<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 08 Jul 2026 23:47:23 +0530</lastBuildDate>
        <atom:link href="https://kannada.asianetnews.com/rss/entertainment" rel="self" type="application/rss+xml"/>
        <item>
            <title><![CDATA[Bigg Boss Telugu 10: ಬಿಗ್ ಬಾಸ್ ತಂಡಕ್ಕೆ ಶಾಕ್ ಕೊಟ್ಟ ನಾಗಾರ್ಜುನ: ಕಿಂಗ್ ಕೇಳಿದ ಸಂಭಾವನೆ ಎಷ್ಟು?]]></title>
            <link>https://kannada.asianetnews.com/entertainment/king-nagarjuna-demands-40-crore-for-bigg-boss-telugu-10-season-gvd/articleshow-8ocii0n</link>
            <guid isPermaLink="true">https://kannada.asianetnews.com/entertainment/king-nagarjuna-demands-40-crore-for-bigg-boss-telugu-10-season-gvd/articleshow-8ocii0n</guid>
            <pubDate>Wed, 08 Jul 2026 23:47:16 +0530</pubDate>
            <description><![CDATA[&lt;p&gt;ನಾಗಾರ್ಜುನ ಬಿಗ್ ಬಾಸ್ ತೆಲುಗು ಸೀಸನ್ 3ರಿಂದ ನಿರೂಪಕರಾಗಿದ್ದಾರೆ. ಮೊದಲ ಸೀಸನ್&zwnj;ಗೆ ಎನ್&zwnj;ಟಿಆರ್, ಎರಡನೇ ಸೀಸನ್&zwnj;ಗೆ ನಾನಿ ನಿರೂಪಕರಾಗಿದ್ದರು. ಮೂರನೇ ಸೀಸನ್&zwnj;ನಿಂದ ನಾಗಾರ್ಜುನ ಜವಾಬ್ದಾರಿ ವಹಿಸಿಕೊಂಡರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx1c77xx7yacmqs473w5bfnq,imgname-gxg-1783531544509.png" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ 7 ಸೀಸನ್&zwnj;ಗಳಿಂದ ಕಿಂಗ್ ನಾಗಾರ್ಜುನ ಬಿಗ್ ಬಾಸ್ ತೆಲುಗು ಶೋ ನಿರೂಪಣೆ ಮಾಡುತ್ತಿದ್ದಾರೆ. ಈ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿರುವ ನಾಗ್, ಈ ಬಾರಿಯ ಸೀಸನ್&zwnj;ಗೆ ಭಾರಿ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿಯಲ್ಲಿ ನಿಜ ಎಷ್ಟು? ನಾಗಾರ್ಜುನ ಬಿಗ್ ಬಾಸ್ ತೆಲುಗು ಸೀಸನ್ 3ರಿಂದ ನಿರೂಪಕರಾಗಿದ್ದಾರೆ. ಮೊದಲ ಸೀಸನ್&zwnj;ಗೆ ಎನ್&zwnj;ಟಿಆರ್, ಎರಡನೇ ಸೀಸನ್&zwnj;ಗೆ ನಾನಿ ನಿರೂಪಕರಾಗಿದ್ದರು. ಮೂರನೇ ಸೀಸನ್&zwnj;ನಿಂದ ನಾಗಾರ್ಜುನ ಜವಾಬ್ದಾರಿ ವಹಿಸಿಕೊಂಡರು.&lt;/p&gt;&lt;p&gt;ಅವರ ಎಂಟ್ರಿಯಿಂದ ಶೋ ರೇಟಿಂಗ್ ಹೊಸ ದಾಖಲೆಗಳನ್ನು ಸೃಷ್ಟಿಸಿತು. ಆಗ ಸೀಸನ್ 3ಕ್ಕೆ ನಾಗಾರ್ಜುನ ಸುಮಾರು 5 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ಮಧ್ಯದಲ್ಲಿ ಒಂದೆರಡು ಸೀಸನ್&zwnj;ಗಳು ಅಷ್ಟು ಚೆನ್ನಾಗಿ ನಡೆಯಲಿಲ್ಲ, ನಾಗಾರ್ಜುನ ವಿರುದ್ಧ ಟೀಕೆಗಳೂ ಬಂದವು. ಆದರೆ ನಂತರ ಎಲ್ಲವನ್ನೂ ದಾಟಿ ನಾಗಾರ್ಜುನ ಮತ್ತೆ ಶೋ ಅನ್ನು ಟ್ರ್ಯಾಕ್&zwnj;ಗೆ ತಂದರು. 66ನೇ ವಯಸ್ಸಿನಲ್ಲೂ ನಾಗಾರ್ಜುನ ಅವರಿಗಾಗಿ ಮಹಿಳಾ ಪ್ರೇಕ್ಷಕರು ಬಿಗ್ ಬಾಸ್ ನೋಡುತ್ತಾರೆ.&lt;/p&gt;&lt;p&gt;3 ಕೋಟಿಯಿಂದ ಆರಂಭವಾಗಿ, ಸೀಸನ್ 9ರ ಹೊತ್ತಿಗೆ ನಾಗಾರ್ಜುನ ಸಂಭಾವನೆ 30 ಕೋಟಿಗೆ ತಲುಪಿತ್ತಂತೆ. ಕಳೆದ ಬಿಗ್ ಬಾಸ್ ಸೀಸನ್&zwnj;ಗೆ ಅವರು 30 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಈಗ ಸೀಸನ್ 10ಕ್ಕೆ ಬಂದಾಗ, ಆ ಮೊತ್ತ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಟಾಲಿವುಡ್ ಮೂಲಗಳ ಪ್ರಕಾರ, ಈ ಹೊಸ ಸೀಸನ್&zwnj;ಗೆ ನಾಗಾರ್ಜುನ ಬರೋಬ್ಬರಿ 40 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ. ಕಳೆದ ಸೀಸನ್&zwnj;ಗೆ ಹೋಲಿಸಿದರೆ 10 ಕೋಟಿ ಹೆಚ್ಚಳವಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.&lt;/p&gt;&lt;p&gt;ಬಿಗ್ ಬಾಸ್ ಶೋ ಸುಮಾರು 15 ವಾರಗಳ ಕಾಲ ನಡೆಯುತ್ತದೆ. ಇದರಲ್ಲಿ ನಾಗಾರ್ಜುನ ಕೇವಲ ವೀಕೆಂಡ್&zwnj;ಗಳಲ್ಲಿ (ಶನಿವಾರ, ಭಾನುವಾರ) ಮಾತ್ರ ಕಾಣಿಸಿಕೊಳ್ಳುತ್ತಾರೆ. ಅಂದರೆ, ಇಡೀ ಶೋನಲ್ಲಿ ಅವರು ಭಾಗವಹಿಸುವುದು ಸುಮಾರು 30 ದಿನಗಳು ಮಾತ್ರ. ಈ ಲೆಕ್ಕಾಚಾರದ ಪ್ರಕಾರ, ನಾಗಾರ್ಜುನ ದಿನಕ್ಕೆ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಚಾರ್ಜ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಬ್ರ್ಯಾಂಡ್ ಮೌಲ್ಯ ಮತ್ತು ನಾಗಾರ್ಜುನ ಅವರ ಕ್ರೇಜ್ ಹಾಗೂ ಪ್ರಬುದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಆಯೋಜಕರು ಈ ಭಾರಿ ಮೊತ್ತವನ್ನು ನೀಡಲು ಹಿಂಜರಿಯುತ್ತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ಸ್ಪರ್ಧಿಗಳು ಯಾರು?&lt;/strong&gt;&lt;/h2&gt;&lt;p&gt;ನಾಗಾರ್ಜುನ ಸಂಭಾವನೆ ವಿಚಾರವನ್ನು ಬದಿಗಿಟ್ಟರೆ, ಈ 10ನೇ ಸೀಸನ್&zwnj;ನಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳು ಯಾರು ಎಂಬ ಬಗ್ಗೆ ಎಲ್ಲೆಡೆ ಕುತೂಹಲವಿದೆ. ಈ ಬಾರಿ ಹಿಂದೆಂದಿಗಿಂತಲೂ ಭಿನ್ನವಾಗಿ, ಹೆಚ್ಚು ಜನಪ್ರಿಯ ಸೆಲೆಬ್ರಿಟಿಗಳನ್ನು ಕಣಕ್ಕಿಳಿಸಲು ತಂಡ ಯೋಜಿಸುತ್ತಿದೆ. ಶೀಘ್ರದಲ್ಲೇ ಈ ಶೋಗೆ ಸಂಬಂಧಿಸಿದ ಅಧಿಕೃತ ಅಪ್&zwnj;ಡೇಟ್&zwnj;ಗಳು ಬರಲಿವೆ. ಈ ಸೀಸನ್ ಯಾವ ರೀತಿ ಸಂಚಲನ ಸೃಷ್ಟಿಸಲಿದೆ ಎಂಬುದನ್ನು ಕಾದು ನೋಡಬೇಕು!&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/king-nagarjuna-demands-40-crore-for-bigg-boss-telugu-10-season-gvd/articleshow-8ocii0n"/>
        </item>
        <item>
            <title><![CDATA['ಆಕೆ ನನ್ನ ಸ್ವೀಟ್‌ಹಾರ್ಟ್‌ ಆದ್ರೆ ನಾವು ಲೆಸ್ಬಿಯನ್‌ಗಳಲ್ಲ..' ನಟಿ ಸೌಮ್ಯ ಜೊತೆಗಿನ ರಿಲೇಷನ್‌ಷಿಪ್‌ ಗಾಸಿಪ್‌ಗೆ ತೆರೆ ಎಳೆದ ಅಶ್ವತಿ]]></title>
            <link>https://kannada.asianetnews.com/relationship/aswathy-nair-clarifies-lesbian-rumors-soumya-wedding-gautham-fitness-san/articleshow-7g3eixc</link>
            <guid isPermaLink="true">https://kannada.asianetnews.com/relationship/aswathy-nair-clarifies-lesbian-rumors-soumya-wedding-gautham-fitness-san/articleshow-7g3eixc</guid>
            <pubDate>Wed, 08 Jul 2026 22:44:25 +0530</pubDate>
            <description><![CDATA[&lt;p&gt;'ಲೇಡೀಸ್ ರೂಮ್' ಖ್ಯಾತಿಯ ನಟಿ ವಿಎಸ್ ಸೌಮ್ಯ, ಫಿಟ್ನೆಸ್ ಟ್ರೈನರ್ ಗೌತಮ್ ಅವರನ್ನು ಸರಳ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಈ ಮದುವೆಯ ವೇದಿಕೆಯಲ್ಲಿ, ಸೌಮ್ಯರ ಆಪ್ತ ಗೆಳತಿ ಅಶ್ವತಿ ನಾಯರ್, ತಮ್ಮಿಬ್ಬರ ಬಗ್ಗೆ ಹರಿದಾಡುತ್ತಿದ್ದ 'ಲೆಸ್ಬಿಯನ್' ಸಂಬಂಧದ ವದಂತಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyet1ht74hz13j9kvc72k1b,imgname-befunky-collage-1783433594425.jpg" type="image/jpeg" height="390" width="690"/>
            <content:encoded><![CDATA[&lt;p&gt;ತಿರುವನಂತಪುರಂ (ಜು.8): &lsquo;ಲೇಡೀಸ್ ರೂಮ್&rsquo; ಎನ್ನುವ ಜನಪ್ರಿಯ ಧಾರವಾಹಿಯ ಮೂಲಕ ಮಿನಿ ಸ್ಕ್ರೀನ್ ಪ್ರೇಕ್ಷಕರ ಮನ ಗೆದ್ದಿರುವ ನಟಿ ವಿಎಸ್ ಸೌಮ್ಯ (V.S. Soumya) ಇತ್ತೀಚೆಗಷ್ಟೇ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯ ಬೆನ್ನಲ್ಲೇ ಅವರ ವೈಯಕ್ತಿಕ ಜೀವನದ ಕುರಿತಾಗಿದ್ದ ದೊಡ್ಡದೊಂದು ವದಂತಿಗೆ ಬ್ರೇಕ್ ಬಿದ್ದಿದೆ. ಸೌಮ್ಯ ಮತ್ತು ಅವರ ಆಪ್ತ ಗೆಳತಿ, ನಟಿ ಅಶ್ವತಿ ನಾಯರ್ (Aswathy Nair) ಪರಸ್ಪರ 'ಲೆಸ್ಬಿಯನ್' (Lesbian) ಸಂಬಂಧದಲ್ಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುಳ್ಳು ಸುದ್ದಿಗಳಿಗೆ ಅಶ್ವತಿ ಈಗ ಮದುವೆಯ ವೇದಿಕೆಯಲ್ಲೇ ಖಡಕ್ ಉತ್ತರ ನೀಡಿ ಗಾಸಿಪ್&zwnj;ಕೋರರ ಬಾಯಿ ಮುಚ್ಚಿಸಿದ್ದಾರೆ.&lt;/p&gt;&lt;p&gt;ದೀರ್ಘಕಾಲದ ಸ್ನೇಹಿತ ಹಾಗೂ ಫಿಟ್ನೆಸ್ ಟ್ರೈನರ್ ಆಗಿರುವ ಗೌತಮ್ ಅವರೊಂದಿಗೆ ಸೌಮ್ಯ ಮದುವೆ ನಡೆದಿದೆ. ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಪಾಲ್ಗೊಂಡಿದ್ದ ಅತ್ಯಂತ ಸರಳ ಸಮಾರಂಭದಲ್ಲಿ ಇಬ್ಬರು ಹಾರ ಬದಲಾಯಿಸಿಕೊಂಡಿದ್ದಾರೆ. ಈ ಮದುವೆಗೆ ಆಗಮಿಸಿದ್ದ ನಟಿ ಅಶ್ವತಿ ನಾಯರ್, ಮಾಧ್ಯಮಗಳ ಎದುರು ತಮ್ಮಿಬ್ಬರ ಸ್ನೇಹದ ಬಗ್ಗೆ ಇದ್ದ ಅಪಪ್ರಚಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಇನ್ನಾದರೂ ಆ ರೀತಿ ಕರೆಯುವುದನ್ನು ನಿಲ್ಲಿಸಿ: ಅಶ್ವತಿ ಆಕ್ರೋಶ&lt;/p&gt;&lt;p&gt;ತಮ್ಮಿಬ್ಬರ ಬಗ್ಗೆ ಸೋಶಿಯಲ್&zwnj; ಮೀಡಿಯಾದಲ್ಲಿ ವ್ಯಕ್ತವಾಗುತ್ತಿದ್ದ ಟೀಕೆಗಳಿಗೆ ಉತ್ತರಿಸಿದ ಅಶ್ವತಿ, 'ತುಂಬಾ ಜನ ನಮ್ಮನ್ನು ಲೆಸ್ಬಿಯನ್, ಲೆಸ್ಬಿಯನ್ ಎಂದು ನಿರಂತರವಾಗಿ ಕರೆಯುತ್ತಿದ್ದರು. ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೇಳುವವರು ಹೇಳಲಿ, ಯಾರ ಬಾಯನ್ನೂ ನಮಗೆ ಮುಚ್ಚಿಸಲು ಸಾಧ್ಯವಿಲ್ಲ ಅಂದುಕೊಂಡಿದ್ದೆವು. ಆದರೆ ಈಗ ಆ ಗಾಸಿಪ್&zwnj; ಮಾಡುವವರಿಗೆ ನಾನು ಹೇಳಲು ಬಯಸುವುದಿಷ್ಟೇ; ಇನ್ನಾದರೂ ನಮ್ಮನ್ನು ಲೆಸ್ಬಿಯನ್ ಎಂದು ಕರೆಯುವುದನ್ನು ನಿಲ್ಲಿಸಿ. ಏಕೆಂದರೆ, ಸೌಮ್ಯ.. ನನ್ನ ಅಕ್ಕ ಈಗ ಮದುವೆಯಾಗಿದ್ದಾಳೆ. ನನಗೂ ನನ್ನದೇ ಆದ ಒಂದು ಒಳ್ಳೆಯ ಜೀವನವಿದೆ. ನಾವು ಕೇವಲ ಬೆಸ್ಟ್ ಫ್ರೆಂಡ್ಸ್ ಅಷ್ಟೇ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;ಜೀವನಪೂರ್ತಿ ಅವಳು ನನ್ನ ಸ್ವೀಟ್&zwnj;ಹಾರ್ಟ್&zwnj;&lt;/p&gt;&lt;p&gt;ತಮ್ಮ ನಡುವಿನ ಆತ್ಮೀಯ ಸಂಬಂಧದ ಬಗ್ಗೆ ಮುಂದುವರಿದು ಮಾತನಾಡಿದ ಅಶ್ವತಿ, ಸೌಮ್ಯ ನನ್ನ ಜೀವನದುದ್ದಕ್ಕೂ ನನ್ನ ಸ್ವೀಟ್&zwnj;ಹಾರ್ಟ್&zwnj; ಆಗಿ ನನ್ನ ಜೊತೆಯಲ್ಲೇ ಇರುತ್ತಾಳೆ. ಈಗ ಅವಳು ಮಾತ್ರವಲ್ಲ, ಅವಳ ಪತಿ ಗೌತಮ್ ಕೂಡ ನನ್ನ ಬೆಸ್ಟ್ ಫ್ರೆಂಡ್. ಅವರಿಬ್ಬರೂ ನನಗೆ ತುಂಬಾ ಇಷ್ಟ. ನನ್ನ ಪಾಲಿನ ಮುತ್ತುಗಳು ಅವರು,&quot; ಎಂದು ಭಾವುಕರಾಗಿ ನುಡಿದಿದ್ದಾರೆ. ಅಶ್ವತಿ ಅವರ ಈ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.&lt;/p&gt;&lt;p&gt;ನ್ಯಾಷನಲ್ ಮೆಡಲಿಸ್ಟ್ ಅಥ್ಲೀಟ್ ಈ ಸೌಮ್ಯ!&lt;/p&gt;&lt;p&gt;ಕೋಝಿಕೋಡ್&zwnj;ನ ಆನಕ್ಕಾಂಪೋಯಿಲ್ ಮೂಲದವರಾದ ಸೌಮ್ಯ ಫಿಟ್ನೆಸ್ ಟ್ರೈನರ್ ಕೂಡ ಹೌದು. ಇನ್ನು ಗೌತಮ್ ಕೂಡ ಇದೇ ಫಿಟ್ನೆಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾಲಾ ಅಲ್ಫೋನ್ಸಾ ಕಾಲೇಜಿನಲ್ಲಿ ಬಿಕಾಂ ಶಿಕ್ಷಣ ಮುಗಿಸಿದ ನಂತರ ಸೌಮ್ಯ ನಟನಾ ರಂಗಕ್ಕೆ ಪ್ರವೇಶ ಮಾಡಿದ್ದರು. ಸೌಮ್ಯ ಅವರ ಇನ್&zwnj;ಸ್ಟಾಗ್ರಾಮ್ ವೀಡಿಯೊಗಳನ್ನು ನೋಡಿ ಇಷ್ಟಪಟ್ಟ 'ಲೇಡೀಸ್ ರೂಮ್' ಧಾರಾವಾಹಿಯ ನಿರ್ದೇಶಕರು ಅವರಿಗೆ ನಟಿಸಲು ಅವಕಾಶ ನೀಡಿದ್ದರು.&lt;/p&gt;&lt;p&gt;ಇತ್ತೀಚೆಗಷ್ಟೇ ಪ್ರಸಾರ ಅಂತ್ಯಗೊಂಡ 'ಟೀಚರಮ್ಮ' ಸೀರಿಯಲ್&zwnj;ನ 'ಕನಿ' ಎಂಬ ಪಾತ್ರದ ಮೂಲಕವೂ ಸೌಮ್ಯ ಮನೆಮಾತಾಗಿದ್ದರು. ಕೇವಲ ನಟನೆ ಮಾತ್ರವಲ್ಲದೆ ಕ್ರೀಡಾರಂಗದಲ್ಲೂ ಸೌಮ್ಯ ದೊಡ್ಡ ಸಾಧನೆ ಮಾಡಿದ್ದಾರೆ. ಪೋಲ್ ವಾಲ್ಟ್ (Pole Vault) ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ (Bronze Medal) ಗೆದ್ದ ಹೆಮ್ಮೆಯ ಅಥ್ಲೀಟ್ ಇವರಾಗಿದ್ದಾರೆ. ಸದ್ಯ ಸೌಮ್ಯ ಹಾಗೂ ಗೌತಮ್ ಅವರ ಮದುವೆಯ ಸುಂದರ ಫೋಟೋಗಳಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/aswathy-nair-clarifies-lesbian-rumors-soumya-wedding-gautham-fitness-san/articleshow-7g3eixc"/>
        </item>
        <item>
            <title><![CDATA[ಪವನ್ ಕಲ್ಯಾಣ್ ಅಲ್ಲ... ಆಂಧ್ರದ ಮುಂದಿನ ಸಿಎಂ ಜೂ.ಎನ್‌ಟಿಆರ್? ವೇಣು ಸ್ವಾಮಿ ಸ್ಫೋಟಕ ಭವಿಷ್ಯ]]></title>
            <link>https://kannada.asianetnews.com/entertainment/astrologer-venu-swamy-predicts-jr-ntr-as-future-ap-cm-not-pawan-kalyan-gvd/articleshow-hacs327</link>
            <guid isPermaLink="true">https://kannada.asianetnews.com/entertainment/astrologer-venu-swamy-predicts-jr-ntr-as-future-ap-cm-not-pawan-kalyan-gvd/articleshow-hacs327</guid>
            <pubDate>Wed, 08 Jul 2026 22:44:14 +0530</pubDate>
            <description><![CDATA[&lt;p&gt;ಸಿನಿಮಾ ಮಂದಿಯ ಜಾತಕ ಹೇಳುವುದನ್ನು ನಿಲ್ಲಿಸಿದ್ದ ಜ್ಯೋತಿಷಿ ವೇಣು ಸ್ವಾಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಮತ್ತು ಜೂ.ಎನ್&zwnj;ಟಿಆರ್ ಅಭಿಮಾನಿಗಳ ನಡುವೆ ತಮ್ಮ ಹೊಸ ಭವಿಷ್ಯದ ಮೂಲಕ ಕಿಚ್ಚು ಹಚ್ಚಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx1b3wpt7ytzy8q0h0bdwppt,imgname-jgj-1783530386138.png" type="image/jpeg" height="390" width="690"/>
            <content:encoded><![CDATA[&lt;p&gt;ಕೆಲ ಕಾಲದಿಂದ ಸಿನಿಮಾ ಮಂದಿಯ ಜಾತಕ ಹೇಳುವುದನ್ನು ನಿಲ್ಲಿಸಿದ್ದ ಜ್ಯೋತಿಷಿ ವೇಣು ಸ್ವಾಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಮತ್ತು ಜೂ.ಎನ್&zwnj;ಟಿಆರ್ ಅಭಿಮಾನಿಗಳ ನಡುವೆ ತಮ್ಮ ಹೊಸ ಭವಿಷ್ಯದ ಮೂಲಕ ಕಿಚ್ಚು ಹಚ್ಚಿದ್ದಾರೆ. ತೆಲುಗು ರಾಜ್ಯಗಳಲ್ಲಿ ರಾಜಕೀಯ ಮತ್ತು ಸಿನಿಮಾ ವಿಚಾರಗಳಿಗೆ ಎಷ್ಟು ಕ್ರೇಜ್ ಇದೆಯೋ, ಅಷ್ಟೇ ಕ್ರೇಜ್ ಸೆಲೆಬ್ರಿಟಿಗಳ ಜಾತಕದ ಬಗ್ಗೆ ಬರುವ ಸುದ್ದಿಗಳಿಗೂ ಇದೆ. ಅದರಲ್ಲೂ ಜ್ಯೋತಿಷಿ ವೇಣು ಸ್ವಾಮಿ ಹೇಳುವ ಭವಿಷ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸದಾ ಹಾಟ್ ಟಾಪಿಕ್.&lt;/p&gt;&lt;p&gt;ಈ ಹಿಂದೆ ಅವರು ಹೇಳಿದ ಕೆಲವು ವಿಚಾರಗಳು ನಿಜವಾದ ಕಾರಣ, ಅವರ ಮಾತುಗಳಿಗೆ ಎಲ್ಲರಲ್ಲೂ ಒಂದು ಕುತೂಹಲ ಇದ್ದೇ ಇರುತ್ತದೆ. ಇದೀಗ ವೇಣು ಸ್ವಾಮಿ ಆಂಧ್ರ ರಾಜಕೀಯದ ಬಗ್ಗೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಆಂಧ್ರಪ್ರದೇಶ ರಾಜಕೀಯದಲ್ಲಿ ಸದ್ಯ ಉಪಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ಅವರಿಗೆ ಭಾರೀ ಕ್ರೇಜ್ ಇದೆ. ಮುಂದಿನ ದಿನಗಳಲ್ಲಿ ಅವರೇ ಮುಖ್ಯಮಂತ್ರಿ ಆಗ್ತಾರೆ ಅಂತ ಜನಸೈನಿಕರು ಮತ್ತು ಅಭಿಮಾನಿಗಳು ನಂಬಿದ್ದಾರೆ.&lt;/p&gt;&lt;p&gt;ಆದರೆ, ವೇಣು ಸ್ವಾಮಿ ಇದಕ್ಕೆ ತದ್ವಿರುದ್ಧವಾದ ಭವಿಷ್ಯ ನುಡಿದಿದ್ದಾರೆ. 'ಆಂಧ್ರದ ಮುಂದಿನ ಸಿಎಂ ಪವನ್ ಕಲ್ಯಾಣ್ ಅಲ್ಲ, ಭವಿಷ್ಯದಲ್ಲಿ ಜೂ.ಎನ್&zwnj;ಟಿಆರ್ ಆ ಪಟ್ಟಕ್ಕೇರಲಿದ್ದಾರೆ' ಎಂದು ವೇಣು ಸ್ವಾಮಿ ಹೇಳಿದ್ದಾರೆ. ಗ್ರಹಗಳ ಅನುಕೂಲತೆ ಮತ್ತು ಜಾತಕ ಚಕ್ರದ ಪ್ರಕಾರ, ಪವನ್ ಕಲ್ಯಾಣ್&zwnj;ಗಿಂತ ಜೂನಿಯರ್ ಎನ್&zwnj;ಟಿಆರ್&zwnj;ಗೆ ರಾಜಕೀಯವಾಗಿ ಉನ್ನತ ಪದವಿ ಹಿಡಿಯುವ ಯೋಗ ಹೆಚ್ಚಿದೆ ಎಂದು ವೇಣು ಸ್ವಾಮಿ ವಿಶ್ಲೇಷಿಸಿದ್ದಾರೆ. ಎನ್&zwnj;ಟಿಆರ್ ಜಾತಕದಲ್ಲಿ ರಾಜಯೋಗ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ವೇಣು ಸ್ವಾಮಿ ಅವರ ಈ ಹೇಳಿಕೆ ಸಿನಿಮಾ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪವನ್ ಕಲ್ಯಾಣ್ ಅಭಿಮಾನಿಗಳು ಈ ಭವಿಷ್ಯವನ್ನು ತಳ್ಳಿಹಾಕುತ್ತಿದ್ದರೆ, ಜೂನಿಯರ್ ಎನ್&zwnj;ಟಿಆರ್ ಅಭಿಮಾನಿಗಳು ಈ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ. ಕೆಲವು ಕಡೆ ಇಬ್ಬರೂ ಹೀರೋಗಳ ಫ್ಯಾನ್ಸ್ ನಡುವೆ ಮಾತಿನ ಚಕಮಕಿ ಕೂಡ ನಡೆಯುತ್ತಿದೆ. ಎನ್&zwnj;ಟಿಆರ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ, ಭವಿಷ್ಯದಲ್ಲಿ ರಾಜಕೀಯಕ್ಕೆ ಬರುವುದು ಖಚಿತ, ತಾತನಿಗೆ ತಕ್ಕ ಮೊಮ್ಮಗನಾಗಿ ಸಿಎಂ ಕುರ್ಚಿ ಏರುತ್ತಾರೆ ಎಂದು ನಂದಮೂರಿ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ವೇಣು ಸ್ವಾಮಿ ವಿರುದ್ಧ ಫ್ಯಾನ್ಸ್ ಗರಂ&lt;/strong&gt;&lt;/h2&gt;&lt;p&gt;ಜ್ಯೋತಿಷ್ಯ ಅನ್ನೋದು ನಂಬಿಕೆ ಮೇಲೆ ನಿಂತಿದೆ. ಹಿಂದೆ ವೇಣು ಸ್ವಾಮಿ ಹೇಳಿದ ಕೆಲವು ಭವಿಷ್ಯಗಳು ತಪ್ಪಾದ ಉದಾಹರಣೆಗಳೂ ಇವೆ. ಹಾಗಾಗಿ, ಈ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗುತ್ತೆ, ಜೂನಿಯರ್ ಎನ್&zwnj;ಟಿಆರ್ ರಾಜಕೀಯಕ್ಕೆ ಬಂದು ಆ ಮಟ್ಟಕ್ಕೆ ಏರುತ್ತಾರಾ ಅನ್ನೋದನ್ನು ಕಾದು ನೋಡಬೇಕು. ಈ ಮಾತನ್ನು ಪವನ್ ಕಲ್ಯಾಣ್ ಅಭಿಮಾನಿಗಳು ಖಂಡಿಸುತ್ತಿದ್ದಾರೆ. ಮತ್ತೆ ವಿವಾದ ಸೃಷ್ಟಿಸಿರುವ ವೇಣು ಸ್ವಾಮಿ ಮೇಲೆ ಏನಾದರೂ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/astrologer-venu-swamy-predicts-jr-ntr-as-future-ap-cm-not-pawan-kalyan-gvd/articleshow-hacs327"/>
        </item>
        <item>
            <title><![CDATA[Vaishnavi Gowda: ಮದುವೆ ಬಳಿಕ ಮತ್ತೆ ಬಂದ ವೈಷ್ಣವಿ, ಮನೆಮನೆಗೆ ಬರಲಿರುವ 'ಅಗ್ನಿಸಾಕ್ಷಿ' ಸನ್ನಿಧಿ!]]></title>
            <link>https://kannada.asianetnews.com/tv-talk/tv-serial-agnisakshi-actress-vaishnavi-gowda-comes-again-to-small-screen-with-new-serial-soon/articleshow-4rzrb3y</link>
            <guid isPermaLink="true">https://kannada.asianetnews.com/tv-talk/tv-serial-agnisakshi-actress-vaishnavi-gowda-comes-again-to-small-screen-with-new-serial-soon/articleshow-4rzrb3y</guid>
            <pubDate>Wed, 08 Jul 2026 21:58:11 +0530</pubDate>
            <description><![CDATA[&lt;p&gt;ಸೀತಾ ರಾಮ ಮುಗಿಯುತ್ತಿದ್ದಂತೆ ವೈಷ್ಣವಿ ಗೌಡ ಮದುವೆ ಸುದ್ದಿಯೂ ಕೇಳಿಬಂತು. ಉತ್ತರ ಭಾರತದ ಅನುಕೂಲ್ ಮೀಶ್ರಾ ಜೊತೆಗೆ ಕಳೆದ ವರ್ಷ ಸಪ್ತಪದಿ ತುಳಿದಿದ್ರು ವೈಷ್ಣವಿ. ಈಗ ಮತ್ತೆ ಹೊಸ ಸುದ್ದಿಯ ಮೂಲಕ ಫ್ಯಾನ್ಸ್&zwnj; ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx18thwy49pcnc99nm089agn,imgname-vaishnavi-gowda--1--1783527983006.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಕಿರುತೆರೆ ಕ್ವೀನ್ ಕಂಬ್ಯಾಕ್..ಹೆಣ್ಣುಮಕ್ಕಳು ಸಖತ್ ಖುಷ್..!&lt;/strong&gt;&lt;/h2&gt;&lt;p&gt;ಕನ್ನಡ ಕಿರುತೆರೆಯಲ್ಲೇ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರೋ ನಟಿಯರಲ್ಲಿ &lsquo;ಅಗ್ನಿಸಾಕ್ಷಿ&rsquo; ಖ್ಯಾತಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ (Vaishnavi Gowda) ಮುಂಚೂಣಿಯಲ್ಲಿ ಇದಾರೆ. ಕಳೆದ ವರ್ಷ ವೈಷ್ಣವಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಒಂದೇ ವರ್ಷಕ್ಕೆ ವೈಷ್ಣವಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಹೌದು... ಮದುವೆ ಬೆನ್ನಲ್ಲೇ ವೈಷ್ಣವಿ ಮತ್ತೆ ಕಿರುತೆರೆಗೆ ಕಮ್&zwnj;ಬ್ಯಾಕ್ ಮಾಡ್ತಿದ್ದಾರೆ.&lt;/p&gt;&lt;h3&gt;ಮದುವೆ ಬಳಿಕ ಮತ್ತೆ ಬಣ್ಣ ಹಚ್ಚಿದ ವೈಷ್ಣವಿ..! ಮತ್ತೆ ಕಿರುತೆರೆಗೆ ವೈಷ್ಣವಿ ಗೌಡ ಗ್ರ್ಯಾಂಡ್ ಎಂಟ್ರಿ&lt;/h3&gt;&lt;p&gt;ಕನ್ನಡ ಕಿರುತೆರೆ ವೀಕ್ಷಕರ ಪಾಲಿಗೆ ಮನೆಮಗಳು ಅನ್ನಿಸಿಕೊಂಡವರು ವೈಷ್ಣವಿ ಗೌಡ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಆಗಿ ಇಡೀ ಕರ್ನಾಟಕದ ಅಚ್ಚುಮೆಚ್ಚಿನ ಸೊಸೆಯಾಗಿದ್ರು ವೈಷ್ಣವಿ.&lt;/p&gt;&lt;p&gt;ಅಗ್ನಿಸಾಕ್ಷಿಯ ಯಶಸ್ಸಿನ ಬೆನ್ನಲ್ಲೇ ವೈಷ್ಣವಿ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟಿದ್ರು, ಆದ್ರೆ ಕಿರುತೆರೆಯಲ್ಲಿ ವೈಷುಗೆ ಸಿಕ್ಕ ಸಕ್ಸಸ್ ಬಿಗ್ ಸ್ಕ್ರೀನ್​ನಲ್ಲಿ ಅಷ್ಟಾಗಿ ಸಿಕ್ಕಲಿಲ್ಲ. ವೈಷ್ಣವಿ ನಟಿಸಿದ ಚಿತ್ರಗಳ್ಯಾವವೂ ಯಶಸ್ಸು ಕಾಣಲಿಲ್ಲ.&lt;/p&gt;&lt;p&gt;ಸೀತಾರಾಮ ಸೀರಿಯಲ್ ಮೂಲಕ ವೈಷ್ಣವಿ ಮತ್ತೆ ಕಿರುತೆರೆಯಲ್ಲಿ ಜರ್ನಿ ಮುಂದುವರೆಸಿದ್ರು. ಸೀತಾರಾಮ ಸೀರಿಯಲ್ ಕೂಡ ಸೂಪರ್ ಹಿಟ್ ಆಗಿ ಎಲ್ಲರ ಮನೆಮಗಳ ಪಟ್ಟ ಪಡೆದುಕೊಂಡಿದ್ರು ವೈಷ್ಣವಿ.&lt;/p&gt;&lt;p&gt;ಸೀತಾ ರಾಮ ಮುಗಿಯುತ್ತಿದ್ದಂತೆ ವೈಷ್ಣವಿ ಗೌಡ ಮದುವೆ ಸುದ್ದಿಯೂ ಕೇಳಿಬಂತು. ಉತ್ತರ ಭಾರತದ ಅನುಕೂಲ್ ಮೀಶ್ರಾ ಜೊತೆಗೆ ಕಳೆದ ವರ್ಷ ಸಪ್ತಪದಿ ತುಳಿದಿದ್ರು ವೈಷ್ಣವಿ.&lt;/p&gt;&lt;p&gt;ಮದುವೆಯಾದ ಮೇಲೆ ವೈಷ್ಣವಿ ಆಕ್ಟಿಂಗ್&zwnj;ಗೆ ಬ್ರೇಕ್ ಹಾಕ್ತಾರಾ ಅನ್ನೋ ಆತಂಕ ಅಭಿಮಾನಿಗಳಲ್ಲಿ ಇತ್ತು. ಆದರೆ, ಆ ಎಲ್ಲಾ ಕೌತುಕಗಳಿಗೆ ಈಗ ತೆರೆ ಬಿದ್ದಿದ್ದು, ವೈಷ್ಣವಿ ಮತ್ತೆ ಕಿರುತೆರೆ ಪ್ರೇಕ್ಷಕರನ್ನ ರಂಜಿಸಲು ಹೊಸ ಧಾರಾವಾಹಿಯೊಂದಿಗೆ ಅಖಾಡಕ್ಕಿಳಿತಾ ಇದ್ದಾರೆ.&lt;/p&gt;&lt;p&gt;ಹೌದು, ಹೊಸ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ನಟಿಸ್ತಾ ಇದ್ದಾರೆ. &lsquo;ಗೆಳತಿ ಗಾಯತ್ರಿ&rsquo; ಅನ್ನೋ ಮಹಿಳಾ ಪ್ರಧಾನ ಕಥೆ ಹೊಂದಿರುವ ಧಾರಾವಾಹಿ ಮೂಲಕ ವೈಷ್ಣವಿ ಗೌಡ ಕಿರುತೆರೆಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಇಷ್ಟು ದಿನ ವೈಷುನ ಮಿಸ್ ಮಾಡಿಕೊಂಡಿದ್ದ ಫ್ಯಾನ್ಸ್ ಮತ್ತೆ ಮನೆಮಗಳನ್ನ ಮನೆಗೆ ಬರಮಾಡಿಕೊಳ್ಳೋದಕ್ಕೆ ಸಜ್ಜಾಗಿದ್ದಾರೆ..!&lt;/p&gt;&lt;p&gt;ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/tv-serial-agnisakshi-actress-vaishnavi-gowda-comes-again-to-small-screen-with-new-serial-soon/articleshow-4rzrb3y"/>
        </item>
        <item>
            <title><![CDATA['ಕಾಂತಾರ'ಗೆ ಮತ್ತೊಂದು ಜಾಗತಿಕ ಗೌರವ: IFFM ನಾಮಿನೇಷನ್‌ನಲ್ಲಿ ರಿಷಬ್ ಶೆಟ್ಟಿ ಡಬಲ್ ಧಮಾಕಾ]]></title>
            <link>https://kannada.asianetnews.com/entertainment/iffm-2026-nominations-kantara-chapter-1-and-sitaare-zameen-par-lead-the-race-gvd/articleshow-w4nfyfm</link>
            <guid isPermaLink="true">https://kannada.asianetnews.com/entertainment/iffm-2026-nominations-kantara-chapter-1-and-sitaare-zameen-par-lead-the-race-gvd/articleshow-w4nfyfm</guid>
            <pubDate>Wed, 08 Jul 2026 21:57:10 +0530</pubDate>
            <description><![CDATA[&lt;p&gt;ಮೆಲ್ಬೋರ್ನ್&zwnj;ನ ಭಾರತೀಯ ಚಲನಚಿತ್ರೋತ್ಸವ (IFFM) ತನ್ನ 17ನೇ ಆವೃತ್ತಿಯ ನಾಮಿನೇಷನ್&zwnj;ಗಳನ್ನು ಪ್ರಕಟಿಸಿದೆ. 'ಸಿತಾರೆ ಜಮೀನ್ ಪರ್' ಮತ್ತು 'ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1' ಚಿತ್ರಗಳು ಪ್ರಮುಖ ಸ್ಪರ್ಧಿಗಳಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbpyxs32x2z09p7kewmk1a9p,imgname-kantara-1-1764928447586.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಲ್ಬೋರ್ನ್&zwnj;ನ ಭಾರತೀಯ ಚಲನಚಿತ್ರೋತ್ಸವ (IFFM) ತನ್ನ 17ನೇ ಆವೃತ್ತಿಯ ನಾಮಿನೇಷನ್&zwnj;ಗಳನ್ನು ಪ್ರಕಟಿಸಿದೆ. 'ಸಿತಾರೆ ಜಮೀನ್ ಪರ್' ಮತ್ತು 'ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1' ಚಿತ್ರಗಳು ಪ್ರಮುಖ ಸ್ಪರ್ಧಿಗಳಾಗಿವೆ. ಆಮೀರ್ ಖಾನ್, ರಾಣಿ ಮುಖರ್ಜಿ ಮತ್ತು ರಿಷಬ್ ಶೆಟ್ಟಿ ಕೂಡ ನಾಮನಿರ್ದೇಶನಗೊಂಡಿದ್ದಾರೆ.&lt;/p&gt;&lt;p&gt;ಮೆಲ್ಬೋರ್ನ್&zwnj;ನ ಭಾರತೀಯ ಚಲನಚಿತ್ರೋತ್ಸವ (IFFM) ತನ್ನ 17ನೇ ಆವೃತ್ತಿಯ ನಾಮಿನೇಷನ್&zwnj; ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ 'ಸಿತಾರೆ ಜಮೀನ್ ಪರ್,' 'ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1,' 'ಸೈಯಾರಾ,' 'ಮೆಂಬರ್ಸ್ ಆಫ್ ದಿ ಪ್ರಾಬ್ಲಮ್ಯಾಟಿಕ್ ಫ್ಯಾಮಿಲಿ,' ಮತ್ತು 'ನಾಟ್ ಎ ಹೀರೋ' ಚಿತ್ರಗಳು ವಿವಿಧ ವಿಭಾಗಗಳಲ್ಲಿ ಮುಂಚೂಣಿಯಲ್ಲಿವೆ. ಈ ಫಿಲ್ಮ್ ಫೆಸ್ಟಿವಲ್ 2026ರ ಆಗಸ್ಟ್ 13 ರಿಂದ ಆಗಸ್ಟ್ 23ರವರೆಗೆ ನಡೆಯಲಿದೆ. ಭಾರತದ ವಿವಿಧ ಭಾಷೆಗಳು ಮತ್ತು ಪ್ರದೇಶಗಳ ಸಿನಿಮಾಗಳನ್ನು ಈ ಉತ್ಸವದಲ್ಲಿ ಗೌರವಿಸಲಾಗುತ್ತದೆ. ವಿಕ್ಟೋರಿಯನ್ ಸರ್ಕಾರದ ಬೆಂಬಲದೊಂದಿಗೆ ನಡೆಯುವ IFFM, ಭಾರತೀಯ ಚಿತ್ರರಂಗಕ್ಕೆ ಮೀಸಲಾದ ಅತಿದೊಡ್ಡ ಅಂತರರಾಷ್ಟ್ರೀಯ ಉತ್ಸವಗಳಲ್ಲಿ ಒಂದಾಗಿದೆ.&lt;/p&gt;&lt;p&gt;&lt;strong&gt;ಪ್ರಮುಖ ಸಿನಿಮಾ ನಾಮಿನೇಷನ್&zwnj;ಗಳು&lt;/strong&gt;&lt;/p&gt;&lt;p&gt;ಈ ವರ್ಷ ಥಿಯೇಟರ್&zwnj;ಗಳಲ್ಲಿ ಮತ್ತು ಓಟಿಟಿ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಬಿಡುಗಡೆಯಾದ ಸಿನಿಮಾಗಳು ಮತ್ತು ಸಿರೀಸ್&zwnj;ಗಳನ್ನು ನಾಮಿನೇಷನ್&zwnj;ಗೆ ಪರಿಗಣಿಸಲಾಗಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ಇಂಡೀ ಚಿತ್ರ, ಅತ್ಯುತ್ತಮ ನಿರ್ದೇಶಕ, ನಟನೆ, ಅತ್ಯುತ್ತಮ ಸರಣಿ, ಅತ್ಯುತ್ತಮ ಡಾಕ್ಯುಮೆಂಟರಿ ಮತ್ತು ಉಪಖಂಡದ ಅತ್ಯುತ್ತಮ ಚಿತ್ರ ಸೇರಿದಂತೆ ಹಲವು ವಿಭಾಗಗಳಲ್ಲಿ ನಾಮನಿರ್ದೇಶನಗಳನ್ನು ಪ್ರಕಟಿಸಲಾಗಿದೆ.&lt;/p&gt;&lt;p&gt;ಅತ್ಯುತ್ತಮ ಚಿತ್ರ ವಿಭಾಗದಲ್ಲಿ 'ಹಕ್', 'ಜರನ್', 'ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1', 'ಲೋಕ ಚಾಪ್ಟರ್ 1: ಚಂದ್ರ', 'ಸೈಯಾರಾ', 'ಸಿತಾರೆ ಜಮೀನ್ ಪರ್', 'ಶರ್ತೊಪೋರ್' ಮತ್ತು 'ದಿ ಗ್ರೇಟ್ ಶಮ್ಸುದ್ದೀನ್ ಫ್ಯಾಮಿಲಿ' ಚಿತ್ರಗಳು ನಾಮಿನೇಟ್ ಆಗಿವೆ. ಅತ್ಯುತ್ತಮ ಇಂಡೀ ಚಿತ್ರ ವಿಭಾಗದಲ್ಲಿ 'ಅಮ್ಮಂಗ್ ಹೇಳ್ಬೇಡ', 'ಫುಲ್ ಪ್ಲೇಟ್', 'ಕಿಕ್ಕ್ರನ್ ದೇ ಫುಲ್', 'ಲಾலா ಆಂಡ್ ಪಾಪ್ಪಿ', 'ಮೈಲಾ - ಸೆಮ್ಮಲರ್ ಅನ್ನಂ', 'ಮೆಂಬರ್ಸ್ ಆಫ್ ದಿ ಪ್ರಾಬ್ಲಮ್ಯಾಟಿಕ್ ಫ್ಯಾಮಿಲಿ', 'ನಾಟ್ ಎ ಹೀರೋ' ಮತ್ತು 'ಪಂಖುಡಿಯಾ' ಚಿತ್ರಗಳಿವೆ.&lt;/p&gt;&lt;p&gt;&lt;strong&gt;ಟಾಪ್ ನಿರ್ದೇಶಕ ಮತ್ತು ನಟನಾ ವಿಭಾಗದ ನಾಮಿನೇಷನ್&zwnj;ಗಳು&lt;/strong&gt;&lt;/p&gt;&lt;p&gt;ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ರೇಸ್&zwnj;ನಲ್ಲಿ ಅಶ್ವಿನಿ ಅಯ್ಯರ್ ತಿವಾರಿ (ಸಿಸ್ಟಮ್), ಚಂದ್ರಶಿಶ್ ರೇ (ಪೋರ್ಶಿ), ಮೋಹಿತ್ ಸೂರಿ (ಸೈಯಾರಾ), ರಾಮಲಿಂಗಂ ಗೌತಮ್ (ಮೆಂಬರ್ಸ್ ಆಫ್ ದಿ ಪ್ರಾಬ್ಲಮ್ಯಾಟಿಕ್ ಫ್ಯಾಮಿಲಿ), ರೀಮಾ ದಾಸ್ (ನಾಟ್ ಎ ಹೀರೋ), ರಿಷಬ್ ಶೆಟ್ಟಿ (ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1), ಆರ್.ಎಸ್. ಪ್ರಸನ್ನ (ಸಿತಾರೆ ಜಮೀನ್ ಪರ್) ಮತ್ತು ಶಝಿಯಾ ಇಕ್ಬಾಲ್ (ಧಡಕ್ 2) ಇದ್ದಾರೆ. ಅತ್ಯುತ್ತಮ ನಟನೆ (ಪುರುಷ) ವಿಭಾಗದಲ್ಲಿ ಆಮೀರ್ ಖಾನ್, ಅಹಾನ್ ಪಾಂಡೆ, ಭೂಮನ್ ಭಾರ್ಗವ್ ದಾಸ್, ದುಲ್ಕರ್ ಸಲ್ಮಾನ್, ಮಮ್ಮುಟ್ಟಿ, ರಣವೀರ್ ಸಿಂಗ್, ರಿಷಬ್ ಶೆಟ್ಟಿ ಮತ್ತು ಸಂಜಯ್ ಮಿಶ್ರಾ ನಾಮನಿರ್ದೇಶನಗೊಂಡಿದ್ದಾರೆ. ಅತ್ಯುತ್ತಮ ನಟನೆ (ಮಹಿಳೆ) ವಿಭಾಗದಲ್ಲಿ ಅನೀತ್ ಪಡ್ಡಾ, ಕಲ್ಯಾಣಿ ಪ್ರಿಯದರ್ಶನ್, ಕೀರ್ತಿ ಕುಲ್ಹರಿ, ನೀನಾ ಗುಪ್ತಾ, ರಾಜಶ್ರೀ ದೇಶಪಾಂಡೆ, ರಾಣಿ ಮುಖರ್ಜಿ, ರಿತುಪರ್ಣಾ ಸೇನ್&zwnj;ಗುಪ್ತಾ ಮತ್ತು ಯಾಮಿ ಗೌತಮ್ ಧರ್ ಸ್ಪರ್ಧೆಯಲ್ಲಿದ್ದಾರೆ.&lt;/p&gt;&lt;p&gt;&lt;strong&gt;ಸ್ಟ್ರೀಮಿಂಗ್ ವಿಭಾಗದ ಹೈಲೈಟ್ಸ್&lt;/strong&gt;&lt;/p&gt;&lt;p&gt;ಸ್ಟ್ರೀಮಿಂಗ್ ವಿಭಾಗದಲ್ಲಿ 'ಕೊಹ್ರಾ: ಸೀಸನ್ 2', 'ಮಟ್ಕಾ ಕಿಂಗ್', 'ಸಪ್ನೆ Vs ಎವೆರಿವನ್', 'ಫ್ರೀಡಂ ಅಟ್ ಮಿಡ್&zwnj;ನೈಟ್: ಸೀಸನ್ 2' ಮತ್ತು 'ದಿ ಬಾ***ಡ್ಸ್ ಆಫ್ ಬಾಲಿವುಡ್' ನಂತಹ ಸಿರೀಸ್&zwnj;ಗಳು ನಾಮಿನೇಷನ್ ಲಿಸ್ಟ್&zwnj;ನಲ್ಲಿವೆ.&lt;/p&gt;&lt;h2&gt;&lt;strong&gt;ಜ್ಯೂರಿ ಮತ್ತು ಫೆಸ್ಟಿವಲ್ ಕಾರ್ಯಕ್ರಮಗಳು&lt;/strong&gt;&lt;/h2&gt;&lt;p&gt;ಆಸ್ಟ್ರೇಲಿಯಾದ ಸಿನಿಮಾ ರಂಗ ಮತ್ತು ಸಾಂಸ್ಕೃತಿಕ ಕ್ಷೇತ್ರದ ತಜ್ಞರನ್ನೊಳಗೊಂಡ ಜ್ಯೂರಿ, ವಿಜೇತರನ್ನು ಆಯ್ಕೆ ಮಾಡಲಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ, ಈ ವರ್ಷದ ಫೆಸ್ಟಿವಲ್&zwnj;ನಲ್ಲಿ ಸಿನಿಮಾ ಪ್ರೀಮಿಯರ್&zwnj;ಗಳು, ವಿಶೇಷ ಪ್ರದರ್ಶನಗಳು, ಪ್ಯಾನೆಲ್ ಚರ್ಚೆಗಳು, ಮಾಸ್ಟರ್&zwnj;ಕ್ಲಾಸ್&zwnj;ಗಳು ಮತ್ತು ಇಂಡಸ್ಟ್ರಿ ಈವೆಂಟ್&zwnj;ಗಳು ಕೂಡ ನಡೆಯಲಿವೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/iffm-2026-nominations-kantara-chapter-1-and-sitaare-zameen-par-lead-the-race-gvd/articleshow-w4nfyfm"/>
        </item>
        <item>
            <title><![CDATA[Actress Car: ಅಂತರಪಟ ಆರಾಧನಾ ಮನೆಗೆ ಬಂತು ಹೊಸ ಕಿಯಾ ಸೆಲ್ಟೋಸ್; ಹೊಸ ಕಾರು ಖರೀದಿ ಮಾಡಲಿ ಇದೇ ಕಾರಣ!]]></title>
            <link>https://kannada.asianetnews.com/gallery/tv-talk/kannada-serial-actress-radhyaa-raj-buys-new-kia-seltos-car-features-and-her-emotional-journey-sat-e0652pw</link>
            <guid isPermaLink="true">https://kannada.asianetnews.com/gallery/tv-talk/kannada-serial-actress-radhyaa-raj-buys-new-kia-seltos-car-features-and-her-emotional-journey-sat-e0652pw</guid>
            <pubDate>Wed, 08 Jul 2026 20:03:18 +0530</pubDate>
            <description><![CDATA[&lt;p&gt;'ಅಂತರಪಟ' ಧಾರಾವಾಹಿ ಖ್ಯಾತಿಯ ನಟಿ ರಾಧ್ಯಾ ರಾಜ್ ತಮ್ಮ 10 ವರ್ಷಗಳ ಹೋರಾಟದ ಫಲವಾಗಿ ಹೊಸ 'ಕಿಯಾ ಸೆಲ್ಟೋಸ್' ಕಾರನ್ನು ಖರೀದಿಸಿದ್ದಾರೆ. ತಮ್ಮ 17ನೇ ವಯಸ್ಸಿನಿಂದ 27ನೇ ವಯಸ್ಸಿನವರೆಗಿನ ಕಷ್ಟದ ಪಯಣವನ್ನು ನೆನಪಿಸಿಕೊಂಡು, &amp;nbsp;ತಮ್ಮ ಜನ್ಮದಿನದ ಉಡುಗೊರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx11kac7h93f18ra3ygtxv1f,imgname-actress-radhya-raj-new-car-kia-seltos-1783520405895.jpg" type="image/jpeg" height="390" width="690"/>
            <content:encoded><![CDATA[&lt;p&gt;'ಅಂತರಪಟ' ಧಾರಾವಾಹಿ ಖ್ಯಾತಿಯ ನಟಿ ರಾಧ್ಯಾ ರಾಜ್ ತಮ್ಮ 10 ವರ್ಷಗಳ ಹೋರಾಟದ ಫಲವಾಗಿ ಹೊಸ 'ಕಿಯಾ ಸೆಲ್ಟೋಸ್' ಕಾರನ್ನು ಖರೀದಿಸಿದ್ದಾರೆ. ತಮ್ಮ 17ನೇ ವಯಸ್ಸಿನಿಂದ 27ನೇ ವಯಸ್ಸಿನವರೆಗಿನ ಕಷ್ಟದ ಪಯಣವನ್ನು ನೆನಪಿಸಿಕೊಂಡು, &amp;nbsp;ತಮ್ಮ ಜನ್ಮದಿನದ ಉಡುಗೊರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಾಧ್ಯಾ ರಾಜ್ ತಮ್ಮ ಜೀವನದ ದೊಡ್ಡ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. 17ನೇ ವಯಸ್ಸಿನ ಹೋರಾಟದಿಂದ 27ನೇ ವಯಸ್ಸಿನ ಈ ಯಶಸ್ಸಿನವರೆಗೆ ಅವರ ಪಯಣ ಓದುಗರಿಗೆ ಸ್ಫೂರ್ತಿದಾಯಕವಾಗಿದೆ.&lt;/p&gt;&lt;p&gt;ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ ಎಂಬ ಮಾತಿಗೆ ಸಾಕ್ಷಿಯಾಗಿದ್ದಾರೆ ಕನ್ನಡ ಕಿರುತೆರೆಯ ಪ್ರತಿಭಾನ್ವಿತ ನಟಿ ರಾಧ್ಯಾರಾಜ್. ಕಲರ್ಸ್ ಕನ್ನಡದ ಜನಪ್ರಿಯ 'ಅಂತರಪಟ' ಧಾರಾವಾಹಿಯ ಮೂಲಕ ಮನೆಮಾತಾಗಿರುವ ಇವರು, ಇದೀಗ ಐಷಾರಾಮಿ 'ಕಿಯಾ ಸೆಲ್ಟೋಸ್' (Kia Seltos) ಕಾರನ್ನು ಖರೀದಿಸುವ ಮೂಲಕ ಸಂಭ್ರಮದಲ್ಲಿದ್ದಾರೆ. ಕುಟುಂಬದೊಂದಿಗೆ ಶೋರೂಮ್&zwnj;ಗೆ ತೆರಳಿ ಕಾರು ಖರೀದಿಸಿದ ನಟಿ, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ.&lt;/p&gt;&lt;img&gt;&lt;p&gt;&lt;strong&gt;ಬ್ಯಾಕ್&zwnj;ಸ್ಟೇಜ್ ಡ್ಯಾನ್ಸರ್&zwnj;ನಿಂದ ನಾಯಕ ನಟಿಯವರೆಗೆ..&lt;/strong&gt;&lt;/p&gt;&lt;p&gt;ರಾಧ್ಯಾ ರಾಜ್ ಅವರು ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ಸುಲಭದ ಹಾದಿಯನ್ನೇನೂ ತುಳಿದಿಲ್ಲ. ಈ ಬಗ್ಗೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಬರೆದುಕೊಂಡಿರುವ ಅವರು, 'ನನಗೆ 17 ವರ್ಷವಿದ್ದಾಗ ನಾನು ಒಬ್ಬ ಸಾಮಾನ್ಯ ಹುಡುಗಿಯಾಗಿದ್ದೆ. ಬ್ಯಾಕ್&zwnj;ಸ್ಟೇಜ್&zwnj;ನಲ್ಲಿ ನಿಂತು ಡ್ಯಾನ್ಸ್ ಮಾಡುತ್ತಾ, ಕಣ್ಣಲ್ಲಿ ಸಾವಿರಾರು ಕನಸುಗಳನ್ನು ಹೊತ್ತಿದ್ದೆ. ನನ್ನ ಜೀವನದಲ್ಲಿ ಯಾವುದೇ ಶಾರ್ಟ್&zwnj;ಕಟ್&zwnj;ಗಳಿರಲಿಲ್ಲ, ಆಸರೆ ನೀಡಲು ಯಾರೂ ಇರಲಿಲ್ಲ. ಕೇವಲ ಹೋರಾಟಗಳು, ಮೌನವಾಗಿ ಸುರಿಸಿದ ಕಣ್ಣೀರು ಮತ್ತು ನಿದ್ರೆಯಿಲ್ಲದ ರಾತ್ರಿಗಳಷ್ಟೇ ಜೊತೆಗಿದ್ದವು' ಎಂದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;'ಇಂದು 27ನೇ ವಯಸ್ಸಿನಲ್ಲಿ ನನ್ನ ಮೊದಲ ಕಾರಿನ ಕೀ ಹಿಡಿದಿದ್ದೇನೆ. ಹಲವರಿಗೆ ಇದು ಕೇವಲ ಕಾರು ಇರಬಹುದು, ಆದರೆ ನನಗೆ ಇದು ವರ್ಷಗಳ ತ್ಯಾಗ, ಧೈರ್ಯ ಮತ್ತು ನನ್ನ ಮೇಲಿದ್ದ ನಂಬಿಕೆಗೆ ಸಿಕ್ಕ ಜಯ. ನನ್ನ ತಂದೆ-ತಾಯಿಯ ಕಣ್ಣಲ್ಲಿ ಹೆಮ್ಮೆಯನ್ನು ನೋಡುವುದೇ ಈ ಕ್ಷಣದ ಅತ್ಯಂತ ಅಮೂಲ್ಯವಾದ ಭಾಗ' ಎಂದಿದ್ದಾರೆ. ಈ ಕಾರನ್ನು ಅವರು ತಮಗೆ ತಾವೇ ನೀಡಿಕೊಂಡ 'ಜನ್ಮದಿನದ ಉಡುಗೊರೆ' ಎಂದು ಕರೆದಿದ್ದಾರೆ.&lt;/p&gt;&lt;img&gt;&lt;p&gt;ಕಾರು ಖರೀದಿ ವೇಳೆ ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ, ಸಿಹಿ ತಿನ್ನುವ ಮೂಲಕ ತಮ್ಮ ಜನ್ಮದಿನವನ್ನೂ ಆಚರಣೆ ಮಾಡಿಕೊಂಡಿದ್ದಾರೆ. ಕುಟುಂಬ ಸದಸ್ಯರೆಲ್ಲರೂ ರಾಧ್ಯಾ ರಾಜ್&zwnj;ಗೆ ಶುಭ ಕೋರಿದ್ದಾರೆ.&amp;nbsp;&lt;/p&gt;&lt;p&gt;ಮತ್ತೊಂದು ವಿಚಾರವೆಂದರೆ ತನ್ವಿಯ ಬಾಲರಾಜ್ ಎಂಬ ಹೆಸರನ್ನು ಹೊಂದಿದ್ದ ನಟಿ ಇತ್ತೀಚೆಗೆ ಜನವರಿ ತಿಂಗಳಲ್ಲಿ ರಾಧ್ಯಾ ರಾಜ್ ಎಂದು ಹೆಸರು ಬದಲಿಸಿಕೊಂಡಿದ್ದರು. ಹೆಸರು ಬದಲಿಸಿಕೊಂಡು 6 ತಿಂಗಳಲ್ಲಿ ಹೊಸ ಕಾರನ್ನು ಖರೀದಿಸಿದ್ದಾರೆ. ಹೆಸರಿನಿಂದಲೂ ಅದೃಷ್ಟ ಖುಲಾಯಿಸಿದೆಯೇ ಎಂದು ಅವರ ಹಿತೈಷಿಗಳು ಕೇಳುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ರಾಧ್ಯಾ ರಾಜ್ ಖರೀದಿಸಿದ ಕಿಯಾ ಸೆಲ್ಟೋಸ್ ವಿಶೇಷತೆಗಳೇನು?&lt;/strong&gt;&lt;/p&gt;&lt;p&gt;ರಾಧ್ಯಾ ರಾಜ್ ಅವರು ಆಯ್ಕೆ ಮಾಡಿಕೊಂಡಿರುವ ಕಿಯಾ ಸೆಲ್ಟೋಸ್ ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಪ್ರೀಮಿಯಂ ಮತ್ತು ಸ್ಟೈಲಿಶ್ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:&lt;/p&gt;&lt;p&gt;&lt;strong&gt;ವಿನ್ಯಾಸ: &lt;/strong&gt;ಕಿಯಾ ಸೆಲ್ಟೋಸ್ ತನ್ನ ಸಿಗ್ನೇಚರ್ 'ಟೈಗರ್ ನೋಸ್' ಗ್ರಿಲ್, ಎಲ್&zwnj;ಇಡಿ ಹೆಡ್&zwnj;ಲ್ಯಾಂಪ್&zwnj;ಗಳು ಮತ್ತು ಆಕರ್ಷಕ ಅಲಾಯ್ ವೀಲ್&zwnj;ಗಳಿಂದಾಗಿ ರಸ್ತೆಯಲ್ಲಿ ಪ್ರೀಮಿಯಂ ಲುಕ್ ನೀಡುತ್ತದೆ.&lt;/p&gt;&lt;p&gt;&lt;strong&gt;ಎಂಜಿನ್ ಮತ್ತು ಪರ್ಫಾರ್ಮೆನ್ಸ್: &lt;/strong&gt;ಈ ಕಾರು 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಸಿಟಿ ಚಾಲನೆ ಮತ್ತು ಲಾಂಗ್ ಡ್ರೈವ್ ಎರಡಕ್ಕೂ ಉತ್ತಮ ಪರ್ಫಾರ್ಮೆನ್ಸ್ ನೀಡುತ್ತದೆ.&lt;/p&gt;&lt;p&gt;&lt;strong&gt;ತಂತ್ರಜ್ಞಾನ ಮತ್ತು ಒಳಾಂಗಣ: &lt;/strong&gt;ಕಾರಿನೊಳಗೆ 10.25 ಇಂಚಿನ ಟ್ವಿನ್ ಡಿಸ್&zwnj;ಪ್ಲೇ (ಇನ್ಫೋಟೈನ್&zwnj;ಮೆಂಟ್ ಮತ್ತು ಕ್ಲಸ್ಟರ್) ಇದ್ದು, ಪನೋರಮಿಕ್ ಸನ್&zwnj;ರೂಫ್ ಕಾರಿಗೆ ಐಷಾರಾಮಿ ಸ್ಪರ್ಶ ನೀಡುತ್ತದೆ. ಇನ್ನು ವೆಂಟಿಲೇಟೆಡ್ ಸೀಟುಗಳು ಮತ್ತು ಬೋಸ್ (Bose) ಸೌಂಡ್ ಸಿಸ್ಟಮ್ ಚಾಲನೆಯ ಅನುಭವವನ್ನು ಸುಧಾರಿಸುತ್ತದೆ.&lt;/p&gt;&lt;p&gt;&lt;strong&gt;ಸುರಕ್ಷತೆ: &lt;/strong&gt;ಸುರಕ್ಷತೆಯ ದೃಷ್ಟಿಯಿಂದ ಈ ಕಾರಿನಲ್ಲಿ 6 ಏರ್&zwnj;ಬ್ಯಾಗ್&zwnj;ಗಳು ಮತ್ತು ADAS Level 2 (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಫೀಚರ್ಸ್&zwnj;ಗಳಿವೆ. ಇದು 360-ಡಿಗ್ರಿ ಕ್ಯಾಮೆರಾವನ್ನು ಸಹ ಹೊಂದಿದ್ದು, ಚಾಲಕನಿಗೆ ಹೆಚ್ಚಿನ ಭದ್ರತೆ ಒದಗಿಸುತ್ತದೆ.&lt;/p&gt;&lt;img&gt;&lt;p&gt;'ಅಂತರಪಟ' ಧಾರಾವಾಹಿಯಲ್ಲಿ ಬಡತನದಿಂದ ಉದ್ಯಮ ಕಟ್ಟುವ ಹಾದಿಯಲ್ಲಿ ಸಾಗುವ 'ಆರಾಧನಾ' ಪಾತ್ರ ಮಾಡಿದ್ದ ರಾಧ್ಯಾ ರಾಜ್, ನಿಜ ಜೀವನದಲ್ಲೂ ಹಂತ ಹಂತವಾಗಿ ಬೆಳೆದು ಇಂದು ಈ ಸಾಧನೆ ಮಾಡಿರುವುದು ಅವರ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಇದೀಗ ರಾಧ್ಯಾ ರಾಜ್ ತೆಲುಗು ಕಿರುತೆರೆಯಲ್ಲಿ ಬ್ಯೂಸಿಯಾಗಿದ್ದು, 'ಎನ್ನಾಲ್ಲೋ ವಚ್ಚಿನ ಹೃದಯಂ'ಯ ನಾಯಕಿಯಾಗಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/kannada-serial-actress-radhyaa-raj-buys-new-kia-seltos-car-features-and-her-emotional-journey-sat-e0652pw"/>
