಮನ್​ ಮ್ಯಾನ್​ ಆಗಿ ಎಂಟ್ರಿ ಕೊಟ್ಟಿರುವ, ಅಗ್ನಿಪರೀಕ್ಷೆಯಲ್ಲಿ ಅರ್ಧ ತಲೆ ಬೋಳಿಸಿಕೊಂಡು ಸುದ್ದಿಯಾಗಿದ್ದ ಮಂಜುನಾಥ್​ ಅವರ ನಡುವೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ, ಇವರಿಬ್ಬರ ನಡುವೆ ಕಿಡಿ ಹೊತ್ತುಕೊಂಡದ್ದು, ಬಿಗ್​ಬಾಸ್​ ಕೊಟ್ಟಿರುವ ಟಾಸ್ಕ್​ನಿಂದಾಗಿ. ಮೊದಲ ದಿನವೇ ತಮಗೆ ಇಷ್ಟವಾಗದ ಪ್ರಯಾಣಿಕರನ್ನು ಹೊರಹಾಕುವಂತೆ ಬಿಗ್​ಬಾಸ್​​ ಹೇಳಿತ್ತು. ಆ ಸಮಯದಲ್ಲಿ ಉಂಟಾದ ಕಿತ್ತಾಟ ಇದು.&lt;/p&gt;&lt;img&gt;&lt;p&gt;ಈ ಸಮಯದಲ್ಲಿ ಮಂಜು ಅವರು ಗಗನ್​ ಅವರನ್ನು ಉದ್ದೇಶಿಸಿ ಕೆಟ್ಟದ್ದಾಗಿ ಮಾತನಾಡಿದ್ದು, ಅದಕ್ಕೆ ಗಗನ್​ ಅವರು ತುಂಬಾ ಮಾತನಾಡಬೇಡ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಆಗ ಮಂಜುನಾಥ್​, ನನಗೆ ಉರ್ಸೋದು ಎಂದರೆ ಇಷ್ಟ, ಅದರ ಮಜಾನೇ ಬೇರೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಲ್ಲಿಗೆ ಅವರಿಬ್ಬರ ನಡುವೆ ಜಟಾಪಟಿ ನಡೆದಿದೆ. ಮಂಜು ಅವರು ಧಗ ಧಗ ಧಗ... ನನಗೆ ಉರಿಸೋದು ಅಂದ್ರೆ ತುಂಬಾ ಖುಷಿ ಎಂದಿದ್ದಾರೆ.&lt;/p&gt;&lt;img&gt;&lt;p&gt;ಇದರ ಪ್ರೊಮೋ ಅನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿಕೊಂಡಿದೆ. ಮಂಜುನಾಥ್ ಉರ್ಸಿದ್ದು ನಿಜಾನಾ? ಗಗನ್ ಉರ್ಕೊಂಡಿದ್ದು ಸುಳ್ಳಾ ಎಂದು ಇದಕ್ಕೆ ಕ್ಯಾಪ್ಷನ್​ ನೀಡಲಾಗಿದೆ.&lt;/p&gt;&lt;img&gt;&lt;p&gt;ಮಂಜು ಅವರ ಧಗಧಗಧಗ ಡೈಲಾಗ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಅವರಿಗೆ ಮೊದಲ ದಿನವೇ ಧಗ ಧಗ ಧಗ ಎಂದು ಬಿರುದು ಕೊಡಲಾಗಿದೆ. ಒಟ್ಟಿನಲ್ಲಿ ಮೊದಲ ದಿನವೇ ವೀಕ್ಷಕರು ಕುತೂಹಲದಿಂದ ಷೋ ನೋಡುವಂತೆ ಆಗುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-kannada-13-first-day-fight-between-manjunath-and-gagan-suc-ovl00yv"/>
        </item>
        <item>
            <title><![CDATA[32ವರ್ಷದ ಹಾರ್ದಿಕ್ ಪಾಂಡ್ಯಾ ಜೊತೆ 51ರ ಅಮೀಷಾ ಪಾಟೀಲ್ ಡೇಟಿಂಗ್! ನಟಿ ಹೇಳಿಕೆ ವೈರಲ್]]></title>
            <link>https://kannada.asianetnews.com/cine-world/ameesha-patel-reacts-to-hardik-pandya-romance-rumours-gives-a-savage-reply-to-troll/articleshow-rmrrdmm</link>
            <guid isPermaLink="true">https://kannada.asianetnews.com/cine-world/ameesha-patel-reacts-to-hardik-pandya-romance-rumours-gives-a-savage-reply-to-troll/articleshow-rmrrdmm</guid>
            <pubDate>Mon, 07 Sep 2026 16:41:19 +0530</pubDate>
            <description><![CDATA[&lt;p&gt;ಟೀಂ ಇಂಡಿಯಾದ ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಜೊತೆ ಬಾಲಿವುಡ್ ನಟಿ ಅಮೀಷಾ ಪಾಟೀಲ್ ಡೇಟಿಂಗ್ ಮಾಡುತ್ತಿದ್ದಾರೆ, ಹೀಗಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ರೂಮರ್ಸ್ ಕೇಳಿ ಬಂದಿದ್ದು, ಇದೀಗ ಸೋಶಿಯಲ್ ಮೀಡಿಯಾ ಟ್ರೋಲ್ ಗಳಿಗೆ ನಟಿ ಖಡಕ್ ಉತ್ತರ ನೀಡಿದ್ದಾರೆ. ಈ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xrv203xq1mct3xhzeykxfr,imgname-ameesha-patel-1788779268098.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಹಾರ್ದಿಕ್ ಪಾಂಡ್ಯ ಜೊತೆ ಅಮೀಷಾ ಪಟೇಲ್ ರೊಮ್ಯಾನ್ಸ್?&lt;/strong&gt;&lt;/h2&gt;&lt;p&gt;ಬಾಲಿವುಡ್ ನಟಿ ಅಮೀಷಾ ಪಟೇಲ್ ಹಾಗೂ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಹೆಸರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. &lsquo;ಕಹೋ ನಾ ಪ್ಯಾರ್ ಹೈ&rsquo; ಚಿತ್ರದ ಮೂಲಕ ಬಾಲಿವುಡ್&zwnj;ಗೆ ಕಾಲಿಟ್ಟ ಅಮೀಷಾ ಪಟೇಲ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ತಮ್ಮ ಸಿನಿಮಾಗಳು, ವೈಯಕ್ತಿಕ ವಿಚಾರಗಳು ಹಾಗೂ ವಿವಿಧ ವಿಷಯಗಳ ಬಗ್ಗೆ ಅವರು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ.&lt;/p&gt;&lt;p&gt;ಇತ್ತೀಚೆಗೆ ಅಮೀಷಾ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಮಾತುಕತೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ವಿಡಿಯೋದಲ್ಲಿ ಅಮೀಷಾ, ಹಾರ್ದಿಕ್ ಅವರ ಭುಜದ ಮೇಲೆ ಕೈ ಇಟ್ಟಿರುವುದನ್ನು ಗಮನಿಸಿದ ಕೆಲವರು, ಇಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧವಿರಬಹುದೇ ಎಂದು ಊಹಾಪೋಹಗಳನ್ನು ಹರಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಒಬ್ಬ ನೆಟ್ಟಿಗ &lsquo;ರೆಡಿಟ್&zwnj;ನಲ್ಲಿ ಹರಿದಾಡುತ್ತಿರುವ ಅಮೀಷಾ ಮತ್ತು ಹಾರ್ದಿಕ್ ಕುರಿತ ವದಂತಿಗಳು ನಿಜವಾಗುತ್ತಿರುವಂತೆ ಕಾಣುತ್ತಿದೆ&rsquo; ಎಂದು ಪೋಸ್ಟ್ ಮಾಡಿದ್ದ. ವಿಶೇಷವಾಗಿ ಬೆಂಗಳೂರಿನ ಹೋಟೆಲ್&zwnj;ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಅಮೀಷಾ, ಹಾರ್ದಿಕ್ ಅವರ ಭುಜದ ಮೇಲೆ ಕೈ ಇಟ್ಟಿದ್ದನ್ನು ಉಲ್ಲೇಖಿಸಿ ಆತನ ಪೋಸ್ಟ್ ಮಾಡಿದ್ದ.&lt;/p&gt;&lt;h3&gt;&lt;strong&gt;ಅಮೀಷಾ ಪಾಟೀಲ್ ಖಡಕ್ ಉತ್ತರ&lt;/strong&gt;&lt;/h3&gt;&lt;p&gt;ಈ ಪೋಸ್ಟ್ ಅಮೀಷಾ ಅವರ ಗಮನಕ್ಕೂ ಬಂದಿದೆ. ಅವರು ಆ ಪೋಸ್ಟ್&zwnj;ನ ಸ್ಕ್ರೀನ್&zwnj;ಶಾಟ್ ಹಂಚಿಕೊಂಡು ವ್ಯಂಗ್ಯಭರಿತವಾಗಿ ನೆಟ್ಟಿಗನಿಗೆ ತಿರುಗೇಟು ನೀಡಿದ್ದಾರೆ. &ldquo;ಹೌದು, ನೀನು ಹೇಳಿದ್ದು ಸರಿಯಾಗಿದೆ. ನಾನು ಅವರ ಮೇಲೆ ಕೈ ಇಟ್ಟಿದ್ದು ನಿಜಕ್ಕೂ ತುಂಬಾ ರೊಮ್ಯಾಂಟಿಕ್ ಆಗಿತ್ತು. ನಿನ್ನನ್ನು ನನಗೆ ಗೊತ್ತಿಲ್ಲ, ಆದರೆ ನಿನಗೆ ಯಾವುದೇ ಹುಡುಗಿ ಸ್ನೇಹಿತೆ ಇಲ್ಲ ಎಂದು ಖಚಿತವಾಗಿ ಹೇಳಬಹುದು. ಇಂತಹ ವಿಷಯಗಳ ಬಗ್ಗೆ ಪೋಸ್ಟ್ ಮಾಡುವ ಮೊದಲು ಒಬ್ಬ ಹುಡುಗಿಯನ್ನು ಸ್ನೇಹಿತೆಯನ್ನಾಗಿ ಮಾಡಿಕೊಳ್ಳಬೇಕು&rdquo; ಎಂಬ ಅರ್ಥದಲ್ಲಿ ಅಮೀಷಾ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;&lt;strong&gt;ಹಾರ್ದಿಕ್ ಜೊತೆ ಮತ್ತೆ ಕಾಣಿಸಿಕೊಂಡ ಅಮೀಷಾ&lt;/strong&gt;&lt;/p&gt;&lt;p&gt;ಇದರ ನಡುವೆ ಅಮೀಷಾ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ಮುಂಬೈನ ತಾಜ್ ಮಹಲ್ ಪ್ಯಾಲೇಸ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಭೇಟಿಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅಮೀಷಾ, ಹಾರ್ದಿಕ್ ಅವರನ್ನು ತಮ್ಮ ಕೆಲವು ಸ್ನೇಹಿತರೊಂದಿಗೆ ಪರಿಚಯಿಸುತ್ತಿರುವ ದೃಶ್ಯ ಕಂಡುಬಂದಿದೆ.&lt;/p&gt;&lt;p&gt;&lt;strong&gt;ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನ&lt;/strong&gt;&lt;/p&gt;&lt;p&gt;ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನವೂ ಈ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು. ಅವರು ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು 2020ರಲ್ಲಿ ವಿವಾಹವಾಗಿದ್ದರು. ಅದೇ ವರ್ಷ ಅವರಿಗೆ ಆಗಸ್ತ್ಯ ಎಂಬ ಮಗ ಜನಿಸಿದ್ದರು. ಸುಮಾರು ನಾಲ್ಕು ವರ್ಷಗಳ ಬಳಿಕ, 2024ರ ಜುಲೈ 18ರಂದು ಈ ಜೋಡಿ ವಿಚ್ಚೇದನ ಪಡೆದಿದ್ದರು. ಸದ್ಯ ಹಾರ್ದಿಕ್ ಪಾಂಡ್ಯಾ ಮಾಡೆಲ್ ಮಾಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/cine-world/ameesha-patel-reacts-to-hardik-pandya-romance-rumours-gives-a-savage-reply-to-troll/articleshow-rmrrdmm"/>
        </item>
        <item>
            <title><![CDATA[ಬಿಗ್‌ಬಾಸ್ ಮನೆಯೊಳಗೆ ಹಿಂಗ್ ಬಂದು, ಹಂಗೆ ಹೋದ ಅಮೂಲ್ಯಾ ಗೌಡ; ನಟ ವಿಷ್ಣುಕಾಂತ್ ಜೊತೆ ಎಂಟ್ರಿ]]></title>
            <link>https://kannada.asianetnews.com/gallery/tv-talk/telugu-bigg-boss10-update-kannada-serial-actress-amulya-gowda-did-a-home-tour-with-co-star-vishnukant-mrq-f660xsg</link>
            <guid isPermaLink="true">https://kannada.asianetnews.com/gallery/tv-talk/telugu-bigg-boss10-update-kannada-serial-actress-amulya-gowda-did-a-home-tour-with-co-star-vishnukant-mrq-f660xsg</guid>
            <pubDate>Mon, 07 Sep 2026 16:56:01 +0530</pubDate>
            <description><![CDATA[&lt;p&gt;ಕನ್ನಡ ಬಿಗ್&zwnj;ಬಾಸ್ ಸೀಸನ್ 9ರ ಸ್ಪರ್ಧಿ ಹಾಗೂ 'ಕಮಲಿ' ಖ್ಯಾತಿಯ ನಟಿ ಅಮೂಲ್ಯಾ ಗೌಡ ಇದೀಗ ತೆಲುಗು ಬಿಗ್&zwnj;ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ತೆಲುಗು ಧಾರಾವಾಹಿ 'ಗುಂಡೆನಿಂದ ಗುಡಿಗಂಟಲು' ಸಹನಟನೊಂದಿಗೆ ಮನೆಯೊಳಗೆ ಮೀನಾ ಆಗಿ ಬಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xsewtjry9mr96fk6m11jcj,imgname-amulya-gowda---3--1788779918162.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಬಿಗ್&zwnj;ಬಾಸ್ ಸೀಸನ್ 9ರ ಸ್ಪರ್ಧಿ ಹಾಗೂ 'ಕಮಲಿ' ಖ್ಯಾತಿಯ ನಟಿ ಅಮೂಲ್ಯಾ ಗೌಡ ಇದೀಗ ತೆಲುಗು ಬಿಗ್&zwnj;ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ತೆಲುಗು ಧಾರಾವಾಹಿ 'ಗುಂಡೆನಿಂದ ಗುಡಿಗಂಟಲು' ಸಹನಟನೊಂದಿಗೆ ಮನೆಯೊಳಗೆ ಮೀನಾ ಆಗಿ ಬಂದಿದ್ದಾರೆ.&lt;/p&gt;&lt;img&gt;&lt;p&gt;ಜೀ ಕನ್ನಡ ವಾಹಿನಿ ಕಮಲಿ ಸೀರಿಯಲ್ ಖ್ಯಾತಿಯ ನಟಿ ಅಮೂಲ್ಯಾ ಗೌಡ ಬಿಗ್&zwnj;ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಬಿಗ್&zwnj;ಬಾಸ್ ಮನೆಯೊಳಗೆ ಬಂದಿರುವ ಅಮೂಲ್ಯಾ ಗೌಡ, ಅಲ್ಲಿಯ ಪ್ರತಿಯೊಂದು ವಿನ್ಯಾಸ ನೋಡಿ ಅಚ್ಚರಿಗಗೊಂಡಿದ್ದಾರೆ. ಹೌದು, ಅಮೂಲ್ಯಾ ಗೌಡ ಬಿಗ್&zwnj;ಬಾಸ್ ಮನೆಯೊಳಗಿರುವ ಪ್ರೋಮೋ ವಿಡಿಯೋ ಬಿಡುಗಡೆಯಾಗಿದೆ.&lt;/p&gt;&lt;img&gt;&lt;p&gt;ಸೆಪ್ಟೆಂಬರ್ 6ರಂದು ಕನ್ನಡ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಬಿಗ್&zwnj;ಬಾಸ್ ಆರಂಭವಾಗಿದೆ. ಕನ್ನಡ ಬಿಗ್&zwnj;ಬಾಸ್&zwnj;ನಲ್ಲಿ ನಾಲ್ಕು ಕಾಮನ್ ಮ್ಯಾನ್ ಜೊತೆ 12 ಸೆಲಿಬ್ರಿಟಿಗಳು ದೊಡ್ಮನೆಯನ್ನು ಸೇರಿಕೊಂಡಿದ್ದಾರೆ. ನಟಿ ಅಮೂಲ್ಯಾ ಗೌಡ ಈ ಹಿಂದೆ ಕನ್ನಡ ಬಿಗ್&zwnj;ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿದ್ದರು. ನೂರಕ್ಕೂ ಹೆಚ್ಚು ದಿನಗಳನ್ನು ಬಿಗ್&zwnj;ಬಾಸ್ ಮನೆಯಲ್ಲಿ ಕಳೆದಿದ್ದರು.&lt;/p&gt;&lt;img&gt;&lt;p&gt;ಇದೀಗ ತೆಲುಗು ಬಿಗ್&zwnj;ಬಾಸ್&zwnj; ಮನೆಯೊಳಗೆ ಅಮೂಲ್ಯಾ ಗೌಡ ಬಂದಿದ್ದಾರೆ. ಸ್ಪರ್ಧಿಯಾಗಿಲ್ಲ, ಬದಲಾಗಿ ಬಿಗ್&zwnj;ಬಾಸ್ ಮನೆಯನ್ನು ತೋರಿಸಲು ತಮ್ಮ ಸೀರಿಯಲ್ ನಟನೊಂದಿಗೆ ಆಗಮಿಸಿದ್ದಾರೆ. ಗುಂಡೆನಿಂದ ಗುಡಿಗಂಟಲು ಧಾರಾವಾಹಿಯ ನಟ ವಿಷ್ಣುಕಾಂತ್ ಜೊತೆ ಬಿಗ್&zwnj;ಬಾಸ್ ಆಗಮಿಸಿ ಮನೆಯನ್ನು ಸುತ್ತಾಡಿ ತೆರಳಿದ್ದಾರೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಮನೆಗೆ &quot; ಗುಂಡೆನಿಂದ ಗುಡಿಗಂಟಲು&quot; ಸೀರಿಯಲ್&zwnj;ನ ಮೀನಾ ಮತ್ತು ಬಾಲು ಪಾತ್ರದಲ್ಲಿಯೇ ಇಬ್ಬರು ಕಲಾವಿದರು ಆಗಮಿಸಿದ್ದು, ಮನೆಯ ಪ್ರತಿಯೊಂದು ಭಾಗವನ್ನು ವೀಕ್ಷಕರಿಗೆ ತೋರಿಸವ ಕೆಲಸವನ್ನು ಮಾಡಿದ್ದಾರೆ. ಚಿನಕುರಳಿ ಮೀನಾ, ಬಿಗ್&zwnj;ಬಾಸ್ ಮನೆಯನ್ನು ಮಾಡೆಲ್ ಹೌಸ್ ಎಂದು ತಿಳಿದು ಓಡಾಡಿದ್ದಾಳೆ. ಆನಂತರ ಇದು ಮಾಡೆಲ್ ಹೌಸ್ ಅಲ್ಲ, ಬಿಗ್&zwnj;ಬಾಸ್ ಹೌಸ್ ಎಂದು ತಿಳಿದಾಗ ಶಾಕ್ ಆಗಿದ್ದಾಳೆ.&lt;/p&gt;&lt;img&gt;&lt;p&gt;ಇದು ಬಿಗ್&zwnj;ಬಾಸ್ ಮನೆ ಇಲ್ಲಿ ತಂತ್ರಗಾರಿಕೆ, ಆಟ, ಹೋರಾಟ ಎಲ್ಲವೂ ಇರುತ್ತದೆ. ನಾನು ಇಲ್ಲಿಗೆ ಬರಲು ಇಷ್ಟವಿಲ್ಲ ಅಂದ್ರು ಕರೆದುಕೊಂಡು ಬಂದಿದ್ದೀಯಾ? ಬಾಗಿಲು ಮುಚ್ಚುವ ಮುನ್ನ ಇಲ್ಲಿಂದ ಹೋಗೋಣ ಬಾ ಎಂದು ಮೀನಾಳನ್ನು ಕರೆದುಕೊಂಡು ಬಾಲು ಹೋಗಿದ್ದಾನೆ. ನಟಿ ಅಮೂಲ್ಯಾ ಗೌಡ ಕನ್ನಡ ಜೊತೆಯಲ್ಲಿ ತೆಲಗು ಸೀರಿಯಲ್&zwnj;ಗಳಲ್ಲಿ ನಟಿಸುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/telugu-bigg-boss10-update-kannada-serial-actress-amulya-gowda-did-a-home-tour-with-co-star-vishnukant-mrq-f660xsg"/>
        </item>
        <item>
            <title><![CDATA[ಡೆವಿಲ್ಸ್ ಕಿಚನ್ Vs ಸಿನಿಮಾ ನಂಟು: ಪ್ರಕೃತಿಯ ರಹಸ್ಯದೊಳಗಿನ ಸಾಹಸದ ಲೋಕ 'ಗುಣ ಗುಹೆ']]></title>
            <link>https://kannada.asianetnews.com/gallery/travel/tamil-nadu-famous-guna-caves-the-mysterious-kodaikanal-spot-made-famous-by-cinema-gvd-wv3q0vx</link>
            <guid isPermaLink="true">https://kannada.asianetnews.com/gallery/travel/tamil-nadu-famous-guna-caves-the-mysterious-kodaikanal-spot-made-famous-by-cinema-gvd-wv3q0vx</guid>
            <pubDate>Mon, 07 Sep 2026 16:43:17 +0530</pubDate>
            <description><![CDATA[&lt;p&gt;&lsquo;ಗುಣ&rsquo; ಸಿನಿಮಾ ಮತ್ತು &lsquo;ಮಂಜುಮ್ಮಲ್ ಬಾಯ್ಸ್&rsquo; ಮೂಲಕ ಪ್ರಸಿದ್ಧಿ ಪಡೆದ ಕೊಡೈಕೆನಾಲ್&zwnj;ನ ಗುಣ ಗುಹೆಗಳು ಇಂದಿಗೂ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ನಿಗೂಢ ಗುಹೆಗಳು, ಆಳವಾದ ಬಿರುಕುಗಳು ಮತ್ತು ಪೈನ್ ಕಾಡಿನ ಸೌಂದರ್ಯ ಈ ತಾಣದ ವಿಶೇಷತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xrg59ekjmbrx81f4a76wgf,imgname-1-1788778911022.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಗುಣ&rsquo; ಸಿನಿಮಾ ಮತ್ತು &lsquo;ಮಂಜುಮ್ಮಲ್ ಬಾಯ್ಸ್&rsquo; ಮೂಲಕ ಪ್ರಸಿದ್ಧಿ ಪಡೆದ ಕೊಡೈಕೆನಾಲ್&zwnj;ನ ಗುಣ ಗುಹೆಗಳು ಇಂದಿಗೂ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ನಿಗೂಢ ಗುಹೆಗಳು, ಆಳವಾದ ಬಿರುಕುಗಳು ಮತ್ತು ಪೈನ್ ಕಾಡಿನ ಸೌಂದರ್ಯ ಈ ತಾಣದ ವಿಶೇಷತೆ.&lt;/p&gt;&lt;img&gt;&lt;p&gt;ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಕೊಡೈಕೆನಾಲ್&zwnj;ನ ಸುಂದರ ಗಿರಿಧಾಮದಲ್ಲಿ ಸಮುದ್ರ ಮಟ್ಟದಿಂದ ಸುಮಾರು 2,230 ಮೀಟರ್ (7,320 ಅಡಿ) ಎತ್ತರದಲ್ಲಿರುವ ಗುಣ ಗುಹೆಗಳು ಪ್ರಕೃತಿಯ ವಿಸ್ಮಯಗಳಿಗೆ ಜೀವಂತ ಸಾಕ್ಷಿಯಾಗಿದೆ. ಕೋಟ್ಯಂತರ ವರ್ಷಗಳ ಭೂವೈಜ್ಞಾನಿಕ ಬದಲಾವಣೆಗಳಿಂದ ರೂಪುಗೊಂಡ ಈ ಗುಹೆಗಳು ದಟ್ಟ ಶೋಲಾ ಕಾಡು, ಎತ್ತರದ ಪೈನ್ ಮರಗಳು ಹಾಗೂ ಆಳವಾದ ಕಲ್ಲಿನ ಬಿರುಕುಗಳಿಂದ ಕೂಡಿದ್ದು, ಪ್ರಕೃತಿ ಪ್ರಿಯರು ಮತ್ತು ಸಾಹಸಾಸಕ್ತರನ್ನು ತನ್ನತ್ತ ಸೆಳೆಯುತ್ತವೆ.&lt;/p&gt;&lt;img&gt;&lt;p&gt;1821ರಲ್ಲಿ ಬ್ರಿಟಿಷ್ ಅನ್ವೇಷಕ ಬಿ.ಎಸ್. ವಾರ್ಡ್ ಇದನ್ನು ಪತ್ತೆ ಮಾಡಿದರು. ಈ ಗುಹೆಗಳನ್ನು ಹಿಂದೆ ಡೆವಿಲ್ಸ್ ಕಿಚನ್ ಎಂದು ಕರೆಯಲಾಗುತ್ತಿತ್ತು. ಆದರೆ 1991ರಲ್ಲಿ ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ಗುಣ ಚಿತ್ರದ ಪ್ರಮುಖ ದೃಶ್ಯಗಳು ಇಲ್ಲಿ ಚಿತ್ರೀಕರಣಗೊಂಡ ಬಳಿಕ ಈ ಸ್ಥಳವು ಗುಣ ಗುಹೆ ಎಂಬ ಹೆಸರಿನಿಂದ ದೇಶಾದ್ಯಂತ ಜನಪ್ರಿಯವಾಯಿತು. ಸುಮಾರು ಮೂರು ದಶಕಗಳ ನಂತರ, 2024ರಲ್ಲಿ ಬಿಡುಗಡೆಯಾದ ಮಲಯಾಳಂನ ಬ್ಲಾಕ್&zwnj;ಬಸ್ಟರ್ ಮಂಜುಮ್ಮಿಲ್ ಬಾಯ್ಸ್ ಈ ಗುಹೆಯನ್ನು ಮತ್ತೊಮ್ಮೆ ವಿಶ್ವದ ಗಮನಕ್ಕೆ ತಂದಿತು.&lt;/p&gt;&lt;img&gt;&lt;p&gt;2006ರಲ್ಲಿ ನಡೆದ ನೈಜ ಘಟನೆಯ ಆಧಾರದ ಮೇಲೆ ನಿರ್ಮಿತವಾದ ಈ ಚಿತ್ರದಲ್ಲಿ, ಗುಹೆಯ ಆಳವಾದ ಬಿರುಕಿಗೆ ಬಿದ್ದ ಸ್ನೇಹಿತನನ್ನು ಉಳಿಸಲು ಇತರ ಸ್ನೇಹಿತರು ತೋರಿದ ಧೈರ್ಯ ಮತ್ತು ಸ್ನೇಹದ ಮೌಲ್ಯವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಸಾವಿರಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಲು ಆರಂಭಿಸಿದರು.&lt;/p&gt;&lt;img&gt;&lt;p&gt;ಗುಣ ಗುಹೆಯ ಬಿರುಕುಗಳು ನೂರಾರು ಅಡಿ ಆಳ ಹೊಂದಿರುವುದರಿಂದ ಇಲ್ಲಿ ಈ ಹಿಂದೆ ಹಲವು ಅಪಘಾತಗಳು ಸಂಭವಿಸಿವೆ. ಈ ಕಾರಣದಿಂದ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗುಹೆಯ ಒಳಭಾಗಕ್ಕೆ ಪ್ರವೇಶವನ್ನು ಸರ್ಕಾರ ನಿರ್ಬಂಧಿಸಿದೆ. ಆದರೂ ಸುರಕ್ಷಿತ ವೀಕ್ಷಣಾ ಪ್ರದೇಶಗಳಿಂದ ಪೈನ್ ಕಾಡು, ಮಂಜಿನ ಹೊದಿಕೆ ಮತ್ತು ವಿಶಿಷ್ಟ ಶಿಲಾರಚನೆಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದು.&lt;/p&gt;&lt;img&gt;&lt;p&gt;ಪ್ರಕೃತಿಯ ಸೌಂದರ್ಯ, ಭೂವೈಜ್ಞಾನಿಕ ವೈಶಿಷ್ಟ್ಯ, ಸಿನಿರಂಗದ ಇತಿಹಾಸ ಹಾಗೂ ಸಾಹಸದ ರೋಮಾಂಚನ ಈ ನಾಲ್ಕೂ ಅಂಶಗಳನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಸಾಧ್ಯವಾಗುವ ಅಪರೂಪದ ಪ್ರವಾಸಿ ತಾಣವೇ ಗುಣ ಗುಹೆ. ಕೊಡೈಕೆನಾಲ್ ಪ್ರವಾಸದ ಅವಿಭಾಜ್ಯ ಆಕರ್ಷಣೆಯಾಗಿ ಇದು ಇಂದಿಗೂ ಲಕ್ಷಾಂತರ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/travel/tamil-nadu-famous-guna-caves-the-mysterious-kodaikanal-spot-made-famous-by-cinema-gvd-wv3q0vx"/>
        </item>
        <item>
            <title><![CDATA[ದರ್ಶನ್ ಕೇಸ್‌ಗೆ ಬಿಗ್ ಟ್ವಿಸ್ಟ್ : ಮಹತ್ವದ ಮನವಿಯೊಂದಿಗೆ ಮತ್ತೊಮ್ಮೆ ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್ ಪರ ವಕೀಲ]]></title>
            <link>https://kannada.asianetnews.com/bengaluru-urban/major-twist-in-the-darshan-case-counsel-for-darshan-approaches-high-court-again-with-a-significant-plea-gkn/articleshow-kgbo0ds</link>
            <guid isPermaLink="true">https://kannada.asianetnews.com/bengaluru-urban/major-twist-in-the-darshan-case-counsel-for-darshan-approaches-high-court-again-with-a-significant-plea-gkn/articleshow-kgbo0ds</guid>
            <pubDate>Mon, 07 Sep 2026 16:39:38 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ ಪ್ರಕರಣದಲ್ಲಿ 14ನೇ ಆರೋಪಿ ಮಾಫಿ ಸಾಕ್ಷಿ ಆಗಿರೋದು ಭಾರೀ ಕುತೂಹಲ ಮೂಡಿಸಿದೆ. ಬೆನ್ನಲ್ಲೇ ದರ್ಶನ್ ಪರ ಮತ್ತೊಮ್ಮೆ ಹೈಕೋರ್ಟ್&zwnj; ಮೆಟ್ಟಿಲೇರಿದ್ದಾರೆ. ಯಾಕೆ ದರ್ಶನ್ ಅವರಿಗೆ ಆತಂಕ ಶುರುವಾಗಿದ್ಯಾ? ಈ ಕುರಿತು ಕಂಪ್ಲೀಟ್ ಡಿಟೈಲ್ಡ್ ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xrxfv9hq1m4wwyvykmdh8w,imgname-darshan-case-in-pradosh-1788779347817.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರೇಣುಕಾಸ್ವಾಮಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ನಟ ದರ್ಶನ್ ಮತ್ತೊಂದು ಮಹತ್ವದ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಸಾಕ್ಷ್ಯ ವಿಚಾರಣೆ ವೇಳೆ ತಾನು ಖುದ್ದಾಗಿ ಕೋರ್ಟ್&zwnj;ನಲ್ಲಿ ಹಾಜರಿರಬೇಕು ಎಂಬ ಬೇಡಿಕೆಯೊಂದಿಗೆ ದರ್ಶನ್ ಪರ ವಕೀಲರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ದರ್ಶನ್ ಸಲ್ಲಿಸಿರುವ ಹೊಸ ಅರ್ಜಿ?&lt;/strong&gt;&lt;/h2&gt;&lt;p&gt;ರೇಣುಕಾಸ್ವಾಮಿ ಪ್ರಕರಣದ ಸಾಕ್ಷ್ಯ ವಿಚಾರಣೆ ಆರಂಭವಾಗುತ್ತಿರುವ ಬೆನ್ನಲ್ಲೇ, ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಆದರೆ, ಇದನ್ನು ದರ್ಶನ್ ವಿರೋಧಿಸಿದ್ದಾರೆ. ತಾವು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ಕೋರ್ಟ್ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್&zwnj;ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.&lt;/p&gt;&lt;h2&gt;&lt;strong&gt;ದರ್ಶನ್ ಮಂಡಿಸಿರುವ ಪ್ರಮುಖ ವಾದಗಳೇನು?&lt;/strong&gt;&lt;/h2&gt;&lt;p&gt;ನ್ಯಾಯಾಲಯಕ್ಕೆ ದರ್ಶನ್ ಪರ ವಕೀಲರು ಹಲವು ತಾಂತ್ರಿಕ ಮತ್ತು ಕಾನೂನಾತ್ಮಕ ಅಂಶಗಳನ್ನು ಮುಂದಿಟ್ಟಿದ್ದಾರೆ. ಸಾಕ್ಷಿಗಳು ಹೇಳಿಕೆ ನೀಡುವಾಗ ಆರೋಪಿಯು ಅವರ ಎದುರೇ ಇರಬೇಕು. ಸಾಕ್ಷ್ಯ ವಿಚಾರಣೆಯನ್ನು ನೇರವಾಗಿ ಆಲಿಸುವುದು ಮತ್ತು ವೀಕ್ಷಿಸುವುದು ಆರೋಪಿಯ ಸಾಂವಿಧಾನಿಕ ಹಕ್ಕು. ಪ್ರಸ್ತುತ ವಿಡಿಯೋ ಕಾನ್ಫರೆನ್ಸ್&zwnj;ನಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿವೆ. ಜೈಲು ಮತ್ತು ನ್ಯಾಯಾಲಯದಲ್ಲಿರುವ ಉಪಕರಣಗಳು ಹಳೆಯದಾಗಿದ್ದು, ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ.&lt;/p&gt;&lt;h2&gt;&lt;strong&gt;ಪ್ರದೋಷ್ 'ಮಾಫಿ ಸಾಕ್ಷಿ'ಯಾಗಿದ್ದೇ ದರ್ಶನ್ ಆತಂಕಕ್ಕೆ ಕಾರಣವೇ?&lt;/strong&gt;&lt;/h2&gt;&lt;p&gt;ವಿಚಾರಣೆ ನಡೆಯುವ ಸಂದರ್ಭದಲ್ಲಿ ಕಾಲಕಾಲಕ್ಕೆ ತನ್ನ ವಕೀಲರಿಗೆ ಅಗತ್ಯ ಸೂಚನೆಗಳನ್ನು ನೀಡಲು ವಿಡಿಯೋ ಕಾನ್ಫರೆನ್ಸ್&zwnj;ನಲ್ಲಿ ಸಾಧ್ಯವಾಗುತ್ತಿಲ್ಲ. ಆರೋಪಿ ಮತ್ತು ವಕೀಲರ ನಡುವಿನ ನೇರ ಸಂವಹನಕ್ಕೆ ಸೂಕ್ತ ವ್ಯವಸ್ಥೆಯಿಲ್ಲ. ಈ ಪ್ರಕರಣದಲ್ಲಿ ಅತಿ ದೊಡ್ಡ ಟ್ವಿಸ್ಟ್ ಎಂದರೆ 14ನೇ ಆರೋಪಿಯಾಗಿರುವ ಪ್ರದೋಷ್ ಈಗ 'ಮಾಫಿ ಸಾಕ್ಷಿ' (Approver) ಆಗಿ ಬದಲಾಗಿರುವುದು. ಈ ಕೊಲೆ ಪ್ರಕರಣದ ಬಗ್ಗೆ ಸತ್ಯ ಹೇಳುವುದಾಗಿ ಒಪ್ಪಿಕೊಂಡಿರುವ ಪ್ರದೋಷ್, ಈಗಾಗಲೇ ಎವಿಡೆನ್ಸ್ ಬುಕ್ ಹಿಡಿದು ಬಿಗಿ ಪೊಲೀಸ್ ಭದ್ರತೆಯಲ್ಲಿ ಕೋರ್ಟ್&zwnj;ಗೆ ಹಾಜರಾಗಿದ್ದರು.&lt;/p&gt;&lt;p&gt;ಪ್ರದೋಷ್ ನೀಡುವ ಹೇಳಿಕೆ ದರ್ಶನ್ ಪಾಲಿಗೆ ಸಂಕಷ್ಟ ತರುವ ಸಾಧ್ಯತೆ ಇರುವುದರಿಂದ ಆತ ಹೇಳಿಕೆ ನೀಡುವಾಗ ತಾನು ಖುದ್ದಾಗಿ ಹಾಜರಿರಬೇಕು ಎಂಬುದು ದರ್ಶನ್ ಉದ್ದೇಶ ಎನ್ನಲಾಗುತ್ತಿದೆ. ಇದರ ಜೊತೆಗೆ ಪ್ರದೋಷ್ ಮಾಫಿ ಸಾಕ್ಷಿ ಆಗುವುದನ್ನೂ ಪ್ರಶ್ನಿಸಿ ದರ್ಶನ್ ಪರವಾಗಿ ಹೈಕೋರ್ಟ್&zwnj;ಗೆ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ. ಒಟ್ಟಾರೆಯಾಗಿ ವಿಡಿಯೋ ಕಾನ್ಫರೆನ್ಸ್ ಬದಲು ತಮ್ಮನ್ನು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರದೋಷ್ ನೀಡುವ ಸಾಕ್ಷ್ಯ ಮತ್ತು ದರ್ಶನ್ ಸಲ್ಲಿಸಿರುವ ಈ ಅರ್ಜಿ ಮುಂದಿನ ದಿನಗಳಲ್ಲಿ ಈ ಕೇಸ್&zwnj;ನಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>entertainment</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/major-twist-in-the-darshan-case-counsel-for-darshan-approaches-high-court-again-with-a-significant-plea-gkn/articleshow-kgbo0ds"/>
        </item>
        <item>
            <title><![CDATA[ಧಾರವಾಹಿಯಲ್ಲಿ ಬಾಲನಟಿಯಾಗಿ ಮಿಂಚಿ ಇದೀಗ ಬಿಗ್ ಬಾಸ್ 20ಕ್ಕೆ ಕಾಲಿಟ್ಟಿ ಕಿರಿಯ ಸ್ಪರ್ಧಿ]]></title>
            <link>https://kannada.asianetnews.com/gallery/tv-talk/child-artist-to-bigg-boss-20-contestant-arishfa-khan-makes-entry-to-salman-khan-show-8o7g96a</link>
            <guid isPermaLink="true">https://kannada.asianetnews.com/gallery/tv-talk/child-artist-to-bigg-boss-20-contestant-arishfa-khan-makes-entry-to-salman-khan-show-8o7g96a</guid>
            <pubDate>Mon, 07 Sep 2026 16:38:17 +0530</pubDate>
            <description><![CDATA[&lt;p&gt;ಬಿಗ್ ಬಾಸ್ 20ರಲ್ಲಿರುವ ಅತ್ಯಂತ ಕಿರಿಯ ಸ್ಪರ್ಧಿ ಇದೀಗ ಭಾರಿ ಸದ್ದು ಮಾಡುತ್ತಿದ್ದಾರೆ. ಧಾರವಾಹಿಯಲ್ಲಿ ಬಾಲನಟಿಯಾಗಿ ಮಿಂಚಿದ್ದ ಈ ನಟಿಗೆ ಇದೀಗ 23 ವರ್ಷ. ಅಷ್ಟಕ್ಕೂ ಯಾರು ಈ ಆರಿಶ್ಫಾ ಖಾನ್?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xre57hh8898cmngacjbfqp,imgname-arishfa-khan-enters-bigg-boss-20-as-youngest-contestant-1788778845423.png" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ 20ರಲ್ಲಿರುವ ಅತ್ಯಂತ ಕಿರಿಯ ಸ್ಪರ್ಧಿ ಇದೀಗ ಭಾರಿ ಸದ್ದು ಮಾಡುತ್ತಿದ್ದಾರೆ. ಧಾರವಾಹಿಯಲ್ಲಿ ಬಾಲನಟಿಯಾಗಿ ಮಿಂಚಿದ್ದ ಈ ನಟಿಗೆ ಇದೀಗ 23 ವರ್ಷ. ಅಷ್ಟಕ್ಕೂ ಯಾರು ಈ ಆರಿಶ್ಫಾ ಖಾನ್?&lt;/p&gt;&lt;img&gt;&lt;p&gt;ಬಿಗ್ ಬಾಸ್ ರಿಯಾಲಿಟಿ ಶೋ ಅದ್ದೂರಿಯಾಗಿ ಆರಂಭಗೊಂಡಿದೆ. ಕಿಚ್ಚ ಸುದೀಪ್, ಸಲ್ಮಾನ್, ನಾಗಾರ್ಜುನ, ಮೋಹನ್&zwnj;ಲಾಲ್ ಸೇರಿದಂತೆ ಪ್ರಮುಖ ಸ್ಟಾರ್ ನಿರೂಪಕರು ನಡೆಸಿಕೊಡುವ ಬಿಗ್ ಬಾಸ್ ಹಲವು ಭಾಷೆಗಳಲ್ಲಿ ಶುರುವಾಗಿದೆ. ಈ ಪೈಕಿ ಬಿಗ್ ಬಾಸ್ 20ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ಅತೀ ಕಿರಿಯ ಸ್ಪರ್ಧಿ ಅರಿಶ್ಫಾ ಖಾನ್ ಭಾರಿ ಸದ್ದು ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಾಸ್ ಶೋನಲ್ಲಿ ಅರಿಶ್ಫಾ ಖಾನ್ ಪ್ರವೇಶಿಸಿದ್ದಾರೆ. 23ರ ಹರೆಯದ ಅರಿಶ್ಫಾ ಖಾನ್ ಚಿಕ್ಕಂದಿನಿಂದಲೇ ಕ್ಯಾಮೆರಾ ಮುಂದೆ ನಟಿಸಿ ಪ್ರೇಕ್ಷಕರ ಮನಗೆದ್ದ ತಾರೆ. ಹಲವು ಧಾರವಾಹಿಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಅರಿಶ್ಫಾ ಖಾನ್ ಇದೀಗ ಹಿಂದಿ ಬಿಗ್ ಬಾಸ್ ಶೋಗೆ ಪ್ರವೇಶಿಸಿದ್ದಾರೆ.&lt;/p&gt;&lt;img&gt;&lt;p&gt;2012ರಲ್ಲಿ ಬಾಲನಟಿಯಾಗಿ ಚಲಚ್ಚಿ-ಶೆಹ್ ಔರ್ ಮಾತ್ ಧಾರವಾಹಿಯಲ್ಲಿ ನಟಿಸಿದ್ದಾರೆ. ಸದ್ಯ ಧಾರವಾಹಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಏಕ್ ವೀರ್ ಕಿ ಅರ್ದಾಸ್, ಜೀನಿ ಔರ್ ಜುಜು, ಉತ್ತರನ್, ಯೇ ಹೈ ಮೊಹಬ್ಬತೇನ್, ಗಂಗಾ, ಮೇರಿ ದುರ್ಗಾ, ಪಪ್ಪಾ ಬೈ ಚಾನ್ಸ್ ಸೇರಿದಂತೆ ಪ್ರಮುಖ ಧಾರವಾಹಿಗಳಲ್ಲಿ ನಟಿಸಿದ್ದಾರೆ.&lt;/p&gt;&lt;img&gt;&lt;p&gt;ಧಾರವಾಹಿ ಜೊತೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಗಮನಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾಶನ್ , ಬ್ಯೂಟಿ, ಲೈಫ್&zwnj;ಸ್ಟೈಲ್ ಸೇರಿದಂತೆ ಹಲವು ರೀತಿಯ ಕೆಂಟೆಂಟ್ ಹಂಚಿಕೊಳ್ಳುತ್ತಾರೆ. ಕೆಲ ಮ್ಯೂಸಿಕ್ ವಿಡಿಯೋಗಳಲ್ಲೂ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿವಾದಗಳಿಂದ ದೂರವಿದ್ದ ಆರಿಶ್ಫಾ ಖಾನ್ 2018ರಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಗುರುತಿಸಿಕೊಂಡಿದ್ದ ದಾನಿಶ್ ಜೆಹನ್ ನಿಧನದಿಂದ ವಿವಾದ ಸುತ್ತಿಕೊಂಡಿತು. ದಾನಿಶ್ ಜೊತೆ ರಿಲೇಶನ್&zwnj;ಶಿಪ್&zwnj;ನಲ್ಲಿದ್ದರು ಅನ್ನೋ ಮಾತುಗಳು ಕೇಳಿಬಂದಿತ್ತು. ಬಳಿಕ ಆರಿಶ್ಫಾ ಖಾನ್ ಸ್ಪಷ್ಟನೆ ನೀಡಿದ್ದರು. ಇದೀಗ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಶೋನಲ್ಲಿ ಕಿರಿಯ ಸ್ಪರ್ಧಿಯಾಗಿ ಗಮನಸೆಳೆದಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/tv-talk/child-artist-to-bigg-boss-20-contestant-arishfa-khan-makes-entry-to-salman-khan-show-8o7g96a"/>
        </item>
        <item>
            <title><![CDATA[Bigg Boss ಎಲ್ಲಾ ಭಾಷೆಗಳ ನಿರೂಪಕರ ಸಂಭಾವನೆ ರಿವೀಲ್​: ಯಾರಿಗೆ ಹೆಚ್ಚು, ಕನ್ನಡಕ್ಕೆ ಇದೆಂಥ ಅನ್ಯಾಯ]]></title>
            <link>https://kannada.asianetnews.com/gallery/tv-talk/bigg-boss-hosts-salaries-for-all-languages-who-gets-more-kannada-less-suc-kkktv1g</link>
            <guid isPermaLink="true">https://kannada.asianetnews.com/gallery/tv-talk/bigg-boss-hosts-salaries-for-all-languages-who-gets-more-kannada-less-suc-kkktv1g</guid>
            <pubDate>Mon, 07 Sep 2026 13:13:18 +0530</pubDate>
            <description><![CDATA[ಕನ್ನಡ, ಹಿಂದಿ, ತಮಿಳು ಸೇರಿದಂತೆ ಆರು ಭಾಷೆಗಳಲ್ಲಿ ಬಿಗ್​ಬಾស្សೋ ಆರಂಭವಾಗಿದೆ. ಈ ರಿಯಾಲಿಟಿ ಶೋ ನಿರೂಪಕರ ಸಂಭಾವನೆ ಬಹಿರಂಗವಾಗಿದ್ದು, ಹಿಂದಿಯ ಸಲ್ಮಾನ್ ಖಾನ್ ಅತಿ ಹೆಚ್ಚು ಸಂಭಾವನೆ ಪಡೆದರೆ, ಕನ್ನಡದ ಕಿಚ್ಚ ಸುದೀಪ್ ಅವರ ಸಂಭಾವನೆ ಎಷ್ಟು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1xcpxq61apn0tqaphvb6xq3,imgname-bigg-boss-1788766549733.jpg" type="image/jpeg" height="390" width="690"/>
            <content:encoded><![CDATA[ಕನ್ನಡ, ಹಿಂದಿ, ತಮಿಳು ಸೇರಿದಂತೆ ಆರು ಭಾಷೆಗಳಲ್ಲಿ ಬಿಗ್​ಬಾស្សೋ ಆರಂಭವಾಗಿದೆ. ಈ ರಿಯಾಲಿಟಿ ಶೋ ನಿರೂಪಕರ ಸಂಭಾವನೆ ಬಹಿರಂಗವಾಗಿದ್ದು, ಹಿಂದಿಯ ಸಲ್ಮಾನ್ ಖಾನ್ ಅತಿ ಹೆಚ್ಚು ಸಂಭಾವನೆ ಪಡೆದರೆ, ಕನ್ನಡದ ಕಿಚ್ಚ ಸುದೀಪ್ ಅವರ ಸಂಭಾವನೆ ಎಷ್ಟು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.&lt;img&gt;&lt;p&gt;ನಿನ್ನೆ ಆರು ಭಾಷೆಗಳಲ್ಲಿ ಬಿಗ್​ಬಾಸ್​ ಹವಾ ಶುರುವಾಗಿದೆ. ಕನ್ನಡ ಸೇರಿದಂತೆ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬಾಂಗ್ಲಾದಲ್ಲಿ ಶುರುವಾಗಿದ್ದು, ಕನ್ನಡದಲ್ಲಿ, Bigg Boss 13ಗೆ ಚಾಲನೆ ಸಿಕ್ಕಿದೆ. ಅಂತೆ-ಕಂತೆಗಳಿಗೆ ತೆರೆ ಬಿದ್ದಿದೆ. ಯಾವೆಲ್ಲಾ ಸ್ಪರ್ಧಿಗಳು ಬಿಗ್​ಬಾಸ್​ ಮನೆಯೊಳಕ್ಕೆ ಹೋಗ್ತಿದ್ದಾರೆ ಎನ್ನುವ ಬಗ್ಗೆ ಕೊನೆಗೂ ರಿವೀಲ್​ ಆಗಿದೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ಇದೀಗ ಇನ್ನೊಂದು ವಿಷಯವೂ ರಿವೀಲ್​ ಆಗಿದೆ. ಅದೇನೆಂದರೆ, ಬಿಗ್​ಬಾಸ್​ನ ಈ ಆರೂ ಭಾಷೆಗಳ ಹೋಸ್ಟ್​ ಅರ್ಥಾತ್​ ನಿರೂಪಕರಿಗೆ ಎಷ್ಟು ಸಂಭಾವನೆ ಎನ್ನುವ ವಿಷಯ. ಅಷ್ಟಕ್ಕೂ ಬಿಗ್​ಬಾಸ್ ಸ್ಪರ್ಧಿಗಳಿಗೆ ಆಗಲೀ, ನಿರೂಪಕರಿಗೆ ಆಗಲೀ ಸಂಭಾವನೆಯ ವಿಷಯವನ್ನು ಹೊರಗೆ ರಟ್ಟು ಮಾಡುವುದಿಲ್ಲ. ಇದರ ಹೊರತಾಗಿಯೂ ಹೇಗೋ ಈ ಸುದ್ದಿ ಹೊರಗೆ ಬಂದು ಬಿಡುತ್ತದೆ.&lt;/p&gt;&lt;img&gt;&lt;p&gt;ಕುತೂಹಲದ ವಿಷ್ಯ ಏನೆಂದರೆ, ಈ ಎಲ್ಲಾ ಬಿಗ್​ಬಾಸ್​ಗಳಲ್ಲಿ ಹಿರಿಯಣ್ಣ ಎನ್ನಿಸಿಕೊಂಡಿರುವುದು ಹಿಂದಿ ಬಿಗ್​ಬಾಸ್​​. ಇದರ ನಿರೂಪಕರು ನಟ ಸಲ್ಮಾನ್​ ಖಾನ್​. ಏಕೆಂದರೆ, ಹಿಂದಿಯ ಬಿಗ್​ಬಾಸ್​​ ಆರಂಭವಾಗಿದ್ದು, 2006ರಲ್ಲಿ.&lt;/p&gt;&lt;img&gt;&lt;p&gt;ಇದನ್ನು ಹೊರತುಪಡಿಸಿದರೆ, ಸೀನಿಯಾರಿಟಿಯಲ್ಲಿ ಎರಡನೆಯ ಸ್ಥಾನ ಇರುವುದು ಕನ್ನಡ ಮತ್ತು ಬೆಂಗಾಲಿ. ಇವೆರಡೂ ಶುರುವಾಗಿದ್ದು 2013ರಲ್ಲಿ. ಆ ಬಳಿಕ ಬರುವುದು, 2017ರಲ್ಲಿ ಶುರುವಾದ ತಮಿಳು ಮತ್ತು ತೆಲಗು, ಆನಂತರ 2018ರಲ್ಲಿ ಆರಂಭವಾಗಿರುವ ಮರಾಠಿ ಮತ್ತು ಮಲಯಾಳಿ.&lt;/p&gt;&lt;img&gt;&lt;p&gt;ಹಾಗಿದ್ದರೆ ಯಾರಿಗೆ ಎಷ್ಟು ಸಂಭಾವನೆ ಎನ್ನೋದನ್ನು ನೋಡುವುದಾದರೆ, ಹಿಂದಿನ ಬಿಗ್​ಬಾಸ್​ ನಡೆಸಿಕೊಡುವ &lt;strong&gt;ಸಲ್ಮಾನ್ ಖಾನ್&lt;/strong&gt;, ಪ್ರತಿ ಸೀಸನ್&zwnj;ಗೆ 250 ಕೋಟಿ ರೂಪಾಯಿಗಳಿಂದ 300 ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆಯುತ್ತಿದ್ದಾರೆ.&lt;/p&gt;&lt;p&gt;ಒಂದು ದಶಕದ ನಂತರ ಈ ಕಾರ್ಯಕ್ರಮ ಮತ್ತೆ ಬರುತ್ತಿದ್ದಂತೆ &lt;strong&gt;ಸೌರವ್ ಗಂಗೂಲಿ&lt;/strong&gt; ಬಿಗ್ ಬಾಸ್ ಬಾಂಗ್ಲಾವನ್ನು ಆಯೋಜಿಸುತ್ತಿದ್ದಾರೆ. ಇವರ ಸಂಭಾವನೆ 125 ಕೋಟಿ ರೂಪಾಯಿ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ವಿಜಯ್ ಸೇತುಪತಿ &lt;/strong&gt;ಬಿಗ್ ಬಾಸ್ ತಮಿಳಿನ ನಿರೂಪಣೆ ಮಾಡುತ್ತಿದ್ದಾರೆ. ಮೂರು ತಿಂಗಳ ಕಾಲ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರ ಸಂಭಾವನೆ ಸಣ್ಣ ಚಿತ್ರದ ಬಜೆಟ್&zwnj;ಗೆ ಸಮನಾಗಿದ್ದು, 75 ಕೋಟಿ ರೂಪಾಯಿಗಳಿಂದ 80 ಕೋಟಿ ರೂಪಾಯಿಗಳವರೆಗೆ ಗಳಿಸುತ್ತಿದೆ.&lt;/p&gt;&lt;p&gt;&lt;strong&gt;ನಾಗಾರ್ಜುನ&lt;/strong&gt; ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗು 10 ಅನ್ನು ಮತ್ತೆ ನಿರೂಪಣೆ ಮಾಡುತ್ತಿದ್ದಾರೆ. ಬಿಗ್ ಬಾಸ್ ತೆಲುಗು ಸೀಸನ್ 3 ರಿಂದ ಅವರು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ ಮತ್ತು ಅವರಿಗೆ 35 ಕೋಟಿ ರೂಪಾಯಿಗಳ ಸಂಭಾವನೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.&lt;/p&gt;&lt;p&gt;&lt;strong&gt;ನಟ ಮೋಹನ್ ಲಾಲ್&lt;/strong&gt; ಬಿಗ್ ಬಾಸ್ ಮಲಯಾಳಂ ಸೀಸನ್ 8 ರ ನಿರೂಪಕರಾಗಿ ಮರಳಿದ್ದಾರೆ. ಹೊಸ ಸೀಸನ್ ಅನ್ನು ನಿರೂಪಣೆ ಮಾಡಲು ಅವರು 30 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದಾರೆ.&lt;/p&gt;&lt;p&gt;&lt;strong&gt;ಕಿಚ್ಚ ಸುದೀಪ್&lt;/strong&gt; ಬಿಗ್ ಬಾಸ್ ಕನ್ನಡ ಸೀಸನ್ 13 ಅನ್ನು ಆಯೋಜಿಸುತ್ತಿದ್ದಾರೆ ಮತ್ತು ಅವರಿಗೆ 20 ಕೋಟಿ ರೂಪಾಯಿಗಳವರೆಗೆ ಸಂಭಾವನೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಈ ವರದಿ ನಿಜವೇ ಆಗಿದ್ದರೆ, ಮೊದಲಿನ ಸ್ಥಾನ ಹಿಂದಿಯ ಬಿಗ್​ಬಾಸ್​​ ಹಾಗೂ ಕೊನೆಯ ಸ್ಥಾನ ಕನ್ನಡದ ಬಿಗ್​ಬಾಸ್​​ ಎಂದು ವರದಿಯಾಗಿದೆ. ಅಷ್ಟಕ್ಕೂ ಸುದೀಪ್​ ಅವರು ಕೆಲವು ಕಾರಣಗಳಿಂದ ಮುಂದಿನ ಸೀಸನ್​ನಿಂದ ನಾನು ಬಿಗ್​ಬಾಸ್​ ನಡೆಸಿಕೊಡುವುದಿಲ್ಲ ಎಂದಿದ್ದರು. ಇದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಶಾಕ್​ ಕೊಟ್ಟಿತ್ತು. ಕೊನೆಗೆ ಮಾತುಕತೆ ಬಳಿಕ ನಾಲ್ಕು ಸೀಸನ್​ ಮಾಡಲು ಒಪ್ಪಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-hosts-salaries-for-all-languages-who-gets-more-kannada-less-suc-kkktv1g"/>
        </item>
        <item>
            <title><![CDATA[ನಟಿ ಲಾವಣ್ಯ ಭಾರಧ್ವಜ್ ಅದ್ದೂರಿ ಸೀಮಂತ ಸಂಭ್ರಮದಲ್ಲಿ ‘ಶ್ರೀರಸ್ತು ಶುಭಮಸ್ತು’ ತಂಡ]]></title>
            <link>https://kannada.asianetnews.com/gallery/tv-talk/srirastu-shubhamastu-actress-lavanya-bharadhwaj-baby-shower-dx9x7b5</link>
            <guid isPermaLink="true">https://kannada.asianetnews.com/gallery/tv-talk/srirastu-shubhamastu-actress-lavanya-bharadhwaj-baby-shower-dx9x7b5</guid>
            <pubDate>Mon, 07 Sep 2026 16:02:14 +0530</pubDate>
            <description><![CDATA[&lt;p&gt;&lsquo;ಶ್ರೀರಸ್ತು ಶುಭಮಸ್ತು&rsquo; ಧಾರಾವಾಹಿಯಲ್ಲಿ ಪೂರ್ಣಿ ಪಾತ್ರದ ಮೂಲಕ ಮನೆಮಾತಾಗಿದ್ದ ನಟಿ ಲಾವಣ್ಯ ಭಾರಧ್ವಜ್ ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದು, ಕಾರ್ಯಕ್ರಮಕ್ಕೆ ಸೀರಿಯಲ್ ತಂಡವೇ ಆಗಮಿಸಿ, ಚೊಚ್ಚಲ ತಾಯಿಗೆ ಶುಭ ಕೋರಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xpq506g7tanyg33pfahb7x,imgname-lavanya-bharadhwaj-1788777042949.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಶ್ರೀರಸ್ತು ಶುಭಮಸ್ತು&rsquo; ಧಾರಾವಾಹಿಯಲ್ಲಿ ಪೂರ್ಣಿ ಪಾತ್ರದ ಮೂಲಕ ಮನೆಮಾತಾಗಿದ್ದ ನಟಿ ಲಾವಣ್ಯ ಭಾರಧ್ವಜ್ ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದು, ಕಾರ್ಯಕ್ರಮಕ್ಕೆ ಸೀರಿಯಲ್ ತಂಡವೇ ಆಗಮಿಸಿ, ಚೊಚ್ಚಲ ತಾಯಿಗೆ ಶುಭ ಕೋರಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯಲ್ಲಿ ಪೋಷಕ ಪಾತ್ರಗಳ ಮೂಲಕವೇ ಗಮನ ಸೆಳೆದ ನಟಿ ಲಾವಣ್ಯ ಭಾರಧ್ವಜ್. ಇವರು ಹೆಚ್ಚು ಜನಪ್ರಿಯತೆ ಪಡೆದ ಪಾತ್ರ &lsquo;ಶ್ರೀರಸ್ತು ಶುಭಮಸ್ತು&rsquo; ಧಾರಾವಾಹಿಯ ಪೂರ್ಣಿ ಪಾತ್ರ. ಇದೀಗ ಪೂರ್ಣಿ ಪಾತ್ರಧಾರಿ ಲಾವಣ್ಯ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ.&lt;/p&gt;&lt;img&gt;&lt;p&gt;ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ &lsquo;ಶ್ರೀರಸ್ತು ಶುಭಮಸ್ತು&rsquo;ವಿನಲ್ಲಿ ಅವಿನಾಶ್ ಪತ್ನಿ ಪೂರ್ಣಿಯಾಗಿ, ಅವಿಯ ಪ್ರೀತಿಯ ಪತ್ನಿಯಾಗಿ, ಮಾವನ ಮುದ್ದಿನ ಸೊಸೆಯಾಗಿ, ಮನೆಮಂದಿಯ ಜೊತೆಗೆ, ಜನರ ಪ್ರೀತಿಯನ್ನು ಗೆದ್ದಿದ್ದ ಸೊಸೆಯಾಗಿದ್ದರು ಲಾವಣ್ಯ ಭಾರಧ್ವಜ್.&lt;/p&gt;&lt;img&gt;&lt;p&gt;ಇದೀಗ ಲಾವಣ್ಯ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ಲಾವಣ್ಯ ಇತ್ತೀಚೆಗೆ ತಮ್ಮ ಸೀಮಂತವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದು, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.&lt;/p&gt;&lt;img&gt;&lt;p&gt;ಸೀಮಂತದ ಸಂಭ್ರಮದಲ್ಲಿರುವ ಲಾವಣ್ಯಗೆ ಶುಭ ಹಾರೈಸಲು ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಟ, ನಟಿಯರು ಹಾಗೂ ನಿರ್ದೇಶಕರು ಕೂಡ ಆಗಮಿಸಿದ್ದರು. ಸುಧಾರಾಣಿ ಪುತ್ರಿಯಾಗಿ ನಟಿಸಿದ ನಟಿ ದೀಪಾ ಕಟ್ಟೆ, ಸೀಮಂತದ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಧಾರಾವಾಹಿಯಲ್ಲಿ ನಾಯಕಿಯಾಗಿದ್ದ ನಟಿ ಸುಧಾರಾಣಿ, ಮಾವ ಆಗಿದ್ದ ದತ್ತಾತ್ರೇಯ ಆಲಿಯಾ ಜನರ ಪ್ರೀತಿಯ ದತ್ತ ತಾತ, ದೀಪಾ ಕಟ್ಟೆ, ಸ್ವಪ್ನಾ ದೀಕ್ಷಿತ್, ದರ್ಶಿತ್, ದರ್ಶಿನಿ ಡೆಲ್ಟಾ ಹಾಗೂ ನಕುಲ್ ಶರ್ಮಾ, ಜೊತೆಗೆ ನಿರ್ದೇಶಕರಾದ ಸುದೇಶ್ ಕೆ ರಾವ್ ಆಗಮಿಸಿ ಲಾವಣ್ಯಗೆ ಶುಭ ಹಾರೈಸಿದ್ದಾರೆ.&lt;/p&gt;&lt;img&gt;&lt;p&gt;ಅಂದ ಹಾಗೇ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾವನಾಗಿ ನಟಿಸಿದ್ದ ಅಜಿತ್ ಹಂಡೆ ಹಾಗೂ ಗಂಡನಾಗಿ ನಟಿಸಿದ್ದ ಅರ್ಫತ್ ಶರೀಫ್ ಮಾತ್ರ ಕಾರ್ಯಕ್ರಮದಲ್ಲಿ ಮಿಸ್ ಆದಂತಿತ್ತು. ಹಸಿರು ಮತ್ತು ಪಿಂಕ್ ಸೀರೆಯಲ್ಲಿ ಲಾವಣ್ಯ ಮಿಂಚುತ್ತಿದ್ದರು. ತಾಯ್ತನದ ಕಳೆ ಮುಖದಲ್ಲಿ ಎದ್ದು ಕಾಣುತ್ತಿತ್ತು.&lt;/p&gt;&lt;img&gt;&lt;p&gt;ಲಾವಣ್ಯ ಭಾರಧ್ವಜ್, ರಾಜಾರಾಣಿ ಧಾರಾವಾಹಿಯಲ್ಲಿ ತಮ್ಮ ಸಹ ನಟರಾಗಿದ್ದ ನಟ ಶಶಿ ಹೆಗ್ಡೆಯವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ದಾಂಪತ್ಯಕ್ಕೆ 4 ವರ್ಷಗಳು ತುಂಬಿದ್ದು, ಇದೀಗ ಇಬ್ಬರು ಜೊತೆಯಾಗಿ ಮೊದಲ ಮದುವಿನ ಆಗಮನದ ಸಂಭ್ರಮವನ್ನು ಸಂಭ್ರಮಿಸುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/srirastu-shubhamastu-actress-lavanya-bharadhwaj-baby-shower-dx9x7b5"/>
        </item>
        <item>
            <title><![CDATA[ರಿಷಬ್ ಶೆಟ್ಟಿ ಸಂಸ್ಥೆಯಲ್ಲಿ ಸಿನಿಮಾ ಮಾಡಬೇಕಿತ್ತು, ಆದ್ರೆ..: ನಟ ಶೈನ್ ಶೆಟ್ಟಿ ಹೇಳಿದ್ದೇನು?]]></title>
            <link>https://kannada.asianetnews.com/gallery/sandalwood/kannada-actor-shine-shetty-s-dream-project-shankarabharana-film-teaser-wins-appreciation-gvd-bgxakh8</link>
            <guid isPermaLink="true">https://kannada.asianetnews.com/gallery/sandalwood/kannada-actor-shine-shetty-s-dream-project-shankarabharana-film-teaser-wins-appreciation-gvd-bgxakh8</guid>
            <pubDate>Mon, 07 Sep 2026 16:18:36 +0530</pubDate>
            <description><![CDATA[&lt;p&gt;ಶೈನ್ ಶೆಟ್ಟಿ ನಿರ್ಮಿಸಿ, ನಾಯಕನಾಗಿ ನಟಿಸಿರುವ &lsquo;ಶಂಕರಾಭರಣ&rsquo; ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸುಮಂತ್ ಭಟ್ ನಿರ್ದೇಶನದ ಈ ಹಾರರ್ ಕಾಮಿಡಿಯಲ್ಲಿ ಶೈನ್ ಬಸ್ ಚಾಲಕನಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನ.20ರಂದು ತೆರೆಗೆ ಬರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xq6xj6z1bz1cakp5bq58fx,imgname-1-1788777559622.png" type="image/jpeg" height="390" width="690"/>
            <content:encoded><![CDATA[&lt;p&gt;ಶೈನ್ ಶೆಟ್ಟಿ ನಿರ್ಮಿಸಿ, ನಾಯಕನಾಗಿ ನಟಿಸಿರುವ &lsquo;ಶಂಕರಾಭರಣ&rsquo; ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸುಮಂತ್ ಭಟ್ ನಿರ್ದೇಶನದ ಈ ಹಾರರ್ ಕಾಮಿಡಿಯಲ್ಲಿ ಶೈನ್ ಬಸ್ ಚಾಲಕನಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನ.20ರಂದು ತೆರೆಗೆ ಬರಲಿದೆ.&lt;/p&gt;&lt;img&gt;&lt;p&gt;&lsquo;ನಮಗೆ ಅನ್ನಿಸುವುದನ್ನು ಮಾಡಬೇಕಾದರೆ ವೇದಿಕೆ ನಮ್ಮದೇ ಆಗಿರಬೇಕು. ಹಾಗಾಗಿ ನಾನೇ ನಿರ್ಮಾಣ ಸಂಸ್ಥೆ ಕಟ್ಟಿ ಮಾಡಿದ ಸಿನಿಮಾ ಇದು. ಹಲವು ವರ್ಷಗಳ ಶ್ರಮದ, ಕನಸಿನ ಫಲ ಈ ಶಂಕರಾಭರಣ&rsquo;. ಶೈನ್ ಶೆಟ್ಟಿ ಹೇಳಿದ ಮಾತಿದು. ಸಾಮಾನ್ಯವಾಗಿ ಪ್ರತಿಯೊಬ್ಬ ಕಲಾವಿದರೂ ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.&lt;/p&gt;&lt;img&gt;&lt;p&gt;ಕೆಲವರು ಆ ಅವಕಾಶವನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಶೈನ್ ಎರಡನೇ ದಾರಿ ಆರಿಸಿಕೊಂಡಿದ್ದಾರೆ. ಅವರ ತಂಡ ನಿರ್ಮಿಸಿರುವ, ಅವರು ನಾಯಕನಾಗಿ ನಟಿಸಿರುವ, &lsquo;ಮಿಥ್ಯ&rsquo; ಖ್ಯಾತಿಯ ಸುಮಂತ್ ಭಟ್ ನಿರ್ದೇಶನದ &lsquo;ಶಂಕರಾಭರಣ&rsquo; ಚಿತ್ರದ ಟೀಸರ್&zwnj; ಬಿಡುಗಡೆಯಾಗಿದೆ ಮತ್ತು ಮೆಚ್ಚುಗೆ ಗಳಿಸಿದೆ.&lt;/p&gt;&lt;img&gt;&lt;p&gt;ರಿಷಬ್ ಶೆಟ್ಟಿಯವರ ಸಂಸ್ಥೆಯಲ್ಲಿ ನಾನೊಂದು ಸಿನಿಮಾ ಮಾಡಬೇಕಿತ್ತು. ಅದಕ್ಕಾಗಿ ಕತೆ ಮಾಡಿದ್ದಾಗ ಅವರು ಮೆಚ್ಚಿದ್ದರು. ನಾನೂ ಕತೆ ಮಾಡಬಹುದು ಅನ್ನುವ ಧೈರ್ಯ ಬಂದಿತ್ತು. ಆಮೇಲೆ ನಾನೇ ನಿರ್ಮಾಣ ಸಂಸ್ಥೆ ಮಾಡುವ ಧೈರ್ಯ ಮಾಡಿದೆ. ಹಲವು ಸಮಯ ಹೋರಾಟ ಮಾಡಿದರೂ ನಿರ್ಮಾಪಕರು ಸಿಗಲಿಲ್ಲ.&lt;/p&gt;&lt;img&gt;&lt;p&gt;ಕೊನೆಗೆ ಅಣ್ಣ ದಿವಾಕರ ಶೆಟ್ಟಿ ಜೊತೆಯಾದರು. ರಂಗಸ್ಥಳ ಸಂಸ್ಥೆ ಕಟ್ಟಿದೆವು. ನನ್ನ ಕತೆಯನ್ನು ಸುಮಂತ್&zwnj; ಭಟ್ರಿಗೆ ಹೇಳಿ ಅವರೂ ಒಪ್ಪಿ ಸಿನಿಮಾ ಆಗಿದೆ. ಈ ಪಯಣ ನನಗೆ ತೃಪ್ತಿ ಕೊಟ್ಟಿದೆ. ಒಂದೊಳ್ಳೆ ಸಿನಿಮಾ ಮಾಡಿದ ಸಾರ್ಥಕತೆ ತಂದಿದೆ ಎನ್ನುತ್ತಾರೆ ಶೈನ್.ಇದೊಂದು ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಶೈನ್ ಬಸ್&zwnj; ಚಾಲಕನ ಪಾತ್ರದಲ್ಲಿ ನಟಿಸಿದ್ದಾರೆ.&lt;/p&gt;&lt;img&gt;&lt;p&gt;ಕರಾವಳಿ ಭಾಗದ ಖಾಸಗಿ ಬಸ್&zwnj;ಗಳ ಜಗತ್ತು ಈ ಕತೆಯಲ್ಲಿ ಅನಾವರಣಗೊಳ್ಳಲಿದೆ. ತನ್ವಿ ರಾವ್ ಈ ಚಿತ್ರದ ನಾಯಕಿ. ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚರಣ್&zwnj;ರಾಜ್&zwnj; ಸಂಗೀತ ನೀಡಿರುವ ಈ ಚಿತ್ರ ನ.20ರಂದು ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/kannada-actor-shine-shetty-s-dream-project-shankarabharana-film-teaser-wins-appreciation-gvd-bgxakh8"/>
        </item>
        <item>
            <title><![CDATA[ಬಿಗ್‌ ಬಾಸ್‌ ಮನೆಗೆ ಮೇರಿ ಕೋಮ್‌ ಎಂಟ್ರಿ; ‘ಆಕೆಯ ನಾಕೌಟ್‌ನಿಂದ ತಪ್ಪಿಸಿಕೊಳ್ಳೋದು ಕಷ್ಟ’ ಎಂದ ಪ್ರಿಯಾಂಕಾ]]></title>
            <link>https://kannada.asianetnews.com/gallery/tv-talk/mary-kom-contestants-participating-in-bigg-boss-20-suh-wygi72k</link>
            <guid isPermaLink="true">https://kannada.asianetnews.com/gallery/tv-talk/mary-kom-contestants-participating-in-bigg-boss-20-suh-wygi72k</guid>
            <pubDate>Mon, 07 Sep 2026 16:10:56 +0530</pubDate>
            <description><![CDATA[&lt;p&gt;ಬಾಲಿವುಡ್&zwnj;ನ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್&zwnj; ಬಾಸ್&zwnj; ಸೀಸನ್&zwnj; 20 ಭರ್ಜರಿಯಾಗಿ ಆರಂಭವಾಗಿದೆ. ಸಲ್ಮಾನ್&zwnj; ಖಾನ್&zwnj; ನಡೆಸಿಕೊಡುತ್ತಿರುವ ಈ ಸೀಸನ್&zwnj;ನಲ್ಲಿ ಭಾರತದ ಖ್ಯಾತ ಬಾಕ್ಸರ್&zwnj; ಮೇರಿ ಕೋಮ್&zwnj; ಕೂಡ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jt3c20chkcwcfpwsewrx8a2p,imgname-mary-kom-1746017517969.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್&zwnj;ನ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್&zwnj; ಬಾಸ್&zwnj; ಸೀಸನ್&zwnj; 20 ಭರ್ಜರಿಯಾಗಿ ಆರಂಭವಾಗಿದೆ. ಸಲ್ಮಾನ್&zwnj; ಖಾನ್&zwnj; ನಡೆಸಿಕೊಡುತ್ತಿರುವ ಈ ಸೀಸನ್&zwnj;ನಲ್ಲಿ ಭಾರತದ ಖ್ಯಾತ ಬಾಕ್ಸರ್&zwnj; ಮೇರಿ ಕೋಮ್&zwnj; ಕೂಡ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ್ದಾರೆ.&lt;/p&gt;&lt;img&gt;&lt;p&gt;ಬಾಲಿವುಡ್&zwnj;ನ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್&zwnj; ಬಾಸ್&zwnj; ಸೀಸನ್&zwnj; 20 ಭರ್ಜರಿಯಾಗಿ ಆರಂಭವಾಗಿದೆ. ಸಲ್ಮಾನ್&zwnj; ಖಾನ್&zwnj; ನಡೆಸಿಕೊಡುತ್ತಿರುವ ಈ ಸೀಸನ್&zwnj;ನಲ್ಲಿ ಭಾರತದ ಖ್ಯಾತ ಬಾಕ್ಸರ್&zwnj; ಮೇರಿ ಕೋಮ್&zwnj; ಕೂಡ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ್ದಾರೆ. ಕ್ರೀಡಾಂಗಣದಲ್ಲಿ ಎದುರಾಳಿಗಳನ್ನು ಎದುರಿಸಿ ಗೆದ್ದಿರುವ ಮೇರಿ ಕೋಮ್&zwnj;, ಇದೀಗ ಬಿಗ್&zwnj; ಬಾಸ್&zwnj; ಮನೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಆಟ ಆಡಲು ಸಜ್ಜಾಗಿದ್ದಾರೆ.&lt;/p&gt;&lt;p&gt;&lt;strong&gt;ಬಿಗ್&zwnj; ಬಾಸ್&zwnj; ಮನೆಯಲ್ಲೂ ಶಿಸ್ತು ತರ್ತೀನಿ!&lt;/strong&gt;&lt;/p&gt;&lt;p&gt;ಬಾಕ್ಸಿಂಗ್&zwnj; ರಿಂಗ್&zwnj;ನಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ಹೆಸರಾಗಿರುವ ಮೇರಿ ಕೋಮ್&zwnj;, ಬಿಗ್&zwnj; ಬಾಸ್&zwnj; ಮನೆಯಲ್ಲೂ ಅದನ್ನೇ ಪಾಲಿಸಲು ನಿರ್ಧರಿಸಿದ್ದಾರೆ. ಮನೆಯಲ್ಲಿರುವ ಎಲ್ಲರೂ ಒಂದೇ ಸಮಯಕ್ಕೆ ಎದ್ದೇಳಬೇಕು, ಮನೆಯ ಕೆಲಸಗಳನ್ನು ಎಲ್ಲರೂ ಹಂಚಿಕೊಂಡು ಮಾಡಬೇಕು ಎಂಬುದು ತಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಅಡುಗೆ, ಸ್ವಚ್ಛತೆ ಸೇರಿದಂತೆ ಮನೆಯ ಯಾವುದೇ ಕೆಲಸವನ್ನು ಒಬ್ಬರೇ ಮಾಡಬಾರದು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಶಿಸ್ತನ್ನು ಮನೆಯಲ್ಲಿ ತರಲು ಪ್ರಯತ್ನಿಸುವುದಾಗಿ ಮೇರಿ ಕೋಮ್&zwnj; ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಬಾಕ್ಸರ್&zwnj; ಅಂತ ಅಂದುಕೊಂಡಿರೋದು ಬೇರೆ, ನಿಜವಾದ ಮೇರಿ ಕೋಮ್&zwnj; ಬೇರೆ!&rsquo;&lt;/strong&gt;&lt;/p&gt;&lt;p&gt;ಬಿಗ್&zwnj; ಬಾಸ್&zwnj; ಮನೆಗೆ ಬಂದಿರುವುದು ತಮ್ಮ ಮತ್ತೊಂದು ಮುಖವನ್ನು ಪ್ರೇಕ್ಷಕರಿಗೆ ತೋರಿಸುವ ಅವಕಾಶ ಎಂದು ಮೇರಿ ಕೋಮ್&zwnj; ಹೇಳಿದ್ದಾರೆ. ಇದುವರೆಗೆ ಜನರು ತಮ್ಮನ್ನು ಕ್ರೀಡಾಪಟುವಾಗಿ ಮಾತ್ರ ನೋಡಿದ್ದಾರೆ. ಆದರೆ ತಾಯಿ, ಮಹಿಳೆ ಹಾಗೂ ಸಾಮಾನ್ಯ ವ್ಯಕ್ತಿಯಾಗಿ ತಮ್ಮ ವ್ಯಕ್ತಿತ್ವದ ಹಲವು ಮುಖಗಳನ್ನು ಈ ಶೋನಲ್ಲಿ ಜನರು ನೋಡಲಿದ್ದಾರೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಬಿಗ್&zwnj; ಬಾಸ್&zwnj; ವೇದಿಕೆಯಲ್ಲಿ ಮೇರಿ ಕೋಮ್&zwnj;ಗೆ ಮತ್ತೊಂದು ಸರ್ಪ್ರೈಸ್&zwnj; ಕಾದಿತ್ತು. ಮೇರಿ ಕೋಮ್&zwnj; ಅವರ ಜೀವನಾಧಾರಿತ ಸಿನಿಮಾದಲ್ಲಿ ಅವರ ಪಾತ್ರವನ್ನು ನಿರ್ವಹಿಸಿದ್ದ ನಟಿ ಪ್ರಿಯಾಂಕಾ ಚೋಪ್ರಾ ವಿಶೇಷ ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿದ್ದಾರೆ. ಮೇರಿ ಕೋಮ್&zwnj; ಅವರ ಶಕ್ತಿ, ಹೋರಾಟದ ಮನೋಭಾವ ಹಾಗೂ ಸ್ಪರ್ಧಾತ್ಮಕ ಗುಣಗಳನ್ನು ನೆನಪಿಸಿಕೊಂಡ ಪ್ರಿಯಾಂಕಾ, ಬಿಗ್&zwnj; ಬಾಸ್&zwnj; ಮನೆಯಲ್ಲೂ ಅವರು ತಮ್ಮ ನೈಜ ವ್ಯಕ್ತಿತ್ವದೊಂದಿಗೆ ಆಟವಾಡುವಂತೆ ಶುಭ ಹಾರೈಸಿದ್ದಾರೆ.&lt;/p&gt;&lt;img&gt;&lt;p&gt;ಆದರೆ ಪ್ರಿಯಾಂಕಾ ಚೋಪ್ರಾ ಅವರ ಸಂದೇಶದಲ್ಲಿ ಮತ್ತೊಂದು ಮಾತು ಇದೀಗ ಭಾರೀ ವೈರಲ್&zwnj; ಆಗಿದೆ. ಮೇರಿ ಕೋಮ್&zwnj; ಜೊತೆ ಬಿಗ್&zwnj; ಬಾಸ್&zwnj; ಮನೆಯಲ್ಲಿ ಸ್ಪರ್ಧಿಸಲು ಬಯಸುವವರು ಸುದೀರ್ಘ ಹೋರಾಟಕ್ಕೆ ಸಿದ್ಧರಾಗಿರಬೇಕು ಎಂದು ಪ್ರಿಯಾಂಕಾ ಎಚ್ಚರಿಸಿದ್ದಾರೆ. ಬಾಕ್ಸಿಂಗ್&zwnj; ರಿಂಗ್&zwnj;ನ ಮೇರಿ ಕೋಮ್&zwnj; ಅವರ &lsquo;ನಾಕೌಟ್&zwnj;&rsquo; ಬಿಗ್&zwnj; ಬಾಸ್&zwnj; ಮನೆಯಲ್ಲೂ ಭಾರಿಯಾಗಿರಬಹುದು ಎಂಬರ್ಥದಲ್ಲಿ ಪ್ರಿಯಾಂಕಾ ತಮಾಷೆಯಾಗಿ ಹೇಳಿದ್ದಾರೆ. ಇದರಿಂದ ಮೇರಿ ಕೋಮ್&zwnj; ಅವರ ಮನೆಯ ಆಟ ಹೇಗಿರಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಆರು ಬಾರಿ ವಿಶ್ವ ಅಮೆಚೂರ್&zwnj; ಬಾಕ್ಸಿಂಗ್&zwnj; ಚಾಂಪಿಯನ್&zwnj; ಆಗಿರುವ ಮೇರಿ ಕೋಮ್&zwnj; ಅವರ ಪ್ರವೇಶ ಈ ಬಾರಿ ಬಿಗ್&zwnj; ಬಾಸ್&zwnj;ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ರಿಂಗ್&zwnj;ನಲ್ಲಿ ಎದುರಾಳಿಗಳನ್ನು ಎದುರಿಸಿದ ಅನುಭವ ಹೊಂದಿರುವ ಮೇರಿ ಕೋಮ್&zwnj;, ದೊಡ್ಮನೆಯ ಭಿನ್ನ ವ್ಯಕ್ತಿತ್ವಗಳ ನಡುವೆ ಹೇಗೆ ಆಟ ಆಡುತ್ತಾರೆ ಎನ್ನುವುದು ಈಗ ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/mary-kom-contestants-participating-in-bigg-boss-20-suh-wygi72k"/>
