<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 09 May 2026 07:24:29 +0530</lastBuildDate>
        <atom:link href="https://kannada.asianetnews.com/rss/entertainment" rel="self" type="application/rss+xml"/>
        <item>
            <title><![CDATA[ತೆರೆ ಮೇಲೆ ಪಟ ಪಟ ಮಾತನಾಡುವ ‘ನಂದಗೋಕುಲ’ ಮೀನಮ್ಮಾ… ತೆರೆ ಹಿಂದೆ ಪಡ್ತಿರೋ ಪಾಡು ನೋಡಿ]]></title>
            <link>https://kannada.asianetnews.com/tv-talk/funny-behind-the-scene-of-nandagokula-serial/articleshow-3o1osgk</link>
            <guid isPermaLink="true">https://kannada.asianetnews.com/tv-talk/funny-behind-the-scene-of-nandagokula-serial/articleshow-3o1osgk</guid>
            <pubDate>Sat, 09 May 2026 07:24:24 +0530</pubDate>
            <description><![CDATA[&lt;p&gt;Nandagokula: ನಂದಗೋಕುಲ ಧಾರಾವಾಹಿಯಲ್ಲಿ ಮೀನಾ ತಮ್ಮ ಮಾತಿಗೆ ಫೇಮಸ್. ತಮ್ಮ ಕ್ಯೂಟ್ ಆಗಿರುವ ಡೈಲಾಗ್ ಮೂಲಕ ಎದುರಿನವರ ಮುಖದಲ್ಲಿ ನಗು ತರಿಸುವ ಪಟ ಪಟ ಮಾತನಾಡುವ ಮೀನಾ, ತೆರೆಯ ಹಿಂದೆ ಆ ಡೈಲಾಗ್ ಗಳನ್ನು ಹೇಳಲು ಎಷ್ಟು ಕಷ್ಟ ಪಡ್ತಿದ್ದಾರೆ ಅನ್ನೋದನ್ನು ನೀವೆ ನೋಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5728b0edwqzn3j20shd8f9,imgname-nandagokula-1778291646814.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ನಂದಗೋಕುಲದ ಮೀನಾ ಪಾತ್ರಧಾರಿಯ ತೆರೆಯ ಹಿಂದಿನ ಕಥೆ&lt;/strong&gt;&lt;/h2&gt;&lt;p&gt;ನಂದಗೋಕುಲ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ತಮ್ಮ ಅತ್ಯುತ್ತಮ ಅಭಿನಯದ ಮೂಲಕ ಗಮನ ಸೆಳೆಯುತ್ತವೆ. ಅದರಲ್ಲೂ ಮೀನಾ ಪಾತ್ರಧಾರಿ ಜನಮನ ಗೆಲ್ಲುವಲ್ಲಿ ಗೆದ್ದಿದ್ದಾರೆ. ಮೀನಾ ಪಾತ್ರ, ಪತ್ನಿಯಾಗಿ ಸೊಸೆಯಾಗಿ, ಬಿಂದಾಸ್ ಹುಡುಗಿಯಾಗಿ ಅವರ ಪಾತ್ರವನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಆರಂಭದಲ್ಲೇ ತಮ್ಮ ಪಾತ್ರದ ಮೂಲಕ ಚಮಕ್ ಕೊಟ್ಟವರು ಮೀನಾ. ಅಪ್ಪನಿಗೆ ಲವ್ ಮಾಡೋದು ಅಂದ್ರೇನೆ ಆಗೋದಿಲ್ಲ. ಅಂತದರಲ್ಲಿ ಅಪ್ಪನಿಗೆ ಕಂಡರೇ ಆಗದ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಮನೆಗೆ ಬಂದ ಹುಡುಗಿ ಮೀನಾ, ಮನೆ ಮಂದಿಯ ಅದರಲ್ಲೂ ಅತ್ತೆ ಮಾವನ ದ್ವೇಷವನ್ನೇ ಪ್ರೀತಿಗೆ ಬದಲಾಯಿಸಿದವಳು. ಆರಂಭದಲ್ಲಿ ಅತ್ತೆಯ ಮನಸ್ಸನ್ನು ಗೆದ್ದ ಮೀನಾ, ನಂತರ ಮಾವ ನಂದನ ಮನಸ್ಸನ್ನು ನಿಧಾನವಾಗಿ ಗೆಲ್ಲುವಲ್ಲಿ ಯಶಸ್ವಿಯಾದಳು. ಜೊತೆಗೆ ತನ್ನ ಮುದ್ದು ಪೆದ್ದು ಮಾತಿನ ಮೂಲಕವೇ ಮಾವನಿಂದ ಶಹಭಾಸ್ ಗಿರಿ ಪಡೆದುಕೊಂಡು, ಮನೆಯ ಮೆಚ್ಚಿನ ಸೊಸೆಯಾಗಿದ್ದಾಳೆ ಮೀನಾ.&lt;/p&gt;&lt;p&gt;ಮೀನಾ ಪಾತ್ರಧಾರಿಯ ತೆರೆಯ ಮುಂದಿನ ಕತೆಯನ್ನು ನೀವು ಕೇಳಿರುತ್ತೀರಿ. ನೋಡಿರುತ್ತೀರಿ. ಆದರೆ ತೆರೆಯ ಹಿಂದೆ ಅವರು ಏನೆಲ್ಲಾ ಕಸರತ್ತು ಮಾಡುತ್ತಾರೆ ಅನ್ನೋದು ಗೊತ್ತಾ? ತೆರೆಯ ಮೇಲೆ ಪಟ ಪಟ ಎಂದು ಮಾತನಾಡಿ, ಎದುರು ಯಾರೇ ನಿಂತಿದ್ದರೂ ಉತ್ತರ ಕೊಡುವ ಮೀನಾ, ತೆರೆಯ ಹಿಂದೆ ಮಾತ್ರ ತಮ್ಮ ಡೈಲಾಗ್ ಹೇಳೋದಕ್ಕೆ ತುಂಬಾನೆ ಕಷ್ಟಪಡುತ್ತಾರೆ. ಒಂದೊಂದು ಡೈಲಾಗನ್ನು ಹತ್ತು ಬಾರಿಯಾದರೂ ಹೇಳುತ್ತಾರೆ. ನಿರ್ದೇಶಕರಾದ ಶ್ರವಂತ್ ಹತ್ತಿರವಿದ್ದು, ತಿದ್ದಿ ಸರಿಪಡಿಸಿದರೂ, ಮತ್ತೆ ಕನ್ಫ್ಯೂಶನ್ ಆಗಿ ತಪ್ಪು ಮಾಡುತ್ತಾರೆ. ತೆರೆಯ ಹಿಂದಿನ ತಮಾಷೆಯಾದ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಮ್ಮು, ಪ್ರಿಯಾ ಮತ್ತು ಮೀನಾ ನಡುವೆ ಸಂಭಾಷಣೆ ನಡೆಯುತ್ತಿದೆ. ಪ್ರಿಯಾ ಮುಂದೆ ಧಾರವಾಹಿಯಲ್ಲಿ ಡೈಲಾಗ್ ಹೊಡೆದಷ್ಟು ಸುಲಭದಲ್ಲಿ, ಸೀರಿಯಲ್ ಶೂಟಿಂಗ್ ಸಂದರ್ಭದಲ್ಲಿ ಡೈಲಾಗ್ ಹೊಡೆಯಲು ಸಾಧ್ಯ ಆಗೋದಿಲ್ಲ. ವಿಡಿಯೋ ನೋಡಿ ಜನ ಅಯ್ಯೋ ಒಂದು ಡೈಲಾಗ್ ಹೊಡೆಯೋದು ಇಷ್ಟೊಂದು ಕಷ್ಟಾನ ಎಂದು ಹೇಳಿದ್ದಾರೆ. ಹೇಗಿದೆ ವಿಡಿಯೋ ನೀವೆ ನೋಡಿ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by AV MEDIA  (@kanndafilmindustry___studio)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;ಅಂದ ಹಾಗೇ &lsquo;ನಂದಗೋಕುಲ&rsquo; ಧಾರಾವಾಹಿಯಲ್ಲಿ ಮೀನಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮೇಘಾ ಎಸ್ ವಿ. ಇವರು ಈ ಹಿಂದೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಇಷ್ಟ ದೇವತೆ, ಜೀವ ಹೂವಾಗಿದೆ ಹಾಗೂ ಜೀ ಕನ್ನಡದ ನಾಗಿಣಿ ಧಾರವಾಹಿಯಲ್ಲೂ ಸಹ ಮೇಘಾ ನಟಿಸಿದ್ದರು. ಅಷ್ಟೇ ಅಲ್ಲ ಇವರು ಕಲರ್ಸ್ ಕನ್ನಡದ ಕಪಲ್ಸ್ ರಿಯಾಲಿಟಿ ಶೋ ರಾಜಾ ರಾಣಿ ಸೀಸನ್ ೩ ವಿನ್ನರ್ ಕೂಡ ಹೌದು. ಇವರ ಪತಿ ಸಂಜಯ್. ಇಬ್ಬರ ಜೋಡಿಯನ್ನು ಜನ ಇಷ್ಟಪಟ್ಟಿದ್ದರು. ಈಕೆ ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/tv-talk/funny-behind-the-scene-of-nandagokula-serial/articleshow-3o1osgk"/>
        </item>
        <item>
            <title><![CDATA[ರಾಮ್ ಚರಣ್ 'ಪೆದ್ದಿ' ಸೆಟ್‌ಗೆ ಚಿರಂಜೀವಿ, ಸುಕುಮಾರ್ ಸರ್ಪ್ರೈಸ್ ವಿಸಿಟ್: ಬಿಟಿಎಸ್ ವಿಡಿಯೋ ವೈರಲ್]]></title>
            <link>https://kannada.asianetnews.com/entertainment/chiranjeevi-and-sukumar-make-surprise-visit-to-ram-charans-peddi-set-gvd/articleshow-iafxlzb</link>
            <guid isPermaLink="true">https://kannada.asianetnews.com/entertainment/chiranjeevi-and-sukumar-make-surprise-visit-to-ram-charans-peddi-set-gvd/articleshow-iafxlzb</guid>
            <pubDate>Fri, 08 May 2026 23:27:57 +0530</pubDate>
            <description><![CDATA[&lt;p&gt;ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಸೆಟ್&zwnj;ಗೆ ಮೆಗಾಸ್ಟಾರ್ ಚಿರಂಜೀವಿ ಹಾಗೂ 'ಪುಷ್ಪ' ಖ್ಯಾತಿಯ ನಿರ್ದೇಶಕ ಸುಕುಮಾರ್ ಭೇಟಿ ನೀಡಿದ್ದಾರೆ. ಈ ಕ್ಷಣದ ಬಿಟಿಎಸ್ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದ್ದು, ಈ ಸಿನಿಮಾ 2026ರ ಜೂನ್ 4ರಂದು ತೆರೆಗೆ ಬರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr493cc051zjvywwv02k1e16,imgname-kbk-1778260226432.png" type="image/jpeg" height="390" width="690"/>
            <content:encoded><![CDATA[&lt;p&gt;ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಮೇಲೆ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗ ಚಿತ್ರತಂಡ ಒಂದು ಸ್ಪೆಷಲ್ ಬಿಟಿಎಸ್ ವಿಡಿಯೋ ಹಂಚಿಕೊಂಡು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ. ಈ ವಿಡಿಯೋದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ 'ಪುಷ್ಪ' ಖ್ಯಾತಿಯ ನಿರ್ದೇಶಕ ಸುಕುಮಾರ್ 'ಪೆದ್ದಿ' ಸೆಟ್&zwnj;ಗೆ ಭೇಟಿ ನೀಡಿರುವ ದೃಶ್ಯಗಳಿವೆ.&lt;/p&gt;&lt;p&gt;'ಪೆದ್ದಿ' ಚಿತ್ರತಂಡ ಈ ವಿಡಿಯೋ ಶೇರ್ ಮಾಡಿಕೊಂಡು, &quot;ನಮ್ಮ ಹೃದಯಕ್ಕೆ ಹತ್ತಿರವಾದ ಕೆಲವು ಖುಷಿಯ ಕ್ಷಣಗಳು ಇಲ್ಲಿವೆ. ಮೆಗಾಸ್ಟಾರ್ ಚಿರಂಜೀವಿ ಹಾಗೂ ನಿರ್ದೇಶಕ ಸುಕುಮಾರ್ 'ಪೆದ್ದಿ' ಶೂಟಿಂಗ್&zwnj;ಗೆ ಭೇಟಿ ನೀಡಿದ್ದರು. 'ಪೆದ್ದಿ' ಸಿನಿಮಾ ಜೂನ್ 4, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜೂನ್ 3 ರಂದು ಪ್ರೀಮಿಯರ್ ಶೋಗಳು ಇರಲಿವೆ. ಟ್ರೇಲರ್ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ,&quot; ಎಂದು ಬರೆದುಕೊಂಡಿದೆ.&lt;/p&gt;&lt;p&gt;ರಾಮ್ ಚರಣ್ ಕೂಡ ಈ ಬಿಟಿಎಸ್ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. &quot;'ಪೆದ್ದಿ' ಸೆಟ್&zwnj;ನಲ್ಲಿ ಒರಿಜಿನಲ್ ಪೆದ್ದಿ. #Throwback,&quot; ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ವಿಡಿಯೋದಲ್ಲಿ, ಚಿರಂಜೀವಿ ಮತ್ತು ಸುಕುಮಾರ್ ಅವರು 'ಪೆದ್ದಿ' ಚಿತ್ರತಂಡದ ಜೊತೆ ಮಾತನಾಡುತ್ತಿರುವುದನ್ನು ಕಾಣಬಹುದು. ನಟ ರಾಮ್ ಚರಣ್ ಕೂಡ ತಮ್ಮ ಪಾತ್ರದ ಗೆಟಪ್&zwnj;ನಲ್ಲೇ ಇದ್ದು, ಇಬ್ಬರೂ ಗಣ್ಯರ ಜೊತೆ ಚರ್ಚೆಯಲ್ಲಿ ತೊಡಗಿದ್ದರು.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Ram Charan (@alwaysramcharan)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;'ಪೆದ್ದಿ'ಯಲ್ಲಿ ಸುಕುಮಾರ್ ಪಾತ್ರವೇನು?&lt;/strong&gt;&lt;/p&gt;&lt;p&gt;ಚಿತ್ರತಂಡದ ಪತ್ರಿಕಾ ಪ್ರಕಟಣೆ ಪ್ರಕಾರ, 'ಪೆದ್ದಿ' ಸಿನಿಮಾದಲ್ಲಿ ನಿರ್ದೇಶಕ ಸುಕುಮಾರ್ ಅವರ ಪಾತ್ರ ಬಹಳ ಮುಖ್ಯವಾದದ್ದು. ಕಥೆಯ ಹಂತದಿಂದ ಹಿಡಿದು, ನಾಯಕನ ಆಯ್ಕೆ, ಸಂಗೀತ ನಿರ್ದೇಶನ ಹಾಗೂ ಸಿನಿಮಾದ ಪ್ರತಿಯೊಂದು ಕ್ರಿಯೇಟಿವ್ ನಿರ್ಧಾರದಲ್ಲೂ ಸುಕುಮಾರ್ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲ, ಅವರು ಶೂಟಿಂಗ್ ಸೆಟ್&zwnj;ಗಳಿಗೆ ಭೇಟಿ ನೀಡಿ, ತೆರೆಮರೆಯಲ್ಲಿ ಎಲ್ಲವನ್ನೂ ನೋಡಿಕೊಂಡಿದ್ದಾರೆ. ಎಡಿಟಿಂಗ್&zwnj;ನಲ್ಲೂ ಕುಳಿತು, ತಮ್ಮ ಶಿಷ್ಯನ (ಬುಚ್ಚಿ ಬಾಬು ಸಾನಾ) ವಿಷನ್ ಅತ್ಯುತ್ತಮವಾಗಿ ತೆರೆಗೆ ಬರುವಂತೆ ನೋಡಿಕೊಂಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.&lt;/p&gt;&lt;h2&gt;&lt;strong&gt;'ಪೆದ್ದಿ' ತಾರಾಗಣ ಮತ್ತು ಬಿಡುಗಡೆ ವಿವರ&lt;/strong&gt;&lt;/h2&gt;&lt;p&gt;ಬುಚ್ಚಿ ಬಾಬು ಸಾನಾ ಕಥೆ ಬರೆದು ನಿರ್ದೇಶಿಸುತ್ತಿರುವ 'ಪೆದ್ದಿ' ಸಿನಿಮಾದಲ್ಲಿ ರಾಮ್ ಚರಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಶಿವ ರಾಜ್&zwnj;ಕುಮಾರ್, ಜಾನ್ವಿ ಕಪೂರ್, ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಮೈತ್ರಿ ಮೂವೀ ಮೇಕರ್ಸ್ ಸಹಯೋಗ ನೀಡಿದೆ. ಈ ಸಿನಿಮಾ 2026ರ ಜೂನ್ 4 ರಂದು ತೆರೆಗೆ ಬರಲಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/chiranjeevi-and-sukumar-make-surprise-visit-to-ram-charans-peddi-set-gvd/articleshow-iafxlzb"/>
        </item>
        <item>
            <title><![CDATA[Amruthadhaare: ಪ್ಲೀಸ್​ ಪೊಲೀಸ್ರೇ ಸೀರಿಯಲ್​ ನೋಡಿ, ಜೈದೇವ್​ನ ಬಿಟ್ಟುಬಿಡಿ: ಗೋಳಾಡ್ತಿದ್ದಾರೆ ಜೈ ಫ್ಯಾನ್ಸ್​]]></title>
            <link>https://kannada.asianetnews.com/gallery/tv-talk/amruthadhaare-serial-jaidev-in-jail-shakuntala-reject-him-as-his-son-suc-okufgav</link>
            <guid isPermaLink="true">https://kannada.asianetnews.com/gallery/tv-talk/amruthadhaare-serial-jaidev-in-jail-shakuntala-reject-him-as-his-son-suc-okufgav</guid>
            <pubDate>Fri, 08 May 2026 20:19:16 +0530</pubDate>
            <description><![CDATA[ಅಮೃತಧಾರೆ ಸೀರಿಯಲ್&zwnj;ನಲ್ಲಿ ದಿಯಾಳಿಂದಾಗಿ ಜೈಲು ಪಾಲಾದ ಜೈದೇವ್, ಸಹಾಯಕ್ಕಾಗಿ ತನ್ನ ತಾಯಿ ಶಕುಂತಲಾಗೆ ಕರೆ ಮಾಡುತ್ತಾನೆ. ಆದರೆ, ಮಗನಿಂದಾದ ಅವಮಾನವನ್ನು ನೆನೆದು ಶಕುಂತಲಾ, ಅವನು ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿ ಪೊಲೀಸರಿಗೆ ಅವನನ್ನು ಥಳಿಸಲು ಹೇಳುತ್ತಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr40wqc124pnmgw1ns8vm16q,imgname-jaidev-03-1778251619713.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಸೀರಿಯಲ್&zwnj;ನಲ್ಲಿ ದಿಯಾಳಿಂದಾಗಿ ಜೈಲು ಪಾಲಾದ ಜೈದೇವ್, ಸಹಾಯಕ್ಕಾಗಿ ತನ್ನ ತಾಯಿ ಶಕುಂತಲಾಗೆ ಕರೆ ಮಾಡುತ್ತಾನೆ. ಆದರೆ, ಮಗನಿಂದಾದ ಅವಮಾನವನ್ನು ನೆನೆದು ಶಕುಂತಲಾ, ಅವನು ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿ ಪೊಲೀಸರಿಗೆ ಅವನನ್ನು ಥಳಿಸಲು ಹೇಳುತ್ತಾಳೆ.&lt;img&gt;&lt;p&gt;ಅಮೃತಧಾರೆ (Amruthadhaare Serial) ಸದ್ಯ ಜೈದೇವನ ಸ್ಥಿತಿ ಯಾರಿಂದಲೂ ನೋಡಲು ಆಗುತ್ತಿಲ್ಲ. ಅದರಲ್ಲಿಯೂ ಅವರ ಫ್ಯಾನ್ಸ್ ಅಂತೂ ಪ್ಲೀಸ್​ ಹಾಗೆ ಮಾಡಬೇಡಿ, ಬಿಟ್ಟುಬಿಡಿ ಅವರನ್ನು ಎನ್ನುತ್ತಿದ್ದಾರೆ. ಏಕೆಂದರೆ ಅಂಥ ಸ್ಥಿತಿ ಜೈದೇವ್​ಗೆ ಬಂದಿದೆ.&lt;/p&gt;&lt;img&gt;&lt;p&gt;ಬೇಬಿ ಬೇಬಿ ಎಂದು ದಿಯಾಳ ಹಿಂದೆ ತಿರುಗುತ್ತಿದ್ದ ಜೈದೇವ್​ಗೆ ಆಕೆ ಸರಿಯಾದ ಬುದ್ಧಿ ಕಲಿಸಿ ಪೊಲೀಸರನ್ನು ಕರೆಸಿದ್ದಾಳೆ. ಅವನು ಜೈಲುಪಾಲಾಗಿದ್ದಾನೆ.&lt;/p&gt;&lt;img&gt;&lt;p&gt;ಹೇಗಾದರೂ ಜೈಲಿನಿಂದ ತಪ್ಪಿಸಿಕೊಳ್ಳಲು ನಾನು ಜೈದೇವ್​ ದಿವಾನ್​. ಬೇಕಿದ್ದರೆ ನನ್ನ ಅಮ್ಮನಿಗೆ ಕಾಲ್​ ಮಾಡಿ ಎಂದು ಹೇಳಿದ್ದಾನೆ ಜೈದೇವ. ಪೊಲೀಸರು ಶಕುಂತಲಗೆ ಕಾಲ್​ ಮಾಡಿದಾಗ ಫೋನ್​ ಕಸಿದುಕೊಂಡ ಜೈದೇವ್​, ಅಮ್ಮಾ ಪ್ಲೀಸ್​ ನೀನು ನನ್ನ ಅಮ್ಮ ಎಂದು ಹೇಳು. ಇಲ್ಲಿ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾನೆ.&lt;/p&gt;&lt;img&gt;&lt;p&gt;ಆದರೆ, ತನ್ನನ್ನು ಬೀದಿಗೆ ತಂದು ಬಾಯಿಗೆ ಬಂದ ಹಾಗೆ ಬಯ್ದಿರೋ ಮಗನ ಎಲ್ಲಾ ಸೀನ್​ ನೆನಪಿಸಿಕೊಂಡ ಶಕುಂತಲಾ ಪೊಲೀಸರ ಬಳಿ, ಅವನು ಯಾರೆಂದೇ ನನಗೆ ಗೊತ್ತಿಲ್ಲ, ಚೆನ್ನಾಗಿ ರುಬ್ಬಿ ಎಂದಿದ್ದಾಳೆ.&lt;/p&gt;&lt;img&gt;&lt;p&gt;ಇಷ್ಟು ಹೇಳುತ್ತಿದ್ದಂತೆಯೇ ಪೊಲೀಸರು ಜೈದೇವನ ಅಂಗಿ ಎಲ್ಲಾ ಬಿಚ್ಚಿಸಿ ಚೆನ್ನಾಗಿ ಬಾರಿಸಿದ್ದಾರೆ. ಮೈಯೆಲ್ಲಾ ಬರೆ ಬಂದಿದೆ. ಇದನ್ನು ನೋಡಿದ ಜೈದೇವ್​ ಫ್ಯಾನ್ಸ್​ ತುಂಬಾ ನೊಂದುಕೊಳ್ಳುತ್ತಿದ್ದಾರೆ. ಪ್ಲೀಸ್​​ ಹಾಗೆಲ್ಲಾ ಮಾಡಬೇಡಿ. ಸೀರಿಯಲ್​ ನೋಡಿ, ಅವನೇ ಶಕುಂತಲಾ ಮಗ ಎನ್ನುತ್ತಿದ್ದಾರೆ.&lt;/p&gt;&lt;img&gt;&lt;p&gt;ಜೈದೇವ್​ ಉರ್ಫ್​ ನಟ ರಾಣವ್​ ಗೌಡ ಅವರ ಆ್ಯಕ್ಟಿಂಗ್​ ನೆಕ್ಟ್​ ಲೆವೆಲ್​ ಎಂದು ಹಲವರು ಶ್ಲಾಘಿಸುತ್ತಿದ್ದಾರೆ. ಇವರು ವಿಲನ್​ ಅಲ್ಲ, ಹೀರೋ ಆಗಿ ಮಿಂಚಬೇಕು ಎನ್ನುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-serial-jaidev-in-jail-shakuntala-reject-him-as-his-son-suc-okufgav"/>
        </item>
        <item>
            <title><![CDATA[ಬ್ಲಡಿ ಮದರ್ ಸೆಂಟಿಮೆಂಟ್ ಕ್ಲೋಸ್ ಮಾಡಿದ್ದ ಜೈದೇವ್‌ಗೆ ಆಘಾತ; ಕೆಡಿ ನೋಡಿ ಪೊಲೀಸರೇ ಕಂಗಾಲು]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-update-mother-shakuntala-did-not-come-to-the-aid-of-her-son-jaidev-mrq-aawakg7</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-update-mother-shakuntala-did-not-come-to-the-aid-of-her-son-jaidev-mrq-aawakg7</guid>
            <pubDate>Fri, 08 May 2026 20:03:37 +0530</pubDate>
            <description><![CDATA[ದಿಯಾ ಮನೆ ಮುಂದೆ ಗಲಾಟೆ ಮಾಡಿ ಜೈಲು ಸೇರಿದ ಜೈದೇವ್, ಸಹಾಯಕ್ಕಾಗಿ ತಾಯಿ ಶಕುಂತಲಾಗೆ ಕರೆ ಮಾಡುತ್ತಾನೆ. ಆದರೆ, ಶಕುಂತಲಾ ಅವನನ್ನು ಗುರುತಿಸಲು ನಿರಾಕರಿಸಿ ಕೈಬಿಡುತ್ತಾಳೆ, ಇದರಿಂದಾಗಿ ಪೊಲೀಸರು ಜೈದೇವ್&zwnj;ಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3zrryq05hyh2jssv7tn7kg,imgname-amruthadhaare--3--1778250441687.jpg" type="image/jpeg" height="390" width="690"/>
            <content:encoded><![CDATA[ದಿಯಾ ಮನೆ ಮುಂದೆ ಗಲಾಟೆ ಮಾಡಿ ಜೈಲು ಸೇರಿದ ಜೈದೇವ್, ಸಹಾಯಕ್ಕಾಗಿ ತಾಯಿ ಶಕುಂತಲಾಗೆ ಕರೆ ಮಾಡುತ್ತಾನೆ. ಆದರೆ, ಶಕುಂತಲಾ ಅವನನ್ನು ಗುರುತಿಸಲು ನಿರಾಕರಿಸಿ ಕೈಬಿಡುತ್ತಾಳೆ, ಇದರಿಂದಾಗಿ ಪೊಲೀಸರು ಜೈದೇವ್&zwnj;ಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ.&lt;img&gt;&lt;p&gt;ದಿಯಾ ಬೇಬಿ ಮನೆ ಮುಂದೆ ಕಿರಿಕ್ ಮಾಡಿಕೊಂಡ ಜೈದೇವ್, ಜೈಲು ಸೇರಿದ್ದಾನೆ. ಪೊಲೀಸ್ ಸ್ಟೇಶನ್&zwnj;ಗೆ ಬರುತ್ತಿದ್ದಂತೆ ನಾನು ಯಾರು ಅಂತ ನಿಮಗೆ ಗೊತ್ತಿಲ್ಲ. ಗೌತಮ್ ದಿವಾನ್ ಹೆಸರು ಕೇಳಿದ್ದಿರಲ್ಲಾ? ಅವನ ತಮ್ಮನೇ ಈ ಜೈದೇವ್. ದಿಯಾ ಕೊತೆ ಏಳೆಂಟು ವರ್ಷ ಸಂಸಾರ ಮಾಡಿದ್ದೇನೆ. ಆಕೆ ನನಗೆ ಮೋಸ ಮಾಡಿದ್ದಾಳೆ ಎಂದು ಪೊಲೀಸರ ಮುಂದೆ ಕೂಗಾಡಿದ್ದಾನೆ.&lt;/p&gt;&lt;img&gt;&lt;p&gt;ಜೈಲಿನಿಂದ ಹೊರಗಡೆ ಬರಲು ದಿವಾನ್ ಮನೆಗೆ ಪೊಲೀಸರಿಂದ ಜೈದೇವ್ ಕಾಲ್ ಮಾಡಿಸಿದ್ದಾನೆ. ಪೊಲೀಸರ ಕರೆಯನ್ನು ಶಕುಂತಲಾ ರಿಸೀವ್ ಮಾಡಿದ್ದಾಳೆ. ಪೊಲೀಸರು ಶಕುಂತಲಾ ಅಂತ ಹೇಳುತ್ತಿದ್ದಂತೆ ಜೈದೇವ್, ಕೂಡಲೇ ಮಾಮ್ ಮಾಮ್ ಅಂತ ಮಾತನಾಡಿಸಿ ಫೋನ್&zwnj;ನಲ್ಲಿ ಜೈದೇವ್, ತನ್ನ ಸ್ಥಿತಿಯನ್ನು ವಿವರಿಸಿದ್ದಾನೆ.&lt;/p&gt;&lt;img&gt;&lt;p&gt;ಜೈದೇವ್ ಧ್ವನಿ ಕೇಳುತ್ತಿದ್ದಂತೆ ಶಕುಂತಲಾ ಮುಂದೆ ಹಿಂದಿನ ಘಟನೆಯೆಲ್ಲವೂ ಕಣ್ಮುಂದೆ ಬಂದಿದೆ. ನಂತರ ಅವನು ಯಾರು ಅಂತ ನಮಗೆ ಗೊತ್ತಿಲ್ಲ. ನನ್ನ ಹೆಸರು ಬಳಸಿಕೊಂಡು ಜೈಲಿನಿಂದ ಹೊರಗೆ ಬರಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿ ಶಕುಂತಲಾ ಕೈ ತೊಳೆದುಕೊಂಡಿದ್ದಾಳೆ. ಶಕುಂತಲಾ ಮಾತು ಕೇಳುತ್ತಿದ್ದಂತೆ ಜೈದೇವ್&zwnj; ಕೆನ್ನೆಗೆ ಪೊಲೀಸರು ಏಟು ನೀಡಿದ್ದಾರೆ.&lt;/p&gt;&lt;img&gt;&lt;p&gt;ಪೊಲೀಸರು ಹೊಡೆಯುತ್ತಿದ್ದಂತೆ ಕೋಪಗೊಂಡ ಜೈದೇವ್, ನೀವು ಲಂಚ ತೆಗೆದುಕೊಂಡು ಈ ರೀತಿ ಮಾಡ್ತಿದ್ದೀರಿ. ಮಾಮ್ ಹಾಗೆ ಹೇಳಲು ಸಾಧ್ಯವೇ ಇಲ್ಲ. ನಾನು ಆಕೆಯ ಪ್ರೀತಿಯ ಮಗ. ನಿಮ್ಮನ್ನು ನೀರು-ನೆರಳಿಲ್ಲದ ಸ್ಥಳಕ್ಕೆ ಟ್ರಾನ್ಸಫರ್ ಮಾಡಸ್ತೀನಿ ಅಂತ ಜೈದೇವ್ ಹೇಳುತ್ತಿದ್ದಂತೆ ಪೊಲೀಸರು ಒಳಗೆ ಹೋಗಿ ಲಾಠಿ ಏಟು ನೀಡಲು ಆರಂಭಿಸುತ್ತಾರೆ.&lt;/p&gt;&lt;img&gt;&lt;p&gt;ದಿಯಾ ಜೊತೆ ಸೇರಿಕೊಂಡು ಬ್ಲಡಿ ಮದರ್ ಸೆಂಟಿಮೆಂಟ್&zwnj; ಕ್ಲೋಸ್ ಮಾಡಿದ್ದ ಜೈದೇವ್&zwnj;ಗೆ ತಾಯಿ ಶಕುಂತಲಾ ಶಾಕ್ ನೀಡಿದ್ದಾಳೆ. ಮತ್ತೊಂದೆಡೆ ಪೊಲೀಸರು ಜೈದೇವ್&zwnj;ನ ಬಟ್ಟೆ ಕಳಚಿ ಥಳಿಸಿದ್ದಾರೆ. ಸೆಲ್&zwnj;ನಿಂದ ಹೊರಬಂದ ಪೊಲೀಸರು, ಎಷ್ಟೇ ಹೊಡೆದ್ರೂ ಒಂದು ಹನಿ ಕಣ್ಣೀರು ಬರಲಿಲ್ಲವಾ ಎಂದು ಶಾಕ್ ಆಗಿದ್ದಾರೆ. ಅಂತಿಮವಾಗಿ ಜೈಲಿನಲ್ಲಿ ಕುಳಿತು ವಿಕೃತವಾಗಿ ನಗುತ್ತಿರೋ ಜೈದೇವ್&zwnj;ನನ್ನು ಇಂದಿನ ಸಂಚಿಕೆಯಲ್ಲಿ ತೋರಿಸಲಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-update-mother-shakuntala-did-not-come-to-the-aid-of-her-son-jaidev-mrq-aawakg7"/>
        </item>
        <item>
            <title><![CDATA[Bhagylakshmi ಕಂಡ್ರೆ ಕಿಡಿಕಾರೋ ಕನ್ನಿಕಾ ಇಲ್ಲಿ ನೋಡಿ ಭಾಗ್ಯ ಜೊತೆ ಸೊಂಟ ಬಳಕಿಸೋ ವಿಡಿಯೋ]]></title>
            <link>https://kannada.asianetnews.com/gallery/tv-talk/bhagyalakshmi-bhagya-urf-sushma-k-rao-and-kannika-sukruta-nag-reels-suc-wzumczs</link>
            <guid isPermaLink="true">https://kannada.asianetnews.com/gallery/tv-talk/bhagyalakshmi-bhagya-urf-sushma-k-rao-and-kannika-sukruta-nag-reels-suc-wzumczs</guid>
            <pubDate>Fri, 08 May 2026 19:55:12 +0530</pubDate>
            <description><![CDATA['ಭಾಗ್ಯಲಕ್ಷ್ಮಿ' ಸೀರಿಯಲ್&zwnj;ನ ಅತ್ತಿಗೆ-ನಾದಿನಿ ಭಾಗ್ಯ (ಸುಷ್ಮಾ) ಮತ್ತು ಕನ್ನಿಕಾ (ಸುಕೃತಾ) ತೆರೆಮೇಲೆ ವೈರಿಗಳಾಗಿದ್ದರೂ, ತೆರೆಹಿಂದೆ ವೈರಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಲೇಖನವು ಅವರ ವೃತ್ತಿಜೀವನದ ಆರಂಭ ಮತ್ತು ಸುಕೃತಾ ತಮ್ಮ ಜೀವನದ ಖಿನ್ನತೆಯ ಬಗ್ಗೆ ಮಾತನಾಡಿದ ಕ್ಷಣಗಳನ್ನು ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3zfwky8xjw5arvgkxw7p9w,imgname-bhagyalakshmi-02-1778250150526.jpg" type="image/jpeg" height="390" width="690"/>
            <content:encoded><![CDATA['ಭಾಗ್ಯಲಕ್ಷ್ಮಿ' ಸೀರಿಯಲ್&zwnj;ನ ಅತ್ತಿಗೆ-ನಾದಿನಿ ಭಾಗ್ಯ (ಸುಷ್ಮಾ) ಮತ್ತು ಕನ್ನಿಕಾ (ಸುಕೃತಾ) ತೆರೆಮೇಲೆ ವೈರಿಗಳಾಗಿದ್ದರೂ, ತೆರೆಹಿಂದೆ ವೈರಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಲೇಖನವು ಅವರ ವೃತ್ತಿಜೀವನದ ಆರಂಭ ಮತ್ತು ಸುಕೃತಾ ತಮ್ಮ ಜೀವನದ ಖಿನ್ನತೆಯ ಬಗ್ಗೆ ಮಾತನಾಡಿದ ಕ್ಷಣಗಳನ್ನು ವಿವರಿಸುತ್ತದೆ.&lt;img&gt;&lt;p&gt;ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯಳ ಇನ್ನೊಂದು ಗೋಳಾಟ ಶುರುವಾಗಿದೆ. ಆದಿಯ ಮನೆಯಲ್ಲಿಯೂ ಆಕೆಗೆ ಹಿಂಸೆ ತಪ್ಪಿದ್ದಲ್ಲ. ಕನ್ನಿಕಾ ಮತ್ತು ಚಿಕ್ಕಮ್ಮ ಎಲ್ಲಾ ಸೇರಿ ಭಾಗ್ಯಳಿಗೆ ಕಿರಿಕ್ ಮಾಡುತ್ತಿದ್ದಾರೆ. ಅದರಲ್ಲಿಯೂ ಕನ್ನಿಕಾ ಅಂತೂ ಒಂದು ಕ್ಷಣವೂ ಬಿಡದೇ ಭಾಗ್ಯಳಿಗೆ ತೊಂದರೆ ಕೊಡೋದನ್ನೇ ಕಾಯಕ ಮಾಡಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ಇದು ಸೀರಿಯಲ್ ಸ್ಟೋರಿ ಆದ್ರೆ ಇತ್ತ ಶೂಟಿಂಗ್​ ನಡುವಿನ ಅವಧಿಯಲ್ಲಿ ಭಾಗ್ಯ ಉರ್ಫ್​ ಸುಷ್ಮಾ ಕೆ.ರಾವ್​ ಹಾಗೂ ಕನ್ನಿಕಾ ಉರ್ಫ್​ ಸುಕೃತಾ ನಾಗ್​ ಅವರು ಭಾರಿ ವೈರಲ್​ ಆಗ್ತಿರೋ ved lavla ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಅತ್ತಿಗೆ-ನಾದಿನಿ ಎಂದು ಇದಕ್ಕೆ ಸುಕೃತಾ ಅವರು ಕ್ಯಾಪ್ಷನ್​ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಸುಷ್ಮಾ ಕೆ. ರಾವ್ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್&zwnj;ನಲ್ಲಿ ಬಿಎಸ್&zwnj;ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಸುಷ್ಮಾ ರಾವ್ ಎಸ್&zwnj;.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.&lt;/p&gt;&lt;img&gt;&lt;p&gt;ಸುಕೃತಾ ನಾಗ್​ ಕುರಿತು ಹೇಳುವುದಾದರೆ, ಇವರು ಹುಟ್ಟಿ ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಅವರ ತಂದೆ ಮಂಡ್ಯದವರು. ಸುಕೃತಾ ಅವರಿಗೆ ಐದು ವರ್ಷ ಇರುವಾಗಲೇ ನ್ಯುಮೋನಿಯಾದಿಂದ ತಂದೆ ಮೃತಪಟ್ಟಿರುವ ಬಗ್ಗೆ ನಟಿ ಹೇಳಿದ್ದರು. ಅಪ್ಪನ ಜೊತೆ ಕಳೆದ ಅಷ್ಟು ಸುಂದರ ಕ್ಷಣಗಳು ನನಗೆ ನೆನಪಿದೆ. ಅಪ್ಪ ನನ್ನ ಜೀವನದ ಮೊದಲನೇ ಹೀರೋ ಮತ್ತು ಮೊದಲ ಲವ್&zwnj; ಕೂಡ ಹೌದು ಎಂದಿದ್ದರು.&lt;/p&gt;&lt;img&gt;&lt;p&gt;ಸುಕೃತಾ ಭಾಗ್ಯಲಕ್ಷ್ಮಿ ಸೀರಿಯಲ್​ಗೂ ಮುನ್ನ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಅಗ್ನಿಸಾಕ್ಷಿ ಸೀರಿಯಲ್&zwnj; ಅಂಜಲಿ ಪಾತ್ರದ ಮೂಲಕ ಸೀರಿಯಲ್​ ಪ್ರೇಕ್ಷಕರ ಮನಸ್ಸನ್ನು ಗೆದ್ದವರು. ಹಿಂದೊಮ್ಮೆ ನಟಿ, ಇನ್ನೊಂದು ಸಂದರ್ಶನದಲ್ಲಿ ತಮ್ಮ ಜೀವನದ ಲವ್​, ಬ್ರೇಕಪ್​, ಡಿಪ್ರೆಷನ್​ ಬಗ್ಗೆ ಮಾತನಾಡಿದ್ದರು. ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಲವ್&zwnj; ಮತ್ತು ಬ್ರೇಕಪ್&zwnj; ತುಂಬಾ ಕಾಮನ್&zwnj; ಸಂಗತಿ ಆಗಿದೆ. ನಾನು ಲವ್&zwnj; ಮಾಡಿದ್ದೀನಿ.. ನನಗೂ ಬ್ರೇಕಪ್&zwnj; ಆಗಿದೆ. ಹಾರ್ಟ್&zwnj; ಬ್ರೇಕ್&zwnj; ಆಗಿದೆ. ಡಿಪ್ರೆಶನ್&zwnj;ಗೂ ಹೋಗಿದ್ದೀನಿ, ಥೆರಪಿನೂ ತೆಗೆದುಕೊಂಡಿದ್ದೀನಿ ಎಂದು ಸುಕೃತಾ ಓಪನ್​ ಆಗಿ ಹೇಳಿಕೊಂಡಿದ್ದರು.&lt;/p&gt;&lt;img&gt;&lt;p&gt;ಲವ್​ ಬ್ರೇಕಪ್​ ಆದಾಗ, ಖಿನ್ನತೆಗೆ ಜಾರಿದ್ದ ಬಗ್ಗೆ ಹೇಳಿಕೊಂಡಿರೋ ಸುಕೃತಾ, ಆ ಸಮಯದಲ್ಲಿ, ಮಾನಸಿಕ ತಜ್ಞರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಂಡಿದುದ್ದಾಗಿ ಹೇಳಿದ್ದಾರೆ. ಇದೆಲ್ಲವೂ ಪ್ರತಿಯೊಬ್ಬರ ಜೀವನದ ಒಂದು ಭಾಗ ಅಷ್ಟೇ. ಎರಡೂವರೆ ವರ್ಷದ ಪ್ರೀತಿ, ಬ್ರೇಕಪ್&zwnj; ಆದಾಗ ಅದನ್ನ ಸಹಿಸಿಕೊಳ್ಳೋಕೆ ತುಂಬಾ ಕಷ್ಟ ಆಯ್ತು. ಒಂದು ವ್ಯಕ್ತಿ ಜೊತೆಗೆ ಪ್ರೀತಿ ಮಾಡಿ, ಇವರನ್ನೇ ಮದುವೆನೂ ಆಗಬೇಕು ಅಂದ್ಕೊಂಡು, ಇಡೀ ಜೀವನವನ್ನೇ ಪ್ಲ್ಯಾನ್&zwnj; ಮಾಡಿರುತ್ತೇವೆ. ಆ ವ್ಯಕ್ತಿ ದೂರ ಆದಾಗ ಬೇಜಾರಾಗುತ್ತೆ. ಅದೇ ನೋವಿನಿಂದ ಖಿನ್ನತೆಗೆ ಹೋಗಿದ್ದೆ. ಜೀವನ ಇಷ್ಟೇ ಎಂದು ಗೊತ್ತಾಯಿತು, ಏನೂ ಮಾಡಲು ಆಗಲ್ಲ ಎಂದಿದ್ದರು ನಟಿ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bhagyalakshmi-bhagya-urf-sushma-k-rao-and-kannika-sukruta-nag-reels-suc-wzumczs"/>
        </item>
        <item>
            <title><![CDATA[ಮಾಜಿ ಬಾಯ್‌ಫ್ರೆಂಡ್‌ಗಳನ್ನ ಸಾಯೋವರೆಗೂ ಪ್ರೀತಿಸ್ತೀನಿ.. ಅದಕ್ಕೇ ಸಂಬಂಧ ಬೆಳೆಸಿದ್ದು: ನಟಿ ವಿಷ್ಣುಪ್ರಿಯಾ]]></title>
            <link>https://kannada.asianetnews.com/gallery/entertainment/actress-vishnupriya-about-ex-boyfriends-love-statement-gvd-9wae710</link>
            <guid isPermaLink="true">https://kannada.asianetnews.com/gallery/entertainment/actress-vishnupriya-about-ex-boyfriends-love-statement-gvd-9wae710</guid>
            <pubDate>Fri, 08 May 2026 19:20:50 +0530</pubDate>
            <description><![CDATA[&lt;p&gt;ನಟಿ ಹಾಗೂ ನಿರೂಪಕಿ ವಿಷ್ಣುಪ್ರಿಯಾ ತನ್ನ ಮಾಜಿ ಬಾಯ್&zwnj;ಫ್ರೆಂಡ್&zwnj;ಗಳ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತನ್ನೆಲ್ಲಾ ಮಾಜಿ ಬಾಯ್&zwnj;ಫ್ರೆಂಡ್&zwnj;ಗಳನ್ನು ಸಾಯುವವರೆಗೂ ಪ್ರೀತಿಸುತ್ತೇನೆ ಎಂದಿದ್ದಾರೆ. ಅವರು ಹೀಗೆ ಹೇಳಿದ್ದೇಕೆ? ಈ ಫೋಟೋ ಸ್ಟೋರಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kny3x8f4zbk0nn3xc9gef16r,imgname-vishnupriya-1775905972708.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಹಾಗೂ ನಿರೂಪಕಿ ವಿಷ್ಣುಪ್ರಿಯಾ ತನ್ನ ಮಾಜಿ ಬಾಯ್&zwnj;ಫ್ರೆಂಡ್&zwnj;ಗಳ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತನ್ನೆಲ್ಲಾ ಮಾಜಿ ಬಾಯ್&zwnj;ಫ್ರೆಂಡ್&zwnj;ಗಳನ್ನು ಸಾಯುವವರೆಗೂ ಪ್ರೀತಿಸುತ್ತೇನೆ ಎಂದಿದ್ದಾರೆ. ಅವರು ಹೀಗೆ ಹೇಳಿದ್ದೇಕೆ? ಈ ಫೋಟೋ ಸ್ಟೋರಿ ಓದಿ.&lt;/p&gt;&lt;img&gt;&lt;p&gt;ಟಾಲಿವುಡ್&zwnj;ನ ಜನಪ್ರಿಯ ನಿರೂಪಕಿಯರಲ್ಲಿ ವಿಷ್ಣುಪ್ರಿಯಾ ಕೂಡ ಒಬ್ಬರು. ಇವರು ಕಿರುತೆರೆಯಲ್ಲಿ ಹಲವು ಟಿವಿ ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ನಿರೂಪಕಿ ಮಾತ್ರವಲ್ಲದೆ, ನಟಿ ಮತ್ತು ಡ್ಯಾನ್ಸರ್ ಆಗಿಯೂ ವಿಷ್ಣುಪ್ರಿಯಾ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಸದ್ಯ ಗ್ಲಾಮರಸ್ ಬ್ಯೂಟಿ ಅಂತಾನೇ ಯುವಕರಲ್ಲಿ ಇವರು ಸಖತ್ ಕ್ರೇಜ್ ಹೊಂದಿದ್ದಾರೆ. ವಿಷ್ಣುಪ್ರಿಯಾ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.&lt;/p&gt;&lt;img&gt;&lt;p&gt;ವಿಷ್ಣುಪ್ರಿಯಾ ವೈಯಕ್ತಿಕ ವಿಚಾರಗಳು ಮತ್ತು ವಿವಾದಗಳಿಂದಲೂ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಬೆಟ್ಟಿಂಗ್ ಆ್ಯಪ್&zwnj;ಗಳ ವಿವಾದದಲ್ಲಿ ವಿಷ್ಣುಪ್ರಿಯಾ ಹೆಸರು ಕೇಳಿಬಂದಿತ್ತು. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿ, ಸಬ್&zwnj;ಸ್ಕ್ರಿಪ್ಷನ್ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಈ ನಡುವೆ, ವಿಷ್ಣುಪ್ರಿಯಾ ಈ ಹಿಂದೆ ತನ್ನ ಬಾಯ್&zwnj;ಫ್ರೆಂಡ್&zwnj;ಗಳ ಬಗ್ಗೆ ಮಾಡಿದ ಕಾಮೆಂಟ್&zwnj;ಗಳು ವೈರಲ್ ಆಗುತ್ತಿವೆ.&lt;/p&gt;&lt;img&gt;&lt;p&gt;ಹಿಂದೆ ವಿಷ್ಣುಪ್ರಿಯಾ ಹಲವು ಬಾಯ್&zwnj;ಫ್ರೆಂಡ್&zwnj;ಗಳ ಜೊತೆ ಸಂಬಂಧ ಹೊಂದಿದ್ದರಂತೆ. ಅವರೆಲ್ಲರ ಜೊತೆ ಬ್ರೇಕಪ್ ಕೂಡ ಆಗಿದೆ. ಈ ವಿಚಾರವನ್ನು ಸ್ವತಃ ವಿಷ್ಣುಪ್ರಿಯಾ ಅವರೇ ಬಹಿರಂಗಪಡಿಸಿದ್ದಾರೆ. ಬ್ರೇಕಪ್ ಆದಮೇಲೆ ನಿಮ್ಮ ಮಾಜಿ ಬಾಯ್&zwnj;ಫ್ರೆಂಡ್&zwnj;ಗಳ ಜೊತೆ ಮಾತುಕತೆ ಮುಂದುವರಿಸಿದ್ದೀರಾ, ಮತ್ತೆ ಸಂಬಂಧ ಮುಂದುವರಿಸಲು ಪ್ರಯತ್ನಿಸಿದ್ದೀರಾ ಎಂದು ಕೇಳಿದಾಗ, ವಿಷ್ಣುಪ್ರಿಯಾ ಆಸಕ್ತಿದಾಯಕ ಉತ್ತರ ನೀಡಿದ್ದರು.&lt;/p&gt;&lt;img&gt;&lt;p&gt;ನನ್ನ ಎಲ್ಲಾ ಮಾಜಿ ಬಾಯ್&zwnj;ಫ್ರೆಂಡ್&zwnj;ಗಳ ಜೊತೆ ನಾನು ಈಗಲೂ ಮಾತನಾಡುತ್ತೇನೆ. ಅವರೆಲ್ಲರೂ ನನಗೆ ಬೆಸ್ಟ್ ಫ್ರೆಂಡ್ಸ್. ಅವರಲ್ಲಿನ ಕೆಲವು ಗುಣಗಳು ಇಷ್ಟವಾದ ಕಾರಣಕ್ಕೇ ನಾನು ಸಂಬಂಧದಲ್ಲಿದ್ದೆ. ಬ್ರೇಕಪ್ ಆದ ತಕ್ಷಣ ಎಲ್ಲವೂ ಮುಗಿದುಹೋಯ್ತು ಅಂತಲ್ಲ. ಹಾಗಂತ ಭವಿಷ್ಯದಲ್ಲಿ ಅವರೊಂದಿಗೆ ಮತ್ತೆ ಸಂಬಂಧ ಬೆಳೆಸಲು ಸಾಧ್ಯವಿಲ್ಲ. ಆದರೆ ಸ್ನೇಹ ಮಾತ್ರ ಖಂಡಿತಾ ಮುಂದುವರಿಯುತ್ತದೆ.&lt;/p&gt;&lt;img&gt;&lt;p&gt;'ಸಾಯುವವರೆಗೂ ನಾನು ಅವರನ್ನು ಪ್ರೀತಿಸುತ್ತಲೇ ಇರುತ್ತೇನೆ. ನಾವು ಸಂಬಂಧದಲ್ಲಿರಲು ಹಲವು ಒಳ್ಳೆಯ ಕಾರಣಗಳಿದ್ದವು. ಕೇವಲ ಕೆಲವು ಕಾರಣಗಳಿಂದ ನಾವು ಬೇರೆಯಾದೆವು ಅಷ್ಟೇ' ಎಂದು ವಿಷ್ಣುಪ್ರಿಯಾ ಹೇಳಿದ್ದಾರೆ. 'ಬೇರೆಯಾದ ಮಾತ್ರಕ್ಕೆ ಅವರ ಮೇಲೆ ನನಗಾಗಲಿ, ನನ್ನ ಮೇಲೆ ಅವರಿಗಾಗಲಿ ದ್ವೇಷವಿಲ್ಲ' ಎಂದು ವಿಷ್ಣುಪ್ರಿಯಾ ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/actress-vishnupriya-about-ex-boyfriends-love-statement-gvd-9wae710"/>