        </item>
        <item>
            <title><![CDATA[Karavali Controversy: ಟ್ರೈಲರ್ ಲಾಂಚ್‌ಗೆ ಪ್ರಜ್ವಲ್ ಅಬ್ಸೆಂಟ್; ಇದಕ್ಕೆಲ್ಲಾ ಕಾರಣ ಅಲ್ವಾ ಪೇಮೆಂಟ್? ಹಾಗಿದ್ರೆ ಸತ್ಯ ಏನು?]]></title>
            <link>https://kannada.asianetnews.com/sandalwood/prajwal-devaraj-and-raj-b-shetty-controversy-about-karavali-movie-become-talk-of-the-sandalwood-now/articleshow-rnf2vp0</link>
            <guid isPermaLink="true">https://kannada.asianetnews.com/sandalwood/prajwal-devaraj-and-raj-b-shetty-controversy-about-karavali-movie-become-talk-of-the-sandalwood-now/articleshow-rnf2vp0</guid>
            <pubDate>Wed, 08 Jul 2026 20:52:58 +0530</pubDate>
            <description><![CDATA[&lt;p&gt;ಅದ್ಧೂರಿಯಾಗಿ ಸಿದ್ದವಾಗಿರೋ 'ಕರಾವಳಿ ಸಿನಿಮಾ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ತಮ್ಮದೇ ಚಿತ್ರವನ್ನ ಒಬ್ಬ ನಟ ಸಾಯಿಸೋದಕ್ಕೆ ಹೊರಟರಾ? ಅಥವಾ ಸತ್ಯ ಇನ್ನೇನೋ ಇದೆಯಾ? ಇಲ್ಲಿದೆ ಹಲವು ಸಂಗತಿಗಳು..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx152f1emqspfdvv1tkrn6x3,imgname-prajwal-devaraj-raj-b-shetty--1--1783524047918.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರಾವಳಿ.. ಡೈನಾಮಿಕ್ ಪ್ರಿನ್ಸ್ ದೇವರಾಜ್ (Prajwal Devaraj) ಮತ್ತು ರಾಜ್ ಬಿ ಶೆಟ್ಟಿ (Raj B Shetty) ನಟಿಸಿರೋ ಅದ್ದೂರಿ ಸಿನಿಮಾ. ಅಸಲಿಗೆ ಕರಾವಳಿ ತಂಡ ಅದ್ದೂರಿಯಾಗಿ ಟ್ರೈಲರ್ ಲಾಂಚ್​ಮಾಡೋಕೆ ಪ್ಲಾನ್ ಮಾಡಿತ್ತು. ಆದ್ರೆ ಪ್ರಜ್ವಲ್ ಫ್ಯಾನ್ಸ್ ಬಂದು ಈ ಇವೆಂಟ್&zwnj;ಗೆ ಅಡ್ಡಿ ಪಡಿಸಿದ್ದಾರೆ. ಅಷ್ಟಕ್ಕೂ ಏನಿದು ಕರಾವಳಿ ಕದನ..? 'ಇದಕ್ಕೆ ನಮ್ಮ ಇಂಡಸ್ಟ್ರಿ ಉದ್ದಾರ ಆಗಿಲ್ಲ ಅಂದಿದ್ದೇಕೆ ರಾಜ್ ಶೆಟ್ಟಿ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.&lt;/p&gt;&lt;h2&gt;ಪ್ರಜ್ವಲ್ ದೇವರಾಜ್ - ರಾಜ್ ಶೆಟ್ಟಿ ನಡುವೆ ಕರಾವಳಿ ಕದನ? ಕರಾವಳಿ ಚಿತ್ರದ ಟ್ರೈಲರ್ ಲಾಂಚ್​ನಲ್ಲಿ ಪ್ರಜ್ವಲ್ ಫ್ಯಾನ್ಸ್ ಗಲಾಟೆ!&lt;/h2&gt;&lt;p&gt;ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ನಟಿಸಿರೋ ಕರಾವಳಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡ್ತಾ ಬಂದಿದೆ. ಚಿತ್ರದ ಟೀಸರ್ - ಸಾಂಗ್ಸ್ ನಿರೀಕ್ಷೆ ಮೂಡಿಸಿವೆ. ಆದ್ರೆ ಕರಾವಳಿ ಟ್ರೈಲರ್ ಲಾಂಚ್​ನಲ್ಲಿ ಒಂದು ಕದನ ನಡೆದಿದೆ.&lt;/p&gt;&lt;p&gt;ಟ್ರೈಲರ್ ಬಿಡುಗಡೆಗೆ ಪ್ರಜ್ವಲ್ ಬಂದಿಲ್ಲ. ಇತ್ತ ಅವರ ಫ್ಯಾನ್ಸ್ ಈ ಇವೆಂಟ್ ಗೆ ಬಂದು ಚಿತ್ರತಂಡವರ ಮೇಲೆ ಎಗರಾಡಿದ್ದಾರೆ. ತಳ್ಳಾಟ-ನೂಕಾಟ ನಡೆದು ದೊಡ್ಡ ಹೈಡ್ರಾಮಾನೇ ನಡೆದುಹೋಗಿದೆ.&lt;/p&gt;&lt;p&gt;ರಾಜ್​ ಶೆಟ್ಟಿ ಎಂಟ್ರಿ.. ಕರಾವಳಿಯಲ್ಲಿ ಪ್ರಜ್ವಲ್ ಸೈಡ್​ಲೈನ್..?&lt;/p&gt;&lt;p&gt;ಹೌದು ಈ ಸಿನಿಮಾಗೆ ಪ್ರಜ್ವಲ್ ನಾಯಕನಟ. ಆದ್ರೆ ಚಿತ್ರದ ಮುಖ್ಯವಾದ ಅತಿಥಿ ಪಾತ್ರಕ್ಕೆ ರಾಜ್ ಎಂಟ್ರಿ ಕೊಟ್ಟಿದ್ದಾರೆ. ಶೆಟ್ರು ಬಂದ ಮೇಲೆ ತನ್ನನ್ನ ಕಡೆಗಣಿಸಿದ್ರು ಅಂತ ಪ್ರಜ್ವಲ್​ಗೆ ಅನ್ನಿಸ್ತಾ ಗೊತ್ತಿಲ್ಲ. ಎರಡು ತಿಂಗಳಿಂದ ನಿರ್ದೇಶಕ ಗುರುದತ್ ಗಾಣಿಗ ಫೋನ್ ಸಂಪರ್ಕಕ್ಕೆ ಸಿಕ್ತಿಲ್ಲವಂತೆ ಪ್ರಜ್ವಲ್.&lt;/p&gt;&lt;p&gt;1 ಕೋಟಿ ಪೇಮೆಂಟ್.. ಟ್ರೈಲರ್ ಲಾಂಚ್​ಗೆ ಪ್ರಜ್ವಲ್ ಅಬ್ಸೆಂಟ್..!&lt;/p&gt;&lt;p&gt;ಹೌದು, ಪೇಮೆಂಟ್ ವಿಷ್ಯಕ್ಕೆ ಪ್ರಜ್ವಲ್ ಮುನಿಸಿಕೊಂಡಿದ್ದಾರಾ? ಆದ್ರೆ ಸಿಕ್ಕ ಮಾಹಿತಿ ಪ್ರಕಾರ ಕರಾವಳಿ ನಿರ್ಮಾಪಕರು ನಟ ಪ್ರಜ್ವಲ್&zwnj;ಗೆ ಬರೊಬ್ಬರಿ 1 ಕೋಟಿ ಪೇಮೆಂಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಆದ್ರೆ ಕೋಟಿ ಪೇಮೆಂಟ್ ಪಡೆದ ನಟ ಟ್ರೈಲರ್ ಲಾಂಚ್​ಗೆ ಅಬ್ಸೆಂಟ್ ಆಗಿದ್ದಾರೆ ಏಕೆ? ಈ ವಿವಾದ ಅಸಲಿಯತ್ತೇನು?&lt;/p&gt;&lt;h3&gt;'ಇದಕ್ಕೆ ನಮ್ಮ ಚಿತ್ರರಂಗ ಉದ್ದಾರ ಆಗಿಲ್ಲ..' ರಾಜ್ ಶೆಟ್ಟಿ ಬೇಸರ..!&lt;/h3&gt;&lt;p&gt;ಹೌದು, ಟ್ರೈಲರ್ ಲಾಂಚ್​ನಲ್ಲಿ ನಡೆದ ಗಲಾಟೆ, ಪ್ರಜ್ವಲ್ ಮುನಿಸಿನ ಪ್ರಸಂಗದಿಂದ ರಾಜ್ ಶೆಟ್ಟಿ ಸಿಕ್ಕಾಪಟ್ಟೆ ಅಪ್ಸೆಟ್ ಆಗಿದ್ದಾರೆ. ಇದಕ್ಕೇ ನಮ್ಮ ಚಿತ್ರರಂಗ ಉದ್ದಾರ ಆಗಿಲ್ಲ' ಅಂತ ನೋವು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಪ್ರಜ್ವಲ್ ದೇವರಾಜ್ ಇಷ್ಟು ವರ್ಷ ಚಿತ್ರರಂಗದಲ್ಲಿದ್ರೂ ಒಂದು ವಿವಾದ ಕೂಡ ಮಾಡಿಕೊಂಡವರಲ್ಲ. ಆದ್ರೆ ಕರಾವಳಿ ವಿಚಾರದಲ್ಲಿ ಇಂಥಾ ವಿವಾದ ಯಾಕಾಯ್ತು ಅನ್ನೋ ಪ್ರಶ್ನೆ ಚಿತ್ರಪ್ರಿಯರನ್ನ ಕಾಡ್ತಾ ಇದೆ.&lt;/p&gt;&lt;p&gt;ಒಟ್ಟಿನಲ್ಲಿ, ಅದ್ಧೂರಿಯಾಗಿ ಸಿದ್ದವಾಗಿರೋ 'ಕರಾವಳಿ ಸಿನಿಮಾ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ತಮ್ಮದೇ ಚಿತ್ರವನ್ನ ಒಬ್ಬ ನಟ ಸಾಯಿಸೋದಕ್ಕೆ ಹೊರಟರಾ? ಅಥವಾ ಸತ್ಯ ಇನ್ನೇನೋ ಇದೆಯಾ? ಸತ್ಯ ಸಂಗತಿ ತಿಳಿಯೋತನಕ ಎಲ್ಲರನ್ನೂ ಯಾವುದೋ ಒಂದು ಅನುಮಾನ ಕಾಡೋದಂತೂ ಸತ್ಯ! ಈ ವಿಷಯದ ಬಗ್ಗೆ ಪ್ರಜ್ವಲ್ ದೇವರಾಜ್ ಏನ್ ಹೇಳ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.&lt;/p&gt;&lt;p&gt;ಹೆಚ್ಚಿನ ಮಾಗಿತಿಗೆ &lsquo;ಸಿನಿಮಾ ಹಂಗಾಮ&rsquo; ನೋಡಿ..&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/prajwal-devaraj-and-raj-b-shetty-controversy-about-karavali-movie-become-talk-of-the-sandalwood-now/articleshow-rnf2vp0"/>
        </item>
        <item>
            <title><![CDATA[ಹೋಟೆಲ್​ ಉದ್ಯಮಕ್ಕೆ ಕಾಲಿಟ್ಟ Bigg Boss ಉಗ್ರಂ ಮಂಜು: ಏನಿದರ ಸ್ಪೆಷ್ಯಾಲಿಟಿ? ಎಲ್ಲಿದೆ]]></title>
            <link>https://kannada.asianetnews.com/gallery/tv-talk/bigg-boss-ugram-manju-enters-the-hotel-industry-what-is-his-specialty-where-is-it-suc-f1h9t5k</link>
            <guid isPermaLink="true">https://kannada.asianetnews.com/gallery/tv-talk/bigg-boss-ugram-manju-enters-the-hotel-industry-what-is-his-specialty-where-is-it-suc-f1h9t5k</guid>
            <pubDate>Wed, 08 Jul 2026 20:52:26 +0530</pubDate>
            <description><![CDATA['ಬಿಗ್ ಬಾಸ್' ಖ್ಯಾತಿಯ ನಟ ಉಗ್ರಂ ಮಂಜು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ತಲಘಟ್ಟಪುರದಲ್ಲಿ 'ಮಂಡಿಪೇಟೆ ಮೈಸೂರು ಪಲಾವ್' ಹೆಸರಿನ ಹೋಟೆಲ್ ಆರಂಭಿಸಿದ್ದು, ಈ ಮೂಲಕ ಬಾಣಸಿಗನಾಗಿ ಹೊಸ ಅವತಾರವೆತ್ತಿದ್ದಾರೆ. ತಮ್ಮ ಈ ಹೊಸ ಪ್ರಯತ್ನಕ್ಕೆ ಅವರು ಅಭಿಮಾನಿಗಳ ಬೆಂಬಲ ಕೋರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx14vrenq1nsb1506avnv7xn,imgname-ugram-manju-1783523828181.jpg" type="image/jpeg" height="390" width="690"/>
            <content:encoded><![CDATA['ಬಿಗ್ ಬಾಸ್' ಖ್ಯಾತಿಯ ನಟ ಉಗ್ರಂ ಮಂಜು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ತಲಘಟ್ಟಪುರದಲ್ಲಿ 'ಮಂಡಿಪೇಟೆ ಮೈಸೂರು ಪಲಾವ್' ಹೆಸರಿನ ಹೋಟೆಲ್ ಆರಂಭಿಸಿದ್ದು, ಈ ಮೂಲಕ ಬಾಣಸಿಗನಾಗಿ ಹೊಸ ಅವತಾರವೆತ್ತಿದ್ದಾರೆ. ತಮ್ಮ ಈ ಹೊಸ ಪ್ರಯತ್ನಕ್ಕೆ ಅವರು ಅಭಿಮಾನಿಗಳ ಬೆಂಬಲ ಕೋರಿದ್ದಾರೆ.&lt;img&gt;&lt;p&gt;ಸಿನಿಮಾಗಳಲ್ಲಿ ವಿಲನ್ ಹಾಗೂ ಪೋಷಕ ನಟನಾಗಿ ಮಿಂಚುತ್ತಿದ್ದ ಉಗ್ರಂ ಮಂಜು, ಎಲ್ಲ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದದ್ದು ʻಬಿಗ್ ಬಾಸ್ʼ ಸೀಸನ್​ ಮೂಲಕ. ಇದೀಗ ಅವರ ಹೆಸರಿನ ಹಿಂದೆ ಬಿಗ್ ಬಾಸ್ ಖ್ಯಾತಿಯ ಎನ್ನುವ ಬಿರುದು ಸೇರಿಕೊಳ್ಳುತ್ತದೆ. ಈಚೆಗಷ್ಟೇ ಇವರ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ಬಿಡುಗಡೆಯಾಗಿದೆ. ಇವೆಲ್ಲವುಗಳ ನಡುವೆ ಹೊಸದೊಂದು ಗುಡ್​ನ್ಯೂಸ್ ಕೊಟ್ಟಿದ್ದಾರೆ ಮಂಜು.&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟ ಉಗ್ರಂ ಮಂಜು (Bigg Boss Ugram Manju) ಕಳೆದ ಜನವರಿಯಲ್ಲಿ ತಮ್ಮ ಸ್ನೇಹಿತೆ ಸಂಧ್ಯಾ ಜೊತೆ ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಜುನಾಥನ ಸಾನಿಧ್ಯದಲ್ಲಿ ಇವರು ವಿವಾಹವಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದೇ ತಿಂಗಳಿಗೆ ಹೊಸ ಬಿಜಿನೆಸ್​ ಶುರು ಮಾಡಿದ್ದಾರೆ ಉಗ್ರಂ ಮಂಜು. ಅವರು ಹೋಟೆಲ್​ ಉದ್ಯಮವನ್ನು ಆರಂಭ ಮಾಡಿದ್ದಾರೆ. ಈ ಕುರಿತು ವಿಶೇಷ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇದರಲ್ಲಿ ಮಂಜು ಅವರೇ ಬಾಣಸಿಗನಾಗಿರುವುದನ್ನು ಕಾಣಬಹುದು. ದೊಡ್ಡ ಪಾತ್ರೆಯಲ್ಲಿ ಸೌಟು ಹಿಡಿದು ಅಡುಗೆ ಮಾಡುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಈ ಹೊಸ ಉದ್ಯಮಕ್ಕೆ ಎಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಾನು ನಿಮ್ಮ ಪ್ರೀತಿಯ ಉಗ್ರಂ ಮಂಜು. ಇಷ್ಟು ದಿನ ಕಲಾವಿದನಾಗಿ ನನಗೆ ನಿಮ್ಮ ಪ್ರೀತಿ ಕೊಟ್ಟಿದ್ದೀರಾ. ಇವಾಗ ಹೋಟೆಲ್ ಉದ್ಯಮ ಪ್ರಾರಂಭ ಮಾಡಿದ್ದೇನೆ. ಇದಕ್ಕೂ ನಿಮ್ಮ ಬೆಂಬಲ, ಆಶೀರ್ವಾದ ಸದಾ ಹೀಗೆ ಇರಲಿ&quot; ಎಂದಿದ್ದಾರೆ.&lt;/p&gt;&lt;img&gt;&lt;p&gt;ಮಂಡಿಪೇಟೆ ಶೈಲಿಯ ರುಚಿಕರ ಆಹಾರಕ್ಕೆ ಫೇಮಸ್ ಆಗಿರುವುದಾಗಿ ತಿಳಿಸಲಾಗಿದೆ. ನಾಟಿ ಶೈಲಿಯ ಹಾಗೂ ಮೈಸೂರು ಶೈಲಿಯ ಪಲಾವ್ ಪ್ರಿಯರಿಗಾಗಿ ಈ ಹೋಟೆಲ್ ಮಸ್ತ್ ತಾಣವಾಗಲಿದೆ. ಅಂದಹಾಗೆ ʻಮಂಡಿಪೇಟೆ ಮೈಸೂರು ಪಲಾವ್ʼ ಹೆಸರಿನ ಈ ಹೋಟೆಲ್​ ಬೆಂಗಳೂರಿನ ತಲಘಟ್ಟಪುರ ಬ್ರಾಂಚ್ ಕನಕಪುರ ರಸ್ತೆಯಲ್ಲಿ ತೆರೆಯಲಾಗಿರುವುದಾಗಿ ನಟ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕೋಲಾರದ ಉಗ್ರಂ ಮಂಜು ಅವರು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಉಗ್ರಂ ಮೂವಿಯಲ್ಲಿ ಖಳ ನಟನಾಗಿ ಅಮೋಘವಾಗಿ ಅಭಿನಯ ಮಾಡಿದ್ದರು. ಈ ಸಿನಿಮಾದಿಂದಲೇ ಇವರಿಗೆ ಉಗ್ರಂ ಎನ್ನುವುದು ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-ugram-manju-enters-the-hotel-industry-what-is-his-specialty-where-is-it-suc-f1h9t5k"/>
        </item>
        <item>
            <title><![CDATA['ಮನೆಯಲ್ಲಿ ನನ್ನನ್ನು ಹೀಗೆ ಕರೆಯುತ್ತಾರೆ...: ಪತ್ನಿ ಬಗ್ಗೆ ಅಖಿಲ್ ಅಕ್ಕಿನೇನಿ ಹೇಳಿದ್ದೇನು?]]></title>
            <link>https://kannada.asianetnews.com/entertainment/akhil-akkineni-reveals-what-his-wife-zainab-calls-him-at-home-gvd/articleshow-l08mxd5</link>
            <guid isPermaLink="true">https://kannada.asianetnews.com/entertainment/akhil-akkineni-reveals-what-his-wife-zainab-calls-him-at-home-gvd/articleshow-l08mxd5</guid>
            <pubDate>Wed, 08 Jul 2026 20:41:27 +0530</pubDate>
            <description><![CDATA[&lt;p&gt;ನಾಗಾರ್ಜುನ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಖಿಲ್ ಅಕ್ಕಿನೇನಿ, ಇನ್ನೂ ಮೊದಲ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ವಿವಿ ವಿನಾಯಕ್ ನಿರ್ದೇಶನದ 'ಅಖಿಲ್' ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx14eyj7jf0jk04n1r23pcdc,imgname-kbk-1783523408455.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ಅಖಿಲ್ ಅಕ್ಕಿನೇನಿ ತಮ್ಮ ಪತ್ನಿ ಜೈನಬ್ ಬಗ್ಗೆ ಆಸಕ್ತಿಕರ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಮನೆಯಲ್ಲಿ ಜೈನಬ್ ತಮ್ಮನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಎಂಬುದನ್ನು ಅಖಿಲ್ ಬಹಿರಂಗಪಡಿಸಿದ್ದಾರೆ. ಆ ವಿವರ ಇಲ್ಲಿದೆ. ನಾಗಾರ್ಜುನ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಖಿಲ್, ಇನ್ನೂ ಮೊದಲ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ವಿವಿ ವಿನಾಯಕ್ ನಿರ್ದೇಶನದ 'ಅಖಿಲ್' ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದರು.&lt;/p&gt;&lt;p&gt;ಆದರೆ, ದೊಡ್ಡ ನಿರೀಕ್ಷೆಯೊಂದಿಗೆ ತೆರೆಕಂಡ ಈ ಚಿತ್ರ ನಿರಾಸೆ ಮೂಡಿಸಿತ್ತು. ಇದರ ನಂತರ ಬಂದ ಯಾವ ಚಿತ್ರಗಳೂ ದೊಡ್ಡ ಮಟ್ಟದ ಸದ್ದು ಮಾಡಲಿಲ್ಲ. ಆದರೆ ಸದ್ಯದಲ್ಲೇ ಬಿಡುಗಡೆಯಾಗಲಿರುವ 'ಲೆನಿನ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಬಗ್ಗೆ ಅಖಿಲ್ ತುಂಬಾ ಸಕಾರಾತ್ಮಕವಾಗಿದ್ದು, ಉತ್ಸಾಹದಿಂದಿದ್ದಾರೆ. ಸಂದರ್ಶನಗಳಲ್ಲಿ ಕೆಲವು ತಮಾಷೆಯ ಪ್ರಶ್ನೆಗಳಿಗೂ ಅಖಿಲ್ ಉತ್ತರಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಲೆನಿನ್ ಅಂತಾರೆ&lt;/strong&gt;&lt;/h2&gt;&lt;p&gt;ಕಳೆದ ವರ್ಷ ಜೂನ್&zwnj;ನಲ್ಲಿ ಅಖಿಲ್ ಮತ್ತು ಜೈನಬ್ ವಿವಾಹವಾಗಿದ್ದರು. ಪ್ರೀತಿಸಿ, ಮನೆಯವರ ಒಪ್ಪಿಗೆಯೊಂದಿಗೆ ಮದುವೆಯಾದರು. 'ಲೆನಿನ್' ಪ್ರಚಾರದ ವೇಳೆ, 'ನಿಮ್ಮ ಪತ್ನಿ ನಿಮ್ಮನ್ನು ಏನೆಂದು ಕರೆಯುತ್ತಾರೆ?' ಎಂದು ಕೇಳಲಾಯಿತು. ಅದಕ್ಕೆ ಅಖಿಲ್ ತಮಾಷೆಯಾಗಿ, 'ಸದ್ಯಕ್ಕೆ ಲೆನಿನ್ ಅಂತಾರೆ' ಎಂದರು. ನಂತರ, 'ಅವರು ನನ್ನನ್ನು 'ಮಾ' ಎಂದು ಕರೆಯುತ್ತಾರೆ' ಎಂದು ಅಖಿಲ್ ತಿಳಿಸಿದರು. ತಮ್ಮ ಪತ್ನಿಯನ್ನು ತಾನು ಏನೆಂದು ಕರೆಯುತ್ತೇನೆ ಎಂಬುದನ್ನೂ ಅಖಿಲ್ ಬಹಿರಂಗಪಡಿಸಿದರು.&lt;/p&gt;&lt;p&gt;ತಾನು ಜೈನಬ್&zwnj;ರನ್ನು 'ಬಂಗಾರಂ' ಎಂದು ಕರೆಯುವುದಾಗಿ ಅಖಿಲ್ ತಿಳಿಸಿದರು. ಜೈನಬ್ ಕೂಡ ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ ದೊಡ್ಡ ಉದ್ಯಮಿ. ಇನ್ನು ಅಖಿಲ್ ನಟನೆಯ 'ಲೆನಿನ್' ಸಿನಿಮಾ ಜುಲೈ 10 ರಂದು ಅದ್ದೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಚಿತ್ರಕ್ಕೆ ನಾಗಾರ್ಜುನ ಕೂಡ ಸಹ-ನಿರ್ಮಾಪಕರಾಗಿದ್ದಾರೆ. ಸಿತಾರಾ ನಾಗವಂಶಿ ಇನ್ನೊಬ್ಬ ನಿರ್ಮಾಪಕರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/akhil-akkineni-reveals-what-his-wife-zainab-calls-him-at-home-gvd/articleshow-l08mxd5"/>
        </item>
        <item>
            <title><![CDATA[ಗಂಡನ ಫಿಸಿಕ್‌ ನೋಡಿ ಮತ್ತೊಮ್ಮೆ 'ಹಾಟ್‌ ಹಸ್ಬೆಂಡ್‌' ಎಂದ ಕರೀನಾ ಕಪೂರ್‌ ಖಾನ್‌, ಬೀಚ್‌ ಹಾಲಿಡೇ ಫೋಟೋ ವೈರಲ್‌]]></title>
            <link>https://kannada.asianetnews.com/cine-world/kareena-kapoor-saif-ali-khan-beach-holiday-pics-hot-husband-instagram-viral-san/articleshow-q32ssz9</link>
            <guid isPermaLink="true">https://kannada.asianetnews.com/cine-world/kareena-kapoor-saif-ali-khan-beach-holiday-pics-hot-husband-instagram-viral-san/articleshow-q32ssz9</guid>
            <pubDate>Wed, 08 Jul 2026 20:20:55 +0530</pubDate>
            <description><![CDATA[ಯುರೋಪ್&zwnj;ನಲ್ಲಿ ರಜೆ ಕಳೆಯುತ್ತಿರುವ ಕರೀನಾ ಕಪೂರ್, ತಮ್ಮ ಪತಿ ಸೈಫ್ ಅಲಿ ಖಾನ್ ಅವರ ಬೀಚ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೈಫ್ ಅವರ ಹಾಟ್ ಲುಕ್&zwnj;ಗೆ 'ಹಾಟ್ ಹಸ್ಬೆಂಡ್' ಎಂದು ಕ್ಯಾಪ್ಷನ್ ನೀಡಿರುವ ಈ ಫೋಟೋಗಳು, ಅಭಿಮಾನಿಗಳಿಗೆ 'ರೇಸ್ 2' ಚಿತ್ರವನ್ನು ನೆನಪಿಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx1375ve6rm1bkxv3ccq6t74,imgname-kareena-kapoor-khan-saifeena-1783522105198.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜು.8): &lt;/strong&gt;ಬಾಲಿವುಡ್&zwnj;ನ ಸ್ಟಾರ್ ನಟಿ ಕರೀನಾ ಕಪೂರ್ ಖಾನ್ ಅವರ ಈ ಬಾರಿಯ ಬೇಸಿಗೆಯ ರಜಾದಿನಗಳನ್ನೂ ಅದ್ಭುತವಾಗಿ ಕಳೆಯುತ್ತಿದ್ದಾರೆ. ಅದಕ್ಕೆ ಕಾರಣ ಕೇವಲ ಸುಂದರವಾದ ಬೀಚ್&zwnj; ಮತ್ತು ಪ್ರಕೃತಿಯ ಸೌಂದರ್ಯ ಮಾತ್ರವಲ್ಲ, ಬದಲಿಗೆ ಅವರ ಪಕ್ಕದಲ್ಲೇ ಇರುವ ಅವರ &lsquo;ಹಾಟ್ ಹಸ್ಬೆಂಡ್&rsquo; ಸೈಫ್ ಅಲಿ ಖಾನ್! ಪ್ರಸ್ತುತ ಯುರೋಪ್&zwnj;ನ ಬೀಚ್&zwnj;ಗಳಲ್ಲಿ ರಜೆ ಕಳೆಯುತ್ತಿರುವ ಕರೀನಾ, ತಮ್ಮ ಪತಿಯ ಹಾಟ್&zwnj; ಲುಕ್&zwnj; ಫೋಟೋಗಳನ್ನು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಇಂಟರ್ನೆಟ್&zwnj;ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.&lt;/p&gt;&lt;p&gt;ಕರೀನಾ ಕಪೂರ್ ಅವರು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಸೈಫ್ ಅಲಿ ಖಾನ್ ಅವರ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸೈಫ್ ಅಲಿ ಖಾನ್ ಕಿತ್ತಳೆ ಬಣ್ಣದ ಸ್ವಿಮ್&zwnj; ಶಾರ್ಟ್ಸ್&zwnj; ಅಷ್ಟೇ ಧರಿಸಿ, ಸಮುದ್ರದ ನೀರಿನಿಂದ ಹೊರಬರುತ್ತಿರುವುದು ಕಂಡುಬಂದಿದೆ. ಸಮುದ್ರದ ನೀರಿನಲ್ಲಿ ಈಜಾಡಿ ತಮ್ಮ ಒದ್ದೆ ಕೂದಲುಗಳನ್ನು ಹಿಂದಕ್ಕೆ ಸರಿಸಿದ್ದು, ಅವರ ಸದೃಢ, ಟೋನ್ಡ್&zwnj; ಬಾಡಿ ಬಿಸಿಲಿನಲ್ಲಿ ಸಂಪೂರ್ಣವಾಗಿ ಪ್ರದರ್ಶನವಾಗಿದೆ. ಪತಿಯ ರಗಡ್ ಲುಕ್ ಮತ್ತು ಚಾರ್ಮ್&zwnj;ಗೆ ಮನಸೋತ ಕರೀನಾ ಕಪೂರ್, ಫೋಟೋದ ಕೆಳಗೆ &quot;ಬೇಸಿಗೆಯ ದಿನಗಳು ಚೆನ್ನಾಗಿ ಕಳೆಯುತ್ತಿವೆ. #HotHusband&quot; ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;&lsquo;ರೇಸ್ 2&rsquo; ನೆನಪಿಸಿಕೊಂಡ ಅಭಿಮಾನಿಗಳು; ನೆಟ್ಟಿಗರ ಕಾಮೆಂಟ್ಸ್:&lt;/strong&gt;&lt;/h2&gt;&lt;p&gt;ಕರೀನಾ ಅವರ ಈ ಪೋಸ್ಟ್&zwnj;ಗೆ ಅಭಿಮಾನಿಗಳಿಂದ ಲೈಕ್ಸ್ ಹಾಗೂ ಕಾಮೆಂಟ್&zwnj;ಗಳ ಮಹಾಪೂರವೇ ಹರಿದುಬರುತ್ತಿದೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, &quot;ಯಾವುದೇ ಅನುಮಾನವಿಲ್ಲದೆ, ಬಾಲಿವುಡ್&zwnj;ನ ಅತ್ಯುತ್ತಮ ಮತ್ತು ಅತ್ಯಂತ ಹಾಟೆಸ್ಟ್ ಜೋಡಿ ಎಂದರೆ ಇವರೇ&quot; ಎಂದು ಬರೆದಿದ್ದಾರೆ. ಇನ್ನು ಅನೇಕರು ಈ ವಯಸ್ಸಿನಲ್ಲೂ ಸೈಫ್ ಕಾಯ್ದುಕೊಂಡಿರುವ ಫಿಟ್&zwnj;ನೆಸ್ ಅನ್ನು ಕೊಂಡಾಡಿದ್ದಾರೆ. ಸೈಫ್ ಅವರ ಈ ಬೀಚ್ ಲುಕ್ ನೋಡಿದರೆ, ಅವರ ಸೂಪರ್&zwnj;ಹಿಟ್ ಸಿನಿಮಾ &lsquo;ರೇಸ್ 2&rsquo; (Race 2) ಚಿತ್ರದ ಐಕಾನಿಕ್ ಬೀಚ್ ಸೀನ್&zwnj;ಗಳು ತಕ್ಷಣ ನೆನಪಿಗೆ ಬರುತ್ತವೆ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ.&lt;/p&gt;&lt;h2&gt;&lt;strong&gt;ಪತಿಯನ್ನು ಸದಾ &lsquo;ಹಾಟ್ ಹಸ್ಬೆಂಡ್&rsquo; ಎಂದು ಕರೆಯುವ ಕರೀನಾ&lt;/strong&gt;&lt;/h2&gt;&lt;p&gt;ಕರೀನಾ ಕಪೂರ್ ತನ್ನ ಪತಿ ಸೈಫ್ ಅಲಿ ಖಾನ್ ಮೇಲಿರುವ ಪ್ರೀತಿ ಮತ್ತು ಅಭಿಮಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ಎಂದಿಗೂ ಹಿಂಜರಿದಿಲ್ಲ. ಕಳೆದ ವರ್ಷವೂ ಸೈಫ್ ಅವರ ಫೋಟೋ ಒಂದನ್ನು ಹಂಚಿಕೊಂಡಿದ್ದ ಕರೀನಾ, ಅದಕ್ಕೂ &lsquo;ಹಾಟ್ ಹಸ್ಬೆಂಡ್&rsquo; ಎಂದೇ ಕರೆದಿದ್ದರು. ಆ ಫೋಟೋದಲ್ಲಿ ಸೈಫ್ ತಿಳಿ ನೀಲಿ ಬಣ್ಣದ ಲೂಸ್ ಶರ್ಟ್ ಮತ್ತು ವೈಡ್-ಲೆಗ್ ಡೆನಿಮ್ ಪ್ಯಾಂಟ್ ಧರಿಸಿ, ಬಿಳಿ ಸ್ನೀಕರ್ಸ್, ಸನ್&zwnj;ಗ್ಲಾಸ್ ಹಾಗೂ ಕ್ಲಾಸಿಕ್ ವಾಚ್ ಧರಿಸಿ ಅತ್ಯಂತ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದರು. ಅದಕ್ಕೆ ಕರೀನಾ &quot;ಅಚ್ಚಾ, ಇಷ್ಟೊಂದು ಹಾಟ್ ಯಾಕೆ?&quot; ಎಂದು ಹಾರ್ಟ್ ಎಮೋಜಿ ಹಾಕಿ ಬರೆದಿದ್ದರು.&lt;/p&gt;&lt;p&gt;ಇದಕ್ಕೂ ಮೊದಲು ಮತ್ತೊಂದು ಬೀಚ್ ರಜಾದಿನದ ಫೋಟೋ ಹಂಚಿಕೊಂಡಿದ್ದ ಬೇಬೋ, ಅದರಲ್ಲಿ ಸೈಫ್ &quot;Beach Gstaad&quot; ಎಂದು ಬರೆದಿರುವ ಶರ್ಟ್ ಹಾಗೂ ನೇವಿ ಬ್ಲೂ ಶಾರ್ಟ್ಸ್ ಧರಿಸಿದ್ದರು. ಅದಕ್ಕೆ ಕರೀನಾ ತಮಾಷೆಯಾಗಿ, &quot;ಇವರು ಇನ್ನೂ ರಜಾದಿನದಲ್ಲೇ ಇದ್ದುಕೊಂಡು ಮುಂದಿನ ರಜಾದಿನದ ತಾಣದ ಬಗ್ಗೆ ಜಾಹೀರಾತು ನೀಡುತ್ತಿದ್ದಾರಾ?! #My Hot Husband #My Saifu&quot; ಎಂದು ಬರೆದುಕೊಂಡಿದ್ದರು.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Kareena Kapoor Khan (@kareenakapoorkhan)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/cine-world/kareena-kapoor-saif-ali-khan-beach-holiday-pics-hot-husband-instagram-viral-san/articleshow-q32ssz9"/>
        </item>
        <item>
            <title><![CDATA[ಕೊನೆಗೂ ಈಡೇರಲಿಲ್ಲ ನಟ ಪವನ್​ ಕಲ್ಯಾಣ್​ ಆಸೆ: ನಗು ಉಳಿಸಿ, ಹೃದಯ ಛಿದ್ರ ಮಾಡಿ ಮರೆಯಾದ  ಪುಟ್ಟ ಅಭಿಮಾನಿ]]></title>
            <link>https://kannada.asianetnews.com/relationship/pawan-kalyan-fan-who-was-battling-with-rare-genetic-disorder-passes-away-suc/articleshow-vgdp2zl</link>
            <guid isPermaLink="true">https://kannada.asianetnews.com/relationship/pawan-kalyan-fan-who-was-battling-with-rare-genetic-disorder-passes-away-suc/articleshow-vgdp2zl</guid>
            <pubDate>Wed, 08 Jul 2026 20:07:50 +0530</pubDate>
            <description><![CDATA[ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಅಭಿಮಾನಿ ನಿರಂಜನ್&zwnj;ನ ಕೊನೆಯಾಸೆಯಂತೆ ನಟ ಪವನ್ ಕಲ್ಯಾಣ್ ಆತನನ್ನು ಭೇಟಿಯಾಗಿದ್ದರು. ಆದರೆ ಭೇಟಿಯಾದ 20 ದಿನಗಳಲ್ಲೇ ಬಾಲಕ ನಿಧನನಾಗಿದ್ದು, ಜೊತೆಯಾಗಿ ಸಿನಿಮಾ ನೋಡುವ ಆಸೆ ಈಡೇರಿಲ್ಲ. ಈ ದುರಂತ ಘಟನೆಯಿಂದ ಪವನ್ ಕಲ್ಯಾಣ್ ಕಂಬನಿ ಮಿಡಿದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx12k9wtw90hzpe35n0f13q4,imgname-pawan-kalyan-1783521453978.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇವಲ 20 ದಿನಗಳ ಹಿಂದಷ್ಟೇ. ಆ 17 ವರ್ಷದ ಬಾಲಕನ ಕಣ್ಣಲ್ಲಿ ಅದೇನೋ ಸಾರ್ಥಕ ಮನೋಭಾವ. ಜೀವನದ ಸಂಪೂರ್ಣ ಆಸೆ ಈಡೇರಿದ ಅನುಭೂತಿ. ಹೌದು ಅಂದು ಆ ಬಾಲಕ ತನ್ನ ನೆಚ್ಚಿನ ಅರಾಧ್ಯದೈವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರನ್ನು ಕಣ್ತುಂಬಿಸಿದ್ದ. ನಟ ಪವನ್​ ಕಲ್ಯಾಣ್​ ಎಂದರೆ ಜೀವ ಬಿಡುತ್ತಿದ್ದ ಆ ಪುಟ್ಟ ಹೃದಯಕ್ಕೆ ಅಂದು ಆಗಿದ್ದ ಸಂತೋಷ ಅದೆಷ್ಟೋ. ಸಾಯುವ ಮೊದಲು ನಟನನ್ನು ನೋಡಬೇಕು ಎನ್ನುವುದೇ ಆತನ ಆಸೆಯಾಗಿತ್ತು. ಈ ಬಗ್ಗೆ ತಿಳಿಯುತ್ತಲೇ ಪವನ್​ ಕಲ್ಯಾಣ್ ಅವರು ಆ ಬಾಲಕನ ಮನೆಗೆ ಭೇಟಿ ನೀಡಿ ಮಾತನಾಡಿದ್ದರು. ಅಷ್ಟೇ ಅಲ್ಲದೇ, ಆ ಕುಟುಂಬಕ್ಕೆ ಅಗತ್ಯವಿರುವ ಆರ್ಥಿಕ ನೆರವು, ಚಿಕಿತ್ಸೆ ಬೇಕಾಗಿರುವ ನೆರವು ಕೂಡ ನೀಡಿದ್ದರು. ಇದೇ ಸಂದರ್ಭದಲ್ಲಿ ತನ್ನ ಪುಟಾಣಿ ಅಭಿಮಾನಿಗೆ ಮಾತುಕೊಟ್ಟಿದ್ದ ನಟ ಪವನ್ ಕಲ್ಯಾಣ್, ನಾವಿಬ್ಬರು ಸೇರಿ ತಮ್ಮ ಮುಂದಿನ ಒಜಿ-2 ಸಿನಿಮಾ ನೋಡೋಣಾ, ನಿನ್ನನ್ನು ನನ್ನ ಸ್ಪೆಷಲ್ ಗೆಸ್ಟ್ ಆಗಿ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ದರು.&lt;/p&gt;&lt;p&gt;ಆದರೆ, ಪವನ್​ ಕಲ್ಯಾಣ್ ಅವರ ಆಸೆ ಈಡೇರಿಲಿಲ್ಲ. ಆ ಪುಟ್ಟ ಬಾಲಕ ಇಂದು ಇಹಲೋಕ ತ್ಯಜಿಸಿದ್ದಾರೆ. 17ರ ಹರೆಯದ ಈತನ ಹೆಸರು ನಿರಂಜನ್​. ರಾಮು ಮತ್ತು ಮಾನಸ ದಂಪತಿ ಮನಗಾಗಿದ್ದ ನಿರಂಜನ್​ಗೆ ಕೆಲ ಸಮಯದಿಂದ &lsquo;ಡಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿ&rsquo; ಎಂಬ ಅನುವಂಶಿಕ ಕಾಯಿಲೆ ಸುತ್ತಿಕೊಂಡಿತ್ತು. ಇದರಿಂದಾಗಿ ಕ್ರಮೇಣ ಮಾಂಸಖಂಡಗಳ ಬೆಳವಣಿಗೆ ನಿಂತು ಹೋಗಿತ್ತು, ದೈಹಿಕ ಬೆಳವಣಿಗೆ ಆಗಿರಲಿಲ್ಲ. ಇದಕ್ಕೆ ಸದ್ಯ ಯಾವುದೇ ಚಿಕಿತ್ಸೆ ಇಲ್ಲ ಎನ್ನಲಾಗಿದೆ. ಆದ್ದರಿಂದ ಸಾವು-ಬದುಕಿನ ನಡುವೆ ನಿರಂಜನ್​ ಹೋರಾಡುತ್ತಿದ್ದ. ಕಿಡ್ನಿಗಳು ಕೂಡ ಹಾನಿಯಾಗಿತ್ತು. ಚಿಕಿತ್ಸೆಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ದರು. ಆದರೂ ಇದ್ದ ಹಣವೆಲ್ಲಾ ಖರ್ಚಾದರೂ ಚಿಕಿತ್ಸೆ ಸಿಗಲಿಲ್ಲ. ಆತನ ಆಸೆಯಂತೆ ಪವನ್​ ಕಲ್ಯಾಣ್​ ಅವರಿಗೆ ವಿಡಿಯೋ ತೋರಿಸಿದಾಗ, ಅವರು ಮನೆಗೆ ಭೇಟಿ ಕೊಟ್ಟಿದ್ದರು.&lt;/p&gt;&lt;h2&gt;&lt;strong&gt;ಪವನ್​ ಕಲ್ಯಾಣ್​ ಕಂಬನಿ&lt;/strong&gt;&lt;/h2&gt;&lt;p&gt;ತಮ್ಮ ಪುಟ್ಟ ಅಭಿಮಾನಿಯ ನಿಧನದಿಂದ ನಟ ಕಣ್ಣೀರಾಗಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಪವನ್ ಕಲ್ಯಾಣ್, ನಿರಂಜನ್ ಸಾವಿನ ಸುದ್ದಿ ತಮ್ಮ ಹೃದಯವನ್ನು ಆಳವಾಗಿ ಮುಟ್ಟಿದೆ ಎಂದಿದ್ದಾರೆ. ಕೆಲವು ದಿನಗಳ ಹಿಂದೆ ನಾನು ಹನುಮಕೊಂಡದಲ್ಲಿರುವ ನಿರಂಜನ್ ಅವರ ಮನೆಗೆ ಹೋದ ಆ ಕ್ಷಣಗಳು ಇನ್ನೂ ನನ್ನ ಮನಸ್ಸಿನಲ್ಲಿ ಎದ್ದು ಕಾಣುತ್ತಿವೆ. ಗಂಭೀರ ಅನಾರೋಗ್ಯದ ವಿರುದ್ಧ ಹೋರಾಡುತ್ತಿರುವಾಗ ನನಗಾಗಿ ಕಾಯುತ್ತಿದ್ದ ಆ ಪುಟ್ಟ ಹುಡುಗ, ನನ್ನನ್ನು ಆತ ನೋಡಿದಾಗ ಆತನ ಮುಖದಲ್ಲಿ ಮೂಡಿದ ಆ ನಗು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವೆಲ್ಲವೂ ಈಗ ಕೇವಲ ನೆನಪಾಗಿ ಉಳಿದುಬಿಟ್ಟಿವೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಹೃದಯದಲ್ಲಿ ಶಾಶ್ವತ&lt;/strong&gt;&lt;/h3&gt;&lt;p&gt;ಆತನ ದೇಹವು ರೋಗದ ವಿರುದ್ಧ ಹೋರಾಡುತ್ತಿದ್ದರೂ.. ಮನಸ್ಸು ಧೈರ್ಯದಿಂದ ತುಂಬಿತ್ತು. ಇಷ್ಟೆಲ್ಲಾ ನೋವನ್ನು ಅನುಭವಿಸಿದರೂ ಆತ ಜೀವನದಲ್ಲಿ ತೋರಿಸಿದ ಭರವಸೆ ಮತ್ತು ಆತ್ಮವಿಶ್ವಾಸ ಬಹಳ ಅಮೂಲ್ಯವಾದುದು. ಅಂತಹ ಧೈರ್ಯಶಾಲಿ ವ್ಯಕ್ತಿ ಇಷ್ಟು ಬೇಗ ನಮ್ಮನ್ನು ಅಗಲಿದ್ದು ತುಂಬಾ ದುಃಖಕರ. ಆ ಪುಟ್ಟ ಅಭಿಮಾನಿಯ ನಗು ಮತ್ತು ಹಂಚಿಕೊಂಡ ಪ್ರೀತಿ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಕಂಬನಿ ಮಿಡಿದಿದ್ದಾರೆ ಪವನ್​ಕಲ್ಯಾಣ್​&lt;/p&gt;&lt;p&gt;ಪವನ್ ಕಲ್ಯಾಣ್ ನಿರಂಜನ್ ಅವರನ್ನು ಭೇಟಿಯಾದಾಗ, ಅವರನ್ನು ಪ್ರೀತಿಯಿಂದ ಅಪ್ಪಿಕೊಂಡು ಪ್ರೋತ್ಸಾಹಿಸಿದರು. ಸೆಲ್ಫಿ ತೆಗೆದುಕೊಂಡರು. ತಿರುಮಲ ಶ್ರೀವಾರಿ ಪ್ರಸಾದವನ್ನು ನೀಡಿದರು. ನಿರಂಜನ್, 'ನಾನು ನಾಯಿಮರಿ ಸಾಕಲು ಬಯಸುತ್ತೇನೆ' ಎಂದು ಹೇಳಿದ್ದ. ಆಗ ಪವನ್​ ಅವರು ನಾನು ಅದನ್ನು ಖರೀದಿಸಿ ನಿನಗೆ ಕಳುಹಿಸುತ್ತೇನೆ ಎಂದು ಕೂಡ ಹೇಳಿದ್ದರು. ಆದರೆ ಈಗ ಎಲ್ಲವೂ ನೆನಪು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/pawan-kalyan-fan-who-was-battling-with-rare-genetic-disorder-passes-away-suc/articleshow-vgdp2zl"/>
        </item>
        <item>
            <title><![CDATA[ಮಳೆಯಿಂದ ಹೆದ್ದಾರಿಯಲ್ಲಿ 9 ಗಂಟೆ ಟ್ರಾಫಿಕ್ ಜಾಮ್: ಪೀರಿಯಡ್ಸ್‌ ನರಕಯಾತನೆ ಬಿಚ್ಚಿಟ್ಟ ಸೀರಿಯಲ್‌ ನಟಿ]]></title>
            <link>https://kannada.asianetnews.com/tv-talk/marathi-actress-dhanashri-kadgaonkar-stuck-mumbai-pune-highway-traffic-periods-san/articleshow-qol02ug</link>
            <guid isPermaLink="true">https://kannada.asianetnews.com/tv-talk/marathi-actress-dhanashri-kadgaonkar-stuck-mumbai-pune-highway-traffic-periods-san/articleshow-qol02ug</guid>
            <pubDate>Wed, 08 Jul 2026 19:39:08 +0530</pubDate>
            <description><![CDATA[ಮರಾಠಿ ನಟಿ ಧನಶ್ರೀ ಕಾಡಗಾಂವ್ಕರ್ ಅವರು ಮಹಾಮಳೆಯಿಂದಾಗಿ ಪುಣೆ-ಮುಂಬೈ ಹೆದ್ದಾರಿಯಲ್ಲಿ 9 ಗಂಟೆಗಳ ಕಾಲ ಟ್ರಾಫಿಕ್&zwnj;ನಲ್ಲಿ ಸಿಲುಕಿಕೊಂಡರು. ಈ ಸಮಯದಲ್ಲಿ ಮುಟ್ಟಿನ ನೋವಿನಿಂದ ಬಳಲಿದರೂ, ತಮ್ಮ ವೃತ್ತಿಪರ ಬದ್ಧತೆಯಿಂದಾಗಿ ಶೂಟಿಂಗ್ ಸ್ಥಳವನ್ನು ತಲುಪಿದ ತಮ್ಮ ಕಠಿಣ ಅನುಭವವನ್ನು ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx10szsppf6g0a7bfxf9yhfs,imgname-actress-dhanashri-kadgaonkar-1783519575862.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜು.8): &lt;/strong&gt;ಮಹಾಮಳೆಯಿಂದಾಗಿ ಮಹಾರಾಷ್ಟ್ರದ ಪ್ರಮುಖ ಹೆದ್ದಾರಿಗಳು ಸಂಪೂರ್ಣ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿರುವ ಬೆನ್ನಲ್ಲೇ, ಕಿರುತೆರೆಯ ಪ್ರಖ್ಯಾತ ನಟಿಯೊಬ್ಬರು ಪುಣೆ-ಮುಂಬೈ ಹೆದ್ದಾರಿಯಲ್ಲಿ ಬರೋಬ್ಬರಿ ಒಂಬತ್ತು ಗಂಟೆಗಳ ಕಾಲ ಟ್ರಾಫಿಕ್ ಜಾಮ್&zwnj;ನಲ್ಲಿ ಸಿಲುಕಿ ನರಕಯಾತನೆ ಅನುಭವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಖುದ್ದು ನಟಿಯೇ ತಮ್ಮ ಸೋಶಿಯಲ್&zwnj; ಮೀಡಿಯಾ ಖಾತೆಯಲ್ಲಿ ನೋವಿನ ವಿಚಾರ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಮರಾಠಿ ಟಿವಿ ಸೀರಿಯಲ್&zwnj;ಗಳ ಪ್ರಖ್ಯಾತ ನಟಿ ಧನಶ್ರೀ ಕಾಡಗಾಂವ್ಕರ್ (Dhanashri Kadgaonkar) ಈ ಕಠಿಣ ಪರಿಸ್ಥಿತಿ ಎದುರಾಗಿದೆ. ಮುಂಬೈ-ಪುಣೆ ಎಕ್ಸ್&zwnj;ಪ್ರೆಸ್&zwnj;ವೇ ಹಾಗೂ ಹಳೆಯ ಮುಂಬೈ-ಪುಣೆ ಹೆದ್ದಾರಿಯ ಎರಡೂ ಮಾರ್ಗಗಳಲ್ಲಿ ಭಾರಿ ಮಳೆಯಿಂದಾಗಿ ಸರಣಿ ಭೂಕುಸಿತ ಸಂಭವಿಸಿತ್ತು. ಮುಖ್ಯವಾಗಿ ಪುಣೆ ಯಶವಂತರಾವ್ ಚವಾಣ್ ಎಕ್ಸ್&zwnj;ಪ್ರೆಸ್&zwnj;ವೇಯ 'ಮಿಸ್ಸಿಂಗ್ ಲಿಂಕ್' ಪ್ರದೇಶದಲ್ಲಿ ಬಂಡೆಗಳು ಉರುಳಿ ಬಿದ್ದಿದ್ದವು. ಜೊತೆಗೆ ಹೆದ್ದಾರಿಯ ಹಲವು ಕಡೆಗಳಲ್ಲಿ ಮಂಡಿಯುದ್ದ ನೀರು ನಿಂತಿದ್ದರಿಂದ ಸೋಮವಾರ ಮುಂಜಾನೆಯಿಂದಲೇ ವಾಹನಗಳ ಸಂಚಾರ ಸಂಪೂರ್ಣ ಸ್ತಬ್ಧಗೊಂಡು ಕಿಲೋಮೀಟರ್&zwnj;ಗಟ್ಟಲೆ ಉದ್ದದ ಸಾಲು ನಿರ್ಮಾಣವಾಗಿತ್ತು. ಇದೇ ದಟ್ಟಣೆಯ ಮಧ್ಯೆ ನಟಿ ಧನಶ್ರೀ ಅವರ ಕಾರು ಕೂಡ ಸಿಲುಕಿಕೊಂಡಿತ್ತು.&lt;/p&gt;&lt;h2&gt;&lt;strong&gt;ಮುಟ್ಟಿನ ಸಮಯದ ನರಕಯಾತನೆ ಬಿಚ್ಚಿಟ್ಟ ನಟಿ&lt;/strong&gt;&lt;/h2&gt;&lt;p&gt;ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹೆದ್ದಾರಿಯ ಟ್ರಾಫಿಕ್ ವಿಡಿಯೋ ಹಂಚಿಕೊಂಡಿರುವ ಧನಶ್ರೀ, ಮಹಿಳೆಯರು ಇಂತಹ ಸಂದರ್ಭದಲ್ಲಿ ಎದುರಿಸುವ ಅತ್ಯಂತ ಕಠಿಣ ಪರಿಸ್ಥಿತಿಯನ್ನು ವಿವರಿಸಿದ್ದಾರೆ. &quot;ನಾನು ಯಾವಾಗಲೂ ಮಾಧ್ಯಮಗಳಲ್ಲಿ ಹೆದ್ದಾರಿ ಟ್ರಾಫಿಕ್, ಅಪಘಾತ ಅಥವಾ ಭೂಕುಸಿತದ ಸುದ್ದಿಗಳನ್ನಷ್ಟೇ ನೋಡುತ್ತಿದ್ದೆ. ಆದರೆ ಜುಲೈ 6ರಂದು ನಾನೇ ಸ್ವತಃ ಆ ಕಠಿಣ ಪರಿಸ್ಥಿತಿಯ ಭಾಗವಾಗಿದ್ದೆ. ಈ ರೀತಿ ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಳ್ಳುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಆಯಾಸ ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಆ ಸಮಯದಲ್ಲಿ ನನಗೆ ಪೀರಿಯಡ್ಸ್&zwnj; ಶುರುವಾಗಿತ್ತು.ತೀವ್ರ ನೋವಿನ ನಡುವೆ ನನಗೆ ತುರ್ತಾಗಿ ವಾಶ್&zwnj;ರೂಮ್&zwnj;ಗೆ ಹೋಗಬೇಕಿತ್ತು. ಆದರೆ ಸುತ್ತಲೂ ವಾಹನಗಳಿದ್ದರಿಂದ ಕಾರಿನಿಂದ ಇಳಿದು ಎಲ್ಲಿಗೂ ಹೋಗಲು ಸಾಧ್ಯವಾಗದೆ ತತ್ತರಿಸಿದೆ. ಹತ್ತಿರದ ಫುಡ್ ಕೋರ್ಟ್&zwnj;ಗೆ ಹೋಗಿ ಏನಾದರೂ ತಿನ್ನೋಣ ಅಥವಾ ನಿಶ್ಚಿಂತೆಯಾಗೋಣ ಎಂದರೆ ಅದಕ್ಕೂ ದಾರಿಯಿರಲಿಲ್ಲ&quot; ಎಂದು ತಮ್ಮ ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಕಲಾವಿದರ ಕಮಿಟ್&zwnj;ಮೆಂಟ್ ಮತ್ತು ಆತಂಕ&lt;/strong&gt;&lt;/h2&gt;&lt;p&gt;'ರಸ್ತೆಯುದ್ದಕ್ಕೂ ಮಂಡಿ ಉದ್ದಕ್ಕೆ ನೀರು ನಿಂತಿತ್ತು. ಎಲ್ಲಾದರೂ ಇಳಿದು ಮಳೆಯಲ್ಲಿ ನೆನೆದರೆ ಅನಾರೋಗ್ಯ ಕಾಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಅನಾರೋಗ್ಯಕ್ಕೆ ಈಡಾಗುವುದನ್ನು ನಾನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಏಕೆಂದರೆ ಸದ್ಯ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ನಿಗದಿಯಾಗಿದೆ. ಹೆದ್ದಾರಿಯ ಪರಿಸ್ಥಿತಿ ನೋಡಿ ನನ್ನ ಡ್ರೈವರ್, 'ಮೇಡಮ್&zwnj;, ಶೂಟಿಂಗ್ ಸಾಕು, ಪುಣೆಗೆ ವಾಪಸ್ ಹೊರಟುಬಿಡೋಣ' ಎಂದಿದ್ದ. ಆದರೆ ಒಬ್ಬ ಕಲಾವಿದೆಯಾಗಿ ನನಗೆ ನನ್ನ ಕಮಿಟ್&zwnj;ಮೆಂಟ್ ಮುಖ್ಯವಾಗಿತ್ತು. ಧಾರಾವಾಹಿಯ ಮುಂದಿನ ಸಂಚಿಕೆಗಳ ಪ್ರಸಾರ ಬಾಕಿ ಇತ್ತು. ನಾವು ಹೋಗದಿದ್ದರೆ ಶೂಟಿಂಗ್ ನಿಂತು ವಾಹಿನಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ನೋವಿದ್ದರೂ ಧೃತಿಗೆಡದೆ ಅಲ್ಲೇ ಕಾಯಲು ನಿರ್ಧರಿಸಿದೆ&quot; ಎಂದು ಧನಶ್ರೀ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಕೊನೆಗೂ ಬರೋಬ್ಬರಿ 9 ಗಂಟೆಗಳ ಕಾಲ ಆಮೆಗತಿಯಲ್ಲಿ ಸಾಗಿದ ಪ್ರಯಾಣದ ನಂತರ ಧನಶ್ರೀ ಸುರಕ್ಷಿತವಾಗಿ ಶೂಟಿಂಗ್ ಸೆಟ್ ತಲುಪಿದ್ದಾರೆ. ಹೆದ್ದಾರಿಯ ಜಾಮ್&zwnj;ಗೆ ಬೇಸರಿಸಿದ ಅವರು, &quot;ಕೊನೆಗೂ ನಾನು ಶೂಟಿಂಗ್ ಸ್ಥಳಕ್ಕೆ ಸುರಕ್ಷಿತವಾಗಿ ಬಂದಿಳಿದಿದ್ದೇನೆ. ಪ್ರಕೃತಿಯ ಮುನಿಸಿನ ಮುಂದೆ ಯಾರ ಆಟವೂ ನಡೆಯುವುದಿಲ್ಲ. ಆದರೆ ನಾನು ದೇವರಲ್ಲಿ ಕೈಮುಗಿದು ಕೇಳಿಕೊಳ್ಳುವುದು ಇಷ್ಟೇ, ಯಾರ ಬದುಕೂ ಇಷ್ಟು ದುಸ್ತರವಾಗುವಂತಹ ಭೀಕರ ಹಾಗೂ ಭಯಾನಕ ಪರಿಸ್ಥಿತಿಯನ್ನು ಯಾರಿಗೂ ತರಬೇಡ. ಪ್ರತಿಯೊಬ್ಬರೂ ಸುರಕ್ಷಿತವಾಗಿರಿ&quot; ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ. ನಟಿಯ ಈ ಪೋಸ್ಟ್&zwnj;ಗೆ ನೆಟ್ಟಿಗರು ಹಾಗೂ ಸಹ ಕಲಾವಿದರು ವ್ಯಾಪಕ ಪ್ರತಿಕ್ರಿಯೆ ನೀಡುತ್ತಿದ್ದು, ಕಠಿಣ ಪರಿಸ್ಥಿತಿಯಲ್ಲೂ ಜವಾಬ್ದಾರಿ ಮೆರೆದ ಅವರ ವೃತ್ತಿಪರತೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Dhanashri Kadgaonkar (@kadgaonkar_dhanashri)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/marathi-actress-dhanashri-kadgaonkar-stuck-mumbai-pune-highway-traffic-periods-san/articleshow-qol02ug"/>
