<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 18 May 2026 07:23:36 +0530</lastBuildDate>
        <atom:link href="https://kannada.asianetnews.com/rss/education" rel="self" type="application/rss+xml"/>
        <item>
            <title><![CDATA[ನೀಟ್ ಪರೀಕ್ಷೆ ರದ್ದತಿಗೆ ವಿಪಕ್ಷಗಳ ಟೀಕೆ, ರಾಜ್ಯದಲ್ಲಿ ಎಷ್ಟೋ ಬಾರಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ: HDK ತಿರುಗೇಟು!]]></title>
            <link>https://kannada.asianetnews.com/education/neet-ug-2026-cancelled-over-paper-leak-h-d-kumaraswamy-slams-congress-raises-kpsc-concerns-gdp/articleshow-37sfkmy</link>
            <guid isPermaLink="true">https://kannada.asianetnews.com/education/neet-ug-2026-cancelled-over-paper-leak-h-d-kumaraswamy-slams-congress-raises-kpsc-concerns-gdp/articleshow-37sfkmy</guid>
            <pubDate>Tue, 12 May 2026 17:24:08 +0530</pubDate>
            <description><![CDATA[2026ರ ನೀಟ್ ಯುಜಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಿಂದ ರದ್ದಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕೆಪಿಎಸ್&zwnj;ಸಿಯಲ್ಲಿ ನಡೆದ ಅಕ್ರಮಗಳನ್ನು ಉಲ್ಲೇಖಿಸಿ, ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-ani20250602082242,imgname-image-c4c84b1a-4c34-4617-8d6a-463a5637836e.jpg" type="image/jpeg" height="390" width="690"/>
            <content:encoded><![CDATA[&lt;p&gt;2026ನೇ ಸಾಲಿನ NEET UG ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದ ಹಿನ್ನೆಲೆ, ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡು ಮೇ 3ರಂದು ದೇಶಾದ್ಯಂತ ನಡೆದಿದ್ದ ಪರೀಕ್ಷೆಯನ್ನು ರದ್ದುಪಡಿಸಿದೆ. ಈ ಬೆಳವಣಿಗೆ ದೇಶದಾದ್ಯಂತ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ. ಕರ್ನಾಟಕದಲ್ಲಿಯೂ ಸುಮಾರು 1.45 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್&zwnj;ಗಳಿಗೆ ಪ್ರವೇಶ ಪಡೆಯಲು ನಡೆಯುವ ಈ ಪರೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ.&lt;/p&gt;&lt;h2&gt;ಕಾಂಗ್ರೆಸ್ ಆಡಳಿತದಲ್ಲೂ ಅನೇಕ ಅನಾಹುತಗಳು ನಡೆದಿವೆ&lt;/h2&gt;&lt;p&gt;ಈ ಹಿನ್ನೆಲೆಯಲ್ಲಿ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸಚಿವ ಹೆಚ್&zwnj; ಡಿ ಕುಮಾರಸ್ವಾಮಿ ಅವರು ನೀಟ್ ಪರೀಕ್ಷೆ ರದ್ದು ಮತ್ತು ಮರುಪರೀಕ್ಷೆ ಕುರಿತಾಗಿ ನಡೆದಿರುವ ರಾಜಕೀಯ ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಿ, &ldquo;ನಮ್ಮ ರಾಜ್ಯದಲ್ಲೇ ಎಷ್ಟು ಬಾರಿ ಪರೀಕ್ಷೆಗಳು ಮುಂದೂಡಿಕೆ ಆಗಿವೆ? ಕಾಂಗ್ರೆಸ್ ಆಡಳಿತದಲ್ಲೂ ಅನೇಕ ಅನಾಹುತಗಳು ನಡೆದಿವೆ. ಈಗ ಮಾತ್ರ ನೈತಿಕತೆ ಬಗ್ಗೆ ಮಾತನಾಡುವುದು ಹೇಗೆ?&rdquo; ಎಂದು ಪ್ರಶ್ನಿಸಿದರು.&lt;/p&gt;&lt;h2&gt;ಕೆಪಿಎಸ್&zwnj;ಸಿ ಬಗ್ಗೆ ಪ್ರಶ್ನೆ ಎತ್ತಿದ ಹೆಚ್&zwnj;ಡಿಕೆ&lt;/h2&gt;&lt;p&gt;ವಿಶೇಷವಾಗಿ ಕರ್ನಾಟಕ ಲೋಕ ಸೇವಾ ಆಯೋಗ (KPSC) ಕಾರ್ಯವೈಖರಿಯನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಕೆಪಿಎಸ್ಸಿ ಸಂಸ್ಥೆಯನ್ನು ಸರಿಪಡಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಈ ಸಂಸ್ಥೆ ಹಾಳಾಗಲು ಕಾಂಗ್ರೆಸ್ ಆಡಳಿತವೇ ಕಾರಣ. ಜನರು ಇಂದು ಕೆಪಿಎಸ್ಸಿ ಬಗ್ಗೆ ಯಾವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದಲ್ಲದೆ, ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪವಿರುವ ವ್ಯಕ್ತಿಯನ್ನೇ ಕೆಪಿಎಸ್ಸಿ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಗಿದೆ. ಸಾರ್ವಜನಿಕವಾಗಿ ಹುದ್ದೆಗಳಿಗೆ ಹಣ ನಿಗದಿ ಮಾಡಿ, ಬೀದಿ ಬೀದಿಯಲ್ಲಿ ಚರ್ಚೆಯಾಗುವಂತಹ ಪರಿಸ್ಥಿತಿಯನ್ನು ತಂದದ್ದು ಕಾಂಗ್ರೆಸ್ ಆಡಳಿತ ಎಂದು ಅವರು ಕಿಡಿಕಾರಿದರು.&lt;/p&gt;&lt;p&gt;ರಾಜಸ್ಥಾನದಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಉಲ್ಲೇಖಿಸಿದ ಅವರು, ಅಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಮರುಪರೀಕ್ಷೆ ನಡೆಸಲಾಗುತ್ತಿದೆ. ಕೆಲವರ ತಪ್ಪಿಗೆ ಸಂಪೂರ್ಣ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ನಮ್ಮ ರಾಜ್ಯದಲ್ಲಿಯೂ ಇದೇ ರೀತಿಯ ಘಟನೆಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದಿವೆ ಎಂದು ಹೇಳಿದರು.&lt;/p&gt;&lt;p&gt;ನೀಟ್ ಪರೀಕ್ಷೆ ಮರುಪರೀಕ್ಷೆ ಮುಂದೂಡಿಕೆಯ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಬಳಸಿಕೊಳ್ಳುತ್ತಿವೆ. ಆದರೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕು ಅವರಿಗೆ ಇಲ್ಲ ಎಂದು ಹೇಳಿದರು. ಒಟ್ಟಿನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶದ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಹೊಡೆತ ನೀಡಿದೆಯಾದರೂ, ಈ ವಿಚಾರ ರಾಜಕೀಯ ಆರೋಪ-ಪ್ರತ್ಯಾರೋಪಗಳ ವೇದಿಕೆಯಾಗಿರುವುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಷ್ಠೆಯನ್ನು ಕಾಪಾಡುವುದು ಸರ್ಕಾರಗಳ ಪ್ರಮುಖ ಜವಾಬ್ದಾರಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/neet-ug-2026-cancelled-over-paper-leak-h-d-kumaraswamy-slams-congress-raises-kpsc-concerns-gdp/articleshow-37sfkmy"/>
        </item>
        <item>
            <title><![CDATA[ಬೆಂಗಳೂರಿನ ಐಐಎಸ್‌ಸಿಗೆ ಬಂತು ಸೂಪರ್ ಕಂಪ್ಯೂಟಿಂಗ್ ಲ್ಯಾಬ್, ಸಂಶೋಧನೆಗೆ ಭರ್ಜರಿ ಬೂಸ್ಟ್ ನೀಡಿದ ಶೆಫ್ಲರ್ ಇಂಡಿಯಾ]]></title>
            <link>https://kannada.asianetnews.com/gallery/science/schaeffler-india-partners-with-iisc-to-launch-advanced-high-performance-computing-lab-in-bengaluru-gdp-6o54pwd</link>
            <guid isPermaLink="true">https://kannada.asianetnews.com/gallery/science/schaeffler-india-partners-with-iisc-to-launch-advanced-high-performance-computing-lab-in-bengaluru-gdp-6o54pwd</guid>
            <pubDate>Thu, 14 May 2026 18:24:05 +0530</pubDate>
            <description><![CDATA[&lt;p&gt;&amp;nbsp;ಐಐಎಸ್&zwnj;ಸಿ &amp;nbsp;ಮತ್ತು ಶೆಫ್ಲರ್ ಇಂಡಿಯಾ ಸಹಯೋಗದೊಂದಿಗೆ ಅತ್ಯಾಧುನಿಕ ಕಂಪ್ಯೂಟೇಶನಲ್ ಲ್ಯಾಬ್ ಅನ್ನು ಸ್ಥಾಪಿಸಲಾಗಿದೆ. ಈ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ &amp;nbsp;ಸೌಲಭ್ಯವು ಸಂಶೋಧಕರು, ಸ್ಟಾರ್ಟ್&zwnj;ಅಪ್&zwnj;ಗಳು ಮತ್ತು ಕೈಗಾರಿಕೆಗಳಿಗೆ ಲಭ್ಯವಿದ್ದು, ಸಂಶೋಧನೆ ಮತ್ತು ನಾವೀನ್ಯತೆಗೆ ಹೊಸ ವೇಗ ನೀಡಲಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gv665kjq8b6ffmcc8a2jb4zf,imgname-indian-institute-of-science-bangalore-1678466272855.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ಐಐಎಸ್&zwnj;ಸಿ &amp;nbsp;ಮತ್ತು ಶೆಫ್ಲರ್ ಇಂಡಿಯಾ ಸಹಯೋಗದೊಂದಿಗೆ ಅತ್ಯಾಧುನಿಕ ಕಂಪ್ಯೂಟೇಶನಲ್ ಲ್ಯಾಬ್ ಅನ್ನು ಸ್ಥಾಪಿಸಲಾಗಿದೆ. ಈ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ &amp;nbsp;ಸೌಲಭ್ಯವು ಸಂಶೋಧಕರು, ಸ್ಟಾರ್ಟ್&zwnj;ಅಪ್&zwnj;ಗಳು ಮತ್ತು ಕೈಗಾರಿಕೆಗಳಿಗೆ ಲಭ್ಯವಿದ್ದು, ಸಂಶೋಧನೆ ಮತ್ತು ನಾವೀನ್ಯತೆಗೆ ಹೊಸ ವೇಗ ನೀಡಲಿದೆ. &amp;nbsp;&lt;/p&gt;&lt;img&gt;&lt;p&gt;ಬೆಂಗಳೂರು: ದೇಶದ ಹೆಮ್ಮೆಯ ವಿಜ್ಞಾನ ಸಂಸ್ಥೆಯಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್&zwnj;ಸಿ)ಯ ಕ್ಯಾಂಪಸ್&zwnj;ನಲ್ಲಿ ಇದೀಗ ಸಂಶೋಧನೆ ಮತ್ತು ನಾವೀನ್ಯತೆ ಮತ್ತಷ್ಟು ಹೈ-ಟೆಕ್ ಆಗಲಿದೆ. ಪ್ರಖ್ಯಾತ ಮೋಷನ್ ಟೆಕ್ನಾಲಜಿ ಕಂಪನಿಯಾದ ಶೆಫ್ಲರ್ ಇಂಡಿಯಾ, ಐಐಎಸ್&zwnj;ಸಿಯ ಫೌಂಡೇಶನ್ ಫಾರ್ ಸೈನ್ಸ್ ಇನ್ನೋವೇಶನ್ ಅಂಡ್ ಡೆವಲಪ್&zwnj;ಮೆಂಟ್ (ಎಫ್&zwnj;ಎಸ್&zwnj;ಐಡಿ) ಜೊತೆ ಕೈಜೋಡಿಸಿದ್ದು ಅತ್ಯಾಧುನಿಕ ಕಂಪ್ಯೂಟೇಶನಲ್ ಲ್ಯಾಬ್ ಒಂದನ್ನು ಆರಂಭಿಸಿದೆ. ಶೈಕ್ಷಣಿಕ ಜ್ಞಾನ ಮತ್ತು ಕೈಗಾರಿಕಾ ತಂತ್ರಜ್ಞಾನವನ್ನು ಬೆಸೆಯುವ ಮಹತ್ವದ ಹೆಜ್ಜೆ ಇದಾಗಿದೆ.&lt;/p&gt;&lt;img&gt;&lt;p&gt;ಸಂಶೋಧನೆ ಎಂದರೆ ನೂರಾರು ಲೆಕ್ಕಾಚಾರಗಳು ಹಾಗೂ ಬೃಹತ್ ಡೇಟಾ ವಿಶ್ಲೇಷಣೆ ಅನಿವಾರ್ಯ. ಇದಕ್ಕೆ ಸಹಾಯ ಮಾಡಲು ಈ ಲ್ಯಾಬ್&zwnj;ನಲ್ಲಿ 'ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್' (ಎಚ್&zwnj;ಪಿಸಿ) ಅಳವಡಿಸಲಾಗಿದೆ. ಇದರೊಂದಿಗೆ ಸುಧಾರಿತ ಲ್ಯಾಬ್ ಸ್ಪೇಸ್, ಇನ್-ರ್ಯಾಕ್ ಕೂಲಿಂಗ್ (ತಾಪಮಾನ ನಿಯಂತ್ರಣ), ಪವರ್ ಬ್ಯಾಕಪ್ ಮತ್ತು ಹೈಬ್ರಿಡ್ ಕಂಪ್ಯೂಟಿಂಗ್ ಕ್ಲಸ್ಟರ್&zwnj;ಗಳನ್ನು ನೀಡಲಾಗಿದೆ. ಇದರಿಂದಾಗಿ ವಿಜ್ಞಾನಿಗಳು ಹೊಸ ವಸ್ತುಗಳ ಮೇಲೆ ಅಧ್ಯಯನ, ಎನರ್ಜಿ ಸಿಸ್ಟಮ್ಸ್ ಹಾಗೂ ಸುಸ್ಥಿರ ಚಲನಶೀಲತೆಯ ಕುರಿತಾದ ಸಂಕೀರ್ಣ ಲೆಕ್ಕಾಚಾರಗಳನ್ನು ಕಣ್ಣು ಮಿಟುಕುವಷ್ಟರಲ್ಲಿ ಅತಿ ವೇಗವಾಗಿ ಮತ್ತು ನಿಖರವಾಗಿ ಮಾಡಲು ಸಾಧ್ಯವಾಗಲಿದೆ.