        </item>
        <item>
            <title><![CDATA[ನಿರ್ದೇಶಕ ಓಂ ಸಾಯಿಪ್ರಕಾಶ್‌ ನನ್ನ ಪಾಲಿಗೆ ಗುರುಗಳಿದ್ದಂತೆ: ಹಿರಿಯ ನಟಿ ಉಮಾಶ್ರೀ!]]></title>
            <link>https://kannada.asianetnews.com/sandalwood/kannada-veteran-actress-umashree-talks-about-director-om-saiprakash-common-man-kannada-movie-gvd/articleshow-53wcixb</link>
            <guid isPermaLink="true">https://kannada.asianetnews.com/sandalwood/kannada-veteran-actress-umashree-talks-about-director-om-saiprakash-common-man-kannada-movie-gvd/articleshow-53wcixb</guid>
            <pubDate>Mon, 07 Sep 2026 16:01:39 +0530</pubDate>
            <description><![CDATA[&lt;p&gt;ಓಂ ಸಾಯಿಪ್ರಕಾಶ್ ನಿರ್ದೇಶನದ &lsquo;ಕಾಮನ್ ಮ್ಯಾನ್&rsquo; ಸಿನಿಮಾ ಸೆ.25ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಸಿಎಂ ಆದಾಗ ಆಡಳಿತದಲ್ಲಿ ಎದುರಿಸುವ ಸವಾಲುಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಚಿತ್ರದ ಪ್ರಮುಖ ಕಥಾಹಂದರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xpqmqfsppd9nr57j2zds9d,imgname-bbk-1788777059055.png" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯನೊಬ್ಬ ಮುಖ್ಯಮಂತ್ರಿಯಾದರೆ ಆಡಳಿತ ವ್ಯವಸ್ಥೆ ಹೇಗಿರುತ್ತದೆ ಮತ್ತು ಆತ ಎದುರಿಸುವ ಸವಾಲುಗಳೇನು ಎಂಬ ಕಥಾಹಂದರ ಹೊಂದಿರುವ &lsquo;ಕಾಮನ್&zwnj; ಮ್ಯಾನ್&zwnj;&rsquo; ಚಿತ್ರ ಸೆ.25ರಂದು ತೆರೆಕಾಣಲು ಸಜ್ಜಾಗಿದೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್&zwnj; ನಿರ್ದೇಶನದ 106ನೇ ಚಿತ್ರ ಇದಾಗಿದ್ದು, ಇತ್ತೀಚೆಗೆ ಚಿತ್ರದ ನಾಲ್ಕು ಹಾಡುಗಳನ್ನು ಉಮಾಶ್ರೀ, ವಿನೋದ್&zwnj; ಪ್ರಭಾಕರ್&zwnj;, ರಮೇಶ್&zwnj; ಭಟ್&zwnj; ಹಾಗೂ ಪ್ರಿಯಾಂಕಾ ಉಪೇಂದ್ರ ಬಿಡುಗಡೆ ಮಾಡಿದರು.&lt;/p&gt;&lt;p&gt;ಸಾಮಾಜಿಕ ಕಾರ್ಯಕರ್ತ ಎನ್. ನರಸಿಂಹಮೂರ್ತಿ ಕಥೆ ಬರೆದು ಈ ಚಿತ್ರ ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರು, ಪ್ರತಿ ಮನುಷ್ಯನಲ್ಲೂ ಒಂದಲ್ಲ ಒಂದು ಆಸೆ ಇರುತ್ತದೆ. ಹಾಗೆಯೇ ಒಬ್ಬ ಸಾಧಾರಣ ವ್ಯಕ್ತಿ ಸಿಎಂ ಆದಾಗ ಏನೆಲ್ಲ ಸುಧಾರಣೆ ಮಾಡಬಹುದು ಎಂಬುದನ್ನು ಈ ಚಿತ್ರದ ಮೂಲಕ ತೋರಿಸಲು ಪ್ರಯತ್ನಿಸಿದ್ದೇವೆ ಎಂದು ತಿಳಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಉಮಾಶ್ರೀ, &lsquo;ನಿರ್ದೇಶಕ ಸಾಯಿಪ್ರಕಾಶ್ ನನ್ನ ಪಾಲಿಗೆ ಗುರುಗಳಿದ್ದಂತೆ. ಹಿಂದೆ ಎನ್.ಎಸ್. ರಾವ್ ನಿಧನರಾದಾಗ ನನ್ನ ನಟನಾ ಬದುಕು ಮುಗಿಯಿತು ಎಂದೇ ಹಲವರು ಭಾವಿಸಿದ್ದರು. ಅಂಥ ಕಷ್ಟದ ಕಾಲದಲ್ಲಿ ನನಗೆ ಅವಕಾಶ ನೀಡಿ ಬೆಂಬಲಿಸಿದವರು ಸಾಯಿಪ್ರಕಾಶ್&rsquo; ಎಂದರು.&lt;/p&gt;&lt;p&gt;ರಮೇಶ್&zwnj; ಭಟ್&zwnj;, &lsquo;ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಮಟ್ಟಹಾಕುವ ಸಂದೇಶ ಈ ಚಿತ್ರದಲ್ಲಿದೆ&rsquo; ಎಂದರು. ವಿನೋದ್&zwnj; ಪ್ರಭಾಕರ್&zwnj;, &lsquo;ನನ್ನ ತಂದೆಯ ಜತೆ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡಿ ಸಂತಸವಾಯಿತು&rsquo; ಎಂದರು. ಪ್ರಿಯಾಂಕಾ ಉಪೇಂದ್ರ ಹಾಡುಗಳ ಗುಣಮಟ್ಟವನ್ನು ಶ್ಲಾಘಿಸಿದರು.&lt;/p&gt;&lt;h2&gt;&lt;strong&gt;ನಾಯಕಿಯಾಗಿ ಸೋನಾ ಲದ್ವಾ&lt;/strong&gt;&lt;/h2&gt;&lt;p&gt;&lsquo;ಕೆರೆ ಬೇಟೆ&rsquo; ಚಿತ್ರದ ಮೂಲಕ ಜನಮನ ಗೆದ್ದಿದ್ದ ಗೌರಿಶಂಕರ್ ಎಸ್.ಆರ್.ಜಿ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಶೋಕ್, ಗಣೇಶ್&zwnj; ರಾವ್&zwnj; ಕೇಸರಕರ್&zwnj;, ಪ್ರಕಾಶ್&zwnj; ತುಮಿನಾಡು ತಾರಾಗಣದಲ್ಲಿದ್ದಾರೆ. ಇನ್ನು ಸಾಮಾನ್ಯ ಮನುಷ್ಯನ ರಾಜಕೀಯ ಪಯಣದ ಕಥೆ ಹೊಂದಿರುವ ಈ ಸಿನಿಮಾ ಇದೇ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-veteran-actress-umashree-talks-about-director-om-saiprakash-common-man-kannada-movie-gvd/articleshow-53wcixb"/>
        </item>
        <item>
            <title><![CDATA[ಕೊನೆಗೂ ಶುರುವಾಯಿತು ದುನಿಯಾ ಸೂರಿ ಚಿತ್ರ ಕಾಗೆ ಬಂಗಾರ: ತಾರಾಬಳಗದಲ್ಲಿ ಸರ್ಪ್ರೈಸ್!]]></title>
            <link>https://kannada.asianetnews.com/sandalwood/kannada-director-duniya-suri-kaage-bangara-finally-goes-on-floors-surya-prakhyath-and-rithanya-vijay-lead-gvd/articleshow-o9mkvh6</link>
            <guid isPermaLink="true">https://kannada.asianetnews.com/sandalwood/kannada-director-duniya-suri-kaage-bangara-finally-goes-on-floors-surya-prakhyath-and-rithanya-vijay-lead-gvd/articleshow-o9mkvh6</guid>
            <pubDate>Mon, 07 Sep 2026 15:48:22 +0530</pubDate>
            <description><![CDATA[&lt;p&gt;ದುನಿಯಾ ಸೂರಿ ನಿರ್ದೇಶನದ &lsquo;ಕಾಗೆ ಬಂಗಾರ&rsquo; ಚಿತ್ರೀಕರಣ ಆರಂಭವಾಗಿದ್ದು, ಸೂರ್ಯ ಪ್ರಖ್ಯಾತ್ ಮತ್ತು ರಿತನ್ಯಾ ವಿಜಯ್ ನಾಯಕ-ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪ್ರಶಾಂತ್ ಸಿದ್ಧಿ ಸೇರಿದಂತೆ ಹಳೆಯ ಚಿತ್ರಗಳ ಹಲವು ನಟರು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xn22krpw1gqd0tp2np2akf,imgname-jbj-1788775303800.png" type="image/jpeg" height="390" width="690"/>
            <content:encoded><![CDATA[&lt;p&gt;ಬಹುದಿನಗಳಿಂದ ಸುದ್ದಿಯಲ್ಲಿದ್ದ ದುನಿಯಾ ಸೂರಿ ನಿರ್ದೇಶನದ &lsquo;ಕಾಗೆ ಬಂಗಾರ&rsquo; ಚಿತ್ರ ಇದೀಗ ಚಿತ್ರೀಕರಣದ ಹಂತಕ್ಕೆ ಪ್ರವೇಶಿಸಿದೆ. ಹಲವು ಕಾರಣಗಳಿಂದ ವಿಳಂಬವಾಗಿದ್ದ ಈ ಸಿನಿಮಾದ ಕೆಲಸಕ್ಕೆ ಕೊನೆಗೂ ಚಾಲನೆ ಸಿಕ್ಕಿದ್ದು, ಚಿತ್ರೀಕರಣ ಆರಂಭಗೊಂಡಿದೆ ಎನ್ನಲಾಗಿದೆ. ಶೀಘ್ರದಲ್ಲೇ ಚಿತ್ರತಂಡದಿಂದ ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.&lt;/p&gt;&lt;p&gt;ಇದರ ನಡುವೆ ಸಿನಿಮಾದ ತಾರಾಬಳಗದ ಕುರಿತ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. &lsquo;ನಡುವೆ ಅಂತರವಿರಲಿ&rsquo; ಚಿತ್ರದ ಮೂಲಕ ಸ್ಯಾಂಡಲ್&zwnj;ವುಡ್&zwnj;ಗೆ ಪರಿಚಿತರಾದ ನಟ ಸೂರ್ಯ ಪ್ರಖ್ಯಾತ್ ಇದೀಗ &lsquo;ಕಾಗೆ ಬಂಗಾರ&rsquo;ದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ &lsquo;ಜೆಸಿ - ದಿ ಯೂನಿವರ್ಸಿಟಿ&rsquo; (JC &ndash; The University) ಚಿತ್ರದಲ್ಲೂ ಅವರು ನಟಿಸಿದ್ದರು.&lt;/p&gt;&lt;p&gt;ಇನ್ನು &lsquo;ಕಾಗೆ ಬಂಗಾರ&rsquo;ಕ್ಕೆ ನಾಯಕಿಯಾಗಿ ನಟಿ ರಿತನ್ಯಾ ವಿಜಯ್ ಆಯ್ಕೆಯಾಗಿದ್ದಾರೆ. ನಟ ದುನಿಯಾ ವಿಜಯ್ ಅವರ ಪುತ್ರಿಯಾಗಿರುವ ರಿತನ್ಯಾ, ಜಡೇಶಾ ಕೆ. ಹಂಪಿ ನಿರ್ದೇಶನದ &lsquo;ಲ್ಯಾಂಡ್&zwnj;ಲಾರ್ಡ್&rsquo; ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇದೀಗ ದುನಿಯಾ ಸೂರಿ ನಿರ್ದೇಶನದ ಈ ಸಿನಿಮಾ ಅವರ ಮುಂದಿನ ಪ್ರಮುಖ ಹೆಜ್ಜೆಯಾಗಲಿದೆ.&lt;/p&gt;&lt;h2&gt;&lt;strong&gt;&lsquo;ಕೆಂಡಸಂಪಿಗೆ&rsquo;, &lsquo;ಪಾಪ್&zwnj;ಕಾರ್ನ್ ಮಂಕಿ ಟೈಗರ್&zwnj;&rsquo; ಜೊತೆ ಹೊಸ ಕನೆಕ್ಷನ್&lt;/strong&gt;&lt;/h2&gt;&lt;p&gt;&lsquo;ಕಾಗೆ ಬಂಗಾರ&rsquo; ಕೇವಲ ಹೊಸ ಕಥೆಯ ಸಿನಿಮಾವಾಗಿರದೆ, ದುನಿಯಾ ಸೂರಿ ಅವರ ಹಿಂದಿನ ಚಿತ್ರಗಳ ಜಗತ್ತಿನೊಂದಿಗೂ ಒಂದು ರೀತಿಯ ಸಂಪರ್ಕ ಹೊಂದಿರಲಿದೆ ಎಂಬುದು ವಿಶೇಷ. &lsquo;ಕೆಂಡಸಂಪಿಗೆ&rsquo; ಹಾಗೂ &lsquo;ಪಾಪ್&zwnj;ಕಾರ್ನ್ ಮಂಕಿ ಟೈಗರ್&zwnj;&rsquo; ಚಿತ್ರಗಳ ತುದಿಗಳನ್ನು ಒಟ್ಟಿಗೆ ತರುವ ಪ್ರಯತ್ನ ಈ ಸಿನಿಮಾದಲ್ಲಿದೆ ಎನ್ನಲಾಗಿದೆ.&lt;/p&gt;&lt;p&gt;ಈ ಕನೆಕ್ಷನ್&zwnj;ನ ಭಾಗವಾಗಿ ನಟ ಪ್ರಶಾಂತ್ ಸಿದ್ಧಿ ಮತ್ತೊಮ್ಮೆ ಸೂರಿ ಅವರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರವನ್ನು &lsquo;ಕೆಂಡಸಂಪಿಗೆ&rsquo; ಚಿತ್ರದಿಂದಲೇ ಮುಂದುವರಿಸಲಾಗಿದೆ ಎನ್ನಲಾಗುತ್ತಿದ್ದು, ಈ ಕಾರಣದಿಂದ &lsquo;ಕಾಗೆ ಬಂಗಾರ&rsquo;ದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.&lt;/p&gt;&lt;p&gt;ಇದರ ಜೊತೆಗೆ ದುನಿಯಾ ಸೂರಿ ಅವರ ಹಿಂದಿನ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಇನ್ನೂ ಹಲವು ನಟರು &lsquo;ಕಾಗೆ ಬಂಗಾರ&rsquo; ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಸಿನಿಮಾದ ಕಥೆ, ಪಾತ್ರಗಳು ಮತ್ತು ಹಿಂದಿನ ಚಿತ್ರಗಳ ನಡುವಿನ ಕನೆಕ್ಷನ್ ಹೇಗಿರಲಿದೆ ಎಂಬ ಕುತೂಹಲ ಇದೀಗ ಸಿನಿಪ್ರಿಯರಲ್ಲಿ ಮೂಡಿದೆ. ಇನ್ನು ಚಿತ್ರದ ಅಧಿಕೃತ ಘೋಷಣೆ ಹಾಗೂ ಸಂಪೂರ್ಣ ತಾರಾಬಳಗದ ವಿವರಗಳು ಹೊರಬಂದ ಬಳಿಕ &lsquo;ಕಾಗೆ ಬಂಗಾರ&rsquo;ದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-director-duniya-suri-kaage-bangara-finally-goes-on-floors-surya-prakhyath-and-rithanya-vijay-lead-gvd/articleshow-o9mkvh6"/>
        </item>
        <item>
            <title><![CDATA[ನೀಟ್‌ ಪ್ರತಿಭಟನೆಯಿಂದ ಬಿಗ್‌ ಬಾಸ್‌ ವೇದಿಕೆಗೆ – ಸಲ್ಮಾನ್ ಮುಂದೆ ಜಗಳ ಆಡಿದ್ರೂ ಸಿಗ್ಲಿಲ್ಲ ಅವಕಾಶ]]></title>
            <link>https://kannada.asianetnews.com/tv-talk/neet-protest-viral-girl-rhiya-ahir-insulted-in-bigg-boss-salman-khan/articleshow-n3lggrg</link>
            <guid isPermaLink="true">https://kannada.asianetnews.com/tv-talk/neet-protest-viral-girl-rhiya-ahir-insulted-in-bigg-boss-salman-khan/articleshow-n3lggrg</guid>
            <pubDate>Mon, 07 Sep 2026 13:19:36 +0530</pubDate>
            <description><![CDATA[&lt;p&gt;ಬಿಗ್&zwnj; ಬಾಸ್&zwnj; ಹಿಂದಿ ಸೀಸನ್&zwnj; 20 ಶುರುವಾಗಿದೆ. ಬಿಗ್&zwnj; ಬಾಸ್&zwnj; ಮನೆಗೆ ಯಾರೆಲ್ಲ ಹೋಗ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಮಧ್ಯೆ ಬಿಗ್&zwnj; ಬಾಸ್&zwnj; ವೇದಿಕೆ ಮೇಲೆ ನೀಟ್&zwnj; ಹುಡುಗಿ ಗಮನ ಸೆಳೆದಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xdb1v3ntzv7r954zhk0d84,imgname-rhiya-ahir-1788767209315.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಸೀಸನ್ 20 ಅದ್ಧೂರಿಯಾಗಿ ಆರಂಭಗೊಂಡಿದೆ. ಬಿಗ್&zwnj; ಬಾಸ್&zwnj; ಮನೆಗೆ ಯಾರೆಲ್ಲ ಬರ್ತಾರೆ ಎನ್ನುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗಿತ್ತು. ಈ ಬಾರಿ ಸ್ಪರ್ಧಿಗಳ ಆಯ್ಕೆಯನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಬಿಗ್&zwnj; ಬಾಸ್&zwnj; ಮನೆ ಒಳಗೆ ಹೋಗುವ ಮುನ್ನವೇ ನೀಟ್&zwnj; ಹುಡುಗಿ ರಿಜೆಕ್ಟ್ ಆಗಿದ್ದಾರೆ.&lt;/p&gt;&lt;h2&gt;ರಿಯಾ ಅಹಿರ್&zwnj; ವರ್ಸಸ್&zwnj; ವಲ್&zwnj; ಗಿಲ್&lt;/h2&gt;&lt;p&gt;ನೀಟ್ (NEET) ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸ್ ವ್ಯಾನ್ ಎದುರು ನಿಂತು ಗಮನ ಸೆಳೆದಿದ್ದ ಇನ್ಫ್ಲುಯೆನ್ಸರ್ ಹಾಗೂ ಮಾಡೆಲ್ ರಿಯಾ ಅಹಿರ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಬಂದಿದ್ದರು. ಆದ್ರೆ ಅವರ ಎಂಟ್ರಿಯನ್ನು ಈ ಬಾರಿ ಬಿಗ್ ಬಾಸ್ ತಂಡ ನೇರವಾಗಿ ನಿರ್ಧರಿಸಿರಲಿಲ್ಲ. ಬದಲಿಗೆ, ರಿಯಾ ಅಹಿರ್ ಮತ್ತು ಪಂಜಾಬಿ ನಟಿ ಹಾಗೂ ಇನ್ಫ್ಲುಯೆನ್ಸರ್ ಲವ್ ಗಿಲ್ ಅವರಲ್ಲಿ ಯಾರನ್ನು ಶೋಗೆ ಕಳುಹಿಸಬೇಕು ಎನ್ನುವುದನ್ನು ಜನರಿಗೆ ಬಿಡಲಾಗಿತ್ತು. ಜನರ ತೀರ್ಪು ರಿಯಾಗೆ ನಿರಾಸೆ ಮೂಡಿಸಿದೆ.&lt;/p&gt;&lt;h3&gt;ನೀಟ್ ಪ್ರತಿಭಟನೆಯಿಂದ ರಿಯಾ ಅಹಿರ್ ಫೇಮಸ್&lt;/h3&gt;&lt;p&gt;ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆದ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ರಿಯಾ ಅಹಿರ್ ಗಮನ ಸೆಳೆದಿದ್ದರು. ವಿದ್ಯಾರ್ಥಿಗಳಿದ್ದ ಪೊಲೀಸ್ ವ್ಯಾನ್ ಅನ್ನು ತಡೆಯಲು ಅವರು ಒಬ್ಬರೇ ವ್ಯಾನ್ನ ಮುಂದೆ ನಿಂತಿದ್ದರು. ಈ ಘಟನೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದಾದ ಬಳಿಕ ರಿಯಾ ಅವರ ಧೈರ್ಯದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ಪ್ರಸಿದ್ಧಿ ಬೆನ್ನಲ್ಲೆ ರಿಯಾ ಬಿಗ್&zwnj; ಬಾಸ್&zwnj; ಮನೆಗೆ ಎಂಟ್ರಿಕೊಡಲು ಬಂದಿದ್ದರು. ಆದ್ರೆ ಪಂಜಾಬಿ ನಟಿ ಮತ್ತು ಇನ್ಫ್ಲುಯೆನ್ಸರ್ ಲವ್ ಗಿಲ್ ಮುಂದೆ ಸೋಲಬೇಕಾಯ್ತು. ಇಬ್ಬರಲ್ಲಿ ಒಬ್ಬರ ಆಯ್ಕೆ ಬಂದಾಗ ಜನರು ಲವ್&zwnj; ಗಿಲ್&zwnj; ಆಯ್ಕೆ ಮಾಡ್ಕೊಂಡ್ರು.&lt;/p&gt;&lt;p&gt;&lt;strong&gt;ಲವ್ ಗಿಲ್ ಯಾರು?&lt;/strong&gt;&lt;/p&gt;&lt;p&gt;ರಿಯಾ ಎದುರಾಳಿ ಲವ್ ಗಿಲ್ ಪಂಜಾಬಿ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಹಾಗೂ ಇನ್ಫ್ಲುಯೆನ್ಸರ್. ಬಿಗ್ ಬಾಸ್ ವೇದಿಕೆಯಲ್ಲಿ ರಿಯಾ ಅವರೊಂದಿಗೆ ನೇರವಾಗಿ ಮುಖಾಮುಖಿಯಾಗಿದ್ದು, ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಹೀಗಾಗಿ ಜನರ ವೋಟಿಂಗ್ಗೂ ಮುನ್ನವೇ ಇವರಿಬ್ಬರ ಪೈಪೋಟಿ ಸಾಕಷ್ಟು ಗಮನ ಸೆಳೆಯಿತು. ಕೊನೆಗೆ ನಡೆದ ಪಬ್ಲಿಕ್ ವೋಟಿಂಗ್ನಲ್ಲಿ ಲವ್ ಗಿಲ್ ಹೆಚ್ಚು ವೋಟ್ ಪಡೆದುಕೊಂಡರು. ಹೀಗಾಗಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 20ಗೆ ಲವ್ ಗಿಲ್ ಎಂಟ್ರಿ ಪಡೆದಿದ್ದಾರೆ. ಇತ್ತ ರಿಯಾ ಅಹಿರ್ ಮನೆಗೆ ವಾಪಸ್&zwnj; ಆಗಿದ್ದಾರೆ.&lt;/p&gt;&lt;p&gt;&lt;strong&gt;ವೇದಿಕೆಯಲ್ಲೇ ರಿಯಾ-ಲವ್ ಜಗಳ&lt;/strong&gt;&lt;/p&gt;&lt;p&gt;ವೋಟಿಂಗ್ ಮುನ್ನ ರಿಯಾ ಮತ್ತು ಲವ್ ನಡುವೆ ವೇದಿಕೆಯಲ್ಲಿ ಮಾತಿನ ಚಕಮಕಿ ಶುರುವಾಗಿತ್ತು. ರಿಯಾ, ತಾನು ನಿಲ್ಲಿಸಿದ್ದು ಪೊಲೀಸ್ ವ್ಯಾನ್ ಎಂದು ಸ್ಪಷ್ಟಪಡಿಸಿ ಲವ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು. ಇದಕ್ಕೆ ಲವ್ ಕೂಡ ತಿರುಗೇಟು ನೀಡಿದ್ದು, ಇಬ್ಬರೂ ಒಬ್ಬರನ್ನೊಬ್ಬರು ಪ್ರಶ್ನಿಸುವಂತಾಯಿತು. ರಿಯಾ ಮತ್ತು ಲವ್ ನಡುವೆ ಮಾತಿನ ಜಗಳ ನಡೆಯುತ್ತಿದ್ದರೂ ಸಲ್ಮಾನ್ ಖಾನ್ ಮಧ್ಯಪ್ರವೇಶ ಮಾಡಲಿಲ್ಲ.ಇಬ್ಬರ ಮಾತುಗಳನ್ನು ಅವರು ಸುಮ್ಮನೆ ಕೇಳುತ್ತಾ, ಯಾವುದೇ ಒಬ್ಬರ ಪರ ನಿಲ್ಲದೆ ತಟಸ್ಥವಾಗಿದ್ದರು.&lt;/p&gt;]]></content:encoded>
            <category>entertainment</category>
            <dc:creator>Roopa Hegde</dc:creator>
            <atom:link href="https://kannada.asianetnews.com/tv-talk/neet-protest-viral-girl-rhiya-ahir-insulted-in-bigg-boss-salman-khan/articleshow-n3lggrg"/>
        </item>
        <item>
            <title><![CDATA[ಬಿಗ್‌ ಬಾಸ್‌ ಕನ್ನಡ 13: ಯಾರು ಈ ‘ಯುಕೆ ಹುಲಿ’ ಕಿರಣ್ ಶಾಸ್ತ್ರಿ? ಜವಾರಿ ಮಾತಿನಿಂದಲೇ ಸದ್ದು, ಮೊದಲ ದಿನವೇ ಕಿರಿಕ್!]]></title>
            <link>https://kannada.asianetnews.com/gallery/tv-talk/who-is-kiran-shastri-bigg-boss-kannada-13-suh-0azs9y1</link>
            <guid isPermaLink="true">https://kannada.asianetnews.com/gallery/tv-talk/who-is-kiran-shastri-bigg-boss-kannada-13-suh-0azs9y1</guid>
            <pubDate>Mon, 07 Sep 2026 13:17:19 +0530</pubDate>
            <description><![CDATA[&lt;p&gt;ಕಿಚ್ಚ ಸುದೀಪ್&zwnj; ಸಾರಥ್ಯದ ದೊಡ್ಮನೆಗೆ ಈ ಬಾರಿ ಹಲವು ವಿಭಿನ್ನ ಹಿನ್ನೆಲೆಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಉತ್ತರ ಕರ್ನಾಟಕದ ಕಿರಣ್&zwnj; ಶಾಸ್ತ್ರಿ ಕೂಡ ಒಬ್ಬರು. &lsquo;ಅಗ್ನಿಪರೀಕ್ಷೆ&rsquo; ಮೂಲಕ ಜನರ ಗಮನ ಸೆಳೆದಿದ್ದ ಕಿರಣ್&zwnj;, ಇದೀಗ ಬಿಗ್&zwnj; ಬಾಸ್&zwnj; ಮನೆಯೊಳಗೆ ತಮ್ಮ ಆಟ ಶುರು ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xd66hpb4cq0pyw7efc2vy5,imgname-who-is-kiran-shastri-bigg-boss-kannada-13-1788767050294.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಿಚ್ಚ ಸುದೀಪ್&zwnj; ಸಾರಥ್ಯದ ದೊಡ್ಮನೆಗೆ ಈ ಬಾರಿ ಹಲವು ವಿಭಿನ್ನ ಹಿನ್ನೆಲೆಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಉತ್ತರ ಕರ್ನಾಟಕದ ಕಿರಣ್&zwnj; ಶಾಸ್ತ್ರಿ ಕೂಡ ಒಬ್ಬರು. &lsquo;ಅಗ್ನಿಪರೀಕ್ಷೆ&rsquo; ಮೂಲಕ ಜನರ ಗಮನ ಸೆಳೆದಿದ್ದ ಕಿರಣ್&zwnj;, ಇದೀಗ ಬಿಗ್&zwnj; ಬಾಸ್&zwnj; ಮನೆಯೊಳಗೆ ತಮ್ಮ ಆಟ ಶುರು ಮಾಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 13ರ ಗ್ರ್ಯಾಂಡ್&zwnj; ಓಪನಿಂಗ್&zwnj; ಅದ್ಧೂರಿಯಾಗಿ ನಡೆದಿದೆ. ಕಿಚ್ಚ ಸುದೀಪ್&zwnj; ಸಾರಥ್ಯದ ದೊಡ್ಮನೆಗೆ ಈ ಬಾರಿ ಹಲವು ವಿಭಿನ್ನ ಹಿನ್ನೆಲೆಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಉತ್ತರ ಕರ್ನಾಟಕದ ಕಿರಣ್&zwnj; ಶಾಸ್ತ್ರಿ ಕೂಡ ಒಬ್ಬರು. &lsquo;ಅಗ್ನಿಪರೀಕ್ಷೆ&rsquo; ಮೂಲಕ ಜನರ ಗಮನ ಸೆಳೆದಿದ್ದ ಕಿರಣ್&zwnj;, ಇದೀಗ ಬಿಗ್&zwnj; ಬಾಸ್&zwnj; ಮನೆಯೊಳಗೆ ತಮ್ಮ ಆಟ ಶುರು ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಯಾರು ಈ ಕಿರಣ್ ಶಾಸ್ತ್ರಿ?&lt;/strong&gt;&lt;/p&gt;&lt;p&gt;ಬಾಗಲಕೋಟೆ ಮೂಲದ ಕಿರಣ್ ಶಾಸ್ತ್ರಿ ಉತ್ತರ ಕರ್ನಾಟಕದ ಅಪ್ಪಟ ಜವಾರಿ ಸೊಗಡಿನ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅವರ ನೇರ ಮಾತು, ಮುಗ್ಧತೆ ಹಾಗೂ ವಿಶಿಷ್ಟ ಶೈಲಿ &lsquo;ಅಗ್ನಿಪರೀಕ್ಷೆ&rsquo; ಕಾರ್ಯಕ್ರಮದಲ್ಲೇ ವೀಕ್ಷಕರಿಗೆ ಇಷ್ಟವಾಗಿತ್ತು. ಬಿಗ್&zwnj; ಬಾಸ್&zwnj; ಕನ್ನಡ 13ರಲ್ಲಿ ಅವರು 9ನೇ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ್ದಾರೆ. &lsquo;ಅಗ್ನಿಪರೀಕ್ಷೆ&rsquo;ಯಲ್ಲಿ ತಮ್ಮ ಆಟ ಮತ್ತು ಮಾತಿನ ಮೂಲಕ ಗಮನ ಸೆಳೆದ ಕಿರಣ್&zwnj;, ಈಗ ಬಿಗ್&zwnj; ಬಾಸ್&zwnj; ಮನೆಯೊಳಗೆ ಹೇಗೆ ಆಟ ಆಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.&lt;/p&gt;&lt;p&gt;&lt;strong&gt;&lsquo;ಯುಕೆ ಹುಲಿ&rsquo; ಎಂದೇ ಫೇಮಸ್&lt;/strong&gt;&lt;/p&gt;&lt;p&gt;ಉತ್ತರ ಕರ್ನಾಟಕದ ಸೊಗಡನ್ನು ತಮ್ಮ ಮಾತಿನಲ್ಲಿ ಉಳಿಸಿಕೊಂಡಿರುವ ಕಿರಣ್&zwnj; ಶಾಸ್ತ್ರಿ ಅವರನ್ನು ಕೆಲವರು &lsquo;ಯುಕೆ ಹುಲಿ&rsquo; ಎಂದೂ ಕರೆಯುತ್ತಾರೆ. ಅವರ ಜವಾರಿ ಭಾಷೆಯ ಮಾತು, ಯಾವುದೇ ಮುಚ್ಚುಮರೆಯಿಲ್ಲದೆ ನೇರವಾಗಿ ಮಾತನಾಡುವ ಗುಣ ಹಾಗೂ ಮುಗ್ಧ ವರ್ತನೆ ಬಿಗ್&zwnj; ಬಾಸ್&zwnj; ವೇದಿಕೆಯಲ್ಲೂ ಗಮನ ಸೆಳೆದಿದೆ. ವೇದಿಕೆಗೆ ಬಂದಾಗ ಕೊಂಚ ನರ್ವಸ್&zwnj; ಆಗಿದ್ದ ಕಿರಣ್&zwnj;, ತಮ್ಮ ಬಗ್ಗೆ ಮಾತನಾಡುವಾಗ ಸ್ನೇಹಿತರು ನೀಡಿದ ಸಹಾಯದ ಬಗ್ಗೆಯೂ ಹೇಳಿಕೊಂಡಿದ್ದರು. ತಮ್ಮ ವಿಡಿಯೋಗಳನ್ನು ಸ್ನೇಹಿತರೇ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದರು. ಬಿಗ್&zwnj; ಬಾಸ್&zwnj; ಗೆಲ್ಲುತ್ತೀರಾ ಎಂಬ ಪ್ರಶ್ನೆಗೆ, ಅದನ್ನು ಜನರಿಗೆ ಬಿಟ್ಟಿದ್ದೇನೆ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು.&lt;/p&gt;&lt;img&gt;&lt;p&gt;ಕಿರಣ್&zwnj; ಶಾಸ್ತ್ರಿ ಅವರು ತುಮಕೂರಿನ ಪ್ರಸಿದ್ಧ ಶ್ರೀ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ ಎನ್ನಲಾಗಿದೆ. ಉತ್ತರ ಕರ್ನಾಟಕದ ಬಾಗಲಕೋಟೆಯಿಂದ ಬಂದು ಇದೀಗ ಬಿಗ್&zwnj; ಬಾಸ್&zwnj; ವೇದಿಕೆ ತಲುಪಿರುವ ಅವರ ಜರ್ನಿ ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಕಿರಣ್&zwnj; ಶಾಸ್ತ್ರಿ ಅವರ ಬಿಗ್&zwnj; ಬಾಸ್&zwnj; ಜರ್ನಿ ಆರಂಭವಾಗುತ್ತಿದ್ದಂತೆಯೇ ವಿವಾದದ ಸಣ್ಣ ಕಿಡಿಯೂ ಹೊತ್ತಿಕೊಂಡಿದೆ. ದೊಡ್ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನವೇ ಸಹ ಸ್ಪರ್ಧಿ ಪ್ರಥಮ ಪ್ರಸಾದ್&zwnj; ಅವರೊಂದಿಗೆ ಕಿರಣ್&zwnj; ಮಾತಿನ ಚಕಮಕಿಗೆ ಇಳಿದಿದ್ದಾರೆ. ಕಿರಣ್&zwnj; ಮತ್ತು ಪ್ರಥಮ ಪ್ರಸಾದ್&zwnj; ನಡುವೆ ಮಾತಿನ ವಾಗ್ವಾದ ನಡೆದಿದೆ. ವಿಮಾನದಲ್ಲೇ ಈ ಚರ್ಚೆ ಶುರುವಾಗಿದ್ದು, ಮನೆಗೆ ಎಂಟ್ರಿಯಾಗುವ ಮೊದಲೇ ಕಿರಣ್&zwnj; ಅವರ ಖಡಕ್&zwnj; ಮಾತಿನ ಶೈಲಿ ಗಮನ ಸೆಳೆದಿದೆ. ಇನ್ನು ಕಿರಣ್&zwnj; ಶಾಸ್ತ್ರಿ ಅವರು ಆಡಿದ ಕೆಲವು ಮಾತುಗಳು ಹಾಗೂ ಅವರ ವರ್ತನೆ ಕೂಡ ಮೊದಲ ದಿನವೇ ಚರ್ಚೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಬಿಗ್&zwnj; ಬಾಸ್&zwnj; ಮನೆಯಲ್ಲಿ ಮುಂದಿನ ದಿನಗಳಲ್ಲಿ ಕಿರಣ್&zwnj; ಅವರ ಆಟ ಹೇಗೆ ಸಾಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಕಿರಣ್&zwnj; ಶಾಸ್ತ್ರಿ ಅವರ ಮತ್ತೊಂದು ವಿಶೇಷವೆಂದರೆ, ಅವರು ಮುಖ ನೋಡಿ ಭವಿಷ್ಯ ಹೇಳುವ ಕಲೆ ಹೊಂದಿದ್ದಾರೆ ಎಂದು ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರಿಗೆ &lsquo;ನಿಂಬೆ ಶಾಸ್ತ್ರಿ&rsquo; ಎಂಬ ಹೆಸರೂ ಬಂದಿರುವುದಾಗಿ ವರದಿಯಾಗಿದೆ. ಬಿಗ್&zwnj; ಬಾಸ್&zwnj; ವೇದಿಕೆಯಲ್ಲೂ ಕಿಚ್ಚ ಸುದೀಪ್&zwnj; ಅವರು ಕಿರಣ್&zwnj;ಗೆ ವಿಶೇಷ ಟಾಸ್ಕ್&zwnj; ನೀಡಿದ್ದರು. ಈಗಾಗಲೇ ಮನೆಯೊಳಗೆ ಪ್ರವೇಶಿಸಿರುವ ಸ್ಪರ್ಧಿಗಳ ಭವಿಷ್ಯ ಹೇಳುವಂತೆ ಸೂಚಿಸಿದ್ದರು. ತಮ್ಮ ಈ ವಿಭಿನ್ನ ಕೌಶಲ್ಯದ ಮೂಲಕವೂ ಕಿರಣ್&zwnj; ಪ್ರೇಕ್ಷಕರ ಗಮನ ಸೆಳೆದಿದ್ದಾರೆ.&lt;/p&gt;&lt;img&gt;&lt;p&gt;ಬಿಗ್&zwnj; ಬಾಸ್&zwnj; ಕನ್ನಡ 13 ಆರಂಭಕ್ಕೂ ಮುನ್ನ ಆಯೋಜಿಸಿದ್ದ &lsquo;ಅಗ್ನಿಪರೀಕ್ಷೆ&rsquo; ಕಾರ್ಯಕ್ರಮದ ಮೂಲಕ ಸಾಮಾನ್ಯ ವರ್ಗದ ಸ್ಪರ್ಧಿಗಳಿಗೆ ದೊಡ್ಮನೆ ಪ್ರವೇಶಿಸುವ ಅವಕಾಶ ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಕಿರಣ್&zwnj; ಶಾಸ್ತ್ರಿ ಪ್ರಮುಖವಾಗಿ ಗುರುತಿಸಿಕೊಂಡರು. ಇದೀಗ ಆ ವೇದಿಕೆಯಿಂದ ನೇರವಾಗಿ ಬಿಗ್&zwnj; ಬಾಸ್&zwnj; ಮನೆಗೆ ಕಾಲಿಟ್ಟಿರುವ ಅವರು, ತಮ್ಮ ಜವಾರಿ ಮಾತು ಮತ್ತು ವಿಭಿನ್ನ ವ್ಯಕ್ತಿತ್ವದಿಂದ ವೀಕ್ಷಕರಿಗೆ ಎಷ್ಟು ಮನರಂಜನೆ ನೀಡಲಿದ್ದಾರೆ ಎಂಬುದೇ ಕುತೂಹಲ. ಉತ್ತರ ಕರ್ನಾಟಕದ ಸೊಗಡನ್ನು ಹೊತ್ತುಕೊಂಡು ಬಂದಿರುವ &lsquo;ಯುಕೆ ಹುಲಿ&rsquo; ಕಿರಣ್&zwnj; ಶಾಸ್ತ್ರಿ, ಬಿಗ್&zwnj; ಬಾಸ್&zwnj; ಮನೆಯಲ್ಲಿ ಕೇವಲ ಎಂಟರ್&zwnj;ಟೈನರ್&zwnj; ಆಗಿ ಉಳಿಯುತ್ತಾರಾ? ಅಥವಾ ತಮ್ಮ ನೇರ ಮಾತಿನಿಂದ ಮತ್ತಷ್ಟು ಕಿರಿಕ್&zwnj; ಮಾಡಿಕೊಂಡು ಮನೆಯ ಪ್ರಮುಖ ಸ್ಪರ್ಧಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/who-is-kiran-shastri-bigg-boss-kannada-13-suh-0azs9y1"/>
        </item>
        <item>
            <title><![CDATA[10 ತಿಂಗಳ ಮಗುವನ್ನು ಗಂಡನ ಕೈಗೆ ಒಪ್ಪಿಸಿ ತೆಲುಗು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಕನ್ನಡ ನಟಿ!!]]></title>
            <link>https://kannada.asianetnews.com/gallery/tv-talk/chaitra-rai-enters-bigg-boss-telugu-10-leaving-her-10-month-old-baby-career-and-family-journey-gdp-x0stm97</link>
            <guid isPermaLink="true">https://kannada.asianetnews.com/gallery/tv-talk/chaitra-rai-enters-bigg-boss-telugu-10-leaving-her-10-month-old-baby-career-and-family-journey-gdp-x0stm97</guid>
            <pubDate>Mon, 07 Sep 2026 13:04:32 +0530</pubDate>
            <description><![CDATA[&lt;p&gt;ಕನ್ನಡ ಮತ್ತು ತೆಲುಗು ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ರೈ, ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ 'ಬಿಗ್ ಬಾಸ್ ತೆಲುಗು ಸೀಸನ್ 10'ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಇತ್ತೀಚೆಗಷ್ಟೇ ತಾಯಿಯಾದ ಅವರು, ತಮ್ಮ 10 ತಿಂಗಳ ಹಸುಗೂಸನ್ನು ಮನೆಯಲ್ಲಿ ಬಿಟ್ಟು ಶೋಗೆ ಬಂದಿರುವುದು ಕುತೂಹಲ ಕೆರಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xbt4karxvx5fvv2nt3tn4t,imgname-bigg-boss-telugu-chaithra-rai-1788765606506.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಮತ್ತು ತೆಲುಗು ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ರೈ, ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ 'ಬಿಗ್ ಬಾಸ್ ತೆಲುಗು ಸೀಸನ್ 10'ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಇತ್ತೀಚೆಗಷ್ಟೇ ತಾಯಿಯಾದ ಅವರು, ತಮ್ಮ 10 ತಿಂಗಳ ಹಸುಗೂಸನ್ನು ಮನೆಯಲ್ಲಿ ಬಿಟ್ಟು ಶೋಗೆ ಬಂದಿರುವುದು ಕುತೂಹಲ ಕೆರಳಿಸಿದೆ.&lt;/p&gt;&lt;img&gt;&lt;p&gt;ಒಳ್ಳೆಯ ಕಥೆ ಮತ್ತು ಥೀಮ್ ಇದ್ದರೆ ಪ್ರೇಕ್ಷಕರ ಮನಸ್ಸು ಗೆಲ್ಲುವುದು ಕಷ್ಟವೇನಲ್ಲ. ಈ ಮಾತು &lsquo;ಬಿಗ್ ಬಾಸ್&rsquo; ಆಟಕ್ಕೂ ಪಕ್ಕಾ ಅನ್ವಯಿಸುತ್ತದೆ. ಸ್ಪರ್ಧಿಗಳಲ್ಲಿ ದೃಢ ಮನಸ್ಸು ಹಾಗೂ ಮನರಂಜನೆ ನೀಡುವ ಸಾಮರ್ಥ್ಯವಿದ್ದರೆ ಮಾತ್ರ ಆ ಸೀಸನ್ ಸೂಪರ್ ಹಿಟ್ ಆಗುತ್ತದೆ. ಇದೀಗ ತೆಲುಗು ಕಿರುತೆರೆ ವೀಕ್ಷಕರ ಬಹುದಿನಗಳ ಕಾಯುವಿಕೆಗೆ ತೆರೆಬಿದ್ದಿದ್ದು, ಅಕ್ಕಿನೇನಿ ನಾಗಾರ್ಜುನ ನಿರೂಪಣೆಯಲ್ಲಿ &lsquo;ಬಿಗ್ ಬಾಸ್ ತೆಲುಗು ಸೀಸನ್ 10&rsquo; ಭಾನುವಾರದಿಂದ (ಸೆಪ್ಟೆಂಬರ್ 6) ವೈಭವೋಪೇತವಾಗಿ ಆರಂಭವಾಗಿದೆ. &lsquo;ದಶಾವತಾರಂ&rsquo; ಎಂಬ ವಿಶೇಷ ಥೀಮ್ ಹೊಂದಿರುವ ಈ ಮೈಲಿಗಲ್ಲಿನ ಸೀಸನ್&zwnj;ಗೆ ಕನ್ನಡ ಮತ್ತು ತೆಲುಗು ಕಿರುತೆರೆಯ ಜನಪ್ರಿಯ ನಟಿ ಮಂಗಳೂರು ಮೂಲದ ಚೈತ್ರಾ ರೈ ಸ್ಪರ್ಧಿಯಾಗಿ ಧುಮುಕಿದ್ದಾರೆ. ಕನ್ನಡ ಬಿಗ್&zwnj;ಬಾಸ್ ಸೀಸನ್ 13ರ ಜೊತೆ ಜೊತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಕೂಡ ಒಂದೇ ದಿನ ಆರಂಭವಾಗಿದೆ.&lt;/p&gt;&lt;img&gt;&lt;p&gt;ಇದೀಗ ತೆಲುಗು ಬಿಗ್&zwnj;ಬಾಸ್&zwnj; ಸೀಸನ್ 10ಕ್ಕೆ ಇಬ್ಬರು ಕನ್ನಡ ತಾರೆಯರು ಗ್ರ್ಯಾಂಡ್ ಎಂಟ್ರಿ ಪಡೆದಿದ್ದಾರೆ. ಅದುವೇ ಮೈಸೂರಿನ ಮುಖೇಶ್ ಗೌಡ ಮತ್ತು ಮಂಗಳೂರಿನ ಚೈತ್ರಾ ರೈ. ಆದರೆ ಇದರಲ್ಲಿ ವಿಶೇಷ ಎನ್ನುವುದಕ್ಕಿಂತ ಆಶ್ಚರ್ಯ ಏನಂದ್ರೆ ತನ್ನ 10 ತಿಂಗಳ ಮಗುವನ್ನು ಬಿಟ್ಟು ಚೈತ್ರಾ ಅವರು ಬಿಗ್&zwnj;ಬಾಸ್&zwnj; ತೆಲುಗಿಗೆ ಹೋಗಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಮಗುವಿನ ತಾಯಿಯಾಗಿರುವ ಚೈತ್ರಾ ರೈ, ಕೇವಲ 10 ತಿಂಗಳ ಪುಟ್ಟ ಮಗಳನ್ನು ಮನೆಯಲ್ಲಿ ಬಿಟ್ಟು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಇಂತಹ ದೊಡ್ಡ ನಿರ್ಧಾರ ತೆಗೆದುಕೊಂಡು ರಿಯಾಲಿಟಿ ಶೋಗೆ ಬಂದಿರುವ ಚೈತ್ರಾ ರೈ, ತಮ್ಮ ಸದಾಶಯ ಮತ್ತು ಆಟದ ವೈಖರಿಯಿಂದ ತೆಲುಗು ಬಿಗ್ ಬಾಸ್ ಮನೆಯಲ್ಲಿ ಎಷ್ಟರಮಟ್ಟಿಗೆ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;img&gt;&lt;p&gt;ಮಂಗಳೂರು ಮೂಲದ ಬಿ.ಡಿ. ವಾಸು ರೈ ಮತ್ತು ಗುಲಾಬಿ ರೈ ದಂಪತಿಯ ಪುತ್ರಿಯಾಗಿ ಮಾರ್ಚ್ 29, 1990 ರಂದು ಜನಿಸಿದ ಚೈತ್ರಾ ರೈ, 2009ರಲ್ಲಿ 'ಕುಸುಮಾಂಜಲಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಂತರ 'ಬೊಂಬೆಯಾಟವಯ್ಯ', 'ಗೆಜ್ಜೆಪೂಜೆ', 'ಬಣ್ಣದ ಬುಗುರಿ', 'ಪೌರ್ಣಮಿ', 'ನಾಗಮಣಿ' ಹಾಗೂ 'ಯುಗಾದಿ'ಯಂತಹ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ವಿಶೇಷವಾಗಿ ಜೀ ಕನ್ನಡದ ಸೂಪರ್ ಹಿಟ್ 'ರಾಧಾ ಕಲ್ಯಾಣ' ಧಾರಾವಾಹಿಯ 'ವಿಶಾಖ' ಎಂಬ ನೆಗೆಟಿವ್ ಶೇಡ್ ಪಾತ್ರದ ಮೂಲಕ ಅವರು ಕನ್ನಡಿಗರ ಮನೆಮಾತಾದರು. ಪರದೆಯ ಮೇಲೆ ಖಳನಟಿಯಾಗಿ ನೆನಪಿನಲ್ಲಿ ಉಳಿಯುವ ಚೈತ್ರಾ, ನಿಜ ಜೀವನದಲ್ಲಿ ತದ್ವಿರುದ್ಧ ವ್ಯಕ್ತಿತ್ವದವರು. 2014ರಲ್ಲಿ 'ಜಂಬೂ ಸವಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟರು.&lt;/p&gt;&lt;img&gt;&lt;p&gt;2017ರಲ್ಲಿ 'ಅಷ್ಟ ಚಮ್ಮಾ' ಧಾರಾವಾಹಿಯ ಮೂಲಕ ತೆಲುಗು ರಂಗ ಪ್ರವೇಶಿಸಿದ ಚೈತ್ರಾ, ಆನಂತರ ಹಿಂತಿರುಗಿ ನೋಡಲೇ ಇಲ್ಲ. ಅತ್ತರಿಂಟ್ಲು ಅಕ್ಕ ಚೆಲ್ಲುಲು , ಅಳ ಮೊದಲಿಂದಿ , ಅತ್ತೋ ಅತ್ತಮ್ಮ ಕುತ್ರೋ , ದಟ್ಸ್ ಮಹಾಲಕ್ಷ್ಮಿ , ಒಕರಿಕಿ ಒಕರು ಹಾಗೂ ಮನಸುನ ಮನಸ್ಯೆ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿ ತೆಲುಗು ಪ್ರೇಕ್ಷಕರ ನೆಚ್ಚಿನ ನಟಿಯಾದರು. ಕನ್ನಡಕ್ಕಿಂತಲೂ ಹೆಚ್ಚು ತೆಲುಗು ಕಿರುತೆರೆಯಲ್ಲಿಯೇ ಬ್ಯುಸಿಯಾದರು.&lt;/p&gt;&lt;img&gt;&lt;p&gt;ಮಂಗಳೂರಿನಲ್ಲಿ ಪ್ರಸನ್ನ ಶೆಟ್ಟಿ ಎಂಬುವವರನ್ನು ಅರೇಂಜ್ಡ್ ಮ್ಯಾರೇಜ್ ವಿವಾಹವಾದ ಚೈತ್ರಾ, ಸದ್ಯ ವೈಯಕ್ತಿಕ ಜೀವನದಲ್ಲೂ ಸುಂದರ ಕುಟುಂಬವನ್ನು ಹೊಂದಿದ್ದಾರೆ. ಇವರ ಪತಿ ಕತಾರ್&zwnj;ನಲ್ಲಿ ಉದ್ಯೋಗದಲ್ಲಿದ್ದಾರೆ. ಈ ದಂಪತಿಗೆ 2021 ರಲ್ಲಿ ಮೊದಲ ಮಗಳು 'ನಿಷ್ಕಾ ಶೆಟ್ಟಿ' ಜನಿಸಿದಳು. ಇತ್ತೀಚೆಗಷ್ಟೇ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಚೈತ್ರಾ, ಮಗಳಿಗೆ 'ಪ್ರಿಷ್ಕಾ ಶೆಟ್ಟಿ' (ದೈವಿಕ ಆತ್ಮ ಅಥವಾ ದೇವರ ಅಮೂಲ್ಯ ಕೊಡುಗೆ ಎಂಬ ಅರ್ಥ) ಎಂದು ಹೆಸರಿಟ್ಟಿದ್ದಾರೆ. ಎರಡನೇ ಮಗುವಿಗೆ 10 ತಿಂಗಳು ತುಂಬಿದೆ.&lt;/p&gt;&lt;p&gt;ಇನ್ನು ನಟಿ ಚೈತ್ರಾ ರೈ ತಮ್ಮ ತೂಕದ ಕಾರಣಕ್ಕೆ ಎದುರಾದ ನಕಾರಾತ್ಮಕ ಕಾಮೆಂಟ್ ಹಾಗೂ ಬಾಡಿ ಶೇಮಿಂಗ್&zwnj; ಅನ್ನು ಸವಾಲಾಗಿ ಸ್ವೀಕರಿಸಿ, ಕೇವಲ 3 ತಿಂಗಳಲ್ಲಿ ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ವರ್ಕೌಟ್ ಮೂಲಕ ತಮ್ಮ ತೂಕವನ್ನು 82 ಕೆಜಿಯಿಂದ 60 ಕೆಜಿಗೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜನ ಆಡಿದ ಟೀಕೆಗಳೇ ತಮ್ಮ ಈ ಅದ್ಭುತ ಫಿಟ್ನೆಸ್ ರೂಪಾಂತರಕ್ಕೆ ಪ್ರೇರಣೆಯಾಯಿತು ಎಂದು ಅವರು ತಿಳಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/tv-talk/chaitra-rai-enters-bigg-boss-telugu-10-leaving-her-10-month-old-baby-career-and-family-journey-gdp-x0stm97"/>
        </item>
        <item>
            <title><![CDATA[ಅಮೃತಧಾರೆ ಸೀರಿಯಲ್ ಪ್ರೇಮಿಗಳಿಗೆ ಸಂತಸದ ಸುದ್ದಿ: ಭೂಮಿಕಾಳ ಹೊಸ ಪಯಣ ಆರಂಭದ ಸುಳಿವು]]></title>
            <link>https://kannada.asianetnews.com/gallery/tv-talk/zee-kannada-promo-for-the-serial-amruthadhaare-hints-at-a-new-twist-in-story-mrq-1gp1xka</link>
            <guid isPermaLink="true">https://kannada.asianetnews.com/gallery/tv-talk/zee-kannada-promo-for-the-serial-amruthadhaare-hints-at-a-new-twist-in-story-mrq-1gp1xka</guid>
            <pubDate>Mon, 07 Sep 2026 12:23:43 +0530</pubDate>
            <description><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಪಾತ್ರದ ಅಂತ್ಯವಾಗಿದ್ದು, ಆತನ ಸಾವಿನ ರಹಸ್ಯವನ್ನು ಭೂಮಿಕಾ ಮುಚ್ಚಿಹಾಕಿದ್ದಾಳೆ. ಧಾರಾವಾಹಿ ಮುಗಿಯುವ ಊಹಾಪೋಹಗಳ ನಡುವೆ, ಬಿಡುಗಡೆಯಾದ ಹೊಸ ಪ್ರೋಮೋ ಕಥೆಯು ಹೊಸ ತಿರುವು ಪಡೆಯುವ ಸೂಚನೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1x9zr3eq6jgf8jn5thztcv9,imgname-amruthadhaare--2--1788763693166.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಪಾತ್ರದ ಅಂತ್ಯವಾಗಿದ್ದು, ಆತನ ಸಾವಿನ ರಹಸ್ಯವನ್ನು ಭೂಮಿಕಾ ಮುಚ್ಚಿಹಾಕಿದ್ದಾಳೆ. ಧಾರಾವಾಹಿ ಮುಗಿಯುವ ಊಹಾಪೋಹಗಳ ನಡುವೆ, ಬಿಡುಗಡೆಯಾದ ಹೊಸ ಪ್ರೋಮೋ ಕಥೆಯು ಹೊಸ ತಿರುವು ಪಡೆಯುವ ಸೂಚನೆ ನೀಡಿದೆ.&lt;/p&gt;&lt;img&gt;&lt;p&gt;ಅಮೃತಧಾರೆ ಸೀರಿಯಲ್ ಮುಂದುವರಯಲು ಕಾರಣ ಜೈದೇವ್. ಇದೀಗ ಜೈದೇವ್ ಪ್ರಾಣಪಕ್ಷಿಯೇ ಹಾರಿ ಹೋಗಿದ್ದು, ಯಾರಿಗೂ ತಿಳಿಯದಂತೆ ಆತನ ಹೆಣವನ್ನು ಭೂಮಿಕಾ ಮುಚ್ಚಿ ಹಾಕಿದ್ದಾಳೆ. ಜೈದೇವ್ ಸಾವಿನ ಬೆನ್ನಲ್ಲೇ ಧಾರಾವಾಹಿ ಮುಗಿಯಬಹುದು ಎಂದು ವೀಕ್ಷಕರು ಅಂದಾಜಿಸಿದ್ದರು. ಆದ್ರೆ ಈ ಊಹಾಪೋಹಕ್ಕೆ ಭೂಮಿಕಾ ಅವರಿಂದ ಸ್ಪಷ್ಟನೆ ಬಂದಿದೆ.&lt;/p&gt;&lt;img&gt;&lt;p&gt;ಇಂದು ಅಮೃತಧಾರೆ ಧಾರಾವಾಹಿ ತಂಡದಿಂದ ವಿಶೇಷ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ ಗೌತಮ್ ಜೊತೆಗಿನ ಬದುಕು ಹೇಗಿತು ಎಂಬುದನ್ನು ಭೂಮಿಕಾ ವಿವರಿಸಿದ್ದು, ಮುಂದಿನ ಕಥೆ ಎಷ್ಟು ವಿಶೇಷ ಮತ್ತು ವಿಭಿನ್ನವಾಗಿರಲಿದೆ ಎಂಬುದರ ಸುಳಿವು ನೀಡಲಾಗಿದೆ.&lt;/p&gt;&lt;img&gt;&lt;p&gt;ಹೌದು, ಜೈದೇವ್&zwnj; ಸಾವಿನ ಹೊಣೆ ಹೊತ್ತು ಭೂಮಿಕಾ ಜೈಲು ಸೇರಬಹುದು. ನಂತರ ಸೀರಿಯಲ್ ಹಲವು ವರ್ಷಗಳ ನಂತರದ ಕತೆಗೆ ಮರಳಬಹುದು ಎಂದು ಊಹಿಸಲಾಗುತ್ತದೆ. ಈ ಹಿಂದೆಯೂ ಅಮೃತಧಾರೆ ಕಥೆಯಲ್ಲಿ ಈ ರೀತಿಯ ದಿಢೀರ್ ಬದಲಾವಣೆಗಳನ್ನು ತೆಗೆದುಕೊಂಡು ಬರಲಾಗಿತ್ತು. ಮಗುವನ್ನು ಹೊತ್ತುಕೊಂಡು ಮನೆ ತೊರೆದಿದ್ದ ಭೂಮಿಕಾ, ಸಾಮಾನ್ಯಾ ಮಹಿಳೆಯಂತೆ ದೂರದ ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿದ್ದಳು.&lt;/p&gt;&lt;img&gt;&lt;p&gt;ಭೂಮಿಕಾಳನ್ನು ಹುಡುಕುತ್ತಾ ಗೌತಮ್ ಸಹ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಆನಂತರ ಇವರಿಬ್ಬರ ಭೇಟಿ, ಮತ್ತೆ ಒಂದಾಗುವಿಕೆ ಕಥೆಯು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲಾಗಿತ್ತು. ಆನಂತರ ಭೂಮಿಕಾಗೆ ಕ್ಯಾನ್ಸರ್ ತುತ್ತಾದ ಬಳಿಕ ವರ್ಷಗಳ ನಂತ್ರ ಅಂತ ತೋರಿಸಲಾಗಿತ್ತು. ಆನಂತರ ಭೂಮಿಕಾ ಕ್ಯಾನ್ಸರ್&zwnj;ನಿಂದ ಗುಣಮುಖಳಾಗಿ ಜೈದೇವ್ ರಹಸ್ಯ ಹುಡುಕಲು ಮುಂದಾಗಿದ್ದಳು.&lt;/p&gt;&lt;img&gt;&lt;p&gt;ಇದೀಗ ಧಾರಾವಾಹಿಯೇ ಪ್ರಮುಳ ಪಾತ್ರವೇ ಮುಕ್ತಾಯವಾಗಿದೆ. ಹಾಗಾಗಿ ಸೀರಿಯಲ್ ಮತ್ತೊಂದು ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ಹೊಸ ಅಧ್ಯಾಯದಲ್ಲಿ ಭೂಮಿಕಾ-ಗೌತಮ್ ಮಕ್ಕಳು ದೊಡ್ಡವರಾಗ್ತಾರಾ ಅಂತ ಕಾದು ನೋಡಬೇಕಿದೆ. ಜೈಲುಪಾಲಾದ ತಾಯಿಯನ್ನು ಮಕ್ಕಳು ಹುಡುಕ್ತಾರಾ ಅನ್ನೋದು ಶೀಘ್ರದಲ್ಲಿಯೇ ತಿಳಿಯಲಿದೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-promo-for-the-serial-amruthadhaare-hints-at-a-new-twist-in-story-mrq-1gp1xka"/>
        </item>
        <item>
            <title><![CDATA[ತೆಲುಗು ಬಿಗ್‌ಬಾಸ್‌ 10ಕ್ಕೆ ಕನ್ನಡದ ಮೂವರು ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ, ಎಲ್ಲಿಯವರು? ಇಲ್ಲಿದೆ ನೋಡಿ]]></title>
            <link>https://kannada.asianetnews.com/gallery/tv-talk/bigg-boss-telugu-season-10-akkineni-nagarjuna-hosts-edition-top-kannada-stars-chaithra-rai-and-mukesh-gowda-gdp-wnf4ait</link>
            <guid isPermaLink="true">https://kannada.asianetnews.com/gallery/tv-talk/bigg-boss-telugu-season-10-akkineni-nagarjuna-hosts-edition-top-kannada-stars-chaithra-rai-and-mukesh-gowda-gdp-wnf4ait</guid>
            <pubDate>Mon, 07 Sep 2026 12:19:44 +0530</pubDate>
            <description><![CDATA[ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ತೆಲುಗು ಬಿಗ್&zwnj;ಬಾಸ್&zwnj; ಸೀಸನ್ 10 'ದಶಾವತಾರಂ' ಥೀಮ್&zwnj;ನೊಂದಿಗೆ ಆರಂಭವಾಗಿದೆ. ಈ ಬಾರಿ ಕನ್ನಡದ ಮೂವರು ಪ್ರತಿಭೆಗಳಾದ ನಟಿ ಚೈತ್ರಾ ರೈ, ನಟ ಮುಖೇಶ್ ಗೌಡ ಮತ್ತು ಆದಿತ್ ಈಶ್ವರನ್ (ತ್ರಿಗುಣ್) ಸ್ಪರ್ಧಿಗಳಾಗಿ ಮನೆ ಪ್ರವೇಶಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1xa21hmp7bjq8130v7ccqjv,imgname-bigg-boss-telugu-1788763768372.jpg" type="image/jpeg" height="390" width="690"/>
            <content:encoded><![CDATA[ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ತೆಲುಗು ಬಿಗ್&zwnj;ಬಾಸ್&zwnj; ಸೀಸನ್ 10 'ದಶಾವತಾರಂ' ಥೀಮ್&zwnj;ನೊಂದಿಗೆ ಆರಂಭವಾಗಿದೆ. ಈ ಬಾರಿ ಕನ್ನಡದ ಮೂವರು ಪ್ರತಿಭೆಗಳಾದ ನಟಿ ಚೈತ್ರಾ ರೈ, ನಟ ಮುಖೇಶ್ ಗೌಡ ಮತ್ತು ಆದಿತ್ ಈಶ್ವರನ್ (ತ್ರಿಗುಣ್) ಸ್ಪರ್ಧಿಗಳಾಗಿ ಮನೆ ಪ್ರವೇಶಿಸಿದ್ದಾರೆ.&lt;img&gt;&lt;p&gt;ಒಳ್ಳೆಯ ಕಥೆ ಸಿಕ್ಕರೆ ಪ್ರೇಕ್ಷಕರ ಜೊತೆ ಸಂಪರ್ಕ ಸಾಧಿಸುವುದು ಕಷ್ಟವೇನಲ್ಲ. ಅದೇ ರೀತಿ ರಿಯಾಲಿಟಿ ಶೋ ವಿಷಯಕ್ಕೆ ಬಂದರೆ, ಸ್ಪರ್ಧಿಗಳು ಕೊಡುವ 'ಕಂಟೆಂಟ್' ಆಧರಿಸಿ ಆ ಸೀಸನ್ ಹಿಟ್ ಆಗುತ್ತದೆ. ಇದೀಗ ಕಿರುತೆರೆ ವೀಕ್ಷಕರ ಸುದೀರ್ಘ ಕಾಯುವಿಕೆಗೆ ತೆರೆಬಿದ್ದಿದ್ದು, ಬಿಗ್&zwnj;ಬಾಸ್&zwnj; ಕನ್ನಡ ಸೀಸನ್ 13 ಆರಂಭವಾದ ಸೆಪ್ಟೆಂಬರ್ 6 ರಂದೇ ಬಿಗ್ ಬಾಸ್ ತೆಲುಗು ಸೀಸನ್ 10 ಅದ್ದೂರಿಯಾಗಿ ಆರಂಭವಾಗಿದೆ. ಟಾಲಿವುಡ್ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ರಿಯಾಲಿಟಿ ಶೋ ನ 10ನೇ ಸೀಸನ್ 'ದಶಾವತಾರಂ' ಎಂಬ ವಿಶಿಷ್ಟ ಥೀಮ್&zwnj;ನೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ.&lt;/p&gt;&lt;img&gt;&lt;p&gt;ಈ ಬಾರಿ ತೆಲುಗು , ತಮಿಳು, ಕನ್ನಡ ಹಾಗೂ ಮಲಯಾಳಂ ಏಕ ಕಾಲಕ್ಕೆ ಒಂದೇ ದಿನ ಗ್ರ್ಯಾಂಡ್ ಎಂಟ್ರಿ ಪಡೆದುಕೊಂಡಿದೆ. ತೆಲುಗು ಬಿಗ್ ಬಾಸ್ ಮನೆಗೆ 16 ಮಂದಿ ಪ್ರವೇಶ ಪಡೆದಿದ್ದು ಕನ್ನಡದಂತೆಯೇ ಅಗ್ನಿ ಪರೀಕ್ಷೆಯಲ್ಲಿ ಸೆಲೆಕ್ಟ್ ಆದ ಕಾಮನ್&zwnj; ಮ್ಯಾನ್ ಗಳು ಕೂಡ ಇದ್ದಾರೆ. ಇದರಲ್ಲಿ ಕನ್ನಡದ ನಟರು ಕೂಡ ಪ್ರವೇಶ ಪಡೆದಿದ್ದು ಅವರ ಸಂಪೂರ್ಣ ಮಾಹಿತಿ ಇಲ್ಲಿದೆ. ಕನ್ನಡದಿಂದ ತೆಲುಗು ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಪ್ರತಿಭೆಗಳು ಹಾಗೂ ಕನ್ನಡದ ಸಿನೆಮಾಗಳಲ್ಲಿ ನಟಿಸಿರುವ ತೆಲುಗು ಪ್ರತಿಭೆ ಈ ಬಾರಿ ತೆಲುಗು ಬಿಗ್&zwnj;ಬಾಸ್&zwnj; ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಸ್ಟಾರ್&zwnj;ಗಳ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಸಕ್ರಿಯರಾಗಿರುವ ಮಂಗಳೂರು ಮೂಲದ ನಟಿ ಚೈತ್ರಾ ರೈ ಬಿಗ್ ಬಾಸ್ ಅಖಾಡಕ್ಕಿಳಿದಿದ್ದಾರೆ. 'ಕುಸುಮಾಂಜಲಿ', 'ಬೊಂಬೆಯಾಟವಯ್ಯಾ', 'ಯುಗಾದಿ', 'ಗೆಜ್ಜೆಪೂಜೆ', ಹಾಗೂ 'ನಾಗಮಣಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಇವರು, ಜೀ ಕನ್ನಡದ 'ರಾಧಾ ಕಲ್ಯಾಣ' ಧಾರಾವಾಹಿಯ 'ವಿಶಾಖ' ಎಂಬ ನೆಗೆಟಿವ್ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿದ್ದರು. ಪ್ರಸ್ತುತ ತೆಲುಗು ಕಿರುತೆರೆಯಲ್ಲಿ ಹೆಚ್ಚು ಬ್ಯುಸಿಯಾಗಿರುವ ಇವರು, ಈ ಬಾರಿ ತೆಲುಗು ಬಿಗ್&zwnj;ಬಾಸ್&zwnj; ಗೆ 6 ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ತೆಲುಗು ಕಿರುತೆರೆ ವೀಕ್ಷಕರಿಗೆ ಮುಖೇಶ್ ಗೌಡ ಚಿರಪರಿಚಿತ ಹೆಸರು. ಸೂಪರ್ ಹಿಟ್ 'ಗುಪ್ಪೆಡಂತ ಮನಸು' ಧಾರಾವಾಹಿಯಲ್ಲಿ 'ರಿಷಿ ಸರ್' ಆಗಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಈ ಕನ್ನಡಿಗ, ಮೈಸೂರು ಮೂಲದ ಹುಡಗುಗ ಬಿಗ್ ಬಾಸ್ ತೆಲುಗು 10ರ ಕೊನೆಯ ಸ್ಪರ್ಧಿಯಾಗಿ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.&lt;/p&gt;&lt;p&gt;ವಾಸ್ತವವಾಗಿ, ಮುಖೇಶ್ ಗೌಡ ಅವರಿಗೆ ಬಿಗ್ ಬಾಸ್ ತಂಡದಿಂದ ಆಫರ್ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಎರಡು ಬಾರಿ ಆಫರ್ ಬಂದಿತ್ತಾದರೂ, ತಾವು ನಟಿಸುತ್ತಿದ್ದ 'ಗುಪ್ಪೆಡಂತ ಮನಸು' ಧಾರಾವಾಹಿಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಿಂದ ಹಾಗೂ ಆ ಪಾತ್ರಕ್ಕೆ ನೀಡಿದ್ದ ಬದ್ಧತೆಯಿಂದಾಗಿ ಬಿಗ್ ಬಾಸ್ ಆಫರ್ ಅನ್ನು ನಯವಾಗಿಯೇ ತಿರಸ್ಕರಿಸಿದ್ದರು. ಇದೀಗ ಕೊನೆಗೂ ಕಾರ್ಯಕ್ರಮಕ್ಕೆ ಹೆಜ್ಜೆ ಇಟ್ಟಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.&lt;/p&gt;&lt;img&gt;&lt;p&gt;'ತ್ರಿಗುಣ್' ಎಂದೇ ಜನಪ್ರಿಯರಾಗಿರುವ ನಟ ಆದಿತ್ ಈಶ್ವರನ್ ಸಹ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು 'ಕೊಂಡ', 'ಪ್ರೇಮದೇಶಂ', 'ಡೆವಿಲ್' ಮತ್ತು 'ಲೈನ್ ಮ್ಯಾನ್' ನಂತಹ ಪ್ರಮುಖ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಬಹುಭಾಷಾ ಚಿತ್ರರಂಗದ ಅನುಭವ ಹೊಂದಿರುವ ಆದಿತ್ ಈಶ್ವರನ್, ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟದ ವೈಖರಿಯಿಂದ ಯಾವ ರೀತಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/tv-talk/bigg-boss-telugu-season-10-akkineni-nagarjuna-hosts-edition-top-kannada-stars-chaithra-rai-and-mukesh-gowda-gdp-wnf4ait"/>
        </item>
        <item>
            <title><![CDATA[ಬಿಗ್‌ ಬಾಸ್‌ ಮನೆಯಲ್ಲಿ ಓಂ ಪ್ರಕಾಶ್‌ ರಾವ್‌ 2ನೇ ಇನ್ನಿಂಗ್ಸ್‌; ʻಹುಚ್ಚʼ ನಾಯಕಿಯ ಅಕ್ಕನೇ ಇವರ ಧರ್ಮಪತ್ನಿ]]></title>
            <link>https://kannada.asianetnews.com/gallery/tv-talk/bigg-boss-kannada-13-kiccha-sudeep-introduces-om-prakash-rao-wife-suh-a0ycyvf</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-13-kiccha-sudeep-introduces-om-prakash-rao-wife-suh-a0ycyvf</guid>
            <pubDate>Mon, 07 Sep 2026 12:04:53 +0530</pubDate>