        </item>
        <item>
            <title><![CDATA[ಕರಾವಳಿ ವಿವಾದಕ್ಕೆ ಹೊಸ ತಿರುವು: ಪತಿ ಪ್ರಜ್ವಲ್ ದೇವರಾಜ್ ಪರ ನಿಂತ ಪತ್ನಿ ರಾಗಿಣಿ ಚಂದ್ರನ್]]></title>
            <link>https://kannada.asianetnews.com/sandalwood/karavali-controversy-ragini-chandran-supports-prajwal-devaraj-viral-post-gvd/articleshow-me2gw02</link>
            <guid isPermaLink="true">https://kannada.asianetnews.com/sandalwood/karavali-controversy-ragini-chandran-supports-prajwal-devaraj-viral-post-gvd/articleshow-me2gw02</guid>
            <pubDate>Wed, 08 Jul 2026 18:06:38 +0530</pubDate>
            <description><![CDATA[&lt;p&gt;ಜುಲೈ 24ರಂದು ಬಿಡುಗಡೆಯಾಗಲಿರುವ ಕರಾವಳಿ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತ್ತು. ಆದರೆ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳದಿರುವುದು ಮೊದಲ ಚರ್ಚೆಗೆ ಕಾರಣವಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0vkb2ta1v4hpbg6nss4xd1,imgname-cjc-1783514115162.png" type="image/jpeg" height="390" width="690"/>
            <content:encoded><![CDATA[&lt;p&gt;'ಕರಾವಳಿ' ಸಿನಿಮಾ ಬಿಡುಗಡೆಯ ಮುನ್ನವೇ ವಿವಾದದ ಕೇಂದ್ರಬಿಂದುವಾಗಿದೆ. ಟ್ರೇಲರ್ ಬಿಡುಗಡೆಯ ನಂತರ ಚಿತ್ರದ ಸುತ್ತ ಹಲವು ಪ್ರಶ್ನೆಗಳು ಎದ್ದಿದ್ದು, ಅದರಲ್ಲೂ ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಅನುಪಸ್ಥಿತಿ ಮತ್ತು ಅವರ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ನಟನ ಬೆಂಬಲಕ್ಕೆ ಪತ್ನಿ ರಾಗಿಣಿ ಚಂದ್ರನ್ ನಿಂತಿದ್ದು, ಅವರ ಭಾವನಾತ್ಮಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.&lt;/p&gt;&lt;p&gt;ಜುಲೈ 24ರಂದು ಬಿಡುಗಡೆಯಾಗಲಿರುವ ಕರಾವಳಿ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತ್ತು. ಆದರೆ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳದಿರುವುದು ಮೊದಲ ಚರ್ಚೆಗೆ ಕಾರಣವಾಯಿತು. ಇದರ ಬೆನ್ನಲ್ಲೇ ಟ್ರೇಲರ್&zwnj;ನಲ್ಲಿ ಅವರ ಪಾತ್ರಕ್ಕೆ ಬೇರೆ ಕಲಾವಿದರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂಬ ಸಂಗತಿ ಹೊರಬಿದ್ದಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ವಿಶೇಷ ಪೋಸ್ಟ್ ವೈರಲ್&lt;/strong&gt;&lt;/h2&gt;&lt;p&gt;ಈ ಬೆಳವಣಿಗೆಗಳ ನಡುವೆಯೇ ರಾಗಿಣಿ ಚಂದ್ರನ್ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಪತಿಯ ಕುರಿತು ಹಂಚಿಕೊಂಡಿರುವ ವಿಶೇಷ ಪೋಸ್ಟ್ ವೈರಲ್ ಆಗಿದೆ. ಪ್ರಜ್ವಲ್ ಅವರ ಜನ್ಮದಿನ ಜುಲೈ 4ರಂದು ಕಳೆದಿದ್ದರೂ, ಮತ್ತೊಮ್ಮೆ ಶುಭಾಶಯ ಕೋರಿದ ಅವರು, ಪತಿಯ ವ್ಯಕ್ತಿತ್ವ ಮತ್ತು ಜೀವನ ಮೌಲ್ಯಗಳನ್ನು ಹೃದಯಸ್ಪರ್ಶಿಯಾಗಿ ಬಣ್ಣಿಸಿದ್ದಾರೆ.&lt;/p&gt;&lt;p&gt;&quot;ನೀವು ದಯೆ, ಪ್ರೀತಿ ಮತ್ತು ನಿಸ್ವಾರ್ಥತೆಗೆ ಪ್ರತಿರೂಪ. ನಿಮ್ಮ ಸುತ್ತಲಿರುವ ಪ್ರತಿಯೊಬ್ಬರ ಒಳಿತನ್ನೇ ಬಯಸುವ ವ್ಯಕ್ತಿ ನೀವು. ನನ್ನನ್ನು ರಾಜಕುಮಾರಿಯಂತೆ ನೋಡಿಕೊಳ್ಳುವ ಪತಿ, ಕುಟುಂಬಕ್ಕೆ ಮೊದಲ ಆದ್ಯತೆ ನೀಡುವ ಮಗ ಹಾಗೂ ಎರಡು ದಶಕಗಳಿಗೂ ಹೆಚ್ಚು ಕಾಲ ಅಭಿಮಾನಿಗಳಿಗೆ ಅತ್ಯುತ್ತಮ ಅಭಿನಯ ನೀಡುತ್ತಿರುವ ಅದ್ಭುತ ಕಲಾವಿದ ನೀವು,&quot; ಎಂದು ರಾಗಿಣಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಇದರೊಂದಿಗೆ, &quot;ನಿಮ್ಮ ವಿನಯ, ಎಲ್ಲರಿಗೂ ನೀಡುವ ಗೌರವ ಮತ್ತು ನಿಮ್ಮ ಮೌಲ್ಯಗಳೇ ನಿಮ್ಮ ದೊಡ್ಡ ಶಕ್ತಿ. ನಿಮ್ಮ ಕಲೆಗೆ, ಚಿತ್ರರಂಗಕ್ಕೆ ಮತ್ತು ನಿಮ್ಮವರಿಗಾಗಿ ನೀವು ಯಾವಾಗಲೂ ಶೇ.100ರಷ್ಟು ಸಮರ್ಪಣೆಯಿಂದ ದುಡಿಯುತ್ತೀರಿ. ನೀವು ಹೇಗಿದ್ದೀರೋ ಹಾಗೆಯೇ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನಿಮ್ಮ ಮೌಲ್ಯಗಳಿಗೆ ನಮ್ಮ ಗೌರವ ಸದಾ ಇರುತ್ತದೆ. ನೀವು ನಮ್ಮ ಹೆಮ್ಮೆ,&quot; ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.&lt;/p&gt;&lt;p&gt;ಒಂದೆಡೆ ಕರಾವಳಿ ಚಿತ್ರದ ಟ್ರೇಲರ್ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದರೆ, ಮತ್ತೊಂದೆಡೆ ರಾಗಿಣಿ ಚಂದ್ರನ್ ಅವರ ಈ ಬೆಂಬಲದ ಸಂದೇಶ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಈ ಬೆಳವಣಿಗೆಗಳು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿವೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Ragini Prajwal (@iamraginiprajwal)&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/karavali-controversy-ragini-chandran-supports-prajwal-devaraj-viral-post-gvd/articleshow-me2gw02"/>
        </item>
        <item>
            <title><![CDATA['ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್: ಮುಂದಿನ ಭಾಗದ ಕಥೆಯ ರಹಸ್ಯ ಬಯಲು!]]></title>
            <link>https://kannada.asianetnews.com/gallery/sandalwood/kantara-next-part-update-by-rishab-shetty-script-work-gvd-w3g5wdx</link>
            <guid isPermaLink="true">https://kannada.asianetnews.com/gallery/sandalwood/kantara-next-part-update-by-rishab-shetty-script-work-gvd-w3g5wdx</guid>
            <pubDate>Wed, 08 Jul 2026 17:41:33 +0530</pubDate>
            <description><![CDATA[&lt;p&gt;'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್&zwnj;ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkgnwq9e38rhpper11svx7kd,imgname-rishab-shetty-1773307583790.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್&zwnj;ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್&zwnj;ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 'ಕಾಂತಾರ: ಚಾಪ್ಟರ್ 1' ಬಳಿಕ ಈಗ ಮುಂದಿನ ಭಾಗದ ಚಿತ್ರದ ಚಿತ್ರಕಥೆ ಬರೆಯುವ ಕೆಲಸ ಆರಂಭವಾಗಿದ್ದು, ತಮ್ಮ ಲೇಖಕರ ತಂಡದೊಂದಿಗೆ ಸ್ಕ್ರಿಪ್ಟ್ ಅಭಿವೃದ್ಧಿಯಲ್ಲಿ ತೊಡಗಿರುವುದಾಗಿ ಅವರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಅಂತರರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ನಿರ್ದೇಶನವೇ ತಮ್ಮ ನಿಜವಾದ ಫ್ಯಾಷನ್ ಎಂದು ಹೇಳಿಕೊಂಡಿದ್ದಾರೆ. ಕಥೆ ಬರೆಯುವ ಪ್ರಕ್ರಿಯೆಯಲ್ಲೇ ತಮಗೆ ಹೆಚ್ಚು ತೃಪ್ತಿ ಸಿಗುತ್ತದೆ ಎಂದು ತಿಳಿಸಿರುವ ಅವರು, ಮುಂದಿನ ಅಧ್ಯಾಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮೂಲಗಳ ಪ್ರಕಾರ, ಕಾಂತಾರದ ಮುಂದಿನ ಅಧ್ಯಾಯದಲ್ಲೂ ದೈವಿಕ ಶಕ್ತಿಗಳು ಕಥೆಯ ಕೇಂದ್ರಬಿಂದುವಾಗಲಿವೆ. ರಾಜಮನೆತನ ಮತ್ತು ಬುಡಕಟ್ಟು ಸಮುದಾಯದ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಸಾಗಲಿದ್ದು, ಹೊಸ ತಲೆಮಾರಿನ ಕಥೆಯೊಂದಿಗೆ ದೈವ, ನಂಬಿಕೆ ಮತ್ತು ಸಂಪ್ರದಾಯಗಳ ಹೋರಾಟವನ್ನು ಚಿತ್ರಿಸುವ ಸಾಧ್ಯತೆ ಇದೆ. ಹಿಂದಿನ ಭಾಗದಲ್ಲಿ ಕಾಣಿಸಿಕೊಂಡ ಸಂಘರ್ಷದ ಮುಂದುವರಿದ ಅಧ್ಯಾಯವನ್ನು ಇನ್ನಷ್ಟು ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ಚಿತ್ರತಂಡದ್ದಾಗಿದೆ.&lt;/p&gt;&lt;img&gt;&lt;p&gt;ನಿರ್ದೇಶನದ ಜೊತೆಗೆ ನಟನೆಯಲ್ಲೂ ರಿಷಬ್ ಶೆಟ್ಟಿ ಸದ್ಯ ಸಾಕಷ್ಟು ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಎರಡು ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾಗಳಿದ್ದು, ಒಂದಾದ ಮೇಲೆ ಒಂದರಂತೆ ಪೂರ್ಣಗೊಳಿಸುವ ಯೋಜನೆ ಹೊಂದಿದ್ದಾರೆ. ಮೊದಲು ಪ್ರಶಾಂತ್ ವರ್ಮ ನಿರ್ದೇಶನದ ಜೈ ಹನುಮಾನ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲಿರುವ ಅವರು, ಬಳಿಕ ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಐತಿಹಾಸಿಕ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಎರಡೂ ಸಿನಿಮಾಗಳ ಪಾತ್ರಗಳು ಸಂಪೂರ್ಣ ಭಿನ್ನವಾಗಿರುವುದರಿಂದ, ಪ್ರತ್ಯೇಕ ದೈಹಿಕ ಸಿದ್ಧತೆ ಮತ್ತು ವಿಭಿನ್ನ ಲುಕ್ ಅಗತ್ಯವಿದೆ ಎಂದು ರಿಷಬ್ ಹೇಳಿದ್ದಾರೆ. ಒಟ್ಟಾರೆ, ಕಾಂತಾರ ಸರಣಿಯ ಮುಂದಿನ ಭಾಗದ ಕೆಲಸ ಅಧಿಕೃತವಾಗಿ ಆರಂಭವಾಗಿರುವುದು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದು, ಚಿತ್ರದ ಕುರಿತು ಇನ್ನಷ್ಟು ಮಾಹಿತಿಗಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/kantara-next-part-update-by-rishab-shetty-script-work-gvd-w3g5wdx"/>
        </item>
        <item>
            <title><![CDATA[Esha Lankesh: ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ಕಿಡ್ ಎಂಟ್ರಿ: ನಾಯಕಿಯಾದ ಪಿ.ಲಂಕೇಶ್ ಮೊಮ್ಮಗಳು]]></title>
            <link>https://kannada.asianetnews.com/gallery/sandalwood/p-lankesh-granddaughter-esha-lankesh-debut-as-kannada-heroine-gvd-ixsp8ce</link>
            <guid isPermaLink="true">https://kannada.asianetnews.com/gallery/sandalwood/p-lankesh-granddaughter-esha-lankesh-debut-as-kannada-heroine-gvd-ixsp8ce</guid>
            <pubDate>Wed, 08 Jul 2026 17:15:27 +0530</pubDate>
            <description><![CDATA[&lt;p&gt;ನವಿಶಾ ಫಿಲ್ಮ್ಸ್ ಬ್ಯಾನರ್&zwnj;ನಡಿ ಶಿವರಾಜ್ ಕನಗನಪಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಎರಡನೇ ನಿರ್ಮಾಣವಾಗಿದೆ. ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಇಶಾ ಲಂಕೇಶ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0redhzdaykvytgfzkb7cr9,imgname-4-1783510808126.png" type="image/jpeg" height="390" width="690"/>
            <content:encoded><![CDATA[&lt;p&gt;ನವಿಶಾ ಫಿಲ್ಮ್ಸ್ ಬ್ಯಾನರ್&zwnj;ನಡಿ ಶಿವರಾಜ್ ಕನಗನಪಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಎರಡನೇ ನಿರ್ಮಾಣವಾಗಿದೆ. ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಇಶಾ ಲಂಕೇಶ್.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೊಸ ನಾಯಕಿಯ ಆಗಮನಕ್ಕೆ ವೇದಿಕೆ ಸಜ್ಜಾಗಿದೆ. ಖ್ಯಾತ ಪತ್ರಕರ್ತ, ಲೇಖಕ ಪಿ. ಲಂಕೇಶ್ ಅವರ ಮೊಮ್ಮಗಳು ಹಾಗೂ ನಿರ್ದೇಶಕಿ ಕವಿತಾ ಲಂಕೇಶ್ ಅವರ ಪುತ್ರಿ ಇಶಾ ಲಂಕೇಶ್ ಇದೀಗ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ತಮ್ಮ ಸಿನಿ ಪಯಣ ಆರಂಭಿಸುತ್ತಿದ್ದಾರೆ. ಸ್ಟಾರ್&zwnj;ಗಳ ಮಕ್ಕಳು, ನಿರ್ದೇಶಕರು ಹಾಗೂ ನಿರ್ಮಾಪಕರ ಕುಟುಂಬದ ಸದಸ್ಯರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುವುದು ಹೊಸ ಸಂಗತಿಯಲ್ಲ.&lt;/p&gt;&lt;img&gt;&lt;p&gt;ಆದರೆ ಪ್ರತಿಭೆಯ ಮೂಲಕ ತಮ್ಮದೇ ಆದ ಗುರುತು ಮೂಡಿಸಿಕೊಳ್ಳುವುದು ಮುಖ್ಯ. ಆ ನಿಟ್ಟಿನಲ್ಲಿ ಇಶಾ ಲಂಕೇಶ್ ಕೂಡ ತಮ್ಮ ಮೊದಲ ಚಿತ್ರದಲ್ಲೇ ಗಮನ ಸೆಳೆಯುವ ನಿರೀಕ್ಷೆಯಲ್ಲಿದ್ದಾರೆ. ಇಶಾ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೆ ಪ್ರೀತಂ ಗುಬ್ಬಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈಗಾಗಲೇ ದಿಲ್ ರಂಗೀಲಾ, ಜಾನು ಹಾಗೂ ಬಾನ ದಾರಿಯಲ್ಲಿ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅವರು, ಈ ಹೊಸ ಪ್ರಾಜೆಕ್ಟ್&zwnj;ಗೆ ನಿರ್ದೇಶನ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ನವಿಶಾ ಫಿಲ್ಮ್ಸ್ ಬ್ಯಾನರ್&zwnj;ನಡಿ ಶಿವರಾಜ್ ಕನಗನಪಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಎರಡನೇ ನಿರ್ಮಾಣವಾಗಿದೆ. ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಇಶಾ ಲಂಕೇಶ್, ನಟನೆಯ ತರಬೇತಿ ಹಾಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅಭಿನಯದ ಜೊತೆಗೆ ಪಾತ್ರದ ಆಯ್ಕೆಯಲ್ಲೂ ವಿಶೇಷ ಗಮನಹರಿಸಿರುವ ಅವರು, ಮೊದಲ ಸಿನಿಮಾದಲ್ಲೇ ವಿಭಿನ್ನವಾಗಿ ಕಾಣಿಸಿಕೊಳ್ಳುವ ನಿರೀಕ್ಷೆ ಮೂಡಿಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯಕ್ಕೆ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ನಾಯಕಿಯ ಪರಿಚಯವನ್ನು ಮಾತ್ರ ಅಧಿಕೃತವಾಗಿ ಪ್ರಕಟಿಸಿರುವ ನಿರ್ದೇಶಕ ಪ್ರೀತಂ ಗುಬ್ಬಿ, ಚಿತ್ರದ ಉಳಿದ ಕಲಾವಿದರು, ತಾಂತ್ರಿಕ ವರ್ಗ ಹಾಗೂ ಕಥೆಯ ವಿವರಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸುವುದಾಗಿ ತಿಳಿಸಿದ್ದಾರೆ. ಪ್ರತಿಭಾವಂತ ನಿರ್ದೇಶಕರೊಂದಿಗೆ ಇಶಾ ಲಂಕೇಶ್ ಅವರ ಚೊಚ್ಚಲ ಸಿನಿಮಾ ಘೋಷಣೆಯಾಗಿರುವುದರಿಂದ, ಈ ಹೊಸ ಜೋಡಿಯ ಸಿನಿಮಾ ಕುರಿತು ಸಿನಿಪ್ರಿಯರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/p-lankesh-granddaughter-esha-lankesh-debut-as-kannada-heroine-gvd-ixsp8ce"/>
        </item>
        <item>
            <title><![CDATA[Srinagara Kitty Birthday: ನಟ ಶ್ರೀನಗರ ಕಿಟ್ಟಿಗೆ ಹುಟ್ಟುಹಬ್ಬದ ದಿನ; ಪತ್ನಿ-ಮಗಳೊಂದಿಗೆ ಮನೆಯಲ್ಲೇ ಸರಳ ಸಂಭ್ರಮ!]]></title>
            <link>https://kannada.asianetnews.com/gallery/sandalwood/sandalwood-actor-srinagara-kitty-celebrates-his-birthday-in-simple-with-his-family-i5gk75a</link>
            <guid isPermaLink="true">https://kannada.asianetnews.com/gallery/sandalwood/sandalwood-actor-srinagara-kitty-celebrates-his-birthday-in-simple-with-his-family-i5gk75a</guid>
            <pubDate>Wed, 08 Jul 2026 15:41:15 +0530</pubDate>
            <description><![CDATA[&lt;p&gt;ನಟ ಶ್ರೀನಗರ ಕಿಟ್ಟಿಯವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಅತ್ಯಂತ ಸರಳವಾಗಿ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಹಾಗೂ ಆತ್ಮೀಯರು, ಕುಟುಂಬಸ್ಥರು ಸೇರಿ ಕಿಟ್ಟಿ ಅವರ ಹುಟ್ಟುಹಬ್ಬವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0jnc92sbfjwt4qdncc32ka,imgname-srinagara-kitty-birthday-1783504744738.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ಶ್ರೀನಗರ ಕಿಟ್ಟಿಯವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಅತ್ಯಂತ ಸರಳವಾಗಿ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಹಾಗೂ ಆತ್ಮೀಯರು, ಕುಟುಂಬಸ್ಥರು ಸೇರಿ ಕಿಟ್ಟಿ ಅವರ ಹುಟ್ಟುಹಬ್ಬವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಸ್ಯಾಂಡಲ್&zwnj;ವುಡ್ ನಟ, 'ಇಂತಿ ನಿನ್ನ ಪ್ರೀತಿಯʼ ಸಿನಿಮಾದ ಮೂಲಕ ಕರ್ನಾಟಕದ ಮನೆಮನೆಮಾತಾಗಿರುವ ಕಲಾವಿದ ಶ್ರೀನಗರ ಕಿಟ್ಟಿಗೆ (Srinagara Kitty) ಇಂದು (8 ಜುಲೈ) ಹುಟ್ಟಹಬ್ಬದ ಸಂಭ್ರಮ. ʻಸವಾರಿʼ, ʻಸಂಜು ವೆಡ್ಸ್&zwnj; ಗೀತಾʼ ನಂತಹ ಸೂಪರ್&zwnj; ಹಿಟ್&zwnj; ಸಿನಿಮಾಗಳ ನಟನೆಯ ಮೂಲಕ ಜನಮನ್ನಣೆ ಗಳಿಸಿರುವ ಶ್ರೀನಗರ ಕಿಟ್ಟಿಯವರು ಇಂದು ತಮ್ಮ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಟ ಶ್ರೀನಗರ ಕಿಟ್ಟಿಯವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಅತ್ಯಂತ ಸರಳವಾಗಿ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಹಾಗೂ ಆತ್ಮೀಯರು, ಕುಟುಂಬಸ್ಥರು ಸೇರಿ ಕಿಟ್ಟಿ ಅವರ ಹುಟ್ಟುಹಬ್ಬವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಜೊತೆ ಸಿಂಪಲ್&zwnj; ಸೆಲೆಬ್ರೇಷನ್&lt;/p&gt;&lt;p&gt;ಹೌದು, ನಟ ಶ್ರೀನಗರ ಕಿಟ್ಟಿ ಯಾವುದೇ ಆಡಂಬರವಿಲ್ಲದೇ ಕುಟುಂಬಸ್ಥರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಇದೀಗ ವೈರಲ್ ಅಗುತ್ತಿದೆ. ಪತಿ ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬಕ್ಕೆ ಪತ್ನಿ ಭಾವನಾ ಬೆಳಗೆರೆ ಅವರು ಪ್ರೀತಿಯಿಂದ ಶುಭಕೋರಿದ್ದಾರೆ.&lt;/p&gt;&lt;img&gt;&lt;p&gt;ಪತಿಯ ಕೆನ್ನೆಯನ್ನು ಮುದ್ದಿಸಿ ಕ್ಯಾಮೆರಾ ಮುಂದೆಯೇ ತಮ್ಮ ಅಪರಿಮಿತ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕೇಕ್&zwnj; ಕತ್ತರಿಸುವ ಮೂಲಕ ಸಂಭ್ರಮಿಸಿದ್ದು, ಈ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.&lt;/p&gt;&lt;img&gt;&lt;p&gt;ಕುಟುಂಬದ ಜೊತೆ ಕೇಕ್&zwnj; ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಸ್ಯಾಂಡಲ್&zwnj;ವುಡ್&zwnj; ನಟ ಶ್ರೀನಗರ ಕಿಟ್ಟಿಗೆ ಪತ್ನಿ ಭಾವನಾ ಬೆಳಗೆರೆ ಹಾಗೂ ಮಗಳು ಪರಿಣಿತಾ ಶುಭ ಕೋರಿದ್ದು ಇದೀಗ ಸ್ಯಾಂಡಲ್&zwnj;ವುಡ್ ಅಂಗಳದಲ್ಲಿ ವೈರಲ್ ಆಗಿ ಕರ್ನಾಟಕದ ಸುತ್ತ ಸುತ್ತತೊಡಗಿದೆ.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/sandalwood/sandalwood-actor-srinagara-kitty-celebrates-his-birthday-in-simple-with-his-family-i5gk75a"/>
        </item>
        <item>
            <title><![CDATA[RIP ಕಂದಮ್ಮ.. ಅಗಲಿದ ಮುದ್ದಿನ ನಾಯಿಯನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ಕಿಶನ್ ಬಿಳಗಲಿ]]></title>
            <link>https://kannada.asianetnews.com/gallery/tv-talk/kishen-bilagalis-pet-god-death-dancer-shares-emotional-video-with-note-rkq3guu</link>
            <guid isPermaLink="true">https://kannada.asianetnews.com/gallery/tv-talk/kishen-bilagalis-pet-god-death-dancer-shares-emotional-video-with-note-rkq3guu</guid>
            <pubDate>Wed, 08 Jul 2026 14:57:53 +0530</pubDate>
            <description><![CDATA[&lt;p&gt;ಜನಪ್ರಿಯ ಡ್ಯಾನ್ಸರ್, ನಟ ಹಾಗೂ ಕನ್ನಡ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮನ್ನು ಅಗಲಿದ ಮುದ್ದಿನ ಶ್ವಾನವನ್ನು ನೆನಪಿಸಿಕೊಂಡು, ಮಿಸ್ ಯೂ ಕಂದಮ್ಮ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0gqx7n78t55mdj541m3c7n,imgname-kishen-bilagali-1783502730485.jpg" type="image/jpeg" height="390" width="690"/>
            <content:encoded><![CDATA[&lt;p&gt;ಜನಪ್ರಿಯ ಡ್ಯಾನ್ಸರ್, ನಟ ಹಾಗೂ ಕನ್ನಡ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮನ್ನು ಅಗಲಿದ ಮುದ್ದಿನ ಶ್ವಾನವನ್ನು ನೆನಪಿಸಿಕೊಂಡು, ಮಿಸ್ ಯೂ ಕಂದಮ್ಮ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ತಮ್ಮ ನೃತ್ಯದ ಮೂಲಕ ಕನ್ನಡಿರನ್ನು ಮೋಡಿ ಮಾಡುತ್ತಿರುವ ನೃತ್ಯ ಪಟು, ನಟ ಹಾಗೂ ಕನ್ನಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಿಶನ್ ಬಿಳಗಲಿ ಶ್ವಾನ ಪ್ರೇಮಿ ಎನ್ನುವುದು, ಅವರ ಅಭಿಮಾನಿಗಳಾದ ಎಲ್ಲರಿಗೂ ಗೊತ್ತಿದೆ. ಆದರೆ ಇದೀಗ ಕಿಶನ್ ತಮ್ಮ ಮುದ್ದಿನ ಶ್ವಾನವೊಂದನ್ನು ಕಳೆದುಕೊಂಡು ಭಾವುಕರಾಗಿದ್ದಾರೆ.&lt;/p&gt;&lt;img&gt;&lt;p&gt;ಕಿಶನ್ ಬಿಳಗಲಿ ತಮ್ಮ ಊರಾದ ಚಿಕ್ಕಮಗಳೂರಿನಲ್ಲಿ ಹಲವಾರು ತಳಿಯ ಶ್ವಾನಗಳನ್ನು ಸಾಕಿದ್ದರು. ತಮಗೆ ಬಿಡುವು ಸಿಕ್ಕಾಗಲೆಲ್ಲಾ, ಕಿಶನ್ ಊರಿಗೆ ತೆರಳಿ ಅವುಗಳೊಂದಿಗೆ ಸಮಯ ಕಳೆಯುತ್ತಿರುತ್ತಾರೆ. ಹಾಗೆ ಮುದ್ದಾದ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಮುದ್ದಿನ ನಾಯಿಗಳಲ್ಲಿ ಒಂದು ಸಾವನ್ನಪ್ಪಿದ್ದು, ಕಿಶನ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕಿಶನ್ ಬಿಳಗಲಿ ಪೋಸ್ಟ್ ಹೀಗಿದೆ&hellip; RIP ಕಂದಮ್ಮ - ಅಮ್ಮನಿಗೆ ಹಾಯ್ ಹೇಳು&hellip; ನಾನು ನಿನ್ನ ಜೊತೆಗಿನ ಎಲ್ಲಾ ಸಂತೋಷದ ನೆನಪುಗಳೊಂದಿಗೆ ಮುಂದುವರಿಯುತ್ತೇನೆ .. ಸುಲಭವಾಗಿ ಯಾವುದನ್ನೂ ಬಿಟ್ಟು ಕೊಡಬಾರದು ಎನ್ನುವುದನ್ನು ನೀನು ಕಲಿಸಿದ್ದಿ. ನೀನು ನಿನ್ನ ಜನರನ್ನು ಪ್ರೀತಿಸಿದೆ, ಸ್ನೇಹ ಎಂದರೆ ಏನು ಎನ್ನುವುದನ್ನು ತೋರಿಸಿದ್ದೀ, ಅಷ್ಟೇ ಅಲ್ಲ ಕಣ್ಣು ಕುರುಡಾದಾಗಲೂ ನೀನು ಪ್ರತಿ ಕ್ಷಣವನ್ನು ಸಕಾರಾತ್ಮಕತೆಯಿಂದ ಬೆಳಗಿಸಿದೆ. ಬಂಗಾರ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ .. ಮುಂದಿನ ಬಾರಿ ಸಿಗುವವರೆಗೆ ಎಂದು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಈ ಶ್ವಾನವು ಕಿಶನ್ ಅವರ ಕುಟುಂಬದ ಅವಿಭಾಜ್ಯ ಅಂಗವಾಗಿತ್ತು. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದಿನ ಕಂದಮ್ಮನ ಜೊತೆಗಿನ ಹಲವು ಮಧುರ ಕ್ಷಣಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿದ್ದರು. ಈಗ ಆ ನೆನಪುಗಳನ್ನೇ ಜೊತೆಯಾಗಿ ಇಟ್ಟುಕೊಂಡು ಮುಂದೆ ಸಾಗುವುದಾಗಿ ಕಿಶನ್ ಹೇಳಿದ್ದಾರೆ. ಅಭಿಮಾನಿಗಳು ಸಹ ಕಿಶನ್ ಪೋಸ್ಟ್ ನೋಡಿ ಭಾವುಕರಾಗಿದ್ದಾರೆ.&lt;/p&gt;&lt;img&gt;&lt;p&gt;ಪೋಸ್ಟ್&zwnj;ಗೆ ಅಭಿಮಾನಿಗಳು ಹಾಗೂ ಸ್ನೇಹಿತರು ಸಂತಾಪ ಸೂಚಿಸುತ್ತಿದ್ದು, &quot;Stay strong&quot;, &quot;Run free Kandamma&quot;, &quot;ನಿಮಗೆ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ&quot;, &ldquo;ವಿಷ್ಯ ಕೇಳಿ ಬೇಜಾರಾಯ್ತು, ಆದರೆ ದೇವರಿಗೂ ಆ ಏಂಜಲ್ ನ್ನು ಬೇಗನೆ ಕಾಣುವ ಆಸೆ ರೆಸ್ಟ್ ಇನ್ ಪೀಸ್&rsquo; ಎಂಬ ಕಾಮೆಂಟ್&zwnj;ಗಳ ಮೂಲಕ ಕಿಶನ್ ಅವರಿಗೆ ಧೈರ್ಯ ತುಂಬುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಿಶನ್ ಹಂಚಿಕೊಂಡ ವಿಡಿಯೋದಲ್ಲಿ ತಮ್ಮ ಶ್ವಾನದ ಜೊತೆ ಕಾರ್ ರೈಡಿಂಗ್, ಸಮುದ್ರ ತೀರದಲಿ ಆಟವಾಡಿದ, ಸ್ನಾನ ಮಾಡಿಸಿದ, ಕಿಶನ್ ಜೊತೆ ಮಲಗಿರುವ, ಇನ್ನೊಂದು ಶ್ವಾನ ಸತ್ತಾಗ ದುಃಖಿತರಾದ, ನೀರಲ್ಲಿ ಈಜಾಡುವ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಕೊನೆಗೆ ನಾಯಿಯ ಅಂತ್ಯಸಂಸ್ಕಾರದ ಫೋಟೊ, ವಿಡಿಯೋಗಳನ್ನು ಕಿಶನ್ ಹಂಚಿಕೊಂಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/kishen-bilagalis-pet-god-death-dancer-shares-emotional-video-with-note-rkq3guu"/>
        </item>
        <item>
            <title><![CDATA[Niti Taylor: ಸಿಗರೇಟ್‌ನಿಂದ ಆತ ನನ್ನ ಸುಟ್ಟಿದ್ದ; ಖ್ಯಾತ ನಟಿಯ ಶಾಕಿಂಗ್ ಹೇಳಿಕೆಗೆ ಸಿನಿರಂಗ ಶಾಕ್!]]></title>
            <link>https://kannada.asianetnews.com/gallery/cine-world/bollywood-actress-niti-taylor-says-her-life-tragic-incident-in-a-reality-show-recently-lvgnu19</link>
            <guid isPermaLink="true">https://kannada.asianetnews.com/gallery/cine-world/bollywood-actress-niti-taylor-says-her-life-tragic-incident-in-a-reality-show-recently-lvgnu19</guid>
            <pubDate>Wed, 08 Jul 2026 14:50:18 +0530</pubDate>
            <description><![CDATA[&lt;p&gt;ಬಾಲಿವುಡ್ ಇರಲಿ, ಸ್ಯಾಂಡಲ್&zwnj;ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ. ಈ ಟನಿ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0ftzqge6xrvpw3vvvy8cvz,imgname-niti-taylor-1783501782768.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ಇರಲಿ, ಸ್ಯಾಂಡಲ್&zwnj;ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ. ಈ ಟನಿ ಸ್ಟೋರಿ ನೋಡಿ..&lt;/p&gt;&lt;img&gt;&lt;p&gt;ಗ್ಲಾಮರ್ ಲೋಕದ ಕರಾಳ ಮುಖ: ನಟಿ ನೀತಿ ಟೇಲರ್ ಅನುಭವಿಸಿದ ಆ ನರಕಯಾತನೆಯ ಕಥೆ!&lt;/p&gt;&lt;p&gt;ಬಾಲಿವುಡ್ ಇರಲಿ, ಸ್ಯಾಂಡಲ್&zwnj;ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ.&amp;nbsp;&lt;/p&gt;&lt;p&gt;ಸದಾ ನಗುನಗುತ್ತಿರುವಂತೆ ಕಾಣುವ ಖ್ಯಾತ ನಟಿ ನೀತಿ ಟೇಲರ್ (Neeti Taylor) ಅವರ ಬದುಕಿನಲ್ಲೂ ಅಂತಹದ್ದೇ ಒಂದು ಕರಾಳ ಘಟನೆ ಇದೆ. ಅದು ಅವರ ;ನೆನಪಿನ ಪುಟದಿಂದ ಯಾವತ್ತೂ ಮರೆಯಾಗುವುದಿಲ್ಲ; ಎಂದಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ಒಂದರಲ್ಲಿ ಅವರು ಬಿಚ್ಚಿಟ್ಟ ಸತ್ಯಗಳು ಕೇಳುಗರ ಮೈ ಜುಂ ಎನಿಸುವಂತಿದೆ.&lt;/p&gt;&lt;img&gt;&lt;p&gt;ಆ ಒಂದು ರಾತ್ರಿ ಮತ್ತು ಆ ಸೈಕೋ ಪ್ರಿಯಕರ!&lt;/p&gt;&lt;p&gt;'ಅಲಾಯನ್ಸ್' ಎಂಬ ರಿಯಾಲಿಟಿ ಶೋನಲ್ಲಿ ಮಿನಿ ಮಾಥುರ್ ಅವರೊಂದಿಗೆ ಮನಬಿಚ್ಚಿ ಮಾತನಾಡಿದ ನೀತಿ ಟೇಲರ್, 'ನಾನು ಹಿಂದೆ ಪ್ರೀತಿಸಿದ ವ್ಯಕ್ತಿ ಎಂತಹ ಕ್ರೂರಿಯಾಗಿದ್ದ' ಎಂಬುದನ್ನು ವಿವರಿಸಿದ್ದಾರೆ.&amp;nbsp;&lt;/p&gt;&lt;p&gt;'ಪ್ರೀತಿಯ ಹೆಸರಿನಲ್ಲಿ ಆತ ನನಗೆ ನೀಡಿದ್ದು ಕೇವಲ ನೋವು ಮತ್ತು ಅವಮಾನ. ಆತ ಕೇವಲ ಲವರ್ ಆಗಿರಲಿಲ್ಲ, ಬದಲಾಗಿ ಒಬ್ಬ 'ಸೈಕೋ'ನಂತೆ ವರ್ತಿಸುತ್ತಿದ್ದ. ಸಣ್ಣ ವಿಷಯಗಳಿಗೂ ನನ್ನ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದ' ಎಂದಿದ್ದಾರೆ.&lt;/p&gt;&lt;img&gt;&lt;p&gt;ಬರ್ತ್&zwnj;ಡೇ ಗಿಫ್ಟ್ ಆಗಿ ಸಿಕ್ಕಿದ್ದು ಸಿಗರೇಟ್ ಬರೆ!&lt;/p&gt;&lt;p&gt;'ಜನ್ಮದಿನ ಎನ್ನುವುದು ಯಾವುದೇ ಕುಟುಂಬದ ಸಂಬಂಧಗಳಲ್ಲಿ ಸಂಭ್ರಮದ ಕ್ಷಣ. ಆದರೆ ನನ್ನ ಪಾಲಿಗೆ ನನ್ನ ಪ್ರಿಯಕರನ ಹುಟ್ಟುಹಬ್ಬ ಜೀವನದ ಅತ್ಯಂತ ಭಯಾನಕ ದಿನವಾಗಿತ್ತು. ಅಂದು ಸಂಭ್ರಮಿಸುವ ಬದಲಿಗೆ ಆತ ಅಟ್ಟಹಾಸ ಮೆರೆದಿದ್ದ.&amp;nbsp;&lt;/p&gt;&lt;p&gt;ಮಾತು ಮಾತಿನಲ್ಲೇ ಜಗಳ ಶುರುವಾಗಿ, ಆ ಕ್ರೂರಿ ನನ್ನ ಕೆನ್ನೆಗೆ ಬಲವಾಗಿ ಹೊಡೆದಿದ್ದ. ಜೊತೆಗೆ, ಆತನ ಕೈಯಲ್ಲಿದ್ದ ಉರಿಯುವ ಸಿಗರೇಟ್&zwnj;ನಿಂದ ನನ್ನ ತೊಡೆಯ ಒಳಭಾಗವನ್ನು ಸುಟ್ಟಿದ್ದ..&lt;/p&gt;&lt;img&gt;&lt;p&gt;ಆ ನೋವು ಇಂದಿಗೂ ನನ್ನನ್ನು ಕಾಡುತ್ತದೆ. ಆ ಸಿಗರೇಟ್ ಬರೆಯ ಗುರುತು ಇಂದಿಗೂ ನನ್ನ ದೇಹದ ಮೇಲಿದೆ. ಅದನ್ನು ನೋಡಿದಾಗಲೆಲ್ಲಾ ನಾನು ಅನುಭವಿಸಿದ ನರಕ ಕಣ್ಣೆದುರು ಬರುತ್ತದೆ&quot; ಎಂದು ನೀತಿ ಹೇಳುವಾಗ ಅವರ ಕಣ್ಣಾಲಿಗಳು ತೇವವಾಗಿದ್ದವು. ಹಳೆಯ ನೆನಪು ಅವರನ್ನು ಯಾವತ್ತೂ ಕಾಡುವಂತೆ ಇದ್ದು, ಅದು ಜೀವನದ ಕೊನೆಯೊಂದಿಗೆ ಕೊನೆಯಾಗಬೇಕಷ್ಟೇ ಎಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಧೈರ್ಯದ ನಿರ್ಧಾರ-ಹೊಸ ಬದುಕು:&lt;/p&gt;&lt;p&gt;ಆ ಘಟನೆ ಬಳಿಕ 'ಹೆಣ್ಣು ಅಬಲೆಯಲ್ಲ' ಎನ್ನುವುದನ್ನು ನೀತಿ ತಮ್ಮ ಹೊಸ ನಿರ್ಧಾರದ ಮೂಲಕ ಸಾಬೀತುಪಡಿಸಿದರು. ಅಂದು ಆ ಸಿಗರೇಟ್ ಸುಟ್ಟ ಘಟನೆ ನಡೆದ ಮರುಕ್ಷಣವೇ ಅವರು ಆ ಸಂಬಂಧಕ್ಕೆ ಎಳ್ಳುನೀರು ಬಿಟ್ಟರು.&amp;nbsp;&lt;/p&gt;&lt;p&gt;&quot;ಇನ್ನು ಸಾಕು&quot; ಎಂದು ಅಲ್ಲಿಂದ ಹೊರಬಂದ ನೀತಿ, ಮತ್ತೆ ಎಂದೂ ಆತನ ಮುಖ ನೋಡಲಿಲ್ಲ. ತನ್ನ ಆತ್ಮಗೌರವಕ್ಕಾಗಿ ಆಕೆ ತೆಗೆದುಕೊಂಡ ಆ ಕಠಿಣ ನಿರ್ಧಾರವೇ ಇಂದು ಆಕೆಯನ್ನು ಸುಭದ್ರವಾಗಿರಿಸಿದೆ. ಜೀವನದಲ್ಲಿ ಹೊಸ ಬೆಳಕು, ಹೊಸ ಗೌರವ ಸಿಗುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಸೇನಾ ಅಧಿಕಾರಿಯ ಕೈಹಿಡಿದ ನೀತಿ:&lt;/p&gt;&lt;p&gt;ಆ ಕಹಿ ನೆನಪುಗಳ ನಡುವೆಯೇ, ಬದುಕಿನಲ್ಲಿ ಹೊಸ ಭರವಸೆ ಕಂಡುಕೊಂಡಿದ್ದಾರೆ ನೀತಿ ಟೇಲರ್. 2020ರಲ್ಲಿ ಭಾರತೀಯ ಸೇನೆಯ ಧೀಮಂತ ಅಧಿಕಾರಿ ಪರೀಕ್ಷಿತ್ ಬಾವಾ ಅವರನ್ನು ವಿವಾಹವಾದರು. ಕೊರೊನಾ ಲಾಕ್&zwnj;ಡೌನ್ ಸಮಯದಲ್ಲಿ ಸರಳವಾಗಿ ನಡೆದ ಈ ಮದುವೆ ಅವರಿಗೆ ಹೊಸ ಜೀವನ ನೀಡಿತು. ಮದುವೆಯ ನಂತರ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ನೀತಿ ಟೇಲರ್, ಈಗ ಮತ್ತೆ ನಟನೆಯಲ್ಲಿ ಸಕ್ರಿಯರಾಗಿದ್ದಾರೆ.&lt;/p&gt;&lt;p&gt;ಸದ್ಯ ನೀತಿ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಗಾಳಿಸುದ್ದಿಗಳು ಹರಿದಾಡುತ್ತಿದ್ದರೂ, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅವರು ಧೈರ್ಯವಾಗಿ ಮುಂದೆ ಸಾಗುತ್ತಿದ್ದಾರೆ. ತನ್ನ ಹಳೆಯ ನೋವನ್ನು ಹಂಚಿಕೊಳ್ಳುವ ಮೂಲಕ, ಶೋಷಣೆ ಅನುಭವಿಸುತ್ತಿರುವ ಇತರ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸವನ್ನು ನೀತಿ ಮಾಡಿದ್ದಾರೆ. ನೀತಿ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.&lt;/p&gt;&lt;p&gt;ಬೆಳ್ಳಿತೆರೆಯ ಸುಂದರಿಯರ ಜೀವನ ನಮಗೆ ಹೂವಿನ ಹಾಸಿಗೆಯಂತೆ ಕಂಡರೂ, ಅದರ ಕೆಳಗೆ ಮುಳ್ಳುಗಳೂ ಇರುತ್ತವೆ ಎಂಬುದಕ್ಕೆ ನೀತಿ ಟೇಲರ್ ಅವರ ಈ ಕಹಿಘಟನೆಯೇ ಸಾಕ್ಷಿ. ನೋವಿನಿಂದ ನರಳಿ ಮುಖದಲ್ಲಿ ನಗು ಮೂಡುವವರೆಗೆ ನಟಿ ನೀತಿ ಸಾಗಿ ಬಂದ ಹಾದಿ ನಿಜಕ್ಕೂ ಸ್ಫೂರ್ತಿದಾಯಕ ಎನ್ನಲೇಬೇಕು.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/bollywood-actress-niti-taylor-says-her-life-tragic-incident-in-a-reality-show-recently-lvgnu19"/>
        </item>
        <item>
            <title><![CDATA[ಕೋಳಿ ಜೊತೆ ಕರ್ಣನ ನಿಧಿ: ಗಂಡನನ್ನು ಬಿಟ್ಟು ಇಲ್ಲೇನು ಮಾಡ್​ತಿದ್ಯಾ ಕೇಳಿದ್ದಾರೆ ಫ್ಯಾನ್ಸ್​]]></title>
            <link>https://kannada.asianetnews.com/gallery/tv-talk/karna-serial-nidhi-urf-bhavya-gowda-with-chicken-cute-video-viral-suc-beig3pc</link>
            <guid isPermaLink="true">https://kannada.asianetnews.com/gallery/tv-talk/karna-serial-nidhi-urf-bhavya-gowda-with-chicken-cute-video-viral-suc-beig3pc</guid>
            <pubDate>Tue, 07 Jul 2026 20:34:02 +0530</pubDate>