        </item>
        <item>
            <title><![CDATA[ನೀನೊಬ್ಬ ಕ್ರಿಶ್ಚಿಯನ್ ಆಗಿದ್ದು ಹೀಗೆ ಮಾಡಬಹುದಾ?: ಟೀಚರ್ ಮಾತು ನೆನೆದ ನಟ ಟೊವಿನೋ ಥಾಮಸ್]]></title>
            <link>https://kannada.asianetnews.com/entertainment/tovino-thomas-recalls-getting-caught-cheating-in-college-exam-gvd/articleshow-1wiru1h</link>
            <guid isPermaLink="true">https://kannada.asianetnews.com/entertainment/tovino-thomas-recalls-getting-caught-cheating-in-college-exam-gvd/articleshow-1wiru1h</guid>
            <pubDate>Fri, 08 May 2026 18:46:21 +0530</pubDate>
            <description><![CDATA[&lt;p&gt;ನಟ ಟೊವಿನೋ ಥಾಮಸ್ ತಮ್ಮ ಕಾಲೇಜು ದಿನಗಳ ಒಂದು ಮಜವಾದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಪರೀಕ್ಷಾ ಹಾಲ್&zwnj;ನಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿಬಿದ್ದಾಗ, &quot;ನೀನೊಬ್ಬ ಕ್ರಿಶ್ಚಿಯನ್ ಅಲ್ವಾ?..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn20c1q2je8zaaz1qa5xy5nr,imgname-tovino-thomas-1774962738914.png" type="image/jpeg" height="390" width="690"/>
            <content:encoded><![CDATA[&lt;p&gt;ಬಾಸಿಲ್ ಜೋಸೆಫ್ ಜೊತೆ ಟೊವಿನೋ ಥಾಮಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೊಸ ಸಿನಿಮಾ 'ಅತಿರಡಿ'. ಈ ಚಿತ್ರದಲ್ಲಿ ಬಾಸಿಲ್ ಅವರು ಸಾಂಬೋಯ್ ಎಂಬ ಕಾಲೇಜು ಹುಡುಗನ ಪಾತ್ರ ಮಾಡಿದ್ರೆ, ಟೊವಿನೋ ಅವರು ಶ್ರೀಕುಟ್ಟನ್ ವೆಳ್ಳಾಯಣಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 'ಮಿನ್ನಲ್ ಮುರಳಿ' ಚಿತ್ರದ ಸಹ-ಲೇಖಕ ಅರುಣ್ ಅನಿರುದ್ಧನ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಮೇ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;&lt;p&gt;ಸದ್ಯ, ಈ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಟೊವಿನೋ ಥಾಮಸ್ ತಮ್ಮ ಕಾಲೇಜು ದಿನಗಳ ಒಂದು ಮಜವಾದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಪರೀಕ್ಷಾ ಹಾಲ್&zwnj;ನಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿಬಿದ್ದಾಗ, &quot;ನೀನೊಬ್ಬ ಕ್ರಿಶ್ಚಿಯನ್ ಅಲ್ವಾ? ಹೀಗೆ ಮಾಡಬಹುದಾ? ಹೋಗಿ ಚರ್ಚ್&zwnj;ನಲ್ಲಿ ತಪ್ಪೊಪ್ಪಿಕೊ&quot; ಅಂತ ಟೀಚರ್ ಬುದ್ಧಿ ಹೇಳಿದ್ದನ್ನು ಟೊವಿನೋ ತಮಾಷೆಯಾಗಿ ಹೇಳಿಕೊಂಡಿದ್ದಾರೆ.&lt;/p&gt;&lt;p&gt;&quot;ನಾನು ಪರೀಕ್ಷೆಯಲ್ಲಿ ಕಾಪಿ ಇಟ್ಟಿದ್ದೂ ಇದೆ, ಸಿಕ್ಕಿಬಿದ್ದಿದ್ದೂ ಇದೆ. ಆಗ ಮೈಕ್ರೋ ಜೆರಾಕ್ಸ್ ಸಿಕ್ತಿತ್ತು. ದೊಡ್ಡ ಪೇಜ್&zwnj;ನಲ್ಲಿದ್ದ ನೋಟ್ಸ್ ಅನ್ನು ಚಿಕ್ಕದಾಗಿ ಪ್ರಿಂಟ್ ತೆಗೆಯಬಹುದಿತ್ತು. ಅದನ್ನು ಮಡಚಿ ಎಲ್ಲೆಲ್ಲೋ ಇಟ್ಕೋತಿದ್ವಿ. ರೋಲ್ ನಂಬರ್ ಪ್ರಕಾರ ಅಕ್ಕಪಕ್ಕ ಕೂತಿದ್ದ ನಾವು ಮೂರು ಜನ ಫ್ರೆಂಡ್ಸ್, ತಲಾ ಐದೈದು ಚೀಟಿ ಹಂಚಿಕೊಂಡಿದ್ವಿ. ನಾನು ಮತ್ತು ವಿಮಲ್ ಪಕ್ಕದಲ್ಲೇ ಇದ್ವಿ. ಶೆಹನಾಝ್ ಸ್ವಲ್ಪ ದೂರದಲ್ಲಿದ್ದ. ಪ್ರಶ್ನೆಪತ್ರಿಕೆ ನೋಡಿದ್ರೆ, ನನ್ನ ಹತ್ರ ಇದ್ದ ಚೀಟಿಯಲ್ಲಿದ್ದ ಪ್ರಶ್ನೆಗಳೇ ಬಂದಿದ್ದವು. ನನಗಂತೂ ಸಖತ್ ಖುಷಿ ಆಯ್ತು,&quot; ಎಂದು ಟೊವಿನೋ ಹೇಳಿದರು.&lt;/p&gt;&lt;p&gt;&quot;ನಾನು ನೋಡಿದ್ರೆ, ಅತ್ತ ಕೂತಿದ್ದ ಇಬ್ಬರೂ ನನ್ನನ್ನೇ ನೋಡ್ತಿದ್ದಾರೆ. ಪಕ್ಕದಲ್ಲಿದ್ದವನಿಗೆ ಚೀಟಿ ಫ್ಲಿಪ್ ಮಾಡಿ ಕೊಟ್ಟೆ. ಆದರೆ ಕೊನೆಗೆ ಕೂತಿದ್ದವನು 'ಅಯ್ಯೋ' ಅಂತ ನನ್ನನ್ನೇ ನೋಡ್ತಿದ್ದ. ಅವನಿಗೆ ಹೇಗೆ ಕೊಡೋದು ಅಂತ ಗೊತ್ತಾಗಲಿಲ್ಲ. ಅವನ ಕಷ್ಟ ನೋಡಿದ್ರೂ, ಅದನ್ನೇ ನೋಡ್ತಾ ಕೂತರೆ ನಾನೇ ಫೇಲ್ ಆಗ್ತೀನಿ ಅನ್ಕೊಂಡು ಬರೆಯೋಕೆ ಶುರು ಮಾಡಿದೆ. ಪ್ರಶ್ನೆಪತ್ರಿಕೆ ಒಳಗೆ ಚೀಟಿ ಇಟ್ಕೊಂಡು ಬರೀತಿದ್ದೆ,&quot; ಎಂದರು.&lt;/p&gt;&lt;p&gt;&quot;ಸ್ವಲ್ಪ ಹೊತ್ತಾದ ಮೇಲೆ ನನ್ನ ಕಾಲಿಗೆ ಯಾರೋ ಮುಟ್ಟಿದ ಹಾಗಾಯ್ತು. ನೋಡಿದ್ರೆ, ಆ ಫ್ರೆಂಡ್ ಟೀಚರ್ ಕಣ್ಣು ತಪ್ಪಿಸಿ, ಟಾಮ್ ಅಂಡ್ ಜೆರ್ರಿ ತರ ನಾಲ್ಕು ಡೆಸ್ಕ್ ದಾಟಿ ಬಂದಿದ್ದ. ನಾನೂ ಚೀಟಿ ಕೊಟ್ಟೆ. ಅವನು ವಾಪಸ್ ಹೋಗಿದ್ದನ್ನು ನೋಡಿ ನನಗೆ ಟೆನ್ಶನ್ ಆಗೋಯ್ತು. ಕಾಲೇಜಲ್ಲಿ ನಾನು ಸ್ವಲ್ಪ ಡೀಸೆಂಟ್ ಹುಡುಗ ಅನ್ನೋ ತಪ್ಪು ತಿಳುವಳಿಕೆ ಇತ್ತು. ನನ್ನ ಮುಖದಲ್ಲಿನ ಗಾಬರಿ ನೋಡಿ, ಟೀಚರ್&zwnj;ಗೆ ಏನೋ ಗೊತ್ತಿಲ್ಲ ಅನ್ಸುತ್ತೆ ಅಂತ ಪಾಪ ಬಂತು. ನನ್ನ ಮೇಲಿನ ಪ್ರೀತಿಯಿಂದ ಅವರೇ ಉತ್ತರ ಹೇಳಿಕೊಡ್ತೀನಿ ಅಂದ್ರು,&quot; ಎಂದು ಟೊವಿನೋ ಘಟನೆಯನ್ನು ವಿವರಿಸಿದರು.&lt;/p&gt;&lt;p&gt;&quot;ಬರೆಯೋಕೆ ಶುರು ಮಾಡಿದೆ, ಮುಂದಿನ ಭಾಗ ಬರೆಯೋಕೆ ಪೇಜ್ ತಿರುಗಿಸಬೇಕಿತ್ತು. ತಿರುಗಿಸಿದ್ರೆ ಸಾಕು, ಅಲ್ಲೇ ಇತ್ತು ನೋಡಿ 'ಬಿಟ್'. ತಕ್ಷಣ ನನ್ನನ್ನು ಹಿಡಿದು ಹೊರಗೆ ನಿಲ್ಲಿಸಿದ್ರು. ಆಗ ಭಕ್ತಿ ಇಲ್ಲದಿದ್ರೂ ಸ್ಟೈಲ್&zwnj;ಗಾಗಿ ರೋಸರಿ ಹಾಕೋತಿದ್ದೆ. 'ನೀನೊಬ್ಬ ಕ್ರಿಶ್ಚಿಯನ್ ಆಗಿದ್ದು ಹೀಗೆ ಮಾಡಬಹುದಾ?' ಅಂತ ಟೀಚರ್ ಕೇಳಿದ್ರು. ನಾನು 'ಸಾರಿ, ತಪ್ಪಾಯ್ತು' ಅಂದೆ. ನನ್ನ ಮುಖ ನೋಡಿ ಅವರಿಗೆ ಪಾಪ ಬಂತು.&lt;/p&gt;&lt;h2&gt;&lt;strong&gt;ಬಿಟ್ ಕೊಡಿ ಟೀಚರ್!&lt;/strong&gt;&lt;/h2&gt;&lt;p&gt;'ಇದನ್ನು ನೀನು ತಪ್ಪೊಪ್ಪಿಗೆಯಲ್ಲಿ (confession) ಹೇಳಬೇಕು' ಅಂದ್ರು. ನಾನು 'ಖಂಡಿತ ಹೇಳ್ತೀನಿ' ಅಂದೆ. 'ಸರಿ, ಹೋಗಿ ಬಾಕಿ ಇರೋದನ್ನು ಬರಿ' ಅಂದ್ರು. ಎರಡು ಹೆಜ್ಜೆ ಮುಂದೆ ಹೋಗಿ, ನಾನು ವಾಪಸ್ ತಿರುಗಿ 'ಟೀಚರ್, ಆ ಬಿಟ್ ಕೊಡಿ' ಅಂತ ಕೇಳಿದೆ. ಅಷ್ಟೇ, ನನ್ನನ್ನು ಹಿಡಿದು ಹೊರಗೆ ಹಾಕಿಬಿಟ್ಟರು. ಅದಿಲ್ಲದೆ ನಾನು ಹೇಗೆ ಬರೆಯಲಿ ಹೇಳಿ? ಆದರೆ ಆ ಇಬ್ಬರು ಫ್ರೆಂಡ್ಸ್ ಪಾಸ್ ಆದ್ರು,&quot; ಎಂದು ಟೊವಿನೋ ನಗುತ್ತಾ ಹೇಳಿದರು. ಮೂವಿಮ್ಯಾನ್ ಬ್ರಾಡ್&zwnj;ಕಾಸ್ಟಿಂಗ್&zwnj;ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/tovino-thomas-recalls-getting-caught-cheating-in-college-exam-gvd/articleshow-1wiru1h"/>
        </item>
        <item>
            <title><![CDATA[ಇನ್‌ಸ್ಟಾಗ್ರಾಂ ಈಗ ತುಂಬಾನೇ ಸ್ಟ್ರಿಕ್ಟ್, ಆ ಕಂಟೆಂಟ್ ಹಾಕಲು ಸಾಧ್ಯವಿಲ್ಲ: ನಟಿ ಅನ್ನಾ ರಾಜನ್]]></title>
            <link>https://kannada.asianetnews.com/entertainment/actress-anna-rajan-instagram-subscription-income-statement-gvd/articleshow-lpze6ez</link>
            <guid isPermaLink="true">https://kannada.asianetnews.com/entertainment/actress-anna-rajan-instagram-subscription-income-statement-gvd/articleshow-lpze6ez</guid>
            <pubDate>Fri, 08 May 2026 18:24:05 +0530</pubDate>
            <description><![CDATA[&lt;p&gt;ನಟಿ ಅನ್ನಾ ರಾಜನ್ ತಮ್ಮ ಇನ್&zwnj;ಸ್ಟಾಗ್ರಾಂ ಸಬ್&zwnj;ಸ್ಕ್ರಿಪ್ಷನ್ ಬಗ್ಗೆ ಎದ್ದಿದ್ದ ಚರ್ಚೆಗಳಿಗೆ ಉತ್ತರ ನೀಡಿದ್ದಾರೆ. ಸಬ್&zwnj;ಸ್ಕ್ರಿಪ್ಷನ್ ಒಂದು ಆದಾಯದ ಮೂಲ ಅನ್ನೋದು ನಿಜ, ಆದರೆ ಇನ್&zwnj;ಸ್ಟಾಗ್ರಾಂನ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಕೆಟ್ಟ ಕಂಟೆಂಟ್ ಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3tdrmb8p0tjnxzat78ypy9,imgname-jcj-1778244838027.png" type="image/jpeg" height="390" width="690"/>
            <content:encoded><![CDATA[&lt;p&gt;ಮಲಯಾಳಂನ 'ಅಂಗಮಾಲಿ ಡೈರೀಸ್' ಸಿನಿಮಾ ಮೂಲಕ ಫೇಮಸ್ ಆದ ನಟಿ ಅನ್ನಾ ರಾಜನ್, ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್. ಇತ್ತೀಚೆಗೆ ಅನ್ನಾ, ತಮ್ಮ ಇನ್&zwnj;ಸ್ಟಾಗ್ರಾಂ ಸಬ್&zwnj;ಸ್ಕ್ರಿಪ್ಷನ್&zwnj;ಗೆ ಎಲ್ಲರನ್ನೂ ಸ್ವಾಗತಿಸಿ ಒಂದು ವಿಡಿಯೋ ಹಾಕಿದ್ದರು. ಇದನ್ನು ನೋಡಿದ ಅನೇಕರು, ಅನ್ನಾ ಈಗಷ್ಟೇ ಸಬ್&zwnj;ಸ್ಕ್ರಿಪ್ಷನ್ ಶುರು ಮಾಡಿದ್ದಾರೆ ಅಂದುಕೊಂಡಿದ್ದರು. ಆದರೆ, ಈ ಬಗ್ಗೆ ಸ್ವತಃ ಅನ್ನಾ ರಾಜನ್ ಸ್ಪಷ್ಟನೆ ನೀಡಿದ್ದು, ತಾನು ಮೂರೂವರೆ ವರ್ಷಗಳ ಹಿಂದೆಯೇ ಈ ಫೀಚರ್ ಶುರು ಮಾಡಿದ್ದಾಗಿ ಹೇಳಿದ್ದಾರೆ.&lt;/p&gt;&lt;p&gt;ಇನ್&zwnj;ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿದ್ದರೆ ಸಿನಿಮಾ ಅವಕಾಶ ಸಿಗುತ್ತೆ ಅನ್ನೋದು ಸುಳ್ಳು ಅಂತ ಅನ್ನಾ ರಾಜನ್ ಸ್ಪಷ್ಟಪಡಿಸಿದ್ದಾರೆ. &quot;ಇನ್&zwnj;ಸ್ಟಾಗ್ರಾಂ ಮತ್ತು ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಅದು ಬೇರೆಯೇ ಪ್ರಪಂಚ. ಇನ್&zwnj;ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದರೆ ಸಿನಿಮಾ ಸಿಗುತ್ತೆ ಅಂತ ನಾನು ಹೇಳಲ್ಲ, ಹಾಗೆ ಸಿಗುವುದೂ ಇಲ್ಲ. ನಟನಾ ಕೌಶಲ್ಯ ಇದ್ದರೆ ಮಾತ್ರ ಅವಕಾಶಗಳು ಸಿಗುತ್ತವೆ. ಹಿಂದಿನ ಸಿನಿಮಾಗಳ ಯಶಸ್ಸು ಕೂಡಾ ಮುಖ್ಯವಾಗುತ್ತದೆ,&quot; ಎಂದು ಅನ್ನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಇನ್&zwnj;ಸ್ಟಾಗ್ರಾಂ ಸಬ್&zwnj;ಸ್ಕ್ರಿಪ್ಷನ್ ಬಗ್ಗೆ ಮಾತನಾಡಿದ ಅವರು, &quot;ಮೊದಮೊದಲು ನನಗೆ ಇನ್&zwnj;ಸ್ಟಾಗ್ರಾಂ ಜಗತ್ತು ಅಂದ್ರೆ ಭಯ ಇತ್ತು. ಹೇಗೋ ಮಾಡಿ ಅದಕ್ಕೆ ಕಾಲಿಟ್ಟೆ. ನಾನು ಸಬ್&zwnj;ಸ್ಕ್ರಿಪ್ಷನ್ ಶುರು ಮಾಡಿ ಈಗಾಗಲೇ ಮೂರೂವರೆ ವರ್ಷಗಳಾಗಿವೆ. ಮೊಬೈಲ್ ಬಂದಾಗ ಮೊದಲು ಏನು ಹೇಳುತ್ತಿದ್ದರು? ಮಕ್ಕಳಿಗೆ ಕೊಡಬಾರದು, ಅದು ಹಾಳು, ಇದು ಹಾಳು ಅಂತೆಲ್ಲಾ ಹೇಳಿದರು. ಈಗ ಮೊಬೈಲ್ ಇಲ್ಲದವರು ಇದ್ದಾರಾ? ಎಲ್ಲದರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತೆ. ನಾವು ಬಳಸುವ ರೀತಿ ಮುಖ್ಯ,&quot; ಎಂದರು.&lt;/p&gt;&lt;p&gt;&quot;ನನ್ನ ಸಬ್&zwnj;ಸ್ಕ್ರಿಪ್ಷನ್ ಚಾಟ್&zwnj;ನಲ್ಲಿ ಕೆಲವರು, 'ಅಕ್ಕಾ, ಇದರಲ್ಲಿ ಏನೂ ಇಲ್ಲವಲ್ಲಾ? ಇದಕ್ಕಿಂತ 'ನೀಲಕುಯಿಲ್' ಸೀರಿಯಲ್ ನೋಡೋದು ವಾಸಿ' ಅಂತ ಮೆಸೇಜ್ ಮಾಡ್ತಾರೆ. ಆದರೆ, ಇನ್ನು ಕೆಲವರು ನನ್ನನ್ನು ಸಪೋರ್ಟ್ ಮಾಡ್ತಾರೆ. 'ಪಾಪ, ಆ ಹುಡುಗಿ ನಿಮಗೊಂದು ಹಾಯ್ ಆದ್ರೂ ಹೇಳ್ತಿದ್ದಾಳಲ್ಲ' ಅಂತ ನನಗೆ ಬೆಂಬಲವಾಗಿ ನಿಲ್ತಾರೆ. ಒಂದು ಸತ್ಯ ಒಪ್ಪಿಕೊಳ್ಳಬೇಕು, ಇದರಿಂದ ಒಳ್ಳೆ ದುಡ್ಡು ಕೈಗೆ ಬರುತ್ತೆ. ಯಾರು ಏನೇ ಅಂದರೂ ಇದೊಂದು ಒಳ್ಳೆಯ ಆದಾಯದ ಮೂಲ,&quot; ಎಂದು ಅನ್ನಾ ಒಪ್ಪಿಕೊಂಡರು.&lt;/p&gt;&lt;h2&gt;&lt;strong&gt;ವಾರ್ನಿಂಗ್ ಕೊಟ್ಟರು&lt;/strong&gt;&lt;/h2&gt;&lt;p&gt;&quot;ಸಬ್&zwnj;ಸ್ಕ್ರಿಪ್ಷನ್ ಹೆಸರಲ್ಲಿ ಕೆಲವರು ಏನೇನೋ ಹಾಕ್ತಾರೆ. ಆದರೆ ಇನ್&zwnj;ಸ್ಟಾಗ್ರಾಂ ಈಗ ತುಂಬಾನೇ ಸ್ಟ್ರಿಕ್ಟ್ ಆಗಿದೆ. ಒಮ್ಮೆ ಒಬ್ಬ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ. ಅದಕ್ಕೆ ನಾನು 'ನಿಮ್ಮ ಮನೆಯವರನ್ನು ನೆನಪಿಸಿಕೊಳ್ತೀನಿ' ಅಂತ ರಿಪ್ಲೈ ಮಾಡಿದ್ದೆ. ತಕ್ಷಣ ನನ್ನ ಪೇಜ್ ಅನ್ನೇ ತೆಗೆದುಹಾಕಿ, ವಾರ್ನಿಂಗ್ ಕೊಟ್ಟರು. ಅಷ್ಟರಮಟ್ಟಿಗೆ ಅವರು ಫಿಲ್ಟರ್ ಮಾಡ್ತಾರೆ. ಹಾಗಾಗಿ ಕೆಟ್ಟ ಕಂಟೆಂಟ್ ಹಾಕೋಕೆ ಸಾಧ್ಯವೇ ಇಲ್ಲ,&quot; ಎಂದು ಅನ್ನಾ ವಿವರಿಸಿದ್ದಾರೆ. ಒಂದು ಯೂಟ್ಯೂಬ್ ಚಾನೆಲ್&zwnj;ಗೆ ನೀಡಿದ ಸಂದರ್ಶನದಲ್ಲಿ ಅನ್ನಾ ಈ ಎಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/actress-anna-rajan-instagram-subscription-income-statement-gvd/articleshow-lpze6ez"/>
        </item>
        <item>
            <title><![CDATA['ಆ ನೋವು ಈಗ ನಿಮಗೂ ಅರ್ಥವಾಗಬಹುದು': ನಟಿ ಆರ್ಯಾ ಪೋಸ್ಟ್‌ನಿಂದ ಸೀರೆ ಬ್ರ್ಯಾಂಡ್ ವಾರ್!]]></title>
            <link>https://kannada.asianetnews.com/entertainment/actress-arya-badais-cryptic-instagram-post-sparks-controversy-over-new-saree-brand-gvd/articleshow-36btio6</link>
            <guid isPermaLink="true">https://kannada.asianetnews.com/entertainment/actress-arya-badais-cryptic-instagram-post-sparks-controversy-over-new-saree-brand-gvd/articleshow-36btio6</guid>
            <pubDate>Fri, 08 May 2026 18:10:41 +0530</pubDate>
            <description><![CDATA[&lt;p&gt;ತಮ್ಮ ಸೀರೆ ಬ್ರ್ಯಾಂಡ್&zwnj;ಗೆ ಹಿಂದೆ ನೋವು ಕೊಟ್ಟಿದ್ದ ವ್ಯಕ್ತಿಯೇ ಈಗ ಹೊಸ ಸೀರೆ ಬ್ರ್ಯಾಂಡ್ ಶುರು ಮಾಡಿದ್ದಕ್ಕೆ ನಟಿ ಆರ್ಯಾ ಬಡಾಯಿ ಇನ್&zwnj;ಸ್ಟಾಗ್ರಾಂನಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3sn3c6ztjrrm4yxrd44yss,imgname-cj-1778244029830.png" type="image/jpeg" height="390" width="690"/>
            <content:encoded><![CDATA[&lt;p&gt;ಕಿರುತೆರೆ ಪ್ರೇಕ್ಷಕರಿಗೆ ಆರ್ಯಾ ಬಡಾಯಿ ಚಿರಪರಿಚಿತ. 'ಬಡಾಯಿ ಬಂಗ್ಲಾ' ಅನ್ನೋ ಟಿವಿ ಶೋ ಮೂಲಕ ಫೇಮಸ್ ಆದ ಆರ್ಯಾ, ಬಿಗ್ ಬಾಸ್&zwnj;ನಲ್ಲೂ ಭಾಗವಹಿಸಿದ್ದರು. ನಟನೆಯ ಜೊತೆಗೆ 'ಕಾಂಚೀವರಂ' ಅನ್ನೋ ತಮ್ಮ ಸೀರೆ ಬ್ರ್ಯಾಂಡ್ ಮೂಲಕ ಉದ್ಯಮಿಯಾಗಿಯೂ ಆರ್ಯಾ ಗುರುತಿಸಿಕೊಂಡಿದ್ದಾರೆ. ಆದರೆ, ಈಗ ಆರ್ಯಾ ಇನ್&zwnj;ಸ್ಟಾಗ್ರಾಂನಲ್ಲಿ ಹಾಕಿರುವ ಒಂದು ಸ್ಟೋರಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.&lt;/p&gt;&lt;p&gt;ಇತ್ತೀಚೆಗೆ ಯುವ ನಟಿಯೊಬ್ಬರು ತಮ್ಮ ಸೀರೆ ಬ್ರ್ಯಾಂಡ್ ಲಾಂಚ್ ಮಾಡಿದ್ದನ್ನು ನೋಡಿ ತನಗೆ ತುಂಬಾ ಖುಷಿಯಾಗಿದೆ ಅಂತ ಆರ್ಯಾ ವ್ಯಂಗ್ಯವಾಗಿ ಹೇಳಿದ್ದಾರೆ. ತಮ್ಮ ಉದ್ಯಮದ ಆರಂಭದಲ್ಲಿ ತಮಗೆ ತುಂಬಾ ನೋವು ಕೊಟ್ಟಿದ್ದ ವ್ಯಕ್ತಿಯೇ ಈಗ ಹೊಸ ಸೀರೆ ಬ್ರ್ಯಾಂಡ್ ಶುರು ಮಾಡಿದ್ದಾರೆ ಅಂತ ಆರ್ಯಾ ತಮ್ಮ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಆರ್ಯಾ ತಮ್ಮ ಪೋಸ್ಟ್&zwnj;ನಲ್ಲಿ ಆ ನಟಿಯ ಹೆಸರನ್ನು ಎಲ್ಲೂ ಹೇಳಿಲ್ಲ. ಆದರೆ, ಇತ್ತೀಚೆಗಷ್ಟೇ ನಟಿ ನಮಿತಾ ಪ್ರಮೋದ್ 'ನಮ್ಮ ದೇಸಿ' ಅನ್ನೋ ತಮ್ಮ ಹೊಸ ಸೀರೆ ಬ್ರ್ಯಾಂಡ್ ಲಾಂಚ್ ಮಾಡಿದ್ದರು. 'ಒರಿಜಿನಲ್ ಕಾಂಚೀಪುರಂ ಸೀರೆಗಳು' ಅಂತ ಹೇಳಿ ನಮಿತಾ ತಮ್ಮ ಬ್ರ್ಯಾಂಡ್&zwnj;ನ ಸೀರೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಹೀಗಾಗಿ, ಆರ್ಯಾ ತಮ್ಮ ಇನ್&zwnj;ಸ್ಟಾಗ್ರಾಂ ಸ್ಟೋರಿಯಲ್ಲಿ ನಮಿತಾ ಪ್ರಮೋದ್ ಅವರನ್ನೇ ಉದ್ದೇಶಿಸಿ ಮಾತನಾಡಿದ್ದಾರೆ ಅಂತ ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಆರ್ಯಾ ಹೇಳಿದ್ದೇನು?&lt;/strong&gt;&lt;/h2&gt;&lt;p&gt;&quot;ಪ್ರತಿದಿನ ಹೊಸ ಹೊಸ ಸೀರೆ ಬ್ರ್ಯಾಂಡ್&zwnj;ಗಳು ಲಾಂಚ್ ಆಗೋದು ಕಾಮನ್... ಆದ್ರೆ, ಇದೇ ಮೊದಲ ಬಾರಿಗೆ ಒಬ್ಬ ಸೆಲೆಬ್ರಿಟಿಯ ಸೀರೆ ಬ್ರ್ಯಾಂಡ್ ಲಾಂಚ್ ಆಗಿದ್ದನ್ನು ನೋಡಿ ನನಗೆ ಇಷ್ಟೊಂದು ಖುಷಿಯಾಗ್ತಿದೆ! ನನ್ನ ಏಳು ವರ್ಷಗಳ 'ಕಾಂಚೀವರಂ' ಬ್ರ್ಯಾಂಡ್ ಪಯಣದಲ್ಲಿ, ಒಬ್ಬ ಉದ್ಯಮಿಯಾಗಿ ನನಗೆ ತುಂಬಾ ನೋವು, ಅಸಹಾಯಕತೆ ಮತ್ತು ನಿರಾಸೆ ಮೂಡಿಸಿದ ಒಂದು ಘಟನೆ ನಡೆದಿತ್ತು. ಆ ಘಟನೆ ನನ್ನನ್ನು ಎಷ್ಟು ಕಾಡಿತ್ತೆಂದರೆ, ಬಹಳ ಕಾಲ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ,&quot; ಎಂದು ಆರ್ಯಾ ಹೇಳಿದ್ದಾರೆ.&lt;/p&gt;&lt;p&gt;&quot;ಇವತ್ತು ಈ ಬ್ರ್ಯಾಂಡ್ ಲಾಂಚ್ ಮಾಡಿದವರೇ ಅಂದು ಆ ಘಟನೆಯ ಹಿಂದಿದ್ದರು. ಈಗ ನನಗಂತೂ ಇದಕ್ಕಿಂತ ಹೆಚ್ಚು ಖುಷಿಪಡಲು ಸಾಧ್ಯವಿಲ್ಲ. ನಾನು ಅನುಭವಿಸಿದ ಆ ನೋವು ಈಗ ನಿಮಗೂ ಅರ್ಥವಾಗಬಹುದು... ಅವರಿಗೆ ನನ್ನ ಕಡೆಯಿಂದ ಆಲ್ ದಿ ಬೆಸ್ಟ್. ಸಾಮಾನ್ಯವಾಗಿ ನಾನು ಇಂತಹ ವಿಷಯಗಳನ್ನು ಬಹಿರಂಗವಾಗಿ ಹೇಳಲ್ಲ, ಆದರೆ ಇವತ್ತು ನನಗೆ ಕಂಟ್ರೋಲ್ ಮಾಡೋಕೆ ಆಗ್ಲಿಲ್ಲ. ಅಂದ್ರೆ, ಆ ಘಟನೆ ನನಗೆ ಅಷ್ಟೊಂದು ನೋವು ಕೊಟ್ಟಿತ್ತು, ಆ ನೋವು ಇವತ್ತಿಗೂ ನನ್ನ ಮನಸ್ಸಿನಲ್ಲಿದೆ,&quot; ಎಂದು ಆರ್ಯಾ ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/actress-arya-badais-cryptic-instagram-post-sparks-controversy-over-new-saree-brand-gvd/articleshow-36btio6"/>
        </item>
        <item>
            <title><![CDATA[ಚಂದನ್​ ಕುಮಾರ್​ಗೆ ಮತ್ತೊಂದು ಮದ್ವೆ ಮಾಡಲು ನಟಿ ಕವಿತಾ ಗೌಡ ರೆಡಿ ! ಪ್ಲೀಸ್​ ಹೀಗೆಲ್ಲಾ ಹೇಳ್ಬೇಡಿ ಎಂದ ಫ್ಯಾನ್ಸ್​]]></title>
            <link>https://kannada.asianetnews.com/gallery/relationship/kavita-gowda-is-ready-to-get-husband-chandan-kumar-married-again-suc-zu2d55x</link>
            <guid isPermaLink="true">https://kannada.asianetnews.com/gallery/relationship/kavita-gowda-is-ready-to-get-husband-chandan-kumar-married-again-suc-zu2d55x</guid>
            <pubDate>Fri, 08 May 2026 18:08:13 +0530</pubDate>
            <description><![CDATA['ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ಕವಿತಾ ಗೌಡ, ತಮ್ಮ ಪತಿ ಚಂದನ್ ಗೌಡಗೆ ಎರಡನೇ ಮದುವೆಯ ಆಫರ್ ನೀಡಿದ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3s809gmdh60q6sf6tk8d0b,imgname-kavitha-gowda-and-chandan-kumar-1778243600688.jpg" type="image/jpeg" height="390" width="690"/>
            <content:encoded><![CDATA['ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ಕವಿತಾ ಗೌಡ, ತಮ್ಮ ಪತಿ ಚಂದನ್ ಗೌಡಗೆ ಎರಡನೇ ಮದುವೆಯ ಆಫರ್ ನೀಡಿದ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.&lt;img&gt;&lt;p&gt;ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ ಹಾಗೂ ನಟ ಚಂದನ್​ ಗೌಡ ಮೇ 14, 2021 ರಂದು ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾದರು. ಕೋವಿಡ್ ಲಾಕ್&zwnj;ಡೌನ್ ನಿರ್ಬಂಧಗಳ ಕಾರಣ, ಈ ಜೋಡಿ ನಿಕಟವರ್ತಿಗಳ ಸಮ್ಮುಖದಲ್ಲಿ Lakshmi Baramma ಧಾರಾವಾಹಿ ಖ್ಯಾತಿಯ ದಂಪತಿ ಹೊಸ ಜೀವನಕ್ಕೆ ಕಾಲಿಟ್ಟರು&lt;/p&gt;&lt;img&gt;&lt;p&gt;2024ರಲ್ಲಿ ಜೋಡಿ ಗಂಡು ಮಗುವನ್ನು ಸ್ವಾಗತಿಸಿದೆ. ಕವಿತಾ ಅವರಿಗೆ ಹೆಣ್ಣು ಮಗು ಇಲ್ಲವೇ ಅವಳಿ ಮಕ್ಕಳಾಗಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆದರೆ ಅವೆಲ್ಲವೂ ಸುಳ್ಳಾಗಿ ಕವಿತಾಗೆ ಗಂಡು ಮಗುವಾಗಿದೆ. ಮಗನಿಗೆ ಈಗ ಒಂದೂವರೆ ವರ್ಷ ವಯಸ್ಸು.&lt;/p&gt;&lt;img&gt;&lt;p&gt;ಸದ್ಯ ಜೋಡಿ ಸೋಷಿಯಲ್​​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಮಗುವಿನ ಆರೈಕೆಗಾಗಿ ಕವಿತಾ ಸದ್ಯ ಬಣ್ಣದ ಲೋಕದಿಂದ ದೂರ ಇದ್ದರೂ ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ವಿಡಿಯೋ ಪೋಸ್ಟ್​ ಮಾಡುತ್ತಲೇ ಇರುತ್ತಾರೆ.&lt;/p&gt;&lt;img&gt;&lt;p&gt;ಇದೀಗ ಕವಿತಾ, ತಮ್ಮ ಪತಿಗೆ ಎರಡನೆಯ ಮದುವೆಯ ಆಫರ್​ ಕೊಟ್ಟಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಡಿಯರ್ ಹಸ್​ಬೆಂಡ್​ ನಿಮಗೊಂದು ಅಫರ್​ ಕೊಡುತ್ತಿದ್ದೇನೆ ಎಂದು ಚೀಟಿಯಲ್ಲಿ ಅವರು ಬರೆದಿದ್ದಾರೆ.&lt;/p&gt;&lt;img&gt;&lt;p&gt;ಈ ವಿಡಿಯೋದಲ್ಲಿ &lsquo;ಎರಡನೇ ಪತ್ನಿ ಬೇಕು ಅಂತಾದ್ರೆ ನಗಬೇಕು&rsquo; ಎಂದು ಬರೆಯಲಾಗಿದೆ. ಆಗ ನಗು ತಡೆದುಕೊಳ್ಳಲು ಆಗದ ಚಂದನ್, &lsquo;ಒಂದನ್ನೇ ತಡೆದುಕೊಳ್ಳೋಕೆ ಆಗ್ತಿಲ್ಲ, ಇನ್ನೊಂದಾ, ಬೇಡಪ್ಪಾ ಬೇಡ ಎಂದಿದ್ದಾರೆ.&lt;/p&gt;&lt;img&gt;&lt;p&gt;ಎರಡನೆಯ ಪತ್ನಿ ಬೇಡ ಎಂದರೂ ನಕ್ಕಿರುವ ಕಾರಣ, ಅವರಿಗೆ ಮತ್ತೊಂದು ಮದುವೆಯಾಗುವ ಆಸೆ ಇದೆ. ಪತ್ನಿ ಭಯಕ್ಕೆ ಬೇಡ ಅಂತಿದ್ದಾರೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಕೆಲವರು ಸೀರಿಯಲ್​​ ಆಗಿದ್ದು, ತಮಾಷೆಗೂ ಹೀಗೆಲ್ಲಾ ಮಾತನಾಡಬೇಡಿ.ಕೆಲವೊಮ್ಮೆ ಮಾತನಾಡಿದ್ದೇ ಏನೋ ಆಗಿಬಿಡುತ್ತದೆ ಎಂದಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/kavita-gowda-is-ready-to-get-husband-chandan-kumar-married-again-suc-zu2d55x"/>
        </item>
        <item>
            <title><![CDATA[Bigg Boss 13 ಕುರಿತು ಬಿಗ್​ ಅಪ್​ಡೇಟ್​:  ವಿಡಿಯೋದಲ್ಲಿ ಕಿಚ್ಚ ಹೇಳಿದ್ದೇನು? ಇಲ್ಲಿದೆ ಒಂದು ರೋಚಕ ಟ್ವಿಸ್ಟ್​]]></title>
            <link>https://kannada.asianetnews.com/gallery/tv-talk/bigg-boss-13-ai-video-gone-viral-where-kichcha-sudeep-talks-suc-exfcbq5</link>
            <guid isPermaLink="true">https://kannada.asianetnews.com/gallery/tv-talk/bigg-boss-13-ai-video-gone-viral-where-kichcha-sudeep-talks-suc-exfcbq5</guid>
            <pubDate>Fri, 08 May 2026 17:48:26 +0530</pubDate>
            <description><![CDATA[ಬಿಗ್​ಬಾಸ್​ 13ನೇ ಸೀಸನ್​ಗಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದು, ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುವುದು ಖಚಿತವಾಗಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸೀಸನ್ 13ರ ದಿನಾಂಕ ಘೋಷಿಸುವ ವಿಡಿಯೋ ವೈರಲ್ ಆಗಿದ್ದು, ಅದು ವೀಕ್ಷಣೆಗಾಗಿ ಎಐ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋ ಎಂಬುದು ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3r53d5s368y30np0b4hpcf,imgname-bbk-13-05-1778242456997.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​ 13ನೇ ಸೀಸನ್​ಗಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದು, ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುವುದು ಖಚಿತವಾಗಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸೀಸನ್ 13ರ ದಿನಾಂಕ ಘೋಷಿಸುವ ವಿಡಿಯೋ ವೈರಲ್ ಆಗಿದ್ದು, ಅದು ವೀಕ್ಷಣೆಗಾಗಿ ಎಐ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋ ಎಂಬುದು ಬಯಲಾಗಿದೆ.&lt;img&gt;&lt;p&gt;ಬಿಗ್​ಬಾಸ್​ ಎಂದರೆ ಬಾಯ್ಬಿಟ್ಟು ನೋಡುವ ಲಕ್ಷಾಂತರ ವೀಕ್ಷಕರಿದ್ದಾರೆ. ಇಲ್ಲಿ ನಡೆಯುವ ಜಗಳ, ಕಾಂಟ್ರವರ್ಸಿ, ಲವ್​ಸ್ಟೋರಿ... ಹೀಗೆ ಎಲ್ಲವನ್ನೂ ನೋಡಲು ತುದಿಗಾಲಿನಲ್ಲಿ ನಿಲ್ಲುವ ವೀಕ್ಷಕರು ಹಲವರು. ಇದಾಗಲೇ 12 ಸೀಸನ್​ಗಳನ್ನು ಮುಗಿಸಿರುವ ಬಿಗ್​ಬಾಸ್​ನಲ್ಲಿ 13ನೇ ಸೀಸನ್​ ಯಾವಾಗ ಶುರುವಾಗುತ್ತದೆ ಎಂದು ಹಲವರು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;img&gt;&lt;p&gt;11ನೇ ಸೀಸನ್​ ಬಳಿಕ ಮುಂದಿನ ಸೀಸನ್​ನಿಂದ ತಾವು ಕಾಣಿಸಿಕೊಳ್ಳುವುದಿಲ್ಲ ಎಂದು ಶಾಕ್​ ಕೊಟ್ಟ ಕಿಚ್ಚ ಸುದೀಪ್​, ಕೊನೆಗೆ ಒಂದಲ್ಲ, ನಾಲ್ಕು ಸೀಸನ್​ಗಳನ್ನು ಒಪ್ಪಿಕೊಂಡಿದ್ದಾರೆ. ತಾವು ಮುಂದೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದಕ್ಕೂ ತಮ್ಮದೇ ಆದ ಕಾರಣ ಕೊಟ್ಟು, ಕೊನೆಗೆ ತಾವು ಯಾಕೆ ಕಾಣಿಸಿಕೊಳ್ಳುತ್ತಿದ್ದೇವೆ ಎನ್ನುವುದಕ್ಕೂ ಕಾರಣ ಕೊಟ್ಟಿದ್ದಾರೆ. ಇದರಿಂದಾಗಿ ಕಿಚ್ಚ ಸುದೀಪ್​ (Kichcha Sudeep) 13ನೇ ಸೀಸನ್​ ಅನ್ನು ನಡೆಸಿಕೊಡುವುದು ಕನ್​ಫರ್ಮ್​ ಆಗಿದೆ.&lt;/p&gt;&lt;img&gt;&lt;p&gt;ಇದೀಗ ಸೋಷಿಯಲ್​ ಮೀಡಿಯಾದಲ್ಲಿ 13ನೇ ಸೀಸನ್​ ಎನ್ನುವ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ 143 ದಿನ ಕಾದರೆ ಬಿಗ್​ಬಾಸ್​ 13 ನೇ ಸೀಸನ್​ ಶುರುವಾಗುತ್ತದೆ ಎಂದು ಇದೆ. bbkseason 13 ಎನ್ನುವ ಇನ್ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.&lt;/p&gt;&lt;img&gt;&lt;p&gt;ಈ ವಿಡಿಯೋದಲ್ಲಿ ಕಿಚ್ಚ ಸುದೀಪ್​ ಅವರು ಬಂದು ಹೊಸ ಕಂಟೆಸ್ಟೆಂಟ್​, ಹೊಸ ಆಟಗಳು ಎಂದಿದ್ದಾರೆ. ಈ ಮನೆಯಲ್ಲಿಯೂ ಕಿಚ್ಚು ಇರುತ್ತದೆ, ಹುಚ್ಚು ಇರುತ್ತದೆ. ಮನಸ್ಸಿನಲ್ಲಿಯೇ ಮಡಗಿರುವ ರೊಚ್ಚು ಇರುತ್ತದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಸಲಿಗೆ ಇದು ಅಸಲಿ ವಿಡಿಯೋ ಕಂಡ ಹಾಗೆಯೇ ಕಾಣಿಸುತ್ತದೆ. ಅಷ್ಟಕ್ಕೂ ಇದು ಎಐ ಯುಗ. ಎಐನಲ್ಲಿ ಇದನ್ನು ಕ್ರಿಯೇಟ್​ ಮಾಡಲಾಗಿದೆ. ಸೀಸನ್​ 13 ಅನ್ನು ಜನರು ಕಾತರದಿಂದ ಕಾಯುತ್ತಿದ್ದಾರೆ ಎನ್ನುವ ಕಾರಣಕ್ಕೆ ಅದನ್ನೇ ಬಂಡವಾಳ ಮಾಡಿಕೊಂಡು ಹೆಚ್ಚು ಹೆಚ್ಚು ವ್ಯೂವ್ಸ್​ ತರುವುದಕ್ಕಾಗಿ ಹೊಸ ಪ್ರೊಫೈಲ್​ ಕ್ರಿಯೇಟ್​ ಮಾಡಲಾಗಿದೆ. ಚಾನೆಲ್​ ಹೆಸರನ್ನು ಕಲರ್ಸ್​ ಸೂಪರ್​ ಎಂದು ಮಾಡಲಾಗಿದೆ!&lt;/p&gt;&lt;img&gt;&lt;p&gt;ಇದೇ ಕಾರಣಕ್ಕೆ ಜನರು ಬೈಯುತ್ತಾರೆಂದು ಕಮೆಂಟ್​ ಸೆಕ್ಷನ್​ ಕೂಡ ಆಫ್​ ಮಾಡಲಾಗಿದೆ. ಒಟ್ಟಿನಲ್ಲಿ ಬಿಗ್​ಬಾಸ್​ ಎನ್ನುವ ಹುಚ್ಚು, ಜನರನ್ನು ಎಷ್ಟು ಮರಳು ಮಾಡುತ್ತಿದೆಯೋ, ಈ ವಿಡಿಯೋ ಅನ್ನು ಕೂಡ ನಿಜ ಎಂದು ನಂಬಿ ಮರುಳು ಆಗುತ್ತಿದ್ದಾರೆ ಹಲವರು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-13-ai-video-gone-viral-where-kichcha-sudeep-talks-suc-exfcbq5"/>
        </item>
        <item>
            <title><![CDATA[ನಾನಿನ್ನು ಜೀವಂತವಾಗಿದ್ದೇನೆ… ಸಾವಿನ ಸುಳ್ಳು ವದಂತಿ ಹರಡುತ್ತಿದ್ದಂತೆ ಸಿಟ್ಟಿಗೆದ್ದ ನಟ ಶಕ್ತಿ ಕಪೂರ್]]></title>
            <link>https://kannada.asianetnews.com/gallery/tv-talk/shakti-kapoor-death-rumors-actor-made-a-video-to-clarify-the-fake-news-aaes4yf</link>
            <guid isPermaLink="true">https://kannada.asianetnews.com/gallery/tv-talk/shakti-kapoor-death-rumors-actor-made-a-video-to-clarify-the-fake-news-aaes4yf</guid>
            <pubDate>Fri, 08 May 2026 17:37:20 +0530</pubDate>