&lt;/p&gt;&lt;img&gt;&lt;p&gt;ಈ ಹೈ-ಟೆಕ್ ಸೌಲಭ್ಯ ಕೇವಲ ಐಐಎಸ್&zwnj;ಸಿ ಪ್ರಾಧ್ಯಾಪಕರಿಗಷ್ಟೇ ಸೀಮಿತವಲ್ಲ. ಕ್ಯಾಂಪಸ್&zwnj;ನಲ್ಲಿರುವ ಹಾಗೂ ಹೊರಗಿನ ಸ್ಟಾರ್ಟ್&zwnj;ಅಪ್&zwnj;ಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಕೂಡ ಈ ಅತ್ಯಾಧುನಿಕ ಲ್ಯಾಬ್ ಅನ್ನು ಬಳಸಿಕೊಳ್ಳಬಹುದು. ಜೊತೆಗೆ, ಪಿಎಚ್&zwnj;ಡಿ ಮತ್ತು ಪದವಿ ವಿದ್ಯಾರ್ಥಿಗಳ ಭವಿಷ್ಯದ ಸಂಶೋಧನಾ ಯೋಜನೆಗಳಿಗೂ ಇದು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.&lt;/p&gt;&lt;img&gt;&lt;p&gt;ಕೇವಲ ಲ್ಯಾಬ್ ಸ್ಥಾಪನೆ ಮಾತ್ರವಲ್ಲದೆ, ಭವಿಷ್ಯದಲ್ಲಿ ಜಂಟಿ ಸಂಶೋಧನೆಗಳನ್ನು ಕೈಗೊಳ್ಳಲು ಐಐಎಸ್&zwnj;ಸಿ ಹಾಗೂ ಶೆಫ್ಲರ್ ಇಂಡಿಯಾ 'ಮಾಸ್ಟರ್ ರಿಸರ್ಚ್ ಅಗ್ರಿಮೆಂಟ್' (ಎಂಆರ್&zwnj;ಎ)ಗೆ ಸಹಿ ಹಾಕಿವೆ. ಈ ಬಗ್ಗೆ ಮಾತನಾಡಿದ ಶೆಫ್ಲರ್ ಇಂಡಿಯಾದ ಎಂಡಿ ಮತ್ತು ಸಿಇಒ ಹರ್ಷ ಕದಮ್, &quot;ಭಾರತದ ಉತ್ಪಾದನಾ ವಲಯವನ್ನು ಬಲಪಡಿಸಲು ಶೈಕ್ಷಣಿಕ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಪಾಲುದಾರಿಕೆ ಅತಿ ಮುಖ್ಯ. ನಮ್ಮ ಸಿಎಸ್&zwnj;ಆರ್ ಕಾರ್ಯಕ್ರಮವಾದ 'ಹೋಪ್' (HOPE) ಅಡಿಯಲ್ಲಿ ಐಐಎಸ್&zwnj;ಸಿಗೆ ಈ ಅತ್ಯಾಧುನಿಕ ಮೂಲಸೌಕರ್ಯ ಒದಗಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ. ಇದರಿಂದ ಸಂಶೋಧನೆಗಳ ವೇಗ ಮತ್ತು ಗುಣಮಟ್ಟ ಎರಡೂ ಹೆಚ್ಚಾಗಲಿದೆ,&rdquo; ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಈ ಸೌಲಭ್ಯದಿಂದ ಐಐಎಸ್&zwnj;ಸಿ ಸಂಶೋಧನಾ ತಂಡಗಳಿಗೆ, ಸ್ಟಾರ್ಟ್&zwnj;ಅಪ್&zwnj;ಗಳಿಗೆ ಮತ್ತು ಕೈಗಾರಿಕೆಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಐಐಎಸ್&zwnj;ಸಿಯ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಸಾಯಿ ಗೌತಮ್ ಗೋಪಾಲಕೃಷ್ಣನ್ ಹೇಳಿದರು.&lt;/p&gt;&lt;p&gt;=ಶೈಕ್ಷಣಿಕ ಕ್ಷೇತ್ರ ಮತ್ತು ಕೈಗಾರಿಕೆಗಳ ನಡುವೆ ಜಂಟಿ ಸಂಶೋಧನೆಗೆ ಈ ಹೊಸ ಮೂಲಸೌಕರ್ಯ ಸೇತುವೆಯಾಗಲಿದೆ. ಇದರಿಂದ ಭವಿಷ್ಯದ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಉನ್ನತ ಮಟ್ಟದ ಡೇಟಾ ಸಂಶೋಧನಾ ಸಾಮರ್ಥ್ಯ ಹೆಚ್ಚಾಗಲಿದೆ, ಎಂದು ಎಫ್&zwnj;ಎಸ್&zwnj;ಐಡಿ ನಿರ್ದೇಶಕ ಪ್ರೊ. ಬಿ. ಗುರುಮೂರ್ತಿ ಸಂತಸ ವ್ಯಕ್ತಪಡಿಸಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಐಐಎಸ್&zwnj;ಸಿ ಮತ್ತು ಶೆಫ್ಲರ್ ಇಂಡಿಯಾದ ಈ ಪಾಲುದಾರಿಕೆಯು, ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಜೊತೆಗೆ ಕೈಗಾರಿಕೆಗಳಿಗೆ ಅಗತ್ಯವಿರುವ ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಲಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/science/schaeffler-india-partners-with-iisc-to-launch-advanced-high-performance-computing-lab-in-bengaluru-gdp-6o54pwd"/>
        </item>
        <item>
            <title><![CDATA[ಶಾಲೆ-ಕಾಲೇಜಿನಲ್ಲಿ ಹಿಜಾಬ್ ನಿಷೇಧ ರದ್ದು, ಕೇಸರಿ ಶಾಲು ಧರಿಸುವಂತಿಲ್ಲ, ಶಿಕ್ಷಣ ಸಚಿವರ ಎಚ್ಚರಿಕೆ ಏನು?]]></title>
            <link>https://kannada.asianetnews.com/state/karnataka-government-issues-important-order-to-lift-hijab-ban-in-schools-and-colleges-rav/articleshow-az02l73</link>
            <guid isPermaLink="true">https://kannada.asianetnews.com/state/karnataka-government-issues-important-order-to-lift-hijab-ban-in-schools-and-colleges-rav/articleshow-az02l73</guid>
            <pubDate>Thu, 14 May 2026 07:02:46 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರವು 2022ರ ಹಿಜಾಬ್ ನಿಷೇಧದ ವಿವಾದಾತ್ಮಕ ಆದೇಶವನ್ನು ಹಿಂಪಡೆದಿದೆ. ಹೊಸ ಆದೇಶದ ಪ್ರಕಾರ, ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರಕ್ಕೆ ಪೂರಕವಾಗಿ ಹಿಜಾಬ್, ಪೇಟ, ಜನಿವಾರ, ರುದ್ರಾಕ್ಷಿಯಂತಹ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅನುಮತಿ ನೀಡಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krj1r6yaray2tyhq7gtm2bkr,imgname-----------------------2026-05-14t070035.059-1778722282442.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.14):&lt;/strong&gt; ರಾಜ್ಯದ ಎಲ್ಲಾ ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ 2022ರಲ್ಲಿ ಹೊರಡಿಸಿದ್ದ ವಿವಾದಾತ್ಮಕ ಆದೇಶವನ್ನು ಸರ್ಕಾರ ಹಿಂಪಡೆದಿದ್ದು, ಪೇಟ/ಅರ್ಬನ್&zwnj;, ಶಿರವಸ್ತ್ರ ಅಥವಾ ಹಿಜಾಬ್&zwnj;, ಜನಿವಾರ, ಶಿವಧಾರ, ರುದ್ರಾಕ್ಷಿ ಸೇರಿ ಯಾವುದೇ ಸಮಾನ ಸ್ವರೂಪದ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಧರಿಸಲು ಅವಕಾಶ ನೀಡಿ ಹೊಸ ಆದೇಶ ಮಾಡಿದೆ.&lt;/p&gt;&lt;p&gt;ಆದರೆ, ಪರೀಕ್ಷಾ ಸಂದರ್ಭದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಸ್ತ್ರ ಸಂಹಿತೆ ನಿಯಮಗಳನ್ನು ಸಂದರ್ಭೋಚಿತವಾಗಿ ಆಯಾ ಪ್ರಾಧಿಕಾರಿಗಳು ಅಳವಡಿಸಿಕೊಳ್ಳತಕ್ಕದ್ದು ಎಂದು ತಿಳಿಸಲಾಗಿದೆ.&lt;/p&gt;&lt;p&gt;ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಇಲಾಖೆ ಹೊರಡಿಸಿರುವ ಆದೇಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಈ ವೇಳೆ, ಆರೋಗ್ಯ ಸಚಿವ ದಿನೇಶ್&zwnj; ಗುಂಡೂರಾವ್&zwnj;, ಶಾಸಕ ರಿಜ್ವಾನ್&zwnj; ಅರ್ಷದ್&zwnj; ಜೊತೆಗಿದ್ದು, ಸರ್ಕಾರದ ಆದೇಶ ಸಮರ್ಥಿಸಿಕೊಂಡರು.&lt;/p&gt;&lt;p&gt;ಈ ವೇಳೆ ಮಾತನಾಡಿದ ಮಧು ಬಂಗಾರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮ ಇಲಾಖೆ ಈ ಮಹತ್ವದ ಆದೇಶ ಮಾಡಿದೆ ಎಂದು ತಿಳಿಸಿದರು. .&lt;/p&gt;&lt;h2&gt;ಸಮವಸ್ತ್ರಕ್ಕೆ ಪೂರಕವಾಗಿರಬೇಕು:&lt;/h2&gt;&lt;p&gt;ಇಲಾಖೆಯು ತನ್ನ ಆದೇಶದಲ್ಲಿ ವಿದ್ಯಾರ್ಥಿಗಳು ನಿಗದಿ ಪಡಿಸಲಾದ ಸಮವಸ್ತ್ರದೊಂದಿಗೆ ಸೀಮಿತ ಸಾಂಪ್ರದಾಯಿಕ ಜಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸಲು ಅನುಮತಿ ನೀಡಿದೆ. ಆದರೆ ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಸಮವಸ್ತ್ರಕ್ಕೆ ಪೂರಕವಾಗಿರಬೇಕು ಮತ್ತು ನಿಗದಿತ ಸಮವಸ್ತ್ರವನ್ನು ಬದಲಿಸುವ, ಮಾರ್ಪಡಿಸುವ ಅಥವಾ ಅದರ ಮೂಲ ಉದ್ದೇಶ ವಿಫಲಗೊಳಿಸುವಂತಿರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಈ ಆದೇಶಕ್ಕೆ ವಿರುದ್ಧವಾಗಿರುವ ಯಾವುದೇ ಸುತ್ತೋಲೆ, ನಿರ್ಣಯ, ಸೂಚನೆ, ನಿರ್ದೇಶನಗಳಿದ್ದರೂ ಎಲ್ಲವೂ ತಕ್ಷಣದಿಂದ ಅನೂರ್ಜಿತವಾಗಲಿವೆ. ಒಟ್ಟಿನಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಬಸವಣ್ಣನವರ &lsquo;ಇವ ನಮ್ಮವ&rsquo; ಎಂಬ ಉದಾತ್ತವಾದ ಒಳಗೊಳ್ಳುವ ನಿಲುವು ಅಳವಡಿಸಿಕೊಳ್ಳಬೇಕು. ಯಾವುದೇ ವಿದ್ಯಾರ್ಥಿಗೆ ಯಾವುದೇ ಕಾರಣದಿಂದಲೂ ಶಿಕ್ಷಣಕ್ಕೆ ನಿರಾಕರಣೆ ಆಗದಂತೆ ಶಿಸ್ತು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ಈ ಆದೇಶ ಎಂದು ಸಚಿವರು ವಿವರಿಸಿದರು.&lt;/p&gt;&lt;h3&gt;ಯಾವುದಕ್ಕೆ ಅವಕಾಶ:&lt;/h3&gt;&lt;p&gt;ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳ ಆಡಿಯಲ್ಲಿ ಸಾಮಾನ್ಯವಾಗಿ ಧರಿಸುವ ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ತಲೆವಸ್ತ್ರ/ಹಿಜಾಬ್ ಸೇರಿ ಇತರೆ ಯಾವುದೇ ಸಮಾನ ಸ್ವರೂಪದ ಸಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಧರಿಸಲು ಅವಕಾಶ ನೀಡಿದೆ. ಆದರೆ ಇವು ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆಗೆ ಅಡ್ಡಿಯಾಗಬಾರದು ಎಂದು ಹೇಳಿದೆ.&lt;/p&gt;&lt;p&gt;ನಿಗದಿತ ಸಮವಸ್ತ್ರದೊಂದಿಗೆ ಇಂತಹ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಧರಿಸುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ, ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟವಟಿಕೆಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ. ನಿರಾಕರಿಸಿದ್ದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಅಷ್ಟೇ ಅಲ್ಲ, ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಧರಿಸುವಂತೆ ಯಾವುದೇ ವಿದ್ಯಾರ್ಥಿಗಳಿಗೆ ಒತ್ತಾಯಿಸುವಂತಿಲ್ಲ ಹಾಗೂ ಸರ್ಕಾರ ನಿಗದಿಪಡಿಸಿದ ಸಂಕೇತಗಳನ್ನು ತೆಗೆಯುವಂತೆ ಒತ್ತಾಯಸುವಂತೆಯೂ ಇಲ್ಲ.&lt;/p&gt;&lt;p&gt;ಈ ಆದೇಶದ ಅನುಷ್ಠಾನ ಏಕರೂಪವಾಗಿಬೇಕು. ಧಾರ್ಮಿಕ, ಸಾಂಪ್ರದಾಯಿಕ, ನಿಷ್ಪಕ್ಷಪಾತವಾಗಿರಬೇಕು ಮತ್ತು ತಾರತಮ್ಯರಹಿತವಾಗಿರಬೇಕು. ಸಮಾನತೆ, ಘನತೆ, ಭಾತೃತ್ವ, ಜಾತ್ಯತೀತತೆ, ವೈಜ್ಞಾನಿಕತೆ, ವೈಚಾರಿಕತೆ ಮತ್ತು ಶಿಕ್ಷಣದ ಹಕ್ಕು ಎಂಬ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರಬೇಕು. ಈ ಆದೇಶಕ್ಕೆ ವಿರುದ್ಧವಾಗಿರುವ ಯಾವುದೇ ಸುತ್ತೋಲೆ, ನಿರ್ಣಯ, ಸೂಚನೆ, ರೂಢಿ ಅಥವಾ ಸಂಸ್ಥೆಯ ನಿರ್ದೇಶನಗಳು ಅನೂರ್ಜಿತವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಇತ್ತೀಚೆಗೆ ಜನಿವಾರ ತೆಗೆಸುವ ವಿಚಾರಕ್ಕಾಗಿ ಸಂಘರ್ಷ ಭುಗಿಲೆದ್ದಿತ್ತು. ಇವೆಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಶಿಸ್ತು, ಸುರಕ್ಷತೆ ಹಾಗೂ ವಿದ್ಯಾರ್ಥಿಯನ್ನು ಗುರುತಿಸಲು ಧಾರ್ಮಿಕ ಸಂಕೇತಗಳು ಅಡ್ಡಿಯಾಗಕೂಡದು. 1ರಿಂದ 12ನೇ ತರಗತಿ ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಗ್ಗಿಸದಿರಲು ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಈ ನಿರ್ಣಯ ತಳೆದಿದ್ದೇವೆ ಎಂದು ಮಧು ಬಂಗಾರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.