            <description><![CDATA[&lt;p&gt;ಕರ್ಣ ಸೀರಿಯಲ್ ಖ್ಯಾತಿಯ ನಿಧಿ ಅಲಿಯಾಸ್ ಭವ್ಯಾ ಗೌಡ, ಕೋಳಿಯೊಂದಿಗೆ ಆಟವಾಡುವ ವಿಡಿಯೋದಿಂದ ಸದ್ದು ಮಾಡುತ್ತಿದ್ದಾರೆ. ಕರ್ಣನೊಂದಿಗೆ ಮದುವೆಯಾಗಿ ಸೀರಿಯಲ್&zwnj;ನಲ್ಲಿ ಮಿಂಚುತ್ತಿರುವ ಇವರು, ಬಿಗ್&zwnj;ಬಾಸ್ ಸ್ಪರ್ಧಿ ಹಾಗೂ 'ಲ್ಯಾಂಡ್&zwnj;ಲಾರ್ಡ್' ಚಿತ್ರದ ನಾಯಕಿಯೂ ಹೌದು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyhhyv2ywtcbdf9a0a4g593,imgname-bhavya-gowda-1783436475234.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ಣ ಸೀರಿಯಲ್ ಖ್ಯಾತಿಯ ನಿಧಿ ಅಲಿಯಾಸ್ ಭವ್ಯಾ ಗೌಡ, ಕೋಳಿಯೊಂದಿಗೆ ಆಟವಾಡುವ ವಿಡಿಯೋದಿಂದ ಸದ್ದು ಮಾಡುತ್ತಿದ್ದಾರೆ. ಕರ್ಣನೊಂದಿಗೆ ಮದುವೆಯಾಗಿ ಸೀರಿಯಲ್&zwnj;ನಲ್ಲಿ ಮಿಂಚುತ್ತಿರುವ ಇವರು, ಬಿಗ್&zwnj;ಬಾಸ್ ಸ್ಪರ್ಧಿ ಹಾಗೂ 'ಲ್ಯಾಂಡ್&zwnj;ಲಾರ್ಡ್' ಚಿತ್ರದ ನಾಯಕಿಯೂ ಹೌದು. &amp;nbsp;&lt;/p&gt;&lt;img&gt;&lt;p&gt;ಭವ್ಯಾ ಗೌಡ ಎಂದರೆ ಕೆಲವರಿಗೆ ತಿಳಿಯಲಿಕ್ಕಿಲ್ಲ. ಆದರೆ ಕರ್ಣ ಸೀರಿಯಲ್ (Karna Serial) ನಿಧಿ ಎಂದಾಕ್ಷಣ ಸೀರಿಯಲ್ ಪ್ರಿಯರ ಕಣ್ಣುಗಳು ಅರಳುತ್ತವೆ. ಇತ್ತ ಕರ್ಣ ಸೀರಿಯಲ್&zwnj;ನಲ್ಲಿ ಅಂತೂ ಕರ್ಣನ ಜೊತೆ ನಿಧಿಯ ಮದುವೆಯಾಗಿದೆ. ನಿಧಿ ಕನಸು ನನಸಾಗಿದ್ದು ಮಾತ್ರವಲ್ಲದೇ ಇಡೀ ಸಂಸಾರವನ್ನು ನಿಭಾಯಿಸುವ ಶಕ್ತಿಯನ್ನೂ ಹೊಂದಿದ್ದಾಳೆ.&lt;/p&gt;&lt;img&gt;&lt;p&gt;ನಿಧಿ ಮತ್ತು ಕರ್ಣ ಒಂದಾಗಲಿ ಎಂದು ಕನಸು ಕಾಣುತ್ತಿದ್ದ ವೀಕ್ಷಕರಿಗೆ ಇದು ಸಿಕ್ಕಾಪಟ್ಟೆ ಖುಷಿ ಕೊಟ್ಟಿದ್ದು, ಇದೀಗ ಇಬ್ಬರೂ ಸೇರಿ ರಮೇಶನ ಸೊಕ್ಕನ್ನು ಮುರಿಯಬೇಕಿದೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್&zwnj; ಜನರ ಮೆಚ್ಚುಗೆ ಗಳಿಸುತ್ತಲೇ ಸಾಗಿದೆ. ಕರ್ಣ ಮತ್ತು ನಿಧಿಯ ರೊಮಾನ್ಸ್&zwnj; ಎಲ್ಲರಿಗೂ ಮೆಚ್ಚುಗೆ ಆಗುತ್ತಿದೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ನಿಧಿ ಅರ್ಥಾತ್&zwnj; ಭವ್ಯಾ ಗೌಡ (Bhavya Gowda) ಕೋಳಿಯ ಜೊತೆ ಆಟವಾಡುತ್ತಿರುವ ವಿಡಿಯೋ ಒಂದು ಸೋಷಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗುತ್ತಿದೆ. ಇದನ್ನು ನೋಡಿ ಫ್ಯಾನ್ಸ್&zwnj; ಸಿಕ್ಕಾಪಟ್ಟೆ ಖುಷಿ ಪಟ್ಟುಕೊಂಡಿದ್ದಾರೆ. ಕರ್ಣನ ಬಿಟ್ಟು ಕೋಳಿ ಜೊತೆ ಯಾಕಮ್ಮಾ ಎಂದು ನಟಿಯ ಕಾಲೆಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ನಟಿ ಭವ್ಯಾ ಗೌಡ (Bhavya Gowda) ಕುರಿತು ಹೇಳುವುದಾದರೆ, ಅವರು ಇದೀಗ ಕರ್ಣ ಸೀರಿಯಲ್​ ನಿಧಿ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಇದಕ್ಕೂ ಮುನ್ನ ಅವರು 'ಗೀತಾ' ಸೀರಿಯಲ್​ನಲ್ಲಿ ನಟಿಸಿದ್ದರು. 'ಬಿಗ್&zwnj;ಬಾಸ್ ಕನ್ನಡ ಸೀಸನ್ 11' ನ ಸ್ಪರ್ಧಿಯಾಗಿ ಮನೆಮಾತಾಗಿದ್ದಾರೆ.&lt;/p&gt;&lt;img&gt;&lt;p&gt;ನಟಿ ಭವ್ಯಾ, ಇದಾಗಲೇ ನಟಿ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. 'ಲ್ಯಾಂಡ್&zwnj;ಲಾರ್ಡ್' ಚಿತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಚಿತ್ರವಿದು. ಗಗನಸಖಿಯಾಗುವ ಹಂಬಲವಿದ್ದ ನಟಿ, ನಟನಾ ವೃತ್ತಿಗೆ ಕಾಲಿಟ್ಟು ಯಶಸ್ವಿ ನಟಿ ಎನ್ನಿಸಿಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಭವ್ಯಾ ಅವರ ಲವ್​ಸ್ಟೋರಿ ಬಗ್ಗೆ ಇದಾಗಲೇ ರಿವೀಲ್​ ಆಗಿದೆ. ಅವರು ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್&zwnj; ಇದ್ದಾರೆ ಎಂದು ಹಿಂದೊಮ್ಮೆ ಹೇಳಿದ್ದರು. ನಿಮಗೆ ಯಾರಾದರೂ ಕ್ರಶ್&zwnj; ಇದ್ದಾರಾ ಎಂದು ಭವ್ಯಾ ಗೌಡ ಅವರಿಗೆ ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಪ್ರಶ್ನೆ ಮಾಡಿತ್ತು, ಆಗಲೇ ಅವರು ಹೌದು, ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್&zwnj; ಇದ್ದಾರೆ ಎಂದು ಹೇಳಿದ್ದರು. ಅವರು ಯಾರು ಎನ್ನುವುದು ಇನ್ನಷ್ಟೇ ರಿವೀಲ್​ ಆಗಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-nidhi-urf-bhavya-gowda-with-chicken-cute-video-viral-suc-beig3pc"/>
        </item>
        <item>
            <title><![CDATA[Karna Serial ಅನಿರೀಕ್ಷಿತ ತಿರುವು: ಗಂಡನಿಗೆ ಮಾಲತಿ ಕಪಾಳಮೋಕ್ಷ- ಕಮೆಂಟಿಗರ ರಿಪ್ಲೈಗೆ ಗಂಡಸರು ಶಾಕ್​​]]></title>
            <link>https://kannada.asianetnews.com/gallery/tv-talk/karna-serial-twist-malathi-slaps-her-husband-netizens-reacts-suc-i9oyvy5</link>
            <guid isPermaLink="true">https://kannada.asianetnews.com/gallery/tv-talk/karna-serial-twist-malathi-slaps-her-husband-netizens-reacts-suc-i9oyvy5</guid>
            <pubDate>Tue, 07 Jul 2026 21:07:17 +0530</pubDate>
            <description><![CDATA[ಕರ್ಣ ಸೀರಿಯಲ್&zwnj;ನಲ್ಲಿ ಪತ್ನಿ ಮಾಲತಿ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದ ಪತಿ ರಮೇಶ್&zwnj;ಗೆ ಕಪಾಳ ಮೋಕ್ಷವಾಗಿದೆ. ಸೊಸೆ ನಿಧಿಯ ಬೆಂಬಲದಿಂದ, ಮಾಲತಿ ತನ್ನ ಮೇಲೆ ಕೈ ಮಾಡಲು ಬಂದ ಪತಿಗೆ ತಿರುಗಿ ಹೊಡೆದಿದ್ದು, ಈ ಘಟನೆಗೆ ವೀಕ್ಷಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwykbt0xfcv85ycxnc7dn1ee,imgname-car-05-1783438370845.jpg" type="image/jpeg" height="390" width="690"/>
            <content:encoded><![CDATA[ಕರ್ಣ ಸೀರಿಯಲ್&zwnj;ನಲ್ಲಿ ಪತ್ನಿ ಮಾಲತಿ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದ ಪತಿ ರಮೇಶ್&zwnj;ಗೆ ಕಪಾಳ ಮೋಕ್ಷವಾಗಿದೆ. ಸೊಸೆ ನಿಧಿಯ ಬೆಂಬಲದಿಂದ, ಮಾಲತಿ ತನ್ನ ಮೇಲೆ ಕೈ ಮಾಡಲು ಬಂದ ಪತಿಗೆ ತಿರುಗಿ ಹೊಡೆದಿದ್ದು, ಈ ಘಟನೆಗೆ ವೀಕ್ಷಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.&lt;img&gt;&lt;p&gt;ಸೀರಿಯಲ್&zwnj;ಗೂ, ನಿಜ ಜೀವನಕ್ಕೂ ಅಜಗಜಾಂತರ ವ್ಯತ್ಯಾಸ ಇರತ್ತೆ ಬಿಡಿ. ಸೀರಿಯಲ್&zwnj;ಗಳಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ಆಗುವುದನ್ನು ನೋಡುತ್ತಿರುವಾಗ ಅಥವಾ ವಿಲನ್&zwnj;ಗಳು, ಅವರು ಲೇಡಿನೇ ಆಗಿರಲಿ, ಪುರುಷರೇ ಆಗಿರಲಿ ಟಾರ್ಚರ್&zwnj; ಕೊಡುವುದನ್ನು ನೋಡಿದಾಗ, ಹೋಗಿ ಬಾರಿಸಿಬಿಡಬೇಕು ಎನ್ನಿಸುತ್ತದೆ, ಇವನ್ನೆಲ್ಲಾ ಅವರು ಯಾಕೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸುವವರೇ ನಿಜ ಜೀವನದಲ್ಲಿ ಹೀಗೇನಾದ್ರೂ ಅಕ್ಕ-ಪಕ್ಕದ ಮನೆಯವರು ಮಾಡಿಬಿಟ್ಟರೆ ಸಂತ್ರಸ್ತರ ಮೇಲೆಯೇ ಗೂಬೆ ಕುಳ್ಳರಿಸುವುದು ಇದೆ. ಅದರಲ್ಲಿಯೂ ಸಂಬಂಧಿಕರ ಮನೆಯಲ್ಲಿ ಹೊರಗಿನ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುವಾಗ, ಸಂಬಂಧಿಕರ ಪರವಾಗಿಯೇ ನಿಲ್ಲುವ ಎಷ್ಟು ಪ್ರಕರಣಗಳು ಇಲ್ಲ ಹೇಳಿ.&lt;/p&gt;&lt;img&gt;&lt;p&gt;ಆದರೆ ಮೊದಲೇ ಹೇಳಿದಂತೆ ಸೀರಿಯಲ್&zwnj;ಗಳನ್ನು ನೋಡುವಾಗ ಮಾತ್ರ, ವೀಕ್ಷಕರು ವಿಲನ್&zwnj;ಗಳ ವಿರೋಧಿಗಳಾಗಿರುತ್ತಾರೆ. ಒಂದೆರಡು ಬಾರಿಸಬಾರದಾ ಎಂದು ಹೇಳುವುದೂ ಉಂಟು. ಕರ್ಣ ಸೀರಿಯಲ್&zwnj; (Karna Serial) ವಿಷಯಕ್ಕೆ ಬರುವುದಾದರೆ, ಕುತಂತ್ರಿ ರಮೇಶ್&zwnj;ನನ್ನು ನೋಡಿದರೆ ವೀಕ್ಷಕರು ಉರಿದು ಬೀಳುವುದು ಇದೆ. ಪ್ರತಿಬಾರಿಯೂ ರಮೇಶ್&zwnj; ಮಾಡುವ ಕುತಂತ್ರ ಕಂಡಾಗಲೆಲ್ಲಾ ಕರ್ಣ ಎರಡು ಬಾರಿಸಬಾರದೇ ಎಂದವರೇ ಹೆಚ್ಚು. ಅದರಲ್ಲಿಯೂ ಪತ್ನಿ ಮಾಲತಿ ಮೇಲೆ ಎಸಗುವ ದೌರ್ಜನ್ಯ ಕಂಡಾಗಲೆಲ್ಲಾ ಇದ್ಯಾಕೋ ಪತ್ನಿಯರು ಹೀಗೆ ಸುಮ್ಮನೆ ಇದ್ದರೆ ಆಗುವುದಿಲ್ಲ, ದೌರ್ಜನ್ಯ ಎಷ್ಟು ವರ್ಷ ಸಹಿಸಿಕೊಳ್ಳಬೇಕು ಎಂದು ಹೇಳಿದವರೇ ಎಲ್ಲಾ.&lt;/p&gt;&lt;img&gt;&lt;p&gt;ವೀಕ್ಷಕರ ಆ ಆಸೆ ಕೊನೆಗೂ ನೆರವೇರಿದೆ. ರಮೇಶ್&zwnj; ಪದೇ ಪದೇ ಪತ್ನಿ ಮಾಲತಿ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದ್ದಾನೆ. ಆದರೆ ಈಗ ಸೊಸೆ ನಿಧಿಯ ಸಪೋರ್ಟ್&zwnj; ಹಾಗೂ ಬುದ್ಧಿಮಾತಿನಿಂದ ಮಾಲತಿ ಬದಲಾಗಿದ್ದಾಳೆ.&lt;/p&gt;&lt;img&gt;&lt;p&gt;ತನ್ನ ಮೇಲೆ ಕೈಮಾಡಲು ಬಂದಿರುವ ಪತಿಯ ಕೈಯನ್ನು ಹಿಡಿದುಕೊಂಡಿದ್ದಾಳೆ. ಮಾತ್ರವಲ್ಲದೇ ತಿರುಗಿ ಪತಿಯ ಕೆನ್ನೆಗೆ ರಪಾರ್&zwnj; ಎಂದು ಬಾರಿಸಿದ್ದಾಳೆ. ಇದನ್ನು ಕಂಡು ರಮೇಶ್&zwnj; ಅಂತೂ ತತ್ತರಿಸಿಹೋಗಿದ್ದಾನೆ. ಕರ್ಣ, ನಿಧಿಗೆ ಮಾಲತಿಯ ಈ ಬದಲಾವಣೆ ಕಂಡು ಖುಷಿಯಾಗಿದೆ.&lt;/p&gt;&lt;img&gt;&lt;p&gt;ಇನ್ನು ಕಮೆಂಟಿಗರ ಕಮೆಂಟ್&zwnj; ನೋಡಿ ರಮೇಶ್&zwnj;ನಂಥ ಪುರುಷರು ಥರ ಥರ ನಡುಗುತ್ತಿದ್ದಾರೆ. ಬಹುತೇಕ ಎಲ್ಲರೂ ಮಾಲತಿ ಪರವೇ ನಿಂತಿದ್ದಾರೆ. ಪುರುಷರು ಕೂಡ ಮಾಲತಿ ಸರಿಯಾಗಿ ಮಾಡಿದ್ದಾಳೆ ಎನ್ನುತ್ತಿದ್ದಾರೆ. ಇಂಥ ಗಂಡಂದಿರಿಗೆ ಹೀಗೆಯೇ ಮಾಡಬೇಕು. ದೌರ್ಜನ್ಯ ಎಂದಿಗೂ ಸಹಿಸಬಾರದು. ಇದು ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿಯಾಗಬೇಕು ಎನ್ನುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಪತಿ ರಕ್ಕಸನಾಗಿದ್ದರೂ, ಪತಿಯೇ ಪರದೈವ ಎಂದು ಜೀವನಪೂರ್ತಿ ಆತನ ದೌರ್ಜನ್ಯ ಸಹಿಸಿಕೊಳ್ಳುವುದು ಇನ್ನು ಸಲ್ಲದು, ಪತ್ನಿಯನ್ನು ಗೌರವಿಸುವ ಪತಿಗೆ ಗೌರವ ಕೊಡಿ, ಆದರೆ ಕಾಲ ಕಸಕ್ಕಿಂತ ಕಡೆಯಾಗಿ ನೋಡುವ, ಕ್ಷಣ ಕ್ಷಣಕ್ಕೂ ನರಕಯಾತನೆ ನೀಡುವ ಇಂಥ ಗಂಡಸರಿಗೆ ತಕ್ಕಬುದ್ಧಿ ಕಲಿಸಬೇಕು ಎನ್ನುವ ಕಮೆಂಟಿಗರ ಕಮೆಂಟ್&zwnj; ನೋಡಿ ಹಲವರು ಸುಸ್ತಾಗಿರೋದಂತೂ ಗ್ಯಾರೆಂಟಿ&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-twist-malathi-slaps-her-husband-netizens-reacts-suc-i9oyvy5"/>
        </item>
        <item>
            <title><![CDATA[ಕ್ವಾಟ್ಲೆಗಳಿಗೆ ಕ್ವಾಟ್ಲೆ ಕೊಡ್ತಿದ್ದಾರೆ ರಕ್ಷಿತಾ ಶೆಟ್ಟಿ, ಗೆಸ್ ಮಾಡೋಕಾಗ್ದೆ ಪ್ರಶಾಂತ್ ಕಂಗಾಲು]]></title>
            <link>https://kannada.asianetnews.com/gallery/tv-talk/rakshitha-confuses-prashanth-on-kwatle-kitchen-judges-ca-not-stop-laughing-t5i575v</link>
            <guid isPermaLink="true">https://kannada.asianetnews.com/gallery/tv-talk/rakshitha-confuses-prashanth-on-kwatle-kitchen-judges-ca-not-stop-laughing-t5i575v</guid>
            <pubDate>Wed, 08 Jul 2026 13:00:22 +0530</pubDate>
            <description><![CDATA[&lt;p&gt;Quatley Kitchen Rakshita : ಕ್ವಾಟ್ಲೆ ಕಿಚನ್ ಸೀಸನ್ 2 ನಲ್ಲಿ ರಕ್ಷಿತಾ ಹವಾ ಜೋರಾಗಿದೆ. ರಕ್ಷಿತಾ ಇದ್ದಲ್ಲೆಲ್ಲ ನಗು ಗ್ಯಾರಂಟಿ. ಶನಿವಾರದ ಎಪಿಸೋಡ್ ನಲ್ಲಿ ರಕ್ಷಿತಾ ಕೈನಲ್ಲಿ ಸಿಕ್ಕಿಬಿದ್ದ ಪ್ರಶಾಂತ್ ಸುಸ್ತಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx09qze8gg3p2abg8paahrhw,imgname-quatley-kitchen-rakshita-1783495392712.jpg" type="image/jpeg" height="390" width="690"/>
            <content:encoded><![CDATA[&lt;p&gt;Quatley Kitchen Rakshita : ಕ್ವಾಟ್ಲೆ ಕಿಚನ್ ಸೀಸನ್ 2 ನಲ್ಲಿ ರಕ್ಷಿತಾ ಹವಾ ಜೋರಾಗಿದೆ. ರಕ್ಷಿತಾ ಇದ್ದಲ್ಲೆಲ್ಲ ನಗು ಗ್ಯಾರಂಟಿ. ಶನಿವಾರದ ಎಪಿಸೋಡ್ ನಲ್ಲಿ ರಕ್ಷಿತಾ ಕೈನಲ್ಲಿ ಸಿಕ್ಕಿಬಿದ್ದ ಪ್ರಶಾಂತ್ ಸುಸ್ತಾಗಿದ್ದಾರೆ.&lt;/p&gt;&lt;img&gt;&lt;p&gt;ಕ್ವಾಟ್ಲೆ ಕಿಚನ್ ಸೀಸನ್ 2 ಗೆ ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಕಾಲಿಟ್ಟು ಸಾಕಷ್ಟು ಮನರಂಜನೆ ನೀಡ್ತಿದ್ದಾರೆ. ರಕ್ಷಿತಾ ಶೋನಲ್ಲಿದ್ದಾರೆ ಅಂದ್ರೆ ಫ್ಯಾನ್ಸ್ ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ. ರಕ್ಷಿತಾ ತುಳು ಮಿಕ್ಸ್ ಕನ್ನಡ ಜಪ್ಪಯ್ಯ ಅಂದ್ರೂ ಅರ್ಥವಾಗೋದಿಲ್ಲ.&lt;/p&gt;&lt;img&gt;&lt;p&gt;ಈ ವಾರ ರಕ್ಷಿತಾ ಜೊತೆ ಪ್ರಶಾಂತ್ ಜೋಡಿಯಾಗಲಿದ್ದಾರೆ. ಪ್ರೋಮೋದಲ್ಲಿ ಇವರ ಟಾಸ್ಕ್ ವಿಡಿಯೋ ಪೋಸ್ಟ್ ಮಾಡಲಾಗಿದೆ. ಪ್ರಶಾಂತ್ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳ್ತಾರೆ. ರಕ್ಷಿತಾ, ತಿಂಡಿ ಹೆಸರನ್ನು ಹೇಳ್ಬೇಕು. ರಕ್ಷಿತಾ ಬಾಯಿ ನೋಡಿಯೇ ಪ್ರಶಾಂತ್ ಗೆಸ್ ಮಾಡ್ಬೇಕು. ಆದ್ರೆ ರಕ್ಷಿತಾ ಹೇಳಿದ ಒಂದೂ ಹೆಸರು ಪ್ರಶಾಂತ್ ಗೆ ಗೊತ್ತಾದಂತೆ ಕಾಣ್ತಿಲ್ಲ.&lt;/p&gt;&lt;img&gt;&lt;p&gt;ರಕ್ಷಿತಾ, ಪ್ರಶಾಂತ್ ಗೆ ಹೋಳೋ ಸ್ಟೈಲ್ ನೋಡಿದ್ರೆ ನಗು ಬರುತ್ತೆ. ಪರಾಟಾ ಹೆಸರು ಕೇಳಿ ಕೆಟ್ಟದಾಗಿ ಬೈತಿದ್ದಾರೆ ಅಂತ ಪ್ರಶಾಂತ್ ತಲೆ ಕೆಡಿಸಿಕೊಂಡಿದ್ದಾರೆ. ರಕ್ಷಿತಾ ಸ್ವಲ್ಪ ಮಾಡಿದ್ದಲ್ಲ ಜಾಸ್ತಿಯೇ ಮಾಡಿದ್ದು ಅಂತ ಜಡ್ಜಸ್ ಅವರ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ರಕ್ಷಿತಾ ತಮ್ಮ ಡೈಲಾಗ್ ನಲ್ಲೇ ವೀಕ್ಷಕರನ್ನು ಗೆದ್ದಿದ್ದಾರೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ನಲ್ಲಿ ರಕ್ಷಿತಾರನ್ನು ನೋಡಿ ಮೆಚ್ಚಿಕೊಂಡಿದ್ದ ವೀಕ್ಷಕರು ಇಷ್ಟು ದಿನ ಮಿಸ್ ಮಾಡಿಕೊಳ್ತಿದ್ದರು. ಈಗ ಕ್ವಾಟ್ಲೆ ಕಿಚನ್ ನಲ್ಲಿ ರಕ್ಷಿತಾ ನೋಡುವ ಅವಕಾಶ ಸಿಕ್ಕಿದೆ. ರಕ್ಷಿತಾ ಸೂಪರ್, ಅಡುಗೆ ಮಾಡೋಕೆ ಬಂದಿರುವ ರಕ್ಷಿತಾ ಕ್ವಾಟ್ಲೆಗಳಿಗೆ ಕ್ವಾಟ್ಲೆ ನೀಡ್ತಿದ್ದಾರೆ. ರಕ್ಷಿತಾ ಇದ್ದಲ್ಲಿ ಎಂಟರ್ಟೈನ್ಮೆಂಟ್ ಗ್ಯಾರಂಟಿ ಎನ್ನುವ ಕಮೆಂಟ್ ಗಳು ಬಂದಿವೆ.&lt;/p&gt;]]></content:encoded>
            <category>entertainment</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/tv-talk/rakshitha-confuses-prashanth-on-kwatle-kitchen-judges-ca-not-stop-laughing-t5i575v"/>
        </item>
        <item>
            <title><![CDATA[Rishab Shetty: ಹುಟ್ಟುಹಬ್ಬದ ಸಂಭ್ರಮದಲ್ಲಿ ಹಲವು ಗುಟ್ಟು ಹಂಚಿಕೊಂಡ ರಿಷಬ್ ಶೆಟ್ಟಿ; ಸೀಕ್ರೆಟ್ ಮೂಟೆಯಲ್ಲಿ ಏನೇನಿದೆ ನೋಡಿ!]]></title>
            <link>https://kannada.asianetnews.com/sandalwood/sandalwood-divine-star-rishab-shetty-shares-many-secrets-on-his-birthday-celebration-event/articleshow-feqq654</link>
            <guid isPermaLink="true">https://kannada.asianetnews.com/sandalwood/sandalwood-divine-star-rishab-shetty-shares-many-secrets-on-his-birthday-celebration-event/articleshow-feqq654</guid>
            <pubDate>Wed, 08 Jul 2026 12:29:17 +0530</pubDate>
            <description><![CDATA[&lt;p&gt;ರಿಷಬ್ ನಟಿಸ್ತಾ ಇರೋ ನೆಕ್ಸ್ಟ್ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್. ಅಸಲಿಗೆ ಈ ಸಿನಿಮಾ ಅನೌನ್ಸ್ ಆದಾಗ ಹಲವು ಕನ್ನಡ ಪರ ಸಂಘಟನೆಗಳು ರಿಷಬ್ ಈ ಸಿನಿಮಾ ಮಾಡಬಾರದು ಅಂತ ಒತ್ತಾಯಿಸಿದ್ವು. ಶಿವಾಜಿ ಕನ್ನಡ ವಿರೋಧಿ.. ಅವರ ಬಯೋಪಿಕ್​ನಲ್ಲಿ ಕನ್ನಡಿಗರ ನಟಿಸೋದು ಎಷ್ಟು ಸರಿ ಅಂತ ವಾದ ಮಾಡಿದ್ರು. ಆದರೆ, ರಿಷಬ್ ಅವರು ಈ ಬಗ್ಗೆ ಏನು ಹೇಳಿದ್ದಾರೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx080gcyt35yn879yttccxqe,imgname-rishab-shetty--2--1783493575070.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ತಮ್ಮ 43ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿರುವುದು ಗೊತ್ತೇ ಇದೆ. ಬರ್ತ್​ಡೇ ಸಂಭ್ರಮದ ವೇಳೆ ಮುಂದೆ ಬರಲಿರೋ ಪ್ರಾಜೆಕ್ಟ್, ಇಂಡಸ್ಟ್ರಿಯಲ್ಲಿ ಓಡ್ತಿರೋ ಗಾಸಿಪ್, ಪ್ಯಾನ್ ಇಂಡಿಯಾ ಜರ್ನಿ, ಸಿನಿಮಾ ಇಂಡಸ್ಟ್ರಿಯ ಸ್ಥಿತಿಗತಿ ಎಲ್ಲದರ ಬಗ್ಗೆ ಉತ್ತರ ಕೊಟ್ಟಿದ್ದಾರೆ ರಿಷಬ್. ಹಾಗಾದ್ರೆ ರಿಷಬ್ ಹೇಳಿದ ಆ ಗುಟ್ಟುಗಳು ಏನು..? ವಾಚ್ ದಿಸ್ ಸ್ಟೋರಿ.&lt;/p&gt;&lt;p&gt;ಬರ್ತ್​ಡೇ ದಿನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ಈ ಮೂರು(3) ಗುಟ್ಟುಗಳನ್ನು ಹೇಳಿದ್ದಾರೆ.&lt;/p&gt;&lt;p&gt;ಜೈ ಹನುಮಾನ್ ತೆಲುಗು ಚಿತ್ರವಲ್ಲ.. ಅಪ್ಪಟ ಕನ್ನಡ ಚಿತ್ರ..!&lt;/p&gt;&lt;p&gt;ವಿವಾದಕ್ಕೆ ತಲೆ ಕೆಡಿಸಿಕೊಳ್ಳಲ್ಲ.. ಶಿವಾಜಿ ಸಿನಿಮಾ ಬಿಡಲ್ಲ..!&lt;/p&gt;&lt;p&gt;ಕಾಂತಾರ ಹೊಸ ಅಧ್ಯಾಯ ರೆಡಿಯಾಗ್ತಿರೋದು ಸುಳ್ಳಲ್ಲ..!&lt;/p&gt;&lt;p&gt;ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದು, ಚಿತ್ರರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಸಣ್ಣ ಪುಟ್ಟ ಪಾತ್ರ ಮಾಡ್ತಾ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಬಂದವರು ರಿಷಬ್. ಸದ್ಯ ಶೆಟ್ರು ಗ್ಲೋಬಲ್ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ.&lt;/p&gt;&lt;p&gt;ಕಾಂತಾರ ರಿಷಬ್ ಬದುಕಿನ ಟರ್ನಿಂಗ್ ಪಾಯಿಂಟ್. ಕಾಂತಾರದಿಂದ ಸಿಕ್ಕ ಜಾಗತಿಕ ಮನ್ನಣೆ ರಿಷಬ್​ಅವರನ್ನು ರಾತ್ರೋರಾತ್ರಿ ಗ್ಲೋಬಲ್ ಸ್ಟಾರ್ ಆಗಿಸಿದೆ. ಕಾಂತಾರ ಚಾಪ್ಟರ್-1 ಮತ್ತೊಂದು ಲೆವೆಲ್ ಎತ್ತರಕ್ಕೆ ಕೊಂಡೊಯ್ದಿದೆ.&lt;/p&gt;&lt;p&gt;ಸದ್ಯ ರಿಷಬ್ ಎರಡು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದನೇಯದ್ದು ಜೈ ಹನುಮಾನ್. ಪ್ರಶಾಂತ್ ವರ್ಮಾ ನಿರ್ದೇಶನದ ಮೈತ್ರಿ ಮೂವೀಸ್ ನಿರ್ಮಾಣದ ಜೈ ಹನುಮಾನ್ ತೆಲುಗು ಮೂವಿನಾ..? ಇಲ್ಲಾ ಅಂತಾರೆ ರಿಷಬ್. ಬೇರೆ ಬೇರೆ ಭಾಷೆಯ ನಟರು ಇರೋ ಸಿನಿಮಾ ಅದು. ಅವರವರು ಅವರವರ ಭಾಷೆಯಲ್ಲಿ ಮಾತನಾಡ್ತಾರೆ, ಬಳಿಕ ಡಬ್ಬಿಂಗ್ ಆಗುತ್ತೆ. ಹನುಮಂತನೂ ಕನ್ನಡದವನು.. ರಿಷಬ್ ಕೂಡ ಕನ್ನಡಿಗ.. ಸೋ ಇದು ಅಪ್ಪಟ ಕನ್ನಡ ಸಿನಿಮಾ ಅಂತಾರೆ ರಿಷಬ್.&lt;/p&gt;&lt;p&gt;ಇದಾದ ಬಳಿಕ ರಿಷಬ್ ನಟಿಸ್ತಾ ಇರೋ ನೆಕ್ಸ್ಟ್ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್. ಅಸಲಿಗೆ ಈ ಸಿನಿಮಾ ಅನೌನ್ಸ್ ಆದಾಗ ಹಲವು ಕನ್ನಡ ಪರ ಸಂಘಟನೆಗಳು ರಿಷಬ್ ಈ ಸಿನಿಮಾ ಮಾಡಬಾರದು ಅಂತ ಒತ್ತಾಯಿಸಿದ್ವು. ಶಿವಾಜಿ ಕನ್ನಡ ವಿರೋಧಿ.. ಅವರ ಬಯೋಪಿಕ್​ನಲ್ಲಿ ಕನ್ನಡಿಗರ ನಟಿಸೋದು ಎಷ್ಟು ಸರಿ ಅಂತ ವಾದ ಮಾಡಿದ್ರು.&lt;/p&gt;&lt;p&gt;ಆದ್ರೆ ಈ ವಿವಾದದ ಹೊರತಾಗಿಯೂ ರಿಷಬ್ ಈ ಪ್ರಾಜೆಕ್ಟ್​ನಿಂದ ಹಿಂದೆ ಸರಿದಿಲ್ಲ. ಶಿವಾಜಿ ಪಾತ್ರ ಮಾಡಿಯೇ ಸಿದ್ಧ ಅಂದಿದ್ದಾರೆ. ಜೈ ಹನುಮಾನ್ ಬಳಿಕ ಈ ಸಿನಿಮಾ ಶುರುವಾಗಲಿದೆ.&lt;/p&gt;&lt;p&gt;ಇನ್ನು, ಕಾಂತಾರದ ಇನ್ನೊಂದು ಅಧ್ಯಾಯ ಕೂಡ ಬರೋದು ಫಿಕ್ಸ್. ಸದ್ಯ ನಟನೆಯ ಚಿತ್ರಗಳ ಜೊತೆ ಜೊತೆಗೆ ಕಾಂತಾರ ಚಾಪ್ಟರ್ 2 ಸ್ಕ್ರಿಪ್ಟ್ ರೆಡಿಯಾಗ್ತಾ ಇದೆಯಂತೆ. ರಿಷಬ್ ರೈಟರ್ಸ್ ಟೀಂ ಆ ಸ್ಕ್ರಿಪ್ಟ್​ನ ಸಿದ್ದಮಾಡ್ತಾ ಇದೆ.&lt;/p&gt;&lt;p&gt;ಕರಾವಳಿ ಪ್ರವಾಸೋಧ್ಯಮ ರಾಯಭಾರಿ ಆಗಿದ್ದು ನಿಜಾನಾ..?&lt;/p&gt;&lt;p&gt;ಇತ್ತೀಚಿಗೆ ರಿಷಬ್, ಸಿಎಂ ಡಿ.ಕೆ ಶಿವಕುಮಾರ್​ಅವರನ್ನು ಭೇಟಿ ಮಾಡಿದ್ರು. ರಿಷಬ್​ಅವರನ್ನು ಕರ್ನಾಟಕ ಕರಾವಳಿ ಪ್ರವಾಸೋದ್ಯಮ ರಾಯಭಾರಿ ಮಾಡಲಾಗಿದೆ ಅನ್ನೋ ನ್ಯೂಸ್ ಹರಿದಾಡಿದ್ವು. ಆದ್ರೆ ಅದು ಇನ್ನೂ ಅಧಿಕೃತ ಆಗಿಲ್ಲ. ಈ ಕುರಿತ ಮಾತುಕತೆಗೆ ಅಂತಲೇ ರಿಷಬ್ ಸಿಎಂ ಭೇಟಿ ಮಾಡಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ರಿಷಬ್ ಕೈಯಲ್ಲಿ ಮೂರು ಚಿತ್ರಗಳಿವೆ. ತಲೆಯಲ್ಲಿ ಮತ್ತೊಂದಿಷ್ಟು ಕನಸುಗಳಿವೆ. ಇವೆಲ್ಲ ಕನಸುಗಳ ನಡುವೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರೋ ರಿಷಬ್ ಹೊಸ ಅಧ್ಯಾಯ ಸ್ಟಾರ್ಟ್ ಅಂದಿದ್ದಾರೆ..!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-divine-star-rishab-shetty-shares-many-secrets-on-his-birthday-celebration-event/articleshow-feqq654"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೇಸ್‌: ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣದ ಹಿಂದೆ ಪ್ರಭಾವಿಗಳಿರೋ ಶಂಕೆ? ಡೀಲ್ ಕೊಟ್ಟವರಿಗೂ ನಡುಕ]]></title>
            <link>https://kannada.asianetnews.com/karnataka-districts/renukaswamy-case-darshan-aides-arrested-for-threatening-witness-fsl-to-uncover-big-names-in-witness-deal-gdp/articleshow-7m26gyz</link>
            <guid isPermaLink="true">https://kannada.asianetnews.com/karnataka-districts/renukaswamy-case-darshan-aides-arrested-for-threatening-witness-fsl-to-uncover-big-names-in-witness-deal-gdp/articleshow-7m26gyz</guid>
            <pubDate>Wed, 08 Jul 2026 12:28:16 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿಗಳನ್ನು ಬಂಧಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ. ಪ್ರಭಾವಿಗಳ ಸೂಚನೆ ಮೇರೆಗೆ ನಡೆದಿದೆ ಎನ್ನಲಾದ ಈ 'ಡೀಲ್'ನ ರಹಸ್ಯವನ್ನು ಆರೋಪಿಗಳ ಮೊಬೈಲ್ ಫೋನ್&zwnj;ನ ಎಫ್&zwnj;ಎಸ್&zwnj;ಎಲ್ ವರದಿ ಬಯಲು ಮಾಡುವ ನಿರೀಕ್ಷೆಯಿದೆ, ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j0q7cynrazcp8gfx4vw71q87,imgname-Renukaswamy-Murder-Case-1718766435000.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಟ ದರ್ಶನ್ ಅವರನ್ನು ಈ ಕೊಲೆ ಕೇಸ್&zwnj;ನಿಂದ ಹೇಗಾದರೂ ಮಾಡಿ ಪಾರು ಮಾಡಬೇಕು ಎಂದು ಯಾರದ್ದೋ ಮಾತು ಕೇಳಿ ಸಾಕ್ಷಿಗಳ ನಾಶಕ್ಕೆ ಇಳಿದಿದ್ದ ದರ್ಶನ್ ಅಭಿಮಾನಿ ಸಂಘದ ಪ್ರಮುಖರು ಈಗ ತಾವೇ ಕಾನೂನಿನ ಉರುಳಿಗೆ ಸಿಲುಕಿದ್ದಾರೆ. ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಒಡ್ಡಿ ಸಿಕ್ಕಿಬಿದ್ದಿರುವ ಆರೋಪಿಗಳ ಜಾಲದ ಹಿಂದೆ ಚಿತ್ರರಂಗದ ಪ್ರಭಾವಿ ವ್ಯಕ್ತಿಗಳು ಅಥವಾ ರಾಜಕೀಯದ ಪ್ರಭಾವಿ ವ್ಯಕ್ತಿಗಳು ಇರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿದೆ.&lt;/p&gt;&lt;h2&gt;ಸಾಕ್ಷಿ ನಂ. 49 ಸಂದೀಪ್&zwnj;ಗೆ ಬೆದರಿಕೆ ಹಾಕಿದ್ದ ಮೂವರ ಬಂಧನ&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿಯಾಗಿರುವ ಚಿತ್ರದುರ್ಗದ ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್&zwnj;ನ ಕ್ಯಾಷಿಯರ್ ಸಂದೀಪ್&zwnj;ಗೆ ಇತ್ತೀಚೆಗೆ ಆಕರ್ಷ್ ಎಂಬ ವ್ಯಕ್ತಿಯ ಮೂಲಕ ಕರೆ ಮಾಡಿಸಲಾಗಿತ್ತು. ನಾವು ಹೇಳಿದಂತೆ ಕೋರ್ಟ್&zwnj;ನಲ್ಲಿ ಸಾಕ್ಷ್ಯ ನುಡಿಯಬೇಕು, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಕುರಿತು ಸಂದೀಪ್ ಸ್ವತಃ ನ್ಯಾಯಾಧೀಶರ ಮುಂದೆ ಧೈರ್ಯವಾಗಿ ನನಗೆ ಸುಳ್ಳು ಸಾಕ್ಷಿ ನುಡಿಯುವ ಬೆದರಿಕೆ ಇದೆ ಎಂದು ಜವಾಬ್ದಾರಿ ಹೇಳಿಕೆ ನೀಡಿದ್ದರು.&lt;/p&gt;&lt;p&gt;ವಿಚಾರಣೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಬೆದರಿಕೆ ಹಾಕಿದವರ ವಿರುದ್ಧ ತಕ್ಷಣ ಕ್ರಮ ಜರುಗಿಸಲು ಮತ್ತು ಸಾಕ್ಷಿಗೆ ಸೂಕ್ತ ರಕ್ಷಣೆ ನೀಡಲು ತನಿಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಟ ದರ್ಶನ್ ಅಭಿಮಾನಿ ಸಂಘದ ಸದಸ್ಯರಾದ ಸುಹಾಸ್, ವೇಣು ಮತ್ತು ಪುನೀತ್ ಎಂಬ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದರು.&lt;/p&gt;&lt;h2&gt;10 ದಿನ ಪೊಲೀಸ್ ಕಸ್ಟಡಿಯಲ್ಲಿ ಪುನೀತ್: ಬಾಯಿ ಬಿಟ್ಟರೆ ಅನಾಹುತ!&lt;/h2&gt;&lt;p&gt;ಬಂಧಿತರ ಪೈಕಿ ತೀವ್ರ ವಿಚಾರಣೆಗೆ ಒಳಗಾಗಿರುವ ದಾಸನ ಅಭಿಮಾನಿ ಪುನೀತ್ ನನ್ನು ಪೊಲೀಸರು ಸದ್ಯ 10 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಈ ಪುನೀತ್ ಪೊಲೀಸರ ಮುಂದೆ ನಿರಂತರವಾಗಿ ಮರು ಹೇಳಿಕೆಗಳನ್ನು ದಾಖಲಿಸುತ್ತಿದ್ದಾನೆ. ಸದ್ಯದ ಮಾಹಿತಿ ಪ್ರಕಾರ, ಈತ ಯಾರೋ ಪ್ರಭಾವಿಗಳ ಸೂಚನೆ ಮೇರೆಗೆ ಈ ಇಡೀ ಸಾಕ್ಷಿ ನಾಶದ &lsquo;ಡೀಲ್&rsquo; ಕುದುರಿಸಲು ಮುಂದಾಗಿದ್ದ ಎನ್ನಲಾಗಿದೆ. 10 ದಿನಗಳ ಈ ಸುದೀರ್ಘ ವಿಚಾರಣೆಯಲ್ಲಿ ಪುನೀತ್ ಅಸಲಿ ಸತ್ಯವನ್ನು ಬಾಯಿ ಬಿಟ್ಟರೆ, ಈ ಡೀಲ್ ಕುದುರಿಸಲು ಹಣದ ಆಮಿಷ ಒಡ್ಡಿದ ದೊಡ್ಡ ವ್ಯಕ್ತಿಗಳಿಗೆ ನೇರ ಸಂಕಷ್ಟ ಅಂತು ಕಟ್ಟಿಟ್ಟ ಬುತ್ತಿ.&lt;/p&gt;&lt;h2&gt;ಕಾನ್ಫರೆನ್ಸ್ ಕಾಲ್ ರಹಸ್ಯ ಬಿಚ್ಚಿಡಲಿದೆ ಎಫ್&zwnj;ಎಸ್&zwnj;ಎಲ್ (FSL) ವರದಿ&lt;/h2&gt;&lt;p&gt;ಸಾಕ್ಷಿಗೆ ಬೆದರಿಕೆ ಹಾಕಲು ಆರೋಪಿಗಳು ಬಳಸಿದ್ದ ಮೊಬೈಲ್ ಫೋನ್&zwnj;ಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಿದ್ದಾರೆ. ಮೊಬೈಲ್&zwnj;ನಿಂದ ಡಿಲೀಟ್ ಮಾಡಲಾಗಿರುವ ಕರೆಗಳ ವಿವರ, ವಾಟ್ಸಾಪ್ ಚಾಟ್&zwnj;ಗಳು ಮತ್ತು ಪ್ರಮುಖ ಆಡಿಯೋ ರೆಕಾರ್ಡಿಂಗ್&zwnj;ಗಳನ್ನು ಮರುಪಡೆಯುವ (Retrieve) ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ವರದಿ ಪೊಲೀಸರ ಕೈಸೇರಲಿದೆ. ಸಾಕ್ಷಿಗೆ ಬೆದರಿಕೆ ಹಾಕುವ ಸಮಯದಲ್ಲಿ ಈ ಆರೋಪಿಗಳ ಜೊತೆ ಕಾನ್ಫರೆನ್ಸ್ ಕಾಲ್&zwnj;ನಲ್ಲಿ ಇನ್ನು ಯಾರ್ಯಾರು ಸಂಪರ್ಕದಲ್ಲಿದ್ದರು? ಬೆಂಗಳೂರಿನಿಂದ ಯಾರಾದರೂ ಇವರಿಗೆ ಇನ್ಸ್ಟ್ರಕ್ಷನ್ ನೀಡುತ್ತಿದ್ದರೇ? ಎಂಬುದನ್ನು ಎಫ್&zwnj;ಎಸ್&zwnj;ಎಲ್ ಪತ್ತೆ ಹಚ್ಚಲಿದೆ.&lt;/p&gt;&lt;h2&gt;ಡೀಲ್ ಕುದುರಿಸಿದವರಿಗೆ ಶುರುವಾಗಿದೆ ನಡುಕ!&lt;/h2&gt;&lt;p&gt;ಎಫ್&zwnj;ಎಸ್&zwnj;ಎಲ್&zwnj;ನಿಂದ ತಾಂತ್ರಿಕ ಸಾಕ್ಷ್ಯಗಳು ಕೈ ಸೇರಿದ ತಕ್ಷಣವೇ, ಈ ಇಡೀ ಸಾಕ್ಷಿ ಬೆದರಿಕೆ ಪ್ರಕರಣದ ಹಿಂದೆ ನಿಂತು ಹಣದ ಹರಿವು ಹಾಗೂ ತಂತ್ರ ರೂಪಿಸಿದ ದೊಡ್ಡ ತಲೆಗಳಿಗೆ ಪೊಲೀಸರು ನೋಟಿಸ್ ಜಾರಿ ಮಾಡಲಿದ್ದಾರೆ. ನೋಟಿಸ್ ನೀಡಿದ ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಮುಖಾಮುಖಿ ವಿಚಾರಣೆ ನಡೆಸಲು ಕಾಮಾಕ್ಷಿಪಾಳ್ಯ ಪೊಲೀಸರು ಯೋಜನೆ ರೂಪಿಸಿದ್ದಾರೆ.&lt;/p&gt;&lt;p&gt;ದರ್ಶನ್ ರಕ್ಷಣೆಗಾಗಿ ಕೋಟಿ ಕೋಟಿ ಹಣ ಹಿಡಿದು ಡೀಲ್ ಮಾಡಲು ಹೊರಟಿದ್ದ ಪ್ರಭಾವಿ ವಲಯದಲ್ಲಿ ಈಗ ತೀವ್ರ ನಡುಕ ಮತ್ತು ಆತಂಕ ಮನೆಮಾಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್&zwnj;ನ ಸೈಡ್ ಟ್ರ್ಯಾಕ್&zwnj;ನಲ್ಲಿ ಆರಂಭವಾಗಿರುವ ಈ ಬೆದರಿಕೆ ಪ್ರಕರಣ, ಅಸಲಿ ಕೊಲೆ ಪ್ರಕರಣಕ್ಕಿಂತಲೂ ದೊಡ್ಡ ತಿರುವು ಪಡೆಯುವ ಮುನ್ಸೂಚನೆ ಸಿಗುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-darshan-aides-arrested-for-threatening-witness-fsl-to-uncover-big-names-in-witness-deal-gdp/articleshow-7m26gyz"/>
        </item>
        <item>
            <title><![CDATA[Yash-Toxic: ಕಿಯಾರ ಮೇಲೆ ಮುತ್ತಿನ ಮಳೆ.. ಹೊರಬಂತು ಮೋಸದ ಕಥೆ; ಮಿತಿಮೀರಿಸುತ್ತಿದೆ ಟಾಕ್ಸಿಕ್ ಕ್ರೇಜ್!]]></title>
            <link>https://kannada.asianetnews.com/sandalwood/rocking-star-yash-starrer-geethu-mohandas-movie-toxic-2nd-song-released-and-making-sensation/articleshow-z5dq6hr</link>
            <guid isPermaLink="true">https://kannada.asianetnews.com/sandalwood/rocking-star-yash-starrer-geethu-mohandas-movie-toxic-2nd-song-released-and-making-sensation/articleshow-z5dq6hr</guid>
            <pubDate>Wed, 08 Jul 2026 12:05:21 +0530</pubDate>
            <description><![CDATA[&lt;p&gt;ಇಂದು (8 ಜುಲೈ 2026) ಬಿಡುಗಡೆ ಆಗಿರುವ &lsquo;ತಬಾಹಿ&rsquo; &amp;nbsp;ಸಾಂಗ್ ಮೂಲಕ, ಯಶ್ ನಾಯಕತ್ವ ಹಾಗೂ ಗೀತೂ ಮೋಹನ್&zwnj;ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರಕ್ಕೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಈ ಮೂಲಕ, 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ 'ಪ್ಯಾನ್ ವರ್ಲ್ಡ್' ಟಾಕ್ಸಿಕ್&zwnj; ಸಿನಿಮಾಗೆ ಸಂಚಲನ ಹಾಗೂ ನಿರೀಕ್ಷೆ ಮುಗಿಲು ಮುಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx070418yy7vw59shcvf247c,imgname-yash-kiara-advani-1783492513832.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಪ್ರತಿಯೊಂದು ಅಪ್&zwnj;ಡೇಟ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೆನ್ಸೇಷನ್ ಸೃಷ್ಟಿಸುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್&zwnj; ಹಾಗೂ ಸಾಂಗ್ ಮೂಲಕ ಟಾಕ್ಸಿಕ್ ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಹೊಸ &lsquo;ತಬಾಹಿ (Tabaahi)&rsquo; ಸಾಂಗ್ ಬಿಡುಗಡೆ ಆಗಿದ್ದು ಇದು 'ಟಾಕ್ಸಿಕ್&zwnj;' ಜ್ವರವನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಸಂದೇಹವೇ ಇಲ್ಲ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಟಾಕ್ಸಿಕ್ ಚಿತ್ರದ ಎರಡನೇ ಹಾಡು ಇದೀಗ ಬಿಡುಗಡೆಯಾಗಿದೆ. ವಿಶಾಲ್ ಮಿಶ್ರಾ ಸಂಗೀತದ ಹೊಸ ಸಾಂಗ್&zwnj; ಸಿಕ್ಕಾಪಟ್ಟೆ ವೈರಲ್ ಅಗುತ್ತಿದೆ. ತಬಾಹಿ ಹಾಡು ನಾಳೆ 11.33ಕ್ಕೆ ಬರಲಿದೆ ಎಂದು ನಿನ್ನೆಯೇ ಟಾಕ್ಸಿಕ್ ನಟಿ ಕಿಯಾರಾ ಅದ್ವಾನಿ ಎಕ್ಸ್&zwnj;ನಲ್ಲಿ ಹಂಚಿಕೊಂಡಿದ್ದರು. (ಇಡೀ ಚಿತ್ರತಂಡ ಇಂದು ಲಾಂಚ್ ಆಗಲಿರುವ ತಬಾಹಿ ಸಾಂಗ್&zwnj;ಗೆ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿತ್ತು.). ಈಗ ಹಾಡು ಬಿಡುಗಡೆ ಆಗಿ ನಿರೀಕ್ಷೆಗೂ ಮೀರಿ ಸೆನ್ಸೇಷನ್ ಸೃಷ್ಟಿಸುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಏನಿದೆ, ಹೇಗಿದೆ ತಬಾಹಿ ಹಾಡು?!&lt;/h2&gt;&lt;p&gt;ವಿಶಾಲ್ ಮಿಶ್ರಾ ಸಂಗೀತ ನಿರ್ದೇಶನ, ಗಾಯನದ ಮೂಲಕ ಹೊರಬಂದಿರುವ ಈ ಹೊಸ ಹಾಡು ವಿಭಿನ್ನ ಹಾಗೂ ವಿಶೇಷ ಎನ್ನುವಂತಿದೆ. ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮೂಡಿಬಂದಿರುವ &lsquo;ತಬಾಹಿ.. ಎಲ್ಲಾ ಮೀತಿಮೀರಿ ಹೋಗೋಣ ಬಾ.. ಎನ್ನುವ ಹಾಡು ಯಶ್ ಹಾಗೂ ಕಿಯಾರಾ ಅಡ್ವಾನಿ ನಟನೆಯಲ್ಲಿ ಸೂಪರ್ ರೊಮ್ಯಾಂಟಿಕ್ ಎನ್ನುವಂತೆ ಇದೆ. ಜೆನ್ ಜೀ ಮಾತಲ್ಲಿ ಹೇಳಬೇಕು ಎಂದರೆ ಈ ಹಾಡು &rsquo;ಬೆಂಕಿ'.. &amp;nbsp; ಮಿಕ್ಕ ವಾತಾವರಣ ಈ ಹಾಡಿಗೆ ಪೂರಕವಾಗಿದ್ದು, ಹೈ ಲೆವಲ್ ಕಮಾಲ್ ಈ ಹಾಡಿನಲ್ಲಿ ಎದ್ದು ಕಾಣುತ್ತಿದೆ. ಮೇಕಿಂಗ್ ರಿಚ್&zwnj;ನೆಸ್, ಹೈ ಟೆಕ್ನಾಲಜಿ ಸೇರಿದಂತೆ ಎಲ್ಲಾ ಅಂಶಗಳೂ ಈ ಹಾಡಿನಲ್ಲಿ ಬೇರೆಯದೇ ಲೆವೆಲ್&zwnj;ನಲ್ಲಿ ಮೇಳೈಸಿದ್ದು, ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದೆ. ಇದೀಗ ಹೊರಜಗತ್ತಿಗೆ ಕಾಲಿಟ್ಟಿರುವ ತಬಾಹಿ ಹಾಡಿನ ಮೂಲಕ ಟಾಕ್ಸಿಕ್ ಸಿನಿಮಾಗೆ ಈಗಾಗಲೇ ಇರುವ ಅಪಾರ ನಿರೀಕ್ಷೆಯ ಬೆಂಕಿಗೆ ಇನ್ನಷ್ಟು ಮತ್ತಷ್ಟು ತುಪ್ಪ ಸುರಿದಿದೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;'ಲೇಡೀಸ್ &amp;amp; ಲೇಡೀಸ್' ಟೀಸರ್ ಭಾರೀ ಸಂಚಲನ&lt;/h3&gt;&lt;p&gt;ಅಂದಹಾಗೆ, ಇತ್ತೀಚೆಗೆ ಬಿಡುಗಡೆ ಆಗಿರುವ ಟಾಕ್ಸಿಕ್ ಸಿನಿಮಾದ 'ಲೇಡೀಸ್ &amp;amp; ಲೇಡೀಸ್' ಟೀಸರ್ ಭಾರೀ ಸಂಚಲನ ಸೃಷ್ಟಿಸಿದೆ. ನಯನತಾರಾ, ಕಿಯಾರಾ ಅಡ್ವಾನಿ, ಹಿಮಾ ಖುರೇಶಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಈ ಐದು ನಾಯಕಿಯರ ವಿಶೇಷ ಟೀಸರ್ ಇದಾಗಿದೆ. ಈ ಪಂಚ ಚಲುವೆಯರ ಜೊತೆ ಯಶ್ ಖದರ್ ಜೋರಾಗಿಯೇ ಹೈಲೈಟ್ ಆಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇಂದು (8 ಜುಲೈ 2026) ಬಿಡುಗಡೆ ಆಗಿರುವ ಸಾಂಗ್ ಮೂಲಕ, ಯಶ್ ನಾಯಕತ್ವ ಹಾಗೂ ಗೀತೂ ಮೋಹನ್&zwnj;ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರಕ್ಕೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಈ ಮೂಲಕ, ಮುಂದಿನ ತಿಂಗಳು, ಅಂದರೆ 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಪ್ಯಾನ್ ಇಂಡಿಯಾ ಮೀರಿದ 'ಪ್ಯಾನ್ ವರ್ಲ್ಡ್' ಟಾಕ್ಸಿಕ್ ಸಂಚಲನ ಹಾಗೂ ನಿರೀಕ್ಷೆ ಮುಗಿಲು ಮುಟ್ಟಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/rocking-star-yash-starrer-geethu-mohandas-movie-toxic-2nd-song-released-and-making-sensation/articleshow-z5dq6hr"/>
        </item>
        <item>
            <title><![CDATA[ಹ್ಯಾಪಿ ಮೂಡ್‌ನಲ್ಲಿರೋ ಗೌತಮ್-ಭೂಮಿಕಾಗೆ ಡಬಲ್ ಶಾಕ್; ಇಬ್ಬರಲ್ಲಿ ಯಾರಿಗೆ ಕಾದಿದೆ ಆಪತ್ತು?]]></title>
            <link>https://kannada.asianetnews.com/gallery/tv-talk/zee-kannada-serial-amruthadhaare-update-double-shock-for-gautham-bhumika-in-a-moment-of-happiness-mrq-ihgglla</link>
            <guid isPermaLink="true">https://kannada.asianetnews.com/gallery/tv-talk/zee-kannada-serial-amruthadhaare-update-double-shock-for-gautham-bhumika-in-a-moment-of-happiness-mrq-ihgglla</guid>
            <pubDate>Wed, 08 Jul 2026 11:46:30 +0530</pubDate>
            <description><![CDATA[&lt;p&gt;Zee Kannada Serial Amruthadhaare Promo Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಆದರೆ, ಎರಡು ದೊಡ್ಡ ಆಘಾತಗಳು ಕಾದಿದ್ದು, ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx05cjywc4bh4v68yc91y3cp,imgname-amruthadhaare--1--1783490825180.jpg" type="image/jpeg" height="390" width="690"/>
