<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 29 Jul 2026 13:20:12 +0530</lastBuildDate>
        <atom:link href="https://kannada.asianetnews.com/rss/entertainment" rel="self" type="application/rss+xml"/>
        <item>
            <title><![CDATA[Amruthadhaare Serial: ಮಹಾಮಾರಿ ಕಾಯಿಲೆ ವಿರುದ್ಧ ಹೋರಾಟ: ಕೂದಲಿಲ್ಲದ ಭೂಮಿ ನೋಡೋಕಾಗಲ್ಲ ಎಂದ ವೀಕ್ಷಕರು]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-latest-episode-bhumika-cancer-suh-2399pib</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-latest-episode-bhumika-cancer-suh-2399pib</guid>
            <pubDate>Wed, 29 Jul 2026 13:20:06 +0530</pubDate>
            <description><![CDATA[&lt;p&gt;Amruthadhaare Serial: ಗೌತಮ್-ಭೂಮಿಕಾ ಬಾಳಲ್ಲಿ ಎಲ್ಲವೂ ಸರಿಯಾಯ್ತು ಎನ್ನುವಾಗಲೇ ಬಿಗ್ ಶಾಕ್; ಕೂದಲು ಕಳೆದುಕೊಂಡು ಕಿಮೋಥೆರಪಿ ಎದುರಿಸುತ್ತಿರುವ ಭೂಮಿಕಾಳನ್ನು ಕಂಡು ವೀಕ್ಷಕರು ಕಣ್ಣೀರಿಟ್ಟಿದ್ದಾರೆ!&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypdc9mcqdehdea4vjfyh0f7,imgname-zee-kannada-amruthadhaare-serial-latest-episode-bhumika-cancer-suh--4--1785311143562.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Serial: ಗೌತಮ್-ಭೂಮಿಕಾ ಬಾಳಲ್ಲಿ ಎಲ್ಲವೂ ಸರಿಯಾಯ್ತು ಎನ್ನುವಾಗಲೇ ಬಿಗ್ ಶಾಕ್; ಕೂದಲು ಕಳೆದುಕೊಂಡು ಕಿಮೋಥೆರಪಿ ಎದುರಿಸುತ್ತಿರುವ ಭೂಮಿಕಾಳನ್ನು ಕಂಡು ವೀಕ್ಷಕರು ಕಣ್ಣೀರಿಟ್ಟಿದ್ದಾರೆ!&lt;/p&gt;&lt;p&gt;&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಇದೀಗ ಕಥೆ ಮತ್ತೊಂದು ಭಾವುಕ ತಿರುವು ಪಡೆದುಕೊಂಡಿದೆ. ವರ್ಷಗಳಿಂದ ವೀಕ್ಷಕರ ಮನ ಗೆದ್ದಿರುವ ಗೌತಮ್ ಮತ್ತು ಭೂಮಿಕಾಳ ಪ್ರೇಮಕಥೆ, ವಿರಹ, ಹೋರಾಟ ಹಾಗೂ ಕೊನೆಗೆ ಇಬ್ಬರೂ ಒಂದಾದ ಬಳಿಕ ಇದೀಗ ಅವರ ಬದುಕಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಗೌತಮ್ ಮತ್ತು ಭೂಮಿಕಾ ಬಾಳಿನಲ್ಲಿ ಎಲ್ಲವೂ ಸರಿಯಾಗುತ್ತಿದೆ ಎಂದು ವೀಕ್ಷಕರು ಅಂದುಕೊಳ್ಳುತ್ತಿರುವಾಗಲೇ ಭೂಮಿಕಾಗೆ ಕ್ಯಾನ್ಸರ್ ಎಂಬ ಆಘಾತಕಾರಿ ಟ್ವಿಸ್ಟ್ ನೀಡಲಾಗಿದೆ. ಸೀರಿಯಲ್&zwnj;ನ ಕಥೆಯ ಪ್ರಕಾರ ಭೂಮಿಕಾ 3ನೇ ಹಂತದ ಸ್ತನ ಕ್ಯಾನ್ಸರ್&zwnj;ನಿಂದ ಬಳಲುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂಬ ವಿಚಾರ ಕಥೆಯಲ್ಲಿ ಬಹಿರಂಗವಾಗಿದೆ.&lt;/p&gt;&lt;img&gt;&lt;p&gt;ಭೂಮಿಕಾಗೆ ವೈದ್ಯರು ಚಿಕಿತ್ಸೆ ಆರಂಭಿಸುವಂತೆ ಸೂಚಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ಕಿಮೋಥೆರಪಿ ಆರಂಭವಾಗಿದ್ದು, ಅದರ ಪರಿಣಾಮವಾಗಿ ಭೂಮಿಕಾ ತನ್ನ ಕೂದಲನ್ನು ಕಳೆದುಕೊಳ್ಳುವ ಸನ್ನಿವೇಶವನ್ನು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಕೂದಲು ತೆಗೆದು ತಲೆ ಬೋಳಿಸಿಕೊಂಡು ಭೂಮಿಕಾ ಕಾಣಿಸಿಕೊಂಡಿರುವ ದೃಶ್ಯ ಇದೀಗ ವೀಕ್ಷಕರಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿದೆ. ತಮ್ಮ ನೆಚ್ಚಿನ ನಾಯಕಿಯನ್ನು ಈ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಭೂಮಿಕಾಳ ಈ ಸ್ಥಿತಿಯನ್ನು ಕಂಡ ಗೌತಮ್ ಕೂಡ ಆಘಾತಕ್ಕೊಳಗಾಗಿದ್ದಾನೆ. ತನ್ನ ಜೀವನದ ಪ್ರೀತಿಯ ವ್ಯಕ್ತಿ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಇರುವುದನ್ನು ಕಂಡು ಗೌತಮ್ ನೋವಿನಿಂದ ಕುಗ್ಗಿದ್ದಾನೆ.&lt;/p&gt;&lt;img&gt;&lt;p&gt;ಸೀರಿಯಲ್&zwnj;ನ ಮುಂದಿನ ಕಥೆಯಲ್ಲಿ ಭೂಮಿಕಾಳ ಆರೋಗ್ಯದ ಬಗ್ಗೆ ಮತ್ತಷ್ಟು ಆತಂಕಕಾರಿ ತಿರುವು ಬರಲಿದೆ ಎನ್ನಲಾಗುತ್ತಿದೆ. ಭೂಮಿಕಾಳಿಗೆ ಇನ್ನು ಕೆಲವೇ ತಿಂಗಳುಗಳ ಕಾಲ ಮಾತ್ರ ಜೀವನವಿದೆ ಎಂಬ ರೀತಿಯಲ್ಲಿ ಕಥೆಯನ್ನು ಮುಂದುವರಿಸಲಾಗುತ್ತಿದೆ ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಆದರೆ ಭೂಮಿಕಾ ಮತ್ತು ಗೌತಮ್ ಈ ಕಷ್ಟವನ್ನು ಹೇಗೆ ಎದುರಿಸುತ್ತಾರೆ? ಭೂಮಿಕಾ ಕ್ಯಾನ್ಸರ್&zwnj;ನಿಂದ ಗುಣಮುಖಳಾಗುತ್ತಾಳೆಯೇ? ಅಥವಾ ಕಥೆ ಮತ್ತಷ್ಟು ದುರಂತದತ್ತ ಸಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;img&gt;&lt;p&gt;ಇದರ ನಡುವೆ ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಮಲ್ಲಿ ಇದೀಗ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದಾಳೆ. ಓಡಿಹೋಗುತ್ತಿದ್ದ ಕಳ್ಳನನ್ನು ಹಿಡಿಯುವ ಮೂಲಕ ಮಲ್ಲಿ ಪೊಲೀಸ್ ಅಧಿಕಾರಿಯಾಗಿ ಭರ್ಜರಿ ಎಂಟ್ರಿ ನೀಡಿದ್ದಾಳೆ. ಈ ಹೊಸ ಪಾತ್ರ ಮತ್ತು ಮಲ್ಲಿಯ ಹೊಸ ಜವಾಬ್ದಾರಿ ಮುಂದಿನ ದಿನಗಳಲ್ಲಿ ಕಥೆಗೆ ಮತ್ತಷ್ಟು ರೋಚಕ ತಿರುವು ನೀಡುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಇತ್ತ ಜೈದೇವ್ ಮತ್ತು ಶಕುಂತಲಾ ತಮ್ಮ ಕುತಂತ್ರವನ್ನು ಮುಂದುವರಿಸಿದ್ದಾರೆ. ಗೌತಮ್ ಕುಟುಂಬವನ್ನು ಬೀದಿಗೆ ತರುವ ಉದ್ದೇಶದಿಂದ ಇಬ್ಬರೂ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇಲ್ಲಿಯವರೆಗೆ ಹಲವು ಬಾರಿ ತಮ್ಮ ಸಂಚುಗಳಿಂದ ತಪ್ಪಿಸಿಕೊಂಡಿದ್ದ ಜೈದೇವ್ ಮತ್ತು ಶಕುಂತಲಾ ಇದೀಗ ಮತ್ತೆ ಗೌತಮ್ ಕುಟುಂಬಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಲು ಮುಂದಾಗಿದ್ದಾರೆ. ಇದರ ನಡುವೆ ಜೈದೇವ್ ಮಾಡಿರುವ ಮತ್ತೊಂದು ದೊಡ್ಡ ಅಪರಾಧವೂ ಇನ್ನೂ ರಹಸ್ಯವಾಗಿಯೇ ಉಳಿದಿದೆ. ದಿಯಾ ಕೊಲೆಯ ಹಿಂದೆ ಜೈದೇವ್ ಕೈವಾಡವಿದೆ ಎಂಬ ಸತ್ಯ ಕುಟುಂಬದ ಯಾರಿಗೂ ಇನ್ನೂ ತಿಳಿದಿಲ್ಲ. ಈ ಸತ್ಯ ಯಾವಾಗ ಹೊರಬರುತ್ತದೆ ಎಂಬುದೇ ಮುಂದಿನ ಕಥೆಯ ಪ್ರಮುಖ ಕುತೂಹಲವಾಗಿದೆ.&lt;/p&gt;&lt;p&gt;ಒಂದೆಡೆ ಭೂಮಿಕಾಳಿಗೆ ಕ್ಯಾನ್ಸರ್ ಎಂಬ ದೊಡ್ಡ ಆಘಾತ, ಮತ್ತೊಂದೆಡೆ ಜೈದೇವ್-ಶಕುಂತಲಾ ಕುತಂತ್ರ, ಇದರ ನಡುವೆ ಮಲ್ಲಿಯ ಪೊಲೀಸ್ ಅಧಿಕಾರಿಯಾಗಿ ಹೊಸ ಅಧ್ಯಾಯ... ಹೀಗೆ ಅಮೃತಧಾರೆ ಧಾರಾವಾಹಿ ಇದೀಗ ಒಂದರ ಹಿಂದೆ ಒಂದರಂತೆ ರೋಚಕ ತಿರುವುಗಳನ್ನು ನೀಡುತ್ತಿದ್ದು, ಮುಂದಿನ ಸಂಚಿಕೆಗಳ ಮೇಲೆ ವೀಕ್ಷಕರ ಕುತೂಹಲ ಹೆಚ್ಚಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-latest-episode-bhumika-cancer-suh-2399pib"/>
        </item>
        <item>
            <title><![CDATA[ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ]]></title>
            <link>https://kannada.asianetnews.com/entertainment/priyanka-upendra-reacts-to-the-neet-question-paper-leak-issue-videoshow-ntk49ch</link>
            <guid isPermaLink="true">https://kannada.asianetnews.com/entertainment/priyanka-upendra-reacts-to-the-neet-question-paper-leak-issue-videoshow-ntk49ch</guid>
            <pubDate>Wed, 29 Jul 2026 13:12:29 +0530</pubDate>
            <description><![CDATA[&lt;p&gt;ವಿದ್ಯಾರ್ಥಿಗಳ ಭವಿಷ್ಯ ತುಂಬಾ ಮುಖ್ಯ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಮಾತನಾಡಿದ್ದಾರೆ. ನಿಜಕ್ಕೂ ಈ ಒಂದು ವಿಚಾರ ತುಂಬಾ ಬೇಸರ ತರುವಂತದ್ದು. ನೋವುಂಟು ಮಾಡಿರುವ ವಿಚಾರ ಎಂದು ಪ್ರತಿಕ್ರಿಯಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xaswstm" medium="video" height="768" width="1024"/>
            <content:encoded><![CDATA[&lt;p&gt;&lt;span&gt;ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರಿಯಾಂಕ ಉಪೇಂದ್ರ&amp;nbsp;&lt;/span&gt;&lt;span&gt;ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ&lt;/span&gt;&lt;span&gt;&amp;nbsp;&lt;/span&gt;&lt;span&gt;ಮಾತನಾಡಿದ್ದಾರೆ. ನಿಜಕ್ಕೂ ಈ ಒಂದು ವಿಚಾರ ತುಂಬಾ ಬೇಸರ ತರುವಂತದ್ದು.&lt;/span&gt;&lt;span&gt;ದೇಶಾದ್ಯಂತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು. ವಿದ್ಯಾರ್ಥಿಗಳ ಈ ಪರಿಸ್ಥಿಯನ್ನ ನೋಡಿದ್ರೆ ನಿಜಕ್ಕೂ ನೋವಾಗತ್ತೆ. ಜೊತೆಗೆ ಈ ಒಂದು ವಿಚಾರ ರಾಜಕೀಯ ತಿರುವನ್ನ ಪಡೆದುಕೊಳ್ಳುತ್ತಿದೆ ಎಂಬ ವಿಚಾರವೂ ಕೂಡ ನೋವನ್ನ ಉಂಟು ಮಾಡತ್ತೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ದಕ್ಕಬೇಕು. ವಿದ್ಯಾರ್ಥಿಗಳಿಗೆ ಒಳಿತಾಗಬೇಕು ಎಂದಿದ್ದಾರೆ.&lt;/span&gt;&lt;/p&gt;]]></content:encoded>
            <category>entertainment</category>
            <dc:creator>Roja Manu Patil</dc:creator>
            <atom:link href="https://kannada.asianetnews.com/entertainment/priyanka-upendra-reacts-to-the-neet-question-paper-leak-issue-videoshow-ntk49ch"/>
        </item>
        <item>
            <title><![CDATA[Shocking: ವಿಜಯಲಕ್ಷ್ಮೀ ಮಾಡಿದ್ದ ಪೋಸ್ಟ್ ರಿಪೀಟ್ ಮಾಡಿದ್ದೇಕೆ ಧನ್ವೀರ್ ಗೌಡ, 'ಬೇರೆ ಏನೋ ಇದೆ ಇಲ್ಲಿ..' ಅಂತಿರೋ ನೆಟ್ಟಿಗರು!]]></title>
            <link>https://kannada.asianetnews.com/sandalwood/sandalwood-actor-dhanveer-gowda-repeats-darshan-wife-vijayalakshmi-old-post-after-he-meets-actor-darshan-in-jail/articleshow-cune80y</link>
            <guid isPermaLink="true">https://kannada.asianetnews.com/sandalwood/sandalwood-actor-dhanveer-gowda-repeats-darshan-wife-vijayalakshmi-old-post-after-he-meets-actor-darshan-in-jail/articleshow-cune80y</guid>
            <pubDate>Wed, 29 Jul 2026 12:52:38 +0530</pubDate>
            <description><![CDATA[&lt;p&gt;'ದರ್ಶನ್ ಹೇಗಿದ್ದಾರೆ ಎಂಬ ಮಾಧ್ಯಮದ ಅನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿರುವ ನಟ ಧನ್ವೀರ್ ಗೌಡ, 'ಪರವಾಗಿಲ್ಲ' ಎಂದಷ್ಟೇ ಹೇಳಿದ್ದಾರೆ. ಹಾಗಿದ್ರೆ ನಿಜವಾಗಿಯೂ ದರ್ಶನ್-ಧನ್ವೀರ್ ಮಧ್ಯೆ ಏನಾಗುತ್ತಿದೆ? ನಿನ್ನೆ ಧನ್ವೀರ್ ಗೌಡ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಏಕೆ ಹೋಗಿಲ್ಲ. ಚರ್ಚೆ ಜೋರಾಗಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypbb658pazadexvsbx6nt86,imgname-dhanveer-gowda-darshan-vijayalakshmi-1785309010087.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಏನಾಗ್ತಿದೆ ದರ್ಶನ್-ವಿಜಯಲಕ್ಷ್ಮೀ ಹಾಗೂ ಧನ್ವೀರ್ ಮಧ್ಯೆ?&amp;nbsp;&lt;/strong&gt;&lt;/p&gt;&lt;p&gt;Dhanveer Gowda Post after Darshan Thoogudeepa Meet: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್ ಅವರನ್ನು ನಿನ್ನೆ (28 ಜುಲೈ 2026) ದರ್ಶನ್ ಆಪ್ತ ಸ್ನೇಹಿತ ಹಾಗೂ ನಟ ಧನ್ವೀರ್ ಗೌಡ (Dhanveer Gowda) ಭೇಟಿಯಾಗಿ ಮಾತನ್ನಾಡಿಕೊಂಡು ಬಂದಿದ್ದಾರೆ. ಈ ಮೊದಲು ಕೂಡ ಧನ್ವೀರ್ ಅವರು ದರ್ಶನ್ (Darshan Thoogudeepa) ಅವರನ್ನು ಭೇಟಿಯಾಗಿ ಬಂದಿದ್ದರು. ಆದರೆ, ಈ ಭೇಟಿಯ ಬಳಿಕ ನಟ ಧನ್ವೀರ್ ಗೌಡ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಇನ್&zwnj;ಸ್ಟಾಗ್ರಾಂನಲ್ಲಿ ಮಾಡಿರೋ ಪೋಸ್ಟ್&zwnj; ಇದೀಗ ತೀವ್ರ ಕುತೂಹಲ ಹಾಗೂ ಸಂಚಲನ ಸೃಷ್ಟಿಸಿದೆ. ಹಾಗಿದ್ದರೆ ನಟ ಧನ್ವೀರ್ ಗೌಡ ಅದೇನು ಪೋಸ್ಟ್ ಮಾಡಿದ್ದಾರೆ. ಅದೇನು ಅಂತ ಮುಂದೆ ನೋಡಿ..&lt;/p&gt;&lt;p&gt;ಹೌದು, ನಿನ್ನೆ ತಮ್ಮ ಆಪ್ತ ಸ್ನೇಹಿತ ದರ್ಶನ್ ತೂಗುದೀಪ ಅವರನ್ನು ಜೈಲಿಗೆ ಹೋಗಿ ಭೇಟಿ ಮಾಡಿ ವಾಪಸ್ ಆದ ಬಳಿಕ ನಟ ಧನ್ವೀರ್ ಗೌಡ ಅವರು ಮಾಡಿರೋ ಪೋಸ್ಟ್&zwnj; ಹೀಗಿದೆ. ಕೃಷ್ಣನ ಫೋಟೋ ಕಾರ್ಡ್&zwnj;ನಲ್ಲಿ 'ಪಡೆದುಕೊಂಡ ಮೇಲೆ.... ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ.... ಅದು ವಸ್ತುವಾಗಲಿ, ವ್ಯಕ್ತಿಯಾಗಲಿ....' ಎಂದು ಬರೆದಿರುವ ಪೋಸ್ಟ್ ಮಾಡಿದ್ದಾರೆ ಧನ್ವೀರ್ ಗೌಡ. ಇದೇ ಪೋಸ್ಟ್&zwnj; ಅನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ಕೆಲವು ದಿನಗಳ ಹಿಂದೆ ಜೈಲಿನಲ್ಲಿ ಪತಿ ದರ್ಶನ್ ಭೇಟಿ ಮಾಡಿ ಬಂದ ಬಳಿಕ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಪೋಸ್ಟ್ ಮಾಡಿದ್ದರು. ಒಂದೇ ರೀತಿಯಲ್ಲಿ ಈ ಇಬ್ಬರೂ, ಅಂದರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಗೌಡ ಪೋಸ್ಟ್ ಮಾಡುವ ಮೂಲಕ ಹೊಸ ಕುತೂಹಲ ಹಾಗೂ ಸಂಶಯಕ್ಕೆ ಕಾರಣರಾಗಿದ್ದಾರೆ.&lt;/p&gt;&lt;h2&gt;ಈ ಪೋಸ್ಟ್ ಅಸಲಿಯತ್ತೇನು?&lt;/h2&gt;&lt;p&gt;ಹಾಗಿದ್ದರೆ ಈ ಪೋಸ್ಟ್ ಅಸಲಿಯತ್ತೇನು? ಅದ್ಯಾಕೆ ಇಬ್ಬರೂ (ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಗೌಡ) ಒಂದೇ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಸತ್ಯ ಸಂಗತಿ ಅವರಿಗೇ ಗೊತ್ತು. ಆದರೆ ಇಬ್ಬರೂ ಹಾಕಿರುವ ಒಂದೇ ಪೋಸ್ಟ್ ಇದೀಗ, ಇಲ್ಲಸಲ್ಲದ ಚರ್ಚೆಗೆ, ಕುತೂಹಲಕ್ಕೆ ಹಾಗು 'ಅವರ ನಡುವೆ ಏನೋ ಸರಿಯಿಲ್ಲ ಅಥವಾ ಎಲ್ಲವೂ ಸರಿಯಿಲ್ಲ' ಎಂಬ ಮಾತುಗಳಿಗೆ ಕಾರಣವಾಗಿದೆ. ಹಾಗಿದ್ದರೆ ಅಸಲೀಯತ್ತು ಏನು? ಏಕೆ ಇಬ್ಬರೂ ಒಂದೇ ರೀತಿಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಅದೂ ಕೂಡ ಜೈಲಿನ್ಲಲಿ ನಟ ದರ್ಶನ್ ಅವರನ್ನು ಬೇಟಿಯಾಗಿ ಬಂದ ಮೇಲೆ!?&lt;/p&gt;&lt;p&gt;&lt;img&gt;&lt;/p&gt;&lt;h3&gt;ಧನ್ವೀರ್ ಕ್ಯಾಮೆರಾ ಮುಂದೆ ಹೇಳಿರೋ ಮಾತು?!&lt;/h3&gt;&lt;p&gt;ದರ್ಶನ್ ಭೇಟಿಯಾಗಿ ಬಂದ ನಟ ಧನ್ವೀರ್ ಕ್ಯಾಮೆರಾ ಮುಂದೆ ಹೇಳಿರೋ ಮಾತು ಒಂದೇ ಶಬ್ದ. 'ದರ್ಶನ್ ಹೇಗಿದ್ದಾರೆ ಎಂಬ ಮಾಧ್ಯಮದ ಅನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿರುವ ನಟ ಧನ್ವೀರ್ ಗೌಡ, 'ಪರವಾಗಿಲ್ಲ' ಎಂದಷ್ಟೇ ಹೇಳಿದ್ದಾರೆ. ಹಾಗಿದ್ರೆ ನಿಜವಾಗಿಯೂ ದರ್ಶನ್-ಧನ್ವೀರ್ ಮಧ್ಯೆ ಏನಾಗುತ್ತಿದೆ? ನಿನ್ನೆ ಧನ್ವೀರ್ ಗೌಡ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಏಕೆ ಹೋಗಿಲ್ಲ. ವಿಜಯಲಕ್ಷ್ಮೀ ಹಾಗೂ ಧನ್ವೀರ್ ಮಧ್ಯೆ ಸಮಸ್ಯೆ ಆಗಿದೆಯಾ ಅಥವಾ ದರ್ಶನ್ ಧನ್ವೀರ್ ಮಧ್ಯೆ ಮನಸ್ತಾಪ ಮೂಡಿದೆಯಾ? ಹೀಗೆ ಹಲವಾರು ಪ್ರಶ್ನೆಗಳು ಈಗ ಕನ್ನಡದ ಸಿನಿರಸಿಕರು, ದರ್ಶನ್ ಆಪ್ತರು ಸೇರಿದಂತೆ ದರ್ಶನ್ ಅಭಿಮಾನಿಗಳ ವಲಯದಲ್ಲಿ ಮೂಡತೊಡಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಷ್ಟೇ!&lt;/p&gt;&lt;p&gt;ಒಟ್ಟಿನಲ್ಲಿ, ಸ್ಯಾಂಡಲ್&zwnj;ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್&zwnj; ಅವರ ಕ್ಲೋಸ್ ಸರ್ಕಲ್&zwnj;ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೇಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ &lsquo;ಸ್ನೇಹವೆಂದರೆ ಸ್ನೇಹ, ಪ್ರೀತಿ ಎಂದರೆ ಪ್ರೀತಿ-ನಮ್ಮಿಬ್ಬರ ನಡುವಿನ ಗೌರವಾದರ ಹಾಗೇ ಇದೆ&rsquo; ಎಂಬುದನ್ನು ಈ ಮೂಲಕ ಜಗತ್ತಿಗೆ ಹೇಳುತ್ತಿದ್ದಾರಾ? ಅಥವಾ ಬೇರೇನೋ ಆಗ್ತಿದ್ಯಾ? ಕಾಲವೇ ಉತ್ತರ ಕೊಡಬೇಕಿದೆ ಎನ್ನೋದು ಸೂಕ್ತ!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-actor-dhanveer-gowda-repeats-darshan-wife-vijayalakshmi-old-post-after-he-meets-actor-darshan-in-jail/articleshow-cune80y"/>
        </item>
        <item>
            <title><![CDATA[ಬ್ರಹ್ಮ ಮುಹೂರ್ತದಲ್ಲೇ 'ರಾಮಾಯಣ' ಟ್ರೇಲರ್‌ ರಿಲೀಸ್‌.. ಜಗತ್ತಿಗೇ ಗೊತ್ತಾಯ್ತು ಈ 'ಸುಮುಹೂರ್ತ'ದ ಮಹತ್ವ!]]></title>
            <link>https://kannada.asianetnews.com/entertainment/trailer-for-yash-and-ranbir-kapoor-ramayana-drops-on-30-july-2026-at-4-15-am-in-brahma-muhurta/articleshow-ltg15kn</link>
            <guid isPermaLink="true">https://kannada.asianetnews.com/entertainment/trailer-for-yash-and-ranbir-kapoor-ramayana-drops-on-30-july-2026-at-4-15-am-in-brahma-muhurta/articleshow-ltg15kn</guid>
            <pubDate>Wed, 29 Jul 2026 11:51:33 +0530</pubDate>
            <description><![CDATA[&lt;p&gt;ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಬ್ರಹ್ಮ ಮುಹೂರ್ತದಲ್ಲಿ ಆಗಲಿದೆ. ಜುಲೈ 30ರಂದು ಬೆಳ್ಳಂಬೆಳಿಗ್ಗೆ ಬ್ರಹ್ಮ ಮಹೂರ್ತದಲ್ಲಿ ನಮ್ಮ ರಾಮಾಯಣದ ಟ್ರೇಲರ್ ಬಿಡುಗಡೆ ಆಗಲಿದೆ ಎಂದು ರಾಮಾಯಣ ಚಿತ್ರತಂಡ ಘೋಷಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಯಾಗಿದೆ. ಎಷ್ಟು ಗಂಟೆಗೆ? ಇಲ್ಲಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9f87pfshc1v3z84nnfrhvx,imgname-ramayana-movie-1784876900047.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊನೆಗೂ ಘೋಷಣೆ ಆಯ್ತು ರಾಮಾಯಣ ಟ್ರೇಲರ್ ಬಿಡುಗಡೆಗೆ ಮುಹೂರ್ತ!&lt;/strong&gt;&lt;/p&gt;&lt;p&gt;ಭಾರತೀಯ ಸಿನಿಮಾ ರಂಗದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರುವ ಸಿನಿಮಾ ಅಂದ್ರೆ ಅದು 'ರಾಮಾಯಣ! ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' (Ramayana) ಚಿತ್ರವನ್ನು ಮನಿಷ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣ ಮಾಡಿದ್ದಾರೆ. ಈ 'ರಾಮಾಯಣ' ಚಿತ್ರದಲ್ಲಿ ನಟ ಯಶ್ ಅವರು ನಿರ್ಮಾಣದ ಜೊತೆಗೆ 'ರಾವಣ'ನ ಪಾತ್ರವನ್ನೂ ಕೂಡ ಮಾಡಿದ್ದಾರೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲಾ ವಿಷಯಗಳೂ ಈಗಾಗಲೇ ಜಗತ್ತಿಗೆಲ್ಲಾ ಬಹುತೇಕ ಗೊತ್ತಿದೆ. ಆದರೆ ಇದೀಗ ಹೊಸದೊಂದು ಸಂಗತಿ ಸ್ಫೋಟವಾಗಿದ್ದು ಜಾಗತಿಕವಾಗಿ ಹೊಸ ಸಂಚಲನ ಸೃಷ್ಟಿಸಿದೆ. ಅದೇನು ನೋಡಿ...&lt;/p&gt;&lt;p&gt;ಹೌದು, ಈ ವರ್ಷದ (2026) ದೀಪಾವಳಿಗೆ ಬಿಡುಗಡೆ ಆಗಲಿರುವ ರಾಮಾಯಣ ಸಿನಿಮಾದ ಟ್ರೇಲರ್ ಇದೇ ತಿಂಗಳು 24 ಜುಲೈಗೆ ಬಿಡುಗಡೆ ಆಗಬೇಕಿತ್ತು. ಆದರೆ, ವ್ಯವಹಾರಿಕ ದೃ&zwj;ಷ್ಟಿಯಿಂದ ಟ್ರೇಲರ್ ಮುಂದೂಡಿದ್ದ ರಾಮಾಯಣ ಚಿತ್ರತಂಡ, ಕೊನೆಗೂ ಹೊಸ ಬಿಡುಗಡೆ ದಿನಾಂಕ ಘೋಷಿಸಿದೆ. ಸದ್ಯ ಚಿತ್ರತಂಡ ಬಿಡಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಮಾಯಣ ಚಿತ್ರದ ಟ್ರೇಲರ್ 30 ಜುಲೈ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಆದರೆ, ಯಾವ ಮುಹೂರ್ತದಲ್ಲಿ ಗೊತ್ತಾ?&lt;/p&gt;&lt;h2&gt;ಬ್ರಹ್ಮ ಮುಹೂರ್ತ&lt;/h2&gt;&lt;p&gt;ಹೌದು, ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಬ್ರಹ್ಮ ಮುಹೂರ್ತದಲ್ಲಿ ಆಗಲಿದೆ. ಜುಲೈ 30ರಂದು ಬೆಳ್ಳಂಬೆಳಿಗ್ಗೆ 4 ಗಂಟೆ 15 ನಿಮಿಷಕ್ಕೆ (4.15 AM) ಸನಾತನ ಧರ್ಮದ ಪ್ರಕಾರ, ಬ್ರಹ್ಮ ಮಹೂರ್ತದಲ್ಲಿ ನಮ್ಮ ರಾಮಾಯಣದ ಟ್ರೇಲರ್ ಬಿಡುಗಡೆ ಆಗಲಿದೆ ಎಂದು ರಾಮಾಯಣ ಚಿತ್ರತಂಡ ಘೋಷಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರದ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಇದನ್ನು ಘೋಷಿಸುತ್ತಿರುವಂತೆ, ನೆಟ್ಟಿಗರು ಬಹಳಷ್ಟು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ, 'ಇದೇ ಸರಿಯಾದ ಸಮಯ, ಇದೇ ಸೂಕ್ತ ನಿರ್ಧಾರ' ಎಂದು ಹೇಳುವ ಮೂಲಕ ಹಲವರು ಕಾಮೆಂಟ್ ಸೆಕ್ಷನ್&zwnj; ತುಂಬಿಸಿದ್ದಾರೆ.&lt;/p&gt;&lt;p&gt;ಸದ್ಯಕ್ಕೆ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ನಟ ಯಶ್, ರಣಬೀರ್ ಕಪೂರ್ ಸೇರಿದಂತೆ ಇಡೀ ಚಿತ್ರತಂಡ, ಸದ್ಯಕ್ಕೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ರಾಮಾಯಣ ಸಿನಿಮಾದ ಪ್ರಮೋಶನ್&zwnj; ಮಾಡಿದ್ದಾರೆ. ನಟ ಯಶ್ ಅವರು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಟ ರಣಬೀರ್ ಕಪೂರ್ ಅವರೊಂದಿಗೆ ತಮ್ಮ 'ರಾಮಾಯಣ' ಸಿನಿಮಾದ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾದ 'ಕಾಮಿಕ್ ಕಾನ್' ಕಾರ್ಯಕ್ರಮದಲ್ಲಿನಟ ಯಶ್ ಹಾಗೂ ರಣಬೀರ್ ಕಪೂರ್ ಭಾಗಿಯಾಗಿ ಗಮನಸೆಳೆದರು.&lt;/p&gt;&lt;h3&gt;ಕಾಮಿಕ್ ಕಾನ್ ಕಾರ್ಯಕ್ರಮ&lt;/h3&gt;&lt;p&gt;ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ರಾಮಾಯಣ ಸಿನಿಮಾವನ್ನು ಪ್ರಚಾರ ಮಾಡುತ್ತಿರುವ ನಟ ಯಶ್ ಹಾಗೂ ರಣಬೀರ್ ಕಪೂರ್ ಅವರು ತಮ್ಮ ಚಿತ್ರತಂಡದೊಂದಿಗೆ ಅಮೆರಿಕಾದಲ್ಲಿ ಬೀಡುಬಿಟ್ಟಿದ್ದಾರೆ. 'ಕಾಮಿಕ್ ಕಾನ್'ನಲ್ಲಿ ರಾಮಾಯಣ ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಚಿತ್ರತಂಡವು ಅಮೆರಿಕಾದ ಹಲವು ಕಡೆ ಪ್ರಚಾರದಲ್ಲಿ ನಿರತವಾಗಿದೆ. ಇದೀಗ ಜಗತ್ತು ಬಹುನಿರೀಕ್ಷೆಯಿಂದ ಕಾಯುತ್ತಿರುವ ರಾಮಾಯಣದ ಟ್ರೇಲರ್ ಬಿಡುಗಡೆ ಜುಲೈ 30ರ ಮುಂಜಾನೆ ನಿಗದಿಯಾಗಿದೆ. ವಿಶ್ವದಾದ್ಯಂತ ಸಿನಿಪ್ರೇಕ್ಷಕರು ಈ ಸುಮುಹೂರ್ತವನ್ನೇ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/trailer-for-yash-and-ranbir-kapoor-ramayana-drops-on-30-july-2026-at-4-15-am-in-brahma-muhurta/articleshow-ltg15kn"/>
        </item>
        <item>
            <title><![CDATA[ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!]]></title>
            <link>https://kannada.asianetnews.com/entertainment/what-did-priyanka-upendra-say-about-nepotism-videoshow-3yptfms</link>
            <guid isPermaLink="true">https://kannada.asianetnews.com/entertainment/what-did-priyanka-upendra-say-about-nepotism-videoshow-3yptfms</guid>
            <pubDate>Wed, 29 Jul 2026 11:46:23 +0530</pubDate>
            <description><![CDATA[&lt;p&gt;ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ,ನಮ್ಮ ಮಕ್ಕಳು ಯಾವ ವಿಚಾರದಲ್ಲಿ ಆಸಕ್ತರಾಗಿರ್ತಾರೆ ಆ ವಿಚಾರಕ್ಕೆ, ನಮ್ಮ ಸಂಪೂರ್ಣ ಸಪೋರ್ಟ್ ಇರಬೇಕು ಅದು ನಮ್ಮ ಜವಾಬ್ದಾರಿ, ಪ್ರೀತಿ ಆಗಿರುತ್ತೆ ಎಂದಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xaswtzm" medium="video" height="768" width="1024"/>
            <content:encoded><![CDATA[&lt;p&gt;&lt;span&gt;ಹೌದು&amp;nbsp;&lt;/span&gt;&lt;span&gt;ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ, ನೆಪೋಟಿಸಂ ವಿಚಾರವಾಗಿ ಪ್ರಶ್ನಿಸಿದಾಗ, ನಮ್ಮ ಮಕ್ಕಳು ಯಾವ ವಿಚಾರದಲ್ಲಿ ಆಸಕ್ತರಾಗಿರ್ತಾರೆ ಆ ವಿಚಾರಕ್ಕೆ, ನಮ್ಮ ಸಂಪೂರ್ಣ ಸಪೋರ್ಟ್ ಇರಬೇಕು ಅದು ನಮ್ಮ ಜವಬ್ದಾರಿ, ಪ್ರೀತಿ ಆಗಿರುತ್ತೆ, ನನ್ನ ಅಮ್ಮ, ತಮ್ಮ ಕೂಡ ಕಲಾವಿದರೇ. ನನ್ನ ಮಕ್ಕಳನ್ನ ನಾನು ಒಂದು ಸಿನಿಮಾದ ಮುಖೇನ ನಾನು ಪರಿಚಯಿಸಬಹುದಷ್ಟೆ. ಅವರ ಶ್ರಮ, ಒಳ್ಳೆಯ ಸಿನಿಮಾದಿಂದಷ್ಟೆ ಅವರು ಗೆಲ್ಲಲು ಸಾಧ್ಯ ಎಂದಿದ್ದಾರೆ.&amp;nbsp;&lt;/span&gt;&lt;/p&gt;]]></content:encoded>
            <category>entertainment</category>
            <dc:creator>Roja Manu Patil</dc:creator>
            <atom:link href="https://kannada.asianetnews.com/entertainment/what-did-priyanka-upendra-say-about-nepotism-videoshow-3yptfms"/>
        </item>
        <item>
            <title><![CDATA[Bigg Bossನಲ್ಲಿ ಎಲ್ಲರಿಗೂ ಸಿಗೋ ಹಣ ಎಷ್ಟು? ಯಾರೂ ಹೇಳದ ಗುಟ್ಟು ರಿವೀಲ್​ ಮಾಡಿದ ನಟ ಧನ್​ರಾಜ್]]></title>
            <link>https://kannada.asianetnews.com/gallery/tv-talk/how-much-money-does-everyone-get-in-bigg-boss-actor-dhanraj-reveals-a-secret-no-one-has-told-him-suc-tfz8ytk</link>
            <guid isPermaLink="true">https://kannada.asianetnews.com/gallery/tv-talk/how-much-money-does-everyone-get-in-bigg-boss-actor-dhanraj-reveals-a-secret-no-one-has-told-him-suc-tfz8ytk</guid>
            <pubDate>Tue, 28 Jul 2026 20:22:59 +0530</pubDate>
            <description><![CDATA[&lt;p&gt;'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಧನರಾಜ್ ಆಚಾರ್, ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆಯ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಕೆಲ ಸ್ಪರ್ಧಿಗಳು ವಿನ್ನರ್ ಪ್ರಶಸ್ತಿ ಮೊತ್ತದ ಅರ್ಧದಷ್ಟು ಹಣವನ್ನು ವಾರದ ಸಂಭಾವನೆಯಾಗಿ ಪಡೆಯುತ್ತಾರೆ ಎಂದು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymk95eawvk9nffq6fy3e2wv,imgname-dhanaraj-1785250223562.jpg" type="image/jpeg" height="390" width="690"/>
            <content:encoded><![CDATA[&lt;p&gt;'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಧನರಾಜ್ ಆಚಾರ್, ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆಯ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಕೆಲ ಸ್ಪರ್ಧಿಗಳು ವಿನ್ನರ್ ಪ್ರಶಸ್ತಿ ಮೊತ್ತದ ಅರ್ಧದಷ್ಟು ಹಣವನ್ನು ವಾರದ ಸಂಭಾವನೆಯಾಗಿ ಪಡೆಯುತ್ತಾರೆ ಎಂದು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.&lt;/p&gt;&lt;img&gt;&lt;p&gt;'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಧನರಾಜ್ ಆಚಾರ್ (Dhanraj Achar) ಬಿಗ್ ಬಾಸ್ 11ರಲ್ಲಿ ಸ್ಪರ್ಧಿಯಾಗಿ ಹೋಗಿದ್ದರು. ಸಾಧಾರಣವಾಗಿ ಬಿಗ್​ಬಾಸ್​ ಮನೆಗೆ ಹೋಗುವುದು ಪ್ರತಿಷ್ಠೆಯ ಸಂಕೇತ ಒಂದಾದರೆ, ಅಲ್ಲಿ ಸಿಗುವ ಪೇಮೆಂಟ್​ಗಳ ಬಗ್ಗೆ ಜನ ಸಾಮಾನ್ಯರಲ್ಲಿ ಯಾವಾಗಲೂ ಕುತೂಹಲ ಇದದ್ದೇ.&lt;/p&gt;&lt;img&gt;&lt;p&gt;ಆದರೆ, ಬಿಗ್​ಬಾಸ್​​ನ ಸ್ಪರ್ಧಿಗಳಿಗೆ ಇರುವ ಹಲವು ಕಂಡೀಷನ್​ಗಳಲ್ಲಿ ಒಂದು ಅವರ ಪೇಮೆಂಟ್​ ಅನ್ನು ಎಲ್ಲಿಯೂ ರಿವೀಲ್​ ಮಾಡಬಾರದು ಎನ್ನುವುದು. ಇದೇ ಕಾರಣಕ್ಕೆ, ಎಲ್ಲಿಯೂ, ಯಾವ ಸ್ಪರ್ಧಿಯೂ ತಮಗೆ ಅಥವಾ ಬೇರೆ ಸ್ಪರ್ಧಿಗಳಿಗೆ ಸಿಗುವ ಮೊತ್ತವನ್ನು ರಿವೀಲ್​ ಮಾಡುವುದಿಲ್ಲ.&lt;/p&gt;&lt;img&gt;&lt;p&gt;ಆದರೆ, ಇದೀಗ ಧನ್​ರಾಜ್​ ಅವರು ಒಂದು ಹಿಂಟ್​ ಕೊಡುವ ಮೂಲಕ ಎಷ್ಟು ಸಂಭಾವನೆ ಬರುತ್ತದೆ ಎನ್ನುವುದನ್ನು ರಿವೀಲ್​ ಮಾಡಿದ್ದಾರೆ. shravanbro.insightsಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಅವರು ರಿವೀಲ್​ ಮಾಡಿದ್ದಾರೆ. ಬಿಗ್&zwnj; ಬಾಸ್&zwnj; ಮನೆಗೆ ಬರುವ ಸ್ಪರ್ಧಿಗಳಿಗೆ ನೀಡಲಾಗುವ ಅತ್ಯಂತ ಹೆಚ್ಚು ಮತ್ತು ಕಮ್ಮಿ ಪೇಮೆಂಟ್​ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಯಿತು.&lt;/p&gt;&lt;img&gt;&lt;p&gt;ಅದಕ್ಕೆ ಧನ್​ರಾಜ್​ ಅವರು, &ldquo;ಬಿಗ್&zwnj; ಬಾಸ್&zwnj; ವಿನ್ನರ್&zwnj;ಗೆ ಸಿಗುವ ಒಟ್ಟು ವಿನ್ನಿಂಗ್&zwnj; ಅಮೌಂಟ್&zwnj; ಇದೆಯಲ್ಲಾ? ಅದರ ಅರ್ಧದಷ್ಟು ಹಣವನ್ನ ಕೇವಲ ವಾರದ ಸಂಭಾವನೆಯ ರೂಪದಲ್ಲೇ ಪಡೆಯುವಂತಹ ಬಲವಾದ ಕಂಟೆಸ್ಟೆಂಟ್&zwnj;ಗಳು ಸಹ ಇಲ್ಲಿದ್ದಾರೆ&rdquo; ಎಂದು ಹೇಳಿದ್ದಾರೆ. ಅಂದರೆ ಕನಿಷ್ಠ 25 ಲಕ್ಷ ರೂಪಾಯಿ ಬರುತ್ತಾ ಎಂದು ಪ್ರಶ್ನಿಸಿದಾಗ, ಜೋರಾಗಿ ನಗುತ್ತಾ, ಗುಟ್ಟು ಬಿಟ್ಟು ಕೊಟ್ಟರೂ ನಾನು ಅದನ್ನು ಹೇಳಲ್ಲ ಎಂದಿದ್ದಾರೆ!&lt;/p&gt;&lt;img&gt;&lt;p&gt;ಕೊನೆಗೆ, ಈ ಶೋನಲ್ಲಿ ಅತಿ ಕಡಿಮೆ ಸಂಭಾವನೆ ಪಡೆದವ ನಾನೇ ಇರಬೇಕೇನೋ ಎಂದು ತಮಾಷೆ ಮಾಡಿದ್ದಾರೆ. ಅಷ್ಟಕ್ಕೂ ವಿನ್ನರ್​ಗೆ 50 ಲಕ್ಷ ಕ್ಯಾಷ್​ಪ್ರೈಸ್​ ಸಿಗೋದು ಗೊತ್ತೇ ಇದೆ. ಆದಾಯ ತೆರಿಗೆ ಎಲ್ಲಾ ಕಳೆದ 35 ಲಕ್ಷ ಬಂದರೂ, ಇದರ ನಡುವೆಯೇ ಇನ್ನಷ್ಟು ಹಣ ಮಾಡಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಹಣಕ್ಕಿಂತಲೂ ಹೆಚ್ಚಾಗಿ ಬಿಗ್​ಬಾಸ್​ಗೆ ಹೋಗಿ ಬಂದ ಮೇಲೆ ಅವರು ಸೆಲೆಬ್ರಿಟಿಯಾಗಿ, ಕೋಟಿ ಕೋಟಿಯಲ್ಲಿ ಸಂಪಾದನೆಯನ್ನೂ ಮಾಡಬಹುದಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/how-much-money-does-everyone-get-in-bigg-boss-actor-dhanraj-reveals-a-secret-no-one-has-told-him-suc-tfz8ytk"/>
        </item>
        <item>
            <title><![CDATA[Bigg Boss 13ಕ್ಕೆ ಬಂತು ಆಫರ್​: ಷೋಗೆ ಹೋಗಲ್ಲ ಎಂದ ಮುಸ್ಲಿಂ ಮುಖಂಡ ಏನ್​ ಹೇಳಿದ್ರು ಕೇಳಿ]]></title>
            <link>https://kannada.asianetnews.com/gallery/entertainment/bigg-boss-kannada-13-offer-rejected-by-muslim-leader-abdul-rajack-suc-ti4svgg</link>
            <guid isPermaLink="true">https://kannada.asianetnews.com/gallery/entertainment/bigg-boss-kannada-13-offer-rejected-by-muslim-leader-abdul-rajack-suc-ti4svgg</guid>
            <pubDate>Tue, 28 Jul 2026 22:10:53 +0530</pubDate>
            <description><![CDATA[&lt;p&gt;ಸೆಪ್ಟೆಂಬರ್​ನಿಂದ ಆರಂಭವಾಗಲಿರುವ ಬಿಗ್​ಬಾಸ್​ 13ನೇ ಸೀಸನ್&zwnj;ಗೆ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದೆ. ಈ ಮಧ್ಯೆ, ಹಿಜಾಬ್ ಹೋರಾಟ, ಸ್ಪೀಕರ್ ಬ್ಯಾನ್ ವಿಚಾರಗಳಲ್ಲಿ ಸದ್ದು ಮಾಡಿದ್ದ ಮುಸ್ಲಿಂ ಮುಖಂಡ ಅಬ್ದುಲ್​ ರಜಾಕ್​, ತಮಗೆ ಬಂದಿದ್ದ ಬಿಗ್​ಬಾಸ್​ ಆಫರ್​ ಅನ್ನು ತಿರಸ್ಕರಿಸಿರುವುದಾಗಿ &amp;nbsp;ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymsaegtxssehwy11p62ef7c,imgname-abdul-rajack-01-1785256557082.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೆಪ್ಟೆಂಬರ್​ನಿಂದ ಆರಂಭವಾಗಲಿರುವ ಬಿಗ್​ಬಾಸ್​ 13ನೇ ಸೀಸನ್&zwnj;ಗೆ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದೆ. ಈ ಮಧ್ಯೆ, ಹಿಜಾಬ್ ಹೋರಾಟ, ಸ್ಪೀಕರ್ ಬ್ಯಾನ್ ವಿಚಾರಗಳಲ್ಲಿ ಸದ್ದು ಮಾಡಿದ್ದ ಮುಸ್ಲಿಂ ಮುಖಂಡ ಅಬ್ದುಲ್​ ರಜಾಕ್​, ತಮಗೆ ಬಂದಿದ್ದ ಬಿಗ್​ಬಾಸ್​ ಆಫರ್​ ಅನ್ನು ತಿರಸ್ಕರಿಸಿರುವುದಾಗಿ &amp;nbsp;ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​​ 13 ಬರುವ ಸೆಪ್ಟೆಂಬರ್​ ತಿಂಗಳಿನಿಂದ ಆರಂಭ ಆಗಲಿದೆ ಎನ್ನುವ ಬಗ್ಗೆ ಇದಾಗಲೇ ವಾಹಿನಿ ಅನೌನ್ಸ್​ ಮಾಡಿದೆ. ಇದಾಗಲೇ ಮನೆಗೆ ಈ ಬಾರಿ ಹೋಗುವವರು ಯಾರು ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಿದೆ. ಕಾಂಟ್ರವರ್ಸಿ ಮಾಡಿಕೊಂಡವರಿಗೇ ಹೆಚ್ಚು ಅವಕಾಶ ಇರುವ ಕಾರಣ, ಅಂಥವರ ಹೆಸರನ್ನು ಜನರು ಹೆಕ್ಕಿ ತೆಗೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಇದೀಗ, ಮುಸ್ಲಿಂ ಮುಖಂಡ ಅಬ್ದುಲ್​ ರಜಾಕ್​ ಅವರು ತಮಗೆ ಬಿಗ್​ಬಾಸ್​ನ ಆಫರ್​ ಬಂದಿದ್ದು, ಅದನ್ನು ತಾವು ರಿಜೆಕ್ಟ್​ ಮಾಡಿರುವುದಾಗಿ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಅಬ್ದುಲ್​ ರಜಾಕ್​ ಅವರು ಇದಾಗಲೇ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನೇ ಪ್ರಶ್ನಿಸುವ ಮೂಲಕ &amp;nbsp;ಸುದ್ದಿ ಮಾಡಿದ್ದರು. ಕೆಲ ವರ್ಷಗಳ ಹಿಂದೆ ಹಿಜಾಬ್ ಹೋರಾಟಗಾರ್ತಿಯರಿಗೆ ಸುದ್ದಿಯಲ್ಲಿದ್ದರು. ಮಸೀದಿಗಳಲ್ಲಿ ಸ್ಪೀಕರ್ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ರಜಾಕ್ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದರು. ಹೀಗೆ ಹಲವಾರು ಸಂದರ್ಭಗಳಲ್ಲಿ ಅಬ್ದುಲ್​ ರಜಾಕ್​ ಅವರ ಸದ್ದು ಮಾಡುತ್ತಲೇ ಇರುತ್ತಾರೆ.&lt;/p&gt;&lt;img&gt;&lt;p&gt;ಹೀಗೆ ಫೇಮಸ್​ ಆಗಿರುವ ಕಾರಣದಿಂದ ಬಿಗ್​ಬಾಸ್​ಗೆ ಆಫರ್​ ಬಂದಿರುವುದಾಗಿ ಹೇಳಿರುವ ಅವರು, ವಾಹಿನಿ ಕಡೆಯಿಂದ ತಮಗೆ ಬಂದಿರುವ ಫೋನ್​ ಕಾಲ್​ನ ಆಡಿಯೋ ಅನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಿ. ತುಂಬಾ ಫೇಮಸ್​ ಇದ್ದೀರಿ. ಆದ್ದರಿಂದ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ ಒಪ್ಪಿಗೆ ಇದೆಯೇ ಎಂದು ಅತ್ತ ಕಡೆಯಿಂದ ದನಿ ಬಂದಾಗ, ಎರಡು ದಿನ ಟೈಮ್​ ಕೊಡಿ ಎಂದು ಅಬ್ದುಲ್​ ರಜಾಕ್​ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಬಳಿಕ, ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ನೀಡಿದ್ದು, ತಮ್ಮನ್ನು ಆಯ್ಕೆ ಮಾಡಿರುವ ವಾಹಿನಿಗೆ ಧನ್ಯವಾದ ಸಲ್ಲಿಸಿ, ಈ ಆಫರ್​ ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕಾರಣವನ್ನು ಅವರು ಕೊಟ್ಟಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/bigg-boss-kannada-13-offer-rejected-by-muslim-leader-abdul-rajack-suc-ti4svgg"/>