&lt;/p&gt;&lt;h3&gt;ಮುಸ್ಲಿಂ ಟೋಪಿ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ: ಸಚಿವ&lt;/h3&gt;&lt;p&gt;ಮುಸಲ್ಮಾನ ವಿದ್ಯಾರ್ಥಿಗಳು ಧಾರ್ಮಿಕ ಟೋಪಿ ಧರಿಸಿಕೊಂಡು ಬಂದರೆ ಅವಕಾಶ ನೀಡುತ್ತೀರಾ ಎಂಬ ಪ್ರಶ್ನೆಗೆ, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ತಿಳಿಸಿದರು.&lt;/p&gt;&lt;h3&gt;ಧಾರ್ಮಿಕ ವಿವಾದಕ್ಕೆ ಬಳಸಿದರೆ ಕ್ರಮ: ಮಧ&lt;/h3&gt;&lt;p&gt;ಸರ್ಕಾರ ಈಗ ಹೊರಡಿಸಿರುವ ಆದೇಶವನ್ನು ಧಾರ್ಮಿಕ ಸಂಘರ್ಷದಂಥ ಕೆಲಸಗಳಿಗೆ ಬಳಸಿಕೊಂಡರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ನಾವೇನು ತಲೆಕೆಟ್ಟು ಈ ಆದೇಶ ಮಾಡಿಲ್ಲ ಎಂದು ಮಧು ಬಂಗಾರಪ್ಪ ಮಾರ್ಮಿಕವಾಗಿ ನುಡಿದರು.&lt;/p&gt;&lt;p&gt;ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ದಿನೇಶ್&zwnj; ಗುಂಡೂರಾವ್&zwnj;, ಯಾವುದೇ ವಿದ್ಯಾರ್ಥಿಯ ಭಾವನೆಗೆ ನೋವುಂಟಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಆದೇಶ ಮಾಡಿದೆ. ಸಾಂಪ್ರದಾಯಿಕ ಸಂಕೇತಗಳು ಎಂದರೆ ಸರ್ಕಾರದ ಆದೇಶದಲ್ಲಿ ಇರುವುದು ಬಿಟ್ಟು ಹೆಣ್ಣುಮಕ್ಕಳು ಹಣೆಗೆ ಕುಂಕುಮ, ಬಿಂದಿ ಇಡುವುದು, ನಾಮ, ತಿಲಕ ಧಾರಣೆ ಸೇರಿ ಇನ್ನಿತರೆ ಸಂಪ್ರದಾಯಿಕ ಸಂಕೇತಗಳೂ ಸೇರುತ್ತವೆ ಎಂದು ಸ್ಪಷ್ಟಪಡಿಸಿದರು..&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-government-issues-important-order-to-lift-hijab-ban-in-schools-and-colleges-rav/articleshow-az02l73"/>
        </item>
        <item>
            <title><![CDATA[NEET Re-exam: ಜೂನ್ 21ಕ್ಕೆ ಮರುಪರೀಕ್ಷೆ ಫಿಕ್ಸ್! ಮುಂದಿನ ವರ್ಷದಿಂದ NEET ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ]]></title>
            <link>https://kannada.asianetnews.com/education/education-minister-announces-neet-ug-re-test-and-shift-to-computer-based-exams/articleshow-bbwr7w3</link>
            <guid isPermaLink="true">https://kannada.asianetnews.com/education/education-minister-announces-neet-ug-re-test-and-shift-to-computer-based-exams/articleshow-bbwr7w3</guid>
            <pubDate>Fri, 15 May 2026 13:08:33 +0530</pubDate>
            <description><![CDATA[&lt;p&gt;&lt;strong&gt;Computer based NEET exam: &lt;/strong&gt;ನೀಟ್-ಯುಜಿ ಪೇಪರ್ ಲೀಕ್ ಆದ್ಮೇಲೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜೂನ್ 21ಕ್ಕೆ ಮರುಪರೀಕ್ಷೆ ನಡೆಸೋದಾಗಿ ಹೇಳಿದ್ದಾರೆ. ಪಾರದರ್ಶಕತೆ ತರಲು ಮುಂದಿನ ವರ್ಷದಿಂದ ಪರೀಕ್ಷೆ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ಮಾದರಿಯಲ್ಲಿ ನಡೆಯಲಿದೆ ಅಂತಾನೂ ತಿಳಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-f193aef2-5ff6-4827-8d9c-5978a5b0b713.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೇಂ&lt;/strong&gt;ದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ ಮಹತ್ವದ ಘೋಷಣೆ ಮಾಡಿದ್ದಾರೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಜೂನ್ 21 ರಂದು ನೀಟ್-ಯುಜಿ ಮರುಪರೀಕ್ಷೆ ನಡೆಸಲಿದೆ. ಅಷ್ಟೇ ಅಲ್ಲ, ಪಾರದರ್ಶಕತೆ ತರಲು ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲಾಗುತ್ತೆ ಅಂತಾನೂ ಹೇಳಿದ್ದಾರೆ.&lt;/p&gt;&lt;p&gt;ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ಪ್ರಧಾನ್, ಪರೀಕ್ಷೆಯಲ್ಲಿ ಇನ್ಮುಂದೆ ಯಾವುದೇ ಅಕ್ರಮ ನಡೆಯಲು ಬಿಡಲ್ಲ ಅಂದಿದ್ದಾರೆ. &quot;ವಿದ್ಯಾರ್ಥಿಗಳ ಭವಿಷ್ಯವೇ ನಮ್ಮ ಮೊದಲ ಆದ್ಯತೆ. ಅವರ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಈ ಬಾರಿ ಯಾವುದೇ ಅಕ್ರಮಕ್ಕೆ ನಾವು ಅವಕಾಶ ಕೊಡಲ್ಲ. ಸರ್ಕಾರ ನಿಮ್ಮ ಜೊತೆ ಇದೆ. ದೇಶದ ಹಿತದೃಷ್ಟಿಯಿಂದ ನಾವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯ್ತು. ನಮಗೆ ತುಂಬಾ ಬೇಸರವಿದೆ&quot; ಅಂತ ಪ್ರಧಾನ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸಚಿವರಿಂದ ಪೇಪರ್ ಲೀಕ್ ಒಪ್ಪಿಗೆ&lt;/strong&gt;&lt;/h2&gt;&lt;p&gt;ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವರು, 'ಗೆಸ್ ಪೇಪರ್&zwnj;'ಗಳ ಹೆಸರಲ್ಲಿ ಪ್ರಶ್ನೆಗಳು ಹೊರಹೋಗಿವೆ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. &quot;ಗೆಸ್ ಪೇಪರ್&zwnj;ಗಳ ನೆಪದಲ್ಲಿ ಪ್ರಶ್ನೆಗಳು ಲೀಕ್ ಆಗಿವೆ&quot; ಅಂತ ಪ್ರಧಾನ್ ಹೇಳಿದ್ದಾರೆ.&lt;/p&gt;&lt;p&gt;&quot;ಮೇ 8 ರಂದು ಪರಿಶೀಲನಾ ಪ್ರಕ್ರಿಯೆ ಶುರುವಾಗಿ, ಮೇ 8, 9, 10 ಮತ್ತು 11 ರವರೆಗೂ ಮುಂದುವರೆಯಿತು. ಲೀಕ್ ಆದ ಪೇಪರ್ ಆಧಾರದ ಮೇಲೆ ಪ್ರಶ್ನೆಗಳು ಹೊರಹೋಗಿವೆ ಅನ್ನೋದು ನಮಗೆ ಸ್ಪಷ್ಟವಾದಾಗ, ಮೇ 12 ರಂದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ರದ್ದು ಮಾಡುವ ನಿರ್ಧಾರ ತೆಗೆದುಕೊಂಡ್ವಿ. ಶಿಕ್ಷಣ ಮಾಫಿಯಾಗಳ ಷಡ್ಯಂತ್ರದಿಂದ ಯಾವುದೇ ಅರ್ಹ ಅಭ್ಯರ್ಥಿಗೆ ಅನ್ಯಾಯ ಆಗಬಾರದು ಅನ್ನೋದು ನಮ್ಮ ಉದ್ದೇಶವಾಗಿತ್ತು&quot; ಅಂತ ಅವರು ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ಅಕ್ರಮಗಳ ವಿರುದ್ಧ 'ಝೀರೋ ಟಾಲರೆನ್ಸ್'&lt;/strong&gt;&lt;/h2&gt;&lt;p&gt;&quot;ಪರೀಕ್ಷಾ ಅಕ್ರಮಗಳ ಬಗ್ಗೆ ಸರ್ಕಾರ 'ಝೀರೋ ಟಾಲರೆನ್ಸ್' ನೀತಿ ಹೊಂದಿದೆ. ಕಳೆದ ವರ್ಷ ಸಮಸ್ಯೆಗಳು ಬಂದಾಗ, ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳನ್ನು 2025 ಮತ್ತು 2026 ಕ್ಕಾಗಿ ನಾವು ಅಕ್ಷರಶಃ ಜಾರಿಗೆ ತಂದಿದ್ದೆವು. ಆದರೂ ಈ ಘಟನೆ ನಡೆದಿದೆ. ಅದಕ್ಕಾಗಿಯೇ, ಪರೀಕ್ಷೆ ರದ್ದು ಮಾಡಿದ್ದೇ ನಮ್ಮ ಮೊದಲ ನಿರ್ಧಾರವಾಗಿತ್ತು&quot; ಅಂತ ಪ್ರಧಾನ್ ಹೇಳಿದ್ದಾರೆ.&lt;/p&gt;&lt;p&gt;ಕೇಂದ್ರ ಸಚಿವರು NTA ಯನ್ನು ಸಮರ್ಥಿಸಿಕೊಂಡಿದ್ದಾರೆ. &quot;NTA ಸಂಪೂರ್ಣ ಜವಾಬ್ದಾರಿ ಹೊತ್ತಿದೆ. NTA ಒಬ್ಬ ಸಮರ್ಥ ವ್ಯಕ್ತಿಯ ಕೈಯಲ್ಲಿದೆ. ಸುಪ್ರೀಂ ಕೋರ್ಟ್ ಶಿಫಾರಸಿನ ಮೇರೆಗೆ ಇದನ್ನ ರಚಿಸಲಾಗಿದೆ. ಇದು ಪ್ರತಿ ವರ್ಷ ಸುಮಾರು 1 ಕೋಟಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತೆ. NTA ಯಲ್ಲಿ ಶೂನ್ಯ ದೋಷ ಇರುವಂತೆ ನಾವು ನೋಡಿಕೊಳ್ಳುತ್ತೇವೆ&quot; ಅಂತ ಅವರು ಹೇಳಿದ್ದಾರೆ. ಇದನ್ನ ಯಾವುದೇ ಒಂದು ಸಂಸ್ಥೆಯ ಸಮಸ್ಯೆಯಾಗಿ ನೋಡದೆ, ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿದ ಸವಾಲು ಅಂತ ಪರಿಗಣಿಸಬೇಕು ಅಂತಾನೂ ಅವರು ಸೇರಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳಿಗಾಗಿ ಸುಧಾರಣೆಗಳ ಘೋಷಣೆ&lt;/strong&gt;&lt;/h2&gt;&lt;p&gt;ವಿದ್ಯಾರ್ಥಿಗಳು ಪಾವತಿಸಿದ ಶುಲ್ಕವನ್ನು ವಾಪಸ್ ನೀಡುವುದು ಮತ್ತು ಮುಂಬರುವ ಪರೀಕ್ಷೆಗೆ ಯಾವುದೇ ಶುಲ್ಕ ವಿಧಿಸದಿರುವುದು ಸೇರಿದಂತೆ ಹಲವು ಸುಧಾರಣೆಗಳನ್ನು ಶಿಕ್ಷಣ ಸಚಿವರು ಘೋಷಿಸಿದ್ದಾರೆ. &quot;ನಾವು ವಿದ್ಯಾರ್ಥಿಗಳ ಶುಲ್ಕವನ್ನು ಹಿಂತಿರುಗಿಸುತ್ತೇವೆ. ಮುಂಬರುವ ಪರೀಕ್ಷೆಗೆ ಶೂನ್ಯ ಶುಲ್ಕ ಇರಲಿದೆ&quot; ಅಂತ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಪರೀಕ್ಷಾ ಪ್ರಕ್ರಿಯೆಯನ್ನು ಬಲಪಡಿಸಲು ಮತ್ತು ಅಕ್ರಮಗಳನ್ನು ತಡೆಯುವ ಪ್ರಯತ್ನದ ಭಾಗವಾಗಿ, ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಸಿಬಿಟಿ (ಕಂಪ್ಯೂಟರ್ ಬೇಸ್ಡ್ ಟೆಸ್ಟ್) ಮಾದರಿಯಲ್ಲಿ ನಡೆಸಲಾಗುವುದು ಅಂತಾನೂ ಅವರು ಘೋಷಿಸಿದ್ದಾರೆ.&lt;/p&gt;&lt;h3&gt;&lt;strong&gt;ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷಾ ನಗರ ಆಯ್ಕೆ ಅವಕಾಶ&lt;/strong&gt;&lt;/h3&gt;&lt;p&gt;NTA ವಿದ್ಯಾರ್ಥಿಗಳಿಗೆ ತಮ್ಮ ಆದ್ಯತೆಯ ಪರೀಕ್ಷಾ ನಗರವನ್ನು ಮತ್ತೊಮ್ಮೆ ಆಯ್ಕೆ ಮಾಡಲು ಅವಕಾಶ ನೀಡಲಿದೆ ಅಂತ ಪ್ರಧಾನ್ ತಿಳಿಸಿದ್ದಾರೆ. &quot;ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಾರೆ. NTA ಇಂದು ಸಂಜೆಯೊಳಗೆ ಸಂಪೂರ್ಣ ಮಾಹಿತಿಯೊಂದಿಗೆ ವಿವರವಾದ ಸಾರ್ವಜನಿಕ ಪ್ರಕಟಣೆ ಹೊರಡಿಸಲಿದೆ. ಸದ್ಯಕ್ಕೆ, ವಿದ್ಯಾರ್ಥಿಗಳಿಗೆ ತಮ್ಮ ಆದ್ಯತೆಯ ಪರೀಕ್ಷಾ ನಗರವನ್ನು ಆಯ್ಕೆ ಮಾಡಲು ಒಂದು ವಾರ ಕಾಲಾವಕಾಶ ನೀಡಲು NTA ನಿರ್ಧರಿಸಿದೆ. ಯಾಕಂದ್ರೆ, ಅನೇಕ ಅಭ್ಯರ್ಥಿಗಳು ಹಿಂದಿನ ಪರೀಕ್ಷೆ ಬರೆದ ನಗರವನ್ನು ಬಿಟ್ಟು ಹೋಗಿರಬಹುದು&quot; ಅಂತ ಪ್ರಧಾನ್ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಪರೀಕ್ಷಾ ಅವಧಿ ವಿಸ್ತರಣೆ&lt;/strong&gt;&lt;/h3&gt;&lt;p&gt;ಹಾಜರಾತಿ ಹಾಳೆಗೆ ಸಹಿ ಮಾಡುವುದು ಮತ್ತು ಇತರ ಪ್ರಕ್ರಿಯೆಗಳಿಗೆ ಅನುಕೂಲವಾಗುವಂತೆ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ವಿಸ್ತರಿಸಲಾಗುವುದು ಅಂತಾನೂ ಕೇಂದ್ರ ಸಚಿವರು ಘೋಷಿಸಿದ್ದಾರೆ. &quot;ವಿದ್ಯಾರ್ಥಿಗಳ ಅನುಕೂಲ ಮತ್ತು ಸಮಯದ ಮಿತಿಯನ್ನು ಗಮನದಲ್ಲಿಟ್ಟುಕೊಂಡು, ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ವಿಸ್ತರಿಸಲು NTA ನಿರ್ಧರಿಸಿದೆ. ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಯಬೇಕಿದ್ದ ಪರೀಕ್ಷೆ, ಈಗ ಸಂಜೆ 5:15 ರವರೆಗೆ ಮುಂದುವರಿಯಲಿದೆ&quot; ಅಂತ ಅವರು ಹೇಳಿದ್ದಾರೆ.&lt;/p&gt;&lt;p&gt;&quot;ಸಾರಿಗೆ ವ್ಯವಸ್ಥೆ ಬಗ್ಗೆ ಭಾರತ ಸರ್ಕಾರ ರಾಜ್ಯಗಳೊಂದಿಗೆ ಮಾತನಾಡಲಿದೆ. ವಿದ್ಯಾರ್ಥಿಗಳಿಗೆ ಕನಿಷ್ಠ ತೊಂದರೆಯಾಗುವಂತೆ ನೋಡಿಕೊಳ್ಳಲು ನಾನು ಕೂಡಾ ವೈಯಕ್ತಿಕವಾಗಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ&quot; ಅಂತ ಅವರು ಭರವಸೆ ನೀಡಿದ್ದಾರೆ.&lt;/p&gt;&lt;p&gt;ಜೂನ್ 14 ರೊಳಗೆ ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷೆಯ ಪ್ರವೇಶ ಪತ್ರಗಳನ್ನು ನೀಡಲಾಗುವುದು ಅಂತ ಪ್ರಧಾನ್ ಹೇಳಿದ್ದಾರೆ. (ANI)&lt;/p&gt;]]></content:encoded>