            <description><![CDATA[&lt;p&gt;Shakti Kapoor death rumors: ನಟ ಶಕ್ತಿ ಕಪೂರ್ ಸಾವಿನ ಸುಳ್ಳು ಸುದ್ದಿ ವೈರಲ್ ಆಗುತ್ತಿದ್ದಂತೆ, ನಟ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, &quot;ನಾನು ಇನ್ನೂ ಜೀವಂತವಾಗಿದ್ದೇನೆ. ನಕಲಿ ಸುದ್ದಿ ಹರಡುವವರ ವಿರುದ್ಧ ಪೊಲೀಸ್ ದೂರು ದಾಖಲಿಸುತ್ತೇನೆ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3qkt3z4t87yft133acx18r,imgname-shakti-kapoor-2-1778241890431.jpg" type="image/jpeg" height="390" width="690"/>
            <content:encoded><![CDATA[&lt;p&gt;Shakti Kapoor death rumors: ನಟ ಶಕ್ತಿ ಕಪೂರ್ ಸಾವಿನ ಸುಳ್ಳು ಸುದ್ದಿ ವೈರಲ್ ಆಗುತ್ತಿದ್ದಂತೆ, ನಟ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, &quot;ನಾನು ಇನ್ನೂ ಜೀವಂತವಾಗಿದ್ದೇನೆ. ನಕಲಿ ಸುದ್ದಿ ಹರಡುವವರ ವಿರುದ್ಧ ಪೊಲೀಸ್ ದೂರು ದಾಖಲಿಸುತ್ತೇನೆ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬಾಲಿವುಡ್&zwnj;ನಲ್ಲಿ ತಮ್ಮ ಅಸಾಧಾರಣ ಖಳನಾಯಕ ಪಾತ್ರಗಳು ಮತ್ತು ಕಾಮಿಡಿ ಟೈಮಿಂಗ್ ಮೂಲಕ ಜನಪ್ರಿಯತೆ ಪಡೆದ ಹಿರಿಯ ನಟ ಶಕ್ತಿ ಕಪೂರ್ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳಿಗೆ ಬಲಿಯಾಗಿದ್ದಾರೆ. ಶಕ್ತಿ ಕಪೂರ್ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.&lt;/p&gt;&lt;img&gt;&lt;p&gt;ಶಕ್ತಿ ಕಪೂರ್ ಸಾವಿನ ಸುದ್ದಿ ವೈರಲ್ ಆಗುತ್ತಿದ್ದಂತೆ, ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ಪ್ರಾರಂಭಿಸಿದರು. ಆದರೆ, ಕೆಲವೇ ಗಂಟೆಗಳ ನಂತರ, ಶಕ್ತಿ ಕಪೂರ್ ಸ್ವತಃ ಮುಂದೆ ಬಂದು, ಇನ್&rsquo;ಸ್ಟಾಗ್ರಾಂ ಪೋಸ್ಟ್ ಮಾಡಿ, ವರದಿಗಳು ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದ್ದು,. ಹಾಗೂ ವದಂತಿಗಳನ್ನು ಹರಡುವವರ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಶಕ್ತಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಬಿಡುಗಡೆ ಮಾಡಿ, ತಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಈಗ ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಕೋಪವು ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.&lt;/p&gt;&lt;img&gt;&lt;p&gt;ವಿಡಿಯೋದಲ್ಲಿ ಶಕ್ತಿ ಕಪೂರ್ &quot;ನಮಸ್ಕಾರ ಸ್ನೇಹಿತರೇ, ನನ್ನ ಸಾವಿನ ಎಲ್ಲಾ ವರದಿಗಳು ಸುಳ್ಳು. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಸಂತೋಷವಾಗಿದ್ದೇನೆ. ದಯವಿಟ್ಟು ಸುಳ್ಳು ಸುದ್ದಿಗಳನ್ ನು ನಿರ್ಲಕ್ಷಿಸಿ. ಈ ರೀತಿ ಸುದ್ದಿ ಹರಡುವುದು ಸರಿಯಲ್ಲ. ಯಾವುದೇ ಸುದ್ದಿಯನ್ನು ಪರಿಶೀಲಿಸದೆ ನಂಬಬೇಡಿ ಅಥವಾ ಹಂಚಿಕೊಳ್ಳಬೇಡಿ&quot; ಎಂದು ಹೇಳಿದ್ದಾರೆ. ವಿಡಿಯೋಗಾಗಿ &lt;strong&gt;ಇಲ್ಲಿ ಕ್ಲಿಕ್ ಮಾಡಿ.&lt;/strong&gt;&lt;/p&gt;&lt;img&gt;&lt;p&gt;ಅಭಿಮಾನಿಗಳು ಶಕ್ತಿ ಕಪೂರ್ ವೀಡಿಯೊ ಪೋಸ್ಟ್ ಮಾಡಿದ ಬಳಿಕ, ಕಾಮೆಂಟ್ ಮಾಡಿ &quot;ನೀವು ಯಾವಾಗಲೂ ಆರೋಗ್ಯವಾಗಿರಲಿ, ಇದು ದೇವರಿಗೆ ನನ್ನ ಪ್ರಾರ್ಥನೆ&quot; , &quot;ಟೈಗರ್ ಈಸ್ ಅಲೈವ್, ದೀರ್ಘಕಾಲ ಬದುಕಬೇಕು&quot; ಎಂದು ಬರೆದಿದ್ದಾರೆ. ಆ ಮೂಲಕ ಅಭಿಮಾನಿಗಳು ಶಕ್ತಿ ಕಪೂರ್ ಆರೋಗ್ಯದಿಂದ ಇರಲಿ ಎಂದು ಹಾರೈಸಿದ್ದಾರೆ.&lt;/p&gt;&lt;img&gt;&lt;p&gt;ಈ ರೀತಿ ಸುದ್ದಿಗಳು ಬರೋದು ಇದೇ ಮೊದಲಲ್ಲ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇಂತಹ ಸಾವಿನ ಸುಳ್ಳು ಸುದ್ದಿಗೆ ಬಲಿಯಾಗುತ್ತಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಇಂತಹ ಸುದ್ದಿಗಳು ನಿಮಿಷಗಳಲ್ಲಿ ಸಾವಿರಾರು ಜನರನ್ನು ತಲುಪುತ್ತವೆ, ಗೊಂದಲ ಮತ್ತು ಭೀತಿಯನ್ನು ಉಂಟುಮಾಡುತ್ತವೆ. ಹಾಗಾಗಿ ಸುದ್ದಿಯನ್ನು ಪರಿಶೀಲಿಸಿ, ಬಳಿಕವೇ ಅದನ್ನು ಹಂಚಿಕೊಳ್ಳಬೇಕು.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/shakti-kapoor-death-rumors-actor-made-a-video-to-clarify-the-fake-news-aaes4yf"/>
        </item>
        <item>
            <title><![CDATA[ಭಾರೀ ಮೊತ್ತಕ್ಕೆ 'ಅಯೋಗ್ಯ 2' ಆಡಿಯೋ ಹಕ್ಕು ಖರೀದಿಸಿದ ಆನಂದ್ ಆಡಿಯೋ: ವಿಡಿಯೋ ವೈರಲ್!]]></title>
            <link>https://kannada.asianetnews.com/sandalwood/sathish-ninasams-ayogya-2-audio-rights-bagged-by-anand-audio-for-2-crores-gv/articleshow-tnu5hkr</link>
            <guid isPermaLink="true">https://kannada.asianetnews.com/sandalwood/sathish-ninasams-ayogya-2-audio-rights-bagged-by-anand-audio-for-2-crores-gv/articleshow-tnu5hkr</guid>
            <pubDate>Fri, 08 May 2026 17:26:43 +0530</pubDate>
            <description><![CDATA[&lt;p&gt;ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ &lsquo;ಅಯೋಗ್ಯ 2&rsquo; ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಲೇ ಬಂದಿದೆ. ಈಗಾಗಲೇ &lsquo;ಅಯೋಗ್ಯ&rsquo;..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jewdjgsp1x2ermz4thsdex1s,imgname-bfb.png" type="image/jpeg" height="390" width="690"/>
            <content:encoded><![CDATA[&lt;p&gt;ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ &lsquo;ಅಯೋಗ್ಯ 2&rsquo; ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಲೇ ಬಂದಿದೆ. ಈಗಾಗಲೇ &lsquo;ಅಯೋಗ್ಯ&rsquo; ಪಾರ್ಟ್&zwnj; 1 ಯಶಸ್ಸು ದಾಖಲಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಟೀಂ &lsquo;ಅಯೋಗ್ಯ&rsquo; ಹೊಸದೊಂದು ವಿಚಾರವನ್ನು ಹಂಚಿಕೊಂಡಿದೆ.&lt;/p&gt;&lt;p&gt;ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ &lsquo;ಅಯೋಗ್ಯ 2&rsquo; ಚಿತ್ರದ ಆಡಿಯೋ ಹಕ್ಕನ್ನು ರೂ.2 ಕೋಟಿ ಕೊಟ್ಟು ಆನಂದ್&zwnj; ಆಡಿಯೋ ಖರೀದಿಸಿದೆ. ಈ ಸುದ್ದಿಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಆಡಿಯೋ ಮಾರಾಟವಾಗಿದ್ದ ಸುದ್ದಿ ಹಂಚಿಕೊಳ್ಳಲು ವಿಶೇಷ ವೀಡಿಯೋ ಬಿಡುಗಡೆ ಮಾಡಿದೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Sathish Ninasam (@sathish_ninasam_official)&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಆಡಿಯೋ ಹಕ್ಕಿಗೆ ಭರ್ಜರಿ ಬೆಲೆ&lt;/strong&gt;&lt;/h2&gt;&lt;p&gt;ಮೊದಲ ಭಾಗ &lsquo;ಅಯೋಗ್ಯ&rsquo; ಚಿತ್ರದ ಆಡಿಯೋ ಹಕ್ಕು ರೂ.9 ಲಕ್ಷಕ್ಕೆ ಮಾರಾಟವಾಗಿತ್ತು ಎಂದು ಮಹೇಶ್ ತಿಳಿಸಿದ್ದು, ಎರಡನೇ ಭಾಗದ ಆಡಿಯೋ ಹಕ್ಕಿಗೆ ಭರ್ಜರಿ ಬೆಲೆ ದೊರಕಿದೆ. ಅಯೋಗ್ಯ ಮೊದಲ ಭಾಗ ಎಲ್ಲಿಗೆ ಮುಗಿದಿತ್ತೋ, ಅದರ ಮರುದಿನದಿಂದ ಚಿತ್ರ ಶುರುವಾಗುತ್ತದೆ. ಎರಡ್ಮೂರು ಹೊಸ ಪಾತ್ರಗಳು ಬರುತ್ತವೆ ಎನ್ನುವುದು ಬಿಟ್ಟರೆ, ಮಿಕ್ಕಂತೆ ಎಲ್ಲಾ ಪಾತ್ರಗಳು ಮುಂದುವರಿಯುತ್ತವೆ.&lt;/p&gt;&lt;p&gt;&lsquo;ಅಯೋಗ್ಯ&rsquo; ಕೊನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನಾಗುವ ಸಿದ್ಧೇಗೌಡ ಮುಂದೆ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾನೆ ಎನ್ನುವುದು ಚಿತ್ರದ ಕಥೆ&quot; ಎಂದು ಕಥೆಯ ಗುಟ್ಟನ್ನು ಬಿಡುಕೊಡುತ್ತಾರೆ ನಿರ್ದೇಶಕ ಮಹೇಶ್ ಕುಮಾರ್. ಇನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರವನ್ನು ಎಂ.ಮುನೇಗೌಡ ನಿರ್ಮಿಸಿದ್ದಾರೆ. ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ತಾರಾಗಣದಲ್ಲಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/sathish-ninasams-ayogya-2-audio-rights-bagged-by-anand-audio-for-2-crores-gv/articleshow-tnu5hkr"/>
        </item>
        <item>
            <title><![CDATA[ಪ್ರತಿ ಹೆಣ್ಣಿಗೂ ಮಾದಪ್ಪನಂತಹ ಮಾವ ಸಿಗಲಿ- ವೀಕ್ಷಕರ ಹಾರೈಕೆ… ಜೇಡಿಯಂತೆ ಸೀನ ಕೈಗೂ ಸಿಗಲಿದೆ ಚೆಂಬು!]]></title>
            <link>https://kannada.asianetnews.com/tv-talk/annayya-serial-update-viewers-wishes-madappa-like-father-in-law/articleshow-xrcau39</link>
            <guid isPermaLink="true">https://kannada.asianetnews.com/tv-talk/annayya-serial-update-viewers-wishes-madappa-like-father-in-law/articleshow-xrcau39</guid>
            <pubDate>Fri, 08 May 2026 17:10:29 +0530</pubDate>
            <description><![CDATA[&lt;p&gt;Annayya Serial: &lsquo;ಅಣ್ಣಯ್ಯ&rsquo; ಧಾರಾವಾಹಿಯಲ್ಲಿ ಸೀನನ ಬುದ್ದಿ ಗೊತ್ತಾದ ಬಳಿಕ ರಶ್ಮಿಯನ್ನು ಶಿವು ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಮಾದಪ್ಪ ಮಾತ್ರ ನನ್ನ ಸೊಸೆಯನ್ನು ಮನೆಗೆ ಕರೆದುಕೊಂಡು ಬರಲು ಧರಣಿ ಕೂತಿದ್ದಾನೆ. ಮಾದಪ್ಪನಂತಹ ಮಾವ ಎಲ್ಲರಿಗೂ ಸಿಗಲಿ ಎಂದು ಜನ ಹಾರೈಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3p6e8z1k5g83a8694qmmjc,imgname-annayya-serial-1778240403743.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಅಣ್ಣಯ್ಯ ಸೀರಿಯಲ್ ಮಾದಪ್ಪ&lt;/strong&gt;&lt;/h2&gt;&lt;p&gt;&lsquo;ಅಣ್ಣಯ್ಯ&rsquo; ಧಾರಾವಾಹಿಯಲ್ಲಿ ಸದ್ಯ ಇಮೋಶನಲ್ ಎಪಿಸೋಡ್ ಪ್ರಸಾರವಾಗುತ್ತಿದೆ. ಒಂದು ಕಡೆ ಶಿವಣ್ಣನ ಮುಂದೆ ಸೀನನ ನಿಜ ಮುಖದ ಅನಾವರಣ ಆಗಿದೆ. ದೇವಸ್ಥಾನದಲ್ಲಿ ಸೀನಾ, ಪಿಂಕಿ ಕುತ್ತಿಗೆಗೆ ತಾಳಿ ಕಟ್ಟುವುದನ್ನು ನೋಡಿ ಸಿಟ್ಟಾದ ಶಿವಣ್ಣ, ಸೀನಾಗೆ ಬಿಗಿದು, ಕೊನೆಗೆ ತನ್ನ ತಂಗಿಯ ಜೀವನ ಹಾಳಾಗಿದೆ ಎಂದು ತಿಳಿದು, ಸೀನಾ ಮನೆಯಿಂದ ರಶ್ಮಿಯನ್ನು ವಾಪಾಸ್ ಕರೆದುಕೊಂಡು ಮನೆಗೆ ಬಂದಿದ್ದಾನೆ. ಸೊಸೆಯನ್ನು ಕರೆದುಕೊಂಡು ಹೋದ ಶಿವುನ ಮನ ಒಲಿಸಿ. ಮತ್ತೆ ತನ್ನ ಮುದ್ದಿನ ಸೊಸೆಯನ್ನು ಮನೆಗೆ ಕರೆದುಕೊಂಡು ಹೋಗಿ ದೀಪ ಹಚ್ಚಲು, ಶಿವು ಮನೆ ಮುಂದೆ ಧರಣಿ ಕುತ್ತಿದ್ದಾನೆ ಮಾದಪ್ಪ.&lt;/p&gt;&lt;h3&gt;&lt;strong&gt;ಮಾದಪ್ಪನಂತಹ ಮಾವ ಸಿಗಲು ಪುಣ್ಯ ಮಾಡಿದ್ಲು ರಶ್ಮಿ&lt;/strong&gt;&lt;/h3&gt;&lt;p&gt;ಸೊಸೆಗಾಗಿ ಮಗನನ್ನೇ ದುರು ಹಾಕಿ, ರಶ್ಮಿಯನ್ನು ಮಗಳಂತೆ ಕಾಣುತ್ತಿರುವ ಹಾಗೂ ಸೊಸೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬರಲು ತಯಾರಿ ನಡೆಸಿರುವ ಮಾದಪ್ಪನನ್ನು ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಇಂತಹ ಮಾವ ಎಲ್ಲರಿಗೂ ಸಿಗಲಪ್ಪಾ ಎಂದು ಹಾರೈಸಿದ್ದಾರೆ. ಮಾವ ಎಂದರೆ ಸೊಸೆಯರ ಮುಂದೆ ಅಧಿಕಾರ ಚಲಾಯಿಸುವವರ ಮಧ್ಯೆ, ಮಾದಪ್ಪನಂತಹ ಸೊಸೆಗೆ ಸದಾ ಬೆಂಗಾವಲಾಗಿರುವ ಮಾವನನ್ನು ನೋಡಿ ವೀಕ್ಷಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಆಸ್ತಿಗೋಸ್ಕರ ಸೀನಾ ಮದುವೆಯಾಗ್ತಿದ್ದಾರೆ ಪಿಂಕಿ&lt;/strong&gt;&lt;/h3&gt;&lt;p&gt;ಅಂದ ಹಾಗೆ ಪಿಂಕಿ ಸೀನಾನನ್ನು ಲವ್ ಮಾಡಿದ್ದು ಮತ್ತು ಮದುವೆಯಾಗಲು ತುದಿಕಾಲಲ್ಲಿ ನಿಂತಿರುವುದು ಎಲ್ಲವೂ ಆಸ್ತೊಗೋಸ್ಕರ. ಆದರೆ ಸೀನಾಗೆ ಆಸ್ತಿಯೇ ಇಲ್ಲ ಅಂದರೆ, ನಿಜವಾಗಿಯೂ ಪಿಂಕಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾಳೆಯೇ ಖಂಡಿತಾ ಇಲ್ಲ. ಈಗ ಮಾದಪ್ಪನ ಮುಂದೆ ಪಿಂಕಿಯ ಅಸಲಿ ಮುಖ ಬಯಲಾಗಿದೆ. ಮಾದಪ್ಪ ಮತ್ತು ಪಾರು ಇಬ್ಬರೂ ಜೊತೆ ಸೇರಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಾರೆಯೇ ನೋಡಬೇಕು.&lt;/p&gt;&lt;h3&gt;&lt;strong&gt;ವೀಕ್ಷಕರು ಮಾದಪ್ಪನ ಬಗ್ಗೆ ಹೇಳುತ್ತಿರೋದು ಏನು?&lt;/strong&gt;&lt;/h3&gt;&lt;ul&gt; &lt;li&gt;ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಈ ಥರ ಮಾವ ಇರಬೇಕು. ಹೆಣ್ಣು ಹೆತ್ತವರು ಮಾದಪ್ಪಣ್ಣನಂತ ಮಾವ ಸಿಗಲಿ ಅಂತ ಇಚ್ಚಿಸುವವರೇ ಹೆಚ್ಚು. ಇಂತ ಮಾವಾ ಲಕ್ಷಕ್ಕೆ ಒಬ್ಬರು ಎಂದಿದ್ದಾರೆ.&lt;/li&gt; &lt;li&gt;ಮಾದಪ್ಪನಂಥ ಮಾವ, ಶಿವಣ್ಣ ಅಂಥ ಮಾವ, ಗೌತಮ್ ಅಂಥ ಗಂಡ ಎಲ್ಲ ಹೆಣ್ಣುಮಕ್ಕಳಿಗೂ ಸಿಗಬೇಕು, ಎಲ್ಲದಕ್ಕೂ ಪುಣ್ಯ ಮಾಡಿರಬೇಕು&lt;/li&gt; &lt;li&gt;ಇಂಥ ಮಾವ ಸಿಕ್ರೆ ಯಾವ ಹೆಣ್ಣು ತವರು ಮನೆಗೆ ಹೋಗಲ್ಲ ಗಂಡ ಇಲ್ಲ ಅಂದ್ರೆ ಧೈರ್ಯದಿಂದ ದುಡುಕೊಂಡ್ ತಿಂತಾಳೆ&lt;/li&gt; &lt;li&gt;ಮಾದಪ್ಪಣ್ಣ ಮತತ್ತು ಪಾರು ಒಂದು ಪ್ಲಾನ್ ಮಾಡಿ ಪಿಂಕಿ ಮನೆ ತುಂಬಿಸ್ಕೊಂಡು ಸೀನ ನ ಮುಂದೆ ನಿಂಗೆ ಆಸ್ತಿ ಬೇಕ ಅಥವಾ ಸೀನ ಬೇಕಾ ಅಂತ ಅಂದಾಗ ಆಲ್ಮೋಸ್ಟ್ ಸೀನಾ ಅಂತಾಳೆ. ಆಗ ಸರಿಯಾಗಿದ್ರೆ ನನ್ ಸೊಸೆಗೆ ನಾನ್ ಆಸ್ತಿಯೆಲ್ಲ ಬರ್ಕೊಡ್ತೀನಿ, ನೀನು ಸೀನಾ ಮದುವೆಯಾಗು ಅಂದರೆ ಮುಗೀತು ಅವಾಗ ಅವ್ಳು ಅಸ್ಲಿ ಮುಖ ಹೊರಗೆ ಬರುತ್ತೆ ಎಂದು ಸಲಹೆ ಕೂಡ ಕೊಟ್ಟಿದ್ದಾರೆ.&lt;/li&gt;&lt;/ul&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/tv-talk/annayya-serial-update-viewers-wishes-madappa-like-father-in-law/articleshow-xrcau39"/>
        </item>
        <item>
            <title><![CDATA[ಆ ಮಹಿಳೆಯ 19 ನಿಮಿಷ 34 ಸೆಕೆಂಡ್ ವಿಡಿಯೋ ಸರ್ಚ್‌ ಮಾಡಿದ್ರೆ ನಿಮ್ಮ ಕಥೆ ಮುಗೀತು!]]></title>
            <link>https://kannada.asianetnews.com/gallery/tv-talk/sofik-sonali-viral-video-scam-beware-of-fake-links-and-malware-traps-details-5vylrho</link>
            <guid isPermaLink="true">https://kannada.asianetnews.com/gallery/tv-talk/sofik-sonali-viral-video-scam-beware-of-fake-links-and-malware-traps-details-5vylrho</guid>
            <pubDate>Fri, 08 May 2026 17:05:16 +0530</pubDate>
            <description><![CDATA[&lt;p&gt;ಸೋಫಿಕ್, ಸೊನಾಲಿ ಅವರದ್ದು ಎನ್ನಲಾದ ವೈರಲ್ ವಿಡಿಯೋ ಹೆಸರಲ್ಲಿ ಸೈಬರ್ ಕಳ್ಳರು ಜನರಿಗೆ ನಕಲಿ ಲಿಂಕ್&zwnj;ಗಳನ್ನು ಕಳಿಸುತ್ತಿದ್ದಾರೆ. &lsquo;Season 2&rsquo;, 'Leaked Video' ಅಂತ ಹೇಳಿ ಮಾಲ್&zwnj;ವೇರ್ ಹರಡುತ್ತಿದ್ದಾರೆ. ಈ ವಿಡಿಯೋ AI ಡೀಪ್&zwnj;ಫೇಕ್ ಇರಬಹುದು, ಹಾಗಾಗಿ ಎಚ್ಚರವಾಗಿರಿ ಅಂತ ತಜ್ಞರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3nxmwpjjymw9j83wp46w08,imgname-new-project---2026-05-08t170449.831-1778240115606.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೋಫಿಕ್, ಸೊನಾಲಿ ಅವರದ್ದು ಎನ್ನಲಾದ ವೈರಲ್ ವಿಡಿಯೋ ಹೆಸರಲ್ಲಿ ಸೈಬರ್ ಕಳ್ಳರು ಜನರಿಗೆ ನಕಲಿ ಲಿಂಕ್&zwnj;ಗಳನ್ನು ಕಳಿಸುತ್ತಿದ್ದಾರೆ. &lsquo;Season 2&rsquo;, 'Leaked Video' ಅಂತ ಹೇಳಿ ಮಾಲ್&zwnj;ವೇರ್ ಹರಡುತ್ತಿದ್ದಾರೆ. ಈ ವಿಡಿಯೋ AI ಡೀಪ್&zwnj;ಫೇಕ್ ಇರಬಹುದು, ಹಾಗಾಗಿ ಎಚ್ಚರವಾಗಿರಿ ಅಂತ ತಜ್ಞರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸೋಫಿಕ್ ಮತ್ತು ಸೊನಾಲಿ ವಿಡಿಯೋ ವೈರಲ್ ಆಗಿ ತಿಂಗಳುಗಳೇ ಕಳೆದರೂ, ಜನ ಇನ್ನೂ ಅದರ ಬಗ್ಗೆ ಹುಡುಕುತ್ತಲೇ ಇದ್ದಾರೆ. ಇದನ್ನೇ ಹ್ಯಾಕರ್&zwnj;ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಫೇಸ್&zwnj;ಬುಕ್, ಇನ್&zwnj;ಸ್ಟಾಗ್ರಾಂ ಮತ್ತು ಇತರ ಸೋಶಿಯಲ್ ಮೀಡಿಯಾಗಳಲ್ಲಿ 'ಪೂರ್ತಿ ವಿಡಿಯೋ ಇಲ್ಲಿ ನೋಡಿ' ಅಥವಾ 'Season 2 ಡೌನ್&zwnj;ಲೋಡ್ ಮಾಡಿ' ಎಂಬಂತಹ ನಕಲಿ ಲಿಂಕ್&zwnj;ಗಳನ್ನು ಹಂಚಿಕೊಳ್ಳುತ್ತಿದ್ದಾರೆ.&amp;nbsp;&lt;/p&gt;&lt;p&gt;ಬಳಕೆದಾರರು ಈ ಲಿಂಕ್&zwnj;ಗಳನ್ನು ಕ್ಲಿಕ್ ಮಾಡಿದ ತಕ್ಷಣ, ಅವರ ಡಿವೈಸ್&zwnj;ನಲ್ಲಿ ಮಾಲ್&zwnj;ವೇರ್ ಅಥವಾ ವೈರಸ್ ಡೌನ್&zwnj;ಲೋಡ್ ಆಗಬಹುದು. ಇದರ ನಂತರ ಹ್ಯಾಕರ್&zwnj;ಗಳು ಬಳಕೆದಾರರ ಖಾಸಗಿ ಫೋಟೋ, ಪಾಸ್&zwnj;ವರ್ಡ್, ಸೋಶಿಯಲ್ ಮೀಡಿಯಾ ಅಕೌಂಟ್ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಕದಿಯಬಹುದು. ಹಲವು ಪ್ರಕರಣಗಳಲ್ಲಿ ಫೋನ್ ಅಥವಾ ಲ್ಯಾಪ್&zwnj;ಟಾಪ್ ಸಂಪೂರ್ಣವಾಗಿ ಹ್ಯಾಕ್ ಆಗುವ ಅಪಾಯವೂ ಇದೆ.&lt;/p&gt;&lt;img&gt;&lt;p&gt;ವಿಡಿಯೋ ವಿವಾದದ ನಂತರ, ಸೊನಾಲಿ ಮಾನಹಾನಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಸುಳ್ಳು ಸುದ್ದಿಯನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸಲಾಗಿತ್ತು. ಆದರೆ, ತನಿಖೆಯಲ್ಲಿ ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ತಿಳಿದುಬಂದಿದೆ. ಇಂತಹ ಸುಳ್ಳು ಸುದ್ದಿಗಳನ್ನು ಕೇವಲ ಜನರಲ್ಲಿ ಭಯ ಮತ್ತು ಭಾವನಾತ್ಮಕ ಒತ್ತಡ ಸೃಷ್ಟಿಸಲು ಹರಡಲಾಗುತ್ತದೆ. ಸದ್ಯಕ್ಕೆ ಇಬ್ಬರೂ ಇನ್&zwnj;ಫ್ಲುಯೆನ್ಸರ್&zwnj;ಗಳು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ, ಆದರೆ ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಡಿಜಿಟಲ್ ಫೋರೆನ್ಸಿಕ್ ತಜ್ಞರ ಪ್ರಕಾರ, ವೈರಲ್ ಆಗುತ್ತಿರುವ 19 ನಿಮಿಷದ ಈ ವಿಡಿಯೋ ನಿಜವಾಗಿರಲೇಬೇಕು ಅಂತೇನಿಲ್ಲ. ಇದು AI ಡೀಪ್&zwnj;ಫೇಕ್ ತಂತ್ರಜ್ಞಾನದಿಂದ ಸೃಷ್ಟಿಸಿದ ವಿಡಿಯೋ ಆಗಿರಬಹುದು. ಇಂದಿನ ಆಧುನಿಕ AI ತಂತ್ರಜ್ಞಾನ ಬಳಸಿ, ಯಾವುದೇ ವ್ಯಕ್ತಿಯ ಮುಖವನ್ನು ಬೇರೆ ವಿಡಿಯೋಗೆ ಸುಲಭವಾಗಿ ಜೋಡಿಸಬಹುದು. ಇದೇ ಕಾರಣಕ್ಕೆ, ಇಂಟರ್ನೆಟ್&zwnj;ನಲ್ಲಿ ವೈರಲ್ ಆಗುವ ಯಾವುದೇ ವಿಡಿಯೋವನ್ನು ಪರಿಶೀಲಿಸದೆ ನಂಬುವುದು ಅಪಾಯಕಾರಿ.&lt;/p&gt;&lt;p&gt;&lt;strong&gt;&lsquo;ಸೀಸನ್ 2&rsquo; ಮತ್ತು &lsquo;ಸೀಸನ್ 3&rsquo; ಬರೀ ಕ್ಲಿಕ್&zwnj;ಬೈಟ್?&lt;/strong&gt;&lt;/p&gt;&lt;p&gt;ಈ ವೈರಲ್ ವಿಡಿಯೋದ 'Season 2' ಮತ್ತು 'Season 3' ಕೂಡ ಬರಲಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಲಾಗುತ್ತಿದೆ. ಆದರೆ, ಸೈಬರ್ ತಜ್ಞರು ಹೇಳುವ ಪ್ರಕಾರ, ಅಂತಹ ಯಾವುದೇ ವಿಡಿಯೋ ಅಸ್ತಿತ್ವದಲ್ಲಿಲ್ಲ. ಇದು ಕೇವಲ ಒಂದು ಕ್ಲಿಕ್&zwnj;ಬೇಟ್ ತಂತ್ರವಾಗಿದ್ದು, ಬಳಕೆದಾರರನ್ನು ನಕಲಿ ವೆಬ್&zwnj;ಸೈಟ್&zwnj;ಗಳು ಮತ್ತು ಡೌನ್&zwnj;ಲೋಡ್ ಲಿಂಕ್&zwnj;ಗಳತ್ತ ಸೆಳೆಯಲು ಬಳಸಲಾಗುತ್ತಿದೆ. ಈ ಲಿಂಕ್&zwnj;ಗಳನ್ನು ಕ್ಲಿಕ್ ಮಾಡಿದರೆ, ಬಳಕೆದಾರರು ಸೈಬರ್ ವಂಚನೆಗೆ ಬಲಿಯಾಗಬಹುದು.&lt;/p&gt;&lt;p&gt;ಹಕ್ಕುತ್ಯಾಗ: ಈ ವರದಿಯನ್ನು ಡಿಜಿಟಲ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಸೋಶಿಯಲ್ ಮೀಡಿಯಾ ಮತ್ತು ಇಂಟರ್ನೆಟ್&zwnj;ನಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಯಾವುದೇ ಪರಿಶೀಲಿಸದ ವಿಡಿಯೋವನ್ನು ಬೆಂಬಲಿಸುವ, ಪ್ರಚಾರ ಮಾಡುವ ಅಥವಾ ಪ್ರವೇಶ ನೀಡುವ ಉದ್ದೇಶ ಈ ವರದಿಗಿಲ್ಲ. ವೈರಲ್ ಕ್ಲಿಪ್&zwnj;ನ ಸತ್ಯಾಸತ್ಯತೆ ಅಧಿಕೃತವಾಗಿ ದೃಢಪಟ್ಟಿಲ್ಲ ಮತ್ತು ಇದು AI ಡೀಪ್&zwnj;ಫೇಕ್ ತಂತ್ರಜ್ಞಾನದ ಪರಿಣಾಮವೂ ಆಗಿರಬಹುದು. ಲಭ್ಯವಿರುವ ಆನ್&zwnj;ಲೈನ್ ಮಾಹಿತಿಯ ಆಧಾರದ ಮೇಲೆ ಈ ವಿಷಯವನ್ನು ಸಿದ್ಧಪಡಿಸಲಾಗಿದೆ. ಏಷ್ಯಾನೆಟ್ ನ್ಯೂಸ್ ಈ ಹೇಳಿಕೆಗಳು ಮತ್ತು ಅವುಗಳ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/sofik-sonali-viral-video-scam-beware-of-fake-links-and-malware-traps-details-5vylrho"/>
        </item>
        <item>
            <title><![CDATA[ಆಚೆ ಬಂದಾಗ ಮೋನಿಷಾ ಮಗಳು, ಸೆಟ್‌ನಲ್ಲಿ ಅವಳು ನಟಿಯಷ್ಟೇ: ದುನಿಯಾ ವಿಜಯ್‌ ಮಾತು ವೈರಲ್]]></title>
            <link>https://kannada.asianetnews.com/sandalwood/duniya-vijay-on-directing-daughter-monisha-in-citylights-gvd/articleshow-axdkvop</link>
            <guid isPermaLink="true">https://kannada.asianetnews.com/sandalwood/duniya-vijay-on-directing-daughter-monisha-in-citylights-gvd/articleshow-axdkvop</guid>
            <pubDate>Fri, 08 May 2026 16:51:27 +0530</pubDate>
            <description><![CDATA[&lt;p&gt;ದುನಿಯಾ ವಿಜಯ್&zwnj; ನಿರ್ದೇಶನದ ʻಸಿಟಿಲೈಟ್ಸ್&zwnj;ʼ ಸಿನಿಮಾದ ಮೊದಲ ಹಾಡು ರಿಲೀಸ್&zwnj; ಆಗಿದೆ. ʻಬಾವ ಬಾವʼ ಅನ್ನೋ ರ್ಯಾಪ್&zwnj; ಹಾಡಿನ ಮೂಲಕ ದುನಿಯಾ ವಿಜಯ್&zwnj; ಮತ್ತೆ ಟ್ರೆಂಡಿ ಸಾಂಗ್&zwnj; ಅನ್ನ ಪ್ರೇಕ್ಷಕರ ಮುಂದೆ ತಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3n413rv1e7veh5vyydvfmr,imgname-hchj-1778239276152.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಸೆಟ್&zwnj;ನಿಂದ ಆಚೆ ಬಂದಾಗ ಮಾತ್ರ ಮಗಳು. ಸೆಟ್&zwnj;ನಲ್ಲಿ ಮೋನಿಷಾ ನಟಿ, ನಾನು ನಿರ್ದೇಶಕ&rsquo;. ಇದು ದುನಿಯಾ ವಿಜಯ್&zwnj; ಮಾತು. ತನ್ನ ನಿರ್ದೇಶನದಲ್ಲಿ ಮಗಳು ಮೋನಿಷಾ ಹಾಗೂ ವಿನಯ್&zwnj; ರಾಜ್&zwnj;ಕುಮಾರ್&zwnj; ನಟಿಸಿರುವ &lsquo;ಸಿಟಿಲೈಟ್ಸ್&zwnj;&rsquo; ಸಿನಿಮಾದ ಹಾಡು ಬಿಡುಗಡೆಯಲ್ಲಿ ಮಾತನಾಡಿದ ಅವರು, &lsquo;ನಿರ್ದೇಶನ ಅನ್ನುವುದು ಪರೀಕ್ಷೆ ಬರೆದ ಹಾಗಿದೆ&rsquo; ಎಂದರು.&lt;/p&gt;&lt;p&gt;&lsquo;ಸಿಟಿಲೈಟ್ಸ್&zwnj;ನಲ್ಲಿ ಇರುವ ಕತ್ತಲ ಜಗತ್ತು ನನ್ನನ್ನು ಬಹಳ ಕಾಡಿದೆ. ಇದರಲ್ಲಿ ಬಹಳ ನೋವು ತರುವಂಥಾ ವಿಚಾರವನ್ನು ಹೇಳಲು ಹೊರಟಿದ್ದೇನೆ, ಈ ಕಥೆಗೆ ವಿನಯ್&zwnj; ರಾಜ್&zwnj;ಕುಮಾರ್&zwnj; ಅವರೇ ಬೇಕಿತ್ತು. ವೈಯಕ್ತಿಕವಾಗಿಯೂ ನನಗೆ ವಿನಯ್&zwnj; ಬಹಳ ಇಷ್ಟವಾಗುವ ವ್ಯಕ್ತಿತ್ವ&rsquo; ಎಂದರು. ಮೋನಿಷಾ ವಿಜಯ್&zwnj;ಕುಮಾರ್&zwnj;, ವಿನಯ್&zwnj; ರಾಜ್&zwnj;ಕುಮಾರ್&zwnj; ಕಾರ್ಯಕ್ರಮದಲ್ಲಿದ್ದರು.&lt;/p&gt;&lt;p&gt;ಚರಣ್&zwnj; ಸರ್&zwnj;ಗೆ ಒಂದು ಒಳ್ಳೆ ಸಾಂಗ್&zwnj; ಕೊಡಿ ಅಂತ ಕೇಳಿದ್ದೆ ಆದರೆ ಅವರು ಐದು ಹಾಡುಗಳನ್ನು ಕೊಟ್ಟಿದ್ದಾರೆ ಖುಷಿ ಆಗ್ತಿದೆ ಎಂದರು ನಟ ವಿನಯ್&zwnj; ರಾಜ್&zwnj; ಕುಮಾರ್&zwnj;.ಇನ್ನು ವಿನಯ್&zwnj; ರಾಜ್&zwnj; ಕುಮಾರ್&zwnj; ಜೊತೆ ಅಭಿನಯ ಮಾಡಿದ್ದು ಖುಷಿ ಕೊಟ್ಟಿದೆ. ತುಂಬಾ ವಿಚಾರಗಳನ್ನು ಕಲಿತಿದ್ದೇನೆ ಎಂದರು ನಟಿ ಮೋನಿಷಾವಿಜಯ್&zwnj;.&lt;/p&gt;&lt;h2&gt;&lt;strong&gt;ಸಿಟಿಲೈಟ್ಸ್&zwnj;ಗೆ ಭಾರಿ ಹೈಪ್&lt;/strong&gt;&lt;/h2&gt;&lt;p&gt;'ಸಿಟಿಲೈಟ್ಸ್' ಚಿತ್ರಕ್ಕೆ ʻಜವಾಬ್ ದಾರಿ&hellip;ದೀಪಗಳುʼ ಎಂಬ ಅಡಿಬರಹವಿದೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟಗಳನ್ನ ಎದುರಿಸುತ್ತಾರೆ ಎನ್ನುವ ಕಥೆ ಸಿನಿಮಾದಲ್ಲಿದೆ. ಚಿತ್ರಕ್ಕೆ ಶಿವಸೇನಾ ಛಾಯಾಚಿತ್ರಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ಮಾಸ್ತಿ ಅವರ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತವಿದೆ. ದುನಿಯಾ ಟಾಕೀಸ್&zwnj; ಹಾಗೂ ಯಂತ್ರೋದ್ದಾರಕ ಬ್ಯಾನರ್&zwnj; ಅಡಿಯಲ್ಲಿ ವಿಜಯ್&zwnj; ಕುಮಾರ್&zwnj; ಹಾಗೂ ವಿಕ್ರಂ ಆರ್ಯಾ ನಿರ್ಮಾಣ ಮಾಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/duniya-vijay-on-directing-daughter-monisha-in-citylights-gvd/articleshow-axdkvop"/>
        </item>
        <item>
            <title><![CDATA[ಹಾಲಿವುಡ್‌ನ ಮ್ಯಾಗಜಿನ್‌ ಮುಖಪುಟದಲ್ಲಿ ನಟ ಯಶ್‌: ಜಗತ್ತು ಗೆಲ್ಲಲು ಹೊರಟ ರಾಕಿಂಗ್‌ ಸ್ಟಾರ್‌]]></title>
            <link>https://kannada.asianetnews.com/entertainment/yash-variety-magazine-the-yash-effect-global-star-gvd/articleshow-mw3repn</link>
            <guid isPermaLink="true">https://kannada.asianetnews.com/entertainment/yash-variety-magazine-the-yash-effect-global-star-gvd/articleshow-mw3repn</guid>
            <pubDate>Fri, 08 May 2026 16:33:26 +0530</pubDate>
            <description><![CDATA[&lt;p&gt;&lsquo;ವೆರೈಟಿ&rsquo; ಎಂಬ ಹಾಲಿವುಡ್&zwnj; ಮ್ಯಾಗಜಿನ್&zwnj;ನಲ್ಲಿ ರಾಕಿಂಗ್&zwnj; ಸ್ಟಾರ್&zwnj; ಸಿನಿ ಜರ್ನಿಯ ಕತೆ. &lsquo;ದಿ ಯಶ್&zwnj; ಎಫೆಕ್ಟ್&zwnj;&rsquo; ಎಂಬ ಶೀರ್ಷಿಕೆಯಡಿ ಪ್ರಕಟ. ಕನ್ನಡ ನಟನೊಬ್ಬನ ಬಗ್ಗೆ ಹಾಲಿವುಡ್&zwnj; ಮ್ಯಾಗಜಿನ್&zwnj;ನಲ್ಲಿ ಸಚಿತ್ರ ಲೇಖನ ಇದೇ ಮೊದಲು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3m2a4a45w7zehbpkyj0ycm,imgname-hxh-1778238171274.png" type="image/jpeg" height="390" width="690"/>