        </item>
        <item>
            <title><![CDATA[ಈ ಹಾರರ್ ಸಿನಿಮಾನ ಒಮ್ಮೆ ನೀವು ನೋಡಿದ್ರೆ ಮುಗೀತು ಕಥೆ.. ರಾತ್ರಿ ಕಣ್ಣು ಬಿಡೋಕೂ ಹಿಂದೆ-ಮುಂದೆ ನೋಡ್ತೀರಾ!]]></title>
            <link>https://kannada.asianetnews.com/entertainment/tahkhana-1986-film-is-scary-bollywood-horror-movie-that-people-who-watch-it-once-are-too-afraid-to-ever-see-it-again/articleshow-914ayzp</link>
            <guid isPermaLink="true">https://kannada.asianetnews.com/entertainment/tahkhana-1986-film-is-scary-bollywood-horror-movie-that-people-who-watch-it-once-are-too-afraid-to-ever-see-it-again/articleshow-914ayzp</guid>
            <pubDate>Tue, 28 Jul 2026 23:07:19 +0530</pubDate>
            <description><![CDATA[&lt;p&gt;ಆ ಕಾಲದಲ್ಲಿ ಹಾರರ್ ಸಿನೆಮಾಗಳಲ್ಲಿ ನಟಿಸುವುದು ಸುಲಭದ ಮಾತಾಗಿರಲಿಲ್ಲ. &lsquo;ಶೂಟಿಂಗ್ ಬಹುತೇಕ ತಡರಾತ್ರಿಯಲ್ಲೇ ನಡೆಯುತ್ತಿತ್ತು. ದಟ್ಟವಾದ ಮಂಜು ಮತ್ತು ಸ್ಮಶಾನದಂತಹ ನಿಶ್ಯಬ್ದದ ನಡುವೆ ರಾತ್ರಿಯಿಡೀ ಕಿರುಚಾಡುತ್ತಾ, ದೆವ್ವಗಳಿಂದ ತಪ್ಪಿಸಿಕೊಂಡು ಓಡುವ ದೃಶ್ಯಗಳಲ್ಲಿ ಅಭಿನಯಿಸುವುದು ನಿಜಕ್ಕೂ ಮೈ ಜುಂ ಎನ್ನುವ ಅನುಭವ&rsquo; ಎಂದಿದ್ದಾರೆ ನಟಿ ಪ್ರೀತಿ ಸಪ್ರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymwrwzdvcmmzq4pdvg7t8sb,imgname-tahkhana-movie-1785260176365.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಮಾವಾಸ್ಯೆಯ ಕತ್ತಲು, ಹಳೇ ಬಂಗಲೆ, ಮತ್ತೆ ಆ ಭೀಕರ ಕಿರುಚಾಟ! 40 ವರ್ಷವಾದ್ರೂ ನಡುಕ ಹುಟ್ಟಿಸುತ್ತೆ ಈ ಸಿನೆಮಾ!&lt;/strong&gt;&lt;/p&gt;&lt;p&gt;ಇಂದಿನ ಕಾಲದ ಹಾರರ್ ಸಿನಿಮಾಗಳಲ್ಲಿ ಹೈ-ಫೈ ಗ್ರಾಫಿಕ್ಸ್ ಇರುತ್ತೆ, ಸೌಂಡ್ ಎಫೆಕ್ಟ್ಸ್ ಇರುತ್ತೆ. ಆದರೆ, ಯಾವುದೇ ಅದ್ದೂರಿ ತಂತ್ರಜ್ಞಾನ ಇಲ್ಲದ ಕಾಲದಲ್ಲೂ ಜನರನ್ನು ಥಿಯೇಟರ್&zwnj;ನ ಸೀಟಿನ ಅಂಚಿಗೆ ಬಂದು ಕೂರುವಂತೆ ಮಾಡಿದ್ದ ಆ 'ಭಯಾನಕ' ಕಾಲ ನೆನಪಿದೆಯೇ? ಹೌದು, ನಾವು ಮಾತನಾಡುತ್ತಿರೋದು 1980ರ ದಶಕದ ಬಗ್ಗೆ. ಆ ಕಾಲದಲ್ಲಿ ಬಾಲಿವುಡ್&zwnj;ನ 'ರಾಮ್ಸೆ ಸಹೋದರರು' (Ramsay Brothers) ಸೃಷ್ಟಿಸಿದ ಹಾರರ್ ಲೋಕವೇ ಬೇರೆ! ಅದರಲ್ಲೂ 40 ವರ್ಷಗಳೇ ಕಳೆದರೂ ಇಂದಿಗೂ ಸಿನೆಮಾ ಪ್ರೇಮಿಗಳ ನಿದ್ದೆ ಗೆಡಿಸುತ್ತಿರುವ ಒಂದು ಚಿತ್ರವೆಂದರೆ ಅದು 'ತಹ್ಖಾನಾ' (Tahkhana).&lt;/p&gt;&lt;p&gt;ಏನಿದು 'ತಹ್ಖಾನಾ' ಕಿರಿಕ್?&lt;/p&gt;&lt;p&gt;1986ರಲ್ಲಿ ಬಿಡುಗಡೆಯಾದ ಈ ಚಿತ್ರ ಹಾರರ್ ಪ್ರಿಯರ ಪಾಲಿಗೆ ಒಂದು 'ಕಲ್ಟ್ ಕ್ಲಾಸಿಕ್'. ಇವತ್ತಿನ ದಿನಗಳಲ್ಲಿ ರಾತ್ರಿ ಹೊತ್ತು ಒಂಟಿಯಾಗಿ ಈ ಸಿನೆಮಾ ನೋಡಲು ಧೈರ್ಯವಂತರೂ ಒಮ್ಮೆ ಯೋಚನೆ ಮಾಡುತ್ತಾರೆ. ಕೇವಲ ₹34 ಲಕ್ಷದ ಸಣ್ಣ ಬಜೆಟ್&zwnj;ನಲ್ಲಿ ತಯಾರಾದ ಈ ಚಿತ್ರ, ಬಾಕ್ಸ್ ಆಫೀಸ್&zwnj;ನಲ್ಲಿ ಬರೋಬ್ಬರಿ ₹97 ಲಕ್ಷ ಗಳಿಸಿ ಆ ಕಾಲದ ದೊಡ್ಡ ಹಿಟ್ ಎನಿಸಿಕೊಂಡಿತ್ತು.&lt;/p&gt;&lt;h2&gt;ಕಥೆಯಲ್ಲಿದೆ ಮೈ ನಡುಗಿಸುವ ಟ್ವಿಸ್ಟ್:&lt;/h2&gt;&lt;p&gt;ಈ ಚಿತ್ರದ ಕಥೆ ಶುರುವಾಗುವುದು ಠಾಕೂರ್ ಸುರ್ಜಿತ್ ಸಿಂಗ್ ಅವರ ಕುಟುಂಬದಿಂದ. ಆಸ್ತಿಗಾಗಿ ಹಪಹಪಿಸುವ ಮತ್ತು ಮಾಟಮಂತ್ರದ ಹಿಂದೆ ಬೀಳುವ ದುಷ್ಟ ಮಗ 'ದುರ್ಜನ್' ಈ ಕಥೆಯ ವಿಲನ್. ತಂದೆಯಿಂದ ಬಹಿಷ್ಕೃತನಾದ ಈತ ಒಂದು ನೆಲಮಾಳಿಗೆಯಲ್ಲಿ (ತಹ್ಖಾನಾ) ಬಂದಿಯಾಗುತ್ತಾನೆ. ಆದರೆ ಅಲ್ಲಿಂದಲೇ ಅಸಲಿ ಆಟ ಶುರುವಾಗುತ್ತದೆ. ಮಾಟಮಂತ್ರ, ದುಷ್ಟ ಶಕ್ತಿಗಳು ಮತ್ತು ಬಾಲ್ಯದಲ್ಲೇ ಬೇರ್ಪಟ್ಟ ಇಬ್ಬರು ಸಹೋದರಿಯರ ನೋವಿನ ಕಥೆ ಇದರಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಚಿತ್ರದಲ್ಲಿ 'ಶಂಸುದ್ದೀನ್' ಎಂಬ ನಟ ನಿರ್ವಹಿಸಿದ ಆ ಭಯಾನಕ ದೆವ್ವದ ಪಾತ್ರವಿದೆಯಲ್ಲ... ಅದು ಇಂದಿಗೂ ಹಾರರ್ ಅಭಿಮಾನಿಗಳ ಪಾಲಿಗೆ ಒಂದು ದುಃಸ್ವಪ್ನ!&lt;/p&gt;&lt;p&gt;ಶೂಟಿಂಗ್ ಹೇಗಿರುತ್ತಿತ್ತು ಗೊತ್ತಾ?&lt;/p&gt;&lt;p&gt;ಆ ಕಾಲದಲ್ಲಿ ಹಾರರ್ ಸಿನೆಮಾಗಳಲ್ಲಿ ನಟಿಸುವುದು ಸುಲಭದ ಮಾತಾಗಿರಲಿಲ್ಲ. ನಟಿ ಪ್ರೀತಿ ಸಪ್ರು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ಶೂಟಿಂಗ್ ಬಹುತೇಕ ತಡರಾತ್ರಿಯಲ್ಲೇ ನಡೆಯುತ್ತಿತ್ತು. ದಟ್ಟವಾದ ಮಂಜು ಮತ್ತು ಸ್ಮಶಾನದಂತಹ ನಿಶ್ಯಬ್ದದ ನಡುವೆ ರಾತ್ರಿಯಿಡೀ ಕಿರುಚಾಡುತ್ತಾ, ದೆವ್ವಗಳಿಂದ ತಪ್ಪಿಸಿಕೊಂಡು ಓಡುವ ದೃಶ್ಯಗಳಲ್ಲಿ ಅಭಿನಯಿಸುವುದು ನಿಜಕ್ಕೂ ಮೈ ಜುಂ ಎನ್ನುವ ಅನುಭವವಂತೆ. ಪುನೀತ್ ಇಸ್ಸಾರ್, ಹೇಮಂತ್ ಬಿರ್ಜೆ ಅಂತಹ ಸ್ಟಾರ್ ನಟರಿದ್ದರೂ, ತೆರೆಯ ಮೇಲೆ ದೆವ್ವ ಬಂದಾಗ ಪ್ರೇಕ್ಷಕರು ನಟರನ್ನು ಮರೆತು ಹೌಹಾರಿ ಹೋಗುತ್ತಿದ್ದರು.&lt;/p&gt;&lt;h3&gt;ಇಂದಿಗೂ ಯಾಕೆ ಫೇಮಸ್?&lt;/h3&gt;&lt;p&gt;ಇವತ್ತಿನ ಹಾರರ್ ಸಿನಿಮಾಗಳಲ್ಲಿ ಲಾಜಿಕ್ ಹುಡುಕಬಹುದು, ಆದರೆ ರಾಮ್ಸೆ ಬ್ರದರ್ಸ್ ಚಿತ್ರಗಳಲ್ಲಿ ಇದ್ದದ್ದು ಕೇವಲ 'ಮ್ಯಾಜಿಕ್' ಮತ್ತು 'ಭಯ'. ಆ ಕೆಂಪು ಕಣ್ಣುಗಳು, ಉದ್ದನೆಯ ಉಗುರುಗಳು, ಹಳೇ ಬಂಗಲೆಯ ಬಾಗಿಲು ತೆರೆಯುವ ಆ 'ಕಿರ್ರ್..' ಎಂಬ ಶಬ್ದ... ಇವೆಲ್ಲವೂ ಈಗಿನ ಹಾರರ್ ಪ್ರಿಯರಿಗೂ ಕಿಕ್ ನೀಡುತ್ತವೆ.&lt;/p&gt;&lt;p&gt;ನಿಮಗೂ ಧೈರ್ಯವಿದ್ದರೆ, ಯಾವುದಾದರೂ ಒಂದು ಶುಕ್ರವಾರದ ರಾತ್ರಿ ಲೈಟ್ ಆಫ್ ಮಾಡಿ ಈ 'ತಹ್ಖಾನಾ' ಸಿನೆಮಾ ನೋಡಲು ಕುಳಿತುಕೊಳ್ಳಿ. ಆದರೆ ನೆನಪಿರಲಿ, ಆ ನೆಲಮಾಳಿಗೆಯ ಒಳಗಿರುವ ಶಕ್ತಿ ನಿಮ್ಮನ್ನೂ ಬೆನ್ನಟ್ಟಬಹುದು! ಆದ್ರೂ.. ಯಾವುದಕ್ಕೂ ಹುಶಾರ್!!! ಏಕೆಂದರೆ, ಒಮ್ಮೆ ಈ ತಹ್ಖಾನಾ ಸಿನಿಮಾ ನೋಡಿದವ್ರು ಹೆಸರು ಹೇಳೋಕೂ ಹೆದರ್ತಾರೆ! ಅಷ್ಟೊಂದು ಭಯಾನಕ ಹಾರರ್ ಸಿನಿಮಾ ಇದು!!&lt;/p&gt;&lt;p&gt;ಸಂಕ್ಷಿಪ್ತ ಮಾಹಿತಿ:&lt;/p&gt;&lt;p&gt;ಚಿತ್ರ: ತಹ್ಖಾನಾ (1986)&lt;/p&gt;&lt;p&gt;ನಿರ್ದೇಶನ: ತುಳಸಿ ರಾಮ್ಸೆ ಮತ್ತು ಶ್ಯಾಮ್ ರಾಮ್ಸೆ&lt;/p&gt;&lt;p&gt;ಬಜೆಟ್: ₹34 ಲಕ್ಷ&lt;/p&gt;&lt;p&gt;ಗಳಿಕೆ: ₹97 ಲಕ್ಷ (ಜಾಗತಿಕವಾಗಿ)&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/tahkhana-1986-film-is-scary-bollywood-horror-movie-that-people-who-watch-it-once-are-too-afraid-to-ever-see-it-again/articleshow-914ayzp"/>
        </item>
        <item>
            <title><![CDATA[ತಂದೆ ನಿಧನರಾದ ಲಂಡನ್ ಆಸ್ಪತ್ರೆಯಲ್ಲೇ ಮಗನ ಕೊನೆಯುಸಿರು: ಹಿರಿಯ ನಟ ದೇವಾನಂದ್‌ ಪುತ್ರ ಸುನೀಲ್ ಆನಂದ್ ವಿಧಿವಶ!]]></title>
            <link>https://kannada.asianetnews.com/cine-world/dev-anand-son-suneil-anand-passes-away-heart-attack-london-hospital-san/articleshow-bc9hy1f</link>
            <guid isPermaLink="true">https://kannada.asianetnews.com/cine-world/dev-anand-son-suneil-anand-passes-away-heart-attack-london-hospital-san/articleshow-bc9hy1f</guid>
            <pubDate>Tue, 28 Jul 2026 22:44:36 +0530</pubDate>
            <description><![CDATA[ಹಿರಿಯ ನಟ ದೇವ್ ಆನಂದ್ ಅವರ ಪುತ್ರ, ನಟ-ನಿರ್ಮಾಪಕ ಸುನೀಲ್ ಆನಂದ್ (70) ಲಂಡನ್&zwnj;ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಚಿತ್ರ ಕಾಕತಾಳೀಯವೆಂದರೆ, ವರ್ಷಗಳ ಹಿಂದೆ ಅವರ ತಂದೆ ದೇವ್ ಆನಂದ್ ನಿಧನರಾದ ಅದೇ ಆಸ್ಪತ್ರೆಯಲ್ಲಿ ಸುನೀಲ್ ಆನಂದ್ ಕೂಡ ಕೊನೆಯುಸಿರೆಳೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kymckf74sntwaqqs9y44xy0z,imgname-fotojet--36--1785243221216.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್/ಮುಂಬೈ (ಜು.28): &lt;/strong&gt;ಹಿಂದಿ ಚಿತ್ರರಂಗದ ದಂತಕಥೆ ದೇವ್ ಆನಂದ್ ಹಾಗೂ ನಟಿ ಕಲ್ಪನಾ ಕಾರ್ತಿಕ್ ಅವರ ಪುತ್ರ, ನಟ ಹಾಗೂ ಚಲನಚಿತ್ರ ನಿರ್ಮಾಪಕ ಸುನೀಲ್ ಆನಂದ್ (70) ಅವರು ಲಂಡನ್&zwnj;ನಲ್ಲಿ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬದ ಪರವಾಗಿ ಅವರ ಸೋದರಸಂಬಂಧಿ ಜೀನಾ ನಾರಂಗ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅಮೆರಿಕದಿಂದ ಇಂಗ್ಲೆಂಡ್&zwnj; ಮಾರ್ಗವಾಗಿ ಭಾರತಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಸುನೀಲ್ ಆನಂದ್ ಅವರಿಗೆ ಲಂಡನ್&zwnj;ನಲ್ಲಿ ತೀವ್ರ ಹೃದಯಾಘಾತ ಸಂಭವಿಸಿತ್ತು.&lt;/p&gt;&lt;p&gt;ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಪರೀಕ್ಷೆಯ ನಂತರ ವೈದ್ಯರು ಸ್ಟೆಂಟ್ (Stent) ಅಳವಡಿಸುವ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಿದ್ದರು. ಆದರೆ, ಚಿಕಿತ್ಸೆ ಪ್ರಾರಂಭವಾಗುವ ಮುನ್ನವೇ ಅವರಿಗೆ ಎರಡನೇ ಬಾರಿಗೆ ಭಾರಿ ಪ್ರಮಾಣದ ಹೃದಯಾಘಾತ ಸಂಭವಿಸಿತು. ವೈದ್ಯಕೀಯ ತಂಡವು ಅವರನ್ನು ಉಳಿಸಿಕೊಳ್ಳಲು ತೀವ್ರ ಯತ್ನ ನಡೆಸಿತಾದರೂ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ವಿಚಿತ್ರ ಕಾಕತಾಳೀಯವೆಂದರೆ, ವರ್ಷಗಳ ಹಿಂದೆ ಅವರ ತಂದೆ ದೇವ್ ಆನಂದ್ ಅವರು ನಿಧನರಾದ ಅದೇ ಆಸ್ಪತ್ರೆಯಲ್ಲಿ ಸುನೀಲ್ ಆನಂದ್ ಕೂಡ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;h2&gt;&lt;strong&gt;'ಆನಂದ್ ಔರ್ ಆನಂದ್' ಚಿತ್ರದ ಮೂಲಕ ನಟನೆಯ ರಂಗಪ್ರವೇಶ&lt;/strong&gt;&lt;/h2&gt;&lt;p&gt;ದೇವ್ ಆನಂದ್ ಅವರ ಹಿರಿಮಗನಾಗಿದ್ದ ಸುನೀಲ್ ಆನಂದ್, 1984 ರಲ್ಲಿ ದೇವ್ ಆನಂದ್ ಅವರೇ ನಿರ್ದೇಶಿಸಿದ್ದ 'ಆನಂದ್ ಔರ್ ಆನಂದ್' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ತದನಂತರ ಅವರು 'ಕಾರ್ ಥೀಫ್' (Car Thief), 'ಮೈ ತೇರೇ ಲಿಯೇ' (Main Tere Liye) ಮತ್ತು 'ಮಾಸ್ಟರ್' (Master) ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಸುನೀಲ್ ಆನಂದ್ ಅವರು ಕಳೆದ ಜೂನ್ 30ರಂದು ತಮ್ಮ 70ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು.&lt;/p&gt;&lt;h2&gt;&lt;strong&gt;'ತಂದೆಯ ಜೊತೆಗೇ ಕಳೆದಿದ್ದೆ 40 ವರ್ಷಗಳು'&lt;/strong&gt;&lt;/h2&gt;&lt;p&gt;2023 ರ ಸೆಪ್ಟೆಂಬರ್ 26 ರಂದು ದೇವ್ ಆನಂದ್ ಅವರ ಜನ್ಮಶತಾಬ್ದಿ ಆಚರಣೆಗೆ ಮುನ್ನ ಮಾತನಾಡಿದ್ದ ಸುನೀಲ್ ಆನಂದ್, ತಮ್ಮ ಜೀವನದ 40 ವರ್ಷಗಳನ್ನು ತಂದೆಯ ಜೊತೆಯಲ್ಲೇ ಕಳೆದು, ಅವರ ಆರೋಗ್ಯ, ದಿನಚರಿ ಹಾಗೂ ಕುಟುಂಬದ ನಿರ್ಮಾಣ ಸಂಸ್ಥೆಯಾದ 'ನವಕೇತನ್ ಫಿಲ್ಮ್ಸ್' (Navketan Films) ಜವಾಬ್ದಾರಿಯನ್ನು ನೋಡಿಕೊಂಡಿದ್ದಾಗಿ ನೆನಪಿಸಿಕೊಂಡಿದ್ದರು.&lt;/p&gt;&lt;p&gt;&quot;ನಮ್ಮ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾ 'ಗೈಡ್' ಅನ್ನು 2008 ರ ಕಾನ್ಸ್ ಫಿಲ್ಮ್ ಫೆಸ್ಟಿವಲ್&zwnj;ಗೆ (Cannes Film Festival) ಕೊಂಡೊಯ್ಯುವ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡಿದ್ದೆ. ಕಾನ್ಸ್ ಸಮಿತಿಯಿಂದ ಪ್ರದರ್ಶನಕ್ಕೆ ಆಯ್ಕೆಯಾದ ಮೊದಲ ಭಾರತೀಯ ಕ್ಲಾಸಿಕ್ ಸಿನಿಮಾ ಅದಾಗಿತ್ತು. ಅದು ನನ್ನ ತಂದೆಗೆ, ನಮಗೆ, ನವಕೇತನ್ ಸಂಸ್ಥೆಗೆ ಹಾಗೂ ಇಡೀ ಭಾರತಕ್ಕೆ ದೊಡ್ಡ ಮೈಲಿಗಲ್ಲಾಗಿತ್ತು,&quot; ಎಂದು ಅವರು ಹೇಳಿದ್ದರು.&lt;/p&gt;&lt;h2&gt;&lt;strong&gt;ತಂದೆಗೆ ಸಿನಿಮಾ ಸಮರ್ಪಿಸುವ ಕನಸು&lt;/strong&gt;&lt;/h2&gt;&lt;p&gt;ಚಲನಚಿತ್ರ ನಿರ್ಮಾಪಕರಾಗಿ ಸುನೀಲ್ ಆನಂದ್ ಅವರು ತಮ್ಮ ತಂದೆಯ ಸ್ಮರಣಾರ್ಥ ದೊಡ್ಡ ಸಿನಿಮಾವೊಂದನ್ನು ನಿರ್ಮಿಸುವ ಯೋಜನೆಯಲ್ಲಿದ್ದರು. &quot;ಅದು ನನ್ನ ತಂದೆಗೆ ಸಮರ್ಪಿಸುವ ಬೃಹತ್ ಸಿನಿಮಾವಾಗಲಿದೆ. ನಾನೇ ಅದನ್ನು ನಿರ್ಮಿಸಿ ನಿರ್ದೇಶಿಸುತ್ತೇನೆ. ತಂದೆಯ ಪರಂಪರೆಯನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ,&quot; ಎಂದು ಸುನೀಲ್ ತಿಳಿಸಿದ್ದರು. ಆದರೆ ಆ ಕನಸು ನನಸಾಗುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/cine-world/dev-anand-son-suneil-anand-passes-away-heart-attack-london-hospital-san/articleshow-bc9hy1f"/>
        </item>
        <item>
            <title><![CDATA['ನನ್ನ ಹೆಸರಲ್ಲಿ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ..' ಮೀಸಲಾತಿ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ನಟಿ ಶಿಲ್ಪಾ ಶೆಟ್ಟಿ]]></title>
            <link>https://kannada.asianetnews.com/cine-world/shilpa-shetty-clarifies-fake-reservation-post-viral-instagram-statement-san/articleshow-qndig7r</link>
            <guid isPermaLink="true">https://kannada.asianetnews.com/cine-world/shilpa-shetty-clarifies-fake-reservation-post-viral-instagram-statement-san/articleshow-qndig7r</guid>
            <pubDate>Tue, 28 Jul 2026 20:34:47 +0530</pubDate>
            <description><![CDATA[&lt;p&gt;ನಟಿ ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿ ಜಾತಿ ಆಧಾರಿತ ಮೀಸಲಾತಿ ಕುರಿತು ವೈರಲ್ ಆಗಿದ್ದ ವಿವಾದಾತ್ಮಕ ಹೇಳಿಕೆಯು ಸಂಪೂರ್ಣ ನಕಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮಗೆ ಆಘಾತವಾಗಿದೆ ಎಂದು ಹೇಳಿರುವ ಅವರು, ಇಂತಹ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ನಂಬದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktk8f13h77npv7sdrwyhmned,imgname-shilpa-shetty--1--1780910359665.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜು.28): &lt;/strong&gt;ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿ ಸೋಶಿಯಲ್&zwnj; ಮೀಡಿಯಾದಲ್ಲಿ ಜಾತಿ ಆಧಾರಿತ ಮೀಸಲಾತಿ ಕುರಿತು ವಿವಾದಾತ್ಮಕ ಹಾಗೂ ನಕಲಿ ಹೇಳಿಕೆಯೊಂದು ತೀವ್ರವಾಗಿ ವೈರಲ್ ಬೆನ್ನಲ್ಲೇ, ನಟಿ ಶಿಲ್ಪಾ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಹೇಳಿಕೆಯು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ನಕಲಿ ಎಂದು ಸ್ಪಷ್ಟಪಡಿಸಿರುವ ಅವರು, ಇಂತಹ ಗೊಂದಲ ಮೂಡಿಸುವ ಪೋಸ್ಟ್&zwnj;ಗಳನ್ನು ಯಾರೂ ನಂಬಬಾರದು ಎಂದು ಅಭಿಮಾನಿಗಳಲ್ಲಿ ಹಾಗೂ ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಸೋಶಿಯಲ್&zwnj; ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಅವರು ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಪೋಸ್ಟ್ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಆ ಪೋಸ್ಟ್&zwnj;ನಲ್ಲಿ ಶಿಲ್ಪಾ ಶೆಟ್ಟಿ ಅವರು ಮೀಸಲಾತಿಯನ್ನು ರದ್ದುಗೊಳಿಸುವ ಪರವಾಗಿದ್ದಾರೆ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಆದರೆ, ಈ ಮಾತನ್ನು ಅಲ್ಲಗೆಳೆದಿರುವ ಶಿಲ್ಪಾ ಶೆಟ್ಟಿ, ಇಂತಹ ಯಾವುದೇ ಹೇಳಿಕೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಎಕ್ಸ್&zwnj;ನಲ್ಲಿ ಶಿಲ್ಪಾ ಶೆಟ್ಟಿ ಪೋಸ್ಟ್&zwnj;&lt;/strong&gt;&lt;/h2&gt;&lt;p&gt;ಎಕ್ಸ್&zwnj; ಹಾಗೂ ಇನ್ಸ್&zwnj;ಟಾಗ್ರಾಮ್&zwnj; ಸ್ಟೋರಿಯಲ್ಲಿ ಈ ಬಗ್ಗೆ ಸುದೀರ್ಘ ಪ್ರತಿಕ್ರಿಯೆ ನೀಡಿರುವ ನಟಿ, 'ನನ್ನ ಹೆಸರಿನಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸುಳ್ಳು ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ಜೋಡಿಸಿ ಪ್ರಚಾರ ಮಾಡಲಾಗುತ್ತಿದೆ. ಇದನ್ನು ಕಂಡು ನನಗೆ ತೀವ್ರ ಆಘಾತವಾಗಿದೆ. ಇದು ಸಂಪೂರ್ಣವಾಗಿ ನಕಲಿ ಹಾಗೂ ದ್ವೇಷಪೂರಿತ ಸುಳ್ಳು ಪ್ರಚಾರ. ದಯವಿಟ್ಟು ಇಂತಹ ಫೇಕ್ ಪೋಸ್ಟ್&zwnj;ಗಳು ಹಾಗೂ ವಿಕೃತ ವದಂತಿಗಳನ್ನು ಯಾರೂ ನಂಬಬೇಡಿ,&quot; ಎಂದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;ಲಭ್ಯವಿರುವ ಮಾಹಿತಿಯ ಪ್ರಕಾರ, ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವೈರಲ್ ಆದ ನಕಲಿ ಪೋಸ್ಟ್&zwnj;ನಲ್ಲಿ ಶಿಲ್ಪಾ ಶೆಟ್ಟಿ ಅವರು ಜಾತಿ ಆಧಾರಿತ ಮೀಸಲಾತಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಬಿಂಬಿಸಲಾಗಿತ್ತು. ಆ ನಕಲಿ ಪೋಸ್ಟ್&zwnj;ನಲ್ಲಿ, 'ಸಾಮಾನ್ಯ ವರ್ಗದ (General Category) ವೈದ್ಯರು ಕೇವಲ ಸಾಮಾನ್ಯ ವರ್ಗದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಇನ್ನುಳಿದ ಸಮಾಜದ ವೈದ್ಯರು ತಮ್ಮ ತಮ್ಮ ವರ್ಗದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಇಂತಹ ವ್ಯವಸ್ಥೆ ಜಾರಿಯಾದರೆ ಜನರೇ ಸ್ವತಃ ಮೀಸಲಾತಿಯನ್ನು ರದ್ದುಗೊಳಿಸುವಂತೆ ಆಗ್ರಹಿಸುತ್ತಾರೆ. ಏಕೆಂದರೆ ಪ್ರತಿಭೆ/ಅರ್ಹತೆಯು (Quality) ಮೀಸಲಾತಿಯಿಂದ ಸಿಗಲು ಸಾಧ್ಯವಿಲ್ಲ&quot; ಎಂಬ ಸಾಲುಗಳನ್ನು ಬರೆಯಲಾಗಿತ್ತು.&lt;/p&gt;&lt;p&gt;ಈ ಸೂಕ್ಷ್ಮ ಹಾಗೂ ಆಕ್ಷೇಪಾರ್ಹ ಸಾಲುಗಳನ್ನು ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಲಾಗಿತ್ತು. ಸಾಮಾಜಿಕವಾಗಿ ತೀವ್ರ ಸೂಕ್ಷ್ಮವಾಗಿರುವ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದ್ದರಿಂದ ಈ ಪೋಸ್ಟ್ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿ, ಹಲವರ ತೀವ್ರ ಆಕ್ರೋಶ ಹಾಗೂ ಆಕ್ಷೇಪಾರ್ಹ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು.&lt;/p&gt;&lt;h2&gt;&lt;strong&gt;ಹೆಚ್ಚುತ್ತಿರುವ 'ಫೇಕ್ ನ್ಯೂಸ್' ಪಿಡುಗು&lt;/strong&gt;&lt;/h2&gt;&lt;p&gt;ನಟಿ ಶಿಲ್ಪಾ ಶೆಟ್ಟಿ ಅವರು ತಕ್ಷಣವೇ ನೀಡಿದ ಈ ಸ್ಪಷ್ಟನೆಯಿಂದಾಗಿ, ಪ್ರಸಿದ್ಧ ವ್ಯಕ್ತಿಗಳ (Celebrities) ಹೆಸರನ್ನು ಬಳಸಿ ಸೋಶಿಯಲ್&zwnj; ಮೀಡಿಯಾದಲ್ಲಿ ಸುಳ್ಳು ಹಾಗೂ ನಕಲಿ ವದಂತಿಗಳನ್ನು ಹಬ್ಬಿಸುವ ಜಾಲ ಎಷ್ಟು ಅಪಾಯಕಾರಿಯಾಗಿ ಬೆಳೆದಿದೆ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಅಥವಾ ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಎಷ್ಟು ಅಗತ್ಯ ಎಂಬುದನ್ನು ಈ ಘಟನೆ ಎತ್ತಿ ತೋರಿಸಿದೆ.&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/cine-world/shilpa-shetty-clarifies-fake-reservation-post-viral-instagram-statement-san/articleshow-qndig7r"/>
        </item>
        <item>
            <title><![CDATA[ಕುಡಿದು ತೂರಾಡಿದ್ರೂ ಜೈದೇವ್‌ಗೆ ಬಹುಪರಾಕ್; ಮಲ್ಲಿ ಮುಂದೆ ಬಾಲ ಬಿಚ್ಚಿದ ಕೆಡಿಗೆ ಶಾಕ್]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-latest-episode-raanav-gowda-jaidev-s-natural-acting-was-appreciated-by-audience-mrq-6xxmkgw</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-latest-episode-raanav-gowda-jaidev-s-natural-acting-was-appreciated-by-audience-mrq-6xxmkgw</guid>
            <pubDate>Tue, 28 Jul 2026 20:26:31 +0530</pubDate>
            <description><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ, ಕುಡಿದ ಮತ್ತಿನಲ್ಲಿ ಮಾಜಿ ಪತ್ನಿ, ಐಪಿಎಸ್ ಅಧಿಕಾರಿ ಮಲ್ಲಿಗೆ ಜೈದೇವ್ ಸಾರ್ವಜನಿಕವಾಗಿ ಅವಮಾನಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಮಲ್ಲಿ ಆತನನ್ನು ಜೈಲಿಗೆ ಕಳುಹಿಸುತ್ತಾಳೆ ಮತ್ತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymk7jk9fawse5ghc5pc7k40,imgname-amruthadhaare--3--1785250171497.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ, ಕುಡಿದ ಮತ್ತಿನಲ್ಲಿ ಮಾಜಿ ಪತ್ನಿ, ಐಪಿಎಸ್ ಅಧಿಕಾರಿ ಮಲ್ಲಿಗೆ ಜೈದೇವ್ ಸಾರ್ವಜನಿಕವಾಗಿ ಅವಮಾನಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಮಲ್ಲಿ ಆತನನ್ನು ಜೈಲಿಗೆ ಕಳುಹಿಸುತ್ತಾಳೆ ಮತ್ತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತಾಳೆ.&lt;/p&gt;&lt;img&gt;&lt;p&gt;ಐಪಿಎಸ್&zwnj; ಅಧಿಕಾರಿಯಾಗಿರುವ ಮಲ್ಲಿ ಮುಂದೆಯೇ ಬಾಲ ಬಿಚ್ಚಿದ ಮಾಜಿ ಗಂಡ ಕೆಡಿ ಜೈದೇವ್&zwnj; ಜೈಲುಪಾಲಾಗಿದ್ದಾನೆ. ಇಂದಿನ ಇಡೀ ಸಂಚಿಕೆಯ ಅರ್ಧ ಭಾಗದಲ್ಲಿ ಜೈದೇವ್&zwnj; ಕುಡಿದು ರಂಪಾಟ ಮಾಡಿದ್ದನು. ಮಲ್ಲಿಯನ್ನು ಹೇಗೆಲ್ಲಾ ಅವಮಾನಿಸಲು ಸಾಧ್ಯವೋ ಎಲ್ಲವನ್ನು ಜೈದೇವ್ ಮಾಡಿದ್ದಾನೆ. ಇಷ್ಟೆಲ್ಲಾ ಮಾಡಿದ್ರೂ ಮಾತ್ರ ವೀಕ್ಷಕರು ಮಾತ್ರ ಜೈದೇವ್&zwnj;ಗೆ ಬಹುಪರಾಕ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಹೌದು, ಜೈದೇವ್&zwnj; ನಟನೆಗೆ ಎಂದಿನಂತೆ ಮತ್ತೊಮ್ಮೆ ಜನರು ಫಿದಾ ಆಗಿದ್ದಾರೆ. ಇಡೀ ಎಪಿಸೋಡ್&zwnj;ನಲ್ಲಿ ಜೈದೇವ್&zwnj; ಇಂದು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಂತು ನಿಜ. ಜೈದೇವ್ ನಟನೆಗೆ ಮಲ್ಲಿ ತನ್ನ ಲುಕ್&zwnj;ನಲ್ಲಿಯೇ ಕೌಂಟರ್ ಕೊಟ್ಟಿದ್ದು ವಿಶೇಷ. ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು ಎಂಬುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ರಾತ್ರಿ ಪೊಲೀಸರು ವಾಹನಗಳನ್ನು ಪರಿಶೀಲನೆ ಮಾಡುತ್ತಿರುತ್ತಾರೆ. ಈ ವೇಳೆ ಕುಡಿದು ಕಾರ್ ಚಲಾಯಿಸಿಕೊಂಡು ಬಂದ ಜೈದೇವ್&zwnj;ನನ್ನು ಪೊಲೀಸರು ನಿಲ್ಲಿಸುತ್ತಾರೆ. ಈ ವೇಳೆ ಡ್ಯೂಟಿಯಲ್ಲಿದ್ದ ಮಲ್ಲಿಯನ್ನು ನೋಡಿದ ಜೈದೇವ್, ಅಲ್ಲಿದ್ದ ಎಲ್ಲಾ ಪೊಲೀಸರ ಮುಂದೆ ಈಕೆ ನನ್ನ ಮಾಜಿ ಹೆಂಡ್ತಿ. ನನ್ನ ಹಣದಲ್ಲಿ ಐಪಿಎಸ್ ಓದಿ, ಬೇರೊಬ್ಬನ ಜೊತೆ ಹೋದವಳು ಎಂದು ಹೇಳುತ್ತಾನೆ.&lt;/p&gt;&lt;img&gt;&lt;p&gt;ಇಷ್ಟಕ್ಕೆ ಸುಮ್ಮನಾಗದ ಜೈದೇವ್, ಮಾಜಿ ಪತ್ನಿಯ ಖಾಸಗಿ ವಿಷಯಗಳೆಲ್ಲವನ್ನು ಎಲ್ಲರ ಮುಂದೆ ರಿವೀಲ್ ಮಾಡಿದ್ದಾನೆ. ಪದೇ ಪದೇ ರೂರಲ್ ಖೋಟಾ, ರೂರಲ್ ಖೋಟಾ ಇದೀಗ ಟೀಶರ್ಟ್, ಬೆಲ್ಟ್ ಮತ್ತು ಬೂಟ್ ಹಾಕೊಂಡು ಬಂದು ನಿಂತಿದ್ದಾಳೆ. ನನ್ನ ಕಾರ್ ನಿಲ್ಲಿಸುವಂತೆ ಈಕೆಯೇ ಹೇಳಿದ್ದಾಳೆ ಎಂದು ಜೈದೇವ್ ಪ್ರಶ್ನೆ ಮಾಡುತ್ತಾನೆ. ಸತ್ಯ ಒಪ್ಪಿಕೊಳ್ಳೋಕೆ ಮೀಟರ್ ಬೇಕೆಂದು ಜೈದೇವ್ ಗುಡುಗಿದ್ದಾನೆ.&lt;/p&gt;&lt;img&gt;&lt;p&gt;ಜೈದೇವ್ ಉಪಟಳ ಹೆಚ್ಚಾಗುತ್ತಿದ್ದಂತೆ ಆತನ ಮೇಲೆ ಲಾಠಿ ಬೀಸಿದ ಮಲ್ಲಿ, ಜೈಲಿಗೆ ಕರೆದುಕೊಂಡು ಹೋಗುವಂತೆ ಹೇಳುತ್ತಾಳೆ. ಇಡೀ ರಾತ್ರಿ ಜೈಲಿನಲ್ಲಿಯೇ ಕಳೆದ ಜೈದೇವ್&zwnj;ನನ್ನು ಬಿಟ್ಟು ಕಳುಹಿಸಬೇಕಾ ಎಂದು ಪೊಲೀಸರು ಮಲ್ಲಿಗೆ ಫೋನ್ ಮಾಡಿ ಕೇಳ್ತಾರೆ. ಆದ್ರೆ ಮಲ್ಲಿ ಮಾತ್ರ, ಕಾನೂನಿನ ಪ್ರಕಾರ ಏನು ಮಾಡಬೇಕು ಅದನ್ನೇ ಮಾಡಿ. ಜೈದೇವ್&zwnj;ನನ್ನು ನ್ಯಾಯಾಲಯ ಮುಂದೆ ಹಾಜರುಪಡಿಸುವಂತೆ ಹೇಳಿದ್ದಾಳೆ. ಈ ಘಟನೆ ಬಳಿಕ ಜೈದೇವ್ ಮತ್ತಷ್ಟು ಕೋಪಗೊಂಡಿದ್ದಾನೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-latest-episode-raanav-gowda-jaidev-s-natural-acting-was-appreciated-by-audience-mrq-6xxmkgw"/>
        </item>
        <item>
            <title><![CDATA[Gen Z: ಜೆನ್‌ಜಿ ಲವ್, ಬ್ರೇಕಪ್, ಲಿವಿಂಗ್ ಟುಗೆದರ್.. ಸಿನಿಬ್ರಹ್ಮಾಂಡದಲ್ಲಿ 'ಪಾಟ್ನರ್' ಅಮೋರಾ ಸೌಂಡ್!]]></title>
            <link>https://kannada.asianetnews.com/sandalwood/partner-movie-amora-song-featuring-ajay-rao-and-brinda-acharya-becomes-a-big-hit-for-its-gen-z-vibe-in-social-media/articleshow-5w2vybk</link>
            <guid isPermaLink="true">https://kannada.asianetnews.com/sandalwood/partner-movie-amora-song-featuring-ajay-rao-and-brinda-acharya-becomes-a-big-hit-for-its-gen-z-vibe-in-social-media/articleshow-5w2vybk</guid>
            <pubDate>Tue, 28 Jul 2026 15:40:22 +0530</pubDate>
            <description><![CDATA[&lt;p&gt;ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ಚಿತ್ರ ತಂಡ ಇದೀಗ ಚಿತ್ರದ ಮೊದಲ ಹಾಡನ್ನು ಹೊರತಂದಿದೆ. ನಾಗಾರ್ಜುನ ಶರ್ಮಾ ರಚನೆಯ ಅಮೋರಾ ಎಂಬ ಹಾಡಿಗೆ ಕುನಾಲ್ ಗಂಜಾವಾಲಾ ದನಿಯಾಗಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯ ಈ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kym35kpped279rdzhb5mvarn,imgname-partner-movie-1785233329878.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಸಿನಿಮಾ ಗೆಲ್ಲಬೇಕೆಂದರೆ ಅದರ ಗಟ್ಟಿ ಕಥೆ, ಕಲಾವಿದರ ಅಭಿನಯ, ಮೇಕಿಂಗ್ ಜತೆಗೆ ಹಾಡುಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಮಳೆ, ಧೈರ್ಯಂ, ದಿಲ್ ಪಸಂದ್ ಚಿತ್ರಗಳ ನಂತರ ನಿರ್ದೇಶಕ ಶಿವತೇಜಸ್ ಆಕ್ಷನ್ ಕಟ್ ಹೇಳಿರುವ ಚಿತ್ರ 'ಪಾರ್ಟ್ನರ್' ವಿಶೇಷ ಹಾಡಿನ ಮೂಲಕ ಪ್ರೇಕ್ಷರನ್ನು ಆಕರ್ಷಿಸುತ್ತಿದೆ. ಬೃಂದಾ ಆಚಾರ್ಯ, ಕೃಷ್ಣ ಅಜಯ್ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ ಈಗಿನ ಜೆನ್&zwnj;ಜಿ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ನಂಥ ಕಂಟೆಂಟ್ ಇಟ್ಟುಕೊಂಡು ಜೀವನ ಎಂದರೆ ಇದಲ್ಲ, ಅದು ಬೇರೇನೇ ಇದೆ ಎಂದು ನಿರ್ದೇಶಕ ಶಿವತೇಜಸ್ ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ.&lt;/p&gt;&lt;p&gt;ಇತ್ತೀಚೆಗಷ್ಟೇ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ಚಿತ್ರ ತಂಡ ಇದೀಗ ಚಿತ್ರದ ಮೊದಲ ಹಾಡನ್ನು ಹೊರತಂದಿದೆ. ನಾಗಾರ್ಜುನ ಶರ್ಮಾ ರಚನೆಯ ಅಮೋರಾ ಎಂಬ ಹಾಡಿಗೆ ಕುನಾಲ್ ಗಂಜಾವಾಲಾ ದನಿಯಾಗಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯ ಈ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು. ವೇದಿಕೆಯಲ್ಲಿ ನಿರ್ಮಾಪಕ ಹರೀಶ್ ದೇವಿತಂದ್ರೆ ಅವರಿಗೆ ಪಾಠ ಹೇಳಿಕೊಟ್ಟ ಗುರುಗಳಾದ ನಾಗಭೂಷಣ್ ದಂಪತಿ ಈ ಹಾಡನ್ನು ರಿಲೀಸ್ ಮಾಡಿದರು.&lt;/p&gt;&lt;p&gt;ಈ ವೇಳೆ ನಟ ಅಜಯ್ ರಾವ್ ಮಾತನಾಡುತ್ತ ನನ್ನ ಮನಸಿಗೆ ತುಂಬಾ ಹತ್ತಿರವಾದ ಚಿತ್ರವಿದು. ನನ್ನ ಹೃದಯದ ಒಂದು ಭಾಗವನ್ನೇ ಇದರಲ್ಲಿ ಹಾಕಿದ್ದೇನೆ, ಕೆಲ ಸಿನಿಮಾಗಳು ಆರಂಭದಿಂದಲೇ ಏನೋ ಒಂದು ಮ್ಯಾಜಿಕ್ ಮಾಡುತ್ತೆ ಅನಿಸುತ್ತೆ. ಅಂಥಾ ಚಿತ್ರವಿದು. ಈ ಚಿತ್ರದ ಮೇಲೆ ನನಗೆ ತುಂಬಾ ಕಾನ್ಫಿಡೆಂಟ್ ಇದೆ. ಹ್ಯೂಮನ್ ವ್ಯಾಲ್ಯೂಸ್, ಎಮೋಷನ್ಸ್ ತುಂಬಾ ಚೆನ್ನಾಗಿ ಹೇಳಿದ್ದಾರೆ&zwnj;. ನನ್ನ ಜಾನರ್ ಸಿನಿಮಾದ ಎಮೋಷನ್ ಈ ಚಿತ್ರದಲ್ಲಿದೆ ಎಂದರು.&lt;/p&gt;&lt;p&gt;ನಿರ್ದೇಶಕ ಶಿವತೇಜಸ್ ಮಾತನಾಡುತ್ತ ದಿಲ್ ಪಸಂದ್ ಚಿತ್ರದಿಂದ ನನ್ನ ಹರೀಶ್ (ನಿರ್ಮಾಪಕ) ಸ್ನೇಹ ಆರಂಭವಾಯ್ತು. ಎಲ್ಲರಿಗೂ ಒಬ್ಬ ಪರ್ಟ್ನರ್ ಅಂತ ಇರ್ತಾರೆ. ಅದನ್ನೇ ಇಟ್ಟುಕೊಂಡು, ಜಂಜೀ ಕಂಟೆಂಟ್ ಮೇಲೆ ಈ ಸಿನಿಮಾ ಮಾಡಿದ್ದೇನೆ. ಈ ಸಾಂಗ್ ಕೂಡ ಜಂಜಿಗಳಿಗಾಗೇ ಮಾಡಿರೋದು ಎಂದರು. ನಿರ್ಮಾಪಕ ಹರೀಶ್ ಮಾತನಾಡಿ ನಾನಿಲ್ಲಿ ನಿಂತಿದ್ದೇನೆ ಅಂದ್ರೆ ಅದಕ್ಕೆ ನನ್ನ ತಾಯಿ, ಪತ್ನಿ ಕಾರಣ. ಯಾವುದೇ ಮುಜುಗರ ಇಲ್ಲದೆ ಕುಟುಂಬ ಸಮೇತ ಕೂತು ನೋಡುವಂಥ ಸಿನಿಮಾ ನಿರ್ಮಿಸಿದ್ದೇವೆ.&lt;/p&gt;&lt;p&gt;ಅಜಯ್ ಚಿತ್ರದ ಸ್ಯಾಟಲೈಟ್ ಗೆ ಸಿಗೋ ಮೊತ್ತದ 50% ಹಣವನ್ನು ಆನಂದ್ ಆಡಿಯೋ ನಮ್ಮ ಆಡಿಯೋಗೆ ಕೊಟ್ಟಿದೆ ಎಂದರು. ನಾಯಕಿ ಬೃಂದಾ ಆಚಾರ್ಯ ಮಾತನಾಡಿ ನನ್ನ ಸಿನಿಮಾ ಕಲೆಕ್ಷನ್ ನಲ್ಲಿ ಅಮೋರಾ 'ದಿ ಬೆಸ್ಟ್' ಸಾಂಗ್. ಒಂದೊಳ್ಳೆ ಟೀಮ್ ಜತೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್, ಸಾಹಿತಿ ನಾಗಾರ್ಜುನ ಶರ್ಮ, ಕೊರಿಯಾಗ್ರಾಫರ್ ಮುರಳಿ, ನಟ ಅರವಿಂದರಾವ್ ಈ ಚಿತ್ರದಲ್ಲಿ ಕೆಲಸ ಮಾಡಿದ ತಮ್ಮ ಅನುಭವಗಳನ್ನು ಹಂಚಿಕೊಂಡರು.&lt;/p&gt;&lt;p&gt;ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಹೆಚ್.ಪಿ.ಆರ್. ಎಂಟರ್ ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ಈ ಚಿತ್ರಕ್ಕಿದೆ&zwnj;. ಪಾರ್ಟ್ ನರ್ ಚಿತ್ರದ4 ಹಾಡುಗಳಿಗೆ ಕವಿರಾಜ್, ಪ್ರಮೋದ್ ಮರವಂತೆ, ನಾಗಾರ್ಜುನ. ಶರ್ಮಾ ಸಾಹಿತ್ಯ ರಚಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/partner-movie-amora-song-featuring-ajay-rao-and-brinda-acharya-becomes-a-big-hit-for-its-gen-z-vibe-in-social-media/articleshow-5w2vybk"/>
        </item>
        <item>
            <title><![CDATA[ಮುನಿಸು ಮರೆತರಾ ಕುಚಿಕೂ? ನಟ ದರ್ಶನ್ ಭೇಟಿಗೆ ಹೋದ ಧನ್ವೀರ್ ಗೌಡ.. ಅಲ್ಲಿ ಆಗಿದ್ದೇನು, ಮಾತಾಡಿದ್ದೇನು?]]></title>
            <link>https://kannada.asianetnews.com/sandalwood/sandalwood-actor-dhanveer-gowda-meets-his-close-friend-darshan-thoogudeepa-in-parappana-agahara-jail/articleshow-6l5buvs</link>
            <guid isPermaLink="true">https://kannada.asianetnews.com/sandalwood/sandalwood-actor-dhanveer-gowda-meets-his-close-friend-darshan-thoogudeepa-in-parappana-agahara-jail/articleshow-6l5buvs</guid>
            <pubDate>Tue, 28 Jul 2026 17:33:27 +0530</pubDate>
            <description><![CDATA[&lt;p&gt;ಸ್ಯಾಂಡಲ್&zwnj;ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್&zwnj; ಅವರ ಕ್ಲೋಸ್ ಸರ್ಕಲ್&zwnj;ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೆಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ ಬದಲಾಗಿಲ್ಲ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kym5d481tkxhg8nrfbztm076,imgname-darshan-thoogudeepa-dhanveer-gowda-1785235673345.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದರ್ಶನ್-ಧನ್ವೀರ್ ಭೇಟಿ.. &amp;nbsp;ಕುತೂಹಲ ಕೆರಳಿಸಿದ ಕೂಚಿಕೂ ಭೇಟಿ!&lt;/strong&gt;&lt;/p&gt;&lt;p&gt;Darshan Thoogudeepa-Dhanveer Gowda Meet: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ಇಂದು, 28 ಜುಲೈ 2026ರಂದು ನಟ ದರ್ಶನ್ ಆಪ್ತ ಸ್ನೇಹಿತ, ಸ್ಯಾಂಡಲ್&zwnj;ವುಡ್ ನಟ ಧನ್ವೀರ್ ಗೌಡ ಅವರು ಜೈಲಿಗೆ ಹೋಗಿ ನಟ ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಈ ಮೊದಲು ಕೂಡ ಧನ್ವೀರ್ ಅವರು ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದರು.&lt;/p&gt;&lt;h2&gt;ಇಂದಿನ ಭೇಟಿಯಲ್ಲಿ ನಡೆದ ಮಾತುಕತೆ ಏನು?&lt;/h2&gt;&lt;p&gt;ನಟ ಹಾಗೂ ತಮ್ಮ ಆಪ್ತ ದರ್ಶನ್ ಅವರನ್ನು ಭೇಟಿಯಾಗಲು ಇಂದು ನಟ ಧನ್ವೀರ್ ಗೌಡ ಅವರು ಒಂಟಿಯಾಗಿಯೇ ಬಂದಿದ್ದಾರೆ. ಅವರ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಾಗಲೀ ಅಥವಾ ಬೇರೆ ಸ್ನೇಹಿತರಾಗಲೀ ಬಂದಿಲ್ಲ. ಸಿಕ್ಕ ಮಾತುಕತೆ ಪ್ರಕಾರ- ನಟ ದರ್ಶನ್ ನೋಡಿ ಧನ್ವೀರ್ ಹಾಗೂ ಧನ್ವೀರ್ ನೋಡಿ ದರ್ಶನ್ ಪರಸ್ಪರ ಸಹಜವಾಗಿಯೇ ಖುಷಿಯಾಗಿದ್ದಾರೆ, ಕಣ್ಣೀರಾಗಿದ್ದಾರೆ. ಪ್ರೊಟೋಕಾಲ್ ಪಾಲನೆಯಲ್ಲೇ ಮಾತನ್ನಾಡಿದ ಈ ಇಬ್ಬರು ಸ್ನೇಹಿತರು ಹಾಗೂ ಸ್ಯಾಂಡಲ್&zwnj;ವುಡ್ ನಟರು, ತಮ್ಮ ಮಾತುಕತೆ ವೇಳೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್ ಜೀವನದಲ್ಲಿ ಉಂಟಾಗಿರುವ ಈ ಅನಿರೀಕ್ಷಿತ ಆಘಾತಕ್ಕೆ ಸಹಜವಾಗಿಯೇ ಈ ಇಬ್ಬರಲ್ಲೂ ಆತಂಕ ಇದ್ದೇ ಇದೆ. 'ನಟ ದರ್ಶನ್ ಬಿಡುಗಡೆ ಯಾವಾಗ?' ಎಂಬ ಪ್ರಶ್ನೆ ಸಹಜವಾಗಿಯೇ ಈ ಇಬ್ಬರನ್ನೂ ಕಾಡುತ್ತಿದೆ.&lt;/p&gt;&lt;p&gt;ನಟ ದರ್ಶನ್ ಹಾಗೂ ಧನ್ವೀರ್ ಗೌಡ ಮಾತುಕತೆಯಲ್ಲಿ ನಿಖರವಾಗಿ ಚರ್ಚೆಯಾದ ಸಂಗತಿ ಯಾವುದೆಂದು ಅವರಿಬ್ಬರನ್ನು ಬಿಟ್ಟು ಉಳಿದವರಿಗೆ ಗೊತ್ತಾಗುವಂಥದ್ದು ಏನೂ ಇಲ್ಲ. ಸಹಜವಾಗಿಯೇ ಅದು ಸ್ನೇಹಿತರ ಭೇಟಿ. ಜೈಲಿನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಬಿಡುಗಡೆ ಬಗ್ಗೆ, ಆ ನಿಟ್ಟಿನಲ್ಲಿ ಹುಡುಕಬಹುದಾದ ದಾರಿಗಳ ಬಗ್ಗೆ ಮಾತುಕತೆ ಆಗಿರಬಹುದು. ಅದರಲ್ಲಿ ಹೊರಜಗತ್ತಿಗೆ ಹೇಳುವಂಥದ್ದು ಏನಿದೆ? ಹೀಗಾಗಿ ಸದ್ಯಕ್ಕೆ ನಟ ಧನ್ವೀರ್ ಗೌಡ ಇಂದು ಪರಪ್ಪನ ಅಗ್ರಹಾರಕ್ಕೆ ಒಂಟಿಯಾಗಿ ಹೋಗಿ ಒಂಟಿಯಾಗಿ ಬಂದಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಆ ಸುದ್ದಿಯೀಗ ವೈರಲ್ ಆಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಸ್ಯಾಂಡಲ್&zwnj;ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್&zwnj; ಅವರ ಕ್ಲೋಸ್ ಸರ್ಕಲ್&zwnj;ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೇಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ &lsquo;ಸ್ನೇಹವೆಂದರೆ ಸ್ನೇಹ, ಪ್ರೀತಿ ಎಂದರೆ ಪ್ರೀತಿ-ನಮ್ಮಿಬ್ಬರ ನಡುವಿನ ಗೌರವಾದರ ಹಾಗೇ ಇದೆ&rsquo; ಎಂಬುದನ್ನು ಈ ಮೂಲಕ ಜಗತ್ತಿಗೆ ಹೇಳಿದ್ದಾರೆ ಎನ್ನಬಹುದು.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-actor-dhanveer-gowda-meets-his-close-friend-darshan-thoogudeepa-in-parappana-agahara-jail/articleshow-6l5buvs"/>