            <category>education</category>
            <dc:creator>Ashwini HR</dc:creator>
            <atom:link href="https://kannada.asianetnews.com/education/education-minister-announces-neet-ug-re-test-and-shift-to-computer-based-exams/articleshow-bbwr7w3"/>
        </item>
        <item>
            <title><![CDATA[ಸಿಬಿಎಸ್ಇ 9ನೇ ಕ್ಲಾಸ್‌ಗೆ ಜು.1ರಿಂದ್ಲೇ ತ್ರಿಭಾಷೆ ಸೂತ್ರ; 3ರಲ್ಲಿ 2 ಸ್ಥಳೀಯ ಭಾಷೆ ಕಡ್ಡಾಯ]]></title>
            <link>https://kannada.asianetnews.com/education/cbse-to-introduce-three-language-formula-for-class-9-from-july-1st-mrq/articleshow-ducg7ar</link>
            <guid isPermaLink="true">https://kannada.asianetnews.com/education/cbse-to-introduce-three-language-formula-for-class-9-from-july-1st-mrq/articleshow-ducg7ar</guid>
            <pubDate>Sun, 17 May 2026 08:47:06 +0530</pubDate>
            <description><![CDATA[ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್&zwnj;ಇ) 9ನೇ ತರಗತಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿದೆ. ಈ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಕನಿಷ್ಠ ಎರಡು ಸ್ಥಳೀಯ ಭಾಷೆಗಳನ್ನು ಕಲಿಯಬೇಕಿದ್ದು, 10ನೇ ತರಗತಿಯಲ್ಲಿ ಮೂರನೇ ಭಾಷೆಗೆ ಬೋರ್ಡ್ ಪರೀಕ್ಷೆ ಇರುವುದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kkg8738qn3pmxxgqbn5v7pwb,imgname-cbse-class-12-english-exam-fake-notice-middle-east-reschedule-news-cbse-board-alert-students-parents-fact-check-2026-3-1773293243671.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್&zwnj;ಇ) 2026-27ನೇ ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಇದು ಈ ವರ್ಷ ಜು.1ರಿಂದಲೇ ಜಾರಿಗೆ ಬರಲಿದೆ. 10ನೇ ಕ್ಲಾಸ್&zwnj;ಗೆ ಮುಂದಿನ ವರ್ಷ ಜಾರಿಯಾಗಲಿದೆ.&lt;/p&gt;&lt;p&gt;9 ಮತ್ತು 10ನೇ ತರಗತಿಗಳಲ್ಲಿ ಆರ್&zwnj;1, ಆರ್&zwnj;2, ಆರ್&zwnj;3 ಎಂಬ 3 ಭಾಷೆಗಳು ಕಡ್ಡಾಯ. ಇವುಗಳಲ್ಲಿ ಕನಿಷ್ಠ 2 ಭಾಷೆಗಳು ಸ್ಥಳೀಯ ಭಾಷೆಗಳಾಗಿರಬೇಕು. ವಿದೇಶಿ ಭಾಷೆಗಳನ್ನು ಕಲಿಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ, ಅದನ್ನು 3ನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅಥವಾ ಮೂರೂ ಸ್ಥಳೀಯ ಭಾಷೆಗಳನ್ನು ಆಯ್ದುಕೊಂಡರೆ, ವಿದೇಶಿ ಭಾಷೆಯನ್ನು 4ನೇ ಭಾಷೆಯಾಗಿ ಆಯ್ದುಕೊಳ್ಳಬಹುದು. 10ನೇ ತರಗತಿಯಲ್ಲಿ ಆರ್&zwnj;3ಗೆ ಬೋರ್ಡ್ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂದು ಶುಕ್ರವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಸದ್ಯಕ್ಕೆ 6ನೇ ಕ್ಲಾಸ್&zwnj; ಪಠ್ಯ ಬಳಸಿ&lt;/strong&gt;&lt;/h2&gt;&lt;p&gt;ಆರ್&zwnj;3 ಮೌಲ್ಯಮಾಪನವನ್ನು ಸಂಪೂರ್ಣವಾಗಿ ಶಾಲಾ ಮಟ್ಟದಲ್ಲಿ ಆಂತರಿಕವಾಗಿ ನಡೆಸಲಾಗುವುದು. ಆರ್&zwnj;-3ನಲ್ಲಿ ವಿದ್ಯಾರ್ಥಿ ತೋರಿದ ಸಾಮರ್ಥ್ಯವನ್ನು ಸಿಬಿಎಸ್&zwnj;ಇ ಪ್ರಮಾಣಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಲಾಗುವುದು. ಆರ್&zwnj;3 ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿ 10ನೇ ತರಗತಿ ಬೋರ್ಡ್&zwnj; ಪರೀಕ್ಷೆಗೆ ಕೂರದಂತೆ ಮಾಡಲಾಗುವುದಿಲ್ಲ.&lt;/p&gt;&lt;p&gt;9ನೇ ತರಗತಿಯ ಆರ್&zwnj;3 ಪಠ್ಯಪುಸ್ತಕಗಳು ಲಭ್ಯವಾಗುವವರೆಗೆ 6ನೇ ತರಗತಿಯ ಆರ್&zwnj;3 ಪುಸ್ತಕವನ್ನು ಬಳಸಿಕೊಳ್ಳಬಹುದು. ಜು.1ರ ಒಳಗೆ 19 ಭಾಷೆಗಳಲ್ಲಿ 6ನೇ ತರಗತಿ ಆರ್&zwnj;3 ಪಠ್ಯಪುಸ್ತಕಗಳು ಶಾಲೆಗಳಿಗೆ ಲಭ್ಯವಾಗಲಿವೆ. ಈ ಕುರಿತ ಮಾರ್ಗದರ್ಶಿ ಪಠ್ಯವನ್ನು ಜೂ.15ಕ್ಕೆ ಒದಗಿಸಲಾಗುವುದು ಎಂದು ಸಿಬಿಎಸ್&zwnj;ಇ ತಿಳಿಸಿದೆ.&lt;/p&gt;&lt;h3&gt;&lt;strong&gt;ಶಿಕ್ಷಕರ ವಿನಿಮಯ ಮತ್ತು ನಿವೃತ್ತ ಶಿಕ್ಷಕರಿಂದ ಸೇವೆ&lt;/strong&gt;&lt;/h3&gt;&lt;p&gt;ಸ್ಥಳೀಯ ಭಾರತೀಯ ಭಾಷೆಗಳನ್ನು ಕಲಿಸಬಲ್ಲ ಶಿಕ್ಷಕರ ಅಭಾವವನ್ನು ಮನಗಂಡಿರುವ ಸಿಬಿಎಸ್&zwnj;ಇ, ಬೇರೆ ಭಾಷೆಗಳ ಶಿಕ್ಷಕರೇ ಈ ಭಾಷೆಗಳನ್ನು ಕಲಿಸುವ ಸಾಮರ್ಥ್ಯ ಹೊಂದಿದ್ದರೆ, ಅವರನ್ನೇ ಬಳಸಿಕೊಳ್ಳುವಂತೆ ಶಾಲೆಗಳಿಗೆ ಸೂಚಿಸಿದೆ. ಪರಸ್ಪರ ಶಾಲೆಗಳ ಸಹಕಾರ, ಶಿಕ್ಷಕರ ವಿನಿಮಯ ಮತ್ತು ನಿವೃತ್ತ ಶಿಕ್ಷಕರಿಂದ ಸೇವೆ ಪಡೆಯುವಂತೆಯೂ ನಿರ್ದೇಶಿಸಿದೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/cbse-to-introduce-three-language-formula-for-class-9-from-july-1st-mrq/articleshow-ducg7ar"/>
        </item>
        <item>
            <title><![CDATA[NEET UG 2026 ಮರು-ಪರೀಕ್ಷೆ ದಿನಾಂಕ ಪ್ರಕಟ: ಜೂನ್ 21 ರಂದು 22 ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆ!]]></title>
            <link>https://kannada.asianetnews.com/india-news/india-neet-ug-2026-re-exam-date-announced-june-21-nta-official-updates-sat/articleshow-enxeca6</link>
            <guid isPermaLink="true">https://kannada.asianetnews.com/india-news/india-neet-ug-2026-re-exam-date-announced-june-21-nta-official-updates-sat/articleshow-enxeca6</guid>
            <pubDate>Fri, 15 May 2026 09:59:29 +0530</pubDate>
            <description><![CDATA[&lt;p&gt;ಪ್ರಶ್ನೆ ಪತ್ರಿಕೆ ಲೀಕ್&zwnj;ನಿಂದ ರದ್ದಾಗಿದ್ದ ನೀಟ್ ಯುಜಿ 2026 ಪರೀಕ್ಷೆಯ ಮರುಪರೀಕ್ಷೆಯನ್ನು ಜೂನ್ 21 ರಂದು ನಡೆಸುವುದಾಗಿ ಎನ್&zwnj;ಟಿಎ ಘೋಷಿಸಿದೆ. ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳು ಅಧಿಕೃತ ಮಾಹಿತಿ ಮಾತ್ರ ನಂಬುವಂತೆ ಎನ್&zwnj;ಟಿಎ ಸೂಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j1esqxyvn8jbfmfmxqm8kb29,imgname-NEET-exam-fraud-crime-branch-1719557421019.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ 15): ವೈ&lt;/strong&gt;ದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಗೊಂದಲಕ್ಕೆ ಈಗ ತೆರೆ ಬಿದ್ದಿದೆ. ಮೇ 3ರಂದು ನಡೆಸಲಾಗಿದ್ದ ಪರೀಕ್ಷೆಯು ಪ್ರಶ್ನೆ ಪತ್ರಿಕೆ ಲೀಕ್ ಆದ ಹಿನ್ನೆಲೆಯಲ್ಲಿ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಶುಕ್ರವಾರದಂದು ಮಹತ್ವದ ಘೋಷಣೆ ಮಾಡಿದ್ದು, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET-UG 2026) ಮರುಪರೀಕ್ಷೆಯನ್ನು ಜೂನ್ 21 ರಂದು ನಡೆಸಲಾಗುವುದು ಎಂದು ತಿಳಿಸಿದೆ.&lt;/p&gt;&lt;h3&gt;&lt;strong&gt;ಜೂನ್ 21 ರಂದು ಪರೀಕ್ಷೆ:&lt;/strong&gt;&lt;/h3&gt;&lt;p&gt;ಎನ್&zwnj;ಟಿಎ ತನ್ನ ಅಧಿಕೃತ 'X' (ಟ್ವಿಟರ್) ಖಾತೆಯ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಜೂನ್ 21, ಭಾನುವಾರದಂದು ದೇಶಾದ್ಯಂತ ಪರೀಕ್ಷೆ ನಡೆಯಲಿದೆ. ಈ ಮರುಪರೀಕ್ಷೆಯಲ್ಲಿ ಸುಮಾರು 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳು ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.&lt;/p&gt;&lt;h2&gt;&lt;strong&gt;ಅಧಿಕೃತ ಮಾಹಿತಿ ಮಾತ್ರ ನಂಬಿ:&lt;/strong&gt;&lt;/h2&gt;&lt;p&gt;ಪರೀಕ್ಷೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳ ಬಗ್ಗೆ ಎನ್&zwnj;ಟಿಎ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ. 'ಅಧಿಕೃತ ಸಂವಹನ ಚಾನಲ್&zwnj;ಗಳ ಮೂಲಕ ಬರುವ ಮಾಹಿತಿಯನ್ನು ಮಾತ್ರ ವಿದ್ಯಾರ್ಥಿಗಳು ಮತ್ತು ಪೋಷಕರು ಅವಲಂಬಿಸಬೇಕು. ಯಾವುದೇ ಅನಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ನಂಬಬೇಡಿ' ಎಂದು ಏಜೆನ್ಸಿ ಸ್ಪಷ್ಟಪಡಿಸಿದೆ. ಪರೀಕ್ಷೆಯ ಪಾರದರ್ಶಕತೆ ಮತ್ತು ನಿಖರತೆಯನ್ನು ಕಾಪಾಡಿಕೊಳ್ಳಲು ಅಧಿಕೃತ ವೆಬ್&zwnj;ಸೈಟ್ ಗಮನಿಸುತ್ತಿರಲು ಸೂಚಿಸಲಾಗಿದೆ.&lt;/p&gt;&lt;h3&gt;&lt;strong&gt;ಪರೀಕ್ಷೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಇದಕ್ಕೂ ಮೊದಲು ನಡೆದಿದ್ದ ನೀಟ್ ಯುಜಿ 2026 ಪರೀಕ್ಷೆಯು ಕೆಲವು ತಾಂತ್ರಿಕ ಅಥವಾ ಆಡಳಿತಾತ್ಮಕ ಕಾರಣಗಳಿಂದಾಗಿ ರದ್ದಾಗಿತ್ತು. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಆತಂಕಗೊಂಡಿದ್ದರು ಮತ್ತು ಪರಿಷ್ಕೃತ ವೇಳಾಪಟ್ಟಿಗಾಗಿ ಕಾಯುತ್ತಿದ್ದರು. ಈಗ ಹೊಸ ದಿನಾಂಕ ಪ್ರಕಟವಾಗಿರುವುದು ವಿದ್ಯಾರ್ಥಿಗಳಿಗೆ ಸಮಾಧಾನ ತಂದಿದ್ದು, ಪರೀಕ್ಷಾ ಸಿದ್ಧತೆಗೆ ಮತ್ತಷ್ಟು ಸಮಯ ಲಭ್ಯವಾದಂತಾಗಿದೆ.&lt;/p&gt;&lt;h3&gt;&lt;strong&gt;ಸಹಾಯವಾಣಿ ಸಂಪರ್ಕಿಸಿ:&lt;/strong&gt;&lt;/h3&gt;&lt;p&gt;ವಿದ್ಯಾರ್ಥಿಗಳು ಅಥವಾ ಪೋಷಕರಿಗೆ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳು ಅಥವಾ ಗೊಂದಲಗಳಿದ್ದರೆ, ಎನ್&zwnj;ಟಿಎ ಒದಗಿಸಿರುವ ಅಧಿಕೃತ ಇಮೇಲ್ ಮತ್ತು ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:&lt;/p&gt;&lt;p&gt;ಇಮೇಲ್: neet-ug@nta.ac.in&lt;/p&gt;&lt;p&gt;ಹೆಲ್ಪ್&zwnj;ಲೈನ್ ಸಂಖ್ಯೆಗಳು: 011-40759000 ಮತ್ತು 011-69227700&lt;/p&gt;&lt;h3&gt;&lt;strong&gt;ವಿದ್ಯಾರ್ಥಿಗಳಿಗೆ ಸಲಹೆ:&lt;/strong&gt;&lt;/h3&gt;&lt;p&gt;ಪರೀಕ್ಷೆಗೆ ದಿನಾಂಕ ನಿಗದಿಯಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಸಿದ್ಧತೆಯನ್ನು ಚುರುಕುಗೊಳಿಸಬೇಕಿದೆ. 22 ಲಕ್ಷ ವಿದ್ಯಾರ್ಥಿಗಳು ಸ್ಪರ್ಧಿಸುತ್ತಿರುವುದರಿಂದ ಪೈಪೋಟಿ ಹೆಚ್ಚಿರಲಿದೆ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಮತ್ತು ಎನ್&zwnj;ಟಿಎ ಹೊರಡಿಸುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವುದು ಅತ್ಯಗತ್ಯ. ಮುಂದಿನ ದಿನಗಳಲ್ಲಿ ಪ್ರವೇಶ ಪತ್ರ (Admit Card) ಮತ್ತು ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿಯನ್ನು ಎನ್&zwnj;ಟಿಎ ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿ ಪ್ರಕಟಿಸಲಿದೆ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/india-neet-ug-2026-re-exam-date-announced-june-21-nta-official-updates-sat/articleshow-enxeca6"/>
