<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 18 Aug 2026 19:18:03 +0530</lastBuildDate>
        <atom:link href="https://kannada.asianetnews.com/rss/entertainment" rel="self" type="application/rss+xml"/>
        <item>
            <title><![CDATA[ಟಾಕ್ಸಿಕ್ ಬಿಡುಗಡೆ 7 ದಿನ ಬಾಕಿ ಇರುವಾಗಲೇ ಅಡ್ವಾನ್ಸ್ ಬುಕಿಂಗ್‌ನಲ್ಲಿ ಅಮೆರಿಕದಲ್ಲಿ ಯಶ್ ಹೊಸ ದಾಖಲೆ]]></title>
            <link>https://kannada.asianetnews.com/entertainment/rocking-star-yash-toxic-movie-usa-advance-booking-crosses-120k-dollars/articleshow-g3nll95</link>
            <guid isPermaLink="true">https://kannada.asianetnews.com/entertainment/rocking-star-yash-toxic-movie-usa-advance-booking-crosses-120k-dollars/articleshow-g3nll95</guid>
            <pubDate>Tue, 18 Aug 2026 19:17:57 +0530</pubDate>
            <description><![CDATA[&lt;p&gt;ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿ. ಅಷ್ಟರಲ್ಲೇ ಅಮೆರಿಕದಲ್ಲಿ ರಾಕಿ ಬಾಯ್ ಹೊಸ ದಾಖಲೆ ನಿರ್ಮಾಣ ಮಾಡಿದ್ದರೆ, ಅಡ್ವಾನ್ಸ್ ಬುಕಿಂಗ್&zwnj;ನಲ್ಲಿ ಯಶ್ ಟಾಕ್ಸಿಕ್ ಸಿನಿಮಾ ಬರೆದ ದಾಖಲೆ ಏನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzk8ht9bacn0xsamv9xkfnpy,imgname-toxic-star-cast-fees-1786279160107.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.18)&lt;/strong&gt; ಕನ್ನಡಿಗರು ಮಾತ್ರವಲ್ಲ ದೇಶ ವಿದೇಶಗಳ ಪ್ರೇಕ್ಷಕರು ಇದೀಗ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಆಗಸ್ಟ್ 26ರಂದು ಟಾಕ್ಸಿಕ್ ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಬಿಡುಗಡೆ ಕೆಲವೇ ದಿನಗಳ ಮೊದಲೇ ಯಾಕ್ಸಿಕ್ ಅಮೆರಿಕದಲ್ಲಿ ಹೊಸ ದಾಖಲೆ ಬರೆದಿದೆ. ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಸಿನಿಮಾ ಮಾರ್ಕೆಟ್&zwnj;ನಲ್ಲಿ ಟಾಕ್ಸಿಕ್ ಹೊಸ ದಾಖಲೆ ಬರೆದಿದೆ. ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಇದೀಗ ಗ್ಲೋಬಲ್ ಸ್ಟಾರ್ ಆಗಿ ಮಿಂಚಿದ್ದಾರೆ.&lt;/p&gt;&lt;h2&gt;ಅಮೆರಿಕದಲ್ಲಿ $120,000 ದಾಟಿದ ಅಡ್ವಾನ್ಸ್ ಬುಕಿಂಗ್&lt;/h2&gt;&lt;p&gt;ಟಾಕ್ಸಿಕ್ ಸಿನಿಮಾ ಇದೀಗ ಅಮೆರಿಕದಲ್ಲಿ ಸಿನಿಮಾ ಮಾರ್ಕೆಟ್ ಆಕ್ರಮಿಸಿಕೊಂಡಿದೆ. ಬಿಡುಗಡೆಗೂ ಮೊದಲೇ ಅಡ್ವಾನ್ಸ್ ಬುಕಿಂಗ್ $120,000 ಡಾಲರ್ (1 ಕೋಟಿ ರೂಪಾಯಿಗೂ ಅಧಿಕ) ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗೂ ಇನ್ನೂ ಒಂದು ವಾರ ಬಾಕಿ ಇರುವಂತೆ ಭಾರಿ ಬುಕಿಂಗ್ ಪಡೆದುಕೊಂಡಿದೆ. ಈ ಮೂಲಕ ಯಶ್ ಅಂತಾರಾಷ್ಟ್ರೀಯ ಸಿನಿಮಾ ಮಾರುಕಟ್ಟೆಯಲ್ಲೂ ಭಾರಿ ಕ್ರೇಜ್ ಹುಟ್ಟು ಹಾಕಿದ್ದಾರೆ.&lt;/p&gt;&lt;p&gt;ಅಮೆರಿಕದಲ್ಲಿ ಮಂಗಡ ಬುಕಿಂಗ್&zwnj;ನಲ್ಲಿ ದಾಖಲೆ ಬರೆದ ಯಶ್ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲೂ ಭರ್ಜರಿ ಬೇಡಿಕೆ ವ್ಯಕ್ತವಾಗುತ್ತಿದೆ. ವಿದೇಶಿ ಸಿನಿ ಪ್ರೇಕ್ಷಕರು ಟಾಕ್ಸಿಕ್ ಸಿನಿಮಾಗೆ ಕಾಯುತ್ತಿದ್ದಾರೆ. ವಿದೇಶಗಳಲ್ಲಿ ಅಡ್ವಾನ್ಸ್ ಬುಕಿಂಗ್&zwnj;ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತ್ವರಿತವಾಗಿ ಟಿಕೆಟ್&zwnj;ಕಳು ಬುಕಿಂಗ್ ಆಗುತ್ತಿದೆ. ವಿಶ್ವದೆಲ್ಲೆಡೆ ನೆಲೆಸಿರುವ ಭಾರತೀಯರು ಯಶ್ ಟಾಕ್ಸಿಕ್ ಸಿನಿಮಾಗೆ ಕಾಯುತ್ತಿದ್ದಾರೆ. ಕೆಜಿಎಫ್ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿರುವ ಯಶ್ ಇದೀಗ ಟಾಕ್ಸಿಕ್ ಮೂಲಕ ಗ್ಲೋಬಲ್ ಸ್ಟಾರ್ ಆಗುವತ್ತ ಹೊರಟಿದ್ದಾರೆ.&lt;/p&gt;&lt;p&gt;ಟಾಕ್ಸಿಕ್ ಸಿನಿಮಾ ಕುರಿತ ಕುತೂಹಲ ಹೆಚ್ಚಾಗುತ್ತಿದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿದೆ. ಟೀಸರ್, ಟ್ರೇಲರ್ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಏಕಾಕಲಕ್ಕೆ ಸಿನಿಮಾ ಚಿತ್ರೀಕರಣಗೊಂಡಿದೆ. ಇನ್ನು ಹಿಂದಿ, ತಮಿಳು, ತೆಲುಗು ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಕುರೇಷಿ ಸೇರಿದಂತೆ ಅತೀ ದೊಡ್ಡ ಸ್ಟಾರ್ ಬಳಗವಿದೆ. ಅಂತಾರಾಷ್ಟ್ರೀಯ ಬಾಕ್ಸ್ ಆಫೀಸ್&zwnj;ನಲ್ಲಿ ಹೊಸ ದಾಖಲೆ ಬರೆಯಲು ಟಾಕ್ಸಿಕ್ ಸಜ್ಜಾಗಿದೆ. ಗೀತು ಮೋಹನ್&zwnj;ದಾಸ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್&zwnj;ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದ 'ಟಾಕ್ಸಿಕ್ ಪ್ಯಾನ್ ಗ್ಲೋಬಲ್ ಸ್ಟಾರ್ ಮಾಡುವುದರಲ್ಲಿ ಅನುಮಾನವಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Chethan Kumar</dc:creator>
            <atom:link href="https://kannada.asianetnews.com/entertainment/rocking-star-yash-toxic-movie-usa-advance-booking-crosses-120k-dollars/articleshow-g3nll95"/>
        </item>
        <item>
            <title><![CDATA[ಗಿಲ್ಲಿ ನಿಮ್ಮ ಕ್ರಶ್ಶಾ ಕೇಳ್ದೋರಿಗೆ ಮುಟ್ಟಿಕೊಳ್ಳೋ ಉತ್ತರ ಕೊಟ್ಟ Rakshita Shetty: ಮತ್ತೆ ಪ್ರಶ್ನೆ ಕೇಳೋ ಸಾಹಸ ಮಾಡಲ್ಲ]]></title>
            <link>https://kannada.asianetnews.com/relationship/rakshita-shettys-strong-answer-for-those-who-asked-about-gilli-nata-and-crush-suc/articleshow-9unfl4t</link>
            <guid isPermaLink="true">https://kannada.asianetnews.com/relationship/rakshita-shettys-strong-answer-for-those-who-asked-about-gilli-nata-and-crush-suc/articleshow-9unfl4t</guid>
            <pubDate>Tue, 18 Aug 2026 18:44:53 +0530</pubDate>
            <description><![CDATA[ಬಿಗ್&zwnj;ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ, ತಮಗೂ ಗಿಲ್ಲಿ ನಟನಿಗೂ ಇರುವ ಸಂಬಂಧದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಂದ ಬೇಸತ್ತಿದ್ದಾರೆ. 'ಕ್ರಷ್' ಇದೆಯೇ ಎಂಬ ಪ್ರಶ್ನೆಗೆ, ಮೀನಿನ ಸಾಂಬಾರಿಗೆ ಮಸಾಲೆ ಅರೆಯುವುದನ್ನು 'ಕ್ರಷ್' ಎನ್ನುತ್ತೇವೆ ಎಂದು ಉತ್ತರಿಸಿ, ಸ್ನೇಹವನ್ನು ಕೇವಲ ಪ್ರೀತಿಯ ದೃಷ್ಟಿಯಿಂದ ನೋಡುವವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ag4zkdb1g0y1cgfdk73zxx,imgname-rakshita-shetty-1787058880109.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಷೋ ಅಥವಾ ಸೀರಿಯಲ್​ಗಳಲ್ಲಿ ಒಂದು ಜೋಡಿ ಫೇಮಸ್​ ಆಯ್ತು ಎಂದಾಕ್ಷಣ, ಅವರಿಬ್ಬರ ಮಧ್ಯೆ ಸಂಬಂಧ ತಂದು, ಅದನ್ನು ಅಸಹ್ಯ ಎನ್ನುವಷ್ಟರಮಟ್ಟಿಗೆ ಮುಂದಕ್ಕೆ ಕರೆದುಕೊಂಡು ಹೋಗುವ ದೊಡ್ಡ ವರ್ಗವೇ ಇದೆ. ಗಂಡು-ಹೆಣ್ಣು ಒಟ್ಟಿಗೆ ಇದ್ದರೆ ಸಾಕು, ಅವರಿಗೆ ಮುಜುಗರ ಆಗುವಂಥ ಪ್ರಶ್ನೆ ಕೇಳುವ ಚಾಳಿ ಹಲವರದ್ದು. ಕೆಲವೊಮ್ಮೆ ಎಐ ಫೋಟೋದ ಮೂಲಕ, ಆ ನಟ-ನಟಿಯರಿಗೆ ಅಸಹ್ಯ ಆಗುವಂಥ ಚಿತ್ರಗಳನ್ನು ತಾವೇ ಚಿತ್ರಿಸುವುದು ಉಂಟು. ಸ್ನೇಹವನ್ನು ಕೂಡ ಬರೀ ಲವರ್ಸ್​ ದೃಷ್ಟಿಯಲ್ಲಿಯೇ ನೋಡುವ ಮನಸ್ಥಿತಿಯವರು ಹಲವರು. ಅವರ ತಲೆಯಲ್ಲಿ ತುಂಬಿರುವುದು ಇಂಥ ವಿಚಾರಗಳೇ. ಅದಕ್ಕಾಗಿ ಎಲ್ಲಿಯಾದರೂ, ಸೆಲೆಬ್ರಿಟಿಗಳು ಕಂಡಾಗ ಬೇರೊಬ್ಬರ ಹೆಸರು ಹೇಳಿ ಸಂಬಂಧಗಳ ಬಗ್ಗೆ ಕೇಳುತ್ತಾ ಅವರಿಗೆ ಮುಜುಗರ ಮಾಡುತ್ತಾರೆ.&lt;/p&gt;&lt;p&gt;ಅದೇ ರೀತಿ, ಬಿಗ್​ಬಾಸ್​ 12ರಲ್ಲಿ ಸದ್ದು ಮಾಡಿದ್ದ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿಗೂ ಇಂಥದ್ದೇ ಪ್ರಶ್ನೆಗಳು ಎದುರಾಗುತ್ತವೆ. ತಮಗೆ ಗಿಲ್ಲಿ ನಟನಂಥ ಹುಡುಗ ಬೇಕು ಎಂದು ರಕ್ಷಿತಾ (Bigg Boss Rakshita Shetty) ಹೇಳಿದ ಮಾತುಗಳನ್ನೇ ಇಟ್ಟುಕೊಂಡು, ಆಕೆ ಹೋದಲ್ಲಿ, ಬಂದಲ್ಲಿ ಗಿಲ್ಲಿ ನಟನ ಪ್ರಶ್ನೆ ಕೇಳಲಾಗುತ್ತದೆ. ಆದರೆ ತುಳುನಾಡಿನ ಈ ಬೆಡಗಿ ಪ್ರತಿಬಾರಿಯೂ ತನ್ನದೇ ಆದ ರೀತಿಯಲ್ಲಿ ಪ್ರಶ್ನೆ ಕೇಳಿದವರನ್ನು ಕಕ್ಕಾಬಿಕ್ಕಿ ಮಾಡುವುದು ಉಂಟು. ಇದೀಗ ಅಂಥದ್ದೇ ಇನ್ನೊಂದು ಪ್ರಶ್ನೆಗೆ ಉತ್ತರಿಸಿರುವ ರಕ್ಷಿತಾ, ಪ್ರಶ್ನೆ ಕೇಳಿದವರು ಮುಟ್ಟಿಕೊಳ್ಳುವ ಹಾಗೆ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಮೀನಿನ ಸಾಂಬಾರ್ ಮಾಡುವಾಗ...&lt;/strong&gt;&lt;/h2&gt;&lt;p&gt;ನಿಮಗೆ ಗಿಲ್ಲಿಯ ಮೇಲೆ ಕ್ರಷ್​ ಇದ್ಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇದರಿಂದ ಗರಂ ಆದ ರಕ್ಷಿತಾ ಕ್ರಷ್​ ಎಂದ್ರೆ ಏನು ಎಂದು ಪ್ರಶ್ನಿಸಿದ್ದಾರೆ. ಕ್ರಷ್​ ಎಂದರೆ ಜಸ್ಟ್​ ಇಷ್ಟ ಆಯ್ತು ಅಂತ ಅಷ್ಟೇ ಎಂದು ಉತ್ತರ ಬಂತು. ಅದಕ್ಕೆ ರಕ್ಷಿತಾ ಶೆಟ್ಟಿ, ನಮ್ಮ ಕಡೆ ಮೀನಿನ ಸಾಂಬಾರು ಮಾಡುವಾಗ ಎಲ್ಲಾ ಮಸಾಲೆ ಹಾಕಿ ಅದನ್ನು ಪುಡಿ ಪುಡಿ ಮಾಡ್ತೇವೆ, ಅದಕ್ಕೆ ಕ್ರಷ್​ ಅಂತೇವೆ, ನೀವು ಹೇಳ್ತಿರೋದು ನನಗೆ ಅರ್ಥ ಆಗ್ತಿಲ್ಲಾ ಎಂದಾಗ, ಪುನಃ ಅಲ್ಲಿದ್ದೋರು ಸುಮ್ಮನೇ ಇಷ್ಟ ಆಯ್ತು ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಇಷ್ಟ ಎಂದ್ರೆ ಏನರ್ಥ?&lt;/strong&gt;&lt;/h3&gt;&lt;p&gt;ಅದಕ್ಕೆ ರೊಚ್ಚಿಗೆದ್ದ ರಕ್ಷಿತಾ, ಇಷ್ಟ ಆಯ್ತು ಅಂದರೆ ಏನು, ನನಗೆ ಎಲ್ಲರೂ ಇಷ್ಟ ಆಗ್ತಾರೆ. ಅಣ್ಣ-ತಂಗಿ ಸಂಬಂಧದಲ್ಲೂ ಇಷ್ಟ ಇದೆ. ಸ್ನೇಹದಲ್ಲೂ ಇಷ್ಟ ಇದೆ. ಗಂಡ-ಹೆಂಡತಿನೂ ಇಷ್ಟ ಪಡ್ತಾರೆ. ಅದರಲ್ಲಿ ಏನಿದೆ ಎಂದು ಸ್ನೇಹ ಎನ್ನೋದನ್ನು ಬರೀ ಕಾಮುಕ ದೃಷ್ಟಿಯಿಂದಲೇ ನೋಡುವವರಿಗೆ ತಿರುಗೇಟು ನೀಡಿ, ಅವರ ಬಾಯಿ ಮುಚ್ಚಿಸಿದ್ದಾರೆ ರಕ್ಷಿತಾ ಶೆಟ್ಟಿ. ಬೆಂಕಿ ಉತ್ತರ ಇದು ಎಂದು ಕಮೆಂಟ್ಸ್​ ಸುರಿಮಳೆಯೇ ಸುರಿಯುತ್ತಿದೆ. ಎಲ್ಲವೂ ಒಂದು ಹಂತಕ್ಕೆ ಚೆಂದ. ಪದೇ ಪದೇ ಅದೇ ಪ್ರಶ್ನೆ ಕೇಳಿ ಸೆಲೆಬ್ರಿಟಿಗಳನ್ನು ಮುಜುಗರ ಉಂಟು ಮಾಡಬೇಡಿ, ನಿಮ್ಮ ಈ ಬುದ್ಧಿ ಪದೇಪದೇ ತೋರಿಸಬೇಡಿ ಎಂದೆಲ್ಲಾ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/rakshita-shettys-strong-answer-for-those-who-asked-about-gilli-nata-and-crush-suc/articleshow-9unfl4t"/>
        </item>
        <item>
            <title><![CDATA[ಟಾಕ್ಸಿಕ್‌ ಯಶಸ್ಸಿಗಾಗಿ ತಿರುಪತಿಯಲ್ಲಿ ಮುಡಿ ಕೊಟ್ರಾ ಲೇಡಿ ಸೂಪರ್‌ಸ್ಟಾರ್‌ ನಯನತಾರಾ? ಏನಿದು ಫೋಟೋ ರಹಸ್ಯ?]]></title>
            <link>https://kannada.asianetnews.com/viral/nayanthara-tirupati-bald-look-viral-photo-fact-check-toxic-san/articleshow-ex03sop</link>
            <guid isPermaLink="true">https://kannada.asianetnews.com/viral/nayanthara-tirupati-bald-look-viral-photo-fact-check-toxic-san/articleshow-ex03sop</guid>
            <pubDate>Tue, 18 Aug 2026 18:27:27 +0530</pubDate>
            <description><![CDATA[ನಟಿ ನಯನತಾರಾ ಅವರು 'ಟಾಕ್ಸಿಕ್' ಸಿನಿಮಾದ ಯಶಸ್ಸಿಗಾಗಿ ತಿರುಪತಿಯಲ್ಲಿ ಮುಡಿ ಕೊಟ್ಟಿದ್ದಾರೆ ಎನ್ನಲಾದ ಫೋಟೋಗಳು ವೈರಲ್ ಆಗಿವೆ. ಆದರೆ, ಈ ಫೋಟೋಗಳು ಸಂಪೂರ್ಣ ನಕಲಿಯಾಗಿದ್ದು, ಎಐ ತಂತ್ರಜ್ಞಾನ ಬಳಸಿ ಹಳೆಯ ಚಿತ್ರಗಳನ್ನು ಮಾರ್ಫ್ ಮಾಡಿ ಸೃಷ್ಟಿಸಲಾಗಿದೆ ಎಂಬ ಸತ್ಯ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0af2czd9eyyv8s7bp8habbh,imgname-nayantara-1787057746925.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.18): &lt;/strong&gt;ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್', ಬಾಲಿವುಡ್&zwnj;ನ 'SVC63' ಹಾಗೂ 'ಹಾಯ್' ನಂತಹ ಪ್ರಮುಖ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಫೋಟೋ ಸಿರೀಸ್&zwnj; ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ನಯನತಾರಾ ತಮ್ಮ ಮುಡಿ ಕೊಟ್ಟಿದ್ದಾರೆ (ಮುಂಡನ ಮಾಡಿಸಿಕೊಂಡಿದ್ದಾರೆ) ಎನ್ನಲಾದ ಚಿತ್ರಗಳು ಸೋಶಿಯಲ್&zwnj; ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹರಿದಾಡುತ್ತಿವೆ.&lt;/p&gt;&lt;p&gt;'ಟಾಕ್ಸಿಕ್' ಸೇರಿದಂತೆ ತಮ್ಮ ಮುಂಬರುವ ಸಿನಿಮಾಗಳ ಯಶಸ್ಸಿಗಾಗಿ ನಯನತಾರಾ ಅವರು ಶ್ರೀವಾರಿಗೆ ಮುಡಿ ಅರ್ಪಿಸಿದ್ದಾರೆ ಎಂದೇ ಅಭಿಮಾನಿಗಳು ಭಾವಿಸಿ ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಆದರೆ, ಈ ಫೋಟೋಗಳ ಪೋಸ್ಟ್ ಮಾರ್ಟಮ್ ಮಾಡಿದಾಗ ಇದರ ಹಿಂದಿರುವ ಅಸಲಿ ರಹಸ್ಯ ಬಯಲಾಗಿದೆ!&lt;/p&gt;&lt;h2&gt;&lt;strong&gt;ಫೋಟೋಗಳ ಹಿಂದಿರುವ ಅಸಲಿ ರಹಸ್ಯವೇನು?&lt;/strong&gt;&lt;/h2&gt;&lt;p&gt;ನೆಟ್ಟಿಗರು ಹಾಗೂ ಫ್ಯಾಕ್ಟ್ ಚಾಕ್ ನಡೆಸಿದಾಗ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋಗಳು ಸಂಪೂರ್ಣ ನಕಲಿ (Fake) ಎಂಬುದು ಸಾಬೀತಾಗಿದೆ. ಕೃತಕ ಬುದ್ಧಿಮತ್ತೆ ಅಥವಾ ಎಐ (Artificial Intelligence) ತಂತ್ರಜ್ಞಾನವನ್ನು ಬಳಸಿಕೊಂಡು ಈ ಫೋಟೋಗಳನ್ನು ಸೃಷ್ಟಿಸಲಾಗಿದೆ.&lt;/p&gt;&lt;p&gt;&lt;strong&gt;ಜೆಮಿನಿ ವಾಟರ್&zwnj;ಮಾರ್ಕ್ ಪತ್ತೆ&lt;/strong&gt;: ವೈರಲ್ ಆಗಿರುವ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದರ ಮೇಲೆ ಎಐ ಇಮೇಜ್ ಜನರೇಟರ್ 'ಜೆಮಿನಿ' (Gemini) ವಾಟರ್&zwnj;ಮಾರ್ಕ್ ಇರುವುದು ಕಂಡುಬಂದಿದೆ.&lt;/p&gt;&lt;p&gt;&lt;strong&gt;ಹಳೆಯ ಫೋಟೋಗಳ ಮಾರ್ಫಿಂಗ್: &lt;/strong&gt;ಕಳೆದ ಏಪ್ರಿಲ್ ತಿಂಗಳಿನಲ್ಲಿ ನಯನತಾರಾ ಅವರು ತಮ್ಮ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ತೆಗೆಯಲಾಗಿದ್ದ ಅಸಲಿ ಫೋಟೋಗಳನ್ನು ಎಐ ಟೂಲ್ ಬಳಸಿ ಎಡಿಟ್ ಮಾಡಲಾಗಿದ್ದು, ನಯನತಾರಾ ಮುಡಿ ಕೊಟ್ಟಿರುವ ರೀತಿಯಲ್ಲಿ ನಕಲಿ ಚಿತ್ರವನ್ನು ಹೆಣೆಯಲಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, 'ಟಾಕ್ಸಿಕ್' ಸಿನಿಮಾಗಾಗಿ ನಯನತಾರಾ ಮುಡಿ ಕೊಟ್ಟಿದ್ದಾರೆ ಎನ್ನುವುದೆಲ್ಲಾ ಎಐ ತಂತ್ರಜ್ಞಾನದಿಂದ ಸೃಷ್ಟಿಯಾದ ವದಂತಿಯಷ್ಟೇ.&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/viral/nayanthara-tirupati-bald-look-viral-photo-fact-check-toxic-san/articleshow-ex03sop"/>
        </item>
        <item>
            <title><![CDATA[ಜೈಲಿನಲ್ಲಿ ದರ್ಶನ್ ಭೇಟಿಯಾದ ವಿಜಯಲಕ್ಷ್ಮೀ, ತಾಯಿ ಮೀನಾ: ಧನ್ವೀರ್ ಕೂಡ ಭೇಟಿ, ಕುತೂಹಲ!]]></title>
            <link>https://kannada.asianetnews.com/bengaluru-urban/vijayalakshmi-and-mother-meena-meet-darshan-in-jail-dhanveer-also-visits-sparks-curiosity-gkn/articleshow-wg1lpkn</link>
            <guid isPermaLink="true">https://kannada.asianetnews.com/bengaluru-urban/vijayalakshmi-and-mother-meena-meet-darshan-in-jail-dhanveer-also-visits-sparks-curiosity-gkn/articleshow-wg1lpkn</guid>
            <pubDate>Tue, 18 Aug 2026 18:22:44 +0530</pubDate>
            <description><![CDATA[&lt;p&gt;ಕಾನೂನು ಹೋರಾಟದಲ್ಲಿ ಹಿನ್ನಡೆ, ಸೊಳ್ಳೆ ಕಾಟ, ಜೈಲಲ್ಲಿನ ಕಿರಿಕಿರಿ ಸೇರಿದಂತೆ ಅನೇಕ ನೋವುಗಳನ್ನು ಅನುಭವಿಸುತ್ತಿದ್ದ ನಟ ದರ್ಶನ್&zwnj;ಗೆ ಇವತ್ತು ಕೊಂಚ ಸಮಾಧಾನ ಸಿಕ್ಕಿದೆ. ಕುಟುಂಬಸ್ಥರ ಭೇಟಿ ಹಿನ್ನೆಲೆಯಲ್ಲಿ ಮಾನಸಿಕವಾಗಿ ಗಟ್ಟಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0aekwd0mwfz0frsy8cyjz0v,imgname-viajyalakshami-darshan-and-dhanveer-1787057271200.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರೇಣುಕಾಸ್ವಾಮಿ ಪ್ರಕರಣದಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್ ಭೇಟಿಗೆ ಅವರ ಕುಟುಂಬ ಆಗಮಿಸಿತ್ತು.&lt;/p&gt;&lt;h2&gt;&lt;strong&gt;ಒಂದೇ ಬಾರಿಗೆ ಜೈಲಿಗೆ ಬಂದ ಪತ್ನಿ, ತಾಯಿ ಮತ್ತು ಧನ್ವೀರ್!&lt;/strong&gt;&lt;/h2&gt;&lt;p&gt;ಇಂದು ಬೆಳಿಗ್ಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi) ಮತ್ತು ತಾಯಿ ಮೀನಾ (Meena) ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದರು. ಮಗನ ಆರೋಗ್ಯ ಮತ್ತು ಜೈಲಿನ ಸ್ಥಿತಿಗತಿ ವಿಚಾರಿಸಲು ತಾಯಿ ಮೀನಾ ಅವರು ಕಾರಿನಲ್ಲಿ ಆಗಮಿಸಿದರೆ ಪತ್ನಿ ವಿಜಯಲಕ್ಷ್ಮೀ ಅವರು ಚೆಕ್ ಪೋಸ್ಟ್&zwnj;ನಿಂದ ನಡೆದುಕೊಂಡೇ ಜೈಲು ಆವರಣದತ್ತ ತೆರಳಿದರು. ಇದೇ ಸಮಯದಲ್ಲಿ ಸ್ಯಾಂಡಲ್&zwnj;ವುಡ್ ನಟ ಧನ್ವೀರ್ (Dhanveer) ಕೂಡ ಜೈಲಿಗೆ ಆಗಮಿಸಿದ್ದು ಹಲವು ಚರ್ಚೆಗಳಿಗೆ ಕಾರಣವಾಗಿದೆ.&lt;/p&gt;&lt;p&gt;ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್&zwnj;ಗೆ ಸತತ ಹಿನ್ನಡೆ ಆಗ್ತಿದೆ. ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಬದುಕುತ್ತಿರುವ ದರ್ಶನ್, ಕಾನೂನು ಹೋರಾಟದಲ್ಲಿ ಮತ್ತೆ ಮತ್ತೆ ಫೇಲ್ ಆಗುತ್ತಿದ್ದಾರೆ. ಇದರ ಮಧ್ಯೆ ಅವರ ಗ್ಯಾಂಗ್&zwnj;ನಲ್ಲಿರುವ ಕೆಲವು ಸದಸ್ಯರು ದರ್ಶನ್ ವಿರುದ್ಧವೇ ಸಾಕ್ಷ್ಯ ಹೇಳಲು ತಿರುಗಿಬಿದ್ದಿದ್ದಾರೆ. ಇದು ದರ್ಶನ್&zwnj;ಗೆ ದೊಡ್ಡ ಆಘಾತ ತಂದಿದೆ.&lt;/p&gt;&lt;p&gt;ಜೊತೆಗೆ ದರ್ಶನ್&zwnj; ಅವರು ಜೈಲಿನಲ್ಲಿ ಕೆಲವು ವ್ಯವಸ್ಥೆಗಳನ್ನ ಕೇಳಿದ್ದರು. ಜೈಲಿನ ಕಠಿಣ ನಿಯಮಗಳ ಪ್ರಕಾರ ಅದೂ ಕೂಡ ಅವರಿಗೆ ಸಿಕ್ಕಿಲ್ಲ. ಇದರ ಮಧ್ಯೆ ಸೊಳ್ಳೆ ಕಾಟದಿಂದ ನಿದ್ದೆ ಕೂಡ ಬರುತ್ತಿಲ್ಲ. ಇದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂಬ ವರದಿಗಳಿವೆ. ಇದೀಗ ಕುಟುಂಬಸ್ಥರ ಭೇಟಿ ಹಿನ್ನೆಲೆಯಲ್ಲಿ ದರ್ಶನ್&zwnj;ಗೆ ಕೊಂಚ ಸಮಾಧಾನ ತಂದಿದೆ.&lt;/p&gt;]]></content:encoded>
            <category>entertainment</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/vijayalakshmi-and-mother-meena-meet-darshan-in-jail-dhanveer-also-visits-sparks-curiosity-gkn/articleshow-wg1lpkn"/>
        </item>
        <item>
            <title><![CDATA[ಕುಲದೇವಿ ದರ್ಶನಕ್ಕಾಗಿ ಮೊದಲ ಬಾರಿ ಗಂಡನ ಜೊತೆ ಕೇರಳಕ್ಕೆ ತೆರಳಿದ ನಟಿ ವೈಷ್ಣವಿ ಗೌಡ]]></title>
            <link>https://kannada.asianetnews.com/gallery/tv-talk/vaishnavi-gowda-visits-kerala-to-kuladevi-darshana-with-husband-39o473g</link>
            <guid isPermaLink="true">https://kannada.asianetnews.com/gallery/tv-talk/vaishnavi-gowda-visits-kerala-to-kuladevi-darshana-with-husband-39o473g</guid>
            <pubDate>Tue, 18 Aug 2026 17:48:23 +0530</pubDate>
            <description><![CDATA[&lt;p&gt;Vaishnavi Gowda: ನಟಿ ವೈಷ್ಣವಿ ಗೌಡ, ಈಗಷ್ಟೇ ಉದಯ ಟಿವಿ ಸೀರಿಯಲ್ ಮೂಲಕ ಮತ್ತೊಮ್ಮೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದರು. ಇದೀಗ ಶಾರ್ಟ್ ಬ್ರೇಕ್ ತೆಗೆದುಕೊಂಡು ಗಂಡನ ಜೊತೆ ಕೇರಳಕ್ಕೆ ತೆರಳಿ ತಮ್ಮ ಕುಲ ದೇವಿಯ ದರ್ಶನ ಪಡೆದು ಬಂದಿದ್ದಾರೆ ನಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0acvkjzwd4kcpfnds5kb13c,imgname-vaishnavi-gowda-1787055427165.jpg" type="image/jpeg" height="390" width="690"/>
            <content:encoded><![CDATA[&lt;p&gt;Vaishnavi Gowda: ನಟಿ ವೈಷ್ಣವಿ ಗೌಡ, ಈಗಷ್ಟೇ ಉದಯ ಟಿವಿ ಸೀರಿಯಲ್ ಮೂಲಕ ಮತ್ತೊಮ್ಮೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದರು. ಇದೀಗ ಶಾರ್ಟ್ ಬ್ರೇಕ್ ತೆಗೆದುಕೊಂಡು ಗಂಡನ ಜೊತೆ ಕೇರಳಕ್ಕೆ ತೆರಳಿ ತಮ್ಮ ಕುಲ ದೇವಿಯ ದರ್ಶನ ಪಡೆದು ಬಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ, ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ. ಇದೀಗ ತಮ್ಮ ಬ್ಯುಸಿ ಸೀರಿಯಲ್ ಶೆಡ್ಯೂಲ್ ನಡುವೆ ನಟಿ ಬ್ರೇಕ್ ತೆಗೆದುಕೊಂಡು ಕುಲದೇವಿ ದರ್ಶನ ಪಡೆದು ಬಂದಿದ್ದಾರೆ. ತಮ್ಮ ಪತಿ ಜೊತೆಗಿನ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೇರಳದ ನಮ್ಮ ಕುಲದೇವಿ ದೇವಸ್ಥಾನಕ್ಕೆ ನಮ್ಮ ಮೊದಲ ಭೇಟಿ. ಆಶೀರ್ವಾದಗಳನ್ನು ಹುಡುಕುವುದು, ಪ್ರಶಾಂತವಾದ ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸುವುದು ಮತ್ತು ಕುಟುಂಬವಾಗಿ ಒಟ್ಟಿಗೆ ಅಮೂಲ್ಯ ಸಮಯವನ್ನು ಕಳೆಯುವ ಸುಂದರ ಅನುಭವ. ಕೆಲವು ಪ್ರಯಾಣಗಳು ನಾವು ಭೇಟಿ ನೀಡುವ ಸ್ಥಳಗಳಿಗೆ ಮಾತ್ರವಲ್ಲ, ದಾರಿಯುದ್ದಕ್ಕೂ ನಾವು ಸೃಷ್ಟಿಸುವ ನೆನಪುಗಳಿಗೂ ವಿಶೇಷವಾಗಿರುತ್ತದೆ ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವೈಷ್ಣವಿ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ಫೋಟೋಗಳಲ್ಲಿ ನಟಿ ಕೇರಳ ಕಸುವು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಲೆ ತುಂಬ ದುಂಡು ಮಲ್ಲಿಗೆ ಮುಡಿದು, ಜುಮುಕಿ ಧರಿಸಿ, ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತಿ ಅನುಕೂಲ್ ಮಿಶ್ರಾ ಪಂಚೆ ಹಾಗೂ ಶಾಲು ಧರಿಸಿ ಫೋಟೊಗೆ ಹೆಂಡ್ತಿ ಜೊತೆ ಪೋಸ್ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಇಬ್ಬರೂ ಸಹ ಟ್ರಾವೆಲ್ ಪ್ರಿಯರಾಗಿದ್ದು, ಹೆಚ್ಚಾಗಿ ದೇಶದ ವಿವಿಧ ಸುಂದರ ತಾಣಗಳನ್ನು ಜೊತೆಯಾಗಿ ಎಕ್ಸ್ ಪ್ಲೋರ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಈ ಜೋಡಿ ಮೇಘಾಲಯದ ಸುಂದರ ಜಾಗವನ್ನು ಎಕ್ ಪ್ಲೋರ್ ಮಾಡಿ ಬಂದಿದ್ದರು. ಅಲ್ಲಿನ ಪ್ರಕೃತಿ ಜೊತೆ ಕಳೆದು ಹೋಗಿದ್ದರು. ಇದೀಗ ಕೇರಳದ ಸೌಂದರ್ಯಕ್ಕೆ ಮನ ಸೋತಿದ್ದಾರೆ ಜೋಡಿ.&lt;/p&gt;&lt;img&gt;&lt;p&gt;ವೈಷ್ಣವಿ ಗೌಡ, ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ &lsquo;ಗೆಳತಿ ಗಾಯತ್ರಿ&rsquo;ಯಲ್ಲಿ ಪಾರ್ವತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲ್ಯದಲ್ಲಿಜೊತೆಯಾಗಿದ್ದ ಗೆಳತಿ ಗಾಯತ್ರಿಯನ್ನು ಹುಡುಕುವ ಪ್ರಯತ್ನದಲ್ಲಿರುವ, ಅದಕ್ಕಾಗಿ ಪ್ರತಿ ವರ್ಷ ರಿ ಯೂನಿಯನ್ ಮಾಡುತ್ತಿರುವ ಶ್ರೀಮಂತ ಮನೆಯ ಹುಡುಗಿ ಹಾಗೂ ಪ್ರೀತಿ ಮಾಡುವ ಗಂಡ ಮುದ್ದಾದ ಮಗುವಿನ ಅಮ್ಮ ಪಾರ್ವತಿಯಾಗಿ ವೈಷ್ಣವಿ ಗೌಡ ನಟಿಸುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/vaishnavi-gowda-visits-kerala-to-kuladevi-darshana-with-husband-39o473g"/>
        </item>
        <item>
            <title><![CDATA[Karna Serial ರೋಚಕ ಟ್ವಿಸ್ಟ್​: ಕರ್ಣನೇ ಮಗ ಎನ್ನೋ ಸತ್ಯ ಸೀತಾಗೂ ತಿಳಿಯಿತು! ಸೀರಿಯಲ್​ ಮುಕ್ತಾಯ?]]></title>
            <link>https://kannada.asianetnews.com/gallery/tv-talk/karna-serial-bhuvaneshwari-urf-seetha-also-came-to-know-about-karnas-truth-suc-o1x4zdy</link>
            <guid isPermaLink="true">https://kannada.asianetnews.com/gallery/tv-talk/karna-serial-bhuvaneshwari-urf-seetha-also-came-to-know-about-karnas-truth-suc-o1x4zdy</guid>
            <pubDate>Tue, 18 Aug 2026 17:28:23 +0530</pubDate>
            <description><![CDATA[&lt;p&gt;ಕರ್ಣ ಸೀರಿಯಲ್​ನಲ್ಲಿ, ತನ್ನ ಮಗನೆಂದು ರಮೇಶ್&zwnj;ಗೆ ಸತ್ಯ ತಿಳಿದರೂ ಹೇಳಲಾಗದ ಸ್ಥಿತಿಯಲ್ಲಿದ್ದಾನೆ. ಇತ್ತ, ಆಸ್ಪತ್ರೆಯಲ್ಲಿರುವ ಕರ್ಣನನ್ನು ನೋಡಲು ಬಂದ ಸೀತಾ, ಅವನನ್ನು ಸ್ಪರ್ಶಿಸಿದಾಗ ತಾಯ್ತನದ ಅನುಭೂತಿ ಪಡೆದು ಆಘಾತಕ್ಕೊಳಗಾಗುತ್ತಾಳೆ. ಈ ಸ್ಪರ್ಶದಿಂದ ಕರ್ಣನಲ್ಲಿ ಚಲನೆ ಕಾಣಿಸಿಕೊಂಡಿದ್ದು, ಮುಂದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0abpw0vzm8ze7p1pwwpjhs3,imgname-k.-serial-00-1787054223387.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ಣ ಸೀರಿಯಲ್​ನಲ್ಲಿ, ತನ್ನ ಮಗನೆಂದು ರಮೇಶ್&zwnj;ಗೆ ಸತ್ಯ ತಿಳಿದರೂ ಹೇಳಲಾಗದ ಸ್ಥಿತಿಯಲ್ಲಿದ್ದಾನೆ. ಇತ್ತ, ಆಸ್ಪತ್ರೆಯಲ್ಲಿರುವ ಕರ್ಣನನ್ನು ನೋಡಲು ಬಂದ ಸೀತಾ, ಅವನನ್ನು ಸ್ಪರ್ಶಿಸಿದಾಗ ತಾಯ್ತನದ ಅನುಭೂತಿ ಪಡೆದು ಆಘಾತಕ್ಕೊಳಗಾಗುತ್ತಾಳೆ. ಈ ಸ್ಪರ್ಶದಿಂದ ಕರ್ಣನಲ್ಲಿ ಚಲನೆ ಕಾಣಿಸಿಕೊಂಡಿದ್ದು, ಮುಂದೇನು?&lt;/p&gt;&lt;img&gt;&lt;p&gt;ಕರ್ಣ ಸೀರಿಯಲ್​ನಲ್ಲಿ (Karna Serial) ಇದಾಗಲೇ ಕರ್ಣನೇ ತನ್ನ ಮಗ ಎನ್ನುವ ಸತ್ಯ ರಮೇಶ್​ಗೆ ತಿಳಿದಿದೆ. ಆದರೆ ಅದನ್ನು ತಿಳಿಯುವ ಮೊದಲೇ ರಮೇಶ್​ ತನ್ನ ಸ್ವಂತ ಮಗನನ್ನೇ ಕೊಲೆಮಾಡಲು ನೋಡಿ ಎಲ್ಲರ ಕಣ್ಣಿನಲ್ಲಿ ಅಪರಾಧಿಯಾಗಿದ್ದಾನೆ.&lt;/p&gt;&lt;img&gt;&lt;p&gt;ಅವನನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಅವನೇ ತನ್ನ ಮಗ ಎಂದು ಹೇಳುವುದಕ್ಕೂ ಅವನಿಂದ ಸಾಧ್ಯವಾಗುತ್ತಿಲ್ಲ. ತಪ್ಪಿತಸ್ಥ ಭಾವನೆಯಲ್ಲಿ ಕರ್ಣ ಇದ್ದಾನೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ, ಕರ್ಣನಿಗೆ ತಾನು ಆ್ಯಕ್ಸಿಡೆಂಟ್​ ಮಾಡಿಸಿರುವುದಾಗಿ ನಯನತಾರಾ ಭುವನೇಶ್ವರಿ ಉರ್ಫ್​ ಸೀತಾಗೆ ಹೇಳಿದಾಗ ಅವಳಿಗೆ ಅದ್ಯಾಕೋ ಸಂಕಟವಾಗುತ್ತದೆ. ತನ್ನ ಹಗೆತನ ಏನಿದ್ದರೂ ಕೆಲಸದಲ್ಲಿಯೇ ವಿನಾ ಜೀವ ತೆಗೆಯುವ ಮಟ್ಟಿಗೆ ಅಲ್ಲ ಎಂದು ನಯನತಾರಾ ಮೇಲೆ ಕೈ ಮಾಡಲು ಹೋಗುತ್ತಾಳೆ ಅವಳು.&lt;/p&gt;&lt;img&gt;&lt;p&gt;ಕೊನೆಗೆ ಕರ್ಣನನ್ನು ನೋಡಲು ಆಸ್ಪತ್ರೆಗೆ ಬರುತ್ತಾಳೆ. ತನ್ನ ಕೈಮೀರಿ ಇಂಥದ್ದೊಂದು ನಡೆದು ಹೋಯಿತು ಎಂದು ಮರಗುತ್ತಾಳೆ.&lt;/p&gt;&lt;img&gt;&lt;p&gt;ಅದೇ ಸಮಯದಲ್ಲಿ ಕರ್ಣನನ್ನು ಮುಟ್ಟುತ್ತಾಳೆ. ಹೀಗೆ ಆಗುತ್ತಲೇ ಆಕೆಯ ಮೈಯಲ್ಲೆಲ್ಲಾ ರೋಮಾಂಚನವಾಗುತ್ತದೆ. ಅದ್ಯಾವುದೋ ಅಮ್ಮನ ಶಕ್ತಿ ಆಕೆಯಲ್ಲಿ ಜಾಗೃತವಾಗುತ್ತದೆ. ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುತ್ತಾರಲ್ಲ, ಹಾಗೆ ಆಗಿ ಅವಳಿಗೆ ಶಾಕ್​ ಆಗುತ್ತದೆ.&lt;/p&gt;&lt;img&gt;&lt;p&gt;ಅಮ್ಮನ ಸ್ಪರ್ಶ ಆಗುತ್ತಿದ್ದಂತೆಯೇ ಕರ್ಣನಲ್ಲಿ ಚಲನೆ ಕಾಣಿಸುತ್ತದೆ. ಭುವನೇಶ್ವರಿಗೆ ಕರ್ಣನನ್ನು ಮುಟ್ಟುತ್ತಿದ್ದಂತೆಯೇ ಅದೇನೋ ಸಂಕಟ ಉಂಟಾಗುತ್ತದೆ. ಹಾಗಿದ್ದರೆ, ಕರ್ಣನೇ ತನ್ನ ಮಗ ಎನ್ನುವ ಸತ್ಯ ತಿಳಿಯತ್ತಾ? ಸೀರಿಯಲ್​ನಲ್ಲಿ ಇಷ್ಟು ಆದರೆ ಮುಂದೇನು ಇರುತ್ತೆ ಎನ್ನುವ ಕುತೂಹಲ ಸದ್ಯಕ್ಕಿದೆ!&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-bhuvaneshwari-urf-seetha-also-came-to-know-about-karnas-truth-suc-o1x4zdy"/>
        </item>
        <item>
            <title><![CDATA[ಶಾರುಖ್ ಖಾನ್ ಮನೆಯಲ್ಲಿ ಕಾಣಿಸಿಕೊಂಡ 8 ಅಡಿ ಉದ್ದದ ಬೃಹತ್ ಹಾವು, ಕಂಗಾಲದ ಮನ್ನತ್]]></title>
            <link>https://kannada.asianetnews.com/entertainment/huge-8-foot-snake-found-at-shah-rukh-khan-mumbai-mannat-leaves-everyone-shocked/articleshow-7s0aoo7</link>
            <guid isPermaLink="true">https://kannada.asianetnews.com/entertainment/huge-8-foot-snake-found-at-shah-rukh-khan-mumbai-mannat-leaves-everyone-shocked/articleshow-7s0aoo7</guid>
            <pubDate>Tue, 18 Aug 2026 16:17:30 +0530</pubDate>
            <description><![CDATA[&lt;p&gt;ಬಾಲಿವುಡ್ ನಟ ಶಾರುಖ್ ಖಾನ್ ಮನ್ನತ್ ಮನೆಯಲ್ಲಿ ಬೃಹತ್ ಹಾವು ಕಾಣಿಸಿಕೊಂಡಿದೆ. ಹಾವು ಪ್ರತ್ಯಕ್ಷವಾದ ಬೆನ್ನಲ್ಲೇ ಮನೆಯಲ್ಲಿದ್ದ ಎಲ್ಲರು ಕಂಗಾಲಾಗಿದ್ದಾರೆ. ಸಿಬ್ಬಂದಿಗಳು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ, ಉರಗ ತಜ್ಞರು ದೌಡಾಯಿಸಿದ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0a7ppk86dm0qpya7x2j6ba3,imgname-snake-found-at-mannat-shah-rukh-khan-home-1787050023527.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಆ.18) &lt;/strong&gt;ಬಾಲಿವುಡ್ ನಟ ಶಾರುಖ್ ಖಾನ್ ಅವರ ಮನೆಯಲ್ಲಿ ಹಾವು ಕಾಣಿಸಿಕೊಂಡು ಕೋಲಾಹಲ ಸೃಷ್ಟಿಯಾದ ಘಟನೆ ನಡೆದಿದೆ. ಮುಂಬೈನ ಬಾಂದ್ರಾದಲ್ಲಿರುವ ಮನ್ನತ್ ಮನೆಯಲ್ಲಿ ಹಾವು ಕಾಣಿಸಿಕೊಂಡಿದೆ. ಹಾವು ಕಾಣಿಸಿಕೊಂಡ ಬೆನ್ನಲ್ಲೇ ಸಿಬ್ಬಂದಿಗಳು ಅಲರ್ಟ್ ಆಗಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇತ್ತ ಅರಣ್ಯ ಇಲಾಖೆ ಸಿಬ್ಬಂದಿ ಉರಗ ತಜ್ಞರು ಸ್ಥಳಕ್ಕೆ ಆಗಮಿಸಿ 8 ಅಡಿ ಉದ್ದದ ಬೃಹತ್ ಹಾವನ್ನು ರಕ್ಷಿಸಿದ್ದಾರೆ.&lt;/p&gt;&lt;h2&gt;ಮನೆಯ ಸಿಬ್ಬಂದಿಗಳಿಂದ ಸೂಚನೆ&lt;/h2&gt;&lt;p&gt;ಮನ್ನತ್ ಮನೆಯ ಹೊರಾಂಗಣದ ಮೆಟ್ಟಿಲುಗಳ ಪಕ್ಕದಲ್ಲಿ ಹಾವು ಕಾಣಿಸಿಕೊಂಡಿದೆ. ಹಾವು ಕಾಣಿಸಿಕೊಂಡ ಬೆನ್ನಲ್ಲೇ ಸಿಬ್ಬಂದಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇತ್ತ ಮನೆಯಲ್ಲಿದ್ದ ಸದಸ್ಯರು ಹಾವಿನಿಂದ ಆತಂಕಗೊಂಡಿದ್ದಾರೆ. ಇತ್ತ ಸಿಬ್ಬಂದಿಗಳು ಹಾವು ಮನೆಯೊಳಗೆ ಸೇರಿ ಅಡಗಿಕೊಂಡರೆ ಸಮಸ್ಯೆಯಾಗಲಿದೆ ಎಂದು ಸೂಕ್ಷ್ಮವಾಗಿ ಹಾವನ್ನು ಗಮನಿಸಿದ್ದಾರೆ. ಇಷ್ಟೇ ಅಲ್ಲ ಹಾವು ಮೆಟ್ಟಿಲುಗಳಂದ ನೇರವಾಗಿ ಮನ್ನತ್ ಮನೆಯೊಳಗೆ ಸೇರದಂತೆ ನೋಡಿಕೊಂಡಿದ್ದಾರೆ.&lt;/p&gt;&lt;p&gt;ಕೆಲ ಹೊತ್ತಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಉರಗ ತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ. ಉರಗ ತಜ್ಞ ವಿಕಿ ದುಬೆ ಹಾವು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೆಲ ಹೊತ್ತಲ್ಲಿ ಹಾವು ಹಿಡಿದಿದ್ದಾರೆ. ಧಾಮನ್ ತಳಿಗೆ ಸೇರಿದ್ದ ಈ ಹಾವು ವಿಷಪೂರಿತವಲ್ಲ ಎಂದು ಉರಗ ತಜ್ಞ ಹೇಳಿದ್ದಾರೆ. ಚೀಲದಲ್ಲಿ ಬಂಧಿಸಿದ ಹಾವನ್ನು ಅರಣ್ಯ ಇಲಾಖೆ ನಿಯಮದಂತೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.&lt;/p&gt;&lt;h2&gt;ಎರಡು ಹಾವಿನಲ್ಲಿ ಒಂದು ನಾಪತ್ತೆ&lt;/h2&gt;&lt;p&gt;ಎರಡು ಹಾವುಗಳು ಕಾಣಿಸಿಕೊಂಡಿದೆ ಎಂಬ ಮಾಹಿತಿ ಬಂದಿತ್ತು. ಆದರೆ ಒಂದು ಹಾವು ಮಾತ್ರ ರಕ್ಷಣೆ ಮಾಡಲಾಗಿದೆ. ಮತ್ತೊಂದು ಹಾವು ಕಾಣಿಸಿಕೊಂಡಿಲ್ಲ. ಮುಂಬೈನಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದ ಹಲವೆಡೆ ಹಾವುಗಳು ಕಾಣಿಸಿಕೊಂಡಿದೆ. ಮಳೆ ಕಾರಣದಿಂದ ಹಾವುಗಳು ಹರಿದು ಬರುದು ಸಾಮಾನ್ಯ. ಇದೇ ರೀತಿ ಮನ್ನತ್ ಆವರಣಕ್ಕೆ ಲಗ್ಗೆ ಇಟ್ಟಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ವಿಷಕಾರಕ ಹಾವಲ್ಲ ಅನ್ನೋದು ಪತ್ತೆಯಾದ ಬೆನ್ನಲ್ಲೇ ಶಾರುಖ್ ಕುಟುಂಬಸ್ಥರು ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಹಲೆವೆಡೆ ಹಾವು ಕಡಿತ ವರದಿಯಾಗಿದೆ. ವಿಷಕಾರಿ ಹಾವಿನಿಂದ ಕೆಲವರು ಪ್ರಾಣಕ್ಕೂ ಸಂಚಕಾರ ಬಂದಿದೆ. ಇತ್ತೀಚೆಗೆ ಮಧ್ಯಪ್ರದೇಶದ ಪೊಲೀಸ್ ಪೇದೆಗೆ ಹಾವು ಕಡಿದು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಇನ್ನು ಇಬ್ಬರು ಸಹೋದರರು ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಡಿದಿತ್ತು. ಸಹೋದರನ ಬದುಕಿಸಲು ಅಣ್ಣ ಶತಪ್ರಯತ್ನ ಮಾಡಿದ ಘಟನೆಯೂ ವರದಿಯಾಗಿತ್ತು.&lt;/p&gt;]]></content:encoded>
            <category>entertainment</category>
            <dc:creator>Chethan Kumar</dc:creator>
            <atom:link href="https://kannada.asianetnews.com/entertainment/huge-8-foot-snake-found-at-shah-rukh-khan-mumbai-mannat-leaves-everyone-shocked/articleshow-7s0aoo7"/>
        </item>
        <item>
            <title><![CDATA[​ಐಪಿಎಲ್ 'ನ್ಯಾಷನಲ್ ಕ್ರಶ್' ಜೊತೆ ಮ್ಯೂಸಿಕ್ ಮಾಂತ್ರಿಕ ಅನಿರುದ್ಧ್ ಮದುವೆ? ದಿನಾಂಕ, ಜಾಗ ಎಲ್ಲವೂ ಫಿಕ್ಸ್]]></title>
            <link>https://kannada.asianetnews.com/gallery/sports/kavya-maran-anirudh-ravichander-marriage-reports-greece-november-10-suh-r9smpgo</link>
            <guid isPermaLink="true">https://kannada.asianetnews.com/gallery/sports/kavya-maran-anirudh-ravichander-marriage-reports-greece-november-10-suh-r9smpgo</guid>
            <pubDate>Tue, 18 Aug 2026 13:04:45 +0530</pubDate>
            <description><![CDATA[&lt;p&gt;ಅನಿರುದ್ಧ್&zwnj; ರವಿಚಂದರ್&zwnj; ಮತ್ತು ಕಾವ್ಯಾ ಮಾರನ್&zwnj; ನವೆಂಬರ್&zwnj; ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್&zwnj; ಮಾಡಿಕೊಳ್ಳಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಇಬ್ಬರಿಂದಲೂ ಇನ್ನೂ ಅಧಿಕೃತ ಘೋಷಣೆ ಬಂದಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09w8g3bkegngbk4v7f504y1,imgname-kavya-maran-anirudh-ravichander-marriage-reports-greece-november-10-1787038023787.jpg" type="image/jpeg" height="390" width="690"/>
            <content:encoded><![CDATA[&lt;p&gt;ಅನಿರುದ್ಧ್&zwnj; ರವಿಚಂದರ್&zwnj; ಮತ್ತು ಕಾವ್ಯಾ ಮಾರನ್&zwnj; ನವೆಂಬರ್&zwnj; ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್&zwnj; ಮಾಡಿಕೊಳ್ಳಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಇಬ್ಬರಿಂದಲೂ ಇನ್ನೂ ಅಧಿಕೃತ ಘೋಷಣೆ ಬಂದಿಲ್ಲ.&lt;/p&gt;&lt;img&gt;&lt;p&gt;ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್&zwnj;ರೈಸರ್ಸ್ ಹೈದರಾಬಾದ್&zwnj; (SRH) ಮಾಲಕಿ ಕಾವ್ಯಾ ಮಾರನ್ ಅವರ ಮದುವೆ ಬಗ್ಗೆ ಹಲವು ತಿಂಗಳುಗಳಿಂದ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಈ ಚರ್ಚೆಗೆ ಮತ್ತಷ್ಟು ಕುತೂಹಲಕಾರಿ ತಿರುವು ಸಿಕ್ಕಿದೆ, ಮಾಧ್ಯಮಗಳ ವರದಿ ಪ್ರಕಾರ, ಈ ಜೋಡಿ ನವೆಂಬರ್ 10ರಂದು ಗ್ರೀಸ್&zwnj;ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.&lt;/p&gt;&lt;p&gt;&lt;strong&gt;ನವೆಂಬರ್ 10ಕ್ಕೆ ಮದುವೆ?&lt;/strong&gt;&lt;/p&gt;&lt;p&gt;ಅನಿರುದ್ಧ್ ಮತ್ತು ಕಾವ್ಯಾ ಅವರ ಮದುವೆ ಬಗ್ಗೆ ವದಂತಿಗಳು ಇದೇ ಮೊದಲಲ್ಲ. ಹಲವು ಸಮಯದಿಂದಲೂ ಈ ಇಬ್ಬರ ಹೆಸರುಗಳು ಸಾಮಾಜಿಕ ಜಾಲತಾಣ ಮತ್ತು ಚಿತ್ರರಂಗದ ವಲಯಗಳಲ್ಲಿ ಕೇಳಿಬರುತ್ತಿವೆ. ಆದರೆ ಇದೀಗ ಬಂದಿರುವ ವರದಿಯಲ್ಲಿ ನಿರ್ದಿಷ್ಟವಾಗಿ ನವೆಂಬರ್ 10 ದಿನಾಂಕವನ್ನು ಉಲ್ಲೇಖಿಸಿರುವುದು ಕುತೂಹಲ ಹೆಚ್ಚಿಸಿದೆ. ಇದಕ್ಕೂ ಮುನ್ನ ಮದುವೆಯ ಸ್ಥಳವಾಗಿ ಸೀಶೆಲ್ಸ್ ಹೆಸರು ಕೇಳಿಬಂದಿತ್ತು. ಇದೀಗ ಆ ಸ್ಥಳ ಬದಲಾಗಿದ್ದು, ಗ್ರೀಸ್&zwnj;ನಲ್ಲಿ ವಿವಾಹ ಸಮಾರಂಭ ನಡೆಯಬಹುದು ಎಂಬ ಚರ್ಚೆ ಆರಂಭವಾಗಿದೆ.&lt;/p&gt;&lt;img&gt;&lt;p&gt;ಈ ಮದುವೆ ಚರ್ಚೆಗೆ ವೇಗ ನೀಡಿದ ಪ್ರಮುಖ ಕಾರಣಗಳಲ್ಲಿ ಅನಿರುದ್ಧ್&zwnj; ಅವರ ಮಾವ ಹಾಗೂ ಹಿರಿಯ ನಟ ವೈ.ಜಿ. ಮಹೇಂದ್ರನ್ ಅವರ ಹೇಳಿಕೆಯೂ ಒಂದು. ಜೂನ್&zwnj;ನಲ್ಲಿ ಅವರು ಅನಿರುದ್ಧ್&zwnj; ಮತ್ತು ಕಾವ್ಯಾ ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂಬರ್ಥದಲ್ಲಿ ಮಾತನಾಡಿದ್ದರು. ಇದರಿಂದಲೇ ಮದುವೆ ವದಂತಿಗಳಿಗೆ ಮತ್ತಷ್ಟು ಬಲ ಸಿಕ್ಕಿತ್ತು. ಆದರೂ, ಎರಡೂ ಕುಟುಂಬಗಳಿಂದಲೂ ಅಧಿಕೃತ ಮದುವೆ ಘೋಷಣೆ ಇನ್ನೂ ಬಂದಿಲ್ಲ.&lt;/p&gt;&lt;p&gt;ಅದ್ಧೂರಿ ಮದುವೆ ಅಲ್ಲ, ಖಾಸಗಿ ಡೆಸ್ಟಿನೇಶನ್ ವೆಡ್ಡಿಂಗ್?&lt;/p&gt;&lt;p&gt;ಉದ್ಯಮದ ವಲಯಗಳಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಅನಿರುದ್ಧ್ ಮತ್ತು ಕಾವ್ಯಾ ದೊಡ್ಡ ಸಾರ್ವಜನಿಕ ಕಾರ್ಯಕ್ರಮದ ಬದಲು ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಖಾಸಗಿ ಡೆಸ್ಟಿನೇಶನ್ ವೆಡ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ. ಗ್ರೀಸ್&zwnj;ನಲ್ಲಿ ಮದುವೆ ಸಮಾರಂಭ ನಡೆದ ಬಳಿಕ, ಈ ಜೋಡಿ ವಿವಿಧ ಸ್ಥಳಗಳಲ್ಲಿ ಒಟ್ಟಿಗೆ ಸಮಯ ಕಳೆಯುವ ಸಾಧ್ಯತೆಯೂ ಇದೆ ಎಂದು ವರದಿಗಳು ಹೇಳುತ್ತಿವೆ. ಹೀಗಾಗಿ ಮದುವೆಯ ಸಂದರ್ಭವನ್ನು ವಿಸ್ತೃತ ಖಾಸಗಿ ಪ್ರವಾಸವಾಗಿಯೂ ರೂಪಿಸಿಕೊಳ್ಳಬಹುದು ಎಂಬ ಮಾತು ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ಇಷ್ಟೆಲ್ಲಾ ಚರ್ಚೆಗಳ ನಡುವೆಯೂ ಒಂದು ಪ್ರಮುಖ ಅಂಶವಿದೆ. ಅನಿರುದ್ಧ್ ಆಗಲಿ, ಕಾವ್ಯಾ ಮಾರನ್ ಆಗಲಿ ಮದುವೆ ಸುದ್ದಿಯನ್ನು ಇದುವರೆಗೆ ಅಧಿಕೃತವಾಗಿ ದೃಢಪಡಿಸಿಲ್ಲ. ಎರಡೂ ಕುಟುಂಬಗಳಿಂದಲೂ ಯಾವುದೇ ಔಪಚಾರಿಕ ಘೋಷಣೆ ಹೊರಬಿದ್ದಿಲ್ಲ. ಹೀಗಾಗಿ ನವೆಂಬರ್ 10ರ ದಿನಾಂಕ, ಗ್ರೀಸ್&zwnj; ಸ್ಥಳ ಮತ್ತು ಮದುವೆಯ ಇತರ ವಿವರಗಳನ್ನು ಸದ್ಯಕ್ಕೆ ವರದಿಗಳು ಹಾಗೂ ಉದ್ಯಮದ ಊಹಾಪೋಹಗಳೆಂದು ಮಾತ್ರ ಪರಿಗಣಿಸಬೇಕಾಗಿದೆ.&lt;/p&gt;&lt;p&gt;ಮದುವೆಗೂ ಮುನ್ನ ಬ್ಯುಸಿ ಅನಿರುದ್ಧ್&lt;/p&gt;&lt;p&gt;ವದಂತಿಗಳ ನಡುವೆಯೇ ಅನಿರುದ್ಧ್ ತಮ್ಮ ವೃತ್ತಿಜೀವನದಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಭಾರತೀಯ ಚಿತ್ರರಂಗದ ಬೇಡಿಕೆಯ ಸಂಗೀತ ಸಂಯೋಜಕರಲ್ಲಿ ಒಬ್ಬರಾಗಿರುವ ಅನಿರುದ್ಧ್ , Why This Kolaveri Di ಮೂಲಕ ಭಾರೀ ಜನಪ್ರಿಯತೆ ಪಡೆದ ಅವರು ಸದ್ಯ ಹಲವು ಪ್ರಮುಖ ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದಾರೆ. ಮದುವೆ ವಿರಾಮಕ್ಕೂ ಮುನ್ನ ತಮ್ಮ ಬಾಕಿ ಇರುವ ಸಂಗೀತ ಕೆಲಸಗಳನ್ನು ಸಾಧ್ಯವಾದಷ್ಟು ಪೂರ್ಣಗೊಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅವರ ಮುಂದಿನ ಪ್ರಮುಖ ಯೋಜನೆಗಳಲ್ಲಿ &lsquo;ದಿ ಪ್ಯಾರಡೈಸ್&rsquo; ಮತ್ತು &lsquo;ಜೈಲರ್ 2&rsquo; ಮುಂತಾದ ಸಿನಿಮಾಗಳು ಸೇರಿವೆ. ಇದರ ಜೊತೆಗೆ ಬಾಲಿವುಡ್&zwnj; ಸೂಪರ್&zwnj;ಸ್ಟಾರ್ ಶಾರುಖ್ ಖಾನ್ ಅವರ &lsquo;ಕಿಂಗ್&rsquo; ಸಿನಿಮಾದ ಸಂಗೀತದ ಬಹುಭಾಗದ ಕೆಲಸವನ್ನೂ ಮದುವೆಗೂ ಮುನ್ನ ಪೂರ್ಣಗೊಳಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಮದುವೆ ನಡೆದರೆ, ಉಳಿದ ಸಂಗೀತ ಸಂಯೋಜನೆ, ಅಂತಿಮ ಕೆಲಸಗಳು ಹಾಗೂ ಹೊಂದಾಣಿಕೆಗಳನ್ನು ಸಮಾರಂಭದ ಬಳಿಕ ಮುಂದುವರಿಸಬಹುದು ಎನ್ನಲಾಗುತ್ತಿದೆ. ಆದರೆ ಈ ಮಾಹಿತಿಗೂ ಸದ್ಯ ಯಾವುದೇ ಅಧಿಕೃತ ದೃಢೀಕರಣವಿಲ್ಲ.&lt;/p&gt;&lt;img&gt;&lt;p&gt;ಅನಿರುದ್ಧ್ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಸಂಗೀತ ಸಂಯೋಜಕರಲ್ಲಿ ಒಬ್ಬರು. ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಅವರ ಸಂಗೀತಕ್ಕೆ ದೊಡ್ಡ ಅಭಿಮಾನಿ ಬಳಗವಿದೆ. ಇತ್ತ ಕಾವ್ಯಾ ಮಾರನ್ ಕೂಡ ಸನ್ ಗ್ರೂಪ್ ಮತ್ತು ಸನ್&zwnj;ರೈಸರ್ಸ್ ಹೈದರಾಬಾದ್ ಜೊತೆಗಿನ ಸಂಬಂಧದಿಂದಾಗಿ ಸಾರ್ವಜನಿಕವಾಗಿ ಪರಿಚಿತ ವ್ಯಕ್ತಿಯಾಗಿದ್ದಾರೆ. ವಿಶೇಷವಾಗಿ IPL ಪಂದ್ಯಗಳ ವೇಳೆ ಅವರ ಹಾಜರಾತಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತದೆ. ಹೀಗಾಗಿ ಸಿನಿಮಾ ಮತ್ತು ಕ್ರಿಕೆಟ್ ಲೋಕಕ್ಕೆ ಸಂಬಂಧಿಸಿದ ಈ ಎರಡು ಜನಪ್ರಿಯ ಹೆಸರುಗಳು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹಜವಾಗಿಯೇ ಭಾರೀ ಕುತೂಹಲ ಮೂಡಿಸಿದೆ.&lt;/p&gt;&lt;p&gt;ವದಂತಿಗೆ ಇನ್ನೂ ಅಧಿಕೃತ ಮುದ್ರೆ ಬಿದ್ದಿಲ್ಲ&lt;/p&gt;&lt;p&gt;ನವೆಂಬರ್ 10ರ ದಿನಾಂಕ ಮತ್ತು ಗ್ರೀಸ್&zwnj; ಡೆಸ್ಟಿನೇಶನ್ ವೆಡ್ಡಿಂಗ್&zwnj; ಬಗ್ಗೆ ಚರ್ಚೆಗಳು ಇದೀಗ ವ್ಯಾಪಕವಾಗಿವೆ. ಆದರೆ ಅನಿರುದ್ಧ್ ಮತ್ತು ಕಾವ್ಯಾ ಅಥವಾ ಅವರ ಕುಟುಂಬಗಳು ಅಧಿಕೃತವಾಗಿ ಹೇಳಿಕೆ ನೀಡುವವರೆಗೆ ಇದನ್ನು ಖಚಿತ ಮದುವೆ ಘೋಷಣೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಇದು ಚಿತ್ರರಂಗದ ವಲಯಗಳಲ್ಲಿ ಹರಿದಾಡುತ್ತಿರುವ ದೃಢೀಕರಿಸದ ವರದಿ ಮತ್ತು ಊಹಾಪೋಹ ಮಾತ್ರ. ಅಧಿಕೃತ ಘೋಷಣೆ ಹೊರಬಂದರೆ, ಈ ಜೋಡಿಯ ಮದುವೆ ದಿನಾಂಕ, ಸ್ಥಳ ಮತ್ತು ಸಮಾರಂಭದ ವಿವರಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/sports/kavya-maran-anirudh-ravichander-marriage-reports-greece-november-10-suh-r9smpgo"/>
        </item>
        <item>
            <title><![CDATA[Bigg Boss ಅಗ್ನಿಪರೀಕ್ಷೆ ಬಗ್ಗೆ ನೀವು ಅಂದ್ಕೊಂಡಿರೋದೆಲ್ಲಾ ಸುಳ್ಳು: ಗಿನ್ನೆಸ್​ ದಾಖಲೆ ಹರಿದ ಅಭ್ಯರ್ಥಿ ಏನಂದ್ರು ಕೇಳಿ]]></title>
            <link>https://kannada.asianetnews.com/tv-talk/bigg-boss-13-kannada-contestant-dhanush-who-torn-guinness-world-record-about-the-show-suc/articleshow-n8oxmcr</link>
            <guid isPermaLink="true">https://kannada.asianetnews.com/tv-talk/bigg-boss-13-kannada-contestant-dhanush-who-torn-guinness-world-record-about-the-show-suc/articleshow-n8oxmcr</guid>
            <pubDate>Tue, 18 Aug 2026 15:16:25 +0530</pubDate>
