<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 29 May 2026 20:43:55 +0530</lastBuildDate>
        <atom:link href="https://kannada.asianetnews.com/rss/entertainment" rel="self" type="application/rss+xml"/>
        <item>
            <title><![CDATA[ಚಾಮುಂಡೇಶ್ವರಿ ಮುಂದೆ ಕ್ಷಮೆ ಕೋರಿದ ಬೆನ್ನಲ್ಲೇ ಸಲ್ಮಾನ್ ಖಾನ್ ಮೂಲಕ ರಣವೀರ್-ಫರ್ಹಾನ್ 'ವಾರ್' ಎಂಡ್!?]]></title>
            <link>https://kannada.asianetnews.com/cine-world/don-3-fight-between-ranveer-and-farhan-is-finally-getting-sorted-out-with-salman-khan-stepping-in-as-the-peacemaker/articleshow-vro2ek8</link>
            <guid isPermaLink="true">https://kannada.asianetnews.com/cine-world/don-3-fight-between-ranveer-and-farhan-is-finally-getting-sorted-out-with-salman-khan-stepping-in-as-the-peacemaker/articleshow-vro2ek8</guid>
            <pubDate>Fri, 29 May 2026 20:43:11 +0530</pubDate>
            <description><![CDATA[&lt;p&gt;ಬಾಲಿವುಡ್&zwnj;ನಲ್ಲಿ ಯಾರಿಗಾದರೂ ಸಂಕಷ್ಟ ಎದುರಾದರೆ ಅಲ್ಲಿ 'ಭಾಯ್&zwnj;ಜಾನ್' ಸಲ್ಮಾನ್ ಖಾನ್ ಇರಲೇಬೇಕು. ಇತ್ತ ಫರ್ಹಾನ್ ಅಖ್ತರ್ ಅವರ ಕುಟುಂಬದ ಜೊತೆ ಸಲ್ಮಾನ್&zwnj;ಗೆ ದಶಕಗಳ ಆಪ್ತತೆ ಇದೆ, ಅತ್ತ ರಣವೀರ್ ಸಿಂಗ್ ಮೇಲೂ ಸಲ್ಮಾನ್&zwnj;ಗೆ ಎಲ್ಲಿಲ್ಲದ ಪ್ರೀತಿ. ಈಗ ಈ ಇಬ್ಬರ ಮಧ್ಯೆ ಸಲ್ಲೂ ಇರೋದ್ರಿಂದ ಜಗಳ ಸ್ಟಾಪ್ ಆಗ್ತಿದೆಯಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kst48bma3kbg8arr1w35r2em,imgname-farhan-akhtar-salman-khan-ranveer-singh-1780067085961.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ಅಂಗಳದಲ್ಲಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದ 'ಡಾನ್ 3' ವಿವಾದಕ್ಕೆ ಈಗ ಒಂದು ರೋಚಕ ಟ್ವಿಸ್ಟ್ ಸಿಕ್ಕಿದೆ. ಸಿನಿಮಾ ಬಿಡಿ, ಈ ವಿವಾದವೇ ಒಂದು ಕಮರ್ಷಿಯಲ್ ಸಿನೆಮಾದಂತೆ ಹತ್ತಾರು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಅವರಂತಹ ದಿಗ್ಗಜರ ನಂತರ, ಹೊಸ ಕಾಲದ 'ಡಾನ್' ಆಗಿ ರಣವೀರ್ ಸಿಂಗ್ (Ranveer Singh) ಅವರನ್ನು ಫರ್ಹಾನ್ ಅಖ್ತರ್ () ಲಾಂಚ್ ಮಾಡಲು ರೆಡಿಯಾಗಿದ್ದರು. ಆದರೆ ಸಿನಿಮಾ ಸೆಟ್ಟೇರುವ ಮೊದಲೇ ಶುರುವಾದ ಈ ಕಿತ್ತಾಟ ಈಗ ಬಾಲಿವುಡ್&zwnj;ನ 'ಟೈಗರ್' ಸಲ್ಮಾನ್ ಖಾನ್ (Salman Khan) ಅವರ ಅಂಗಳಕ್ಕೆ ಬಂದು ನಿಂತಿದೆ.&lt;/p&gt;&lt;p&gt;&lt;strong&gt;ಏನಿದು 45 ಕೋಟಿಯ ಹೈಡ್ರಾಮಾ?&lt;/strong&gt;&lt;/p&gt;&lt;p&gt;ಯಾವಾಗ ರಣವೀರ್ ಸಿಂಗ್ 'ಡಾನ್ 3' ಚಿತ್ರದಿಂದ ದಿಢೀರನೆ ಹೊರನಡೆದರೋ, ಅಲ್ಲಿಂದ ಶುರುವಾಗಿದ್ದೇ ಅಸಲಿ ರಗಳೆ. ನಿರ್ದೇಶಕ ಹಾಗೂ ನಿರ್ಮಾಪಕ ಫರ್ಹಾನ್ ಅಖ್ತರ್ ಅವರಿಗೆ ಈ ನಿರ್ಧಾರ ಸುನಾಮಿಯಂತೆ ಅಪ್ಪಳಿಸಿತ್ತು. ಏಕೆಂದರೆ, ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಅವರು ಅಷ್ಟರಲ್ಲಾಗಲೇ ಬರೋಬ್ಬರಿ 45 ಕೋಟಿ ರೂಪಾಯಿಗಳನ್ನು ಸುರಿದಿದ್ದರು. ಹೀರೋ ಹಠಾತ್ತನೆ ಕೈಕೊಟ್ಟಿದ್ದರಿಂದ ಈ ಹಣ ನೀರಿನಲ್ಲಿ ಹೋಮ ಮಾಡಿದಂತಾಯಿತು. ಇದರಿಂದ ಕೆಂಡಾಮಂಡಲವಾದ ಫರ್ಹಾನ್, ಈ ನಷ್ಟವನ್ನು ರಣವೀರ್ ಅವರೇ ಭರಿಸಬೇಕು ಎಂದು ಪಟ್ಟು ಹಿಡಿದು 'ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್' (FWICE) ಮೆಟ್ಟಿಲೇರಿದ್ದರು.&lt;/p&gt;&lt;h2&gt;ಭಾಯ್&zwnj;ಜಾನ್ ಮಾಸ್ ಎಂಟ್ರಿ!&lt;/h2&gt;&lt;p&gt;ಬಾಲಿವುಡ್&zwnj;ನಲ್ಲಿ ಯಾರಿಗಾದರೂ ಸಂಕಷ್ಟ ಎದುರಾದರೆ ಅಲ್ಲಿ 'ಭಾಯ್&zwnj;ಜಾನ್' ಸಲ್ಮಾನ್ ಖಾನ್ ಇರಲೇಬೇಕು. ಇತ್ತ ಫರ್ಹಾನ್ ಅಖ್ತರ್ ಅವರ ಕುಟುಂಬದ ಜೊತೆ ಸಲ್ಮಾನ್&zwnj;ಗೆ ದಶಕಗಳ ಆಪ್ತತೆ ಇದೆ, ಅತ್ತ ರಣವೀರ್ ಸಿಂಗ್ ಮೇಲೂ ಸಲ್ಮಾನ್&zwnj;ಗೆ ಎಲ್ಲಿಲ್ಲದ ಪ್ರೀತಿ. ಈ ಇಬ್ಬರು ಆಪ್ತರ ನಡುವಿನ ಜಗಳ ಬೀದಿಗೆ ಬಂದು, ಕೋರ್ಟ್ ಮೆಟ್ಟಿಲೇರುವ ಲಕ್ಷಣಗಳು ಕಂಡಾಗ ಸಲ್ಮಾನ್ ಖಾನ್ ಸ್ವಯಂ ಪ್ರೇರಿತರಾಗಿ ಮಧ್ಯಸ್ಥಿಕೆ ವಹಿಸಲು ಮುಂದಾದರು.&lt;/p&gt;&lt;h3&gt;ರಣವೀರ್-ಫರ್ಹಾನ್&zwnj;ಗೆ ಸಲ್ಮಾನ್ ಖಡಕ್ ಕ್ಲಾಸ್!&lt;/h3&gt;&lt;p&gt;ಸಿನಿಮಾ ಮೂಲಗಳ ಪ್ರಕಾರ, ಸಲ್ಮಾನ್ ಖಾನ್ ಇಬ್ಬರನ್ನೂ ಕೂರಿಸಿ ಸುದೀರ್ಘವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಫರ್ಹಾನ್&zwnj;ಗೆ &quot;ಸಿನಿಮಾ ರಂಗದಲ್ಲಿ ಇಂತಹ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ, ಹಠಕ್ಕೆ ಬಿದ್ದು ಸಂಬಂಧಗಳನ್ನು ಮತ್ತು ಸಿನಿಮಾ ಬಿಸಿನೆಸ್ ಹಾಳು ಮಾಡಿಕೊಳ್ಳಬೇಡಿ&quot; ಎಂದು ತಿಳಿಹೇಳಿದ್ದಾರೆ. ಅತ್ತ ರಣವೀರ್ ಸಿಂಗ್ ಅವರಿಗೂ ವೃತ್ತಿಜೀವನದ ಗಂಭೀರತೆ ಮತ್ತು ಕಮಿಟ್&zwnj;ಮೆಂಟ್ ಬಗ್ಗೆ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ. &quot;ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ, ಮೂರನೇ ವ್ಯಕ್ತಿಗಳಿಗೆ ಇದು ಉಣಿಸಾಗಬಾರದು&quot; ಎಂಬುದು ಸಲ್ಮಾನ್ ನೀಡಿದ ಖಡಕ್ ಸಲಹೆಯಾಗಿತ್ತು.&lt;/p&gt;&lt;p&gt;ಸುಖಾಂತ್ಯದತ್ತ 'ಡಾನ್' ವಿವಾದ&lt;/p&gt;&lt;p&gt;ಸಲ್ಮಾನ್ ಖಾನ್ ಅವರ ಮಾತಿಗೆ ಬೆಲೆ ನೀಡಿರುವ ರಣವೀರ್ ಮತ್ತು ಫರ್ಹಾನ್ ಇಬ್ಬರೂ ಈಗ ಒಂದು ಹೆಜ್ಜೆ ಹಿಂದೆ ಸರಿದು, ಸಮಾಧಾನದಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಒಪ್ಪಿದ್ದಾರೆ ಎಂಬ ಸುದ್ದಿ ಗಾಂಧಿನಗರದಿಂದ ಜೂಹು ತನಕ ಹಬ್ಬಿದೆ. ಬಹುಶಃ ಸದ್ಯದಲ್ಲೇ ರಣವೀರ್ ಮೇಲಿರುವ ದೂರು ರದ್ದಾಗಿ, ಇಬ್ಬರೂ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ, ಸ್ಕ್ರೀನ್ ಮೇಲೆ ಡಾನ್ ಯಾರೇ ಆಗಿರಲಿ, ಬಾಲಿವುಡ್&zwnj;ನ ಆಫ್-ಸ್ಕ್ರೀನ್ ಬಿಕ್ಕಟ್ಟುಗಳನ್ನು ಬಗೆಹರಿಸುವಲ್ಲಿ ಮಾತ್ರ ಸಲ್ಮಾನ್ ಖಾನ್ ಅವರೇ 'ಅಸಲಿ ಬಾಸ್' ಎಂಬುದು ಮತ್ತೊಮ್ಮೆ ಸಾಬೀತಾಗಿದೆ.&lt;/p&gt;&lt;p&gt;ಈ ಬೆಳವಣಿಗೆಯಿಂದ ಸಿನಿರಂಗದ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಡಾನ್ ಬರೋದು ಸ್ವಲ್ಪ ತಡವಾಗಬಹುದು, ಆದರೆ ವಿವಾದ ಮಾತ್ರ ಸುಖಾಂತ್ಯ ಕಾಣುತ್ತಿದೆ ಎನ್ನುವುದೇ ಸದ್ಯದ ದೊಡ್ಡ ನ್ಯೂಸ್!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/don-3-fight-between-ranveer-and-farhan-is-finally-getting-sorted-out-with-salman-khan-stepping-in-as-the-peacemaker/articleshow-vro2ek8"/>
        </item>
        <item>
            <title><![CDATA[OMG! ಎಲ್ರನ್ನೂ ಕರೆದು, ಇವೆಂಟ್‌ ಮಾಡಿ, ಹುಡುಗಿ ಮುಖ ರಿವೀಲ್‌ ಮಾಡಿದ ಬೃಂದಾವನ ಧಾರಾವಾಹಿ ನಟ Varun Aradya]]></title>
            <link>https://kannada.asianetnews.com/gallery/tv-talk/brindavana-serial-actor-youtuber-varun-aradya-reveal-his-girlfriend-fiance-namratha-par20cm</link>
            <guid isPermaLink="true">https://kannada.asianetnews.com/gallery/tv-talk/brindavana-serial-actor-youtuber-varun-aradya-reveal-his-girlfriend-fiance-namratha-par20cm</guid>
            <pubDate>Fri, 29 May 2026 20:41:09 +0530</pubDate>
            <description><![CDATA[&lt;p&gt;Youtuber Varun Aradya: ಬೃಂದಾವನ ಧಾರಾವಾಹಿ ನಟ, ಯುಟ್ಯೂಬರ್&zwnj; ವರುಣ್&zwnj; ಆರಾಧ್ಯ ಅವರು ಮದುವೆ ಆಗೋಕೆ ರೆಡಿ ಆಗಿರೋದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ ಇವರು ದೊಡ್ಡ ಇವೆಂಟ್&zwnj; ಮಾಡಿ, ಹುಡುಗಿ ಯಾರೆಂದು ರಿವೀಲ್&zwnj; ಮಾಡಿದ್ದಾರೆ. ಹಾಗಾದರೆ ಯಾರದು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kst482w3f2xz6afqsecd9p29,imgname-new-project---2026-05-29t203127.841-1780067076995.jpg" type="image/jpeg" height="390" width="690"/>
            <content:encoded><![CDATA[&lt;p&gt;Youtuber Varun Aradya: ಬೃಂದಾವನ ಧಾರಾವಾಹಿ ನಟ, ಯುಟ್ಯೂಬರ್&zwnj; ವರುಣ್&zwnj; ಆರಾಧ್ಯ ಅವರು ಮದುವೆ ಆಗೋಕೆ ರೆಡಿ ಆಗಿರೋದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ ಇವರು ದೊಡ್ಡ ಇವೆಂಟ್&zwnj; ಮಾಡಿ, ಹುಡುಗಿ ಯಾರೆಂದು ರಿವೀಲ್&zwnj; ಮಾಡಿದ್ದಾರೆ. ಹಾಗಾದರೆ ಯಾರದು?&lt;/p&gt;&lt;img&gt;&lt;p&gt;ನಟ ವರುಣ್&zwnj; ಆರಾಧ್ಯ ಅವರು ಹುಡುಗಿ ಮುಖ ರಿವೀಲ್&zwnj; ಮಾಡಬೇಕು ಎಂದು ರೆಸಾರ್ಟ್&zwnj;ನಲ್ಲಿ ಇವೆಂಟ್&zwnj; ಪ್ಲ್ಯಾನ್&zwnj; ಮಾಡಿದ್ದಾರೆ. ಆ ಇವೆಂಟ್&zwnj;ನಲ್ಲಿ ಪ್ರಪೋಸ್&zwnj; ಮಾಡಲು ಒಂದಿಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ. ಕೇಕ್&zwnj; ಕಟಿಂಗ್&zwnj;, ಫ್ಲವರ್&zwnj; ಡೆಕೋರೇಶನ್&zwnj;, ಡ್ಯಾನ್ಸ್&zwnj;, ಎಲ್ಲರಿಗೂ ಊಟ ಎಂದು ವರುಣ್&zwnj; ಅವರೇ ಎಲ್ಲ ತಯಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಡ್ಯಾನ್ಸ್&zwnj; ಪ್ರಾಕ್ಟೀಸ್&zwnj; ಕೂಡ ಮಾಡಿದ್ದರು.&lt;/p&gt;&lt;img&gt;&lt;p&gt;ನಮ್ರತಾ ( namratha lasrado ) ಎನ್ನುವವರನ್ನು ವರುಣ್&zwnj; ಮದುವೆ ಆಗುತ್ತಿದ್ದಾರೆ. ನಮ್ರತಾ ಅವರ ವೃತ್ತಿ ಏನು ಎಂದು ರಿವೀಲ್&zwnj; ಆಗಿಲ್ಲ, ಆದರೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ 35 ಸಾವಿರಕ್ಕೂ ಅಧಿಕ ಫಾಲೋವರ್ಸ್&zwnj; ಇದ್ದಾರೆ.&lt;/p&gt;&lt;img&gt;&lt;p&gt;ಕೆಲವು ತಿಂಗಳುಗಳ ಹಿಂದೆಯೇ ವರುಣ್&zwnj; ಆರಾಧ್ಯ ಅವರು ರಿಲೇಶನ್&zwnj;ಶಿಪ್&zwnj;ನಲ್ಲಿರೋದು, ಹುಡುಗಿ ನಮ್ರತಾ ಎಂದು ಅನೇಕರಿಗೆ ಗೊತ್ತಾಗಿತ್ತು. ಆದರೆ ವರುಣ್&zwnj; ಮಾತ್ರ ರಿವೀಲ್&zwnj; ಮಾಡಿರಲಿಲ್ಲ.&lt;/p&gt;&lt;img&gt;&lt;p&gt;ಈ ಹಿಂದೆ ವರುಣ್&zwnj; ಆರಾಧ್ಯ ಲವ್&zwnj; ಮಾಡಿದ್ದು, ಬ್ರೇಕಪ್&zwnj; ಆಗಿದ್ದು ಎಲ್ಲರಿಗೂ ಗೊತ್ತಿದೆ. ಇವರ ಬ್ರೇಕಪ್&zwnj; ವಿಷಯ ಪೊಲೀಸ್&zwnj; ಠಾಣೆಯಲ್ಲಿ ಕೂಡ ನಿರ್ಧಾರ ಆಗಿತ್ತು. ಹೀಗಾಗಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.&lt;/p&gt;&lt;img&gt;&lt;p&gt;ವರುಣ್&zwnj; ಆರಾಧ್ಯ ಅವರು ಮುಂದಿನ ಬಾರಿ ಬಿಗ್&zwnj; ಬಾಸ್&zwnj; ಶೋಗೆ ಬರ್ತಾರಾ ಎಂಬ ಪ್ರಶ್ನೆ ಉಂಟಾಗಿದೆ. ಇನ್ನೊಂದು ಕಡೆ ಕಳೆದ ಬಾರಿ ಆಫರ್&zwnj; ಬಂದರೂ ಕೂಡ ವೈಯಕ್ತಿಕ ಕಾರಣಕ್ಕೆ ಅವರು ಅಟೆಂಡ್&zwnj; ಆಗಿರಲಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/brindavana-serial-actor-youtuber-varun-aradya-reveal-his-girlfriend-fiance-namratha-par20cm"/>
        </item>
        <item>
            <title><![CDATA[Ohh My God: ಸುಳ್ಳು ಹೇಳಿ ಮುಂಬೈ ಲೋಕಲ್ ಟ್ರೇನ್‌ನಲ್ಲಿ ಸಾರಾ ಎಲ್ಲಿಗೆ ಹೋಗಿದ್ರು? ಅಮ್ಮ ಅಮೃತಾ ಸಿಂಗ್ ಕೈನಲ್ಲಿ ಸಿಕ್ಕಿಬಿದ್ದಿದ್ದು ಹೀಗೆ!]]></title>
            <link>https://kannada.asianetnews.com/gallery/cine-world/sara-ali-khan-once-lied-to-her-mother-amrita-singh-by-traveled-in-a-mumbai-local-train-but-later-got-caught-and-scolded-mlpz1w1</link>
            <guid isPermaLink="true">https://kannada.asianetnews.com/gallery/cine-world/sara-ali-khan-once-lied-to-her-mother-amrita-singh-by-traveled-in-a-mumbai-local-train-but-later-got-caught-and-scolded-mlpz1w1</guid>
            <pubDate>Fri, 29 May 2026 19:53:00 +0530</pubDate>
            <description><![CDATA[&lt;p&gt;ಒಮ್ಮೆ ನಟಿ ಸಾರಾ ಅವರು ತಮ್ಮ ತಾಯಿಗೆ ಸಹಪಾಠಿ ಫ್ರೆಂಡ್ಸ್ &amp;nbsp;ಮನೆಗೆ ಹೋಗುತ್ತಿರುವುದಾಗಿ ಹೇಳಿ ತಮ್ಮ ಸ್ನೇಹಿತೆಯ ಜೊತೆ ತಮ್ಮ ಮತ್ತೊಬ್ಬ ಫ್ರೆಂಡ್ ಭೇಟಿಯಾಗಲು ಮುಂಬೈನ ಲೋಕಲ್&zwnj; ಟ್ರೇನ್&zwnj;ನಲ್ಲಿ ಪ್ರಯಾಣ ಮಾಡಿದ್ದರು. ಆದರೆ, ಅವರ ಅಮ್ಮನ ಕೈಲಿ ಸಿಕ್ಕಿಬಿದ್ದಿದ್ದು ಹೀಗೆ ನೋಡಿ..!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kst1eyk5vtghr8d3g3yajqfc,imgname-sara-ali-khan-1780064156260.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಮ್ಮೆ ನಟಿ ಸಾರಾ ಅವರು ತಮ್ಮ ತಾಯಿಗೆ ಸಹಪಾಠಿ ಫ್ರೆಂಡ್ಸ್ &amp;nbsp;ಮನೆಗೆ ಹೋಗುತ್ತಿರುವುದಾಗಿ ಹೇಳಿ ತಮ್ಮ ಸ್ನೇಹಿತೆಯ ಜೊತೆ ತಮ್ಮ ಮತ್ತೊಬ್ಬ ಫ್ರೆಂಡ್ ಭೇಟಿಯಾಗಲು ಮುಂಬೈನ ಲೋಕಲ್&zwnj; ಟ್ರೇನ್&zwnj;ನಲ್ಲಿ ಪ್ರಯಾಣ ಮಾಡಿದ್ದರು. ಆದರೆ, ಅವರ ಅಮ್ಮನ ಕೈಲಿ ಸಿಕ್ಕಿಬಿದ್ದಿದ್ದು ಹೀಗೆ ನೋಡಿ..!&lt;/p&gt;&lt;img&gt;&lt;p&gt;ಸಾರಾ ಅಲಿ ಖಾನ್ (Sara Ali Khan) ಕಪಿಲ್ ಶರ್ಮಾ (Kapil Sharma) ಸಂದರ್ಶನವೊಂದರಲ್ಲಿ ತಾವು ತಮ್ಮ ಅಮ್ಮನಿಗೆ ಸುಳ್ಳು ಹೇಳಿ ಸಿಕ್ಕಿಬಿದ್ದ ಘಟನೆಯೊಂದನ್ನು ಕಪಿಲ್ ಶೋದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಒಮ್ಮೆ ಬಾಲ್ಯದಲ್ಲಿ ಸಾರಾ ಅವರು ತಮ್ಮ ತಾಯಿಗೆ ಫ್ರೆಂಡ್ಸ್ ಸಹಪಾಠಿ ಮನೆಗೆ ಹೋಗುತ್ತಿರುವುದಾಗಿ ಹೇಳಿ ತಮ್ಮ ಸ್ನೇಹಿತೆಯ ಜೊತೆ ತಮ್ಮ ಮತ್ತೊಬ್ಬ ಫ್ರೆಂಡ್ ಭೇಟಿಯಾಗಲು ಮುಂಬೈನ ಲೋಕಲ್&zwnj; ಟ್ರೇನ್&zwnj;ನಲ್ಲಿ ಪ್ರಯಾಣ ಮಾಡಿದ್ದರು.&lt;/p&gt;&lt;img&gt;&lt;p&gt;ಆ ವೇಳೆ ಅದೇ ಟ್ರೇನ್&zwnj;ನಲ್ಲಿದ್ದ ಜರ್ನಲಿಸ್ಟ್ ಒಬ್ಬರು ಸಾರಾ ಅವರು ಲೋಕಲ್&zwnj; ಟ್ರೇನ್&zwnj; ಒಳಗೆ ಇರುವ ಫೋಟೋವನ್ನು ತೆಗೆದು ಅದನ್ನು ಸಾರಾ ಅಮ್ಮ ಅಮೃತಾಸಿಂಗ್&zwnj;ಗೆ (Amrita Singh) ಅವರಿಗೆ ಕಳುಹಿಸಿ, ಕಾಲ್ ಮಾಡಿ, 'ನಿಮ್ಮ ಮಗಳನ್ನು ತುಂಬಾ ಚೆನ್ನಾಗಿ, ಸಿಂಪಲ್&zwnj; ಆಗಿ ಬೆಳೆಸಿದ್ದೀರಿ, ಅವಳು ಜನಸಾಮಾನ್ಯರಂತೆ ಲೋಕಲ್ ಟ್ರೇನ್&zwnj;ನಲ್ಲಿ ಪ್ರಯಾಣ ಮಾಡ್ತಾ ಇರೋದನ್ನು ನಿನ್ನೆ ನೋಡಿದ್ದೇನೆ' ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಆ ವಿಷಯ ನನಗೆ ಗೊತ್ತಿರಲಿಲ್ಲ. ಮಾರನೇ ದಿನ ನನ್ನ ಅಮ್ಮ ಅಮೃತಾ 'ನಿನ್ನೆ ಎಲ್ಲಿಗೆ ಹೋಗಿದ್ದೆ?' ಎಂದು ಕೇಳಿದಾಗ ನಾನು 'ನಿನಗೆ ಹೇಳಿದ್ನಲ್ಲಾ, ನನ್ನ ಕ್ಲಾಸ್&zwnj;ಮೇಟ್ ಮನೆಗೆ ಹೋಗಿದ್ದೆ' ಎಂದು ಹೇಳಿದ್ದೆ.&lt;/p&gt;&lt;img&gt;&lt;p&gt;ಆಗ ಅಮ್ಮ ಅವರು ಕಳಿಸಿದ ಲೋಕಲ್ ಟ್ರೇನ್ ಜರ್ನಿ ಫೋಟೋ ತೋರಿಸಿ 'ಹೌದಾ, ಇಲ್ನೋಡು ನಿನ್ನ ಫೋಟೋ ನನಗೆ ಬಂದಿದೆ' ಎಂದು ಹೇಳುತ್ತ 'ರೆಡ್&zwnj; ಹ್ಯಾಂಡ್&zwnj;' ಆಗಿ ನನ್ನನ್ನು ಹಿಡಿದವರಂತೆ ಫೋಟೋ ತೋರಿಸಿ ಹೇಳಿದ್ದರು. ಆಗ ಸೈಲೆಂಟ್ ಆಗಿ ಇರೋದನ್ನು ಬಿಟ್ಟರೆ ನನಗೆ ಬೇರೆ ದಾರಿ ಇರಲಿಲ್ಲ' ಎಂದಿದ್ದಾರೆ.&lt;/p&gt;&lt;img&gt;&lt;p&gt;ಜೊತೆಗೆ, ಆಮೇಲೆ ಕೂಡ ಅದೆಷ್ಟೋ ಬಾರಿ ನಾನು ಅಮ್ಮನಿಗೆ ಸುಳ್ಳು ಹೇಳಿ ಎಲ್ಲೆಲ್ಲಿಗೂ ಸುತ್ತಾಡಲು ಹೋಗುತ್ತಿದ್ದೆ. ಆದರೆ ಆ ಫೋಟೋಗಳೆಲ್ಲಾ ಇನ್ನೂ ಯಾರಿಗೆ ಸಿಕ್ಕಿಲ್ಲ' ಎಂದು ಹೇಳಿ ಇಡೀ ಶೋದಲ್ಲಿಇದ್ದ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾರೆ.&lt;/p&gt;&lt;img&gt;&lt;p&gt;ಸಾರಾ ಅಲಿ ಖಾನ್ ಭಾಗವಹಿಸಿದ್ದ ಆ ಶೋದಲ್ಲಿ ಅಂದು ಬಾಲಿವುಡ್ 'ಕಿಲಾಡಿ' ಖ್ಯಾತಿಯ ನಟ ಅಕ್ಷಯ್ ಕುಮಾರ್ ಕೂಡ ಭಾಗಿಯಾಗಿದ್ದರು. ಸಾರಾ ಅವರ ಸಿಂಪ್ಲಿಸಿಟಿ ಹಾಗೂ ಮುಗ್ಧತೆಯಿಂದ ಕೂಡಿದ ಮಾತುಗಳು ಅಲ್ಲಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/sara-ali-khan-once-lied-to-her-mother-amrita-singh-by-traveled-in-a-mumbai-local-train-but-later-got-caught-and-scolded-mlpz1w1"/>
        </item>
        <item>
            <title><![CDATA[ಜೆಡಿಎಸ್‌ಗೆ ಸೇರಿದ ಬೆನ್ನಲ್ಲೇ ದೇವೇಗೌಡರ ಕಾಲು ಹಿಡಿದು ಆಶೀರ್ವಾದ ಪಡೆದ ಯುವನಾಯಕಿ ಬಿಗ್‌ಬಾಸ್‌ ಜಾಹ್ನವಿ]]></title>
            <link>https://kannada.asianetnews.com/gallery/tv-talk/bigg-boss-jhanvi-joins-jds-meets-hd-deve-gowda-padmanabhanagar-residence-san-elzk32v</link>
            <guid isPermaLink="true">https://kannada.asianetnews.com/gallery/tv-talk/bigg-boss-jhanvi-joins-jds-meets-hd-deve-gowda-padmanabhanagar-residence-san-elzk32v</guid>
            <pubDate>Fri, 29 May 2026 19:48:31 +0530</pubDate>
            <description><![CDATA[ಬಿಗ್&zwnj;ಬಾಸ್&zwnj; ಖ್ಯಾತಿಯ ನಟಿ ಜಾಹ್ನವಿ, ಎಚ್&zwnj;ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್&zwnj; ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಬಳಿಕ, ಮಾಜಿ ಪ್ರಧಾನಿ ಎಚ್&zwnj;ಡಿ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ಈ ಕ್ಷಣದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kst1bzkcehxgvrazt6par8qv,imgname-jhanvi--5--1780064058988.jpg" type="image/jpeg" height="390" width="690"/>
            <content:encoded><![CDATA[ಬಿಗ್&zwnj;ಬಾಸ್&zwnj; ಖ್ಯಾತಿಯ ನಟಿ ಜಾಹ್ನವಿ, ಎಚ್&zwnj;ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್&zwnj; ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಬಳಿಕ, ಮಾಜಿ ಪ್ರಧಾನಿ ಎಚ್&zwnj;ಡಿ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ಈ ಕ್ಷಣದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.&lt;img&gt;&lt;p&gt;ನಟಿ, ನಿರೂಪಕಿ ಹಾಗೂ ಬಿಗ್&zwnj;ಬಾಸ್&zwnj; ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿದ್ದ ಜಾಹ್ನವಿ ಇತ್ತೀಚೆಗೇ ಕೇಂದ್ರ ಸಚಿವ ಎಚ್&zwnj;ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್&zwnj; ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಂಡಿದ್ದರು. ಬಿಗ್&zwnj;ಬಾಸ್&zwnj; ಬಳಿಕ ಸಮಾಜಸೇವೆಯಲ್ಲೇ ಹೆಚ್ಚಾಗಿ ತೊಡಗಿಕೊಂಡಿದ್ದ ಅವರೀಗ ಜೆಡಿಎಸ್&zwnj; ಮಹಿಳಾ ಘಟಕವನ್ನು ಬಲಪಡಿಸುವ ಉದ್ದೇಶದಲ್ಲಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪಕ್ಷಕ್ಕೆ ಸೇರಿಕೊಂಡ ಐದು ದಿನಗಳ ಬಳಿಕ ಶುಕ್ರವಾರ ಅವರು ಜೆಡಿಎಸ್&zwnj; ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್&zwnj;ಡಿ ದೇವೇಗೌಡ ಅವರನ್ನು ಪದ್ಮನಾಭ ನಗರದ ನಿವಾಸದಲ್ಲಿ ಭೇಟಿಯಾದರು. ಅವರಿಗೆ ಹೂಗುಚ್ಛ ನೀಡಿದ ಬಳಿಕ ಕಾಲು ಮುಟ್ಟಿ ನಮಸ್ಕಾರ ಪಡೆದಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಜೆಡಿಎಸ್&zwnj;ಗೆ ಸೇರಿದ ಬೆನ್ನಲ್ಲಿಯೇ ಅವರು ರಾಜಕೀಯ ವಿಚಾರಗಳನ್ನು ಹಂಚಿಕೊಳ್ಳಲು ಜಾಹ್ನವಿ ರಾಜಶೇಖರ್&zwnj; (jhanvirajshekar) ಹೆಸರಿನಲ್ಲಿ ಹೊಸ ಖಾತೆಯನ್ನೂ ತೆರೆದಿದ್ದು, ಇದರಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಡಿಪಿಯಲ್ಲಿ ಜೆಡಿಎಸ್&zwnj; ಯುವನಾಯಕಿ ಎಂದು ಅವರು ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿಡಿಯೋ ಹಂಚಿಕೊಂಡಿರುವ ಜಾಹ್ನವಿ, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೆ ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳು , ಮಣ್ಣಿನ ಮಗ , @ಹೆಚ್ ಡಿ ದೇವೇಗೌಡ ಅಪ್ಪಾಜಿಯವರನ್ನು ಪದ್ಮನಾಭನಗರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇದಕ್ಕೆ ಕಾಮೆಂಟ್&zwnj; ಮಾಡಿರುವ ಹಲವರು, ನೀವು ಚುನಾವಣೆಗೆ ನಿಂತು ಶಾಸಕಿಯಾಗಬೇಕು. ನಿಮಗೆ ಆ ಅರ್ಹತೆ ಇದೆ ಎಂದು ಕಾಮೆಂಟ್&zwnj; ಮಾಡಿದ್ದಾರೆ. 'ಯುವಶಕ್ತಿಯ ಜೊತೆಗೆ ಮಹಿಳಾ ಶಕ್ತಿಯೂ ಪಕ್ಷಕ್ಕೆ ಇನ್ನಷ್ಟು ಬಲ ತುಂಬಲಿ.ಜಾತ್ಯಾತೀತ ಜನತಾದಳದ ತತ್ವ, ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿಮ್ಮ ಪಯಣ ಯಶಸ್ವಿಯಾಗಲಿ' ಎಂದು ಇನ್ನೊಬ್ಬರು ಹರಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/tv-talk/bigg-boss-jhanvi-joins-jds-meets-hd-deve-gowda-padmanabhanagar-residence-san-elzk32v"/>
        </item>
        <item>
            <title><![CDATA[ಮೆಜೆಸ್ಟಿಕ್‌ನಲ್ಲಿ ಮೈ ಮಾರಿಕೊಳ್ಳೋ ಆ ಮಹಿಳೆಯರು; ಕಣ್ಣಿಗೆ ಕಾಣಿಸದ ಸತ್ಯ ತೋರಿಸಿದ ನಟಿ ಕಾವ್ಯಾ ಶಾ!]]></title>
            <link>https://kannada.asianetnews.com/gallery/tv-talk/kannada-actress-kaavya-sha-on-majestic-women-call-girls-who-work-for-money-w98zc53</link>
            <guid isPermaLink="true">https://kannada.asianetnews.com/gallery/tv-talk/kannada-actress-kaavya-sha-on-majestic-women-call-girls-who-work-for-money-w98zc53</guid>
            <pubDate>Fri, 29 May 2026 19:39:47 +0530</pubDate>
            <description><![CDATA[&lt;p&gt;Actress Kaavya Sha: ಸಂಜೆಯಾಗುತ್ತಿದ್ದಂತೆ ಮೆಜೆಸ್ಟಿಕ್&zwnj;ನಲ್ಲಿ ಕೆಲ ಹುಡುಗಿಯರು ಅತಿಯಾಗಿ ಮೇಕಪ್&zwnj; ಮಾಡಿಕೊಂಡು, ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿರುತ್ತಾರೆ. ಅವರ ನಡವಳಿಕೆ ನೋಡಿದ್ರೆ, ಅವ್ರ ಉದ್ದೇಶ ಏನು ಎನ್ನೋದು ಗೊತ್ತಾಗುತ್ತದೆ. ಸಿಂಗಲ್&zwnj; ಆಗಿ ಓಡಾಡುವ ಹುಡುಗರ ಕಡೆಗೆ ಅವರ ಗಮನ ಹೆಚ್ಚಿರುತ್ತದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kst0ba4q1f513yp6ytqv4kxr,imgname-new-project---2026-05-29t192059.889-1780062988439.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Kaavya Sha: ಸಂಜೆಯಾಗುತ್ತಿದ್ದಂತೆ ಮೆಜೆಸ್ಟಿಕ್&zwnj;ನಲ್ಲಿ ಕೆಲ ಹುಡುಗಿಯರು ಅತಿಯಾಗಿ ಮೇಕಪ್&zwnj; ಮಾಡಿಕೊಂಡು, ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿರುತ್ತಾರೆ. ಅವರ ನಡವಳಿಕೆ ನೋಡಿದ್ರೆ, ಅವ್ರ ಉದ್ದೇಶ ಏನು ಎನ್ನೋದು ಗೊತ್ತಾಗುತ್ತದೆ. ಸಿಂಗಲ್&zwnj; ಆಗಿ ಓಡಾಡುವ ಹುಡುಗರ ಕಡೆಗೆ ಅವರ ಗಮನ ಹೆಚ್ಚಿರುತ್ತದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಟಿ ಕಾವ್ಯಾ ಶಾ ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಆಕ್ಟಿವ್&zwnj; ಆಗಿದ್ದು, ದಿನಕ್ಕೊಂದು ವಿಷಯಗಳನ್ನು ಇಟ್ಟುಕೊಂಡು ವಿಡಿಯೋ ಮಾಡುತ್ತಾರೆ. ಒಟ್ಟಿನಲ್ಲಿ ಒಂದಿಷ್ಟು ಸಂದೇಶ, ಸಾಮಾಜಿಕ ಕಳಕಳಿ ಮೂಡಿಸುವ ಕೆಲಸವನ್ನು ಮಾಡುತ್ತಿರೋದು ಖುಷಿಯ ವಿಷಯ. ಈಗ ಮೆಜೆಸ್ಟಿಕ್&zwnj;ನಲ್ಲಿರುವ ಆ ಮಹಿಳೆಯರ ಕುರಿತು ವಿಡಿಯೋ ಮಾಡಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಮೆಜೆಸ್ಟಿಕ್&zwnj;ನಲ್ಲಿ 500, 1000, 3000 ರೂಪಾಯಿಗೆ ದೇಹ ಮಾರಿಕೊಳ್ಳುವ ಮಹಿಳೆಯರಿದ್ದಾರೆ. ಕಾರ್&zwnj;ನಲ್ಲೋ, ಹೋಟೆಲ್&zwnj;ನಲ್ಲೋ ಗಂಟೆಗೆ ಇಂತಿಷ್ಟು ಎಂದು ಹಣ ಕೊಡಬೇಕು. ಮೊದಲೇ ಹೋಟೆಲ್&zwnj;ನಲ್ಲಿ ಮಾತನಾಡಿಕೊಳ್ಳೋದುಂಟು, ಆ ಹೋಟೆಲ್&zwnj;ನಲ್ಲಿ ಕೂಡ ಹೈ ಕ್ಲಾಸ್&zwnj;, ಲೋ ಕ್ಲಾಸ್&zwnj; ಎಂದು ಕೂಡ ಇರುವುದು.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಕಾವ್ಯಾ ಶಾ ಅವರು ಕಂಟೆಂಟ್&zwnj; ಕ್ರಿಯೇಟರ್&zwnj; ಆಗಿ ಈ ಬಾರಿ ಧೈರ್ಯದಿಂದ ಕಂಟೆಂಟ್&zwnj; ಆಯ್ಕೆ ಮಾಡಿಕೊಂಡು, ಎಲ್ಲರ ಮನಸ್ಸು ನಾಟುವಂತೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಮಾಡಿದ ಒಂದೇ ದಿನಕ್ಕೆ 6000 ಕ್ಕೂ ಅಧಿಕ ಜನರು ಕಾಮೆಂಟ್&zwnj; ಮಾಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.&lt;/p&gt;&lt;img&gt;&lt;p&gt;ದುಡ್ಡಿರೋನು ಬಂದರೆ ಸಾಕು, ಒಂದು ಗಂಟೆಯಲ್ಲಿ ಹಣ ಸಿಕ್ಕರೆ ಸಾಕು ಎಂದು ಮೆಜೆಸ್ಟಿಕ್&zwnj;ನಲ್ಲಿ ಗಂಟೆಗೆ ಇಂತಿಷ್ಟು ಎಂದು ಹಣ ಪಡೆಯುವ ಆ ಮಹಿಳೆ ಅಂದುಕೊಳ್ತಾರೆ. ಅದನ್ನು ನೋಡಿದ ಕೆಲವರು ಇಂಥವ್ರದ್ದೊಂದು ಜನ್ಮಾನಾ? ಬದುಕೋ ಬದಲು ಸತ್ತೋಗೋದು ಒಳ್ಳೆಯದು, ಕಾಸಿಗೋಸ್ಕರ ಮಾರಿಕೊಳ್ತಾರೆ ಎಂದು ಬೈಯ್ದುಕೊಳ್ತಾರೆ.&lt;/p&gt;&lt;img&gt;&lt;p&gt;&ldquo;ಹುಟ್ಟಿದಾಗಿನಿಂದ ಈಗಿನವರೆಗೂ ತುಂಬ ಸಲ ಸತ್ತು ಹೋದೆ, ಇನ್ನೂ ಎಷ್ಟು ಸಲ ಸತ್ತೋಗಲಿ? ಭಿಕ್ಷೆ ಬೇಡ್ತಿಲ್ಲ, ಇದು ಕೆಲಸವೇ. ಹದಿನೈದು ವರ್ಷಕ್ಕೆ ಅಪ್ಪ ಎಂದುಕೊಂಡವನು ಯಾವುದೋ ಮುದುಕನಿಗೆ ಮಾರಿದ, ಆಮೇಲೆ ಅವನು, ಅವನ ಮಗ, ಸಂಬಂಧಿಕರು ಯಾರೂ ಕೂಡ ನನ್ನ ಬಿಡಲಿಲ್ಲ. ನ್ಯಾಯವಾಗಿ ನನ್ನನ್ನು ಮಾರಿದ ಅವನ ತಂದೆ ಸಾಯಬೇಕು, ಆ ಮುದುಕನ ಮಗ, ಸಂಬಂಧಿಕರು ಸಾಯಬೇಕು, ಅವನು ಸತ್ತೋದ ಎಂದ ಬೇರೆಯವ್ರನ್ನು ಮದುವೆಯಾದರೆ, ಅವನು ಕೂಡ ನನ್ನನ್ನು ಮೆಜೆಸ್ಟಿಕ್&zwnj;ಗೆ ತಂದು ಕೂರಿಸಿದ, ಅವನು ಸಾಯಬೇಕು ಅಲ್ವಾ? ಮನೆಯಲ್ಲಿ ಹೆಂಡ್ತಿ ಇದ್ರೂ ಕೂಡ ನನ್ನ ಜೊತೆ ಮಲ್ಕೊಂಡ ನೀನು ಸಾಯಬೇಕು ಅಲ್ವಾ? ಸಮಾಜದಲ್ಲಿ ಯಾರೇ ತಪ್ಪು ಮಾಡಿದ್ರೂ, ಅವಮಾನ, ಶಿಕ್ಷೆ ಹೆಣ್ಣಿಗೆ ಮಾತ್ರಾನಾ? ಇದಕ್ಕೆಲ್ಲ ತಲೆಕೆಡಿಸಿಕೊಂಡ್ರೆ ಬದುಕೋಕೆ ಆಗೋದಿಲ್ಲ&rdquo; ಎಂದು ಆ ಮಹಿಳೆ ಮನಸ್ಸಿನಲ್ಲಿ ಅಂದುಕೊಳ್ತಾಳೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಮೆಜೆಸ್ಟಿಕ್&zwnj; ಮೈ ಮಾರಿಕೊಳ್ಳುವ ಕೆಲ ಮಹಿಳೆಯರ ಹಿಂದೆ ಒಂದಿಷ್ಟು ಕರಾಳ ಕತೆಗಳು ಇರುತ್ತವೆ, ಭಾವನಾತ್ಮಕ ಕತೆಯೂ ಇರುತ್ತದೆ, ಅವು ಎಲ್ಲರಿಗೂ ಗೊತ್ತಾಗೋದಿಲ್ಲ ಎನ್ನೋದನ್ನು ನಟಿ ಕಾವ್ಯಾ ಶಾ ಅವರು ರೀಲ್ಸ್&zwnj; ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/kannada-actress-kaavya-sha-on-majestic-women-call-girls-who-work-for-money-w98zc53"/>
        </item>
        <item>
            <title><![CDATA[ಇಲ್ಲಿ ಎಷ್ಟು ನೀಚರಿದ್ದಾರೆ ಎಂದ್ರೆ- ಕನ್ನಡ ಸೀರಿಯಲ್​ ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟ Bigg Boss ಧ್ರುವಂತ್​]]></title>
            <link>https://kannada.asianetnews.com/gallery/tv-talk/bigg-boss-dhruvanth-about-kannada-serial-industries-another-face-where-actors-dont-get-opportunity-suc-86rul3g</link>
            <guid isPermaLink="true">https://kannada.asianetnews.com/gallery/tv-talk/bigg-boss-dhruvanth-about-kannada-serial-industries-another-face-where-actors-dont-get-opportunity-suc-86rul3g</guid>