        </item>
        <item>
            <title><![CDATA[ಭಾಗ್ಯಶ್ರೀ ಬೋರ್ಸೆಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ? ಯಾರೆಲ್ಲಾ ಕೈ ಬಿಟ್ರು? ಏನೆಲ್ಲಾ ಆಯ್ತು ಲೈಫಲ್ಲಿ ಗೊತ್ತಾ?]]></title>
            <link>https://kannada.asianetnews.com/gallery/entertainment/marathi-actress-bhagyashri-borse-who-became-famous-from-telugu-movie-lenin-life-story-is-here-to-know-9atzcfh</link>
            <guid isPermaLink="true">https://kannada.asianetnews.com/gallery/entertainment/marathi-actress-bhagyashri-borse-who-became-famous-from-telugu-movie-lenin-life-story-is-here-to-know-9atzcfh</guid>
            <pubDate>Tue, 28 Jul 2026 16:52:01 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಭಾಗ್ಯಶ್ರೀಗೆ ಬಾಲ್ಯದಿಂದಲೂ ಕ್ಯಾಮೆರಾ ಎದುರು ನಿಲ್ಲುವ ಕನಸು. ಆದರೆ ಸಿನಿಮಾ ಅಂದ್ರೆ ಸಾಕು, ಮಧ್ಯಮ ವರ್ಗದ ಪೋಷಕರ ಎದುರು &lsquo;ನಾನು ನಟಿ ಆಗ್ತೀನಿ&rsquo; ಎಂದು ಭಾಗ್ಯಶ್ರೀ ಹೇಳಿದಾಗ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು. ಮುಂದೆ..?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kym65p5ggzwjysbf3k3rd7bw,imgname-bhagyashri-borse-1785236478128.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಭಾಗ್ಯಶ್ರೀಗೆ ಬಾಲ್ಯದಿಂದಲೂ ಕ್ಯಾಮೆರಾ ಎದುರು ನಿಲ್ಲುವ ಕನಸು. ಆದರೆ ಸಿನಿಮಾ ಅಂದ್ರೆ ಸಾಕು, ಮಧ್ಯಮ ವರ್ಗದ ಪೋಷಕರ ಎದುರು &lsquo;ನಾನು ನಟಿ ಆಗ್ತೀನಿ&rsquo; ಎಂದು ಭಾಗ್ಯಶ್ರೀ ಹೇಳಿದಾಗ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು. ಮುಂದೆ..?&lt;/p&gt;&lt;img&gt;&lt;p&gt;'ಲೇನಿನ್' ಸುಂದರಿ ಭಾಗ್ಯಶ್ರೀ ಬೋರ್ಸೆ ಬದುಕಿನ ಈ 'ಟ್ವಿಸ್ಟ್' ಯಾರಿಗೂ ಗೊತ್ತಿಲ್ಲ!&lt;/p&gt;&lt;p&gt;ಬಣ್ಣದ ಲೋಕದ ಮಿಂಚಿನ ಹಿಂದೆ ಅಡಗಿದೆ ಕಣ್ಣೀರಿನ ಕಥೆ! ಸಿನಿಮಾ ರಂಗ ಅಂದಮೇಲೆ ಅಲ್ಲಿ ಗ್ಲಾಮರ್ ಇರುತ್ತೆ, ಹಣ ಇರುತ್ತೆ, ಪ್ರಸಿದ್ಧಿ ಇರುತ್ತೆ. ಆದರೆ ಆ ಸ್ಥಾನಕ್ಕೆ ಬಂದು ನಿಲ್ಲುವವರೆಗೆ ಒಬ್ಬ ನಟಿ ಪಡುವ ಕಷ್ಟ ಯಾರಿಗೂ ಕಾಣಿಸುವುದಿಲ್ಲ. ಸದ್ಯ ತೆಲುಗಿನ 'ಲೇನಿನ್' ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಮರಾಠಿ ಬೆಡಗಿ ಭಾಗ್ಯಶ್ರೀ ಬೋರ್ಸೆ (Bhagyashri Borse) ಲೈಫ್ ಸ್ಟೋರಿ ಕೇಳಿದರೆ ನೀವು ಅಚ್ಚರಿಪಡುತ್ತೀರಿ. ಯಶಸ್ಸಿನ ಉತ್ತುಂಗದಲ್ಲಿರುವ ಈ ಸುಂದರಿಯನ್ನು ಅವಳ ಸ್ವಂತ ತಾಯಿಯೇ ಆರು ತಿಂಗಳು ವಾಟ್ಸಾಪ್&zwnj;ನಲ್ಲಿ ಬ್ಲಾಕ್ ಮಾಡಿದ್ದರಂತೆ! ಯಾಕೆ ಗೊತ್ತಾ?&lt;/p&gt;&lt;img&gt;&lt;p&gt;ಮನೆ ಮಂದಿಯೆಲ್ಲಾ ವಿರೋಧಿಸಿದ ಆ ಒಂದು ನಿರ್ಧಾರ!&lt;/p&gt;&lt;p&gt;ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಭಾಗ್ಯಶ್ರೀಗೆ ಬಾಲ್ಯದಿಂದಲೂ ಕ್ಯಾಮೆರಾ ಎದುರು ನಿಲ್ಲುವ ಕನಸು. ಆದರೆ ಸಿನಿಮಾ ಅಂದ್ರೆ ಸಾಕು ಮಧ್ಯಮ ವರ್ಗದ ಪೋಷಕರಿಗೆ ಒಂದು ರೀತಿಯ ಭಯ. &quot;ನಾನು ನಟಿ ಆಗ್ತೀನಿ&quot; ಎಂದು ಭಾಗ್ಯಶ್ರೀ ಹೇಳಿದಾಗ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು.&lt;/p&gt;&lt;img&gt;&lt;p&gt;ಮೊದಲು ತಾಯಿಗೆ ಫೋನ್ ಮಾಡಿದರೆ, &quot;ಅದೆಲ್ಲಾ ನಮಗೆ ಬೇಡ&quot; ಎಂದು ಖಡಕ್ ಆಗಿ ಹೇಳಿಬಿಟ್ಟರು. ಸರಿ, ಅಪ್ಪನನ್ನಾದರೂ ಒಪ್ಪಿಸೋಣ ಎಂದು ತಂದೆಗೆ ಕರೆ ಮಾಡಿದರೆ, &quot;ನಿಮ್ಮ ಅಮ್ಮ ಬೇಡ ಅಂದ್ಮೇಲೆ ನಾನೂ ಏನೂ ಮಾಡೋಕೆ ಆಗಲ್ಲ&quot; ಎಂದು ತಂದೆ ಕೂಡ ಕೈ ತೊಳೆದುಕೊಂಡರು. ಕೊನೆಗೆ ಅಕ್ಕನಾದರೂ ಸಾಥ್ ಕೊಡುತ್ತಾಳೆ ಎಂದು ನಂಬಿದ್ದ ಭಾಗ್ಯಶ್ರೀಗೆ ಅಲ್ಲಿಯೂ ನಿರಾಸೆಯೇ ಕಾದಿತ್ತು!&lt;/p&gt;&lt;img&gt;&lt;p&gt;6 ತಿಂಗಳ ಕಾಲ ಮೌನ ಮತ್ತು ಬ್ಲಾಕ್ ಲಿಸ್ಟ್!&lt;/p&gt;&lt;p&gt;ಯಾರು ಏನೇ ಅಂದರೂ ಪರವಾಗಿಲ್ಲ, ನನ್ನ ಕನಸು ನನಸಾಗಬೇಕು ಎಂದು ಭಾಗ್ಯಶ್ರೀ ಹಠಕ್ಕೆ ಬಿದ್ದು ಆಡಿಷನ್ ನೀಡಲು ಶುರು ಮಾಡಿದರು. ಇದರಿಂದ ತೀವ್ರ ಕೋಪಗೊಂಡ ಅವರ ತಾಯಿ, ಬರೋಬ್ಬರಿ ಆರು ತಿಂಗಳು ಮಗಳ ಮುಖವನ್ನೂ ನೋಡಲಿಲ್ಲ, ಮಾತು ಆಡಲಿಲ್ಲ. ಅಷ್ಟೇ ಅಲ್ಲ, ಮಗಳು ಮೆಸೇಜ್ ಮಾಡಬಾರದು ಎಂದು ವಾಟ್ಸಾಪ್&zwnj;ನಲ್ಲಿ ಬ್ಲಾಕ್ ಮಾಡಿಬಿಟ್ಟಿದ್ದರು! &quot;ಇಂದು ನಾನು ಈ ವಿಷಯವನ್ನು ನಗುತ್ತಾ ಹೇಳುತ್ತಿರಬಹುದು, ಆದರೆ ಅಂದು ಅಮ್ಮ ನನ್ನನ್ನು ಬ್ಲಾಕ್ ಮಾಡಿದಾಗ ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ&quot; ಎಂದು ಭಾಗ್ಯಶ್ರೀ ಇತ್ತೀಚೆಗೆ ಕಾಲೇಜು ಸಂವಾದವೊಂದರಲ್ಲಿ ಕಣ್ಣಾಲಿಗಳು ಒದ್ದೆಯಾಗುವಂತೆ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;200 ರೂಪಾಯಿಯ ಚಪ್ಪಲಿ ಕಲಿಸಿದ ಪಾಠ!&lt;/p&gt;&lt;p&gt;ಭಾಗ್ಯಶ್ರೀ ಅವರ ಈ ಛಲದ ಹಿಂದೆ ಒಂದು ಬಲವಾದ ಕಾರಣವಿದೆ. ಚಿಕ್ಕವಳಿದ್ದಾಗ ಒಮ್ಮೆ ಅಪ್ಪನ ಜೊತೆ ಮಾರ್ಕೆಟ್&zwnj;ನಲ್ಲಿ ಹೋಗುತ್ತಿದ್ದಾಗ 200 ರೂಪಾಯಿಯ ಒಂದು ಸಾದಾ ಚಪ್ಪಲಿ ಇಷ್ಟವಾಗಿತ್ತು. ಆದರೆ ಅಪ್ಪ ಅದನ್ನು ಕೊಡಿಸಲಿಲ್ಲ. &quot;ಬರೀ 200 ರೂಪಾಯಿಯ ಚಪ್ಪಲಿ ಕೂಡ ನನಗೆ ಸಿಗುತ್ತಿಲ್ಲವಲ್ಲ&quot; ಎಂದು ಆವತ್ತು ಆ ಹುಡುಗಿ ಅನುಭವಿಸಿದ ಸಂಕಟ, ಇಂದು ಅವಳನ್ನು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಸ್ಟಾರ್ ನಟಿಯನ್ನಾಗಿ ಮಾಡಿದೆ. &quot;ಜೀವನದಲ್ಲಿ ಇನ್ನೊಬ್ಬರ ಮುಂದೆ ಹಣಕ್ಕಾಗಿ ಕೈ ಚಾಚಬಾರದು ಎಂಬುದು ನನಗೆ ಅಂದೇ ಅರ್ಥವಾಯಿತು&quot; ಎನ್ನುತ್ತಾರೆ ಭಾಗ್ಯಶ್ರೀ.&lt;/p&gt;&lt;img&gt;&lt;p&gt;ಹುಡುಗಿಯರೇ ಕೇಳಿ... ನಿಮ್ಮ ಹತ್ತಿರ ಒಂದು ಬ್ಯಾಂಕ್ ಅಕೌಂಟ್ ಇರಲಿ!&lt;/p&gt;&lt;p&gt;ಇವತ್ತು ಸ್ಟಾರ್ ಆಗಿ ಮೆರೆಯುತ್ತಿರುವ ಭಾಗ್ಯಶ್ರೀ ಯುವತಿಯರಿಗೆ ಒಂದು ಕಿವಿಮಾತು ಹೇಳಿದ್ದಾರೆ. &quot;ಪ್ರತಿ ಹುಡುಗಿಗೂ ತನ್ನದೇ ಆದ ಪ್ರತ್ಯೇಕ ಬ್ಯಾಂಕ್ ಅಕೌಂಟ್ ಮತ್ತು ಒಂದು ಸ್ವಂತ ಮನೆ ಇರಬೇಕು. ನೀವು ನಿಮ್ಮ ಸ್ವಂತ ಹಣದಲ್ಲಿ ಒಂದು ಸಣ್ಣ ಚಪ್ಪಲಿ ಖರೀದಿಸಿದರೂ ಅದರಲ್ಲಿರುವ ಖುಷಿಯೇ ಬೇರೆ.&lt;/p&gt;&lt;img&gt;&lt;p&gt;ಜೀವನದಲ್ಲಿ ಯಾವುದಕ್ಕೇ ಆಗಲಿ ಪಶ್ಚಾತ್ತಾಪ ಪಡಬೇಡಿ, ನಿಮ್ಮ ಕನಸಿನ ಹಿಂದೆ ಓಡಿ&quot; ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.&lt;/p&gt;&lt;p&gt;ಸದ್ಯ ಭಾಗ್ಯಶ್ರೀ ಅವರ ಈ ಜರ್ನಿ ಕೇಳಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಮ್ಮ ಅಂದು ಬ್ಲಾಕ್ ಮಾಡಿರಬಹುದು, ಆದರೆ ಇಂದು ಇಡೀ ಜಗತ್ತೇ ಇವಳನ್ನು 'ಅನ್ ಬ್ಲಾಕ್' ಮಾಡಿ ಪ್ರೀತಿಯಿಂದ ಆರಾಧಿಸುತ್ತಿದೆ!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/entertainment/marathi-actress-bhagyashri-borse-who-became-famous-from-telugu-movie-lenin-life-story-is-here-to-know-9atzcfh"/>
        </item>
        <item>
            <title><![CDATA[ಅರೇ ನಾನು ಎರಡು ಮಕ್ಕಳ ತಂದೆಯಾಗುತ್ತಿದ್ದೇನೆ,  ರಣವೀರ್ ಸಿಂಗ್ ಮಾತಿಗೆ ನಾಚಿ ನೀರಾದ ಯುವತಿ]]></title>
            <link>https://kannada.asianetnews.com/cine-world/i-am-going-to-be-a-father-of-two-ranveer-singh-remark-leaves-young-woman-blushing/articleshow-gc5feqv</link>
            <guid isPermaLink="true">https://kannada.asianetnews.com/cine-world/i-am-going-to-be-a-father-of-two-ranveer-singh-remark-leaves-young-woman-blushing/articleshow-gc5feqv</guid>
            <pubDate>Tue, 28 Jul 2026 16:32:20 +0530</pubDate>
            <description><![CDATA[&lt;p&gt;ನಾನು ಎರಡು ಮಕ್ಕಳ ತಂದೆಯಾಗುತ್ತಿದ್ದೇನೆ, ಮುಗುಳು ನಕ್ಕ ರಣವೀರ್ ಸಿಂಗ್ ಯುವತಿಗೆ ಈ ಮಾತು ಹೇಳಿದ್ದಾರೆ. ಎಲ್ಲರೂ ಒಮ್ಮಲೆ ನಕ್ಕಿದ್ದಾರೆ. ಅಷ್ಟಕ್ಕೂ ಧುರಂಧರ್ ಹೀರೋ ರಣವೀರ್ ಈ ಮಾತನ್ನು ಹೇಳಿದ್ದೇಕೆ?&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kym623n41veejv1k2z6k6q71,imgname-ranveer-singh-humorous-interaction-1785236360867.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜು.28) &lt;/strong&gt;ಧುರಂಧರ್ ಹೀರೋ ರಣವೀರ್ ಸಿಂಗ್ ಬಾಲಿವುಡ್&zwnj;ನ ಅತೀ ಹೆಚ್ಚು ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ. ವಿಶೇಷ ಅಂದರೆ ಸೆಟ್&zwnj;ನಲ್ಲಿ ಮಾತ್ರವಲ್ಲ, ಕಾರ್ಯಕ್ರಮ ವೇದಿಕೆ ಸೇರಿದಂತೆ ಎಲ್ಲೇ ಹೋದರೆ ರಣವೀರ್ ಸಿಂಗ್ ಅತ್ಯಂತ ಎನರ್ಜಿಟಿಕ್ ಆಗಿರುತ್ತಾರೆ. ಇದೀಗ ರಣವೀರ್ ಸಿಂಗ್, ಯುವತಿಯನ್ನು ನೋಡಿ ನಾನು ಎರಡು ಮಕ್ಕಳ ತಂದೆಯಾಗುತ್ತಿದ್ದೇನೆ ಎಂದಿದ್ದಾರೆ. ರಣವೀರ್ ಸಿಂಗ್ ಈ ಪ್ರತಿಕ್ರಿಯೆ ವಿಡಿಯೋ ಭಾರಿ ವೈರಲ್ ಆಗುತ್ತಿದೆ.&lt;/p&gt;&lt;h2&gt;ಏನಿದು ಘಟನೆ?&lt;/h2&gt;&lt;p&gt;ಜಾಹೀರಾತು ಶೂಟಿಂಗ್ ಒಂದರಲ್ಲಿ ರಣವೀರ್ ಸಿಂಗ್ ಪಾಲ್ಗೊಂಡಿದ್ದರು. ಈ ವೇಳೆ ನಡೆದ ಘಟನೆಯನ್ನು ಮಾಡೆಲ್ ದೀಕ್ಷಾ ನಾರಂಗ್ ಹಂಚಿಕೊಂಡಿದ್ದಾರೆ. ಬ್ರ್ಯಾಂಡ್ ಪ್ರಮೋಶನ್ ವಿಡಿಯೋಗಾಗಿ ಶೂಟಿಂಗ್ ನಡೆಯುತ್ತಿತ್ತು. ಇದರ ನಡುವೆ ಕಾಫಿ ಬ್ಲೆಂಡರ್ ಕೆಟ್ಟು ಹೋಗಿ ಶೂಟಿಂಗ್ ನಿಂತಿತ್ತು. ಎಲ್ಲರೂ ಮೌನವಾಗಿದ್ದರು. ಈ ವೇಳೆ ಮೌನ ಮುರಿಯಲು ದೀಕ್ಷಾ ನಾರಂಗ ಏಕಾಏಕಿ ರಣವೀರ್ ಸಿಂಗ್ ಜೊತೆ ಮಾತನಾಡಲು ಆರಂಭಿಸಿದ್ದಾರೆ. ಒಂದರ ಮೇಲೊಂದರಂತೆ ಪ್ರಶ್ನಿಸುತ್ತಾ, ಇದಕ್ಕೆ ರಣವೀರ್ ಸಿಂಗ್ ಉತ್ತರವನ್ನು ಪಡೆದುಕೊಳ್ಳುತ್ತಾ ಸಂವಹನ ನಡೆಸಿದ್ದಾರೆ.&lt;/p&gt;&lt;h2&gt;ಯುವತಿಗೆ ತಮಾಷೆ ಉತ್ತರ ನೀಡಿದ ರಣವೀರ್ ಸಿಂಗ್&lt;/h2&gt;&lt;p&gt;ದೀಕ್ಷಾ ನಾರಂಗ್ ಪದೇ ಪದೇ ರಣವೀರ್ ಸಿಂಗ್ ಕಾಫಿ ಮಾಡುವ ಶೈಲಿ, ಎಲ್ಲೇ ಇದ್ದರೂ ತುಂಬಾ ಉತ್ಸಾಹದಿಂದ ಇರುವ ಸೀಕ್ರೆಟ್ ಕುರಿತು ಹಲವು ಬಾರಿ ಹೊಗಳಿದ್ದಾರೆ. ಪದೇ ಪದೇ ಇದೇ ಮಾತುಗಳು ಬಂದಾಗ ರಣವೀರ್ ಸಿಂಗ್, ಅದೆಷ್ಟು ಮಾತನಾಡುತ್ತೀರಿ, ಅದೆಷ್ಟು ಫ್ಲರ್ಟ್ ಮಾಡುತ್ತೀದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ. ಇಷ್ಟೇ ಅಲ್ಲ ನೀವು ಎಷ್ಟೊಂದು ಫ್ಲರ್ಟ್ ಮಾಡುತ್ತೀದ್ದೀರಿ, ನಾನು ಎರಡು ಮಕ್ಕಳ ತಂದೆಯಾಗುತ್ತಿದ್ದೇನೆ ಎಂದು ರಣವೀರ್ ಸಿಂಗ್ ನೆನಪಿಸಿದ್ದಾರೆ.&lt;/p&gt;&lt;p&gt;ರಣವೀರ್ ಸಿಂಗ್ ತಮಾಷೆ ಪ್ರಜ್ಞೆ ಹಾಗೂ ತಕ್ಷಣ ನೀಡಿದ ಉತ್ತರಕ್ಕೆ ಮೌನವಾಗಿದ್ದ ಶೂಟಿಂಗ್ ಸೆಟ್ ನಗೆಗಡಲಲ್ಲಿ ತೇಲಾಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಧುರಂಧರ್ ಸಿನಿಮಾದಿಂದ ರಣವೀರ್ ಸಿಂಗ್ ಜನಪ್ರಿಯತೆ ಮಾತ್ರವಲ್ಲ, ಬಾಲಿವುಡ್&zwnj;ನ ಅತ್ಯಂತ ವಿಶೇಷ ಹೀರೋ ಎಂದೇ ಗುರುತಿಸಿಕೊಂಡಿದ್ದಾರೆ.&lt;/p&gt;&lt;h2&gt;ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ&lt;/h2&gt;&lt;p&gt;ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ 2018ರಲ್ಲಿ ಮದುವೆಯಾಗಿದ್ದಾರೆ. 2024ರಲ್ಲಿ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.ಇದೀಗ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಅಭಿಮಾನಿಗಳು, ಬಾಲಿವುಡ್ ಸೆಲೆಬ್ರೆಟಿಗಳು ಬಾಲಿವುಡ್ ಜೋಡಿಗೆ ಶುಭಹಾರೈಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Deeksha Narang (@deekshanarang_theshagirl)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Chethan Kumar</dc:creator>
            <atom:link href="https://kannada.asianetnews.com/cine-world/i-am-going-to-be-a-father-of-two-ranveer-singh-remark-leaves-young-woman-blushing/articleshow-gc5feqv"/>
        </item>
        <item>
            <title><![CDATA[ಜಗತ್ತಿನ ಅತ್ಯಂತ ಶ್ರೀಮಂತ ಬಡವ, ₹30 ಕೋಟಿ ದಾನ ಮಾಡಿದ ಗ್ರಂಥಪಾಲಕನಿಗೆ ತಲೆಬಾಗಿದ ರಜನಿಕಾಂತ್]]></title>
            <link>https://kannada.asianetnews.com/viral/librarian-palam-kalyanasundaram-donated-rs-30-crore-his-entire-salary-pension-rajinikanth-called-him-his-father-suh/articleshow-gsiozs6</link>
            <guid isPermaLink="true">https://kannada.asianetnews.com/viral/librarian-palam-kalyanasundaram-donated-rs-30-crore-his-entire-salary-pension-rajinikanth-called-him-his-father-suh/articleshow-gsiozs6</guid>
            <pubDate>Tue, 28 Jul 2026 16:27:43 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ಕೋಟ್ಯಂತರ ರೂಪಾಯಿ ಸಂಪಾದಿಸಿದವರು ಶ್ರೀಮಂತರು ಎಂದು ಕರೆಯಲಾಗುತ್ತದೆ. ಆದರೆ ತಮಿಳುನಾಡಿನ ಲೈಬ್ರೇರಿಯನ್ ಪಾಲಂ ಕಲ್ಯಾಣಸುಂದರಂ ಅವರ ಕಥೆಯೇ ವಿಭಿನ್ನ.ಬಡವರು ಮತ್ತು ಅಗತ್ಯವಿರುವವರಿಗೆ ದಾನ ಮಾಡಿದ ಅವರು &lsquo;ಭಾರತದ ಶ್ರೀಮಂತ ಬಡ ವ್ಯಕ್ತಿ&rsquo;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kym5me4xcma7adbdwgbh09at,imgname-librarian-palam-kalyanasundaram-donated-rs-30-crore-his-entire-salary-pension-rajinikanth-called-him-his-father-1785235912861.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಕೋಟ್ಯಂತರ ರೂಪಾಯಿ ಸಂಪಾದಿಸಿದವರು ಶ್ರೀಮಂತರು ಎಂದು ಕರೆಯಲಾಗುತ್ತದೆ. ಆದರೆ ತಮಿಳುನಾಡಿನ ಲೈಬ್ರೇರಿಯನ್ ಪಾಲಂ ಕಲ್ಯಾಣಸುಂದರಂ ಅವರ ಕಥೆಯೇ ವಿಭಿನ್ನ. ಜೀವನಪೂರ್ತಿ ದುಡಿದು ಗಳಿಸಿದ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳದೆ, ಸಮಾಜದ ಬಡವರು ಮತ್ತು ಅಗತ್ಯವಿರುವವರಿಗೆ ದಾನ ಮಾಡಿದ ಅವರು &lsquo;ಭಾರತದ ಶ್ರೀಮಂತ ಬಡ ವ್ಯಕ್ತಿ&rsquo; ಎಂದೇ ಗುರುತಿಸಿಕೊಂಡಿದ್ದಾರೆ.&lt;/p&gt;&lt;h2&gt;ಬಾಲ್ಯದಲ್ಲೇ ಆರಂಭವಾಗಿತ್ತು ಸಹಾಯ ಮಾಡುವ ಗುಣ&lt;/h2&gt;&lt;p&gt;1940ರಲ್ಲಿ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಮೆಲಕರಿವೆಲಂಕುಲಂ ಎಂಬ ಸಣ್ಣ ಗ್ರಾಮದಲ್ಲಿ ಪಾಲಂ ಕಲ್ಯಾಣಸುಂದರಂ ಜನಿಸಿದರು. ಅವರ ತಂದೆ ಚಿಕ್ಕ ವಯಸ್ಸಿನಲ್ಲೇ ನಿಧನರಾದ ಕಾರಣ, ತಾಯಿ ಅವರನ್ನು ಬೆಳೆಸಿದರು. ಬಾಲ್ಯದಿಂದಲೇ ಇತರರಿಗೆ ಸಹಾಯ ಮಾಡಬೇಕು ಎಂಬ ಮನೋಭಾವವನ್ನು ತಾಯಿ ಅವರಲ್ಲಿ ಬೆಳೆಸಿದ್ದರು. ಶಾಲೆಗೆ ಹೋಗಲು ಪ್ರತಿದಿನ ಸುಮಾರು 10 ಕಿಲೋಮೀಟರ್ ನಡೆದು ಹೋಗುತ್ತಿದ್ದ ಅವರು, ಒಟ್ಟು 20 ಕಿಲೋಮೀಟರ್ ಪ್ರಯಾಣ ಮಾಡುತ್ತಿದ್ದರು. ತಮ್ಮೊಂದಿಗೆ ಇತರ ಮಕ್ಕಳೂ ಬಂದರೆ ಪ್ರಯಾಣದ ಏಕಾಂತ ಕಡಿಮೆಯಾಗುತ್ತದೆ ಎಂದು ಭಾವಿಸಿದ ಅವರು, ಬಡ ಮಕ್ಕಳ ಶಾಲಾ ಶುಲ್ಕ, ಪುಸ್ತಕ ಮತ್ತು ಬಟ್ಟೆಗಳ ಖರ್ಚನ್ನು ತಾವೇ ಭರಿಸಲು ಆರಂಭಿಸಿದರು.&lt;/p&gt;&lt;h2&gt;35 ವರ್ಷಗಳ ಕಾಲ ಸಂಪೂರ್ಣ ಸಂಬಳ ದಾನ&lt;/h2&gt;&lt;p&gt;ಪಾಲಂ ಕಲ್ಯಾಣಸುಂದರಂ ಅವರು ಸಾಹಿತ್ಯ ಮತ್ತು ಇತಿಹಾಸದಲ್ಲಿ ಪದವಿ ಪಡೆದ ಬಳಿಕ ಲೈಬ್ರರಿ ಸೈನ್ಸ್&zwnj;ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಶ್ರೀವೈಕುಂಟಂನ ಕುಮಾರಗುರುಪರ ಆರ್ಟ್ಸ್ ಕಾಲೇಜಿನಲ್ಲಿ ಲೈಬ್ರೇರಿಯನ್ ಆಗಿ ಕೆಲಸಕ್ಕೆ ಸೇರಿದರು. ಉದ್ಯೋಗದ ಮೊದಲ ಸಂಬಳ ಬಂದಾಗಲೇ ಅವರು ಒಂದು ಮಹತ್ವದ ನಿರ್ಧಾರ ಕೈಗೊಂಡರು. ತಮ್ಮ ಸಂಬಳದ ಸಂಪೂರ್ಣ ಮೊತ್ತವನ್ನು ಬಡ ಮಕ್ಕಳು ಮತ್ತು ಅನಾಥರ ಸಹಾಯಕ್ಕಾಗಿ ದಾನ ಮಾಡಲು ಆರಂಭಿಸಿದರು. ಈ ಸೇವೆಯನ್ನು ಸುಮಾರು 35 ವರ್ಷಗಳ ಕಾಲ ಮುಂದುವರಿಸಿದರು. ತಮ್ಮ ವೈಯಕ್ತಿಕ ಖರ್ಚುಗಳನ್ನು ಪೂರೈಸಲು ಹೋಟೆಲ್&zwnj;ಗಳು ಮತ್ತು ಲಾಂಡ್ರಿಗಳಲ್ಲಿ ಹೆಚ್ಚುವರಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.&lt;/p&gt;&lt;h2&gt;ನಿವೃತ್ತಿ ಬಳಿಕ ಸಿಕ್ಕ ₹10 ಲಕ್ಷ ಪಿಂಚಣಿಯನ್ನೂ ಬಿಟ್ಟುಕೊಟ್ಟರು&lt;/h2&gt;&lt;p&gt;1998ರಲ್ಲಿ ಲೈಬ್ರೇರಿಯನ್ ಹುದ್ದೆಯಿಂದ ನಿವೃತ್ತರಾದಾಗ ಅವರಿಗೆ ಸುಮಾರು ₹10 ಲಕ್ಷ ಪಿಂಚಣಿ ದೊರೆಯಿತು. ಆದರೆ ಆ ಹಣವನ್ನೂ ತಮ್ಮ ಬಳಿ ಇಟ್ಟುಕೊಳ್ಳದೆ ಸಂಪೂರ್ಣವಾಗಿ ದಾನ ಮಾಡಿದರು. ಇಷ್ಟಕ್ಕೇ ಅವರ ಸೇವೆ ನಿಲ್ಲಲಿಲ್ಲ. ನಿವೃತ್ತಿಯ ನಂತರವೂ ಹಣ ಗಳಿಸಿ ಅದನ್ನು ಸಮಾಜ ಸೇವೆಗೆ ಬಳಸುವ ಉದ್ದೇಶದಿಂದ ಹೋಟೆಲ್&zwnj;ನಲ್ಲಿ ವೇಟರ್ ಆಗಿಯೂ ಕೆಲಸ ಮಾಡಿದರು. ತಮ್ಮ ಪೂರ್ವಿಕರಿಂದ ಬಂದ ಆಸ್ತಿಯನ್ನೂ ದಾನ ಮಾಡಿದರು.&lt;/p&gt;&lt;h2&gt;₹30 ಕೋಟಿ ಬಹುಮಾನ ಬಂದರೂ ತಮ್ಮ ಬಳಿ ಇಟ್ಟುಕೊಳ್ಳಲಿಲ್ಲ&lt;/h2&gt;&lt;p&gt;ಪಾಲಂ ಕಲ್ಯಾಣಸುಂದರಂ ಅವರ ಸಮಾಜ ಸೇವೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲ್ಪಟ್ಟಿತು. ಅಮೆರಿಕದ ಒಂದು ಸಂಸ್ಥೆಯಿಂದ ಅವರಿಗೆ ₹30 ಕೋಟಿ ಬಹುಮಾನ ಮೊತ್ತ ದೊರೆಯಿತು ಎಂದು ವರದಿಯಾಗಿದೆ. ಆದರೆ ಈ ಹಣವನ್ನೂ ಅವರು ಸಂಪೂರ್ಣವಾಗಿ ದಾನ ಮಾಡಿದರು. ಅವರಿಗೆ ದೊರೆತ ವಿವಿಧ ಪ್ರಶಸ್ತಿಗಳ ಬಹುಮಾನ ಮೊತ್ತವನ್ನೂ ಸಮಾಜ ಸೇವೆಗಾಗಿ ಬಳಸಿದರು. ಹಣ ಮತ್ತು ಆಸ್ತಿ ಸಂಗ್ರಹಿಸುವ ಬದಲು, ಅಗತ್ಯವಿರುವವರಿಗೆ ನೆರವಾಗುವುದೇ ತಮ್ಮ ಜೀವನದ ಉದ್ದೇಶ ಎಂಬ ನಿಲುವನ್ನು ಅವರು ಹೊಂದಿದ್ದರು.&lt;/p&gt;&lt;h2&gt;&lsquo;ಮ್ಯಾನ್ ಆಫ್ ದಿ ಮಿಲೇನಿಯಂ&rsquo; ಸೇರಿದಂತೆ ಹಲವು ಗೌರವ&lt;/h2&gt;&lt;p&gt;ಅವರ ಸಮಾಜ ಸೇವೆಗೆ ದೇಶ-ವಿದೇಶಗಳಲ್ಲಿ ಹಲವು ಗೌರವಗಳು ಲಭಿಸಿವೆ. ವಿಶ್ವಸಂಸ್ಥೆಯು ಅವರನ್ನು 20ನೇ ಶತಮಾನದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಿದೆ ಎಂದು ವರದಿಯಾಗಿದೆ. ಕೇಂಬ್ರಿಡ್ಜ್&zwnj;ನ ಇಂಟರ್&zwnj;ನ್ಯಾಷನಲ್ ಬಯೋಗ್ರಾಫಿಕಲ್ ಸೆಂಟರ್ ಸೇರಿದಂತೆ ಹಲವು ಸಂಸ್ಥೆಗಳು ಅವರನ್ನು ಗೌರವಿಸಿವೆ. 2023ರಲ್ಲಿ ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಆದರೆ ತಮ್ಮ ಸೇವಾ ಜೀವನದಲ್ಲಿ ಪಡೆದ ಪ್ರಶಸ್ತಿಗಳ ಬಹುಮಾನ ಮೊತ್ತವನ್ನೂ ಅವರು ಸಾರ್ವಜನಿಕ ಹಿತಕ್ಕಾಗಿ ದಾನ ಮಾಡುತ್ತಿದ್ದರು.&lt;/p&gt;&lt;h2&gt;ರಜನಿಕಾಂತ್&zwnj;ರಿಂದ ಸಿಕ್ಕಿತ್ತು ವಿಶೇಷ ಗೌರವ&lt;/h2&gt;&lt;p&gt;ಪಾಲಂ ಕಲ್ಯಾಣಸುಂದರಂ ಅವರ ಸರಳ ಜೀವನ ಮತ್ತು ಸಮಾಜ ಸೇವೆಯಿಂದ ಪ್ರಭಾವಿತರಾದ ಖ್ಯಾತ ನಟ ರಜನಿಕಾಂತ್, 2012ರಲ್ಲಿ ಅವರನ್ನು ತಮ್ಮ ತಂದೆಯಂತೆ ಸ್ವೀಕರಿಸಿ ತಮ್ಮೊಂದಿಗೆ ವಾಸಿಸುವಂತೆ ಆಹ್ವಾನಿಸಿದ್ದರು ಎಂದು ವರದಿಯಾಗಿದೆ. ಆದರೆ ಕಲ್ಯಾಣಸುಂದರಂ ಅವರು ತಮ್ಮ ಸರಳ ಮತ್ತು ಸ್ವತಂತ್ರ ಜೀವನವನ್ನೇ ಮುಂದುವರಿಸಲು ನಿರ್ಧರಿಸಿದರು. ಚೆನ್ನೈನ ಸೈದಾಪೇಟೆಯಲ್ಲಿರುವ ಸರಳ ಮನೆಯಲ್ಲಿ ವಾಸಿಸುತ್ತಾ ಸಮಾಜ ಸೇವೆಯನ್ನು ಮುಂದುವರಿಸಿದರು.&lt;/p&gt;&lt;h2&gt;ಹಣವಲ್ಲ, ಸೇವೆಯೇ ನಿಜವಾದ ಶ್ರೀಮಂತಿಕೆ&lt;/h2&gt;&lt;p&gt;ಪಾಲಂ ಕಲ್ಯಾಣಸುಂದರಂ ಅವರ ಜೀವನದ ವಿಶೇಷತೆ ಎಂದರೆ ಅವರು ಹಣ ಸಂಪಾದಿಸಿಲ್ಲ ಎಂಬುದಲ್ಲ; ತಾವು ಸಂಪಾದಿಸಿದ ಎಲ್ಲವನ್ನೂ ಸಮಾಜಕ್ಕಾಗಿ ಬಳಸಿದ್ದಾರೆ ಎಂಬುದು. 35 ವರ್ಷಗಳ ಸಂಬಳ, ₹10 ಲಕ್ಷ ಪಿಂಚಣಿ, ಪೂರ್ವಿಕರ ಆಸ್ತಿ, ₹30 ಕೋಟಿ ಬಹುಮಾನ ಮತ್ತು ವಿವಿಧ ಪ್ರಶಸ್ತಿಗಳಿಂದ ಬಂದ ಹಣ&mdash;ಹೀಗೆ ತಮ್ಮ ಕೈಗೆ ಬಂದ ಬಹುತೇಕ ಸಂಪತ್ತನ್ನು ಇತರರಿಗಾಗಿ ದಾನ ಮಾಡಿದ ಅವರ ಬದುಕು, ಹಣದ ಅರ್ಥ ಮತ್ತು ನಿಜವಾದ ಶ್ರೀಮಂತಿಕೆಯ ಬಗ್ಗೆ ಹೊಸ ದೃಷ್ಟಿಕೋನ ನೀಡುತ್ತದೆ. ಅದಕ್ಕಾಗಿಯೇ ಪಾಲಂ ಕಲ್ಯಾಣಸುಂದರಂ ಅವರನ್ನು &lsquo;ಭಾರತದ ಶ್ರೀಮಂತ ಬಡ ವ್ಯಕ್ತಿ&rsquo; ಎಂದು ಕರೆಯಲಾಗುತ್ತದೆ. ಅವರ ಬಳಿ ಕೋಟ್ಯಂತರ ರೂಪಾಯಿ ಆಸ್ತಿ ಇಲ್ಲದಿರಬಹುದು; ಆದರೆ ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಜನರ ಹೃದಯದಲ್ಲಿ ಗಳಿಸಿದ ಸ್ಥಾನವೇ ಅವರ ನಿಜವಾದ ಸಂಪತ್ತು.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/librarian-palam-kalyanasundaram-donated-rs-30-crore-his-entire-salary-pension-rajinikanth-called-him-his-father-suh/articleshow-gsiozs6"/>
        </item>
        <item>
            <title><![CDATA[ಪ್ರೊಟೀನ್ ಶೇಕ್ ಕುಡಿದ್ರೆ ಬುದ್ಧಿಹೀನ ಆಗ್ತಾರೆ - ಫಿಟ್ನೆಸ್ ಪ್ರಿಯರಿಗೆ ಆಘಾತ ತಂದ ಕಂಗನಾ ಹೇಳಿಕೆ]]></title>
            <link>https://kannada.asianetnews.com/entertainment/kangana-ranaut-says-too-much-protein-makes-you-dumb-kangana-ranaut-on-protein-gkn/articleshow-5hvd4u1</link>
            <guid isPermaLink="true">https://kannada.asianetnews.com/entertainment/kangana-ranaut-says-too-much-protein-makes-you-dumb-kangana-ranaut-on-protein-gkn/articleshow-5hvd4u1</guid>
            <pubDate>Tue, 28 Jul 2026 16:05:12 +0530</pubDate>
            <description><![CDATA[&lt;p&gt;ನಟಿ ಕಂಗನಾ ರಣಾವತ್ ಅವರ ಪ್ರಕಾರ ಹೆಚ್ಚು ಪ್ರೊಟೀನ್ ಸೇವನೆಯಿಂದ ಬುದ್ಧಿಶಕ್ತಿ ಕುಂದುತ್ತದೆ. ಆದರೆ, ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಪುರಾವೆಗಳಿಲ್ಲವೆಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಪ್ರೊಟೀನ್ ಮೆದುಳಿಗೆ ಅವಶ್ಯಕ. ಕಾರ್ಬೋಹೈಡ್ರೇಟ್ ಮತ್ತು ನೀರಿನ ಕೊರತೆಯಿಂದ ತಾತ್ಕಾಲಿಕವಾಗಿ ಮೆದುಳು ಮಂದವಾಗಬಹುದೇ ಹೊರತು, ಐಕ್ಯೂ ಕಡಿಮೆಯಾಗುವುದಿಲ್ಲ. ಆದ್ದರಿಂದ ಸಮತೋಲಿತ ಆಹಾರ ಸೇವಿಸುವುದು ಮುಖ್ಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kym4320mmaet39hs7h8ypt5x,imgname-india-s-cultural-heritage-youtube-thumbnail-1785234294804.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: &lt;/strong&gt;ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆಗಳು ವಿವಾದ ಆಗೋದು ಹೊಸದೇನೂ ಅಲ್ಲ. ಆದರೆ ಈ ಬಾರಿ ಅವರು ನೇರವಾಗಿ ಫಿಟ್&zwnj;ನೆಸ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೆಚ್ಚು ಪ್ರೊಟೀನ್ ಶೇಕ್ ಕುಡಿಯುವುದರಿಂದ ಮನುಷ್ಯರು ಬುದ್ಧಿಹೀನರಾಗುತ್ತಾರೆ ಮತ್ತು ಮೆದಳಿನ ಕಾರ್ಯಕ್ಷಮತೆ ಮಂದಗತಿಯಾಗುತ್ತದೆ ಎಂದು ಕಂಗನಾ ಹೇಳಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಪ್ರೊಟೀನ್ ಡಯಟ್ ಬಗ್ಗೆ ಕಂಗನಾ ಮಾಡಿರುವ ಈ ಕಾಮೆಂಟ್&zwnj;ನಿಂದಾಗಿ ಜಿಮ್&zwnj;ಗೆ ಹೋಗುವವರು ಮತ್ತು ಫಿಟ್&zwnj;ನೆಸ್ ಪ್ರಿಯರು ಗೊಂದಲಕ್ಕೀಡಾಗಿದ್ದಾರೆ. ಹಾಗಾದರೆ ಕಂಗನಾ ಹೇಳಿದಂತೆ ಪ್ರೊಟೀನ್ ನಿಜವಾಗಿಯೂ ಮನುಷ್ಯನ ಐಕ್ಯೂ (IQ) ಕಡಿಮೆ ಮಾಡುತ್ತದೆಯೇ? ಆರೋಗ್ಯ ತಜ್ಞರು ಮತ್ತು ವೈಜ್ಞಾನಿಕ ಸಂಶೋಧನೆಗಳು ಏನು ಹೇಳುತ್ತವೆ? ಇಲ್ಲಿದೆ ಮಾಹಿತಿ.&lt;/p&gt;&lt;p&gt;ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಹೆಚ್ಚು ಪ್ರೊಟೀನ್ ಸೇವಿಸುವುದರಿಂದ ಮನುಷ್ಯನ ಬುದ್ಧಿವಂತಿಕೆ ಅಥವಾ ಐಕ್ಯೂ ಕಡಿಮೆಯಾಗುತ್ತದೆ ಅಥವಾ ಮೆದುಳು ಶಾಶ್ವತವಾಗಿ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಇದು ಕೇವಲ ಒಂದು ಅಪೋಹವಷ್ಟೇ. ಆದರೆ ತಪ್ಪಾದ ಆಹಾರ ಪದ್ಧತಿಯಿಂದಾಗಿ ತಾತ್ಕಾಲಿಕವಾಗಿ ಮೆದುಳು ಮಂದವಾದಂತೆ ಅಥವಾ ಸುಸ್ತಾದಂತೆ ಭಾಸವಾಗುವುದು ನಿಜ. ಈ ತಾತ್ಕಾಲಿಕ ಪರಿಸ್ಥಿತಿಯನ್ನು ಕಂಡು ಅನೇಕರು ಐಕ್ಯೂ ಕಡಿಮೆಯಾಗುತ್ತಿದೆ ಎಂದು ತಪ್ಪಾಗಿ ಭಾವಿಸುತ್ತಾರೆ.&lt;/p&gt;&lt;h2&gt;&lt;strong&gt;ಹೈ-ಪ್ರೊಟೀನ್ ಡಯಟ್&zwnj;ನಲ್ಲಿ 'ಬ್ರೈನ್ ಫಾಗ್' ಉಂಟಾಗುವುದು ಏಕೆ?&lt;/strong&gt;&lt;/h2&gt;&lt;p&gt;ಪ್ರೊಟೀನ್ ಸೇವಿಸುವಾಗ ಮಾಡುವ ಕೆಲವು ಸಣ್ಣ ತಪ್ಪುಗಳು ಮೆದುಳಿನ ಕಾರ್ಯಕ್ಷಮತೆ ಮಂದವಾಗಲು ಕಾರಣವಾಗುತ್ತವೆ.&lt;/p&gt;&lt;ul&gt; &lt;li&gt;&lt;strong&gt;ಕಾರ್ಬೋಹೈಡ್ರೇಟ್&zwnj;ಗಳ ಕೊರತೆ&lt;/strong&gt;: ಮೆದುಳು ವೇಗವಾಗಿ ಕೆಲಸ ಮಾಡಲು ಗ್ಲೂಕೋಸ್ ಅಗತ್ಯವಿದೆ. ಕೀಟೋ ಡಯಟ್ ಹೆಸರಿನಲ್ಲಿ ಕಾರ್ಬೋಹೈಡ್ರೇಟ್&zwnj;ಗಳನ್ನು ಸಂಪೂರ್ಣವಾಗಿ ಬಿಟ್ಟು ಕೇವಲ ಪ್ರೊಟೀನ್ ಮಾತ್ರ ಸೇವಿಸಿದರೆ, ಮೆದುಳಿಗೆ ಸರಿಯಾದ ಇಂಧನ ಸಿಗದೆ ಕಿರಿಕಿರಿ ಮತ್ತು ಮಂದಬುದ್ಧಿ ಉಂಟಾಗಬಹುದು.&lt;/li&gt; &lt;li&gt;&lt;strong&gt;ನಿರ್ಜಲೀಕರಣ (Dehydration):&lt;/strong&gt; ಪ್ರೊಟೀನ್ ಅರಗಿಸಿಕೊಳ್ಳಲು ಕಿಡ್ನಿಗಳಿಗೆ ಹೆಚ್ಚಿನ ನೀರು ಬೇಕು. ಪ್ರೊಟೀನ್ ಸೇವಿಸಿ ಸರಿಯಾಗಿ ನೀರು ಕುಡಿಯದಿದ್ದರೆ ನಿರ್ಜಲೀಕರಣ ಉಂಟಾಗುತ್ತದೆ. ಇದು ತಾತ್ಕಾಲಿಕವಾಗಿ ಏಕಾಗ್ರತೆ ಮತ್ತು ಜ್ಞಾಪಕಶಕ್ತಿಯನ್ನು ಕುಂದಿಸುತ್ತದೆ.&lt;/li&gt; &lt;li&gt;&lt;strong&gt;ಫುಡ್ ಕೋಮಾ: &lt;/strong&gt;ಒಂದೇ ಬಾರಿಗೆ ಹೆಚ್ಚಿನ ಪ್ರೊಟೀನ್ ಸೇವಿಸಿದರೆ, ಅದನ್ನು ಜೀರ್ಣಿಸಲು ದೇಹವು ಹೆಚ್ಚಿನ ಶಕ್ತಿಯನ್ನು ವ್ಯಯಿಸುತ್ತದೆ. ಇದರಿಂದ ರಕ್ತದ ಹರಿವು ಮೆದುಳಿನಿಂದ ಜೀರ್ಣಾಂಗವ್ಯೂಹದ ಕಡೆಗೆ ತಿರುಗುತ್ತದೆ. ಫಲಿತಾಂಶವಾಗಿ ತಿಂದ ನಂತರ ತೀವ್ರ ಬದ್ಧತೆ ಮತ್ತು ಅಮಲೇರಿದಂತೆ ಭಾಸವಾಗುತ್ತದೆ.&lt;/li&gt;&lt;/ul&gt;&lt;h2&gt;&lt;strong&gt;ವಿಜ್ಞಾನಿಗಳು ಏನು ಹೇಳುತ್ತಾರೆ?&lt;/strong&gt;&lt;/h2&gt;&lt;p&gt;&lt;strong&gt;ಮೆದುಳಿಗೆ ಪ್ರೊಟೀನ್ ಅಗತ್ಯ: &lt;/strong&gt;ಪ್ರೊಟೀನ್&zwnj;ನಲ್ಲಿರುವ ಅಮೈನೋ ಆಮ್ಲಗಳು ಡೋಪಮೈನ್ ಮತ್ತು ಸಿರೊಟೋನಿನ್&zwnj;ನಂತಹ ಮೆದುಳಿಗೆ ಅಗತ್ಯವಾದ ನ್ಯೂರೋ ಟ್ರಾನ್ಸ್&zwnj;ಮಿಟರ್&zwnj;ಗಳ ತಯಾರಿಕೆಗೆ ಅಡಿಪಾಯವಾಗಿವೆ. ಪ್ರೊಟೀನ್ ಕೊರತೆಯಾದರೆ ಮಾನಸಿಕ ಸ್ಥಿತಿ ಮತ್ತು ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.&lt;/p&gt;&lt;p&gt;&lt;strong&gt;ಸುರಕ್ಷಿತ ಪ್ರಮಾಣ: &lt;/strong&gt;ಒಬ್ಬ ಆರೋಗ್ಯವಂತ ವ್ಯಕ್ತಿಯು ತನ್ನ ದೇಹದ ತೂಕದ ಪ್ರತಿ ಕೆಜಿಗೆ 2.2 ಗ್ರಾಂನಿಂದ 3.0 ಗ್ರಾಂ ವರೆಗೆ ಪ್ರತಿದಿನ ಪ್ರೊಟೀನ್ ಸೇವಿಸಬಹುದು ಎಂದು ಕ್ಲಿನಿಕಲ್ ಅಧ್ಯಯನಗಳು ತಿಳಿಸಿವೆ.&lt;/p&gt;&lt;p&gt;&lt;strong&gt;ಕಿಡ್ನಿ ಆರೋಗ್ಯ&lt;/strong&gt;: ಮೊದಲೇ ಕಿಡ್ನಿ ಸಮಸ್ಯೆ ಇರುವವರಿಗೆ ಮಾತ್ರ ಅಧಿಕ ಪ್ರೊಟೀನ್ ಹಾನಿಕಾರಕ. ಸಾಮಾನ್ಯ ವ್ಯಕ್ತಿಗೆ ಇದರಿಂದ ಯಾವುದೇ ತೊಂದರೆಯಿಲ್ಲ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಮೆದುಳು ಚುರುಕಾಗಿರಲು ತಜ್ಞರ ಸಲಹೆಗಳು&lt;/strong&gt;&lt;/h2&gt;&lt;ul&gt; &lt;li&gt;ಪ್ರೊಟೀನ್ ಜೊತೆಗೆ ಓಟ್ಸ್, ಬ್ರೌನ್ ರೈಸ್&zwnj;ನಂತಹ ಉತ್ತಮ ಕಾರ್ಬೋಹೈಡ್ರೇಟ್&zwnj;ಗಳನ್ನು ಸೇವಿಸಿ&lt;/li&gt; &lt;li&gt;ಪ್ರೊಟೀನ್ ಪ್ರಮಾಣ ಹೆಚ್ಚಿಸಿದಾಗ ನೀರು ಕುಡಿಯುವುದನ್ನೂ ಹೆಚ್ಚಿಸಿ&lt;/li&gt; &lt;li&gt;ಇಡೀ ದಿನದ ಪ್ರೊಟೀನ್ ಅನ್ನು ಒಂದೇ ಬಾರಿಗೆ ಸೇವಿಸಬೇಡಿ; ಅದನ್ನು 20 ರಿಂದ 40 ಗ್ರಾಂಗಳಂತೆ ಭಾಗಗಳಾಗಿ ಸೇವಿಸಿ&lt;/li&gt;&lt;/ul&gt;&lt;p&gt;ಕಂಗನಾ ರಣಾವತ್ ಹೇಳಿದಂತೆ ಪ್ರೊಟೀನ್&zwnj;ನಿಂದ ಮೇಧಾಶಕ್ತಿ ಕುಂದುವುದಿಲ್ಲ. ಆದರೆ ಸಮತೋಲಿತ ಡಯಟ್ ಇಲ್ಲದಿದ್ದರೆ ತಾತ್ಕಾಲಿಕ ಆಲಸ್ಯ ಉಂಟಾಗಬಹುದು ಅಷ್ಟೇ. ಆದ್ದರಿಂದ ಪ್ರೊಟೀನ್ ಶೇಕ್ ಸೇವಿಸುವವರು ಅದರೊಂದಿಗೆ ಸರಿಯಾದ ಪ್ರಮಾಣದ ನೀರು ಮತ್ತು ಕಾರ್ಬೋಹೈಡ್ರೇಟ್ ಸೇವಿಸಿದರೆ ಮೆದುಳು ಮತ್ತು ದೇಹ ಎರಡೂ ಚುರುಕಾಗಿರುತ್ತವೆ.&lt;/p&gt;]]></content:encoded>
            <category>entertainment</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/entertainment/kangana-ranaut-says-too-much-protein-makes-you-dumb-kangana-ranaut-on-protein-gkn/articleshow-5hvd4u1"/>
        </item>
        <item>
            <title><![CDATA[ಮೈಗೆ ಎಣ್ಣೆ ಹಚ್ಚಿಕೊಂಡಂತೆ ದೊಡ್ಡ ಗಂಡಾಂತರದಿಂದ ಪಾರಾದ ಎಸ್‌ಎಸ್‌ ರಾಜಮೌಳಿ.. 'ವಾರಣಾಸಿ' ಕೊನೆಗೂ ಬಚಾವಾಯ್ತು!]]></title>
            <link>https://kannada.asianetnews.com/entertainment/title-dispute-over-ss-rajamouli-varanasi-settled-following-a-successful-negotiation-with-the-title-owner-subba-reddy/articleshow-cw1p0he</link>
            <guid isPermaLink="true">https://kannada.asianetnews.com/entertainment/title-dispute-over-ss-rajamouli-varanasi-settled-following-a-successful-negotiation-with-the-title-owner-subba-reddy/articleshow-cw1p0he</guid>
            <pubDate>Tue, 28 Jul 2026 14:59:33 +0530</pubDate>