        </item>
        <item>
            <title><![CDATA[ಮಣಿಪಾಲದ ಎಂಐಟಿಗೆ ವಿಶ್ವ ಗರಿ, CFA ಮಾನ್ಯತೆ ಪಡೆದ ದೇಶದ ಮೊದಲ ಎಂಜಿನಿಯರಿಂಗ್ ಸಂಸ್ಥೆ! ಇನ್ಮುಂದೆ ಜಾಗತಿಕ ಶಿಕ್ಷಣ]]></title>
            <link>https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp</link>
            <guid isPermaLink="true">https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp</guid>
            <pubDate>Sun, 10 May 2026 18:06:20 +0530</pubDate>
            <description><![CDATA[ಮಣಿಪಾಲದ ಎಂಐಟಿಯು ಪ್ರತಿಷ್ಠಿತ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನಿಂದ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆಯಾಗಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸಲಿದೆ. ಸಂಸ್ಥೆಯು 2023ರಿಂದ ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿಯಲ್ಲಿ ಬಿಟೆಕ್ ಕೋರ್ಸ್ ಅನ್ನು ಸಹ ಆರಂಭಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8xykemzxs2053j4vh0t6hw,imgname-mit-manipal--1--1778416307667.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಣಿಪಾಲ: &lt;/strong&gt;ಮಣಿಪಾಲ್ ಅಕಾಡೆಮಿ ಆಫ್&zwnj; ಹೈಯರ್&zwnj; ಎಜುಕೇಶನ್&zwnj; (ಮಾಹೆ) ವಿವಿಯ ಅಂಗ ಸಂಸ್ಥೆ ಮಣಿಪಾಲ್ ಇನ್&zwnj;ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂಐಟಿ)ಗೆ ಪ್ರತಿಷ್ಠಿತ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್ ವಿಶ್ವವಿದ್ಯಾಲಯದಿಂದ ಮಾನ್ಯತೆ ಸಿಕ್ಕಿದ್ದು, ಎಂಐಟಿಯು ಈ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ಮೇ 6ರಂದು ಮಣಿಪಾಲದಲ್ಲಿ ನಡೆದ ಕಾರ್&zwj;ಯಕ್ರಮದಲ್ಲಿ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನ ಪ್ರತಿನಿಧಿಗಳಾದ ಸೈಮ್ ಫಕಿಹ್ ಮತ್ತು ಕುಮಾರಿ ಅಂಜನಾ ನಹರ್ ಅವರು ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರಿಗೆ ಈ ಮಾನ್ಯತೆ ಪ್ರಮಾಣಪತ್ರ ಅಧಿಕೃತವಾಗಿ ಹಸ್ತಾಂತರಿಸಿದರು.&lt;/p&gt;&lt;p&gt;ಎಂಐಟಿ ನಿರ್ದೇಶಕರಾದ ಕಮಾಂಡರ್ (ಡಾ) ಅನಿಲ್ ರಾಣಾ ಮತ್ತು ಡಾ. ಕುಂಚಂ ಶ್ಯಾಮ್ ಪ್ರಸಾದ್, ಎಂಐಟಿ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, ಹ್ಯುಮಾನಿಟೀಸ್ ಅಂಡ್ ಮ್ಯಾನೇಜ್&zwnj;ಮೆಂಟ್&zwnj;ನ ಸಹ ಡೀನ್ ಡಾ. ಯೋಗೇಶ್ ಪೈ ಪಿ. ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.&lt;/p&gt;&lt;h2&gt;ಜಾಗತಿಕ ಮಟ್ಟದ ಶಿಕ್ಷಣ&lt;/h2&gt;&lt;p&gt;ಈ ಮಾನ್ಯತೆಯಿಂದ ಎಂಐಟಿ ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ದೊರೆಯಲಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವುದಲ್ಲದೆ, ಉದ್ಯಮದ ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಮತ್ತು ವಿವಿಧ ವಿದ್ಯಾರ್ಥಿವೇತನಗಳನ್ನು ಪಡೆಯಲು ದಾರಿಯಾಗಲಿದೆ.&lt;/p&gt;&lt;p&gt;ಜಾಗತಿಕ ಮಟ್ಟದಲ್ಲಿ ಹಣಕಾಸು ಮತ್ತು ಹೂಡಿಕೆ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನೊಂದಿಗೆ ಕೈಜೋಡಿಸಿರುವುದು ಎಂಐಟಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಜತೆಗೆ ಹಣಕಾಸು ಕ್ಷೇತ್ರದ ಜಾಗತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.&lt;/p&gt;&lt;h2&gt;ಬಿಟೆಕ್ ನೂತನ ಕೋರ್ಸ್ ಆರಂಭ&lt;/h2&gt;&lt;p&gt;ಸಿಎಸ್&zwnj;-ಎಫ್&zwnj;ಟಿ ಕೋರ್ಸ್ ಎಂಐಟಿಯ 2023ರಿಂದ ಬಿಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿ) ಎಂಬ ವಿನೂತನ ಕೋರ್ಸನ್ನು ಆರಂಭಿಸಿದೆ. ಕಂಪ್ಯೂಟರ್ ಸೈನ್ಸ್ ಜತೆಗೆ ಹಣಕಾಸು, ಅನಲಿಟಿಕ್ಸ್&zwnj;, ತಂತ್ರಜ್ಞಾನಗಳನ್ನು ಒಳಗೊಂಡ ಅಂತರಶಿಸ್ತೀಯ ಕೋರ್ಸ್&zwnj; ಪರಿಚಯಿಸಿದ ದೇಶದ ಮೊದಲ ಮತ್ತು ಏಕೈಕ ಸಂಸ್ಥೆ ಎಂಬ ಕೀರ್ತಿಗೆ ಎಂಐಟಿ ಪಾತ್ರವಾಗಿದೆ. ಇಂದಿನ ಆಧುನಿಕ ಉದ್ಯೋಗ ಮಾರುಕಟ್ಟೆಗೆ ಪೂರಕವಾದ ಪರಿಣಿತರನ್ನು ಸಿದ್ಧಪಡಿಸುವಲ್ಲಿ ಎಂಐಟಿ ಮಹತ್ವದ ಪಾತ್ರ ವಹಿಸುತ್ತಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp"/>
        </item>
        <item>
            <title><![CDATA[ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಬಿಗ್ ಅಪ್‌ಡೇಟ್: 9ನೇ ತರಗತಿಯಿಂದ 3 ಭಾಷೆಗಳ ಕಲಿಕೆ ಕಡ್ಡಾಯ!]]></title>
            <link>https://kannada.asianetnews.com/education/cbse-makes-three-languages-compulsory-class-9-nep-2020-new-rules-san/articleshow-g51ernl</link>
            <guid isPermaLink="true">https://kannada.asianetnews.com/education/cbse-makes-three-languages-compulsory-class-9-nep-2020-new-rules-san/articleshow-g51ernl</guid>
            <pubDate>Sat, 16 May 2026 21:19:01 +0530</pubDate>
            <description><![CDATA[&lt;p&gt;ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 2026 ರಿಂದ 9ನೇ ತರಗತಿಗೆ ಮೂರು ಭಾಷೆಗಳ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಈ ನಿಯಮದಂತೆ, ವಿದ್ಯಾರ್ಥಿಗಳು ಕಲಿಯುವ ಮೂರು ಭಾಷೆಗಳಲ್ಲಿ ಎರಡು ಭಾರತೀಯ ಭಾಷೆಗಳಾಗಿರಬೇಕು ಎಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6m2ptcdd3d6vg19n81ffya,imgname-cbse-new-curriculum-2026-27-1775117622092.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.16): &lt;/strong&gt;ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಹಾಗೂ ಪರಿಣಾಮ ಬೀರಬಲ್ಲ ಬದಲಾವಣೆಯೊಂದನ್ನು ತಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 (NEP 2020) ಮತ್ತು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಫ್ರೇಮ್&zwnj; 2023 (NCF-SE) ರ ಅನುಷ್ಠಾನದ ಭಾಗವಾಗಿ, ಮುಂಬರುವ ಜುಲೈ 1, 2026 ರಿಂದ 9ನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.&lt;/p&gt;&lt;p&gt;ಮೇ 15 ರಂದು ಸಿಬಿಎಸ್&zwnj;ಇ ಅಧಿಕೃತ ಸುತ್ತೋಲೆಯೊಂದನ್ನು ಹೊರಡಿಸಿದ್ದು, ವಿದ್ಯಾರ್ಥಿಗಳು ಇನ್ಮುಂದೆ R1, R2 ಮತ್ತು R3 ಎಂದು ಕರೆಯಲಾಗುವ ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕಾಗುತ್ತದೆ. ಅತ್ಯಂತ ಪ್ರಮುಖವಾಗಿ, ಈ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಸ್ಥಳೀಯ ಭಾಷೆಗಳಾಗಿರಬೇಕು ಎಂದು ಮಂಡಳಿ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;R3 ಭಾಷೆಗೆ ಬೋರ್ಡ್ ಪರೀಕ್ಷೆ ಇರುವುದಿಲ್ಲ!&lt;/strong&gt;&lt;/h2&gt;&lt;p&gt;ಮೂರನೇ ಭಾಷೆಯನ್ನು ಕಡ್ಡಾಯಗೊಳಿಸಿದ್ದರೂ, ವಿದ್ಯಾರ್ಥಿಗಳ ಮೇಲಿನ ಓದಿನ ಒತ್ತಡವನ್ನು ಕಡಿಮೆ ಮಾಡಲು ಸಿಬಿಎಸ್&zwnj;ಇ ಒಂದು ಮಹತ್ವದ ವಿನಾಯಿತಿ ನೀಡಿದೆ. 10ನೇ ತರಗತಿಯ ಮಟ್ಟದಲ್ಲಿ ಈ ಮೂರನೇ ಭಾಷೆಗೆ (R3) ಯಾವುದೇ ಅಧಿಕೃತ ಬೋರ್ಡ್ ಪರೀಕ್ಷೆಗಳು ಇರುವುದಿಲ್ಲ. ಬದಲಿಗೆ, ಶಾಲೆಗಳ ಮಟ್ಟದಲ್ಲೇ ಆಂತರಿಕ ಮೌಲ್ಯಮಾಪನಗಳನ್ನು (Internal Assessments) ನಡೆಸಲಾಗುವುದು ಮತ್ತು ವಿದ್ಯಾರ್ಥಿಗಳ ಸಾಧನೆಯನ್ನು ಅವರ ಸಿಬಿಎಸ್&zwnj;ಇ ಪ್ರಮಾಣಪತ್ರದಲ್ಲಿ ದಾಖಲಿಸಲಾಗುವುದು. &quot;ವಿದ್ಯಾರ್ಥಿಗಳ ಕಲಿಕೆಯ ಕಡೆಗೆ ಹೆಚ್ಚಿನ ಗಮನ ಹರಿಸಲು ಮತ್ತು ಅವರ ಮೇಲಿನ ಅನಗತ್ಯ ಒತ್ತಡವನ್ನು ಕಡಿಮೆ ಮಾಡಲು ಈ ತೀರ್ಮಾನ ಕೈಗೊಳ್ಳಲಾಗಿದೆ&quot; ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಅಲ್ಲದೆ, ಯಾವುದೇ ವಿದ್ಯಾರ್ಥಿಯು ಈ ಮೂರನೇ ಭಾಷೆಯ ಕಾರಣದಿಂದಾಗಿ 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗುವುದರಿಂದ ವಂಚಿತರಾಗುವುದಿಲ್ಲ ಎಂದು ಸಿಬಿಎಸ್&zwnj;ಇ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ವಿದೇಶಿ ಭಾಷೆ ಕಲಿಯಲು ಹೊಸ ನಿಯಮ&lt;/strong&gt;&lt;/h2&gt;&lt;p&gt;ಪರಿಷ್ಕೃತ ನಿಯಮಾವಳಿಗಳ ಪ್ರಕಾರ, ಯಾವುದೇ ವಿದ್ಯಾರ್ಥಿಯು ಫ್ರೆಂಚ್, ಜರ್ಮನ್ ನಂತಹ ವಿದೇಶಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದರೆ, ಅವರು ಮೊದಲು ಎರಡು ಭಾರತೀಯ ಭಾಷೆಗಳನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು. ತದನಂತರವಷ್ಟೇ ವಿದೇಶಿ ಭಾಷೆಯನ್ನು ಮೂರನೇ ಭಾಷೆಯಾಗಿ ಅಥವಾ ಹೆಚ್ಚುವರಿ ನಾಲ್ಕನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.