            <content:encoded><![CDATA[&lt;p&gt;Zee Kannada Serial Amruthadhaare Promo Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಆದರೆ, ಎರಡು ದೊಡ್ಡ ಆಘಾತಗಳು ಕಾದಿದ್ದು, ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ.&lt;/p&gt;&lt;img&gt;&lt;p&gt;ಇನ್ನೇನು ಮುಗಿಯುತ್ತೆ ಅಂತ ಅಂದ್ಕೊಂಡಿದ್ದ ಅಮೃತಧಾರೆ ಸೀರಿಯಲ್ ಮತ್ತೊಮ್ಮೆ ಮೊದಲಿನಿಂದ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ. ಸೀರಿಯಲ್ ಆರಂಭದಲ್ಲಿ ದಿವಾನ್ ಕುಟುಂಬ ಹೇಗಿತ್ತೋ ಅದೇ ಲಯಕ್ಕೆ ಮರುಳಿದೆ. ಹಾಗಾಗಿ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಗೌತಮ್ ಮತ್ತು ಭೂಮಿಕಾ ಫುಲ್ ಹ್ಯಾಪಿ ಹ್ಯಾಪಿಯಾಗಿದ್ದಾರೆ. ಸಂತೋಷವಾಗಿರುವ ಜೋಡಿಗೆ ಒಂದಲ್ಲ ಎರಡು ಶಾಕ್ ಸಿಗೋದು ಪಕ್ಕಾ ಆಗಿದೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಗೌತಮ್ ಮತ್ತು ಭೂಮಿಕಾ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಮೆಡಿಕಲ್ ರಿಪೋರ್ಟ್ ಸಹ ನಾರ್ಮಲ್ ಎಂದು ತೋರಿಸಲಾಗಿತ್ತು. ಇದರಿಂದ ಖುಷಿಗೊಂಡ ಗೌತಮ್-ಭೂಮಿಕಾ ಖುಷಿಯಿಂದ ಐಸ್&zwnj;ಕ್ರೀಂ ಸವಿದು ಮನೆ ಸೇರಿಕೊಂಡಿದ್ದರು. ಗೌತಮ್-ಭೂಮಿಕಾ ಆಸ್ಪತ್ರೆಯಿಂದ ಹೋಗುತ್ತಿದ್ದಂತೆ ಡಾಕ್ಟರ್ ಬಳಿ ಬಂದ ನರ್ಸ್, ರಿಪೋರ್ಟ್&zwnj;ನಲ್ಲಿರುವ ವ್ಯತ್ಯಾಸದ ಬಗ್ಗೆ ಹೇಳುತ್ತಾರೆ. ರಿಪೋರ್ಟ್ ನೋಡಿದ ವ್ಯದ್ಯರು ಮತ್ತೊಮ್ಮೆ ಪರೀಕ್ಷೆ ಮಾಡುವಂತೆ ಸೂಚಿಸುತ್ತಾರೆ.&lt;/p&gt;&lt;img&gt;&lt;p&gt;ಇಬ್ಬರಲ್ಲಿ ಯಾರ ರಿಪೋರ್ಟ್&zwnj;ನಲ್ಲಿ ವ್ಯತ್ಯಾಸ ಆಗಿದೆ ಎಂಬುದನ್ನು ನಿರ್ದೇಶಕರು ರಿವೀಲ್ ಮಾಡಿಲ್ಲ. ಹಾಗಾಗಿ ಇಬ್ಬರಲ್ಲಿ ಒಬ್ಬರಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಬಹುದು. ಮತ್ತೊಂದೆಡೆ ಜೈಲಿನಲ್ಲಿದ್ದ ಜೈದೇವ್&zwnj;ಗೆ ಶಕುಂತಲಾಳೇ ಜಾಮೀನು ಕೊಡಿಸಿದ್ದಾಳೆ. ತಮ್ಮ ಬೆನ್ನಹಿಂದೆಯೇ ತಾಯಿ ಶಕುಂತಲಾ ಮಾಡುತ್ತಿರೋ ಕುತಂತ್ರ ಗೊತ್ತಾದ್ರೆ ಗೌತಮ್&zwnj;ಗೆ ಮತ್ತೊಂದು ಬಿಗ್ ಶಾಕ್ ಎದುರಾದಂತೆ ಆಗುತ್ತೆ.&lt;/p&gt;&lt;img&gt;&lt;p&gt;ಗೌತಮ್ ಮತ್ತು ಭೂಮಿಕಾ ವಿರುದ್ಧ ಶಕುಂತಲಾ ಮಾಡುತ್ತಿರುವ ಷಡ್ಯಂತ್ರಕ್ಕೆ ಶಕುನಿ ಮಾಮಾ ಸಾಥ್ ನೀಡ್ತಾನಾ ಎಂಬುದರ ಬಗ್ಗೆ ಅನುಮಾನವಿದೆ. ಜೈಲಿನಿಂದ ಬಂದ ಬಳಿಕ ಗೌತಮ್&zwnj; ಜೊತೆಯಲ್ಲಿ ನಿಂತುಕೊಂಡು ಲಕ್ಷ್ಮೀಕಾಂತ್ ಕೆಲಸ ಮಾಡಿದ್ದನು. ತಂಗಿ ಮತ್ತು ಸೋದರಳಿಯನಿಗೆ ಲಕ್ಷ್ಮೀಕಾಂತ್ ಸಾಥ್ ಕೊಟ್ಟು ಗೌತಮ್ ವಿರುದ್ಧ ಹೋಗ್ತಾನಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.&lt;/p&gt;&lt;img&gt;&lt;p&gt;ಸೀರಿಯಲ್ 2.ಓ ತಿರುವು ಪಡೆದುಕೊಂಡಿರುವ ಕಾರಣ ಮಲ್ಲಿ ಮತ್ತೆ ಕಂಬ್ಯಾಕ್ ಮಾಡುವ ಸಾಧ್ಯತೆಗಳಿವೆ. ಐಪಿಎಸ್ ಅಧಿಕಾರಿಯಾಗಿರುವ ಮಲ್ಲಿ ಮೂಲಕ ಜೈದೇವ್ ಮತ್ತು ಶಕುಂತಲಾ ಪಾತ್ರವನ್ನು ಕೊನೆ ಮಾಡಬಹುದು ಎಂದು ಸೀರಿಯಲ್ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-serial-amruthadhaare-update-double-shock-for-gautham-bhumika-in-a-moment-of-happiness-mrq-ihgglla"/>
        </item>
        <item>
            <title><![CDATA[ಆ ಹುಡ್ಗಿ ಮನೆ ಬಿಟ್ಟು ನಮ್​ ಮನೆಗೆ ಬಂದು ಬಿಟ್ಟಳು: ಪ್ಲೀಸ್​ ​ ಹೀಗೆಲ್ಲಾ ಮಾಡ್ಬೇಡಿ; ಕಂಪ್ಲೇಂಟ್​ ಆಗತ್ತೆ- ಭವ್ಯಾ ಗೌಡ ಮನವಿ]]></title>
            <link>https://kannada.asianetnews.com/gallery/tv-talk/karna-serial-nidhi-urf-bhavya-gowda-asking-fans-not-to-disturb-her-flower-business-by-calling-suc-ake67g2</link>
            <guid isPermaLink="true">https://kannada.asianetnews.com/gallery/tv-talk/karna-serial-nidhi-urf-bhavya-gowda-asking-fans-not-to-disturb-her-flower-business-by-calling-suc-ake67g2</guid>
            <pubDate>Tue, 07 Jul 2026 22:26:29 +0530</pubDate>
            <description><![CDATA[&lt;p&gt;'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ ತಮ್ಮ ಹೊಸ ಹೂವಿನ ಉದ್ಯಮಕ್ಕೆ ಅಭಿಮಾನಿಗಳಿಂದಲೇ ತೊಂದರೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಾಪಾರದ ಫೋನ್ ಸಂಖ್ಯೆಗೆ ಕರೆ ಮಾಡಿ ತೊಂದರೆ ನೀಡಿದರೆ, ಮತ್ತೊಬ್ಬ ಯುವತಿ ನಟಿಯಾಗುವ ಆಸೆಯಿಂದ &amp;nbsp;ಮನೆಗೆ ಬಂದಿರುವ ಬಗ್ಗೆ ತಿಳಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyqtyz0gppdfvqw2xfqbq3n,imgname-bhavya-gowda-1783443061728.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ ತಮ್ಮ ಹೊಸ ಹೂವಿನ ಉದ್ಯಮಕ್ಕೆ ಅಭಿಮಾನಿಗಳಿಂದಲೇ ತೊಂದರೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಾಪಾರದ ಫೋನ್ ಸಂಖ್ಯೆಗೆ ಕರೆ ಮಾಡಿ ತೊಂದರೆ ನೀಡಿದರೆ, ಮತ್ತೊಬ್ಬ ಯುವತಿ ನಟಿಯಾಗುವ ಆಸೆಯಿಂದ &amp;nbsp;ಮನೆಗೆ ಬಂದಿರುವ ಬಗ್ಗೆ ತಿಳಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಕರ್ಣ ಸೀರಿಯಲ್​ ನಿಧಿಯಾಗಿ ಎಲ್ಲರ ಮನ ಸೆಳೆಯುತ್ತಿರುವ ನಟಿ ಭವ್ಯಾ ಗೌಡ ಅವರು, ಕೆಲ ತಿಂಗಳುಗಳಿಂದ ಸಹೋದರಿ ದಿವ್ಯಾ ಗೌಡ ಜೊತೆ ಸೇರಿ 'ಹೌಸ್ ಆಫ್ ಫ್ಲವರ್ಸ್' ಎಂಬ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಒಣ ಹೂವುಗಳನ್ನು ಬಳಸಿ ಕೈಯಿಂದ ತಯಾರಿಸಿದ ಬೊಕ್ಕೆಗಳನ್ನು (handmade bouquets) ಅವರು ಮಾರಾಟ ಮಾಡುತ್ತಿದ್ದಾರೆ. ಒಣ ಹೂವುಗಳನ್ನು ಬಳಸಿ ವಿಶಿಷ್ಟವಾದ, ಕೈಯಿಂದ ಮಾಡಿದ ಹೂವಿನ ಬೊಕ್ಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.&lt;/p&gt;&lt;img&gt;&lt;p&gt;ಇದರ ಬಗ್ಗೆ ಅವರು ಮಾಹಿತಿ ನೀಡುತ್ತಲೇ, ಹೂವಿನ ಬಗ್ಗೆ ವಿಚಾರಿಸೋದನ್ನು ಬಿಟ್ಟು ಮೊಬೈಲ್​ ನಂಬರ್​ ಸಿಕ್ಕಿಬಿಟ್ಟಿದೆ ಎನ್ನುವ ಖುಷಿಯಲ್ಲಿ ಭವ್ಯಾ ಗೌಡ ಅವರ ಜೊತೆಗೆಮಾತನಾಡಲು ಅಭಿಮಾನಿಗಳು ದಿನನಿತ್ಯವೂ ಆಮೊಬೈಲ್​ಗೆ ಕರೆಮಾಡಿ ಬಿಜಿನೆಸ್​ಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಭವ್ಯಾ ಅವರು ನೋವು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಫೋನ್​ ನನ್ನ ಬಳಿ ಇರುವುದಿಲ್ಲ. ಅದು ಬಿಜಿನೆಸ್​ ಮಾಡುವವರ ಬಳಿ ಇರುತ್ತದೆ. ಅವರಿಗೆ ಕಾಲ್​ಮಾಡಿ ನನ್ನ ಬಗ್ಗೆ ವಿಚಾರಿಸೋದು, ಫೋನ್​ ನಂಬರ್​ ಕೇಳೋದು ಹೀಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ.ಪ್ಲೀಸ್​ ಹಾಗೆಲ್ಲಾ ಮಾಡಿ ಬಿಜಿನೆಸ್​ಗೆ ತೊಂದರೆ ಮಾಡಬೇಡಿ ಎಂದು ಭವ್ಯಾ ಕೇಳಿಕೊಂಡಿದ್ದಾರೆ..&lt;/p&gt;&lt;img&gt;&lt;p&gt;ಒಬ್ಬ ಹುಡುಗಿ ಕೆಲವು ದಿನಗಳ ಹಿಂದೆ ಬಂದು ಆ್ಯಕ್ಟಿಂಗ್​ಮಾಡಬೇಕು, ಇಲ್ಲೇ ಇರ್ತೇನೆ ಎಂದು ಬಂದುಬಿಟ್ಟಳು.ಮೊದಲಿಗೆ ಆ ಹುಡುಗಿಯ ಅಕ್ಕ ಬಂದು ಕರೆದುಕೊಂಡು ಹೋದರು. ಮತ್ತೊಮ್ಮೆ ಬಂದ ಹುಡುಗಿ, ನಿನ್ನೆ ಕೂಡ ಮತ್ತೆ ಬಂದಿದ್ದಾಳೆ. ಮನೆ ಬಿಟ್ಟು ಬಂದಿದ್ದೇನೆ. ನನಗೆ ನೀವು ಆ್ಯಕ್ಟಿಂಗ್​ ಕಲಿಸಲೇಬೇಕು. ಎಲ್ಲಿಯೂ ಹೋಗಲ್ಲ ಎಂದು ಬಟ್ಟೆ ಪ್ಯಾಕ್​ ಮಾಡಿಕೊಂಡು ಬಂದಿದ್ದಾಳೆ. ಹೀಗೆಲ್ಲಾ ಆದ್ರೆ ತುಂಬಾ ಭಯ ಆಗುತ್ತೆ ಎಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಕೊನೆಗೆ ಆ ಹುಡುಗಿ ನೇರವಾಗಿ ನಮ್ಮ ಮನೆಗೆ ಮಧ್ಯರಾತ್ರಿ ಬಂದಿದ್ದಾಳೆ. ನಮ್ಮ ಓನರ್​ ನೋಡಿ ಭಯಪಟ್ಟುಕೊಂಡಿದ್ದಾರೆ. ಹೀಗೆ ತೊಂದರೆ ಕೊಟ್ಟರೆ ಪೊಲೀಸ್​ ಕಂಪ್ಲೇಂಟ್​ ಕೊಡುವುದಾಗಿ ಅವರು ಹೇಳಿದ್ದಾರೆ. ಹೀಗೆಲ್ಲಾ ಆದರೆ ದೊಡ್ಡ ಇಶ್ಯು ಆಗುತ್ತದೆ, ದಯವಿಟ್ಟು ಸಹಕರಿಸಿ ಎಂದು ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಮಗೂ ನಮ್ಮ ಪರ್ಸನಲ್​ ಲೈಫ್​ ಇದೆ. ಅದನ್ನು ಬದುಕಲು ಬಿಡಿ. ನನ್ನ ಸೋಷಿಯಲ್​ ಮೀಡಿಯಾ ಖಾತೆಗೆ ಎಷ್ಟೇ ಮೆಸೇಜ್ ಮಾಡಿ, ನಾನು ರೆಸ್ಪಾನ್ಸ್​ ಮಾಡುತ್ತೇನೆ. ಅದನ್ನು ಬಿಟ್ಟು ಹೀಗೆಲ್ಲಾ ನಮ್ಮ ಬಿಜಿನೆಸ್​ಗೆ ಬಂದು ತೊಂದರೆ ಕೊಡಬೇಡಿ ಎಂದಿದ್ದಾರೆ ನಟಿ ಭವ್ಯಾ ಗೌಡ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-nidhi-urf-bhavya-gowda-asking-fans-not-to-disturb-her-flower-business-by-calling-suc-ake67g2"/>
        </item>
        <item>
            <title><![CDATA[ಸತ್ಯಶೋಧಕ್ಕೆ ಮುಂದಾದ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್; ಅಪಘಾತ ಜನ್ಮರಹಸ್ಯ ಬಯಲಾಗುತ್ತಾ?]]></title>
            <link>https://kannada.asianetnews.com/gallery/tv-talk/zee-kannada-karna-serial-find-the-truth-is-now-detective-will-the-secret-of-his-accidental-birth-be-revealed-mrq-emg7e1b</link>
            <guid isPermaLink="true">https://kannada.asianetnews.com/gallery/tv-talk/zee-kannada-karna-serial-find-the-truth-is-now-detective-will-the-secret-of-his-accidental-birth-be-revealed-mrq-emg7e1b</guid>
            <pubDate>Wed, 08 Jul 2026 08:35:39 +0530</pubDate>
            <description><![CDATA[ಕರ್ಣ ಸೀರಿಯಲ್&zwnj;ನಲ್ಲಿ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಪತ್ನಿ ನಿಧಿಯ ತಂದೆ-ತಾಯಿಯ ಸಾವು ಅಪಘಾತವಲ್ಲ, ಕೊಲೆ ಎಂದು ತಿಳಿದು, ಹಳೆಯ ಕ್ಯಾಮೆರಾದ ಸಹಾಯದಿಂದ ಸತ್ಯಶೋಧಕ್ಕೆ ಮುಂದಾಗಿದ್ದಾರೆ. ಈ ತನಿಖೆಯು ಕರ್ಣನ ಜನ್ಮರಹಸ್ಯವನ್ನೂ ಬಯಲು ಮಾಡುವ ಹಾದಿಯಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwztjbka2p60jzb5njfbnshw,imgname-karna--1--1783479479914.jpg" type="image/jpeg" height="390" width="690"/>
            <content:encoded><![CDATA[ಕರ್ಣ ಸೀರಿಯಲ್&zwnj;ನಲ್ಲಿ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಪತ್ನಿ ನಿಧಿಯ ತಂದೆ-ತಾಯಿಯ ಸಾವು ಅಪಘಾತವಲ್ಲ, ಕೊಲೆ ಎಂದು ತಿಳಿದು, ಹಳೆಯ ಕ್ಯಾಮೆರಾದ ಸಹಾಯದಿಂದ ಸತ್ಯಶೋಧಕ್ಕೆ ಮುಂದಾಗಿದ್ದಾರೆ. ಈ ತನಿಖೆಯು ಕರ್ಣನ ಜನ್ಮರಹಸ್ಯವನ್ನೂ ಬಯಲು ಮಾಡುವ ಹಾದಿಯಲ್ಲಿದೆ.&lt;img&gt;&lt;p&gt;ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್ ಆದ್ರು; ಅಪಘಾತ, ಜನ್ಮರಹಸ್ಯ ಬಯಲಾಗುತ್ತಾ?&lt;/p&gt;&lt;p&gt;ಕರ್ಣ ಸೀರಿಯಲ್&zwnj; ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಡಾಕ್ಟರ್ ಕರ್ಣ ಇದೀಗ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಶಾಂತಿ ಅಜ್ಜಿ ತಂದುಕೊಟ್ಟ ಕ್ಯಾಮೆರಾ ಹಿಡಿದು ಹೋಗಿರುವ ಕರ್ಣನಿಗೆ ಅಚ್ಚರಿ ಸತ್ಯಗಳು ಕಣ್ಮುಂದೆ ಬಂದಿದೆ. ಸತ್ಯಶೋಧಕ್ಕೆ ಮುಂದಾಗಿರುವ ಕರ್ಣ, ಪತ್ನಿ ನಿಧಿ ತಂದೆ-ತಾಯಿ ಸಾವಿರ ರಹಸ್ಯ ಹುಡುಕಲು ಹೊರಟಿದ್ದಾನೆ.&lt;/p&gt;&lt;img&gt;&lt;p&gt;ಈ ಹಿಂದೆ ಮಾರಿಗುಡಿಗೆ ಹೋದಾಗ ನಿಧಿಗೆ ಹಳೆಯ ಕ್ಯಾಮೆರಾವೊಂದು ಸಿಕ್ಕಿತ್ತು. ಇದೀಗ ಕ್ಯಾಮೆರಾದಲ್ಲಿನ ಕೆಲ ಫೋಟೋಗಳು ಕರ್ಣನ ಕೈ ಸೇರಿವೆ. ಈ ಫೋಟೋದಲ್ಲಿ ಮಾರಿಗುಡಿಯಲ್ಲಿದ್ದ ಚೆನ್ನಯ್ಯ ಮತ್ತು ತನ್ನ ತಂದೆ ರಮೇಶ್ ವಶಿಷ್ಠ ಇರೋದನ್ನು ನೋಡಿ ಕರ್ಣ ಗೊಂದಲಕ್ಕೆ ಸಿಲುಕಿದ್ದಾನೆ. ಮತ್ತೊಂದು ಫೋಟೋದಲ್ಲಿ ಮಹಿಳೆಯೊಬ್ಬರ ಫೋಟೋ ಸಹ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;img&gt;&lt;p&gt;ನಿಧಿ ತಂದೆ-ತಾಯಿ ಸಾವು ಅಪಘಾತವಲ್ಲ, ಅದೊಂದು ಕೊ*ಲೆ ಎಂಬ ವಿಷಯ ಕರ್ಣನಿಗೆ ಗೊತ್ತಾಗಿದೆ. ಈ ಸಾವುಗಳಿಗೆ ಕಾರಣ ಎಂದು ಹುಡುಕಲು ಹೊರಟನಿಗೆ ಆತನ ಜನ್ಮರಹಸ್ಯ ಗೊತ್ತಾಗೋದು ಪಕ್ಕಾ ಆಗಿದೆ. ಇಷ್ಟು ದಿನ ಹಣಕ್ಕಾಗಿ ಪೀಡಿಸುತ್ತಿರುವ ಮಹಿಳೆಯೇ ಕರ್ಣನ ತಾಯಿಯಾಗಿದ್ದು, ಈ ಸತ್ಯವೂ ಬಹಿರಂಗಗೊಳ್ಳಬೇಕಿದೆ.&lt;/p&gt;&lt;img&gt;&lt;p&gt;ಈ ಎಲ್ಲಾ ವಿಷಯ ಗೊತ್ತಿರೋ ತಾರಾ ಮಾತ್ರ ತನ್ನದೇ ಸಂಚು ಮಾಡಿಕೊಂಡು ಅಣ್ಣ ರಮೇಶ್&zwnj;ನಿಗೆ ಕಾಟ ಕೊಡುತ್ತಿದ್ದಾಳೆ. ರಮೇಶ್&zwnj;ನಿಗೆ ಕರ್ಣ ತನ್ನ ಸ್ವಂತ ಮಗ ಎಂಬ ಸತ್ಯ ತಿಳಿಯದೇ ಆತನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾನೆ. ತಾಯಿಯಿಂದ ಬೇರ್ಪಟ್ಟು ಕರ್ಣ ಕಸದ ತೊಟ್ಟಿ ಸೇರಿದ್ದೇಗೆ ಎಂಬ ಸತ್ಯ ಗೊತ್ತಿರೋದ ತಾರಾಗೆ ಮಾತ್ರ ಗೊತ್ತಿದೆ.&lt;/p&gt;&lt;img&gt;&lt;p&gt;ಸ್ವಂತ ಅಣ್ಣ ರಮೇಶ್&zwnj; ವಿರುದ್ಧ ತಾರಾ ಸಂಚು ಮಾಡುತ್ತಿರೋದೇಕೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಎಲ್ಲಾ ಕಥೆ ನಡುವೆ ನಿತ್ಯಾ ಮಾತ್ರ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮುಂದೆ ನಿತ್ಯಾ ಆಗಮನ ಮತ್ಯಾವ ಹೊಸ ತಿರುವು ಪಡೆದುಕೊಳ್ಳುತ್ತೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-karna-serial-find-the-truth-is-now-detective-will-the-secret-of-his-accidental-birth-be-revealed-mrq-emg7e1b"/>
        </item>
        <item>
            <title><![CDATA[ಸುರೇಖಾ ಜೊತೆ ಮದುವೆಗೆ ಚಿರಂಜೀವಿಗೆ ಸಿಕ್ಕಿದ್ದು ಬರೀ 3 ದಿನ ರಜೆ: ಮೆಗಾಸ್ಟಾರ್ ಫನ್ನಿ ಲವ್ ಸ್ಟೋರಿ]]></title>
            <link>https://kannada.asianetnews.com/entertainment/chiranjeevi-surekha-wedding-story-how-the-megastar-got-only-three-days-leave-gvd/articleshow-g9uu4in</link>
            <guid isPermaLink="true">https://kannada.asianetnews.com/entertainment/chiranjeevi-surekha-wedding-story-how-the-megastar-got-only-three-days-leave-gvd/articleshow-g9uu4in</guid>
            <pubDate>Tue, 07 Jul 2026 23:42:23 +0530</pubDate>
            <description><![CDATA[&lt;p&gt;ಮೆಗಾಸ್ಟಾರ್ ಚಿರಂಜೀವಿ ತಮ್ಮ ಮದುವೆಯ ಕಥೆಯನ್ನು ತಮಾಷೆಯಾಗಿ ಹೇಳಿ ನಗಿಸುತ್ತಾರೆ. 'ಮನವೂರಿ ಪಾಂಡವುಲು' ಸಿನಿಮಾ ಸಮಯದಿಂದಲೇ ಅಲ್ಲು ರಾಮಲಿಂಗಯ್ಯ ಚಿರಂಜೀವಿಯವರ ಮೇಲೆ ಒಂದು ಕಣ್ಣಿಟ್ಟಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyt16jmcf1nnvcrzpqh97cy,imgname-hcchc-1783445363284.png" type="image/jpeg" height="390" width="690"/>
            <content:encoded><![CDATA[&lt;p&gt;ಮೆಗಾಸ್ಟಾರ್ ಚಿರಂಜೀವಿ ಮತ್ತು ಸುರೇಖಾ ನಾಲ್ಕು ದಶಕಗಳಿಂದ ಆದರ್ಶ ದಂಪತಿಯಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಇವರಿಬ್ಬರ ಮದುವೆಗೆ ಸಂಬಂಧಿಸಿದ ಕಥೆಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಆದರೆ, ಚಿರಂಜೀವಿ ತಮ್ಮ ಮದುವೆಯ ಸಮಯದಲ್ಲಿ ಪಟ್ಟ ಪಾಡಿನ ಬಗ್ಗೆ ನಿಮಗೆ ಗೊತ್ತಾ? ಮೆಗಾಸ್ಟಾರ್ ಚಿರಂಜೀವಿ ತಮ್ಮ ಮದುವೆಯ ಕಥೆಯನ್ನು ತಮಾಷೆಯಾಗಿ ಹೇಳಿ ನಗಿಸುತ್ತಾರೆ. 'ಮನವೂರಿ ಪಾಂಡವುಲು' ಸಿನಿಮಾ ಸಮಯದಿಂದಲೇ ಅಲ್ಲು ರಾಮಲಿಂಗಯ್ಯ ಚಿರಂಜೀವಿಯವರ ಮೇಲೆ ಒಂದು ಕಣ್ಣಿಟ್ಟಿದ್ದರು.&lt;/p&gt;&lt;p&gt;ಅಲ್ಲು ಅರವಿಂದ್, ನಿರ್ಮಾಪಕ ಜಯಕೃಷ್ಣ ಮತ್ತು ಅಲ್ಲು ರಾಮಲಿಂಗಯ್ಯ ಒಟ್ಟಿಗೆ ಸೇರಿ 'ಈ ಹುಡುಗನನ್ನು ಹೇಗೆ ನಮ್ಮವನನ್ನಾಗಿ ಮಾಡಿಕೊಳ್ಳುವುದು' ಎಂದು ಯೋಚಿಸಿದ್ದರು. ನಂತರ ಜಯಕೃಷ್ಣ ನನ್ನ ಬಳಿ ಬಂದು ಮದುವೆ ಪ್ರಸ್ತಾಪ ಮಾಡಿದರು ಎಂದು ಚಿರಂಜೀವಿ ಒಂದು ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಜಯಕೃಷ್ಣ ಮದುವೆ ಪ್ರಸ್ತಾಪ ತಂದಾಗ, 'ಈಗ ತಾನೇ ನಾನು ಸೆಟಲ್ ಆಗುತ್ತಿದ್ದೇನೆ, ಇವಾಗ ಮದುವೆಯೇ?' ಎಂದು ಚಿರಂಜೀವಿ ಕೇಳಿದ್ದರಂತೆ.&lt;/p&gt;&lt;p&gt;'ಈ ಹುಡುಗ ಕಮಲ್ ಹಾಸನ್ ರೀತಿ ದೊಡ್ಡ ಸ್ಟಾರ್ ಆಗ್ತಾನೆ, ಹುಡುಗಿಯರು ಹಿಂದೆ ಬೀಳ್ತಾರೆ, ಈಗಲೇ ಮದುವೆ ಮಾಡಿಬಿಡಬೇಕು' ಎಂದು ನನ್ನ ತಂದೆಗೆ ಹೇಳಿ ಒಪ್ಪಿಸಿದರು. ಸುರೇಖಾರನ್ನು ನೋಡಲು ಹೋಗಿ, ಆಕೆ ಕೊಟ್ಟ ಕಾಫಿ ಕುಡಿದ ಮೇಲೆ ನಾನು 'ಹೂಂ' ಎನ್ನದೇ ಇರಲು ಆಗಲಿಲ್ಲ. 'ಏನು ಮದ್ದು ಹಾಕಿದಳೋ ಏನೋ, ಬಾಯಿಗೆ ಬೆರಳಿಟ್ಟರೆ ಕಚ್ಚಲ್ಲ ಅಂದರು, ಆದರೆ ಆಮೇಲೆ ನನ್ನ ಕತ್ತನ್ನೇ ಕಚ್ಚೋಕೆ ಬಂದಳು' ಎಂದು ಚಿರಂಜೀವಿ ತಮಾಷೆಯಾಗಿ ಹೇಳಿದ್ದರು.&lt;/p&gt;&lt;h2&gt;&lt;strong&gt;ರಜೆ ಕೊಡಲು ನಿರಾಕರಿಸಿದರು&lt;/strong&gt;&lt;/h2&gt;&lt;p&gt;ಸುರೇಖಾ ಜೊತೆ ಮದುವೆಗೆ, ಬಲಿ ಕೊಡುವ ಕುರಿಯಂತೆ ನನ್ನ ಕುತ್ತಿಗೆಗೆ ಹಾರ ಹಾಕಿ ಕರೆದುಕೊಂಡು ಹೋದರು. ಆಗ ನಾನು ತುಂಬಾ ಬ್ಯುಸಿ ಇದ್ದೆ. ನನ್ನ ನಿರ್ಮಾಪಕರು ಸಮಯವನ್ನೇ ಕೊಡಲಿಲ್ಲ. ಚಿತ್ರದ ಶೂಟಿಂಗ್ ಬೇರೆ ಜೋರಾಗಿ ನಡೆಯುತ್ತಿತ್ತು. ಮದುವೆಗೆ ರಜೆ ಕೇಳಿದರೆ, ಆ ಚಿತ್ರದ ನಿರ್ಮಾಪಕ ಎಂ.ಎಸ್. ರೆಡ್ಡಿ ಅವರು ರಜೆ ಕೊಡಲು ನಿರಾಕರಿಸಿದರು ಎಂದು ಚಿರಂಜೀವಿ ನೆನಪಿಸಿಕೊಂಡರು. ಮದುವೆಗೆ ರಜೆ ಕೇಳಿದರೆ, 'ಒಂದು ದಿನಕ್ಕೆ ಸರಿ' ಎಂದರು.&lt;/p&gt;&lt;p&gt;ಆದರೆ ಶೂಟಿಂಗ್ ಬೇರೆ ಕಡೆ ನಡೆಯುತ್ತಿತ್ತು. ಅಲ್ಲಿಂದ ಹೈದರಾಬಾದ್&zwnj;ಗೆ ಬಂದು ಮದುವೆಯಾಗಿ ವಾಪಸ್ ಹೋಗುವುದು ಹೇಗೆ? ಕೊನೆಗೆ ನಾನು ಒತ್ತಾಯಿಸಿ ಕೇಳಿದಾಗ, ಕೇವಲ ಮೂರು ದಿನಗಳ ರಜೆ ನೀಡಿದರು. ಒಂದು ದಿನ ಮದುಮಗನಾಗಲು, ಇನ್ನೊಂದು ದಿನ ಮದುವೆ, ಮೂರನೇ ದಿನ... ಅದೇನೋ ಇರುತ್ತಲ್ಲಾ' ಎಂದು ಹೇಳಿ ಚಿರಂಜೀವಿ ಎಲ್ಲರನ್ನೂ ನಗಿಸಿದರು. ಅಲ್ಲು ರಾಮಲಿಂಗಯ್ಯ ಅವರ ಶತದಿನೋತ್ಸವ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಈ ವಿಷಯಗಳನ್ನು ಹಂಚಿಕೊಂಡಿದ್ದರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/chiranjeevi-surekha-wedding-story-how-the-megastar-got-only-three-days-leave-gvd/articleshow-g9uu4in"/>
        </item>
        <item>
            <title><![CDATA[ವಿಜಯ್‌ ಹಾದಿಯಲ್ಲೇ ಧನುಷ್ ರಾಜಕೀಯಕ್ಕೆ ಎಂಟ್ರಿ? ಫ್ಯಾನ್ಸ್ ಅಸೋಸಿಯೇಷನ್‌ನಿಂದ ಧ್ವಜ ಅನಾವರಣ!]]></title>
            <link>https://kannada.asianetnews.com/entertainment/dhanush-political-entry-speculation-rises-after-fan-club-unveils-flag-gvd/articleshow-prlykmh</link>
            <guid isPermaLink="true">https://kannada.asianetnews.com/entertainment/dhanush-political-entry-speculation-rises-after-fan-club-unveils-flag-gvd/articleshow-prlykmh</guid>
            <pubDate>Tue, 07 Jul 2026 22:41:41 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ಸ್ಟಾರ್ ನಟರ ರಾಜಕೀಯ ಪ್ರವೇಶದ ಸುದ್ದಿ ನಿಲ್ಲುತ್ತಿಲ್ಲ. ವಿಜಯ್ ಸಿಎಂ ಆದ್ಮೇಲೆ ವಿಶಾಲ್, ಸೂರ್ಯ, ಅಜಿತ್ ಬಳಿಕ ಈಗ ಧನುಷ್ ಹೆಸರು ಕೇಳಿಬರುತ್ತಿದೆ. ಹಾಗಾದ್ರೆ ಧನುಷ್ ರಾಜಕೀಯ ಎಂಟ್ರಿ ಫಿಕ್ಸ್ ಆಯ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyqnn09ax6g8t4jbrw9q7aw,imgname-cjcjvj-1783442887689.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ರಾಜಕೀಯದಲ್ಲಿ ಕಾಲಿವುಡ್&zwnj;ನ ದಳಪತಿ ವಿಜಯ್ ಒಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೊದಲ ಪ್ರಯತ್ನದಲ್ಲೇ ಮುಖ್ಯಮಂತ್ರಿ ಪಟ್ಟಕ್ಕೇರಿ ವಿಜಯ್ ಹೊಸ ಇತಿಹಾಸ ಬರೆದಿದ್ದಾರೆ. ಕಮಲ್ ಹಾಸನ್ ಅವರಂತಹ ದಿಗ್ಗಜರಿಗೂ ಸಾಧ್ಯವಾಗದ ಈ ರಾಜಕೀಯ ಚಮತ್ಕಾರವನ್ನು ವಿಜಯ್ ಮಾಡಿ ತೋರಿಸಿದ್ದಾರೆ. ಹೀಗಾಗಿ, ಕಾಲಿವುಡ್&zwnj;ನ ಇತರೆ ಸ್ಟಾರ್ ನಟರು ಕೂಡ ಈಗ ರಾಜಕೀಯದತ್ತ ಹೆಜ್ಜೆ ಹಾಕಲು ಆಸಕ್ತಿ ತೋರುತ್ತಿದ್ದಾರೆ. ಈಗಾಗಲೇ ವಿಶಾಲ್, ಸೂರ್ಯ, ಅಜಿತ್ ರಾಜಕೀಯ ಪ್ರವೇಶದ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಈ ಲಿಸ್ಟ್&zwnj;ಗೆ ಸ್ಟಾರ್ ನಟ ಧನುಷ್ ಹೆಸರು ಕೂಡ ಸೇರಿದೆ.&lt;/p&gt;&lt;p&gt;ಕಾಲಿವುಡ್ ಸ್ಟಾರ್ ನಟ ಧನುಷ್ ಕೂಡ ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಪ್ರಚಾರ ತಮಿಳುನಾಡಿನಲ್ಲಿ ಜೋರಾಗಿದೆ. ಇತ್ತೀಚೆಗೆ ಧನುಷ್ ಅಭಿಮಾನಿ ಸಂಘ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮವೊಂದರಲ್ಲಿ ಅಧಿಕೃತ ಧ್ವಜವನ್ನು ಅನಾವರಣಗೊಳಿಸಿರುವುದು ಹಾಟ್ ಟಾಪಿಕ್ ಆಗಿದೆ. ಕೇವಲ ಧ್ವಜ ಅನಾವರಣಕ್ಕೆ ಸೀಮಿತವಾಗದೆ, ತಮಿಳುನಾಡಿನಾದ್ಯಂತ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಭಿಮಾನಿ ಸಂಘದ ನಾಯಕರಿಗೆ ಕರೆ ನೀಡಲಾಗಿದೆ. ಇದು ಪಕ್ಕಾ ರಾಜಕೀಯ ಲೆಕ್ಕಾಚಾರದಿಂದಲೇ ನಡೆಯುತ್ತಿದೆ ಎಂದು ವಿಶ್ಲೇಷಕರು ಭಾವಿಸುತ್ತಿದ್ದಾರೆ. ಮಾವ ರಜನಿಕಾಂತ್ ರಾಜಕೀಯಕ್ಕೆ ಬಾರದ ಕಾರಣ, ಆ ಜಾಗವನ್ನು ಧನುಷ್ ತುಂಬಲು ನೋಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.&lt;img&gt;&lt;/p&gt;&lt;p&gt;ಮುಖ್ಯಮಂತ್ರಿ ವಿಜಯ್ ಅವರ ಹಾದಿಯಲ್ಲೇ ಧನುಷ್ ಕೂಡ ಈಗಿನಿಂದಲೇ ಗ್ರೌಂಡ್ ವರ್ಕ್ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆಗೆ ಪಕ್ಕಾ ಪ್ಲಾನ್&zwnj;ನೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ಕಾಲಿವುಡ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಯಶಸ್ಸಿನಿಂದ ಸ್ಫೂರ್ತಿ ಪಡೆದು, ಧನುಷ್ ಅಭಿಮಾನಿಗಳು ಕೂಡ ತಳಮಟ್ಟದಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಈ ಧ್ವಜ ಅನಾವರಣ ಕಾರ್ಯಕ್ರಮ ಕೇವಲ ಆರಂಭವಷ್ಟೇ, ಮುಂದೆ ಇನ್ನಷ್ಟು ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಾಲು ಸಾಲು ಪ್ರಾಜೆಕ್ಟ್&zwnj;ಗಳಲ್ಲಿ ಬ್ಯುಸಿ&lt;/strong&gt;&lt;/h2&gt;&lt;p&gt;ಒಂದೆಡೆ, ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸೋಶಿಯಲ್ ಮೀಡಿಯಾ ಮತ್ತು ರಾಜಕೀಯ ವಲಯದಲ್ಲಿ ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ, ನಟ ಧನುಷ್ ಕಡೆಯಿಂದಾಗಲಿ ಅಥವಾ ಅವರ ಪಿಆರ್ ಟೀಮ್&zwnj;ನಿಂದಾಗಲಿ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಸದ್ಯ ಸಾಲು ಸಾಲು ಕ್ರೇಜಿ ಪ್ರಾಜೆಕ್ಟ್&zwnj;ಗಳಲ್ಲಿ ಬ್ಯುಸಿಯಾಗಿರುವ ಧನುಷ್, ಕೇವಲ ಅಭಿಮಾನಿ ಸಂಘದ ಗುರುತಿಗಾಗಿ ಈ ಧ್ವಜಕ್ಕೆ ಅನುಮತಿ ನೀಡಿದ್ದಾರಾ, ಅಥವಾ ಇದರ ಹಿಂದೆ ದೀರ್ಘಕಾಲದ ರಾಜಕೀಯ ತಂತ್ರವಿದೆಯೇ ಎಂಬುದು ತಿಳಿಯಬೇಕಿದೆ. ಈ ಸಸ್ಪೆನ್ಸ್&zwnj;ಗೆ ತೆರೆ ಬೀಳಬೇಕಾದರೆ, ಸ್ವತಃ ಧನುಷ್ ಅವರೇ ಪ್ರತಿಕ್ರಿಯಿಸುವವರೆಗೆ ಕಾಯಲೇಬೇಕು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/dhanush-political-entry-speculation-rises-after-fan-club-unveils-flag-gvd/articleshow-prlykmh"/>
        </item>
        <item>
            <title><![CDATA['ಡೀ ಡೀ ಢಿಕ್ಕಿ' ಕೆಲಸದ ನಡುವೆ ಸೋಲೋ ಇಟಲಿ ಟ್ರಿಪ್: 'ಕನ್ನಡತಿ' ನಟಿಯ ಫೋಟೋಗಳು ವೈರಲ್!]]></title>
            <link>https://kannada.asianetnews.com/tv-talk/actress-ranjani-raghavan-italy-solo-trip-photos-viral-gvd/articleshow-sc3ua1r</link>
            <guid isPermaLink="true">https://kannada.asianetnews.com/tv-talk/actress-ranjani-raghavan-italy-solo-trip-photos-viral-gvd/articleshow-sc3ua1r</guid>
            <pubDate>Tue, 07 Jul 2026 22:00:34 +0530</pubDate>
            <description><![CDATA[&lt;p&gt;Ranjani Raghavan: ಕಿರುತೆರೆಯ ಜನಪ್ರಿಯ ನಟಿ, ಲೇಖಕಿ ಹಾಗೂ ನಿರ್ದೇಶಕಿಯಾಗಿ ಹೊಸ ಅಧ್ಯಾಯ ಆರಂಭಿಸಿರುವ ರಂಜನಿ ರಾಘವನ್ ಇದೀಗ ಇಟಲಿಯ ಸುಂದರ ತಾಣಗಳಲ್ಲಿ ಸೋಲೋ ಟ್ರಿಪ್ ಎಂಜಾಯ್ ಮಾಡಿ ಬಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwypgskhgz51cbq5be1ydsb2,imgname-hcxh-1783441679985.png" type="image/jpeg" height="390" width="690"/>
            <content:encoded><![CDATA[&lt;p&gt;ಕಿರುತೆರೆಯ ಜನಪ್ರಿಯ ನಟಿ, ಲೇಖಕಿ ಹಾಗೂ ನಿರ್ದೇಶಕಿಯಾಗಿ ಹೊಸ ಅಧ್ಯಾಯ ಆರಂಭಿಸಿರುವ ರಂಜನಿ ರಾಘವನ್ ಇದೀಗ ಇಟಲಿಯ ಸುಂದರ ತಾಣಗಳಲ್ಲಿ ಸೋಲೋ ಟ್ರಿಪ್ ಎಂಜಾಯ್ ಮಾಡಿ ಬಂದಿದ್ದಾರೆ. 'ಪುಟ್ಟಗೌರಿ ಮದುವೆ' ಮತ್ತು 'ಕನ್ನಡತಿ' ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ರಂಜನಿ, ಸಿನಿಮಾ ಕೆಲಸದ ನಡುವೆಯೂ ತಮ್ಮ ಬಿಡುವಿನ ಕ್ಷಣಗಳನ್ನು ವಿದೇಶ ಪ್ರವಾಸದಲ್ಲಿ ಕಳೆದಿದ್ದಾರೆ.&lt;/p&gt;&lt;p&gt;ಪ್ರಸ್ತುತ ತಮ್ಮ ಚೊಚ್ಚಲ ನಿರ್ದೇಶನದ 'ಡೀ ಡೀ ಢಿಕ್ಕಿ' ಸಿನಿಮಾದಲ್ಲಿ ಬ್ಯುಸಿಯಾಗಿರುವ ರಂಜನಿ, ಕೆಲಸದಿಂದ ಸ್ವಲ್ಪ ವಿರಾಮ ಪಡೆದು ಏಕಾಂಗಿಯಾಗಿ ಇಟಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ವೇಳೆ ಮಿಲಾನ್, ಅಮಾಲ್ಫಿ ಕೋಸ್ಟ್, ಬ್ಲೂ ಗ್ರೊಟ್ಟೊ ಹಾಗೂ ಸೊರೆಂಟೊ ಸೇರಿದಂತೆ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ.&lt;/p&gt;&lt;p&gt;ಪ್ರಯಾಣದ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಂಜನಿ, ಇಟಲಿಯ ಸುಂದರ ಹಿನ್ನೆಲೆಯಲ್ಲಿರುವ ತಮ್ಮ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಚಿತ್ರಗಳಿಗೆ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್&zwnj;ಗಳು ಹರಿದುಬರುತ್ತಿದ್ದು, ಅಭಿಮಾನಿಗಳು ಅವರ ಹೊಸ ಲುಕ್ ಹಾಗೂ ಪ್ರವಾಸದ ಕ್ಷಣಗಳನ್ನು ಮೆಚ್ಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ನಮ್ಮೊಳಗಿನ ಹೊಸ ವ್ಯಕ್ತಿಯನ್ನು ಪರಿಚಯಿಸುತ್ತದೆ&lt;/strong&gt;&lt;/h2&gt;&lt;p&gt;ಜೊತೆಗೆ 'ನಾನು ಒಬ್ಬಳೇ ಇಟಲಿಯ ಬೇರೆ ಬೇರೆ ಊರಿಗೆ ಹೋದ ಬಗ್ಗೆ caption ಬರೆಯೋಣ ಅಂತ ಹೋದೆ. But, ಪ್ರವಾಸಗಳು ಹೊಸ ಸ್ಥಳಗಳನ್ನು ತೋರಿಸುವುದಕ್ಕಿಂತ, ನಮ್ಮೊಳಗಿನ ಹೊಸ ವ್ಯಕ್ತಿಯನ್ನು ಪರಿಚಯಿಸುತ್ತದೆ' ಎಂದು ಪೋಸ್ಟ್&zwnj;ನಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಇನ್ನು ರಂಜನಿ ರಾಘವನ್ 1994ರ ಮಾರ್ಚ್ 29ರಂದು ಬೆಂಗಳೂರಿನಲ್ಲಿ ಜನಿಸಿದ್ದು, ಶೇಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ನಟನೆಯ ಜೊತೆಗೆ ಬರವಣಿಗೆಯಲ್ಲೂ ತಮ್ಮದೇ ಛಾಪು ಮೂಡಿಸಿರುವ ಅವರು, 2014ರಲ್ಲಿ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು. ಬಳಿಕ 'ಪೌರ್ಣಮಿ', 'ಇಷ್ಟದೇವತೆ' ಹಾಗೂ 'ಕನ್ನಡತಿ' ಧಾರಾವಾಹಿಗಳಲ್ಲಿ ಅಭಿನಯಿಸಿ ಅಪಾರ ಜನಪ್ರಿಯತೆ ಗಳಿಸಿದರು.&lt;/p&gt;&lt;p&gt;2017ರಲ್ಲಿ 'ರಾಜಹಂಸ' ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ರಂಜನಿ, ಬಳಿಕ 'ಪುಣ್ಯ', 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ', 'ನೈಟ್ ಕರ್ಫ್ಯೂ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಿರ್ದೇಶಕಿಯಾಗಿಯೂ ಹೊಸ ಜವಾಬ್ದಾರಿ ಹೊತ್ತಿರುವ ಅವರು, 'ಡೀ ಡೀ ಢಿಕ್ಕಿ' ಚಿತ್ರದ ಮೂಲಕ ಮತ್ತೊಂದು ಹೊಸ ಪ್ರಯಾಣಕ್ಕೆ ಚಾಲನೆ ನೀಡಿದ್ದಾರೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by ರಂಜನಿ ರಾಘವನ್ (@ranjani.raghavan)&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/actress-ranjani-raghavan-italy-solo-trip-photos-viral-gvd/articleshow-sc3ua1r"/>
        </item>
        <item>
            <title><![CDATA['ನೀವು ನೀವಾಗಿ ಇರುವುದಕ್ಕೇ ಧನ್ಯವಾದಗಳು': ಪತಿ ರಿಷಬ್‌ಗೆ ಪತ್ನಿ ಪ್ರಗತಿ ಶೆಟ್ಟಿ ಹೃದಯಸ್ಪರ್ಶಿ ಶುಭಾಶಯ]]></title>
            <link>https://kannada.asianetnews.com/sandalwood/rishab-shetty-wife-pragathi-shetty-birthday-post-viral-gvd/articleshow-0kzdu3x</link>
            <guid isPermaLink="true">https://kannada.asianetnews.com/sandalwood/rishab-shetty-wife-pragathi-shetty-birthday-post-viral-gvd/articleshow-0kzdu3x</guid>
            <pubDate>Tue, 07 Jul 2026 21:04:10 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಸಿನಿತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwykcjc4sm4bhrrdkksykkrx,imgname-ch-1783438395780.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಸಿನಿತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿರುವ ಈ ವಿಶೇಷ ದಿನದಂದು, ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡ ಭಾವನಾತ್ಮಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ರಿಷಬ್ ಶೆಟ್ಟಿ ಜೊತೆಗಿನ ಸುಂದರ ಕ್ಷಣಗಳ ಚಿತ್ರಗಳನ್ನು ಹಂಚಿಕೊಂಡಿರುವ ಪ್ರಗತಿ ಶೆಟ್ಟಿ, ಪತಿಯ ಮೇಲಿನ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&quot;ನಿಮ್ಮ ನಂಬಿಕೆ ಮತ್ತು ಪ್ರೀತಿಯೇ ಕಾರಣ&quot;&lt;/strong&gt;&lt;/p&gt;&lt;p&gt;&quot;ಪ್ರತಿದಿನವನ್ನೂ ಇನ್ನಷ್ಟು ಸುಂದರವಾಗಿಸುವ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನೀವು ನನ್ನ ಜೀವನವನ್ನು ನಾನು ಊಹಿಸಿದ್ದಕ್ಕಿಂತಲೂ ಹೆಚ್ಚು ಸುಂದರವಾಗಿಸಿದ್ದೀರಿ. ನಿಮ್ಮ ಪ್ರೀತಿಯೇ ನನ್ನ ಬೆಳಕು, ನನ್ನ ಶಾಂತಿ. ಇಂದು ನಾನು ಏನಾಗಿದ್ದೇನೋ ಅದಕ್ಕೆ ನಿಮ್ಮ ಪ್ರೋತ್ಸಾಹ, ನಂಬಿಕೆ ಮತ್ತು ಪ್ರೀತಿಯೇ ಕಾರಣ. ನನ್ನ ಸಂಗಾತಿಯಾಗಿ, ನನ್ನ ಅತಿದೊಡ್ಡ ಶಕ್ತಿಯಾಗಿ ನಿಂತು, ನನ್ನ ಪುಟ್ಟ ಪ್ರಪಂಚವನ್ನು ಅಂತ್ಯವಿಲ್ಲದ ಕನಸುಗಳ ಸಾಗರವಾಗಿ ರೂಪಿಸಿದ್ದೀರಿ,&quot; ಎಂದು ಪ್ರಗತಿ ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;&quot;ನೀವು ನೀವಾಗಿ ಇರುವುದಕ್ಕೇ ಧನ್ಯವಾದಗಳು&quot;&lt;/strong&gt;&lt;/h2&gt;&lt;p&gt;ಮುಂದುವರಿದು, &quot;ನಾವು ಜೊತೆಯಾಗಿ ಸಾಗಿದ ಪ್ರತಿಯೊಂದು ಹೆಜ್ಜೆಯೂ ಅಮೂಲ್ಯ ನೆನಪು. ನಮ್ಮ ಬದುಕಿನಲ್ಲಿ ನಗು, ಕಣ್ಣೀರು, ಸಂತೋಷ, ಭಿನ್ನಾಭಿಪ್ರಾಯ ಎಲ್ಲವೂ ಬಂದಿವೆ. ಆದರೆ ಅವೆಲ್ಲಕ್ಕಿಂತ ದೊಡ್ಡದು ನಮ್ಮ ನಡುವಿನ ಪರಸ್ಪರ ಅರ್ಥೈಸಿಕೊಳ್ಳುವಿಕೆ ಮತ್ತು ಎಂದಿಗೂ ಕಡಿಮೆಯಾಗದ ಪ್ರೀತಿ. ನೀವು ನೀವಾಗಿ ಇರುವುದಕ್ಕೇ ಧನ್ಯವಾದಗಳು. ಪದಗಳಲ್ಲಿ ಹೇಳಲಾಗದಷ್ಟು ನಾನು ನಿಮ್ಮನ್ನು ಪ್ರೀತಿಸುತ್ತೇನೆ,&quot; ಎಂದು ಭಾವುಕರಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಪ್ರಗತಿ ಶೆಟ್ಟಿ ಅವರ ಈ ಹೃದಯಸ್ಪರ್ಶಿ ಸಂದೇಶಕ್ಕೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಕಾಮೆಂಟ್&zwnj;ಗಳ ಮೂಲಕ ದಂಪತಿಗೆ ಶುಭ ಹಾರೈಸುತ್ತಿದ್ದಾರೆ. ರಿಷಬ್ ಶೆಟ್ಟಿಯ ಜನ್ಮದಿನದ ಸಂಭ್ರಮದ ನಡುವೆ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಗಮನ ಸೆಳೆದಿದೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by PragathiRishabShetty (@pragathirishabshetty)&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/rishab-shetty-wife-pragathi-shetty-birthday-post-viral-gvd/articleshow-0kzdu3x"/>
        </item>
        <item>
            <title><![CDATA[Rishab Shetty: 'ಜೈಹನುಮಾನ್' ತೆಲುಗು ಅಲ್ಲ, ಕನ್ನಡ ಸಿನಿಮಾ; ಮಾರ್ಮಿಕ ಕ್ಲಾರಿಟಿ ಕೊಟ್ಟ ರಿಷಬ್ ಶೆಟ್ಟಿ!]]></title>
            <link>https://kannada.asianetnews.com/sandalwood/rishab-shetty-clarifies-jai-hanuman-movie-is-kannada-movie-only-in-his-own-way/articleshow-f9cgfiy</link>
            <guid isPermaLink="true">https://kannada.asianetnews.com/sandalwood/rishab-shetty-clarifies-jai-hanuman-movie-is-kannada-movie-only-in-his-own-way/articleshow-f9cgfiy</guid>
            <pubDate>Tue, 07 Jul 2026 21:00:24 +0530</pubDate>