            <description><![CDATA[&lt;p&gt;ರಾಜಮೌಳಿ ಸಿನಿಮಾಗೆ 'ವಾರಣಾಸಿ' ಟೈಟಲ್​ಆಗಿ ತೆಲುಗು ಫಿಲ್ಮ್ ನಗರಿಯ ಕಾಂಪೌಂಡ್&zwnj;ನಲ್ಲಿ ವಾರ್ ಶುರುವಾಗಿತ್ತು. ನಿಜ ಹೇಳ್ಬೇಕಂದ್ರೆ, 2023ರಲ್ಲೇ &lsquo;ವಾರಣಾಸಿ&rsquo; ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿಯಲ್ಲಿ ಸುಬ್ಬಾರೆಡ್ಡಿ ಆಫೀಶಿಯಲ್ ಆಗಿ ರಿಜಿಸ್ಟರ್ ಮಾಡಿಸಿಕೊಂಡು ಕಥೆ ರೆಡಿ ಮಾಡಿಕೊಳ್ತಿದ್ರು. ಆಗ ಶುರುವಾಯ್ತು ವಾರ್!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k8zanrafwn102658shxvn39d,imgname-fotojet--12--1761987977551.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;'ವಾರಣಾಸಿ' ಟೈಟಲ್ ಗೆ ತೆಲುಗಿನಲ್ಲಿ ಆಗಿತ್ತು ಭಾರಿ ಹೋರಾಟ..!&lt;/strong&gt;&lt;/p&gt;&lt;p&gt;ಎಸ್ಎಸ್​ರಾಜಮೌಳಿ ವಿವಾದಗಳಿಂದ ಸದಾ ದೂರ ಇದ್ದವರು.. ಈ ಕಾಂಟ್ರವರ್ಸಿಗಳಿಗೂ ರಾಜಮೌಳಿಗೂ ಆಗಿ ಬರೋದೇ ಇಲ್ಲ. ಮೌಳಿ ಯಾವ ವಿವಾದದಲ್ಲೂ ಸಿಕ್ಕಿ ಬಿದ್ದವರಲ್ಲ. ಆದ್ರೆ ಅದ್ಯಾಕೋ ಏನೋ.? ವಾರಣಾಸಿ ಅನ್ನೋ ಅಡ್ವೆಂಚರ್​ ಥ್ರಿಲ್ಲರ್​ ಸಿನಿಮಾ ಅನೌನ್ಸ್ ಮಾಡಿದ್ಮೇಲೆ ರಾಜಮೌಳಿಗೆ ಎದುರಾದ ಸವಾಲುಗಳು ಹಲವಾರು.. ಆ ಸವಾಲುಗಳ ಬಗ್ಗೆ ಎಲ್ಲೂ ಮೌನ ಮುರಿಯದ ಮೌಳಿ ಈಗ ಮೌನವಾಗೆ ಇದ್ದು ಭಾರೀ ಗಂಡಾಂತರಿಂದ ಪಾರಾಗಿದ್ದಾರೆ. ಹಾಗಾದ್ರೆ ಏನದು ಗಂಡಾಂತರ.. ಜಕ್ಕಣ್ಣ ಪಾರಾಗಿದ್ದು ಹೇಗೆ?&lt;/p&gt;&lt;p&gt;ಸಿನಿಮಾ ಮಂದಿ ಅಂದ್ರೆ ಒಂದಲ್ಲೊಂದು ವಿವಾದಗಳನ್ನ ಮೈ ಮೇಲೆ ಹೊದ್ದುಕೊಂಡೇ ಇರ್ತಾರೆ. ಯಾಕಂದ್ರೆ ಅದು ಕಲರ್​ಫುಲ್ ಜಗತ್ತು. ಆದ್ರೆ ಯಾವ್ದೇ ವಿವಾದಗಳನ್ನೂ ಮೈ ಮೇಲೆ ಎಳೆದುಕೊಳ್ಳದೇ ಸೇಫ್​ಆಗಿ ಸ್ಮೂತ್​ ಆಗಿ ಕೆಲಸ ಮಾಡಿಕೊಂಡು ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಅನ್ನೋಕಿರೀಟ ಮುಡಿಗೇರಿಸಿಕೊಂಡವರು ಎಸ್ಎಸ್​ರಾಜಮೌಳಿ. ಆದ್ರೆ ಈ ರಾಜಮೌಳಿ ಎಷ್ಟೇ ಪ್ರಯತ್ನ ಪಟ್ರೂ ವಿವಾದಗಳು ಇವರನ್ನೂ ಬಿಡಲಿಲ್ಲ. ಬಾಹುಬಲಿ ಆರ್&zwnj;ಆರ್&zwnj;ಆರ್&zwnj; ಸಿನಿಮಾಗಳ ಬಳಿಕ ಕೈಗೆತ್ತಿಕೊಂಡ ವಾರಣಾಸಿ ಸಿನಿಮಾ ವಿವಾದದಿಂದ ರಾಜಮೌಳಿಯ ನಿದ್ದಿ ಕೆಡಿಸಿತ್ತು..&lt;/p&gt;&lt;h2&gt;ರಾಜಮೌಳಿ-ಮಹೇಶ್​ಬಾಬುಗೆ ಕಾಡುತ್ತಿತ್ತು ಟೈಟಲ್ ವಿವಾದ; 'ವಾರಣಾಸಿ' ಟೈಟಲ್​​ಗೆ ತೆಲುಗಿನಲ್ಲಿ ಆಗಿತ್ತು ಭಾರಿ ಹೋರಾಟ..!&lt;/h2&gt;&lt;p&gt;ಹೌದು, ತೆಲುಗು ಚಿತ್ರರಂಗದಲ್ಲಿ ಹುಟ್ಟಿಕೊಂಡಿದ್ದ ಬಿಸಿಬಿಸಿ ಟೈಟಲ್ ವಾರ್&zwnj; ಅಂದ್ರೆ ಅದು ಎಸ್ಎಸ್ ರಾಜಮೌಳಿ ಹಾಗು ಮಹೇಶ್​ ಬಾಬು ಕಾಂಬಿನೇಷನ್ ನ ಸಿನಿಮಾ ಶೀರ್ಷಿಕೆ ವಿವಾದ. ರಾಜಮೌಳಿ ತನ್ನ ಮುಂದಿನ ಸಿನಿಮಾ ಟೈಟಲ್​ವಾರಣಾಸಿ ಎಂದು ಘೋಷಣೆ ಮಾಡಿದ್ರು.&lt;/p&gt;&lt;p&gt;ಆರ್&zwnj;ಆರ್&zwnj;ಆರ್ ಜಮಾನಾ ಮುಗಿದು,ಜೇಮ್ಸ್ ಬಾಂಡ್ ಲೆವೆಲ್&zwnj;ನ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಮಾಡೋಕೆ ಜ್ಯಾಕ್ ಹಾಕಿರೋ ರಾಜಮೌಳಿ, ಪ್ರಿನ್ಸ್ ಮಹೇಶ್ ಬಾಬುಗಾಗಿ ನೆಕ್ಸ್ಟ್ ಯಾವ ಶೀರ್ಷಿಕೆ ಹಿಡಿತಾರೆ ಅನ್ನೋ ಕುತೂಹಲ ಇತ್ತು. ಕಳೆದ ವರ್ಷ ನವೆಂಬರ್&zwnj;ನಲ್ಲಿ &lsquo;ವಾರಣಾಸಿ&rsquo; ಅನ್ನೋ ಪವರ್&zwnj;ಫುಲ್ ಶೀರ್ಷಿಕೆ ಅನೌನ್ಸ್ ಮಾಡ್ತಿದ್ದಂತೆಯೇ ಫ್ಯಾನ್ಸ್ ಖುಷಿ ಪಟ್ಟಿದ್ರು. ಆದ್ರೆ, ತೆಲುಗು ಚಿತ್ರರಂಗದಲ್ಲಿ ಸಣ್ಣ ಮಟ್ಟದ ಭೂಕಂಪ ಸೃಷ್ಟಿಯಾಗಿತ್ತು. ನನ್ನ ಪರ್ಮಿಷನ್ ಇಲ್ಲದೇ ಈ ಹೆಸರನ್ನ ರಾಜಮೌಳಿ ಹೇಗೆ ಬಳಸಿಕೊಳ್ತಾರೆ? ಅಂತ ನಿರ್ದೇಶಕ ಸುಬ್ಬಾರೆಡ್ಡಿ ಮೌಳಿ ವಿರುದ್ಧ ತೊಡೆ ತಟ್ಟಿದ್ರು..&lt;/p&gt;&lt;p&gt;ವಾರಣಾಸಿ ಟೈಟಲ್​ ಆಗಿ ತೆಲುಗು ಫಿಲ್ಮ್ ನಗರಿಯ ಕಾಂಪೌಂಡ್&zwnj;ನಲ್ಲಿ ವಾರ್ ಶುರುವಾಗಿತ್ತು. ನಿಜ ಹೇಳ್ಬೇಕಂದ್ರೆ, 2023ರಲ್ಲೇ &lsquo;ವಾರಣಾಸಿ&rsquo; ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿಯಲ್ಲಿ ಸುಬ್ಬಾರೆಡ್ಡಿ ಆಫೀಶಿಯಲ್ ಆಗಿ ರಿಜಿಸ್ಟರ್ ಮಾಡಿಸಿಕೊಂಡು ಕಥೆ ರೆಡಿ ಮಾಡಿಕೊಳ್ತಿದ್ರು. ಆದ್ರೆ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್&zwnj;ರಂತ ಬಿಗ್ ರೇಂಜ್ ಸ್ಟಾರ್ಸ್&zwnj;ಗಳಿರೋ ಜ್ಯಾಕ್&zwnj;ಪಾಟ್ ಪ್ರಾಜೆಕ್ಟ್&zwnj;ಗೆ ಈ ಹೆಸರೇ ಬೇಕು ಅಂತ ರಾಜಮೌಳಿ ಅನೌನ್ಸ್ ಮಾಡಿದಾಗ ಸುಬ್ಬಾರೆಡ್ಡಿ ಹರ್ಟ್ ಆಗಿದ್ರು. ಕೊನೆಗೆ ತೆಲುಗು ಫಿಲ್ಮ್ ಛೇಂಬರ್&zwnj;ಗೆ ವಿಷಯ ತಲುಪಿ, ರಾಜಿ ಸಂಧಾನಕ್ಕೆ ರಾಜಮೌಳಿ ಹಾಗು ಸುಬ್ಬಾರೆಡ್ಡಿಯನ್ನ ಕರೆಯಲಾಯ್ತು.&lt;/p&gt;&lt;p&gt;ಕಣ್ಮರೆ ಆಯ್ತು 'ವಾರಣಾಸಿ'ಗೆ ಇದ್ದ ದೊಡ್ಡ ಗಂಡಾಂತರ&lt;/p&gt;&lt;h3&gt;ದೊಡ್ಡ ಸಮಸ್ಯೆ ಬಗೆ ಹರಿದಿದ್ದಕ್ಕೆ ನಿಟ್ಟುಸಿರು ಬಿಟ್ಟ ಜಕ್ಕಣ್ಣ&lt;/h3&gt;&lt;p&gt;ರಾಜಮೌಳಿ ಹಾಗು ಸುಬ್ಬಾರೆಡ್ಡಿ ಮಧ್ಯೆ ಕಳೆದ ಒಂದು ವರ್ಷದಿಂದ ಟೈಟಲ್​ವಿವಾದ ಬಗೆ ಹರಿಸಲು ಪಂಚಾಯ್ತಿ ಮಾಡಲಾಗುತ್ತಿತ್ತು. ವಿಷಯ ಸೀರಿಯಸ್ ಆಗ್ತಿದ್ದಂತೆಯೇ ರಂಗಕ್ಕಿಳಿದ ತೆಲುಗು ಫಿಲ್ಮ್ ಪ್ರೊಡ್ಯೂಸರ್ಸ್ ಕೌನ್ಸಿಲ್ ಮತ್ತು ತೆಲುಗು ಡೈರೆಕ್ಟರ್ಸ್ ಅಸೋಸಿಯೇಷನ್ ಡೈರೆಕ್ಟರ್ ಸುಬ್ಬಾರೆಡ್ಡಿ ಜೊತೆ ಹೈ-ವೋಲ್ಟೇಜ್ ಚರ್ಚೆ ಮಾಡಿದ್ರು. ಕೊನೆಗೆ ರಾಜಮೌಳಿಯಂತಹ ದಿಗ್ಗಜನ ಸಿನಿಮಾಗೆ ಈ ಟೈಟಲ್ ಸಿಕ್ಕಿದ್ರೆ ಇಡೀ ತೆಲಗು ಚಿತ್ರರಂಗಕ್ಕೇ ಹೆಮ್ಮೆ ಅನ್ನೋ ಅಂತ ವಾರಣಾಸಿ ಟೈಟಲ್​ಅನ್ನ ರಾಜಮೌಳಿಗೇ ಬಿಟ್ಟು ಕೊಟ್ಟಿದ್ದಾರೆ. ಅಲ್ಲಿಗೆ ನಿರ್ದೇಶಕ ರಾಜಮೌಳಿ ಟೈಟಲ್​ವಿವಾದಿಂದ ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ತಪ್ಪಿಸಿಕೊಂಡಿದ್ದಾರೆ.&lt;/p&gt;&lt;p&gt;ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/title-dispute-over-ss-rajamouli-varanasi-settled-following-a-successful-negotiation-with-the-title-owner-subba-reddy/articleshow-cw1p0he"/>
        </item>
        <item>
            <title><![CDATA[ಸಚಿವರ ಪಾರ್ಟಿಗೆ ಹುಡುಗಿಯರ ಸಪ್ಲೈ ಮಾಡಲು ₹80,000 ಆಫರ್! ಗ್ಲಾಮರ್ ಜಗತ್ತಿನ ಕರಾಳ ಮುಖ ಬಿಚ್ಚಿಟ್ಟ ಮಾಡೆಲ್!]]></title>
            <link>https://kannada.asianetnews.com/gallery/tv-talk/indian-model-licha-bora-explosive-allegation-minister-party-offer-80k-for-girls-gpso8z7</link>
            <guid isPermaLink="true">https://kannada.asianetnews.com/gallery/tv-talk/indian-model-licha-bora-explosive-allegation-minister-party-offer-80k-for-girls-gpso8z7</guid>
            <pubDate>Tue, 28 Jul 2026 14:35:06 +0530</pubDate>
            <description><![CDATA[&lt;p&gt;ಖ್ಯಾತ ಮಾಡೆಲ್ ಲಿಚಾ ಬೋರಾ ಅವರು, ರಾಜ್ಯದ ಸಚಿವರೊಬ್ಬರ ಪಾರ್ಟಿಯಲ್ಲಿ ಕುಡಿದು ಡ್ಯಾನ್ಸ್ ಮಾಡಲು ಹುಡುಗಿಯರನ್ನು ಕಳುಹಿಸಲು ತಮಗೆ ಅಪರಿಚಿತರಿಂದ ಕರೆ ಬಂದಿತ್ತು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಮಾಡೆಲಿಂಗ್ ಕ್ಷೇತ್ರ ಹಾಗೂ ಹಣದ ಆಮಿಷದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykyxc7prmzhqfyny52ty1tz,imgname-assam-model-licha-bora-explosive-1785228865780.jpg" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ಮಾಡೆಲ್ ಲಿಚಾ ಬೋರಾ ಅವರು, ರಾಜ್ಯದ ಸಚಿವರೊಬ್ಬರ ಪಾರ್ಟಿಯಲ್ಲಿ ಕುಡಿದು ಡ್ಯಾನ್ಸ್ ಮಾಡಲು ಹುಡುಗಿಯರನ್ನು ಕಳುಹಿಸಲು ತಮಗೆ ಅಪರಿಚಿತರಿಂದ ಕರೆ ಬಂದಿತ್ತು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಮಾಡೆಲಿಂಗ್ ಕ್ಷೇತ್ರ ಹಾಗೂ ಹಣದ ಆಮಿಷದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಗ್ಲಾಮರ್ ಜಗತ್ತು ಹಾಗೂ ಮಾಡೆಲಿಂಗ್ ಕ್ಷೇತ್ರದ (Modelling Industry) ಕರಾಳ ಮುಖವನ್ನು ಬಿಚ್ಚಿಡುವಂತಹ ಆಘಾತಕಾರಿ ಘಟನೆಯೊಂದನ್ನು ಖ್ಯಾತ ಮಾಡೆಲ್ ಲಿಚಾ ಬೋರಾ (Licha Bora) ಬಹಿರಂಗಪಡಿಸಿದ್ದಾರೆ. ರಾಜ್ಯದ ಹಾಲಿ ಸಚಿವರೊಬ್ಬರ ಪಾರ್ಟಿಯಲ್ಲಿ (Minister's Party) 'ಕುಡಿದು ಡ್ಯಾನ್ಸ್ ಮಾಡಲು' ಹುಡುಗಿಯರನ್ನು ಸರಬರಾಜು ಮಾಡಿದರೆ ಭಾರಿ ಪ್ರಮಾಣದ ಹಣ ನೀಡುವುದಾಗಿ ತಮಗೆ ಕರೆ ಬಂದಿತ್ತು ಎಂದು ಲಿಚಾ ಶಾಕಿಂಗ್ ಆರೋಪ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ (Interview) ಈ ವಿಚಾರವನ್ನು ಬಿಚ್ಚಿಟ್ಟ ಲಿಚಾ ಬೋರಾ, 'ಕೆಲ ದಿನಗಳ ಹಿಂದೆ ನನಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಕರೆ ಬಂದಿತ್ತು. ಅಸ್ಸಾಂನ ಸೋನಾಪುರ್&zwnj;ನಲ್ಲಿರುವ (Sonapur) ಅತ್ಯಂತ ಪ್ರಸಿದ್ಧ ರೆಸಾರ್ಟ್&zwnj; ಒಂದರಲ್ಲಿ ಪಾರ್ಟಿ ಆಯೋಜಿಸಲಾಗಿದೆ. ಅಲ್ಲಿ ಕುಡಿದು ಡ್ಯಾನ್ಸ್ ಮಾಡಲು ಹುಡುಗಿಯರನ್ನು ಕಳುಹಿಸಿಕೊಡಲು ಸಾಧ್ಯವಿದೆಯೇ? ಎಂದು ಕೇಳಿದನು. ನಾನು ಯಾಕೆ ಎಂದು ಪ್ರಶ್ನಿಸಿದಾಗ, ರಾಜ್ಯದ ಪ್ರಭಾವಿ ಶಾಸಕ ಹಾಗೂ ಸಚಿವರೊಬ್ಬರ ಪಾರ್ಟಿಗೆ ಈ ವ್ಯವಸ್ಥೆ ಬೇಕಾಗಿದೆ ಎಂದು ಆತ ಹೇಳಿದನು' ಎಂದು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಕರೆ ಮಾಡಿದ ವ್ಯಕ್ತಿಗಳು ಕೇವಲ ಅಲ್ಪಾವಧಿಯ ಪಾರ್ಟಿಗೆ ಬರಲು ಬರೋಬ್ಬರಿ ₹80,000 ನೀಡುವುದಾಗಿ ಆಫರ್ (Offer) ನೀಡಿದ್ದರು. 'ಕೇವಲ ಡ್ಯಾನ್ಸ್ ಮಾಡಲು ಇಷ್ಟೊಂದು ದೊಡ್ಡ ಮೊತ್ತವನ್ನು ಯಾರು ಕೊಡ್ತಾರೆ? ಎಂಬ ಅನುಮಾನ ನನಗೆ ಬಂದಿತ್ತು. ಹೀಗಾಗಿ ನಾನು ನೇರವಾಗಿಯೇ ಆತನನ್ನು ಪ್ರಶ್ನಿಸಿದೆ. ನಿಮಗೆ ಲೈಂಗಿಕ ವೃತ್ತಿಗೆ (Se*x Work) ಹುಡುಗಿಯರು ಬೇಕಿದ್ದರೆ, ಸೆ*ಕ್ಸ್ ವರ್ಕರ್ಸ್ ಬಳಿ ಹೋಗಿ ಎಂದು ಕಡಾಖಂಡಿತವಾಗಿ ಹೇಳಿದೆ. ಆದರೆ ಆತ, ಇಲ್ಲ ನಮಗೆ ಕೇವಲ ನಮ್ಮ ಜೊತೆ ಕುಡಿದು ಡ್ಯಾನ್ಸ್ ಮಾಡಲು ಮಾಡೆಲ್&zwnj;ಗಳೇ ಬೇಕು ಎಂದು ಪಟ್ಟು ಹಿಡಿದಿದ್ದನು' ಎಂದು ಲಿಚಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಆರೋಪದ ಬೆನ್ನಲ್ಲೇ ಆ ಪ್ರಭಾವಿ ಸಚಿವ ಯಾರು ಎಂಬುದನ್ನು ಹೆಳಲು ಲಿಚಾ ಬೋರಾ ನಿರಾಕರಿಸಿದ್ದಾರೆ. 'ಅವರು ಅತ್ಯಂತ ಪ್ರಭಾವಿ ನಾಯಕರು, ಸುದೀರ್ಘ ಕಾಲದಿಂದ ಶಾಸಕರಾಗಿದ್ದು (MLA), ಪ್ರಸ್ತುತ ಸಚಿವರಾಗಿದ್ದಾರೆ (Minister). ಅವರ ಹೆಸರು ಹೇಳಿದರೆ ನನಗೆ ಅಪಾಯ ಕಾಯ್ದಿರುತ್ತದೆ. ಆದರೆ ನಾನು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ' ಎಂದಿದ್ದಾರೆ.&lt;/p&gt;&lt;img&gt;&lt;p&gt;ಈ ಕರೆ ಬಂದ ನಂತರ ಲಿಚಾ ತಮ್ಮ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಸಲಹೆ ಕೇಳಿದ್ದರು. 'ಸೋನಾಪುರದಲ್ಲಿ ಇಂತಹ ಘಟನೆಗಳು ನಡೆಯುವ ಬಗ್ಗೆ ಕೇಳಲ್ಪಟ್ಟಿದ್ದೇನೆ. ಆದರೆ, ಇದರಲ್ಲಿ ಸಚಿವರು ನೇರವಾಗಿ ಭಾಗಿಯಾಗಿದ್ದಾರೋ ಅಥವಾ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಮಧ್ಯವರ್ತಿಗಳು (Middlemen) ಈ ರೀತಿ ದಂದೆ ನಡೆಸುತ್ತಿದ್ದಾರೋ ಗೊತ್ತಿಲ್ಲ. ಹೀಗಾಗಿ ಈ ವಿಚಾರದಿಂದ ದೂರವಿರು' ಎಂದು ಪೊಲೀಸರು ಸಲಹೆ ನೀಡಿದ್ದಾಗಿ ಲಿಚಾ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಮಾಡೆಲಿಂಗ್ ಕ್ಷೇತ್ರಕ್ಕೆ ಹೊಸದಾಗಿ ಬರುವ ಯುವತಿಯರನ್ನು (Newcomers) ಗುರಿಯಾಗಿಸಿಕೊಂಡು ಇಂತಹ ಜಾಲಗಳು ಕೆಲಸ ಮಾಡುತ್ತವೆ. ಹಣ ಮತ್ತು ಕೆಲಸದ ಅಗತ್ಯವಿರುವ ಯುವತಿಯರು &quot;ಕೇವಲ ಡ್ಯಾನ್ಸ್ ತಾನೇ&quot; ಎಂದು ಭಾವಿಸಿ ಇಂತಹ ಅಪಾಯಕಾರಿ ಬಲೆಗೆ ಬೀಳುವ ಸಾಧ್ಯತೆಯಿದೆ ಎಂದು ಲಿಚಾ ಬೋರಾ ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/indian-model-licha-bora-explosive-allegation-minister-party-offer-80k-for-girls-gpso8z7"/>
        </item>
        <item>
            <title><![CDATA[ಹಾಲಿವುಡ್ ಅಂಗಳದಲ್ಲಿ ರಾಮಾಯಣ ಪ್ರಚಾರ, ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಜಪ..!]]></title>
            <link>https://kannada.asianetnews.com/entertainment/rocking-star-yash-latest-statement-on-toxic-in-hollywood-media-toxic-glimpse-received-a-massive-enthusiastic-reaction/articleshow-ol8052g</link>
            <guid isPermaLink="true">https://kannada.asianetnews.com/entertainment/rocking-star-yash-latest-statement-on-toxic-in-hollywood-media-toxic-glimpse-received-a-massive-enthusiastic-reaction/articleshow-ol8052g</guid>
            <pubDate>Tue, 28 Jul 2026 14:11:19 +0530</pubDate>
            <description><![CDATA[ರಾಮಾಯಣ ಪ್ರಚಾರದ ವೇಳೆ ಹಾಲಿವುಡ್&zwnj;ನಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂಬರುವ 'ಟಾಕ್ಸಿಕ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರವು ಅತ್ಯಂತ ರೋಮಾಂಚನಕಾರಿ, ಸಾಹಸಮಯ ಮತ್ತು ಭಾವನಾತ್ಮಕವಾಗಿದ್ದು, 'ಜಾನ್ ವಿಕ್' ಖ್ಯಾತಿಯ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಯಶ್ ಅವರ ಈ ಹೇಳಿಕೆಗಳು ಹಾಲಿವುಡ್ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyky3z3tjnntgh7sj7aa9xtw,imgname-yash-hollywood-1785228033146.png" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿಗೆ ರಾಕಿ ಭಾಯ್ ಕೊಟ್ಟಿರುವ ಈ ಒಂದು ಹೇಳಿಕೆ ಹಾಲಿವುಡ್ ಮಾಧ್ಯಮಗಳಲ್ಲಿ ಭಾರಿ ಸದ್ದು ಸುದ್ದಿ ಮಾಡುತ್ತಿದೆ. ಹಾಲಿವುಡ್ ಅಂಗಳದಲ್ಲಿ ರಾಮಾಯಣ ಪ್ರಚಾದ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಜಪವನ್ನೆ ಮಾಡಿದ್ದಾರೆ. ವೀಕ್ಷಕರು ಚಿತ್ರಮಂದಿರದಿಂದ ಹೊರಬರುವಾಗ ಪೂರ್ತಿಯಾಗಿ ತೃಪ್ತರಾಗಿ, ರೋಮಾಂಚನಗೊಳ್ಳಲಿದ್ದಾರೆ ಎಂಬ ದೃಢವಾದ ನಂಬಿಕೆಯನ್ನು ಯಶ್ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಕುರಿತಾದ ಇತ್ತೀಚಿನ ಹೇಳಿಕೆ ಹಾಲಿವುಡ್ ಮಾಧ್ಯಮದಲ್ಲಿ ಸದ್ದು&lt;/h2&gt;&lt;p&gt;ಇನ್ನು 'ಟಾಕ್ಸಿಕ್' ಸಿನಾಮಾವನ್ನ ಅತ್ಯಂತ ರೋಮಾಂಚನಕಾರಿ, ಸಾಹಸಮಯ, ವೈಲ್ಡ್, ಬಂಡಾಯದ ಮನೋಭಾವವನ್ನೋಳಗೊಂಡಿದ್ದಾಗಿದೆ. ಹಾಗೂ ಅದ್ದೂರಿ ಕ್ಯಾನ್ವಾಸ್&zwnj;ನ ಸಿನಿಮಾವಾಗಿದೆ ಎಂದಿದ್ದಾರೆ.ಜೊತೆಗೆ ಅತ್ಯಂತ ಭಾವನಾತ್ಮಕ ಮತ್ತು ನೈಜತೆಗೆ ಹತ್ತಿರವಾಗಿರುವ ಸಿನಿಮಾ ಎಂದು ಯಶ್ ವರ್ಣಿಸಿದ್ದಾರೆ.&lt;/p&gt;&lt;h3&gt;ಮನದಾಳದ ಮಾತನ್ನ ಹಂಚಿಕೊಂಡ ರಾಕಿ ಭಾಯ್ ಯಶ್&amp;nbsp;&lt;/h3&gt;&lt;p&gt;ಇನ್ನು ಸಿನಿಮಾ ಮೇಲಿನ ಪ್ರೀತಿ ಹಾಗೆ ಭರವಸೆಯನ್ನ ವ್ಯಕ್ತಪಡಿಸುತ್ತಾ ಯಶ್ ಸಾಹಸ ಪ್ರಧಾನ ಸಿನಿಮಾಗಳ ಮೇಲಿರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಪ್ರಸಿದ್ಧ ಹಾಲಿವುಡ್ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ (JJ Perry) ಅವರೊಂದಿಗೆ ಕೆಲಸ ಮಾಡಿದ್ದು ಅತ್ಯುತ್ತಮ ಅನುಭವವಾಗಿತ್ತು ಎಂದು ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಜೊತೆಗೆ 'ಜಾನ್ ವಿಕ್' (John Wick) ನಂತಹ ಉನ್ನತ ಮಟ್ಟದ ಸಿನಿಮಾಗಳಿಂದ ಪ್ರೇರಿತವಾಗಿ ಈ ಚಿತ್ರದ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ. ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಪ್ರತಿಯೊಂದು ಆಕ್ಷನ್ ದೃಶ್ಯವೂ ಕೇವಲ ಸಾಹಸಕ್ಕಾಗಿ ಇರದೆ, ಆಳವಾದ ಭಾವನೆಗಳಿಂದ ಕೂಡಿರುತ್ತದೆ ಎಂದು ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಒಟ್ಟಿನ್ನಲ್ಲಿ ರಾಮಾಯಣ ಸಿನಿಮಾದ ಪ್ರಚಾರದ ಸಂದರ್ಭದಲ್ಲಿಯೂ ಯಶ್ ಟಾಕ್ಸಿಕ್ ಸಿನಿಮಾದ ಜಪವನ್ನೆ ಮಾಡಿದ್ದು, 'ಟಾಕ್ಸಿಕ್' ಕುರಿತಾದ ಯಶ್ ಹೇಳಿಕೆ ಹಾಲಿವುಡ್ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Roja Manu Patil</dc:creator>
            <atom:link href="https://kannada.asianetnews.com/entertainment/rocking-star-yash-latest-statement-on-toxic-in-hollywood-media-toxic-glimpse-received-a-massive-enthusiastic-reaction/articleshow-ol8052g"/>
        </item>
        <item>
            <title><![CDATA[ಇದು ಜೋಡೆತ್ತು ಕಥೆ.. ಜೈಲಲ್ಲೂ ದರ್ಶನ್‌ಗೆ 'ಯಶ್‌' ಯೋಚ್ನೆನಾ? ರಕ್ಷಿತಾ ಬಳಿ 'ದಾಸ' ಕೇಳಿ ಪಡೆದ ಉತ್ತರವೇನು?]]></title>
            <link>https://kannada.asianetnews.com/sandalwood/actor-darshan-sought-updates-about-yash-movie-toxic-from-his-friend-and-actress-rakshita-in-parappana-agrahara-jail/articleshow-nd4m3l4</link>
            <guid isPermaLink="true">https://kannada.asianetnews.com/sandalwood/actor-darshan-sought-updates-about-yash-movie-toxic-from-his-friend-and-actress-rakshita-in-parappana-agrahara-jail/articleshow-nd4m3l4</guid>
            <pubDate>Tue, 28 Jul 2026 12:23:02 +0530</pubDate>
            <description><![CDATA[&lt;p&gt;&lsquo;ಜೈಲಿನಲ್ಲಿ&zwnj; ಇದ್ರೂ, ಯಾವಾಗ ಏನ್ ಆಗುತ್ತೋ ಅನ್ನೋ ಆತಂಕದ ನಡುವೆಯೂ ದರ್ಶನ್ ಸಿನಿಮಾ&zwnj; ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ಸಿನಿಮಾ ಮಾಡಲ್ಲ, ಚಿತ್ರರಂಗದಿಂದ ದೂರ ಇರ್ತಾರೆ&zwnj;. ರಾಜಕೀಯಕ್ಕೆ ಹೋಗ್ತಾರೆ &zwnj;ಹೀಗೆ ಹತ್ತು ಹಲವು ಅಯಾಮಗಳಲ್ಲಿ ಚರ್ಚೆ ಆಗ್ತಿದೆ&rsquo;.. ಏನಿದು ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykqg6n8ygqz7f4ev2ecxak6,imgname-rakshitha-pream-darshan-yash-1785221094056.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದರ್ಶನ್ ಜೈಲಿಂದ ಹೊರಗೆ ಬರೋ ಆಶಾ ಭಾವನೆ ಕಳೆದುಕೊಂಡಿಲ್ವಂತೆ!&lt;/strong&gt;&lt;/p&gt;&lt;p&gt;ಕೊಲೆ ಆರೋಪದಲ್ಲಿ ನಟ ದರ್ಶನ್ (Darshan Thoogudeepa) ಜೈಲು ಸೇರಿ ಎರಡು ವರ್ಷಗಳು ಕಳೆದಿವೆ. ದರ್ಶನ್ ಜೈಲು ಸೇರಿದ ಬೆನ್ನಲ್ಲೆ ಸಾಕಷ್ಟು ಸಿನಿಮಾಗಳು ಕೈ ಬಿಟ್ಟು ಹೋಗಿವೆ. ಈ ಕೇಸ್ ನಲ್ಲಿ ದರ್ಶನ್ ಹೊರಗೆ ಬರ್ತಾರೆ ಇಲ್ವೋ ಅನ್ನೋದು ಯಾರಿಗೂ ತಿಳಿತಿಲ್ಲ. 'ಆದ್ರೆ ದರ್ಶನ್ ಜೈಲಿನಲ್ಲಿದ್ರು ನಂಬಿಕೆ ಕಳೆದುಕೊಂಡಿಲ್ಲ. ಜೊತೆಗೆ ಜೈಲಿನಲ್ಲಿದ್ರು ದಾಸನ ಸಿನಿಮಾ ಪ್ರೀತಿ ಕಮ್ಮಿಯಾಗಿಲ್ಲ. ತನ್ನನ್ನ ನೋಡಲು ಹೋದವರ ಬಳಿ ದಾಸ ಕೇಳೋದು ಚಿತ್ರರಂಗದ ಏನಾಗಿದೆ ಅನ್ನೋ ಪ್ರಶ್ನೆಯಂತೆ. ಅಷ್ಟೆ ಅಲ್ಲ ಯಶ್ (Yash) ನಟನೆಯ ಟಾಕ್ಸಿಕ್ ಸಿನಿಮಾ ಬಗ್ಗೆಯೂ ದಾಸ ವಿಚಾರಿಸ್ತಾರಂತೆ'.. ಈ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ..&lt;/p&gt;&lt;h2&gt;ಜೈಲಿನಲ್ಲಿದ್ರೂ ನಟ ದರ್ಶನ್ ಗೆ ಕನ್ನಡ ಚಿತ್ರರಂಗದ್ದೇ ಚಿಂತೆ..!&lt;/h2&gt;&lt;p&gt;ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿ ಎರಡು ವರ್ಷ ಆಗಿದೆ. ಈ ಕೊಲೆ ಆರೋಪದಿಂದ ಅದ್​ ಹೇಗೆ ಮುಕ್ತಿ ಪಡಿತಾರೋ ಗೊತ್ತಿಲ್ಲ. ಆದ್ರೆ ಜೈಲಿನಲ್ಲಿರೋ ದರ್ಶನ್ ತನ್ನ ವೃತ್ತಿ ಜೀವನದ ಬಗ್ಗೆ ಆಶಾಭಾವನೆ ಕಳೆದುಕೊಂಡಿಲ್ವಂತೆ. ಯಾಕಂದ್ರೆ ದರ್ಶನ್​​ರನ್ನ ಯಾರೇ ನೋಡೋಕೆ ಹೋದ್ರು ಅಲ್ಲಿ ಸಿನಿಮಾರಂಗದ ಆಗು ಹೋಗುಗಳು ನಿರೀಕ್ಷೆ ಇರೋ ಸಿನಿಮಾಗಳ ಬಗ್ಗೆಯೇ ಮಾತಾಡುತ್ತಾರಂತೆ..&lt;/p&gt;&lt;p&gt;ದರ್ಶನ್ ಕನ್ನಡ ಚಿತ್ರರಂಗದ ಬಾಕ್ಸ್ ಅಫೀಸ್ ಸುಲ್ತಾನ್ ... ದರ್ಶನ್ ಕಾಲ್ ಶೀಟ್ ಸಿಕ್ರೆ ಸಾಕು ಅಂತ ನಿರ್ಮಾಪಕರು ಕ್ಯೂ ನಿಂತ ದಿನವೂ ನೋಡಿದ್ದೀವಿ.. ಅದ್ರೆ ದರ್ಶನ್ ಮಾಡಿಕೊಂಡ ಎಡವಟ್ಟಿಗೆ ಇಂದು ಜೈಲು ಸೇರಿದ್ದಾರೆ. ಆದ್ರೆ ಜೈಲಿನಿಲ್ಲಿದ್ರೂ ದಾಸನಿಗೆ ಚಿತ್ರರಂಗದ್ದೇ ಚಿಂತೆಯಂತೆ..&lt;/p&gt;&lt;h3&gt;ಚಿತ್ರರಂಗದ ಮೇಲೆ ದಾಸನ ಪ್ರೀತಿ.. ಆಪ್ತರ ಬಳಿ ಹಂಚಿಕೊಂಡ ರಕ್ಷಿತಾ..!&lt;/h3&gt;&lt;p&gt;ದರ್ಶನ್ ಬದುಕು ಕೊಟ್ಟಿದ್ದ ಬಣ್ಣದ ಜಗತ್ತಿನ ಬಗ್ಗೆ ಎಷ್ಟು ಚಿಂತಿಸುತ್ತಿದ್ದಾರೆ ಅನ್ನೋದನ್ನ ದರ್ಶನ್​ಅವರನ್ನ ಮೊನ್ನೆಯಷ್ಟೆ ಜೈಲಿನಲ್ಲಿ ಭೇಟಿ ಆದ ನಟಿ ರಕ್ಷಿತಾ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಹೌದು ದರ್ಶನ್ ಜೈಲಿನಲ್ಲಿ ಇದ್ರು ಕನ್ನಡ ಚಿತ್ರರಂಗದ ಮೇಲಿನ ಅಭಿಮಾನ ಕನ್ನಡ ಸಿನಿಮಾಗಳ ಮೇಲಿನ&zwnj; ಪ್ರೀತಿ ಕಮ್ಮಿಯಾಗಿಲ್ಲ. ಇತ್ತೀಚಿನ ದರ್ಶನ್ ರನ್ನ ಸ್ನೇಹಿತೆ ರಕ್ಷಿತಾ ಪ್ರೇಮ್ ಭೇಟಿ ಆಗಿದ್ರು. ಈ ವೇಳೆ ದರ್ಶನ್ ಆತ್ಮೀಯರ ಅರೋಗ್ಯ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದರ ಜೊತೆಗೆ ಕನ್ನಡ ಸಿನಿಮಾಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.&lt;/p&gt;&lt;p&gt;ಯಶ್​ರ ಟಾಕ್ಸಿಕ್​ಸಿನಿಮಾ​ಬಗ್ಗೆ ಮಾತನಾಡಿದ ದರ್ಶನ್; ಟಾಕ್ಸಿಕ್ ಬಿಡುಗಡೆ ಬಗ್ಗೆ ದರ್ಶನ್ ಗೆ ಮಾಹಿತಿ ಕೊಟ್ಟ ರಕ್ಷಿತಾ&lt;/p&gt;&lt;p&gt;ಹೌದು, ನಟ ದರ್ಶನ್ ಹಾಗು ಯಶ್​ಜೋಡೆತ್ತುಗಳು ಅಂತಲೇ ಫೇಮಸ್! ಸುಮಲತಾ ಎಲೆಕ್ಷನ್ ಗೆಲುವಿನಲ್ಲಿ ಇಬ್ಬರು ಜೋಡೆಂತಿನಂತೆ ದುಡಿದು ಗೆಲ್ಲಿಸಿದ್ರು. ಸುಮಲತಾ ಬರ್ತ್​ಡೇ ಪಾರ್ಟಿಯಲ್ಲೂ ಈ ಇಬ್ಬರೂ ಒಟ್ಟೊಟ್ಟಿಗೆ ಇದ್ರು. ಅಂಬರೀಶ್​ರ ಆಪ್ತ ಬಳಗದಲ್ಲಿ ಇಬ್ಬರೂ ಇದ್ದವರು. ಅದರಲ್ಲೂ ನಟ ದರ್ಶನ್ ಯಶ್​ಗೆ ಹೀರೋ ಅಂತಲೇ ಕರೀತಾ ಇದ್ರು.. ಈಗ ಈ ಹೀರೋನಾ ಟಾಕ್ಸಿಕ್ ಸಿನಿಮಾ ಬರ್ತಾ ಇದೆ. ಈ ಸಿಮಾ ಬಗ್ಗೆಯೂ ರಕ್ಷಿತಾ ಬಳಿ ದರ್ಶನ್ ಮಾಹಿತಿ ಪಡೆದುಕೊಂಡಿದ್ದಾರಂತೆ..&lt;/p&gt;&lt;p&gt;ರಕ್ಷಿತಾ ಜೊತೆ ಕುಶಲೋಪರಿ ಮಾತಾಡ್ತಿದ್ದ ದರ್ಶನ್ ಯಶ್​ರ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಯ್ತಾ ಅಂತ ಕೇಳಿದ್ರಂತೆ. ಅಷ್ಟೆ ಅಲ್ಲ ಡಾಲಿ ಧನಂಜಯ ಅಭಿನಯಿಸಿ ನಿರ್ಮಾಣ ಮಾಡಿರುವ 'ಮದರ್ ಪ್ರಾಮಿಸ್' ಸಿನಿಮಾ ಗೆಲ್ತಾ ಅಂತೆಲ್ಲಾ ಧನಂಜಯ್​ಬಗ್ಗೆಯೂ ವಿಚಾರಿಸಿದ್ರಂತೆ. ಆ ಚಿತ್ರಕ್ಕೆ ಒಳ್ಳೆದಾಗಬೇಕು ಅಂದ್ರಂತೆ. ಕನ್ನಡ ಸಿನಿಮಾಗಳು ಚೆನ್ನಾಗಿ ಓಡಬೇಕು, ಕನ್ನಡ ಚಿತ್ರರಂಗಕ್ಕೆ ಒಳ್ಳೆಯಾಗಬೇಕು ಎಂದು ಭಾವುಕರಾಗಿ ಮಾತನಾಡಿದ್ರಂತೆ.&lt;/p&gt;&lt;p&gt;ಜೈಲಿನಲ್ಲಿ&zwnj; ಇದ್ರೂ ಯಾವಾಗ ಏನ್ ಆಗುತ್ತೆ ಅನ್ನೋ ಆತಂಕದ ನಡುವೆಯೂ ದರ್ಶನ್ ಸಿನಿಮಾ&zwnj; ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ಸಿನಿಮಾ ಮಾಡಲ್ಲ, ಚಿತ್ರರಂಗದಿಂದ ದೂರ ಇರ್ತಾರೆ&zwnj;. ರಾಜಕೀಯಕ್ಕೆ ಹೋಗ್ತಾರೆ &zwnj;ಹೀಗೆ ಹತ್ತು ಹಲವು ಅಯಾಮಗಳಲ್ಲಿ ಚರ್ಚೆ ಆಗ್ತಿದೆ. ಅದ್ರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ದರ್ಶನ್ ಮನಸ್ಥಿತಿ ಸಿನಿಮಾ ಬಿಟ್ಟು ಬೇರೇನೂ ಬಯಸ್ತಿಲ್ಲ ಅನ್ನೋ ವಿಚಾರ ರಕ್ಷಿತಾರಿಂದ ರಿವಿಲ್ ಆಗಿದೆ.&lt;/p&gt;&lt;p&gt;ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/actor-darshan-sought-updates-about-yash-movie-toxic-from-his-friend-and-actress-rakshita-in-parappana-agrahara-jail/articleshow-nd4m3l4"/>
        </item>
        <item>
            <title><![CDATA[Viral News: ಬರೋಬ್ಬರಿ 9 ವರ್ಷ ಕಿರಿಯ ಸ್ಟಾರ್ ಕ್ರಿಕೆಟರ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್? ವೈರಲ್‌ ವಿಡಿಯೋ ಅಸಲಿಯತ್ತೇನು?]]></title>
            <link>https://kannada.asianetnews.com/entertainment/the-news-that-a-romance-has-started-between-actress-mrunal-thakur-and-cricketer-yashasvi-jaiswal-is-going-viral/articleshow-5nhn1ds</link>
            <guid isPermaLink="true">https://kannada.asianetnews.com/entertainment/the-news-that-a-romance-has-started-between-actress-mrunal-thakur-and-cricketer-yashasvi-jaiswal-is-going-viral/articleshow-5nhn1ds</guid>
            <pubDate>Tue, 28 Jul 2026 11:40:23 +0530</pubDate>
            <description><![CDATA[&lt;p&gt;&quot;ಒಂದೇ ಕೆಫೆಗೆ ಯಾಕೆ ಹೋದರು? ಇಬ್ಬರೂ ಸೀಕ್ರೆಟ್ ಆಗಿ ಮೀಟ್ ಮಾಡಿದ್ದಾರಾ?&quot; ಎಂದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಈ ಹಿಂದೆ ಮೃಣಾಲ್ ಹೆಸರು ತಮಿಳು ನಟ ಧನುಷ್ ಜೊತೆಯೂ ಕೇಳಿಬಂದಿತ್ತು. ಆದರೆ ಈಗ ಜೈಸ್ವಾಲ್! ಏನಿದು ಹೊಸ ಲವ್ ಸ್ಟೋರಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyknc57jpf27677d9rnmszmj,imgname-yashasvi-jaiswal-mrunal-thakur-1785218864370.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಲಿವುಡ್ ಬ್ಯೂಟಿ &amp;amp; ಕ್ರಿಕೆಟ್ ಕಲಿ: ಮೃಣಾಲ್-ಜೈಸ್ವಾಲ್ ನಡುವೆ ಶುರುವಾಯ್ತಾ 'ಲವ್ವೋ ಲವ್ವು'? ವೈರಲ್ ವಿಡಿಯೋ ಹಿಂದೆ ಅಡಗಿದ ರಹಸ್ಯವೇನು?&lt;/strong&gt;&lt;/p&gt;&lt;p&gt;ಮುಂಬೈ: ಸಿನಿಮಾ ಮತ್ತು ಕ್ರಿಕೆಟ್... ಭಾರತದಲ್ಲಿ ಈ ಎರಡೂ ಕ್ಷೇತ್ರಗಳಿಗೂ ಅವಿನಾಭಾವ ಸಂಬಂಧ. ನಟಿಯರು ಮತ್ತು ಕ್ರಿಕೆಟಿಗರು ಪ್ರೀತಿಯ ಬಲೆಯಲ್ಲಿ ಬೀಳುವುದು ಇಂದು ನಿನ್ನೆಯ ಸುದ್ದಿಯಲ್ಲ. ಶರ್ಮಿಳಾ ಟಾಗೋರ್-ಪಟೌಡಿ ಕಾಲದಿಂದ ಹಿಡಿದು ಇತ್ತೀಚಿನ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿಯವರೆಗೆ ಈ 'ಪಿಚ್' ಸದಾ ರಂಗೇರಿರುತ್ತದೆ. ಈಗ ಇದೇ ಹಾದಿಯಲ್ಲಿ ಮತ್ತೊಂದು ಹೊಸ ಜೋಡಿಯ ಹೆಸರು ಜೋರಾಗಿ ಕೇಳಿಬರುತ್ತಿದೆ. ಅದುವೇ ಬಾಲಿವುಡ್&zwnj;ನ &lsquo;ಸೀತಾ ರಾಮಂ&rsquo; ಖ್ಯಾತಿಯ ಮೃಣಾಲ್ ಠಾಕೂರ್ ಮತ್ತು ಟೀಮ್ ಇಂಡಿಯಾದ ಉದಯೋನ್ಮುಖ ಸ್ಟಾರ್ ಯಶಸ್ವಿ ಜೈಸ್ವಾಲ್! ಈ ಕಥೆ ಹುಟ್ಟಿಕೊಂಡಿದ್ದು ಎಲ್ಲಿ? ಇದೆಂಥಾ ಸ್ಟೋರಿ ನೋಡಿ...&lt;/p&gt;&lt;p&gt;ಬಾಂದ್ರಾ ಕೆಫೆಯಲ್ಲಿ ಏನಾಯ್ತು?&lt;/p&gt;&lt;p&gt;ಮುಂಬೈನ ಪ್ರತಿಷ್ಠಿತ ಬಾಂದ್ರಾ ವೆಸ್ಟ್&zwnj;ನಲ್ಲಿರುವ &lsquo;ಬೂಜೀ ಕೆಫೆ&rsquo; ಈಗ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಈ ಕೆಫೆಯ ಹೊರಗೆ ಸೆರೆಹಿಡಿಯಲಾದ ಒಂದು ಪುಟ್ಟ ವಿಡಿಯೋ ಈಗ ಇಂಟರ್ನೆಟ್&zwnj;ನಲ್ಲಿ ಕಿಚ್ಚು ಹಚ್ಚಿದೆ. ವಿಡಿಯೋದಲ್ಲಿ ಏನಿದೆ ಅಂದುಕೊಂಡಿದ್ದೀರಾ? ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಕೆಫೆಯಿಂದ ಹೊರಬರುತ್ತಿದ್ದರೆ, ಒಳಗಡೆ ಮೃಣಾಲ್ ಠಾಕೂರ್ ಇರುವುದು ಕಂಡುಬಂದಿದೆ. ಅಷ್ಟೇ ಅಲ್ಲ, ಇಬ್ಬರೂ ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿದ್ದುದು ನೆಟ್ಟಿಗರ ಕಣ್ಣು ಕೆಂಪು ಮಾಡಿದೆ. &quot;ಏನೋ ನಡೀತಿದೆ ಗುರು!&quot; ಎಂಬ ಮಾತುಗಳು ಅಂದೇ ಶುರುವಾಗಿಬಿಟ್ಟವು.&lt;/p&gt;&lt;h2&gt;9 ವರ್ಷದ ಅಂತರ; ಆದರೇನು ಬಂತು ಲವ್ವಿಗಿಲ್ಲ ಅಂತರ!&lt;/h2&gt;&lt;p&gt;ಈ ಜೋಡಿಯ ಬಗ್ಗೆ ಚರ್ಚೆ ಶುರುವಾಗುತ್ತಿದ್ದಂತೆ ನೆಟ್ಟಿಗರು ಇಬ್ಬರ ಕುಂಡಲಿ ಕೆದಕಲು ಶುರು ಮಾಡಿದ್ದಾರೆ. ಮೃಣಾಲ್ ಠಾಕೂರ್ (Mrunal Thakur) ಅವರಿಗೆ ಈಗ 33 ವರ್ಷ, ಇತ್ತ ಯಶಸ್ವಿ ಜೈಸ್ವಾಲ್ (Yashasvi Jaiswal) ಇನ್ನು 24ರ ಹರೆಯದ ಹದಿಹರೆಯದ ಕಿಚ್ಚು! ಈ 9 ವರ್ಷದ ವಯಸ್ಸಿನ ಅಂತರವನ್ನು ನೋಡಿ ಅನೇಕರು ಹುಬ್ಬೇರಿಸಿದ್ದಾರೆ. &quot;ಪ್ರೀತಿಗೆ ವಯಸ್ಸಿನ ಹಂಗಿಲ್ಲ&quot; ಎಂದು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು &quot;ಇದು ಕೇವಲ ಕಾಕತಾಳೀಯ ಇರಬಹುದು&quot; ಎಂದು ವಾದಿಸುತ್ತಿದ್ದಾರೆ.&lt;/p&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ 'ಸಿಬಿಐ' ತನಿಖೆ!&lt;/p&gt;&lt;p&gt;ವಿಡಿಯೋದಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಕಾಫಿ ಕುಡಿಯುತ್ತಿರುವುದು ಅಥವಾ ಹರಟೆ ಹೊಡೆಯುತ್ತಿರುವುದು ಎಲ್ಲಿಯೂ ಕಾಣಿಸಿಲ್ಲ. ಜೈಸ್ವಾಲ್ ಗಂಭೀರವಾಗಿ ಹೊರಬರುತ್ತಿದ್ದರೆ, ಮೃಣಾಲ್ ಒಳಗಿದ್ದರು. ಆದರೂ ಬಿಡದ ನೆಟ್ಟಿಗರು, &quot;ಒಂದೇ ಕೆಫೆಗೆ ಯಾಕೆ ಹೋದರು? ಇಬ್ಬರೂ ಸೀಕ್ರೆಟ್ ಆಗಿ ಮೀಟ್ ಮಾಡಿದ್ದಾರಾ?&quot; ಎಂದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಈ ಹಿಂದೆ ಮೃಣಾಲ್ ಹೆಸರು ತಮಿಳು ನಟ ಧನುಷ್ ಜೊತೆಯೂ ಕೇಳಿಬಂದಿತ್ತು. ಆದರೆ ಈಗ ಜೈಸ್ವಾಲ್ ಎಂಟ್ರಿ ಕೊಟ್ಟ ತಕ್ಷಣ ಹಳೆಯ ಸುದ್ದಿಗಳೆಲ್ಲಾ ಮರೆಯಾಗಿವೆ.&lt;/p&gt;&lt;h3&gt;ಯಶಸ್ವಿ-ಮೃಣಾಲ್ ಮೌನವೇಕೆ?&lt;/h3&gt;&lt;p&gt;ಈ ವೈರಲ್ ವಿಡಿಯೋ ಮತ್ತು ಹಬ್ಬುತ್ತಿರುವ ವದಂತಿಗಳ ಬಗ್ಗೆ ಮೃಣಾಲ್ ಆಗಲಿ ಅಥವಾ ಯಶಸ್ವಿ ಆಗಲಿ ತುಟಿಪಿಟಕ್ ಎಂದಿಲ್ಲ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಇಂತಹ ಸುದ್ದಿಗಳು ಹುಟ್ಟಿಕೊಳ್ಳುವುದು ಸಹಜ. ಬಹುಶಃ ಇಬ್ಬರೂ ಕೇವಲ ಸ್ನೇಹಿತರಾಗಿರಬಹುದು ಅಥವಾ ಕೆಲಸದ ನಿಮಿತ್ತ ಅಲ್ಲಿ ಭೇಟಿಯಾಗಿರಬಹುದು. ಆದರೆ, ಫ್ಯಾನ್ಸ್ ಮಾತ್ರ ಈಗಾಗಲೇ ಇವರಿಬ್ಬರಿಗೂ ಒಂದು ಹೆಸರು ಇಟ್ಟು, &quot;ಹೊಸ ಜೋಡಿ&quot; ಎಂದು ಹಣೆಪಟ್ಟಿ ಹಚ್ಚಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಈ ಬಾಲಿವುಡ್ ಸುಂದರಿ ಮತ್ತು ಕ್ರಿಕೆಟ್ ಲೋಕದ 'ಯಶಸ್ವಿ' ಹುಡುಗನ ನಡುವೆ ನಿಜವಾಗಿಯೂ ಏನಾದರೂ ನಡೆಯುತ್ತಿದೆಯೇ? ಅಥವಾ ಇದು ಕೇವಲ ಸಾಮಾಜಿಕ ಜಾಲತಾಣಗಳ 'ಟೀ ಕಪ್'ನಲ್ಲಿನ ಬಿರುಗಾಳಿಯೇ? ಎಂಬುದನ್ನು ಕಾಲವೇ ಉತ್ತರಿಸಬೇಕು. ಅಲ್ಲಿಯವರೆಗೆ ಈ 'ಕಾಫಿ ಡೇಟ್' ಸುದ್ದಿ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಸೃಷ್ಟಿಸುತ್ತಲೇ ಇರುತ್ತದೆ!&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/the-news-that-a-romance-has-started-between-actress-mrunal-thakur-and-cricketer-yashasvi-jaiswal-is-going-viral/articleshow-5nhn1ds"/>
        </item>
        <item>
            <title><![CDATA[ನೀಟ್ ಪ್ರತಿಭಟನೆ ವೇಳೆ ಪೊಲೀಸ್ ವ್ಯಾನ್ ಅಡ್ಡಗಟ್ಟಿ ನಿಲ್ಲಿಸಿದ್ದ 'ಮಾಡೆಲ್‌ ರಿಯಾ'ಗೆ ಎದುರಾಯ್ತು ಸಂಕಷ್ಟ!]]></title>
            <link>https://kannada.asianetnews.com/gallery/india-news/model-riya-ahir-get-cyber-problem-cockroach-janata-party-neet-protest-police-van-mumbai-xgbgag2</link>
            <guid isPermaLink="true">https://kannada.asianetnews.com/gallery/india-news/model-riya-ahir-get-cyber-problem-cockroach-janata-party-neet-protest-police-van-mumbai-xgbgag2</guid>
            <pubDate>Tue, 28 Jul 2026 11:10:07 +0530</pubDate>
            <description><![CDATA[&lt;p&gt;ನೀಟ್&zwnj; ಪರೀಕ್ಷೆ ಅಕ್ರಮ ಖಂಡಿಸಿ ಪೊಲೀಸ್ ವ್ಯಾನ್&zwnj;ಗೆ ಅಡ್ಡ ನಿಂತು ಸುದ್ದಿಯಾಗಿದ್ದ ಮಾಡೆಲ್ ರಿಯಾ ಅಹೀರ್ ಅವರಿಗೆ ಕಿರುಕುಳ ಎದುರಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಮಾಡೆಲ್ ಇದೀಗ ಅದೇ ಪೊಲೀಸ್ ಠಾಣೆ ಮೆಟ್ಟಿಲೇರಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kycmrcxs1jzkmb3p2haxdavb,imgname-riya-ahir-1784983335865.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್&zwnj; ಪರೀಕ್ಷೆ ಅಕ್ರಮ ಖಂಡಿಸಿ ಪೊಲೀಸ್ ವ್ಯಾನ್&zwnj;ಗೆ ಅಡ್ಡ ನಿಂತು ಸುದ್ದಿಯಾಗಿದ್ದ ಮಾಡೆಲ್ ರಿಯಾ ಅಹೀರ್ ಅವರಿಗೆ ಕಿರುಕುಳ ಎದುರಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಮಾಡೆಲ್ ಇದೀಗ ಅದೇ ಪೊಲೀಸ್ ಠಾಣೆ ಮೆಟ್ಟಿಲೇರಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ನೀಟ್&zwnj; (NEET) ಪರೀಕ್ಷೆ ಅಕ್ರಮ ಹಾಗೂ ಪೇಪರ್ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ, ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್&zwnj; ವ್ಯಾನ್&zwnj;ಗೆ ಏಕಾಂಗಿಯಾಗಿ ಅಡ್ಡ ನಿಂತು ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಪ್ರಸಿದ್ಧ ರೂಪದರ್ಶಿ (Model) ರಿಯಾ ಅಹೀರ್ (Riya Ahir) ಅವರಿಗೆ ಈಗ ಆನ್&zwnj;ಲೈನ್&zwnj;ನಲ್ಲಿ ಭಾರಿ ಕಿರುಕುಳ ಎದುರಾಗಿದೆ.&lt;/p&gt;&lt;img&gt;&lt;p&gt;ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸಂಘಟಿತವಾಗಿ ಅಪಪ್ರಚಾರ ನಡೆಸಿ, ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಮುಂಬೈನ ಸೈಬರ್&zwnj; ಪೊಲೀಸ್ ಠಾಣೆ (Cyber Police Station) ಮೆಟ್ಟಿಲೇರಿದ್ದಾರೆ.&lt;/p&gt;&lt;img&gt;&lt;p&gt;ದೂರಿನಲ್ಲಿ ಆಘಾತಕಾರಿ ಅಂಶ ಉಲ್ಲೇಖ:&lt;/p&gt;&lt;p&gt;ಸೈಬರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ರಿಯಾ ಅಹೀರ್ ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 'ಸಾಮಾಜಿಕ ಜಾಲತಾಣಗಳಲ್ಲಿ (Social Media) ನನ್ನ ವಿರುದ್ಧ ಕೆಲ ಕಿಡಿಗೇಡಿಗಳು ಅಸಭ್ಯ ಮತ್ತು ಅತ್ಯಂತ ನಿಕೃಷ್ಟ ಭಾಷೆಯನ್ನು ಬಳಸುತ್ತಿದ್ದಾರೆ. ಅಷ್ಟೇ ಅಲ್ಲದೇ, ನನ್ನ ಮಾನಹಾನಿ ಮಾಡುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನ ಬಳಸಿ ಡೀಪ್&zwnj;ಫೇಕ್ (Deepfake Video) ವಿಡಿಯೋಗಳನ್ನು ಸೃಷ್ಟಿಸಲಾಗಿದೆ. ನನ್ನ ಫೋಟೋಗಳನ್ನು ಅಸಭ್ಯವಾಗಿ ತಿರುಚಿ (Morphed Images) ವೈರಲ್ ಮಾಡಲಾಗುತ್ತಿದ್ದು, ಕ್ರಿಮಿನಲ್ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಮಳೆಯಲ್ಲಿ ಏಕಾಂಗಿಯಾಗಿ ವ್ಯಾನ್ ತಡೆದಿದ್ದ ರಿಯಾ:&lt;/strong&gt;&lt;/p&gt;&lt;p&gt;ದಾದರ್&zwnj;ನ ಶಿವಾಜಿ ಪಾರ್ಕ್&zwnj;ನಲ್ಲಿ (Shivaji Park, Dadar) ನೀಟ್&zwnj; ಪೇಪರ್&zwnj; ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ಬೃಹತ್&zwnj; ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವ್ಯಾನ್&zwnj;ನಲ್ಲಿ ಕರೆದೊಯ್ಯುತ್ತಿದ್ದರು. ಆ ಸಮಯದಲ್ಲಿ ಬೂದು ಬಣ್ಣದ ಹೂಡಿ (Grey Hoodie) ಧರಿಸಿದ್ದ ರಿಯಾ ಅಹೀರ್&zwnj;, ಸುರಿಯುವ ಮಳೆಯಲ್ಲೇ ಏಕಾಂಗಿಯಾಗಿ ಓಡಿಬಂದು ಪೊಲೀಸ್&zwnj; ವ್ಯಾನ್&zwnj;ಗೆ ಅಡ್ಡವಾಗಿ ನಿಂತಿದ್ದರು. ಈ ಧೈರ್ಯದ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು ಮತ್ತು ಅವರ ಫೋಟೋ-ವಿಡಿಯೋಗಳು ವೈರಲ್ (Viral Photo) ಆಗಿದ್ದವು.&lt;/p&gt;&lt;img&gt;&lt;p&gt;&lt;strong&gt;ಸಂಘಟಿತ ಸೈಬರ್ ದಾಳಿ (Organized Campaign):&lt;/strong&gt;&lt;/p&gt;&lt;p&gt;ಆದರೆ, ಈ ಘಟನೆಯ ಬೆನ್ನಲ್ಲೇ ತಮ್ಮ ವಿರುದ್ಧವೇ ಒಂದು ವಿಭಾಗದ ನೆಟ್ಟಿಗರು ಸಂಘಟಿತ ಸೈಬರ್ ದಾಳಿ ನಡೆಸುತ್ತಿದ್ದಾರೆ ಎಂದು ರಿಯಾ ಹೇಳಿದ್ದಾರೆ. ದೂರಿಗೆ ಸಾಕ್ಷಿಯಾಗಿ ಸ್ಕ್ರೀನ್&zwnj;ಶಾಟ್&zwnj;ಗಳು (Screenshots) ಸೇರಿದಂತೆ ಹಲವು ಡಿಜಿಟಲ್ ಪುರಾವೆಗಳನ್ನು (Digital Evidence) ಸೈಬರ್ ಪೊಲೀಸರಿಗೆ ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/india-news/model-riya-ahir-get-cyber-problem-cockroach-janata-party-neet-protest-police-van-mumbai-xgbgag2"/>