            <pubDate>Fri, 29 May 2026 19:36:09 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಧ್ರುವಂತ್, ಕನ್ನಡ ಸೀರಿಯಲ್ ಇಂಡಸ್ಟ್ರಿಯ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ಪರಭಾಷಾ ಸೀರಿಯಲ್&zwnj;ಗಳಲ್ಲಿ ಯಶಸ್ಸು ಕಾಣುತ್ತಿರುವ ಕನ್ನಡ ಕಲಾವಿದರ ಬೆಳವಣಿಗೆಯನ್ನು ಸಹಿಸದೆ, ಕನ್ನಡ ಇಂಡಸ್ಟ್ರಿಯ ಕೆಲವರು ಅವರ ಅವಕಾಶಗಳನ್ನು ಹಾಳುಮಾಡಲು ಯತ್ನಿಸುತ್ತಿದ್ದಾರೆ ಎಂದು &amp;nbsp;ಆರೋಪ ಮಾಡಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kst0r7fmnvjjh570bn4x8vcw,imgname-bigg-boss-dhruvanth-1780063411700.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಧ್ರುವಂತ್, ಕನ್ನಡ ಸೀರಿಯಲ್ ಇಂಡಸ್ಟ್ರಿಯ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ಪರಭಾಷಾ ಸೀರಿಯಲ್&zwnj;ಗಳಲ್ಲಿ ಯಶಸ್ಸು ಕಾಣುತ್ತಿರುವ ಕನ್ನಡ ಕಲಾವಿದರ ಬೆಳವಣಿಗೆಯನ್ನು ಸಹಿಸದೆ, ಕನ್ನಡ ಇಂಡಸ್ಟ್ರಿಯ ಕೆಲವರು ಅವರ ಅವಕಾಶಗಳನ್ನು ಹಾಳುಮಾಡಲು ಯತ್ನಿಸುತ್ತಿದ್ದಾರೆ ಎಂದು &amp;nbsp;ಆರೋಪ ಮಾಡಿದ್ದಾರೆ&lt;/p&gt;&lt;img&gt;&lt;p&gt;ಬಿಗ್​ಬಾಸ್​ ಮೂಲಕ ಫೇಮಸ್​ ಆದವರು ಧ್ರುವಂತ್​ (Bigg Boss Dhruvanth). ರಕ್ಷಿತಾ ಶೆಟ್ಟಿ ಜೊತೆಗಿನ ಜಗಳದಿಂದಲೇ ಇವರಿಬ್ಬರ ಜೋಡಿ ವೀಕ್ಷಕರಿಗೆ ಸಕತ್​ ಮಜಾಕೊಟ್ಟಿದ್ದಂತೂ ನಿಜ. ಇದೀಗ ಧ್ರುವಂತ್​ ಅವರು ಕನ್ನಡ ಸೀರಿಯಲ್​ ಇಂಡಸ್ಟ್ರಿಯ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡದ ಹೆಚ್ಚಿನ ಸೀರಿಯಲ್​ ನಟ-ನಟಿಯರು ತೆಲುಗು, ತಮಿಳು ಇಂಡಸ್ಟ್ರಿಗೆ ಹೋಗುತ್ತಿರುವ ಬಗ್ಗೆ ಬಾಸ್​ ಟಿವಿ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಧ್ರುವಂತ್​ ಅವರು, ನೀವು ಇಂದು ತಮಿಳು ಮತ್ತು ತೆಲುಗು ಸೀರಿಯಲ್​ನ 10 ಧಾರಾವಾಹಿ ತೆಗೆದುಕೊಂಡರೆ ಅದರಲ್ಲಿ ಎಂಟರಲ್ಲಿ ಕನ್ನಡವರೇ ಇರುತ್ತಾರೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಎಷ್ಟು ಜನ ಸೆಟ್ಲ್​ ಆಗಿದ್ದಾರೆ ಹೇಳಿ, ಆದ್ರೆ ತಮಿಳು, ತೆಲುಗುಗೆ ಹೋದವರು, ಒಳ್ಳೆಯ ಮನೆ, ಕಾರು, ಮದುವೆ ಎಲ್ಲಾ ಆಗಿ ಸೆಟ್ಲ್​ ಆಗಿದ್ದಾರೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ನಮ್ಮ ಸೀರಿಯಲ್​ ಇಂಡಸ್ಟ್ರಿಯವರು ಎಷ್ಟು ನೀಚರು ಎಂದರೆ, ಇಲ್ಲೊಂದು ಗುಂಪಿದೆ. ಅವರು ತಮಿಳು ಮತ್ತು ತೆಲಗು ಪ್ರೊಡ್ಯೂಸರ್​ ಮತ್ತು ಡೈರೆಕ್ಟರ್ ಅಸೋಸಿಯೇಷನ್​ಗೆ ಹೋಗಿ ಇಲ್ಲಿನ ನಟರಿಗೆ ನೀವು ಅಷ್ಟೆಲ್ಲಾ ಸೌಲಭ್ಯ ಕೊಡಬೇಡಿ, ನಮಗೆ ಇಲ್ಲಿ ಕಷ್ಟ ಆಗುತ್ತಿದೆ ಎನ್ನುತ್ತಿದ್ದಾರಂತೆ. ಅಷ್ಟು ನೀಚರು ಇಲ್ಲಿದ್ದಾರೆ ಎಂದು ಕಿಡಿ ಕಾರಿದ್ದಾರೆ ಧ್ರುವಂತ್​.&lt;/p&gt;&lt;img&gt;&lt;p&gt;ಅಲ್ಲಿ ಮನೆ ಹಾಳು ಮಾಡಲು ಮಾಡುವ ಕೆಲ್ಸ ಮಾಡುತ್ತಿದ್ದಾರೆ ಇಲ್ಲಿಯವರು. ಆದರೆ ಜನರಿಗೆ ಇವೆಲ್ಲಾ ಗೊತ್ತಾಗಲ್ಲ. ಅಲ್ಲಿ ಒಳ್ಳೆಯ ಭವಿಷ್ಯ ಸಿಕ್ಕಿರುತ್ತೆ ಎಂದು ಕಲಾವಿದರು ಹೋಗ್ತಾರೆ. ಆದರೆ ಜನರು ಬೆಳೆಯೋಕೆ ಕನ್ನಡ ಬೇಕಿತ್ತು, ಈಗ ಪರಭಾಷೆಗೆ ಹೋಗಿದ್ದಾರೆ ಅಂತಾರೆ. ಆದರೆ ಇಲ್ಲಿ ಮಾಡ್ತಿರೋ ನೀಚತನ ಅವರಿಗೆ ಗೊತ್ತಾಗತ್ತಾ ಎಂದು ಪ್ರಶ್ನಿಸಿದ್ದಾರೆ ಧ್ರುವಂತ್​&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-dhruvanth-about-kannada-serial-industries-another-face-where-actors-dont-get-opportunity-suc-86rul3g"/>
        </item>
        <item>
            <title><![CDATA[ಹಾಯ್​, ಹಲೋ, ಗುಡ್​ಮಾರ್ನಿಂಗ್​ ಪಕ್ಕಕ್ಕಿಡಿ: 'Toxic' ನಿರ್ದೇಶಕಿಯ ವಿಚಿತ್ರ ಆದೇಶ- ನಟಿ ಕಿಯಾರಾ ಅಡ್ವಾಣಿ ಹೇಳಿದ್ದೇನು]]></title>
            <link>https://kannada.asianetnews.com/gallery/sandalwood/no-hi-hello-just-stay-in-the-zone-kiara-advani-opens-up-on-intense-shooting-experience-for-yashs-toxic-suc-x2g5e0f</link>
            <guid isPermaLink="true">https://kannada.asianetnews.com/gallery/sandalwood/no-hi-hello-just-stay-in-the-zone-kiara-advani-opens-up-on-intense-shooting-experience-for-yashs-toxic-suc-x2g5e0f</guid>
            <pubDate>Fri, 29 May 2026 17:33:14 +0530</pubDate>
            <description><![CDATA[&lt;p&gt;ನಟ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಚಿತ್ರೀಕರಣದ ಅನುಭವವನ್ನು ನಟಿ ಕಿಯಾರಾ ಅಡ್ವಾಣಿ ಹಂಚಿಕೊಂಡಿದ್ದಾರೆ. ಸೆಟ್&zwnj;ನಲ್ಲಿ ಪಾತ್ರದಲ್ಲಿಯೇ ಇರಲು ನಿರ್ದೇಶಕಿ ಗೀತು ಮೋಹನ್&zwnj;ದಾಸ್ 'ಹಾಯ್, ಹಲೋ' ಎನ್ನದಂತೆ ಸೂಚನೆ ನೀಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssstm5pxxhaj86k7jap5skm,imgname-toxic-movie-1780056150198.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಚಿತ್ರೀಕರಣದ ಅನುಭವವನ್ನು ನಟಿ ಕಿಯಾರಾ ಅಡ್ವಾಣಿ ಹಂಚಿಕೊಂಡಿದ್ದಾರೆ. ಸೆಟ್&zwnj;ನಲ್ಲಿ ಪಾತ್ರದಲ್ಲಿಯೇ ಇರಲು ನಿರ್ದೇಶಕಿ ಗೀತು ಮೋಹನ್&zwnj;ದಾಸ್ 'ಹಾಯ್, ಹಲೋ' ಎನ್ನದಂತೆ ಸೂಚನೆ ನೀಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ನಟ ಯಶ್​ ಅವರ ಟಾಕ್ಸಿಕ್​ (&quot;ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&quot; ) ಚಿತ್ರದ ಬಗ್ಗೆ ಇದಾಗಲೇ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಅದಕ್ಕೆ ಬಿಡುಗಡೆಯ ಭಾಗ್ಯ ಇನ್ನೂ ಬಂದಿಲ್ಲ. ಇದಾಗಲೇ ಬಿಡುಗಡೆಯಾಗಬೇಕಿದ್ದ ಚಿತ್ರ ಮುಂದೂಡಲಾಗಿದೆ. ಇದೀಗ ಈ ಸಿನಿಮಾದ ಕುರಿತು ನಾಯಕಿ ಕಿಯಾರಾ ಅಡ್ವಾಣಿ ಶೀಘ್ರದಲ್ಲೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬಾಂಬೆ ಟೈಮ್ಸ್&zwnj;ಗೆ ನೀಡಿದ ಸಂದರ್ಶನದಲ್ಲಿ, ಕಿಯಾರಾ ತಮ್ಮ ಅನುಭವ ಶೇರ್​ ಮಾಡಿಕೊಂಡಿದ್ದಾರೆ..ಟಾಕ್ಸಿಕ್​ ಚಿತ್ರದ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರು ಸೆಟ್&zwnj;ನಲ್ಲಿ ನಿರ್ದಿಷ್ಟ ಸೂಚನೆಯನ್ನು ನೀಡಿದ್ದರು ಎಂದು ಕಿಯಾರಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕಿಯಾರಾ ಹೇಳಿದ್ದೇನೆಂದರೆ, ಸಾಮಾನ್ಯವಾಗಿ ಸೆಟ್&zwnj;ಗೆ ಬಂದ ತಕ್ಷಣ ಎಲ್ಲರಿಗೂ &quot;ಹಾಯ್,&quot; &quot;ಹಲೋ,&quot; ಮತ್ತು &quot;ಗುಡ್ ಮಾರ್ನಿಂಗ್&quot; ಎಂದು ಹೇಳುವುದು ನನ್ನ ವಾಡಿಕೆ. ಆದರೆ ಇದನ್ನು ಸ್ಟ್ರಿಕ್ಟ್​ ಆಗಿ ಸ್ಟಾಪ್​ ಮಾಡುವಂತೆ ನಿರ್ದೇಶಕಿ ಹೇಳಿದ್ರು. 'ನಾಳೆ ನೀವು ಸೆಟ್&zwnj;ಗೆ ಬಂದಾಗ, ನೀವು ಪಾತ್ರದಲ್ಲಿಯೇ ಇರಬೇಕು, ಹಾಯ್​, ಹಲ್ಲೋ ಎಲ್ಲಾ ಬೇಡ. ನನಗೆ ಯಾವುದೇ ಔಪಚಾರಿಕತೆಗಳು ಬೇಡ. ನೀವು ನೇರವಾಗಿ ನಿಮ್ಮ ಪಾತ್ರದ ವಲಯಕ್ಕೆ ಹೋಗಬೇಕೆಂದು ನಾನು ಬಯಸುತ್ತೇನೆ' ಎಂದು ಹೇಳಿದ್ದರು ಎಂಬುದಾಗಿ ನೆನಪಿಸಿಕೊಂಡಿದ್ದಾರೆ ನಟಿ ಕಿಯಾರಾ.&lt;/p&gt;&lt;img&gt;&lt;p&gt;ಚಿತ್ರದಲ್ಲಿ ಕೆಲಸ ಮಾಡುವುದು ಸಾಕಷ್ಟು ಸವಾಲಿನದ್ದಾಗಿತ್ತು ಎಂದು ಕಿಯಾರಾ ಹೇಳಿದ್ದಾರೆ. ಕನ್ನಡದಲ್ಲಿ ಚಿತ್ರೀಕರಣ ಮಾಡಬೇಕಾಗಿರುವುದರಿಂದ ಈ ಚಿತ್ರದಲ್ಲಿ ಕೆಲಸ ಮಾಡುವುದು ತುಂಬಾ ಸವಾಲಿನದ್ದಾಗಿತ್ತು. ಕನ್ನಡದಲ್ಲಿ ಕೆಲಸ ಮಾಡುವುದು ನನಗೆ ಹೊಸ ಅನುಭವ. ಅದಕ್ಕೆ ಕಷ್ಟವಾಯಿತು ಎಂದರು.&lt;/p&gt;&lt;img&gt;&lt;p&gt;'ಟಾಕ್ಸಿಕ್' ನನಗೆ ಕೂಡ ಕಷ್ಟಕರವಾಗಿತ್ತು, ಏಕೆಂದರೆ ಮೊದಲ ಬಾರಿಗೆ ನಾವು ಒಂದೇ ದೃಶ್ಯವನ್ನು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಚಿತ್ರೀಕರಿಸಿದ್ದೇವೆ. ಪರಿಪೂರ್ಣ ಟೇಕ್ ಸಿಗುವವರೆಗೆ ನಾವು ಮೊದಲು ದೃಶ್ಯವನ್ನು ಇಂಗ್ಲಿಷ್&zwnj;ನಲ್ಲಿ ಪೂರ್ವಾಭ್ಯಾಸ ಮಾಡುತ್ತೇವೆ. ನಂತರ ಅದೇ ದೃಶ್ಯವನ್ನು ಕನ್ನಡದಲ್ಲಿ ಮರುಚಿತ್ರೀಕರಿಸಿದ್ದೇವೆ ಎಂದಿದ್ದಾರೆ ನಟಿ. ಕನ್ನಡ ನನ್ನ ಭಾಷೆಯಲ್ಲ, ಆದ್ದರಿಂದ ನಾನು ಹಿಂದಿನ ರಾತ್ರಿ ನನ್ನ ಸಂಭಾಷಣೆಗಳನ್ನು ಕಂಠಪಾಠ ಮಾಡಬೇಕಾಯಿತು&quot; ಎಂದು ಕಿಯಾರಾ ವಿವರಿಸಿದರು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/no-hi-hello-just-stay-in-the-zone-kiara-advani-opens-up-on-intense-shooting-experience-for-yashs-toxic-suc-x2g5e0f"/>
        </item>
        <item>
            <title><![CDATA[ಟಾಕ್ಸಿಕ್, ರಾಮಾಯಣ, ಪೆದ್ದಿ ಯಾವುದು ಅಲ್ಲ, IMDb ರೇಟಿಂಗ್ ನೀಡಿದ 2026ರ ಬಹುನಿರೀಕ್ಷಿತ ಚಿತ್ರ ಇದು]]></title>
            <link>https://kannada.asianetnews.com/gallery/cine-world/not-toxic-ramayana-or-peddi-imdb-reveals-most-anticipated-film-of-2026-p3yafll</link>
            <guid isPermaLink="true">https://kannada.asianetnews.com/gallery/cine-world/not-toxic-ramayana-or-peddi-imdb-reveals-most-anticipated-film-of-2026-p3yafll</guid>
            <pubDate>Fri, 29 May 2026 17:02:35 +0530</pubDate>
            <description><![CDATA[&lt;p&gt;2026ರಲ್ಲಿ ಧುರಂಧರ್ 2 ಮೂಲಕ ಬಾಲಿವುಡ್ ಸಿನಿಮಾದಲ್ಲಿ ಹಂಗಾಮ ಸೃಷ್ಟಿಯಾಗಿದೆ. ಇದೀಗ 2026ರಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಆದರೆ IMDb ರೇಟಿಂಗ್ ಪ್ರಕಾರ 2026ರ ಬಹುನಿರೀಕ್ಷಿತ ಚಿತ್ರದಲ್ಲಿ ಯಾವ ಸೂಪರ್ ಸ್ಟಾರ್&zwnj;ಗಳು ಇಲ್ಲ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssqnq1dgve57t4865ngkef3,imgname-imd-most-anticipated-film-1780053892141.png" type="image/jpeg" height="390" width="690"/>
            <content:encoded><![CDATA[&lt;p&gt;2026ರಲ್ಲಿ ಧುರಂಧರ್ 2 ಮೂಲಕ ಬಾಲಿವುಡ್ ಸಿನಿಮಾದಲ್ಲಿ ಹಂಗಾಮ ಸೃಷ್ಟಿಯಾಗಿದೆ. ಇದೀಗ 2026ರಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಆದರೆ IMDb ರೇಟಿಂಗ್ ಪ್ರಕಾರ 2026ರ ಬಹುನಿರೀಕ್ಷಿತ ಚಿತ್ರದಲ್ಲಿ ಯಾವ ಸೂಪರ್ ಸ್ಟಾರ್&zwnj;ಗಳು ಇಲ್ಲ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;2026ರಲ್ಲಿ ಹಲವು ಬಹುನಿರೀಕ್ಷಿತ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೇವಲ ಫ್ಯಾನ್ಸ್ ಮಾತ್ರವಲ್ಲ ದೇಶದ ಎಲ್ಲಾ ಚಿತ್ರರಂಗ ಎದರು ನೋಡುತ್ತಿದೆ. ಈ ಪೈಕಿ ರಾಮಾಯಣ, ಟಾಕ್ಸಿಕ್, ಕಿಂಗ್, ಜನ ನಾಯಗನ್ ಸೇರಿದಂತೆ ಹಲವು ಸಿನಿಮಾಗಳು ಸರದಿ ಸಾಲಿನಲ್ಲಿದೆ. ಆದರೆ IMDb ರೇಟಿಂಗ್ ಪ್ರಕಾರ ಜನರ ಕಾಯುತ್ತಿರುವ ಸಿನಿಮಾ ಇದ್ಯಾವುದು ಅಲ್ಲ.&lt;/p&gt;&lt;img&gt;&lt;p&gt;ಧುರಂಧರ್ 2 ಭರ್ಜರಿ ಯಶಸ್ಸಿನ ಬಳಿಕ ಇದೀಗ ಅಭಿಮಾನಿಗಳು ಕೆಲ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ. ಆದರೆ ಜನರ ಪ್ರಕಾರ ಅತೀ ಹೆಚ್ಚು ಕುತೂಹಲ ಮೂಡಿಸಿದ, ಅತೀ ಹೆಚ್ಚಿನ ಅಭಿಮಾನಿಗಳು ಕಾಯುತ್ತಿರುವ ಸಿನಿಮಾ ಯಾವುದು ಅನ್ನೋದನ್ನು IMDb ರೇಟಿಂಗ್ ಮೂಲಕ ಹೇಳಿದೆ. IMDb ರೇಟಿಂಗ್ ಪ್ರಕಾರ 2026ರ ಬಹುನಿರೀಕ್ಷಿತ ಸಿನಿಮಾ ಮೈನೆ ವಾಪಸ್ ಆವುಂಗಾ.&lt;/p&gt;&lt;img&gt;&lt;p&gt;ಸಿನಿ ಪ್ರೇಕ್ಷಕರು ತಾವು ಯಾವ ಸಿನಿಮಾಗಾಗಿ ಕಾಯುತ್ತಿದ್ದಾರೆ ಅನ್ನೋದನ್ನು ಮತದ ಮೂಲಕ ಹೇಳಿದ್ದಾರೆ. IMDb ರೇಟಿಂಗ್ ಪ್ರಕಾರ ಇಮ್ತಿಯಾಜ್ ಅಲಿ ನಿರ್ದೇಶನದ ಮೈನಿ ವಾಪಸ್ ಆವುಂಗಾ ಸಿನಿಮಾಗೆ ಶೇಕಡಾ 23.3ರಷ್ಟು ಅಭಿಮಾನಿಗಳು ನೋಡಲು ಬಯಸಿದ್ದಾರೆ. ದಿಲ್ಜಿತ್ ದೋಸಾಂಜ್, ಶಾರ್ವರಿ, ವೆದಾಂಗ್ ರೈನಾ ಸೇರಿದಂತೆ ತಾರಾಬಣ ಈ ಸಿನಿಮಾದಲ್ಲಿದೆ.&lt;/p&gt;&lt;img&gt;&lt;p&gt;ದೇಶದ ಅಭಿಮಾನಿಗಳು ಕಾಯುತ್ತಿರುವ ಸಿನಿಮಾಗಳ ಪೈಕಿ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಎರಡನೇ ಸ್ಥಾನದಲ್ಲಿದೆ. ಟಾಕ್ಸಿಕ್ ಸಿನಿಮಾ ವೀಕ್ಷಣೆ ಮಾಡಲು ಶೇಕಡಾ 15.4ರಷ್ಟು ಮಂದಿ ವೋಟ್ ಮಾಡಿದ್ದಾರೆ. ಟಾಕ್ಸಿಕ್ ಸಿನಿಮಾದ ಟ್ರೇಲರ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಸಿನಿಮಾ ಬಿಡುಗಡೆ ವಿಳಂಬ ಎಂದಾಗ ಹಲವರು ನಿರಾಸೆ ಪಟ್ಟಿದ್ದಾರೆ. ಇದೀಗ ಟಾಕ್ಸಿಕ್ ರಿಲೀಸ್&zwnj;ಗೆ ಕಾಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಭಾರತೀಯ ಸಿನಿಮಾದಲ್ಲಿ ಅತೀ ದೊಡ್ಡ ಬಜೆಟ್, ಅತೀ ಹೆಚ್ಚು ತಂತ್ರಜ್ಞಾನ ಬಳಕೆ, ಕಲಾವಿದರ ಬಳಕೆ, ಅತೀ ಹೆಚ್ಚು ಸಂಭಾವನೆ ಸೇರಿದಂತೆ ಹಲವು ರೀತಿಯಲ್ಲಿ ಸದ್ದು ಮಾಡಿರುವ ರಾಮಾಯಣ ಸಿನಿಮಾ ಈ ಟಾಪ್ 10 ಲಿಸ್ಟ್&zwnj;ನಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಈ ರೇಟಿಂಗ್ ಸದ್ಯದ ಟ್ರೆಂಡ್ ಪ್ರಕಾರ ನೀಡಲಾಗಿದೆ. ರಾಮಯಾಣ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಕಾರಣ ಸದ್ಯ 2-3 ತಿಂಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳು ಈ ರೇಟಿಂಗ್&zwnj; ಲಿಸ್ಟ್&zwnj;ನಲ್ಲಿ ಕಾಣಿಸಿಕೊಂಡಿದೆ.&lt;/p&gt;&lt;img&gt;&lt;p&gt;ಯಶ್ ಟಾಕ್ಸಿಕ್ ಸಿನಿಮಾ IMDb ರೇಟಿಂಗ್&zwnj;ನಲ್ಲಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಚಿತ್ರದ ಕುತೂಹಲ ಹೆಚ್ಚಾಗುತ್ತಿದೆ. ಕೆಜಿಎಫ್ ಬಳಿಕ ಯಶ್ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಇತ್ತ ಟಾಕ್ಸಿಕ್ ಕೂಡ ಭಾರಿ ವಿಳಂಬವಾಗಿದೆ. ಇಷ್ಟು ಹೊತ್ತು ಕಾದಿರುವ ಅಭಿಮಾನಿಗಳಿಗೆ ಯಶ್ ಅಚ್ಚರಿ ಜೊತೆಗೆ ಹೊಸ ದಾಖಲೆ ಸಿನಿಮಾ ನೀಡುತ್ತಾರ ಅನ್ನೋ ಚರ್ಚೆಗಳು ಶುರುವಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cine-world/not-toxic-ramayana-or-peddi-imdb-reveals-most-anticipated-film-of-2026-p3yafll"/>
        </item>
        <item>
            <title><![CDATA[Amruthadhaare: ಭೂಮಿಕಾಳ ನಿರ್ಧಾರ, ಮಿಂಚು ಮನದಲ್ಲಿ ಬಿರುಗಾಳಿ- ವೀಕ್ಷಕರ ಭಾರಿ ಆಕ್ರೋಶ]]></title>
            <link>https://kannada.asianetnews.com/gallery/tv-talk/amruthadhaare-serial-bhoomika-decided-to-leave-minchu-with-mahima-suc-buv6edi</link>
            <guid isPermaLink="true">https://kannada.asianetnews.com/gallery/tv-talk/amruthadhaare-serial-bhoomika-decided-to-leave-minchu-with-mahima-suc-buv6edi</guid>
            <pubDate>Fri, 29 May 2026 14:48:52 +0530</pubDate>
            <description><![CDATA[ಮಹಿಮಾಳ ಮಗುವಿನ ಆಸೆಗಾಗಿ, ಭೂಮಿಕಾ ಮತ್ತು ಗೌತಮ್ ಸಂದಿಗ್ಧತೆಗೆ ಸಿಲುಕಿದ್ದಾರೆ. ಅಂತಿಮವಾಗಿ, ಭೂಮಿಕಾ ಮಿಂಚುವನ್ನು ಮಹಿಮಾ ಬಳಿ ಕಳುಹಿಸಲು ನಿರ್ಧರಿಸಿದ್ದು, ಈ ನಿರ್ಧಾರದಿಂದ ಮಿಂಚು ಆಘಾತಕ್ಕೊಳಗಾಗಿದ್ದಾಳೆ ಮತ್ತು ವೀಕ್ಷಕರು ಭೂಮಿಕಾ ವಿರುದ್ಧ ಗರಂ ಆಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kssg974gdrvp4tr5rqh4f97w,imgname-amruthadhaare-serial-1780046142608.jpg" type="image/jpeg" height="390" width="690"/>
            <content:encoded><![CDATA[ಮಹಿಮಾಳ ಮಗುವಿನ ಆಸೆಗಾಗಿ, ಭೂಮಿಕಾ ಮತ್ತು ಗೌತಮ್ ಸಂದಿಗ್ಧತೆಗೆ ಸಿಲುಕಿದ್ದಾರೆ. ಅಂತಿಮವಾಗಿ, ಭೂಮಿಕಾ ಮಿಂಚುವನ್ನು ಮಹಿಮಾ ಬಳಿ ಕಳುಹಿಸಲು ನಿರ್ಧರಿಸಿದ್ದು, ಈ ನಿರ್ಧಾರದಿಂದ ಮಿಂಚು ಆಘಾತಕ್ಕೊಳಗಾಗಿದ್ದಾಳೆ ಮತ್ತು ವೀಕ್ಷಕರು ಭೂಮಿಕಾ ವಿರುದ್ಧ ಗರಂ ಆಗಿದ್ದಾರೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಭೂಮಿಕಾ ಮತ್ತು ಗೌತಮ್​ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮಹಿಮಾ ಮಗುವಿಗಾಗಿ ಹಾತೊರೆಯುತ್ತಿದ್ದರೆ, ಭೂಮಿಕಾ ಅಮ್ಮ-ಅಪ್ಪ ಮಿಂಚುವನ್ನು ಕಳುಹಿಸಿಕೊಡುವಂತೆ ಕೇಳಿದ್ದಾರೆ.&lt;/p&gt;&lt;img&gt;&lt;p&gt;ಮಿಂಚು ತಮ್ಮ ಸ್ವಂತ ಮಗಳು ಎನ್ನುವುದು ತಿಳಿಯದಿದ್ದರೂ, ಅವಳನ್ನು ಸ್ವಂತ ಮಗಳಂತೆಯೇ ನೋಡುತ್ತಿರುವ ಗೌತಮ್​ ಮತ್ತು ಭೂಮಿಕಾಗೆ ಇದು ನುಂಗಲಾಗದ ತುತ್ತಾಗಿದೆ. ಆದರೂ ಮಹಿಮಾಳ ಹಟದಿಂದ ಒಂದು ನಿರ್ಧಾರಕ್ಕೆ ಬರಬೇಕಿದೆ.&lt;/p&gt;&lt;img&gt;&lt;p&gt;ಒಂದು ಹಂತದಲ್ಲಿ ಭೂಮಿಕಾ, ಮಿಂಚು ಬಳಿ ಮಾತನಾಡಿ ಅವಳನ್ನು ಸ್ವಲ್ಪ ದಿನದ ಮಟ್ಟಿಗೆ ಮಹಿಮಾ ಬಳಿ ಕಳಿಸೋಣ. ಅವಳು ಗರ್ಭಿಣಿಯಾದ ಬಳಿಕ ವಾಪಸ್​ ಕರೆದುಕೊಂಡು ಬರೋಣ ಎಂದಾಗ ಗೌತಮ್​, ಹಾಗೆ ಮಾಡಲು ಮಿಂಚು ಏನು ಗೊಂಬೆನಾ, ಬೇಕಾದಾಗ ಹೋಗು, ಬೇಡವಾದಾಗ ಬರಲು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾನೆ.&lt;/p&gt;&lt;img&gt;&lt;p&gt;ಆದರೆ, ಮಹಿಮಾಳ ನೋವಿನ ಎದುರು ಭೂಮಿಕಾ ಏನೋ ಒಂದು ನಿರ್ಧಾರ ಮಾಡಲೇಬೇಕಿದೆ.ಕೊನೆಗೆ ಮಿಂಚುವನ್ನು ಕಳುಹಿಸುವ ನಿರ್ಧಾರ ಮಾಡಿದ್ದಾಳೆ.&lt;/p&gt;&lt;img&gt;&lt;p&gt;ಮಿಂಚುವನ್ನು ಕರೆದು ಮಹಿಮಾ ಆಂಟಿಯ ಸಮಸ್ಯೆ ನಿನಗೆ ಗೊತ್ತಲ್ವಾ, ಸ್ವಲ್ಪ ದಿನ ಅಲ್ಲಿ ಹೋಗಿ ಇರುವೆಯಾ ಎಂದು ಅಳುಕುತ್ತಲೇ ಮಿಂಚುವನ್ನು ಕೇಳಿದ್ದಾಳೆ. ಇದರಿಂದ ಮಿಂಚು ಆಘಾತಗೊಂಡಿದ್ದಾಳೆ.&lt;/p&gt;&lt;img&gt;&lt;p&gt;ಸದ್ಯ ಭೂಮಿಕಾಗೆ ಬೇರೆ ದಾರಿ ತೋರದೇ ಹಾಗೆ ಮಾಡಿದ್ದು ನಿಜವಾದರೂ, ಮಿಂಚುವಿನ ಸ್ಥಾನದಲ್ಲಿ ಇರುವ ಮಕ್ಕಳ ಮನಸ್ಥಿತಿ, ಅದರಲ್ಲಿಯೂ ತಾನು ಸ್ವಂತ ಮಗಳು ಅಲ್ಲ ಎಂದು ಗೊತ್ತಿರುವಾಗ, ಹೀಗೆಲ್ಲಾ ಭೂಮಿಕಾ ಕೇಳಿದರೆ ಆಕೆಯ ಮನಸ್ಸಿನಲ್ಲಿ ಯಾವ ರೀತಿ ಆಗಬಹುದು ಎಂದು ಕೇಳುತ್ತಿರುವ ವೀಕ್ಷಕರು, ಭೂಮಿಕಾಳ ವಿರುದ್ಧ ಗರಂ ಆಗಿದ್ದಾರೆ. ಆಕೆ ಹೀಗೆ ಮಾಡುವುದು ಸರಿಯಲ್ಲ, ಮಿಂಚುವಿನ ಮುಖ ನೋಡಲು ಆಗ್ತಿಲ್ಲ. ಸ್ವಂತ ಮಗು ಎನ್ನೋದು ಗೊತ್ತಾಗಿದ್ದರೆ ಹೀಗೆ ಮಾಡುತ್ತಿದ್ದಳಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-serial-bhoomika-decided-to-leave-minchu-with-mahima-suc-buv6edi"/>
        </item>
        <item>
            <title><![CDATA[ರೆಬಲ್ ಸ್ಟಾರ್ ಅಂಬರೀಷ್ 74ನೇ ಹುಟ್ಟುಹಬ್ಬ.. ಅಂಬಿಯನ್ನು ನೆನೆದು ಸುಮಲತಾ ಭಾವುಕ ಪೋಸ್ಟ್]]></title>
            <link>https://kannada.asianetnews.com/gallery/sandalwood/actress-sumalatha-wishes-her-husband-rebel-star-ambareesh-74th-birthday-icn4c1u</link>
            <guid isPermaLink="true">https://kannada.asianetnews.com/gallery/sandalwood/actress-sumalatha-wishes-her-husband-rebel-star-ambareesh-74th-birthday-icn4c1u</guid>
            <pubDate>Fri, 29 May 2026 15:30:29 +0530</pubDate>
            <description><![CDATA[&lt;p&gt;Ambareesh 74th Birthday: ರೆಬೆಲ್ ಸ್ಟಾರ್ ಅಂಬರೀಷ್ ಅವರ 74ನೇ ವರ್ಷದ ಜನ್ಮದಿನದ ಅಂಗವಾಗಿ, ಪತ್ನಿ ಹಾಗೂ ನಟಿ ಸುಮಲತಾ ಅಂಬರೀಷ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಗಲಿರುವ ಪತಿಗೆ ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssjcb868jsfqctz0rgyrvpk,imgname-ambareesh-1780048342277.jpg" type="image/jpeg" height="390" width="690"/>
            <content:encoded><![CDATA[&lt;p&gt;Ambareesh 74th Birthday: ರೆಬೆಲ್ ಸ್ಟಾರ್ ಅಂಬರೀಷ್ ಅವರ 74ನೇ ವರ್ಷದ ಜನ್ಮದಿನದ ಅಂಗವಾಗಿ, ಪತ್ನಿ ಹಾಗೂ ನಟಿ ಸುಮಲತಾ ಅಂಬರೀಷ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಗಲಿರುವ ಪತಿಗೆ ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕನ್ನಡಿಗರ ಮನೆ ಮನದಲ್ಲಿ ಸದಾ ಜೀವಂತವಾಗಿರುವ ರೆಬೆಲ್ ಸ್ಟಾರ್ ಅಂಬರೀಷ್ ಅವರ 74ನೇ ಹುಟ್ಟುಹಬ್ಬ ಇಂದು. ಮಲವಳ್ಳಿ ಹುಚ್ಚೆಗೌಡ ಅಮರ್ ನಾಥ್ ಆಗಿ ಮಂಡ್ಯ ಜಿಲ್ಲೆಯಲ್ಲಿ ಮೇ 29, 1952ರಲ್ಲಿ ಜನಿಸಿದರು. ಸಿನಿಮಾ ಮೂಲಕ ಅಂಬರೀಷ್ ಆಗಿ ವಿಲನ್, ನಾಯಕರಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾದರು.&lt;/p&gt;&lt;img&gt;&lt;p&gt;ಸಿನಿಮಾಗಳಲ್ಲಿ ಮಿಂಚಿದ ಅಂಬರೀಷ್, ಸಿನಿಮಾ ನಟಿಯಾಗಿರುವ ಸುಮಲತಾರನ್ನು 1991ರಲ್ಲಿ ಪ್ರೀತಿಸಿ ಮದುವೆಯಾದರು. ಇವರಿಗೆ ಅಭಿಷೇಕ್ ಎನ್ನುವ ಮಗ ಕೂಡ ಇದ್ದಾರೆ. ಸಿನಿಮಾದೊಂದಿಗೆ ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡು, ಮಂಡ್ಯ ಜನತೆಗಾಗಿ ಸೇವೆ ಸಲ್ಲಿಸಿದ್ದರು ಅಂಬರೀಷ್. 2014ರಲ್ಲಿ ಉಸಿರಾಟದ ತೊಂದರೆಯಿಂದಾಗಿ ದಿಢೀರ್ ಆಗಿ ಸಾವನ್ನಪ್ಪುವ ಮೂಲಕ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದರು ಅಂಬಿ.&lt;/p&gt;&lt;img&gt;&lt;p&gt;ಅಂಬರೀಷ್ ಹುಟ್ಟುಹಬ್ಬದ ಅಂಗವಾಗಿ ಪತ್ನಿ ಸುಮಲತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಂಬರೀಷ್ ಅವರ ಫೋಟೊ ಹೊಂದಿರುವ ಪೋಸ್ಟರ್ ಶೇರ್ ಮಾಡಿ, ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇಲ್ಲಿದೆ ಸುಮಲತಾ ಅವರು ಬರೆದ ಸಾಲುಗಳು.&lt;/p&gt;&lt;img&gt;&lt;p&gt;ಇಂದು ಅವರ 74ನೇ ಜನ್ಮದಿನ. ಅಭಿಮಾನಿಗಳು ಪ್ರೀತಿಯಿಂದ ಕೊಂಡಾಡುವ &quot;ರೆಬಲ್&zwnj; ಸ್ಟಾರ್&zwnj;&quot;, ತನ್ನ ಬಳಿ ಸಹಾಯ ಕೇಳಿ ಬಂದವರನ್ನು ಎಂದಿಗೂ ಬರಿಗೈಯ್ಯಲ್ಲಿ ಕಳುಹಿಸದ &quot;ಕಲಿಯುಗದ ಕರ್ಣ&quot;... ಈ ಎರಡೂ ಅಂಕಿತಗಳಿಗೆ ಪ್ರತಿರೂಪವಾಗಿದ್ದ ಅಂಬರೀಶ್ ಅವರ ಬದುಕೇ ಒಂದು ಹಬ್ಬವಾಗಿತ್ತು. ಅವರಲ್ಲಿದ್ದ ಆ ಕರುಣೆ, ಔದಾರ್ಯ, ಸದಾ ಹಸನ್ಮುಖಿ ವ್ಯಕ್ತಿತ್ವ ಮತ್ತು ಜನರ ಮೇಲಿದ್ದ ಪ್ರೀತಿಗೆ ಬೆಲೆ ಕಟ್ಟಲಾಗದು. ಅವರ ಮನಸ್ಸು ಸಮುದ್ರದಷ್ಟೇ ವಿಶಾಲವಾಗಿತ್ತು.&lt;/p&gt;&lt;img&gt;&lt;p&gt;ಕಣ್ಣೆದುರು ಬಂದ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳುವ ದೊಡ್ಡ ಗುಣ ಅವರದ್ದಾಗಿತ್ತು. ಅವರ ಒಡನಾಟ ಸಿಕ್ಕಿದ್ದೇ ನಮ್ಮ ಪುಣ್ಯ ಅಂತ ಅದೆಷ್ಟೋ ಜನ ಇವತ್ತಿಗೂ ಹೆಮ್ಮೆಯಿಂದ ಹೇಳುತ್ತಾರೆ. ಇವತ್ತು ಈ ನಮ್ಮ ಕುಟುಂಬ ಮಾತ್ರವಲ್ಲ, ಕೋಟ್ಯಂತರ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ಅವರ ನೆರಳಲ್ಲಿ ಬೆಳೆದು, ಅವರೊಂದಿಗಿನ ಆಪ್ತ ಕ್ಷಣಗಳನ್ನು ಆನಂದಿಸಿದ ಅದೆಷ್ಟೋ ಆತ್ಮೀಯ ಸ್ನೇಹಿತರು ಇಂದಿಗೂ ಅವರನ್ನ ಸ್ಮರಿಸಿ, ಭಾವುಕರಾಗುತ್ತಾರೆ.&lt;/p&gt;&lt;img&gt;&lt;p&gt;ಅವರು ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಮಾತ್ರವಲ್ಲ, ಅಸಂಖ್ಯಾತ ಜನರಿಗೆ ಅವರು ಹಂಚಿದ ಆ ಪ್ರೀತಿ ಮತ್ತು ಬಿಟ್ಟುಹೋದ ಮರೆಯಲಾಗದ ನೆನಪುಗಳು ಅವರನ್ನು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಂತವಾಗಿಟ್ಟಿದೆ. ನಮ್ಮೆಲ್ಲರ ಮನಸ್ಸಿನಲ್ಲಿ ನೀವು ಸದಾ ಅಮರ... ಅನು ದಿನವೂ, ಅನುಕ್ಷಣವೂ ನಮ್ಮ ಕುಟುಂಬದ ಉಸಿರಾಗಿರುವ ನೀವೆಂದಿಗೂ ನಮ್ಮ ಹೆಮ್ಮೆಯ &quot;ರೆಬೆಲ್ ಸ್ಟಾರ್&rdquo;.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/actress-sumalatha-wishes-her-husband-rebel-star-ambareesh-74th-birthday-icn4c1u"/>
        </item>
        <item>
            <title><![CDATA[SS Rajamouli: 'ನನಗೆ ಆ ನಾಯಕಿ ತುಂಬಾ ಇಷ್ಟ' ಎಂದ ರಾಜಮೌಳಿ, 'ನಿಮ್ಮಷ್ಟದ ನಾಯಕ ಯಾರು' ಎಂದು ಕೇಳಿದಾಗ ಹೇಳಿದ್ದೇನು?]]></title>
            <link>https://kannada.asianetnews.com/cine-world/rajamouli-picked-anushka-shetty-as-his-favorite-actress-but-played-safe-game-on-turned-to-his-favorite-hero-question/articleshow-b8m5m42</link>
            <guid isPermaLink="true">https://kannada.asianetnews.com/cine-world/rajamouli-picked-anushka-shetty-as-his-favorite-actress-but-played-safe-game-on-turned-to-his-favorite-hero-question/articleshow-b8m5m42</guid>
            <pubDate>Fri, 29 May 2026 16:58:13 +0530</pubDate>
            <description><![CDATA[&lt;p&gt;ಸಣ್ಣ ಕಥೆಯನ್ನೂ ದೃಶ್ಯ ವೈಭವವನ್ನಾಗಿ ಮಾರ್ಪಡಿಸುವ ಅದ್ಭುತ ಕಲೆ ರಾಜಮೌಳಿ ಅವರಿಗೆ ಸಿದ್ಧಿಸಿದೆ. ನಾಯಕಿಯರ ವಿಷಯದಲ್ಲಿ 'ದೇವಸೇನಾ'ಗೆ ಜೈ ಎಂದಿರುವ ರಾಜಮೌಳಿ, ನಾಯಕರ ವಿಷಯದಲ್ಲಿ ಮಾತ್ರ 'ಸೇಫ್ ಗೇಮ್' ಆಡಿದ್ದು ಏಕೆ? ಉತ್ತರಕ್ಕೆ ಈ ಸ್ಟೋರಿ ನೋಡಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ka8p3en64hv531ngt3jrp5sd,imgname-ss-rajamouli-1763375692454.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಕ್ಕಣ್ಣನ ಮನಗೆದ್ದ ಆ 'ಮಹಾನಟಿ' ಯಾರು? ನೆಚ್ಚಿನ ನಟನ ವಿಷಯದಲ್ಲಿ ರಾಜಮೌಳಿ 'ಸೇಫ್ ಗೇಮ್'!&lt;/strong&gt;&lt;/p&gt;&lt;p&gt;ಭಾರತೀಯ ಚಿತ್ರರಂಗದ ಇತಿಹಾಸವನ್ನು 'ಬಾಹುಬಲಿ' ಪೂರ್ವ ಮತ್ತು 'ಬಾಹುಬಲಿ' ನಂತರ ಅಂತ ಎರಡು ಭಾಗ ಮಾಡಬಹುದು. ಅಷ್ಟರ ಮಟ್ಟಿಗೆ ನಮ್ಮ ದೇಶದ ಸಿನಿಮಾವನ್ನು ವಿಶ್ವದ ನೆತ್ತಿಯ ಮೇಲೆ ಕೂರಿಸಿದ ಕ್ರೆಡಿಟ್ ಆ ಒಬ್ಬ ವ್ಯಕ್ತಿಗೆ ಸಲ್ಲುತ್ತದೆ. ಅವನ್ಯಾರೋ ಅಲ್ಲ, ಸಿನಿಮಾ ರಂಗದ ಅಜೇಯ ಸರದಾರ, ನಮ್ಮ ಹೆಮ್ಮೆಯ 'ಜಕ್ಕಣ್ಣ' ಎಸ್&zwnj;ಎಸ್&zwnj; ರಾಜಮೌಳಿ!&lt;/p&gt;&lt;p&gt;ಸಿನಿಮಾ ಅಖಾಡದಲ್ಲಿ ಸೋಲೇ ಅರಿಯದ ಈ ಮಾಂತ್ರಿಕ (SS Rajamouli) ಈಗ ಮಹೇಶ್ ಬಾಬು ಜೊತೆಗಿನ ಮುಂದಿನ ಸಾಹಸಕ್ಕೆ (SSMB29) ರೆಡಿಯಾಗುತ್ತಿದ್ದಾರೆ. ಆದರೆ ಈ ನಡುವೆ, ರಾಜಮೌಳಿ ಅವರ ಹಳೆಯ ಇಂಟರ್ವ್ಯೂ ಒಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ರಾಜಮೌಳಿ ಅವರು ತಮ್ಮ ಪರ್ಸನಲ್ ಫೇವರೆಟ್ಸ್ ಬಗ್ಗೆ ಬಿಚ್ಚಿಟ್ಟ ಮಾತುಗಳು ಈಗ ಗಾಂಧಿನಗರದಿಂದ ಟಾಲಿವುಡ್&zwnj;ವರೆಗೆ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;ಯಾರು ಆ ಲಕ್ಕಿ ಹೀರೋಯಿನ್?&lt;/h2&gt;&lt;p&gt;ಯಾವುದೇ ಒಬ್ಬ ನಿರ್ದೇಶಕನಿಗೆ 'ನಿಮ್ಮ ಫೇವರೆಟ್ ನಟಿ ಯಾರು?' ಎಂಬ ಪ್ರಶ್ನೆ ಎದುರಾದರೆ, ಅವರು ಹತ್ತಾರು ಬಾರಿ ಯೋಚನೆ ಮಾಡುತ್ತಾರೆ. ಆದರೆ ರಾಜಮೌಳಿ ಮಾತ್ರ ಅಂದು ಒಂದೇ ಕ್ಷಣದಲ್ಲಿ, ಯಾವುದೇ ಮುಲಾಜಿಲ್ಲದೆ ಒಂದು ಹೆಸರನ್ನು ಹೇಳಿದರು. ಆ ಹೆಸರು ಬೇರೆ ಯಾರದ್ದೂ ಅಲ್ಲ, ಅದು ಕರಾವಳಿ ಬೆಡಗಿ, ತೆಲುಗು ಚಿತ್ರರಂಗದ ಜೇಜಮ್ಮ ಅನುಷ್ಕಾ ಶೆಟ್ಟಿ!&lt;/p&gt;&lt;p&gt;&lt;img&gt;&lt;/p&gt;&lt;p&gt;&quot;ನಾಯಕಿಯರ ವಿಷಯಕ್ಕೆ ಬಂದರೆ ನನಗೆ ಅನುಷ್ಕಾ ಶೆಟ್ಟಿ ಅಂದ್ರೆ ತುಂಬಾ ಇಷ್ಟ&quot; ಎಂದು ರಾಜಮೌಳಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕೇವಲ ಅಂದಕ್ಕಾಗಿ ಮಾತ್ರವಲ್ಲ, ಅನುಷ್ಕಾ ಅವರ ಕೆಲಸದ ಮೇಲಿರುವ ಶ್ರದ್ಧೆ, ಪ್ರಾಮಾಣಿಕತೆ ಮತ್ತು ವೃತ್ತಿಪರತೆ ರಾಜಮೌಳಿ ಅವರಿಗೆ ಸಖತ್ ಇಷ್ಟವಂತೆ. 'ವಿಕ್ರಮಾರ್ಕುಡು' ಚಿತ್ರದಿಂದ ಶುರುವಾದ ಇವರ ಕಾಂಬಿನೇಷನ್, 'ಬಾಹುಬಲಿ'ಯ ದೇವಸೇನಾ ಪಾತ್ರದ ಮೂಲಕ ಇಡೀ ಭಾರತವನ್ನೇ ಬೆರಗುಗೊಳಿಸಿದ್ದು ಈಗ ಇತಿಹಾಸ. ಇದರ ಜೊತೆಗೆ 'ಮಗಧೀರ'ದ ಕಾಜಲ್ ಮತ್ತು 'ಮರ್ಯಾದ ರಾಮಣ್ಣ'ದ ಸಲೋನಿ ಅವರ ನಟನೆಯನ್ನೂ ಜಕ್ಕಣ್ಣ ಕೊಂಡಾಡಿದ್ದಾರೆ.&lt;/p&gt;&lt;h3&gt;ಹೀರೋ ವಿಷಯದಲ್ಲಿ 'ಕಿಲಾಡಿ' ರಾಜಮೌಳಿ!&lt;/h3&gt;&lt;p&gt;ಇನ್ನು ಅಸಲಿ ಮಜಾ ಇರೋದೇ ಇಲ್ಲಿ! ನಿರೂಪಕರು ಮೆಲ್ಲಗೆ &quot;ಸರಿ ಮೇಡಂ ಆಯ್ತು, ಈಗ ನಿಮ್ಮ ನೆಚ್ಚಿನ ನಟ (Hero) ಯಾರು?&quot; ಎಂದು ಕೇಳಿದ್ದೇ ತಡ, ರಾಜಮೌಳಿ ಅವರು ಫುಲ್ ಅಲರ್ಟ್ ಆಗಿಬಿಟ್ಟರು. ತಮಾಷೆ ಮಾಡುತ್ತಲೇ ಅವರು ಕೊಟ್ಟ ಉತ್ತರ ಕೇಳಿ ಆಂಕರ್ ಕೂಡ ದಂಗಾದರು!&lt;/p&gt;&lt;p&gt;&quot;ನನ್ನ ನೆಚ್ಚಿನ ನಟ ಯಾರು ಎಂದು ಸಾರ್ವಜನಿಕವಾಗಿ ಹೇಳುವಷ್ಟು ನಾನು ಮುಗ್ಧನಲ್ಲ (Innocent)!&quot; ಎಂದು ನಗುತ್ತಲೇ ಜಕ್ಕಣ್ಣ ಪಲ್ಟಿ ಹೊಡೆದರು. ಒಬ್ಬ ನಟನ ಹೆಸರನ್ನು ಹೇಳಿದರೆ ಉಳಿದ ಸ್ಟಾರ್ ನಟರ ಅಭಿಮಾನಿಗಳು ಸುಮ್ಮನಿರುತ್ತಾರೆಯೇ? ಅಥವಾ ಮುಂದಿನ ಸಿನಿಮಾಗೆ ಡೇಟ್ಸ್ ಸಿಗುವುದು ಕಷ್ಟವಾಗುತ್ತದೆಯೇ? ಎಂಬ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿದ ರಾಜಮೌಳಿ, ಅತ್ಯಂತ ಜಾಣತನದಿಂದ ಈ ಪ್ರಶ್ನೆಯಿಂದ ನುಣುಚಿಕೊಂಡರು. &quot;ನಾನು ಎಲ್ಲ ನಟರ ಜೊತೆ ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ, ಎಲ್ಲರೂ ನನಗೆ ಪ್ರಿಯರೇ&quot; ಎಂಬ ಡಿಪ್ಲೊಮ್ಯಾಟಿಕ್ ಉತ್ತರ ನೀಡಿ ತಮ್ಮ ಕಿಲಾಡಿತನ ಮೆರೆದರು.&lt;/p&gt;&lt;p&gt;ಸಿನಿಮಾ ಮಾಂತ್ರಿಕನ ಮುಂದಿನ ಪ್ಲಾನ್..&lt;/p&gt;&lt;p&gt;ಸಣ್ಣ ಕಥೆಯನ್ನೂ ದೃಶ್ಯ ವೈಭವವನ್ನಾಗಿ ಮಾರ್ಪಡಿಸುವ ಅದ್ಭುತ ಕಲೆ ರಾಜಮೌಳಿ ಅವರಿಗೆ ಸಿದ್ಧಿಸಿದೆ. ಪ್ರಸ್ತುತ ವಾರಣಾಸಿಯ ಹಿನ್ನೆಲೆಯಲ್ಲಿ ಮಹೇಶ್ ಬಾಬು ಅವರೊಂದಿಗೆ ಒಂದು ಭರ್ಜರಿ ಆ್ಯಕ್ಷನ್ ಅಡ್ವೆಂಚರ್ ಚಿತ್ರ ಮಾಡಲು ಅವರು ತಯಾರಿ ನಡೆಸುತ್ತಿದ್ದಾರೆ. ರಾಜಮೌಳಿ ಸಿನಿಮಾ ಅಂದಮೇಲೆ ಅಲ್ಲಿ ಏನೋ ಒಂದು ಮ್ಯಾಜಿಕ್ ಇದ್ದೇ ಇರುತ್ತದೆ ಎಂಬ ನಂಬಿಕೆ ಅಭಿಮಾನಿಗಳದ್ದು.&lt;/p&gt;&lt;p&gt;ಒಟ್ಟಿನಲ್ಲಿ, ನಾಯಕಿಯರ ವಿಷಯದಲ್ಲಿ 'ದೇವಸೇನಾ'ಗೆ ಜೈ ಎಂದಿರುವ ರಾಜಮೌಳಿ, ನಾಯಕರ ವಿಷಯದಲ್ಲಿ ಮಾತ್ರ 'ಸೇಫ್ ಗೇಮ್' ಆಡುವ ಮೂಲಕ ತಾನೊಬ್ಬ ಗ್ರೇಟ್ ಡೈರೆಕ್ಟರ್ ಮಾತ್ರವಲ್ಲ, ಸಖತ್ ಸ್ಮಾರ್ಟ್ ವ್ಯಕ್ತಿ ಅಂತಲೂ ಪ್ರೂವ್ ಮಾಡಿದ್ದಾರೆ!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/rajamouli-picked-anushka-shetty-as-his-favorite-actress-but-played-safe-game-on-turned-to-his-favorite-hero-question/articleshow-b8m5m42"/>