            <description><![CDATA[&lt;p&gt;ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 13ರ ಗ್ರ್ಯಾಂಡ್&zwnj; ಓಪನಿಂಗ್&zwnj; ಅದ್ಧೂರಿಯಾಗಿ ನಡೆದಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪೈಕಿ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್&zwnj; ರಾವ್&zwnj; ಕೂಡ ಪ್ರಮುಖರಾಗಿದ್ದಾರೆ. ವಿಶೇಷವೆಂದರೆ ಓಂ ಪ್ರಕಾಶ್&zwnj; ರಾವ್&zwnj; ಧರ್ಮಪತ್ನಿ ಹುಚ್ಚ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1x8pfctpt423yeyg4m5fzr7,imgname-bigg-boss-kannada-13-kiccha-sudeep-introduces-om-prakash-rao-wife-1788762340761.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 13ರ ಗ್ರ್ಯಾಂಡ್&zwnj; ಓಪನಿಂಗ್&zwnj; ಅದ್ಧೂರಿಯಾಗಿ ನಡೆದಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪೈಕಿ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್&zwnj; ರಾವ್&zwnj; ಕೂಡ ಪ್ರಮುಖರಾಗಿದ್ದಾರೆ. ವಿಶೇಷವೆಂದರೆ ಓಂ ಪ್ರಕಾಶ್&zwnj; ರಾವ್&zwnj; ಧರ್ಮಪತ್ನಿ ಹುಚ್ಚ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.&lt;/p&gt;&lt;img&gt;&lt;p&gt;ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 13ರ ಗ್ರ್ಯಾಂಡ್&zwnj; ಓಪನಿಂಗ್&zwnj; ಅದ್ಧೂರಿಯಾಗಿ ನಡೆದಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪೈಕಿ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್&zwnj; ರಾವ್&zwnj; ಕೂಡ ಪ್ರಮುಖರಾಗಿದ್ದಾರೆ. ವಿಶೇಷವೆಂದರೆ, ಓಂ ಪ್ರಕಾಶ್&zwnj; ರಾವ್&zwnj; ಅವರಿಗೆ ಇದು ಬಿಗ್&zwnj; ಬಾಸ್&zwnj; ಮನೆಯ ಎರಡನೇ ಇನ್ನಿಂಗ್ಸ್&zwnj;. ಓಂ ಪ್ರಕಾಶ್&zwnj; ರಾವ್&zwnj; ಅವರನ್ನು ವೇದಿಕೆಗೆ ಬರಮಾಡಿಕೊಂಡ ಕಿಚ್ಚ ಸುದೀಪ್&zwnj;, ಎಂದಿನಂತೆ ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ. ಟೆಸ್ಟ್&zwnj; ಕ್ರಿಕೆಟ್&zwnj;ನಲ್ಲಿ ಸೆಕೆಂಡ್&zwnj; ಇನ್ನಿಂಗ್ಸ್&zwnj;ಗೆ ಬಂದಿದ್ದೀರಾ ಎಂದು ಕಿಚ್ಚ ಕಿಚಾಯಿಸಿದರು. ಇದೇ ವೇಳೆ, ತಮ್ಮಂತಹ ಸ್ಟಾರ್&zwnj; ನಟರಿಗೆ ನಿರ್ದೇಶನ ಮಾಡಿದ ಪ್ರತಿಭಾವಂತ ನಿರ್ದೇಶಕ ಎಂದು ಓಂ ಪ್ರಕಾಶ್&zwnj; ರಾವ್&zwnj; ಅವರನ್ನು ಸುದೀಪ್&zwnj; ಬಣ್ಣಿಸಿದರು.&lt;/p&gt;&lt;p&gt;&lt;strong&gt;ʻಹುಚ್ಚʼ ಚಿತ್ರದ ನಾಯಕಿಯ ಅಕ್ಕನೇ ಓಂ ಪ್ರಕಾಶ್&zwnj; ರಾವ್&zwnj; ಪತ್ನಿ&lt;/strong&gt;&lt;/p&gt;&lt;p&gt;ಓಂ ಪ್ರಕಾಶ್&zwnj; ರಾವ್&zwnj; ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವಾಗ ಅವರ ಪತ್ನಿಯ ವಿಚಾರವೂ ಗಮನ ಸೆಳೆದಿದೆ. ʻಹುಚ್ಚʼ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿಯ ಅಕ್ಕನೇ ಓಂ ಪ್ರಕಾಶ್&zwnj; ರಾವ್&zwnj; ಅವರ ಧರ್ಮಪತ್ನಿ ಎಂಬ ವಿಚಾರ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಕಿಚ್ಚ ಸುದೀಪ್&zwnj; ಅವರೇ ಬಿಗ್&zwnj; ಬಾಸ್&zwnj; ವೇದಿಕೆಯಲ್ಲಿ ಓಂ ಪ್ರಕಾಶ್&zwnj; ರಾವ್&zwnj; ಅವರ ಪತ್ನಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಹೀಗಾಗಿ, ಸಿನಿಮಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ಓಂ ಪ್ರಕಾಶ್&zwnj; ರಾವ್&zwnj; ಅವರ ಕುಟುಂಬದ ಕುರಿತ ಕುತೂಹಲವೂ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಓಂ ಪ್ರಕಾಶ್&zwnj; ರಾವ್&zwnj; ಅವರು ಈ ಹಿಂದೆ ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 4ರಲ್ಲಿಯೇ ವೈಲ್ಡ್&zwnj; ಕಾರ್ಡ್&zwnj; ಮೂಲಕ ದೊಡ್ಮನೆ ಪ್ರವೇಶಿಸಿದ್ದರು. ಆದರೆ ಅನಾರೋಗ್ಯದ ಸಮಸ್ಯೆಯಿಂದಾಗಿ ಮನೆಯೊಳಗೆ ಹೆಚ್ಚು ದಿನಗಳ ಕಾಲ ಇರಲು ಸಾಧ್ಯವಾಗಿರಲಿಲ್ಲ. ಎಂಟ್ರಿ ಕೊಟ್ಟ ಕೆಲವೇ ದಿನಗಳಲ್ಲಿ ಅವರು ಬಿಗ್&zwnj; ಬಾಸ್&zwnj; ಮನೆಯಿಂದ ಹೊರಬಂದಿದ್ದರು. ಇದೀಗ ಸೀಸನ್&zwnj; 13ರಲ್ಲಿ ಮತ್ತೆ ದೊಡ್ಮನೆಗೆ ಕಾಲಿಟ್ಟಿರುವ ಓಂ ಪ್ರಕಾಶ್&zwnj; ರಾವ್&zwnj;, ತಮ್ಮ ಸೆಕೆಂಡ್&zwnj; ಇನ್ನಿಂಗ್ಸ್&zwnj; ಆರಂಭಿಸಿದ್ದಾರೆ. ಈ ಬಾರಿ ಅವರ ಆಟ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದಲ್ಲಿ ಓಂ ಪ್ರಕಾಶ್&zwnj; ರಾವ್&zwnj; ಅವರು ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸುದೀಪ್&zwnj;, ದರ್ಶನ್&zwnj;, ಶಿವರಾಜ್&zwnj;ಕುಮಾರ್&zwnj; ಸೇರಿದಂತೆ ಹಲವು ಸ್ಟಾರ್&zwnj; ನಟರಿಗೆ ಅವರು ನಿರ್ದೇಶನ ಮಾಡಿದ್ದಾರೆ. ಶಿವರಾಜ್&zwnj;ಕುಮಾರ್&zwnj; ಅಭಿನಯದ ʻಎ.ಕೆ. 47ʼ ಸಿನಿಮಾ ಓಂ ಪ್ರಕಾಶ್&zwnj; ರಾವ್&zwnj; ಅವರ ನಿರ್ದೇಶನದ ಪ್ರಮುಖ ಸಿನಿಮಾಗಳಲ್ಲಿ ಒಂದು. ಆ್ಯಕ್ಷನ್&zwnj; ಥ್ರಿಲ್ಲರ್&zwnj; ಕಥಾಹಂದರದ ಈ ಸಿನಿಮಾ ಬಿಡುಗಡೆಯಾದಾಗ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಸುದೀಪ್&zwnj; ನಾಯಕನಾಗಿ ನಟಿಸಿದ್ದ ʻಹುಚ್ಚʼ ಸಿನಿಮಾ ಓಂ ಪ್ರಕಾಶ್&zwnj; ರಾವ್&zwnj; ಅವರ ವೃತ್ತಿಜೀವನದ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ. ಆ್ಯಕ್ಷನ್&zwnj;, ಸೆಂಟಿಮೆಂಟ್&zwnj; ಹಾಗೂ ಸುದೀಪ್&zwnj; ಅವರ ಅಭಿನಯದಿಂದಾಗಿ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ದರ್ಶನ್&zwnj; ಅಭಿನಯದ ʻಕಳಸಿಪಾಳ್ಯʼ ಕೂಡ ಓಂ ಪ್ರಕಾಶ್&zwnj; ರಾವ್&zwnj; ಅವರ ನಿರ್ದೇಶನದ ಜನಪ್ರಿಯ ಸಿನಿಮಾಗಳಲ್ಲಿ ಒಂದು. ಸಿನಿಮಾದ ಮಾಸ್&zwnj; ಡೈಲಾಗ್&zwnj;ಗಳು, ಹಾಡುಗಳು ಹಾಗೂ ದರ್ಶನ್&zwnj; ಅವರ ಪಾತ್ರ ಇಂದಿಗೂ ಅಭಿಮಾನಿಗಳಲ್ಲಿ ಜನಪ್ರಿಯವಾಗಿದೆ. ದರ್ಶನ್&zwnj; ಅಭಿನಯದ ʻಅಯ್ಯʼ ಸಿನಿಮಾವನ್ನೂ ಓಂ ಪ್ರಕಾಶ್&zwnj; ರಾವ್&zwnj; ನಿರ್ದೇಶಿಸಿದ್ದಾರೆ. ಆ್ಯಕ್ಷನ್&zwnj; ಪ್ರಧಾನ ಕಥೆಯ ಈ ಚಿತ್ರವೂ ಅವರ ನಿರ್ದೇಶನದ ಪ್ರಮುಖ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಓಂ ಪ್ರಕಾಶ್&zwnj; ರಾವ್&zwnj; ವಿರುದ್ಧ ₹3.85 ಕೋಟಿ ವಂಚನೆ ಆರೋಪವೂ ಕೇಳಿಬಂದಿತ್ತು. ʻಫೀನಿಕ್ಸ್&zwnj;ʼ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಅವರ ವಿರುದ್ಧ ದಾಖಲಾಗಿತ್ತು. ದೂರಿನ ಪ್ರಕಾರ, ಓಂ ಪ್ರಕಾಶ್&zwnj; ರಾವ್&zwnj; ಮತ್ತು ಅವರ ತಂಡವು ವಾಸುದೇವರೆಡ್ಡಿ, ಭಾಸ್ಕರ್&zwnj; ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವವರಿಂದ ಹಂತ ಹಂತವಾಗಿ ಒಟ್ಟು ₹3 ಕೋಟಿ 85 ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಸಿನಿಮಾ ನಿರ್ಮಾಣದ ಉದ್ದೇಶಕ್ಕಾಗಿ ಹಣ ಪಡೆದಿದ್ದರೂ, ಸಮಯ ಕಳೆದಂತೆ ಸಿನಿಮಾದ ಯಾವುದೇ ಮಾಹಿತಿ ಸಿಗಲಿಲ್ಲ ಹಾಗೂ ನೀಡಿದ್ದ ಹಣವೂ ವಾಪಸ್&zwnj; ಬಂದಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಸಿನಿಮಾ ನಿರ್ಮಾಣದ ನೆಪದಲ್ಲಿ ಪಡೆದ ಹಣವನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚನೆ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು.&lt;/p&gt;&lt;p&gt;ಸದ್ಯ ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 13ರ ಮೂಲಕ ಓಂ ಪ್ರಕಾಶ್&zwnj; ರಾವ್&zwnj; ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ದೊಡ್ಮನೆಯಲ್ಲಿ ಅವರ ಆಟ, ಮಾತು ಹಾಗೂ ವ್ಯಕ್ತಿತ್ವ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/bigg-boss-kannada-13-kiccha-sudeep-introduces-om-prakash-rao-wife-suh-a0ycyvf"/>
        </item>
        <item>
            <title><![CDATA[Bigg Boss Kannada: ಕಾವ್ಯಾ ಗೌಡ  ಪ್ರಶ್ನೆಯಿಂದ ಸುದೀಪ್ ರಿವೀಲ್ ಮಾಡಿದ್ರು ರಹಸ್ಯ]]></title>
            <link>https://kannada.asianetnews.com/gallery/tv-talk/bigg-boss-kannada-season-13-update-sudeep-revealed-the-secret-after-kavya-gowda-asked-him-a-question-mrq-6g4k32r</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-season-13-update-sudeep-revealed-the-secret-after-kavya-gowda-asked-him-a-question-mrq-6g4k32r</guid>
            <pubDate>Mon, 07 Sep 2026 11:50:23 +0530</pubDate>
            <description><![CDATA[&lt;p&gt;Kavya Gowda: ಬಿಗ್&zwnj;ಬಾಸ್ ಕನ್ನಡ ಸೀಸನ್ 13 ರ ವೇದಿಕೆಯಲ್ಲಿ ಸ್ಪರ್ಧಿ ಕಾವ್ಯಾ ಗೌಡ ಅವರು ಶೋಕೇಸ್&zwnj;ನಲ್ಲಿದ್ದ ವಸ್ತುಗಳ ಬಗ್ಗೆ ಪ್ರಶ್ನಿಸಿದಾಗ, ನಿರೂಪಕ ಸುದೀಪ್ ರಹಸ್ಯವೊಂದನ್ನು ಬಹಿರಂಗಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1x802603d2h7a5hwyyf6pvq,imgname-kavya-gowda-1788761606336.jpg" type="image/jpeg" height="390" width="690"/>
            <content:encoded><![CDATA[&lt;p&gt;Kavya Gowda: ಬಿಗ್&zwnj;ಬಾಸ್ ಕನ್ನಡ ಸೀಸನ್ 13 ರ ವೇದಿಕೆಯಲ್ಲಿ ಸ್ಪರ್ಧಿ ಕಾವ್ಯಾ ಗೌಡ ಅವರು ಶೋಕೇಸ್&zwnj;ನಲ್ಲಿದ್ದ ವಸ್ತುಗಳ ಬಗ್ಗೆ ಪ್ರಶ್ನಿಸಿದಾಗ, ನಿರೂಪಕ ಸುದೀಪ್ ರಹಸ್ಯವೊಂದನ್ನು ಬಹಿರಂಗಪಡಿಸಿದರು.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಕನ್ನಡ ಸೀಸನ್ 13 ಅದ್ಧೂರಿಯಾಗಿ ಆರಂಭವಾಗಿದ್ದು, ಈ ಬಾರಿ ಒಟ್ಟು 16 ಸ್ಪರ್ಧಿಗಳು ಮನೆಯಲ್ಲಿದ್ದಾರೆ. 16 ಸ್ಪರ್ಧಿಗಳ ಪೈಕಿ ನಾಲ್ವರು ಕಾಮನ್ ಮ್ಯಾನ್&zwnj;ಗಳಾಗಿದ್ದಾರೆ. ಸುದೀಪ್ ಅವರೇ ಎಲ್ಲಾ ಸ್ಪರ್ಧಿಗಳಿಗೆ ಬಿಗ್&zwnj;ಬಾಸ್ ಮನೆಯ ಬೋರ್ಡಿಂಗ್ ಪಾಸ್ ನೀಡಿ ಶುಭ ಹಾರೈಸಿ ಕಳುಹಿಸಿದ್ದಾರೆ. ಏಳನೇ ಸ್ಪರ್ಧಿಯಾಗಿ ಬಂದ ಕಾವ್ಯಾ ಗೌಡ ಅವರ ಪ್ರಶ್ನೆಯಿಂದ ರಹಸ್ಯವೊಂದು ರಿವೀಲ್ ಆಗಿದೆ.&lt;/p&gt;&lt;img&gt;&lt;p&gt;ಹೌದು, ಈ ಬಾರಿ ಸುದೀಪ್ ಅವರು ನಿರೂಪಣೆ ಮಾಡುವ ವೇದಿಕೆಯನ್ನು ಸಹ ಅದ್ಧೂರಿಯಾಗಿ ಡಿಸೈನ್ ಮಾಡಲಾಗಿದೆ. ವೇದಿಕೆ ಬಲಭಾಗದ ಗೋಡೆ ಮೇಲೆ ಬ್ಯಾಟ್ ಸೇರಿದಂತೆ ಕೆಲ ವಸ್ತುಗಳನ್ನು ಜೋಡಿಸಲಾಗಿತ್ತು. ಈ ಶೋಕೇಸ್ ಗಮನಿಸಿದ ಕಾವ್ಯಾ ಗೌಡ, ಅಲ್ಲಿರೋದು ಏನು? ಯಾಕೆ ಈ ವಸ್ತುಗಳನ್ನು ಅಲ್ಲಿ ಜೋಡಿಸಲಾಗಿದೆ ಎಂದು ನೇರವಾಗಿಯೇ ಸುದೀಪ್ ಅವರನ್ನು ಪ್ರಶ್ನೆ ಮಾಡಿದರು.&lt;/p&gt;&lt;img&gt;&lt;p&gt;ಶೋಕೇಸ್&zwnj;ನಲ್ಲಿ ಜೋಡಿಸಲಾಗಿರುವ ಎಲ್ಲಾ ವಸ್ತುಗಳು ನನಗೆ ಸೇರಿದ್ದು. ವಾರದ ಅಂತ್ಯದಲ್ಲಿ ಯಾವ ಸ್ಪರ್ಧಿ ಕಿಚ್ಚನ ಚಪ್ಪಾಳೆ ಪಡೆಯುತ್ತಾರೆಯೋ ಅಲ್ಲಿರುವ ಒಂದು ವಸ್ತು ಅವರಿಗೆ ಸೇರುತ್ತದೆ. ಮುಂದಿನ ದಿನಗಳಲ್ಲಿ ಅಲ್ಲಿರುವ ವಸ್ತುಗಳ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಸುದೀಪ್ ಹೇಳಿದರು.&lt;/p&gt;&lt;img&gt;&lt;p&gt;ಸೀಸನ್ 13ರ ಮೊದಲ ಕಿಚ್ಚನ ಚಪ್ಪಾಳೆ ಬಿಗ್&zwnj;ಬಾಸ್ ಪಡೆದುಕೊಂಡಿದ್ದಾರೆ. ಜಗತ್ತಿನ ಏಳು ಅದ್ಭುತಗಳು ಈ ಬಾರಿಯ ಬಿಗ್&zwnj;ಬಾಸ್ ಮನೆಯಲ್ಲಿವೆ. ಹೊಸದಾಗಿ ನಿರ್ಮಾಣಗೊಂಡಿರುವ ಮನೆಯನ್ನು ನೋಡಿದ ಸುದೀಪ್, ಸಂತೋಷದಿಂದ ಬಿಗ್&zwnj;ಬಾಸ್ ಅವರಿಗೆ ಸೀಸನ್ 13ರ ಮೊದಲ ಕಿಚ್ಚನ ಚಪ್ಪಾಳೆಯನ್ನು ನೀಡಿದರು.&lt;/p&gt;&lt;img&gt;&lt;p&gt;ಜಗದೀಶ್, ಸೌಂದರ್ಯಾ ಶೆಟ್ಟಿ, ಅವಿನಾಶ್ ಶತಮರ್ಷನ, ಪ್ರಥಮಾ ಪ್ರಸಾದ್, ಗಗನ್ ಚಿನ್ನಪ್ಪ, ಸಂಗೀತಾ ಭಟ್, ಕಾವ್ಯಾ ಗೌಡ, ಓಂ ಪ್ರಕಾಶ್ ರಾವ್, ಕಿರಣ್ ಶಾಸ್ತ್ರಿ, ಆಸಿಯಾ ಫಿರ್ದೋಸ್,ಲಿಖಿತ್ ಗೋಂದಿ, ತಾಂಡವ್ ರಾಮ್, ವೈಷ್ಣವಿ ಕೌಂಡಿನ್ಯ, ಧನುಷ್, ಯಶಸ್ ಕೃಷ್ಣ ಮತ್ತು ಮಾಡರ್ನ್ ಕವಿ ಮಂಜ&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-season-13-update-sudeep-revealed-the-secret-after-kavya-gowda-asked-him-a-question-mrq-6g4k32r"/>
        </item>
        <item>
            <title><![CDATA[Bigg Boss Kannada 13 ಆರಂಭ; ಎಲ್ಲಾ 16 ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ ನೊಡಿ]]></title>
            <link>https://kannada.asianetnews.com/gallery/tv-talk/bigg-boss-kannada-season-13-here-is-the-complete-list-of-all-16-contestants-colors-channel-kichcha-sudeep-mrq-mchy57b</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-season-13-here-is-the-complete-list-of-all-16-contestants-colors-channel-kichcha-sudeep-mrq-mchy57b</guid>
            <pubDate>Mon, 07 Sep 2026 11:12:10 +0530</pubDate>
            <description><![CDATA[&lt;p&gt;ಬಿಗ್&zwnj;ಬಾಸ್ ಕನ್ನಡ ಸೀಸನ್ 13 ಆರಂಭವಾಗಿದ್ದು, ಒಟ್ಟು 16 ಸ್ಪರ್ಧಿಗಳು ದೊಡ್ಮನೆಯನ್ನು ಸೇರಿದ್ದಾರೆ. ಇವರಲ್ಲಿ ನಾಲ್ವರು ಕಾಮನ್ ಮ್ಯಾನ್ ಆಗಿದ್ದ, 13 ಸೆಲಿಬ್ರಿಟಿಗಳಿದ್ದಾರೆ. ಇವರೆಲ್ಲರ ಮಾಹಿತಿ ಇಲ್ಲಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1x66jx7cy498wqg9fmnd03x,imgname-bigg-boss-1788759722919.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ ಕನ್ನಡ ಸೀಸನ್ 13 ಆರಂಭವಾಗಿದ್ದು, ಒಟ್ಟು 16 ಸ್ಪರ್ಧಿಗಳು ದೊಡ್ಮನೆಯನ್ನು ಸೇರಿದ್ದಾರೆ. ಇವರಲ್ಲಿ ನಾಲ್ವರು ಕಾಮನ್ ಮ್ಯಾನ್ ಆಗಿದ್ದ, 13 ಸೆಲಿಬ್ರಿಟಿಗಳಿದ್ದಾರೆ. ಇವರೆಲ್ಲರ ಮಾಹಿತಿ ಇಲ್ಲಿದೆ&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಕನ್ನಡ ಸೀಸನ್ 13 ಆರಂಭವಾಗಿದ್ದು, ಒಟ್ಟು 17 ಸ್ಪರ್ಧಿಗಳು ದೊಡ್ಮನೆಯನ್ನು ಸೇರಿದ್ದಾರೆ. ಇವರಲ್ಲಿ ನಾಲ್ವರು ಕಾಮನ್ ಮ್ಯಾನ್ ಆಗಿದ್ದ, 13 ಸೆಲಿಬ್ರಿಟಿಗಳಿದ್ದಾರೆ. ಇವರೆಲ್ಲರ ಮಾಹಿತಿ ಇಲ್ಲಿದೆ&lt;/p&gt;&lt;img&gt;&lt;p&gt;ಲವ್ ಮಾಕ್ಟೇಲ್-3 ಸಿನಿಮಾದಲ್ಲಿ ಜಗ್ಗು ಮಮ್ಮಿಯಾಗಿ ಕಾಣಿಸಿಕೊಂಡಿದ್ದ ನಟ ಜಗದೀಶ್ ಬಿಗ್&zwnj;ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಮಂಡ್ಯ ಜಿಲ್ಲೆಯ ಶೂಟಿಂಗ್ ಮಹದೇವಪುರ ನಿವಾಸಿಯಾಗಿರುವ ಜಗದೀಶ್, ಮೈಸೂರು ಡೈರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮನೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;ಲವ್&zwnj; ಮಾಕ್ಟೇಲ್ ಸಿನಿಮಾ ಮೂಲಕ ಜನಪ್ರಿಯತೆ ಪಡೆದುಕೊಂಡ ಜಗದೀಶ್ ಅವರಿಗೆ ಮೂರ್ನಾಲ್ಕು ವರ್ಷಗಳಲ್ಲಿ 30-40 ಸಿನಿಮಾ ಮಾಡಿ, ಆಸ್ಕರ್ ಮತ್ತು ನ್ಯಾಷನಲ್ ಅವಾರ್ಡ್ ತೆಗೆದುಕೊಂಡು ಹಾಲಿವುಡ್&zwnj;ಗೆ ಹೋಗೋದಂತೆ. ಚಿನ್ನ ಅಡವಿಟ್ಟು ಸಾಲ ಪಡೆದುಕೊಂಡಿದ್ದೇನೆ. ಇಲ್ಲಿಂದ ಹಣ ಬಂದ್ರೆ ಒಡವೆಗಳನ್ನು ಬಿಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸ್ಟೈಲಿಶ್ &amp;amp; ಕಾನ್ಫಿಡೆಂಟ್ ಹುಡುಗಿ ಮಸ್ಕತ್&zwnj;ನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಬೆಳೆದಿರುವ ಸೌಂದರ್ಯ ಶೆಟ್ಟಿ, ಸದ್ಯ ಮುಂಬೈನಲ್ಲಿ ವಾಸವಾಗಿದ್ದಾರೆ. ಹಿಂದಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಸೌಂದರ್ಯ ಶೆಟ್ಟಿ, ತವರೂರಿನಲ್ಲಿರಬೇಕು ಎಂದು ಬಯಸಿ ಬಿಗ್&zwnj;ಬಾಸ್&zwnj;ಗೆ ಬಂದಿರೋದಾಗಿ ಹೇಳಿದ್ದಾರೆ. ಕನ್ನಡ ಅಸ್ಪಷ್ಟವಾಗಿ ಮಾತನಾಡುವ ಕರಾವಳಿ ಚೆಲುವೆ ಸೌಂದರ್ಯ ಶೆಟ್ಟಿ ಆಟ ಹೇಗಿರಲಿದೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.&lt;/p&gt;&lt;img&gt;&lt;p&gt;ನಿರಂತರ ಹುಡುಕಾಟದಲ್ಲಿರುವ ವ್ಯಕ್ತಿ. ಹಿಂದೆ ಆಗಿರೋದು, ಮುಂದೆ ಆಗೋದನ್ನ ಯೋಚಿಸದೇ ಈ ಕ್ಷಣವನ್ನು ಆನಂದಿಸುವ ವ್ಯಕ್ತಿ. ನಾನು ಸೋತಿರುವನು, ಗೆಲುವ ಬೇಕಾಗಿ ಬಿಗ್&zwnj;ಬಾಸ್&zwnj;ಗೆ ಬಂದಿದ್ದೇನೆ ಎಂದು ಅವಿನಾಶ್ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ.&lt;/p&gt;&lt;p&gt;ವಿಭಿನ್ನವಾಗಿ ಕಾಣಿಸಿಕೊಳ್ಳುವ ಅವಿನಾಶ್, ಬಿಗ್&zwnj;ಬಾಸ್ ಮನೆಯಲ್ಲಿ ಹೇಗಿರ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ. ಬಿಗ್&zwnj;ಬಾಸ್ ಟ್ರೋಫಿ ಗೆಲ್ಲುತ್ತೇನೆ ಇಲ್ಲವೋ ಗೊತ್ತಿಲ್ಲ. ಆದ್ರೆ ನನ್ನ ಜೀವನ ಗೆಲ್ಲಲು ಇಲ್ಲಿಗೆ ಬಂದಿದ್ದೇನೆ ಎಂದು ಅವಿನಾಶ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡದ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ, ಕಿರುತೆರೆ ಕಲಾವಿದೆ, ಡ್ಯಾನ್ಸರ್ ಪ್ರಥಮಾ ಪ್ರಸಾದ್ 4ನೇ ಸ್ಪರ್ಧಿಯಾಗಿ ಬಿಗ್&zwnj;ಬಾಸ್ ಮನೆ ಪ್ರವೇಶಿಸಿದ್ದಾರೆ. ಒಂದು ವರ್ಷದಲ್ಲಿ 50 ಬಾರಿ ಆಡಿಷನ್&zwnj;ನಲ್ಲಿ ರಿಜೆಕ್ಷನ್ ನೋಡಿದ್ದೇನೆ. ಅಮ್ಮನೇ ನನ್ನ ಬಿಗ್ ಸ್ಟ್ರೆಂಥ್. ಒಂದು ವರ್ಷದ ಬಳಿಕ ಬಿಗ್&zwnj;ಬಾಸ್ ಅವಕಾಶ ಸಿಕ್ಕಿದೆ ಎಂದು ಪ್ರಥಮಾ ಹೇಳುತ್ತಾರೆ. ಮಗಳಿಗೆ ಒಳ್ಳೆಯ ಡಬ್ಬಿಂಗ್ ಆರ್ಟಿಸ್ಟ್ ಎಂದು ನಟಿ ವಿನಯಾ ಪ್ರಸಾದ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಮಂಗಳಗೌರಿ ಮದುವೆ, ಸೀತಾರಾಮಾ ಸೀರಿಯಲ್&zwnj;ನ ನಟ ಗಗನ್ ಚಿನ್ನಪ್ಪ ಬಿಗ್&zwnj;ಬಾಸ್ ಮನೆಗೆ 5ನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ. ಸೂಪರ್ ಹಿಟ್ ಸೀರಿಯಲ್&zwnj;ಗಳ ಮೂಲಕ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಗಗನ್ ಚಿನ್ನಪ್ಪ, ಬಿಗ್&zwnj;ಬಾಸ್ ಸ್ಪರ್ಧೆಯ ಬಿಸಿಯನ್ನು ಹೆಚ್ಚು ಮಾಡಿದ್ದಾರೆ. ಕೊಡಗು ಮೂಲದ ಗಗನ್ ಚಿನ್ನಪ್ಪ, ಆಟೋಮೊಬೈಲ್ ಇಂಡಸ್ಟ್ರಿಯಲ್ಲಿಯೂ ಕೆಲಸ ಮಾಡಿದ್ದಾರೆ. ಅಲೆಗ್ಸಾಂಡರ್ ಎಂಬ ಸಿನಿಮಾದಲ್ಲಿಯೂ ನಾಯಕ ನಟನಾಗಿ ಗಗನ್ ಚಿನ್ನಪ್ಪ ನಟಿಸಿದ್ದಾರೆ. ಈ ಹಿಂದೆ ಮಿನಿ ಸೀಸನ್&zwnj;ನಲ್ಲಿಯೂ ಗಗನ್ ಕಾಣಿಸಿಕೊಂಡಿದ್ದರು.&lt;/p&gt;&lt;img&gt;&lt;p&gt;ಸ್ಯಾಂಡಲ್&zwnj;ವುಡ್ ನಟಿ ಸಂಗೀತಾ ಭಟ್ ಗ್ರ್ಯಾಂಡ್ ಆಗಿ ಬಿಗ್&zwnj;ಬಾಸ್ ಮನೆಗೆ 6ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರೀತಿ ಗೀತಿ ಇತ್ಯಾದಿ, ಎರಡನೇ ಸಲ, ದಯವಿಟ್ಟು ಗಮನಿಸಿ, ಕಿಸ್ಮತ್, ಅಂಕುಶ, ಕಪಟ ನಟಕ ಪಾತ್ರಧಾರಿ ಸೇರಿದಂತೆ ಕನ್ನಡ, ತಮಿಳು ಮತ್ತು ತೆಲಗು ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಸಂಗೀತಾ ಭಟ್ ಅವರ ಪತಿ ಸುದರ್ಶನ್ ಸಹ ಕಲಾವಿದರಾಗಿದ್ದು, ಭಾಗ್ಯಲಕ್ಷ್ಮೀ ಸೀರಿಯಲ್&zwnj;ನ ತಾಂಡವ್ ಆಗಿ ಗುರುತಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಭಾಗ್ಯಲಕ್ಷ್ಮೀ ಧಾರಾವಾಹಿಯ ಶ್ರೇಷ್ಠಾ ಖ್ಯಾತಿಯ ಕಾವ್ಯಾ ಗೌಡ ಬಿಗ್&zwnj;ಬಾಸ್ ಮನೆಗೆ ಏಳನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ನಟ ಸುದರ್ಶನ್ ಅವರನ್ನು ನೋಡುತ್ತಿದ್ದಂತೆ ನೀನು ಬಂದಿದೆಯಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ಶ್ರೇಷ್ಠಾ ರೀತಿಯಲ್ಲಿರುತ್ತೇನೆ ಅಂತ ಬಹುತೇಕರು ತಿಳಿದುಕೊಳ್ಳುತ್ತಾರೆ. ಆದ್ರೆ ಕಾವ್ಯಾ ತುಂಬಾನೇ ಡಿಫರೆಂಟ್. ನನಗೆ ತಾಳ್ಮೆ ಕೊಂಚ ಕಡಿಮೆ. ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ನಾನು ಸುಮ್ನೆ ಇರಲ್ಲ ಎಂದು ಕಾವ್ಯಾ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ, ನಟ, ಓಂ ಪ್ರಕಾಶ್ ರಾವ್ ಬಿಗ್&zwnj;ಬಾಸ್ ಮನೆಗೆ ಎಂಟನೇ ಸ್ಪರ್ಧಿಯಾಗಿ ಬಂದಿದ್ದಾರೆ. ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯ ಕ್ವಾಟ್ಲೆ ಕಿಚನ್ ಶೋನಲ್ಲಿ ಓಂ ಪ್ರಕಾಶ್ ರಾವ್ ಕಾಣಿಸಿಕೊಂಡಿದ್ದರು. ಇದೀಗ ಹಿರಿಯರ ಕೋಟಾದಲ್ಲಿ ಓಂ ಪ್ರಕಾಶ್ ರಾವ್ ಕಾಣಿಸಿಕೊಳ್ಳೋ ಸಾಧ್ಯತೆಗಳಿವೆ. ಹುಚ್ಚ, ಪಾರ್ಥ, ಕಲಾಸಿಪಾಳ್ಯ, ಸಾಹುಕಾರ, ತುಂಟ, ಹುಬ್ಬಳ್ಳಿ, ಯೋಧ, ಮಂಡ್ಯ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಅಗ್ನಿಪರೀಕ್ಷೆ ಮೂಲಕ ಬಂದಿರುವ ಕಿರಣ್ ಶಾಸ್ತ್ರಿ ದೊಡ್ಮನೆಗೆ 9ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ಸುದೀಪ್ ಅವರನ್ನು ನೋಡುತ್ತಿದ್ದಂತೆ ಕೊಂಚ ನರ್ವಸ್ ಆದರು. ಬಿಗ್&zwnj;ಬಾಸ್ ಅಗ್ನಿಪರೀಕ್ಷೆಯಲ್ಲಿ ತಮ್ಮ ಆಟ ಮತ್ತು ಮಾತುಗಳಿಂದಲೇ ಕಿರಣ್ ಶಾಸ್ತ್ರಿ ಎಲ್ಲರ ಗಮನ ಸೆಳೆದರು. ಉತ್ತರ ಕರ್ನಾಟಕದ ಪ್ರತಿಭೆಯಾಗಿರೋ ಕಿರಣ್&zwnj; ಶಾಸ್ತ್ರಿ ಮನೆಯಲ್ಲಿ ಹೇಗಿರ್ತಾರೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ. ಈ ಹಿಂದಿನ ಸೀಸನ್&zwnj;ನಗಳಲ್ಲಿ ಮಾಳು ನಿಪನಾಳ, ಮಲ್ಲಮ್ಮ, ಹನುಮಂತ ಕಾಣಿಸಿಕೊಂಡಿದ್ದರು.&lt;/p&gt;&lt;img&gt;&lt;p&gt;ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಮುಗಿಯುತ್ತಿದ್ದಂತೆ ನಟಿ ಆಸಿಯಾ ಫಿರ್ದೋಸ್, ಬಿಗ್&zwnj;ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಬಂದಿದ್ದಾರೆ. ಆಸಿಯಾ ಅವರಿಗೆ ಶ್ರಾವಣಿ ಪಾತ್ರ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದು ಕೊಡ್ತು. ಮೊದಲ ಬಾರಿಗೆ ಕನ್ಯಾಕುಮಾರಿ ಧಾರಾವಾಹಿಗೆ ನಾಯಕಿಯಾಗಿ ಆಸಿಯಾ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಚಿಕ್ಕವಳಿದ್ದಾಗಿಂದಲೂ ದೊಡ್ಡ ದೊಡ್ಡ ಕನಸುಗಳು. ಆ ಕನಸುಗಳು ನನಸು ಮಾಡಿಕೊಳ್ಳುತ್ತಾ ಸಾಗಿರುವ ಜರ್ನಿ ಬಿಗ್&zwnj;ಬಾಸ್ ವರೆಗೂ ತಲುಪಿದೆ ಎಂದು ಆಸಿಯಾ ಫಿರ್ದೋಸ್ ಹೇಳಿಕೊಂಡಿದ್ದಾರೆ. ಇದೇ ವೇಳೆ ಸಾಂಪ್ರದಾಯಿಕ ಕುಟುಂಬದಿಂದ ಇಲ್ಲಿವರೆಗಿನ ಬಂದ ದಾರಿ ನೆನೆದು ಆಸಿಯಾ ಭಾವುಕರಾಗಿ ಕಣ್ಣೀರು ಹಾಕಿದರು.&lt;/p&gt;&lt;img&gt;&lt;p&gt;ಅಗ್ನಿಪರೀಕ್ಷೆಯ ಮತ್ತೋರ್ವ ಸ್ಪರ್ಧಿಯಾಗಿದ್ದ ಲಿಖಿತ್ ಗೋಂದಿ, ಬಿಗ್&zwnj;ಬಾಸ್ ಮನೆಗೆ 11ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್&zwnj;ಬಾಸ್ ಅಗ್ನಿಪರೀಕ್ಷೆಗೆ ತಂದೆಯೊಂದಿಗೆ ಆಗಮಿಸಿದ್ದರು. ಅಪ್ಪ ಮತ್ತು ಮಗನ ಜೋಡಿ ಎಲ್ಲರ ಗಮನ ಸೆಳೆದಿದ್ದರು. ತಂದೆ-ಮಗ ಜೊತೆಯಾಗಿ ಬರಬಹುದು ಎಂಬ ನಿರೀಕ್ಷೆ ಹೆಚ್ಚಿತ್ತು. ಅದು ಸುಳ್ಳು ಆಗಿದೆ. ಇದಕ್ಕೂ ಮೊದಲು ಕಿರಣ್ ಶಾಸ್ತ್ರಿ ಆಗಮಿಸಿದ್ದರು.&lt;/p&gt;&lt;img&gt;&lt;p&gt;ಕುಸ್ತಿಪಟು, ಕಿರುತೆರೆ ನಟ ಹಾಸನ ಮೂಲದ ತಾಂಡವ್ ರಾಮ್ ಬಿಗ್&zwnj;ಬಾಸ್ ಮನೆಗೆ 12ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡದ ಜೋಡಿಹಕ್ಕಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದುಕೊಂಡ ತಾಂಡವ್ ರಾಮ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಪರಾಧ ಪ್ರಕರಣವೊಂದರಲ್ಲಿ ತಾಂಡವ್ ರಾಮ್ ಹೆಸರು ಕೇಳಿ ಬಂದಿತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವೆ ಎಂದು ತಾಂಡವ್ ರಾಮ್ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡದ ಪ್ರೇಮಕಾವ್ಯಾ ಸೀರಿಯಲ್&zwnj; ಖ್ಯಾತಿಯ ನಟಿ ವೈಷ್ಣವಿ ವಿ ಕೌಂಡಿನ್ಯ ಅವರು ಬಿಗ್&zwnj;ಬಾಸ್ ಮನೆಗೆ 13ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಪ್ರೇಮಕಾವ್ಯ ಸೀರಿಯಲ್ ಮುಕ್ತಾಯಗೊಂಡಿತ್ತು. ಈ ಹಿಂದೆ ಡೀಪ್ ನೆಕ್ ಡ್ರೆಸ್ ಧರಿಸಿದ್ದರಿಂದ ವೈಷ್ಣವಿ ಅವರನ್ನು ಅತಿಯಾಗಿ ಟ್ರೋಲ್ ಮಾಡಲಾಗಿತ್ತು. ಈ ಸಂಬಂಧ ಟ್ರೋಲರ್ಸ್ ವಿರುದ್ದ ವೈಷ್ಣವಿ ಧ್ವನಿ ಎತ್ತಿ, ಎಚ್ಚರಿಕೆ ನೀಡಿದ್ದರು.&lt;/p&gt;&lt;img&gt;&lt;p&gt;ಅಗ್ನಿಪರೀಕ್ಷೆಯಿಂದ ಮೂರನೇ ಸ್ಪರ್ಧಿಯಾಗಿ ಧನುಷ್ ಅವರು ಬಿಗ್&zwnj;ಬಾಸ್ ಮನೆಗೆ 14ನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಸುದೀಪ್ ಅವರ ಮುಂದೆ ಬಂದು ನಿಲ್ಲುತ್ತೇನೆ ಎಂದು ನಂಬಿಕೆ ಇತ್ತು. ಇಂದು ಬಿಗ್&zwnj;ಬಾಸ್ ವೇದಿಕೆ ಮೇಲಿದ್ದೇನೆ. ಗೆಲ್ಲುತ್ತೇನೆ ಎಂಬ ನಂಬಿಕೆಯಿಂದ ಬಿಗ್&zwnj;ಬಾಸ್&zwnj;ಗೆ ಬಂದಿರೋದಾಗಿ ಧನುಷ್ ಹೇಳಿಕೊಂಡಿದ್ದಾರೆ. ಇದೇ ವೇಳೆ ತಾವು ಸುದೀಪ್ ಅವರ ದೊಡ್ಡ ಅಭಿಮಾನಿ ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಪವಿತ್ರ ಬಂಧನ ಸೀರಿಯಲ್ ಆರಂಭದಲ್ಲಿದ್ದ ತಿಲಕ್ ಆಗಿ ಕಾಣಿಸಿಕೊಂಡಿದ್ದ ನಟ ಯಶಸ್ ಕೃಷ್ಣ ಅವರು ಬಿಗ್&zwnj;ಬಾಸ್ ಮನೆಗೆ 15ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ವೇದಿಕೆಯಿಂದ ಮತ್ತಷ್ಟು ಅವಕಾಶಗಳು ಸಿಗುತ್ತೆ. ನಾನು ನಾನಾಗಿಯೇ ಇರುತ್ತೇನೆ. ಜನರು ಇಷ್ಟಪಡೋವರೆಗೂ ಬಿಗ್&zwnj;ಬಾಸ್ ಮನೆಯಲ್ಲಿರುತ್ತೇನೆ ಎಂದು ಯಶಸ್ ಕೃಷ್ಣ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಅಗ್ನಿಪರೀಕ್ಷೆ ತೀರ್ಪುಗಾರರಿಗೆ ಓರ್ವ ಸ್ಪರ್ಧಿಯನ್ನು ದೊಡ್ಮನೆಗೆ ಕಳುಹಿಸುವ ಅವಕಾಶ ನೀಡಲಾಗಿತ್ತು. ಶೃತಿ, ವಿನಯ್ ಗೌಡ ಮತ್ತು ಚಂದನ್ ಶೆಟ್ಟಿ ಆಯ್ಕೆಯನುಸಾರವಾಗಿ ಬಿಗ್&zwnj;ಬಾಸ್ ಮನೆಗೆ 16ನೇ ಸ್ಪರ್ಧಿಯಾಗಿ ಮಾಡರ್ನ್ ಮಹಾಕವಿ ಮಂಜ ಎಂಟ್ರಿ ಕೊಟ್ಟಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-season-13-here-is-the-complete-list-of-all-16-contestants-colors-channel-kichcha-sudeep-mrq-mchy57b"/>
        </item>
        <item>
            <title><![CDATA[ಅಪ್ಪನ ಮುಖವನ್ನೇ ನೋಡದೆ, ಅಮ್ಮ-ಅಜ್ಜಿ ಜೊತೆ ಬೆಳೆದ ನಟಿ ವೈಷ್ಣವಿ; 16ನೇ ವಯಸ್ಸಿಗೇ ನಾಯಕಿ, ಈಗ Bigg boss ಮನೆಯಲ್ಲಿ]]></title>
            <link>https://kannada.asianetnews.com/gallery/tv-talk/bigg-boss-kannada-13-contestant-vaishnavi-koundinya-spoke-about-her-parents-divorce-suh-mdwecge</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-13-contestant-vaishnavi-koundinya-spoke-about-her-parents-divorce-suh-mdwecge</guid>
            <pubDate>Mon, 07 Sep 2026 11:01:15 +0530</pubDate>
            <description><![CDATA[&lt;p&gt;ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಇದೀಗ &lsquo;ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 13&rsquo;ರ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ವೈಷ್ಣವಿ, ಇದೀಗ ತಮ್ಮ ರಿಯಲ್&zwnj; ಲೈಫ್&zwnj; ಕಥೆಯನ್ನು ಬಿಗ್&zwnj;ಬಾಸ್&zwnj; ವೇದಿಕೆಯಲ್ಲಿ ತೆರೆದಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1x4ynvx6b2mhap1bdre8ev0,imgname-bigg-boss-kannada-13-contestant-vaishnavi-koundinya-spoke-about-her-parents-divorce-1788758415229.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಇದೀಗ &lsquo;ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 13&rsquo;ರ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ವೈಷ್ಣವಿ, ಇದೀಗ ತಮ್ಮ ರಿಯಲ್&zwnj; ಲೈಫ್&zwnj; ಕಥೆಯನ್ನು ಬಿಗ್&zwnj;ಬಾಸ್&zwnj; ವೇದಿಕೆಯಲ್ಲಿ ತೆರೆದಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಇದೀಗ &lsquo;ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 13&rsquo;ರ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. &lsquo;ಮಿಥುನ ರಾಶಿ&rsquo;, &lsquo;ಪ್ರೇಮಕಾವ್ಯ&rsquo; ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ವೈಷ್ಣವಿ, ಇದೀಗ ತಮ್ಮ ರಿಯಲ್&zwnj; ಲೈಫ್&zwnj; ಕಥೆಯನ್ನು ಬಿಗ್&zwnj;ಬಾಸ್&zwnj; ವೇದಿಕೆಯಲ್ಲಿ ತೆರೆದಿಟ್ಟಿದ್ದಾರೆ. ಅದರಲ್ಲೂ ತಮ್ಮ ಬಾಲ್ಯದ ಕಹಿ ಅನುಭವಗಳು, ಹೆತ್ತವರ ವಿಚ್ಛೇದನ ಹಾಗೂ ತಂದೆಯ ಮುಖವನ್ನೇ ನೋಡದ ನೋವಿನ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;p&gt;&lt;strong&gt;ಅಪ್ಪ-ಅಮ್ಮನ ಡಿವೋರ್ಸ್&zwnj;... ಅಪ್ಪನ ಮುಖವನ್ನೇ ನೋಡಿಲ್ಲ&lt;/strong&gt;&lt;/p&gt;&lt;p&gt;ಬಿಗ್&zwnj;ಬಾಸ್&zwnj; ವೇದಿಕೆಯಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ವೈಷ್ಣವಿ, ತಾವು ತಂದೆ-ತಾಯಿಯ ಏಕೈಕ ಮಗಳು ಎಂದು ಹೇಳಿದ್ದಾರೆ. ತಮ್ಮ ಮನೆಯಲ್ಲಿ ತಾಯಿ, ಅಜ್ಜಿ ಮತ್ತು ತಾವು ಮಾತ್ರ ಇದ್ದಿದ್ದು, ತಂದೆ-ತಾಯಿ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ನಾನು ಇದುವರೆಗೆ ನನ್ನ ತಂದೆಯ ಮುಖವನ್ನೂ ನೋಡಿಲ್ಲ ಎಂದು ವೈಷ್ಣವಿ ಹೇಳಿಕೊಂಡಿದ್ದು, ಅವರ ಮಾತುಗಳು ಬಿಗ್&zwnj;ಬಾಸ್&zwnj; ವೇದಿಕೆಯಲ್ಲಿ ಭಾವುಕ ಕ್ಷಣಕ್ಕೆ ಕಾರಣವಾಗಿವೆ. ಚಿಕ್ಕ ವಯಸ್ಸಿನಿಂದಲೇ ಸ್ವಂತ ಕಾಲಿನ ಮೇಲೆ ನಿಲ್ಲಬೇಕು, ಯಾರ ಮುಂದೆಯೂ ಕೈಚಾಚಬಾರದು ಎಂಬ ದೃಢ ನಿರ್ಧಾರ ಮಾಡಿಕೊಂಡು ಬೆಳೆದಿದ್ದಾಗಿ ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;16ನೇ ವಯಸ್ಸಿಗೇ ನಾಯಕಿಯಾದ ವೈಷ್ಣವಿ&lt;/strong&gt;&lt;/p&gt;&lt;p&gt;ವೈಷ್ಣವಿ ಕೌಂಡಿನ್ಯ ಅವರ ನಟನಾ ಪಯಣವೇ ವಿಶೇಷ. ಕೇವಲ 16ನೇ ವಯಸ್ಸಿನಲ್ಲೇ ಕಿರುತೆರೆಗೆ ಕಾಲಿಟ್ಟ ಅವರು, &lsquo;ಮಿಥುನ ರಾಶಿ&rsquo; ಧಾರಾವಾಹಿಯಲ್ಲಿ &lsquo;ರಾಶಿ&rsquo; ಪಾತ್ರದ ಮೂಲಕ ಮನೆಮಾತಾದರು. ಆಟೋ ಓಡಿಸುವ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಶಿ, ಅಕ್ಕನಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧವಾಗುವ ಪಾತ್ರವಾಗಿತ್ತು. ಈ ಪಾತ್ರವನ್ನು ವೈಷ್ಣವಿ ಅತ್ಯಂತ ಸಹಜವಾಗಿ ನಿರ್ವಹಿಸಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು.&lt;/p&gt;&lt;img&gt;&lt;p&gt;ಇತ್ತೀಚೆಗೆ &lsquo;ಪ್ರೇಮಕಾವ್ಯ&rsquo; ಧಾರಾವಾಹಿಯಲ್ಲಿ ನಟಿಸಿ ಸದ್ದು ಮಾಡುತ್ತಿದ್ದ ವೈಷ್ಣವಿ, ಧಾರಾವಾಹಿ ಮುಗಿದ ಬೆನ್ನಲ್ಲೇ &lsquo;ಬಿಗ್&zwnj;ಬಾಸ್&zwnj; ಕನ್ನಡ ಸೀಸನ್&zwnj; 13&rsquo; ಮನೆಗೆ ಎಂಟ್ರಿ ನೀಡಿದ್ದಾರೆ. ಈ ಹಿಂದೆ &lsquo;ಬಿಗ್&zwnj;ಬಾಸ್&zwnj; ಮಿನಿ ಸೀಸನ್&zwnj;&rsquo;ನಲ್ಲೂ ಭಾಗವಹಿಸಿದ್ದ ವೈಷ್ಣವಿ ತಮ್ಮ ಆಟದ ವೈಖರಿಯಿಂದ ಗಮನ ಸೆಳೆದಿದ್ದರು. ಇದೀಗ ಮತ್ತೊಮ್ಮೆ ದೊಡ್ಮನೆ ಪ್ರವೇಶಿಸಿರುವ ಅವರು, ಈ ಬಾರಿ ತಮ್ಮ ನಿಜವಾದ ವ್ಯಕ್ತಿತ್ವದ ಮೂಲಕ ಪ್ರೇಕ್ಷಕರ ಮನ ಗೆಲ್ಲುವ ಸವಾಲು ಎದುರಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ತಮಿಳು, ಮಲಯಾಳಂ ಕಿರುತೆರೆಯಲ್ಲೂ ನಟಿಸಿದ್ದಾರೆ&lt;/strong&gt;&lt;/p&gt;&lt;p&gt;ವೈಷ್ಣವಿ ಕೌಂಡಿನ್ಯ ಕೇವಲ ಕನ್ನಡ ಕಿರುತೆರೆಗೆ ಸೀಮಿತವಾಗಿಲ್ಲ. ತಮಿಳು ಹಾಗೂ ಮಲಯಾಳಂ ಧಾರಾವಾಹಿಗಳಲ್ಲೂ ನಟಿಸಿರುವ ಅವರು, ಅಲ್ಲಿನ ಕಿರುತೆರೆ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿದ್ದಾರೆ. ನಟನೆ ಮಾತ್ರವಲ್ಲದೆ ಸೈಕಾಲಜಿ ಮತ್ತು ಜರ್ನಲಿಸಂ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರುವ ವೈಷ್ಣವಿ, ಭರತನಾಟ್ಯ ಕಲಾವಿದೆಯೂ ಹೌದು.&lt;/p&gt;&lt;img&gt;&lt;p&gt;ವೈಷ್ಣವಿ ಅವರ ಜೀವನದಲ್ಲಿ ಯಶಸ್ಸಿನ ಜೊತೆಗೆ ಕೆಲವು ಕಹಿ ಅನುಭವಗಳೂ ಇವೆ. ಇತ್ತೀಚೆಗೆ ಈವೆಂಟ್&zwnj;ವೊಂದರಲ್ಲಿ ಅವರು ಧರಿಸಿದ್ದ ಉಡುಪು ಹಾಗೂ ವಿಡಿಯೋ ಚಿತ್ರೀಕರಣದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್&zwnj; ಆಗಿತ್ತು. ತಪ್ಪು ಆಂಗಲ್&zwnj;ನಲ್ಲಿ ವಿಡಿಯೋ ಮಾಡಲಾಗಿತ್ತು ಮತ್ತು ಕಾಮೆಂಟ್&zwnj;ಗಳಲ್ಲಿ ಕೆಟ್ಟ ಪದಗಳನ್ನು ಬಳಸಲಾಗಿತ್ತು ಎಂದು ವೈಷ್ಣವಿ ಬಿಗ್&zwnj;ಬಾಸ್&zwnj; ವೇದಿಕೆಯಲ್ಲಿ ನೋವು ತೋಡಿಕೊಂಡಿದ್ದಾರೆ. ಆ ಘಟನೆ ಬಳಿಕ ಎರಡು ದಿನಗಳ ಕಾಲ ಮನೆಯಿಂದ ಹೊರಗೆ ಬರಲು ಸಾಧ್ಯವಾಗಿರಲಿಲ್ಲ, ಆ ರಾತ್ರಿ ಪೂರ್ತಿ ಅತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಜೀವನದಲ್ಲಿ ಎದುರಾದ ನೋವು, ಟ್ರೋಲ್&zwnj;ಗಳು ಹಾಗೂ ನಿರಂತರ ಓಟದಿಂದಾಗಿ ಮಾನಸಿಕವಾಗಿ ಒಂದು ಬ್ರೇಕ್&zwnj; ಬೇಕಿತ್ತು. ಅದಕ್ಕಾಗಿಯೇ ಬಿಗ್&zwnj;ಬಾಸ್&zwnj; ಮನೆಗೆ ಬಂದಿದ್ದೇನೆ ಎಂದು ವೈಷ್ಣವಿ ಹೇಳಿದ್ದಾರೆ. ಬಾಲ್ಯದಲ್ಲೇ ತಂದೆಯಿಂದ ದೂರವಾಗಿ, ತಾಯಿ-ಅಜ್ಜಿಯ ಜೊತೆ ಬೆಳೆದ ವೈಷ್ಣವಿ, ಕೇವಲ 16ನೇ ವಯಸ್ಸಿಗೆ ನಾಯಕಿಯಾಗಿ, ಕನ್ನಡದ ಜೊತೆಗೆ ತಮಿಳು-ಮಲಯಾಳಂ ಕಿರುತೆರೆಯಲ್ಲೂ ಗುರುತಿಸಿಕೊಂಡು ಇದೀಗ ಬಿಗ್&zwnj;ಬಾಸ್&zwnj; ಅಖಾಡಕ್ಕೆ ಕಾಲಿಟ್ಟಿದ್ದಾರೆ. ಅವರ ಈ ಜೀವನಕಥೆ ಇದೀಗ ಬಿಗ್&zwnj;ಬಾಸ್&zwnj; ಪ್ರೇಕ್ಷಕರಲ್ಲೂ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/bigg-boss-kannada-13-contestant-vaishnavi-koundinya-spoke-about-her-parents-divorce-suh-mdwecge"/>
        </item>
        <item>
            <title><![CDATA['ಆಕ್ಷನ್‌ಗೆ ಪಕ್ಕಾ ರಿಯಾಕ್ಷನ್': ತಾಂಡವ್ ರಾಮ್ ಎಂಟ್ರಿಗೆ ಬಿಗ್‌ ಬಾಸ್ ಮನೆಯಲ್ಲಿ ಶುರುವಾಯ್ತು ಹೊಸ ಆಟ!]]></title>
            <link>https://kannada.asianetnews.com/tv-talk/bigg-boss-kannada-13-jodi-hakki-fame-thandav-ram-enters-the-house-after-a-controversial-chapter-gvd/articleshow-rrge7fb</link>
            <guid isPermaLink="true">https://kannada.asianetnews.com/tv-talk/bigg-boss-kannada-13-jodi-hakki-fame-thandav-ram-enters-the-house-after-a-controversial-chapter-gvd/articleshow-rrge7fb</guid>
            <pubDate>Sun, 06 Sep 2026 23:48:20 +0530</pubDate>
            <description><![CDATA[&lt;p&gt;&lsquo;ಜೋಡಿ ಹಕ್ಕಿ&rsquo; ಧಾರಾವಾಹಿಯ ಪೈಲ್ವಾನ್ ರಾಮು ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ತಾಂಡವ್ ರಾಮ್ ಬಿಗ್&zwnj; ಬಾಸ್ ಕನ್ನಡ ಸೀಸನ್ 13ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹಾಸನದಿಂದ ಬೆಂಗಳೂರಿಗೆ ಬಂದು ಕಿರುತೆರೆ, ಹಿರಿತೆರೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vxpfmsztt2f75sdt1br524,imgname-bvb-1788717252249.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಬಿಗ್&zwnj; ಬಾಸ್ ಕನ್ನಡ&rsquo; ಸೀಸನ್ 13ರ ಮನೆಯಲ್ಲಿ ಒಬ್ಬೊಬ್ಬರಾಗಿ ಸ್ಪರ್ಧಿಗಳು ಎಂಟ್ರಿ ಕೊಡುತ್ತಿದ್ದು, ಇದೀಗ ಕಿರುತೆರೆ-ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟ ತಾಂಡವ್ ರಾಮ್ ಸರದಿ ಬಂದಿದೆ. &lsquo;ಜೋಡಿ ಹಕ್ಕಿ&rsquo; ಧಾರಾವಾಹಿಯ ಪೈಲ್ವಾನ್ ರಾಮು ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ತಾಂಡವ್, ತಮ್ಮ ವೈಯಕ್ತಿಕ ಬದುಕಿನ ಏಳು-ಬೀಳು, ವಿವಾದಗಳು ಹಾಗೂ ಸಿನಿಮಾ ಪಯಣದೊಂದಿಗೆ &lsquo;ದೊಡ್ಮನೆ&rsquo;ಗೆ ಕಾಲಿಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಹಾಸನದಿಂದ ಬೆಂಗಳೂರಿಗೆ... ಬಣ್ಣದ ಲೋಕದ ಕನಸು!&lt;/strong&gt;&lt;/p&gt;&lt;p&gt;ಹಾಸನ ಮೂಲದ ತಾಂಡವೇಶ್ವರ ಅಲಿಯಾಸ್ ತಾಂಡವ್ ರಾಮ್, ಬಣ್ಣದ ಲೋಕದಲ್ಲಿ ಏನಾದರೂ ಸಾಧಿಸಬೇಕು ಎಂಬ ಕನಸಿನೊಂದಿಗೆ ರಾಜಧಾನಿಗೆ ಬಂದವರು. ಕಿರುತೆರೆ, ಹಿರಿತೆರೆ ಮಾತ್ರವಲ್ಲದೆ ನಿರ್ಮಾಣ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿರುವ ಅವರು, ಹಲವು ಸವಾಲುಗಳನ್ನು ಎದುರಿಸಿ ಈ ಹಂತಕ್ಕೆ ಬಂದಿದ್ದಾರೆ. ಬಿಗ್&zwnj; ಬಾಸ್ ವೇದಿಕೆ ಮೇಲೆ ತಮ್ಮ ಬದುಕಿನ ಹಾದಿಯನ್ನು ನೆನಪಿಸಿಕೊಂಡ ತಾಂಡವ್, ಪಿಯುಸಿ ಓದುತ್ತಿದ್ದಾಗಲೇ ತಂದೆಯನ್ನು ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ರಂಗಭೂಮಿಗೆ ಕಾಲಿಟ್ಟ ವಿಚಾರವನ್ನೂ ಆರಂಭದಲ್ಲಿ ಮನೆಯವರಿಗೆ ಹೇಳಿರಲಿಲ್ಲವಂತೆ. ಟಿವಿಯಲ್ಲಿ ತಮ್ಮನ್ನು ನೋಡಿದಾಗಲೇ ಕುಟುಂಬದವರಿಗೆ ತಾವು ಕಲಾವಿದರಾಗುತ್ತಿರುವ ವಿಚಾರ ತಿಳಿದಿತ್ತು ಎಂದು ಹೇಳಿದ್ದಾರೆ. &lsquo;ಬದುಕಿನಲ್ಲಿ ಏನಾದರೂ ಸಾಧಿಸಿದ ಬಳಿಕವೇ ಮದುವೆಯಾಗುತ್ತೇನೆ&rsquo; ಎಂಬ ತಮ್ಮ ನಿರ್ಧಾರವನ್ನೂ ತಾಂಡವ್ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ನೀವು ಆಕ್ಷನ್ ಮಾಡಿದ್ರೆ... ನನ್ನ ಕಡೆಯಿಂದ ರಿಯಾಕ್ಷನ್ ಪಕ್ಕಾ!&rsquo;&lt;/strong&gt;&lt;/p&gt;&lt;p&gt;ಬಿಗ್&zwnj; ಬಾಸ್ ಮನೆಯಲ್ಲಿ ತಮ್ಮ ಆಟ ಹೇಗಿರಲಿದೆ ಎಂಬುದರ ಸುಳಿವನ್ನೂ ತಾಂಡವ್ ಮೊದಲೇ ನೀಡಿದ್ದಾರೆ. ಯಾರಾದರೂ ತಮ್ಮ ಮೇಲೆ ಆಕ್ಷನ್ ಮಾಡಿದರೆ, ಅದಕ್ಕೆ ತಮ್ಮ ಕಡೆಯಿಂದ ಪಕ್ಕಾ ರಿಯಾಕ್ಷನ್ ಇರಲಿದೆ ಎಂದು ನೇರವಾಗಿಯೇ ಹೇಳಿದ್ದಾರೆ. ಈ ಹೇಳಿಕೆ ಇದೀಗ ತಾಂಡವ್ ಅವರ ಬಿಗ್&zwnj; ಬಾಸ್ ಆಟದ ಬಗ್ಗೆ ಕುತೂಹಲ ಮೂಡಿಸಿದೆ. ಪೈಲ್ವಾನ್ ಲುಕ್&zwnj;ನಲ್ಲಿರುವ ತಾಂಡವ್, ಮನೆಯೊಳಗೆ ತಾಳ್ಮೆಯಿಂದ ಆಡ್ತಾರಾ? ಇಲ್ಲವೇ ಸಣ್ಣ ವಿಚಾರಕ್ಕೂ ರಿಯಾಕ್ಟ್ ಮಾಡ್ತಾರಾ? ಅನ್ನೋ ಪ್ರಶ್ನೆ ಪ್ರೇಕ್ಷಕರಲ್ಲಿ ಶುರುವಾಗಿದೆ.&lt;/p&gt;&lt;p&gt;&lt;strong&gt;&lsquo;ಜೋಡಿ ಹಕ್ಕಿ&rsquo;ಯ ರಾಮು ಕೊಟ್ಟ ದೊಡ್ಡ ಗುರುತು&lt;/strong&gt;&lt;/p&gt;&lt;p&gt;ಜೀ ಕನ್ನಡದ ಜನಪ್ರಿಯ ಧಾರಾವಾಹಿ &lsquo;ಜೋಡಿ ಹಕ್ಕಿ&rsquo;ಯಲ್ಲಿ ಮುಗ್ಧ ಹಳ್ಳಿ ಪೈಲ್ವಾನ್ ರಾಮು ಪಾತ್ರ ತಾಂಡವ್&zwnj;ಗೆ ಕಿರುತೆರೆಯಲ್ಲಿ ದೊಡ್ಡ ಗುರುತು ತಂದುಕೊಟ್ಟಿತ್ತು. ಈ ಪಾತ್ರಕ್ಕಾಗಿ ಚಿತ್ರೀಕರಣದ ಸಮಯದಲ್ಲೇ ಕುಸ್ತಿ ಪಟ್ಟುಗಳನ್ನೂ ಕಲಿತಿದ್ದರು. ಬಾಡಿ ಬಿಲ್ಡಿಂಗ್&zwnj;ನಲ್ಲೂ ಆಸಕ್ತಿ ಹೊಂದಿರುವ ತಾಂಡವ್, ಹಲವು ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಹೀಗಾಗಿ ಬಿಗ್&zwnj; ಬಾಸ್ ಮನೆಯಲ್ಲಿ ಅವರ ಫಿಟ್&zwnj;ನೆಸ್ ಕೂಡ ಒಂದು ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.&lt;/p&gt;&lt;p&gt;&lt;strong&gt;ಹಿರಿತೆರೆಯಲ್ಲೂ ತಾಂಡವ್ ಗುರುತು&lt;/strong&gt;&lt;/p&gt;&lt;p&gt;ಗಿರೀಶ್ ಜಿ ನಿರ್ದೇಶನದ &lsquo;ಒಂದ್ ಕಥೆ ಹೇಳ್ಲಾ&rsquo; ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಕಾಲಿಟ್ಟ ತಾಂಡವ್, ಬಳಿಕ ಕೆ.ಎಂ. ಚೈತನ್ಯ ನಿರ್ದೇಶನದ &lsquo;ಅಬ್ಬಬ್ಬಾ&rsquo; ಚಿತ್ರದಲ್ಲೂ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. &lsquo;ಭೂಮಿಗೆ ಬಂದ ಭಗವಂತ&rsquo; ಧಾರಾವಾಹಿಯ ಮೂಲಕ ನಟನೆಯ ಜತೆಗೆ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟ ಅವರು, ಕಿರುಚಿತ್ರಗಳು ಮತ್ತು ಸಿನಿಮಾಗಳ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಜೈಲು ವಿವಾದದಿಂದ ಭಾರೀ ಸುದ್ದಿಯಾಗಿದ್ದ ನಟ&lt;/strong&gt;&lt;/p&gt;&lt;p&gt;ತಾಂಡವ್ ರಾಮ್ ಅವರ ಬದುಕಿನಲ್ಲಿ ವಿವಾದವೂ ದೊಡ್ಡ ಅಧ್ಯಾಯವಾಗಿದೆ. 2024ರಲ್ಲಿ ಸಿನಿಮಾವೊಂದರ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಲು ಯತ್ನಿಸಿದ ಆರೋಪದಲ್ಲಿ ಪೊಲೀಸರು ಅವರನ್ನು ಕೊಲೆ ಯತ್ನ ಪ್ರಕರಣದಡಿ ಬಂಧಿಸಿದ್ದರು. ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ತಾಂಡವ್ ಮತ್ತೆ ತಮ್ಮ ವೃತ್ತಿಜೀವನದತ್ತ ಗಮನ ಹರಿಸಿದರು. &lsquo;ಕ್ವಾಟ್ಲೆ ಕಿಚನ್&rsquo; ಶೋನಲ್ಲಿ ಭಾಗವಹಿಸಿ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದು, ಅವರ ಮತ್ತೊಂದು ಮುಖವನ್ನು ಪ್ರೇಕ್ಷಕರಿಗೆ ಪರಿಚಯಿಸಿತ್ತು.&lt;/p&gt;&lt;h2&gt;&lt;strong&gt;ಈಗ &lsquo;ದೊಡ್ಮನೆ&rsquo;ಯಲ್ಲಿ ಹೊಸ ಅಧ್ಯಾಯ!&lt;/strong&gt;&lt;/h2&gt;&lt;p&gt;ವಿವಾದಗಳ ನೆರಳಿನಿಂದ ಹೊರಬಂದು ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಜನರಿಗೆ ಪರಿಚಯಿಸಿಕೊಳ್ಳಲು ತಾಂಡವ್ ರಾಮ್ ಇದೀಗ ಬಿಗ್&zwnj; ಬಾಸ್ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪೈಲ್ವಾನ್ ಲುಕ್, ಬಾಡಿ ಬಿಲ್ಡಿಂಗ್ ಹಿನ್ನೆಲೆ, ನೇರ ಮಾತು ಹಾಗೂ &lsquo;ಆಕ್ಷನ್&zwnj;ಗೆ ರಿಯಾಕ್ಷನ್ ಪಕ್ಕಾ&rsquo; ಎಂಬ ವಾರ್ನಿಂಗ್&zwnj;-ಇವೆಲ್ಲವೂ ಅವರ ಆಟದ ಬಗ್ಗೆ ಈಗಾಗಲೇ ನಿರೀಕ್ಷೆ ಹುಟ್ಟುಹಾಕಿವೆ.&lt;/p&gt;&lt;p&gt;ಇನ್ನು ಇಷ್ಟೆಲ್ಲ ಅನುಭವ ಹೊತ್ತು ಬಿಗ್&zwnj; ಬಾಸ್ ಮನೆಗೆ ಕಾಲಿಟ್ಟಿರುವ ತಾಂಡವ್, ಈ ಬಾರಿ ವಿವಾದಗಳ ಮೂಲಕವಲ್ಲ, ತಮ್ಮ ಆಟದ ಮೂಲಕವೇ ಗುರುತಿಸಿಕೊಳ್ಳುತ್ತಾರಾ? ಅಥವಾ &lsquo;ಆಕ್ಷನ್-ರಿಯಾಕ್ಷನ್&rsquo; ಆಟವೇ ಅವರನ್ನು ಹೆಚ್ಚು ಸುದ್ದಿಯಲ್ಲಿಡುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-kannada-13-jodi-hakki-fame-thandav-ram-enters-the-house-after-a-controversial-chapter-gvd/articleshow-rrge7fb"/>
        </item>
        <item>
            <title><![CDATA['ಅದೇ ಆಕೆಗೆ ಮೈನಸ್ ಆಗಬಹುದು': ಕಿಚ್ಚನ ಮುಂದೆ ಆಸಿಯಾ ಅಮ್ಮ ಹೇಳಿದ ಆ ಮಾತಿನ ಅರ್ಥವೇನು?]]></title>
            <link>https://kannada.asianetnews.com/tv-talk/bigg-boss-kannada-13-actress-asiya-firdose-enters-the-house-after-shravani-subramanya-gvd/articleshow-arqlt7q</link>
            <guid isPermaLink="true">https://kannada.asianetnews.com/tv-talk/bigg-boss-kannada-13-actress-asiya-firdose-enters-the-house-after-shravani-subramanya-gvd/articleshow-arqlt7q</guid>
            <pubDate>Sun, 06 Sep 2026 23:26:15 +0530</pubDate>
            <description><![CDATA[&lt;p&gt;&lsquo;ಕನ್ಯಾಕುಮಾರಿ&rsquo; ಹಾಗೂ &lsquo;ಶ್ರಾವಣಿ ಸುಬ್ರಮಣ್ಯ&rsquo; ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಆಸಿಯಾ ಫಿರ್ದೋಸ್ &lsquo;ಬಿಗ್&zwnj;ಬಾಸ್ ಕನ್ನಡ ಸೀಸನ್ 13&rsquo;ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್&zwnj; ಬಾಸ್ ಮನೆಯಲ್ಲಿ ಅವರ ಆಟ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vxrsx1fn10tt8qfs1ys7ts,imgname-vjv-1788717328289.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ರ ಮನೆಗೆ ಪರಿಚಿತ ಮುಖಗಳ ಎಂಟ್ರಿ ಮುಂದುವರಿದಿದ್ದು, ಇದೀಗ ಕಿರುತೆರೆಯ ಜನಪ್ರಿಯ ನಟಿ ಹಾಗೂ ಸೋಷಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಆಸಿಯಾ ಫಿರ್ದೋಸ್ ಕೂಡ &lsquo;ದೊಡ್ಮನೆ&rsquo;ಗೆ ಕಾಲಿಟ್ಟಿದ್ದಾರೆ. &lsquo;ಕನ್ಯಾಕುಮಾರಿ&rsquo; ಹಾಗೂ &lsquo;ಶ್ರಾವಣಿ ಸುಬ್ರಮಣ್ಯ&rsquo; ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿರುವ ಆಸಿಯಾ, ಈ ಬಾರಿ ತಮ್ಮ ರಿಯಲ್ ವ್ಯಕ್ತಿತ್ವದೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.&lt;/p&gt;&lt;p&gt;ಆಸಿಯಾ ಫಿರ್ದೋಸ್ ಅವರ ಹೆಸರು ಬಿಗ್&zwnj; ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೀಗ ಅಧಿಕೃತವಾಗಿ ಮನೆಗೆ ಎಂಟ್ರಿ ಕೊಟ್ಟಿರುವ ಅವರು, ಬಿಗ್&zwnj; ಬಾಸ್ ಆಟದಲ್ಲಿ ಎಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸುತ್ತಾರೆ ಎನ್ನುವುದೇ ಸದ್ಯದ ಪ್ರಶ್ನೆ.&lt;/p&gt;&lt;p&gt;&lt;strong&gt;ಮಾಡೆಲಿಂಗ್&zwnj;ನಿಂದ ಕಿರುತೆರೆಗೆ ಬಂದ ಆಸಿಯಾ&lt;/strong&gt;&lt;/p&gt;&lt;p&gt;ಆಸಿಯಾ ಫಿರ್ದೋಸ್ ಅವರ ವೃತ್ತಿಜೀವನದ ಆರಂಭ ಮಾಡೆಲಿಂಗ್&zwnj;ನಿಂದ. ಫ್ಯಾಷನ್ ಹಾಗೂ ಕ್ರಿಯೇಟಿವ್ ಕಂಟೆಂಟ್&zwnj;ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದ ಅವರು, ತಮ್ಮದೇ ಶೈಲಿಯ ರೀಲ್ಸ್ ಹಾಗೂ ಫೋಟೋಶೂಟ್&zwnj;ಗಳಿಂದ ಗಮನ ಸೆಳೆದಿದ್ದರು. ಗ್ಲಾಮರಸ್ ಲುಕ್ ಮಾತ್ರವಲ್ಲದೆ ವಿಭಿನ್ನ ಕಂಟೆಂಟ್ ಮೂಲಕವೂ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಗಳಿಸಿಕೊಂಡಿದ್ದ ಆಸಿಯಾಗೆ ಇದೇ ಜನಪ್ರಿಯತೆ ಕಿರುತೆರೆಗೆ ಎಂಟ್ರಿ ನೀಡಲು ನೆರವಾಯಿತು.&lt;/p&gt;&lt;p&gt;&lt;strong&gt;&lsquo;ಕನ್ಯಾಕುಮಾರಿ&rsquo; ಕೊಟ್ಟ ಮೊದಲ ಗುರುತು&lt;/strong&gt;&lt;/p&gt;&lt;p&gt;ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ &lsquo;ಕನ್ಯಾಕುಮಾರಿ&rsquo; ಧಾರಾವಾಹಿಯ ಮೂಲಕ ಆಸಿಯಾ ಫಿರ್ದೋಸ್ ನಟನೆಯ ಲೋಕಕ್ಕೆ ಕಾಲಿಟ್ಟರು. ಧಾರಾವಾಹಿಯಲ್ಲಿನ ಅವರ ಪಾತ್ರ ಕಿರುತೆರೆ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಆ ಬಳಿಕ ಜೀ ಕನ್ನಡದ &lsquo;ಶ್ರಾವಣಿ ಸುಬ್ರಮಣ್ಯ&rsquo; ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ತಮ್ಮ ಸಹಜ ಅಭಿನಯದ ಮೂಲಕ ಮತ್ತಷ್ಟು ಜನಪ್ರಿಯರಾದರು.&lt;/p&gt;&lt;p&gt;&lt;strong&gt;&lsquo;ಶ್ರಾವಣಿ ಸುಬ್ರಮಣ್ಯ&rsquo; ಬಳಿಕ ಬಿಗ್&zwnj; ಬಾಸ್!&lt;/strong&gt;&lt;/p&gt;&lt;p&gt;&lsquo;ಶ್ರಾವಣಿ ಸುಬ್ರಮಣ್ಯ&rsquo; ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಈ ಧಾರಾವಾಹಿಯಲ್ಲಿನ ಆಸಿಯಾ ಅವರ ಅಭಿನಯಕ್ಕೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಧಾರಾವಾಹಿ ಮುಗಿದ ಬೆನ್ನಲ್ಲೇ ಇದೀಗ ಆಸಿಯಾ ಮತ್ತೊಂದು ದೊಡ್ಡ ವೇದಿಕೆಗೆ ಕಾಲಿಟ್ಟಿದ್ದಾರೆ. ಈ ಬಾರಿ ಯಾವುದೇ ಸೀರಿಯಲ್ ಪಾತ್ರವಲ್ಲ; ತಮ್ಮದೇ ನಿಜವಾದ ವ್ಯಕ್ತಿತ್ವದೊಂದಿಗೆ &lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;strong&gt;&lsquo;ಆಸಿಯಾ ಕೆಲಸ ಮಾಡಲ್ಲ... ಅದೇ ಮೈನಸ್ ಆಗಬಹುದು!&rsquo;&lt;/strong&gt;&lt;/p&gt;&lt;p&gt;ಬಿಗ್&zwnj; ಬಾಸ್ ಮನೆಗೆ ಕಳುಹಿಸುವ ಮುನ್ನ ಆಸಿಯಾ ಅವರ ತಾಯಿ ಕೂಡ ಮಗಳ ಸ್ವಭಾವದ ಬಗ್ಗೆ ಮಾತನಾಡಿದ್ದಾರೆ. &lsquo;ಆಸಿಯಾ ಕೆಲಸ ಮಾಡಲ್ಲ. ಅದುವೇ ಮೈನಸ್ ಆಗಬಹುದು&rsquo; ಎಂದು ಅವರು ಹೇಳಿರುವುದು ಇದೀಗ ಗಮನ ಸೆಳೆದಿದೆ. ಬಿಗ್&zwnj; ಬಾಸ್ ಮನೆಯಲ್ಲಿ ದಿನನಿತ್ಯದ ಕೆಲಸ, ಜವಾಬ್ದಾರಿ ಹಾಗೂ ಟಾಸ್ಕ್&zwnj;ಗಳು ಆಟದ ಪ್ರಮುಖ ಭಾಗವಾಗಿರುವುದರಿಂದ, ತಾಯಿಯ ಈ ಮಾತು ನಿಜವಾಗುತ್ತದೆಯೇ ಅಥವಾ ಆಸಿಯಾ ಮನೆಯೊಳಗೆ ತಮ್ಮನ್ನು ತಾವು ಬದಲಿಸಿಕೊಂಡು ಅಚ್ಚರಿ ಮೂಡಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;&lt;p&gt;&lt;strong&gt;ಸೋಷಿಯಲ್ ಮೀಡಿಯಾ ಸ್ಟಾರ್&zwnj;ನಿಂದ ಬಿಗ್&zwnj; ಬಾಸ್ ಸ್ಪರ್ಧಿವರೆಗೆ&lt;/strong&gt;&lt;/p&gt;&lt;p&gt;ಮಾಡೆಲಿಂಗ್, ಸೋಷಿಯಲ್ ಮೀಡಿಯಾ ಹಾಗೂ ಕಿರುತೆರೆ-ಹೀಗೆ ವಿಭಿನ್ನ ಹಂತಗಳನ್ನು ದಾಟಿ ಬಂದಿರುವ ಆಸಿಯಾ ಫಿರ್ದೋಸ್&zwnj;ಗೆ ಬಿಗ್&zwnj; ಬಾಸ್ ಮತ್ತೊಂದು ಹೊಸ ಪರೀಕ್ಷೆ. ಇಲ್ಲಿಯವರೆಗೆ ಪ್ರೇಕ್ಷಕರು ಅವರನ್ನು ಧಾರಾವಾಹಿಯ ಪಾತ್ರಗಳ ಮೂಲಕ ನೋಡಿದ್ದಾರೆ. ಆದರೆ &lsquo;ದೊಡ್ಮನೆ&rsquo;ಯಲ್ಲಿ ಯಾವುದೇ ಸ್ಕ್ರಿಪ್ಟ್ ಇರುವುದಿಲ್ಲ. ಇಲ್ಲಿ ಅವರ ನಿಜವಾದ ವ್ಯಕ್ತಿತ್ವ, ನಿರ್ಧಾರಗಳು, ಕೋಪ, ಸ್ನೇಹ ಹಾಗೂ ಆಟದ ತಂತ್ರಗಳೇ ಅವರನ್ನು ಮುನ್ನಡೆಸಬೇಕಿದೆ.&lt;/p&gt;&lt;h2&gt;&lt;strong&gt;ಆಸಿಯಾ ಅವರ ಗೇಮ್ ಹೇಗಿರಲಿದೆ?&lt;/strong&gt;&lt;/h2&gt;&lt;p&gt;ಕಿರುತೆರೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿರುವ ಆಸಿಯಾ, ಬಿಗ್&zwnj; ಬಾಸ್ ಮನೆಯಲ್ಲಿ ಅದೇ ಜನಪ್ರಿಯತೆಯನ್ನು ಮುಂದುವರಿಸಿಕೊಳ್ಳುತ್ತಾರಾ? ಮನೆಯ ಕೆಲಸ ಹಾಗೂ ಜವಾಬ್ದಾರಿಗಳ ವಿಚಾರದಲ್ಲಿ ತಾಯಿಯ ಮಾತು ನಿಜವಾಗುತ್ತದೆಯಾ? ಇತರ ಸ್ಪರ್ಧಿಗಳೊಂದಿಗೆ ಹೇಗೆ ಬೆರೆಯುತ್ತಾರೆ? ಟಾಸ್ಕ್&zwnj;ಗಳಲ್ಲಿ ಯಾವ ರೀತಿಯ ಸ್ಪರ್ಧಾತ್ಮಕ ಮನೋಭಾವ ತೋರಿಸುತ್ತಾರೆ?&lt;/p&gt;&lt;p&gt;ಎಲ್ಲಕ್ಕಿಂತ ಮುಖ್ಯವಾಗಿ, &lsquo;ಕನ್ಯಾಕುಮಾರಿ&rsquo; ಮತ್ತು &lsquo;ಶ್ರಾವಣಿ ಸುಬ್ರಮಣ್ಯ&rsquo; ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿದ್ದ ಆಸಿಯಾ ಫಿರ್ದೋಸ್ ಅವರ ರಿಯಲ್ ಅವತಾರ ಹೇಗಿರಲಿದೆ ಎನ್ನುವುದೇ ಈಗ &lsquo;ದೊಡ್ಮನೆ&rsquo; ವೀಕ್ಷಕರ ಕುತೂಹಲ. ಇನ್ನು ಬಿಗ್&zwnj; ಬಾಸ್ ವೇದಿಕೆ ಅವರ ಕಿರುತೆರೆ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆಯೇ? ಅಥವಾ ಆಟದ ಒತ್ತಡದಲ್ಲಿ ಹೊಸ ಮುಖವೊಂದು ಹೊರಬರುತ್ತದೆಯೇ? ಇದಕ್ಕೆ ಉತ್ತರ ಸೀಸನ್ 13ರ ಮುಂದಿನ ದಿನಗಳಲ್ಲಿ ಸಿಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-kannada-13-actress-asiya-firdose-enters-the-house-after-shravani-subramanya-gvd/articleshow-arqlt7q"/>
        </item>
        <item>
            <title><![CDATA[‘ಆಂಟಿ’ ಎಂದ ಕಿರಣ್‌ಗೆ ಪ್ರಥಮ ಕೊಟ್ರು ತಿರುಗೇಟು: ಕೆರ್ಕೊಂಡು ಇರುವುದರಲ್ಲೇ ನೆಮ್ಮದಿ ಎಂದ ಓಂ ಪ್ರಕಾಶ್ ರಾವ್]]></title>