            <description><![CDATA[&lt;p&gt;'ಮೊಟ್ಟೆ ಮೊದ್ಲಾ ಕೋಳಿ ಮೊದ್ಲಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಕೊಟ್ರೆ ಜನ ನೋಡ್ತಿಲ್ವಾ, ಜನ ನೋಡೋದಕ್ಕೆ ಒಳ್ಳೆ ಸಿನಿಮಾ ಕೊಡ್ತಿಲ್ವಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಬಂದಾಗ ಜನ ನೋಡ್ತಾರೆ. 'ಸು ಫ್ರಂ ಸೋ' ಸಿನಿಮಾ ಬಂದಾಗ ಎಲ್ಲಾ ನುಗ್ಗಿ ನೋಡಿದ್ರು. ಜೆಪಿ ತುಮ್ಮಿನಾಡು ಹೊಸ ನಿರ್ದೇಶಕರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyk6vztckh7ensxr05b707v,imgname-rishab-shetty--1--1783438209018.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದು, (07 July 2026) ಸ್ಯಾಂಡಲ್&zwnj;ವುಡ್ ಪ್ಯಾನ್ ಇಂಡಿಯಾ ಸ್ಟಾರ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ನಿನ್ನೆ ಬೆಂಗಳೂರಿನಲ್ಲಿ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ, ಮಗ-ಮಗಳು ಜೊತೆ ನಿನ್ನೆ ಆಗಮಿಸಿದ್ದ ರಿಷಬ್ ಶೆಟ್ಟಿಯವರು ಮಾಧ್ಯಮಗಳ ಜೊತೆಯಲ್ಲಿ ಮಾತುಕತೆ ನಡೆಸಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮದ ಸಮಯದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮುಂದಿನ ಯೋಜನೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಈ ಮಾತುಕತೆ ವೇಳೆ 'ಜೈ ಹನುಮಾನ್' ಸಿನಿಮಾದ ಬಗ್ಗೆ ಕೂಡ ಮಾತನ್ನಾಡಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ 'ಜೈಹನುಮಾನ್' ಚಿತ್ರವು ತೆಲುಗು ಅಲ್ಲ ಕನ್ನಡ ಸಿನಿಮಾ ಎಂದು ಹೇಳಿ ಶಾಕ್ ಮೂಡಿಸಿದ್ದಾರೆ. ಅದು ಹೇಗೆ ಎನ್ನುವ ಪ್ರಶ್ನೆಗೆ ತಮ್ಮದೇ ಆದ ಶೈಲಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. &quot;ಕನ್ನಡ ಬಿಟ್ಟು ನಾವು ಎಲ್ಲೂ ಹೋಗಲ್ಲ. ಯಾರೋ ಕೇಳಿದ್ರು, 'ಜೈಹನುಮಾನ್' ತೆಲುಗು ಸಿನ್ಮಾ ಅಲ್ವಾ ಅಂತ.. ನಾನು ಇಲ್ಲ ಕನ್ನಡ ಸಿನ್ಮಾ ಅಂದೆ..' ಎಂದಿದ್ದಾರೆ.&lt;/p&gt;&lt;p&gt;ತೆಲುಗು ನಿರ್ಮಾಪಕ, ನಿರ್ದೇಶಕರ ಸಿನಿಮಾ 'ಜೈ ಹನುಮಾನ್' ಅದು ಹೇಗೆ ಕನ್ನಡ ಸಿನಿಮಾ ಆಗುತ್ತದೆ ಎಂಬ 'ಮರುಪ್ರಶ್ನೆ'ಗೆ ಉತ್ತರಿಸಿದ್ದಾರೆ ರಿಷಬ್ ಶೆಟ್ಟಿಯವರು. 'ಹೌದು ಈ ಚಿತ್ರದ ನಿರ್ಮಾಪಕರು, ನಿರ್ದೇಶಕರು ತೆಲುಗಿನವ್ರು.. ಹೀರೊ ನಾನು ಕನ್ನಡದವನು. ಹನುಮಂತ ಹಾಗೂ ನಾನು ಇಬ್ಬರೂ ಕನ್ನಡದವ್ರು.. ಹಾಗಾಗಿ ಈ ಚಿತ್ರ ಕನ್ನಡ ಸಿನಿಮಾ ತಾನೇ ಎಂದೆ&quot; ಎಂದಿದ್ದಾರೆ ರಿಷಬ್. ಇದೀಗ ಅವರ ಈ ಹೇಳಿಕೆ ಇದೀಗ ವೈರಲ್ ಆಗ್ತಿದೆ.&lt;/p&gt;&lt;p&gt;'ಜೈಹನುಮಾನ್' ಸಿನಿಮಾ ಯಾವ ಭಾಷೆಯಲ್ಲಿ ಚಿತ್ರೀಕರಣವಾಗುತ್ತದೆ ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿಯವರು &quot;ತೆಲುಗಿನವ್ರು ತೆಲುಗಿನಲ್ಲಿ ಮಾತನಾಡ್ತಾರೆ, ಕನ್ನಡದವ್ರು ಕನ್ನಡದಲ್ಲಿ ಮಾತನಾಡ್ತಾರೆ, ಹಿಂದಿಯವ್ರು ಹಿಂದಿಯಲ್ಲಿ ಮಾತನಾಡ್ತಾರೆ. ಒಟ್ಟಾರೆ ಪ್ಯಾನ್ ಇಂಡಿಯಾ ಸಿನಿಮಾ ಹಲವು ಭಾಷೆಗಳಲ್ಲಿ ಬರುತ್ತೆ. ಈಗ ಸಿನಿಮಾ ಡಬ್ಬಿಂಗ್ ಮಾಡುವುದು ಸುಲಭವಾಗಿದೆ. ನಿರ್ದೇಶಕರಿಗೆ ಯಾವ ಭಾಷೆಯಲ್ಲಿ ಬೇಕೋ ಆ ಭಾಷೆಯಲ್ಲಿ ಚಿತ್ರೀಕರಣ ಮಾಡ್ತಾರೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;ನಿನ್ನೆ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. 'ಮೊಟ್ಟೆ ಮೊದ್ಲಾ ಕೋಳಿ ಮೊದ್ಲಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಕೊಟ್ರೆ ಜನ ನೋಡ್ತಿಲ್ವಾ, ಜನ ನೋಡೋದಕ್ಕೆ ಒಳ್ಳೆ ಸಿನಿಮಾ ಕೊಡ್ತಿಲ್ವಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಬಂದಾಗ ಜನ ನೋಡ್ತಾರೆ. 'ಸು ಫ್ರಂ ಸೋ' ಸಿನಿಮಾ ಬಂದಾಗ ಎಲ್ಲಾ ನುಗ್ಗಿ ನೋಡಿದ್ರು. ಜೆಪಿ ತುಮ್ಮಿನಾಡು ಹೊಸ ನಿರ್ದೇಶಕರು. ರಾಜ್ ಬಿಟ್ರೆ ಎಲ್ಲಾ ಹೊಸ ಕಲಾವಿದರೇ.. ಸಿನಿಮಾ ಇಷ್ಟವಾಗಿದ್ದಕ್ಕೆ ಜನ ನೋಡಿದ್ರು.. ಜನಪ್ರಿಯ ಕಲಾವಿದರು ಇದ್ದೂ ಜನ ನೋಡ್ಲಿಲ್ಲ ಅಂದ್ರೆ, ಸಿನಿಮಾ ಚೆನ್ನಾಗಿಲ್ಲ ಅಂತ ಅರ್ಥ.&lt;/p&gt;&lt;p&gt;ಅಷ್ಟೇ ಅಲ್ಲ, ಇನ್ನೂ ಸಾಕಷ್ಟು ಸಂಗತಿಗಳ ಬಗ್ಗೆ ರಿಷಬ್ ಶೆಟ್ಟಿಯವರು ಮಾತನ್ನಾಡಿದ್ದಾರೆ. ಮಲಯಾಳಂನಲ್ಲಿ 'ವಾಳಾ- 2', ತಮಿಳಿನಲ್ಲಿ 'ಯೂತ್' ಎನ್ನುವ ಸಿನಿಮಾಗಳು ಬಂತು.. ಹೊಸಬರ ಸಿನಿಮಾ ಆಗಿದ್ರೂ ಅದು 200 ಕೋಟಿ ಕಲೆಕ್ಷನ್ ಆಯ್ತು.. ಕಲೆಕ್ಷನ್&zwnj; ನಂಬರ್&zwnj;ಗಿಂತಲೂ ಅಷ್ಟು ಜನ ನೋಡಿದ್ರು ಎನ್ನುವುದು ಮುಖ್ಯ. ಓಟಿಟಿ ಬಂದಿದೆ ಅಂತ ಎಲ್ಲರೂ ಹೇಳ್ತಾರೆ. ಆದರೆ ಟಿವಿ ರೀತಿ ಈಗ ಓಟಿಟಿ ಕೂಡ ಹಳೇದಾಯ್ತು.. ಓಟಿಟಿಗೆ ಬೇಕಾದ ಕಂಟೆಂಟ್ ಸಿಕ್ತಿದೆ, ಅದು ಅದರ ಪಾಡಿಗೆ ನಡಿತಿದೆ. ಥಿಯೇಟರ್&zwnj;ಗೆ ಬಂದು ಜನ ಸಿನಿಮಾ ನೋಡಲು ಈಗ ಏನು ಮಾಡಬೇಕು ಎನ್ನುವುದು ಮುಖ್ಯ. 'ಚಿತ್ರಮಂದಿರವೇ ಅಂತಿಮ' ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.&lt;/p&gt;&lt;p&gt;ಸಣ್ಣ ಬಜೆಟ್ ಸಿನಿಮಾ ಆದರೆ ವರ್ಷಕ್ಕೆ ಒಂದು ಮಾಡಬಹುದು. ಬಿಗ್ ಬಜೆಟ್ ಸಿನಿಮಾ ಅಂದಾಗ ಅದಕ್ಕೆ ಬೇಕಾಗಿರುವ ಅಗತ್ಯಗಳು ಸಿಗಲು ತಡವಾಗುತ್ತದೆ. ನಾನು 'ಜೈಹನುಮಾನ್' ಸಿನಿಮಾದಲ್ಲಿ ನಟಿಸುವುದರ ಜೊತೆ ಎರಡು ಪ್ರಾಜೆಕ್ಟ್ ಸ್ಕ್ರಿಪ್ಟ್ ಮಾಡ್ತಿದ್ದೀನಿ. ಕೆಲವೊಮ್ಮೆ ಆಗುತ್ತೆ, ಕೆಲವೊಮ್ಮೆ ಆಗೋದಿಲ್ಲ. 'ಕಾಂತಾರ' ಸಿನಿಮಾ ಒಂದೇ ವರ್ಷದಲ್ಲಿ ಕಥೆ ಬರೆದು, ಚಿತ್ರೀಕರಣ ಮಾಡಿ ಬಿಡುಗಡೆಯನ್ನೂ ಮಾಡಿಬಿಟ್ಟೆವು. ಸಿನಿಮಾ ಅನ್ನೋದು ಆಗಬೇಕು ಮಾಡೋಕೆ ಆಗಲ್ಲ. 'ಕಾಂತಾರ-1' ನಾವು ಮಾಡಿದ ಸಿನಿಮಾ' ಎಂದು ರಿಷಬ್ ಶೆಟ್ಟಿ ಮಾರ್ಮಿಕ ಅರ್ಥದಲ್ಲಿ ಹೇಳಿದ್ದಾರೆ.&lt;/p&gt;&lt;p&gt;ಇನ್ನೂ ಒಂದು ಸೀಕ್ರೆಟ್ ಹೇಳಿದ್ದಾರೆ ರಿಷಬ್ ಶೆಟ್ಟಿ. 'ಬರಹಗಾರರನ್ನು ಕನ್ನಡ ಚಿತ್ರರಂಗದಲ್ಲಿ ಬೆಳೆಸುತ್ತಿಲ್ಲ. ಮೊದಲಿನಿಂದ ಅದೇ ತಪ್ಪು ಮಾಡಿದ್ದಕ್ಕೆ ಈಗ ಪರಿಸ್ಥಿತಿ ಈ ರೀತಿಯಾಗಿದೆ. ಬೆಂಗಳೂರಿನ ಬರಹಗಾರರು ಈಗ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಬರಹಗಾರರನ್ನು ಬೆಳೆಸುತ್ತಿದ್ದೇವೆ. ಅವರಿಂದ ಮುಂದೆ ಚಿತ್ರರಂಗಕ್ಕೆ ಕೊಡುಗೆಗಳು ಖಂಡಿತ ಸಿಗಲಿವೆ' ಎಂದಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/rishab-shetty-clarifies-jai-hanuman-movie-is-kannada-movie-only-in-his-own-way/articleshow-f9cgfiy"/>
        </item>
        <item>
            <title><![CDATA[ಪ್ರಜ್ವಲ್‌ ದೇವರಾಜ್‌ ಒಳ್ಳೆಯವರು ಅಂತಾ ಯಾರಾದ್ರೂ ಆಸ್ಕರ್‌ ಅವಾರ್ಡ್‌ ಕೊಟ್ಟಿದ್ದೀರಾ?.. ಕರಾವಳಿ ಚಿತ್ರತಂಡದ ವಿರುದ್ಧ ಫ್ಯಾನ್ಸ್ ಆಕ್ರೋಶ]]></title>
            <link>https://kannada.asianetnews.com/sandalwood/prajwal-devaraj-fans-protest-karavali-trailer-launch-controversy-san/articleshow-7s6qrzw</link>
            <guid isPermaLink="true">https://kannada.asianetnews.com/sandalwood/prajwal-devaraj-fans-protest-karavali-trailer-launch-controversy-san/articleshow-7s6qrzw</guid>
            <pubDate>Tue, 07 Jul 2026 20:11:36 +0530</pubDate>
            <description><![CDATA[&lt;p&gt;'ಕರಾವಳಿ' ಚಿತ್ರದ ಟ್ರೈಲರ್&zwnj;ನಲ್ಲಿ ನಾಯಕ ಪ್ರಜ್ವಲ್ ದೇವರಾಜ್ ಅವರ ಧ್ವನಿ ಇಲ್ಲದಿರುವುದು ಮತ್ತು ಕಳಪೆ ಸ್ಕ್ರೀನ್ ಪ್ರೆಸೆನ್ಸ್&zwnj;ಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಬೇಜವಾಬ್ದಾರಿತನದಿಂದ ಅಭಿಮಾನಿಗಳು ನೊಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyga8r764m3d730wj3t8k4d,imgname-prajwal-devaraj-fans-controversy-1783435174663.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7):&lt;/strong&gt; ಸ್ಯಾಂಡಲ್&zwnj;ವುಡ್&zwnj;ನ ಬಹುನಿರೀಕ್ಷಿತ &lsquo;ಕರಾವಳಿ&rsquo; ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಡೆದ ಗದ್ದಲದ ಅಸಲಿ ಚಿತ್ರಣ ಈಗ ಹೊರಬಂದಿದೆ. ಚಿತ್ರದ ಟ್ರೈಲರ್&zwnj;ನಲ್ಲಿ ಹೀರೊ ಪ್ರಜ್ವಲ್ ದೇವರಾಜ್ (Prajwal Devaraj) ಅವರ ಧ್ವನಿ ಇಲ್ಲದಿರುವುದು ಹಾಗೂ ಕಳಪೆ ಸ್ಕ್ರೀನ್ ಪ್ರೆಸೆನ್ಸ್&zwnj;ನಿಂದ ಬೇಸತ್ತ ಅಖಿಲ ಕರ್ನಾಟಕ ಪ್ರಜ್ವಲ್ ದೇವರಾಜ್ ಅಭಿಮಾನಿ ಸಂಘದ ಪದಾಧಿಕಾರಿಗಳು ಚಿತ್ರತಂಡದ ವಿರುದ್ಧ ಕಣ್ಣೀರು ಹಾಕುತ್ತಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. &quot;ನಮ್ಮ 15 ವರ್ಷಗಳ ಅಭಿಮಾನದ ಇತಿಹಾಸದಲ್ಲೇ ನಾವು ಈ ರೀತಿ ರಸ್ತೆಗೆ ಇಳಿದಿರಲಿಲ್ಲ, ಆದರೆ ಚಿತ್ರತಂಡ ನಮ್ಮನ್ನು ಆ ಮಟ್ಟಿಗೆ ನೋಯಿಸಿದೆ&quot; ಎಂದು ಅಭಿಮಾನಿಗಳು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ನಮ್ಮ ಬಾಸ್ ಸಿನಿಮಾ ಬಂದು ಎರಡು ವರ್ಷ ಆಗಿತ್ತು. ಈ ಬಾರಿ ಅವರ ಬರ್ತ್&zwnj;ಡೇಗೆ ನಮಗೆ ಅವರನ್ನು ಸಿಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಟ್ರೈಲರ್ ಲಾಂಚ್ ಅನ್ನೇ ದೊಡ್ಡ ಹಬ್ಬದಂತೆ ಆಚರಿಸಲು ನಿರ್ಧರಿಸಿ, ನೆನ್ನೆ ರಾತ್ರಿ 2 ಗಂಟೆಯವರೆಗೂ ರಸ್ತೆಯಲ್ಲಿ ನಿಂತು ಬ್ಯಾನರ್ ಕಟ್ಟಿದ್ದೇವೆ, ಹೂವಿನ ಹಾರ ತಂದಿದ್ದೇವೆ, ಪಟಾಕಿಗಳನ್ನು ತಂದಿದ್ದೇವೆ. ರಾತ್ರಿ ಪೊಲೀಸರು ಬಂದು ನಮಗೆ ಕೆಟ್ಟದಾಗಿ ಬೈದರೂ, ರಿಕ್ವೆಸ್ಟ್ ಮಾಡಿಕೊಂಡು ಕೆಲಸ ಮುಗಿಸಿದ್ದೆವು. ಇದೆಲ್ಲವನ್ನೂ ನಾವು ನಿರ್ದೇಶಕ ಗುರುದತ್ ಗಾಣಿಗ ಅವರ ಮೇಲಿನ ನಂಬಿಕೆಯಿಂದ ಮಾಡಿದ್ದೆವು. ಆದರೆ ಇಂದು ಬೆಳಗ್ಗೆ 10:30 ಆದರೂ ಬಾಸ್ ಬರ್ತಾ ಇಲ್ಲ ಅಂದಾಗ ಚಿತ್ರತಂಡದವರು ನಮಗೆ 'ಗೊತ್ತಿಲ್ಲ' ಎಂದು ಬೇಜವಾಬ್ದಾರಿಯ ಉತ್ತರ ನೀಡಿದರು ಎಂದು ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಟ್ರೈಲರ್&zwnj;ನಲ್ಲಿ ನಮ್ಮ ಬಾಸ್ ಕಾಣಿಸಿದ್ದು ಕೇವಲ 'ಜೂನಿಯರ್ ಆರ್ಟಿಸ್ಟ್' ತರ&lt;/strong&gt;&lt;/h2&gt;&lt;p&gt;ಬಾಸ್ ಬರಲಿಲ್ಲ ಅಂದರೂ ಬೇಸರ ಮರೆತು ಸಿನಿಮಾ ಟ್ರೈಲರ್&zwnj; ನೋಡೋಣ ಎಂದು ಥಿಯೇಟರ್ ಒಳಗೆ ಹೋದೆವು. ಆದರೆ ಟ್ರೈಲರ್ ನೋಡಿದ ನಮಗೆ ಎದೆ ಒಡೆದಂತಾಯಿತು. ಇಡೀ ಟ್ರೈಲರ್&zwnj;ನಲ್ಲಿ ನಮ್ಮ ಹೀರೊ ಎಲ್ಲೂ ಸರಿಯಾಗಿ ಕಾಣಿಸಿಯೇ ಇಲ್ಲ. ಬಂದು ಹಾಗೆ ಹೋಗುವ ಜೂನಿಯರ್ ಆರ್ಟಿಸ್ಟ್ ಅಥವಾ ಪಾಸಿಂಗ್ ಶಾಟ್&zwnj; ತರಹ ಬಾಸ್ ಅನ್ನು ತೋರಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಟ್ರೈಲರ್&zwnj;ನಲ್ಲಿ ಅವರ ಧ್ವನಿಯೇ ಇಲ್ಲ. ಸಂಭಾವನೆ ಗಲಾಟೆ ನಮಗಂತೂ ಗೊತ್ತಿಲ್ಲ, ಆದರೆ ಒಬ್ಬ ಅಭಿಮಾನಿಯಾಗಿ ನಮ್ಮ ಹೀರೊನ ನಾವು ಸ್ಕ್ರೀನ್ ಮೇಲೆ ಅದ್ಭುತವಾಗಿ ನೋಡಲು ಬಂದಿದ್ದೆವು. ಆದರೆ ಚಿತ್ರತಂಡ ನಮಗೆ ತೀವ್ರ ನಿರಾಸೆ ಮೂಡಿಸಿದೆ. ಈ ಮುಂಚೆ ಬಿಡುಗಡೆಯಾದ ಹಾಡಿನಲ್ಲೂ ಅವರ ಧ್ವನಿ ಇರಲಿಲ್ಲ ಎಂದು ಅಭಿಮಾನಿಯೊಬ್ಬರು ದೂರಿದ್ದಾರೆ.&lt;/p&gt;&lt;h2&gt;&lt;strong&gt;ಮಂಗಳೂರು ಭಾಷೆಯೇ ಬೇಕಿತ್ತಾದ್ರೆ ರಿಷಬ್ ಶೆಟ್ಟಿ ಅಥವಾ ರಾಜ್ ಬಿ. ಶೆಟ್ಟಿನೇ ಹೀರೊ ಮಾಡ್ಬಹುದಿತ್ತಲ್ಲ&lt;/strong&gt;&lt;/h2&gt;&lt;p&gt;ಚಿತ್ರತಂಡದ ಮೇಕಿಂಗ್ ಶೈಲಿಯನ್ನು ಪ್ರಶ್ನಿಸಿದ ಫ್ಯಾನ್ಸ್, ಇದು ಕರಾವಳಿ ಭಾಷೆಯ ಸಿನಿಮಾ, ಮಂಗಳೂರು ಶೈಲಿಯ ಧ್ವನಿಯೇ ಬೇಕು ಅಂತ ಇವರು ಹಠ ಮಾಡುವುದಾದರೆ, ಮೊದಲೇ ಪ್ರಜ್ವಲ್ ದೇವರಾಜ್ ಅವರನ್ನು ಹೀರೊ ಮಾಡುವುದು ಬೇಕಿರಲಿಲ್ಲ. ಅದರ ಬದಲು ರಾಜ್ ಬಿ. ಶೆಟ್ಟಿ, ರಿಷಬ್ ಶೆಟ್ಟಿ ಅಥವಾ ರಕ್ಷಿತ್ ಶೆಟ್ಟಿ ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಬೇಕಿತ್ತಲ್ಲ? ನಮ್ಮ ಬಾಸ್&zwnj;ನ ಹೀರೊ ಅಂತ ಮುಂಚೆ ಹಾಕಿ, ಇವಾಗ ವಾಯ್ಸ್ ಬರಲ್ಲ, ಡಬ್ಬಿಂಗ್ ಮಾಡಿಲ್ಲ ಅಂದರೆ ಹೇಗೆ? ತಪ್ಪು ಎರಡು ಕಡೆಯಿಂದಲೂ ಆಗಿರುತ್ತದೆ. ಚಿತ್ರತಂಡದ ಈ ನಡವಳಿಕೆಯಿಂದ ನಮ್ಮ ಹೀರೊಗೆ ಎಷ್ಟು ಹರ್ಟ್ ಆಗಿರಬೇಡ? ಅದಕ್ಕೇ ಅವರು ಬಂದಿಲ್ಲ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ನಾವು ಪ್ರಾಣಿಗಳಲ್ಲ, ನಮ್ಮ ಹೋರಾಟ ಮುಂದುವರಿಯುತ್ತದೆ!&lt;/strong&gt;&lt;/h2&gt;&lt;p&gt;ವೇದಿಕೆಯ ಮೇಲೆ ಚಿತ್ರರಂಗದ ಗಣ್ಯರು ಮಾತನಾಡಿದ ಶೈಲಿಗೆ ಆಕ್ಷೇಪವೆತ್ತಿದ ಅಭಿಮಾನಿಗಳು, ಅಲ್ಲಿ ಸ್ಟೇಜ್ ಮೇಲೆ ಕೂತವರು 'ನಾವು ಮನುಷ್ಯರ ಜೊತೆ ಮಾತನಾಡುತ್ತೇವೆ' ಅಂತಾರೆ, ಹಾಗಾದರೆ ನಾವೇನು ಪ್ರಾಣಿಗಳಾ? ನಾವು ಸಿನಿಮಾ ಹಾಳು ಮಾಡಲು ಬಂದಿಲ್ಲ, ಎರಡು ವರ್ಷಗಳಿಂದ ರೀಲ್ಸ್ ಮಾಡಿ ಪ್ರಮೋಷನ್ ಮಾಡಿದ್ದು ನಾವೇ. ಇವತ್ತು ನಮ್ಮ ನೋವನ್ನು ತೋರಿಸಿಕೊಳ್ಳುತ್ತಿದ್ದೇವೆ. ನಮ್ಮ ಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ. ಈಗ ತಂದಿರುವ ಪಟಾಕಿಗಳನ್ನು ಇಲ್ಲೇ ಹೊಡೆದು, ಹೂವಿನ ಹಾರಗಳನ್ನು ವೇಸ್ಟ್ ಮಾಡಿ, ಮುಂದಿನ ನಿರ್ಧಾರಕ್ಕಾಗಿ ನೇರವಾಗಿ ನಮ್ಮ ಬಾಸ್ (ಪ್ರಜ್ವಲ್) ಮನೆ ಮುಂದೆ ಹೋಗುತ್ತೇವೆ. ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/sandalwood/prajwal-devaraj-fans-protest-karavali-trailer-launch-controversy-san/articleshow-7s6qrzw"/>
        </item>
        <item>
            <title><![CDATA[ಆ ಹುಡುಗಿಯ ಸ್ಯಾಡಿಸಂನಿಂದಲೇ ಹಿಟ್ ಆಯ್ತು: ವಿಶ್ವವನ್ನೇ ಅಲ್ಲಾಡಿಸಿದ 'ಅಬ್ಸೆಶನ್' ಬಗ್ಗೆ ನಿರ್ಮಾಪಕ ಹೇಳಿದ್ದೇನು?]]></title>
            <link>https://kannada.asianetnews.com/entertainment/producer-naga-vamsi-says-sadism-made-obsession-a-blockbuster-hit/articleshow-klaf5tn</link>
            <guid isPermaLink="true">https://kannada.asianetnews.com/entertainment/producer-naga-vamsi-says-sadism-made-obsession-a-blockbuster-hit/articleshow-klaf5tn</guid>
            <pubDate>Tue, 07 Jul 2026 20:08:09 +0530</pubDate>
            <description><![CDATA[&lt;p&gt;Obsession Movie Success: ಹಲವು ಬಾರಿ ನಾಗವಂಶಿ ಮಾಡಿದ ಕಾಮೆಂಟ್&zwnj;ಗಳು ವಿವಾದಕ್ಕೆ ಕಾರಣವಾಗುತ್ತವೆ. ಇದೀಗ ನಾಗವಂಶಿ ವಿಶ್ವದಾದ್ಯಂತ ಸಂಚಲನ ಮೂಡಿಸಿದ ಚಿತ್ರವೊಂದರ ಬಗ್ಗೆ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshfrw43hxr6h37cxghk84rn,imgname-image-1779777171586.jpg" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ನಿರ್ಮಾಪಕ ನಾಗವಂಶಿ ಅವರು ಸಂಚಲನ ಮೂಡಿಸಿದ್ದ 'ಅಬ್ಸೆಶನ್' ಚಿತ್ರದ ಬಗ್ಗೆ ಆಸಕ್ತಿದಾಯಕ ಕಾಮೆಂಟ್ ಮಾಡಿದ್ದಾರೆ. ಆ ಸಿನಿಮಾ ತಾಂತ್ರಿಕವಾಗಿ ಅದ್ಭುತವಾಗಿದ್ದಕ್ಕೆ ಹಿಟ್ ಆಗಿದ್ದಲ್ಲ, ಬದಲಾಗಿ ಯುವಕರು ಎಂಜಾಯ್ ಮಾಡುವ ಸ್ಯಾಡಿಸಂ ಅಂಶಗಳಿಂದಾಗಿ ಹಿಟ್ ಆಯಿತು ಎಂದಿದ್ದಾರೆ.&lt;/p&gt;&lt;p&gt;ಖ್ಯಾತ ನಿರ್ಮಾಪಕ ನಾಗವಂಶಿ ಅವರ ಇತ್ತೀಚಿನ ಸಿನಿಮಾ 'ಲೆನಿನ್'. ಅಖಿಲ್ ಅಕ್ಕಿನೇನಿ ಮತ್ತು ಭಾಗ್ಯಶ್ರೀ ಬೋರ್ಸೆ ನಟಿಸಿರುವ ಈ ಚಿತ್ರವನ್ನು ಮುರಳಿ ಕಿಶೋರ್ ಅಬ್ಬೂರಿ ನಿರ್ದೇಶಿಸಿದ್ದಾರೆ. ಈ ಚಿತ್ರ ಜುಲೈ 10 ರಂದು ಬಿಡುಗಡೆಯಾಗುತ್ತಿದ್ದು, ನಾಗವಂಶಿ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ವಿವಾದಗಳು, ನಿರ್ಮಾಪಕರ ಸಮಸ್ಯೆಗಳು, ಹೀರೋಗಳ ಸಂಭಾವನೆ ಮುಂತಾದ ವಿಷಯಗಳ ಬಗ್ಗೆ ನಾಗವಂಶಿ ಮುಕ್ತವಾಗಿ ಮಾತನಾಡುತ್ತಾರೆ.&lt;/p&gt;&lt;p&gt;ಹಲವು ಬಾರಿ ನಾಗವಂಶಿ ಮಾಡಿದ ಕಾಮೆಂಟ್&zwnj;ಗಳು ವಿವಾದಕ್ಕೆ ಕಾರಣವಾಗುತ್ತವೆ. ಇದೀಗ ನಾಗವಂಶಿ ವಿಶ್ವದಾದ್ಯಂತ ಸಂಚಲನ ಮೂಡಿಸಿದ ಚಿತ್ರವೊಂದರ ಬಗ್ಗೆ ಮಾತನಾಡಿದ್ದಾರೆ. ಅತ್ಯಂತ ಕಡಿಮೆ ಬಜೆಟ್&zwnj;ನಲ್ಲಿ ನಿರ್ಮಾಣವಾದ 'ಅಬ್ಸೆಶನ್' ಎಂಬ ಚಿತ್ರ ವಿಶ್ವಾದ್ಯಂತ ಪ್ರೇಕ್ಷಕರನ್ನು ಸೆಳೆದಿತ್ತು. ಹಾರರ್ ಅಂಶಗಳಿರುವ ಈ ಸಿನಿಮಾ ಪ್ರಸ್ತುತ ಪ್ರೈಮ್ ವಿಡಿಯೋ ಮತ್ತು ಆಪಲ್ ಟಿವಿಯಂತಹ ಓಟಿಟಿಗಳಲ್ಲಿ ಬಾಡಿಗೆಗೆ ಲಭ್ಯವಿದೆ.&lt;img&gt;&lt;/p&gt;&lt;p&gt;ಅತಿ ಕಡಿಮೆ ಬಜೆಟ್&zwnj;ನಲ್ಲಿ ನಿರ್ಮಾಣವಾದ ಈ ಚಿತ್ರ ವಿಶ್ವಾದ್ಯಂತ 2,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಿಂದಲೇ 'ಅಬ್ಸೆಶನ್' ಚಿತ್ರ ಎಂತಹ ಸಂಚಲನ ಸೃಷ್ಟಿಸಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಒಂದು ಹಾರರ್ ಸಿನಿಮಾ ಇಷ್ಟೊಂದು ದೊಡ್ಡ ಯಶಸ್ಸು ಗಳಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಆದರೆ ಇದರ ಹಿಂದಿನ ನಿಜವಾದ ಕಾರಣವನ್ನು ನಿರ್ಮಾಪಕ ನಾಗವಂಶಿ ಬಹಿರಂಗಪಡಿಸಿದ್ದಾರೆ.&lt;/p&gt;&lt;p&gt;'ಲೆನಿನ್' ಸಿನಿಮಾದ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ನಾಗವಂಶಿಗೆ 'ಅಬ್ಸೆಶನ್' ಬಗ್ಗೆ ಪ್ರಶ್ನೆ ಎದುರಾಯಿತು. 'ಅಬ್ಸೆಶನ್' ಸಿನಿಮಾ ನೋಡಿದ್ದೀರಾ ಎಂದು ಕೇಳಿದಾಗ, 'ನೋಡಿದ್ದೇನೆ' ಎಂದು ನಾಗವಂಶಿ ಉತ್ತರಿಸಿದರು. 'ಆ ಸಿನಿಮಾ ಬಗ್ಗೆ ನಾನೇನಾದರೂ ಮಾತನಾಡಿದರೆ ಬೈಯುತ್ತಾರೆ. ನನ್ನ ಅಭಿಪ್ರಾಯ ಯಾರಿಗೂ ಇಷ್ಟವಾಗುತ್ತಿಲ್ಲ' ಎಂದರು. ಆದರೂ, 'ಅಬ್ಸೆಶನ್' ಚಿತ್ರದ ದೊಡ್ಡ ಯಶಸ್ಸಿನ ಹಿಂದಿನ ಕಾರಣವನ್ನು ಅವರು ಬಿಚ್ಚಿಟ್ಟರು.&lt;img&gt;&lt;/p&gt;&lt;h2&gt;&lt;strong&gt;ಹುಡುಗಿಯ ಸ್ಯಾಡಿಸಂನಿಂದಲೇ ದೊಡ್ಡ ಹಿಟ್&lt;/strong&gt;&lt;/h2&gt;&lt;p&gt;'ಸಿನಿಮಾ ಅದ್ಭುತವಾಗಿದೆ. ತಾಂತ್ರಿಕವಾಗಿ ಬ್ರಿಲಿಯಂಟ್ ಸಿನಿಮಾ, ಅದರಲ್ಲಿ ಅನುಮಾನವಿಲ್ಲ. ಆದರೆ ಒಬ್ಬ ಹುಡುಗಿ ತೋರಿಸುವ ಸ್ಯಾಡಿಸಂ ಅನ್ನು ಎಂಜಾಯ್ ಮಾಡಲು ಯುವಕರೆಲ್ಲರೂ ಥಿಯೇಟರ್&zwnj;ಗೆ ಮುಗಿಬಿದ್ದರು. ನಮ್ಮ ಫ್ರೆಂಡ್&zwnj;ಗೆ ಅವನ ಗರ್ಲ್&zwnj;ಫ್ರೆಂಡ್ ಹಿಂಸೆ ಕೊಟ್ಟರೆ ನಾವು ಹೇಗೆ ಎಂಜಾಯ್ ಮಾಡುತ್ತೇವೋ, ಅದನ್ನೇ ಈ ಚಿತ್ರದಲ್ಲಿಯೂ ತೋರಿಸಿದ್ದಾರೆ. ಹಾಗೆಯೇ ಭಯಾನಕ ದೃಶ್ಯಗಳೂ ಇವೆ' ಎಂದು ನಾಗವಂಶಿ ವಿವರಿಸಿದರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/producer-naga-vamsi-says-sadism-made-obsession-a-blockbuster-hit/articleshow-klaf5tn"/>
        </item>
        <item>
            <title><![CDATA['ಮಧ್ಯರಾತ್ರಿ ಟ್ರೈಲರ್ ನೋಡಿದಾಗ ಶಾಕ್ ಆಯ್ತು, ನನ್ನ ಧ್ವನಿಯೇ ಇರಲಿಲ್ಲ': ಕರಾವಳಿ ವಿವಾದದ ಸತ್ಯ ಬಿಚ್ಚಿಟ್ಟ ಪ್ರಜ್ವಲ್ ದೇವರಾಜ್!]]></title>
            <link>https://kannada.asianetnews.com/entertainment/prajwal-devaraj-clarifies-karavali-movie-trailer-voice-remuneration-dispute-san/articleshow-1nmquso</link>
            <guid isPermaLink="true">https://kannada.asianetnews.com/entertainment/prajwal-devaraj-clarifies-karavali-movie-trailer-voice-remuneration-dispute-san/articleshow-1nmquso</guid>
            <pubDate>Tue, 07 Jul 2026 19:29:04 +0530</pubDate>
            <description><![CDATA[&lt;p&gt;'ಕರಾವಳಿ' ಚಿತ್ರದ ಟ್ರೈಲರ್ ವಿವಾದದ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಮೌನ ಮುರಿದಿದ್ದಾರೆ. ಚಿತ್ರತಂಡ ಸಂಭಾವನೆ ಬಾಕಿ ಉಳಿಸಿಕೊಂಡಿದ್ದರಿಂದ ಡಬ್ಬಿಂಗ್ ಮಾಡಿರಲಿಲ್ಲ ಮತ್ತು ಕಾರ್ಯಕ್ರಮಕ್ಕೆ ಗೈರಾಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwydwn65y97sdkdq6hq04eya,imgname-prajwal-devaraj-opens-up-on-karavali-movie-trailer-and-fee-dispute-1783432631492.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7): &lt;/strong&gt;ಸ್ಯಾಂಡಲ್&zwnj;ವುಡ್&zwnj;ನಲ್ಲಿ ಭಾರಿ ಸದ್ದು ಮಾಡುತ್ತಿರುವ &lsquo;ಕರಾವಳಿ&rsquo; ಚಿತ್ರದ ಟ್ರೈಲರ್ ಲಾಂಚ್ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ನಾಯಕ ನಟ ಪ್ರಜ್ವಲ್ ದೇವರಾಜ್ ಮೌನ ಮುರಿದಿದ್ದಾರೆ. ತಾವು ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಹಾಗೂ ಟ್ರೈಲರ್&zwnj;ನಲ್ಲಿ ತಮ್ಮ ಧ್ವನಿ ಇಲ್ಲದಿರಲು ಕಾರಣವೇನು ಎಂಬುದನ್ನು ಮಾಧ್ಯಮಗಳ ಎದುರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 'ನನ್ನ ಇಡೀ ಸಿನಿ ಜರ್ನಿಯಲ್ಲಿ ಇಂತಹ ಬ್ಲಾಕ್ ಮಾರ್ಕ್ ಇರಲಿಲ್ಲ, ಆದರೆ ಚಿತ್ರತಂಡ ನನ್ನನ್ನು ನಡೆಸಿಕೊಂಡ ರೀತಿ ತೀವ್ರ ಬೇಸರ ತರಿಸಿದೆ' ಎಂದು ಅವರು ಬೇಸರ ಹೊರಹಾಕಿದ್ದಾರೆ.&lt;/p&gt;&lt;p&gt;ಖಾಸಗಿ ಟಿವಿಯ ಜೊತೆ ಮಾತನಾಡಿರುವ ಪ್ರಜ್ವಲ್&zwnj; ದೇವರಾಜ್&zwnj;, ನಾನು ಚಿತ್ರರಂಗದ ಮೇಲಿರುವ ಪ್ರೀತಿ ಮತ್ತು ಬಾಂಧವ್ಯದಿಂದಾಗಿ ನಿರ್ಮಾಪಕರಿಗಾಗಿ ಕಳೆದ ವರ್ಷದಲ್ಲಿ ಅಂದಾಜು 1.5 ಕೋಟಿ ರೂಪಾಯಿ ಸಂಭಾವನೆ ಬಿಟ್ಟುಕೊಟ್ಟಿದ್ದೇನೆ. ಆದರೆ, ನಾವೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿ ಇರಬೇಕಲ್ಲವೇ? ಕಳೆದ 2-3 ವರ್ಷಗಳಿಂದ ಬೇರೆ ಸಿನಿಮಾ ಮಾಡದೆ ಕೇವಲ ಈ ಪ್ರಾಜೆಕ್ಟ್&zwnj;ಗಳನ್ನೇ ನಂಬಿ ಮನೆಯಲ್ಲಿದ್ದೇನೆ. ನನಗೂ ಫೈನಾನ್ಸಿಯಲ್ ಕಮೀಟ್&zwnj;ಮೆಂಟ್&zwnj; ಇರುತ್ತವೆ. ಚಿತ್ರತಂಡ ನನಗೆ ಕೊಡಬೇಕಾದ ಸಂಭಾವನೆ ಹಾಗೂ ಜಿಎಸ್&zwnj;ಟಿ (GST) ಪೇಮೆಂಟ್ ಅನ್ನು ಬಾಕಿ ಉಳಿಸಿಕೊಂಡಿದೆ. ಅದನ್ನು ಕೊಟ್ಟರೆ ನಾನು ಬಂದು ಡಬ್ಬಿಂಗ್ ಮಾಡುತ್ತೇನೆ ಎಂದಿದ್ದೆ. ಆದರೆ ಅವರು ಖಡಾಖಂಡಿತವಾಗಿ 'ಕೊಡಲು ಆಗಲ್ಲ' ಎಂದು ಹಠ ಮಾಡುತ್ತಿದ್ದಾರೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಮಧ್ಯರಾತ್ರಿ ಟ್ರೈಲರ್ ನೋಡಿದಾಗ ಶಾಕ್ ಆಯ್ತು, ನನ್ನ ವಾಯ್ಸ್ ಇರಲಿಲ್ಲ!&lt;/strong&gt;&lt;/h2&gt;&lt;p&gt;ನಾನು ಸದಾ ಸಿನಿಮಾದ ಪ್ರಮೋಷನ್ ಮಾಡಲು ಸಿದ್ಧನಿದ್ದೆ. ನನ್ನ ಮ್ಯಾನೇಜರ್ ಮೂಲಕ ಚಿತ್ರತಂಡವನ್ನು ಸಂಪರ್ಕಿಸಿ 'ಟ್ರೈಲರ್ ಡಬ್ಬಿಂಗ್ ಯಾವಾಗ?' ಎಂದು ಕೇಳಿದ್ದೆ. ಆದರೆ ಅವರು 'ಫಸ್ಟ್ ಲಾಂಚ್&zwnj;ಗೆ ಬನ್ನಿ, ಆಮೇಲೆ ಮಾತನಾಡೋಣ' ಎಂದಿದ್ದರು. ನಾನು ಬೆಳಗ್ಗೆ ಜೋಶ್&zwnj;ನಲ್ಲಿ ಕಾರ್ಯಕ್ರಮಕ್ಕೆ ಹೋಗಲು ನಿರ್ಧಾರ ಮಾಡಿದ್ದೆ. ಆದರೆ, ನೆನ್ನೆ ಮಧ್ಯರಾತ್ರಿ ನಾನು ಕಾಡಿ ಬೇಡಿ ಅವರಿಂದ ಟ್ರೈಲರ್ ತರಿಸಿಕೊಂಡು ನೋಡಿದಾಗ ನನಗೆ ದೊಡ್ಡ ಶಾಕ್ ಕಾದಿತ್ತು. ಅದರಲ್ಲಿ ನನ್ನ ಧ್ವನಿಯೇ ಇರಲಿಲ್ಲ! ಈ ಮುಂಚೆ ಹಾಡಿನ ಡೈಲಾಗ್&zwnj;ನಲ್ಲೂ ನನ್ನ ವಾಯ್ಸ್ ಬಳಸಿರಲಿಲ್ಲ. ಕನಿಷ್ಠಪಕ್ಷ ನನಗೆ ಈ ವಿಷಯವನ್ನು ತಿಳಿಸುವ ಸೌಜನ್ಯವನ್ನೂ ಚಿತ್ರತಂಡ ತೋರಲಿಲ್ಲ. ನನ್ನನ್ನು ಇಷ್ಟು ಕೇರ್&zwnj;ಲೆಸ್ ಮಾಡಿದ್ದಕ್ಕೆ ಬೇಸರಗೊಂಡು ನಾನು ಕಾರ್ಯಕ್ರಮಕ್ಕೆ ಹೋಗಲಿಲ್ಲ. ಅವರು ಮೊದಲೇ ಹೇಳಿದ್ದರೆ ನಾನು ಉಚಿತವಾಗಿಯಾದರೂ ಟ್ರೈಲರ್ ಮುಗಿಸಿಕೊಡುತ್ತಿದ್ದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ರಾಜ್ ಬಿ. ಶೆಟ್ಟಿ ಎಕ್ಸ್&zwnj;ಟ್ರಾಆರ್ಡಿನರಿ ಪರ್ಸನ್; ನಮ್ಮ ನಡುವೆ ಮನಸ್ತಾಪವಿಲ್ಲ&lt;/strong&gt;&lt;/h2&gt;&lt;p&gt;ಮಲ್ಟಿಸ್ಟಾರರ್ ಸಿನಿಮಾ ಎಂಬ ಕಾರಣಕ್ಕೆ ನಟ ರಾಜ್ ಬಿ. ಶೆಟ್ಟಿ ಮತ್ತು ನಿಮ್ಮ ನಡುವೆ ಇಗೋ ಕ್ಲ್ಯಾಶ್ (Ego Clash) ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್, ಖಂಡಿತವಾಗಿಯೂ ಇಲ್ಲ. ನಾವು ಹಿಂದೆ &lsquo;ಚೌಕ&rsquo; ಸಿನಿಮಾದಲ್ಲಿ ನಾಲ್ಕು ಜನ ಹೀರೊಗಳು ಒಟ್ಟಿಗೆ ನಟಿಸಿರಲಿಲ್ಲವೇ? ಇವತ್ತಿಗೂ ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ. ರಾಜ್ ಬಿ. ಶೆಟ್ಟಿ ಅವರು ಎಕ್ಸ್&zwnj;ಟ್ರಾಆರ್ಡಿನರಿ ಟ್ಯಾಲೆಂಟ್, ಅಮೇಜಿಂಗ್&zwnj; ಪರ್ಸನ್ ಮತ್ತು ವಂಡರ್&zwnj;ಫುಲ್ ಕೋ-ಸ್ಟಾರ್. ಅವರ ಜೊತೆ ನನಗೆ ಯಾವುದೇ ಸಮಸ್ಯೆ ಇಲ್ಲ. ಅವರು ನನಗೆ ಕರೆ ಮಾಡಿಲ್ಲ, ಆದರೆ ಅವರ ಜೊತೆ ಮುಕ್ತವಾಗಿ ಮಾತನಾಡಲು ನಾನು ಸಿದ್ಧನಿದ್ದೇನೆ. ಇಂಡಸ್ಟ್ರಿ ಬೆಳೆಯಬೇಕು, ಪ್ರೊಡ್ಯೂಸರ್ಸ್ ಚೆನ್ನಾಗಿರಬೇಕು ಅನ್ನೋದಷ್ಟೇ ನನ್ನ ಆಸೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಅಪ್ಪನಿಗೆ ಬೇಸರವಾಗಿದೆ; ಲಿಖಿತ ಒಪ್ಪಂದ ಮಾಡಿಕೊಳ್ಳದ ನಂಬಿಕೆಯೇ ಮುಳುವಾಯಿತು!&lt;/strong&gt;&lt;/h2&gt;&lt;p&gt;&quot;ನನ್ನ ತಂದೆ (ಹಿರಿಯ ನಟ ದೇವರಾಜ್) ಈ ಬೆಳವಣಿಗೆಯಿಂದ ತೀವ್ರ ಬೇಸರಗೊಂಡಿದ್ದಾರೆ. 'ನೀನ್ಯಾಕಪ್ಪಾ ಹೀಗೆ ಪ್ರತಿಬಾರಿಯೂ ಲಾಸ್ಟ್ ತನಕ ಕಾಸು ಬಿಟ್ಟುಕೊಟ್ಟು ಒದ್ದಾಡುತ್ತೀಯಾ, ನಿನ್ನ ನೋಡಿದರೆ ಅಯ್ಯೋ ಅನ್ಸುತ್ತೆ' ಎಂದು ಬೇಸರ ಹೊರಹಾಕಿದ್ದಾರೆ. ನಾನು ಯಾವುದೇ ನಿರ್ಮಾಪಕರ ಹತ್ತಿರ ಲಿಖಿತ ಒಪ್ಪಂದ ಮಾಡಿಕೊಳ್ಳಲ್ಲ. ಮಾತಿನ ನಂಬಿಕೆ ಮೇಲೆ ಸಿನಿಮಾ ಮಾಡುತ್ತೇನೆ. ಅದೇ ಈಗ ನನಗೆ ಮುಳುವಾಗಿದೆ ಎಂದಿದ್ದಾರೆ ಪ್ರಜ್ವಲ್.&lt;/p&gt;&lt;h2&gt;&lt;strong&gt;ಸಿನಿಮಾ ಒಬ್ಬನದಲ್ಲ, ಅದರ ಹಿಂದೆ 500 ಜನರ ಬದುಕಿರುತ್ತದೆ...&lt;/strong&gt;&lt;/h2&gt;&lt;p&gt;ಒಂದು ಸಿನಿಮಾದ ಹಿಂದೆ ನನ್ನೊಬ್ಬನದಲ್ಲ, 500 ಜನರ ಬದುಕಿರುತ್ತದೆ. ಎಲ್ಲರಿಗೂ ಆ ಸಿನಿಮಾ ಜೀವನ ನೀಡಬೇಕು. ಚಿತ್ರತಂಡದೊಂದಿಗೆ ನನ್ನ ಮ್ಯಾನೇಜರ್ ಇನ್ನು ಕಾಂಟ್ಯಾಕ್ಟ್&zwnj;ನಲ್ಲೇ ಇದ್ದಾರೆ. ಸಮಸ್ಯೆ ಬಗೆಹರಿದರೆ ನನಗೂ ಸಂತೋಷವೇ&quot; ಎಂದು ಮಾತು ಮುಗಿಸಿರುವ ಪ್ರಜ್ವಲ್, ನಾಯಕ ನಟನ ಧ್ವನಿ ಇಲ್ಲದೆ ಸಿನಿಮಾ ರಿಲೀಸ್ ಆಗುವುದು ಹೇಗೆ ಎಂಬ ಪ್ರಶ್ನೆಗೆ, &quot;ಅದು ನನಗೂ ದೊಡ್ಡ ಡೌಟ್!&quot; ಎಂದು ಉತ್ತರಿಸಿರುವುದು ಚಿತ್ರದ ಭವಿಷ್ಯದ ಮೇಲೆ ಕುತೂಹಲ ಮೂಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/entertainment/prajwal-devaraj-clarifies-karavali-movie-trailer-voice-remuneration-dispute-san/articleshow-1nmquso"/>
        </item>
        <item>
            <title><![CDATA['ನಮ್‌ ಇಂಡಸ್ಟ್ರಿ ಯಾಕೆ ಉದ್ದಾರ ಆಗಲ್ಲ ಅಂದ್ರೆ ಇದೇ ಕಾರಣ..' ಕರಾವಳಿ ವೇದಿಕೆಯಲ್ಲೇ ರಾಜ್‌ ಬಿ ಶೆಟ್ಟಿ ಕಿಡಿಕಿಡಿ]]></title>
            <link>https://kannada.asianetnews.com/sandalwood/raj-b-shetty-slams-prajwal-devaraj-karavali-trailer-launch-controversy-san/articleshow-4w725ku</link>
            <guid isPermaLink="true">https://kannada.asianetnews.com/sandalwood/raj-b-shetty-slams-prajwal-devaraj-karavali-trailer-launch-controversy-san/articleshow-4w725ku</guid>
            <pubDate>Tue, 07 Jul 2026 19:08:16 +0530</pubDate>
            <description><![CDATA[&lt;p&gt;'ಕರಾವಳಿ' ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳ ಪ್ರತಿಭಟನೆಯಿಂದ ವಿವಾದ ಭುಗಿಲೆದ್ದಿದೆ. ಈ ಕುರಿತು ಮಾತನಾಡಿದ ನಟ ರಾಜ್ ಬಿ. ಶೆಟ್ಟಿ, ಚಿತ್ರತಂಡದ ವಿರುದ್ಧದ ಪಿತೂರಿ ಹಾಗೂ ಪ್ರಜ್ವಲ್ ದೇವರಾಜ್ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwycq84y0atc8qjxv0s0qyb9,imgname-raj-b-shetty-slams-prajwal-devaraj-1783431405726.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7):&lt;/strong&gt; ಸ್ಯಾಂಡಲ್&zwnj;ವುಡ್&zwnj;ನ ಬಹುನಿರೀಕ್ಷಿತ ಸಿನಿಮಾ ಕರಾವಳಿಯ ವಿವಾದ ದೊಡ್ಡದಾಗುವ ಲಕ್ಷಣ ಕಂಡಿದೆ. ಮಂಗಳವಾರ ಸಿನಿಮಾದ ಟ್ರೇಲರ್&zwnj; ಬಿಡುಗಡೆ ಸಮಾರಂಭದಲ್ಲಿ ಸಿನಿಮಾದ ಟ್ರೇಲರ್&zwnj;ನಲ್ಲಿ ಪ್ರಜ್ವಲ್&zwnj; ದೇವರಾಜ್&zwnj; ಅವರ ವಾಯ್ಸ್&zwnj; ಇಲ್ಲ ಎನ್ನುವ ಕಾರಣ ನೀಡಿ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಈ ಸಿನಿಮಾದ ಒಂದೊಂದೆ ವಿವಾದಗಳು ಹೊರಬರಲು ಆರಂಭಿಸಿದೆ. ಇನ್ನೊಂದೆಡೆ ಇದೇ ಸಿನಿಮಾದಲ್ಲಿ ನಟಿಸಿರುವ ಸ್ಯಾಂಡಲ್&zwnj;ವುಡ್&zwnj;ನ ಪ್ರಖ್ಯಾತ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ (Raj B Shetty) ಹೀರೊ ಪ್ರಜ್ವಲ್ ದೇವರಾಜ್ ಅವರ ನಡೆ ಹಾಗೂ ಚಿತ್ರತಂಡದ ವಿರುದ್ಧ ನಡೆಯುತ್ತಿರುವ ಪಿತೂರಿಗಳ ವಿರುದ್ಧ ಬಹಿರಂಗವಾಗಿ ಗುಡುಗಿದ್ದಾರೆ. &quot;ನಮ್ಮ ಇಂಡಸ್ಟ್ರಿ ಯಾಕೆ ಉದ್ಧಾರ ಆಗಲ್ಲ ಅಂತ ಜನ ಕೇಳ್ತಾರಲ್ಲ, ಅದಕ್ಕೆ ನಮ್ಮಲ್ಲಿ ಸಹಯೋಗ ಮನೋಭಾವ ಇಲ್ಲದಿರುವುದೇ ಕಾರಣ ಎಂದು ಭಾವುಕರಾಗುತ್ತಲೇ ತೀಕ್ಷ್ಣವಾಗಿ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ನಡೆದ &lsquo;ಕರಾವಳಿ&rsquo; ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಂಟಾದ ಗದ್ದಲ ಹಾಗೂ ಪ್ರಜ್ವಲ್ ದೇವರಾಜ್ ಅವರ ಮುನಿಸಿನ ಕುರಿತು ರಾಜ್ ಬಿ. ಶೆಟ್ಟಿ ಮಾಧ್ಯಮಗಳ ಮುಂದೆ ಅದೇ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;h2&gt;&lt;strong&gt;ಮನುಷ್ಯರಂತೆ ಮಾತನಾಡಿದರೆ ಮಾತ್ರ ನಾನೂ ಕೂತು ಚರ್ಚಿಸುತ್ತೇನೆ!&lt;/strong&gt;&lt;/h2&gt;&lt;p&gt;ಪ್ರಜ್ವಲ್ ದೇವರಾಜ್ ಅಸಮಾಧಾನದ ಕುರಿತು ಮಾತನಾಡಿದ ರಾಜ್, &quot;ನನಗೆ ಯಾರ ಜೊತೆಯೂ ಪೈಪೋಟಿ ಇಲ್ಲ. ಅವರ ಮನಸ್ಸಿನಲ್ಲಿ ನನ್ನ ಮೇಲೆ ಏನಾದರೂ ಕೋಪ ಅಥವಾ ಮುನಿಸಿದ್ದರೆ, ನಾನು ಅವರ ಜೊತೆ ಕೂತು ಮಾತನಾಡಲು ಸಿದ್ಧನಿದ್ದೇನೆ. ಆದರೆ, ಅವರು ಮನುಷ್ಯರ ತರಹ ಬಂದು ಮಾತನಾಡಿದರೆ ಮಾತ್ರ ನಾನು ಚರ್ಚಿಸುತ್ತೇನೆ. ಎಲ್ಲದಕ್ಕಿಂತ ಮನುಷ್ಯತ್ವ ಮುಖ್ಯ. ಇಡೀ ಭಾರತವೇ ತಿರುಗಿ ನೋಡುವಂತಹ ಅದ್ಭುತ ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ದೇವೆ. ಇಂತಹ ಸಮಯದಲ್ಲಿ ನಾವು ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ಮಾತನಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ&quot; ಎಂದಿದ್ದಾರೆ.&lt;/p&gt;&lt;p&gt;ರಾಜ್ ಬಿ ಶೆಟ್ಟಿ ಚಿತ್ರಕ್ಕೆ ಬಂದಿದ್ದರಿಂದ ಪ್ರಜ್ವಲ್ ಮುನಿಸಿಕೊಂಡಿದ್ದಾರೆ ಎಂಬ ಗಾಂಧಿನಗರದ ಗಾಸಿಪ್&zwnj;ಗೆ ಉತ್ತರಿಸಿದ ರಾಜ್, &quot;ಈ ಸಿನಿಮಾದಲ್ಲಿ ನಾನೊಂದು ಮುಖ್ಯವಾದ ಅತಿಥಿ ಪಾತ್ರ (Cameo) ಮಾಡುತ್ತಿದ್ದೇನಷ್ಟೇ. ಇದರ ಪೋಸ್ಟರ್, ಟೈಟಲ್ ಎಲ್ಲದರಲ್ಲೂ ಪ್ರಜ್ವಲ್ ಅವರ ಹೆಸರೇ ಮುಂಚೂಣಿಯಲ್ಲಿದೆ ಮತ್ತು ಅದು ನನಗೆ ಮೊದಲೇ ಗೊತ್ತಿತ್ತು. ನಾನು ಈ ಪಾತ್ರಕ್ಕೆ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ. ನನಗಿಂತ ದೊಡ್ಡ ನಟರೊಬ್ಬರು ಈ ಪಾತ್ರ ಮಾಡಬೇಕಿತ್ತು, ಕಾರಣಾಂತರಗಳಿಂದ ಅವರು ಬರದೇ ಇದ್ದಾಗ ಕೊನೆಯಲ್ಲಿ ನಾನು ಬಂದೆ. ಇದು ಬರವಣಿಗೆಯಲ್ಲೇ ಇದ್ದ ಪಾತ್ರ, ಯಾರದ್ದೋ ಜಾಗ ಕಿತ್ತುಕೊಳ್ಳಲು ನಾನು ಬಂದಿಲ್ಲ&quot; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಿನಿಮಾ ನನಗಿಂತ ದೊಡ್ಡದು, ಕಟೌಟ್ ಸಂಸ್ಕೃತಿ ನನಗಿಲ್ಲ!&lt;/strong&gt;&lt;/h2&gt;&lt;p&gt;ತಮ್ಮ ಸಿನಿಪ್ರಯಾಣದ ಶಿಸ್ತನ್ನು ನೆನಪಿಸಿದ ರಾಜ್, &quot;ನಾನು ಮೂಲತಃ ಒಬ್ಬ ತಂತ್ರಜ್ಞ (Technician). ಒಂಬತ್ತನೇ ಕ್ಲಾಸಿನಲ್ಲಿ ಕುಂದಾಪುರದಿಂದ ಮನೆ ಬಿಟ್ಟು ಓಡಿಬಂದ ಹುಡುಗ ಇವತ್ತು ಇಷ್ಟು ದೊಡ್ಡ ಸಿನಿಮಾ ಮಾಡಿದ್ದಾನೆಂದರೆ ಅದರ ಹಿಂದೆ ಎಷ್ಟು ಶ್ರಮವಿದೆ ಎಂದು ನನಗೆ ಗೊತ್ತು. ಸಿನಿಮಾ ಎನ್ನುವುದು ನನಗಿಂತ ತುಂಬಾ ದೊಡ್ಡದು. ನನ್ನ ಹೆಸರು ಪೋಸ್ಟರ್&zwnj;ನಲ್ಲಿ ಹಾಕದಿದ್ದರೂ ಯಾರೂ ನನ್ನ ಸಿನಿಮಾ ನೋಡಲು ಬರಲ್ಲ ಅಂತ ನಾನು ಗ್ಯಾರೆಂಟಿ ಕೊಡಬಲ್ಲೆ. ನಾನು ಈ ಹಿಂದೆ ಖಳನಾಯಕನಾಗಿ, ಕಾಮಿಡಿ ಪಾತ್ರದಲ್ಲೂ ನಟಿಸಿದ್ದೇನೆ. ಎಲ್ಲೂ ನನ್ನ ಕಟೌಟ್ ಹಾಕಿ ಅಂತಾಗಲಿ, ಪೋಸ್ಟರ್&zwnj;ನಲ್ಲಿ ಹೆಸರು ದೊಡ್ಡದಾಗಿ ಹಾಕಿ ಅಂತಾಗಲಿ ಕೇಳಿಲ್ಲ, ಕೇಳುವುದೂ ಇಲ್ಲ. ಹಾಗೇನಾದರೂ ನಾನು ಮಾಡಿದರೆ ಅಂದೇ ಚಿತ್ರರಂಗ ಬಿಡುತ್ತೇನೆ&quot; ಎಂದು ಕಟುವಾಗಿ ನುಡಿದಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಜ್ವಲ್ ದೊಡ್ಡ ಸ್ಟಾರ್ ಆಗಲಿ, ನನಗೆ ಖುಷಿಯೇ!&lt;/strong&gt;&lt;/h2&gt;&lt;p&gt;ಚಿತ್ರದ ಇತರ ಸಹನಟರಾದ ಮಿತ್ರ ಹಾಗೂ ಶ್ರೀಧರ್ ಅವರ ಶ್ರಮವನ್ನು ಕೊಂಡಾಡಿದ ರಾಜ್, &quot;ಮಿತ್ರ ಸರ್, ಶ್ರೀಧರ್ ಸರ್ ಅವರಂತಹ ಅದ್ಭುತ ಕಲಾವಿದರು ಪೋಸ್ಟರ್&zwnj;ನಲ್ಲಿ ತಮ್ಮ ಹೆಸರಿಲ್ಲ ಎಂದು ಎಂದಾದರೂ ಗಲಾಟೆ ಮಾಡಿದ್ದಾರೆಯೇ? ಅವರಿಗಿಂತ ದೊಡ್ಡ ನಟನಾ ನಾನು? ಈ ಸಿನಿಮಾದ ಮೂಲಕ ಪ್ರಜ್ವಲ್ ದೇವರಾಜ್ ಅವರಿಗೆ ಅತಿ ದೊಡ್ಡ ಹೆಸರು ಬಂದರೆ ಎಲ್ಲರಿಗಿಂತ ಹೆಚ್ಚು ಖುಷಿ ಪಡುವವನು ನಾನು. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ದೊಡ್ಡ ಸ್ಟಾರ್ ಸಿಗಲಿ. ಹಾಗೆಯೇ ಮಿತ್ರ ಸರ್ ಅವರಂತಹ ಕಲಾವಿದರಿಗೆ ಗೌರವ ಸಿಗಲಿ. ಕರಾವಳಿ ಸಿನಿಮಾದ ಗುಣಮಟ್ಟ (Quality) ನೋಡಿ ಮಾತನಾಡಿ, ಅಹಂಕಾರ, ಜಗಳಗಳನ್ನು ಬಿಟ್ಟುಬಿಡಿ&quot; ಎಂದು ಚಿತ್ರರಂಗದ ಮನಸ್ಥಿತಿಗೆ ರಾಜ್ ಬಿ. ಶೆಟ್ಟಿ ಕನ್ನಡಿ ಹಿಡಿದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/sandalwood/raj-b-shetty-slams-prajwal-devaraj-karavali-trailer-launch-controversy-san/articleshow-4w725ku"/>
        </item>
        <item>
            <title><![CDATA[ಸ್ಯಾಂಡಲ್‌ವುಡ್‌ ಕರಾವಳಿಯಲ್ಲಿ ಫುಲ್‌ 'ವರಿ', ಪ್ರಜ್ವಲ್‌ ದೇವರಾಜ್‌ ವೈಮನಸ್ಯಕ್ಕೆ ಹಣವೊಂದೇ ಕಾರಣವೇ?]]></title>
            <link>https://kannada.asianetnews.com/sandalwood/karavali-kannada-movie-controversy-prajwal-devaraj-raj-b-shetty-guruduth-ganiga-san/articleshow-qeuerfp</link>
            <guid isPermaLink="true">https://kannada.asianetnews.com/sandalwood/karavali-kannada-movie-controversy-prajwal-devaraj-raj-b-shetty-guruduth-ganiga-san/articleshow-qeuerfp</guid>
            <pubDate>Tue, 07 Jul 2026 18:46:22 +0530</pubDate>