        </item>
        <item>
            <title><![CDATA[ಮತ್ತೊಮ್ಮೆ ಲವರ್‌ಬಾಯ್‌ ಆಗಿ ಬೆಳ್ಳಿ ಪರದೆ ಮೇಲೆ Bhagyalkashmi ಆದಿ: ನಾಯಕ, ನಿರ್ದೇಶಕ ಎಲ್ಲರೂ ಇವರೇ]]></title>
            <link>https://kannada.asianetnews.com/gallery/entertainment/bhagyalkashmi-adi-urf-harish-raj-in-love-mocktail-movie-direction-and-actor-suc-em9gvho</link>
            <guid isPermaLink="true">https://kannada.asianetnews.com/gallery/entertainment/bhagyalkashmi-adi-urf-harish-raj-in-love-mocktail-movie-direction-and-actor-suc-em9gvho</guid>
            <pubDate>Mon, 27 Jul 2026 19:55:51 +0530</pubDate>
            <description><![CDATA[&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ನಟ ಹರೀಶ್ ರಾಜ್, 50ರ ಹರೆಯದಲ್ಲಿ 'ಲವ್ ಕಾಕ್ಟೇಲ್' ಎಂಬ ಸಿನಿಮಾದ ಮೂಲಕ ಲವರ್&zwnj; ಬಾಯ್ ಆಗಿ ಮತ್ತೆ ಬೆಳ್ಳಿಪರದೆಗೆ ಮರಳಿದ್ದಾರೆ. ಪ್ರೇಮದಲ್ಲಿ ಸೋತ ನಂತರದ ಜೀವನವನ್ನು ಹಾಸ್ಯಮಯವಾಗಿ ಹೇಳುವ ಈ ಚಿತ್ರವನ್ನು ಅವರೇ ನಿರ್ದೇಶಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhzaw66yry790qepzyyqxr1,imgname-harish-raj-1785162199238.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ನಟ ಹರೀಶ್ ರಾಜ್, 50ರ ಹರೆಯದಲ್ಲಿ 'ಲವ್ ಕಾಕ್ಟೇಲ್' ಎಂಬ ಸಿನಿಮಾದ ಮೂಲಕ ಲವರ್&zwnj; ಬಾಯ್ ಆಗಿ ಮತ್ತೆ ಬೆಳ್ಳಿಪರದೆಗೆ ಮರಳಿದ್ದಾರೆ. ಪ್ರೇಮದಲ್ಲಿ ಸೋತ ನಂತರದ ಜೀವನವನ್ನು ಹಾಸ್ಯಮಯವಾಗಿ ಹೇಳುವ ಈ ಚಿತ್ರವನ್ನು ಅವರೇ ನಿರ್ದೇಶಿಸಿದ್ದಾರೆ.&lt;/p&gt;&lt;img&gt;&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್&zwnj;ನಲ್ಲಿ (Bhagyalkashmi Serial)ನಲ್ಲಿ ಆದಿಯಾಗಿ ಭರ್ಜರಿ ಎಂಟ್ರಿ ಕೊಟ್ಟು, ಬಳಿಕ ಭಾಗ್ಯಳ ಜೀವನದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವರು ನಟ ಹರೀಶ್&zwnj; ರಾಜ್&zwnj;. 50ರ ಹರೆಯದಲ್ಲಿಯೂ ಲವರ್&zwnj; ಬಾಯ್&zwnj; ಎಂದೇ ಗುರುತಿಸಿಕೊಂಡವು ನಟ. ಇದೀಗ ಅದೇ ಕ್ರೇಜ್&zwnj;ನೊಂದಿಗೆ ಮತ್ತೊಮ್ಮೆ ಲವರ್&zwnj; ಬಾಯ್&zwnj; ಆಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;img&gt;&lt;p&gt;ನಿರ್ದೇಶಕರಾಗಿ, ನಟನಾಗಿ 'ಲವ್ ಕಾಕ್ಟೇಲ್' ಚಿತ್ರದಲ್ಲಿ ವಿಭಿನ್ನ ಶೇಡ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ ನಟ ಹರೀಶ್&zwnj; ರಾಜ್&zwnj;. ಮೂರು ದಶಕಗಳ ತಮ್ಮ ಬಣ್ಣದ ಲೋಕದಲ್ಲಿ ಇದೀಗ ಹೊಸ ಪ್ರಯೋಗಕ್ಕೆ ನಟ ಮುಂದಾಗಿದ್ದಾರೆ. ಪ್ರೇಮಕಥೆಗೆ ಮನರಂಜನೆಯ ಸ್ಪರ್ಶ ನೀಡುವ ಪಾತ್ರದಲ್ಲಿ ನಟ ಮಿಂಚಲಿದ್ದಾರೆ.&lt;/p&gt;&lt;img&gt;&lt;p&gt;ಪ್ರೇಮದಲ್ಲಿ ಸೋತ ನಂತರವೂ ಜೀವನವನ್ನು ಹೇಗೆ ಖುಷಿಯಾಗಿ ಎದುರಿಸಬಹುದು ಎಂಬ ಸಂದೇಶವನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ ಲವ್ ಕಾಕ್ಟೇಲ್' ಚಿತ್ರದಲ್ಲಿ. ಈ ಕುರಿತು ಖುದ್ದು ಅವರೇ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;'ಲವ್ ಕಾಕ್ಟೇಲ್' ಚಿತ್ರದ ಕುರಿತು ಮಾತನಾಡಿದ ಹರೀಶ್ ರಾಜ್, ತಮ್ಮ ಸಿನಿ ಬದುಕಿನ ಮಹತ್ವದ ಘಟ್ಟವನ್ನು ಈ ಚಿತ್ರದ ಮೂಲಕ ಆಚರಿಸುತ್ತಿರುವುದಾಗಿ ಹೇಳಿದರು. ಚಿತ್ರರಂಗದಲ್ಲಿ ನನಗೆ 30 ವರ್ಷದ ಪಯಣ. ಈಗ ನನಗೆ 50 ವರ್ಷ. ಈ ಸಂತೋಷವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಈ ಸಿನಿಮಾ ಮಾಡಿದ್ದೇನೆ. ಇದು ನನ್ನ ಮನಸ್ಸಿಗೆ ಹತ್ತಿರವಾದ ಕಥೆ ಎಂದು ಹೇಳಿದರು.&lt;/p&gt;&lt;img&gt;&lt;p&gt;ಈ ಸಿನಿಮಾಕ್ಕೆ ಆರಂಭದಲ್ಲಿ 'ವೆಂಕಟೇಶಾಯ ನಮಃ' ಎಂಬ ಹೆಸರನ್ನು ಇಡಲು ನಿರ್ಧರಿಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯ ಸಲಹೆಯ ಮೇರೆಗೆ ಚಿತ್ರದ ಶೀರ್ಷಿಕೆಯನ್ನು 'ಲವ್ ಕಾಕ್ಟೇಲ್' ಎಂದು ಬದಲಾಯಿಸಲಾಗಿದೆ ಎಂದೂ ವಿವರಿಸಿದರು. ಈಚೆಗೆ ನಿಧನರಾದ ಹಿರಿಯ ನಟ ಉಮೇಶ್ ಕೂಡ ಈ ಸಿನಿಮಾದಲ್ಲಿ ಇದ್ದಾರೆ. ಅವರ ಬಗ್ಗೆ ನೆನಪಿಸಿಕೊಂಡ ನಟ ಹರೀಶ್ ರಾಜ್, &quot;ಅವರು ಚಿತ್ರದಲ್ಲಿ ಅದ್ಭುತ ಪಾತ್ರ ನಿರ್ವಹಿಸಿದ್ದರು. ಆದರೆ ಇಂದು ಅವರು ನಮ್ಮ ಜೊತೆ ಇಲ್ಲ ಎನ್ನುವುದು ನೋವಿನ ಸಂಗತಿ&quot; ಎಂದರು.&lt;/p&gt;&lt;img&gt;&lt;p&gt;ಶ್ರೀ ಲಕ್ಷ್ಮೀ ಜನಾರ್ಧನ ಬ್ಯಾನರ್ ಅಡಿಯಲ್ಲಿ ಪಿ. ಜನಾರ್ಧನ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪ್ರವೀಣ್ ಶ್ರೀನಿವಾಸ ಮೂರ್ತಿ ಸಂಗೀತ ಸಂಯೋಜಿಸಿದ್ದು, ರಾಜಾ ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಹರೀಶ್ ರಾಜ್, ಪ್ರಕೃತಿ ಪ್ರಸಾದ್, ತಬಲಾ ನಾಣಿ, ಅಶೋಕ್, ಉಮಾಶ್ರೀ, ಅಭಿನಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/bhagyalkashmi-adi-urf-harish-raj-in-love-mocktail-movie-direction-and-actor-suc-em9gvho"/>
        </item>
        <item>
            <title><![CDATA[ನಾವು ರಿಯಲ್ ಆಗಿ ಮದುವೆ ಆಗ್ತಿದ್ದೀವಿ: ತೆಲುಗು ವಾಹಿನಿಯಲ್ಲಿ ಘೋಷಿಸಿದ ಕಮಲಿ ಧಾರಾವಾಹಿ ಹೀರೋ, ಹೀರೋಯಿನ್]]></title>
            <link>https://kannada.asianetnews.com/gallery/tv-talk/kamali-serial-actress-amulya-gowda-love-with-niranjan-suh-zab9vp5</link>
            <guid isPermaLink="true">https://kannada.asianetnews.com/gallery/tv-talk/kamali-serial-actress-amulya-gowda-love-with-niranjan-suh-zab9vp5</guid>
            <pubDate>Tue, 28 Jul 2026 10:09:14 +0530</pubDate>
            <description><![CDATA[&lt;p&gt;ಕಮಲಿ ಧಾರಾವಾಹಿಯ ಜನಪ್ರಿಯ ಜೋಡಿ ಅಮೂಲ್ಯ ಗೌಡ ಮತ್ತು ನಿರಂಜನ್&zwnj; ಅವರ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ತೆಲುಗು ವಾಹಿನಿಯ ಕಾರ್ಯಕ್ರಮದಲ್ಲಿ ಮದುವೆಗೆ ಸಂಬಂಧಿಸಿದ ಹೇಳಿಕೆ ಹಾಗೂ &lsquo;Will You Marry Me&rsquo; ದೃಶ್ಯಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykfn9a4qjxe5wznkym1b4x9,imgname-kamali-serial-actress-amulya-gowda-love-with-niranjan-1785212872004.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಮಲಿ ಧಾರಾವಾಹಿಯ ಜನಪ್ರಿಯ ಜೋಡಿ ಅಮೂಲ್ಯ ಗೌಡ ಮತ್ತು ನಿರಂಜನ್&zwnj; ಅವರ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ತೆಲುಗು ವಾಹಿನಿಯ ಕಾರ್ಯಕ್ರಮದಲ್ಲಿ ಮದುವೆಗೆ ಸಂಬಂಧಿಸಿದ ಹೇಳಿಕೆ ಹಾಗೂ &lsquo;Will You Marry Me&rsquo; ದೃಶ್ಯಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ &amp;nbsp;ಕಮಲಿ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ನಟಿ ಅಮೂಲ್ಯ ಗೌಡ ಮತ್ತು ನಟ ನಿರಂಜನ್ ಬಗ್ಗೆ ಬಹಳ ದಿನಗಳಿಂದಲೂ ಒಂದು ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇವರಿಬ್ಬರು ಕೇವಲ ಸ್ನೇಹಿತರಾ? ಅಥವಾ ನಿಜವಾಗಿಯೂ ಪ್ರೀತಿಸುತ್ತಿದ್ದಾರಾ? ಎಂಬ ಕುತೂಹಲಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.&lt;/p&gt;&lt;p&gt;ಕಮಲಿ ಧಾರಾವಾಹಿ 2018ರಲ್ಲಿ ಆರಂಭವಾಗಿ 2022ರಲ್ಲಿ ಮುಕ್ತಾಯವಾಗಿತ್ತು. ಸಾವಿರಕ್ಕೂ ಹೆಚ್ಚು ಎಪಿಸೋಡ್&zwnj;ಗಳನ್ನು ಪೂರೈಸಿದ್ದ ಈ ಧಾರಾವಾಹಿಯಲ್ಲಿ ಅಮೂಲ್ಯ ಗೌಡ ಮತ್ತು ನಿರಂಜನ್ ಜೋಡಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿತ್ತು. ಧಾರಾವಾಹಿ ಮುಗಿದ ಬಳಿಕವೂ ಇವರಿಬ್ಬರ ನಡುವಿನ ಸ್ನೇಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಲೇ ಇತ್ತು.&lt;/p&gt;&lt;img&gt;&lt;p&gt;ಹಿಂದೆ ಸಂದರ್ಶನವೊಂದರಲ್ಲಿ ಅಮೂಲ್ಯ ಗೌಡ ಅವರಿಗೆ ನಿರಂಜನ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು, ನಾನು ಮತ್ತು ನಿರಂಜನ್ ಲವ್ ಮಾಡ್ತಿದ್ದೀವಿ ಅಂತ ಕಮಲಿ ಧಾರಾವಾಹಿ ಸಮಯದಿಂದಲೂ ಮಾತಿದೆ. ನನ್ನ ಕುಟುಂಬಕ್ಕೆ ನಿರಂಜನ್ ಗೊತ್ತು, ಅವರ ಕುಟುಂಬಕ್ಕೂ ನನ್ನ ಪರಿಚಯ ಇದೆ. ನನ್ನ ಪ್ರಪಂಚದಲ್ಲಿ ನಿರಂಜನ್ ಕೂಡ ಇದ್ದಾರೆ ಎಂದು ಹೇಳಿದ್ದರು.&amp;nbsp;&lt;/p&gt;&lt;p&gt;ಇನ್ನೂ ಕುತೂಹಲಕಾರಿ ವಿಚಾರವೆಂದರೆ, ನಾನು ನಿರಂಜನ್ ಅವರನ್ನು ಪ್ರೀತಿಸುತ್ತಿದ್ದೇನೋ, ಇಲ್ಲವೋ ಎಂದು ಹೇಳಲು ಇಷ್ಟಪಡುವುದಿಲ್ಲ. ಆದರೆ ನಾನು ಅವರನ್ನು ಲವ್ ಮಾಡ್ತಿಲ್ವಾ ಎಂದು ಕೇಳಿದರೆ &lsquo;ನೋ&rsquo; ಅಂತ ಕೂಡ ಹೇಳೋದಿಲ್ಲ&rdquo; ಎಂದು ಅಮೂಲ್ಯ ಹೇಳಿದ್ದರು. ಈ ಹೇಳಿಕೆ ಆಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.&lt;/p&gt;&lt;img&gt;&lt;p&gt;ಅಮೂಲ್ಯ ಅವರು ಮತ್ತೊಂದು ಮಾತನ್ನೂ ಹೇಳಿದ್ದರು. ನಾನು ಮತ್ತು ನಿರಂಜನ್ ಸ್ನೇಹಿತರು. ಅವರು ತುಂಬಾ ಒಳ್ಳೆಯ ಹುಡುಗ. ನಾವಿಬ್ಬರೂ ನಾಳೆ ಪ್ರೀತಿಸಿ ಮದುವೆಯಾಗಲೂಬಹುದು. ಸೋಶಿಯಲ್ ಮೀಡಿಯಾ ತುಂಬಾ ಸ್ಟ್ರಾಂಗ್ ಆಗಿದೆ. ಇಂದು ನಾವು ಪ್ರೀತಿಸುತ್ತಿಲ್ಲ ಎಂದು ಹೇಳಿ, ನಾಳೆ ಪ್ರೀತಿಸಿ ಮದುವೆಯಾದರೆ, ಹಿಂದಿನ ಹೇಳಿಕೆಗಳನ್ನೇ ಇಟ್ಟುಕೊಂಡು ಜನ ಮಾತನಾಡುತ್ತಾರೆ. ಅದಕ್ಕಾಗಿಯೇ ನಾನು ಲವ್ ಮಾಡ್ತಿಲ್ಲ ಅಂತಲೂ ಹೇಳೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಅಮೂಲ್ಯ ಅವರ ಈ ಮಾತುಗಳು ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದವು.&lt;/p&gt;&lt;p&gt;&lt;strong&gt;ಹೈದರಾಬಾದ್&zwnj;ನಲ್ಲಿ ನಿರಂಜನ್ ತೋರಿಸಿದ ಕಾಳಜಿ ವೈರಲ್&lt;/strong&gt;&lt;/p&gt;&lt;p&gt;ಅಮೂಲ್ಯ ಮತ್ತು ನಿರಂಜನ್ ಇಬ್ಬರೂ ಬೇರೆ ಬೇರೆ ತೆಲುಗು ಧಾರಾವಾಹಿಗಳಲ್ಲಿಯೂ ನಟಿಸುತ್ತಿದ್ದಾರೆ. ಹೈದರಾಬಾದ್&zwnj;ನಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೂಲ್ಯ ಅವರಿಗೆ ಗಾಯವಾಗಿದೆ ಎಂದು ನಿರಂಜನ್&zwnj;ಗೆ ಫ್ರಾಂಕ್ ಕಾಲ್ ಮಾಡಿ ಕರೆಸಲಾಗಿತ್ತು.&lt;/p&gt;&lt;p&gt;ಆಗ ಅಮೂಲ್ಯ ಅವರ ಬಗ್ಗೆ ನಿರಂಜನ್ ತೋರಿಸಿದ ಕಾಳಜಿ ಮತ್ತು ಆತಂಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಅನೇಕ ಅಭಿಮಾನಿಗಳು, &ldquo;ಇವರಿಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧವಿದೆ&rdquo; ಎಂದು ಅಭಿಪ್ರಾಯಪಟ್ಟಿದ್ದರು.&lt;/p&gt;&lt;img&gt;&lt;p&gt;ಇದೀಗ ಮತ್ತೊಂದು ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿವೆ. ತೆಲುಗು ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಅಮೂಲ್ಯ ಮತ್ತು ನಿರಂಜನ್ ಅವರ ಮದುವೆಯ ವಿಚಾರ ಚರ್ಚೆಗೆ ಬಂದಿದ್ದು, ನಾವು ರಿಯಲ್ ಆಗಿ ಮದುವೆ ಆಗ್ತಿದ್ದೀವಿ ಎಂಬ ರೀತಿಯ ಹೇಳಿಕೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ ಎನ್ನಲಾಗಿದೆ.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಮದುವೆ ಸಂಭ್ರಮದ ವಾತಾವರಣ, &amp;nbsp;ಕಾಲಿಗೆ ಗಜ್ಜೆ ತೊಡಿಸುವ ಕ್ಷಣ ಮತ್ತು &lsquo;Will U Marry Me&rsquo; ಎಂಬ ಬರಹದ ಹಿನ್ನೆಲೆ ಕಾಣಿಸಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಇದರಿಂದಾಗಿ ಅಮೂಲ್ಯ-ನಿರಂಜನ್ ನಿಜ ಜೀವನದಲ್ಲೂ ಮದುವೆಯಾಗಲಿದ್ದಾರಾ ಎಂಬ ಚರ್ಚೆ ಮತ್ತಷ್ಟು ಜೋರಾಗಿದೆ. ಆದರೆ, ಈ ದೃಶ್ಯಗಳು ಟಿವಿ ಶೋನ ಭಾಗವಾಗಿದೆಯೇ ಅಥವಾ ನಿಜ ಜೀವನದ ಮದುವೆ ಘೋಷಣೆಯೇ ಎಂಬುದು ಸ್ಪಷ್ಟವಾಗಬೇಕಿದೆ. ಹೀಗಾಗಿ ಅಭಿಮಾನಿಗಳು ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಿರುತೆರೆಯಲ್ಲಿ ಜೋಡಿಯಾಗಿ ಮೋಡಿ ಮಾಡಿದ್ದ ಅಮೂಲ್ಯ ಗೌಡ ಮತ್ತು ನಿರಂಜನ್, ನಿಜ ಜೀವನದಲ್ಲೂ ಒಂದಾಗಬೇಕು ಎಂಬುದು ಇವರ ಅಭಿಮಾನಿಗಳ ಬಹುದಿನಗಳ ಆಸೆ. ಈ ಹಿಂದೆ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ನೇರವಾಗಿ ಯಾವುದೇ ಸ್ಪಷ್ಟ ಘೋಷಣೆ ಮಾಡಿರಲಿಲ್ಲ.&lt;/p&gt;&lt;p&gt;ಆದರೆ ಇದೀಗ ತೆಲುಗು ಕಾರ್ಯಕ್ರಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಕೇಳಿಬಂದ ಮಾತುಗಳು ಮತ್ತು ವೈರಲ್ ಆಗಿರುವ ದೃಶ್ಯಗಳು ಹೊಸ ಚರ್ಚೆಗೆ ಕಾರಣವಾಗಿವೆ. &lsquo;ಕಮಲಿ&rsquo; ಧಾರಾವಾಹಿಯ ಈ ಜನಪ್ರಿಯ ಜೋಡಿ ನಿಜ ಜೀವನದಲ್ಲೂ ಮದುವೆಯಾಗಲಿದೆಯೇ? ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;p&gt;ಒಟ್ಟಿನಲ್ಲಿ, &lsquo;ಕಮಲಿ&rsquo; ಧಾರಾವಾಹಿಯ ಅಮೂಲ್ಯ ಗೌಡ-ನಿರಂಜನ್ ಜೋಡಿಯ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ಅಭಿಮಾನಿಗಳ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/kamali-serial-actress-amulya-gowda-love-with-niranjan-suh-zab9vp5"/>
        </item>
        <item>
            <title><![CDATA[ರೂರಲ್ ಅಲ್ಲ, ಇದು ಐಪಿಎಸ್ ಮಲ್ಲಿಯ ಖಡಕ್ ದರ್ಬಾರ್; ಮಾಜಿ ಗಂಡ ಜೈದೇವ್‌ಗೆ ಲಾಠಿ ಏಟು]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-update-ips-malli-khadak-darbar-jaidev-was-lathi-charged-by-his-wife-mrq-cx3nugo</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-update-ips-malli-khadak-darbar-jaidev-was-lathi-charged-by-his-wife-mrq-cx3nugo</guid>
            <pubDate>Tue, 28 Jul 2026 07:52:41 +0530</pubDate>
            <description><![CDATA[ಅಮೃತಧಾರೆ ಸೀರಿಯಲ್&zwnj;ನಲ್ಲಿ ಐಪಿಎಸ್ ಅಧಿಕಾರಿಯಾಗಿರುವ ಮಲ್ಲಿ, ಕುಡಿದು ಗಲಾಟೆ ಮಾಡುತ್ತಿದ್ದ ಮಾಜಿ ಗಂಡ ಜೈದೇವ್&zwnj;ಗೆ ಲಾಠಿ ರುಚಿ ತೋರಿಸಿದ್ದಾಳೆ. ಮತ್ತೊಂದೆಡೆ, ಗೌತಮ್ ತನ್ನ ಪತ್ನಿ ಭೂಮಿಕಾಳ ಆಸೆಗಳನ್ನು ಈಡೇರಿಸುತ್ತಿದ್ದರೆ, ಜೀವ ದಿಯಾಳನ್ನು ಹುಡುಕುತ್ತಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyk81ey1ds8pwdyge199ayjh,imgname-amruthadhaare--2--1785204882369.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಸೀರಿಯಲ್&zwnj;ನಲ್ಲಿ ಐಪಿಎಸ್ ಅಧಿಕಾರಿಯಾಗಿರುವ ಮಲ್ಲಿ, ಕುಡಿದು ಗಲಾಟೆ ಮಾಡುತ್ತಿದ್ದ ಮಾಜಿ ಗಂಡ ಜೈದೇವ್&zwnj;ಗೆ ಲಾಠಿ ರುಚಿ ತೋರಿಸಿದ್ದಾಳೆ. ಮತ್ತೊಂದೆಡೆ, ಗೌತಮ್ ತನ್ನ ಪತ್ನಿ ಭೂಮಿಕಾಳ ಆಸೆಗಳನ್ನು ಈಡೇರಿಸುತ್ತಿದ್ದರೆ, ಜೀವ ದಿಯಾಳನ್ನು ಹುಡುಕುತ್ತಿದ್ದಾನೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್&zwnj;ನ ಐಪಿಎಸ್ ಮಲ್ಲಿ, ಕುಡಿದು ಕಿರಿಕ್ ಮಾಡುತ್ತಿದ್ದ ಮಾಜಿ ಗಂಡ, ಕೆಡಿ ಜೈದೇವ್&zwnj;ಗೆ ಬಿಸಿ ಬಿಸಿ ಕಜ್ಜಾಯ ನೀಡಿದ್ದಾಳೆ. ಸದ್ಯ ಪೊಲೀಸ್ ಸ್ಟೇಶನ್ ಡ್ಯೂಟಿಯಲ್ಲಿರುವ ಮಲ್ಲಿ ತಾನೆಷ್ಟು ಖಡಕ್ ಎಂಬುದನ್ನು ತೋರಿಸುತ್ತಿದ್ದಾಳೆ. ಇಂದು ಬಿಡುಗಡೆಯಾಗಿರುವ ಪ್ರೋಮೋ ನೋಡಿ ಮಲ್ಲಿ ಫ್ಯಾನ್ಸ್ ಖುಷಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಪ್ರತಿ ಬಾರಿಯೂ ರೂರಲ್ ಖೋಟಾ ಮಲ್ಲಿ ಎಂದು ಅಣುಕಿಸುತ್ತಿದ್ದ ಜೈದೇವ್, ಮೊದಲ ಬಾರಿಗೆ ಮಾಜಿ ಪತ್ನಿಯ ಹೊಸ್ ಲುಕ್&zwnj;ಗೆ ಥಂಡಾ ಹೊಡೆದಿದ್ದಾನೆ. ಮಧ್ಯರಾತ್ರಿ ಕುಡಿದು ಕಾರ್ ಚಲಾಯಿಸುತ್ತಿದ್ದ ಜೈದೇವ್&zwnj;ನನ್ನು ಹಿಡಿಯಲಾಗಿತ್ತು. ಬಾಲ ಇಲ್ಲದ ಮಂಗನಂತಿರೋ ಜೈದೇವ್, ಪೊಲೀಸ್ ಜೀಪ್ ಮೇಲೆಯೇ ಹತ್ತಿ ಕಿರಿಕ್ ಮಾಡಿದ್ದಾನೆ.&lt;/p&gt;&lt;img&gt;&lt;p&gt;ಪೊಲೀಸ್ ಜೀಪ್ ಮೇಲೆಯೇ ಕುಳಿತು ನ್ಯಾಯ ಬೇಕೆಂದು ಕೂಗುತ್ತಿದ್ದ ಜೈದೇವ್&zwnj;ಗೆ ಮಲ್ಲಿ ಲಾಠಿ ಏಟು ನೀಡಿದ್ದಾಳೆ. ನಂತರ ಆತನನ್ನು ಸ್ಟೇಶನ್&zwnj;ಗೆ ಶಿಫ್ಟ್ ಮಾಡಲಾಗಿದೆ. ಇಷ್ಟಾದ್ರೂ ಜೈದೇವ್ ಸೊಕ್ಕು ಮಾತ್ರ ಕಡಿಮೆಯಾಗಿಲ್ಲ. ನಿನ್ನನ್ನು ನೋಡಿಕೊಳ್ಳುವೆ ಎಂಬ ಸನ್ನೆ ಮಾಡಿ ಜೈದೇವ್&zwnj; ಅಲ್ಲಿಂದ ತೆರಳಿದ್ದಾನೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಮಡದಿ ಭೂಮಿಕಾಳ ಆಸೆಯನ್ನು ಈಡೇರಿಸಲು ಗೌತಮ್ ಮುಂದಾಗಿದ್ದಾನೆ. ಪತ್ನಿ ಭೂಮಿಕಾ ಜೊತೆ ಮಾರುಕಟ್ಟೆಗೆ ಬಂದಿರುವ ಗೌತಮ್, ಚೌಕಾಸಿ ಮಾಡಿ ತರಕಾರಿ ಖರೀದಿಸುತ್ತಿದ್ದಾನೆ. ಈ ಮುಂಚೆಗ ಹೇಗೆ ಚೌಕಾಸಿ ಮಾಡಬೇಕು ಎಂಬುದನ್ನು ಗೌತಮ್&zwnj;ಗೆ ಭೂಮಿಕಾ ಹೇಳಿಕೊಟ್ಟಿದ್ದಾಳೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ಮೈಯೆಲ್ಲಾ ವಿಷ ತುಂಬಿಕೊಂಡಿರುವ ಶಕುಂತಲಾ ಮನೆಯಲ್ಲಿ ನಡೆಯುತ್ತಿರೋ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ. ಮತ್ತೊಂದೆಡೆ ಜೈದೇವ್ ಬೆನ್ನಹಿಂದೆಯೇ ಬಿದ್ದಿರೋ ಜೀವ, ದಿಯಾ ಎಲ್ಲಿ ಹೋದಳು ಎಂದು ಪತ್ತೆ ಮಾಡುತ್ತಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Amruthadhaare: ಪೊಲೀಸ್​ ಮಲ್ಲಿಯ ಭರ್ಜರಿ ಎಂಟ್ರಿ- ಜೈದೇವ್​, ಶಕುಂತಲಾಗೆ ಮುಹೂರ್ತ ಫಿಕ್ಸ್​&lt;/strong&gt;&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-update-ips-malli-khadak-darbar-jaidev-was-lathi-charged-by-his-wife-mrq-cx3nugo"/>
        </item>
        <item>
            <title><![CDATA[ವಿಜಯ್ ದೇವರಕೊಂಡ ಕೆರಿಯರ್ ಬದಲಿಸಬಹುದಾಗಿದ್ದ ಎರಡು ಸಿನಿಮಾಗಳು ಯಾಕೆ ನಿಂತವು? ಅಸಲಿ ಕಾರಣ ಇಲ್ಲಿದೆ]]></title>
            <link>https://kannada.asianetnews.com/entertainment/vijay-devarakonda-shelved-movies-hero-and-jgm-explained-gvd/articleshow-fgsie76</link>
            <guid isPermaLink="true">https://kannada.asianetnews.com/entertainment/vijay-devarakonda-shelved-movies-hero-and-jgm-explained-gvd/articleshow-fgsie76</guid>
            <pubDate>Mon, 27 Jul 2026 23:36:44 +0530</pubDate>
            <description><![CDATA[&lt;p&gt;ವಿಜಯ್ ದೇವರಕೊಂಡ ಕೆರಿಯರ್&zwnj;ನಲ್ಲಿ ಸೂಪರ್&zwnj; ಹಿಟ್&zwnj; ಸಿನಿಮಾಗಳ ಜೊತೆಗೆ, ದೊಡ್ಡ ಮಟ್ಟದಲ್ಲಿ ಶುರುವಾಗಿ ಅರ್ಧಕ್ಕೆ ನಿಂತುಹೋದ ಚಿತ್ರಗಳೂ ಇವೆ. ಆ ಎರಡು ಸಿನಿಮಾಗಳು ಯಾವುವು? ಅವು ನಿಲ್ಲಲು ಕಾರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyjajc05rk4h507ewdypdqg8,imgname-ch-1785173979141.png" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯ್ ದೇವರಕೊಂಡ ಕೆರಿಯರ್&zwnj;ನಲ್ಲಿ ಸೂಪರ್&zwnj; ಹಿಟ್&zwnj; ಸಿನಿಮಾಗಳ ಜೊತೆಗೆ, ದೊಡ್ಡ ಮಟ್ಟದಲ್ಲಿ ಶುರುವಾಗಿ ಅರ್ಧಕ್ಕೆ ನಿಂತುಹೋದ ಚಿತ್ರಗಳೂ ಇವೆ. ಆ ಎರಡು ಸಿನಿಮಾಗಳು ಯಾವುವು? ಅವು ನಿಲ್ಲಲು ಕಾರಣವೇನು? ಒಂದು ವೇಳೆ ಆ ಚಿತ್ರಗಳು ತೆರೆಕಂಡಿದ್ದರೆ ವಿಜಯ್ ಭವಿಷ್ಯ ಹೇಗಿರುತ್ತಿತ್ತು? ಟಾಲಿವುಡ್&zwnj;ನ ರೌಡಿ ಹೀರೋ ವಿಜಯ್ ದೇವರಕೊಂಡ, ಒಂದು ಭರ್ಜರಿ ಹಿಟ್&zwnj;ಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ. 'ಅರ್ಜುನ್ ರೆಡ್ಡಿ', 'ಗೀತ ಗೋವಿಂದಂ' ನಂತರ ಆ ಮಟ್ಟದ ಯಶಸ್ಸು ಅವರಿಗೆ ಸಿಕ್ಕಿಲ್ಲ.&lt;/p&gt;&lt;p&gt;ಆದರೆ ಅವರ ಇಮೇಜ್ ಮಾತ್ರ ಕಡಿಮೆಯಾಗಿಲ್ಲ. ಅವರ ಕೆರಿಯರ್&zwnj;ನಲ್ಲಿ ನಿಂತುಹೋದ ಎರಡು ದೊಡ್ಡ ಸಿನಿಮಾಗಳೇ 'ಹೀರೋ' ಮತ್ತು 'ಜನ ಗಣ ಮನ' (JGM). 2019ರಲ್ಲಿ 'ಡಿಯರ್ ಕಾಮ್ರೇಡ್' ಬಿಡುಗಡೆಯಾದ ನಂತರ, ವಿಜಯ್ ದೇವರಕೊಂಡ ಮತ್ತು ಮಾಳವಿಕಾ ಮೋಹನನ್ ಜೋಡಿಯಾಗಿ 'ಹೀರೋ' ಸಿನಿಮಾ ಘೋಷಣೆಯಾಯಿತು. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ, ಹೊಸ ನಿರ್ದೇಶಕ ಆನಂದ್ ಅಣ್ಣಾಮಲೈ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದರು.&lt;/p&gt;&lt;p&gt;ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಚಿತ್ರಕ್ಕೆ ಚಾಲನೆ ನೀಡಿದ್ದರು. ಬೈಕ್ ರೇಸಿಂಗ್ ಕಥಾಹಂದರ ಹೊಂದಿದ್ದ ಈ ಸ್ಪೋರ್ಟ್ಸ್ ಡ್ರಾಮಾದಲ್ಲಿ ಶಾಲಿನಿ ಪಾಂಡೆ ಎರಡನೇ ನಾಯಕಿಯಾಗಿದ್ದರು. ಸುಮಾರು 50 ಕೋಟಿ ಬಜೆಟ್&zwnj;ನಲ್ಲಿ ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ವಿಜಯ್ ದೇವರಕೊಂಡ ಮತ್ತು ಮಾಳವಿಕಾ ಮೋಹನನ್ ನಟನೆಯ 'ಹೀರೋ' ಸಿನಿಮಾದ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿದಿತ್ತು. ಆದರೆ, 50 ಕೋಟಿ ಬಜೆಟ್&zwnj;ನ ಈ ಸಿನಿಮಾದ ಮೊದಲ ಶೆಡ್ಯೂಲ್&zwnj;ಗೇ ಸುಮಾರು 6 ಕೋಟಿ ರೂಪಾಯಿ ಖರ್ಚಾಗಿತ್ತು.&lt;/p&gt;&lt;p&gt;ಬಂದ ಔಟ್&zwnj;ಪುಟ್ ಬಗ್ಗೆ ನಟ ವಿಜಯ್ ದೇವರಕೊಂಡ ಹಾಗೂ ನಿರ್ಮಾಪಕರಿಬ್ಬರಿಗೂ ಸಮಾಧಾನವಿರಲಿಲ್ಲ. ನಂತರ ಸ್ಕ್ರಿಪ್ಟ್&zwnj;ನಲ್ಲಿ ಬದಲಾವಣೆ ಮಾಡಿದರೂ, ಆ ವರ್ಷನ್ ಕೂಡ ವಿಜಯ್&zwnj;ಗೆ ಇಷ್ಟವಾಗಲಿಲ್ಲ. ನಿರ್ದೇಶಕರನ್ನು ಬದಲಿಸಿ ಸಿನಿಮಾ ಮುಂದುವರಿಸಲು ನಿರ್ಮಾಪಕರು ಯೋಚಿಸಿದರೂ, ಆ ಪ್ರಯತ್ನ ಫಲಿಸಲಿಲ್ಲ. ಹೀಗಾಗಿ, ಮೊದಲ ಶೆಡ್ಯೂಲ್&zwnj;ನಲ್ಲೇ ಈ ಸಿನಿಮಾ ಸಂಪೂರ್ಣವಾಗಿ ನಿಂತುಹೋಯಿತು. ಪೂರಿ ಜಗನ್ನಾಥ್ ನಿರ್ದೇಶನದಲ್ಲಿ, ವಿಜಯ್ ದೇವರಕೊಂಡ ನಾಯಕನಾಗಿ 'ಲೈಗರ್' ಸಿನಿಮಾ ಭಾರೀ ನಿರೀಕ್ಷೆಯೊಂದಿಗೆ ತೆರೆಕಂಡಿತ್ತು. ಆದರೆ ಈ ಸಿನಿಮಾ ಹೀನಾಯವಾಗಿ ಸೋತಿತು.&lt;/p&gt;&lt;p&gt;'ಲೈಗರ್' ತಯಾರಿಕೆಯ ಸಮಯದಲ್ಲಿಯೇ ಪೂರಿ ಜಗನ್ನಾಥ್ 'ಜನ ಗಣ ಮನ' (JGM) ಎಂಬ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಘೋಷಿಸಿದ್ದರು. ಈ ಹಿಂದೆ ಇದೇ ಸಿನಿಮಾವನ್ನು ಮಹೇಶ್ ಬಾಬು ಜೊತೆ ಮಾಡಲು ಪೂರಿ ಪ್ರಯತ್ನಿಸಿದ್ದರು. ಪೂರಿಯವರ ಡ್ರೀಮ್ ಪ್ರಾಜೆಕ್ಟ್ ಎನ್ನಲಾದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಮುಂಬೈನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮೂಲಕ, ಆರ್ಮರ್ಡ್ ಆರ್ಮಿ ಲುಕ್&zwnj;ನಲ್ಲಿ ವಿಜಯ್ ದೇವರಕೊಂಡರನ್ನು ಪರಿಚಯಿಸಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಈ ಚಿತ್ರವನ್ನು ಅದ್ದೂರಿಯಾಗಿ ಪ್ರಾರಂಭಿಸಿದ್ದರು. ದೇಶಭಕ್ತಿಯ ಸೈನಿಕ ಕಾರ್ಯಾಚರಣೆಯ ಕಥೆಯುಳ್ಳ ಈ ಚಿತ್ರವನ್ನು 100 ಕೋಟಿಗೂ ಅಧಿಕ ಬಜೆಟ್&zwnj;ನಲ್ಲಿ ನಿರ್ಮಿಸಲಾಗುತ್ತಿದೆ ಎಂಬ ಸುದ್ದಿ ಇತ್ತು.&lt;/p&gt;&lt;h2&gt;&lt;strong&gt;ಕೆರಿಯರ್ ಬೇರೆಯೇ ಇರುತ್ತಿತ್ತು&lt;/strong&gt;&lt;/h2&gt;&lt;p&gt;ಆದರೆ, ವಿಜಯ್-ಪೂರಿ ಕಾಂಬಿನೇಷನ್&zwnj;ನ 'ಲೈಗರ್' (2022) ಬಾಕ್ಸ್ ಆಫೀಸ್&zwnj;ನಲ್ಲಿ ಹೀನಾಯವಾಗಿ ಸೋತಿತು. 'ಲೈಗರ್' ಸೋಲಿನ ಪರಿಣಾಮ 'ಜನ ಗಣ ಮನ' ಚಿತ್ರದ ಬಜೆಟ್ ಮತ್ತು ಮಾರುಕಟ್ಟೆ ಲೆಕ್ಕಾಚಾರಗಳನ್ನು ಬದಲಾಯಿಸಿತು. ಅಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ನಿರ್ಮಾಪಕರು ಮತ್ತು ವಿಜಯ್, ಪರಸ್ಪರ ಒಪ್ಪಿಗೆಯೊಂದಿಗೆ ಈ ಪ್ರಾಜೆಕ್ಟ್ ಅನ್ನು ಅಧಿಕೃತವಾಗಿ ನಿಲ್ಲಿಸಲು ನಿರ್ಧರಿಸಿದರು. 'ಹೀರೋ' ಅಥವಾ 'ಜನ ಗಣ ಮನ' ಹಿಟ್ ಆಗಿದ್ದರೆ ವಿಜಯ್ ಕೆರಿಯರ್ ಬೇರೆಯೇ ಇರುತ್ತಿತ್ತು ಎನ್ನುವುದು ಅಭಿಮಾನಿಗಳ ಮಾತು. ಸದ್ಯ ವಿಜಯ್ 'ರಣಬಲಿ' ಎಂಬ ಹೊಸ ಕಾನ್ಸೆಪ್ಟ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/vijay-devarakonda-shelved-movies-hero-and-jgm-explained-gvd/articleshow-fgsie76"/>
        </item>
        <item>
            <title><![CDATA[ಟಾಲಿವುಡ್‌ನಲ್ಲಿ ಗಾಯದ ಪರ್ವ.. ಫ್ಯಾನ್ಸ್‌ಗೆ ಶಾಕ್! ಜೂ.ಎನ್‌ಟಿಆರ್‌ಗೆ ಗಾಯ, 8 ವಾರ ಬೆಡ್ ರೆಸ್ಟ್: ಆಗಿದ್ದೇನು?]]></title>
            <link>https://kannada.asianetnews.com/entertainment/jr-ntr-shoulder-injury-actor-advised-8-weeks-bed-rest-gvd/articleshow-q8vrzca</link>
            <guid isPermaLink="true">https://kannada.asianetnews.com/entertainment/jr-ntr-shoulder-injury-actor-advised-8-weeks-bed-rest-gvd/articleshow-q8vrzca</guid>
            <pubDate>Mon, 27 Jul 2026 22:37:59 +0530</pubDate>
            <description><![CDATA[&lt;p&gt;ನಟ ಜೂ.ಎನ್&zwnj;ಟಿಆರ್&zwnj;ಗೆ ಗಾಯಗಳಾಗಿವೆ. ಅವರ ಭುಜಕ್ಕೆ ಗಾಯವಾಗಿದೆ ಎಂದು ಅವರ ತಂಡ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಗಳ ನಂತರ ಎಂಟು ವಾರಗಳ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyj6kgv7vhd069b25n3dejzt,imgname-vhv-1785169822567.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ಜೂ.ಎನ್&zwnj;ಟಿಆರ್&zwnj;ಗೆ ಗಾಯಗಳಾಗಿವೆ. ಅವರ ಭುಜಕ್ಕೆ ಗಾಯವಾಗಿದೆ ಎಂದು ಅವರ ತಂಡ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಗಳ ನಂತರ ಎಂಟು ವಾರಗಳ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಟಾಲಿವುಡ್&zwnj;ನಲ್ಲಿ ಸದ್ಯ ಗಾಯದ ಪರ್ವ ನಡೆಯುತ್ತಿದೆ. ಮೊನ್ನೆ ಬಾಲಯ್ಯ ಗಾಯಗೊಂಡಿದ್ದರು.&lt;/p&gt;&lt;p&gt;ಇತ್ತ ರಾಮ್ ಚರಣ್ ಕೂಡ ಆಸ್ಪತ್ರೆಯಲ್ಲಿದ್ದು, ಅವರ ಮಣಿಕಟ್ಟಿಗೆ ಆಪರೇಷನ್ ಆಗಿದೆ. ಈಗ ಜೂ.ಎನ್&zwnj;ಟಿಆರ್&zwnj; ಕೂಡ ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಅವರಿಗೆ ಗಾಯವಾಗಿದೆ ಎಂದು ಅವರ ತಂಡ ಅಧಿಕೃತವಾಗಿ ತಿಳಿಸಿದೆ. ಅವರ ಭುಜಕ್ಕೆ ಗಾಯವಾಗಿದೆ ಎಂದು ಮಾಹಿತಿ ನೀಡಿದ್ದು, ಈ ಸುದ್ದಿ ತಿಳಿಸಲು ವಿಷಾದವಿದೆ ಎಂದಿದ್ದಾರೆ. ಸೋಮವಾರ ಸಂಜೆ ಜೂ.ಎನ್&zwnj;ಟಿಆರ್&zwnj; ಅವರ ಭುಜಕ್ಕೆ ದುರದೃಷ್ಟವಶಾತ್ ಗಾಯವಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.&lt;/p&gt;&lt;p&gt;ಸಂಪೂರ್ಣ ವೈದ್ಯಕೀಯ ಪರೀಕ್ಷೆಗಳ ನಂತರ, ಡಾ. ಜೆ. ಮಧುಸೂದನ್ ರಾವ್ ಮತ್ತು ಡಾ. ಆರ್. ಎ. ಪೂರ್ಣಚಂದ್ರ ತೇಜಸ್ವಿ ನೇತೃತ್ವದ ವೈದ್ಯರ ತಂಡವು, ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಆರರಿಂದ ಎಂಟು ವಾರಗಳ ಕಾಲ ಪೂರ್ತಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ತಾರಕ್ ಅವರ ಆರೋಗ್ಯ ಮತ್ತು ಚೇತರಿಕೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ನಾವು ಕಾಲಕಾಲಕ್ಕೆ ನೀಡುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ತಂಡ ತಿಳಿಸಿದೆ.&lt;/p&gt;&lt;h2&gt;&lt;strong&gt;ಭುಜಕ್ಕೆ ಗಾಯ?&lt;/strong&gt;&lt;/h2&gt;&lt;p&gt;ಆದರೆ, ಗಾಯ ಎಲ್ಲಿ ಮತ್ತು ಹೇಗೆ ಆಯಿತು ಎಂಬುದನ್ನು ತಂಡ ಬಹಿರಂಗಪಡಿಸಿಲ್ಲ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರದಲ್ಲಿ ತಾರಕ್ ನಟಿಸುತ್ತಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿದ್ದು, ಬಾಲಿವುಡ್ ನಟ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಬಹುಶಃ ಚಿತ್ರೀಕರಣದ ವೇಳೆ ಅವರ ಭುಜಕ್ಕೆ ಗಾಯವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೂರ್ಣ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಸಿನಿಮಾವನ್ನು ಮುಂದಿನ ವರ್ಷ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/jr-ntr-shoulder-injury-actor-advised-8-weeks-bed-rest-gvd/articleshow-q8vrzca"/>
        </item>
        <item>
            <title><![CDATA[ವಿಶ್ವದ ಶ್ರೇಷ್ಠ ವೈದ್ಯರ ತಂಡದಿಂದ ರಾಮ್ ಚರಣ್‌ಗೆ ಸರ್ಜರಿ: ಈಗ ಪೆದ್ದಿ ಆರೋಗ್ಯ ಹೇಗಿದೆ?]]></title>
            <link>https://kannada.asianetnews.com/entertainment/ram-charan-undergoes-successful-wrist-surgery-by-top-global-doctors-gvd/articleshow-52lx8g1</link>
            <guid isPermaLink="true">https://kannada.asianetnews.com/entertainment/ram-charan-undergoes-successful-wrist-surgery-by-top-global-doctors-gvd/articleshow-52lx8g1</guid>
            <pubDate>Mon, 27 Jul 2026 21:46:47 +0530</pubDate>
            <description><![CDATA[&lt;p&gt;Ram Charan Health: ರಾಮ್ ಚರಣ್ ಅವರ ಮಣಿಕಟ್ಟು ಸರ್ಜರಿ ಯಶಸ್ವಿಯಾಗಿ ನಡೆದಿದೆ. ವಿಶ್ವದ ಖ್ಯಾತ ವೈದ್ಯರು ಈ ಸರ್ಜರಿ ಮಾಡಿರುವುದು ವಿಶೇಷ. ಹಾಗಾದರೆ ಈಗ ಚರಣ್ ಆರೋಗ್ಯ ಹೇಗಿದೆ? ಇಲ್ಲಿದೆ ವಿವರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyj5488n227t6xcmx3zndz0j,imgname-k-1785168273684.png" type="image/jpeg" height="390" width="690"/>
            <content:encoded><![CDATA[&lt;p&gt;ರಾಮ್ ಚರಣ್ ಇತ್ತೀಚೆಗೆ ಸರ್ಜರಿಗಾಗಿ ಕೋಯಂಬತ್ತೂರಿಗೆ ತೆರಳಿದ್ದರು. ಅವರ ಮಣಿಕಟ್ಟಿನ ಗಾಯಕ್ಕೆ ಸರ್ಜರಿ ಬೇಕಾಗಿದ್ದರಿಂದ ಇಡೀ ಮೆಗಾ ಫ್ಯಾಮಿಲಿ ಅಲ್ಲಿಗೆ ಹೋಗಿತ್ತು. ಚಿರಂಜೀವಿ, ಸುರೇಖಾ, ಮತ್ತು ಉಪಾಸನಾ ಕೂಡ ಆಸ್ಪತ್ರೆಯಲ್ಲಿದ್ದು, ರಾಮ್ ಚರಣ್ ಅವರ ಆರೈಕೆ ಮಾಡಿದ್ದಾರೆ. ಇದೀಗ ಅವರ ಬಲಗೈ ಮಣಿಕಟ್ಟಿನ ಸರ್ಜರಿ ಯಶಸ್ವಿಯಾಗಿ ನಡೆದಿದೆ. 'ಪೆದ್ದಿ' ಸಿನಿಮಾ ಪ್ರಚಾರದ ಸಮಯದಿಂದಲೇ ರಾಮ್ ಚರಣ್ ಮಣಿಕಟ್ಟು ನೋವಿನಿಂದ ಬಳಲುತ್ತಿದ್ದರು. ಆಗ ಕೈಗೆ ಬ್ಯಾಂಡೇಜ್ ಹಾಕಿಕೊಂಡು ಕಾಣಿಸಿಕೊಂಡಿದ್ದರು.&lt;/p&gt;&lt;p&gt;ಈ ಶಸ್ತ್ರಚಿಕಿತ್ಸೆಯನ್ನು ಗಂಗಾ ಆಸ್ಪತ್ರೆಯ ಮುಖ್ಯಸ್ಥ, ವಿಶ್ವಪ್ರಸಿದ್ಧ ಆರ್ಥೋಪೆಡಿಕ್ ಸರ್ಜನ್ ಡಾ. ಎಸ್. ರಾಜಶೇಖರನ್ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ದಶಕಗಳ ಅನುಭವ ಹೊಂದಿರುವ ಇವರು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆರ್ಥೋಪೆಡಿಕ್ ಕ್ಷೇತ್ರದಲ್ಲಿ ಇವರು ದಿಗ್ಗಜರೆಂದೇ ಖ್ಯಾತಿ ಪಡೆದಿದ್ದಾರೆ. ಇದೇ ಡಾ. ರಾಜಶೇಖರನ್ ಈ ಹಿಂದೆ ಚಿರಂಜೀವಿ ಅವರ ಅತ್ಯಂತ ಕ್ಲಿಷ್ಟಕರವಾದ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದರು.&lt;/p&gt;&lt;p&gt;ರಾಮ್ ಚರಣ್ ಅವರ ಮಣಿಕಟ್ಟು ಸಮಸ್ಯೆಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ, ಅಮೆರಿಕದ ಮಿಯಾಮಿಯ ಖ್ಯಾತ ಹ್ಯಾಂಡ್ ಆ್ಯಂಡ್ ರಿಸ್ಟ್ ಸರ್ಜನ್ ಡಾ. ಅಲೆಹಾಂಡ್ರೋ ಬಾಡಿಯಾ (Dr. Alejandro Badia) ಅವರನ್ನು ವಿಶೇಷವಾಗಿ ಕೋಯಂಬತ್ತೂರಿಗೆ ಆಹ್ವಾನಿಸಲಾಗಿತ್ತು. ಕೈ ಮತ್ತು ಮಣಿಕಟ್ಟು ಶಸ್ತ್ರಚಿಕಿತ್ಸೆ, ವಿಶೇಷವಾಗಿ ಸ್ಪೋರ್ಟ್ಸ್ ಇಂಜುರಿಗಳ ಚಿಕಿತ್ಸೆಯಲ್ಲಿ ಅವರು ವಿಶ್ವದಾದ್ಯಂತ ಹೆಸರುವಾಸಿಯಾದ ತಜ್ಞರು. ಸಾಮಾನ್ಯವಾಗಿ ಅವರ ಅಪಾಯಿಂಟ್&zwnj;ಮೆಂಟ್ ಸಿಗುವುದೇ ಕಷ್ಟ. ಅಂತಹವರು ರಾಮ್ ಚರಣ್&zwnj;ಗಾಗಿ ಬಂದಿದ್ದು ವಿಶೇಷ. ಡಾ. ರಾಜಶೇಖರನ್, ಡಾ. ಅಲೆಹಾಂಡ್ರೋ ಬಾಡಿಯಾ, ಡಾ. ಪ್ರವೀಣ್ ಭಾರದ್ವಾಜ್ ಮತ್ತು ಅವರ ತಜ್ಞರ ತಂಡ ಈ ಸರ್ಜರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.&lt;/p&gt;&lt;h2&gt;&lt;strong&gt;ಆರೋಗ್ಯ ಸ್ಥಿತಿ ಸ್ಥಿರ&lt;/strong&gt;&lt;/h2&gt;&lt;p&gt;ಸದ್ಯ ರಾಮ್ ಚರಣ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇನ್ನೂ ನಾಲ್ಕು ದಿನಗಳ ವಿಶ್ರಾಂತಿಯ ನಂತರ ಹೈದರಾಬಾದ್&zwnj;ಗೆ ಮರಳುವ ಸಾಧ್ಯತೆ ಇದೆ. ಈ ಸಮಯದಲ್ಲಿ ಚಿರಂಜೀವಿ-ಸುರೇಖಾ ದಂಪತಿ ಮತ್ತು ಉಪಾಸನಾ ಕೋಯಂಬತ್ತೂರಿನಲ್ಲೇ ಇದ್ದು, ರಾಮ್ ಚರಣ್&zwnj;ಗೆ ಬೆಂಬಲವಾಗಿ ನಿಂತಿದ್ದಾರೆ. ಡಾ. ರಾಜಶೇಖರನ್ ಅವರು ಚಿರಂಜೀವಿಯವರ ಬಹುಕಾಲದ ಆತ್ಮೀಯ ಸ್ನೇಹಿತರು. ರಾಮ್ ಚರಣ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ram-charan-undergoes-successful-wrist-surgery-by-top-global-doctors-gvd/articleshow-52lx8g1"/>
        </item>
        <item>
            <title><![CDATA[ಜೂ.ಎನ್‌ಟಿಆರ್‌ 'ದೇವರ' ಕಲೆಕ್ಷನ್ ನಿಜಾನಾ, ಸುಳ್ಳಾ? ದುಬೈ ಪಾರ್ಟಿ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ನಿರ್ಮಾಪಕ!]]></title>
            <link>https://kannada.asianetnews.com/entertainment/jr-ntr-devara-box-office-success-secret-revealed-by-producer-dheeraj-mogilineni-gvd/articleshow-pxycaz9</link>