            <content:encoded><![CDATA[&lt;p&gt;ಯಶ್ ಕನ್ನಡದ ಮಂದಿಗೆ ಸಿಗುವುದಿಲ್ಲ. ಭಾರತ ಮಟ್ಟದಲ್ಲೂ ಪತ್ರಕರ್ತರಿಗೆ ಮಾತಿಗೆ ಸಿಗುತ್ತಿಲ್ಲ. ಅವರು ಏನಿದ್ದರೂ ಈಗ ಗ್ಲೋಬಲ್&zwnj; ಸ್ಟಾರ್&zwnj; ಆಗುವತ್ತ ಚಿತ್ತ ನೆಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಪಿಆರ್&zwnj; ಏಜೆನ್ಸಿಯೊಂದು ಅವರ ಪ್ರಚಾರ ಕಾರ್ಯಗಳನ್ನು ನಡೆಸಿಕೊಡುತ್ತಿದೆ ಎನ್ನಲಾಗಿದೆ. ಅದಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಮ್ಯಾಗಜೀನ್ ವೆರೈಟಿ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜಾಗತಿಕ ಪ್ರಚಾರ ತಂತ್ರದ ಕುರಿತ ವಿಶೇಷ ವಿವರಗಳು ಇಲ್ಲಿವೆ.&lt;/p&gt;&lt;p&gt;&lt;strong&gt;1. ಯಶ್&zwnj; ಯೋಚನೆಗಳೇ ಬೇರೆ&lt;/strong&gt;&lt;/p&gt;&lt;p&gt;ಯಶ್ ಏನಿದ್ದರೂ ಮೇಲಿನ ಹಂತಕ್ಕೆ ನೋಟ ನೆಟ್ಟಿರುತ್ತಾರೆ. ಮೇಲಿನ ಹಂತದಲ್ಲಿ ನಿಂತು ಏನೇ ಮಾಡಿದರೂ ಕೆಳ ಹಂತಕ್ಕೆ ತಲುಪುತ್ತದೆ ಅನ್ನುವುದು ಅವರ ನಂಬಿಕೆ. ಅದಕ್ಕೆ ಪೂರಕವಾಗಿ ಅವರು ಟಾಕ್ಸಿಕ್&zwnj;, ರಾಮಾಯಣ ಸಿನಿಮಾಗಳನ್ನು ಜಾಗತಿಕ ಮಟ್ಟದಲ್ಲಿಯೇ ಪ್ರಚಾರ ಮಾಡುತ್ತಿದ್ದಾರೆ.&lt;/p&gt;&lt;p&gt;&lt;strong&gt;2. ಜಾಗತಿಕ ಪ್ರಚಾರ&lt;/strong&gt;&lt;/p&gt;&lt;p&gt;ಏನೇ ಮಾಡಿದರೂ ಶ್ರೇಷ್ಠವಾದದ್ದೇ ಮಾಡಬೇಕು ಅನ್ನುವುದು ಅವರ ಹಂಬಲ. ಅದಕ್ಕೆ ತಕ್ಕಂತೆ ಅವರು ತನ್ನ ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಪ್ರಚಾರ ಸಂಸ್ಥೆ ಡಬ್ಲ್ಯೂಎಂಎಫ್&zwnj; ಏಜೆನ್ಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ತಂತ್ರದ ಭಾಗವಾಗಿಯೇ ಅವರದೊಂದು ವಿಶೇಷ ಸಂದರ್ಶನ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಸಿನಿಮಾ ಮ್ಯಾಗಜೀನ್&zwnj; ವೆರೈಟಿಯಲ್ಲಿ ಪ್ರಕಟವಾಗಿದೆ.&lt;/p&gt;&lt;p&gt;&lt;strong&gt;3. ಪ್ರಾಯೋಜಿತ ಸಂದರ್ಶನ&lt;/strong&gt;&lt;/p&gt;&lt;p&gt;ವಿಶೇಷ ಇರುವುದು ಇಲ್ಲೇ, ತಾನು ಅಂದುಕೊಂಡಿದ್ದು ಮಾಡದೇ ಬಿಡುವ ಜಾಯಮಾನ ಯಶ್ ಅವರದಲ್ಲ. ಒಂದು ನಿರ್ದಿಷ್ಟ ಗುರಿ ಇಟ್ಟರು ಎಂದರೆ ಆ ಗುರಿ ಸಾಧಿಸಬೇಕು ಎಂಬ ಮನಸ್ಥಿತಿ. ವೆರೈಟಿ ಪತ್ರಿಕೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದ ಬಳಿಕ ಪ್ರಾಯೋಜಿತವಾದರೂ ಸರಿ, ಅಲ್ಲಿ ಕಾಣಿಸಿಕೊಳ್ಳಬೇಕು. ಇದೀಗ ವೆರೈಟಿ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಪ್ರಾಯೋಜಿತ ಅನ್ನುವುದು ಅವರ ಪ್ರಚಾರ ವೈಖರಿಯನ್ನು ಹೇಳುತ್ತದೆ. ಆ ಮುಖಪುಟ ಪ್ರಕಟವಾಗಿದೆ ಅನ್ನುವ ಸುದ್ದಿಯೇ ಈಗ ಭಾರತದಾದ್ಯಂತ ಓಡುತ್ತಿದೆ. ಅಲ್ಲಿಗೆ ಆ ಮುಖಪುಟ ಸುದ್ದಿ ಸಾರ್ಥಕವಾಗಿದೆ.&lt;/p&gt;&lt;p&gt;&lt;strong&gt;4. ದಿ ಯಶ್ ಎಫೆಕ್ಟ್&zwnj; ಎಂಬ ಬ್ರಾಂಡಿಂಗ್&zwnj;&lt;/strong&gt;&lt;/p&gt;&lt;p&gt;ಈ ಸಂದರ್ಶನದಲ್ಲಿ &lsquo;ದಿ ಯಶ್&zwnj; ಎಫೆಕ್ಟ್&zwnj;&rsquo; ಎಂಬ ಒಂದೇ ಸಾಲಿನಲ್ಲಿ ಯಶ್&zwnj; ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶ್&zwnj; ತನ್ನನ್ನು ಪ್ರಸ್ತುತಪಡಿಸಿದ್ದಾರೆ. ಪಾಶ್ಚಿಮಾತ್ಯ ಸಿನಿಮಾ ನಿರ್ಮಾಪಕರು ಹಾಗೂ ಹೂಡಿಕೆದಾರರ ಮುಂದೆ ತಾನು ಗ್ಲೋಬಲ್&zwnj; ಮಟ್ಟದಲ್ಲಿ ದೊಡ್ಡ ಹೂಡಿಕೆಗೆ ಯೋಗ್ಯ ಮತ್ತು ಜಾಗತಿಕ ಸಿನಿಮಾ ಜಗತ್ತನ್ನು ಆಳುವ ಸಾಮರ್ಥ್ಯವಿರುವ ನಟ ಎಂದು ಮನವರಿಕೆ ಮಾಡುವ ಪ್ರಯತ್ನ ಇದರ ಹಿಂದಿದೆ.&lt;/p&gt;&lt;p&gt;&lt;strong&gt;5. ವಿಶ್ವಮಟ್ಟದಲ್ಲಿ ಟಾಕ್ಸಿಕ್&zwnj; ಹವಾ&lt;/strong&gt;&lt;/p&gt;&lt;p&gt;ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಟಾಕ್ಸಿಕ್&zwnj; ಅನ್ನು ಸಾಮಾನ್ಯ ಆ್ಯಕ್ಷನ್&zwnj; ಸಿನಿಮಾವಾಗಿ ಬಿಂಬಿಸದೇ ಅದನ್ನೊಂದು ದೊಡ್ಡ ಮಟ್ಟದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್&zwnj;, ಭಿನ್ನ ಬಗೆಯ ಪ್ರಯತ್ನ ಎಂದು ಬಿಂಬಿಸಲಾಗಿದೆ. ಇದು ಸಿನಿಮಾ ಬಗ್ಗೆ ಜಾಗತಿಕ ಮಟ್ಟದಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.&lt;/p&gt;&lt;p&gt;&lt;strong&gt;6. ಗ್ಲೋಬಲ್&zwnj; ಲೆವೆಲ್&zwnj;ಗೆ ತಕ್ಕಂಥಾ ಲುಕ್&lt;/strong&gt;&lt;/p&gt;&lt;p&gt;ಕವರ್&zwnj; ಪೇಜ್&zwnj;ನಲ್ಲಿರುವ ಯಶ್&zwnj; ಫೋಟೋ &lsquo;ಗ್ಲೋಬರ್&zwnj; ನೋಯರ್&zwnj;&rsquo; ಸ್ಟೈಲ್&zwnj;ನಲ್ಲಿದೆ. ಕೆನೆ ಬಣ್ಣದ ಪ್ಯಾಟರ್ನ್ಡ್&zwnj; ಸೂಟ್&zwnj;, ಹ್ಯಾಟ್&zwnj;, ಕ್ಲಾಸಿಕ್&zwnj; ಕಾರು ಇವೆಲ್ಲವೂ ಜಾಗತಿಕ ಪ್ರೇಕ್ಷಕರನ್ನು ಸೆಳೆಯುವಂತಿದೆ.&lt;/p&gt;&lt;p&gt;&lt;strong&gt;7. ಸಿನಿಮಾ ನಿರ್ಮಾಣದಲ್ಲೂ ಹೊಸತನ&lt;/strong&gt;&lt;/p&gt;&lt;p&gt;ಮಾನ್&zwnj;ಸ್ಟರ್&zwnj; ಮೈಂಡ್&zwnj; ಕ್ರಿಯೇಶನ್ಸ್&zwnj; ಯಶ್&zwnj; ಅವರ ನಿರ್ಮಾಣ ಸಂಸ್ಥೆ. ಈ ಬ್ಯಾನರ್&zwnj;ನಡಿ ಯಶ್&zwnj; ತನ್ನ ಬ್ರಾಂಡ್&zwnj; ಅನ್ನು ವಿಶ್ವಮಟ್ಟದಲ್ಲಿ ಬಹಳ ಕ್ರಿಯೇಟಿವ್&zwnj; ಆಗಿ ನಿಯಂತ್ರಿಸುತ್ತಿದ್ದಾರೆ. ದುಡ್ಡು ಪೋಲಾಗಬಾರದು, ತಾನು ಹಾಕುವ ಪ್ರತೀ ಪೈಸೆಯೂ ತನಗೆ ಜಾಗತಿಕ ಮಟ್ಟದಲ್ಲಿ ಹೆಸರು, ಹಣ ತರುವಂತಿರಬೇಕು ಅನ್ನೋದನ್ನು ಕರೆಕ್ಟಾಗಿ ಪ್ಲಾನ್&zwnj; ಮಾಡಿ ಕಾರ್ಯಗತಗೊಳಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;8. ಟಾಕ್ಸಿಕ್&zwnj;, ರಾಮಾಯಣ ಎರಡಕ್ಕೂ ಆದ್ಯತೆ&lt;/strong&gt;&lt;/p&gt;&lt;p&gt;ಯಶ್&zwnj; ನಟಿಸಿ ಸಹ ನಿರ್ಮಾಣ ಮಾಡುತ್ತಿರುವ &lsquo;ಟಾಕ್ಸಿಕ್&zwnj;&rsquo; ಹಾಗೂ &lsquo;ರಾಮಾಯಣ&rsquo; ಎರಡೂ ಸಂಪೂರ್ಣ ಭಿನ್ನ ನೆಲೆಯ ಕಥೆಗಳು. ಟಾಕ್ಸಿಕ್&zwnj; ರಾಯನಾಗಿ ಯಶ್&zwnj; ಆಧುನಿಕ ಲುಕ್&zwnj;ನಲ್ಲಿದ್ದರೆ, &lsquo;ರಾಮಾಯಣ&rsquo;ದಲ್ಲಿ ಪ್ರಾಚೀನ ಕಾಲದ ರಾವಣನ ಪಾತ್ರ ನಿರ್ವಹಿಸಿದ್ದಾರೆ. ಇವೆರಡಕ್ಕೂ ಆದ್ಯತೆ ನೀಡಿ ತನ್ನ ಪ್ರತಿಭೆಯ ಭಿನ್ನ ಮುಖವನ್ನು ವಿಶ್ವಕ್ಕೆ ಪರಿಚಯಿಸಲು ಹೊರಟಿದ್ದಾರೆ.&lt;/p&gt;&lt;p&gt;&lt;strong&gt;9. ಮಾತು ಕಡಿಮೆ, ಕೆಲಸ ಹೆಚ್ಚು&lt;/strong&gt;&lt;/p&gt;&lt;p&gt;ಯಶ್&zwnj; ಖಚಿತ ತಂತ್ರಗಾರಿಕೆ ಅವರ ಕೆಲಸದ ವಿಚಾರದಲ್ಲಿ ಎದ್ದುಕಾಣುತ್ತದೆ. ಮಾತಲ್ಲಿ ಹೇಳುವುದಕ್ಕಿಂತ ಸ್ಮಾರ್ಟ್&zwnj; ವಿಧಾನದಲ್ಲಿ ಸಿನಿಮಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಹಾಲಿವುಡ್&zwnj; ಮ್ಯಾಗಜಿನ್&zwnj;ನಲ್ಲಿ ಬಂದಿರುವ ಬರಹ ಸಿನಿಮಾದ ಹೆಚ್ಚುಗಾರಿಕೆಯನ್ನು ಪರಿಣಾಮಕಾರಿಯಾಗಿ ಜಗತ್ತಿನ ಮುಂದಿಡುವಂತಿದೆ.&lt;/p&gt;&lt;h2&gt;&lt;strong&gt;10. ಇನ್ನು ಯಶ್ ಪ್ಯಾನ್&zwnj; ಇಂಡಿಯಾ ಅಲ್ಲ, ಪ್ಯಾನ್&zwnj; ವರ್ಲ್ಡ್&zwnj; ಸ್ಟಾರ್&zwnj;&lt;/strong&gt;&lt;/h2&gt;&lt;p&gt;ತನ್ನ &lsquo;ಟಾಕ್ಸಿಕ್&zwnj;&rsquo; ಹಾಗೂ &lsquo;ರಾಮಾಯಣ&rsquo; ಸಿನಿಮಾಗಳ ಮೂಲಕ ಯಶ್&zwnj; ತಾನು ಪ್ಯಾನ್&zwnj; ಇಂಡಿಯಾ ಅಲ್ಲ, ಪ್ಯಾನ್&zwnj; ವರ್ಲ್ಡ್&zwnj; ಲೆವಲ್&zwnj;ನಲ್ಲಿ ಮಿಂಚುವ ಐಕಾನ್&zwnj; ಅನ್ನುವುದನ್ನು ಸಾಬೀತು ಮಾಡಲು ಹೊರಟಂತಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/yash-variety-magazine-the-yash-effect-global-star-gvd/articleshow-mw3repn"/>
        </item>
        <item>
            <title><![CDATA[Nandagokula Serial: ಪಿನ್‌ ಇಟ್ಟು ತಂದಿಡ್ತಿದ್ದ ಪ್ರಿಯಾಗೆ, ಕತ್ತಿಯೇಟು ಕೊಟ್ಟ ಅತ್ತೆ ಗಿರಿಜಾ!]]></title>
            <link>https://kannada.asianetnews.com/gallery/tv-talk/colors-kannada-nanda-gokula-serial-episode-girija-oppose-cyqfguw</link>
            <guid isPermaLink="true">https://kannada.asianetnews.com/gallery/tv-talk/colors-kannada-nanda-gokula-serial-episode-girija-oppose-cyqfguw</guid>
            <pubDate>Fri, 08 May 2026 16:15:52 +0530</pubDate>
            <description><![CDATA[&lt;p&gt;Nanda Gokula Serial Episode; 'ನಂದಗೋಕುಲ' ಧಾರಾವಾಹಿಯಲ್ಲಿ ಕೌಟುಂಬಿಕ ಮೌಲ್ಯಗಳ ಜೊತೆಗೆ ಸಣ್ಣಪುಟ್ಟ ಮೋಜಿನ ಪ್ರಸಂಗಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿರುವ ಈ ಸೀರಿಯಲ್&zwnj;ನಲ್ಲಿ, ಇದೀಗ ಕೇಶವ ಮತ್ತು ವಲ್ಲಭನ 'ಸಹೋದರರ ಸವಾಲ್' ಪ್ರಸಂಗ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3jr152fjyrqvs9g4svtfs9,imgname-new-project---2026-05-08t160620.586-1778236785826.jpg" type="image/jpeg" height="390" width="690"/>
            <content:encoded><![CDATA[&lt;p&gt;Nanda Gokula Serial Episode; 'ನಂದಗೋಕುಲ' ಧಾರಾವಾಹಿಯಲ್ಲಿ ಕೌಟುಂಬಿಕ ಮೌಲ್ಯಗಳ ಜೊತೆಗೆ ಸಣ್ಣಪುಟ್ಟ ಮೋಜಿನ ಪ್ರಸಂಗಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿರುವ ಈ ಸೀರಿಯಲ್&zwnj;ನಲ್ಲಿ, ಇದೀಗ ಕೇಶವ ಮತ್ತು ವಲ್ಲಭನ 'ಸಹೋದರರ ಸವಾಲ್' ಪ್ರಸಂಗ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದೆ.&lt;/p&gt;&lt;img&gt;&lt;p&gt;ಕೇಶವ ಮತ್ತು ಮೀನಾ ಪ್ರೀತಿಸಿ ಮದುವೆಯಾದವರು. ಆದರೆ ಈ ಮದುವೆ ಮೀನಾ ತಂದೆಗೆ ಎಳ್ಳಷ್ಟೂ ಇಷ್ಟವಿಲ್ಲ. ದೇವಸ್ಥಾನದಲ್ಲಿ ಇವರನ್ನು ನೋಡಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ ಎಂದು ಮೀನಾ ತಂದೆ ಅವಮಾನ ಮಾಡಿದ್ದು, ಕೇಶವನ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ.&amp;nbsp;&lt;/p&gt;&lt;p&gt;ತಾನು ಸರ್ಕಾರಿ ಕೆಲಸ ಮಾಡ್ತಿಲ್ಲ ಅನ್ನೋ ಬೇಸರದಲ್ಲಿ ಕೇಶವ, ತನ್ನ ತಮ್ಮ ವಲ್ಲಭನ ಮುಂದೆ ಹೋಗಿ ಈ ನೋವನ್ನು ಹಂಚಿಕೊಳ್ಳುತ್ತಾನೆ. ನಾನು ಹೇಗಾದರೂ ಮಾಡಿ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದು ಶಪಥ ಮಾಡುತ್ತಾನೆ. ಇತ್ತ ವಲ್ಲಭ ಕೂಡ ತಾನು ಡ್ರೈವಿಂಗ್ ಕೆಲಸಕ್ಕೆ ಹೋಗಿ ಅಷ್ಟೋ ಇಷ್ಟು ಕಾಸು ಮಾಡಬೇಕು ಎಂಬ ತನ್ನ ಮನದ ಆಸೆಯನ್ನು ಅಣ್ಣನ ಮುಂದೆ ಬಿಚ್ಚಿಡುತ್ತಾನೆ.&lt;/p&gt;&lt;img&gt;&lt;p&gt;ಈ ಇಬ್ಬರು ಸಹೋದರರು ಒಟ್ಟಾಗಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಯಾವುದೇ ಕಾರಣಕ್ಕೂ ನಮ್ಮಿಬ್ಬರ ನಡುವಿನ ಈ ಮಾತು ನಮ್ಮ ಹೆಂಡ್ತಿಯರಿಗೆ ಗೊತ್ತಾಗಬಾರದು ಎಂಬ ನಿರ್ಧಾರಕ್ಕೆ ಬರುತ್ತಾರೆ. ಗುಟ್ಟು ರಟ್ಟಾಗದಂತೆ ಒಬ್ಬರಿಗೊಬ್ಬರು ಪ್ರಾಮಿಸ್&zwnj; ಪಡೆದುಕೊಳ್ತಾರೆ.&lt;/p&gt;&lt;p&gt;ಕೇಶವ ಮನೆಗೆ ಬಂದವನೇ ತನ್ನ ಪತ್ನಿ ಮೀನಾ ಮುಂದೆ ವಲ್ಲಭ ಡ್ರೈವಿಂಗ್ ಕೆಲಸಕ್ಕೆ ಹೋಗುವ ಗುಟ್ಟನ್ನು ಹೇಳಿಬಿಡುತ್ತಾನೆ! ಈ ವಿಷಯವನ್ನು ಯಾವುದೇ ಕಾರಣಕ್ಕೂ ಅಮೂಲ್ಯ ಮುಂದೆ ಹೇಳಬಾರದು ಎಂಬ ಕಂಡೀಷನ್ ಬೇರೆ ಹಾಕುತ್ತಾನೆ.&lt;/p&gt;&lt;img&gt;&lt;p&gt;ಇತ್ತ ವಲ್ಲಭ ಕೂಡ ಅಷ್ಟೇ, ತನ್ನ ಹೆಂಡತಿ ಅಮೂಲ್ಯ ಬಳಿ ಬಂದು ಕೇಶವಣ್ಣ ಗೌವರ್ನ್&zwnj;ಮೆಂಟ್&zwnj; ಕೆಲಸಕ್ಕೆ ಸೇರ್ತಾರೆ, ಮೀನಾಳ ಮುಂದೆ ಹೇಳಬೇಡ ಎಂದು ಗುಟ್ಟನ್ನು ರಟ್ಟು ಮಾಡುತ್ತಾನೆ. ಪಾಪ, ಮೀನಾಳಿಗೆ ಗುಟ್ಟುಗಳನ್ನು ಗೌಪ್ಯವಾಗಿಟ್ಟುಕೊಳ್ಳುವುದು ಅಸಾಧ್ಯದ ಮಾತು!&amp;nbsp;&lt;/p&gt;&lt;p&gt;&quot;ಹೊಟ್ಟೆಯಲ್ಲಿ ಏನೋ ಚಿಟ್ಟೆ ಓಡಾಡಿದಂತಾಗುತ್ತಿದೆ&quot; ಎಂದು ಒದ್ದಾಡುವ ಮೀನಾ, ಅಡುಗೆ ಮನೆಯಲ್ಲಿ ಅಮೂಲ್ಯ ಸಿಕ್ಕ ಕೂಡಲೇ ವಲ್ಲಭನ ಪ್ಲಾನ್ ಅನ್ನು ಬಾಯಿ ಬಿಡ್ತಾಳೆ. ಅಲ್ಲಿಗೆ ಸಹೋದರರ ಸವಾಲ್ ಮಣ್ಣು ಪಾಲಾಗಿ, ಹೆಣ್ಮಕ್ಕಳ ಬಾಯಲ್ಲಿ ಮಾತು ನಿಲ್ಲಲ್ಲ ಅನ್ನೋದನ್ನ ನಂದಗೋಕುಲ ಧಾರಾವಾಹಿಯಲ್ಲಿ ಹಾಸ್ಯದ ಮೂಲಕ ಅದ್ಭುತವಾಗಿ ಚಿತ್ರಿಸಲಾಗಿದೆ.&lt;/p&gt;&lt;img&gt;&lt;p&gt;ಇನ್ನೊಂದು ಕಡೆ ಪ್ರಿಯಾ ನಾಟಕ ಮಾಡಿಕೊಂಡು, ಗಂಡನ ಜೊತೆ ಹನಿಮೂನ್&zwnj; ಹೋಗಲು ರೆಡಿಯಾದಳು. ಇದಕ್ಕೆ ಮಾವ ಒಪ್ಪಿದ್ದನು. ಇನ್ನಿಬ್ಬರು ಸೊಸೆಯಂದಿರಿಗೆ ಹನಿಮೂನ್&zwnj; ಇಲ್ಲ. ಇದರಿಂದ ಇನ್ನಿಬ್ಬರು ಸೊಸೆಯಂದಿರಿಗೆ ಬೇಸರ ಆಗುತ್ತದೆ. ಇದು ಗಿರಿಜಾಗೆ ಅರ್ಥ ಆಯಿತು.&amp;nbsp;&lt;/p&gt;&lt;p&gt;ಹೀಗಾಗಿ ಅವಳು, ಹನಿಮೂನ್&zwnj;ಗೆ ಕಳಿಸೋದಿದ್ರೆ ಮೂವರು ಸೊಸೆಯಂದಿರನ್ನು ಅವರವರ ಗಂಡನ ಜೊತೆ ಕಳಿಸಿ, ಇಲ್ಲ ಅಂದ್ರೆ ಬೇಡ ಎಂದು ಖಡಕ್&zwnj; ಆಗಿ ಹೇಳಿದ್ದಾಳೆ. ಇದು ಮಾವನಿಗೆ ಒಪ್ಪಿಗೆ ಆದರೆ ಪ್ರಿಯಾಗೆ ಬೇಸರ ಆಗುವುದು. ಒಟ್ಟಿನಲ್ಲಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.&lt;/p&gt;&lt;img&gt;&lt;p&gt;ಗಂಡಂದಿರ ಅತಿಯಾದ ಆತ್ಮವಿಶ್ವಾಸ ಮತ್ತು ಹೆಂಡತಿಯರ ಮುಗ್ಧ ಚಾಡಿ ಮಾತುಗಳ ನಡುವಿನ ಈ ಕಚ್ಚಾಟ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ಮತ್ತು ಜಿಯೋಹಾಟ್&zwnj;ಸ್ಟಾರ್&zwnj;ನಲ್ಲಿ&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/colors-kannada-nanda-gokula-serial-episode-girija-oppose-cyqfguw"/>
        </item>
        <item>
            <title><![CDATA[ನಾನು ಆ ಚಿತ್ರಕ್ಕೆ ಕರೆಕ್ಟ್ ಆಯ್ಕೆ ಅಲ್ಲ ಅನ್ನಿಸಿತ್ತು: ನಟಿ ಸಾಯಿ ಪಲ್ಲವಿ ಹೀಗಾ ಹೇಳೋದು!]]></title>
            <link>https://kannada.asianetnews.com/gallery/entertainment/actress-sai-pallavi-ek-din-movie-not-right-choice-gvd-zgq0rhz</link>
            <guid isPermaLink="true">https://kannada.asianetnews.com/gallery/entertainment/actress-sai-pallavi-ek-din-movie-not-right-choice-gvd-zgq0rhz</guid>
            <pubDate>Fri, 08 May 2026 16:17:11 +0530</pubDate>
            <description><![CDATA[&lt;p&gt;ಈ ಸಿನಿಮಾ ಕತೆ ಕೇಳಿದಾಗ ನನಗೆ ಹಾಲಿವುಡ್&zwnj;ನ &lsquo;ಬಿಫೋರ್&zwnj; ಸನ್&zwnj;ರೈಸ್&rsquo; ಸಿನಿಮಾ ನೆನಪಿಗೆ ಬಂತು. ಅದೇ ರೀತಿ ಈ ಸಿನಿಮಾ ಇರುತ್ತದೆ ಎಂದು &lsquo;ಏಕ್&zwnj; ದಿನ್&zwnj;&rsquo; ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದರು ಸಾಯಿ ಪಲ್ಲವಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn9ene865x1m9v3r3zjcs6e6,imgname-ramayan-sita-sai-pallavi-upcoming-films-3-1775212607750.jpg" type="image/jpeg" height="390" width="690"/>
            <content:encoded><![CDATA[&lt;p&gt;ಈ ಸಿನಿಮಾ ಕತೆ ಕೇಳಿದಾಗ ನನಗೆ ಹಾಲಿವುಡ್&zwnj;ನ &lsquo;ಬಿಫೋರ್&zwnj; ಸನ್&zwnj;ರೈಸ್&rsquo; ಸಿನಿಮಾ ನೆನಪಿಗೆ ಬಂತು. ಅದೇ ರೀತಿ ಈ ಸಿನಿಮಾ ಇರುತ್ತದೆ ಎಂದು &lsquo;ಏಕ್&zwnj; ದಿನ್&zwnj;&rsquo; ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದರು ಸಾಯಿ ಪಲ್ಲವಿ.&lt;/p&gt;&lt;img&gt;&lt;p&gt;ನಾನು ಆ ಚಿತ್ರಕ್ಕೆ ಕರೆಕ್ಟ್ ಆಯ್ಕೆ ಅಲ್ಲ ಅನ್ನಿಸಿತ್ತು&rsquo;. ಹೀಗೆ ಹೇಳಿದ್ದು ನಟಿ ಸಾಯಿ ಪಲ್ಲವಿ. ಅವರ ಈ ಮಾತು ಹಿಂದಿಯ &lsquo;ಏಕ್&zwnj; ದಿನ್&zwnj;&rsquo; ಚಿತ್ರದ ಬಗ್ಗೆ. ಅಮೀರ್&zwnj; ಖಾನ್&zwnj; ಪುತ್ರ ಜುನೈದ್&zwnj; ಖಾನ್&zwnj; ಜೊತೆಗೆ ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದರು.&lt;/p&gt;&lt;img&gt;&lt;p&gt;ನಾನು ಬೇರೆ ಬೇರೆ ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಆದರೆ, ಲೈಟ್ ಆಗಿರುವ ಹಾಗೂ ಹೆಚ್ಚು ಭಾವನಾತ್ಮಕವಾಗಿರುವ ಸಿನಿಮಾ ಮಾಡುವಾಸೆ ಇತ್ತು. &lsquo;ಏಕ್&zwnj; ದಿನ್&zwnj;&rsquo; ಸಿನಿಮಾ ತಂಡ ನನ್ನ ಭೇಟಿ ಮಾಡಿ ಕತೆ ಹೇಳಿದಾಗ ನಾನು ನಿರೀಕ್ಷೆ ಮಾಡಿದ್ದ ಕತೆಯೇ ಸಿಕ್ಕಿದೆ ಎಂದು ಖುಷಿಪಟ್ಟೆ.&lt;/p&gt;&lt;img&gt;&lt;p&gt;ಅಲ್ಲದೆ ಈ ಸಿನಿಮಾ ಕತೆ ಕೇಳಿದಾಗ ನನಗೆ ಹಾಲಿವುಡ್&zwnj;ನ &lsquo;ಬಿಫೋರ್&zwnj; ಸನ್&zwnj;ರೈಸ್&rsquo; ಸಿನಿಮಾ ನೆನಪಿಗೆ ಬಂತು. ಅದೇ ರೀತಿ ಈ ಸಿನಿಮಾ ಇರುತ್ತದೆ ಎಂದು &lsquo;ಏಕ್&zwnj; ದಿನ್&zwnj;&rsquo; ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಆದರೆ, ಪ್ರೀಮಿಯರ್&zwnj; ಶೋನಲ್ಲಿ ಸಿನಿಮಾ ನೋಡಿದ ಮೇಲೆ, ನಾನು ಸೂಕ್ತ ಆಯ್ಕೆ ಅಲ್ಲ.&lt;/p&gt;&lt;img&gt;&lt;p&gt;ನನ್ನ ಪಾತ್ರಕ್ಕೆ ಬೇರೆ ಹೊಸ ನಟಿಯನ್ನು ಸೆಲೆಕ್ಟ್&zwnj; ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಅಲ್ಲದೆ ಚಿತ್ರೀಕರಣದ ಸಮಯದಲ್ಲೇ ನಾನು ಸೂಕ್ತ ಆಯ್ಕೆ ಅಲ್ಲ ಎಂದು ಜುನೈದ್&zwnj; ಖಾನ್&zwnj;ಗೂ ಹೇಳಿದ್ದೆ. ಅವರು ನನ್ನ ಮಾತು ಒಪ್ಪಲಿಲ್ಲ ಎಂದು ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/actress-sai-pallavi-ek-din-movie-not-right-choice-gvd-zgq0rhz"/>
        </item>
        <item>
            <title><![CDATA[Trisha Krishnan: 24 ವರ್ಷದಿಂದ ಸ್ವಲ್ಪವೂ ದಪ್ಪಗಾಗಿಲ್ಲ; ಅದೊಂದು ಪದ್ಧತಿಯಿಂದ ಸಣ್ಣಗಿರೋ 43 ವರ್ಷದ ನಟಿ!]]></title>
            <link>https://kannada.asianetnews.com/gallery/cine-world/tamil-actress-trisha-krishnan-diet-fitness-workout-plan-1ety9mx</link>
            <guid isPermaLink="true">https://kannada.asianetnews.com/gallery/cine-world/tamil-actress-trisha-krishnan-diet-fitness-workout-plan-1ety9mx</guid>
            <pubDate>Fri, 08 May 2026 15:56:40 +0530</pubDate>
            <description><![CDATA[&lt;p&gt;Actress Trisha Krishnan: ಇತ್ತೀಚೆಗೆ 43ನೇ ವಸಂತಕ್ಕೆ ಕಾಲಿಟ್ಟ ನಟಿ ತ್ರಿಷಾ ಕೃಷ್ಣನ್, ತಮ್ಮ ಸೌಂದರ್ಯದ ಗುಟ್ಟನ್ನು ಹಂಚಿಕೊಂಡಿದ್ದಾರೆ. ವಯಸ್ಸು ಇವರಿಗೆ ಕೇವಲ ಒಂದು ಸಂಖ್ಯೆಯಷ್ಟೇ ಎನ್ನುವುದನ್ನು ಇವರ ಫಿಟ್ನೆಸ್ ಸೀಕ್ರೆಟ್ ಹೇಳುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3gt0s5tfvrc4jf0y2cc5ma,imgname-new-project---2026-05-08t153224.914-1778234753829.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Trisha Krishnan: ಇತ್ತೀಚೆಗೆ 43ನೇ ವಸಂತಕ್ಕೆ ಕಾಲಿಟ್ಟ ನಟಿ ತ್ರಿಷಾ ಕೃಷ್ಣನ್, ತಮ್ಮ ಸೌಂದರ್ಯದ ಗುಟ್ಟನ್ನು ಹಂಚಿಕೊಂಡಿದ್ದಾರೆ. ವಯಸ್ಸು ಇವರಿಗೆ ಕೇವಲ ಒಂದು ಸಂಖ್ಯೆಯಷ್ಟೇ ಎನ್ನುವುದನ್ನು ಇವರ ಫಿಟ್ನೆಸ್ ಸೀಕ್ರೆಟ್ ಹೇಳುತ್ತದೆ.&lt;/p&gt;&lt;img&gt;&lt;p&gt;ತಮಿಳು ಸಿನಿಮಾ ವೀಕ್ಷಕರಿಗೆ ತ್ರಿಷಾ ಕೃಷ್ಣನ್ ಕೇವಲ ನಟಿಯಲ್ಲ, ಅವರೊಂದು ಎಮೋಶನ್. 'ಮೌನಂ ಪೇಸಿಯದೇ' ಚಿತ್ರದಲ್ಲಿ ಕಂಡ ಅದೇ ಲವಲವಿಕೆ ಇಂದಿಗೂ ಅವರಲ್ಲಿದೆ. ಇತ್ತೀಚೆಗೆ ಮೇ 4ರಂದು ತ್ರಿಷಾ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೆ ಅವರ ಫಿಟ್&zwnj;ನೆಸ್&zwnj;ನಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಇದನ್ನು 'ರಿವರ್ಸ್ ಏಜಿಂಗ್' ಎಂದು ಹಲವರು ಕರೆಯುತ್ತಾರೆ. ಆದರೆ ತ್ರಿಷಾ ಹೇಳುವುದು ಮಾತ್ರ ಸಿಂಪಲ್ ಟಿಪ್ಸ್.&amp;nbsp;&lt;/p&gt;&lt;img&gt;&lt;p&gt;'ನಾವು ಏನು ತಿನ್ನುತ್ತೇವೆಯೋ ಅದೇ ನಮ್ಮ ಮುಖದಲ್ಲಿ ಕಾಣಿಸುತ್ತದೆ' ಎಂದು ತ್ರಿಷಾ ಬಲವಾಗಿ ನಂಬುತ್ತಾರೆ. ಹಾಗಾಗಿಯೇ ಜಂಕ್ ಫುಡ್, ಎಣ್ಣೆಯುಕ್ತ ಪದಾರ್ಥಗಳಿಗೆ ಸಂಪೂರ್ಣ ಗುಡ್&zwnj;ಬೈ ಹೇಳಿದ್ದಾರೆ.&amp;nbsp;&lt;/p&gt;&lt;p&gt;ಪೌಷ್ಟಿಕಾಂಶಯುಕ್ತ, ಮನೆಯಲ್ಲೇ ತಯಾರಿಸಿದ ಊಟವೇ ಅವರ ಡಯಟ್&zwnj;ನ ಪ್ರಮುಖ ಭಾಗ. ಹೆಚ್ಚು ಮಸಾಲೆ, ಕೃತಕ ಪದಾರ್ಥಗಳನ್ನು ಬಿಟ್ಟು, ಸರಳ ಆಹಾರ ಪದ್ಧತಿ ಪಾಲಿಸುವುದು ಚರ್ಮದ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.&lt;/p&gt;&lt;img&gt;ತ್ರಿಷಾ ಅವರ ದಿನ ಕಾಫಿ, ಟೀಯಿಂದ ಶುರುವಾಗುವುದಿಲ್ಲ. ಬದಲಿಗೆ, ನಿಂಬೆ ರಸ ಬೆರೆಸಿದ ಬಿಸಿ ನೀರು ಅಥವಾ ದೇಹದಲ್ಲಿನ ವಿಷವನ್ನು ಹೊರಹಾಕಲು ಸಹಾಯ ಮಾಡುವ ಗ್ರೀನ್ ಟೀ... ಇವೆರಡರಲ್ಲಿ ಒಂದನ್ನು ಬೆಳಗ್ಗೆ ಕುಡಿಯುತ್ತಾರೆ. ಇದು ದೇಹವನ್ನು ಶುದ್ಧೀಕರಿಸಿ, ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ತಮ್ಮ ಮುಖದ ಹೊಳಪಿಗೆ ಇದೇ ಮುಖ್ಯ ಕಾರಣ ಎಂದು ಅವರು ಹಲವು ಬಾರಿ ಹೇಳಿದ್ದಾರೆ.&lt;img&gt;ಚರ್ಮದ ಆರೋಗ್ಯದಲ್ಲಿ ಸಿಟ್ರಸ್ ಹಣ್ಣುಗಳ ಪಾತ್ರ ತ್ರಿಷಾಗೆ ಚೆನ್ನಾಗಿ ತಿಳಿದಿದೆ. ಕಿತ್ತಳೆ, ನಿಂಬೆಯಂತಹ ವಿಟಮಿನ್ 'ಸಿ' ಹೆಚ್ಚಿರುವ ಹಣ್ಣುಗಳನ್ನು ಅವರು ತಮ್ಮ ಆಹಾರದಲ್ಲಿ ಖಂಡಿತವಾಗಿ ಸೇರಿಸಿಕೊಳ್ಳುತ್ತಾರೆ. ಇದು ಚರ್ಮದಲ್ಲಿ ಕೊಲಾಜನ್ ಉತ್ಪಾದನೆಯನ್ನು ಹೆಚ್ಚಿಸಿ, ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಜೊತೆಗೆ, ಪ್ರತಿದಿನ ಸಾಕಷ್ಟು ನೀರು ಕುಡಿದು ಚರ್ಮವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ಅವರು ಮರೆಯುವುದಿಲ್ಲ.&lt;img&gt;ಫಿಟ್ನೆಸ್ ವಿಚಾರದಲ್ಲಿ ತ್ರಿಷಾ ತೋರುವ ಶಿಸ್ತು ಯಾರನ್ನಾದರೂ ಅಚ್ಚರಿಗೊಳಿಸುತ್ತದೆ. ಕಠಿಣ ಜಿಮ್ ವರ್ಕೌಟ್ ಜೊತೆಗೆ, ಪೈಲೇಟ್ಸ್, ಸ್ಟ್ರೆಂತ್ ಟ್ರೈನಿಂಗ್, ಕಾರ್ಡಿಯೋ ವ್ಯಾಯಾಮಗಳನ್ನು ಅವರು ತಪ್ಪದೆ ಮಾಡುತ್ತಾರೆ. ವ್ಯಾಯಾಮವು ರಕ್ತ ಸಂಚಾರವನ್ನು ಹೆಚ್ಚಿಸಿ, ಬೆವರಿನ ಮೂಲಕ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.&lt;img&gt;ಅಗತ್ಯವಿರುವ ವಿಷಯಗಳನ್ನು ಮಾತ್ರ ತ್ರಿಷಾ ತಮ್ಮ ಚರ್ಮದ ಮೇಲೆ ಪ್ರಯತ್ನಿಸುತ್ತಾರೆ. ಶೂಟಿಂಗ್ ಮುಗಿಸಿ ಮನೆಗೆ ಬಂದ ತಕ್ಷಣ, ಸರಿಯಾಗಿ ಮೇಕಪ್ ತೆಗೆದು, ಚರ್ಮವನ್ನು ಮಾಯಿಶ್ಚರೈಸ್ ಮಾಡಲು ಅವರು ಮರೆಯುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಮನಸ್ಸನ್ನು ಒತ್ತಡ ರಹಿತವಾಗಿ ಇಟ್ಟುಕೊಳ್ಳುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದೇ ತಮ್ಮ ಸೌಂದರ್ಯದ ಮೂಲ ಎಂದು ತ್ರಿಷಾ ನೆನಪಿಸುತ್ತಾರೆ.]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/tamil-actress-trisha-krishnan-diet-fitness-workout-plan-1ety9mx"/>
        </item>
        <item>
            <title><![CDATA[Amruthadhaare Serial: ಆ ಪುರೋಹಿತ ಹೇಳಿದ್ದಕ್ಕೆ ಮಿಂಚು ಬಗ್ಗೆ ಸ್ಫೋಟಕ ವಿಷಯ ಗೊತ್ತಾಗೋ ಸಮಯ ಬಂತು!]]></title>
            <link>https://kannada.asianetnews.com/gallery/tv-talk/amruthadhaare-kannada-serial-episode-update-9op5k12</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-episode-update-9op5k12</guid>
            <pubDate>Fri, 08 May 2026 14:39:14 +0530</pubDate>
            <description><![CDATA[&lt;p&gt;Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್&zwnj; ಹಾಗೂ ಭೂಮಿಕಾ ಇಡೀ ಕುಟುಂಬ ಸಮೇತ ಹಳೆ ಮನೆಗೆ ಕಾಲಿಟ್ಟಿದ್ದಾರೆ. ಅಲ್ಲಿ ವಿಶೇಷವಾದ ಪೂಜೆ ಮಾಡಲಾಗುತ್ತಿದೆ. ಈ ಪೂಜೆಗೆ ಮಿಂಚು ಕೂಡ ಕೂತಿದ್ದಳು. ಇದನ್ನು ಪುರೋಹಿತರು ವಿರೋಧಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3d3wzza7jfe6fx9g3td0qb,imgname-new-project---2026-05-08t142941.096-1778230883327.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್&zwnj; ಹಾಗೂ ಭೂಮಿಕಾ ಇಡೀ ಕುಟುಂಬ ಸಮೇತ ಹಳೆ ಮನೆಗೆ ಕಾಲಿಟ್ಟಿದ್ದಾರೆ. ಅಲ್ಲಿ ವಿಶೇಷವಾದ ಪೂಜೆ ಮಾಡಲಾಗುತ್ತಿದೆ. ಈ ಪೂಜೆಗೆ ಮಿಂಚು ಕೂಡ ಕೂತಿದ್ದಳು. ಇದನ್ನು ಪುರೋಹಿತರು ವಿರೋಧಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಗೌತಮ್&zwnj;ಗೆ ಮಿಂಚು ಎಂಬ ಹುಡುಗಿ ಅಚಾನಕ್&zwnj; ಆಗಿ ಸಿಕ್ಕಿದ್ದಳು. ಇವಳನ್ನೇ ಅವನು ಸ್ವಂತ ಮಗಳೆಂದು ಸಾಕುತ್ತಿದ್ದಾನೆ. ಎಲ್ಲರೂ ಅವಳನ್ನು ಆ ಮನೆಯ ಮೊಮ್ಮಗಳು ಎಂದೇ ನಂಬಿದ್ದಾರೆ. ಗೌತಮ್&zwnj; ಮಗಳನ್ನು ಜಯದೇವ್&zwnj; ಕಿಡ್ನ್ಯಾಪ್&zwnj; ಮಾಡಿ, ಕಾಡಿನಲ್ಲಿ ಬಿಸಾಕಿದ್ದನು. ಇದುವರೆಗೂ ಅವನಿಗೆ ಮಗಳು ಸಿಕ್ಕಿಲ್ಲ.&lt;/p&gt;&lt;img&gt;&lt;p&gt;ಒಂದು ಕಡೆ ಜ್ಯೋತಿಷಿಯಿಂದ ಮಗಳು ಬದುಕಿದ್ದಾಳೆ ಎನ್ನೋದು ಗೌತಮ್&zwnj; ದಂಪತಿಗೆ ಗೊತ್ತಾಗಿದೆ. ಮತ್ತೆ ಹಳೆ ಮನೆಗೆ ಕಾಲಿಟ್ಟಿರುವ ಈ ಜೋಡಿ, ಆದಷ್ಟು ಬೇಗ ಮಗಳನ್ನು ಹುಡುಕುವ ಪ್ರಯತ್ನ ಮಾಡಬಹುದು. ಈಗ ಜಯದೇವ್&zwnj; ಮನೆಯಿಂದ ಹೊರಬಿದ್ದಿದ್ದಾನೆ, ದಿಯಾ ಕೂಡ ಅವನ ದುಡ್ಡನ್ನು ತಗೊಂಡು ಎಸ್ಕೇಪ್&zwnj; ಆಗಿದ್ದಾಳೆ. ಒಟ್ಟಿನಲ್ಲಿ ಮಗಳನ್ನು ಹುಡುಕೋದು ಈಗ ಇರುವ ಟಾಸ್ಕ್&zwnj; ಆಗಿದೆ.&lt;/p&gt;&lt;img&gt;&lt;p&gt;ಮಿಂಚು ಅಸಲಿ ತಂದೆ-ತಾಯಿ ಯಾರು? ಎನ್ನುವುದು ಸದ್ಯಕ್ಕಿರುವ ಕುತೂಹಲ ಆಗಿದೆ. ಮಿಂಚು ಕುಟುಂಬದ ಹಿನ್ನಲೆ ಬಗ್ಗೆ ಬೇಗ ತಿಳಿಸಿ ಎಂದು ಕೆಲ ವೀಕ್ಷಕರು ಸೋಶಿಯಲ್&zwnj; ಮೀಡಿಯಾದಲ್ಲಿ ಕಾಮೆಂಟ್&zwnj; ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಪೂಜೆಗೆ ಗೌತಮ್&zwnj; ದಿವಾನ್&zwnj;, ಭೂಮಿಕಾ ಹಾಗೂ ಅವರಿಬ್ಬರ ಮಕ್ಕಳು ಕೂರಲಿದ್ದಾರೆ ಎಂದು ಪುರೋಹಿತರ ಬಳಿ ಹೇಳಲಾಗಿದೆ. ಆಗ ಮಿಂಚು ಸಾಕು ಮಗಳು ಎನ್ನೋದು ಗೊತ್ತಾಗಿದೆ. ಈ ಪೂಜೆಗೆ ಮನೆಯ ವಾರಸದಾರರು ಮಾತ್ರ ಕೂರಬೇಕು ಎಂದು ಪುರೋಹಿತರು ಹೇಳಿದ್ದಾರೆ. ಇದನ್ನು ಕೇಳಿ ಎಲ್ಲರಿಗೂ ಬೇಸರ ಆಗಿದೆ. ಮಿಂಚು ಕೂಡ ಅಲ್ಲಿಂದ ಎದ್ದು ಹೋಗಿದ್ದಾಳೆ. ಈ ವಿಷಯ ಭೂಮಿ, ಗೌತಮ್&zwnj;ಗೆ ಗೊತ್ತಾಗಿದೆ.&lt;/p&gt;&lt;img&gt;&lt;p&gt;&ldquo;ಶಾಸ್ತ್ರದ ಬಗ್ಗೆ ನನಗೆ ಗೊತ್ತಿಲ್ಲ. ಮಗುವಿನ ಮನಸ್ಸನ್ನು ನೋಯಿಸಬೇಕು ಎನ್ನೋದು ಯಾವುದಾದರೂ ಶಾಸ್ತ್ರದಲ್ಲಿದೆಯಾ? ಮಕ್ಕಳು ದೇವರ ಸಮಾನ, ಎಲ್ಲರೂ ಒಂದೇ. ನಮ್ಮ ಭಾವನೆಗಳನ್ನು ಗೌರವಿಸಿ. ಇವಳು ನಮ್ಮ ಮಗಳು, ನಮಗೋಸ್ಕರ ಅವಳಿದ್ದಾಳೆ, ಅವಳಿಗೋಸ್ಕರ ನಾವಿದ್ದೇವೆ. ಯಾರೂ ಮಿಂಚು ಬಗ್ಗೆ ಏನೂ ಮಾತನಾಡಬೇಡಿ. ಮಕ್ಕಳ ಜೊತೆಗೆ ಕೂತು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದೇವೆ&rdquo; ಎಂದು ಗೌತಮ್&zwnj; ಹೇಳಿದ್ದಾನೆ.&lt;/p&gt;&lt;img&gt;&lt;p&gt;ಇದನ್ನು ನೋಡಿ ವೀಕ್ಷಕರು ಬೇಸರ ಆಗಿದ್ದಾರೆ. ಗೌತಮ್, ಭೂಮಿಕಾ ಕಳೆದು ಹೋಗಿರುವ ಅವರ ಮಗಳನ್ನು ಈ ಹೆಣ್ಣು ಮಗುವಿನ ರೂಪದಲ್ಲಿ ನೋಡಿಕೊಳ್ಳುತ್ತಿದ್ದಾರೆ ದೇವರಿಗೆ ಇಲ್ಲದ ಮೂಡನಂಬಿಕೆ ಪೂಜಾರಿಗೆ ಏಕೆ? ಎಂದು ಕೆಲವರು ಹೇಳುತ್ತಿದ್ದಾರೆ. ಇದು ಧಾರಾವಾಹಿ ಮಾತ್ರ, ಧಾರಾವಾಹಿಯಲ್ಲಿ ಮಾತ್ರ ಈ ರೀತಿ ತೋರಿಸಲಾಗಿದೆ ಅಷ್ಟೇ, ಧಾರಾವಾಹಿಯಲ್ಲಿ ಮಾತ್ರ ಈ ರೀತಿ ಸ್ಕ್ರಿಪ್ಟ್&zwnj; ಬರೆಯಲಾಗಿದೆ ಅಷ್ಟೇ.&amp;nbsp;&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-episode-update-9op5k12"/>
        </item>
        <item>
            <title><![CDATA[ಕಪ್ಪಗಿದ್ದವ್ರನ್ನು ಲವ್‌ ಮಾಡಬಾರದಾ? ದುಡ್ಡಿಗೋಸ್ಕರ ಅವಳು ಮದುವೆ ಆಗ್ತಿಲ್ಲ: Gicchi Gili gili ಟಾಲೆಂಟೆಡ್‌ ಕಲಾವಿದ]]></title>
            <link>https://kannada.asianetnews.com/gallery/tv-talk/gicchi-gili-gili-talented-kalavida-prashanth-gowda-on-wedding-with-krithi-gowda-qng86nr</link>
            <guid isPermaLink="true">https://kannada.asianetnews.com/gallery/tv-talk/gicchi-gili-gili-talented-kalavida-prashanth-gowda-on-wedding-with-krithi-gowda-qng86nr</guid>
            <pubDate>Fri, 08 May 2026 13:14:34 +0530</pubDate>
            <description><![CDATA[&lt;p&gt;Gicchi Gili gili Talented Kalavida: 'ಗಿಚ್ಚಿ ಗಿಲಿಗಿಲಿ', 'ಕ್ವಾಟ್ಲೆ ಕಿಚನ್' ಖ್ಯಾತಿಯ ಪ್ರಶಾಂತ್ ಗೌಡ (ಟ್ಯಾಲೆಂಟೆಡ್ ಕಲಾವಿದ), ಕೃತಿ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರ ಮದುವೆ ಬಗ್ಗೆ ನೆಗೆಟಿವ್&zwnj; ಮಾತನಾಡಲಾಗ್ತಿದೆ. ಈ ಬಗ್ಗೆ ಪ್ರಶಾಂತ್&zwnj; ಅವರು ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr388jj8g6936gdnkkgcr3cw,imgname-new-project---2026-05-08t125238.740-1778225793607.jpg" type="image/jpeg" height="390" width="690"/>
            <content:encoded><![CDATA[&lt;p&gt;Gicchi Gili gili Talented Kalavida: 'ಗಿಚ್ಚಿ ಗಿಲಿಗಿಲಿ', 'ಕ್ವಾಟ್ಲೆ ಕಿಚನ್' ಖ್ಯಾತಿಯ ಪ್ರಶಾಂತ್ ಗೌಡ (ಟ್ಯಾಲೆಂಟೆಡ್ ಕಲಾವಿದ), ಕೃತಿ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರ ಮದುವೆ ಬಗ್ಗೆ ನೆಗೆಟಿವ್&zwnj; ಮಾತನಾಡಲಾಗ್ತಿದೆ. ಈ ಬಗ್ಗೆ ಪ್ರಶಾಂತ್&zwnj; ಅವರು ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪ್ರಶಾಂತ್&zwnj;, ಕೃತಿ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದು ಈ ಜೋಡಿ ಮದುವೆ ಆಗ್ತಿದೆ. &quot;ನಮ್ಮದು ಐದು ವರ್ಷಗಳ ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೊದಲು ನಾನೇ ಅವಳಿಗೆ ಮದುವೆಯಾಗುತ್ತೀಯಾ ಎಂದು ಪ್ರಪೋಸ್ ಮಾಡಿದ್ದೆ&quot; ಎಂದು ಪ್ರಶಾಂತ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ &quot;ಕಪ್ಪಗಿರುವ ಪ್ರಶಾಂತ್&zwnj;ಗೆ ಇಷ್ಟು ಬೆಳ್ಳಗಿರುವ ಹುಡುಗಿ ಸಿಕ್ಕಿದ್ದಾಳೆ&quot; ಅಥವಾ &quot;ದುಡ್ಡಿಗೋಸ್ಕರ ಮದುವೆಯಾಗುತ್ತಿದ್ದಾರೆ&quot; ಎಂಬ ಕಮೆಂಟ್&zwnj; ಬರುತ್ತಿದೆ. ಇದಕ್ಕೆ ಕೃತಿ ಮಾತನಾಡಿದ್ದು, &quot;ಒಬ್ಬ ಹುಡುಗ ಕಪ್ಪಗಿದ್ದಾನೆ ಎಂಬ ಕಾರಣಕ್ಕೆ ಹುಡುಗಿ ಅವನನ್ನು ಮದುವೆಯಾದರೆ, ಅದು ಕೇವಲ ಹಣಕ್ಕೋಸ್ಕರ ಎಂದು ಜಡ್ಜ್ ಮಾಡುವುದು ತಪ್ಪು. ಅವನಲ್ಲಿರುವ ಮುಗ್ಧತೆ, ನನ್ನನ್ನು ಮಗುವಿನಂತೆ ನೋಡಿಕೊಳ್ಳುವ ಕೇರಿಂಗ್ ಮನೋಭಾವ ಇಷ್ಟವಾಯಿತು. ನನ್ನ ತಂದೆಯ ಸ್ಥಾನವನ್ನು ತುಂಬುವ ಶಕ್ತಿ ಅವನಲ್ಲಿದೆ&quot; ಎಂದು ಕೃತಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಪ್ರಶಾಂತ್ ಮಾತನಾಡಿದ್ದು, &quot;ನಾವು ಬಿಸಿಲಿಗೆ ಹೋದರೆ ಟ್ಯಾನ್ ಆಗುತ್ತೇವೆ, ಬಣ್ಣ ಬದಲಾಗುತ್ತದೆ. ಆದರೆ ಮನಸ್ಸು ಬದಲಾಗಲ್ಲ. ನಾನು ಅವಳ ಬಣ್ಣ ನೋಡಿ ಪ್ರೀತಿಸಿಲ್ಲ, ಅವಳು ನನ್ನ ಶ್ರೀಮಂತಿಕೆ ನೋಡಿ ಬಂದಿಲ್ಲ. ನಮ್ಮಿಬ್ಬರ ನಡುವೆ ಭಾವನೆಗಳ ಬಂಧವಿದೆ&quot; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕೃತಿ ಗೌಡ ಕೇವಲ ಪ್ರಶಾಂತ್ ಭಾವಿ ಪತ್ನಿಯಷ್ಟೇ ಅಲ್ಲ, ಅವರು ಕೂಡ ಒಬ್ಬ ಕಲಾವಿದೆ. 'ಬ್ರೇಕ್ ಫೇಲ್ಯೂರ್', 'ದಶಗ್ರೀವ' ಸಿನಿಮಾಗಳಲ್ಲಿ ನಟಿಸಿದ್ದು, 'ರಾಮಾಚಾರಿ' ಮತ್ತು 'ಭೂಮಿಗೆ ಬಂದ ಭಗವಂತ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯಕ್ಕೆ ನಿಶ್ಚಿತಾರ್ಥ ಮುಗಿಸಿರುವ ಈ ಜೋಡಿ, ಶೀಘ್ರದಲ್ಲೇ ಅಂದರೆ ಜುಲೈ ತಿಂಗಳಿನಲ್ಲಿ ಮದುವೆ ಆಗುವ ಸಾಧ್ಯತೆ ಇದೆ.&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/gicchi-gili-gili-talented-kalavida-prashanth-gowda-on-wedding-with-krithi-gowda-qng86nr"/>