            <link>https://kannada.asianetnews.com/tv-talk/bigg-boss-kannada-13-om-prakash-rao-s-comeback-and-kiran-shastri-s-entry-grab-attention-gvd/articleshow-ouekxm4</link>
            <guid isPermaLink="true">https://kannada.asianetnews.com/tv-talk/bigg-boss-kannada-13-om-prakash-rao-s-comeback-and-kiran-shastri-s-entry-grab-attention-gvd/articleshow-ouekxm4</guid>
            <pubDate>Sun, 06 Sep 2026 22:21:21 +0530</pubDate>
            <description><![CDATA[&lt;p&gt;ಬಿಗ್&zwnj; ಬಾಸ್ ಕನ್ನಡ ಸೀಸನ್ 13ಕ್ಕೆ ನಿರ್ದೇಶಕ ಎನ್. ಓಂ ಪ್ರಕಾಶ್ ರಾವ್ ಹಾಗೂ &lsquo;ಅಗ್ನಿ ಪರೀಕ್ಷೆ&rsquo; ಕಾರ್ಯಕ್ರಮದ ಮೂಲಕ ವೀಕ್ಷಕರ ವೋಟಿಂಗ್&zwnj;ನಲ್ಲಿ ಆಯ್ಕೆಯಾದ ಕಿರಣ್ ಶಾಸ್ತ್ರಿ ಎಂಟ್ರಿ ಕೊಟ್ಟಿದ್ದಾರೆ. ಅವರ ಹೊಸ ಜರ್ನಿ ಈ ಸೀಸನ್&zwnj;ನಲ್ಲಿ ಹೇಗೆ ಸಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vt1pytk9kmh0fdnzre9xry,imgname-jv-1788713425882.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ರ ಗ್ರ್ಯಾಂಡ್ ಓಪನಿಂಗ್ ದಿನದಿಂದಲೇ ಒಂದರ ಹಿಂದೆ ಒಂದರಂತೆ ಕುತೂಹಲಕಾರಿ ಎಂಟ್ರಿಗಳಿಗೆ ಸಾಕ್ಷಿಯಾಗುತ್ತಿದೆ. ಕಿರುತೆರೆ ಹಾಗೂ ಬೆಳ್ಳಿತೆರೆಯ ಪರಿಚಿತ ಮುಖಗಳು &lsquo;ದೊಡ್ಮನೆ&rsquo;ಗೆ ಕಾಲಿಡುತ್ತಿದ್ದು, ಇದೀಗ ನಿರ್ದೇಶಕ ಎನ್. ಓಂ ಪ್ರಕಾಶ್ ರಾವ್ ಹಾಗೂ &lsquo;ಅಗ್ನಿ ಪರೀಕ್ಷೆ&rsquo; ಮೂಲಕ ವೀಕ್ಷಕರ ವೋಟಿಂಗ್&zwnj;ನಲ್ಲಿ ಗೆದ್ದು ಬಂದ ಕಿರಣ್ ಶಾಸ್ತ್ರಿ ಕೂಡ ಬಿಗ್&zwnj; ಬಾಸ್ ಮನೆ ಸೇರಿದ್ದಾರೆ.&lt;/p&gt;&lt;p&gt;ಈಗಾಗಲೇ ಜಗದೀಶ್, ಸೌಂದರ್ಯ ಶೆಟ್ಟಿ, ಅವಿನಾಶ್, ಪ್ರಥಮ ಪ್ರಸಾದ್, ಗಗನ್ ಚಿನ್ನಪ್ಪ, ಸಂಗೀತಾ ಭಟ್ ಹಾಗೂ ಕಾವ್ಯಾ ಗೌಡ ಸೇರಿದಂತೆ ಹಲವು ಸ್ಪರ್ಧಿಗಳು ಬಿಗ್&zwnj; ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರೂ ಫ್ಲೈಟ್&zwnj; ಬೋರ್ಡಿಂಗ್ ಪಾಸ್ ಹಿಡಿದುಕೊಂಡೇ &lsquo;ದೊಡ್ಮನೆ&rsquo; ಪ್ರಯಾಣ ಆರಂಭಿಸಿರುವುದು ಈ ಸೀಸನ್&zwnj;ನ ವಿಶೇಷತೆಯಾಗಿದೆ.&lt;/p&gt;&lt;p&gt;&lt;strong&gt;ಮತ್ತೆ &lsquo;ದೊಡ್ಮನೆ&rsquo;ಗೆ ಓಂ ಪ್ರಕಾಶ್ ರಾವ್!&lt;/strong&gt;&lt;/p&gt;&lt;p&gt;ನೇರ ಮಾತು, ವಿಭಿನ್ನ ವ್ಯಕ್ತಿತ್ವ ಹಾಗೂ ತಮ್ಮದೇ ಶೈಲಿಯ ಹೇಳಿಕೆಗಳಿಂದ ಸದಾ ಗಮನ ಸೆಳೆಯುವ ನಿರ್ದೇಶಕ ಎನ್. ಓಂ ಪ್ರಕಾಶ್ ರಾವ್ ಮತ್ತೊಮ್ಮೆ ಬಿಗ್&zwnj; ಬಾಸ್ ಮನೆಗೆ ಬಂದಿದ್ದಾರೆ. ಓಂ ಪ್ರಕಾಶ್ ರಾವ್ ವೇದಿಕೆಗೆ ಬರುತ್ತಿದ್ದಂತೆ ಕಿಚ್ಚ ಸುದೀಪ್ ಕೂಡ ವಿಶೇಷವಾಗಿ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ಅವರಿಗಾಗಿ &lsquo;ಉಸಿರೇ ಉಸಿರೇ&rsquo; ಹಾಡನ್ನು ಹಾಡಿದ್ದು ವಿಶೇಷ ಗಮನ ಸೆಳೆಯಿತು.&lt;/p&gt;&lt;p&gt;&lt;strong&gt;ಸೀಸನ್ 4ರ ಬಳಿಕ ಮತ್ತೆ ಬಿಗ್&zwnj; ಬಾಸ್!&lt;/strong&gt;&lt;/p&gt;&lt;p&gt;ಓಂ ಪ್ರಕಾಶ್ ರಾವ್ ಅವರಿಗೆ ಬಿಗ್&zwnj; ಬಾಸ್ ಅನುಭವ ಇದೇ ಮೊದಲೇನಲ್ಲ. ಈ ಹಿಂದೆ &lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 4&rsquo;ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಅವರು, ಅನಾರೋಗ್ಯದ ಕಾರಣದಿಂದ ಏಳನೇ ವಾರದಲ್ಲೇ ಮನೆಯಿಂದ ಹೊರಬಂದಿದ್ದರು. ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಅದೇ ವೇದಿಕೆಗೆ ಮರಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂದರ್ಶನಗಳಲ್ಲಿನ ನೇರ ಮಾತುಗಳು ಹಾಗೂ &lsquo;ಕ್ವಾಟ್ಲೆ ಕಿಚನ್&rsquo; ಕಾರ್ಯಕ್ರಮದ ಮೂಲಕವೂ ಓಂ ಪ್ರಕಾಶ್ ರಾವ್ ಸಾಕಷ್ಟು ಸುದ್ದಿಯಲ್ಲಿದ್ದರು.&lt;/p&gt;&lt;p&gt;&lt;strong&gt;&lsquo;ಕೆರ್ಕೊಂಡು ಇರುವುದರಲ್ಲೇ ನೆಮ್ಮದಿ ಇದೆ&rsquo;!&lt;/strong&gt;&lt;/p&gt;&lt;p&gt;ಓಂ ಪ್ರಕಾಶ್ ರಾವ್ ಅವರ ಎಂಟ್ರಿಗೂ ಬಿಗ್&zwnj; ಬಾಸ್ ಕಡೆಯಿಂದ ಒಂದು ವಿಭಿನ್ನ ಟ್ವಿಸ್ಟ್ ಸಿಕ್ಕಿತ್ತು. ವಿಟಿಯಲ್ಲಿ ಅವರ ತಲೆ ಕೆರೆಯುತ್ತಿರುವ ದೃಶ್ಯವನ್ನು ತೋರಿಸಲಾಯಿತು. ಇದನ್ನು ನೋಡಿದ ಓಂ ಪ್ರಕಾಶ್ ರಾವ್, &lsquo;ಕೆರ್ಕೊಂಡು ಇರುವುದರಲ್ಲೇ ನೆಮ್ಮದಿ ಇದೆ&rsquo; ಎನ್ನುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದೇ ಮಾತು ಅವರ ಬಿಗ್&zwnj; ಬಾಸ್ ಜರ್ನಿಗೆ ಒಂದು ರೀತಿಯ ಕಾಮಿಡಿ ಟಚ್ ನೀಡಿದೆ. ಹೀಗಾಗಿ ಈ ಬಾರಿ ಓಂ ಪ್ರಕಾಶ್ ರಾವ್ ಅವರ ನೇರ ಮಾತುಗಳು, ಸ್ವಭಾವ ಹಾಗೂ ಮನೆಯೊಳಗಿನ ಇತರ ಸ್ಪರ್ಧಿಗಳೊಂದಿಗೆ ಅವರ ಸಂವಹನ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.&lt;/p&gt;&lt;p&gt;&lt;strong&gt;&lsquo;ಅಗ್ನಿ ಪರೀಕ್ಷೆ&rsquo; ಗೆದ್ದು ಬಿಗ್&zwnj; ಬಾಸ್ ಮನೆಗೆ ಕಿರಣ್ ಶಾಸ್ತ್ರಿ!&lt;/strong&gt;&lt;/p&gt;&lt;p&gt;ಇನ್ನು ಮತ್ತೊಂದೆಡೆ, &lsquo;ಅಗ್ನಿ ಪರೀಕ್ಷೆ&rsquo; ಕಾರ್ಯಕ್ರಮದ ಮೂಲಕ ವೀಕ್ಷಕರ ವೋಟಿಂಗ್ ಆಧಾರದ ಮೇಲೆ ಕಿರಣ್ ಶಾಸ್ತ್ರಿ ಬಿಗ್&zwnj; ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಕಿರಣ್, ವೀಕ್ಷಕರೇ ತಮ್ಮನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾರೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಿಗ್&zwnj; ಬಾಸ್ ಮನೆಯಲ್ಲೂ ವೀಕ್ಷಕರ ಬೆಂಬಲವೇ ತಮ್ಮ ದೊಡ್ಡ ಶಕ್ತಿ ಎಂಬ ವಿಶ್ವಾಸದಲ್ಲಿದ್ದಾರೆ.&lt;/p&gt;&lt;p&gt;&lt;strong&gt;ಪ್ರಥಮ ಪ್ರಸಾದ್&zwnj;ಗೆ &lsquo;ಆಂಟಿ&rsquo; ಎಂದ ಕಿರಣ್!&lt;/strong&gt;&lt;/p&gt;&lt;p&gt;ಕಿರಣ್ ಶಾಸ್ತ್ರಿ ಮನೆಯೊಳಗೆ ಕಾಲಿಟ್ಟ ಆರಂಭದಲ್ಲೇ ಒಂದು ಸಣ್ಣ ಘಟನೆ ಗಮನ ಸೆಳೆದಿದೆ. ಪ್ರಥಮ ಪ್ರಸಾದ್ ಅವರನ್ನು ಕಿರಣ್ ಬಾಯಿತಪ್ಪಿ &lsquo;ಆಂಟಿ&rsquo; ಎಂದು ಕರೆದಿದ್ದಾರೆ. ಇದನ್ನು ಕೇಳಿದ ಪ್ರಥಮ ಪ್ರಸಾದ್ ತಕ್ಷಣವೇ ಪ್ರತಿಕ್ರಿಯಿಸಿದ್ದು, &lsquo;ನನ್ನನ್ನು ಆಂಟಿ ಎಂದು ಕರೆಯಬೇಡಿ, ಅಮ್ಮ ಬೇಕಾದರೂ ಕರೆಯಿರಿ&rsquo; ಎಂದು ಹೇಳಿದ್ದಾರೆ. ಈ ಮಾತಿಗೆ ಅಲ್ಲಿದ್ದವರಲ್ಲಿ ನಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗ್&zwnj; ಬಾಸ್ ಮನೆಯ ಮೊದಲ ದಿನವೇ ಕಿರಣ್-ಪ್ರಥಮ ನಡುವಿನ ಈ ಸಂಭಾಷಣೆ ಗಮನ ಸೆಳೆದಿದೆ.&lt;/p&gt;&lt;h2&gt;&lt;strong&gt;ಈ ಸೀಸನ್&zwnj;ನಲ್ಲಿ ಯಾರು ಸದ್ದು ಮಾಡ್ತಾರೆ?&lt;/strong&gt;&lt;/h2&gt;&lt;p&gt;ಒಂದೆಡೆ ಈಗಾಗಲೇ ಬಿಗ್&zwnj; ಬಾಸ್ ಅನುಭವ ಹೊಂದಿರುವ ಓಂ ಪ್ರಕಾಶ್ ರಾವ್. ಮತ್ತೊಂದೆಡೆ ವೀಕ್ಷಕರ ವೋಟಿಂಗ್ ಮೂಲಕ ಮನೆಗೆ ಬಂದಿರುವ ಕಿರಣ್ ಶಾಸ್ತ್ರಿ. ಇವರಿಬ್ಬರ ಎಂಟ್ರಿಯಿಂದ &lsquo;ದೊಡ್ಮನೆ&rsquo; ಆಟಕ್ಕೆ ಮತ್ತಷ್ಟು ವಿಭಿನ್ನ ಬಣ್ಣ ಸಿಗುವ ಸಾಧ್ಯತೆ ಇದೆ. ಇನ್ನು ಓಂ ಪ್ರಕಾಶ್ ರಾವ್ ಅವರ ನೇರ ಮಾತುಗಳು ಯಾವ ರೀತಿಯ ಚರ್ಚೆ ಹುಟ್ಟುಹಾಕುತ್ತವೆ? ಕಿರಣ್ ಶಾಸ್ತ್ರಿ ವೀಕ್ಷಕರ ಬೆಂಬಲವನ್ನು ಗೇಮ್&zwnj;ನಲ್ಲಿ ಹೇಗೆ ಬಳಸಿಕೊಳ್ಳುತ್ತಾರೆ? ಪ್ರಥಮ ಪ್ರಸಾದ್ ಜೊತೆಗಿನ ಈ ಮೊದಲ ಸಂಭಾಷಣೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ? ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-kannada-13-om-prakash-rao-s-comeback-and-kiran-shastri-s-entry-grab-attention-gvd/articleshow-ouekxm4"/>
        </item>
        <item>
            <title><![CDATA[ಪತ್ನಿಯ ಆ ಸ್ವಭಾವ ಬಯಲು ಮಾಡಿದ ಸುದರ್ಶನ್: ಸಂಗೀತಾ ಭಟ್‌ಗೆ ಸುದೀಪ್ ಕೊಟ್ಟ ವಾರ್ನಿಂಗ್ ಏನು?]]></title>
            <link>https://kannada.asianetnews.com/tv-talk/kannada-actress-sangeetha-bhat-enters-bigg-boss-kannada-13-husband-sudarshan-reveals-her-personality-gvd/articleshow-qvla8gk</link>
            <guid isPermaLink="true">https://kannada.asianetnews.com/tv-talk/kannada-actress-sangeetha-bhat-enters-bigg-boss-kannada-13-husband-sudarshan-reveals-her-personality-gvd/articleshow-qvla8gk</guid>
            <pubDate>Sun, 06 Sep 2026 21:36:16 +0530</pubDate>
            <description><![CDATA[&lt;p&gt;ಸಂಗೀತಾ ಭಟ್ ಅವರನ್ನು ಬಿಗ್&zwnj; ಬಾಸ್ ವೇದಿಕೆಗೆ ಕಳುಹಿಸಲು ಅವರ ಪತಿ ಹಾಗೂ ನಟ ಸುದರ್ಶನ್ ಕೂಡ ಆಗಮಿಸಿದ್ದರು. ಇದೇ ವೇಳೆ ಪತ್ನಿಯ ವ್ಯಕ್ತಿತ್ವದ ಬಗ್ಗೆ ಸುದರ್ಶನ್ ಹೇಳಿದ ಕೆಲವು ಮಾತುಗಳು ವೇದಿಕೆಯಲ್ಲಿ ನಗುವಿನ ವಾತಾವರಣ ಸೃಷ್ಟಿಸಿದವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vqd67zb0pw2zy7xfzx032x,imgname-vj-1788710656255.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ರ ಮನೆಗೆ ಸ್ಪರ್ಧಿಗಳ ಎಂಟ್ರಿ ಜೋರಾಗುತ್ತಿದ್ದು, ಈಗ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಸಂಗೀತಾ ಭಟ್ ಕೂಡ ಮನೆಯೊಳಗೆ ಕಾಲಿಟ್ಟಿದ್ದಾರೆ. ಬೋಲ್ಡ್ ಪಾತ್ರಗಳು, ವಿಭಿನ್ನ ಫೋಟೋಶೂಟ್&zwnj;ಗಳು ಹಾಗೂ ತಮ್ಮ ನೇರ ನಿಲುವುಗಳಿಂದಲೇ ಆಗಾಗ್ಗೆ ಸುದ್ದಿಯಾಗುತ್ತಿದ್ದ ಸಂಗೀತಾ ಭಟ್, ಇದೀಗ ಬಿಗ್&zwnj; ಬಾಸ್ ಮನೆಯೊಳಗೆ ಯಾವ ರೀತಿಯ ಆಟ ಆಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.&lt;/p&gt;&lt;p&gt;ಸಂಗೀತಾ ಭಟ್ ಅವರನ್ನು ಬಿಗ್&zwnj; ಬಾಸ್ ವೇದಿಕೆಗೆ ಕಳುಹಿಸಲು ಅವರ ಪತಿ ಹಾಗೂ ನಟ ಸುದರ್ಶನ್ ಕೂಡ ಆಗಮಿಸಿದ್ದರು. ಇದೇ ವೇಳೆ ಪತ್ನಿಯ ವ್ಯಕ್ತಿತ್ವದ ಬಗ್ಗೆ ಸುದರ್ಶನ್ ಹೇಳಿದ ಕೆಲವು ಮಾತುಗಳು ವೇದಿಕೆಯಲ್ಲಿ ನಗುವಿನ ವಾತಾವರಣ ಸೃಷ್ಟಿಸಿದವು.&lt;/p&gt;&lt;p&gt;&lt;strong&gt;&lsquo;ಅವಳು ಬಹಳ ಶಿಸ್ತಿನ ವ್ಯಕ್ತಿ, ಆದರೆ ಸಿಟ್ಟು ಬಂದರೆ...!&rsquo;&lt;/strong&gt;&lt;/p&gt;&lt;p&gt;ಸಂಗೀತಾ ಭಟ್ ಅವರ ಸ್ವಭಾವವನ್ನು ವಿವರಿಸಿದ ಸುದರ್ಶನ್, ಅವರು ತುಂಬಾ ವಿಭಿನ್ನ ವ್ಯಕ್ತಿತ್ವದವರು ಮತ್ತು ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂದು ಹೇಳಿದ್ದಾರೆ. ಪ್ರತಿಯೊಂದು ವಸ್ತುವೂ ಸರಿಯಾದ ಜಾಗದಲ್ಲಿರಬೇಕು, ಎಲ್ಲವೂ ವ್ಯವಸ್ಥಿತವಾಗಿರಬೇಕು ಎನ್ನುವುದು ಸಂಗೀತಾ ಅವರ ಸ್ವಭಾವವಂತೆ. ಒಂದು ವೇಳೆ ವ್ಯವಸ್ಥೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಅವರಿಗೆ ಸಿಟ್ಟು ಬರುತ್ತದೆ. ಆ ಸಿಟ್ಟನ್ನು ತಡೆದುಕೊಳ್ಳುವುದು ಕಷ್ಟ ಎಂದು ಸುದರ್ಶನ್ ತಮಾಷೆಯಾಗಿ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಗ್ಯಾಸ್ ಆಫ್ ಮಾಡದೇ ಮಲಗಿದ್ರೆ ಏನಾಗುತ್ತೆ?&lt;/strong&gt;&lt;/p&gt;&lt;p&gt;ಸಂಗೀತಾ ಅವರ ದಿನನಿತ್ಯದ ಸ್ವಭಾವಕ್ಕೆ ಸಂಬಂಧಿಸಿದಂತೆ ಸುದರ್ಶನ್ ಒಂದು ಸನ್ನಿವೇಶವನ್ನೂ ಹಂಚಿಕೊಂಡಿದ್ದಾರೆ. ಸಂಗೀತಾ ಗ್ಯಾಸ್ ಆಫ್ ಮಾಡದೇ ಮಲಗುವ ಸಂದರ್ಭವೊಂದನ್ನು ಅವರು ವಿವರಿಸಿದಾಗ, ಕಿಚ್ಚ ಸುದೀಪ್ ಕೂಡ ಅದನ್ನೇ ಇಟ್ಟುಕೊಂಡು ತಮಾಷೆ ಮಾಡಿದ್ದಾರೆ. &lsquo;ಬಿಗ್&zwnj; ಬಾಸ್ ಮನೆಯಲ್ಲಿ ಹಾಗೆ ಮಾಡಬೇಡಿ. ಆಮೇಲೆ ನಾವು ಬೇರೆ ಸೆಟ್ ಹುಡುಕಿಕೊಳ್ಳಬೇಕಾಗುತ್ತದೆ&rsquo; ಎಂದು ಸುದೀಪ್ ಹೇಳಿದ್ದು, ವೇದಿಕೆಯಲ್ಲಿ ನಗೆ ಮೂಡಿಸಿತು.&lt;/p&gt;&lt;p&gt;&lt;strong&gt;&lsquo;ಮಾಮೂ ಟೀ ಅಂಗಡಿ&rsquo;ಯಿಂದ ಶುರುವಾದ ಸಿನಿಮಾ ಪಯಣ&lt;/strong&gt;&lt;/p&gt;&lt;p&gt;ಸಂಗೀತಾ ಭಟ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. &lsquo;ಮಾಮೂ ಟೀ ಅಂಗಡಿ&rsquo; ಬಳಿಕ ಯೋಗರಾಜ್ ಭಟ್ ಪ್ರಸ್ತುತಪಡಿಸಿದ್ದ &lsquo;ಪ್ರೀತಿ, ಗೀತಿ, ಇತ್ಯಾದಿ&rsquo; ಹಾಗೂ ವಿಜಯ್ ರಾಘವೇಂದ್ರ ನಟನೆಯ &lsquo;ಕಿಸ್ಮತ್&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಸಂಗೀತಾ ಭಟ್ ತಮ್ಮ ಅಭಿನಯದ ಛಾಪು ಮೂಡಿಸಿದ್ದಾರೆ. ತಮಿಳಿನ &lsquo;ಡೂ&rsquo;, &lsquo;ಕಾ ಕಾ ಕಾ&rsquo;, ತೆಲುಗಿನ &lsquo;ಕಾಕಿ&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಧನಂಜಯ್ ಜೊತೆಗಿನ ಸಿನಿಮಾಗಳು ತಂದುಕೊಟ್ಟ ಮತ್ತಷ್ಟು ಗುರುತು&lt;/strong&gt;&lt;/p&gt;&lt;p&gt;ಡಾಲಿ ಧನಂಜಯ್ ಜೊತೆಗಿನ &lsquo;ಎರಡನೇ ಸಲ&rsquo;, &lsquo;ದಯವಿಟ್ಟು ಗಮನಿಸಿ&rsquo; ಸೇರಿದಂತೆ ಕೆಲವು ಸಿನಿಮಾಗಳು ಸಂಗೀತಾ ಭಟ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಗುರುತನ್ನು ತಂದುಕೊಟ್ಟವು. ಇದರ ನಡುವೆ ಅವರು ವಿಭಿನ್ನ ಹಾಗೂ ಬೋಲ್ಡ್ ಪಾತ್ರಗಳಲ್ಲೂ ಕಾಣಿಸಿಕೊಂಡರು. ಅವರ ಬೋಲ್ಡ್ ಲುಕ್ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಎದುರಾದ ನಕಾರಾತ್ಮಕ ಕಾಮೆಂಟ್&zwnj;ಗಳು ನಟಿಗೆ ಬೇಸರ ಉಂಟುಮಾಡಿದ್ದವು.&lt;/p&gt;&lt;p&gt;&lt;strong&gt;ಮೀ ಟೂ ಆರೋಪದ ಬಳಿಕ ಚಿತ್ರರಂಗದಿಂದ ದೂರ&lt;/strong&gt;&lt;/p&gt;&lt;p&gt;ಸಂಗೀತಾ ಭಟ್ ಅವರ ವೃತ್ತಿಜೀವನದಲ್ಲಿ ಮೀ ಟೂ ಆರೋಪದ ವಿಚಾರವೂ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆ ಬಳಿಕ ಅವರು ಸಾಕಷ್ಟು ಟೀಕೆ ಹಾಗೂ ನಿಂದನೆಗಳನ್ನು ಎದುರಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋಗಳಿಗೂ ನಕಾರಾತ್ಮಕ ಪ್ರತಿಕ್ರಿಯೆಗಳು ಹೆಚ್ಚಾಗಿದ್ದವು. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿದ್ದ ಸಂಗೀತಾ ಒಂದು ಹಂತದಲ್ಲಿ ಚಿತ್ರರಂಗದಿಂದಲೇ ದೂರ ಉಳಿದಿದ್ದರು. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದೆ, ತಮ್ಮದೇ ಜೀವನದಲ್ಲಿ ತೊಡಗಿಸಿಕೊಂಡಿದ್ದರು.&lt;/p&gt;&lt;p&gt;&lt;strong&gt;&lsquo;ಇದು ನನ್ನ ಎರಡನೇ ಇನ್ನಿಂಗ್ಸ್&rsquo; ಎಂದಿದ್ದ ಸಂಗೀತಾ&lt;/strong&gt;&lt;/p&gt;&lt;p&gt;ನಂತರ ಪತಿ ಸುದರ್ಶನ್ ಸೇರಿದಂತೆ ಆಪ್ತರ ಬೆಂಬಲದಿಂದ ಸಂಗೀತಾ ಭಟ್ ಮತ್ತೆ ಚಿತ್ರರಂಗಕ್ಕೆ ಮರಳಿದರು. ತಮ್ಮ ಕಮ್&zwnj;ಬ್ಯಾಕ್&zwnj; ಅನ್ನು ಅವರು &lsquo;ಎರಡನೇ ಇನ್ನಿಂಗ್ಸ್&rsquo; ಎಂದು ಹೇಳಿಕೊಂಡಿದ್ದರು. ಇದೀಗ ಇದೇ ಎರಡನೇ ಇನ್ನಿಂಗ್ಸ್&zwnj;ನಲ್ಲಿ ಅವರು ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. &lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ರ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಬಿಗ್&zwnj; ಬಾಸ್ ಮನೆಯಲ್ಲಿ ಸಂಗೀತಾ ಭಟ್ ಆಟ ಹೇಗಿರಲಿದೆ?&lt;/strong&gt;&lt;/h2&gt;&lt;p&gt;ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳ ಮೂಲಕ ಗಮನ ಸೆಳೆದಿರುವ ಸಂಗೀತಾ, ನಿಜ ಜೀವನದಲ್ಲಿ ಶಿಸ್ತಿಗೆ ಹೆಚ್ಚು ಆದ್ಯತೆ ನೀಡುವ ವ್ಯಕ್ತಿತ್ವ ಹೊಂದಿದ್ದಾರೆ ಎನ್ನುವುದು ಪತಿ ಸುದರ್ಶನ್ ಮಾತಿನಿಂದ ತಿಳಿದುಬಂದಿದೆ. ಹೀಗಿರುವಾಗ ವಿವಿಧ ಮನಸ್ಥಿತಿಯ ಸ್ಪರ್ಧಿಗಳೊಂದಿಗೆ ಒಂದೇ ಮನೆಯಲ್ಲಿ ಸಂಗೀತಾ ಹೇಗೆ ಹೊಂದಿಕೊಳ್ಳುತ್ತಾರೆ? ತಮ್ಮ ಕೋಪವನ್ನು ಹೇಗೆ ನಿಭಾಯಿಸುತ್ತಾರೆ? ಬಿಗ್&zwnj; ಬಾಸ್ ಟಾಸ್ಕ್&zwnj;ಗಳಲ್ಲಿ ಯಾವ ರೀತಿಯ ಆಟ ಪ್ರದರ್ಶಿಸುತ್ತಾರೆ? ತಮ್ಮ ಹಿಂದಿನ ಅನುಭವಗಳನ್ನು ಮರೆತು ಹೊಸ ರೀತಿಯಲ್ಲಿ ಗೇಮ್ ಆಡುತ್ತಾರಾ? ಎನ್ನುವುದೇ ಈಗಿನ ಕುತೂಹಲ.&lt;/p&gt;&lt;p&gt;ಇನ್ನು ಸಾಕಷ್ಟು ಏಳು-ಬೀಳುಗಳ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಸಂಗೀತಾ ಭಟ್&zwnj;ಗೆ ಬಿಗ್&zwnj; ಬಾಸ್ ಮನೆ ಹೊಸ ವೇದಿಕೆಯಾಗಿದ್ದು, ಅವರ ಈ ಜರ್ನಿ ಹೇಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/kannada-actress-sangeetha-bhat-enters-bigg-boss-kannada-13-husband-sudarshan-reveals-her-personality-gvd/articleshow-qvla8gk"/>
        </item>
        <item>
            <title><![CDATA[Bigg Boss ಸುದೀಪ್ ಸರಳತೆಗೆ ಅಭಿಮಾನಿಗಳಿಂದ ಉಘೇ ಉಘೇ; ಹಿರಿಯ ನಟಿಯಿಂದ ಮೆಚ್ಚುಗೆ!]]></title>
            <link>https://kannada.asianetnews.com/gallery/tv-talk/bigg-boss-kannada-13-sudeep-s-simplicity-appreciated-by-fans-and-veteran-actress-vinaya-prasad-mrq-52on0gl</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-13-sudeep-s-simplicity-appreciated-by-fans-and-veteran-actress-vinaya-prasad-mrq-52on0gl</guid>
            <pubDate>Sun, 06 Sep 2026 21:33:24 +0530</pubDate>
            <description><![CDATA[&lt;p&gt;ಬಿಗ್&zwnj;ಬಾಸ್ ಕಾರ್ಯಕ್ರಮದಲ್ಲಿ, ಸ್ಪರ್ಧಿ ಪ್ರಥಮಾ ಪ್ರಸಾದ್ ಅವರನ್ನು ಬೀಳ್ಕೊಡಲು ಬಂದಿದ್ದ ಹಿರಿಯ ನಟಿ ವಿನಯಾ ಪ್ರಸಾದ್ ಅವರಿಗೆ ನಟ ಸುದೀಪ್ ಅವರು ವಿಶೇಷ ಗೌರವ ಸಲ್ಲಿಸಿದ್ದಾರೆ. ವೇದಿಕೆಗೆ ಕರೆತಂದ ಸುದೀಪ್ ಅವರ ಸರಳತೆಯನ್ನು ವಿನಯಾ ಪ್ರಸಾದ್ ಶ್ಲಾಘಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vpyvd7hyxf48dtcmpnfyn7,imgname-sudeep--2--1788710186407.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ ಕಾರ್ಯಕ್ರಮದಲ್ಲಿ, ಸ್ಪರ್ಧಿ ಪ್ರಥಮಾ ಪ್ರಸಾದ್ ಅವರನ್ನು ಬೀಳ್ಕೊಡಲು ಬಂದಿದ್ದ ಹಿರಿಯ ನಟಿ ವಿನಯಾ ಪ್ರಸಾದ್ ಅವರಿಗೆ ನಟ ಸುದೀಪ್ ಅವರು ವಿಶೇಷ ಗೌರವ ಸಲ್ಲಿಸಿದ್ದಾರೆ. ವೇದಿಕೆಗೆ ಕರೆತಂದ ಸುದೀಪ್ ಅವರ ಸರಳತೆಯನ್ನು ವಿನಯಾ ಪ್ರಸಾದ್ ಶ್ಲಾಘಿಸಿದರು.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ನಟ ಸುದೀಪ್ ಅವರ ಸರಳತೆಗೆ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ. ಹೌದು, ಬಿಗ್&zwnj;ಬಾಸ್ ಮನೆಗೆ ಸ್ಪರ್ಧಿಯಾಗಿ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಗಳು ಪ್ರಥಮಾ ಆಗಮಿಸಿದ್ದಾರೆ. ಮಗಳನ್ನು ಬೀಳ್ಕೊಡಲು ಬಿಗ್&zwnj;ಬಾಸ್ ಕಾರ್ಯಕ್ರಮಕ್ಕೆ ವಿನಯಾ ಪ್ರಸಾದ್ ಆಗಮಿಸಿದ್ದರು.&lt;/p&gt;&lt;img&gt;&lt;p&gt;ಪ್ರಥಮಾ ಪ್ರಸಾದ್ ಜೊತೆ ಮಾತನಾಡುತ್ತಿರೋ ಸಂದರ್ಭದಲ್ಲಿ ನಿಮ್ಮೊಂದಿಗೆ ಯಾರು ಬಂದಿದ್ದಾರೆ ಅಂತ ಕೇಳಿದಾಗ ಪತಿ ಮತ್ತು ಅಮ್ಮಾ ಎಂದು ಹೇಳುತ್ತಾರೆ. ವಿನಯ್ ಪ್ರಸಾದ್ ಅವರನ್ನು ನೋಡಿದ ಸುದೀಪ್, ಕೈ ಮುಗಿದು ನಮಸ್ಕಾರ ಮಾಡುತ್ತಾರೆ. ವಿನಯ್ ಪ್ರಸಾದ್ ಅವರು ಪ್ರೇಕ್ಷಕರ ಗ್ಯಾಲರಿಯಿಂದಲೇ ಮಗಳ ಕುರಿತು ಮಾತನಾಡಲು ಆರಂಭಿಸುತ್ತಾರೆ.&lt;/p&gt;&lt;img&gt;&lt;p&gt;ಕೂಡಲೇ ವೇದಿಕೆಯಿಂದ ಕೆಳಗಿಳಿದು ವಿನಯಾ ಪ್ರಸಾದ್ ಬಳಿ ಬಂದು ಅವರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ನೀವು ಇಲ್ಲಿ ನಿಂತು, ನಾವು ಅಲ್ಲಿ ನಿಲ್ಲೋದು ಚೆನ್ನಾಗಿರಲ್ಲ ಎಂದು ಕೈ ಹಿಡಿದುಕೊಂಡು ವೇದಿಕೆಗೆ ಕರೆದುಕೊಂಡು ಬರುವ ಮೂಲಕ ಹಿರಿಯ ನಟಿಗೆ ಗೌರವ ತೋರಿಸುತ್ತಾರೆ. ವೇದಿಕೆ ಮೇಲೆ ಬರುತ್ತಿದ್ದಂತೆ, ಈಗ ನಮ್ಮ ಸ್ಟೇಜ್&zwnj;ಗೆ ಒಂದು ಕಳೆ ಬಂತು ಎಂದು ಸುದೀಪ್ ವ್ಯಕ್ತಪಡಿಸುತ್ತಾರೆ.&lt;/p&gt;&lt;img&gt;&lt;p&gt;ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ ಸುದೀಪ್ ಅವರ ಸರಳತೆ ವಿನಯಾ ಪ್ರಸಾದ್ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿಮ್ಮ ಈ ನಡೆಯಿಂದಲೇ ನೀವು ಸುದೀಪ ಆಗಿರೋದು. ನೀವು ಇದ್ದಲ್ಲಿ ಗೌರವ ಇದ್ದೇ ಇರುತ್ತೆ, ನಿಮ್ಮ ಗೌರವಕ್ಕೆ ಆಭಾರಿಯಾಗಿದ್ದೇನೆ ಎಂದು ವಿನಯ ಪ್ರಸಾದ್ ಎಂದು ವಿನಯಾ ಪ್ರಸಾದ್ ಹೇಳುತ್ತಾರೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಕನ್ನಡ ಜೊತೆ ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿಯೂ ಆರಂಭವಾಗಿದೆ. ಈ ಬಾರಿಯ ಶೋಗೆ ಸೆಲೆಬ್ರಿಟಿಗಳ ಜೊತೆ ಕಾಮನ್ ಮ್ಯಾನ್ ಸಹ ಆಗಮಿಸುತ್ತಿದ್ದಾರೆ. ಈ ಬಾರಿಯೂ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಬಿಗ್&zwnj;ಬಾಸ್ ನಡೆಯುತ್ತಿದೆ.=&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-13-sudeep-s-simplicity-appreciated-by-fans-and-veteran-actress-vinaya-prasad-mrq-52on0gl"/>
        </item>
        <item>
            <title><![CDATA[ಸರ್, ನಾನು ಮನೆ ಕಟ್ಟಬೇಕು ಎಂದ ಗಗನ್ ಚಿನ್ನಪ್ಪ: ಶುಭ ಹಾರೈಸಿ ಬಿಗ್‌ ಬಾಸ್ ಮನೆಗೆ ಕಳಿಸಿಕೊಟ್ಟ ಕಿಚ್ಚ!]]></title>
            <link>https://kannada.asianetnews.com/tv-talk/bigg-boss-kannada-13-gagan-chinnappa-promises-entertainment-inside-the-house-for-a-new-game-gvd/articleshow-1uws3xq</link>
            <guid isPermaLink="true">https://kannada.asianetnews.com/tv-talk/bigg-boss-kannada-13-gagan-chinnappa-promises-entertainment-inside-the-house-for-a-new-game-gvd/articleshow-1uws3xq</guid>
            <pubDate>Sun, 06 Sep 2026 21:18:45 +0530</pubDate>
            <description><![CDATA[&lt;p&gt;&lsquo;ಸೀತಾ ರಾಮ&rsquo; ಧಾರಾವಾಹಿಯ ರಾಮ್&zwnj; ಪಾತ್ರದ ಮೂಲಕ ಜನಪ್ರಿಯತೆ ಗಳಿಸಿರುವ ನಟ ಗಗನ್ ಚಿನ್ನಪ್ಪ &lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕೊಡಗಿನಿಂದ ನಟನೆಯತ್ತ ಬಂದ ಗಗನ್, ಜರ್ಮನಿ ಮತ್ತು ಓಮನ್&zwnj;ನಲ್ಲಿ ಕೆಲಸ ಮಾಡಿದ ಬಳಿಕ ಕಿರುತೆರೆಗೆ ಕಾಲಿಟ್ಟಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vpg9q0mdecn4tk4h5rksz1,imgname-jv-1788709709536.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ರ ಗ್ರ್ಯಾಂಡ್ ಓಪನಿಂಗ್ ಒಂದರ ಹಿಂದೆ ಒಂದರಂತೆ ಕುತೂಹಲಕಾರಿ ಎಂಟ್ರಿಗಳಿಗೆ ಸಾಕ್ಷಿಯಾಗುತ್ತಿದೆ. ಇದೀಗ ಕಿರುತೆರೆಯ ಜನಪ್ರಿಯ ನಟ ಗಗನ್ ಚಿನ್ನಪ್ಪ ಬಿಗ್&zwnj; ಬಾಸ್ ಮನೆಗೆ ಕಾಲಿಟ್ಟಿದ್ದಾರೆ. &lsquo;ಸೀತಾ ರಾಮ&rsquo; ಧಾರಾವಾಹಿಯ ರಾಮ್ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಗಗನ್, ಈ ಬಾರಿ ಬಿಗ್&zwnj; ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಮನರಂಜನೆ ನೀಡುವ ಭರವಸೆಯೊಂದಿಗೆ ಎಂಟ್ರಿ ಕೊಟ್ಟಿದ್ದಾರೆ.&lt;/p&gt;&lt;p&gt;ವೇದಿಕೆಗೆ ಬಂದ ಗಗನ್, ಮನೆ ಕಟ್ಟುವ ಜವಾಬ್ದಾರಿ ತಮ್ಮ ಮೇಲಿದೆ ಎಂಬ ರೀತಿಯಲ್ಲಿ ಮಾತನಾಡಿದ್ದು, ಬಿಗ್&zwnj; ಬಾಸ್ ಮನೆಯಲ್ಲಿ ಮನರಂಜನೆಗೆ ಯಾವುದೇ ಕೊರತೆ ಇರಲ್ಲ ಎಂಬ ಸೂಚನೆಯನ್ನೂ ನೀಡಿದ್ದಾರೆ. ಗಗನ್ ಅವರ ಎಂಟ್ರಿಗೆ ಅವರ ಅಭಿಮಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.&lt;/p&gt;&lt;p&gt;&lt;strong&gt;ಕೊಡಗಿನ ಹುಡುಗನಿಂದ ಕಿರುತೆರೆಯ ರಾಮ್&zwnj;ವರೆಗೆ!&lt;/strong&gt;&lt;/p&gt;&lt;p&gt;ಮೂಲತಃ ಕೊಡಗಿನವರಾದ ಗಗನ್ ಚಿನ್ನಪ್ಪ, ನೇರವಾಗಿ ನಟನೆಯ ಕ್ಷೇತ್ರಕ್ಕೆ ಬಂದವರಲ್ಲ. ಮೂರು ವರ್ಷಗಳ ಕಾಲ ಜರ್ಮನಿ ಹಾಗೂ ಓಮನ್&zwnj;ನಲ್ಲಿ ಕೆಲಸ ಮಾಡಿದ್ದ ಅವರು, ಬಳಿಕ ಭಾರತಕ್ಕೆ ಮರಳಿ ಐಟಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ನಟನೆಯ ಮೇಲಿನ ಆಸಕ್ತಿ ಅವರನ್ನು ಮತ್ತೊಂದು ದಿಕ್ಕಿನತ್ತ ಕರೆದೊಯ್ದಿತು. &lsquo;ಮಂಗಳಗೌರಿ ಮದುವೆ&rsquo; ಧಾರಾವಾಹಿಯ ಆಡಿಷನ್&zwnj;ಗೆ ತೆರಳಿದ್ದ ಗಗನ್ ಆಯ್ಕೆಯಾದರು. ಈ ಧಾರಾವಾಹಿಯಲ್ಲಿ ರಾಜೀವ್ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದರು.&lt;/p&gt;&lt;p&gt;&lt;strong&gt;&lsquo;ಸೀತಾ ರಾಮ&rsquo; ಕೊಟ್ಟ ದೊಡ್ಡ ಗುರುತು&lt;/strong&gt;&lt;/p&gt;&lt;p&gt;ಗಗನ್ ಅವರ ವೃತ್ತಿಜೀವನದಲ್ಲಿ &lsquo;ಸೀತಾ ರಾಮ&rsquo; ಧಾರಾವಾಹಿ ಪ್ರಮುಖ ತಿರುವು ನೀಡಿತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಈ ಧಾರಾವಾಹಿಯಲ್ಲಿ ರಾಮ್ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಕನ್ನಡದ ಜೊತೆಗೆ ತೆಲುಗು ಧಾರಾವಾಹಿಗಳಲ್ಲೂ ನಟಿಸಿರುವ ಗಗನ್&zwnj;ಗೆ ಸಿನಿಮಾದ ಮೇಲೂ ವಿಶೇಷ ಆಸಕ್ತಿ ಇದೆ. ಇದೇ ಕಾರಣಕ್ಕೆ &lsquo;ಅಲೆಗ್ಸಾಂಡರ್&rsquo; ಸಿನಿಮಾದಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಬಿಗ್&zwnj; ಬಾಸ್ ಅನುಭವ ಹೊಸದಲ್ಲ!&lt;/strong&gt;&lt;/p&gt;&lt;p&gt;ಗಗನ್ ಚಿನ್ನಪ್ಪ ಅವರಿಗೆ ಬಿಗ್&zwnj; ಬಾಸ್ ವೇದಿಕೆ ಸಂಪೂರ್ಣ ಹೊಸದೇನಲ್ಲ. ಈ ಹಿಂದೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್&zwnj; ಬಾಸ್ ಕನ್ನಡ ಮಿನಿ ಸೀಸನ್ನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈಗ ಮತ್ತೊಮ್ಮೆ ಸುದೀಪ್ ಅವರ ನಿರೂಪಣೆಯಲ್ಲೇ &lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ಕ್ಕೆ ಎಂಟ್ರಿ ಕೊಟ್ಟಿರುವುದು ವಿಶೇಷ. ಹೀಗಾಗಿ ಬಿಗ್&zwnj; ಬಾಸ್ ಮನೆಯ ವಾತಾವರಣ ಹಾಗೂ ಆಟದ ಸ್ವರೂಪದ ಬಗ್ಗೆ ಅವರಿಗೆ ಈಗಾಗಲೇ ಒಂದು ರೀತಿಯ ಅನುಭವವೂ ಇದೆ.&lt;/p&gt;&lt;p&gt;&lt;strong&gt;&lsquo;ಮನೆ ಕಟ್ಟಬೇಕು&rsquo; ಎಂದ ಗಗನ್!&lt;/strong&gt;&lt;/p&gt;&lt;p&gt;ಬಿಗ್&zwnj; ಬಾಸ್ ವೇದಿಕೆಯಲ್ಲಿ ಗಗನ್ ತಮ್ಮ ಜೀವನದ ಪಯಣದ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ತಾವು ನಡೆದು ಬಂದ ದಾರಿ, ಎದುರಿಸಿದ ಕಷ್ಟಗಳು ಹಾಗೂ ಮನೆ ಕಟ್ಟಿಕೊಳ್ಳಲು ಹಣ ಹೊಂದಿಸುತ್ತಿರುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗಗನ್ ಅವರ ಮಾತುಗಳನ್ನು ಆಲಿಸಿದ ಕಿಚ್ಚ ಸುದೀಪ್, ನಟನಿಗೆ ಶುಭ ಹಾರೈಸಿದ್ದಾರೆ. ಕಿರುತೆರೆಯಲ್ಲಿ ಈಗಾಗಲೇ ಅಪಾರ ಅಭಿಮಾನಿ ಬಳಗ ಹೊಂದಿರುವ ಗಗನ್&zwnj;ಗೆ ಬಿಗ್&zwnj; ಬಾಸ್ ಮೂಲಕ ಮತ್ತಷ್ಟು ಜನರನ್ನು ತಲುಪುವ ಅವಕಾಶ ಸಿಕ್ಕಿದೆ.&lt;/p&gt;&lt;h2&gt;&lt;strong&gt;ಬಿಗ್&zwnj; ಬಾಸ್ ಮನೆಯಲ್ಲಿ ಗಗನ್ ಗೇಮ್ ಹೇಗಿರಲಿದೆ?&lt;/strong&gt;&lt;/h2&gt;&lt;p&gt;&lsquo;ಸೀತಾ ರಾಮ&rsquo;ದ ರಾಮ್ ಪಾತ್ರದಲ್ಲಿ ಸೌಮ್ಯ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುವ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿರುವ ಗಗನ್, ಬಿಗ್&zwnj; ಬಾಸ್ ಮನೆಯೊಳಗೆ ಹೇಗೆ ಬದಲಾಗುತ್ತಾರೆ ಎಂಬುದೇ ಈಗ ಕುತೂಹಲ. ಈಗಾಗಲೇ ಬಿಗ್&zwnj; ಬಾಸ್ ಅನುಭವ ಹೊಂದಿರುವ ಅವರು ಈ ಬಾರಿ ತಮ್ಮ ಗೇಮ್ ಪ್ಲ್ಯಾನ್ ಹೇಗೆ ರೂಪಿಸಿಕೊಳ್ಳುತ್ತಾರೆ? ಸ್ಪರ್ಧಿಗಳೊಂದಿಗೆ ಹೇಗೆ ಬೆರೆಯುತ್ತಾರೆ? ಮನೆ ಕಟ್ಟುವ ಜವಾಬ್ದಾರಿಯ ಜೊತೆಗೆ ಮನರಂಜನೆಯಲ್ಲೂ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ. &lsquo;ಸೀತಾ ರಾಮ&rsquo;ದ ರಾಮ್&zwnj; ಬಿಗ್&zwnj; ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದಕ್ಕೆ ಫ್ಯಾನ್ಸ್ ಖುಷಿಯಾಗಿದ್ದು, ಗಗನ್ ಅವರ ಈ ಹೊಸ ಇನ್ನಿಂಗ್ಸ್&zwnj; ಮೇಲೆ ನಿರೀಕ್ಷೆ ಹೆಚ್ಚಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-kannada-13-gagan-chinnappa-promises-entertainment-inside-the-house-for-a-new-game-gvd/articleshow-1uws3xq"/>
        </item>
        <item>
            <title><![CDATA[ಕಿಚ್ಚ ಸುದೀಪ್ ಮುಂದೆ ಖಡಕ್ಕಾಗಿ 'ಜನರ ಸಿಂಪತಿ ಬೇಡ' ಎಂದ ರಂಗಭೂಮಿ ಕಲಾವಿದ ಅವಿನಾಶ್!]]></title>
            <link>https://kannada.asianetnews.com/tv-talk/bigg-boss-kannada-13-avinash-shatamarshan-enters-the-house-says-i-don-t-want-sympathy-gvd/articleshow-9get8f4</link>
            <guid isPermaLink="true">https://kannada.asianetnews.com/tv-talk/bigg-boss-kannada-13-avinash-shatamarshan-enters-the-house-says-i-don-t-want-sympathy-gvd/articleshow-9get8f4</guid>
            <pubDate>Sun, 06 Sep 2026 21:03:22 +0530</pubDate>
            <description><![CDATA[&lt;p&gt;&lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ರ ಮೂರನೇ ಸ್ಪರ್ಧಿಯಾಗಿ ರಂಗಭೂಮಿ ಕಲಾವಿದ ಹಾಗೂ ನಟ ಅವಿನಾಶ್ ಷಠಮರ್ಶನ್ ಬಿಗ್&zwnj;ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್&zwnj; ಬಾಸ್ ವೇದಿಕೆಯಲ್ಲಿ &lsquo;ನನಗೆ ಜನರ ಸಿಂಪತಿ ಬೇಡ&rsquo; ಎಂದು ಖಡಕ್ ಹೇಳಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vnkz9k2c4rbn67ja655nvy,imgname-kb-1788708781363.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ರ ಗ್ರ್ಯಾಂಡ್ ಓಪನಿಂಗ್&zwnj;ಗೆ ಒಂದೊಂದೇ ಸ್ಪರ್ಧಿಗಳ ಎಂಟ್ರಿ ಕಳೆ ಹೆಚ್ಚಿಸುತ್ತಿದೆ. ಜಗ್ಗು ಮಮ್ಮಿ ಹಾಗೂ ಸೌಂದರ್ಯ ಶೆಟ್ಟಿ ಬಳಿಕ ಇದೀಗ ಮೂರನೇ ಸ್ಪರ್ಧಿಯಾಗಿ ರಂಗಭೂಮಿ ಕಲಾವಿದ ಹಾಗೂ ನಟ ಅವಿನಾಶ್ ಷಠಮರ್ಶನ್ ಬಿಗ್&zwnj; ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ವೇದಿಕೆಯ ಮೇಲೆ ಹಾಡಿನ ಮೂಲಕವೇ ತಮ್ಮ ಎಂಟ್ರಿ ಕೊಟ್ಟ ಅವಿನಾಶ್, ಮೊದಲ ಪರಿಚಯದಲ್ಲೇ ತಮ್ಮ ಖಡಕ್ ಮಾತುಗಳಿಂದ ಗಮನ ಸೆಳೆದಿದ್ದಾರೆ.&lt;/p&gt;&lt;p&gt;ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ತಮ್ಮದೇ ಗುರುತು ಮೂಡಿಸಿಕೊಂಡಿರುವ ಅವಿನಾಶ್, ಬಿಗ್&zwnj; ಬಾಸ್ ವೇದಿಕೆಯಲ್ಲಿ ತಮ್ಮ ಬಗ್ಗೆ ಪರಿಚಯಿಸಿಕೊಳ್ಳುವ ರೀತಿಯೇ ವಿಭಿನ್ನವಾಗಿತ್ತು. ರಾಷ್ಟ್ರೀಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ &lsquo;ಅತ್ಯುತ್ತಮ ನಟ&rsquo; ಪ್ರಶಸ್ತಿ ಪಡೆದಿರುವ ಅವರು, ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ದಯವಿಟ್ಟು ಗಮನಿಸಿ&rsquo;, &lsquo;ಕನ್ನಡಕ್ಕಾಗಿ ಒಂದನ್ನು ಒತ್ತಿ&rsquo; ಚಿತ್ರಗಳಲ್ಲಿ ನಟನೆ&lt;/strong&gt;&lt;/p&gt;&lt;p&gt;ರಂಗಭೂಮಿಯಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿರುವ ಅವಿನಾಶ್ ಷಠಮರ್ಶನ್, ಸಿನಿಮಾಗಳಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. &lsquo;ದಯವಿಟ್ಟು ಗಮನಿಸಿ&rsquo; ಹಾಗೂ &lsquo;ಕನ್ನಡಕ್ಕಾಗಿ ಒಂದನ್ನು ಒತ್ತಿ&rsquo; ಸಿನಿಮಾಗಳಲ್ಲಿ ನಟಿಸಿರುವ ಅವರು, ಇದೀಗ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಮೂಲಕ ದೊಡ್ಡ ಪ್ರೇಕ್ಷಕ ವರ್ಗವನ್ನು ತಲುಪಲು ಸಜ್ಜಾಗಿದ್ದಾರೆ. ಮುಂಬೈನಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ &lsquo;ಅತ್ಯುತ್ತಮ ನಟ&rsquo; ಪ್ರಶಸ್ತಿ ಪಡೆದಿರುವುದು ಅವರ ರಂಗಭೂಮಿ ಪಯಣದ ಪ್ರಮುಖ ಸಾಧನೆಗಳಲ್ಲೊಂದು.&lt;/p&gt;&lt;p&gt;&lt;strong&gt;ಅವಿನಾಶ್ ಪತ್ನಿ ಪ್ರಿಯಾ ಕೂಡ ನಟಿಯೇ!&lt;/strong&gt;&lt;/p&gt;&lt;p&gt;ಅವಿನಾಶ್ ಅವರ ಬಿಗ್&zwnj; ಬಾಸ್ ಎಂಟ್ರಿಗೆ ಮತ್ತೊಂದು ವಿಶೇಷತೆಯೂ ಇದೆ. ಅವರ ಪತ್ನಿ ಪ್ರಿಯಾ ಕೂಡ ಕನ್ನಡದ ಪರಿಚಿತ ನಟಿಯಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ದುನಿಯಾ ವಿಜಯ್ ಅಭಿನಯದ &lsquo;ಭೀಮ&rsquo; ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಗಿರಿಜಾ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಪತಿಯನ್ನು ಬಿಗ್&zwnj; ಬಾಸ್ ಮನೆಗೆ ಬೀಳ್ಕೊಡುವ ಸಂದರ್ಭದಲ್ಲಿ ಪ್ರಿಯಾ ಭಾವುಕರಾದರು. ಮದುವೆಯಾಗಿ 12 ವರ್ಷ ಆಗಿದೆ. ಕಳೆದ ಒಂದು ವರ್ಷದಲ್ಲಿ ಪತಿಯಿಂದ ಒಂದು ದಿನವೂ ದೂರ ಉಳಿದಿರಲಿಲ್ಲ. ಈಗ ಅವರನ್ನು ಬಿಟ್ಟಿರಬೇಕಾಗಿದೆ ಎಂದು ವೇದಿಕೆಯಲ್ಲಿ ಹೇಳಿಕೊಂಡರು.&lt;/p&gt;&lt;p&gt;&lt;strong&gt;&lsquo;ನನಗೆ ಜನರ ಸಿಂಪತಿ ಬೇಡ!&rsquo;&lt;/strong&gt;&lt;/p&gt;&lt;p&gt;ಬಿಗ್&zwnj; ಬಾಸ್ ಮನೆಯೊಳಗಿನ ತಮ್ಮ ಆಟದ ಬಗ್ಗೆ ಅವಿನಾಶ್ ಯಾವುದೇ ಮುಚ್ಚುಮರೆ ಇಲ್ಲದೆ ಮಾತನಾಡಿದ್ದಾರೆ. ನನಗೆ ಯಾವುದೇ ದುರಹಂಕಾರ, ಸೊಕ್ಕು, ಗಾಂಚಾಲಿ ಅಥವಾ ಜನರ ಸಿಂಪತಿ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಆಟದ ವಿಚಾರದಲ್ಲಿ ಮಾತ್ರ ರಾಜಿಯಾಗುವುದಿಲ್ಲ ಎನ್ನುವ ಸೂಚನೆಯನ್ನೂ ನೀಡಿದ್ದಾರೆ. ಆಟಕ್ಕಾಗಿ ಸ್ವಲ್ಪ ಕಿತಾಪತಿ, ಹಠ, ತಲೆಹರಟೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಊಸರವಳ್ಳಿ ಗುಣವನ್ನು ಜೊತೆಯಲ್ಲೇ ಕೊಂಡೊಯ್ಯುತ್ತಿದ್ದೇನೆ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ರಂಗಭೂಮಿಯ ಕಲಾವಿದನ ಆಟ ಹೇಗಿರಲಿದೆ?&lt;/strong&gt;&lt;/h2&gt;&lt;p&gt;ಬಿಗ್&zwnj; ಬಾಸ್ ವೇದಿಕೆಯಲ್ಲಿ ಅವಿನಾಶ್ ಅವರ ಮಾತುಗಳು ಹಾಗೂ ಆತ್ಮವಿಶ್ವಾಸ ಈಗಾಗಲೇ ಕುತೂಹಲ ಮೂಡಿಸಿವೆ. ರಂಗಭೂಮಿಯ ಅನುಭವ, ನಟನೆಯ ಕೌಶಲ್ಯ ಮತ್ತು ನೇರವಾಗಿ ಮಾತನಾಡುವ ಸ್ವಭಾವವನ್ನು ಅವರು ಬಿಗ್&zwnj; ಬಾಸ್ ಮನೆಯ ಆಟದಲ್ಲಿ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೇ ಈಗ ಪ್ರೇಕ್ಷಕರ ಪ್ರಶ್ನೆ. ಸಿಂಪತಿ ಬೇಡ, ಅನುಕಂಪ ಬೇಡ ಎಂದು ಆರಂಭದಲ್ಲೇ ಖಡಕ್ ಆಗಿ ಘೋಷಿಸಿರುವ ಅವಿನಾಶ್, ಬಿಗ್&zwnj; ಬಾಸ್ ಮನೆಯಲ್ಲಿ ಆಟ, ಹಠ, ಕಿತಾಪತಿ ಹಾಗೂ ತಂತ್ರಗಾರಿಕೆಯಿಂದ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-kannada-13-avinash-shatamarshan-enters-the-house-says-i-don-t-want-sympathy-gvd/articleshow-9get8f4"/>
        </item>
        <item>
            <title><![CDATA[ಸ್ವಲ್ಪ ಯಾಮಾರಿದರೂ ನೈಟ್‌ ಔಟ್ ಆಗಿಬಿಡುತ್ತೆ: ಸೌಂದರ್ಯ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್!]]></title>
            <link>https://kannada.asianetnews.com/tv-talk/bigg-boss-kannada-13-splitsvilla-fame-soundarya-shetty-enters-the-house-as-second-contestant-gvd/articleshow-vxlspk9</link>
            <guid isPermaLink="true">https://kannada.asianetnews.com/tv-talk/bigg-boss-kannada-13-splitsvilla-fame-soundarya-shetty-enters-the-house-as-second-contestant-gvd/articleshow-vxlspk9</guid>
            <pubDate>Sun, 06 Sep 2026 20:48:20 +0530</pubDate>
            <description><![CDATA[&lt;p&gt;&lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ರ ಎರಡನೇ ಸ್ಪರ್ಧಿಯಾಗಿ ಮಾಡೆಲ್ ಹಾಗೂ &lsquo;MTV Splitsvilla Season 16&rsquo; ಖ್ಯಾತಿಯ ಸೌಂದರ್ಯ ಶೆಟ್ಟಿ ಅಲಿಯಾಸ್ ಸ್ಯಾಂಡಿ ಎಂಟ್ರಿ ನೀಡಿದ್ದಾರೆ. ಮಂಗಳೂರು ಮೂಲದ ಸೌಂದರ್ಯ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vmr7s7wg774nxck6b3vkxq,imgname-bk-1788707872550.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo;ರ ಗ್ರ್ಯಾಂಡ್ ಓಪನಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಒಂದೊಂದೇ ಸ್ಪರ್ಧಿಗಳ ಎಂಟ್ರಿ ಕುತೂಹಲ ಹೆಚ್ಚಿಸುತ್ತಿದೆ. ಮೊದಲ ಸ್ಪರ್ಧಿಯಾಗಿ ಜಗ್ಗು ಮಮ್ಮಿ ಮನೆಗೆ ಕಾಲಿಟ್ಟ ಬಳಿಕ ಇದೀಗ ಎರಡನೇ ಸ್ಪರ್ಧಿಯಾಗಿ ಮಾಡೆಲ್ ಹಾಗೂ ರಿಯಾಲಿಟಿ ಶೋ ಖ್ಯಾತಿಯ ಸೌಂದರ್ಯ ಶೆಟ್ಟಿ ಬಿಗ್&zwnj; ಬಾಸ್ ಮನೆ ಪ್ರವೇಶಿಸಿದ್ದಾರೆ. ಬೋಲ್ಡ್ ಲುಕ್ ಹಾಗೂ ಫ್ಯಾಷನ್ ಸ್ಟೈಲ್ ಮೂಲಕವೇ ಗಮನ ಸೆಳೆದಿರುವ ಸೌಂದರ್ಯ ಅವರ ಎಂಟ್ರಿ ಇದೀಗ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.&lt;/p&gt;&lt;p&gt;&lt;strong&gt;ಯಾರಿವರು ಸೌಂದರ್ಯ ಶೆಟ್ಟಿ?&lt;/strong&gt;&lt;/p&gt;&lt;p&gt;ಸೌಂದರ್ಯ ಶೆಟ್ಟಿ ಅವರ ಪೂರ್ಣ ಹೆಸರು ಸೌಂದರ್ಯ ಯುವರಾಜ್ ಶೆಟ್ಟಿ. ಮೂಲತಃ ಕರ್ನಾಟಕದ ಮಂಗಳೂರಿನವರಾದ ಅವರು, ಸೋಷಿಯಲ್ ಮೀಡಿಯಾದಲ್ಲಿ &lsquo;ಸ್ಯಾಂಡಿ&rsquo; ಎಂದೇ ಜನಪ್ರಿಯರಾಗಿದ್ದಾರೆ. ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ಅವರನ್ನು ಪ್ರೀತಿಯಿಂದ &lsquo;ಸ್ಯಾಂಡಿ&rsquo; ಎಂದೇ ಕರೆಯುತ್ತಿದ್ದರು ಎನ್ನಲಾಗಿದೆ.&lt;/p&gt;&lt;p&gt;ಫ್ಯಾಷನ್, ಮಾಡೆಲಿಂಗ್ ಮತ್ತು ಲೈಫ್&zwnj;ಸ್ಟೈಲ್&zwnj;ಗೆ ಸಂಬಂಧಿಸಿದ ಕಂಟೆಂಟ್&zwnj;ಗಳ ಮೂಲಕ ಗುರುತಿಸಿಕೊಂಡಿರುವ ಸೌಂದರ್ಯ, ಬಳಿಕ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ &lsquo;MTV Splitsvilla Season 16 &ndash; Pyaar Ya Paisa&rsquo; ಮೂಲಕ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು. ಈ ಶೋನಲ್ಲಿ ತಮ್ಮ ಆತ್ಮವಿಶ್ವಾಸ ಹಾಗೂ ನೇರ ಮಾತಿನ ಶೈಲಿಯಿಂದ ಗಮನ ಸೆಳೆದ ಅವರು ಫೈನಲಿಸ್ಟ್ ಆಗಿಯೂ ಹೊರಹೊಮ್ಮಿದ್ದರು.&lt;/p&gt;&lt;p&gt;&lt;strong&gt;ಸ್ಪ್ಲಿಟ್ಸ್&zwnj;ವಿಲ್ಲಾದಲ್ಲಿ &lsquo;ಕ್ವೀನ್&rsquo; ಆಗಿದ್ದ ಸ್ಯಾಂಡಿ&lt;/strong&gt;&lt;/p&gt;&lt;p&gt;ಸ್ಪ್ಲಿಟ್ಸ್&zwnj;ವಿಲ್ಲಾದಲ್ಲಿ ಸೌಂದರ್ಯ ಶೆಟ್ಟಿ ತಮ್ಮ ಆಟದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದರು. ಲವ್ ಟ್ರ್ಯಾಪ್&zwnj;ಗಳಿಗೆ ಸಿಲುಕದೆ ಆಟವನ್ನು ಆಟದ ರೀತಿಯಲ್ಲೇ ಆಡಿದ ಅವರು, ಸಿಕ್ಕ ಅವಕಾಶ ಹಾಗೂ ಅಡ್ವಾಂಟೇಜ್&zwnj;ಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದರು. ಇದೇ ಕಾರಣಕ್ಕೆ ಶೋನಲ್ಲಿ ಅವರಿಗೆ &lsquo;ಕ್ವೀನ್&rsquo; ಎಂಬ ಟ್ಯಾಗ್ ಕೂಡ ಸಿಕ್ಕಿತ್ತು. ಈಗ ಇದೇ ಆತ್ಮವಿಶ್ವಾಸದೊಂದಿಗೆ ಸೌಂದರ್ಯ ಬಿಗ್&zwnj; ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಹೀಗಾಗಿ ಸ್ಪ್ಲಿಟ್ಸ್&zwnj;ವಿಲ್ಲಾದಲ್ಲಿ ಕಂಡ ಅವರ ಗೇಮ್ ಪ್ಲೇ ಇಲ್ಲಿ ಹೇಗಿರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.&lt;/p&gt;&lt;p&gt;&lt;strong&gt;ಸುದೀಪ್ ಮುಂದೆ ಸ್ಯಾಂಡಿ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಬಿಗ್&zwnj; ಬಾಸ್ ವೇದಿಕೆಗೆ ಸೌಂದರ್ಯ ಶೆಟ್ಟಿ ಎಂಟ್ರಿ ಕೊಡುತ್ತಿದ್ದಂತೆ ಕಿಚ್ಚ ಸುದೀಪ್ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಪಾರ್ಟಿ ಹಾಗೂ ನೈಟ್&zwnj;ಔಟ್&zwnj;ಗಳನ್ನು ಇಷ್ಟಪಡುವ ಸೌಂದರ್ಯ ಅವರ ಬಗ್ಗೆ ಸುದೀಪ್ ಕೂಡ ತಮಾಷೆಯಾಗಿ ಮಾತನಾಡಿದ್ದಾರೆ. &lsquo;ನೀವು ಪಾರ್ಟಿ ಪ್ರಿಯೆ ಎಂದಿದ್ದೀರಿ. ಸ್ವಲ್ಪ ಯಾಮಾರಿದರೂ ನೈಟ್&zwnj; ಔಟ್ ಆಗಿಬಿಡುತ್ತೆ&rsquo; ಎಂಬ ರೀತಿಯಲ್ಲಿ ಸೌಂದರ್ಯ ಅವರ ಪಾರ್ಟಿ ಲವ್ ಬಗ್ಗೆ ಸುದೀಪ್ ತಮಾಷೆ ಮಾಡಿದ್ದಾರೆ. ಬಳಿಕ ಸೌಂದರ್ಯಗೆ ಬೋರ್ಡಿಂಗ್ ಪಾಸ್ ನೀಡಿ ಬಿಗ್&zwnj; ಬಾಸ್ ಮನೆಯೊಳಗೆ ಕಳುಹಿಸಿದ್ದಾರೆ.&lt;/p&gt;&lt;p&gt;&lt;strong&gt;ಬಿಗ್&zwnj; ಬಾಸ್ ಮನೆಯಲ್ಲಿ ಸ್ಯಾಂಡಿ ಹೇಗೆ ಆಡ್ತಾರೆ?&lt;/strong&gt;&lt;/p&gt;&lt;p&gt;ಸ್ಪ್ಲಿಟ್ಸ್&zwnj;ವಿಲ್ಲಾದಲ್ಲಿ ತಮ್ಮದೇ ಆದ ಸ್ಟೈಲ್&zwnj;ನಲ್ಲಿ ಆಟವಾಡಿ ಗಮನ ಸೆಳೆದಿರುವ ಸೌಂದರ್ಯ ಶೆಟ್ಟಿ, ಬಿಗ್&zwnj; ಬಾಸ್ ಕನ್ನಡದಲ್ಲಿ ಯಾವ ರೀತಿಯ ಗೇಮ್ ಆಡಲಿದ್ದಾರೆ ಎಂಬುದೇ ಈಗ ಪ್ರಮುಖ ಕುತೂಹಲ. ನೇರವಾಗಿ ಮಾತನಾಡುವ ಸ್ವಭಾವ, ಆತ್ಮವಿಶ್ವಾಸ ಹಾಗೂ ರಿಯಾಲಿಟಿ ಶೋ ಅನುಭವ ಅವರಿಗೆ ಎಷ್ಟು ಪ್ಲಸ್ ಆಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ. ಅದರಲ್ಲೂ ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಸೌಂದರ್ಯ ಅವರ ಪರಿಚಯ ಹೊಸದು. ಹೀಗಾಗಿ ಬಿಗ್&zwnj; ಬಾಸ್ ಮನೆಯೊಳಗಿನ ಅವರ ನಡೆ, ಆಟ ಹಾಗೂ ಇತರ ಸ್ಪರ್ಧಿಗಳೊಂದಿಗೆ ಅವರು ಬೆಳೆಸಿಕೊಳ್ಳುವ ಸಂಬಂಧಗಳು ಹೇಗಿರಲಿವೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.&lt;/p&gt;&lt;h2&gt;&lt;strong&gt;ಒಂದೇ ಸಮಯದಲ್ಲಿ ನಾಲ್ಕು ಭಾಷೆಗಳಲ್ಲಿ ಬಿಗ್&zwnj; ಬಾಸ್&lt;/strong&gt;&lt;/h2&gt;&lt;p&gt;ಈ ಬಾರಿಯ ಸೀಸನ್&zwnj;ನ ಮತ್ತೊಂದು ವಿಶೇಷವೆಂದರೆ ಕನ್ನಡದ ಜತೆಗೆ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳ ಬಿಗ್&zwnj; ಬಾಸ್ ಶೋಗಳೂ ಏಕಕಾಲದಲ್ಲಿ ಆರಂಭವಾಗಿವೆ. ನಾಲ್ಕು ಭಾಷೆಗಳ ಬಿಗ್&zwnj; ಬಾಸ್ ಕಾರ್ಯಕ್ರಮಗಳು ಒಂದೇ ಸಮಯದಲ್ಲಿ ಆರಂಭವಾಗಿರುವುದು ವಿಶೇಷ ಬೆಳವಣಿಗೆಯಾಗಿದೆ. &lsquo;ಬಿಗ್&zwnj; ಬಾಸ್ ಕನ್ನಡ 13&rsquo;ರಲ್ಲಿ ಜಗ್ಗು ಮಮ್ಮಿ ಬಳಿಕ ಎರಡನೇ ಸ್ಪರ್ಧಿಯಾಗಿ ಸೌಂದರ್ಯ ಶೆಟ್ಟಿ ಎಂಟ್ರಿ ಕೊಟ್ಟಿದ್ದು, ಈ ಮೂಲಕ ಹೊಸ ಸೀಸನ್&zwnj;ನ ಗೇಮ್ ಇನ್ನಷ್ಟು ರಂಗೇರಿದೆ. ಇದೀಗ &lsquo;ಸ್ಯಾಂಡಿ&rsquo; ಬಿಗ್&zwnj; ಬಾಸ್ ಮನೆಯಲ್ಲಿ ಯಾವ ರೀತಿ ಆಟ ಕಟ್ಟುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-kannada-13-splitsvilla-fame-soundarya-shetty-enters-the-house-as-second-contestant-gvd/articleshow-vxlspk9"/>
        </item>
        <item>
            <title><![CDATA['ನೀವು ನಿಯಮ ಮುರಿದಿದ್ದೀರಿ' ಎಂದ ಸುದೀಪ್: ಗಾಬರಿಯಾದ ಜಗ್ಗು ಮಮ್ಮಿಗೆ ಬೋರ್ಡಿಂಗ್ ಪಾಸ್ ಸಿಕ್ತಾ?]]></title>
            <link>https://kannada.asianetnews.com/tv-talk/bigg-boss-kannada-13-kichcha-sudeep-gives-jaggu-mummy-a-shock-during-grand-entry-gvd/articleshow-azvgo5a</link>
            <guid isPermaLink="true">https://kannada.asianetnews.com/tv-talk/bigg-boss-kannada-13-kichcha-sudeep-gives-jaggu-mummy-a-shock-during-grand-entry-gvd/articleshow-azvgo5a</guid>
            <pubDate>Sun, 06 Sep 2026 20:34:11 +0530</pubDate>
            <description><![CDATA[&lt;p&gt;ಬಿಗ್&zwnj; ಬಾಸ್ ಕನ್ನಡ ಸೀಸನ್ 13ರ ಮೊದಲ ಸ್ಪರ್ಧಿಯಾಗಿ &lsquo;ಲವ್ ಮಾಕ್ಟೆಲ್ 3&rsquo; ಖ್ಯಾತಿಯ ಜಗ್ಗು ಮಮ್ಮಿ ಎಂಟ್ರಿ ನೀಡಿದ್ದಾರೆ. ವೇದಿಕೆಯಲ್ಲಿ ಸುದೀಪ್ ಆರಂಭದಲ್ಲೇ ಜಗ್ಗುಗೆ ಶಾಕ್ ನೀಡಿದ್ದು, ಬಳಿಕ ಆತ್ಮವಿಶ್ವಾಸ ತುಂಬಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vkyjbyf0fx33kzbys4cs1n,imgname-bkb-1788707031421.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಬಿಗ್&zwnj; ಬಾಸ್ ಕನ್ನಡ ಸೀಸನ್ 13&rsquo; ಭರ್ಜರಿ ಆರಂಭ ಕಂಡಿದ್ದು, ಮೊದಲ ಸ್ಪರ್ಧಿಯಾಗಿಯೇ &lsquo;ಲವ್ ಮಾಕ್ಟೆಲ್ 3&rsquo; ಖ್ಯಾತಿಯ ಹಾಸ್ಯನಟ ಜಗ್ಗು ಮಮ್ಮಿ ಎಂಟ್ರಿ ಕೊಟ್ಟಿದ್ದಾರೆ. ಹಳ್ಳಿಯ ಮುಗ್ಧ ಯುವಕನಾಗಿ ವೇದಿಕೆಗೆ ಬಂದ ಜಗ್ಗುಗೆ ಕಿಚ್ಚ ಸುದೀಪ್ ಆರಂಭದಲ್ಲೇ ಸಖತ್ ಶಾಕ್ ನೀಡಿದ್ದಾರೆ. ಆದರೆ ಆ ಶಾಕ್&zwnj;ನ ಹಿಂದೆ ಜಗ್ಗು ಅವರ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶವೂ ಇತ್ತು ಎಂಬುದು ವಿಶೇಷ.&lt;/p&gt;&lt;p&gt;ಹೊಸ ಸೀಸನ್&zwnj;ಗೆ ಅದ್ಧೂರಿ ಚಾಲನೆ ನೀಡಿದ ಸುದೀಪ್, ಮೊದಲಿಗೆ ಬಿಗ್&zwnj; ಬಾಸ್ ಮನೆಯ ಹೊಸ ವಿನ್ಯಾಸವನ್ನು ಪ್ರೇಕ್ಷಕರಿಗೆ ಪರಿಚಯಿಸಿದರು. ಬಳಿಕ ಮೊದಲ ಸ್ಪರ್ಧಿಯಾಗಿ &lsquo;ಲವ್ ಮಾಕ್ಟೆಲ್ 3&rsquo; ಸಿನಿಮಾದ ಹಾಸ್ಯನಟ ಜಗದೀಶ್ ಅಲಿಯಾಸ್ ಜಗ್ಗು ಮಮ್ಮಿ ವೇದಿಕೆಗೆ ಆಗಮಿಸಿದರು. ಒಂದೇ ಸಿನಿಮಾದ ಮೂಲಕ ಗಮನ ಸೆಳೆದಿದ್ದ ಜಗ್ಗು ಅವರಿಗೆ ಇದೀಗ ಬಿಗ್&zwnj;ಬಾಸ್ ವೇದಿಕೆ ಮತ್ತೊಂದು ದೊಡ್ಡ ಅವಕಾಶ ನೀಡಿದೆ.&lt;/p&gt;&lt;p&gt;&lt;strong&gt;&lsquo;ನೀವು ನಿಯಮ ಮುರಿದಿದ್ದೀರಿ!&rsquo; ಎಂದ ಸುದೀಪ್&lt;/strong&gt;&lt;/p&gt;&lt;p&gt;ವೇದಿಕೆಗೆ ಬರುತ್ತಿದ್ದಂತೆ ಜಗ್ಗು ತುಸು ನರ್ವಸ್ ಆಗಿಯೇ ಸುದೀಪ್ ಜೊತೆ ಮಾತನಾಡಿದರು. ಈ ವೇಳೆ, ನಮ್ಮೂರಿನ ಜನ ನಿಮ್ಮ ಅಭಿಮಾನಿಗಳು, ಅವರಿಗೆ ಒಮ್ಮೆ ಹಾಯ್ ಹೇಳಿ ಎಂದು ಸುದೀಪ್ ಬಳಿ ಮನವಿ ಮಾಡಿದರು. ಅಷ್ಟಕ್ಕೇ ಸುದೀಪ್ ತುಸು ಗಂಭೀರವಾಗಿ, ನೀವು ಬಿಗ್&zwnj;ಬಾಸ್ ನಿಯಮ ಮುರಿದಿದ್ದೀರಿ. ಬಿಗ್&zwnj;ಬಾಸ್&zwnj;ಗೆ ಬರುತ್ತಿರುವ ವಿಚಾರವನ್ನು ಯಾರಿಗೂ ಹೇಳುವಂತಿಲ್ಲ. ಆದರೆ ನೀವು ಇಡೀ ಊರಿನವರಿಗೆ ಹೇಳಿದ್ದೀರಲ್ಲ. ನಿಯಮ ಮುರಿದಿರುವ ನಿಮ್ಮನ್ನು ವಾಪಸ್ ಕಳಿಸುತ್ತೇವೆ ಎಂದಿದ್ದಾರೆ. ಸುದೀಪ್ ಅವರ ಮಾತು ಕೇಳಿ ಜಗ್ಗು ಕ್ಷಣಕಾಲ ಗಾಬರಿಯಾಗಿ ನಿಂತುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಜನರ ಮುಂದೆ ಅನುಮತಿ ಕೇಳಿದ ಜಗ್ಗು!&lt;/strong&gt;&lt;/p&gt;&lt;p&gt;ಆ ಬಳಿಕ ಸುದೀಪ್, ಜಗ್ಗುಗೆ ಮತ್ತೊಂದು ಟಾಸ್ಕ್ ನೀಡಿದ್ದಾರೆ. ಜನರೊಂದಿಗೆ ಮಾತನಾಡಿ ಅವರನ್ನು ಒಪ್ಪಿಸಿ, ಅವರು ಅನುಮತಿ ನೀಡಿದರೆ ಮಾತ್ರ ಬಿಗ್&zwnj;ಬಾಸ್ ಮನೆಗೆ ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ ಜಗ್ಗುಗೆ ಗೊತ್ತಾಗದಂತೆ ಸುದೀಪ್ ಅವರು ಪ್ರೇಕ್ಷಕರಿಗೆ &lsquo;ಆಗಲ್ಲ&rsquo; ಎಂದು ಹೇಳುವಂತೆ ಸನ್ನೆ ಮಾಡಿದ್ದಾರೆ. ಜಗ್ಗು ತಮ್ಮಲ್ಲಿದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿಕೊಂಡು ಜನರ ಬಳಿ ಬಿಗ್&zwnj;ಬಾಸ್&zwnj;ಗೆ ಹೋಗಲು ಅನುಮತಿ ಕೇಳಿದ್ದಾರೆ.&lt;/p&gt;&lt;p&gt;ಆದರೆ ಪ್ರೇಕ್ಷಕರು ಸುದೀಪ್ ಅವರ ಸನ್ನೆಯಂತೆ ಒಪ್ಪಿಗೆ ನೀಡಿಲ್ಲ. ಜಗ್ಗು ಅವರ ಸ್ನೇಹಿತರೂ ಕೂಡ &lsquo;ಆಗಲ್ಲ&rsquo; ಎಂದಿದ್ದಾರೆ. ಇದರಿಂದ ಮತ್ತಷ್ಟು ಗಾಬರಿಗೊಂಡ ಜಗ್ಗುಗೆ ಕೊನೆಗೆ ಸುದೀಪ್ ನಿಜವಾದ ವಿಚಾರವನ್ನು ತಿಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಬಳಿಕ ಜಗ್ಗು ಅವರ ವಿಡಿಯೋ ಪ್ಲೇ ಮಾಡಲಾಗಿದ್ದು, ಅದನ್ನು ನೋಡಿ ಅವರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.&lt;/p&gt;&lt;p&gt;&lt;strong&gt;&lsquo;ನಾನು ಬಡವ, ಗೆಳೆಯನ ಮದುವೆ ಬಟ್ಟೆ ಹಾಕಿಕೊಂಡು ಬಂದಿದ್ದೇನೆ&rsquo;&lt;/strong&gt;&lt;/p&gt;&lt;p&gt;ತಮ್ಮ ಜೀವನದ ಕಷ್ಟಗಳ ಬಗ್ಗೆ ಮಾತನಾಡಿದ ಜಗ್ಗು, ತಾವು ಬಡ ಕುಟುಂಬದಿಂದ ಬಂದಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಬಿಗ್&zwnj;ಬಾಸ್ ವೇದಿಕೆಗೆ ತಾವು ಧರಿಸಿರುವ ಬಟ್ಟೆಯೂ ಗೆಳೆಯನ ಮದುವೆಯ ಉಡುಪು ಎಂದು ಹೇಳಿದ್ದಾರೆ. ನನ್ನನ್ನು ಹುಡುಗಿಯಂತೆ ಆಡುತ್ತಾನೆ ಎಂದು ಊರಿನವರು ಲೇವಡಿ ಮಾಡುತ್ತಾರೆ ಎಂದು ತಮ್ಮ ನೋವನ್ನು ಜಗ್ಗು ಹಂಚಿಕೊಂಡಿದ್ದಾರೆ. ಮನೆಯಲ್ಲಿ ಸಾಕಷ್ಟು ಕಷ್ಟಗಳಿವೆ. ಚಿನ್ನವನ್ನು ಅಡವಿಟ್ಟಿದ್ದು, ಸುಮಾರು 2.50 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದೇನೆ. ಬಿಗ್&zwnj;ಬಾಸ್&zwnj;ನಲ್ಲಿ ಗೆದ್ದರೆ ಆ ಚಿನ್ನವನ್ನು ಬಿಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಜಗ್ಗುಗೆ ಧೈರ್ಯ ತುಂಬಿದ ಕಿಚ್ಚ&lt;/strong&gt;&lt;/h2&gt;&lt;p&gt;ಜಗ್ಗು ಅವರ ಮುಗ್ಧತೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಗಮನಿಸಿದ ಸುದೀಪ್, ಅವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ನೀವು ಬಿಗ್&zwnj;ಬಾಸ್ ಮನೆ ಒಳಗೆ ಹೋದಾಗ ಯಾರೇ ಎದುರು ಸಿಕ್ಕರೂ, &lsquo;ನಾನು ಜಗ್ಗು, ಸೀಸನ್ 13ರ ವಿನ್ನರ್&rsquo; ಎಂದು ನಿಮ್ಮನ್ನು ಪರಿಚಯಿಸಿಕೊಳ್ಳಿ ಎಂದು ಸುದೀಪ್ ಸಲಹೆ ನೀಡಿದ್ದಾರೆ.&lt;/p&gt;&lt;p&gt;ಇದಷ್ಟೇ ಅಲ್ಲದೆ, ವೇದಿಕೆಯ ಮೇಲೆಯೇ ಜಗ್ಗು ಜೊತೆ ಹಲವು ಬಾರಿ ಅಭಿನಯಿಸಿ, ಅವರಿಗೆ ರಿಹರ್ಸಲ್ ಕೂಡ ಮಾಡಿಸಿದ್ದಾರೆ. ಆರಂಭದಲ್ಲಿ ಆತಂಕದಲ್ಲಿದ್ದ ಜಗ್ಗು ಕೊನೆಗೆ ಸುದೀಪ್ ಅವರ ಮಾತುಗಳಿಂದ ಆತ್ಮವಿಶ್ವಾಸ ಪಡೆದುಕೊಂಡಿದ್ದಾರೆ. ನಂತರ ಕಿಚ್ಚ ಸುದೀಪ್ ಜಗ್ಗುಗೆ ಬೋರ್ಡಿಂಗ್ ಪಾಸ್ ನೀಡಿ ಬಿಗ್&zwnj;ಬಾಸ್ ಮನೆಯತ್ತ ಕಳುಹಿಸಿದ್ದಾರೆ. ಈ ಮೂಲಕ &lsquo;ಬಿಗ್&zwnj;ಬಾಸ್ ಕನ್ನಡ ಸೀಸನ್ 13&rsquo;ರ ಮೊದಲ ಸ್ಪರ್ಧಿಯಾಗಿ ಜಗ್ಗು ಮಮ್ಮಿ ಅಧಿಕೃತವಾಗಿ ಮನೆ ಪ್ರವೇಶಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-kannada-13-kichcha-sudeep-gives-jaggu-mummy-a-shock-during-grand-entry-gvd/articleshow-azvgo5a"/>