        </item>
        <item>
            <title><![CDATA[ದರ್ಶನ್‌, ಪುನೀತ್‌ ಇವರಾರದ್ದು ಅಲ್ಲ, ಯಶ್‌ ಲಿಸ್ಟ್‌ಅಲ್ಲೇ ಇಲ್ಲ.. ಯೂಟ್ಯೂಬ್‌ನಲ್ಲಿ ಗರಿಷ್ಠ ವೀಕ್ಷಣೆ ಕಂಡಿರೋದು ಈ ಹೀರೋ ಹಾಡು]]></title>
            <link>https://kannada.asianetnews.com/tv-talk/most-viewed-kannada-youtube-song-karabu-dhruva-sarja-top-10-list-san/articleshow-wkcg9kc</link>
            <guid isPermaLink="true">https://kannada.asianetnews.com/tv-talk/most-viewed-kannada-youtube-song-karabu-dhruva-sarja-top-10-list-san/articleshow-wkcg9kc</guid>
            <pubDate>Fri, 29 May 2026 16:28:06 +0530</pubDate>
            <description><![CDATA[&lt;p&gt;'ಪೊಗರು' ಸಿನಿಮಾದ 'ಕರಾಬು' ಹಾಡು 33.4 ಕೋಟಿ ವೀಕ್ಷಣೆಗಳೊಂದಿಗೆ ಯೂಟ್ಯೂಬ್&zwnj;ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕನ್ನಡ ವಿಡಿಯೋ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಲೇಖನವು 'ಬೊಂಬೆ ಹೇಳುತೈತೆ', 'ವರಾಹ ರೂಪಂ' ಸೇರಿದಂತೆ ಯೂಟ್ಯೂಬ್&zwnj;ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssnv4r5d2pw66bxyx217neb,imgname-you-tube-1780051972868.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇ&lt;/strong&gt;ದು ಕನ್ನಡದ ಮೋಸ್ಟ್&zwnj; ಸೂಪರ್&zwnj;ಹಿಟ್&zwnj; ವಿಡಿಯೋ ಸಾಂಗ್&zwnj;. ಆರು ವರ್ಷದ ಹಿಂದೆ ಯೂಟ್ಯೂಬ್&zwnj;ಗೆ ಬಂದ ಈ ವಿಡಿಯೋ ಸಾಂಗ್&zwnj;ಇಲ್ಲಿಯವರೆಗೂ 33.4 ಕೋಟಿ ವೀವ್ಸ್&zwnj;ಅನ್ನು ಯೂಟ್ಯೂಬ್&zwnj;ನಲ್ಲಿ ಪಡೆದುಕೊಂಡಿದೆ. ಕನ್ನಡದ ವಿಡಿಯೋ ಸಾಂಗ್&zwnj;ವೊಂದು 33 ಕೋಟಿಗೂ ಅಧಿಕ ವೀಕ್ಷಣೆ ಕಂಡಿರೋದು ಸ್ಯಾಂಡಲ್&zwnj;ವುಡ್&zwnj;ಗೂ ಹೆಮ್ಮೆಯ ವಿಚಾರ.&lt;/p&gt;&lt;p&gt;ಹಾಗಂತ ಈ ಸಿನಿಮಾ ರಿಲೀಸ್&zwnj; ಆಗಿ ಹೆಚ್ಚೇನೂ ವರ್ಷಗಳಾಗಿಲ್ಲ. ಕೇವಲ ಆರು ವರ್ಷದ ಹಿಂದೆ ರಿಲೀಸ್&zwnj; ಆಗಿದ್ದ ಸಿನಿಮಾದ ಈ ಹಾಡು ಯೂಟ್ಯೂಬ್&zwnj;ನಲ್ಲಿ ತನ್ನ ಕಮಾಲ್&zwnj; ಸೃಷ್ಟಿಸಿದೆ. ಸೋಶಿಯಲ್&zwnj; ಮೀಡಿಯಾದಲ್ಲೂ ದೊಡ್ಡ ಮಟ್ಟದ ಹವಾ ಸೃಷ್ಟಿಸಿದ್ದ ಈ ಸಿನಿಮಾ ಕನ್ನಡದಲ್ಲಿ ರಶ್ಮಿಕಾ ಮಂದಣ್ಣ ನಟಿಸಿರುವ ಕೊನೆಯ ಸಿನಿಮಾ ಕೂಡ ಆಗಿದೆ. ಇಂದಿಗೂ ಕೂಡ ಈ ಹಾಟು ಪಾರ್ಟಿಗಳು, ಮದುವೆ ಹಾಗೂ ಸೋಶಿಯಲ್&zwnj; ಮೀಡಿಯಾ ರೀಲ್ಸ್&zwnj;ಗಳಲ್ಲಿ ವ್ಯಾಪಕವಾಗಿ ಬಳಸಿಕೊಳ್ಳುತ್ತಾರೆ.&lt;/p&gt;&lt;p&gt;ಈ ಹಾಡು ಯಾವುದೆಂದರೆ, ಪೊಗರು ಸಿನಿಮಾದ 'ಕರಾಬು.. ಬಾಸು ಕರಾಬು..' ಸಾಂಗ್&zwnj;. ನಂದಕಿಶೋರ್&zwnj; ನಿರ್ದೇಶನದ ಪೊಗರು ಸಿನಿಮಾದ ಈ ಹಾಡಿನ ಸಂಪೂರ್ಣ ಕ್ರೆಡಿಟ್&zwnj; ಇರುವುದು ಚಂದನ್&zwnj; ಶೆಟ್ಟಿ ಬಳಿಯಲ್ಲಿ. ಈ ಹಾಡಿನ ಮ್ಯೂಸಿಕ್&zwnj;, ಲಿರಿಕ್ಸ್&zwnj; ಮಾತ್ರವಲ್ಲದೆ ಇದನ್ನು ಸ್ವತಃ ಅವರೇ ಕೂಡ ಹಾಡಿದ್ದರು. ಹಾಡಿನಲ್ಲಿ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಇತರರು ನಟಿಸಿದ್ದರು. ಆನಂದ್&zwnj; ಆಡಿಯೋ ಯೂಟ್ಯೂಬ್&zwnj; ಚಾನೆಲ್&zwnj;ನಲ್ಲಿ ವಿಡಿಯೋ ರಿಲೀಸ್&zwnj; ಆಗಿದ್ದು, ಇಂದಿನವರೆಗೆ 33 ಕೋಟಿ 43 ಲಕ್ಷದ 92 ಸಾವಿರದ 713 ವೀವ್ಸ್&zwnj; ಪಡೆದುಕೊಂಡಿದೆ. 2020ರ ಏಪ್ರಿಲ್&zwnj; 2 ರಂದು ಈ ವಿಡಿಯೋ ಯೂಟ್ಯೂಬ್&zwnj;ಗೆ ಅಪ್&zwnj;ಲೋಡ್&zwnj; ಆಗಿತ್ತು.&lt;/p&gt;&lt;p&gt;ಯೂಟ್ಯೂಬ್&zwnj;ನಲ್ಲಿ ಗರಿಷ್ಠ ವೀಕ್ಷಣೆ ಪಡೆದ ಕನ್ನಡದ 10 ಯೂಟ್ಯೂಬ್&zwnj; ವಿಡಿಯೋ ಸಾಂಗ್&zwnj;ಗಳನ್ನು ನೋಡೋದಾದರೆ, ಪುನೀತ್&zwnj; ರಾಜ್&zwnj;ಕುಮಾರ್&zwnj; ನಟನೆಯ ರಾಜಕುಮಾರ ಸಿನಿಮಾದ ಫೇಮಸ್&zwnj; ಹಾಡು 'ಬೊಂಬೆ ಹೇಳುತೈತೆ..' ಮೇಕಿಂಗ್&zwnj; ವಿಡಿಯೋ ಇಲ್ಲಿಯವರೆಗೂ 29 ಕೋಟಿ 30 ಲಕ್ಷ ವೀವ್ಸ್&zwnj; ಪಡೆದುಕೊಂಡಿದೆ. ಇನ್ನು ಕಾಂತಾರ ಸಿನಿಮಾದ ವರಾಹ ರೂಪಂ ಲಿರಿಕ್&zwnj; ವಿಡಿಯೋ ಕಳೆದ ಮೂರು ವರ್ಷದಲ್ಲಿಯೇ 28 ಕೋಟಿ 20 ಲಕ್ಷ ವೀವ್ಸ್&zwnj; ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅಗ್ರಸ್ಥಾನಕ್ಕೇರುವ ಹಾದಿಯಲ್ಲಿದೆ.&lt;/p&gt;&lt;h2&gt;&lt;strong&gt;ಯಶ್&zwnj; ಹಾಡಿಗಿಂತ ಮಾಳು ನಿಪನಾಳ ಫೇಮಸ್&zwnj;&lt;/strong&gt;&lt;/h2&gt;&lt;p&gt;ಇನ್ನೂ ಅಚ್ಚರಿಯ ವಿಚಾರ ಏನೆಂದರೆ, ಟಾಪ್&zwnj;-10 ಲಿಸ್ಟ್&zwnj;ನಲ್ಲಿ ರಾಕಿಂಗ್&zwnj; ಸ್ಟಾರ್&zwnj; ಯಶ್&zwnj; ಅವರ ಯಾವ ಹಾಡುಗಳೂ ಕೂಡ ಇಲ್ಲ. ಇನ್ನು ಉತ್ತರ ಕರ್ನಾಟಕದ ಪ್ರತಿಭೆ, ಬಿಗ್&zwnj;ಬಾಸ್&zwnj;ನಲ್ಲಿ ಭಾಗವಹಿಸಿದ್ದ ಮಾಳು ನಿಪನಾಳ ಅವರ ಮೂರು ಸಾಂಗ್&zwnj;ಗಳು ಟಾಪ್&zwnj;-10 ಲಿಸ್ಟ್&zwnj;ನಲ್ಲಿ ಸ್ಥಾನ ಪಡೆದಿದೆ.&lt;/p&gt;&lt;h2&gt;&lt;strong&gt;ನಂತರದ 7 ಸ್ಥಾನಗಳಲ್ಲಿರುವ ವಿಡಿಯೋ ಸಾಂಗ್&zwnj;ಗಳು ಹಾಗೂ ಅದರ ವೀವ್ಸ್&zwnj;&lt;/strong&gt;&lt;/h2&gt;&lt;table&gt; &lt;tbody&gt;  &lt;tr&gt;   &lt;td&gt;ಸ್ಥಾನ&lt;/td&gt;   &lt;td&gt;ಹಾಡು&lt;/td&gt;   &lt;td&gt;ವೀವ್ಸ್&zwnj;&lt;/td&gt;  &lt;/tr&gt;  &lt;tr&gt;   &lt;td&gt;4&lt;/td&gt;   &lt;td&gt;ನಾ ಡ್ರೈವರ್&zwnj; ನೀ ನನ್ನ ಲವರ್&zwnj;&lt;/td&gt;   &lt;td&gt;27 ಕೋಟಿ 60 ಲಕ್ಷ&lt;/td&gt;  &lt;/tr&gt;  &lt;tr&gt;   &lt;td&gt;5&lt;/td&gt;   &lt;td&gt;ಸಿಂಗಾರ ಸಿರಿಯೇ&lt;/td&gt;   &lt;td&gt;20 ಕೋಟಿ, 3 ಲಕ್ಷ&lt;/td&gt;  &lt;/tr&gt;  &lt;tr&gt;   &lt;td&gt;6&lt;/td&gt;   &lt;td&gt;ಲಂಗಾ ದಾವನ್ಯಾಗ ಮಸ್ತ್&zwnj; ಕಾಣತಿ ಲಾವಣ್ಯ&lt;/td&gt;   &lt;td&gt;19 ಕೋಟಿ 10 ಲಕ್ಷ&lt;/td&gt;  &lt;/tr&gt;  &lt;tr&gt;   &lt;td&gt;7&lt;/td&gt;   &lt;td&gt;ಚುಟು ಚುಟು ಅಂತೈತಿ&lt;/td&gt;   &lt;td&gt;18 ಕೋಟಿ 90 ಲಕ್ಷ&lt;/td&gt;  &lt;/tr&gt;  &lt;tr&gt;   &lt;td&gt;8&lt;/td&gt;   &lt;td&gt;ಮೂರೇ ಮೂರು ಪೆಗ್ಗಿಗೆ&lt;/td&gt;   &lt;td&gt;18 ಕೋಟಿ 60 ಲಕ್ಷ&lt;/td&gt;  &lt;/tr&gt;  &lt;tr&gt;   &lt;td&gt;9&lt;/td&gt;   &lt;td&gt;ಕಣ್ಣು ಹೊಡಿಯಾಕಾ&lt;/td&gt;   &lt;td&gt;18 ಕೋಟಿ, 20 ಲಕ್ಷ&lt;/td&gt;  &lt;/tr&gt;  &lt;tr&gt;   &lt;td&gt;10&lt;/td&gt;   &lt;td&gt;ಕುಣೀತಾಳೋ ಕುಣೀತಾಳ&lt;/td&gt;   &lt;td&gt;18 ಕೋಟಿ 10 ಲಕ್ಷ&lt;/td&gt;  &lt;/tr&gt; &lt;/tbody&gt;&lt;/table&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/most-viewed-kannada-youtube-song-karabu-dhruva-sarja-top-10-list-san/articleshow-wkcg9kc"/>
        </item>
        <item>
            <title><![CDATA[ರವಿಚಂದ್ರನ್​ ಮೇಲೆ ರೇ*ಪ್​ ಆರೋಪ: 34 ವರ್ಷಗಳ ಬಳಿಕ 'ಹಳ್ಳಿಮೇಷ್ಟ್ರು' ಬೆಡಗಿ ಬಿಂದಿಯಾ ಹೇಳಿದ್ದೇನು]]></title>
            <link>https://kannada.asianetnews.com/gallery/sandalwood/halli-mestru-movie-heroine-bindiya-who-accused-ravichandran-now-asking-sorry-suc-1tnnmge</link>
            <guid isPermaLink="true">https://kannada.asianetnews.com/gallery/sandalwood/halli-mestru-movie-heroine-bindiya-who-accused-ravichandran-now-asking-sorry-suc-1tnnmge</guid>
            <pubDate>Fri, 29 May 2026 14:17:49 +0530</pubDate>
            <description><![CDATA['ಹಳ್ಳಿಮೇಷ್ಟ್ರು' ಚಿತ್ರದ ನಾಯಕಿ ಬಿಂದಿಯಾ, ನಟ ರವಿಚಂದ್ರನ್ ಮೇಲೆ ಗಂಭೀರ ಆರೋಪ ಮಾಡಿದ್ದರು, ಇದು ಮಾನನಷ್ಟ ಮೊಕದ್ದಮೆಗೆ ಕಾರಣವಾಗಿತ್ತು. ಇದೀಗ 34 ವರ್ಷಗಳ ನಂತರ, ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿದ್ದವು ಎಂದು ಹೇಳಿ, ಬಿಂದಿಯಾ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kssefaw5xzee47dqcngfdjmy,imgname-halli-mestru-1780044245893.jpg" type="image/jpeg" height="390" width="690"/>
            <content:encoded><![CDATA['ಹಳ್ಳಿಮೇಷ್ಟ್ರು' ಚಿತ್ರದ ನಾಯಕಿ ಬಿಂದಿಯಾ, ನಟ ರವಿಚಂದ್ರನ್ ಮೇಲೆ ಗಂಭೀರ ಆರೋಪ ಮಾಡಿದ್ದರು, ಇದು ಮಾನನಷ್ಟ ಮೊಕದ್ದಮೆಗೆ ಕಾರಣವಾಗಿತ್ತು. ಇದೀಗ 34 ವರ್ಷಗಳ ನಂತರ, ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿದ್ದವು ಎಂದು ಹೇಳಿ, ಬಿಂದಿಯಾ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.&lt;img&gt;&lt;p&gt;ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಜೊತೆ 1992ರಲ್ಲಿ ಬಿಡುಗಡೆಯಾದ ಹಳ್ಳಿಮೇಷ್ಟ್ರು ಚಿತ್ರದಲ್ಲಿ ಮಿಂಚಿದ್ದ ಬಿಂದಿಯಾ ಉರ್ಫ್​ ಫರ್ಹೀನ್ ಬಾಲಿವುಡ್, ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದರು. ಮಾಧುರಿ ದೀಕ್ಷಿತ್ ಅವರನ್ನು ಹೋಲುವ ಅವರ ಗಮನಾರ್ಹ ಲುಕ್ಕು ಅಪಾರ ಅಭಿಮಾನಿಗಳನ್ನು ಗಳಿಸುವಂತೆ ಮಾಡಿತು. ಅವರ ಮೊದಲ ಚಿತ್ರದ ನಂತರ, ಫರ್ಹೀನ್ ಜನಪ್ರಿಯತೆ ಗಳಿಸಿದರು ಮತ್ತು ಮಾಧ್ಯಮಗಳಲ್ಲಿ 'ಮಾಧುರಿ ದೀಕ್ಷಿತ್ ಅವರ ನಂ.2' ಆಗಿದ್ದರು. ಅಂಥ ಬಿಂದಿಯಾ ರವಿಚಂದ್ರನ್​ ಅವರ ಮೇಲೆಯೇ ರೇ*ಪ್ ಕೇಸ್​ ಆರೋಪ ಮಾಡಿಬಿಟ್ಟಿದ್ದರು. ​&lt;/p&gt;&lt;img&gt;&lt;p&gt;ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಪರಿಮಳಾ ಪಾತ್ರದಲ್ಲಿ ಹೀರೋಯಿನ್​ ಆಗಿದ್ದ ಬಿಂದಿಯಾ, ಈ ಚಿತ್ರದಿಂದ ರಾತ್ರೋರಾತ್ರಿ ದಕ್ಷಿಣದಲ್ಲಿಯೂ ಸ್ಟಾರ್​ ಆದರು. ಈ ಚಿತ್ರ ಸಕತ್​ ಹಿಟ್​ ಆಗಿತ್ತು. ತಮಿಳಿನಲ್ಲಿಯೂ ಡಬ್​ ಆದ ಚಿತ್ರವಿದು. ಆದರೆ, ಈ ಸಮಯದಲ್ಲಿಯೇ ಬಿಂದಿಯಾ ರವಿಚಂದ್ರನ್​ ತಮ್ಮ ಮೇಲೆ ಅತ್ಯಾ*ಚಾರ ಮಾಡಲು ಟ್ರೈಮಾಡಿದ್ರು ಎಂದು ಹೇಳಿ ಹಲ್​ಚಲ್​ ಸೃಷ್ಟಿಸಿದ್ದರು.&lt;/p&gt;&lt;img&gt;&lt;p&gt;ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ರೀತಿ ಹೇಳಿದ್ದ ನಟಿಯ ಮಾತಿಗೆ ರವಿಚಂದ್ರನ್​ ಶಾಕ್​ ಆಗಿಹೋಗಿದ್ದರು. ಇದೇ ಕಾರಣಕ್ಕೆ ಅವರು ನಟಿಯ ವಿರುದ್ಧ ಕೇಸ್​​ ಹಾಕಿದ್ದರು. ತಮ್ಮ ಮೇಲೆ ಮಾಡಿರುವ ಆರೋಪವನ್ನ ಸಾಬೀತು ಪಡಿಸುವಂತೆ ಸವಾಲು ಹಾಕಿ ಬಿಂದಿಯಾ ವಿರುದ್ಧ ರವಿಚಂದ್ರನ್&zwnj; ಒಂದು ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹಾಕಿದ್ದು ಆಗ ಭಾರಿ ಸದ್ದು ಮಾಡಿತ್ತು. ಆಗ ನಟಿ ವಿಚಾರಣೆ ವೇಳೆ ನಾನು ಹೇಳಿದ್ದೇ ಬೇರೆ, ಮಾಧ್ಯಮಗಳಲ್ಲಿ ಬಂದಿದ್ದೆ ಬೇರೆ, ನನ್ನ ಮೇಲೆ ಹೀಗೆಲ್ಲಾ ನಟ ಮಾಡಿಲ್ಲ ಎಂದಿದ್ದರು. ಆ ವಿಷ್ಯ ಆಮೇಲೆ ಅಲ್ಲಿಗೇ ತಣ್ಣಗಾಗಿತ್ತು.&lt;/p&gt;&lt;img&gt;&lt;p&gt;ಘಟನೆ ನಡೆದು ಈಗ 34 ವರ್ಷವಾಗಿದೆ. ಇದೀಗ ಮತ್ತೊಮ್ಮೆ ನಟಿ ಬಿಂದಿಯಾ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. ತಾವು ಅಂದು ಮಾಡಿದ್ದು ತಪ್ಪು ಎಂದು ನಟ, ನಿರ್ದೇಶಕ ರಘುರಾಮ್&zwnj; ಅವರ ಯೂಟ್ಯೂಬ್&zwnj; ಚಾನೆಲ್&zwnj;ನಲ್ಲಿ ಕಣ್ಣೀರು ಹಾಕಿದ್ದಾರೆ ಬಿಂದಿಯಾ. ನಾನು &lsquo;&lsquo;ಜಾನ್ ತೇರೆ ನಾಮ್&rsquo; ಸಿನಿಮಾದಲ್ಲಿ ನಟಿಸಿದ್ದೆ. ಅದು ಸೂಪರ್​ ಹಿಟ್​ ಅಗಿತ್ತು. ಆಗ ರವಿ ಸರ್&zwnj; ಬಾಂಬೆಯಲ್ಲಿದ್ದರು. &lsquo;ಹಳ್ಳಿಮೇಷ್ಟ್ರು&rsquo; ಸಿನಿಮಾಗೆ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ನನ್ನನ್ನು ಆಯ್ಕೆ ಮಾಡಲಾಗಿತ್ತು ಎನ್ನುತ್ತ, ರೇ*ಪ್ ಬಗ್ಗೆ ನಾನು ಹೇಳಲಿಲ್ಲ. ನಾನು ಹೇಳಿದ್ದೇ ಒಂದು, ಅವರು ಬರೆದದ್ದೇ ಇನ್ನೊಂದು ಎಂದು ಕ್ಷಮೆ ಕೋರಿ ಕಣ್ಣೀರಾಗಿದ್ದಾರೆ.&lt;/p&gt;&lt;img&gt;&lt;p&gt;ನನ್ನ ಹೇಳಿಕೆಯನ್ನ ಮ್ಯಾಗಝೀನ್&zwnj;ನವರು ತಿರುಚಿದ್ದರು. ಇದರಿಂದ ರವಿ ಸರ್&zwnj;ಗೆ ಬಂದ ಇಂಪ್ರೆಷನ್ ಸಹ ಕೆಟ್ಟದಾಗಿತ್ತು. ಇದು ನನ್ನ ತಪ್ಪು ಖಂಡಿತ ಅಲ್ಲ.. ರವಿಚಂದ್ರನ್ ಸರ್ ಬಗ್ಗೆ ನಾನು ಯಾವುದೇ ರೀತಿಯ ತಪ್ಪು ಹೇಳಿಕೆ ನೀಡಿರಲಿಲ್ಲ. ಐ ಆಮ್ ಸಾರಿ ಎಲ್ಲರಿಗೂ&rsquo;&rsquo; ಎಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಫರ್ಹೀನ್ 90 ರ ದಶಕದ ಅನೇಕ ಪ್ರಮುಖ ನಾಯಕರೊಂದಿಗೆ ಕೆಲಸ ಮಾಡಿದರು, ಉದಾಹರಣೆಗೆ ದಿಲ್ ಕಿ ಬಾಜಿ, ಸೈನಿಕ್ ಮತ್ತು ನಜರ್ ಕೆ ಸಾಮ್ನೆ, ತಹ್ಕಿಕಾತ್&zwnj;ನಲ್ಲಿ ಜೀತೇಂದ್ರ, ಜಾನ್ ಸೆ ಪ್ಯಾರಾದಲ್ಲಿ ಗೋವಿಂದ ಮತ್ತು ಇತರ ಅನೇಕರು. ಬಾಲಿವುಡ್&zwnj;ನಲ್ಲಿ ಮಾತ್ರವಲ್ಲದೆ, ಫರ್ಹೀನ್ ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದರು. 17 ಚಿತ್ರಗಳ ನಂತರ, ಫರ್ಹೀನ್ ನಟನೆಯನ್ನು ತೊರೆದು ಭಾರತೀಯ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ವಿವಾಹವಾದರು. ತನ್ನ ಪತಿ ಮತ್ತು ಮಕ್ಕಳಿಗಾಗಿ ತನ್ನ ಸಮಯವನ್ನು ಮೀಸಲಿಡಲು ಗ್ಲಾಮರ್ ಜಗತ್ತನ್ನು ತೊರೆಯಲು ನಿರ್ಧರಿಸಿದಾಗ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/halli-mestru-movie-heroine-bindiya-who-accused-ravichandran-now-asking-sorry-suc-1tnnmge"/>
        </item>
        <item>
            <title><![CDATA[Shocking: ಯಾರಿವನು?.. ಒಂದೇ ಚಿತ್ರದ ಮೂಲಕ ವಿಜಯ್, ಐಶ್ವರ್ಯಾ ರೈ ಹಿಂದಿಕ್ಕಿ ನಂಬರ್ 1ಪಟ್ಟಕ್ಕೇರಿದ ಯುವ ನಟ!]]></title>
            <link>https://kannada.asianetnews.com/gallery/cine-world/yudhvir-ahlawat-has-topped-the-imdb-popular-indian-celebrities-list-surpassing-legendary-stars-like-thalapathy-vijay-57rk608</link>
            <guid isPermaLink="true">https://kannada.asianetnews.com/gallery/cine-world/yudhvir-ahlawat-has-topped-the-imdb-popular-indian-celebrities-list-surpassing-legendary-stars-like-thalapathy-vijay-57rk608</guid>
            <pubDate>Fri, 29 May 2026 10:29:59 +0530</pubDate>
            <description><![CDATA[&lt;p&gt;ದಶಕಗಳಿಂದ ಚಿತ್ರರಂಗ ಆಳುತ್ತಿರುವ ದಳಪತಿ ವಿಜಯ್, ಬಾಲಿವುಡ್ ಬಾದ್&zwnj;ಶಾ ಶಾರುಖ್ ಖಾನ್ ಮತ್ತು ಜೂನಿಯರ್ ಎನ್&zwnj;ಟಿಆರ್&zwnj;ರಂತಹ ಘಟಾನುಘಟಿ ನಟರನ್ನೇ ಹಿಂದಿಕ್ಕಿ ಒಬ್ಬ ಹೊಸ ನಟ ನಂಬರ್ 1 ಪಟ್ಟಕ್ಕೇರಿದ್ದಾನೆ ಅಂದ್ರೆ ನೀವು ನಂಬಲೇಬೇಕು! ಯಾರವನು ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kss0wezm0jsfhreerzyxjejk,imgname-yudhvir-ahlawat-1780029996020.jpg" type="image/jpeg" height="390" width="690"/>
            <content:encoded><![CDATA[&lt;p&gt;ದಶಕಗಳಿಂದ ಚಿತ್ರರಂಗ ಆಳುತ್ತಿರುವ ದಳಪತಿ ವಿಜಯ್, ಬಾಲಿವುಡ್ ಬಾದ್&zwnj;ಶಾ ಶಾರುಖ್ ಖಾನ್ ಮತ್ತು ಜೂನಿಯರ್ ಎನ್&zwnj;ಟಿಆರ್&zwnj;ರಂತಹ ಘಟಾನುಘಟಿ ನಟರನ್ನೇ ಹಿಂದಿಕ್ಕಿ ಒಬ್ಬ ಹೊಸ ನಟ ನಂಬರ್ 1 ಪಟ್ಟಕ್ಕೇರಿದ್ದಾನೆ ಅಂದ್ರೆ ನೀವು ನಂಬಲೇಬೇಕು! ಯಾರವನು ನೋಡಿ..&lt;/p&gt;&lt;img&gt;&lt;p&gt;ದಳಪತಿ ವಿಜಯ್, ಶಾರುಖ್&zwnj;ಗೇ ಟಕ್ಕರ್ ಕೊಟ್ಟ 'ಹೂವಿನಂತ' ಪೋರ! ಕೇವಲ ಒಂದು ಚಿತ್ರದಿಂದ ಇಂಟರ್ನೆಟ್ ಶೇಕ್ ಮಾಡಿದ ಈ ಹೊಸ ಬಾಸ್ ಯಾರು ಗೊತ್ತಾ?&lt;/p&gt;&lt;img&gt;&lt;p&gt;ಸಿನಿಮಾ ಜಗತ್ತು ಅಂದ್ರೆ ಹಾಗೇನೆ, ಇಲ್ಲಿ ಯಾವಾಗ ಯಾರ ಅದೃಷ್ಟ ಖುಲಾಯಿಸುತ್ತೆ ಅಂತ ಹೇಳೋಕೆ ಆಗಲ್ಲ. ರಾತ್ರೋರಾತ್ರಿ ಸ್ಟಾರ್ ಆದವರು ಇಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ಆದರೆ, ದಶಕಗಳಿಂದ ಚಿತ್ರರಂಗ ಆಳುತ್ತಿರುವ ದಳಪತಿ ವಿಜಯ್, ಬಾಲಿವುಡ್ ಬಾದ್&zwnj;ಶಾ ಶಾರುಖ್ ಖಾನ್ ಮತ್ತು ಜೂನಿಯರ್ ಎನ್&zwnj;ಟಿಆರ್&zwnj;ರಂತಹ ಘಟಾನುಘಟಿ ನಟರನ್ನೇ ಹಿಂದಿಕ್ಕಿ ಒಬ್ಬ ಹೊಸ ನಟ ನಂಬರ್ 1 ಪಟ್ಟಕ್ಕೇರಿದ್ದಾನೆ ಅಂದ್ರೆ ನೀವು ನಂಬಲೇಬೇಕು!&lt;/p&gt;&lt;img&gt;&lt;p&gt;ಹೌದು, ಈಗ ಇಡೀ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿರುವುದು ಬೇರೆ ಯಾರೂ ಅಲ್ಲ, ಆತನೇ ಯುಧ್ವೀರ್ ಅಹ್ಲಾವತ್ (Yudhvir Ahlawat). ಈ ಹೆಸರು ಕೇಳಿದ ತಕ್ಷಣ ನಿಮಗೆ &quot;ಇವರು ಯಾರಪ್ಪಾ?&quot; ಅನ್ನಿಸಬಹುದು. ಆದರೆ ಇತ್ತೀಚಿನ IMDb (Internet Movie Database) ಪಟ್ಟಿಯಲ್ಲಿ ಇವರು ಮಾಡಿರುವ ಮೋಡಿ ಮಾತ್ರ ಸಾಧಾರಣವಾದದ್ದಲ್ಲ.&lt;/p&gt;&lt;img&gt;&lt;p&gt;ಘಟಾನುಘಟಿಗಳಿಗೇ ಇಲ್ಲಿದೆ ಶಾಕ್!&lt;/p&gt;&lt;p&gt;ಸಾಮಾನ್ಯವಾಗಿ IMDb ಜನಪ್ರಿಯ ನಟರ ಪಟ್ಟಿಯಲ್ಲಿ ಶಾರುಖ್, ಸಲ್ಮಾನ್ ಅಥವಾ ಸೌತ್ ಸೂಪರ್&zwnj;ಸ್ಟಾರ್&zwnj;ಗಳ ಹೆಸರುಗಳು ಅಗ್ರಸ್ಥಾನದಲ್ಲಿರುತ್ತವೆ. ಆದರೆ ಈ ವಾರ ಎಲ್ಲವೂ ಉಲ್ಟಾಪಲ್ಟಾ ಆಗಿದೆ! ನೆಟ್&zwnj;ಫ್ಲಿಕ್ಸ್&zwnj;ನಲ್ಲಿ ಬಿಡುಗಡೆಯಾದ 'ಕರ್ತವ್ಯ' (Sector 36) ಚಿತ್ರದ ಅದ್ಭುತ ನಟನೆಯ ಮೂಲಕ ಯುಧ್ವೀರ್ ಅಹ್ಲಾವತ್ ಈ ವಾರದ &quot;ಅತ್ಯಂತ ಜನಪ್ರಿಯ ಭಾರತೀಯ ಸೆಲೆಬ್ರಿಟಿ&quot; ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.&lt;/p&gt;&lt;img&gt;&lt;p&gt;ಕೇವಲ ಮೊದಲ ಸ್ಥಾನ ಪಡೆಯುವುದಷ್ಟೇ ಅಲ್ಲ, ಇವರು ಹಿಂದಿಕ್ಕಿರೋ ಲಿಸ್ಟ್ ನೋಡಿದರೆ ಅಬ್ಬಾ ಎನ್ನಿಸದೇ ಇರದು. ಈ ಪಟ್ಟಿಯಲ್ಲಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ 3ನೇ ಸ್ಥಾನದಲ್ಲಿದ್ದರೆ, ತಮಿಳುನಾಡಿನ 'ದಳಪತಿ' ವಿಜಯ್ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇನ್ನು ಗ್ಲೋಬಲ್ ಸ್ಟಾರ್ ಜೂನಿಯರ್ ಎನ್&zwnj;ಟಿಆರ್ 24ನೇ ಸ್ಥಾನದಲ್ಲಿದ್ದರೆ, ಬಾಲಿವುಡ್&zwnj;ನ ಕಿಂಗ್ ಖಾನ್ ಶಾರುಖ್ ಮತ್ತು ಆಲಿಯಾ ಭಟ್ ಟಾಪ್ 30 ರಲ್ಲೂ ಕಾಣಿಸಿಕೊಂಡಿಲ್ಲ ಎಂದರೆ ಈ ಯುವ ನಟನ ಕ್ರೇಜ್ ಎಷ್ಟಿರಬಹುದು ಊಹಿಸಿ!&lt;/p&gt;&lt;img&gt;&lt;p&gt;ಯಾರು ಈ ಯುಧ್ವೀರ್ ಅಹ್ಲಾವತ್?&lt;/p&gt;&lt;p&gt;ಹರಿಯಾಣ ಮೂಲದ ಈ ಪ್ರತಿಭಾನ್ವಿತ ನಟ 2019 ರಲ್ಲಿ 'ಸಾಂಡ್ ಕಿ ಆಂಖ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ನಂತರ 'ಲವ್ ಹಾಸ್ಟೆಲ್' ಮತ್ತು 'ಕೋ-ಎಡ್' ವೆಬ್ ಸರಣಿಗಳಲ್ಲಿ ನಟಿಸಿದರೂ, ಅವರಿಗೆ ಅಸಲಿ ಬ್ರೇಕ್ ಸಿಕ್ಕಿದ್ದು ಮಾತ್ರ ಇತ್ತೀಚಿನ 'ಕರ್ತವ್ಯ' ಚಿತ್ರದಿಂದ. ಈ ಸಿನಿಮಾದಲ್ಲಿ ಇವರು 14 ವರ್ಷದ ಬಾಲಕನ ಪಾತ್ರವನ್ನು ಎಷ್ಟು ನೈಜವಾಗಿ ನಿಭಾಯಿಸಿದ್ದಾರೆ ಎಂದರೆ, ಪ್ರೇಕ್ಷಕರು ಇವರ ಬಗ್ಗೆ ಹುಡುಕಾಡಲು ಶುರುಮಾಡಿದ್ದಾರೆ. ಸೈಫ್ ಅಲಿ ಖಾನ್ ಜೊತೆ ನಟಿಸುವಾಗ ಎದೆಗುಂದದೆ ನೀಡಿದ ಪರ್ಫಾರ್ಮೆನ್ಸ್ ಈಗ ಇವರನ್ನು ಇಂಟರ್ನೆಟ್ ಸೆನ್ಸೇಷನ್ ಮಾಡಿದೆ.&lt;/p&gt;&lt;img&gt;&lt;p&gt;ಜನರ ಸರ್ಚ್ ಬೆನ್ನಲ್ಲೇ ಈ ಸಾಧನೆ!&lt;/p&gt;&lt;p&gt;IMDb ತನ್ನ ಪಟ್ಟಿಯನ್ನು ವಾರಕ್ಕೊಮ್ಮೆ ಸಿದ್ಧಪಡಿಸುತ್ತದೆ. ವಿಶ್ವದಾದ್ಯಂತ 250 ಮಿಲಿಯನ್ ಬಳಕೆದಾರರು ಯಾರ ಬಗ್ಗೆ ಹೆಚ್ಚು ಸರ್ಚ್ ಮಾಡಿದ್ದಾರೆ ಮತ್ತು ಯಾರ ಪ್ರೊಫೈಲ್ ಅನ್ನು ಹೆಚ್ಚು ಭೇಟಿ ಮಾಡಿದ್ದಾರೆ ಎಂಬ ಆಧಾರದ ಮೇಲೆ ಈ ಶ್ರೇಯಾಂಕ ನೀಡಲಾಗುತ್ತದೆ. ಯುಧ್ವೀರ್ ಅವರ ನಟನೆಯನ್ನು ಮೆಚ್ಚಿದ ಪ್ರೇಕ್ಷಕರು ಹುಚ್ಚು ಹಿಡಿದವರಂತೆ ಇವರ ಬಗ್ಗೆ ಮಾಹಿತಿ ಹುಡುಕಿದ್ದೇ ಇವರು ಈ ಮಟ್ಟಕ್ಕೆ ಏರಲು ಕಾರಣ.&lt;/p&gt;&lt;p&gt;ಒಟ್ಟಿನಲ್ಲಿ, ದೊಡ್ಡ ಸ್ಟಾರ್&zwnj;ಗಳ ಆರ್ಭಟದ ನಡುವೆ, ಒಬ್ಬ ಹೊಸಬ ತನ್ನ ನಟನಾ ಸಾಮರ್ಥ್ಯದಿಂದ ಇಡೀ ಇಂಡಸ್ಟ್ರಿ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. &quot;ಟ್ಯಾಲೆಂಟ್ ಇದ್ದರೆ ಯಾರನ್ನಾದರೂ ಹಿಂದಿಕ್ಕಬಹುದು&quot; ಅನ್ನೋದಕ್ಕೆ ಯುಧ್ವೀರ್ ಅಹ್ಲಾವತ್ ಸದ್ಯಕ್ಕೆ ಬೆಸ್ಟ್ ಎಕ್ಸಾಂಪಲ್!&lt;/p&gt;&lt;p&gt;ಮುಂದಿನ ದಿನಗಳಲ್ಲಿ ಈ ಯುವ ನಟ ಇನ್ನೂ ಎಂತಹ ಕಮಾಲ್ ಮಾಡಲಿದ್ದಾನೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಮನೆ ಮಾಡಿದೆ. ಬ್ರಾವೋ ಯುಧ್ವೀರ್!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/yudhvir-ahlawat-has-topped-the-imdb-popular-indian-celebrities-list-surpassing-legendary-stars-like-thalapathy-vijay-57rk608"/>
        </item>
        <item>
            <title><![CDATA[ಇಂಟರ್‌ನೆಟ್‌ಗೆ 'ಬೆಂಕಿ' ಹಚ್ಚಿದ ನಟಿ; ಅರ್ಜುನ್ ಕಪೂರ್ ಬಳಿಕ ಸೋರಬ್ ಬೇಡಿ ತೋಳತೆಕ್ಕೆಯಲ್ಲಿ ಮಲೈಕಾ!]]></title>
            <link>https://kannada.asianetnews.com/gallery/cine-world/malaika-arora-is-making-headlines-for-her-romance-with-splitsvilla-fame-sorab-bedi-after-breakup-with-arjun-kapoor-3i3ahge</link>
            <guid isPermaLink="true">https://kannada.asianetnews.com/gallery/cine-world/malaika-arora-is-making-headlines-for-her-romance-with-splitsvilla-fame-sorab-bedi-after-breakup-with-arjun-kapoor-3i3ahge</guid>
            <pubDate>Fri, 29 May 2026 13:43:59 +0530</pubDate>
            <description><![CDATA[&lt;p&gt;ಬಾಲಿವುಡ್&zwnj;ನ 'ಚೈಯಾ ಚೈಯಾ' ಗರ್ಲ್ ಮಲೈಕಾ ಅರೋರಾ ಸುದ್ದಿಯಲ್ಲಿದ್ದಾರೆ ಅಂದರೆ ಅಲ್ಲಿ ಏನೋ ಒಂದು ವಿಶೇಷ ಇದ್ದೇ ಇರುತ್ತದೆ. ಅರ್ಜುನ್ ಕಪೂರ್ ಜೊತೆಗಿನ ಸುದೀರ್ಘ ಸಂಬಂಧಕ್ಕೆ ಬ್ರೇಕಪ್ ಹೇಳಿದ ನಂತರ ಮಲೈಕಾ ವೈಯಕ್ತಿಕ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳುತ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksscgdvj76s4c0kjm8rxmkgg,imgname-malaika-arora--1--1780042184562.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್&zwnj;ನ 'ಚೈಯಾ ಚೈಯಾ' ಗರ್ಲ್ ಮಲೈಕಾ ಅರೋರಾ ಸುದ್ದಿಯಲ್ಲಿದ್ದಾರೆ ಅಂದರೆ ಅಲ್ಲಿ ಏನೋ ಒಂದು ವಿಶೇಷ ಇದ್ದೇ ಇರುತ್ತದೆ. ಅರ್ಜುನ್ ಕಪೂರ್ ಜೊತೆಗಿನ ಸುದೀರ್ಘ ಸಂಬಂಧಕ್ಕೆ ಬ್ರೇಕಪ್ ಹೇಳಿದ ನಂತರ ಮಲೈಕಾ ವೈಯಕ್ತಿಕ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳುತ್ತಿವೆ.&lt;/p&gt;&lt;img&gt;&lt;p&gt;ಅರ್ಜುನ್ ಕಪೂರ್ ನಂತರ ಮಲೈಕಾ ಲೈಫ್&zwnj;ಗೆ ಹೊಸ ಎಂಟ್ರಿ? 'ಸ್ಪ್ಲಿಟ್ಸ್&zwnj;ವಿಲ್ಲಾ' ಫೇಮ್ ಸೋರಬ್ ಬೇಡಿ ಜೊತೆಗಿನ ಮಲೈಕಾ ವಿಡಿಯೋ ವೈರಲ್!&lt;/p&gt;&lt;p&gt;ಬಾಲಿವುಡ್&zwnj;ನ 'ಚೈಯಾ ಚೈಯಾ' ಗರ್ಲ್ ಮಲೈಕಾ ಅರೋರಾ ಸುದ್ದಿಯಲ್ಲಿದ್ದಾರೆ ಅಂದರೆ ಅಲ್ಲಿ ಏನೋ ಒಂದು ವಿಶೇಷ ಇದ್ದೇ ಇರುತ್ತದೆ. ಅರ್ಜುನ್ ಕಪೂರ್ ಜೊತೆಗಿನ ಸುದೀರ್ಘ ಸಂಬಂಧಕ್ಕೆ ಬ್ರೇಕಪ್ ಹೇಳಿದ ನಂತರ ಮಲೈಕಾ ವೈಯಕ್ತಿಕ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳುತ್ತಿವೆ. ಇದೀಗ ಅಂತಹದ್ದೇ ಒಂದು ಬಿಸಿಬಿಸಿ ಸುದ್ದಿ ಬಿಟೌನ್&zwnj;ನಲ್ಲಿ ಹರಿದಾಡುತ್ತಿದ್ದು, ಮಲೈಕಾ ಅರೋರಾ ಅವರ ಹೊಸ ಗೆಳೆಯ ಇವರೇನಾ? ಎಂಬ ಚರ್ಚೆ ಶುರುವಾಗಿದೆ.&lt;/p&gt;&lt;img&gt;&lt;p&gt;ಸೋರಬ್ ಬೇಡಿ ಜೊತೆ ಮಲೈಕಾ ಪ್ರತ್ಯಕ್ಷ!&lt;/p&gt;&lt;p&gt;ಹೌದು, ಇತ್ತೀಚೆಗಷ್ಟೇ ವೈರಲ್ ಆಗಿರುವ ಒಂದು ವಿಡಿಯೋ ಕ್ಲಿಪ್ ಈಗ ಇಂಟರ್ನೆಟ್&zwnj;ನಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋದಲ್ಲಿ ಮಲೈಕಾ ಅರೋರಾ ಅವರು 'ಸ್ಪ್ಲಿಟ್ಸ್&zwnj;ವಿಲ್ಲಾ X6' (Splitsvilla X6) ಖ್ಯಾತಿಯ ಸೋರಬ್ ಬೇಡಿ (Sorab Bedi) ಜೊತೆಗೆ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಒಂದು ಮಿರರ್ ಸೆಲ್ಫಿ ತೆಗೆದುಕೊಳ್ಳುವಾಗ ಇಬ್ಬರೂ ಪರಸ್ಪರ ಹತ್ತಿರವಾಗಿ (Cozy) ನಿಂತಿದ್ದು, ಇದನ್ನು ನೋಡಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಏನಿದು ಹೊಸ ಸಂಬಂಧ?&lt;/p&gt;&lt;p&gt;ಈ ವಿಡಿಯೋ ಕ್ಲಿಪ್ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಕಾಮೆಂಟ್&zwnj;ಗಳ ಸುರಿಮಳೆಗೈಯುತ್ತಿದ್ದಾರೆ. ಕೆಲವರು &quot;ಮಲೈಕಾ ಅವರ ಹೊಸ ಕ್ರಶ್ ಇವರೇ ಇರಬೇಕು&quot; ಎನ್ನುತ್ತಿದ್ದರೆ, ಇನ್ನು ಕೆಲವರು &quot;ಇದು ಕೇವಲ ಸ್ನೇಹವಿರಬಹುದು ಅಥವಾ ಯಾವುದಾದರೂ ಪ್ರಾಜೆಕ್ಟ್&zwnj;ನ ಭಾಗವಾಗಿರಬಹುದು&quot; ಎಂದು ಊಹಿಸುತ್ತಿದ್ದಾರೆ. ಸೋರಬ್ ಬೇಡಿ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸುತ್ತಿರುವ ಯುವ ಪ್ರತಿಭೆ, ಅವರೊಂದಿಗೆ ಮಲೈಕಾ ಇಷ್ಟೊಂದು ಕ್ಲೋಸ್ ಆಗಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.&lt;/p&gt;&lt;img&gt;&lt;p&gt;ಮೌನ ವಹಿಸಿದ ತಾರೆಯರು!&lt;/p&gt;&lt;p&gt;ಸದ್ಯಕ್ಕೆ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಸುದ್ದಿ ಗಾಂಧಿನಗರದಿಂದ ಹಿಡಿದು ಬಾಲಿವುಡ್&zwnj;ವರೆಗೂ ಹಬ್ಬಿದೆ. ಆದರೆ ಈ ಬಗ್ಗೆ ಮಲೈಕಾ ಅರೋರಾ ಆಗಲಿ ಅಥವಾ ಸೋರಬ್ ಬೇಡಿ ಆಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.&amp;nbsp;&lt;/p&gt;&lt;img&gt;&lt;p&gt;ಮಲೈಕಾ ಯಾವಾಗಲೂ ತಮ್ಮ ಜೀವನವನ್ನು ತಮಗೆ ಇಷ್ಟ ಬಂದಂತೆ ಬದುಕುವವರು. ಸದ್ಯಕ್ಕೆ ಈ 'ಮಿರರ್ ಸೆಲ್ಫಿ' ವಿಡಿಯೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್&zwnj;ನಲ್ಲಿದೆ. ಇವರಿಬ್ಬರ ನಡುವೆ ನಿಜವಾಗಿಯೂ ಪ್ರೀತಿ ಮೊಳೆದಿದೆಯೇ ಅಥವಾ ಇದು ಕೇವಲ ಒಂದು ಕ್ಷಣದ ಮೋಜಿನ ವಿಡಿಯೋವೇ ಎಂಬುದು ಕಾಲವೇ ಉತ್ತರಿಸಬೇಕಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಮಲೈಕಾ ಅರೋರಾ ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಮೂಲಕ ಇಡೀ ಇಂಟರ್ನೆಟ್ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/malaika-arora-is-making-headlines-for-her-romance-with-splitsvilla-fame-sorab-bedi-after-breakup-with-arjun-kapoor-3i3ahge"/>