        </item>
        <item>
            <title><![CDATA[Lakshmi Nivasa ಸೈಕೋ ಜಯಂತ್​ ಜೊತೆ ಶೂಟಿಂಗ್​ ಅನುಭವ ಹಂಚಿಕೊಂಡ ನಟಿ ಯಮುನಾ ಶ್ರೀನಿಧಿ ಹೇಳಿದ್ದೇನು]]></title>
            <link>https://kannada.asianetnews.com/gallery/tv-talk/lakshmi-nivasa-anamaika-woman-yamuna-shreenidhi-about-workin-with-deepak-subramanya-suc-ul4ysl7</link>
            <guid isPermaLink="true">https://kannada.asianetnews.com/gallery/tv-talk/lakshmi-nivasa-anamaika-woman-yamuna-shreenidhi-about-workin-with-deepak-subramanya-suc-ul4ysl7</guid>
            <pubDate>Fri, 08 May 2026 12:46:10 +0530</pubDate>
            <description><![CDATA['ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರಕ್ಕೆ ನಟ ದೀಪಕ್ ಸುಬ್ರಹ್ಮಣ್ಯ ಜೀವ ತುಂಬಿದ್ದಾರೆ. ಇದೀಗ ಧಾರಾವಾಹಿಗೆ ಹಿರಿಯ ನಟಿ ಯಮುನಾ ಶ್ರೀನಿಧಿ ಅನಾಮಿಕ ಮಹಿಳೆಯಾಗಿ ಎಂಟ್ರಿ ಕೊಟ್ಟಿದ್ದು, ಸಹನಟ ದೀಪಕ್ ಅವರ ನಟನೆ ಹಾಗೂ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr36vwgm4psv72zm92345erm,imgname-yamuma-04-1778224329236.jpg" type="image/jpeg" height="390" width="690"/>
            <content:encoded><![CDATA['ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರಕ್ಕೆ ನಟ ದೀಪಕ್ ಸುಬ್ರಹ್ಮಣ್ಯ ಜೀವ ತುಂಬಿದ್ದಾರೆ. ಇದೀಗ ಧಾರಾವಾಹಿಗೆ ಹಿರಿಯ ನಟಿ ಯಮುನಾ ಶ್ರೀನಿಧಿ ಅನಾಮಿಕ ಮಹಿಳೆಯಾಗಿ ಎಂಟ್ರಿ ಕೊಟ್ಟಿದ್ದು, ಸಹನಟ ದೀಪಕ್ ಅವರ ನಟನೆ ಹಾಗೂ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;img&gt;&lt;p&gt;ನನ್ನ ಗಂಡ ತುಂಬಾ ಪ್ರೀತಿಸಬೇಕು, ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು ಎಂದೆಲ್ಲಾ ಕನಸು ಕಂಡುಕೊಂಡಿರೋ ಹೆಣ್ಣುಮಕ್ಕಳು, ಅಯ್ಯಪ್ಪಾ ಇಂಥ ಗಂಡ ಬೇಡಪ್ಪಾ ಎನ್ನುವಂತೆ ಮಾಡಿದ್ದ ಲಕ್ಷ್ಮೀ ನಿವಾಸ ಸೀರಿಯಲ್​ ಜಯಂತ್​. ಪ್ರೀತಿಯ ಹೆಸರಿನಲ್ಲಿ, ಚಿನ್ನುಮರಿಗೆ ಆತ ಕೊಟ್ಟ ಟಾರ್ಚರ್​ ಆ ದೇವರಿಗೇ ಪ್ರೀತಿ ಎನ್ನುವಂತಿದೆ. ಇದೀಗ ಆತ ಸರಿದಾರಿಗೆ ಬಂದರೂ ಆತನ ಚಿನ್ನುಮರಿ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲವಾಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ವಿಭಿನ್ನ ರೀತಿಯ ಶೇಡ್​ನಲ್ಲಿ ಕಾಣಿಸಿಕೊಂಡು ಜಯಂತ್​ ಪಾತ್ರಕ್ಕೆ ಜೀವ ತುಂಬಿ, ಅತ್ಯದ್ಭುತವಾಗಿ ನಟಿಸುವ ಮೂಲಕ ಸೈಕೋಗಳೆಂದರೆ ಹೀಗೆಯೇ ಇರುತ್ತಾರೆ ಎಂದು ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡವರು ನಟ ದೀಪಕ್​ ಸುಬ್ರಹ್ಮಣ್ಯ (Deepak Subramanya). ಇವರ ನಟನೆಗೆ ಮನಸೋಲದವರೇ ಇಲ್ಲ. ಇವರ ಪ್ರತಿ ಪ್ರೊಮೋ ವಾಹಿನಿ ಹಂಚಿಕೊಂಡಾಗಲೂ ಅವರ ನಟನೆಯನ್ನು ಹಾಡಿ ಹೊಗಳುವವರೇ ಎಲ್ಲಾ. ಅಷ್ಟೊಂದು ಪ್ರಭಾವ ಬೀರಿರುವ ನಟ ಇವರು. ಸಾಮಾನ್ಯವಾಗಿ ವಿಲನ್​ ರೋಲ್​ ಮಾಡುವವರಿಗೆ ಬೇರೆಯದ್ದೇ ರೀತಿಯ ಗೆಟಪ್​ ಇರುತ್ತದೆ. ಆದರೆ ಸೈಕೋ ಅಗಿ ಹೆಂಡತಿಯನ್ನು ಅತಿಯಾಗಿ ಪ್ರೀತಿಸಿ ಅದನ್ನು ವಿಲನ್​ ರೀತಿಯಲ್ಲಿ ತೋರಿಸಿದಾಗ ಅದರ ನಟನೆ ಕಷ್ಟವೇ. ಆದರೆ ಅದಕ್ಕೆ ಜೀವ ತುಂಬುತ್ತಿದ್ದಾರೆ ದೀಪಕ್​.&lt;/p&gt;&lt;img&gt;&lt;p&gt;ಇದೀಗ ಲಕ್ಷ್ಮೀ ನಿವಾಸ ಸೀರಿಯಲ್​ ರೋಚಕ ಹಂತ ತಲುಪಿದ್ದು, ಜಾಹ್ನವಿ ಏನೋ ಮನೆಗೆ ಬಂದಿದ್ದಾಳೆ.ಆದರೆ ಅನಾಮಿಕ ಮಹಿಳೆಯ ಎಂಟ್ರಿ ಆಗಿದೆ. ಯಾರೀಕೆ ಎನ್ನುವ ಕುತೂಹಲ ಕೆರಳಿಸುತ್ತಿದೆ. ಈ ಅನಾಮಿಕ ಮಹಿಳೆಯರ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವವರು ಹಿರಿಯ ನಟಿ ಯಮುನಾ ಶ್ರೀನಿಧಿ.&lt;/p&gt;&lt;img&gt;&lt;p&gt;ಈಗ ಅವರು ಪೋಸ್ಟ್​ ಒಂದನ್ನು ಮಾಡಿದ್ದು, ಲಕ್ಷ್ಮೀ ನಿವಾಸದ ಸೀರಿಯಲ್​ನಲ್ಲಿ ತಮ್ಮ ಪಾತ್ರ ಹಾಗೂ ಸೈಕೋ ಜಯಂತ್ ಪಾತ್ರಧಾರಿ ದೀಪಕ್​ ಅವರ ಜೊತೆಗೆ ಕೆಲಸ ಮಾಡುತ್ತಿರುವ ರೋಚಕ ಅನುಭವವನ್ನು ತೆರೆದಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಜೀ ಕನ್ನಡದಲ್ಲಿ &quot;ಲಕ್ಷ್ಮಿನಿವಾಸ&quot; ಸರಣಿಯ ಪ್ರಮುಖ ಕಲಾವಿದ ದೀಪಕ್ ಸುಬ್ರಹ್ಮಣ್ಯ ಅವರೊಂದಿಗೆ ಕೆಲಸ ಮಾಡುವುದು ನನಗೆ ಅರ್ಥಪೂರ್ಣ ಕಲಿಕೆಯ ಅನುಭವವಾಗಿದೆ. ನಾನು ಯಾವಾಗಲೂ ಅವರ ಅದ್ಭುತ ನಟನೆಯ ಅಭಿಮಾನಿಯಾಗಿದ್ದೆ, ಆದರೆ ಅವರೊಂದಿಗೆ ಕೆಲಸ ಮಾಡಿದ ನಂತರ, ನಾನು ಅವರ ಶಿಸ್ತು, ಅವರ ಸರಳತೆ, ಪ್ರತಿ ದೃಶ್ಯ ಮತ್ತು ಪ್ರತಿ ಸಂಭಾಷಣೆಗೆ ಅವರು ಆಳವನ್ನು ಸೇರಿಸುವ ರೀತಿ, ಪ್ರತಿ ಕ್ಷಣವನ್ನು ಉನ್ನತೀಕರಿಸುವ ಅವರ ಬದ್ಧತೆ, ಈ ಸೀರಿಯಲ್​ಗೆ ಅವರ ಕೊಡುಗೆ ಮತ್ತು ಅವರು ತಮ್ಮ ಸಹ-ಕಲಾವಿದರಿಗೆ ತೋರಿಸುವ ಗೌರವ ಮತ್ತು ಪ್ರೋತ್ಸಾಹ ನಿಜವಾಗಿಯೂ ಅಪರೂಪ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ದೀಪಕ್​ ಅವರನ್ನು ನಟಿ ಹಾಡಿ ಹೊಗಳಿದ್ದಾರೆ.&lt;/p&gt;&lt;img&gt;&lt;p&gt;ಹಿಂದೆ ನಾನು ಅವರ ಅದ್ಭುತ ಅಭಿನಯದ ಅಭಿಮಾನಿಯಾಗಿದ್ದೆ. ಆದರೆ ಅವರ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಅವರ ಕೆಲಸದ ನೈತಿಕತೆ, ಪ್ರತಿಯೊಂದು ದೃಶ್ಯ ಮತ್ತು ಸಂಭಾಷಣೆಗೆ ಅವರು ನೀಡುವ ಮೌಲ್ಯ&mdash; ಇವೆಲ್ಲವೂ ಅವರನ್ನು ಇನ್ನಷ್ಟು ಗೌರವದಿಂದ ಮೆಚ್ಚುವಂತೆ ಮಾಡಿವೆ. ಪ್ರತಿ ದೃಶ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ಅವರ ತೊಡಗಿಸಿಕೊಳ್ಳುವಿಕೆ ಇವೆಲ್ಲವೂ ನಿಜವಾಗಿಯೂ ಪ್ರೇರಣಾದಾಯಕವಾಗಿವೆ ಎಂದು ನಟಿ ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/lakshmi-nivasa-anamaika-woman-yamuna-shreenidhi-about-workin-with-deepak-subramanya-suc-ul4ysl7"/>
        </item>
        <item>
            <title><![CDATA[Bigg Boss Season 12ರಲ್ಲಿ ಜನಮನ ಗೆದ್ದ ಇಬ್ಬರು ಸ್ಪರ್ಧಿಗಳು ಕಿರುತೆರೆಗೆ ರೀ ಎಂಟ್ರಿ ಕೊಡಲು ರೆಡಿ]]></title>
            <link>https://kannada.asianetnews.com/gallery/tv-talk/bigg-boss-season-12-contestants-dhruvanth-and-dhanush-ready-for-re-entry-8b1rkei</link>
            <guid isPermaLink="true">https://kannada.asianetnews.com/gallery/tv-talk/bigg-boss-season-12-contestants-dhruvanth-and-dhanush-ready-for-re-entry-8b1rkei</guid>
            <pubDate>Thu, 07 May 2026 22:45:10 +0530</pubDate>
            <description><![CDATA[&lt;p&gt;Bigg Boss Season 12ರಲ್ಲಿ ಕಠಿಣ ಸ್ಪರ್ಧೆಯನ್ನು ನೀಡುವ ಮೂಲಕ ಕೊನೆಯ ದಿನದ ತನಕ ಬಿಗ್ ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳಾದ ಧ್ರುವಂತ್ ಮತ್ತು ಧನುಷ್ ಗೌಡ ಇಬ್ಬರೂ ಸಹ ಮತ್ತೆ ಕಿರುತೆರೆಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1pavhwp0byc64satrser2g,imgname-bigg-boss-season-12-1778173439547.jpg" type="image/jpeg" height="390" width="690"/>
            <content:encoded><![CDATA[&lt;p&gt;Bigg Boss Season 12ರಲ್ಲಿ ಕಠಿಣ ಸ್ಪರ್ಧೆಯನ್ನು ನೀಡುವ ಮೂಲಕ ಕೊನೆಯ ದಿನದ ತನಕ ಬಿಗ್ ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳಾದ ಧ್ರುವಂತ್ ಮತ್ತು ಧನುಷ್ ಗೌಡ ಇಬ್ಬರೂ ಸಹ ಮತ್ತೆ ಕಿರುತೆರೆಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಧ್ರುವಂತ್ ಮತ್ತು ಧನುಷ್ ಗೌಡ ಇಬ್ಬರೂ ಕೂಡ ಈ ವರ್ಷದ ಬಿಗ್ ಬಾಸ್ ಸೀಸನ್ 12 ರಲ್ಲಿ ಸ್ಪರ್ಧಿಸಿದ್ದ ಸ್ಪರ್ಧಿಗಳು. ಇಬ್ಬರೂ ಕೊನೆಯ ದಿನದವರೆಗೂ ಇಬ್ಬರು ಮನರಂಜನೆ, ಸ್ಪರ್ಧೆ ನೀಡುತ್ತಾ, ಮಿಂಚಿದ್ದರು. ಇದೀಗ ಇಬ್ಬರೂ ಕೂಡ ಕಿರುತೆರೆಗೆ ಕಂ ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಗೀತಾ ಧಾರಾವಾಹಿಯಲ್ಲಿ ಅಹಂಕಾರಿ ನಾಯಕ ವಿಜಯ್ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದವರು ಧನುಷ್ ಗೌಡ. ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಇದು ಮುಗಿಯುತ್ತಿದ್ದಂತೆ, &lsquo;ನೂರು ಜನ್ಮಕೂ&rsquo; ಧಾರಾವಾಹಿಯಲ್ಲಿ ಧನುಷ್ ನಟಿಸಿದ್ದರು. ಬಳಿಕ ಆ ಧಾರಾವಾಹಿಯಿಂದ ಅರ್ಧದಲ್ಲಿ ಹೊರ ಬಂದಿದ್ದರು.&lt;/p&gt;&lt;img&gt;&lt;p&gt;ಧನುಷ್ ಗೌಡ ನಾಯಕನಾಗಿ ಶೀಘ್ರದಲ್ಲಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಯಾವ ಧಾರಾವಾಹಿ? ಯಾವ ವಾಹಿನಿಯ ಮೂಲಕ ಮತ್ತೆ ಬರುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲ. ಕೆಲವರು ಜಗಧಾತ್ರಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಉದಯವಾಹಿನಿ ಅಥವಾ ಸ್ಟಾರ್ ಸುವರ್ಣ ವಾಹಿನಿ ಮೂಲಕ ಬರ್ತಿದ್ದಾರೆ ಎನ್ನುತ್ತಿದ್ದಾರೆ.&lt;/p&gt;&lt;img&gt;&lt;p&gt;ಚರಿತ್ ಬಾಳಪ್ಪ, ಕನ್ನಡ ಹಾಗೂ ತೆಲುಗು ಸೀರಿಯಲ್ ನಟ. ಎಂಟಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಧ್ರುವಂತ್ ನಟಿಸಿದ್ದಾರೆ. ಮುದ್ದು ಲಕ್ಷ್ಮೀ ಧಾರಾವಾಹಿಯ ಧ್ರುವಂತ್ ಪಾತ್ರ ಜನಪ್ರಿಯತೆ ಪಡೆದು, ಅದೇ ಹೆಸರನ್ನು ಧ್ರುವಂತ್ ಆಗಿ ಬದಲಾಯಿಸಿದರು. ಬಳಿಕ ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದರು.&lt;/p&gt;&lt;img&gt;&lt;p&gt;ಶೀಘ್ರದಲ್ಲೇ ಶುರುವಾಗಲಿರುವ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಧ್ರುವಂತ್ ನಟಿಸಲಿದ್ದಾರೆ. ಶಮಂತ್ ಬ್ರೋ ಗೌಡ ಹಾಗೂ ವರ್ಷಿಣಿ ಗೌಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಧ್ರುವಂತ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದು, ಇದು ವಿಲನ್ ಪಾತ್ರವೇ ಆಗಿರಬಹುದು.&lt;/p&gt;&lt;img&gt;&lt;p&gt;ಬಿಗ್ ಬಾಸ್ ಸ್ಪರ್ಧಿಗಳೆಲ್ಲಾ, ಒಂದಲ್ಲ ಒಂದು ಸೀರಿಯಲ್ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ.ಇದೀಗ ಧ್ರುವಂತ್ ಮತ್ತು ಧನುಷ್ ಗೌಡ ಕಂ ಬ್ಯಾಕ್ ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ ಗಿಲ್ಲಿ ಅಭಿಮಾನಿಗಳು ಮಾತ್ರ ಧನುಷ್ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಕಾರುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/bigg-boss-season-12-contestants-dhruvanth-and-dhanush-ready-for-re-entry-8b1rkei"/>
        </item>
        <item>
            <title><![CDATA['ಡಬಡಿ ಡಿಬಿಡಿ' ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಊರ್ವಶಿ: ಬಾಲಯ್ಯರನ್ನ 'ಹೀಗೆ' ಕರೆದ ನಟಿ!]]></title>
            <link>https://kannada.asianetnews.com/entertainment/urvashi-rautela-defends-balakrishna-amid-dabidi-dibidi-song-controversy-gvd/articleshow-5o6adrp</link>
            <guid isPermaLink="true">https://kannada.asianetnews.com/entertainment/urvashi-rautela-defends-balakrishna-amid-dabidi-dibidi-song-controversy-gvd/articleshow-5o6adrp</guid>
            <pubDate>Fri, 08 May 2026 00:26:27 +0530</pubDate>
            <description><![CDATA[&lt;p&gt;'ಡಾಕು ಮಹಾರಾಜ್' ಚಿತ್ರದ 'ಡಬಡಿ ಡಿಬಿಡಿ' ಹಾಡಿನ ವಿವಾದದ ಬಗ್ಗೆ ನಟಿ ಊರ್ವಶಿ ರೌಟೇಲಾ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ನಂದಮೂರಿ ಬಾಲಕೃಷ್ಣ ಜೊತೆ ಕೆಲಸ ಮಾಡಿದ ಅನುಭವವನ್ನೂ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1rxwz68gabhg8dehrjbpbf,imgname-m-1778176160742.png" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ 'ರೇಡಿಯೋ ನಶಾ' ಜೊತೆ ಮಾತನಾಡಿದ ಊರ್ವಶಿ ರೌಟೇಲಾ, 'ಡಾಕು ಮಹಾರಾಜ್' ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು. ಸಿನಿಮಾ ಮತ್ತು ನಟನ ಬಗ್ಗೆ ಆನ್&zwnj;ಲೈನ್&zwnj;ನಲ್ಲಿ ಚರ್ಚೆಗಳಿದ್ದರೂ, ಆ ಅನುಭವ ಖುಷಿ ಕೊಟ್ಟಿತ್ತು ಎಂದಿದ್ದಾರೆ. ಚಿತ್ರದ ಆ್ಯಕ್ಷನ್ ಸೀನ್&zwnj;ಗಳನ್ನು ಮೆಚ್ಚಿಕೊಂಡ ನಟಿ, ಬಾಲಕೃಷ್ಣ ಸೆಟ್&zwnj;ನಲ್ಲಿ ಸಖತ್ ಎನರ್ಜಿ ತರುತ್ತಿದ್ದರು ಎಂದರು.&lt;/p&gt;&lt;p&gt;ಅವರ ಪ್ರಕಾರ, ಬಾಲಕೃಷ್ಣ ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ, ಉತ್ಸಾಹಭರಿತ ವ್ಯಕ್ತಿಯಾಗಿದ್ದರು. 'ಡಬಡಿ ಡಿಬಿಡಿ' ಹಾಡು ರಿಲೀಸ್ ಆದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಯಿತು. ಅನೇಕರು ಹಾಡಿನ ಕೊರಿಯೋಗ್ರಫಿಯನ್ನು ಟೀಕಿಸಿದರು. ಜೊತೆಗೆ, ನಂದಮೂರಿ ಬಾಲಕೃಷ್ಣ ಮತ್ತು ಊರ್ವಶಿ ರೌಟೇಲಾ ನಡುವಿನ ವಯಸ್ಸಿನ ಅಂತರವನ್ನು ಕೂಡ ಪ್ರಸ್ತಾಪಿಸಿದರು.&lt;/p&gt;&lt;p&gt;ಈ ವಿವಾದದ ಬಗ್ಗೆ ಮಾತನಾಡಿದ ಊರ್ವಶಿ, ಆನ್&zwnj;ಲೈನ್&zwnj;ನಲ್ಲಿ ಚರ್ಚೆಗಳು ಒಂದರ ಮೇಲೊಂದರಂತೆ ಬೆಳೆದು ದೊಡ್ಡದಾಯಿತು ಎಂದು ಹೇಳಿದರು. ಇಷ್ಟೆಲ್ಲಾ ಟೀಕೆಗಳ ನಡುವೆಯೂ, 'ಡಾಕು ಮಹಾರಾಜ್' ಚಿತ್ರದಲ್ಲಿ ಈ ಹಾಡನ್ನು ಉಳಿಸಿಕೊಳ್ಳಲಾಯಿತು ಮತ್ತು ಇದು ಎಲ್ಲೆಡೆ ಗಮನ ಸೆಳೆಯಿತು. ಬಾಲಕೃಷ್ಣ ಅವರ ಸಾರ್ವಜನಿಕ ವರ್ತನೆಯ ವೈರಲ್ ಕ್ಲಿಪ್&zwnj;ಗಳಿಂದಾಗಿ, ಅವರ ಬಗ್ಗೆ ಇರುವ ಅಭಿಪ್ರಾಯದ ಬಗ್ಗೆಯೂ ಊರ್ವಶಿ ಮಾತನಾಡಿದರು.&lt;img&gt;&lt;/p&gt;&lt;h2&gt;&lt;strong&gt;ಮಗುವಿನಂಥ ಮನಸ್ಸಿನವರು&lt;/strong&gt;&lt;/h2&gt;&lt;p&gt;ನೋಡಲು ಅವರು ಗಂಭೀರವಾಗಿ ಕಂಡರೂ, ನಿಜ ಜೀವನದಲ್ಲಿ ಹಾಗಲ್ಲ ಎಂದರು. ಅವರನ್ನು 'ಮಗುವಿನಂಥ ಮನಸ್ಸಿನವರು' ಮತ್ತು 'ಸೂಪರ್ ಎನರ್ಜಿಟಿಕ್' ಎಂದು ಬಣ್ಣಿಸಿದ ನಟಿ, ಅವರು ತುಂಬಾ ಕರುಣೆ ಮತ್ತು ಸರಳ ವ್ಯಕ್ತಿ ಎಂದು ಹೇಳಿದರು. ಕಳೆದ ವರ್ಷ ವ್ಯಾಲೆಂಟೈನ್ಸ್ ಡೇ ದಿನ ತನಗೆ ಮೊದಲು ವಿಶ್ ಮಾಡಿದ್ದೇ ಬಾಲಕೃಷ್ಣ ಎಂದು ಊರ್ವಶಿ ನೆನಪಿಸಿಕೊಂಡರು. ಅವರಿಗೆ ಮಕ್ಕಳೊಂದಿಗೆ ಇರುವುದು ಇಷ್ಟ, ಆನ್&zwnj;ಲೈನ್&zwnj;ನಲ್ಲಿ ಕಾಣುವ ಗಂಭೀರ ವ್ಯಕ್ತಿಗಿಂತ ಅವರು ಹೆಚ್ಚು ಸ್ನೇಹಮಯಿ ಎಂದಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/urvashi-rautela-defends-balakrishna-amid-dabidi-dibidi-song-controversy-gvd/articleshow-5o6adrp"/>
        </item>
        <item>
            <title><![CDATA[ನಾನೇನು ಸಾಧು ಅಲ್ಲ, ಕೆಟ್ಟ ಮಾತು ನನಗೂ ಬರುತ್ತೆ: ಪುಷ್ಪ ನಟಿ ಅನಸೂಯಾ!]]></title>
            <link>https://kannada.asianetnews.com/webstories/entertainment/anasuya-bharadwaj-shares-cryptic-post-about-vulgar-language-gvd-rkghgrl</link>
            <guid isPermaLink="true">https://kannada.asianetnews.com/webstories/entertainment/anasuya-bharadwaj-shares-cryptic-post-about-vulgar-language-gvd-rkghgrl</guid>
            <pubDate>Thu, 07 May 2026 22:51:24 +0530</pubDate>
            <description><![CDATA[ನಟಿ ಅನಸೂಯಾ ಭಾರದ್ವಾಜ್ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಅಚ್ಚರಿಯ ಪೋಸ್ಟ್&zwnj; ಒಂದನ್ನು ಹಂಚಿಕೊಂಡಿದ್ದಾರೆ. ಅಶ್ಲೀಲ ಪದಗಳ ಕುರಿತಾದ ವಿಡಿಯೋವೊಂದನ್ನು ಶೇರ್&zwnj; ಮಾಡಿದ್ದು, ಇದರಲ್ಲಿ ಅವರು ಹೇಳಿದ್ದೇನು?]]></description>
            <media:content url="https://static.asianetnews.com/images/w-1280,h-720,format-jpg,imgid-01kbqnm602s8a0x5jqqceqdf45,imgname-anasuya-bharadwaj-5--2--1764952250370.jpg" type="image/jpeg" height="390" width="690"/>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/entertainment/anasuya-bharadwaj-shares-cryptic-post-about-vulgar-language-gvd-rkghgrl"/>
        </item>
        <item>
            <title><![CDATA[ಹೀರೋ ಜೊತೆ ಕಿಸ್ಸಿಂಗ್ ಸೀನ್, ಶ್ರೀದೇವಿಗೆ ಮೋಸ ಮಾಡಿದ ನಿರ್ದೇಶಕ: ಕೋರ್ಟ್‌ ಮೆಟ್ಟಿಲೇರಿದ್ದ ನಟಿ!]]></title>
            <link>https://kannada.asianetnews.com/entertainment/actress-sridevi-kiss-scene-controversy-director-used-body-double-gvd/articleshow-2b0aovo</link>
            <guid isPermaLink="true">https://kannada.asianetnews.com/entertainment/actress-sridevi-kiss-scene-controversy-director-used-body-double-gvd/articleshow-2b0aovo</guid>
            <pubDate>Thu, 07 May 2026 22:26:07 +0530</pubDate>
            <description><![CDATA[&lt;p&gt;ಈಗಿನ ಸಿನಿಮಾಗಳಲ್ಲಿ ಕಿಸ್ಸಿಂಗ್, ಹಾಟ್ ರೊಮ್ಯಾಂಟಿಕ್ ದೃಶ್ಯಗಳು ಕಾಮನ್. ಆದರೆ ಒಂದು ಕಾಲದಲ್ಲಿ ಹೀರೋಯಿನ್&zwnj;ಗಳು ಈ ವಿಚಾರದಲ್ಲಿ ತುಂಬಾನೇ ಸ್ಟ್ರಿಕ್ಟ್ ಆಗಿದ್ದರು. ಒಮ್ಮೆ ಮುತ್ತಿನ ದೃಶ್ಯದ ವಿಚಾರಕ್ಕೆ ಅತಿಲೋಕ ಸುಂದರಿ ಶ್ರೀದೇವಿ ಕೋರ್ಟ್&zwnj; ಮೆಟ್ಟಿಲೇರಿದ್ದರು. ಅಷ್ಟಕ್ಕೂ ಅಂದು ನಡೆದಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jdcfsmddf1we3wfqbmz6vpg1,imgname-actress-sridevi.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಗಿನ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಸರ್ವೇಸಾಮಾನ್ಯ. ಎಷ್ಟೇ ಸಂಪ್ರದಾಯಸ್ಥ ಸಿನಿಮಾ ಆದರೂ ಒಂದಾದರೂ ಅಂತಹ ದೃಶ್ಯ ಇರಲೇಬೇಕು. ಆದರೆ ಒಂದು ಕಾಲದಲ್ಲಿ ಪರಿಸ್ಥಿತಿ ಬೇರೆಯೇ ಇತ್ತು. ಮುತ್ತಿನ ದೃಶ್ಯಗಳು, ರೊಮ್ಯಾಂಟಿಕ್ ಸೀನ್&zwnj;ಗಳು ಬಹಳ ವಿರಳವಾಗಿದ್ದವು. ಅದೂ ನಾಯಕಿಯ ಒಪ್ಪಿಗೆ ಇದ್ದರೆ ಮಾತ್ರ ನಿರ್ದೇಶಕರು ಚಿತ್ರೀಕರಿಸುತ್ತಿದ್ದರು. ಅವರ ಅನುಮತಿಯಿಲ್ಲದೆ ಇಂತಹ ದೃಶ್ಯಗಳನ್ನು ತೆಗೆಯುವ ಸಾಹಸ ಮಾಡುತ್ತಿರಲಿಲ್ಲ. ಆದರೆ ಒಂದು ಸಿನಿಮಾದಲ್ಲಿ ಅತಿಲೋಕ ಸುಂದರಿ ಶ್ರೀದೇವಿಗೆ ತಿಳಿಯದಂತೆ ಅವರ ಕಿಸ್ಸಿಂಗ್ ಸೀನ್ ತೆಗೆದು ಸಿನಿಮಾದಲ್ಲಿ ಹಾಕಲಾಗಿತ್ತು. ಅದು ಹೇಗೆ ಸಾಧ್ಯವಾಯಿತು? ಈ ಬಗ್ಗೆ ಶ್ರೀದೇವಿ ಏನು ಮಾಡಿದರು ಗೊತ್ತಾ?&lt;/p&gt;&lt;p&gt;ಭಾರತೀಯ ಚಿತ್ರರಂಗದಲ್ಲಿ ಅತಿಲೋಕ ಸುಂದರಿ ಎಂದೇ ಶ್ರೀದೇವಿ ಖ್ಯಾತಿ ಗಳಿಸಿದ್ದರು. ತಮ್ಮ ನಟನೆ ಮತ್ತು ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ತಮ್ಮ ಸಿನಿ ಬದುಕಿನಲ್ಲಿ ಅನೇಕ ಅದ್ಭುತ ಚಿತ್ರಗಳಲ್ಲಿ ನಟಿಸಿದ ಅವರು, ಸಿನಿಮಾಗಳ ವಿಚಾರದಲ್ಲಿ ಬಹಳ ಜಾಗರೂಕರಾಗಿದ್ದರು. ಮೌಲ್ಯಗಳ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ನಟಿಯಾಗಿ ಶ್ರೀದೇವಿ ಗುರುತಿಸಿಕೊಂಡಿದ್ದರು. ಹೀರೋಗಳೊಂದಿಗೆ ತೆರೆಯ ಮೇಲೆ ಅತಿಯಾದ ರೊಮ್ಯಾನ್ಸ್ ಮಾಡಲು ಅವರು ಒಪ್ಪುತ್ತಿರಲಿಲ್ಲ. ಮುತ್ತಿನ ದೃಶ್ಯಗಳ ವಿಷಯದಲ್ಲೂ ಮಿತಿ ಇಟ್ಟುಕೊಂಡಿದ್ದರು. ಆದರೆ 1989ರಲ್ಲಿ ಬಿಡುಗಡೆಯಾದ 'ಗುರು' ಸಿನಿಮಾ ಶೂಟಿಂಗ್ ವೇಳೆ ಒಂದು ಘಟನೆ ನಡೆಯಿತು. ಅವರ ಅನುಮತಿಯಿಲ್ಲದೆ ಮುತ್ತಿನ ದೃಶ್ಯವೊಂದು ಸಿನಿಮಾಗೆ ಸೇರಿಹೋಯಿತು.&lt;/p&gt;&lt;p&gt;'ಗುರು' ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ನಾಯಕರಾಗಿ ನಟಿಸಿದ್ದರು. ಅವರೊಂದಿಗೆ ಒಂದು ಕಿಸ್ಸಿಂಗ್ ದೃಶ್ಯದಲ್ಲಿ ನಟಿಸುವಂತೆ ನಿರ್ದೇಶಕ ಉಮೇಶ್ ಮೆಹ್ರಾ ಶ್ರೀದೇವಿಯವರನ್ನು ಕೇಳಿಕೊಂಡರು. ಆದರೆ, ತನಗೆ ಪರಿಚಯವಿಲ್ಲದ ವ್ಯಕ್ತಿಯೊಂದಿಗೆ ಅಂತಹ ದೃಶ್ಯದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಶ್ರೀದೇವಿ ನಿರ್ದೇಶಕರಿಗೆ ಬಹಳ ವಿನಯದಿಂದ ಹೇಳಿದರು. ಅಷ್ಟೇ ಅಲ್ಲ, ಅವರ ನಿರ್ಧಾರವನ್ನು ನಾಯಕ ಮಿಥುನ್ ಚಕ್ರವರ್ತಿ ಕೂಡ ಗೌರವಿಸಿದರು. ಆದರೆ ನಿರ್ದೇಶಕರು ಮಾತ್ರ ಆ ದೃಶ್ಯ ಇರಲೇಬೇಕು ಎಂದು ಪಟ್ಟು ಹಿಡಿದಿದ್ದರು.&lt;img&gt;&lt;/p&gt;&lt;p&gt;ಮುತ್ತಿನ ದೃಶ್ಯಕ್ಕೆ ಶ್ರೀದೇವಿ ಒಪ್ಪದಿದ್ದಾಗ, ನಿರ್ದೇಶಕ ಉಮೇಶ್ ಮೆಹ್ರಾ ಸುಮ್ಮನಾಗಲಿಲ್ಲ. ಅವರು ಶ್ರೀದೇವಿಗೆ ತಿಳಿಯದಂತೆ ಬಾಡಿ ಡಬಲ್ ಬಳಸಿ ಆ ಕಿಸ್ಸಿಂಗ್ ದೃಶ್ಯವನ್ನು ಚಿತ್ರೀಕರಿಸಿದರು. ಆ ದೃಶ್ಯವನ್ನು ಸಿನಿಮಾದಲ್ಲಿ ಸೇರಿಸಿದರು. ಅಷ್ಟೇ ಅಲ್ಲ, ಆ ದೃಶ್ಯದಲ್ಲಿ ನಾನೇ ನಟಿಸಿದ್ದೇನೆ ಎಂದು ಶ್ರೀದೇವಿಯೇ ಹೇಳಿದ್ದಾರೆ ಎಂಬ ಪ್ರಚಾರವನ್ನೂ ಮಾಡಿಸಿದರು. ಈ ವಿಷಯ ಶ್ರೀದೇವಿಗೆ ತಲುಪಿದಾಗ ವಿವಾದ ಮತ್ತಷ್ಟು ದೊಡ್ಡದಾಯಿತು.&lt;/p&gt;&lt;p&gt;ಸಿನಿಮಾ ಬಿಡುಗಡೆಗೂ ಮುನ್ನ ಈ ವಿಷಯ ತಿಳಿದ ಶ್ರೀದೇವಿ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಿರ್ದೇಶಕ ಉಮೇಶ್ ಮೆಹ್ರಾ ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ತಕ್ಷಣ ಆ ದೃಶ್ಯವನ್ನು ತೆಗೆದುಹಾಕುವಂತೆ ಒತ್ತಾಯಿಸಿದರು. ವಕೀಲರಾಗಿದ್ದ ಶ್ರೀದೇವಿ ತಂದೆ ಈ ಘಟನೆ ಬಗ್ಗೆ ಕಾನೂನು ಕ್ರಮಕ್ಕೂ ಸಿದ್ಧರಾದರು. ಈ ವಿವಾದದಿಂದಾಗಿ ಚಿತ್ರದ ಬಿಡುಗಡೆಯೂ ತಡವಾಯಿತು. ವಿವಾದ ತಾರಕಕ್ಕೇರುತ್ತಿದ್ದಂತೆ, ನಿರ್ದೇಶಕ ಉಮೇಶ್ ಮೆಹ್ರಾ ಆ ಮುತ್ತಿನ ದೃಶ್ಯವನ್ನು ತೆಗೆದುಹಾಕಿದರೆಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ..&lt;/strong&gt;&lt;/h2&gt;&lt;p&gt;ಹಿಂದೆ ಒಂದು ಸಂದರ್ಭದಲ್ಲಿ ಈ ವಿಷಯವನ್ನು ನೆನಪಿಸಿಕೊಂಡ ಶ್ರೀದೇವಿ, ಇದು ತಮ್ಮ ಸಿನಿ ಬದುಕಿನ ಒಂದು ದುಃಸ್ವಪ್ನ ಎಂದು ಹೇಳಿದ್ದರು. ತಮ್ಮ ವೃತ್ತಿಜೀವನದಲ್ಲಿ ಆ ಸಿನಿಮಾದಿಂದ ಅತ್ಯಂತ ಕೆಟ್ಟ ಅನುಭವವಾಯಿತು ಎಂದು ಶ್ರೀದೇವಿ ತಿಳಿಸಿದ್ದರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶ್ರೀದೇವಿ, ಬಾಲಿವುಡ್&zwnj;ಗೆ ಪ್ರವೇಶಿಸಿ ಅಲ್ಲಿಯೂ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. ಲೇಡಿ ಸೂಪರ್&zwnj;ಸ್ಟಾರ್ ಆಗಿ ಬೆಳೆದರು. 54ನೇ ವಯಸ್ಸಿನಲ್ಲಿ ಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾದರು. ಪ್ರಸ್ತುತ ಶ್ರೀದೇವಿಯವರ ಪುತ್ರಿ ಜಾನ್ವಿ ಕಪೂರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/actress-sridevi-kiss-scene-controversy-director-used-body-double-gvd/articleshow-2b0aovo"/>
        </item>
        <item>
            <title><![CDATA[ವಿಜಯ್‌ ಗೆಲುವಿನ ಬಳಿಕ ತ್ರಿಷಾ ರಾಜಕೀಯಕ್ಕೆ ಎಂಟ್ರಿ? ತಲೈವಾ ಪಾಲಿಟಿಕ್ಸ್‌ನಲ್ಲಿ ಹೊಸ ಟ್ವಿಸ್ಟ್!]]></title>
            <link>https://kannada.asianetnews.com/entertainment/trisha-krishnan-rumored-for-political-debut-in-vijay-tvk-bypoll-race-gvd/articleshow-dx1yacz</link>
            <guid isPermaLink="true">https://kannada.asianetnews.com/entertainment/trisha-krishnan-rumored-for-political-debut-in-vijay-tvk-bypoll-race-gvd/articleshow-dx1yacz</guid>
            <pubDate>Thu, 07 May 2026 19:45:52 +0530</pubDate>
            <description><![CDATA[&lt;p&gt;ದಳಪತಿ ವಿಜಯ್ ಅವರ ರಾಜಕೀಯದ ಮೊದಲ ಹೆಜ್ಜೆ ಭರ್ಜರಿ ಯಶಸ್ಸು ಕಂಡಿದೆ. ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1cpn6k599smyewr99qszz3,imgname-vjkm-1778163340499.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳು ಸೂಪರ್&zwnj;ಸ್ಟಾರ್ ದಳಪತಿ ವಿಜಯ್ ಅವರ ಪಕ್ಷ ಟಿವಿಕೆ, ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದು ದೊಡ್ಡ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ, ವಿಜಯ್ ಅವರು ನಟಿ ತ್ರಿಷಾ ಕೃಷ್ಣನ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನದಲ್ಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದಿಂದ ತ್ರಿಷಾ ಅವರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಟಿವಿಕೆ ಪಕ್ಷ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ.&lt;/p&gt;&lt;p&gt;ದಳಪತಿ ವಿಜಯ್ ಅವರ ರಾಜಕೀಯದ ಮೊದಲ ಹೆಜ್ಜೆ ಭರ್ಜರಿ ಯಶಸ್ಸು ಕಂಡಿದೆ. ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈಗ ವಿಜಯ್ ಗೆಲುವಿನ ನಡುವೆಯೇ ಮತ್ತೊಂದು ದೊಡ್ಡ ಚರ್ಚೆ ಶುರುವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ನಟಿ ತ್ರಿಷಾ ಕೃಷ್ಣನ್ ಕೂಡ ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಬಹುದು. ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ವಿಜಯ್ ಮತ್ತು ಟಿವಿಕೆ ನಾಯಕರು ತ್ರಿಷಾ ಅವರನ್ನು ಮನವೊಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ತ್ರಿಷಾಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಸದ್ಯಕ್ಕೆ ರಾಜಕೀಯಕ್ಕೆ ಬರುವ ಬಗ್ಗೆ ಅವರಿಗೆ ಅಷ್ಟೊಂದು ಆಸಕ್ತಿ ಇಲ್ಲ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ತ್ರಿಷಾಗೆ ಸಿಗುತ್ತಾ ಅವಕಾಶ?&lt;/strong&gt;&lt;/p&gt;&lt;p&gt;ವರದಿಗಳ ಪ್ರಕಾರ, ದಳಪತಿ ವಿಜಯ್ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಗೆಲುವು ಸಾಧಿಸಿದ್ದಾರೆ. ಒಂದು ಚೆನ್ನೈನ ಪೆರಂಬೂರ್ ಮತ್ತು ಇನ್ನೊಂದು ತಿರುಚಿರಾಪಳ್ಳಿ ಪೂರ್ವ. ನಿಯಮಗಳ ಪ್ರಕಾರ, ಅವರು ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ 14 ದಿನಗಳೊಳಗೆ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಪೆರಂಬೂರ್ ಕ್ಷೇತ್ರದಲ್ಲಿ ವಿಜಯ್ ದೊಡ್ಡ ಅಂತರದಿಂದ ಗೆದ್ದಿದ್ದಾರೆ ಮತ್ತು ಆ ಕ್ಷೇತ್ರ ರಾಜ್ಯ ಸಚಿವಾಲಯಕ್ಕೆ ಹತ್ತಿರದಲ್ಲಿದೆ. ಹಾಗಾಗಿ, ಅವರು ಪೆರಂಬೂರ್ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆಗ ತಿರುಚಿರಾಪಳ್ಳಿ ಪೂರ್ವ ಕ್ಷೇತ್ರ ಖಾಲಿಯಾಗಲಿದ್ದು, ಅಲ್ಲಿ ಉಪಚುನಾವಣೆ ನಡೆಯಲಿದೆ. ಇದೇ ಕ್ಷೇತ್ರದಿಂದ ತ್ರಿಷಾ ಕೃಷ್ಣನ್ ಅವರನ್ನು ಕಣಕ್ಕಿಳಿಸುವ ಚರ್ಚೆ ಜೋರಾಗಿದೆ.&lt;/p&gt;&lt;p&gt;&lt;strong&gt;ತ್ರಿಷಾ ಸದ್ಯಕ್ಕೆ ರೆಡಿ ಇಲ್ಲ!&lt;/strong&gt;&lt;/p&gt;&lt;p&gt;ಮಾಧ್ಯಮ ವರದಿಗಳ ಪ್ರಕಾರ, ವಿಜಯ್ ಮತ್ತು ಟಿವಿಕೆಯ ಹಿರಿಯ ನಾಯಕರು ತ್ರಿಷಾ ಕೃಷ್ಣನ್ ಅವರನ್ನು ರಾಜಕೀಯಕ್ಕೆ ತರಲು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ತ್ರಿಷಾಗೆ ದೊಡ್ಡ ಅಭಿಮಾನಿ ಬಳಗ ಇರುವುದರಿಂದ, ಅವರು ಉಪಚುನಾವಣೆಯಲ್ಲಿ ಅಭ್ಯರ್ಥಿಯಾದರೆ ಪಕ್ಷಕ್ಕೆ ಲಾಭವಾಗಲಿದೆ ಎಂಬುದು ಟಿವಿಕೆ ಲೆಕ್ಕಾಚಾರ. ಆದರೆ, ತ್ರಿಷಾ ಸದ್ಯಕ್ಕೆ ರಾಜಕೀಯಕ್ಕೆ ಬರಲು ಪೂರ್ತಿಯಾಗಿ ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ. ಅವರಿಗೆ ರಾಜಕೀಯ ಅನುಭವ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಆದರೂ, ತ್ರಿಷಾ ಚುನಾವಣೆಗೆ ನಿಂತರೆ ಅದು ಟಿವಿಕೆ ಪಕ್ಷಕ್ಕೆ ದೊಡ್ಡ ರಾಜಕೀಯ ಶಕ್ತಿ ಮತ್ತು ಸ್ಟಾರ್ ಪವರ್ ತಂದುಕೊಡಲಿದೆ ಎಂದು ವಿಜಯ್ ಆಪ್ತರು ನಂಬಿದ್ದಾರೆ.&lt;/p&gt;&lt;h2&gt;&lt;strong&gt;ಈಗ ಸರ್ಕಾರ ರಚನೆಗೆ ತಯಾರಿ&lt;/strong&gt;&lt;/h2&gt;&lt;p&gt;ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118ಕ್ಕಿಂತ 10 ಸ್ಥಾನಗಳು ಕಡಿಮೆ ಇವೆ. ಹೀಗಾಗಿ, ಮೈತ್ರಿ ರಾಜಕಾರಣ ಬಹಳ ಮುಖ್ಯವಾಗಿದೆ. 59 ಸ್ಥಾನಗಳನ್ನು ಗೆದ್ದಿರುವ ಡಿಎಂಕೆ ಜೊತೆ ಟಿವಿಕೆ ಕೈಜೋಡಿಸಬಹುದು ಎಂದು ಕೆಲವು ವರದಿಗಳು ಹೇಳುತ್ತಿವೆ. ಮತ್ತೊಂದೆಡೆ, ಎಐಎಡಿಎಂಕೆ ಜೊತೆಗಿನ ಮೈತ್ರಿ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಸರ್ಕಾರ ರಚಿಸಲು ಅವಕಾಶ ಕೋರಿ ವಿಜಯ್ ಅವರು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಗಳು ಹೇಳಿವೆ. ಮೇ 7 ರಂದು ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/trisha-krishnan-rumored-for-political-debut-in-vijay-tvk-bypoll-race-gvd/articleshow-dx1yacz"/>