&lt;/p&gt;&lt;h2&gt;&lt;strong&gt;ಶಿಕ್ಷಕರ ಕೊರತೆ ನೀಗಿಸಲು ಶಾಲೆಗಳಿಗೆ ಗಡುವು&lt;/strong&gt;&lt;/h2&gt;&lt;p&gt;ಅರ್ಹ ಭಾಷಾ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿರುವ ಶಾಲೆಗಳಿಗೆ ಸಿಬಿಎಸ್&zwnj;ಇ ಕೆಲವು ಮಧ್ಯಂತರ ಪರಿಹಾರಗಳನ್ನು ಸೂಚಿಸಿದೆ. ಶಾಲೆಗಳು ವರ್ಚುವಲ್ (ಆನ್&zwnj;ಲೈನ್) ಶಿಕ್ಷಕರ ಬೆಂಬಲ, ಇತರ ಶಾಲೆಗಳೊಂದಿಗೆ ಶಿಕ್ಷಕರನ್ನು ಹಂಚಿಕೊಳ್ಳುವುದು (Inter-school faculty sharing), ನಿವೃತ್ತ ಶಿಕ್ಷಕರನ್ನು ಅಥವಾ ಅರ್ಹ ಸ್ನಾತಕೋತ್ತರ ಪದವೀಧರರನ್ನು (Postgraduates) ಒಪ್ಪಂದದ ಆಧಾರದ ಮೇಲೆ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದೆ. ಇದರೊಂದಿಗೆ, ಜೂನ್ 30 ರೊಳಗೆ 6 ರಿಂದ 9 ನೇ ತರಗತಿಗಳಿಗೆ ತಾವು ನೀಡುತ್ತಿರುವ ಮೂರನೇ ಭಾಷೆಯ ಆಯ್ಕೆಗಳ ವಿವರಗಳನ್ನು 'ಓಯಸಿಸ್' (OASIS) ಪೋರ್ಟಲ್&zwnj;ನಲ್ಲಿ ಕಡ್ಡಾಯವಾಗಿ ಅಪ್&zwnj;ಡೇಟ್&zwnj; ಮಾಡುವಂತೆ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.&lt;/p&gt;&lt;h2&gt;&lt;strong&gt;ವಿಶೇಷ ಚೇತನರು ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ವಿನಾಯಿತಿ&lt;/strong&gt;&lt;/h2&gt;&lt;p&gt;ವಿಕಲಚೇತನರ ಹಕ್ಕುಗಳ ಕಾಯ್ದೆ 2016 ರ ಅಡಿಯಲ್ಲಿ ವಿಶೇಷ ಅಗತ್ಯವಿರುವ ಮಕ್ಕಳಿಗೆ (CwSN) ಭಾಷಾ ಕಲಿಕೆಯಲ್ಲಿ ನೀಡಲಾಗುವ ವಿನಾಯಿತಿಗಳು ಎಂದಿನಂತೆ ಮುಂದುವರಿಯಲಿವೆ. ಇದರೊಂದಿಗೆ, ವಿದೇಶಗಳಿಂದ ಭಾರತಕ್ಕೆ ಮರಳುವ ವಿದೇಶಿ ವಿದ್ಯಾರ್ಥಿಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ಎರಡು ಭಾರತೀಯ ಭಾಷೆಗಳನ್ನು ಕಲಿಯುವ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಲಾಗುವುದು ಎಂದು ಸಿಬಿಎಸ್&zwnj;ಇ ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Santosh Naik</dc:creator>
            <atom:link href="https://kannada.asianetnews.com/education/cbse-makes-three-languages-compulsory-class-9-nep-2020-new-rules-san/articleshow-g51ernl"/>
        </item>
        <item>
            <title><![CDATA[ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆದ ಸರ್ಕಾರ; ಇನ್ನುಮುಂದೆ ಜನಿವಾರ, ರುದ್ರಾಕ್ಷಿ, ಪೇಟ ಧರಿಸಲೂ ಅವಕಾಶ!]]></title>
            <link>https://kannada.asianetnews.com/state/karnataka-govt-withdraws-hijab-ban-order-new-rules-allow-headscarves-and-religious-symbols-sat/articleshow-gckf3uv</link>
            <guid isPermaLink="true">https://kannada.asianetnews.com/state/karnataka-govt-withdraws-hijab-ban-order-new-rules-allow-headscarves-and-religious-symbols-sat/articleshow-gckf3uv</guid>
            <pubDate>Wed, 13 May 2026 18:44:01 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು 2022ರ ಹಿಜಾಬ್ ನಿಷೇಧ ಆದೇಶವನ್ನು ಅಧಿಕೃತವಾಗಿ ಹಿಂಪಡೆದಿದೆ. ಹೊಸ ಮಾರ್ಗಸೂಚಿಯ ಅನ್ವಯ, ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ನೀಡಲಾಗಿದ್ದು, ಶಿಕ್ಷಣದ ಹಕ್ಕನ್ನು ಎತ್ತಿಹಿಡಿಯಲಾಗಿದೆ. ಈ ನಿಯಮವು ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ಅನ್ವಯವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krgqhbeygsb15236ab8qfdj9,imgname-karnataka-hijab-ban-cancel--1--1778678017502.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 13): ರಾ&lt;/strong&gt;ಜ್ಯದ ಶೈಕ್ಷಣಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ 'ಹಿಜಾಬ್' ವಿವಾದಕ್ಕೆ ಕರ್ನಾಟಕ ಸರ್ಕಾರವು ಈಗ ಅಧಿಕೃತವಾಗಿ ತೆರೆ ಎಳೆದಿದೆ. 2022ರಲ್ಲಿ ಅಂದಿನ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿಷೇಧಕ್ಕೆ ಪೂರಕವಾಗಿದ್ದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಹಿಂಪಡೆದಿದೆ. ಈ ಕುರಿತು ದಿನಾಂಕ 13.05.2026 ರಂದು ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ 'ಹಿಜಾಬ್' (ತಲೆವಸ್ತ್ರ) ಧರಿಸಲು ಈಗ ಮುಕ್ತ ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;h3&gt;&lt;strong&gt;ಹಳೇ ಆದೇಶ ರದ್ದು, ಹೊಸ ನಿಯಮ ಜಾರಿ:&lt;/strong&gt;&lt;/h3&gt;&lt;p&gt;ದಿನಾಂಕ 05.02.2022 ರಂದು ಹೊರಡಿಸಲಾಗಿದ್ದ ಸಮವಸ್ತ್ರ ಸಂಹಿತೆಯ ಆದೇಶವನ್ನು ರಾಜ್ಯ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ. 'ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಮತ್ತು ಸಾಂವಿಧಾನಿಕ ಮೌಲ್ಯಗಳ ವೃದ್ಧಿಗೆ ಪೂರಕವಾಗಿರಬೇಕು. ಯಾವುದೇ ಧರ್ಮ ಅಥವಾ ಸಂಪ್ರದಾಯದ ಆಚರಣೆಯು ವಿದ್ಯಾರ್ಥಿಯ ಶಿಕ್ಷಣದ ಹಕ್ಕಿಗೆ ಅಡ್ಡಿಯಾಗಬಾರದು' ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಹಿಜಾಬ್ ಮಾತ್ರವಲ್ಲ, ಪೇಟ, ರುದ್ರಾಕ್ಷಿಗೂ ಅವಕಾಶ:&lt;/strong&gt;&lt;/h2&gt;&lt;p&gt;ಸರ್ಕಾರದ ಹೊಸ ಆದೇಶದ ಪ್ರಕಾರ, ಶಾಲಾ-ಕಾಲೇಜುಗಳು ನಿಗದಿಪಡಿಸಿದ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅನುಮತಿ ನೀಡಲಾಗಿದೆ. ಇದರಲ್ಲಿ ಪ್ರಮುಖವಾಗಿ:&lt;/p&gt;&lt;ul&gt; &lt;li&gt;ಹಿಜಾಬ್ (Headscarf/ತಲೆವಸ್ತ್ರ)&lt;/li&gt; &lt;li&gt;ಪೇಟ ಅಥವಾ ಟರ್ಬನ್ (Turban)&lt;/li&gt; &lt;li&gt;ಜನಿವಾರ ಅಥವಾ ಪವಿತ್ರ ದಾರ&lt;/li&gt; &lt;li&gt;ಶಿವದಾರ ಮತ್ತು ರುದ್ರಾಕ್ಷಿ&lt;/li&gt; &lt;li&gt;ಇವುಗಳನ್ನು ಧರಿಸುವುದರಿಂದ ಶಾಲೆಯ ಶಿಸ್ತು ಅಥವಾ ಬೋಧನಾ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ.&lt;/li&gt;&lt;/ul&gt;&lt;h3&gt;&lt;strong&gt;ವಿದ್ಯಾರ್ಥಿಗಳ ಶಿಕ್ಷಣದ ಹಕ್ಕೇ ಮುಖ್ಯ:&lt;/strong&gt;&lt;/h3&gt;&lt;p&gt;ಈ ಹೊಸ ಆದೇಶದ ಅಡಿಯಲ್ಲಿ ಅತ್ಯಂತ ಮಹತ್ವದ ಅಂಶವೆಂದರೆ, ಯಾವುದೇ ವಿದ್ಯಾರ್ಥಿನಿಯು ಹಿಜಾಬ್ ಧರಿಸಿದ್ದಾಳೆ ಎಂಬ ಕಾರಣಕ್ಕೆ ಆಕೆಗೆ ಶಿಕ್ಷಣವನ್ನು ನಿರಾಕರಿಸುವಂತಿಲ್ಲ. ತರಗತಿ ಪ್ರವೇಶ ಅಥವಾ ಪರೀಕ್ಷಾ ಕೊಠಡಿಗಳಿಗೆ ಇಂತಹ ಸಂಪ್ರದಾಯಿಕ ಸಂಕೇತಗಳೊಂದಿಗೆ ಪ್ರವೇಶವನ್ನು ನಿರ್ಬಂಧಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ, ಈ ಸಂಕೇತಗಳು ವಿದ್ಯಾರ್ಥಿಯ ಗುರುತಿಸುವಿಕೆಗೆ (Identification) ಯಾವುದೇ ತೊಂದರೆ ನೀಡಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ.&lt;/p&gt;&lt;h3&gt;&lt;strong&gt;ಬಸವಣ್ಣನವರ 'ಇವ ನಮ್ಮವ' ತತ್ವದ ಅಳವಡಿಕೆ:&lt;/strong&gt;&lt;/h3&gt;&lt;p&gt;ಈ ಆದೇಶದಲ್ಲಿ ಸರ್ಕಾರವು ಜಗಜ್ಯೋತಿ ಬಸವಣ್ಣನವರ 'ಇವ ನಮ್ಮವ' ಎಂಬ ತತ್ವವನ್ನು ಪ್ರಸ್ತಾಪಿಸಿದೆ. ಶಿಕ್ಷಣ ಸಂಸ್ಥೆಗಳು ಕೇವಲ ಬೋಧನಾ ಕೇಂದ್ರಗಳಾಗದೆ, ಸಾಮಾಜಿಕ ಸಾಮರಸ್ಯ ಮತ್ತು ಪರಸ್ಪರ ಗೌರವವನ್ನು ಕಲಿಯುವ ಕೇಂದ್ರಗಳಾಗಬೇಕು. ಎಲ್ಲರನ್ನೂ ಒಳಗೊಳ್ಳುವ (Inclusive) ಮನೋಭಾವವನ್ನು ಬೆಳೆಸಲು ಈ ಹೊಸ ಆದೇಶ ಸಹಾಯ ಮಾಡಲಿದೆ ಎಂದು ಸರ್ಕಾರ ಆಶಯ ವ್ಯಕ್ತಪಡಿಸಿದೆ.&lt;/p&gt;&lt;h3&gt;&lt;strong&gt;ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಅನ್ವಯ:&lt;/strong&gt;&lt;/h3&gt;&lt;p&gt;ಈ ಹೊಸ ಮಾರ್ಗಸೂಚಿಗಳು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ-ಕಾಲೇಜುಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಅನ್ವಯವಾಗಲಿವೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (SDMC) ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಈ ಆದೇಶದ ಮೂಲಕ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಸಮವಸ್ತ್ರ ಮತ್ತು ಹಿಜಾಬ್ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ವಿದ್ಯಾರ್ಥಿಗಳು ಧಾರ್ಮಿಕ ನಂಬಿಕೆ ಮತ್ತು ಶಿಕ್ಷಣ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯಲು ಈ ಹೊಸ ನೀತಿ ಪೂರಕವಾಗಿದೆ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-withdraws-hijab-ban-order-new-rules-allow-headscarves-and-religious-symbols-sat/articleshow-gckf3uv"/>
        </item>
        <item>
            <title><![CDATA[ತಮಿಳುನಾಡು ಸಿಎಂ ಆಗಲಿರುವ ವಿಜಯ್‌ 10ನೇ ಕ್ಲಾಸ್‌ ಮಾರ್ಕ್ಸ್‌ ಕಾರ್ಡ್‌ ವೈರಲ್‌, ಗಣಿತದಲ್ಲಿ ವೀಕು, ಈ ವಿಷಯದಲ್ಲಿ ಟಾಪ್‌]]></title>
            <link>https://kannada.asianetnews.com/india-news/thalapathy-vijay-10th-marksheet-viral-maths-marks-tamil-nadu-election-2026-san/articleshow-gvag41n</link>
            <guid isPermaLink="true">https://kannada.asianetnews.com/india-news/thalapathy-vijay-10th-marksheet-viral-maths-marks-tamil-nadu-election-2026-san/articleshow-gvag41n</guid>
            <pubDate>Wed, 06 May 2026 17:13:25 +0530</pubDate>