            <guid isPermaLink="true">https://kannada.asianetnews.com/entertainment/jr-ntr-devara-box-office-success-secret-revealed-by-producer-dheeraj-mogilineni-gvd/articleshow-pxycaz9</guid>
            <pubDate>Mon, 27 Jul 2026 21:06:32 +0530</pubDate>
            <description><![CDATA[&lt;p&gt;ಜೂ.ಎನ್&zwnj;ಟಿಆರ್&zwnj;&zwnj; ನಟನೆಯ 'ದೇವರ' ಚಿತ್ರದ ಕಲೆಕ್ಷನ್ ನಿಜವೇ ಅಥವಾ ಫೇಕ್ ಎಂಬ ಚರ್ಚೆ ಟಾಲಿವುಡ್&zwnj;ನಲ್ಲಿ ಇನ್ನೂ ನಡೆಯುತ್ತಿದೆ. ನೆಗೆಟಿವ್ ಟಾಕ್ ನಡುವೆಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಹೇಳಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyj3dewdw0eamnzkwdz2m4y6,imgname-vjv-1785166478221.png" type="image/jpeg" height="390" width="690"/>
            <content:encoded><![CDATA[&lt;p&gt;ಜೂ.ಎನ್&zwnj;ಟಿಆರ್&zwnj;&zwnj; ನಟನೆಯ 'ದೇವರ' ಚಿತ್ರದ ಕಲೆಕ್ಷನ್ ನಿಜವೇ ಅಥವಾ ಫೇಕ್ ಎಂಬ ಚರ್ಚೆ ಟಾಲಿವುಡ್&zwnj;ನಲ್ಲಿ ಇನ್ನೂ ನಡೆಯುತ್ತಿದೆ. ನೆಗೆಟಿವ್ ಟಾಕ್ ನಡುವೆಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಹೇಳಿದ್ದರು. ಈ ಬಗ್ಗೆ ನಿರ್ಮಾಪಕರೊಬ್ಬರು ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ. ಯಂಗ್ ಟೈಗರ್ ಜೂ.ಎನ್&zwnj;ಟಿಆರ್&zwnj;, 'RRR' ನಂತರ ನಟಿಸಿದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ 'ದೇವರ'. ಈ ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ಉತ್ತಮ ಯಶಸ್ಸು ಗಳಿಸಿತು.&lt;/p&gt;&lt;p&gt;ಇದು ಎರಡು ಭಾಗಗಳಲ್ಲಿ ಬರಬೇಕಾದ ಚಿತ್ರ. 'ದೇವರ ಪಾರ್ಟ್ 1' ಯಶಸ್ವಿಯಾಗಿದೆ. ಆದರೂ 'ದೇವರ 2' ಬಗ್ಗೆ ಯಾವುದೇ ಅಪ್&zwnj;ಡೇಟ್ ಇಲ್ಲ. ಆದರೆ, 'ದೇವರ ಪಾರ್ಟ್ 1' ಕಲೆಕ್ಷನ್ ಬಗ್ಗೆ ಟಾಲಿವುಡ್&zwnj;ನಲ್ಲಿ ಈಗಲೂ ಚರ್ಚೆ ನಡೆಯುತ್ತಿದೆ. 'ದೇವರ' ಚಿತ್ರಕ್ಕೆ ಪ್ರೀಮಿಯರ್ ಶೋಗಳಿಂದಲೇ ಡಿವೈಡ್ ಟಾಕ್ ಬಂದಿತ್ತು. ಆದರೂ, ಸಿನಿಮಾ 500 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ವರದಿಯಾಯಿತು. ಇದು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ತೀವ್ರ ಚರ್ಚೆ ನಡೆಯಿತು.&lt;/p&gt;&lt;p&gt;'ದೇವರ' ಕಲೆಕ್ಷನ್ ಫೇಕ್ ಎಂಬ ಪ್ರಚಾರವೂ ನಡೆಯಿತು. ಈ ಬಗ್ಗೆ ನಾಗವಂಶಿ ಹಲವು ಬಾರಿ ಸ್ಪಷ್ಟನೆ ನೀಡಿದರೂ ಚರ್ಚೆ ನಿಂತಿಲ್ಲ. ಇಷ್ಟೊಂದು ನೆಗೆಟಿವ್ ಟಾಕ್ ಇದ್ದರೂ ಸಿನಿಮಾ ಹೇಗೆ ದಾಖಲೆ ಕಲೆಕ್ಷನ್ ಮಾಡಿತು ಎಂಬುದು ಎಲ್ಲರ ಪ್ರಶ್ನೆ. ಈ ಬಗ್ಗೆ ಖ್ಯಾತ ನಿರ್ಮಾಪಕ ಧೀರಜ್ ಮೊಗಿಲಿನೇನಿ ಸಂದರ್ಶನವೊಂದರಲ್ಲಿ ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ. ಅವರು 'ದೇವರ' ಚಿತ್ರವನ್ನು ತೆಲುಗು ರಾಜ್ಯಗಳ 3 ಏರಿಯಾಗಳಲ್ಲಿ ವಿತರಿಸಿದ್ದರು.&lt;/p&gt;&lt;p&gt;'ದೇವರ' ಚಿತ್ರಕ್ಕೆ ಪ್ರೀಮಿಯರ್ ಶೋಗಳಿಂದಲೇ ನೆಗೆಟಿವ್ ಟಾಕ್ ಬಂದಿದ್ದು ನಿಜ. ಇದರಿಂದ ನಾವು ಆತಂಕಗೊಂಡಿದ್ದೆವು. ಯಾಕಂದ್ರೆ, ದೊಡ್ಡ ಮೊತ್ತಕ್ಕೆ ಸಿನಿಮಾ ಖರೀದಿಸಿದ್ದೆವು. ಆದರೆ ಮೊದಲ ದಿನ ಎಲ್ಲಾ ಏರಿಯಾಗಳಲ್ಲೂ ಪ್ರತಿ ಶೋ ಹೌಸ್&zwnj;ಫುಲ್ ಆಗಿತ್ತು. ಇದರಿಂದ ಓಪನಿಂಗ್ಸ್ ಭರ್ಜರಿಯಾಗಿತ್ತು' ಎಂದು ಧೀರಜ್ ಹೇಳಿದರು. ನೆಗೆಟಿವ್ ಟಾಕ್ ಇದ್ದರೂ, ಎರಡನೇ ದಿನದಿಂದ 'ದೇವರ' ಚಿತ್ರದ ಕಲೆಕ್ಷನ್ ಸ್ಥಿರವಾಗಿತ್ತು. ಇದಕ್ಕೆ ಸಾಮಾನ್ಯ ಪ್ರೇಕ್ಷಕರೇ ಕಾರಣ. ಸಿನಿಮಾದಲ್ಲಿ ಕೆಲವು ಕಡೆ ಡಲ್ ಮೂಮೆಂಟ್ಸ್ ಇವೆ. ಆದರೆ ಒಟ್ಟಾರೆ ಅನುಭವ ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟವಾಯಿತು.&lt;/p&gt;&lt;h2&gt;&lt;strong&gt;ಕಿಕ್ ಬೇರೆಯೇ ಇರುತ್ತೆ&lt;/strong&gt;&lt;/h2&gt;&lt;p&gt;ಅದು ದಸರಾ ಸೀಸನ್ ಆಗಿದ್ದರಿಂದ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬಂದರು. ಜೂ.ಎನ್&zwnj;ಟಿಆರ್&zwnj; ಅಭಿಮಾನಿಗಳು ಪದೇ ಪದೇ ಸಿನಿಮಾ ನೋಡಿದರು. ಅದಕ್ಕಾಗಿಯೇ ನಾಲ್ಕು ವಾರಗಳ ಕಾಲ 'ದೇವರ' ಕಲೆಕ್ಷನ್ ಸ್ಟಡಿಯಾಗಿತ್ತು ಎಂದು ಧೀರಜ್ ಹೇಳಿದರು. ದುಬೈನಲ್ಲಿ ನಾಗವಂಶಿ ಪಾರ್ಟಿ ಮಾಡಿದ್ದು ನಿಜವೇ ಎಂದು ಕೇಳಿದಾಗ, 'ಹೌದು' ಎಂದು ಉತ್ತರಿಸಿದರು. 'ನಾಗವಂಶಿ ಒಂದು ಚಾಲೆಂಜ್ ರೀತಿ 'ದೇವರ' ಚಿತ್ರವನ್ನು ಖರೀದಿಸಿ, ರಿಲೀಸ್ ಮಾಡಿದ್ದರು. ನೆಗೆಟಿವ್ ಟಾಕ್ ನಡುವೆಯೂ ಕಲೆಕ್ಷನ್ ಬಂತು ಅಂದ್ರೆ ಆ ಕಿಕ್ ಬೇರೆಯೇ ಇರುತ್ತೆ ಅಲ್ವಾ? ಅದಕ್ಕಾಗಿಯೇ ಅವರು ದುಬೈನಲ್ಲಿ ಸೆಲೆಬ್ರೇಟ್ ಮಾಡಿಕೊಂಡರು' ಎಂದು ಧೀರಜ್ ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/jr-ntr-devara-box-office-success-secret-revealed-by-producer-dheeraj-mogilineni-gvd/articleshow-pxycaz9"/>
        </item>
        <item>
            <title><![CDATA[ಸತತ 7 ಫ್ಲಾಪ್! ವಿಜಯ್ ಚಿತ್ರವೂ ಕೈ ಹಿಡಿಯಲಿಲ್ಲ: 'ಬುಟ್ಟಬೊಮ್ಮ' ಪೂಜಾ ಹೆಗ್ಡೆಗೆ ಸಂಕಷ್ಟ]]></title>
            <link>https://kannada.asianetnews.com/entertainment/pooja-hegde-career-in-trouble-after-7-consecutive-flops-gvd/articleshow-74d62ni</link>
            <guid isPermaLink="true">https://kannada.asianetnews.com/entertainment/pooja-hegde-career-in-trouble-after-7-consecutive-flops-gvd/articleshow-74d62ni</guid>
            <pubDate>Mon, 27 Jul 2026 20:17:50 +0530</pubDate>
            <description><![CDATA[&lt;p&gt;ನಟಿ ಪೂಜಾ ಹೆಗ್ಡೆ ಇತ್ತೀಚೆಗೆ 'ಜನ ನಾಯಗನ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾ ಸೋಲಿನತ್ತ ಸಾಗುತ್ತಿದ್ದು, ಪೂಜಾ ಇಟ್ಟಿದ್ದ ಭರವಸೆ ಹುಸಿಯಾಗಿದೆ. ಸತತ ಸೋಲುಗಳಿಂದ ಅವರ ವೃತ್ತಿಜೀವನ ಸಂಕಷ್ಟದಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyj0p2fp9tska3dkb71ngkk7,imgname-chc-1785163614710.png" type="image/jpeg" height="390" width="690"/>
            <content:encoded><![CDATA[&lt;p&gt;'ಬುಟ್ಟಬೊಮ್ಮ' ಪೂಜಾ ಹೆಗ್ಡೆಗೆ ಅದೃಷ್ಟ ಕೈಕೊಟ್ಟಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಅವರಿಗೆ ಯಶಸ್ಸು ಸಿಗುತ್ತಿಲ್ಲ. ಸುಮಾರು ನಾಲ್ಕು ವರ್ಷಗಳಿಂದ ಇದೇ ಪರಿಸ್ಥಿತಿ. ದಳಪತಿ ವಿಜಯ್ ಜೊತೆಗಿನ 'ಜನ ನಾಯಗನ್' ಸಿನಿಮಾ ತನ್ನನ್ನು ಗೆಲುವಿನ ದಡ ಸೇರಿಸುತ್ತದೆ ಎಂದು ಅವರು ಬಹಳ ನಂಬಿದ್ದರು. ಈ ಚಿತ್ರದಿಂದ ಮತ್ತೆ ಪುಟಿದೇಳಬಹುದು ಎಂದು ಭಾವಿಸಿದ್ದರು. ಆದರೆ ಅದು ಆಗಲಿಲ್ಲ. 'ಜನ ನಾಯಗನ್' ಬಾಕ್ಸ್ ಆಫೀಸ್&zwnj;ನಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ವಿಜಯ್ ರೇಂಜ್&zwnj;ಗೆ ಕಲೆಕ್ಷನ್ ಆಗಿಲ್ಲ. ಹಿಟ್ ಆಗಲು ಇನ್ನೂ ಮುನ್ನೂರು ಕೋಟಿ ಬೇಕು, ಅದು ಕಷ್ಟಸಾಧ್ಯ.&lt;/p&gt;&lt;p&gt;ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದರೂ, ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರಲಿಲ್ಲ. ಕೇವಲ ಹಾಡುಗಳಿಗಾಗಿಯೇ ಅವರನ್ನು ಬಳಸಿಕೊಂಡಂತೆ ಭಾಸವಾಗುತ್ತದೆ. ಒಬ್ಬ ಸ್ಟಾರ್ ನಟಿಗೆ ಇದು ಸರಿಹೊಂದುವ ಪಾತ್ರವಲ್ಲ. ವಿಜಯ್ ಮೇಲಿನ ಅಭಿಮಾನ ಮತ್ತು ನಂಬಿಕೆಯಿಂದ ಅವರು ಈ ಸಿನಿಮಾ ಮಾಡಿರಬಹುದು. ಆದರೆ ಫಲಿತಾಂಶ ಬೇರೆಯೇ ಆಗಿದೆ. ಈ ಸಿನಿಮಾ ವಿಜಯ್ ಅಭಿಮಾನಿಗಳನ್ನು ರಂಜಿಸಿದರೂ, ಕಮರ್ಷಿಯಲ್ ಆಗಿ ನಿರಾಸೆ ಮೂಡಿಸಲಿದೆ. ಈ ಮೂಲಕ ಪೂಜಾ ಖಾತೆಗೆ ಮತ್ತೊಂದು ಫ್ಲಾಪ್ ಸೇರಿದೆ.&lt;img&gt;&lt;/p&gt;&lt;p&gt;ಇದು ಪೂಜಾ ಹೆಗ್ಡೆಗೆ ಸತತ ಏಳನೇ ಫ್ಲಾಪ್ ಆಗಿದೆ. 'ರಾಧೆ ಶ್ಯಾಮ್' ಚಿತ್ರದಿಂದಲೇ ಈ ಸೋಲಿನ ಸರಣಿ ಶುರುವಾಗಿದೆ ಎನ್ನಬಹುದು. ಮಧ್ಯದಲ್ಲಿ 'ಬೀಸ್ಟ್' ಸಿನಿಮಾ ಚೆನ್ನಾಗಿ ಓಡಿದರೂ, 'ಆಚಾರ್ಯ' ಚಿತ್ರದಿಂದ ಶುರುವಾದ ಸೋಲುಗಳು ನಿಂತಿಲ್ಲ. 'ಆಚಾರ್ಯ' ನಂತರ 'ಸರ್ಕಸ್', 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್', 'ದೇವಾ', 'ರೆಟ್ರೋ', 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರಗಳು ಸೋತವು. ಈಗ 'ಜನ ನಾಯಗನ್' ಕೂಡ ಅದೇ ಹಾದಿಯಲ್ಲಿದೆ.&lt;/p&gt;&lt;h2&gt;&lt;strong&gt;ಪೂಜಾ ಹೆಗ್ಡೆಗೆ ಹೊಡೆತದ ಮೇಲೆ ಹೊಡೆತ&lt;/strong&gt;&lt;/h2&gt;&lt;p&gt;ಇದು ಪೂಜಾ ಹೆಗ್ಡೆ ವೃತ್ತಿಜೀವನಕ್ಕೆ ದೊಡ್ಡ ಹೊಡೆತವಾಗಿದೆ. ಚಿತ್ರರಂಗದಲ್ಲಿ ಯಶಸ್ಸು ಬಹಳ ಮುಖ್ಯ. ಸೋತರೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೂ, ಪೂಜಾ ಹೆಗ್ಡೆ ತಮ್ಮ ಸ್ಟಾರ್&zwnj;ಡಮ್&zwnj;ನಿಂದಾಗಿ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ 'ಕಾಂಚನಾ 4' ಮತ್ತು 'ಶ್ರೀ ಶ್ರೀ' ಎಂಬ ಎರಡು ಸಿನಿಮಾಗಳಿವೆ. ಈ ಚಿತ್ರಗಳಾದರೂ ಪೂಜಾಗೆ ಯಶಸ್ಸು ನೀಡುತ್ತವೆಯೇ ಎಂದು ಕಾದು ನೋಡಬೇಕು. ಸಿನಿಮಾದ ಸೋಲು-ಗೆಲುವಿನಲ್ಲಿ ನಾಯಕಿಯ ಪಾತ್ರ ಹೆಚ್ಚೇನೂ ಇರುವುದಿಲ್ಲ, ಅದು ಕಥೆ ಮತ್ತು ನಿರ್ದೇಶಕರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ನೆಗೆಟಿವ್ ಪರಿಣಾಮ ನಾಯಕಿಯ ಮೇಲೂ ಬೀಳುತ್ತದೆ ಎಂಬುದು ಗಮನಾರ್ಹ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/pooja-hegde-career-in-trouble-after-7-consecutive-flops-gvd/articleshow-74d62ni"/>
        </item>
        <item>
            <title><![CDATA['ಬಾಹುಬಲಿ'ಗಾಗಿ ನಾಸರ್‌ಗೆ ಸಿಕ್ಸ್ ಪ್ಯಾಕ್ ಮಾಡಲು ಹೇಳಿದ್ದರಾ ರಾಜಮೌಳಿ? ಇಲ್ಲಿದೆ ಕುತೂಹಲಕಾರಿ ಕಥೆ]]></title>
            <link>https://kannada.asianetnews.com/entertainment/rajamouli-wanted-a-six-pack-from-baahubali-actor-nassar-gvd/articleshow-x0yhrix</link>
            <guid isPermaLink="true">https://kannada.asianetnews.com/entertainment/rajamouli-wanted-a-six-pack-from-baahubali-actor-nassar-gvd/articleshow-x0yhrix</guid>
            <pubDate>Mon, 27 Jul 2026 19:38:52 +0530</pubDate>
            <description><![CDATA[&lt;p&gt;Baahubali Movie Secrets: ತಮಗೆ ಬೇಕಾದ ಔಟ್&zwnj;ಪುಟ್ ಬರುವವರೆಗೂ ರಾಜಮೌಳಿ ಕಲಾವಿದರನ್ನು ಬಿಡುವುದಿಲ್ಲ. ಚಿಕ್ಕ ಪಾತ್ರವೇ ಇರಲಿ, ದೊಡ್ಡ ಪಾತ್ರವೇ ಇರಲಿ, ಪರ್ಫೆಕ್ಷನ್ ಇರಲೇಬೇಕು ಎನ್ನುವ ನಿರ್ದೇಶಕ ಅವರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhyfq5kpnygc0jx0yw3tj5x,imgname-hh-1785161309363.png" type="image/jpeg" height="390" width="690"/>
            <content:encoded><![CDATA[&lt;p&gt;ತಮಗೆ ಬೇಕಾದ ಔಟ್&zwnj;ಪುಟ್ ಬರುವವರೆಗೂ ರಾಜಮೌಳಿ ಕಲಾವಿದರನ್ನು ಬಿಡುವುದಿಲ್ಲ. ಚಿಕ್ಕ ಪಾತ್ರವೇ ಇರಲಿ, ದೊಡ್ಡ ಪಾತ್ರವೇ ಇರಲಿ, ಪರ್ಫೆಕ್ಷನ್ ಇರಲೇಬೇಕು ಎನ್ನುವ ನಿರ್ದೇಶಕ ಅವರು. ಇದೇ ಕಾರಣಕ್ಕೆ ಖ್ಯಾತ ಪೋಷಕ ನಟರೊಬ್ಬರಿಗೆ ಸಿಕ್ಸ್ ಪ್ಯಾಕ್ ಮಾಡಲು ಹೇಳಿದ್ದರಂತೆ ಜಕ್ಕಣ್ಣ. ಟಾಲಿವುಡ್&zwnj;ನ ಸ್ಟಾರ್ ನಿರ್ದೇಶಕ ರಾಜಮೌಳಿ, ತೆಲುಗು ಸಿನಿಮಾವನ್ನು ಆಸ್ಕರ್ ಮಟ್ಟಕ್ಕೆ ಕೊಂಡೊಯ್ದವರು. ತಮಗೆ ಬೇಕಾದ ನಟನೆ ಬರುವವರೆಗೂ ಕಲಾವಿದರನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ.&lt;/p&gt;&lt;p&gt;ಅದಕ್ಕಾಗಿ ಎಷ್ಟು ಟೇಕ್&zwnj;ಗಳಾದರೂ ತೆಗೆದುಕೊಳ್ಳಲು ಸಿದ್ಧ. ಅದಕ್ಕಾಗಿಯೇ ಎನ್&zwnj;ಟಿಆರ್, ಪ್ರಭಾಸ್ ಅವರಂತಹ ಸ್ಟಾರ್&zwnj;ಗಳೂ ರಾಜಮೌಳಿ ಟಾರ್ಚರ್ ತಡೆಯಲಾಗದು, ಅವರೊಬ್ಬ 'ಪನಿ ರಾಕ್ಷಸುಡು' (ಕೆಲಸದ ರಾಕ್ಷಸ) ಎಂದು ತಮಾಷೆಯಾಗಿ ಹೇಳಿದ್ದುಂಟು. ಬಾಹುಬಲಿ ಸಿನಿಮಾ ಮೂಲಕ ರಾಜಮೌಳಿ ಟಾಲಿವುಡ್&zwnj;ನ ದಿಕ್ಕನ್ನೇ ಬದಲಿಸಿದರು. ಈ ಚಿತ್ರಕ್ಕಾಗಿ ಪ್ರಭಾಸ್ ಮತ್ತು ರಾಣಾ ಅವರನ್ನು ಹೇಗೆ ಸಿದ್ಧಪಡಿಸಿದ್ದರು ಎಂಬುದು ಎಲ್ಲರಿಗೂ ಗೊತ್ತು.&lt;/p&gt;&lt;p&gt;ಈ ಸಿನಿಮಾದಲ್ಲಿ ಅವರಿಬ್ಬರೂ ಸಿಕ್ಸ್ ಪ್ಯಾಕ್ ಬಾಡಿಯೊಂದಿಗೆ ಕಾಣಿಸಿಕೊಂಡರೆ, ಬಿಜ್ಜಳದೇವನ ಪಾತ್ರಧಾರಿ ನಾಸರ್ ಮಾತ್ರ 'ಫ್ಯಾಮಿಲಿ ಪ್ಯಾಕ್'ನೊಂದಿಗೆ ದಿವ್ಯಾಂಗನಾಗಿ ಕಾಣಿಸಿಕೊಂಡಿದ್ದರು. ಈ ಪಾತ್ರದ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಬಾಹುಬಲಿ ಚಿತ್ರದಲ್ಲಿ ಬಿಜ್ಜಳದೇವನಾಗಿ ಅದ್ಭುತ ನಟನೆ ನೀಡಿದ ನಾಸರ್, ಸಂದರ್ಶನವೊಂದರಲ್ಲಿ ಆ ಸಿನಿಮಾ ಕುರಿತು ಮಾತನಾಡಿದ್ದರು. ಕಥೆ ಹೇಳುವಾಗ ರಾಜಮೌಳಿ, ಈ ಬಿಜ್ಜಳದೇವ ಪಾತ್ರವಿಲ್ಲದಿದ್ದರೆ ಈ ಕಥೆಯೇ ಇಲ್ಲ' ಎಂದು ಹೇಳಿದ್ದರಂತೆ.&lt;/p&gt;&lt;p&gt;ತನಗೆ ಸಿಗದ ಸಿಂಹಾಸನವನ್ನು ಮಗ ಭಲ್ಲಾಳದೇವನಿಗೆ ಕೊಡಿಸಬೇಕೆಂಬ ಆತನ ಕುತಂತ್ರವೇ 'ಬಾಹುಬಲಿ' ಕಥೆಯ ಮೂಲಾಧಾರ. ಬಾಹುಬಲಿಗಾಗಿ ಪ್ರಭಾಸ್, ರಾಣಾ ಸಿಕ್ಸ್ ಪ್ಯಾಕ್ ಮಾಡಿದ್ದರು. ಆಗ ರಾಜಮೌಳಿ ತಮಾಷೆಗಾಗಿ ನಾಸರ್&zwnj;ಗೆ, 'ಸಾರ್, ನೀವೂ ಟ್ರೈ ಮಾಡಬಹುದಲ್ಲವೇ?' ಎಂದು ಕೇಳಿದರಂತೆ. ಅದಕ್ಕೆ ನಾಸರ್ ನಗುತ್ತಲೇ, 'ಎಲ್ಲರೂ ಸಿಕ್ಸ್ ಪ್ಯಾಕ್&zwnj;ನಲ್ಲಿದ್ದರೆ, ನಾನು ಒಬ್ಬನೇ 'ಫ್ಯಾಮಿಲಿ ಪ್ಯಾಕ್'ನಲ್ಲಿ ಇರುತ್ತೇನೆ.&lt;/p&gt;&lt;h2&gt;&lt;strong&gt;ಬಾಹುಬಲಿ ಯಶಸ್ಸಿನಲ್ಲಿ ಪಾತ್ರಗಳ ಕೊಡುಗೆ&lt;/strong&gt;&lt;/h2&gt;&lt;p&gt;ನನ್ನಿಂದ ಆಗದು, ನನ್ನನ್ನು ಬಿಟ್ಟುಬಿಡಿ' ಎಂದು ಹೇಳಿ ನಯವಾಗಿಯೇ ನಿರಾಕರಿಸಿದ್ದರಂತೆ. 'ಬಾಹುಬಲಿ'ಯ ಭರ್ಜರಿ ಯಶಸ್ಸಿಗೆ ಕೇವಲ ಗ್ರಾಫಿಕ್ಸ್ ಮಾತ್ರ ಕಾರಣವಲ್ಲ. ಬಿಜ್ಜಳದೇವನಂತಹ ಬಲವಾದ ಖಳನಾಯಕನ ಪಾತ್ರವೂ ಪ್ರಮುಖ ಕಾರಣ. ಇದರ ಹಿಂದೆ ರಾಜಮೌಳಿಯವರ ಶ್ರದ್ಧೆ ಮತ್ತು ಎಲ್ಲಾ ನಟರ ಅದ್ಭುತ ಅಭಿನಯ 'ಬಾಹುಬಲಿ'ಯನ್ನು ದೊಡ್ಡ ಯಶಸ್ಸಿನತ್ತ ಕೊಂಡೊಯ್ಯಿತು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rajamouli-wanted-a-six-pack-from-baahubali-actor-nassar-gvd/articleshow-x0yhrix"/>
        </item>
        <item>
            <title><![CDATA[ಕುಚ್‌ಕುಚ್ ಹೋಗಯಾ.. ಕಾಶ್ಮೀರದ ಸುಂದರಿ ಸಮ್ರೀನ್ ಕೌರ್ ಲವ್ವಲ್ಲಿ ಅರ್ಷ್‌ದೀಪ್ ಸಿಂಗ್ ಬಿದ್ದಿದ್ದು ಪಕ್ಕಾ ಆಯ್ತು!]]></title>
            <link>https://kannada.asianetnews.com/news-entertainment/cricketer-arshdeep-singh-introduces-samreen-kaur-as-my-person-and-here-is-everything-to-know-about-their-love-story/articleshow-shihx9k</link>
            <guid isPermaLink="true">https://kannada.asianetnews.com/news-entertainment/cricketer-arshdeep-singh-introduces-samreen-kaur-as-my-person-and-here-is-everything-to-know-about-their-love-story/articleshow-shihx9k</guid>
            <pubDate>Mon, 27 Jul 2026 18:51:26 +0530</pubDate>
            <description><![CDATA[&lt;p&gt;ಮೈದಾನದಲ್ಲಿ ಬ್ಯಾಟರ್&zwnj;ಗಳನ್ನು ನಡುಗಿಸುವ ಅರ್ಶದೀಪ್ ಈಗ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ಅಭಿಮಾನಿಗಳಂತೂ ಈ ಹೊಸ ಜೋಡಿಯನ್ನು ನೋಡಿ &quot;ಪರ್ಫೆಕ್ಟ್ ಮ್ಯಾಚ್&quot; ಎಂದು ಸಂಭ್ರಮಿಸುತ್ತಿದ್ದಾರೆ! ಆದರೆ, ಈ ಲವ್&zwnj; ಸ್ಟೋರಿಯಿಂದ ಈ ಇಬ್ಬರ ಕೆರಿಯರ್ ಸಮಸ್ಯೆ ಎದುರಿಸದೇ ಇರಲಿ ಎಂದೂ ಕೂಡ ಹಲವರು ಹಾರೈಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhv8rhce4ncdgcaxsbjjvtf,imgname-arshdeep-singh-samreen-kaur-1785157935660.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟೀಮ್ ಇಂಡಿಯಾ ವೇಗಿ ಅರ್ಶದೀಪ್ ಸಿಂಗ್ 'ಕ್ಲೀನ್ ಬೌಲ್ಡ್'! ಯಾರೀಕೆ ಅರ್ಶದೀಪ್ ಮನಗೆದ್ದ ಸುಂದರಿ ಸಮ್ರೀನ್ ಕೌರ್?&lt;/strong&gt;&lt;/p&gt;&lt;p&gt;ಮೈದಾನದಲ್ಲಿ ಘಾತಕ ಯಾರ್ಕರ್&zwnj;ಗಳ ಮೂಲಕ ಎದುರಾಳಿ ಬ್ಯಾಟರ್&zwnj;ಗಳ ವಿಕೆಟ್ ಹಾರಿಸುವ ಅರ್ಶದೀಪ್ ಸಿಂಗ್ (Arshdeep Singh) ಈಗ ತಾವೇ 'ಕ್ಲೀನ್ ಬೌಲ್ಡ್' ಆಗಿದ್ದಾರೆ! ಹೌದು, ಕಳೆದ ಕೆಲವು ತಿಂಗಳುಗಳಿಂದ ಅರ್ಷ್&zwnj;ದೀಪ್ ಸಿಂಗ್ ಯಾರ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗುಸುಗುಸು ಸುದ್ದಿಗೆ ಈಗ ಅವರೇ ಸ್ವತಃ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಅತೀ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿರೋ ಈ ಕ್ರಿಕೆಟರ್, ಮಾಡೆಲ್ ಮತ್ತು ನಟಿ ಸಮ್ರೀನ್ ಕೌರ್ (Samreen Kaur) ಅವರನ್ನು 'ನನ್ನ ಪ್ರೀತಿಯ ವ್ಯಕ್ತಿ' (My Person) ಎಂದು ಜಗತ್ತಿಗೆ ಪರಿಚಯಿಸಿದ್ದಾರೆ. ಇನ್ನು ಈ ಪೋಸ್ಟ್ ನೋಡಿದ ಅಭಿಮಾನಿಗಳು &quot;ಅರ್ಶದೀಪ್ ಜೀವನದ ಅತ್ಯುತ್ತಮ ವಿಕೆಟ್ ಇದು&quot; ಎಂದು ಕಾಮೆಂಟ್ ಮಾಡುತ್ತಾ ಹಾರೈಸುತ್ತಿದ್ದಾರೆ.&lt;/p&gt;&lt;p&gt;ಯಾರು ಈ ಸಮ್ರೀನ್ ಕೌರ್? ಬ್ಯೂಟಿ ವಿತ್ ಬ್ರೈನ್!&lt;/p&gt;&lt;p&gt;ಅಷ್ಟಕ್ಕೂ ಅರ್ಶದೀಪ್ ಹೃದಯ ಕದ್ದ ಈ ಸಮ್ರೀನ್ ಕೌರ್ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಸೆಪ್ಟೆಂಬರ್ 7, 1999 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಸಮ್ರೀನ್ ಕೌರ್, ಮಾಡೆಲಿಂಗ್ ಲೋಕದ ಖ್ಯಾತ ಮುಖ. 2018ರ 'ಫೆಮಿನಾ ಮಿಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯಲ್ಲಿ ತಮ್ಮ ರಾಜ್ಯವನ್ನು ಪ್ರತಿನಿಧಿಸಿ ಫೈನಲಿಸ್ಟ್ ಆಗಿ ಗುರುತಿಸಿಕೊಂಡಿದ್ದರು. ಸಮ್ರೀನ್ ಬರೀ ಸುಂದರಿ ಅಷ್ಟೇ ಅಲ್ಲ, ವಿದ್ಯಾಭ್ಯಾಸದಲ್ಲೂ ಸೈ ಎನಿಸಿಕೊಂಡಿದ್ದಾರೆ. ಪುಣೆಯ ಖ್ಯಾತ ಸಿಂಬಯೋಸಿಸ್ ಕಾಲೇಜಿನಿಂದ ಬಿಕಾಂ (ಆನರ್ಸ್) ಪದವಿ ಪಡೆದಿದ್ದಾರೆ.&lt;/p&gt;&lt;h2&gt;ಬೆಳ್ಳಿತೆರೆಯಲ್ಲಿ ಸಮ್ರೀನ್ ಹವಾ:&lt;/h2&gt;&lt;p&gt;ಮಾಡೆಲಿಂಗ್ ನಂತರ ನಟನೆಯತ್ತ ವಾಲಿದ ಸಮ್ರೀನ್, ಕಬೀರ್ ಖಾನ್ ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ '83' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ZEE5 ನ 'ನೈಲ್ ಪಾಲಿಶ್' ಮತ್ತು ಪಂಜಾಬಿ ಸಿನಿಮಾ 'ಸರ್ದಾರ್ ಜಿ 2' ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಾದ್&zwnj;ಶಾ, ಗುರು ರಾಂಧವಾ, ಜುಬಿನ್ ನೌಟಿಯಾಲ್, ಜಸ್ ಮಾನಕ್ ಮತ್ತು ಮನಿಂದರ್ ಬುಟ್ಟರ್ ಅವರಂತಹ ಖ್ಯಾತ ಗಾಯಕರ ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫಾಲೋಯಿಂಗ್ ಸಂಪಾದಿಸಿದ್ದಾರೆ.&lt;/p&gt;&lt;p&gt;ಆಶಿಶ್ ಚಂಚಲಾನಿ ಜೊತೆ ತಳುಕು ಹಾಕಿಕೊಂಡಿದ್ದ ಹೆಸರು!&lt;/p&gt;&lt;p&gt;ಅರ್ಶದೀಪ್ ಅವರೊಂದಿಗೆ ಅಧಿಕೃತವಾಗಿ ಕಾಣಿಸಿಕೊಳ್ಳುವ ಮೊದಲು, ಸಮ್ರೀನ್ ಹೆಸರು ಖ್ಯಾತ ಯೂಟ್ಯೂಬರ್ ಆಶಿಶ್ ಚಂಚಲಾನಿ ಜೊತೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗಾಸಿಪ್ ಹಬ್ಬಿತ್ತು. ಆದರೆ, ಆಗ ಸಮ್ರೀನ್ &quot;ನಾವಿಬ್ಬರೂ ಕೇವಲ ಆತ್ಮೀಯ ಸ್ನೇಹಿತರು ಅಷ್ಟೇ&quot; ಎಂದು ಸ್ಪಷ್ಟನೆ ನೀಡಿದ್ದರು.&lt;/p&gt;&lt;h3&gt;ಐಪಿಎಲ್ ಕ್ರೀಡಾಂಗಣದಲ್ಲಿ ಶುರುವಾದ ಪ್ರೇಮದ ಗುಮಾನಿ!&lt;/h3&gt;&lt;p&gt;ಅರ್ಶದೀಪ್ ಮತ್ತು ಸಮ್ರೀನ್ ಪ್ರೀತಿಯ ವಿಷಯ ಮೊದಲು ಚರ್ಚೆಗೆ ಬಂದಿದ್ದು ಐಪಿಎಲ್ 2024ರ ಸಮಯದಲ್ಲಿ. ಪಂಜಾಬ್ ಕಿಂಗ್ಸ್ ಪರ ಆಡುವ ಅರ್ಶದೀಪ್ ಅವರನ್ನು ಬೆಂಬಲಿಸಲು ಸಮ್ರೀನ್ ಪದೇ ಪದೇ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅರ್ಶದೀಪ್ ವಿಕೆಟ್ ಪಡೆದಾಗಲೆಲ್ಲಾ ಸಮ್ರೀನ್ ಅವರ ಮುಖದಲ್ಲಿ ಅರಳುತ್ತಿದ್ದ ನಗು ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿಯನ್ನು ಮೂಡಿಸಿತ್ತು. ಈಗ ಅರ್ಶದೀಪ್ ಅವರೇ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಅಧಿಕೃತ ಮೊಹರು ಒತ್ತಿದ್ದು, ಪ್ರೇಮಿಗಳ ಪಟ್ಟಿಗೆ ಹೊಸ ಜೋಡಿಯ ಎಂಟ್ರಿಯಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಮೈದಾನದಲ್ಲಿ ಬ್ಯಾಟರ್&zwnj;ಗಳನ್ನು ನಡುಗಿಸುವ ಅರ್ಶದೀಪ್ ಈಗ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ಅಭಿಮಾನಿಗಳಂತೂ ಈ ಹೊಸ ಜೋಡಿಯನ್ನು ನೋಡಿ &quot;ಪರ್ಫೆಕ್ಟ್ ಮ್ಯಾಚ್&quot; ಎಂದು ಸಂಭ್ರಮಿಸುತ್ತಿದ್ದಾರೆ!&lt;/p&gt;&lt;p&gt;ಸಂಕ್ಷಿಪ್ತವಾಗಿ: ಜಮ್ಮು ಕಾಶ್ಮೀರದ ಸುಂದರಿ ಸಮ್ರೀನ್ ಕೌರ್ ಈಗ ಅರ್ಶದೀಪ್ ಸಿಂಗ್ ಅವರ ಬಾಳಸಂಗಾತಿಯಾಗಿ ಬರಲು ಸಿದ್ಧರಾಗಿದ್ದಾರೆ. ವಿವಾದಗಳಿಗಿಂತ ಹೆಚ್ಚಾಗಿ ತಮ್ಮ ನಟನೆ ಮತ್ತು ಸೌಂದರ್ಯದಿಂದ ಸದ್ದು ಮಾಡಿದ್ದ ಸಮ್ರೀನ್, ಈಗ ಟೀಮ್ ಇಂಡಿಯಾದ 'ಫ್ಯೂಚರ್ ಸ್ಟಾರ್' ಪತ್ನಿಯಾಗುವ ಹಾದಿಯಲ್ಲಿದ್ದಾರೆ. ಇನ್ಮುಂದೆ ಅಸಲಿ ಮಜಾ ಶುರು!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/cricketer-arshdeep-singh-introduces-samreen-kaur-as-my-person-and-here-is-everything-to-know-about-their-love-story/articleshow-shihx9k"/>
        </item>
        <item>
            <title><![CDATA[ಮದುವೆಗೂ ಮುನ್ನವೇ ಗೊತ್ತಿತ್ತು..:  ಪತ್ನಿ ಜೈನಬ್ ಟ್ರೋಲ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಅಖಿಲ್]]></title>
            <link>https://kannada.asianetnews.com/entertainment/akhil-akkineni-opens-up-about-trolling-against-his-wife-zainab-gvd/articleshow-f7aro2a</link>
            <guid isPermaLink="true">https://kannada.asianetnews.com/entertainment/akhil-akkineni-opens-up-about-trolling-against-his-wife-zainab-gvd/articleshow-f7aro2a</guid>
            <pubDate>Mon, 27 Jul 2026 18:53:05 +0530</pubDate>
            <description><![CDATA[&lt;p&gt;ನಟ ಅಖಿಲ್ ಅಕ್ಕಿನೇನಿ ತಮ್ಮ ಪತ್ನಿ ಜೈನಬ್ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಮದುವೆಗೂ ಮುನ್ನವೇ ಈ ಬಗ್ಗೆ ನಮಗೆ ತಿಳಿದಿತ್ತು ಎಂದು ಅಖಿಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhvvwz6pzb2d7tyqtcq345z,imgname-vvjv-1785158562790.png" type="image/jpeg" height="390" width="690"/>
            <content:encoded><![CDATA[&lt;p&gt;ಅಖಿಲ್ ಅಕ್ಕಿನೇನಿ ಸದ್ಯ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಹತ್ತು ವರ್ಷಗಳ ವೃತ್ತಿಜೀವನದಲ್ಲಿ 'ಲೆನಿನ್' ಚಿತ್ರದ ಮೂಲಕ ಮೊದಲ ಯಶಸ್ಸು ಕಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರ ಥಿಯೇಟರ್&zwnj;ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿದ್ದು, ಮುರಳಿ ಕಿಶೋರ್ ನಿರ್ದೇಶಿಸಿದ್ದಾರೆ. ನಾಗವಂಶಿ ಮತ್ತು ನಾಗಾರ್ಜುನ ಚಿತ್ರವನ್ನು ನಿರ್ಮಿಸಿದ್ದಾರೆ.&lt;/p&gt;&lt;p&gt;ಅಖಿಲ್ ಮದುವೆಯಾದ ನಂತರ ಬಿಡುಗಡೆಯಾದ ಮೊದಲ ಚಿತ್ರವಿದು. ಜೈನಬ್ ತಮ್ಮ ಜೀವನಕ್ಕೆ ಬಂದ ಮೇಲೆ ಅಖಿಲ್ ವೃತ್ತಿಜೀವನದಲ್ಲಿ ಸೂಪರ್ ಸಕ್ಸಸ್ ಕಂಡಿದ್ದಾರೆ. ಸಕ್ಸಸ್ ಮೀಟ್&zwnj;ನಲ್ಲಿ ಜೈನಬ್ ಕೂಡ ಭಾಗವಹಿಸಿದ್ದರು. 'ಅಯ್ಯಗಾರು ನಂಬರ್ 1' ಎಂದು ಮುದ್ದಾಗಿ ಕಾಮೆಂಟ್ ಮಾಡಿ ಸಂಭ್ರಮಿಸಿದ್ದರು. ಆದರೆ, ಮದುವೆಗೂ ಮುನ್ನವೇ ಜೈನಬ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ನಡೆಯುತ್ತಿತ್ತು.&lt;/p&gt;&lt;p&gt;ಅಖಿಲ್ ಅವರಿಗಿಂತ ಜೈನಬ್ ವಯಸ್ಸಿನಲ್ಲಿ ಹಿರಿಯರು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇವರಿಬ್ಬರ ಸಂಬಂಧ ಬಹಿರಂಗವಾದ ಕ್ಷಣದಿಂದಲೇ ಈ ಕಾಮೆಂಟ್&zwnj;ಗಳು ಶುರುವಾಗಿದ್ದವು. ಆಕೆಯ ಧರ್ಮದ ಬಗ್ಗೆಯೂ ಕಾಮೆಂಟ್&zwnj;ಗಳು ಬಂದಿದ್ದವು. ಈ ಟ್ರೋಲಿಂಗ್ ಬಗ್ಗೆ ಅಖಿಲ್ ಕೊನೆಗೂ ಮೌನ ಮುರಿದಿದ್ದಾರೆ. 'ಜೈನಬ್ ನನಗೆ ಪರಿಚಯವಾದಾಗ, ನಮ್ಮಿಬ್ಬರ ನಡುವಿನ ವಯಸ್ಸಿನ ಅಂತರ ಅಥವಾ ಆಕೆಯ ಧರ್ಮದ ಬಗ್ಗೆ ನಾವು ಯೋಚಿಸಿರಲಿಲ್ಲ' ಎಂದಿದ್ದಾರೆ.&lt;/p&gt;&lt;p&gt;'ಆದರೆ, ಮದುವೆಗೂ ಮುನ್ನವೇ ನಾವು ಈ ಬಗ್ಗೆ ಮಾತನಾಡಿಕೊಂಡಿದ್ದೆವು. ಜನರು ಈ ವಿಷಯಗಳ ಬಗ್ಗೆ ಟ್ರೋಲ್ ಮಾಡುತ್ತಾರೆಂದು ನಮಗೆ ತಿಳಿದಿತ್ತು. ಮದುವೆಯ ನಂತರ ನಡೆಯುವ ಟ್ರೋಲಿಂಗ್ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ನಿರ್ಧರಿಸಿದೆವು. ಈ ಟ್ರೋಲಿಂಗ್ ಬಗ್ಗೆ ಯೋಚಿಸಬೇಕಾ ಅಥವಾ ನಮ್ಮ 50 ವರ್ಷಗಳ ಜೀವನದ ಬಗ್ಗೆ ಯೋಚಿಸಬೇಕಾ ಎಂದು ಪ್ರಶ್ನಿಸಿಕೊಂಡಾಗ, ಜೀವನದ ಬಗ್ಗೆಯೇ ಯೋಚಿಸಲು ಆರಂಭಿಸಿದೆ' ಎಂದು ಅಖಿಲ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಮರೆಯಲು ಸಾಧ್ಯವಿಲ್ಲ&lt;/strong&gt;&lt;/h2&gt;&lt;p&gt;'ಮದುವೆಯಾದ ಮೇಲೆ ಕೆಲವು ನೆಗೆಟಿವ್ ಕಾಮೆಂಟ್&zwnj;ಗಳು ಬರುತ್ತವೆ, ಅದಕ್ಕೆ ನೀನು ಸಿದ್ಧವಾಗಿರಬೇಕು ಎಂದು ನಾನು ಜೈನಬ್&zwnj;ಗೆ ಮೊದಲೇ ಹೇಳಿದ್ದೆ. ಆಕೆ ತುಂಬಾ ಸ್ಟ್ರಾಂಗ್ ಆಗಿದ್ದಾಳೆ. ನಮ್ಮಿಬ್ಬರ ನಡುವೆ ಅದ್ಭುತವಾದ ಅಂಡರ್&zwnj;ಸ್ಟ್ಯಾಂಡಿಂಗ್ ಇದೆ. ಅದಕ್ಕಾಗಿಯೇ ನಾವು ವಯಸ್ಸು, ಧರ್ಮ, ಜಾತಿ ಮೀರಿ ಯೋಚಿಸಲು ಸಾಧ್ಯವಾಗುತ್ತಿದೆ' ಎಂದು ಅಖಿಲ್ ತಿಳಿಸಿದರು. 'ನಾನು ಮಾನಸಿಕವಾಗಿ ಕಷ್ಟದ ಸಮಯದಲ್ಲಿದ್ದಾಗ ಜೈನಬ್ ನೀಡಿದ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ' ಎಂದು ಅಖಿಲ್ ತಮ್ಮ ಪತ್ನಿಯನ್ನು ಶ್ಲಾಘಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/akhil-akkineni-opens-up-about-trolling-against-his-wife-zainab-gvd/articleshow-f7aro2a"/>
        </item>
        <item>
            <title><![CDATA[ಭರ್ಜರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಅಮೃತಾ ಅಯ್ಯಂಗಾರ್! ನಟಿ ವಯಸ್ಸೆಷ್ಟು?]]></title>
            <link>https://kannada.asianetnews.com/webstories/sandalwood/sandalwood-actress-amrutha-iyengar-celebrates-birthday-with-celebrities-6e2ie39</link>
            <guid isPermaLink="true">https://kannada.asianetnews.com/webstories/sandalwood/sandalwood-actress-amrutha-iyengar-celebrates-birthday-with-celebrities-6e2ie39</guid>
            <pubDate>Mon, 27 Jul 2026 18:30:09 +0530</pubDate>
            <description><![CDATA[&lt;p&gt;Amrutha Iyengar Birthday: ಸ್ಯಾಂಡಲ್&zwnj;ವುಡ್ ನಟಿ ಅಮೃತಾ ಅಯ್ಯಂಗಾರ್ ತಮ್ಮ ಆಪ್ತರು ಹಾಗೂ ಚಿತ್ರರಂಗದ ಸ್ನೇಹಿತರೊಂದಿಗೆ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಬರ್ತ್&zwnj;ಡೇ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhtc72wgj01b68y3nnjt2ya,imgname-amrutha-iyengar--9--1785157000280.jpg" type="image/jpeg" height="390" width="690"/>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/webstories/sandalwood/sandalwood-actress-amrutha-iyengar-celebrates-birthday-with-celebrities-6e2ie39"/>
        </item>
        <item>
            <title><![CDATA['ತಾಜ್‌ಮಹಲ್' ಬಳಿಕ ಮತ್ತೆ ಕನ್ನಡಕ್ಕೆ ಕುನಾಲ್ ಗಾಂಜಾವಾಲ: ಅಜಯ್ ರಾವ್ 'ಪಾರ್ಟ್ನರ್' ಹಾಡಿಗೆ ಧ್ವನಿ]]></title>
            <link>https://kannada.asianetnews.com/sandalwood/kunal-ganjawala-reunites-with-ajay-rao-for-partner-movie-gvd/articleshow-392hp43</link>
            <guid isPermaLink="true">https://kannada.asianetnews.com/sandalwood/kunal-ganjawala-reunites-with-ajay-rao-for-partner-movie-gvd/articleshow-392hp43</guid>
            <pubDate>Mon, 27 Jul 2026 18:21:51 +0530</pubDate>
            <description><![CDATA[&lt;p&gt;ಸಂಗೀತ ಪ್ರಿಯರ ಪಾಲಿಗೆ ಇಂದಿಗೂ ವಿಶೇಷ ಸ್ಥಾನ ಪಡೆದಿರುವ 'ಖುಷಿಯಾಗಿದೆ ಏಕೋ ನಿನ್ನಿಂದಲೆ' ಹಾಡು ಕೇಳಿದಾಗ ಪ್ರೇಮ, ಕಾಲೇಜು ದಿನಗಳು ಹಾಗೂ ಕೃಷ್ಣ ಅಜಯ್ ರಾವ್ ಅವರ ನೆನಪಿನ ಪಾತ್ರಗಳು ಕಣ್ಣ ಮುಂದೆ ಬರುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhss5x4aak0brmmn39gs9vj,imgname-vj-1785156376484.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಸಂಗೀತ ಪ್ರಿಯರ ಪಾಲಿಗೆ ಇಂದಿಗೂ ವಿಶೇಷ ಸ್ಥಾನ ಪಡೆದಿರುವ 'ಖುಷಿಯಾಗಿದೆ ಏಕೋ ನಿನ್ನಿಂದಲೆ' ಹಾಡು ಕೇಳಿದಾಗ ಪ್ರೇಮ, ಕಾಲೇಜು ದಿನಗಳು ಹಾಗೂ ಕೃಷ್ಣ ಅಜಯ್ ರಾವ್ ಅವರ ನೆನಪಿನ ಪಾತ್ರಗಳು ಕಣ್ಣ ಮುಂದೆ ಬರುತ್ತವೆ. 'ತಾಜ್&zwnj;ಮಹಲ್' ಚಿತ್ರದ ಈ ಸೂಪರ್ ಹಿಟ್ ಮೆಲೋಡಿಯ ಮೂಲಕ ಕನ್ನಡಿಗರ ಮನಗೆದ್ದಿದ್ದ ಬಾಲಿವುಡ್&zwnj;ನ ಖ್ಯಾತ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲ ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.&lt;/p&gt;&lt;p&gt;ಅಜಯ್ ರಾವ್ ಅಭಿನಯದ ಬಹುನಿರೀಕ್ಷಿತ 'ಪಾರ್ಟ್ನರ್' ಚಿತ್ರದ ಮೊದಲ ಸಿಂಗಲ್ 'ಅಮೋರಾ' ಹಾಡಿಗೆ ಕುನಾಲ್ ಗಾಂಜಾವಾಲ ತಮ್ಮ ಧ್ವನಿ ನೀಡಿದ್ದಾರೆ. ಜುಲೈ 27ರಂದು ಬಿಡುಗಡೆಯಾಗಲಿರುವ ಈ ಹಾಡು ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಕುನಾಲ್ ಅವರ ವಿಶಿಷ್ಟ ಧ್ವನಿಯನ್ನು ಮತ್ತೆ ಕನ್ನಡ ರೊಮ್ಯಾಂಟಿಕ್ ಹಾಡಿನಲ್ಲಿ ಕೇಳಲು ಅಭಿಮಾನಿಗಳು ಕಾತರರಾಗಿದ್ದಾರೆ.&lt;/p&gt;&lt;p&gt;2000ರ ದಶಕದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದ ಕುನಾಲ್ ಗಾಂಜಾವಾಲ ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. 'ಆಕಾಶ್', 'ಐಶ್ವರ್ಯ', 'ಅರಸು', 'ಮುಂಗಾರು ಮಳೆ', 'ಚಾರ್ಮಿನಾರ್', 'ಅರಮನೆ', 'ಮಿಲನ', 'ಶೌರ್ಯ' ಹಾಗೂ 'ಚೆಲುವಿನ ಚಿತ್ತಾರ' ಸೇರಿದಂತೆ ಹಲವು ಚಿತ್ರಗಳ ಹಾಡುಗಳು ಇಂದಿಗೂ ಸಂಗೀತ ಪ್ರಿಯರ ಮೆಚ್ಚಿನವುಗಳಾಗಿವೆ.&lt;/p&gt;&lt;p&gt;ಕುನಾಲ್ ಅವರ ಭಾವಪೂರ್ಣ ಗಾಯನ ಶೈಲಿ ಮತ್ತು ಹಾಡಿನ ಭಾವನೆಗೆ ತಕ್ಕಂತೆ ಧ್ವನಿಯನ್ನು ಹೊಂದಿಸುವ ಸಾಮರ್ಥ್ಯ ಅವರನ್ನು ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನಕ್ಕೇರಿಸಿತ್ತು. ಹಲವು ಭಾರತೀಯ ಭಾಷೆಗಳಲ್ಲಿ ಹಾಡುತ್ತಾ ಬಂದಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ಅವರ ಹಾಡುಗಳ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ ಅವರ ಈ ಮರಳುವಿಕೆ ಅಭಿಮಾನಿಗಳಿಗೆ ವಿಶೇಷ ಸಂತಸ ತಂದಿದೆ.&lt;/p&gt;&lt;h2&gt;&lt;strong&gt;ಹೊಸ ಸ್ಟೈಲಿಶ್ ಲುಕ್&zwnj;&lt;/strong&gt;&lt;/h2&gt;&lt;p&gt;'ಅಮೋರಾ' ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದು, ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಪುದುಚೇರಿ ಹಾಗೂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಿರುವ ಈ ಹಾಡಿನಲ್ಲಿ ಅಜಯ್ ರಾವ್ ಅವರನ್ನು ಹೊಸ ಸ್ಟೈಲಿಶ್ ಲುಕ್&zwnj;ನಲ್ಲಿ ತೋರಿಸಲಾಗಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ಹಾಡಿನ ದೃಶ್ಯ ವೈಭವದ ಮೇಲೆ ಚಿತ್ರತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.&lt;/p&gt;&lt;p&gt;'ಧೈರ್ಯಂ' ಚಿತ್ರದ ಬಳಿಕ ನಿರ್ದೇಶಕ ಶಿವ ತೇಜಸ್ ಮತ್ತು ಅಜಯ್ ರಾವ್ ಅವರ ಎರಡನೇ ಸಹಯೋಗವಾಗಿರುವ 'ಪಾರ್ಟ್ನರ್' ಸಿನಿಮಾ ಆಧುನಿಕ ಸಂಬಂಧಗಳ ಕುರಿತಾದ ಕಥೆಯನ್ನು ಹೊಂದಿದೆ. ಪ್ರೀತಿ, ಬ್ರೇಕಪ್, ಲಿವ್-ಇನ್ ಸಂಬಂಧಗಳು ಹಾಗೂ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ನಂಬಿಕೆ ಮತ್ತು ಬದ್ಧತೆಯ ಮಹತ್ವವನ್ನು ಸಿನಿಮಾ ಹೇಳಲಿದೆ ಎಂದು ಚಿತ್ರತಂಡ ತಿಳಿಸಿದೆ.&lt;/p&gt;&lt;p&gt;ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕುನಾಲ್ ಗಾಂಜಾವಾಲ ಅವರ ಧ್ವನಿ ಹಾಗೂ ಅಜಯ್ ರಾವ್ ಅವರ ರೊಮ್ಯಾಂಟಿಕ್ ಇಮೇಜ್ ಮತ್ತೊಮ್ಮೆ ಒಂದಾಗುತ್ತಿರುವುದರಿಂದ 'ಪಾರ್ಟ್ನರ್' ಚಿತ್ರದ ಸಂಗೀತದ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kunal-ganjawala-reunites-with-ajay-rao-for-partner-movie-gvd/articleshow-392hp43"/>