        </item>
        <item>
            <title><![CDATA[ನಟಿ ಜ್ಯೋತಿ ರೈ ದಿಢೀರನೇ ಆಸ್ಪತ್ರೆಗೆ ದಾಖಲು; ಸಿನಿಮಾ ರಿಲೀಸ್‌ಗೂ ಮುನ್ನ ಮತ್ತೆ ಪೆಟ್ಟು ಮಾಡಿಕೊಂಡ್ರಾ?]]></title>
            <link>https://kannada.asianetnews.com/gallery/tv-talk/actress-jyoti-rai-hospitalized-killer-movie-release-update-health-concern-sat-daomipa</link>
            <guid isPermaLink="true">https://kannada.asianetnews.com/gallery/tv-talk/actress-jyoti-rai-hospitalized-killer-movie-release-update-health-concern-sat-daomipa</guid>
            <pubDate>Thu, 07 May 2026 19:38:04 +0530</pubDate>
            <description><![CDATA[&lt;p&gt;ಕನ್ನಡತಿ ನಟಿ ಜ್ಯೋತಿ ರೈ ಅವರು 'ಕಿಲ್ಲರ್' ಸಿನಿಮಾ ಬಿಡುಗಡೆಗೂ ಮುನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್&zwnj;ನಲ್ಲಿ ಬಿದ್ದು ಗಾಯಗೊಂಡಿದ್ದಾರೆಯೇ ಅಥವಾ ಅನಾರೋಗ್ಯವೇ ಎಂಬ ಪ್ರಶ್ನೆ ಕೇಳಿಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1b5skwrvjq10fygzbp8ayp,imgname-jyoti-rai-hospitalized-1778161739387.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡತಿ ನಟಿ ಜ್ಯೋತಿ ರೈ ಅವರು 'ಕಿಲ್ಲರ್' ಸಿನಿಮಾ ಬಿಡುಗಡೆಗೂ ಮುನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್&zwnj;ನಲ್ಲಿ ಬಿದ್ದು ಗಾಯಗೊಂಡಿದ್ದಾರೆಯೇ ಅಥವಾ ಅನಾರೋಗ್ಯವೇ ಎಂಬ ಪ್ರಶ್ನೆ ಕೇಳಿಬಂದಿದೆ.&lt;/p&gt;&lt;img&gt;&lt;p&gt;ತೆಲುಗು ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ತಮ್ಮ ನಟನೆಯಿಂದ ಛಾಪು ಮೂಡಿಸಿರುವ ನಟಿ ಜ್ಯೋತಿ ರೈ (ಜ್ಯೋತಿ ಪೂರ್ವಾಜ್) ಅವರು, ಸದ್ಯ ತಮ್ಮ ಮುಂಬರುವ 'ಕಿಲ್ಲರ್' (KilleR) ಸಿನಿಮಾದ ಬಿಡುಗಡೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಸಿನಿಮಾ ಬಿಡುಗಡೆಗೂ ಮುನ್ನ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;ಜ್ಯೋತಿ ರೈ ಅವರು ತಮ್ಮ ಇನ್&zwnj;ಸ್ಟಾಗ್ರಾಂನಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲಿದ್ದ ಫೋಟೋವೊಂದನ್ನು ಹಂಚಿಕೊಂಡಿದ್ದು, 'Getting closer and closer to the release date. We&rsquo;ll announce it at the right time, considering the production houses involved in it. Meet RAI from KilleR #SuperSHE' ಎಂದು ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಹಿಂದೆಯೂ ಜ್ಯೋತಿ ರೈ ಅವರು ಸ್ಟಂಟ್ ಶೂಟಿಂಗ್ ಮಾಡುವಾಗ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಪುನಃ ಆಸ್ಪತ್ರೆಯಲ್ಲಿ ನೋಡುವುತ್ತಿರುವುದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ, ಅವರು ಯಾವ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.&lt;/p&gt;&lt;p&gt;ಇದು ಸಿನಿಮಾ ಚಿತ್ರೀಕರಣದ ಒಂದು ಭಾಗವೇ ಅಥವಾ ಶೂಟಿಂಗ್&zwnj;ನಲ್ಲಿ ಬಿದ್ದು ಗಾಯಗೊಂಡಿದ್ದಾರೆಯೇ ಅಥವಾ ಅನಾರೋಗ್ಯವೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಆಸ್ಪತ್ರೆಯಲ್ಲಿದ್ದರೂ ಮುಖದ ಮೇಲೆ ಮೇಕಪ್&zwnj; ಹಾಕಿಕೊಂಡು ಪೋಸ್ ಕೊಟ್ಟಿರುವುದನ್ನು ನೋಡಿದರೆ ಇದು ಸಿನಿಮಾ ಶೂಟಿಂಗ್&zwnj;ನ ಒಂದು ಭಾಗವೇಆಗಿರಬೇಕು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;'ಕಿಲ್ಲರ್' ಸಿನಿಮಾ ಈಗಾಗಲೇ ಫೆಬ್ರವರಿ 22ರಂದು ಟೀಸರ್ ಬಿಡುಗಡೆ ಮಾಡಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಇದೀಗ ಸಿನಿಮಾ ಬಿಡುಗಡೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಈ ಚಿತ್ರದಲ್ಲಿ ಜ್ಯೋತಿ ರೈ ಅವರು 'ರೈ' (RAI) ಎಂಬ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಈ ಸಿನಿಮಾದ ಟೀಸರ್&zwnj;ನಲ್ಲಿ ನಟಿ ತುಂಬಾ ಹಾಟ್ ಆಗಿ ಹಾಗೂ ಸಾಂಪ್ರದಾಯಿಕವಾಗಿಯೂ ಕಾಣಿಸಿಕೊಂಡಿದ್ದಾರೆ. ಅಂದರೆ, ಆಧುನಿಕ ಉಡುಪು ಹಾಗೂ ಸೀರೆಗಳಲ್ಲಿಯೂ ಅವರ ಪಾತ್ರ ವಿಭಿನ್ನವಾಗಿ ಮೂಡಿಬರಲಿದೆ ಎಂಬುದು ಕಂಡುಬರುತ್ತಿದೆ. #SuperSHE ಎಂಬ ಹ್ಯಾಶ್&zwnj;ಟ್ಯಾಗ್ ಬಳಸಲಾಗಿರುವುದರಿಂದ, ಇದು ಮಹಿಳಾ ಪ್ರಧಾನ ಅಥವಾ ಶಕ್ತಿಶಾಲಿ ಪಾತ್ರವೆಂದು ಊಹಿಸಲಾಗಿದೆ.&lt;/p&gt;&lt;img&gt;&lt;p&gt;ಮೂಲತಃ ಕರ್ನಾಟಕದವರಾದ ಜ್ಯೋತಿ ರೈ, ತೆಲುಗು ಕಿರುತೆರೆಯಲ್ಲಿ ಯಶಸ್ಸು ಕಂಡ ನಂತರ ಈಗ ಸಿನಿಮಾ ರಂಗದಲ್ಲೂ ಸಕ್ರಿಯರಾಗಿದ್ದಾರೆ. ಅವರ ವೈಯಕ್ತಿಕ ಜೀವನದಲ್ಲಿಯೂ ಹಲವು ಏರಿಳಿತಗಳಾಗಿವೆ. ಮೊದಲ ಮದುವೆಯಿಂದ ವಿಚ್ಛೇದನ ಪಡೆದ ನಂತರ, ತೆಲುಗು ಚಿತ್ರರಂಗದ ನಿರ್ದೇಶಕ ಪೂರ್ವಜ್ ಅವರನ್ನು ಎರಡನೇ ವಿವಾಹವಾಗಿದ್ದಾರೆ. ಇದೀಗ ಅವರಿಗೆ ಕೈತುಂಬಾ ಸಿನಿಮಾಗಳಿವೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಜ್ಯೋತಿ ರೈ ಅವರು ತಮ್ಮ ಸುಂದರ ಫೋಟೋಗಳನ್ನು ಹಾಗೂ ಸಿನಿಮಾಗಳ ಅಪ್&zwnj;ಡೇಟ್&zwnj;ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹಂಚಿಕೊಳ್ಳುತ್ತಾ ಅಭಿಮಾನಿಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ. 'ಥಿಂಕ್ ಸಿನಿಮಾ' (Think Cinema) ಅಧಿಕೃತ ಪೇಜ್&zwnj;ನಲ್ಲಿ ಸಿನಿಮಾದ ಕುರಿತಾದ ವಿಶೇಷ ಮಾಹಿತಿ, ತೆರೆಮರೆಯ ದೃಶ್ಯಗಳು ಲಭ್ಯವಿರಲಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;ಸಿನಿಮಾ ಬಿಡುಗಡೆಗೂ ಮುನ್ನವೇ ನಟಿಯ ಆರೋಗ್ಯದ ಬಗ್ಗೆ ಸುದ್ದಿ ಹರಡಿರುವುದು ಕೊಂಚ ಆತಂಕ ಮೂಡಿಸಿದೆ. ಆದರೂ, ಅವರು ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ಭರವಸೆ ನೀಡಿರುವುದರಿಂದ, ಅಭಿಮಾನಿಗಳು ಅದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/actress-jyoti-rai-hospitalized-killer-movie-release-update-health-concern-sat-daomipa"/>
        </item>
        <item>
            <title><![CDATA[ಈ ಜನ್ಮದಲ್ಲಿ ಮತ್ತೆ ನಾನು 'ಬಿಗ್ ಬಾಸ್'ಗೆ ಹೋಗುವುದಿಲ್ಲ: ಸ್ಟಾರ್ ಆಂಕರ್ ಹೇಳಿಕೆ ಹಿಂದಿನ  ಸೀಕ್ರೆಟ್ ಹೊರಬಿತ್ತು!]]></title>
            <link>https://kannada.asianetnews.com/gallery/tv-talk/i-will-never-return-to-bigg-boss-in-this-lifetime-says-star-anchor-hariteja-in-shocking-statement-ayu3tyq</link>
            <guid isPermaLink="true">https://kannada.asianetnews.com/gallery/tv-talk/i-will-never-return-to-bigg-boss-in-this-lifetime-says-star-anchor-hariteja-in-shocking-statement-ayu3tyq</guid>
            <pubDate>Thu, 07 May 2026 19:33:48 +0530</pubDate>
            <description><![CDATA[&lt;p&gt;ರಿಯಾಲಿಟಿ ಶೋಗಳ ಲೋಕದಲ್ಲಿ 'ಬಿಗ್ ಬಾಸ್' ಅಂದ್ರೆ ಅದೊಂದು ಬಣ್ಣದ ಪ್ರಪಂಚ. ಇಲ್ಲಿ ಹೋದವರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ, ಕಳೆದುಹೋದ ಜನಪ್ರಿಯತೆಯನ್ನು ಮತ್ತೆ ಗಳಿಸುತ್ತಾರೆ ಎಂಬುದು ಜನರ ನಂಬಿಕೆ. ಆದರೆ, ಎಲ್ಲರಿಗೂ ಈ 'ಮನೆ' ಹೂವಿನ ಹಾಸಿಗೆಯಾಗಿರುವುದಿಲ್ಲ&hellip;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1bea700pz2cr6ehj23gvt8,imgname-hariteja-1778162018528.jpg" type="image/jpeg" height="390" width="690"/>
            <content:encoded><![CDATA[&lt;p&gt;ರಿಯಾಲಿಟಿ ಶೋಗಳ ಲೋಕದಲ್ಲಿ 'ಬಿಗ್ ಬಾಸ್' ಅಂದ್ರೆ ಅದೊಂದು ಬಣ್ಣದ ಪ್ರಪಂಚ. ಇಲ್ಲಿ ಹೋದವರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ, ಕಳೆದುಹೋದ ಜನಪ್ರಿಯತೆಯನ್ನು ಮತ್ತೆ ಗಳಿಸುತ್ತಾರೆ ಎಂಬುದು ಜನರ ನಂಬಿಕೆ. ಆದರೆ, ಎಲ್ಲರಿಗೂ ಈ 'ಮನೆ' ಹೂವಿನ ಹಾಸಿಗೆಯಾಗಿರುವುದಿಲ್ಲ&hellip;&lt;/p&gt;&lt;img&gt;&lt;p&gt;ಬಿಗ್ ಬಾಸ್ ಸಹವಾಸ ಸಾಕು ಸ್ವಾಮಿ! ಸ್ಟಾರ್ ಆಂಕರ್ ನೀಡಿದ ಶಾಕಿಂಗ್ ಹೇಳಿಕೆಯ ಹಿಂದಿದೆ ಕಣ್ಣೀರಿನ ಕಥೆ!&lt;/p&gt;&lt;p&gt;ರಿಯಾಲಿಟಿ ಶೋಗಳ ಲೋಕದಲ್ಲಿ 'ಬಿಗ್ ಬಾಸ್' (Bigg Boss) ಅಂದ್ರೆ ಅದೊಂದು ಬಣ್ಣದ ಪ್ರಪಂಚ. ಇಲ್ಲಿ ಹೋದವರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ, ಕಳೆದುಹೋದ ಜನಪ್ರಿಯತೆಯನ್ನು ಮತ್ತೆ ಗಳಿಸುತ್ತಾರೆ ಎಂಬುದು ಜನರ ನಂಬಿಕೆ. ಆದರೆ, ಎಲ್ಲರಿಗೂ ಈ 'ಮನೆ' ಹೂವಿನ ಹಾಸಿಗೆಯಾಗಿರುವುದಿಲ್ಲ. ಕೆಲವರಿಗೆ ಇದು ಅಕ್ಷರಶಃ ಮುಳ್ಳಿನ ಹಾದಿಯಾಗುತ್ತದೆ.&lt;/p&gt;&lt;img&gt;&lt;p&gt;ಅಂತಹದ್ದೇ ಒಂದು ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ ತೆಲುಗು ಮತ್ತು ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಖ್ಯಾತ ಆಂಕರ್ ಹರಿತೇಜಾ.&lt;/p&gt;&lt;p&gt;ಹರಿತೇಜಾ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ತಮ್ಮ ಚುರುಕಿನ ಮಾತು, ಗ್ಲಾಮರಸ್ ಲುಕ್ ಮತ್ತು ಅದ್ಭುತ ನಟನೆಯಿಂದ ಮನೆಮಾತಾದವರು.&lt;/p&gt;&lt;img&gt;&lt;p&gt;ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅವರು ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. &quot;ಈ ಜನ್ಮದಲ್ಲಿ ನಾನು ಮತ್ತೆಂದೂ ಬಿಗ್ ಬಾಸ್ ಮನೆಗೆ ಕಾಲಿಡುವುದಿಲ್ಲ!&quot; - ಈ ಮಾತು ಕೇಳಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಕಾಡಿನ ನಡುವೆ ಮೊದಲ ಸೀಸನ್: ಭಯಾನಕವಾದರೂ ಮಧುರ!&lt;/p&gt;&lt;p&gt;ಹರಿತೇಜಾ ಅವರಿಗೆ ಬಿಗ್ ಬಾಸ್ ಹೊಸತೇನಲ್ಲ. ಅವರು ಈ ಶೋನ ಮೊದಲ ಸೀಸನ್&zwnj;ನಲ್ಲೇ ಮಿಂಚಿದ್ದರು. ಆಗಿನ ಬಿಗ್ ಬಾಸ್ ಸೆಟ್ ಈಗಿನಂತೆ ಹೈದರಾಬಾದ್&zwnj;ನಲ್ಲಿ ಇರಲಿಲ್ಲ, ಬದಲಾಗಿ ಮುಂಬೈ ಸಮೀಪದ ಲೋನಾವಾಲಾದ ದಟ್ಟ ಕಾಡಿನ ಮಧ್ಯೆ ಇತ್ತು. &quot;ಆಗಿನ ದಿನಗಳೇ ಬೇರೆ, ರಾತ್ರಿಯಾದರೆ ಹುಲಿಗಳ ಘರ್ಜನೆ ಕೇಳುತ್ತಿತ್ತು, ಮನೆಯೊಳಗೆ ಹಾವುಗಳು ನುಗ್ಗುತ್ತಿದ್ದವು! ಅದೆಲ್ಲಾ ಭಯಾನಕವಾಗಿದ್ದರೂ, ಒಂದು ಅದ್ಭುತ ಸಾಹಸದಂತಿತ್ತು. ಅದರಲ್ಲೂ ಜೂನಿಯರ್ ಎನ್&zwnj;ಟಿಆರ್ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದು ಇಂದಿಗೂ ನನ್ನ ಜೀವನದ ಬಂಗಾರದಂತಹ ನೆನಪು&quot; ಎನ್ನುತ್ತಾರೆ ಹರಿತೇಜಾ.&lt;/p&gt;&lt;img&gt;&lt;p&gt;ಸೀಸನ್ 8 ಎಂಬ ಕೆಟ್ಟ ಕನಸು!&lt;/p&gt;&lt;p&gt;ಸರಿ, ಮೊದಲ ಸೀಸನ್ ಚೆನ್ನಾಗಿತ್ತು.. ಹಾಗಾದರೆ ಸಮಸ್ಯೆ ಎಲ್ಲಿ ಶುರುವಾಯಿತು? ಅಲ್ಲಿಗೆ ಬರುತ್ತದೆ 'ಸೀಸನ್ 8'ರ ಟ್ವಿಸ್ಟ್. ಕಳೆದ ಸೀಸನ್&zwnj;ನಲ್ಲಿ ಹರಿತೇಜಾ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಹೋಗಿದ್ದರು. ಆದರೆ ಈ ಎರಡನೇ ಬಾರಿ ಹೋದಾಗ ಪರಿಸ್ಥಿತಿ ತಲೆಕೆಳಗಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಅವರಿಗೆ ಸಿಕ್ಕಿದ್ದು ಚಪ್ಪಾಳೆಗಳಲ್ಲ, ಬದಲಾಗಿ ಟ್ರೋಲ್ ಮತ್ತು ಟೀಕೆಗಳ ಸುರಿಮಳೆ!&lt;/p&gt;&lt;img&gt;&lt;p&gt;&quot;ಆ ಮನೆಯೊಳಗೆ ನಡೆದ ಕೆಲವು ಘಟನೆಗಳು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತೆ ಮಾಡಿದವು. ಹೊರಬಂದಾಗ ಜನರ ನೆಗೆಟಿವ್ ಕಾಮೆಂಟ್&zwnj;ಗಳನ್ನು ನೋಡಿ ನಾನು ಅಕ್ಷರಶಃ ಕುಸಿದು ಹೋಗಿದ್ದೆ. ತೀವ್ರವಾದ ಖಿನ್ನತೆಗೆ (Depression) ಒಳಗಾಗಿದ್ದೆ. ಆ ನೋವಿನಿಂದ ಹೊರಬರಲು ನನಗೆ ಸುದೀರ್ಘ ಸಮಯ ಬೇಕಾಯಿತು&quot; ಎಂದು ಹರಿತೇಜಾ ಭಾವುಕರಾಗಿ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ಬಾಗಿಲು ಶಾಶ್ವತವಾಗಿ ಕ್ಲೋಸ್!&lt;/p&gt;&lt;p&gt;ಇಂದು ಹರಿತೇಜಾ ಅವರಿಗೆ ಬಿಗ್ ಬಾಸ್ ಎಂಬ ಹೆಸರೇ ಕಿರಿಕಿರಿ ಉಂಟುಮಾಡುತ್ತಿದೆಯಂತೆ. &quot;ಮನರಂಜನೆಯ ಹೆಸರಿನಲ್ಲಿ ಮನಸ್ಸಿನ ಶಾಂತಿ ಹಾಳುಮಾಡಿಕೊಳ್ಳಲು ನಾನು ಸಿದ್ಧವಿಲ್ಲ. ಅಂದು ನಾನು ಗೆದ್ದ ಪ್ರೀತಿಗಿಂತ, ಇಂದು ಅನುಭವಿಸಿದ ನೋವೇ ಹೆಚ್ಚಾಗಿದೆ. ಹಾಗಾಗಿ, ಈ ಜನ್ಮದಲ್ಲಿ ಮತ್ತೆ ಬಿಗ್ ಬಾಸ್ ಸಹವಾಸಕ್ಕೆ ಹೋಗುವುದಿಲ್ಲ&quot; ಎಂದು ಖಡಕ್ ಆಗಿ ನಿರ್ಧರಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/tv-talk/i-will-never-return-to-bigg-boss-in-this-lifetime-says-star-anchor-hariteja-in-shocking-statement-ayu3tyq"/>
        </item>
        <item>
            <title><![CDATA[2 ಕೋಟಿ ಸಾಲ ಕೇಳಲು ಹೋದ ಜೈದೇವ್‌ಗೆ ಬಿಗ್ ಶಾಕ್; ಕೂಗಿ ಕೂಗಿ ಕರೆದ್ರೂ ಕೇಳಲಿಲ್ಲ ದಿಯಾ ಬೇಬಿ]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-text-update-kd-jaidev-humiliated-in-bank-and-club-for-rs-2-crore-loan-mrq-gaxtw8o</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-text-update-kd-jaidev-humiliated-in-bank-and-club-for-rs-2-crore-loan-mrq-gaxtw8o</guid>
            <pubDate>Thu, 07 May 2026 19:33:38 +0530</pubDate>
            <description><![CDATA[ಎಲ್ಲವನ್ನೂ ಕಳೆದುಕೊಂಡಿರುವ ಜೈದೇವ್, 2 ಕೋಟಿ ಸಾಲಕ್ಕಾಗಿ ಬ್ಯಾಂಕ್ ಮತ್ತು ಕ್ಲಬ್&zwnj;ನಲ್ಲಿ ಅವಮಾನಕ್ಕೊಳಗಾಗುತ್ತಾನೆ. ಬಳಿಕ ಹೆಂಡತಿ ದಿಯಾ ಬೇಬಿ ಬಳಿ ಹಣಕ್ಕಾಗಿ ಜಗಳವಾಡಿ, ಆಕೆ ನೀಡಿದ ದೂರಿನ ಅನ್ವಯ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲು ಸೇರುತ್ತಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr1bfc0fpvryh6qbwpmfjpbs,imgname-amruthadhaare--5--1778162053135.jpg" type="image/jpeg" height="390" width="690"/>
            <content:encoded><![CDATA[ಎಲ್ಲವನ್ನೂ ಕಳೆದುಕೊಂಡಿರುವ ಜೈದೇವ್, 2 ಕೋಟಿ ಸಾಲಕ್ಕಾಗಿ ಬ್ಯಾಂಕ್ ಮತ್ತು ಕ್ಲಬ್&zwnj;ನಲ್ಲಿ ಅವಮಾನಕ್ಕೊಳಗಾಗುತ್ತಾನೆ. ಬಳಿಕ ಹೆಂಡತಿ ದಿಯಾ ಬೇಬಿ ಬಳಿ ಹಣಕ್ಕಾಗಿ ಜಗಳವಾಡಿ, ಆಕೆ ನೀಡಿದ ದೂರಿನ ಅನ್ವಯ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲು ಸೇರುತ್ತಾನೆ.&lt;img&gt;&lt;p&gt;ಎಲ್ಲವನ್ನು ಕಳೆದುಕೊಂಡಿರುವ ಜೈದೇವ್&zwnj;, ಮತ್ತೆ ಪುಟಿದೇಳಲು ಪ್ರಯತ್ನಿಸುತ್ತಿದ್ದಾನೆ. ಹಾಗಾಗಿ ಬ್ಯಾಂಕ್&zwnj;ವೊಂದರಲ್ಲಿ 2 ಕೋಟಿ ಸಾಲ ಕೇಳಲು ಜೈದೇವ್ ಹೋಗಿದ್ದಾನೆ. ಬ್ಯಾಂಕ್&zwnj; ಮ್ಯಾನೇಜರ್ ಹೇಳಿದ ಮಾತುಗಳನ್ನು ಕೇಳಿ ಕೋಪಗೊಂಡ ಜೈದೇವ್, ಇಂದು ನನ್ನ ಬಳಿ ಏನೂ ಇಲ್ಲದಿರಬಹುದು. ಮತ್ತೆ ಎಲ್ಲವನ್ನು ಬಂದಾಗ ನೀವೆಲ್ಲಾ ಬರ್ತೀರಾ ಅಲ್ಲವಾ ಆಗ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಚಾಲೆಂಜ್ ಹಾಕಿದ್ದಾನೆ.&lt;/p&gt;&lt;img&gt;&lt;p&gt;ಈ ಹಿಂದೆ ನಿಮ್ಮ ಬಳಿಯಲ್ಲಿ ಎಲ್ಲವೂ ಇತ್ತು. ಆದ್ರೆ ಏನು ಇಲ್ಲದೇ ಬೀದಿಗೆ ಬಂದಿದ್ದೀರಿ. ಮೊದಲು ನಿಮಗೆ ಎಲ್ಲಾ ಅದೃಷ್ಟದ ಬಾಗಿಲುಗಳು ತೆರೆಯುತ್ತಿದ್ದವು. ಇಂದು ಒಂದು ಫೈಲ್ ಸಹ ತೆಗೆಯಲ್ಲ. ಜಾಮೀನಿಗೆ ಏನಾದ್ರು ನೀಡಿದ್ರೆ ಮಾತ್ರ ಸಾಲ ಸಿಗುತ್ತೆ. ದಯವಿಟ್ಟು ಇಲ್ಲಿಂದ ಹೊರಗೆ ಹೋಗಿ. ಇಲ್ಲಾಂದ್ರೆ ಸೆಕ್ಯೂರಿಟಿಯನ್ನು ಕರೀಬೇಕಾಗುತ್ತೆ ಎಂದು ಜೈದೇವ್&zwnj;ಗೆ ಬ್ಯಾಂಕ್ ಮ್ಯಾನೇಜರ್ ಎಚ್ಚರಿಕೆ ನೀಡಿದ್ದಾನೆ.&lt;/p&gt;&lt;img&gt;&lt;p&gt;ಬ್ಯಾಂಕ್&zwnj;ನಲ್ಲಿ ಅವಮಾನಕ್ಕೊಳಗಾದ ಜೈದೇವ್, ಮೆಂಬರ್&zwnj;ಶಿಪ್ ಹೊಂದಿರುವ ಕ್ಲಬ್&zwnj;ಗೆ ಹೋಗಿದ್ದಾನೆ. ಅಲ್ಲಿ ಶೂ ಧರಿಸದೇ ಇರೋರನ್ನು ಒಳಗೆ ಬಿಡೋದಕ್ಕೆ ಆಗಲ್ಲ ಎಂದಿದ್ದಾರೆ. ಇದರಿಂದ ಕ್ಲಬ್ ಮೆಂಬರ್ ಅವರನ್ನೇ ಹೊರಗೆ ಕರೆದು 2 ಕೋಟಿ ಸಾಲ ಕೇಳಿದ್ದಾನೆ. ಇದಕ್ಕೆ, ನೀವು 2 ಕೋಟಿಗೆ ಬೆಲೆ ಬಾಳ್ತೀರಾ? ನಿಮ್ಮ ಅಣ್ಣನೇ ಹೊರಗೆ ಹಾಕಿರೋ ವಿಷಯ ಮೀಡಿಯಾಗಳಲ್ಲಿ ಬಂದಿದೆ. ಯಾರ ಹತ್ತಿರ ಹೋದ್ರೂ ನಿಮಗೆ ಹಣ ಸಿಗಲ್ಲ ಎಂಬ ಸತ್ಯವನ್ನು ಜೈದೇವ್&zwnj;ಗೆ ಹೇಳಿ, ಅಲ್ಲಿಂದ ಕಳುಹಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಎಲ್ಲಾ ಘಟನೆಗಳಿಂದ ಅವಮಾನಿತನಾದ ಜೈದೇವ್, ಮತ್ತೆ ಹೆಂಡ್ತಿ ದಿಯಾ ಬೇಬಿ ಬಳಿಗೆ ಹೋಗಿದ್ದಾನೆ. ಆಕೆ ಬಳಿ ತನ್ನ ಹಣವನ್ನು ವಾಪಸ್ ಕೊಡುವಂತೆ ಜಗಳ ಮಾಡಿದ್ದಾನೆ. ಜೈದೇವ್ ಕಿರಿಕಿರಿಯಿಂದ ಬೇಸತ್ತ ದಿಯಾ ಬೇಬಿ, ಪೊಲೀಸರನ್ನು ಕರೆಸಿ ದೂರು ನೀಡಿದ್ದಾಳೆ. ಕೊನೆಗೆ ಪೊಲೀಸರು ಜೈದೇವ್&zwnj;ನನ್ನು ಕರೆದುಕೊಂಡ ಕತ್ತಲಕೋಣೆಗೆ ತಳ್ಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Amruthadhaare ಭೂಮಿಕಾ ಧರಿಸಿದ ಕಾಲ್ಗೆಜ್ಜೆಗೀಗ ಭಾರಿ ಡಿಮಾಂಡ್​: ಪತಿ ತೊಡಿಸಿದರೆ ಆಗುವುದೇನು?&lt;/strong&gt;&lt;/p&gt;&lt;img&gt;&lt;p&gt;ಬಟ್ಟೆ ಬಿಚ್ಚಿಸಿ, ಚಡ್ಡಿ ಮೇಲೆ ಬಿಟ್ಟರೂ ಜೈದೇವ್&zwnj;ನ ಆಟಿಟ್ಯೂಡ್ ಮಾತ್ರ ಕಡಿಮೆಯಾದಂತೆ ಕಾಣಿಸುತ್ತಿಲ್ಲ. ನೆಲದ ಮೇಲೆಯೇ ಕಾಲಿನ ಮೇಲೆ ಕಾಲು ಹಾಕಿಕೊಂಡು ಜೈದೇವ್ ಮಲಗಿದ್ದಾನೆ. ಈಗ ಜೈಲು ಸೇರಿರುವ ಜೈದೇವ್&zwnj;ನನ್ನು ಸೇವ್ ಮಾಡೋರು ಯಾರು? ಜೈದೇವ್ ಸಹಾಯಕ್ಕೆ ಬರೋರು ಯಾರು? ಮಗನ ಸ್ಥಿತಿ ನೋಡಿ ಕೆಡಿ ಸಹಾಯಕ್ಕೆ ಶಕುಂತಲಾ ಬರ್ತಾಳಾ ಅಥವಾ ಎಲ್ಲಾ ತಪ್ಪನ್ನು ಕ್ಷಮಿಸಿ ಗೌತಮ್ ಬರ್ತಾನಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೊನೆಗೂ ಬೀದಿಪಾಲಾದ ಅಮೃತಧಾರೆಯ ಕೆಡಿ; ಆದ್ರೂ ಜೈದೇವ್&zwnj;ಗೆ ಅಭಿಮಾನಿಗಳಿಂದ ಬಹುಪರಾಕ್&lt;/strong&gt;&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-text-update-kd-jaidev-humiliated-in-bank-and-club-for-rs-2-crore-loan-mrq-gaxtw8o"/>
        </item>
        <item>
            <title><![CDATA['ದೃಶ್ಯಂ 3' ಚಿತ್ರದಲ್ಲಿ ನಟ ಅಜಿತ್? ಸುಳ್ಳು ಸುದ್ದಿಗೆ ನೆಟ್ಟಿಗರ ತರ್ಲೆ ಕಾಮೆಂಟ್‌ಗಳು ವೈರಲ್!]]></title>
            <link>https://kannada.asianetnews.com/entertainment/drishyam-3-rumor-ajith-kumar-cameo-sparks-funny-comments-online-gvd/articleshow-17tpmc3</link>
            <guid isPermaLink="true">https://kannada.asianetnews.com/entertainment/drishyam-3-rumor-ajith-kumar-cameo-sparks-funny-comments-online-gvd/articleshow-17tpmc3</guid>
            <pubDate>Thu, 07 May 2026 19:25:16 +0530</pubDate>
            <description><![CDATA[&lt;p&gt;'ದೃಶ್ಯಂ 3' ಸಿನಿಮಾದಲ್ಲಿ ತಮಿಳು ನಟ ಅಜಿತ್ ಕುಮಾರ್ ಗೆಸ್ಟ್ ರೋಲ್ ಮಾಡ್ತಾರೆ ಅನ್ನೋ ಸುಳ್ಳು ಸುದ್ದಿಯೊಂದು ಹಬ್ಬಿದೆ. ಇದಕ್ಕೆ ನೆಟ್ಟಿಗರು ಕೊಟ್ಟಿರುವ ತಮಾಷೆಯ ಕಾಮೆಂಟ್&zwnj;ಗಳು ವೈರಲ್ ಆಗಿವೆ. ಮೇ 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1bd4gaazmpcc6bwypwx9r4,imgname-cj-1778161979913.png" type="image/jpeg" height="390" width="690"/>
            <content:encoded><![CDATA[&lt;p&gt;ಬಹುನಿರೀಕ್ಷಿತ ಸಿನಿಮಾ 'ದೃಶ್ಯಂ 3' ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಬರೀ ಕೇರಳದಲ್ಲಿ ಮಾತ್ರವಲ್ಲ, ಬೇರೆ ಭಾಷೆಯ ಪ್ರೇಕ್ಷಕರೂ ಈ ಚಿತ್ರಕ್ಕಾಗಿ ಕಾಯ್ತಾ ಇದ್ದಾರೆ. ಯಾಕಂದ್ರೆ, ಇಷ್ಟೊಂದು ಭಾಷೆಗಳಿಗೆ ರಿಮೇಕ್ ಆದ ಮತ್ತೊಂದು ಮಲಯಾಳಂ ಸಿನಿಮಾ ಫ್ರಾಂಚೈಸಿ ಇಲ್ಲ. ಮೊದಲು ಏಪ್ರಿಲ್ 2ಕ್ಕೆ ರಿಲೀಸ್ ಆಗುತ್ತೆ ಅಂತ ಹೇಳಲಾಗಿತ್ತು. ಆದ್ರೆ ಈಗ ಮೋಹನ್&zwnj;ಲಾಲ್ ಹುಟ್ಟುಹಬ್ಬದ ದಿನವಾದ ಮೇ 21ಕ್ಕೆ ಚಿತ್ರ ತೆರೆಗೆ ಬರ್ತಿದೆ. ಇದರ ನಡುವೆ, ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮತ್ತು ಅದಕ್ಕೆ ಬಂದಿರೋ ಕಾಮೆಂಟ್&zwnj;ಗಳು ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ.&lt;/p&gt;&lt;p&gt;'ದೃಶ್ಯಂ 3' ಸಿನಿಮಾದಲ್ಲಿ ತಮಿಳು ಸೂಪರ್&zwnj;ಸ್ಟಾರ್ ಅಜಿತ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಅಂತ ಒಂದು ತಮಿಳು ಇನ್&zwnj;ಸ್ಟಾಗ್ರಾಮ್ ಪೇಜ್ ಪೋಸ್ಟ್ ಹಾಕಿದೆ. ಮೋಹನ್&zwnj;ಲಾಲ್ ಜೊತೆಗಿನ ಸ್ನೇಹದಿಂದ ಅಜಿತ್ ಈ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ, ಈ ಮಾಲಿವುಡ್-ಕಾಲಿವುಡ್ ಕಾಂಬೋ ದೊಡ್ಡ ನಿರೀಕ್ಷೆ ಹುಟ್ಟಿಸಿದೆ ಅಂತೆಲ್ಲಾ ಆ ಪೋಸ್ಟ್&zwnj;ನಲ್ಲಿ ಬರೆಯಲಾಗಿದೆ. ಈ ಪೋಸ್ಟ್&zwnj;ಗೆ 8,000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಆದರೆ, ಇದು ಸುಳ್ಳು ಸುದ್ದಿ ಅಂತ ಹಲವರು ಕಾಮೆಂಟ್&zwnj;ಗಳಲ್ಲಿ ಹೇಳುತ್ತಿದ್ದಾರೆ.&lt;/p&gt;&lt;p&gt;ಈ ಪೋಸ್ಟ್&zwnj;ಗೆ ಬಂದಿರೋ ಕಾಮೆಂಟ್&zwnj;ಗಳೇ ಸಖತ್ ತಮಾಷೆಯಾಗಿವೆ. &quot;ಮೋಹನ್&zwnj;ಲಾಲ್ ಪಾತ್ರಧಾರಿ ಜಾರ್ಜ್&zwnj;ಕುಟ್ಟಿಯ ಥಿಯೇಟರ್&zwnj;ನಲ್ಲಿ ಅಜಿತ್ ಸಿನಿಮಾ ಓಡಿಸ್ತಾರೆ, ಅದೇ ಅವರ ಕ್ಯಾಮಿಯೋ&quot; ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ. &quot;ರಾಣಿ ಥಿಯೇಟರ್&zwnj;ನಲ್ಲಿ 'ಮಂಕಥಾ' ರೀ-ರಿಲೀಸ್ ಆಗುತ್ತೆ&quot; ಅನ್ನೋದು ಇನ್ನೊಬ್ಬರ ಕಾಮೆಂಟ್. &quot;ಮೇ 21ಕ್ಕೆ ರಿಲೀಸ್ ಆಗೋ ಸಿನಿಮಾಗೆ ಈಗ ಯಾವಾಗ ಕ್ಯಾಮಿಯೋ ಶೂಟ್ ಮಾಡ್ತಾರೆ?&quot; ಅಂತ ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಈ ರೀತಿಯ ಸುಳ್ಳು ಸುದ್ದಿಗಳು ಹಬ್ಬುತ್ತಿರುವುದೇ 'ದೃಶ್ಯಂ 3' ಬಗ್ಗೆ ತಮಿಳು ಪ್ರೇಕ್ಷಕರಲ್ಲಿಯೂ ಇರುವ ಕುತೂಹಲಕ್ಕೆ ಸಾಕ್ಷಿ. 'ದೃಶ್ಯಂ' ಮೊದಲ ಭಾಗ ತಮಿಳಿನಲ್ಲಿ 'ಪಾಪನಾಸಂ' ಹೆಸರಲ್ಲಿ ರಿಮೇಕ್ ಆಗಿತ್ತು.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Chennai Pasanga Da (@chennaipasangada)&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ದೊಡ್ಡ ಸವಾಲು&lt;/strong&gt;&lt;/h2&gt;&lt;p&gt;ಅದರಲ್ಲಿ ಕಮಲ್ ಹಾಸನ್ ನಾಯಕರಾಗಿದ್ದರು. ಆ ಚಿತ್ರವನ್ನು ಜೀತು ಜೋಸೆಫ್ ಅವರೇ ನಿರ್ದೇಶಿಸಿದ್ದರು. ಈ ಮಧ್ಯೆ, 'ದೃಶ್ಯಂ 3' ಮೇಲೆ ಪ್ರೇಕ್ಷಕರ ನಿರೀಕ್ಷೆಗಳ ಭಾರ ಹೆಚ್ಚಾಗಿದೆ. ಇದೇ ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ. ನಿರ್ದೇಶಕ ಜೀತು ಜೋಸೆಫ್, &quot;ಯಾವ ನಿರೀಕ್ಷೆಯೂ ಇಲ್ಲದೆ ಚಿತ್ರಮಂದಿರಕ್ಕೆ ಬನ್ನಿ&quot; ಅಂತ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. &quot;ಇದು ಮೊದಲ ಅಥವಾ ಎರಡನೇ ಭಾಗದಂತಿಲ್ಲ. ಇದು ಜಾರ್ಜ್&zwnj;ಕುಟ್ಟಿಯ ಭಾವನಾತ್ಮಕ ಪಯಣ. ಹಾಗಾಗಿ, ನೀವು ಏನೋ ದೊಡ್ಡ ಆ್ಯಕ್ಷನ್ ಸಿನಿಮಾ ಅಂದುಕೊಂಡು ಬಂದರೆ ನಿರಾಸೆಯಾಗಬಹುದು&quot; ಅಂತ ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/drishyam-3-rumor-ajith-kumar-cameo-sparks-funny-comments-online-gvd/articleshow-17tpmc3"/>
        </item>
        <item>
            <title><![CDATA['ಸೆರಗ ಸರ್ಸಿ'ದ್ದಕ್ಕೆ ಕ್ಷಮೆ ಕೇಳಿದ ನೋರಾ ಫತೇಹಿ: ಜೊತೆಗೊಂದು ಮಹತ್ವದ ಜವಾಬ್ದಾರಿ ಹೊತ್ತ ನಟಿ!]]></title>
            <link>https://kannada.asianetnews.com/entertainment/nora-fatehi-apologises-to-ncw-over-sarse-ninna-seraga-sarse-song-controversy-gvd/articleshow-u63dqld</link>
            <guid isPermaLink="true">https://kannada.asianetnews.com/entertainment/nora-fatehi-apologises-to-ncw-over-sarse-ninna-seraga-sarse-song-controversy-gvd/articleshow-u63dqld</guid>
            <pubDate>Thu, 07 May 2026 18:41:36 +0530</pubDate>
            <description><![CDATA[&lt;p&gt;ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಅವರು 'ಕೆಡಿ' ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr190z10byr3seqvb0rbggmj,imgname-vjm-1778159483936.png" type="image/jpeg" height="390" width="690"/>