            <description><![CDATA[ನಟ-ರಾಜಕಾರಣಿ ಜೋಸೆಫ್ ವಿಜಯ್ ಚಂದ್ರಶೇಖರ್ ಶಾಲಾ ದಿನಗಳಲ್ಲಿ ಸರಾಸರಿ ವಿದ್ಯಾರ್ಥಿಯಾಗಿದ್ದರು, ಅವರ 10ನೇ ತರಗತಿಯ ಅಂಕಪಟ್ಟಿಯಿಂದ ಇದು ತಿಳಿದುಬಂದಿದೆ. ಗಣಿತದಂತಹ ವಿಷಯಗಳಲ್ಲಿ ಕಡಿಮೆ ಅಂಕ ಗಳಿಸಿದ್ದರೂ, ಅವರು ರಾಜಕೀಯದಲ್ಲಿ ಅದ್ಭುತ ಯಶಸ್ಸು ಸಾಧಿಸಿ, ತಮಿಳುನಾಡಿನ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyabwx2xw4qwc1ya3g64m7p,imgname-thalapathy-vijay-tamil-nadu-cm-2026-net-worth-assets-car-collection-tvk-property-affidavit-1-1778060227490.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಮೇ.6): &lt;/strong&gt;ತಮಿಳುನಾಡು ರಾಜಕೀಯದ ಮುಂದಿನ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ಜೋಸೆಫ್ ವಿಜಯ್ ಚಂದ್ರಶೇಖರ್ ಅಲಿಯಾಸ್ ವಿಜಯ್, ತಮ್ಮ ಶಾಲಾ ದಿನಗಳಲ್ಲಿ ಒಬ್ಬ &quot;ಸರಾಸರಿ ವಿದ್ಯಾರ್ಥಿ&quot; (Average Student) ಆಗಿದ್ದರು. ಪ್ರಸ್ತುತ 2026ರ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ವಿಜಯ್&zwnj; ಅವರ 10ನೇ ತರಗತಿಯ ಅಂಕಪಟ್ಟಿ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನ್ಯೂಸ್-18 ವರದಿಯ ಪ್ರಕಾರ, ವಿಜಯ್ ಚೆನ್ನೈನ ವಿರುಗಂಬಾಕ್ಕಂನ ಪ್ರಖ್ಯಾತ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ತಮ್ಮ ಪ್ರೌಢಶಾಲಾ ಶಿಕ್ಷಣ ಮುಗಿಸಿದ್ದರು. ಅವರ ಅಂಕಪಟ್ಟಿಯ ವಿವರ ಹೀಗಿದೆ.&lt;/p&gt;&lt;h2&gt;&lt;strong&gt;ಒಟ್ಟು ಅಂಕಗಳು: 1100ಕ್ಕೆ 711 ಅಂಕಗಳು (ಶೇ. 65).&lt;/strong&gt;&lt;/h2&gt;&lt;p&gt;&lt;strong&gt;ತಮಿಳು (ಮಾತೃಭಾಷೆ): &lt;/strong&gt;ವಿಜಯ್ ತಮ್ಮ ಮಾತೃಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದರು. 200ಕ್ಕೆ 155 ಅಂಕಗಳನ್ನು ಪಡೆಯುವ ಮೂಲಕ ಈ ವಿಷಯದಲ್ಲಿ ಟಾಪ್ ಮಾಡಿದ್ದರು.&lt;/p&gt;&lt;p&gt;&lt;strong&gt;ಗಣಿತ&lt;/strong&gt;: ವಿಜಯ್ ಅವರಿಗೆ ಗಣಿತ ಸ್ವಲ್ಪ ಕಷ್ಟವಿತ್ತು ಎಂಬುದು ಅಂಕಪಟ್ಟಿಯಿಂದ ತಿಳಿಯುತ್ತದೆ. ಅವರು ಈ ವಿಷಯದಲ್ಲಿ 200ಕ್ಕೆ ಕೇವಲ 95 ಅಂಕಗಳನ್ನು ಮಾತ್ರ ಗಳಿಸಿದ್ದರು. ಇದು ಅವರ ಅಂಕಪಟ್ಟಿಯಲ್ಲಿನ ಕನಿಷ್ಠ ಸ್ಕೋರ್ ಆಗಿದೆ.&lt;/p&gt;&lt;p&gt;&lt;strong&gt;ಇತರ ವಿಷಯಗಳು:&lt;/strong&gt; ವಿಜ್ಞಾನದಲ್ಲಿ 300ಕ್ಕೆ 206, ಇಂಗ್ಲಿಷ್&zwnj;ನಲ್ಲಿ 200ಕ್ಕೆ 133 ಮತ್ತು ಸಮಾಜ ವಿಜ್ಞಾನದಲ್ಲಿ 200ಕ್ಕೆ 122 ಅಂಕಗಳನ್ನು ಗಳಿಸಿದ್ದರು.&lt;/p&gt;&lt;h2&gt;&lt;strong&gt;ಅಪೂರ್ಣವಾಗಿದ್ದ ಕಾಲೇಜು ಶಿಕ್ಷಣ&lt;/strong&gt;&lt;/h2&gt;&lt;p&gt;ಚೆನ್ನೈನ ಕೊಡಂಬಾಕ್ಕಂನ ಫಾತಿಮಾ ಶಾಲೆ ಮತ್ತು ವಿರುಗಂಬಾಕ್ಕಂನ ಬಾಲಲೋಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ವಿಜಯ್, ನಂತರ ಚೆನ್ನೈನ ಪ್ರತಿಷ್ಠಿತ ಲೊಯೋಲಾ ಕಾಲೇಜಿನಲ್ಲಿ 'ವಿಶುವಲ್ ಕಮ್ಯುನಿಕೇಷನ್' ಪದವಿಗೆ ಸೇರಿದ್ದರು. ಆದರೆ, ನಟನೆಯಲ್ಲಿ ಆಸಕ್ತಿ ಹೊಂದಿದ್ದರಿಂದ ಅವರು ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಚಿತ್ರರಂಗಕ್ಕೆ ಪ್ರವೇಶಿಸಿದರು.&lt;/p&gt;&lt;p&gt;ವಿಶೇಷವೆಂದರೆ, ದಶಕಗಳ ನಂತರ ವಿಜಯ್ ಇತ್ತೀಚೆಗೆ ಅದೇ ಲೊಯೋಲಾ ಕಾಲೇಜಿಗೆ ಭೇಟಿ ನೀಡಿದ್ದರು. ತಿರುಚಿರಾಪಳ್ಳಿ (ಪೂರ್ವ) ಅಥವಾ ಪೆರಂಬೂರ್ ಕ್ಷೇತ್ರದಿಂದ ಗೆದ್ದ ನಂತರ ಅವರು ತಮ್ಮ ಚುನಾವಣಾ ವಿಜಯದ ಪ್ರಮಾಣಪತ್ರ (Victory Certificate) ಪಡೆಯಲು ಅದೇ ಕಾಲೇಜಿಗೆ ಭೇಟಿ ನೀಡಿದ್ದು ಈಗ ಭಾರಿ ಸಂಚಲನ ಮೂಡಿಸಿದೆ. ತಾವು ಅರ್ಧಕ್ಕೆ ಬಿಟ್ಟಿದ್ದ ಕಾಲೇಜಿಗೆ ಈಗ ವಿಜೇತ ರಾಜಕಾರಣಿಯಾಗಿ ಮರಳಿರುವುದು ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ.&lt;/p&gt;&lt;p&gt;ತಮಿಳುನಾಡಿನಲ್ಲಿ ದಶಕಗಳಿಂದ ಆಳ್ವಿಕೆ ನಡೆಸುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪ್ರಾಬಲ್ಯವನ್ನು ವಿಜಯ್ ಅವರ ಟಿವಿಕೆ ಪಕ್ಷ ಮುರಿದಿದೆ. 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ವಿಜಯ್, ಶೀಘ್ರದಲ್ಲೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಈ ಹಳೆಯ ಅಂಕಪಟ್ಟಿಗಳು ಒಬ್ಬ ಸಾಮಾನ್ಯ ವಿದ್ಯಾರ್ಥಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/thalapathy-vijay-10th-marksheet-viral-maths-marks-tamil-nadu-election-2026-san/articleshow-gvag41n"/>
        </item>
        <item>
            <title><![CDATA[ಕಾಶ್ಮೀರ ವಿವಾದ, ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ 2 ವರ್ಷಗಳ ಕಾಲ ವಿದ್ಯಾರ್ಥಿ ಅಮಾನತು]]></title>
            <link>https://kannada.asianetnews.com/gallery/education/azim-premji-university-bengaluru-suspends-student-for-two-years-after-campus-violent-protests-erupt-gdp-l1t5n05</link>
            <guid isPermaLink="true">https://kannada.asianetnews.com/gallery/education/azim-premji-university-bengaluru-suspends-student-for-two-years-after-campus-violent-protests-erupt-gdp-l1t5n05</guid>
            <pubDate>Mon, 11 May 2026 20:44:03 +0530</pubDate>
            <description><![CDATA[&lt;p&gt;ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಓರ್ವ ವಿದ್ಯಾರ್ಥಿಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ವಿಶ್ವವಿದ್ಯಾಲಯದ ನಿರ್ಧಾರವನ್ನು ಏಕಪಕ್ಷೀಯ ಮತ್ತು ಅನ್ಯಾಯ ಎಂದು ಟೀಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj9qtvdeabap7c1b5sjyckvk,imgname-azim-premji-university-protest-1772000996782.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಓರ್ವ ವಿದ್ಯಾರ್ಥಿಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ವಿಶ್ವವಿದ್ಯಾಲಯದ ನಿರ್ಧಾರವನ್ನು ಏಕಪಕ್ಷೀಯ ಮತ್ತು ಅನ್ಯಾಯ ಎಂದು ಟೀಕಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು: ಸರ್ಜಾಪುರದಲ್ಲಿರುವ ಅಜೀಂ ಪ್ರೇಮ್ ಜಿ (ಎಪಿಯು) ಕ್ಯಾಂಪಸ್&zwnj;ನಲ್ಲಿ ಫೆಬ್ರವರಿ 24ರಂದು ನಡೆದ ಹಿಂಸಾಚಾರ ಸಂಬಂಧಿತ ವಿವಾದ ಇದೀಗ ಮತ್ತೆ ತೀವ್ರಗೊಂಡಿದ್ದು, ವಿದ್ಯಾರ್ಥಿಯೊಬ್ಬನನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿರುವ ವಿಶ್ವವಿದ್ಯಾಲಯದ ಕ್ರಮಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಇನ್ನಿಬ್ಬರು ವಿದ್ಯಾರ್ಥಿಗಳಿಗೆ ಲಿಖಿತ ಎಚ್ಚರಿಕೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ &ldquo;ರೀಡಿಂಗ್ ಸರ್ಕಲ್&rdquo; ಚರ್ಚಾ ಕಾರ್ಯಕ್ರಮವನ್ನು ಫೆಬ್ರವರಿಯಲ್ಲಿ ಆಯೋಜಿಸಲಾಗಿತ್ತು. ಆದರೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲವು ವ್ಯಕ್ತಿಗಳು ಕ್ಯಾಂಪಸ್&zwnj;ಗೆ ನುಗ್ಗಿ ಕಾರ್ಯಕ್ರಮವನ್ನು ಅಡ್ಡಿಪಡಿಸಿದ್ದು, ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿತ್ತು.&lt;/p&gt;&lt;p&gt;ಈ ಘಟನೆಯ ಹಿನ್ನೆಲೆ, ವಿಶ್ವವಿದ್ಯಾಲಯವು &ldquo;ವಿಶೇಷ ಶಿಸ್ತು ಸಮಿತಿ&rdquo; ರಚಿಸಿ ಸುಮಾರು ಎರಡು ತಿಂಗಳ ಕಾಲ ತನಿಖೆ ನಡೆಸಿತು. ತನಿಖಾ ಸಮಿತಿಯ ಶಿಫಾರಸುಗಳ ಆಧಾರದಲ್ಲಿ, ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಗುರುವಾರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಚೇರಿಯಿಂದ ಕಳುಹಿಸಲಾದ ಇಮೇಲ್ ನಲ್ಲಿ, ಅಮಾನತುಗೊಂಡ ವಿದ್ಯಾರ್ಥಿ ಸಾಂಸ್ಥಿಕ ಪ್ರಕ್ರಿಯೆಗಳ ಅವಮಾನ, ಸತ್ಯಗಳನ್ನು ಮರೆಮಾಚಿ ತಪ್ಪು ನಿರೂಪಣೆ ಹಾಗೂ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ವಿಫಲತೆ ಎಂಬ ಆರೋಪಗಳಿಗೆ ಒಳಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದ್ದು, ಮುಂದಿನ ಅವಧಿಯಲ್ಲಿ ಮರುಪ್ರವೇಶವು ಪರಿಶೀಲನೆ ಅಧೀನದಲ್ಲಿರುತ್ತದೆ ಎಂದು ಉಲ್ಲೇಖಿಲಾಗಿದೆ.&lt;/p&gt;&lt;img&gt;&lt;p&gt;ಈ ಕ್ರಮದ ವಿರುದ್ಧ ಶುಕ್ರವಾರ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್&zwnj;ನ &lsquo;ದಿ ಹಿಂಜ್&rsquo; ಪ್ರದೇಶದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ನಂತರ ರಿಜಿಸ್ಟ್ರಾರ್ ಕಚೇರಿಯ ಕಡೆಗೆ ಮೆರವಣಿಗೆ ನಡೆಸಿದರೂ, ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಪ್ರತಿಭಟನಾಕಾರರು ಈ ಕ್ರಮವನ್ನು ಏಕಪಕ್ಷೀಯ ಮತ್ತು ಅಸಮಾನ ಶಿಕ್ಷೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಬಾಹ್ಯ ವ್ಯಕ್ತಿಗಳು ನಡೆಸಿದ ದಾಳಿಗೆ ಒಳಗಾದ ವಿದ್ಯಾರ್ಥಿಗಳನ್ನು ಶಿಕ್ಷಿಸುವುದು ನ್ಯಾಯವಲ್ಲ. ನಿಜವಾದ ಅಪರಾಧಿಗಳನ್ನು ಶಿಕ್ಷಿಸುವ ಬದಲು ಬಲಿಪಶುಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ವಿದ್ಯಾರ್ಥಿಗಳು, ವಿಶೇಷ ಶಿಸ್ತು ಸಮಿತಿಯ ವರದಿ ಮತ್ತು ನಿರ್ಣಯಗಳ ಬಗ್ಗೆ ಪಾರದರ್ಶಕತೆ ಕೊರತೆಯಿದೆ ಎಂದು ಆರೋಪಿಸಿದ್ದಾರೆ. ತನಿಖಾ ವಿವರಗಳನ್ನು ಸಂಬಂಧಿತ ವಿದ್ಯಾರ್ಥಿಯೊಂದಿಗೆ ಹಂಚಿಕೊಳ್ಳಲಾಗಿಲ್ಲ ಎಂದು ಅವರು ಹೇಳಿದ್ದು, ವಿಶ್ವವಿದ್ಯಾಲಯದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇದೇ ವೇಳೆ, ಅಮಾನತು ಕುರಿತು ಕಳುಹಿಸಿದ ಇಮೇಲ್ ಸಮಯವು ಸಹ ವಿದ್ಯಾರ್ಥಿಗಳಿಂದ ಟೀಕೆಗೆ ಗುರಿಯಾಗಿದೆ. ಸಾಮೂಹಿಕ ಪ್ರತಿಕ್ರಿಯೆ ನೀಡಲು ಅವಕಾಶ ಕಡಿಮೆ ಮಾಡುವ ಉದ್ದೇಶದಿಂದ ತಡವಾಗಿ ಇಮೇಲ್ ಕಳುಹಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.&lt;/p&gt;&lt;img&gt;&lt;p&gt;ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ವಕ್ತಾರರು, &ldquo;ಫೆಬ್ರವರಿ 24ರ ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗಿದೆ. ತನಿಖಾ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿದ ಬಳಿಕವೇ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯದ ನೀತಿ ಸಂಹಿತೆಯನ್ನು ಗಂಭೀರವಾಗಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದ್ದು, ಇನ್ನಿಬ್ಬರಿಗೆ ಲಿಖಿತ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಅಮಾನತುಗೊಂಡ ವಿದ್ಯಾರ್ಥಿ ಈ ನಿರ್ಧಾರ ವಿರುದ್ಧ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದೇ ವೇಳೆ, ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ಘಟನೆ ಕ್ಯಾಂಪಸ್&zwnj;ನಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯ, ಭದ್ರತೆ ಮತ್ತು ಆಡಳಿತಾತ್ಮಕ ಕ್ರಮಗಳ ಕುರಿತ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ರೀತಿಯಲ್ಲಿ ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/education/azim-premji-university-bengaluru-suspends-student-for-two-years-after-campus-violent-protests-erupt-gdp-l1t5n05"/>