            <description><![CDATA[&lt;p&gt;'ಕರಾವಳಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಸಂಭಾವನೆ ವಿಚಾರವಾಗಿ ನಾಯಕ ಪ್ರಜ್ವಲ್ ದೇವರಾಜ್ ಮತ್ತು ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಈ ಒಳಜಗಳವು ಚಿತ್ರದ ಡಬ್ಬಿಂಗ್ ಮತ್ತು ನಿಗದಿತ ಬಿಡುಗಡೆಯ ಮೇಲೆ ಪರಿಣಾಮ ಬೀರಿದ್ದು, ಚಿತ್ರದ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwybew1ttn2e6zafm69pewyb,imgname-karavali-movie-controversy-1783430082618.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಜು.7): ಸ್ಯಾಂಡಲ್&zwnj;ವುಡ್&zwnj;ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ &lsquo;ಕರಾವಳಿ&rsquo; ಜುಲೈ 24 ರಂದು ತೆರೆಗೆ ಬರಲು ಸಜ್ಜಾಗಿದೆ. ಆದರೆ, ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡದ ಒಳಜಗಳ ಗಾಂಧಿನಗರದ ಬೀದಿಗೆ ಬಂದು ನಿಂತಿದೆ. ಇತ್ತೀಚೆಗೆ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಹೀರೊ ಪ್ರಜ್ವಲ್ ದೇವರಾಜ್ ಗೈರಾಗಿದ್ದು, ಸಿನಿಮಾದ ಟ್ರೇಲರ್&zwnj;ನಲ್ಲಿ ಅವರ ಧ್ವನಿಯೂ ಇಲ್ಲದ ಕಾರಣ ಕೆರಳಿದ ಅಭಿಮಾನಿಗಳು ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ಸಿನಿಮಾದ ಒಳಗಿನ ದೊಡ್ಡ ವಿವಾದವೊಂದು ಅಧಿಕೃತವಾಗಿ ಸ್ಫೋಟಗೊಂಡಿದೆ.&lt;/p&gt;&lt;p&gt;ಈ ಮುನಿಸಿಗೆ ಪ್ರಮುಖ ಕಾರಣ ಸಂಭಾವನೆ ಹಾಗೂ ಸಹಾಯಕರ ಭತ್ಯೆಯ ವಿಚಾರ ಅನ್ನೋದು ಗಾಂಧಿನಗರದ ಗಲ್ಲಿಗಳ ಮಾತು. ವಿವಿಧ ಮೂಲಗಳ ಪ್ರಕಾರ, ನಿರ್ದೇಶಕ ಹಾಗೂ ನಿರ್ಮಾಪಕ ಗುರುದತ್ ಗಾಣಿಗ ಅವರು ಪ್ರಜ್ವಲ್&zwnj;ಗೆ 1.25 ಕೋಟಿ ರೂ. ಸಂಭಾವನೆ ನಿಗದಿಪಡಿಸಿ, ಈಗಾಗಲೇ 1 ಕೋಟಿ ರೂಪಾಯಿ ಹಣವನ್ನು ಪಾವಿತಿಯೂ ಮಾಡಿದ್ದಾರೆ. ಉಳಿದ 25 ಲಕ್ಷ ರೂ.ಗಳನ್ನು ಡಬ್ಬಿಂಗ್ ಮುಗಿದ ನಂತರ ನೀಡುವುದಾಗಿ ಗಾಣಿಗ ಹೇಳಿದ್ದಾರೆ. ಆದರೆ, ಪ್ರಜ್ವಲ್ ತಮ್ಮ ಸಹಾಯಕರಿಗಾಗಿ ಹೆಚ್ಚುವರಿಯಾಗಿ 20 ಲಕ್ಷ ರೂ. ಭತ್ಯೆ ಮತ್ತು ಜಿಎಸ್&zwnj;ಟಿ ಮೊತ್ತವನ್ನು ಕೇಳುತ್ತಿದ್ದಾರೆ. ಇದಕ್ಕೆ ನಿರ್ಮಾಪಕರು ಒಪ್ಪದ ಕಾರಣ ಇಬ್ಬರ ನಡುವೆ ಹಣಕಾಸಿನ ದೊಡ್ಡ ಕಂದಕ ಸೃಷ್ಟಿಯಾಗಿದೆ ಎಂದು ಹೇಳಲಾಗಿದ.ೆ&lt;/p&gt;&lt;p&gt;ಮತ್ತೊಂದೆಡೆ, ಸಿನಿಮಾದ ಸ್ಟಾರ್ ಕಾಸ್ಟಿಂಗ್ ವಿಚಾರದಲ್ಲೂ ಅಸಮಾಧಾನದ ಹೊಗೆಯಾಡುತ್ತಿದೆ. ಚಿತ್ರದ ಕಥೆ ಒಪ್ಪಿಸುವಾಗ ಗುರುದತ್ ಗಾಣಿಗ ಅವರು ಬೇರೊಬ್ಬ ಪ್ರಮುಖ ಸ್ಟಾರ್ ನಟನನ್ನು ಕರೆತರುವುದಾಗಿ ಪ್ರಜ್ವಲ್&zwnj;ಗೆ ಭರವಸೆ ನೀಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಆ ನಟನ ಬದಲಿಗೆ ರಾಜ್ ಬಿ. ಶೆಟ್ಟಿ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಈ ದಿಢೀರ್ ಬದಲಾವಣೆ ಪ್ರಜ್ವಲ್&zwnj;ಗೆ ಇಷ್ಟವಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಮಾಧ್ಯಮಗಳ ಮುಂದೆ ಪ್ರಜ್ವಲ್ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕರಾವಳಿ ಸಿನಿಮಾದಲ್ಲಿ ರಾಜ್ ಬಿ. ಶೆಟ್ ನಟಿಸಿರುವುದರ ಟಿ ವಿರುದ್ಧ ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ರಿಲೀಸ್ ಡೇಟ್ ಫಿಕ್ಸ್; ಆದರೆ ಡಬ್ಬಿಂಗ್ ಸಸ್ಪೆನ್ಸ್!&lt;/p&gt;&lt;p&gt;ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಈ ಚಿತ್ರದ ವಿತರಣೆ ಜವಾಬ್ದಾರಿ ಹೊತ್ತಿರುವುದರಿಂದ ನಿಗದಿತ ದಿನದಂದೇ ಸಿನಿಮಾ ತರಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ಬಾಕಿ ಹಣ ಸಿಗುವವರೆಗೂ ಪ್ರಜ್ವಲ್ ಡಬ್ಬಿಂಗ್ ಮಾಡುವ ಸಾಧ್ಯತೆ ಕಡಿಮೆ. ಒಂದು ವೇಳೆ ಅವರ ಧ್ವನಿ ಇಲ್ಲದೆ ಬೇರೆಯವರಿಂದ ಡಬ್ ಮಾಡಿಸಿ ಸಿನಿಮಾ ರಿಲೀಸ್ ಮಾಡಲು ರೆಡಿಯಾಗಿದೆ. ಹಾಗೇನಾದರೂ ಪ್ರಜ್ವಲ್ ಕಾನೂನಾತ್ಮಕವಾಗಿ ಒಪ್ಪಿಗೆ ನೀಡದಿದ್ದರೆ, ಜುಲೈ 24 ರ ಬಿಡುಗಡೆ ಭಾಗ್ಯ ಅನುಮಾನ ಎನ್ನಲಾಗುತ್ತಿದೆ. ನಿರ್ದೇಶಕ ಗುರುದತ್ ಗಾಣಿಗ ಈ ಬಿಕ್ಕಟ್ಟನ್ನು ಹೇಗೆ ಬಗೆಹರಿಸುತ್ತಾರೆ ಎಂಬುದರ ಮೇಲೆ ಚಿತ್ರದ ಭವಿಷ್ಯ ನಿರ್ಧಾರವಾಗಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/sandalwood/karavali-kannada-movie-controversy-prajwal-devaraj-raj-b-shetty-guruduth-ganiga-san/articleshow-qeuerfp"/>
        </item>
        <item>
            <title><![CDATA['ಮಿಮಿ'ಗಾಗಿ ದಪ್ಪ ಆಗ್ತಿದ್ದಾಗಲೇ ಅಂಡಾಣು ಫ್ರೀಜ್ ಮಾಡಿಸಿದ್ದೆ: ಕೃತಿ ಸನೋನ್ ರಹಸ್ಯ ಇದೇನಾ?]]></title>
            <link>https://kannada.asianetnews.com/entertainment/kriti-sanon-on-egg-freezing-a-smart-decision-during-mimi-transformation-gvd/articleshow-sl5axbn</link>
            <guid isPermaLink="true">https://kannada.asianetnews.com/entertainment/kriti-sanon-on-egg-freezing-a-smart-decision-during-mimi-transformation-gvd/articleshow-sl5axbn</guid>
            <pubDate>Tue, 07 Jul 2026 18:17:43 +0530</pubDate>
            <description><![CDATA[&lt;p&gt;ಬಾಲಿವುಡ್&zwnj;ನ ಜನಪ್ರಿಯ ನಟಿ ಕೃತಿ ಸನೋನ್ ತಮ್ಮ ನೇರ ನುಡಿಗಳಿಗೆ ಹೆಸರುವಾಸಿ. ಇತ್ತೀಚೆಗೆ ಅವರ 'ಕಾಕ್&zwnj;ಟೇಲ್ 2' ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktxedw1jzpf898fz9tawqphp,imgname-kriti--9--1781252157490.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಕೃತಿ ಸನೋನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. 'ಮಿಮಿ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳುವ ಸಮಯದಲ್ಲಿ ತಾವು ತಮ್ಮ ಅಂಡಾಣುಗಳನ್ನು ಫ್ರೀಜ್ ಮಾಡಿಸಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ. ಈ ಚಿತ್ರದಲ್ಲಿ ಅವರು ಬಾಡಿಗೆ ತಾಯಿಯ ಪಾತ್ರ ಮಾಡಿದ್ದರು.&lt;/p&gt;&lt;p&gt;ಬಾಲಿವುಡ್&zwnj;ನ ಜನಪ್ರಿಯ ನಟಿ ಕೃತಿ ಸನೋನ್ ತಮ್ಮ ನೇರ ನುಡಿಗಳಿಗೆ ಹೆಸರುವಾಸಿ. ಇತ್ತೀಚೆಗೆ ಅವರ 'ಕಾಕ್&zwnj;ಟೇಲ್ 2' ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದರು. ಸದ್ಯ ಕೃತಿ ಸಾಲು ಸಾಲು ಸಂದರ್ಶನಗಳನ್ನು ನೀಡುತ್ತಿದ್ದು, ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಕೃತಿ ಸನೋನ್ ಎಗ್ ಫ್ರೀಸಿಂಗ್ ಬಗ್ಗೆ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಇತ್ತೀಚೆಗೆ 'ಹ್ಯೂಮನ್ಸ್ ಆಫ್ ಬಾಂಬೆ' ಜೊತೆಗಿನ ಸಂವಾದದಲ್ಲಿ, ಕೃತಿ ತಮ್ಮ ಅಭಿಮಾನಿಗಳಿಗೆ ಗೊತ್ತಿಲ್ಲದ ಒಂದು ಸೀಕ್ರೆಟ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೌದು, ತಾವು ತಮ್ಮ ಅಂಡಾಣುಗಳನ್ನು (eggs) ಫ್ರೀಜ್ ಮಾಡಿಸಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಇದೊಂದು 'ಸ್ಮಾರ್ಟ್' ನಿರ್ಧಾರವಾಗಿತ್ತು ಎಂದೂ ಹೇಳಿದ್ದಾರೆ. ಸಂದರ್ಶನದಲ್ಲಿ ನಿರೂಪಕರು 'ಮದುವೆ' ಮತ್ತು 'ಬಯೋಲಾಜಿಕಲ್ ಕ್ಲಾಕ್' ಬಗ್ಗೆ ಕೇಳಿದಾಗ, ಕೃತಿ ಈ ವಿಷಯವನ್ನು ಬಿಚ್ಚಿಟ್ಟರು.&lt;/p&gt;&lt;p&gt;'ನಾನು ಈ ವಿಷಯವನ್ನು ಮೊದಲ ಬಾರಿಗೆ ಹೇಳುತ್ತಿದ್ದೇನೆ. ನಾನು ನನ್ನ ಎಗ್ಸ್ ಫ್ರೀಜ್ ಮಾಡಿಸಿದ್ದೇನೆ. 'ಮಿಮಿ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳಬೇಕಿದ್ದ ಸಮಯದಲ್ಲಿ ನಾನು ಬಹಳ ಜಾಣತನದಿಂದ ಈ ಕೆಲಸ ಮಾಡಿದೆ. ಯಾಕಂದ್ರೆ, ಎಗ್ ಫ್ರೀಜಿಂಗ್ ಪ್ರಕ್ರಿಯೆಯಿಂದ ದೇಹ ಸ್ವಲ್ಪ ಊದಿಕೊಳ್ಳುತ್ತದೆ. ಆಗ ನಾನು ಹೇಗಿದ್ದರೂ ತೂಕ ಹೆಚ್ಚಿಸಿಕೊಳ್ಳುತ್ತಿದ್ದೆ. ಹೀಗಾಗಿ ಇದೇ ಸರಿಯಾದ ಸಮಯ ಅಂತ ತೀರ್ಮಾನಿಸಿದೆ. ನಿಮಗೆ ನೀವೇ ಕೊಟ್ಟುಕೊಳ್ಳಬಹುದಾದ ಅತ್ಯುತ್ತಮ ಉಡುಗೊರೆ ಇದು ಅಂತ ಯಾರೋ ನನಗೆ ಹೇಳಿದ್ದರು. ಅದು ನನ್ನ ಮನಸ್ಸಿನಲ್ಲಿ ಉಳಿದಿತ್ತು' ಎಂದು ಕೃತಿ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;'ಮಿಮಿ' ಸಿನಿಮಾ ಬಗ್ಗೆ&lt;/strong&gt;&lt;/p&gt;&lt;p&gt;ಕೃತಿ ವೃತ್ತಿಜೀವನದಲ್ಲಿ 'ಮಿಮಿ' ಬಹಳ ವಿಶೇಷವಾದ ಸಿನಿಮಾ. 2021ರಲ್ಲಿ ತೆರೆಕಂಡ ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದರು. ಬಾಡಿಗೆ ತಾಯ್ತನ ಮತ್ತು ಮಾತೃತ್ವದ ಕಥಾಹಂದರ ಹೊಂದಿದ್ದ ಈ ಚಿತ್ರದ ಅಭಿನಯಕ್ಕಾಗಿ ಕೃತಿಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು.&lt;/p&gt;&lt;h2&gt;&lt;strong&gt;ವೈಯಕ್ತಿಕ ಜೀವನ&lt;/strong&gt;&lt;/h2&gt;&lt;p&gt;ಇನ್ನು ಕೃತಿ ಸನೋನ್ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬಂದರೆ, ಅವರು ಲಂಡನ್ ಮೂಲದ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಸದ್ಯಕ್ಕೆ ಅವರು ತಮ್ಮ ಮುಂದಿನ ಯಾವುದೇ ಪ್ರಾಜೆಕ್ಟ್ ಬಗ್ಗೆ ಘೋಷಣೆ ಮಾಡಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kriti-sanon-on-egg-freezing-a-smart-decision-during-mimi-transformation-gvd/articleshow-sl5axbn"/>
        </item>
        <item>
            <title><![CDATA['ಭರವಸೆ ಕಳೆದುಕೊಳ್ಳಬೇಡ, ನಾನಿದ್ದೇನೆ': ಕೃಷಿ ತಾಪಂಡಗೆ ಧೈರ್ಯ ತುಂಬಿದ ರಾಧಾ ರಮಣ ನಟಿ]]></title>
            <link>https://kannada.asianetnews.com/sandalwood/radha-ramana-actress-kavya-gowda-emotional-message-to-krishi-thapanda-gvd/articleshow-8byut0m</link>
            <guid isPermaLink="true">https://kannada.asianetnews.com/sandalwood/radha-ramana-actress-kavya-gowda-emotional-message-to-krishi-thapanda-gvd/articleshow-8byut0m</guid>
            <pubDate>Tue, 07 Jul 2026 17:30:01 +0530</pubDate>
            <description><![CDATA[&lt;p&gt;ಇತ್ತೀಚೆಗೆ ಕೃಷಿ ತಾಪಂಡ, &quot;ಈಗ ನಾನು ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ, ಅದರ ಜೊತೆಗೆ ಬದುಕುವುದನ್ನು ಕಲಿತಿದ್ದೇನೆ&quot; ಎಂದು ಹೃದಯ ಮುರಿದಿರುವ ಎಮೋಜಿಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy75cwbf01dgf1m90zzjg7p,imgname-ch-1783425577867.png" type="image/jpeg" height="390" width="690"/>
            <content:encoded><![CDATA[&lt;p&gt;ಆತ್ಮೀಯ ಗೆಳೆಯ ವೈಶಾಖ್ ಅಗಲಿಕೆಯ ನೋವಿನಿಂದ ಇನ್ನೂ ಹೊರಬರಲಾಗದ ನಟಿ ಕೃಷಿ ತಾಪಂಡ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಭಾವುಕ ಪೋಸ್ಟ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದರು. ತಮ್ಮ ಮನಸ್ಥಿತಿಯನ್ನು ತೆರೆದಿಟ್ಟಿದ್ದ ನಟಿಗೆ ಇದೀಗ ಸ್ನೇಹಿತರು, ಅಭಿಮಾನಿಗಳು ಹಾಗೂ ಚಿತ್ರರಂಗದ ಹಲವರು ಧೈರ್ಯ ತುಂಬುತ್ತಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಕೃಷಿ ತಾಪಂಡ, &quot;ಈಗ ನಾನು ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ, ಅದರ ಜೊತೆಗೆ ಬದುಕುವುದನ್ನು ಕಲಿತಿದ್ದೇನೆ&quot; ಎಂದು ಹೃದಯ ಮುರಿದಿರುವ ಎಮೋಜಿಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದರು. ಈ ಸಾಲುಗಳು ಅವರ ಮನದಾಳದ ನೋವನ್ನು ಪ್ರತಿಬಿಂಬಿಸುತ್ತಿದ್ದರಿಂದ, ಸಾವಿರಾರು ಅಭಿಮಾನಿಗಳು ಕಾಮೆಂಟ್&zwnj;ಗಳ ಮೂಲಕ ಸಾಂತ್ವನ ಹೇಳಿ ಬೆಂಬಲ ಸೂಚಿಸಿದ್ದರು.&lt;/p&gt;&lt;p&gt;&lt;strong&gt;ರಾಧಾ ರಮಣ ನಟಿ ಕಾವ್ಯ ಗೌಡ ಭಾವುಕ ಸಂದೇಶ&lt;/strong&gt;&lt;/p&gt;&lt;p&gt;ಕಿರುತೆರೆ ನಟಿ ಕಾವ್ಯ ಗೌಡ ಕೂಡ ಕೃಷಿ ತಾಪಂಡ ಅವರ ಪೋಸ್ಟ್&zwnj;ಗೆ ಪ್ರತಿಕ್ರಿಯಿಸಿ, ಧೈರ್ಯ ತುಂಬುವ ಸಂದೇಶ ಬರೆದಿದ್ದಾರೆ. &quot;ಕೃಷಿ, ಈಗ ಎಲ್ಲವೂ ತುಂಬಾ ಭಾರವಾಗಿ ಅನಿಸುತ್ತಿದೆ ಎಂಬುದು ನನಗೆ ಗೊತ್ತು. ಆದರೆ ಕಷ್ಟದ ದಿನಗಳು ಶಾಶ್ವತವಲ್ಲ. ಸಮಯದೊಂದಿಗೆ ಎಲ್ಲವೂ ನಿಧಾನವಾಗಿ ಬದಲಾಗುತ್ತದೆ. ಧೈರ್ಯವಾಗಿ ಮುಂದೆ ಹೆಜ್ಜೆ ಇಡು. ಮೊದಲಿಗೆ ನಿನ್ನ ಬಗ್ಗೆ ನೀನೇ ಕಾಳಜಿ ವಹಿಸು,&quot; ಎಂದು ಅವರು ಬರೆದಿದ್ದಾರೆ.&lt;/p&gt;&lt;p&gt;ಮುಂದುವರಿದು, &quot;ಹೀಲಿಂಗ್ ಎನ್ನುವುದು ಒಂದೇ ದಿನದಲ್ಲಿ ಆಗುವುದಿಲ್ಲ. ಆದರೆ ಮುಂದೆ ಇಡುವ ಪ್ರತಿಯೊಂದು ಸಣ್ಣ ಹೆಜ್ಜೆಯೂ ಬಹಳ ಮಹತ್ವದ್ದು. ಭರವಸೆ ಕಳೆದುಕೊಳ್ಳಬೇಡ. ನೀನು ತುಂಬಾ ಗಟ್ಟಿಯಾದ ವ್ಯಕ್ತಿ. ಮಾತನಾಡಬೇಕು ಅನಿಸಿದಾಗ ನಾನು ಯಾವಾಗಲೂ ನಿನ್ನ ಜೊತೆಯಲ್ಲಿದ್ದೇನೆ. ಸಮಯವೇ ಎಲ್ಲ ಗಾಯಗಳಿಗೂ ಉತ್ತರ ನೀಡುತ್ತದೆ. ಸಾಯಿ ರಾಮ್,&quot; ಎಂದು ಕಾವ್ಯ ಗೌಡ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h2&gt;&lt;strong&gt;ಕಾವ್ಯ ಗೌಡಗೆ ಮೆಚ್ಚುಗೆ&lt;/strong&gt;&lt;/h2&gt;&lt;p&gt;ಕಾವ್ಯ ಗೌಡ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಅಭಿಮಾನಿಗಳು ಅವರ ಸಂವೇದನಾಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಸ್ನೇಹಿತೆಯ ಪರವಾಗಿ ನಿಂತು ಧೈರ್ಯ ತುಂಬಿದ ಕಾವ್ಯ ಗೌಡ ಅವರ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದು, ಕೃಷಿ ತಾಪಂಡ ಕೂಡ ಈ ನೋವಿನ ಸಮಯವನ್ನು ಧೈರ್ಯದಿಂದ ಎದುರಿಸಲಿ ಎಂದು ಹಾರೈಸುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/radha-ramana-actress-kavya-gowda-emotional-message-to-krishi-thapanda-gvd/articleshow-8byut0m"/>
        </item>
        <item>
            <title><![CDATA[ರಿಷಬ್ ಶೆಟ್ಟಿ ನೆರವಿನಿಂದ ಬದಲಾದ ಬದುಕು: ಗ್ರಾಮಸ್ಥರಿಂದ ಕಣ್ಣೀರಿನ ಕೃತಜ್ಞತೆ, ವಿಡಿಯೋ ವೈರಲ್]]></title>
            <link>https://kannada.asianetnews.com/sandalwood/rishab-shetty-birthday-students-thank-foundation-video-goes-viral-gvd/articleshow-ofrn8h4</link>
            <guid isPermaLink="true">https://kannada.asianetnews.com/sandalwood/rishab-shetty-birthday-students-thank-foundation-video-goes-viral-gvd/articleshow-ofrn8h4</guid>
            <pubDate>Tue, 07 Jul 2026 17:02:42 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಸಿನಿ ತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy5jpf5xvndg6wr4nbs2cnv,imgname-gnk-1783423916517.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಸಿನಿ ತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಫೌಂಡೇಶನ್ ಬಿಡುಗಡೆ ಮಾಡಿರುವ ವಿಶೇಷ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದೆ.&lt;/p&gt;&lt;p&gt;ಸಿನಿಮಾಗಳ ಮೂಲಕ ಮಾತ್ರವಲ್ಲ, ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ, ತಮ್ಮ ಫೌಂಡೇಶನ್ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಾ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಈ ನೆರವಿನಿಂದ ಬದುಕು ಬದಲಾಗಿರುವ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ವಿಡಿಯೋದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ನಟನಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;&lt;p&gt;&lt;strong&gt;&quot;ರಿಷಬ್ ಸರ್ ನೆರವಿಲ್ಲದಿದ್ದರೆ ನನ್ನ ಓದು ನಿಂತು ಹೋಗುತ್ತಿತ್ತು&quot;&lt;/strong&gt;&lt;/p&gt;&lt;p&gt;ವಿಡಿಯೋದಲ್ಲಿ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು, &quot;ಒಂದೂವರೆ ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡೆವು. ಮನೆಯ ಸಂಪೂರ್ಣ ಜವಾಬ್ದಾರಿ ತಾಯಿಯ ಮೇಲಿತ್ತು. ಅಂತಹ ಕಷ್ಟದ ಸಮಯದಲ್ಲಿ ರಿಷಬ್ ಶೆಟ್ಟಿ ಸರ್ ನೀಡಿದ ವಿದ್ಯಾರ್ಥಿವೇತನ ನನ್ನ ಶಿಕ್ಷಣ ಮುಂದುವರಿಸಲು ದೊಡ್ಡ ಆಸರೆಯಾಯಿತು&quot; ಎಂದು ಭಾವುಕರಾಗಿ ಹೇಳಿದ್ದಾಳೆ.&lt;/p&gt;&lt;p&gt;ಇನ್ನೊಬ್ಬ ಪೋಷಕರು, &quot;ಮಕ್ಕಳ ಶಾಲಾ ಶುಲ್ಕ ಕಟ್ಟುವುದೇ ನಮಗೆ ದೊಡ್ಡ ಸವಾಲಾಗಿತ್ತು. ಅವರಿಗೆ ಇಷ್ಟಪಟ್ಟ ಶಿಕ್ಷಣ ಕೊಡಲು ಸಾಧ್ಯವಾಗುತ್ತಿರಲಿಲ್ಲ. ರಿಷಬ್ ಶೆಟ್ಟಿ ಫೌಂಡೇಶನ್&zwnj;ನ ಸಹಾಯ ನಮ್ಮ ಕುಟುಂಬಕ್ಕೆ ಹೊಸ ಭರವಸೆ ನೀಡಿತು&quot; ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಗ್ರಾಮಸ್ಥರೂ ನಟನ ಸಾಮಾಜಿಕ ಕಾಳಜಿಯನ್ನು ಕೊಂಡಾಡಿದ್ದು, &quot;ತಾವೊಬ್ಬರೇ ಬೆಳೆಯದೇ, ತಮ್ಮ ಊರಿನ ಮಕ್ಕಳ ಭವಿಷ್ಯಕ್ಕೂ ಬೆಳಕು ನೀಡುತ್ತಿದ್ದಾರೆ. ಅವರ ಸಹಾಯ ಅನೇಕ ಕುಟುಂಬಗಳ ಬದುಕು ಬದಲಿಸಿದೆ&quot; ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಕೆಲವರು ಮಾತನಾಡುವ ವೇಳೆ ಭಾವುಕರಾಗಿರುವ ದೃಶ್ಯಗಳೂ ವಿಡಿಯೋದಲ್ಲಿವೆ.&lt;/p&gt;&lt;p&gt;&lt;strong&gt;&quot;ಒಂದು ಸಣ್ಣ ಒಳ್ಳೆಯ ಕಾರ್ಯ, ನಾಳೆಯ ಉಜ್ವಲ ಸಮಾಜ&quot;&lt;/strong&gt;&lt;/p&gt;&lt;p&gt;ವಿಡಿಯೋದೊಂದಿಗೆ ಫೌಂಡೇಶನ್ ಮಹತ್ವದ ಸಂದೇಶವನ್ನೂ ಹಂಚಿಕೊಂಡಿದೆ. &quot;ಶಿಕ್ಷಣವು ಕೇವಲ ಜೀವನ ಬದಲಿಸುವುದಲ್ಲ, ಭವಿಷ್ಯ ರೂಪಿಸುವ ಶಕ್ತಿ ಹೊಂದಿದೆ. ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಗೂ ಕನಸು ಕಾಣುವ ಅವಕಾಶ ಸಿಗಬೇಕು ಎಂಬ ನಂಬಿಕೆಯಿಂದ ವಿದ್ಯಾರ್ಥಿವೇತನ ಯೋಜನೆ ನಡೆಸುತ್ತಿದ್ದೇವೆ. ಪ್ರತಿಯೊಂದು ನೆರವೂ ಉಜ್ವಲ ಭವಿಷ್ಯ ಮತ್ತು ಉತ್ತಮ ಸಮಾಜದತ್ತ ನಮ್ಮ ಸಣ್ಣ ಹೆಜ್ಜೆಯಾಗಿದೆ&quot; ಎಂದು ತಿಳಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, &quot;ರಿಯಲ್ ಹೀರೋ&quot;, &quot;ಮಾನವೀಯತೆಗೆ ಮತ್ತೊಂದು ಹೆಸರು ರಿಷಬ್ ಶೆಟ್ಟಿ&quot;, &quot;ಇದೇ ನಿಜವಾದ ಸ್ಟಾರ್&zwnj;ಡಮ್&quot; ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಹುಟ್ಟುಹಬ್ಬದ ಶುಭಾಶಯ ಕೋರಿ, ಅವರ ಮುಂದಿನ ಸಿನಿಮಾಗಳಿಗಾಗಿ ಕಾತರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮುಂದಿನ ಸಿನಿಮಾಗಳಲ್ಲಿ ರಿಷಬ್ ಬ್ಯುಸಿ&lt;/strong&gt;&lt;/h2&gt;&lt;p&gt;ಸಿನಿಮಾ ವಿಚಾರಕ್ಕೆ ಬಂದರೆ, ರಿಷಬ್ ಶೆಟ್ಟಿ ಹಲವು ಬಹುನಿರೀಕ್ಷಿತ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್&zwnj;ಗಳ ಬಗ್ಗೆ ಸಿನಿಪ್ರಿಯರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದ್ದು, ನಟನ ಹೊಸ ಅವತಾರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Rishab ShettyFoundation (@rishabshettyfoundation)&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/rishab-shetty-birthday-students-thank-foundation-video-goes-viral-gvd/articleshow-ofrn8h4"/>
        </item>
        <item>
            <title><![CDATA[OTT Releases This Month: ಲವ್‌ಸ್ಟೋರಿ, ಸಸ್ಪೆನ್ಸ್‌, ಫೀಲ್‌ ಗುಡ್‌ ಸಿನಿಮಾಗಳಿವು.. ವೀಕ್ಷಕರಿಗಂತೂ ಹಬ್ಬ..!]]></title>
            <link>https://kannada.asianetnews.com/gallery/sandalwood/ott-netflix-movie-release-this-month-july-2026-top-web-series-ux8uoho</link>
            <guid isPermaLink="true">https://kannada.asianetnews.com/gallery/sandalwood/ott-netflix-movie-release-this-month-july-2026-top-web-series-ux8uoho</guid>
            <pubDate>Tue, 07 Jul 2026 15:02:14 +0530</pubDate>
            <description><![CDATA[&lt;p&gt;Top 10 Netflix movies 2026: ಜುಲೈ ತಿಂಗಳಿನಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್&zwnj; ಆಗಿವೆ. ಲವ್&zwnj;ಸ್ಟೋರಿ, ಸಸ್ಪೆನ್ಸ್&zwnj; ಥ್ರಿಲ್ಲರ್&zwnj;, ಡ್ರಾಮಾ, ಆಕ್ಷನ್&zwnj; ಸಿನಿಮಾಗಳು ಪ್ರಸಾರ ಆಗಿವೆ. ಹಾಗಾದರೆ ಯಾವ ಸಿನಿಮಾಗಳು ರಿಲೀಸ್&zwnj; ಆಗಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxybnv4y0b1b5patt4zs37e,imgname-new-project---2026-07-07t144420.163-1783416346468.jpg" type="image/jpeg" height="390" width="690"/>
            <content:encoded><![CDATA[&lt;p&gt;Top 10 Netflix movies 2026: ಜುಲೈ ತಿಂಗಳಿನಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್&zwnj; ಆಗಿವೆ. ಲವ್&zwnj;ಸ್ಟೋರಿ, ಸಸ್ಪೆನ್ಸ್&zwnj; ಥ್ರಿಲ್ಲರ್&zwnj;, ಡ್ರಾಮಾ, ಆಕ್ಷನ್&zwnj; ಸಿನಿಮಾಗಳು ಪ್ರಸಾರ ಆಗಿವೆ. ಹಾಗಾದರೆ ಯಾವ ಸಿನಿಮಾಗಳು ರಿಲೀಸ್&zwnj; ಆಗಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;img&gt;&lt;p&gt;ತಮಿಳು ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ.&lt;/p&gt;&lt;p&gt;&quot;ಆ್ಯಕ್ಷನ್ ಕಿಂಗ್&quot; ಅರ್ಜುನ್ ಸರ್ಜಾ, ಅಭಿರಾಮಿ ಮತ್ತು ಪ್ರೀತಿ ಮುಕುಂದನ್.&lt;/p&gt;&lt;p&gt;ಮಾರ್ಷಲ್ ಆರ್ಟ್ಸ್ ಪರಿಣಿತ ಮಧ್ಯಮ ವರ್ಗದ ಕುಟುಂಬವೊಂದು ಕ್ರೂರ ಕಾರ್ಪೊರೇಟ್ ಮಾಫಿಯಾ ಎದುರು ನಡೆಸುವ ಹೋರಾಟ. ಮಹಿಳಾ ಪಾತ್ರಗಳ ರೋಮಾಂಚಕ ಸಾಹಸ ದೃಶ್ಯಗಳು ಇದರ ಹೈಲೈಟ್.&lt;/p&gt;&lt;img&gt;&lt;p&gt;ನೆಟ್&zwnj;ಫ್ಲಿಕ್ಸ್&zwnj;ನ ಜನಪ್ರಿಯ ಲೈವ್-ಆ್ಯಕ್ಷನ್ ಫ್ಯಾಂಟಸಿ ಸರಣಿ. ಮುಖ್ಯ ಪಾತ್ರಧಾರಿ 'ಆಂಗ್' ತನ್ನ ಸ್ನೇಹಿತರೊಂದಿಗೆ ಸೇರಿ ಮಣ್ಣಿನ ತತ್ವವನ್ನು (Earthbending) ಕರಗತ ಮಾಡಿಕೊಳ್ಳಲು ಸಾಗುವ ರೋಮಾಂಚಕ ಸಾಹಸದ ಪ್ರಯಾಣ.&lt;/p&gt;&lt;img&gt;&lt;p&gt;ಬಾಲಿವುಡ್ ಮಾಸ್ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ. ಸನ್ನಿ ಡಿಯೋಲ್ ಈ ಸಿನಿಮಾ ಹೀರೋ. ಸನ್ನಿ ಡಿಯೋಲ್ ಅವರು ಅತ್ಯಂತ ಸ್ಟೈಲಿಶ್ ಹಾಗೂ ಪವರ್&zwnj;ಫುಲ್ ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಂತರರಾಷ್ಟ್ರೀಯ ಪ್ರೇಮಕಥೆಯ ಸಿನಿಮಾ ಇದು. ಜೀವನದ ಕಠಿಣ ಪರಿಸ್ಥಿತಿಯಲ್ಲಿ ಭೇಟಿಯಾಗುವ ಇಬ್ಬರು ವ್ಯಕ್ತಿಗಳ ನಡುವಿನ ಒಂಟಿತನ, ಪ್ರೀತಿ ಮತ್ತು ಭಾವನಾತ್ಮಕ ಬಂಧದ ಹುಡುಕಾಟ.&lt;/p&gt;&lt;img&gt;&lt;p&gt;ಬಾಲಿವುಡ್ ರೋಮ್ಯಾಂಟಿಕ್ ಡ್ರಾಮಾ ಸಿನಿಮಾ. ವಿಕ್ರಾಂತ್ ಮಾಸ್ಸಿ ಈ ಸಿನಿಮಾದ ಹೀರೋ. ಒಂದು ಸುಂದರ ಕೆಫೆಯ ಹಿನ್ನೆಲೆಯಲ್ಲಿ ಇಂದಿನ ಯುವ ಪೀಳಿಗೆಯ ಪ್ರೀತಿ, ಸಂಬಂಧಗಳು ಮತ್ತು ಜೀವನದ ಪ್ರಯಾಣದ ಅನ್ವೇಷಣೆ.&lt;/p&gt;&lt;img&gt;&lt;p&gt;ಭಾರಿ ಬಜೆಟ್&zwnj;ನ ಪ್ಯಾನ್-ಇಂಡಿಯಾ ಆ್ಯಕ್ಷನ್ ಸಿನಿಮಾ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ. ರಾಮ್ ಚರಣ್ ಅವರು ಹಿಂದೆಂದೂ ಕಾಣದ ರಗಡ್ 'ಪೈಲ್ವಾನ್' ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನೆಟ್&zwnj;ಫ್ಲಿಕ್ಸ್&zwnj;ನ ನೈಜ-ಅಪರಾಧ (True-crime) ಸಾಕ್ಷ್ಯಚಿತ್ರ ಸರಣಿ..ನೆರೆಹೊರೆಯವರ ನಡುವಿನ ಜಗಳ, ಕಿರುಕುಳ ಮತ್ತು ಆಸ್ತಿ ವಿವಾದಗಳು ಭೀಕರ ಹಿಂಸಾಚಾರವಾಗಿ ಬದಲಾದ ನೈಜ ಘಟನೆಗಳು. ಬದುಕುಳಿದವರ ಸಾಕ್ಷ್ಯಗಳು ಮತ್ತು ಪೊಲೀಸರ ಬಾಡಿಕಾಮ್ ದೃಶ್ಯಗಳ ಮೂಲಕ ಕಥೆ ಬಿಚ್ಚಿಡಲಾಗುತ್ತದೆ.&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/sandalwood/ott-netflix-movie-release-this-month-july-2026-top-web-series-ux8uoho"/>
        </item>
        <item>
            <title><![CDATA[Agnisakshi Serial Chandrika Maya: ವಿದೇಶದಿಂದ ಕರ್ನಾಟಕಕ್ಕೆ ಬರ್ತಿದ್ದಂತೆ 'ಅಗ್ನಿಸಾಕ್ಷಿ' ಅಕ್ಕ ತಂಗಿ ಭೇಟಿ]]></title>
            <link>https://kannada.asianetnews.com/gallery/tv-talk/agnisakshi-kannada-serial-chandrika-real-name-rajeshwari-parthasarathy-ishita-varsha-1bcci8p</link>
            <guid isPermaLink="true">https://kannada.asianetnews.com/gallery/tv-talk/agnisakshi-kannada-serial-chandrika-real-name-rajeshwari-parthasarathy-ishita-varsha-1bcci8p</guid>
            <pubDate>Tue, 07 Jul 2026 15:48:11 +0530</pubDate>
            <description><![CDATA[&lt;p&gt;Agnisakshi Serial: 2013 ರಲ್ಲಿ &lsquo;ಅಗ್ನಿಸಾಕ್ಷಿ&rsquo; ಧಾರಾವಾಹಿ ಪ್ರಸಾರ ಆಗಿತ್ತು. ಇದು ಕನ್ನಡದ ಸೂಪರ್&zwnj; ಹಿಟ್&zwnj; ಧಾರಾವಾಹಿಗಳಲ್ಲಿ ಒಂದಾಗಿತ್ತು. ಸಿದ್ದಾರ್ಥ್&zwnj;, ಸನ್ನಿಧಿ, ಮಾಯಾ, ಚಂದ್ರಿಕಾ ಪಾತ್ರಗಳು ವೀಕ್ಷಕರಿಗೆ ಇಷ್ಟ ಆಗಿತ್ತು. ಈಗ ಚಂದ್ರಿಕಾ ಪಾತ್ರಧಾರಿ ರಾಜೇಶ್ವರಿ, ಇಷಿತಾ ವರ್ಷ ಭೇಟಿ ಆಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy0j8ch2dwe9ddc5knqkx5j,imgname-new-project---2026-07-07t152452.626-1783418659217.jpg" type="image/jpeg" height="390" width="690"/>
            <content:encoded><![CDATA[&lt;p&gt;Agnisakshi Serial: 2013 ರಲ್ಲಿ &lsquo;ಅಗ್ನಿಸಾಕ್ಷಿ&rsquo; ಧಾರಾವಾಹಿ ಪ್ರಸಾರ ಆಗಿತ್ತು. ಇದು ಕನ್ನಡದ ಸೂಪರ್&zwnj; ಹಿಟ್&zwnj; ಧಾರಾವಾಹಿಗಳಲ್ಲಿ ಒಂದಾಗಿತ್ತು. ಸಿದ್ದಾರ್ಥ್&zwnj;, ಸನ್ನಿಧಿ, ಮಾಯಾ, ಚಂದ್ರಿಕಾ ಪಾತ್ರಗಳು ವೀಕ್ಷಕರಿಗೆ ಇಷ್ಟ ಆಗಿತ್ತು. ಈಗ ಚಂದ್ರಿಕಾ ಪಾತ್ರಧಾರಿ ರಾಜೇಶ್ವರಿ, ಇಷಿತಾ ವರ್ಷ ಭೇಟಿ ಆಗಿದ್ದಾರೆ.&lt;/p&gt;&lt;img&gt;&lt;p&gt;2013ರ ಸೂಪರ್&zwnj; ಹಿಟ್&zwnj; ಅಗ್ನಿಸಾಕ್ಷಿ ಧಾರಾವಾಹಿಯ ಕಲಾವಿದರು ಭೇಟಿ ಆಗಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಈ ಜೋಡಿ ಅಕ್ಕ ಚಂದ್ರಿಕಾ- ತಂಗಿ ಮಾಯಾ ಆಗಿ ನಟಿಸಿತ್ತು. ಈ ಜೋಡಿಗೆ ಸಾಕಷ್ಟು ಅಭಿಮಾನಿಗಳು ಇದ್ದರು.&amp;nbsp;&lt;/p&gt;&lt;img&gt;&lt;p&gt;ಧಾರಾವಾಹಿ, ನಟನೆಯಿಂದಾಚೆ ಕೂಡ ಇವರಿಬ್ಬರು ಸ್ನೇಹಿತೆಯರು. ಬೇರೆ ಬೇರೆ ದೇಶದಲ್ಲಿ ಬದುಕುತ್ತಿದ್ದರೂ ಕೂಡ ಒಂದೇ ಬಾಂಧವ್ಯ ಹೊಂದಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಚಂದ್ರಿಕಾ ಪಾತ್ರಧಾರಿ ನಟಿ ರಾಜೇಶ್ವರಿ ಪಾರ್ಥಸಾರಥಿ ಅವರು ವಿದೇಶದಲ್ಲಿದ್ದಾರೆ. ಕಲ್ಯಾಣ್&zwnj; ಕ್ರಿಶ್&zwnj; ಅವರನ್ನು ಮದುವೆಯಾದ ಬಳಿಕ ಅವರು ವಿದೇಶದಲ್ಲಿ ನೆಲೆಸಿದ್ದಾರೆ. 2016ರಲ್ಲಿ ಇವರ ಮದುವೆ ಆಗಿತ್ತು.&amp;nbsp;&lt;/p&gt;&lt;img&gt;&lt;p&gt;ರಾಜೇಶ್ವರಿ ಪಾರ್ಥಸಾರಥಿ ಅವರಿಗೆ ಓರ್ವ ಮಗಳು ಕೂಡ ಇದ್ದಾಳೆ. ಮಗಳು ವಿದೇಶದಲ್ಲಿ ಬೆಳೆದರೂ ಕೂಡ, ಭಾರತ, ಕರ್ನಾಟಕದ ಸಂಪ್ರದಾಯವನ್ನು ಕಲಿಸುತ್ತಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ರಾಜೇಶ್ವರಿ ಅವರು ಭಾರತಕ್ಕೆ ಬಂದಾಗ ಇಷಿತಾ ವರ್ಷಾ ಸೇರಿದಂತೆ ಸ್ನೇಹಿತರನ್ನು ಭೇಟಿ ಆಗುತ್ತಾರೆ. ಈ ಬಾರಿ ರಾಜೇಶ್ವರಿ, ಇಷಿತಾ ಅವರು ಒಂದಿಷ್ಟು ಜಾಗಗಳಿಗೆ ಭೇಟಿ ಕೊಟ್ಟಿದ್ದರು.&amp;nbsp;&lt;/p&gt;&lt;img&gt;&lt;p&gt;ಈ ಜೋಡಿ ಕೆಲ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದೆ.&amp;nbsp;&lt;/p&gt;&lt;img&gt;&lt;p&gt;ಇಷಿತಾ ವರ್ಷ ಅವರು ಫೋಟೋಗ್ರಾಫರ್&zwnj; ಕೂಡ ಹೌದು. ವನ್ಯಜೀವಿಗಳ ಫೋಟೋಗ್ರಫಿ ಆರಂಭಿಸಿರುವ ಅವರು ಈ ಬಾರಿ ರಾಜೇಶ್ವರಿಗೂ ಕೂಡ ಕಾಡು, ವನ್ಯಜೀವಿಗಳ ಪರಿಚಯ ಮಾಡಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಕಾಡು, ವನ್ಯಜೀವಿಗಳನ್ನು ನೋಡಿ ರಾಜೇಶ್ವರಿ ಅವರಿಗೆ ಖುಷಿ ಆಗಿದೆ. ಇದನ್ನು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&amp;nbsp;&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/agnisakshi-kannada-serial-chandrika-real-name-rajeshwari-parthasarathy-ishita-varsha-1bcci8p"/>
        </item>
        <item>
            <title><![CDATA[Ramesh Aravind: ಮಧುರ ದಾಂಪತ್ಯ  ಜೀವನದ ಗುಟ್ಟು ಬಿಚ್ಚಿಟ್ಟು, ಪತ್ನಿಗೆ ಆನಿವರ್ಸರಿ ಶುಭ ಕೋರಿದ ನಟ ರಮೇಶ್ ಅರವಿಂದ್]]></title>
            <link>https://kannada.asianetnews.com/gallery/sandalwood/actor-ramesh-aravind-celebrates-his-wedding-anniversary-today-opcstxa</link>
            <guid isPermaLink="true">https://kannada.asianetnews.com/gallery/sandalwood/actor-ramesh-aravind-celebrates-his-wedding-anniversary-today-opcstxa</guid>
            <pubDate>Tue, 07 Jul 2026 16:23:02 +0530</pubDate>
            <description><![CDATA[&lt;p&gt;Ramesh Aravind: ಕನ್ನಡದ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊಗಳನ್ನು ಹಂಚಿಕೊಂಡು, ಪತ್ನಿಗೆ ಶುಭ ಕೋರಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy36f5dg8nbjnc1crazcjk3,imgname-ramesh-aravind-1783421418668.jpg" type="image/jpeg" height="390" width="690"/>
            <content:encoded><![CDATA[&lt;p&gt;Ramesh Aravind: ಕನ್ನಡದ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊಗಳನ್ನು ಹಂಚಿಕೊಂಡು, ಪತ್ನಿಗೆ ಶುಭ ಕೋರಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಮತ್ತು ಅವರ ಪತ್ನಿ ಅರ್ಚನಾ ತಮ್ಮ ದಾಂಪತ್ಯ ಜೀವನದ ಮತ್ತೊಂದು ಸುಂದರ ಮೈಲಿಗಲ್ಲನ್ನು ಸಂಭ್ರಮಿಸಿದ್ದಾರೆ. ವಿವಾಹ ವಾರ್ಷಿಕೋತ್ಸವದ ಈ ವಿಶೇಷ ಸಂದರ್ಭದಲ್ಲಿ ರಮೇಶ್ ಅರವಿಂದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು ಇದು ಅಭಿಮಾನಿಗಳ ಮನ ಗೆದ್ದಿದೆ.&lt;/p&gt;&lt;img&gt;&lt;p&gt;ರಮೇಶ್ ಅರವಿಂದ್ ತಮ್ಮ ಪತ್ನಿಯೊಂದಿಗೆ ಇರುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದು, ಜೀವನದ ಏಳು-ಬೀಳುಗಳಲ್ಲೂ ಜೊತೆ ನಿಂತಿರುವ ಸಂಗಾತಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಪರಸ್ಪರ ಗೌರವ, ಪ್ರೀತಿ ಮತ್ತು ವಿಶ್ವಾಸವೇ ತಮ್ಮ ದಾಂಪತ್ಯದ ದೊಡ್ಡ ಬಲ ಎಂಬ ಸಂದೇಶವನ್ನು ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ಸಿನಿತಾರೆಯರು ಮುದ್ದಾದ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.&lt;/p&gt;&lt;img&gt;&lt;p&gt;ಜುಲೈ 7 ಇಂದು ನಾವು ಹಂಚಿಕೊಂಡ ಜೀವನದ ಮತ್ತೊಂದು ವರ್ಷವನ್ನು ಪ್ರವೇಶಿಸುತ್ತೇವೆ.ಅವಳು ನಿರಂತರವಾಗಿ ಕಾಳಜಿ ವಹಿಸುತ್ತಾಳೆ. ನಮ್ಮ ಜೀವನ ಏರಿಳಿತಗಳ ರೋಲರ್ ಕೋಸ್ಟರ್ ಆಗಿದೆ. ಹೆಚ್ಚಾಗಿ ವಿನೋದ, ಸಂತೋಷ, ನಗುವಿನಿಂದ ಕೂಡಿದ್ದರೆ, ಸ್ವಲ್ಪವೇ ಸ್ವಲ್ಪ ಕಣ್ಣೀರು, ಭಯ ಸಣ್ಣ ನಿರಾಶೆಯೂ ಸೇರಿರುತ್ತವೆ. ಆದರೆ ನಮಗೆ ನಿಜವಾಗಿ ಬೇಕಾಗಿರೋದು ಏನು? ಎನ್ನುವುದಷ್ಟೇ ಮುಖ್ಯ. ಹಾಗಾಗಿ ನಾವು ಬೇಗನೆ ರಿಪೇರಿ, ರಿಚಾರ್ಜ್, ರಿಫ್ರೆಶ್ ಆಗಿ ಮತ್ತೆ ನಗುತ್ತಾ, ಉತ್ತಮ ಸಮಯ ಕಳೆಯುತ್ತೇವೆ. ಎನ್ನುತ್ತಾ ತಮ್ಮ ದಾಂಪತ್ಯ ಜೀವನದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ರಮೇಶ್ ಅರವಿಂದ್ ಮತ್ತು ಅರ್ಚನಾ ಅವರದ್ದು ಪ್ರೇಮ ವಿವಾಹ, ಇವರದ್ದು ಇಂಟರ್ ಕಾಲೇಜ್ ಕಾಂಪೀಟೀಶನ್ ಸಮಯದಲ್ಲಿ ಶುರುವಾದ ಪ್ರೇಮ.ಆದರೆ ಕುಟುಂಬದ ಒಪ್ಪಿಗೆಯೊಂದಿಗೆ ನಡೆದಿತ್ತು. ಮದುವೆಯಾದ ಬಳಿಕವೂ ಅರ್ಚನಾ ಸದಾ ರಮೇಶ್ ಅವರ ವೃತ್ತಿಜೀವನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಿನಿಮಾ, ನಿರ್ದೇಶನ, ಟಿವಿ ಕಾರ್ಯಕ್ರಮಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ ರಮೇಶ್ ಅವರ ಹಿಂದೆ ಪತ್ನಿಯ ಪ್ರೋತ್ಸಾಹ ಮತ್ತು ಬೆಂಬಲ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ವತಃ ರಮೇಶ್ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಒಂದು ಸಂದರ್ಶನದಲ್ಲಿ ರಮೇಶ್ ಅರವಿಂದ್ ಮತ್ತು ಅರ್ಚನಾ, ಯಶಸ್ವಿ ದಾಂಪತ್ಯದ ರಹಸ್ಯವನ್ನು ಹಂಚಿಕೊಂಡಿದ್ದರು. &quot;ದಾಂಪತ್ಯ ಜೀವನದಲ್ಲಿ 'ನಾನು' ಎನ್ನುವುದಕ್ಕಿಂತ 'ನಾವು' ಎನ್ನುವ ಭಾವನೆಗೆ ಹೆಚ್ಚು ಆದ್ಯತೆ ನೀಡಿದರೆ ಸಂಬಂಧ ಸುಂದರವಾಗಿರುತ್ತದೆ&quot; ಎಂದು ಇಬ್ಬರೂ ಹೇಳಿದ್ದರು. ಇದೇ ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಅವರ ದಾಂಪತ್ಯವನ್ನು ಹಲವು ವರ್ಷಗಳಿಂದ ಗಟ್ಟಿಯಾಗಿ ಉಳಿಸಿದೆ.&lt;/p&gt;&lt;img&gt;&lt;p&gt;ರಮೇಶ್ ಅರವಿಂದ್ ಅವರ ಕರಿಯರ್ ಬಗ್ಗೆ ಹೇಳುವುದಾದರೆ, ಸಾಲು ಸಾಲು ಸಿನಿಮಾಗಳಲ್ಲಿ ರಮೇಶ್ ನಟಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ &lsquo;ಯುವರ್ ಸಿನ್ಸಿಯರ್ಲಿ ರಾಮ್&rsquo; ಹಾಗೂ ಹಾರರ್ ಥ್ರಿಲ್ಲರ್ ಸಿನಿಮಾ &lsquo;ಡೈಜಿ&rsquo;ಯಲ್ಲಿ ರಮೇಶ್ ಅರವಿಂದ್ ನಟಿಸುತ್ತಿದ್ದಾರೆ. ಕರಿಯರ್ ಜೊತೆಗೆ ತಮ್ಮ ಕುಟುಂಬದೊಂದಿಗೂ ಸಹ ರಮೇಶ್ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/actor-ramesh-aravind-celebrates-his-wedding-anniversary-today-opcstxa"/>
        </item>
        <item>
            <title><![CDATA[ಮದ್ವೆಯಾಗಿ ಮಕ್ಕಳಾಯ್ತು, ಡಿವೋರ್ಸ್ ಆದಾಗ ಕೈಯಿಂದ ₹20 ಕೋಟಿ ಹೋಯ್ತು, ಕಣ್ಣೀರಿಟ್ಟ ಬಾಲಿವುಡ್ ನಟಿ]]></title>
            <link>https://kannada.asianetnews.com/gallery/relationship/celina-jaitly-breaks-down-while-recalling-divorce-and-rs-20-crore-financial-setback-dnh2zug</link>
            <guid isPermaLink="true">https://kannada.asianetnews.com/gallery/relationship/celina-jaitly-breaks-down-while-recalling-divorce-and-rs-20-crore-financial-setback-dnh2zug</guid>