            <description><![CDATA[ಬಿಗ್​ಬಾಸ್​ 13ರ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿ ಧನುಷ್​ ಮಂಜುನಾಥ್ ತಮ್ಮ ಗಿನ್ನೆಸ್​ ದಾಖಲೆ ಹರಿದು ಹಾಕಿದ್ದು ಭಾರೀ ಟ್ರೋಲ್​ಗೆ ಕಾರಣವಾಗಿತ್ತು. ಆದರೆ, ತಾನು ಹರಿದಿದ್ದು ನಕಲಿ ದಾಖಲೆ ಎಂದು ಸ್ಪಷ್ಟನೆ ನೀಡಿರುವ ಧನುಷ್, ಬಿಗ್​ಬಾಸ್​ಗೆ ಹೋಗುವ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಸಿಗುತ್ತದೆ ಎಂದಿದ್ದಾರೆ. ಈ ಘಟನೆಯು ಬಿಗ್​ಬಾಸ್​ಗೆ ಹೋಗಲು ಜನರು ಹೊಂದಿರುವ ಕನಸು ಮತ್ತು ಭ್ರಮೆಗಳನ್ನು ತೆರೆದಿಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0a46zzhne2hpdfqjhecj85d,imgname-bigg-boss-13-1787046363121.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್​ಬಾಸ್​ 13 (Bigg Boss 13) ಅಗ್ನಿಪರೀಕ್ಷೆ ಮಾಡಿ ಸಾಮಾನ್ಯ ಜನರನ್ನು ಈ ಬಾರಿ ಒಳಗೆ ಕಳಿಸಲಾಗುತ್ತಿದೆ. ಈ ಸಮಯದಲ್ಲಿ ನಡೆದ ಅಗ್ನಿಪರೀಕ್ಷೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದೆ. ಸ್ಪರ್ಧೆಯ ಹೆಸರಿನಲ್ಲಿ ಮುಖಕ್ಕೆ ಸೆಗಣಿ ಬಳಿದುಕೊಳ್ಳುವಂತೆ ಮಾಡುವುದು, ಕೆಲಸ ಬಿಡುವಂತೆ ಹೇಳುವುದು, ಇನ್ನೂ ಏನೇನೋ ಟಾಸ್ಕ್​ ಮಾಡಿಸುವುದು... ಹೀಗೆ ಇಲ್ಲಿ ನಡೆದ ಟಾಸ್ಕ್​ಗಳ ಬಗ್ಗೆ ಸಿಕ್ಕಾಪಟ್ಟೆ ಟೀಕೆಗಳು ಕೇಳಿಬರುತ್ತಿವೆ. ಅಷ್ಟಕ್ಕೂ ಇವೆಲ್ಲಾ ರಿಯಾಲಿಟಿ ಷೋ ನಡೆಸುವವರಿಗೆ ತಿಳಿಯದೇ ಇರುವ ವಿಷಯವೇನಲ್ಲ. ಆದರೆ ಜನರನ್ನು ಆಕರ್ಷಿಸಲು ನೆಗೆಟಿವ್​ ಕಮೆಂಟ್ಸ್​ಗಳು ಸೋಷಿಯಲ್​ ಮೀಡಿಯಾಕ್ಕೆ ತುಂಬಾ ಮುಖ್ಯವಾಗಿರುತ್ತದೆ. ಆದ್ದರಿಂದ ಇದು ಕೂಡ ಅದರ ಒಂದು ಭಾಗವಾಗಿರಲಿಕ್ಕೆ ಸಾಕು.&lt;/p&gt;&lt;p&gt;ಆದರೆ ಎಲ್ಲಕ್ಕಿಂತಲೂ ಮಿಗಿಲಾಗಿ ಭಾರಿ ಟ್ರೋಲ್​ ಆಗಿದ್ದು ಮಾತ್ರವಲ್ಲದೇ ಸ್ಪರ್ಧಿಯ ನಡವಳಿಕೆಯ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದ್ದು, ಧನುಷ್​ ಮಂಜುನಾಥ್​ ಎನ್ನುವ ಸ್ಪರ್ಧಿ ತಮ್ಮ ಗಿನ್ನೆಸ್​ ದಾಖಲೆ ಹರಿದು ಹಾಕಿದ್ದು. ಇಂಥ ದಾಖಲೆ ಜೀವನದಲ್ಲಿ ಮಾಡುವುದು ಎಷ್ಟೋ ಮಂದಿಗೆ ಒಂದೇ ಬಾರಿಯಾಗಿರುತ್ತದೆ. ಆದರೆ ಬಿಗ್​ಬಾಸ್​​ ಷೋಗೆ ಹೋಗುವುದಕ್ಕಾಗಿ ಜೀವಮಾನದ ಸಾಧನೆಯನ್ನೇ ಪಣಕ್ಕಿಡುವಂತೆ ಹೇಳಿದ್ದು, ಹಾಗೂ ರಿಯಾಲಿಟಿ ಷೋದಿಂದ ಫೇಮಸ್​ ಆಗಿಯೇ ತೀರುತ್ತೇವೆ ಎನ್ನುವ ಭ್ರಮೆಯಿಂದ ಕೆಲವರು ಈ ರೀತಿ ದಾಖಲೆ ಹರಿದು ಹಾಕಿದ್ದು ಎಷ್ಟರಮಟ್ಟಿಗೆ ಸರಿ ಎಂದು ಸಾಕಷ್ಟು ಮಂದಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಧನುಷ್​ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ಆದರೆ, ಅದಕ್ಕೀಗ ಖುದ್ದು ಧನುಷ್​ ಅವರೇ ಸ್ಪಷ್ಟನೆ ನೀಡಿದ್ದಾರೆ. ಅಗ್ನಿಪರೀಕ್ಷೆಯಲ್ಲಿ ನೀವು ನೋಡಿದ್ದೆಲ್ಲಾ ಸತ್ಯವಲ್ಲ. ಅದು ನನ್ನ ಒರಿಜಿನಲ್​ ದಾಖಲೆಯಲ್ಲ. ನನಗೆ ದಾಖಲೆಯ ನಕಲಿ ಪ್ರತಿಯನ್ನು ನೀಡಲಾಗಿತ್ತು. ಒರಿಜಿನಲ್​ ನನ್ನ ಬಳಿಯೇ ಇದೆ. ಅಷ್ಟಕ್ಕೂ ಇಂಥದ್ದೊಂದು ದಾಖಲೆಯನ್ನು ಇನ್ನೊಂದು ಬಾರಿ ಬೇಕಾದ್ರೂ ಮಾಡಬಹುದು. ಆದರೆ ಬಿಗ್​ಬಾಸ್​ಗೆ ಹೋಗುವ ಅವಕಾಶ ಸಿಗುವುದು ಜೀವನದಲ್ಲಿ ಒಂದೇ ಬಾರಿ. ಎಷ್ಟೋ ಮಂದಿಯಲ್ಲಿ ಸೆಲೆಕ್ಟ್​ ಆಗಿರುವಾಗ ಇಂಥ ಅವಕಾಶವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮೂಲಕ, ಅಸಲಿ ದಾಖಲೆ ಹರಿದು ಹಾಕಿದರೂ ತಮಗೆ ಯಾವುದೇ ಪಶ್ಚಾತ್ತಾಪ ಇರಲಿಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ.&lt;/p&gt;&lt;h3&gt;&lt;strong&gt;ಬಿಗ್​ಬಾಸ್ ಎನ್ನುವ ಕನಸು...&lt;/strong&gt;&lt;/h3&gt;&lt;p&gt;ಇವರ ಮಾತಿನಿಂದ ಬಿಗ್​ಬಾಸ್​​ಗೆ ಹೋಗುವುದು ಅದೆಷ್ಟು ಮಂದಿಯ ದೊಡ್ಡ ಕನಸು ಎನ್ನುವುದು ತಿಳಿಯುತ್ತದೆ. ಬಿಗ್​ಬಾಸ್​ಗೆ ಹೋಗಿ ಬಂದರೆ ಅದರ ಲೆವೆಲ್ಲೇ ಬೇರೆಯದ್ದು ಎನ್ನುವ ಕಲ್ಪನೆ ಹಲವರಿಗೆ ಇದೆ. ಗಿನ್ನೆಸ್​ ದಾಖಲೆ ಮಾಡಿದರೂ ಸಿಗದ ಮರ್ಯಾದೆ ಬಿಗ್​ಬಾಸ್​ಗೆ ಹೋಗಿ ಬಂದರೆ ತಮಗೆ ಸಿಕ್ಕಾಪಟ್ಟೆ ಸಿಗುತ್ತದೆ, ಇದರಿಂದ ಮುಂದೆ ದೊಡ್ಡ ದೊಡ್ಡ ಅವಕಾಶಗಳು ಹುಡುಕಿ ಬರುತ್ತವೆ, ಜನರು ನಮ್ಮ ಹಿಂದೆ ಬೀಳುತ್ತಾರೆ, ಹೋದಲ್ಲಿ, ಬಂದಲ್ಲಿ ಆಟೋಗ್ರಾಫ್​ ಕೇಳುತ್ತಾರೆ. ಮುಂದೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ.... ಹೀಗೆ ಹಲವರ ಕಲ್ಪನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ, ಅವರ ಅದೃಷ್ಟ ಕಾಲವೇ ನಿರ್ಧರಿಸಬೇಕಷ್ಟೇ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/tv-talk/bigg-boss-13-kannada-contestant-dhanush-who-torn-guinness-world-record-about-the-show-suc/articleshow-n8oxmcr"/>
        </item>
        <item>
            <title><![CDATA[ಅರ್ಜುನ್ ದೇವ್ ತಳು-ಕನ್ನಡ ಸಿನಿಮಾ ಟಾಸ್‌ಗೆ ಶಿಲ್ಪಾ ಗಣೇಶ್ ಸಾರಥ್ಯ, ಮೊದಲ ಹಾಡು ರಿಲೀಸ್]]></title>
            <link>https://kannada.asianetnews.com/entertainment/tulunadu-star-arjun-dev-tulu-kannada-film-toss-led-by-shilpa-ganesh-first-song-released/articleshow-hb7dlm0</link>
            <guid isPermaLink="true">https://kannada.asianetnews.com/entertainment/tulunadu-star-arjun-dev-tulu-kannada-film-toss-led-by-shilpa-ganesh-first-song-released/articleshow-hb7dlm0</guid>
            <pubDate>Tue, 18 Aug 2026 15:02:17 +0530</pubDate>
            <description><![CDATA[&lt;p&gt;ತುಳುನಾಡಿನ ಸೂಪರ್ ಸ್ಟಾರ್ ಅರ್ಜುನ್ ದೇವ್ ಟಾಸ್ ಚಿತ್ರಕ್ಕೆ ಶಿಲ್ಪಾ ಗಣೇಶ್ ಸಾರಥ್ಯದ ಗೋಲ್ಡನ್ ಮೂವೀಸ್ ಸಾಥ್ ನೀಡಿದೆ. ಕನ್ನಡ ಹಾಗೂ ತುಳು ಭಾಷೆಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಸೆ.18ಕ್ಕೆ ಬಿಡುಗಡೆಯಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0a3cw4da0mty0ba114sfx0s,imgname-arjun-dev-tulu-kannada-movie-toss-1787045507205.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.18) &lt;/strong&gt;ತುಳು ನಾಡಿನ&zwnj; ಸೂಪರ್ ಸ್ಟಾರ್ ಅರ್ಜುನ್ ದೇವ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಚಿತ್ರ ಟಾಸ್ ಸೆಪ್ಟೆಂಬರ್ 18ಕ್ಕೆ ಬಿಡುಗಡೆಯಾಗಹುತ್ತಿದೆ. ಡಾ.ದೇವದಾಸ್ ಕಾಪಿಕಾಡ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದ ಈ ಸಿನಿಮಾ ವಿಶೇಷ ಅಂದರೆ ತುಳು ಹಾಗೂ ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ , ಜೋಯೆಲ್ ಶರ್ಮನ್ ಡಿಸೋಜಾ ಛಾಯಾಗ್ರಹಣ,ಯಾಶ್ವಿನ್ ಕೆ ಶೆಟ್ಟಿಗೇರ್ ಸಂಕಲನ ಟಾಸ್ ಚಿತ್ರಕ್ಕಿದೆ. ಅದ್ಧೂರಿ ಸಿನಿಮಾಗೆ ಶಿಲ್ಪಾ ಗಣೇಶಾ ಸಾರಥ್ಯದ ಗೋಲ್ಡನ್ ಮೂವೀಸ್ ಅರ್ಪಿಸು ಅಿಕಾ ಪ್ರೊಡಕ್ಷನ್ ಹಾಗೂ ಬಿ.ಆರ್.ಬಿ ಪ್ರೊಡಕ್ಷನ್ಸ್ ನಿರ್ಮಾಣ ಜವಾಬ್ದಾರಿ ಹೊತ್ತಿಕೊಂಡಿದೆ.&lt;/p&gt;&lt;h2&gt;ಸಿನಿಮಾದಲ್ಲಿ ಸು ಫ್ರಮ್ ಸೋ ಖ್ಯಾತಿಯ ಶನೀಲ್ ಗೌತಮ್ ಸೇವೆ&lt;/h2&gt;&lt;p&gt;ಸುಫ್ರಮ್ ಸೋ ಖ್ಯಾತಿಯಾ ಶನೀಲ್ ಗೌತಮ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರೋದು ವಿಶೇಷ. ಟಾಸ್ ಸಿನಿಮಾ ನೋಡಿ ಮೆಚ್ಚಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ರವರು ಈ ಚಿತ್ರವನ್ನ ಗೋಲ್ಡನ್ ಮೂವೀಸ್ ಬ್ಯಾನರ್ ಮೂಲಕ ಅರ್ಪಿಸ್ತಿದ್ದಾರೆ. ಪ್ರಚಾರ ಆರಂಭಿಸಿರೋ ಚಿತ್ರತಂಡ ಚಿತ್ರದ ಮೊದಲ ಹಾಡನ್ನ ಬಿಡುಗಡೆ ಮಾಡಿದ್ದಾರೆ..&lt;/p&gt;&lt;p&gt;ಹೆಲೋ ಹೆಲೋ ನೀಲಾಂಬರಿ ಅನ್ನೋ ಮೆಲೋಡಿ ಡ್ಯುಯೆಟ್ ಹಾಡಲ್ಲಿ ಅರ್ಜುನ್ ದೇವ್ ಮತ್ತು ನಾಯಕಿ ಸುತೇಜ್ ಶೆಟ್ಟಿ ಕೆಮಿಸ್ಟ್ರಿ ಆಕರ್ಷಕವಾಗಿದೆ.. ಮಣಿಕಾಂತ್ ಕದ್ರಿ ಟ್ಯೂನ್, ಯೋಗರಾಜ್ ಭಟ್ ಸಾಹಿತ್ಯವಿರೋ ಈ ಹಾಡನ್ನ ಅರ್ಮಾನ್ ಮಾಲೀಕ್ ಹಾಡಿದ್ದಾರೆ..ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಹಾಡು ಲಭ್ಯವಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಟಾಸ್ ಸಿನಿಮಾದ ಹಾಡು ಮತ್ತು ಮೇಕಿಂಗ್ ಗುಣಮಟ್ಟ ನಿರೀಕ್ಷೆ ಹುಟ್ಟಿಸ್ತಿದೆ... ಅಂದ್ಹಾಗೆ ಈ ಹಾಡಿನ ಮೂಲಕ&zwnj;&zwnj;ಪ್ರಚಾರ ಕೆಲಸಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ ಸದ್ಯದಲ್ಲೇ ಪತ್ರಿಕಾಗೋಷ್ಠಿ ಮೂಲಕ ಉಳಿದ ವಿಷ್ಯಗಳನ್ನ ಹಂಚಿಕೊಳ್ಳೊ ಯೋಜನೆಯಲ್ಲಿದ್ದು, ಚಿತ್ರವನ್ನ ಸೆಪ್ಟೆಂಬರ್ 18ಕ್ಕೆ ಬಿಡುಗಡೆ ಮಾಡೋ ಸನ್ನಾಹದಲ್ಲಿದೆ.&lt;/p&gt;]]></content:encoded>
            <category>entertainment</category>
            <dc:creator>Chethan Kumar</dc:creator>
            <atom:link href="https://kannada.asianetnews.com/entertainment/tulunadu-star-arjun-dev-tulu-kannada-film-toss-led-by-shilpa-ganesh-first-song-released/articleshow-hb7dlm0"/>
        </item>
        <item>
            <title><![CDATA[Bigg Boss 13 ಮನೆ ಹೇಗಿದೆ ನೋಡ್ಬೇಕಾ? ಹಾಗಿದ್ರೆ ನಿಮಗಿದೆ ಇಲ್ಲೊಂದು ಸೂಪರ್​ ಅವಕಾಶ]]></title>
            <link>https://kannada.asianetnews.com/tv-talk/want-to-see-bigg-boss-kannada-13-house-is-like-then-here-is-a-super-opportunity-for-you-suc/articleshow-tzl49se</link>
            <guid isPermaLink="true">https://kannada.asianetnews.com/tv-talk/want-to-see-bigg-boss-kannada-13-house-is-like-then-here-is-a-super-opportunity-for-you-suc/articleshow-tzl49se</guid>
            <pubDate>Tue, 18 Aug 2026 13:56:40 +0530</pubDate>
            <description><![CDATA[ಬಿಗ್​ಬಾಸ್​ 13ನೇ ಸೀಸನ್&zwnj;ಗಾಗಿ 'ಅಗ್ನಿ ಪರೀಕ್ಷೆ' ಮೂಲಕ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದ್ದು, ಇದರಲ್ಲಿ ಮಂಡ್ಯದ ಮೆಕ್ಯಾನಿಕ್ ಜಿ.ಕೆ ಪೂರ್ಣಿಮಾ 'ಸ್ಟಾರ್&zwnj; ಕಂಟೆಸ್ಟಂಟ್&zwnj;' ಆಗಿ ಹೊರಹೊಮ್ಮಿದ್ದಾರೆ. ಇದರ ಜೊತೆಗೆ, ವೀಕ್ಷಕರಿಗೂ ಒಂದು ಸ್ಪರ್ಧೆಯ ಮೂಲಕ ಬಿಗ್​ಬಾಸ್​ ಮನೆಯ ಸೆಟ್ ನೋಡುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09zmr9znxn03w8e4bf2nt0w,imgname-bigg-boss-13-1787041571135.jpg" type="image/jpeg" height="390" width="690"/>
            <content:encoded><![CDATA[&lt;h3&gt;ಬಿಗ್​ಬಾಸ್​ 13ನೇ ಕನ್ನಡ ಸೀಸನ್​ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸೀಸನ್​ ಆರಂಭ ಆಗಲಿದೆ. ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದ್ದು, ಅದರ ಸ್ಪರ್ಧೆ ಇದಾಗಲೇ ನಡೆದಿದೆ. ನಾಳೆ ಅದರ ಟೆಲಿಕಾಸ್ಟ್​ ಆಗಲಿದೆ. ಕೆಲವರನ್ನು ಆಯ್ಕೆ ಮಾಡಲಾಗಿದ್ದು, ಕೆಲವರನ್ನು ಪೆಂಡಿಂಗ್​ನಲ್ಲಿ ಇಡಲಾಗಿದೆ. ಮೊದಲ ಸುತ್ತಿನಲ್ಲಿ, 60ಜನ ಆಯ್ಕೆ ಆಗಿ ಬಂದಿರುವವರಲ್ಲಿ 8 ಜನರಿಗೆ ಅರ್ಹತೆ ಟೆಸ್ಟ್&zwnj; ಮಾಡಲಾಗಿತ್ತು. ದೀಕ್ಷಾ ಆರ್&zwnj; ಶೆಟ್ಟಿ, ಮಾಡ್ರನ್&zwnj; ಕವಿ ಮಂಜ, ಇಶಾ ನವೀನ್&zwnj;, ಯೋಗಿತಾ-ಯೋಗಶ್ರೀ, ಚರಣ್&zwnj; ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್&zwnj; ಮಂಜು ಹಾಗೂ ಪೂರ್ಣಿಮಾ ಜಿಕೆ ಎಂಬ 8 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಅರ್ಹತೆ ಟೆಸ್ಟ್&zwnj;ಪಾಸ್&zwnj; ಆಗಿ ಮಾಡ್ರನ್&zwnj; ಕವಿ ಮಂಜ, ಚರಣ್&zwnj; ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ.&lt;/h3&gt;&lt;h2&gt;&lt;strong&gt;ಬಿಗ್​ಬಾಸ್​ ಸೆಟ್​ ನೋಡಲು ಅವಕಾಶ&lt;/strong&gt;&lt;/h2&gt;&lt;p&gt;ಇದು ಅಗ್ನಿಪರೀಕ್ಷೆ ಸುತ್ತಾದರೆ, ಇನ್ನು ಬಿಗ್​ಬಾಸ್​ ಸೆಟ್​ ನೋಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ವಾಹಿನಿ ಪ್ರೊಮೋ ಒಂದನ್ನು ಶೇರ್​ ಮಾಡಿಕೊಂಡಿದೆ. ಬಿಗ್​ಬಾಸ್​​ನ ಸೆಟ್​ ಹೇಗೆ ಇರುತ್ತದೆ ಎನ್ನುವುದನ್ನು ನೋಡುವುದಕ್ಕಾಗಿ ಲಕ್ಷಾಂತರ ಮಂದಿ ಬಯಸುತ್ತಾರೆ. ಆದರೆ ಕೆಲವು ಷರತ್ತುಗಳು ಇರುವ ಹಿನ್ನೆಲೆಯಲ್ಲಿ, ಎಲ್ಲರಿಗೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದಕ್ಕೂ ಒಂದು ಸ್ಪರ್ಧೆ ಏರ್ಪಡಿಸಲಾಗಿದೆ. ಅರ್ಹರಿಗೆ ಬಿಗ್​ಬಾಸ್​ ಸೆಟ್​ ನೋಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.&lt;/p&gt;&lt;p&gt;ಅದಕ್ಕೆ ಮೂರು ಹೆಜ್ಜೆಗಳು ಎಂದು ಪ್ರೊಮೋ ಶೇರ್​ ಮಾಡಲಾಗಿದೆ. ಬಿಗ್​ಬಾಸ್​ ಅಗ್ನಿಪರೀಕ್ಷೆಯ ಪ್ರತಿ ಎಪಿಸೋಡ್​ ನೋಡಿ, ಸಿಂಪಲ್​ ಪ್ರಶ್ನೆಗಳಿಗೆ ಉತ್ತರ ಕೊಡಿ, ಜಿಯೋಹಾಸ್ಟ್​ ಸ್ಟಾರ್​ ಆರ್ಮಿ ಬೋರ್ಡ್​ನಲ್ಲಿ ಮೇಲೇರಿ, ಅವಕಾಶ ಪಡೆಯಿರಿ ಎಂದು ಹೇಳಲಾಗಿದೆ. ಆದ್ದರಿಂದ ಬಿಗ್​ಬಾಸ್ ಸೆಟ್​ಗೆ ಹೋಗಲು ಬಯಸುವವರು ಈ ಸ್ಪರ್ಧೆಯಲ್ಲಿ ವಿನ್​ ಆಗಬೇಕಿದೆ.&lt;/p&gt;&lt;p&gt;&lt;strong&gt;ಮನ ಗೆದ್ದ ಮಂಡ್ಯದ ಯುವತಿ&lt;/strong&gt;&lt;/p&gt;&lt;p&gt;ಇನ್ನು ಬಿಗ್​ಬಾಸ್​ ಅಗ್ನಿ ಪರೀಕ್ಷೆ (Bigg Boss Agni Pareekshe) ಕುರಿತು ಹೇಳುವುದಾದರೆ, ಇದರಲ್ಲಿ, ಮಂಡ್ಯ ಜಿಲ್ಲೆಯ ಕೆಎಸ್&zwnj;ಆರ್&zwnj;ಟಿಸಿ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಜಿ.ಕೆ ಪೂರ್ಣಿಮಾ ಅವರಿಗೆ 30 ಸೆಕೆಂಡ್&zwnj; ದೊಡ್ಡ ಗಾತ್ರದ ಟೈಯರ್&zwnj; ಗಾಲಿ ಹೊಲ್ಡ್&zwnj; ಮಾಡುವಂತೆ ಟಾಸ್ಕ್&zwnj; ಕೊಟ್ಟಿದ್ದರು. ಇವರು 45 ಸೆಕೆಂಡ್&zwnj; ಟೈಯರ್&zwnj; ಎತ್ತಿ ಹಿಡಿದು, ತೀರ್ಪುಗಾರರಿಂದ ಸೈ ಎನ್ನಿಸಿಕೊಂಡರು. ಜೊತೆತೆ, ಇವರಿಗೆ ಕುಡುಕರ ರೀತಿಯಲ್ಲಿ ಟೈಟ್&zwnj; ಆಗಿ ಸಂಗೀತಾ ಶೃಂಗೇರಿ ಮತ್ತು ವಿನಯ್&zwnj; ಗೌಡ ಅವರಿಗೆ ಕ್ಲಾಸ್&zwnj; ತೆಗೆದುಕೊಳ್ಳುವಂತೆ ಟೆಸ್ಟ್&zwnj; ನೀಡಲಾಯಿತು. ಅದರಲ್ಲೂ ಅವರು ಎಲ್ಲರನ್ನೂ ರಂಜಿಸಿದರು. ನಾಲ್ವರ ಕಡೆಯಿಂದ ಗ್ರೀನ್&zwnj; ಸಿಗ್ನಲ್&zwnj; ಪಡೆದು ಮೊದಲ &lsquo;ಸ್ಟಾರ್&zwnj; ಕಂಟೆಸ್ಟಂಟ್&zwnj;&rsquo;(ನಾಲ್ವರು ಗ್ರೀನ್&zwnj; ಸಿಗ್ನಲ್ ಕೊಟ್ಟರೆ ಆ ಸ್ಪರ್ಧಿಗೆ ಸ್ಟಾರ್&zwnj; ಕಂಟೆಸ್ಟಂಟ್ ಬಿರುದು ಸಿಗುತ್ತೆ) ಎಂಬ ಬಿರುದು ಪಡೆದರು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/tv-talk/want-to-see-bigg-boss-kannada-13-house-is-like-then-here-is-a-super-opportunity-for-you-suc/articleshow-tzl49se"/>
        </item>
        <item>
            <title><![CDATA[Toxic Countdown Day 09: 'ಟಾಕ್ಸಿಕ್' ಕೌಂಟ್‌ಡೌನ್ 09.. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ಏನೆಲ್ಲಾ ಇದೆ? ಈ ಸ್ಪೆಷಲ್‌ ಸ್ಟೋರಿ ನೋಡಿ!]]></title>
            <link>https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-09-days-to-go/articleshow-n06oaqg</link>
            <guid isPermaLink="true">https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-09-days-to-go/articleshow-n06oaqg</guid>
            <pubDate>Tue, 18 Aug 2026 13:18:30 +0530</pubDate>
            <description><![CDATA[&lt;p&gt;ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ ಆಪ್&zwnj; ಕಿ ಅದಾಲತ್&zwnj;ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 09ರ ಕೌಂಟ್&zwnj;ಡೌನ್&zwnj;ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 08.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09x9jk2yych61nr961cf14p,imgname-whatsapp-image-2026-08-18-at-12.49.42-pm-1787039107682.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Release Date-Rocking Star Yash-Toxic Movie Countdown 09: ಯಶ್&zwnj; ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ 09.&lt;/strong&gt;&lt;/p&gt;&lt;p&gt;ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಬ್ಬದ ಹವಾ ಜೋರಾಗಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ ಚಾಲನೆಯಲ್ಲಿದೆ. ಇನ್ನೇನು ಕೇವಲ 09 ದಿನಗಳಷ್ಟೇ ಬಾಕಿ ಇದೆ. ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿರಸಿಕರಿಗೆ ಟಾಕ್ಸಿಕ್ ಬಿಡುಗಡೆ ಎಂಬುದು ಒಂದು ಹಬ್ಬದಂತೆ. ಟಾಕ್ಸಿಕ್&zwnj; ತೆರೆಯ ಮೇಲೆ ಕಾಣಿಸಿಕೊಳ್ಳಲು ಇನ್ನು 09 ದಿನಗಳಷ್ಟೇ ಬಾಕಿ ಇದ್ದು, ಪರದೆಯಲ್ಲಿ ಈ ಸಿನಿಮಾ ಕಣ್ತುಂಬಿಕೊಳ್ಳಲು ಕನ್ನಡಿಗರು ಸೇರಿದಂತೆ ಜಗತ್ತಿನಾದ್ಯಂತ ಸಿನಿರಸಿಕರು ಹಗಲಿರುಳೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.&lt;/p&gt;&lt;h2&gt;ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್&zwnj;ದಾಸ್ ನಿರ್ದೇಶನ&lt;/h2&gt;&lt;p&gt;ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್&zwnj;ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಆದರೆ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಡಬ್ ಆಗಿರುವ ವರ್ಷನ್ ಬಿಡುಗಡೆ ಆಗಲಿದೆ. ಹಾಲಿವುಡ್ ತಂತ್ರಜ್ಞರು ಸೇರಿದಂತೆ, ಜಗತ್ತಿನ ಖ್ಯಾತ ಟೆಕ್ನಿಷಿಯನ್ಸ್&zwnj; ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಮೂಡಿ ಬಂದಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಈ ಮುಳಕ ಕನ್ನಡ ಸಿನಿಮಾ ಇದೇ ಮೊದಲ ಬಾರಿಗೆ ಜಗತ್ತಿನಾದ್ಯಂತ ಹಾಲಿವುಡ್ ಸಿನಿಮಾದಂತೆ ರಿಲೀಸ್ ಆಗಲಿದೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ವಿಶ್ವದಾದ್ಯಂತ ಮೆರೆದಾಡಲಿದೆ.&lt;/p&gt;&lt;p&gt;ನಮಿತ್ ಮಲ್ಹೋತ್ರಾ ಹಾಗೂ ಯಶ್ ಪಾರ್ಟ್&zwnj;ನರ್&zwnj;ಶಿಪ್&zwnj;ನಲ್ಲಿ ಟಾಕ್ಸಿಕ್ ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಕೂಡ ಈ ಬಜೆಟ್&zwnj;ನಲ್ಲಿ ಸೇರಿಕೊಂಡಿದೆ. ಈಗಾಗಲೇ ಸಿನಿಮಾದ ಬಗ್ಗೆ ಅಪರಿಮಿತ ನಿರೀಕ್ಷೆ ಸೃಷ್ಟಿಯಾಗಿದ್ದು, ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂಬುದು ಸಿನಿಮಾ ಬಾಕ್ಸ್&zwnj; ಆಫೀಸ್ ಪಂಡಿತರ ಲೆಕ್ಕಾಚಾರ. ನಟ ಯಶ್ ಅವರು ತಮ್ಮ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ಬರೋಬ್ಬರಿ 4.5 ವರ್ಷ ಕೊಟ್ಟು ಬಿಗ್ ಬಜೆಟ್ ಹಾಗೂ ರಿಚ್ ಮೂಲಕ ಪ್ಯಾನ್ ವರ್ಲ್ಡ್ ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಇನ್ನೇನು ಟಾಕ್ಸಿಕ್ ಕೇವಲ 9 ದಿನಗಳ ಬಳಿಕ ತೆರೆಯ ಮೇಲೆ ರಾರಾಜಿಸಲಿದೆ. ಹಾಗೇ, ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ಅಂದರೆ 08 ನವೆಂಬರ್ 2026ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ.&lt;/p&gt;&lt;p&gt;ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 09 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು, ಅಂದರೆ ನಯನಾತಾರಾ, ಕನ್ನಡತಿ ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಬಹಳಷ್ಟು ನಿರೀಕ್ಷೆ ಮೂಡಿಸಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್&zwnj;ಡೌನ್ ಶುರುವಾಗಿದೆ. ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ ಆಪ್&zwnj; ಕಿ ಅದಾಲತ್&zwnj;ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 09ರ ಕೌಂಟ್&zwnj;ಡೌನ್&zwnj;ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 08. ಎಲ್ಲಾ ದಿನಗಳ ಅಪ್&zwnj;ಡೇಟ್&zwnj;ಗೆ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-09-days-to-go/articleshow-n06oaqg"/>
        </item>
        <item>
            <title><![CDATA[ನನ್ನನ್ನು ಶಾಂತಿಯಿಂದ ಸಾಯಲು ಬಿಡಿ.. ಮಾಡೆಲ್‌ ಜೀವನದ ಕೊನೆಯ 90 ನಿಮಿಷ]]></title>
            <link>https://kannada.asianetnews.com/cine-world/bhopal-twisha-sharma-suicide-cbi-chargesheet-reveals-last-90-minutes/articleshow-pkabpy5</link>
            <guid isPermaLink="true">https://kannada.asianetnews.com/cine-world/bhopal-twisha-sharma-suicide-cbi-chargesheet-reveals-last-90-minutes/articleshow-pkabpy5</guid>
            <pubDate>Tue, 18 Aug 2026 13:05:42 +0530</pubDate>
            <description><![CDATA[&lt;p&gt;ಮಾಡೆಲ್&zwnj; ತ್ವಿಶಾ ಶರ್ಮಾ ಸಾವಿನ ಬಗ್ಗೆ ಸಾಕಷ್ಟು ಹೊಸ ವಿಷ್ಯಗಳು ಹೊರಗೆ ಬಿದ್ದಿವೆ. ಈಗಾಗಲೇ ಚಾರ್ಜ್&zwnj; ಶೀಟ್&zwnj; ಸಲ್ಲಿಕೆಯಾಗಿದ್ದು, 90 ನಿಮಿಷದಲ್ಲಿ ಏನೆಲ್ಲಾ ಆಯ್ತು ಎಂಬುದನ್ನು ಹೇಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09wr27kzgrxmbb5g3ccv35c,imgname-twisha-sharma--2--1787038533875.jpg" type="image/jpeg" height="390" width="690"/>
            <content:encoded><![CDATA[&lt;p&gt;ಭೋಪಾಲ್ನ ಚರ್ಚಿತ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಘಾತಕಾರಿ ವಿವರಗಳು ಬಹಿರಂಗವಾಗಿವೆ. ಸಿಬಿಐ ಪ್ರಕಾರ, 34 ವರ್ಷದ ಮಾಜಿ ಮಿಸ್ ಪುಣೆ ತ್ವಿಶಾ ಸಾವು ಕೊಲೆಯಲ್ಲ, ಆತ್ಮಹತ್ಯೆ ಎಂಬುದು ಬಹಿರಂಗವಾಗಿದೆ. ನಿರಂತರ ಮಾನಸಿಕ ಕಿರುಕುಳದಿಂದ ಬೇಸತ್ತು ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.&lt;/p&gt;&lt;p&gt;30 ಪುಟಗಳ ಚಾರ್ಜ್ಶೀಟ್ನಲ್ಲಿ ತ್ವಿಶಾ ಸಾವಿಗೂ ಮುನ್ನ ನಡೆದ ಕೊನೆಯ ಸುಮಾರು 90 ನಿಮಿಷಗಳ ಘಟನೆಗಳ ವಿವರ, ಸಿಸಿಟಿವಿ ದೃಶ್ಯಗಳು, ವಾಟ್ಸಾಪ್ ಸಂದೇಶಗಳು, ಕರೆ ದಾಖಲೆಗಳು, ಕೌನ್ಸೆಲಿಂಗ್ ವರದಿಗಳು ಹಾಗೂ ಹಣಕಾಸಿನ ವಿವಾದದ ಮಾಹಿತಿಯನ್ನು ದಾಖಲಿಸಲಾಗಿದೆ.&lt;/p&gt;&lt;h2&gt;ಸಾವಿಗೂ ಮುನ್ನದ ಕೊನೆಯ 90 ನಿಮಿಷ&lt;/h2&gt;&lt;p&gt;ಚಾರ್ಜ್ಶೀಟ್ ಪ್ರಕಾರ, ರಾತ್ರಿ 9.20ಕ್ಕೆ ತ್ವಿಶಾ ತನ್ನ ಅತ್ತಿಗೆ ರಾಶಿಗೆ ಕರೆ ಮಾಡಿದ್ದರು. ಅವರು ಅಳುತ್ತಾ, ಬೆನ್ನು ನೋವಿನ ಕಾರಣ ಪತಿ ಸಮರ್ಥ್ಗೆ ಬೇರೆ ಕೋಣೆಯಲ್ಲಿ ಮಲಗುವಂತೆ ಹೇಳಿದ್ದಕ್ಕೆ ಆತ ಆಕ್ರಮಣಕಾರಿಯಾಗಿ ವರ್ತಿಸಿದ್ದಾನೆ ಎಂದು ತಿಳಿಸಿದ್ದರು. 9.29ಕ್ಕೆ ಮತ್ತೆ ಕರೆ ಬಂದರೂ, ತ್ವಿಶಾ ಅಳುತ್ತಿದ್ದ ಕಾರಣ ಹೆಚ್ಚಿನ ಮಾತುಕತೆ ಸಾಧ್ಯವಾಗಲಿಲ್ಲ. ರಾತ್ರಿ 9.36ಕ್ಕೆ ಅವರು ತಮ್ಮ ಅತ್ತಿಗೆಗೆ ಕೊನೆಯ ಸಂದೇಶ ಕಳುಹಿಸಿದ್ದರು ಎಂದು ಸಿಬಿಐ ಹೇಳಿದೆ. ಅದರಲ್ಲಿ, ಅವನಿಗೆ ತನ್ನ ಹೆಂಡತಿಯ ಡೆಡ್ ಬಾಡಿಯನ್ನು ತೆಗೆದುಕೊಂಡು ಹೋಗಲು ಹೇಳಿ, ಆದರೆ ನಾಳೆ. ನನಗೆ ಈಗ ಶಾಂತಿಯಿಂದ ಸಾಯಲು ಬಿಡಿ ಎಂದು ಬರೆದಿದ್ದರು ಎನ್ನಲಾಗಿದೆ.&lt;/p&gt;&lt;p&gt;ಸಿಸಿಟಿವಿ ದೃಶ್ಯಗಳ ಪ್ರಕಾರ, 9.40ಕ್ಕೆ ತ್ವಿಶಾ ಒಬ್ಬರೇ ಮೆಟ್ಟಿಲುಗಳ ಮೂಲಕ ಮೇಲ್ಛಾವಣಿಯತ್ತ ತೆರಳಿದ್ದಾರೆ. 9.41ಕ್ಕೆ ತಂದೆಗೆ ಕರೆ ಮಾಡಿ, ಸಮರ್ಥ್ ತುಂಬಾ ಆಕ್ರಮಣಕಾರಿಯಾಗಿದ್ದಾನೆ, ತಕ್ಷಣ ಬರುವಂತೆ ತಿಳಿಸಿದ್ದಾರೆ. ರಾತ್ರಿ 10.5ಕ್ಕೆ ಇದೇ ವಿಚಾರವನ್ನು ತಾಯಿಗೂ ತಿಳಿಸಿದ್ದಾರೆ. ನಂತರ ಕುಟುಂಬಸ್ಥರು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.&lt;/p&gt;&lt;p&gt;10.10ಕ್ಕೆ ತಾಯಿ ಗಿರಿಬಾಲಾ ಸಿಂಗ್ ಅವರಿಗೆ ಕರೆ ಮಾಡಿ ತ್ವಿಶಾಳನ್ನು ನೋಡಿಕೊಳ್ಳುವಂತೆ ತಿಳಿಸಿದ್ದಾರೆ. 10.16ಕ್ಕೆ ಗಿರಿಬಾಲಾ ಕೆಳಗಿನ ಕೋಣೆಗೆ ತೆರಳಿದ್ದು, 10.18ಕ್ಕೆ ತ್ವಿಶಾ ಗೆ ಕರೆ ಮಾಡಿದ್ದಾರೆ. 10.21ಕ್ಕೆ ಸಮರ್ಥ್ಗೆ ಕರೆ ಮಾಡಲಾಗಿದೆ. 10.23ಕ್ಕೆ ಗಿರಿಬಾಲಾ ಮತ್ತು ಸಮರ್ಥ್ ಸಿಸಿಟಿವಿಯಲ್ಲಿ ಮೇಲ್ಛಾವಣಿಯತ್ತ ತೆರಳುತ್ತಿರುವುದು ಕಂಡುಬಂದಿದೆ. ನಂತರ ತ್ವಿಶಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ರಾತ್ರಿ 10.55ಕ್ಕೆ ಏಮ್ಸ್ ಭೋಪಾಲ್ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.&lt;/p&gt;&lt;h3&gt;ಪೋಸ್ಟ್ಮಾರ್ಟಂ ವರದಿ ಏನು ಹೇಳಿದೆ?&lt;/h3&gt;&lt;p&gt;ಮೊದಲ ಪೋಸ್ಟ್ಮಾರ್ಟಂ ವರದಿ ಕುರಿತು ಕುಟುಂಬಸ್ಥರು ಪ್ರಶ್ನೆಗಳನ್ನು ಎತ್ತಿದ ನಂತರ, ಮಧ್ಯಪ್ರದೇಶ ಹೈಕೋರ್ಟ್ ಆದೇಶದ ಮೇರೆಗೆ ಏಮ್ಸ್ ದೆಹಲಿಯ ವೈದ್ಯಕೀಯ ಮಂಡಳಿ ಮರುಪೋಸ್ಟ್ಮಾರ್ಟಂ ನಡೆಸಿತ್ತು. ಸಿಬಿಐ ಚಾರ್ಜ್ಶೀಟ್ ಪ್ರಕಾರ, ಮರುಪೋಸ್ಟ್ಮಾರ್ಟಂ ವರದಿಯಲ್ಲಿ ನೇಣು ಬಿಗಿದ ಪರಿಣಾಮ ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸಿದೆ ಎಂದು ತಿಳಿಸಲಾಗಿದೆ.&lt;/p&gt;&lt;p&gt;&lt;strong&gt;ಆನ್ಲೈನ್ ಪರಿಚಯ, ಮದುವೆ ಮತ್ತು ವೈವಾಹಿಕ ಕಲಹ&lt;/strong&gt;&lt;/p&gt;&lt;p&gt;ಚಾರ್ಜ್ಶೀಟ್ ಪ್ರಕಾರ, 2025ರ ಫೆಬ್ರವರಿಯಲ್ಲಿ ಆನ್ಲೈನ್ ಡೇಟಿಂಗ್ ಆ್ಯಪ್ ಮೂಲಕ ತ್ವಿಶಾ ಮತ್ತು ಸಮರ್ಥ್ ಪರಿಚಯವಾಗಿದ್ದರು. 2025ರ ಡಿಸೆಂಬರ್ 9ರಂದು ಇಬ್ಬರೂ ಮದುವೆಯಾಗಿದ್ದರು. ಮದುವೆಯ ನಂತರ ಸಮರ್ಥ್ ತ್ವಿಶಾಳ ಹಿಂದಿನ ಸಂಬಂಧಗಳ ಕುರಿತು ಅವಮಾನಕರ ಹಾಗೂ ಅನೈತಿಕ ಟೀಕೆಗಳನ್ನು ಮಾಡುತ್ತಿದ್ದ ಎಂದು ಸಿಬಿಐ ಆರೋಪಿಸಿದೆ. ಈ ಬಗ್ಗೆ ತ್ವಿಶಾ ಅತ್ತೆಗೆ ದೂರು ನೀಡಿದಾಗಲೆಲ್ಲಾ ಅವರು ಮಗನ ಪರ ನಿಂತಿದ್ದರು ಎನ್ನಲಾಗಿದೆ.&lt;/p&gt;&lt;p&gt;2026ರ ಮಾರ್ಚ್ನಲ್ಲಿ ತ್ವಿಶಾಳ ತಂದೆಗೆ ಹೃದಯಾಘಾತವಾದಾಗ, ಚಿಕಿತ್ಸೆಗಾಗಿ ಅವರು ತವರು ಮನೆಗೆ ತೆರಳಿದ್ದರು. ಆದರೆ ಭೋಪಾಲ್ಗೆ ಹಿಂದಿರುಗುವಂತೆ ಪತಿ ಮತ್ತು ಅತ್ತೆ ಒತ್ತಡ ಹೇರಿದ್ದರೆಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ನಂತರ ಮಾರ್ಚ್ 24ರಂದು ಅವರು ಭೋಪಾಲ್ಗೆ ಮರಳಿದ್ದರು.&lt;/p&gt;&lt;p&gt;&lt;strong&gt;ಗರ್ಭಧಾರಣೆ, ಗರ್ಭಪಾತದ ಒತ್ತಡ ಮತ್ತು ಕಿರುಕುಳದ ಆರೋಪ&lt;/strong&gt;&lt;/p&gt;&lt;p&gt;ಏಪ್ರಿಲ್ 16ರಂದು ತ್ವಿಶಾಗೆ ತಾನು ಗರ್ಭಿಣಿಯಾಗಿರುವುದು ತಿಳಿದುಬಂದಿತ್ತು. ವೈವಾಹಿಕ ಸಂಬಂಧದಲ್ಲಿನ ಒತ್ತಡದಿಂದಾಗಿ ಮಗುವನ್ನು ಮುಂದುವರಿಸುವ ಬಗ್ಗೆ ಅವರು ಗೊಂದಲದಲ್ಲಿದ್ದರು ಎನ್ನಲಾಗಿದೆ. ಏಪ್ರಿಲ್ 17ರಂದು ಈ ವಿಚಾರವಾಗಿ ಪತಿ-ಪತ್ನಿ ನಡುವೆ ವಿವಾದ ಉಂಟಾಗಿದ್ದು, ನಂತರ ತ್ವಿಶಾ ತವರು ಮನೆಗೆ ತೆರಳಿದ್ದರು.&lt;/p&gt;&lt;p&gt;ಏಪ್ರಿಲ್ 30ರಂದು ಅವರಿಗೆ ಪ್ಯಾನಿಕ್ ಅಟ್ಯಾಕ್ ಬಂದಿದ್ದು, ಮನೋವೈದ್ಯರ ಬಳಿ ಕರೆದೊಯ್ಯಲಾಗಿತ್ತು. ಮೇ 6ರಂದು ಅವರು ತಮ್ಮ ಹಳೆಯ ಉದ್ಯೋಗಕ್ಕೆ ಮರಳುವ ಅವಕಾಶವನ್ನು ಸ್ವೀಕರಿಸಿದ್ದರು. ಅದೇ ದಿನ ಗರ್ಭಪಾತಕ್ಕಾಗಿ ಮೊದಲ ಔಷಧಿ ತೆಗೆದುಕೊಂಡಿದ್ದರು ಎನ್ನಲಾಗಿದೆ. ಮೇ 7ರಂದು ಸಾಸು ಗಿರಿಬಾಲಾ ಅವರನ್ನು ಆಸ್ಪತ್ರೆಗೆ ಕರೆದೊಯ್ದು, ಗರ್ಭಪಾತವನ್ನು ನಿಲ್ಲಿಸಲು ಸಾಧ್ಯವೇ ಎಂದು ವೈದ್ಯರನ್ನು ಕೇಳಿದ್ದರು. ಆದರೆ ವೈದ್ಯರು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಕೌನ್ಸೆಲಿಂಗ್ ವೇಳೆ ತ್ವಿಶಾ ಅಳುತ್ತಾ, ಗರ್ಭಪಾತ ಮಾಡಿಸಿಕೊಳ್ಳುತ್ತಿರುವ ಕಾರಣಕ್ಕೆ ಅತ್ತೆ ತಮ್ಮನ್ನು ದೂರಿದ್ದರು ಎಂದು ಆರೋಪಿಸಿದ್ದಾರೆ. ಮೇ 8ರಂದು ಎರಡನೇ ಔಷಧಿ ತೆಗೆದುಕೊಂಡ ನಂತರ ತೀವ್ರ ನೋವಿನಿಂದ ಬಳಲುತ್ತಿದ್ದಾಗಲೂ ಸಮರ್ಥ್ಮ, ಪತ್ನಿ ಬೆಂಬಲಕ್ಕೆ ಬಂದಿರಲಿಲ್ಲ.&lt;/p&gt;&lt;p&gt;ಮೇ 9ರಂದು ಸಮರ್ಥ್, ಗರ್ಭದಲ್ಲಿರುವ ಮಗು ತನ್ನದೇ ಎಂಬುದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾನೆ ಎಂದು ಸಿಬಿಐ ಆರೋಪಿಸಿದೆ. ಇದಾದ ಬಳಿಕ ತ್ವಿಶಾ ತನ್ನ ತಾಯಿಗೆ ನನ್ನ ಉಸಿರೇ ಇಲ್ಲಿ ಕಟ್ಟಿಹೋಗುತ್ತಿದೆ ಎಂಬ ಅರ್ಥದ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.&lt;/p&gt;&lt;p&gt;&lt;strong&gt;20 ಲಕ್ಷದ ಷೇರು ಹಣದ ವಿವಾದ&lt;/strong&gt;&lt;/p&gt;&lt;p&gt;ದಂಪತಿಯ ನಡುವಿನ ವಿವಾದದಲ್ಲಿ ಹಣಕಾಸಿನ ವಿಚಾರವೂ ಪ್ರಮುಖವಾಗಿತ್ತು ಎಂದು ಚಾರ್ಜ್ಶೀಟ್ ಹೇಳುತ್ತದೆ. ತ್ವಿಶಾ ಅವರ ಡಿಮ್ಯಾಟ್ ಖಾತೆಯಲ್ಲಿ ಸುಮಾರು 20 ಲಕ್ಷ ಮೌಲ್ಯದ ಷೇರುಗಳಿದ್ದವು ಎನ್ನಲಾಗಿದೆ. ಈ ಹಣವನ್ನು ಸಮರ್ಥ್ ಮತ್ತು ಅವರ ತಾಯಿ, ಏಪ್ರಿಲ್ 7ರಂದು ತೆರೆಯಲಾಗಿದ್ದ ಜಂಟಿ ಖಾತೆಗೆ ವರ್ಗಾಯಿಸುವಂತೆ ಒತ್ತಡ ಹೇರಿದ್ದರು ಎಂದು ಸಿಬಿಐ ಆರೋಪಿಸಿದೆ. ಸಮರ್ಥ್ ಈ ಹಣವನ್ನು ಚೀನಾದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದ್ದ ಎನ್ನಲಾಗಿದೆ. ಆದರೆ ತ್ವಿಶಾ ಹಣ ತನ್ನ ತಂದೆಗೆ ಸೇರಿದ್ದು, ಅದನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರು. ಪ್ರಕರಣದಲ್ಲಿ ತ್ವಿಶಾ ಅವರ ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳನ್ನು ಸಿಬಿಐ ದಾಖಲಿಸಿದೆ.&lt;/p&gt;]]></content:encoded>
            <category>entertainment</category>
            <dc:creator>Roopa Hegde</dc:creator>
            <atom:link href="https://kannada.asianetnews.com/cine-world/bhopal-twisha-sharma-suicide-cbi-chargesheet-reveals-last-90-minutes/articleshow-pkabpy5"/>
        </item>
        <item>
            <title><![CDATA['ಕೃಷ್ಣಂ ಪ್ರಣಯ ಸಖಿ' ವೆಜ್​ ನಟಿಗೆ ಕೇರಳದಲ್ಲಿ ಗೋಮಾಂಸದ ಪ್ರಶ್ನೆ: ಆ ಪತ್ರಕರ್ತನ ಕಿಡಿಗೇಡಿತನಕ್ಕೆ ಭಾರಿ ಟೀಕೆ]]></title>
            <link>https://kannada.asianetnews.com/entertainment/malvika-sharma-asked-about-beef-in-kerala-media-ecosystem-normalises-provocations-against-hindus-suc/articleshow-e5v226g</link>
            <guid isPermaLink="true">https://kannada.asianetnews.com/entertainment/malvika-sharma-asked-about-beef-in-kerala-media-ecosystem-normalises-provocations-against-hindus-suc/articleshow-e5v226g</guid>
            <pubDate>Tue, 18 Aug 2026 12:54:52 +0530</pubDate>
            <description><![CDATA['ಖಲೀಫಾ' ಸಿನಿಮಾ ಪ್ರಚಾರಕ್ಕಾಗಿ ಕೇರಳಕ್ಕೆ ಬಂದಿದ್ದ ಸಸ್ಯಾಹಾರಿ ನಟಿ ಮಾಳವಿಕಾ ಶರ್ಮಾ ಅವರಿಗೆ ಪತ್ರಕರ್ತರೊಬ್ಬರು ಗೋಮಾಂಸ ತಿನ್ನುತ್ತೀರಾ ಎಂದು ಅನಗತ್ಯ ಪ್ರಶ್ನೆ ಕೇಳಿ ಮುಜುಗರ ಉಂಟುಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಈ ಪ್ರಶ್ನೆ ಕೇಳಲಾಗಿದೆ ಎಂದು ನೆಟ್ಟಿಗರು ಪತ್ರಕರ್ತನನ್ನು ಟ್ರೋಲ್ ಮಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09w3rz26cr0sawjk5yxz5nr,imgname-malavika-sharma-1787037869026.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳಕ್ಕೂ, ಗೋಮಾಂಸಕ್ಕೂ ಭಾರಿ ನಂಟಿದೆ. ಇಲ್ಲಿನ ಬಹುತೇಕ ಮಂದಿ ಇದನ್ನು ಸೇವಿಸುತ್ತಾರೆ. ಗೋಮಾಂಸ ಬ್ಯಾನ್​ ಆಗಿದ್ದರೂ ಕೆಲವು ಕಡೆಗಳಲ್ಲಿ ಅದು ಅವ್ಯಾಹತವಾಗಿ ಖುಲ್ಲಂಖುಲ್ಲಾ ಆಗಿಯೇ ಮಾರಾಟ ಆಗುತ್ತಿದೆ. ಹಾಗೆಂದು ಕಂಡಕಂಡವರಿಗೆಲ್ಲಾ ಗೋಮಾಂಸ ತಿನ್ನುತ್ತೀರಾ ಎನ್ನುವ ಪ್ರಶ್ನೆ ಕೇಳಿದರೆ ಹೇಗೆ? ಅಂಥದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದ್ದು, ಸಿನಿಮಾ ಪ್ರಚಾರಕ್ಕೆ ಬಂದಿರುವ ಸಸ್ಯಾಹಾರಿ ನಟಿಗೆ ಗೋಮಾಂಸ ತಿನ್ನುತ್ತೀರಾ ಎಂದು ಪತ್ರಕರ್ತನೊಬ್ಬ ಪ್ರಶ್ನೆ ಕೇಳಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಇಂದಿನ ಹಲವು ಪತ್ರಕರ್ತರಿಗೆ ಎಲ್ಲಿ, ಏನು ಕೇಳಬೇಕು ಎನ್ನುವುದು ತಿಳಿದಿಲ್ಲ ಎನ್ನುವುದು ಜಗಜ್ಜಾಹಿರವಾಗಿರುವ ಮಾತೇ. ಹಾಗೆಂದು ವೇದಿಕೆಯ ಮೇಲೆ ಒಬ್ಬರಿಗೆ ಅತೀ ಮುಜುಗರ ಆಗುವಂಥ, ಅನಗತ್ಯ ಪ್ರಶ್ನೆಗಳನ್ನು ಕೇಳಿ ಫೇಮಸ್​ ಆಗುವ ಖಯಾಲಿ ಇರುತ್ತದೆ ಎನ್ನುವುದಕ್ಕೆ ಈ ಪ್ರಶ್ನೆ ಸಾಕ್ಷಿಯಾಗಿದೆ.&lt;/p&gt;&lt;p&gt;ಇಂಥದ್ದೊಂದು ಮುಜುಗರ ಅನುಭವಿಸಿದ್ದು, ಬಹುಭಾಷಾ ನಟಿ, ಗಣೇಶ್​ ಅವರ ಜೊತೆ 'ಕೃಷ್ಣಂ ಪ್ರಣಯ ಸಖಿ' ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ಮಾಳವಿಕಾ ಶರ್ಮಾ (Malavika Sharma). ಅವರು ತಮ್ಮ ಮಲಯಾಳಿ ಸಿನಿಮಾ &quot;ಖಲೀಫಾ: ದಿ ಇಂಟ್ರೋ&quot; ಪ್ರಚಾರಕ್ಕಾಗಿ ಕೇರಳಕ್ಕೆ ಬಂದಿದ್ದರು. ಮಾಧ್ಯಮ ಸಂವಾದದ ಸಮಯದಲ್ಲಿ, ವರದಿಗಾರರೊಬ್ಬರು ನಿಮಗೆ ಗೋಮಾಂಸ ಇಷ್ಟವೇ, ಅದು ಹೇಗೆ ಎನ್ನಿಸಿತು ಎಂದು ಅನಗತ್ಯ ಪ್ರಶ್ನೆ ಕೇಳಿದ್ದಾನೆ. ಸಿನಿಮಾಕ್ಕೂ, ಈ ಪ್ರಶ್ನೆಗೂ ಏನೂ ಸಂಬಂಧವೇ ಇಲ್ಲ. ಪತ್ರಿಕಾಗೋಷ್ಠಿಗೆ ಬರುವಾಗಲೂ ಗೋಮಾಂಸದ ಕನಸನ್ನೇ ಕಾಣುತ್ತಿದ್ದ ಈ ಪತ್ರಕರ್ತ, ಇಂಥದ್ದೊಂದು ಪ್ರಶ್ನೆ ಕೇಳಿದಾಗ, ಅಲ್ಲಿ ಸ್ವಲ್ಪ ಗಲಿಬಿಲಿಯಾಯಿತು.&lt;/p&gt;&lt;h2&gt;&lt;strong&gt;ನಟಿಗೆ ಇರುಸುಮುರುಸು&lt;/strong&gt;&lt;/h2&gt;&lt;p&gt;ಅದರಲ್ಲಿಯೂ ನಟಿಗೆ ಇದರಿಂದ ಇರುಸುಮುರುಸು ಉಂಟಾಯಿತು. ಆದರೆ, ಸಮಾಧಾನದಿಂದ ನಟಿ, ನಾನು ಸಸ್ಯಾಹಾರಿ. ಮಾಂಸವೆಲ್ಲಾ ತಿನ್ನುವುದಿಲ್ಲ. ಗೋಮಾಂಸ ತಿಂದಿಲ್ಲ ಎಂದರು. ಮಾಳವಿಕಾ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ ಮತ್ತು ಪ್ರಶ್ನೆ ಕೇಳಿದ ವ್ಯಕ್ತಿ ಗಮನಾರ್ಹ ಟ್ರೋಲಿಂಗ್ ಎದುರಿಸುತ್ತಿದ್ದಾರೆ. ಆತನಿಗೆ ಬೇಕಾಗಿದ್ದು ಕೂಡ ಇದೇ ಇರಬಹುದು.&lt;/p&gt;&lt;p&gt;ಈ ಪ್ರಶ್ನೆಯು ಉದ್ದೇಶಪೂರ್ವಕವಾಗಿ ಕೇಳಿ ಪ್ರಚೋದನೆ ಉಂಟು ಮಾಡುವ ಪ್ರಶ್ನೆಯಾಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಮನರಂಜನೆಯಾಗಿ ಪರಿವರ್ತಿಸಲಾಗುತ್ತದೆ ಮತ್ತು ಗೋಮಾಂಸ ಸೇವನೆ ಬಗ್ಗೆ ಹಿಂದೂ ಸೆಲೆಬ್ರಿಟಿಗೆ ಕೇಳಿ ವಿಕೃತ ಆನಂದ ಪಡೆಯುವುದು ಆ ಸೋ ಕಾಲ್ಡ್​ ಪತ್ರಕರ್ತನ ಉದ್ದೇಶವಾಗಿತ್ತು ಎಂದೇ ಹೇಳಲಾಗುತ್ತಿದೆ.&lt;/p&gt;&lt;h3&gt;&lt;strong&gt;ಹಿಂದೂ ಭಾವನೆಗೆ ಉದ್ದೇಶಪೂರ್ವಕ ಧಕ್ಕೆ?&lt;/strong&gt;&lt;/h3&gt;&lt;p&gt;ಇನ್ನು ನಟಿ, ಮಾಳವಿಕಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಮಲಯಾಳಂ ಸಿನಿಮಾ, ತೆಲುಗು ಸಿನಿಮಾ ಮತ್ತು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಮಾಳವಿಕಾ 2018 ರಲ್ಲಿ ನೆಲ ಟಿಕೆಟ್ ಚಿತ್ರದ ಮೂಲಕ ತೆಲುಗು ಚೊಚ್ಚಲ ಪ್ರವೇಶ ಮಾಡಿದರು. ನಂತರ ಅವರು 2021 ರಲ್ಲಿ ತಮಿಳು ಚಿತ್ರ ರೆಡ್ ನಲ್ಲಿ ಕಾಣಿಸಿಕೊಂಡರು. 2022 ರಲ್ಲಿ, ಅವರು ಕಾಫಿ ವಿತ್ ಕಾದಲ್ ನಲ್ಲಿ ನಟಿಸಿದರು. 2024 ರಲ್ಲಿ, ಅವರು ಭೀಮಾದಲ್ಲಿ ಕಾಣಿಸಿಕೊಂಡರು. ಅದೇ ವರ್ಷ, ಅವರು ಹರೋಮ್ ಹರಾ ಚಿತ್ರದಲ್ಲೂ ನಟಿಸಿದರು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/malvika-sharma-asked-about-beef-in-kerala-media-ecosystem-normalises-provocations-against-hindus-suc/articleshow-e5v226g"/>
        </item>
        <item>
            <title><![CDATA[ನಾರ್ಸಿಸಿಸ್ಟ್ ನಡವಳಿಕೆ ಅಂದ್ರೆ ಏನು? ಪುನೀತ್ ರಾಜ್‌ಕುಮಾರ್ ಜತೆ ವಿಭಿನ್ನ ಪಾತ್ರದಲ್ಲಿ ನಟಿಸಿದ್ದ ಈ ನಟಿ ಬ್ರೇಕ್‌ಅಪ್ ಮಾಡಿಕೊಂಡಿದ್ದೇಕೆ?]]></title>
            <link>https://kannada.asianetnews.com/gallery/relationship/what-is-narcissistic-behavior-5-warning-signs-you-should-never-ignore-in-a-relationship-gxngygl</link>
            <guid isPermaLink="true">https://kannada.asianetnews.com/gallery/relationship/what-is-narcissistic-behavior-5-warning-signs-you-should-never-ignore-in-a-relationship-gxngygl</guid>
            <pubDate>Tue, 18 Aug 2026 12:36:48 +0530</pubDate>
            <description><![CDATA[&lt;p&gt;ಪುನೀತ್ ರಾಜ್&zwnj;ಕುಮಾರ್ ಜತೆ ನಟಸಾರ್ವಭೌಮ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ಬಾಯ್&zwnj;ಫ್ರೆಂಡ್ ಬಾಯ್&zwnj;ಫ್ರೆಂಡ್ ಒಬ್ಬ 'ನಾರ್ಸಿಸಿಸ್ಟ್' ಆಗಿದ್ದ, ಅದಕ್ಕೇ ಬ್ರೇಕಪ್ ಮಾಡಿಕೊಂಡೆ ಎಂದಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01fz7psegx5ngeyray8nvm6351,imgname-anupama-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ಪುನೀತ್ ರಾಜ್&zwnj;ಕುಮಾರ್ ಜತೆ ನಟಸಾರ್ವಭೌಮ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ಬಾಯ್&zwnj;ಫ್ರೆಂಡ್ ಬಾಯ್&zwnj;ಫ್ರೆಂಡ್ ಒಬ್ಬ 'ನಾರ್ಸಿಸಿಸ್ಟ್' ಆಗಿದ್ದ, ಅದಕ್ಕೇ ಬ್ರೇಕಪ್ ಮಾಡಿಕೊಂಡೆ ಎಂದಿದ್ದರು.&lt;/p&gt;&lt;img&gt;&lt;p&gt;ನಾನು ಪ್ರೀತಿಸಿದ್ದೇ ದೊಡ್ಡ ತಪ್ಪಾ? ನನ್ನದೇನೂ ತಪ್ಪಿಲ್ಲದಿದ್ದರೂ, ಎಲ್ಲವೂ ನನ್ನದೇ ತಪ್ಪು ಎಂದು ಅವರು ನನ್ನನ್ನು ನಂಬಿಸಿದ್ದರು. ನನ್ನ ವ್ಯಕ್ತಿತ್ವವನ್ನೇ ಕುಗ್ಗಿಸುವಂತೆ ಮಾಡಿದ್ದರು. ಹೀಗೆಂದು ನಟಿ ಅನುಪಮಾ ಪರಮೇಶ್ವರನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಮಾಜಿ ಬಾಯ್&zwnj;ಫ್ರೆಂಡ್ ಬಗ್ಗೆ ಹೇಳಿ ಸಂಚಲನ ಮೂಡಿಸಿದ್ದರು. ಹಾಗಿದ್ರೆ ಈ ನಾರ್ಸಿಸಿಸ್ಟ್ ನಡವಳಿಕೆ ಅಂದ್ರೆ ಏನು? ಅದನ್ನು ಗುರುತಿಸೋದು ಹೇಗೆ?&lt;/p&gt;&lt;img&gt;&lt;p&gt;ಬ್ರೇಕಪ್ ನಂತರ, ಆತ ಒಬ್ಬ 'ನಾರ್ಸಿಸಿಸ್ಟ್' (Narcissist) ಎಂದು ಓಪನ್ ಆಗಿ ಹೇಳಿಕೊಂಡಿದ್ದರು. ಅಷ್ಟಕ್ಕೂ ಅನುಪಮಾಗೆ ಅಷ್ಟೊಂದು ನರಕ ತೋರಿಸಿದ ಆ 'ನಾರ್ಸಿಸಿಸ್ಟ್ ನಡವಳಿಕೆ' ಅಂದ್ರೆ ಏನು? ಈ ಮನಸ್ಥಿತಿ ಇರುವವರು ಹೇಗೆ ವರ್ತಿಸುತ್ತಾರೆ? ಮನಃಶಾಸ್ತ್ರಜ್ಞರು ಏನು ಹೇಳ್ತಾರೆ ನೋಡೋಣ. ಮನಃಶಾಸ್ತ್ರದ ಪ್ರಕಾರ, ನಾರ್ಸಿಸಿಸಂ ಅಂದರೆ, ತಮ್ಮ ಬಗ್ಗೆ ತಾವೇ ಅತಿಯಾಗಿ ಭಾವಿಸಿಕೊಂಡು, ಬೇರೆಯವರ ಭಾವನೆಗಳನ್ನು ಸಂಪೂರ್ಣವಾಗಿ ತುಳಿದುಹಾಕುವ ಸ್ವಾರ್ಥ ಮನೋಭಾವ.&lt;/p&gt;&lt;img&gt;&lt;p&gt;ಅನುಪಮಾ ಹೇಳಿದಂತೆ, ಇಂಥವರು ಒಂದು ದಿನ ವಿಪರೀತ ಪ್ರೀತಿ ತೋರಿಸುತ್ತಾರೆ, ಮರುದಿನವೇ ಸಣ್ಣ ವಿಷಯಕ್ಕೂ ರಾಕ್ಷಸರಂತೆ ಬದಲಾಗುತ್ತಾರೆ. ನಂತರ, ತಮ್ಮದೇನೂ ತಪ್ಪಿಲ್ಲ ಎಂಬಂತೆ ಬಂದು ಕ್ಷಮೆ ಕೇಳಿ ಅಳುತ್ತಾರೆ. ಈ ರೀತಿಯ ಸೈಕಲಾಜಿಕಲ್ ಡ್ರಾಮಾದಿಂದ ಎದುರಿಗಿದ್ದವರನ್ನು ಗೊಂದಲಕ್ಕೆ ತಳ್ಳುತ್ತಾರೆ.&lt;/p&gt;&lt;img&gt;&lt;p&gt;ತಪ್ಪು ತಮ್ಮದೇ ಇದ್ದರೂ, ಮಾತಿನ ಚಾಕಚಕ್ಯತೆಯಿಂದ ಅದನ್ನು ಬೇರೆಯವರ ಮೇಲೆ ಹಾಕುತ್ತಾರೆ. &quot;ನಿನ್ನಿಂದಲೇ ನಾನು ಹೀಗೆ ನಡೆದುಕೊಳ್ಳಬೇಕಾಯಿತು&quot; ಎಂದು ನಂಬಿಸಿ, ಎದುರಿಗಿದ್ದವರೇ ತಪ್ಪಿತಸ್ಥರೆಂಬ ಭಾವನೆ ಬರುವಂತೆ ಮಾಡುತ್ತಾರೆ.&lt;/p&gt;&lt;img&gt;&lt;p&gt;&quot;ಆ ಸಂಬಂಧದಲ್ಲಿ ನನ್ನ ವ್ಯಕ್ತಿತ್ವವೇ ಕುಸಿದುಹೋದಂತೆ ಅನಿಸಿತು&quot; ಎಂದು ಅನುಪಮಾ ಹೇಳಿದ್ದರು. ನಾರ್ಸಿಸಿಸ್ಟ್&zwnj;ಗಳು ತಮ್ಮ ಸಂಗಾತಿಯ ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ನಾಶಮಾಡಿ, ಅವರು ತಮ್ಮ ಮೇಲೆ ಮಾತ್ರ ಅವಲಂಬಿತರಾಗುವಂತೆ ಮಾಡುತ್ತಾರೆ. ಸಂಬಂಧದಲ್ಲಿ ಎಷ್ಟೇ ಹಿಂಸೆ ನೀಡಿದರೂ, ಹೊರಗಿನ ಪ್ರಪಂಚದ ಮುಂದೆ ಅಥವಾ ಕೊನೆಯಲ್ಲಿ ತಾವೇ ಬಲಿಪಶುಗಳು (Victims) ಎಂದು ಬಿಂಬಿಸಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಸಂಗಾತಿ ಎಷ್ಟೇ ಮಾನಸಿಕ ಯಾತನೆ ಅನುಭವಿಸುತ್ತಿದ್ದರೂ ಇವರಿಗೆ ಅದರ ಬಗ್ಗೆ ಕಾಳಜಿ ಇರುವುದಿಲ್ಲ. ಎಲ್ಲವೂ ತಮ್ಮ ಅಧಿಪತ್ಯ ಮತ್ತು ತಮ್ಮ ಅಗತ್ಯಗಳ ಸುತ್ತಲೇ ಇರಬೇಕೆಂದು ಬಯಸುತ್ತಾರೆ. ನಾರ್ಸಿಸಿಸ್ಟ್ ಮನಸ್ಥಿತಿ ಇರುವವರ ಜೊತೆ ಪ್ರೀತಿಯಲ್ಲಿರುವುದು ಎಂದರೆ ಪ್ರತಿದಿನ ಮಾನಸಿಕ ಯುದ್ಧ ಮಾಡಿದಂತೆ. ಇಂತಹ ನಡವಳಿಕೆ ಹುಡುಗಿಯರಲ್ಲೇ ಇರಲಿ, ಹುಡುಗರಲ್ಲೇ ಇರಲಿ, ಅವರೊಂದಿಗೆ ಜೀವನ ನಡೆಸುವುದು ತುಂಬಾ ಕಷ್ಟ. ಅಂತಹ ಸಂಬಂಧದಿಂದ ಹೊರಬರುವುದೇ ಉತ್ತಮ.&lt;/p&gt;]]></content:encoded>
            <category>entertainment</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/relationship/what-is-narcissistic-behavior-5-warning-signs-you-should-never-ignore-in-a-relationship-gxngygl"/>
        </item>
        <item>
            <title><![CDATA[Anupama Gowda: ವಿದಾಯದ ನುಡಿ ಹೇಳಿ ಫ್ಯಾನ್ಸ್​ಗೆ ಬಿಗ್​ ಶಾಕ್​ ಕೊಟ್ಟ ಆ್ಯಂಕರ್​ ಅನುಪಮಾ ಗೌಡ: ಏನಾಯ್ತು ನಟಿಗೆ]]></title>
            <link>https://kannada.asianetnews.com/entertainment/anchor-anupama-gowda-gave-a-big-shock-to-fans-by-saying-goodbye-what-happened-to-the-actress-suc/articleshow-19vlvvx</link>
            <guid isPermaLink="true">https://kannada.asianetnews.com/entertainment/anchor-anupama-gowda-gave-a-big-shock-to-fans-by-saying-goodbye-what-happened-to-the-actress-suc/articleshow-19vlvvx</guid>
            <pubDate>Tue, 18 Aug 2026 12:27:36 +0530</pubDate>
            <description><![CDATA[ಖ್ಯಾತ ನಿರೂಪಕಿ ಮತ್ತು ನಟಿ ಅನುಪಮಾ ಗೌಡ, 8 ವರ್ಷಗಳ ಆ್ಯಂಕರಿಂಗ್ ಪಯಣಕ್ಕೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಅವರು, ಈ ಅನಿರೀಕ್ಷಿತ ನಿರ್ಧಾರಕ್ಕೆ ಕಾರಣ ಹಾಗೂ ತಮ್ಮ ಮನದ ನೋವನ್ನು ಬಿಚ್ಚಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09tegvpbg7mdew0wxcrm9n3,imgname-anupama-gowda-1787036124022.jpg" type="image/jpeg" height="390" width="690"/>
            <content:encoded><![CDATA[&lt;p&gt;ಆ್ಯಂಕರ್ ಎಂದಾಕ್ಷಣ ಕೆಲವೇ ಕೆಲವು ಜನ ನೆನಪಾಗ್ತಾರೆ. ಅವರಲ್ಲಿ ಒಬ್ಬರು ಆ್ಯಂಕರ್​ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು ನಟಿಯೂ ಆಗಿರುವ ಅನುಪಮಾ ಗೌಡ. ಇವರ ಆ್ಯಂಕರಿಂಗ್​ ಪಯಣಕ್ಕೆ 8 ವರ್ಷಗಳಾಗಿವೆ. ಇದೀಗ ಅವರು ತಮ್ಮ ಆ್ಯಂಕರಿಂಗ್​ ಕ್ಷೇತ್ರಕ್ಕೆ ಗುಡ್​ಬೈ ಹೇಳಿದ್ದು, ಈ ಕುರಿತು ವಿಡಿಯೋ ಮಾಡಿ ಅಭಿಮಾನಿಗಳಿಗೆ ಬಿಗ್​ ಶಾಕ್​ ನೀಡಿದ್ದಾರೆ. ತಮ್ಮ ನಿರೂಪಣಾ ವೃತ್ತಿಗೆ ನಿವೃತ್ತಿ ಘೋಷಿಸಿರೋ ಅನುಪಮಾ ಗೌಡ ಅವರು, ಇದನ್ನು ತಮ್ಮ ಜಾಲತಾಣದಲ್ಲಿ ಶೇರ್​ಮಾಡಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ಆ್ಯಂಕರಿಂಗ್​ ಪಯಣದ ಕುರಿತು ಮಾತನಾಡಿರುವ ನಟಿ, ನಾನು 2016ರಲ್ಲಿಯೇ ನಿರೂಪಕಿಯಾಗಬೇಕಿತ್ತು. ಆದರೆ 2 ವರ್ಷಗಳ ಸಮಯ ತೆಗೆದುಕೊಂಡು ಮೊದಲ ಬಾರಿಗೆ ವೇದಿಕೆ ಹತ್ತಿದ್ದು 2018 ಜೂ.22ರಂದು. ಅಲ್ಲಿಂದ ಪ್ರಾರಂಭವಾದ ಈ ಪ್ರಯಾಣ ಕೊನೆಗೊಂಡಿದ್ದು 2026ರ ಮೇ 05. ಅದು ಅನಿರೀಕ್ಷಿತವಾಗಿ ಒಲಿದು ಬಂದ ನಿವೃತ್ತಿ. ಏನೂ ಗೊತ್ತಿಲ್ಲದ್ದಿದ್ದ ನನಗೆ ಕನ್ನಡ ಕಲಿಸಿ, ವೇದಿಕೆ ಮೇಲೆ ನಿಲ್ಲೋದನ್ನು ಕಲಿಸಿಕೊಟ್ಟು.. ನನ್ನನ್ನು ನಿರೂಪಕಿಯಾಗಿ ಮಾಡಿ ಇಲ್ಲಿಯವರೆಗೂ ಬರಲು ನನ್ನ ಹಿಂದೆ ನಿಂತವರು ಹಲವರು. ನನ್ನ ನಿರೂಪಣೆಯ ಜರ್ನಿಯಲ್ಲಿ ಅತ್ಯುತ್ತಮ ವ್ಯಕ್ತಿಗಳು ಪರಿಚಯವಾದ್ರು, ಅವರೆಲ್ಲರೊಂದಿಗಿನ ಸಂಬಂಧವನ್ನು ನಾನು ನನ್ನ ಜೀವನದುದ್ದಕ್ಕೂ ಇಟ್ಟುಕೊಳ್ತೀನಿ ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ತುಂಬಾ ಕಲಿತಿದ್ದೇನೆ&lt;/strong&gt;&lt;/h2&gt;&lt;p&gt;ನಾನು ನನ್ನೊಳಗಿನ ಕಲಾವಿದೆಗೆ ತೃಪ್ತಿಪಡಿಸಬೇಕು ಅನ್ನೋದೇ ಈ ನಿರ್ಧಾರಕ್ಕೆ ಕಾರಣ.. ನಿಮ್ಮಿಂದ ತುಂಬಾ ಕಲಿತಿದ್ದೀನಿ, ತುಂಬಾ ಪ್ರೀತಿ ಕೊಟ್ಟಿದೀರಿ. ಎಲ್ಲರಿಗೂ ಥ್ಯಾಂಕ್ಯೂ.. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತೆ. ಮುಂದೆ ಬೇರೆ ಬೇರೆ ದಾರಿಗಳಿವೆ. ಮುಂದೆ ಜೀವನ ಇನ್ನೂ ಚೆನ್ನಾಗಿದೆ. ಈ ವಿದಾಯಕ್ಕೆ ಇದು ಸರಿಯಾದ ಸಮಯ.. ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ಅನುಪಮಾ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಅಷ್ಟಕ್ಕೂ ಏನಾಯ್ತು?&lt;/strong&gt;&lt;/h3&gt;&lt;p&gt;ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ. ನೀವೆಲ್ಲ ಸಾಕಮ್ಮ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ&rsquo; ಎಂದು ನೊಂದು ನುಡಿದಂತಿದೆ ಅನುಪಮಾ. &lsquo;ಸೀರಿಯಲ್​ಗೆ ಮತ್ತೆ ಬರುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ&rsquo; ಎಂದೂ ಹೇಳಿದ್ದಾರೆ. ಮಜಾ ಭಾರತ​&rsquo;, &lsquo;ಕನ್ನಡ ಕೋಗಿಲೆ&rsquo;, &lsquo;ರಾಜಾ ರಾಣಿ&rsquo;, &lsquo;ನಮ್ಮಮ್ಮ ಸೂಪರ್ ಸ್ಟಾರ್&rsquo;, &lsquo;ಸುವರ್ಣ ಸೂಪರ್​ಸ್ಟಾರ್ಸ್&rsquo;, &lsquo;ಸುವರ್ಣ ಜ್ಯಾಕ್​ಪಾಟ್&rsquo;, &lsquo;ಗರ್ಲ್ಸ್ vs ಬಾಯ್ಸ್&rsquo;, &lsquo;ಕ್ವಾಟ್ಲೆ ಕಿಚನ್&rsquo; ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಕೊನೆಯ ಶೋ ಅನ್ನು ಅವರಿಗೆ ಪೂರ್ಣವಾಗಿ ಮುಗಿಸುವ ಅವಕಾಶವೂ ಸಿಕ್ಕಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/anchor-anupama-gowda-gave-a-big-shock-to-fans-by-saying-goodbye-what-happened-to-the-actress-suc/articleshow-19vlvvx"/>
        </item>
        <item>
            <title><![CDATA[Bigg Bossಗೆ ಹೋಗೋ ಮೊದ್ಲೇ ದಾಖಲೆ ಹರಿದ್ರೆ, ತಲೆ ಬೋಳಿಸಿದ್ರೆ, ಸೆಗಣಿ ಹಚ್ಚಿದ್ರೆ ಮುಂದೆ ಒಳ್ಳೇದು; ಸಂಗೀತಾ ಶೃಂಗೇರಿ]]></title>
            <link>https://kannada.asianetnews.com/gallery/tv-talk/sangeetha-sringeri-about-bigg-boss-13-task-which-has-been-trolled-suc-c0zdlb7</link>
            <guid isPermaLink="true">https://kannada.asianetnews.com/gallery/tv-talk/sangeetha-sringeri-about-bigg-boss-13-task-which-has-been-trolled-suc-c0zdlb7</guid>
            <pubDate>Mon, 17 Aug 2026 20:04:50 +0530</pubDate>