        </item>
        <item>
            <title><![CDATA[ಕನ್ನಡಕ್ಕೆ ಪಾರುಲ್ ಯಾದವ್ ಗ್ರ್ಯಾಂಡ್ ಕಂಬ್ಯಾಕ್: ಕಾರ್ತಿಕ್ ಮಹೇಶ್ ಜೊತೆ ಹೊಸ ಸಿನಿಮಾ]]></title>
            <link>https://kannada.asianetnews.com/sandalwood/parul-yadav-returns-to-kannada-cinema-karthik-mahesh-gvd/articleshow-g5ip77n</link>
            <guid isPermaLink="true">https://kannada.asianetnews.com/sandalwood/parul-yadav-returns-to-kannada-cinema-karthik-mahesh-gvd/articleshow-g5ip77n</guid>
            <pubDate>Mon, 27 Jul 2026 17:45:31 +0530</pubDate>
            <description><![CDATA[&lt;p&gt;ದೀರ್ಘ ವಿರಾಮದ ಬಳಿಕ ನಟಿ ಪಾರುಲ್ ಯಾದವ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಿರ್ದೇಶಕ ಪನ್ನಗಾಭರಣ ಅವರ ಹೊಸ ಕಾಮಿಡಿ ಎಂಟರ್&zwnj;ಟೈನರ್ ಚಿತ್ರದ ಮೂಲಕ ಪಾರುಲ್ ಕಂಬ್ಯಾಕ್ ಮಾಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhqrbfve4d3772rtkjwd2kn,imgname-cc-1785154252283.png" type="image/jpeg" height="390" width="690"/>
            <content:encoded><![CDATA[&lt;p&gt;ದೀರ್ಘ ವಿರಾಮದ ಬಳಿಕ ನಟಿ ಪಾರುಲ್ ಯಾದವ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಿರ್ದೇಶಕ ಪನ್ನಗಾಭರಣ ಅವರ ಹೊಸ ಕಾಮಿಡಿ ಎಂಟರ್&zwnj;ಟೈನರ್ ಚಿತ್ರದ ಮೂಲಕ ಪಾರುಲ್ ಕಂಬ್ಯಾಕ್ ಮಾಡುತ್ತಿದ್ದು, 'ಬಿಗ್ ಬಾಸ್ ಕನ್ನಡ' ಸೀಸನ್&zwnj; 10ರ ವಿಜೇತ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಸುಮುಖ ಹಾಗೂ ಶ್ರುತಿ ಹರಿಹರನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;p&gt;ಚಿತ್ರಕ್ಕೆ ಇನ್ನೂ ಅಧಿಕೃತ ಶೀರ್ಷಿಕೆ ಘೋಷಣೆಯಾಗಿಲ್ಲ. ಆದರೆ, ಚಿತ್ರತಂಡ ಈಗಾಗಲೇ ಮಾರಿಷಸ್&zwnj;ನಲ್ಲಿ ಒಂದು ತಿಂಗಳ ಕಾಲ ನಡೆದ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎನ್ನಲಾಗಿದೆ. ಇನ್ನೂ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ಬಾಕಿ ಇದ್ದು, ಅದರಿಗಾಗಿ ಮತ್ತೊಂದು ವಿದೇಶಿ ಲೊಕೇಶನ್ ಹುಡುಕುವ ಕಾರ್ಯದಲ್ಲಿ ಚಿತ್ರತಂಡ ತೊಡಗಿದೆ. ಅಂತಿಮ ಹಂತದ ಚಿತ್ರೀಕರಣ ಮುಗಿದ ಬಳಿಕ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.&lt;/p&gt;&lt;p&gt;ಈ ಸಿನಿಮಾ ಕನ್ನಡ ಚಿತ್ರರಂಗದ ವಿಭಿನ್ನ ತಲೆಮಾರಿನ ಕಲಾವಿದರನ್ನು ಒಂದೇ ವೇದಿಕೆಗೆ ತರುತ್ತಿದೆ. ಹಲವು ವರ್ಷಗಳ ಬಳಿಕ ಪಾರುಲ್ ಯಾದವ್ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 'ಗೋವಿಂದಾಯ ನಮಃ' ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ಪಾರುಲ್, ಬಳಿಕ 'ಬಚ್ಚನ್', 'ಕಿಲ್ಲಿಂಗ್ ವೀರಪ್ಪನ್', 'ಉಪ್ಪಿ 2', 'ಜೆಸ್ಸಿ' ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಅವರ ಕೊನೆಯ ಬಿಡುಗಡೆಯಾದ ಸಿನಿಮಾ 'ಸೀಜರ್'. ಅದರ ನಂತರ ಹೊಸ ಕನ್ನಡ ಚಿತ್ರವನ್ನು ಅವರು ಒಪ್ಪಿಕೊಂಡಿರಲಿಲ್ಲ.&lt;/p&gt;&lt;p&gt;ಇನ್ನೊಂದೆಡೆ, 'ಕ್ವೀನ್' ಚಿತ್ರದ ಕನ್ನಡ ರಿಮೇಕ್ ಆಗಿರುವ 'ಬಟರ್&zwnj;ಫ್ಲೈ' ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ. ಆದರೂ ಉತ್ತಮ ಕಥೆಯ ನಿರೀಕ್ಷೆಯಲ್ಲಿದ್ದ ಪಾರುಲ್, ಇದೀಗ ಪನ್ನಗಾಭರಣ ಅವರ ಚಿತ್ರದ ಮೂಲಕ ಮತ್ತೆ ಕನ್ನಡ ಸಿನಿಪ್ರಿಯರ ಮುಂದೆ ಬರಲು ಸಜ್ಜಾಗಿದ್ದಾರೆ. ನಟಿ ಶ್ರುತಿ ಹರಿಹರನ್ ಕೂಡ ಆಯ್ದ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದು, 'ನಿದ್ರಾದೇವಿ ನೆಕ್ಸ್ಟ್ ಡೋರ್' ನಂತರ ಕೆಲವು ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟ ಸುಮುಖ, ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಬಳಿಕ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;h2&gt;&lt;strong&gt;ಕಾಮಿಡಿ ಮನರಂಜನಾ ಶೈಲಿ&lt;/strong&gt;&lt;/h2&gt;&lt;p&gt;'ಬಿಗ್ ಬಾಸ್ ಕನ್ನಡ' ಸೀಸನ್&zwnj; 10ರ ವಿಜೇತ ಕಾರ್ತಿಕ್ ಮಹೇಶ್ ಕೂಡ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಜರ್ನಿಯನ್ನು ಕಟ್ಟಿಕೊಳ್ಳುತ್ತಿದ್ದಾರೆ. ಈ ಚಿತ್ರದ ಜೊತೆಗೆ ಕೀರ್ತಿ ಕೃಷ್ಣ ನಿರ್ದೇಶನದ 'ಸೀತಾ ರಾಮ ರಾಜು' ಚಿತ್ರವೂ ಅವರ ಕೈಯಲ್ಲಿದೆ. ಪನ್ನಗಾಭರಣ ಈ ಚಿತ್ರವನ್ನು ಸಂಪೂರ್ಣ ಕಾಮಿಡಿ ಮನರಂಜನಾ ಶೈಲಿಯಲ್ಲಿ ಕಟ್ಟಿಕೊಡುತ್ತಿದ್ದು, ಉಳಿದ ಚಿತ್ರೀಕರಣ ಪೂರ್ಣಗೊಂಡ ಬಳಿಕ ಚಿತ್ರದ ಶೀರ್ಷಿಕೆ, ನಿರ್ಮಾಣ ಸಂಸ್ಥೆ, ತಾಂತ್ರಿಕ ಬಳಗ ಹಾಗೂ ಉಳಿದ ಕಲಾವಿದರ ವಿವರಗಳನ್ನು ಅಧಿಕೃತವಾಗಿ ಅನಾವರಣಗೊಳಿಸಲಿದ್ದಾರೆ.&lt;/p&gt;&lt;p&gt;ಇನ್ನು ಪಾರುಲ್ ಯಾದವ್ ಅವರ ಕಂಬ್ಯಾಕ್, ಕಾರ್ತಿಕ್ ಮಹೇಶ್ ಅವರ ಹೊಸ ಪಾತ್ರ, ಶ್ರುತಿ ಹರಿಹರನ್ ಮತ್ತು ಸುಮುಖ ಅವರ ಅಭಿನಯ, ಜೊತೆಗೆ ಪನ್ನಗಾಭರಣ ಅವರ ಕಾಮಿಡಿ ಶೈಲಿಯ ನಿರ್ದೇಶನ-ಈ ಎಲ್ಲ ಕಾರಣಗಳಿಂದ ಈ ಸಿನಿಮಾ ಈಗಾಗಲೇ ಕನ್ನಡ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/parul-yadav-returns-to-kannada-cinema-karthik-mahesh-gvd/articleshow-g5ip77n"/>
        </item>
        <item>
            <title><![CDATA['ಲೀಲಮ್ಮ ನಿನ್ನ ಗಂಡ ಯಾರಮ್ಮ..' ಪುಸ್ತಕದಲ್ಲಿ ಇರೋದೇನು? ಡಾ.ರಾಜ್‌ ಅಭಿಮಾನಿಗಳು ಸಂಭ್ರಮಿಸುತ್ತಿರೋದೇಕೆ?]]></title>
            <link>https://kannada.asianetnews.com/entertainment/leelamma-ninna-ganda-yaaramma-book-release-dr-rajkumar-controversy-answers-san/articleshow-wi0slqe</link>
            <guid isPermaLink="true">https://kannada.asianetnews.com/entertainment/leelamma-ninna-ganda-yaaramma-book-release-dr-rajkumar-controversy-answers-san/articleshow-wi0slqe</guid>
            <pubDate>Mon, 27 Jul 2026 17:13:14 +0530</pubDate>
            <description><![CDATA[ಎನ್. ಆರ್. ರಮೇಶ್ ಬರೆದಿರುವ 'ಲೀಲಮ್ಮ.. ನಿನ್ನ ಗಂಡ ಯಾರಮ್ಮ?' ಪುಸ್ತಕ ಬಿಡುಗಡೆಯಾಗಿದೆ. ಈ ಕೃತಿಯು ದಿವಂಗತ ನಟಿ ಲೀಲಾವತಿ, ಅವರ ಪತಿ ಮಹಾಲಿಂಗ ಭಾಗವತರ್ ಕುರಿತಾಗಿದ್ದು, ಡಾ. ರಾಜ್&zwnj;ಕುಮಾರ್ ಮೇಲಿನ ವಿವಾದಗಳಿಗೆ ಸ್ಫೋಟಕ ದಾಖಲೆಗಳ ಮೂಲಕ ಸ್ಪಷ್ಟನೆ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyhp2mggk4f5ymaknr9ksk1m,imgname-dr-rajkumar-book-leelavati-1785152492047.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.27):&lt;/strong&gt; ದಿವಂಗತ ಹಿರಿಯ ನಟಿ ಲೀಲಾವತಿ ಹಾಗೂ ಅವರ ಪತಿ ಮಹಾಲಿಂಗ ಭಾಗವತರ್ ಅವರ ಜೀವನ ವೃತ್ತಾಂತವನ್ನು ಒಳಗೊಂಡ 'ಲೀಲಮ್ಮ.. ನಿನ್ನ ಗಂಡ ಯಾರಮ್ಮ?' ಎಂಬ ಹೊಸ ಪುಸ್ತಕ ಬಿಡುಗಡೆಯಾಗಿದೆ. ಅಖಿಲ ಕರ್ನಾಟಕ ಡಾ. ರಾಜ್&zwnj;ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಎನ್. ಆರ್. ರಮೇಶ್ ಅವರು ಬರೆದಿರುವ ಈ ಕೃತಿಯಲ್ಲಿ ಹಲವು ಸ್ಫೋಟಕ ದಾಖಲೆಗಳನ್ನು ಉಲ್ಲೇಖಿಸಲಾಗಿದೆ. ನಗರದ 'ಕರ್ನಾಟಕ ರತ್ನ ಡಾ. ಪುನೀತ್ ರಾಜ್&zwnj;ಕುಮಾರ್ ಸಭಾಂಗಣ'ದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಪುಸ್ತಕವನ್ನು ಅಧಿಕೃತವಾಗಿ ಇತ್ತೀಚೆಗೆ ಅನಾವರಣಗೊಳಿಸಲಾಯಿತು.&lt;/p&gt;&lt;h2&gt;&lt;strong&gt;ಪುಸ್ತಕದಲ್ಲೇನಿದೆ?: ಸ್ಫೋಟಕ ವಿಚಾರಗಳ ಉಲ್ಲೇಖ!&lt;/strong&gt;&lt;/h2&gt;&lt;p&gt;ಈ ಪುಸ್ತಕದ ಕುರಿತು 'ವಿಶ್ವಮಾನವ ಡಾ. ರಾಜ್ ಕುಮಾರ್ ಫೌಂಡೇಶನ್' ಸಂಸ್ಥಾಪಕ ಅಧ್ಯಕ್ಷ ಬ.ನಾ. ಮು. ರಾಜು ಅವರು ತಮ್ಮ ಫೇಸ್&zwnj;ಬುಕ್ ಖಾತೆಯಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕವು ಹಲವು ಅಧ್ಯಾಯಗಳನ್ನು ಹೊಂದಿದ್ದು, ನಟಸಾರ್ವಭೌಮ ಡಾ. ರಾಜ್&zwnj;ಕುಮಾರ್ ಅವರ ಸುತ್ತ ಇಷ್ಟು ವರ್ಷ ಸೃಷ್ಟಿಯಾಗಿದ್ದ ಹಲವಾರು ವಿವಾದಗಳಿಗೆ ಸೂಕ್ತ ಆಧಾರಗಳೊಂದಿಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿದೆ.&lt;/p&gt;&lt;p&gt;ವೃತ್ತಿಜೀವನ ಹಾಗೂ ವೈಯಕ್ತಿಕವಾಗಿ ಡಾ. ರಾಜ್&zwnj;ಕುಮಾರ್ ಅವರಿಗೆ ಎದುರಾಗಿದ್ದ ಅವಮಾನಗಳ ಕುರಿತೂ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ. ದಿವಂಗತ ನಟಿ ಲೀಲಾವತಿ, ಅವರ ಪತಿ ಮಹಾಲಿಂಗ ಭಾಗವತರ್ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವು ಅಪರೂಪದ ಮತ್ತು ಸ್ಫೋಟಕ ದಾಖಲೆಗಳನ್ನು ಲೇಖಕ ಹಾಗೂ ರಾಜಕಾರಣಿಯೂ ಆಗಿರುವ ಎನ್. ಆರ್. ರಮೇಶ್ ಅವರು ಈ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ ಎಂದು ರಾಜು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಬ.ನಾ. ಮು. ರಾಜು ಅವರ ಫೇಸ್&zwnj;ಬುಕ್&zwnj; ಬರಹ..&lt;/strong&gt;&lt;/h2&gt;&lt;p&gt;&quot;ಇದು.., ಉತ್ತರ..., ಅಂದರೆ..,&quot;&lt;/p&gt;&lt;p&gt;ಇದು ಸಮಸ್ತ ರಾಜಕುಮಾರ್ ಅಭಿಮಾನಿಗಳು, ಹೇಳುತ್ತಿರುವ ಮಾತು..&lt;/p&gt;&lt;p&gt;ಮೂರ್ನಾಲ್ಕು ದಶಕಗಳಿಂದ ವರನಟ ರಾಜಕುಮಾರ್ ಅವರ ಹೆಸರಿಗೆ ಕಳಂಕ ತರಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು (ಹಲವಾರು ಜನ ಇಂದು ನಮ್ಮೊಂದಿಗಿಲ್ಲ) ಕಟ್ಟಿದ ಸುಳ್ಳಿನ ಕಥೆಗಳಿಗೆ ಇಂದು ಸಮರ್ಪಕವಾದ, ಸಾಕ್ಷಿ ಸಮೇತವಾದ ಉತ್ತರವನ್ನು &quot;ಲೀಲಮ್ಮ ನಿನ್ನ ಗಂಡ ಯಾರಮ್ಮ?&quot; ಕೃತಿಯ ಮೂಲಕ ನೀಡಿದಂತಾಗಿದೆ..&lt;/p&gt;&lt;p&gt;ರಾಜ್ ಕುಮಾರ್ ಅವರ ಕಟ್ಟಾಭಿಮಾನಿ ಹಾಗೂ ಜನಪ್ರಿಯ ನಾಯಕ ಶ್ರೀಯುತ ಎನ್. ಆರ್. ರಮೇಶ್ ಅವರು ರಚನೆಯ ಹಾಗೂ ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆ ಸ್ನೇಹ ಬುಕ್ ಹೌಸ್ ಪ್ರಕಟಣೆಯ ಈ ಕೃತಿ ಲೋಕಾರ್ಪಣೆಯಾಗಿದೆ.&lt;/p&gt;&lt;p&gt;ಈ ಪುಸ್ತಕವನ್ನು ಹಿಡಿದು ಓದಲು ಆರಂಭಿಸಿದರೆ ನಿಮ್ಮ ಕಣ್ಣಲ್ಲಿ ನೀರೂರುತ್ತದೆ.. ಹಾಗೆ ಓದುತ್ತಾ ಹೋದಂತೆ ನಿಮ್ಮ ಕಣ್ಣೀರು ಇನ್ನೂ ಹೆಚ್ಚಾಗುತ್ತದೆ..., ಅದು ಈಗಲಾದರೂ ಉತ್ತರ ಸಿಕ್ಕಿತಲ್ಲ ಎನ್ನುವ ಸಮಾಧಾನದಿಂದ.., ತೃಪ್ತಿ ಭಾವದಿಂದ ಆನಂದಭಾಷ್ಪ ಆಗಿರುತ್ತದೆ....&lt;/p&gt;&lt;p&gt;ಲೇಖಕರು ಅಧ್ಯಾಯಗಳ ರೂಪದಲ್ಲಿ&lt;/p&gt;&lt;p&gt;&quot;ಅಖಾಡಕ್ಕೆ ಇಳಿಯುವ ಮುನ್ನ&quot; ದಲ್ಲಿ ವರನಟರ ಸಾಧನೆ, ಸರಳತೆ, ಸಂಯಮಗಳಂತಹ ವಿಚಾರವನ್ನು ತಿಳಿಸಿ,&lt;/p&gt;&lt;p&gt;&quot;ಸೋದರಿಯ ಜಟಕಾಸಾಬಿ&quot;&lt;/p&gt;&lt;p&gt;&quot;ಕಲ್ಯಾಣ ಕಾಲದಲ್ಲಿ ಕುರ್ಚಿ ಎಳೆದ ಕಥೆ!&quot;&lt;/p&gt;&lt;p&gt;.&quot;ಸುಡುಬಿಸಿಲು ಬರಿಗಾಲಲ್ಲಿ ನಡೆದುಬಂದ 'ಜಕಣಾಚಾರಿ'&quot;&lt;/p&gt;&lt;p&gt;.&quot;ಮಂತ್ರಾಲಯ ಮಹಾತ್ಮೆ: ಹೆಂಡ ಇಳಿಸುವವನು ರಾಯರ ಪಾತ್ರ ಮಾಡುವುದೇ!&quot;&lt;/p&gt;&lt;p&gt;&quot;ಶತಮಾನದ ಚಿತ್ರವನ್ನು 'ಅತಿ ಕೆಟ್ಟ ಫಿಲಂ' ಅಂದಿದ್ದರು ಪುಟ್ಟಣ್ಣ!&quot;&lt;/p&gt;&lt;p&gt;&quot;'ಗಂಧದಗುಡಿ'ಗೆ ರಾಜ್ ಕುಮಾರ್ ಏಕೆ ಬೇಕಿತ್ತು?&quot;&lt;/p&gt;&lt;p&gt;&quot;ಕಲ್ಯಾಣ್ ಕುಮಾರ್ ಸನ್ಮಾನ: ರಾಜ್ ಸಭಾಧ್ಯಕ್ಷರು: ನಡೆದದ್ದೇ ಬೇರೆ!&quot;&lt;/p&gt;&lt;p&gt;&quot;'ಕವಿರತ್ನ ಕಾಳಿದಾಸ' 'ಮಾಣಿಕ್ಯ ವೀಣಾ!' ರಾಜ್ ಕುಮಾರ್ ಹಾಡಬಾರದು!&quot;&lt;/p&gt;&lt;p&gt;ಅಧ್ಯಾಯಗಳ ಮೂಲಕ ವರನಟರಿಗೆ ಆದ ಅವಮಾನ, ಅಪಹಾಸ್ಯ ಆ ಸಮಯದಲ್ಲಿ ರಾಜ್ ತಮ್ಮ ಸಂಯಮದಿಂದಲೇ ನಿರ್ಲಿಪ್ತ ಭಾವದಿಂದ ಇದ್ದ ದಿನಗಳು ಹೀಗೆ ಎಲ್ಲವನ್ನೂ ವಿವರಿಸಿ&lt;/p&gt;&lt;p&gt;'ಲೀಲಮ್ಮನ ಆತ್ಮಚರಿತ್ರೆಯೋ?! ಬೆಳೆಗೆರೆಯವರ ಆತ್ಮಪ್ರಲಾಪವೋ?!&lt;/p&gt;&lt;p&gt;ಅಧ್ಯಾಯದ ಮೂಲಕ ರಾಜ್ ಭೌತಿಕವಾಗಿ ಅಗಲಿದ ನಂತರವೂ ಕೆಲವರು ಮನದಲ್ಲಿ ಬೇರೂರಿದ್ದ ಈರ್ಷ್ಯೆಯ ಮನಸ್ಥಿತಿಯನ್ನು ವಿವರಿಸಿ..&lt;/p&gt;&lt;p&gt;&quot;ದಿ ಅಲ್ಟಿಮೇಟ್ ಪೋಸ್ಟ್ ಮಾರ್ಟ೦&quot;&lt;/p&gt;&lt;p&gt;&quot;ನೀವೆಲ್ಲೂ ನೋಡಿರದ ಸ್ಫೋಟಕ ದಾಖಲೆಗಳು&quot;&lt;/p&gt;&lt;p&gt;ಅಧ್ಯಾಯಗಳ ಮೂಲಕ ಸಮರ್ಪಕವಾದ ಉತ್ತರ ನೀಡಿದ್ದಾರೆ.&lt;/p&gt;&lt;p&gt;&quot;ಈಗ ಕಳಂಕ ಹೊತ್ತವರೂ ಇಲ್ಲ.. ಹೊರಿಸಿದ್ದವರೂ ಇಲ್ಲ.. ಆ ಸಮಯದಲ್ಲಿ ಬಾಳಿದ್ದ ಹಲವರಲ್ಲಿ ಯಾರೂ ಇಲ್ಲ.. &quot; ಇಂತಹ ಸಂದರ್ಭದಲ್ಲಿ ಈ ಕೃತಿಯ ಅವಶ್ಯಕತೆ ಇತ್ತೇ? ಎನ್ನುವುದು ಕೆಲವರ ಪ್ರಶ್ನೆ ..&lt;/p&gt;&lt;p&gt;ಅದಕ್ಕೆ ಉತ್ತರ...&lt;/p&gt;&lt;p&gt;ನಮ್ಮ ಪೂರ್ವಜರ ಬಗ್ಗೆ ಯಾರಾದರೂ ಮಾತನಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ ಅಲ್ಲವೇ..?&lt;/p&gt;&lt;p&gt;ನಮ್ಮ ನಂಬಿಕೆ ಆಚಾರ ವಿಚಾರಗಳ ಬಗ್ಗೆ ಯಾರಾದರೂ ಕೇವಲವಾಗಿ ಮಾತನಾಡಿದರೆ ಸಾಕ್ಷಿ ಸಮೇತವಾಗಿ ಉತ್ತರ (ಕಡೆಗೆ ಕೋರ್ಟ್ ಮೆಟ್ಟಿಲು ಏರಿಯಾದರೂ ಸರಿ) ನೀಡುತ್ತೇವೆ ಅಲ್ಲವೇ?&lt;/p&gt;&lt;p&gt;ಹಾಗಿರುವಾಗ ಕನ್ನಡ ನಾಡು ನುಡಿ ಸಂಸ್ಕೃತಿಯ ಪ್ರತೀಕವಾದ ರಾಜ್ ಎನ್ನುವ ಹೆಸರಿಗೆ ಕಳಂಕ ತರುವ ಉದ್ದೇಶ ಹೊಂದಿದ ಮನಸ್ಥಿತಿ ಗಳಿಂದ ಆಗಿರುವ, ಆಗುತ್ತಿರುವ ಅಪಪ್ರಚಾರಗಳಿಗೆ ಉತ್ತರ ನೀಡದೆ ಹೋಗಿದ್ದರೆ.., ಮುಂದಿನ ದಿನಗಳಲ್ಲಿ ಅದೇ ಸತ್ಯ ಎನ್ನುವ ಅಪಾಯ ಎದುರಾಗುತ್ತದೆ... ಎನ್ನುವ ಸ್ಪಷ್ಟತೆ ನಮಗಿರಬೇಕು ಅಲ್ಲವೇ?&lt;/p&gt;&lt;p&gt;ಇಂತಹ ದಾಖಲೆಪೂರಕವಾದ, ಸಂಗ್ರಹಯೋಗ್ಯವಾದ ಕೃತಿ ಬಿಡುಗಡೆಯಾದ ಎರಡೇ ತಾಸುಗಳಲ್ಲಿ ಎರಡು ಮುದ್ರಣಗಳ ಪ್ರತಿಗಳು ಸಂಪೂರ್ಣ ಮಾರಟವಾಗಿ, ಮೂರನೆಯ ಮುದ್ರಣಕ್ಕೆ ಕಾಲಿಟ್ಟು ದಾಖಲೆ ನಿರ್ಮಿಸಿದೆ. ಈ ಸಂದರ್ಭದಲ್ಲಿ ಕೃತಿಯ ಲೇಖಕರಾದ ಶ್ರೀಯುತ ಎನ್ ಆರ್ ರಮೇಶ್ ಸರ್ ಅವರಿಗೆ ಹಾಗೂ ಸ್ನೇಹ ಬುಕ್ ಹೌಸ್ ನ ಮಾಲೀಕರಾದ ಶ್ರೀಯುತ ಕೆ. ಪರಶಿವಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/entertainment/leelamma-ninna-ganda-yaaramma-book-release-dr-rajkumar-controversy-answers-san/articleshow-wi0slqe"/>
        </item>
        <item>
            <title><![CDATA[ರಿಷಬ್ ಶೆಟ್ಟಿ 'ಶಿವಾಜಿ' ಸಿನಿಮಾಗೆ ಭೂಮಿ ಪೆಡ್ನೇಕರ್ ಎಂಟ್ರಿ: ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಬಾಲಿವುಡ್ ನಟಿ]]></title>
            <link>https://kannada.asianetnews.com/entertainment/bhumi-pednekar-joins-rishab-shetty-chhatrapati-shivaji-maharaj-film-gvd/articleshow-nr0hkzy</link>
            <guid isPermaLink="true">https://kannada.asianetnews.com/entertainment/bhumi-pednekar-joins-rishab-shetty-chhatrapati-shivaji-maharaj-film-gvd/articleshow-nr0hkzy</guid>
            <pubDate>Mon, 27 Jul 2026 17:12:55 +0530</pubDate>
            <description><![CDATA[&lt;p&gt;'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ತಂಡಕ್ಕೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhnh3vmqe9tw6afkyfw5ts0,imgname-jvj-1785151917940.png" type="image/jpeg" height="390" width="690"/>
            <content:encoded><![CDATA[&lt;p&gt;'ಕಾಂತಾರ' ಖ್ಯಾತಿಯ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ತಂಡಕ್ಕೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕರುನಾಡಿನ ಧೈರ್ಯ, ಸಾಹಸ ಮತ್ತು ಸ್ವಾಭಿಮಾನದ ಪ್ರತೀಕವಾಗಿರುವ ವೀರಮಹಿಳೆ ಬೆಳವಡಿ ಮಲ್ಲಮ್ಮ ಅವರ ಪಾತ್ರವನ್ನು ಭೂಮಿ ತೆರೆಯ ಮೇಲೆ ಜೀವಂತಗೊಳಿಸಲಿದ್ದಾರೆ.&lt;/p&gt;&lt;p&gt;ಸೋಮವಾರ (ಜುಲೈ 27) ಚಿತ್ರತಂಡ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದು, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಭೂಮಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದೆ. ಸಂದೀಪ್ ಸಿಂಗ್ ನಿರ್ದೇಶನದ ಈ ಮಹತ್ವಾಕಾಂಕ್ಷೆಯ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಬಾಲಿವುಡ್ ನಟರಾದ ಅರ್ಜುನ್ ರಾಂಪಾಲ್ ಹಾಗೂ ವಿವೇಕ್ ಓಬೆರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.&lt;/p&gt;&lt;p&gt;ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಭೂಮಿ ಪೆಡ್ನೇಕರ್, &quot;ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಪರಂಪರೆಯನ್ನು ಆಧರಿಸಿದ ಈ ಬೃಹತ್ ಸಿನಿಮಾದ ಭಾಗವಾಗಿರುವುದು ನನ್ನ ಪಾಲಿಗೆ ಹೆಮ್ಮೆಯ ಸಂಗತಿ. ಕರ್ನಾಟಕದ ವೀರಮಹಿಳೆ ಬೆಳವಡಿ ಮಲ್ಲಮ್ಮ ಅವರಂತಹ ಐತಿಹಾಸಿಕ ವ್ಯಕ್ತಿತ್ವವನ್ನು ತೆರೆಯ ಮೇಲೆ ಜೀವಂತಗೊಳಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;ರಿಷಬ್ ಶೆಟ್ಟಿ ಅವರ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಭೂಮಿ, &quot;'ಕಾಂತಾರ' ಸಿನಿಮಾ ನೋಡಿದ ಬಳಿಕ ನಾನು ರಿಷಬ್ ಶೆಟ್ಟಿ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಅವರ ಅಭಿನಯ ನನ್ನನ್ನು ಆಳವಾಗಿ ಸ್ಪರ್ಶಿಸಿತ್ತು. ನಿರ್ದೇಶಕ ಸಂದೀಪ್ ಸಿಂಗ್ ಈ ಚಿತ್ರದ ಕಥೆ ಹೇಳಿದ ಕ್ಷಣವೇ ಒಪ್ಪಿಕೊಳ್ಳುವ ನಿರ್ಧಾರ ಮಾಡಿದೆ. ಇದು ನನ್ನ ವೃತ್ತಿಜೀವನದಲ್ಲೇ ಇದುವರೆಗೆ ಮಾಡದಿರುವ ಅತ್ಯಂತ ವಿಭಿನ್ನ ಪಾತ್ರ. ನನ್ನನ್ನು ಹೊಸ ಆಯಾಮದಲ್ಲಿ ಪ್ರೇಕ್ಷಕರ ಮುಂದೆ ಪರಿಚಯಿಸುತ್ತಿರುವ ಚಿತ್ರತಂಡಕ್ಕೆ ನಾನು ಕೃತಜ್ಞಳಾಗಿದ್ದೇನೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಎರಡು ಭಾಗಗಳಲ್ಲಿ ನಿರ್ಮಿಸುವ ಯೋಜನೆ&lt;/strong&gt;&lt;/h2&gt;&lt;p&gt;ಈ ಬೃಹತ್ ಐತಿಹಾಸಿಕ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ನೀಡುತ್ತಿದ್ದು, ಖ್ಯಾತ ಗೀತರಚನೆಕಾರ ಪ್ರಸೂನ್ ಜೋಶಿ ಸಾಹಿತ್ಯ ರಚಿಸಲಿದ್ದಾರೆ. ರಿಷಿ ವಿರ್ಮಾನಿ ಚಿತ್ರಕಥೆ ಬರೆದಿದ್ದು, ಸಿನಿಮಾವನ್ನು ಎರಡು ಭಾಗಗಳಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈ ವರ್ಷಾಂತ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯ ಭಾರೀ ಪ್ರಮಾಣದ ಪೂರ್ವ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.&lt;/p&gt;&lt;p&gt;ಈಗಾಗಲೇ ಬಿಡುಗಡೆಯಾಗಿರುವ ರಿಷಬ್ ಶೆಟ್ಟಿ ಅವರ ಛತ್ರಪತಿ ಶಿವಾಜಿ ಮಹಾರಾಜರ ಫಸ್ಟ್ ಲುಕ್ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆದಿತ್ತು. ಆರಂಭಿಕ ಯೋಜನೆಯಂತೆ ಚಿತ್ರವನ್ನು 2027ರ ಜನವರಿ 21ರಂದು ಬಿಡುಗಡೆ ಮಾಡುವ ಉದ್ದೇಶವಿದ್ದರೂ, ಚಿತ್ರೀಕರಣ ಇನ್ನೂ ಆರಂಭವಾಗದ ಕಾರಣ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆ ಇದೆ.&lt;/p&gt;&lt;p&gt;ಇದಕ್ಕೂ ನಡುವೆ, ರಿಷಬ್ ಶೆಟ್ಟಿ ಪ್ರಶಾಂತ್ ವರ್ಮಾ ನಿರ್ದೇಶನದ ಪೌರಾಣಿಕ ಸಿನಿಮಾ 'ಜೈ ಹನುಮಾನ್' ಚಿತ್ರದ ಚಿತ್ರೀಕರಣದಲ್ಲೂ ತೊಡಗಿಸಿಕೊಂಡಿದ್ದು, ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರವೂ ದೇಶಾದ್ಯಂತ ಸಾಕಷ್ಟು ನಿರೀಕ್ಷೆ ಮೂಡಿಸಿದೆ. 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಮೂಲಕ ರಿಷಬ್ ಶೆಟ್ಟಿ ಮತ್ತೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐತಿಹಾಸಿಕ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/bhumi-pednekar-joins-rishab-shetty-chhatrapati-shivaji-maharaj-film-gvd/articleshow-nr0hkzy"/>
        </item>
        <item>
            <title><![CDATA[ರಾಷ್ಟ್ರ ಪ್ರಶಸ್ತಿ ವಿವಾದಕ್ಕೆ ನಟ ಧನುಷ್ ಖಡಕ್ ಕೌಂಟರ್.. 'ಆವತ್ತು ಸಿಗದಿದ್ದಾಗ ಏಕೆ ಚರ್ಚೆ ಆಗಿಲ್ಲ?' ಎಂದ ನಟ!]]></title>
            <link>https://kannada.asianetnews.com/news-entertainment/dhanush-counter-on-rayan-movie-national-award-debate-and-controversy-against-his-victory/articleshow-gypt1nd</link>
            <guid isPermaLink="true">https://kannada.asianetnews.com/news-entertainment/dhanush-counter-on-rayan-movie-national-award-debate-and-controversy-against-his-victory/articleshow-gypt1nd</guid>
            <pubDate>Mon, 27 Jul 2026 17:11:48 +0530</pubDate>
            <description><![CDATA[&lt;p&gt;ಧನುಷ್ ಅವರ ಈ ಪ್ರಾಮಾಣಿಕ ಮಾತುಗಳು ಈಗ ಅಭಿಮಾನಿಗಳ ಹೃದಯ ಗೆದ್ದಿವೆ. ಟ್ರೋಲ್ ಮಾಡುವವರಿಗೆ ತಮ್ಮ ಕೆಲಸದ ಮೂಲಕವೇ ಉತ್ತರ ನೀಡುವ ಧನುಷ್, ಈಗ ರಾಷ್ಟ್ರ ಪ್ರಶಸ್ತಿಯ ವಿವಾದವನ್ನೂ ತಮ್ಮ ಚಾಣಾಕ್ಷತನದಿಂದ ತಣ್ಣಗಾಗಿಸಿದ್ದಾರೆ. ನಿಜಕ್ಕೂ ಧನುಷ್ ಅಂದ್ರೆ ಸುಮ್ನೇನಾ? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhp104c02a6ftzret70wjks,imgname-dhanush-1785152438411.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧನುಷ್ 'ರಾಯನ್' ಘರ್ಜನೆ: ರಾಷ್ಟ್ರ ಪ್ರಶಸ್ತಿ ವಿವಾದಕ್ಕೆ 'ಅಸುರ'ನ ಸ್ಟೈಲಿಶ್ ಉತ್ತರ!&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಅಸುರ'ನಂತೆ ಬೆಳೆದಿರುವ ನಟ ಧನುಷ್ (Dhanush) ಅಂದ್ರೆ ಅಲ್ಲಿ ಬರೀ ಟ್ಯಾಲೆಂಟ್ ಮಾತ್ರವಲ್ಲ, ಬಾಕ್ಸ್ ಆಫೀಸ್ ಧೂಳೀಪಟ ಮಾಡೋ ಸಕ್ಸಸ್ ಕೂಡ ಮನೆಮಾತು. ಈಗ ಧನುಷ್ ಹೆಸರು ಇಡೀ ದೇಶಾದ್ಯಂತ ಸದ್ದು ಮಾಡ್ತಿದೆ. ಯಾಕಂದ್ರೆ, 2024ರ ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ ಧನುಷ್ ಅವರ ಹೆಸರು ಒಂದಲ್ಲ, ಎರಡರಷ್ಟು ಮಿಂಚುತ್ತಿದೆ! ಆದರೆ, ಈ ಸಂಭ್ರಮದ ನಡುವೆಯೇ ಒಂದು ವಿವಾದದ ಕಿಡಿ ಹೊತ್ತಿಕೊಂಡಿತ್ತು. ಆ ವಿವಾದಕ್ಕೆ ಧನುಷ್ ಈಗ ಕೊಟ್ಟಿರೋ ಉತ್ತರ ಮಾತ್ರ ಸಖತ್ ವೈರಲ್ ಆಗ್ತಿದೆ.&lt;/p&gt;&lt;p&gt;ಏನಿದು ನ್ಯಾಷನಲ್ ಅವಾರ್ಡ್ ಸುನಾಮಿ?&lt;/p&gt;&lt;p&gt;ಸಂಗತಿ ಏನಪ್ಪಾ ಅಂದ್ರೆ, ಧನುಷ್ ನಿರ್ದೇಶಿಸಿ, ನಟಿಸಿದ 50ನೇ ಸಿನಿಮಾ 'ರಾಯನ್'ಗೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಸಂದಿದೆ. ಅದರ ಜೊತೆಗೆ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಅದ್ಭುತ ನಟನೆಗಾಗಿ ಅವರಿಗೆ ವಿಶೇಷ ತೀರ್ಪುಗಾರರ ಪ್ರಶಸ್ತಿ (Special Jury Award) ಲಭಿಸಿದೆ. ಒಂದೇ ವರ್ಷದಲ್ಲಿ ಎರಡು ರಾಷ್ಟ್ರ ಮಟ್ಟದ ಗೌರವಗಳು ಒಬ್ಬ ನಟನಿಗೆ ಸಿಗುವುದು ಅಂದ್ರೆ ಅದು ಸಾಮಾನ್ಯ ವಿಷಯವಲ್ಲ.&lt;/p&gt;&lt;p&gt;ಆದರೆ, ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗ್ಯಾಂಗ್ ಮತ್ತು ಸಿನಿಮಾ ಪ್ರೇಮಿಗಳ ನಡುವೆ ದೊಡ್ಡ ಯುದ್ಧವೇ ಶುರುವಾಯಿತು. &quot;ರಾಯನ್ ಚಿತ್ರಕ್ಕಿಂತ ವಿಜಯ್ ಸೇತುಪತಿಯ 'ಮಹಾರಾಜ' ಅಥವಾ ಕಾರ್ತಿ ಅಭಿನಯದ 'ಮೆಯ್ಯಳಗನ್' ಸಿನಿಮಾಗಳು ಪ್ರಶಸ್ತಿಗೆ ಹೆಚ್ಚು ಅರ್ಹವಾಗಿದ್ದವು&quot; ಎಂಬ ಚರ್ಚೆ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಧನುಷ್ ಅವರಿಗೆ ಸಿಕ್ಕ ಪ್ರಶಸ್ತಿ ಬಗ್ಗೆ ಕೆಲವರು ಅಸಮಾಧಾನ ಹೊರಹಾಕಿದ್ದರು.&lt;/p&gt;&lt;h2&gt;ಮೌನ ಮುರಿದ ಧನುಷ್: &quot;ಸತ್ಯ ಒಪ್ಪಿಕೊಳ್ಳೋಕೆ ನನಗೇನು ಸಂಕೋಚವಿಲ್ಲ!&quot;&lt;/h2&gt;&lt;p&gt;ಇಷ್ಟು ದಿನ ಈ ಎಲ್ಲಾ ಟೀಕೆಗಳನ್ನು ಗಮನಿಸುತ್ತಿದ್ದ ಧನುಷ್, ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮೈಕ್ ಹಿಡಿದು ನಿಂತಾಗ ಎಲ್ಲರೂ ಅಂದುಕೊಂಡಿದ್ದು &quot;ಧನುಷ್ ಸಿಟ್ಟಾಗಬಹುದು&quot; ಎಂದು. ಆದರೆ ಧನುಷ್ ತುಂಬಾ ಕೂಲ್ ಆಗಿ, ಆದರೆ ಖಡಕ್ ಆಗಿ ಮಾತು ಶುರು ಮಾಡಿದರು. &quot;ನಾನು ಒಪ್ಪಿಕೊಳ್ಳುತ್ತೇನೆ, ರಾಯನ್ ಸಿನಿಮಾಗಿಂತಲೂ ಉತ್ತಮ ಸಿನಿಮಾಗಳು ಖಂಡಿತ ಇವೆ. ಯಾರಿಗೆ ಯಾವ ಸಿನಿಮಾ ಇಷ್ಟವಾಗಬೇಕು ಎನ್ನುವುದು ಅವರವರ ವೈಯಕ್ತಿಕ ವಿಚಾರ&quot; ಎನ್ನುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು.&lt;/p&gt;&lt;p&gt;ಅಷ್ಟೇ ಅಲ್ಲದೆ, ಪ್ರಶಸ್ತಿ ಎನ್ನುವುದು ಬರೀ ಗುಣಮಟ್ಟದ ಮೇಲೆ ಮಾತ್ರವಲ್ಲ, ಕೆಲವೊಮ್ಮೆ ಶ್ರಮದ ಜೊತೆಗೆ ಕಾಲದ ಅದೃಷ್ಟವೂ ಇರಬೇಕು ಎಂಬ ಸತ್ಯವನ್ನು ಬಿಚ್ಚಿಟ್ಟರು. &quot;ಸಿನಿಮಾ ಚೆನ್ನಾಗಿರುವುದು ಒಂದು ಕಡೆಯಾದರೆ, ಪ್ರಶಸ್ತಿ ಸಿಗುವುದು ಮತ್ತೊಂದು ಕಡೆ. ಇವೆರಡೂ ಯಾವಾಗಲೂ ಒಟ್ಟಿಗೆ ಇರಬೇಕೆಂದು ನಿಯಮವಿಲ್ಲ&quot; ಎಂದು ಮಾರ್ಮಿಕವಾಗಿ ನುಡಿದರು.&lt;/p&gt;&lt;p&gt;ಹಳೆಯ ಗಾಯಗಳನ್ನು ನೆನಪಿಸಿದ ನಟ!&lt;/p&gt;&lt;p&gt;ಈ ವೇಳೆ ಧನುಷ್ ತಮ್ಮ ಕರಿಯರ್&zwnj;ನ ಬೆಸ್ಟ್ ಸಿನಿಮಾಗಳನ್ನು ನೆನಪಿಸಿಕೊಂಡರು. &quot;ನಾನು ಪುದುಪೇಟ್ಟೈ, ವಡಾ ಚೆನ್ನೈ, ಮರಿಯನ್ ಮತ್ತು ಕರ್ಣನ್ ಅಂತಹ ಸಿನಿಮಾಗಳನ್ನು ಮಾಡಿದ್ದಾಗ ಇವಕ್ಕೆ ನ್ಯಾಷನಲ್ ಅವಾರ್ಡ್ ಪಕ್ಕಾ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವತ್ತು ನನಗೆ ಪ್ರಶಸ್ತಿ ಸಿಗಲಿಲ್ಲ. ಅಂದು ಪ್ರಶಸ್ತಿ ಸಿಗದಿದ್ದಾಗ ಇಷ್ಟೊಂದು ದೊಡ್ಡ ಮಟ್ಟದ ಚರ್ಚೆಗಳು ನಡೆಯಲೇ ಇಲ್ಲ&quot; ಎಂದು ಬೇಸರದಿಂದಲೇ ನಕ್ಕರು. ಎಷ್ಟೇ ಬೆವರು ಹರಿಸಿದರೂ ಫಲ ಸಿಗದ ದಿನಗಳಿದ್ದವು, ಆದರೆ ಇಂದು ಸಿಕ್ಕಿರುವ ಗೌರವವನ್ನು ಟೀಕೆ ಮಾಡುವುದು ಎಷ್ಟು ಸರಿ ಎಂಬುದು ಅವರ ಪ್ರಶ್ನೆಯಾಗಿತ್ತು.&lt;/p&gt;&lt;p&gt;ವಿವಾದ ಬೇಡ, ಸಾಧನೆ ಸಂಭ್ರಮಿಸಿ!&lt;/p&gt;&lt;p&gt;ತಮ್ಮ ಭಾಷಣದ ಕೊನೆಯಲ್ಲಿ ಧನುಷ್ ಒಂದು ಮಾಸ್ ಡೈಲಾಗ್ ಹೊಡೆದರು. &quot;ಒಬ್ಬ ತಮಿಳು ನಟನಿಗೆ ರಾಷ್ಟ್ರ ಮಟ್ಟದಲ್ಲಿ ಒಂದೇ ವರ್ಷ ಎರಡು ಪ್ರಶಸ್ತಿಗಳು ಸಿಕ್ಕಿರುವುದು ನಮ್ಮ ಚಿತ್ರರಂಗಕ್ಕೆ ಹೆಮ್ಮೆ. ಇದನ್ನು ವಿವಾದದ ಕನ್ನಡಕದಿಂದ ನೋಡುವ ಬದಲು, ಎಲ್ಲರೂ ಒಟ್ಟಾಗಿ ಸಂಭ್ರಮಿಸೋಣ&quot; ಎಂದು ಅಭಿಮಾನಿಗಳಿಗೆ ಕರೆ ನೀಡಿದರು.&lt;/p&gt;&lt;p&gt;ಒಟ್ಟಿನಲ್ಲಿ, ಧನುಷ್ ಅವರ ಈ ಪ್ರಾಮಾಣಿಕ ಮಾತುಗಳು ಈಗ ಅಭಿಮಾನಿಗಳ ಹೃದಯ ಗೆದ್ದಿವೆ. ಟ್ರೋಲ್ ಮಾಡುವವರಿಗೆ ತಮ್ಮ ಕೆಲಸದ ಮೂಲಕವೇ ಉತ್ತರ ನೀಡುವ ಧನುಷ್, ಈಗ ರಾಷ್ಟ್ರ ಪ್ರಶಸ್ತಿಯ ವಿವಾದವನ್ನೂ ತಮ್ಮ ಚಾಣಾಕ್ಷತನದಿಂದ ತಣ್ಣಗಾಗಿಸಿದ್ದಾರೆ. ನಿಜಕ್ಕೂ ಧನುಷ್ ಅಂದ್ರೆ ಸುಮ್ನೇನಾ? ಅವರ ಸಾಧನೆಗೆ ನಾವೂ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು! ಒಟ್ಟಿನಲ್ಲಿ, ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಧನುಷ್, &quot;ಶ್ರಮಕ್ಕೆ ಸಿಕ್ಕ ಪ್ರತಿಫಲವಿದು&quot; ಎನ್ನುವ ಮೂಲಕ ತಮ್ಮ ಎರಡೂ ರಾಷ್ಟ್ರ ಪ್ರಶಸ್ತಿಗಳನ್ನು ಹೆಮ್ಮೆಯಿಂದ ಸಂಭ್ರಮಿಸುವಂತೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇನ್ಮುಂದೆ ಅಸಲಿ ಆಟ ಶುರು!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/dhanush-counter-on-rayan-movie-national-award-debate-and-controversy-against-his-victory/articleshow-gypt1nd"/>
        </item>
        <item>
            <title><![CDATA[ಸ್ಪೈಡರ್ ಮ್ಯಾನ್ ಪ್ರಪಂಚಕ್ಕೆ ರಿಷಬ್ ಶೆಟ್ಟಿ ಎಂಟ್ರಿ: ಸೋನಿ ಪಿಕ್ಚರ್ಸ್ ಜೊತೆ ಕೈಜೋಡಿಸಿದ ಭಾರತದ ಮೊದಲ ನಟ!]]></title>
            <link>https://kannada.asianetnews.com/entertainment/rishab-shetty-joins-spider-man-brand-new-day-promo-sony-pictures-gvd/articleshow-ykokgyq</link>
            <guid isPermaLink="true">https://kannada.asianetnews.com/entertainment/rishab-shetty-joins-spider-man-brand-new-day-promo-sony-pictures-gvd/articleshow-ykokgyq</guid>
            <pubDate>Mon, 27 Jul 2026 16:40:03 +0530</pubDate>
            <description><![CDATA[&lt;p&gt;Spider Man Brand New Day India: 'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhkxt6v97ms5688r7yd1jtv,imgname-ch-1785150236891.png" type="image/jpeg" height="390" width="690"/>
            <content:encoded><![CDATA[&lt;p&gt;'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಲಿವುಡ್&zwnj;ನ ಖ್ಯಾತ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್ ಎಂಟರ್&zwnj;ಟೈನ್&zwnj;ಮೆಂಟ್, ತನ್ನ ಬಹುನಿರೀಕ್ಷಿತ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಚಿತ್ರದ ವಿಶೇಷ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿಯನ್ನು ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಇಂತಹ ಬೃಹತ್ ಹಾಲಿವುಡ್ ಸೂಪರ್&zwnj;ಹೀರೋ ಫ್ರಾಂಚೈಸಿಯ ಅಧಿಕೃತ ಪ್ರಚಾರದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ ಭಾರತದ ಮೊದಲ ನಟ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.&lt;/p&gt;&lt;p&gt;ಸೋನಿ ಪಿಕ್ಚರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, &quot;ರಿಷಬ್ ಶೆಟ್ಟಿ ಪೀಟರ್ ಪಾರ್ಕರ್ ಪ್ರಪಂಚಕ್ಕೆ ಪ್ರವೇಶಿಸುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ&hellip;&quot; ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ವಿಡಿಯೊ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಪ್ರೋಮೋ ವೈರಲ್ ಆಗಿದ್ದು, ಕನ್ನಡ ಸಿನಿಪ್ರಿಯರಲ್ಲೂ ಸಂಚಲನ ಮೂಡಿಸಿದೆ.&lt;/p&gt;&lt;h2&gt;&lt;strong&gt;ಪ್ರೋಮೋದಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ಈ ವಿಶೇಷ ಪ್ರೋಮೋದಲ್ಲಿ, 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಚಿತ್ರದ ಅಂತ್ಯದಲ್ಲಿ ನಡೆಯುವ ಪ್ರಮುಖ ತಿರುವನ್ನು ರಿಷಬ್ ಶೆಟ್ಟಿ ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ತನ್ನ ನಿಜವಾದ ಗುರುತನ್ನು ಇಡೀ ಜಗತ್ತಿನಿಂದ ಅಳಿಸಿಹಾಕಿಕೊಂಡ ಪೀಟರ್ ಪಾರ್ಕರ್&zwnj;ನ ಒಂಟಿತನ, ತ್ಯಾಗ ಮತ್ತು ಸೂಪರ್&zwnj;ಹೀರೋ ಆಗಿರುವ ಜವಾಬ್ದಾರಿಯನ್ನು ಭಾವನಾತ್ಮಕವಾಗಿ ನಿರೂಪಿಸಿರುವುದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.&lt;/p&gt;&lt;p&gt;'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾ, 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಚಿತ್ರದ ಮುಂದುವರಿದ ಭಾಗವಾಗಿದೆ. ಡಾಕ್ಟರ್ ಸ್ಟ್ರೇಂಜ್&zwnj;ನ ಮಂತ್ರದ ಪರಿಣಾಮವಾಗಿ ಪೀಟರ್ ಪಾರ್ಕರ್&zwnj;ನನ್ನು ಸ್ನೇಹಿತ ನೆಡ್, ಪ್ರಿಯತಮೆ ಎಂಜೆ ಸೇರಿದಂತೆ ಇಡೀ ಜಗತ್ತೇ ಮರೆತುಬಿಡುತ್ತದೆ. ನಂತರ ನ್ಯೂಯಾರ್ಕ್ ನಗರದಲ್ಲಿ ತನ್ನ ನಿಜವಾದ ಗುರುತನ್ನು ಯಾರಿಗೂ ಬಹಿರಂಗಪಡಿಸದೆ, ಸಂಪೂರ್ಣ ಒಂಟಿಯಾಗಿ ಸ್ಪೈಡರ್ ಮ್ಯಾನ್ ಆಗಿ ಅಪರಾಧಗಳ ವಿರುದ್ಧ ಹೋರಾಡುವ ಪೀಟರ್ ಪಾರ್ಕರ್&zwnj;ನ ಹೊಸ ಅಧ್ಯಾಯವೇ ಈ ಚಿತ್ರದ ಕಥಾಹಂದರ.&lt;/p&gt;&lt;p&gt;ಚಿತ್ರ ಬಿಡುಗಡೆಯ ಮುನ್ನವೇ ಭಾರತದಲ್ಲಿ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ'ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ವೇಗ ಪಡೆದುಕೊಂಡಿದೆ. ಟಾಮ್ ಹಾಲ್ಯಾಂಡ್ ನಟನೆಯ ಈ ಬಹುನಿರೀಕ್ಷಿತ ಸಿನಿಮಾ ಜುಲೈ 30ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಇಂಗ್ಲಿಷ್ ಜೊತೆಗೆ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಪ್ರೇಕ್ಷಕರ ಮುಂದೆ ಬರಲಿದೆ. ರಿಷಬ್ ಶೆಟ್ಟಿ ಮತ್ತು ಸೋನಿ ಪಿಕ್ಚರ್ಸ್&zwnj;ಗಳ ಈ ಸಹಯೋಗವು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಅಂತರರಾಷ್ಟ್ರೀಯ ಗೌರವ ತಂದುಕೊಟ್ಟಿದ್ದು, ಜಾಗತಿಕ ಸಿನಿರಂಗದಲ್ಲಿ ಕನ್ನಡ ಪ್ರತಿಭೆಯ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rishab-shetty-joins-spider-man-brand-new-day-promo-sony-pictures-gvd/articleshow-ykokgyq"/>
        </item>
        <item>
            <title><![CDATA[ನನ್ನ ಪರ್ಸನಲ್ ಲೈಫ್ ಬಗ್ಗೆ ಎಲ್ಲರಿಗೂ ಉತ್ತರ ಕೊಡಬೇಕಿಲ್ಲ… ವದಂತಿಗಳಿಗೆ Krishi Thapanda ಖಡಕ್ ತಿರುಗೇಟು]]></title>