            <pubDate>Tue, 07 Jul 2026 16:42:23 +0530</pubDate>
            <description><![CDATA[&lt;p&gt;ಬಾಲಿವುಡ್ ನಟಿ ತಮ್ಮ ವೈಯುಕ್ತಿಕ ಬದುಕು ನೆನೆದು ಕಣ್ಣೀರಿಟ್ಟಿದ್ದಾರೆ. ಒಂದೆಡೆ ಡಿವೋರ್ಸ್,ಮತ್ತೊಂದೆಡೆ ಮಕ್ಕಳ ನೋಡಲು ಅವಕಾಶ ಸಿಗುತ್ತಿಲ್ಲ. ಕೈಯಲ್ಲಿದ್ದ 20 ಕೋಟಿ ರೂ ಆಸ್ತಿಯೂ ಕರಗಿತು ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy3s4yczm8qdm6b3yv4anmc,imgname-celina-jaitly-shares-emotional-story-1783422030796.png" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟಿ ತಮ್ಮ ವೈಯುಕ್ತಿಕ ಬದುಕು ನೆನೆದು ಕಣ್ಣೀರಿಟ್ಟಿದ್ದಾರೆ. ಒಂದೆಡೆ ಡಿವೋರ್ಸ್,ಮತ್ತೊಂದೆಡೆ ಮಕ್ಕಳ ನೋಡಲು ಅವಕಾಶ ಸಿಗುತ್ತಿಲ್ಲ. ಕೈಯಲ್ಲಿದ್ದ 20 ಕೋಟಿ ರೂ ಆಸ್ತಿಯೂ ಕರಗಿತು ಎಂದಿದ್ದಾರೆ.&lt;/p&gt;&lt;img&gt;&lt;p&gt;ಬಾಲಿವುಡ್ ನಟಿ ಸೆಲಿನಾ ಜೆಟ್ಲಿ ತಮ್ಮ ಜೀವನದಲ್ಲಿ ಅನುಭವಿಸಿದ ಅಗಾಧ ನೋವು, ಕಣ್ಣೀರು, ಹಿನ್ನಡೆ, ಆತಂಕಗಳ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ. ಪ್ರೀತಿ, ನಂಬಿಕೆ ಹಾಗೂ ಭರವಸೆಯೊಂದಿಗೆ ವೈವಾಹಿಕ ಜೀವನ ಆರಂಭಗೊಳ್ಳುತ್ತದೆ. ಆದರೆ ಮುರಿದು ಬೀಳುವಾಗ ಹಣ, ಆಸ್ತಿ, ಲೆಕ್ಕಾಚಾರ ಮಾತ್ರ ಗಣನೆಗೆ ಬರುತ್ತದೆ. ಅಲ್ಲಿ ಜೊತೆಯಾಗಿ ಸಾಗಿದ ಯಾವುದೇ ಸಂಬಂಧಗಳಿಗೂ ಅರ್ಥವಿರಲ್ಲ ಎಂದಿದ್ದಾರೆ.&lt;/p&gt;&lt;img&gt;&lt;p&gt;ಪತಿ ಪೀಟರ್ ಹಾಗ್ ಹಾಗೂ ನಟಿ ಸೆಲಿನಾ ಜೆಟ್ಲಿ ವಿಚ್ಚೇದನ ಬಾರಿ ಕೋಲಾಹಲ ಎಬ್ಬಿಸಿದ ಪ್ರಕರಣ. ಇತ್ತೀಚಿಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನೋವು ಹೇಳಿಕೊಂಡಿದ್ದಾರೆ. ನನ್ನ ಮದುವೆ ಮುರಿದು ಬಿತ್ತು. ಪತಿ ನನ್ನ 20 ಕೋಟಿ ರೂಪಾಯಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಜೊತೆಯಾಗಿ ನಡೆಯುವಾಗ ನಂಬಿಕೆ ಭರವಸೆ ಮೇಲಿನ ಹೂಡಿಕೆ ಕೊನೆ ನನ್ನನ್ನು ಬೀದಿಪಾಲು ಮಾಡುವಂತೆ ಮಾಡಿತು ಎಂದು ಸೆಲಿನಾ ಜೆಟ್ಲಿ ಹೇಳಿದ್ದಾರೆ. ಮದುವೆಗೂ ಮೊದಲು ನಾನು ಮಾಡಿದ್ದ ಆಸ್ತಿಯಲ್ಲೂ ಹಕ್ಕು ಸಾಧಿಸಿಬಿಟ್ಟರು. ನಾನು ಎಲ್ಲವನ್ನೂ ಕಳೆದುಕೊಂಡೆ ಎಂದು ಸೆಲಿನಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮನಸ್ತಾಪಗಳು, ಜಗಳ ನಡೆಯುತ್ತಿತ್ತು. ಮಾನಸಿಕ ಹಿಂಸೆಯಿಂದ ಕಂಗಾಲಾಗಿದ್ದೆ. ಇದರ ನಡುವೆ 15ನೇ ವೆಡ್ಡಿಂಗ್ ಆ್ಯನಿವರ್ಸರಿ ದಿನ ಡಿವೋರ್ಸ್ ಗಿಫ್ಟ್ ಬಂದಿತ್ತು. ಪತಿ ಪೀಟರ್ ಹಾಗ್ ಜರ್ಮನ್ ಬಾಷೆಯಲ್ಲಿ ಒಂದು ಪತ್ರ ಕಳುಹಿಸಿದ್ದರು. ನನಗೆ ಓದಲು ಸಾಧ್ಯವಾಗದ ಕಾರಣ ಪುಟ್ಟ ಮಕ್ಕಳಲ್ಲಿ ಓದಲು ಹೇಳಿದೆ. ಪೋಷಕರ ಡಿವೋರ್ಸ್ ಪತ್ರವನ್ನು ಮಕ್ಕಳು ಓದುವಂತಾಯಿತು.&lt;/p&gt;&lt;img&gt;&lt;p&gt;ಪರಿಹಾರ ನನಗೆ ಬೇಡ, ನಾನು ಗಳಿಸಿದ ಆಸ್ತಿ ನನ್ನ ಮಕ್ಕಳನ್ನು ಜಂಟಿ ಕಸ್ಟಡಿ ಮಾಡಿ ಕೊಡುವಂತೆ ಕೇಳಿಕೊಂಡೆ. ಮಕ್ಕಳನ್ನು ನೋಡಬೇಕಾದರೆ ಇಲ್ಲಿ ಮಾರ್ಕೆಟ್&zwnj;ನಲ್ಲಿ ಕಸ ಗುಡಿಸುವ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಭಾರತೀಯರ ತರ ಕಸ ಗುಡಿಕುವ ಕೆಲಸವನ್ನು ನಾವು ಕೀಳಾಗಿ ನೋಡುವುದಿಲ್ಲ ಎಂದು ಪೀಟರ್ ಹಾಗ್, ನನ್ನ ಹಾಗೂ ಭಾರತವನ್ನು ಅವಮಾನಿಸಿದರು ಎಂದಿದ್ದಾರೆ.&lt;/p&gt;&lt;img&gt;&lt;p&gt;2010ರಲ್ಲಿ ಬಾಲಿವುಡ್ ನಟಿ ಸೆಲಿನಾ ಜೆಟ್ಲಿ ಹಾಗೂ ಆಸ್ಟ್ರಿಯಾ ಉದ್ಯಮಿ ಪೀಟರ್ ಹಾಗ್ ಮದುವೆಯಾಗಿದ್ದರು. ಇರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಪತಿ ವಿರುದ್ದ ದೈಹಿಕ ಹಾಗೂ ಮಾನಸಿಕ ಹಿಂಸೆ, ಕಿರುಕುಳ ದೂರು ದಾಖಲಿಸಿದ್ದರು. ಭಾರಿ ವಿವಾದಗಳಿಂದ ಕೂಡಿದ ಬದುಕು, ವಿಚ್ಚೇದನ ಬಳಿಕವೂ ಜಟಾಪಟಿಯಿಂದಲೇ ಸಾಗುತ್ತಿದೆ.&lt;/p&gt;&lt;img&gt;&lt;p&gt;ಮದುವೆಯಾಗುವ ಹೆಣ್ಣುಮಕ್ಕಳು ಮದುವೆಗೂ ಮೊದಲೆ ಒಂದು ಒಪ್ಪಂದ ಮಾಡಿಕೊಳ್ಳಬೇಕು. ಹೀಗಾಗಿ ಎಲ್ಲಾ ಮಹಿಳೆಯರು Prenup ಅಗ್ರೀಮೆಂಟ್ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. Prenup ಎಂದರೆ ಮದುವೆಗೂ ಮೊದಲೇ ದಂಪತಿಗಳು ಮಾಡಿಕೊಳ್ಳುವ ಒಪ್ಪಂದ. ಈ ಒಪ್ಪಂದದಲ್ಲಿ ಒಂದು ವೇಳೆ ಮದುವೆ ಮುರಿದು ಬಿದ್ದರೆ ತಮ್ಮ ಆಸ್ತಿ, ಸಂಪಾದನೆ, ಸಂಪತ್ತು, ಬ್ಯಾಂಕ್ ಉಳಿತಾಯ ಹೇಗೆ ಹಂಚಿಕೆ ಅನ್ನೋ ಕುರಿತು ಮೊದಲೇ ಅಗ್ರೀಮೆಂಟ್ ಮಾಡಲಾಗುತ್ತದೆ. ವಿದೇಶಗಲ್ಲಿ ಇದು ಪ್ರಚಲಿತದಲ್ಲಿದೆ. ಇದು ಭಾರತದಲ್ಲೂ ಮಹಿಳೆಯರು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/relationship/celina-jaitly-breaks-down-while-recalling-divorce-and-rs-20-crore-financial-setback-dnh2zug"/>
        </item>
        <item>
            <title><![CDATA[ಹಸಿವು, ಅವಮಾನ, ಬಡತನ... ತಾಯಿಯ ಒಂದು ಮಾತು ನನ್ನ ಬದುಕು ಬದಲಿಸಿತು: ಜಗ್ಗೇಶ್ ಭಾವುಕ ಪೋಸ್ಟ್!]]></title>
            <link>https://kannada.asianetnews.com/sandalwood/jaggesh-inspiring-journey-mother-changed-my-life-facebook-post-gvd/articleshow-0imkmz9</link>
            <guid isPermaLink="true">https://kannada.asianetnews.com/sandalwood/jaggesh-inspiring-journey-mother-changed-my-life-facebook-post-gvd/articleshow-0imkmz9</guid>
            <pubDate>Tue, 07 Jul 2026 16:32:57 +0530</pubDate>
            <description><![CDATA[&lt;p&gt;ನವರಸ ನಾಯಕ ಜಗ್ಗೇಶ್ ತಮ್ಮ ಅಧಿಕೃತ ಫೇಸ್&zwnj;ಬುಕ್ ಖಾತೆಯಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದು, ಬಾಲ್ಯದಿಂದ ಯಶಸ್ಸಿನ ಶಿಖರ ತಲುಪುವವರೆಗಿನ ತಮ್ಮ ಜೀವನದ ಹೋರಾಟದ ಪಯಣವನ್ನು ನೆನಪಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy3wfjj4ypdtsbtf33f71gb,imgname-bjb-1783422139986.png" type="image/jpeg" height="390" width="690"/>
            <content:encoded><![CDATA[&lt;p&gt;ಹಿರಿಯ ನಟ, ನವರಸ ನಾಯಕ ಜಗ್ಗೇಶ್ ತಮ್ಮ ಅಧಿಕೃತ ಫೇಸ್&zwnj;ಬುಕ್ ಖಾತೆಯಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದು, ಬಾಲ್ಯದಿಂದ ಯಶಸ್ಸಿನ ಶಿಖರ ತಲುಪುವವರೆಗಿನ ತಮ್ಮ ಜೀವನದ ಹೋರಾಟದ ಪಯಣವನ್ನು ನೆನಪಿಸಿಕೊಂಡಿದ್ದಾರೆ. ಬಾಲ್ಯ ಮತ್ತು ಯೌವನದ ದಿನಗಳಲ್ಲಿ ಆರ್ಥಿಕ ಸಂಕಷ್ಟ, ಹಸಿವು, ಅವಮಾನ, ಅವಕಾಶಗಳ ಕೊರತೆ ಹಾಗೂ ಜೀವನದ ಹಲವು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ದಾಗಿ ಜಗ್ಗೇಶ್ ತಿಳಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ತಂದೆ-ತಾಯಿಯ ಮೇಲೆಯೂ ಅಸಮಾಧಾನ ಮೂಡುತ್ತಿತ್ತು. ಆದರೆ ಜೀವನದಲ್ಲಿ ಎಂದಿಗೂ ಕುಗ್ಗದಂತೆ ಮಾಡಿದವರು ತಮ್ಮ ತಾಯಿ ಎಂದು ಅವರು ಭಾವುಕರಾಗಿ ಸ್ಮರಿಸಿದ್ದಾರೆ.&lt;/p&gt;&lt;p&gt;&quot;ಭಕ್ತಿ, ಪ್ರಾಮಾಣಿಕ ಶ್ರಮ, ತಾಳ್ಮೆ ಮತ್ತು ನಿರಂತರ ಅಭ್ಯಾಸವೇ ಬದುಕಿನ ನಿಜವಾದ ಬಂಡವಾಳ&quot; ಎಂದು ತಾಯಿ ಹೇಳುತ್ತಿದ್ದ ಮಾತುಗಳು ತಮ್ಮ ಜೀವನದ ದಿಕ್ಕನ್ನೇ ಬದಲಿಸಿವೆ ಎಂದು ಜಗ್ಗೇಶ್ ಬರೆದಿದ್ದಾರೆ. ವಿಶೇಷವಾಗಿ, &quot;ಗೆದ್ದರೆ ಸನ್ಮಾನ... ಸೋತರೆ ಅಪಮಾನ&quot; ಎಂಬ ತಾಯಿಯ ಮಾತು ಪ್ರತಿಯೊಂದು ಹೆಜ್ಜೆಯಲ್ಲೂ ತಮ್ಮನ್ನು ಮುನ್ನಡೆಸಿದ ದಾರಿದೀಪವಾಗಿತ್ತು ಎಂದು ತಿಳಿಸಿದ್ದಾರೆ. ಇಂದು ತಾಯಿ ತಮ್ಮೊಂದಿಗಿಲ್ಲದಿದ್ದರೂ, ಆಕೆಯ ಆದರ್ಶಗಳು ಮತ್ತು ಬದುಕಿನ ಪಾಠಗಳೇ ಪ್ರತಿದಿನ ತಮ್ಮನ್ನು ಮುನ್ನಡೆಸುತ್ತಿವೆ ಎಂದು ಜಗ್ಗೇಶ್ ಭಾವುಕರಾಗಿ ಹೇಳಿದ್ದಾರೆ. ಜೀವನದಲ್ಲಿ ಎದುರಾದ ಪ್ರತಿಯೊಂದು ಕಷ್ಟವೂ ತಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಜಗ್ಗೇಶ್&zwnj; ಪೋಸ್ಟ್&zwnj;ನಲ್ಲಿ ಏನಿದೆ?&lt;/strong&gt;&lt;/p&gt;&lt;p&gt;ಯೌವನದ ದಿನದಲ್ಲಿ ನನಗೆ ಯಾರು ಸಹಾಯ ಮಾಡಲಿಲ್ಲಾ ಕೋಪ! ಎಲ್ಲರಿಗು ಇಷ್ಟಪಟ್ಟ ವಸ್ತು ಕೊಡಿಸೋ ತಂದೆ-ತಾಯಿ ನನಗೇಕಿಲ್ಲಾ ಕೋಪ! ಸ್ನೇಹಿತರ ಜೊತೆ ವಾರಕ್ಕೊಂದು ಸಿನಿಮ ಹೋಟಲ್ ದೋಸೆಗೆ ಕಾಸುಕೊಡಲ್ಲಾ ಅಪ್ಪ ಕೋಪ! ಕಾಲೇಜಿಗೆ ಒಳ್ಳೆ ಬಟ್ಟೆ ಶೋ ಧರಿಸಿ ಸೈಕಲ್ ನಲ್ಲಿ ಹೋಗಬೇಕು ಅಪ್ಪ ಕ್ಯಾರೆ ಅನ್ನನು ಕೋಪ!&lt;/p&gt;&lt;p&gt;ಈ ಮುಖಕ್ಕೆ ಒಬ್ಬಳು ಪ್ರೇಮಿ ಸಿಕ್ಕಳು ಚಾಕ್ಲೇಟ್ ಕೊಡಿಸಲು ಕಾಸಿಲ್ಲಾ ಕೋಪ! ನನ್ನ ಇಷ್ಟದ ಕ್ಷೇತ್ರ ಕಲಾರಂಗದಲ್ಲಿ ನನ್ನ ನೋಡಿದರೆ ಎಲ್ಲರಿಗು ವಾಕರಿಕೆ ಓಡಿಸುತ್ತದ್ದರು ಹೊರಗೆ ಕೋಪ! ಹೈಲ್ಯಾಂಡ್ ಹೋಟೆಲ್ ಪುಟ್ಪಾತ್ ನಲ್ಲಿ ನಿಂತು ಬರುವ ತಾರೆಗಳ ನೋಡಿ ನನಗೇಕಿಲ್ಲಾ ಈ ಯೋಗ ಕೋಪ!&lt;/p&gt;&lt;p&gt;ಬೆಳಗಿನಿಂದ ಸಂಜೆಯವರೆಗು ಗಾಂಧಿನಗರ ಪಾತ್ರಕ್ಕೆ ಅಲೆದಾಟ ಹಸಿವು ಊಟವಿಲ್ಲದೆ ಕೋಪ! ನನಗೆ ಅಂತ ಯಾರಿಲ್ಲವೆ ಎಂದು ಬಂದ ಕೋಪಕ್ಕೆ ಸಾಂತ್ವನ ಹೇಳಿ ಹುರಿದುಂಬಿಸಿ ಭುಜತಟ್ಟಿ ಏಳು ಎದ್ದೇಳು ನಿನಗೆ ನಾನು ಜನ್ಮ ನೀಡಿದ್ದೆ ಗೆಲ್ಲಲು,ಗದ್ದು ವಂಶಕ್ಕೆ ಕಳಶಪ್ರಾಯವಾಗಲು ಮಗನೆ... ನೀನು ಗೆಲ್ಲಬೇಕೆಂದರೆ ನಿನ್ನ ನೀನು ಸೈನಿಕನಂತೆ ತಯಾರು ಮಾಡಿಕೋ, ಮಾಡುವ ಕಾಯಕ ಅಭ್ಯಾಸ ಮಾಡಿಕೋ, ಅರ್ಜುನ ಕೃಷ್ಣನ ಜೊತೆಯಲ್ಲಿ ಇಟ್ಟುಕೊಂಡಂತೆ ಭಕ್ತಿ ರೂಡಿಸಿಕೋ, ಅಣಕ ಅಪಮಾನ ಮಾಡುವವರ ಗಮನಿಸದೆ ನಿನ್ನ ಗುರಿಯ ಕಡೆ ಹೆಜ್ಜೆಹಾಕು ಸಾಧಕನಾಗುವೆ, ಒಂದು ನೆನಪಿಡು ಗೆದ್ದರೆ ಮಾತ್ರ ಸನ್ಮಾನ ಸೋತರೆ ಅಪಮಾನ ಎಂದು ಬದುಕಿನ ಯುದ್ಧಕ್ಕೆ ತಯಾರು ಮಾಡಿಬಿಟ್ಟಳು ಅಮ್ಮ ನನ್ನ ದೇವರು.&lt;/p&gt;&lt;p&gt;ಮುಂದೆ ಅವಳು ಹೇಳಿದಂತೆ ಬದುಕು ಸಾಧಿಸಿ ಗೆದ್ದೆ ಅದನ್ನು ನೋಡಲು ಅಮ್ಮನೆ ಇಲ್ಲಾ ನನ್ನ 30ನೆ ವಯಸ್ಸಿಗೆ ಯಾತ್ರೆ ಮುಗಿಸಿ ನನ್ನ ಮುಂದಿನ ಗೋಡೆಯ ಮೇಲೆ ಶಾಶ್ವತ ಚಿತ್ರವಾದಳು... ಯುವ ಮನಸುಗಳೆ ಯಾವುದೆ ಆಗಲು ಈ ಜಗದಲ್ಲಿ ಅವರವರ ಧರ್ಮದ ದೇವರ ಮೇಲಿನ ಭಕ್ತಿ, ತಾಳ್ಮೆ, ಶ್ರಮ, ಸಮಯಪ್ರಜ್ಞೆ, ನಿರಂತರ ಅಭ್ಯಾಸ, ಉತ್ತಮ ಜನರ ಒಡನಾಟ ಅಭ್ಯಾಸ ಮಾಡಿಕೊಳ್ಳಬೇಕು.. ಯಾವುದೆ ಸಾಧನೆ ಒಂದೆ ದಿನ ಆಗದು. ಕಾದವ ಮೇಧಾವಿ ನುಗ್ಗಿದವ ಮೂರ್ಖ. ನಿಮ್ಮ ಗೆಲುವಿಗೆ ನನ್ನ ಜೀವನದ ಶ್ರಮದಕಥೆ ಸ್ಪೂರ್ಥಿಯಾಗಲಿ ಎಂಬ ಆಶಯ. ಶುಭಮಸ್ತು. #ತಾಯಿದೇವರು ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸಾಮಾಜಿಕ ಜಾಲತಾಣಗಳಲ್ಲಿ ವೈರಲ್&lt;/strong&gt;&lt;/h2&gt;&lt;p&gt;ತಮ್ಮ ಬರಹದ ಮೂಲಕ ಇಂದಿನ ಯುವಕರಿಗೂ ಜಗ್ಗೇಶ್ ಮಹತ್ವದ ಸಂದೇಶ ನೀಡಿದ್ದಾರೆ. ಯಶಸ್ಸಿಗೆ ಯಾವುದೇ ಶಾರ್ಟ್&zwnj;ಕಟ್ ಇಲ್ಲ. ನಿರಂತರ ಪರಿಶ್ರಮ, ತಾಳ್ಮೆ, ಶಿಸ್ತು ಮತ್ತು ಉತ್ತಮ ವ್ಯಕ್ತಿಗಳ ಒಡನಾಟವೇ ವ್ಯಕ್ತಿಯನ್ನು ಸಾಧನೆಯತ್ತ ಕೊಂಡೊಯ್ಯುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ. ಜಗ್ಗೇಶ್ ಅವರ ಈ ಸ್ಪೂರ್ತಿದಾಯಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಹೋರಾಟದ ಬದುಕಿಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ತಾಯಿಯ ಮೇಲಿನ ಅವರ ಅಪಾರ ಗೌರವಕ್ಕೂ ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/jaggesh-inspiring-journey-mother-changed-my-life-facebook-post-gvd/articleshow-0imkmz9"/>
        </item>
        <item>
            <title><![CDATA['ಪ್ರೀತಿ, ಅಭಿಮಾನ ಮಾತ್ರ ತಗೊಂಡು ಬನ್ನಿ': ಅಭಿಮಾನಿಗಳಿಗೆ ಶಿವಣ್ಣನ ವಿಶೇಷ ಮನವಿಯೇನು?]]></title>
            <link>https://kannada.asianetnews.com/sandalwood/shivarajkumar-birthday-fans-asked-not-to-bring-gifts-gvd/articleshow-8mp27vq</link>
            <guid isPermaLink="true">https://kannada.asianetnews.com/sandalwood/shivarajkumar-birthday-fans-asked-not-to-bring-gifts-gvd/articleshow-8mp27vq</guid>
            <pubDate>Tue, 07 Jul 2026 16:07:41 +0530</pubDate>
            <description><![CDATA[&lt;p&gt;ಶಿವರಾಜ್&zwnj;ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ 64ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy2enz392mvxkgwwwygygq2,imgname-bjnb-1783420639203.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಸೇರಿದಂತೆ ಹಲವು ಬಿರುದುಗಳಿಂದ ಕನ್ನಡಿಗರ ಹೃದಯ ಗೆದ್ದಿರುವ ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾ. ಶಿವರಾಜ್&zwnj;ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ 64ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಶಿವಣ್ಣ ಅಭಿಮಾನಿಗಳಲ್ಲಿ ಹೃದಯಸ್ಪರ್ಶಿ ಮನವಿಯೊಂದನ್ನು ಮಾಡಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿರುವ ಶಿವರಾಜ್&zwnj;ಕುಮಾರ್, &quot;ಸಿಗೋಣ ಜುಲೈ 12ಕ್ಕೆ... ಪ್ರೀತಿ, ಅಭಿಮಾನ ಮಾತ್ರ ತಗೊಂಡು ಬನ್ನಿ&quot; ಎಂಬ ಭಾವನಾತ್ಮಕ ಕ್ಯಾಪ್ಷನ್ ಮೂಲಕ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.&lt;/p&gt;&lt;p&gt;&lt;strong&gt;&quot;ಕೇಕ್, ಹಾರ, ಶಾಲು ಬೇಡ... ನಿಮ್ಮ ಪ್ರೀತಿಯೇ ಸಾಕು&quot;&lt;/strong&gt;&lt;/p&gt;&lt;p&gt;ವಿಡಿಯೊದಲ್ಲಿ ಮಾತನಾಡಿರುವ ಶಿವರಾಜ್&zwnj;ಕುಮಾರ್, &quot;ಎಲ್ಲರಿಗೂ ನಮಸ್ಕಾರ. ಜುಲೈ 12 ನನ್ನ ಹುಟ್ಟುಹಬ್ಬ. ನೀವು ಪ್ರತಿವರ್ಷದಂತೆ ಈ ಬಾರಿಯೂ ಬರ್ತೀರ ಅನ್ನೋದು ನನಗೆ ಗೊತ್ತಿದೆ. ಆದರೆ ಈ ಬಾರಿ ನನ್ನದೊಂದು ಸಣ್ಣ ಮನವಿ ಇದೆ. ಯಾವುದೇ ಉಡುಗೊರೆ ತರಬೇಡಿ. ವಿಶೇಷವಾಗಿ ಕೇಕ್, ಹಾರ, ಶಾಲು ಯಾವುದೂ ಬೇಡ. ನಿಮ್ಮೆಲ್ಲರ ಪರವಾಗಿ ನಾನೇ ಒಂದು ಕೇಕ್ ಕಟ್ ಮಾಡ್ತೀನಿ. ನಿಮ್ಮ ಪ್ರೀತಿ, ಶುಭಾಶಯಗಳೇ ನನಗೆ ದೊಡ್ಡ ಉಡುಗೊರೆ. ಎಲ್ಲರೂ ಬನ್ನಿ... ಭೇಟಿಯಾಗೋಣ... ಸಂತೋಷವಾಗಿ ಸಮಯ ಕಳೆಯೋಣ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಶಿವಣ್ಣನ ಮನವಿ&lt;/strong&gt;&lt;/p&gt;&lt;p&gt;ಶಿವಣ್ಣನ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಭಾವುಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. &quot;ಅಪ್ಪು ಒಮ್ಮೆ ಹೇಳಿದ್ದರು... 'ನನಗೂ ನಮ್ಮ ಅಣ್ಣನಿಗೂ ವಯಸ್ಸೇ ಆಗಲ್ಲ.' ಹ್ಯಾಪಿ ಬರ್ತ್&zwnj;ಡೇ ಶಿವಣ್ಣ&quot; ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, &quot;ಹ್ಯಾಪಿ ಬರ್ತ್&zwnj;ಡೇ ದೇವ್ರು&quot; ಎಂದು ಶುಭ ಹಾರೈಸಿದ್ದಾರೆ. ಇನ್ನೋರ್ವ ನೆಟ್ಟಿಗರ ಕಾಮೆಂಟ್ ಗಮನ ಸೆಳೆಯುವಂತಿದ್ದು, &quot;ಸ್ಯಾಂಡಲ್&zwnj;ವುಡ್&zwnj;ನ ಹಲವು ನಟರು ಹುಟ್ಟುಹಬ್ಬದಂದು ಮನೆಯಲ್ಲಿ ಇರಲ್ಲ ಎಂದು ಹೇಳುತ್ತಾರೆ. ಆದರೆ ದೊಡ್ಡಮನೆಯ ಶಿವಣ್ಣ ಮಾತ್ರ 'ಬನ್ನಿ' ಎಂದು ಆಹ್ವಾನಿಸುತ್ತಾರೆ. ದೊಡ್ಡಮನೆಯವರು ಅನ್ನೋದು ಮನೆಗೆ ಅಲ್ಲ, ಮನಸ್ಸಿಗೆ&quot; ಎಂದು ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಶಿವಣ್ಣ&lt;/strong&gt;&lt;/h2&gt;&lt;p&gt;ಸಿನಿಮಾ ವಿಚಾರಕ್ಕೆ ಬಂದರೆ, ಶಿವರಾಜ್&zwnj;ಕುಮಾರ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಸದ್ಯ 10ಕ್ಕೂ ಹೆಚ್ಚು ಸಿನಿಮಾಗಳನ್ನು ಕೈಯಲ್ಲಿ ಹೊಂದಿದ್ದಾರೆ.&lt;/p&gt;&lt;p&gt;ಅವುಗಳಲ್ಲಿ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರವೂ ಒಂದು. ಈ ಸಿನಿಮಾದಲ್ಲಿ ಶಿವರಾಜ್&zwnj;ಕುಮಾರ್ ಜೊತೆಗೆ ನಟರಾಕ್ಷಸ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಮೇಲೆ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ನಡುವೆ, ಯಾವುದೇ ಆಡಂಬರವಿಲ್ಲದೆ &quot;ಪ್ರೀತಿ ಮತ್ತು ಅಭಿಮಾನ ಮಾತ್ರ ಸಾಕು&quot; ಎಂದು ಅಭಿಮಾನಿಗಳಿಗೆ ಮನವಿ ಮಾಡಿರುವ ಶಿವಣ್ಣನ ಸರಳತೆ ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/shivarajkumar-birthday-fans-asked-not-to-bring-gifts-gvd/articleshow-8mp27vq"/>
        </item>
        <item>
            <title><![CDATA[ಭವ್ಯಾ ಅಲ್ಲ, ನಮ್ರತಾ ಅಲ್ಲ…. ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ…]]></title>
            <link>https://kannada.asianetnews.com/webstories/tv-talk/here-are-the-list-of-kannada-serial-actresses-payment-sda3oya</link>
            <guid isPermaLink="true">https://kannada.asianetnews.com/webstories/tv-talk/here-are-the-list-of-kannada-serial-actresses-payment-sda3oya</guid>
            <pubDate>Tue, 07 Jul 2026 11:40:44 +0530</pubDate>
            <description><![CDATA[&lt;p&gt;ಕನ್ನಡ ಕಿರುತೆರೆಯ ನಟಿಯರ ಸಂಭಾವನೆ ಕುರಿತಾದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗುತ್ತಿದ್ದು, ಆ ಮಾಹಿತಿ ಪ್ರಕಾರ ನಟಿಯರು ಧಾರಾವಾಹಿಯ ಒಂದೊಂದು ಎಪಿಸೋಡ್ ಗೆ ಎಷ್ಟು ಸ್ಯಾಲರಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxjy2re6b2dsdzs7785gnf9,imgname-highest-payment-1783404366605.jpg" type="image/jpeg" height="390" width="690"/>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/webstories/tv-talk/here-are-the-list-of-kannada-serial-actresses-payment-sda3oya"/>
        </item>
        <item>
            <title><![CDATA[Rishab Shetty Birthday: ಗ್ರಾಂಡ್‌ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ]]></title>
            <link>https://kannada.asianetnews.com/gallery/sandalwood/sandalwood-actor-and-director-rishab-shetty-birthday-celebration-to-know-here-qssrsmv</link>
            <guid isPermaLink="true">https://kannada.asianetnews.com/gallery/sandalwood/sandalwood-actor-and-director-rishab-shetty-birthday-celebration-to-know-here-qssrsmv</guid>
            <pubDate>Tue, 07 Jul 2026 11:05:56 +0530</pubDate>
            <description><![CDATA[&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ತಮ್ಮ &amp;nbsp;ಹುಟ್ಟುಹಬ್ಬವನ್ನು ನಿನ್ನೆ ರಾತ್ರಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಿನ್ನೆ ಬೆಂಗಳೂರಿನ 'ಕಿಂಗ್ಸ್&zwnj; ಕ್ಲಬ್'ನಲ್ಲಿ ತಮ್ಮ ಕುಟುಂಬ, ಮಾಧ್ಯಮ ಮಿತ್ರರು, ಆಪ್ತ ಸ್ನೇಹಿತಬಳಗದೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxgn1xy0mz8zx2461vr9a1h,imgname-rishab-shetty-1783401973693.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ತಮ್ಮ &amp;nbsp;ಹುಟ್ಟುಹಬ್ಬವನ್ನು ನಿನ್ನೆ ರಾತ್ರಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಿನ್ನೆ ಬೆಂಗಳೂರಿನ 'ಕಿಂಗ್ಸ್&zwnj; ಕ್ಲಬ್'ನಲ್ಲಿ ತಮ್ಮ ಕುಟುಂಬ, ಮಾಧ್ಯಮ ಮಿತ್ರರು, ಆಪ್ತ ಸ್ನೇಹಿತಬಳಗದೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ಹುಟ್ಟುಹಬ್ಬವನ್ನು (Rishab Shetty Birthday) ನಿನ್ನೆ ರಾತ್ರಿ ಅದ್ದೂರಿಯಾಗಿ ಆಚರಿಸಲಾಗಿದೆ. 43ನೇ ವಯಸ್ಸಿಗೆ ಕಾಲಿಟ್ಟ ನಟ ರಿಷಬ್ ಶೆಟ್ಟಿಯವರು ನಿನ್ನೆ ಬೆಂಗಳೂರಿನ 'ಕಿಂಗ್ಸ್&zwnj; ಕ್ಲಬ್'ನಲ್ಲಿ ತಮ್ಮ ಕುಟುಂಬ, ಮಾಧ್ಯಮ ಮಿತ್ರರು, ಆಪ್ತ ಸ್ನೇಹಿತರು ಹಾಗೂ ಬಂಧುಬಳಗದವರೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕಿಂಗ್ಸ್&zwnj; ಕ್ಲಬ್ ಜಗಮಗಿಸುವ ಬೆಳಕು ಹಾಗೂ ಹೂಗಳಿಂದ ಅಲಂಕೃತವಾದ ಭವ್ಯವಾದ ವೇದಿಕೆಯಲ್ಲಿ ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳು ಹಾಗೂ ಆಪ್ತರ ಜೊತೆಯಲ್ಲಿ ನಟ ರಿಷಬ್ ಶೆಟ್ಟಿಯವರು ತಮ್ಮ ಬರ್ತ್&zwnj;ಡೇ ಸೆಲೆಬ್ರೇಶನ್ ಮಾಡಿಕೊಂಡಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್&zwnj; ಮಧ್ಯೆ ಬಿಡುವು ಮಾಡಿಕೊಂಡಿರುವ ರಿಷಬ್ ಶೆಟ್ಟಿಯವರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುವ ಮೂಲಕ ಲೈಫ್ ಖುಷಿಯನ್ನು ಸ್ವತಃ ಹೆಚ್ಚಿಸಿಕೊಂಡಿದ್ದಲ್ಲದೇ ಫ್ಯಾನ್ಸ್ ಹಾಗೂ ಪ್ರಪಂಚದೊಂದಿಗೆ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪ್ರಸ್ತುತ ರಿಷಬ್ ಶೆಟ್ಟಿಯವರು 'ಜೈ ಹನುಮಾನ್' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಜೊತೆಗೆ &lsquo;ಛತ್ರಪತಿ ಶಿವಾಜಿ ಮಹಾರಾಜ್&rsquo; ಚಿತ್ರಕ್ಕೂ ಸಿದ್ಧವಾಗುತ್ತಿದ್ದಾರೆ. ಈ ಮೂಲಕ ಕನ್ನಡ ಸಿನಿಮಾದ ಜೊತೆಗೆ ಮರಾಠಿ ಹಾಗೂ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಮಿಂಚುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯಕ್ಕೆ ತಮ್ಮದೇ ನಿರ್ದೇಶನದ &lsquo;ಕಾಂತಾರ ಚಾಪ್ಟರ್ 2&rsquo; ರೂಪಿಸುವ ಕಾರ್ಯದಲ್ಲಿದ್ದಾರೆ. ಜೊತೆಗೆ ಮಲಯಾಳಂನ ಖ್ಯಾತ ಬರಹಗಾರ ಎಂ.ಟಿ. ವಾಸುದೇವ ನಾಯರ್ ಅವರ &lsquo;ರಂಡಮೂಳಂ&rsquo; ಕೃತಿಯನ್ನು ಸಿನಿಮಾವಾಗಿಸುವ ಮಹೋನ್ನತ ಯೋಜನೆಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. &lsquo;ರಂಡಮೂಳಂ&rsquo; ಅವರ ಮ್ಯಾಗ್ನಂ ಓಪಸ್ ಸಿನಿಮಾ ಆಗಲಿದ್ದು, ಅವರ ತಂಡ ಸಂಶೋಧನಾ ಕೆಲಸದಲ್ಲಿ ನಿರತವಾಗಿದೆ. ಮುಂದೆ ಆದಷ್ಟು ಬೇಗ ಸಿನಿಮಾ ಬರಹದ ಮೂಲಕ ತೆರೆಯ ಮೇಲೆ ಬರುವ ಸಿದ್ಧತೆಯಲ್ಲಿದೆ.&lt;/p&gt;&lt;img&gt;&lt;p&gt;ಬಹುತೇಕರಿಗೆ ಗೊತ್ತಿರುವಂತೆ, ರಿಷಬ್ ಶೆಟ್ಟಿ ಸುಮ್ಮನೇ ಸಮಯ ವ್ಯರ್ಥ ಮಾಡುವವರಲ್ಲ. ಜೈ ಹನುಮಾನ್ ಚಿತ್ರದಲ್ಲಿ ಅವರು ನಟನೆ ಮಾತ್ರ ಮಾಡುತ್ತಿರುವುದರಿಂದ ಉಳಿದ ಸಮಯದಲ್ಲಿ ಬೇರೆ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಕಂಟೆಂಟ್ ಇರುವ ಸಿನಿಮಾ ನಿರ್ಮಾಣ ಮಾಡುವ ಯೋಜನೆಯನ್ನು ಕೂಡ ಅವರು ಪ್ಲಾನ್ ಮಾಡುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.&lt;/p&gt;&lt;img&gt;&lt;p&gt;ಸಿನಿಮಾ ಹೊರತಾಗಿಯೂ ಕಲೆ, ಸಂಸ್ಕೃತಿಗೆ ಗೌರವ ಕೊಡುವ ರಿಷಬ್ ಶೆಟ್ಟುಯವರು ಇತ್ತೀಚೆಗೆ ಊರಿನಲ್ಲಿ ಯಕ್ಷಗಾನ, ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅದರಲ್ಲಿ ಅವರ ಮಗ ರಣ್ವಿತ್ ಶೆಟ್ಟಿ ಯಕ್ಷಗಾನದಲ್ಲಿ ಪಾತ್ರ ಮಾಡುವ ಮೂಲಕ ಮೊಟ್ಟಮೊದಲ ಬಾರಿಗೆ ಬಣ್ಣ ಹಚ್ಚಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;ರಿಷಬ್ ಶೆಟ್ಟಿಯವರು ದತ್ತು ಪಡೆದಿರುವ ಸರ್ಕಾರಿ ಶಾಲೆಯ ಉನ್ನತಿ ಕಡೆಗೂ ಅವರು ಗಮನ ಹರಿಸಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತರಾಗಿಲ್ಲ. ಅವರ ಸೀಮಾವಲಯ ವಿಸ್ತಾರವಾಗಿದೆ. ಹಾಗೆ ವಿಸ್ತಾರಗೊಂಡ ವ್ಯಕ್ತಿಗಳು ಬೇರಿನ ಕುರಿತು ಆಲೋಚಿಸುವುದು ಬಹಳ ಅಪರೂಪ. ರಿಷಬ್ ಮಾತ್ರ ಕನ್ನಡತನವನ್ನು ಉಸಿರಾಡುತ್ತಿರುವುದು, ಸಂಸ್ಕೃತಿಗೆ ನಿಷ್ಠರಾಗಿರುವುದು ಅವರ ಹೆಗ್ಗಳಿಕೆ.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/sandalwood/sandalwood-actor-and-director-rishab-shetty-birthday-celebration-to-know-here-qssrsmv"/>
        </item>
        <item>
            <title><![CDATA[ಅಯೋಧ್ಯೆಯಲ್ಲಿ ಅಮಿತಾಬ್ ಬಚ್ಚನ್ ಭಾರಿ ಹೂಡಿಕೆ: ಬೆಳಗಿನ ಜಾವ 3 ಗಂಟೆಗೆ ಉದ್ಯಮಿಗೆ ಕರೆ ಮಾಡಿ 15 ಕೋಟಿ ರವಾನೆ!]]></title>
            <link>https://kannada.asianetnews.com/gallery/business/real-estate-bollywood-megastar-amitabh-bachchan-ayodhya-property-investment-deal-revealed-gdp-47cgezu</link>
            <guid isPermaLink="true">https://kannada.asianetnews.com/gallery/business/real-estate-bollywood-megastar-amitabh-bachchan-ayodhya-property-investment-deal-revealed-gdp-47cgezu</guid>
            <pubDate>Tue, 07 Jul 2026 10:24:09 +0530</pubDate>
            <description><![CDATA[&lt;p&gt;ಬಾಲಿವುಡ್ ಸೂಪರ್&zwnj;ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 'ಹೌಸ್ ಆಫ್ ಅಭಿನಂದನ್ ಲೋಧಾ' ಮೂಲಕ ಕೋಟ್ಯಂತರ ರೂಪಾಯಿಗಳ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಮತ್ತು ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದಾಗಿ ಅಯೋಧ್ಯೆಯು ಜಾಗತಿಕ ಹೂಡಿಕೆ ತಾಣವಾಗಿ ಮಾರ್ಪಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcqvv2p2jr229sz8e2j5rgyn,imgname-amitabh-bachchan-in-kbc-17-1766032509634.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ಸೂಪರ್&zwnj;ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 'ಹೌಸ್ ಆಫ್ ಅಭಿನಂದನ್ ಲೋಧಾ' ಮೂಲಕ ಕೋಟ್ಯಂತರ ರೂಪಾಯಿಗಳ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಮತ್ತು ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದಾಗಿ ಅಯೋಧ್ಯೆಯು ಜಾಗತಿಕ ಹೂಡಿಕೆ ತಾಣವಾಗಿ ಮಾರ್ಪಡುತ್ತಿದೆ.&lt;/p&gt;&lt;img&gt;&lt;p&gt;ಅಯೋಧ್ಯೆ ರಾಮ ಮಂದಿರದ ಅವ್ಯವಹಾರಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವ ಮಧ್ಯೆಯೇ ಅಲ್ಲಿ ರಿಯಲ್ ಎಸ್ಟೇಟ್&zwnj; ಉದ್ಯಮವು ವ್ಯಾಪಕ ಬೆಳವಣಿಗೆ ಕಾಣುತ್ತಿದೆ. ಬಾಲಿವುಡ್ ಸೂಪರ್&zwnj;ಸ್ಟಾರ್ ಅಮಿತಾಬ್ ಬಚ್ಚನ್ ಅವರು ಇತ್ತೀಚಿನ ವರ್ಷಗಳಲ್ಲಿ ಅಯೋಧ್ಯೆಯಲ್ಲಿ ತಮ್ಮ ರಿಯಲ್ ಎಸ್ಟೇಟ್ ಹೂಡಿಕೆಯನ್ನು ವ್ಯಾಪಕವಾಗಿ ವಿಸ್ತರಿಸುತ್ತಿರುವುದು ಕೂಡ ಈಗ ಸುದ್ದಿಯಲ್ಲಿದೆ. 'ಹಿಂದೂಸ್ತಾನ್ ಟೈಮ್ಸ್ ಇಂಡಿಯಾ ನೆಕ್ಸ್ಟ್ ರಿಯಲ್ ಎಸ್ಟೇಟ್ ಶೃಂಗಸಭೆ 2026' ರಲ್ಲಿ ಮಾತನಾಡಿದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ 'ಹೌಸ್ ಆಫ್ ಅಭಿನಂದನ್ ಲೋಧಾ' (HoABL) ಸಂಸ್ಥಾಪಕ ಮತ್ತು ಸಿಎಂಡಿ ಅಭಿನಂದನ್ ಲೋಧಾ ಅವರು, ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ತಮ್ಮ ಮೊದಲ ಭೂಮಿಯನ್ನು ಹೇಗೆ ಖರೀದಿಸಿದರು ಎಂಬ ಸ್ವಾರಸ್ಯಕರ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;2023 ರಲ್ಲಿ ಅಭಿನಂದನ್ ಲೋಧಾ ಅವರು ಆಸ್ಟ್ರೇಲಿಯಾದಲ್ಲಿದ್ದಾಗ, ಅವರ ಮೊಬೈಲ್&zwnj;ಗೆ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಒಂದೆರಡು ಮಿಸ್ಡ್ ಕಾಲ್&zwnj;ಗಳು ಮತ್ತು ಒಂದು ಸಂದೇಶ ಬಂದಿದ್ದವು. ಆ ಸಂದೇಶದಲ್ಲಿ, ಇದು ಅಮಿತಾಬ್ ಬಚ್ಚನ್, ದಯವಿಟ್ಟು ಅನುಕೂಲವಾದಾಗ ಮತ್ತೆ ಕರೆ ಮಾಡಿ ಎಂದು ಬರೆಯಲಾಗಿತ್ತು. ಇದನ್ನು ನೋಡಿ ಆಶ್ಚರ್ಯಚಕಿತರಾದ ಲೋಧಾ, ತಕ್ಷಣವೇ ಎದ್ದು ನಿಂತು ಬಿಗ್ ಬಿ ಅವರಿಗೆ ಮರಳಿ ಕರೆ ಮಾಡಿದರು.&lt;/p&gt;&lt;p&gt;ಆಗ ಬಚ್ಚನ್ ಅವರು ಅತ್ಯಂತ ನಮ್ರತೆಯಿಂದ, ನಾನು ಮೂಲತಃ ಉತ್ತರ ಪ್ರದೇಶದವನಾಗಿದ್ದು, ಪವಿತ್ರ ಪಟ್ಟಣವಾದ ಅಯೋಧ್ಯೆಯಲ್ಲಿ ಭೂಮಿಯನ್ನು ಖರೀದಿಸಲು ಬಯಸುತ್ತೇನೆ ಎಂದು ಹೇಳಿದರು. ಅದಕ್ಕೆ ಲೋಧಾ ಅವರು, ಖಂಡಿತವಾಗಿಯೂ ನಾವು ಅದನ್ನು ನಿಮಗಾಗಿ ಮಾಡುತ್ತೇವೆ ಎಂದು ಭರವಸೆ ಕೊಟ್ಟರು. ಬಳಿಕ ಬಚ್ಚನ್ ಅವರು ಬೆಲೆಯ ಬಗ್ಗೆ ವಿಚಾರಿಸಿದಾಗ, ನಿಮ್ಮೊಂದಿಗೆ ನಾನು ಬೆಲೆಯ ಬಗ್ಗೆ ಹೇಗೆ ಮಾತನಾಡಲಿ? ಎನ್ನುತ್ತಲೇ, ಅವರು ಕೇಳಿದ 15,000 ಚದರ ಅಡಿ ಜಾಗಕ್ಕೆ ಸುಮಾರು 15 ಕೋಟಿ ರೂ. ಆಗಬಹುದು ಎಂದು ಲೋಧಾ ತಿಳಿಸಿದರು. ಆಶ್ಚರ್ಯಕರ ಸಂಗತಿಯೆಂದರೆ, ಬೆಲೆ ತಿಳಿದ ಮರುದಿನವೇ ಅಮಿತಾಬ್ ಬಚ್ಚನ್ ಅವರು ಪೂರ್ಣ 15 ಕೋಟಿ ರೂ.ಗಳನ್ನು ಕಂಪನಿಗೆ ವರ್ಗಾಯಿಸುವ ಮೂಲಕ ವ್ಯವಹಾರವನ್ನು ಪೂರ್ಣಗೊಳಿಸಿದರು.&lt;/p&gt;&lt;img&gt;&lt;p&gt;ಕಳೆದ ಕೆಲವು ವರ್ಷಗಳಿಂದ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ಸರಣಿ ಹೂಡಿಕೆಗಳನ್ನು ಮಾಡುತ್ತಾ ಬಂದಿದ್ದಾರೆ.&lt;/p&gt;&lt;p&gt;2024 (ಮೊದಲ ಹೂಡಿಕೆ): HoABL ನ ಪ್ರಮುಖ ಸೆವೆನ್-ಸ್ಟಾರ್ ಮಿಶ್ರ-ಬಳಕೆಯ ಎನ್&zwnj;ಕ್ಲೇವ್ ಆದ 'ದಿ ಸರಯು' ಯೋಜನೆಯಲ್ಲಿ 10,000 ಚದರ ಅಡಿ ಜಾಗವನ್ನು 14.5 ಕೋಟಿ ರೂ. ಗೆ ಖರೀದಿಸಿದರು.&lt;/p&gt;&lt;p&gt;ಮೇ 2025 (ಎರಡನೇ ಹೂಡಿಕೆ): 'ದಿ ಸರಯು' ಯೋಜನೆಗೆ ಹೊಂದಿಕೊಂಡಂತಿರುವ 25,000 ಚದರ ಅಡಿ ವಿಸ್ತೀರ್ಣದ ಮತ್ತೊಂದು ಪ್ಲಾಟ್&zwnj; ಅನ್ನು ಸುಮಾರು 40 ಕೋಟಿ ರೂ. ಗೆ ತಮ್ಮದಾಗಿಸಿಕೊಂಡರು.&lt;/p&gt;&lt;p&gt;ಮಾರ್ಚ್ 2026 (ಮೂರನೇ ಹೂಡಿಕೆ): 'ದಿ ಸರಯು' ಯೋಜನೆಯ ಸಮೀಪದಲ್ಲೇ ಬರೋಬ್ಬರಿ 2.67 ಎಕರೆ ಭೂಮಿಯನ್ನು 35 ಕೋಟಿ ರೂ. ಮೌಲ್ಯಕ್ಕೆ ಖರೀದಿಸಿದ್ದಾರೆ. ಇದು ಅಯೋಧ್ಯೆಯಲ್ಲಿ ಅವರ 3ನೇ ಹೂಡಿಕೆಯಾಗಿದ್ದು, HoABL ಸಂಸ್ಥೆಯೊಂದಿಗೆ ನಡೆದ 4ನೇ ಪ್ಲಾಟ್ ವ್ಯವಹಾರವಾಗಿದೆ.&lt;/p&gt;&lt;p&gt;ಅಯೋಧ್ಯೆಯ ಹೊರತಾಗಿ, ಬಚ್ಚನ್ ಅವರು ಮಹಾರಾಷ್ಟ್ರದ ಅಲಿಬಾಗ್&zwnj;ನಲ್ಲಿರುವ HoABL ನ 'ಸೋಲ್ ಡಿ ಅಲಿಬಾಗ್' ಯೋಜನೆಯಲ್ಲೂ 10 ಕೋಟಿ ರೂ. ಹೂಡಿಕೆ ಮಾಡಿ 10,000 ಚದರ ಅಡಿ ಭೂಮಿಯನ್ನು ಖರೀದಿಸಿದ್ದಾರೆ. ಈ ಯೋಜನೆಯಲ್ಲಿ ಬಾಲಿವುಡ್&zwnj;ನ ಇತರ ತಾರೆಯರಾದ ಕೃತಿ ಸನನ್ ಮತ್ತು ಕಾರ್ತಿಕ್ ಆರ್ಯನ್ ಕೂಡ ಹೂಡಿಕೆ ಮಾಡಿದ್ದಾರೆ. HoABL ಸಂಸ್ಥೆಯ ಪ್ರಕಾರ, ಅವರ ಗ್ರಾಹಕರಲ್ಲಿ ಶೇ. 65 ಕ್ಕಿಂತ ಹೆಚ್ಚು ಜನರು ಪ್ರಮುಖ ಔಷಧೀಯ, BFSI ಮತ್ತು ಬಹುರಾಷ್ಟ್ರೀಯ ಕಂಪನಿಗಳ ಸಿಇಒಗಳು, ಸಿಎಕ್ಸ್&zwnj;ಒಗಳು ಹಾಗೂ ಬಾಲಿವುಡ್ ಗಣ್ಯರಾಗಿದ್ದಾರೆ.&lt;/p&gt;&lt;img&gt;&lt;p&gt;ಅಮಿತಾಬ್ ಬಚ್ಚನ್ ಅವರ ಈ ಹೂಡಿಕೆಯ ಕುರಿತು ಮಾತನಾಡಿದ ಅಭಿನಂದನ್ ಲೋಧಾ, ಬಚ್ಚನ್ ಅವರ ಹೂಡಿಕೆಯು ಭೂಮಿಯ ಮೇಲಿನ ಹಂಚಿಕೆಯ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ದೀರ್ಘಾವಧಿಯಲ್ಲಿ ಮೌಲ್ಯವನ್ನು ಕಾಯ್ದುಕೊಳ್ಳುವ ಒಂದು ಅಂತರ ಪೀಳಿಗೆಯ ಆಸ್ತಿಯಾಗಿದೆ ಎಂದಿದ್ದಾರೆ. ನಾವು ಭೂಮಿಯನ್ನು ಕೇವಲ ಸಂಪತ್ತಾಗಿ ನೋಡುವುದಿಲ್ಲ, ಬದಲಾಗಿ ಪರಂಪರೆಯಾಗಿ ನೋಡುತ್ತೇವೆ. ಅಯೋಧ್ಯೆಯಲ್ಲಿ ಈ ಪರಂಪರೆಯು ಅತ್ಯಂತ ಆಳವಾದ ಅರ್ಥವನ್ನು ಪಡೆದುಕೊಳ್ಳುತ್ತದೆ. ಇದು ನಂಬಿಕೆ ಮತ್ತು ಆನುವಂಶಿಕತೆ ಒಟ್ಟಿಗೆ ಬರುವ ಪರಂಪರೆ. ಸೌಕರ್ಯಗಳ ಅಭಿವೃದ್ಧಿ ಮತ್ತು ಸಾರ್ವಜನಿಕ ಹೂಡಿಕೆಯ ಬೆಂಬಲದೊಂದಿಗೆ ಅಯೋಧ್ಯೆಯು ಶಾಶ್ವತ ಮೌಲ್ಯ ಸೃಷ್ಟಿಯ ಬಲವಾದ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಅಭಿನಂದನ್ ಲೋಧಾ, ಸಿಎಂಡಿ (HoABL) ಹೇಳಿದರು.&lt;/p&gt;&lt;img&gt;&lt;p&gt;ಭಾರತದ ದೇವಾಲಯ ಪಟ್ಟಣಗಳ ಸುತ್ತ ಬೆಳೆಯುತ್ತಿರುವ ಸಾಂಸ್ಕೃತಿಕ ಪ್ರವಾಸೋದ್ಯಮದ ಬಗ್ಗೆ ಮಾತನಾಡಿದ ಲೋಧಾ, ಇದು ಶೀಘ್ರದಲ್ಲೇ ಹಿರಿಯ ನಾಗರಿಕ ಸಮುದಾಯಗಳಿಗೆ ಅತ್ಯುತ್ತಮ ಆವಾಸಸ್ಥಾನವಾಗಲಿದ್ದು, ರಿಯಲ್ ಎಸ್ಟೇಟ್ ವಲಯದಲ್ಲಿ ದೊಡ್ಡ ಬೆಳವಣಿಗೆಯ ಅವಕಾಶವನ್ನು ತರಲಿದೆ ಎಂದಿದ್ದಾರೆ. ಜಾಗತಿಕ ಪ್ರವಾಸೋದ್ಯಮದ ಅಂಕಿ-ಅಂಶಗಳನ್ನು ಹೋಲಿಸಿದ ಅವರು, ವ್ಯಾಟಿಕನ್ ಸಿಟಿಯು ವರ್ಷಕ್ಕೆ ಸುಮಾರು 10 ಮಿಲಿಯನ್ (1 ಕೋಟಿ) ಪ್ರವಾಸಿಗರನ್ನು ಆಕರ್ಷಿಸಿದರೆ, ಅಯೋಧ್ಯೆಯು ಸುಮಾರು 250 ಮಿಲಿಯನ್ (25 ಕೋಟಿ) ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಒತ್ತಿ ಹೇಳಿದರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಹರಿದು ಬಂದಾಗ ಸ್ಥಳೀಯ ಆರ್ಥಿಕತೆ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆ ಅಭೂತಪೂರ್ವ ಬೆಳವಣಿಗೆಯನ್ನು ಕಾಣುವುದು ಸ್ವಾಭಾವಿಕ.&lt;/p&gt;&lt;img&gt;&lt;p&gt;'ಅಯೋಧ್ಯೆ - ಎ ರೈಸಿಂಗ್ ಗ್ಲೋಬಲ್ ಸ್ಪಿರಿಚ್ಯುವಲ್ ಕ್ಯಾಪಿಟಲ್' ಎಂಬ ಶೀರ್ಷಿಕೆಯ 'ಲಿಯಾಸೆಸ್ ಫೋರಾಸ್' ವರದಿಯ ಪ್ರಕಾರ, ಅಯೋಧ್ಯೆಯ ರಿಯಲ್ ಎಸ್ಟೇಟ್ ಮಾರುಕಟ್ಟೆ ದೊಡ್ಡ ಪರಿವರ್ತನೆಗೆ ಸಾಕ್ಷಿಯಾಗಿದೆ. ಅಯೋಧ್ಯೆಯಲ್ಲಿ ಭೂಮಿಯ ಬೆಲೆಗಳು ಶೇ. 19 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರದಲ್ಲಿ (CAGR) ಹೆಚ್ಚುತ್ತಿದ್ದು, ಇದು 2035 ರ ವೇಳೆಗೆ ಶೇ. 25 ಕ್ಕೆ ತಲುಪುವ ಮುನ್ಸೂಚನೆ ಇದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ, ಸುಧಾರಿತ ರಸ್ತೆ-ರೈಲು ಸಂಪರ್ಕ ಮತ್ತು ಭವ್ಯ ರಾಮ ಮಂದಿರ ನಿರ್ಮಾಣದ ಕಾರಣದಿಂದಾಗಿ ಕಳೆದ ಐದು ವರ್ಷಗಳಲ್ಲಿ ಇಲ್ಲಿನ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಭಾರಿ ಉತ್ತೇಜನ ಸಿಕ್ಕಿದೆ. ಪ್ರಮುಖವಾಗಿ ಸರಯು ನದಿ ದಂಡೆ ಮತ್ತು ರಾಮ ಮಂದಿರ ಕಾರಿಡಾರ್&zwnj;ಗಳಂತಹ ಆಯಕಟ್ಟಿನ ಪ್ರದೇಶಗಳಲ್ಲಿನ ಭೂಮಿಯ ಮೌಲ್ಯವು 2020 ರಿಂದ 2025 ರ ನಡುವಿನ ಅವಧಿಯಲ್ಲಿ ಬರೋಬ್ಬರಿ 4.5 ಪಟ್ಟು ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಅಯೋಧ್ಯೆಯು ಕೇವಲ ಧಾರ್ಮಿಕ ಕೇಂದ್ರವಾಗಿ ಉಳಿಯದೆ, ಜಾಗತಿಕ ಮಟ್ಟದ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮುತ್ತಿರುವುದಕ್ಕೆ ಅಮಿತಾಬ್ ಬಚ್ಚನ್ ಅವರಂತಹ ದಿಗ್ಗಜರ ಹೂಡಿಕೆಯೇ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/real-estate-bollywood-megastar-amitabh-bachchan-ayodhya-property-investment-deal-revealed-gdp-47cgezu"/>
        </item>
    </channel>
</rss>