            <description><![CDATA[&lt;p&gt;ಬಿಗ್​ಬಾಸ್​ 13ರ 'ಅಗ್ನಿಪರೀಕ್ಷೆ'ಯಲ್ಲಿ ಸಾಮಾನ್ಯ ಸ್ಪರ್ಧಿಗಳಿಗೆ ಗಿನ್ನೆಸ್ ದಾಖಲೆ ಹರಿಯುವಂತಹ ಕಠಿಣ ಟಾಸ್ಕ್&zwnj; ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಸಂಗೀತಾ ಶೃಂಗೇರಿ ಇದು ಸ್ಪರ್ಧಿಗಳ ಅನುಕೂಲಕ್ಕೆ ಎಂದು ಸಮರ್ಥಿಸಿಕೊಂಡರೂ, ಆಯ್ಕೆಗೂ ಮುನ್ನ ಇಂತಹ ಟಾಸ್ಕ್&zwnj; ಔಚಿತ್ಯ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke207ee1evjgw616x0tv2ec2,imgname-bigg-boss-sangeetha-sringeri-1767446395328.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್​ಬಾಸ್​ 13ರ 'ಅಗ್ನಿಪರೀಕ್ಷೆ'ಯಲ್ಲಿ ಸಾಮಾನ್ಯ ಸ್ಪರ್ಧಿಗಳಿಗೆ ಗಿನ್ನೆಸ್ ದಾಖಲೆ ಹರಿಯುವಂತಹ ಕಠಿಣ ಟಾಸ್ಕ್&zwnj; ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಸಂಗೀತಾ ಶೃಂಗೇರಿ ಇದು ಸ್ಪರ್ಧಿಗಳ ಅನುಕೂಲಕ್ಕೆ ಎಂದು ಸಮರ್ಥಿಸಿಕೊಂಡರೂ, ಆಯ್ಕೆಗೂ ಮುನ್ನ ಇಂತಹ ಟಾಸ್ಕ್&zwnj; ಔಚಿತ್ಯ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​​ 13ರಲ್ಲಿ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದ್ದು, ಇದಾಗಲೇ ಅಗ್ನಿಪರೀಕ್ಷೆಯ ರೌಂಡ್​ಗಳು ಮುಗಿದಿವೆ. ಕೆಲವರು ಸೆಲೆಕ್ಟ್​ ಆಗಿದ್ದು, ಕೆಲವರನ್ನು ಪೆಂಡಿಂಗ್​ನಲ್ಲಿ ಇಡಲಾಗಿದೆ.&lt;/p&gt;&lt;img&gt;&lt;p&gt;ಆದರೆ, ಅಗ್ನಿಪರೀಕ್ಷೆಯ ಹೆಸರಿನಲ್ಲಿ ತಲೆ ಬೋಳಿಸುವಂತೆ ಮಾಡಿದ್ದು, ಸೆಗಣಿ ಮೆತ್ತಿಸಿದ್ದು, ಸಾಲದು ಎನ್ನುವುದಕ್ಕೆ ಗಿನ್ನೆಸ್​ ದಾಖಲೆಯನ್ನೇ ಹರಿಯುವಂತೆ ಮಾಡಿದ್ದು, ಒಬ್ಬಾಕೆಗೆ ಫೋನ್​ ಮಾಡಿ ಕೆಲಸ ಬಿಡುವಂತೆ ಹೇಳಿರುವುದು... ಇವೆಲ್ಲವೂ ಸಾಕಷ್ಟು ಟ್ರೋಲ್​ ಕೂಡ ಆಗುತ್ತಿದೆ. ಗಿನ್ನೆಸ್​ ದಾಖಲೆಯಂಥ ಜೀವನ ಪರ್ಯಂತದ ದಾಖಲೆಯನ್ನು, ಒಂದು ಷೋಗೋಸ್ಕರ ಹರಿದ ಹಾಗೂ ಹರಿಸುವಂತೆ ಕೆಲಸ ಮಾಡಿರುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ.&lt;/p&gt;&lt;img&gt;&lt;p&gt;ಇವುಗಳ ಬಗ್ಗೆ ತೀರ್ಪುಗಾರರಲ್ಲಿ ಒಬ್ಬರಾಗಿರುವ ಬಿಗ್​ಬಾಸ್​ ಸ್ಪರ್ಧಿಯಾಗಿದ್ದ, ನಟಿ ಸಂಗೀತಾ ಶೃಂಗೇರಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. televisionjanataparty ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.&lt;/p&gt;&lt;img&gt;&lt;p&gt;ಇದರಲ್ಲಿ ಸಂಗೀತಾ ಅವರು, ಇದೇನೂ ಕಾಮನ್​ಮ್ಯಾನ್​ಗೆ ಮಾತ್ರ ಮಾಡಿದ್ದಲ್ಲ. ಸೆಲೆಬ್ರಿಟಿಗಳಿಗೂ ಸಾಕಷ್ಟು ಟಫ್​ ಟಾಸ್ಕ್​ ನೀಡಲಾಗಿತ್ತು. ನನಗೆ ಕಣ್ಣಿಗೆ ಸಮಸ್ಯೆಯಾಗಿದ್ದು ಗೊತ್ತಿರಬಹುದು, ವಿನಯ್​ ಗೌಡ ಅವರು ಸಾಕಷ್ಟು ವರ್ಷದಿಂದ ಇದಕ್ಕಾಗಿ ಟ್ರೈ ಮಾಡಿದ್ದರು, ಆದ್ದರಿಂದ ಬಿಗ್​ಬಾಸ್​ಗೆ ಹೋಗುವಾಗ ಎಲ್ಲರಿಗೂ ಇದು ಕಾಮನ್​ ಎಂದಿದ್ದಾರೆ.&lt;/p&gt;&lt;img&gt;&lt;p&gt;ನಮಗೆಲ್ಲಾ ಬಿಗ್​ಬಾಸ್​ ಒಳಗೆ ಹೋದ ಮೇಲೆ ಏಕಾಏಕಿ ಟಾಸ್ಕ್​ ಕೊಡಲಾಗಿತ್ತು. ಆಗ ತುಂಬಾ ತೊಂದರೆಯಾಗಿತ್ತು. ಆದರೆ ಈಗ ಕಾಮನ್​ ಮ್ಯಾನ್​ಗೆ ಮೊದಲೇ ಟಾಸ್ಕ್​ ಕೊಟ್ಟಿರುವ ಕಾರಣ, ಅವರಿಗೆ ಮುಂದೆ ಎಲ್ಲಾ ಈಸಿಯಾಗುತ್ತದೆ. ಬಿಗ್​ಬಾಸ್​ ಮನೆಯೊಳಕ್ಕೆ ಹೋದಾಗ ಅವರು ನಮ್ಮ ಹಾಗೆ ಕಷ್ಟ ಪಡಬೇಕಾಗಿ ಬರುವುದಿಲ್ಲ ಎಂದಿದ್ದಾರೆ.&lt;/p&gt;&lt;img&gt;&lt;p&gt;ಆದ್ದರಿಂದ ಇಂಥ ಟಾಸ್ಕ್​ ಮಾಡಿರುವುದು ತಪ್ಪೇನಲ್ಲ. ಹೀಗೆಲ್ಲಾಮಾಡಿದ್ರೆ ಅವರಿಗೆ ಮುಂದೆ ಸುಲಭವಾಗುತ್ತದೆ ಎಂದಿದ್ದಾರೆ. ಆದರೆ ಇದಕ್ಕೂ ಪರ-ವಿರೋಧ ಕಮೆಂಟ್ಸ್​ ಬರುತ್ತಿವೆ. ನಿಮಗೆ ಕೊಟ್ಟಿರುವುದು ಸೆಲೆಕ್ಟ್​ ಆದಮೇಲಿನ ಟಾಸ್ಕ್​. ಆದರೆ ಇಲ್ಲಿ ಇರುವವರು ಸೆಲೆಕ್ಟ್​ ಆಗ್ತಾರೋ ಇಲ್ಲವೋ ಗೊತ್ತಿಲ್ಲ. ಅಂಥವರ ಬಳಿ ಗಿನ್ನೆಸ್​ ದಾಖಲೆಯನ್ನು ಹರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/sangeetha-sringeri-about-bigg-boss-13-task-which-has-been-trolled-suc-c0zdlb7"/>
        </item>
        <item>
            <title><![CDATA[ಅಮೃತಧಾರೆ: IPS ಆದ್ರೂ ಅಕ್ಕಾರ ಬಳಿಗೆ ಓಡೋಡಿ ಬಂದ ಮಲ್ಲಿ;  ಜೈದೇವ್‌ಗಿಲ್ಲ ಉಳಿಗಾಲ]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-laxmikant-goes-to-jaidev-s-house-to-find-out-the-secret-of-dia-baby-mrq-gmn5s4u</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-laxmikant-goes-to-jaidev-s-house-to-find-out-the-secret-of-dia-baby-mrq-gmn5s4u</guid>
            <pubDate>Tue, 18 Aug 2026 11:21:53 +0530</pubDate>
            <description><![CDATA[ಜೀ ಕನ್ನಡದ ಅಮೃತಧಾರೆ ಸೀರಿಯಲ್&zwnj;ನಲ್ಲಿ, ನಾಪತ್ತೆಯಾದ ದಿಯಾಳನ್ನು ಹುಡುಕಲು ಭೂಮಿಕಾ, ಶಕುನಿ ಮಾಮ ಲಕ್ಷ್ಮೀಕಾಂತ್ ಅವರ ಸಹಾಯದಿಂದ ಜೈದೇವ್ ವಿರುದ್ಧ ಗೂಢಚಾರಿಕೆ ಆರಂಭಿಸಿದ್ದಾಳೆ. ಭೂಮಿಕಾಳ ಮಾತಿನಂತೆ ಜೈದೇವ್ ಮನೆಗೆ ಹೋದ ಲಕ್ಷ್ಮೀಕಾಂತ್, ಅವರಿಂದ ಸತ್ಯ ಬಾಯಿಬಿಡಿಸಲು ಪ್ರಯತ್ನಿಸುತ್ತಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09pe4n419hdfns2j8tw62yp,imgname-amruthadhaare--2--1787031917220.jpg" type="image/jpeg" height="390" width="690"/>
            <content:encoded><![CDATA[ಜೀ ಕನ್ನಡದ ಅಮೃತಧಾರೆ ಸೀರಿಯಲ್&zwnj;ನಲ್ಲಿ, ನಾಪತ್ತೆಯಾದ ದಿಯಾಳನ್ನು ಹುಡುಕಲು ಭೂಮಿಕಾ, ಶಕುನಿ ಮಾಮ ಲಕ್ಷ್ಮೀಕಾಂತ್ ಅವರ ಸಹಾಯದಿಂದ ಜೈದೇವ್ ವಿರುದ್ಧ ಗೂಢಚಾರಿಕೆ ಆರಂಭಿಸಿದ್ದಾಳೆ. ಭೂಮಿಕಾಳ ಮಾತಿನಂತೆ ಜೈದೇವ್ ಮನೆಗೆ ಹೋದ ಲಕ್ಷ್ಮೀಕಾಂತ್, ಅವರಿಂದ ಸತ್ಯ ಬಾಯಿಬಿಡಿಸಲು ಪ್ರಯತ್ನಿಸುತ್ತಾನೆ.&lt;img&gt;&lt;p&gt;ಜೀ ಕನ್ನಡದ &lt;strong&gt;ಅಮೃತಧಾರೆ ಸೀರಿಯಲ್&lt;/strong&gt; ಸಂಚಿಕೆಯಿಂದ ಸಂಚಿಕೆಗೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸೀರಿಯಲ್ ವೀಕ್ಷಕರೆಲ್ಲಾ ಕಾಯುತ್ತಿದ್ದ ಸಮಯ ಬಂದಿದ್ದು, ಕೆಡಿ ಜೈದೇವ್ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹೌದು, ಜೈದೇವ್ ವಿರುದ್ಧ ಭೂಮಿಕಾ ಗೂಢಚಾರಿಕೆ ಆರಂಭಿಸಿದ್ದಾಳೆ. ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸವನ್ನು ಭೂಮಿಕಾ ಮಾಡಲು ಹೊರಟಿದ್ದಾಳೆ.&lt;/p&gt;&lt;img&gt;&lt;p&gt;ಜೈದೇವ್&zwnj;ನ ದಿಯಾ ಬೇಬಿ ಮತ್ತು ಹಾಲಿ ಗೆಳತಿ ದಿಢೀರ್ ನಾಪತ್ತೆಯಾಗಿದ್ದು, ಇಬ್ಬರ ಹುಡುಕಲು ಜೀವಾ ಮುಂದಾಗಿದ್ದಾನೆ. ಇದಕ್ಕಾಗಿ ಐಪಿಎಸ್ ಆಗಿರೋ ಮಲ್ಲಿ ಸಹಾಯ ಕೇಳಿದ್ದನು. ಇದೀಗ ಜೈದೇವ್ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುವ ಮುನ್ನ ಭೂಮಿಕಾ ಅಭಿಪ್ರಾಯವನ್ನು ಮಲ್ಲಿ ಕೇಳಿದ್ದಾಳೆ. ಐಪಿಎಸ್ ಆದ್ರೂ ಮಲ್ಲಿ ಮೇಡಂಗೆ ಅಕ್ಕರಾ ಸಹಾಯ ಬೇಕಾಯ್ತಾ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಜೈದೇವ್ ವಿಷಯ ತಿಳಿಯುತ್ತಲೇ ಅಖಾಡಕ್ಕೆ ಇಳಿದಿರೋ ಭೂಮಿಕಾ, ಹಳೆ ಹುಲಿ ಶಕುನಿ ಮಾಮಾ (ಲಕ್ಷ್ಮೀಕಾಂತ್&zwnj;) ಸಹಾಯ ಕೇಳಿದ್ದಾಳೆ. ಜೈದೇವ್ ಬಳಿಗೆ ಹೋಗಿ ದಿಯಾ ವಿಷಯ ತಿಳಿದುಕೊಂಡು ಬರುವಂತೆ ಮನವಿ ಮಾಡಿಕೊಂಡಿದ್ದಾಳೆ. ಭೂಮಿಕಾ ಹೇಳಿದಂತೆ ಜೈದೇವ್ ಮನೆಗೆ ಲಕ್ಷ್ಮೀಕಾಂತ್ ಹೋಗಿದ್ದಾನೆ.&lt;/p&gt;&lt;img&gt;&lt;p&gt;ತನ್ನ ಮನೆಗೆ ಬಂದ ಮಾವ ಲಕ್ಷ್ಮೀಕಾಂತ್&zwnj;ನನ್ನು ನೋಡಿ ಜೈದೇವ್ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ನಿನ್ನೊಂದಿಗೆ ಮದ್ಯ ಕುಡಿಯೋಕೆ ಬಂದೆ ಎಂದು ಹೇಳುತ್ತಾ ಲಕ್ಷ್ಮೀಕಾಂತ್ ತನ್ನ ಮಾತುಗಳನ್ನು ಆರಂಭಿಸಿದ್ದಾನೆ. ಬೇಕಂತಲೇ ಜೈದೇವ್ ಮುಂದೆ ಗೌತಮ್, ಭೂಮಿಕಾ ವಿರುದ್ಧ ವಾಗ್ದಾಳಿ ನಡೆಸುತ್ತಾ ನಿನ್ನ ಕಷ್ಟಕ್ಕೆ ಯಾರು ಬರಲಿಲ್ಲ ಅಲ್ಲವಾ ಅಳಿಮಯ್ಯಾ ಎಂದಿದ್ದಾನೆ.&lt;/p&gt;&lt;img&gt;&lt;p&gt;ನಿನಗೆ ಯಾರೂ ಖುಷಿ ಅನ್ನೋದನ್ನ ಕೊಡಲಿಲ್ಲವಲ್ಲಾ? ಆ ಖುಷಿ ಸಿಕ್ಕಿದ್ದು ದಿಯಾಳಿಂದ ಮಾತ್ರ ಅಲ್ಲವಾ ಎಂದು ಲಕ್ಷ್ಮೀಕಾಂತ್ ಹೇಳುತ್ತಾನೆ. ದಿಯಾ ಹೆಸರು ಕೇಳುತ್ತಿದ್ದಂತೆ ಜೈದೇವ್ ಅಲರ್ಟ್ ಆದಂತೆ ಕಾಣಿಸುತ್ತಿದೆ. ಲಕ್ಷ್ಮೀಕಾಂತ್ ಮುಂದೆ ಜೈದೇವ್ ಸತ್ಯ ಹೇಳ್ತಾನಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-laxmikant-goes-to-jaidev-s-house-to-find-out-the-secret-of-dia-baby-mrq-gmn5s4u"/>
        </item>
        <item>
            <title><![CDATA[ಪ್ಯಾರೀಸ್ ಫೋಟೋ ರಹಸ್ಯ  ಬಯಲಾಯ್ತು! Bigg Boss ಸ್ಪಂದನಾ  ಜೊತೆಗಿನ ಆ ಹುಡುಗ ಯಾರು? ಮದುವೆ ಯಾವಾಗ]]></title>
            <link>https://kannada.asianetnews.com/gallery/relationship/bigg-boss-spandana-somanna-about-boyfriend-and-talked-about-marriage-suc-ll22xsw</link>
            <guid isPermaLink="true">https://kannada.asianetnews.com/gallery/relationship/bigg-boss-spandana-somanna-about-boyfriend-and-talked-about-marriage-suc-ll22xsw</guid>
            <pubDate>Mon, 17 Aug 2026 21:19:48 +0530</pubDate>
            <description><![CDATA[ಬಿಗ್​ಬಾಸ್​ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ, ಪ್ಯಾರೀಸ್ ಪ್ರವಾಸದ ಫೋಟೋ ಹಂಚಿಕೊಂಡಿದ್ದು, ಅದರಲ್ಲಿರುವ ಹುಡುಗ ಸೂರಜ್ ಸಿಂಗ್ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಅದು ಸೂರಜ್ ಅಲ್ಲ, ಶೀಘ್ರದಲ್ಲೇ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡುವುದಾಗಿ ಸ್ಪಂದನಾ ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m086jpeqx6k93dqtj4e7prk8,imgname-spandana-somanna-1786981734871.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ, ಪ್ಯಾರೀಸ್ ಪ್ರವಾಸದ ಫೋಟೋ ಹಂಚಿಕೊಂಡಿದ್ದು, ಅದರಲ್ಲಿರುವ ಹುಡುಗ ಸೂರಜ್ ಸಿಂಗ್ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಅದು ಸೂರಜ್ ಅಲ್ಲ, ಶೀಘ್ರದಲ್ಲೇ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡುವುದಾಗಿ ಸ್ಪಂದನಾ ಸ್ಪಷ್ಟಪಡಿಸಿದ್ದಾರೆ.&lt;img&gt;&lt;p&gt;ಬಿಗ್​ಬಾಸ್​​ ಮೂಲಕ ಖ್ಯಾತಿ ಪಡೆದವರು ನಟಿ ಸ್ಪಂದನಾ ಸೋಮಣ್ಣ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇವರು, ಇತ್ತೀಚೆಗೆ ತಮ್ಮ ಇನ್&rsquo;ಸ್ಟಾಗ್ರಾಂನಲ್ಲಿ ಪ್ಯಾರೀಸ್ ನ ಐಫೆಲ್ ಟವರ್ ಹಿನ್ನೆಲೆಯಲ್ಲಿ, ಹುಡುಗನೊಬ್ಬನ ಕೈಹಿಡಿದು ಸಂತೋಷದಿಂದ ನಡೆಯುತ್ತಿರುವ ಫೋಟೊ ಶೇರ್ ಮಾಡಿದ್ದು, ಅದರ ಜೊತೆಗೆ Plot Twist : Paris was not the Main Character! ಎಂದು ಬರೆದುಕೊಂಡಿದ್ದರು.&lt;/p&gt;&lt;img&gt;&lt;p&gt;ಆ ಫೋಟೋ ನೋಡಿದವರು ಇವರು ಬಿಗ್​ಬಾಸ್​ ಸೂರಜ್​ ಸಿಂಗ್​ ಎಂದೇ ಹೇಳಿದ್ದರು. ಏಕೆಂದರೆ ಹಿಂದಿನಿಂದ ಅವರು ಹಾಗೆಯೇ ಕಾಣಿಸುತ್ತಿದ್ದರು. ಇದೀಗ ಸ್ಪಂದನಾ ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆ ಎದುರಾಗುತ್ತಿದೆ.&lt;/p&gt;&lt;img&gt;&lt;p&gt;ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಸ್ಪಂದನಾ ಅವರಿಗೆ ಇದೇ ಪ್ರಶ್ನೆ ಕೇಳಲಾಗಿದೆ. ಪ್ಯಾರೀಸ್​ನಲ್ಲಿ ಇರುವ ಹುಡುಗ ಸೂರಜ್​ ಸಿಂಗ್​ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ, ಇದು ನಿಜನಾ ಎಂದು ಪ್ರಶ್ನಿಸಲಾಗಿದೆ.&lt;/p&gt;&lt;img&gt;&lt;p&gt;ಅದಕ್ಕೆ ನಟಿ, ಇಲ್ಲಪ್ಪಾ, ನಾವಿಬ್ಬರೂ ಮಾತನಾಡದೇ ತುಂಬಾ ತಿಂಗಳುಗಳೇ ಆಗಿವೆ. ಮದುವೆಯ ಬಗ್ಗೆ ಅಪ್​ಡೇಟ್​ ಕೊಡುತ್ತೇನೆ. ಶೀಘ್ರದಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಪ್ಯಾರೀಸ್​ ಟೂರಿನ ಬಗ್ಗೆ ಪ್ರಶ್ನಿಸಿದಾಗ ಸ್ಪಂದನಾ, ನಾಚಿ ನೀರಾದರು. ಟೂರ್​ ತುಂಬಾ ಚೆನ್ನಾಗಿತ್ತು. ಜನರು ನಮಗೆ ಇಷ್ಟೊಂದು ಪ್ರೀತಿ ಕೊಡುವಾಗ ಪರ್ಸನಲ್​ ಲೈಫ್​ ಬಗ್ಗೆಯೂ ಗೊತ್ತಿರಲಿ ಎಂದು ಫೋಟೋ ಹಾಕಿದ್ದೆ. ಆದರೆ ಅವರು ಸೂರಜ್​ ಸಿಂಗ್​ ಅಲ್ಲ. ಅವರ ಬಗ್ಗೆ ಶೀಘ್ರದಲ್ಲಿ ಹೇಳುವೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಸ್ಪಂದನಾ ಈಚೆಗೆ ಇನ್ನೊಂದು ಪೋಸ್ಟ್​ ಶೇರ್​ ಮಾಡಿದ್ದರು. ಅದರಲ್ಲಿ ಅವರು, ನಾನು ಕೆಲಸಕ್ಕಾಗಿ ಹೊಸ ನಗರಕ್ಕೆ ಸ್ಥಳಾಂತರಗೊಂಡು 3 ವರ್ಷಗಳಾಗಿವೆ. ನನ್ನ ಸ್ವಂತ ಜೀವನವನ್ನು ನಿರ್ಮಿಸಲು ನಾನು ನನ್ನ ಮನೆ, ನನ್ನ ಜನರು ಮತ್ತು ಪರಿಚಿತ ಎಲ್ಲವನ್ನೂ ಬಿಟ್ಟು ಬಂದಿದ್ದೇನೆ. ಇದು ಯಾವಾಗಲೂ ಸುಲಭವಾಗಿರಲಿಲ್ಲ, ಆದರೆ ಇದು ನನ್ನ ಬಗ್ಗೆ, ಸ್ವಾತಂತ್ರ್ಯ, ನನ್ನ ಸ್ವಂತ ಸಹವಾಸದಲ್ಲಿ ಸೌಕರ್ಯ ಮತ್ತು ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವ ಬಗ್ಗೆ ನನಗೆ ತುಂಬಾ ಕಲಿಸಿದೆ ಎಂದು ನಟಿ ಶೇರ್​ ಮಾಡಿಕೊಂಡಿದ್ದರು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/bigg-boss-spandana-somanna-about-boyfriend-and-talked-about-marriage-suc-ll22xsw"/>
        </item>
        <item>
            <title><![CDATA[ಮಮ್ಮಿ ಎಂದೇ ಕರೆಯುತ್ತಿದ್ದ ಜಿಮ್ ಫ್ರೆಂಡ್‌ನೇ ಮದುವೆಯಾದ ನಟಿ ರಜನಿ; 10 ಮಿಲಿಯನ್ ವೀಕ್ಷಣೆ ಪಡೆದ ಲವ್‌ಸ್ಟೋರಿ ಇದು]]></title>
            <link>https://kannada.asianetnews.com/gallery/tv-talk/amruthavarshini-fame-actress-rajini-and-husband-arun-gowda-love-story-suh-lg6ciwx</link>
            <guid isPermaLink="true">https://kannada.asianetnews.com/gallery/tv-talk/amruthavarshini-fame-actress-rajini-and-husband-arun-gowda-love-story-suh-lg6ciwx</guid>
            <pubDate>Tue, 18 Aug 2026 11:15:09 +0530</pubDate>
            <description><![CDATA[&lt;p&gt;&lsquo;ಪೈಲ್ವಾನ್-ಪ್ರಿಟಿ ಗರ್ಲ್&rsquo; ಕಾಂಬಿನೇಷನ್&zwnj;ನ ಕಾಮಿಡಿ, ರಜನಿ ಹಾಗೂ ಅರುಣ್ ಗೌಡ ಅವರ ಸ್ನೇಹ, ಪ್ರೀತಿ ಮತ್ತು ಫಿಟ್&zwnj;ನೆಸ್ ಮೆಸೇಜ್&zwnj;ಗಳು ಸದ್ಯ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09nymze34h1e0amn8swyhxk,imgname-amruthavarshini-fame-actress-rajini-and-husband-arun-gowda-love-story-1787031409646.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಪೈಲ್ವಾನ್-ಪ್ರಿಟಿ ಗರ್ಲ್&rsquo; ಕಾಂಬಿನೇಷನ್&zwnj;ನ ಕಾಮಿಡಿ, ರಜನಿ ಹಾಗೂ ಅರುಣ್ ಗೌಡ ಅವರ ಸ್ನೇಹ, ಪ್ರೀತಿ ಮತ್ತು ಫಿಟ್&zwnj;ನೆಸ್ ಮೆಸೇಜ್&zwnj;ಗಳು ಸದ್ಯ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯಲ್ಲಿ &lsquo;ಅಮೃತವರ್ಷಿಣಿ&rsquo; ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ ನಟಿ ರಜನಿ ಸದ್ಯ ಸ್ಟಾರ್ ಸುವರ್ಣ ವಾಹಿನಿಯ &lsquo;ನೀ ಇರಲು ಜೊತೆಯಲ್ಲಿ&rsquo; ಹಾಗೂ ಉದಯ ಟಿವಿಯ &lsquo;ಕೃಷ್ಣವಂಶಿ&rsquo; ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ ಮುಖವಾಗಿರುವ ರಜನಿ ಇದೀಗ ನಟನೆಯ ಜೊತೆಗೆ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿಯೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅವರ ಪತಿ ಅರುಣ್ ಗೌಡ ಅವರೊಂದಿಗಿನ ವಿಶಿಷ್ಟ ಕಾಂಬಿನೇಷನ್. ಫಿಟ್&zwnj;ನೆಸ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಅರುಣ್ ಗೌಡ ಹಾಗೂ ರಜನಿ ಅವರ ಜೋಡಿ ಇಂದು ಸೋಶಿಯಲ್ ಮೀಡಿಯಾದಲ್ಲಿ &lsquo;ಪೈಲ್ವಾನ್ ಮತ್ತು ಪ್ರಿಟಿ ಗರ್ಲ್&rsquo; ಎಂದೇ ಫೇಮಸ್ ಆಗಿದೆ.&lt;/p&gt;&lt;p&gt;&lt;strong&gt;7 ವರ್ಷಗಳ ಸ್ನೇಹ, ನಂತರ ಪ್ರೀತಿಯಾಗಿ ಬದಲಾದ ಸಂಬಂಧ&lt;/strong&gt;&lt;/p&gt;&lt;p&gt;ರಜನಿ ಹಾಗೂ ಅರುಣ್ ಗೌಡ ಸುಮಾರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಕೋವಿಡ್ ಸಮಯದಲ್ಲಿ ಇವರಿಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ಜಿಮ್&zwnj;ನಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿದ್ದ ಈ ಜೋಡಿ, ತಮಾಷೆಯಾಗಿ ವಿಡಿಯೋಗಳನ್ನು ಮಾಡಲು ಆರಂಭಿಸಿತು. ಆ ವಿಡಿಯೋಗಳೇ ಮುಂದೆ ಇವರ ಜೀವನಕ್ಕೆ ಹೊಸ ತಿರುವು ನೀಡಿದವು. ವರ್ಷಗಳ ಕಾಲ ಪ್ರೀತಿಸಿದ ಬಳಿಕ ರಜನಿ ಹಾಗೂ ಅರುಣ್ ಗೌಡ 2025ರ ನವೆಂಬರ್ 10ರಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾದರು. ಇದೀಗ ದಂಪತಿಯಾಗಿ ಮಾತ್ರವಲ್ಲದೆ ಕಂಟೆಂಟ್ ಕ್ರಿಯೇಟರ್&zwnj;ಗಳಾಗಿಯೂ ಗಮನ ಸೆಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ರಜನಿ ಮತ್ತು ಅರುಣ್ ಗೌಡ ಅವರ ಕಂಟೆಂಟ್ ಕ್ರಿಯೇಟರ್ ಜರ್ನಿಯಲ್ಲಿ ತಿರುವು ತಂದದ್ದು ಜಿಮ್&zwnj;ನಲ್ಲಿ ಮಾಡಿದ ಒಂದು ತಮಾಷೆಯ ವಿಡಿಯೋ. ಇವರಿಬ್ಬರು ಮಾಡಿದ &lsquo;ಲೆಗ್ ಪ್ರೆಸ್&rsquo; ವಿಡಿಯೋ ಬರೋಬ್ಬರಿ 10 ಮಿಲಿಯನ್&zwnj;ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತು. ಈ ವಿಡಿಯೋ ದಕ್ಷಿಣ ಆಫ್ರಿಕಾದವರೆಗೂ ಟ್ರೆಂಡ್ ಆಗಿತ್ತು ಎನ್ನಲಾಗಿದೆ. ಅಲ್ಲಿಂದ ಆರಂಭವಾದ ಇವರ ಸೋಶಿಯಲ್ ಮೀಡಿಯಾ ಪಯಣ ಇಂದು ಮಿಲಿಯನ್&zwnj;ಗಟ್ಟಲೆ ವೀಕ್ಷಣೆ ಪಡೆಯುವ ಹಂತಕ್ಕೆ ತಲುಪಿದೆ.&lt;/p&gt;&lt;p&gt;&lt;strong&gt;&lsquo;ಮಮ್ಮಿ&rsquo; ಎಂದು ಯಾಕೆ ಕರೆಯುತ್ತಾರೆ?&lt;/strong&gt;&lt;/p&gt;&lt;p&gt;ಅರುಣ್ ಗೌಡ, ರಜನಿ ಅವರನ್ನು ಆಗಾಗ್ಗೆ &lsquo;ಮಮ್ಮಿ&rsquo; ಎಂದು ಕರೆಯುವುದು ಇವರ ಕಂಟೆಂಟ್&zwnj;ನ ಪ್ರಮುಖ ಆಕರ್ಷಣೆ. ಇದರ ಹಿಂದೆಯೂ ಒಂದು ತಮಾಷೆಯ ಕಾರಣವಿದೆ. ಅರುಣ್ ಏನಾದರೂ ಮಾಡಿದಾಗ ರಜನಿ, &lsquo;ಬ್ಯಾಗ್ ಎಲ್ಲಿಟ್ಟಿದ್ದೀಯ? ಯಾಕೆ ತಡ ಮಾಡಿದೆ?&rsquo; ಎಂದು ಅಮ್ಮನ ರೀತಿಯಲ್ಲಿ ಬೈಯುತ್ತಾರಂತೆ. ಹೀಗಾಗಿ ತಮಾಷೆಗಾಗಿ ಅರುಣ್, ರಜನಿ ಅವರನ್ನು &lsquo;ಮಮ್ಮಿ&rsquo; ಎಂದು ಕರೆಯಲು ಆರಂಭಿಸಿದ್ದರಂತೆ. ಆ ತಮಾಷೆಯೇ ಮುಂದೆ ಇವರ ಕಂಟೆಂಟ್&zwnj;ನ ವಿಶಿಷ್ಟ ಗುರುತಾಗಿ ಬದಲಾಗಿದೆ.&lt;/p&gt;&lt;img&gt;&lt;p&gt;ಅರುಣ್ ಗೌಡ ಅವರನ್ನು ಬಹುತೇಕರು ಬಾಡಿಬಿಲ್ಡರ್ ಮತ್ತು ಫಿಟ್&zwnj;ನೆಸ್ ಅಥ್ಲೀಟ್ ಎಂದೇ ಗುರುತಿಸುತ್ತಾರೆ. ಆದರೆ ಅವರ ಮತ್ತೊಂದು ಮುಖ ಅನೇಕರಿಗೆ ಗೊತ್ತಿಲ್ಲ. ಅರುಣ್ ಸುಮಾರು 9 ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಸಂಕೇತ್ ಮತ್ತು ರಂಗಶಂಕರ ಸೇರಿದಂತೆ ವಿವಿಧ ರಂಗಭೂಮಿ ತಂಡಗಳೊಂದಿಗೆ 15ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. 200ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಅವರು ಎರಡು ನಾಟಕಗಳನ್ನು ನಿರ್ದೇಶಿಸಿರುವ ಅನುಭವವನ್ನೂ ಹೊಂದಿದ್ದಾರೆ. ಹೀಗಾಗಿ ಕ್ಯಾಮೆರಾ ಮುಂದೆ ಕಾಮಿಡಿ ಮಾಡುವ ಕಲೆ ಅವರಿಗೆ ಹೊಸದೇನಲ್ಲ.&lt;/p&gt;&lt;p&gt;&lt;strong&gt;&lsquo;ಡ್ಯಾನ್ಸಿಂಗ್ ಸ್ಟಾರ್ 2&rsquo; ಕೊಟ್ಟ ಫಿಟ್&zwnj;ನೆಸ್ ಟರ್ನಿಂಗ್ ಪಾಯಿಂಟ್&lt;/strong&gt;&lt;/p&gt;&lt;p&gt;2016ರಲ್ಲಿ ಪ್ರಸಾರವಾದ &lsquo;ಡ್ಯಾನ್ಸಿಂಗ್ ಸ್ಟಾರ್ 2&rsquo; ರಿಯಾಲಿಟಿ ಶೋ ರಜನಿ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತು. ನೃತ್ಯ ಪ್ರದರ್ಶನಗಳಿಗೆ ಉತ್ತಮ ಕೋರ್ ಸ್ಟ್ರೆಂತ್ ಅಗತ್ಯವಿದ್ದ ಕಾರಣ ರಜನಿ ಮೊದಲ ಬಾರಿಗೆ ಜಿಮ್ ಮತ್ತು ಫಿಟ್&zwnj;ನೆಸ್&zwnj;ನತ್ತ ಗಮನ ಹರಿಸಿದರು. ಇದೇ ಆಸಕ್ತಿ ಮುಂದೆ ಅರುಣ್ ಗೌಡ ಅವರೊಂದಿಗೆ ಕಂಟೆಂಟ್ ಮಾಡಲು ಸಹ ಕಾರಣವಾಯಿತು.&lt;/p&gt;&lt;img&gt;&lt;p&gt;ರಜನಿ ಮತ್ತು ಅರುಣ್ ಗೌಡ ಅವರ ವಿಡಿಯೋಗಳು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ತಮ್ಮ ಕಂಟೆಂಟ್ ಮೂಲಕ ಫಿಟ್&zwnj;ನೆಸ್ ಮತ್ತು ಆರೋಗ್ಯದ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಪ್ರೋಟೀನ್ ಸೇವನೆ, ಡಯಟ್, ವರ್ಕೌಟ್ ಮತ್ತು ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಸರಳವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಾರೆ. ಟ್ರೈನರ್ ಇಲ್ಲದೆ ಯೂಟ್ಯೂಬ್ ವಿಡಿಯೋ ನೋಡಿ ವರ್ಕೌಟ್ ಮಾಡಿ ಗಾಯ ಮಾಡಿಕೊಳ್ಳಬೇಡಿ, ನೈಸರ್ಗಿಕ ಆಹಾರದಿಂದಲೂ ಉತ್ತಮ ಪ್ರೋಟೀನ್ ಪಡೆಯಬಹುದು ಮತ್ತು ಆರೋಗ್ಯದ ಮೇಲೆ ಪ್ರತಿದಿನ ಹೂಡಿಕೆ ಮಾಡಬೇಕು ಎಂಬ ಸಂದೇಶವನ್ನು ತಮ್ಮದೇ ಶೈಲಿಯಲ್ಲಿ ನೀಡುತ್ತಿದ್ದಾರೆ. ಅವರ ಮಾತಿನಲ್ಲಿ ಹೇಳುವುದಾದರೆ, ನೇರವಾಗಿ ಫಿಟ್&zwnj;ನೆಸ್ ಸಲಹೆ ನೀಡಿದರೆ ಕೆಲವರು ಗಮನ ಕೊಡದೇ ಇರಬಹುದು. ಹೀಗಾಗಿ &lsquo;ಮಿರ್ಚಿ ಮಸಾಲಾ&rsquo; ಮತ್ತು ಕಾಮಿಡಿ ಸೇರಿಸಿ ಆರೋಗ್ಯದ ಸಂದೇಶವನ್ನು ಜನರಿಗೆ ತಲುಪಿಸುವುದು ಇವರ ಕಂಟೆಂಟ್&zwnj;ನ ವಿಶೇಷತೆ.&lt;/p&gt;&lt;p&gt;&lt;strong&gt;ನಟಿಯಿಂದ ಇನ್ಫ್ಲುಯೆನ್ಸರ್ ಆಗಿದ್ದಕ್ಕೆ ಟೀಕೆ&lt;/strong&gt;&lt;/p&gt;&lt;p&gt;ರಜನಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ ಗುರುತಿಸಿಕೊಳ್ಳಲು ಆರಂಭಿಸಿದಾಗ ಕೆಲವರು ಅವರನ್ನು ಟೀಕಿಸಿದ್ದರು. ನಟಿಯಾಗಿದ್ದವರು ಇನ್ಫ್ಲುಯೆನ್ಸರ್ ಆಗಿ ಬದಲಾಗಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದರು. ಆದರೆ ಈ ಟೀಕೆಗಳಿಗೆ ರಜನಿ ತಲೆಕೆಡಿಸಿಕೊಂಡಿಲ್ಲ. ಜನರು ತಮ್ಮ ವಿಡಿಯೋ ನೋಡಿ ದಿನದ ಒತ್ತಡ, ಬೇಸರ ಮತ್ತು ದಣಿವು ಮರೆತು ನಗುತ್ತೇವೆ ಎಂದು ಕಮೆಂಟ್ ಮಾಡಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದು ಅವರ ನಿಲುವು. ಕಲಾವಿದ ಎಲ್ಲೇ ಇದ್ದರೂ ಪ್ರೇಕ್ಷಕರಿಗೆ ಮನರಂಜನೆ ತಲುಪಿಸುವುದು ಮುಖ್ಯ ಎಂಬ ತತ್ವವನ್ನು ಅವರು ತಮ್ಮದೇ ರೀತಿಯಲ್ಲಿ ಮುಂದುವರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ನಟನೆ, ಕಂಟೆಂಟ್ ಕ್ರಿಯೇಷನ್ ಮತ್ತು ಫಿಟ್&zwnj;ನೆಸ್ ನಡುವೆ ಬ್ಯುಸಿಯಾಗಿರುವ ಈ ಜೋಡಿ ಇತ್ತೀಚೆಗೆ ಥೈಲ್ಯಾಂಡ್ ಪ್ರವಾಸಕ್ಕೂ ತೆರಳಿ ಒಟ್ಟಿಗೆ ಕ್ವಾಲಿಟಿ ಟೈಮ್ ಕಳೆದಿದ್ದಾರೆ. ದಂಪತಿಯ ಪ್ರವಾಸದ ಕ್ಷಣಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಗಮನ ಸೆಳೆದಿವೆ. ಒಟ್ಟಿನಲ್ಲಿ, ಧಾರಾವಾಹಿಯಿಂದ ಕಿರುತೆರೆ ಪ್ರೇಕ್ಷಕರ ಮನ ಗೆದ್ದ ರಜನಿ, ಫಿಟ್&zwnj;ನೆಸ್ ಮತ್ತು ರಂಗಭೂಮಿ ಹಿನ್ನೆಲೆಯ ಅರುಣ್ ಗೌಡ ಜೊತೆ ಸೇರಿ ಹೊಸ ರೀತಿಯ ಡಿಜಿಟಲ್ ಕಂಟೆಂಟ್ ಮೂಲಕ ಮತ್ತೊಂದು ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. &lsquo;ಪೈಲ್ವಾನ್-ಪ್ರಿಟಿ ಗರ್ಲ್&rsquo; ಕಾಂಬಿನೇಷನ್&zwnj;ನ ಕಾಮಿಡಿ, ಸ್ನೇಹ, ಪ್ರೀತಿ ಮತ್ತು ಫಿಟ್&zwnj;ನೆಸ್ ಮೆಸೇಜ್&zwnj;ಗಳು ಸದ್ಯ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/amruthavarshini-fame-actress-rajini-and-husband-arun-gowda-love-story-suh-lg6ciwx"/>
        </item>
        <item>
            <title><![CDATA[ಒಂದಾಗಿದ್ದ ಗೆಳೆಯರು ದೂರಾಗಿದ್ದೇಕೆ? ವಿನೋದ್ ಕಾಂಬ್ಳಿ-ಸಚಿನ್ ನಡುವಿನ ರಹಸ್ಯ ಈಗ ವೆಬ್ ಸರಣಿಯಲ್ಲಿ ರಿವೀಲ್!]]></title>
            <link>https://kannada.asianetnews.com/cricket-sports/vinod-kambli-life-story-to-become-a-web-series-will-sachin-tendulkar-chapter-be-revealed-kvn/articleshow-bhypcq0</link>
            <guid isPermaLink="true">https://kannada.asianetnews.com/cricket-sports/vinod-kambli-life-story-to-become-a-web-series-will-sachin-tendulkar-chapter-be-revealed-kvn/articleshow-bhypcq0</guid>
            <pubDate>Mon, 17 Aug 2026 17:21:43 +0530</pubDate>
            <description><![CDATA[ಕ್ರಿಕೆಟಿಗ ವಿನೋದ್ ಕಾಂಬ್ಳಿ ಜೀವನವನ್ನು ಆಧರಿಸಿದ 'ಕಾಂಬ್ಳಿ' ವೆಬ್ ಸರಣಿ 'ಝೀ-5'ನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಅಭಿಜಿತ್ ದೇಶಪಾಂಡೆ ನಿರ್ದೇಶನದ ಈ ಸರಣಿಯು, ಕಾಂಬ್ಳಿಯ ಕ್ರಿಕೆಟ್ ಜರ್ನಿ, ಆರಂಭಿಕ ಯಶಸ್ಸು ಹಾಗೂ ಸಚಿನ್ ತೆಂಡೂಲ್ಕರ್ ಜೊತೆಗಿನ ಸ್ನೇಹದ ಏರಿಳಿತಗಳನ್ನು ಕಟ್ಟಿಕೊಡುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jeqnh1efs809ycyrawk4c8ys,imgname-vinod-kambli-sachin.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಕ್ರಿಕೆಟ್&zwnj;ನಲ್ಲಿ ಕೆಲವು ಕ್ರಿಕೆಟಿಗರ ದಾಖಲೆಗಳಿಗಿಂತ ಅವರ ಕ್ರಿಕೆಟ್ ಜರ್ನಿ ಸಾಕಷ್ಟು ಸದ್ದು ಮಾಡಿರುವುದಿದೆ. ಅಂತಹ ಆಟಗಾರರ ಪೈಕಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅಗ್ರಸಾಲಿನಲ್ಲಿ ನಿಲ್ಲುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ್ದ ವಿನೋದ್ ಕಾಂಬ್ಳಿ, ಆರಂಭಿಕ ಯಶಸ್ಸಿನ ಬಳಿಕ ಸಿಕ್ಕ ತಿರುವಿನಿಂದಾಗಿ ಪಾತಾಳಕ್ಕೆ ಜಾರಿದ್ದು ಈಗ ಇತಿಹಾಸ. ಇದೀಗ ವಿನೋದ್ ಕಾಂಬ್ಳಿಯ ಆ ಜೆರ್ನಿಯನ್ನು ತೆರೆಯ ಮೇಲೆ ನೋಡುವ ಅವಕಾಶ ಬಂದಿದೆ. ಇದೀಗ ವಿನೋದ್ ಕಾಂಬ್ಳಿಯ ಜೀವನವನ್ನು ಆಧರಿಸಿದ ಈ ವೆಬ್&zwnj; ಸರಣಿ 'ಕಾಂಬ್ಳಿ' ಹೆಸರಿನಲ್ಲಿ ಸ್ಕ್ರೀನ್&zwnj; ಮೇಲೆ ಬರಲು ಸಜ್ಜಾಗಿದೆ.&lt;/p&gt;&lt;p&gt;ನಿರ್ದೇಶಕ ಅಭಿಜಿತ್ ದೇಶಪಾಂಡೆ, 2019ರಿಂದಲೂ ಈ ಪ್ರಾಜೆಕ್ಟ್&zwnj;ಮನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೆಬ್ ಸರಣಿಯು OTT ಫ್ಲಾಟ್&zwnj;ಫಾರ್ಮ್&zwnj; 'ಝೀ-5'ನಲ್ಲಿ ಬಿಡುಗಡೆಯಾಗಲಿದ್ದು, 'ಕಾಂಬ್ಳಿ' ವೆಬ್&zwnj; ಸೀರಿಸ್&zwnj;ನ ಪೋಸ್ಟರ್&zwnj; ಯೂಟ್ಯೂಬ್&zwnj; ಚಾನೆಲ್&zwnj;ನಲ್ಲಿ ಬಿಡುಗಡೆಯಾಗಿದ್ದು, ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.&lt;/p&gt;&lt;h2&gt;&lt;strong&gt;ಸಚಿನ್ ಬಾಲ್ಯದ ಗೆಳೆಯ ದೂರಾಗಿದ್ದೇಕೆ? ಬಯಲಾಗುತ್ತಾ ಆ ಸೀಕ್ರೇಟ್?&lt;/strong&gt;&lt;/h2&gt;&lt;p&gt;ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಎಂತಹ ಆತ್ಮೀಯ ಬಾಲ್ಯದ ಗೆಳೆಯರು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಶಾಲಾ ದಿನಗಳಿಂದ ಆತ್ಮೀಯ ಗೆಳೆಯರಾಗಿದ್ದ ಈ ಜೋಡಿ 1988ರಲ್ಲಿ ನಡೆದ ಹ್ಯಾರಿಸ್ ಶೀಲ್ಡ್&zwnj; ಟೂರ್ನಿಯಲ್ಲಿ ಬರೋಬ್ಬರಿ 664 ರನ್&zwnj;ಗಳ ದಾಖಲೆಯ ಅಜೇಯ ಜತೆಯಾಟ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಇಬ್ಬರು ರಮಾಕಾಂತ್ ಅಚ್ರೇಕರ್ ಮಾರ್ಗದರ್ಶನದಲ್ಲಿ ಕ್ರಿಕೆಟ್ ಆರಂಭಿಸಿದ್ದರು. ಹೀಗಾಗಿ ಸಹಜವಾಗಿ ಇದೆಲ್ಲವನ್ನು ವೆಬ್&zwnj; ಸೀರಿಸ್&zwnj;ನಲ್ಲಿ ಎಳೆಎಳೆಯಾಗಿ ತೆರೆಕಾಣುವ ನಿರೀಕ್ಷೆಯಿದೆ. ಆದರೆ ಬಾಲ್ಯದಿಂದಲೂ ಸಚಿನ್ ಆತ್ಮೀಯ ಗೆಳೆಯರಾಗಿ ಗುರುತಿಸಿಕೊಂಡಿದ್ದ ಕಾಂಬ್ಳಿ, ಆ ಬಳಿಕ ಸಚಿನ್&zwnj;ರಿಂದ ದೂರಾಗಿದ್ದೇಕೆ ಎನ್ನುವ ಕುತೂಹಲಕ್ಕೆ ಈ ವೆಬ್ ಸೀರಿಸ್ ತೆರೆ ಎಳೆಯುವ ನಿರೀಕ್ಷೆಯಿದ್ದು, ಈ ವಿಚಾರ ತಿಳಿದುಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.&lt;/p&gt;&lt;p&gt;ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಸ್ನೇಹದ ಏರಿಳಿತವನ್ನು ಈ ವೆಬ್ ಸೀರಿಸ್ ಕಟ್ಟಿಕೊಡುವ ನಿರೀಕ್ಷೆಯಿದೆ. ಯಾಕೆಂದರೆ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ನಿವೃತ್ತಿ ಘೋಷಿಸುವ ಸಂದರ್ಭದಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸದಿರುವುದಕ್ಕೆ ಬಹಿರಂಗವಾಗಿಯೇ ವಿನೋದ್ ಕಾಂಬ್ಳಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸಚಿನ್ ಹಾಗೂ ಕಾಂಬ್ಳಿ ನಡುವೆ ಸಂಬಂಧ ಬಿರುಕುಬಿಟ್ಟಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಹೀಗಾಗಿ ಈ ಎಲ್ಲಾ ವಿಚಾರಗಳು ಕಾಂಬ್ಳಿ ವೆಬ್ ಸೀರಿಸ್&zwnj;ನಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಅಭಿಜಿತ್ ದೇಶಪಾಂಡೆ ಮಾಡಿರುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ಸಿನಿಮಾದಲ್ಲೂ ಅದೃಷ್ಟಪರೀಕ್ಷೆ ನಡೆಸಿದ್ದ ವಿನೋದ್ ಕಾಂಬ್ಳಿ:&lt;/strong&gt;&lt;/h3&gt;&lt;p&gt;ಕ್ರಿಕೆಟ್&zwnj;ನಿಂದ ದೂರವಾದ ಬಳಿಕ ವಿನೋದ್ ಕಾಂಬ್ಳಿ ಬಾಲಿವುಡ್&zwnj;ನಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದರು. 2000 ಇಸವಿಯಲ್ಲಿ ಬಿಡುಗಡೆಯಾದ 'ಅನಾರ್ಥ್' ಚಿತ್ರದಲ್ಲಿ ಸಂಜಯ್ ದತ್ ಜತೆ ನಟಿಸಿದ್ದರು. ಆದರೆ ಅಲ್ಲೂ ಕಾಂಬ್ಳಿ ಅಷ್ಟೊಂದು ಯಶಸ್ಸು ಕಂಡಿರಲಿಲ್ಲ. ಇನ್ನು ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.&lt;/p&gt;]]></content:encoded>
            <category>entertainment</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/vinod-kambli-life-story-to-become-a-web-series-will-sachin-tendulkar-chapter-be-revealed-kvn/articleshow-bhypcq0"/>
        </item>
        <item>
            <title><![CDATA[Celebrity Nicknames: ಈ ಸ್ಟಾರ್ ನಟಿಯರ ಮುದ್ದಿನ ಹೆಸರುಗಳು ಗೊತ್ತಾ? ಕೆಲವಂತೂ ಸಖತ್ ಇಂಟರೆಸ್ಟಿಂಗ್!]]></title>
            <link>https://kannada.asianetnews.com/webstories/entertainment/secret-nicknames-of-famous-indian-actresses-revealed-gvd-ee5ehlz</link>
            <guid isPermaLink="true">https://kannada.asianetnews.com/webstories/entertainment/secret-nicknames-of-famous-indian-actresses-revealed-gvd-ee5ehlz</guid>
            <pubDate>Mon, 17 Aug 2026 23:51:12 +0530</pubDate>
            <description><![CDATA[&lt;p&gt;ಪ್ರತಿಯೊಬ್ಬರಿಗೂ ಅಡ್ಡಹೆಸರು ಅಥವಾ ಮುದ್ದಿನ ಹೆಸರು ಇರುವುದು ಸಾಮಾನ್ಯ. ಅದರಲ್ಲೂ ನಮ್ಮ ನೆಚ್ಚಿನ ನಟಿಯರ ನಿಕ್&zwnj;ನೇಮ್&zwnj; ಏನು ಅಂತಾ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತೆ. ಹಾಗಿದ್ರೆ, ಕೆಲವು ಫೇಮಸ್ ನಟಿಯರ ಮುದ್ದಿನ ಹೆಸರುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m08dj71fecshw6vz1h8qa1t2,imgname-1-1786989059119.png" type="image/jpeg" height="390" width="690"/>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/entertainment/secret-nicknames-of-famous-indian-actresses-revealed-gvd-ee5ehlz"/>
        </item>
        <item>
            <title><![CDATA['ಟಬು ನನ್ನ ಉತ್ತಮ ಸ್ನೇಹಿತೆ, ಆದ್ರೆ.. ನಾನು ಭ್ರಷ್ಟನಾಗಿದ್ದೇನೆ': ನಟ ನಾಗಾರ್ಜುನ ಓಪನ್ ಟಾಕ್]]></title>
            <link>https://kannada.asianetnews.com/entertainment/nagarjuna-says-i-am-corrupt-while-opening-up-about-his-personal-life-gvd/articleshow-m1yepih</link>
            <guid isPermaLink="true">https://kannada.asianetnews.com/entertainment/nagarjuna-says-i-am-corrupt-while-opening-up-about-his-personal-life-gvd/articleshow-m1yepih</guid>
            <pubDate>Mon, 17 Aug 2026 23:36:41 +0530</pubDate>
            <description><![CDATA[&lt;p&gt;ನಟ ನಾಗಾರ್ಜುನ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾನು ಭ್ರಷ್ಟನಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಈ ಸಮಸ್ಯೆ ಇಲ್ಲ, ಆದರೆ ಹೊರಗಿನ ಜಗತ್ತಿನಲ್ಲಿ ಇದು ಹೆಚ್ಚಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m08cna0b8a2xj0fpx9cr3j8e,imgname-cchchg-1786988111883.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ನಾಗಾರ್ಜುನ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾನು ಭ್ರಷ್ಟನಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಈ ಸಮಸ್ಯೆ ಇಲ್ಲ, ಆದರೆ ಹೊರಗಿನ ಜಗತ್ತಿನಲ್ಲಿ ಇದು ಹೆಚ್ಚಾಗಿದೆ, ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಟಾಲಿವುಡ್&zwnj;ನಲ್ಲಿ 'ಕಿಂಗ್' ಮತ್ತು 'ಮನ್ಮಥ' ಎಂದೇ ಖ್ಯಾತರಾದವರು ನಾಗಾರ್ಜುನ. 'ಗೀತಾಂಜಲಿ', 'ಶಿವ', 'ಅನ್ನಮಯ್ಯ' ದಂತಹ ವಿಭಿನ್ನ ಚಿತ್ರಗಳನ್ನು ಮಾಡಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ರಜನಿಕಾಂತ್ ಅವರ 'ಕೂಲಿ' ಚಿತ್ರದಲ್ಲಿ ವಿಲನ್ ಪಾತ್ರವನ್ನೂ ಮಾಡಿದ್ದಾರೆ. ಸದ್ಯ ಅವರು ತಮ್ಮ 100ನೇ ಚಿತ್ರ 'ಕಿಂಗ್ 100'ರಲ್ಲಿ ನಟಿಸುತ್ತಿದ್ದಾರೆ. ಹಿಂದೊಮ್ಮೆ ಮಂಚು ಲಕ್ಷ್ಮಿ ಅವರ ಶೋನಲ್ಲಿ ನಾಗಾರ್ಜುನ ನೀಡಿದ್ದ ಹೇಳಿಕೆಯೊಂದು ಈಗ ವೈರಲ್ ಆಗಿದೆ. ತನಗೆ ಕೋಪ ಬಂದಾಗ ಎಲ್ಲರ ಮೇಲೂ ಕೂಗಾಡುತ್ತೇನೆ, ಆದರೆ ನಂತರ 'ಕ್ಷಮಿಸಿ, ಕೋಪದಲ್ಲಿ ಏನೋ ಅಂದೆ' ಎಂದು ಹೇಳುತ್ತೇನೆ ಎಂದಿದ್ದರು. ಕ್ಷಮೆ ಕೇಳುವುದರಿಂದ ಅಹಂಗೆ ಯಾವುದೇ ಸಮಸ್ಯೆ ಇಲ್ಲ, ಇದರಿಂದ ಹಲವು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಾಗಾರ್ಜುನ ಹೇಳಿದ್ದಾರೆ.&lt;/p&gt;&lt;p&gt;ಮಂಚು ಲಕ್ಷ್ಮಿ ಅವರು 'ನಿಮ್ಮಲ್ಲಿ ನಿಮಗೆ ಇಷ್ಟವಾಗದ ಗುಣ ಯಾವುದು?' ಎಂದು ಕೇಳಿದಾಗ, ನಾಗಾರ್ಜುನ 'ನಾನು ಭ್ರಷ್ಟನಾಗಿದ್ದೇನೆ, ಅದು ನನಗೆ ಇಷ್ಟವಿಲ್ಲ' ಎಂದು ಉತ್ತರಿಸಿದರು. ವ್ಯವಸ್ಥೆಯೇ ಭ್ರಷ್ಟವಾಗಿದೆ, ತಾನೂ ಅದರ ಭಾಗವಾಗಿದ್ದೇನೆ. ಆದರೆ ಸಿನಿಮಾ ಇಂಡಸ್ಟ್ರಿಯಲ್ಲಿ ಇಂತಹ ಭ್ರಷ್ಟಾಚಾರ ಇಲ್ಲ, ಇಲ್ಲಿ ಕೇವಲ ಅಹಂನ ಸಮಸ್ಯೆ ಮಾತ್ರ ಇರುತ್ತದೆ ಎಂದು ನಾಗಾರ್ಜುನ ಸ್ಪಷ್ಟಪಡಿಸಿದರು.&lt;/p&gt;&lt;h2&gt;&lt;strong&gt;ನನ್ನ ಉತ್ತಮ ಸ್ನೇಹಿತೆ&lt;/strong&gt;&lt;/h2&gt;&lt;p&gt;ನಟಿ ಟಬು ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ ನಾಗಾರ್ಜುನ, 'ಟಬು ನನ್ನ ಉತ್ತಮ ಸ್ನೇಹಿತೆ, ಆಕೆ ನನಗೆ ತುಂಬಾ ವಿಶೇಷ' ಎಂದರು. ಮದುವೆಗೂ ಮುನ್ನವೇ ಟಬು ತನಗೆ ಗೊತ್ತು, ಈ ವಿಷಯ ಪತ್ನಿ ಅಮಲಾಗೂ ತಿಳಿದಿದೆ. ಸಂಬಂಧಗಳಲ್ಲಿ ನಂಬಿಕೆ ಮುಖ್ಯ, ನಂಬಿಕೆ ಇಲ್ಲದಿದ್ದರೆ ಸಂಬಂಧ ಉಳಿಯುವುದಿಲ್ಲ ಎಂದು ಅವರು ಹೇಳಿದರು. ಸದ್ಯ 'ಕಿಂಗ್ 100' ಚಿತ್ರ ದಸರಾ ಅಥವಾ ಸಂಕ್ರಾಂತಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/nagarjuna-says-i-am-corrupt-while-opening-up-about-his-personal-life-gvd/articleshow-m1yepih"/>
        </item>
        <item>
            <title><![CDATA[ಮೆಲ್ಬೋರ್ನ್ ರೆಡ್ ಕಾರ್ಪೆಟ್‌ನಲ್ಲಿ ಕರ್ನಾಟಕದ ಕಂಪು: ರೇಷ್ಮೆ ಪಂಚೆ, ಗಂಡಭೇರುಂಡ ಕುರ್ತಾದಲ್ಲಿ ರಿಷಬ್ ಶೆಟ್ಟಿ!]]></title>
            <link>https://kannada.asianetnews.com/entertainment/silk-dhoti-and-gandaberunda-rishab-shettys-iffm-look-is-all-about-karnataka-gvd/articleshow-iwg3kbv</link>
            <guid isPermaLink="true">https://kannada.asianetnews.com/entertainment/silk-dhoti-and-gandaberunda-rishab-shettys-iffm-look-is-all-about-karnataka-gvd/articleshow-iwg3kbv</guid>
            <pubDate>Mon, 17 Aug 2026 22:40:48 +0530</pubDate>
            <description><![CDATA[&lt;p&gt;Rishab Shetty IFFM: ಮೆಲ್ಬೋರ್ನ್&zwnj;ನ ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್&zwnj;ನಲ್ಲಿ ನಟ ರಿಷಬ್ ಶೆಟ್ಟಿ ತಮ್ಮ ತವರು ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m089zf6a5385vmf3fse97te5,imgname-2-1786985299146.png" type="image/jpeg" height="390" width="690"/>
            <content:encoded><![CDATA[&lt;p&gt;ಮೆಲ್ಬೋರ್ನ್&zwnj;ನ ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್&zwnj;ನಲ್ಲಿ ನಟ ರಿಷಬ್ ಶೆಟ್ಟಿ ತಮ್ಮ ತವರು ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದಾರೆ. ಭಾರತೀಯ ಚಿತ್ರೋತ್ಸವ ಮೆಲ್ಬೋರ್ನ್ (IFFM) ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಯಾವುದೇ ಅದ್ಧೂರಿ ಅಥವಾ ಪ್ರಯೋಗಾತ್ಮಕ ಫ್ಯಾಷನ್ ಮೊರೆ ಹೋಗದೆ, ಸರಳವಾದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕೂಡ ತಮ್ಮ ಕರ್ನಾಟಕದ ಬೇರುಗಳನ್ನು ಮರೆಯದೆ, ಸಂಪ್ರದಾಯದ ಉಡುಗೆಯಲ್ಲೇ ಸ್ಟೈಲ್ ಸ್ಟೇಟ್&zwnj;ಮೆಂಟ್ ನೀಡಿರುವ ರಿಷಬ್ ಅವರ ಲುಕ್ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;p&gt;&lt;strong&gt;ಕೈಮಗ್ಗದ ಶುದ್ಧ ರೇಷ್ಮೆ ಪಂಚೆಯಲ್ಲಿ ರಿಷಬ್ ಶೆಟ್ಟಿ&lt;/strong&gt;&lt;/p&gt;&lt;p&gt;ಮೆಲ್ಬೋರ್ನ್&zwnj;ನಲ್ಲಿ ನಡೆದ IFFM ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಕಪ್ಪು ಕುರ್ತಾ ಹಾಗೂ ಕೈಮಗ್ಗದಲ್ಲಿ ತಯಾರಿಸಲಾದ ಶುದ್ಧ ರೇಷ್ಮೆಯ ಪಂಚೆ ಧರಿಸಿದ್ದರು. ಸಾಮಾನ್ಯವಾಗಿ ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್&zwnj;ಗಳಲ್ಲಿ ಕಾಣಿಸುವ ಅದ್ಧೂರಿ ಫ್ಯಾಷನ್&zwnj;ಗಿಂತ ಭಿನ್ನವಾಗಿ, ರಿಷಬ್ ಅವರ ಸರಳ ಸಾಂಪ್ರದಾಯಿಕ ಲುಕ್ ಎಲ್ಲರ ಗಮನ ಸೆಳೆಯಿತು. ಐವರಿ ಬಣ್ಣದ ಪಂಚೆಗೆ ಜರಿ ಅಂಚು ನೀಡಲಾಗಿದ್ದು, ಉಡುಪಿಗೆ ಸೊಗಸಾದ ಶ್ರೀಮಂತಿಕೆ ತಂದಿತ್ತು. ಇದಕ್ಕೆ ಕಪ್ಪು ಸಿಲ್ಕ್-ಕಾಟನ್ ಕುರ್ತಾ ಜೋಡಿಸಲಾಗಿತ್ತು. ಕಪ್ಪು ಮತ್ತು ಐವರಿ ಬಣ್ಣಗಳ ಕಾಂಬಿನೇಷನ್&zwnj;ಗೆ ಸಣ್ಣ ಪ್ರಮಾಣದ ಗೋಲ್ಡ್ ಡೀಟೇಲಿಂಗ್ ಮತ್ತಷ್ಟು ಎಲಿಗಂಟ್ ಲುಕ್ ನೀಡಿತ್ತು. ಸರಳತೆ ಹಾಗೂ ಸಾಂಪ್ರದಾಯಿಕತೆಯ ನಡುವೆ ಬ್ಯಾಲೆನ್ಸ್ ಕಾಯ್ದುಕೊಂಡಿದ್ದ ಈ ಲುಕ್, ರೆಡ್ ಕಾರ್ಪೆಟ್&zwnj;ಗೆ ಸೂಕ್ತವಾಗಿಯೇ ಕಾಣಿಸಿಕೊಂಡಿತು.&lt;img&gt;&lt;/p&gt;&lt;p&gt;&lt;strong&gt;ಕುರ್ತಾದ ಮೇಲಿದ್ದ ಗಂಡಭೇರುಂಡವೇ ಹೈಲೈಟ್!&lt;/strong&gt;&lt;/p&gt;&lt;p&gt;ರಿಷಬ್ ಶೆಟ್ಟಿ ಅವರ ಈ ಉಡುಪಿನಲ್ಲಿ ಎಲ್ಲರ ಗಮನ ಸೆಳೆದ ಪ್ರಮುಖ ಅಂಶವೆಂದರೆ ಕುರ್ತಾದ ಮೇಲೆ ಕಸೂತಿ ಮಾಡಲಾಗಿದ್ದ ಗಂಡಭೇರುಂಡ. ಕರ್ನಾಟಕದೊಂದಿಗೆ ಆಳವಾದ ನಂಟು ಹೊಂದಿರುವ ಗಂಡಭೇರುಂಡವು ಶಕ್ತಿ, ಸಾಮರ್ಥ್ಯ ಹಾಗೂ ಸ್ಥೈರ್ಯದ ಸಂಕೇತವಾಗಿ ಗುರುತಿಸಿಕೊಂಡಿದೆ. ರಿಷಬ್ ಅವರ ಕುರ್ತಾದ ಮೇಲೆ ಇದು ಯಾವುದೇ ಅದ್ಧೂರಿ ಅಲಂಕಾರದಂತೆ ಕಾಣಿಸದೆ, ಕರ್ನಾಟಕದೊಂದಿಗೆ ಅವರ ವೈಯಕ್ತಿಕ ನಂಟನ್ನು ಸಾರುವ ಸಣ್ಣ ಆದರೆ ಅರ್ಥಪೂರ್ಣ ಸಂಕೇತವಾಗಿ ಮೂಡಿಬಂದಿತ್ತು. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ತೋರಿಸಲು ಅದ್ಧೂರಿ ವಿನ್ಯಾಸ ಅಥವಾ ಓವರ್&zwnj; ದಿ ಟಾಪ್ ಸ್ಟೈಲಿಂಗ್ ಅಗತ್ಯವಿಲ್ಲ ಎಂಬುದನ್ನೂ ರಿಷಬ್ ಅವರ ಲುಕ್ ತೋರಿಸಿಕೊಟ್ಟಿದೆ.&lt;/p&gt;&lt;p&gt;&lt;strong&gt;ಗ್ಲೋಬಲ್ ರೆಡ್ ಕಾರ್ಪೆಟ್&zwnj;ನಲ್ಲಿ ಕರ್ನಾಟಕದ ಸಂಸ್ಕೃತಿ&lt;/strong&gt;&lt;/p&gt;&lt;p&gt;ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್&zwnj;ಗಳಲ್ಲಿ ಸಾಮಾನ್ಯವಾಗಿ ವಿಭಿನ್ನ ಸಿಲೂಯೆಟ್&zwnj;ಗಳು, ಪ್ರಯೋಗಾತ್ಮಕ ಫ್ಯಾಷನ್, ಸ್ಟೇಟ್&zwnj;ಮೆಂಟ್ ಆಕ್ಸೆಸರೀಸ್&zwnj;ಗಳು ಗಮನ ಸೆಳೆಯುತ್ತವೆ. ಆದರೆ ರಿಷಬ್ ಶೆಟ್ಟಿ ಈ ಬಾರಿ ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೈಮಗ್ಗದ ಬಟ್ಟೆ, ಸಾಂಪ್ರದಾಯಿಕ ಪಂಚೆ, ಸರಳ ಕುರ್ತಾ ಹಾಗೂ ಗಂಡಭೇರುಂಡದ ಕಸೂತಿ-ಇವೆಲ್ಲವೂ ಸೇರಿ ಯಾವುದೇ ಅತಿಯಾದ ಸ್ಟೈಲಿಂಗ್ ಇಲ್ಲದೆ ಕರ್ನಾಟಕದ ಸೊಗಡನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದಿವೆ. ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ರಿಷಬ್ ಶೆಟ್ಟಿ ಅವರ ನಂಟು ಹೊಸದೇನಲ್ಲ. ತಮ್ಮ ಸಿನಿಮಾ ಹಾಗೂ ಸಾರ್ವಜನಿಕ ಬದುಕಿನಲ್ಲೂ ಅವರು ಕನ್ನಡ ನಾಡಿನ ಸಂಸ್ಕೃತಿಯೊಂದಿಗೆ ಸದಾ ಗುರುತಿಸಿಕೊಂಡಿದ್ದಾರೆ. ಇದೀಗ ಮೆಲ್ಬೋರ್ನ್ ರೆಡ್ ಕಾರ್ಪೆಟ್&zwnj;ನಲ್ಲೂ ಅದೇ ನಂಟು ಮತ್ತೊಮ್ಮೆ ಎದ್ದು ಕಾಣಿಸಿದೆ.&lt;/p&gt;&lt;p&gt;&lt;strong&gt;&lsquo;ಕರ್ನಾಟಕವನ್ನು ಬದಲಿಸಿ ತೋರಿಸುವ&rsquo; ಬದಲು ಹಾಗೆಯೇ ಕೊಂಡೊಯ್ದ ರಿಷಬ್!&lt;/strong&gt;&lt;/p&gt;&lt;p&gt;ಅಂತರರಾಷ್ಟ್ರೀಯ ಪ್ರೇಕ್ಷಕರಿಗಾಗಿ ಕರ್ನಾಟಕದ ಸಾಂಪ್ರದಾಯಿಕ ಉಡುಗೆಯನ್ನು ಹೊಸ ರೀತಿಯಲ್ಲಿ ಬದಲಿಸಿ ತೋರಿಸುವ ಬದಲು, ತಮ್ಮ ಸಂಸ್ಕೃತಿಯನ್ನು ಅದರ ಸಹಜ ರೂಪದಲ್ಲೇ ರಿಷಬ್ ಶೆಟ್ಟಿ ಜಾಗತಿಕ ವೇದಿಕೆಗೆ ಕೊಂಡೊಯ್ದಿದ್ದಾರೆ.&lt;/p&gt;&lt;h2&gt;&lt;strong&gt;ಇದೇ ಅವರ IFFM ಲುಕ್&zwnj;ನ ವಿಶೇಷತೆ&lt;/strong&gt;&lt;/h2&gt;&lt;p&gt;ಜಾಗತಿಕ ರೆಡ್ ಕಾರ್ಪೆಟ್&zwnj;ನಲ್ಲಿ ಗಮನ ಸೆಳೆಯಲು ಯಾವಾಗಲೂ ಅದ್ಧೂರಿತನವೇ ಬೇಕಿಲ್ಲ. ಕೆಲವೊಮ್ಮೆ ಸರಳತೆ, ಸಂಪ್ರದಾಯ ಮತ್ತು ತನ್ನ ನೆಲದ ಮೇಲಿನ ಹೆಮ್ಮೆ ಕೂಡ ಅತ್ಯಂತ ಪರಿಣಾಮಕಾರಿ ಫ್ಯಾಷನ್ ಸ್ಟೇಟ್&zwnj;ಮೆಂಟ್ ಆಗಬಲ್ಲದು ಎಂಬುದನ್ನು ರಿಷಬ್ ಶೆಟ್ಟಿ ತಮ್ಮ ಲುಕ್ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/silk-dhoti-and-gandaberunda-rishab-shettys-iffm-look-is-all-about-karnataka-gvd/articleshow-iwg3kbv"/>
        </item>
        <item>
            <title><![CDATA[‘ಸುರ್ನಪಖಾ ಅಲ್ಲ, ಶೂರ್ಪನಖಿ’: ಹೆಸರು ತಪ್ಪಾಗಿ ಹೇಳಿದ ಪಾಪರಾಜಿಗಳನ್ನು ನಗುತ್ತಲೇ ತಿದ್ದಿದ ರಕುಲ್!]]></title>
            <link>https://kannada.asianetnews.com/entertainment/rakul-preet-singh-corrects-paparazzi-not-surnapakha-surpanakhi-gvd/articleshow-0xpuyh0</link>
            <guid isPermaLink="true">https://kannada.asianetnews.com/entertainment/rakul-preet-singh-corrects-paparazzi-not-surnapakha-surpanakhi-gvd/articleshow-0xpuyh0</guid>
            <pubDate>Mon, 17 Aug 2026 22:01:43 +0530</pubDate>