        </item>
        <item>
            <title><![CDATA[ಇಂಗ್ಲೆಂಡ್​ ಬಿಟ್ಟು ಭಾರತಕ್ಕೆ ಬಂದು Hanuman Anshನಿಂದ 100 ಕೋಟಿ ಗಳಿಸಿದ 21ರ ಯುವತಿ: ಯಾರೀ ನಿರ್ಮಾಪಕಿ]]></title>
            <link>https://kannada.asianetnews.com/entertainment/21-year-old-anupriya-nagar-of-england-to-earn-rs-100-crore-from-producring-hanuman-ansh-suc/articleshow-ndsii4u</link>
            <guid isPermaLink="true">https://kannada.asianetnews.com/entertainment/21-year-old-anupriya-nagar-of-england-to-earn-rs-100-crore-from-producring-hanuman-ansh-suc/articleshow-ndsii4u</guid>
            <pubDate>Sun, 06 Sep 2026 20:27:27 +0530</pubDate>
            <description><![CDATA[&quot;ಹನುಮಾನ ಅಂಶ&quot; ಎಂಬ ಕಡಿಮೆ ಬಜೆಟ್​ನ ಚಿತ್ರವು ಬ್ಲಾಕ್​ಬಸ್ಟರ್​ ಯಶಸ್ಸು ಕಂಡಿದೆ. ಇಂಗ್ಲೆಂಡ್​ನಲ್ಲಿ ಅರ್ಥಶಾಸ್ತ್ರ ಓದುತ್ತಿದ್ದ 21ರ ಯುವತಿ ಅನುಪ್ರಿಯಾ ನಗರ್ ಅವರು ತಮ್ಮ ವಿಶ್ವವಿದ್ಯಾಲಯದ ಪ್ರಾಜೆಕ್ಟ್​ನಿಂದ ಪ್ರೇರಿತರಾಗಿ ನೀಮ್ ಕರೋಲಿ ಬಾಬಾ ಅವರ ಜೀವನದ ಆಧಾರದ ಮೇಲೆ ಈ ಚಿತ್ರವನ್ನು ನಿರ್ಮಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1vkgdb442qfmf35rd2xgsg5,imgname-hanuman-ansh-1788706567524.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಪೀಳಿಗೆಯವರಿಗೆ ಕೊಲೆ, ರಕ್ತಪಾತ, ಲೈಂ*ಗಿಕತೆ, ಲಾಂಗು, ಮಚ್ಚು, ಮದ್ಯ, ಸಿಗರೆಟ್​ ಸಿನಿಮಾಗಳೇ ಬೇಕು, ಅವರು ಅಂಥ ಸಿನಿಮಾ ಇಷ್ಟಪಡುವುದಕ್ಕೇನೇ ನಾವು ಅಂಥ ಸಿನಿಮಾ ಮಾಡುತ್ತೇವೆ ಎಂದೆಲ್ಲಾ ಹೇಳುವ ಈ ಕಾಲಘಟ್ಟದಲ್ಲಿಯೂ, ಇದ್ಯಾವುದೂ ಇಲ್ಲದ ಚಿತ್ರಗಳು, ಒಂದೊಳ್ಳೆ ಸಂದೇಶವನ್ನು ನೀಡುವ ಸಿನಿಮಾ ಕೂಡ ಯಾವುದೇ ಪ್ರಚಾರ ಇಲ್ಲದಿದ್ದರೂ, ಆ ಚಿತ್ರದ ಪ್ರದರ್ಶನಕ್ಕೆ ನೂರೆಂಟು ವಿಘ್ನಗಳನ್ನು ತಂದರೂ ಅದು ಬ್ಲಾಕ್​ಬಸ್ಟರ್​ ಆಗುತ್ತದೆ ಎನ್ನುವುದನ್ನು ಸಾಬೀತು ಮಾಡಿರುವುದೇ ಹನುಮಾನ ಅಂಶ (Hanuman Ansh).&lt;/p&gt;&lt;p&gt;ಈಗ ಸಿನಿ ಪ್ರಿಯರ ಬಾಯಲ್ಲಿ ಹನುಮಾನ ಅಂಶ ಸಿನಿಮಾ ಮಾತೇ. ಕೇವಲ 2 ಕೋಟಿ ರೂಪಾಯಿ ಬಂಡವಾಳ ಹಾಕಿ ಕಡಿಮೆಯ ಬಜೆಟ್​ ಚಿತ್ರವೊಂದು, ಹತ್ತಿರಹತ್ತಿರ ನೂರು ಕೋಟಿ ಗಳಿಸುತ್ತದೆ ಎಂದರೆ ಅದು ಸುಲಭದ ಮಾತಲ್ಲ. ಇದರ ಸಂಪೂರ್ಣ ಶ್ರೇಯಸ್ಸು ಸಲ್ಲುವುದು ಕೇವಲ 21ರ ಯುವತಿ ಅನುಪ್ರಿಯಾ ನಗರ್​ ಅವರಿಗೆ. ಅನುಪ್ರಿಯಾ ನಗರ್ ಇಂಗ್ಲೆಂಡ್​ನಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿದ್ದಾಗ, ವಿಶ್ವವಿದ್ಯಾನಿಲಯದ ನಿಯೋಜನೆಯು ಅವರನ್ನು ನಿರೀಕ್ಷಿಸದ ಸ್ಥಳಕ್ಕೆ ಕರೆದೊಯ್ಯಿತು. ಅದುವೇ ಭಾರತೀಯ ಸಿನಿಮಾ ಪ್ರಪಂಚಕ್ಕೆ. 21 ವರ್ಷದ ಬಾತ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನೀಮ್ ಕರೋಲಿ ಬಾಬಾ ಅವರ ಜೀವನದಿಂದ ಪ್ರೇರಿತವಾದ ಹನುಮಾನ್ ಅಂಶ್ ನಿರ್ಮಿಸಲು ಮುಂದಾಗಿದ್ದೇ ರೋಚಕ.&lt;/p&gt;&lt;p&gt;ಆಗಸ್ಟ್ 7 ರಂದು ಭಾರತದಲ್ಲಿ ಕೇವಲ 10 ಲಕ್ಷ ರೂ.ಗಳೊಂದಿಗೆ ಇದು ಬಿಡುಗಡೆಯಾಯಿತು. 27 ನೇ ದಿನದ ವೇಳೆಗೆ, ಅದರ ನಿವ್ವಳ ಸಂಗ್ರಹವು 61.38 ಕೋಟಿ ರೂ. ತಲುಪಿತ್ತು, ಆದರೆ ಅದರ ಒಟ್ಟು ಸಂಗ್ರಹವು 72.32 ಕೋಟಿ ರೂ. ಆಗಿತ್ತು ಎಂದು ಸೆಪ್ಟೆಂಬರ್ 2 ರಂದು ವರದಿಯಾದ ಸ್ಯಾಕ್ನಿಲ್ಕ್ ಅಂಕಿಅಂಶಗಳು ತಿಳಿಸಿವೆ. ಈ ಚಿತ್ರವನ್ನು ಸುಮಾರು 2 ಕೋಟಿ ರೂ.ಗಳಿಗೆ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ, ಆದಾಗ್ಯೂ ಕೆಲವು ವರದಿಗಳು ವೆಚ್ಚವನ್ನು 1.8 ಕೋಟಿ ರೂ.ಗಳಿಗೆ ಹತ್ತಿರದಲ್ಲಿವೆ. ಆ ಹೋಲಿಕೆಯು ಸಂಖ್ಯೆಗಳನ್ನು ಗಮನಾರ್ಹವಾಗಿಸುತ್ತದೆ, ಆದರೆ ಬಾಕ್ಸ್ ಆಫೀಸ್ ಗಳಿಕೆಯನ್ನು ನಿರ್ಮಾಪಕರ ಲಾಭವೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ನಾಟಕೀಯ ಆದಾಯವನ್ನು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ನಡುವೆ ವಿಂಗಡಿಸಲಾಗಿದೆ.&lt;/p&gt;&lt;h2&gt;&lt;strong&gt;ಚಲನಚಿತ್ರ ನಿರ್ಮಾಣಕ್ಕೆ ಕಾರಣವಾದ ವಿಶ್ವವಿದ್ಯಾಲಯ ಯೋಜನೆ&lt;/strong&gt;&lt;/h2&gt;&lt;p&gt;ಅನುಪ್ರಿಯಾ ನಗರ್ ಅವರ ಚಲನಚಿತ್ರ ನಿರ್ಮಾಣದ ಹಾದಿಯು ಅರ್ಥಶಾಸ್ತ್ರದ ನಿಯೋಜನೆಯೊಂದಿಗೆ ಪ್ರಾರಂಭವಾಯಿತು. ಹೂಡಿಕೆ ಮತ್ತು ಬ್ಯಾಂಕಿಂಗ್&zwnj;ಗೆ ಸಂಬಂಧಿಸಿದ ವಿಶ್ವವಿದ್ಯಾಲಯ ಮಾಡ್ಯೂಲ್&zwnj;ನಲ್ಲಿ ಕೆಲಸ ಮಾಡುವಾಗ, ಅವರು ಸ್ಟೀವ್ ಜಾಬ್ಸ್ ಅವರನ್ನು ಉದ್ಯಮಿ ಮತ್ತು ಚಿಂತಕರಾಗಿ ಸಂಶೋಧಿಸಿದರು. ಆ ಸಂಶೋಧನೆಯು ಅವರನ್ನು ನೀಮ್ ಕರೋಲಿ ಬಾಬಾ ಅವರೊಂದಿಗಿನ ಪ್ರಸಿದ್ಧ ಸಂಪರ್ಕ ಮತ್ತು ಅವರ ಭಾರತ ಭೇಟಿಗೆ ಕರೆದೊಯ್ದಿತು.&lt;/p&gt;&lt;p&gt;ಜಾಬ್ಸ್ ಸಂಪರ್ಕದೊಂದಿಗೆ ನಿಲ್ಲುವ ಬದಲು, ನಾಗರ್ ಬಾಬಾ ಅವರ ಜೀವನ ಮತ್ತು ಪ್ರಭಾವವನ್ನು ಆಳವಾಗಿ ನೋಡಲು ಪ್ರಾರಂಭಿಸಿದರು. ಅವರ ತಂಡವು ಸುಮಾರು ಒಂದು ವರ್ಷ ಈ ವಿಷಯದ ಬಗ್ಗೆ ಸಂಶೋಧನೆ ನಡೆಸಿತು, ನೀಮ್ ಕರೋಲಿ ಬಾಬಾ ಅವರೊಂದಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಿತು ಮತ್ತು ಅವರೊಂದಿಗೆ ತಿಳಿದಿರುವ ಅಥವಾ ಸಮಯ ಕಳೆದ ಜನರೊಂದಿಗೆ ಮಾತನಾಡಿತು. ಸಂಶೋಧನೆಯ ಸಮಯದಲ್ಲಿ ಅನ್ವೇಷಿಸಲಾದ ಸ್ಥಳಗಳಲ್ಲಿ ಚಿತ್ರಕೂಟ ಮತ್ತು ವೃಂದಾವನ ಸೇರಿವೆ. ಅನುಪ್ರಿಯಾ ನಗರ್​ ಅವರು ಕಥೆಯನ್ನು ಕಿರಿಯ ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಕೊಂಡೊಯ್ಯಲು ಬಯಸಿದ್ದರು. ಯಾವುದೇ ಚಲನಚಿತ್ರ ಶಾಲಾ ಪದವಿ ಅಥವಾ ಸಾಂಪ್ರದಾಯಿಕ ಬಾಲಿವುಡ್ ಮಾರ್ಗವನ್ನು ಒಳಗೊಂಡಿರಲಿಲ್ಲ. ಒಂದು ಶೈಕ್ಷಣಿಕ ಯೋಜನೆಯು ಚಲನಚಿತ್ರಕ್ಕೆ ಆರಂಭಿಕ ಹಂತವಾಯಿತು.&lt;/p&gt;&lt;h3&gt;&lt;strong&gt;ಅನುಪ್ರಿಯಾ ನಗರ್ ಯಾರು?&lt;/strong&gt;&lt;/h3&gt;&lt;p&gt;ಬಾತ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ ನಾಗರ್, ಸಾಮಾಜಿಕ ಮಾಧ್ಯಮದಲ್ಲಿ ತನ್ನನ್ನು ತಾನು ಅರ್ಥಶಾಸ್ತ್ರಜ್ಞೆ, ಕಲಾವಿದೆ ಮತ್ತು ಚಲನಚಿತ್ರ ನಿರ್ಮಾಪಕಿ ಎಂದು ಬಣ್ಣಿಸಿಕೊಳ್ಳುತ್ತಾರೆ. ಕಲೆಯಲ್ಲಿ ಅವರ ಆಸಕ್ತಿ ಮೊದಲೇ ಪ್ರಾರಂಭವಾಯಿತು. ಅವರು 12 ನೇ ವಯಸ್ಸಿನಲ್ಲಿ ತಮ್ಮ ಕಲಾಕೃತಿಯನ್ನು ಪ್ರದರ್ಶಿಸಲು ಪ್ರಾರಂಭಿಸಿದರು ಮತ್ತು ನಂತರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕಲೆ, ನೃತ್ಯ ಮತ್ತು ವ್ಯಾಪಾರ ಸಮಾಜಗಳಲ್ಲಿ ತೊಡಗಿಸಿಕೊಂಡರು.&lt;/p&gt;&lt;p&gt;ಅವರ ಚಲನಚಿತ್ರವನ್ನು ಸ್ವಾಂಭು ಮೀಡಿಯಾ ನೆಟ್&zwnj;ವರ್ಕ್ ಅಡಿಯಲ್ಲಿ ನಿರ್ಮಿಸಲಾಯಿತು, ಸಾರ್ವಜನಿಕವಾಗಿ ಲಭ್ಯವಿರುವ ಕ್ರೆಡಿಟ್&zwnj;ಗಳಲ್ಲಿ ನಾಗರ್, ರಾಗಿಣಿ ಎಸ್, ನಮ್ರತಾ ಜಿ ಸಿಂಗ್ ಮತ್ತು ನಿರ್ದೇಶಕ ವಿಶಾಲ್ ಚತುರ್ವೇದಿ ಅವರನ್ನು ನಿರ್ಮಾಪಕರಾಗಿ ಪಟ್ಟಿ ಮಾಡಲಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/21-year-old-anupriya-nagar-of-england-to-earn-rs-100-crore-from-producring-hanuman-ansh-suc/articleshow-ndsii4u"/>
        </item>
        <item>
            <title><![CDATA[ವಿದೇಶದಲ್ಲಿರುವ ಗಂಡ, ಮತ್ತೊಬ್ಬನ ಜೊತೆ ಹೆಂಡತಿಯ ಅಫೇರ್: ಮುಂದೈತೆ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್!]]></title>
            <link>https://kannada.asianetnews.com/gallery/movie-reviews/malayalam-suspense-thriller-movie-udal-now-getting-sensational-response-in-amazon-prime-video-gvd-rug1h9s</link>
            <guid isPermaLink="true">https://kannada.asianetnews.com/gallery/movie-reviews/malayalam-suspense-thriller-movie-udal-now-getting-sensational-response-in-amazon-prime-video-gvd-rug1h9s</guid>
            <pubDate>Sun, 06 Sep 2026 20:08:55 +0530</pubDate>
            <description><![CDATA[&lt;p&gt;&lsquo;ಉಡಲ್&rsquo; 2022ರಲ್ಲಿ ಬಿಡುಗಡೆಯಾದ ಮಲಯಾಳಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಇದೀಗ OTTಯಲ್ಲಿ ಮತ್ತೆ ಗಮನ ಸೆಳೆಯುತ್ತಿದೆ. ರತ್ನೇಶ್ ರಘುನಂದನ್ ನಿರ್ದೇಶನದ ಈ ಚಿತ್ರದಲ್ಲಿ ದುರ್ಗಾ ಕೃಷ್ಣ, ಧ್ಯಾನ್ ಶ್ರೀನಿವಾಸನ್ ಹಾಗೂ ಇಂದ್ರನ್ಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vhrs2ccwypnq15g0vfy684,imgname-1-1788704744524.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಉಡಲ್&rsquo; 2022ರಲ್ಲಿ ಬಿಡುಗಡೆಯಾದ ಮಲಯಾಳಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಇದೀಗ OTTಯಲ್ಲಿ ಮತ್ತೆ ಗಮನ ಸೆಳೆಯುತ್ತಿದೆ. ರತ್ನೇಶ್ ರಘುನಂದನ್ ನಿರ್ದೇಶನದ ಈ ಚಿತ್ರದಲ್ಲಿ ದುರ್ಗಾ ಕೃಷ್ಣ, ಧ್ಯಾನ್ ಶ್ರೀನಿವಾಸನ್ ಹಾಗೂ ಇಂದ್ರನ್ಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.&lt;/p&gt;&lt;img&gt;&lt;p&gt;ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಖಂಡಿತ ಇಷ್ಟವಾಗಬಹುದು. ಯಾಕೆಂದರೆ ಈ ಚಿತ್ರದ ಕಥೆಯಲ್ಲಿ ಬರುವ ಟ್ವಿಸ್ಟ್&zwnj;ಗಳು ಪ್ರೇಕ್ಷಕರನ್ನು ಕೊನೆಯವರೆಗೂ ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡುತ್ತವೆ. ಅದರಲ್ಲೂ &lsquo;ದೃಶ್ಯಂ&rsquo; ಸಿನಿಮಾದ ರೀತಿಯಲ್ಲೇ ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವ ಈ ಚಿತ್ರದಲ್ಲಿ, ಅದಕ್ಕಿಂತಲೂ ವಿಭಿನ್ನವಾದ ಸಸ್ಪೆನ್ಸ್ ಇದೆ ಎನ್ನಬಹುದು. ಆದರೆ ಒಂದು ವಿಚಾರ ನೆನಪಿರಲಿ. ಈ ಸಿನಿಮಾ ಕುಟುಂಬ ಸಮೇತ ಕುಳಿತು ನೋಡುವ ಚಿತ್ರವಲ್ಲ. ಚಿತ್ರದಲ್ಲಿ ಬೋಲ್ಡ್ ದೃಶ್ಯಗಳೂ ಇರುವುದರಿಂದ ವಯಸ್ಕ ಪ್ರೇಕ್ಷಕರಿಗೆ ಸೂಕ್ತವಾಗಿದೆ. ಸದ್ಯ ಈ ಸಿನಿಮಾ ಓಟಿಟಿಯಲ್ಲಿ ಮತ್ತೆ ಗಮನ ಸೆಳೆಯುತ್ತಿದ್ದು, ಅದರ ಕಥೆ ಹಾಗೂ ಟ್ವಿಸ್ಟ್&zwnj;ಗಳೇ ಚರ್ಚೆಯಲ್ಲಿವೆ.&lt;/p&gt;&lt;img&gt;&lt;p&gt;2022ರಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾ &lsquo;ಉಡಲ್&rsquo; ಇದೀಗ ಮತ್ತೊಮ್ಮೆ ಓಟಿಟಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ರತ್ನೇಶ್ ರಘುನಂದನ್ ನಿರ್ದೇಶನದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ &lsquo;ಎ&rsquo; ಪ್ರಮಾಣಪತ್ರ ನೀಡಿತ್ತು. ಚಿತ್ರದಲ್ಲಿ ದುರ್ಗಾ ಕೃಷ್ಣ, ಧ್ಯಾನ್ ಶ್ರೀನಿವಾಸನ್, ಇಂದ್ರನ್ಸ್ ಹಾಗೂ ಜೂಡ್ ಆಂಥನಿ ಜೋಸೆಫ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ. ಕಥೆ ಶೈನಿ ಎಂಬ ಮಹಿಳೆಯ ಸುತ್ತ ಸುತ್ತುತ್ತದೆ. ಆಕೆಯ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇತ್ತ ಶೈನಿ ತನ್ನ ಪುಟ್ಟ ಮಗ, ದೃಷ್ಟಿಹೀನ ಮಾವ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಅತ್ತೆಯೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿರುತ್ತಾಳೆ. ಅತ್ತೆಯ ಅನಾರೋಗ್ಯದ ಕಾರಣ ಆಕೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೈನಿಯ ಮೇಲಿರುತ್ತದೆ. ದಿನದಿಂದ ದಿನಕ್ಕೆ ಆಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತಾಳೆ. ಇದೇ ಸಂದರ್ಭದಲ್ಲಿ ಆಕೆಯ ಜೀವನಕ್ಕೆ ಕಾಲೇಜಿನ ಹಳೆಯ ಸ್ನೇಹಿತ ಕಿರಣ್ ಮತ್ತೆ ಬರುತ್ತಾನೆ.&lt;/p&gt;&lt;img&gt;&lt;p&gt;ಕಿರಣ್ ಹಾಗೂ ಶೈನಿಯ ನಡುವೆ ನಿಧಾನವಾಗಿ ಆಪ್ತತೆ ಬೆಳೆಯುತ್ತದೆ. ಇಬ್ಬರೂ ಪರಸ್ಪರ ಆಕರ್ಷಿತರಾಗುತ್ತಾರೆ. ಈ ಸಂಬಂಧ ಮುಂದೆ ಹೋಗುತ್ತಿದ್ದಂತೆ, ತಮ್ಮ ದಾರಿಗೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವ ಅಪಾಯಕಾರಿ ನಿರ್ಧಾರಕ್ಕೆ ಇಬ್ಬರೂ ಬರುತ್ತಾರೆ. ಅದರ ಪರಿಣಾಮವಾಗಿ ಕಥೆ ಮತ್ತೊಂದು ಹಂತಕ್ಕೆ ತಿರುಗುತ್ತದೆ. ಅತ್ತೆಯನ್ನು ಕೊಲೆ ಮಾಡುವ ನಿರ್ಧಾರಕ್ಕೆ ಶೈನಿ ಮತ್ತು ಕಿರಣ್ ಮುಂದಾಗುತ್ತಾರೆ. ಆದರೆ ಅವರು ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ.&lt;/p&gt;&lt;img&gt;&lt;p&gt;ಅತ್ತೆಯ ಸಾವಿನ ಬಳಿಕ ಮನೆಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ತಮ್ಮ ಯೋಜನೆ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡಿದ್ದ ಶೈನಿ ಹಾಗೂ ಕಿರಣ್&zwnj;ಗೆ ದೊಡ್ಡ ಶಾಕ್ ಎದುರಾಗುತ್ತದೆ. ದೃಷ್ಟಿಹೀನನಾಗಿರುವ ಮಾವನಿಗೆ ಅವರ ರಹಸ್ಯದ ಸುಳಿವು ಸಿಗುತ್ತದೆ. ಇಲ್ಲಿಂದಲೇ &lsquo;ಉಡಲ್&rsquo; ಸಿನಿಮಾದ ನಿಜವಾದ ಆಟ ಶುರುವಾಗುತ್ತದೆ. ಒಂದೇ ಮನೆಯೊಳಗೆ ಸೊಸೆ ಹಾಗೂ ಮಾವನ ನಡುವೆ ನಡೆಯುವ ಸಂಘರ್ಷ ಕಥೆಯನ್ನು ಮತ್ತಷ್ಟು ರೋಚಕವಾಗಿಸುತ್ತದೆ.&lt;/p&gt;&lt;img&gt;&lt;p&gt;ಇಂಟರ್ವಲ್ ಬಳಿಕ ಸಿನಿಮಾ ಸಂಪೂರ್ಣವಾಗಿ ಹೊಸ ತಿರುವು ಪಡೆದುಕೊಳ್ಳುತ್ತದೆ. ಸೊಸೆ ಮತ್ತು ಮಾವನ ನಡುವಿನ ಮಾನಸಿಕ ಸಂಘರ್ಷ, ಪರಸ್ಪರ ಅನುಮಾನ ಹಾಗೂ ಪ್ರತೀಕಾರದ ಆಟ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಡುತ್ತದೆ. ಪ್ರೇಮಕ್ಕಾಗಿ ಒಬ್ಬ ವ್ಯಕ್ತಿ ಎಷ್ಟರ ಮಟ್ಟಿಗೆ ಬದಲಾಗಬಹುದು? ತನ್ನ ಸ್ವಾರ್ಥಕ್ಕಾಗಿ ಮನುಷ್ಯ ಎಷ್ಟು ದೂರ ಹೋಗಬಲ್ಲ? ಎಂಬ ಪ್ರಶ್ನೆಗಳನ್ನು ಸಿನಿಮಾ ಪ್ರೇಕ್ಷಕರ ಮುಂದೆ ಇಡುತ್ತದೆ. ಕಥೆ ಮುಂದುವರಿದಂತೆ ಒಂದರ ಹಿಂದೆ ಒಂದರಂತೆ ಟ್ವಿಸ್ಟ್&zwnj;ಗಳು ಎದುರಾಗುತ್ತವೆ. ಹೀಗಾಗಿ ಕ್ಲೈಮ್ಯಾಕ್ಸ್&zwnj;ವರೆಗೆ ಸಿನಿಮಾದ ಕುತೂಹಲ ಕಡಿಮೆಯಾಗುವುದಿಲ್ಲ.&lt;/p&gt;&lt;img&gt;&lt;p&gt;ಸಸ್ಪೆನ್ಸ್, ಕೌಟುಂಬಿಕ ಸಂಘರ್ಷ, ಸಂಬಂಧಗಳಲ್ಲಿನ ಬಿರುಕು ಹಾಗೂ ಅನಿರೀಕ್ಷಿತ ತಿರುವುಗಳ ಮಿಶ್ರಣವಾಗಿರುವ &lsquo;ಉಡಲ್&rsquo; ಇದೀಗ ಓಟಿಟಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಬೋಲ್ಡ್ ದೃಶ್ಯಗಳಿರುವುದರಿಂದ ಇದು ಕುಟುಂಬ ಸಮೇತ ವೀಕ್ಷಿಸುವ ಸಿನಿಮಾ ಅಲ್ಲ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿರುವ ಈ ಚಿತ್ರವನ್ನು ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಸಿನಿಮಾಗಳನ್ನು ಇಷ್ಟಪಡುವ ವಯಸ್ಕ ಪ್ರೇಕ್ಷಕರು ನೋಡಬಹುದು. &lsquo;ಉಡಲ್&rsquo; ಸಿನಿಮಾ ಕೊನೆಗೆ ಒಂದು ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಡುತ್ತದೆ-ಪ್ರೀತಿ ಮತ್ತು ಸ್ವಾರ್ಥದ ನಡುವೆ ಸಿಲುಕಿದ ಮನುಷ್ಯ, ತನ್ನ ಗುರಿ ಸಾಧಿಸಲು ಎಷ್ಟು ದೂರ ಹೋಗಬಲ್ಲ?&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/movie-reviews/malayalam-suspense-thriller-movie-udal-now-getting-sensational-response-in-amazon-prime-video-gvd-rug1h9s"/>
        </item>
        <item>
            <title><![CDATA[Bigg Boss: ಬಿಗ್ ಬಾಸ್ ವೇದಿಕೆ ಮೇಲೆ 'ವಿಷ್ಣುವರ್ಧನ್' ಸ್ಟೈಲ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್‌.. ಇದು ಏಕೆ ಗೊತ್ತಾ?]]></title>
            <link>https://kannada.asianetnews.com/tv-talk/bigg-boss-season-13-host-kiccha-sudeep-appeared-exactly-like-the-late-actor-vishnuvardhan-in-this-venue/articleshow-ffnwgod</link>
            <guid isPermaLink="true">https://kannada.asianetnews.com/tv-talk/bigg-boss-season-13-host-kiccha-sudeep-appeared-exactly-like-the-late-actor-vishnuvardhan-in-this-venue/articleshow-ffnwgod</guid>
            <pubDate>Sun, 06 Sep 2026 19:49:16 +0530</pubDate>
            <description><![CDATA[&lt;p&gt;ಈ ಬಾರಿಯ ಬಿಗ್ ಬಾಸ್ 'ಹೊಸ ಬಾಸ್, ಹೊಸ ರೂಲ್ಸ್' ಮಾತ್ರವಲ್ಲದೆ, ಹೊಸ ಸ್ಟೈಲ್ ಮೂಲಕವೂ ಜನರ ಮನ ಗೆಲ್ಲಲು ಸಜ್ಜಾಗಿದೆ. ಕಿಚ್ಚನ ಖದರ್, ಸುಂದರ ಮನೆ ಮತ್ತು ವಿಭಿನ್ನ ಸ್ಪರ್ಧಿಗಳ ನಡುವೆ ಈ ಸೀಸನ್ 13 ಕನ್ನಡಿಗರಿಗೆ ಪಕ್ಕಾ ಎಂಟರ್ಟೈನ್ಮೆಂಟ್ ನೀಡೋದು ಗ್ಯಾರಂಟಿನಾ?! ನೋಡೋಣ.. ಇನ್ಮೇಲೆ ಶುರುವಾಗಲಿದೆ ಅಸಲಿ ಮಜಾ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vha3vq5nvttmdk6jmecyva,imgname-vishnuvardhan-kichcha-sudeep-1788704264055.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Bigg Boss Kannada Season 13-Kiccha Sudeep Vishnuvardhan Look Highlights- Vihnuvardhan 75th Birth Anniversary-September 18 Special-ದೊಡ್ಮನೆಯಲ್ಲಿ 'ಯಜಮಾನ'ನ ಅಬ್ಬರ: ವಿಷ್ಣುದಾದಾ ಸ್ಟೈಲ್&zwnj;ನಲ್ಲಿ ಕಿಚ್ಚ ಸುದೀಪ್&zwnj;! ಬಿಗ್ ಬಾಸ್ 13ಕ್ಕೆ ಗ್ರ್ಯಾಂಡ್ ವೆಲ್ಕಮ್!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ಅಂಗಳದ ಅತಿದೊಡ್ಡ ರಿಯಾಲಿಟಿ ಹಬ್ಬ 'ಬಿಗ್ ಬಾಸ್ ಕನ್ನಡ ಸೀಸನ್ 13'ಕ್ಕೆ ಈಗ ಅದ್ಧೂರಿ ಚಾಲನೆ ಸಿಕ್ಕಿದೆ. ಪ್ರತಿ ಸೀಸನ್&zwnj;ನಲ್ಲೂ ತನ್ನದೇ ಆದ ಹೊಸತನದೊಂದಿಗೆ ಬರುವ ಬಿಗ್ ಬಾಸ್, ಈ ಬಾರಿ ಆರಂಭದಲ್ಲೇ ಇಡೀ ಕರ್ನಾಟಕವೇ ಬೆರಗಾಗುವಂತಹ ಸರ್&zwnj;ಪ್ರೈಸ್ ನೀಡಿದೆ. ಈ ಸಲದ ಹೈಲೈಟ್ ಕೇವಲ ಸ್ಪರ್ಧಿಗಳಲ್ಲ, ಬದಲಿಗೆ ನಮ್ಮ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರ ಹೊಸ ಅವತಾರ!&lt;/p&gt;&lt;p&gt;ವಿಷ್ಣು ದಾದಾ ನೆನಪಿಸಿದ ಕಿಚ್ಚನ 'ಲಕ್'!&lt;/p&gt;&lt;p&gt;ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳ ಎದಬಡಿತ ಜೋರಾಗಿದೆ. ಅದಕ್ಕೆ ಕಾರಣ ಸುದೀಪ್ ಅವರ ಸ್ಟೈಲಿಶ್ ಲುಕ್. ಹೌದು, ಈ ಬಾರಿ ಸುದೀಪ್ ಅವರು ಸ್ಯಾಂಡಲ್&zwnj;ವುಡ್&zwnj;ನ ಸಾಹಸಿಂಹ, ದಿವಂಗತ ಡಾ. ವಿಷ್ಣುವರ್ಧನ್ ಅವರ ಸಿಗ್ನೇಚರ್ ಸ್ಟೈಲ್&zwnj;ನಲ್ಲಿ ಮಿಂಚುತ್ತಿದ್ದಾರೆ. ಅವರ ಹೇರ್ ಸ್ಟೈಲ್, ಕಣ್ಣಿಗೆ ಧರಿಸಿರುವ ಕೂಲಿಂಗ್ ಗ್ಲಾಸ್ ಮತ್ತು ಆ ಕಪ್ಪು ಬಣ್ಣದ ರಾಯಲ್ ಕೋಟ್ ನೋಡುತ್ತಿದ್ದರೆ, ಥೇಟ್ 'ಯಜಮಾನ' ಸಿನೆಮಾದ ವಿಷ್ಣುದಾದಾ ಅವರನ್ನೇ ನೆನಪಿಸುತ್ತಿದೆ. ವಿಶೇಷವಾಗಿ ಸುದೀಪ್ ಅವರ ನಗು ಮತ್ತು ವೇದಿಕೆ ಮೇಲಿನ ಗತ್ತಿನ ನಡಿಗೆ ಸಾಹಸಿಂಹನ ಅಭಿಮಾನಿಗಳಿಗೆ ಫುಲ್ ಖುಷಿ ಕೊಟ್ಟಿದೆ. ಕಿಚ್ಚನ ಈ 'ವಿಷ್ಣು ಅವತಾರ' ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.&lt;/p&gt;&lt;p&gt;ಈ ತಿಂಗಳು, ಅಂದರೆ ಸೆಪ್ಟೆಂಬರ್ 18ಕ್ಕೆ ನಟ ಸಾಹಸಸಿಂಹ ಖ್ಯಾತಿಯ ಡಾ. ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವಿದೆ. ಈ ಕಾರಣಕ್ಕೇ ನಟ ಕಿಚ್ಚ ಸುದೀಪ್ ಅವರು ಲೆಜೆಂಡರಿ ನಟ ವಿಷ್ಣುವರ್ಧನ್ ಗೆಟ್&zwnj;ಅಪ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ನಿಜವೆಷ್ಟು ಎಂಬದು ಗೊತ್ತಿಲ್ಲ. ಇದು ಜಸ್ಟ್ ಸೋಷಿಯಲ್ ಮೀಡಿಯಾ ಊಹೆಯೂ ಆಗಿರಬಹುದು!&lt;/p&gt;&lt;h2&gt;ದೊಡ್ಮನೆಯಲ್ಲಿ 'ವಿಶ್ವ ಪರ್ಯಟನೆ'!&lt;/h2&gt;&lt;p&gt;ಇನ್ನು ಬಿಗ್ ಬಾಸ್ ಮನೆ ಈ ಬಾರಿ ಕೇವಲ ಒಂದು ಮನೆಯಲ್ಲ, ಅದೊಂದು 'ವಿಶ್ವದ ಅದ್ಭುತಗಳ ಮ್ಯೂಸಿಯಂ'. ಮನೆಯೊಳಗೆ ಕಾಲಿಟ್ಟರೆ ನೀವು ಯಾವುದೋ ವಿದೇಶಿ ಪ್ರವಾಸಕ್ಕೆ ಬಂದ ಅನುಭವವಾಗುತ್ತದೆ. ಯುರೋಪ್ ರಾಷ್ಟ್ರಗಳ ಐಷಾರಾಮಿ ಶೈಲಿಯಲ್ಲಿ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಮನೆಯ ಮಧ್ಯಭಾಗದಲ್ಲಿ ಬೃಹತ್ ವಿಶ್ವದ ಗೋಳ (Globe), ಐಫೆಲ್ ಟವರ್, ಸ್ಟ್ಯಾಚ್ಯೂ ಆಫ್ ಲಿಬರ್ಟಿ ಮತ್ತು ಡ್ರ್ಯಾಗನ್ ಸೇರಿದಂತೆ ಜಗತ್ತಿನ ಏಳು ಅದ್ಭುತಗಳ ಪರಿಕಲ್ಪನೆಯನ್ನು ಅದ್ಭುತವಾಗಿ ಬಳಸಲಾಗಿದೆ. ವಿಮಾನದ ಮಾದರಿಯಲ್ಲೇ ರೂಪಿಸಿರುವ ಸಿಟ್-ಔಟ್ ಪ್ರದೇಶವಂತೂ ಈ ಸೀಸನ್&zwnj;ನ ಮಾಸ್ಟರ್ ಪೀಸ್ ಎನ್ನಬಹುದು.&lt;/p&gt;&lt;h3&gt;ಸುಂದರಿಯರ ಸೌಂದರ್ಯ ಮತ್ತು ಮಾಸ್ ಡೈರೆಕ್ಟರ್ ಎಂಟ್ರಿ!&lt;/h3&gt;&lt;p&gt;ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋಗಳ ಪ್ರಕಾರ, ಕಿರುತೆರೆಯ ಜನಪ್ರಿಯ ನಟಿಯರಾದ ಸಂಗೀತಾ ಭಟ್ ಮತ್ತು ಕಾವ್ಯ ಗೌಡ ಅವರ ಎಂಟ್ರಿ ಕನ್ಫರ್ಮ್ ಆಗಿದೆ. ಈ ಇಬ್ಬರು ಸುಂದರಿಯರು ದೊಡ್ಮನೆಯ ಗ್ಲಾಮರ್ ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ. ಇವರ ಜೊತೆಗೆ ಸ್ಯಾಂಡಲ್&zwnj;ವುಡ್&zwnj;ನ 'ಮಾಸ್' ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪ್ರವೇಶ ಪ್ರೇಕ್ಷಕರಲ್ಲಿ ಕುತೂಹಲದ ಕಿಚ್ಚು ಹಚ್ಚಿದೆ. ಆಕ್ಷನ್ ಮತ್ತು ಕಿರಿಕ್&zwnj;ಗಳಿಗೆ ಫೇಮಸ್ ಆಗಿರುವ ಓಂ ಪ್ರಕಾಶ್ ರಾವ್ ಅವರು ಮನೆಯೊಳಗೆ ಯಾವ ರೀತಿ ಆಟವಾಡಲಿದ್ದಾರೆ ಎಂಬುದೇ ದೊಡ್ಡ ಸಸ್ಪೆನ್ಸ್.&lt;/p&gt;&lt;p&gt;ಒಟ್ಟಿನಲ್ಲಿ, ಈ ಬಾರಿಯ ಬಿಗ್ ಬಾಸ್ 'ಹೊಸ ಬಾಸ್, ಹೊಸ ರೂಲ್ಸ್' ಮಾತ್ರವಲ್ಲದೆ, ಹೊಸ ಸ್ಟೈಲ್ ಮೂಲಕವೂ ಜನರ ಮನ ಗೆಲ್ಲಲು ಸಜ್ಜಾಗಿದೆ. ಕಿಚ್ಚನ ಖದರ್, ಸುಂದರ ಮನೆ ಮತ್ತು ವಿಭಿನ್ನ ಸ್ಪರ್ಧಿಗಳ ನಡುವೆ ಈ ಸೀಸನ್ 13 ಕನ್ನಡಿಗರಿಗೆ ಪಕ್ಕಾ ಎಂಟರ್ಟೈನ್ಮೆಂಟ್ ನೀಡೋದು ಗ್ಯಾರಂಟಿ! ಇನ್ಮೇಲೆ ಶುರುವಾಗಲಿದೆ ಅಸಲಿ ಮಜಾ!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/bigg-boss-season-13-host-kiccha-sudeep-appeared-exactly-like-the-late-actor-vishnuvardhan-in-this-venue/articleshow-ffnwgod"/>
        </item>
        <item>
            <title><![CDATA[Bigg Boss ಶೋ ಆರಂಭದಲ್ಲಿಯೇ ಬಿಗ್ ಟ್ವಿಸ್ಟ್; ವಿಶೇಷ ವ್ಯಕ್ತಿಗೆ ಸಿಕ್ತು ಕಿಚ್ಚನ ಮೊದಲ ಚಪ್ಪಾಳೆ]]></title>
            <link>https://kannada.asianetnews.com/gallery/tv-talk/bigg-boss-kannada-show-has-a-big-twist-right-from-the-start-s-first-applause-for-a-special-person-kichchana-chappale-mrq-vuw6isq</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-show-has-a-big-twist-right-from-the-start-s-first-applause-for-a-special-person-kichchana-chappale-mrq-vuw6isq</guid>
            <pubDate>Sun, 06 Sep 2026 19:42:39 +0530</pubDate>
            <description><![CDATA[ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್&zwnj;ಬಾಸ್ ಸೀಸನ್ 13ಕ್ಕೆ ಕಿಚ್ಚ ಸುದೀಪ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಈ ಬಾರಿ ವಿಶ್ವದ ಅದ್ಭುತಗಳ ಮಾದರಿಯ ಮನೆಯನ್ನು ನಿರ್ಮಿಸಲಾಗಿದ್ದು, ಸ್ಪರ್ಧಿಗಳಿಗೆ ಆರಂಭದಲ್ಲೇ ಸವಾಲೊಂದು ಎದುರಾಗಿದೆ. ಮೊದಲ ಸ್ಪರ್ಧಿಯಾಗಿ ಜಗ್ಗ ಮಮ್ಮಿ ಖ್ಯಾತಿಯ ಜಗದೀಶ್ ಆಗಮಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1vgr7esjwgxtn83cgnkr8p2,imgname-bigg-boss-sudeep--3--1788703677913.jpg" type="image/jpeg" height="390" width="690"/>
            <content:encoded><![CDATA[ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್&zwnj;ಬಾಸ್ ಸೀಸನ್ 13ಕ್ಕೆ ಕಿಚ್ಚ ಸುದೀಪ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಈ ಬಾರಿ ವಿಶ್ವದ ಅದ್ಭುತಗಳ ಮಾದರಿಯ ಮನೆಯನ್ನು ನಿರ್ಮಿಸಲಾಗಿದ್ದು, ಸ್ಪರ್ಧಿಗಳಿಗೆ ಆರಂಭದಲ್ಲೇ ಸವಾಲೊಂದು ಎದುರಾಗಿದೆ. ಮೊದಲ ಸ್ಪರ್ಧಿಯಾಗಿ ಜಗ್ಗ ಮಮ್ಮಿ ಖ್ಯಾತಿಯ ಜಗದೀಶ್ ಆಗಮಿಸಿದ್ದಾರೆ.&lt;img&gt;&lt;p&gt;ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗೆ ಬಿಗ್&zwnj;ಬಾಸ್ ಸೀಸನ್ 13ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಕಾರ್ಯಕ್ರಮದ ನಿರೂಪಕ, ನಟ ಕಿಚ್ಚ ಸುದೀಪ್, ಬಿಗ್&zwnj;ಬಾಸ್ ಮನೆಯೊಳಗೆ ಎಂಟ್ರಿ ರಿಯಾಲಿಟಿ ಶೋಗೆ ಚಾಲನೆ ನೀಡಿದರು. ಈ ಬಾರಿಯ ಮನೆಯಲ್ಲಿ ವಿಶ್ವದ ಪ್ರಮುಖ ಅದ್ಭುತಗಳ ಮಾದರಿಯನ್ನು ಸೃಷ್ಟಿಸಲಾಗಿದೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಮನೆಯೊಳಗೆ ಬಂದ ಸುದೀಪ್, ಅಲ್ಲಿರೋ ವಿಶೇಷತೆಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಲು ಆರಂಭಿಸಿದರು. ಈ ವೇಳೆ ಸ್ಟ್ಯಾಚು ಆಫ್ ಲಿಬರ್ಟಿಯನ್ನು ನೋಡಿ, ಅದರಲ್ಲಿ ಮಾಡಲಾಗಿರುವ ಸಣ್ಣ ಬದಲಾವಣೆಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸ್ಟ್ಯಾಚುಗೆ ಮೂಗುತಿಯನ್ನ ಹಾಕಿ ನಮ್ಮ ಸಂಪ್ರದಾಯದ ಸ್ಪರ್ಶವನ್ನು ನೀಡಲಾಗಿತ್ತು. ಹಾಗೆಯೇ ಮೂರ್ತಿಯ ಕೈಯಲ್ಲಿ &quot;ಕಿಚ್ಚನ ಚಪ್ಪಾಳೆ&quot; ಬರಹವುಳ್ಳ ಪತ್ರವಿತ್ತು.&lt;/p&gt;&lt;img&gt;&lt;p&gt;ಈ ಮೂರ್ತಿ ಸೇರಿದಂತೆ ಸುಂದರವಾದ ಮನೆಯನ್ನು ನಿರ್ಮಿಸಿರೋದಕ್ಕೆ ಬಿಗ್&zwnj;ಬಾಸ್&zwnj; ಅವರಿಗೆ ಸುದೀಪ್ ತಮ್ಮ ಚಪ್ಪಾಳೆಯನ್ನು ನೀಡಿದರು. ಶೋ ಆರಂಭದಲ್ಲಿ ಬಿಗ್&zwnj;ಬಾಸ್&zwnj;ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಒಂದು ವಾರದ ಆಟವನ್ನು ಗಮನಿಸಿ ಉತ್ತಮವಾಗಿ ಆಡಿರುವ ಓರ್ವ ಸ್ಪರ್ಧಿಗೆ ಸುದೀಪ್ ಅವರಿಂದ ಕಿಚ್ಚನ ಚಪ್ಪಾಳೆ ಸಿಗುತ್ತದೆ. ಈ ಚಪ್ಪಾಳೆಗಾಗಿ ಸ್ಪರ್ಧಿಗಳು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ.&lt;/p&gt;&lt;img&gt;&lt;p&gt;ಇನ್ನು ಬಿಗ್&zwnj;ಬಾಸ್ ಶೋ ಆರಂಭದಲ್ಲಿ ಸುದೀಪ್ ಟ್ವಿಸ್ಟ್&zwnj;ವೊಂದನ್ನು ನೀಡಿದ್ದಾರೆ. ವೇದಿಕೆಗೆ ಬರುವ ಸ್ಪರ್ಧಿಗಳು ನೇರವಾಗಿ ಬಿಗ್&zwnj;ಬಾಸ್ ಮನೆಯನ್ನು ಪ್ರವೇಶ ಮಾಡಲ್ಲ. ಅದಕ್ಕೂ ಮುಂಚೆ ಸ್ಪರ್ಧಿಗಳು ಸವಾಲೊಂದನ್ನು ಎದುರಿಸಬೇಕು ಎಂದು ಸುದೀಪ್ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಈ ಬಾರಿ ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಬಿಗ್&zwnj;ಬಾಸ್ ಏಕಕಾಲದಲ್ಲಿಯೇ ಆರಂಭವಾಗುತ್ತಿರೋದು ಮತ್ತೊಂದು ವಿಶೇಷವಾಗಿದೆ. ಕನ್ನಡದ ಬಿಗ್&zwnj;ಬಾಸ್ ಸೀಸನ್ 13ರ ಶೋಗಾಗಿ ಬೆಂಗಳೂರು ಹೊರವಲಯದಲ್ಲಿ ದೊಡ್ಡದಾದ ಸೆಟ್ ಹಾಕಲಾಗಿದೆ. ಇಲ್ಲಿಂದಲೇ ಶೋ ನಡೆಯಲಿದೆ. ಮೊದಲ ಸ್ಪರ್ಧಿಯಾಗಿ ಲವ್ ಮಾಕ್ಟೇಲ್ ಸಿನಿಮಾದ ಜಗ್ಗ ಮಮ್ಮಿ ಖ್ಯಾತಿಯ ಜಗದೀಶ್ ಆಗಮಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-show-has-a-big-twist-right-from-the-start-s-first-applause-for-a-special-person-kichchana-chappale-mrq-vuw6isq"/>
        </item>
        <item>
            <title><![CDATA[ರಾಜಮೌಳಿ ಲೆಕ್ಕಾಚಾರದಲ್ಲಿ ಸಹಜವಾಗಿ ನಟಿಸೋದು ಈ ಇಬ್ಬರು ನಟರಂತೆ: ಕಾರಣವೂ ರಿವೀಲ್!]]></title>
            <link>https://kannada.asianetnews.com/entertainment/pan-india-director-rajamouli-reveals-the-strengths-of-jr-ntr-prabhas-ravi-teja-and-sunil-gvd/articleshow-w8bemfv</link>
            <guid isPermaLink="true">https://kannada.asianetnews.com/entertainment/pan-india-director-rajamouli-reveals-the-strengths-of-jr-ntr-prabhas-ravi-teja-and-sunil-gvd/articleshow-w8bemfv</guid>
            <pubDate>Sun, 06 Sep 2026 19:37:29 +0530</pubDate>
            <description><![CDATA[&lt;p&gt;ಖ್ಯಾತ ನಿರ್ದೇಶಕ ರಾಜಮೌಳಿ, ತಮ್ಮ ಜೊತೆ ಕೆಲಸ ಮಾಡಿದ ಕೆಲವು ಹೀರೋಗಳ ಸಾಮರ್ಥ್ಯದ ಬಗ್ಗೆ ಇಂಟರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಜೂ.ಎನ್&zwnj;ಟಿಆರ್&zwnj;, ರವಿತೇಜ, ಸುನೀಲ್ ಬಗ್ಗೆ ಜಕ್ಕಣ್ಣ ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vfsmm78j0yvkvht5xvrqqe,imgname-bjhb-1788702675591.png" type="image/jpeg" height="390" width="690"/>
            <content:encoded><![CDATA[&lt;p&gt;ನಿರ್ದೇಶಕ ರಾಜಮೌಳಿ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಟಿಯಿಲ್ಲದ ಡೈರೆಕ್ಟರ್. ತಮ್ಮ ಸಿನಿಮಾಗಳಲ್ಲಿ ನಟಿಸುವ ಹೀರೋಗಳಿಂದ ಬೆಸ್ಟ್ ನಟನೆ ಹೊರತೆಗೆಯುವುದು ಹೇಗೆ ಎಂಬುದು ರಾಜಮೌಳಿಗೆ ಚೆನ್ನಾಗಿ ಗೊತ್ತು. ತಮ್ಮ ನಿರ್ದೇಶನದಲ್ಲಿ ನಟಿಸಿದ ಕೆಲವು ಹೀರೋಗಳ ಬಗ್ಗೆ ರಾಜಮೌಳಿ ಒಂದು ಸಂದರ್ಶನದಲ್ಲಿ ಇಂಟರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಯಾರ ಶಕ್ತಿ ಏನು ಅನ್ನೋದನ್ನು ಜಕ್ಕಣ್ಣ ರಿವೀಲ್ ಮಾಡಿದ್ದಾರೆ.&lt;/p&gt;&lt;p&gt;ಪ್ರಭಾಸ್ ಕಟೌಟ್ ಅವರಿಗೆ ನಿಜವಾಗಿಯೂ ಒಂದು ದೊಡ್ಡ ಬಲ. ಅದರ ಜೊತೆಗೆ ಪ್ರಭಾಸ್&zwnj;ಗೆ ಮತ್ತೊಂದು ಶಕ್ತಿಯೂ ಇದೆ. ಅವರು ತುಂಬಾ ಆಳವಾಗಿ ಯೋಚಿಸಬಲ್ಲರು. ಯಾವುದೇ ದೃಶ್ಯವನ್ನು ವಿವರಿಸಿದಾಗ, ಅದನ್ನು ವಿಶ್ಲೇಷಿಸುವ ರೀತಿ ತುಂಬಾ ಚೆನ್ನಾಗಿರುತ್ತದೆ ಎಂದು ರಾಜಮೌಳಿ ಹೇಳಿದ್ದಾರೆ.&lt;img&gt;&lt;/p&gt;&lt;p&gt;ಸಹಜವಾಗಿ ನಟಿಸುವುದು ರವಿತೇಜ ಅವರ ದೊಡ್ಡ ಸಾಮರ್ಥ್ಯ. ರವಿತೇಜ ನಟಿಸುವ ಅಗತ್ಯವೇ ಇಲ್ಲ. ಅವರು ನಿಜ ಜೀವನದಲ್ಲಿ ಹೇಗಿರುತ್ತಾರೋ, ಸಿನಿಮಾಗಳಲ್ಲೂ ಹಾಗೆಯೇ ಕಾಣಿಸಿಕೊಂಡರೆ ಸಾಕು. ಅವರ ನಟನೆಯಲ್ಲಿ ಒಂದು ಸಹಜವಾದ ಫ್ಲೋ ಇರುತ್ತದೆ ಎಂದು ರಾಜಮೌಳಿ ಹೇಳುತ್ತಾರೆ. ನ್ಯಾಚುರಲ್ ಸ್ಟಾರ್ ನಾನಿ ಕೂಡ ರವಿತೇಜ ಅವರಂತೆಯೇ. ಆದರೆ ನಾನಿ ಅವರ ಸಹಜತೆಯಲ್ಲಿ ಸ್ವಲ್ಪ ಲೆಕ್ಕಾಚಾರ ಇರುತ್ತದೆ ಎಂದಿದ್ದಾರೆ ರಾಜಮೌಳಿ.&lt;/p&gt;&lt;p&gt;ಸುನೀಲ್ ಬಗ್ಗೆ ರಾಜಮೌಳಿ ಇಂಟರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. 'ತಾನು ದೊಡ್ಡ ಸುಂದರನಲ್ಲ, ದೊಡ್ಡ ಡ್ಯಾನ್ಸರ್ ಅಲ್ಲ, ಅದ್ಭುತವಾದ ಬಾಡಿ ಇಲ್ಲ ಎಂಬುದು ಸುನೀಲ್&zwnj;ಗೆ ಚೆನ್ನಾಗಿ ಗೊತ್ತು. ತನ್ನೆಲ್ಲಾ ಮೈನಸ್&zwnj;ಗಳ ಬಗ್ಗೆ ಅವರಿಗೆ ಅರಿವಿದೆ. ಆದರೆ, ಅವರಲ್ಲಿ ಅದ್ಭುತವಾದ ಡೆಡಿಕೇಶನ್ ಇದೆ. ಆ ಡೆಡಿಕೇಶನ್&zwnj;ನಿಂದ ತಾನೊಬ್ಬ ಶ್ರೇಷ್ಠ ಡ್ಯಾನ್ಸರ್, ಶ್ರೇಷ್ಠ ಫೈಟರ್ ಎಂದು ಪ್ರೇಕ್ಷಕರಿಗೆ ಫೀಲ್ ಮಾಡಿಸಬಲ್ಲರು' ಎಂದು ರಾಜಮೌಳಿ ಹೊಗಳಿದ್ದಾರೆ.&lt;img&gt;&lt;/p&gt;&lt;h2&gt;&lt;strong&gt;ಅದ್ಭುತ ಪರ್ಫಾರ್ಮರ್&lt;/strong&gt;&lt;/h2&gt;&lt;p&gt;ಜೂ.ಎನ್&zwnj;ಟಿಆರ್&zwnj; ಒಬ್ಬ ಅದ್ಭುತ ಪರ್ಫಾರ್ಮರ್. ಅವರ ನಟನೆಗಿಂತ ದೊಡ್ಡದಾದ ಮತ್ತೊಂದು ಪ್ರತಿಭೆ ಅವರಲ್ಲಿದೆ. ಅದುವೇ ಅವರ ಗ್ರಹಿಕೆ ಶಕ್ತಿ. ದೃಶ್ಯವನ್ನು ಅರ್ಧ ಹೇಳುವಷ್ಟರಲ್ಲೇ, ಮುಂದೆ ಏನು ಹೇಳಲಿದ್ದಾರೆ, ನಿರ್ದೇಶಕರು ತನ್ನಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ತಾರಕ್&zwnj;ಗೆ ಅರ್ಥವಾಗಿಬಿಡುತ್ತದೆ ಎಂದು ರಾಜಮೌಳಿ ಹೇಳಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/pan-india-director-rajamouli-reveals-the-strengths-of-jr-ntr-prabhas-ravi-teja-and-sunil-gvd/articleshow-w8bemfv"/>
        </item>
        <item>
            <title><![CDATA['ಫಿಲ್ಮ್‌ಮೇಕಿಂಗ್ ಅನ್ನೋದು ರಿಸ್ಕ್': ಕನ್ನಡ ಚಿತ್ರರಂಗದ ಬಗ್ಗೆ ನಟಿ ಶ್ರುತಿ ಹರಿಹರನ್ ಯಾಕೆ ಹೀಗಂದ್ರು]]></title>
            <link>https://kannada.asianetnews.com/celebrity-interviews/kannada-actress-sruthi-hariharan-on-sandalwood-cinema-theatrical-releases-risk-interview-gvd/articleshow-rz1p9gs</link>
            <guid isPermaLink="true">https://kannada.asianetnews.com/celebrity-interviews/kannada-actress-sruthi-hariharan-on-sandalwood-cinema-theatrical-releases-risk-interview-gvd/articleshow-rz1p9gs</guid>
            <pubDate>Sun, 06 Sep 2026 18:44:33 +0530</pubDate>
            <description><![CDATA[&lt;p&gt;ನಟಿ ಶ್ರುತಿ ಹರಿಹರನ್&zwnj;ಗೆ ಸಿನಿಮಾದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಅಷ್ಟೇ ಮುಖ್ಯ. ಕೇವಲ ಮನರಂಜನೆ ಎಂಬ ಕಾರಣಕ್ಕೆ ಪರದೆಯ ಮೇಲೆ ಮಹಿಳೆಯರನ್ನು ಹೇಗೆ ಬೇಕಾದರೂ ತೋರಿಸುವುದನ್ನು ಒಪ್ಪಿಕೊಳ್ಳಬಾರದು ಎಂಬುದು ಅವರ ಅಭಿಪ್ರಾಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vdnhn6tve93d1d984mac80,imgname-vjv-1788700444326.png" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಕೆಲ ವರ್ಷಗಳಿಂದ ತುಸು ಸೈಲೆಂಟ್ ಆಗಿದ್ದ ನಟಿ ಶ್ರುತಿ ಹರಿಹರನ್ ಇದೀಗ ವಿಭಿನ್ನ ಸಿನಿಮಾಗಳ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. &lsquo;ಮುಧೋಳ್&rsquo;, &lsquo;ಚೀತಾ&rsquo; ಹಾಗೂ &lsquo;NH66&rsquo; ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿದ್ದು, ಈ ಚಿತ್ರಗಳು ಶ್ರುತಿಯನ್ನು ಈ ಹಿಂದೆ ನೋಡಿರದ ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ಪರಿಚಯಿಸುವ ನಿರೀಕ್ಷೆಯಿದೆ.&lt;/p&gt;&lt;p&gt;ಒಂದು ಕಾಲದಲ್ಲಿ ಸಾಂಪ್ರದಾಯಿಕ ನಾಯಕಿ ಪಾತ್ರಗಳಿಗೆ ಸೀಮಿತವಾಗಿದ್ದ ಶ್ರುತಿಗೆ ಇದೀಗ ಸಿಗುತ್ತಿರುವ ಪಾತ್ರಗಳಲ್ಲಿ ಹೆಚ್ಚು ವೈವಿಧ್ಯತೆ ಮತ್ತು ತೂಕವಿದೆ. ತಮ್ಮ ಈ ಹೊಸ ಹಂತದ ಸಿನಿಮಾ ಪಯಣ, ಎನ್ಸೆಂಬಲ್ ಸಿನಿಮಾಗಳಲ್ಲಿ ಕೆಲಸ ಮಾಡುವ ಖುಷಿ, ಚಿತ್ರಗಳ ಥಿಯೇಟ್ರಿಕಲ್ ಭವಿಷ್ಯ ಹಾಗೂ ತಾವು ನಂಬಿರುವ ಸಿನಿಮಾಗಳನ್ನು ಮಾಡುವ ಅಗತ್ಯದ ಬಗ್ಗೆ ಶ್ರುತಿ ಹರಿಹರನ್ ಮಾತನಾಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ವಿಭಿನ್ನ ರೀತಿಯ ಪಾತ್ರಗಳು ನನ್ನತ್ತ ಬರಬೇಕು ಎಂಬ ಆಸೆ ಯಾವಾಗಲೂ ಇತ್ತು&rsquo;&lt;/strong&gt;&lt;/p&gt;&lt;p&gt;ಕಳೆದ ಎರಡು ವರ್ಷಗಳಿಂದ ನನ್ನ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ ಅನ್ನೋದು ನಿಜಕ್ಕೂ ಆಶ್ಚರ್ಯಕರ. ಆದರೆ ಕಳೆದ ಎರಡೂವರೆ-ಮೂರು ವರ್ಷಗಳಲ್ಲಿ ನಾನು ಕೆಲಸ ಮಾಡಿರುವ ಸಿನಿಮಾಗಳ ಪೈಕಿ ಬಹುತೇಕ ಚಿತ್ರಗಳು ಈ ವರ್ಷ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಶ್ರುತಿ ಹೇಳುತ್ತಾರೆ. ಆ ಸಿನಿಮಾಗಳೆಲ್ಲವೂ ವಿಭಿನ್ನವಾಗಿವೆ. ಅವುಗಳಲ್ಲಿ ನಾನು ಸಾಮಾನ್ಯ ಅರ್ಥದಲ್ಲಿ ನಾಯಕಿಯ ಪಾತ್ರ ಮಾಡದೇ ಇರಬಹುದು.&lt;/p&gt;&lt;p&gt;ಆದರೆ ಆ ಪಾತ್ರಗಳಲ್ಲಿ ಸಾಕಷ್ಟು ತೂಕವಿದೆ, ನನ್ನನ್ನು ಸವಾಲಿಗೆ ಒಡ್ಡುವಂತಹ ಪಾತ್ರಗಳಾಗಿವೆ. ಇಂಥ ವಿಭಿನ್ನ ಕೆಲಸಗಳು ನನ್ನತ್ತ ಬರಬೇಕು ಎಂಬ ಆಸೆ ನನಗೆ ಯಾವಾಗಲೂ ಇತ್ತು ಎನ್ನುತ್ತಾರೆ. ನನಗೆ ಯಾವಾಗ ಅವಕಾಶ ಸಿಕ್ಕರೂ ಅದನ್ನು ಕೈಬಿಡಲು ಇಷ್ಟವಾಗುವುದಿಲ್ಲ. &lsquo;ವಾವ್, ಇದು ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ&rsquo; ಎಂದುಕೊಂಡು ಆ ಅವಕಾಶವನ್ನು ಸ್ವೀಕರಿಸುತ್ತೇನೆ ಎಂದು ತಮ್ಮ ಪಾತ್ರಗಳ ಆಯ್ಕೆಯ ಬಗ್ಗೆ ಅವರು ಹೇಳುತ್ತಾರೆ.&lt;/p&gt;&lt;p&gt;ಉದಾಹರಣೆಗೆ, ಶ್ರುತಿ ನಟಿಸಿರುವ &lsquo;ಮುಧೋಳ್&rsquo; ಒಂದು ಎನ್ಸೆಂಬಲ್ ಸಿನಿಮಾ. ಒಂದೇ ಚಿತ್ರದಲ್ಲಿ ಹಲವು ಕಲಾವಿದರು ಇರುವ ಇಂತಹ ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ಅವರು ವಿಶೇಷವಾಗಿ ಇಷ್ಟಪಡುತ್ತಾರೆ. ಸೆಟ್&zwnj;ನಲ್ಲಿ ಸಾಕಷ್ಟು ಕಲಾವಿದರು ಇದ್ದಾಗ ಸುತ್ತಮುತ್ತ ತುಂಬಾ ಮಾತುಕತೆ, ಎನರ್ಜಿ ಇರುತ್ತದೆ. ಸಿನಿಮಾದಲ್ಲಿ ನಮ್ಮದೇ ಆದ ಜಾಗವನ್ನು ಹುಡುಕಿಕೊಳ್ಳಬೇಕಾಗುತ್ತದೆ. ಅದು ಬಹುತೇಕ ಸಂದರ್ಭಗಳಲ್ಲಿ ನನ್ನಿಂದ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಿಸುವಂತೆ ಮಾಡುತ್ತದೆ ಎನ್ನುತ್ತಾರೆ ಶ್ರುತಿ.&lt;/p&gt;&lt;p&gt;&lt;strong&gt;&lsquo;ಮನರಂಜನೆಯಾಚೆ ಕಲೆಗಿರುವ ಶಕ್ತಿ ಅಪಾರ&rsquo;&lt;/strong&gt;&lt;/p&gt;&lt;p&gt;ಶ್ರುತಿ ಹರಿಹರನ್&zwnj;ಗೆ ಸಿನಿಮಾದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಅಷ್ಟೇ ಮುಖ್ಯ. ಕೇವಲ ಮನರಂಜನೆ ಎಂಬ ಕಾರಣಕ್ಕೆ ಪರದೆಯ ಮೇಲೆ ಮಹಿಳೆಯರನ್ನು ಹೇಗೆ ಬೇಕಾದರೂ ತೋರಿಸುವುದನ್ನು ಒಪ್ಪಿಕೊಳ್ಳಬಾರದು ಎಂಬುದು ಅವರ ಅಭಿಪ್ರಾಯ.&lt;/p&gt;&lt;p&gt;ಬರಹಗಾರರನ್ನು ಪ್ರಶ್ನಿಸುವುದು, ಪುರುಷರ ದೃಷ್ಟಿಕೋನವನ್ನು ಪ್ರಶ್ನಿಸುವುದು ಬಹಳ ಮುಖ್ಯ. ನಿಮ್ಮ ಲೈಂಗಿಕತೆಯನ್ನು ಸಂಭ್ರಮಿಸುವುದೇ ತಪ್ಪು ಎಂದು ನಾನು ಹೇಳುವುದಿಲ್ಲ. ಖಂಡಿತವಾಗಿಯೂ ಅಲ್ಲ. ಆದರೆ ಒಂದು ಹಂತದಲ್ಲಿ ಯಾವುದಾದರೂ ವಿಚಾರ ಮಹಿಳೆಯರನ್ನು ಕೀಳಾಗಿ ತೋರಿಸುತ್ತಿದೆಯೇ, ಅಥವಾ ಒಬ್ಬ ಮಹಿಳೆ ನಿಮ್ಮನ್ನು ಆ ದೃಶ್ಯದಲ್ಲಿ ನೋಡಿಕೊಂಡು ಮುಜುಗರಪಡಬಹುದೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಶ್ರುತಿ ಹೇಳುತ್ತಾರೆ.&lt;/p&gt;&lt;p&gt;ಕಲೆಗೆ ಅಪಾರ ಶಕ್ತಿಯಿದೆ. ಫಿಲ್ಮ್&zwnj;ಮೇಕರ್&zwnj;ಗಳು ಮತ್ತು ನಟ-ನಟಿಯರಾದ ನಾವು ಮನರಂಜನೆ ನೀಡುತ್ತಲೇ ಒಂದು ಮುಖ್ಯವಾದ ವಿಚಾರವನ್ನು ಹೇಳುವ ಶಕ್ತಿಯನ್ನು ಹೊಂದಿದ್ದೇವೆ. ಮನರಂಜನೆಯೂ ಅಷ್ಟೇ ಮುಖ್ಯ. ಆದರೆ ನಮ್ಮ ಕೆಲಸದಿಂದ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬುದನ್ನೂ ನಾವು ಅರ್ಥಮಾಡಿಕೊಳ್ಳಬೇಕು ಎಂದು ಅವರು ವಿವರಿಸುತ್ತಾರೆ.&lt;/p&gt;&lt;p&gt;&lt;strong&gt;&lsquo;ಒಬ್ಬರನ್ನೊಬ್ಬರು ದೂಷಿಸುತ್ತಾ ಕೂರಬಹುದು; ಇಲ್ಲವೇ ಸಿನಿಮಾ ಮಾಡುತ್ತಲೇ ಇರಬಹುದು&rsquo;&lt;/strong&gt;&lt;/p&gt;&lt;p&gt;ಇತ್ತೀಚೆಗೆ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿದ್ದರೂ ಅವುಗಳಿಗೆ ಥಿಯೇಟರ್&zwnj;ನಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿರುವ ಕುರಿತು ಕೇಳಿದಾಗ, ಶ್ರುತಿ ಕೂಡ ಇದಕ್ಕೆ ಸುಲಭವಾದ ಉತ್ತರ ಇಲ್ಲ ಎನ್ನುತ್ತಾರೆ. ಇದು ಯಾಕೆ ಆಗುತ್ತಿದೆ ಎಂದು ನಾವೆಲ್ಲರೂ ಯೋಚಿಸಿದ್ದೇವೆ. ಪ್ರೇಕ್ಷಕರು ಥಿಯೇಟರ್&zwnj;ಗೆ ಬರುತ್ತಿಲ್ಲ ಎಂದು ಹೇಳುತ್ತೇವೆ. ಆದರೆ ಮತ್ತೊಂದು ಕಡೆ, ಪ್ರೇಕ್ಷಕರು ಥಿಯೇಟರ್&zwnj;ಗೆ ಬರುವಷ್ಟು ಉತ್ತಮ ಸಿನಿಮಾಗಳನ್ನು ನಾವು ಮಾಡುತ್ತಿದ್ದೇವೆಯೇ ಎಂಬ ಪ್ರಶ್ನೆಯೂ ಇದೆ. ಇದು ಮೊದಲು ಕೋಳಿ ಬಂದಿತೋ, ಮೊಟ್ಟೆ ಬಂದಿತೋ ಎಂಬಂತಾಗಿದೆ ಎಂದು ಅವರು ಹೇಳುತ್ತಾರೆ. ಆದರೆ ಈ ಪರಿಸ್ಥಿತಿಯಲ್ಲಿ ತಮ್ಮ ನಿಲುವು ಮಾತ್ರ ಸ್ಪಷ್ಟವಾಗಿದೆ ಎನ್ನುತ್ತಾರೆ ಶ್ರುತಿ.&lt;/p&gt;&lt;p&gt;ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಫಿಲ್ಮ್&zwnj;ಮೇಕಿಂಗ್ ದೊಡ್ಡ ರಿಸ್ಕ್ ಆಗಿಬಿಟ್ಟಿದೆ. ಆದರೂ ಆ ರಿಸ್ಕ್ ತೆಗೆದುಕೊಂಡು ಸಿನಿಮಾಗಳನ್ನು ಮಾಡುತ್ತಿರುವವರು ಈಗಲೂ ಇದ್ದಾರೆ. ನಾವು ಒಬ್ಬರನ್ನೊಬ್ಬರು ದೂಷಿಸುತ್ತಾ ಕೂರಬಹುದು. ಇಲ್ಲವೇ ನಮ್ಮದೇ ಆದ ರೀತಿಯಲ್ಲಿ ನಾವು ನಂಬಿರುವ, ಉತ್ತಮ ಬರಹ ಹೊಂದಿರುವ ಸಿನಿಮಾಗಳನ್ನು ಮಾಡುವುದನ್ನು ಮುಂದುವರಿಸಬಹುದು ಎಂದು ಶ್ರುತಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಒಂದು ಸಿನಿಮಾ ಎರಡು ಗಂಟೆಯ ಕೆಲಸವಲ್ಲ; ಅದರ ಹಿಂದೆ ವರ್ಷಗಳ ಶ್ರಮವಿರುತ್ತದೆ&rsquo;&lt;/strong&gt;&lt;/h2&gt;&lt;p&gt;ಸಿನಿಮಾ ಕ್ಷೇತ್ರದ ಬಗ್ಗೆ ಪ್ರೇಕ್ಷಕರು ಇನ್ನಷ್ಟು ಅರ್ಥಮಾಡಿಕೊಳ್ಳಬೇಕಾದ ಒಂದು ವಿಚಾರವಿದೆ ಎಂದರೆ, ಪರದೆಯ ಮೇಲೆ ಕಾಣಿಸುವ ಎರಡು ಗಂಟೆಗಳ ಹಿಂದೆ ಇರುವ ಅಪಾರ ಪರಿಶ್ರಮ ಎನ್ನುತ್ತಾರೆ ಶ್ರುತಿ. ಒಂದು ಸಿನಿಮಾ ಎರಡರಿಂದ ಎರಡೂವರೆ ಗಂಟೆಗಳ ಮನರಂಜನೆಯಾಗಿರಬಹುದು. ಆದರೆ ಆ ಸಿನಿಮಾದ ಹಿಂದೆ ಹಲವಾರು ಜನರ ವರ್ಷಗಳ ಪರಿಶ್ರಮ ಇರುತ್ತದೆ. ಯಾವುದಾದರೂ ಸಿನಿಮಾವನ್ನು ತಕ್ಷಣವೇ ತಿರಸ್ಕರಿಸುವುದು ಸುಲಭ.&lt;/p&gt;&lt;p&gt;ಆದರೆ ಕನಿಷ್ಠ ಒಂದು ಅವಕಾಶ ನೀಡುವುದು ಮುಖ್ಯ. ಥಿಯೇಟರ್&zwnj;ಗೆ ಬಂದು ಸಿನಿಮಾವನ್ನು ನೋಡಿ, ಅದಕ್ಕೆ ಸ್ವಲ್ಪ ಸಮಯ ಕೊಡಿ ಎಂದು ಅವರು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಇನ್ನು ವಿಭಿನ್ನ ಪಾತ್ರಗಳ ಮೂಲಕ ಮತ್ತೆ ತೆರೆಮೇಲೆ ಬರಲು ಸಜ್ಜಾಗಿರುವ ಶ್ರುತಿ ಹರಿಹರನ್ ಅವರ ಮಾತುಗಳಲ್ಲಿ, ಸಿನಿಮಾ ಎನ್ನುವುದು ಕೇವಲ ಮನರಂಜನೆಯಲ್ಲ; ಅದು ರಿಸ್ಕ್, ಪರಿಶ್ರಮ ಮತ್ತು ನಂಬಿಕೆಯ ಫಲ ಎಂಬ ಸಂದೇಶವೂ ಸ್ಪಷ್ಟವಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kannada-actress-sruthi-hariharan-on-sandalwood-cinema-theatrical-releases-risk-interview-gvd/articleshow-rz1p9gs"/>
        </item>
        <item>
            <title><![CDATA[BBK 13: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಓಂ ಪ್ರಕಾಶ್ ರಾವ್.. 'ಬೀಪ್‌ ಸೌಂಡ್‌' ಪ್ರಶ್ನೆ ಕೇಳಿದ್ಯಾಕೆ ಕಿಚ್ಚ ಸುದೀಪ್?]]></title>
            <link>https://kannada.asianetnews.com/tv-talk/sandalwood-director-om-prakash-rao-is-a-contestant-in-bigg-boss-kannada-13-show-hosted-by-kiccha-sudeep/articleshow-d65e2xt</link>
            <guid isPermaLink="true">https://kannada.asianetnews.com/tv-talk/sandalwood-director-om-prakash-rao-is-a-contestant-in-bigg-boss-kannada-13-show-hosted-by-kiccha-sudeep/articleshow-d65e2xt</guid>
            <pubDate>Sun, 06 Sep 2026 18:03:51 +0530</pubDate>
            <description><![CDATA[&lt;p&gt;ಓಂ ಪ್ರಕಾಶ್ ರಾವ್ ಎಂದರೆ ನೇರ ನಡೆ, ನೇರ ನುಡಿ. ಯಾವುದೇ ವಿಷಯವನ್ನಾದರೂ ಮುಚ್ಚುಮರೆಯಿಲ್ಲದೆ ಮಾತನಾಡುವ ಗುಣ ಅವರದ್ದು. ಹಾಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಟ್ರೋಲ್&zwnj;ಗಳು ಶುರುವಾಗಿದ್ದು, &quot;ಇನ್ಮೇಲೆ ಎಡಿಟರ್&zwnj;ಗಳಿಗೆ ಬೀಪ್ ಸೌಂಡ್ ಹಾಕೋದೇ ಕೆಲಸ&quot; ಎನ್ನಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v9mje4rgyz1yjkk1m1j31z,imgname-om-prakash-rao-kichcha-sudeep-1788696218052.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Bigg Boss Kannada Season 13-Kiccha Sudeep-Om Prakash Rao Entry-ಬಿಗ್ ಬಾಸ್ ಮನೆಗೆ 'ಮಾಸ್' ಡೈರೆಕ್ಟರ್ ಎಂಟ್ರಿ: ಇನ್ಮೇಲೆ 'ಬೀಪ್' ಸೌಂಡ್ ಗ್ಯಾರಂಟಿ! ಓಂ ಪ್ರಕಾಶ್ ರಾವ್ ಅಖಾಡಕ್ಕೆ!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' ಇಂದು ಸಂಜೆಯಿಂದ ಅದ್ದೂರಿಯಾಗಿ ಶುರುವಾಗುತ್ತಿದೆ. ಕಿಚ್ಚ ಸುದೀಪ್ ಅವರ ಖಡಕ್ ನಿರೂಪಣೆಯಲ್ಲಿ ಆರಂಭವಾಗಲಿರುವ ಈ ಶೋನಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ. ನಟಿ ಸಂಗೀತಾ ಭಟ್ ಮತ್ತು ಕಾವ್ಯ ಗೌಡ ಅವರಂತಹ ಸುಂದರಿಯರ ಹೆಸರು ಕೇಳಿಬರುತ್ತಿರುವ ಬೆನ್ನಲ್ಲೇ, ಸ್ಯಾಂಡಲ್&zwnj;ವುಡ್&zwnj;ನ 'ಡೈನಾಮಿಕ್' ಡೈರೆಕ್ಟರ್ ಒಬ್ಬರು ಬಿಗ್ ಬಾಸ್ ಮನೆಯ ಬಾಗಿಲು ತಟ್ಟುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಅವರೇ 'ಆಕ್ಷನ್ ಕಿಂಗ್' ಓಂ ಪ್ರಕಾಶ್ ರಾವ್!&lt;/p&gt;&lt;p&gt;ಬಂದೇ ಬಿಟ್ಟರು 'ಮಾಸ್' ಸಿನಿಮಾಗಳ ಸರದಾರ!&lt;/p&gt;&lt;p&gt;ಬಿಗ್ ಬಾಸ್ ಇತಿಹಾಸದಲ್ಲಿ ಸಾಮಾನ್ಯವಾಗಿ ನಟ-ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಗಾಂಧಿನಗರದ ಸ್ಟಾರ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಎಂಟ್ರಿ ದೊಡ್ಡ ಧಮಾಕಾ ಎನ್ನಬಹುದು. ಯಾರೂ ಊಹಿಸದ ರೀತಿಯಲ್ಲಿ ಅಚ್ಚರಿಯ ಎಂಟ್ರಿ ಕೊಟ್ಟಿರುವ ರಾವ್ ಅವರು, ಬಿಗ್ ಬಾಸ್ ವೇದಿಕೆಯ ಮೇಲೆ ನಿಂತಾಗ ಅಭಿಮಾನಿಗಳ ಶಿಳ್ಳೆ-ಚಪ್ಪಾಳೆ ಮುಗಿಲು ಮುಟ್ಟಿದೆ. 47ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಇವರು, ಕೇವಲ ಆಕ್ಷನ್ ಮಾತ್ರವಲ್ಲದೆ ತಮ್ಮ ಮಾತಿನ ಶೈಲಿಯಿಂದಲೂ ಸಖತ್ ಫೇಮಸ್.&lt;/p&gt;&lt;h2&gt;ಲಾಕಪ್ ಡೆತ್&zwnj;ನಿಂದ ಕಲಾಸಿಪಾಳ್ಯದವರೆಗೆ... ಇವರದ್ದೇ ಹವಾ!&lt;/h2&gt;&lt;p&gt;ಓಂ ಪ್ರಕಾಶ್ ರಾವ್ ಅಂದಾಕ್ಷಣ ನೆನಪಾಗುವುದು 'AK 47', 'ಸಿಂಹದ ಮರಿ' ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿಜೀವನವನ್ನೇ ಬದಲಿಸಿದ 'ಕಲಾಸಿಪಾಳ್ಯ'. 'ಲಾಕಪ್ ಡೆತ್' ಚಿತ್ರದ ಮೂಲಕ ಅಬ್ಬರಿಸಿದ್ದ ಇವರು, ಗಾಂಧಿನಗರದ ಪ್ರತಿಷ್ಠಿತ ನಿರ್ದೇಶಕರಲ್ಲೊಬ್ಬರು. ಕೇವಲ ಆಕ್ಷನ್ ಕಟ್ ಹೇಳುವುದು ಮಾತ್ರವಲ್ಲದೆ, 'ಡಕೋಟಾ ಎಕ್ಸ್&zwnj;ಪ್ರೆಸ್'ನಂತಹ ಸಿನಿಮಾಗಳಲ್ಲಿ ಹಾಸ್ಯ ನಟನೆಯ ಮೂಲಕವೂ ಕನ್ನಡಿಗರನ್ನು ಹೊಟ್ಟೆ ಚುರುಕ್ ಎನ್ನುವಂತೆ ನಗಿಸಿದ್ದರು. ಈಗ ಇಂತಹ 'ಮಲ್ಟಿ ಟ್ಯಾಲೆಂಟೆಡ್' ವ್ಯಕ್ತಿ ಬಿಗ್ ಬಾಸ್ ಮನೆಗೆ ಹೋಗುತ್ತಿರುವುದು ಮನೆಯೊಳಗಿನ ಇತರ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿರುವುದಂತೂ ನಿಜ!&lt;/p&gt;&lt;p&gt;ಸಂಸಾರ ಎಂಬ ಸಿನಿಮೀಯ ಹಾದಿ!&lt;/p&gt;&lt;p&gt;ಓಂ ಪ್ರಕಾಶ್ ರಾವ್ ಅವರ ವೈಯಕ್ತಿಕ ಜೀವನವೂ ಯಾವುದೋ ಒಂದು ಸಿನಿಮಾ ಸ್ಕ್ರಿಪ್ಟ್&zwnj;ಗಿಂತ ಕಮ್ಮಿ ಇಲ್ಲ. ಹಿರಿಯ ನಟ ಎನ್.ಎಸ್. ರಾವ್ ಅವರ ಪುತ್ರರಾದ ಇವರು, ನಟಿ ರೇಖಾ ದಾಸ್ ಅವರನ್ನು ಮೊದಲು ವಿವಾಹವಾಗಿದ್ದರು. ನಂತರದ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡು, ನಂದಾ ಹಾಗೂ ನಟಿ ಭವ್ಯ ಪ್ರೇಮಯ್ಯ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಬೇರ್ಪಟ್ಟಿದ್ದರು. ಸದ್ಯ ಡೆನಿಸ್ಸಾ ಅವರೊಂದಿಗೆ ಜೀವನ ನಡೆಸುತ್ತಿರುವ ಓಂ ಪ್ರಕಾಶ್ ರಾವ್ ಅವರ ಈ ವೈಯಕ್ತಿಕ ಹಾದಿಯೇ ಒಂದು ತೆರೆದ ಪುಸ್ತಕ. ಅವರ ಜೀವನದ ಕಥೆಗಳು ಬಿಗ್ ಬಾಸ್ ಮನೆಯೊಳಗೆ ಎಷ್ಟರಮಟ್ಟಿಗೆ ಚರ್ಚೆಗೆ ಬರಲಿವೆ ಎಂಬುದು ಸದ್ಯದ ಕುತೂಹಲ.&lt;/p&gt;&lt;h3&gt;ಬಿಗ್ ಬಾಸ್ ಮನೆಯಲ್ಲಿ 'ಬೀಪ್' ಸೌಂಡ್ ಜಾಸ್ತಿ ಇರುತ್ತಾ?&lt;/h3&gt;&lt;p&gt;ಓಂ ಪ್ರಕಾಶ್ ರಾವ್ ಎಂದರೆ ನೇರ ನಡೆ, ನೇರ ನುಡಿ. ಯಾವುದೇ ವಿಷಯವನ್ನಾದರೂ ಮುಚ್ಚುಮರೆಯಿಲ್ಲದೆ ಮಾತನಾಡುವ ಗುಣ ಅವರದ್ದು. ಹಾಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಟ್ರೋಲ್&zwnj;ಗಳು ಶುರುವಾಗಿದ್ದು, &quot;ಇನ್ಮೇಲೆ ಎಡಿಟರ್&zwnj;ಗಳಿಗೆ ಬೀಪ್ ಸೌಂಡ್ ಹಾಕೋದೇ ಕೆಲಸ&quot; ಎನ್ನಲಾಗುತ್ತಿದೆ. ಇಷ್ಟು ದಿನ ಬೇರೆಯವರಿಗೆ ಆಕ್ಷನ್ ಕಟ್ ಹೇಳುತ್ತಿದ್ದ ನಿರ್ದೇಶಕರು, ಈಗ ಬಿಗ್ ಬಾಸ್ ಕಣ್ಗಾವಲಿನಲ್ಲಿ ಹೇಗೆ ಬದುಕುತ್ತಾರೆ? ಮನೆಯೊಳಗಿನ ಕಿರಿಕ್ ಮತ್ತು ಮಜಾ ಹೇಗಿರುತ್ತದೆ ಅನ್ನೋದನ್ನ ನೋಡಲು ಕನ್ನಡಿಗರು ಕಾತರರಾಗಿದ್ದಾರೆ.&lt;/p&gt;&lt;p&gt;ಅಂದಹಾಗೆ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಗೆ ಇದು 2ನೇ ಎಂಟ್ರಿ. ಈ ಹಿಂದೆ ಬಿಗ್​​ಬಾಸ್ ಕನ್ನಡ ಸೀಸನ್ 4ರಲ್ಲಿ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್​​ಬಾಸ್ ಮನೆಗೆ ಹೋಗಿದ್ದರು. ಆದರೆ ಅಲ್ಲಿ ಅವರು ಹೆಚ್ಚು ದಿನ ಇರಲಿಲ್ಲ. ಅವರಿಗೆ ವಿಪರೀತ ಕಾಲು ನೋವು ಶುರುವಾದ ಕಾರಣ, &lsquo;ಆರೋಗ್ಯದ ಕಾರಣ&rsquo; ನೀಡಿ ಅಲ್ಲಿಂದ ಹೊರಬಂದಿದ್ದರು. ಇದೀಗ ಎರಡನೇ ಬಾರಿ ಓಂ ಪ್ರಕಾಶ್ ಅವರು ಬಿಗ್​​ಬಾಸ್ ಮನೆಗೆ ಕಾಲಿಟ್ಟಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಬಿಗ್ ಬಾಸ್ ಸೀಸನ್ 13 ಕೇವಲ ಸುಂದರಿಯರ ಸೌಂದರ್ಯಕ್ಕೆ ಮಾತ್ರವಲ್ಲ, ಓಂ ಪ್ರಕಾಶ್ ರಾವ್ ಅಂತಹ ಮಾಸ್ ವ್ಯಕ್ತಿಗಳ ಘರ್ಜನೆಗೂ ಸಾಕ್ಷಿಯಾಗಲಿದೆ. ಲೈಟ್ಸ್... ಕ್ಯಾಮೆರಾ... ಆಕ್ಷನ್... ಇನ್ಮುಂದೆ &lsquo;ಬಿಗ್ ಬಾಸ್&rsquo; ಹವಾ ಶುರು!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/sandalwood-director-om-prakash-rao-is-a-contestant-in-bigg-boss-kannada-13-show-hosted-by-kiccha-sudeep/articleshow-d65e2xt"/>