        </item>
        <item>
            <title><![CDATA[‘ಜಗದ್ಧಾತ್ರಿ’ ಗೆ ಕವಿತಾ ಗೌಡ ಫಿಕ್ಸ್! ಹಾಗಿದ್ರೆ ಮೋಕ್ಷಿತಾ ಪೈ ನಾಯಕಿ ಅಲ್ವಾ?]]></title>
            <link>https://kannada.asianetnews.com/gallery/tv-talk/mokshitha-pai-and-kavitha-gowda-acting-in-same-serial-jagaddhatri-2341qoe</link>
            <guid isPermaLink="true">https://kannada.asianetnews.com/gallery/tv-talk/mokshitha-pai-and-kavitha-gowda-acting-in-same-serial-jagaddhatri-2341qoe</guid>
            <pubDate>Thu, 28 May 2026 18:09:29 +0530</pubDate>
            <description><![CDATA[&lt;p&gt;ಶೀಘ್ರದಲ್ಲೇ ಶುರುವಾಗಲಿರುವ &lsquo;ಜಗದ್ಧಾತ್ರಿ&rsquo; ಧಾರಾವಾಹಿಯಲ್ಲಿ ಕವಿತಾ ಗೌಡ ನಟಿಸುತ್ತಿರುವುದು ಫೈನಲ್ ಆಗಿದೆ. ಆದರೆ ಈಗಾಗಲೇ ಎಲ್ಲೆಡೆ ವೈರಲ್ ಆಗಿರುವಂತೆ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸುತ್ತಿಲ್ಲವೇ? ಎನ್ನುವ ಮಾತು ಕೇಳಿ ಬರುತ್ತಿದೆ. ವೈರಲ್ ಸುದ್ದಿಯಲ್ಲಿ ಏನಿದೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksq9d9a7nwka723nbqvzjry5,imgname-kavitha--mokshitha-1779971827014.jpg" type="image/jpeg" height="390" width="690"/>
            <content:encoded><![CDATA[&lt;p&gt;ಶೀಘ್ರದಲ್ಲೇ ಶುರುವಾಗಲಿರುವ &lsquo;ಜಗದ್ಧಾತ್ರಿ&rsquo; ಧಾರಾವಾಹಿಯಲ್ಲಿ ಕವಿತಾ ಗೌಡ ನಟಿಸುತ್ತಿರುವುದು ಫೈನಲ್ ಆಗಿದೆ. ಆದರೆ ಈಗಾಗಲೇ ಎಲ್ಲೆಡೆ ವೈರಲ್ ಆಗಿರುವಂತೆ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸುತ್ತಿಲ್ಲವೇ? ಎನ್ನುವ ಮಾತು ಕೇಳಿ ಬರುತ್ತಿದೆ. ವೈರಲ್ ಸುದ್ದಿಯಲ್ಲಿ ಏನಿದೆ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಶುರುವಾಗಲಿರುವ, ಈಗಾಗಲೇ ಪ್ರೊಮೋ ಮೂಲಕ ಸದ್ದು ಮಾಡುತ್ತಿರುವ &lsquo;ಜಗದ್ಧಾತ್ರಿ ಧಾರಾವಾಹಿಯಲ್ಲಿ, &rsquo;ಲಕ್ಷ್ಮೀ ಬಾರಮ್ಮ&rsquo; ಖ್ಯಾತಿಯ ನಟಿ ಕವಿತಾ ಗೌಡ ನಟಿಸುತ್ತಿರುವುದು ಪಕ್ಕಾ ಆಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕವಿತಾ ಗೌಡ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಮನೆಮಾತಾಗಿದ್ದರು. ವಿದ್ಯಾ ವಿನಾಯಕದ ಮೂಲಕ ಜನಕ್ಕೆ ಮತ್ತಷ್ಟು ಹತ್ತಿರವಾದರು. ಧಾರಾವಾಹಿಗಳಲ್ಲಿ ಗೆಸ್ಟ್ ಎಪಿಯರೆನ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಮಗುವಾದ ಬಳಿಕ ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಕವಿತಾ ಗೌಡ 2024ರ ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಿಗೆ ತಾಯಿಯಾದರು. ಆದಾದ ಬಳಿಕ ಮಗುವಿನ ಲಾಲನೆ ಪಾಲನೆಯಲ್ಲಿಯೇ ನಟಿ ಬ್ಯುಸಿಯಾಗಿದ್ದರು. ಮಗುವಿಗೆ ಈಗ ಒಂದೂವರೆ ವರ್ಷ ಕಳೆದಿದ್ದು, ಕವಿತಾ ಗೌಡ ಮತ್ತೆ ಕಿರುತೆರೆಗೆ ಜಗದ್ಧಾತ್ರಿ ಧಾರಾವಾಹಿ ಮೂಲಕ ಎಂಟ್ರಿ ಕೊಡಲಿದ್ದಾರೆ.&lt;/p&gt;&lt;img&gt;&lt;p&gt;ಕವಿತಾ ಗೌಡ &lsquo;ಜಗದ್ಧಾತ್ರಿ&rsquo; ಧಾರಾವಾಹಿಯಲ್ಲಿ ನಟಿಸುತ್ತಿರುವ ಪಕಕ್ಕಾ ಆಗಿದೆ. ಆದರೆ ಈ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ನಟಿಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಹಾಗಿದ್ರೆ ಧಾರಾವಾಹಿಯಲ್ಲಿ ಇಬ್ಬರು ನಾಯಕಿಯರೇ ಎನ್ನುವ ಗೊಂದಲ ವೀಕ್ಷಕರಲ್ಲಿ ಶುರುವಾಗಿದೆ.&lt;/p&gt;&lt;img&gt;&lt;p&gt;ಈಗಾಗಲೇ &lsquo;ಜಗದ್ಧಾತ್ರಿ&rsquo; ಪ್ರೊಮೋ ರಿಲೀಸ್ ಆಗಿದೆ. ಆದರೆ ಪ್ರೊಮೋದಲ್ಲಿ ನಾಯಕಿಯ ಮುಖವನ್ನು ತೋರಿಸಿಲ್ಲ. ಆದರೆ ವಾಯ್ಸ್ ಕೇಳಿ ಎಲ್ಲರೂ ಇದು ಮೋಕ್ಷಿತಾ ಪೈ ಅವರೇ ಎಂದು ಹೇಳಿದ್ದಾರೆ. ಇದೀಗ ಕವಿತಾ ಗೌಡ ಕೂಡ ಈ ಧಾರಾವಾಹಿಯಲ್ಲಿ ನಟಿಸುವುದನ್ನು ನೋಡಿ ವೀಕ್ಷಕರು ಫುಲ್ ಕನ್ ಫ್ಯೂಸ್ ಆಗಿದ್ದಾರೆ.&lt;/p&gt;&lt;img&gt;&lt;p&gt;ಅಂದ ಹಾಗೇ ಸದ್ಯ ಬಂದಿರುವ ಮಾಹಿತಿ ಪ್ರಕಾರ ಕವಿತಾ ಗೌಡ ಮತ್ತು ಮೋಕ್ಷಿತಾ ಪೈ ಇಬ್ಬರೂ ಕೂಡ &lsquo;ಜಗದ್ಧಾತ್ರಿ&rsquo;ಯಲ್ಲಿ ನಟಿಸುತ್ತಿದ್ದಾರೆ. ಮೋಕ್ಷಿತಾ ನಾಯಕಿಯಾಗಿ ನಟಿಸಿದರೆ, ನಾಯಕನ ಅಕ್ಕನಾಗಿ ಕವಿತಾ ಗೌಡ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಇದು ಸಹ ಧಾರಾವಾಹಿಯಲ್ಲಿ ಅತ್ಯಂತ ಮುಖ್ಯವಾದ ಪಾತ್ರವಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/mokshitha-pai-and-kavitha-gowda-acting-in-same-serial-jagaddhatri-2341qoe"/>
        </item>
        <item>
            <title><![CDATA[Viral Song: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಕಮಾಲ್, 'ಪಿಂಜರ' ಸಾಂಗ್ ರಂಗು, ಇಡೀ ದೇಶಕ್ಕೇ ಕನ್ನಡಿಗನ ಗುಂಗು!]]></title>
            <link>https://kannada.asianetnews.com/cine-world/raj-b-shetty-acts-in-a-guest-appearance-and-a-high-voltage-pimjara-dance-sequence-in-hindi-film-by-anurag-kashyap/articleshow-zo8ahbg</link>
            <guid isPermaLink="true">https://kannada.asianetnews.com/cine-world/raj-b-shetty-acts-in-a-guest-appearance-and-a-high-voltage-pimjara-dance-sequence-in-hindi-film-by-anurag-kashyap/articleshow-zo8ahbg</guid>
            <pubDate>Fri, 29 May 2026 11:14:32 +0530</pubDate>
            <description><![CDATA[&lt;p&gt;ಬಂದರ್ ಚಿತ್ರದ 'ಪಿಂಜಾರ' (Pinjara) ಎಂಬ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಮಿತ್ ತ್ರಿವೇದಿ ಮ್ಯೂಸಿಕ್ ಕಿಕ್ ಮತ್ತು ಸುದೀಪ್ ಶರ್ಮಾ ಬರಹದ ಈ ಹಾಡು ಈಗ ಪ್ರತಿಯೊಬ್ಬರ ಪ್ಲೇಲಿಸ್ಟ್ ಸೇರುತ್ತಿದೆ. ಇದರಲ್ಲಿ ರಾಜ್ ಬಿ ಶೆಟ್ಟಿ ಸ್ಟೆಪ್ಸ್ ಮಿಂಚಿದ್ದಾರೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7r38nqrgcnjnkav0n2q8898,imgname-fffb-1760671586040.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಪ್ರತಿಭಾವಂತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಅವರ ಕ್ರೇಜ್ ಈಗ ಗಡಿ ದಾಟಿದೆ. ಹೌದು, ಬಾಲಿವುಡ್&zwnj;ನ ಖ್ಯಾತ ವಿವಾದಾತ್ಮಕ ಮತ್ತು ಕ್ರೈಮ್ ಕಥೆಗಳ ಮಾಂತ್ರಿಕ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಹಿಂದಿ ಸಿನಿಮಾ 'ಬಂದರ್' (Bandar) ನಲ್ಲಿ ನಮ್ಮ ಹೆಮ್ಮೆಯ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೇವಲ ಅತಿಥಿ ಪಾತ್ರವಷ್ಟೇ ಅಲ್ಲದೆ, ಒಂದು ಹೈ-ವೋಲ್ಟೇಜ್ ಡ್ಯಾನ್ಸ್ ಸೀಕ್ವೆನ್ಸ್ ಮೂಲಕ ಅವರು ಬಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.&lt;/p&gt;&lt;p&gt;&lt;strong&gt;ವೈರಲ್ ಆದ 'ಪಿಂಜಾರ' ಸಾಂಗ್!&lt;/strong&gt;&lt;/p&gt;&lt;p&gt;ಇತ್ತೀಚೆಗಷ್ಟೇ ಈ ಚಿತ್ರದ 'ಪಿಂಜರ' (Pinjara) ಎಂಬ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಮಿತ್ ತ್ರಿವೇದಿ ಅವರ ಮ್ಯೂಸಿಕ್ ಕಿಕ್ ಮತ್ತು ಸುದೀಪ್ ಶರ್ಮಾ ಅವರ ಬರಹವಿರುವ ಈ ಹಾಡು ಈಗ ಪ್ರತಿಯೊಬ್ಬರ ಪ್ಲೇಲಿಸ್ಟ್ ಸೇರುತ್ತಿದೆ. ಅನುರಾಗ್ ಕಶ್ಯಪ್ ಅವರ ಸಿನಿಮಾಗಳಲ್ಲಿ ಸದಾ ಇರುತ್ತಿದ್ದ ಆ ವಿಭಿನ್ನ ಶೈಲಿಯ ಮೇಕಿಂಗ್ ಈ ಹಾಡಿನಲ್ಲೂ ಎದ್ದು ಕಾಣುತ್ತಿದೆ.&lt;/p&gt;&lt;h2&gt;ಬಾಬಿ ಡಿಯೋಲ್ ಅವರ ವಿಭಿನ್ನ ಅವತಾರ!&lt;/h2&gt;&lt;p&gt;ಇನ್ನು ಈ ಚಿತ್ರದಲ್ಲಿ ಬಾಲಿವುಡ್&zwnj;ನ 'ಲಾರ್ಡ್' ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರುವ ಒಬ್ಬ ವಯಸ್ಸಾದ ಟೆಲಿವಿಷನ್ ಸ್ಟಾರ್ ಆಗಿ ಬಾಬಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ಬಹಳ ಸವಾಲಿನಿಂದ ಕೂಡಿದೆ ಎನ್ನಲಾಗುತ್ತಿದೆ. 'ಅನಿಮಲ್' ಚಿತ್ರದ ನಂತರ ಬಾಬಿ ಡಿಯೋಲ್ ಅವರ ಮತ್ತೊಂದು ಕೌತುಕದ ಪಾತ್ರ ಇದಾಗಲಿದೆ.&lt;/p&gt;&lt;h3&gt;ಕ್ರೈಮ್ ಥ್ರಿಲ್ಲರ್&lt;/h3&gt;&lt;p&gt;ಈ ಚಿತ್ರದಲ್ಲಿ ಸನ್ಯಾ ಎಂ, ಸಪ್ನಾ, ಸಬಾ ಆಜಾದ್ ಮತ್ತು ನಿಖಿಲ್ ಡಿ ಅವರಂತಹ ಪ್ರತಿಭಾವಂತ ತಾರಾಗಣವಿದೆ. ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಜೂನ್ 5, 2026 ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಜ್ ಬಿ ಶೆಟ್ಟಿ ಅವರ ವಿಭಿನ್ನ ನಟನೆ ಮತ್ತು ಅನುರಾಗ್ ಕಶ್ಯಪ್ ಅವರ ರಾ ಸ್ಟೈಲ್ ಮೇಕಿಂಗ್ ನೋಡಲು ಈಗಿನಿಂದಲೇ ಸಿನಿರಸಿಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಸ್ಯಾಂಡಲ್&zwnj;ವುಡ್ ನಟರೊಬ್ಬರು ಬಾಲಿವುಡ್&zwnj;ನ ಈ ಮಟ್ಟದ ದೊಡ್ಡ ಪ್ರಾಜೆಕ್ಟ್&zwnj;ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಷಯ!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/raj-b-shetty-acts-in-a-guest-appearance-and-a-high-voltage-pimjara-dance-sequence-in-hindi-film-by-anurag-kashyap/articleshow-zo8ahbg"/>
        </item>
        <item>
            <title><![CDATA[ನಿರ್ದೇಶಕರಾಗಿ ಮೊದಲ ಸಿನಿಮಾ ಮೂಲಕವೇ ಗೆದ್ದ ಕನ್ನಡದ ಸ್ಟಾರ್ ನಟರಿವರು]]></title>
            <link>https://kannada.asianetnews.com/gallery/sandalwood/kannada-star-actors-who-won-in-their-debut-movie-direction-o02y9dh</link>
            <guid isPermaLink="true">https://kannada.asianetnews.com/gallery/sandalwood/kannada-star-actors-who-won-in-their-debut-movie-direction-o02y9dh</guid>
            <pubDate>Fri, 29 May 2026 08:18:03 +0530</pubDate>
            <description><![CDATA[&lt;p&gt;ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಸ್ಟಾರ್ ನಟರಲ್ಲಿ ಹಲವಾರು ಜನ, ನಾಯಕನಾಗಿ ಗೆದ್ದ ಬಳಿಕ, ಸಿನಿಮಾ ನಿರ್ದೇಶನಕ್ಕೆ ಇಳಿದು, ಮೊದಲ ಸಿನಿಮಾ ಮೂಲಕವೇ ಗೆದ್ದಿದ್ದಾರೆ. ಶಂಕರ್ ನಾಗ್ ಅವರಿಂದ ಹಿಡಿದು, ದುನಿಯಾ ವಿಜಯ್ ವರೆಗೂ ಮೊದಲ ಸಿನಿಮಾ ನಿರ್ದೇಶನದ ಮೂಲಕವೇ ಗೆದ್ದ ನಟರಿವರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksrssrgrg13aqs0mbt14stf3,imgname-debut-director-1780022567447.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಸ್ಟಾರ್ ನಟರಲ್ಲಿ ಹಲವಾರು ಜನ, ನಾಯಕನಾಗಿ ಗೆದ್ದ ಬಳಿಕ, ಸಿನಿಮಾ ನಿರ್ದೇಶನಕ್ಕೆ ಇಳಿದು, ಮೊದಲ ಸಿನಿಮಾ ಮೂಲಕವೇ ಗೆದ್ದಿದ್ದಾರೆ. ಶಂಕರ್ ನಾಗ್ ಅವರಿಂದ ಹಿಡಿದು, ದುನಿಯಾ ವಿಜಯ್ ವರೆಗೂ ಮೊದಲ ಸಿನಿಮಾ ನಿರ್ದೇಶನದ ಮೂಲಕವೇ ಗೆದ್ದ ನಟರಿವರು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಂಗಭೂಮಿ ಕಲಾವಿದರಾಗಿರುವ ಶಂಕರ್ ನಾಗ್, ನಾಯಕನಾಗಿ ತಮ್ಮ ನಟನೆಯ ಮೂಲಕ ಭಾರಿ ಪ್ರಮಾಣದಲ್ಲಿ ಜನಮನ್ನಣೆ ಪಡೆದರು. ಬಳಿಕ ಶಂಕರ್ ನಾಗ್ ನಿರ್ದೇಶನಕ್ಕೆ ಕಾಲಿಟ್ಟು 'ಮಿಂಚಿನ&rsquo; ಓಟ ಸಿನಿಮಾ ನಿರ್ದೇಶನ ಮಾಡಿ ಯಶಸ್ಸು ಪಡೆದರು.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದ ಲವರ್ ಬಾಯ್ ಆಗಿದ್ದ ನಟ ವಿ ರವಿಚಂದ್ರನ್. ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ಸಮಯದಲ್ಲಿ ತಾವು ನಟನೆ ಮಾತ್ರವಲ್ಲ್ ನಿರ್ದೇಶನಕ್ಕೂ ಸೈ ಎನ್ನುತ್ತಾ &lsquo;ಪ್ರೇಮಲೋಕ&rsquo; ಸಿನಿಮಾ ನಿರ್ದೇಶನ ಮಾಡಿದರು. ಈ ಸಿನಿ ರಸಿಕರಿಗೆ ಫೇವರಿಟ್ ಫಿಲಂ.&lt;/p&gt;&lt;img&gt;&lt;p&gt;ಕನ್ನಡದ ಎವರ್ ಗ್ರೀನ್ ನಟರಲ್ಲಿ ರಮೇಶ್ ಅರವಿಂದ್ ಒಬ್ಬರು. ತಮ್ಮ ಪ್ರೇಮಕಥೆ, ತ್ಯಾಗರಾಜರಾಗಿ ಗುರುತಿಸಿಕೊಂಡ ರಮೇಶ್, ರಾಮ ಶಾಮ ಭಾಮ ಸಿನಿಮಾ ಮೂಲಕ ನಿರ್ದೇಶಕರಾಗಿ ಜನರು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿ ಗೆದ್ದರು.&lt;/p&gt;&lt;img&gt;&lt;p&gt;ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ರಿಷಬ್ ಶೆಟ್ಟಿ, ಬಳಿಕ &lsquo;ರಿಕ್ಕಿ&rsquo; ಸಿನಿಮ ಮೂಲಕ ನಿರ್ದೇಶನಕ್ಕಿಳಿದು ಗೆದ್ದರು. ನಂತರ ಸಾಲು ಸಾಲು ನಿರ್ದೇಶನ ಮಾಡಿ, ನಿರ್ದೇಶನ ಮಾಡಿದ ಎಲ್ಲಾ ಸಿನಿಮಾ ಸೂಪರ್ ಹಿಟ್ ಆಗಿ ಗೆದ್ದಿತು. ನಟನಾಗಿಯೂ ಯಶಸ್ವಿಯಾದರು.&lt;/p&gt;&lt;img&gt;&lt;p&gt;ರಕ್ಷಿತ್ ಶೆಟ್ಟಿ ಅಂದಿಗೂ ಇಂದಿಗೂ ಸಿನಿಮಾ ಮಾಡೋದ್ರಲ್ಲಿ, ನಟಿಸೋದ್ರಲ್ಲಿ ತುಂಬಾನೆ ಚೂಸಿ. ನಟರಾಗಿ ಮೊದಲ ಎರಡು ಸಿನಿಮಾದಲ್ಲೇ ಗೆದ್ದಿದ್ದರು. ನಿರ್ದೇಶಕರಾಗಿ &lsquo;ಉಳಿದವರು ಕಂಡಂತೆ&rsquo; ಮೂಲಕ ಮೊದಲ ಹೆಜ್ಜೆ ಇಟ್ಟರು. ಆ ಸಿನಿಮಾ ಸೂಪರ್ ಹಿಟ್ ಆಗದಿದ್ದರು, ಒಂದು ಅದ್ಭುತ ಸಿನಿಮಾವಾಗಿ ಇಂದಿಗೂ ಜನ ಅದನ್ನು ಕೊಂಡಾಡುತ್ತಾರೆ.&lt;/p&gt;&lt;img&gt;&lt;p&gt;ಕಿಚ್ಚ ಸುದೀಪ್ ನಟನಾಗಿ ಮೊದಲ ಸಿನಿಮಾದಿಂದಲೇ ಗೆದ್ದಿದ್ದರು. ಆದರೆ ನಿರ್ದೇಶಕರಾಗಿ ಯಶಸ್ವಿಯಾಗುವರೋ ಎನ್ನುವ ಸಂಶಯ ಇತ್ತು. ಆದರೆ, ತಮಿಳಿನ ಮೈ ಆಟೋಗ್ರಾಫ್ ಸಿನಿಮಾವನ್ನು ಕನ್ನಡದಲ್ಲಿ ಸುಂದರವಾಗಿ ಕಟ್ಟಿಕೊಟ್ಟು ಗೆದ್ದಿದ್ದರು ಸುದೀಪ್.&lt;/p&gt;&lt;img&gt;&lt;p&gt;ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಪೋಷಕ ಪಾತ್ರಗಳಿಗೆ ಜೀವ ತುಂಬಿ ನಟಿಸಿ, ಬಳಿಕ ದುನಿಯಾ ಸಿನಿಮಾ ಮೂಲಕ ನಾಯಕನಾಗಿ ಭಡ್ತಿ ಪಡೆದ ನಟ ವಿಜಯ್. ಸ್ಟಾರ್ ನಟನಾಗಿರುವಾಗಲೇ, ಕ್ಯಾಮೆರಾ ಹಿಂದೆ ನಿಂತು &lsquo;ಸಲಗ&rsquo; ಸಿನಿಮಾವನ್ನು ನಿರ್ದೇಶಿಸಿ ಗೆದ್ದರು.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/kannada-star-actors-who-won-in-their-debut-movie-direction-o02y9dh"/>
        </item>
        <item>
            <title><![CDATA['ಇಂಟರ್ನೆಟ್ ಸೌಂಡ್ ಮಾಡೋದು ನಿಜ, ಆದರೆ ಅದಕ್ಕೆ ಬುದ್ಧಿವಂತಿಕೆ ಇಲ್ಲ!' ಟ್ರೋಲರ್‌ಗಳಿಗೆ ತಿವಿದ ಮಲೈಕಾ!]]></title>
            <link>https://kannada.asianetnews.com/gallery/cine-world/malaika-arora-says-the-internet-is-loud-but-it-is-not-always-wise-on-dealing-with-online-trolling-3dgz9ow</link>
            <guid isPermaLink="true">https://kannada.asianetnews.com/gallery/cine-world/malaika-arora-says-the-internet-is-loud-but-it-is-not-always-wise-on-dealing-with-online-trolling-3dgz9ow</guid>
            <pubDate>Fri, 29 May 2026 11:50:01 +0530</pubDate>
            <description><![CDATA[&lt;p&gt;&quot;ಇಂಟರ್ನೆಟ್ ದೊಡ್ಡದಾಗಿ ಸದ್ದು ಮಾಡುತ್ತದೆ ನಿಜ, ಆದರೆ ಅದು ಯಾವಾಗಲೂ ಬುದ್ಧಿವಂತಿಕೆಯಿಂದ ಕೂಡಿರುವುದಿಲ್ಲ ಎಂಬುದನ್ನು ನಾನು ನೆನಪಿಟ್ಟುಕೊಳ್ಳುತ್ತೇನೆ. ಸದ್ದು ಮಾಡುವುದಕ್ಕೂ ಮತ್ತು ಜಾಣತನಕ್ಕೂ ದೊಡ್ಡ ವ್ಯತ್ಯಾಸವಿದೆ. ಇನ್ನೇನೋ ಹೇಳಿದ್ದಾರೆ ನೋಡಿ ಗುರೂ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kss5vr4481x52yp3k15dajxz,imgname-malaika-arora-1780035215492.jpg" type="image/jpeg" height="390" width="690"/>
            <content:encoded><![CDATA[&lt;p&gt;&quot;ಇಂಟರ್ನೆಟ್ ದೊಡ್ಡದಾಗಿ ಸದ್ದು ಮಾಡುತ್ತದೆ ನಿಜ, ಆದರೆ ಅದು ಯಾವಾಗಲೂ ಬುದ್ಧಿವಂತಿಕೆಯಿಂದ ಕೂಡಿರುವುದಿಲ್ಲ ಎಂಬುದನ್ನು ನಾನು ನೆನಪಿಟ್ಟುಕೊಳ್ಳುತ್ತೇನೆ. ಸದ್ದು ಮಾಡುವುದಕ್ಕೂ ಮತ್ತು ಜಾಣತನಕ್ಕೂ ದೊಡ್ಡ ವ್ಯತ್ಯಾಸವಿದೆ. ಇನ್ನೇನೋ ಹೇಳಿದ್ದಾರೆ ನೋಡಿ ಗುರೂ..&lt;/p&gt;&lt;img&gt;&lt;p&gt;&quot;ಇಂಟರ್ನೆಟ್ ಸದ್ದು ಮಾಡುತ್ತದೆ ನಿಜ, ಆದರೆ ಅದಕ್ಕೆ ಬುದ್ಧಿವಂತಿಕೆ ಇಲ್ಲ!&quot; ಟ್ರೋಲರ್&zwnj;ಗಳ ಬಾಯಿ ಮುಚ್ಚಿಸಿದ ಬಾಲಿವುಡ್ ಸುಂದರಿ ಮಲೈಕಾ ಅರೋರಾ!&lt;/p&gt;&lt;p&gt;ಬಾಲಿವುಡ್&zwnj;ನ ಫಿಟ್&zwnj;ನೆಸ್ ಫ್ರೀಕ್, ಸ್ಟೈಲ್ ಐಕಾನ್ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿರುವ ನಟಿ. ಅವರ ಫ್ಯಾಷನ್ ಸೆನ್ಸ್ ಆಗಿರಲಿ ಅಥವಾ ಅವರ ವೈಯಕ್ತಿಕ ಜೀವನವೇ ಇರಲಿ, ಸದಾ ಒಂದಲ್ಲ ಒಂದು ಕಾರಣಕ್ಕೆ ಅವರು ಲೈಮ್&zwnj;ಲೈಟ್&zwnj;ನಲ್ಲಿರುತ್ತಾರೆ. ಆದರೆ, ಖ್ಯಾತಿಯ ಜೊತೆಗೆ ಅವರಿಗೆ ಅಂಟಿಕೊಂಡಿರುವುದು ಆನ್&zwnj;ಲೈನ್ ಟ್ರೋಲಿಂಗ್ ಎಂಬ ದೊಡ್ಡ ಪಿಡುಗು. ಈಗ ಇದೇ ಟ್ರೋಲಿಂಗ್ ಹಾಗೂ ಇಂಟರ್ನೆಟ್ ಸಂಸ್ಕೃತಿಯ ಬಗ್ಗೆ ಮಲೈಕಾ ಅರೋರಾ ನೀಡಿರುವ ಒಂದು ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.&lt;/p&gt;&lt;img&gt;&lt;p&gt;ಇಂಟರ್ನೆಟ್ ಎನ್ನುವುದು ಬರಿ ಗದ್ದಲ!&lt;/p&gt;&lt;p&gt;ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರೋಲಿಂಗ್ ಕುರಿತು ಮನಬಿಚ್ಚಿ ಮಾತನಾಡಿರುವ ಮಲೈಕಾ, ತಮಗೆ ಬರುವ ಟೀಕೆಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. &quot;ಇಂಟರ್ನೆಟ್ ದೊಡ್ಡದಾಗಿ ಸದ್ದು ಮಾಡುತ್ತದೆ ನಿಜ, ಆದರೆ ಅದು ಯಾವಾಗಲೂ ಬುದ್ಧಿವಂತಿಕೆಯಿಂದ ಕೂಡಿರುವುದಿಲ್ಲ ಎಂಬುದನ್ನು ನಾನು ನೆನಪಿಟ್ಟುಕೊಳ್ಳುತ್ತೇನೆ.&lt;/p&gt;&lt;img&gt;&lt;p&gt;ಸದ್ದು ಮಾಡುವುದಕ್ಕೂ ಮತ್ತು ಜಾಣತನಕ್ಕೂ ದೊಡ್ಡ ವ್ಯತ್ಯಾಸವಿದೆ. ವರ್ಷಗಳು ಕಳೆದಂತೆ ನನಗೆ ಒಂದು ವಿಷಯ ಮನವರಿಕೆಯಾಗಿದೆ, ಅದೇನೆಂದರೆ ನಿಮ್ಮ ಮನಸ್ಸಿನ ಶಾಂತಿಯನ್ನು ನೀವು ಸಾರ್ವಜನಿಕರ ಅಭಿಪ್ರಾಯಕ್ಕೆ ಬಿಟ್ಟುಕೊಟ್ಟರೆ, ನೀವು ಎಂದಿಗೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ&quot; ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮಾನಸಿಕ ನೆಮ್ಮದಿಗೆ ಲಕ್ಷ್ಮಣ ರೇಖೆ!&lt;/p&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ ಬರುವ ಪ್ರತಿಯೊಂದು ನೆಗೆಟಿವ್ ಕಮೆಂಟ್ ಬಗ್ಗೆ ಮಲೈಕಾ ಈಗ ತಲೆಕೆಡಿಸಿಕೊಳ್ಳುವುದಿಲ್ಲವಂತೆ. ಇದಕ್ಕಾಗಿ ಅವರು ತಮ್ಮದೇ ಆದ ಕೆಲವು ಗಡಿಗಳನ್ನು (Boundaries) ಹಾಕಿಕೊಂಡಿದ್ದಾರೆ. &quot;ನನ್ನ ಬಗ್ಗೆ ಹೇಳಲಾಗುವ ಪ್ರತಿಯೊಂದು ವಿಷಯವನ್ನೂ ನಾನು ಓದುವುದಿಲ್ಲ ಅಥವಾ ಕೇಳಿಸಿಕೊಳ್ಳುವುದಿಲ್ಲ. ಜನರ ಪ್ರತಿಯೊಂದು ಅಭಿಪ್ರಾಯವನ್ನು ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ ನನ್ನ ಕೆಲಸ, ನನ್ನ ಪ್ರೀತಿಪಾತ್ರರು ಮತ್ತು ನನ್ನ ದೈನಂದಿನ ದಿನಚರಿಯತ್ತ ಹೆಚ್ಚು ಗಮನ ಹರಿಸುತ್ತೇನೆ. ಇವುಗಳು ನನ್ನನ್ನು ಮಾನಸಿಕವಾಗಿ ಸದೃಢವಾಗಿಡುತ್ತವೆ&quot; ಎಂದು ತಮ್ಮ ಸಕ್ಸಸ್ ಸೀಕ್ರೆಟ್ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವಯಸ್ಸಿನೊಂದಿಗೆ ಬರುವ ಪರಿಪಕ್ವತೆ!&lt;/p&gt;&lt;p&gt;ಟ್ರೋಲರ್&zwnj;ಗಳ ಕಾಟಕ್ಕೆ ಮೊದಮೊದಲು ಬೇಸರವಾಗುತ್ತಿತ್ತು ಎಂದು ಒಪ್ಪಿಕೊಂಡ ಮಲೈಕಾ, ವಯಸ್ಸಾದಂತೆ ಜೀವನದ ದೃಷ್ಟಿಕೋನ ಬದಲಾಗುತ್ತದೆ ಎಂದಿದ್ದಾರೆ. &quot;ವಯಸ್ಸಾದಂತೆ ನಮಗೆ ಪ್ರಪಂಚವನ್ನು ನೋಡುವ ದೃಷ್ಟಿ ಸಿಗುತ್ತದೆ. ಪ್ರತಿಯೊಂದು ಸಣ್ಣ ಶಬ್ದಕ್ಕೂ ಪ್ರತಿಕ್ರಿಯಿಸುವುದನ್ನು ನಾವು ನಿಲ್ಲಿಸುತ್ತೇವೆ. ಯಾರಾದರೂ ಟೀಕೆ ಮಾಡುತ್ತಿದ್ದಾರೆ ಎಂದರೆ, ಅದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆಯೇ ಹೊರತು ನಮ್ಮನ್ನಲ್ಲ. ನನ್ನ ಸಂತೋಷ ಈಗ ನನ್ನಲ್ಲಿಯೇ ಇದೆ, ಅದನ್ನು ಸಾರ್ವಜನಿಕವಾಗಿ ಚರ್ಚೆಗೆ ಇಡುವ ಅವಶ್ಯಕತೆ ಇಲ್ಲ&quot; ಎಂಬುದು ಮಲೈಕಾ ಅವರ ವಾದ.&lt;/p&gt;&lt;img&gt;&lt;p&gt;ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ನಂತರದ ಮಾತು!&lt;/p&gt;&lt;p&gt;ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಅವರ ಸುದೀರ್ಘ ಸಂಬಂಧಕ್ಕೆ ಇತ್ತೀಚೆಗೆ ತೆರೆಬಿದ್ದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಾಸಿಪ್&zwnj;ಗಳು ಹರಿದಾಡುತ್ತಿದ್ದವು. ಇಂತಹ ಸಮಯದಲ್ಲಿ ಮಲೈಕಾ ನೀಡಿರುವ ಈ ಹೇಳಿಕೆಗಳು, ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಬ್ಬುವ ವದಂತಿಗಳಿಂದ ದೂರವಿರಲು ಬಯಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.&lt;/p&gt;&lt;img&gt;&lt;p&gt;ಕೆಲಸದ ವಿಚಾರಕ್ಕೆ ಬಂದರೆ...&lt;/p&gt;&lt;p&gt;ಇನ್ನು ಮಲೈಕಾ ಅರೋರಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಇತ್ತೀಚೆಗೆ ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಥಮ್ಮಾ' (Thamma) ಚಿತ್ರದ 'ಪಾಯಿಸನ್ ಬೇಬಿ' (Poison Baby) ಎಂಬ ಹಾಡಿನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದರು. ಈ ಹಾಡಿನಲ್ಲಿ ಅವರ ಡ್ಯಾನ್ಸ್ ಸ್ಟೆಪ್ಸ್&zwnj;ಗೆ ಅಭಿಮಾನಿಗಳು ಫಿದಾ ಆಗಿದ್ದರು. ಒಟ್ಟಿನಲ್ಲಿ, ಟ್ರೋಲರ್&zwnj;ಗಳಿಗೆ ತಲೆಕೆಡಿಸಿಕೊಳ್ಳದೆ ಮಲೈಕಾ ತಮ್ಮದೇ ರಾಜಮಾರ್ಗದಲ್ಲಿ ಮುನ್ನುಗ್ಗುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/malaika-arora-says-the-internet-is-loud-but-it-is-not-always-wise-on-dealing-with-online-trolling-3dgz9ow"/>
        </item>
        <item>
            <title><![CDATA[ಅಪ್ಪನ ಕಂಡ್ರೆ ಇಷ್ಟವಿಲ್ಲ, ಆ ದೊಡ್ಡ ಹೀರೋ ನನ್ನ ನಂಬರ್ ತಗೊಂಡ್ರು: ಆಂಕರ್ ಸೌಮ್ಯ ಸ್ಫೋಟಕ ಹೇಳಿಕೆ]]></title>
            <link>https://kannada.asianetnews.com/gallery/entertainment/anchor-sowmya-rao-opens-up-about-tollywood-syndicates-and-personal-struggles-gvd-alrvrte</link>
            <guid isPermaLink="true">https://kannada.asianetnews.com/gallery/entertainment/anchor-sowmya-rao-opens-up-about-tollywood-syndicates-and-personal-struggles-gvd-alrvrte</guid>
            <pubDate>Thu, 28 May 2026 23:43:35 +0530</pubDate>
            <description><![CDATA[&lt;p&gt;ಆಂಕರ್ ಸೌಮ್ಯ ರಾವ್ ಅವರು ಟಾಲಿವುಡ್&zwnj;ನಲ್ಲಿರುವ ಸಿಂಡಿಕೇಟ್ ಮತ್ತು ತಾರತಮ್ಯದ ಬಗ್ಗೆ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ, ಟಾಲಿವುಡ್&zwnj;ನ ದೊಡ್ಡ ಹೀರೋ ಒಬ್ಬರ ಬಗ್ಗೆಯೂ ಅವರು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gj5ap3p3xyc88vsd4rtqjrhq,imgname-sowmya-rao.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಂಕರ್ ಸೌಮ್ಯ ರಾವ್ ಅವರು ಟಾಲಿವುಡ್&zwnj;ನಲ್ಲಿರುವ ಸಿಂಡಿಕೇಟ್ ಮತ್ತು ತಾರತಮ್ಯದ ಬಗ್ಗೆ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ, ಟಾಲಿವುಡ್&zwnj;ನ ದೊಡ್ಡ ಹೀರೋ ಒಬ್ಬರ ಬಗ್ಗೆಯೂ ಅವರು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಟಾಲಿವುಡ್&zwnj;ನ ಸುಂದರ ನಿರೂಪಕಿಯರಲ್ಲಿ ಸೌಮ್ಯ ರಾವ್ ಕೂಡ ಒಬ್ಬರು. ಕನ್ನಡದವರಾದರೂ, 'ಜಬರ್ದಸ್ತ್' ನಂತಹ ಶೋಗಳಿಂದ ತೆಲುಗಿನಲ್ಲಿ ಭಾರಿ ಜನಪ್ರಿಯತೆ ಗಳಿಸಿದರು. ಸೌಮ್ಯ ಕಿರುತೆರೆ ಸೀರಿಯಲ್&zwnj;ಗಳಲ್ಲೂ ನಟಿಸಿದ್ದಾರೆ. ಜಬರ್ದಸ್ತ್&zwnj;ನಿಂದ ಅನಸೂಯಾ ಹೊರನಡೆದ ನಂತರ, ಆ ಅವಕಾಶ ಸೌಮ್ಯ ರಾವ್&zwnj;ಗೆ ಸಿಕ್ಕಿತು. ಈ ಅವಕಾಶವನ್ನು ಅವರು ಚೆನ್ನಾಗಿ ಬಳಸಿಕೊಂಡರು.&lt;/p&gt;&lt;img&gt;&lt;p&gt;ಸೌಮ್ಯ ರಾವ್ ತಮ್ಮ ಗ್ಲಾಮರ್&zwnj;ನಿಂದ ಯುವಕರನ್ನು ಆಕರ್ಷಿಸಿದರು. ಆದರೆ, ಅವರು ಗ್ಲಾಮರ್ ವಿಚಾರದಲ್ಲಿ ಎಂದಿಗೂ ಎಲ್ಲೆ ಮೀರಲಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸೌಮ್ಯ ತಮ್ಮ ವೈಯಕ್ತಿಕ ಜೀವನ ಮತ್ತು ಇಂಡಸ್ಟ್ರಿ ಬಗ್ಗೆ ಮಾತನಾಡಿದ್ದಾರೆ. 'ಇನ್ನೂ ಹೆಚ್ಚು ಅವಕಾಶಗಳು ಸಿಕ್ಕರೆ ತೆಲುಗು ಪ್ರೇಕ್ಷಕರನ್ನು ರಂಜಿಸಬೇಕು ಎಂಬ ಆಸೆ ಇದೆ. ಆದರೆ ಅವಕಾಶಗಳು ಬರುತ್ತಿಲ್ಲ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಹಾಗೆ, ನಮಗೆ ಅವಕಾಶ ಬಂದರೂ ಕೆಲವರು ಅದನ್ನು ತಪ್ಪಿಸುತ್ತಾರೆ' ಎಂದು ಸೌಮ್ಯ ರಾವ್ ಹೇಳಿದರು.&lt;/p&gt;&lt;img&gt;&lt;p&gt;'ಉದಯಭಾನು ಅಕ್ಕ ಹೇಳಿದ ಹಾಗೆ ಇಲ್ಲಿ ದೊಡ್ಡ ಸಿಂಡಿಕೇಟ್ ನಡೆಯುತ್ತಿದೆ' ಎಂದು ಸೌಮ್ಯ ರಾವ್ ಸ್ಫೋಟಕ ಹೇಳಿಕೆ ನೀಡಿದರು. 'ಒಬ್ಬ ದೊಡ್ಡ ಹೀರೋ ನಿಮ್ಮ ಫೋನ್ ನಂಬರ್ ಕೇಳಿ ಪಡೆದರಂತೆ, ನಿಜವೇ?' ಎಂದು ನಿರೂಪಕರು ಕೇಳಿದಾಗ, ಸೌಮ್ಯ ನಾಚಿಕೊಂಡರು. 'ಹೌದು, ನನ್ನ ನಂಬರ್ ತೆಗೆದುಕೊಂಡರು. ಆದರೆ ಅದೆಲ್ಲ ಈಗ ಯಾಕೆ ಹೇಳಿ' ಎಂದರು. 'ಆ ಹೀರೋ ಯಾರೆಂದು ಹೇಳಬಹುದಲ್ಲವೇ?' ಎಂದು ಕೇಳಿದಾಗ, 'ಅವರು ದೊಡ್ಡವರು, ನನಗೆ ಭಯ' ಎಂದು ಸೌಮ್ಯ ರಾವ್ ಕುತೂಹಲಕಾರಿ ಉತ್ತರ ನೀಡಿದರು.&lt;/p&gt;&lt;img&gt;&lt;p&gt;ಸೀರಿಯಲ್&zwnj;ಗಳಲ್ಲಿ ನಟಿಸುವಾಗ ನಾನು ತಾರತಮ್ಯ ಎದುರಿಸಿದ್ದೇನೆ. ನನಗೆ ಹೆಚ್ಚಾಗಿ ಸೆಕೆಂಡ್ ಲೀಡ್ ಮತ್ತು ನೆಗೆಟಿವ್ ಪಾತ್ರಗಳೇ ಬರುತ್ತಿದ್ದವು. ಸೆಕೆಂಡ್ ಲೀಡ್&zwnj;ನಲ್ಲಿ ನಟಿಸಿದರೆ ಯಾರೂ ಅಷ್ಟಾಗಿ ಗಮನಿಸುವುದಿಲ್ಲ. ಜೀವನದಲ್ಲಿ ಇಂತಹ ಪಾತ್ರಗಳನ್ನು ಮಾಡಬಾರದು ಎಂದು ನಾನು ನಿರ್ಧರಿಸಿದೆ. ಅಷ್ಟರಮಟ್ಟಿಗೆ ಅವರು ನನಗೆ ಬೇಸರ ಮೂಡಿಸಿದ್ದರು' ಎಂದು ಸೌಮ್ಯ ರಾವ್ ವಿವರಿಸಿದರು.&lt;/p&gt;&lt;img&gt;&lt;p&gt;ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಸೌಮ್ಯ, 'ನಾನು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವಳು' ಎಂದರು. 'ನಿಮ್ಮ ತಂದೆ ಏನು ಮಾಡುತ್ತಾರೆ?' ಎಂದು ಕೇಳಿದಾಗ, 'ಅವರ ಬಗ್ಗೆ ಮಾತನಾಡುವುದು ನನಗೆ ಇಷ್ಟವಿಲ್ಲ. ಅವರ ಬಗ್ಗೆ ಮಾತನಾಡಿದರೆ ಎಲ್ಲರೂ ನನ್ನನ್ನು ವಿಲನ್ ತರಹ ನೋಡುತ್ತಾರೆ' ಎಂದು ಅವರು ಸ್ಫೋಟಕ ಹೇಳಿಕೆ ನೀಡಿದರು. 'ಒಳ್ಳೆಯ ತಂದೆ ಸಿಗುವುದು ಅದೃಷ್ಟ. ನನಗೆ ಆ ಅದೃಷ್ಟ ಇಲ್ಲ' ಎಂದು ಸೌಮ್ಯ ರಾವ್ ಬೇಸರ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/anchor-sowmya-rao-opens-up-about-tollywood-syndicates-and-personal-struggles-gvd-alrvrte"/>
        </item>
        <item>