            <description><![CDATA[&lt;p&gt;ನಟಿಯೊಂದಿಗೆ ಮಾತನಾಡುವ ವೇಳೆ ಮುಂಬೈನ ಪಾಪರಾಜಿಗಳು ಆಕೆಯ &lsquo;ರಾಮಾಯಣ&rsquo; ಪಾತ್ರದ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದಕ್ಕೆ ರಕುಲ್ ಪ್ರೀತ್ ಸಿಂಗ್ ನಗುತ್ತಲೇ ಸರಿಯಾದ ಉಚ್ಚಾರಣೆಯನ್ನು ಹೇಳಿಕೊಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m088xn6erqbqsgbt5051n0dx,imgname-jvjv-1786984191182.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿಯೊಂದಿಗೆ ಮಾತನಾಡುವ ವೇಳೆ ಮುಂಬೈನ ಪಾಪರಾಜಿಗಳು ಆಕೆಯ &lsquo;ರಾಮಾಯಣ&rsquo; ಪಾತ್ರದ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದಕ್ಕೆ ರಕುಲ್ ಪ್ರೀತ್ ಸಿಂಗ್ ನಗುತ್ತಲೇ ಸರಿಯಾದ ಉಚ್ಚಾರಣೆಯನ್ನು ಹೇಳಿಕೊಟ್ಟಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ &lsquo;ರಾಮಾಯಣ&rsquo; ಸಿನಿಮಾದಲ್ಲಿ ರಕುಲ್ ಶೂರ್ಪನಖಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;strong&gt;ಪಾಪರಾಜಿಗಳ ಉಚ್ಚಾರಣೆ ಕೇಳಿ ನಕ್ಕ ರಕುಲ್&lt;/strong&gt;&lt;/p&gt;&lt;p&gt;ಆಗಸ್ಟ್ 17ರಂದು ಮುಂಬೈನ ಅಂಧೇರಿಯಲ್ಲಿ ರಕುಲ್ ಪ್ರೀತ್ ಸಿಂಗ್ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದರು. ಈ ವೇಳೆ ಛಾಯಾಗ್ರಾಹಕರು ರಕುಲ್ ಅವರನ್ನು ಅವರ &lsquo;ರಾಮಾಯಣ&rsquo; ಪಾತ್ರದ ಹೆಸರಿನಿಂದ ಕರೆಯಲು ಪ್ರಯತ್ನಿಸಿದ್ದಾರೆ. ಆದರೆ ಶೂರ್ಪನಖಿ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದಾರೆ. ಇದನ್ನು ಗಮನಿಸಿದ ರಕುಲ್, ನಗುತ್ತಲೇ &ldquo;ಸುರ್ನಪಖಾ ಅಲ್ಲ, ಶೂರ್ಪನಖ&rdquo; ಎಂದು ಸರಿಪಡಿಸಿದ್ದಾರೆ. ಪಾಪರಾಜಿಗಳ ಉಚ್ಚಾರಣೆ ನೋಡಿ ನಗುವುದನ್ನು ತಡೆಯಲು ಸಾಧ್ಯವಾಗದೆ ರಕುಲ್ ಕೊನೆಗೆ ಜೋರಾಗಿ ನಕ್ಕಿದ್ದಾರೆ. ಈ ವೇಳೆ ಅವರು ಪಾಪರಾಜಿಗಳೊಂದಿಗೆ ಎಂದಿನಂತೆ ಲವಲವಿಕೆಯಿಂದಲೇ ಸಂವಹನ ನಡೆಸಿದ್ದಾರೆ.&lt;/p&gt;&lt;p&gt;&lt;strong&gt;ಶೂರ್ಪನಖಿ ಪಾತ್ರವನ್ನೇ ರಕುಲ್ ಆಯ್ಕೆ ಮಾಡಿದ್ದೇಕೆ?&lt;/strong&gt;&lt;/p&gt;&lt;p&gt;ರಕುಲ್ ಶೂರ್ಪನಖಿ ಪಾತ್ರ ಒಪ್ಪಿಕೊಂಡಿರುವ ಹಿಂದಿನ ಕಾರಣದ ಬಗ್ಗೆಯೂ ಇತ್ತೀಚೆಗೆ ಮಾತನಾಡಿದ್ದರು. ಆಗಸ್ಟ್ 3ರಂದು ಎಕ್ಸ್&zwnj;ನಲ್ಲಿ ಅಭಿಮಾನಿಯೊಬ್ಬರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ರಕುಲ್, ಪಾತ್ರದ ಸಂಕೀರ್ಣತೆಯೇ ತಮ್ಮನ್ನು ಹೆಚ್ಚು ಆಕರ್ಷಿಸಿತು ಎಂದು ಹೇಳಿದ್ದರು. ಸಾಮಾನ್ಯವಾಗಿ ಇತಿಹಾಸದಲ್ಲಿ ಶೂರ್ಪನಖಿಯನ್ನು ಆಕೆಯ ಜೀವನದ ಒಂದು ನಿರ್ದಿಷ್ಟ ಘಟನೆಯ ಮೂಲಕವೇ ನೆನಪಿಸಿಕೊಳ್ಳಲಾಗುತ್ತದೆ. ಆದರೆ ಆ ಪಾತ್ರದ ಹಿಂದೆ ಇನ್ನೂ ಹಲವು ಆಯಾಮಗಳಿವೆ ಎಂಬ ಅಭಿಪ್ರಾಯವನ್ನು ರಕುಲ್ ವ್ಯಕ್ತಪಡಿಸಿದ್ದರು. ಹೀಗಾಗಿ ಸಾಮಾನ್ಯವಾಗಿ ಕಾಣಿಸುವ ಚಿತ್ರಣವನ್ನು ಮೀರಿ ಶೂರ್ಪನಖಿ ವ್ಯಕ್ತಿತ್ವದ ಹಲವು ಮುಖಗಳನ್ನು ತೆರೆಗೆ ತರುವ ಅವಕಾಶವೇ ತಮ್ಮನ್ನು ಈ ಪಾತ್ರದತ್ತ ಸೆಳೆಯಿತು ಎಂಬುದು ಅವರ ಮಾತಿನ ಅರ್ಥ. ರಾವಣನ ಸಹೋದರಿಯಾಗಿರುವ ಶೂರ್ಪನಖಿ, ರಾಮಾಯಣದ ಪ್ರಮುಖ ಘಟನೆಗಳ ಸರಣಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ. ಆಕೆಗೆ ಸಂಬಂಧಿಸಿದ ಘಟನೆಯೇ ಮುಂದೆ ರಾಮ ಮತ್ತು ಲಂಕಾಧಿಪತಿ ರಾವಣನ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ.&lt;/p&gt;&lt;p&gt;&lt;strong&gt;&lsquo;ರಾಮಾಯಣ&rsquo;ದಲ್ಲಿ ದೊಡ್ಡ ತಾರಾಬಳಗ&lt;/strong&gt;&lt;/p&gt;&lt;p&gt;ನಿತೇಶ್ ತಿವಾರಿ ನಿರ್ದೇಶನದ &lsquo;ರಾಮಾಯಣ&rsquo; ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಹಲವು ಸ್ಟಾರ್&zwnj;ಗಳು ಅಭಿನಯಿಸುತ್ತಿದ್ದಾರೆ. ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಳ್ಳುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿದ್ದಾರೆ. ಯಶ್ ರಾವಣನಾಗಿ ಹಾಗೂ ಸನ್ನಿ ಡಿಯೋಲ್ ಹನುಮಂತನಾಗಿ ನಟಿಸುತ್ತಿದ್ದಾರೆ. ರವೀ ದುಬೆ ಲಕ್ಷ್ಮಣನ ಪಾತ್ರದಲ್ಲಿದ್ದಾರೆ. ರಾಮಾನಂದ ಸಾಗರ್ ಅವರ ಜನಪ್ರಿಯ &lsquo;ರಾಮಾಯಣ&rsquo; ಧಾರಾವಾಹಿಯಲ್ಲಿ ಶ್ರೀರಾಮನಾಗಿ ಅಭಿನಯಿಸಿದ್ದ ಅರುಣ್ ಗೋವಿಲ್ ಇದೀಗ ರಾಜ ದಶರಥನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲಾರಾ ದತ್ತಾ ಕೈಕೇಯಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಯಾವಾಗ ಬಿಡುಗಡೆಯಾಗಲಿದೆ &lsquo;ರಾಮಾಯಣ&rsquo;?&lt;/strong&gt;&lt;/h2&gt;&lt;p&gt;ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷೆಯ &lsquo;ರಾಮಾಯಣ&rsquo; ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. &lsquo;ರಾಮಾಯಣ: ಪಾರ್ಟ್ 1&rsquo; 2026ರ ದೀಪಾವಳಿ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. &lsquo;ರಾಮಾಯಣ: ಪಾರ್ಟ್ 2&rsquo; 2027ರ ದೀಪಾವಳಿ ಸಂದರ್ಭದಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ರಕುಲ್ ಪ್ರೀತ್ ಸಿಂಗ್ ಅವರ ಶೂರ್ಪನಖಿ ಪಾತ್ರದ ಲುಕ್ ಮತ್ತು ಪಾತ್ರದ ಕುರಿತ ಕುತೂಹಲ ಈಗಾಗಲೇ ಹೆಚ್ಚಿದ್ದು, ಪಾಪರಾಜಿಗಳ ಸಣ್ಣ ಉಚ್ಚಾರಣೆ ತಪ್ಪು ಕೂಡ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rakul-preet-singh-corrects-paparazzi-not-surnapakha-surpanakhi-gvd/articleshow-0xpuyh0"/>
        </item>
        <item>
            <title><![CDATA[12ನೇ ವಯಸ್ಸಿನಲ್ಲೇ ಮದುವೆ... ಗರ್ಭಿಣಿಯಾಗಿದ್ದಾಗ ಪತಿಯಿಂದ ಹಿಂಸೆ: ನಟಿ ಸರಿತಾ ಬದುಕಿನಲ್ಲಿ ಇಷ್ಟೊಂದು ದುರಂತವೇ?]]></title>
            <link>https://kannada.asianetnews.com/entertainment/veteran-actress-sarithas-inspiring-journey-through-cinema-and-life-gvd/articleshow-elelgbo</link>
            <guid isPermaLink="true">https://kannada.asianetnews.com/entertainment/veteran-actress-sarithas-inspiring-journey-through-cinema-and-life-gvd/articleshow-elelgbo</guid>
            <pubDate>Mon, 17 Aug 2026 21:29:35 +0530</pubDate>
            <description><![CDATA[&lt;p&gt;Veteran Actress Saritha: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೇವಲ ಸೌಂದರ್ಯ ಮತ್ತು ಗ್ಲಾಮರ್&zwnj;ನಿಂದಲ್ಲದೆ, ಅಸಾಧಾರಣ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಕೆಲವೇ ಕೆಲವು ನಟಿಯರಲ್ಲಿ ಸರಿತಾ ಪ್ರಮುಖರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m08714bdks4qj1de77xnpf1r,imgname-b-bkj-1786982207853.png" type="image/jpeg" height="390" width="690"/>
            <content:encoded><![CDATA[&lt;p&gt;ಬಹುಭಾಷಾ ನಟಿ ಸರಿತಾ ಅವರ ಸಿನಿ ಪಯಣ ಗ್ಲಾಮರ್&zwnj;ಗೆ ಮೀರಿದ್ದು. ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರಂತಹ ದಿಗ್ಗಜರಿಗೆ ಅವರ ಅಭಿನಯವೇ ಪ್ರಮುಖ ಅಸ್ತ್ರವಾಗಿತ್ತು. ಬಾಲ್ಯವಿವಾಹದಿಂದ ಹಿಡಿದು ವಿಚ್ಛೇದನದವರೆಗೆ ವೈಯಕ್ತಿಕ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ಸರಿತಾ, ನಟಿಯಾಗಿ ಮಾತ್ರವಲ್ಲದೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ತಮ್ಮ ಅಪ್ರತಿಮ ಪ್ರತಿಭೆ ಮೆರೆದಿದ್ದಾರೆ.&lt;/p&gt;&lt;p&gt;ದಕ್ಷಿಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೇವಲ ಸೌಂದರ್ಯ ಮತ್ತು ಗ್ಲಾಮರ್&zwnj;ನಿಂದಲ್ಲದೆ, ಅಸಾಧಾರಣ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಕೆಲವೇ ಕೆಲವು ನಟಿಯರಲ್ಲಿ ಸರಿತಾ ಪ್ರಮುಖರು. ಹಲವು ಸೂಪರ್&zwnj;ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅವರು, ವೈಯಕ್ತಿಕ ಜೀವನದಲ್ಲಿ ಮಾತ್ರ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ.&lt;/p&gt;&lt;p&gt;&lt;strong&gt;12-13ರ ವಯಸ್ಸಿನಲ್ಲೇ ಬಾಲ್ಯವಿವಾಹ!&lt;/strong&gt;&lt;/p&gt;&lt;p&gt;ಸರಿತಾ ಅವರಿಗೆ ಚಿಕ್ಕ ವಯಸ್ಸಿನಲ್ಲೇ, ಅಂದರೆ 12-13ನೇ ವಯಸ್ಸಿನಲ್ಲಿ ಬಾಲ್ಯವಿವಾಹ ನಡೆದಿತ್ತು ಎನ್ನಲಾಗಿದೆ. ಆ ಕಾಲದ ಪರಿಸ್ಥಿತಿಯಲ್ಲಿ ಇದು ಸಾಮಾನ್ಯವಾಗಿದ್ದರೂ, ಸರಿತಾ ಈ ಮದುವೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಬಳಿಕ ನ್ಯಾಯಾಲಯದ ಮೊರೆ ಹೋಗಿ ಆ ವಿವಾಹವನ್ನು ರದ್ದುಗೊಳಿಸಿಕೊಂಡರು. ನಂತರ ಚಿತ್ರರಂಗಕ್ಕೆ ಕಾಲಿಡುವ ಆಸೆಯಿಂದ ಮದ್ರಾಸ್&zwnj;ಗೆ ಬಂದರು. ಇದೇ ಸಂದರ್ಭದಲ್ಲಿ ನಿರ್ದೇಶಕ ಕೆ. ಬಾಲಚಂದರ್ ತಮ್ಮ &lsquo;ಮರೋ ಚರಿತ್ರ&rsquo; ಸಿನಿಮಾಗಾಗಿ ನಾಯಕಿಯ ಹುಡುಕಾಟದಲ್ಲಿದ್ದರು.&lt;/p&gt;&lt;p&gt;ಅವರು ನಾಯಕಿಯ ಆಯ್ಕೆಯಲ್ಲಿ ಸೌಂದರ್ಯ, ಎತ್ತರ, ಮೈಬಣ್ಣಕ್ಕಿಂತ ಪಾತ್ರಕ್ಕೆ ತಕ್ಕ ಅಭಿನಯ ಸಾಮರ್ಥ್ಯಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಆ ಸಂದರ್ಭದಲ್ಲಿ ದೇಹದ ತೂಕ ಹೆಚ್ಚಿದ್ದು, ಎತ್ತರ ಕಡಿಮೆ ಇದ್ದ ಸರಿತಾ ಅವರನ್ನು ಬರೋಬ್ಬರಿ 162 ಮಂದಿಯ ಆಡಿಷನ್&zwnj;ನಿಂದ ಆಯ್ಕೆ ಮಾಡಲಾಯಿತು. ಕಮಲ್ ಹಾಸನ್ ಜೊತೆ &lsquo;ಮರೋ ಚರಿತ್ರ&rsquo; ಸಿನಿಮಾದಲ್ಲಿ ನಟಿಸಿದ ಸರಿತಾ ಅವರ ಅಭಿನಯ ತೆಲುಗು ಮತ್ತು ತಮಿಳು ಪ್ರೇಕ್ಷಕರನ್ನು ಬೆರಗುಗೊಳಿಸಿತು.&lt;img&gt;&lt;/p&gt;&lt;p&gt;&lt;strong&gt;ಬಾಲಚಂದರ್ ಜೊತೆ ಬರೋಬ್ಬರಿ 23 ಸಿನಿಮಾಗಳು!&lt;/strong&gt;&lt;/p&gt;&lt;p&gt;&lsquo;ಮರೋ ಚರಿತ್ರ&rsquo; ಯಶಸ್ಸಿನ ಬಳಿಕ ಸರಿತಾ ಅಲ್ಲಿಗೇ ನಿಲ್ಲಲಿಲ್ಲ. ನಿರ್ದೇಶಕ ಕೆ. ಬಾಲಚಂದರ್ ಅವರೊಂದಿಗೆ ಬರೋಬ್ಬರಿ 23 ಸಿನಿಮಾಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದರು. ಒಬ್ಬ ನಿರ್ದೇಶಕ ಒಂದೇ ನಟಿಯೊಂದಿಗೆ ಇಷ್ಟೊಂದು ಸಿನಿಮಾಗಳಲ್ಲಿ ಕೆಲಸ ಮಾಡಿರುವುದು ಅಪರೂಪ. ಪಾತ್ರಕ್ಕಾಗಿ ತಲೆ ಬೋಳಿಸಿಕೊಂಡಿದ್ದೂ ಇದೆ. ಕ್ಯಾನ್ಸರ್ ರೋಗಿಯ ಪಾತ್ರ, ಗ್ರಾಮೀಣ ಮಹಿಳೆಯ ಪಾತ್ರ, &lsquo;ತಣ್ಣೀರ್ ತಣ್ಣೀರ್&rsquo; ಸಿನಿಮಾದಲ್ಲಿ ಹಳ್ಳಿಯ ಮಹಿಳೆಯ ಪಾತ್ರ-ಹೀಗೆ ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ಮೂಲಕ ತಮ್ಮ ಅಭಿನಯ ಸಾಮರ್ಥ್ಯವನ್ನು ಸಾಬೀತುಪಡಿಸಿದರು.&lt;/p&gt;&lt;p&gt;ಚಿರಂಜೀವಿ ಜೊತೆಗಿನ &lsquo;47 ಡೇಸ್&rsquo;, &lsquo;ಕಲಿಯುಗ ಪಾಂಡವರು&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸರಿತಾ, ಮಹೇಶ್ ಬಾಬು ಅಭಿನಯದ &lsquo;ಅರ್ಜುನ್&rsquo; ಸಿನಿಮಾದಲ್ಲಿ ಖಳನಾಯಕಿಯ ಪಾತ್ರದಲ್ಲೂ ಗಮನ ಸೆಳೆದಿದ್ದರು. ಈ ಅಭಿನಯಕ್ಕಾಗಿ ಅವರಿಗೆ ವಿಶೇಷ ಜ್ಯೂರಿ ಪ್ರಶಸ್ತಿಯೂ ದೊರೆತಿತ್ತು. ಡಾ. ರಾಜ್&zwnj;ಕುಮಾರ್, ಶ್ರೀನಾಥ್, ವಿಷ್ಣುವರ್ಧನ್, ಶ್ರೀಧರ್, ಶಿವಾಜಿ ಗಣೇಶನ್ ಸೇರಿದಂತೆ ವಿವಿಧ ಭಾಷೆಗಳ ಹಲವು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿರುವ ಸರಿತಾ, ತಮ್ಮ ನೈಜ ಹಾಗೂ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು. ಇನ್ನು ಕನ್ನಡದಲ್ಲಿ &lsquo;ಚಲಿಸುವ ಮೋಡಗಳು&rsquo;, &lsquo;ಹೊಸ ಬೆಳಕು&rsquo;, &lsquo;ಕೆರಳಿದ ಸಿಂಹ&rsquo; ಮುಂತಾದ ಚಿತ್ರಗಳಲ್ಲಿ ಡಾ. ರಾಜ್&zwnj;ಕುಮಾರ್ ಅವರೊಂದಿಗೆ ನಟಿಸಿ ಪ್ರಶಂಸೆ ಪಡೆದರು. ಶ್ರೀನಾಥ್ ಜೊತೆ ಎರಡು ರೇಖೆಗಳಲ್ಲಿ ನಟಿಸಿ ಜನಮನ ಗೆದ್ದರು. ಶ್ರೀಧರ್ ಜೊತೆ ಬ್ರಹ್ಮಗಂಟು ಸಿನಿಮಾದ ಮುಗ್ಧ ಹುಡುಗಿ ಪಾತ್ರದಲ್ಲಿ ಮಿಂಚಿದ್ದರು.&lt;/p&gt;&lt;p&gt;&lt;strong&gt;ನಟಿಯಾಗಿ ಮಾತ್ರವಲ್ಲ, ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಮಿಂಚು!&lt;/strong&gt;&lt;/p&gt;&lt;p&gt;ಸರಿತಾ ಬಹುಮುಖ ಪ್ರತಿಭೆಯ ಕಲಾವಿದೆ. ನಟನೆಯ ಜೊತೆಗೆ ಡಬ್ಬಿಂಗ್ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಸುಹಾಸಿನಿ, ವಿಜಯಶಾಂತಿ, ರಮ್ಯಕೃಷ್ಣ, ಶ್ರೀದೇವಿ, ಭಾನುಪ್ರಿಯಾ, ರಾಧಾ ಸೇರಿದಂತೆ ಹಲವು ಖ್ಯಾತ ನಾಯಕಿಯರಿಗೆ ಸಿನಿಮಾಗಳಲ್ಲಿ ಸರಿತಾ ಧ್ವನಿ ನೀಡಿದ್ದಾರೆ. ವಿಶೇಷವಾಗಿ ನಟಿ ವಿಜಯಶಾಂತಿ ಅವರ ಪಾತ್ರಗಳಿಗೆ ಸರಿತಾ ಅವರ ಧ್ವನಿ ಮತ್ತಷ್ಟು ಶಕ್ತಿ ನೀಡಿತ್ತು ಎನ್ನಲಾಗುತ್ತದೆ. &lsquo;ಅಮ್ಮೋರು&rsquo;, &lsquo;ಅಂತಃಪುರಂ&rsquo;, &lsquo;ಮಾವಿಚಿಗುರು&rsquo;, &lsquo;ಮಾ ಆಯನ ಬಂಗಾರಂ&rsquo; ಸಿನಿಮಾಗಳಿಗೆ ಅತ್ಯುತ್ತಮ ಡಬ್ಬಿಂಗ್ ಆರ್ಟಿಸ್ಟ್ ಆಗಿ ಸರಿತಾ ನಂದಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರ ಜೊತೆಗೆ ಕಲೈಮಾಮಣಿ ಹಾಗೂ ಸೈಮಾ ಪ್ರಶಸ್ತಿಗಳ ಗೌರವವೂ ಅವರ ಪ್ರತಿಭೆಗೆ ಸಂದಿದೆ.&lt;img&gt;&lt;/p&gt;&lt;h2&gt;&lt;strong&gt;ಮದುವೆ ಜೀವನದಲ್ಲಿ ಮಾತ್ರ ಎದುರಾದ ಕಹಿ ಅನುಭವ?&lt;/strong&gt;&lt;/h2&gt;&lt;p&gt;ಮಲಯಾಳಂ ನಟ ಮುಖೇಶ್ ಅವರನ್ನು ಸರಿತಾ ವಿವಾಹವಾಗಿದ್ದರು. ಆದರೆ ಈ ಮದುವೆ ತಮ್ಮ ಜೀವನದ ತಪ್ಪು ನಿರ್ಧಾರವಾಗಿತ್ತು ಎಂದು ಸರಿತಾ ಹೇಳಿಕೊಂಡಿರುವುದಾಗಿ ವರದಿಗಳಿವೆ. ತಾವು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಮುಖೇಶ್ ತಮ್ಮನ್ನು ಕಾಲಿನಿಂದ ಒದ್ದಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು. ಈ ಘಟನೆಯ ಬಳಿಕ ಮಕ್ಕಳೊಂದಿಗೆ ದುಬೈಗೆ ತೆರಳಿ ಅಲ್ಲಿಯೇ ನೆಲೆಸಿದರು ಎನ್ನಲಾಗಿದೆ.&lt;/p&gt;&lt;p&gt;ಇನ್ನು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿದ ಸರಿತಾ, ಅವರನ್ನು ಉತ್ತಮವಾಗಿ ಓದಿಸಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪುವಂತೆ ಮಾಡಿದ್ದಾರೆ. ಆದರೆ ವಿಚ್ಛೇದನದ ವಿಚಾರದಲ್ಲಿಯೂ ಅವರು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಬಾಲ್ಯದಲ್ಲೇ ಎದುರಾದ ಕಹಿ ಅನುಭವ, ನಂತರ ಚಿತ್ರರಂಗದಲ್ಲಿ ಸಾಧಿಸಿದ ಅಪಾರ ಯಶಸ್ಸು, ನಟನೆಯ ಜೊತೆಗೆ ಡಬ್ಬಿಂಗ್ ಕ್ಷೇತ್ರದಲ್ಲೂ ಮೂಡಿಸಿದ ಛಾಪು-ಸರಿತಾ ಅವರ ಬದುಕು ನಿಜಕ್ಕೂ ಹೋರಾಟ ಮತ್ತು ಸಾಧನೆಯ ಅಪರೂಪದ ಕಥೆಯಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/veteran-actress-sarithas-inspiring-journey-through-cinema-and-life-gvd/articleshow-elelgbo"/>
        </item>
        <item>
            <title><![CDATA[ಈಗ ಸೊಳ್ಳೆ ಕಾಟ.. ನಿದ್ದೆ ಇಲ್ಲದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರಂತೆ ದರ್ಶನ್..!]]></title>
            <link>https://kannada.asianetnews.com/bengaluru-urban/mosquito-menace-terrifies-actor-darshan-sleepless-nights-for-darshan-thoogudeepa-in-parappana-agrahara-gkn/articleshow-kplu9ma</link>
            <guid isPermaLink="true">https://kannada.asianetnews.com/bengaluru-urban/mosquito-menace-terrifies-actor-darshan-sleepless-nights-for-darshan-thoogudeepa-in-parappana-agrahara-gkn/articleshow-kplu9ma</guid>
            <pubDate>Mon, 17 Aug 2026 21:18:44 +0530</pubDate>
            <description><![CDATA[&lt;p&gt;ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬ್ಯಾರಕ್&zwnj;ನಲ್ಲಿ ಮೊಬೈಲ್ ಪತ್ತೆಯಾದ ಬಳಿಕ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದ್ದು, ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೊಳ್ಳೆಗಳ ಕಾಟಕ್ಕೆ ಹೈರಾಣಾಗಿದ್ದಾರೆ. ಸೊಳ್ಳೆ ಪರದೆ ಇಲ್ಲದೆ ಕಳೆದ ಎರಡು ದಿನಗಳಿಂದ ದರ್ಶನ್ ಸರಿಯಾಗಿ ನಿದ್ರೆ ಮಾಡದೆ ಮಾನಸಿಕವಾಗಿ ಕುಗ್ಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m086hyce1wdkhnc7bmmsnm5d,imgname-darshan-thoogudeepa-1786981710222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಆಗಿ ಮೆರೆದಿದ್ದ ನಟ ದರ್ಶನ್&zwnj;ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೊಳ್ಳೆಗಳೇ ದೊಡ್ಡ ಚಾಲೆಂಜ್ ಆಗಿ ಪರಿಣಮಿಸಿವೆ. ಕಳೆದ ಎರಡು ದಿನಗಳಿಂದ ಸೊಳ್ಳೆಗಳ ಕಾಟಕ್ಕೆ ಸಿಲುಕಿರುವ ದರ್ಶನ್, ನಿದ್ರೆ ಇಲ್ಲದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಜ್ವಲ್ ರೇವಣ್ಣ ಕೇಸ್&zwnj;ನಿಂದ ದರ್ಶನ್&zwnj;ಗೆ ಎಫೆಕ್ಟ್!&lt;/strong&gt;&lt;/h2&gt;&lt;p&gt;ಇತ್ತೀಚೆಗೆ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್&zwnj;ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಜೈಲು ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇದರಿಂದಾಗಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರಿಗೂ ಸಂಕಷ್ಟ ಎದುರಾಗಿದೆ. ಜೈಲಿನಲ್ಲಿ ನಿಷೇಧಿತ ವಸ್ತುಗಳಿಗೆ ಮತ್ತು ವಿಶೇಷ ಸೌಲಭ್ಯಗಳಿಗೆ ಅಧಿಕಾರಿಗಳು ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಯಾವುದೇ ರಾಜಾತಿಥ್ಯ ಸಿಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;ಹೈಫೈ ಲೈಫ್ ಲೀಡ್ ಮಾಡುತ್ತಿದ್ದ ದರ್ಶನ್&zwnj;ಗೆ ಸೊಳ್ಳೆಗಳ ಕಾಟ ನರಕ ದರ್ಶನ ಮಾಡಿಸುತ್ತಿದೆ. ಜೈಲಿನಲ್ಲಿ ಸೊಳ್ಳೆ ಪರದೆ ಒದಗಿಸಲು ಅವಕಾಶ ಇಲ್ಲದ ಕಾರಣ, ಕಳೆದ ಎರಡು ರಾತ್ರಿಗಳಿಂದ ದರ್ಶನ್ ಸರಿಯಾಗಿ ನಿದ್ರೆ ಮಾಡಿಲ್ಲ. ಸೊಳ್ಳೆಗಳ ಆರ್ಭಟಕ್ಕೆ ನಟ ಕಂಗಾಲಾಗಿದ್ದು, ಮುಖ ಹಾಗೂ ಕೈಕಾಲುಗಳ ಮೇಲೆ ಸೊಳ್ಳೆ ಕಚ್ಚಿದ ಗುರುತುಗಳು ಕಾಣಿಸಿಕೊಳ್ಳುತ್ತಿವೆ ಎಂದು ವರದಿಯಾಗಿದೆ.&lt;/p&gt;&lt;p&gt;ಸಿಸಿಟಿವಿ ಕ್ಯಾಮೆರಾಗಳು ಹಾಗೂ ಸಿಬ್ಬಂದಿ ತೀವ್ರ ನಿಗಾದಲ್ಲಿರುವ ದರ್ಶನ್, ಈಗ ಸಾಮಾನ್ಯ ಕೈದಿಗಳಂತೆ ದಿನ ಕಳೆಯುತ್ತಿದ್ದಾರೆ. ಇತ್ತ ಪವಿತ್ರಾ ಗೌಡ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇಬ್ಬರಿಗೂ ಸೊಳ್ಳೆಗಳ ಕಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಿಯಾದ ನಿದ್ರೆ ಇಲ್ಲದ ಕಾರಣ ದರ್ಶನ್ ಕಣ್ಣುಗಳು ಕೆಂಪಾಗಿದ್ದು, ಮುಖದಲ್ಲಿ ಆಯಾಸ ಎದ್ದು ಕಾಣಿಸುತ್ತಿದೆ. ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್&zwnj;ಗೆ ಒಂದೆಡೆ ಕಾನೂನು ಹೋರಾಟದ ಚಿಂತೆಯಾದರೆ ಇನ್ನೊಂದೆಡೆ ಜೈಲಿನ ಒಳಗಿನ ಸೊಳ್ಳೆಗಳ ಕಾಟ ನಿದ್ದೆಗೆಡಿಸಿದೆ.&lt;/p&gt;]]></content:encoded>
            <category>entertainment</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/mosquito-menace-terrifies-actor-darshan-sleepless-nights-for-darshan-thoogudeepa-in-parappana-agrahara-gkn/articleshow-kplu9ma"/>
        </item>
        <item>
            <title><![CDATA[ಸೌತ್‌ನ ಎಲ್ಲಾ ಇಂಡಸ್ಟ್ರಿಗಳಲ್ಲೂ ಈ ಮೂವರು ಚೆಲುವೆಯರ ಹವಾ: ರುಕ್ಮಿಣಿ, ಮಮಿತಾ, ಕಯಾದುಗೆ ಎಲ್ಲೆಡೆ ಡಿಮ್ಯಾಂಡ್!]]></title>
            <link>https://kannada.asianetnews.com/entertainment/rukmini-vasanth-mamitha-baiju-kayadu-lohar-become-souths-most-wanted-actresses-gvd/articleshow-54erlc6</link>
            <guid isPermaLink="true">https://kannada.asianetnews.com/entertainment/rukmini-vasanth-mamitha-baiju-kayadu-lohar-become-souths-most-wanted-actresses-gvd/articleshow-54erlc6</guid>
            <pubDate>Mon, 17 Aug 2026 20:50:26 +0530</pubDate>
            <description><![CDATA[&lt;p&gt;South Indian Actresses: ಕೆಲವು ನಾಯಕಿಯರಿಗೆ ಚಿತ್ರರಂಗದಲ್ಲಿ &lsquo;ಆಲ್ ಆಕ್ಸೆಸ್ ಪಾಸ್&rsquo; ಸಿಕ್ಕಂತಿದೆ. ಒಂದೇ ಒಂದು ಇಂಡಸ್ಟ್ರಿಗೆ ಸೀಮಿತವಾಗದೆ, ಬಹುತೇಕ ಎಲ್ಲಾ ಭಾಷೆಗಳಲ್ಲೂ ತಮ್ಮ ಪ್ರತಿಭೆಯ ಮೂಲಕ ಛಾಪು ಮೂಡಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m084wphej6s9qans50bxv4kq,imgname-jj-1786979965486.png" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವು ನಾಯಕಿಯರಿಗೆ ಚಿತ್ರರಂಗದಲ್ಲಿ &lsquo;ಆಲ್ ಆಕ್ಸೆಸ್ ಪಾಸ್&rsquo; ಸಿಕ್ಕಂತಿದೆ. ಒಂದೇ ಒಂದು ಇಂಡಸ್ಟ್ರಿಗೆ ಸೀಮಿತವಾಗದೆ, ಬಹುತೇಕ ಎಲ್ಲಾ ಭಾಷೆಗಳಲ್ಲೂ ತಮ್ಮ ಪ್ರತಿಭೆಯ ಮೂಲಕ ಛಾಪು ಮೂಡಿಸುತ್ತಿದ್ದಾರೆ. ತವರು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವುದರ ಜೊತೆಗೆ, ಪಕ್ಕದ ಭಾಷೆಗಳಲ್ಲೂ ಗಟ್ಟಿ ನೆಲೆ ಕಂಡುಕೊಳ್ಳಲು ಪಕ್ಕಾ ಪ್ಲ್ಯಾನ್&zwnj;ನೊಂದಿಗೆ ಮುನ್ನಡೆಯುತ್ತಿದ್ದಾರೆ. ಸದ್ಯ ರುಕ್ಮಿಣಿ ವಸಂತ್, ಮಮಿತಾ ಬೈಜು ಹಾಗೂ ಕಯಾದು ಲೋಹರ್&zwnj; ದಕ್ಷಿಣ ಭಾರತದ ಬಹುತೇಕ ಎಲ್ಲಾ ಚಿತ್ರರಂಗಗಳಲ್ಲೂ ಮೋಸ್ಟ್ ವಾಂಟೆಡ್ ನಾಯಕಿಯರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;strong&gt;ಮಲಯಾಳಂ ಚಿತ್ರರಂಗಕ್ಕೆ ರುಕ್ಮಿಣಿ ವಸಂತ್ ಎಂಟ್ರಿ!&lt;/strong&gt;&lt;/p&gt;&lt;p&gt;ರುಕ್ಮಿಣಿ ವಸಂತ್ ಈಗಾಗಲೇ ಕನ್ನಡದಲ್ಲಿ &lsquo;ಟಾಕ್ಸಿಕ್&rsquo;, ತೆಲುಗಿನಲ್ಲಿ &lsquo;ಡ್ರ್ಯಾಗನ್&rsquo; ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ನಟ ನಿವಿನ್ ಪೌಲಿ ಅಭಿನಯದ 51ನೇ ಸಿನಿಮಾಗೆ ರುಕ್ಮಿಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನೂತನ ನಿರ್ದೇಶಕ ನಶೀದ್ ಮಹಮೂದ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ನಿವಿನ್ ಪೌಲಿ ಜೋಡಿಯಾಗಿ ರುಕ್ಮಿಣಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಮಲಯಾಳಂ ಚಿತ್ರರಂಗದ ಎಂಟ್ರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರುಕ್ಮಿಣಿ, &lsquo;ವೆರಿ ಸ್ಪೆಷಲ್ ಫಸ್ಟ್&rsquo; ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಮಮಿತಾ ಬೈಜು ಕೂಡ ಫುಲ್ ಬಿಜಿ!&lt;/strong&gt;&lt;/p&gt;&lt;p&gt;ಮತ್ತೊಂದೆಡೆ, ಮಲಯಾಳಂನ ಜನಪ್ರಿಯ ನಟಿ ಮಮಿತಾ ಬೈಜು ತಮಿಳು ಚಿತ್ರರಂಗದಲ್ಲೂ ಸದ್ದು ಮಾಡುತ್ತಿದ್ದಾರೆ. ಸದ್ಯ ತಮಿಳಿನಲ್ಲಿ &lsquo;ವಿಶ್ವನಾಥ್ &amp;amp; ಸನ್ಸ್&rsquo; ಚಿತ್ರದ ಮೂಲಕ ಟ್ರೆಂಡ್&zwnj;ನಲ್ಲಿದ್ದಾರೆ. ತಮ್ಮ ಮಾತೃಭಾಷೆಯಾದ ಮಲಯಾಳಂನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಮಿತಾ, ಇದೀಗ ತೆಲುಗು ಚಿತ್ರರಂಗದ ಡೆಬ್ಯೂಗಾಗಿ ಎದುರು ನೋಡುತ್ತಿದ್ದಾರೆ. ಹೀಗಾಗಿ ಮಲಯಾಳಂ, ತಮಿಳು ಬಳಿಕ ತೆಲುಗಿನಲ್ಲೂ ಮಮಿತಾ ಮೋಡಿ ಮಾಡಲು ಸಜ್ಜಾಗಿದ್ದಾರೆ.&lt;/p&gt;&lt;h2&gt;&lt;strong&gt;ಕಯಾದು ಲೋಹರ್&zwnj;ಗೆ ಎಲ್ಲೆಡೆ ಡಿಮ್ಯಾಂಡ್!&lt;/strong&gt;&lt;/h2&gt;&lt;p&gt;ಇನ್ನು ಕಯಾದು ಲೋಹರ್&zwnj; ವಿಚಾರಕ್ಕೆ ಬಂದರೆ, ಕನ್ನಡ ಹೊರತುಪಡಿಸಿ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ತೆಲುಗಿನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ &lsquo;ಪ್ಯಾರಡೈಸ್&rsquo; ಸಿನಿಮಾದಲ್ಲಿ ನಟಿಸುತ್ತಿರುವ ಕಾಯದು, ತಮಿಳಿನಲ್ಲಿ &lsquo;ಇಮ್ಮಾರ್ಟಲ್&rsquo; ಹಾಗೂ &lsquo;ಸೂರ್ಯ 48&rsquo; ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಮಲಯಾಳಂನಲ್ಲಿ &lsquo;ತಾರಂ&rsquo; ಹಾಗೂ ದುಲ್ಕರ್ ಸಲ್ಮಾನ್ ಜೊತೆಗಿನ &lsquo;ಐ ಆ್ಯಮ್ ಗೇಮ್&rsquo; ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ರುಕ್ಮಿಣಿ ವಸಂತ್, ಮಮಿತಾ ಬೈಜು ಹಾಗೂ ಕಯಾದು ಲೋಹರ್&zwnj;-ಈ ಮೂವರು ನಾಯಕಿಯರ ದಕ್ಷಿಣ ಭಾರತದ ಚಿತ್ರರಂಗದ ಮೇಲಿನ ದಾಳಿಯ ವೇಗ ಸದ್ಯಕ್ಕಂತೂ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಒಂದರ ಹಿಂದೆ ಒಂದರಂತೆ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಈ ಬ್ಯೂಟೀಸ್, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳಲ್ಲಿ ತಮ್ಮದೇ ಛಾಪು ಮೂಡಿಸುವ ಸಾಧ್ಯತೆ ಹೆಚ್ಚಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rukmini-vasanth-mamitha-baiju-kayadu-lohar-become-souths-most-wanted-actresses-gvd/articleshow-54erlc6"/>
        </item>
        <item>
            <title><![CDATA[ಮದುವೆಯ ಬಗ್ಗೆ ಕೊನೆಗೂ ಮೌನ ಮುರಿದ 'Jagaddhatri'! ನಟಿ ಮೋಕ್ಷಿತಾ ಪೈ ಕೊಟ್ಟ ನ್ಯೂಸ್​ ಏನು]]></title>
            <link>https://kannada.asianetnews.com/gallery/relationship/jagaddhatri-mokshitha-pai-finally-breaks-silence-about-marriage-what-did-she-says-suc-lh3y8o9</link>
            <guid isPermaLink="true">https://kannada.asianetnews.com/gallery/relationship/jagaddhatri-mokshitha-pai-finally-breaks-silence-about-marriage-what-did-she-says-suc-lh3y8o9</guid>
            <pubDate>Mon, 17 Aug 2026 20:27:11 +0530</pubDate>
            <description><![CDATA['ಪಾರು' ಖ್ಯಾತಿಯ ಮೋಕ್ಷಿತಾ ಪೈ 'ಜಗದ್ಧಾತ್ರಿ' ಸೀರಿಯಲ್ ಮೂಲಕ ಕಮ್&zwnj;ಬ್ಯಾಕ್ ಮಾಡುತ್ತಿದ್ದಾರೆ. ಈ ಲೇಖನದಲ್ಲಿ, ಅವರ ಮದುವೆ ಕುರಿತ ಪ್ರಶ್ನೆಗಳಿಗೆ ಉತ್ತರ, ಅವರ ವೈಯಕ್ತಿಕ ಜೀವನದ ನೋವಿನ ಕಥೆ ಮತ್ತು ನಟನೆಗೆ ಅವಕಾಶ ನೀಡಿದ ದಿಲೀಪ್ ರಾಜ್ ಅವರನ್ನು ಸ್ಮರಿಸಿದ ಕ್ಷಣಗಳ ಬಗ್ಗೆ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m083ba0jht2rt9caq59qbmj0,imgname-mokshita-pai-1786978347025.jpg" type="image/jpeg" height="390" width="690"/>
            <content:encoded><![CDATA['ಪಾರು' ಖ್ಯಾತಿಯ ಮೋಕ್ಷಿತಾ ಪೈ 'ಜಗದ್ಧಾತ್ರಿ' ಸೀರಿಯಲ್ ಮೂಲಕ ಕಮ್&zwnj;ಬ್ಯಾಕ್ ಮಾಡುತ್ತಿದ್ದಾರೆ. ಈ ಲೇಖನದಲ್ಲಿ, ಅವರ ಮದುವೆ ಕುರಿತ ಪ್ರಶ್ನೆಗಳಿಗೆ ಉತ್ತರ, ಅವರ ವೈಯಕ್ತಿಕ ಜೀವನದ ನೋವಿನ ಕಥೆ ಮತ್ತು ನಟನೆಗೆ ಅವಕಾಶ ನೀಡಿದ ದಿಲೀಪ್ ರಾಜ್ ಅವರನ್ನು ಸ್ಮರಿಸಿದ ಕ್ಷಣಗಳ ಬಗ್ಗೆ ವಿವರಿಸಲಾಗಿದೆ.&lt;img&gt;&lt;p&gt;ಮೋಕ್ಷಿತಾ ಪೈ ಎಂದರೆ ಹಲವರಿಗೆ ತಿಳಿಯಲಿಕ್ಕಿಲ್ಲ. 'ಕರುಣೆಯ ಪೈರು, ನಮ್ಮ ಪಾರು...' ಎಂದಾಕ್ಷಣ ಪಾರು ನೆನಪಿಗೆ ಬರ್ತಾಳೆ. ಅವಳೇ ಮೋಕ್ಷಿತಾ ಪೈ. ಬಿಗ್​ಬಾಸ್​​ ಮೂಲಕವೂ ಫೇಮಸ್​ ಆಗಿದ್ದ ಮೋಕ್ಷಿತಾ ಪೈ (Mokshitha Pai) ಅವರು ಈಗ ಜಗದ್ಧಾತ್ರಿ ಸೀರಿಯಲ್​ ಮೂಲಕ ತೆರೆಗೆ ಜಬರ್ದಸ್ತ್​ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ನಾಯಕಿ ಮೋಕ್ಷಿತಾ ಪೈ ಎನ್ನುವುದು ಇದಾಗಲೇ ಬಿಡುಗಡೆಯಾಗಿರುವ ಪ್ರೊಮೋದಿಂದ ತಿಳಿದುಬಂದಿದೆ. ಇದರ ನಡುವೆಯೇ, ಕವಿತಾ ಗೌಡ ಕೂಡ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಟ ವಿಜಯ ಸೂರ್ಯ ನಾಯಕನಾಗಿದ್ದಾರೆ. ಈ ಸೀರಿಯಲ್​ ಆರಂಭಕ್ಕೆ ಎಲ್ಲರೂ ಕಾಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ನಟಿ ಮೋಕ್ಷಿತಾ ಪೈ ಅವರಿಗೆ ಹೋದಲ್ಲಿ, ಬಂದಲ್ಲಿ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಗೂಗಲ್​ ದಾಖಲೆಯ ಪ್ರಕಾರ ನಟಿಗೆ ಈಗ 30 ವರ್ಷ ವಯಸ್ಸು. ಈ ದಾಖಲೆಯ ಪ್ರಕಾರ ನಟಿ ಹುಟ್ಟಿರುವುದು ಅಕ್ಟೋಬರ್ 22, 1995ರಂದು (ಗೂಗಲ್​ ದಾಖಲೆಯನ್ನು ಸಂಪೂರ್ಣವಾಗಿ ನಂಬಲು ಬರುವುದಿಲ್ಲ!). ಆದ್ದರಿಂದ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.&lt;/p&gt;&lt;img&gt;&lt;p&gt;ಕಾರ್ಯಕ್ರಮವೊಂದಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ, ನಟಿ ಮೋಕ್ಷಿತಾ ಪೈ ಅವರಿಗೆ ಇದೇ ಪ್ರಶ್ನೆ ಎದುರಾಯಿತು. ಅದಕ್ಕೆ ನಟಿ, ಮೊದಲು ನನಗೆ ಸುಧಾರಿಸಿಕೊಳ್ಳಲು ಟೈಮ್​ ಕೊಡಿ. ಹಲವು ತಿಂಗಳ ಬಳಿಕ ಒಂದೊಳ್ಳೆ ಆಫರ್​ ಬಂದಿದೆ. (ಜಗದ್ಧಾತ್ರಿ ಸೀರಿಯಲ್​). ಅದರ ಕಡೆಗೆ ಮೊದಲು ಗಮನ ಹರಿಸುತ್ತೇನೆ. ಮದುವೆಯಾದರೆ ಮೊದಲು ನಿಮಗೇ ತಿಳಿಸುವೆ ಎಂದು ಚಟಾಕಿ ಹಾರಿಸಿದರು.&lt;/p&gt;&lt;img&gt;&lt;p&gt;ಅಂದಹಾಗೆ, ನಟಿ ಈಚೆಗೆ ನಿಧನರಾದ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್​ ರಾಜ್​ ಅವರನ್ನು ನೆನೆದಿದ್ದರು. ಏಕೆಂದರೆ ಸೀರಿಯಲ್​​ಗೆ ಮೋಕ್ಷಿತಾ ಅವರನ್ನು ಕರೆತಂದದ್ದೇ ಅವರು. 'ನನಗೆ ನಟನೆ ಎಂದರೆ ಏನು ಎಂದೇ ತಿಳಿದಿರಲಿಲ್ಲ. ಆದರೆ ಪಾರು ಸೀರಿಯಲ್​ನ ಲೀಡ್​ ರೋಲ್​ಗೆ ದಿಲೀಪ್​ ರಾಜ್​ ಸರ್​ ಅವರು ಆಯ್ಕೆ ಮಾಡಿದರು. ಇದೆಲ್ಲಾ ನನ್ನ ಕೈಯಲ್ಲಿ ಆಗಲ್ಲ ಸರ್​ ಎಂದು ಕೈಮುಗಿದು ಬೇಡಿಕೊಂಡರೂ ಕೇಳಲಿಲ್ಲ. ಆಗತ್ತೆ ಬನ್ನಿ ಎಂದು ಧೈರ್ಯ ತುಂಬಿದ್ದ ಪರಿಣಾಮ ಇಂದು ಈ ಮಟ್ಟಿನ ಯಶಸ್ಸು ಸಿಕ್ಕಿದೆ' ಎಂದಿದ್ದರು ನಟಿ.&lt;/p&gt;&lt;img&gt;&lt;p&gt;ಅಂದಹಾಗೆ, ಮೋಕ್ಷಿತಾ ಪೈ ಅವರ ಜೀವನ ನೋವಿನಿಂದ ಕೂಡಿದೆ. ಮೋಕ್ಷಿತಾ ಪೈ ಅವರ ಸಹೋದರ ವಿಕಲಚೇತನ ಆಗಿದ್ದಾರೆ. 22 ವರ್ಷವಾಗಿದ್ದರೂ ಇಂದಿಗೂ ಅವರು 8 ವರ್ಷದ ಮಕ್ಕಳ ರೀತಿ ಇದ್ದರೆ, ಅವರ ಬುದ್ದಿ ಇನ್ನೂ 8 ತಿಂಗಳ ಮಗುವಿನ ಹಾಗೆ ಇದೆ. ಈ ಬಗ್ಗೆ ಬಿಗ್&zwnj; ಬಾಸ್&zwnj; ವೇದಿಕೆಯಲ್ಲೂ ಮೋಕ್ಷಿತಾ ಪೈ ಮಾತನಾಡಿದ್ದರು. ತಮ್ಮನ ಬಗ್ಗೆ ಹೇಳುವಾಗಲೆಲ್ಲಾ ಭಾವುಕರಾಗುವ ಮೋಕ್ಷಿತಾ ಪೈ, ಬಿಗ್&zwnj; ಬಾಸ್&zwnj; ವೇದಿಕೆಯಲ್ಲೂ ಸುದೀಪ್&zwnj; ಈ ಬಗ್ಗೆ ಪ್ರಶ್ನೆ ಮಾಡಿದಾಗ, ನನ್ನ ತಮ್ಮನಿಗೆ ನಾನು ಅಕ್ಕನೂ ಹೌದು, ಅಮ್ಮನೂ ಹೌದು. ಆತನ ಬಗ್ಗೆ ಹೆಚ್ಚು ಮಾತನಾಡೋದು ಇಷ್ಟವಿಲ್ಲ ಎಂದು ಹೇಳಿ ಸುಮ್ಮನಾಗಿದ್ದರು.&lt;/p&gt;&lt;img&gt;&lt;p&gt;'ನನ್ನ ಬಾಲ್ಯ ಎಲ್ಲರಿದ್ದ ಹಾಗೆ ಇದ್ದಿರಲೇ ಎಲ್ಲ. ಎಲ್ಲರ ಬಾಲ್ಯದಲ್ಲಿ, ತಮಾಷೆ, ತರಲೆಗಳು ಇರುತ್ತವೆ. ನನ್ನ ಬಾಲ್ಯದಲ್ಲಿ ಅಂಥ ಸಂಗತಿಗಳೇ ಇದ್ದಿರಲಿಲ್ಲ. ನನಗೆ ಬುದ್ಧಿಮಾಂದ್ಯನಾದ ಒಬ್ಬ ತಮ್ಮನಿದ್ದಾನೆ. ಆತನ ನೋಡಿಕೊಳ್ಳುವ ಕಾರಣದಿಂದಾಗಿ ಚಿಕ್ಕಂದಿನಿಂದಲೇ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಗಳಿದ್ದವು. ನಾನೇ ದೊಡ್ಡವಳಾಗಿದ್ದ ಕಾರಣಕ್ಕೆ ಆತನನ್ನೆ ನೋಡಿಕೊಳ್ಳಬೇಕಾಗುತ್ತಿತ್ತು. ಆತ ಒಂದು ಮಗು ಥರ ಇದ್ದಾನೆ' ಎಂದು ಈ ಹಿಂದೆ ನಟಿ ಹೇಳಿದ್ದರು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/jagaddhatri-mokshitha-pai-finally-breaks-silence-about-marriage-what-did-she-says-suc-lh3y8o9"/>
        </item>
        <item>
            <title><![CDATA[Aamir Khan Fitness: 61 ವರ್ಷವಾಗಿದ್ದರೂ ಆಮಿರ್‌ ಖಾನ್‌ ಅಷ್ಟು ಫಿಟ್‌ ಆಗಿರೋದು ಹೇಗೆ? ಇಲ್ಲಿದೆ ಸೀಕ್ರೆಟ್‌]]></title>
            <link>https://kannada.asianetnews.com/gallery/life/aamir-khan-fitness-secret-pure-desi-ghee-kbc-18-revelation-san-0pzfhr7</link>
            <guid isPermaLink="true">https://kannada.asianetnews.com/gallery/life/aamir-khan-fitness-secret-pure-desi-ghee-kbc-18-revelation-san-0pzfhr7</guid>
            <pubDate>Mon, 17 Aug 2026 19:55:57 +0530</pubDate>
            <description><![CDATA[&lt;p&gt;'ಕೌನ್ ಬನೇಗಾ ಕರೋಡ್&zwnj;ಪತಿ 18' ಶೋನಲ್ಲಿ ಆಮೀರ್ ಖಾನ್ ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ಸೇವಿಸುವುದೇ ತಮ್ಮ ಆರೋಗ್ಯದ ಗುಟ್ಟು ಎಂದು ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzqrme1es5a1p23b0wdyqv29,imgname-aamir-khan-sunny-deol-movies-together-1786430240814.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕೌನ್ ಬನೇಗಾ ಕರೋಡ್&zwnj;ಪತಿ 18' ಶೋನಲ್ಲಿ ಆಮೀರ್ ಖಾನ್ ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ಸೇವಿಸುವುದೇ ತಮ್ಮ ಆರೋಗ್ಯದ ಗುಟ್ಟು ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;61 ವರ್ಷ ವಯಸ್ಸಾದರೂ ಇಂದಿಗೂ ಅತ್ಯಂತ ಫಿಟ್ ಹಾಗೂ ತರುಣರಂತೆ ಕಂಗೊಳಿಸುವ ಬಾಲಿವುಡ್&zwnj;ನ 'ಮಿಸ್ಟರ್&zwnj; ಪರ್ಫೆಕ್ಷನಿಸ್ಟ್' ಆಮಿರ್ ಖಾನ್ ಅವರ ಆರೋಗ್ಯದ ರಹಸ್ಯವೆಂದರೆ ಅವರ ಶಿಸ್ತಿನ ಜೀವನಶೈಲಿ ಮತ್ತು ಸಮತೋಲಿತ ಆಹಾರ ಕ್ರಮ. ಇತ್ತೀಚೆಗೆ 'ಕೌನ್ ಬನೇಗಾ ಕರೋಡ್&zwnj;ಪತಿ 18' (KBC 18) ಶೋನಲ್ಲಿ ಭಾಗವಹಿಸಿದ್ದ ಆಮಿರ್ ಖಾನ್, ತಮ್ಮ ದಿನನಿತ್ಯದ ಫಿಟ್ನೆಸ್ ರಹಸ್ಯವನ್ನು ಬಿಚ್ಚಿಟ್ಟಿದ್ದು, ಅದನ್ನು ಕೇಳಿ ಕಾರ್ಯಕ್ರಮದ ನಿರೂಪಕ ಅಮಿತಾಭ್ ಬಚ್ಚನ್ ಅವರೇ ಆಶ್ಚರ್ಯಚಕಿತರಾಗಿದ್ದಾರೆ.&lt;/p&gt;&lt;img&gt;&lt;p&gt;'ಕೌನ್ ಬನೇಗಾ ಕರೋಡ್&zwnj;ಪತಿ 18' ಶೋನ ಹಾಟ್ ಸೀಟ್&zwnj;ನಲ್ಲಿ ಕುಳಿತಿದ್ದ ಆಮಿರ್ ಖಾನ್, ತಮ್ಮ ದಿನದ ಶುರುವಾತಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. &quot;ನಾನು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಮೊದಲ ಕೆಲಸವಾಗಿ ಒಂದು ದೊಡ್ಡ ಚಮಚ ಶುದ್ಧ ದೇಸಿ ತುಪ್ಪವನ್ನು ಸೇವಿಸುತ್ತೇನೆ&quot; ಎಂದು ಆಮಿರ್ ಹೇಳಿದ್ದಾರೆ. ಇದನ್ನು ಕೇಳಿ ಬಿಗ್ ಬಿ ಅಮಿತಾಭ್ ಬಚ್ಚನ್ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದಾಗ, &quot;ಹೌದು, ಒಂದು ಚಮಚ ಪ್ಯೂರ್ ತುಪ್ಪದ ರುಚಿ ತುಂಬಾ ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು&quot; ಎಂದು ಆಮಿರ್ ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಆಮಿರ್ ಖಾನ್ ಅವರ ಮಾತುಗಳನ್ನು ಕೇಳಿದ ಅಮಿತಾಭ್ ಬಚ್ಚನ್, ದೇಸಿ ತುಪ್ಪ ಸೇವನೆಯಿಂದ ಮೆದುಳು ಯಾವಾಗಲೂ ತಾಜಾ ಮತ್ತು ಸಕ್ರಿಯವಾಗಿರುತ್ತದೆ, ನಾನು ಕೂಡ ಇಂದಿನಿಂದಲೇ ಇದನ್ನು ಆರಂಭಿಸುತ್ತೇನೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕವಾಗಿ ಬಳಕೆಯಾಗುವ ದೇಸಿ ತುಪ್ಪದಲ್ಲಿ ವಿಟಮಿನ್ ಎ, ಡಿ ಮತ್ತು ಇ ಸಮೃದ್ಧವಾಗಿದ್ದು, ಇವು ಕಣ್ಣಿನ ಆರೋಗ್ಯ ಹಾಗೂ ಮೂಳೆಗಳ ಗಟ್ಟಿಯಾದ ಬೆಳವಣಿಗೆಗೆ ಅತ್ಯಂತ ಉಪಯುಕ್ತವಾಗಿವೆ.&lt;/p&gt;&lt;img&gt;&lt;p&gt;ಕೆಬಿಸಿ ಸೀಸನ್ 18ರ ಈ ವಿಶೇಷ ಸಂಚಿಕೆಯಲ್ಲಿ ಆಮಿರ್ ಖಾನ್ ಅವರೊಂದಿಗೆ ಬಾಲಿವುಡ್ ನಟ ಸನ್ನಿ ಡಿಯೋಲ್ ಹಾಗೂ ನಟಿ ಪ್ರೀತಿ ಜಿಂಟಾ ಕೂಡ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ಕಟ್ಟಿದ್ದರು. ಶೋನ ಇತ್ತೀಚಿನ ಪ್ರೋಮೊದಲ್ಲಿ ಈ ರಸವತ್ತಾದ ಸಂಭಾಷಣೆಯ ತುಣುಕುಗಳು ವೈರಲ್ ಆಗಿವೆ.&lt;/p&gt;&lt;img&gt;&lt;p&gt;ಆಮಿರ್ ಖಾನ್ ಪ್ರಸ್ತುತ ತಮ್ಮ ನಿರ್ಮಾಣದ 'ಬಂಟ್ವಾರಾ 1947' (Batwara 1947) ಸಿನಿಮಾದ ಯಶಸ್ಸಿನ ಅಲೆಯಲ್ಲಿದ್ದಾರೆ. 2026ರ ಆಗಸ್ಟ್ 14 ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿರುವ ಈ ಚಿತ್ರವನ್ನು ಆಮಿರ್ ಖಾನ್ ಸ್ವತಃ ನಿರ್ಮಿಸಿದ್ದು, ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.&lt;/p&gt;&lt;img&gt;&lt;p&gt;ಆಮಿರ್ ಖಾನ್ ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದ ಗೆಳತಿಯಾಗಿದ್ದ ಗೌರಿ ಸ್ಪ್ರಾಟ್&zwnj;(Gauri Spratt) ಅವರೊಂದಿಗೆ 2026ರ ಜುಲೈ 5 ರಂದು ಆಮಿರ್ ನೋಂದಾಯಿತ ವಿವಾಹ (Registered Marriage) ಮಾಡಿಕೊಂಡಿದ್ದಾರೆ. ಇದು ಆಮಿರ್ ಖಾನ್ ಅವರ ಮೂರನೇ ಮದುವೆಯಾಗಿದ್ದು, 2025ರಲ್ಲೇ ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಅಧಿಕೃತಗೊಳಿಸಿದ್ದರು.&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/life/aamir-khan-fitness-secret-pure-desi-ghee-kbc-18-revelation-san-0pzfhr7"/>
        </item>
        <item>
            <title><![CDATA[Romantic Films: ಫಸ್ಟ್ ಡೇಟ್‌ನಲ್ಲಿ ನೋಡಬಹುದಾದ 7 ಅದ್ಭುತ ರೊಮ್ಯಾಂಟಿಕ್ ಸಿನಿಮಾಗಳಿವು!]]></title>
            <link>https://kannada.asianetnews.com/webstories/entertainment/7-best-romantic-movies-for-a-perfect-first-date-night-gvd-k8rghyo</link>
            <guid isPermaLink="true">https://kannada.asianetnews.com/webstories/entertainment/7-best-romantic-movies-for-a-perfect-first-date-night-gvd-k8rghyo</guid>
            <pubDate>Mon, 17 Aug 2026 19:52:05 +0530</pubDate>
            <description><![CDATA[&lt;p&gt;ಫಸ್ಟ್ ಡೇಟ್&zwnj;ಗೆ ಯಾವ ಸಿನಿಮಾ ನೋಡೋದು ಅನ್ನೋದು ಯಾವಾಗಲೂ ಕನ್ಫ್ಯೂಶನ್. ಸಿನಿಮಾ ರೊಮ್ಯಾಂಟಿಕ್ ಆಗಿರಬೇಕು, ಹಗುರವಾಗಿರಬೇಕು, ಆದರೆ ತುಂಬಾ ಸೀರಿಯಸ್ ಆಗಿರಬಾರದು. ಇಲ್ಲಿದೆ ನೋಡಿ ಫಸ್ಟ್ ಡೇಟ್&zwnj;ನಲ್ಲಿ ನೋಡಬಹುದಾದ 7 ಸೂಪರ್ ರೊಮ್ಯಾಂಟಿಕ್ ಸಿನಿಮಾಗಳ ಲಿಸ್ಟ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jz3py22ke25srxxt4amyx8w0,imgname-movie-nigt-1751397632083.jpg" type="image/jpeg" height="390" width="690"/>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/entertainment/7-best-romantic-movies-for-a-perfect-first-date-night-gvd-k8rghyo"/>
        </item>
        <item>
            <title><![CDATA['ಸತ್ತವರ ಬಗ್ಗೆ ನಾನು ಯೋಚಿಸಲ್ಲ': ಶ್ರೀದೇವಿ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?]]></title>
            <link>https://kannada.asianetnews.com/entertainment/sridevis-mr-india-performance-still-leaves-ram-gopal-varma-amazed-gvd/articleshow-w0qzxk5</link>
            <guid isPermaLink="true">https://kannada.asianetnews.com/entertainment/sridevis-mr-india-performance-still-leaves-ram-gopal-varma-amazed-gvd/articleshow-w0qzxk5</guid>
            <pubDate>Mon, 17 Aug 2026 19:31:57 +0530</pubDate>
            <description><![CDATA[&lt;p&gt;ನಟಿ ಶ್ರೀದೇವಿ ಅವರ ಜೀವನಚರಿತ್ರೆ 'ದಿ ಎಂಪ್ರೆಸ್'ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದು ಅಧ್ಯಾಯ ಬರೆದಿದ್ದಾರೆ. ಈ ವೇಳೆ, ದಂತಕಥೆಯಂತಿದ್ದ ನಟಿಯ ನಟನೆ, ಅದರಲ್ಲೂ 'ಮಿಸ್ಟರ್ ಇಂಡಿಯಾ' ಚಿತ್ರದ ಅಭಿನಯವನ್ನು ನೆನಪಿಸಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m080e26yqptnkd2sfk7g0zxx,imgname-hh-1786975291614.png" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ದಿವಂಗತ ನಟಿ ಶ್ರೀದೇವಿ ಅವರ ಜೀವನಚರಿತ್ರೆ 'ದಿ ಎಂಪ್ರೆಸ್' ಪುಸ್ತಕಕ್ಕೆ ಒಂದು ಅಧ್ಯಾಯವನ್ನು ಬರೆದುಕೊಟ್ಟಿದ್ದಾರೆ. ಧೀರಜ್ ಯು. ಕುಮಾರ್ ಬರೆದಿರುವ ಈ ಪುಸ್ತಕವನ್ನು ಶ್ರೀದೇವಿ ಅವರ ಜನ್ಮದಿನದಂದು ಪ್ರಿಯಾಂಕಾ ಚೋಪ್ರಾ ಅನೌನ್ಸ್ ಮಾಡಿದ್ದರು. ಈ ಪುಸ್ತಕದ ಟೈಟಲ್ 'ದಿ ಎಂಪ್ರೆಸ್' ಅಂತ ನನಗೆ ಗೊತ್ತಿರಲಿಲ್ಲ. ಆಕೆಗೆ 'ಸ್ಕ್ರೀನ್ ಕ್ವೀನ್' ಅನ್ನೋ ಬಿರುದು ಹೆಚ್ಚು ಸೂಕ್ತವಾಗಿತ್ತು ಅಂತ ನನಗನಿಸುತ್ತೆ. ಯಾಕಂದ್ರೆ, ಆ ಸ್ಥಾನವನ್ನು ಶ್ರೀದೇವಿ ನಿಜವಾಗಿಯೂ ಗಳಿಸಿದ್ದರು. ಉಳಿದ ನಟಿಯರೆಲ್ಲಾ ಆಕೆಯ ದಾರಿಯಲ್ಲೇ ಬಂದವರು' ಎಂದು ವರ್ಮಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸತ್ತವರ ಬಗ್ಗೆ ನಾನು ಯೋಚಿಸಲ್ಲ&rsquo;&lt;/strong&gt;&lt;/p&gt;&lt;p&gt;ಶ್ರೀದೇವಿ ಅವರ ಜನ್ಮದಿನದ ಬಗ್ಗೆ ಮಾತನಾಡಿದ ವರ್ಮಾ, 'ಸಾಮಾನ್ಯವಾಗಿ ನಾನು ಯಾರಾದರೂ ತೀರಿಕೊಂಡ ಮೇಲೆ ಅವರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನನ್ನ ಜೀವನ ಮತ್ತು ಕೆಲಸದ ಕಡೆಗೆ ಗಮನ ಕೊಡುತ್ತೇನೆ' ಎಂದಿದ್ದಾರೆ. 'ಆದರೆ, ಶ್ರೀದೇವಿ ತೀರಿಕೊಂಡು ವರ್ಷಗಳೇ ಕಳೆದರೂ, ಅವರ ಕೆಲವು ಅದ್ಭುತ ನಟನೆಗಳ ಹಿಂದಿನ ಕಲೆಗಾರಿಕೆ ನನಗೆ ಈಗಲೂ ಅರ್ಥವಾಗುವುದಿಲ್ಲ' ಎಂದು ಒಪ್ಪಿಕೊಂಡಿದ್ದಾರೆ.&lt;/p&gt;&lt;p&gt;ಅದರಲ್ಲೂ 'ಮಿಸ್ಟರ್ ಇಂಡಿಯಾ' ಸಿನಿಮಾದಲ್ಲಿ ಚಾರ್ಲಿ ಚಾಪ್ಲಿನ್ ರೀತಿ ಅವರು ಮಾಡಿದ ನಟನೆಯನ್ನು ನೆನಪಿಸಿಕೊಂಡ ವರ್ಮಾ, 'ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ನನಗೆ ಇಂದಿಗೂ ಅಸಾಧ್ಯ' ಎಂದಿದ್ದಾರೆ. 'ಶ್ರೀದೇವಿ ಒಬ್ಬ ಅದ್ಭುತ ನಟಿ. ನಾನು ನಿರ್ದೇಶಿಸಿದ ಯಾವುದೇ ನಟರಿಗಿಂತ ಆಕೆ ಮಿಗಿಲು' ಎಂದು ಹೊಗಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಚೆನ್ನೈನಲ್ಲಿ ನಡೆದ ಆ ಮೊದಲ ಭೇಟಿ&rsquo;&lt;/strong&gt;&lt;/h2&gt;&lt;p&gt;ಶ್ರೀದೇವಿಯವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ವರ್ಮಾ ನೆನಪಿಸಿಕೊಂಡಿದ್ದಾರೆ. 'ನನ್ನ ಸಿನಿಮಾಗೆ ಅವರನ್ನು ನಾಯಕಿಯನ್ನಾಗಿ ಹಾಕಿಕೊಳ್ಳುವ ಆಸೆಯಿಂದ ಚೆನ್ನೈನಲ್ಲಿರುವ ಅವರ ಮನೆಗೆ ಹೋಗಿದ್ದೆ. ಆಗ ಅವರು ಫ್ಲೈಟ್ ಹಿಡಿಯುವ ತಯಾರಿಯಲ್ಲಿದ್ದರು. ಆ ವೇಳೆ ಅವರು ಪದೇ ಪದೇ ರೂಮಿನೊಳಗೆ ಹೋಗಿಬರುತ್ತಿದ್ದರು. ಅವರ ಉಪಸ್ಥಿತಿ, ತಣ್ಣನೆಯ ತಾಜಾ ಗಾಳಿ ಬೀಸಿದ ಹಾಗೆ ಇತ್ತು' ಎಂದು ವರ್ಮಾ ಹೇಳಿದ್ದಾರೆ.&lt;/p&gt;&lt;p&gt;ಶ್ರೀದೇವಿ ಅವರು 2018ರ ಫೆಬ್ರವರಿ 24ರಂದು ದುಬೈನಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ನಿಧನರಾದರು. 'ಮಿಸ್ಟರ್ ಇಂಡಿಯಾ', 'ಚಾಂದನಿ' ಮತ್ತು 'ಹಿಮ್ಮತ್&zwnj;ವಾಲಾ' ಸೇರಿದಂತೆ ಹಲವು ಸೂಪರ್&zwnj;ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಅವರು, ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅವರ ಅಭಿನಯ ಮತ್ತು ಅವರೊಂದಿಗೆ ಕೆಲಸ ಮಾಡಿದವರ ನೆನಪುಗಳ ಮೂಲಕ ಶ್ರೀದೇವಿ ಇಂದಿಗೂ ಜೀವಂತವಾಗಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sridevis-mr-india-performance-still-leaves-ram-gopal-varma-amazed-gvd/articleshow-w0qzxk5"/>
        </item>
        <item>
            <title><![CDATA[ವೆಬ್‌ಸೀರಿಸ್ ಜಗತ್ತಿಗೆ ಪ್ರಿಯಾಂಕಾ ಉಪೇಂದ್ರ, ನಿಶ್ವಿಕಾ ನಾಯ್ಡು ಎಂಟ್ರಿ: ಇಲ್ಲಿದೆ ಕುತೂಹಲಕಾರಿ ಮಾಹಿತಿ]]></title>
            <link>https://kannada.asianetnews.com/sandalwood/priyanka-upendra-nishvika-naidu-make-their-web-series-debuts-gvd/articleshow-qrga8tb</link>
            <guid isPermaLink="true">https://kannada.asianetnews.com/sandalwood/priyanka-upendra-nishvika-naidu-make-their-web-series-debuts-gvd/articleshow-qrga8tb</guid>