            <content:encoded><![CDATA[&lt;p&gt;'ಕೆಡಿ' ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ನಟಿ ನೋರಾ ಫತೇಹಿ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿದ್ದಾರೆ. ಹಾಡಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿರುವ ಅವರು, ಅನಾಥ ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರುವುದಾಗಿ ಹೇಳಿದ್ದಾರೆ. ಹಾಡಿನಲ್ಲಿ 'ಅಶ್ಲೀಲತೆ' ಇದೆ ಎಂಬ ಆರೋಪದ ಮೇಲೆ ಆಯೋಗವು ನೋರಾಗೆ ಸಮನ್ಸ್ ನೀಡಿತ್ತು.&lt;/p&gt;&lt;p&gt;&lt;strong&gt;NCW ಮುಂದೆ ಹಾಜರಾಗಿ ಕ್ಷಮೆ ಕೇಳಿದ ನೋರಾ ಫತೇಹಿ&lt;/strong&gt;&lt;/p&gt;&lt;p&gt;ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಅವರು 'ಕೆಡಿ' ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಾಡಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದಾರೆ.&lt;/p&gt;&lt;p&gt;ವರದಿಗಾರರೊಂದಿಗೆ ಮಾತನಾಡಿದ ನೋರಾ ಫತೇಹಿ, &quot;ಒಬ್ಬ ಕಲಾವಿದೆಯಾಗಿ ನಾನು ಜವಾಬ್ದಾರಿಯಿಂದ ಇರಬೇಕು, ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ಈ ಘಟನೆಯ ನಂತರ, ಅನಾಥ ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳಲು ನಿರ್ಧರಿಸಿದ್ದೇನೆ,&quot; ಎಂದು ಹೇಳಿದ್ದಾರೆ. 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನಲ್ಲಿ 'ಅಶ್ಲೀಲತೆ' ಮತ್ತು 'ಅಸಭ್ಯತೆ' ಇದೆ ಎಂಬ ಆರೋಪಗಳ ಮೇಲೆ ಆಯೋಗವು ನೋರಾಗೆ ಸಮನ್ಸ್ ಜಾರಿ ಮಾಡಿತ್ತು. ಮೇ 7ರಂದು ಬೆಳಗ್ಗೆ 11:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.&lt;/p&gt;&lt;p&gt;&lt;strong&gt;NCW ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣ&lt;/strong&gt;&lt;/p&gt;&lt;p&gt;ಕಳೆದ ಮಾರ್ಚ್ ತಿಂಗಳಲ್ಲೇ, ಈ ಹಾಡಿನ ಬಗ್ಗೆ ಬಂದ ಮಾಧ್ಯಮ ವರದಿಗಳನ್ನು ಗಮನಿಸಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ನಟಿ ನೋರಾ ಫತೇಹಿ, ನಟ ಸಂಜಯ್ ದತ್, ಗೀತರಚನೆಕಾರ ರಕೀಬ್ ಆಲಂ, ನಿರ್ಮಾಪಕ ವೆಂಕಟ್ ಕೆ. ನಾರಾಯಣ ಮತ್ತು ನಿರ್ದೇಶಕ ಕಿರಣ್ ಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.&lt;/p&gt;&lt;p&gt;ಆ ಸಮಯದಲ್ಲಿ ಆಯೋಗವು ಒಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು. &quot;ಈ ಹಾಡಿನ ದೃಶ್ಯಗಳು ಲೈಂಗಿಕ ಪ್ರಚೋದನೆ ನೀಡುವಂತಿದ್ದು, ಆಕ್ಷೇಪಾರ್ಹವಾಗಿವೆ. ಇದು ಭಾರತೀಯ ನ್ಯಾಯ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act), ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO Act) ಅಡಿಯಲ್ಲಿನ ನಿಬಂಧನೆಗಳ ಉಲ್ಲಂಘನೆಯಾಗಬಹುದು. ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ,&quot; ಎಂದು ಹೇಳಿಕೆಯಲ್ಲಿ ತಿಳಿಸಿತ್ತು.&lt;/p&gt;&lt;h2&gt;&lt;strong&gt;ಭಾರಿ ವಿರೋಧದ ನಂತರ ಹಾಡು ನಿಷೇಧ&lt;/strong&gt;&lt;/h2&gt;&lt;p&gt;'ಕೆಡಿ' ಸಿನಿಮಾದ ಈ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿವೆ ಎಂದು ಹಲವು ವ್ಯಕ್ತಿಗಳು ಮತ್ತು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಹಾಡನ್ನು ತೆಗೆದುಹಾಕಬೇಕು ಮತ್ತು ಎಫ್&zwnj;ಐಆರ್ ದಾಖಲಿಸಬೇಕು ಎಂದು ದೂರುಗಳು ಸಹ ಸಲ್ಲಿಕೆಯಾಗಿದ್ದವು.&lt;/p&gt;&lt;p&gt;ನಂತರ ಈ ವಿವಾದ ಸಂಸತ್ತಿನಲ್ಲೂ ಚರ್ಚೆಗೆ ಬಂದಿತ್ತು. ಸಮಾಜವಾದಿ ಪಕ್ಷದ ಸಂಸದ ಆನಂದ್ ಭದೌರಿಯಾ ಅವರು ಲೋಕಸಭೆಯಲ್ಲಿ ಎತ್ತಿದ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಹಾಡನ್ನು ಬ್ಯಾನ್ ಮಾಡಲಾಗಿದೆ ಎಂದು ಖಚಿತಪಡಿಸಿದ್ದರು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾರ್ವಜನಿಕವಾಗಿ ದೊಡ್ಡ ಚರ್ಚೆಗೆ ಕಾರಣವಾಗಿದ್ದ ಈ ಹಾಡಿನಲ್ಲಿ ನೋರಾ ಫತೇಹಿ ಜೊತೆ ನಟ ಸಂಜಯ್ ದತ್ ಕೂಡ ಕಾಣಿಸಿಕೊಂಡಿದ್ದರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/nora-fatehi-apologises-to-ncw-over-sarse-ninna-seraga-sarse-song-controversy-gvd/articleshow-u63dqld"/>
        </item>
        <item>
            <title><![CDATA[Amruthadhaare ಭೂಮಿಕಾ ಧರಿಸಿದ ಕಾಲ್ಗೆಜ್ಜೆಗೀಗ ಭಾರಿ ಡಿಮಾಂಡ್​: ಪತಿ ತೊಡಿಸಿದರೆ ಆಗುವುದೇನು?]]></title>
            <link>https://kannada.asianetnews.com/gallery/astrology/amruthadhaare-serial-gowtham-gifted-payal-to-bhoomika-astrological-importance-suc-z9lfa8i</link>
            <guid isPermaLink="true">https://kannada.asianetnews.com/gallery/astrology/amruthadhaare-serial-gowtham-gifted-payal-to-bhoomika-astrological-importance-suc-z9lfa8i</guid>
            <pubDate>Thu, 07 May 2026 17:38:59 +0530</pubDate>
            <description><![CDATA[ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಪ್ರೀತಿಯಿಂದ ಭೂಮಿಕಾಳ ಕಾಲಿಗೆ ಗೆಜ್ಜೆ ತೊಡಿಸಿದ್ದಾನೆ. ಈ ಘಟನೆಯು ಕೇವಲ ಪ್ರೀತಿಯ ಸಂಕೇತವಲ್ಲ, ಬದಲಾಗಿ ಪತಿ ಪತ್ನಿಯ ಕಾಲಿಗೆ ಗೆಜ್ಜೆ ತೊಡಿಸುವುದರ ಹಿಂದೆ ಆಳವಾದ ಸಾಂಪ್ರದಾಯಿಕ ಮತ್ತು ಜ್ಯೋತಿಷ್ಯದ ಮಹತ್ವವಿದೆ ಎಂದು ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr151h7v75qf3dew0fhm90jn,imgname-gejje-04-1778155308283.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಪ್ರೀತಿಯಿಂದ ಭೂಮಿಕಾಳ ಕಾಲಿಗೆ ಗೆಜ್ಜೆ ತೊಡಿಸಿದ್ದಾನೆ. ಈ ಘಟನೆಯು ಕೇವಲ ಪ್ರೀತಿಯ ಸಂಕೇತವಲ್ಲ, ಬದಲಾಗಿ ಪತಿ ಪತ್ನಿಯ ಕಾಲಿಗೆ ಗೆಜ್ಜೆ ತೊಡಿಸುವುದರ ಹಿಂದೆ ಆಳವಾದ ಸಾಂಪ್ರದಾಯಿಕ ಮತ್ತು ಜ್ಯೋತಿಷ್ಯದ ಮಹತ್ವವಿದೆ ಎಂದು ವಿವರಿಸಲಾಗಿದೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare Serial) ಅಂದ್ರೆನೇ ಅದೊಂದು ರೀತಿಯಲ್ಲಿ ದಾಂಪತ್ಯದ ರಸದೌತಣವನ್ನು ಉಣಬಡಿಸುವ ಧಾರಾವಾಣಿ ಎಂದುಕೊಳ್ಳುವುದು ಇದೆ. ಇದಾಗಲೇ ಈ ಸೀರಿಯಲ್​ ಸಂಪೂರ್ಣವಾಗಿ ಮುಗಿಯುವ ಹಂತಕ್ಕೆ ಬಂದಿದ್ದರೂ, ಇನ್ನೊಂದೇನೋ ಎಳೆ ತಂದು ಸೀರಿಯಲ್​ ಎಳೆಯುತ್ತಿರುವುದಕ್ಕೂ ಇದೇ ಕಾರಣ, ಇದು ಸೀರಿಯಲ್​ ವೀಕ್ಷಕರ ಪ್ರೀತಿ, ಟಿಆರ್​ಪಿಯ ಏರಿಕೆ. ಇದೀಗ ಸೀರಿಯಲ್​ನಲ್ಲಿ ಗೌತಮ್​ಗೆ ಮಗಳಿಂದಲೇ ಆಪತ್ತು ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಇದರಿಂದಾಗಿ, ಅದು ಯಾವ ಮಗಳು, ಮಿಸ್ಸಿಂಗ್​ ಆಗಿರೋ ಮಗಳೇ, ಇನ್ನೊಂದು ಮಗು ಹುಟ್ಟುತ್ತಾ... ಹೀಗೆ ಹಲವಾರು ರೀತಿಯಲ್ಲಿ ಸಸ್ಪೆನ್ಸ್ ಇಟ್ಟಿದ್ದಾರೆ ನಿರ್ದೇಶಕರು. ಆದ್ದರಿಂದ ಈ ಸೀರಿಯಲ್​ ಇನ್ನೊಂದು ವರ್ಷ ಎಳೆಯುವುದಂತೂ ಖಂಡಿತ.&lt;/p&gt;&lt;img&gt;&lt;p&gt;ಅದರ ನಡುವೆಯೇ, ಗೌತಮ್​ ತನ್ನ ಮೂಲ ಮನೆಯನ್ನು ಮತ್ತೆ ವಾಪಸ್​ ಪಡೆದಿದ್ದು, ಅದಕ್ಕೆ ಹೋಗಲು ಕುಟುಂಬ ಸಜ್ಜಾಗುತ್ತಿದೆ. ಮನೆಯಲ್ಲಿ ಪೂಜೆಗೆಂದು ಗೌತಮ್​ ಭೂಮಿಕಾಗೆ ಹೊಸ ಸೀರೆ ಕೊಡಿಸಿದ್ದರೆ, ಭೂಮಿಕಾ ಕೂಡ ಪತಿಗೆ ಹೊಸ ಡ್ರೆಸ್​​ ಕೊಡಿಸಿದ್ದಾಳೆ. ಆದರೆ ಇಲ್ಲಿ ಗಮನ ಸೆಳೆದಿದ್ದು ಭೂಮಿಕಾಗೆ ಗೌತಮ್​ ತೊಡಿಸಿದ ಗೆಜ್ಜೆ.&lt;/p&gt;&lt;img&gt;&lt;p&gt;ಈ ಗೆಜ್ಜೆಗೆ ಈಗ ಭಾರಿ ಡಿಮಾಂಡ್​ ಬಂದಿದೆ. ಅದಕ್ಕೆ ಕಾರಣ, ಗೌತಮ್​ ಪ್ರೀತಿಯಿಂದ ಭೂಮಿಕಾಗೆ ಅದನ್ನು ತೊಡಿಸಿದ್ದಾನೆ. ಇದನ್ನು ನೋಡಿ ವೀಕ್ಷಕರು ಪುಳಕಿತರಾಗಿದ್ದಾರೆ. ಅಷ್ಟಕ್ಕೂ ಬೇರೆ ಬೇರೆ ಸಂಪ್ರದಾಯದವರು ಗೆಜ್ಜೆಯನ್ನು ಧರಿಸುವುದು ಮಾಮೂಲಾಗಿದ್ದರೂ, ಹಿಂದೂ ಸಂಪ್ರದಾಯಕ್ಕೂ, ಗೆಜ್ಜೆಗೂ ತುಂಬಾ ಹತ್ತಿರ ನಂಟಿದೆ. ಅದರಲ್ಲಿಯೂ ಪತಿಯಾದವನು ಪತ್ನಿಯ ಕಾಲಿಗೆ ಖುದ್ದು ತೊಡಿಸಿದರೆ, ಅದಕ್ಕೂ ಒಂದು ಅರ್ಥವಿದೆ. ಅದೇ ಅರ್ಥದಲ್ಲಿಯೂ ಈ ಸೀರಿಯಲ್​ನಲ್ಲಿ ಗೌತಮ್, ಪತ್ನಿ​ ಕಾಲಿಗೆ ಗೆಜ್ಜೆ ತೊಡಿಸಿದ್ದಾನೆ.&lt;/p&gt;&lt;img&gt;&lt;p&gt;ಅನೇಕ ಸಂಪ್ರದಾಯಗಳಲ್ಲಿ, ವಿಶೇಷವಾಗಿ ಭಾರತೀಯ ಸಂಸ್ಕೃತಿಯಲ್ಲಿ, ಗಂಡನು ತನ್ನ ಹೆಂಡತಿಗೆ ಉಡುಗೊರೆಯಾಗಿ ನೀಡುವ ಗೆಜ್ಜೆ, ಗಮನಾರ್ಹವಾದ ಭಾವನಾತ್ಮಕ, ಸಾಂಪ್ರದಾಯಿಕ ಮತ್ತು ಜ್ಯೋತಿಷ್ಯ ಅರ್ಥವನ್ನು ಹೊಂದಿದೆ. ಇದನ್ನು ಹೆಚ್ಚಾಗಿ ವಿವಾಹಿತ ಮಹಿಳೆಯ 16 ಅಲಂಕಾರಗಳ (ಶೃಂಗಾರ) ಭಾಗವೆಂದು ಪರಿಗಣಿಸಲಾಗುತ್ತದೆ ಮತ್ತು ಪ್ರೀತಿ, ರಕ್ಷಣೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ಮಹತ್ವವೂ ಈ ರೀತಿ ಗೆಜ್ಜೆ ತೊಡಿಸುವುದಕ್ಕೆ ಇದೆ. ಬೆಳ್ಳಿಯ ಕಾಲ್ಗೆಜ್ಜೆಗಳು ಜ್ಯೋತಿಷ್ಯದಲ್ಲಿ ಚಂದ್ರನೊಂದಿಗೆ ಸಂಬಂಧ ಹೊಂದಿವೆ. ಅವುಗಳನ್ನು ಧರಿಸುವುದರಿಂದ ಭಾವನೆಗಳನ್ನು ಶಾಂತಗೊಳಿಸಬಹುದು, ಮಾನಸಿಕ ಸ್ಥಿರತೆಯನ್ನು ಸುಧಾರಿಸಬಹುದು ಮತ್ತು ವೈವಾಹಿಕ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಬಹುದು, ವಿಶೇಷವಾಗಿ ಹೆಂಡತಿಯ ಜಾತಕದಲ್ಲಿ ಚಂದ್ರ ದುರ್ಬಲವಾಗಿದ್ದರೆ, ಗಂಡನಾದವ ಹೀಗೆ ತೊಡಿಸಿದರೆ ಆ ದೋಷ ಹೋಗುತ್ತದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕಾಲ್ಗೆಜ್ಜೆಗಳ ಶಬ್ದವು ದುಷ್ಟಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಗಳನ್ನು ದೂರವಿಡುತ್ತದೆ ಎಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ, ಇದು ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಹೆಂಡತಿಗೆ ಉಡುಗೊರೆಯಾಗಿ ನೀಡುವುದು ಪ್ರೀತಿಯ ಸಂಕೇತವಾಗಿದೆ, ಅವಳನ್ನು ಗೌರವಿಸುತ್ತದೆ ಮತ್ತು ಜೀವಮಾನದ ಬದ್ಧತೆಯನ್ನು ದೃಢೀಕರಿಸುತ್ತದೆ. ಜ್ಯೋತಿಷ್ಯವನ್ನು ಮೀರಿ, ಬೆಳ್ಳಿಯ ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳು ರೋಗನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ ಮತ್ತು ಕಾಲುಗಳಲ್ಲಿ ನೋವು ಅಥವಾ ಮರಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/astrology/amruthadhaare-serial-gowtham-gifted-payal-to-bhoomika-astrological-importance-suc-z9lfa8i"/>
        </item>
        <item>
            <title><![CDATA[Drishyam 3: ಸಿನಿರಸಿಕರಿಗೆ ಗುಡ್‌ನ್ಯೂಸ್.. ಸೆನ್ಸಾರ್ ಮುಗಿಸಿ ಈ ದಿನ ತೆರೆಮೇಲೆ ಬರ್ತಿದ್ದಾನೆ ಜಾರ್ಜ್‌ಕುಟ್ಟಿ!]]></title>
            <link>https://kannada.asianetnews.com/entertainment/drishyam-3-gets-ua-certificate-mohanlal-starrer-set-for-may-21-release-gvd/articleshow-m4la8di</link>
            <guid isPermaLink="true">https://kannada.asianetnews.com/entertainment/drishyam-3-gets-ua-certificate-mohanlal-starrer-set-for-may-21-release-gvd/articleshow-m4la8di</guid>
            <pubDate>Thu, 07 May 2026 17:28:57 +0530</pubDate>
            <description><![CDATA[&lt;p&gt;ಸದ್ಯ ಬಹುನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದ್ರೆ ಅದು ಮೋಹನ್&zwnj;ಲಾಲ್-ಜೀತು ಜೋಸೆಫ್ ಕಾಂಬಿನೇಷನ್&zwnj;ನ 'ದೃಶ್ಯಂ 3'. ಇದೀಗ ಸಿನಿಮಾದ ಸೆನ್ಸಾರ್ ಮುಗಿದಿದ್ದು, ಮೇ 21 ರಂದು ತೆರೆಗೆ ಬರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jmkj2m0p4f7t91rkvz1weey7,imgname-Mohnalal-Confirms-Drishyam-3-1740118249494.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೋಹನ್&zwnj;ಲಾಲ್ ನಟನೆಯ 'ದೃಶ್ಯಂ 3' ಸಿನಿಮಾಕ್ಕೆ ಸೆನ್ಸಾರ್ ಮುಗಿದಿದ್ದು, ಮೇ 21 ರಂದು ತೆರೆಗೆ ಬರಲಿದೆ. ಅಂದು ಮೋಹನ್&zwnj;ಲಾಲ್ ಹುಟ್ಟುಹಬ್ಬವೂ ಹೌದು. ಆಂಟನಿ ಪೆರುಂಬಾವೂರ್ ನಿರ್ಮಾಣದ ಈ ಚಿತ್ರದಲ್ಲಿ ಮೊದಲ ಎರಡು ಭಾಗಗಳಲ್ಲಿದ್ದ ಬಹುತೇಕ ತಾರಾಗಣವೇ ಮುಂದುವರಿದಿದೆ.&lt;/p&gt;&lt;p&gt;ಮಲಯಾಳಂನಲ್ಲಿ ಸದ್ಯ ಬಹುನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದ್ರೆ ಅದು ಮೋಹನ್&zwnj;ಲಾಲ್-ಜೀತು ಜೋಸೆಫ್ ಕಾಂಬಿನೇಷನ್&zwnj;ನ 'ದೃಶ್ಯಂ 3'. ಮೊದಲ ಎರಡು ಭಾಗಗಳು ಸೂಪರ್ ಹಿಟ್ ಆಗಿದ್ದರಿಂದ, ಮೂರನೇ ಭಾಗ ಬಾಕ್ಸಾಫೀಸ್&zwnj;ನಲ್ಲಿ ಹೊಸ ದಾಖಲೆಗಳನ್ನು ಬರೆಯಲಿದೆ ಅಂತಾ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಈ ಸಿನಿಮಾ ಮೇ 21 ರಂದು ಥಿಯೇಟರ್&zwnj;ಗಳಿಗೆ ಎಂಟ್ರಿ ಕೊಡಲಿದೆ.&lt;/p&gt;&lt;p&gt;ಈಗ ಚಿತ್ರತಂಡದವರು ಸಿನಿಮಾದ ಸೆನ್ಸಾರ್ ಮುಗಿದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ U/A 13+ ಸರ್ಟಿಫಿಕೇಟ್ ಸಿಕ್ಕಿದೆ. ಮೊದಲು ಈ ಸಿನಿಮಾವನ್ನು ಏಪ್ರಿಲ್ 2 ರಂದು ವಿಶ್ವಾದ್ಯಂತ ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ, ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ರಿಲೀಸ್ ದಿನಾಂಕವನ್ನು ಮೇ 21ಕ್ಕೆ ಮುಂದೂಡಲಾಯಿತು. ವಿಶೇಷ ಅಂದ್ರೆ, ಮೇ 21 ಮೋಹನ್&zwnj;ಲಾಲ್ ಅವರ ಹುಟ್ಟುಹಬ್ಬ ಕೂಡ.&lt;/p&gt;&lt;h2&gt;&lt;strong&gt;ಹಳೆಯ ತಾರಾಗಣವೇ ಮುಂದುವರಿಕೆ&lt;/strong&gt;&lt;/h2&gt;&lt;p&gt;ಮೋಹನ್&zwnj;ಲಾಲ್ ಜೊತೆಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಸಿದ್ದಿಖ್, ಕಲಾಭವನ್ ಶಾಜೋನ್, ಇರ್ಷಾದ್, ಗಣೇಶ್ ಕುಮಾರ್ ಅವರಂತಹ ಹಳೆಯ ತಾರೆಯರೇ ಈ ಚಿತ್ರದಲ್ಲೂ ಇದ್ದಾರೆ. ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಟನಿ ಪೆರುಂಬಾವೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಂದಹಾಗೆ, ಈ ಚಿತ್ರದ ಹಿಂದಿ ಅವತರಣಿಕೆ 2026ರ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ.&lt;/p&gt;&lt;p&gt;ಇದೇ ವೇಳೆ, ಮಮ್ಮುಟ್ಟಿ ನಾಯಕರಾಗಿ ನಟಿಸಿದ್ದ 'ಪೇಟ್ರಿಯಾಟ್' ಚಿತ್ರದಲ್ಲಿ ಮೋಹನ್&zwnj;ಲಾಲ್ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದರು. ಮಹೇಶ್ ನಾರಾಯಣನ್ ನಿರ್ದೇಶನದ ಈ ಸಿನಿಮಾ ಕಲೆಕ್ಷನ್&zwnj;ನಲ್ಲೂ ದೊಡ್ಡ ಸದ್ದು ಮಾಡುತ್ತಿದೆ. ದೊಡ್ಡ ಬಜೆಟ್&zwnj;ನಲ್ಲಿ ತಯಾರಾದ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಬೋಬನ್, ನಯನತಾರಾ, ರೇವತಿ, ದರ್ಶನಾ ರಾಜೇಂದ್ರನ್, ರಾಜೀವ್ ಮೆನನ್, ಸೆರಿನ್ ಶಿಹಾಬ್, ಗ್ರೇಸ್ ಆಂಟನಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/drishyam-3-gets-ua-certificate-mohanlal-starrer-set-for-may-21-release-gvd/articleshow-m4la8di"/>
        </item>
        <item>
            <title><![CDATA[ಮಹಿಳಾ ನಿರ್ದೇಶಕಿಯರೇ ನಿರ್ದೇಶಿಸಿದ ಮಹಿಳಾ ಕೇಂದ್ರಿದ ಸಿನಿಮಾಗಳು Don't Miss It]]></title>
            <link>https://kannada.asianetnews.com/webstories/cine-world/women-oriented-women-directors-movies-64dkcqk</link>
            <guid isPermaLink="true">https://kannada.asianetnews.com/webstories/cine-world/women-oriented-women-directors-movies-64dkcqk</guid>
            <pubDate>Thu, 07 May 2026 17:24:05 +0530</pubDate>
            <description><![CDATA[&lt;p&gt;ನೀವು ಸಿನಿಮಾ ಪ್ರಿಯರಾಗಿದ್ದು, ಮಹಿಳಾ ಕೇಂದ್ರಿತ ಸಿನಿಮಾಗಳನ್ನ ನೋಡಲು ಇಷ್ಟಪಟ್ಟರೆ, ಇಲ್ಲಿವೆ ಅತ್ಯುತ್ತಮ ಸಿನಿಮಾಗಳು, ಈ ಚಿತ್ರಗಳು ಕೇವಲ ಮಹಿಳೆಯರ ಕಥೆಗಳನ್ನು ಹೇಳುವುದಿಲ್ಲ - ಅವು ಜೀವಂತ ಭಾವನೆಗಳು, ಶಾಂತ ಶಕ್ತಿ ಮತ್ತು ವೈಯಕ್ತಿಕ ನೋಟದ ಮೂಲಕ ಸತ್ಯಗಳನ್ನು ಪ್ರತಿಬಿಂಬಿಸುತ್ತವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-404b66b0-0468-4840-9570-968b47df2f37,imgname-image.jpg" type="image/jpeg" height="390" width="690"/>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/webstories/cine-world/women-oriented-women-directors-movies-64dkcqk"/>
        </item>
        <item>
            <title><![CDATA[ರಾಮ್ ಚರಣ್ 'ಪೆದ್ದಿ' ಚಿತ್ರದ ಸ್ಟಾರ್‌ಗಳಿಗೆ ಕೋಟಿ ಕೋಟಿ ಸಂಭಾವನೆ: ಯಾರಿಗೆಷ್ಟು?]]></title>
            <link>https://kannada.asianetnews.com/webstories/entertainment/peddi-movie-cast-remuneration-ram-charan-janhvi-kapoor-shivarajkumar-salary-details-gvd-qn66pz3</link>
            <guid isPermaLink="true">https://kannada.asianetnews.com/webstories/entertainment/peddi-movie-cast-remuneration-ram-charan-janhvi-kapoor-shivarajkumar-salary-details-gvd-qn66pz3</guid>
            <pubDate>Thu, 07 May 2026 17:14:08 +0530</pubDate>
            <description><![CDATA[&lt;p&gt;ರಾಮ್ ಚರಣ್ ನಾಯಕರಾಗಿ ನಟಿಸುತ್ತಿರುವ 'ಪೆದ್ದಿ' ಸಿನಿಮಾ ಸಿದ್ಧವಾಗುತ್ತಿದೆ. ಶಿವರಾಜ್&zwnj;ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ ಜೂನ್&zwnj;ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ನಟಿಸಿರುವ ಕಲಾವಿದರು ಮತ್ತು ತಂತ್ರಜ್ಞರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpgj117nqbknzn9kfby2whsp,imgname-peddi-movie--1776524756213.jpg" type="image/jpeg" height="390" width="690"/>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/entertainment/peddi-movie-cast-remuneration-ram-charan-janhvi-kapoor-shivarajkumar-salary-details-gvd-qn66pz3"/>
        </item>
        <item>
            <title><![CDATA[ಪ್ರಾಣಿಪ್ರೇಮಿ ಸುನೀತಾ ಕೊಲೆ, ಆರೋಪಿಯನ್ನ ಯಾಕೆ ಇನ್ನೂ ಅರೆಸ್ಟ್ ಮಾಡಿಲ್ಲ? ಮಿಲನ ನಟಿ ಕಣ್ಣೀರು!]]></title>
            <link>https://kannada.asianetnews.com/entertainment/parvathy-thiruvothu-demands-justice-for-murdered-animal-rescuer-sunitha-in-bengaluru-gvd/articleshow-dywgb8n</link>
            <guid isPermaLink="true">https://kannada.asianetnews.com/entertainment/parvathy-thiruvothu-demands-justice-for-murdered-animal-rescuer-sunitha-in-bengaluru-gvd/articleshow-dywgb8n</guid>
            <pubDate>Thu, 07 May 2026 16:50:01 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಯತ್ನವನ್ನು ವಿರೋಧಿಸಿದ್ದಕ್ಕೆ ಕೊಲೆಯಾದ ಪ್ರಾಣಿಪ್ರೇಮಿ ಸುನೀತಾ ಸಾವಿಗೆ ಮಿಲನ ನಟಿ ಪಾರ್ವತಿ ತಿರುವೊತ್ತು ಕಂಬನಿ ಮಿಡಿದಿದ್ದಾರೆ. ಆರೋಪಿಯನ್ನು ಯಾಕೆ ಇನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr12mnc10esd5bbkhqjdwd1y,imgname-xxjh-1778152789377.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿ ನಡೆದ ಅಮಾನವೀಯ ಹಲ್ಲೆಯಿಂದಾಗಿ ಪ್ರಾಣ ಬಿಟ್ಟ ಪ್ರಾಣಿಪ್ರೇಮಿ ಸುನೀತಾ ಬಗ್ಗೆ ನಟಿ ಪಾರ್ವತಿ ತಿರುವೊತ್ತು ಮಾತನಾಡಿದ್ದಾರೆ. ಲೈಂಗಿಕ ದೌರ್ಜನ್ಯದ ಯತ್ನವನ್ನು ವಿರೋಧಿಸಿದ್ದಕ್ಕೆ ಸುನೀತಾ ಕೊಲೆಯಾದರು ಎಂದು ತಿಳಿದಾಗಿನಿಂದ ನನಗೆ ಅಳು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪಾರ್ವತಿ ಹೇಳಿದ್ದಾರೆ. ಕೊಲೆಗಾರನನ್ನು ಇನ್ನೂ ಯಾಕೆ ಬಂಧಿಸಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ಪಾರ್ವತಿ ತಿರುವೊತ್ತು ಹೇಳಿದ್ದೇನು?&lt;/strong&gt;&lt;/h2&gt;&lt;p&gt;&quot;ಸುನೀತಾ ಸುಮ್ಮನೆ ಸಾಯಲಿಲ್ಲ. ಅವಳನ್ನು ಕೊಲೆ ಮಾಡಲಾಗಿದೆ. ನಾನು ಭೇಟಿಯಾದವರಲ್ಲಿಯೇ ಅತ್ಯಂತ ಪ್ರೀತಿಯ, ದಯೆಯುಳ್ಳ ಮಹಿಳೆ ಆಕೆ. ತನ್ನ ಕೊಲೆಗಡುಕನ ಲೈಂಗಿಕ ದೌರ್ಜನ್ಯ ಯತ್ನವನ್ನು ವಿರೋಧಿಸುವಾಗ ಆಕೆ ಕೊಲೆಯಾದಳು ಎಂದು ತಿಳಿದಾಗಿನಿಂದ ನನಗೆ ಅಳು ತಡೆಯಲು ಆಗುತ್ತಿಲ್ಲ. ಆಕೆಯ ಉದ್ಯೋಗದಾತ ಯಾರು? ಯಾರನ್ನು ಇನ್ನೂ ಬಂಧಿಸಿ ನ್ಯಾಯದ ಮುಂದೆ ತಂದಿಲ್ಲ? ಆದರೂ ನಮಗೆ ಈ ಬಗ್ಗೆ ಯಾವುದೇ ಆಶ್ಚರ್ಯ ಇದೆಯೇ?&lt;/p&gt;&lt;p&gt;ಸುನೀತಾಗೆ ಪ್ರೀತಿಯ ಗಂಡ ಮತ್ತು 4 ವರ್ಷದ ಮಗನಿದ್ದ. ಇವರ ಜೊತೆಗೆ, 167 ನಾಯಿಗಳನ್ನು ಆಕೆ ರಕ್ಷಿಸಿ ಪೋಷಿಸುತ್ತಿದ್ದಳು. ನಾಯಿಗಳನ್ನು ರಕ್ಷಿಸಲು ಹೋಗಿ ಈ ಹಿಂದೆ ಆಕೆ ಹಲವು ಬಾರಿ ಹಲ್ಲೆಗೊಳಗಾಗಿದ್ದಳು. ಚಾಕು ಇರಿತ, ತೀವ್ರ ಸುಟ್ಟಗಾಯಗಳನ್ನೆಲ್ಲಾ ಆಕೆ ಮೆಟ್ಟಿನಿಂತಿದ್ದಳು. ಕೊಲೆಗಾರನು ತನ್ನ ಬೀದಿ ನಾಯಿಗಳ ಆಶ್ರಮದಲ್ಲಿ ಉತ್ತಮ ಸಂಬಳದ ಆಫರ್ ನೀಡಿದ್ದ. ಇದರಿಂದ ತನ್ನ ಕುಟುಂಬ ಮತ್ತು ತಾನು ಸಾಕುತ್ತಿದ್ದ ನಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಸುನೀತಾ ಆ ಕೆಲಸ ಒಪ್ಪಿಕೊಂಡಿದ್ದಳು. ಆಕೆಯ ಈ ದಯೆಯೇ ಅವಳ ಸಾವಿಗೆ ಕಾರಣವಾಯಿತೇ? ನನಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,&quot; ಎಂದು ಪಾರ್ವತಿ ನೋವು ತೋಡಿಕೊಂಡಿದ್ದಾರೆ.&lt;img&gt;&lt;/p&gt;&lt;p&gt;ಕಳೆದ ಭಾನುವಾರ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಲೈಂಗಿಕ ದೌರ್ಜನ್ಯವನ್ನು ತಡೆಯಲು ಯತ್ನಿಸಿದಾಗ ಸುನೀತಾ ಮೇಲೆ ಹಲ್ಲೆ ನಡೆಸಲಾಗಿತ್ತು. ದೇಹದಾದ್ಯಂತ ಗಾಯಗಳಾಗಿ ವೆಂಟಿಲೇಟರ್&zwnj;ನಲ್ಲಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಶೆಲ್ಟರ್ ಹೋಂ ಮಾಲೀಕ, ಮಲಯಾಳಿ ದೀಪಕ್ ಕೃಷ್ಣ, ಸುನೀತಾಳ ತಲೆಯನ್ನು ಗೋಡೆ ಮತ್ತು ಕಪಾಟಿಗೆ ಹಲವು ಬಾರಿ ಬಡಿದಿದ್ದ. ನಂತರ ಕೆಳಗೆ ಬಿದ್ದ ಆಕೆಯ ಎದೆಯ ಮೇಲೆ ಪದೇ ಪದೇ ತುಳಿದಿದ್ದ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/parvathy-thiruvothu-demands-justice-for-murdered-animal-rescuer-sunitha-in-bengaluru-gvd/articleshow-dywgb8n"/>
        </item>
        <item>
            <title><![CDATA[Vijay Trisha ವಿವಾದಕ್ಕೆ ನಟಿ ಗಾಯತ್ರಿ ಶಂಕರ್ ಎಂಟ್ರಿ: ಡಬಲ್ ಸ್ಟ್ಯಾಂಡರ್ಡ್ ವಿರುದ್ಧ ಆಕ್ರೋಶ]]></title>
            <link>https://kannada.asianetnews.com/entertainment/gayathrie-shankar-slams-double-standards-over-vijay-trisha-affair-rumors-gvd/articleshow-9z9a0tk</link>
            <guid isPermaLink="true">https://kannada.asianetnews.com/entertainment/gayathrie-shankar-slams-double-standards-over-vijay-trisha-affair-rumors-gvd/articleshow-9z9a0tk</guid>
            <pubDate>Thu, 07 May 2026 16:35:00 +0530</pubDate>
            <description><![CDATA[&lt;p&gt;ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದರೂ, ರಾಜಕೀಯದ ಕಾವು ಇನ್ನೂ ಆರಿಲ್ಲ. ಮಾಜಿ ಸಿಎಂ ಸ್ಟಾಲಿನ್ ಸೋತರೆ, ನಟ ವಿಜಯ್ ಅವರ ಟಿವಿಕೆ ಪಕ್ಷ ಅನಿರೀಕ್ಷಿತ ಗೆಲುವು ಸಾಧಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr11s8fx8pakp0sh35nga4hk,imgname-vjmv-1778151891453.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಗೆದ್ದಿದ್ದಕ್ಕೆ ನಟಿ ತ್ರಿಶಾಗೆ ಶುಭಾಶಯಗಳು ಬರುತ್ತಿರುವುದನ್ನು ನಟಿ ಗಾಯತ್ರಿ ಶಂಕರ್ ಟೀಕಿಸಿದ್ದಾರೆ. ಇದೇ ಜಾಗದಲ್ಲಿ ಒಬ್ಬ ಮಹಿಳೆ ಇದ್ದಿದ್ದರೆ ಸಮಾಜ ಸುಮ್ಮನೆ ಬಿಡುತ್ತಿರಲಿಲ್ಲ, ಇದು ಡಬಲ್ ಸ್ಟ್ಯಾಂಡರ್ಡ್ ಎಂದು ಅವರು ಕಿಡಿಕಾರಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದರೂ, ರಾಜಕೀಯದ ಕಾವು ಇನ್ನೂ ಆರಿಲ್ಲ. ಮಾಜಿ ಸಿಎಂ ಸ್ಟಾಲಿನ್ ಸೋತರೆ, ನಟ ವಿಜಯ್ ಅವರ ಟಿವಿಕೆ ಪಕ್ಷ ಅನಿರೀಕ್ಷಿತ ಗೆಲುವು ಸಾಧಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ವಿಜಯ್ ಮುಖ್ಯಮಂತ್ರಿ ಆಗೋಕೆ ಪ್ರಯತ್ನ ಶುರು ಮಾಡಿದ್ದಾರೆ ಅಂತ ತಮಿಳುನಾಡಿನಲ್ಲಿ ಮಾತುಗಳು ಕೇಳಿಬರುತ್ತಿವೆ. ಚುನಾವಣೆಗೂ ಮುನ್ನ ಕರೂರ್ ದುರಂತ, 'ಜನನಾಯಗನ್' ಸಿನಿಮಾ ರಿಲೀಸ್&zwnj;ಗೆ ತಡೆ, ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು... ಇವೆಲ್ಲವೂ ವಿಜಯ್&zwnj;ಗೆ ಹಿನ್ನಡೆ ಆಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಈ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ ವಿಜಯ್ ಮತ್ತು ಅವರ ಟಿವಿಕೆ ಪಕ್ಷ ಗೆದ್ದು ಬೀಗಿದೆ.&lt;/p&gt;&lt;p&gt;ವಿಜಯ್ ಜೊತೆಗೆ ಈಗ ಅತಿ ಹೆಚ್ಚು ಕೇಳಿಬರುತ್ತಿರುವ ಇನ್ನೊಂದು ಹೆಸರು ನಟಿ ತ್ರಿಶಾ ಅವರದ್ದು. ಚುನಾವಣೆಯಲ್ಲಿ ಗೆದ್ದ ಬಳಿಕ ತ್ರಿಶಾ, ವಿಜಯ್ ಮನೆಗೆ ಭೇಟಿ ನೀಡಿದ್ದ ಫೋಟೋಗಳು ಸಖತ್ ವೈರಲ್ ಆಗಿದ್ದವು. ವಿಜಯ್-ಸಂಗೀತಾ ದಾಂಪತ್ಯ ಮುರಿಯಲು ತ್ರಿಶಾ ಕಾರಣ ಅನ್ನೋ ವದಂತಿಗಳ ನಡುವೆಯೇ ಈ ಘಟನೆ ನಡೆದಿದ್ದು, ಚರ್ಚೆಗೆ ಮತ್ತಷ್ಟು ಇಂಬು ನೀಡಿತ್ತು. ಇದರ ಬೆನ್ನಲ್ಲೇ, ವಿಜಯ್ ಅವರ ಈ ಗೆಲುವು, ತ್ರಿಶಾಗೆ ಹುಟ್ಟುಹಬ್ಬದ ಉಡುಗೊರೆ ಅಂತ ತಮಿಳು ಚಿತ್ರರಂಗದ ಹಲವು ನಟರೇ ಕಾಮೆಂಟ್ ಮಾಡಿದ್ದರು.&lt;/p&gt;&lt;h2&gt;&lt;strong&gt;ಇಷ್ಟು ಸಿಂಪಲ್ ಆಗಿ ತಗೊಳ್ತಿರಲಿಲ್ಲ&lt;/strong&gt;&lt;/h2&gt;&lt;p&gt;ಈಗ, ವಿಜಯ್ ಗೆಲುವಿಗೆ ತ್ರಿಶಾಗೆ ಶುಭಾಶಯಗಳು ಹರಿದುಬರುತ್ತಿರುವುದನ್ನು ನಟಿ ಗಾಯತ್ರಿ ಶಂಕರ್ ಖಾರವಾಗಿ ಟೀಕಿಸಿದ್ದಾರೆ. ಒಬ್ಬ ನಟನ ವಿವಾಹೇತರ ಸಂಬಂಧವನ್ನು ಸಂಭ್ರಮಿಸುವ ಸಮಾಜ, ಇದೇ ಜಾಗದಲ್ಲಿ ನಟಿ ಇದ್ದಿದ್ದರೆ ಹೀಗೆಯೇ ನಡೆದುಕೊಳ್ಳುತ್ತಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ. ಒಂದು ವೇಳೆ, ಒಬ್ಬ ನಟಿ ತನ್ನ ಸಹನಟನ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡು, ಅದರಿಂದ ಆಕೆಯ ಸಂಸಾರ ಹಾಳಾಗುವ ಹಂತದಲ್ಲಿದ್ದರೆ, ಸಮಾಜ ಇದನ್ನು ಇಷ್ಟು ಸಿಂಪಲ್ ಆಗಿ ತಗೊಳ್ತಿರಲಿಲ್ಲ.&lt;/p&gt;&lt;p&gt;ತಮಾಷೆಯಾಗಿಯೂ ನೋಡುತ್ತಿರಲಿಲ್ಲ. ಇಡೀ ಗಂಡಸರ ಸಮಾಜವೇ ಆಕ್ರೋಶದಿಂದ ಕುದಿಯುತ್ತಿತ್ತು. ಆಕೆಗೆ ಬಾಯಿಗೆ ಬಂದಂತೆ ಬೈಯುತ್ತಿದ್ದರು. ಗೆಲ್ಲುವುದು ದೂರ, ಆಕ್ರೋಶಗೊಂಡ ಜನರ ಗುಂಪಿಗೆ ಹೆದರಿ ಮನೆಯಿಂದ ಹೊರಬರಲೂ ಆಗದ ಸ್ಥಿತಿ ನಿರ್ಮಾಣವಾಗುತ್ತಿತ್ತು,&quot; ಎಂದು ಗಾಯತ್ರಿ ತಮ್ಮ ಇನ್&zwnj;ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಗಾಯತ್ರಿ ಶಂಕರ್ 'ಸೂಪರ್ ಡೀಲಕ್ಸ್', 'ವಿಕ್ರಂ' ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/gayathrie-shankar-slams-double-standards-over-vijay-trisha-affair-rumors-gvd/articleshow-9z9a0tk"/>
        </item>
        <item>
            <title><![CDATA[ಆ ಹೀರೋಯಿನ್ ಗಾಗಿ ಪತ್ನಿಗೆ ಡಿವೋರ್ಸ್ ಕೊಡಲು ರೆಡಿಯಾಗಿದ್ರು ಸೂಪರ್ ಸ್ಟಾರ್ ರಜನಿಕಾಂತ್!]]></title>
            <link>https://kannada.asianetnews.com/gallery/cine-world/did-you-know-rajinikanths-affair-with-amala-after-marriage-with-latha-yva0ekv</link>
            <guid isPermaLink="true">https://kannada.asianetnews.com/gallery/cine-world/did-you-know-rajinikanths-affair-with-amala-after-marriage-with-latha-yva0ekv</guid>
            <pubDate>Thu, 07 May 2026 16:12:16 +0530</pubDate>