            <link>https://kannada.asianetnews.com/sandalwood/actress-krishi-thapanda-pen-down-emotional-note-against-trolls-in-social-media/articleshow-r1u8pcx</link>
            <guid isPermaLink="true">https://kannada.asianetnews.com/sandalwood/actress-krishi-thapanda-pen-down-emotional-note-against-trolls-in-social-media/articleshow-r1u8pcx</guid>
            <pubDate>Mon, 27 Jul 2026 15:12:38 +0530</pubDate>
            <description><![CDATA[&lt;p&gt;Krishi Thapanda: ಮತ್ತೆ ಟ್ರೋಲ್ ಗಳಿಗೆ ಆಹಾರವಾಗಿದ್ದ ನಟಿ ಕೃಷಿ ತಾಪಂಡ ಇದೀಗ ಮತ್ತೆ ಕೆಟ್ಟದಾಗಿ ಮಾತನಾಡುವವರ ವಿರುದ್ಧ ಪ್ರೀತಿಯಿಂದ ಗುಡುಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮನದ ಭಾವನೆಗಳನ್ನು ಹಂಚಿಕೊಂಡಿರುವ ನಟಿ, ಮೌನವಾಗಿದ್ದರೆ ಅದು ದೌರ್ಬಲ್ಯ ಅಲ್ಲ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhf8fkm1vfjqksmeq346kv4,imgname-krishi-thapanda-1785145343603.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಟ್ರೋಲ್&zwnj;ಗಳ ವಿರುದ್ಧ ಗುಡುಗಿದ ನಟಿ ಕೃಷಿ ತಾಪಂಡ&lt;/strong&gt;&lt;/h2&gt;&lt;p&gt;ಕನ್ನಡ ಚಿತ್ರರಂಗದ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕೃಷಿ ತಾಪಂಡ ಈ ಹಿಂದೆ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು, ನಂತರ ಕೃಷಿ ಗೆಳೆಯ ಅವರದೇ ಫ್ಲಾಟಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಷಯವು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಕಾರಣದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ನಟಿಯ ಕುರಿತು ಹಲವಾರು ಚರ್ಚೆ, ಟೀಕೆಗಳು ಕೇಳಿ ಬಂದಿದ್ದವು. ಇದೀಗ ಕೃಷಿ ಟ್ರೋಲ್ ಗಳ ವಿರುದ್ಧ ಮತ್ತೆ ಸಿಡಿದೆದ್ದಿದ್ದಾರೆ. ಇನ್&rsquo;ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ನಟಿ ಹೇಳಿದ್ದೇನು? ನೋಡಿ&hellip;&lt;/p&gt;&lt;p&gt;ಒಂದು ಪ್ರಶ್ನೆ ನನ್ನ ಮನಸ್ಸಿನಲ್ಲಿ ಮತ್ತೆ ಮತ್ತೆ ಬರುತ್ತದೆ, ಯಾರದ್ದೋ ನೋವನ್ನು ನೋಡಿ ಅದನ್ನೇ ಮನರಂಜನೆ ಮಾಡಿಕೊಳ್ಳುವಷ್ಟು ನಾವು ಯಾವಾಗ ಇಷ್ಟು ಬದಲಾಗಿಬಿಟ್ಟೆವು? ಯಾರಾದರೂ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅವರನ್ನು ಹಾಗೆಯೇ ಬಿಡುವುದು ಯಾಕೆ ಇಷ್ಟು ಕಷ್ಟ? ನನ್ನ ಪರ್ಸನಲ್ ಲೈಫ್ ಬಗ್ಗೆ ಎಲ್ಲರಿಗೂ ಉತ್ತರ ಕೊಡಬೇಕೆಂಬ ಹಕ್ಕು ಎಲ್ಲಿಂದ ಬಂತು? ಮೌನವಾಗಿದ್ದರೆ ಅದು ದೌರ್ಬಲ್ಯ ಅಲ್ಲ, ಕೈಂಡ್ ನೆಸ್ ಅಂದ್ರೆ ವೀಕ್ನೆಸ್ ಅಲ್ಲ.&lt;/p&gt;&lt;p&gt;ನಾನು ಮೌನವನ್ನು ಆಯ್ಕೆ ಮಾಡಿಕೊಂಡದ್ದು ಗೌರವಕ್ಕಾಗಿ, ಕೈಂಡ್ ನೆಸ್ ಆಯ್ಕೆ ಮಾಡಿಕೊಂಡದ್ದು ನನ್ನ ವ್ಯಕ್ತಿತ್ವಕ್ಕಾಗಿ. ನನ್ನನ್ನು ಎಷ್ಟು ತಳ್ಳಿದರು, ಎಷ್ಟು ಪ್ರಶ್ನೆಸಿದರೂ ಎಷ್ಟು ಜಡ್ಜ್ ಮಾಡಿದರು, ಎಷ್ಟು ಕಥೆಗಳನ್ನು ಕಟ್ಟಿದರೂ ನಾನು ಪ್ರತಿ ಬಾರಿ ಮತ್ತೆ ಎದ್ದಿದ್ದೇನೆ. ಇನ್ನೂ ಎದ್ದೆ ನಿಲ್ಲುತ್ತೇನೆ.&lt;/p&gt;&lt;p&gt;ನನ್ನನ್ನು ಇನ್ನು ತಳ್ಳಬೇಕು ಅನಿಸಿದರೆ ತಳ್ಳಿ . ನೆಲದೊಳಗೆ ಇನ್ನೂ ಆಳಕ್ಕೆ ಹೂಳಬೇಕು ಅನಿಸಿದರೆ ಹೂಳಿ. ಬೇರುಗಳು ಎಷ್ಟು ಆಳವಾಗುತ್ತವೋ, ಮರ ಅಷ್ಟು ಗಟ್ಟಿಯಾಗಿ ಬೆಳೆಯುತ್ತದೆ. ನಾನು ಈಗ ನಿಂತಿರುವುದು ದ್ವೇಷದ ಮೇಲಲ್ಲ, ನನ್ನ ಅಪ್ಪ ಅಮ್ಮನ ಪ್ರೀತಿ ಮೇಲೆ. ನನ್ನ ಕುಟುಂಬದ ಆಶೀರ್ವಾದದ ಮೇಲೆ. ನನ್ನ ಸ್ನೇಹಿತರ ಬೆಂಬಲದ ಮೇಲೆ. ನನ್ನನ್ನು ನಿಜವಾಗಿ ಅರಿತಿರುವ ಜನರ ವಿಶ್ವಾಸದ ಮೇಲೆ ಮತ್ತು ಪ್ರೀತಿ, ಕರುಣೆ, ಎಂಪತಿ ಇಂದ ಕಟ್ಟಿದ ನನ್ನ ಕಮ್ಯುನಿಟಿ ಮೇಲೆ.&lt;/p&gt;&lt;p&gt;ಬೇರೆಯವರ ಗಾಯಗಳಲ್ಲಿ ಸಂತೋಷ ಹುಡುಕುವ ಅಗತ್ಯವೇ ಬರದಿರಲಿ&lt;/p&gt;&lt;p&gt;ನಾನು ಯಾರಿಗಾದರೂ ಉತ್ತರ ಕೊಡಬೇಕಾದರೆ ಅದು ಅವರಿಗೆ ಮಾತ್ರ, ಬೇರೆ ಯಾರಿಗೂ ಅಲ್ಲ. ನಿಮ್ಮ ರೂಮರ್ಸ್ ನನ್ನನ್ನು ನಿರ್ಧರಿಸಲಾರವು. ನಿಮ್ಮ ಸ್ಟೋರೀಸ್ ನನ್ನನ್ನು ಬದಲಾಯಿಸಲಾರವು. ನಿಮ್ಮ ಪ್ರಯತ್ನಗಳು ನನ್ನ ಆತ್ಮವನ್ನು ಮುರಿಯಲಾರವು. ಯಾಕೆಂದರೆ ನನ್ನನ್ನು ದೇವರು ಕಾಪಾಡುತ್ತಿದ್ದಾನೆ. ನನ್ನ ಜನ ಕಾಪಾಡುತ್ತಿದ್ದಾರೆ. ನಿಮ್ಮ ಮೇಲೆ ನನಗೆ ಕೋಪ ಇಲ್ಲ, ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ. ಒಂದು ದಿನ ನಿಮ್ಮ ಹೃದಯ ನಿಮ್ಮ ಅಭಿಪ್ರಾಯಕ್ಕಿಂತ ದೊಡ್ಡದಾಗಲಿ ಎಂದು. ಒಂದು ದಿನ ಬೇರೆಯವರ ನೋವು, ನಿಮಗೆ ಎಂಟಟೈನ್ಮೆಂಟ್ ಆಗದೆ ನಿಜವಾದ ನೋವಾಗಿ ಕಾಣಲಿ ಎಂದು. ಒಂದು ದಿನ ನಿಮ್ಮ ಜೀವನದಲ್ಲಿ ಅಷ್ಟೊಂದು ಪ್ರೀತಿ ತುಂಬಿರಲಿ, ಬೇರೆಯವರ ಗಾಯಗಳಲ್ಲಿ ಸಂತೋಷ ಹುಡುಕುವ ಅಗತ್ಯವೇ ಬರದಿರಲಿ ಎಂದು.&lt;/p&gt;&lt;p&gt;ನಿಮ್ಮೆಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ ಮತ್ತು ನನ್ನ ಜೊತೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವೇ ನನ್ನ ಶಕ್ತಿ, ನೀವೇ ನನ್ನ ಧೈರ್ಯ, ನೀವೇ ನನ್ನ ಸುರಕ್ಷಿತ ಜಾಗ. ನೀವು ಇರುವವರೆಗೂ, ದೇವರ ಆಶೀರ್ವಾದ ನನ್ನ ಜೊತೆ ಇರುವವರೆಗೂ, ಯಾವ ವದಂತಿಯು ನನ್ನನ್ನು ಏನು ಮಾಡಲಾರದು. ನಾನು ಮತ್ತೆ ಮತ್ತೆ ಏಳುತ್ತೇನೆ. ತಪ್ಪು ಎಂದು ಯಾರನ್ನು ಸಾಬೀತುಪಡಿಸಲು ಅಲ್ಲ, ನಾನು ಯಾರು ಎನ್ನುವುದನ್ನು ಮರೆಯದಿರಲು. ಯಾಕೆಂದರೆ ದಯೆ ಯಾವಾಗಲೂ ದ್ವೇಷಕ್ಕಿಂತ ದೊಡ್ಡದು. ಪ್ರೀತಿ ಯಾವಾಗಲೂ ಗದ್ದಲಕ್ಕಿಂತ ದೊಡ್ಡದು. ಮತ್ತು ಗೌರವದಿಂದ ಬದುಕುವುದು ಯಾವಾಗಲೂ ಗೆಲುವೇ.&lt;/p&gt;&lt;p&gt;ಕೃಷಿ&lt;/p&gt;&lt;p&gt;ಟ್ರಸ್ಟ್ ಅಂಡ್ ಲಿಟಲ್ ಬಿಟ್ ಆಫ್ ಮ್ಯಾಜಿಕ್ ಎಂದು ನಟಿ ಬರೆದುಕೊಂಡಿದ್ದಾರೆ. ಕನ್ನಡ ಕಿರುತೆರೆಯ ನಟ-ನಟಿಯರು ಅಭಿಮಾನಿಗಳು ನಟಿಗೆ ಧೈರ್ಯ ತುಂಬುವ ಕಾಮೆಂಟ್ ಮಾಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/sandalwood/actress-krishi-thapanda-pen-down-emotional-note-against-trolls-in-social-media/articleshow-r1u8pcx"/>
        </item>
        <item>
            <title><![CDATA[‘Shravani Subramanya’ ಧಾರಾವಾಹಿಯಿಂದ ಹೊರಬಂದ ಪ್ರಮುಖ ಪಾತ್ರಧಾರಿ… ಅಭಿಮಾನಿಗಳು ಶಾಕ್!]]></title>
            <link>https://kannada.asianetnews.com/gallery/tv-talk/zee-kannada-news-why-did-atharva-leave-shravani-subramanya-s3goco0</link>
            <guid isPermaLink="true">https://kannada.asianetnews.com/gallery/tv-talk/zee-kannada-news-why-did-atharva-leave-shravani-subramanya-s3goco0</guid>
            <pubDate>Mon, 27 Jul 2026 16:19:12 +0530</pubDate>
            <description><![CDATA[&lt;p&gt;Shravani Subramanya: ಕನ್ನಡ ಕಿರುತೆರೆಯ ಜನಪ್ರಿಯ &lsquo;ಶ್ರಾವಣಿಸುಬ್ರಹ್ಮಣ್ಯ&rsquo; ಧಾರಾವಾಹಿ ರೋಚಕ ಘಟ್ಟ ತಲುಪಿರುವ ಸಮಯದಲ್ಲೇ ಪ್ರಮುಖ ಪಾತ್ರಧಾರಿ ಹೊರ ಬಂದಿದ್ದಾರೆ. ಈ ಬಗ್ಗೆ ನಟ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhjw3p8ce32cfd7grgekmf3,imgname-shravani-subramanya-1785149132486.jpg" type="image/jpeg" height="390" width="690"/>
            <content:encoded><![CDATA[&lt;p&gt;Shravani Subramanya: ಕನ್ನಡ ಕಿರುತೆರೆಯ ಜನಪ್ರಿಯ &lsquo;ಶ್ರಾವಣಿಸುಬ್ರಹ್ಮಣ್ಯ&rsquo; ಧಾರಾವಾಹಿ ರೋಚಕ ಘಟ್ಟ ತಲುಪಿರುವ ಸಮಯದಲ್ಲೇ ಪ್ರಮುಖ ಪಾತ್ರಧಾರಿ ಹೊರ ಬಂದಿದ್ದಾರೆ. ಈ ಬಗ್ಗೆ ನಟ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.&lt;/p&gt;&lt;img&gt;&lt;p&gt;ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ &lsquo;ಶ್ರಾವಣಿಸುಬ್ರಹ್ಮಣ್ಯ&rsquo;. ಎರಡು ವರ್ಷಗಳಿಗಿಂತ ಹೆಚ್ಚು ಸಮಯದಿಂದ ಜನರಿಗೆ ಮನರಂಜನೆ ನೀಡುತ್ತಾ ಬಂದಿದೆ. ಇದೀಗ ರೋಚಕ ಘಟ್ಟವನ್ನು ತಲುಪಿರುವ ಹೊತ್ತಿಗೆ ಧಾರಾವಾಹಿಯಿಂದ ಪ್ರಮುಖ ಪಾತ್ರಧಾರಿ ಹೊರ ಬಂದಿದ್ದಾರೆ. ಇದನ್ನು ನೋಡಿ ವೀಕ್ಷಕರು, ಅಭಿಮಾನಿಗಳು ಶಾಕ್ ಆಗಿದ್ದಾರೆ.&lt;/p&gt;&lt;img&gt;&lt;p&gt;&lsquo;ಶ್ರಾವಣಿಸುಬ್ರಹ್ಮಣ್ಯ&rsquo; ಧಾರಾವಾಹಿಯಲ್ಲಿ ವಿಲನ್ ಮದನ್/ಮ್ಯಾಡಿ ಪಾತ್ರದಲ್ಲಿ ಮಿಂಚುತ್ತಿದ್ದ ನಟ ಅಥರ್ವ ತಾವು ಸೀರಿಯಲ್ ನಿಂದ ಹೊರ ಬಂದಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ, ಮುದ್ದಾದ ವಿಡೀಯೋಗಳನ್ನು ಹಂಚಿಕೊಂಡು, ಪೋಸ್ಟ್ ಶೇರ್ ಮಾಡುವ ಮೂಲಕ ತಿಳಿಸಿದ್ದಾರೆ. ನಟ ಈ ಕುರಿತು ಹೇಳಿದ್ದೇನು ನೋಡಿ.&lt;/p&gt;&lt;img&gt;&lt;p&gt;ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಮದನ್ (ಮ್ಯಾಡಿ) ಆಗಿ 2 ವರ್ಷಗಳಿಗೂ ಹೆಚ್ಚು ಕಾಲ ಅದ್ಭುತ ಜೀವನ ಕಳೆದ ನಂತರ, ನನ್ನ ಜೀವನದ ಈ ಸುಂದರ ಅಧ್ಯಾಯಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಈ ಸೆಟ್&zwnj;ನಲ್ಲಿನ ಪ್ರತಿಯೊಂದು ದೃಶ್ಯ, ಪ್ರತಿ ಶೂಟಿಂಗ್ ದಿನ, ಪ್ರತಿ ನಗು, ಪ್ರತಿ ಸವಾಲು ಮತ್ತು ಪ್ರತಿಯೊಂದು ನೆನಪು ನನಗೆ ಬೆಳೆಯಲು ಸಹಾಯ ಮಾಡಿದೆ . ಕೇವಲ ನಟನಾಗಿ ಅಲ್ಲ, ಒಬ್ಬ ವ್ಯಕ್ತಿಯಾಗಿ. ಈ ಪ್ರಯಾಣವು ಯಾವಾಗಲೂ ನನ್ನ ಹೃದಯದಲ್ಲಿ ಬಹಳ ವಿಶೇಷ ಸ್ಥಾನವನ್ನು ಹೊಂದಿರುತ್ತದೆ.&lt;/p&gt;&lt;img&gt;&lt;p&gt;ನನ್ನ ಮೇಲೆ ವಿಶ್ವಾಸವಿಟ್ಟು ಇಂತಹ ಸುಂದರ ಕಾರ್ಯಕ್ರಮದ ಭಾಗವಾಗುವಂತೆ ಮಾಡಿ, ಈ ಅದ್ಭುತ ಅವಕಾಶ ನೀಡಿದ್ದಕ್ಕಾಗಿ ಜೀ ಕನ್ನಡ, ಮತ್ತು ನಮ್ಮ ಪ್ರೀತಿಯ ನಿರ್ಮಾಪಕ ಸುಬ್ರಹ್ಮಣ್ಯ ಮೂರ್ತಿನಾಥ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಆದರ್ಶ್ ಹೆಗ್ಡೆ ಸರ್, ನಿಮ್ಮ ನಿರಂತರ ಮಾರ್ಗದರ್ಶನ, ತಾಳ್ಮೆ ಮತ್ತು ಪ್ರೋತ್ಸಾಹಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರ್ದೇಶನದಲ್ಲಿ ನಾನು ತುಂಬಾ ಕಲಿತಿದ್ದೇನೆ.&lt;/p&gt;&lt;img&gt;&lt;p&gt;ಸ್ನೇಹಾ ಈಶ್ವರ್ ಮೇಡಂ, ಯಾವಾಗಲೂ ತುಂಬಾ ದಯೆ, ಬೆಂಬಲ ಮತ್ತು ಸ್ಪೂರ್ತಿದಾಯಕವಾಗಿರುವುದಕ್ಕೆ ಧನ್ಯವಾದಗಳು. ನೀವು ಯಾವಾಗಲೂ ನನ್ನ ನೆಚ್ಚಿನ ಕೋ ಸ್ಟಾರ್ ಗಳಲ್ಲಿ ಒಬ್ಬರಾಗಿ ಉಳಿಯುತ್ತೀರಿ. ಹಾಗೂ ಮೋಹನ್ ಶಂಕರ್ ಸರ್, ಸತತ ಎರಡನೇ ಪ್ರಾಜೆಕ್ಟ್ ನಲ್ಲಿ ನಿಮ್ಮೊಂದಿಗೆ ಸ್ಕ್ರೀನ್ ಶೇರ್ ಮಾಡಿರುವುದಕ್ಕೆ ನಿಜಕ್ಕೂ ಹೆಮ್ಮೆ ಇದೆ. ಇದು ನನ್ನ ಆಶೀರ್ವಾದವೂ ಔದು. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಇನ್ನು ರಕ್ಷಿತಾ ಭಾಸ್ಕರ್ ಈ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸಂತೋಷ ತಂದಿದೆ. ಥ್ಯಾಂಕ್ಯೂ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಪ್ರತಿಯೊಬ್ಬ ನಟ, ತಂತ್ರಜ್ಞ, ಸಹಾಯಕ ನಿರ್ದೇಶಕ, ಕ್ಯಾಮೆರಾಮನ್, ಮೇಕಪ್ ಕಲಾವಿದ, ವೇಷಭೂಷಣ ತಂಡ, ನಿರ್ಮಾಣ ತಂಡ ಮತ್ತು ಶ್ರಾವಣಿ ಸುಬ್ರಹ್ಮಣ್ಯದ ಹಿಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಈ ಎರಡು ವರ್ಷಗಳನ್ನು ಸ್ಮರಣೀಯವಾಗಿಸಿದ್ದಕ್ಕಾಗಿ ಧನ್ಯವಾದಗಳು. ಈ ಕುಟುಂಬ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ಇನ್ನು ಕೊನೆಅದಾಗಿ ಪ್ರೇಕ್ಷಕರಿಗೆದೊಡ್ಡ ಧನ್ಯವಾದಗಳು. ಯಾರಾದರೂ ನನ್ನನ್ನು ಮ್ಯಾಡಿ ಎಂದು ಗುರುತಿಸಿದಾಗ, ಫೋಟೋ ಕ್ಲಿಕ್ ಮಾಡಿದಾಗ, ನನಗೆ ಶುಭ ಹಾರೈಸಿದಾಗ ಅಥವಾ ನನ್ನ ಅಭಿನಯವನ್ನು ಮೆಚ್ಚಿದಾಗಲೆಲ್ಲಾ, ನಾನು ಈ ವೃತ್ತಿಯನ್ನು ಏಕೆ ಆರಿಸಿಕೊಂಡೆ ಎಂಬುದನ್ನು ಅದು ನನಗೆ ನೆನಪಿಸುತ್ತದೆ. ನಿಮ್ಮ ಪ್ರೀತಿ ಮತ್ತು ಬೆಂಬಲ ನನ್ನ ದೊಡ್ಡ ಪ್ರೇರಣೆಯಾಗಿದೆ.&lt;/p&gt;&lt;img&gt;&lt;p&gt;ಇಂದು, ನಾನು ಮದನ್ (ಮ್ಯಾಡಿ) ಪಾತ್ರದಿಂದ ನಿರ್ಗಮಿಸುತ್ತಿದ್ದೇನೆ, ನನ್ನ ಹೃದಯದಲ್ಲಿ ಕೃತಜ್ಞತೆ ಮಾತ್ರ ಇದೆ. ಆದರೆ ಇದು ಅಂತ್ಯವಲ್ಲ&hellip; ಇದು ಕೇವಲ ಹೊಸ ಅಧ್ಯಾಯದ ಆರಂಭ. ಹೊಸ ಪಾತ್ರ, ಹೊಸ ಶೇಡ್, ಹೊಸ ಕಥೆಗಳು ಮತ್ತು ನಿಮ್ಮೆಲ್ಲರನ್ನೂ ರಂಜಿಸಲು ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ. ಅಲ್ಲಿಯವರೆಗೆ, ಈ ಅದ್ಭುತ ಪ್ರಯಾಣದುದ್ದಕ್ಕೂ ನನ್ನನ್ನು ಸ್ವೀಕರಿಸಿದ್ದಕ್ಕಾಗಿ, ಪ್ರೋತ್ಸಾಹಿಸಿದ್ದಕ್ಕಾಗಿ ಮತ್ತು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ಎಂದೆಂದಿಗೂ ಕೃತಜ್ಞರು. ಪ್ರೀತಿಯಿಂದ, ಅಥರ್ವ ಎಂದು ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/zee-kannada-news-why-did-atharva-leave-shravani-subramanya-s3goco0"/>
        </item>
        <item>
            <title><![CDATA['ಹುಚ್ಚು ಹುಚ್ಚರ ಥರ..' ಹೇಳಿಕೆ ಬಳಿಕ ಬಿಗ್ ಬಾಸ್ ಧ್ರುವಂತ್‌ಗೆ ಟ್ರೋಲ್ ಕಾಟ: ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ]]></title>
            <link>https://kannada.asianetnews.com/tv-talk/bigg-boss-fame-dhruvanth-files-police-complaint-against-trolls-gvd/articleshow-gx2kc0o</link>
            <guid isPermaLink="true">https://kannada.asianetnews.com/tv-talk/bigg-boss-fame-dhruvanth-files-police-complaint-against-trolls-gvd/articleshow-gx2kc0o</guid>
            <pubDate>Mon, 27 Jul 2026 16:22:25 +0530</pubDate>
            <description><![CDATA[&lt;p&gt;ಕಿರುತೆರೆ ನಟ ಧ್ರುವಂತ್&zwnj;, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ ಹಾಗೂ ಮಾನಹಾನಿಕಾರಕ ಪೋಸ್ಟ್&zwnj;ಗಳನ್ನು ಪ್ರಕಟಿಸುತ್ತಿರುವ ಟ್ರೋಲರ್&zwnj;ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhk7gf5exmxv2g91me88f1w,imgname-bjj-1785149506021.png" type="image/jpeg" height="390" width="690"/>
            <content:encoded><![CDATA[&lt;p&gt;'ಬಿಗ್ ಬಾಸ್ ಕನ್ನಡ' ಸೀಸನ್&zwnj; 12ರ ಮಾಜಿ ಸ್ಪರ್ಧಿ ಹಾಗೂ ಕಿರುತೆರೆ ನಟ ಧ್ರುವಂತ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ ಹಾಗೂ ಮಾನಹಾನಿಕಾರಕ ಪೋಸ್ಟ್&zwnj;ಗಳನ್ನು ಪ್ರಕಟಿಸುತ್ತಿರುವ ಟ್ರೋಲರ್&zwnj;ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಬಸವೇಶ್ವರ ನಗರ ಸೈಬರ್ ಸೆಲ್&zwnj;ನಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಧ್ರುವಂತ್, &quot;ಹುಚ್ಚು ಹುಚ್ಚರ ಥರ ಆಡುವವರಿಗೆ ಬೆಲೆ ಜಾಸ್ತಿ&quot; ಎಂದು ಹೇಳಿದ್ದರು. ಈ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಅವಹೇಳನಕಾರಿ ಕಾಮೆಂಟ್&zwnj;ಗಳು, ಟ್ರೋಲ್ ವಿಡಿಯೊಗಳು ಹಾಗೂ ಮಾನಹಾನಿಕಾರಕ ಪೋಸ್ಟ್&zwnj;ಗಳನ್ನು ಹರಿಬಿಡಲು ಆರಂಭಿಸಿದ್ದರು ಎನ್ನಲಾಗಿದೆ. ಘಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಇದೀಗ ಅವರು ಪೊಲೀಸರ ಮೊರೆ ಹೋಗಿದ್ದಾರೆ.&lt;/p&gt;&lt;h2&gt;&lt;strong&gt;ದೂರಿನಲ್ಲೇನಿದೆ?&lt;/strong&gt;&lt;/h2&gt;&lt;p&gt;ದೂರಿನಲ್ಲಿ ಧ್ರುವಂತ್, ತಾವು ಕನ್ನಡ ಚಿತ್ರರಂಗ ಹಾಗೂ ದೂರದರ್ಶನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಟರಾಗಿದ್ದು, 'ಬಿಗ್ ಬಾಸ್ ಕನ್ನಡ' ಸೀಸನ್&zwnj; 12ರ ಫೈನಲಿಸ್ಟ್ ಆಗಿ ಸಾರ್ವಜನಿಕರಲ್ಲಿ ಗೌರವ ಮತ್ತು ವಿಶ್ವಾಸ ಗಳಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಆದರೆ ಇನ್&zwnj;ಸ್ಟಾಗ್ರಾಂ ಮತ್ತು ಫೇಸ್&zwnj;ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಅವಾಚ್ಯ, ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಒಡ್ಡುವ ರೀತಿಯ ಪೋಸ್ಟ್&zwnj;, ಕಾಮೆಂಟ್ ಮತ್ತು ಸಂದೇಶಗಳನ್ನು ನಿರಂತರವಾಗಿ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;&lt;p&gt;ಈ ರೀತಿಯ ಪೋಸ್ಟ್&zwnj;ಗಳು ತಮ್ಮ ವೈಯಕ್ತಿಕ ನೆಮ್ಮದಿಯಷ್ಟೇ ಅಲ್ಲ, ವೃತ್ತಿಜೀವನದ ಮೇಲೂ ಗಂಭೀರ ಪರಿಣಾಮ ಬೀರಿವೆ ಎಂದು ಧ್ರುವಂತ್ ದೂರಿನಲ್ಲಿ ತಿಳಿಸಿದ್ದಾರೆ. ನಿರ್ಮಾಪಕರು, ನಿರ್ದೇಶಕರು, ಬ್ರಾಂಡ್&zwnj;ಗಳು ಹಾಗೂ ಇತರ ವೃತ್ತಿಪರ ವಲಯದಲ್ಲಿ ತಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಲಾಗುತ್ತಿದ್ದು, ತಮ್ಮ ಸಾರ್ವಜನಿಕ ಇಮೇಜ್, ಖ್ಯಾತಿ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ, ನಿರಂತರವಾಗಿ ಅವಾಚ್ಯ ಪದಗಳಿಂದ ನಿಂದಿಸುವುದು, ಸುಳ್ಳು ಆರೋಪಗಳನ್ನು ಹರಡುವುದು, ಬೆದರಿಕೆ ಹಾಕುವುದು ಹಾಗೂ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕವಾಗಿ ಅವಮಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಧ್ರುವಂತ್ ಆರೋಪಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ತಮಗೆ ತೀವ್ರ ಮಾನಸಿಕ ಯಾತನೆ ಹಾಗೂ ಸಾಮಾಜಿಕ ಅವಮಾನ ಉಂಟಾಗಿದ್ದು, ಇಂತಹ ಕೃತ್ಯ ಎಸಗುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅಗತ್ಯ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಸದ್ಯ ಧ್ರುವಂತ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಹಾಗೂ ಸೈಬರ್ ಸೆಲ್ ಅಧಿಕಾರಿಗಳು ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರಕ ಪೋಸ್ಟ್&zwnj;ಗಳನ್ನು ಪ್ರಕಟಿಸಿರುವ ಖಾತೆಗಳ ವಿರುದ್ಧ ಮುಂದಿನ ಕಾನೂನು ಕ್ರಮದ ಸಾಧ್ಯತೆ ಇದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-fame-dhruvanth-files-police-complaint-against-trolls-gvd/articleshow-gx2kc0o"/>
        </item>
        <item>
            <title><![CDATA[Amruthadhaare Serial: ಮಲ್ಲಿ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬಿದ್ನಾ? ಮಗನ ಜೊತೆ ಶಕುಂತಲಾಗೂ ಜೈಲೂಟ ಗ್ಯಾರಂಟಿನಾ?]]></title>
            <link>https://kannada.asianetnews.com/tv-talk/while-fate-takes-a-difficult-turn-for-bhumika-in-the-popular-serial-amruthdhaare-malli-makes-a-powerful-entry-in-khaki/articleshow-39fkeh3</link>
            <guid isPermaLink="true">https://kannada.asianetnews.com/tv-talk/while-fate-takes-a-difficult-turn-for-bhumika-in-the-popular-serial-amruthdhaare-malli-makes-a-powerful-entry-in-khaki/articleshow-39fkeh3</guid>
            <pubDate>Mon, 27 Jul 2026 14:38:01 +0530</pubDate>
            <description><![CDATA[&lt;p&gt;&quot;ಕಥೆ ಎಳೆಯೋ ಬದಲು, ಎಲ್ಲರೂ ಸುಖವಾಗಿದ್ದಾಗಲೇ ಮುಗಿಸಿಬಿಡಿ&quot; ಎಂಬ ಕೂಗು ಒಂದೆಡೆಯಾದರೆ, &quot;ಭೂಮಿಕಾ ಸಾವನ್ನಪ್ಪಬಾರದು, ಚಮತ್ಕಾರ ನಡೆಯಬೇಕು&quot; ಎನ್ನುವ ಹಂಬಲ ಇನ್ನೊಂದೆಡೆ. ಮುಂದೇನಾಗುತ್ತೆ? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhd7txnp3tytf8xsy4yd1xg,imgname-amruthdhaare-serial-1785143225269.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Amruthdhaare:ಅಮೃತಧಾರೆ ಹೈ-ವೋಲ್ಟೇಜ್ ಡ್ರಾಮಾ: ಖಾಕಿ ಪವರ್ ವರ್ಸಸ್ ಖತರ್ನಾಕ್ ಕಿರಾತಕರು!&lt;/strong&gt;&lt;/p&gt;&lt;p&gt;ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಅಮೃತಧಾರೆ' (Amruthdhaare) ಈಗ ಕೇವಲ ಕಣ್ಣೀರಿನ ಧಾರೆ ಅಷ್ಟೇ ಅಲ್ಲ, ಸುನಾಮಿ ಎಬ್ಬಿಸುವ ಕುತೂಹಲದ ಅಖಾಡವಾಗಿ ಬದಲಾಗಿದೆ! ಅತ್ತ ಭೂಮಿಕಾಳ ಬಾಳಲ್ಲಿ ವಿಧಿಯಾಟ ಶುರುವಾಗಿದ್ದರೆ, ಇತ್ತ ಪಾಪಿಗಳ ಪಾಲಿಗೆ ಸಾಕ್ಷಾತ್ ಕಾಲಭೈರವಿಯಾಗಿ ಎಂಟ್ರಿ ಕೊಟ್ಟಿದ್ದಾಳೆ ನಮ್ ಮಲ್ಲಿ!&lt;/p&gt;&lt;p&gt;ಟ್ವಿಸ್ಟ್ ಅಂದ್ರೆ ಇದು ಗುರು!&lt;/p&gt;&lt;p&gt;ಕಥೆ ಎಲ್ಲಿಗೆ ಬಂತು ಅಂದ್ರೆ, ವೀಕ್ಷಕರೆಲ್ಲಾ 'ಗೌತಮ್ ದಿವಾನನಿಗೆ ಏನೋ ಆಗಿದೆ' ಅಂತ ಅಂದುಕೊಂಡು ಟಿಶ್ಯೂ ಪೇಪರ್ ಹಿಡಿದು ಅಳೋಕೆ ರೆಡಿಯಾಗಿದ್ದರು. ಆದರೆ ಡೈರೆಕ್ಟರ್ ಸರ್ ಕೊಟ್ಟಿದ್ದು ಮಾತ್ರ ಬಿಗ್ ಶಾಕ್! ಚೆಕಪ್ ಮಾಡಿಸಿದ್ದು ಗೌತಮ್ ಆದರೆ, ರಿಪೋರ್ಟ್ ಬಂದಿದ್ದು ಮಾತ್ರ ಭೂಮಿಕಾಗೆ. ಅದು ಸಾಮಾನ್ಯ ರಿಪೋರ್ಟ್ ಅಲ್ಲ, ಸಾಕ್ಷಾತ್ ಮೃತ್ಯುವಿನ ಪತ್ರ! 3ನೇ ಹಂತದ ಸ್ತನ ಕ್ಯಾನ್ಸರ್ ಭೂಮಿಕಾಳನ್ನು ಆವರಿಸಿದ್ದು, ಕೈಯಲ್ಲಿರೋದು ಕೇವಲ ಐದು ತಿಂಗಳು ಮಾತ್ರವಂತೆ. ಈ ವಿಷಯ ಕೇಳಿ ಪ್ರೇಕ್ಷಕರು ದಿಗ್ಭ್ರಮೆಗೊಂಡಿದ್ದಾರೆ. &quot;ಅಯ್ಯೋ ಡೈರೆಕ್ಟರ್ ಅವರೇ, ಒಳ್ಳೆ ಜೋಡಿ ಮೇಲೆ ಯಾಕಿಷ್ಟು ಕೋಪ?&quot; ಅಂತ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಗರಂ ಆಗಿದ್ದಾರೆ.&lt;/p&gt;&lt;h2&gt;ಖಾಕಿ ತೊಟ್ಟ ಮಲ್ಲಿ: ಜೈದೇವ್&zwnj;ಗೆ ಶುರುವಾಯ್ತು ನಡುಕ!&lt;/h2&gt;&lt;p&gt;ಇನ್ನೊಂದೆಡೆ, ಕಥೆಗೆ ಮಸ್ತ್ ಎಂಟ್ರಿ ಸಿಕ್ಕಿದೆ. ಅದೆಂದರೆ 'ಮಲ್ಲಿ'ಯ ಖಡಕ್ ಪೊಲೀಸ್ ಅವತಾರ! ಇಷ್ಟು ದಿನ ಮುಗ್ಧೆಯಾಗಿದ್ದ ಮಲ್ಲಿ ಈಗ ಇನ್ಸ್&zwnj;ಪೆಕ್ಟರ್ ಆಗಿ ಸ್ಟೇಷನ್ ಮೆಟ್ಟಿಲೇರಿದ್ದಾಳೆ. ಜೈದೇವ್ ಮತ್ತು ಶಕುಂತಲಾ ಇಬ್ಬರೂ ಸೇರಿ ದಿವಾನ್ ಫ್ಯಾಮಿಲಿಯನ್ನು ಬೀದಿಗೆ ತರೋಕೆ ಸ್ಕೆಚ್ ಹಾಕ್ತಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ, ಅವರ ಪಕ್ಕದಲ್ಲೇ ಇರೋದು ಅವರ ಅವನತಿಯ ಕಾಲ ಅಂತ!&lt;/p&gt;&lt;p&gt;ದಿಯಾಳನ್ನು ಕೊಲೆ ಮಾಡಿ ಯಾವುದೋ ಸೀಕ್ರೆಟ್ ಬಚ್ಚಿಟ್ಟಿರೋ ಜೈದೇವ್&zwnj;ಗೆ ಈಗ ಮುಹೂರ್ತ ಫಿಕ್ಸ್ ಆಗಿದೆ. ಮಲ್ಲಿ ತನ್ನ ಚಾಣಾಕ್ಷತನದಿಂದ ಜೈದೇವನ ಒಂದೊಂದೇ ಕುತಂತ್ರಗಳನ್ನು ಬಯಲಿಗೆಳೆಯಲು ಸಜ್ಜಾಗಿದ್ದಾಳೆ. ಜೈದೇವ್ ಮತ್ತು ಶಕುಂತಲಾ ಇಬ್ಬರಿಗೂ ಜೈಲೂಟ ಗ್ಯಾರಂಟಿ ಎನ್ನುವ ಹಂತಕ್ಕೆ ಕಥೆ ಬಂದು ನಿಂತಿದೆ. ಖಾಕಿ ಡ್ರೆಸ್&zwnj;ನಲ್ಲಿ ಮಲ್ಲಿಯನ್ನು ನೋಡುವುದು ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತಿದೆ.&lt;/p&gt;&lt;h3&gt;ಪ್ರೇಕ್ಷಕರ ಆಕ್ರೋಶ ಮತ್ತು ನಿರೀಕ್ಷೆ:&lt;/h3&gt;&lt;p&gt;ಸಾವಿರ ಎಪಿಸೋಡ್&zwnj;ಗಳನ್ನು ದಾಟಿ ಮುನ್ನುಗ್ಗುತ್ತಿರುವ ಈ ಸೀರಿಯಲ್ ಬಗ್ಗೆ ಈಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. &quot;ಕಥೆ ಎಳೆಯೋ ಬದಲು, ಎಲ್ಲರೂ ಸುಖವಾಗಿದ್ದಾಗಲೇ ಮುಗಿಸಿಬಿಡಿ&quot; ಎಂಬ ಕೂಗು ಒಂದೆಡೆಯಾದರೆ, &quot;ಭೂಮಿಕಾ ಸಾವನ್ನಪ್ಪಬಾರದು, ಚಮತ್ಕಾರ ನಡೆಯಬೇಕು&quot; ಎನ್ನುವ ಹಂಬಲ ಇನ್ನೊಂದೆಡೆ. ಗೌತಮ್ ಮತ್ತು ಭೂಮಿಕಾಳ ಪ್ರೇಮ ಕಥೆಗೆ ಇಂತಹ ಟ್ರಾಜಿಕ್ ಎಂಡ್ ಸಿಗಬಾರದು ಎನ್ನುವುದು ಎಲ್ಲರ ಆಶಯ.&lt;/p&gt;&lt;p&gt;ಛಾಯಾ ಸಿಂಗ್ ಮತ್ತು ರಾಜೇಶ್ ಧ್ರುವ ಅವರ ಅಭಿನಯ ಈ ಸರಣಿಯ ಜೀವನಾಡಿ. ಪ್ರತಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾವಾಹಿ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ. ಮಲ್ಲಿ ಜೈದೇವನಿಗೆ ಬೇಡಿ ತೊಡಿಸುತ್ತಾಳಾ? ಭೂಮಿಕಾ ಸಾವನ್ನು ಗೆದ್ದು ಬರುತ್ತಾಳಾ? ಕಾದು ನೋಡಬೇಕು!&lt;/p&gt;&lt;p&gt;ಸಂಕ್ಷಿಪ್ತವಾಗಿ ಹೇಳಬೇಕೆಂದರೆ: 'ಅಮೃತಧಾರೆ' ಈಗ ಭಾವುಕತೆ ಮತ್ತು ಸೇಡಿನ ಜಿದ್ದಾಜಿದ್ದಿನ ಸಂಘರ್ಷ! ವಿಲನ್&zwnj;ಗಳ ಅಟ್ಟಹಾಸಕ್ಕೆ ಮಲ್ಲಿ ಬ್ರೇಕ್ ಹಾಕ್ತಾರಾ ಅನ್ನೋದೇ ಸದ್ಯದ ಬಿಗ್ ಸಸ್ಪೆನ್ಸ್.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/while-fate-takes-a-difficult-turn-for-bhumika-in-the-popular-serial-amruthdhaare-malli-makes-a-powerful-entry-in-khaki/articleshow-39fkeh3"/>
        </item>
        <item>
            <title><![CDATA[ಸತ್ಯ ಹೇಳಿದ್ದೇ ಮುಳುವಾಯ್ತಾ, ಕೋಟಿ ಸಂಬಳದ ಉದ್ಯೋಗ ಕಳೆದುಕೊಂಡ ನೆಟ್‌ಫ್ಲಿಕ್ಸ್ ಎಕ್ಸಿಕ್ಯೂಟಿವ್!]]></title>
            <link>https://kannada.asianetnews.com/world-news/netflix-executive-lawsuit-kevin-baillie-fired-ketamine-treatment-netflix-lawsuit-eyeline-studios-vfx-head-fired-gdp/articleshow-19ys87b</link>
            <guid isPermaLink="true">https://kannada.asianetnews.com/world-news/netflix-executive-lawsuit-kevin-baillie-fired-ketamine-treatment-netflix-lawsuit-eyeline-studios-vfx-head-fired-gdp/articleshow-19ys87b</guid>
            <pubDate>Mon, 27 Jul 2026 14:14:11 +0530</pubDate>
            <description><![CDATA[ಕಂಪನಿಯ 'ವಿಶ್ವಾಸ ವೃದ್ಧಿ ವ್ಯಾಯಾಮ'ದ ವೇಳೆ ತಮ್ಮ ಖಿನ್ನತೆಯ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತನಾಡಿದ್ದ ನೆಟ್&zwnj;ಫ್ಲಿಕ್ಸ್&zwnj;ನ ಹಿರಿಯ ಅಧಿಕಾರಿಯೊಬ್ಬರನ್ನು ವಜಾಗೊಳಿಸಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ, ಅವರು ತಾರತಮ್ಯ ಮತ್ತು ಅನ್ಯಾಯದ ಆರೋಪದ ಮೇಲೆ ಈಗ ನೆಟ್&zwnj;ಫ್ಲಿಕ್ಸ್ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyh9j5x9qmdn6xzt8vepkzfy,imgname-kevin-baillie-was-fired-from-his-role-at-netflix-1785139369896.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕ್ಯಾಲಿಫೋರ್ನಿಯಾ: &lt;/strong&gt;ಕಂಪನಿಯ ಆಂತರಿಕ ತರಬೇತಿ ಶಿಬಿರದ (Retreat) &lsquo;ವಿಶ್ವಾಸ ವೃದ್ಧಿ ವ್ಯಾಯಾಮ&rsquo;ದ (Trust Exercise) ವೇಳೆ ತಾವು ಖಿನ್ನತೆಗಾಗಿ ವೈದ್ಯಕೀಯವಾಗಿ ಕೆಟಮೈನ್ (Ketamine) ಚಿಕಿತ್ಸೆ ಪಡೆದಿದ್ದಾಗಿ ಒಪ್ಪಿಕೊಂಡ ನೆಟ್&zwnj;ಫ್ಲಿಕ್ಸ್&zwnj;ನ ಹಿರಿಯ ಕಾರ್ಯನಿರ್ವಾಹಕರೊಬ್ಬರನ್ನು ಕಂಪನಿ ವಜಾಗೊಳಿಸಿದೆ. ಈ ಅನಿರೀಕ್ಷಿತ ಕ್ರಮದಿಂದ ಆಘಾತಕ್ಕೊಳಗಾಗಿರುವ ಅಧಿಕಾರಿ, ಈಗ ಜಾಗತಿಕ ಸ್ಟ್ರೀಮಿಂಗ್ ದೈತ್ಯ ನೆಟ್&zwnj;ಫ್ಲಿಕ್ಸ್ (Netflix) ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಆರಂಭಿಸಿದ್ದಾರೆ.&lt;/p&gt;&lt;p&gt;ನೆಟ್&zwnj;ಫ್ಲಿಕ್ಸ್&zwnj;ನ ಆಂತರಿಕ ಉತ್ಪಾದನಾ ತಂತ್ರಜ್ಞಾನ, ದೃಶ್ಯ ಪರಿಣಾಮಗಳು (VFX) ಮತ್ತು ವರ್ಚುವಲ್ ಉತ್ಪಾದನಾ ಸ್ಟುಡಿಯೋ ಆದ &lsquo;ಐಲೈನ್ ಸ್ಟುಡಿಯೋಸ್&rsquo;ನಲ್ಲಿ (Eyeline Studios) ಉಪಾಧ್ಯಕ್ಷ ಹಾಗೂ ಸೃಜನಶೀಲ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಕೆವಿನ್ ಬೈಲ್ಲಿ (Kevin Baillie) ಅವರೇ ಕಂಪನಿ ವಿರುದ್ಧ ಮೊಕದ್ದಮೆ ಹೂಡಿರುವ ಮಾಜಿ ಉದ್ಯೋಗಿ. ಏಪ್ರಿಲ್ 2026 ರಲ್ಲಿ ಇವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.&lt;/p&gt;&lt;h2&gt;ಚಿಕಿತ್ಸೆಯ ಹಿನ್ನೆಲೆ ಮತ್ತು 'ವಿಶ್ವಾಸ ವ್ಯಾಯಾಮ'ದ ಎಡವಟ್ಟು&lt;/h2&gt;&lt;p&gt;&lsquo;ದಿ ನ್ಯೂಯಾರ್ಕ್ ಪೋಸ್ಟ್&rsquo; ಪ್ರಕಟಿಸಿರುವ ವರದಿಯ ಪ್ರಕಾರ, ಕೆವಿನ್ ಬೈಲ್ಲಿ ಸಲ್ಲಿಸಿರುವ ಮೊಕದ್ದಮೆಯ ಪ್ರತಿಯಲ್ಲಿ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಬೈಲ್ಲಿ ಅವರು ತಮ್ಮ ತಾಯಿಯ ನಿಧನದ ನಂತರ ತೀವ್ರವಾದ ಕ್ಲಿನಿಕಲ್ ಖಿನ್ನತೆಗೆ (Clinical Depression) ಒಳಗಾಗಿದ್ದರು. ಇದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಭಾಗವಾಗಿ, ಅವರು 2022 ರ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಸಾಂಟಾ ಬಾರ್ಬರಾ ಚಿಕಿತ್ಸಾಲಯದಲ್ಲಿ ವೈದ್ಯರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಕೆಟಮೈನ್ ಔಷಧಿಯನ್ನು ಪಡೆದುಕೊಂಡಿದ್ದರು.&lt;/p&gt;&lt;p&gt;ಆದರೆ, ಜನವರಿ 2026 ರಲ್ಲಿ ಉತ್ತರ ಕ್ಯಾಲಿಫೋರ್ನಿಯಾದ ಸೆಂಡೆರೊ ರಾಂಚ್&zwnj;ನಲ್ಲಿ ನೆಟ್&zwnj;ಫ್ಲಿಕ್ಸ್ ಆಯೋಜಿಸಿದ್ದ ಕಂಪನಿಯ ವಾರ್ಷಿಕ ರಿಟ್ರೀಟ್&zwnj;ನಲ್ಲಿ ಪರಿಸ್ಥಿತಿ ತಲೆಕೆಳಗಾಯಿತು. ಉದ್ಯೋಗಿಗಳಲ್ಲಿ ಪರಸ್ಪರ ನಂಬಿಕೆ ಹೆಚ್ಚಿಸಲು ಹಮ್ಮಿಕೊಳ್ಳಲಾಗಿದ್ದ &quot;ದುರ್ಬಲತೆ-ವಿಶ್ವಾಸ&quot; (Vulnerability-Trust) ವ್ಯಾಯಾಮದ ಸಂವಾದದ ಸಮಯದಲ್ಲಿ, ಬೈಲ್ಲಿ ಅವರು ಸಹೋದ್ಯೋಗಿಗಳ ಎದುರು ಮುಕ್ತವಾಗಿ ತಮ್ಮ ಖಿನ್ನತೆ ಮತ್ತು ಅದಕ್ಕಾಗಿ ತಾವು ಪಡೆದ ಕೆಟಮೈನ್ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಹಂಚಿಕೊಂಡಿದ್ದರು.&lt;/p&gt;&lt;h2&gt;ಸಂಶಯದ ಕಣ್ಣಿಂದ ನೋಡಿದ ನೆಟ್&zwnj;ಫ್ಲಿಕ್ಸ್ ತನಿಖಾಧಿಕಾರಿಗಳು&lt;/h2&gt;&lt;p&gt;ಬೈಲ್ಲಿ ಅವರು ಕೇವಲ ವೈದ್ಯಕೀಯ ಕಾರಣಗಳಿಗಾಗಿ ಆ ಔಷಧಿಯನ್ನು ತೆಗೆದುಕೊಂಡಿದ್ದಾಗಿ ಸ್ಪಷ್ಟಪಡಿಸಿದ್ದರೂ, ನೆಟ್&zwnj;ಫ್ಲಿಕ್ಸ್ ಮ್ಯಾನೇಜ್&zwnj;ಮೆಂಟ್ ಈ ಮುಕ್ತ ಒಪ್ಪಿಗೆಯನ್ನು ಗಂಭೀರವಾಗಿ ಪರಿಗಣಿಸಿತು. ಮಾರ್ಚ್ 18, 2026 ರಂದು ಕಂಪನಿಯ ಆಂತರಿಕ ತನಿಖಾಧಿಕಾರಿಯೊಬ್ಬರು ಬೈಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿದರು. &quot;ಅವರು ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತನಾಡಿದ್ದರೂ, ತನಿಖಾಧಿಕಾರಿಗಳು ಅದನ್ನು ಕೇವಲ ಮನರಂಜನಾ ಮಾದಕವಸ್ತು ಬಳಕೆ (Recreational Drug Use) ಎಂಬ ಸಂಶಯ ಬರುವ ರೀತಿಯಲ್ಲಿ ಪ್ರಶ್ನಿಸಿ ಮಾನಸಿಕ ಕಿರುಕುಳ ನೀಡಿದ್ದರು&quot; ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಅಸಭ್ಯ ವರ್ತನೆಯ ಆರೋಪ ಮತ್ತು ವಿಲಕ್ಷಣ ಘಟನೆ&lt;/h2&gt;&lt;p&gt;ಅಂತಿಮವಾಗಿ ಈ ವರ್ಷದ ಏಪ್ರಿಲ್&zwnj;ನಲ್ಲಿ ನೆಟ್&zwnj;ಫ್ಲಿಕ್ಸ್ ಕೆವಿನ್ ಬೈಲ್ಲಿ ಅವರನ್ನು ಅಧಿಕೃತವಾಗಿ ಕೆಲಸದಿಂದ ವಜಾಗೊಳಿಸಿತು. ಕಂಪನಿಯ ವಕೀಲರು ಸಹ &quot;ಕೆಟಮೈನ್ ಚಿಕಿತ್ಸೆಯ ಕುರಿತಾದ ವಿಚಾರವೇ ಅವರ ವಜಾಕ್ಕೆ ಮುಖ್ಯ ಕಾರಣ&quot; ಎಂಬುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ನಿಯಮಾವಳಿಗಳ ಪ್ರಕಾರ ಬೈಲ್ಲಿಗೆ ಸಿಗಬೇಕಾಗಿದ್ದ ಒಂದು ವರ್ಷದ ಬೇರ್ಪಡಿಕೆ ವೇತನವನ್ನು (Severance Pay) ನೀಡಲು ಸಹ ಕಂಪನಿ ನಿರಾಕರಿಸಿದೆ.&lt;/p&gt;&lt;p&gt;ಆದರೆ, ಕಂಪನಿಯು ತನ್ನ ತನಿಖಾ ವರದಿಯಲ್ಲಿ ಬೈಲ್ಲಿ ಅವರ ಮೇಲಿನ ಅಶ್ಲೀಲತೆ ಮತ್ತು ಮದ್ಯಪಾನದ ಆರೋಪಗಳನ್ನು ಮುನ್ನೆಲೆಗೆ ತಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೈಲ್ಲಿ, &quot;ಹಿಂದಿನ ಕಾರ್ಯಕ್ಷಮತೆಯ ವಿಮರ್ಶೆಯ (Performance Review) ಸಮಯದಲ್ಲಿ ಪ್ರೀತಿಯಿಂದ ಒಂದು ಅಥವಾ ಎರಡು ಬಾರಿ ಆಡುಭಾಷೆಯ ಕೆಟ್ಟ ಪದಗಳನ್ನು (F-bombs) ಬಳಸಬಹುದೇ ವಿನಃ ವೃತ್ತಿಪರತೆಯನ್ನು ಸಂಪೂರ್ಣವಾಗಿ ಬಿಡಬಾರದು ಎಂದು ನನಗೆ ಹಿರಿಯರೇ ಸಲಹೆ ನೀಡಿದ್ದರು&quot; ಎಂದು ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;p&gt;ಇದೇ ವೇಳೆ, ಅದೇ ರಿಟ್ರೀಟ್&zwnj;ನಲ್ಲಿ ನಡೆದ ಮತ್ತೊಂದು ವಿಲಕ್ಷಣ ಘಟನೆಯನ್ನೂ ಮೊಕದ್ದಮೆಯಲ್ಲಿ ವಿವರಿಸಲಾಗಿದೆ. ವಿಶ್ವಾಸ ವ್ಯಾಯಾಮದ ಮುಕ್ತ ಸಂಭಾಷಣೆಯ ವೇಳೆ, ತಾವು ತಲೆಯ ಮೇಲೆ ನಿಂತು (Headstand) ಗಿನ್ನೆಸ್ ಬಿಯರ್ ಕುಡಿಯುವ ವಿಶಿಷ್ಟ ಕಲೆಯನ್ನು ತಮ್ಮ ಮಾಜಿ ಮಾವನಿಂದ ಕಲಿತಿರುವುದಾಗಿ ಬೈಲ್ಲಿ ಹಂಚಿಕೊಂಡಿದ್ದರು. ಇದನ್ನು ಕೇಳಿದ ಸಹೋದ್ಯೋಗಿಯೊಬ್ಬರು ತಕ್ಷಣವೇ ಅದನ್ನು ಪ್ರದರ್ಶಿಸುವಂತೆ ಕೇಳಿಕೊಂಡಾಗ, ಶಿಬಿರದ ನಿಯಮದಂತೆ ಮುಕ್ತತೆಯನ್ನು ಗೌರವಿಸಿ ಬೈಲ್ಲಿ ಆ ಟ್ರಿಕ್ ಅನ್ನು ಪ್ರದರ್ಶಿಸಿದ್ದರು. ಕಂಪನಿ ಈಗ ಇದನ್ನು ಅಶಿಸ್ತು ಎಂದು ಬಿಂಬಿಸುತ್ತಿದೆ ಎಂಬುದು ಅವರ ವಾದ.&lt;/p&gt;&lt;h2&gt;ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಉಪಾಧ್ಯಕ್ಷ&lt;/h2&gt;&lt;p&gt;ತಮ್ಮ ಖಿನ್ನತೆಯ ವೈದ್ಯಕೀಯ ಚಿಕಿತ್ಸೆಯನ್ನೇ ಅಸ್ತ್ರವಾಗಿ ಬಳಸಿ, ಕಂಪನಿಯು ತಾರತಮ್ಯ ಎಸಗಿದೆ ಮತ್ತು ಅನ್ಯಾಯವಾಗಿ ತಮ್ಮನ್ನು ವಜಾಗೊಳಿಸಿದೆ ಎಂದು ಕೆವಿನ್ ಬೈಲ್ಲಿ ಆರೋಪಿಸಿದ್ದಾರೆ. ಸದ್ಯ ನೆಟ್&zwnj;ಫ್ಲಿಕ್ಸ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿರುವ ಅವರು, ತೀರ್ಪುಗಾರರ ಸಮ್ಮುಖದಲ್ಲಿ ವಿಚಾರಣೆ (Jury Trial), ಸೂಕ್ತ ಪರಿಹಾರ, ಕಳೆದುಹೋದ ವೇತನದ ಮರುಪಾವತಿ, ಮಾನಸಿಕ ಯಾತನೆಗೆ ಪರಿಹಾರ ಹಾಗೂ ಕಂಪನಿಯ ಬೇಜವಾಬ್ದಾರಿತನಕ್ಕೆ ದಂಡನಾತ್ಮಕ ಹಾನಿಗಳನ್ನು (Punitive Damages) ನೀಡುವಂತೆ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Gowthami K</dc:creator>
            <atom:link href="https://kannada.asianetnews.com/world-news/netflix-executive-lawsuit-kevin-baillie-fired-ketamine-treatment-netflix-lawsuit-eyeline-studios-vfx-head-fired-gdp/articleshow-19ys87b"/>
        </item>
    </channel>
</rss>