            <pubDate>Mon, 17 Aug 2026 18:45:30 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದಲ್ಲಿ ವೆಬ್&zwnj;ಸೀರಿಸ್&zwnj;ಗಳತ್ತ ಮುಖ ಮಾಡುತ್ತಿರುವ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಟ್ರೀಮಿಂಗ್ ಪ್ಲಾಟ್&zwnj;ಫಾರ್ಮ್&zwnj;ಗಳು ವಿಭಿನ್ನ ಫಾರ್ಮ್ಯಾಟ್&zwnj;ಗಳು ಹಾಗೂ ಕಥೆಗಳಿಗೆ ಅವಕಾಶ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07xrv2v6g27cmtkb33pvvc8,imgname-knk-1786972499035.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ತಾರೆಯರ ಗಮನ ಇದೀಗ ವೆಬ್&zwnj;ಸೀರಿಸ್&zwnj;ಗಳತ್ತವೂ ಹರಿಯುತ್ತಿದೆ. ವಿಭಿನ್ನ ಕಥೆಗಳು, ದೀರ್ಘಾವಧಿಯ ನಿರೂಪಣೆ ಹಾಗೂ ಹೊಸ ರೀತಿಯ ಪಾತ್ರಗಳಿಗೆ ಡಿಜಿಟಲ್ ವೇದಿಕೆ ಅವಕಾಶ ಕಲ್ಪಿಸುತ್ತಿರುವ ಹಿನ್ನೆಲೆಯಲ್ಲಿ, ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹಲವು ನಟ-ನಟಿಯರು ಓಟಿಟಿ ಜಗತ್ತಿನತ್ತ ಹೆಜ್ಜೆ ಹಾಕುತ್ತಿದ್ದಾರೆ.&lt;/p&gt;&lt;p&gt;&lt;strong&gt;ವೆಬ್&zwnj;ಸೀರಿಸ್&zwnj;ಗೆ ಪ್ರಿಯಾಂಕಾ ಉಪೇಂದ್ರ, ನಿಶ್ವಿಕಾ ನಾಯ್ಡು ಎಂಟ್ರಿ!&lt;/strong&gt;&lt;/p&gt;&lt;p&gt;ಕನ್ನಡ ಚಿತ್ರರಂಗದಲ್ಲಿ ವೆಬ್&zwnj;ಸೀರಿಸ್&zwnj;ಗಳತ್ತ ಮುಖ ಮಾಡುತ್ತಿರುವ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಟ್ರೀಮಿಂಗ್ ಪ್ಲಾಟ್&zwnj;ಫಾರ್ಮ್&zwnj;ಗಳು ವಿಭಿನ್ನ ಫಾರ್ಮ್ಯಾಟ್&zwnj;ಗಳು ಹಾಗೂ ಕಥೆಗಳಿಗೆ ಅವಕಾಶ ನೀಡುತ್ತಿರುವುದರಿಂದ, ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟರು ಇದೀಗ ಡಿಜಿಟಲ್ ಜಗತ್ತಿನಲ್ಲೂ ಹೊಸ ಬಗೆಯ ಪಾತ್ರಗಳು ಹಾಗೂ ದೀರ್ಘಾವಧಿಯ ಕಥನಗಳನ್ನು ಪ್ರಯೋಗಿಸಲು ಮುಂದಾಗಿದ್ದಾರೆ.&lt;/p&gt;&lt;p&gt;ಒಂದೆಡೆ ಸಂಜನಾ ಆನಂದ್ ವೆಬ್&zwnj;ಸೀರಿಸ್&zwnj;ನಿಂದ ಬೆಳ್ಳಿತೆರೆಗೆ ಬಂದಿದ್ದರೆ, &lsquo;ದಿಯಾ&rsquo; ಖ್ಯಾತಿಯ ಖುಷಿ ರವಿ &lsquo;ಅಯ್ಯನ ಮನೆ&rsquo; ವೆಬ್&zwnj;ಸೀರಿಸ್ ಮೂಲಕ ಗಮನ ಸೆಳೆದಿದ್ದರು. ಕೌಟುಂಬಿಕ ಡ್ರಾಮಾ, ಸಸ್ಪೆನ್ಸ್ ಹಾಗೂ ಮಿಸ್ಟರಿಯನ್ನು ಒಳಗೊಂಡಿದ್ದ &lsquo;ಅಯ್ಯನ ಮನೆ&rsquo;ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ಇದರ ಎರಡನೇ ಭಾಗದ ಕೆಲಸವೂ ನಡೆಯುತ್ತಿದೆ. ಇದೀಗ ಈ ಸಾಲಿಗೆ ಮತ್ತೊಂದು ಜನಪ್ರಿಯ ಹೆಸರು ಸೇರ್ಪಡೆಯಾಗಿದೆ. ಪ್ರಿಯಾಂಕಾ ಉಪೇಂದ್ರ ವೆಬ್&zwnj;ಸೀರಿಸ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.&lt;/p&gt;&lt;p&gt;ಹಲವು ಭಾಷೆಗಳಲ್ಲಿ ನಟಿಸಿರುವ ಪ್ರಿಯಾಂಕಾ, &lsquo;ಕೋಟಿಗೊಬ್ಬ&rsquo;, &lsquo;ಮಲ್ಲ&rsquo;, &lsquo;H2O&rsquo;, &lsquo;ಶ್ರೀಮತಿ&rsquo;, &lsquo;ಮಮ್ಮಿ ಸೇವ್ ಮೀ&rsquo;, &lsquo;ದೇವಕಿ&rsquo; ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಪ್ರಿಯಾಂಕಾ &lsquo;ಕಾರ್ಪೊರೇಟ್ ಲವ್ ಸ್ಟೋರಿ&rsquo; ಎಂಬ 50 ಎಪಿಸೋಡ್&zwnj;ಗಳ ವೆಬ್&zwnj;ಸೀರಿಸ್&zwnj;ನಲ್ಲಿ ನಟಿಸುತ್ತಿದ್ದು, ಶೂಟಿಂಗ್&zwnj;ನಲ್ಲಿ ಬ್ಯುಸಿಯಾಗಿದ್ದಾರೆ. ಜನಪ್ರಿಯ ಕೊರಿಯನ್ ರೊಮ್ಯಾಂಟಿಕ್ ಡ್ರಾಮಾಗಳಿಂದ ಪ್ರೇರಣೆ ಪಡೆದಿರುವ ಈ ಸೀರಿಸ್&zwnj;ನಲ್ಲಿ ಪ್ರಿಯಾಂಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಓಟಿಟಿಗೆ ನಿಶ್ವಿಕಾ ನಾಯ್ಡು ಎಂಟ್ರಿ&lt;/strong&gt;&lt;/p&gt;&lt;p&gt;ಇದೇ ವೇಳೆ, ನಟಿ ನಿಶ್ವಿಕಾ ನಾಯ್ಡು ಕೂಡ ಡಿಜಿಟಲ್ ಜಗತ್ತಿನತ್ತ ಹೆಜ್ಜೆ ಇಡುತ್ತಿದ್ದಾರೆ. &lsquo;ಆಪರೇಷನ್ ಬಂಗಾರಿ&rsquo; ಎಂಬ ವೆಬ್&zwnj;ಸೀರಿಸ್ ಮೂಲಕ ಅವರು ಓಟಿಟಿಗೆ ಎಂಟ್ರಿ ಕೊಡುತ್ತಿದ್ದು, ಈ ಕಥೆ ನೈಜ ಘಟನೆಯೊಂದರಿಂದ ಪ್ರೇರಿತವಾಗಿದೆ ಎನ್ನಲಾಗಿದೆ. &lsquo;ಅಮ್ಮ ಐ ಲವ್ ಯೂ&rsquo;, &lsquo;ವಾಸ್ತು ಪ್ರಕಾರ&rsquo;, &lsquo;ಜೆಂಟಲ್&zwnj;ಮ್ಯಾನ್&rsquo; ಹಾಗೂ &lsquo;ಗುರು ಶಿಷ್ಯರು&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಿಶ್ವಿಕಾ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಪಡೆದಿದ್ದಾರೆ. ಸುದೀಪ್ ಅಭಿನಯದ &lsquo;ಮ್ಯಾಕ್ಸ್&rsquo; ಚಿತ್ರದ ಜನಪ್ರಿಯ ಹಾಡಿನಲ್ಲಿ ಕಾಣಿಸಿಕೊಂಡು ಕೂಡ ಗಮನ ಸೆಳೆದಿದ್ದರು. ಅಲ್ಲದೆ, ಜನಪ್ರಿಯ ರಿಯಾಲಿಟಿ ಶೋವೊಂದಕ್ಕೆ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ವೆಬ್&zwnj;ಸೀರಿಸ್ ಮೂಲಕ ನಿಶ್ವಿಕಾಗೆ ಹಲವು ಎಪಿಸೋಡ್&zwnj;ಗಳಲ್ಲಿ ಹಂತ ಹಂತವಾಗಿ ಬೆಳೆಯುವ ಪಾತ್ರವೊಂದನ್ನು ನಿರ್ವಹಿಸುವ ಅವಕಾಶ ಸಿಗಲಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ನಾಗಭೂಷಣ್ ಈಗಾಗಲೇ ಡಿಜಿಟಲ್ ದಾರಿಯಲ್ಲಿ&lt;/strong&gt;&lt;/p&gt;&lt;p&gt;ನಟ ನಾಗಭೂಷಣ್ ಈಗಾಗಲೇ ಈ ಡಿಜಿಟಲ್ ಪಯಣ ಆರಂಭಿಸಿದ್ದಾರೆ. ಅವರು ಶ್ರೀನಿಧಿ ಬೆಂಗಳೂರು ಜೊತೆ ಕೈಜೋಡಿಸಿ &lsquo;ಜೆರಾಕ್ಸ್&rsquo; ವೆಬ್&zwnj;ಸೀರಿಸ್&zwnj;ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಚಿತ್ರಮಂದಿರದ ಎರಡು ಗಂಟೆಗಳ ಅವಧಿಯೊಳಗೆ ಹೇಳಲು ಸಾಧ್ಯವಾಗದಂತಹ ಕಥೆಗಳನ್ನು ಡಿಜಿಟಲ್ ವೇದಿಕೆಗಳ ಮೂಲಕ ಹೇಳುವ ಪ್ರಯತ್ನಕ್ಕೆ ಈ ಯೋಜನೆಯೂ ಮತ್ತೊಂದು ಉದಾಹರಣೆಯಾಗಿದೆ.&lt;/p&gt;&lt;h2&gt;&lt;strong&gt;ಓಟಿಟಿ ಕೇವಲ ಮತ್ತೊಂದು ರಿಲೀಸ್ ಪ್ಲಾಟ್&zwnj;ಫಾರ್ಮ್ ಅಲ್ಲ!&lt;/strong&gt;&lt;/h2&gt;&lt;p&gt;ಕಲಾವಿದರಿಗೆ ಓಟಿಟಿ ಕೇವಲ ಮತ್ತೊಂದು ಬಿಡುಗಡೆ ವೇದಿಕೆಯಲ್ಲ. ವೆಬ್&zwnj;ಸೀರಿಸ್&zwnj;ಗಳು ದೀರ್ಘ ಕಥನ, ವಿಭಿನ್ನ ಪಾತ್ರಗಳು ಹಾಗೂ ಹಲವು ಎಪಿಸೋಡ್&zwnj;ಗಳಲ್ಲಿ ಪಾತ್ರದ ಬೆಳವಣಿಗೆಯನ್ನು ತೋರಿಸುವ ಅವಕಾಶವನ್ನು ನೀಡುತ್ತವೆ. ಇದೇ ವೇಳೆ ನಿರ್ದೇಶಕರಿಗೂ ಎರಡು ಗಂಟೆಗಳ ಸಿನಿಮಾದ ಚೌಕಟ್ಟಿಗೆ ಸೀಮಿತವಾಗದೆ ಕಥೆಯನ್ನು ವಿಸ್ತಾರವಾಗಿ ಹೇಳುವ ಸ್ವಾತಂತ್ರ್ಯ ಸಿಗುತ್ತದೆ. ಇನ್ನು ಸಂಜನಾ ಆನಂದ್, ಖುಷಿ ರವಿ ಅವರ ಬಳಿಕ ಇದೀಗ ಪ್ರಿಯಾಂಕಾ ಉಪೇಂದ್ರ ಹಾಗೂ ನಿಶ್ವಿಕಾ ನಾಯ್ಡು ಕೂಡ ವೆಬ್&zwnj;ಸೀರಿಸ್ ಜಗತ್ತಿಗೆ ಕಾಲಿಡುತ್ತಿರುವುದು ಕನ್ನಡದ ಡಿಜಿಟಲ್ ಸ್ಪೇಸ್ ಮತ್ತಷ್ಟು ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡದ ಸ್ಟಾರ್&zwnj;ಗಳು ಓಟಿಟಿಯತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/priyanka-upendra-nishvika-naidu-make-their-web-series-debuts-gvd/articleshow-qrga8tb"/>
        </item>
        <item>
            <title><![CDATA[‘ಮುಧೋಳ್’ ಹೆಸರಿನ ಹಿಂದೆ ರವಿಚಂದ್ರನ್: ವಿಕ್ರಮ್ ಬಿಚ್ಚಿಟ್ಟ ಆ ಕುತೂಹಲಕಾರಿ ಸೀಕ್ರೆಟ್ ಏನು?]]></title>
            <link>https://kannada.asianetnews.com/sandalwood/vikram-ravichandran-reveals-why-his-father-suggested-the-title-mudhol-gvd/articleshow-aeb5axk</link>
            <guid isPermaLink="true">https://kannada.asianetnews.com/sandalwood/vikram-ravichandran-reveals-why-his-father-suggested-the-title-mudhol-gvd/articleshow-aeb5axk</guid>
            <pubDate>Mon, 17 Aug 2026 18:21:26 +0530</pubDate>
            <description><![CDATA[&lt;p&gt;Mudhol Movie: ಬಹುಕಾಲದಿಂದ ನಿರೀಕ್ಷೆ ಮೂಡಿಸಿರುವ ನಟ-ನಿರ್ಮಾಪಕ ವಿಕ್ರಮ್ ರವಿಚಂದ್ರನ್ ಅಭಿನಯದ &lsquo;ಮುಧೋಳ್&rsquo; ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ಮೊದಲ ಹಾಡು &lsquo;ಗುಚ್ಚಿ ಗರ್ಲ್&rsquo; ಬಿಡುಗಡೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07wbpx2jz32sjqqph5h5bz3,imgname-hh-1786971020194.png" type="image/jpeg" height="390" width="690"/>
            <content:encoded><![CDATA[&lt;p&gt;ಬಹುಕಾಲದಿಂದ ನಿರೀಕ್ಷೆ ಮೂಡಿಸಿರುವ ನಟ-ನಿರ್ಮಾಪಕ ವಿಕ್ರಮ್ ರವಿಚಂದ್ರನ್ ಅಭಿನಯದ &lsquo;ಮುಧೋಳ್&rsquo; ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ಮೊದಲ ಹಾಡು &lsquo;ಗುಚ್ಚಿ ಗರ್ಲ್&rsquo; ಬಿಡುಗಡೆಯಾಗಿದ್ದು, ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ನಿರ್ದೇಶಕ ಜೋಗಿ ಪ್ರೇಮ್ ಬಿಡುಗಡೆಗೊಳಿಸಿದ ಈ ಹಾಡಿಗೆ ಯುವರಾಜ್ ಚಂದ್ರನ್ ಸಂಗೀತ ಸಂಯೋಜಿಸಿದ್ದಾರೆ. ಹಾಡಿನಲ್ಲಿ ನಾಯಕಿ ಸಂಜನಾ ಆನಂದ್ ಜೊತೆಗೆ ಡ್ಯಾನ್ಸರ್-ನಟಿ ಇಶಿತಾ ರಾಜ್ ಕಾಣಿಸಿಕೊಂಡಿದ್ದು, ವಿಕ್ರಮ್ ರವಿಚಂದ್ರನ್ ಕೂಡ ಕೆಲ ಸ್ಟೆಪ್&zwnj;ಗಳಿಗೆ ಸಾಥ್ ನೀಡಿದ್ದಾರೆ.&lt;/p&gt;&lt;p&gt;ರಕ್ಷಾ ವಿಜಯಕುಮಾರ್, ವಿಜಯ್ ಟಾಟಾ ಹಾಗೂ ಅಮೃತಾ ನಿರ್ಮಿಸಿರುವ ಈ ಚಿತ್ರವನ್ನು ಕಾರ್ತಿಕ್ ರಾಜನ್ ನಿರ್ದೇಶಿಸಿದ್ದಾರೆ. ವಿಕ್ರಮ್ ರವಿಚಂದ್ರನ್ ಹಾಗೂ ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಹಲವು ಸದಸ್ಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ನಟ ಅಭಿಲಾಷ್ ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಎರಡು ವರ್ಷಗಳಿಗೂ ಹೆಚ್ಚು ಕಾಲ ಯಾಕೆ ತಡವಾಯ್ತು?&lt;/strong&gt;&lt;/p&gt;&lt;p&gt;&lsquo;ಮುಧೋಳ್&rsquo; ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಇಷ್ಟು ಸಮಯ ತೆಗೆದುಕೊಂಡಿದ್ದೇಕೆ ಎಂಬುದರ ಬಗ್ಗೆ ವಿಕ್ರಮ್ ಮಾತನಾಡಿದ್ದಾರೆ. &ldquo;ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು, ಸಿನಿಮಾದ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸುವ ಪ್ರಯತ್ನಗಳು ಹಾಗೂ ಕಥೆಯಲ್ಲಿ ಮಾಡಲಾದ ಬದಲಾವಣೆಗಳಿಂದ ಚಿತ್ರ ತಡವಾಯಿತು,&rdquo; ಎಂದು ಅವರು ಹೇಳಿದ್ದಾರೆ. ಚಿತ್ರವೊಂದು ಕಮರ್ಷಿಯಲ್ ಎಂಟರ್&zwnj;ಟೈನರ್ ಆಗಿದ್ದು, ಅದರೊಳಗೆ ಬಲವಾದ ಸಸ್ಪೆನ್ಸ್ ಅಂಶವೂ ಇದೆ ಎಂದು ವಿಕ್ರಮ್ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಮುಧೋಳ್&rsquo; ಹೆಸರಿಟ್ಟಿದ್ದು ಯಾರು ಗೊತ್ತಾ?&lt;/strong&gt;&lt;/p&gt;&lt;p&gt;ಸಿನಿಮಾದ ಶೀರ್ಷಿಕೆಯ ಹಿಂದಿನ ಕುತೂಹಲಕಾರಿ ಸಂಗತಿಯನ್ನೂ ವಿಕ್ರಮ್ ಬಹಿರಂಗಪಡಿಸಿದ್ದಾರೆ. ಚಿತ್ರದ ನಿರ್ಮಾಣದ ಸಂದರ್ಭದಲ್ಲಿ ತಮ್ಮ ತಂದೆ, ಹಿರಿಯ ನಟ ರವಿಚಂದ್ರನ್, ಹಲವು ಸಲಹೆಗಳನ್ನು ನೀಡಿದ್ದರು. ಅಷ್ಟೇ ಅಲ್ಲ, &lsquo;ಮುಧೋಳ್&rsquo; ಎಂಬ ಶೀರ್ಷಿಕೆಯನ್ನು ಸೂಚಿಸಿದ್ದೂ ಅವರೇ ಎಂದು ವಿಕ್ರಮ್ ಹೇಳಿದ್ದಾರೆ. ಇನ್ನು ಚಿತ್ರದ ಟೈಟಲ್ ಸಾಂಗ್&zwnj;ಗೆ ರವಿಚಂದ್ರನ್ ಅವರೇ ಸಾಹಿತ್ಯ ಬರೆದಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಾಡು ಬಿಡುಗಡೆಯಾದ ಬಳಿಕ ಚಿತ್ರತಂಡ ಹಂಚಿಕೊಳ್ಳಲಿದೆ ಎಂದು ವಿಕ್ರಮ್ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ನಿರ್ಮಾಪಕರ ಜವಾಬ್ದಾರಿಯೂ ಅಷ್ಟೇ ಮುಖ್ಯ&lt;/strong&gt;&lt;/h2&gt;&lt;p&gt;&lsquo;ಮುಧೋಳ್&rsquo; ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿರುವ ವಿಕ್ರಮ್, ಕಲಾವಿದರು ಮತ್ತು ತಂತ್ರಜ್ಞರು ಕೇವಲ ತಮ್ಮ ಕಲೆಯಷ್ಟೇ ಅಲ್ಲದೆ ಸಿನಿಮಾದ ಬಿಸಿನೆಸ್ ಭಾಗವನ್ನೂ ಅರ್ಥಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕರು ಹೂಡಿಕೆ ಮಾಡುವ ಹಣಕ್ಕೆ ತಕ್ಕ ಮೌಲ್ಯವನ್ನು ಪ್ರೇಕ್ಷಕರಿಗೆ ನೀಡುವ ಜವಾಬ್ದಾರಿ ಇಡೀ ಚಿತ್ರತಂಡಕ್ಕಿದೆ. ಈ ನಿಟ್ಟಿನಲ್ಲಿ ಸಿನಿಮಾ ರೂಪಿಸುವಾಗ ಸಾಕಷ್ಟು ವಿಚಾರಗಳನ್ನು ಪರಿಗಣಿಸಿದ್ದರಿಂದಲೂ ಚಿತ್ರ ಪೂರ್ಣಗೊಳ್ಳಲು ಹೆಚ್ಚಿನ ಸಮಯ ಬೇಕಾಯಿತು ಎಂದು ಅವರು ಹೇಳಿದ್ದಾರೆ. ಸದ್ಯ &lsquo;ಗುಚ್ಚಿ ಗರ್ಲ್&rsquo; ಮೂಲಕ &lsquo;ಮುಧೋಳ್&rsquo; ಚಿತ್ರದ ಮೇಲಿನ ನಿರೀಕ್ಷೆ ಮತ್ತೆ ಗರಿಗೆದರಿದ್ದು, ಮುಂದಿನ ಹಾಡುಗಳು ಹಾಗೂ ಚಿತ್ರದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/vikram-ravichandran-reveals-why-his-father-suggested-the-title-mudhol-gvd/articleshow-aeb5axk"/>
        </item>
        <item>
            <title><![CDATA[ಯಶ್‌ ‘ಟಾಕ್ಸಿಕ್‌’ನಲ್ಲಿ ಭಾರತೀಯ ಸಂಗೀತಕ್ಕೆ ರಷ್ಯಾದ ಖ್ಯಾತ ಗಾಯಕಿ ಧ್ವನಿ: ಯಾರು ಈ ಡಯಾನಾ?]]></title>
            <link>https://kannada.asianetnews.com/entertainment/russian-singer-diana-ankudinova-lends-her-voice-to-yash-toxic-gvd/articleshow-ul93a5x</link>
            <guid isPermaLink="true">https://kannada.asianetnews.com/entertainment/russian-singer-diana-ankudinova-lends-her-voice-to-yash-toxic-gvd/articleshow-ul93a5x</guid>
            <pubDate>Mon, 17 Aug 2026 17:41:42 +0530</pubDate>
            <description><![CDATA[&lt;p&gt;Russian Singer Diana Ankudinova: ಯಶ್&zwnj; ಅಭಿನಯದ ಬಹುನಿರೀಕ್ಷಿತ ಸಿನಿಮಾ &lsquo;ಟಾಕ್ಸಿಕ್&zwnj;: ಎ ಫೇರಿ ಟೇಲ್&zwnj; ಫಾರ್&zwnj; ಗ್ರೋನ್&zwnj;-ಅಪ್ಸ್&zwnj;&rsquo; ಈಗಾಗಲೇ ಟೀಸರ್&zwnj;, ಹಾಡುಗಳು ಮತ್ತು ಟ್ರೇಲರ್&zwnj; ಮೂಲಕ ಭಾರೀ ಕುತೂಹಲ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07t25exht4t9j808v6desb0,imgname-kk-1786968610268.png" type="image/jpeg" height="390" width="690"/>
            <content:encoded><![CDATA[&lt;p&gt;ಯಶ್&zwnj; ಅಭಿನಯದ ಬಹುನಿರೀಕ್ಷಿತ ಸಿನಿಮಾ &lsquo;ಟಾಕ್ಸಿಕ್&zwnj;: ಎ ಫೇರಿ ಟೇಲ್&zwnj; ಫಾರ್&zwnj; ಗ್ರೋನ್&zwnj;-ಅಪ್ಸ್&zwnj;&rsquo; ಈಗಾಗಲೇ ಟೀಸರ್&zwnj;, ಹಾಡುಗಳು ಮತ್ತು ಟ್ರೇಲರ್&zwnj; ಮೂಲಕ ಭಾರೀ ಕುತೂಹಲ ಮೂಡಿಸಿದೆ. ಆಗಸ್ಟ್&zwnj; 26ರಂದು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿರುವ ಈ ಸಿನಿಮಾದಲ್ಲಿ ದೃಶ್ಯ ವೈಭವದ ಜೊತೆಗೆ ಸಂಗೀತಕ್ಕೂ ಅಷ್ಟೇ ಮಹತ್ವ ನೀಡಲಾಗಿದೆ. ಇದೀಗ ಚಿತ್ರದ ಸಂಗೀತ ಲೋಕಕ್ಕೆ ರಷ್ಯಾದ ಖ್ಯಾತ ಗಾಯಕಿಯೊಬ್ಬರ ಎಂಟ್ರಿ ಮತ್ತಷ್ಟು ವಿಶೇಷತೆ ತಂದಿದೆ.&lt;/p&gt;&lt;p&gt;&lt;strong&gt;&lsquo;ಟಾಕ್ಸಿಕ್&zwnj;&rsquo;ಗೆ ರಷ್ಯಾದ ಗಾಯಕಿ ಡಯಾನಾ ಅಂಕುಡಿನೋವಾ ಧ್ವನಿ!&lt;/strong&gt;&lt;/p&gt;&lt;p&gt;ಚಿತ್ರದ ಥೀಮ್&zwnj; ಸಾಂಗ್&zwnj;ಗೆ ರಷ್ಯಾದ ಖ್ಯಾತ ಗಾಯಕಿ ಡಯಾನಾ ಅಂಕುಡಿನೋವಾ ತಮ್ಮ ವಿಭಿನ್ನ ಧ್ವನಿಯನ್ನು ನೀಡಿದ್ದಾರೆ. ರಷ್ಯಾದ ಟೆಲಿವಿಷನ್&zwnj; ಟ್ಯಾಲೆಂಟ್&zwnj; ಶೋ &lsquo;You Are Super!&rsquo;ನ ಸತತ ಎರಡು ಸೀಸನ್&zwnj;ಗಳಲ್ಲಿ ಗೆದ್ದು ಜನಪ್ರಿಯತೆ ಪಡೆದಿರುವ ಡಯಾನಾ, ತಮ್ಮ ಆಳವಾದ ಮತ್ತು ನಾಟಕೀಯ ಕಾಂಟ್ರಾಲ್ಟೋ ಧ್ವನಿಗೆ ಹೆಸರುವಾಸಿಯಾಗಿದ್ದಾರೆ. ರಷ್ಯನ್&zwnj;, ಇಂಗ್ಲಿಷ್&zwnj; ಮತ್ತು ಫ್ರೆಂಚ್&zwnj; ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿರುವ ಡಯಾನಾ ಅವರ ವಿಶಿಷ್ಟ ವಾಯ್ಸ್&zwnj; ಇದೀಗ &lsquo;ಟಾಕ್ಸಿಕ್&zwnj;&rsquo; ಚಿತ್ರದ ಸಂಗೀತದಲ್ಲಿ ಕೇಳಿಬರಲಿದೆ.&lt;/p&gt;&lt;p&gt;&lt;strong&gt;ತಂದೆ-ಮಗನ ಭಾವನಾತ್ಮಕ ಕಥೆಗೆ ಥೀಮ್&zwnj; ಸಾಂಗ್&zwnj;!&lt;/strong&gt;&lt;/p&gt;&lt;p&gt;&lsquo;ಟಾಕ್ಸಿಕ್&zwnj;&rsquo; ಚಿತ್ರದ ಕಥೆಯಲ್ಲಿ ಪ್ರಮುಖವಾಗಿರುವ ತಂದೆ-ಮಗನ ಭಾವನಾತ್ಮಕ ಸಂಬಂಧಕ್ಕೆ ಈ ಥೀಮ್&zwnj; ಸಾಂಗ್&zwnj; ಕನೆಕ್ಟ್&zwnj; ಆಗಲಿದೆ ಎನ್ನಲಾಗಿದೆ. ವಿಶೇಷವೆಂದರೆ ಡಯಾನಾ ಅವರ ಧ್ವನಿಯನ್ನು ಹಾಡಿನಲ್ಲಿ ಹಲವು ಭಾಷೆಗಳಲ್ಲಿ ಬಳಸಲಾಗಿದೆ. ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತಿರುವ ರವಿ ಬಸ್ರೂರು, ಈ ಹಾಡಿಗೆ ದೊಡ್ಡ ಮಟ್ಟದ ಆರ್ಕೆಸ್ಟ್ರಾ ಬಳಸಿದ್ದಾರೆ ಎನ್ನಲಾಗಿದೆ. ಬರೋಬ್ಬರಿ 100 ಮಂದಿಯ ಆರ್ಕೆಸ್ಟ್ರಾ ಜೊತೆ ಈ ಸಂಗೀತವನ್ನು ರೆಕಾರ್ಡ್&zwnj; ಮಾಡಲಾಗಿದೆ ಎಂಬ ಮಾಹಿತಿ ಇದೀಗ ಗಮನ ಸೆಳೆಯುತ್ತಿದೆ. ಡಯಾನಾ ಅವರಿಗೆ ಧನ್ಯವಾದ ತಿಳಿಸಿರುವ ರವಿ ಬಸ್ರೂರು, ಅವರ ಧ್ವನಿ ಸಂಗೀತಕ್ಕೆ ವಿಶಿಷ್ಟ ಆತ್ಮ ಮತ್ತು ಭಾವನೆಯನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಟಾಕ್ಸಿಕ್&zwnj;&rsquo; ಸಂಗೀತದಲ್ಲಿ ಹಲವು ಸಂಗೀತ ನಿರ್ದೇಶಕರ ಸಂಗಮ&lt;/strong&gt;&lt;/p&gt;&lt;p&gt;&lsquo;ಟಾಕ್ಸಿಕ್&zwnj;&rsquo; ಚಿತ್ರದ ಸಂಗೀತ ಲೋಕವೂ ಸಾಕಷ್ಟು ವೈವಿಧ್ಯಮಯವಾಗಿದೆ. ವಿಶಾಲ್&zwnj; ಮಿಶ್ರಾ, ತನಿಷ್ಕ್&zwnj; ಬಾಗ್ಚಿ, ಫಹೀಮ್&zwnj; ಅಬ್ದುಲ್ಲಾ, ಅರ್ಸ್ಲಾನ್&zwnj; ನಿಜಾಮಿ ಮತ್ತು ರವಿ ಬಸ್ರೂರು ಸೇರಿದಂತೆ ಹಲವು ಸಂಗೀತ ನಿರ್ದೇಶಕರು ಚಿತ್ರದ ವಿವಿಧ ಹಾಡುಗಳು ಮತ್ತು ಸಂಗೀತ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ &lsquo;ತಬಾಹಿ&rsquo; ಹಾಡಿನಲ್ಲಿ ವಿಶಾಲ್&zwnj; ಮಿಶ್ರಾ ಅವರ ಎನರ್ಜಿಟಿಕ್&zwnj; ಮ್ಯೂಸಿಕ್&zwnj; ಗಮನ ಸೆಳೆದಿದ್ದರೆ, &lsquo;ಮನಮೋಹಕ&rsquo; ಹಾಡು ರೊಮ್ಯಾಂಟಿಕ್&zwnj; ಮೂಡ್&zwnj; ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರದ ಸಂಪೂರ್ಣ ಸೌಂಡ್&zwnj;ಟ್ರ್ಯಾಕ್&zwnj;ನಲ್ಲಿ ಸುಮಾರು 10 ಸಂಗೀತ ಭಾಗಗಳು ಇರಲಿವೆ ಎನ್ನಲಾಗಿದ್ದು, ಇದರಲ್ಲಿ ಪೂರ್ಣ ಪ್ರಮಾಣದ ಹಾಡುಗಳ ಜೊತೆಗೆ ಕೆಲವು ಶಾರ್ಟ್&zwnj; ಮ್ಯೂಸಿಕಲ್&zwnj; ಪೀಸ್&zwnj;ಗಳೂ ಇರಲಿವೆ.&lt;/p&gt;&lt;p&gt;&lt;strong&gt;ಯಶ್&zwnj;-ರವಿ ಬಸ್ರೂರು ಕಾಂಬಿನೇಷನ್&zwnj;ಗೆ ಮತ್ತೊಂದು ವಿಶೇಷ ಸೇರ್ಪಡೆ&lt;/strong&gt;&lt;/p&gt;&lt;p&gt;&lsquo;ಕೆಜಿಎಫ್&zwnj;&rsquo; ಸಿನಿಮಾಗಳ ಮೂಲಕ ಯಶ್&zwnj; ಮತ್ತು ರವಿ ಬಸ್ರೂರು ಕಾಂಬಿನೇಷನ್&zwnj; ಪ್ರೇಕ್ಷಕರಿಗೆ ಈಗಾಗಲೇ ಚಿರಪರಿಚಿತ. ಇದೀಗ &lsquo;ಟಾಕ್ಸಿಕ್&zwnj;&rsquo;ನಲ್ಲೂ ರವಿ ಬಸ್ರೂರು ಹಿನ್ನೆಲೆ ಸಂಗೀತದ ಜೊತೆಗೆ ಚಿತ್ರದ ಮ್ಯೂಸಿಕಲ್&zwnj; ವರ್ಲ್ಡ್&zwnj; ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ. ಭಾರತೀಯ ಸಂಗೀತ ನಿರ್ದೇಶಕರ ತಂಡ, ರಷ್ಯಾದ ಅಂತಾರಾಷ್ಟ್ರೀಯ ಗಾಯಕಿಯ ವಿಭಿನ್ನ ಧ್ವನಿ ಮತ್ತು 100 ಸದಸ್ಯರ ಆರ್ಕೆಸ್ಟ್ರಾ-ಈ ಮೂರು ಅಂಶಗಳ ಸಂಗಮ &lsquo;ಟಾಕ್ಸಿಕ್&zwnj;&rsquo; ಚಿತ್ರದ ಸಂಗೀತವನ್ನು ವಿಶೇಷವಾಗಿಸುವ ನಿರೀಕ್ಷೆ ಮೂಡಿಸಿದೆ.&lt;/p&gt;&lt;h2&gt;&lt;strong&gt;ಗೋವಾದ ಕ್ರೈಂ ವರ್ಲ್ಡ್&zwnj;ನಲ್ಲಿ &lsquo;ಟಾಕ್ಸಿಕ್&zwnj;&rsquo; ಕಥೆ&lt;/strong&gt;&lt;/h2&gt;&lt;p&gt;ಗೀತು ಮೋಹನ್&zwnj;ದಾಸ್&zwnj; ನಿರ್ದೇಶನದ ಈ ಚಿತ್ರವು ಹಿಂದಿನ ಕಾಲದ ಗೋವಾದ ಕ್ರಿಮಿನಲ್&zwnj; ಅಂಡರ್&zwnj;ವರ್ಲ್ಡ್&zwnj; ಹಿನ್ನೆಲೆಯಲ್ಲಿನ ಪೀರಿಯಡ್&zwnj; ಗ್ಯಾಂಗ್&zwnj;ಸ್ಟರ್&zwnj; ಡ್ರಾಮಾ ಎಂದು ಹೇಳಲಾಗಿದೆ. ಚಿತ್ರದಲ್ಲಿ ಯಶ್&zwnj; ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್&zwnj; ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜೀವ್&zwnj; ರವಿ ಸಿನಿಮಾಟೋಗ್ರಫಿ ನಿರ್ವಹಿಸಿದ್ದಾರೆ.&lt;/p&gt;&lt;p&gt;ವೆಂಕಟ್&zwnj; ಕೆ. ನಾರಾಯಣ ಮತ್ತು ಯಶ್&zwnj; ನಿರ್ಮಾಣದಲ್ಲಿ, ಕೆವಿಎನ್&zwnj; ಪ್ರೊಡಕ್ಷನ್ಸ್&zwnj; ಮತ್ತು ಮಾನ್ಸ್ಟರ್&zwnj; ಮೈಂಡ್&zwnj; ಕ್ರಿಯೇಷನ್ಸ್&zwnj; ಬ್ಯಾನರ್&zwnj;ನಲ್ಲಿ ಮೂಡಿಬರುತ್ತಿರುವ &lsquo;ಟಾಕ್ಸಿಕ್&zwnj;&rsquo; ಆಗಸ್ಟ್&zwnj; 26ರಂದು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ಹೀಗಾಗಿ ಈಗಾಗಲೇ ಟ್ರೇಲರ್&zwnj; ಮೂಲಕ ಸದ್ದು ಮಾಡಿರುವ &lsquo;ಟಾಕ್ಸಿಕ್&zwnj;&rsquo;ಗೆ ರಷ್ಯಾದ ಗಾಯಕಿ ಡಯಾನಾ ಅಂಕುಡಿನೋವಾ ಅವರ ವಿಶಿಷ್ಟ ಧ್ವನಿ ಮತ್ತೊಂದು ಕುತೂಹಲಕಾರಿ ಅಂಶವಾಗಿದ್ದು, ಚಿತ್ರದ ಸಂಗೀತದ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/russian-singer-diana-ankudinova-lends-her-voice-to-yash-toxic-gvd/articleshow-ul93a5x"/>
        </item>
        <item>
            <title><![CDATA[ಕಿಚ್ಚ ಸುದೀಪ್‌ ಅವರ ಐಷಾರಾಮಿ ಜೀವನ ಹೇಗಿದೆ? ಆಸ್ತಿ, ಕಾರು, ಫ್ಯಾಷನ್‌ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ]]></title>
            <link>https://kannada.asianetnews.com/sandalwood/kichcha-sudeep-net-worth-income-fashion-luxury-house-and-car-collection-gvd/articleshow-bwe749p</link>
            <guid isPermaLink="true">https://kannada.asianetnews.com/sandalwood/kichcha-sudeep-net-worth-income-fashion-luxury-house-and-car-collection-gvd/articleshow-bwe749p</guid>
            <pubDate>Mon, 17 Aug 2026 16:34:43 +0530</pubDate>
            <description><![CDATA[&lt;p&gt;Kichcha Sudeep Net Worth: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್&zwnj; ಅವರ ಅಂದಾಜು ನಿವ್ವಳ ಮೌಲ್ಯ ಎಷ್ಟು? ಅವರ ಆದಾಯದ ಮೂಲಗಳೇನು? ಯಾವ ರೀತಿಯ ಐಷಾರಾಮಿ ಜೀವನವನ್ನು ಅವರು ನಡೆಸುತ್ತಿದ್ದಾರೆ? ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07p1wh2g8wa7wk5tfng98ft,imgname-jb-1786964406817.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ, ಕರುನಾಡ ಮಾಣಿಕ್ಯ ಕಿಚ್ಚ ಸುದೀಪ್&zwnj; ಎಂದರೆ ಕೇವಲ ಒಬ್ಬ ನಟನಲ್ಲ. ನಟನೆಯ ಜೊತೆಗೆ ನಿರ್ದೇಶನ, ನಿರ್ಮಾಣ, ಕಿರುತೆರೆ ನಿರೂಪಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಬಹುಮುಖ ಪ್ರತಿಭೆ. ಕನ್ನಡದ ಗಡಿ ದಾಟಿ ಹಲವು ಭಾಷೆಗಳಲ್ಲೂ ಗುರುತಿಸಿಕೊಂಡಿರುವ ಸುದೀಪ್&zwnj;, ವರ್ಷಗಳು ಕಳೆದರೂ ತಮ್ಮದೇ ಆದ ಸ್ಟಾರ್&zwnj;ಡಮ್&zwnj; ಉಳಿಸಿಕೊಂಡಿದ್ದಾರೆ. ಆದರೆ ತೆರೆಯ ಮೇಲಿನ ಈ ಸ್ಟಾರ್&zwnj; ಲೈಫ್&zwnj; ಹಿಂದೆ ಅವರ ಆಸ್ತಿ, ಆದಾಯ, ಮನೆ, ಕಾರುಗಳು ಮತ್ತು ಫ್ಯಾಷನ್&zwnj; ವಿಚಾರಗಳೂ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿವೆ. ಹಾಗಾದರೆ ಕಿಚ್ಚ ಸುದೀಪ್&zwnj; ಅವರ ಅಂದಾಜು ನಿವ್ವಳ ಮೌಲ್ಯ ಎಷ್ಟು? ಅವರ ಆದಾಯದ ಮೂಲಗಳೇನು? ಯಾವ ರೀತಿಯ ಐಷಾರಾಮಿ ಜೀವನವನ್ನು ಅವರು ನಡೆಸುತ್ತಿದ್ದಾರೆ? ನೋಡೋಣ.&lt;/p&gt;&lt;p&gt;&lt;strong&gt;₹150 ಕೋಟಿ ಆಸ್ತಿ? ಸುದೀಪ್&zwnj; ಆದಾಯದ ಮೂಲಗಳೇನು?&lt;/strong&gt;&lt;/p&gt;&lt;p&gt;ಟೈಮ್ಸ್&zwnj; ಆಫ್&zwnj; ಇಂಡಿಯಾ ವರದಿಯ ಪ್ರಕಾರ, ಕಿಚ್ಚ ಸುದೀಪ್&zwnj; ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ₹150 ಕೋಟಿ ಎಂದು ಉಲ್ಲೇಖಿಸಲಾಗಿದೆ. ಆದರೆ ಇದು ವಿವಿಧ ಮಾಧ್ಯಮ ವರದಿಗಳ ಆಧಾರದ ಮೇಲಿನ ಅಂದಾಜು ಮಾತ್ರವಾಗಿದ್ದು, ಅಧಿಕೃತವಾಗಿ ದೃಢೀಕರಿಸಲಾದ ಆಸ್ತಿ ವಿವರವೆಂದು ಪರಿಗಣಿಸಬಾರದು. ಸುದೀಪ್&zwnj; ಅವರ ಆದಾಯಕ್ಕೆ ಒಂದೇ ಮೂಲವಿಲ್ಲ. ಸಿನಿಮಾಗಳಿಗೆ ಪಡೆಯುವ ಸಂಭಾವನೆ, ಲಾಭ ಹಂಚಿಕೆ, ನಿರ್ದೇಶನ ಮತ್ತು ನಿರ್ಮಾಣ, ಕಿರುತೆರೆ ನಿರೂಪಣೆ ಹಾಗೂ ಇತರೆ ವ್ಯವಹಾರಗಳು ಅವರ ಆದಾಯದ ಪ್ರಮುಖ ಮೂಲಗಳೆಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. 2023ರ ವರದಿಗಳ ಪ್ರಕಾರ, ಸುದೀಪ್&zwnj; ಪ್ರತಿ ಚಿತ್ರಕ್ಕೆ ಸುಮಾರು ₹20ರಿಂದ ₹25 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿತ್ತು. ಸಿನಿಮಾ ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡಿದಾಗ ಲಾಭ ಹಂಚಿಕೆಯೂ ಅವರ ಆದಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಬಿಗ್&zwnj;ಬಾಸ್&zwnj; ನಿರೂಪಣೆಯಿಂದಲೂ ಭರ್ಜರಿ ಬೇಡಿಕೆ&lt;/strong&gt;&lt;/p&gt;&lt;p&gt;ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಸುದೀಪ್&zwnj; ತಮ್ಮದೇ ಬ್ರ್ಯಾಂಡ್&zwnj; ನಿರ್ಮಿಸಿಕೊಂಡಿದ್ದಾರೆ. ವಿಶೇಷವಾಗಿ ಬಿಗ್&zwnj;ಬಾಸ್&zwnj; ಕನ್ನಡ ಕಾರ್ಯಕ್ರಮದ ನಿರೂಪಕರಾಗಿ ಹಲವು ವರ್ಷಗಳಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ವಾರಾಂತ್ಯದ ಎಪಿಸೋಡ್&zwnj;ಗಳಲ್ಲಿ ಅವರ ನಿರೂಪಣೆ ಮಾತ್ರವಲ್ಲ, ಅವರ ಲುಕ್&zwnj;, ಡ್ರೆಸ್ಸಿಂಗ್&zwnj; ಮತ್ತು ಸ್ಟೈಲ್&zwnj; ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಆದರೆ ಮುಂದಿನ ಸೀಸನ್&zwnj;ನಿಂದ ಬಿಗ್&zwnj;ಬಾಸ್&zwnj; ಕನ್ನಡ ನಿರೂಪಣೆ ಮಾಡದಿರಬಹುದು ಎಂಬ ವರದಿಗಳೂ ಕೇಳಿಬಂದಿವೆ.&lt;/p&gt;&lt;p&gt;&lt;strong&gt;1991ರಲ್ಲಿ ನಿರ್ಮಿಸಿದ &lsquo;ಶ್ರೀನಿಧಿ&rsquo; ಮನೆ ಈಗ ಎಷ್ಟು ಕೋಟಿ?&lt;/strong&gt;&lt;/p&gt;&lt;p&gt;ಸುದೀಪ್&zwnj; ಅವರ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿರುವುದು ಅವರ ಮನೆ &lsquo;ಶ್ರೀನಿಧಿ&rsquo;. ಶಿವಮೊಗ್ಗ ಮೂಲದ ಸುದೀಪ್&zwnj; ಅವರ ತಂದೆ 1991ರಲ್ಲಿ ಈ ಮನೆಯನ್ನು ನಿರ್ಮಿಸಿದ್ದರು ಎನ್ನಲಾಗಿದೆ. ಬೆಂಗಳೂರಿನ ಜೆ.ಪಿ. ನಗರದ ಪುಟ್ಟೇನಹಳ್ಳಿಯಲ್ಲಿರುವ ಇದೇ ಮನೆಯಲ್ಲಿ ಸುದೀಪ್&zwnj; ಈಗಲೂ ವಾಸಿಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಈ ಮನೆಯ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು ₹20 ಕೋಟಿ ಇರಬಹುದು ಎಂಬ ಅಂದಾಜು ಕೂಡ ಇದೆ. ಇದರ ಜೊತೆಗೆ ಮುಂಬೈ ಮತ್ತು ಹೈದರಾಬಾದ್&zwnj;ನಲ್ಲೂ ಸುದೀಪ್&zwnj; ಆಸ್ತಿ ಹೊಂದಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;&lt;strong&gt;ಕಾರುಗಳ ಮೇಲೂ ಕಿಚ್ಚನಿಗೆ ಕ್ರೇಜ್&zwnj;&lt;/strong&gt;&lt;/p&gt;&lt;p&gt;ಸುದೀಪ್&zwnj; ಅವರ ಐಷಾರಾಮಿ ಜೀವನಶೈಲಿಯ ಬಗ್ಗೆ ಮಾತನಾಡುವಾಗ ಅವರ ಕಾರು ಕಲೆಕ್ಷನ್&zwnj; ಕೂಡ ಗಮನ ಸೆಳೆಯುತ್ತದೆ. Range Rover, Jeep Wrangler, Jeep Compass, BMW M3, Jaguar, Hummer H3, Lamborghini Aventador ಮತ್ತು Volvo ಸೇರಿದಂತೆ ದುಬಾರಿ ಕಾರುಗಳು ಅವರ ಕಾರುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ ಎಂದು ವರದಿಗಳಿವೆ. ಸ್ಟೈಲ್&zwnj; ಮತ್ತು ಕಾರುಗಳ ವಿಚಾರದಲ್ಲಿ ಸುದೀಪ್&zwnj; ಅವರ ಆಯ್ಕೆ ಕೂಡ ಅವರ ವ್ಯಕ್ತಿತ್ವದಷ್ಟೇ ವಿಭಿನ್ನ ಎನ್ನಬಹುದು.&lt;/p&gt;&lt;p&gt;&lt;strong&gt;ಸುದೀಪ್&zwnj; ಧರಿಸುವ ಬಟ್ಟೆಗಳ ಹಿಂದಿರುವ ಸ್ಟೈಲ್&zwnj; ಮ್ಯಾನ್&zwnj; ಯಾರು?&lt;/strong&gt;&lt;/p&gt;&lt;p&gt;ಸುದೀಪ್&zwnj; ಅವರ ಫ್ಯಾಷನ್&zwnj; ಸೆನ್ಸ್&zwnj; ಕೂಡ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತದೆ. ಅದರಲ್ಲೂ ಬಿಗ್&zwnj;ಬಾಸ್&zwnj; ಕನ್ನಡದ ವೀಕೆಂಡ್&zwnj; ಎಪಿಸೋಡ್&zwnj;ಗಳಲ್ಲಿ ಅವರು ಕಾಣಿಸಿಕೊಳ್ಳುವ ಪ್ರತಿಯೊಂದು ಲುಕ್&zwnj; ಸೋಷಿಯಲ್&zwnj; ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ. ಸುದೀಪ್&zwnj; ಅವರ ಹಲವು ಲುಕ್&zwnj;ಗಳ ಹಿಂದೆ ಫ್ಯಾಷನ್&zwnj; ಡಿಸೈನರ್&zwnj; ಭರತ್&zwnj; ಸಾಗರ್&zwnj; ಅವರ ಕೈಚಳಕವಿದೆ ಎಂದು ವರದಿಯಾಗಿದೆ. 2024ರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಿಗ್&zwnj;ಬಾಸ್&zwnj; ಕನ್ನಡದ ವೀಕೆಂಡ್&zwnj; ಎಪಿಸೋಡ್&zwnj;ಗಳಿಗೆ ಸುದೀಪ್&zwnj; ಧರಿಸುವ ಹಲವು ಕಾಸ್ಟ್ಯೂಮ್&zwnj;ಗಳನ್ನು ಭರತ್&zwnj; ಸಾಗರ್&zwnj; ವಿನ್ಯಾಸಗೊಳಿಸಿದ್ದಾರೆ. ಭರತ್&zwnj; ಸಾಗರ್&zwnj; ಅವರು ಸುದೀಪ್&zwnj; ಮಾತ್ರವಲ್ಲದೆ ಶಿವರಾಜ್&zwnj;ಕುಮಾರ್&zwnj;, ಉಪೇಂದ್ರ ಮತ್ತು ಗಣೇಶ್&zwnj; ಸೇರಿದಂತೆ ಹಲವು ಕನ್ನಡ ಸ್ಟಾರ್&zwnj;ಗಳ ಜೊತೆ ಕೆಲಸ ಮಾಡಿರುವುದಾಗಿ Cinema Expressಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಸುದೀಪ್&zwnj; ಅವರ ವಾರ್ಡ್&zwnj;ರೋಬ್&zwnj;ನಲ್ಲಿ Gucci, Louis Vuitton!&lt;/strong&gt;&lt;/p&gt;&lt;p&gt;ಸುದೀಪ್&zwnj; ಅವರ ಸ್ಟೈಲ್&zwnj; ಒಂದೇ ಬ್ರ್ಯಾಂಡ್&zwnj;ಗೆ ಸೀಮಿತವಾಗಿಲ್ಲ. ಸಂದರ್ಭಕ್ಕೆ ತಕ್ಕಂತೆ ಭಾರತೀಯ ಡಿಸೈನರ್&zwnj;ಗಳ ಉಡುಪುಗಳ ಜೊತೆಗೆ ಅಂತರರಾಷ್ಟ್ರೀಯ ಲಕ್ಸುರಿ ಬ್ರ್ಯಾಂಡ್&zwnj;ಗಳನ್ನೂ ಬಳಸುತ್ತಾರೆ ಎಂದು ವರದಿಗಳಲ್ಲಿ ಹೇಳಲಾಗಿದೆ. 2025ರ ವರದಿಯೊಂದರಲ್ಲಿ ಅವರ ವಾರ್ಡ್&zwnj;ರೋಬ್&zwnj;ನಲ್ಲಿ Gucci, Louis Vuitton ಮತ್ತು Armani ಮುಂತಾದ ಬ್ರ್ಯಾಂಡ್&zwnj;ಗಳ ಉಡುಪುಗಳಿವೆ ಎಂದು ಉಲ್ಲೇಖಿಸಲಾಗಿತ್ತು. ಅಂದರೆ ಸುದೀಪ್&zwnj; ಅವರ ಫ್ಯಾಷನ್&zwnj; ಎಂದರೆ ಕೇವಲ ದುಬಾರಿ ಬ್ರ್ಯಾಂಡ್&zwnj; ಧರಿಸುವುದಲ್ಲ. ತಮ್ಮ ವ್ಯಕ್ತಿತ್ವಕ್ಕೆ ಹೊಂದುವ ಲುಕ್&zwnj;, ಪಾತ್ರಕ್ಕೆ ತಕ್ಕ ಸ್ಟೈಲಿಂಗ್&zwnj; ಮತ್ತು ಡಿಸೈನರ್&zwnj;ಗಳ ಕ್ರಿಯೇಟಿವಿಟಿಯೂ ಅದರ ಭಾಗವಾಗಿದೆ.&lt;/p&gt;&lt;p&gt;&lt;strong&gt;&lsquo;ವಿಕ್ರಾಂತ್&zwnj; ರೋಣ&rsquo; ಲುಕ್&zwnj;ನಲ್ಲೂ ಕಿಚ್ಚನ ಕ್ರಿಯೇಟಿವಿಟಿ!&lt;/strong&gt;&lt;/p&gt;&lt;p&gt;&lsquo;ವಿಕ್ರಾಂತ್&zwnj; ರೋಣ&rsquo; ಸಿನಿಮಾದಲ್ಲಿ ಸುದೀಪ್&zwnj; ಕಾಣಿಸಿಕೊಂಡ ಸ್ಲೀವ್&zwnj;ಲೆಸ್&zwnj; ಶರ್ಟ್&zwnj;, ಕ್ಯಾಪ್&zwnj; ಸೇರಿದಂತೆ ಹಲವು ಅಂಶಗಳು ಗಮನ ಸೆಳೆದಿದ್ದವು. ವರದಿಗಳ ಪ್ರಕಾರ, ಸಿನಿಮಾದಲ್ಲಿನ ತಮ್ಮ ಪಾತ್ರದ ಲುಕ್&zwnj; ರೂಪಿಸುವಲ್ಲಿ ಸುದೀಪ್&zwnj; ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ಸ್ಲೀವ್&zwnj;ಲೆಸ್&zwnj; ಶರ್ಟ್&zwnj; ಬಳಸುವ ಆಲೋಚನೆ ಅವರದ್ದೇ ಎನ್ನಲಾಗಿದೆ. ಇದು ಸುದೀಪ್&zwnj; ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ ಪಾತ್ರದ ಪ್ರೆಸೆಂಟೇಶನ್&zwnj; ವಿಚಾರದಲ್ಲೂ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ.&lt;/p&gt;&lt;h2&gt;&lt;strong&gt;ಒಂದೇ ಲುಕ್&zwnj;ಗೆ ₹2 ಲಕ್ಷದಷ್ಟು ಖರ್ಚು?&lt;/strong&gt;&lt;/h2&gt;&lt;p&gt;ಬಿಗ್&zwnj;ಬಾಸ್&zwnj; ಕನ್ನಡದ 10ನೇ ಸೀಸನ್&zwnj;ನಲ್ಲಿ ಸುದೀಪ್&zwnj; ಧರಿಸಿದ್ದ ಒಂದು ಆಫ್&zwnj;-ವೈಟ್&zwnj; ಜಾಕೆಟ್&zwnj; ಮತ್ತು ಸ್ನೀಕರ್ಸ್&zwnj; ಕೂಡ ಸಾಕಷ್ಟು ಸುದ್ದಿಯಾಗಿತ್ತು. ವರದಿಯ ಪ್ರಕಾರ, ಆ ಜಾಕೆಟ್&zwnj;ನ ಬೆಲೆ ಸುಮಾರು ₹97,405 ಹಾಗೂ ಸ್ನೀಕರ್ಸ್&zwnj;ನ ಬೆಲೆ ಸುಮಾರು ₹94,700 ಎಂದು ಉಲ್ಲೇಖಿಸಲಾಗಿತ್ತು. ಎರಡನ್ನೂ ಸೇರಿಸಿದರೆ ಆ ಲುಕ್&zwnj;ನ ಬೆಲೆ ಸುಮಾರು ₹1.92 ಲಕ್ಷ. ಹೀಗಾಗಿ ಕಿಚ್ಚ ಸುದೀಪ್&zwnj; ಅವರ ಸ್ಟೈಲ್&zwnj; ಸ್ಟಾರ್&zwnj;ಡಮ್&zwnj;ನ ಮತ್ತೊಂದು ಭಾಗವಾಗಿರುವುದು ಸ್ಪಷ್ಟ. ಆದರೆ ಅವರ ಫ್ಯಾಷನ್&zwnj; ಅನ್ನು ಕೇವಲ ಬೆಲೆಯ ಮೂಲಕ ಅಳೆಯಲು ಸಾಧ್ಯವಿಲ್ಲ. ತಮ್ಮದೇ ಆದ ಸ್ಟೈಲ್&zwnj; ಸೆನ್ಸ್&zwnj;, ಪಾತ್ರಕ್ಕೆ ತಕ್ಕ ಲುಕ್&zwnj; ಮತ್ತು ವಿಭಿನ್ನ ಪ್ರಯೋಗಗಳೇ ಅವರ ಫ್ಯಾಷನ್&zwnj;ನ ವಿಶೇಷತೆ. ಒಟ್ಟಿನಲ್ಲಿ, ಕಿಚ್ಚ ಸುದೀಪ್&zwnj; ಅವರ ಪಯಣ ಕೇವಲ ಕೋಟಿ ಕೋಟಿ ಆಸ್ತಿ ಅಥವಾ ಐಷಾರಾಮಿ ಕಾರುಗಳ ಕಥೆಯಲ್ಲ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಕಟ್ಟಿಕೊಂಡು, ನಟನಿಂದ ನಿರ್ದೇಶಕ, ನಿರ್ಮಾಪಕ ಮತ್ತು ಕಿರುತೆರೆ ನಿರೂಪಕರವರೆಗೆ ಬೆಳೆದ ಒಬ್ಬ ಬಹುಮುಖ ಪ್ರತಿಭೆಯ ಯಶೋಗಾಥೆಯೂ ಹೌದು.&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ಸುದೀಪ್&zwnj; ಅವರ ಆಸ್ತಿ, ಆದಾಯ ಹಾಗೂ ಫ್ಯಾಷನ್&zwnj; ವಸ್ತುಗಳ ಬೆಲೆಗೆ ಸಂಬಂಧಿಸಿದ ಅಂಕಿ-ಅಂಶಗಳು ವಿವಿಧ ಮಾಧ್ಯಮ ವರದಿಗಳ ಆಧಾರದ ಮೇಲಿನ ಅಂದಾಜುಗಳು. ಇವುಗಳನ್ನು ಸುದೀಪ್&zwnj; ಅವರ ಅಧಿಕೃತವಾಗಿ ದೃಢೀಕರಿಸಲಾದ ಆಸ್ತಿ ಅಥವಾ ಆದಾಯದ ವಿವರಗಳೆಂದು ಪರಿಗಣಿಸಬಾರದು. ಕಾಲಾನುಸಾರ ಮಾರುಕಟ್ಟೆ ಮೌಲ್ಯ ಹಾಗೂ ವಸ್ತುಗಳ ಬೆಲೆಗಳಲ್ಲಿ ಬದಲಾವಣೆ ಸಾಧ್ಯ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kichcha-sudeep-net-worth-income-fashion-luxury-house-and-car-collection-gvd/articleshow-bwe749p"/>
        </item>
        <item>
            <title><![CDATA[ದರ್ಶನ್‌ಗೆ ಮತ್ತೆ ಹಿನ್ನಡೆ.. ಕೋರ್ಟ್‌ನಿಂದ ಮೂರು ಪ್ರಮುಖ ಆದೇಶ..!]]></title>
            <link>https://kannada.asianetnews.com/bengaluru-urban/renukaswamy-case-another-setback-for-actor-darshan-plea-for-personal-appearance-dismissed-gkn/articleshow-nrg2ds2</link>
            <guid isPermaLink="true">https://kannada.asianetnews.com/bengaluru-urban/renukaswamy-case-another-setback-for-actor-darshan-plea-for-personal-appearance-dismissed-gkn/articleshow-nrg2ds2</guid>
            <pubDate>Mon, 17 Aug 2026 16:54:56 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಖುದ್ದು ಕೋರ್ಟ್&zwnj;ಗೆ ಹಾಜರಾಗಲು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ದೊಡ್ಡ ಹಿನ್ನಡೆ ನೀಡಿದೆ. ಬದಲಾಗಿ, ವಿಚಾರಣೆಗೆ ಸ್ಪಷ್ಟ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಹಾಗೂ ವಕೀಲರೊಂದಿಗೆ ಗೌಪ್ಯ ಮಾತುಕತೆಗೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07qec1q5agxbk10hw2j8a51,imgname-actor-darshan-thoogudeepa-1786965864498.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ತಮ್ಮನ್ನು ವಿಚಾರಣೆಯ ವೇಳೆ ಖುದ್ದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.&lt;/p&gt;&lt;h2&gt;&lt;strong&gt;ನ್ಯಾಯಾಲಯದ ಆದೇಶವೇನು?&lt;/strong&gt;&lt;/h2&gt;&lt;p&gt;ನ್ಯಾಯಾಧೀಶರಾದ ಸುಜಾತ ಎಂ. ಸಂಬ್ರಾಣಿ ಅವರು ಈ ಆದೇಶವನ್ನು ಹೊರಡಿಸಿದ್ದು, ದರ್ಶನ್ ಅವರನ್ನು ಭೌತಿಕವಾಗಿ (ಖುದ್ದು) ಹಾಜರುಪಡಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಆರೋಪಿಗಳ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಜೈಲು ಅಧಿಕಾರಿಗಳಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಮೊದಲನೇಯದು ಆರೋಪಿಗಳು ತಮ್ಮ ವಕೀಲರನ್ನು ಭೇಟಿ ಮಾಡಲು ಮತ್ತು ರಹಸ್ಯವಾಗಿ ಮಾತುಕತೆ ನಡೆಸಲು ಸೂಕ್ತ ಅವಕಾಶ ಕಲ್ಪಿಸಬೇಕು. ಎರಡನೇಯದು ವಿಡಿಯೋ ಕಾನ್ಫರೆನ್ಸ್ (VC) ಮೂಲಕ ವಿಚಾರಣೆ ನಡೆಸುವಾಗ ಆಡಿಯೋ ಮತ್ತು ವಿಡಿಯೋ ಗುಣಮಟ್ಟ ಅತ್ಯಂತ ಸ್ಪಷ್ಟವಾಗಿರಬೇಕು. ಇದರಲ್ಲಿ ಯಾವುದೇ ತಾಂತ್ರಿಕ ಅಡಚಣೆ ಇರಬಾರದು. ಮೂರನೇಯದರು ಈ ಆದೇಶ ಪಾಲನೆಯಾಗುತ್ತಿದೆಯೇ ಎಂಬ ಬಗ್ಗೆ ನಿಗಾ ವಹಿಸಲು ಸಿಟಿ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್&zwnj;ಗೆ ಜವಾಬ್ದಾರಿ ನೀಡಲಾಗಿದೆ.&lt;/p&gt;&lt;h2&gt;&lt;strong&gt;ದರ್ಶನ್&zwnj;ಗೆ ಹಿನ್ನಡೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ವಿಚಾರಣೆಯ ವೇಳೆ ಎಸ್&zwnj;ಪಿಪಿ ಪ್ರಸನ್ನ ಕುಮಾರ್ ಅವರು ಬಲವಾದ ವಾದ ಮಂಡಿಸಿದ್ದರು. ಈ ಹಿಂದೆ ದರ್ಶನ್ ಅವರನ್ನು ಕೋರ್ಟ್&zwnj;ಗೆ ಕರೆತಂದಾಗ ಉಂಟಾದ ಅಸ್ತವ್ಯಸ್ತ ಪರಿಸ್ಥಿತಿಯನ್ನು ಅವರು ವಿವರಿಸಿದ್ದರು. ದರ್ಶನ್ ಅವರನ್ನು ನೋಡಲು ಸಾವಿರಾರು ಜನ ಜಮಾಯಿಸುವುದರಿಂದ ಕೋರ್ಟ್ ಆವರಣದಲ್ಲಿ ಉಸಿರಾಡಲು ಕಷ್ಟವಾಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ವರಮಹಾಲಕ್ಷ್ಮಿ, ಈದ್-ಮಿಲಾದ್ ಮತ್ತು ಗಣೇಶ ಹಬ್ಬಗಳ ಕಾರಣ ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಹೆಚ್ಚಿನ ಬಂದೋಬಸ್ತ್ ಒದಗಿಸುವುದು ಕಷ್ಟ.&lt;/p&gt;&lt;p&gt;ಹೊಸ ಕಾನೂನು (BNSS) ಮತ್ತು ಹೈಕೋರ್ಟ್ ನಿಯಮಗಳ ಪ್ರಕಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅವಕಾಶವಿದೆ ಎಂದು ಅವರು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು, ಸಾಕ್ಷಿಗಳ ವಿಚಾರಣೆ ವೇಳೆ ವಕೀಲರಿಗೆ ಮಾಹಿತಿ ನೀಡಲು ಆರೋಪಿ ಪಕ್ಕದಲ್ಲಿರುವುದು ಅಗತ್ಯ. ಜೈಲಿನಲ್ಲಿ ಭೇಟಿಯಾದಾಗ ಎಲ್ಲವನ್ನೂ ಚರ್ಚಿಸಲು ಸಾಧ್ಯವಾಗುವುದಿಲ್ಲ ಎಂದು ವಾದಿಸಿದರೂ ಕೋರ್ಟ್ ಅದನ್ನು ಪುರಸ್ಕರಿಸಲಿಲ್ಲ.&lt;/p&gt;&lt;h2&gt;&lt;strong&gt;ಪ್ರದೂಷ್ ಅರ್ಜಿ; ಪ್ರತ್ಯೇಕ ವಿಚಾರಣೆ&lt;/strong&gt;&lt;/h2&gt;&lt;p&gt;ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೂಷ್ (A14) ತಾನು 'ಮಾಫಿ ಸಾಕ್ಷಿ' (Approver) ಆಗುವುದಾಗಿ ಅರ್ಜಿ ಸಲ್ಲಿಸಿದ್ದಾರೆ. ತನಗೆ ಪ್ರಕರಣದ ಸಂಪೂರ್ಣ ಮಾಹಿತಿ ಇದ್ದು, ಸ್ವಯಂಪ್ರೇರಿತವಾಗಿ ಕ್ಷಮಾದಾನ ಕೋರುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಎಲ್ಲರೊಂದಿಗೆ ವಿಡಿಯೋ ಕಾನ್ಫರೆನ್ಸ್&zwnj;ನಲ್ಲಿ ಭಾಗಿಯಾಗುತ್ತಿದ್ದ ಪ್ರದೂಷ್ ಅವರನ್ನು ಈಗ ಕೋರ್ಟ್ ಸೂಚನೆಯಂತೆ ಪ್ರತ್ಯೇಕವಾಗಿ ಹಾಜರುಪಡಿಸಲಾಯಿತು. ಇನ್ನುಳಿದಂತೆ A12 ಆರೋಪಿ ಲಕ್ಷ್ಮಣ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಒಟ್ಟಾರೆಯಾಗಿ ಜೈಲಿನಿಂದ ಹೊರಬಂದು ಕೋರ್ಟ್ ಕಟಕಟೆಯಲ್ಲಿ ನಿಂತು ವಿಚಾರಣೆ ಎದುರಿಸಬೇಕೆಂಬ ದರ್ಶನ್ ಆಸೆಗೆ ಈಗ ತಣ್ಣೀರು ಸುರಿದಂತಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/renukaswamy-case-another-setback-for-actor-darshan-plea-for-personal-appearance-dismissed-gkn/articleshow-nrg2ds2"/>
        </item>
        <item>
            <title><![CDATA[DK ಶಿವಕುಮಾರ್ ಮತ್ತು ಪ್ರಕಾಶ್ ರಾಜ್ ದಿಢೀರ್ ಭೇಟಿ.. ಭಾರೀ ಕುತೂಹಲ]]></title>
            <link>https://kannada.asianetnews.com/politics/actor-prakash-raj-met-cm-dk-shivakumar-in-bangaluru-matter-is-sir-gkn/articleshow-tnwo4m3</link>
            <guid isPermaLink="true">https://kannada.asianetnews.com/politics/actor-prakash-raj-met-cm-dk-shivakumar-in-bangaluru-matter-is-sir-gkn/articleshow-tnwo4m3</guid>
            <pubDate>Mon, 17 Aug 2026 17:31:56 +0530</pubDate>
            <description><![CDATA[&lt;p&gt;ನಟ ಪ್ರಕಾಶ್ ರಾಜ್ ನೇತೃತ್ವದ ನಾಗರಿಕ ಸಂಘಟನೆಗಳ ನಿಯೋಗ ಡಿಕೆಶಿ ಅವರನ್ನು ಭೇಟಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿತು. ಮತದಾನದ ಹಕ್ಕನ್ನು ರಕ್ಷಿಸಲು ಈ ಪ್ರಕ್ರಿಯೆಯ ಕಾಲಾವಕಾಶವನ್ನು ವಿಸ್ತರಿಸುವಂತೆ ಮತ್ತು ಲೋಪದೋಷಗಳನ್ನು ಸರಿಪಡಿಸುವಂತೆ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07sfgwfjab2cybxyfnz7w4x,imgname-prakash-raj-meet-cm-dk-shivakumar-1786967999375.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಇಂದು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ದಿಢೀರ್ ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. 'ಎದ್ದೇಳು ಕರ್ನಾಟಕ' ಸಂಘಟನೆಯ ನಿಯೋಗದೊಂದಿಗೆ ಆಗಮಿಸಿದ್ದ ಪ್ರಕಾಶ್ ರಾಜ್, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಗಂಭೀರ ಲೋಪಗಳ ಕುರಿತು ಚರ್ಚೆ ನಡೆಸಿದರು.&lt;/p&gt;&lt;h2&gt;&lt;strong&gt;ಗಮನ ಸೆಳೆದ ಪ್ರಮುಖರ ಭೇಟಿ&lt;/strong&gt;&lt;/h2&gt;&lt;p&gt;ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ.ಅಥೀಕ್ ಉಪಸ್ಥಿತರಿದ್ದರು. ಇತ್ತೀಚೆಗೆ ವೋಟರ್ ಐಡಿ ವಿವಾದ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದ ಪ್ರಕಾಶ್ ರಾಜ್ ಅವರ ಈ ಭೇಟಿ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ SIR (Special Integrated Revision) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಮಾಯವಾಗುವ ಆತಂಕ ಎದುರಾಗಿದೆ ಎಂದು ನಿಯೋಗವು ಸಿಎಂಗೆ ಮನವರಿಕೆ ಮಾಡಿಕೊಟ್ಟಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ನಿಯೋಗದ ಪ್ರಮುಖ ಆಕ್ಷೇಪಗಳು&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಲಕ್ಷಾಂತರ ಹೆಸರು ಡಿಲೀಟ್&lt;/strong&gt;: ಕರ್ನಾಟಕದ ಸುಮಾರು 1.9 ಕೋಟಿಗೂ ಹೆಚ್ಚು ಮತದಾರರ ಹೆಸರುಗಳ ಪರಿಷ್ಕರಣೆ ನಡೆಯುತ್ತಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಸಹಜವಾಗಿ ಹೆಚ್ಚಿನ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಡಲಾಗುತ್ತಿದೆ.&lt;/li&gt; &lt;li&gt;&lt;strong&gt;ಶೇ. 60ರಷ್ಟು ಡಿಲೀಷನ್ (deletion): &lt;/strong&gt;ರಾಜ್ಯದ ಸುಮಾರು 3 ಸಾವಿರಕ್ಕೂ ಹೆಚ್ಚು ಬೂತ್&zwnj;ಗಳಲ್ಲಿ ಶೇ. 60ಕ್ಕೂ ಅಧಿಕ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/li&gt; &lt;li&gt;&lt;strong&gt;ಬದುಕಿರುವವರೇ 'ಡೆಡ್'!:&lt;/strong&gt; ಅಚ್ಚರಿಯೆಂದರೆ, ಬದುಕಿರುವವರನ್ನೇ 'ಮೃತರು' (Dead) ಎಂದು ತೋರಿಸಲಾಗುತ್ತಿದೆ. ಇನ್ನು ಬಾಡಿಗೆ ಮನೆ ಬದಲಿಸಿದವರು ಅಥವಾ ಉದ್ಯೋಗಕ್ಕಾಗಿ ಬೇರೆಡೆ ಹೋದವರನ್ನು 'ಗೈರು ಹಾಜರು' (Absent) ಎಂದು ತೋರಿಸಿ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.&lt;/li&gt; &lt;li&gt;&lt;strong&gt;ತರಬೇತಿ ಇಲ್ಲದ ಬಿಎಲ್&zwnj;ಒಗಳು:&lt;/strong&gt; BLOಗಳಿಗೆ ಸರಿಯಾದ ತರಬೇತಿ ನೀಡದೆ ತರಾತುರಿಯಲ್ಲಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಒಂದು ತಿಂಗಳ ಅಲ್ಪಾವಧಿಯಲ್ಲಿ ಮನೆಮನೆಗೆ ತೆರಳಿ ನಿಖರ ಪರಿಷ್ಕರಣೆ ಮಾಡುವುದು ಅಸಾಧ್ಯ ಎಂದು ಸಂಘಟನೆ ದೂರಿದೆ.&lt;/li&gt;&lt;/ul&gt;&lt;h2&gt;&lt;strong&gt;ಸಿಎಂಗೆ ಸಲ್ಲಿಸಿದ ಪ್ರಮುಖ ಬೇಡಿಕೆಗಳು&lt;/strong&gt;&lt;/h2&gt;&lt;p&gt;&lt;strong&gt;ಸಮಯ ವಿಸ್ತರಣೆ: &lt;/strong&gt;ತರಾತುರಿಯಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ಕನಿಷ್ಠ ಮೂರು ತಿಂಗಳು ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಬೇಕು.&lt;/p&gt;&lt;p&gt;&lt;strong&gt;ಫಾರ್ಮ್ 6 ಮತ್ತು 8 ವಿತರಣೆ:&lt;/strong&gt; ಮತ್ತೊಮ್ಮೆ ಮನೆಮನೆಗೆ ತೆರಳಿ ಸ್ಥಳಾಂತರಗೊಂಡ ಮತದಾರರಿಗೆ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಅವಕಾಶ ನೀಡಬೇಕು.&lt;/p&gt;&lt;p&gt;&lt;strong&gt;ಜಾಗೃತಿ ಅಭಿಯಾನ:&lt;/strong&gt; ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಸರ್ಕಾರದಿಂದಲೇ ವ್ಯಾಪಕ ಜನಜಾಗೃತಿ ಅಭಿಯಾನ ನಡೆಸಬೇಕು.&lt;/p&gt;&lt;p&gt;ಅರ್ಹ ಮತದಾರರ ಹಕ್ಕು ಕಸಿದುಕೊಳ್ಳಲು ಕರ್ನಾಟಕ ಒಪ್ಪುವುದಿಲ್ಲ ಎಂದು ಈ ಸಂದರ್ಭದಲ್ಲಿ ನಿಯೋಗವು ಖಡಕ್ ಆಗಿ ಹೇಳಿದೆ. ಪ್ರಕಾಶ್ ರಾಜ್ ಅವರ ಈ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/actor-prakash-raj-met-cm-dk-shivakumar-in-bangaluru-matter-is-sir-gkn/articleshow-tnwo4m3"/>
        </item>
        <item>
            <title><![CDATA[‘KGF’, ‘ಧುರಂಧರ್‌’ ಅಂತಹ ಬ್ಲಾಕ್‌ಬಸ್ಟರ್‌ ಕೊಟ್ಟರೂ ಈ ಇಬ್ಬರು ನಟಿಯರ ಕರಿಯರ್‌ ಯಾಕೆ ಬದಲಾಗಲಿಲ್ಲ?]]></title>
            <link>https://kannada.asianetnews.com/entertainment/srinidhi-shetty-and-sara-arjun-big-blockbusters-but-limited-career-growth-gvd/articleshow-p3754ip</link>
            <guid isPermaLink="true">https://kannada.asianetnews.com/entertainment/srinidhi-shetty-and-sara-arjun-big-blockbusters-but-limited-career-growth-gvd/articleshow-p3754ip</guid>
            <pubDate>Mon, 17 Aug 2026 17:08:28 +0530</pubDate>
            <description><![CDATA[&lt;p&gt;&lsquo;ಕೆಜಿಎಫ್&zwnj;&rsquo;, &lsquo;ಧುರಂಧರ್&zwnj;&rsquo; ಅಂತಹ ಪ್ಯಾನ್ ಇಂಡಿಯಾ ಬ್ಲಾಕ್&zwnj;ಬಸ್ಟರ್&zwnj; ಸಿನಿಮಾಗಳಲ್ಲಿ ನಟಿಸಿದ ಶ್ರೀನಿಧಿ ಶೆಟ್ಟಿ ಮತ್ತು ಸಾರಾ ಅರ್ಜುನ್&zwnj; ಅವರ ಕರಿಯರ್&zwnj; ನಿರೀಕ್ಷಿತ ಮಟ್ಟದಲ್ಲಿ ಬೆಳೆಯದಿರುವುದಕ್ಕೆ ಕಾರಣವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07qf1mr8byrtdgzbjg8gz8m,imgname-nkn-1786965886616.png" type="image/jpeg" height="390" width="690"/>