        </item>
        <item>
            <title><![CDATA['ಉಪೇಂದ್ರ' ನಟಿ ಪ್ರೇಮಾ ನ್ಯೂಜಿಲೆಂಡ್‌ಗೆ ಹೋಗಿದ್ದೇಕೆ? ಕೊನೆಗೂ ಗೊತ್ತಾಯ್ತು ಅಸಲಿ ಕಾರಣ]]></title>
            <link>https://kannada.asianetnews.com/entertainment/sandalwood-actress-prema-breaks-silence-on-cancer-rumours-and-her-new-zealand-trip-i-have-no-illness-gvd/articleshow-px5xgyz</link>
            <guid isPermaLink="true">https://kannada.asianetnews.com/entertainment/sandalwood-actress-prema-breaks-silence-on-cancer-rumours-and-her-new-zealand-trip-i-have-no-illness-gvd/articleshow-px5xgyz</guid>
            <pubDate>Sun, 06 Sep 2026 18:01:58 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದ 'ಉಪೇಂದ್ರ' ನಟಿ ಪ್ರೇಮಾ ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪ್ರೇಮಾಗೆ ಕ್ಯಾನ್ಸರ್ ಇದೆ ಮತ್ತು ಚಿಕಿತ್ಸೆಗಾಗಿ ನ್ಯೂಜಿಲೆಂಡ್&zwnj;ಗೆ ತೆರಳಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vb7740fdw57b4w235600k4,imgname-vhv-1788697877632.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಪ್ರೇಮಾ ಕೂಡ ಒಬ್ಬರು. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿರುವ ಅವರು, ಹೋಮ್ಲಿ ಲುಕ್ ಹಾಗೂ ಅದ್ಭುತ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ವಿಶೇಷವಾಗಿ ಕೋಡಿ ರಾಮಕೃಷ್ಣ ನಿರ್ದೇಶನದ &lsquo;ದೇವಿ&rsquo; ಸಿನಿಮಾ ಪ್ರೇಮಾ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತ್ತು. ಈ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದರು.&lt;/p&gt;&lt;p&gt;ಇದಕ್ಕೂ ಮುನ್ನ &lsquo;ಧರ್ಮಚಕ್ರಂ&rsquo; ಚಿತ್ರದ ಮೂಲಕ ಟಾಲಿವುಡ್&zwnj;ಗೆ ಎಂಟ್ರಿ ನೀಡಿದ್ದ ಪ್ರೇಮಾ, ಬಳಿಕ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ತೆಲುಗು ಮಾತ್ರವಲ್ಲದೆ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲೂ ಅಭಿನಯಿಸಿರುವ ಪ್ರೇಮಾ, ನಾಯಕಿಯಾಗಿ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.&lt;/p&gt;&lt;p&gt;2006ರಲ್ಲಿ ಉದ್ಯಮಿ ಜೀವನ್ ಅಪ್ಪಚುನ್ ಅವರನ್ನು ವಿವಾಹವಾಗಿದ್ದ ಅವರು, ಬಳಿಕ 2016ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು. ವೈಯಕ್ತಿಕ ಜೀವನದ ಕೆಲವು ಕಾರಣಗಳಿಂದಾಗಿ ಕೆಲಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಪ್ರೇಮಾ, ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ತಾಯಿ, ಅಕ್ಕ, ಅತ್ತಿಗೆ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಟಿವಿ ಶೋಗಳಲ್ಲೂ ಸಕ್ರಿಯರಾಗಿದ್ದಾರೆ.&lt;/p&gt;&lt;p&gt;&lt;strong&gt;ಪ್ರೇಮಾ ಆರೋಗ್ಯದ ಬಗ್ಗೆ ಹರಿದಾಡಿದ್ದ ರೂಮರ್ ಏನು?&lt;/strong&gt;&lt;/p&gt;&lt;p&gt;ಇತ್ತೀಚಿನ ವರ್ಷಗಳಲ್ಲಿ ಪ್ರೇಮಾ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ರೀತಿಯ ಸುದ್ದಿಗಳು ಮತ್ತು ವದಂತಿಗಳು ಹರಿದಾಡಿದ್ದವು. ಅವರು ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂಬ ಮಾತುಗಳ ಜೊತೆಗೆ, ಅವರ ಆರೋಗ್ಯದ ಬಗ್ಗೆಯೂ ಸಾಕಷ್ಟು ಊಹಾಪೋಹಗಳು ಕೇಳಿಬಂದಿದ್ದವು. ಪ್ರೇಮಾಗೆ ಕ್ಯಾನ್ಸರ್ ಇದೆ. ಅದಕ್ಕಾಗಿ ಅವರು ನ್ಯೂಜಿಲೆಂಡ್&zwnj;ಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವದಂತಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರಿಂದ ಅವರ ಅಭಿಮಾನಿಗಳು ಸಹ ಆತಂಕಕ್ಕೊಳಗಾಗಿದ್ದರು. ಆದರೆ ಇದೀಗ ಈ ಎಲ್ಲಾ ಸುದ್ದಿಗಳಿಗೆ ನಟಿ ಪ್ರೇಮಾ ಅವರೇ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ದೇವರ ದಯೆಯಿಂದ ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ&rsquo;&lt;/strong&gt;&lt;/p&gt;&lt;p&gt;ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಕುರಿತು ಮಾತನಾಡಿರುವ ಪ್ರೇಮಾ, ನ್ಯೂಜಿಲೆಂಡ್&zwnj;ಗೆ ತೆರಳಿದ್ದರ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ನನ್ನ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಸೃಷ್ಟಿಸಿದ್ದಾರೆ. ನಾನು ನ್ಯೂಜಿಲೆಂಡ್&zwnj;ಗೆ ನನ್ನ ಸ್ನೇಹಿತರೊಬ್ಬರನ್ನು ಭೇಟಿಯಾಗಲು ಹೋಗಿ ಬಂದಿದ್ದೆ. ದೇವರ ದಯೆಯಿಂದ ನನಗೆ ಯಾವುದೇ ಅನಾರೋಗ್ಯವಿಲ್ಲ. ಆದರೆ ಕೆಲವರು ಈ ವಿಚಾರವನ್ನು ಅತಿರೇಕವಾಗಿ ಬಿಂಬಿಸುತ್ತಿದ್ದಾರೆ ಎಂದು ಪ್ರೇಮಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಈ ವದಂತಿಗಳಿಂದ ನಾನು ಇನ್ನಷ್ಟು ಸ್ಟ್ರಾಂಗ್ ಆಗಿದ್ದೇನೆ&rsquo;&lt;/strong&gt;&lt;/p&gt;&lt;p&gt;ತಮ್ಮ ಬಗ್ಗೆ ಕೇಳಿಬರುವ ಮಾತುಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಪ್ರೇಮಾ, ಇಂತಹ ಪರಿಸ್ಥಿತಿಗಳೇ ತಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿವೆ ಎಂದು ಹೇಳಿದ್ದಾರೆ. ಇಂತಹ ವದಂತಿಗಳಿಂದ ನಾನು ಇನ್ನಷ್ಟು ಸ್ಟ್ರಾಂಗ್ ಆಗಿದ್ದೇನೆ. ನನ್ನ ತಂದೆ-ತಾಯಿ ಪ್ರತಿಯೊಂದು ವಿಚಾರದಲ್ಲೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ಯಾರಾದರೂ ನನ್ನ ಬಗ್ಗೆ ಏನಾದರೂ ಮಾತನಾಡಿದರೆ, ಅದಕ್ಕೆ ಹೇಗೆ ಉತ್ತರಿಸಬೇಕು ಎಂಬುದೂ ನನಗೆ ಚೆನ್ನಾಗಿ ಗೊತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನನ್ನ ಸ್ನೇಹಿತರು ನನ್ನನ್ನು ಸ್ಟಾರ್&zwnj;ನಂತೆ ನೋಡುವುದಿಲ್ಲ&rsquo;&lt;/strong&gt;&lt;/h2&gt;&lt;p&gt;ತಮ್ಮ ಜೀವನದಲ್ಲಿ ಸ್ನೇಹಿತರ ಪಾತ್ರದ ಬಗ್ಗೆಯೂ ಪ್ರೇಮಾ ಮಾತನಾಡಿದ್ದಾರೆ. ನನಗೆ ಒಳ್ಳೆಯ ಸ್ನೇಹಿತರಿದ್ದಾರೆ. ಅವರು ನನ್ನನ್ನು ಸ್ಟಾರ್&zwnj;ನಂತೆ ನೋಡುವುದಿಲ್ಲ. ಅವರೊಂದಿಗೆ ನನ್ನ ಜೀವನದ ಪ್ರತಿಯೊಂದು ವಿಚಾರವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತೇನೆ ಎಂದು ಪ್ರೇಮಾ ಹೇಳಿದ್ದಾರೆ. ಸದ್ಯ ಹಿರಿಯ ನಟಿಯ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ವತಃ ಪ್ರೇಮಾ ಅವರೇ ತೆರೆ ಎಳೆದಿರುವುದು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sandalwood-actress-prema-breaks-silence-on-cancer-rumours-and-her-new-zealand-trip-i-have-no-illness-gvd/articleshow-px5xgyz"/>
        </item>
        <item>
            <title><![CDATA[ಪ್ರಚಾರದ ಅಬ್ಬರವೇ ಇಲ್ಲದೇ ಅಬ್ಬರಿಸಿದ 'ಹನುಮಾನ್​ ಅಂಶ್':​ ಅಂಧ ಗಾಯಕನಿಗೆ ಒಲಿಯುವುದೇ ಕಣ್ಣಿನ ದೃಷ್ಟಿ?]]></title>
            <link>https://kannada.asianetnews.com/entertainment/hanuman-ansh-became-a-hit-without-any-publicity-is-it-the-blind-singer-sunil-lodhis-eyesight-will-come-suc/articleshow-wcu40il</link>
            <guid isPermaLink="true">https://kannada.asianetnews.com/entertainment/hanuman-ansh-became-a-hit-without-any-publicity-is-it-the-blind-singer-sunil-lodhis-eyesight-will-come-suc/articleshow-wcu40il</guid>
            <pubDate>Sun, 06 Sep 2026 17:55:59 +0530</pubDate>
            <description><![CDATA[&lt;p&gt;ಕೇವಲ 2 ಕೋಟಿ ಬಜೆಟ್&zwnj;ನಲ್ಲಿ ತಯಾರಾದ 'ಹನುಮಾನ್ ಅಂಶ್' ಸಿನಿಮಾ ಯಾವುದೇ ಪ್ರಚಾರವಿಲ್ಲದೆ 100 ಕೋಟಿ ಗಳಿಸಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಹಾಡಿರುವ ಅಂಧ ಗಾಯಕ ಸುನಿಲ್ ಲೋಧಿ ಅವರ ಜೀವನವೂ ಬದಲಾಗಿದ್ದು, ನೀಮ್ ಕರೋಲಿ ಬಾಬಾ ಅವರ ಜೀವನ ಆಧರಿತ ಈ ಕಥೆ ಪ್ರೇಕ್ಷಕರನ್ನು ಸೆಳೆಯುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vawnhb2jfv4cgpwgwk8qz8,imgname-hanuman-ansh-1788697531947.jpg" type="image/jpeg" height="390" width="690"/>
            <content:encoded><![CDATA[&lt;p&gt;ಥಿಯೇಟರ್​ ಕೊಡದೇ ಸತಾಯಿಸಿದ್ರು, ಮಾರ್ನಿಂಗ್​ ಷೋ ಸಾಕಾಂದ್ರು, ಯಾವುದೋ ಬಾಬಾನ ಜೀವನ ಚರಿತ್ರೆ ಇಂದಿನಿವರಿಗೆ ಯಾಕೆ ಬೇಕ್ರಿ, ಯಾರು ನೋಡ್ತಾರೆ ಅಂತ ಪ್ರಶ್ನಿಸಿದ್ರು. ರೊಮಾನ್ಸ್​ ಇಲ್ಲ, ಇಂದಿನ ಪೀಳಿಗೆಗೆ ಬೇಕಾದ ರಕ್ತ ಪಾತ, ಕೊಲೆ, ಹಿಂಸೆ, ಲೈಂ*ಗಿಕತೆ... ಯಾವುದೂ ಇಲ್ಲದಿದ್ರೆ ಚಿತ್ರ ಏಕೆ ಓಡತ್ತೆರಿ ಎಂದು ಪ್ರಶ್ನಿಸಿದ್ರು. ಪ್ರಚಾರಕ್ಕೆ ನಾಲ್ಕು ಕಾಸುನೂ ಖರ್ಚು ಮಾಡದೇ ಸಿನಿಮಾ ಓಡಲು ಸಾಧ್ಯವೇನ್ರಿ ಎಂದು ಪ್ರಶ್ನಿಸಿದ್ರು... ಆದರೆ ಎಲ್ಲದ್ದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎನ್ನುವಂತೆ ಆಗಾಗ್ಗೆ ಕೆಲವು ಲೋ ಬಜೆಟ್​ ಸಿನಿಮಾಗಳು, ಪ್ರಚಾರದ ಅಬ್ಬರ ಇಲ್ಲದೆಯೇ, ಇಂಥದ್ದೊಂದು ಸಿನಿಮಾ ಬರುತ್ತಿದೆ ಎಂದು ಸದ್ದು ಕೂಡ ಮಾಡದೇ ನೂರಾರು ಕೋಟಿ ಕಲೆಕ್ಷನ್​ ಮಾಡುತ್ತಿರುವುದು ನಮ್ಮ ಕಣ್ಣಮುಂದೆಯೇ ಇದೆ. ಅಂಥವುಗಳಲ್ಲಿ ಒಂದು ಹನುಮಾನ್​ ಅಂಶ್​ (Hanuman Ansh)&lt;/p&gt;&lt;p&gt;ಕೇವಲ ಎರಡು ಕೋಟಿ ರೂಪಾಯಿ ಬಜೆಟ್​ನ ಈ ಸಿನಿಮಾ ಇದಾಗಲೇ 100 ಕೋಟಿ ಗಳಿಕೆ ಮಾಡಿದೆ. ಆರಂಭದಲ್ಲಿ ಅಷ್ಟೊಂದು ಗಳಿಕೆ ಮಾಡದಿದ್ದರೂ, ಈ ಸಿನಿಮಾ ನೋಡುಗರೇ ಪ್ರಚಾರ ಮಾಡಿದ್ದರಿಂದ ಇದರ ಬಗ್ಗೆ ಕುತೂಲಹದಿಂದ ಜನರು ದೌಡಾಯಿಸುತ್ತಿದ್ದಾರೆ. ಭಾರಿ ಬಜೆಟ್​ನ, ಸೂಪರ್​ಸ್ಟಾರ್​ಗಳ ಚಿತ್ರಗಳು ಥಿಯೇಟರ್​ನಲ್ಲಿ ಇರುವಾಗ, ಥಿಯೇಟರ್​ಗಳನ್ನೂ ಕೊಡದೇ ಸತಾಯಿಸಿದರೂ, ಕೆಲವು ಕಡೆಗಳಲ್ಲಿ ಮಾರ್ನಿಂಗ್ ಷೋಕ್ಕೆ ಮಾತ್ರ ಸೀಮಿತ ಮಾಡಿದರೂ ಈ ಸಿನಿಮಾ 100 ಕೋಟಿ ಕ್ಲಬ್​ ಸೇರಿದೆ. ಎಲ್ಲವೂ ಹನುಮಂತನ ಕೃಪೆ ಎನ್ನುತ್ತಿದ್ದಾರೆ ಸಿನಿವೀಕ್ಷಕರು.&lt;/p&gt;&lt;h2&gt;&lt;strong&gt;ಅಂಧ ಗಾಯಕ ಸುನಿಲ್​&lt;/strong&gt;&lt;/h2&gt;&lt;p&gt;ಇದರಲ್ಲಿ ಹನುಮಂತನ ಅಂಧ ಭಕ್ತನೊಬ್ಬ ಹಾಡಿದ ಹಾಡನ್ನು ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಸುನಿಲ್ ಲೋಧಿ ಹುಟ್ಟಿನಿಂದಲೇ ದೃಷ್ಟಿಹೀನ. ಒಂದು ಕಾಲದಲ್ಲಿ ಅವರ ಕುಟುಂಬವನ್ನು ಪೋಷಿಸಲು ರೈಲುಗಳಲ್ಲಿ ಹಾಡುವ ಮೂಲಕ ಪ್ರಾರಂಭವಾದ ಪ್ರಯಾಣವು ಈಗ ಅವರ ಧ್ವನಿಯನ್ನು ಹೆಚ್ಚು ವಿಶಾಲ ಪ್ರೇಕ್ಷಕರಿಗೆ ಕೊಂಡೊಯ್ಯುವ ಪ್ರಯಾಣವಾಗಿ ಬೆಳೆದಿದೆ. ತಮುರಾ ಮತ್ತು ಭಕ್ತಿಗೀತೆಗಳ ಭಾವಪೂರ್ಣ ರಾಗಗಳ ಮೂಲಕ, ಸುನಿಲ್ ತನಗಾಗಿ ಒಂದು ವಿಶಿಷ್ಟ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ, ಆದರೆ ಹನುಮಾನ್ ಅಂಶ್ ಚಿತ್ರದಲ್ಲಿನ ಅವರ ಧ್ವನಿ ಅವರಿಗೆ ಮತ್ತಷ್ಟು ಮನ್ನಣೆಯನ್ನು ತಂದುಕೊಟ್ಟಿತು.&lt;/p&gt;&lt;p&gt;ಅವರ ಪ್ರಯಾಣವು ಯಶಸ್ಸನ್ನು ಕಂಡುಕೊಳ್ಳುವ ಗಾಯಕನ ಕಥೆಗಿಂತ ಹೆಚ್ಚಿನದಾಗಿದೆ. ಇದು ಕಠಿಣ ಸಂದರ್ಭಗಳನ್ನು ನಿವಾರಿಸುವ ದೃಢನಿಶ್ಚಯ, ಪ್ರತಿಭೆ ಮತ್ತು ಧೈರ್ಯದ ಪ್ರಬಲ ಉದಾಹರಣೆಯಾಗಿದೆ. ಬದುಕುಳಿಯುವಿಕೆಗಾಗಿ ಹಾಡುವುದರಿಂದ ಹಿಡಿದು ಕೇಳುಗರ ಹೃದಯಗಳನ್ನು ತಲುಪುವವರೆಗೆ, ಸುನಿಲ್ ಲೋಧಿ ಅವರ ಪ್ರಯಾಣವು ಮನ್ನಣೆ ಮತ್ತು ಗೌರವಕ್ಕೆ ಅರ್ಹವಾಗಿದೆ. ಇವರು ಈ ಸ್ಟಾರ್​ ಆಗಿದ್ದಾರೆ. ಇದೀಗ ಇವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ,ಮೋಹನ್​ ಯಾದವ್​ ಅವರು ಗಾಯಕನನ್ನು ಭೇಟಿ ಮಾಡಿದ್ದು, ಅವರ ಕಣ್ಣಿನ ದೃಷ್ಟಿಯನ್ನು ವಾಪಸ್​ ತರಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುವುದಾಗಿ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಎಲ್ಲಾ ಹನುಮನ ದಯೆ&lt;/strong&gt;&lt;/h3&gt;&lt;p&gt;ಈ ಕುರಿತು ಡಿಡಿನ್ಯೂಸ್​ ಜೊತೆ ಮಾತನಾಡಿರುವ ಸುನಿಲ್​ ಲೋಧಿ, ನನ್ನ ಹಾಡನ್ನು ಒಂದು ದಿನ ಸಿನಿಮಾದಲ್ಲಿ ಬಳಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಎಳ್ಳಷ್ಟೂ ಕನಸು ಕಂಡಿರಲಿಲ್ಲ. ಆದರೆ ನಾನು ನನ್ನ ಸಂಪೂರ್ಣ ಹಾಡನ್ನು ಹನುಮಂತನಿಗೆ ಮೀಸಲಿಟ್ಟೆ. ಇಂದು ಹನುಮಂತನೇ ನನ್ನ ಜೀವನದಲ್ಲಿ ಪವಾಡ ಮಾಡಿದ ಎಂದಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿಗಳ ಕಣ್ಣಿನ ಚಿಕಿತ್ಸೆಯ ಭರವಸೆಯೂ ಸಿಕ್ಕಿದೆ. ಕೆಲವು ಸಂದರ್ಭಗಳಲ್ಲಿ ಕೆಲವರ ಕಣ್ಣುಗಳಲ್ಲಿ ದೃಷ್ಟಿ ತರಿಸುವುದು ವೈದ್ಯಕೀಯಕ್ಕೂ ಸವಾಲಾಗಿಬಿಡುತ್ತದೆ. ಕೆಲವು ವೈದ್ಯಕೀಯ ಕಾರಣಗಳಿಂದ ಅದು ಸಾಧ್ಯವಾಗದ ಕೆಲಸ. ಸುನಿಲ್​ ಅವರು ಹುಟ್ಟು ಕುರುಡರು. ಆದರೆ ಆ ಭಗವಂತನ ಕೃಪೆಯಿಂದ ಇವರ ಕಣ್ಣುಗಳಲ್ಲಿ ಆದಷ್ಟು ಬೇಗ ದೃಷ್ಟಿ ಬರಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.&lt;/p&gt;&lt;p&gt;ಇನ್ನು ಈ ಸಿನಿಮಾದ ಕುರಿತು ಹೇಳುವುದಾದರೆ, ಭಕ್ತರಿಂದ &lsquo;ಮಹರಾಜ್ ಜಿ&rsquo; ಎಂದೇ ಕರೆಯಲ್ಪಡುವ ಪವಾಡ ಪುರುಷ ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳೇ ಈ ಚಿತ್ರದ ಜೀವಾಳ. ತನ್ನ ಅಗಲಿದ ತಾಯಿಯನ್ನು ಭೇಟಿಯಾಗಲು ದೇವರನ್ನು ಹುಡುಕುತ್ತಾ ಹೊರಡುವ ಒಂದು ಮಗು, ದೈವತ್ವದ ಹಾದಿಯಲ್ಲಿ ನಡೆದು ಹೇಗೆ ಜನಸೇವೆಯೇ ಜನಾರ್ಧನ ಸೇವೆ ಎಂದು ನೀಮ್ ಕರೋಲಿ ಬಾಬಾ ಆಗಿ ಬದಲಾಗುತ್ತದೆ ಎಂಬುದನ್ನು ಶೋಭಿನವ್ ಸತ್ಯ ತಮ್ಮ ಅದ್ಭುತ ನಟನೆಯ ಮೂಲಕ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಈ ಭಕ್ತಿಪ್ರಧಾನ ಕಥೆ ಈಗ ಯುವಜನತೆ ಮತ್ತು ಹಿರಿಯರು ಎಂಬ ಭೇದವಿಲ್ಲದೆ ಎಲ್ಲರನ್ನೂ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/hanuman-ansh-became-a-hit-without-any-publicity-is-it-the-blind-singer-sunil-lodhis-eyesight-will-come-suc/articleshow-wcu40il"/>
        </item>
        <item>
            <title><![CDATA[ಹೀರೋಯಿನ್ ಆಗಿ ಕಾಣಿಸಿಕೊಳ್ಳುವುದಲ್ಲ, ಪಾತ್ರಕ್ಕೆ ಬೆಲೆ ಬೇಕು: ನಟಿ ಶಾನ್ವಿ ಸಂದರ್ಶನ]]></title>
            <link>https://kannada.asianetnews.com/celebrity-interviews/kannada-actress-shanvi-srivastava-opens-up-about-her-role-in-america-america-2-interview-gvd/articleshow-ki9c5cb</link>
            <guid isPermaLink="true">https://kannada.asianetnews.com/celebrity-interviews/kannada-actress-shanvi-srivastava-opens-up-about-her-role-in-america-america-2-interview-gvd/articleshow-ki9c5cb</guid>
            <pubDate>Sun, 06 Sep 2026 17:28:16 +0530</pubDate>
            <description><![CDATA[&lt;p&gt;ನಟಿ ಶಾನ್ವಿ ಶ್ರೀವಾಸ್ತವ ತಮ್ಮ ಹತ್ತು ವರ್ಷಗಳ ಸಿನಿ ಪಯಣ, ಸಿನಿಮಾ ಆಯ್ಕೆ ಮತ್ತು &lsquo;ಅಮೆರಿಕಾ ಅಮೆರಿಕಾ 2&rsquo; ಚಿತ್ರದ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಾತ್ರಕ್ಕೆ ಮೌಲ್ಯ ಸಿಗುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v93fr077m708rw5gzpvhw6,imgname-jbkjb-1788695658240.png" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ ನಟಿ ಶಾನ್ವಿ ಶ್ರೀವಾಸ್ತವ ಅವರಿಗೆ. ಈ ಹತ್ತು ವರ್ಷಗಳಲ್ಲಿ ಸಿನಿಮಾ ಬದಲಾಗಿದೆ, ಚಿತ್ರರಂಗದ ಆದ್ಯತೆಗಳು ಬದಲಾಗಿವೆ, ಅದರೊಂದಿಗೆ ತಮ್ಮ ಆಲೋಚನೆಗಳೂ ಬದಲಾಗಿವೆ ಎನ್ನುತ್ತಾರೆ ಶಾನ್ವಿ. &lsquo;ಚಂದ್ರಲೇಖಾ&rsquo; ಮೂಲಕ ಸಿನಿರಂಗಕ್ಕೆ ಪರಿಚಯವಾದ ಅವರು ಬಳಿಕ &lsquo;ಮಾಸ್ಟರ್&zwnj;ಪೀಸ್&rsquo;, &lsquo;ಅವನೇ ಶ್ರೀಮನ್ನಾರಾಯಣ&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.&lt;/p&gt;&lt;p&gt;ಇದೀಗ ಸೆಪ್ಟೆಂಬರ್ 11ರಂದು ತೆರೆಗೆ ಬರಲಿರುವ &lsquo;ಅಮೆರಿಕಾ ಅಮೆರಿಕಾ 2&rsquo; ಮೂಲಕ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಹತ್ತು ವರ್ಷಗಳ ಸಿನಿ ಪಯಣವನ್ನು Cinema Express ಜೊತೆ ಮೆಲುಕು ಹಾಕಿರುವ ಶಾನ್ವಿ, ಪರದೆಯ ಮೇಲೆ ಕಾಣಿಸಿಕೊಳ್ಳುವುದಕ್ಕಿಂತ, ತಾನು ಮಾಡುವ ಕೆಲಸಕ್ಕೆ ಸಿಗುವ ಮೌಲ್ಯವೇ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಿರುವುದಾಗಿ ಹೇಳುತ್ತಾರೆ.&lt;/p&gt;&lt;p&gt;&lt;strong&gt;&lsquo;ನಾನು ಮಾತ್ರ ಬದಲಾಗಿಲ್ಲ, ಸುತ್ತಲಿನ ಎಲ್ಲವೂ ಬದಲಾಗಿದೆ&rsquo;&lt;/strong&gt;&lt;/p&gt;&lt;p&gt;ನನ್ನನ್ನು ಹೊರತುಪಡಿಸಿ ನನ್ನ ಸುತ್ತಲಿನ ಬಹುತೇಕ ಎಲ್ಲವೂ ಬದಲಾಗಿದೆ. ಅದೂ ಒಳ್ಳೆಯ ರೀತಿಯಲ್ಲಿ. ಇದರೊಂದಿಗೆ ಸಿನಿಮಾಗಳನ್ನು ನೋಡುವ ಮತ್ತು ಕೆಲಸ ಆಯ್ಕೆ ಮಾಡುವ ನನ್ನ ದೃಷ್ಟಿಕೋನವೂ ಬದಲಾಗಿದೆ ಎನ್ನುತ್ತಾರೆ ಶಾನ್ವಿ. ವೃತ್ತಿಜೀವನದ ಆರಂಭದಲ್ಲಿ ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತಾ ಇರಬೇಕು ಎಂಬ ಉತ್ಸಾಹ ಅವರಲ್ಲಿತ್ತು. ಆದರೆ ಕಾಲ ಕಳೆದಂತೆ ಕೇವಲ ಬ್ಯುಸಿಯಾಗಿರಲು ಸಿನಿಮಾ ಮಾಡುವುದು ಸರಿಯಲ್ಲ ಎಂಬ ಅರಿವು ಮೂಡಿತು.&lt;/p&gt;&lt;p&gt;ಒಂದು ಹಂತದಲ್ಲಿ ಹಣ ಸಂಪಾದನೆಗಾಗಿ ಸಿನಿಮಾಗಳನ್ನು ಮಾಡುತ್ತಾ, ಸದಾ ಸರ್ವೈವಲ್ ಮೋಡ್&zwnj;ನಲ್ಲಿ ಇರಲು ನನಗೆ ಇಷ್ಟವಿಲ್ಲ ಎಂಬ ಭಾವನೆ ಬಂತು. ನನ್ನ ಮಧ್ಯಮ ವರ್ಗದ ಮನಸ್ಥಿತಿಯೇ ನನ್ನನ್ನು ಉಳಿಸಿತು. ವೃತ್ತಿಜೀವನದ ಆರಂಭದಲ್ಲಿ ನನಗಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡೆ. ನಂತರ ನನಗೆ ಇಷ್ಟವಾಗುವ ಸ್ಕ್ರಿಪ್ಟ್&zwnj;ಗಳನ್ನು ಆಯ್ಕೆ ಮಾಡಿಕೊಳ್ಳುವ ಹಾದಿಗೆ ಬಂದೆ. ಇದಕ್ಕೆ ಸಮಯ ಬೇಕಾಗುತ್ತದೆ. ನನ್ನ ಕಡೆಯಿಂದಲೂ, ತಂಡದ ಕಡೆಯಿಂದಲೂ ಸಾಕಷ್ಟು ರಿಜೆಕ್ಷನ್ ಎದುರಿಸಬೇಕಾಗುತ್ತದೆ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಕಾಣಿಸಿಕೊಳ್ಳುವುದಕ್ಕಿಂತ ಮೌಲ್ಯ ಸಿಗುವುದು ಮುಖ್ಯ&rsquo;&lt;/strong&gt;&lt;/p&gt;&lt;p&gt;ಚಿತ್ರರಂಗದಲ್ಲಿ ಸದಾ ಕಾಣಿಸಿಕೊಳ್ಳುವುದು ಮುಖ್ಯ ಎನ್ನುವ ಮಾತಿದೆ. ಆದರೆ ಶಾನ್ವಿ ಅವರ ಪ್ರಕಾರ ಕೇವಲ ಗೋಚರತೆಯ ಹಿಂದೆ ಓಡುವುದಕ್ಕಿಂತ, ತಮಗೆ ಸೂಕ್ತವಾದ ಪಾತ್ರಕ್ಕಾಗಿ ಕಾಯುವುದು ಹೆಚ್ಚು ಮುಖ್ಯ.&lt;/p&gt;&lt;p&gt;ನಾವು ಸಿನಿಮಾಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳಬೇಕು. ಜನರು ಹೇಳುವಂತೆ &lsquo;Out of sight, out of mind&rsquo; ಎನ್ನುವುದು ನಿಜ. ಆದರೆ ಒಂದು ಸಿನಿಮಾದಲ್ಲಿ ಇದ್ದರೂ ನಮ್ಮನ್ನು ಮೌಲ್ಯಯುತವಾಗಿ ಕಾಣದಿದ್ದರೆ ಅದರಿಂದ ಏನು ಪ್ರಯೋಜನ? ಒಂದು ಹಂತದಲ್ಲಿ ನಿಮ್ಮನ್ನು ನಿಜವಾಗಿಯೂ ಮೌಲ್ಯಯುತವಾಗಿ ಕಾಣುವ ಸಿನಿಮಾ ಬರುತ್ತದೆ. ನನಗೆ &lsquo;ಅಮೆರಿಕಾ ಅಮೆರಿಕಾ 2&rsquo; ಅಂಥ ಸಿನಿಮಾ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಿರ್ದೇಶಕರೇ ಹೀರೋ ಆಗಲಿ, ನಾನು ನಟಿಯಾಗಿ ಇರಲು ಬಯಸುತ್ತೇನೆ&rsquo;&lt;/strong&gt;&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಸಿನಿಮಾವನ್ನು ಒಪ್ಪಿಕೊಳ್ಳಲು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗಿನ ಕೆಲಸವೂ ಪ್ರಮುಖ ಕಾರಣ ಎನ್ನುವ ಶಾನ್ವಿ, ನಿರ್ದೇಶಕ ಪ್ರಧಾನ ಸಿನಿಮಾಗಳಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಮೆಚ್ಚಿಕೊಂಡಿದ್ದಾರೆ. ಈ ರೀತಿಯ ಇನ್ನೂ ಹತ್ತು ಸ್ಕ್ರಿಪ್ಟ್&zwnj;ಗಳಿಗೆ ಸಹಿ ಹಾಕಲು ನಾನು ಸಿದ್ಧ. ನಿರ್ದೇಶಕ ಮತ್ತು ಸ್ಕ್ರಿಪ್ಟ್&zwnj;ಗಳೇ ಹೀರೋ ಆಗಿರಲಿ. ನಾನು ಕೇವಲ ನಟಿಯಾಗಿ ಇರಲು ಬಯಸುತ್ತೇನೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ನನಗೆ ಒಂದು ರೀತಿಯ ಸುರಕ್ಷಿತ ನೆಟ್ ಇದ್ದಂತೆ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಹೀರೋಯಿನ್&zwnj;ಗೆ ಕೇಂದ್ರದಲ್ಲಿರಬೇಕೆಂದೇನಿಲ್ಲ, ಆದರೆ ಸಮಾನ ಪ್ರಾಮುಖ್ಯ ಬೇಕು&rsquo;&lt;/strong&gt;&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo;ರಲ್ಲಿ ಶಾನ್ವಿ ಅವರ ಪಾತ್ರ ಲವ್ ಟ್ರಯಾಂಗಲ್&zwnj;ನ ಭಾಗವಾಗಿದ್ದರೂ, ಇದು ಸಾಮಾನ್ಯ ಪ್ರೇಮಕಥೆಯಲ್ಲ ಎನ್ನುತ್ತಾರೆ ಅವರು. ತಮ್ಮ ಪಾತ್ರಕ್ಕೆ ನೀಡಿರುವ ಭಾವನಾತ್ಮಕ ಆಳವೇ ಸಿನಿಮಾವನ್ನು ಒಪ್ಪಿಕೊಳ್ಳಲು ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;ನಾನು ಹುಡುಕುತ್ತಿದ್ದ ವಿಷಯವೇ ಇದು. ಕಥೆಯ ಕೇಂದ್ರಬಿಂದುವಾಗಿರದೇ ಇದ್ದರೂ, ಪಾತ್ರಕ್ಕೆ ಸಮಾನವಾದ ಪ್ರಾಮುಖ್ಯ ಇರಬೇಕು ಎಂಬುದು ನನ್ನ ಬಯಕೆ. ಶೇ.90ರಷ್ಟು ನಾಯಕಿಯರು ಇಂಥ ಜಾಗಕ್ಕಾಗಿ ಹೋರಾಡುತ್ತಿದ್ದಾರೆ. ಅಂತಹ ಅವಕಾಶ ಸಿಕ್ಕಾಗ ನಾವು ಅದನ್ನು ಹಿಡಿದುಕೊಳ್ಳುತ್ತೇವೆ. ನನಗೆ ಅವಕಾಶ ಸಿಕ್ಕು ನಾನು ಅದನ್ನು ತೆಗೆದುಕೊಳ್ಳದಿದ್ದರೆ, ಅದು ನನ್ನದೇ ನಷ್ಟ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಇದು ಕೇವಲ ಪ್ರೇಮಕಥೆಯಲ್ಲ, ಸಂಪೂರ್ಣ ಮಹಿಳೆಯ ಕಥೆ&rsquo;&lt;/strong&gt;&lt;/p&gt;&lt;p&gt;ಸಿನಿಮಾ ಕೇವಲ ಪ್ರೀತಿ ಮತ್ತು ಸಂಬಂಧಗಳ ಸುತ್ತ ಸುತ್ತುವುದಿಲ್ಲ. ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ಎದುರಿಸುವ ಹಲವು ಸಂಬಂಧಗಳು, ಜವಾಬ್ದಾರಿಗಳು ಮತ್ತು ತನ್ನನ್ನು ತಾನು ಹುಡುಕಿಕೊಳ್ಳುವ ಪಯಣವನ್ನೂ ಸಿನಿಮಾ ಹೇಳುತ್ತದೆ ಎನ್ನುವುದು ಶಾನ್ವಿ ಮಾತು. ಈ ಸಿನಿಮಾ ಒಬ್ಬ ಸಂಪೂರ್ಣ ಮಹಿಳೆಯನ್ನು ಪ್ರತಿನಿಧಿಸುತ್ತದೆ. ಮಹಿಳೆಯರು ಪ್ರೀತಿಯನ್ನು ಕಂಡುಕೊಳ್ಳುತ್ತಾರಾ? ಖಂಡಿತ. ಆದರೆ ಅದಕ್ಕಿಂತ ಮೊದಲು ನೀವು ನಿಮ್ಮನ್ನು ನೀವು ಕಂಡುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಈ ಸಿನಿಮಾದಲ್ಲಿ ನನ್ನ ಲುಕ್ ಬಗ್ಗೆ ನಾನು ಹೆಚ್ಚು ಯೋಚಿಸಲಿಲ್ಲ&rsquo;&lt;/strong&gt;&lt;/p&gt;&lt;p&gt;ಸಿನಿಮಾದಲ್ಲಿ ತಮ್ಮ ಪಾತ್ರದ ಜೊತೆಗೆ ತಮ್ಮ ನೋಟ ಮತ್ತು ಅಭಿನಯದ ವಿಚಾರದಲ್ಲೂ ಸಾಕಷ್ಟು ಸ್ವಾತಂತ್ರ್ಯ ಸಿಕ್ಕಿತು ಎನ್ನುತ್ತಾರೆ ಶಾನ್ವಿ. ಮಹಿಳಾ ನಟಿಯಾಗಿದ್ದಾಗ ಎಲ್ಲವೂ ಅಚ್ಚುಕಟ್ಟಾಗಿ, ಪರಿಪೂರ್ಣವಾಗಿ ಕಾಣಬೇಕು ಎಂಬ ನಿರೀಕ್ಷೆ ಇರುತ್ತದೆ. ಮುಖದ ಮೇಲೆ ಸಣ್ಣ ಮೊಡವೆ ಇದ್ದರೂ ಅದನ್ನು ದೊಡ್ಡ ವಿಚಾರವಾಗಿ ನೋಡಲಾಗುತ್ತದೆ. ಆದರೆ ಈ ಸಿನಿಮಾದಲ್ಲಿ ನಾನು ಸಂಪೂರ್ಣ ಕೇರ್&zwnj;ಫ್ರೀ ಆಗಿದ್ದೆ. ನಿಜವಾಗಿಯೂ ಆ ಪಾತ್ರವನ್ನು ಬದುಕಿದ್ದೇನೆ ಎಂದು ಅವರು ಹೇಳಿದ್ದಾರೆ.&lt;img&gt;&lt;/p&gt;&lt;p&gt;&lt;strong&gt;&lsquo;ನಿರೂಪ್ ಮತ್ತು ಪೃಥ್ವಿ ನನ್ನ ಶಕ್ತಿಯ ಕಂಬಗಳು&rsquo;&lt;/strong&gt;&lt;/p&gt;&lt;p&gt;ಸಹನಟರಾದ ನಿರೂಪ್ ಭಂಡಾರಿ ಮತ್ತು ಪೃಥ್ವಿ ಅಂಬಾರ್ ಅವರೊಂದಿಗಿನ ಕೆಲಸವೂ ಸಿನಿಮಾದ ಅನುಭವವನ್ನು ಮತ್ತಷ್ಟು ವಿಶೇಷವಾಗಿಸಿದೆ ಎಂದು ಶಾನ್ವಿ ಹೇಳಿದ್ದಾರೆ. ನನ್ನ ಸಹನಟರು ನನ್ನ ಶಕ್ತಿಯ ಕಂಬಗಳಾಗಿದ್ದರು. ಅವರು ನನಗೆ ನೀಡಿದ ಸ್ಪೇಸ್ ಮತ್ತು ಸ್ವಾತಂತ್ರ್ಯ, ಪ್ರತಿಯೊಂದು ಶಾಟ್&zwnj;ನ ನಂತರ ನಾವು ನಡೆಸುತ್ತಿದ್ದ ಚರ್ಚೆಗಳು ಸಾಕಷ್ಟು ವ್ಯತ್ಯಾಸ ತಂದವು. ನಮ್ಮ ಈ ಸಹಕಾರ ತೆರೆಮೇಲೂ ಕಾಣಿಸುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.&lt;/p&gt;&lt;p&gt;&lt;strong&gt;&lsquo;ಭಾವನೆಗಳನ್ನು ನುಗ್ಗಿಸದೆ ಕಟ್ಟಿಕೊಡುವ ನಿರ್ದೇಶಕರು ಬಹಳ ಕಡಿಮೆ&rsquo;&lt;/strong&gt;&lt;/p&gt;&lt;p&gt;ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಬಗ್ಗೆ ಮಾತನಾಡಿದ ಶಾನ್ವಿ, ಭಾವನೆಗಳನ್ನು ಆತುರಪಡಿಸದೆ ಸಹಜವಾಗಿ ತೆರೆಗೆ ತರುವ ಅವರ ಸಾಮರ್ಥ್ಯವನ್ನು ಮೆಚ್ಚಿಕೊಂಡಿದ್ದಾರೆ. ತೆರೆಯ ಮೇಲೆ ಭಾವನೆಗಳನ್ನು ಸಮರ್ಥವಾಗಿ ಕಟ್ಟಿಕೊಡಬಲ್ಲ ನಿರ್ದೇಶಕರು ಬಹಳ ಕಡಿಮೆ. ಅವರು ಭಾವನೆಗಳನ್ನು ಆತುರದಲ್ಲಿ ತೋರಿಸುವುದಿಲ್ಲ. ಹೀಗಾಗಿ ಕುಟುಂಬ ಪ್ರೇಕ್ಷಕರು ಸಿನಿಮಾದೊಂದಿಗೆ ಸುಲಭವಾಗಿ ಕನೆಕ್ಟ್ ಆಗುತ್ತಾರೆ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಇದು ಕಂಬ್ಯಾಕ್&zwnj;ಗಾಗಿ ಲೆಕ್ಕ ಹಾಕಿ ಮಾಡಿದ ಸಿನಿಮಾ ಅಲ್ಲ&rsquo;&lt;/strong&gt;&lt;/h2&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ತಮ್ಮ ಲೆಕ್ಕಾಚಾರದ ಕಂಬ್ಯಾಕ್ ಸಿನಿಮಾ ಅಲ್ಲ ಎನ್ನುವುದು ಶಾನ್ವಿ ಅವರ ಸ್ಪಷ್ಟನೆ. ಸರಿಯಾದ ಸಮಯದಲ್ಲಿ, ಸರಿಯಾದ ಕಥೆ ಮತ್ತು ಸರಿಯಾದ ತಂಡದೊಂದಿಗೆ ಸಿನಿಮಾ ಸಿಕ್ಕಿದೆ ಎಂಬ ಭಾವನೆ ಅವರದು. ಸಿನಿಮಾದಲ್ಲಿ ಸರಿ ಅಥವಾ ತಪ್ಪು ಎಂಬುದಿಲ್ಲ. ಪ್ರೇಕ್ಷಕರ ಭಾವನೆಗಳನ್ನು ಮುಟ್ಟುವ ಸಿನಿಮಾ ಯಾವಾಗಲೂ ಸರಿಯಾದ ಸಿನಿಮಾವೇ. ಅದು ಪ್ರತಿಯೊಬ್ಬ ವ್ಯಕ್ತಿಯ ಅನುಭವ ಮತ್ತು ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ ಎಂದು ಶಾನ್ವಿ ಶ್ರೀವಾಸ್ತವ ಹೇಳಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಹತ್ತು ವರ್ಷಗಳ ಸಿನಿ ಪಯಣದ ಬಳಿಕ ಕೇವಲ ಕಾಣಿಸಿಕೊಳ್ಳುವುದಕ್ಕಾಗಿ ಸಿನಿಮಾ ಮಾಡುವ ಬದಲು, ತಮ್ಮ ಪಾತ್ರಕ್ಕೆ ಮೌಲ್ಯ ಸಿಗುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸ್ಪಷ್ಟ ನಿಲುವಿಗೆ ಶಾನ್ವಿ ಬಂದಿದ್ದಾರೆ. &lsquo;ಅಮೆರಿಕಾ ಅಮೆರಿಕಾ 2&rsquo; ಈ ಹೊಸ ಹಂತದ ಪಯಣದಲ್ಲಿ ಅವರಿಗೆ ಎಷ್ಟರ ಮಟ್ಟಿಗೆ ವಿಶೇಷವಾಗಲಿದೆ ಎಂಬುದನ್ನು ಸೆಪ್ಟೆಂಬರ್ 11ರಂದು ಸಿನಿಮಾ ತೆರೆಕಂಡ ಬಳಿಕ ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kannada-actress-shanvi-srivastava-opens-up-about-her-role-in-america-america-2-interview-gvd/articleshow-ki9c5cb"/>
        </item>
        <item>
            <title><![CDATA[ಹೊಸ ದೃಷ್ಟಿಕೋನದಲ್ಲಿ BGM ಇಲ್ಲದ ಹಾರರ್: ‘ವಿಡಿಯೋ’ ಜೊತೆ ಬಂದ ನಿರ್ದೇಶಕ ಶ್ರೀನಿಧಿ]]></title>
            <link>https://kannada.asianetnews.com/celebrity-interviews/sandalwood-director-srinidhi-bengaluru-video-movie-promises-a-new-found-footage-horror-experience-gvd/articleshow-p1vk347</link>
            <guid isPermaLink="true">https://kannada.asianetnews.com/celebrity-interviews/sandalwood-director-srinidhi-bengaluru-video-movie-promises-a-new-found-footage-horror-experience-gvd/articleshow-p1vk347</guid>
            <pubDate>Sun, 06 Sep 2026 16:52:47 +0530</pubDate>
            <description><![CDATA[&lt;p&gt;&lsquo;ಬ್ಲಿಂಕ್&rsquo; ಮತ್ತು &lsquo;ಜೆರಾಕ್ಸ್&rsquo; ಬಳಿಕ ನಿರ್ದೇಶಕ ಶ್ರೀನಿಧಿ ಬೆಂಗಳೂರು &lsquo;ವಿಡಿಯೋ&rsquo; ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಫೌಂಡ್ ಫುಟೇಜ್ ಹಾರರ್ ಜಾನರ್&zwnj;ನಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ 7ರಿಂದ 12 ಆ್ಯಕ್ಷನ್ ಕ್ಯಾಮೆರಾಗಳನ್ನು ಬಳಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v78z0p8ak0xzc286reqtdq,imgname-bb-1788693740566.png" type="image/jpeg" height="390" width="690"/>
            <content:encoded><![CDATA[&lt;p&gt;ಸೇಫ್ ಗೇಮ್ ಆಡುವುದು ನಿರ್ದೇಶಕ ಶ್ರೀನಿಧಿ ಬೆಂಗಳೂರಿಗೆ ಎಂದಿಗೂ ಇಷ್ಟವಿಲ್ಲ. &lsquo;ಬ್ಲಿಂಕ್&rsquo; ಸಿನಿಮಾದ ಸೈನ್ಸ್ ಫಿಕ್ಷನ್&zwnj;ನಿಂದ ಹಿಡಿದು ನಾಗಭೂಷಣ ಅಭಿನಯದ ಫ್ಯಾಂಟಸಿ ಕಾಮಿಡಿ &lsquo;ಜೆರಾಕ್ಸ್&rsquo;ವರೆಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿರುವ ಅವರು, ಇದೀಗ ತಮ್ಮ ಮೂರನೇ ಚಿತ್ರ &lsquo;ವಿಡಿಯೋ&rsquo; ಮೂಲಕ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಬಾರಿ ಅವರ ಆಯ್ಕೆ &lsquo;ಫೌಂಡ್ ಫುಟೇಜ್&rsquo; ಹಾರರ್.&lt;/p&gt;&lt;p&gt;ಸೆಪ್ಟೆಂಬರ್ 11ರಂದು ತೆರೆಗೆ ಬರಲಿರುವ &lsquo;ವಿಡಿಯೋ&rsquo; ಸಿನಿಮಾ ನಟ ದೀಕ್ಷಿತ್ ಶೆಟ್ಟಿ ಅವರ ಸ್ವಂತ ಬ್ಯಾನರ್ &lsquo;ಧೀ ಸಿನಿಮಾಸ್&rsquo; ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವೂ ಹೌದು. ಭರತ್ ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಸಿನಿಮಾದಲ್ಲಿ ಪಾತ್ರಗಳನ್ನು ಸೆರೆಹಿಡಿಯಲು ಆ್ಯಕ್ಷನ್ ಕ್ಯಾಮೆರಾಗಳನ್ನು ಬಳಸಲಾಗಿದ್ದು, ಸಾಂಪ್ರದಾಯಿಕ ಹಿನ್ನೆಲೆ ಸಂಗೀತವಿಲ್ಲದೇ ನೈಜ ವಾತಾವರಣದ ಶಬ್ದಗಳ ಮೂಲಕವೇ ಭಯದ ಅನುಭವ ಕಟ್ಟಿಕೊಡಲಾಗಿದೆ.&lt;/p&gt;&lt;p&gt;&lt;strong&gt;&lsquo;ಹೊಸದೇನಾದರೂ ಮಾಡಬೇಕು ಎಂಬ ಹಂಬಲವಿತ್ತು&rsquo;&lt;/strong&gt;&lt;/p&gt;&lt;p&gt;ತಮ್ಮ ಪ್ರಯೋಗದ ಬಗ್ಗೆ Cinema Express ಜೊತೆ ಮಾತನಾಡಿರುವ ಶ್ರೀನಿಧಿ, ನಾನು ಯಾವಾಗಲೂ ವಿಭಿನ್ನವಾಗಿ ಏನಾದರೂ ಪ್ರಯತ್ನಿಸಬೇಕು ಎಂದುಕೊಳ್ಳುತ್ತಿದ್ದೆ. &lsquo;ಬ್ಲಿಂಕ್&rsquo; ನಂತರವೇ &lsquo;ವಿಡಿಯೋ&rsquo; ಕಥೆ ನನ್ನ ಬಳಿ ಸಿದ್ಧವಾಗಿತ್ತು. &lsquo;ಜೆರಾಕ್ಸ್&rsquo; ಅನ್ನು ಒಟಿಟಿ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದೆ. ನಾವು ಸ್ನೇಹಿತರು ಸೇರಿ ಸಿನಿಮಾ ಮಾಡಿದಾಗ ಜನರು ತಮ್ಮ ಸಮಯವನ್ನು ನಮ್ಮ ಸಿನಿಮಾಗೆ ಯಾಕೆ ಕೊಡಬೇಕು ಎಂದು ಚರ್ಚಿಸುತ್ತಿದ್ದೆವು.&lt;/p&gt;&lt;p&gt;ಪ್ರೇಮಕಥೆಗಳು ಮತ್ತು ಈಗಾಗಲೇ ಸಾಕಷ್ಟು ಬಾರಿ ಹೇಳಿರುವ ಕಥೆಗಳು ನಿರಂತರವಾಗಿ ಬರುತ್ತಿವೆ. ನಾವೂ ಅದೇ ಹಾದಿಯಲ್ಲಿ ಹೋದರೆ ಆ ಜನಸಂದಣಿಯಲ್ಲಿ ನಮ್ಮ ಸಿನಿಮಾ ಕಳೆದುಹೋಗಬಹುದು. ಹೀಗಾಗಿ ಹೊಸ ಪ್ರಕಾರವನ್ನು ಪ್ರಯತ್ನಿಸಬೇಕು ಎಂದುಕೊಂಡೆ. ಜನರು ಸಿನಿಮಾವನ್ನು ಟೀಕಿಸಿದರೂ ಪರವಾಗಿಲ್ಲ, ಕನಿಷ್ಠ ಅದರ ಬಗ್ಗೆ ಮಾತನಾಡುವಂತಿರಬೇಕು. ಅಪರೂಪದ ಜಾನರ್&zwnj;ನಲ್ಲಿ ಪ್ರಯತ್ನಿಸುವುದರಿಂದ ನಮ್ಮದೇ ಆದ ಗುರುತು ಸಿಗಬಹುದು ಎಂಬ ನಂಬಿಕೆ ನನ್ನದು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಫೌಂಡ್ ಫುಟೇಜ್&rsquo; ಆಯ್ಕೆ ಯಾಕೆ?&lt;/strong&gt;&lt;/p&gt;&lt;p&gt;ಈ ಹುಡುಕಾಟವೇ ಶ್ರೀನಿಧಿ ಅವರನ್ನು &lsquo;ಫೌಂಡ್ ಫುಟೇಜ್&rsquo; ಮಾದರಿಯ ಹಾರರ್&zwnj;ನತ್ತ ಕರೆದೊಯ್ದಿದೆ. ಕಡಿಮೆ ಬಜೆಟ್&zwnj;ನಲ್ಲೂ ಸಿನಿಮಾದ ನೈಜತೆಯನ್ನು ಉಳಿಸಿಕೊಳ್ಳಲು ಈ ಮಾದರಿ ಸಹಕಾರಿಯಾಯಿತು. ಆದರೆ ಆರಂಭದಲ್ಲಿ &lsquo;ವಿಡಿಯೋ&rsquo; ಇನ್ನಷ್ಟು ವಿಭಿನ್ನ ರೀತಿಯಲ್ಲೇ ಇರಬೇಕೆಂದು ಅವರು ಬರೆದಿದ್ದರಂತೆ.&lt;/p&gt;&lt;p&gt;ಮೊದಲಿಗೆ ನಾನು ಸಂಭಾಷಣೆ ಅಥವಾ ಪಾತ್ರಗಳ ವಿವರಗಳಿಲ್ಲದೆ ಕೇವಲ ಘಟನೆಗಳನ್ನು ಮಾತ್ರ ಬರೆದಿದ್ದೆ. ಶೂಟಿಂಗ್ ಸೆಟ್&zwnj;ನಲ್ಲೇ ಎಲ್ಲವನ್ನೂ ವರ್ಕ್&zwnj;ಶಾಪ್ ಮಾಡಿ, ಕಲಾವಿದರಿಂದ ಸಹಜವಾದ ಅಭಿನಯ ಹೊರತರಬಹುದು ಎಂದುಕೊಂಡಿದ್ದೆ. ಆದರೆ ಪ್ರಯತ್ನಿಸಿದಾಗ ನಟರಿಗೆ ಗೊಂದಲವಾಯಿತು. ಹೀಗಾಗಿ ನೈಜ ಅಭಿನಯಕ್ಕೆ ಹತ್ತಿರವಾಗಿರುವ ಶೈಲಿಯನ್ನು ಅಳವಡಿಸಿಕೊಂಡೆ. ಒಬ್ಬರ ಮಾತಿನ ಮೇಲೆ ಮತ್ತೊಬ್ಬರು ಮಾತನಾಡುವುದು, ಸ್ನೇಹಿತರು ನಿಜ ಜೀವನದಲ್ಲಿ ಹೇಗೆ ಮಾತನಾಡುತ್ತಾರೋ ಅದೇ ರೀತಿಯ ಸಂಭಾಷಣೆ ಇರಲಿ ಎಂದು ನಿರ್ಧರಿಸಿದೆ ಎಂದು ಶ್ರೀನಿಧಿ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಮೊದಲು &lsquo;ಟಾರ್ಲೆ ಬಾಯ್ಸ್&rsquo; ಆಗಿದ್ದ ಪಾತ್ರಗಳು&lt;/strong&gt;&lt;/p&gt;&lt;p&gt;ಸಿನಿಮಾದ ಪಾತ್ರಗಳು ಆರಂಭದಲ್ಲಿ ಮೂವರು ಬ್ಲಾಗರ್&zwnj;ಗಳಾಗಿದ್ದರು. ನಿರ್ದೇಶಕರು ಅವರನ್ನು &lsquo;ಟಾರ್ಲೆ ಬಾಯ್ಸ್&rsquo; ಎಂದು ಕರೆಯುತ್ತಿದ್ದರು. ನಂತರ ತಂಡವನ್ನು ವಿಸ್ತರಿಸಿ ಮತ್ತಿಬ್ಬರು ಕಲಾವಿದರನ್ನು ಸೇರಿಸಲಾಯಿತು. &lsquo;ವಿಡಿಯೋ&rsquo;ದ ಮೊದಲ ಭಾಗದಲ್ಲಿ ಹಾಸ್ಯ ಮತ್ತು ಹಗುರವಾದ ಮನರಂಜನೆಯ ಅಂಶಗಳಿದ್ದು, ನಂತರ ಕಥೆ ನಿಧಾನವಾಗಿ ಹಾರರ್ ಜಾನರ್&zwnj;ಗೆ ತಿರುಗುತ್ತದೆ. ಪ್ರೇಕ್ಷಕರನ್ನು ಮೊದಲು ಪಾತ್ರಗಳೊಂದಿಗೆ ಕನೆಕ್ಟ್ ಮಾಡಿಸಿ, ಬಳಿಕ ಅವರನ್ನೇ ಭಯದ ವಾತಾವರಣದೊಳಗೆ ಕರೆದೊಯ್ಯುವುದು ನಿರ್ದೇಶಕರ ಉದ್ದೇಶವಾಗಿದೆ.&lt;/p&gt;&lt;p&gt;&lt;strong&gt;ನಿಜ ಜೀವನದ ಅನುಭವದಿಂದ ಹುಟ್ಟಿದ ಭಯ&lt;/strong&gt;&lt;/p&gt;&lt;p&gt;ಜನರಿಗೆ ಯಾವ ಸಂದರ್ಭಗಳಲ್ಲಿ ಭಯ ಮೂಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಶ್ರೀನಿಧಿ ಹಲವು ಫೌಂಡ್-ಫುಟೇಜ್ ವಿಡಿಯೋಗಳು ಹಾಗೂ ಹಾರರ್ ಅನುಭವಗಳನ್ನು ಗಮನಿಸಿದ್ದಾರೆ. ಈ ವೇಳೆ ತಮ್ಮದೇ ಒಂದು ಅನುಭವ ಅವರಿಗೆ &lsquo;ವಿಡಿಯೋ&rsquo; ಸಿನಿಮಾದ ಭಯದ ಜಗತ್ತಿಗೆ ಪ್ರಮುಖ ಸುಳಿವಾಗಿದೆ.&lt;/p&gt;&lt;p&gt;ನಾನು ಆಂಧ್ರಪ್ರದೇಶಕ್ಕೆ ಸಂಬಂಧಿಕರೊಬ್ಬರನ್ನು ಭೇಟಿಯಾಗಲು ಹೋಗಿದ್ದೆ. ಒಂದು ರಾತ್ರಿ ಸುಮಾರು ಮಧ್ಯರಾತ್ರಿ ವೇಳೆಗೆ ಹಳ್ಳಿಯೊಂದರಲ್ಲಿ ಇದ್ದೆ. ಆಗ ಒಂದು ರೀತಿಯ ಭಯ ನನ್ನನ್ನು ಆವರಿಸಿತು. ಆ ಜಾಗ ನಮಗೆ ಅಪರಿಚಿತವಾಗಿದ್ದಾಗಲೇ ಭಯ ಹೆಚ್ಚಾಗುತ್ತದೆ ಎಂಬುದು ನನಗೆ ಅರ್ಥವಾಯಿತು.&lt;/p&gt;&lt;p&gt;ಆ ಜಾಗ ಹೇಗಿದೆ, ಅಲ್ಲಿನ ವಾತಾವರಣ ಹೇಗಿದೆ, ನಮ್ಮ ಸುತ್ತಮುತ್ತ ಇರುವ ಜನರು ಯಾರು ಎಂಬುದು ಗೊತ್ತಿಲ್ಲದಿರುವುದು ನಮ್ಮೊಳಗೆ ಒಂದು ರೀತಿಯ ಆತಂಕ ಹುಟ್ಟಿಸುತ್ತದೆ. &lsquo;ವಿಡಿಯೋ&rsquo; ಸಿನಿಮಾ ಮಾಡುವಾಗ ಈ ಆಲೋಚನೆ ನನಗೆ ಬಹಳ ಮುಖ್ಯವಾಗಿತ್ತು ಎಂದು ಶ್ರೀನಿಧಿ ಹೇಳಿದ್ದಾರೆ.&lt;/p&gt;&lt;p&gt;ಕನ್ನಡ ಸಿನಿಮಾಗಳಿಂದಲೂ ಅವರು ಸ್ಫೂರ್ತಿ ಪಡೆದಿದ್ದಾರೆ. &lsquo;ಆಪ್ತಮಿತ್ರ&rsquo; ಸಿನಿಮಾದಲ್ಲಿ ಕನ್ನಡದವರಲ್ಲದ ಆತ್ಮದ ಪರಿಕಲ್ಪನೆ ಕೂಡ ಭಾಷೆ ಮತ್ತು ಅಪರಿಚಿತತೆಯೇ ಹೇಗೆ ಭಯವನ್ನು ಹೆಚ್ಚಿಸಬಹುದು ಎಂಬ ಆಲೋಚನೆ ಮೂಡಿಸಿತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಬ್ಲಾಗ್&rsquo; ಆಗಿದ್ದ ಸಿನಿಮಾ &lsquo;ವಿಡಿಯೋ&rsquo; ಆದ ಕಥೆ&lt;/strong&gt;&lt;/p&gt;&lt;p&gt;ಸಿನಿಮಾಕ್ಕೆ ಆರಂಭದಲ್ಲಿ &lsquo;ಬ್ಲಾಗ್&rsquo; ಎಂಬ ಶೀರ್ಷಿಕೆ ಇಡಲಾಗಿತ್ತು. ಕಥೆಯಲ್ಲಿರುವ ಎಲ್ಲಾ ಪಾತ್ರಗಳೂ ಬ್ಲಾಗರ್&zwnj;ಗಳಾಗಿದ್ದು, ಅವರ ಜೀವನವೇ ಕಥೆಯೊಂದಿಗೆ ಬೆಸೆದುಕೊಂಡಿರುವ ಕಾರಣ ಈ ಹೆಸರನ್ನು ಆಯ್ಕೆ ಮಾಡಲಾಗಿತ್ತು.&lt;/p&gt;&lt;p&gt;ಆದರೆ ನನ್ನ ಸ್ನೇಹಿತರು ಮಾತ್ರವಲ್ಲದೆ ನನ್ನ ತಾಯಿಗೂ &lsquo;ಬ್ಲಾಗ್&rsquo; ಎನ್ನುವುದು ಉಚ್ಚರಿಸಲು ಸ್ವಲ್ಪ ಕಷ್ಟವಾಗುತ್ತಿತ್ತು. ಹೀಗಾಗಿ &lsquo;ವಿಡಿಯೋ&rsquo; ಎಂಬ ಹೆಸರು ಹೆಚ್ಚು ಸರಳ ಮತ್ತು ನೇರ ಎನಿಸಿತು. ಈ ಪಾತ್ರಗಳು ಕ್ಯಾಮೆರಾಗಳ ಮೂಲಕವೇ ತಮ್ಮ ಬದುಕನ್ನು ನೋಡುತ್ತಾರೆ. ವಿಡಿಯೋ, ಕ್ಯಾಮೆರಾ ಮತ್ತು ವೈರಲ್ ಆಗುವ ಸಾಧ್ಯತೆ ಅವರ ಕಥೆಯ ಭಾಗವಾಗಿದೆ. ಹೀಗಾಗಿ &lsquo;ವಿಡಿಯೋ&rsquo; ಸೂಕ್ತ ಎನಿಸಿತು ಎಂದು ನಿರ್ದೇಶಕರು ಹೇಳಿದ್ದಾರೆ.&lt;/p&gt;&lt;p&gt;ಸಿನಿಮಾದ ದೃಶ್ಯಗಳಿಗೆ ಅನುಗುಣವಾಗಿ ಏಳುರಿಂದ 12 ಆ್ಯಕ್ಷನ್ ಕ್ಯಾಮೆರಾಗಳನ್ನು ಬಳಸಲಾಗಿದೆ. ಕ್ಯಾಮೆರಾಗಳನ್ನು ಕೇವಲ ತಾಂತ್ರಿಕ ಅಂಶವಾಗಿ ನೋಡಲಿಲ್ಲ. ಕಥೆ ಬರೆಯುವಾಗಲೇ ಯಾವ ದೃಶ್ಯವನ್ನು ಮುಖ್ಯ ಕ್ಯಾಮೆರಾದಿಂದ ತೋರಿಸಬೇಕು, ಯಾವ ಕ್ಷಣವನ್ನು ಮತ್ತೊಂದು ಕ್ಯಾಮೆರಾ ಆ್ಯಂಗಲ್&zwnj;ನಿಂದ ಸೆರೆಹಿಡಿಯಬೇಕು ಎಂಬುದನ್ನು ನಿರ್ಧರಿಸುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ನೋ ಕಂಟ್ರಿ ಫಾರ್ ಓಲ್ಡ್ ಮೆನ್&rsquo; ಸ್ಫೂರ್ತಿ&lt;/strong&gt;&lt;/p&gt;&lt;p&gt;&lsquo;ವಿಡಿಯೋ&rsquo; ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ಸಾಂಪ್ರದಾಯಿಕ ಹಿನ್ನೆಲೆ ಸಂಗೀತದ ಕೊರತೆ. ಹಾರರ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಭಯ ಹೆಚ್ಚಿಸಲು ಬಳಸುವ BGM ಬದಲು, ನೈಜ ವಾತಾವರಣದ ಶಬ್ದಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.&lt;/p&gt;&lt;p&gt;&lsquo;ನೋ ಕಂಟ್ರಿ ಫಾರ್ ಓಲ್ಡ್ ಮೆನ್&rsquo; ಸಿನಿಮಾದಲ್ಲಿ ನಿರಂತರವಾಗಿ ಸಂಗೀತದ ಮೇಲೆ ಅವಲಂಬಿತವಾಗದೇ ಆ್ಯಂಬಿಯನ್ಸ್ ಮತ್ತು ಸೈಲೆನ್ಸ್ ಬಳಸಿರುವುದು ನನಗೆ ಇಷ್ಟವಾಯಿತು. &lsquo;ವಿಡಿಯೋ&rsquo;ದಲ್ಲೂ ಅದೇ ರೀತಿಯ ಅನುಭವ ನೀಡಲು ಪ್ರಯತ್ನಿಸಿದ್ದೇನೆ. ಪ್ರೇಕ್ಷಕರು ಯಾವ ಭಾವನೆ ಅನುಭವಿಸಬೇಕು ಎಂದು BGM ಹೇಳದೇ ಇದ್ದಾಗ, ಸಣ್ಣದೊಂದು ಶಬ್ದ ಕೂಡ ಬಹಳ ಮುಖ್ಯವಾಗುತ್ತದೆ ಎಂದು ಶ್ರೀನಿಧಿ ಹೇಳಿದ್ದಾರೆ. ಚಿತ್ರಕ್ಕೆ ಎಂ.ಎಸ್. ಪ್ರಸನ್ನ ಕುಮಾರ್ ಸಂಗೀತ ನೀಡಿದ್ದು, ಸಾಮಾನ್ಯ ಹಾರರ್ ಸಿನಿಮಾಗಳಿಗಿಂತ ಭಿನ್ನವಾದ ಸಂಗೀತ ಶೈಲಿಯನ್ನು ಪ್ರಯತ್ನಿಸಲಾಗಿದೆ.&lt;/p&gt;&lt;p&gt;&lt;strong&gt;ಪ್ರಯೋಗದ ಜೊತೆ ಕಮರ್ಷಿಯಲ್ ಅಂಶವೂ ಬೇಕಿತ್ತು&lt;/strong&gt;&lt;/p&gt;&lt;p&gt;ಹೊಸ ಪ್ರಯೋಗ ಮಾಡುವ ಉತ್ಸಾಹದ ನಡುವೆಯೂ ಸಿನಿಮಾ ಸಾಮಾನ್ಯ ಪ್ರೇಕ್ಷಕರಿಗೆ ದೂರವಾಗಬಾರದು ಎಂಬ ಎಚ್ಚರಿಕೆಯನ್ನು ಶ್ರೀನಿಧಿ ವಹಿಸಿದ್ದಾರೆ. &lsquo;ಬ್ಲಿಂಕ್&rsquo; ನಂತರ ಒಂದು ವಿಚಾರ ನನ್ನನ್ನು ಕಾಡುತ್ತಿತ್ತು. ಸಿನಿಮಾ ಸಾಮಾನ್ಯ ಪ್ರೇಕ್ಷಕರೊಂದಿಗೆ ಸಾಕಷ್ಟು ಕನೆಕ್ಟ್ ಆಗಲಿಲ್ಲ ಎಂಬ ಭಾವನೆ ಇತ್ತು. ಫೌಂಡ್ ಫುಟೇಜ್ ಸಿನಿಮಾಗಳಲ್ಲಿ ಕಲಾವಿದರು ತಮ್ಮಂತೆಯೇ ಸಹಜವಾಗಿ ನಟಿಸಿದಾಗ ಅದು ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ ಇದೇ ವೇಳೆ ಕಮರ್ಷಿಯಲ್ ಅಂಶವೂ ಇರಬೇಕು ಎಂದು ಬಯಸಿದ್ದೆ. ಈ ಫಾರ್ಮ್ಯಾಟ್ ಪ್ರೇಕ್ಷಕರಿಗೆ ಅಡ್ಡಿಯಾಗಬಾರದು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಥಿಯೇಟರ್ ಅನುಭವಕ್ಕೆ &lsquo;ವಿಡಿಯೋ&rsquo; ಸಿದ್ಧ&lt;/strong&gt;&lt;/p&gt;&lt;p&gt;&lsquo;ವಿಡಿಯೋ&rsquo; ಸಿನಿಮಾದಲ್ಲಿ ಭರತ, ಜೀವನ್ ಶಿವಕುಮಾರ್, ತೇಜಸ್ ಎಸ್.ಎಂ., ಪ್ರಿಯಾ ಜೆ. ಆಚಾರ್ ಹಾಗೂ ನಾಲ್ಮೆ ನಾಚಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭರತ, ಜೀವನ್ ಮತ್ತು ತೇಜಸ್ ಅವರು ಶ್ರೀನಿಧಿ ಅವರ ರಂಗಭೂಮಿ ದಿನಗಳಿಂದಲೂ ಅವರೊಂದಿಗೆ ಕೆಲಸ ಮಾಡಿರುವ ಕಲಾವಿದರು.&lt;/p&gt;&lt;p&gt;ಪ್ರಿಯಾ ಬಳಿಕ ತಂಡ ಸೇರಿಕೊಂಡರೆ, ನಟಿ ಉಷಾ ಭಂಡಾರಿ ಅವರ ಪುತ್ರಿ ನಾಲ್ಮೆ ಅವರನ್ನು ದೀಕ್ಷಿತ್ ಶೆಟ್ಟಿ ತಂಡಕ್ಕೆ ಪರಿಚಯಿಸಿದ್ದಾರೆ. ಪಾತ್ರಗಳ ನಡುವಿನ ಬಾಂಧವ್ಯ ಸಹಜವಾಗಿ ಮೂಡಿಬರಲು ಕಲಾವಿದರಿಗೆ ವರ್ಕ್&zwnj;ಶಾಪ್ ನಡೆಸಲಾಗಿದ್ದು, ಬ್ಲಾಗಿಂಗ್ ಬಗ್ಗೆ ತರಬೇತಿಯನ್ನೂ ನೀಡಲಾಗಿದೆ. ತಂಡದ ಎಲ್ಲರೂ ಸಾಕಷ್ಟು ಸಮಯ ಒಟ್ಟಿಗೆ ಕಳೆದು, ಹಲವು ಕಡೆ ಪ್ರಯಾಣ ಮಾಡಿ ತಮ್ಮ ನಡುವಿನ ಕೆಮಿಸ್ಟ್ರಿಯನ್ನು ಬೆಳೆಸಿಕೊಂಡಿದ್ದಾರೆ. ಚಿತ್ರಕ್ಕೆ ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಸಂಜೀವ್ ಜಗದ್ಗಾರ್ ಸಂಕಲನ ನಿರ್ವಹಿಸಿದ್ದಾರೆ.&lt;/p&gt;&lt;h2&gt;&lt;strong&gt;ದೀಕ್ಷಿತ್ ಶೆಟ್ಟಿ ನಿರ್ಮಾಪಕರಾದ ಕಥೆ&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಶ್ರೀನಿಧಿ ಅವರು ಸಿನಿಮಾಕ್ಕಾಗಿ ಕ್ರೌಡ್&zwnj;ಫಂಡಿಂಗ್ ಮಾಡುವ ಉದ್ದೇಶದಿಂದ ದೀಕ್ಷಿತ್ ಶೆಟ್ಟಿ ಅವರನ್ನು ಸಂಪರ್ಕಿಸಿದ್ದರು. ಆದರೆ ಕಥೆ ಮತ್ತು ಪ್ರಯೋಗದ ಮೇಲಿನ ನಂಬಿಕೆಯಿಂದ ದೀಕ್ಷಿತ್ ನಿರ್ಮಾಪಕರಾಗಿಯೇ ಚಿತ್ರತಂಡಕ್ಕೆ ಸೇರಿಕೊಂಡರು. ನನ್ನ ಮೇಲಿನ ಅವರ ಉತ್ಸಾಹವನ್ನು ದೀಕ್ಷಿತ್ ಅರ್ಥಮಾಡಿಕೊಂಡರು. ನಿರ್ಮಾಪಕರು ಸ್ಕ್ರಿಪ್ಟ್ ಆಯ್ಕೆ ಮಾಡುತ್ತಾರೆ ಎನ್ನುವುದಕ್ಕಿಂತ, ಕೆಲವೊಮ್ಮೆ ಸ್ಕ್ರಿಪ್ಟ್&zwnj;ಗಳೇ ತಮ್ಮ ನಿರ್ಮಾಪಕರನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂಬ ನಂಬಿಕೆ ನನಗಿದೆ ಎಂದು ಶ್ರೀನಿಧಿ ಹೇಳಿದ್ದಾರೆ.&lt;/p&gt;&lt;p&gt;ಶೂಟಿಂಗ್ ಬಳಿಕ ಸಿನಿಮಾದ ಕೆಲವು ಹಾಸ್ಯ ಸನ್ನಿವೇಶಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಹಾಗೂ ಹಾರರ್ ಇನ್ನಷ್ಟು ಪರಿಣಾಮಕಾರಿಯಾಗಬೇಕು ಎಂದು ತಂಡಕ್ಕೆ ಅನಿಸಿದಾಗ ಮೂರು ದಿನಗಳ ಕಾಲ ರೀಶೂಟ್ ಕೂಡ ನಡೆಸಲಾಯಿತು. ಶ್ರೀನಿಧಿ ಕೆಲವು ದೃಶ್ಯಗಳನ್ನು ಮರುಬರೆಯುವ ಮೂಲಕ ಕಥೆಯನ್ನು ಮರುಜೋಡಿಸಿದ್ದು, ದೀಕ್ಷಿತ್ ಈ ಪ್ರಕ್ರಿಯೆಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಈಗಾಗಲೇ ಸಿನಿಮಾದ ಪೇಯ್ಡ್ ಪ್ರೀಮಿಯರ್ ನಡೆದಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಚಿತ್ರತಂಡ ಗಮನಿಸಿದೆ. ವಿಶೇಷವಾಗಿ ಮೊದಲಾರ್ಧದ ಬಗ್ಗೆ ಶ್ರೀನಿಧಿಗೆ ಕುತೂಹಲವಿತ್ತಂತೆ.&lt;/p&gt;&lt;p&gt;ಎರಡನೇ ಭಾಗದ ಬಗ್ಗೆ ನನಗೆ ಯಾವುದೇ ಅನುಮಾನ ಇರಲಿಲ್ಲ. ಆದರೆ ಕಥೆ ಮತ್ತು ಪಾತ್ರಗಳನ್ನು ಕಟ್ಟಿಕೊಡಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ. ಪ್ರೇಕ್ಷಕರು ಆ ಪಾತ್ರಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳದಿದ್ದರೆ ನಂತರ ಬರುವ ಹಾರರ್ ಪರಿಣಾಮಕಾರಿಯಾಗುವುದಿಲ್ಲ. ಅದೃಷ್ಟವಶಾತ್ ಪ್ರೇಕ್ಷಕರು ಕಥೆಯೊಂದಿಗೆ ಸಾಗಿದರು. ಈ ಮೂಲಕ ಸಂಗೀತ ಮತ್ತು ಇತರ ಅಂಶಗಳ ಮೇಲೂ ಇನ್ನಷ್ಟು ಕೆಲಸ ಮಾಡಲು ನಮಗೆ ಅವಕಾಶ ಸಿಕ್ಕಿತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಇನ್ನು &lsquo;ಬ್ಲಿಂಕ್&rsquo;, &lsquo;ಜೆರಾಕ್ಸ್&rsquo; ಬಳಿಕ ಶ್ರೀನಿಧಿ ಬೆಂಗಳೂರು ಮತ್ತೊಮ್ಮೆ ಸಾಮಾನ್ಯ ಹಾದಿಯಿಂದ ಹೊರಗೆ ಹೆಜ್ಜೆ ಇಟ್ಟಿದ್ದಾರೆ. ಈ ಬಾರಿ ಕ್ಯಾಮೆರಾದ ಕಣ್ಣಿನ ಮೂಲಕವೇ ಪ್ರೇಕ್ಷಕರಿಗೆ ಭಯದ ಅನುಭವ ನೀಡಲು ಹೊರಟಿದ್ದಾರೆ. ಇದೊಂದು ಹೊಸ ಅನುಭವ. ಹಾರರ್ ಅನ್ನು ಹೊಸ ದೃಷ್ಟಿಕೋನದಿಂದ ತೋರಿಸುವ ಪ್ರಯತ್ನ. ಈ ಸಿನಿಮಾವನ್ನು ಥಿಯೇಟರ್&zwnj;ನಲ್ಲೇ ಅನುಭವಿಸಬೇಕು ಎಂದು ಶ್ರೀನಿಧಿ ಬೆಂಗಳೂರು ಮಾತು ಮುಗಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/sandalwood-director-srinidhi-bengaluru-video-movie-promises-a-new-found-footage-horror-experience-gvd/articleshow-p1vk347"/>
        </item>
        <item>
            <title><![CDATA[ಮಲಯಾಳಂನ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ; ಕೇರಳ-ತಮಿಳುನಾಡು ಗಡಿಯ ಠಾಣೆ  ಕಥೆ]]></title>
            <link>https://kannada.asianetnews.com/gallery/movie-reviews/malayalam-exciting-suspense-thriller-movie-kooman-kerala-and-tamil-nadu-border-police-station-station-story-ai08b1r</link>
            <guid isPermaLink="true">https://kannada.asianetnews.com/gallery/movie-reviews/malayalam-exciting-suspense-thriller-movie-kooman-kerala-and-tamil-nadu-border-police-station-station-story-ai08b1r</guid>
            <pubDate>Sun, 06 Sep 2026 17:09:21 +0530</pubDate>