            <title><![CDATA[ಕಂಗನಾ ರಣಾವತ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ‘ಅದೃಶ್ಯ ಹೀರೋಗಳು’ ಯಾರು?: ಮೋಶನ್ ಪೋಸ್ಟರ್ ವೈರಲ್]]></title>
            <link>https://kannada.asianetnews.com/entertainment/actress-kangana-ranaut-film-bharat-bhhagya-viddhaata-celebrates-unseen-heroes-gvd/articleshow-z42sodd</link>
            <guid isPermaLink="true">https://kannada.asianetnews.com/entertainment/actress-kangana-ranaut-film-bharat-bhhagya-viddhaata-celebrates-unseen-heroes-gvd/articleshow-z42sodd</guid>
            <pubDate>Thu, 28 May 2026 23:11:16 +0530</pubDate>
            <description><![CDATA[&lt;p&gt;ಕಂಗನಾ ರಣಾವತ್ ಅವರ 'ಭಾರತ್ ಭಾಗ್ಯ ವಿಧಾತಾ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. 'ದಿ ಅನ್&zwnj;ಸೀನ್ ಹೀರೋಸ್' ಅನ್ನೋ ಟೈಟಲ್&zwnj;ನಡಿ, ಸಂಕಷ್ಟದ ಸಮಯದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜವಾಬ್ದಾರಿ ಮೆರೆದ ಆಸ್ಪತ್ರೆ ಸಿಬ್ಬಂದಿಯಂತಹ ಸಾಮಾನ್ಯ ಜನರಿಗೆ ಈ ಚಿತ್ರ ಗೌರವ ಸಲ್ಲಿಸುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksqt1bapfxj9xm1q9q0vhp58,imgname-jvj-1779989261630.png" type="image/jpeg" height="390" width="690"/>
            <content:encoded><![CDATA[&lt;p&gt;ಕಂಗನಾ ರಣಾವತ್ ನಟನೆಯ 'ಭಾರತ್ ಭಾಗ್ಯ ವಿಧಾತಾ' ಚಿತ್ರತಂಡ ಒಂದು ಅದ್ಭುತ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಕಷ್ಟದ ಸಮಯದಲ್ಲಿ ಅಸಾಮಾನ್ಯರಾಗಿ ನಿಂತ ಸಾಮಾನ್ಯ ಜನರಿಗೆ ಈ ಚಿತ್ರ ಗೌರವ ಸಲ್ಲಿಸುತ್ತಿದೆ. 'ದಿ ಅನ್&zwnj;ಸೀನ್ ಹೀರೋಸ್' ಅನ್ನೋ ಶೀರ್ಷಿಕೆಯ ಈ ಪೋಸ್ಟರ್, ನಮ್ಮ ಕಣ್ಣಿಗೆ ಕಾಣದ, ಆದರೆ ನಮ್ಮ ಸುತ್ತಮುತ್ತಲೇ ಇರುವ ಹೀರೋಗಳಿಗೆ ಅರ್ಪಿಸಲಾಗಿದೆ.&lt;/p&gt;&lt;p&gt;&lt;strong&gt;ದೈನಂದಿನ ಶೌರ್ಯಕ್ಕೆ ಗೌರವ&lt;/strong&gt;&lt;/p&gt;&lt;p&gt;ದಾದಿಯರು, ವಾರ್ಡ್ ಬಾಯ್ಸ್, ಕ್ಲೀನರ್&zwnj;ಗಳು, ಲಿಫ್ಟ್ ಆಪರೇಟರ್&zwnj;ಗಳು, ಸೆಕ್ಯುರಿಟಿ ಸಿಬ್ಬಂದಿ ಮತ್ತು ಆಡಳಿತಗಾರರಂತಹ ದೈನಂದಿನ ಹೀರೋಗಳ ಶೌರ್ಯವನ್ನು ಈ ಮೋಷನ್ ಪೋಸ್ಟರ್&zwnj;ನಲ್ಲಿ ಕಟ್ಟಿಕೊಡಲಾಗಿದೆ. &quot;ನಗರವನ್ನು ಭಯ ಆವರಿಸಿದಾಗ, ಈ ಜನರು ತಮ್ಮ ಪ್ರಾಣಕ್ಕಿಂತ ಜವಾಬ್ದಾರಿಗೆ ಹೆಚ್ಚು ಬೆಲೆ ಕೊಟ್ಟರು. ಹೊರಗೆ ಎಷ್ಟೇ ಗೊಂದಲವಿದ್ದರೂ ಆಸ್ಪತ್ರೆಯೊಳಗಿನ ವ್ಯವಸ್ಥೆ ಕುಸಿಯದಂತೆ ನೋಡಿಕೊಂಡರು&quot; ಎಂದು ಚಿತ್ರತಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;&lt;strong&gt;ಚಿತ್ರದ ಬಗ್ಗೆ ಕಂಗನಾ ರಣಾವತ್ ಮಾತು&lt;/strong&gt;&lt;/p&gt;&lt;p&gt;ಈ ಚಿತ್ರದ ಬಗ್ಗೆ ಮಾತನಾಡಿದ ನಟಿ ಕಂಗನಾ ರಣಾವತ್, 'ಭಾರತ್ ಭಾಗ್ಯ ವಿಧಾತಾ' ಚಿತ್ರವು ಕಷ್ಟದ ಸಮಯದಲ್ಲಿ ಮಾನವೀಯತೆ ಮತ್ತು ಸೌಹಾರ್ದತೆಯ ಗುರಾಣಿಯಾಗಿ ನಿಲ್ಲುವ ಅದೃಶ್ಯ ಆತ್ಮಗಳಿಗೆ ಸಲ್ಲಿಸುವ ಗೌರವವಾಗಿದೆ. ವಿಪತ್ತು ಬಂದಾಗ, ನಮ್ಮ ಕಣ್ಣುಗಳು ರಕ್ಷಣೆಗಾಗಿ ಸಮವಸ್ತ್ರಧಾರಿಗಳು ಅಥವಾ ಅಧಿಕಾರಿಗಳತ್ತ ನೋಡುತ್ತವೆ. ಆದರೆ ಈ ಸಿನಿಮಾ ಯಾರೂ ಗಮನಿಸದ ಸಮವಸ್ತ್ರಗಳಿಗೆ, ಅಂದರೆ ರಕ್ತದ ಕಲೆಯಾದ ಏಪ್ರನ್&zwnj;ಗಳು, ಆಸ್ಪತ್ರೆಯ ಸ್ಕ್ರಬ್&zwnj;ಗಳು ಮತ್ತು ಸಾಮಾನ್ಯ ಬಟ್ಟೆಗಳಿಗೆ ಗೌರವ ಸಲ್ಲಿಸುತ್ತದೆ. ನಿಜವಾದ ಧೈರ್ಯಕ್ಕೆ ಯಾವುದೇ ಬ್ಯಾಡ್ಜ್, ಅನುಮತಿ ಅಥವಾ ಪದಕದ ಭರವಸೆ ಬೇಕಿಲ್ಲ. ಈ ಮೋಷನ್ ಪೋಸ್ಟರ್&zwnj;ನ ಪ್ರತಿಯೊಂದು ಫ್ರೇಮ್ ಕೂಡ, ಏನನ್ನೂ ಬಯಸದೆ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಜನರ ಕಣ್ಣುಗಳನ್ನು ನೋಡುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಅವರ ಸತ್ಯವನ್ನು ಜಗತ್ತಿಗೆ ತಲುಪಿಸುವ ಚಿತ್ರದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ&quot; ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ನಿರ್ದೇಶಕರ ದೃಷ್ಟಿಕೋನ: ಮಾನವ ಗುರಾಣಿ&lt;/strong&gt;&lt;/p&gt;&lt;p&gt;ಚಿತ್ರದ ಬರಹಗಾರ ಮತ್ತು ನಿರ್ದೇಶಕ ಮನೋಜ್ ತಪಾಡಿಯಾ ಅವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. &quot;ಒಬ್ಬ ಸಾಮಾನ್ಯ ನಾಗರಿಕನು ಮಾರಣಾಂತಿಕ ಅಪಾಯವನ್ನು ಎದುರಿಸಿದಾಗ, ತನ್ನ ಪ್ರಾಣ ಉಳಿಸಿಕೊಳ್ಳುವ ಸಹಜ ಗುಣವನ್ನು ಬದಿಗಿಟ್ಟು, ಮಾನವ ಗುರಾಣಿಯಾಗಲು ನಿರ್ಧರಿಸುವ ಆ ಒಂದು ಕ್ಷಣವನ್ನು ದಾಖಲಿಸಲು ನಾನು ಬಯಸಿದ್ದೆ. ನರ್ಸ್ ಒಬ್ಬಳು ವಾರ್ಡ್&zwnj;ನ ಬಾಗಿಲನ್ನು ಹಿಡಿದು ನಿಂತಾಗ ಅವಳ ಎದೆಬಡಿತ, ಅಥವಾ ಎಲ್ಲರೂ ಓಡಿಹೋಗುವಾಗ ರೋಗಿಗಳೊಂದಿಗೆ ಉಳಿಯುವ ವಾರ್ಡ್ ಬಾಯ್&zwnj;ನಂತಹ ಸೂಕ್ಷ್ಮ ವಿವರಗಳ ಮೇಲೆ ನಮ್ಮ ಕ್ಯಾಮೆರಾ ಗಮನ ಹರಿಸುತ್ತದೆ. ಈ ಮೋಷನ್ ಪೋಸ್ಟರ್ ಆ ಭಾವನಾತ್ಮಕ ಪ್ರಾಮಾಣಿಕತೆಯ ಭರವಸೆಯನ್ನು ನೀಡುತ್ತದೆ&quot; ಎಂದು ಅವರು ಹೇಳಿದರು.&lt;/p&gt;&lt;p&gt;&lt;strong&gt;ಸಹಾನುಭೂತಿ ಮತ್ತು ಸ್ಥೈರ್ಯದ ಬಗ್ಗೆ ನಿರ್ಮಾಪಕರ ಮಾತು&lt;/strong&gt;&lt;/p&gt;&lt;p&gt;ಪೆನ್ ಸ್ಟುಡಿಯೋಸ್&zwnj;ನ ಪ್ರೆಸೆಂಟರ್ ಮತ್ತು ನಿರ್ಮಾಪಕ ಜಯಂತಿಲಾಲ್ ಗಡಾ ಅವರು, &quot;ನಮ್ಮ ದೇಶವನ್ನು ಒಟ್ಟಿಗೆ ಹಿಡಿದಿಟ್ಟಿರುವುದು ಮಾನವೀಯತೆಗಿಂತ ಮಿಗಿಲಾದ ಸಹಾನುಭೂತಿ. ಸಂಕಷ್ಟದ ಸಮಯದಲ್ಲಿ, ಒಬ್ಬ ಭಾರತೀಯನು ಇನ್ನೊಬ್ಬನನ್ನು ರಕ್ಷಿಸಲು ಸಹಜವಾಗಿ ಮುಂದೆ ಬರುತ್ತಾನೆ. ಆ ಶಕ್ತಿ ಮತ್ತು ಸ್ಥೈರ್ಯವೇ 'ಭಾರತ್ ಭಾಗ್ಯ ವಿಧಾತಾ' ಚಿತ್ರದ ಜೀವಾಳ&quot; ಎಂದು ಹೇಳಿದರು.&lt;/p&gt;&lt;h2&gt;&lt;strong&gt;ತಾರಾಗಣ ಮತ್ತು ಬಿಡುಗಡೆ ವಿವರ&lt;/strong&gt;&lt;/h2&gt;&lt;p&gt;ಕಂಗನಾ ರಣಾವತ್ ಜೊತೆಗೆ ಗಿರಿಜಾ ಓಕ್, ಸ್ಮಿತಾ ತಂಬೆ, ಅಮೃತಾ ನಾಮದೇವ್, ಇಶಾ ಡೇ, ಪ್ರಿಯಾ ಬೆರ್ಡೆ, ಆಶಾ ಶೇಲಾರ್, ಸುಹಿತಾ ಥಟ್ಟೆ, ರಸಿಕಾ ಅಘಾಸೆ, ಆದಿತ್ಯ ಮಿಶ್ರಾ ಮತ್ತು ಜಾಹಿದ್ ಖಾನ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಪೆನ್ ಸ್ಟುಡಿಯೋಸ್&zwnj;ನ ಜಯಂತಿಲಾಲ್ ಗಡಾ ಅರ್ಪಿಸುತ್ತಿರುವ ಈ ಚಿತ್ರವನ್ನು ಪೆನ್ ಸ್ಟುಡಿಯೋಸ್, ಮಣಿಕರ್ಣಿಕಾ ಫಿಲ್ಮ್ಸ್, ಪರಮಹಂಸ ಕ್ರಿಯೇಷನ್ಸ್, ಯುನೊಯಾ ಫಿಲ್ಮ್ಸ್ ಎಲ್&zwnj;ಎಲ್&zwnj;ಪಿ ಮತ್ತು ಫ್ಲೋಟಿಂಗ್ ರಾಕ್ಸ್ ಎಂಟರ್&zwnj;ಟೈನ್&zwnj;ಮೆಂಟ್ ಪ್ರೈ. ಲಿ. ಸಹಯೋಗದಲ್ಲಿ ನಿರ್ಮಿಸಲಾಗಿದೆ. ಮನೋಜ್ ತಪಾಡಿಯಾ ಅವರೇ ಕಥೆ ಬರೆದು ನಿರ್ದೇಶಿಸಿದ್ದಾರೆ. ಪೆನ್ ಮರುಧರ್ ಈ ಚಿತ್ರವನ್ನು ವಿತರಿಸಲಿದ್ದು, ಜೂನ್ 12, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/actress-kangana-ranaut-film-bharat-bhhagya-viddhaata-celebrates-unseen-heroes-gvd/articleshow-z42sodd"/>
        </item>
        <item>
            <title><![CDATA[ಕೋಲ್ಕತ್ತಾದಲ್ಲಿ ದಾದಾ ಹವಾ: ಸೌರವ್ ಗಂಗೂಲಿ ಬಯೋಪಿಕ್ ಶೂಟಿಂಗ್ ಆರಂಭ!]]></title>
            <link>https://kannada.asianetnews.com/news-entertainment/sourav-ganguly-biopic-dada-shooting-starts-kolkata-rajkummar-rao-san/articleshow-zn0xpss</link>
            <guid isPermaLink="true">https://kannada.asianetnews.com/news-entertainment/sourav-ganguly-biopic-dada-shooting-starts-kolkata-rajkummar-rao-san/articleshow-zn0xpss</guid>
            <pubDate>Thu, 28 May 2026 22:21:31 +0530</pubDate>
            <description><![CDATA[&lt;p&gt;ಸೌರವ್ ಗಂಗೂಲಿ ಅವರ ಜೀವನ ಆಧಾರಿತ 'ದಾದಾ' ಸಿನಿಮಾದ ಚಿತ್ರೀಕರಣ ಕೋಲ್ಕತ್ತಾದಲ್ಲಿ ಭರದಿಂದ ಸಾಗುತ್ತಿದೆ. ರಾಜ್&zwnj;ಕುಮಾರ್ ರಾವ್ ಗಂಗೂಲಿ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವು ಗಂಗೂಲಿಯವರ ಕ್ರಿಕೆಟ್ ಪಯಣ ಮತ್ತು ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksqqmq9z47fm2abjm3y04040,imgname-dada-movie-1779986750782.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತ್ತಾ (ಮೇ.28): &lt;/strong&gt;ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಅವರ ಜೀವನ ಆಧಾರಿತ ಸಿನಿಮಾ ಸೆಟ್ಟೇರಿದ್ದು, ಸದ್ಯ ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿ ಭರ್ಜರಿ ಶೂಟಿಂಗ್ ನಡೆಯುತ್ತಿದೆ. &lsquo;ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ&rsquo; (Dada: The Sourav Ganguly Story) ಹೆಸರಿನ ಈ ಹೈ-ಪ್ರೊಫೈಲ್ ಬಯೋಪಿಕ್&zwnj;ನಲ್ಲಿ ಗಂಗೂಲಿ ಪಾತ್ರಕ್ಕೆ ಬಾಲಿವುಡ್&zwnj;ನ ರಾಷ್ಟ್ರಪ್ರಶಸ್ತಿ ವಿಜೇತ ನಟ ರಾಜ್&zwnj;ಕುಮಾರ್ ರಾವ್ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಚಿತ್ರದ ಮುಂಬೈ ಶೆಡ್ಯೂಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಚಿತ್ರತಂಡ ಕೋಲ್ಕತ್ತಾದಲ್ಲಿ 15 ದಿನಗಳ ಸುದೀರ್ಘ ಚಿತ್ರೀಕರಣಕ್ಕಾಗಿ ಬೀಡುಬಿಟ್ಟಿದೆ. ವಿಶೇಷವೆಂದರೆ, ತಮ್ಮ ನಿವಾಸ ಮತ್ತು ಈಡನ್ ಗಾರ್ಡನ್ಸ್&zwnj;ನಲ್ಲಿ ಚಿತ್ರೀಕರಣ ನಡೆಯುವಾಗ ಸೌರವ್ ಗಂಗೂಲಿ ಅವರೇ ಖುದ್ದಾಗಿ ಹಾಜರಿದ್ದು ಚಿತ್ರತಂಡಕ್ಕೆ ಸಲಹೆಗಳನ್ನು ನೀಡಿದ್ದಾರೆ.&lt;/p&gt;&lt;p&gt;ನಟ ರಾಜ್&zwnj;ಕುಮಾರ್ ರಾವ್ ಈ ವಾರದ ಆರಂಭದಲ್ಲೇ ಕೋಲ್ಕತ್ತಾ ತಲುಪಿದ್ದು, ಮೈದಾನದಲ್ಲಿ ಕಠಿಣ ವರ್ಕೌಟ್ ಮುಗಿಸಿ ಶೂಟಿಂಗ್&zwnj;ನಲ್ಲಿ ಭಾಗಿಯಾಗುತ್ತಿದ್ದಾರೆ. ಗಂಗೂಲಿ ಅವರ ಹುಟ್ಟೂರಾದ ಬೆಹಾಲಾದ ಸಣ್ಣ ಗಲ್ಲಿಗಳಿಂದ ಹಿಡಿದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಭಾರತವನ್ನು ಪ್ರತಿನಿಧಿಸುವವರೆಗಿನ ರೋಚಕ ಜರ್ನಿಯನ್ನು ಈ ಸಿನಿಮಾದಲ್ಲಿ ಸೆರೆಹಿಡಿಯಲಾಗುತ್ತಿದೆ.&lt;/p&gt;&lt;p&gt;ಇತ್ತೀಚೆಗೆ ಸೌರವ್ ಗಂಗೂಲಿ ಅವರ ಬೆಹಾಲಾದ ಸ್ವಗೃಹದಲ್ಲೇ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಕೋಲ್ಕತ್ತಾದ ಐತಿಹಾಸಿಕ &lsquo;ಈಸ್ಟ್ ಬೆಂಗಾಲ್ ಕ್ಲಬ್&rsquo; ಮೈದಾನದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಗಂಗೂಲಿ ಅವರು ಆರಂಭಿಕ ದಿನಗಳಲ್ಲಿ &lsquo;ಆರ್ಯನ್ ಕ್ಲಬ್&rsquo; ಪರ ಕ್ರಿಕೆಟ್ ಆಡುತ್ತಿದ್ದ ದಿನಗಳನ್ನು ಇಲ್ಲಿ ಲೈವ್ ಆಗಿ ಮರುಸೃಷ್ಟಿಸಲಾಗಿದೆ. ಇದರೊಂದಿಗೆ ಕೋಲ್ಕತ್ತಾದ ಹೆಮ್ಮೆಯ &lsquo;ಈಡನ್ ಗಾರ್ಡನ್ಸ್&rsquo; ಕ್ರೀಡಾಂಗಣದಲ್ಲೂ ಪ್ರಮುಖ ದೃಶ್ಯಗಳ ಶೂಟಿಂಗ್ ನಡೆದಿದೆ.&lt;/p&gt;&lt;h2&gt;&lt;strong&gt;ಪ್ರೇಮಕಥೆಯೂ ಅನಾವರಣ; ಚಿತ್ರದಲ್ಲಿದೆ ಭರ್ಜರಿ ತಾರಾಬಳಗ!&lt;/strong&gt;&lt;/h2&gt;&lt;p&gt;ಈ ಚಿತ್ರವನ್ನು ಬಾಲಿವುಡ್&zwnj;ನ ಪ್ರತಿಭಾವಂತ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಪ್ರೀತಮ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಸೌರವ್ ಗಂಗೂಲಿ ಅವರ ಪತ್ನಿ ಡೋನಾ ಗಂಗೂಲಿ ಪಾತ್ರದಲ್ಲಿ ನಟಿ ತಾನ್ಯಾ ಮಾಣಿಕ್ತಲ ಕಾಣಿಸಿಕೊಳ್ಳಲಿದ್ದಾರೆ. ಗಂಗೂಲಿ ಅವರ ಕ್ರಿಕೆಟ್ ಬದುಕಿನ ಆಕ್ರಮಣಕಾರಿ ಆಟದ ಜೊತೆಗೆ ಅವರ ವೈಯಕ್ತಿಕ ಜೀವನದ ಸುಂದರ ಪ್ರೇಮಕಥೆಯೂ ಚಿತ್ರದಲ್ಲಿ ಅನಾವರಣಗೊಳ್ಳಲಿದೆ.&lt;/p&gt;&lt;p&gt;ಚಿತ್ರದಲ್ಲಿ ಬಂಗಾಳಿ ಸಂಸ್ಕೃತಿಯ ನೇಟಿವಿಟಿಯನ್ನು ಕಾಪಾಡಿಕೊಳ್ಳಲು ಬಂಗಾಳಿ ಚಿತ್ರರಂಗದ ಪ್ರಮುಖ ನಟರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸೌರವ್ ಅವರ ತಾಯಿ ನಿರುಪಾ ಗಂಗೂಲಿ ಪಾತ್ರದಲ್ಲಿ ಅಪರಾಜಿತಾ ಆಧ್ಯಾ ಹಾಗೂ ತಂದೆ ಚಂಡಿ ಗಂಗೂಲಿ ಪಾತ್ರದಲ್ಲಿ ಹಿರಿಯ ನಟ ಶಾಶ್ವತ ಚಟರ್ಜಿ (ಕಹಾನಿ ಸಿನಿಮಾ ಖ್ಯಾತಿ) ನಟಿಸುತ್ತಿದ್ದಾರೆ. ಮಾಜಿ ಬಿಸಿಸಿಐ (BCCI) ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಅವರ ಲಾರ್ಜರ್ ದ್ಯಾನ್ ಲೈಫ್ ಬಯೋಪಿಕ್ ಸದ್ಯ ಕ್ರಿಕೆಟ್ ಪ್ರೇಮಿಗಳು ಹಾಗೂ ಸಿನಿಮಾ ರಂಗದಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ದಾದಾ ಲಾರ್ಡ್ಸ್ ಮೈದಾನದಲ್ಲಿ ಟೀ ಶರ್ಟ್ ಬಿಚ್ಚಿ ಬೀಸಿದ ಆ ಐತಿಹಾಸಿಕ ಕ್ಷಣ ಬೆಳ್ಳಿತೆರೆಯ ಮೇಲೆ ಹೇಗೆ ಮೂಡಿಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt; Leaked Photos from the Sets of #Dada The #SouravGanguly Biopic stars #RajkummarRao in the Lead role ✅️Produced by #LuvRanjanDirected by Vikramaditya Motwane&amp;nbsp;Can #RajkummarRao recreate the Magic that #SushantSinghRajput delivered in #MSDhoni: The Untold Story?  pic.twitter.com/hXFkL8Ndr0&lt;/p&gt;&lt;p&gt;&mdash; Random Cine Mood (@RandomCineMood) May 28, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/news-entertainment/sourav-ganguly-biopic-dada-shooting-starts-kolkata-rajkummar-rao-san/articleshow-zn0xpss"/>
        </item>
        <item>
            <title><![CDATA[Off Campus: 12 ದಿನದಲ್ಲಿ 36 ಮಿಲಿಯನ್ ವೀಕ್ಷಣೆ: ಈ ಅಡಲ್ಟ್ ವೆಬ್ ಸಿರೀಸ್‌ಗೆ ಜೆನ್‌ ಜಿ ಯುವಜನತೆ ಫಿದಾ!]]></title>
            <link>https://kannada.asianetnews.com/gallery/entertainment/36-million-views-in-12-days-gen-z-youth-are-crazy-about-this-web-series-gvd-zyv69ql</link>
            <guid isPermaLink="true">https://kannada.asianetnews.com/gallery/entertainment/36-million-views-in-12-days-gen-z-youth-are-crazy-about-this-web-series-gvd-zyv69ql</guid>
            <pubDate>Thu, 28 May 2026 21:13:01 +0530</pubDate>
            <description><![CDATA[&lt;p&gt;ಇತ್ತೀಚೆಗೆ ಬಿಡುಗಡೆಯಾದ ವೆಬ್ ಸಿರೀಸ್&zwnj; ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಜೆನ್&zwnj; ಜಿ ಯುವಜನತೆಯನ್ನು ಆಕರ್ಷಿಸುವಂತಹ ಅಡಲ್ಟ್ ಕಂಟೆಂಟ್ ಹೊಂದಿರುವ ಈ ವೆಬ್ ಸಿರೀಸ್ ಬಗ್ಗೆಯೇ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksqk1wdjsgjp3hpwsxhkptt8,imgname-1-1779981939122.png" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ ಬಿಡುಗಡೆಯಾದ ವೆಬ್ ಸಿರೀಸ್&zwnj; ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಜೆನ್&zwnj; ಜಿ ಯುವಜನತೆಯನ್ನು ಆಕರ್ಷಿಸುವಂತಹ ಅಡಲ್ಟ್ ಕಂಟೆಂಟ್ ಹೊಂದಿರುವ ಈ ವೆಬ್ ಸಿರೀಸ್ ಬಗ್ಗೆಯೇ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಓಟಿಟಿಗಳಲ್ಲಿ ಪರಭಾಷೆಯ ಸಿನಿಮಾ ಮತ್ತು ವೆಬ್ ಸಿರೀಸ್&zwnj;ಗಳಿಗೆ ಉತ್ತಮ ಬೇಡಿಕೆ ಇದೆ. ಅದರಲ್ಲೂ ಮಲಯಾಳಂ, ಹಿಂದಿ, ತಮಿಳು ಭಾಷೆಯ ಚಿತ್ರಗಳು ಹಾಗೂ ಸಿರೀಸ್&zwnj;ಗಳನ್ನು ಕನ್ನಡದ ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಾರೆ. ಇತ್ತೀಚೆಗೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ 'ಆಫ್ ಕ್ಯಾಂಪಸ್' (Off Campus) ಎಂಬ ವೆಬ್ ಸಿರೀಸ್ ಜಾಗತಿಕವಾಗಿ ಸಂಚಲನ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ಎಲ್ಲಾ ಬ್ರೈಟ್, ಬೆಲ್ಮಾಂಟ್ ಕ್ಯಾಮೆಲಿ, ಮಿಕಾ ಅಬ್ದಲ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವೆಬ್ ಸಿರೀಸ್ ಕೇವಲ 12 ದಿನಗಳಲ್ಲಿ 36 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿ ಸಂಚಲನ ಮೂಡಿಸಿದೆ. ಭಾರತದಲ್ಲೂ ಈ ಸರಣಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಯುವಜನತೆ ಹೆಚ್ಚಾಗಿ ಈ ಸಿರೀಸ್ ಬಗ್ಗೆಯೇ ಮಾತನಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಈ ವೆಬ್ ಸಿರೀಸ್ ಅನ್ನು ಜೆನ್&zwnj; ಜಿ ಯುವಜನತೆಗಾಗಿಯೇ ರೂಪಿಸಲಾಗಿದೆ. ಇದರಲ್ಲಿ ಸಾಕಷ್ಟು ನ್ಯೂಡಿಟಿ ಮತ್ತು ಇಂಟಿಮೇಟ್ ದೃಶ್ಯಗಳಿವೆ. ಈ ಸರಣಿಯಲ್ಲಿನ 'ಫೇಕ್ ಡೇಟಿಂಗ್' ಕಾನ್ಸೆಪ್ಟ್ ಚೆನ್ನಾಗಿ ವರ್ಕೌಟ್ ಆಗಿದೆ. ಇದರಲ್ಲಿನ ನಾಯಕ-ನಾಯಕಿಯ ಪಾತ್ರಗಳು ಇಂದಿನ ಜೆನ್&zwnj; ಜಿ ಯುವಕರನ್ನು ಪ್ರತಿಬಿಂಬಿಸುವಂತಿವೆ.&lt;/p&gt;&lt;img&gt;&lt;p&gt;ಮೊದಲು ಫೇಕ್ ಡೇಟಿಂಗ್ ಶುರುಮಾಡುವುದು, ನಂತರ ಅದು ಪ್ರೀತಿಯೋ ಅಲ್ಲವೋ ಎಂಬ ಗೊಂದಲಕ್ಕೆ ಒಳಗಾಗುವುದು ಮುಂತಾದ ಅಂಶಗಳು ಈ ಸರಣಿಯಲ್ಲಿವೆ. ಪ್ರಮುಖ ಜೋಡಿಯ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ. ಇದೇ ಕಾರಣಕ್ಕೆ ಜೆನ್&zwnj; ಜಿ ಯುವಜನತೆ ಈ ವೆಬ್ ಸಿರೀಸ್&zwnj;ಗೆ ಮನಸೋತಿದ್ದಾರೆ. ಪ್ರೈಮ್ ವಿಡಿಯೋದಲ್ಲಿ ಈ ವೆಬ್ ಸಿರೀಸ್&zwnj;ನ ತೆಲುಗು ಡಬ್ಬಿಂಗ್ ಆವೃತ್ತಿಯೂ ಲಭ್ಯವಿದೆ.&lt;/p&gt;&lt;img&gt;&lt;p&gt;ಅಮೆಜಾನ್ ಪ್ರೈಮ್&zwnj;ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವೆಬ್ ಸಿರೀಸ್&zwnj;ಗಳ ಪಟ್ಟಿಯಲ್ಲಿ ಇದು ಟಾಪ್ 3 ಸ್ಥಾನದಲ್ಲಿದೆ. 'ಆಫ್ ಕ್ಯಾಂಪಸ್' ಸರಣಿ ಭಾರತದಲ್ಲಿ ಇಷ್ಟೊಂದು ವೈರಲ್ ಆಗಲು ಮತ್ತೊಂದು ಕಾರಣವಿದೆ. ಈ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಿಕಾ ಅಬ್ದಲ್ಲಾ, 90ರ ದಶಕದ ಖ್ಯಾತ ನಟಿ ಮಹಿಮಾ ಚೌಧರಿ ಅವರಂತೆ ಕಾಣುತ್ತಾರೆ ಎಂದು ಅಭಿಮಾನಿಗಳು ಹೋಲಿಕೆ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/36-million-views-in-12-days-gen-z-youth-are-crazy-about-this-web-series-gvd-zyv69ql"/>
        </item>
        <item>
            <title><![CDATA[ಪ್ರಖ್ಯಾತ ರಿಯಾಲಿಟಿ ಶೋ ವಿನ್ನರ್‌ಗೆ ಸ್ತನ ಕ್ಯಾನ್ಸರ್‌, ಆಸ್ಪತ್ರೆಯ ಬೆಡ್‌ನಿಂದಲೇ ಮಾಡಿದ್ರು ವಿಡಿಯೋ..]]></title>
            <link>https://kannada.asianetnews.com/news-entertainment/masterchef-india-winner-pankaj-bhadouria-diagnosed-with-breast-cancer-san/articleshow-rdqc2kd</link>
            <guid isPermaLink="true">https://kannada.asianetnews.com/news-entertainment/masterchef-india-winner-pankaj-bhadouria-diagnosed-with-breast-cancer-san/articleshow-rdqc2kd</guid>
            <pubDate>Thu, 28 May 2026 20:06:12 +0530</pubDate>
            <description><![CDATA['ಮಾಸ್ಟರ್&zwnj;ಚೆಫ್ ಇಂಡಿಯಾ' ಮೊದಲ ಸೀಸನ್ ವಿಜೇತೆ, ಖ್ಯಾತ ಚೆಫ್ ಪಂಕಜ್ ಭದೌರಿಯಾ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಆಸ್ಪತ್ರೆಯಿಂದಲೇ ಈ ಸುದ್ದಿಯನ್ನು ಹಂಚಿಕೊಂಡಿರುವ ಅವರು, ಈ ಕಠಿಣ ಸಮಯದಲ್ಲಿ ತಮ್ಮ ಅಭಿಮಾನಿಗಳ ಪ್ರಾರ್ಥನೆ ಮತ್ತು ಬೆಂಬಲವನ್ನು ಕೋರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksqfzbt8pgmxt6731gdh9hzp,imgname-pankaj-bhadouria-1779978710856.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಮೇ.28):&lt;/strong&gt; &lsquo;ಮಾಸ್ಟರ್&zwnj;ಚೆಫ್ ಇಂಡಿಯಾ&rsquo; ರಿಯಾಲಿಟಿ ಶೋನ ಮೊದಲ ಸೀಸನ್ ವಿಜೇತೆಯಾಗಿ ದೇಶಾದ್ಯಂತ ಮನೆಮಾತಾಗಿದ್ದ ಖ್ಯಾತ ಸೆಲೆಬ್ರಿಟಿ ಚೆಫ್ ಪಂಕಜ್ ಭದೌರಿಯಾ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ಕಹಿ ಸುದ್ದಿಯನ್ನು ಸ್ವತಃ ಪಂಕಜ್ ಅವರೇ ಇಂದು (ಮೇ 28) ತಮ್ಮ ಅಧಿಕೃತ ಸೋಶಿಯಲ್&zwnj; ಮೀಡಿಯಾ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಬೆಡ್&zwnj;ನಿಂದಲೇ ಫೋಟೋ ಮತ್ತು ವಿಡಿಯೋಗಳನ್ನು ಅಪ್&zwnj;ಲೋಡ್ ಮಾಡಿರುವ ಅವರು, ಸದ್ಯ ತಮಗೆ ಅಭಿಮಾನಿಗಳ ಪ್ರಾರ್ಥನೆ ಮತ್ತು ಬೆಂಬಲದ ಅಗತ್ಯವಿದೆ ಎಂದು ಭಾವುಕರಾಗಿ ಕೇಳಿಕೊಂಡಿದ್ದಾರೆ.&lt;/p&gt;&lt;p&gt;ಆಸ್ಪತ್ರೆಯ ಉಡುಪನ್ನು ಧರಿಸಿ, ಕೈಗೆ ಕ್ಯಾನುಲಾ (Cannula) ಮತ್ತು ವೈರ್&zwnj;ಗಳನ್ನು ಅಳವಡಿಸಿಕೊಂಡಿರುವ ಸ್ಥಿತಿಯಲ್ಲಿರುವ ತಮ್ಮ ಫೋಟೋವನ್ನು ಪಂಕಜ್ ಹಂಚಿಕೊಂಡಿದ್ದಾರೆ. ಅದರೊಂದಿಗೆ ಬರೆದುಕೊಂಡಿರುವ ಅವರು, &quot;ನನಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಬೆಂಬಲ ನನಗೆ ಬೇಕಾಗಿದೆ&quot; ಎಂದು ಕೈಮುಗಿಯುವ ಎಮೋಜಿ ಹಾಕಿ ವಿನಂತಿಸಿದ್ದಾರೆ.&lt;/p&gt;&lt;p&gt;ಸರಣಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾದ ಬಳಿಕ ಆಸ್ಪತ್ರೆಯಿಂದಲೇ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಅವರು, &quot;ಸರಣಿ ಪರೀಕ್ಷೆಗಳಿಗಾಗಿ ಹೋಗುತ್ತಿದ್ದೇನೆ... ಇದು ನಿಜಕ್ಕೂ ಸಂತೋಷ ಕೊಡುವ ಜಾಗವಲ್ಲ&quot; ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಬಳಿಕ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡುತ್ತಾ ಮತ್ತೊಂದು ಭಾವುಕ ವಿಡಿಯೋ ಸಂದೇಶ ನೀಡಿರುವ ಪಂಕಜ್, &quot;ನನಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂಬ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನೀವೆಲ್ಲರೂ ನನ್ನ ಕುಟುಂಬದ ಸದಸ್ಯರಂತಿದ್ದೀರಿ. ಅದಕ್ಕಾಗಿಯೇ ಈ ವಿಷಯವನ್ನು ನಾನೇ ವೈಯಕ್ತಿಕವಾಗಿ ನಿಮಗೆ ತಿಳಿಸುತ್ತಿದ್ದೇನೆ. ಈ ಕಠಿಣ ಸಮಯದಲ್ಲಿ ನನಗೆ ನಿಮ್ಮ ಪ್ರಾರ್ಥನೆಯ ಅಗತ್ಯವಿದೆ. ಪ್ರಾರ್ಥನೆಗಳು ಪವಾಡಗಳನ್ನು ಸೃಷ್ಟಿಸಬಲ್ಲವು ಎಂದು ಹೇಳುತ್ತಾರೆ. ದಯವಿಟ್ಟು ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನೆನಪಿಸಿಕೊಳ್ಳಿ&quot; ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಕ ವೃತ್ತಿ ಬಿಟ್ಟು &lsquo;ಮಾಸ್ಟರ್&zwnj;ಚೆಫ್&rsquo; ಮುಕುಟ ಧರಿಸಿದ್ದ ಪಂಕಜ್&lt;/strong&gt;&lt;/h2&gt;&lt;p&gt;2010ರಲ್ಲಿ ಆರಂಭವಾದ ಭಾರತದ ಮೊದಲ &lsquo;ಮಾಸ್ಟರ್&zwnj;ಚೆಫ್ ಇಂಡಿಯಾ&rsquo; ಸೀಸನ್ 1 ರಲ್ಲಿ ವಿಜೇತೆಯಾಗುವ ಮೂಲಕ ಪಂಕಜ್ ಭದೌರಿಯಾ ದೇಶಾದ್ಯಂತ ರಾತ್ರೋರಾತ್ರಿ ಪ್ರಖ್ಯಾತರಾಗಿದ್ದರು. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರು ಈ ಶೋನ ನಿರೂಪಕರಾಗಿದ್ದರು. ಭಾರತದ ಇತಿಹಾಸದಲ್ಲೇ ಅತ್ಯಂತ ಮೊದಲ &lsquo;ಮಾಸ್ಟರ್&zwnj;ಚೆಫ್&rsquo; ಪಟ್ಟ ಗೆದ್ದ ಹೆಗ್ಗಳಿಕೆ ಪಂಕಜ್ ಅವರದ್ದಾಗಿದೆ. ವಿಶೇಷವೆಂದರೆ, ಪಂಕಜ್ ಅವರು ಮೂಲತಃ ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಈ ಅಡುಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವುದಕ್ಕಾಗಿ ಅವರು ತಮ್ಮ 16 ವರ್ಷಗಳ ಸುದೀರ್ಘ ಶಿಕ್ಷಕಿ ವೃತ್ತಿಜೀವನವನ್ನೇ ತ್ಯಜಿಸಿದ್ದರು.&lt;/p&gt;&lt;p&gt;ಪ್ರಸ್ತುತ ಪಂಕಜ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಿಲಿಯನ್&zwnj;ಗಟ್ಟಲೆ ಫಾಲೋವರ್ಸ್&zwnj;ಗಳನ್ನು ಹೊಂದಿದ್ದಾರೆ. ಅವರು ನಿರಂತರವಾಗಿ ಹೊಸ ರೆಸಿಪಿ ವಿಡಿಯೋಗಳು, ಕುಕಿಂಗ್ ಟಿಪ್ಸ್ ಮತ್ತು ಆಹಾರಕ್ಕೆ ಸಂಬಂಧಿಸಿದ ಆಕರ್ಷಕ ಕಂಟೆಂಟ್&zwnj;ಗಳನ್ನು ಹಂಚಿಕೊಳ್ಳುತ್ತಾ ಸದಾ ಸಕ್ರಿಯರಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/news-entertainment/masterchef-india-winner-pankaj-bhadouria-diagnosed-with-breast-cancer-san/articleshow-rdqc2kd"/>
        </item>
        <item>
            <title><![CDATA['ಪೆದ್ದಿ' ಫಸ್ಟ್ ರಿವ್ಯೂ ವೈರಲ್..: ರಾಮ್ ಚರಣ್-ಶಿವಣ್ಣ ಕಾಂಬಿನೇಷನ್ ಹಿಟ್ಟಾ? ಫ್ಲಾಪಾ?]]></title>
            <link>https://kannada.asianetnews.com/gallery/movie-reviews/ram-charan-shivanna-peddi-movie-first-review-out-from-dubai-censor-board-gvd-43hbbxg</link>
            <guid isPermaLink="true">https://kannada.asianetnews.com/gallery/movie-reviews/ram-charan-shivanna-peddi-movie-first-review-out-from-dubai-censor-board-gvd-43hbbxg</guid>
            <pubDate>Thu, 28 May 2026 19:40:39 +0530</pubDate>
            <description><![CDATA[&lt;p&gt;ದುಬೈ ಸೆನ್ಸಾರ್ ವರದಿಯ ಪ್ರಕಾರ, 'ಪೆದ್ದಿ' ಸಿನಿಮಾ ಮೊದಲ ನಿಮಿಷದಿಂದಲೇ ಪ್ರೇಕ್ಷಕರನ್ನು ಕಥೆಯೊಳಗೆ ಹಿಡಿದಿಡುತ್ತದೆ. ಚಿತ್ರದಲ್ಲಿ ಎಲ್ಲೂ ಬೋರ್ ಹೊಡೆಯುವುದಿಲ್ಲ. ಈ ಸಿನಿಮಾ ಖಂಡಿತವಾಗಿಯೂ ಬ್ಲಾಕ್&zwnj;ಬಸ್ಟರ್ ಹಿಟ್ ಆಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxj4t9vt1vry4a86rv761wm,imgname-ch-1779108571451.png" type="image/jpeg" height="390" width="690"/>
            <content:encoded><![CDATA[&lt;p&gt;ದುಬೈ ಸೆನ್ಸಾರ್ ವರದಿಯ ಪ್ರಕಾರ, 'ಪೆದ್ದಿ' ಸಿನಿಮಾ ಮೊದಲ ನಿಮಿಷದಿಂದಲೇ ಪ್ರೇಕ್ಷಕರನ್ನು ಕಥೆಯೊಳಗೆ ಹಿಡಿದಿಡುತ್ತದೆ. ಚಿತ್ರದಲ್ಲಿ ಎಲ್ಲೂ ಬೋರ್ ಹೊಡೆಯುವುದಿಲ್ಲ. ಈ ಸಿನಿಮಾ ಖಂಡಿತವಾಗಿಯೂ ಬ್ಲಾಕ್&zwnj;ಬಸ್ಟರ್ ಹಿಟ್ ಆಗಲಿದೆ.&lt;/p&gt;&lt;img&gt;&lt;p&gt;ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರವು ಜೂನ್ 4 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ನಿರೀಕ್ಷೆಗಳು ಗಗನಕ್ಕೇರುತ್ತಿವೆ. ಈ ಚಿತ್ರಕ್ಕಾಗಿ ರಾಮ್ ಚರಣ್&zwnj;ಗೆ ರಾಷ್ಟ್ರ ಪ್ರಶಸ್ತಿ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಛಾಯಾಗ್ರಾಹಕ ರತ್ನವೇಲು, ನಿರ್ದೇಶಕ ಬುಚ್ಚಿ ಬಾಬು, ಶಿವಣ್ಣ, ಜಗಪತಿ ಬಾಬು ಮತ್ತು ಬೋಮನ್ ಇರಾನಿ ಎಲ್ಲರೂ ಚಿತ್ರವನ್ನು ಹಾಡಿ ಹೊಗಳಿದ್ದಾರೆ.&lt;/p&gt;&lt;img&gt;&lt;p&gt;ದುಬೈ ಸೆನ್ಸಾರ್ ವರದಿಯ ಪ್ರಕಾರ, ಸಿನಿಮಾ ಮೊದಲ ನಿಮಿಷದಿಂದಲೇ ಪ್ರೇಕ್ಷಕರನ್ನು ಕಥೆಯೊಳಗೆ ಹಿಡಿದಿಡುತ್ತದೆ. ಚಿತ್ರದಲ್ಲಿ ಎಲ್ಲೂ ಬೋರ್ ಹೊಡೆಯುವುದಿಲ್ಲ. ಈ ಸಿನಿಮಾ ಖಂಡಿತವಾಗಿಯೂ ಬ್ಲಾಕ್&zwnj;ಬಸ್ಟರ್ ಹಿಟ್ ಆಗಲಿದೆ ಎಂದು ವರದಿ ಹೇಳಿದೆ. ಚಿತ್ರದ ಮೊದಲಾರ್ಧದಲ್ಲಿ ಕೆಲವು ಹಾಸ್ಯ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ. ರಾಮ್ ಚರಣ್, ಶಿವರಾಜ್&zwnj;ಕುಮಾರ್ ಮತ್ತು ಜಗಪತಿ ಬಾಬು ನಡುವಿನ ಸಂಭಾಷಣೆಗಳು ಚಿತ್ರದ ಹೈಲೈಟ್ ಎನ್ನಲಾಗಿದೆ. ಮಧ್ಯಂತರದ ಮೊದಲು ಚಿತ್ರದಲ್ಲಿ ನಿಜವಾದ ಭಾವನಾತ್ಮಕ ಪಯಣ ಶುರುವಾಗುತ್ತದೆ. ಕಥೆ ಭಾವನಾತ್ಮಕವಾಗಿದ್ದರೂ, ಮೈ ಜುಮ್ಮೆನಿಸುವ ದೃಶ್ಯಗಳು ಸಾಕಷ್ಟಿವೆ.&lt;/p&gt;&lt;img&gt;&lt;p&gt;ರಾಮ್ ಚರಣ್ ಮತ್ತು ಜಗಪತಿ ಬಾಬು ಇಬ್ಬರ ನಟನೆಯೂ ಬಹಳ ಕಾಲ ನೆನಪಿನಲ್ಲಿ ಉಳಿಯಲಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಚಿತ್ರದ ಕೊನೆಯ 45 ನಿಮಿಷಗಳು, ಪ್ರೇಕ್ಷಕರು ಊಹಿಸಲೂ ಸಾಧ್ಯವಾಗದಂತಹ ಕಥೆ ಮತ್ತು ದೃಶ್ಯಗಳನ್ನು ಹೊಂದಿದೆಯಂತೆ. ರಾಮ್ ಚರಣ್ ಅವರಂತಹ ಮಾಸ್ ಹೀರೋ ಇಂತಹ ಕಥೆಯನ್ನು ಒಪ್ಪಿಕೊಂಡಿದ್ದೇ ದೊಡ್ಡ ಧೈರ್ಯ. ಆ ಪ್ರಯತ್ನದಲ್ಲಿ ರಾಮ್ ಚರಣ್ ಗೆದ್ದಿದ್ದಾರೆ ಎಂದು ದುಬೈ ಸೆನ್ಸಾರ್ ವರದಿ ಹೇಳುತ್ತದೆ. ನಿರ್ದೇಶಕ ಬುಚ್ಚಿ ಬಾಬು, ನಟಿ ಜಾನ್ವಿ ಕಪೂರ್ ಪಾತ್ರವನ್ನು ಕೇವಲ ಗ್ಲಾಮರ್&zwnj;ಗೆ ಸೀಮಿತಗೊಳಿಸದೆ, ಕಥೆಯ ಪ್ರಮುಖ ಭಾಗವನ್ನಾಗಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಾಹಕ ರತ್ನವೇಲು ಅವರ ಕ್ಯಾಮೆರಾ ವರ್ಕ್ ಚಿತ್ರವನ್ನು ಬೇರೆ ಹಂತಕ್ಕೆ ಕೊಂಡೊಯ್ದಿದೆ ಎನ್ನಲಾಗಿದೆ. ಒಟ್ಟಿನಲ್ಲಿ, 'ಪೆದ್ದಿ' ಚಿತ್ರಕ್ಕೆ ಬಿಡುಗಡೆಗೂ ಮುನ್ನವೇ ಸಿಗಬೇಕಾದ ಎಲ್ಲಾ ಸಕಾರಾತ್ಮಕ ವಿಮರ್ಶೆಗಳು ಸಿಕ್ಕಿವೆ. ಜೂನ್ 4 ರಂದು ಸಿನಿಮಾ ತೆರೆಕಂಡಾಗ ಪ್ರೇಕ್ಷಕರು ಏನು ಹೇಳುತ್ತಾರೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಒಂದು ವೇಳೆ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾದರೆ, 'ಪೆದ್ದಿ' ಖಂಡಿತವಾಗಿಯೂ 1000 ಕೋಟಿ ಕಲೆಕ್ಷನ್ ಕ್ಲಬ್ ಸೇರಲಿದೆ ಎಂದು ನಿರೀಕ್ಷಿಸಲಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/movie-reviews/ram-charan-shivanna-peddi-movie-first-review-out-from-dubai-censor-board-gvd-43hbbxg"/>