            <content:encoded><![CDATA[&lt;p&gt;ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅವಕಾಶ ಸಿಗುವುದು, ಅದರಲ್ಲೂ ಆ ಸಿನಿಮಾ ಬಾಕ್ಸ್&zwnj; ಆಫೀಸ್&zwnj;ನಲ್ಲಿ ಭರ್ಜರಿ ಗೆಲುವು ಕಾಣುವುದು ಅಂದರೆ ನಟಿಯರ ಕರಿಯರ್&zwnj;ಗೆ ದೊಡ್ಡ ತಿರುವು ಸಿಗುತ್ತದೆ ಎಂಬ ನಿರೀಕ್ಷೆ ಸಹಜ. ಆದರೆ ಕೆಲವೊಮ್ಮೆ ಸಿನಿಮಾ ಎಷ್ಟೇ ದೊಡ್ಡ ಮಟ್ಟದಲ್ಲಿ ಸಕ್ಸಸ್&zwnj; ಕಂಡರೂ, ಅದರ ಕ್ರೆಡಿಟ್&zwnj; ಬಹುತೇಕ ಹೀರೋಗಳ ಖಾತೆಗೆ ಹೋಗುತ್ತದೆ. ಪರಿಣಾಮ, ಅದೇ ಸಿನಿಮಾದಲ್ಲಿ ನಟಿಸಿದ ನಾಯಕಿಯರಿಗೆ ನಿರೀಕ್ಷಿಸಿದಷ್ಟು ಅವಕಾಶಗಳು ಸಿಗುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಈಗ ಇಬ್ಬರು ನಟಿಯರ ಹೆಸರುಗಳು ಕೇಳಿಬರುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಬ್ಲಾಕ್&zwnj;ಬಸ್ಟರ್&zwnj; ಸಿನಿಮಾಗಳಲ್ಲಿ ನಟಿಸಿದ್ದರೂ, ಆ ಸಕ್ಸಸ್&zwnj; ನಂತರ ಅವರ ಕರಿಯರ್&zwnj; ಮಾತ್ರ ನಿರೀಕ್ಷಿಸಿದ ವೇಗದಲ್ಲಿ ಮುಂದೆ ಸಾಗಲಿಲ್ಲ.&lt;/p&gt;&lt;p&gt;&lt;strong&gt;&lsquo;ಕೆಜಿಎಫ್&zwnj;&rsquo; ಸಕ್ಸಸ್&zwnj;... ಶ್ರೀನಿಧಿ ಶೆಟ್ಟಿಗೆ ಮಾತ್ರ ಸಿಗದ ಕ್ರೇಜ್&zwnj;!&lt;/strong&gt;&lt;/p&gt;&lt;p&gt;ಯಶ್&zwnj; ಅಭಿನಯದ &lsquo;ಕೆಜಿಎಫ್&zwnj;&rsquo; ಸಿನಿಮಾ ಭಾರತೀಯ ಬಾಕ್ಸ್&zwnj; ಆಫೀಸ್&zwnj;ನಲ್ಲಿ ಭರ್ಜರಿ ಸದ್ದು ಮಾಡಿದ್ದು ಗೊತ್ತೇ ಇದೆ. ಈ ಚಿತ್ರದ ಬಳಿಕ ಯಶ್&zwnj; ಪ್ಯಾನ್ ಇಂಡಿಯಾ ಸ್ಟಾರ್&zwnj; ಆಗಿ ತಮ್ಮ ಇಮೇಜ್&zwnj; ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ಆದರೆ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡ ಶ್ರೀನಿಧಿ ಶೆಟ್ಟಿಗೆ ಮಾತ್ರ ಆ ಮಟ್ಟದ ಸಕ್ಸಸ್&zwnj; ಕರಿಯರ್&zwnj;ಗೆ ತಿರುವು ನೀಡಲಿಲ್ಲ ಎಂಬ ಮಾತು ಕೇಳಿಬರುತ್ತಿದೆ. &lsquo;ಕೆಜಿಎಫ್&zwnj;&rsquo;ನಂತಹ ದೊಡ್ಡ ಸಿನಿಮಾದ ಭಾಗವಾಗಿದ್ದರೂ, ನಂತರ ಅವರಿಗೆ ನಿರೀಕ್ಷಿಸಿದಷ್ಟು ದೊಡ್ಡ ಮಟ್ಟದ ಪ್ರಾಜೆಕ್ಟ್&zwnj;ಗಳು ಸಿಗಲಿಲ್ಲ ಎನ್ನಲಾಗುತ್ತಿದೆ. ಸದ್ಯ ಅವರು ವೆಂಕಟೇಶ್&zwnj; ಜೊತೆ &lsquo;ಆದರ್ಶ ಕುಟುಂಬಂ&rsquo; ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕವಾದರೂ ತಮ್ಮ ಕರಿಯರ್&zwnj;ಗೆ ಹೊಸ ತಿರುವು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಶ್ರೀನಿಧಿ.&lt;/p&gt;&lt;p&gt;&lt;strong&gt;&lsquo;ಧುರಂಧರ್&zwnj;&rsquo; ಬ್ಲಾಕ್&zwnj;ಬಸ್ಟರ್&zwnj;... ಸಾರಾ ಅರ್ಜುನ್&zwnj;ಗೆ ಮಾತ್ರ ಅವಕಾಶಗಳ ಕೊರತೆ!&lt;/strong&gt;&lt;/p&gt;&lt;p&gt;ಇನ್ನು ಮತ್ತೊಂದು ಉದಾಹರಣೆಯಾಗಿ ಸಾರಾ ಅರ್ಜುನ್&zwnj; ಹೆಸರು ಕೇಳಿಬರುತ್ತಿದೆ. ರಣವೀರ್&zwnj; ಸಿಂಗ್&zwnj; ಅಭಿನಯದ &lsquo;ಧುರಂಧರ್&zwnj;&rsquo; ಸಿನಿಮಾ ಬಾಕ್ಸ್&zwnj; ಆಫೀಸ್&zwnj;ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಚಿತ್ರದ ಯಶಸ್ಸು ರಣವೀರ್&zwnj; ಸಿಂಗ್&zwnj; ಅವರ ಇಮೇಜ್&zwnj;ಗೂ ಮತ್ತಷ್ಟು ಬಲ ನೀಡಿತು. ಆದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಸಾರಾ ಅರ್ಜುನ್&zwnj; ಅವರ ಕರಿಯರ್&zwnj;ಗೆ ಮಾತ್ರ ಆ ಸಕ್ಸಸ್&zwnj; ನಿರೀಕ್ಷಿಸಿದ ಮಟ್ಟದ ಪ್ರಯೋಜನ ನೀಡಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಗಮನ ಸೆಳೆದಿದ್ದರೂ, ನಂತರ ಸಾರಾ ಅರ್ಜುನ್&zwnj;ಗೆ ಹೇಳಿಕೊಳ್ಳುವಂತಹ ಹೊಸ ಪ್ರಾಜೆಕ್ಟ್&zwnj;ಗಳು ಸಿಗದಿರುವುದು ಅಚ್ಚರಿ ಮೂಡಿಸಿದೆ.&lt;/p&gt;&lt;h2&gt;&lt;strong&gt;ಹೀರೋಗಳ ಸಕ್ಸಸ್&zwnj;... ನಾಯಕಿಯರ ಕರಿಯರ್&zwnj;ಗೆ ಯಾಕೆ ಆಗಲ್ಲ?&lt;/strong&gt;&lt;/h2&gt;&lt;p&gt;ಒಂದು ದೊಡ್ಡ ಸಿನಿಮಾ ಹಿಟ್&zwnj; ಆಗುವುದರಿಂದ ಮಾತ್ರ ನಾಯಕಿಯರ ಕರಿಯರ್&zwnj; ಸ್ಥಿರವಾಗುತ್ತದೆ ಎನ್ನಲು ಸಾಧ್ಯವಿಲ್ಲ ಎಂಬುದಕ್ಕೆ ಶ್ರೀನಿಧಿ ಶೆಟ್ಟಿ ಮತ್ತು ಸಾರಾ ಅರ್ಜುನ್&zwnj; ಅವರ ಉದಾಹರಣೆ ಚರ್ಚೆಗೆ ಬಂದಿದೆ. ಬಹುತೇಕ ಸಂದರ್ಭಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಯಶಸ್ಸಿನ ಸಂಪೂರ್ಣ ಕ್ರೆಡಿಟ್&zwnj; ಹೀರೋಗಳ ಇಮೇಜ್&zwnj;ಗೆ ಹೋಗುತ್ತದೆ. ನಾಯಕಿಯರ ಪಾತ್ರಗಳು ಸಿನಿಮಾದಲ್ಲಿ ಗಮನ ಸೆಳೆದರೂ, ಅದೇ ಮಟ್ಟದ ಜನಪ್ರಿಯತೆ ಮತ್ತು ಮುಂದಿನ ಅವಕಾಶಗಳು ಸಿಗದೇ ಹೋಗಬಹುದು.&lt;/p&gt;&lt;p&gt;ಆದರೆ ಇದನ್ನು ಸಂಪೂರ್ಣವಾಗಿ ಅದೃಷ್ಟದ ಕೊರತೆ ಅಥವಾ ಪ್ಲಾನಿಂಗ್&zwnj; ಸಮಸ್ಯೆ ಎಂದು ಹೇಳುವುದು ಕಷ್ಟ. ಸರಿಯಾದ ಕಥೆ, ಪಾತ್ರಗಳ ಆಯ್ಕೆ, ಮುಂದಿನ ಸಿನಿಮಾಗಳ ಯೋಜನೆ ಮತ್ತು ಅವಕಾಶಗಳು-ಇವೆಲ್ಲವೂ ನಟಿಯರ ಕರಿಯರ್&zwnj; ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಬಾಕ್ಸ್&zwnj; ಆಫೀಸ್&zwnj;ನಲ್ಲಿ ಬ್ಲಾಕ್&zwnj;ಬಸ್ಟರ್&zwnj; ಕೊಟ್ಟಿದ್ದರೂ, ಅದರ ನಂತರ ಕರಿಯರ್&zwnj; ಯಾವ ದಿಕ್ಕಿಗೆ ಸಾಗುತ್ತದೆ ಎಂಬುದನ್ನು ಸಮಯವೇ ನಿರ್ಧರಿಸುತ್ತದೆ. ಶ್ರೀನಿಧಿ ಶೆಟ್ಟಿ ಮತ್ತು ಸಾರಾ ಅರ್ಜುನ್&zwnj; ಅವರ ಮುಂದಿನ ಸಿನಿಮಾಗಳು ಅವರ ಕರಿಯರ್&zwnj;ಗೆ ಹೊಸ ತಿರುವು ನೀಡುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/srinidhi-shetty-and-sara-arjun-big-blockbusters-but-limited-career-growth-gvd/articleshow-p3754ip"/>
        </item>
        <item>
            <title><![CDATA[ಒಬ್ಬರು ಅಜ್ಜಿಯಾಗ್ತಿದ್ದಾರೆ, ಮತ್ತೊಬ್ಬರು 25ರ ಯುವಕನ ಜೊತೆ ಡೇಟಿಂಗ್! ಪ್ರಿಯಾಂಕಾ ಪೋಸ್ಟ್ ಸಖತ್ ವೈರಲ್]]></title>
            <link>https://kannada.asianetnews.com/cine-world/priyanka-chopras-hilarious-post-on-turning-40-goes-viral/articleshow-4i9ozv4</link>
            <guid isPermaLink="true">https://kannada.asianetnews.com/cine-world/priyanka-chopras-hilarious-post-on-turning-40-goes-viral/articleshow-4i9ozv4</guid>
            <pubDate>Mon, 17 Aug 2026 16:12:04 +0530</pubDate>
            <description><![CDATA[&lt;p&gt;Priyanka Chopra: ಪ್ರಿಯಾಂಕಾ ಚೋಪ್ರಾ 40 ನೇ ವಯಸ್ಸಿನಲ್ಲಿ ಜೀವನದ ವಾಸ್ತವಗಳ ಬಗ್ಗೆ ಒಂದು ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದು, ಅವರು ತಮ್ಮ ಕುಟುಂಬದೊಂದಿಗೆ ಕಳೆದ ಸುಂದರ ಕ್ಷಣಗಳ ಒಂದು ನೋಟವನ್ನು ಸಹ ಹಂಚಿಕೊಂಡಿದ್ದಾರೆ. ಸದ್ಯ ನಟಿಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07n0ja20hx34g6tz8axhe1g,imgname-priyanka-chopra-1786963315008.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾಂಕಾ ಚೋಪ್ರಾ ಪೋಸ್ಟ್ ವೈರಲ್&lt;/strong&gt;&lt;/h2&gt;&lt;p&gt;ಬಾಲಿವುಡ್&zwnj;ನ &lsquo;ದೇಸಿ ಗರ್ಲ್&rsquo; ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಜೀವನದ ಈ ವಿಶೇಷ ಘಟ್ಟವನ್ನು ಅವರು ಅತ್ಯಂತ ಮೋಜಿನ ರೀತಿಯಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಪ್ರಿಯಾಂಕಾ ತಮ್ಮ ಇನ್&zwnj;ಸ್ಟಾಗ್ರಾಂನಲ್ಲಿ ಜೀವನದ ಹಲವು ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದು, ಬ್ಯುಸಿ ಶೆಡ್ಯೂಲ್, ಕುಟುಂಬದೊಂದಿಗೆ ಕಳೆದ ಸಮಯ ಹಾಗೂ 40ರ ವಯಸ್ಸಿನ ಮಜಾದಾಯಕ ವಾಸ್ತವವನ್ನು ಒಂದೇ ಪೋಸ್ಟ್&zwnj;ನಲ್ಲಿ ತೋರಿಸಿದ್ದಾರೆ.&lt;/p&gt;&lt;h3&gt;&lt;strong&gt;ಯಾರೋ ಅಜ್ಜಿಯಾಗಿದ್ದಾರೆ, ಮತ್ತೊಬ್ಬರು 25 ವರ್ಷದ ಯುವಕನನ್ನು ಡೇಟ್ ಮಾಡುತ್ತಿದ್ದಾರೆ!&lt;/strong&gt;&lt;/h3&gt;&lt;p&gt;ಪ್ರಿಯಾಂಕಾ ಇನ್&zwnj;ಸ್ಟಾಗ್ರಾಂ ಸ್ಟೋರಿಯಲ್ಲಿ 40ರ ವಯಸ್ಸಿನ ಬಗ್ಗೆ ತುಂಬಾ ರಿಲೇಟೆಬಲ್ ಹಾಗೂ ಮಜವಾಗಿರುವ ನೋಟ್ ಹಂಚಿಕೊಂಡಿದ್ದಾರೆ. ತಮ್ಮದೇ ವಯಸ್ಸಿನ ಒಬ್ಬ ಸ್ನೇಹಿತೆ ಅಜ್ಜಿಯಾಗಿದ್ದರೆ, ಮತ್ತೊಬ್ಬ ಸ್ನೇಹಿತೆಗೆ ಈಗಷ್ಟೇ ಮಗು ಜನಿಸಿದೆ. ಇನ್ನೊಬ್ಬರು ತಮ್ಮ 20ನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದರೆ, ಮತ್ತೊಬ್ಬರು 25 ವರ್ಷದ ಯುವಕನನ್ನು ಡೇಟ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 40ರ ವಯಸ್ಸಿಗೆ ಕಾಲಿಡುವುದು ನಿಜಕ್ಕೂ ವಿಚಿತ್ರ ಅನುಭವ ಎಂದು ಅವರು ಹೇಳಿದ್ದಾರೆ. ನಮ್ಮಲ್ಲಿ ಅರ್ಧದಷ್ಟು ಜನರು ಇನ್ನೂ 28ರ ವಯಸ್ಸಿನವರಂತೆ ಕಾಣುತ್ತೇವೆ. ಆದರೆ ಉಳಿದ ಅರ್ಧದಷ್ಟು ಜನರು ನಿದ್ದೆಯಲ್ಲೇ ಸ್ನಾಯುಗಳನ್ನು ಎಳೆದುಕೊಂಡು ನೋವು ಅನುಭವಿಸುವಂತಾಗಿದೆ ಎಂದು ಪ್ರಿಯಾಂಕಾ ತಮಾಷೆಯಾಗಿ ಹೇಳಿದ್ದಾರೆ. ನಿಜ ಹೇಳಬೇಕೆಂದರೆ, ಈ ವಯಸ್ಸಿಗೆ ಯಾವುದೇ ನಿರ್ದಿಷ್ಟ ಟೈಮ್&zwnj;ಲೈನ್ ಇರುವುದಿಲ್ಲ, ಕೇವಲ ವೈಬ್ಸ್ ಮಾತ್ರ ಇರುತ್ತವೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಮನೆಗೆ ಮರಳಿದ ಖುಷಿಯಲ್ಲಿ ಪ್ರಿಯಾಂಕಾ; ಮಗಳ ಜೊತೆ ಮಸ್ತಿ&lt;/strong&gt;&lt;/h3&gt;&lt;p&gt;ಹುಟ್ಟುಹಬ್ಬದ ಬಳಿಕ ಪ್ರಿಯಾಂಕಾ ತಮ್ಮ ಇತ್ತೀಚಿನ ಪೋಸ್ಟ್&zwnj;ನಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕ್ಯಾಪ್ಷನ್&zwnj;ನಲ್ಲಿ ಕಳೆದ ಕೆಲವು ವಾರಗಳಲ್ಲಿ ಇಡೀ ಪ್ರಪಂಚವನ್ನು ಸುತ್ತಿದ ಬಳಿಕ ಕೊನೆಗೂ ಸ್ವಲ್ಪ ಸಮಯಕ್ಕಾಗಿ ಮನೆಗೆ ಮರಳಿದ್ದೇನೆ ಎಂದು ಬರೆದಿದ್ದಾರೆ. ಅವರು ಹಂಚಿಕೊಂಡ ಫೋಟೋಗಳಲ್ಲಿ ಇಡ್ಲಿ ಮೇಲಿನ ಪ್ರೀತಿ, ಮಗಳು ಮಾಲ್ತಿಯ ಕ್ಯೂಟ್ ಮಸ್ತಿ, &lsquo;ಜೈ ಜೈ ಭಗವಾನ್ ಜೀ&rsquo; ಎನ್ನುವ ಆಕೆಯ ಮುದ್ದಾದ ಕ್ಷಣ, ಫ್ಯಾಮಿಲಿ ಡಿನ್ನರ್ ಹಾಗೂ ಜೋನಾಸ್ ಜೊತೆಗಿನ &lsquo;ಬೆಸ್ಟಿ&rsquo; ವೈಬ್ಸ್ ಹೀಗೆ ಮೊದಲಾದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ವಾರಾಣಸಿ&rsquo;ಯಲ್ಲಿ ಮಹೇಶ್ ಬಾಬು ಪ್ರಿಯಾಂಕಾ ಚೋಪ್ರಾ&lt;/strong&gt;&lt;/p&gt;&lt;p&gt;ಕರಿಯರ್ ವಿಚಾರಕ್ಕೆ ಬಂದರೆ, ಪ್ರಿಯಾಂಕಾ ಚೋಪ್ರಾ ಶೀಘ್ರದಲ್ಲೇ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಟೈಮ್-ಟ್ರಾವೆಲ್ ಮತ್ತು ಗ್ಲೋಬಲ್ ಆ್ಯಕ್ಷನ್-ಅಡ್ವೆಂಚರ್ ಸಿನಿಮಾ &lsquo;ವಾರಾಣಸಿ&rsquo; ಮೂಲಕ ಭರ್ಜರಿಯಾಗಿ ಕಂಬ್ಯಾಕ್ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ &lsquo;ಮಂದಾಕಿನಿ&rsquo; ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಜೊತೆ ಸೂಪರ್&zwnj;ಸ್ಟಾರ್ ಮಹೇಶ್ ಬಾಬು &lsquo;ರುದ್ರ&rsquo; ಪಾತ್ರದಲ್ಲಿ ಹಾಗೂ ಪೃಥ್ವಿರಾಜ್ ಸುಕುಮಾರನ್ &lsquo;ಕುಂಭ&rsquo; ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ 2027ರ ಏಪ್ರಿಲ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/cine-world/priyanka-chopras-hilarious-post-on-turning-40-goes-viral/articleshow-4i9ozv4"/>
        </item>
        <item>
            <title><![CDATA[ಸ್ಟಾರ್‌ಡಮ್‌, ಟಾಕ್ಸಿಕ್‌, ರಾವಣನ ಪಾತ್ರ... ರಾಕಿಂಗ್ ಸ್ಟಾರ್ ಯಶ್‌ ಬಿಚ್ಚಿಟ್ಟ ಸೀಕ್ರೆಟ್‌ಗಳು!]]></title>
            <link>https://kannada.asianetnews.com/celebrity-interviews/yash-opens-up-about-his-struggles-stardom-toxic-and-ravana-role-gvd/articleshow-x63gme9</link>
            <guid isPermaLink="true">https://kannada.asianetnews.com/celebrity-interviews/yash-opens-up-about-his-struggles-stardom-toxic-and-ravana-role-gvd/articleshow-x63gme9</guid>
            <pubDate>Mon, 17 Aug 2026 16:05:20 +0530</pubDate>
            <description><![CDATA[&lt;p&gt;Rocking Star Yash: ದೇಶದ ಅತ್ಯಂತ ಪ್ರಸಿದ್ಧ ಈ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಯಶ್&zwnj; ಆಗಿದ್ದಾರೆ. ಹಿಂದಿ ಭಾಷೆಯಲ್ಲಿ ನಡೆದ ಅವರ ಕುತೂಹಲಕರ ಸಂದರ್ಶನದ ಆಯ್ದಭಾಗ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07k2fkh608y2gmj6dgqmdmz,imgname-vhjv-1786961280624.png" type="image/jpeg" height="390" width="690"/>
            <content:encoded><![CDATA[&lt;p&gt;ಖಾಸಗಿ ವಾಹಿನಿ ಇಂಡಿಯಾ ಟಿವಿಯಲ್ಲಿ ರಜತ್ ಶರ್ಮಾ ನಡೆಸಿಕೊಡುವ &lsquo;ಆಪ್&zwnj; ಕಿ ಅದಾಲತ್&rsquo; ಕಾರ್ಯಕ್ರಮದಲ್ಲಿ ರಾಕಿಂಗ್&zwnj; ಸ್ಟಾರ್&zwnj; ಯಶ್ ಭಾಗವಹಿಸಿದ್ದಾರೆ. ದೇಶದ ಅತ್ಯಂತ ಪ್ರಸಿದ್ಧ ಈ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಯಶ್&zwnj; ಆಗಿದ್ದಾರೆ. ಹಿಂದಿ ಭಾಷೆಯಲ್ಲಿ ನಡೆದ ಅವರ ಕುತೂಹಲಕರ ಸಂದರ್ಶನದ ಆಯ್ದಭಾಗ ಇಲ್ಲಿದೆ.&lt;/p&gt;&lt;p&gt;&lt;strong&gt;* ಯಶ್ ತುಂಬಾ ಮೊಂಡು ಎಂಬ ಆರೋಪವಿದೆ. ನೀವು ಯಾರ ಮಾತನ್ನೂ ಕೇಳದೆ ನಿಮ್ಮಿಷ್ಟದಂತೆ ಇರುತ್ತೀರಾ?&lt;/strong&gt;&lt;/p&gt;&lt;p&gt;ಇದರಲ್ಲಿ ತಪ್ಪೇನಿದೆ ಸರ್? ಇರುವುದು ಒಂದೇ ಜೀವನ. ನಾವು ಏನಾಗಬೇಕೆಂದು ಬಯಸುತ್ತೇವೆಯೋ, ಏನನ್ನು ಸಾಧಿಸಬೇಕೋ ಅದನ್ನು ಮಾಡಬೇಕು. ಅದನ್ನು ಮೊಂಡುತನ ಎನ್ನುವುದಾದರೆ ಪ್ರತಿಯೊಬ್ಬರೂ ಒಳ್ಳೆಯ ವಿಷಯಗಳಿಗೆ ಮೊಂಡುತನ ಹೊಂದಿರಬೇಕು.&lt;/p&gt;&lt;p&gt;&lt;strong&gt;* ಬಾಲ್ಯದಲ್ಲಿ ನೀವು ಮೊಂಡುತನ ಮಾಡಿದಾಗ ತಂದೆಯಿಂದ ಏಟು ಬೀಳುತ್ತಿತ್ತಂತೆ?&lt;/strong&gt;&lt;/p&gt;&lt;p&gt;ಹೌದು, ತುಂಬಾ ಹೊಡೆಯುತ್ತಿದ್ದರು. ನಾನು ಬಾಲ್ಯದಲ್ಲಿ ಅಷ್ಟು ಚೇಷ್ಟೆ ಮಾಡುತ್ತಿದ್ದೆ. ನನ್ನ ತಂಗಿ ಈಗಲೂ ಹೇಳುತ್ತಾಳೆ, &lsquo;ನೀನು ನಟನಾಗಿ ಎಲ್ಲರೂ ನಿನಗೆ ಇಷ್ಟೊಂದು ಗೌರವ ಕೊಡುತ್ತಿದ್ದಾರೆ, ಆದರೆ ಚಿಕ್ಕವನಿದ್ದಾಗ ನಿನ್ನನ್ನು ನೋಡಿದವರು ಇವನು ಜೀವನದಲ್ಲಿ ಏನೂ ಉದ್ದಾರ ಆಗಲ್ಲ ಎನ್ನುತ್ತಿದ್ದರು&rsquo; ಎಂದು. ಆದರೆ ಜೀವನದಲ್ಲಿ ಕಲಿತ ಆ ಪಾಠಗಳು ನನ್ನನ್ನು ದೊಡ್ಡ ಯುದ್ಧಗಳಿಗೆ ಸಿದ್ಧಪಡಿಸಿದವು ಎಂದೆನಿಸುತ್ತದೆ.&lt;/p&gt;&lt;p&gt;&lt;strong&gt;* ತಂದೆ ನಿಮ್ಮನ್ನು ಫ್ಯಾನ್&zwnj;ಗೆ ತಲೆಕೆಳಗಾಗಿ ನೇತುಹಾಕಿ ಫ್ಯಾನ್ ಆನ್ ಮಾಡಿದ್ದರಂತೆ? ನಿಮ್ಮ ಸ್ನೇಹಿತರು ತಂದೆಯನ್ನು &lsquo;ಟೈಗರ್&rsquo; ಎನ್ನುತ್ತಿದ್ದರಂತೆ?&lt;/strong&gt;&lt;/p&gt;&lt;p&gt;ಹೌದು. ನಾನು ಶಾಲೆಯಿಂದ 10 ನಿಮಿಷ ತಡವಾಗಿ ಬಂದರೂ ಪೊಲೀಸ್ ಗಾಡಿಯಂತೆ ವಾಹನ ತಂದು ಹುಡುಕುತ್ತಿದ್ದರು. ನನ್ನ ಸ್ನೇಹಿತರು &lsquo;ಬೇಗ ಮನೆಗೆ ಹೋಗು, ನಿಮ್ಮಪ್ಪ ಬಂದುಬಿಡುತ್ತಾರೆ&rsquo; ಎಂದು ಓಡಿಹೋಗುತ್ತಿದ್ದರು. ಕಾಲೇಜು ದಿನಗಳಲ್ಲೂ ಅವರು ಎಲ್ಲರ ಮುಂದೆ ಹೊಡೆಯುತ್ತಿದ್ದರು. ಕೊನೆಗೆ ಒಂದು ದಿನ ನಾನು ಅವರ ಮುಂದೆ ಕೆಳಗೆ ಬಿದ್ದು ನಾಟಕ ಮಾಡಿದೆ, ಅಂದಿನಿಂದ ಹೊಡೆಯುವುದನ್ನು ಬಿಟ್ಟರು.&lt;/p&gt;&lt;p&gt;&lt;strong&gt;* ನಿಮ್ಮ ತಂದೆ ನಿರ್ದೇಶಕರೋ, ನಿರ್ಮಾಪಕರೋ ಅಲ್ಲ ಎಂಬ ಕೊರಗು ಇತ್ತಾ?&lt;/strong&gt;&lt;/p&gt;&lt;p&gt;ಎಂದಿಗೂ ಇಲ್ಲ ಸರ್. ನನ್ನ ಹೆತ್ತವರು ನನಗೆ ಕಲಿಸಿದ ಮುಖ್ಯ ಪಾಠ, &lsquo;ಯಾರ ಮೇಲೂ ಅವಲಂಬಿತನಾಗಿ ಬದುಕಬೇಡ, ನಿನ್ನ ಕೆಲಸವನ್ನು ನೀನೇ ಮಾಡು, ಯಾರ ಮುಂದೆಯೂ ತಲೆತಗ್ಗಿಸಬೇಡ&rsquo; ಎಂಬುದು. ಪ್ರತಿಯೊಬ್ಬ ಮಗುವಿಗೂ ಅವರ ತಂದೆಯೇ ಹೀರೋ. ನಮ್ಮ ತಂದೆ-ತಾಯಿ ಹೆಚ್ಚು ಹಣ ಗಳಿಸದೇ ಇರಬಹುದು, ಆಸ್ತಿ ಮಾಡದೇ ಇರಬಹುದು. ಆದರೆ ನಮ್ಮನ್ನೇ ತಮ್ಮ ಆಸ್ತಿ ಎಂದು ನಂಬಿ ಬೆಳೆಸಿದರು.&lt;/p&gt;&lt;p&gt;&lt;strong&gt;* ನಿಮ್ಮ ತಂದೆ ಬಿಎಂಟಿಸಿ ಬಸ್ ಡ್ರೈವರ್ ಆಗಿದ್ದರು. ಆರಂಭದಲ್ಲಿ ದಿನಕ್ಕೆ ₹14 ದುಡಿಯುತ್ತಿದ್ದ ದಿನಗಳಿದ್ದವು...&lt;/strong&gt;&lt;/p&gt;&lt;p&gt;ನಾನು ಓದುವಾಗ ನಮ್ಮ ತಂದೆ ಬಡವರು ಎಂಬ ಭಾವನೆ ನನಗೆ ಬರಲು ಅವರು ಬಿಡಲೇ ಇಲ್ಲ. ಕಾಲೇಜಿಗೆ ಬಂದಾಗ ಎಲ್ಲರ ಬಳಿ ಬೈಕ್, ಹೊಸ ಬಟ್ಟೆ ಇರುತ್ತಿತ್ತು. ನನ್ನ ಬಳಿ ತಂದೆಯ ಹಳೆಯ ಸ್ಕೂಟರ್ ಇತ್ತು. ನಮ್ಮ ಮನಸ್ಥಿತಿ ಮತ್ತು ದುಡಿಮೆಯಿಂದ ಗೌರವ ಸಿಗುತ್ತದೆಯೇ ಹೊರತು ಹೊರಗಿನ ಆಡಂಬರದಿಂದಲ್ಲ ಎಂದು ನನಗೆ ಬಹಳ ಬೇಗ ಅರ್ಥವಾಯಿತು.&lt;/p&gt;&lt;p&gt;&lt;strong&gt;* ನೀವು ಅತ್ಯುತ್ತಮ ಡ್ಯಾನ್ಸರ್ ಆಗಿದ್ದಿರಿ, ಹುಡುಗಿಯರೆಲ್ಲ ನಿಮ್ಮ ಡ್ಯಾನ್ಸ್&zwnj;ಗೆ ಫಿದಾ ಆಗಿದ್ದರು...&lt;/strong&gt;&lt;/p&gt;&lt;p&gt;ಹೌದು, ನನಗೆ ಡ್ಯಾನ್ಸ್ ಎಂದರೆ ಪ್ರಾಣ. ಶಾಲೆಯಲ್ಲಿ ಶಿಕ್ಷಕರು ನನ್ನನ್ನು &lsquo;ಹೀರೋ&rsquo; ಎಂದೇ ಕರೆಯುತ್ತಿದ್ದರು. ನಾನೂ ಸಹ ಹುಟ್ಟಿನಿಂದಲೇ ಹೀರೋ ಎಂದು ನಂಬಿಬಿಟ್ಟಿದ್ದೆ. ಒಮ್ಮೆ ವೀರಪ್ಪನ್ ಹಾವಳಿ ಇದ್ದಾಗ, &lsquo;ನನಗೆ ರಜೆ ಕೊಡಿ, ನಾನೇ ಹೋಗಿ ವೀರಪ್ಪನ್ ಹಿಡಿದು ತರುತ್ತೇನೆ&rsquo; ಎಂದು ಶಾಲೆಯಲ್ಲಿ ಡೈಲಾಗ್ ಹೊಡೆದಿದ್ದೆ. 7ನೇ ತರಗತಿಯವರೆಗೂ ಟೀಚರ್&zwnj;ಗಳು &lsquo;ಏನೋ, ವೀರಪ್ಪನ್ ಹಿಡಕೊಂಡು ಬಂದ್ಯಾ?&rsquo; ಎಂದು ಕಾಲೆಳೆಯುತ್ತಿದ್ದರು.&lt;/p&gt;&lt;p&gt;&lt;strong&gt;* ಚಿತ್ರರಂಗದಲ್ಲಿ ಚಿರಂಜೀವಿ, ಅಲ್ಲು ಅರ್ಜುನ್ ಮುಂತಾದವರ ಕುಟುಂಬದ ಹಿನ್ನೆಲೆ ಇರುವ ನಟರಿಗೆ ಆರಂಭದಲ್ಲಿ ಬೆಂಬಲ ಸಿಗುತ್ತದೆ. ನಿಮ್ಮಂತಹ ಹೊರಗಿನವರಿಗೆ ಕಷ್ಟ ಅನಿಸಲಿಲ್ಲವೇ?&lt;/strong&gt;&lt;/p&gt;&lt;p&gt;ಹಿನ್ನೆಲೆ ಇರಲಿ, ಬಿಡಲಿ, ಕೊನೆಗೆ ನಿರ್ಧರಿಸುವುದು ಪ್ರೇಕ್ಷಕರೇ. ಸ್ಟಾರ್ ಮಕ್ಕಳಿಗೂ ಅವರದೇ ಆದ ತಂದೆಯ ಹೆಸರಿನ ದೊಡ್ಡ ಹೊರೆ ಇರುತ್ತದೆ. ಆದರೆ ನಮ್ಮಂತಹವರಿಗೆ ಆ ಮೊದಲ ಮೆಟ್ಟಿಲು ಹುಡುಕುವುದೇ ಕಷ್ಟ. ಒಮ್ಮೆ ಮೆಟ್ಟಿಲು ಸಿಕ್ಕ ಮೇಲೆ ಹತ್ತುವುದು ನಮ್ಮ ಕೈಯಲ್ಲಿದೆ. ನನ್ನನ್ನು ನಾನೇ ಬೆಳೆಸಿಕೊಂಡಿದ್ದಕ್ಕಿಂತ ಜನರ ಪ್ರೀತಿಯೇ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಅಲ್ಲು ಅರವಿಂದ್ ಒಮ್ಮೆ ಹೇಳಿದ್ದರು, &lsquo;ಕೆಜಿಎಫ್&zwnj;ಗಿಂತ ಮೊದಲು ಯಶ್ ಏನಾಗಿದ್ದರು? ಸಿನಿಮಾ ಮಾಡುವುದು ನಿರ್ಮಾಪಕ, ಅದರ ಲಾಭ ನಟನಿಗೆ ಸಿಗುತ್ತದೆ&rsquo; ಎಂದು... ನಿಜ ಸರ್, ಸಿನಿಮಾದಲ್ಲಿ ನೂರಾರು ಜನರು ಕೆಲಸ ಮಾಡುತ್ತಾರೆ. ಆದರೆ ಆ ಎಲ್ಲರ ಶ್ರಮ ನಟನ ಮೂಲಕ ಪರದೆಯ ಮೇಲೆ ಬರುತ್ತದೆ. ನಟ ಅದನ್ನು ಸರಿಯಾಗಿ ಹೊರಹಾಕದಿದ್ದರೆ ಸಿನಿಮಾ ಓಡುವುದಿಲ್ಲ. ಜಗತ್ತಿನ ಇತಿಹಾಸದಲ್ಲೇ ನಟರಿಗೆ ಹೆಚ್ಚು ಮನ್ನಣೆ ಸಿಗುತ್ತದೆ, ಏಕೆಂದರೆ ಕ್ಯಾಮೆರಾ ಎದುರು ನಿಂತು ಆ ಭಾವನೆಗಳನ್ನು ಜನರಿಗೆ ಮುಟ್ಟಿಸುವ ಜವಾಬ್ದಾರಿ ನಟನ ಮೇಲಿರುತ್ತದೆ. ಪ್ರೇಕ್ಷಕರು ಎಂದಿಗೂ ತಪ್ಪಾಗುವುದಿಲ್ಲ.&lt;/p&gt;&lt;p&gt;&lt;strong&gt;* ದಕ್ಷಿಣದ ರಾಮ್ ಚರಣ್, ಜೂ. ಎನ್&zwnj;ಟಿಆರ್, ಮಹೇಶ್ ಬಾಬು ದೊಡ್ಡ ಕುಟುಂಬದಿಂದ ಬಂದರೂ ನಿಮ್ಮಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ?&lt;/strong&gt;&lt;/p&gt;&lt;p&gt;ಇಲ್ಲ ಸರ್, ಎಲ್ಲರೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಈ &lsquo;ಪ್ಯಾನ್ ಇಂಡಿಯಾ&rsquo;, &lsquo;ಸ್ಟಾರ್ಡಮ್&rsquo; ಎಂಬುದೆಲ್ಲ ಶಾಶ್ವತವಲ್ಲ. ಈ ಶುಕ್ರವಾರ ನೀವು ಸೂಪರ್ ಸ್ಟಾರ್ ಆಗಿರಬಹುದು, ಮುಂದಿನ ಶುಕ್ರವಾರ ಏನೂ ಇಲ್ಲದಂತಾಗಬಹುದು. ಯಾರು ಮುಂದು, ಯಾರು ಹಿಂದು ಎನ್ನುವುದಕ್ಕಿಂತ ಜನರ ಮನಸ್ಸಿನಲ್ಲಿ ಎಷ್ಟು ಕಾಲ ನೆಲೆಸುತ್ತೇವೆ ಎಂಬುದು ಮುಖ್ಯ.&lt;/p&gt;&lt;p&gt;&lt;strong&gt;* ಇಲ್ಲಿಯವರೆಗೆ ಬರಲು ನೀವು ನಾಟಕ ರಂಗದಲ್ಲಿ ನೆಲ ಒರೆಸಿದ್ದೀರಿ, ಚಹಾ ಕೊಟ್ಟಿದ್ದೀರಿ...&lt;/strong&gt;&lt;/p&gt;&lt;p&gt;ಅದನ್ನೆಲ್ಲಾ ಸಾಮಾನ್ಯವಾಗಿ ಜನ ಸ್ಟ್ರಗಲ್ ಎಂದು ಕರೆಯುತ್ತಾರೆ. ಆದರೆ ನನಗೆ ಅದು ಕಷ್ಟ ಎನಿಸಲಿಲ್ಲ. ಆ ಕೆಲಸದಲ್ಲೂ ನಾನು ಖುಷಿ ಕಂಡುಕೊಂಡಿದ್ದೆ. ಕಸ ಗುಡಿಸುವುದರಲ್ಲೂ ಖುಷಿ ಇರಬಹುದು, ದೊಡ್ಡ ಅವಾರ್ಡ್ ತಗೊಂಡಾಗಲೂ ಖುಷಿ ಇಲ್ಲದಿರಬಹುದು. ಮನಸ್ಥಿತಿ ಮುಖ್ಯ.&lt;/p&gt;&lt;p&gt;&lt;strong&gt;* ನಿಮ್ಮಲ್ಲಿ ಆರಂಭದಿಂದಲೂ ಹೀರೋ ಎಂಬ ಇಗೋ ಇತ್ತು?&lt;/strong&gt;&lt;/p&gt;&lt;p&gt;ಅದನ್ನು ನೀವು ಇಗೋ ಅಂದರೆ ಇಗೋ, ನನ್ನ ಮಟ್ಟಿಗೆ ಅದು ಆತ್ಮಗೌರವ, ಸೆಲ್ಫ್ ರೆಸ್ಪೆಕ್ಟ್. 17ನೇ ವಯಸ್ಸಿನಲ್ಲಿ ರಂಗಭೂಮಿಗೆ ಹೋದಾಗ, &lsquo;ನೀನಿನ್ನೂ ಚಿಕ್ಕವನು ಸುಮ್ಮನಿರು&rsquo; ಎನ್ನುತ್ತಿದ್ದರು. ನಾನು ಹೇಳುವ ಮಾತಿಗೆ ವಯಸ್ಸಿನ ಹಂಗಿಲ್ಲದೆ ಬೆಲೆ ಸಿಗಬೇಕೆಂದೇ ನಾನು ಗಡ್ಡ ಬಿಡಲು ಶುರುಮಾಡಿದೆ.&lt;/p&gt;&lt;p&gt;&lt;strong&gt;* ರಾತ್ರೋರಾತ್ರಿ ಇಷ್ಟು ದೊಡ್ಡ ಸೂಪರ್ ಸ್ಟಾರ್ ಆದಾಗ ನಿಮ್ಮ ಶಾಲಾ-ಕಾಲೇಜು ಸ್ನೇಹಿತರ ಪ್ರತಿಕ್ರಿಯೆ ಹೇಗಿತ್ತು?&lt;/strong&gt;&lt;/p&gt;&lt;p&gt;ಕರ್ನಾಟಕದಲ್ಲಿ ನನಗೆ ಸಿಕ್ಕ ಗೆಲುವು ರಾತ್ರೋರಾತ್ರಿ ಸಿಕ್ಕಿದ್ದಲ್ಲ. ಒಂದೊಂದೇ ಹೆಜ್ಜೆ ಇಟ್ಟು, ಹಲವು ಹಿಟ್ ಸಿನಿಮಾಗಳ ನಂತರ &lsquo;ಕೆಜಿಎಫ್&rsquo; ಸಾಧ್ಯವಾಯಿತು. ನಮ್ಮ ಚಿತ್ರರಂಗವನ್ನು ಯಾರಾದರೂ ಕಡೆಗಣಿಸಿದರೆ ನನಗೆ ಬೇಸರವಾಗುತ್ತಿತ್ತು. ಅದಕ್ಕೇ ಇಡೀ ತಂಡವನ್ನು ಒಪ್ಪಿಸಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋದೆವು. ದೇಶದ ಜನರು ನನ್ನನ್ನು ಒಪ್ಪಿಕೊಂಡರು. ಕರ್ನಾಟಕದ ಜನರಿಗೆ ನನ್ನ ಬೆಳವಣಿಗೆ ತಮ್ಮದೇ ಮನೆಯ ಮಗನ ಗೆಲುವು ಎನಿಸುತ್ತದೆ.&lt;/p&gt;&lt;p&gt;&lt;strong&gt;* ನೀವು ಅಹಂಕಾರಿಯಂತೆ, ಟಿವಿ ಸೀರಿಯಲ್&zwnj;ನಲ್ಲಿರುವಾಗಲೇ 7 ಸಿನಿಮಾಗಳ ಆಫರ್ ಬಂದಾಗ, &lsquo;ನನಗೆ ಮೊದಲು ಸ್ಕ್ರಿಪ್ಟ್ ಕೊಡಿ&rsquo; ಎಂದು ಕೇಳಿ ಸಿನಿಮಾಗಳನ್ನೇ ಕಳೆದುಕೊಂಡಿರಂತೆ?&lt;/strong&gt;&lt;/p&gt;&lt;p&gt;ಹೌದು, ಟಿವಿ ನಟ ಸ್ಕ್ರಿಪ್ಟ್ ಕೇಳಬಾರದು ಎಂಬ ನಿಯಮ ಎಲ್ಲಿದೆ? ನಾನು ಮಾಡುವ ಪಾತ್ರ ನನಗೆ ಇಷ್ಟವಾಗಬೇಕು, ನಾನು ಪ್ರಾಮಾಣಿಕವಾಗಿರಬೇಕು. ಅದಕ್ಕಾಗಿ ಸ್ಕ್ರಿಪ್ಟ್ ಕೇಳಿದೆ. ಆ 7 ಸಿನಿಮಾಗಳು ಕೈತಪ್ಪಿದರೂ ನನಗೆ ಬೇಸರವಿಲ್ಲ.&lt;/p&gt;&lt;p&gt;&lt;strong&gt;* ಈಗ ನೀವು ಒಂದು ಚಿತ್ರಕ್ಕೆ ₹50 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತೀರಾ?&lt;/strong&gt;&lt;/p&gt;&lt;p&gt;ಅದಕ್ಕೂ ಜಾಸ್ತಿ. ನಮ್ಮ ಮೌಲ್ಯಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತದೆ. ನಾನು ಕೇವಲ ನಟನಾಗಿ ಹಣ ಪಡೆಯುವುದಿಲ್ಲ. ಕೆಜಿಎಫ್&zwnj;ಗಿಂತ ಮುಂಚಿನಿಂದಲೂ ನಿರ್ಮಾಪಕರ ಜೊತೆ ಪಾಲುದಾರನಾಗಿ ರಿಸ್ಕ್ ತೆಗೆದುಕೊಳ್ಳುತ್ತೇನೆ. ಸಿನಿಮಾ ಹಣ ಗಳಿಸಿದರೆ ನನಗೂ ಪಾಲು, ಸೋತರೆ ನಷ್ಟದಲ್ಲೂ ಪಾಲು.&lt;/p&gt;&lt;p&gt;&lt;strong&gt;* ನೀವು ಶಾರುಖ್ ಖಾನ್ ಅವರ ಬಹುದೊಡ್ಡ ಅಭಿಮಾನಿ. ಆದರೆ &lsquo;ಜೀರೋ&rsquo; ಚಿತ್ರದ ಎದುರೇ &lsquo;ಕೆಜಿಎಫ್&rsquo; ಬಿಡುಗಡೆ ಮಾಡಿ ಕ್ಲ್ಯಾಶ್ ಮಾಡಿದಿರಿ?&lt;/strong&gt;&lt;/p&gt;&lt;p&gt;ನಾನು ಶಾರುಖ್ ಸರ್ ಅವರ ಬಹುದೊಡ್ಡ ಫ್ಯಾನ್. ಪ್ಯಾನ್ ಇಂಡಿಯಾ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ಬರುವಾಗ ಕ್ಲ್ಯಾಶ್ ಅನಿವಾರ್ಯ. ಅವರ ಚಿತ್ರ ದೊಡ್ಡದಾಗಿತ್ತು, ನಮ್ಮದು ಚಿಕ್ಕದಾಗಿತ್ತು. ಅದಕ್ಕೆ ಬಿಡುಗಡೆ ಮಾಡಿದೆವು. ನಮ್ಮ ಸಿನಿಮಾ ಚೆನ್ನಾಗಿ ಓಡಿತು ಎಂದ ಮಾತ್ರಕ್ಕೆ ನಾನು ಶಾರುಖ್ ಸರ್&zwnj;ಗಿಂತ ದೊಡ್ಡವನಾಗುವುದಿಲ್ಲ. ನಾನು ನಮ್ಮ ಹಿರಿಯರಿಗಿಂತ ದೊಡ್ಡವನು ಅಂದುಕೊಂಡ ಕ್ಷಣ ನನ್ನ ಅಂಗಡಿ ಬಂದ್ ಆಗುತ್ತದೆ.&lt;/p&gt;&lt;p&gt;&lt;strong&gt;* ಅಮೀರ್ ಖಾನ್ ಕೂಡ &lsquo;ಕೆಜಿಎಫ್ 2&rsquo; ನೋಡಿ ಹೆದರಿ ತಮ್ಮ ಚಿತ್ರದ ರಿಲೀಸ್ ಡೇಟ್ ಮುಂದೂಡಿದರು ಎನ್ನುತ್ತಾರೆ?&lt;/strong&gt;&lt;/p&gt;&lt;p&gt;ಯಾರೂ ಯಾರಿಗೂ ಹೆದರುವುದಿಲ್ಲ ಸರ್. ಅವರವರ ಸಿನಿಮಾಗಳ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆ.&lt;/p&gt;&lt;p&gt;&lt;strong&gt;* ನಿಮ್ಮ ಹೊಸ ಚಿತ್ರ &lsquo;ಟಾಕ್ಸಿಕ್&rsquo; ರಿಲೀಸ್ ಡೇಟ್ ಮುಂದೂಡಿದಾಗ ಯಶ್ ಕೂಡ ಹೆದರಿದರು ಎಂಬ ಮಾತಿದೆ?&lt;/strong&gt;&lt;/p&gt;&lt;p&gt;ನನ್ನ ಬಳಿ ಕಳೆದುಕೊಳ್ಳಲು ಏನೂ ಇಲ್ಲದಿರುವಾಗ ನನಗೆ ಭಯ ಏಕೆ ಸರ್? 100-200 ಕೋಟಿ ಕಡಿಮೆ ಬಂದರೆ ನನಗೇನೂ ಆಗುವುದಿಲ್ಲ. ನಾನು ಜನರಿಗೆ ನೀಡಿದ ಭರವಸೆಗೆ ತಕ್ಕಂತೆ ಸಿನಿಮಾ ಬರಬೇಕು. ಚಿತ್ರಕ್ಕೆ ಹೆಚ್ಚಿನ ಸಮಯ ಬೇಕು ಎನಿಸಿದಾಗ ಮುಂದೂಡಿದೆವು. ಕೇವಲ ಇಮೇಜ್ ಉಳಿಸಿಕೊಳ್ಳಲು ಹಠ ಹಿಡಿದು ರಿಲೀಸ್ ಮಾಡಿದ್ದರೆ ಅದು ಅಹಂಕಾರವಾಗುತ್ತಿತ್ತು.&lt;/p&gt;&lt;p&gt;&lt;strong&gt;* ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ &lsquo;ಯಶ್ ಮಿಸ್ಟರ್ ಶೋ ಆಫ್&rsquo; ಎಂದಾಗ ನಿಮ್ಮ ಅಭಿಮಾನಿಗಳು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು...&lt;/strong&gt;&lt;/p&gt;&lt;p&gt;ಅವರು ಆಗಷ್ಟೇ ಚಿತ್ರರಂಗಕ್ಕೆ ಬಂದ ಹೊಸಬರಾಗಿದ್ದರು. ಕೆಲವು ಶೋಗಳಲ್ಲಿ ವಿವಾದ ಹುಟ್ಟುಹಾಕಲೆಂದೇ ಆಯ್ಕೆಗಳನ್ನು ಕೊಟ್ಟು ಪ್ರಶ್ನೆ ಕೇಳುತ್ತಾರೆ. ಬಹುಶಃ ಅವರಿಗೆ ನನ್ನ ಹೆಸರು ಸೂಕ್ತ ಎನಿಸಿರಬಹುದು. ಅದರಿಂದ ಹಲವು ನಿರ್ದೇಶಕರಿಗೆ ಬೇಸರವಾಗಿತ್ತು. ಆದರೆ ನನಗೆ ಬೇಸರವಾಗಲಿಲ್ಲ. ಯಾರಾದರೂ ನನ್ನ ಬಗ್ಗೆ ಅಭಿಪ್ರಾಯ ಹೇಳುವ ಹಕ್ಕಿದೆ. ಆದರೆ ಬೇರೆಯವರ ಅಭಿಪ್ರಾಯ ನನ್ನ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ. ನನ್ನ ಹೆಸರಿನಲ್ಲಿ ಬೇರೆ ಕಲಾವಿದರನ್ನು ನಿಂದಿಸುವವರು ನನ್ನ ನಿಜವಾದ ಅಭಿಮಾನಿಗಳೇ ಅಲ್ಲ.&lt;/p&gt;&lt;p&gt;* &lsquo;ನಾನು ಪೋಷಕರ ಜೊತೆ ಕುಳಿತು ನೋಡಲಾಗದ ದೃಶ್ಯಗಳಲ್ಲಿ ನಟಿಸುವುದಿಲ್ಲ&rsquo; ಎಂದಿದ್ದ ನೀವು, ಈಗ &lsquo;ಟಾಕ್ಸಿಕ್&rsquo;ನಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೀರಾ?&lt;/p&gt;&lt;p&gt;ಮನುಷ್ಯ ಕಾಲಕ್ಕೆ ತಕ್ಕಂತೆ ಬದಲಾಗುತ್ತಾನೆ. ಕಲೆಯು ಸಮಾಜಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಬೇಕು. ಈ ಚಿತ್ರದ ಟ್ಯಾಗ್ಲೈನ್ &lsquo;ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್&rsquo;. ಇದು ಮಕ್ಕಳಿಗಲ್ಲ ಎಂದು ನಾವೇ ಸ್ಪಷ್ಟಪಡಿಸಿದ್ದೇವೆ. ಮಹಿಳಾ ನಿರ್ದೇಶಕಿ ಗೀತು ಮೋಹನ್&zwnj;ದಾಸ್ ಮಹಿಳೆಯರ ಆಸೆ ಮತ್ತು ಕಲ್ಪನೆಗಳನ್ನು ಧೈರ್ಯವಾಗಿ ಚಿತ್ರಿಸಿದ್ದಾರೆ. ಕಥೆಯ ಅಗತ್ಯಕ್ಕೆ ತಕ್ಕಂತೆ ಆ ದೃಶ್ಯಗಳಿವೆ.&lt;/p&gt;&lt;p&gt;&lt;strong&gt;* ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ 14 ಮಿಲಿಯನ್ ಫಾಲೋವರ್ಸ್ ಇದ್ದರೂ ನೀವು ಕೇವಲ ಒಬ್ಬರನ್ನು (ಪತ್ನಿ ರಾಧಿಕಾ ಪಂಡಿತ್) ಮಾತ್ರ ಫಾಲೋ ಮಾಡುತ್ತೀರಾ?&lt;/strong&gt;&lt;/p&gt;&lt;p&gt;ಹೌದು, ರಾಧಿಕಾ ನನ್ನ ಜೀವನದ ಏಕೈಕ ಆಪ್ತ ಗೆಳತಿ. ಸೀರಿಯಲ್ ದಿನಗಳಿಂದ ನಾವಿಬ್ಬರೂ ಏನೂ ಇಲ್ಲದ ಕಾಲದಿಂದ ಒಟ್ಟಿಗೆ ಬೆಳೆದಿದ್ದೇವೆ. ನನ್ನ ಬದುಕಿನ ಆಧಾರಸ್ತಂಭ ಅವರು.&lt;/p&gt;&lt;p&gt;&lt;strong&gt;* ₹4000 ಕೋಟಿ ಬಜೆಟ್&zwnj;ನ &lsquo;ರಾಮಾಯಣ&rsquo; ಚಿತ್ರದಲ್ಲಿ ನೀವೇಕೆ ರಾಮನ ಬದಲಿಗೆ ರಾವಣನ ಪಾತ್ರ ಆಯ್ದುಕೊಂಡಿರಿ?&lt;/strong&gt;&lt;/p&gt;&lt;p&gt;ಶ್ರೀರಾಮನ ಧರ್ಮ ಮತ್ತು ಒಳ್ಳೆಯತನದ ತೀವ್ರತೆಯನ್ನು ತೋರಿಸಲು ಅಷ್ಟೇ ಪ್ರಬಲವಾದ, ಭಯಂಕರವಾದ ರಾವಣನ ಪಾತ್ರ ಬೇಕು. ಆ ಪಾತ್ರವನ್ನು ನನಗಿಂತ ಚೆನ್ನಾಗಿ ಯಾರೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿದೆ. ರಣಬೀರ್ ಕಪೂರ್ ರಾಮನಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ಜಾಗತಿಕ ಮಟ್ಟದ ಸಂಗೀತ ನೀಡುತ್ತಿದ್ದಾರೆ.&lt;/p&gt;&lt;p&gt;&lt;strong&gt;* ದಳಪತಿ ವಿಜಯ್ ಅವರಂತೆ ನೀವೂ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಯಾಗುವ ಆಸಕ್ತಿ ಇದೆಯೇ?&lt;/strong&gt;&lt;/p&gt;&lt;p&gt;ಸದ್ಯಕ್ಕೆ ನಟನಾಗಿ ಈ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಜವಾಬ್ದಾರಿಯಿದೆ. ಆದರೆ ರಾಜಕೀಯ ಎಂದರೆ ಸಾರ್ವಜನಿಕ ಸೇವೆ, ಭವಿಷ್ಯದಲ್ಲಿ ಅಂತಹ ಅಗತ್ಯ ಬಂದರೆ ನೋಡೋಣ. ಸದ್ಯಕ್ಕಂತೂ ರಾಜಕೀಯದ ಯಾವುದೇ ಯೋಚನೆಗಳಿಲ್ಲ.&lt;/p&gt;&lt;p&gt;&lt;strong&gt;* ನೀವು ದೊಡ್ಡ ಸ್ಟಾರ್ ಆದಾಗ ನಿಮ್ಮ ತಂದೆಯ ಮೊದಲ ಪ್ರತಿಕ್ರಿಯೆ ಹೇಗಿತ್ತು?&lt;/strong&gt;&lt;/p&gt;&lt;p&gt;ಅವರು ಯಾವಾಗಲೂ ಸಪೋರ್ಟಿವ್. ಆದರೆ ಈಗಲೂ ನಾನು ಚೇಷ್ಟೆ ಮಾಡುತ್ತೇನೆ, ಅವರು ನನ್ನನ್ನು ಯಾರಾದರೂ ಯಾಮಾರಿಸಬಹುದು ಎಂದು ಕಮೆಂಟ್ ಮಾಡುತ್ತಿರುತ್ತಾರೆ. ಅದು ಭಾರತೀಯ ಪೋಷಕರ ಪ್ರೀತಿ, &lsquo;ಜಾಸ್ತಿ ಹಾರಬೇಡ, ನೆಲದಲ್ಲೇ ಇರು&rsquo; ಅಂತ ಹೇಳುವ ರೀತಿ.&lt;/p&gt;&lt;p&gt;&lt;strong&gt;* ನಿಮ್ಮ ಸಂಬಂಧಿಕರು ಕೆಲವರು &lsquo;ಇವನಿಗೆ ಊಟ ಇರಲಿಲ್ಲ ನಾವೇ ಹಾಕಿದ್ದು, 5 ದಿನ ಸ್ನಾನ ಮಾಡುತ್ತಿರಲಿಲ್ಲ ನಾವೇ ಮಾಡಿಸಿದ್ದು&rsquo; ಅಂತೆಲ್ಲ ಹೇಳಿದ್ದಾರಂತೆ?&lt;/strong&gt;&lt;/p&gt;&lt;p&gt;ಒಬ್ಬ ವ್ಯಕ್ತಿ ದೊಡ್ಡವನಾದಾಗ ಹಲವರು ಬಂದು &lsquo;ನಾನು ಹಾಗೆ ಮಾಡಿದೆ, ಹೀಗೆ ಮಾಡಿದೆ&rsquo; ಎನ್ನುತ್ತಾರೆ. ಜೇಬಿನಲ್ಲಿ ದುಡ್ಡು ಇಲ್ಲದಿದ್ದಾಗಲೂ ನಾನು ಸ್ಟೈಲ್ ಬಿಟ್ಟಿರಲಿಲ್ಲ, ಸ್ನಾನವಂತೂ ಪ್ರತಿದಿನ ಮಾಡುತ್ತಿದ್ದೆ. ಯಾರಾದರೂ ನೆರವಾಗಿದ್ದರೆ ಎಲ್ಲರಿಗೂ ಧನ್ಯವಾದ.&lt;/p&gt;&lt;p&gt;&lt;strong&gt;* 700 ಅಭಿಮಾನಿಗಳಿಗೆ ಪ್ರತ್ಯೇಕವಾಗಿ ನಿಂತು ಫೋಟೋ ಕೊಟ್ಟಿರಂತೆ?&lt;/strong&gt;&lt;/p&gt;&lt;p&gt;ಗ್ರೂಪ್ ಫೋಟೋ ತೆಗೆದರೆ ಅವರ ನೆನಪು ಉಳಿಯಲ್ಲ. ವೈಯಕ್ತಿಕವಾಗಿ ಫೋಟೋ ಕೊಟ್ಟರೆ ಅವರಿಗೆ ಲೈಫ್&zwnj;ಟೈಮ್ ಮೆಮೊರಿ. ಅವರ ಸಮಯಕ್ಕೂ ಬೆಲೆಯಿದೆ.&lt;/p&gt;&lt;p&gt;&lt;strong&gt;* ನೀವು ಸ್ಟಾರ್ ಆದ ಮೇಲೂ ನಿಮ್ಮ ತಂದೆ ಬಸ್ ಡ್ರೈವಿಂಗ್ ಕೆಲಸ ಮುಂದುವರಿಸಿದ್ದರು...&lt;/strong&gt;&lt;/p&gt;&lt;p&gt;ಹೌದು ಸರ್. ಮಗ ಆಡಿ ಕಾರಿನಲ್ಲಿ ತಿರುಗಾಡುತ್ತಾನೆ, ಅಪ್ಪ ಬಸ್ ಓಡಿಸುತ್ತಾನೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದರು. ನಾನು ಅವರಿಗೆ ದುಬಾರಿ ಕಾರು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ಅವರು &lsquo;ನನಗೆ ಯಶ್ ತಂದೆ ಅಂತ ಸಿಗುವ ಗೌರವಕ್ಕಿಂತ, ನನ್ನ ಕಾಯಕಕ್ಕೆ ನನ್ನ ಸಹೋದ್ಯೋಗಿಗಳು ಕೊಡುವ ಗೌರವವೇ ನನಗೆ ಮುಖ್ಯ&rsquo; ಎಂದು ಹೆಮ್ಮೆಯಿಂದ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;&lt;strong&gt;* ಮಕ್ಕಳು ಟಾಕ್ಸಿಕ್ ಚಿತ್ರದಿಂದ ಏನು ಕಲಿಯುತ್ತಾರೆ?&lt;/strong&gt;&lt;/p&gt;&lt;p&gt;ಏನು ಮಾಡಬಾರದು ಎಂಬುದನ್ನು ಕಲಿಯುತ್ತಾರೆ. ಇದು ಮಕ್ಕಳಿಗಾಗಿ ಮಾಡಿದ ಚಿತ್ರವಲ್ಲ.&lt;/p&gt;&lt;h2&gt;&lt;strong&gt;* ಸಂಜಯ್ ದತ್ ಜೊತೆ ನಟಿಸಿದ ಅನುಭವ ಹೇಗಿತ್ತು?&lt;/strong&gt;&lt;/h2&gt;&lt;p&gt;ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವರ ಆರೋಗ್ಯ ಸರಿಯಿರಲಿಲ್ಲ. ಅಷ್ಟು ಧೂಳಿನಲ್ಲಿ ನಾವು ಬಾಡಿ ಡಬಲ್ ಬಳಸೋಣ ಎಂದರೂ ಅವರು ಒಪ್ಪಲಿಲ್ಲ. &lsquo;ನನ್ನ ಕಾಯಕಕ್ಕೆ ಅಗೌರವ ಮಾಡಬೇಡಿ&rsquo; ಎಂದು ಸ್ವತಃ ಬಂದು ಅದ್ಭುತವಾಗಿ ನಟಿಸಿದರು. ಅವರ ಬದ್ಧತೆ ಅಸಾಧಾರಣ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/yash-opens-up-about-his-struggles-stardom-toxic-and-ravana-role-gvd/articleshow-x63gme9"/>
        </item>
        <item>
            <title><![CDATA[ಯಶ್ ಹೇಳಿರೋ 'ಆ ಮಾತು' ಇಡೀ ಜಗತ್ತಿನ ಗಮನಕ್ಕೆ ಬಂದಿದೆ.. ರಾಕಿಂಗ್ ಸ್ಟಾರ್‌ಗೂ ಮೊದಲು ಯಾರಾದ್ರಾ ಹೀಗ್ ಹೇಳಿದ್ರಾ?]]></title>
            <link>https://kannada.asianetnews.com/entertainment/world-is-applauding-yash-for-his-remark-on-aap-ki-adalat-as-you-are-not-my-fans-if-you-do-not-respect-other-artists/articleshow-kecdtve</link>
            <guid isPermaLink="true">https://kannada.asianetnews.com/entertainment/world-is-applauding-yash-for-his-remark-on-aap-ki-adalat-as-you-are-not-my-fans-if-you-do-not-respect-other-artists/articleshow-kecdtve</guid>
            <pubDate>Mon, 17 Aug 2026 13:54:17 +0530</pubDate>
            <description><![CDATA[&lt;p&gt;ಈ ಮಾತನ್ನು ಇಡೀ ಜಗತ್ತಿಗೇ ಕೇಳುವಂತೆ ನಟ ಯಶ್ ಅವರು 'ಆಪ್&zwnj; ಕಿ ಅದಾಲತ್' ಶೋನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬಂದಿರೋದು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ಎಂಬುದು ನಿಜವಾದರೂ, 'ಒಂದು ಸ್ಪಷ್ಟ ಸಂದೇಶ ಕೂಡ ಯಶ್ ಅವರ ಮಾತಿನಲ್ಲಿದೆ. ಈ ಮಾತಿಗೆ ಶೋದಲ್ಲಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಏನದು ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m077zkqw7vcs23j2j6kjtv53,imgname-whatsapp-image-2026-08-07-at-4.37.54-pm--3--1786949652220.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash's response to Rashmika's question about 'showing off' actually a message for the whole world?ರಶ್ಮಿಕಾ 'ಶೋ ಆಫ್&zwnj;' ಪ್ರಶ್ನೆಗೆ ಯಶ್ ಕೊಟ್ಟ ಉತ್ತರ ಇಡೀ ಜಗತ್ತಿಗೇ ಕೊಟ್ಟ ಸಂದೇಶವೇ?&lt;/strong&gt;&lt;/p&gt;&lt;p&gt;ಕನ್ನಡಿಗ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಭಾರತದ ಖ್ಯಾತ ಶೋ 'ಆಪ್&zwnj; ಕಿ ಅದಾಲತ್&zwnj;'ನಲ್ಲಿ ಆಡಿರುವ ಒಂದೊಂದು ಮಾತೂ ಮುತ್ತು ಎನ್ನಿಸಿಕೊಂಡಿದೆ. ಆದರೆ, ಎಲ್ಲಕ್ಕಿಂತ ಹೆಚ್ಚು ಮಹತ್ವದ್ದು ಎನ್ನಬಹುದಾದ ಈ ಮಾತನ್ನು ಹಲವರು ಗಮನಿಸಿರಬಹುದು. ಎಲ್ಲ ಪ್ರಶ್ನೆಗಳಿಗೆ ಕೊಟ್ಟ ಉತ್ತರ ಕೂಡ ಮಾರ್ಮಿಕವೇ ಹೌದು. ಆದರೆ, ಮುಂದೆ ಹೇಳಲಿರುವ, ಯಶ್ ಆಡಿರುವ ಆ ಮಾತು ಸಾಕಷ್ಟು ಪ್ರಬುದ್ಧ ಉತ್ತರ ಎನ್ನಿಸಿದೆ. ಕಾರಣ, ಅದು ಸ್ಟಾರ್ ವಾರ್&zwnj;ಗೆ ಸಂಬಂಧಿಸಿದ್ದು, ಜೊತೆಗೆ ಭಾರತದಲ್ಲಿ ಪರಿಹಾರ ಕಾಣಲೇಬೇಕಾದ ಸಮಸ್ಯೆಗೆ ಸಂಬಂಧಿಸಿದ್ದು. ಅದೇನು ಅಂತ ನೋಡಿ..&lt;/p&gt;&lt;p&gt;&lt;img&gt;&lt;/p&gt;&lt;h2&gt;'ಆಪ್&zwnj; ಕಿ ಅದಾಲತ್&zwnj;' ಕೋರ್ಟ್&zwnj;&lt;/h2&gt;&lt;p&gt;ಹೌದು, 'ಆಪ್&zwnj; ಕಿ ಅದಾಲತ್&zwnj;' ಕೋರ್ಟ್&zwnj;ನಲ್ಲಿ ನಟ ಯಶ್ ಅವರಿಗೆ ಬಹಳಷ್ಟು ಪ್ರಶ್ನೆ ಕೇಳಲಾಗಿದೆ. ಅದರಲ್ಲಿ ಒಂದು- ಬರೋಬ್ಬರಿ 9 ವರ್ಷಗಳ ಹಿಂದೆ ನಟಿ ರಶ್ಮಿಕಾಗೆ ಸಂಬಂಧಿಸಿದ್ದು. ಕನ್ನಡದ ನಟಿ, 'ನ್ಯಾಷನಲ್ ಕ್ರಶ್&zwnj;' ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು, ನಟ ರಕ್ಷಿತ್&zwnj; ಶೆಟ್ಟಿ ಜೊತೆಗೆ ಭಾಗಿಯಾದ ಶೋ ಅದು. ಅಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ, ನಟಿ ರಶ್ಮಿಕಾ ಅವರು ಒತ್ತಡಕ್ಕೆ ಒಳಗಾಗಿ, 'ಗಿಫ್ಟ್&zwnj; ಹ್ಯಾಂಪರ್' ಗೆಲ್ಲುವ ಹಠಕ್ಕೆ ಬಿದ್ದು ಹೇಳಲು ಇಷ್ಟವಿಲ್ಲದಿದ್ದರೂ 'ಶೋ ಆಫ್&zwnj;' ಯಾರು ಎಂಬ ಪ್ರಶ್ನೆಗೆ ನಟ ಯಶ್ ಹೆಸರು ಹೇಳಿದ್ದಾರೆ. ಅದು ದೊಡ್ಡ ವಿವಾದವಾಗಿ, ನಟ ಯಶ್ ಅಭಿಮಾನಿಗಳು ಆಗಲೂ ಈಗಲೂ ರಶ್ಮಿಕಾರನ್ನು ದ್ವೇಷಿಸುವುದು ನಡೆಯುತ್ತಲೇ ಇತ್ತು.&lt;/p&gt;&lt;p&gt;&lt;img&gt;&lt;/p&gt;&lt;h3&gt;ಹೋಸ್ಟ್ ರಜತ್ ಶರ್ಮಾ ಕೇಳಿದ ಪ್ರಶ್ನೆಗೆ ನಟ ಯಶ್ ಅವರು ಹೀಗೆ ಉತ್ತರ ಕೊಟ್ಟಿದ್ದಾರೆ!&lt;/h3&gt;&lt;p&gt;'ಆಪ್&zwnj; ಕಿ ಅದಾಲತ್' ಶೋದಲ್ಲಿ, ಹೋಸ್ಟ್ ರಜತ್ ಶರ್ಮಾ ಕೇಳಿದ ಪ್ರಶ್ನೆಗೆ ನಟ ಯಶ್ ಅವರು ಹೀಗೆ ಉತ್ತರ ಕೊಟ್ಟಿದ್ದಾರೆ: ಕೆಲವೊಂದು ಬಕ್ವಾಸ್ ಶೋಗಳು ಇರುತ್ತವೆ. ಅಲ್ಲಿ ಎರಡೋ ನಾಲ್ಕೋ ಆಪ್ಶನ್ ಕೊಟ್ಟು, ಒಂದು ಹೆಸರು ಹೇಳಲೇಬೇಕು ಎಂಬ ಪ್ರೆಶರ್ ತರುತ್ತಾರೆ. ಆ ಸಮಯದಲ್ಲಿ ರಶ್ಮಿಕಾ ಕೊಟ್ಟ ಉತ್ತರ ಅದಾಗಿರಬಹುದು. ಅಷ್ಟಕ್ಕೂ ಅಂದು ರಶ್ಮಿಕಾ ಅವರು ಆಗತಾನೇ ಸಿನಿಮಾರಂಗಕ್ಕೆ ಬಂದ ಹೊಸದು. ಅವರಿಗೆ ಎಲ್ಲವೂ ಹೊಸತು. ಸಿನಿಮಾರಂಗದ ಬಗ್ಗೆ ಅಷ್ಟೇನೂ ಇರವಿಲ್ಲದ, ವೈಯಕ್ತಿಕವಾಗಿ ಪರಿಚಯವಿಲ್ಲದ ನನ್ನ ಬಗ್ಗೆ ಜಸ್ಟ್ ಒಂದು ಆಯ್ಕೆ ಎನ್ನುವಂತೆ ಅವರು ಅಂದು ಹೇಳಿರೋ ಆ ಮಾತನ್ನು ಅಷ್ಟೇನೂ ಸೀರಿಯಸ್ಸಾಗಿ ತೆಗೆದುಕೊಳ್ಳುವ ಅಗತ್ಯವೇ ಇಲ್ಲ. ಅಷ್ಟಕ್ಕೂ ನನ್ನ ವ್ಯಕ್ತಿತ್ವ ಬೇರೆಯವರ ಕಣ್ಣಿನ ದೃಷ್ಟಿಯ ಮೂಲಕ ನಿರ್ಧಾರ ಆಗೋದಿಲ್ಲ.&lt;/p&gt;&lt;p&gt;&lt;img&gt;&lt;/p&gt;&lt;p&gt;ಹೀಗೆಂದು ಹೇಳಿದ ಯಶ್ ಕೊನೆಗೊಂದು ಮಾತು ಹೇಳಿದ್ದಾರೆ. ಅದನ್ನು ಇಡೀ ಜಗತ್ತು ಕೇಳಿಸಿಕೊಂಡಿದೆ. ಆ ಮಾತಲ್ಲಿ ಅದೆಷ್ಟು ಮೆಚ್ಯೂರಿಟಿ ಇದೆ, ಅದೆಂಥಾ ಪ್ರಬುದ್ಧತೆ ಮನೆಮಾಡಿದೆ ಎಂದರೆ, ಇಡೀ ಜಗತ್ತು ಯಶ್ ಮಾತನ್ನು ಮೆಚ್ಚಿಕೊಂಡಿದೆ. ಜಗತ್ತಿನಲ್ಲಿ ಎಲ್ಲೆಲ್ಲಿ ಸ್ಟಾರ್&zwnj;ವಾರ್ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಭಾರತದಲ್ಲಿ ಹಾಗೂ ನಮ್ಮ ಕನ್ನಡನಾಡಿನಲ್ಲಿ ಅದು ಚಿತ್ರರಂಗದ ಒಂದು ಭಾಗವೇ ಆಗಿ ಬೇರೂರಿಬಿಟ್ಟಿದೆ. ಯಶ್ ಹೇಳಿರೋ ಈ ಮಾತನ್ನು ಕೇಳಿ ನಟರ ಅಭಿಮಾನಿಗಳು ಮಾತ್ರವಲ್ಲ, ಸ್ವತಃ ಸ್ಟಾರ್&zwnj;ನಟರುಗಳೂ ಕೂಡ ಅಚ್ಚರಿಗೆ ಒಳಗಾಗಿ ಮೆಚ್ಚುಗೆ ಸೂಚಿಸಲೇಬೇಕು. ಹೌದು ಯಶ್ ಹೇಳಿದ್ದಾರೆ- &quot;ಬೇರೆ ಕಲಾವಿದರನ್ನು ಗೌರವಿಸದಿದ್ದರೆ ನೀವು ನನ್ನ ಅಭಿಮಾನಿಗಳೇ ಅಲ್ಲ' ಎಂದಿದ್ದಾರೆ ಯಶ್.&lt;/p&gt;&lt;p&gt;&lt;img&gt;&lt;/p&gt;&lt;p&gt;ಈ ಮಾತನ್ನು ಇಡೀ ಜಗತ್ತಿಗೇ ಕೇಳುವಂತೆ ನಟ ಯಶ್ ಅವರು 'ಆಪ್&zwnj; ಕಿ ಅದಾಲತ್' ಶೋನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬಂದಿರೋದು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ಎಂಬುದು ನಿಜವಾದರೂ, ಇಂಥ ಪ್ರಶ್ನೆಯನ್ನು ಭವಿಷ್ಯದಲ್ಲಿ ನಟ ಯಶ್&zwnj; ಅವರಿಗೆ ಕೇಳವಂತೆ ಆಗಬಾರದು ಎಂಬ ಉದ್ದೇಶದ ಜೊತೆಗೆ, 'ಯಾರೋ ಒಬ್ಬರ ಬಗ್ಗೆ ಇನ್ಯಾರೋ ಒಬ್ಬರು ಅಭಿಪ್ರಾಯವನ್ನು ಇಟ್ಟುಕೊಂಡು ಅಭಿಮಾನಿಗಳು ಕಚ್ಚಾಡಬಾರದು, ಸೋಷಿಯಲ್ ಮೀಡಿಯಾಗಳಲ್ಲಿ ವಾದ-ವಿವಾದ ನಡೆಯಬಾರದು' ಎಂಬ ಸ್ಪಷ್ಟ ಸಂದೇಶ ಕೂಡ ಯಶ್ ಅವರ ಮಾತಿನಲ್ಲಿದೆ. ಈ ಮಾತಿಗೆ ಶೋದಲ್ಲಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಜೊತೆಗೆ, ಜಗತ್ತಿನಲ್ಲಿರುವ 'ಬುದ್ದಿವಂತರ ಸಮೂಹ'ದಿಂದ ಕೂಡ ಯಶ್ ಅವರಿಗೆ ಕೇಳಿಸದಂತೆ, ಜಗತ್ತಿನ ಅರಿವಿಗೆ ಬಾರದಂತೆ 'ಕ್ಲಾಪ್ಸ್&zwnj;' ಬೀಳುತ್ತಿದೆ. ಇದೇ ಅಲ್ಲವೇ ಮಾನವೀಯತೆ ಬೆರೆತ ಪ್ರಬುದ್ಧತೆ ಎಂದರೆ? ನೀವ್ ಏನಂತೀರಾ?&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/world-is-applauding-yash-for-his-remark-on-aap-ki-adalat-as-you-are-not-my-fans-if-you-do-not-respect-other-artists/articleshow-kecdtve"/>
        </item>
        <item>
            <title><![CDATA[Toxic Countdown Day 10: ಯಶ್ 'ಟಾಕ್ಸಿಕ್' ಬಿಡುಗಡೆಗೆ ಕೌಂಟ್‌ಡೌನ್.. 10ನೇ ದಿನದ ಸ್ಪೆಷಲ್‌ ಸ್ಟೋರಿ ಇಲ್ಲಿದೆ ನೋಡಿ!]]></title>
            <link>https://kannada.asianetnews.com/entertainment/the-countdown-to-the-release-of-yash-starrer-toxic-is-underway-with-only-10-days-to-go-as-of-17-august-2026/articleshow-7to2gd5</link>
            <guid isPermaLink="true">https://kannada.asianetnews.com/entertainment/the-countdown-to-the-release-of-yash-starrer-toxic-is-underway-with-only-10-days-to-go-as-of-17-august-2026/articleshow-7to2gd5</guid>
            <pubDate>Mon, 17 Aug 2026 12:25:41 +0530</pubDate>
            <description><![CDATA[&lt;p&gt;ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 10 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದ ಬಗೆಗಿನ ಸ್ಪೆಷಲ್ ಮಾಹಿತಿ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m077sg52bnt9pc85dh1jyazz,imgname-whatsapp-image-2026-08-16-at-3.24.39-pm-1786949451938.jpeg" type="image/jpeg" height="390" width="690"/>
            <content:encoded><![CDATA[&lt;p&gt;Yash Toxic Release Date-Rocking Star Yash-Toxic Movie Countdown: ಯಶ್&zwnj; ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ ಶುರು:&lt;/p&gt;&lt;p&gt;ಕನ್ನಡನಾಡು ಸೇರಿದಂತೆ ಇಡೀ ಜಗತ್ತಿನಲ್ಲಿ ಕನ್ನಡಿಗ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಬ್ಬದ ಹವಾ ಶುರುವಾಗಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ ಮಾಡಲಾಗುತ್ತಿದೆ. ಇನ್ನೇನು 10 ದಿನಗಳಷ್ಟೇ ಬಾಕಿ ಇದೆ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಎಂಬುದು ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿರಸಿಕರಿಗೆ ಖುಷಿಯ ಸಮಾಚಾರ. ಹೌದು, ಟಾಕ್ಸಿಕ್&zwnj; ತೆರೆಯ ಮೇಲೆ ಕಾಣಿಸಿಕೊಳ್ಳಲು ಇನ್ನು 10 ದಿನಗಳಷ್ಟೇ ಬಾಕಿ ಇವೆ, ಅಂದರೆ ಇಂದು ಕೌಂಟ್&zwnj;ಡೌನ್ ನಂಬರ್ 10.&lt;/p&gt;&lt;p&gt;&lt;img&gt;&lt;/p&gt;&lt;h2&gt;ಯಶ್ ನಟನೆ, ಗೀತು ಮೋಹನ್&zwnj;ದಾಸ್ ನಿರ್ದೇಶನದ ಟಾಕ್ಸಿಕ್&lt;/h2&gt;&lt;p&gt;ಯಶ್ ನಟನೆ, ಗೀತು ಮೋಹನ್&zwnj;ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಆದರೆ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಕೂಡ ಡಬ್ ಆಗಿ ಬಿಡುಗಡೆ ಆಗಲಿದೆ. ಹಾಲಿವುಡ್ ತಂತ್ರಜ್ಞರು ಸೇರಿದಂತೆ, ಜಗತ್ತಿನ ಖ್ಯಾತ ಟೆಕ್ನಿಷಿಯನ್ಸ್&zwnj; ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಪ್ಯಾನ್ ವರ್ಲ್ಡ್ ಸಿನಿಮಾ ಎಂಬ ಹಣೆಪಟ್ಟೆ ಹೊತ್ತಿದೆ. ಈಗಾಗಲೇ ಜಗತ್ತಿಗೆ ಅನಾವರಣ ಆಗಿರುವ ಟ್ರೇಲರ್ ಹಾಗೂ ಸಾಂಗ್ ಮೂಲಕ ಹೇಳುವುದಾದರೆ ಟಾಕ್ಸಿಕ್ ಸಿನಿಮಾ ಅಕ್ಷರಶಃ ಪ್ಯಾನ್ ವರ್ಲ್ಡ್ ಸಿನಿಮಾ ಆಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ನಮಿತ್ ಮಲ್ಹೋತ್ರಾ ಹಾಗೂ ಯಶ್ ಪಾರ್ಟ್&zwnj;ನರ್&zwnj;ಶಿಪ್ ಮೂಲಕ ಟಾಕ್ಸಿಕ್ ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಈ ಬಜೆಟ್&zwnj;ನಲ್ಲಿ ಸೇರಿಕೊಂಡಿದೆ. ಈಗಾಗಲೇ ಸಿನಿಮಾದ ಬಗ್ಗೆ ಪೊಸಿಟಿವ್ ಟಾಕ್ ಹಾಗೂ ಭಾರೀ ನಿರೀಕ್ಷೆ ಇರುವುದರಿಂದ ಸಿನಿಮಾ ಸೂಪರ್ ಹಿಟ್ ಆಗುವುದಂತೂ ಖಂಡಿತ ಎಂಬ ಮಾತು ಎಲ್ಲಾ ಕಡೆ ಕೇಳಿಬರುತ್ತಿದೆ. ಹಾಕಿರುವ ಬಜೆಟ್&zwnj;ಗೆ ಅದರ 2-3 ಪಟ್ಟು ಗಳಿಕೆ ಆಗುವದಂತೂ ನಿಶ್ಚಿತ. ಮಿಕ್ಕಿದ್ದನ್ನು ಈಗಲೇ ಹೇಳಲಾಗದು, ಏಕೆಂದರೆ ಭವಿಷ್ಯ ಯಾವತ್ತೂ ಅನಿಶ್ಚಿತ ಎನ್ನುತ್ತಿದ್ದಾರೆ ಬಾಕ್ಸ್&zwnj; ಆಫೀಸ್ ಕಲೆಕ್ಷನ್ ಲೆಕ್ಕಾಚಾರದಲ್ಲಿ ಮುಳುಗೇಳುತ್ತಿರುವ ಪಂಡಿತರು.&lt;/p&gt;&lt;p&gt;&lt;img&gt;&lt;/p&gt;&lt;h3&gt;ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಅಬ್ಬರದ ಪ್ರಚಾರಕಾರ್ಯ&lt;/h3&gt;&lt;p&gt;ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 10 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು, ಅಂದರೆ ನಯನಾತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ಹಾಗೂ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್&zwnj;ಡೌನ್ ಶುರುವಾಗಿದೆ. ಇಂದು 10ರ ಕೌಂಟ್&zwnj;ಡೌನ್&zwnj;ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 09. ಎಲ್ಲಾ ದಿನಗಳ ಅಪ್&zwnj;ಡೇಟ್&zwnj;ಗೆ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/the-countdown-to-the-release-of-yash-starrer-toxic-is-underway-with-only-10-days-to-go-as-of-17-august-2026/articleshow-7to2gd5"/>
        </item>
        <item>
            <title><![CDATA[ಅಚ್ಚರಿಯ ಕಾರಣ ಕೊಟ್ಟು ಬಿಜೆಪಿಗೆ ಗುಡ್‌ಬೈ ಹೇಳಿದ ಖ್ಯಾತ ನಟ ದೇವನ್; ಕೇರಳ ರಾಜಕೀಯದಲ್ಲಿ ಸಂಚಲನ]]></title>
            <link>https://kannada.asianetnews.com/entertainment/renowned-actor-devan-bids-goodbye-to-the-bjp-citing-surprising-reason-sns/articleshow-xssuga8</link>
            <guid isPermaLink="true">https://kannada.asianetnews.com/entertainment/renowned-actor-devan-bids-goodbye-to-the-bjp-citing-surprising-reason-sns/articleshow-xssuga8</guid>
            <pubDate>Mon, 17 Aug 2026 12:07:58 +0530</pubDate>