            <description><![CDATA[&lt;p&gt;ಜೀತು ಜೋಸೆಫ್ ನಿರ್ದೇಶನದ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ. ಮೇಲಾಧಿಕಾರಿಯಿಂದ ಅವಮಾನಕ್ಕೊಳಗಾದ ಗಿರಿ ಎಂಬ ಪ್ರಾಮಾಣಿಕ ಪೊಲೀಸ್ ಕಾನ್ಸ್&zwnj;ಟೇಬಲ್&zwnj;ನ ಜೀವನವು, ಒಂದು ಕೊ*ಲೆ ಪ್ರಕರಣದ ತನಿಖೆಯೊಂದಿಗೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v7rh0neqy1gvjzff70qw8j,imgname-kooman--2--1788694250517.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೀತು ಜೋಸೆಫ್ ನಿರ್ದೇಶನದ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ. ಮೇಲಾಧಿಕಾರಿಯಿಂದ ಅವಮಾನಕ್ಕೊಳಗಾದ ಗಿರಿ ಎಂಬ ಪ್ರಾಮಾಣಿಕ ಪೊಲೀಸ್ ಕಾನ್ಸ್&zwnj;ಟೇಬಲ್&zwnj;ನ ಜೀವನವು, ಒಂದು ಕೊ*ಲೆ ಪ್ರಕರಣದ ತನಿಖೆಯೊಂದಿಗೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ.&lt;/p&gt;&lt;img&gt;&lt;p&gt;ನೀವು ಸಸ್ಪೆನ್ಸ್, ಇನ್&zwnj;ವೆಸ್ಟಿಗೇಷನ್ ಮತ್ತು ಥ್ರಿಲ್ಲರ್&zwnj; ಕತೆಗಳನ್ನು ಹೊಂದಿರುವ ಸಿನಿಮಾಗಳನ್ನು ಇಷ್ಟಪಡುತ್ತಿದ್ರೆ, ಇದು ನಿಮಗೆ ಒಳ್ಳೆಯ ಆಯ್ಕೆಯಾಗಲಿದೆ. ಜೀತು ಜೋಸೆಫ್ ನಿರ್ದೇಶನದ ಈ ಮಲಯಾಳಂ ಸಿನಿಮಾ ನೋಡಲು ಆರಂಭಿಸಿದ್ರೆ ನಿಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಮರೆಯುತ್ತೀರಿ. OTT ಪ್ಲಾಟ್&zwnj;ಫಾರ್ಮ್&zwnj;ನಲ್ಲಿರುವ ಈ ಸಿನಿಮಾ 2022ರಲ್ಲಿ ಬಿಡುಗಡೆಗೊಂಡಿದೆ.&lt;/p&gt;&lt;img&gt;&lt;p&gt;ಈ ಸಿನಿಮಾದ ಕತೆ ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿರೋ ಪುಟ್ಟ ಗ್ರಾಮದಿಂದ ಆರಂಭವಾಗುತ್ತದೆ. ಬೆರಳಣಿಕೆಯಷ್ಟು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಚಿಕ್ಕ ಪೊಲೀಸ್ ಠಾಣೆಯೊಂದಿರುತ್ತದೆ. ಈ ಠಾಣೆಯಲ್ಲಿರುವ ಪೊಲೀಸ್ ಕಾನ್ಸ್&zwnj;ಟೇಬಲ್ ಗಿರಿ ಎಂಬಾತನೇ ಸುತ್ತವೇ ಚಿತ್ರದ ಕಥೆ ಸುತ್ತುತ್ತದೆ. ಗಿರಿ ಓರ್ವ ದಕ್ಷ, ಪ್ರಾಮಾಣಿಕ ಮತ್ತು ಬುದ್ದಿವಂತ ಪೊಲೀಸ್ ಕಾನ್ಸ್&zwnj;ಟೇಬಲ್ ಆಗಿರುತ್ತಾನೆ.&lt;/p&gt;&lt;img&gt;&lt;p&gt;ಒಮ್ಮೆ ತನ್ನ ಮೇಲಾಧಿಕಾರಿಗಳಿಂದ ಗಿರಿ ತೀವ್ರವಾಗಿ ಅವಮಾನಕ್ಕೆ ಒಳಗಾಗುತ್ತಾನೆ. ಇಲ್ಲಿಂದ ಸಿನಿಮಾ ಹೊಸ ತಿರುವು ಪಡೆದುಕೊಳ್ಳಲಾರಂಭಿಸುತ್ತದೆ. ಮೇಲಾಧಿಕಾರಿಯಿಂದ ಅವಮಾನಕ್ಕೊಳಗಾದ ನಂತ್ರ ಗಿರಿಯ ಆಲೋಚನಾ ಲಹರಿ ಮತ್ತು ಜೀವನವೇ ವಿಭಿನ್ನ ತಿರುವು ಪಡೆಯುತ್ತದೆ. ಚಿತ್ರದ ಸೆಕೆಂಡ್ ಹಾಫ್ ಸಂಪೂರ್ಣವಾಗಿ ಕೊ*ಲೆ ಪ್ರಕರಣದ ತನಿಖೆಯತ್ತ ಮುಖ ಮಾಡುತ್ತದೆ. ಗಿರಿ ಪಾತ್ರದಲ್ಲಿ ನಟ ಆಸಿಪ್ ಅಲಿ ಅದ್ಭುತವಾಗಿ ನಟಿಸುತ್ತಿದ್ದು, ಅವರ ಗ್ರೇ-ಶೇಡ್ ರೋಲ್ ಕಣ್ಮುಂದೆಯೇ ಬಂದಂತೆ ಭಾಸವಾಗುತ್ತದೆ.&lt;/p&gt;&lt;img&gt;&lt;p&gt;153 ನಿಮಿಷದ ಈ ಸಿನಿಮಾ ಹೆಸರು ಕೂಮನ್ (Kooman). ಆಸಿಫ್ ಅಲಿ, ಅಲ್ವಿನ್ ಆಂಥೋನಿ, ರೆಂಜಿ ಪನಿಕೆರ್, ಹನ್ನಾ ರೆಜಿ, ಜಾಫರ್ ಇಡುಕ್ಕಿ, ಬಾಬುರಾಜ್ ಸೇರಿದಂತೆ ಹಲವು ಕಲಾವಿದರು ಕೂಮನ್ ಸಿನಿಮಾದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಕೆ.ಆರ್.ಕೃಷ್ಣಕುಮಾರ್ ಅವರ ಕಥೆಗೆ ನಿರ್ದೇಶಕ ಜೇತು ಜೋಸೆಫ್ ಜೀವ ತುಂಬಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಂಗಾತಿಗಾಗಿ 3 ಜನ್ಮ ಕಾಯೋ ಹೆಣ್ಣು ಹಾವು; 1991ರ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ&lt;/strong&gt;&lt;/p&gt;&lt;img&gt;&lt;p&gt;ಐಎಂಡಿಬಿಯಲ್ಲಿ ಈ ಸಿನಿಮಾಗೆ 7.3 ರೇಟಿಂಗ್ ನೀಡಲಾಗಿದೆ. ಈ ಸಿನಿಮಾ ನೋಡಿದ್ಮೇಲೆ ಮನಸ್ಸಿಗೆ ಮುದ ನೀಡಿದ ಅನುಭವವನ್ನು ನೀಡುತ್ತದೆ. ಪೊಲೀಸ್ ಕಾನ್ಸ್&zwnj;ಟೇಬಲ್ ಕೆಲಸ ಹೋಗುತ್ತಾ? ತನಿಖೆ ಹೇಗೆ ನಡೆಯುತ್ತೆ ಎಂಬ ಪ್ರಶ್ನೆಗಳು ನಿಮ್ಮನ್ನು ಸಿನಿಮಾದ ಕೊನೆಯವರೆಗೂ ಕರೆದುಕೊಂಡು ಹೋಗುತ್ತದೆ. ಈ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದ್ದು, ವೀಕ್ಷಿಸಬಹುದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಂಡನ ರೂಪದ ಹಾವಿನ ಜೊತೆ ಸಂಸಾರ; 15 ಹಾಡುಗಳ ಸೂಪರ್ ಹಿಟ್ ಸಸ್ಪೆನ್ಸ್ ಕನ್ನಡ ಸಿನಿಮಾ&lt;/strong&gt;&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/movie-reviews/malayalam-exciting-suspense-thriller-movie-kooman-kerala-and-tamil-nadu-border-police-station-station-story-ai08b1r"/>
        </item>
        <item>
            <title><![CDATA['ಡಾಕ್ಟರ್ ಅಲ್ಲ, ಡ್ಯಾನ್ಸರ್': ಡಾಲಿ ಧನಂಜಯ ಪತ್ನಿಯ ಡ್ಯಾನ್ಸ್ ನೋಡಿ ಫ್ಯಾನ್ಸ್ ಫುಲ್ ಖುಷ್]]></title>
            <link>https://kannada.asianetnews.com/sandalwood/kannada-actor-daali-dhananjaya-wife-dhanyatha-grooves-to-puttamalli-song-fans-are-impressed-gvd/articleshow-7f2ohxz</link>
            <guid isPermaLink="true">https://kannada.asianetnews.com/sandalwood/kannada-actor-daali-dhananjaya-wife-dhanyatha-grooves-to-puttamalli-song-fans-are-impressed-gvd/articleshow-7f2ohxz</guid>
            <pubDate>Sun, 06 Sep 2026 16:25:37 +0530</pubDate>
            <description><![CDATA[&lt;p&gt;&lsquo;ಅಣ್ಣ ಫ್ರಮ್ ಮೆಕ್ಸಿಕೋ&rsquo; ಚಿತ್ರದ &lsquo;ಪುಟ್ಟಮಲ್ಲಿ&rsquo; ಹಾಡಿಗೆ ಡಾಲಿ ಧನಂಜಯ ಪತ್ನಿ ಧನ್ಯತಾ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಧನ್ಯತಾ ಡ್ಯಾನ್ಸ್ ವಿಡಿಯೋಗೆ ಫ್ಯಾನ್ಸ್ ಫಿದಾ ಆಗಿದ್ದು, &lsquo;ಡಾಕ್ಟರ್ ಅಲ್ಲ, ಡ್ಯಾನ್ಸರ್&rsquo; ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v5p0d1ss77e3ez9repw3db,imgname-m-m-1788692070817.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ನಟ ರಾಕ್ಷಸ ಡಾಲಿ ಧನಂಜಯ ಅಭಿನಯದ ಬಹುನಿರೀಕ್ಷಿತ &lsquo;ಅಣ್ಣ ಫ್ರಮ್ ಮೆಕ್ಸಿಕೋ&rsquo; ಸಿನಿಮಾ ಸದ್ಯ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಹೊಸ ಹಾಡು &lsquo;ಪುಟ್ಟಮಲ್ಲಿ&rsquo; ಬಿಡುಗಡೆಯಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದು, ಇದೀಗ ಈ ಹಾಡಿಗೆ ಧನಂಜಯ ಅವರ ಪತ್ನಿ ಧನ್ಯತಾ ಹಾಕಿರುವ ಸ್ಟೆಪ್ಸ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ.&lt;/p&gt;&lt;p&gt;ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಬಿಡುಗಡೆಯಾಗಿರುವ &lsquo;ಪುಟ್ಟಮಲ್ಲಿ&rsquo; ಹಾಡಿಗೆ ಈಗಾಗಲೇ ರೀಲ್ಸ್&zwnj;ಗಳ ಅಬ್ಬರ ಶುರುವಾಗಿದೆ. ಹಾಡಿನ ಟ್ಯೂನ್&zwnj;ಗೆ ಮನಸೋತಿರುವ ರೀಲ್ಸ್ ಪ್ರಿಯರು ತಮ್ಮದೇ ಸ್ಟೈಲ್&zwnj;ನಲ್ಲಿ ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಧನ್ಯತಾ ಕೂಡ ಮೊದಲ ಬಾರಿಗೆ ಈ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ.&lt;/p&gt;&lt;p&gt;&lt;strong&gt;ಡ್ಯಾನ್ಸ್&zwnj;ಗೆ ಫಿದಾ&lt;/strong&gt;&lt;/p&gt;&lt;p&gt;ಪತಿ ಡಾಲಿ ಧನಂಜಯ ಅವರಿಗೆ ಸಪೋರ್ಟ್ ನೀಡುವ ಉದ್ದೇಶದಿಂದ ಧನ್ಯತಾ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋವನ್ನು ಆನಂದ್ ಆಡಿಯೊ ತನ್ನ ಅಧಿಕೃತ ಇನ್&zwnj;ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋ ನೋಡಿದ ಅಭಿಮಾನಿಗಳು ಧನ್ಯತಾ ಅವರ ಡ್ಯಾನ್ಸ್&zwnj;ಗೆ ಫಿದಾ ಆಗಿದ್ದು, ಕಾಮೆಂಟ್&zwnj;ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;&lsquo;ಡಾಕ್ಟರ್ ಅಲ್ಲ, ಡ್ಯಾನ್ಸರ್&rsquo; ಎಂದು ಅಭಿಮಾನಿಗಳು ಧನ್ಯತಾ ಅವರನ್ನು ಕೊಂಡಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದು, ಧನ್ಯತಾ ಅವರ ಸಿಂಪಲ್ ಹಾಗೂ ಎನರ್ಜಿಟಿಕ್ ಡ್ಯಾನ್ಸ್&zwnj;ಗೆ ಫ್ಯಾನ್ಸ್&zwnj;ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.&lt;/p&gt;&lt;h2&gt;&lt;strong&gt;ಡಿಸೆಂಬರ್ 24ರಂದು ತೆರೆಗೆ&lt;/strong&gt;&lt;/h2&gt;&lt;p&gt;ಇನ್ನು &lsquo;ಅಣ್ಣ ಫ್ರಮ್ ಮೆಕ್ಸಿಕೋ&rsquo; ಸಿನಿಮಾ ಶಂಕರ್ ಗುರು ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಡಿಸೆಂಬರ್ 24ರಂದು ತೆರೆಗೆ ಬರಲು ಸಜ್ಜಾಗಿದೆ. ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್&zwnj;ಟೇನರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ನಾಗಭೂಷಣ ಹಾಗೂ ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲೂಸ್ ಮಾದ ಯೋಗಿ ಕೂಡ ವಿಶೇಷ ಪಾತ್ರದಲ್ಲಿ ನಟಿಸಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.&lt;/p&gt;&lt;p&gt;ಐರಾ ಫಿಲ್ಮ್ಸ್ ಹಾಗೂ ರಾಯಲ್ ಸ್ಟುಡಿಯೊಸ್ ಜಂಟಿ ಬ್ಯಾನರ್&zwnj;ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನವಿದೆ. ಅಜಯ್ ಸಂಕಲನ ಹಾಗೂ ಗುಣ ಕಲಾ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. &lsquo;ಪುಟ್ಟಮಲ್ಲಿ&rsquo; ಹಾಡು ಈಗಾಗಲೇ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಡಾಲಿ ಧನಂಜಯ ಅವರ &lsquo;ಅಣ್ಣ ಫ್ರಮ್ ಮೆಕ್ಸಿಕೋ&rsquo; ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆಯೂ ಮತ್ತಷ್ಟು ಹೆಚ್ಚಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-actor-daali-dhananjaya-wife-dhanyatha-grooves-to-puttamalli-song-fans-are-impressed-gvd/articleshow-7f2ohxz"/>
        </item>
        <item>
            <title><![CDATA[ಬರ್ತಿದೆ Bhagyalakshmi ಪಾರ್ಟ್​-2! Bigg Boss ಮನೆಯಲ್ಲಿ ತಾಂಡವ್​, ಶ್ರೇಷ್ಠಾ ಜೊತೆ ಭಾಗ್ಯನೂ ಎಂಟ್ರಿ?]]></title>
            <link>https://kannada.asianetnews.com/gallery/tv-talk/bhagyalakshmi-serial-part-2-is-coming-bigg-boss-13-wit-tandav-shreshta-bhagya-may-enters-show-suc-5unnnsc</link>
            <guid isPermaLink="true">https://kannada.asianetnews.com/gallery/tv-talk/bhagyalakshmi-serial-part-2-is-coming-bigg-boss-13-wit-tandav-shreshta-bhagya-may-enters-show-suc-5unnnsc</guid>
            <pubDate>Sun, 06 Sep 2026 16:08:23 +0530</pubDate>
            <description><![CDATA[&lt;p&gt;ಬಿಗ್&zwnj;ಬಾಸ್ 13ಗೆ ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ತಾಂಡವ್ (ಸುದರ್ಶನ್) ಮತ್ತು ಶ್ರೇಷ್ಠಾ (ಕಾವ್ಯಾ) ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಾಂಡವ್ ಅವರ ನಿಜವಾದ ಪತ್ನಿ ಸಂಗೀತಾ ಜೊತೆಗೆ, ಭಾಗ್ಯ (ಸುಷ್ಮಾ) ಕೂಡ ಸ್ಪರ್ಧಿಸುವ ಸಾಧ್ಯತೆಯಿದ್ದು, 'ಭಾಗ್ಯಲಕ್ಷ್ಮಿ ಪಾರ್ಟ್-2' ಮಾಡುವ ನಿರೀಕ್ಷೆ ಹುಟ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v4k2fpvbn8jh6h2hmq4zzy,imgname-bigg-boss-13-1788690926070.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ 13ಗೆ ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ತಾಂಡವ್ (ಸುದರ್ಶನ್) ಮತ್ತು ಶ್ರೇಷ್ಠಾ (ಕಾವ್ಯಾ) ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಾಂಡವ್ ಅವರ ನಿಜವಾದ ಪತ್ನಿ ಸಂಗೀತಾ ಜೊತೆಗೆ, ಭಾಗ್ಯ (ಸುಷ್ಮಾ) ಕೂಡ ಸ್ಪರ್ಧಿಸುವ ಸಾಧ್ಯತೆಯಿದ್ದು, 'ಭಾಗ್ಯಲಕ್ಷ್ಮಿ ಪಾರ್ಟ್-2' ಮಾಡುವ ನಿರೀಕ್ಷೆ ಹುಟ್ಟಿಸಿದೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​ 13 (Bigg Boss Kannada 13) ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಇಂದೇ ಷೋ ಆರಂಭವಾಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ಕೆಲವು ಸ್ಪರ್ಧಿಗಳನ್ನು ರಿವೀಲ್​ ಮಾಡಲಾಗಿದೆ. ಅದರಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ತಾಂಡವ್​ ಉರ್ಫ್​ ಸುದರ್ಶನ್​ ರಂಗನಾಥ್​ ಹಾಗೂ ಶ್ರೇಷ್ಠಾ ಉರ್ಫ್​ ಕಾವ್ಯಾ ಗೌಡ ಎಂಟ್ರಿಯಾಗಿದೆ. ಕುತೂಹಲ ಎಂದರೆ, ಈ ಬಾರಿಯ ಸೀಸನ್​ನಲ್ಲಿ ಭಾಗ್ಯಲಕ್ಷ್ಮಿ ಅರ್ಥಾತ್​ ನಟಿ ಸುಷ್ಮಾ ಕೆ.ರಾವ್​ ಕೂಡ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಇದೆ.&lt;/p&gt;&lt;img&gt;&lt;p&gt;ಈ ಹಿನ್ನೆಲೆಯಲ್ಲಿ ಈ ಬಾರಿಯ ಬಿಗ್​ಬಾಸ್​ ಭಾಗ್ಯಲಕ್ಷ್ಮಿ ಪಾರ್ಟ್​-2 (Bhagyalakshmi Part-2) ಆಗುವ ಸಾಧ್ಯತೆ ಇದೆ ಎಂದೇ ನೆಟ್ಟಿಗರು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. ಹೀಗೆ ಆದರೆ ಬಿಗ್​ಬಾಸ್ ಸಕತ್​ ಇಂಟರೆಸ್ಟಿಂಗ್​ ಆಗಲಿದೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ ಕುತೂಹಲದ ವಿಷ್ಯ ಏನಪ್ಪಾ ಎಂದರೆ ತಾಂಡವ್​ ಅರ್ಥಾತ್​ ಸುದರ್ಶನ್​ ರಂಗಪ್ರಸಾದ್​ ಅವರ ರಿಯಲ್​ ಪತ್ನಿ, ಸಂಗೀತಾ ಕೂಡ ಬಿಗ್​ಬಾಸ್​​ಗೆ ಇದಾಗಲೇ ಎಂಟ್ರಿಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಇವರಿಬ್ಬರನ್ನೂ ನೋಡಿದ ಸುದರ್ಶನ್​ ಅವರು ಹೌಹಾರಿದ್ದು, ಇಬ್ಬರೂ ಜಗಳ ಮಾಡಿಕೊಂಡರೆ ನಾನು ಏನು ಮಾಡಿಕೊಳ್ಳಲಪ್ಪ ಎಂದು ಹೇಳಿರುವ ಪ್ರೊಮೋ ಅನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿಕೊಂಡಿದೆ.&lt;/p&gt;&lt;img&gt;&lt;p&gt;ಇದೀಗ ಇವರಿಬ್ಬರ ನಡುವೆ, ಭಾಗ್ಯಳ ಎಂಟ್ರಿನೂ ಆಗಿಬಿಟ್ಟರೆ, ಭಾಗ್ಯಲಕ್ಷ್ಮಿ ಸೀರಿಯಲ್​ ಮುಗಿಯಿತು ಎಂದು ಬೇಸರ ಪಟ್ಟುಕೊಳ್ಳುತ್ತಿರುವವರಿಗೆ ಸಕತ್​ ಖುಷಿ ಕೊಡುವ ಸುದ್ದಿ ಆಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bhagyalakshmi-serial-part-2-is-coming-bigg-boss-13-wit-tandav-shreshta-bhagya-may-enters-show-suc-5unnnsc"/>
        </item>
        <item>
            <title><![CDATA[ದಿನಕ್ಕೆ ₹20 ದುಡಿತ, ಊಟಕ್ಕೂ ಪರದಾಟ; ಇಂದು ₹50 ಕೋಟಿ ಹಿಟ್ ಸಿನಿಮಾಗಳ ಈ ಹೀರೋ ರಜನಿಕಾಂತ್ ದೊಡ್ಡ ಅಭಿಮಾನಿ]]></title>
            <link>https://kannada.asianetnews.com/entertainment/rajinikanth-fan-soori-from-rs-20-daily-wage-to-rs-50-crore-hits-suh/articleshow-umnsvg9</link>
            <guid isPermaLink="true">https://kannada.asianetnews.com/entertainment/rajinikanth-fan-soori-from-rs-20-daily-wage-to-rs-50-crore-hits-suh/articleshow-umnsvg9</guid>
            <pubDate>Sun, 06 Sep 2026 16:07:40 +0530</pubDate>
            <description><![CDATA[&lt;p&gt;ಚಿತ್ರರಂಗಕ್ಕೆ ಕಾಲಿಡುವ ಕನಸು ಕಾಣುವವರಿಗೆ ಯಶಸ್ಸಿನ ಹಾದಿ ಯಾವಾಗಲೂ ಸುಲಭವಲ್ಲ. ಕೆಲವರು ಅವಕಾಶಕ್ಕಾಗಿ ವರ್ಷಗಳ ಕಾಲ ಕಾಯುತ್ತಾರೆ, ಇನ್ನೂ ಕೆಲವರು ಜೀವನ ಸಾಗಿಸಲು ಕೂಲಿ ಕೆಲಸ ಮಾಡುತ್ತಲೇ ತಮ್ಮ ಕನಸನ್ನು ಬೆನ್ನಟ್ಟುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v4gt6rddf3sz5ajvybpqd2,imgname-rajinikanth-fan-soori-from-rs-20-daily-wage-to-rs-50-crore-hits-1788690852056.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗಕ್ಕೆ ಕಾಲಿಡುವ ಕನಸು ಕಾಣುವವರಿಗೆ ಯಶಸ್ಸಿನ ಹಾದಿ ಯಾವಾಗಲೂ ಸುಲಭವಲ್ಲ. ಕೆಲವರು ಅವಕಾಶಕ್ಕಾಗಿ ವರ್ಷಗಳ ಕಾಲ ಕಾಯುತ್ತಾರೆ, ಇನ್ನೂ ಕೆಲವರು ಜೀವನ ಸಾಗಿಸಲು ಕೂಲಿ ಕೆಲಸ ಮಾಡುತ್ತಲೇ ತಮ್ಮ ಕನಸನ್ನು ಬೆನ್ನಟ್ಟುತ್ತಾರೆ. ಅಂತಹ ಕಠಿಣ ಹಾದಿ ದಾಟಿ ಇಂದು ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಸೂರಿ ಅವರ ಕಥೆ ನಿಜಕ್ಕೂ ಸ್ಫೂರ್ತಿದಾಯಕ. ಒಂದು ಕಾಲದಲ್ಲಿ ದಿನಕ್ಕೆ ಕೇವಲ ₹20 ದುಡಿಯುತ್ತಿದ್ದ ಸೂರಿ, ಇಂದು ನಾಯಕ ನಟನಾಗಿ ₹50 ಕೋಟಿಗೂ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಭಾಗವಾಗಿದ್ದಾರೆ.&lt;/p&gt;&lt;h2&gt;ದಿನಕ್ಕೆ ಕೇವಲ ₹20 ದುಡಿಮೆ&lt;/h2&gt;&lt;p&gt;1993ರಲ್ಲಿ ಸೂರಿ ತಮಿಳುನಾಡಿನ ತಿರುಪ್ಪೂರಿನಲ್ಲಿ ಸ್ನೇಹಿತರೊಂದಿಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಆಗ ಅವರಿಗೆ ದಿನಕ್ಕೆ ಸಿಗುತ್ತಿದ್ದ ಸಂಬಳ ಕೇವಲ ₹20. ವಾರಕ್ಕೆ ₹140 ಸಂಪಾದಿಸಿದರೆ, ಅದರಲ್ಲಿ ₹70 ಅನ್ನು ಮನೆಗೆ ಕಳುಹಿಸುತ್ತಿದ್ದರು. ಆ ಕಾಲದಲ್ಲಿ ₹1.25 ಬೆಲೆಯ ತೆಂಗಿನಕಾಯಿ ಬನ್ ಕೂಡ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಹೀಗಾಗಿ ಕೆಲವೊಮ್ಮೆ ಕೇವಲ ಒಂದು ಕಪ್ ಚಹಾದಲ್ಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾಗುತ್ತಿತ್ತು ಎಂದು ವರದಿಯಾಗಿದೆ.&lt;/p&gt;&lt;h2&gt;ರಜನಿಕಾಂತ್ ಅಭಿಮಾನಿಯಾಗಿದ್ದ ಸೂರಿ&lt;/h2&gt;&lt;p&gt;ಸೂರಿ ಚಿಕ್ಕಂದಿನಿಂದಲೇ ಸೂಪರ್&zwnj;ಸ್ಟಾರ್ ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ರಜನಿಕಾಂತ್ ಅಭಿನಯದ Thalapathi ಸಿನಿಮಾದ ಪಾತ್ರದಿಂದ ಪ್ರೇರಣೆ ಪಡೆದು ಅವರು ತಮ್ಮ ಹೆಸರನ್ನು &lsquo;ಸೂರ್ಯ&rsquo; ಎಂದು ಬದಲಿಸಿಕೊಂಡಿದ್ದರು. ನಂತರ ಚಿತ್ರರಂಗದಲ್ಲಿ ಇದೇ ಸೂರಿ ಎಂಬ ಹೆಸರಿನಿಂದ ಪ್ರಸಿದ್ಧರಾದರು.&lt;/p&gt;&lt;h2&gt;ಗೋಡೆಗಳಿಗೆ ಬಣ್ಣ ಬಳಿಯುತ್ತಿದ್ದ ನಟ&lt;/h2&gt;&lt;p&gt;ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಸೂರಿ ಹಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಿದರು. ಅದರಲ್ಲಿ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸವೂ ಸೇರಿತ್ತು. ಚಿತ್ರರಂಗಕ್ಕೆ ಬಂದ ನಂತರವೂ ಆರಂಭದಲ್ಲಿ ಅವರಿಗೆ ಸಿಕ್ಕಿದ್ದು ಹೆಚ್ಚಾಗಿ ಸಣ್ಣ ಪೋಷಕ ಪಾತ್ರಗಳು. ಹಲವು ಪಾತ್ರಗಳು ಪ್ರೇಕ್ಷಕರ ಗಮನಕ್ಕೂ ಬರಲಿಲ್ಲ. ಆದರೂ ಅವರು ನಟನೆಯ ಮೇಲಿನ ಆಸೆಯನ್ನು ಕೈಬಿಡಲಿಲ್ಲ.&lt;/p&gt;&lt;h2&gt;2009ರಲ್ಲಿ ಸಿಕ್ಕ ಮೊದಲ ದೊಡ್ಡ ಗುರುತಿಸಿಕೊಂಡರು&lt;/h2&gt;&lt;p&gt;2009ರ ವೇಳೆಗೆ ಸೂರಿಗೆ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಳ್ಳುವ ಅವಕಾಶ ಸಿಕ್ಕಿತು. ಹಾಸ್ಯ ನಟನಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ಅವರು ನಿಧಾನವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದರು. ಆದರೆ ಅವರ ಜೀವನವನ್ನೇ ಬದಲಿಸಿದ ಸಿನಿಮಾ ಬಂದಿದ್ದು 2023ರಲ್ಲಿ.&lt;/p&gt;&lt;h2&gt;&lsquo;ವಿಡುತಲೈ&rsquo; ಬದಲಿಸಿತು ಸೂರಿ ಜೀವನ&lt;/h2&gt;&lt;p&gt;ನಿರ್ದೇಶಕ ವೆಟ್ರಿಮಾರನ್ ಅವರ Viduthalai: Part 1 ಸಿನಿಮಾದಲ್ಲಿ ಸೂರಿ ಪೊಲೀಸ್ ಕಾನ್ಸ್&zwnj;ಟೇಬಲ್ ಕುಮಾರೇಶನ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಪಾತ್ರ ಅವರ ನಟನಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಹೊಸ ರೀತಿಯಲ್ಲಿ ಪರಿಚಯಿಸಿತು. ಕೇವಲ ಹಾಸ್ಯ ಪಾತ್ರಗಳಿಗೆ ಸೀಮಿತವಾಗಿದ್ದ ಸೂರಿ, ಗಂಭೀರ ಪಾತ್ರದಲ್ಲೂ ಅದ್ಭುತವಾಗಿ ನಟಿಸಬಲ್ಲರು ಎಂಬುದನ್ನು ಈ ಸಿನಿಮಾ ಸಾಬೀತುಪಡಿಸಿತು. ಅವರಿಗೆ ವ್ಯಾಪಕ ಮೆಚ್ಚುಗೆ ಪ್ರಶಂಸೆ ದೊರೆಯಿತು.&lt;/p&gt;&lt;h2&gt;₹50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳು&lt;/h2&gt;&lt;p&gt;Viduthalai: Part 1 ಸೂರಿ ಅವರ ನಾಯಕ ನಟನಾಗಿ ಹೊಸ ಅಧ್ಯಾಯ ಆರಂಭಿಸಿತು. ವರದಿಯ ಪ್ರಕಾರ, ಈ ಸಿನಿಮಾ ವಿಶ್ವಾದ್ಯಂತ ಸುಮಾರು ₹53 ಕೋಟಿ ಗಳಿಸಿತು. ಇದರ ಮುಂದುವರಿದ ಭಾಗ Viduthalai: Part 2 ಕೂಡ ಉತ್ತಮ ಪ್ರದರ್ಶನ ನೀಡಿ ಜಾಗತಿಕವಾಗಿ ಸುಮಾರು ₹55 ಕೋಟಿ ಗಳಿಸಿತು.&lt;/p&gt;&lt;h2&gt;₹20ರಿಂದ ಆರಂಭಿಸಿ ಇಂದು ನಾಯಕ ನಟ&lt;/h2&gt;&lt;p&gt;ಒಂದು ಕಾಲದಲ್ಲಿ ದಿನಕ್ಕೆ ₹20 ದುಡಿದು, ಒಂದು ಬನ್ ಖರೀದಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ವ್ಯಕ್ತಿ ಇಂದು ತಮಿಳು ಚಿತ್ರರಂಗದ ಪ್ರಮುಖ ನಟರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಬಡತನ, ಸಣ್ಣಪುಟ್ಟ ಕೆಲಸಗಳು, ಗಮನಕ್ಕೆ ಬಾರದ ಪಾತ್ರಗಳು... ಇವೆಲ್ಲವನ್ನೂ ದಾಟಿ ಸೂರಿ ಸಾಧಿಸಿರುವ ಈ ಪಯಣ ಕನಸು ಕಾಣುವವರಿಗೆ ಮಾತ್ರವಲ್ಲ, ಅದಕ್ಕಾಗಿ ನಿರಂತರವಾಗಿ ಹೋರಾಡುವವರಿಗೆ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಉದಾಹರಣೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/entertainment/rajinikanth-fan-soori-from-rs-20-daily-wage-to-rs-50-crore-hits-suh/articleshow-umnsvg9"/>
        </item>
        <item>
            <title><![CDATA[ಬೋಲ್ಡ್ ಸೀನ್ಸ್‌ಗೆ ಓಕೆ, ಆದರೆ ಈ ಕಂಡೀಷನ್ ಇರಲೇಬೇಕು: ಕನ್ನಡತಿ ಕಯಾದು ಲೋಹರ್ ಸ್ಪಷ್ಟನೆ]]></title>
            <link>https://kannada.asianetnews.com/entertainment/kannada-actress-kayadu-lohar-says-no-to-women-being-reduced-to-glamour-in-films-gvd/articleshow-yic2m1g</link>
            <guid isPermaLink="true">https://kannada.asianetnews.com/entertainment/kannada-actress-kayadu-lohar-says-no-to-women-being-reduced-to-glamour-in-films-gvd/articleshow-yic2m1g</guid>
            <pubDate>Sun, 06 Sep 2026 15:54:41 +0530</pubDate>
            <description><![CDATA[&lt;p&gt;ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಪ್ರೇಕ್ಷಕರ ಗಮನ ಸೆಳೆಯುವ ಅಲಂಕಾರಿಕ ವಸ್ತುಗಳಂತೆ ತೋರಿಸುವ ಪ್ರವೃತ್ತಿಯನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದು ಯಂಗ್ ಹೀರೋಯಿನ್ ಕಯಾದು ಲೋಹರ್ ಸ್ಪಷ್ಟಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v3yn81kqyv7nvt9fsm3at6,imgname-vbjvb-1788690257153.png" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಪ್ರೇಕ್ಷಕರ ಗಮನ ಸೆಳೆಯುವ ಅಲಂಕಾರಿಕ ವಸ್ತುಗಳಂತೆ ತೋರಿಸುವ ಪ್ರವೃತ್ತಿಯನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದು ಯಂಗ್ ಹೀರೋಯಿನ್ ಕಯಾದು ಲೋಹರ್ ಸ್ಪಷ್ಟಪಡಿಸಿದ್ದಾರೆ. ಕಥೆ ಮತ್ತು ಪಾತ್ರದ ಔಚಿತ್ಯಕ್ಕೆ ಅಗತ್ಯವಿದ್ದರೆ, ಮಿತಿಯೊಳಗೆ ಬೋಲ್ಡ್ ಆಗಿ ನಟಿಸಲು ಯಾವುದೇ ಆಕ್ಷೇಪವಿಲ್ಲ. ಆದರೆ ಕೇವಲ ಲೈಮ್&zwnj;ಲೈಟ್&zwnj;ಗಾಗಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಬೇಕೆಂಬ ಕಾರಣಕ್ಕೆ ಅಶ್ಲೀಲ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ತಮ್ಮ ಮನಸ್ಸಾಕ್ಷಿಗೆ ಒಪ್ಪುವುದಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.&lt;/p&gt;&lt;p&gt;ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ಕಯಾದು ಲೋಹರ್, ಕನ್ನಡ, ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ತಮಿಳಿನ &lsquo;ಡ್ರ್ಯಾಗನ್&rsquo; ಚಿತ್ರದ ಮೂಲಕ ಭರ್ಜರಿ ಕ್ರೇಜ್ ಸಂಪಾದಿಸಿರುವ ಈ ಬೆಡಗಿ, ಸದ್ಯ ನಾನಿ ನಟನೆಯ &lsquo;ದಿ ಪ್ಯಾರಡೈಸ್&rsquo; ಸೇರಿದಂತೆ ಸೂರ್ಯ, ರಜನಿಕಾಂತ್&zwnj;ರಂತಹ ಸ್ಟಾರ್ ನಟರ ಸಿನಿಮಾಗಳಲ್ಲೂ ಅವಕಾಶ ಪಡೆದುಕೊಂಡಿದ್ದಾರೆ.&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರತಿಭೆ ಮತ್ತು ಸೌಂದರ್ಯ ಎರಡನ್ನೂ ಹೊಂದಿರುವ ನಾಯಕಿಯರಿಗೆ ಕೊರತೆಯೇನಿಲ್ಲ. ಆದರೆ ಕಡಿಮೆ ಅವಧಿಯಲ್ಲೇ ಭಾಷೆಯ ಗಡಿಗಳನ್ನು ದಾಟಿ ವಿಭಿನ್ನ ಕಥಾಹಂದರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಂತಹ ಅಪರೂಪದ ಸಾಲಿನಲ್ಲಿ ಗುರುತಿಸಿಕೊಂಡಿರುವ ನಟಿ ಕಯಾದು ಲೋಹರ್.&lt;/p&gt;&lt;p&gt;ಅಸ್ಸಾಂನಲ್ಲಿ ಜನಿಸಿ ಪುಣೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಕಯಾದು, ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿ ಬಳಿಕ ಬೆಳ್ಳಿತೆರೆಗೆ ಕಾಲಿಟ್ಟರು. ಸದ್ಯ ದಕ್ಷಿಣ ಭಾರತದ ಹಲವು ಕ್ರೇಜಿ ಪ್ರಾಜೆಕ್ಟ್&zwnj;ಗಳಲ್ಲಿ ಬ್ಯುಸಿಯಾಗಿರುವ ಅವರು, ಸಿನಿಮಾಗಳಲ್ಲಿ ಮಹಿಳೆಯರನ್ನು ತೋರಿಸುವ ರೀತಿಯ ಬಗ್ಗೆಯೂ ತಮ್ಮದೇ ನಿಲುವು ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಯಾದು, ಸಿನಿಮಾಗಳಲ್ಲಿ ನಾಯಕಿಯರ ಪಾತ್ರಗಳನ್ನು ಚಿತ್ರಿಸುವ ವಿಧಾನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೇವಲ ಮನರಂಜನೆಗಾಗಿ ಅಥವಾ ವೀಕ್ಷಕರ ಗಮನ ಸೆಳೆಯುವ ಉದ್ದೇಶದಿಂದ ಮಹಿಳೆಯರನ್ನು ಅಸಭ್ಯವಾಗಿ ತೋರಿಸುವುದನ್ನು ತಾನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಯಾವುದೇ ತೃಪ್ತಿ ಸಿಗುವುದಿಲ್ಲ&lt;/strong&gt;&lt;/p&gt;&lt;p&gt;'ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಸುಂದರ ವಸ್ತುವಿನಂತೆ, ಅಲಂಕಾರಿಕವಾಗಿ ಮಾತ್ರ ತೆರೆ ಮೇಲೆ ತೋರಿಸುವುದನ್ನು ನಾನು ಒಪ್ಪುವುದಿಲ್ಲ. ಒಂದು ದೃಶ್ಯದಲ್ಲಿ ಬೋಲ್ಡ್&zwnj;ನೆಸ್ ಕಥೆಗೆ ಎಷ್ಟು ಅಗತ್ಯ ಎಂಬುದೇ ನನಗೆ ಮುಖ್ಯ. ಪಾತ್ರದ ಔಚಿತ್ಯಕ್ಕೆ ಅದು ಬೇಕಾದರೆ, ಒಂದು ಹಂತದವರೆಗೆ ಮಿತಿಯೊಳಗೆ ನಟಿಸಲು ನನಗೆ ಯಾವುದೇ ತೊಂದರೆ ಇಲ್ಲ. ಆದರೆ ಕೇವಲ ಪ್ರೇಕ್ಷಕರ ಗಮನ ಸೆಳೆಯಲು ಅಸಭ್ಯತೆಯನ್ನು ಸೇರಿಸಿದರೆ ಅಂತಹ ಸಿನಿಮಾಗಳನ್ನು ನಾನು ಒಪ್ಪುವುದಿಲ್ಲ. ಆ ರೀತಿಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಬಹುದು. ಆದರೆ ಒಬ್ಬ ನಟಿಯಾಗಿ ನನ್ನ ಮನಸ್ಸಾಕ್ಷಿಗೆ ಅದರಿಂದ ಯಾವುದೇ ತೃಪ್ತಿ ಸಿಗುವುದಿಲ್ಲ' ಎಂದು ಕಯಾದು ಹೇಳಿದ್ದಾರೆ.&lt;/p&gt;&lt;p&gt;&lsquo;ಟೈಮ್ಸ್ ಫ್ರೆಶ್ ಫೇಸ್&rsquo; ಸ್ಪರ್ಧೆಯಲ್ಲಿ ವಿಜೇತರಾಗಿ ಗಮನ ಸೆಳೆದ ಕಯಾದು, ಬಳಿಕ ನಟನೆಯತ್ತ ಮುಖ ಮಾಡಿದರು. ಕನ್ನಡದ &lsquo;ಮುಗಿಲ್&zwnj;ಪೇಟೆ&rsquo; ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಅವರು, ಮಲಯಾಳಂನ ಐತಿಹಾಸಿಕ ಚಿತ್ರ &lsquo;ಪತ್ತೊಂಬತಾಂ ನೂಟ್ಟಾಂಡು&rsquo;ನಲ್ಲಿ &lsquo;ನಂಗೇಲಿ&rsquo; ಪಾತ್ರದಲ್ಲಿ ಗಮನಾರ್ಹ ಅಭಿನಯ ನೀಡಿ ವಿಮರ್ಶಕರ ಮೆಚ್ಚುಗೆ ಪಡೆದರು.&lt;/p&gt;&lt;h2&gt;&lt;strong&gt;ಸಾಲು ಸಾಲು ಅವಕಾಶ&lt;/strong&gt;&lt;/h2&gt;&lt;p&gt;ಆ ಬಳಿಕ ಮರಾಠಿ ಚಿತ್ರರಂಗಕ್ಕೂ ಕಾಲಿಟ್ಟ ಕಯಾದು, ತೆಲುಗಿನಲ್ಲಿ ಶ್ರೀವಿಷ್ಣು ಜೊತೆಗಿನ &lsquo;ಅಲ್ಲೂರಿ&rsquo; ಚಿತ್ರದ ಮೂಲಕ ಕಾಣಿಸಿಕೊಂಡರು. ನಂತರ ವಿಶ್ವಕ್ ಸೇನ್ ಅಭಿನಯದ &lsquo;ಫಂಕಿ&rsquo; ಪ್ರಾಜೆಕ್ಟ್ ಮೂಲಕ ತೆಲುಗು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ತಮಿಳಿನಲ್ಲಿ ಪ್ರದೀಪ್ ರಂಗನಾಥನ್ ನಾಯಕನಾಗಿ ನಟಿಸಿದ &lsquo;ಡ್ರ್ಯಾಗನ್&rsquo; ಸಿನಿಮಾ ಕಯಾದು ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಚಿತ್ರದಲ್ಲಿನ &lsquo;ಪಲ್ಲವಿ&rsquo; ಪಾತ್ರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರಿಂದ ಅವರಿಗೆ ಸಾಲು ಸಾಲು ಅವಕಾಶಗಳು ಬಂದವು.&lt;/p&gt;&lt;p&gt;ಸದ್ಯ ಟಾಲಿವುಡ್&zwnj;ನ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಪ್ಯಾನ್ ಇಂಡಿಯಾ ಆ್ಯಕ್ಷನ್ ಸಿನಿಮಾ &lsquo;ದಿ ಪ್ಯಾರಡೈಸ್&rsquo;ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕಯಾದು, ತಮಿಳಿನಲ್ಲಿ ಸೂರ್ಯ (ಸೂರ್ಯ 48), ಶಿಂಬು ಹಾಗೂ ಸೂಪರ್&zwnj;ಸ್ಟಾರ್ ರಜನಿಕಾಂತ್&zwnj;ರಂತಹ ಸ್ಟಾರ್ ನಟರ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸದ್ಯ ಕಯಾದು ಲೋಹರ್ ಮಿಂಚುತ್ತಿರುವ ಮೋಸ್ಟ್ ವಾಂಟೆಡ್ ನಾಯಕಿಯರ ಪೈಕಿ ಒಬ್ಬರಾಗಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kannada-actress-kayadu-lohar-says-no-to-women-being-reduced-to-glamour-in-films-gvd/articleshow-yic2m1g"/>
        </item>
        <item>
            <title><![CDATA[Hanuman Ansh: ಸ್ಮಾಲ್ ಬಜೆಟ್ ಚಿತ್ರದ ಬಿಗ್ ಕಮಾಲ್! 100 ಕೋಟಿ ಕ್ಲಬ್‌ ಸಮೀಪ ಬಂದ 'ಹನುಮಾನ್ ಅಂಶ್']]></title>
            <link>https://kannada.asianetnews.com/news-entertainment/small-budget-hanuman-ansh-box-office-collections-is-just-a-few-lakhs-short-of-joining-the-10-crore-club/articleshow-3hvw5ab</link>
            <guid isPermaLink="true">https://kannada.asianetnews.com/news-entertainment/small-budget-hanuman-ansh-box-office-collections-is-just-a-few-lakhs-short-of-joining-the-10-crore-club/articleshow-3hvw5ab</guid>
            <pubDate>Sun, 06 Sep 2026 15:34:53 +0530</pubDate>
            <description><![CDATA[&lt;p&gt;ಕೇವಲ 2 ಕೋಟಿ ಬಜೆಟ್&zwnj;ನ ಈ ಸಿನಿಮಾ ಈಗ ರಾಕಿಂಗ್ ಸ್ಟಾರ್ ಯಶ್ ಅವರ &lsquo;ಟಾಕ್ಸಿಕ್&rsquo; ಮತ್ತು ಇತ್ತೀಚಿನ ಕ್ರೇಜಿ ಸಿನಿಮಾ &lsquo;ಮಿರ್ಜಾಪುರ್: ದಿ ಮೂವೀ&rsquo; ಅಂತಹ ದೊಡ್ಡ ಸಿನಿಮಾಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿದೆ. ಆರಂಭದಲ್ಲಿ ಸಣ್ಣದಾಗಿ ಶುರುವಾದ ಈ ಕಿಡಿ ಈಗ ಬಾಕ್ಸ್ ಆಫೀಸ್&zwnj;ನಲ್ಲಿ ಕಾಳ್ಗಿಚ್ಚಿನಂತೆ ಹರಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v2saeqvkkg4wz9gzp1cyhk,imgname-hanuman-ansh-1788689033687.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Neem Karoli Baba Biopic-Hanuman Ansh Box Office Collection-2 ಕೋಟಿ ಬಜೆಟ್.. 100 ಕೋಟಿ ಕ್ಲಬ್! 'ಹನುಮಾನ್ ಅಂಶ್' ಸೃಷ್ಟಿಸಿದ ಬಾಕ್ಸ್ ಆಫೀಸ್ ಪವಾಡ ಇದು!&lt;/strong&gt;&lt;/p&gt;&lt;p&gt;ಸಿನೆಮಾ ಎಂಬುದು ಬಣ್ಣದ ಲೋಕ ಮಾತ್ರವಲ್ಲ, ಅದೊಂದು ಪವಾಡಗಳ ಅಖಾಡವೂ ಹೌದು. ಕೋಟಿ ಕೋಟಿ ಸುರಿದು, ದೊಡ್ಡ ಸ್ಟಾರ್ ನಟರನ್ನು ಇಟ್ಟುಕೊಂಡು ಮಾಡಿದ ಸಿನೆಮಾಗಳೇ ಬಾಕ್ಸ್ ಆಫೀಸ್&zwnj;ನಲ್ಲಿ ಮಕಾಡೆ ಮಲಗುತ್ತಿರುವ ಈ ಕಾಲದಲ್ಲಿ, ಕೇವಲ 2 ಕೋಟಿ ರೂಪಾಯಿ ಬಜೆಟ್&zwnj;ನಲ್ಲಿ ತಯಾರಾದ ಒಂದು ಪುಟ್ಟ ಸಿನಿಮಾ ಈಗ ಇಡೀ ಇಂಡಿಯನ್ ಫಿಲ್ಮ್ ಇಂಡಸ್ಟ್ರಿ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಅದೇ ಈ ಹೊತ್ತಿನ ಸೆನ್ಸೇಷನ್ &lsquo;ಹನುಮಾನ್ ಅಂಶ್&rsquo;!&lt;/p&gt;&lt;p&gt;ಆರಂಭದಲ್ಲಿ ಆಮೆ ನಡಿಗೆ.. ಈಗ ಚಿರತೆ ವೇಗ!&lt;/p&gt;&lt;p&gt;ಆಗಸ್ಟ್ 7 ರಂದು ಈ ಸಿನಿಮಾ ತೆರೆಕಂಡಾಗ ಯಾರೂ ಅಂದುಕೊಂಡಿರಲಿಲ್ಲ ಇದು ಇಷ್ಟೊಂದು ದೊಡ್ಡ ಮಟ್ಟದ ಸುನಾಮಿ ಸೃಷ್ಟಿಸುತ್ತದೆ ಎಂದು. ಮೊದಲ ವಾರದಲ್ಲಿ ಕೇವಲ 1.08 ಕೋಟಿ ರೂಪಾಯಿ ಗಳಿಸಿದ್ದ ಈ ಚಿತ್ರ, ಎರಡನೇ ವಾರದಲ್ಲಿ ಕೇವಲ 40 ಲಕ್ಷ ಸಂಗ್ರಹಿಸಿ ಮಂಕಾಗಿತ್ತು. ಆದರೆ, ಅಲ್ಲಿಂದ ಶುರುವಾಗಿದ್ದೇ ಅಸಲಿ ಆಟ! 'ಮೌತ್ ಪಬ್ಲಿಸಿಟಿ' ಅಥವಾ ಪ್ರೇಕ್ಷಕರ ಬಾಯಿ ಮಾತಿನ ಪ್ರಚಾರ ಈ ಚಿತ್ರಕ್ಕೆ ಸಂಜೀವಿನಿಯಾಯಿತು. ಮೂರನೇ ವಾರದಲ್ಲಿ ಹಠಾತ್ 10.40 ಕೋಟಿ ರೂಪಾಯಿ ಬಾಚಿಕೊಂಡ ಈ ಸಿನಿಮಾ, ನಾಲ್ಕನೇ ವಾರಕ್ಕೆ ಬರುವಷ್ಟರಲ್ಲಿ ಬರೋಬ್ಬರಿ 61 ಕೋಟಿ ರೂಪಾಯಿ ಲೂಟಿ ಮಾಡುವ ಮೂಲಕ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿತು!&lt;/p&gt;&lt;h2&gt;100 ಕೋಟಿಯ ಗಡಿಯಲ್ಲಿ 'ಮಹರಾಜ್ ಜಿ' ಮಹಿಮೆ!&lt;/h2&gt;&lt;p&gt;ವಿಶಾಲ್ ಚತುರ್ವೇದಿ ನಿರ್ದೇಶನದ ಈ ಸಿನಿಮಾ ಕೇವಲ ಒಂದು ತಿಂಗಳಲ್ಲಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ. ಸ್ಯಾಕ್ನಿಲ್ಕ್ ವರದಿಗಳ ಪ್ರಕಾರ, ಸಿನಿಮಾ ಬಿಡುಗಡೆಯಾದ 30ನೇ ದಿನದಂದು ಗಳಿಕೆಯಲ್ಲಿ ಶೇಕಡಾ 62.5 ರಷ್ಟು ಏರಿಕೆ ಕಂಡಿದೆ. ಕೇವಲ ಒಂದೇ ದಿನದಲ್ಲಿ 16.25 ಕೋಟಿ ರೂಪಾಯಿ ಕೊಳ್ಳೆ ಹೊಡೆಯುವ ಮೂಲಕ ದೊಡ್ಡ ಸ್ಟಾರ್ ಸಿನಿಮಾಗಳಿಗೇ ನಡುಕ ಹುಟ್ಟಿಸಿದೆ. ಸದ್ಯ ಈ ಚಿತ್ರ ಭಾರತದಲ್ಲಿ 99.13 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದ್ದು, 100 ಕೋಟಿ ಕ್ಲಬ್ ಸೇರಲು ಕೇವಲ ಕೆಲವೇ ಲಕ್ಷಗಳಷ್ಟೇ ಬಾಕಿ ಇದೆ. ಇನ್ನು ಗ್ರಾಸ್ ಕಲೆಕ್ಷನ್ ಈಗಾಗಲೇ 117 ಕೋಟಿಯ ಗಡಿ ದಾಟಿದೆ!&lt;/p&gt;&lt;p&gt;ಏನಿದು 'ಹನುಮಾನ್ ಅಂಶ್' ಕಥೆ?&lt;/p&gt;&lt;p&gt;ಭಕ್ತರಿಂದ &lsquo;ಮಹರಾಜ್ ಜಿ&rsquo; ಎಂದೇ ಕರೆಯಲ್ಪಡುವ ಪವಾಡ ಪುರುಷ ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳೇ ಈ ಚಿತ್ರದ ಜೀವಾಳ. ತನ್ನ ಅಗಲಿದ ತಾಯಿಯನ್ನು ಭೇಟಿಯಾಗಲು ದೇವರನ್ನು ಹುಡುಕುತ್ತಾ ಹೊರಡುವ ಒಂದು ಮಗು, ದೈವತ್ವದ ಹಾದಿಯಲ್ಲಿ ನಡೆದು ಹೇಗೆ ಜನಸೇವೆಯೇ ಜನಾರ್ಧನ ಸೇವೆ ಎಂದು ನೀಮ್ ಕರೋಲಿ ಬಾಬಾ ಆಗಿ ಬದಲಾಗುತ್ತದೆ ಎಂಬುದನ್ನು ಶೋಭಿನವ್ ಸತ್ಯ ತಮ್ಮ ಅದ್ಭುತ ನಟನೆಯ ಮೂಲಕ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಈ ಭಕ್ತಿಪ್ರಧಾನ ಕಥೆ ಈಗ ಯುವಜನತೆ ಮತ್ತು ಹಿರಿಯರು ಎಂಬ ಭೇದವಿಲ್ಲದೆ ಎಲ್ಲರನ್ನೂ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ.&lt;/p&gt;&lt;h3&gt;ದೈತ್ಯ ಸಿನಿಮಾಗಳಿಗೇ ಈ ಪುಟ್ಟ ಸಿನಿಮಾ ಸಿಂಹಸ್ವಪ್ನ!&lt;/h3&gt;&lt;p&gt;ವಿಶೇಷವೆಂದರೆ, ಕೇವಲ 2 ಕೋಟಿ ಬಜೆಟ್&zwnj;ನ ಈ ಸಿನಿಮಾ ಈಗ ರಾಕಿಂಗ್ ಸ್ಟಾರ್ ಯಶ್ ಅವರ &lsquo;ಟಾಕ್ಸಿಕ್&rsquo; ಮತ್ತು ಇತ್ತೀಚಿನ ಕ್ರೇಜಿ ಸಿನಿಮಾ &lsquo;ಮಿರ್ಜಾಪುರ್: ದಿ ಮೂವೀ&rsquo; ಅಂತಹ ದೊಡ್ಡ ಸಿನಿಮಾಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿದೆ. ಆರಂಭದಲ್ಲಿ ಸಣ್ಣದಾಗಿ ಶುರುವಾದ ಈ ಕಿಡಿ ಈಗ ಬಾಕ್ಸ್ ಆಫೀಸ್&zwnj;ನಲ್ಲಿ ಕಾಳ್ಗಿಚ್ಚಿನಂತೆ ಹರಡಿದೆ. ಇದು ಕೇವಲ ಒಂದು ಸಿನಿಮಾದ ಗೆಲುವಲ್ಲ, ಬದಲಿಗೆ ಕಂಟೆಂಟ್ ಮತ್ತು ನಂಬಿಕೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ. ಒಟ್ಟಿನಲ್ಲಿ, ನೀಮ್ ಕರೋಲಿ ಬಾಬಾ ಅವರ ಈ ಜೀವನಗಾಥೆ ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಮುನ್ನುಗ್ಗುತ್ತಿದೆ!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/small-budget-hanuman-ansh-box-office-collections-is-just-a-few-lakhs-short-of-joining-the-10-crore-club/articleshow-3hvw5ab"/>
        </item>
        <item>
            <title><![CDATA[ಕಿಚ್ಚನ ಮುಂದೆ ಕನ್ನಡದಲ್ಲಿ ಮಾತಾಡಿದ ವಿಜಯ್ ಸೇತುಪತಿ: ಬಿಗ್ ಬಾಸ್ 13 ಪ್ರೋಮೋ ಫುಲ್ ವೈರಲ್]]></title>
            <link>https://kannada.asianetnews.com/tv-talk/bigg-boss-kannada-13-vijay-sethupathi-speaks-in-kannada-alongside-kichcha-sudeep-gvd/articleshow-4pggmnr</link>
            <guid isPermaLink="true">https://kannada.asianetnews.com/tv-talk/bigg-boss-kannada-13-vijay-sethupathi-speaks-in-kannada-alongside-kichcha-sudeep-gvd/articleshow-4pggmnr</guid>
            <pubDate>Sun, 06 Sep 2026 15:32:44 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಪ್ರೀಮಿಯರ್&zwnj;ಗೆ ಕ್ಷಣಗಣನೆ ಆರಂಭವಾಗಿದೆ. ಕಿಚ್ಚ ಸುದೀಪ್ ಸಾರಥ್ಯದ ಈ ಸೀಸನ್&zwnj;ನಲ್ಲಿ ಮಲಯಾಳಂನ ಮೋಹನ್&zwnj;ಲಾಲ್, ತಮಿಳಿನ ವಿಜಯ್ ಸೇತುಪತಿ ಹಾಗೂ ತೆಲುಗಿನ ನಾಗಾರ್ಜುನ ಕೂಡ ಒಂದೇ ವೇದಿಕೆಯಲ್ಲಿ ಕಾಣಿಸಿೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v2n85chwgyrfst4q0dfqs8,imgname-jbj-1788688900267.png" type="image/jpeg" height="390" width="690"/>
            <content:encoded><![CDATA[&lt;p&gt;ಕಿಚ್ಚ ಸುದೀಪ್ ಸಾರಥ್ಯದ &lsquo;ಬಿಗ್ ಬಾಸ್ ಕನ್ನಡ ಸೀಸನ್ 13&rsquo;ಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರ ಸಂಜೆ 7 ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ಸಂಚಿಕೆಯೊಂದಿಗೆ ಶೋ ಕಿರುತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಶೂಟಿಂಗ್ ಕೂಡ ಆರಂಭವಾಗಿದ್ದು, ಈ ಬಾರಿಯ ಸೀಸನ್&zwnj;ನಲ್ಲಿ ಏನೆಲ್ಲಾ ಹೊಸತನ ಇರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.&lt;/p&gt;&lt;p&gt;&lsquo;ಬಿಗ್ ಬಾಸ್&rsquo; ಅಭಿಮಾನಿಗಳಿಗೆ ಮತ್ತೊಂದು ವಿಶೇಷ ಸಂಗತಿ ಎಂದರೆ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಶೋ ಪ್ರಸಾರವಾಗುತ್ತಿದೆ. ಕನ್ನಡದ ಕಿಚ್ಚ ಸುದೀಪ್, ಮಲಯಾಳಂನ ಮೋಹನ್&zwnj;ಲಾಲ್, ತಮಿಳಿನ ವಿಜಯ್ ಸೇತುಪತಿ ಹಾಗೂ ತೆಲುಗಿನ ನಾಗಾರ್ಜುನ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;ನಾಲ್ವರು ಸ್ಟಾರ್ ನಿರೂಪಕರು ಪರಸ್ಪರ ಮಾತುಕತೆ ನಡೆಸಿರುವ ಪ್ರೋಮೋ ಇದೀಗ ಗಮನ ಸೆಳೆಯುತ್ತಿದೆ. ಅದರಲ್ಲೂ ವಿಜಯ್ ಸೇತುಪತಿ ಕನ್ನಡದಲ್ಲೇ ಮಾತನಾಡಿರುವುದು ಪ್ರೋಮೋದ ಹೈಲೈಟ್ ಆಗಿದೆ. ಈ ವಿಶೇಷ ಪ್ರೋಮೋವನ್ನು &lsquo;ಕಲರ್ಸ್ ಕನ್ನಡ&rsquo; ವಾಹಿನಿ ಹಂಚಿಕೊಂಡಿದೆ.&lt;/p&gt;&lt;h2&gt;&lt;strong&gt;ವಿಶೇಷ ಬದಲಾವಣೆ&lt;/strong&gt;&lt;/h2&gt;&lt;p&gt;ಇನ್ನು ಈ ಬಾರಿ &lsquo;ಬಿಗ್ ಬಾಸ್ ಕನ್ನಡ&rsquo;ದಲ್ಲಿ ಸ್ಪರ್ಧಿಗಳ ಆಯ್ಕೆಯಲ್ಲೂ ವಿಶೇಷ ಬದಲಾವಣೆ ಇದೆ. ಎಂದಿನಂತೆ ಸೆಲೆಬ್ರಿಟಿಗಳು ಮಾತ್ರವಲ್ಲ, ಜನಸಾಮಾನ್ಯರಿಗೂ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಅವಕಾಶ ಸಿಕ್ಕಿದೆ. ಹೀಗಾಗಿ ಈ ಸೀಸನ್&zwnj;ನಲ್ಲಿ ಯಾರೆಲ್ಲಾ ದೊಡ್ಮನೆ ಪ್ರವೇಶಿಸಲಿದ್ದಾರೆ, ಮನೆಯೊಳಗೆ ಯಾವ ರೀತಿಯ ಆಟ ನಡೆಯಲಿದೆ ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-kannada-13-vijay-sethupathi-speaks-in-kannada-alongside-kichcha-sudeep-gvd/articleshow-4pggmnr"/>
        </item>
        <item>
            <title><![CDATA[ರಿಯಲ್ ಪತ್ನಿ ಸಂಗೀತಾ ಜೊತೆ, ರೀಲ್ ಪತ್ನಿ ಕಾವ್ಯಾ ಎಂಟ್ರಿ'; ತಲೆ ಚಚ್ಚಿಕೊಂಡ ತಾಂಡವ್]]></title>
            <link>https://kannada.asianetnews.com/gallery/tv-talk/bigg-boss-kannada-season-13-sangeetha-bhat-and-kavya-gowda-as-contestant-sudarshan-urd-tandav-shocked-mrq-724g09f</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-season-13-sangeetha-bhat-and-kavya-gowda-as-contestant-sudarshan-urd-tandav-shocked-mrq-724g09f</guid>
            <pubDate>Sun, 06 Sep 2026 15:17:02 +0530</pubDate>
            <description><![CDATA[&lt;p&gt;ಕಲರ್ಸ್ ಕನ್ನಡದ ಬಿಗ್&zwnj;ಬಾಸ್ ಮನೆಗೆ 'ಭಾಗ್ಯಲಕ್ಷ್ಮೀ' ಖ್ಯಾತಿಯ ತಾಂಡವ್ ಅವರ ರಿಯಲ್ ಪತ್ನಿ ಸಂಗೀತಾ ಭಟ್ ಮತ್ತು ರೀಲ್ ಪತ್ನಿ ಶ್ರೇಷ್ಠಾ (ಕಾವ್ಯಾ ಗೌಡ) ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರನ್ನೂ ಒಟ್ಟಿಗೆ ನೋಡಿ ಸುದರ್ಶನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v1fd7grsqdgpfe37vgsvh6,imgname-bigg-boss-kananda--3--1788687660272.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲರ್ಸ್ ಕನ್ನಡದ ಬಿಗ್&zwnj;ಬಾಸ್ ಮನೆಗೆ 'ಭಾಗ್ಯಲಕ್ಷ್ಮೀ' ಖ್ಯಾತಿಯ ತಾಂಡವ್ ಅವರ ರಿಯಲ್ ಪತ್ನಿ ಸಂಗೀತಾ ಭಟ್ ಮತ್ತು ರೀಲ್ ಪತ್ನಿ ಶ್ರೇಷ್ಠಾ (ಕಾವ್ಯಾ ಗೌಡ) ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರನ್ನೂ ಒಟ್ಟಿಗೆ ನೋಡಿ ಸುದರ್ಶನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡ ವಾಹಿನಿಯನ್ನು ಆನ್ ಮಾಡ್ಕೊಂಡು ಇಡೀ ಕರುನಾಡು ಕುಳಿತಿದೆ. ವಾಹಿನಿಯು ಸೋಶಿಯಲ್ ಮೀಡಿಯಾ ಮೂಲಕ ಸ್ಪರ್ಧಿಗಳ ಮಾಹಿತಿಯನ್ನು ಬಿಟ್ಟು ಕೊಡುತ್ತಿದೆ. ಭಾಗ್ಯಲಕ್ಷ್ಮೀ ಸೀರಿಯಲ್&zwnj;ನ ತಾಂಡವ್ ಖ್ಯಾತಿಯ ಸುದರ್ಶನ್ ಪತ್ನಿ ಸಂಗೀತಾ ಭಟ್ ಬಿಗ್&zwnj;ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಪತ್ನಿ ಸಂಗೀತಾ ಅವರನ್ನು ಕಳುಹಿಸಲು ಸ್ವತಃ ಸುದರ್ಶನ್ ಆಗಮಿಸಿದ್ದಾರೆ.&lt;/p&gt;&lt;img&gt;&lt;p&gt;ಆರನೇ ಸ್ಪರ್ಧಿಯಾಗಿ ಸಂಗೀತಾ ಭಟ್ ಬಂದ್ರೆ, ಏಳನೇ ಸ್ಪರ್ಧಿಯಾಗಿ ಕಾವ್ಯಾ ಗೌಡ (ಶ್ರೇಷ್ಠಾ) ಬಂದಿದ್ದಾರೆ. ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ತಾಂಡವ್ ಅವರನ್ನು ನೋಡಿದ ಶ್ರೇಷ್ಠಾ ಶಾಕ್ ಆಗಿದ್ದಾರೆ. ತಮಗಿಂತ ಮೊದಲು ಸಂಗೀತಾ ಭಟ್ ಒಳಗೆ ಹೋಗಿರುವ ವಿಷಯ ತಿಳಿದು ಶ್ರೇಷ್ಠಾ ಅಚ್ಚರಿಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ರೀಲ್ ಮತ್ತು ರಿಯಲ್ ವೈಫ್ ಇಬ್ಬರು ಬಿಗ್&zwnj;ಬಾಸ್ ಮನೆಯೊಳಗೆ ಕಿತ್ತಾಡಿದ್ರೆ ನಾನೆಲ್ಲಿಗೆ ಹೋಗಲಿ ಸರ್ ಎಂದು ಹೇಳಿ ಸುದರ್ಶನ್ ತಮಾಷೆ ಮಾಡಿದ್ದಾರೆ. ವೇದಿಕೆ ಮೇಲೆ ಆಗಮಿಸಿದ ಸುದರ್ಶನ್, ಪತ್ನಿ ಸಂಗೀತಾ ಜೊತೆಯಲ್ಲಿ ಹುಷಾರ್ ಆಗಿರುವಂತೆ ಸಲಹೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ಸಂಗೀತಾ ಭಟ್ ಆಗಮನ ಪ್ರೋಮೋಗೆ ಕಮೆಂಟ್ ಮಾಡಿರುವ ವೀಕ್ಷಕರು, ಭಾಗ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ/ಆಂಕರ್ ಸುಷ್ಮಾ ರಾವ್ ಸ್ಪರ್ಧಿಯಾಗಿ ಬಂದ್ರೆ ತುಂಬಾ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸುಷ್ಮಾ ಅವರ ವೈಲ್ಡ್ ಕಾರ್ಡ್ ಸ್ಪರ್ಧಿ ಅಥವಾ ಅತಿಥಿಯಾಗಿ ಬಂದ್ರೂ ಪರವಾಗಿಲ್ಲ. ಒಟ್ಟಿನಲ್ಲಿ ಮೂವರು ಒಂದೆಡೆ ಸೇರಲಿ ಎಂದು ಆಸೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ ಸುಮಾರು ಮೂರು ವರ್ಷ ಪ್ರಸಾರವಾಗಿತ್ತು. ಈ ಸೀರಿಯಲ್ ಸಂಗೀತಾ ಭಟ್ ಪತಿ ಸುದರ್ಶನ್&zwnj;ಗೆ ದೊಡ್ಡಮಟ್ಟದ ಹೆಸರನ್ನು ತಂದುಕೊಟ್ಟಿತ್ತು. ಧಾರಾವಾಹಿಗಳಿಂದ ಹಿಂದೆ ಸರಿದಿದ್ದ ಸುಷ್ಮಾ ಅವರು ಸಹ ಭಾಗ್ಯಲಕ್ಷ್ಮೀ ಮೂಲಕ ಬಿಗ್&zwnj; ಕಂಬ್ಯಾಕ್ ಮಾಡಿದ್ದರು.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-season-13-sangeetha-bhat-and-kavya-gowda-as-contestant-sudarshan-urd-tandav-shocked-mrq-724g09f"/>
        </item>
        <item>
            <title><![CDATA[Bigg Boss: ಇದೇ ಮೊದಲು.. ಒಂದೇ ದಿನ 5 ಭಾಷೆಗಳಲ್ಲಿ 'ಬಿಗ್‌ ಬಾಸ್‌' ಶುರು; ಈ ಕಮಾಲ್ ಹಿಂದಿರೋ ಸೀಕ್ರೆಟ್ ಏನ್ ಗೊತ್ತಾ?]]></title>
            <link>https://kannada.asianetnews.com/tv-talk/for-the-first-time-in-bigg-boss-history-this-show-will-start-in-five-languages-on-the-same-day/articleshow-fo7iwch</link>
            <guid isPermaLink="true">https://kannada.asianetnews.com/tv-talk/for-the-first-time-in-bigg-boss-history-this-show-will-start-in-five-languages-on-the-same-day/articleshow-fo7iwch</guid>
            <pubDate>Sun, 06 Sep 2026 14:09:50 +0530</pubDate>
            <description><![CDATA[&lt;p&gt;ಈ ಬಾರಿ ಬಿಗ್ ಬಾಸ್ ಕೇವಲ ಒಂದು ಶೋ ಆಗಿ ಉಳಿದಿಲ್ಲ, ಅದು ಇಡೀ ಭಾರತವನ್ನು ಒಂದೇ ವೇದಿಕೆಯಲ್ಲಿ ತರುವ 'ಮನರಂಜನಾ ಹಬ್ಬ'ವಾಗಿ ಬದಲಾಗಿದೆ. ಟಿವಿ ಮತ್ತು ಒಟಿಟಿಯಲ್ಲಿ ದಾಖಲೆ ಮಟ್ಟದ ವೀಕ್ಷಣೆ ಗಳಿಸಲು ಜಿಯೋಸ್ಟಾರ್ ಹೆಣೆದಿರುವ ಈ ತಂತ್ರ ಎಷ್ಟರ ಮಟ್ಟಿಗೆ ವರ್ಕ್ ಆಗಲಿದೆ ? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1txw02fvnayx1np65rrbyyv,imgname-bigg-boss-show-in-5-languages-1788683878478.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Bigg Boss History-Bigg Boss Simultaneous Launch-ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು: ಪಂಚ ಭಾಷೆಗಳಲ್ಲಿ 'ಮಹಾ ಧಮಾಕಾ' - ಕಿಚ್ಚ, ಲಾಲೇಟನ್, ನಾಗ್ ಮತ್ತು ಸೇತುಪತಿ ಜುಗಲ್ ಬಂದಿ!&lt;/strong&gt;&lt;/p&gt;&lt;p&gt;ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಅಂದ್ರೆ ಯಾರಿಗೆ ತಾನೇ ಕ್ರೇಜ್ ಇಲ್ಲ ಹೇಳಿ? ಮನೆ ಮಂದಿಯೆಲ್ಲಾ ಕುಳಿತು ನೋಡುವ, ಜಗಳ, ಪ್ರೀತಿ, ಕುತೂಹಲ ಮತ್ತು ಎಮೋಷನ್&zwnj;ಗಳ ಈ ಆಟ ಈಗ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಇದುವರೆಗೆ ಒಂದೊಂದು ಭಾಷೆಯ ಬಿಗ್ ಬಾಸ್ ಒಂದೊಂದು ಸಮಯದಲ್ಲಿ ಶುರುವಾಗುತ್ತಿತ್ತು. ಆದರೆ ಈ ಬಾರಿ ಹವಾ ಬೇರೆಯೇ ಇದೆ! ಇಡೀ ಭಾರತವೇ ಬೆರಗಾಗುವಂತೆ ಐದು ಭಾಷೆಗಳ ಬಿಗ್ ಬಾಸ್ ಮನೆಗಳು ಒಂದೇ ದಿನ ಬಾಗಿಲು ತೆರೆಯುತ್ತಿವೆ.&lt;/p&gt;&lt;h2&gt;ಸೆಪ್ಟೆಂಬರ್ 6: ಸಂಜೆ 7ಕ್ಕೆ ಸಂಭ್ರಮದ ಸರಣಿ!&lt;/h2&gt;&lt;p&gt;ಹೌದು, ನೀವು ಕೇಳುತ್ತಿರೋದು ನಿಜ. ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಬಿಗ್ ಬಾಸ್ ಸೀಸನ್&zwnj;ಗಳು ಸೆಪ್ಟೆಂಬರ್ 6 ರಂದು ಸಂಜೆ 7 ಗಂಟೆಗೆ ಏಕಕಾಲದಲ್ಲಿ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿವೆ. ಹಿಂದಿಯಲ್ಲಿ ಇದು 20ನೇ ಸೀಸನ್ ಸಂಭ್ರಮವಾದರೆ, ನಮ್ಮ ಹೆಮ್ಮೆಯ ಕನ್ನಡದಲ್ಲಿ 13ನೇ ಸೀಸನ್&zwnj;ನ ಹವಾ ಶುರುವಾಗಲಿದೆ. ಇನ್ನು ತೆಲುಗು ಮತ್ತು ತಮಿಳಿನಲ್ಲಿ 10ನೇ ಸೀಸನ್ ಹಾಗೂ ಮಲಯಾಳಂನಲ್ಲಿ 8ನೇ ಸೀಸನ್ ವೀಕ್ಷಕರನ್ನು ರಂಜಿಸಲು ಸಜ್ಜಾಗಿದೆ.&lt;/p&gt;&lt;p&gt;ನಾಲ್ವರು ಸೂಪರ್&zwnj;ಸ್ಟಾರ್&zwnj;ಗಳು... ಒಂದೇ ಫ್ರೇಮ್!&lt;/p&gt;&lt;p&gt;ಈ ಮೆಗಾ ಲಾಂಚ್&zwnj;ಗಾಗಿ ಬಿಡುಗಡೆಯಾಗಿರುವ ಪ್ರೋಮೋ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ಸ್ಯಾಂಡಲ್&zwnj;ವುಡ್ ಬಾದ್&zwnj;ಷಾ ಕಿಚ್ಚ ಸುದೀಪ್, ತೆಲುಗಿನ ಕಿಂಗ್ ಅಕ್ಕಿನೇನಿ ನಾಗಾರ್ಜುನ, ಮಲಯಾಳಂನ ಕಂಠೀರವ ಮೋಹನ್ ಲಾಲ್ ಮತ್ತು ತಮಿಳಿನ 'ಮಕ್ಕಳ್ ಸೆಲ್ವನ್' ವಿಜಯ್ ಸೇತುಪತಿ - ಈ ನಾಲ್ವರು ದಿಗ್ಗಜರು ಒಂದೇ ಪರದೆಯ ಮೇಲೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.&lt;/p&gt;&lt;p&gt;ಈ ಪ್ರೋಮೋದಲ್ಲಿ 'ಫುಡ್ ಮಿಕ್ಸ್&zwnj;ಅಪ್' ಎಂಬ ಕ್ರಿಯೇಟಿವ್ ಕಾನ್ಸೆಪ್ಟ್ ಬಳಸಲಾಗಿದೆ. ಅಂದರೆ, ಒಬ್ಬರು ಆರ್ಡರ್ ಮಾಡಿದ ಸ್ಥಳೀಯ ಆಹಾರ ಮತ್ತೊಬ್ಬರಿಗೆ ಹೋಗುತ್ತದೆ. ಆರಂಭದಲ್ಲಿ ಆಶ್ಚರ್ಯಪಟ್ಟರೂ, ನಂತರ ಆ ಭಕ್ಷ್ಯದ ರುಚಿಯನ್ನು ಎಲ್ಲರೂ ಆನಂದಿಸುತ್ತಾರೆ. ಇದರ ಹಿಂದಿರುವ ಗುಟ್ಟು ಏನೆಂದರೆ, &quot;ಆಹಾರದಂತೆ ಮನರಂಜನೆ ಮತ್ತು ಭಾವನೆಗಳಿಗೂ ಭಾಷೆಯ ಹಂಗಿಲ್ಲ&quot; ಎನ್ನುವುದು. ಈ ಮೂಲಕ ಜಿಯೋಸ್ಟಾರ್ ಸಂಸ್ಥೆಯು ದಕ್ಷಿಣ ಭಾರತದ ಪ್ರೇಕ್ಷಕರನ್ನು ಡಿಜಿಟಲ್ ಲೋಕದತ್ತ ಸೆಳೆಯಲು ಮಾಸ್ಟರ್ ಪ್ಲಾನ್ ಹಾಕಿದೆ.&lt;/p&gt;&lt;h3&gt;ತೆಲುಗು ಬಿಗ್ ಬಾಸ್ ಮನೆಯಲ್ಲಿ ಯಾರಿದ್ದಾರೆ?&lt;/h3&gt;&lt;p&gt;ಸದ್ಯಕ್ಕೆ ತೆಲುಗು ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ಬಾರಿ ಮನೆಯೊಳಗೆ ಹೋಗಲು ಸ್ಪರ್ಧಿಗಳಿಗೆ 'ಅಗ್ನಿ ಪರೀಕ್ಷೆ'ಯನ್ನೂ ನಡೆಸಲಾಗಿದೆಯಂತೆ! ಮಾಹಿತಿಯ ಪ್ರಕಾರ, ಧಾರಾವಾಹಿ ನಟರಾದ ಮುಖೇಶ್ ಗೌಡ, ಚೈತ್ರ ರಾಯ್, ಕಾಮಿಡಿ ಸ್ಟಾರ್ ರಾಮ್ ಪ್ರಸಾದ್, ಸುಧೀರ್ ರೆಡ್ಡಿ ಮತ್ತು ನಿರೂಪಕಿ ವರ್ಷಿಣಿ ಅವರಂತಹ ಘಟಾನುಘಟಿಗಳು ಮನೆಯೊಳಗೆ ಎಂಟ್ರಿ ಕೊಡೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಈ ಬಾರಿ ಬಿಗ್ ಬಾಸ್ ಕೇವಲ ಒಂದು ಶೋ ಆಗಿ ಉಳಿದಿಲ್ಲ, ಅದು ಇಡೀ ಭಾರತವನ್ನು ಒಂದೇ ವೇದಿಕೆಯಲ್ಲಿ ತರುವ 'ಮನರಂಜನಾ ಹಬ್ಬ'ವಾಗಿ ಬದಲಾಗಿದೆ. ಟಿವಿ ಮತ್ತು ಒಟಿಟಿಯಲ್ಲಿ ದಾಖಲೆ ಮಟ್ಟದ ವೀಕ್ಷಣೆ ಗಳಿಸಲು ಜಿಯೋಸ್ಟಾರ್ ಹೆಣೆದಿರುವ ಈ ತಂತ್ರ ಎಷ್ಟರ ಮಟ್ಟಿಗೆ ವರ್ಕ್ ಆಗಲಿದೆ ಅನ್ನೋದು ಸದ್ಯದಲ್ಲೇ ತಿಳಿಯಲಿದೆ. ಗೆಟ್ ರೆಡಿ ಫಾರ್ ದ ಬಿಗ್ಗೆಸ್ಟ್ ಎಂಟರ್ಟೈನ್ಮೆಂಟ್ ರೈಡ್!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/for-the-first-time-in-bigg-boss-history-this-show-will-start-in-five-languages-on-the-same-day/articleshow-fo7iwch"/>