        </item>
        <item>
            <title><![CDATA[ಜಿಯೋ ಗ್ರಾಹಕರಿಗೆ ಬಂಪರ್ ಧಮಾಕಾ: ಕೇವಲ 200 ರೂಪಾಯಿಗೆ 15 OTT ಆಪ್ಸ್, 1000 ಟಿವಿ ಚಾನೆಲ್ಸ್ ಫ್ರೀ!]]></title>
            <link>https://kannada.asianetnews.com/gallery/news-entertainment/jio-200-rs-ott-pass-plan-free-subscriptions-30gb-data-benefits-san-5wcgil1</link>
            <guid isPermaLink="true">https://kannada.asianetnews.com/gallery/news-entertainment/jio-200-rs-ott-pass-plan-free-subscriptions-30gb-data-benefits-san-5wcgil1</guid>
            <pubDate>Thu, 28 May 2026 19:37:55 +0530</pubDate>
            <description><![CDATA[&lt;p&gt;ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಕೇವಲ 200 ರೂಪಾಯಿಗೆ 'ಜಿಯೋ ಒಟಿಟಿ ಪಾಸ್' ಎಂಬ ಹೊಸ ಆಡ್-ಆನ್ ಯೋಜನೆಯನ್ನು ಪರಿಚಯಿಸಿದೆ. 28 ದಿನಗಳ ವ್ಯಾಲಿಡಿಟಿಯ ಈ ಪ್ಲಾನ್&zwnj;ನಲ್ಲಿ 15 ಪ್ರಮುಖ ಒಟಿಟಿಗಳ ಚಂದಾದಾರಿಕೆ, 30GB ಡೇಟಾ ಹಾಗೂ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ಲಭ್ಯವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksqear4kvcpve84q0e3k1v1b,imgname-jio-launches-rs-200-ott-pass--2--1779976986771.jpeg" type="image/jpeg" height="390" width="690"/>
            <content:encoded><![CDATA[&lt;p&gt;ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಕೇವಲ 200 ರೂಪಾಯಿಗೆ 'ಜಿಯೋ ಒಟಿಟಿ ಪಾಸ್' ಎಂಬ ಹೊಸ ಆಡ್-ಆನ್ ಯೋಜನೆಯನ್ನು ಪರಿಚಯಿಸಿದೆ. 28 ದಿನಗಳ ವ್ಯಾಲಿಡಿಟಿಯ ಈ ಪ್ಲಾನ್&zwnj;ನಲ್ಲಿ 15 ಪ್ರಮುಖ ಒಟಿಟಿಗಳ ಚಂದಾದಾರಿಕೆ, 30GB ಡೇಟಾ ಹಾಗೂ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ಲಭ್ಯವಿದೆ.&lt;/p&gt;&lt;img&gt;&lt;p&gt;ದೇಶದ ಪ್ರಮುಖ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ (Reliance Jio) ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಅತ್ಯಂತ ಆಕರ್ಷಕ ಹಾಗೂ ಮನರಂಜನೆ ಆಧಾರಿತ ಹೊಸ ಆಡ್-ಆನ್ (Add-on) ಪ್ಲಾನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕೇವಲ 200 ರೂಪಾಯಿ ಬೆಲೆಯ ಈ ಯೋಜನೆಗೆ &lsquo;ಜಿಯೋ ಒಟಿಟಿ ಪಾಸ್&rsquo; (Jio OTT Pass) ಎಂದು ಹೆಸರಿಸಲಾಗಿದ್ದು, ಇದು ಪೂರ್ತಿ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ವಿಭಿನ್ನ ಒಟಿಟಿ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಸಿನಿಮಾ, ವೆಬ್ ಸೀರೀಸ್&zwnj;ಗಳನ್ನು ವೀಕ್ಷಿಸುವ ಹಾಗೂ ಒಂದೇ ರೀಚಾರ್ಜ್ ಮೂಲಕ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಜಿಯೋ ಈ ಬಂಡಲ್ ಯೋಜನೆಯನ್ನು ತಂದಿದೆ. ಪ್ರಸ್ತುತ ಈ ಪ್ಲಾನ್ ಕಂಪನಿಯ ಅಧಿಕೃತ ವೆಬ್&zwnj;ಸೈಟ್&zwnj;ನ &lsquo;ಎಂಟರ್&zwnj;ಟೈನ್&zwnj;ಮೆಂಟ್ ಪ್ಲಾನ್ಸ್&rsquo; (Entertainment Plans) ವಿಭಾಗದಲ್ಲಿ ಲಭ್ಯವಿದೆ.&lt;/p&gt;&lt;img&gt;&lt;p&gt;ಈ 200 ರೂಪಾಯಿಯ ಜಿಯೋ ಒಟಿಟಿ ಪಾಸ್ ಖರೀದಿಸುವ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ದೇಶದ ಪ್ರಮುಖ 15 ಪ್ರೀಮಿಯಂ ಒಟಿಟಿ (OTT) ಸ್ಟ್ರೀಮಿಂಗ್ ಆಪ್&zwnj;ಗಳ ಉಚಿತ ಸಬ್&zwnj;ಸ್ಕ್ರಿಪ್ಷನ್ ಸಿಗಲಿದೆ. ಆ ಪ್ಲಾಟ್&zwnj;ಫಾರ್ಮ್&zwnj;ಗಳ ಪಟ್ಟಿ ಇಲ್ಲಿದೆ:&lt;/p&gt;&lt;p&gt;ಯೂಟ್ಯೂಬ್ ಪ್ರೀಮಿಯಂ (YouTube Premium), ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ (Amazon Prime Video Mobile), ಜಿಯೋ ಹಾಟ್&zwnj;ಸ್ಟಾರ್ (JioHotstar), ಸೋನಿ ಲಿವ್ (Sony LIV), ಜೀ5 (ZEE5), ಲಯನ್ಸ್&zwnj;ಗೇಟ್ ಪ್ಲೇ (Lionsgate Play), ಡಿಸ್ಕವರಿ ಪ್ಲಸ್ (Discovery+), ಸನ್ ನೆಕ್ಸ್ಟ್ (Sun NXT), ಕಾಂಚಾ ಲಂಕಾ (Kanchha Lannka), ಪ್ಲಾನೆಟ್ ಮರಾಠಿ (Planet Marathi), ಚೌಪಾಲ್ (Chaupal), ಹೊಯ್ಚೋಯ್ (Hoichoi), ಫ್ಯಾನ್&zwnj;ಕೋಡ್ (FanCode), ಟೈಮ್ಸ್ ಪ್ಲೇ (Times Play) ಮತ್ತು ತರಂಗ್ ಪ್ಲಸ್ (Tarang Plus).&lt;/p&gt;&lt;img&gt;&lt;p&gt;ಒಟಿಟಿ ಸಬ್&zwnj;ಸ್ಕ್ರಿಪ್ಷನ್ ಮಾತ್ರವಲ್ಲದೆ, ಜಿಯೋಟಿವಿ (JioTV) ಆಪ್ ಮೂಲಕ ಗ್ರಾಹಕರು 1000 ಕ್ಕೂ ಹೆಚ್ಚು ಪ್ರೀಮಿಯಂ ಲೈವ್ ಟಿವಿ ಚಾನೆಲ್&zwnj;ಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಈ ಚಾನೆಲ್&zwnj;ಗಳಲ್ಲಿ ಜಿಯೋಸ್ಟಾರ್ (JioStar), ಸೋನಿ ಎಂಟರ್&zwnj;ಟೈನ್&zwnj;ಮೆಂಟ್ (Sony), ಸನ್ ಟಿವಿ ನೆಟ್&zwnj;ವರ್ಕ್ (Sun TV), ವಾರ್ನರ್ ಬ್ರದರ್ಸ್ ಡಿಸ್ಕವರಿ (Warner Bros. Discovery) ಮತ್ತು ಇಟಿವಿ (ETV) ನೆಟ್&zwnj;ವರ್ಕ್&zwnj;ಗಳ ದೃಶ್ಯಾವಳಿಗಳು ಲಭ್ಯವಿರಲಿವೆ. ಆದರೆ, ಕ್ರೀಡಾ ಪ್ರೇಮಿಗಳು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಕೊಡುಗೆಯಿಂದ ಸ್ಪೋರ್ಟ್ಸ್ (ಕ್ರೀಡಾ) ಚಾನೆಲ್&zwnj;ಗಳನ್ನು ಹೊರಗಿಡಲಾಗಿದೆ.&lt;/p&gt;&lt;img&gt;&lt;p&gt;ಇದು ಕೇವಲ &lsquo;ಡೇಟಾ ಮಾತ್ರ&rsquo; (Data-only Pack) ಒಳಗೊಂಡಿರುವ ಆಡ್-ಆನ್ ಯೋಜನೆಯಾಗಿದ್ದು, ಇದರಲ್ಲಿ ಯಾವುದೇ ಉಚಿತ ವಾಯ್ಸ್ ಕಾಲಿಂಗ್ (ಕರೆಗಳು) ಅಥವಾ ದಿನನಿತ್ಯದ ಎಸ್&zwnj;ಎಂಎಸ್ (SMS) ಸೌಲಭ್ಯಗಳು ಸಿಗುವುದಿಲ್ಲ. ಗ್ರಾಹಕರಿಗೆ 28 ದಿನಗಳ ಅವಧಿಗೆ ಒಟ್ಟಾರೆಯಾಗಿ 30GB ಹೈ-ಸ್ಪೀಡ್ ಡೇಟಾವನ್ನು ನೀಡಲಾಗುತ್ತದೆ. ಇದರೊಂದಿಗೆ, ಜಿಯೋದ ಉಚಿತ ಅನ್&zwnj;ಲಿಮಿಟೆಡ್ 5G ಆಫರ್&zwnj;ಗೆ ಅರ್ಹರಾಗಿರುವ ಗ್ರಾಹಕರು, ತಮ್ಮ ಸಕ್ರಿಯ ಬೇಸ್ ಪ್ಲಾನ್ (Active Base Plan) ಮುಗಿಯುವವರೆಗೆ ಎಂದಿನಂತೆ ಅನಿಯಮಿತ 5G ಡೇಟಾವನ್ನು ಉಚಿತವಾಗಿ ಬಳಸಬಹುದಾಗಿದೆ.&lt;/p&gt;&lt;img&gt;&lt;p&gt;ಈ ಪ್ಲಾನ್&zwnj;ನ ಪ್ರಯೋಜನಗಳನ್ನು ಪಡೆದುಕೊಳ್ಳಲು ಜಿಯೋ ಕೆಲವು ಸರಳ ವಿಧಾನಗಳನ್ನು ಸೂಚಿಸಿದೆ. ಅದರಂತೆ, ಯೂಟ್ಯೂಬ್ ಪ್ರೀಮಿಯಂ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಸೌಲಭ್ಯಗಳನ್ನು ಗ್ರಾಹಕರು ರೀಚಾರ್ಜ್ ಮಾಡಿದ ಬಳಿಕ &lsquo;ಮೈಜಿಯೋ&rsquo; (MyJio) ಆಪ್&zwnj;ಗೆ ಲಾಗಿನ್ ಆಗಿ ಅಲ್ಲಿ &lsquo;ಕ್ಲೈಮ್&rsquo; (Claim) ಮಾಡಿಕೊಳ್ಳಬೇಕಾಗುತ್ತದೆ. ಇನ್ನುಳಿದ ಒಟಿಟಿ ಸೇವೆಗಳನ್ನು ಗ್ರಾಹಕರು ತಮ್ಮ ಜಿಯೋ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು &lsquo;ಜಿಯೋಟಿವಿ&rsquo; (JioTV) ಮೊಬೈಲ್ ಅಪ್ಲಿಕೇಶನ್ ಮೂಲಕ ನೇರವಾಗಿ ವೀಕ್ಷಿಸಬಹುದಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/news-entertainment/jio-200-rs-ott-pass-plan-free-subscriptions-30gb-data-benefits-san-5wcgil1"/>
        </item>
        <item>
            <title><![CDATA[ನನ್ನ ಅಮ್ಮನನ್ನೇ ಬ್ಲಾಕ್ ಮಾಡಿದ್ದೆ: ಕಣ್ಣೀರು ಹಾಕುತ್ತಾ ಆ ಕರಾಳ ನೋವಿನ ಕಥೆ ಬಿಚ್ಚಿಟ್ಟ ನಟಿ!]]></title>
            <link>https://kannada.asianetnews.com/gallery/tv-talk/tv-actress-rashami-desai-emotional-story-about-mother-gvd-s6t31a9</link>
            <guid isPermaLink="true">https://kannada.asianetnews.com/gallery/tv-talk/tv-actress-rashami-desai-emotional-story-about-mother-gvd-s6t31a9</guid>
            <pubDate>Thu, 28 May 2026 18:14:43 +0530</pubDate>
            <description><![CDATA[&lt;p&gt;ಟಿವಿ ನಟಿ ರಶ್ಮಿ ದೇಸಾಯಿ ತಮ್ಮ ಜೀವನದ ಕರಾಳ ದಿನಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಅಮ್ಮನನ್ನೇ ಬ್ಲಾಕ್ ಮಾಡಿದ್ದೆ, ಜೀವನವೇ ಮುಗೀತು ಅಂದುಕೊಂಡಿದ್ದೆ ಎಂದು ಕಣ್ಣೀರು ಹಾಕಿದ್ದಾರೆ. ಸಲ್ಮಾನ್ ಖಾನ್ ಅವರಿಂದಾಗಿ ಅಮ್ಮನ ಜೊತೆ ಮತ್ತೆ ಮಾತುಕತೆ ಶುರುವಾದ ಕಥೆಯನ್ನೂ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j8w35mk9jq1dte0ee6c5erk4,imgname-rashami-desai-career-casting-couch-3-1727519707753.jpg" type="image/jpeg" height="390" width="690"/>
            <content:encoded><![CDATA[&lt;p&gt;ಟಿವಿ ನಟಿ ರಶ್ಮಿ ದೇಸಾಯಿ ತಮ್ಮ ಜೀವನದ ಕರಾಳ ದಿನಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಅಮ್ಮನನ್ನೇ ಬ್ಲಾಕ್ ಮಾಡಿದ್ದೆ, ಜೀವನವೇ ಮುಗೀತು ಅಂದುಕೊಂಡಿದ್ದೆ ಎಂದು ಕಣ್ಣೀರು ಹಾಕಿದ್ದಾರೆ. ಸಲ್ಮಾನ್ ಖಾನ್ ಅವರಿಂದಾಗಿ ಅಮ್ಮನ ಜೊತೆ ಮತ್ತೆ ಮಾತುಕತೆ ಶುರುವಾದ ಕಥೆಯನ್ನೂ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಟಿವಿ ಲೋಕದ ಜನಪ್ರಿಯ ನಟಿ ರಶ್ಮಿ ದೇಸಾಯಿ, ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಸದ್ಯದಲ್ಲೇ 'ತುಮ್ ಹೋ ನಾ' (Tum Ho Naa) ಎಂಬ ಶೋನಲ್ಲಿ ಕಾಣಿಸಿಕೊಳ್ಳಲಿರುವ ರಶ್ಮಿ, ಇತ್ತೀಚೆಗೆ ರಾಜೀವ್ ಖಂಡೇಲ್ವಾಲ್ (Rajeev Khandelwal) ಜೊತೆಗಿನ ಸಂದರ್ಶನವೊಂದರಲ್ಲಿ ತಮ್ಮ ಮುರಿದುಹೋದ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕೆರಿಯರ್, ಮಾನಸಿಕ ಸಂಘರ್ಷದ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಒಂದು ಕಾಲದಲ್ಲಿ ತಮ್ಮ ಕುಟುಂಬದಿಂದ ದೂರ ಉಳಿದಿದ್ದನ್ನು ನೆನಪಿಸಿಕೊಂಡು ರಶ್ಮಿ ದೇಸಾಯಿ ಭಾವುಕರಾದರು. &quot;ಆಗೆಲ್ಲಾ ನಾನು ನನ್ನ ಅಮ್ಮನ ಜೊತೆ ಮಾತೇ ಆಡುತ್ತಿರಲಿಲ್ಲ, ಅಷ್ಟೇ ಅಲ್ಲ, ಅವರ ನಂಬರನ್ನೇ ಬ್ಲಾಕ್ ಮಾಡಿದ್ದೆ,&quot; ಎಂದು ಅವರು ಹೇಳಿದ್ದಾರೆ. ಆ ಸಮಯದಲ್ಲಿ ತಮ್ಮ ಜೀವನವೇ ಮುಗಿದುಹೋಯಿತು ಎಂದು ಅನಿಸುತ್ತಿತ್ತು. ಕೆರಿಯರ್ ಕೂಡ ಇರಲಿಲ್ಲ, ವೈಯಕ್ತಿಕ ಜೀವನವೂ ಚೆನ್ನಾಗಿರಲಿಲ್ಲ, ಆರ್ಥಿಕವಾಗಿಯೂ ಪರಿಸ್ಥಿತಿ ಹದಗೆಟ್ಟಿತ್ತು ಎಂದು ರಶ್ಮಿ ನೋವಿನಿಂದ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಆ ಕಷ್ಟದ ದಿನಗಳಲ್ಲಿ ತಮಗೆ ಸದಾ ಭಯ ಕಾಡುತ್ತಿತ್ತು ಎಂದು ನಟಿ ಹೇಳಿದ್ದಾರೆ. &quot;ನಾನು ಈ ಮನೆಯಿಂದ ಹೊರಗೆ ಕಾಲಿಟ್ಟರೆ ನನ್ನ ಕೆರಿಯರ್ ಮುಗಿದುಹೋಗುತ್ತೆ ಅಂತ ನನಗೆ ಅನಿಸುತ್ತಿತ್ತು. ನನ್ನ ಹತ್ತಿರ ದುಡ್ಡೂ ಇರಲಿಲ್ಲ, ಭರವಸೆ ಇಡಬಹುದಾದ ಯಾರೂ ಇರಲಿಲ್ಲ,&quot; ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಆ ಕಷ್ಟದ ದಿನಗಳೇ ತಮಗೆ ಜೀವನದ ದೊಡ್ಡ ಪಾಠ ಕಲಿಸಿದವು ಎಂದು ರಶ್ಮಿ ದೇಸಾಯಿ ಹೇಳಿದ್ದಾರೆ. ಮನುಷ್ಯರು ತಪ್ಪುಗಳಿಂದಲೇ ಕಲಿಯುತ್ತಾರೆ ಮತ್ತು ಜೀವನವನ್ನು ಮತ್ತೆ ಹೊಸದಾಗಿ ಶುರು ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದನ್ನು ಅರಿತುಕೊಂಡೆ ಎಂದಿದ್ದಾರೆ. &quot;ಜೀವನದಲ್ಲಿ ಎಲ್ಲರೂ ನಿಮ್ಮ ವಿರುದ್ಧವಾದಾಗ, ಅದೇ ಸಮಯ ನಮಗೆ ಹೆಚ್ಚು ಕಲಿಸುತ್ತದೆ. ಯಾಕೆಂದರೆ ಆವಾಗ ನಮ್ಮ ಜೊತೆ ಇರುವವರು ಮಾತ್ರ ನಿಜವಾದ ನಮ್ಮವರು,&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ವರ್ಷಗಳ ನಂತರ ಅಮ್ಮನ ಜೊತೆ ಮಾತುಕತೆ ಶುರುವಾದ ಒಂದು ಸ್ವಾರಸ್ಯಕರ ಕಥೆಯನ್ನೂ ರಶ್ಮಿ ಹಂಚಿಕೊಂಡಿದ್ದಾರೆ. ಒಂದು ಶೋಗೆ ಅವರ ಅಮ್ಮ ಬಂದಿದ್ದರಂತೆ. ಆಗ ರಶ್ಮಿ, ಎಂದಿನಂತೆ ಸಲ್ಮಾನ್ ಖಾನ್ ಅವರ ಕಾಲು ಮುಟ್ಟಿದ್ದಾರೆ. ಇದನ್ನು ನೋಡಿದ ಸಲ್ಮಾನ್, ರಶ್ಮಿ ಅಮ್ಮನ ಹತ್ತಿರ, &quot;ಮನೇಲೂ ಹೀಗೇನಾ ಇವಳು?&quot; ಅಂತ ಕೇಳಿದ್ದಾರೆ. ಆಗಲೇ ಅವರಿಬ್ಬರ ನಡುವೆ ಮಾತುಕತೆ ಶುರುವಾಗಿದ್ದು.&lt;/p&gt;&lt;img&gt;&lt;p&gt;ತಮ್ಮ ಮತ್ತು ಅಮ್ಮನ ನಡುವೆ ಸಾಕಷ್ಟು ತಪ್ಪು ತಿಳುವಳಿಕೆಗಳಿದ್ದವು ಎಂದು ರಶ್ಮಿ ವಿವರಿಸಿದ್ದಾರೆ. &quot;ನಾನು ತುಂಬಾ ಮಹತ್ವಾಕಾಂಕ್ಷಿ, ಜೊತೆಗೆ ಬಂಡಾಯದ ಸ್ವಭಾವ ನನ್ನದು. ಆದರೆ ನನ್ನ ಅಮ್ಮ ಪ್ರತಿಯೊಂದು ನಿರ್ಧಾರಕ್ಕೂ ಹೆದರುತ್ತಿದ್ದರು. ಇದೇ ಕಾರಣಕ್ಕೆ ನಮ್ಮಿಬ್ಬರ ನಡುವೆ ಅಂತರ ಹೆಚ್ಚಾಗಿತ್ತು,&quot; ಎಂದು ರಶ್ಮಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ರಶ್ಮಿ ದೇಸಾಯಿ ಅವರ ಈ ಮಾತುಗಳ ನಂತರ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಅವರ ಧೈರ್ಯವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ತಮ್ಮ ಜೀವನದ ಕಷ್ಟಗಳನ್ನು ಇಷ್ಟು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದು ನಿಜಕ್ಕೂ ಸ್ಪೂರ್ತಿದಾಯಕ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/tv-talk/tv-actress-rashami-desai-emotional-story-about-mother-gvd-s6t31a9"/>
        </item>
        <item>
            <title><![CDATA[ಒಬ್ಬನ ಜೊತೆ ಸಂಬಂಧದಲ್ಲಿ ನಂಬಿಕೆ ಇಲ್ಲ: ದೈಹಿಕ ಕ್ರಿಯೆಯ ಬಗ್ಗೆ ನಟಿ ಶಹಾನಾ ಗೋಸ್ವಾಮಿ ಓಪನ್​ ಮಾತೇನು]]></title>
            <link>https://kannada.asianetnews.com/gallery/relationship/shahana-goswami-says-shes-in-an-open-relationship-partners-aware-of-physical-intimacy-suc-u2mvwmo</link>
            <guid isPermaLink="true">https://kannada.asianetnews.com/gallery/relationship/shahana-goswami-says-shes-in-an-open-relationship-partners-aware-of-physical-intimacy-suc-u2mvwmo</guid>
            <pubDate>Thu, 28 May 2026 17:29:57 +0530</pubDate>
            <description><![CDATA[ನಟಿ ಶಹನಾ ಗೋಸ್ವಾಮಿ ತಮ್ಮ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತಾನು ಅನೇಕ ಮುಕ್ತ ಸಂಬಂಧಗಳಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಪ್ರೀತಿಯು ಒಬ್ಬ ವ್ಯಕ್ತಿಗೆ ಸೀಮಿತವಾಗಬಾರದು ಮತ್ತು ಕೆಲವು ಸಂಬಂಧಗಳು ದೈಹಿಕವಾಗಿಯೂ ಬೆಳೆಯಬಹುದು ಎಂಬುದು ತಮ್ಮ ದೃಷ್ಟಿಕೋನ ಎಂದು ಅವರು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksq70w4cs74skf6dves07xkd,imgname-shahana-goswami-01-1779969323148.jpg" type="image/jpeg" height="390" width="690"/>
            <content:encoded><![CDATA[ನಟಿ ಶಹನಾ ಗೋಸ್ವಾಮಿ ತಮ್ಮ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತಾನು ಅನೇಕ ಮುಕ್ತ ಸಂಬಂಧಗಳಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಪ್ರೀತಿಯು ಒಬ್ಬ ವ್ಯಕ್ತಿಗೆ ಸೀಮಿತವಾಗಬಾರದು ಮತ್ತು ಕೆಲವು ಸಂಬಂಧಗಳು ದೈಹಿಕವಾಗಿಯೂ ಬೆಳೆಯಬಹುದು ಎಂಬುದು ತಮ್ಮ ದೃಷ್ಟಿಕೋನ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;img&gt;&lt;p&gt;ಸಿನಿಮಾ ಸೆಲೆಬ್ರಿಟಿಗಳ ಬದುಕು ಯಾವತ್ತಿಗೂ ಸಂಬಂಧಗಳ ಸುತ್ತಲೂ ಸುತ್ತುತ್ತಲೇ ಇರುತ್ತದೆ. ಆದರೆ ಹಲವರು ಅದನ್ನು ಓಪನ್​ ಆಗಿ ಹೇಳಿಕೊಳ್ಳುವುದಿಲ್ಲ. ಆದರೆ ಇದೀಗ ಹೀರೋಯಿನ್, ರಾಕ್ ಆನ್ ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವ ನಟಿ ಶಹನಾ ಗೋಸ್ವಾಮಿ (Shahana Goswami) ತಮ್ಮ ಬಹು ಸಂಬಂಧಗಳ ಬಗ್ಗೆ ಓಪನ್​ ಆಗಿ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ನಾನು ಕೇವಲ ಒಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿಲ್ಲ, ಅನೇಕ ಜನರ ಜೊತೆ ನನ್ನ ಸಂಬಂಧವಿದೆ. ಪ್ರೀತಿಯ ಬಗ್ಗೆ ನನ್ನ ದೃಷ್ಟಿಕೋನವೇ ಬೇರೆ ಇದೆ. ಹಲವಾರು ಮುಕ್ತ ಸಂಬಂಧಗಳಲ್ಲಿ ಇದ್ದೇನೆ. ಈ ಸಂಬಂಧಗಳಲ್ಲಿ ಯಾವುದೂ ನನಗೆ ಸಾಂದರ್ಭಿಕವಲ್ಲ ಎಂದಿದ್ದಾರೆ.&lt;/p&gt;&lt;img&gt;&lt;p&gt;ಹಲವರ ಜೊತೆ ದೀರ್ಘಕಾಲೀನ ಸಂಬಂಧಗಳನ್ನು ಹೊಂದಿದ್ದೇನೆ. ಕೆಲವು ಸ್ನೇಹಗಳಿಗೆ ಸೀಮಿತವಾದರೆ, ಇನ್ನು ಕೆಲವು ದೈಹಿಕ ಸಂಬಂಧಗಳಾಗಿ ಬೆಳೆಯುತ್ತವೆ. ಈ ಸಂಬಂಧಗಳಲ್ಲಿ ಯಾವುದೂ ಯಾವುದೇ ನಿರ್ದಿಷ್ಟ ದಿಕ್ಕಿನಲ್ಲಿ ಬಲವಂತವಾಗಿಲ್ಲ, ಎಲ್ಲವೂ ಸಹಮತದ ಮೇರೆಯೇ ನಡೆಯುತ್ತದೆ ಎಂದು ನಟಿ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್​ಕಾಸ್ಟ್​ನಲ್ಲಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನನ್ನ ಫ್ರೆಂಡ್ಸ್​ಗಳಲ್ಲಿ ಕೆಲವರು ಕೇವಲ ಸ್ನೇಹವಾಗಿರುತ್ತದೆ. ಕೆಲವೊಮ್ಮೆ ಅದು ಭೌತಿಕವಾಗಿರುತ್ತದೆ. ಅದನ್ನು ಒಂದೇ ವಿಷಯಕ್ಕೆ ಸಂಕುಚಿತಗೊಳಿಸುವ ಅಗತ್ಯವಿಲ್ಲ. ಮುಂದೆ ಏನಾಗುತ್ತದೆ ಎಂದು ನಾನು ಯೋಚಿಸುವುದಿಲ್ಲ. ಏಕೆಂದರೆ, ಸ್ನೇಹದಲ್ಲಿ ಮುಕ್ತರಾಗಿರುವಾಗ, ಇವೆಲ್ಲಾ ಮ್ಯಾಟರೇ ಆಗುವುದಿಲ್ಲ ಎಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಭಾವನೆ, ಪ್ರೀತಿ ಎಂದರೆ ಸಂಪೂರ್ಣವಾಗಿ ಮತ್ತು ಒಬ್ಬ ಪುರುಷನೊಂದಿಗೆ ಮಾತ್ರ ಇರುವುದು ಎಂಬ ಕಲ್ಪನೆಯು ಎಷ್ಟು ಆಳವಾಗಿ ಬೇರೂರಿದೆ ಎಂದರೆ ಅದನ್ನು ಹೊರತುಪಡಿಸಿ ಯಾವುದೇ ಸಂಬಂಧವು ಅನೇಕ ಜನರಿಗೆ ತಪ್ಪಾಗಿ ಅನಿಸುತ್ತದೆ. ಪ್ರೀತಿ ಮುಕ್ತವಾಗಿರಬೇಕು ಎಂದು ನಾನು ಯಾವಾಗಲೂ ನಂಬಿದ್ದೆ. ಅದು ಮಿತಿಗೊಳಿಸುವ ಅಥವಾ ಬಂಧಿಸುವ ವಿಷಯವಾಗಬಾರದು. ಅದಕ್ಕೆ ನಾನು ಎಲ್ಲಾ ಓಪನ್​ ಎಂದಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/shahana-goswami-says-shes-in-an-open-relationship-partners-aware-of-physical-intimacy-suc-u2mvwmo"/>
        </item>
        <item>
            <title><![CDATA[ಶಾರುಖ್ ಖಾನ್ ಜಾಗಕ್ಕೆ ಹೃತಿಕ್ ರೋಷನ್ ಎಂಟ್ರಿ? ತಲೈವಾ ಸಿನಿಮಾದಲ್ಲಿ ಬಿಗ್ ಟ್ವಿಸ್ಟ್!]]></title>
            <link>https://kannada.asianetnews.com/entertainment/hrithik-roshan-to-replace-shah-rukh-khan-in-rajinikanths-jailer-2-gvd/articleshow-3yk1t4c</link>
            <guid isPermaLink="true">https://kannada.asianetnews.com/entertainment/hrithik-roshan-to-replace-shah-rukh-khan-in-rajinikanths-jailer-2-gvd/articleshow-3yk1t4c</guid>
            <pubDate>Thu, 28 May 2026 16:57:27 +0530</pubDate>
            <description><![CDATA[&lt;p&gt;ಸೌತ್ ಸೂಪರ್&zwnj;ಸ್ಟಾರ್ ರಜನಿಕಾಂತ್ ಅವರ ಮೋಸ್ಟ್ ಅವೇಟೆಡ್ ಸಿನಿಮಾ 'ಜೈಲರ್ 2' ಬಗ್ಗೆ ಒಂದು ದೊಡ್ಡ ಅಪ್&zwnj;ಡೇಟ್ ಹೊರಬಿದ್ದಿದೆ. ಈ ಸಿನಿಮಾದಲ್ಲಿ ಒಂದು ಪವರ್&zwnj;ಫುಲ್ ಅತಿಥಿ ಪಾತ್ರಕ್ಕಾಗಿ ಚಿತ್ರತಂಡ ಬಾಲಿವುಡ್ ಸ್ಟಾರ್..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksq5d7v8r3rmnkw0g70zvr08,imgname-vj-1779967631208.png" type="image/jpeg" height="390" width="690"/>
            <content:encoded><![CDATA[&lt;p&gt;ಸೂಪರ್&zwnj;ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ 'ಜೈಲರ್ 2' ಚಿತ್ರದಿಂದ ಶಾರುಖ್ ಖಾನ್ ಹೊರನಡೆದಿದ್ದಾರೆ ಎನ್ನಲಾಗಿದೆ. ಅವರ ಜಾಗಕ್ಕೆ ಬಾಲಿವುಡ್&zwnj;ನ ಮತ್ತೊಬ್ಬ ಸ್ಟಾರ್ ಹೃತಿಕ್ ರೋಷನ್ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನೆಲ್ಸನ್ ದಿಲೀಪ್&zwnj;ಕುಮಾರ್ ನಿರ್ದೇಶನದ ಈ ಚಿತ್ರ 2026ರಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. ಸೌತ್ ಸೂಪರ್&zwnj;ಸ್ಟಾರ್ ರಜನಿಕಾಂತ್ ಅವರ ಮೋಸ್ಟ್ ಅವೇಟೆಡ್ ಸಿನಿಮಾ 'ಜೈಲರ್ 2' ಬಗ್ಗೆ ಒಂದು ದೊಡ್ಡ ಅಪ್&zwnj;ಡೇಟ್ ಹೊರಬಿದ್ದಿದೆ.&lt;/p&gt;&lt;p&gt;ಈ ಸಿನಿಮಾದಲ್ಲಿ ಒಂದು ಪವರ್&zwnj;ಫುಲ್ ಅತಿಥಿ ಪಾತ್ರಕ್ಕಾಗಿ ಚಿತ್ರತಂಡ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಜೊತೆ ಮಾತುಕತೆ ನಡೆಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೂ ಮೊದಲು ಈ ರೋಲ್&zwnj;ಗೆ ಶಾರುಖ್ ಖಾನ್ ಅವರಿಗೆ ಆಫರ್ ನೀಡಲಾಗಿತ್ತಂತೆ. ಆದರೆ, ಶಾರುಖ್ ತಮ್ಮ 'ಕಿಂಗ್' ಸಿನಿಮಾದ ಶೂಟಿಂಗ್ ಶೆಡ್ಯೂಲ್&zwnj;ನಿಂದಾಗಿ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹೊಸ ಬೆಳವಣಿಗೆಯಿಂದ 'ಜೈಲರ್ 2' ಮೇಲಿನ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ನೆಲ್ಸನ್ ದಿಲೀಪ್&zwnj;ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ, 2026ರ ಅತಿದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;&lt;strong&gt;'ಜೈಲರ್ 2'ಗೆ ಹೃತಿಕ್ ರೋಷನ್ ಎಂಟ್ರಿ?&lt;/strong&gt;&lt;/p&gt;&lt;p&gt;ವರದಿಗಳ ಪ್ರಕಾರ, 'ಜೈಲರ್ 2' ತಂಡ ಒಂದು ವಿಶೇಷ ಅತಿಥಿ ಪಾತ್ರಕ್ಕಾಗಿ ಹೃತಿಕ್ ರೋಷನ್ ಅವರನ್ನು ಸಂಪರ್ಕಿಸಿದೆ. ಮೊದಲು ಈ ಪಾತ್ರವನ್ನು ಶಾರುಖ್ ಖಾನ್&zwnj;ಗೆ ಆಫರ್ ಮಾಡಲಾಗಿತ್ತು. ಆದರೆ, ತಮ್ಮ 'ಕಿಂಗ್' ಸಿನಿಮಾ ಕಮಿಟ್&zwnj;ಮೆಂಟ್&zwnj;ಗಳಿಂದಾಗಿ ಶಾರುಖ್ ಈ ಪಾತ್ರ ಮಾಡಲು ಆಸಕ್ತಿ ತೋರಿಸಲಿಲ್ಲ ಎನ್ನಲಾಗಿದೆ. ಆದರೂ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.&lt;/p&gt;&lt;p&gt;&lt;strong&gt;ಮತ್ತೆ ಬರಲಿದ್ದಾರೆ ಮುತ್ತುವೇಲ್ ಪಾಂಡಿಯನ್&lt;/strong&gt;&lt;/p&gt;&lt;p&gt;'ಜೈಲರ್ 2' ಚಿತ್ರದಲ್ಲಿ ರಜನಿಕಾಂತ್ ಮತ್ತೊಮ್ಮೆ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದ ಕಥೆಯನ್ನು ಈ ಸಿನಿಮಾ ಮುಂದುವರಿಸಲಿದೆ. ಈ ಬಾರಿ ಸಿನಿಮಾದ ಸ್ಕೇಲ್ ಇನ್ನಷ್ಟು ದೊಡ್ಡದಾಗಿರಲಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಚಿತ್ರತಂಡವು 2026ರ ಸೆಪ್ಟೆಂಬರ್ 11ರಂದು ಈ ಸಿನಿಮಾವನ್ನು ಥಿಯೇಟರ್&zwnj;ಗಳಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದೆ. ರಜನಿಕಾಂತ್ ಜೊತೆಗೆ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್&zwnj;ಜೆ ಸೂರ್ಯ ಮತ್ತು ಸೂರಜ್ ವೆಂಜಾರಮೂಡು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಹಾಗೆಯೇ, ಮೋಹನ್&zwnj;ಲಾಲ್ ಮತ್ತು ಶಿವರಾಜ್&zwnj;ಕುಮಾರ್ ಕೂಡ ತಮ್ಮ ಹಳೆಯ ಪಾತ್ರಗಳಲ್ಲಿ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಕಾರಣಕ್ಕೆ, ಈ ಚಿತ್ರವನ್ನು ಒಂದು ಮೆಗಾ ಮಲ್ಟಿಸ್ಟಾರರ್ ಪ್ರಾಜೆಕ್ಟ್ ಎಂದು ಪರಿಗಣಿಸಲಾಗಿದೆ.&lt;/p&gt;&lt;h2&gt;&lt;strong&gt;ರಜನಿಕಾಂತ್ ಅವರ ಮುಂದಿನ ಪ್ರಾಜೆಕ್ಟ್&zwnj;ಗಳು&lt;/strong&gt;&lt;/h2&gt;&lt;p&gt;'ಜೈಲರ್ 2' ಅಲ್ಲದೆ, ರಜನಿಕಾಂತ್ 'ತಲೈವರ್ 173' ಚಿತ್ರದ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ. ಈ ಸಿನಿಮಾವನ್ನು ಕಮಲ್ ಹಾಸನ್ ಅವರ ಕಂಪನಿ ನಿರ್ಮಿಸುತ್ತಿದೆ. ಇದಲ್ಲದೆ, ರಜನಿಕಾಂತ್ ಮತ್ತು ಕಮಲ್ ಹಾಸನ್ ಮತ್ತೆ ಒಂದಾಗುವ ಸಾಧ್ಯತೆಯಿರುವ ಮತ್ತೊಂದು ಸಿನಿಮಾದ ಬಗ್ಗೆಯೂ ಭಾರಿ ಚರ್ಚೆ ನಡೆಯುತ್ತಿದೆ. ಈ ಚಿತ್ರವನ್ನು ನೆಲ್ಸನ್ ದಿಲೀಪ್&zwnj;ಕುಮಾರ್ ನಿರ್ದೇಶಿಸಬಹುದು ಎನ್ನಲಾಗಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/hrithik-roshan-to-replace-shah-rukh-khan-in-rajinikanths-jailer-2-gvd/articleshow-3yk1t4c"/>
        </item>
        <item>
            <title><![CDATA['ಮದ್ವೆ ಆಗಿ ನೀನೇನು ಕಿತ್ತಾಕಿದ್ದೀಯಾ?': ಟ್ರೋಲಿಗನ ಬಾಯಿ ಮುಚ್ಚಿಸಿದ ಶಿಲ್ಪಾ ಶೆಟ್ಟಿ ತಂಗಿ!]]></title>
            <link>https://kannada.asianetnews.com/gallery/entertainment/shamita-shettys-fiery-response-to-trolls-over-age-and-marriage-goes-viral-gvd-ud6rnts</link>
            <guid isPermaLink="true">https://kannada.asianetnews.com/gallery/entertainment/shamita-shettys-fiery-response-to-trolls-over-age-and-marriage-goes-viral-gvd-ud6rnts</guid>
            <pubDate>Thu, 28 May 2026 16:38:54 +0530</pubDate>