            <description><![CDATA[&lt;p&gt;ಮಲಯಾಳಂ ನಟ ಮತ್ತು ರಾಜಕೀಯ ನಾಯಕ ದೇವನ್ ಅವರು ಕೇರಳ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದ ಕಾರಣ ಮತ್ತು ಹಿರಿಯ ನಾಯಕರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಬೇಸರದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. 2021ರಲ್ಲಿ ತಮ್ಮ ಕೇರಳ ಪೀಪಲ್ಸ್ ಪಾರ್ಟಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m076zkxvkajd7z7wq7ntw6nm,imgname-actor-devan-1786948603835.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಲಯಾಳಂ ಸಿನಿಮಾ ನಟ, ರಾಜಕೀಯ ನಾಯಕ ದೇವನ್ ಅವರು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೇರಳ ಬಿಜೆಪಿಯಲ್ಲಿ ಸೂಕ್ತ ಸ್ಥಾನ ಸಿಗುತ್ತಿಲ್ಲ ಎಂಬ ಬೇಸರದಿಂದ ರಾಜೀನಾಮೆ ನೀಡುತ್ತಿರುವ ತಿಳಿಸಿರುವ ನಟ ದೇವನ್, ಹಿರಿಯ ನಾಯಕರು ತಮ್ಮ ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದರೆ.&lt;/p&gt;&lt;h2&gt;ರಾಜೀನಾಮೆ ನಿರ್ಧಾರ ಯಾಕೆ?&lt;/h2&gt;&lt;p&gt;ಪಕ್ಷವನ್ನು ತೊರೆಯುವ ನಿರ್ಧಾರ ಏಕಾಏಕಿ ತೆಗೆದುಕೊಂಡಿದ್ದು ಅಲ್ಲ, ಕಳೆದ ಹಲವು ತಿಂಗಳಿನಿಂದ ಈ ಬಗ್ಗೆ ಯೋಚನೆ ಮಾಡಿದ್ದೇನೆ. ಆದರೆ ಕೇಂದ್ರ ಬಿಜೆಪಿ ನಾಯಕರೊಂದಿಗೆ ತಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ತಮ್ಮ ರಾಜಕೀಯ ಚಿಂತನೆಗಳನ್ನು ಕೇರಳದಲ್ಲಿ ಅಳವಡಿಸಲು ಆಗುತ್ತಿಲ್ಲ. ಆದ್ದರಿಂದಲೇ ರಾಜೀನಾಮೆ ನಿರ್ಧಾರ ಮಾಡಿರೋದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಕೇರಳದಲ್ಲಿ ಸಿನಿಮಾ ನಟರು ರಾಜಕೀಯಕ್ಕೆ ಬರೋದು ವಿಶೇಷ ಏನು ಅಲ್ಲ. ಮಲಯಾಳಂ ಸಿನಿಮಾ ರಂಗದಲ್ಲಿ ತಮಗೆ ವಿಶೇಷ ಸ್ಥಾನವಿದೆ. ಜನರಿಗೆ ನನ್ನ ಪರಿಚಯ ಇದ್ದು, ಸಿನಿಮಾ ರಂಗದಲ್ಲಿರುವ ಪ್ರಭಾವ, ರಾಜಕೀಯ ಬಗ್ಗೆ ಆಸಕ್ತಿಯಿಂದ ಪಕ್ಷಕ್ಕೆ ಉಪಯೋಗ ಆಗಬೇಕು ಎಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಅಲ್ಲಿನ ನಾಯಕರ ನಡುವಿನ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ಗುಡ್ ಬೈ ಹೇಳುತ್ತಿರೋದಾಗಿ ಹೇಳಿದ್ದರೆ.&lt;/p&gt;&lt;h2&gt;ಬಿಜೆಪಿ ಪಕ್ಷದಲ್ಲಿ ತಮ್ಮ ಪಕ್ಷ ವಿಲೀನ ಮಾಡಿದ್ದ ದೇವನ್&lt;/h2&gt;&lt;p&gt;ಶ್ರೀ ದೇವನ್ 2004ರಲ್ಲಿ ರಾಜಕೀಯಕ್ಕೆ ಕಾಲಿಟ್ಟಿದ್ದರು. ಕೇರಳ ಪೀಪಲ್ಸ್ ಪಾರ್ಟಿ ಪ್ರಾರಂಭಿಸಿದ್ದ ಅವರು, ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿ 2021ರಲ್ಲಿ ಬಿಜೆಪಿಯೊಂದಿಗೆ ಪಕ್ಷವನ್ನು ವಿಲೀನ ಮಾಡಿದ್ದರು. ದೇವನ್ ಅವರು ಶ್ರೀ ನಾರಾಯಣ ಗುರುಗಳ ಆದರ್ಶಿಗಳನ್ನು ಪಾಲಿಸುವ ಉದ್ದೇಶದಿಂದ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಮ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಬಗ್ಗೆ ಸಂಕಲ್ಪ ಕೂಡ ಮಾಡಿದ್ದರು.&lt;/p&gt;&lt;p&gt;2026ರ ಚುನಾವಣೆಯಲ್ಲಿ ನಾನು ಬಿಜೆಪಿ ಪರವಾಗಿ ಅಕ್ರಮಣಕಾರಿಯಾಗಿ ಕೆಲಸ ಮಾಡಿದ್ದೇನೆ. ಸಾಕಷ್ಟು ಆತ್ಮಾವಲೋಕನ ನಂತರ ಬಿಜೆಪಿ ಪ್ರಾಥಮಿಕ ಸದಸ್ಯತ್ವ ತೊರೆಯುವ ನಿರ್ಧಾರ ಮಾಡಿದ್ದೇನೆ. 2026ರ ಆರಂಭದಲ್ಲಿಯೇ ಈ ಬಗ್ಗೆ ಚಿಂತನೆ ಮಾಡಿದ್ದೆ, ಸದ್ಯ ನನ್ನ ದೃಷ್ಟಿಕೋನವೂ ಬಿಜೆಪಿಗೆ ಹೊಂದಾಣಿಕೆ ಆಗೋದಿಲ್ಲ ಎಂದು ಅರಿತುಕೊಂಡು ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ ಎಂದು ದೇವನ್ ಹೇಳಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sumanth SN</dc:creator>
            <atom:link href="https://kannada.asianetnews.com/entertainment/renowned-actor-devan-bids-goodbye-to-the-bjp-citing-surprising-reason-sns/articleshow-xssuga8"/>
        </item>
        <item>
            <title><![CDATA[ಈಡೇರದ ಸಚಿವ ಸ್ಥಾನದ ಕನಸು, ನಟಿ ಉಮಾಶ್ರೀಗೆ ಉಪಸಭಾಪತಿ ಸ್ಥಾನ ಫಿಕ್ಸ್! ಎದುರಾಳಿಗಳೇ ಇಲ್ಲದೆ ಗೆಲುವು ಖಚಿತ!]]></title>
            <link>https://kannada.asianetnews.com/state/actress-umashree-nominated-karnataka-legislative-council-deputy-chairman-unopposed-election/articleshow-v0gwsyy</link>
            <guid isPermaLink="true">https://kannada.asianetnews.com/state/actress-umashree-nominated-karnataka-legislative-council-deputy-chairman-unopposed-election/articleshow-v0gwsyy</guid>
            <pubDate>Mon, 17 Aug 2026 11:40:49 +0530</pubDate>
            <description><![CDATA[ಹಿರಿಯ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಅವರು ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ, ಅವರ ಅವಿರೋಧ ಆಯ್ಕೆ ಖಚಿತವಾಗಿದೆ. ಸಚಿವಾಕಾಂಕ್ಷಿಯಾಗಿದ್ದ ಉಮಾಶ್ರೀ ಅವರು ಇದೀಗ ಮೇಲ್ಮನೆಯ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m074qth7bfaaqm359rx87ff2,imgname-mlc-umashree-nomination-1786946251303.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.17): ಕ&lt;/strong&gt;ರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಹುದ್ದೆಗೆ ಕಾಂಗ್ರೆಸ್&zwnj;ನ ಹಿರಿಯ ಸದಸ್ಯೆ, ಖ್ಯಾತ ನಟಿ ಉಮಾಶ್ರೀ ಅವರು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವು ಈ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿರುವುದರಿಂದ, ಉಮಾಶ್ರೀ ಅವರು ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ. ನಾಳೆ ಸದನದಲ್ಲಿ ಅಧಿಕೃತವಾಗಿ ಅವರ ಆಯ್ಕೆಯನ್ನು ಪ್ರಕಟಿಸಲಾಗುತ್ತದೆ.&lt;/p&gt;&lt;h2&gt;&lt;strong&gt;'ಸಚಿವೆ ಆಗುವ ಆಸೆ ಇತ್ತು, ಆದರೆ...'&lt;/strong&gt;&lt;/h2&gt;&lt;p&gt;ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಮಾಶ್ರೀ ಅವರು ತಮ್ಮ ಮನದ ಇಂಗಿತವನ್ನು ಹಂಚಿಕೊಂಡರು. 'ನಗೂ ಸಹಜವಾಗಿ ರಾಜ್ಯ ಸಚಿವ ಸಂಪುಟದಲ್ಲಿ ಸಚಿವೆ ಆಗುವ ಆಕಾಂಕ್ಷೆ ಇತ್ತು. ಆದರೆ, ನಮ್ಮ ಕಾಂಗ್ರೆಸ್ ಪಕ್ಷ ನನಗೆ ಸಚಿವ ಸ್ಥಾನಕ್ಕಿಂತಲೂ ಅತ್ಯಂತ ಉನ್ನತವಾದ ಸಾಂವಿಧಾನಿಕ ಸ್ಥಾನವನ್ನು ಗೌರವದಿಂದ ನೀಡಿದೆ. ಹಾಗಾಗಿ ನನಗೆ ಈ ಸ್ಥಾನ ಸಿಕ್ಕಿದ್ದಕ್ಕೆ ಅತ್ಯಂತ ತೃಪ್ತಿಯಿದೆ. ನನಗೆ ಈ ಮಹತ್ವದ ಜವಾಬ್ದಾರಿ ನೀಡಿದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. 'ಪಕ್ಷ ಮತ್ತು ಸದನ ನನ್ನ ಮೇಲಿಟ್ಟಿರುವ ನಿರೀಕ್ಷೆಗೆ ತಕ್ಕಂತೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿಕೊಂಡು ಹೋಗುತ್ತೇನೆ' ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಕಣದಿಂದ ಹಿಂದೆ ಸರಿದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ:&lt;/strong&gt;&lt;/h2&gt;&lt;p&gt;ಮತ್ತೊಂದೆಡೆ, ಉಪಸಭಾಪತಿ ಚುನಾವಣೆಯಿಂದ ಹಿಂದೆ ಸರಿಯುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಾಣ ನಡೆ ಪ್ರದರ್ಶಿಸಿದೆ. ಇತ್ತೀಚೆಗಷ್ಟೇ ನಡೆದ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಸ್ಪರ್ಧಿಸಿ, ಸಂಖ್ಯಾಬಲದ ಕೊರತೆಯಿಂದಾಗಿ ಸೋಲು ಕಂಡಿದ್ದರು. ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಸಂಖ್ಯಾಬಲ ಇರುವುದರಿಂದ, ಮತ್ತೊಮ್ಮೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸೋತು ಮುಜುಗರಕ್ಕೆ ಈಡಾಗುವುದು ಬೇಡ ಎಂದು ಎನ್&zwnj;ಡಿಎ ನಾಯಕರು ನಿರ್ಧರಿಸಿದ್ದಾರೆ.&lt;/p&gt;&lt;p&gt;ಹೀಗಾಗಿ, ಯಾವುದೇ ಪೈಪೋಟಿ ಇಲ್ಲದೆ ಉಮಾಶ್ರೀ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದು, ನಾಳೆ ಸದನ ಆರಂಭವಾಗುತ್ತಿದ್ದಂತೆ ಅವರ ಅವಿರೋಧ ಆಯ್ಕೆಯನ್ನು ಸಭಾಪತಿಗಳು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಚಿವರಾಗಿ, ಶಾಸಕಿಯಾಗಿ ಹಾಗೂ ಪರಿಷತ್ ಸದಸ್ಯೆಯಾಗಿ ಅಪಾರ ಅನುಭವ ಹೊಂದಿರುವ ಉಮಾಶ್ರೀ ಅವರು, ಇದೀಗ ಮೇಲ್ಮನೆಯ ಪೀಠವನ್ನೇರಲು ಸಜ್ಜಾಗಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/actress-umashree-nominated-karnataka-legislative-council-deputy-chairman-unopposed-election/articleshow-v0gwsyy"/>
        </item>
        <item>
            <title><![CDATA[ತ್ರಿಷಾ ಬಳಿ ಕೋಟಿ ಕೋಟಿ ಆಸ್ತಿ; ಚೆನ್ನೈ ಮನೆಯಿಂದ ಲಂಡನ್ ಪ್ರಾಪರ್ಟಿವರೆಗೆ ಸಂಪತ್ತಿನ ಲೆಕ್ಕ]]></title>
            <link>https://kannada.asianetnews.com/gallery/entertainment/trisha-krishnans-rs-85-crore-net-worth-rs-10-crore-chennai-home-film-fees-and-luxury-cars-suh-4pt3td5</link>
            <guid isPermaLink="true">https://kannada.asianetnews.com/gallery/entertainment/trisha-krishnans-rs-85-crore-net-worth-rs-10-crore-chennai-home-film-fees-and-luxury-cars-suh-4pt3td5</guid>
            <pubDate>Mon, 17 Aug 2026 10:40:25 +0530</pubDate>
            <description><![CDATA[&lt;p&gt;ತ್ರಿಷಾ ಕೃಷ್ಣನ್&zwnj; ಅವರ ಅಂದಾಜು ₹85 ಕೋಟಿ ಸಂಪತ್ತಿನಲ್ಲಿ ಚೆನ್ನೈನ ₹10 ಕೋಟಿ ಮನೆ, ಹೈದರಾಬಾದ್&zwnj; ಮತ್ತು ಲಂಡನ್&zwnj;ನ ಆಸ್ತಿಗಳು, ಐಷಾರಾಮಿ ಕಾರುಗಳು ಹಾಗೂ ಸಿನಿಮಾಗಳಿಂದ ಪಡೆಯುವ ಕೋಟ್ಯಂತರ ರೂಪಾಯಿ ಸಂಭಾವನೆ ಸೇರಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m071gwvm7jdzwgffv42dg4y0,imgname-trisha-krishnans-rs-85-crore-net-worth-rs-10-crore-chennai-home-film-fees-and-luxury-cars-1786942878580.jpg" type="image/jpeg" height="390" width="690"/>
            <content:encoded><![CDATA[&lt;p&gt;ತ್ರಿಷಾ ಕೃಷ್ಣನ್&zwnj; ಅವರ ಅಂದಾಜು ₹85 ಕೋಟಿ ಸಂಪತ್ತಿನಲ್ಲಿ ಚೆನ್ನೈನ ₹10 ಕೋಟಿ ಮನೆ, ಹೈದರಾಬಾದ್&zwnj; ಮತ್ತು ಲಂಡನ್&zwnj;ನ ಆಸ್ತಿಗಳು, ಐಷಾರಾಮಿ ಕಾರುಗಳು ಹಾಗೂ ಸಿನಿಮಾಗಳಿಂದ ಪಡೆಯುವ ಕೋಟ್ಯಂತರ ರೂಪಾಯಿ ಸಂಭಾವನೆ ಸೇರಿವೆ.&lt;/p&gt;&lt;img&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಯಶಸ್ವಿ ನಟಿಯರಲ್ಲಿ ತ್ರಿಷಾ ಕೃಷ್ಣನ್ ಕೂಡ ಒಬ್ಬರು. ಎರಡು ದಶಕಗಳಿಗೂ ಹೆಚ್ಚು ಕಾಲದ ಸಿನಿ ಪಯಣದಲ್ಲಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹಲವು ಬ್ಲಾಕ್&zwnj;ಬಸ್ಟರ್ ಸಿನಿಮಾಗಳನ್ನು ನೀಡಿರುವ ಅವರು, ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿದ್ದಾರೆ. ವರದಿಗಳ ಪ್ರಕಾರ, ತ್ರಿಷಾ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು ₹85 ಕೋಟಿ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ಸಿನಿಮಾಗಳಲ್ಲಿನ ಭರ್ಜರಿ ಯಶಸ್ಸಿನ ಜೊತೆಗೆ ಬ್ರ್ಯಾಂಡ್ ಎಂಡೋರ್ಸ್&zwnj;ಮೆಂಟ್&zwnj;ಗಳು, ರಿಯಲ್ ಎಸ್ಟೇಟ್ ಹೂಡಿಕೆಗಳು ಹಾಗೂ ಐಷಾರಾಮಿ ಜೀವನಶೈಲಿಯೂ ತ್ರಿಷಾ ಅವರ ಸಂಪತ್ತಿನ ಭಾಗವಾಗಿದೆ ಎಂದು ವರದಿಗಳು ಹೇಳುತ್ತವೆ.&lt;/p&gt;&lt;p&gt;&lt;strong&gt;ತಮಿಳು, ತೆಲುಗಿನಲ್ಲಿ ಹಲವು ಹಿಟ್ ಸಿನಿಮಾಗಳು&lt;/strong&gt;&lt;/p&gt;&lt;p&gt;ತ್ರಿಷಾ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. &lsquo;ಘಿಲ್ಲಿ&rsquo;, &lsquo;ಸಾಮಿ&rsquo;, &lsquo;ಅಭಿಯುಂ ನಾನೂಂ&rsquo;, &lsquo;ವಿನ್ನೈತಾಂಡಿ ವರುವಾಯಾ&rsquo;, &lsquo;ಮಂಕಾಥಾ&rsquo;, &lsquo;96&rsquo; ಮತ್ತು &lsquo;ಪೊನ್ನಿಯಿನ್ ಸೆಲ್ವನ್&rsquo; ಸೇರಿದಂತೆ ಹಲವು ಜನಪ್ರಿಯ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ &lsquo;ವರ್ಷಂ&rsquo;, &lsquo;ನುವ್ವೋಸ್ತಾನಂಟೇ ನೇನೊದ್ದಂಟಾನಾ&rsquo; ಮತ್ತು &lsquo;ಅಥಾಡು&rsquo; ಸೇರಿದಂತೆ ಹಲವು ಯಶಸ್ವಿ ಚಿತ್ರಗಳ ಭಾಗವಾಗಿದ್ದಾರೆ. ವಿಭಿನ್ನ ಕಥಾಹಂದರ ಹಾಗೂ ಪಾತ್ರಗಳಲ್ಲಿ ನಟಿಸುವ ಮೂಲಕ ತ್ರಿಷಾ ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.&lt;/p&gt;&lt;img&gt;&lt;p&gt;ತ್ರಿಷಾ ಅವರ ಸಂಭಾವನೆಯೂ ಕಾಲಕ್ರಮೇಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. &lsquo;ಪೊನ್ನಿಯಿನ್ ಸೆಲ್ವನ್&rsquo; ಮತ್ತು &lsquo;ಲಿಯೋ&rsquo; ಸಿನಿಮಾಗಳ ಯಶಸ್ಸಿನ ಬಳಿಕ ಅವರ ಸಂಭಾವನೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಸದ್ಯ ತ್ರಿಷಾ ಒಂದು ಸಿನಿಮಾಗೆ ಸುಮಾರು ₹10ರಿಂದ ₹12 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ. ಈ ಹಿಂದೆ ಅವರು ಒಂದು ಚಿತ್ರಕ್ಕೆ ಸುಮಾರು ₹5ರಿಂದ ₹10 ಕೋಟಿ ಪಡೆಯುತ್ತಿದ್ದರು ಎಂದು ವರದಿಗಳು ಹೇಳಿದ್ದವು.&lt;/p&gt;&lt;p&gt;&lt;strong&gt;ಬ್ರ್ಯಾಂಡ್&zwnj;ಗಳಿಂದ ವರ್ಷಕ್ಕೆ ₹9 ಕೋಟಿ ಆದಾಯ?&lt;/strong&gt;&lt;/p&gt;&lt;p&gt;ಸಿನಿಮಾ ಸಂಭಾವನೆ ಮಾತ್ರವಲ್ಲದೆ ತ್ರಿಷಾ ಅವರಿಗೆ ಬ್ರ್ಯಾಂಡ್ ಎಂಡೋರ್ಸ್&zwnj;ಮೆಂಟ್&zwnj;ಗಳಿಂದಲೂ ದೊಡ್ಡ ಪ್ರಮಾಣದ ಆದಾಯ ಬರುತ್ತದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಅವರು ಬ್ರ್ಯಾಂಡ್ ಅನುಮೋದನೆಗಳ ಮೂಲಕ ವಾರ್ಷಿಕವಾಗಿ ಸುಮಾರು ₹9 ಕೋಟಿ ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆಭರಣ, ಫ್ಯಾಷನ್, ಬ್ಯೂಟಿ ಮತ್ತು ಲೈಫ್&zwnj;ಸ್ಟೈಲ್ ಕ್ಷೇತ್ರದ ಹಲವು ಬ್ರ್ಯಾಂಡ್&zwnj;ಗಳೊಂದಿಗೆ ಅವರು ಕೆಲಸ ಮಾಡಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ತ್ರಿಷಾ ಅವರ ರಿಯಲ್ ಎಸ್ಟೇಟ್ ಆಸ್ತಿಗಳಲ್ಲೂ ಚೆನ್ನೈನ ಮನೆ ಪ್ರಮುಖವಾಗಿದೆ. ವರದಿಗಳ ಪ್ರಕಾರ, ಚೆನ್ನೈನಲ್ಲಿ ಅವರ ಮನೆ ಸುಮಾರು ₹10 ಕೋಟಿ ಮೌಲ್ಯದ್ದಾಗಿದೆ. ಮನೆಯ ಒಳಾಂಗಣದಲ್ಲಿ ರಸ್ಟ್ ಆರೆಂಜ್, ಬೀಜ್, ಬ್ರೌನ್ ಮತ್ತು ಮ್ಯೂಟೆಡ್ ಗೋಲ್ಡ್&zwnj;ನಂತಹ ಮಣ್ಣಿನ ಬಣ್ಣಗಳ ಛಾಯೆಗಳಿಗೆ ಆದ್ಯತೆ ನೀಡಲಾಗಿದೆ. ವರ್ಣಚಿತ್ರಗಳು, ಅಮೂರ್ತ ಕಲಾಕೃತಿಗಳು ಮತ್ತು ವಿವಿಧ ಸಂಗ್ರಹಯೋಗ್ಯ ವಸ್ತುಗಳಿಂದ ಮನೆಯ ಒಳಾಂಗಣವನ್ನು ಅಲಂಕರಿಸಲಾಗಿದೆ. ನಟಿಯ ಮನೆಯಲ್ಲಿ ಬಟ್ಟೆಗಳು ಮತ್ತು ಐಷಾರಾಮಿ ಹ್ಯಾಂಡ್&zwnj;ಬ್ಯಾಗ್&zwnj;ಗಳಿಂದ ತುಂಬಿರುವ ವಾಕ್-ಇನ್ ವಾರ್ಡ್&zwnj;ರೋಬ್ ಕೂಡ ಇದೆ ಎಂದು ವರದಿಯಾಗಿದೆ.&lt;/p&gt;&lt;p&gt;&lt;strong&gt;ಹೈದರಾಬಾದ್&zwnj;ನಲ್ಲೂ ಕೋಟಿ ಕೋಟಿ ಆಸ್ತಿ&lt;/strong&gt;&lt;/p&gt;&lt;p&gt;ಚೆನ್ನೈ ಮಾತ್ರವಲ್ಲದೆ ತ್ರಿಷಾ ಹೈದರಾಬಾದ್&zwnj;ನಲ್ಲೂ ದುಬಾರಿ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಈ ಆಸ್ತಿಯ ಮೌಲ್ಯ ಸುಮಾರು ₹6ರಿಂದ ₹6.5 ಕೋಟಿ. ತೆಲುಗು ಚಿತ್ರರಂಗದ ಸಿನಿಮಾ ಕೆಲಸಗಳು ಹಾಗೂ ಇತರ ವೃತ್ತಿಪರ ಬದ್ಧತೆಗಳಿಗಾಗಿ ಹೈದರಾಬಾದ್&zwnj;ಗೆ ತೆರಳಿದಾಗ ಅವರು ಈ ಮನೆಯಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗಿದೆ. ಇದರ ಜೊತೆಗೆ ಲಂಡನ್&zwnj;ನಲ್ಲೂ ತ್ರಿಷಾ ವಸತಿ ಆಸ್ತಿಯನ್ನು ಹೊಂದಿದ್ದಾರೆ ಎಂಬ ವರದಿಗಳಿವೆ. ಆದರೆ ಆ ಆಸ್ತಿಯ ನಿಖರ ಮೌಲ್ಯ ಬಹಿರಂಗವಾಗಿಲ್ಲ.&lt;/p&gt;&lt;img&gt;&lt;p&gt;ತ್ರಿಷಾ ಅವರ ಕಾರು ಕಲೆಕ್ಷನ್ ಕೂಡ ಕಡಿಮೆ ಏನಿಲ್ಲ. ವರದಿಗಳ ಪ್ರಕಾರ, ಅವರ ಬಳಿ ಇರುವ ಐಷಾರಾಮಿ ಕಾರುಗಳ ಒಟ್ಟು ಮೌಲ್ಯ ಸುಮಾರು ₹3ರಿಂದ ₹4 ಕೋಟಿ. ಅವರ ಗ್ಯಾರೇಜ್&zwnj;ನಲ್ಲಿ Mercedes-Benz S-Class, Mercedes-Benz E-Class, BMW 5 Series, Range Rover Evoque ಮತ್ತು Audi ಸೇರಿದಂತೆ ಹಲವು ಪ್ರೀಮಿಯಂ ಕಾರುಗಳಿವೆ ಎಂದು ಹೇಳಲಾಗುತ್ತದೆ.&lt;/p&gt;&lt;p&gt;&lt;strong&gt;ಸಿನಿಮಾ, ಬ್ರ್ಯಾಂಡ್, ಆಸ್ತಿ.. ₹85 ಕೋಟಿ ಸಂಪತ್ತಿನ ಹಿಂದಿನ ಕಥೆ&lt;/strong&gt;&lt;/p&gt;&lt;p&gt;ಎರಡು ದಶಕಗಳಿಗೂ ಹೆಚ್ಚು ಕಾಲದ ಸಿನಿ ಪಯಣದಲ್ಲಿ ತ್ರಿಷಾ ಹಲವು ವಾಣಿಜ್ಯ ಯಶಸ್ಸುಗಳನ್ನು ಕಂಡಿದ್ದಾರೆ. ಬ್ಲಾಕ್&zwnj;ಬಸ್ಟರ್ ಸಿನಿಮಾಗಳಿಂದ ಹಿಡಿದು ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರಗಳವರೆಗೆ ವಿವಿಧ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಿಂದ ಬರುವ ಭರ್ಜರಿ ಸಂಭಾವನೆ, ಬ್ರ್ಯಾಂಡ್ ಎಂಡೋರ್ಸ್&zwnj;ಮೆಂಟ್&zwnj;ಗಳು ಮತ್ತು ರಿಯಲ್ ಎಸ್ಟೇಟ್ ಹೂಡಿಕೆಗಳು ಅವರ ಸಂಪತ್ತಿನ ಪ್ರಮುಖ ಭಾಗಗಳಾಗಿವೆ ಎಂದು ವರದಿಗಳು ಹೇಳುತ್ತವೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/entertainment/trisha-krishnans-rs-85-crore-net-worth-rs-10-crore-chennai-home-film-fees-and-luxury-cars-suh-4pt3td5"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಕನ್ನಡ ಭಾಷೆ ಬಳಸಿ ಅನ್ನೋದು ತಪ್ಪಾ? ನಟಿಯ ಮೇಲೆ ಅಪಾರ್ಟ್‌ಮೆಂಟ್‌ನಲ್ಲಿ ದೌರ್ಜನ್ಯ]]></title>
            <link>https://kannada.asianetnews.com/entertainment/actress-akshata-pandavapura-subjected-to-harassment-in-apartment-for-questioning-not-use-of-kannada-language-sns/articleshow-nsb6s6v</link>
            <guid isPermaLink="true">https://kannada.asianetnews.com/entertainment/actress-akshata-pandavapura-subjected-to-harassment-in-apartment-for-questioning-not-use-of-kannada-language-sns/articleshow-nsb6s6v</guid>
            <pubDate>Mon, 17 Aug 2026 09:53:16 +0530</pubDate>
            <description><![CDATA[&lt;p&gt;ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಅನ್ಯಭಾಷಿಕ ನಿವಾಸಿಗಳು ನಿಂದಿಸಿ, ವಾಟ್ಸಾಪ್ ಗ್ರೂಪ್&zwnj;ನಿಂದ ತೆಗೆದುಹಾಕಿದ್ದಾರೆ. ನಮ್ಮ ನೆಲದಲ್ಲಿ ನಮ್ಮ ಭಾಷೆ ಮಾತನಾಡಿ ಎನ್ನುವುದು ತಪ್ಪೇ ಎಂದು ನಟಿ ಪ್ರಶ್ನಿಸಿದ್ದು, ಘಟನೆ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m06yzqfq2qbz3jhsvnhc2zts,imgname-kengeri-apartment-1786940218871.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆ ಬಳಸಿ ಅಂತ ಹೇಳೋದು ತಪ್ಪಾ? ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಅನ್ಯ ಭಾಷಿಕರು ದರ್ಪ ತೋರಿಸುವ ಆರೋಪ ಕೇಳಿ ಬಂದಿದ್ದು, ಸ್ವಾತಂತ್ರ್ಯ ದಿನಾಚರಣೆ ದಿನ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಬಳಕೆ ಮಾಡಿ ಎಂದು ಕೇಳಿದ್ದಕ್ಕೆ ಕನ್ನಡಿಗರ ವಿರುದ್ಧವೇ ದೌರ್ಜನ್ಯ ಮಾಡಿದ ಘಟನೆ ಕೆಂಗೇರಿಯ ಖಾಸ ಗ್ರಾಂಡ್ (Casa Grand) ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.&lt;/p&gt;&lt;h2&gt;ಅಸಲಿಗೆ ಆಗಿದ್ದೇನು?&lt;/h2&gt;&lt;p&gt;ನಟಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಮೇಲೆ ದೌರ್ಜನ್ಯ ನಡೆದಿರುವ ಆರೋಪ ಕೇಳಿ ಬಂದಿದ್ದು, ಸ್ವಾತಂತ್ರ ದಿನಾಚರಣೆಯಲ್ಲಿ ಕನ್ನಡ ಏಕೆ ಬಳಸಿಲ್ಲ ಅಂತ ನಟಿ ಪ್ರಶ್ನೆ ಮಾಡಿದ್ದರಂತೆ. ಇದಕ್ಕೆ ಅಲ್ಲಿನ ಅನ್ಯಭಾಷಿಕರು, ನಮಗೆ ಕನ್ನಡ ಬರಲ್ಲ ನಾವು ಬಳಸಲ್ಲ ಎಂದು ಅವಾಜ್ ಹಾಕಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.&lt;/p&gt;&lt;p&gt;ಕನ್ನಡ ಬಳಕೆ ಮಾಡಿ ಎಂದಿದ್ದಕ್ಕೆ ನಟಿಯನ್ನು ಅಪಾರ್ಟ್ಮೆಂಟ್ ವಾಟ್ಸಾಪ್ ಗ್ರೂಪ್ ನಿಂದಲೇ ತೆಗೆದಿದ್ದು, ಯಾಕೆ ಈ ರೀತಿ ಮಾಡುತ್ತಿದ್ದೀರಿ ಎಂದು ಕೇಳಿದರೆ ಕೆಟ್ಟ ಭಾಷೆ ಬಳಸಿ ನಿಂದನೆ ಮಾಡಿದ್ದರಂತೆ. ಇದರೊಂದಿಗೆ ಬೆಂಗಳೂರಲ್ಲಿ ಕನ್ನಡಕ್ಕೆ ಅಸ್ಮಿತೆಯೇ ಇಲ್ವೆ? ನಮ್ಮೂರಲ್ಲಿ ನಮ್ಮ ಭಾಷೆ ಮಾತಾಡಿ ಅನ್ನೋದು ತಪ್ಪಾ? ಎಂದು ಲಾವಿದೆ ಅಕ್ಷತಾ ಪಾಂಡವಪುರ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ನಟಿ, ಬೇರೆ ಕಡೆ ಇಂತಹ ದೌಜನ್ಯಗಳು ನಡೆಯುತ್ತಿದೆ ಅಂತ ಕೇಳಿದ ಸಂದರ್ಭದಲ್ಲಯೇ ನಾವು ಕೇಳಲು ಆಗೋದಿಲ್ಲ. ಇಂತಹ ಸಂದರ್ಭದಲ್ಲಿ ನಮಗೆ ಇದು ಎದುರಾದರೆ ನಾವು ಸುಮ್ಮನೆ ಇರಲು ಆಗುತ್ತಾ. ಸ್ವಾತಂತ್ರ್ಯ ದಿನಾಚರಣೆ ಆಚರಣೆಯ ಸಂದರ್ಭದಲ್ಲಿ ಕನ್ನಡ ಸುಳಿವೆ ಇರಲಿಲ್ಲ. ಈ ಬಗ್ಗೆ ನಾನು ಗ್ರೂಪ್&zwnj;ನಲ್ಲಿ ಪ್ರಶ್ನೆ ಮಾಡಿದ್ದೆ, ಆಗ ಸ್ವಲ್ಪ ಸಮಯ ವಾದ ಮಾಡಿ ನಮ್ಮನ್ನು ಗ್ರೂಪ್&zwnj;ನಿಂದಲೇ ಎಕ್ಸಿಟ್ ಮಾಡಿದರು. ಆ ಬಳಿಕ ವೈಯುಕ್ತಿಕವಾಗಿ ನನ್ನ ಮೇಲೆ ಟಾರ್ಗೆಟ್ ಮಾಡಿದರು. ಈ ಬಗ್ಗೆ ಕನ್ನಡ ಪರ ಹೋರಾಟಗಾರರಿಗೆ ಮಾಹಿತಿ ನೀಡಿದ್ದೆ. ಆಗ ಅವರ ಮೇಲೆಯೇ ಆರೋಪ ಮಾಡಿ ಗ್ರೂಪ್&zwnj;ನಲ್ಲಿ ಇಲ್ಲ ಸಲ್ಲದ ಆರೋಪ ಮಾಡಿದರು. ಈ ಬಗ್ಗೆ ಬಹಳ ಬೇಸರ ಆಯ್ತು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Sumanth SN</dc:creator>
            <atom:link href="https://kannada.asianetnews.com/entertainment/actress-akshata-pandavapura-subjected-to-harassment-in-apartment-for-questioning-not-use-of-kannada-language-sns/articleshow-nsb6s6v"/>
        </item>
        <item>
            <title><![CDATA[ಸ್ನೇಹಿತ ಕಾರ್ತಿಕ್‌ ಮಹೇಶ್‌ಗೆ ಬಿಗ್ ಸರ್ಪೈಸ್ ನೀಡಿದ ನಮ್ರತಾ ಗೌಡ: ವಿಡಿಯೋ ವೈರಲ್]]></title>
            <link>https://kannada.asianetnews.com/gallery/tv-talk/karna-serial-actress-namratha-gowda-gives-big-surprise-by-visiting-shooting-location-of-karthik-mahesh-s-movie-mrq-xhihcn5</link>
            <guid isPermaLink="true">https://kannada.asianetnews.com/gallery/tv-talk/karna-serial-actress-namratha-gowda-gives-big-surprise-by-visiting-shooting-location-of-karthik-mahesh-s-movie-mrq-xhihcn5</guid>
            <pubDate>Mon, 17 Aug 2026 08:24:27 +0530</pubDate>
            <description><![CDATA[&lt;p&gt;'ಕರ್ಣ' ಸೀರಿಯಲ್&zwnj;ನಿಂದ ನಟಿ ನಮ್ರತಾ ಗೌಡ ದೂರವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದೀಗ ಅವರು ಬಿಗ್&zwnj;ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಸರ್ಪ್ರೈಸ್ ಭೇಟಿ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m06sq4mzg4bh9y6pwb6e6d2k,imgname-namratha-gowda--4--1786934694559.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕರ್ಣ' ಸೀರಿಯಲ್&zwnj;ನಿಂದ ನಟಿ ನಮ್ರತಾ ಗೌಡ ದೂರವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದೀಗ ಅವರು ಬಿಗ್&zwnj;ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಸರ್ಪ್ರೈಸ್ ಭೇಟಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆ ಲೋಕದ ಬಹುಬೇಡಿಕೆಯ ನಟಿ ನಮ್ರತಾ ಗೌಡ ಸದ್ಯ ಕರ್ಣ ಸೀರಿಯಲ್&zwnj;ನಿಂದ ದೂರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ಹಲವು ದಿನಗಳಿಂದ ನಮ್ರತಾ ಗೌಡ ನಿರ್ವಹಿಸುತ್ತಿದ್ದ 'ನಿತ್ಯಾ' ಪಾತ್ರ ತೆರೆಯ ಮೇಲೆ ಬರುತ್ತಿಲ್ಲ. ಇದೀಗ ಸ್ನೇಹಿತ ಕಾರ್ತಿಕ್&zwnj; ಮಹೇಶ್&zwnj; ಅವರಿಗೆ ನಮ್ರತಾ ಗೌಡ ಸರ್ಪೈಸ್ ನೀಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಸೀಸನ್ 10ರ ವಿನ್ನರ್ ಆಗಿರುವ ನಟ ಕಾರ್ತಿಕ್ ಮಹೇಶ್ ಮತ್ತು ನಟಿ ನಮ್ರತಾ ಗೌಡ ಮದುವೆ ಆಗ್ತಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳೋದುಂಟು. ಸೀತಾ ರಾಮ ರಾಜು ಸಿನಿಮಾ ಚಿತ್ರೀಕರಣದಲ್ಲಿ ಕಾರ್ತಿಕ್ ಮಹೇಶ್&zwnj; ಬ್ಯುಸಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಕಾರ್ತಿಕ್ ಮಹೇಶ್ ನಟಿಸುತ್ತಿರುವ ಸಿನಿಮಾ ಶೂಟಿಂಗ್ ಸ್ಥಳಕ್ಕೆ ನಮ್ರತಾ ಗೌಡ ಭೇಟಿ ನೀಡುವ ಮೂಲಕ ಸರ್ಪೈಸ್ ನೀಡಿದ್ದಾರೆ. ಚಿತ್ರೀಕರಣ ಸ್ಥಳಕ್ಕೆ ನಮ್ರತಾ ಗೌಡ ಆಗಮಿಸಿರುವ ವಿಡಿಯೋವನ್ನು ಶೂಟಿಂಗ್ ಸಿಬ್ಬಂದಿಯೊಬ್ಬರು ತಮ್ಮ ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಶೂಟಿಂಗ್&zwnj; ಸೆಟ್&zwnj;ಗೆ ಕಾರ್ತಿಕ್ ಅವರನ್ನ ಭೇಟಿಯಾಗಲು ನಮ್ರತಾ ಗೌಡ ಬಂದಿದ್ದರಾ ಅಥವಾ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದೀರಾ ಎಂಬುದರ ಬಗ್ಗೆ ಅಧಿಕೃತವಾಗಿ ತಿಳಿದು ಬಂದಿಲ್ಲ. ಇತ್ತ ಕರ್ಣ ಸೀರಿಯಲ್ ಬಗ್ಗೆಯೂ ನಮ್ರತಾ ಗೌಡ ಯಾವುದೇ ಮಾಹಿತಿಯನ್ನು ನೀಡಿಲ್ಲ. ನಿತ್ಯಾ ಪಾತ್ರ ಕೊನೆ ಆಯ್ತಾ ಅಥವಾ ಹೊಸ ಟ್ವಿಸ್ಟ್ ಜೊತೆ ನಿತ್ಯಾ ಬರಬಹುದು ಎಂದು ವೀಕ್ಷಕರು ಅಂದಾಜಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ನನಗೆ ಮದುವೆಯಾಗುವುದು ಎಂದರೆ ತುಂಬಾ ಇಷ್ಟ. ಮದುವೆ ಬಗ್ಗೆ ಯಾರಾದ್ರೂ ಕೇಳಿದ್ರೆ ಸಹಜವಾಗಿ ಸಂಕೋಚ, ಮುಜುಗರ ಆಗುತ್ತದೆ. ಅಷ್ಟು ಓಪನ್​ ಅಪ್​ ಆಗಿ ಮಾತನಾಡಲು ನಾಚಿಕೆ ಆಗುತ್ತದೆ. ನನಗೂ ಮದುವೆ ಬಗ್ಗೆ ಕನಸು ಇದೆ. ಆದರೆ ಅದನ್ನು ಎಲ್ಲರ ಬಳಿಯೂ ಹೇಳಿಕೊಳ್ಳಲು ಆಗಲ್ವಲ್ಲಾ ಎಂದಿದ್ದಾರೆ ನಟಿ. ಅದೆಲ್ಲಾ ಸೀಕ್ರೇಟ್​ ಎಂದು ನಮ್ರತಾ ಗೌಡ ಹೇಳಿದ್ದರು.&lt;/p&gt;View this post on Instagram&lt;p&gt;A post shared by Cini_vlog (@cini__vlog)&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/karna-serial-actress-namratha-gowda-gives-big-surprise-by-visiting-shooting-location-of-karthik-mahesh-s-movie-mrq-xhihcn5"/>
        </item>
        <item>
            <title><![CDATA[Exclusive: ಕರಾವಳಿಯ ಮಹಾಬಲ ಪಾತ್ರ ನನಗೆ ಬಲ ತುಂಬಿದೆ: ನಟ ಮಿತ್ರ ಸಂದರ್ಶನ]]></title>
            <link>https://kannada.asianetnews.com/celebrity-interviews/karavali-changed-everything-for-actor-mithra-heres-what-he-says-gvd/articleshow-egx2ds7</link>
            <guid isPermaLink="true">https://kannada.asianetnews.com/celebrity-interviews/karavali-changed-everything-for-actor-mithra-heres-what-he-says-gvd/articleshow-egx2ds7</guid>
            <pubDate>Sun, 16 Aug 2026 23:34:16 +0530</pubDate>
            <description><![CDATA[&lt;p&gt;&lsquo;ರಾಗ&rsquo; ಮತ್ತು &lsquo;ಪರಸಂಗ&rsquo; ಸಿನಿಮಾಗಳಿಂದ. ಯಾಕೆಂದರೆ &lsquo;ರಾಗ&rsquo; ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ ಎಂದು ಸಂದರ್ಶನದಲ್ಲಿ ನಟ ಮಿತ್ರ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05st0mxcxyefsv0ftqgw3p8,imgname-bj-1786901234333.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;* ಈಗ ಮತ್ತೆ ಬೇಡಿಕೆಯ ನಟರಾಗುತ್ತಿದ್ದೀರಿ?&lt;/strong&gt;&lt;/p&gt;&lt;p&gt;ಅದಕ್ಕೆ ಕಾರಣ &lsquo;ಕರಾವಳಿ&rsquo; ಸಿನಿಮಾ. ಈ ಚಿತ್ರದಲ್ಲಿ ನಾನು ಮಾಡಿದ ಮಹಾಬಲ ಪಾತ್ರ ನನ್ನ ಜೀವನಕ್ಕೆ ಮತ್ತೆ ಬಲ ತುಂಬಿದೆ. ಈ ಚಿತ್ರಕ್ಕೆ ನಾನು ಎರಡು ವರ್ಷ ಮೀಸಲಿಟ್ಟಿದ್ದೆ. ಸಿನಿಮಾ ನೋಡಿದ ಎಲ್ಲರಿಗೂ ಮಹಾಬಲನ ಪಾತ್ರ ಇಷ್ಟವಾಗಿದೆ.&lt;/p&gt;&lt;p&gt;&lt;strong&gt;* ಬೇಡಿಕೆಯಲ್ಲಿದ್ದ ನಟ ನೀವು, ಯಾಕೆ ಅವಕಾಶಗಳಿಲ್ಲದೆ ಹೋಗಿದ್ದು?&lt;/strong&gt;&lt;/p&gt;&lt;p&gt;&lsquo;ರಾಗ&rsquo; ಮತ್ತು &lsquo;ಪರಸಂಗ&rsquo; ಸಿನಿಮಾಗಳಿಂದ. ಯಾಕೆಂದರೆ &lsquo;ರಾಗ&rsquo; ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ. ಎಂಟು ವರ್ಷ ಖಾಲಿ ಕೂರಬೇಕಾಯಿತು.&lt;/p&gt;&lt;p&gt;&lt;strong&gt;* ನಿಮ್ಮ ಈ ಅಜ್ಞಾತ ವಾಸವನ್ನು ಮುಕ್ತ ಮಾಡಿದ್ದು ಕರಾವಳಿ ಚಿತ್ರನಾ?&lt;/strong&gt;&lt;/p&gt;&lt;p&gt;&lsquo;ಕರಾವಳಿ&rsquo;ಗೂ ಮುನ್ನ ಬಂದಿದ್ದು ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್&zwnj; ನಟನೆಯ &lsquo;ರಾಘವೇಂದ್ರ ಸ್ಟೋರ್ಸ್&zwnj;&rsquo; ಸಿನಿಮಾ. ಈ ಚಿತ್ರದಲ್ಲಿ ನಾನು ಮಾಡಿದ ಕೋಕಿಲ ಪಾತ್ರ ತುಂಬಾ ಚೆನ್ನಾಗಿತ್ತು. ಆದರೆ, ಸಿನಿಮಾ ಕಮರ್ಷಿಯಲ್ಲಾಗಿ ವರ್ಕ್&zwnj; ಆಗಲಿಲ್ಲ. ಹೀಗಾಗಿ ನನ್ನ ಪಾತ್ರವೂ ಯಾರಿಗೂ ಗೊತ್ತಾಗಲಿಲ್ಲ.&lt;/p&gt;&lt;p&gt;&lt;strong&gt;* ಕರಾವಳಿ ಚಿತ್ರದ ನಂತರ ಬಂದ ಚಿತ್ರಗಳೆಷ್ಟು?&lt;/strong&gt;&lt;/p&gt;&lt;p&gt;ಈ ಸಿನಿಮಾ ಲುಕ್ಕಿನ ನಂತರ ಲ್ಯಾಂಡ್&zwnj; ಲಾರ್ಡ್&zwnj;, ಮಿ.ಜಾಕ್&zwnj;, ಲಕ್ಷ್ಮೀಪುತ್ರ, ಕರಳೆ ಹಾಗೂ ಮಹಾನ್&zwnj; ಚಿತ್ರಗಳು. ಈ ಚಿತ್ರಗಳಲ್ಲಿ ಶಿವಯ್ಯ, ಮಂಡೇಲ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದೇನೆ.&lt;/p&gt;&lt;h2&gt;&lt;strong&gt;* ಮುಂದಿನ ಸಿನಿಮಾಗಳು?&lt;/strong&gt;&lt;/h2&gt;&lt;p&gt;ಆಗಲೇ ಹೇಳಿದಂತೆ &lsquo;ಮಿ.ಜಾಕ್&zwnj;&rsquo;, &lsquo;ಲಕ್ಷ್ಮೀಪುತ್ರ&rsquo;, &lsquo;ಕರಳೆ&rsquo; ಚಿತ್ರಗಳ ಶೂಟಿಂಗ್&zwnj; ಮುಗಿಸಿದ್ದೇನೆ. ಬೇರೆ ಹೊಸ ಸಿನಿಮಾಗಳಿಗೆ ಕಾಯುತ್ತಿದ್ದೇನೆ. ಯಾವುದೇ ರೀತಿಯ ಪಾತ್ರಗಳು ಬಂದರೆ ಮಾಡುತ್ತೇನೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/karavali-changed-everything-for-actor-mithra-heres-what-he-says-gvd/articleshow-egx2ds7"/>
        </item>
        <item>
            <title><![CDATA[Rocking Star: ಯಶ್‌ ಜತೆ ಫೋಟೋ ತೆಗೆಸಿಕೊಳ್ಳುವಾಗ ಕಣ್ಣೀರಿಟ್ಟ ಅಭಿಮಾನಿ! ಒಂದೇ ಹೃದಯ ಸರ್‌, ಎಷ್ಟು ಬಾರಿ ಗೆಲ್ತೀರಿ? ಎಂದಾಗ ರಾಕಿ ಭಾಯ್ ಭಾವುಕ!]]></title>
            <link>https://kannada.asianetnews.com/tv-talk/yash-emotional-fan-moment-aap-ki-adalat-fan-cries-taking-photo-with-yash-one-heart-sir-how-many-times-will-you-win-bmk/articleshow-4wyv3y1</link>
            <guid isPermaLink="true">https://kannada.asianetnews.com/tv-talk/yash-emotional-fan-moment-aap-ki-adalat-fan-cries-taking-photo-with-yash-one-heart-sir-how-many-times-will-you-win-bmk/articleshow-4wyv3y1</guid>
            <pubDate>Sun, 16 Aug 2026 23:07:21 +0530</pubDate>
            <description><![CDATA['ಆಪ್&zwnj; ಕೀ ಅದಾಲತ್&zwnj;' ಕಾರ್ಯಕ್ರಮದ ನಂತರ ನಟ ಯಶ್&zwnj; ಜೊತೆ ಫೋಟೋ ತೆಗೆಸಿಕೊಳ್ಳುವಾಗ ಅಭಿಮಾನಿಯೊಬ್ಬರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. &quot;ನಮಗಿರೋದು ಒಂದೇ ಹೃದಯ ಸರ್&zwnj;, ಅದನ್ನ ಎಷ್ಟು ಬಾರಿ ಗೆಲ್ತೀರಿ?&quot; ಎಂಬ ಅಭಿಮಾನಿಯ ಮಾತಿಗೆ ಯಶ್ ಕೂಡ ಭಾವುಕರಾದರು. ಈ ಭಾವನಾತ್ಮಕ ಕ್ಷಣದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m05tb3fhprhyjfxpsv84rap1,imgname-yash-1786901794289.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್&zwnj; ಸ್ಟಾರ್&zwnj; ಯಶ್&zwnj; ಅವರಿಗೆ ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ. ಸಿನಿಮಾ ಪರದೆ ಮೇಲೆ ಅವರ ಮಾಸ್&zwnj; ಲುಕ್&zwnj;, ಡೈಲಾಗ್&zwnj; ಮತ್ತು ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಕೆಲವೊಮ್ಮೆ ಅಭಿಮಾನಿಗಳ ಪ್ರೀತಿ ನಟರನ್ನೇ ಭಾವುಕರನ್ನಾಗಿಸುವ ಕ್ಷಣಗಳು ಎದುರಾಗುತ್ತವೆ. ಇದೀಗ ಅಂತಹದ್ದೇ ಒಂದು ಎಮೋಷನಲ್&zwnj; ಕ್ಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್&zwnj; ಆಗಿದ್ದು, ಯಶ್&zwnj; ಅಭಿಮಾನಿಗಳ ಗಮನ ಸೆಳೆದಿದೆ.&lt;/p&gt;&lt;h2&gt;&lt;strong&gt;ಗಮನ ಸೆಳೆದ ಯಶ್ ಸಂವಾದ!&lt;/strong&gt;&lt;/h2&gt;&lt;p&gt;ಇತ್ತೀಚೆಗೆ &lsquo;ಆಪ್&zwnj; ಕೀ ಅದಾಲತ್&zwnj;&rsquo; ಕಾರ್ಯಕ್ರಮದಲ್ಲಿ ಯಶ್&zwnj; ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಶ್&zwnj; ಅವರ ಮಾತುಗಳು, ಅಭಿಪ್ರಾಯಗಳು ಮತ್ತು ಸಿನಿಮಾ ಕುರಿತ ಚರ್ಚೆಗಳು ಗಮನ ಸೆಳೆದಿದ್ದವು. ಕಾರ್ಯಕ್ರಮ ಮುಗಿದ ಬಳಿಕ ಯಶ್&zwnj; ಅಲ್ಲಿದ್ದ ಅಭಿಮಾನಿಗಳು ಹಾಗೂ ಇತರರೊಂದಿಗೆ ಫೋಟೋ ತೆಗೆಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಈ ವೇಳೆ ನಡೆದ ಒಂದು ಸಣ್ಣ ಘಟನೆ ಇದೀಗ ಸೋಶಿಯಲ್&zwnj; ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.&lt;/p&gt;&lt;h3&gt;&lt;strong&gt;ಅಭಿಮಾನಿ ಕಣ್ಣಂಚಲ್ಲಿ ನೀರು!&lt;/strong&gt;&lt;/h3&gt;&lt;p&gt;ಕಾರ್ಯಕ್ರಮ ಮುಗಿದ ನಂತರ ಎಲ್ಲರ ಜೊತೆ ಫೋಟೋ ತೆಗೆಸಿಕೊಳ್ಳಲು ಯಶ್&zwnj; ಒಪ್ಪಿಕೊಂಡಾಗ, PSYMEME1 ಎಂಬ ಇನ್&zwnj;ಸ್ಟಾಗ್ರಾಂ ಖಾತೆಗೆ ಸಂಬಂಧಿಸಿದ ಅಭಿಮಾನಿಯೊಬ್ಬರು ಯಶ್&zwnj; ಜೊತೆ ಫೋಟೋ ತೆಗೆಸಿಕೊಳ್ಳಲು ತೆರಳಿದ್ದಾರೆ ಎನ್ನಲಾಗಿದೆ. ಯಶ್&zwnj; ಜೊತೆ ನಿಂತು ಫೋಟೋ ತೆಗೆಸಿಕೊಳ್ಳುವ ಆ ಕ್ಷಣದಲ್ಲಿ ಅಭಿಮಾನಿ ಭಾವುಕರಾಗಿದ್ದಾರೆ. ಯಶ್&zwnj; ಅವರನ್ನು ನೇರವಾಗಿ ಭೇಟಿಯಾಗುವ ಅವಕಾಶ ಸಿಕ್ಕಿದ್ದರಿಂದ ಸಂತೋಷ ಮತ್ತು ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಅಭಿಮಾನಿಯ ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಇದೇ ಸಂದರ್ಭದಲ್ಲಿ ಅವರು ಯಶ್&zwnj;ಗೆ ಹೇಳಿದ ಮಾತು ಎಲ್ಲರ ಗಮನ ಸೆಳೆದಿದೆ. &ldquo;ನಮಗಿರೋದು ಒಂದೇ ಹೃದಯ ಸರ್&zwnj;, ಅದನ್ನ ಎಷ್ಟು ಬಾರಿ ಗೆಲ್ತೀರಿ?&rdquo; ಎಂದು ಅಭಿಮಾನಿ ಯಶ್&zwnj;ಗೆ ಹೇಳಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಭಾವುಕರಾದ ಯಶ್!&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ತಮ್ಮ ಅಭಿಮಾನಿಗಳೊಂದಿಗೆ ನಗುತ್ತಾ, ಫೋಟೋ ತೆಗೆಸಿಕೊಳ್ಳುವ ಯಶ್&zwnj; ಅವರಿಗೂ ಈ ಮಾತು ತಟ್ಟಿದೆ. ಅಭಿಮಾನಿಯ ಭಾವನೆ ಕಂಡು ಯಶ್&zwnj; ಕೂಡ ಭಾವುಕರಾದರು ಎನ್ನಲಾಗಿದೆ. ಅಭಿಮಾನಿಯೊಂದಿಗೆ ಆತ್ಮೀಯವಾಗಿ ಮಾತನಾಡಿ, ಆ ಕ್ಷಣವನ್ನು ಭಾವನಾತ್ಮಕವಾಗಿ ಸ್ವೀಕರಿಸಿದ್ದಾರೆ. ಈ ಕ್ಷಣದ ವಿಡಿಯೋ ಅಥವಾ ಪೋಸ್ಟ್&zwnj; ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದ್ದಂತೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಶ್&zwnj; ಅವರ ಸಿನಿಮಾ ಪ್ರಯಾಣ ಮತ್ತು ಅವರ ಮೇಲಿನ ಅಭಿಮಾನಿಗಳ ಪ್ರೀತಿಯನ್ನು ತೋರಿಸುವ ಮತ್ತೊಂದು ಉದಾಹರಣೆ ಇದು ಎಂದು ಹಲವರು ಕಾಮೆಂಟ್&zwnj; ಮಾಡುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಯಶ್&zwnj; ವ್ಯಕ್ತಿತ್ವದ ಮೇಲೂ ಅಪಾರ ಅಭಿಮಾನ!&lt;/strong&gt;&lt;/h3&gt;&lt;p&gt;ಯಶ್&zwnj; ಅವರ ಅಭಿಮಾನಿಗಳಲ್ಲಿ ಸಿನಿಮಾ ಪ್ರೀತಿಯಷ್ಟೇ ಅಲ್ಲದೆ, ಅವರ ವ್ಯಕ್ತಿತ್ವದ ಮೇಲೂ ವಿಶೇಷ ಅಭಿಮಾನವಿದೆ. &lsquo;KGF&rsquo; ಸರಣಿಯ ಬಳಿಕ ಯಶ್&zwnj; ಅವರ ಜನಪ್ರಿಯತೆ ಕರ್ನಾಟಕದ ಗಡಿಯನ್ನು ದಾಟಿ ರಾಷ್ಟ್ರಮಟ್ಟದಲ್ಲಿ ಹೆಚ್ಚಾಗಿದೆ. ಇದೀಗ ಅವರ ಬಹುನಿರೀಕ್ಷಿತ &lsquo;Toxic&rsquo; ಸಿನಿಮಾದ ಮೇಲೂ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.&lt;/p&gt;&lt;h3&gt;&lt;strong&gt;ಹೃದಯದಿಂದ ಮಾತನಾಡಿದ ಅಭಿಮಾನಿಗಳು!&lt;/strong&gt;&lt;/h3&gt;&lt;p&gt;ಈ ಹಿನ್ನೆಲೆಯಲ್ಲಿ ಯಶ್&zwnj; ಅವರನ್ನು ನೇರವಾಗಿ ಭೇಟಿಯಾಗುವುದು ಅಥವಾ ಅವರ ಜೊತೆ ಫೋಟೋ ತೆಗೆಸಿಕೊಳ್ಳುವುದು ಅಭಿಮಾನಿಗಳಿಗೆ ವಿಶೇಷ ಕ್ಷಣವಾಗುತ್ತಿದೆ. ಅದರಲ್ಲೂ ತಮ್ಮ ನೆಚ್ಚಿನ ನಟನ ಮುಂದೆ ಭಾವುಕರಾಗಿ, ಹೃದಯದಿಂದ ಮಾತನಾಡುವ ಅಭಿಮಾನಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬೇಗನೆ ವೈರಲ್&zwnj; ಆಗುತ್ತವೆ.&lt;/p&gt;&lt;h3&gt;&lt;strong&gt;ಅವರಿಗೆ ಅವರೇ ಸಾಟಿ!&lt;/strong&gt;&lt;/h3&gt;&lt;p&gt;ಈ ಘಟನೆಯಲ್ಲೂ ಅದೇ ಆಗಿದೆ. ಫೋಟೋ ತೆಗೆಸಿಕೊಳ್ಳುವ ಕೆಲವೇ ಕ್ಷಣಗಳಲ್ಲಿ ಅಭಿಮಾನಿ ಹೇಳಿದ ಒಂದು ಸಾಲು ಇಡೀ ಸನ್ನಿವೇಶವನ್ನು ಎಮೋಷನಲ್&zwnj; ಆಗಿಸಿದೆ. &ldquo;ಒಂದೇ ಹೃದಯ ಸರ್&zwnj;, ಎಷ್ಟು ಬಾರಿ ಗೆಲ್ತೀರಿ?&rdquo; ಎಂಬ ಮಾತು ಯಶ್&zwnj; ಅವರ ಮೇಲಿನ ಅಭಿಮಾನಿಯ ಪ್ರೀತಿಯನ್ನು ಎಷ್ಟು ಆಳವಾಗಿ ವ್ಯಕ್ತಪಡಿಸುತ್ತದೆ ಎಂಬುದನ್ನು ತೋರಿಸಿದೆ. ಯಶ್&zwnj; ಕೂಡ ಆ ಅಭಿಮಾನಿಯ ಭಾವನೆಗೆ ಸ್ಪಂದಿಸಿದ ಕ್ಷಣ ಇದೀಗ ಅಭಿಮಾನಿಗಳ ಹೃದಯ ಗೆದ್ದಿದೆ. ಹೀಗಾಗಿ ಇದು ಕೇವಲ ಒಂದು ಫೋಟೋ ತೆಗೆಸಿಕೊಂಡ ಕ್ಷಣವಾಗದೆ, ಸ್ಟಾರ್&zwnj; ಮತ್ತು ಅಭಿಮಾನಿಯ ನಡುವಿನ ಭಾವನಾತ್ಮಕ ಬಂಧಕ್ಕೆ ಸಾಕ್ಷಿಯಾದ ವಿಶೇಷ ಕ್ಷಣವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್&zwnj; ಆಗುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/tv-talk/yash-emotional-fan-moment-aap-ki-adalat-fan-cries-taking-photo-with-yash-one-heart-sir-how-many-times-will-you-win-bmk/articleshow-4wyv3y1"/>
        </item>
        <item>
            <title><![CDATA[ಫ್ಲೈಟ್ ಟಿಕೆಟ್ ಇಲ್ಲ, ಪಾಸ್‌ಪೋರ್ಟ್ ಬೇಕಿಲ್ಲ: ಆದರೂ ವಿಶ್ವ ಸುತ್ತಿಸಿಬಿಡುತ್ತವೆ ಈ 5 ಸಿನಿಮಾಗಳು!]]></title>
            <link>https://kannada.asianetnews.com/gallery/entertainment/no-flights-no-passport-5-movies-that-take-you-around-the-world-gvd-xhonsca</link>
            <guid isPermaLink="true">https://kannada.asianetnews.com/gallery/entertainment/no-flights-no-passport-5-movies-that-take-you-around-the-world-gvd-xhonsca</guid>
            <pubDate>Sun, 16 Aug 2026 22:46:39 +0530</pubDate>
            <description><![CDATA[&lt;p&gt;ಫ್ಲೈಟ್ ಹತ್ತದೆಯೇ ಭಾರತ, ಆಸ್ಟ್ರೇಲಿಯಾ, ಜಪಾನ್, ಅಮೆಜಾನ್ ಕಾಡು ಮತ್ತು ಪೆಸಿಫಿಕ್ ದ್ವೀಪಗಳಂತಹ ವಿಭಿನ್ನ ಜಗತ್ತಿಗೆ ನಮ್ಮನ್ನು ಕರೆದೊಯ್ಯುವ 5 ಅದ್ಭುತ ಸಿನಿಮಾಗಳ ಲಿಸ್ಟ್ ಇಲ್ಲಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02pfb6dj25y3k9vh96552g3,imgname-4-1786797075661.png" type="image/jpeg" height="390" width="690"/>
            <content:encoded><![CDATA[&lt;p&gt;ಫ್ಲೈಟ್ ಹತ್ತದೆಯೇ ಭಾರತ, ಆಸ್ಟ್ರೇಲಿಯಾ, ಜಪಾನ್, ಅಮೆಜಾನ್ ಕಾಡು ಮತ್ತು ಪೆಸಿಫಿಕ್ ದ್ವೀಪಗಳಂತಹ ವಿಭಿನ್ನ ಜಗತ್ತಿಗೆ ನಮ್ಮನ್ನು ಕರೆದೊಯ್ಯುವ 5 ಅದ್ಭುತ ಸಿನಿಮಾಗಳ ಲಿಸ್ಟ್ ಇಲ್ಲಿದೆ!&lt;/p&gt;&lt;img&gt;&lt;p&gt;ವರ್ಷಗಳಿಂದ ದೂರವಿದ್ದ ಮೂವರು ಸಹೋದರರು, ತಮ್ಮ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಭಾರತದಾದ್ಯಂತ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ಪಯಣದಲ್ಲಿ ದೇವಸ್ಥಾನಗಳು, ಸಣ್ಣ ಪಟ್ಟಣಗಳು, ರೈಲು ನಿಲ್ದಾಣಗಳ ಮೂಲಕ ಭಾರತದ ಹಲವು ಮುಖಗಳನ್ನು ಈ ಸಿನಿಮಾ ಸುಂದರವಾಗಿ ತೋರಿಸುತ್ತದೆ. ಕುಟುಂಬ ಸಂಬಂಧಗಳು, ಹಾಸ್ಯ ಮತ್ತು ಅನಿರೀಕ್ಷಿತ ಘಟನೆಗಳಿಂದ ತುಂಬಿರುವ ಈ ಸಿನಿಮಾ, ಸಾಮಾನ್ಯ ಟ್ರಾವೆಲ್ ಚಿತ್ರಗಳಿಗಿಂತ ಸಂಪೂರ್ಣ ವಿಭಿನ್ನ ಅನುಭವ ನೀಡುತ್ತದೆ.&lt;/p&gt;&lt;img&gt;&lt;p&gt;ಒಬ್ಬ ಯುವತಿ ನಾಲ್ಕು ಒಂಟೆಗಳು ಮತ್ತು ತನ್ನ ನಾಯಿಯೊಂದಿಗೆ ಆಸ್ಟ್ರೇಲಿಯಾದ ಬೃಹತ್ ಮರುಭೂಮಿಯನ್ನು ದಾಟಲು ಒಂಟಿಯಾಗಿ ಪ್ರಯಾಣಿಸುತ್ತಾಳೆ. ಜನರಿಲ್ಲದ ವಿಶಾಲವಾದ ಭೂಪ್ರದೇಶ, ಕಠಿಣ ಪರಿಸರ, ಪ್ರಕೃತಿಯ ಸೌಂದರ್ಯ ಹೀಗೆ ಪ್ರತಿಯೊಂದು ದೃಶ್ಯವೂ ನಮ್ಮನ್ನು ಆಸ್ಟ್ರೇಲಿಯಾದ ಬೇರೆಯೇ ಜಗತ್ತಿಗೆ ಕರೆದೊಯ್ಯುತ್ತದೆ. ಈ ಚಿತ್ರ ಒಂದು ಸತ್ಯ ಕಥೆಯನ್ನು ಆಧರಿಸಿದೆ. ಪ್ರಯಾಣವೆಂದರೆ ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದಲ್ಲ ಎಂಬುದನ್ನು ಈ ಸಿನಿಮಾ ಮನದಟ್ಟು ಮಾಡಿಸುತ್ತದೆ.&lt;/p&gt;&lt;img&gt;&lt;p&gt;ಈ ಸಿನಿಮಾ ಟೋಕಿಯೋದಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಒಬ್ಬ ಸಾಮಾನ್ಯ ವ್ಯಕ್ತಿಯ ದೈನಂದಿನ ಜೀವನವನ್ನು ತೋರಿಸುತ್ತದೆ. ಇದರಲ್ಲಿ ದೊಡ್ಡ ಸಾಹಸಗಳಾಗಲಿ, ಪ್ರವಾಸಿ ತಾಣಗಳ ದೃಶ್ಯಗಳಾಗಲಿ ಇಲ್ಲ. ಬದಲಿಗೆ, ಟೋಕಿಯೋದ ಬೀದಿಗಳು, ಪಾರ್ಕ್&zwnj;ಗಳು, ಸಣ್ಣ ಹೋಟೆಲ್&zwnj;ಗಳು ಮತ್ತು ನಗರ ಜೀವನವನ್ನು ಬಹಳ ಶಾಂತವಾಗಿ ನಮಗೆ ಪರಿಚಯಿಸುತ್ತದೆ. ಸಾಮಾನ್ಯ ಜೀವನದಲ್ಲೂ ಸೌಂದರ್ಯವನ್ನು ಕಾಣಬಹುದು ಎಂದು ಹೇಳುವ ಈ ಸಿನಿಮಾ, ಜಪಾನ್ ಅನ್ನು ಸಂಪೂರ್ಣ ವಿಭಿನ್ನ ದೃಷ್ಟಿಕೋನದಲ್ಲಿ ತೋರಿಸುತ್ತದೆ.&lt;/p&gt;&lt;img&gt;&lt;p&gt;ಈ ಸಿನಿಮಾ ಕೊಲಂಬಿಯಾದ ದಟ್ಟವಾದ ಅಮೆಜಾನ್ ಮಳೆಕಾಡಿನಲ್ಲಿ ಎರಡು ವಿಭಿನ್ನ ಕಾಲಘಟ್ಟಗಳಲ್ಲಿ ನಡೆದ ಪ್ರಯಾಣವನ್ನು ಆಧರಿಸಿದೆ. ಅಲ್ಲಿನ ಬುಡಕಟ್ಟು ಜನರ ಜೀವನ, ನಂಬಿಕೆಗಳು ಮತ್ತು ಪ್ರಕೃತಿಯೊಂದಿಗಿನ ಅವರ ಸಂಬಂಧವನ್ನು ಈ ಚಿತ್ರ ತೋರಿಸುತ್ತದೆ. ಪ್ರವಾಸಿಗರು ಸಾಮಾನ್ಯವಾಗಿ ನೋಡಲಾಗದ ಅಮೆಜಾನ್&zwnj;ನ ನಿಗೂಢ ಜಗತ್ತನ್ನು ಈ ಸಿನಿಮಾ ನಮಗೆ ಪರಿಚಯಿಸುತ್ತದೆ. ಇದನ್ನು ಕಪ್ಪು-ಬಿಳುಪು ದೃಶ್ಯಗಳಲ್ಲಿ ಚಿತ್ರಿಸಿರುವುದು ಇದರ ಅನುಭವವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ.&lt;/p&gt;&lt;img&gt;&lt;p&gt;ಪೆಸಿಫಿಕ್ ಮಹಾಸಾಗರದಲ್ಲಿರುವ ವನುವಾಟು ದ್ವೀಪಸಮೂಹದ ದೂರದ ಪ್ರದೇಶವಾದ ಟನ್ನಾದಲ್ಲಿ ವಾಸಿಸುವ ಯಾಕೆಲ್ ಬುಡಕಟ್ಟು ಜನರ ಜೀವನವನ್ನು ಈ ಸಿನಿಮಾ ನಮಗೆ ಪರಿಚಯಿಸುತ್ತದೆ. ಅವರ ಸಾಂಪ್ರದಾಯಿಕ ಜೀವನ, ಸಂಸ್ಕೃತಿ, ಪ್ರೀತಿ ಮತ್ತು ಸಾಮಾಜಿಕ ಕಟ್ಟುಪಾಡುಗಳ ನಡುವೆ ನಡೆಯುವ ಕಥೆ, ನಾವು ಸಾಮಾನ್ಯ ಸಿನಿಮಾಗಳಲ್ಲಿ ನೋಡದ ಒಂದು ಜಗತ್ತನ್ನು ಕಣ್ಣಮುಂದೆ ತರುತ್ತದೆ. ಚಿತ್ರದ ನೈಸರ್ಗಿಕ ದೃಶ್ಯಗಳು ಮತ್ತು ಆ ದ್ವೀಪದ ವಿಶಿಷ್ಟ ಸಂಸ್ಕೃತಿ, ಮನೆಯಲ್ಲೇ ಕುಳಿತು ಹೊಸ ಜಗತ್ತನ್ನು ಸುತ್ತಿ ಬಂದ ಅನುಭವ ನೀಡುತ್ತದೆ.&lt;/p&gt;&lt;p&gt;&lt;strong&gt;ಮನೆಯಲ್ಲೇ ಕುಳಿತು ಒಂದು ವಿಶ್ವ ಪಯಣ!&lt;/strong&gt;ಈ 5 ಚಿತ್ರಗಳು ಒಂದೇ ರೀತಿಯ ಟ್ರಾವೆಲ್ ಸಿನಿಮಾಗಳಲ್ಲ. ಭಾರತದ ರೈಲು ಪ್ರಯಾಣ, ಆಸ್ಟ್ರೇಲಿಯಾದ ಮರುಭೂಮಿ, ಜಪಾನ್&zwnj;ನ ನಗರ ಜೀವನ, ಅಮೆಜಾನ್ ಕಾಡುಗಳು, ಪೆಸಿಫಿಕ್ ದ್ವೀಪದ ಬುಡಕಟ್ಟು ಸಂಸ್ಕೃತಿ... ಹೀಗೆ ಪ್ರತಿಯೊಂದು ಚಿತ್ರವೂ ಸಂಪೂರ್ಣವಾಗಿ ವಿಭಿನ್ನ ಜಗತ್ತನ್ನು ನಮಗೆ ತೋರಿಸುತ್ತದೆ. ಪ್ರಯಾಣ ಮಾಡಲು ಸಾಧ್ಯವಾಗದಿದ್ದಾಗ, ಸಿನಿಮಾ ಮೂಲಕ ಹೊಸ ಸ್ಥಳ ಮತ್ತು ಸಂಸ್ಕೃತಿಗಳನ್ನು ಅನುಭವಿಸಲು ಬಯಸಿದರೆ ಈ 5 ಚಿತ್ರಗಳು ಉತ್ತಮ ಆಯ್ಕೆಯಾಗಿವೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/no-flights-no-passport-5-movies-that-take-you-around-the-world-gvd-xhonsca"/>
        </item>
        <item>
            <title><![CDATA[ಪ್ರಭಾಸ್ ಖಾನ್ಸಾರ್‌ಗೆ ಮತ್ತೆ ವಾಪಸ್ ಆದ ಪ್ರಶಾಂತ್ ನೀಲ್: ‘ಸಲಾರ್ 2’ನಲ್ಲಿ ಏನಿರಲಿದೆ?]]></title>
            <link>https://kannada.asianetnews.com/entertainment/salaar-2-update-prashanth-neel-begins-pre-production-for-prabhas-starrer-gvd/articleshow-bc3v7co</link>
            <guid isPermaLink="true">https://kannada.asianetnews.com/entertainment/salaar-2-update-prashanth-neel-begins-pre-production-for-prabhas-starrer-gvd/articleshow-bc3v7co</guid>
            <pubDate>Sun, 16 Aug 2026 21:49:52 +0530</pubDate>