        </item>
        <item>
            <title><![CDATA[BBK 13: ಬಿಗ್‌ಬಾಸ್‌ ಮನೆಯಲ್ಲಿಯೇ ಒಂದುಗೂಡಿತು ವಿಶ್ವ: ಹೇಗಿದೆ ಈ ಬಾರಿಯ ದೊಡ್ಮನೆ]]></title>
            <link>https://kannada.asianetnews.com/gallery/tv-talk/a-grand-house-built-for-bigg-boss-kannada-season-13-with-idea-with-whole-world-is-one-mrq-0km7ar6</link>
            <guid isPermaLink="true">https://kannada.asianetnews.com/gallery/tv-talk/a-grand-house-built-for-bigg-boss-kannada-season-13-with-idea-with-whole-world-is-one-mrq-0km7ar6</guid>
            <pubDate>Sun, 06 Sep 2026 14:42:08 +0530</pubDate>
            <description><![CDATA[&lt;p&gt;ಕನ್ನಡದ ಬಿಗ್&zwnj;ಬಾಸ್ ಹೊಸ ಸೀಸನ್&zwnj;ಗಾಗಿ 'ಇಡೀ ಜಗತ್ತು ಒಂದು' ಎಂಬ ಕಲ್ಪನೆಯಲ್ಲಿ ಅದ್ಧೂರಿ ಮನೆ ನಿರ್ಮಾಣವಾಗಿದೆ. ಈ ಮನೆಯಲ್ಲಿ ವಿಶ್ವದ ಪ್ರಮುಖ ಸ್ಥಳಗಳ ಕಲ್ಪನೆಗಳಿದ್ದು, ವಿಶಾಲವಾದ ಕಿಚನ್ ಮತ್ತು ಕನ್ಫೆಷನ್ ರೂಮ್ ಅನ್ನು ಹೊಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1tzejwcrc6a2j4pbdqrr9xp,imgname-bigg-boss--5--1788685536140.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡದ ಬಿಗ್&zwnj;ಬಾಸ್ ಹೊಸ ಸೀಸನ್&zwnj;ಗಾಗಿ 'ಇಡೀ ಜಗತ್ತು ಒಂದು' ಎಂಬ ಕಲ್ಪನೆಯಲ್ಲಿ ಅದ್ಧೂರಿ ಮನೆ ನಿರ್ಮಾಣವಾಗಿದೆ. ಈ ಮನೆಯಲ್ಲಿ ವಿಶ್ವದ ಪ್ರಮುಖ ಸ್ಥಳಗಳ ಕಲ್ಪನೆಗಳಿದ್ದು, ವಿಶಾಲವಾದ ಕಿಚನ್ ಮತ್ತು ಕನ್ಫೆಷನ್ ರೂಮ್ ಅನ್ನು ಹೊಂದಿದೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್&zwnj; ಅನ್ನೋದೇ ಒಂದು ಜಗತ್ತು. ಈ ಜಗತ್ತಿನಲ್ಲಿ ಬೇರೆ ಬೇರೆ ಮನಸ್ಸಿನ ಜನರನ್ನು ಸ್ಪರ್ಧಿಗಳನ್ನಾಗಿ ಕಳುಹಿಸಲಾಗುತ್ತದೆ. ವೈವಿದ್ಯಮಯ ಜನರ ನಡುವೆ 100 ದಿನ ಬದುಕಿ ಗೆಲ್ಲೋ ವ್ಯಕ್ತಿಯೇ ವಿನ್ನರ್. ಇಂದಿನಿಂದ ಕನ್ನಡದ ಬಿಗ್&zwnj;ಬಾಸ್ ಸೀಸನ್ ಆರಂಭಗೊಳ್ಳಲಿದ್ದು, ಈ ಶೋಗಾಗಿ ಬೃಹತ್ ಮನೆಯೊಂದು ನಿರ್ಮಾಣವಾಗಿದೆ. ಈ ಮನೆಯಲ್ಲಿ ಏನೇನಿದೆ ಎಂದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಸೀಸನ್ 12ರ ವೇಳೆ ಕರ್ನಾಟಕದ ಸಂಸ್ಕೃತಿ ಕಲ್ಪನೆಯಲ್ಲಿ ಬಿಗ್&zwnj;ಬಾಸ್ ಮನೆ ನಿರ್ಮಾಣಗೊಂಡಿತ್ತು. ಆದ್ರೆ ಈ ಬಾರಿ ಇಡೀ ಜಗತ್ತು ಒಂದು ಎಂಬ ಕಲ್ಪನೆಯಲ್ಲಿ ಬೃಹತ್ ಮತ್ತು ಅದ್ಧೂರಿಯಾದ ಮನೆ ನಿರ್ಮಾಣಗೊಂಡಿದೆ. ದೊಡ್ಮನೆಯ ವಿಡಿಯೋ ತುಣುಕುಗಳು ಹೊರ ಬಂದಿದ್ದು, ವೀಕ್ಷಕರಲ್ಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಮನೆಯ ಸೆಂಟ್ರಲ್&zwnj;ನಲ್ಲಿ ವಿಶ್ವದ ಗೋಳ ಅಳವಡಿಸಲಾಗಿದೆ. ವಿಮಾನದ ಮಾದರಿಯಲ್ಲಿಯೇ ಸಿಟ್&zwnj; ಔಟ್ ಏರಿಯಾದ, ಎಫೆಲ್ ಟವರ್, ಸ್ಟ್ಯಾಚು ಆಫ್ ಲಿಬರ್ಟಿ, ಯುರೋಪ್&zwnj;ನ ಮಲಾನ್ ರಾಜ್, ಡ್ರ್ಯಾಗನ್ ಸೇರಿದಂತೆ ವಿಶ್ವದ ಪ್ರಮುಖ ಸ್ಥಳಗಳ ಕಲ್ಪನೆಗಳು ಈ ಬಾರಿಯ ಬಿಗ್&zwnj;ಬಾಸ್ ಮನೆಯಲ್ಲಿರಲಿವೆ. ಹಾಗೆಯೇ ಈ ಬಾರಿ ಕನ್ಫೆಷನ್ ರೂಮ್ ಸಹ ವಿಶಾಲವಾಗಿದೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಮನೆಯಲ್ಲಿ ಜಗಳಕ್ಕೆ ಕಾರಣವಾಗುವ ಸ್ಥಳ ಅಂದ್ರೆ ಅದುವೇ ಕಿಚನ್. ಅಡುಗೆ ಮಾಡುವ ಮತ್ತು ಪಾತ್ರೆ ತೊಳೆಯುವ ವಿಷಯದಲ್ಲಿಯೇ ಸ್ಪರ್ಧಿಗಳ ನಡುವಿನ ಮನಸ್ತಾಪಕ್ಕೆ ಕಾರಣವಾಗುತ್ತದೆ. ಹಾಗಾಗಿ ಈ ಬಾರಿಯೂ ಅಡುಗೆಮನೆ ವಿಶಾಲವಾಗಿ ಡಿಸೈನ್ ಮಾಡಲಾಗಿದೆ.&lt;/p&gt;&lt;img&gt;&lt;p&gt;ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಗ್&zwnj;ಬಾಸ್ ಸುದ್ದಿಗಳು ಟ್ರೆಂಡಿಂಗ್&zwnj;ನಲ್ಲಿವೆ. ವಾಹಿನಿಯೇ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕೆಲವರ ಹೆಸರುಗಳು ರಿವೀಲ್ ಆಗಿವೆ. ಅಗ್ನಿಪರೀಕ್ಷೆಯಲ್ಲಿ ಗೆದ್ದ ಕಾಮನ್ ಮ್ಯಾನ್&zwnj;ಗಳು ಸಹ ರಿಯಾಲಿಟಿ ಶೋನ ಭಾಗವಾಗಲಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/a-grand-house-built-for-bigg-boss-kannada-season-13-with-idea-with-whole-world-is-one-mrq-0km7ar6"/>
        </item>
        <item>
            <title><![CDATA[ಈ ಬಾರಿ ಹವಾ ನೆಕ್ಸ್ಟ್ ಲೆವೆಲ್‌ಗೆ ಇದೆ.. ಬಿಗ್ ಬಾಸ್ ಸೀಸನ್ 13 ಆರಂಭದಲ್ಲೇ ವಿನ್ನರ್ ಯಾರೆಂದು ಹೇಳಿದ ಜನ್ರು!]]></title>
            <link>https://kannada.asianetnews.com/gallery/tv-talk/female-winner-rumors-bigg-boss-kannada-season-13-g6cyf5t</link>
            <guid isPermaLink="true">https://kannada.asianetnews.com/gallery/tv-talk/female-winner-rumors-bigg-boss-kannada-season-13-g6cyf5t</guid>
            <pubDate>Sun, 06 Sep 2026 13:18:00 +0530</pubDate>
            <description><![CDATA[&lt;p&gt;Bigg Boss Kannada Winner Prediction: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ 'ಬಿಗ್ ಬಾಸ್' ಇಂದಿನಿಂದ ಆರಂಭವಾಗಲಿದೆ. ಆದರೆ ಶೋ ಶುರುವಾಗುವ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿಯ ವಿನ್ನರ್ ಯಾರು ಎಂಬ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1tterakmxp9m5xphzbr587j,imgname-thumbnail---2026-09-06t130709.828-1788680298835.jpg" type="image/jpeg" height="390" width="690"/>
            <content:encoded><![CDATA[&lt;p&gt;Bigg Boss Kannada Winner Prediction: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ 'ಬಿಗ್ ಬಾಸ್' ಇಂದಿನಿಂದ ಆರಂಭವಾಗಲಿದೆ. ಆದರೆ ಶೋ ಶುರುವಾಗುವ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿಯ ವಿನ್ನರ್ ಯಾರು ಎಂಬ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಜೋರಾಗಿ ನಡೆಯುತ್ತಿದೆ ಚರ್ಚೆ&lt;/strong&gt;ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಇಂದಿನಿಂದ (ಸೆಪ್ಟೆಂಬರ್ 06) ಅದ್ಧೂರಿಯಾಗಿ ಚಾಲನೆ ಪಡೆಯಲಿದೆ. ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ರಿಯಾಲಿಟಿ ಶೋ ಬಗ್ಗೆ ವೀಕ್ಷಕರಲ್ಲಿ ಬೆಟ್ಟದಷ್ಟು ಕುತೂಹಲ ಮನೆ ಮಾಡಿದೆ. ಆದರೆ, ಈ ಬಾರಿ ವಿಶೇಷವೆಂದರೆ ಶೋ ಆರಂಭವಾಗುವ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಸ್ಪರ್ಧಿಗಳು ಯಾರು?&lt;/strong&gt;ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳು ಯಾರು ಎಂಬ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡುತ್ತಿದೆ. ವೀಕ್ಷಕರು ತಮ್ಮ ನೆಚ್ಚಿನ ತಾರೆಯರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾ ಹಾಗೂ ಕಿರುತೆರೆ ನಟ-ನಟಿಯರು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಹಾಗೂ ವಿಭಿನ್ನ ರಂಗದ ಪ್ರತಿಭೆಗಳು ಈ ಬಾರಿ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.&lt;/p&gt;&lt;img&gt;&lt;p&gt;&lt;strong&gt;ಕುತೂಹಲಕ್ಕೆ ಸಾಕ್ಷಿ&lt;/strong&gt;ಸಾಮಾನ್ಯವಾಗಿ ಬಿಗ್ ಬಾಸ್ ಆರಂಭವಾದ ಮೇಲೆ ವಾರಗಳು ಕಳೆದಂತೆ ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರ ಶುರುವಾಗುತ್ತದೆ. ಆದರೆ ಈ ಬಾರಿ ಹವಾ ಬೇರೆಯೇ ಇದೆ! ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಮಾಹಿತಿಯ ಪ್ರಕಾರ, ಈ ಸೀಸನ್&zwnj;ನಲ್ಲಿ ಒರ್ವ ಮಹಿಳಾ ಸ್ಪರ್ಧಿ (Female Contestant) ವಿನ್ನರ್ ಪಟ್ಟ ಅಲಂಕರಿಸಲಿದ್ದಾರೆ ಎನ್ನಲಾಗುತ್ತಿದೆ. ಇದು ಬಿಗ್ ಬಾಸ್ ಬಗ್ಗೆ ಅಭಿಮಾನಿಗಳಿಗಿರುವ ಅತಿಯಾದ ಆಸಕ್ತಿ ಮತ್ತು ಕುತೂಹಲಕ್ಕೆ ಸಾಕ್ಷಿಯಾಗಿದೆ. ಈ ಫೋಟೋದಲ್ಲಿ ನೀವು ಫ್ಯಾನ್ಸ್&zwnj; ಏನೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ ನೋಡಬಹುದು.&lt;/p&gt;&lt;img&gt;&lt;p&gt;&lt;strong&gt;ಮಿಶ್ರ ಪ್ರತಿಕ್ರಿಯೆ&lt;/strong&gt;&quot;ಈ ಬಾರಿ ಮಹಿಳಾ ಸ್ಪರ್ಧಿಯೇ ಗೆಲ್ಲುತ್ತಾರೆ&quot; ಎಂದು ಒಂದು ವರ್ಗದ ಅಭಿಮಾನಿಗಳು ಹೇಳುತ್ತಿದ್ದರೆ, ಇನ್ನೊಂದು ವರ್ಗದವರು &quot;ಆಟ ಶುರುವಾಗುವ ಮೊದಲೇ ವಿನ್ನರ್ ಬಗ್ಗೆ ಮಾತನಾಡುವುದು ಸರಿಯಲ್ಲ, ಆಟ ನೋಡಿ ತೀರ್ಮಾನಿಸೋಣ&quot; ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ರೀತಿಯ ವಿಭಿನ್ನ ಚರ್ಚೆಗಳು ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಶೋಗೆ ಭರ್ಜರಿ ಪ್ರಚಾರ ತಂದುಕೊಟ್ಟಿದೆ.&lt;/p&gt;&lt;img&gt;&lt;p&gt;&lt;strong&gt;ಏನೆಲ್ಲಾ ವಿಶೇಷತೆಗಳಿರಲಿವೆ?&lt;/strong&gt;ಒಟ್ಟಿನಲ್ಲಿ, ಯಾರೂ ಊಹಿಸದ ಟ್ವಿಸ್ಟ್&zwnj;ಗಳೊಂದಿಗೆ ಆರಂಭವಾಗುತ್ತಿರುವ ಈ ಬಾರಿಯ ಬಿಗ್ ಬಾಸ್ ಸೀಸನ್&zwnj;ನಲ್ಲಿ ಏನೆಲ್ಲಾ ವಿಶೇಷತೆಗಳಿರಲಿವೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ ಈ ಬಾರಿ ಸೀಸನ್ 13ರ ಅಬ್ಬರ ಶುರುವಾಗುವ ಮೊದಲೇ ಇಡೀ ದೇಶವೇ ತಿರುಗಿ ನೋಡುವಂತಹ ವಿಶೇಷ ಪ್ರೋಮೋ ಒಂದನ್ನು ವಾಹಿನಿ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಪ್ರೋಮೋದ ವಿಶೇಷತೆಯೆಂದರೆ, ದಕ್ಷಿಣ ಭಾರತದ ನಾಲ್ಕು ಭಾಷೆಗಳ ಬಿಗ್ ಬಾಸ್ ಶೋಗಳ ಜನಪ್ರಿಯ ನಿರೂಪಕರು ಒಂದೇ ಪರದೆಯ ಮೇಲೆ ಕಾಣಿಸಿಕೊಂಡಿರುವುದು.&lt;/p&gt;]]></content:encoded>
            <category>entertainment</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/tv-talk/female-winner-rumors-bigg-boss-kannada-season-13-g6cyf5t"/>
        </item>
        <item>
            <title><![CDATA[ಬಿಗ್ ಬಾಸ್ ಕನ್ನಡ 13 ರಂಗು: ಕಿಚ್ಚ ಸುದೀಪ್ ಶೋಗೆ ಎಂಟ್ರಿ ಕೊಡಲಿರುವ ಕನ್ಫರ್ಮ್ ಸ್ಪರ್ಧಿಗಳ ಪಟ್ಟಿ]]></title>
            <link>https://kannada.asianetnews.com/tv-talk/bigg-boss-kannada-13-confirmed-contestants-list-kiccha-sudeep-san/articleshow-7khbcc6</link>
            <guid isPermaLink="true">https://kannada.asianetnews.com/tv-talk/bigg-boss-kannada-13-confirmed-contestants-list-kiccha-sudeep-san/articleshow-7khbcc6</guid>
            <pubDate>Sun, 06 Sep 2026 13:13:03 +0530</pubDate>
            <description><![CDATA[&lt;p&gt;ಕಿಚ್ಚ ಸುದೀಪ್ ನಿರೂಪಣೆಯ 'ಬಿಗ್ ಬಾಸ್ ಕನ್ನಡ ಸೀಸನ್ 13' ಇಂದು ಆರಂಭವಾಗಲಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಈ ಸೀಸನ್&zwnj;ನಲ್ಲಿ ಭಾಗವಹಿಸಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1tsggbz06wpvsx5ety7tgnf,imgname-bigg-boss-kannada-13-kiccha-sudeep-1788679307647.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕ&lt;/strong&gt;ನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ - ಸೀಸನ್ 13' (Bigg Boss Kannada 13) ಹೊಸ ರೀತಿಯ ಡ್ರಾಮಾ, ಮನರಂಜನೆ, ಅನಿರೀಕ್ಷಿತ ತಿರುವುಗಳು ಹಾಗೂ ರೋಚಕ ಸ್ಪರ್ಧೆಯೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಶೋನಲ್ಲಿ ಈ ಬಾರಿ ಯಾವೆಲ್ಲಾ ಪ್ರಸಿದ್ಧ ವ್ಯಕ್ತಿಗಳು ಹಾಗೂ ಸೆಲೆಬ್ರಿಟಿಗಳು ಇರಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆಮಾಡಿದೆ. ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡ ಸಂಭಾವ್ಯ ಕನ್ಫರ್ಮ್ ಸ್ಪರ್ಧಿಗಳ ವಿವರ ಇಲ್ಲಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಸೌಂದರ್ಯ ಶೆಟ್ಟಿ (Soundarya Shetty)&lt;/strong&gt;&lt;/h2&gt;&lt;p&gt;'ಸ್ಯಾಂಡಿ' ಎಂದೇ ಖ್ಯಾತರಾಗಿರುವ ಮಂಗಳೂರು ಮೂಲದ ಸೌಂದರ್ಯ ಶೆಟ್ಟಿ, ಮಾಡೆಲ್, ಕಂಟೆಂಟ್ ಕ್ರಿಯೇಟರ್ ಹಾಗೂ 'ಎಂಟಿವಿ ಸ್ಪ್ಲಿಟ್ಸ್&zwnj;ವಿಲ್ಲಾ 16: ಪ್ಯಾರ್ ಯಾ ಪೈಸಾ' ಮೂಲಕ ಅಪಾರ ಜನಪ್ರಿಯತೆ ಗಳಿಸಿದ ರಿಯಾಲಿಟಿ ಶೋ ತಾರೆ. ಸ್ಪ್ಲಿಟ್ಸ್&zwnj;ವಿಲ್ಲಾ ಫೈನಲಿಸ್ಟ್ ಆಗಿದ್ದ ಇವರು ತಮ್ಮ ನೇರ ಹಾಗೂ ದಿಟ್ಟ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು. ಮಾಡೆಲಿಂಗ್, ನೃತ್ಯ ಹಾಗೂ ಬ್ಯೂಟಿ ಸ್ಪರ್ಧೆಗಳಲ್ಲಿ ಸಕ್ರಿಯರಾಗಿದ್ದ ಸೌಂದರ್ಯ, 2019ರಲ್ಲಿ 'ಮಿಸ್ ವರ್ಲ್ಡ್ ಟೀನ್ ಸೂಪರ್&zwnj;ಮಾಡೆಲ್' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಎಂಟಿವಿ ರೋಡೀಸ್ ಆಡಿಷನ್&zwnj;ನಲ್ಲೂ ಭಾಗವಹಿಸಿದ್ದ ಇವರು, ತಮ್ಮ ಬೋಲ್ಡ್ ಲುಕ್ ಹಾಗೂ ರಿಯಾಲಿಟಿ ಶೋ ಅನುಭವದೊಂದಿಗೆ ಬಿಗ್ ಬಾಸ್ 13ರ ಅಂಗಳಕ್ಕೆ ಪ್ರವೇಶಿಸುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಪೃಥ್ವಿ ಅಂಬಾರ್ (Pruthvi Ambaar)&lt;/strong&gt;&lt;/h2&gt;&lt;p&gt;ಕನ್ನಡ ಚಿತ್ರರಂಗದ ಜನಪ್ರಿಯ ನಟ ಪೃಥ್ವಿ ಅಂಬಾರ್ ಈ ಬಾರಿ ಬಿಗ್ ಬಾಸ್ ಪ್ರವೇಶಿಸುತ್ತಿರುವುದು ದೊಡ್ಡ ಆಕರ್ಷಣೆಯಾಗಿದೆ. ರೇಡಿಯೋ ಜಾಕಿಯಾಗಿ (RJ) ವೃತ್ತಿಜೀವನ ಆರಂಭಿಸಿ, ತುಳು ಹಾಗೂ ಕನ್ನಡ ಸಿನಿಮಾರಂಗದಲ್ಲಿ ನೆಲೆಯೂರಿದ ಪೃಥ್ವಿ, ಪ್ರಶಸ್ತಿ ವಿಜೇತ 'ದಿಯಾ' (Dia) ಸಿನಿಮಾದ 'ಆದಿ' ಪಾತ್ರದ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದರು. ತದನಂತರ ಶುಗರ್&zwnj; ಫ್ಯಾಕ್ಟರಿ, ದೂರದರ್ಶನ, ಜೂನಿ ಹಾಗೂ ಭುವನಂ ಗಗನಂ ಮುಂತಾದ ಸಿನಿಮಾಗಳಲ್ಲಿ ತಮ್ಮ ನಟನಾ ಸಾಮರ್ಥ್ಯ ನಿರೂಪಿಸಿದ್ದಾರೆ. ಬೆಳ್ಳಿತೆರೆಯ ಆಚೆಗೆ ಇವರ ನೈಜ ವ್ಯಕ್ತಿತ್ವವನ್ನು ಕಾಣಲು ಪ್ರೇಕ್ಷಕರು ಕಾಯುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಡ್ರ್ಯಾಗನ್ ಮಂಜ (Dragon Manja)&lt;/strong&gt;&lt;/h2&gt;&lt;p&gt;ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಹಾಗೂ ವಿಲನ್ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಡ್ರ್ಯಾಗನ್ ಮಂಜ, ಈ ಬಾರಿಯ ಬಿಗ್ ಬಾಸ್ ಮನೆಗೆ ಮಾಸ್ ಎನರ್ಜಿ ತರಲಿದ್ದಾರೆ. ಇತ್ತೀಚಿನ 'ಭೀಮ' (Bheema) ಹಾಗೂ 'ಬ್ರಾಟ್' (Brat) ಸಿನಿಮಾಗಳಲ್ಲಿ ತಮ್ಮ ಆಕ್ಷನ್ ಅಭಿನಯದ ಮೂಲಕ ಗಮನ ಸೆಳೆದಿರುವ ಮಂಜ, ಬಿಗ್ ಬಾಸ್ ಮನೆಯ ಟಾಸ್ಕ್&zwnj;ಗಳು, ಸನ್ನಿವೇಶಗಳು ಹಾಗೂ ಕಠಿಣ ವಾತಾವರಣವನ್ನು ಹೇಗೆ ಎದುರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಆಸಿಯಾ ಫಿರ್ದೋಸ್ (Asiya Firdose)&lt;/strong&gt;&lt;/h2&gt;&lt;p&gt;ಕನ್ನಡ ಗೃಹಿಣಿಯರ ನೆಚ್ಚಿನ ನಟಿಯಾಗಿರುವ ಆಸಿಯಾ ಫಿರ್ದೋಸ್, 'ಕನ್ಯಾಕುಮಾರಿ' ಹಾಗೂ ಇತ್ತೀಚಿನ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಗಳ ಮೂಲಕ ಮನೆಮಾತಾದವರು. ಕನ್ಯಾಕುಮಾರಿಯ ಕನ್ನಿಕಾ ಪಾತ್ರ ಹಾಗೂ ಶ್ರಾವಣಿ ಸುಬ್ರಹ್ಮಣ್ಯದ ಶೀರ್ಷಿಕೆ ಪಾತ್ರ 'ಶ್ರಾವಣಿ'ಯಾಗಿ ಪ್ರೇಕ್ಷಕರ ಮನಗೆದ್ದಿರುವ ಆಸಿಯಾ, ತಮ್ಮ ಕ್ಯೂಟ್ ಅಭಿನಯ ಹಾಗೂ ಅಪಾರ ಕಿರುತೆರೆ ಅನುಭವದೊಂದಿಗೆ ದೊಡ್ಮನೆಗೆ ಹೆಜ್ಜೆ ಇಡುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ತಾಂಡವ್ ರಾಮ್ (Tandav Ram)&lt;/strong&gt;&lt;/h2&gt;&lt;p&gt;ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ಪ್ರಸಿದ್ಧ ನಟ ತಾಂಡವ್ ರಾಮ್, ಸೂಪರ್ ಹಿಟ್ 'ಜೋಡಿ ಹಕ್ಕಿ' ಧಾರಾವಾಹಿಯ 'ರಾಮಣ್ಣ' ಪಾತ್ರದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಹಾಸನ ಮೂಲದವರಾದ ತಾಂಡವ್, ಮೈಸೂರಿನ ರಂಗಾಯಣದಲ್ಲಿ ನಟನಾ ತರಬೇತಿ ಪಡೆದು, 'ಕೃಷ್ಣ ರುಕ್ಮಿಣಿ' ಧಾರಾವಾಹಿ ಮೂಲಕ ನಟನೆಗೆ ಬಂದವರು. ಮರೆಯಲಾರೆ, ಒಂದ್ ಕಥೆ ಹೇಳ್ಲಾ ಹಾಗೂ ಅಬ್ಬಬ್ಬಾ ಸಿನಿಮಾಗಳಲ್ಲಿ ನಟಿಸಿರುವ ಇವರು, ಬಾಡಿಬಿಲ್ಡಿಂಗ್ ಹಾಗೂ ನಿರ್ಮಾಣ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ರೇಚೆಲ್ ಡೇವಿಡ್ (Rachel David)&lt;/strong&gt;&lt;/h2&gt;&lt;p&gt;ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಉದಯೋನ್ಮುಖ ನಟಿ ರೇಚೆಲ್ ಡೇವಿಡ್. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಇವರು 2019ರಲ್ಲಿ ಮಲಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ಬ್ಲಾಕ್&zwnj;ಬಸ್ಟರ್ 'ಲವ್ ಮಾಕ್&zwnj;ಟೇಲ್ 2' ಸಿನಿಮಾದ 'ಸಿಹಿ' ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದ ಇವರು, ಶೆಫ್ ಚಿದಂಬರ, ಅನ್&zwnj;ಲಾಕ್ ರಾಘವ ಹಾಗೂ ಭುವನಂ ಗಗನಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ವೈವಿಧ್ಯಮಯ ಸ್ಪರ್ಧಿಗಳ ಸಮ್ಮಿಲನದೊಂದಿಗೆ 'ಬಿಗ್ ಬಾಸ್ ಕನ್ನಡ 13' ಮತ್ತೊಮ್ಮೆ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಸೂರಜ್&zwnj; ಕುಮಾರ್&zwnj;&lt;/strong&gt;&lt;/h2&gt;&lt;p&gt;ಜನಪ್ರಿಯ ಹಾಸ್ಯ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಮೂಲಕ ಕನ್ನಡಿಗರ ಮನೆಮಾತಾಗಿರುವ ನಟ ಸೂರಜ್ ಕುಮಾರ್, 'ಬಿಗ್ ಬಾಸ್ ಕನ್ನಡ - ಸೀಸನ್ 13'ರ ದೊಡ್ಮನೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ತಮ್ಮ ಸಹಜ ಹಾಸ್ಯ ಪ್ರಜ್ಞೆ ಹಾಗೂ ಸಮಯಪ್ರಜ್ಞೆಯಿಂದ ವೀಕ್ಷಕರನ್ನು ರಂಜಿಸಿರುವ ಸೂರಜ್ ಸೇರ್ಪಡೆಯು ಬಿಗ್ ಬಾಸ್ ಮನೆಗೆ ಹೊಸ ಕಳೆ ಹಾಗೂ ಭರಪೂರ್ ಎನರ್ಜಿ ತರಲಿದೆ ಎಂದು ನಿರೀಕ್ಷಿಸಲಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/bigg-boss-kannada-13-confirmed-contestants-list-kiccha-sudeep-san/articleshow-7khbcc6"/>
        </item>
        <item>
            <title><![CDATA[ಆಮೆ ಪಕ್ಕಕ್ಕೆ  ಇಡಮ್ಮಾ, ಬ್ಯೂಟಿ ಸಿಕ್ರೇಟ್​ ರಿವೀಲ್​  ಮಾಡಮ್ಮಾ: ರಾಧಿಕಾಗೆ ದುಂಬಾಲು ಬಿದ್ದ ಫ್ಯಾನ್ಸ್​]]></title>
            <link>https://kannada.asianetnews.com/gallery/entertainment/actress-radhika-pandit-holding-a-turtle-fans-asking-about-her-beauty-secret-suc-4gr9h2u</link>
            <guid isPermaLink="true">https://kannada.asianetnews.com/gallery/entertainment/actress-radhika-pandit-holding-a-turtle-fans-asking-about-her-beauty-secret-suc-4gr9h2u</guid>
            <pubDate>Sun, 06 Sep 2026 13:10:27 +0530</pubDate>
            <description><![CDATA[&lt;p&gt;ಸ್ಯಾಂಡಲ್&zwnj;ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ಯಶ್ ಜೊತೆಗಿನ ದಾಂಪತ್ಯ ಜೀವನ ನಡೆಸುತ್ತಿದ್ದು, ಸದ್ಯ ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 42ನೇ ವಯಸ್ಸಿನಲ್ಲೂ ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ ಕಾಪಾಡಿಕೊಂಡಿರುವ ಅವರ, ಸಿನಿಮಾ ವಾಪಸಾತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ttct4ftwmvjprjwkk2hsa7,imgname-radhika-pandit-1788680235151.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ಯಶ್ ಜೊತೆಗಿನ ದಾಂಪತ್ಯ ಜೀವನ ನಡೆಸುತ್ತಿದ್ದು, ಸದ್ಯ ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 42ನೇ ವಯಸ್ಸಿನಲ್ಲೂ ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ ಕಾಪಾಡಿಕೊಂಡಿರುವ ಅವರ, ಸಿನಿಮಾ ವಾಪಸಾತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ&lt;/p&gt;&lt;img&gt;&lt;p&gt;ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿಗಳಲ್ಲಿ ಒಂದು ಯಶ್​ ಮತ್ತು ರಾಧಿಕಾ ಪಂಡಿತ್​. ಒಟ್ಟಿಗೆ ಬಣ್ಣದ ಲೋಕದ ಜರ್ನಿಯನ್ನು ಆರಂಭಿಸಿ, ಹಲವು ವರ್ಷಗಳಿಂದ ಪ್ರೀತಿಸಿ, ಆನಂತರ 2016ರ ಆಗಸ್ಟ್&zwnj;ನಲ್ಲಿ ಎಂಗೇಜ್&zwnj;ಮೆಂಟ್ ಮಾಡಿಕೊಂಡಿತ್ತು ಈ ಜೋಡಿ. ಗೋವಾದಲ್ಲಿ ಈ ಎಂಗೇಜ್&zwnj;ಮೆಂಟ್ ನಡೆದಿತ್ತು. ಆನಂತರ ಬೆಂಗಳೂರಿನಲ್ಲಿ ಅದೇ ವರ್ಷ ಡಿಸೆಂಬರ್ 9ರಂದು ಅದ್ದೂರಿಯಾಗಿ ವಿವಾಹ ಸಮಾರಂಭವು ನಡೆದಿತ್ತು.&lt;/p&gt;&lt;img&gt;&lt;p&gt;ಸದ್ಯ ಬಹುತೇಕ ಮಹಿಳೆಯರಂತೆ ರಾಧಿಕಾ ಪಂಡಿತ್​ ಕೂಡ ಗಂಡ, ಮಕ್ಕಳಿಗಾಗಿ ಉದ್ಯೋಗವನ್ನು ತೊರೆದಿದ್ದಾರೆ. ಒಂದೊಮ್ಮೆ ಹಾಗೂ ಈಗಲೂ ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ಎಂದೇ ಫೇಮಸ್​ ಆಗಿರೋ ರಾಧಿಕಾ ಪಂಡಿತ್​, ತಮ್ಮ ನೆಚ್ಚಿನ ಸಿನಿಮಾ ಇಂಡಸ್ಟ್ರಿಯಿಂದ ಈಗ ಕುಟುಂಬಕ್ಕಾಗಿ ತ್ಯಾಗ ಮಾಡಿದ್ದು, ಎರಡು ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನ ಸಿಂಡ್ರೆಲ್ಲಾ, ನಟಿ ರಾಧಿಕಾ ಪಂಡಿತ್ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಸಿನಿಮಾಗಳಿಂದ ಸದ್ಯ ಕೊಂಚ ದೂರವಿದ್ದರೂ, ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್&zwnj;ಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ರಾಧಿಕಾ, ಇದೀಗ ಇನ್&zwnj;ಸ್ಟಾಗ್ರಾಂನಲ್ಲಿ 5 ಮಿಲಿಯನ್ ಅಂದರೆ 50 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಮಕ್ಕಳಾದ ಮೇಲೆ ದೇಹದಲ್ಲಿ ಭಾರಿ ಬದಲಾವಣೆ ಆಗುವುದು ಇದೆ. ಆದರೆ ರಾಧಿಕಾ ಪಂಡಿತ್​ (Radhika Pandit) ಮಾತ್ರ ತಮ್ಮ ದೇಹವನ್ನು ಅದೇ ರೀತಿ ಉಳಿಸಿಕೊಂಡಿದ್ದಾರೆ. ಫಿಟ್​ ಆ್ಯಂಡ್​ ಫೈನ್​ ಆಗಿರೋ ರಾಧಿಕಾಗೆ ಈಗ 42 ವರ್ಷ ವಯಸ್ಸು. ಆದರೆ ಇಂದಿಗೂ 20ರ ಚೆಲುವೆಯಂತೆ ಕಂಗೊಳಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಇದೇ ಕಾರಣಕ್ಕೆ ರಾಧಿಕಾ ಪಂಡಿತ್​ ಅವರ ಬ್ಯೂಟಿಯ ಬಗ್ಗೆ ಅವರ ಅಭಿಮಾನಿಗಳಿಗೆ ಸದಾ ಕುತೂಹಲ ಇದ್ದದ್ದೇ. ಹೋದಲ್ಲಿ, ಬಂದಲ್ಲಿ ಅವರಿಗೆ ಇದೇ ಪ್ರಶ್ನೆ ಕೇಳುತ್ತಲೇ ಇರಲಾಗುತ್ತದೆ. ಇದೀಗ ರಾಧಿಕಾ ಅವರು, ಆಮೆಯೊಂದನ್ನು ಹಿಡಿದು ಪೋಸ್​ ಕೊಟ್ಟಿದ್ದಾರೆ. ಆದರೆ ಇಲ್ಲಿ ಅವರ ಅಭಿಮಾನಿಗಳಿಗೆ ರಾಧಿಕಾ ಅವರ ಬ್ಯೂಟಿಯ ಬಗ್ಗೆಯೇ ಚಿಂತೆಯಾಗಿದ್ದು, ಈ ವಯಸ್ಸಿನಲ್ಲಿಯೂ ಇಷ್ಟು ಹೇಗೆ ಫಿಟ್​ ಎಂದು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ರಾಧಿಕಾ ಪಂಡಿತ್ ಸಿನಿಮಾಗಳಿಗಿಂತ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮಕ್ಕಳ ಆರೈಕೆ ಸೇರಿದಂತೆ ಕುಟುಂಬದ ಜವಾಬ್ದಾರಿಗಳಲ್ಲಿ ತೊಡಗಿಸಿಕೊಂಡಿರುವ ಅವರು, ಚಿತ್ರರಂಗಕ್ಕೆ ಯಾವಾಗ ಮರಳುತ್ತಾರೆ ಎಂಬ ಕುತೂಹಲ ಮಾತ್ರ ಅಭಿಮಾನಿಗಳಲ್ಲಿ ಹಾಗೆಯೇ ಇದೆ. ಆದಷ್ಟು ಬೇಗ ರಾಧಿಕಾ ಸಿನಿಮಾಕ್ಕೆ ಮರಳಲಿ ಎನ್ನುವುದು ಫ್ಯಾನ್ಸ್​ ಬಯಕೆ&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/actress-radhika-pandit-holding-a-turtle-fans-asking-about-her-beauty-secret-suc-4gr9h2u"/>
        </item>
        <item>
            <title><![CDATA[ಪತ್ನಿ ಸುನೀತಾ ಆರೋಪಗಳ ಬೆನ್ನಲ್ಲೇ ಫ್ಯಾನ್ಸ್‌ ಬೆಂಬಲ ಕೋರಿದ್ದೇಕೆ ಬಾಲಿವುಡ್ ನಟ ಗೋವಿಂದ?]]></title>
            <link>https://kannada.asianetnews.com/entertainment/tensions-rise-as-sunita-ahuja-fumes-over-rumors-of-govinda-link-up-with-a-actress-and-the-actor-expects-fans-support/articleshow-3bqqnyh</link>
            <guid isPermaLink="true">https://kannada.asianetnews.com/entertainment/tensions-rise-as-sunita-ahuja-fumes-over-rumors-of-govinda-link-up-with-a-actress-and-the-actor-expects-fans-support/articleshow-3bqqnyh</guid>
            <pubDate>Sun, 06 Sep 2026 12:52:58 +0530</pubDate>
            <description><![CDATA[&lt;p&gt;1987ರಲ್ಲಿ ರಹಸ್ಯವಾಗಿ ಶುರುವಾದ ಇವರ ಪ್ರೇಮಕಥೆ, ಈಗ ಅಕ್ಷರಶಃ ಬೀದಿಗೆ ಬಂದಂತಾಗಿದೆ. ನಾಲ್ಕು ವರ್ಷಗಳ ಕಾಲ ತಮ್ಮ ಮದುವೆಯನ್ನು ಗುಟ್ಟಾಗಿಟ್ಟಿದ್ದ ಈ ಜೋಡಿ, ಈಗ ತಮ್ಮ ಜಗಳವನ್ನು ಮುಚ್ಚಿಡಲು ವಿಫಲವಾಗಿದೆ. ಅಭಿಮಾನಿಗಳು ಮಾತ್ರ ತಮ್ಮ ಪ್ರೀತಿಯ 'ಚೀಚಿ' ಮತ್ತೆ ನಗುನಗುತ್ತಾ ಸುನೀತಾ ಅವರ ಜೊತೆ ಒಂದಾಗಲಿ ಎಂದು ಆಶಿಸುತ್ತಿದ್ದಾರೆ. ಆದರೆ.. ಏನಾಗ್ತಿದೆ? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fnppz0v93kx9yy59exqwb4,imgname-sunita-ahuja-govinda-divorce-1787232476128.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Actor Govinda-Sunita Ahuja-Komal Rani-Bollywood Gossip-Govinda Divorce Rumors-Celebrity Marital Discord-ಚೀಚಿ ಸಂಸಾರದಲ್ಲಿ 'ರಿಯಲ್' ಡ್ರಾಮಾ: ಗೋವಿಂದ-ಸುನೀತಾ ನಡುವೆ ಶುರುವಾಯ್ತಾ ವಿಚ್ಛೇದನದ ಕೌಂಟ್&zwnj;ಡೌನ್?&lt;/strong&gt;&lt;/p&gt;&lt;p&gt;ಬೆಳ್ಳಿತೆರೆ ಮೇಲೆ ತಮ್ಮ ಅದ್ಭುತ ಡ್ಯಾನ್ಸ್ ಮತ್ತು ಕಾಮಿಡಿ ಟೈಮಿಂಗ್ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ನಗಿಸಿದ್ದ 'ಹೀರೋ ನಂಬರ್ 1' ಗೋವಿಂದ, ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ದೊಡ್ಡದೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಬಾಲಿವುಡ್ ಗಲ್ಲಿಗಳಲ್ಲಿ ಕೇಳಿಬರುತ್ತಿರುವ ಬಿಸಿಬಿಸಿ ಸುದ್ದಿಯೆಂದರೆ, ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ 37 ವರ್ಷಗಳ ದಾಂಪತ್ಯ ಜೀವನದ ನೌಕೆ ಈಗ ಸುಳಿಯಲ್ಲಿ ಸಿಲುಕಿದೆ! ಅನೈತಿಕ ಸಂಬಂಧ ಮತ್ತು ವಿಚ್ಛೇದನದ ವದಂತಿಗಳು ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ.&lt;/p&gt;&lt;h2&gt;ಆಕಾಶದತ್ತ ಮುಖ ಮಾಡಿದ ನಟ: ಅಸಲಿ ಕಥೆಯೇನು?&lt;/h2&gt;&lt;p&gt;ಸೆಪ್ಟೆಂಬರ್ 7ರ ಶನಿವಾರ ಸಂಜೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೋವಿಂದ ಕಾಣಿಸಿಕೊಂಡಾಗ, ಎಲ್ಲರ ಕಣ್ಣು ಅವರ ಮುಖದ ಮೇಲಿತ್ತು. ಅಲ್ಲಿ ಗೋವಿಂದ ನೀಡಿದ ಹೇಳಿಕೆ ಮಾತ್ರ ಸಖತ್ ನಿಗೂಢವಾಗಿತ್ತು. ಪತ್ನಿ ಸುನೀತಾ ಅವರ ಹೆಸರನ್ನು ಎತ್ತದೆ, ಆದರೆ ಅವರೊಂದಿಗಿನ ಬಿರುಕಿನ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಗೋವಿಂದ, &quot;ಆಕಾಶದಲ್ಲಿ ಹಲವು ವಿಷಯಗಳು ಬರೆಯಲ್ಪಟ್ಟಿವೆ. ಅವೆಲ್ಲವೂ ಬೇಗನೆ ಕ್ಲಿಯರ್ ಆಗಲಿ ಮತ್ತು ನನಗೆ ಅದನ್ನು ಸರಿಪಡಿಸಲು ಶಕ್ತಿ ಸಿಗಲಿ ಎಂದು ನಾನು ತಾಯಿಯಲ್ಲಿ ಪ್ರಾರ್ಥಿಸುತ್ತೇನೆ&quot; ಎಂದಿದ್ದಾರೆ. ಈ 'ಆಕಾಶದಲ್ಲಿ ಬರೆಯಲ್ಪಟ್ಟಿರುವ ವಿಷಯಗಳು' ಅಂದರೆ ಸಂಸಾರದ ಕಲಹವೇ ಎಂಬುದು ಈಗ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ!&lt;/p&gt;&lt;h3&gt;ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಸಂಘರ್ಷ!&lt;/h3&gt;&lt;p&gt;ಒಂದೆಡೆ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದರೆ, ಇನ್ನೊಂದೆಡೆ ಗೋವಿಂದ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. &lsquo;ರೂಪಾ&rsquo; ಮತ್ತು &lsquo;ದುನಿಯಾದಾರಿ&rsquo; ಎಂಬ ಎರಡು ಸಿನಿಮಾಗಳ ಮೂಲಕ ಸ್ಯಾಂಡಲ್&zwnj;ವುಡ್ ಮಾದರಿಯಲ್ಲೇ ಬಾಲಿವುಡ್&zwnj;ಗೆ ಕಂಬ್ಯಾಕ್ ಮಾಡುತ್ತಿರುವ ಗೋವಿಂದ, &quot;ನನಗೆ ನಿಮ್ಮ ಬೆಂಬಲ ಬೇಕು&quot; ಎಂದು ಅಭಿಮಾನಿಗಳ ಮುಂದೆ ಅಕ್ಷರಶಃ ಮನವಿ ಮಾಡಿದ್ದಾರೆ. ಸಂಸಾರದ ಕಿರಿಕಿರಿ ನಡುವೆಯೂ ನಟನೆಯ ಹಸಿವು ಅವರನ್ನು ಕಾಡುತ್ತಿರುವುದು ಸ್ಪಷ್ಟವಾಗಿದೆ.&lt;/p&gt;&lt;h3&gt;ಬಿರುಕಿಗೆ ಕಾರಣ 'ಮೂರನೇ ವ್ಯಕ್ತಿ'?&lt;/h3&gt;&lt;p&gt;ಇತ್ತೀಚೆಗೆ ನಟಿ ಕೋಮಲ್ ರಾಣಿ ಸ್ವರ್ಣಕರ್ ಜೊತೆ ಗೋವಿಂದ ಅವರ ಹೆಸರು ಕೇಳಿಬರುತ್ತಿರುವುದು ಸುನೀತಾ ಅವರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಹಿಂದೆ ರಿಯಾಲಿಟಿ ಶೋಗಳಲ್ಲಿ &quot;ಗೋವಿಂದಗೆ ಎಷ್ಟೇ ಅಫೇರ್ ಇದ್ದರೂ ಕೊನೆಗೆ ಅವರು ನನ್ನ ಬಳಿಯೇ ಬರುತ್ತಾರೆ&quot; ಎಂದು ನಗುನಗುತ್ತಲೇ ಹೇಳುತ್ತಿದ್ದ ಸುನೀತಾ, ಈ ಬಾರಿ ಮಾತ್ರ ವಿಚ್ಛೇದನದ ಗಂಭೀರ ಚಿಂತನೆಯಲ್ಲಿದ್ದಾರಂತೆ. ಇದಕ್ಕೆ ಪ್ರತಿಯಾಗಿ ಗೋವಿಂದ ಕೂಡ ಸುಮ್ಮನೆ ಕುಳಿತಿಲ್ಲ; &quot;ಮಿತಿ ಮೀರಬೇಡಿ&quot; ಎಂದು ಸಾರ್ವಜನಿಕವಾಗಿಯೇ ಪತ್ನಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ!&lt;/p&gt;&lt;p&gt;1987ರಲ್ಲಿ ರಹಸ್ಯವಾಗಿ ಶುರುವಾದ ಇವರ ಪ್ರೇಮಕಥೆ, ಈಗ ಅಕ್ಷರಶಃ ಬೀದಿಗೆ ಬಂದಂತಾಗಿದೆ. ನಾಲ್ಕು ವರ್ಷಗಳ ಕಾಲ ತಮ್ಮ ಮದುವೆಯನ್ನು ಗುಟ್ಟಾಗಿಟ್ಟಿದ್ದ ಈ ಜೋಡಿ, ಈಗ ತಮ್ಮ ಜಗಳವನ್ನು ಮುಚ್ಚಿಡಲು ವಿಫಲವಾಗಿದೆ. ಅಭಿಮಾನಿಗಳು ಮಾತ್ರ ತಮ್ಮ ಪ್ರೀತಿಯ 'ಚೀಚಿ' ಮತ್ತೆ ನಗುನಗುತ್ತಾ ಸುನೀತಾ ಅವರ ಜೊತೆ ಒಂದಾಗಲಿ ಎಂದು ಆಶಿಸುತ್ತಿದ್ದಾರೆ. ಆದರೆ, ಗೋವಿಂದ ಅವರ ಮೌನ ಮತ್ತು ಸುನೀತಾ ಅವರ ಸಿಟ್ಟು ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕು!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/tensions-rise-as-sunita-ahuja-fumes-over-rumors-of-govinda-link-up-with-a-actress-and-the-actor-expects-fans-support/articleshow-3bqqnyh"/>
        </item>
        <item>
            <title><![CDATA[ಕನ್ನಡ ಬಿಗ್‌ಬಾಸ್‌ಗೆ ಹೋಗೋದು ಫಿಕ್ಸ್‌, ಧಾರಾವಾಹಿಯ ಪಾತ್ರಕ್ಕೆ ಗುಡ್‌ಬೈ ಹೇಳಿದ ನಟಿ]]></title>
            <link>https://kannada.asianetnews.com/tv-talk/asiya-firdose-bids-farewell-to-shravani-subramanya-serial-bigg-boss-kannada-13-san/articleshow-armfqty</link>
            <guid isPermaLink="true">https://kannada.asianetnews.com/tv-talk/asiya-firdose-bids-farewell-to-shravani-subramanya-serial-bigg-boss-kannada-13-san/articleshow-armfqty</guid>
            <pubDate>Sun, 06 Sep 2026 11:37:25 +0530</pubDate>
            <description><![CDATA['ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ನಾಯಕಿ ಆಸಿಯಾ ಫಿರ್ದೋಸ್ ತಮ್ಮ ಪಾತ್ರಕ್ಕೆ ಭಾವನಾತ್ಮಕವಾಗಿ ವಿದಾಯ ಹೇಳಿದ್ದಾರೆ. ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ಅವರು 'ಬಿಗ್ ಬಾಸ್ ಕನ್ನಡ 13' ಶೋಗೆ ಸ್ಪರ್ಧಿಯಾಗಿ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳು ಬಲವಾಗಿ ಕೇಳಿಬರುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1tn5m2r8gphtnm4xvrrdqjv,imgname-asiya-firdose-bigg-boss-kannada-1788674756696.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.6):&lt;/strong&gt; ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಶ್ರಾವಣಿ ಸುಬ್ರಹ್ಮಣ್ಯ' ತನ್ನ ಪ್ರಸಾರವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದು, ಈ ಧಾರಾವಾಹಿಯ ಮುಖ್ಯ ಶೀರ್ಷಿಕೆ ಪಾತ್ರಧಾರಿಯಾಗಿದ್ದ ನಟಿ ಆಸಿಯಾ ಫಿರ್ದೋಸ್ (Asiya Firdose) ತಮ್ಮ 'ಶ್ರಾವಣಿ' ಪಾತ್ರಕ್ಕೆ ಅತ್ಯಂತ ಭಾವನಾತ್ಮಕವಾಗಿ ವಿದಾಯ ಹೇಳಿದ್ದಾರೆ.&lt;/p&gt;&lt;p&gt;ಸೋಶಿಯಲ್&zwnj; ಮೀಡಿಯಾದಲ್ಲಿ ಶ್ರಾವಣಿಯಾಗಿ ಸಾಗಿದ ತಮ್ಮ ಪಯಣವನ್ನು ನೆನಪಿಸಿಕೊಂಡಿರುವ ಆಸಿಯಾ, ಈ ಸುಂದರ ಅನುಭವವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನನ್ನೊಳಗಿರುವ 'ಶ್ರಾವಣಿ'ಯನ್ನು ಎಂದಿಗೂ ದೂರ ಕಳುಹಿಸಲು ನನಗೆ ಇಷ್ಟವಿರಲಿಲ್ಲ. ಹಲವು ಹಂತಗಳಲ್ಲಿ ನನ್ನನ್ನು ನಾನು ಕಂಡುಕೊಳ್ಳಲು ಮತ್ತು ಮರಳಿ ಪಡೆಯಲು ಈ ಪಾತ್ರ ನನಗೆ ಸಹಾಯ ಮಾಡಿದೆ,&quot; ಎಂದು ಅವರು ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ವಿದಾಯದ ಭಾವನಾತ್ಮಕ ಪೋಸ್ಟ್&lt;/strong&gt;&lt;/h2&gt;&lt;p&gt;ವಿದಾಯ ಹೇಳುವ ಕುರಿತು ಮನಬಿಚ್ಚಿ ಮಾತನಾಡಿರುವ ಆಸಿಯಾ, &quot;ನನಗೆ ಗುಡ್&zwnj;ಬೈ (ವಿದಾಯ) ಹೇಳುವುದು ಎಂದರೆ ಅಷ್ಟಾಗಿ ಇಷ್ಟವಿಲ್ಲ. ಆದರೆ ಮುಕ್ತಾಯ ಎನ್ನುವುದು ಜೀವನದ ನಿಯಮ. ಕಿರುತೆರೆ ಧಾರಾವಾಹಿಯಲ್ಲಿ ಕೆಲಸ ಮಾಡುವುದು ಒಂದು ವಿಶಿಷ್ಟ ಅನುಭವ. ಕಾಲಕ್ರಮೇಣ ನಟಿಸುವ ಪಾತ್ರ ಹಾಗೂ ಧಾರಾವಾಹಿಯ ಜೊತೆಗಿರುವ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಸವಿನೆನಪಾಗಿ ಬಿಡುತ್ತಾರೆ. ಈ 'ಶ್ರಾವಣಿ' ಪಾತ್ರವನ್ನು ನಾನು ಎಂದೆಂದಿಗೂ ನನ್ನ ಹೃದಯದಲ್ಲಿ ಜೋಪಾನವಾಗಿಟ್ಟುಕೊಳ್ಳುತ್ತೇನೆ,&quot; ಎಂದು ಬರೆದಿದ್ದಾರೆ. ಅಲ್ಲದೆ, ಶ್ರಾವಣಿಯ ಪಯಣದಲ್ಲಿ ತಮ್ಮ ಮೇಲೆ ಪ್ರೀತಿ ವಾತ್ಸಲ್ಯ ಮಳೆಗರೆದ ಪ್ರೇಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಿಗ್ ಬಾಸ್ ಕನ್ನಡ 13 ರೇಸ್&zwnj;ನಲ್ಲಿ ಆಸಿಯಾ?&lt;/strong&gt;&lt;/h2&gt;&lt;p&gt;ನಟಿ ಆಸಿಯಾ ಫಿರ್ದೋಸ್ 'ಶ್ರಾವಣಿ' ಪಾತ್ರಕ್ಕೆ ವಿದಾಯ ಹೇಳಿರುವ ಸಮಯ ಈಗ ಕಿರುತೆರೆ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇಂದಿನಿಂದ ಆರಂಭವಾಗಲಿರುವ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ - ಸೀಸನ್ 13'ಕ್ಕೆ (Bigg Boss Kannada 13) ಸೆಲೆಬ್ರಿಟಿ ಸ್ಪರ್ಧಿಯಾಗಿ ಆಸಿಯಾ ಫಿರ್ದೋಸ್ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿಗಳು ಬಲವಾಗಿ ಹರಿದಾಡುತ್ತಿವೆ.&lt;/p&gt;&lt;p&gt;'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ಮುಕ್ತಾಯ ಹಾಗೂ ಬಿಗ್ ಬಾಸ್ ಹೊಸ ಸೀಸನ್&zwnj;ನ ಪ್ರೋಮೊಗಳು ಹೊರಬಂದ ಬೆನ್ನಲ್ಲೇ ಈ ಗಾಸಿಪ್&zwnj;ಗಳಿಗೆ ಮತ್ತಷ್ಟು ಬಲ ಬಂದಿದೆ. ಆಯೋಜಕರು ಸ್ಪರ್ಧಿಗಳ ಪಟ್ಟಿಯನ್ನು ಗೌಪ್ಯವಾಗಿಟ್ಟಿದ್ದರೂ, ಕಿರುತೆರೆ ಮೂಲಗಳು ಹಾಗೂ ಪ್ರೋಮೊ ಕ್ಲೂಗಳ ಪ್ರಕಾರ ಆಸಿಯಾ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.&lt;/p&gt;&lt;p&gt;ಈ ಹಿಂದೆ 'ಕನ್ಯಾಕುಮಾರಿ' ಹಾಗೂ ಇತ್ತೀಚಿನ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಗಳ ಮೂಲಕ ಕನ್ನಡ ಗೃಹಿಣಿಯರ ನೆಚ್ಚಿನ ನಟಿಯಾಗಿ ಗುರುತಿಸಿಕೊಂಡಿರುವ ಆಸಿಯಾ, ಬಿಗ್ ಬಾಸ್ ಮನೆ ಪ್ರವೇಶಿಸಿದರೆ ತಮ್ಮ ಅಪಾರ ಕಿರುತೆರೆ ಅನುಭವ ಹಾಗೂ ಜನಪ್ರಿಯತೆಯೊಂದಿಗೆ ದೊಡ್ಮನೆ ಅಂಗಳದಲ್ಲೂ ಗಮನ ಸೆಳೆಯಲಿದ್ದಾರೆ. ಶ್ರಾವಣಿಯ ಅಧ್ಯಾಯ ಮುಗಿಸಿರುವ ಆಸಿಯಾ, ಬಿಗ್ ಬಾಸ್ ಮೂಲಕ ಹೊಸ ಪಯಣ ಆರಂಭಿಸಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/asiya-firdose-bids-farewell-to-shravani-subramanya-serial-bigg-boss-kannada-13-san/articleshow-armfqty"/>
        </item>
        <item>
            <title><![CDATA[ಕಾಲಿಗೆ ಬಿದ್ದರೂ ದರ್ಶನ್ ಫ್ಯಾನ್ಸ್ ಕ್ಷಮಿಸದ ರಮ್ಯಾ.. 'ಕೇಸ್ ವಾಪಸ್ ಪಡೆಯಲ್ಲ' ಎಂದು ಖಡಕ್ ಸಂದೇಶ ಕೊಟ್ಟ ನಟಿ!]]></title>
            <link>https://kannada.asianetnews.com/news-entertainment/there-is-no-question-of-forgiveness-says-actress-ramya-declaring-a-legal-war-against-those-who-sent-her-lewd-messages/articleshow-mqqbc3l</link>
            <guid isPermaLink="true">https://kannada.asianetnews.com/news-entertainment/there-is-no-question-of-forgiveness-says-actress-ramya-declaring-a-legal-war-against-those-who-sent-her-lewd-messages/articleshow-mqqbc3l</guid>
            <pubDate>Sun, 06 Sep 2026 12:13:14 +0530</pubDate>
            <description><![CDATA[&lt;p&gt;&lsquo;ಕೈಯಲ್ಲಿ ಫೋನಿದೆ, ಅಕೌಂಟ್&zwnj;ನಲ್ಲಿ ಡೇಟಾ ಇದೆ ಅಂದಮಾತ್ರಕ್ಕೆ ಯಾರ ಬಗ್ಗೆ ಬೇಕಾದರೂ ಹಾದರ-ಬೀದರ ಚರ್ಚೆ ಮಾಡ್ತೀರಾ?&quot; ಎಂಬ ರಮ್ಯಾ ಅವರ ಪ್ರಶ್ನೆ ಅಲ್ಲಿ ನೆರೆದಿದ್ದವರಿಗೆ ಚುರುಕ್ ಮುಟ್ಟಿಸುವಂತಿತ್ತು. ಕ್ಷಮೆ ಕೇಳಲು ಬಂದವರತ್ತ ತಿರುಗಿಯೂ ನೋಡದ ರಮ್ಯಾ, &rsquo;ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ' ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkbb0dw73vkgrsepncw5r9hx,imgname-actress-ramya-in-court-1773128398727.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Ramya revange on Darshan Fans Trollers- ಸ್ಯಾಂಡಲ್ ವುಡ್ ಕ್ವೀನ್ 'ರಿವೇಂಜ್' ಮೋಡ್: ಕಣ್ಣೀರಿಟ್ಟ ಟ್ರೋಲರ್ಸ್, ಕರಗದ ರಮ್ಯಾ!&lt;/strong&gt;&lt;/p&gt;&lt;p&gt;ಸ್ಯಾಂಡಲ್ ವುಡ್ ಅಂಗಳದಲ್ಲಿ ಮಾತ್ರವಲ್ಲ, ರಾಜಕೀಯ ರಣರಂಗದಲ್ಲೂ ಮಿಂಚಿದ್ದ 'ಕ್ವೀನ್' ರಮ್ಯಾ ಈಗ ನ್ಯಾಯಾಲಯದ ಅಖಾಡದಲ್ಲಿ ಅಬ್ಬರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೀಳುಮಟ್ಟದ ಪದಗಳಿಂದ ದಾಳಿ ಮಾಡಿದವರಿಗೆ &quot;ಪಾಠ ಕಲಿಸದೆ ಬಿಡೆನು&quot; ಎಂದು ರಮ್ಯಾ ಈಗ ರಣಕಾಹಳೆ ಮೊಳಗಿಸಿದ್ದಾರೆ. ಈ ಹೈ-ವೋಲ್ಟೇಜ್ ಡ್ರಾಮಾ ನಡೆದಿದ್ದು ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ!&lt;/p&gt;&lt;h2&gt;ಕೋರ್ಟ್ ಅಂಗಳದಲ್ಲಿ ಕಣ್ಣೀರಿನ ಮಳೆ!&lt;/h2&gt;&lt;p&gt;ಕೋರ್ಟ್ ಕಲಾಪ ಅಂದಮೇಲೆ ವಾದ-ಪ್ರತಿವಾದ ಸಾಮಾನ್ಯ. ಆದರೆ ಇಲ್ಲಿ ನಡೆದಿದ್ದೇ ಬೇರೆ. ನಟ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ಕೆಲವು ಕಿಡಿಗೇಡಿಗಳು ರಮ್ಯಾ ಅವರ ವಿರುದ್ಧ ಅಶ್ಲೀಲವಾಗಿ ಕಾಮೆಂಟ್ ಮಾಡಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಯಾವಾಗ ಕೇಸ್ ಸೀರಿಯಸ್ ಆಯ್ತೋ, ಆಗಲೇ ನೋಡಿ ಅಸಲಿ ಸಿನಿಮಾ ಶುರುವಾಗಿದ್ದು! ಕೋರ್ಟ್ ಆವರಣಕ್ಕೆ ರಮ್ಯಾ ಬರುತ್ತಿದ್ದಂತೆ, ಆರೋಪಿಗಳು ಮತ್ತು ಅವರ ಕುಟುಂಬದವರು ಒಬ್ಬೊಬ್ಬರಾಗಿ ರಮ್ಯಾ ಕಾಲಿಗೆ ಬಿದ್ದು ಅಕ್ಷರಶಃ ಪ್ರಲಾಪಿಸಿದ್ದಾರೆ. &quot;ತಾಯಿ, ನಮ್ಮಿಂದ ತಪ್ಪಾಯ್ತು, ಕ್ಷಮಿಸಿಬಿಡಿ.. ಕೇಸ್ ವಾಪಸ್ ತಗೊಳ್ಳಿ&quot; ಎಂದು ಅಂಗಲಾಚಿದ್ದಾರೆ. ಅಲ್ಲಿ ನೆರೆದಿದ್ದವರು ಒಂದು ಕ್ಷಣ ಮರುಗುವಂತೆ ಆ ಕಣ್ಣೀರಿನ ದೃಶ್ಯಗಳಿದ್ದವು.&lt;/p&gt;&lt;h3&gt;ಕಲ್ಲಿನಂತಾದ 'ಪದ್ಮಾವತಿ': ಕ್ಷಮೆಯ ಮಾತಿಲ್ಲ!&lt;/h3&gt;&lt;p&gt;ಇಷ್ಟೆಲ್ಲಾ ಹೈಡ್ರಾಮಾ ನಡೆದರೂ ರಮ್ಯಾ ಮಾತ್ರ ತಮ್ಮ ನಿರ್ಧಾರದಿಂದ ಇಂಚೂ ಕದಲಲಿಲ್ಲ. &quot;ಕೈಯಲ್ಲಿ ಫೋನಿದೆ, ಅಕೌಂಟ್&zwnj;ನಲ್ಲಿ ಡೇಟಾ ಇದೆ ಅಂದಮಾತ್ರಕ್ಕೆ ಯಾರ ಬಗ್ಗೆ ಬೇಕಾದರೂ ಹಾದರ-ಬೀದರ ಚರ್ಚೆ ಮಾಡ್ತೀರಾ?&quot; ಎಂಬ ರಮ್ಯಾ ಅವರ ಪ್ರಶ್ನೆ ಅಲ್ಲಿ ನೆರೆದಿದ್ದವರಿಗೆ ಚುರುಕ್ ಮುಟ್ಟಿಸುವಂತಿತ್ತು. ಕ್ಷಮೆ ಕೇಳಲು ಬಂದವರತ್ತ ತಿರುಗಿಯೂ ನೋಡದ ರಮ್ಯಾ, &quot;ಇಂಟರ್ನೆಟ್ ಸಿಕ್ಕಾಗ ಬಾಯಿಗೆ ಬಂದ ಹಾಗೆ ಟೈಪ್ ಮಾಡಿದ್ದೀರಾ, ಈಗ ಕಾನೂನು ತನ್ನ ಕೆಲಸ ಮಾಡಲಿ. ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ&quot; ಎಂದು ಖಡಕ್ ಆಗಿ ಹೇಳಿಬಿಟ್ಟರು. ಇದು ಕೇವಲ ರಮ್ಯಾ ಅವರ ವೈಯಕ್ತಿಕ ಹೋರಾಟವಾಗಿರಲಿಲ್ಲ, ಬದಲಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣುಮಕ್ಕಳನ್ನು ಅವಹೇಳನ ಮಾಡುವ ಪ್ರತಿಯೊಬ್ಬರಿಗೂ ಕೊಟ್ಟ 'ವಾರ್ನಿಂಗ್ ಬೆಲ್' ಆಗಿತ್ತು.&lt;/p&gt;&lt;p&gt;ಸೈಬರ್ ಕಿಡಿಗೇಡಿಗಳಿಗೆ ಪಾಠ!&lt;/p&gt;&lt;p&gt;ಸದ್ಯ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ವಿಚಾರಣೆ ಚುರುಕುಗೊಂಡಿದೆ. &quot;ನಾನು ಎಷ್ಟು ಬಾರಿ ಬೇಕಾದರೂ ಕೋರ್ಟ್&zwnj;ಗೆ ಅಲೆದಾಡಲು ಸಿದ್ಧ, ಆದರೆ ಇಂಥವರಿಗೆ ತಕ್ಕ ಶಿಕ್ಷೆಯಾಗಲೇಬೇಕು. ಇನ್ನೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮುನ್ನ ನೂರು ಬಾರಿ ಯೋಚಿಸುವಂತಾಗಬೇಕು&quot; ಎಂಬ ರಮ್ಯಾ ಅವರ ಕಿಡಿ ಈಗ ಇಡೀ ಸ್ಯಾಂಡಲ್ ವುಡ್&zwnj;ನಲ್ಲಿ ಸಂಚಲನ ಮೂಡಿಸಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಪರದೆಯ ಮೇಲೆ ಕ್ಯೂಟ್ ಆಗಿ ಕಾಣುತ್ತಿದ್ದ 'ಪದ್ಮಾವತಿ', ಈಗ ಸೈಬರ್ ಕ್ರೈಂ ವಿರುದ್ಧ ಸೈನ್ಯ ಕಟ್ಟಿ ನಿಂತಿದ್ದು, ಟ್ರೋಲರ್ಸ್&zwnj;ಗಳಿಗೆ ನಡುಕ ಶುರುವಾಗಿದೆ. ಮುಂದೆ ಈ ಟ್ರೋಲರ್ಸ್ ಸ್ಥಿತಿ-ಗತಿ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ! ಸದ್ಯಕ್ಕಂತೂ ರಮ್ಯಾ ಕೇಸ್ ಹಿಂಪಡೆಯುವ ಲಕ್ಷಣ ಕಾಣಿಸುತ್ತಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/there-is-no-question-of-forgiveness-says-actress-ramya-declaring-a-legal-war-against-those-who-sent-her-lewd-messages/articleshow-mqqbc3l"/>
        </item>
        <item>
            <title><![CDATA[ದಾಖಲೆ ಬರೆದ ಹಳ್ಳಿ ಪವರ್ ಖ್ಯಾತಿಯ ಬೆಂಕಿ ಬಿಬಿ; ಮಾತುಗಳಿಂದಲೇ ಬಿತ್ತಾ ಆಟಕ್ಕೆ ಬ್ರೇಕ್?]]></title>
            <link>https://kannada.asianetnews.com/gallery/tv-talk/reality-show-update-zee-kannada-s-halli-power-reloaded-contestant-benki-bibi-s-elimination-promo-goes-viral-mrq-9l9uxfe</link>
            <guid isPermaLink="true">https://kannada.asianetnews.com/gallery/tv-talk/reality-show-update-zee-kannada-s-halli-power-reloaded-contestant-benki-bibi-s-elimination-promo-goes-viral-mrq-9l9uxfe</guid>
            <pubDate>Sun, 06 Sep 2026 11:00:03 +0530</pubDate>
            <description><![CDATA[&lt;p&gt;ಜೀ ಕನ್ನಡದ 'ಹಳ್ಳಿ ಪವರ್ ರಿಲೋಡೆಡ್' ಸ್ಪರ್ಧಿ ಬೆಂಕಿ ಬಿಬಿ ಅವರ ಎಲಿಮಿನೇಷನ್ ಕುರಿತ ಪ್ರೋಮೋ ವೈರಲ್ ಆಗಿದೆ. ಬಿಬಿ ನಿಜವಾಗಿಯೂ ಶೋನಿಂದ ಹೊರಬಂದಿದ್ದಾರೆಯೇ ಎಂಬ ಕುತೂಹಲವನ್ನು ಇಂದಿನ ಸಂಚಿಕೆ ತಿಳಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1tjrwg0jgeyzskrtcncsrhv,imgname-benki-bibi--3--1788672242176.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೀ ಕನ್ನಡದ 'ಹಳ್ಳಿ ಪವರ್ ರಿಲೋಡೆಡ್' ಸ್ಪರ್ಧಿ ಬೆಂಕಿ ಬಿಬಿ ಅವರ ಎಲಿಮಿನೇಷನ್ ಕುರಿತ ಪ್ರೋಮೋ ವೈರಲ್ ಆಗಿದೆ. ಬಿಬಿ ನಿಜವಾಗಿಯೂ ಶೋನಿಂದ ಹೊರಬಂದಿದ್ದಾರೆಯೇ ಎಂಬ ಕುತೂಹಲವನ್ನು ಇಂದಿನ ಸಂಚಿಕೆ ತಿಳಿಸಲಿದೆ.&lt;/p&gt;&lt;img&gt;&lt;p&gt;ಜೀ ಕನ್ನಡದ ಪವರ್&zwnj;ಫುಲ್ ರಿಯಾಲಿಟಿ ಶೋ ಆಗಿರುವ ಹಳ್ಳಿ ಪವರ್ ರಿಲೋಡೆಡ್ ಸ್ಪರ್ಧಿಯಾಗಿರೋ ಬಿಬಿ ಹಜರಾ ಉರ್ಫ್ ಬೆಂಕಿ ಬಿಬಿ ದಾಖಲೆಯೊಂದನ್ನು ಬರೆದಿದ್ದಾರೆ. ಆಟದ ಜೊತೆ ತಮ್ಮ ಅಟ್ಯಾಕಿಂಗ್ ಮಾತುಗಳಿಂದಲೇ ಬಿಬಿ ಎಲ್ಲರ ಗಮನ ಸೆಳೆದಿದ್ದಾರೆ. ವಿಷಯ ಯಾವುದೇ ಇರಲಿ? ಅಲ್ಲಿ ಬಿಬಿ ಅವರ ಬೆಂಕಿಯಂಥಾ ಮಾತುಗಳಿರುತ್ತವೆ.&lt;/p&gt;&lt;img&gt;&lt;p&gt;ಈ ಮಾತುಗಳು ಸಹ ಸ್ಪರ್ಧಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತಿರೋದು ಕಂಡು ಬರುತ್ತಿದೆ. ಈ ಹಿನ್ನೆಲೆ ವಾಡಿ ಮನೆಯ ಸ್ಪರ್ಧಿಗಳು ಒಕ್ಕೊಲರಿನಿಂದ ಬಿಬಿ ಹೆಸರು ತೆಗೆದುಕೊಂಡಿದ್ದಾರೆ. ಈ ಹೆಸರು ತೆಗೆದುಕೊಂಡಿದ್ದು ಬಿಬಿ ಈ ರಿಯಾಲಿಟಿ ಶೋನಿಂದ ಹೋಗಲಿ ಎಂಬ ಕಾರಣಕ್ಕೆ. ಇಂದು ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿಯೇ ಬಿಬಿ ಶೋನಿಂದ ಹೊರಗೆ ಹೋಗುತ್ತಿರೋದನ್ನು ತೋರಿಸಲಾಗಿದೆ.&lt;/p&gt;&lt;img&gt;&lt;p&gt;ಬೆಂಕಿ ಬಿಬಿ ಔಟ್&zwnj; ಆದಂತೆ ತೋರಿಸಲಾಗಿರುವ ಪ್ರೋಮೋ ಬಿಡುಗಡೆಯಾದ 2 ಗಂಟೆಯಲ್ಲಿ 1 ಮಿಲಿಯನ್&zwnj;ಗೂ ಅಧಿಕ ವ್ಯೂವ್ ಪಡೆದುಕೊಳ್ಳುವ ಮೂಲಕ ದಾಖಲೆ ಬರೆದಿದೆ. ಆಟಗಳಲ್ಲಿ ತನ್ನನ್ನು ಸಾಬೀತು ಮಾಡಿಕೊಂಡಿರುವ ಬಿಬಿ ನಿಜವಾಗ್ಲೂ ಶೋನಿಂದ ಹೊರಗೆ ಹೋದ್ರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.&lt;/p&gt;&lt;img&gt;&lt;p&gt;ಶನಿವಾರದ ಎಪಿಸೋಡ್&zwnj;ನಲ್ಲಿ ಹಳ್ಳಿ ಪವರ್&zwnj;ನ ಎಲ್ಲಾ ಸ್ಪರ್ಧಿಗಳು, ಅಮಿನಗಢದ ಸಂತೆಗೆ ತೆರಳಿ ವ್ಯಾಪಾರ ಮಾಡಿದ್ದರು. ಜಾನುವಾರುಗಳು ಮಾರಾಟಕ್ಕೆ ಫೇಮಸ್ ಅಗಿರೋ ಅಮಿನಗಢದ ಸಂತೆಯಲ್ಲಿ ಬಜ್ಜಿ, ಎಳನೀರು, ಜಾನುವಾರುಗಳನ್ನು ಅಲಂಕರಿಸಲು ಬಳಸುವ ಸಾಮಾಗ್ರಿ, ಟೀ/ಕಾಫಿ, ಊಟ, ಐಸ್&zwnj;ಕ್ರೀಂ ಮಾರಾಟ ಮಾಡಿದ್ದರು. ಈ ಹಿಂದಿನ ಸಂಚಿಕೆಯಲ್ಲಿ ರಾಧೆಯರಾಗಿ, ಐಹೊಳೆ ಮಕ್ಕಳೊಂದಿಗೆ ಆಟವಾಡಿದ್ದರು.&lt;/p&gt;&lt;img&gt;&lt;p&gt;ಇಂದು ಬಿಡುಗಡೆಯಾಗಿರುವ ಪ್ರೋಮೋಗೆ ಕಮೆಂಟ್ ಮಾಡಿರುವ ಶೋ ವೀಕ್ಷಕರು, ಹಳ್ಳಿ ಪವರ್&zwnj;ನಲ್ಲಿ ಬಿಬಿ ಇದ್ರೆ ಚೆಂದ, ಅಕೆಯನ್ನು ದಯವಿಟ್ಟು ಹೊರಗೆ ಕಳುಹಿಸಬೇಡಿ. ಶೋನಲ್ಲಿ ಬಿಬಿ ಇರೋದಕ್ಕೆ ಒಂದು ಎಪಿಸೋಡ್ ಮಿಸ್ ಮಾಡದೇ ನೋಡಿದ್ದೀವಿ. ಒಂದು ವೇಳೆ ಬಿಬಿ ಹೋದ್ರೆ ಶೋ ನೋಡಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಬರೀ ಮಾತಾಡಿದ್ರೆ ಅಲ್ಲಮ್ಮಾ, ಆಟವೂ ಆಡಬೇಕು ಎಂದು ಬರೆದಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/reality-show-update-zee-kannada-s-halli-power-reloaded-contestant-benki-bibi-s-elimination-promo-goes-viral-mrq-9l9uxfe"/>
        </item>
    </channel>
</rss>