            <description><![CDATA[&lt;p&gt;ಸೂಪರ್ ಸ್ಟಾರ್ ರಜನಿಕಾಂತ್ ವಿವಾಹದ ಬಳಿಕ ತಮ್ಮ ಸಹ ನಟಿಯೊಬ್ಬರ ಪ್ರೀತಿಯಲ್ಲಿ ಬಿದ್ದು, ತಮ್ಮ ಪತ್ನಿಗೆ ಡಿವೋರ್ಸ್ ಕೊಡಲು ನಿರ್ಧರಿಸಿದ್ದರು. ಆದರೆ ಕೆ. ಬಾಲಚಂದರ್ ಮಧ್ಯಸ್ಥಿಕೆಯಿಂದಾಗಿ, ಮನಸ್ಸು ಬದಲಾಯಿಸಿದ್ದರು ರಜನಿ. ಆ ನಟಿ ಯಾರು ಗೊತ್ತಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0zhkchzewxwhcbb8akkn63,imgname-rajinikanth-1778149543312.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೂಪರ್ ಸ್ಟಾರ್ ರಜನಿಕಾಂತ್ ವಿವಾಹದ ಬಳಿಕ ತಮ್ಮ ಸಹ ನಟಿಯೊಬ್ಬರ ಪ್ರೀತಿಯಲ್ಲಿ ಬಿದ್ದು, ತಮ್ಮ ಪತ್ನಿಗೆ ಡಿವೋರ್ಸ್ ಕೊಡಲು ನಿರ್ಧರಿಸಿದ್ದರು. ಆದರೆ ಕೆ. ಬಾಲಚಂದರ್ ಮಧ್ಯಸ್ಥಿಕೆಯಿಂದಾಗಿ, ಮನಸ್ಸು ಬದಲಾಯಿಸಿದ್ದರು ರಜನಿ. ಆ ನಟಿ ಯಾರು ಗೊತ್ತಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಜನಿಕಾಂತ್, ಯಾವುದೇ ಪರಿಚಯದ ಅಗತ್ಯವಿಲ್ಲದ ಹೆಸರು. ಈ ಅಪ್ರತಿಮ ನಟನಿಗೆ ಭಾರತದಲ್ಲಿ ದೇವರಂತಹ ಸ್ಥಾನಮಾನವಿದೆ, ಅವರ ಹೆಸರಿನಲ್ಲಿ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವರ ಪೋಸ್ಟರ್&zwnj;ಗಳ ಮೇಲೆ ಹಾಲಿನ ಅಭಿಷೇಕವೂ ನಡೆಯುತ್ತೆ ಮತ್ತು ದೇವಾಲಯಗಳಲ್ಲಿ ಅವರಿಗಾಗಿ ಕಾಣಿಕೆಗಳನ್ನು ಅರ್ಪಿಸಲಾಗುತ್ತದೆ. ಆಗಸ್ಟ್ 15, 1975 ರಂದು, ರಜನಿಕಾಂತ್ ತಮ್ಮ ಚೊಚ್ಚಲ ಚಿತ್ರ ಅಪೂರ್ವ ರಾಗಂಗಳ್&zwnj;ನೊಂದಿಗೆ ಮೊದಲ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಂಡರು. ನಂತರ ಸ್ಟಾರ್ ನಟನಾಗಿ ಮಿಂಚಿದರು.&lt;/p&gt;&lt;img&gt;&lt;p&gt;ರಜನಿಕಾಂತ್ ಅವರ ವೃತ್ತಿಜೀವನವು ಯಾವಾಗಲೂ ಗಮನ ಸೆಳೆಯುತ್ತಿದ್ದರೂ, ಅವರ ವೈಯಕ್ತಿಕ ಜೀವನವು ಸದಾ ಸುದ್ದಿಯಲ್ಲಿರುತ್ತಿದ್ದುದು ಸುಳ್ಳಲ್ಲ. ದಕ್ಷಿಣ ಭಾರತದ ಚಲನಚಿತ್ರಗಳ ಕೆಲವು ಪ್ರಮುಖ ನಟಿಯರೊಂದಿಗೆ ರಜನಿಕಾಂತ್ ರಿಲೇಶನ್&rsquo;ಶಿಪ್ ನಲ್ಲಿದ್ದರು ಎನ್ನುವ ಮಾತು ಕೂಡ ಇದೆ.. ನಾಗಾರ್ಜುನ ಅವರ ಎರಡನೇ ಪತ್ನಿ ಅಮಲಾ ಅವರಿಗಾಗಿ ರಜನಿಕಾಂತ್ ತಮ್ಮ ಪತ್ನಿ ಲತಾ ರಂಗಾಚಾರಿಗೆ ವಿಚ್ಛೇದನ ಮಾಡಲು ಸಿದ್ಧರಾಗಿದ್ದರು ಎಂದು ನಿಮಗೆ ತಿಳಿದಿದೆಯೇ?&lt;/p&gt;&lt;img&gt;&lt;p&gt;ರಜನಿಕಾಂತ್ ಮತ್ತು ಅಮಲಾ &lsquo;ಮಾಪ್ಪಿಲ್ಲೈ&rsquo;, &lsquo;ಕೋಡಿ ಪರಕ್ಕುತ್ತು&rsquo; ಮತ್ತು &lsquo;ವೆಲೈಕಾರನ್&rsquo; ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದರು. ಅವರ ತೆರೆಯ ಮೇಲಿನ ಕೆಮಿಸ್ಟ್ರಿಯನ್ನು ಜನ ಇಷ್ಟಪಟ್ಟಿದ್ದರು. 1987 ರಲ್ಲಿ 'ವೆಲೈಕಾರನ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಜನಿಕಾಂತ್ ಅವರಿಗೆ ಅಮಲಾ ಮೇಲೆ ಪ್ರೀತಿಯಾಗಿತ್ತು. ಅಮಲಾ ಸಿನಿಮಾ ಸೆಟ್ ಗೆ ರಜನಿ ಬಂದು ಬಹಳ ಗಂಟೆಗಳ ಕಾಲ ಇರುತ್ತಿದ್ದರು ಎನ್ನುವ ಸುದ್ದಿ ಕೂಡ ಇದೆ.&lt;/p&gt;&lt;img&gt;&lt;p&gt;ರಜನಿಕಾಂತ್ ಮತ್ತು ಅಮಲಾ ನಡುವಿನ ಸಂಬಂಧ ಎಷ್ಟು ಗಂಭೀರವಾಯಿತು ಎಂದರೆ ನಟ ತಮ್ಮ ಪತ್ನಿ ಲತಾ ರಂಗಾಚಾರಿಗೆ ವಿಚ್ಛೇದನ ನೀಡುವ ಬಗ್ಗೆ ಯೋಚಿಸಿದರು. ಹಲವಾರು ವರದಿಗಳ ಪ್ರಕಾರ, ಅವರು ಲತಾ ಅವರಿಗೆ ನೋಟಿಸ್ ಸಹ ಕಳುಹಿಸಿದ್ದಾರೆ. ಅವರ ವಿಚ್ಛೇದನದ ವದಂತಿಯು ನಟನ ಅಭಿಮಾನಿಗಳನ್ನು ಕೆರಳಿಸಿತು, ಅವರು ಅವರ ಚಲನಚಿತ್ರಗಳನ್ನು ಬಹಿಷ್ಕರಿಸಲು ಪ್ರಾರಂಭಿಸಿದರು ಎನ್ನುವ ಗಾಸಿಪ್ ಕೂಡ್ ಇದೆ.&lt;/p&gt;&lt;img&gt;&lt;p&gt;ವಿಷಯ ಗಂಭೀರವಾಗುತ್ತಿದ್ದಂತೆ, ಚಿಂತಿತರಾದ ಲತಾ, ರಜನಿಕಾಂತ್ ಅವರ ಮೆಂಟರ್ ಆಗಿದ್ದ ಚಲನಚಿತ್ರ ನಿರ್ಮಾಪಕ ಕೆ. ಬಾಲಚಂದರ್ ಜೊತೆ ಮಾತನಾಡಿದರು. ಕೆ ಬಾಲಚಂದರ್ ಪರಿಸ್ಥಿತಿಯನ್ನು ನಿಭಾಯಿಸಿ, ಪತ್ನಿಗೆ ವಿಚ್ಛೇದನ ನೀಡಿದರೆ ಕುಟುಂಬ ಒಡೆಯುವುದಲ್ಲದೇ, ನಟನಾಗಿ ಅವರ ಖ್ಯಾತಿಗೆ ಕಳಂಕ ತರುತ್ತದೆ ಎಂದು ಬಾಲಚಂದರ್ ರಜನಿಕಾಂತ್ ಅವರಿಗೆ ತಿಳಿಸಿದರು. ಬಾಲಚಂದರ್ ಅವರ ಮಧ್ಯಸ್ಥಿಕೆಯ ನಂತರ, ರಜನಿಕಾಂತ್ ತಮ್ಮ ನಿರ್ಧಾರವನ್ನು ಬದಲಾಯಿಸಿದರು ಮತ್ತು ಶೀಘ್ರದಲ್ಲೇ ವದಂತಿಗಳು ಸಹ ನಿಂತುಹೋದವು.&lt;/p&gt;&lt;img&gt;&lt;p&gt;ರಜನಿಕಾಂತ್ ಮತ್ತು ಕಾಲೇಜು ವಿದ್ಯಾರ್ಥಿನಿ ಲತಾ ರಂಗಾಚಾರಿ ಭೇಟಿ ತುಂಬಾ ಆಕಸ್ಮಿಕ. ಚೆನ್ನೈನ ಎಥಿರಾಜ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿಯಾಗಿದ್ದ ಲತಾ ಅವರನ್ನು ಕಾಲೇಜು ಮ್ಯಾಗಜಿನ್ ಗಾಗಿ ರಜನಿಕಾಂತ್ ಅವರನ್ನು ಸಂದರ್ಶನ ಮಾಡಲು ನಿಯೋಜಿಸಲಾಯಿತು. ಸಂದರ್ಶನಕ್ಕಾಗಿ ರಜನಿಕಾಂತ್ ಲತಾ ಅವರನ್ನು ಭೇಟಿಯಾದಾಗ, ಮೊದಲ ಭೇಟಿಯಲ್ಲೆ ರಜನಿಗೆ ಲತಾ ಮೇಲೆ ಲವ್ ಆಗಿತ್ತು, ಅವರು ಸಂದರ್ಶನದ ಸಮಯದಲ್ಲೇ ಲತಾಗೆ ಪ್ರಪೋಸ್ ಮಾಡಿದ್ದರು.&lt;/p&gt;&lt;img&gt;&lt;p&gt;ಒಬ್ಬ ಸ್ಟಾರ್ ನಟನನ್ನು ಮದುವೆಯಾಗುವ ವಿಚಾರ ಥ್ರಿಲ್ಲಿಂಗ್ ಎನಿಸಿದರೂ ಸಹ, ಲತಾ ಶಾಂತವಾಗಿದ್ದಳು ಮತ್ತು ತನ್ನ ಕುಟುಂಬದೊಂದಿಗೆ ಈ ಬಗ್ಗೆ ಚರ್ಚಿಸಬೇಕು ಎಂದು ಹೇಳಿದರಂತೆ. ರಜನಿಕಾಂತ್ ಅವರ ವಿನಮ್ರ ಸ್ವಭಾವವೇ ಲತಾ ಅವರನ್ನು ಆಕರ್ಷಿಸಿತು. ಚಿತ್ರರಂಗದಲ್ಲಿ ಅಷ್ಟೊಂದು ಪ್ರಸಿದ್ಧ ಹೆಸರಾಗಿದ್ದರೂ, ರಜನಿಕಾಂತ್ ತುಂಬಾ ವಿನಮ್ರರಾಗಿದ್ದರು. ಅವರು ಲತಾ ಪೋಷಕರನ್ನು ಭೇಟಿಯಾದರು, ಮತ್ತು ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ, ದಂಪತಿಗಳು ಫೆಬ್ರವರಿ 26, 1981 ರಂದು ತಿರುಪತಿಯ ಪ್ರಸಿದ್ಧ ಭಗವಾನ್ ಬಾಲಾಜಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯಲ್ಲಿ ವಿವಾಹವಾದರು. ಶೀಘ್ರದಲ್ಲೇ, ಅವರು ಐಶ್ವರ್ಯ ಮತ್ತು ಸೌಂದರ್ಯ ಎಂಬ ಇಬ್ಬರು ಮುದ್ದಾದ ಮಕ್ಕಳ ಪೋಷಕರಾದರು.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/cine-world/did-you-know-rajinikanths-affair-with-amala-after-marriage-with-latha-yva0ekv"/>
        </item>
        <item>
            <title><![CDATA[ಇದು AIನಾ? ನಿಜಾನಾ? ನಟನ ಮಗಳ ಬೋಲ್ಡ್ ವಿಡಿಯೋ ಲೀಕ್: ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ]]></title>
            <link>https://kannada.asianetnews.com/entertainment/hansika-krishna-viral-video-sparks-debate-was-it-leaked-or-a-stunt-gvd/articleshow-x3aymqe</link>
            <guid isPermaLink="true">https://kannada.asianetnews.com/entertainment/hansika-krishna-viral-video-sparks-debate-was-it-leaked-or-a-stunt-gvd/articleshow-x3aymqe</guid>
            <pubDate>Thu, 07 May 2026 16:16:02 +0530</pubDate>
            <description><![CDATA[&lt;p&gt;ನಟ ಕೃಷ್ಣಕುಮಾರ್ ಅವರ ಮಗಳು ಹಂಸಿಕಾ ಕೃಷ್ಣ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಿಂದಾಗಿ ಹಂಸಿಕಾ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಏನೂ ಕನ್ಫರ್ಮ್ ಆಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr10pk46kxarszw35863dhw2,imgname-jv-1778150755462.png" type="image/jpeg" height="390" width="690"/>
            <content:encoded><![CDATA[&lt;p&gt;ಮಲಯಾಳಂ ನಟ ಕೃಷ್ಣಕುಮಾರ್ ಅವರ ಕುಟುಂಬ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಫೇಮಸ್. ಕೃಷ್ಣಕುಮಾರ್, ಅವರ ಪತ್ನಿ ಸಿಂಧು ಮತ್ತು ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಸಿಂಧು ಮತ್ತು ಅವರ ಮಕ್ಕಳಿಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್&zwnj;ಗಳಿದ್ದು, ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಇವರಲ್ಲಿ ಕೊನೆಯ ಮಗಳೇ ಹಂಸಿಕಾ ಕೃಷ್ಣ. ಹಂಸಿಕಾ ಸದ್ಯದಲ್ಲೇ ಚಿತ್ರರಂಗಕ್ಕೆ ಬರ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತವಾಗಿ ಏನೂ ಕನ್ಫರ್ಮ್ ಆಗಿಲ್ಲ.&lt;/p&gt;&lt;p&gt;ಹಂಸಿಕಾ ತಮ್ಮ ಫೋಟೋಶೂಟ್ ಮತ್ತು ಚಿಕ್ಕಪುಟ್ಟ ಖುಷಿಯ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅವೆಲ್ಲಾ ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ತವೆ. ಆದರೆ ಈಗ, ಹಂಸಿಕಾ ಪೋಸ್ಟ್ ಮಾಡದ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಹಂಸಿಕಾ ಬೋಲ್ಡ್ ಆಗಿ, ಬೇರೆ ಬೇರೆ ಸ್ಟೈಲ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಬ್&zwnj;ಸ್ಕ್ರೈಬರ್&zwnj;ಗಳಿಗಾಗಿ ಮಾಡಿದ ಎಕ್ಸ್&zwnj;ಕ್ಲೂಸಿವ್ ವಿಡಿಯೋ, ಅದು ಈಗ ಲೀಕ್ ಆಗಿದೆ ಅಂತ ಹೇಳಲಾಗುತ್ತಿದೆ.&lt;/p&gt;&lt;h2&gt;&lt;strong&gt;ಪಕ್ಕಾ ಒರಿಜಿನಲ್ ವಿಡಿಯೋ&lt;/strong&gt;&lt;/h2&gt;&lt;p&gt;ಈ ವಿಡಿಯೋ ವೈರಲ್ ಆದ್ಮೇಲೆ ಕೃಷ್ಣಕುಮಾರ್ ಮತ್ತು ಹಂಸಿಕಾ ವಿರುದ್ಧ ಜನ ಸಿಕ್ಕಾಪಟ್ಟೆ ಟೀಕೆ ಮಾಡುತ್ತಿದ್ದಾರೆ. ಕೆಲವರು 'ಇದು ಹಂಸಿಕಾ ಅಲ್ಲ, ಅವಳು ಇಂಥವಳಲ್ಲ' ಅಂತ ವಾದಿಸಿದರೆ, ಇನ್ನು ಕೆಲವರು 'ಇದು ಪಕ್ಕಾ ಒರಿಜಿನಲ್ ವಿಡಿಯೋ' ಅಂತಿದ್ದಾರೆ. 'ದುಡ್ಡು ಮಾಡೋಕೆ ಈ ರೀತಿ ಮಾಡ್ತಿದ್ದಾರೆ' ಅಂತ ಹಲವರು ಕಟುವಾಗಿ ಟೀಕಿಸುತ್ತಿದ್ದಾರೆ. ಇದೆಲ್ಲಾ ಸಬ್&zwnj;ಸ್ಕ್ರೈಬರ್&zwnj;ಗಳ ಸಂಖ್ಯೆ ಹೆಚ್ಚಿಸಿಕೊಳ್ಳೋಕೆ ಮಾಡ್ತಿರೋ ಗಿಮಿಕ್ ಅಂತಾನೂ ಕೆಲವರು ಕಾಲೆಳೆಯುತ್ತಿದ್ದಾರೆ.&lt;/p&gt;&lt;p&gt;ಹಂಸಿಕಾ ತಮ್ಮ ಇನ್&zwnj;ಸ್ಟಾಗ್ರಾಮ್ ಸಬ್&zwnj;ಸ್ಕ್ರಿಪ್ಷನ್&zwnj;ಗೆ ತಿಂಗಳಿಗೆ 390 ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರಿಗೆ ಈಗಾಗಲೇ 1764 ಸಬ್&zwnj;ಸ್ಕ್ರೈಬರ್&zwnj;ಗಳಿದ್ದಾರೆ. ಈ ವಿಡಿಯೋ ಲೀಕ್ ಆದ ಒಂದೇ ದಿನದಲ್ಲಿ 700ಕ್ಕೂ ಹೆಚ್ಚು ಹೊಸ ಸಬ್&zwnj;ಸ್ಕ್ರೈಬರ್&zwnj;ಗಳು ಬಂದಿದ್ದಾರೆ ಅಂತ ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ. ಆದರೆ, ಈ ವಿವಾದದ ಬಗ್ಗೆ ಹಂಸಿಕಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/hansika-krishna-viral-video-sparks-debate-was-it-leaked-or-a-stunt-gvd/articleshow-x3aymqe"/>
        </item>
        <item>
            <title><![CDATA[ಎಲ್ಲಾ ಓಕೆ, ಆದ್ರೂ ವೀಕ್ಷಕರು ಮಾತ್ರ ನಂಬ್ತಿಲ್ಲ; ಅಮೃತಧಾರೆ ಬಗ್ಗೆ ಹೀಗೊಂದು ಅನುಮಾನ]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-viewers-have-doubts-about-shakuntala-meanwhile-kd-jaidev-goes-to-jail-mrq-1kxhezm</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-viewers-have-doubts-about-shakuntala-meanwhile-kd-jaidev-goes-to-jail-mrq-1kxhezm</guid>
            <pubDate>Thu, 07 May 2026 14:29:59 +0530</pubDate>
            <description><![CDATA[&lt;p&gt;ಅಮೃತಧಾರೆ ಧಾರಾವಾಹಿ ಮುಕ್ತಾಯದ ವದಂತಿಗಳ ನಡುವೆ ವೀಕ್ಷಕರು ಕೆಲವೊಂದು ಪಾತ್ರವನ್ನು ಅನುಮಾನಿಸುತ್ತಿದ್ದಾರೆ. ದಿಯಾಳ ದೂರಿನಿಂದ ಜೈದೇವ್ ಜೈಲು ಸೇರಿದ್ದು, ಧಾರಾವಾಹಿಯ ಕಥೆಯು ರೋಚಕ ತಿರುವು ಪಡೆದುಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0t8wtb3myergf21x8yef1b,imgname-amruthadhaare--5--1778144015179.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿ ಮುಕ್ತಾಯದ ವದಂತಿಗಳ ನಡುವೆ ವೀಕ್ಷಕರು ಕೆಲವೊಂದು ಪಾತ್ರವನ್ನು ಅನುಮಾನಿಸುತ್ತಿದ್ದಾರೆ. ದಿಯಾಳ ದೂರಿನಿಂದ ಜೈದೇವ್ ಜೈಲು ಸೇರಿದ್ದು, ಧಾರಾವಾಹಿಯ ಕಥೆಯು ರೋಚಕ ತಿರುವು ಪಡೆದುಕೊಂಡಿದೆ.&lt;/p&gt;&lt;img&gt;&lt;p&gt;ಕಳೆದ ನಾಲ್ಕೈದು ದಿನಗಳಿಂದ ಜೀ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಮುಕ್ತಾಯಗೊಳ್ಳಲಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ. ಜೈದೇವ್&zwnj;ನನ್ನು ಹೊರತುಪಡಿಸಿ ಗೌತಮ್ ತನ್ನೆಲ್ಲಾ ಕುಟುಂಬಸ್ಥರೊಂದಿಗೆ ದಿವಾನ್ ಮನೆ ಸೇರಿದ್ದಾನೆ. ಸೀರಿಯಲ್&zwnj;ನ ಪ್ರಮುಖ ಪಾತ್ರಧಾರಿ ಶಕುಂತಲಾ ಸಹ ತನ್ನ ಕೆಟ್ಟ ಚಾಳಿಯನ್ನು ಮರೆತು ಒಳ್ಳೆಯವಳಾಗಿದ್ದಾಳೆ. ಇದಕ್ಕೂ ಮೊದಲು ಶಕುನಿ ಮಾಮ ಸಹ ಚೇಂಜ್ ಆಗಿದ್ರು.&lt;/p&gt;&lt;img&gt;&lt;p&gt;ಹೌದು, ಶಕುಂತಲಾ ಬದಲಾಗಿರೋದನ್ನು ಸೀರಿಯಲ್ ವೀಕ್ಷಕರು ಮಾತ್ರ ನಂಬುತ್ತಿಲ್ಲ. ಇಂದು ಬಿಡುಗಡೆಯಾಗಿರುವ ಪ್ರೋಮೋಗೆ ಕಮೆಂಟ್ ಮಾಡಿರುವ ವೀಕ್ಷಕರು, ಶಕುಂತಲಾ ದೇವಿದು ನಾಟಕಾನೇ ಇರುತ್ತದೆ. ನಂಬಬೇಡಿ. ಯಾಕೋ ಶಕುಂತಲಾ ನಾಟಕ ಮಾಡ್ತಿದ್ದಾಳೆ ಅನ್ನಿಸುತ್ತಿದೆ ಯಾರು ಇದನ್ನ ನಂಬಬಾರದು ಹಾಗೇ ಮೋಸ ಹೋಗ್ಬಾರ್ದು ಅನ್ನೋದೇ ನನ್ನ ಸಲಹೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಶಕುಂತಲಾ ಎರಡನೇಯ ಇನ್ನಿಂಗ್ಸ್ ಆರಂಭ, ಗುಂಡು ಡಕ್ ಔಟ್ ಆಗೋದು ನಿಶ್ಚಿತ ಮತ್ತು ಚತುರ ನಿರ್ದೇಶಕ ಎಂದು ಹೇಳಿದ್ದಾರೆ. ಈ ರೀತಿಯ ಸಾಲು ಸಾಲು ಕಮೆಂಟ್&zwnj;ಗಳು ಪ್ರೋಮೋಗೆ ಬಂದಿದ್ದು, ಸೀರಿಯಲ್ ಮುಗಿಯುತ್ತೆ ಅನ್ನೋದಕ್ಕೂ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ದಿಯಾ ಬೇಬಿಯನ್ನು ಮನವೊಲಿಸಲು ಜೈದೇವ್&zwnj; ನಿರಂತರವಾಗಿ ಪ್ರಯತ್ನದಲ್ಲಿದ್ದಾರೆ.&lt;/p&gt;&lt;img&gt;&lt;p&gt;ದಿಯಾ ಮನೆ ಮುಂದೆಯೇ ಸುತ್ತಾಡುತ್ತಿದ್ದ ಜೈದೇವ್ ಸದ್ಯ ಜೈಲು ಸೇರಿದ್ದಾನೆ. ತನ್ನ ಮನೆ ಮುಂದೆ ಬರದಂತೆ ಎಚ್ಚರಿಕೆ ನೀಡಿದರೂ ಜೈದೇವ್ ಅಲ್ಲೇ ಸುತ್ತಾಡುತ್ತಿದ್ದನು. ಇದರಿಂದ ಬೇಸತ್ತ ದಿಯಾ, ಪೊಲೀಸರಿಗೆ ದೂರು ನೀಡಿದ್ದಳು. ಇಂದಿನ ಪ್ರೋಮೋದಲ್ಲಿ ಜೈದೇವ್&zwnj;ನನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರೋದನ್ನು ತೋರಿಸಲಾಗಿದೆ.&lt;/p&gt;&lt;img&gt;&lt;p&gt;ಶಕುಂತಲಾಗೆ ಜೈದೇವ್, ಪಾರ್ಥ್, ಮಹಿಮಾ ಮತ್ತು ಅಶ್ವಿನಿ ಎಂಬ ನಾಲ್ಕು ಮಕ್ಕಳು. ಕಳೆದ ಹಲವು ತಿಂಗಳುಗಳಿಂದ ಅಶ್ವಿನಿ ಪಾತ್ರವನ್ನು ತೆರೆಯ ಹಿಂದೆ ಸರಿಸಲಾಗಿದೆ. ಅಶ್ವಿನಿ ಎಲ್ಲಿ ಹೋದ್ಳು ಎಂಬುದರ ಬಗ್ಗೆ ವೀಕ್ಷಕರು ಆಗಾಗ ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಮಹಿಮಾ ಪಾತ್ರಧಾರಿಯೂ ಮೂರು ಬಾರಿ ಬದಲಾಗಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-viewers-have-doubts-about-shakuntala-meanwhile-kd-jaidev-goes-to-jail-mrq-1kxhezm"/>
        </item>
        <item>
            <title><![CDATA[ಜೈಲಲ್ಲಿ ದರ್ಶನ್​ಗೆ ದುಃಸ್ಥಿತಿ, ನಂಗೆ ರಾಯಲ್​​ ಟ್ರೀಟ್​ಮೆಂಟ್​: ಕ್ಯಾಮೆರಾ ಆಫ್​ ಆದ್ಮೇಲೆ Dog Satish​ ಗುಟ್ಟು ರಟ್ಟು]]></title>
            <link>https://kannada.asianetnews.com/gallery/tv-talk/bigg-boss-dog-satish-about-darshan-in-jail-and-royal-treatement-secret-suc-yttiu9c</link>
            <guid isPermaLink="true">https://kannada.asianetnews.com/gallery/tv-talk/bigg-boss-dog-satish-about-darshan-in-jail-and-royal-treatement-secret-suc-yttiu9c</guid>
            <pubDate>Thu, 07 May 2026 14:06:07 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಜೈಲಿನಲ್ಲಿ ನಟ ದರ್ಶನ್&zwnj;ಗೆ ಸಿಗುತ್ತಿರುವ ಟ್ರೀಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ತಮಗೆ &amp;nbsp;'ರಾಯಲ್ ಟ್ರೀಟ್ಮೆಂಟ್' ಸಿಕ್ಕಿತ್ತು, ಆದರೆ ದರ್ಶನ್&zwnj;ಗೆ ಹಾಗಾಗುತ್ತಿಲ್ಲ ಎಂದಿದ್ದಾರೆ. ರಾಜಮರ್ಯಾದೆಯ ಹಿಂದಿನ ಗುಟ್ಟಿನ ಬಗ್ಗೆ ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0s4zx2qfc1rtbqyp3g6wz5,imgname-bigg-boss-dog-satish-and-darshan-1778142838690.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಜೈಲಿನಲ್ಲಿ ನಟ ದರ್ಶನ್&zwnj;ಗೆ ಸಿಗುತ್ತಿರುವ ಟ್ರೀಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ತಮಗೆ &amp;nbsp;'ರಾಯಲ್ ಟ್ರೀಟ್ಮೆಂಟ್' ಸಿಕ್ಕಿತ್ತು, ಆದರೆ ದರ್ಶನ್&zwnj;ಗೆ ಹಾಗಾಗುತ್ತಿಲ್ಲ ಎಂದಿದ್ದಾರೆ. ರಾಜಮರ್ಯಾದೆಯ ಹಿಂದಿನ ಗುಟ್ಟಿನ ಬಗ್ಗೆ ಹೇಳಿದ್ದೇನು?&lt;/p&gt;&lt;img&gt;&lt;p&gt;ಬಾಯಿ ಬಿಟ್ಟರೆ ಕೋಟಿ ಕೋಟಿಯಲ್ಲಿ ಮಾತನಾಡುವ, ತಮಗಿಂತ ಸುಂದರ ಯಾರೂ ಇಲ್ಲ ಎನ್ನುವ, ತಾನೊಬ್ಬನಿದ್ದರೆ ಬಿಗ್​ಬಾಸ್ ಕನ್ನಡವನ್ನು ವಿಶ್ವದ ಮಟ್ಟಕ್ಕೆ ಒಯ್ಯುತ್ತೇನೆ ಎನ್ನುವ, ತನ್ನ ಹಿಂದೆ ಮುಂದೆ ಸುರಸುಂದರಿಯರು ತಿರುಗುತ್ತಾರೆ, ರಾಜಕಾರಣಿಗಳು, ಮಾಧ್ಯಮದವರು ನನ್ನ ಪಾಕೆಟ್​ನಲ್ಲಿ ಇದ್ದಾರೆ ಎಂದೆಲ್ಲಾ ಹೇಳುವ Bigg Boss ಖ್ಯಾತಿಯ ಡಾಗ್​ ಸತೀಶ್​ ಇದೀಗ ತಮ್ಮ ಬಳಿ ಇರುವ ನಾಯಿಯ ಬೆಲೆ 100 ಕೋಟಿ ಎಂದು ಹೇಳುವ ಮೂಲಕ ಸಾಕಷ್ಟು ಬಾರಿ ಟ್ರೋಲ್​ಗೆ ಒಳಗಾಗಿದ್ದು ಗೊತ್ತೇ ಇದೆ.&lt;/p&gt;&lt;img&gt;&lt;p&gt;ಅದೇ 100 ಕೋಟಿ ಎನ್ನುವ ನಾಯಿಯ ಹುಟ್ಟುಹಬ್ಬವನ್ನು ಆಚರಿಸಿದರೋ ಡಾಗ್​ ಸತೀಶ್​, ಇದೀಗ ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್​ ಕುರಿತು ಕೇಳಿರುವ ಪ್ರಶ್ನೆಗೆ ಕುತೂಹಲ ಎನ್ನುವಂಥ ಉತ್ತರವನ್ನು ಕೊಟ್ಟಿದ್ದಾರೆ. ಅಷ್ಟಕ್ಕೂ ಡಾಗ್​ ಸತೀಶ್​ ಅವರ ಮೇಲೆ ಇದಾಗಲೇ ಕೇಸ್​ ಕೂಡ ಆಗಿತ್ತು. ವೂಲ್ಫ್ ಡಾಗ್ ಅನ್ನು ಖರೀದಿಸಿರುವ ಬಗ್ಗೆ ಅವರು ಪೋಸ್ಟ್​ ಹಾಕಿದ್ದರು. ಇದು ಬಿಗ್​ಬಾಸ್​ಗೂ ಹೋಗುವ ಮುನ್ನ ನಡೆದಿದ್ದ ಘಟನೆ. ಐವತ್ತು ಕೋಟಿ ರೂ. ಶ್ವಾನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಅವರ ನಿವಾಸದ ಮೇಲೆ ದಾಳಿ ಕೂಡ ನಡೆಸಿತ್ತು. ಹಲವಾರು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ನಾಯಿಯ ಬೆಲೆ 50 ಕೋಟಿ ರೂ. ಎಂದು ಹೇಳಿರುವುದು ಸುಳ್ಳು ಎಂದೇ ಹೇಳಿದ್ದರು. ಕೊನೆಗೆ ಸತೀಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.&lt;/p&gt;&lt;img&gt;&lt;p&gt;ಇದರ ಬೆಲೆ 4.4 ಮಿಲಿಯನ್ ಪೌಂಡ್ ಆಗಿದ್ದು ಭಾರತದ ರೂಪಾಯಿಗೆ ಈ ಹಣವನ್ನು ಹೋಲಿಕೆ ಮಾಡಿದರೆ ಇದು 49 ಕೋಟಿ ರೂ. ಮೌಲ್ಯದ್ದು ಎಂದು ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಾಡು ತೋಳ ಹಾಗೂ ಕಕೇಶಿಯನ್ ಶೆಪರ್ಡ್ ಎಂಬ ಎರಡು ತಳಿಗಳ ಮಿಶ್ರಣವಾಗಿದ್ದ ಈ ನಾಯಿಯು ತೀರಾ ಅಪರೂಪದಲ್ಲಿ ಅಪರೂಪದ್ದು ಎಂದು ಸತೀಶ್ ಹೇಳಿಕೊಂಡಿದ್ದರು. ಆದರೆ ಇವೆಲ್ಲವೂ ಸುಳ್ಳು ಎಂದು ಅಧಿಕಾರಿಗಳು ತಿಳಿಸಿದ್ದರು. ಇದೇ ವಿಚಾರ ಹಾಗೂ ಬಳಿಕ ಪತ್ನಿಯಿಂದ ಡಿವೋರ್ಸ್​ ವಿಚಾರವಾಗಿ ಬಹಳ ಸದ್ದು ಮಾಡಿದ್ದ ಡಾಗ್​ ಸತೀಶ್​ ಅವರಿಗೆ ಬಿಗ್​ಬಾಸ್​​ ಆಫರ್​ ಕೊಟ್ಟಿತ್ತು. ಇದೀಗ ಅವರು ಬಿಗ್​ಬಾಸ್​ ಸತೀಶ್​ ಆಗಿ ಫೇಮಸ್​ ಆಗಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಜೈಲಿನಲ್ಲಿ ತಮಗೆ ಕೊಟ್ಟಿರುವ ಟ್ರೀಟ್​ಮೆಂಟ್​ ಹಾಗೂ ದರ್ಶನ್​ ಅವರಿಗೆ ಕೊಡುತ್ತಿರುವ ಟ್ರೀಟ್​ಮೆಂಟ್​ ಬಗ್ಗೆ ಮಾತನಾಡಿದ್ದಾರೆ. ತಮಗೆ ಜೈಲಿನಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ದರ್ಶನ್​ ಅವರು ಕೋರ್ಟ್​ ಮೊರೆ ಹೋಗಿರುವ ಬಗ್ಗೆ ಕೇಳಿದಾಗ, ಸತೀಶ್​ ಅವರು, ಜೈಲಿನಲ್ಲಿ ಇದೆಲ್ಲಾ ಕಾಮನ್​. ಅಲ್ಲಿ ಆಗದವರೂ ಇರ್ತಾರೆ,, ಒಳ್ಳೆಯವರು, ಕೆಟ್ಟವರು, ಆಪೋಸಿಟ್​ ಇದ್ದವರು ಎಲ್ಲರೂ ಇರ್ತಾರೆ. ಅದಕ್ಕೆ ದರ್ಶನ್​ ಅವರಿಗೆ ಹಾಗೆ ಆಗ್ತಿದೆ. ಆದರೆ ನನಗಂತೂ ಹೀಗಾಗಲಿಲ್ಲ, ರಾಯಲ್​ ಟ್ರೀಟ್​ಮೆಂಟ್ ಸಿಕ್ಕಿತ್ತು, ರಾಜನ ರೀತಿ ಇದ್ದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಈ ಹಿಂದೆ ಕೂಡ ಸತೀಶ್​ ಜೈಲಿನಲ್ಲಿ ತಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡರು ಎನ್ನುವ ಬಗ್ಗೆ ವಿವರಿಸಿದ್ದರು. ಜೈಲು ದಿ ಬೆಸ್ಟ್​. ಅಪ್ಪ-ಅಮ್ಮನಿಗಿಂತಲೂ ಅಲ್ಲಿ ಇರುವವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಹೊರಗಡೆ ಇರುವ ಬದಲು ಒಳಗಡೆ ಇರುವುದೇ ತುಂಬಾ ಲೇಸು ಎಂದು ಹೇಳಿದ್ದರು. ಆಚೆ ನೆಮ್ಮದಿ ಇಲ್ಲ ಎಂದೂ ಹೇಳಿದ್ದರು. ಏನಾದ್ರೂ ಇಶ್ಯು ಮಾಡಿ ಒಳಗೆ ಕಳಿಸುವ ಹಾಗಿದ್ರೆ ಕಳಿಸಿ ಸರ್​ ಎಂದು ಕೂಡ ಹೇಳಿದ್ದರು.&lt;/p&gt;&lt;img&gt;&lt;p&gt;ಹಾಗಿದ್ದರೆ, ಇದಕ್ಕೆ ಕಾರಣ ಏನು? ನಿಮಗೆ ರಾಯಲ್ ಟ್ರೀಟ್​ಮೆಂಟ್​ ಪೊಲೀಸರು ಯಾಕೆ ಕೊಟ್ಟರು ಎನ್ನುವ ಪ್ರಶ್ನೆಗೆ ಮಾತ್ರ, ಸತೀಶ್​ ಅವೆಲ್ಲಾ ಸೀಕ್ರೇಟ್​, ಕ್ಯಾಮೆರಾ ಆಫ್​ ಮಾಡಿದ್ರೆ ಅದರ ಗುಟ್ಟನ್ನು ಹೇಳುತ್ತೇನೆ ಎಂದಿದ್ದಾರೆ. ಜೈಲಿನಲ್ಲಿ ಏಕೆ ಹೀಗೆಲ್ಲಾ ರಾಯಲ್​ ಟ್ರೀಟ್​ಮೆಂಟ್​ ಕೊಡ್ತಾರೆ ಎಂದು ಓಪನ್ ಆಗಿ ಹೇಳುವ ಹಾಗಿಲ್ಲ. ಕ್ಯಾಮೆರಾ ಮುಂದೆ ಹೇಳಿದರೆ ಕಷ್ಟ ಎನ್ನುವುದು ಅವರ ಮಾತು!&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-dog-satish-about-darshan-in-jail-and-royal-treatement-secret-suc-yttiu9c"/>
        </item>
        <item>
            <title><![CDATA[Amruthadhaare Serial: ಬಟ್ಟೆ ಬಿಚ್ಚಿದ ಪೊಲೀಸ್ರು, ಕಮ್ಮಿಯಾಗದ ಜಯದೇವ್‌ ಕೊಬ್ಬು; ಕೊನೇ ಎಪಿಸೋಡ್‌ನಲ್ಲಿ ಏನಾಗುತ್ತೆ?]]></title>
            <link>https://kannada.asianetnews.com/gallery/tv-talk/amruthadhaare-kannada-serial-episode-update-jayadev-is-in-police-station-cygdvlo</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-episode-update-jayadev-is-in-police-station-cygdvlo</guid>
            <pubDate>Thu, 07 May 2026 11:41:02 +0530</pubDate>
            <description><![CDATA[&lt;p&gt;Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್&zwnj; ಈಗ ಜೈಲಿಗೆ ಸೇರಿದ್ದಾನೆ. ಪದೇ ಪದೇ ಅವನು ದಿಯಾ ಮನೆಗೆ ಹೋಗಿ ತೊಂದರೆ ಕೊಡುತ್ತಿದ್ದನು, ಇದನ್ನು ನೋಡಿ ಅವಳೇ ಪೊಲೀಸ್&zwnj; ಠಾಣೆ ಮೆಟ್ಟಿಲೇರಿದ್ದಾಳೆ. ಜಯದೇವ್&zwnj;ನನ್ನು ಸ್ಟೇಶನ್&zwnj;ಗೆ ಹಾಕಲಾಗಿದೆ. ಅವನೀಗ ಅಲ್ಲಿಯೂ ಧಿಮಾಕು ಕಡಿಮೆ ಆಗಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0gqad7nd8rwttmnwfp894e,imgname-new-project---2026-05-07t113531.215-1778134002087.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್&zwnj; ಈಗ ಜೈಲಿಗೆ ಸೇರಿದ್ದಾನೆ. ಪದೇ ಪದೇ ಅವನು ದಿಯಾ ಮನೆಗೆ ಹೋಗಿ ತೊಂದರೆ ಕೊಡುತ್ತಿದ್ದನು, ಇದನ್ನು ನೋಡಿ ಅವಳೇ ಪೊಲೀಸ್&zwnj; ಠಾಣೆ ಮೆಟ್ಟಿಲೇರಿದ್ದಾಳೆ. ಜಯದೇವ್&zwnj;ನನ್ನು ಸ್ಟೇಶನ್&zwnj;ಗೆ ಹಾಕಲಾಗಿದೆ. ಅವನೀಗ ಅಲ್ಲಿಯೂ ಧಿಮಾಕು ಕಡಿಮೆ ಆಗಿಲ್ಲ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಎಲ್ಲ ಆಸ್ತಿಯನ್ನು ಕಳೆದುಕೊಂಡರೂ ಕೂಡ ಅವನಿಗೆ ಪಾಪಪ್ರಜ್ಞೆ ಕಾಡ್ತಿಲ್ಲ, ನಾನು ಮಾಡಿದ್ದು ತಪ್ಪು ಅಂತ ಕೂಡ ಅವನಿಗೆ ಅನಿಸಿಲ್ಲ. ಒಂದು ತುತ್ತು ಊಟ ಸಿಕ್ಕಿಲ್ಲ ಅಂದ್ರೂ ಅವನಿಗೆ ಕೊಬ್ಬು ಕಡಿಮೆ ಆಗಿಲ್ಲ. ಇದು ವೀಕ್ಷಕರಿಗೆ ಇನ್ನಷ್ಟು ಕೋಪ ತರಿಸಿದೆ.&lt;/p&gt;&lt;img&gt;&lt;p&gt;ಗೌತಮ್&zwnj; ದಿವಾನ್&zwnj; ಹಾಗೂ ಭೂಮಿಕಾ ಸೇರಿ ಇಡೀ ಕುಟುಂಬ ಆ ಮನೆಗೆ ಕಾಲಿಟ್ಟಿದೆ. ಎಲ್ಲರೂ ಈ ಖುಷಿಯಿಂದ ಇದ್ದಾರೆ. ಅಂದಹಾಗೆ ಮಲ್ಲಿ ಹಾಗೂ ಸುನೀಲ್&zwnj; ಮಾತ್ರ ಕಾಣಿಸ್ತಿಲ್ಲ. ಗೌತಮ್&zwnj; ತಂಗಿ, ತಾಯಂದಿರು, ಪಾರ್ಥ-ಅಪೇಕ್ಷಾ, ಮಹಿಮಾ ಮುಂತಾದವರು ಕೂಡ ಆ ಮನೆಗೆ ಕಾಲಿಡಲಿದ್ದಾರೆ. ಒಟ್ಟಿನಲ್ಲಿ ದಿವಾನ್&zwnj; ಕುಟುಂಬದ ಕಳೆ ಮತ್ತೆ ಬರುತ್ತಿದೆ.&lt;/p&gt;&lt;img&gt;&lt;p&gt;ಮಗಳಿಂದಲೇ ಗೌತಮ್&zwnj;ಗೆ ಅಪಾಯ ಎಂದು ಜ್ಯೋತಿಷಿ ಹೇಳಿದ್ದಾರೆ. ಈಗ ಮಗಳನ್ನು ಹುಡುಕುವ ಸಮಯ ಕೂಡ ಬಂದಿದೆ. ಒಟ್ಟಿನಲ್ಲಿ ಗೌತಮ್&zwnj; ಮನೆಯಲ್ಲಿರುವ ಮಿಂಚುನೇ ತನ್ನ ಮಗಳು ಎಂದು ಅವನಿಗೆ ಗೊತ್ತಾಗೋ ಸಮಯ ಹತ್ತಿರದಲ್ಲಿದೆ.&lt;/p&gt;&lt;img&gt;&lt;p&gt;ಈಗ ಜಯದೇವ್&zwnj; ಪೊಲೀಸ್&zwnj; ಠಾಣೆಯಲ್ಲಿದ್ದಾನೆ. ಸ್ಟೇಶನ್&zwnj;ನಲ್ಲಿ ಅವನಿಗೆ ಬಟ್ಟೆ ಕೂಡ ಇಲ್ಲ. ಮುಂದೆ ಅವನಿಗೆ ಜಾಮೀನು ಸಿಕ್ಕಿ, ಹೊರಗಡೆ ಬಂದರೆ ಮತ್ತೆ ಗೌತಮ್&zwnj;ಗೆ ತೊಂದರೆ ಕೊಡಲೂಬಹುದು. ಅವನು ಇನ್ನಂತೂ ಸುಮ್ಮನೆ ಇರೋದಿಲ್ಲ.&lt;/p&gt;&lt;img&gt;&lt;p&gt;ಗೌತಮ್&zwnj; ಮಗಳು ಮಿಂಚುಳನ್ನು ಜಯದೇವ್&zwnj; ಕಿಡ್ನ್ಯಾಪ್&zwnj; ಮಾಡಲೂಬಹುದು, ಅವಳನ್ನು ಗೌತಮ್&zwnj; ಕಾಪಾಡಲು ಹೋಗುತ್ತಾನೆ. ಅಲ್ಲಿ ಅವನ ಜೀವಕ್ಕೆ ಅಪಾಯ ಆಗಲೂಬಹುದು. ಆ ನಂತರ ಗೌತಮ್&zwnj; ಸೇವ್&zwnj; ಆಗಲೂಬಹುದು. ಇದೇ ರೀತಿ ಕಥೆ ಅಂತ್ಯ ಆಗಲೂಬಹುದು!&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-episode-update-jayadev-is-in-police-station-cygdvlo"/>
        </item>
        <item>
            <title><![CDATA[ತೆರೆ ಮೇಲಿನ ಕೃಷ್ಣನನ್ನು ನೋಡಿ ಕಾಲಿಗೆ ಬಿದ್ದ ಯುವತಿ, ಪೂಜೆ ಮಾಡಿ ರಾಖಿ ಕಟ್ಟಿ ನಮನ]]></title>
            <link>https://kannada.asianetnews.com/gallery/entertainment/fan-treats-mahabharat-actor-sourabh-raaj-jain-as-real-krishna-in-viral-video-mrq-bwis7x0</link>
            <guid isPermaLink="true">https://kannada.asianetnews.com/gallery/entertainment/fan-treats-mahabharat-actor-sourabh-raaj-jain-as-real-krishna-in-viral-video-mrq-bwis7x0</guid>
            <pubDate>Thu, 07 May 2026 08:54:17 +0530</pubDate>
            <description><![CDATA['ಮಹಾಭಾರತ' ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿದ್ದ ನಟ ಸೌರಭ್ ರಾಜ್ ಜೈನ್ ಅವರನ್ನು ಕಂಡು ಯುವತಿಯೊಬ್ಬಳು ಭಾವುಕಳಾಗಿದ್ದಾಳೆ. ನಟನ ಕಾಲಿಗೆ ಬಿದ್ದು, ಪೂಜೆ ಸಲ್ಲಿಸಿ ರಾಖಿ ಕಟ್ಟುವ ಮೂಲಕ ತನ್ನ ಭಕ್ತಿಯನ್ನು ವ್ಯಕ್ತಪಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr06e18rkav818kr39naav9g,imgname--sourabh-raaj-jain--4--1778123212056.jpg" type="image/jpeg" height="390" width="690"/>
            <content:encoded><![CDATA['ಮಹಾಭಾರತ' ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿದ್ದ ನಟ ಸೌರಭ್ ರಾಜ್ ಜೈನ್ ಅವರನ್ನು ಕಂಡು ಯುವತಿಯೊಬ್ಬಳು ಭಾವುಕಳಾಗಿದ್ದಾಳೆ. ನಟನ ಕಾಲಿಗೆ ಬಿದ್ದು, ಪೂಜೆ ಸಲ್ಲಿಸಿ ರಾಖಿ ಕಟ್ಟುವ ಮೂಲಕ ತನ್ನ ಭಕ್ತಿಯನ್ನು ವ್ಯಕ್ತಪಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;img&gt;&lt;p&gt;ತೆರೆಯ ಮೇಲೆ ಕಾಣಿಸಿಕೊಳ್ಳುವ ನಟ-ನಟಿಯರನ್ನು ಪ್ರೇಕ್ಷಕರು ತುಂಬಾ ಇಷ್ಟಪಡುತ್ತಾರೆ. ಅವರು ಮಾಡುವ ನೆಗೆಟಿವ್ ಅಥವಾ ಪಾಸಿಟಿವ್ ಪಾತ್ರ ಯಾವುದೇ ಇರಲಿ, ಜನ ಅದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಪೌರಾಣಿಕ ಧಾರಾವಾಹಿಗಳ ವಿಷಯವೇ ಬೇರೆ. ದೇವರ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟರ ಮೇಲೆ ಜನರಿಗೆ ವಿಶೇಷ ಗೌರವ, ಭಕ್ತಿ ಇರುತ್ತದೆ.&lt;/p&gt;&lt;img&gt;&lt;p&gt;ತೆರೆ ಮೇಲೆ ಕಾಣಿಸಿಕೊಳ್ಳೋರು ನಟರು ಎಂಬ ವಿಷಯ ತಿಳಿದಿದ್ರೂ ಅವರನ್ನು ನಿಜವಾದ ದೇವರು ಎಂಬಂತೆ ಕಾಣುತ್ತಾರೆ. ಇಂತಹ ಅನೇಕ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಈಗ ಅದೇ ಸಾಲಿಗೆ ಮತ್ತೊಂದು ವಿಡಿಯೋ ಸೇರಿದೆ. ಶ್ರೀಕೃಷ್ಣ ಪಾತ್ರಧಾರಿಯನ್ನು ಕಂಡು ಯುವತಿ ನಮಸ್ಕರಿಸಿದ್ದಾರೆ.&lt;/p&gt;&lt;img&gt;&lt;p&gt;'ಮಹಾಭಾರತ' ಧಾರಾವಾಹಿಯಲ್ಲಿ ಶ್ರೀಕೃಷ್ಣನಾಗಿ ನಟಿಸಿ ಜನರ ಮನಗೆದ್ದಿದ್ದ ಸೌರಭ್ ರಾಜ್ ಜೈನ್ ಅವರ ವಿಡಿಯೋ ವೈರಲ್ ಆಗುತ್ತಿದೆ. ಸೌರಭ್ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಇಲ್ಲಿಗೆ ಬಂದ ಶುಭ್ರಾ ಎಂಬ ಯುವತಿ, ಅವರನ್ನು ನೋಡಿದ್ದಾರೆ.&lt;/p&gt;&lt;img&gt;&lt;p&gt;ತೆರೆಯ ಮೇಲೆ ತಮ್ಮನ್ನು ಭಕ್ತಿ ಲೋಕಕ್ಕೆ ಕೊಂಡೊಯ್ದ ನಟನನ್ನು ಕಣ್ಣೆದುರು ನೋಡಿದಾಗ ಆ ಯುವತಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅವರು ಅಳುತ್ತಾ ಸೌರಭ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಪೂಜಾ ಸಾಮಾಗ್ರಿಗಳೊಂದಿಗೆ ಸೌರಭ್ ಅವರಿಗೆ ಪೂಜೆ ಮಾಡಿ, ರಾಖಿ ಕೂಡ ಕಟ್ಟಿದ್ದಾರೆ. ಶುಭ್ರಾ ಅವರೇ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;&quot;ಮಾಧವನನ್ನು ನೋಡಿದಾಗ, ನಾನು ಅವನೊಂದಿಗೆ ವೃಂದಾವನದಲ್ಲಿ ನನ್ನದೇ ಆದ ಲೋಕದಲ್ಲಿದ್ದೆ. ಅದು ಅಮೂಲ್ಯವಾದ ಕ್ಷಣ. ಅವರ ಜೊತೆ ಒಂದು ಫೋಟೋ ತೆಗೆದುಕೊಳ್ಳುವುದನ್ನು ಕೂಡ ನಾನು ಮರೆತುಬಿಟ್ಟೆ. ನನ್ನ ಕೈಗಳು ಮತ್ತು ಹೃದಯ ಜೋರಾಗಿ ನಡುಗುತ್ತಿತ್ತು. ರಾಖಿ ಕಟ್ಟಲು ಅನುಮತಿ ಕೇಳಿದಾಗ ಅವರು ಒಪ್ಪಿಕೊಂಡರು. ನಾನು ನಡುಗುತ್ತಲೇ ಇದ್ದೆ. ಅವರು ನನ್ನ ಕೈ ಹಿಡಿದಾಗ ಎಲ್ಲವೂ ಸಮಾಧಾನವಾಯಿತು&quot; ಎಂದು ಶುಭ್ರಾ ವಿಡಿಯೋ ಜೊತೆಗೆ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಲಕ್ಷಾಂತರ ವೀವ್ಸ್ ಬಂದಿದ್ದು, ಅನೇಕರು ಕಾಮೆಂಟ್ ಮಾಡಿ ಇದೊಂದು ಭಕ್ತಿಪೂರ್ವಕ ಕ್ಷಣ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/entertainment/fan-treats-mahabharat-actor-sourabh-raaj-jain-as-real-krishna-in-viral-video-mrq-bwis7x0"/>
        </item>
    </channel>
</rss>