            <description><![CDATA[&lt;p&gt;ಪ್ರಭಾಸ್ ಅಭಿಮಾನಿಗಳು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿರುವ &lsquo;ಸಲಾರ್ 2&rsquo; ಸಿನಿಮಾಗೆ ಇದೀಗ ಭರ್ಜರಿ ಅಪ್&zwnj;ಡೇಟ್ ಸಿಕ್ಕಿದೆ. ಜೂ.ಎನ್&zwnj;ಟಿಆರ್ ಅವರ ಭುಜದ ಗಾಯದಿಂದಾಗಿ &lsquo;ಡ್ರ್ಯಾಗನ್&rsquo; ಚಿತ್ರದ ಶೂಟಿಂಗ್&zwnj; ಮುಂದೂಡಿಕೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05nkyqakccmyed0h5yv96dd,imgname-kb-1786896841450.png" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಭಾಸ್ ಅಭಿಮಾನಿಗಳು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿರುವ &lsquo;ಸಲಾರ್ 2&rsquo; ಸಿನಿಮಾಗೆ ಇದೀಗ ಭರ್ಜರಿ ಅಪ್&zwnj;ಡೇಟ್ ಸಿಕ್ಕಿದೆ. ಜೂ.ಎನ್&zwnj;ಟಿಆರ್ ಅವರ ಭುಜದ ಗಾಯದಿಂದಾಗಿ &lsquo;ಡ್ರ್ಯಾಗನ್&rsquo; ಚಿತ್ರದ ಶೂಟಿಂಗ್&zwnj; ಮುಂದೂಡಿಕೆಯಾಗಿರುವ ಬೆನ್ನಲ್ಲೇ, ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಗಮನವನ್ನು ಮತ್ತೆ &lsquo;ಸಲಾರ್ 2&rsquo; ಚಿತ್ರದತ್ತ ಹರಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಗಂದೂರು ಅವರೊಂದಿಗೆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡಿರುವ ಮಾಹಿತಿ ಹೊರಬಿದ್ದಿದೆ.&lt;/p&gt;&lt;p&gt;&lt;strong&gt;&lsquo;ಸಲಾರ್ 2&rsquo; ಕೆಲಸಕ್ಕೆ ಚಾಲನೆ!&lt;/strong&gt;&lt;/p&gt;&lt;p&gt;&lsquo;ಸಲಾರ್: ಪಾರ್ಟ್ 1&ndash;ಸೀಸ್&zwnj;ಫೈರ್&rsquo; ಚಿತ್ರದ ಮುಂದುವರಿದ ಭಾಗವಾಗಿರುವ &lsquo;ಸಲಾರ್ 2&rsquo; ಇದೀಗ ಅಧಿಕೃತವಾಗಿ ಮುಂದಿನ ಹಂತಕ್ಕೆ ಕಾಲಿಟ್ಟಿದೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್&zwnj;ನ ಸಂಸ್ಥಾಪಕ ವಿಜಯ್ ಕಿರಗಂದೂರು ಇತ್ತೀಚೆಗೆ ಸಭೆ ನಡೆಸಿ ಚಿತ್ರದ ಸ್ಕ್ರೀನ್&zwnj;ಪ್ಲೇ, ಶೂಟಿಂಗ್ ಶೆಡ್ಯೂಲ್ ಹಾಗೂ ನಿರ್ಮಾಣದ ಮುಂದಿನ ಹಂತಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ತಾತ್ಕಾಲಿಕವಾಗಿ &lsquo;ಸಲಾರ್ 2: ಶೌರ್ಯಾಂಗ ಪರ್ವಂ&rsquo; ಎಂದು ಕರೆಯಲಾಗುತ್ತಿರುವ ಈ ಸಿನಿಮಾದ ಸ್ಕ್ರಿಪ್ಟ್ ಕೆಲಸಕ್ಕೆ ತಂಡ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮುಖ್ಯ ಚಿತ್ರೀಕರಣ ಆರಂಭಿಸುವ ಮುನ್ನ ಕಥೆ ಮತ್ತು ನಿರ್ಮಾಣ ಯೋಜನೆಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.&lt;/p&gt;&lt;p&gt;&lt;strong&gt;&lsquo;ಸಲಾರ್ 2&rsquo; ನಿಂತಿಲ್ಲ ಎಂದಿದ್ದ ಹೊಂಬಾಳೆ!&lt;/strong&gt;&lt;/p&gt;&lt;p&gt;&lsquo;ಸಲಾರ್ 2&rsquo; ಸಿನಿಮಾ ಮುಂದುವರಿಯುತ್ತದೆಯೇ ಅಥವಾ ಸ್ಥಗಿತಗೊಂಡಿದೆಯೇ ಎಂಬ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸಿನಿಮಾ ಕೈಬಿಡಲಾಗಿದೆ ಎಂಬ ವರದಿಗಳು ಹರಿದಾಡಿದ್ದರೂ, ಹೊಂಬಾಳೆ ಫಿಲ್ಮ್ಸ್ ಈ ಸುದ್ದಿಗಳನ್ನು ತಳ್ಳಿಹಾಕಿತ್ತು. ಪ್ರಶಾಂತ್ ನೀಲ್ ಕೂಡ &lsquo;ಸಲಾರ್ 2&rsquo; ತಮ್ಮ ಯೋಜನೆಯಲ್ಲೇ ಇದೆ ಎಂಬುದನ್ನು ಹಲವು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದರು. ಮೊದಲು ಜೂನಿಯರ್ ಎನ್&zwnj;ಟಿಆರ್ ಅಭಿನಯದ &lsquo;ಡ್ರ್ಯಾಗನ್&rsquo; ಸಿನಿಮಾದ ಕೆಲಸಗಳಿಗೆ ಆದ್ಯತೆ ನೀಡಬೇಕಾಗಿತ್ತು. ಇದೀಗ ಎನ್&zwnj;ಟಿಆರ್ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ &lsquo;ಡ್ರ್ಯಾಗನ್&rsquo; ಶೂಟಿಂಗ್&zwnj;ಗೆ ಬ್ರೇಕ್ ಸಿಕ್ಕಿದ್ದು, ಈ ಸಮಯವನ್ನು &lsquo;ಸಲಾರ್ 2&rsquo; ಪ್ರೀ-ಪ್ರೊಡಕ್ಷನ್&zwnj;ಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಮೊದಲ ಭಾಗಕ್ಕಿಂತ ದೊಡ್ಡದಾಗಲಿದೆ &lsquo;ಸಲಾರ್ 2&rsquo;?&lt;/strong&gt;&lt;/p&gt;&lt;p&gt;&lsquo;ಸಲಾರ್ 2&rsquo; ಅನ್ನು ಮೊದಲ ಭಾಗಕ್ಕಿಂತಲೂ ದೊಡ್ಡ ಮಟ್ಟದಲ್ಲಿ ನಿರ್ಮಿಸುವ ಯೋಜನೆ ಇದೆ ಎನ್ನಲಾಗುತ್ತಿದೆ. ವಿಶೇಷವಾಗಿ ಖಾನ್ಸಾರ್ ಪ್ರಪಂಚವನ್ನು ಇನ್ನಷ್ಟು ವಿಸ್ತರಿಸಿ, ಅಲ್ಲಿನ ರಾಜಕೀಯ, ಅಧಿಕಾರದ ಹೋರಾಟ ಹಾಗೂ ಪಾತ್ರಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ಆಳವಾಗಿ ತೋರಿಸುವ ನಿರೀಕ್ಷೆಯಿದೆ. &lsquo;ಸಲಾರ್&rsquo; ಸಿನಿಮಾದ ಕಥೆಯ ಮೂಲ ಕಲ್ಪನೆಗಳು ಪ್ರಶಾಂತ್ ನೀಲ್ ಅವರ 2014ರ ಕನ್ನಡ ಸಿನಿಮಾ &lsquo;ಉಗ್ರಂ&rsquo;ನೊಂದಿಗೆ ಕೆಲವು ಸಾಮ್ಯತೆಗಳನ್ನು ಹೊಂದಿದ್ದವು. ಶ್ರೀಮುರಳಿ ಅಭಿನಯದ ಈ ಸಿನಿಮಾ ಪ್ರಶಾಂತ್ ನೀಲ್ ಅವರ ನಿರ್ದೇಶನದ ಮೊದಲ ಚಿತ್ರವಾಗಿತ್ತು. ಆದರೆ &lsquo;ಸಲಾರ್&rsquo; ಅನ್ನು ಪ್ರಭಾಸ್&zwnj;ಗಾಗಿ ದೊಡ್ಡ ಮಟ್ಟದ ಫ್ರಾಂಚೈಸಿಯಾಗಿ ರೂಪಿಸಲಾಗಿತ್ತು. ಇದೀಗ ಎರಡನೇ ಭಾಗದಲ್ಲಿ ಆ ಕಥಾವಿಶ್ವ ಮತ್ತಷ್ಟು ವಿಸ್ತರಿಸುವ ಸಾಧ್ಯತೆಯಿದೆ.&lt;/p&gt;&lt;p&gt;&lt;strong&gt;ದೇವಾ-ವರಧಾ ಕಥೆ ಎಲ್ಲಿಗೆ ಹೋಗಲಿದೆ?&lt;/strong&gt;&lt;/p&gt;&lt;p&gt;2023ರ ಡಿಸೆಂಬರ್&zwnj;ನಲ್ಲಿ ಬಿಡುಗಡೆಯಾದ &lsquo;ಸಲಾರ್: ಪಾರ್ಟ್ 1&ndash;ಸೀಸ್&zwnj;ಫೈರ್&rsquo; ಕ್ಲೈಮ್ಯಾಕ್ಸ್&zwnj;ನಲ್ಲಿ ದೊಡ್ಡ ಟ್ವಿಸ್ಟ್ ನೀಡಿತ್ತು. ಪ್ರಭಾಸ್ ಅಭಿನಯದ ದೇವಾ, ಶೌರ್ಯಾಂಗ ವಂಶದ ನಿಜವಾದ ಉತ್ತರಾಧಿಕಾರಿ ಎಂಬುದು ಬಹಿರಂಗವಾಗಿತ್ತು. ಈ ವಿಚಾರ ದೇವಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅಭಿನಯದ ವರಧಾ ರಾಜ ಮನ್ನಾರ್ ನಡುವಿನ ಸಂಬಂಧಕ್ಕೂ ಹೊಸ ತಿರುವು ನೀಡಿತ್ತು. ಇಬ್ಬರ ನಡುವಿನ ಸ್ನೇಹ, ನಿಷ್ಠೆ ಮತ್ತು ಅಧಿಕಾರದ ಹೋರಾಟ ಮುಂದಿನ ಭಾಗದಲ್ಲಿ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ. &lsquo;ಶೌರ್ಯಾಂಗ ಪರ್ವಂ&rsquo; ಎಂಬ ತಾತ್ಕಾಲಿಕ ಶೀರ್ಷಿಕೆಯೇ ಶೌರ್ಯಾಂಗ ವಂಶದ ಇತಿಹಾಸ ಮತ್ತು ಖಾನ್ಸಾರ್&zwnj;ನ ಭವಿಷ್ಯದಲ್ಲಿ ಆ ವಂಶದ ಪಾತ್ರದತ್ತ ಕಥೆ ಸಾಗಬಹುದು ಎಂಬ ಕುತೂಹಲ ಮೂಡಿಸಿದೆ.&lt;/p&gt;&lt;h2&gt;&lt;strong&gt;ಪ್ರಭಾಸ್, ಪೃಥ್ವಿರಾಜ್ ಮತ್ತೆ ಮುಖಾಮುಖಿ?&lt;/strong&gt;&lt;/h2&gt;&lt;p&gt;&lsquo;ಸಲಾರ್ 2&rsquo;ನಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ತಮ್ಮ ಪ್ರಮುಖ ಪಾತ್ರಗಳನ್ನು ಮುಂದುವರಿಸುವ ನಿರೀಕ್ಷೆಯಿದೆ. ಶ್ರುತಿ ಹಾಸನ್, ಶ್ರೀಯಾ ರೆಡ್ಡಿ, ಜಗಪತಿ ಬಾಬು, ಬಾಬಿ ಸಿಂಹ, ಟಿನ್ನು ಆನಂದ್, ಪ್ರಮೋದ್ ಶೆಟ್ಟಿ ಹಾಗೂ ಗರುಡ ರಾಮ್ ಸೇರಿದಂತೆ ಮೊದಲ ಭಾಗದ ಪ್ರಮುಖ ಕಲಾವಿದರು ಕೂಡ ಮರಳುವ ಸಾಧ್ಯತೆ ಇದೆ. ಇತ್ತ ಜೂ.ಎನ್&zwnj;ಟಿಆರ್ ಚೇತರಿಸಿಕೊಂಡ ಬಳಿಕ &lsquo;ಡ್ರ್ಯಾಗನ್&rsquo; ಶೂಟಿಂಗ್ ಮತ್ತೆ ಆರಂಭವಾಗಬೇಕಿದೆ. ಅಷ್ಟರೊಳಗೆ ಪ್ರಶಾಂತ್ ನೀಲ್ ಸುಮಾರು ಮೂರು ವರ್ಷಗಳ ಹಿಂದೆ ಕ್ಲೈಮ್ಯಾಕ್ಸ್&zwnj;ನಲ್ಲಿ ಬಿಟ್ಟಿದ್ದ ಖಾನ್ಸಾರ್ ಲೋಕಕ್ಕೆ ಮತ್ತೆ ಮರಳಿದ್ದು, &lsquo;ಸಲಾರ್ 2&rsquo; ಸ್ಕ್ರಿಪ್ಟ್ ಮತ್ತು ನಿರ್ಮಾಣ ಯೋಜನೆಗಳಿಗೆ ವೇಗ ನೀಡುತ್ತಿದ್ದಾರೆ. ಹೀಗಾಗಿ ಪ್ರಭಾಸ್ ಅಭಿಮಾನಿಗಳ ಬಹುನಿರೀಕ್ಷಿತ &lsquo;ಸಲಾರ್ 2&rsquo; ಇದೀಗ ನಿಜವಾಗಿಯೂ ವೇಗ ಪಡೆದುಕೊಳ್ಳುವ ಹಂತಕ್ಕೆ ಬಂದಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/salaar-2-update-prashanth-neel-begins-pre-production-for-prabhas-starrer-gvd/articleshow-bc3v7co"/>
        </item>
        <item>
            <title><![CDATA[Bollywood: ಆ ಖಡಕ್ ಆಫೀಸರ್‌ ಮಾತಿಗೆ ಬಾಲಿವುಡ್ ಶೇಕ್? ಶಾರುಖ್‌, ಅಜಯ್ ದೇವಗನ್‌, ಟೈಗರ್‌ಗೆ ಎದುರಾಯ್ತು ಕಾನೂನು ಸಂಕಷ್ಟ! ಏನು ಶಿಕ್ಷೆ?]]></title>
            <link>https://kannada.asianetnews.com/tv-talk/what-is-surrogate-ad-and-why-shahrukh-khan-ajay-devgan-tiger-get-not-by-fda-maharashtra-know-rules-bmk/articleshow-2db2yxx</link>
            <guid isPermaLink="true">https://kannada.asianetnews.com/tv-talk/what-is-surrogate-ad-and-why-shahrukh-khan-ajay-devgan-tiger-get-not-by-fda-maharashtra-know-rules-bmk/articleshow-2db2yxx</guid>
            <pubDate>Sun, 16 Aug 2026 21:21:54 +0530</pubDate>
            <description><![CDATA[ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರು ಪಾನ್ ಮಸಾಲಾ ಬ್ರ್ಯಾಂಡ್&zwnj;ನ ಪರೋಕ್ಷ ಪ್ರಚಾರದ (ಸರೋಗೇಟ್ ಜಾಹೀರಾತು) ಆರೋಪದ ಮೇಲೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದ ಎಫ್&zwnj;ಡಿಎ ಮುಖ್ಯಸ್ಥ ತುಕಾರಾಮ್ ಮುಂಢೆ ಅವರು ಈ ನಟರಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿದ್ದು, 15 ದಿನಗಳಲ್ಲಿ ಉತ್ತರಿಸಲು ಗಡುವು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m05m96q0jbr2b0kn620m65qj,imgname-bollywood-1786895440608.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್&zwnj;ನ ಸ್ಟಾರ್&zwnj; ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತದ ಮುಖ್ಯಸ್ಥ ತುಕಾರಾಮ್ ಮುಂಢೆ ಅವರು ಈ ಮೂವರು ನಟರಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಒಂಬತ್ತು ಪುಟಗಳ ಈ ನೋಟಿಸ್&zwnj;ನಲ್ಲಿ 15 ದಿನಗಳೊಳಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸೂಚಿಸಲಾಗಿದೆ. ಇದೇ ವೇಳೆ, ವಿವಾದಿತ ಜಾಹೀರಾತಿಗೆ ಸಂಬಂಧಿಸಿದ ವಿಷಯಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತೆಗೆದುಹಾಕುವಂತೆ ಕೂಡ ಸೂಚನೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಕಾರಣವೇನು?&lt;/strong&gt;&lt;/h2&gt;&lt;p&gt;ಅಷ್ಟಕ್ಕೂ ಈ ಮೂವರು ಸ್ಟಾರ್&zwnj;ಗಳ ವಿರುದ್ಧ ಕ್ರಮಕ್ಕೆ ಕಾರಣವೇನು? ಅವರು ಕಾಣಿಸಿಕೊಂಡಿರುವ ಏಲಕ್ಕಿ ಜಾಹೀರಾತಿನ ಬಗ್ಗೆ ಮಹಾರಾಷ್ಟ್ರ FDA ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕೇವಲ ಏಲಕ್ಕಿಯ ಜಾಹೀರಾತಲ್ಲ, ಬದಲಾಗಿ ಪಾನ್ ಮಸಾಲಾ ಬ್ರ್ಯಾಂಡ್&zwnj;ನ ಪರೋಕ್ಷ ಪ್ರಚಾರವಾಗಿದೆ ಎಂಬುದು FDAಯ ಪ್ರಮುಖ ಆರೋಪವಾಗಿದೆ. ಇದನ್ನೇ ಸರೋಗೇಟ್ ಜಾಹೀರಾತು ಎಂದು ಕರೆಯಲಾಗುತ್ತದೆ. ನೇರವಾಗಿ ಜಾಹೀರಾತು ಮಾಡಲು ಕಾನೂನಿನ ನಿರ್ಬಂಧವಿರುವ ಉತ್ಪನ್ನವನ್ನು ಮತ್ತೊಂದು ಕಾನೂನುಬದ್ಧ ಉತ್ಪನ್ನದ ಹೆಸರಿನಲ್ಲಿ ಪ್ರಚಾರ ಮಾಡುವುದೇ ಸರೋಗೇಟ್ ಜಾಹೀರಾತು. ಉದಾಹರಣೆಗೆ ಪಾನ್ ಮಸಾಲಾ, ಗುಟ್ಕಾ ಅಥವಾ ತಂಬಾಕು ಉತ್ಪನ್ನಗಳ ನೇರ ಪ್ರಚಾರಕ್ಕೆ ನಿರ್ಬಂಧವಿದ್ದರೆ, ಅದೇ ಬ್ರ್ಯಾಂಡ್ ಹೆಸರಿನಲ್ಲಿ ಏಲಕ್ಕಿ, ಮೌತ್ ಫ್ರೆಶ್ನರ್, ಸೋಡಾ ಅಥವಾ ಇತರ ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತದೆ.&lt;/p&gt;&lt;h3&gt;&lt;strong&gt;ಎಫ್&zwnj;ಡಿಎ ಹೇಳೋದೇನು?&lt;/strong&gt;&lt;/h3&gt;&lt;p&gt;FDA ಪ್ರಕಾರ, ಇಂತಹ ಜಾಹೀರಾತುಗಳಲ್ಲಿ ಬಳಸುವ ಬ್ರ್ಯಾಂಡ್ ಹೆಸರು, ಲೋಗೋ, ಬಣ್ಣ, ಟ್ಯಾಗ್&zwnj;ಲೈನ್ ಮತ್ತು ಪ್ರಸ್ತುತಿಯ ಮೂಲಕ ಗ್ರಾಹಕರ ಮನಸ್ಸಿನಲ್ಲಿ ನಿಷೇಧಿತ ಉತ್ಪನ್ನದ ಬ್ರ್ಯಾಂಡ್ ಇಮೇಜ್&zwnj; ಅನ್ನು ಉಳಿಸಿಕೊಳ್ಳಲಾಗುತ್ತದೆ. ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಕಾಣಿಸಿಕೊಂಡಿರುವ ಜಾಹೀರಾತಿನಲ್ಲೂ ಇದೇ ರೀತಿಯ ಅಂಶಗಳಿವೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.&lt;/p&gt;&lt;h3&gt;&lt;strong&gt;ಗಂಭೀರವಾದ ನಿಲುವು ತೆಳೆದ ಮುಂಢೆ!&lt;/strong&gt;&lt;/h3&gt;&lt;p&gt;ತುಕಾರಾಮ್ ಮುಂಢೆ ನೇತೃತ್ವದ ಮಹಾರಾಷ್ಟ್ರ ಎಫ್&zwnj;ಡಿಎ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಪಾನ್ ಮಸಾಲಾ ಮತ್ತು ತಂಬಾಕು ಸಂಬಂಧಿತ ಉತ್ಪನ್ನಗಳ ಜಾಹೀರಾತು ಹಾಗೂ ಮಾರಾಟದ ಮೇಲೆ ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ನಿಯಮಗಳಿವೆ. ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಪರೋಕ್ಷ ಪ್ರಚಾರ ನಡೆಯಬಾರದು ಎಂಬ ನಿಲುವನ್ನು ಎಫ್&zwnj;ಡಿಎ ಹೊಂದಿದೆ.&lt;/p&gt;&lt;h3&gt;&lt;strong&gt;ನೋಟಿಸ್&zwnj;ನಲ್ಲಿ ಇದ್ದದ್ದೇನು?&lt;/strong&gt;&lt;/h3&gt;&lt;p&gt;ನೋಟಿಸ್&zwnj;ನಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ಸೆಕ್ಷನ್ 24 ಅನ್ನು ಉಲ್ಲೇಖಿಸಲಾಗಿದೆ. ಆಹಾರ ಉತ್ಪನ್ನಗಳ ಪ್ರಚಾರದಲ್ಲಿ ಸುಳ್ಳು ಅಥವಾ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವುದನ್ನು ಈ ಕಾನೂನು ನಿರ್ಬಂಧಿಸುತ್ತದೆ. ಇದರ ಜೊತೆಗೆ Food Safety and Standards (Advertising and Claims) Regulations, 2018 ನಿಯಮಗಳನ್ನೂ ಉಲ್ಲೇಖಿಸಲಾಗಿದೆ. ಜಾಹೀರಾತುಗಳಲ್ಲಿನ ಹೇಳಿಕೆಗಳು ಸ್ಪಷ್ಟ, ನಿಖರ ಮತ್ತು ಗ್ರಾಹಕರನ್ನು ದಾರಿತಪ್ಪಿಸದಂತಿರಬೇಕು ಎಂಬುದು ಈ ನಿಯಮಗಳ ಉದ್ದೇಶ.&lt;/p&gt;&lt;h3&gt;&lt;strong&gt;15 ದಿಗನಗಳ ಖಡಕ್&zwnj; ಗಡುವು!&lt;/strong&gt;&lt;/h3&gt;&lt;p&gt;ಈಗ ಶಾರುಖ್, ಅಜಯ್ ಮತ್ತು ಟೈಗರ್ ಮುಂದಿನ 15 ದಿನಗಳಲ್ಲಿ ತಮ್ಮ ಪ್ರತಿಕ್ರಿಯೆ ನೀಡಬೇಕಿದೆ. ಜಾಹೀರಾತಿನಲ್ಲಿ ಭಾಗವಹಿಸಿದ್ದಕ್ಕೆ ಕಾರಣವೇನು, ಸರೋಗೇಟ್ ಜಾಹೀರಾತಿನ ಆರೋಪದ ಬಗ್ಗೆ ಅವರ ನಿಲುವೇನು ಎಂಬುದನ್ನು ಅವರು ಅಥವಾ ಅವರ ಕಾನೂನು ತಂಡ ವಿವರಿಸಬೇಕಾಗುತ್ತದೆ. ಜೊತೆಗೆ ವಿವಾದಿತ ಜಾಹೀರಾತಿನ ವಿಷಯವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ.&lt;/p&gt;&lt;h3&gt;&lt;strong&gt;ದಂಡ ಸೇರಿ ವಿವಿಧ ಕ್ರಮ ಎದುರಾಗುವ ಸಾಧ್ಯತೆ!&lt;/strong&gt;&lt;/h3&gt;&lt;p&gt;ವಿಷಯ ಇಲ್ಲಿಗೇ ಮುಗಿಯುವುದಿಲ್ಲ. FDA ಅವರ ಉತ್ತರದಿಂದ ತೃಪ್ತಿಯಾಗದಿದ್ದರೆ ಅಥವಾ ಪ್ರಕರಣ ಮತ್ತಷ್ಟು ಮುಂದುವರಿದರೆ, ಸಂಬಂಧಿತ ಕಾನೂನುಗಳ ಅಡಿಯಲ್ಲಿ ದಂಡ ಸೇರಿದಂತೆ ವಿವಿಧ ಕ್ರಮಗಳು ಎದುರಾಗಬಹುದು. ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಸೆಲೆಬ್ರಿಟಿ ಎಂಡೋರ್ಸರ್&zwnj;ಗಳ ಮೇಲೂ ನಿರ್ಬಂಧ ಹೇರಲು ಅವಕಾಶವಿದೆ. ಈ ಪ್ರಕರಣವನ್ನು ತುಕಾರಾಮ್ ಮುಂಢೆ ಅವರು ರಾಷ್ಟ್ರೀಯ ಮಟ್ಟದ ಸಂಸ್ಥೆಗಳ ಗಮನಕ್ಕೂ ತಂದಿದ್ದಾರೆ. ಪ್ರಕರಣದ ಪ್ರತಿಯನ್ನು FSSAI ಮತ್ತು CCPAಗೆ ಕಳುಹಿಸಲಾಗಿದ್ದು, ಅಗತ್ಯವಿದ್ದರೆ ರಾಷ್ಟ್ರಮಟ್ಟದಲ್ಲೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.&lt;/p&gt;&lt;h3&gt;&lt;strong&gt;ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಅಕ್ಷಯ್!&lt;/strong&gt;&lt;/h3&gt;&lt;p&gt;ಇದೇ ರೀತಿಯ ವಿವಾದದಲ್ಲಿ ಈ ಹಿಂದೆ ಅಕ್ಷಯ್ ಕುಮಾರ್ ಕೂಡ ಸಿಲುಕಿದ್ದರು. ಬಳಿಕ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ತಮ್ಮ ಎಂಡೋರ್ಸ್&zwnj;ಮೆಂಟ್ ಶುಲ್ಕವನ್ನು ಸಾಮಾಜಿಕ ಉದ್ದೇಶಕ್ಕೆ ನೀಡುವುದಾಗಿ ತಿಳಿಸಿದ್ದರು. ತುಕಾರಾಮ್ ಮುಂಢೆ ಅವರ ಕಠಿಣ ಕ್ರಮದ ಬೆನ್ನಲ್ಲೇ ಬಾಲಿವುಡ್&zwnj;ನ ಈ ಮೂವರು ಸ್ಟಾರ್&zwnj;ಗಳ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. **ಒಂದು ಜಾಹೀರಾತು ಈಗ ಶಾರುಖ್&zwnj;, ಅಜಯ್&zwnj; ಮತ್ತು ಟೈಗರ್&zwnj;ಗೆ ಎಷ್ಟು ದೊಡ್ಡ ಕಾನೂನು ಸಂಕಷ್ಟ ತಂದೊಡ್ಡಲಿದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/tv-talk/what-is-surrogate-ad-and-why-shahrukh-khan-ajay-devgan-tiger-get-not-by-fda-maharashtra-know-rules-bmk/articleshow-2db2yxx"/>
        </item>
        <item>
            <title><![CDATA[ಮದುವೆ ಮನೆಯಲ್ಲಿ ಡಿ-ಬಾಸ್ ಜೈಕಾರ: ಅಭಿಮಾನಿಗಳಿಗೆ ಪ್ರೀತಿಯಿಂದಲೇ ವಾರ್ನಿಂಗ್ ಕೊಟ್ರು ವಿಜಯಲಕ್ಷ್ಮಿ!]]></title>
            <link>https://kannada.asianetnews.com/sandalwood/vijayalakshmi-darshan-warns-d-boss-fans-over-slogans-at-wedding-gvd/articleshow-hgtkf3s</link>
            <guid isPermaLink="true">https://kannada.asianetnews.com/sandalwood/vijayalakshmi-darshan-warns-d-boss-fans-over-slogans-at-wedding-gvd/articleshow-hgtkf3s</guid>
            <pubDate>Sun, 16 Aug 2026 21:14:08 +0530</pubDate>
            <description><![CDATA[&lt;p&gt;ನಟ ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗದ ಕ್ರೇಜ್&zwnj; ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ದರ್ಶನ್ ಎಲ್ಲೇ ಕಾಣಿಸಿಕೊಂಡರೂ, ಅವರ ಹೆಸರು ಕೇಳಿದರೂ ಅಭಿಮಾನಿಗಳು &lsquo;ಡಿ-ಬಾಸ್&rsquo; ಎಂದು ಜೈಕಾರ ಹಾಕುವುದು ಸಾಮಾನ್ಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05kjhr2cxrhtw2yms4brvws,imgname-vvh-1786894698242.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗದ ಕ್ರೇಜ್&zwnj; ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ದರ್ಶನ್ ಎಲ್ಲೇ ಕಾಣಿಸಿಕೊಂಡರೂ, ಅವರ ಹೆಸರು ಕೇಳಿದರೂ ಅಭಿಮಾನಿಗಳು &lsquo;ಡಿ-ಬಾಸ್&rsquo; ಎಂದು ಜೈಕಾರ ಹಾಕುವುದು ಸಾಮಾನ್ಯ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಘೋಷಣೆಗಳಿಂದ ದೂರವಿದ್ದು, ಶಾಂತವಾಗಿರುವಂತೆ ದರ್ಶನ್ ಕುಟುಂಬದವರು ಹಲವು ಬಾರಿ ಮನವಿ ಮಾಡಿದ್ದಾರೆ. ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ಅಭಿಮಾನಿಗಳಿಗೆ ಪ್ರೀತಿಯಿಂದಲೇ ಕಿವಿಮಾತು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಮದುವೆ ಸಮಾರಂಭದಲ್ಲಿ ಶುರುವಾಯ್ತು &lsquo;ಡಿ-ಬಾಸ್&rsquo; ಘೋಷಣೆ!&lt;/strong&gt;&lt;/p&gt;&lt;p&gt;ದರ್ಶನ್ ಕುಟುಂಬಕ್ಕೆ ಆಪ್ತರಾಗಿರುವ ಅಭಿಮಾನಿ ಜೈಕಂಠ ಶೇಖರ್ ಅವರ ಮದುವೆ ಸಮಾರಂಭಕ್ಕೆ ವಿಜಯಲಕ್ಷ್ಮಿ ದರ್ಶನ್ ಆಗಮಿಸಿದ್ದರು. ನವದಂಪತಿಗೆ ಶುಭ ಹಾರೈಸಿ ಫೋಟೋ ತೆಗೆಸಿಕೊಳ್ಳುತ್ತಿದ್ದ ವೇಳೆ ಅಲ್ಲಿದ್ದ ಕೆಲ ಅಭಿಮಾನಿಗಳು ಜೋರಾಗಿ &ldquo;ಡಿ-ಬಾಸ್&zwnj;ಗೆ ಜೈ&rdquo; ಎಂದು ಘೋಷಣೆ ಕೂಗಿದ್ದಾರೆ. ಅಭಿಮಾನಿಗಳ ಈ ಘೋಷಣೆ ಕೇಳುತ್ತಿದ್ದಂತೆ ವಿಜಯಲಕ್ಷ್ಮಿ ಕೊಂಚ ಮುಜುಗರಕ್ಕೊಳಗಾಗಿದ್ದಾರೆ. ಬಳಿಕ ಯಾವುದೇ ಕೋಪವಿಲ್ಲದೆ, ನಗುಮುಖದಲ್ಲೇ ಅಭಿಮಾನಿಗಳಿಗೆ ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;&lsquo;ಇದು ಮದುವೆ ಮನೆ, ಇಲ್ಲೂ ಬೇಕಾ?&rsquo;&lt;/strong&gt;&lt;/p&gt;&lt;p&gt;&ldquo;ಇದು ಮದುವೆ ಮನೆ, ಇಲ್ಲೂ ಇದು ಬೇಕಾ? ಎಲ್ಲಾ ಕಡೆಯೂ ಇದೇ ತೊಂದರೆಯಾಗುತ್ತಿದೆ. ದಯವಿಟ್ಟು ಇದನ್ನು ನೀವು ನಿಲ್ಲಿಸಬೇಕು,&rdquo; ಎಂದು ವಿಜಯಲಕ್ಷ್ಮಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರ ಈ ಮಾತಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳ ವರ್ತನೆಗೆ ಕೋಪದಿಂದ ಪ್ರತಿಕ್ರಿಯಿಸುವ ಬದಲು, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪ್ರೀತಿಯಿಂದಲೇ ಎಚ್ಚರಿಕೆ ನೀಡಿರುವುದು ಹಲವರ ಗಮನ ಸೆಳೆದಿದೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಕೆಲ ಅಭಿಮಾನಿಗಳು, &ldquo;ಅತ್ತಿಗೆ ಹೇಳಿದ್ದು ಸರಿಯಾಗಿದೆ. ಸದ್ಯಕ್ಕೆ ನಾವು ಶಾಂತವಾಗಿರಬೇಕು&rdquo; ಎಂದು ಕಾಮೆಂಟ್ ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಡಿಕೆಶಿ ಕೂಡ ಈ ಹಿಂದೆ ಎಚ್ಚರಿಸಿದ್ದರು&lt;/strong&gt;&lt;/h2&gt;&lt;p&gt;ಇತ್ತೀಚೆಗೆ ರಾಮನಗರದ ಕರಗ ಮಹೋತ್ಸವದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಷಣ ಮಾಡುತ್ತಿದ್ದ ವೇಳೆ ಕೆಲ ದರ್ಶನ್ ಅಭಿಮಾನಿಗಳು &lsquo;ಡಿ-ಬಾಸ್&rsquo; ಎಂದು ಘೋಷಣೆ ಕೂಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಡಿಕೆಶಿ, ಅಭಿಮಾನಿಗಳ ಇಂತಹ ವರ್ತನೆಯಿಂದ ದರ್ಶನ್&zwnj;ಗೆ ಮತ್ತಷ್ಟು ಸಂಕಷ್ಟ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಅದೇ ರೀತಿಯಲ್ಲಿ ವಿಜಯಲಕ್ಷ್ಮಿ ದರ್ಶನ್ ಕೂಡ ಅಭಿಮಾನಿಗಳಿಗೆ ಜೈಕಾರ, ಶೋ ಆಫ್&zwnj;ಗಿಂತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಶಾಂತವಾಗಿರುವುದು ಮುಖ್ಯ ಎಂಬ ಸಂದೇಶ ನೀಡಿದ್ದಾರೆ. ಹೀಗಾಗಿ ಅವರ ಈ ಕಿವಿಮಾತು ಇದೀಗ ದರ್ಶನ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/vijayalakshmi-darshan-warns-d-boss-fans-over-slogans-at-wedding-gvd/articleshow-hgtkf3s"/>
        </item>
        <item>
            <title><![CDATA[ಅಮ್ಮನ ಸೀರೆಯಲ್ಲಿ ಮಿಂಚಿದ ತ್ರಿಷಾ.. ‘ಇದು ತುಂಬಾ ಸ್ಪೆಷಲ್’ ಎಂದ ಬ್ಯೂಟಿ ಕ್ವೀನ್: ಫೋಟೋಸ್ ವೈರಲ್]]></title>
            <link>https://kannada.asianetnews.com/gallery/entertainment/trisha-krishnan-stuns-in-her-mother-saree-photos-go-viral-gvd-d8vrz4z</link>
            <guid isPermaLink="true">https://kannada.asianetnews.com/gallery/entertainment/trisha-krishnan-stuns-in-her-mother-saree-photos-go-viral-gvd-d8vrz4z</guid>
            <pubDate>Sun, 16 Aug 2026 20:38:19 +0530</pubDate>
            <description><![CDATA[&lt;p&gt;ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಸೀರೆ ತಮ್ಮ ತಾಯಿಯದ್ದು ಎಂದು ತ್ರಿಷಾ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿಯ ಸೀರೆಯಲ್ಲೇ ವಿಶೇಷ ಫೋಟೋಶೂಟ್..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05h0qp5fqj17b5jdmccqymp,imgname-6-1786892017349.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಸೀರೆ ತಮ್ಮ ತಾಯಿಯದ್ದು ಎಂದು ತ್ರಿಷಾ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿಯ ಸೀರೆಯಲ್ಲೇ ವಿಶೇಷ ಫೋಟೋಶೂಟ್..&lt;/p&gt;&lt;img&gt;&lt;p&gt;ಸೌತ್ ಸಿನಿರಂಗದ ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಸದಾ ತಮ್ಮ ಸ್ಟೈಲ್ ಹಾಗೂ ಸಿಂಪ್ಲಿಸಿಟಿಯಿಂದ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇದೀಗ ತಮಿಳುನಾಡಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿಷಾ ಕಾಣಿಸಿಕೊಂಡಿರುವ ವಿಶೇಷ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ಅವರು ಧರಿಸಿದ್ದ ಸೀರೆ!&lt;/p&gt;&lt;img&gt;&lt;p&gt;ತಮಿಳುನಾಡು ಸರ್ಕಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿಷಾ ವಿಶೇಷ ಆಕರ್ಷಣೆಯಾಗಿದ್ದರು. ಮುಖ್ಯಮಂತ್ರಿ ವಿಜಯ್ ಭಾಗವಹಿಸಿದ್ದ ಮೊದಲ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವಾಗಿದ್ದರಿಂದ ಈ ಕಾರ್ಯಕ್ರಮಕ್ಕೆ ಸಾಕಷ್ಟು ಮಹತ್ವವಿತ್ತು. ವಿಜಯ್ ಅವರ ಕುಟುಂಬದ ಸದಸ್ಯರ ಜೊತೆಗೆ ತ್ರಿಷಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.&lt;/p&gt;&lt;img&gt;&lt;p&gt;ಚೆನ್ನೈನ ಮರೀನಾ ಬೀಚ್&zwnj;ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತ್ರಿಷಾಗೆ ಮಿನಿಸ್ಟರ್ಸ್ ಗ್ಯಾಲರಿಯಲ್ಲಿ ವಿಶೇಷ ವಿಐಪಿ ಸೀಟ್ ನೀಡಲಾಗಿತ್ತು. ಗೋಲ್ಡ್ ಕಲರ್ ಸೀರೆಯಲ್ಲಿ ಸಾಂಪ್ರದಾಯಿಕ ಲುಕ್&zwnj;ನಲ್ಲಿ ಕಾಣಿಸಿಕೊಂಡ ತ್ರಿಷಾ, ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಮಾತನಾಡಿಸುತ್ತಾ ಗಮನ ಸೆಳೆದರು. ತ್ರಿಷಾ ಅವರ ಈ ಲುಕ್&zwnj;ಗೆ ಸಂಬಂಧಿಸಿದ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಈ ಸೀರೆಯ ಹಿಂದೆ ಒಂದು ವಿಶೇಷವಾದ ಭಾವನಾತ್ಮಕ ಕಥೆ ಇದೆ ಎಂಬುದು ಇದೀಗ ಬಹಿರಂಗವಾಗಿದೆ.&lt;/p&gt;&lt;img&gt;&lt;p&gt;ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಸೀರೆ ತಮ್ಮ ತಾಯಿಯದ್ದು ಎಂದು ತ್ರಿಷಾ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿಯ ಸೀರೆಯಲ್ಲೇ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿರುವ ಚಿತ್ರಗಳನ್ನು ಹಂಚಿಕೊಂಡಿರುವ ತ್ರಿಷಾ, ಇದು ತಮಗೆ ತುಂಬಾ ವಿಶೇಷವಾದ ಸೀರೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಗೋಲ್ಡ್ ಬಣ್ಣದ ಸೀರೆಯಲ್ಲಿ ಸಾಂಪ್ರದಾಯಿಕ ಹಾಗೂ ಎಲಿಗಂಟ್ ಲುಕ್&zwnj;ನಲ್ಲಿ ಕಾಣಿಸಿಕೊಂಡಿರುವ ತ್ರಿಷಾ ಅವರ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ. ನೆಟ್ಟಿಗರು ಕೂಡ ಅವರ ಸೌಂದರ್ಯವನ್ನು ಮೆಚ್ಚಿ ಕಾಮೆಂಟ್&zwnj;ಗಳ ಸುರಿಮಳೆಗೈಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾ ವಿಚಾರಕ್ಕೆ ಬಂದರೆ, ತ್ರಿಷಾ ಸದ್ಯ ಹಲವು ಬಹುನಿರೀಕ್ಷಿತ ಪ್ರಾಜೆಕ್ಟ್&zwnj;ಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂರ್ಯ ಅಭಿನಯದ &lsquo;ಕರುಪ್ಪು&rsquo; ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಆರ್&zwnj;ಜೆ ಬಾಲಾಜಿ ನಿರ್ದೇಶನದ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ತ್ರಿಷಾ ಮೆಗಾಸ್ಟಾರ್ ಚಿರಂಜೀವಿ ಅಭಿನಯದ &lsquo;ವಿಶ್ವಂಭರ&rsquo; ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ವಶಿಷ್ಠ ನಿರ್ದೇಶನದ ಈ ಸೋಶಿಯೋ-ಫ್ಯಾಂಟಸಿ ಎಂಟರ್&zwnj;ಟೈನರ್ ಮೇಲೆ ಭಾರೀ ನಿರೀಕ್ಷೆ ಇದೆ.&lt;/p&gt;&lt;img&gt;&lt;p&gt;ಇದರ ಜೊತೆಗೆ ಮಲಯಾಳಂ ಸೂಪರ್&zwnj;ಸ್ಟಾರ್ ಮೋಹನ್&zwnj;ಲಾಲ್ ಅಭಿನಯದ &lsquo;ರಾಮ್&rsquo; ಸಿನಿಮಾದಲ್ಲೂ ತ್ರಿಷಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. &lsquo;ದೃಶ್ಯಂ&rsquo; ಖ್ಯಾತಿಯ ಜೀತು ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಸಂಯುಕ್ತಾ ಹಾಗೂ ಇಂದ್ರಜಿತ್ ಸುಕುಮಾರನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ, ಅಮ್ಮನ ಸೀರೆಯಲ್ಲಿ ತ್ರಿಷಾ ಕಾಣಿಸಿಕೊಂಡಿರುವ ಈ ಸಿಂಪಲ್ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳಿಗೆ ಮಾತ್ರ ಈ ಸೀರೆ ಹಿಂದಿನ ಭಾವನಾತ್ಮಕ ಕಥೆ ಮತ್ತಷ್ಟು ವಿಶೇಷವಾಗಿ ಇಷ್ಟವಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/trisha-krishnan-stuns-in-her-mother-saree-photos-go-viral-gvd-d8vrz4z"/>
        </item>
        <item>
            <title><![CDATA[ಮದುವೆ ಸಂಭ್ರಮದಲ್ಲಿ ನಲಪಾಡ್.. ಅದ್ದೂರಿ ಕಾರ್‍ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್, ಸುದೀಪ್, ಯಶ್ ಭಾಗಿ]]></title>
            <link>https://kannada.asianetnews.com/politics/congress-leader-mohammed-nalapad-marriage-cm-dk-shivakumar-kiccha-sudeep-rocking-star-yash-attend-grand-wedding-gkn/articleshow-g7thhio</link>
            <guid isPermaLink="true">https://kannada.asianetnews.com/politics/congress-leader-mohammed-nalapad-marriage-cm-dk-shivakumar-kiccha-sudeep-rocking-star-yash-attend-grand-wedding-gkn/articleshow-g7thhio</guid>
            <pubDate>Sun, 16 Aug 2026 20:14:59 +0530</pubDate>
            <description><![CDATA[&lt;p&gt;ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರು ಕೊಡಗಿನ ಮಡಿಕೇರಿಯ ರೆಸಾರ್ಟ್&zwnj;ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕಾನೂನು ಪದವೀಧರೆ ಮಲಿಹಾ ಫಾತಿಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಹೈ-ಪ್ರೊಫೈಲ್ ಮದುವೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್, ನಟರಾದ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05gfpsg0e4e5eqh26336hfw,imgname-cm-dk-shivakumar-and-kiccha-sudeep-in-nalpad-marriage-1786891459375.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ:&lt;/strong&gt; ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ (Mohammed Nalapad) ಅವರು ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿರುವ 'ಕೂರ್ಗ್ ವೈಲ್ಡರ್&zwnj;ನೆಸ್' (Coorg Wilderness) ರೆಸಾರ್ಟ್&zwnj;ನಲ್ಲಿ ಈ ಅದ್ಧೂರಿ ವಿವಾಹ ಮಹೋತ್ಸವ ನೆರವೇರಿದೆ.&lt;/p&gt;&lt;p&gt;ನಲಪಾಡ್ ಅವರ ಕೈಹಿಡಿದ ವಧುವಿನ ಹೆಸರು ಮಲಿಹಾ ಫಾತಿಮಾ. ಈಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಐ.ಮುನೀರ್ ಅಹಮ್ಮದ್ ಅವರ ಮೂರನೇ ಪುತ್ರಿ. ಮಲಿಹಾ ಫಾತಿಮಾ ಅವರು ಕಾನೂನು ಪದವೀಧರೆಯಾಗಿದ್ದು (Law Graduate), ಪ್ರಸ್ತುತ ಅಮೆರಿಕ ಮೂಲದ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ (MNC) ಉನ್ನತ ಹುದ್ದೆಯಲ್ಲಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಸ್ನೇಹ ಈಗ ಸಂಬಂಧವಾಗಿ ಬದಲಾಗಿದೆ&lt;/strong&gt;&lt;/h2&gt;&lt;p&gt;ಶಾಸಕ ಎನ್.ಎ. ಹ್ಯಾರಿಸ್ ಮತ್ತು ಮುನೀರ್ ಅಹಮ್ಮದ್ ನಡುವೆ ಕಳೆದ 20 ವರ್ಷಗಳಿಂದ ಗಾಢ ಸ್ನೇಹವಿದೆ. ಮುನೀರ್ ಅವರು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎ. ಹಸನಬ್ಬ ಅವರ ಸಹೋದರಿಯ ಪುತ್ರ. ಈಗ ಈ ಎರಡು ಕುಟುಂಬಗಳ ದಶಕಗಳ ಸ್ನೇಹವು ನೆಂಟಸ್ತಿಕೆಯಾಗಿ ಬದಲಾಗಿದೆ. ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಈ ವಿವಾಹ ನಿಶ್ಚಯವಾಗಿತ್ತು.&lt;/p&gt;&lt;p&gt;ಈ ಹೈ-ಪ್ರೊಫೈಲ್ ವಿವಾಹಕ್ಕೆ ರಾಜಕೀಯ ಮತ್ತು ಚಿತ್ರರಂಗದ ಪ್ರಮುಖ ಗಣ್ಯರು ಸಾಕ್ಷಿಯಾದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಪತ್ನಿಯೊಂದಿಗೆ ಆಗಮಿಸಿ ನವದಂಪತಿಗೆ ಶುಭ ಹಾರೈಸಿದ್ದಾರೆ. ಕೇರಳ ಸಿಎಂ ವಿ.ಡಿ. ಸತೀಶನ್, ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು. ಸ್ಯಾಂಡಲ್&zwnj;ವುಡ್ ಸ್ಟಾರ್&zwnj;ಗಳಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಸಮಾರಂಭಕ್ಕೆ ಆಗಮಿಸಿ ಮದುವೆಗೆ ತಾರಾ ಮೆರುಗು ನೀಡಿದರು.&lt;/p&gt;&lt;p&gt;ಆಗಸ್ಟ್ 15ರಿಂದ 20ರವರೆಗೆ ಸತತ ಐದು ದಿನಗಳ ಕಾಲ ಮದುವೆ ಶಾಸ್ತ್ರಗಳು ನಡೆಯಲಿವೆ. ಆಗಸ್ಟ್ 16ರಂದು ನಿಕಾಹ್ ನೆರವೇರಿದ್ದು, ಆಗಸ್ಟ್ 17ರಂದು (ನಾಳೆ) ಅದ್ಧೂರಿ ಆರತಕ್ಷತೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ರೆಸಾರ್ಟ್&zwnj;ನ ಎಲ್ಲಾ 104 ಕೊಠಡಿಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದ್ದು, ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮೊಹಮ್ಮದ್ ನಲಪಾಡ್ ಅವರಿಗೆ ಇದು ಎರಡನೇ ವಿವಾಹವಾಗಿದ್ದು, ಈ ಹಿಂದೆ 2017ರಲ್ಲಿ ಸಮ್ರೀನ್ ಅವರೊಂದಿಗೆ ವಿವಾಹವಾಗಿದ್ದರು. ಇದೀಗ ಕೊಡಗಿನ ಅಳಿಯನಾಗಿ ನಲಪಾಡ್ ಹೊಸ ಜೀವನ ಆರಂಭಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/congress-leader-mohammed-nalapad-marriage-cm-dk-shivakumar-kiccha-sudeep-rocking-star-yash-attend-grand-wedding-gkn/articleshow-g7thhio"/>
        </item>
        <item>
            <title><![CDATA[ಘೋಸ್ಟ್ ಸೇರಿ ಸೂಪರ್ ಹಿಟ್ ಸಿನಿಮಾ ನೀಡಿದ ನಟಿ ಅನನ್ಯಾ ರಾಜ್ ಸಾವು, 27ರ ನಟಿಗೆ ಏನಾಯಿತು?]]></title>
            <link>https://kannada.asianetnews.com/entertainment/ghost-fame-actress-ananya-raj-dies-at-27-family-reveals-reason-behind-death/articleshow-nw9xv5n</link>
            <guid isPermaLink="true">https://kannada.asianetnews.com/entertainment/ghost-fame-actress-ananya-raj-dies-at-27-family-reveals-reason-behind-death/articleshow-nw9xv5n</guid>
            <pubDate>Sun, 16 Aug 2026 19:44:45 +0530</pubDate>
            <description><![CDATA[&lt;p&gt;ಘೋಸ್ಟ್ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನಪ್ರಿಯವಾಗಿದ್ದ 27ರ ಹರೆಯದ ನಟಿ ಅನನ್ಯಾ ರಾಜ್ ಸಾವು. ನಿಧನ ಸುದ್ದಿಯನ್ನು ಅನನ್ಯಾ ರಾಜ್ ಕುಟುಂಬಸ್ಥರು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಯುವ ನಟಿಗೆ ಏನಾಯಿತು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05er796rw4cc3cte170gzam,imgname-actress-ananya-raj-dies-at-27-1786889641253.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಆ.16) &lt;/strong&gt;ಬಾಲಿವುಡ್&zwnj;ನ ಘೋಸ್ಟ್, ತೆಲುಗಿನ ತೆಗ್ಗದೆ ಲೇ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದ ನಟಿ ಅನನ್ಯಾ ರಾವ್ ನಿಧನರಾಗಿದ್ದಾರೆ. 27ರ ಹರೆಯದ ಉದೋನ್ಮುಖ ನಟಿ ಅನನ್ಯಾ ರಾಜ್ ಸಾವಿನ ಸುದ್ದಿಯನ್ನು ಕುಟುಂಬಸ್ಥರು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಅನನ್ಯಾ ರಾಜ್ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಸಿನಿಮಾ ಲೋಕದ ದಿಗ್ಗಜರು, ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಇದ್ದಕ್ಕಿದ್ದಂತೆ ನಟಿಗೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h2&gt;ಜುಲೈ 15ಕ್ಕೆ ಸಾವು, ಒಂದು ತಿಂಗಳ ಬಳಿಕ ಬಹಿರಂಗಪಡಿಸಿದ ಕುಟುಂಬ&lt;/h2&gt;&lt;p&gt;ಅನನ್ಯಾ ರಾಜ್ ಸಾವಿನ ಸುದ್ದಿಯನ್ನು ಕುಟುಂಬಸ್ಥರು ಹಂಚಿಕೊಂಡಿದ್ದಾರೆ. ಅನನ್ಯಾ ರಾವ್ ಅಧಿಕೃತ ಇನ್&zwnj;ಸ್ಟಾಗ್ರಾಂ ಖಾತೆ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅನನ್ಯಾ ರಾವ್ ಜುಲೈ 15ರಂದೇ ಮೃತಪಟ್ಟಿದ್ದಾರೆ. ಆದರೆ ತೀವ್ರ ನೋವಿನಲ್ಲಿದ್ದ ಕುಟುಂಬದ ಖಾಸಗಿತನ , ಗೌಪ್ಯತೆ ಕಾರಣದಿಂದ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಒಂದು ತಿಂಗಳ ಬಳಿಕ ಕುಟುಂಬಸ್ಥರು ಸಾವಿನ ಮಾಹಿತಿಯನ್ನು ಖಚಿತಪಡಿಸಿದ್ದಾರೆ.&lt;/p&gt;&lt;h2&gt;ಕುಟುಂಬದಿಂದ ಭಾವುಕ ಸಂದೇಶ&lt;/h2&gt;&lt;p&gt;ಅನನ್ಯಾ ರಾಜ್ ಕುಟುಂಬದಿಂದ ಈ ಪೋಸ್ಟ್ ಮಾಡಲಾಗುತ್ತಿದೆ.ತೀವ್ರ ನೋವು, ದುಃಖದಿಂದ ಈ ಮಾಹಿತಿ ನೀಡುತ್ತಿದ್ದೇವೆ. ಅನನ್ಯಾ ರಾಜ್ ಕಳೆದ ಜುಲೈ 15ರಂದು ನಿದ್ದೆಯಲ್ಲಿರುವಾಗಲೇ ನಿಧನರಾಗಿದ್ದಾರೆ. ಕಳೆದೊಂದು ವರ್ಷದಿಂದ ಅನನ್ಯಾ ರಾಜ್ ಮಾನಸಿಕ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದರು. ಆದರೆ ಅನನ್ಯಾ ರಾಜ್ ಧೈರ್ಯವಂತೆ ಹುಡುಗಿಯಾಗಿದ್ದಳು. ಒಂದು ವರ್ಷದಿಂದ ಸತತ ಹೋರಾಟ ಮಾಡಿದ್ದಳು. ಈ ಕಠಿಣ ಸಂದರ್ಭದಲ್ಲಿ ಕುಟುಂಬದ ಗೌಪತ್ಯ, ಖಾಸಗೀತನವನ್ನು ಗೌರವಿಸಬೇಕಾಗಿ ಅಭಿಮಾನಿಗಳಲ್ಲಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.&lt;/p&gt;&lt;p&gt;ಮುಂಬೈನಲ್ಲಿ ಹುಟ್ಟಿ ಬೆಳೆದ ಅನನ್ಯಾ ರಾಜ್ ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2026ರಲ್ಲಿ 7 ಅವರ್ಸ್ ಟು ಗೋ ಸಿನಿಮಾ ಮೂಲಕ ಬಾಲಿವುಡ್&zwnj;ಗೆ ಎಂಟ್ರಿಕೊಟ್ಟಿದ್ದರು. ದಿ ಫೈನಲ್ ಎಕ್ಸಿಟ್, ಘೋಸ್ಟ್ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ತೆಲುಗಿನ ತಗ್ಗೆದೇ ಲೇ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಳೆದ ಒಂದು ವರ್ಷದಿಂದ ಅನನ್ಯಾ ರಾಜ್ ಎಲ್ಲೂ ಕಾಣಿಸಿಕೊಂಡಿರಲಲ್ಲ. ಇನ್&zwnj;ಸ್ಟಾಗ್ರಾಂ ಪೋಸ್ಟ್ ಮೂಲಕ ಕಾಣಿಸಿಕೊಂಡರೂ ಬಹಿರಂಗವಾಗಿ ಅತೀ ವಿರಳವಾಗಿದ್ದರು. ಮಾನಸಿಕ ಸಮಸ್ಯೆಯಿಂದ ಬಳಸಿದ ಅನನ್ಯಾ ರಾಜ್ ನಿಧನಕ್ಕೆ ಸಿನಿಮಾ ಗಣ್ಯರು ಸಂತಾಪ ಸೂಚಿಸಿದ್ದಾರೆ.&lt;/p&gt;&lt;p&gt;ನಟಿ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಯಾಕೆ ಹೀಗಾಗುತ್ತಿದೆ, ಹಲವು ನಟಿಯರು, ಪ್ರಮುಖರು ಮಾನಸಿಕ ಸಮಸ್ಯೆಗಳಿಂದ ಬಳಲಿದರೆ ಜನಸಾಮಾನ್ಯರ ಗತಿ ಏನು? ಇದಕ್ಕೆ ಪರಿಹಾರವೇನು ಎಂಬುದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Chethan Kumar</dc:creator>
            <atom:link href="https://kannada.asianetnews.com/entertainment/ghost-fame-actress-ananya-raj-dies-at-27-family-reveals-reason-behind-death/articleshow-nw9xv5n"/>
        </item>
        <item>
            <title><![CDATA[Cinema: ಬೆಂಗಳೂರಿನಿಂದ ನಟನಾದವನ 90ರ ದಶಕದ ಚಿತ್ರ ರೀ-ರಿಲೀಸ್;  ಹಳೇ ಪ್ರೊಜೆಕ್ಟರ್‌ನಲ್ಲಿ ಸಿನಿಮಾ ನೋಡಲು ಥಿಯೇಟರ್‌ಗೆ ಮುಗಿಬಿದ್ದ ಜನ!]]></title>
            <link>https://kannada.asianetnews.com/tv-talk/rajinikanth-baashha-movie-re-release-old-film-reel-projector-retro-cinema-experience-kerala-theatre-bmk/articleshow-z32i09g</link>
            <guid isPermaLink="true">https://kannada.asianetnews.com/tv-talk/rajinikanth-baashha-movie-re-release-old-film-reel-projector-retro-cinema-experience-kerala-theatre-bmk/articleshow-z32i09g</guid>
            <pubDate>Sun, 16 Aug 2026 19:19:00 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ಸ್ಟಾರ್ ಆದ ಖ್ಯಾತ ನಟನ ಅಭಿನಯದ 1995ರ ಚಿತ್ರವನ್ನು ಹಳೆಯ ಫಿಲ್ಮ್ ರೀಲ್ ಮತ್ತು ಪ್ರೊಜೆಕ್ಟರ್ ಬಳಸಿ ಮರು ಪ್ರದರ್ಶಿಸಲಾಯಿತು. ಈ ವಿಶಿಷ್ಟ ಪ್ರದರ್ಶನವು ಪ್ರೇಕ್ಷಕರಿಗೆ ಡಿಜಿಟಲ್ ಯುಗದ ಮೊದಲು ಇದ್ದ ಥಿಯೇಟರ್ ಅನುಭವವನ್ನು ಮರಳಿ ನೀಡಿತು, ಮತ್ತು ಜನರು ಹಳೆಯ ದಿನಗಳನ್ನು ನೆನಪಿಸಿಕೊಳ್ಳಲು ಥಿಯೇಟರ್&zwnj;ಗೆ ಮುಗಿಬಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05da2a4fkqp95x83x1hjj33,imgname-movie-1-1786888128836.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಕಾಲದಲ್ಲಿ ಸಿನಿಮಾ ನೋಡಬೇಕೆಂದರೆ ಥಿಯೇಟರ್&zwnj; ಮುಂದೆ ಉದ್ದನೆಯ ಸರತಿ, ಟಿಕೆಟ್&zwnj;ಗಾಗಿ ಕ್ಯೂ, ಫಿಲ್ಮ್&zwnj; ರೀಲ್&zwnj; ಬದಲಿಸುವ ಪ್ರೊಜೆಕ್ಟರ್&zwnj;ನ ಸದ್ದು ಮತ್ತು ಪರದೆಯ ಮೇಲೆ ಮೂಡುತ್ತಿದ್ದ ಚಿತ್ರಗಳೇ ಪ್ರೇಕ್ಷಕರಿಗೆ ವಿಶೇಷ ಅನುಭವವಾಗಿದ್ದವು. ಆದರೆ ಡಿಜಿಟಲ್&zwnj; ತಂತ್ರಜ್ಞಾನ ಬಂದ ನಂತರ ಸಿನಿಮಾ ಪ್ರದರ್ಶನದ ಸಂಪೂರ್ಣ ವಿಧಾನವೇ ಬದಲಾಗಿದೆ. ಈಗ ಡಿಜಿಟಲ್&zwnj; ಪ್ರೊಜೆಕ್ಟರ್&zwnj;, ಆನ್&zwnj;ಲೈನ್&zwnj; ಬುಕಿಂಗ್&zwnj; ಮತ್ತು ಮೊಬೈಲ್&zwnj; ಟಿಕೆಟ್&zwnj;ಗಳು ಸಾಮಾನ್ಯವಾಗಿವೆ. ಇಂತಹ ಸಮಯದಲ್ಲಿ ಕೇರಳದಲ್ಲಿ ಹಳೆಯ ಸಿನಿಮಾ ಅನುಭವಕ್ಕೆ ಮತ್ತೆ ಜೀವ ನೀಡುವ ವಿಭಿನ್ನ ಪ್ರಯತ್ನವೊಂದು ಗಮನ ಸೆಳೆದಿದೆ. ಈ ಕುರಿತು ಕಂಪ್ಲೀಟ್&zwnj; ರಿಪೋರ್ಟ್&zwnj; ಇಲ್ಲಿದೆ.&lt;/p&gt;&lt;h2&gt;&lt;strong&gt;ನೆನಪುಗಳಿಗೆ ಜೀವಕಳೆ!&lt;/strong&gt;&lt;/h2&gt;&lt;p&gt;ಕೇರಳದ ಕೊಚ್ಚಿ ಪ್ರದೇಶದಲ್ಲಿರುವ ಕ್ರಿಪಾ ಥಿಯೇಟರ್&zwnj;ನಲ್ಲಿ ಫೇಸ್&zwnj;ಬುಕ್&zwnj; ಕಲೆಕ್ಟಿವ್&zwnj; ಎಂಬ ಗುಂಪು ಹಳೆಯ ಕಾಲದ ಸಿನಿಮಾ ಪ್ರದರ್ಶನದ ವಾತಾವರಣವನ್ನು ಮರುಸೃಷ್ಟಿಸಿದೆ. ಈ ವಿಶೇಷ ಪ್ರದರ್ಶನದಲ್ಲಿ ರಜನಿಕಾಂತ್&zwnj; ಅಭಿನಯದ 1995ರ ಬ್ಲಾಕ್&zwnj;ಬಸ್ಟರ್&zwnj; ಸಿನಿಮಾ &lsquo;ಬಾಷಾ&rsquo;ವನ್ನು ಸಾಂಪ್ರದಾಯಿಕ ಫಿಲ್ಮ್&zwnj; ರೀಲ್&zwnj; ಮತ್ತು ಹಳೆಯ ಮಾದರಿಯ ಪ್ರೊಜೆಕ್ಟರ್&zwnj; ಬಳಸಿ ಪ್ರದರ್ಶಿಸಲಾಯಿತು. ಸಿನಿಮಾ ನೋಡಲು ಪ್ರೇಕ್ಷಕರು ಥಿಯೇಟರ್&zwnj;ಗೆ ಆಗಮಿಸಿ, ಹಳೆಯ ದಿನಗಳ ನೆನಪನ್ನು ಮತ್ತೊಮ್ಮೆ ಅನುಭವಿಸಿದರು.&lt;/p&gt;&lt;h3&gt;&lt;strong&gt;ವಿಭಿನ್ನ ಅನುಭವ ಪಡೆದ ವೀಕ್ಷಕ!&lt;/strong&gt;&lt;/h3&gt;&lt;p&gt;ಈ ಕಾರ್ಯಕ್ರಮದ ಉದ್ದೇಶ ಕೇವಲ ಹಳೆಯ ಸಿನಿಮಾವೊಂದನ್ನು ಪ್ರದರ್ಶಿಸುವುದಲ್ಲ. ಡಿಜಿಟಲ್&zwnj; ಸಿನಿಮಾ ಬರುವ ಮೊದಲು ಥಿಯೇಟರ್&zwnj;ನಲ್ಲಿ ಸಿನಿಮಾ ನೋಡುವಾಗ ಸಿಗುತ್ತಿದ್ದ ವಿಭಿನ್ನ ಅನುಭವವನ್ನು ಪ್ರೇಕ್ಷಕರಿಗೆ ಮರಳಿ ನೀಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಆ ಕಾಲದಲ್ಲಿ ಸಿನಿಮಾ ಪ್ರದರ್ಶನಕ್ಕೆ ಬಳಸುತ್ತಿದ್ದ ಫಿಲ್ಮ್&zwnj; ರೀಲ್&zwnj;, ಪ್ರೊಜೆಕ್ಟರ್&zwnj; ಮತ್ತು ಸಾಂಪ್ರದಾಯಿಕ ಥಿಯೇಟರ್&zwnj; ವಾತಾವರಣವನ್ನು ಸಾಧ್ಯವಾದಷ್ಟು ಮರುಸೃಷ್ಟಿಸಲು ಆಯೋಜಕರು ಪ್ರಯತ್ನಿಸಿದರು.&lt;/p&gt;&lt;h3&gt;&lt;strong&gt;ದೊರೆತ ಉತ್ತಮ ಪ್ರತಿಕ್ರಿಯೆ!&lt;/strong&gt;&lt;/h3&gt;&lt;p&gt;ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಿನಿಮಾ ಪ್ರದರ್ಶನಕ್ಕೂ ಮುನ್ನವೇ ಪ್ರೇಕ್ಷಕರು ಥಿಯೇಟರ್&zwnj;ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಇಂದಿನ ದಿನಗಳಲ್ಲಿ ಆನ್&zwnj;ಲೈನ್&zwnj; ಬುಕಿಂಗ್&zwnj; ಮೂಲಕ ಕ್ಷಣಗಳಲ್ಲಿ ಟಿಕೆಟ್&zwnj; ಖರೀದಿಸುವ ವ್ಯವಸ್ಥೆ ಇರುವುದರಿಂದ, ಈ ರೀತಿಯ ಕ್ಯೂ ಕೂಡ ಅನೇಕರಿಗೆ ಹಳೆಯ ಸಿನಿಮಾ ದಿನಗಳ ನೆನಪನ್ನು ತಂದಿತು. ಕಾರ್ಯಕ್ರಮದ ಆಯೋಜಕರ ಪ್ರಕಾರ, ಪ್ರೇಕ್ಷಕರಿಗೆ ಸಿನಿಮಾ ನೋಡುವುದರ ಜೊತೆಗೆ ಅದನ್ನು ಸುತ್ತುವರಿದಿದ್ದ ಹಳೆಯ ಥಿಯೇಟರ್&zwnj; ಸಂಸ್ಕೃತಿಯ ಅನುಭವವೂ ಮುಖ್ಯವಾಗಿತ್ತು.&lt;/p&gt;&lt;h3&gt;&lt;strong&gt;ಇರಲಿಲ್ಲ ಸುಗಮವಾದ ಹಾದಿ!&lt;/strong&gt;&lt;/h3&gt;&lt;p&gt;ಆದರೆ ಹಳೆಯ ಫಿಲ್ಮ್&zwnj; ರೀಲ್&zwnj; ಬಳಸಿ ಸಿನಿಮಾ ಪ್ರದರ್ಶಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಇಂದಿನ ಡಿಜಿಟಲ್&zwnj; ಪ್ರೊಜೆಕ್ಷನ್&zwnj; ವ್ಯವಸ್ಥೆಯೊಂದಿಗೆ ಹೋಲಿಸಿದರೆ ಹಳೆಯ ಫಿಲ್ಮ್&zwnj; ರೀಲ್&zwnj;ಗಳನ್ನು ಸಂರಕ್ಷಿಸುವುದು ಮತ್ತು ಅವುಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸುವುದು ಸವಾಲಿನ ಕೆಲಸವಾಗಿದೆ. ಉತ್ತಮ ಗುಣಮಟ್ಟದ ಹಳೆಯ ಮಲಯಾಳಂ ಸಿನಿಮಾಗಳ ಫಿಲ್ಮ್&zwnj; ರೀಲ್&zwnj; ಸಿಗುವುದು ಕಷ್ಟವಾಗಿದ್ದರಿಂದ, ಆಯೋಜಕರು &lsquo;ಬಾಷಾ&rsquo; ಸಿನಿಮಾವನ್ನು ಆಯ್ಕೆ ಮಾಡಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ಹಳೇ ರೀಲ್ ಸಂರಕ್ಷಣೆ ಅಗತ್ಯ!&lt;/strong&gt;&lt;/h3&gt;&lt;p&gt;ಈ ಪ್ರಯತ್ನದ ಮತ್ತೊಂದು ವಿಶೇಷವೆಂದರೆ, ಹಳೆಯ ತಂತ್ರಜ್ಞಾನವನ್ನು ಕೇವಲ ನೆನಪಿನ ವಸ್ತುವಾಗಿ ನೋಡದೆ, ಅದನ್ನು ಮತ್ತೆ ಪ್ರೇಕ್ಷಕರ ಅನುಭವದ ಭಾಗವನ್ನಾಗಿ ಮಾಡಿರುವುದು. ಫಿಲ್ಮ್&zwnj; ರೀಲ್&zwnj;ಗಳನ್ನು ಸಂರಕ್ಷಿಸುವುದು ಮತ್ತು ಅವುಗಳ ಮೂಲಕ ಸಿನಿಮಾಗಳನ್ನು ಮತ್ತೆ ಪ್ರದರ್ಶಿಸುವುದು ಭವಿಷ್ಯದ ಪೀಳಿಗೆಗೆ ಹಳೆಯ ಸಿನಿಮಾ ತಂತ್ರಜ್ಞಾನದ ಪರಿಚಯ ಮಾಡಿಕೊಡುವ ಒಂದು ಮಾರ್ಗವೂ ಆಗಿದೆ.&lt;/p&gt;&lt;h3&gt;&lt;strong&gt;ಇದು ಒಟಿಟಿ ದುನಿಯಾ!&lt;/strong&gt;&lt;/h3&gt;&lt;p&gt;ಇಂದಿನ OTT, ಮೊಬೈಲ್&zwnj; ಮತ್ತು ಡಿಜಿಟಲ್&zwnj; ಸ್ಕ್ರೀನ್&zwnj;ಗಳ ಯುಗದಲ್ಲಿ ಸಿನಿಮಾ ನೋಡುವ ವಿಧಾನ ಸಂಪೂರ್ಣವಾಗಿ ಬದಲಾಗಿದೆ. ಆದರೆ ದೊಡ್ಡ ಪರದೆಯ ಮುಂದೆ ಕುಳಿತು, ಪ್ರೊಜೆಕ್ಟರ್&zwnj;ನಿಂದ ಫಿಲ್ಮ್&zwnj; ರೀಲ್&zwnj; ಮೂಲಕ ಸಿನಿಮಾ ಮೂಡುವ ಕ್ಷಣವನ್ನು ಅನುಭವಿಸುವ ಆಸಕ್ತಿ ಇನ್ನೂ ಪ್ರೇಕ್ಷಕರಲ್ಲಿ ಇದೆ ಎಂಬುದನ್ನು ಈ ಕಾರ್ಯಕ್ರಮ ತೋರಿಸಿಕೊಟ್ಟಿದೆ. ಹೀಗಾಗಿ, &lsquo;ಬಾಷಾ&rsquo; ಪ್ರದರ್ಶನವು ಕೇವಲ ಒಂದು ಸಿನಿಮಾ ರೀ-ರಿಲೀಸ್&zwnj; ಕಾರ್ಯಕ್ರಮವಾಗಿರದೆ, ಹಳೆಯ ಸಿನಿಮಾ ಸಂಸ್ಕೃತಿ, ಫಿಲ್ಮ್&zwnj; ರೀಲ್&zwnj; ಮತ್ತು ಥಿಯೇಟರ್&zwnj; ಅನುಭವಕ್ಕೆ ನೀಡಿದ ಗೌರವವಾಗಿ ಗಮನ ಸೆಳೆದಿದೆ. ಡಿಜಿಟಲ್&zwnj; ಯುಗದಲ್ಲೂ ಹಳೆಯ ಸಿನಿಮಾದ ಮೋಡಿ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ವಿಭಿನ್ನ ಪ್ರಯತ್ನವೇ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/tv-talk/rajinikanth-baashha-movie-re-release-old-film-reel-projector-retro-cinema-experience-kerala-theatre-bmk/articleshow-z32i09g"/>
        </item>
    </channel>
</rss>