            <description><![CDATA[&lt;p&gt;ನಟಿ ಶಮಿತಾ ಶೆಟ್ಟಿ ಅವರಿಗೆ 47 ವರ್ಷ. ಮದುವೆ, ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದ ಟ್ರೋಲಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. 'ಸರಿಯಾದ ಸಮಯಕ್ಕೆ ಮದುವೆ ಆಗಿದ್ರೆ ಇಷ್ಟೊತ್ತಿಗೆ ಮಕ್ಕಳೇ ದೊಡ್ಡವರಾಗ್ತಿದ್ರು' ಅಂದವನಿಗೆ ಶಮಿತಾ ಕೊಟ್ಟ ಉತ್ತರ ಈಗ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gss6qjmv07zcxm81dv4rszw1,imgname-Shamita-Shetty4-1676956912283.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಶಮಿತಾ ಶೆಟ್ಟಿ ಅವರಿಗೆ 47 ವರ್ಷ. ಮದುವೆ, ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದ ಟ್ರೋಲಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. 'ಸರಿಯಾದ ಸಮಯಕ್ಕೆ ಮದುವೆ ಆಗಿದ್ರೆ ಇಷ್ಟೊತ್ತಿಗೆ ಮಕ್ಕಳೇ ದೊಡ್ಡವರಾಗ್ತಿದ್ರು' ಅಂದವನಿಗೆ ಶಮಿತಾ ಕೊಟ್ಟ ಉತ್ತರ ಈಗ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಬಾಲಿವುಡ್ ನಟಿ ಶಮಿತಾ ಶೆಟ್ಟಿ ತಮ್ಮ ವಯಸ್ಸು ಮತ್ತು ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಟ್ರೋಲಿಗರು ಮಾಡಿದ ಕಾಮೆಂಟ್&zwnj;ಗಳ ಸ್ಕ್ರೀನ್&zwnj;ಶಾಟ್&zwnj;ಗಳನ್ನು ಶೇರ್ ಮಾಡಿರುವ ಶಮಿತಾ, ವಯಸ್ಸಾಗೋದು ಜೀವನದ ಸಹಜ ಪ್ರಕ್ರಿಯೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ, ಹೆಣ್ಣುಮಕ್ಕಳನ್ನು ಅವರ ಮದುವೆ ಅಥವಾ ವಯಸ್ಸಿನ ಆಧಾರದ ಮೇಲೆ ಜಡ್ಜ್ ಮಾಡೋದು ತಪ್ಪು ಮನಸ್ಥಿತಿಯನ್ನು ತೋರಿಸುತ್ತೆ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಶಮಿತಾ ಅವರ ಈ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು, ಹಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೇ ಅಲ್ಲ, ಆ ಟ್ರೋಲಿಗನಿಗೆ ನೇರವಾಗಿ 'ಅನ್&zwnj;ಫಾಲೋ ಮಾಡು' ಅಂತಾನೂ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಶಮಿತಾ ಶೆಟ್ಟಿ ಶೇರ್ ಮಾಡಿದ ಸ್ಕ್ರೀನ್&zwnj;ಶಾಟ್&zwnj;ನಲ್ಲಿ ಒಬ್ಬ ಬಳಕೆದಾರ, &ldquo;ನಿಮ್ಮ ವಯಸ್ಸಾಗಿದೆ, ಮೊದಲಿನ ಕಳೆ ಇಲ್ಲ&rdquo; ಎಂದು ಬರೆದಿದ್ದ. ಇದಕ್ಕೆ ಉತ್ತರಿಸಿದ ನಟಿ, &ldquo;ಹೌದು, ನಾನು ಬೇರೆ ರೀತಿ ಕಾಣಿಸ್ತೀನಿ. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತೆ, ಇದು ಜೀವನದ ನಿಯಮ. ಯಾವುದೂ ಶಾಶ್ವತವಲ್ಲ, ದೈಹಿಕ ಸೌಂದರ್ಯ ಕೂಡ. ಆದರೆ ನನ್ನ ವಯಸ್ಸಿಗೆ ತಕ್ಕಂತೆ ನಾನು ಆರೋಗ್ಯವಾಗಿ, ಫಿಟ್ ಆಗಿ, ಖುಷಿಯಾಗಿದ್ದೀನಿ. ದೇವರು ಕೊಟ್ಟಿದ್ದಕ್ಕೆ ನಾನು ಆಭಾರಿ. ನನಗೆ ಅದೇ ಮುಖ್ಯ,&rdquo; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನೊಬ್ಬ ಬಳಕೆದಾರ, &ldquo;ಸರಿಯಾದ ಸಮಯಕ್ಕೆ ಮದುವೆ ಆಗಿದ್ರೆ ಇವತ್ತು ನಿಮ್ಮ ಮಕ್ಕಳೇ ದೊಡ್ಡವರಾಗಿರ್ತಿದ್ರು&rdquo; ಎಂದು ಕೇಳಿದ್ದ. ಈ ಕಾಮೆಂಟ್&zwnj;ಗೆ ಶಮಿತಾ ಶೆಟ್ಟಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. &ldquo;ನೀನು ಮದುವೆ ಆಗಿ ಏನು ಕಿತ್ತಾಕಿದ್ದೀಯಾ (ಭಾಯಿ)? ಮುಖ್ಯವಾಗಿ, ಅವಿವಾಹಿತ ಮಹಿಳೆಯರನ್ನು ಏಜ್-ಶೇಮ್ ಮಾಡಲು ಮತ್ತು ನಿಮ್ಮ ಪಿತೃಪ್ರಧಾನ, ಹಳೆ ಕಾಲದ ಮನಸ್ಥಿತಿಯನ್ನು ಹೇರಲು ನಮ್ಮನ್ನು ಯಾಕೆ ಫಾಲೋ ಮಾಡ್ತೀರಾ? ದಯವಿಟ್ಟು ಒಂದು ಉಪಕಾರ ಮಾಡಿ, ತಕ್ಷಣ ನನ್ನನ್ನು ಅನ್&zwnj;ಫಾಲೋ ಮಾಡಿ,&rdquo; ಎಂದು ಖಾರವಾಗಿ ಬರೆದಿದ್ದಾರೆ.&lt;/p&gt;&lt;img&gt;&lt;p&gt;ಶಮಿತಾ ಶೆಟ್ಟಿ ಅವರ ಈ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಮಹಿಳೆಯರನ್ನು ಮದುವೆ ಮತ್ತು ವಯಸ್ಸಿನ ಆಧಾರದ ಮೇಲೆ ಅಳೆಯುವುದು ತಪ್ಪು ಎಂದು ಹಲವು ಬಳಕೆದಾರರು ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಕೆಲವರು ಶಮಿತಾ ಅವರ ದಿಟ್ಟತನವನ್ನು ಹೊಗಳಿದ್ದಾರೆ. ಶಮಿತಾ ಶೆಟ್ಟಿ ಅವರು 'ಮೊಹಬ್ಬತೇನ್', 'ಝೆಹರ್', 'ಬೇವಾಫಾ' ಮತ್ತು 'ಕ್ಯಾಶ್' ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, 'ಬಿಗ್ ಬಾಸ್ 15', 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 9' ಮತ್ತು 'ಝಲಕ್ ದಿಖ್ಲಾ ಜಾ 8' ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ನಟಿ ಕೊನೆಯದಾಗಿ 'ದಿ ಟೆನೆಂಟ್' ವೆಬ್ ಸಿರೀಸ್&zwnj;ನಲ್ಲಿ ಕಾಣಿಸಿಕೊಂಡಿದ್ದರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/shamita-shettys-fiery-response-to-trolls-over-age-and-marriage-goes-viral-gvd-ud6rnts"/>
        </item>
        <item>
            <title><![CDATA['ಒಂದು ದಿನ ನೀನು ಸಂಪೂರ್ಣ ನಾಶವಾಗುತ್ತೀಯ': ಹನಿ ಸಿಂಗ್‌ಗೆ ಶಾರುಖ್-ಅಕ್ಷಯ್ ನೀಡಿದ ಎಚ್ಚರಿಕೆ ಏನು?]]></title>
            <link>https://kannada.asianetnews.com/entertainment/honey-singh-recalls-shah-rukh-khan-and-akshay-kumars-stern-warning-about-his-downfall-gvd/articleshow-97i7gmf</link>
            <guid isPermaLink="true">https://kannada.asianetnews.com/entertainment/honey-singh-recalls-shah-rukh-khan-and-akshay-kumars-stern-warning-about-his-downfall-gvd/articleshow-97i7gmf</guid>
            <pubDate>Thu, 28 May 2026 16:16:12 +0530</pubDate>
            <description><![CDATA[&lt;p&gt;ರಾಪರ್ ಮತ್ತು ಸಿಂಗರ್ ಯೋ ಯೋ ಹನಿ ಸಿಂಗ್&zwnj; ತಮ್ಮ ಕೆರಿಯರ್&zwnj;ನ ಅತ್ಯಂತ ಕಷ್ಟದ ದಿನಗಳ ಬಗ್ಗೆ ದೊಡ್ಡ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಯಶಸ್ಸಿನ ಶಿಖರದಲ್ಲಿದ್ದಾಗ ತಾನು ಡ್ರಗ್ಸ್, ಅಹಂಕಾರ ಮತ್ತು ಮಾನಸಿಕ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksq31qhc3axvsy5ydv8w4e89,imgname-jbjk-1779965156908.png" type="image/jpeg" height="390" width="690"/>
            <content:encoded><![CDATA[&lt;p&gt;ಫೇಮಸ್ ರಾಪರ್ ಮತ್ತು ಸಿಂಗರ್ ಯೋ ಯೋ ಹನಿ ಸಿಂಗ್ ತಮ್ಮ ಕೆರಿಯರ್&zwnj;ನ ಕರಾಳ ದಿನಗಳ ಬಗ್ಗೆ ದೊಡ್ಡ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿದ್ದಾಗ ಡ್ರಗ್ಸ್, ಅಹಂಕಾರ ಮತ್ತು ಮಾನಸಿಕ ಒತ್ತಡಕ್ಕೆ ಸಿಲುಕಿದ್ದೆ ಎಂದಿದ್ದಾರೆ. ಬಾಲಿವುಡ್ ಸೂಪರ್&zwnj;ಸ್ಟಾರ್&zwnj;ಗಳಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್, 'ಈ ಚಟ ನಿನ್ನನ್ನು ಒಂದು ದಿನ ಸಂಪೂರ್ಣವಾಗಿ ನಾಶಮಾಡುತ್ತೆ' ಎಂದು ಎಚ್ಚರಿಕೆ ನೀಡಿದ್ದರಂತೆ. ಆ ಸಮಯದಲ್ಲಿ ನಾನು ನನ್ನನ್ನೇ ಗುರುತಿಸಲಾಗದ ಸ್ಥಿತಿಯಲ್ಲಿದ್ದೆ ಎಂದು ಹನಿ ಸಿಂಗ್ ಒಪ್ಪಿಕೊಂಡಿದ್ದಾರೆ.&lt;/p&gt;&lt;p&gt;ರಾಪರ್ ಮತ್ತು ಸಿಂಗರ್ ಯೋ ಯೋ ಹನಿ ಸಿಂಗ್ ತಮ್ಮ ಕೆರಿಯರ್&zwnj;ನ ಅತ್ಯಂತ ಕಷ್ಟದ ದಿನಗಳ ಬಗ್ಗೆ ದೊಡ್ಡ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಯಶಸ್ಸಿನ ಶಿಖರದಲ್ಲಿದ್ದಾಗ ತಾನು ಡ್ರಗ್ಸ್, ಅಹಂಕಾರ ಮತ್ತು ಮಾನಸಿಕ ಒತ್ತಡದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದೆ ಎಂದು ಅವರು ಹೇಳಿದ್ದಾರೆ. ಬಾಲಿವುಡ್ ಸೂಪರ್&zwnj;ಸ್ಟಾರ್&zwnj;ಗಳಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್, ಈ ಡ್ರಗ್ಸ್ ಚಟ ಒಂದು ದಿನ ನಿನ್ನನ್ನು ಪೂರ್ತಿಯಾಗಿ ಬರ್ಬಾದ್ ಮಾಡುತ್ತೆ ಎಂದು ಹಲವು ಬಾರಿ ಎಚ್ಚರಿಸಿದ್ದರು ಎಂಬುದನ್ನೂ ಹನಿ ಸಿಂಗ್ ತಿಳಿಸಿದ್ದಾರೆ. ಆ ಸಮಯದಲ್ಲಿ ನಾನು ನನ್ನನ್ನೇ ಗುರುತಿಸಲು ಆಗುತ್ತಿರಲಿಲ್ಲ, ನನ್ನ ಯೋಚನಾ ಲಹರಿಯೇ ಬದಲಾಗಿತ್ತು ಎಂದು ಸಿಂಗರ್ ಒಪ್ಪಿಕೊಂಡಿದ್ದಾರೆ. ಸದ್ಯ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ನಾನೇ ದೇವರು ಎಂದುಕೊಂಡಿದ್ದೆ&lt;/strong&gt;&lt;/p&gt;&lt;p&gt;ABtalks ಪಾಡ್&zwnj;ಕಾಸ್ಟ್&zwnj;ನಲ್ಲಿ ಮಾತನಾಡಿದ ಹನಿ ಸಿಂಗ್, 2013-14ರಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದರೂ ಒಳಗೊಳಗೆ ಖುಷಿಯಾಗಿರಲಿಲ್ಲ ಎಂದಿದ್ದಾರೆ. &quot;ನಾನು ನನ್ನ ಪ್ರಜ್ಞೆಯಲ್ಲೇ ಇರಲಿಲ್ಲ. ನನ್ನ ನಡಿಗೆ, ಮಾತು ಎಲ್ಲವೂ ಬೇರೆಯದ್ದೇ ರೀತಿ ಇತ್ತು, ಎಲ್ಲರನ್ನೂ ಅವಮಾನಿಸುತ್ತಿದ್ದೆ. ಎಲ್ಲವನ್ನೂ ನಾನೇ ಮಾಡಿದ್ದು ಅಂದುಕೊಂಡಿದ್ದೆ. ನನ್ನನ್ನು ನಾನೇ ದೇವರು ಅಂತಾನೂ ಹೇಳಿಕೊಳ್ಳುತ್ತಿದ್ದೆ. ಚಿಕ್ಕ ವಯಸ್ಸಿಗೆ ದುಡ್ಡು, ಯಶಸ್ಸು ಎರಡೂ ಸಿಕ್ಕಿತ್ತು, ಅದೇ ಸಮಯದಲ್ಲಿ ಡ್ರಗ್ಸ್ ಕೂಡಾ ಮಾಡುತ್ತಿದ್ದೆ. ನಾನು ಮಾನಸಿಕವಾಗಿ ತುಂಬಾನೇ ಅಪಾಯಕಾರಿ ಸ್ಥಿತಿಗೆ ತಲುಪಿದ್ದೆ&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಎಚ್ಚರಿಕೆ ನೀಡಿದ್ದರು&lt;/strong&gt;&lt;/p&gt;&lt;p&gt;ಇಂಡಸ್ಟ್ರಿಯ ಹಲವು ದೊಡ್ಡ ಸ್ಟಾರ್&zwnj;ಗಳಿಗೆ ತನ್ನ ಸ್ಥಿತಿ ಅರ್ಥವಾಗಿತ್ತು ಎಂದು ಹನಿ ಸಿಂಗ್ ಹೇಳಿದ್ದಾರೆ. &quot;ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಸ್ಟಾರ್&zwnj;ಗಳು ತುಂಬಾ ಸರಳ ವ್ಯಕ್ತಿಗಳು. ಅವರಲ್ಲಿ ಯಾವುದೇ ಕತ್ತಲೆ ಇಲ್ಲ. ಅವರು ನನ್ನನ್ನು ನೋಡಿ, ನಾನು ಮಾಡುತ್ತಿರುವುದು ತಪ್ಪು ಎಂದು ಹೇಳುತ್ತಿದ್ದರು. ಅದರಲ್ಲೂ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್. ಶಾರುಖ್ ಖಾನ್ ಹಲವು ಬಾರಿ ನನಗೆ, 'ಇದು ನಿನ್ನನ್ನು ಹಾಳು ಮಾಡುತ್ತೆ, ಮುಗಿಸಿಬಿಡುತ್ತೆ, ಬರ್ಬಾದ್ ಮಾಡುತ್ತೆ' ಎಂದು ಹೇಳಿದ್ದರು&quot; ಎಂದಿದ್ದಾರೆ.&lt;/p&gt;&lt;p&gt;&lt;strong&gt;ಡ್ರಗ್ಸ್ ಮತ್ತು ಬೈಪೋಲಾರ್ ಡಿಸಾರ್ಡರ್&zwnj;ನಿಂದ ಕೆರಿಯರ್ ನಾಶ&lt;/strong&gt;&lt;/p&gt;&lt;p&gt;ತನ್ನ ಈ ದುಸ್ಥಿತಿಗೆ ಮನರಂಜನಾ ಇಂಡಸ್ಟ್ರಿ ಕಾರಣವಲ್ಲ ಎಂದು ಹನಿ ಸಿಂಗ್ ಇದೇ ಸಂವಾದದಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ, ಇದೆಲ್ಲವೂ ಅವರದೇ ತಪ್ಪುಗಳು ಮತ್ತು ನಿರ್ಧಾರಗಳ ಫಲ. 'ದೇಸಿ ಕಲಾಕಾರ್' ಹಾಡಿನ ಯಶಸ್ಸಿನ ನಂತರ ಅವರು ಬೈಪೋಲಾರ್ ಡಿಸಾರ್ಡರ್ ಮತ್ತು ಡ್ರಗ್ಸ್ ಚಟಕ್ಕೆ ಬಲಿಯಾಗಿದ್ದರು. 2017ರಲ್ಲಿ ಅವರ ಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ, ಅವರು ಸಂಗೀತದಿಂದ ದೂರ ಉಳಿದು ಚಿಕಿತ್ಸೆ ಆರಂಭಿಸಿದರು. ಲಲ್ಲನ್&zwnj;ಟಾಪ್&zwnj;ಗೆ ನೀಡಿದ ಸಂದರ್ಶನದಲ್ಲಿ, ತಾನು ಡ್ರಗ್ಸ್ ಮತ್ತು ಆಲ್ಕೋಹಾಲ್&zwnj;ನಲ್ಲಿ ಮುಳುಗಿ ಹೋಗಿದ್ದೆ ಎಂದು ಹನಿ ಸಿಂಗ್ ಹೇಳಿದ್ದರು. ಅವರು 12-15 ಗಂಟೆಗಳ ಕಾಲ ಜಾಯಿಂಟ್ ಸೇದುತ್ತಿದ್ದರು ಮತ್ತು ಹಲವು ಬಾಟಲಿಗಳನ್ನು ಖಾಲಿ ಮಾಡುತ್ತಿದ್ದರು. ಹನಿ ಸಿಂಗ್ ಪ್ರಕಾರ, &ldquo;ನಾನು ನನ್ನ ಕುಟುಂಬವನ್ನೇ ಬಿಟ್ಟಿದ್ದೆ. ನನ್ನ ಮೇಲಿನ ಕಂಟ್ರೋಲ್ ಕಳೆದುಕೊಂಡಿದ್ದೆ. ಒಮ್ಮೆ ನಶೆಯಲ್ಲಿದ್ದಾಗ ನನ್ನ ಸ್ನೇಹಿತನ ಹೊಟ್ಟೆಗೆ ಎಂಟು ಬಾರಿ ಕಚ್ಚಿದ್ದೆ.&rdquo;&lt;/p&gt;&lt;h2&gt;&lt;strong&gt;ಕಮ್&zwnj;ಬ್ಯಾಕ್ ನಂತರ ಹನಿ ಸಿಂಗ್ ಜೀವನ ಮತ್ತೆ ಹಳಿಗೆ ಬಂದಿದ್ದು ಹೇಗೆ?&lt;/strong&gt;&lt;/h2&gt;&lt;p&gt;ದೀರ್ಘ ವಿರಾಮದ ನಂತರ, ಹನಿ ಸಿಂಗ್ 2023ರಲ್ಲಿ 'ಕಲಾಸ್ಟಾರ್' ಮೂಲಕ ಕಮ್&zwnj;ಬ್ಯಾಕ್ ಮಾಡಿದರು. ಇತ್ತೀಚೆಗೆ ಅವರು '51 Glorious Days' ಆಲ್ಬಂ ಬಿಡುಗಡೆ ಮಾಡಿದ್ದು, 'ದೇ ದೇ ಪ್ಯಾರ್ ದೇ 2' ಚಿತ್ರದ 'ಝೂಮ್ ಶರಾಬಿ' ಹಾಡಿಗೂ ಧ್ವನಿ ನೀಡಿದ್ದಾರೆ. ಸದ್ಯ ಅವರು ಮ್ಯೂಸಿಕ್ ಟೂರ್ ಮತ್ತು ಹೊಸ ಪ್ರಾಜೆಕ್ಟ್&zwnj;ಗಳಲ್ಲಿ ಬ್ಯುಸಿಯಾಗಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/honey-singh-recalls-shah-rukh-khan-and-akshay-kumars-stern-warning-about-his-downfall-gvd/articleshow-97i7gmf"/>
        </item>
        <item>
            <title><![CDATA[ವೈರಲ್ AI ಫೋಟೋಗೆ ಸಿಟ್ಟಾದ ನಟಿ; ಇಂಥ 'ಟಾಕ್ಸಿಕ್' ಯೋಚನೆಯನ್ನೇ ನಿಲ್ಲಿಸಿ ಎಂದ ಉರ್ವಶಿ ರೌಟೇಲಾ]]></title>
            <link>https://kannada.asianetnews.com/gallery/cine-world/actress-urvashi-rautela-hits-back-at-a-viral-ai-image-that-mocks-her-stardom-on-social-media-tqisemy</link>
            <guid isPermaLink="true">https://kannada.asianetnews.com/gallery/cine-world/actress-urvashi-rautela-hits-back-at-a-viral-ai-image-that-mocks-her-stardom-on-social-media-tqisemy</guid>
            <pubDate>Thu, 28 May 2026 16:06:46 +0530</pubDate>
            <description><![CDATA[&lt;p&gt;&quot;ನಾನು ನಿಜವಾಗಿಯೂ ನಂಬುವುದೇನೆಂದರೆ, ಪ್ರತಿಯೊಬ್ಬ ನಟಿಗೂ ತನ್ನದೇ ಆದ ಶ್ರಮದ ಹಾದಿ ಮತ್ತು ಹಣೆಬರಹ ಇರುತ್ತದೆ. ಮಹಿಳೆಯರನ್ನು ಪರಸ್ಪರ ಹೋಲಿಕೆ ಮಾಡುವುದು ಅಥವಾ ಅವರ ನಡುವೆ ಫ್ಯಾನ್ ವಾರ್&zwnj;ಗಳನ್ನು ಸೃಷ್ಟಿಸುವುದು ಕೇವಲ ನಕಾರಾತ್ಮಕತೆಯನ್ನು ಹರಡುತ್ತದೆ. ಮುಂದೆ ಓದಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krtkb8b6gq7dacy81c8dxm3n,imgname-urvashi-rautela-1779009167717.jpg" type="image/jpeg" height="390" width="690"/>
            <content:encoded><![CDATA[&lt;p&gt;&quot;ನಾನು ನಿಜವಾಗಿಯೂ ನಂಬುವುದೇನೆಂದರೆ, ಪ್ರತಿಯೊಬ್ಬ ನಟಿಗೂ ತನ್ನದೇ ಆದ ಶ್ರಮದ ಹಾದಿ ಮತ್ತು ಹಣೆಬರಹ ಇರುತ್ತದೆ. ಮಹಿಳೆಯರನ್ನು ಪರಸ್ಪರ ಹೋಲಿಕೆ ಮಾಡುವುದು ಅಥವಾ ಅವರ ನಡುವೆ ಫ್ಯಾನ್ ವಾರ್&zwnj;ಗಳನ್ನು ಸೃಷ್ಟಿಸುವುದು ಕೇವಲ ನಕಾರಾತ್ಮಕತೆಯನ್ನು ಹರಡುತ್ತದೆ. ಮುಂದೆ ಓದಿ..&lt;/p&gt;&lt;img&gt;&lt;p&gt;ಐಶ್ವರ್ಯ ರೈ ಮುಂದೆ ಮಂಡಿಯೂರಿ ಕುಳಿತ ಉರ್ವಶಿ ರೌಟೇಲಾ?&lt;/p&gt;&lt;p&gt;ಮುಂಬೈ: ಬಾಲಿವುಡ್&zwnj;ನ ಗ್ಲಾಮರಸ್ ನಟಿ ಉರ್ವಶಿ ರೌಟೇಲಾ (Urvashi Rautela) ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಕಾನ್ ಫಿಲ್ಮ್ ಫೆಸ್ಟಿವಲ್&zwnj;ನಲ್ಲಿ ಐದನೇ ಬಾರಿ ಮಿಂಚಿ ಬಂದಿದ್ದ ಅವರಿಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಶಾಕ್ ಎದುರಾಗಿದೆ. ಅವರ ಸ್ಟಾರ್&zwnj;ಡಮ್ ಅನ್ನು ಅವಮಾನಿಸುವ ರೀತಿಯಲ್ಲಿ ತಯಾರಿಸಲಾದ ಒಂದು ಎಐ (Artificial Intelligence) ಚಿತ್ರ ಈಗ ಇಂಟರ್ನೆಟ್&zwnj;ನಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಉರ್ವಶಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;img&gt;&lt;p&gt;ಏನಿದು ಎಐ ಚಿತ್ರದ ವಿವಾದ?&lt;/p&gt;&lt;p&gt;ಇತ್ತೀಚೆಗೆ ಅಭಿಮಾನಿಯೊಬ್ಬರು ಸಿದ್ಧಪಡಿಸಿದ ಎಐ ಫೋಟೋವೊಂದು ಸಖತ್ ವೈರಲ್ ಆಗಿತ್ತು. ಇದರಲ್ಲಿ ಬಾಲಿವುಡ್&zwnj;ನ ಪ್ರಮುಖ ನಟಿಯರ &quot;ಸ್ಥಾನಮಾನ&quot; ಅಥವಾ &quot;ಹೈರಾರ್ಕಿ&quot;ಯನ್ನು ತೋರಿಸಲಾಗಿತ್ತು. ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ದೊಡ್ಡ ಸಿಂಹಾಸನದ ಮೇಲೆ ಮಹಾರಾಣಿಯಂತೆ ಕುಳಿತಿದ್ದರೆ, ಪ್ರಿಯಾಂಕಾ ಚೋಪ್ರಾ ಪಕ್ಕದ ಸಣ್ಣ ಸಿಂಹಾಸನದಲ್ಲಿದ್ದರು. ಮಾಧುರಿ ದೀಕ್ಷಿತ್ ಮತ್ತು ದೀಪಿಕಾ ಪಡುಕೋಣೆ ಅವರ ಪಕ್ಕದಲ್ಲಿ ನಿಂತಿದ್ದರು. ಆದರೆ, ಆಲಿಯಾ ಭಟ್, ಕತ್ರಿನಾ ಕೈಫ್, ಕರೀನಾ ಕಪೂರ್ ಮತ್ತು ಉರ್ವಶಿ ರೌಟೇಲಾ ಅವರು ಕೆಳಗೆ ಮಂಡಿಯೂರಿ ಕುಳಿತಿರುವಂತೆ ತೋರಿಸಲಾಗಿತ್ತು. ಅಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇವರು ಉಳಿದವರಿಗಿಂತ ಕೆಳಗಿನ ಸ್ಥಾನದಲ್ಲಿದ್ದಾರೆ ಎಂಬ ಅರ್ಥ ಬರುವಂತೆ ಈ ಚಿತ್ರವಿತ್ತು.&lt;/p&gt;&lt;img&gt;&lt;p&gt;ಈ ವಿಷಕಾರಿ ಸಂಸ್ಕೃತಿಯನ್ನು ನಿಲ್ಲಿಸಿ: ಉರ್ವಶಿ ಕಿಡಿ&lt;/p&gt;&lt;p&gt;ಈ ಚಿತ್ರದ ಕುರಿತು ಇನ್&zwnj;ಸ್ಟಾಗ್ರಾಮ್ ಸ್ಟೋರಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉರ್ವಶಿ ರೌಟೇಲಾ, ಹೋಲಿಕೆ ಮಾಡುವ ಅಭಿಮಾನಿಗಳ ವಿರುದ್ಧ ಗುಡುಗಿದ್ದಾರೆ. &quot;ನಾನು ನಿಜವಾಗಿಯೂ ನಂಬುವುದೇನೆಂದರೆ, ಪ್ರತಿಯೊಬ್ಬ ನಟಿಗೂ ತನ್ನದೇ ಆದ ಶ್ರಮದ ಹಾದಿ ಮತ್ತು ಹಣೆಬರಹ ಇರುತ್ತದೆ. ಮಹಿಳೆಯರನ್ನು ಪರಸ್ಪರ ಹೋಲಿಕೆ ಮಾಡುವುದು ಅಥವಾ ಅವರ ನಡುವೆ ಫ್ಯಾನ್ ವಾರ್&zwnj;ಗಳನ್ನು ಸೃಷ್ಟಿಸುವುದು ಕೇವಲ ನಕಾರಾತ್ಮಕತೆಯನ್ನು ಹರಡುತ್ತದೆ. ನಾವು ಪ್ರತಿಭೆ, ಬೆಳವಣಿಗೆ ಮತ್ತು ಮಾನವೀಯತೆಯನ್ನು ಸಂಭ್ರಮಿಸೋಣ. ದಯವಿಟ್ಟು ಈ ವಿಷಕಾರಿ (Toxicity) ಸಂಸ್ಕೃತಿಯನ್ನು ನಿಲ್ಲಿಸಿ&quot; ಎಂದು ಖಡಕ್ ಆಗಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;1,500 ಕೋಟಿ ರೂಪಾಯಿಯ ಗೌನ್!&lt;/p&gt;&lt;p&gt;ಕಾನ್ ಚಲನಚಿತ್ರೋತ್ಸವ 2026ರಲ್ಲಿ (ವರದಿಯ ಅನ್ವಯ) ಉರ್ವಶಿ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕವೇ ಎಲ್ಲರ ಗಮನ ಸೆಳೆದಿದ್ದರು. ಅವರು ಧರಿಸಿದ್ದ ಜೋಲಿಪೋಲಿ ಕೌಚರ್ (JoliPoli Couture) ವಿನ್ಯಾಸದ ಕ್ರಿಸ್ಟಲ್ ಗೌನ್ ಬೆಲೆ ಬರೋಬ್ಬರಿ 1,500 ಕೋಟಿ ರೂಪಾಯಿ (155 ಮಿಲಿಯನ್ ಡಾಲರ್) ಎಂದು ಹೇಳಲಾಗಿದ್ದು, ಇದು ಫ್ಯಾಷನ್ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.&lt;/p&gt;&lt;img&gt;&lt;p&gt;ಉರ್ವಶಿ ಮುಂದಿನ ಸಿನಿಮಾಗಳು:&lt;/p&gt;&lt;p&gt;ಸದ್ಯ ಉರ್ವಶಿ ವೃತ್ತಿಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ರಣದೀಪ್ ಹೂಡಾ ಜೊತೆಗಿನ 'ಇನ್ಸ್&zwnj;ಪೆಕ್ಟರ್ ಅವಿನಾಶ್ 2' ಚಿತ್ರಕ್ಕಾಗಿ ಅವರು ಈಗಾಗಲೇ ಮೆಚ್ಚುಗೆ ಗಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅಕ್ಷಯ್ ಕುಮಾರ್ ಅಭಿನಯದ ದೊಡ್ಡ ತಾರಾಗಣದ ಕಾಮಿಡಿ ಸಿನಿಮಾ 'ವೆಲ್&zwnj;ಕಮ್ ಟು ದಿ ಜಂಗಲ್', 'ಬ್ಲ್ಯಾಕ್ ರೋಸ್' ಮತ್ತು 'ಕಸೂರ್ 2' ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಅಷ್ಟೇ ಅಲ್ಲದೆ, ಅಂತರಾಷ್ಟ್ರೀಯ ಪಾಪ್ ಸ್ಟಾರ್ ಜೇಸನ್ ಡೆರುಲೋ ಅವರೊಂದಿಗೆ ಹೊಸ ಮ್ಯೂಸಿಕ್ ಅಲ್ಬಂಗೆ ಸಹಿ ಹಾಕಿದ್ದು, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಸ್ಟಾರ್ ನಟಿಯರ ನಡುವೆ ತಾರತಮ್ಯ ಮಾಡುವ ಅಭಿಮಾನಿಗಳಿಗೆ ಉರ್ವಶಿ ನೀಡಿರುವ ಈ ಉತ್ತರ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, &quot;ಮಹಿಳೆಯರು ಪರಸ್ಪರ ಗೌರವಿಸಬೇಕು&quot; ಎಂಬ ಅವರ ಸಂದೇಶಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/actress-urvashi-rautela-hits-back-at-a-viral-ai-image-that-mocks-her-stardom-on-social-media-tqisemy"/>
        </item>
        <item>
            <title><![CDATA[Yash: ಯಶ್ ನಿಜವಾದ ಹೆಸರು ನವೀನ್ ಅಲ್ಲ, ಇನ್ನೊಂದು.. ಇಲ್ಲಿದೆ ಹೊಸ ಟ್ವಿಸ್ಟ್!]]></title>
            <link>https://kannada.asianetnews.com/sandalwood/yash-mother-pushpa-arunkumar-recently-shared-a-secret-that-rocking-star-real-name-is-yashwanth-and-not-naveen/articleshow-9083a4f</link>
            <guid isPermaLink="true">https://kannada.asianetnews.com/sandalwood/yash-mother-pushpa-arunkumar-recently-shared-a-secret-that-rocking-star-real-name-is-yashwanth-and-not-naveen/articleshow-9083a4f</guid>
            <pubDate>Thu, 28 May 2026 13:55:40 +0530</pubDate>
            <description><![CDATA[&lt;p&gt;ನಾಟಕ, ಧಾರಾವಾಹಿಗಳಲ್ಲಿ ನಟಿಸುವಾಗ ಯಶ್ ಅವರ ಹೆಸರು ಇದ್ದಿದ್ದು ನವೀನ್ ಅಂತಲೇ ಅಗಿತ್ತು. ಆದರೆ, ಯಾವಾಗ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸಿದರೋ ಆಗ ಅವರ ಹೆಸರನ್ನು 'ಯಶ್' ಎಂದು ಬದಲಾಯಿಸಲಾಯಿತು. ಈ ಸಂಗತಿ ಹೆಚ್ಚಿನ ಎಲ್ಲರಿಗೂ ಗೊತ್ತಿದೆ. ಆದರೆ, ಈಗ ನೋಡಿದರೆ ಯಶ್ ಅಮ್ಮ ಹೊಸ ರಹಸ್ಯ ಹೇಳಿದ್ದಾರೆ!..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk1bxvwmm8ccd76aegfsg1a3,imgname-rocking-star-yash--1--1772793819028.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಶ್ ಮೂಲ ಹೆಸರಿನ ಸೀಕ್ರೆಟ್!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ನಟ, ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ (Yash) ಅವರೀಗ ಇಡೀ ಜಗತ್ತಿಗೆ 'ಯಶ್' ಎಂದೇ ಪರಿಚಿತರು. ಆದರೆ ಅವರ ಮೂಲ ಹೆಸರು, ಸ್ಕೂಲ್-ಕಾಲೇಜಿನ ಹೆಸರು (ಮೂಲ ಹೆಸರು) ನವೀನ್ ಕುಮಾರ್ ಗೌಡ (Naveen Kumar Gowda) ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಅದನ್ನೇ ಯಶ್ ಸಿನಿಮಾರಂಗಕ್ಕೆ ಬಂದಮೇಲೆ ಅವರನ್ನು ಲವ್ ಮಾಡಿ ಮದುವೆಯಾಗಿರುವ ರಾಧಿಕಾ ಪಂಡಿತ್ (Radhika Pandit) ಕೂಡ ಹೇಳಿದ್ದರು. (ಯಶ್ ಅವರು ಈಗ ಕಾನೂನಾತ್ಮಕವಾಗಿಯೂ ತಮ್ಮ ಹೆಸರನ್ನು 'ಯಶ್' ಎಂದೇ ಬದಲಾಯಿಸಿಕೊಂಡಿದ್ದಾರೆ ಎಂದು ರಾಧಿಕಾ ಒಮ್ಮೆ ಸ್ಪಷ್ಟಪಡಿಸಿದ್ದಾರೆ.)&lt;/p&gt;&lt;p&gt;&lt;img&gt;&lt;/p&gt;&lt;p&gt;ಆದರೆ ಸ್ವತಃ ಯಶ್ ಅವರನ್ನು ಹೆತ್ತಿರುವ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಯಶ್ ಅವರ ಮೊಟ್ಟಮೊದಲ ಹೆಸರು ನವೀನ್ ಕುಮಾರ್ ಅಲ್ಲ, ಜನವರಿಯಲ್ಲಿ ಅವರು ಹುಟ್ಟಿರುವುದರಿಂದ (ಹೊಸ ವರ್ಷ, ನವೀನ ವರ್ಷ) ಅವರನ್ನು &lsquo;ನವೀನ&rsquo; ಅಂತ ಕರೆಯುತ್ತಿದ್ದೆವು. ಅದೇ ಸ್ಕೂಲು-ಕಾಲೇಜ್ ಸೇರಿದಂತೆ ಎಲ್ಲಾ ದಾಖಲೆಯಲ್ಲಿ ಬಂದಿತ್ತು. ಆದರೆ, ಅವರಿಗೆ ಹುಟ್ಟಿದಾಗ ನಮ್ಮ ತಾಯಿಯ ಮನೆಯಲ್ಲಿ, ಕುಟುಂಬದವರು ಪ್ರೀತಿಯಿಂದ ನಾವೆಲ್ಲಾ ಇಟ್ಟ ಹೆಸರು ಯಶವಂತ್ ಎಂಬ ಸೀಕ್ರೆಟ್&zwnj; ಬಿಚ್ಚಿಟ್ಟಿದ್ದಾರೆ.&lt;/p&gt;&lt;h2&gt;ಯಶ್ ಅವರ ನಿಜ ಹೆಸರು ನವೀನ್ ಕುಮಾರ್ ಅಲ್ಲ!&lt;/h2&gt;&lt;p&gt;ಇತ್ತೀಚೆಗೆ ('ಲೋ ನವೀನ' ಸಿನಿಮಾ ವೇಳೆ) ಯಶ್ ಅವರ ತಾಯಿ ಪುಷ್ಪಾ ಅವರು ಯಶ್ ಅವರ ನಿಜ ಹೆಸರು ನವೀನ್ ಕುಮಾರ್ ಅಲ್ಲ, ಅವರನ್ನು ನಾವು ಪ್ರೀತಿಯಿಂದ ಯಶವಂತ್ ಅಂತ ಕರೆಯುತ್ತಿದ್ದೆವು. ಆದರೆ, ಜನವರಿಯಲ್ಲಿ ಹುಟ್ಟಿದ್ದಾನೆ ಎಂಬ ಕಾರಣಕ್ಕೆ ಆಮೇಲೆ ನವೀನ್ ಅಂತ ಇಟ್ಟಿದ್ದೇವೆ. ಆದರೆ, ಸಿನಿಮಾಕ್ಕೆ ಬಂದ ಮೇಲೆ ಮತ್ತೆ ಆತನ ಮೊದಲ ಹೆಸರು ಯಶವಂತ್ ಎಂಬುದೇ ಯಶ್ ಆಗಿ ಮತ್ತೆ ಬಂತು' ಎಂದು ಹೇಳಿದ್ದಾರೆ. ಈ ಮೂಲಕ, ಇಷ್ಟು ದಿನವೂ ಇಡೀ ಜಗತ್ತಿಗೆ ಗೊತ್ತಿಲ್ಲದ ಯಶ್ ನಿಜವಾದ ಹೆಸರು, ಅಂದರೆ ಹುಟ್ಟಿದಾಗ ಇಟ್ಟ ಹೆಸರು 'ಯಶವಂತ್' ಅಥವಾ 'ಯಶ್&zwnj;ವಂತ್' ಎಂಬುದು ಗೊತ್ತಿರಲಿಲ್ಲ. ಅದೀಗ ಯಶ್ ಅಮ್ಮ ಪುಷ್ಪಾ ಅವರ ಮೂಲಕ ಜಗಜ್ಜಾಹೀರಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಹೌದು, ಯಶ್ ನಾಟಕ, ಧಾರಾವಾಹಿಗಳಲ್ಲಿ ನಟಿಸುವಾಗ ಅವರ ಹೆಸರು ಇದ್ದಿದ್ದು ನವೀನ್ ಅಂತಲೇ ಅಗಿತ್ತು. ಆದರೆ, ಯಾವಾಗ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸಿದರೋ ಆಗ ಅವರ ಹೆಸರನ್ನು 'ಯಶ್' ಎಂದು ಬದಲಾಯಿಸಲಾಯಿತು. ಈ ಸಂಗತಿ ಹೆಚ್ಚಿನ ಎಲ್ಲರಿಗೂ ಗೊತ್ತಿದೆ. ಆದರೆ, ಈಗ ಇರುವ ಹೆಸರು ಯಶ್ ಈ ಸೂಪರ್ ಸ್ಟಾರ್ ನಟನ ಮೊಟ್ಟಮೊದಲ ಹೆಸರಿನ ಶಾರ್ಟ್ ರೂಪ ಎಂಬುದು ಸತ್ಯ ಸಂಗತಿ. ಅದೆಷ್ಟೋ ಜನರಿಗೆ ಗೊತ್ತಿಲ್ಲದ ಈ ಸತ್ಯ ಇಂದು ವೈರಲ್ ಆಗುತ್ತಿದೆ.&lt;/p&gt;&lt;h3&gt;'ಟಾಕ್ಸಿಕ್' ಹಾಗೂ 'ರಾಮಾಯಣ' ಬಿಡುಗಡೆ!&lt;/h3&gt;&lt;p&gt;ಅಂದಹಾಗೆ, ನಟ ಯಶ್ ಅವರ ಮುಂಬರುವ ಸಿನಿಮಾಗಳಾದ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಇದೇ ವರ್ಷ ಬಿಡುಗಡೆ ಆಗಲಿವೆ ಎನ್ನಲಾಗುತ್ತಿದೆ. ರಾಮಾಯಣ ಚಿತ್ರವು 'ಟಾಕ್ಸಿಕ್&zwnj;'ಗಿಂತಲೂ ಮೊದಲೇ ಚಿತ್ರಮಂದಿರಗಳಿಗೆ ಬರಲಿದೆ ಎಂಬ ಸಂಗತಿ ಈಗಾಗಲೇ ಸುದ್ದಿಯಾಗಿದೆ. ಯಶ್ ನಟನೆ ಮಾತ್ರವಲ್ಲ, ನಿರ್ಮಾಣದಲ್ಲೂ ಪಾಲುದಾರರಾಗಿರುವ 'ರಾಮಾಯಣ' ಚಿತ್ರವು ದೀಪಾವಳಿ ಸಮಯಕ್ಕೆ ತೆರೆಗೆ ಬರಲಿದ್ದು, ಟಾಕ್ಸಿಕ್ ಚಿತ್ರವು ಡಿಸೆಂಬರ್&zwnj;ನಲ್ಲಿ ತೆರೆಯ ಮೇಲೆ ದರ್ಶನ ನೀಡಲಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕವನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಟಾಕ್ಸಿಕ್ ಚಿತ್ರವು ಹಾಲಿವುಡ್ ರೇಂಜ್&zwnj; ಮೇಕಿಂಗ್ ಮೂಲಕ, ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕೆಜಿಎಫ್ (KGF) ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದ ನಟ ಯಶ್ ಅವರು 'ಟಾಕ್ಸಿಕ್' ಮೂಲಕ 'ಪ್ಯಾನ್ ವರ್ಲ್ಡ್' ಸ್ಟಾರ್ ಆಗಿ ಕನ್ನಡನಾಡನ್ನು ಬೆಳಗಿಸಲಿದ್ದಾರೆ. ಈ ಮೂಲಕ ಕನ್ನಡಿಗರ ಹೆಸರು ವಿಶ್ವಮಟ್ಟದಲ್ಲಿ ರಾರಾಜಿಸಲಿದ್ದು, ಇದು ಟಾಕ್ಸಿಕ್ ಚಿತ್ರದ ಮೂಲಕ ಕನ್ನಡನಾಡಿಗೆ ಸಿಗಲಿರುವ ಮತ್ತೊಮದು 'ಬೋನಸ್' ಎನ್ನಬಹುದು.&lt;/p&gt;&lt;p&gt;&lt;img&gt;&lt;/p&gt;&lt;p&gt;ಒಟ್ಟಿನಲ್ಲಿ, ಯಶ್ ಆಗಿರುವ ಯಶ್&zwnj;ವಂತ್ ಅವರ ಮುಂಬರುವ ಸಿನಿಮಾಗಳಿಗಾಗಿ ಇಡೀ ಜಗತ್ತು ಕಾಯುತ್ತಿದೆ. ಆ ರೇಂಜ್&zwnj;ಗೆ ನಟ ಯಶ್ ಇಂದು ಬೆಳೆದುನಿಂತಿದ್ದಾರೆ. ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕಗಳಿಗಾಗಿ ಇಡೀ ಜಗತ್ತು ಈಗ ಕಾಯುತ್ತಿದೆ. ಎಂದು ಬರಲಿವೆ ಯಶ್ ಸಿನಿಮಾಗಳು? ಸ್ವಲ್ಪ ಕಾಯಬೇಕಷ್ಟೇ, ತೆರೆಯ ಮೇಲಿನ ಅಬ್ಬರಕ್ಕೆ ಇನ್ನೇನು ತುಂಬಾ ಕಾಲ ಕಾಯಬೇಕಿಲ್ಲ ಬಿಡಿ!&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Cinistore (@cinistorekannada)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/yash-mother-pushpa-arunkumar-recently-shared-a-secret-that-rocking-star-real-name-is-yashwanth-and-not-naveen/articleshow-9083a4f"/>
        </item>
        <item>
            <title><![CDATA[Shocking: 50 ಕೋಟಿಯ ಪ್ರವೇಟ್‌ ಜೆಟ್‌ನಲ್ಲಿಓಡಾಡುವ ಈ ನಟಿ CA ಆಗ್ಬೇಕಿತ್ತು, ಆದ್ರೆ ಸೂಪರ್ ಸ್ಟಾರ್ ಆಗಿದ್ದು ಹೇಗೆ?]]></title>
            <link>https://kannada.asianetnews.com/cine-world/nayanthara-to-become-a-chartered-accountant-but-today-she-is-rich-lady-superstar-who-owns-a-private-jet-worth-50-crores/articleshow-oxv72st</link>
            <guid isPermaLink="true">https://kannada.asianetnews.com/cine-world/nayanthara-to-become-a-chartered-accountant-but-today-she-is-rich-lady-superstar-who-owns-a-private-jet-worth-50-crores/articleshow-oxv72st</guid>
            <pubDate>Thu, 28 May 2026 12:19:23 +0530</pubDate>
            <description><![CDATA[&lt;p&gt;ಸಿಎ ಆಗಬೇಕಿದ್ದ ಹುಡುಗಿ ಇವತ್ತು ಭಾರತೀಯ ಚಿತ್ರರಂಗದ ಅತಿ ದೊಡ್ಡ ಬ್ರಾಂಡ್ ಆಗಿ ಬೆಳೆದು ನಿಂತಿರುವುದು ಒಂದು ರೋಚಕ ಸಿನಿಮಾದಂತೆಯೇ ಭಾಸವಾಗುತ್ತದೆ. ಸೋಲು-ಗೆಲುವು, ವಿವಾದಗಳ ನಡುವೆಯೂ ಫೀನಿಕ್ಸ್&zwnj;ನಂತೆ ಎದ್ದು ಬಂದ ಈ ತಾರೆ ಕೋಟ್ಯಂತರ ಯುವತಿಯರಿಗೆ ಸ್ಫೂರ್ತಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kspnaq4aappha0w803e8pzde,imgname-nayanthara-1779950771338.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲೆಕ್ಕದ ಪುಸ್ತಕ ಹಿಡಿಯಬೇಕಿದ್ದ ಕೈಯಲ್ಲಿ ಈಗ 50 ಕೋಟಿಯ ಜೆಟ್: ಲೇಡಿ ಸೂಪರ್&zwnj;ಸ್ಟಾರ್ ನಯನತಾರಾ ಆಸ್ತಿಯ ಅಸಲಿ ಕಥೆ!&lt;/strong&gt;&lt;/p&gt;&lt;p&gt;ಸಿನಿಮಾ ಅಂದಮೇಲೆ ಅಲ್ಲಿ ಹೀರೋಗಳದ್ದೇ ಕಾರುಬಾರು. ನೂರಾರು ಕೋಟಿ ಸಂಭಾವನೆ, ಐಷಾರಾಮಿ ಬಂಗಲೆ, ಪ್ರೈವೇಟ್ ಜೆಟ್&zwnj;ಗಳು ಕೇವಲ ಸ್ಟಾರ್ ನಾಯಕರಿಗೆ ಮಾತ್ರ ಸೀಮಿತ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ಆದರೆ, ಈ ಎಲ್ಲಾ ಪೂರ್ವಾಗ್ರಹಗಳನ್ನು ಮುರಿದು, ಗಂಡುಬೀರಿ ಸಾಮ್ರಾಜ್ಯದಲ್ಲಿ ತನ್ನದೇ ಆದ ಸಿಂಹಾಸನ ಏರಿ ಕುಳಿತಿರುವ ಏಕೈಕ 'ಲೇಡಿ ಸೂಪರ್&zwnj;ಸ್ಟಾರ್' ಎಂದರೆ ಅದು ನಯನತಾರಾ!&lt;/p&gt;&lt;p&gt;&lt;img&gt;&lt;/p&gt;&lt;p&gt;ಸಿಎ ಕನಸಿನಿಂದ ಬೆಳ್ಳಿಪರದೆಯವರೆಗೆ:&lt;/p&gt;&lt;p&gt;ಇವತ್ತು 200 ಕೋಟಿಗೂ ಅಧಿಕ ಆಸ್ತಿಯ ಒಡತಿಯಾಗಿರುವ ನಯನತಾರಾ (Nayanthara) ಅವರ ಅಸಲಿ ಹೆಸರು ಡಯಾನಾ ಮರಿಯಮ್ ಕುರಿಯನ್. ಕಾಲೇಜು ದಿನಗಳಲ್ಲಿ ಈಕೆ ಕಂಡಿದ್ದ ಕನಸು ಚಾರ್ಟರ್ಡ್ ಅಕೌಂಟೆಂಟ್ (CA) ಆಗಬೇಕೆಂದು. ಕೈಯಲ್ಲಿ ಬ್ಯಾಲೆನ್ಸ್ ಶೀಟ್ ಹಿಡಿದು ಲೆಕ್ಕ ಹಾಕಬೇಕಿದ್ದ ಹುಡುಗಿ, ಇಂದು ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನೇ ಬದಲಿಸಿಬಿಟ್ಟಿದ್ದಾರೆ. 2003ರಲ್ಲಿ ಮಲಯಾಳಂನ 'ಮನಸಿನಕ್ಕರೆ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಾಗ, ಈಕೆ ಇಷ್ಟೊಂದು ಎತ್ತರಕ್ಕೆ ಬೆಳೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಸಂಭಾವನೆಯಲ್ಲಿ ಹೀರೋಗಳಿಗೇ ಟಕ್ಕರ್:&lt;/h2&gt;&lt;p&gt;ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಪುರುಷ ಪ್ರಧಾನ ಚಿತ್ರರಂಗಕ್ಕೆ ನಯನತಾರಾ ಸವಾಲು ಹಾಕಿದರು. ಇವತ್ತು ಒಂದು ಸಿನಿಮಾಗೆ ಇವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 10 ರಿಂದ 12 ಕೋಟಿ ರೂಪಾಯಿಗಳು! ದಕ್ಷಿಣ ಭಾರತದಲ್ಲಿ ಸ್ಟಾರ್ ನಟರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಏಕೈಕ ನಟಿ ಇವರು ಎನ್ನಲಾಗುತ್ತದೆ.&lt;/p&gt;&lt;p&gt;ಗಗನಯಾನದ ವೈಭೋಗ - 50 ಕೋಟಿಯ ಪ್ರೈವೇಟ್ ಜೆಟ್:&lt;/p&gt;&lt;p&gt;ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸ್ಟಾರ್ ನಟರು ಪ್ರೈವೇಟ್ ಜೆಟ್&zwnj;ನಲ್ಲಿ ಓಡಾಡುವುದನ್ನು ನಾವು ನೋಡಿದ್ದೇವೆ. ಆದರೆ, ಸ್ವಂತ ಖಾಸಗಿ ವಿಮಾನ ಹೊಂದಿರುವ ದಕ್ಷಿಣದ ಏಕೈಕ ನಟಿ ಎಂಬ ಹೆಗ್ಗಳಿಕೆ ನಯನತಾರಾ ಅವರದ್ದು. ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಈ ಜೆಟ್&zwnj;ನಲ್ಲಿ ಪತಿ ವಿಘ್ನೇಶ್ ಶಿವನ್ ಜೊತೆ ಇವರು ಸಿನಿಮಾ ಶೂಟಿಂಗ್ ಮತ್ತು ರಜೆಗಳಿಗಾಗಿ ಹಾರಾಡುತ್ತಾರೆ. ಇದು ಕೇವಲ ಐಷಾರಾಮಿ ಜೀವನವಲ್ಲ, ಬದಲಾಗಿ ಒಬ್ಬ ಮಹಿಳೆ ತನ್ನ ಶ್ರಮದಿಂದ ಎಂತಹ ಎತ್ತರಕ್ಕಾದರೂ ಏರಬಲ್ಲಳು ಎಂಬುದಕ್ಕೆ ಸಾಕ್ಷಿ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಬ್ಯುಸಿನೆಸ್ ಮ್ಯಾಗ್ನೆಟ್ ನಯನತಾರಾ:&lt;/h3&gt;&lt;p&gt;ನಯನತಾರಾ ಕೇವಲ ನಟಿಯಲ್ಲ, ಒಬ್ಬ ಚಾಣಾಕ್ಷ ಉದ್ಯಮಿ ಕೂಡ ಹೌದು. ಪತಿ ವಿಘ್ನೇಶ್ ಶಿವನ್ ಜೊತೆಗೂಡಿ 'ರೌಡಿ ಪಿಕ್ಚರ್ಸ್' ಮೂಲಕ ಯಶಸ್ವಿ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಇದರ ಜೊತೆಗೆ ಸ್ಕಿನ್ ಕೇರ್ ಬ್ರಾಂಡ್ ಮತ್ತು ಕಾಸ್ಮೆಟಿಕ್ಸ್&zwnj; ಉದ್ಯಮದಲ್ಲೂ ಹೂಡಿಕೆ ಮಾಡಿದ್ದಾರೆ. ಚೆನ್ನೈ, ಹೈದರಾಬಾದ್ ಮತ್ತು ಮುಂಬೈನಲ್ಲಿ ಕೋಟ್ಯಂತರ ಮೌಲ್ಯದ ಐಷಾರಾಮಿ ಬಂಗಲೆಗಳನ್ನು ಹೊಂದಿರುವ ನಯನತಾರಾ ಗ್ಯಾರೇಜ್&zwnj;ನಲ್ಲಿ ಬಿಎಂಡಬ್ಲ್ಯೂ, ಮರ್ಸಿಡಿಸ್ ಬೆಂಜ್ ಮತ್ತು ರೇಂಜ್ ರೋವರ್ ಕಾರುಗಳು ಸಾಲುಗಟ್ಟಿ ನಿಂತಿವೆ.&lt;/p&gt;&lt;p&gt;ಜವಾನ್ ಮೂಲಕ ಬಾಲಿವುಡ್ ಶೇಕ್:&lt;/p&gt;&lt;p&gt;ಇತ್ತೀಚೆಗೆ ಶಾರುಖ್ ಖಾನ್ ಜೊತೆ 'ಜವಾನ್' ಸಿನಿಮಾ ಮೂಲಕ ಬಾಲಿವುಡ್&zwnj;ಗೆ ಎಂಟ್ರಿ ಕೊಟ್ಟ ನಯನತಾರಾ, ಅಲ್ಲಿಯೂ ತಮ್ಮ ಹವಾ ಸೃಷ್ಟಿಸಿದರು. ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾದರೂ ಇಂದಿಗೂ ಸೌತ್ ಇಂಡಸ್ಟ್ರಿಯ ಮೋಸ್ಟ್ ಡಿಮ್ಯಾಂಡಿಂಗ್ ನಟಿಯಾಗಿ ಮುಂದುವರಿಯುತ್ತಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಸಿಎ ಆಗಬೇಕಿದ್ದ ಹುಡುಗಿ ಇವತ್ತು ಭಾರತೀಯ ಚಿತ್ರರಂಗದ ಅತಿ ದೊಡ್ಡ ಬ್ರಾಂಡ್ ಆಗಿ ಬೆಳೆದು ನಿಂತಿರುವುದು ಒಂದು ರೋಚಕ ಸಿನಿಮಾದಂತೆಯೇ ಭಾಸವಾಗುತ್ತದೆ. ಸೋಲು-ಗೆಲುವು, ವಿವಾದಗಳ ನಡುವೆಯೂ ಫೀನಿಕ್ಸ್&zwnj;ನಂತೆ ಎದ್ದು ಬಂದ ಈ 'ನಯನ'ತಾರೆ ಕೋಟ್ಯಂತರ ಯುವತಿಯರಿಗೆ ಸ್ಫೂರ್ತಿ!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/nayanthara-to-become-a-chartered-accountant-but-today-she-is-rich-lady-superstar-who-owns-a-private-jet-worth-50-crores/articleshow-oxv72st"/>
        </item>
        <item>
            <title><![CDATA[ಫ್ಯಾಮಿಲಿ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ‘ಗೌರಿ ಕಲ್ಯಾಣ’ ನಟಿ Shilpa Kamath]]></title>
            <link>https://kannada.asianetnews.com/gallery/tv-talk/gowri-kalyana-actress-shilpa-kamath-birthday-celebration-photos-pngzgvc</link>
            <guid isPermaLink="true">https://kannada.asianetnews.com/gallery/tv-talk/gowri-kalyana-actress-shilpa-kamath-birthday-celebration-photos-pngzgvc</guid>
            <pubDate>Wed, 27 May 2026 23:22:33 +0530</pubDate>
            <description><![CDATA[&lt;p&gt;&lsquo;ಗೌರಿ ಕಲ್ಯಾಣ&rsquo; ಧಾರಾವಾಹಿ ನಟಿ ಶಿಲ್ಪಾ ಕಾಮತ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಸಿಂಪಲ್ ಆಗಿ ಆಚರಿಸಿಕೊಂಡಿದ್ದು, ಮುದ್ದಾದ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksn8z28cg7mexh4vvqjhw9vx,imgname-shilpa-kamath--1--1779904252172.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಗೌರಿ ಕಲ್ಯಾಣ&rsquo; ಧಾರಾವಾಹಿ ನಟಿ ಶಿಲ್ಪಾ ಕಾಮತ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಸಿಂಪಲ್ ಆಗಿ ಆಚರಿಸಿಕೊಂಡಿದ್ದು, ಮುದ್ದಾದ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆ ನಟಿ ಶಿಲ್ಪಾ ಕಾಮತ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಆ ಹಿನ್ನೆಲೆಯಲ್ಲಿ ತಮ್ಮ ಅಪ್ಪ ಅಮ್ಮ ಮತ್ತು ಸ್ನೇಹಿತರ ಜೊತೆಗೆ ಸಿಂಪಲ್ ಆಗಿ ಆದರೆ ಗ್ರ್ಯಾಂಡ್ ರೆಸ್ಟೋರೆಂಟಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇಲ್ಲಿದೆ ಸುಂದರವಾದ ಫೋಟೊಗಳು&lt;/p&gt;&lt;img&gt;&lt;p&gt;ನಿಜವಾಗಿಯೂ ಆಶೀರ್ವಾದ ಮತ್ತು ಪ್ರೀತಿಯಿಂದ ತುಂಬಿ ತುಳುಕುತ್ತಿರುವ ಭಾವನೆ. ನನ್ನ ಹುಟ್ಟುಹಬ್ಬವನ್ನು ಎಲ್ಲಾ ಸುಂದರ ಸರ್ಪ್ರೈಸ್, ಪ್ರೀತಿ ಮತ್ತು ಪ್ರಯತ್ನಗಳೊಂದಿಗೆ ವಿಶೇಷವಾಗಿಸಿದ್ದಕ್ಕಾಗಿ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ತುಂಬಾ ಧನ್ಯವಾದಗಳು.&lt;/p&gt;&lt;img&gt;&lt;p&gt;ನನಗೆ ಶುಭ ಹಾರೈಸಲು ಸಮಯ ತೆಗೆದುಕೊಂಡ ಎಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು. ನಿಮ್ಮಲ್ಲಿ ಅನೇಕರಿಗೆ ರಿಪ್ಲೈ ಮಾಡಲು ನಾನು ಮಿಸ್ ಮಾಡಿರಬಹುದು, ಮತ್ತು ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ, ಆದರೆ ನಿಮ್ಮ ಎಲ್ಲಾ ಸಂದೇಶಗಳನ್ನು ನಾನು ನೋಡಿದ್ದೇನೆ ಮತ್ತು ಅವು ನಿಜವಾಗಿಯೂ ಅರ್ಥಪೂರ್ಣವಾಗಿದೆ. ನಿಮ್ಮೆಲ್ಲರ ಪ್ರೀತಿ, ಬೆಂಬಲ ಮತ್ತು ಪ್ರಾರ್ಥನೆಗಳಿಗೆ ಮತ್ತೊಮ್ಮೆ ಧನ್ಯವಾದಗಳು. ದಯವಿಟ್ಟು ಯಾವಾಗಲೂ ಇದೇ ರೀತಿ ನನ್ನನ್ನು ಬೆಂಬಲಿಸಿ ಮತ್ತು ಆಶೀರ್ವದಿಸಿ.&lt;/p&gt;&lt;img&gt;&lt;p&gt;ಶಿಲ್ಪಾ ಕಾಮತ್ ಹುಟ್ಟುಹಬ್ಬ ಸಿಂಪಲ್ ಆಗಿ, ಆದರೆ ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಗ್ರ್ಯಾಂಡ್ ಹೋಟೇಲ್ ಒಂದರಲ್ಲಿ ಗ್ರ್ಯಾಂಡ್ ಸೆಲೆಬ್ರೇಟ್ ಮಾಡಿದ್ದಾರೆ. ಶಿಲ್ಪಾ ಕಾಮತ್ ಗೌನ್ ಧರಿಸಿ, ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಸಹ ನಟಿ ವಿಶ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಗೆ ಕೆಲವು ವರ್ಷಗಳ ಹಿಂದಷ್ಟೆ ಪರಿಚಿತರಾದ ನಟಿ ಶಿಲ್ಪಾ ಕಾಮತ್. &lsquo;ನೂರು ಜನ್ಮಕೂ&rsquo; ಧಾರಾವಾಹಿಯಿಂದ ತಮ್ಮ ನಟನೆ ಜರ್ನಿ ಶುರು ಮಾಡಿ, ಬಳಿಕ ಕಾಮಿಡಿ ಕಿಚನ್ ಸ್ಪರ್ಧಿಯಾಗಿದ್ದರು, ಇದೀಗ &lsquo;ಗೌರಿ ಕಲ್ಯಾಣ&rsquo;ದಲ್ಲಿ ನಟಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಮೂಲತಃ ಉಡುಪಿಯವರಾದ ಶಿಲ್ಪಾ, ಹುಟ್ಟಿ ಬೆಳೆದಿದ್ದು ಎಲ್ಲವೂ ಮಂಗಳೂರಿನಲ್ಲಿ. ಸದ್ಯ ನಟನೆಗಾಗಿ ಬೆಂಗಳೂರಿನಲ್ಲಿ ನೆಲೆಯಾಗಿದ್ದಾರೆ. ಅಂದ ಹಾಗೆ ಶಿಲ್ಪಾ ಕಾಮತ್ ಎಂಕಾಂ ಪದವೀಧರೆ. ವಿದ್ಯಭ್ಯಾಸ ಮುಗಿದ ಮೇಲೆ ಒಂದಷ್ಟು ಸಮಯ ಬ್ಯಾಂಕ್&zwnj;ನಲ್ಲಿ ಕೆಲಸ ಮಾಡಿದ್ದರು. ನಂತರ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು.&lt;/p&gt;&lt;img&gt;&lt;p&gt;ಶಿಲ್ಪಾ ಕಾಮತ್ ಕಿರುತೆರೆಯಲ್ಲಿ ಬಣ್ಣ ಹಚ್ಚುವ ಮುನ್ನ ಮಾಡೆಲಿಂಗ್&zwnj;ನಲ್ಲಿ ಗುರುತಿಸಿಕೊಂಡಿದ್ದರು. 2023ರಲ್ಲಿ 'ಮಿಸ್ ಮಂಗಳೂರು' ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. ಬಳಿಕ ಕಿರುಚಿತ್ರವೊಂದರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/gowri-kalyana-actress-shilpa-kamath-birthday-celebration-photos-pngzgvc"/>
        </item>
        <item>
            <title><![CDATA[‘ಲೋ ನವೀನ’ ಸಿನಿಮಾ ಹಳ್ಳಿ ಸೊಗಡಿನಿಂದ ಪ್ರೇಕ್ಷಕರ ಮನಗೆದ್ದಿದೆ: ನವೀನ್ ಸಜ್ಜು ಹರ್ಷ]]></title>
            <link>https://kannada.asianetnews.com/sandalwood/naveen-sajjus-lo-naveena-kannada-movie-response-davanagere-gvd/articleshow-pfvoscb</link>
            <guid isPermaLink="true">https://kannada.asianetnews.com/sandalwood/naveen-sajjus-lo-naveena-kannada-movie-response-davanagere-gvd/articleshow-pfvoscb</guid>
            <pubDate>Wed, 27 May 2026 23:48:19 +0530</pubDate>
            <description><![CDATA[&lt;p&gt;&lsquo;ಲೋ ನವೀನ&rsquo; ಸಿನಿಮಾವು ಮಂಡ್ಯ, ಮೈಸೂರು ಭಾಗದ ಹಳ್ಳಿ ಸೊಗಡನ್ನು ಮನರಂಜನಾತ್ಮಕವಾಗಿ ತೆರೆಯ ಮೇಲೆ ತಂದ ಸಿನಿಮಾ ಆಗಿದ್ದು, ಎಲ್ಲ ಕಡೆ ಪ್ರೇಕ್ಷಕರ ಗಮನ ಸೆಳೆದು ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ ಎಂದು ನವೀನ್ ಸಜ್ಜು ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kre08z8mfp65ybznpdfp747p,imgname-cjc-1778586516756.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮೇ.27): &lt;/strong&gt;&lsquo;ಲೋ ನವೀನ&rsquo; ಸಿನಿಮಾವು ಮಂಡ್ಯ, ಮೈಸೂರು ಭಾಗದ ಹಳ್ಳಿ ಸೊಗಡನ್ನು ಮನರಂಜನಾತ್ಮಕವಾಗಿ ತೆರೆಯ ಮೇಲೆ ತಂದ ಸಿನಿಮಾ ಆಗಿದ್ದು, ಎಲ್ಲ ಕಡೆ ಪ್ರೇಕ್ಷಕರ ಗಮನ ಸೆಳೆದು ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ ಎಂದು ಚಿತ್ರದ ನಾಯಕ ನಟ ನವೀನ್ ಸಜ್ಜು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಬದುಕಿನ ಕಥೆಯ ನೈಜ ಚಿತ್ರಣ, ಪ್ರೀತಿ, ಸ್ನೇಹ, ಕುಟುಂಬ ಬಾಂಧವ್ಯ, ಗ್ರಾಮೀಣ ಯುವಕ ಜೀವನಶೈಲಿಯನ್ನು ಮನಮುಟ್ಟುವಂತಹ ಕಥೆ ಒಳಗೊಂಡ &lsquo;ಲೋ ನವೀನ&rsquo; ಪ್ರೇಕ್ಷಕರ ಮನ ಗೆಲ್ಲುತ್ತಿದೆ ಎಂದರು.&lt;/p&gt;&lt;p&gt;ಧನುರ್ಧಾರಿ ಪವನ್&zwnj; ಚಿತ್ರವನ್ನು ನಿರ್ದೇಶಿಸಿದ್ದು, ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಕೀರ್ತಿ ಸ್ವಾಮಿ, ಬೆನ್ ಚಿಕ್ಕ ಸ್ವಾಮಿ ಹಾಗೂ ಎನ್ಎಸ್&zwnj; ಸ್ಟುಡಿಯೋಸ್&zwnj; ನಿರ್ಮಾಣ ಮಾಡಿರುವ ಚಿತ್ರ ಇದಾಗಿದೆ. ಒಟ್ಟು 8 ಹಾಡುಗಳಿರುವ &lsquo;ಲೋ ನವೀನ&rsquo;ದಲ್ಲಿ ವರ್ಷ ಗಿರಿಧರ್, ರೇಷ್ಮಾ ಗೌಡ, ಪ್ರಕಾಶ ತುಮ್ಮಿನಾಡು, ಅಪೂರ್ವಶ್ರೀ, ಅಭಿಜಿತ್ ಗೌಡ, ಮಲ್ಲರಾಜು ಮಾರಸಿಂಗನಹಳ್ಳಿ ಸೇರಿದಂತೆ ಹಲವಾರು ಹೊಸ ಕಲಾವಿದರು ಅಭಿನಯಿಸಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಮೇ 15ರಂದು ರಾಜ್ಯಾದ್ಯಂತ ತೆರೆ ಕಂಡ &lsquo;ಲೋ ನವೀನ&rsquo; ಮೈಸೂರು, ಮಂಡ್ಯ ಹಾಗೂ ಇತರೆ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾ ಇದಾಗಿದೆ. ನಾಯಕನಾಗಿ ತಾವು ಅಭಿನಯಿಸಿದ ಮೊದಲ ಚಿತ್ರಕ್ಕೆ ಜನರಿಂದ ಉತ್ತಮ ಸ್ಪಂದನೆ, ಪ್ರೋತ್ಸಾಹ ವ್ಯಕ್ತವಾಗುತ್ತಿದೆ. ಇದು ತಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್&zwnj;&lt;/strong&gt;&lt;/h2&gt;&lt;p&gt;ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಹೊಸ ಅಲೆ ಎಬ್ಬಿಸುತ್ತಿರುವ ಈ ಚಿತ್ರದ ಮೊದಲಾರ್ಧದಲ್ಲಿ ಹಳ್ಳಿ ಸೊಗಡಿನ ಭರಪೂರ ಕಾಮಿಡಿ ಹಾಗೂ ತುಂಟಾಟ ಪ್ರೇಕ್ಷಕರನ್ನು ನಗಿಸಿದರೆ, ದ್ವಿತೀಯಾರ್ಧದಲ್ಲಿ ಕಥೆ ಕೊಂಚ ಗಂಭೀರ ತಿರುವು ಪಡೆದುಕೊಳ್ಳುತ್ತದೆ. ಚಿತ್ರಕ್ಕೆ ತಾವೇ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳು ಚಿತ್ರದ ದೊಡ್ಡ ಫ್ಲಸ್ ಪಾಯಿಂಟ್. ಅದರಲ್ಲೂ ವಿಶೇಷವಾಗಿ ಎಚ್.ಡಿ.ಕೋಟೆ ಗ್ರಾಮೀಣ ಪ್ರತಿಭೆಗಳಾದ ಚಮ್ಮಮ್ಮ ಹಾಗೂ ಲಕ್ಷಮ್ಮ ಹಾಡಿರುವ ಜನಪದ ಶೈಲಿಯ ಕೋಣಾಣೆ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್&zwnj;ನಲ್ಲಿದ್ದು, ಪ್ರೇಕ್ಷಕರ ಮನಗೆದ್ದಿದೆ ಎಂದು ನವೀನ ಸಜ್ಜು ಹೇಳಿದರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/naveen-sajjus-lo-naveena-kannada-movie-response-davanagere-gvd/articleshow-pfvoscb"/>
        </item>
        <item>
            <title><![CDATA[ಸಿನಿಮಾ ಬಿಟ್ಟು ಗೇಮಿಂಗ್ ಲೋಕಕ್ಕೆ ಯಶ್ ಎಂಟ್ರಿ? ರಾಕಿಂಗ್ ಸ್ಟಾರ್ ಹೊಸ ನಿರ್ಧಾರ ವೈರಲ್!]]></title>
            <link>https://kannada.asianetnews.com/gallery/entertainment/rocking-star-yash-bgmi-collaboration-toxic-voice-pack-gvd-8xmgh14</link>
            <guid isPermaLink="true">https://kannada.asianetnews.com/gallery/entertainment/rocking-star-yash-bgmi-collaboration-toxic-voice-pack-gvd-8xmgh14</guid>
            <pubDate>Wed, 27 May 2026 23:29:45 +0530</pubDate>
            <description><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಇದೀಗ ಆನ್&zwnj;ಲೈನ್&zwnj; ಗೇಮಿಂಗ್&zwnj; ಕ್ಷೇತ್ರ ಪ್ರವೇಶಿಸಿದ್ದಾರೆ. ಯುವ ಜನರೇ ತುಂಬಿರುವ ಜನಪ್ರಿಯ ಆನ್​​ಲೈನ್ ಗೇಮ್ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಮಾಡಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqq161bb43mjdk3fpvktppje,imgname-yash-1777815717227.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಇದೀಗ ಆನ್&zwnj;ಲೈನ್&zwnj; ಗೇಮಿಂಗ್&zwnj; ಕ್ಷೇತ್ರ ಪ್ರವೇಶಿಸಿದ್ದಾರೆ. ಯುವ ಜನರೇ ತುಂಬಿರುವ ಜನಪ್ರಿಯ ಆನ್​​ಲೈನ್ ಗೇಮ್ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ತನ್ನ ನಟನೆ, ನಿರ್ಮಾಣದ &lsquo;ಟಾಕ್ಸಿಕ್&zwnj;&rsquo; ಸಿನಿಮಾಕ್ಕೆ ಯುವ ಜನರನ್ನು ಸೆಳೆಯುವ ಪ್ರಯತ್ನದಲ್ಲಿರುವ ಯಶ್&zwnj; ಇದೀಗ ಆನ್&zwnj;ಲೈನ್&zwnj; ಗೇಮಿಂಗ್&zwnj; ಕ್ಷೇತ್ರ ಪ್ರವೇಶಿಸಿದ್ದಾರೆ. ಯುವ ಜನರೇ ತುಂಬಿರುವ ಜನಪ್ರಿಯ ಆನ್​​ಲೈನ್ ಗೇಮ್ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ದೇಶದೊಳಗೇ ಸುಮಾರು 26 ಕೋಟಿಗೂ ಹೆಚ್ಚು ಮಂದಿ ಡೌನ್&zwnj;ಲೋಡ್&zwnj; ಮಾಡಿಕೊಂಡಿರುವ ಬಿಜಿಎಂಐ ಗೇಮ್&zwnj;ನ ಹೊಸ 4.4 ಅಪ್&zwnj;ಡೇಟ್&zwnj;ನ ಭಾಗವಾಗಿ ಈ ಸಹಯೋಗ ಮಾಡಲಾಗಿದೆ. ಇದಕ್ಕೆ ಯಶ್ x ಬಿಜಿಎಂಐ: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್ ಎಂಬ ಹೆಸರನ್ನಿಡಲಾಗಿದೆ.&lt;/p&gt;&lt;img&gt;&lt;p&gt;ಈ ಗೇಮ್&zwnj;ನಲ್ಲಿ ಕನ್ನಡ ಹಾಗೂ ಹಿಂದಿಯಲ್ಲಿ ಯಶ್ ಧ್ವನಿ ಕೇಳಬಹುದು. &lsquo;ಟಾಕ್ಸಿಕ್&zwnj;&rsquo; ಸಿನಿಮಾದಲ್ಲಿ ಬಳಸಲಾದ ಆಯುಧಗಳ ಮೂಲಕ ಫೈಟ್ ಮಾಡಬಹುದು. ಈ ಗೇಮ್&zwnj;ನಲ್ಲಿ ಯಶ್&zwnj; ಹೇರ್&zwnj;ಸ್ಟೈಲ್, ಉಡುಪು ಮತ್ತು ಆಕ್ಷನ್ ಮ್ಯಾನರಿಸಂಗಳನ್ನು ಅಳವಡಿಸಲಾಗಿದೆ.&lt;/p&gt;&lt;img&gt;&lt;p&gt;ಈ ಬಗ್ಗೆ ಮಾತನಾಡಿದ ಯಶ್&zwnj;, ಜೆನ್&zwnj; ಜೀಗಳಿಗೆ ಅಧಿಕೃತತೆ, ಕತ್ತಿಯಲುಗಿನ ನಡೆಯಂಥಾ ರೋಚಕತೆ, ವಿಶಿಷ್ಟ ಕಥಾಹಂದರಗಳು ಇಷ್ಟ. ಆ ವೈಬ್&zwnj; ಟಾಕ್ಸಿಕ್&zwnj;ನಲ್ಲಿದೆ. ನನ್ನ ಧ್ವನಿ ಮತ್ತು ಟಾಕ್ಸಿಕ್&zwnj;ನ ಎನರ್ಜಿ ಈ ಗೇಮ್&zwnj;ಗಳಲ್ಲಿದೆ.&lt;/p&gt;&lt;img&gt;&lt;p&gt;ದೊಡ್ಡವರ ಫೇರಿಟೇಲ್&zwnj; ಯುವ ಸಮುದಾಯಕ್ಕೆ ಅದ್ಭುತ ಅನುಭವ ನೀಡುತ್ತದೆ ಎಂಬ ವಿಶ್ವಾಸವಿದೆ. ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಕುತೂಹಲವಿದೆ ಎಂದರು.&lt;/p&gt;&lt;img&gt;&lt;p&gt;ಗೀತು ಮೋಹನ್&zwnj;ದಾಸ್&zwnj; ನಿರ್ದೇಶನದ &lsquo;ಟಾಕ್ಸಿಕ್&zwnj;&rsquo; ಸಿನಿಮಾವನ್ನು ಕೆವಿಎನ್&zwnj; ಪ್ರೊಡಕ್ಷನ್&zwnj; ಹಾಗೂ ಮಾನ್&zwnj;ಸ್ಟರ್&zwnj; ಮೈಂಡ್&zwnj; ಕ್ರಿಯೇಶನ್ಸ್&zwnj; ಸಂಸ್ಥೆಗಳು ನಿರ್ಮಿಸುತ್ತಿವೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/rocking-star-yash-bgmi-collaboration-toxic-voice-pack-gvd-8xmgh14"/>
        </item>
        <item>
            <title><![CDATA[Tragedy- Akash Puri: ಪುರಿ ಜಗನ್ನಾಥ್ ಮಗ ಬಿಚ್ಚಿಟ್ಟ ರಹಸ್ಯ.. ಸ್ಟಾರ್ ಡೈರೆಕ್ಟರ್ ಮಗ ಹಣವಿಲ್ಲದೇ ಹಾಸ್ಟೆಲ್‌ ಸೇರಬೇಕಾಯ್ತು!]]></title>
            <link>https://kannada.asianetnews.com/cine-world/akash-puri-discloses-that-puri-jagannadh-couple-sent-their-children-to-a-hostel-to-shield-them-from-the-family-poverty/articleshow-mmenbo7</link>
            <guid isPermaLink="true">https://kannada.asianetnews.com/cine-world/akash-puri-discloses-that-puri-jagannadh-couple-sent-their-children-to-a-hostel-to-shield-them-from-the-family-poverty/articleshow-mmenbo7</guid>
            <pubDate>Wed, 27 May 2026 22:59:50 +0530</pubDate>
            <description><![CDATA[&lt;p&gt;&quot;ನಮ್ಮಪ್ಪನ ಜೇಬಿನಲ್ಲಿ ಕೇವಲ 200 ರೂಪಾಯಿ ಇದ್ದಾಗಲೇ ಅಮ್ಮ ಅವರನ್ನು ಮದುವೆಯಾಗಿದ್ದು. ಕಷ್ಟದ ಕಾಲದಲ್ಲಿ ಅಮ್ಮನೇ ಅಪ್ಪನಿಗೆ ಬೆನ್ನೆಲುಬಾಗಿ ನಿಂತವರು. ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksn6z5c2hm6jrecdqde8z2kw,imgname-akash-puri-1779902158209.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿನಿಮಾ ಸ್ಟೈಲ್&zwnj;ನಲ್ಲೇ ಇದೆ ಈ ಸ್ಟಾರ್ ಡೈರೆಕ್ಟರ್ ಲೈಫ್ ಸ್ಟೋರಿ! ನೂರಾರು ಕೋಟಿ ಕಳೆದುಕೊಂಡು ಬೀದಿಗೆ ಬಂದಿದ್ದರೇ ಪುರಿ ಜಗನ್ನಾಥ್? ಮಗ ಆಕಾಶ್ ಬಿಚ್ಚಿಟ್ಟ ಶಾಕಿಂಗ್ ಸತ್ಯ!&lt;/strong&gt;&lt;/p&gt;&lt;p&gt;ಟಾಲಿವುಡ್ ಅಂಗಳ ಟ್ರಾಜಿಡಿ ಸ್ಟೋರಿ!&lt;/p&gt;&lt;p&gt;ಸಿನಿಮಾ ಅಂದಮೇಲೆ ಅಲ್ಲಿ ಬಣ್ಣದ ಲೋಕ ಮಾತ್ರವಲ್ಲ, ಕತ್ತಲೆಯ ಹಾದಿಯೂ ಇರುತ್ತದೆ ಅನ್ನೋದಕ್ಕೆ ಲೈವ್ ಎಕ್ಸಾಂಪಲ್ ಅಂದರೆ ಅದು ಡೈರೆಕ್ಟರ್ ಪುರಿ ಜಗನ್ನಾಥ್ (Puri Jagannadh)! 'ಬದ್ರಿ' ಸಿನಿಮಾದಿಂದ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, 'ಪೋಕಿರಿ', 'ಈಡಿಯಟ್' ಅಂತಹ ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ನೀಡಿದ ಈ ಕ್ರೇಜಿ ಡೈರೆಕ್ಟರ್ ಅಕ್ಷರಶಃ ಟಾಲಿವುಡ್ ಅನ್ನು ಆಳಿದವರು. ಮಹೇಶ್ ಬಾಬು, ಪವನ್ ಕಲ್ಯಾಣ್ ಅವರಂತಹ ಸೂಪರ್ ಸ್ಟಾರ್&zwnj;ಗಳ ಕೆರಿಯರ್ ಗ್ರಾಫ್ ಬದಲಿಸಿದ ಪುರಿ, ಒಂದು ಕಾಲದಲ್ಲಿ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದ ಕಿಂಗ್ ಮೇಕರ್. ಆದರೆ, ಇದೀಗ ಅವರ ಮಗ ಆಕಾಶ್ ಪುರಿ ಹೇಳಿರುವ ಮಾತುಗಳು ಕೇಳಿದರೆ ಸಿನಿಮಾ ಪ್ರೇಮಿಗಳ ಕಣ್ಣಾಲಿಗಳು ಒದ್ದೆಯಾಗುವುದು ಖಂಡಿತ!&lt;/p&gt;&lt;p&gt;&lt;img&gt;&lt;/p&gt;&lt;h2&gt;ಪರಾಜಯದ ಸುಳಿಗೆ ಸಿಲುಕಿದ ಪುರಿ:&lt;/h2&gt;&lt;p&gt;ಯಶಸ್ಸಿನ ಶಿಖರದಲ್ಲಿದ್ದಾಗಲೇ ಪುರಿ ಜಗನ್ನಾಥ್ ಅವರ ಕಾಲ ಬುಡದ ನೆಲ ಕುಸಿಯಿತು. ಮಾಡಿದ ಸಿನಿಮಾಗಳು ಬಾಕ್ಸ್ ಆಫೀಸ್&zwnj;ನಲ್ಲಿ ಮಕಾಡೆ ಮಲಗಿದವು. ಫಾರ್ಮ್ ಕಳೆದುಕೊಂಡ ಪುರಿ ಜಗನ್ನಾಥ್ ಅವರ ಮಾರುಕಟ್ಟೆ ಕುಸಿಯಿತು. ಆದರೆ, ಕೇವಲ ಸಿನಿಮಾ ಸೋಲು ಮಾತ್ರ ಅವರನ್ನ ಕುಗ್ಗಿಸಲಿಲ್ಲ; ಬದಲಾಗಿ ಅವರು ಅತಿಯಾಗಿ ನಂಬಿದ್ದ ಆಪ್ತರೇ ಅವರಿಗೆ ಬೆನ್ನಿಗೆ ಚೂರಿ ಹಾಕಿದರು. ನೂರಾರು ಕೋಟಿ ಮೌಲ್ಯದ ಆಸ್ತಿ ಮತ್ತು ಹಾರ್ಡ್ ವರ್ಕ್ ಮಾಡಿ ಗಳಿಸಿದ ಹಣವೆಲ್ಲಾ ಮೋಸದಿಂದಾಗಿ ಮಣ್ಣು ಪಾಲಾಯಿತು.&lt;/p&gt;&lt;p&gt;&lt;img&gt;&lt;/p&gt;&lt;p&gt;&quot;ನಾಯಿಗಳಿಗೆ ಆಹಾರ ನೀಡಲೂ ಕಾಸಿರಲಿಲ್ಲ!&quot;:&lt;/p&gt;&lt;p&gt;ಒಂದು ಸಂದರ್ಶನದಲ್ಲಿ ಪುರಿ ಜಗನ್ನಾಥ್ ಅವರೇ ಹೇಳಿಕೊಂಡಂತೆ, &quot;ನನ್ನ ಮನೆಯಲ್ಲಿದ್ದ ಸಾಕು ನಾಯಿಗಳಿಗೆ ಊಟ ಹಾಕಲು ಕೂಡ ನನ್ನ ಬಳಿ ಹಣವಿರಲಿಲ್ಲ.&quot; ಈ ಮಾತು ಅಕ್ಷರಶಃ ಟಾಲಿವುಡ್&zwnj;ಗೆ ಶಾಕ್ ನೀಡಿತ್ತು. ಇದನ್ನು ಈಗ ಅವರ ಮಗ ಆಕಾಶ್ ಪುರಿ ಕೂಡ ಧೃಢಪಡಿಸಿದ್ದಾರೆ. ಆ ಕರಾಳ ದಿನಗಳ ಬಗ್ಗೆ ಮಾತನಾಡುತ್ತಾ, &quot;ನಾವು ಮನೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದೆವು. ಅಪ್ಪ ಅನುಭವಿಸುತ್ತಿದ್ದ ಕಷ್ಟ ನಮಗೆ ಮತ್ತು ತಂಗಿಗೆ ಗೊತ್ತಾಗಬಾರದು ಎಂದು ಅಮ್ಮ ನಮ್ಮನ್ನು ದೂರದ ಹಾಸ್ಟೆಲ್&zwnj;ಗೆ ಸೇರಿಸಿ ಓದಿಸಿದಳು. ಆ 5 ವರ್ಷಗಳು ನಮ್ಮ ಕುಟುಂಬ ಪಟ್ಟ ಪಾಡು ಹೇಳತೀರದು&quot; ಎಂದು ಭಾವುಕರಾಗಿದ್ದಾರೆ.&lt;/p&gt;&lt;h3&gt;ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಆಕಾಶ್:&lt;/h3&gt;&lt;p&gt;ಇದೇ ಸಮಯದಲ್ಲಿ ಪುರಿ ಜಗನ್ನಾಥ್ ಮತ್ತು ಅವರ ಪತ್ನಿ ಲಾವಣ್ಯ ನಡುವೆ ಬಿರುಕು ಮೂಡಿದೆ, ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಸಿಪ್&zwnj;ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದಕ್ಕೆ ಆಕಾಶ್ ಖಡಕ್ ಉತ್ತರ ನೀಡಿದ್ದಾರೆ. &quot;ನಮ್ಮಪ್ಪನ ಜೇಬಿನಲ್ಲಿ ಕೇವಲ 200 ರೂಪಾಯಿ ಇದ್ದಾಗಲೇ ಅಮ್ಮ ಅವರನ್ನು ಮದುವೆಯಾಗಿದ್ದು. ಕಷ್ಟದ ಕಾಲದಲ್ಲಿ ಅಮ್ಮನೇ ಅಪ್ಪನಿಗೆ ಬೆನ್ನೆಲುಬಾಗಿ ನಿಂತವರು. ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಇದೆಲ್ಲಾ ಕೇವಲ ಸುಳ್ಳು ಸುದ್ದಿ&quot; ಎಂದು ಅಪ್ಪ-ಅಮ್ಮನ ಬಾಂಧವ್ಯವನ್ನು ಎತ್ತಿ ಹಿಡಿದಿದ್ದಾರೆ.&lt;/p&gt;&lt;p&gt;ಮತ್ತೆ ಪುಟಿದೇಳುವ ಮುನ್ಸೂಚನೆ:&lt;/p&gt;&lt;p&gt;ಸದ್ಯ ಪುರಿ ಜಗನ್ನಾಥ್ ಅವರು ವಿಜಯ್ ಸೇತುಪತಿ ಅವರಂತಹ ಪ್ರತಿಭಾವಂತರ ಜೊತೆ ಹೊಸ ಪ್ರಾಜೆಕ್ಟ್&zwnj;ಗೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲದೆ, ನಟ ರಾಮ್ ಪೋತಿನೇನಿ ಜೊತೆಗೂ ಕೆಲಸ ಮಾಡುತ್ತಿದ್ದಾರೆ. ಅಂದು ನೂರಾರು ಕೋಟಿ ಕಳೆದುಕೊಂಡು ಶೂನ್ಯಕ್ಕೆ ಇಳಿದಿದ್ದ ಪುರಿ ಜಗನ್ನಾಥ್, ಇಂದು ಮತ್ತೆ ಪೀನಿಕ್ಸ್ ಹಕ್ಕಿಯಂತೆ ಎದ್ದು ಬರಲು ಸಿದ್ಧರಾಗುತ್ತಿದ್ದಾರೆ.&lt;/p&gt;&lt;p&gt;ಸಿನಿಮಾ ಅಂದರೆ ಬರಿ ಲೈಟ್ಸ್, ಕ್ಯಾಮೆರಾ, ಆಕ್ಷನ್ ಮಾತ್ರವಲ್ಲ; ಅದರ ಹಿಂದೆ ಇಂತಹ ರೋಚಕ ಮತ್ತು ನೋವಿನ ಕಥೆಗಳೂ ಇರುತ್ತವೆ ಎಂಬುದಕ್ಕೆ ಈ ಸ್ಟಾರ್ ಡೈರೆಕ್ಟರ್ ಜೀವನವೇ ಸಾಕ್ಷಿ!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/akash-puri-discloses-that-puri-jagannadh-couple-sent-their-children-to-a-hostel-to-shield-them-from-the-family-poverty/articleshow-mmenbo7"/>
        </item>
        <item>
            <title><![CDATA[ಹಳೆ ಕಥೆ ಬೇಡ.. ನಟ ಪ್ರಭು ಜೊತೆ ಮದುವೆ, ವಿಚ್ಛೇದನದ ಬಗ್ಗೆ ರವಿಚಂದ್ರನ್ ಹೀರೋಯಿನ್ ಹೇಳಿದ್ದೇನು?]]></title>
            <link>https://kannada.asianetnews.com/gallery/entertainment/actress-khushbu-breaks-silence-on-old-rumours-about-actor-prabhu-gvd-0snbx6t</link>
            <guid isPermaLink="true">https://kannada.asianetnews.com/gallery/entertainment/actress-khushbu-breaks-silence-on-old-rumours-about-actor-prabhu-gvd-0snbx6t</guid>
            <pubDate>Wed, 27 May 2026 21:17:21 +0530</pubDate>
            <description><![CDATA[&lt;p&gt;ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ರಣಧೀರ, ಅಂಜದ ಗಂಡು ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಖುಷ್ಬೂ ಸದ್ಯ 'ಜಬರ್ದಸ್ತ್' ಶೋ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಇದೀಗ ನಟ ಪ್ರಭು ಜೊತೆಗಿನ ಮದುವೆ ಹಾಗೂ ವಿಚ್ಛೇದನದ ವದಂತಿಗಳ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j1z12szwndc8d47h9x2e42y1,imgname-khushbu-sundar.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ರಣಧೀರ, ಅಂಜದ ಗಂಡು ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಖುಷ್ಬೂ ಸದ್ಯ 'ಜಬರ್ದಸ್ತ್' ಶೋ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಇದೀಗ ನಟ ಪ್ರಭು ಜೊತೆಗಿನ ಮದುವೆ ಹಾಗೂ ವಿಚ್ಛೇದನದ ವದಂತಿಗಳ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;img&gt;&lt;p&gt;ಖುಷ್ಬೂ ಸದ್ಯಕ್ಕೆ ಆಯ್ದ ಸಿನಿಮಾಗಳಲ್ಲಿ ನಟಿಸುತ್ತಾ, ತೆಲುಗಿನ 'ಜಬರ್ದಸ್ತ್' ಕಾಮಿಡಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀರೋಯಿನ್ ಆಗಿದ್ದಕ್ಕಿಂತ ಹೆಚ್ಚಾಗಿ ಈ ಟಿವಿ ಶೋ ಮೂಲಕವೇ ಅವರು ಕುಟುಂಬ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗಿದ್ದಾರೆ. ಇದೇ ವೇಳೆ ತಮ್ಮ ಜೀವನದ ಒಂದು ಹಳೆಯ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಖುಷ್ಬೂ, ನಟ ಹಾಗೂ ನಿರ್ದೇಶಕ ಸುಂದರ್ ಸಿ ಅವರನ್ನು ಪ್ರೀತಿಸಿ ಮದುವೆಯಾದರು. 'ಮುರೈ ಮಾಮನ್' ಸಿನಿಮಾ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಅಚ್ಚರಿ ಎಂದರೆ, ಈ ಚಿತ್ರಕ್ಕೆ ಸುಂದರ್ ಸಿ ಮೊದಲು ನಾಯಕಿಯಾಗಿ ಸೌಂದರ್ಯ, ನಂತರ ಮೀನಾ ಅವರನ್ನು ಅಪ್ರೋಚ್ ಮಾಡಿದ್ದರು. ಅವರಿಬ್ಬರೂ ಬ್ಯುಸಿ ಇದ್ದ ಕಾರಣ ಖುಷ್ಬೂಗೆ ಅವಕಾಶ ಸಿಕ್ಕಿತ್ತು. ಈ ಸಿನಿಮಾ ಸೆಟ್&zwnj;ನಲ್ಲೇ ಇಬ್ಬರ ಮನಸ್ಸು ಒಂದಾಗಿ ಮದುವೆಯಾದರು.&lt;/p&gt;&lt;img&gt;&lt;p&gt;ಆ ಕಾಲದಲ್ಲಿ ನಟ ಪ್ರಭು ಜೊತೆ ಖುಷ್ಬೂ ಹೆಸರು ಬಲವಾಗಿ ಕೇಳಿಬಂದಿತ್ತು. ಪ್ರಭು ಕೂಡ ಆಗಿನ ಕಾಲದ ಸ್ಟಾರ್ ಹೀರೋ. ಇವರಿಬ್ಬರ ಜೋಡಿ ಹಿಟ್ ಆಗಿತ್ತು. ಹೀಗಾಗಿ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ, ನಂತರ ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇತ್ತೀಚೆಗೆ 'ಸುಮನ್ ಟಿವಿ'ಯ ರೋಶನ್ ಸಂದರ್ಶನದಲ್ಲಿ ಈ ಬಗ್ಗೆ ಕೇಳಿದಾಗ ಖುಷ್ಬೂ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;img&gt;&lt;p&gt;ಪ್ರಭು ಜೊತೆ ನಾನು ಸಾಕಷ್ಟು ಸಿನಿಮಾ ಮಾಡಿದ್ದೇನೆ, ನಮ್ಮದು ಹಿಟ್ ಜೋಡಿ ಆಗಿತ್ತು ಎಂದ ಖುಷ್ಬೂ, ಸತ್ಯರಾಜ್, ಕಾರ್ತಿಕ್ ಜೊತೆಗೂ ಹೆಚ್ಚು ಸಿನಿಮಾ ಮಾಡಿದ್ದಾಗಿ ಹೇಳಿದರು. ವದಂತಿಗಳ ಬಗ್ಗೆ ಕೇಳಿದಾಗ, 'ಇದು ಬಹಳ ಹಳೆಯ ಕಥೆ. ಈಗ ಅದರ ಬಗ್ಗೆ ಮಾತನಾಡೋದು ಬೇಡ. ಅವರು ಅವರ ಜೀವನದಲ್ಲಿ ಚೆನ್ನಾಗಿ ಸೆಟಲ್ ಆಗಿದ್ದಾರೆ, ನಾವು ನಮ್ಮ ಲೈಫ್&zwnj;ನಲ್ಲಿ ಸೆಟಲ್ ಆಗಿದ್ದೇವೆ. ಮತ್ತೆ ಆ ವಿಷಯ ಬೇಡ' ಎಂದು ಖುಷ್ಬೂ ಸ್ಪಷ್ಟಪಡಿಸಿದ್ದಾರೆ. ಪ್ರಭು, ತಮ್ಮ ಪತಿ ಸುಂದರ್ ಸಿ ಜೊತೆಗೂ ಕೆಲಸ ಮಾಡಿದ್ದಾರೆ, ಅವರೆಲ್ಲ '80ರ ದಶಕದ ನಟರ ಗುಂಪಿ'ನ ಭಾಗ ಎಂದು ಖುಷ್ಬೂ ತಿಳಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/actress-khushbu-breaks-silence-on-old-rumours-about-actor-prabhu-gvd-0snbx6t"/>
        </item>
    </channel>
</rss>