        </item>
        <item>
            <title><![CDATA[ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಭಾರೀ ಉತ್ತೇಜನ, 1600ಕೋಟಿ ಗೂ ಮೀರಿ ವಿನಿಯೋಗ, ಈ ಜಿಲ್ಲೆಗಳಿಗೆ ಜಾಕ್‌ಪಾಟ್!]]></title>
            <link>https://kannada.asianetnews.com/gallery/education/big-relief-for-medical-aspirants-as-karnataka-receives-extra-seats-1122-mbbs-and-pg-medical-seats-approved-gdp-l7ny20m</link>
            <guid isPermaLink="true">https://kannada.asianetnews.com/gallery/education/big-relief-for-medical-aspirants-as-karnataka-receives-extra-seats-1122-mbbs-and-pg-medical-seats-approved-gdp-l7ny20m</guid>
            <pubDate>Sun, 17 May 2026 21:01:14 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 1122 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು (550 ಪಿಜಿ ಮತ್ತು 572 ಎಂಬಿಬಿಎಸ್&zwnj;) ಮಂಜೂರು ಮಾಡಿದೆ. ಈ ಸೀಟುಗಳನ್ನು ರಾಜ್ಯದ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಂಚಲಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ₹1090 ಕೋಟಿ ಅನುದಾನವನ್ನೂ ನೀಡಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krv86mg234xnr7cmmrm33vcw,imgname-sharan-prakash-patil--1--1779031036418.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 1122 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು (550 ಪಿಜಿ ಮತ್ತು 572 ಎಂಬಿಬಿಎಸ್&zwnj;) ಮಂಜೂರು ಮಾಡಿದೆ. ಈ ಸೀಟುಗಳನ್ನು ರಾಜ್ಯದ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಂಚಲಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ₹1090 ಕೋಟಿ ಅನುದಾನವನ್ನೂ ನೀಡಲಾಗಿದೆ.&amp;nbsp;&lt;/p&gt;&lt;img&gt;&lt;p&gt;ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ನೀಡುವ ನಿರ್ಧಾರವಾಗಿ, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಒಟ್ಟು 1122 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಿದೆ. ಇದರಲ್ಲಿ 550 ಸ್ನಾತಕೋತ್ತರ (ಪಿಜಿ) ಮತ್ತು 572 ಸ್ನಾತಕ (ಎಂಬಿಬಿಎಸ್&zwnj;) ಸೀಟುಗಳು ಸೇರಿದ್ದು, ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ವಿಕಾಸಸೌಧದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವೈದ್ಯಕೀಯ ಸೀಟುಗಳ ಲಭ್ಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರದಿಂದ ಈ ಬಾರಿ ದೊರೆತಿರುವ ಹೆಚ್ಚುವರಿ 1122 ಸೀಟುಗಳು ಮಹತ್ವದ ಮೈಲಿಗಲ್ಲು ಎಂದರು. ಈ ಸೀಟುಗಳನ್ನು ಮುಖ್ಯವಾಗಿ ಕೊಪ್ಪಳ, ಶಿವಮೊಗ್ಗ, ಹುಬ್ಬಳ್ಳಿ, ಮಂಡ್ಯ, ಗದಗ, ಮಡಿಕೇರಿ, ಚಾಮರಾಜನಗರ, ಕಾರವಾರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಹೆಚ್ಚುವರಿ ಸೀಟುಗಳ ಜೊತೆಗೆ, ವೈದ್ಯಕೀಯ ಮೂಲಸೌಕರ್ಯವನ್ನು ಬಲಪಡಿಸಲು ಕೇಂದ್ರ ಸರ್ಕಾರವು ಒಟ್ಟು ₹1090 ಕೋಟಿ ಅನುದಾನ ನೀಡಲಿದ್ದು, ರಾಜ್ಯ ಸರ್ಕಾರವೂ ₹600 ಕೋಟಿಗೂ ಅಧಿಕ ಮೊತ್ತವನ್ನು ವಿನಿಯೋಗಿಸಲು ಸಿದ್ಧವಾಗಿದೆ. ಇದರಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸೌಲಭ್ಯಗಳು ಮತ್ತಷ್ಟು ವಿಸ್ತರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಸಾಧ್ಯವಾಗಲಿದೆ.&lt;/p&gt;&lt;img&gt;&lt;p&gt;ರಾಜ್ಯ ಸರ್ಕಾರದ ನಿರಂತರ ಪ್ರಯತ್ನಗಳ ಫಲವಾಗಿ ಈ ಹೆಚ್ಚುವರಿ ಸೀಟುಗಳು ಲಭಿಸಿವೆ ಎಂದು ಸಚಿವರು ಹೇಳಿದರು. ಕಳೆದ ವರ್ಷವೂ ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಲಾಗಿತ್ತು. ಈ ಬಾರಿ ದೊರೆತಿರುವ ಸೀಟುಗಳ ಹೆಚ್ಚಳವು, ಯಾವುದೇ ಹೊಸ ವೈದ್ಯಕೀಯ ಕಾಲೇಜು ನಿರ್ಮಿಸದೆ ಸುಮಾರು 10 ಹೊಸ ಕಾಲೇಜುಗಳಷ್ಟು ಅವಕಾಶ ಸೃಷ್ಟಿಸಿದಂತಾಗಿದೆ. ಒಂದೇ ವರ್ಷದಲ್ಲಿ ಒಂದು ರಾಜ್ಯಕ್ಕೆ ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳು ದೊರೆತಿರುವುದು ದಾಖಲೆಯಾಗಿದೆ ಎಂದು ಅವರು ಹೇಳಿದರು.&lt;/p&gt;&lt;img&gt;&lt;p&gt;ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಡಾ. ಶರಣಪ್ರಕಾಶ್ ಪಾಟೀಲ್, ಕಳೆದ ಐದು ವರ್ಷಗಳಿಂದ ಪದೇಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಹಾನಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ವೈದ್ಯರಾಗುವ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಅನ್ಯಾಯವಾಗಿದ್ದು, ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಹೊಣೆಗಾರಿಕೆ ಪ್ರಶ್ನೆಗೆ ಒಳಗಾಗುತ್ತದೆ ಎಂದರು. ಈ ಹಿನ್ನೆಲೆಯಲ್ಲಿ, ಸಿಬಿಐ ತನಿಖೆ ಮಾತ್ರವಲ್ಲದೆ ನ್ಯಾಯಾಂಗ ಮೇಲ್ವಿಚಾರಣೆಯಲ್ಲಿಯೇ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು. ಎಂಬಿಬಿಎಸ್&zwnj; ಸೀಟುಗಳ ಅಕ್ರಮ ಮಾರಾಟದ ಉದ್ದೇಶದಿಂದಲೇ ಈ ರೀತಿಯ ಹಗರಣಗಳು ನಡೆಯುತ್ತಿವೆ ಎಂಬ ಅನುಮಾನವೂ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಈ ಮಾದರಿಯನ್ನು ಕೇಂದ್ರ ಸರ್ಕಾರ ನೀಟ್&zwnj; ಪರೀಕ್ಷೆಗೆ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ, ರಾಜ್ಯಗಳಿಗೆ ಸ್ವತಂತ್ರವಾಗಿ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರವು ರಾಜ್ಯಗಳ ಸಲಹೆ ಪಡೆಯದೆ ತೀರ್ಮಾನಗಳನ್ನು ಕೈಗೊಳ್ಳುವುದರಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಟೀಕಿಸಿದ ಅವರು, ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸಮರ್ಥಿಸುವವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಒಟ್ಟಾರೆ, ಹೆಚ್ಚುವರಿ ವೈದ್ಯಕೀಯ ಸೀಟುಗಳ ಮಂಜೂರಾತಿಯಿಂದ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಕನಸುಗಳನ್ನು ಸಾಕಾರಗೊಳಿಸುವ ಅವಕಾಶ ದೊರೆಯಲಿದೆ. ಇದರ ಜೊತೆಗೆ, ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹಾಗೂ ಮೂಲಸೌಕರ್ಯವೂ ಮತ್ತಷ್ಟು ಬಲವಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/education/big-relief-for-medical-aspirants-as-karnataka-receives-extra-seats-1122-mbbs-and-pg-medical-seats-approved-gdp-l7ny20m"/>
        </item>
        <item>
            <title><![CDATA[ವಿಟಿಯು ಪರೀಕ್ಷಾ ದಿನಾಂಕ ಪ್ರಕಟ: ಯುಜಿ ಹಾಗೂ  ಪಿಜಿ ಕೋರ್ಸ್‌ಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ]]></title>
            <link>https://kannada.asianetnews.com/education/vtu-exam-time-table-2026-released-ug-and-pg-exams-begin-in-june-second-week-gdp/articleshow-lk9hedh</link>
            <guid isPermaLink="true">https://kannada.asianetnews.com/education/vtu-exam-time-table-2026-released-ug-and-pg-exams-begin-in-june-second-week-gdp/articleshow-lk9hedh</guid>
            <pubDate>Thu, 07 May 2026 17:15:38 +0530</pubDate>
            <description><![CDATA[ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ತನ್ನ ಪದವಿ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ಕೋರ್ಸ್&zwnj;ಗಳ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಜೂನ್ ಎರಡನೇ ವಾರದಿಂದ ಆಗಸ್ಟ್ ಮೂರನೇ ವಾರದವರೆಗೆ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿ ವಿವರಗಳನ್ನು ಪರಿಶೀಲಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01jrhmm88znqyqj4543w5t6f9v,imgname-vvfd.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಪ್ರಕಟಿಸಿದ್ದು, ಪದವಿ (ಯುಜಿ) ಹಾಗೂ ಸ್ನಾತಕೋತ್ತರ (ಪಿಜಿ) ಕೋರ್ಸ್&zwnj;ಗಳ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.&lt;/p&gt;&lt;h2&gt;ಜೂನ್ ಎರಡನೇ ವಾರದಿಂದ ಪರೀಕ್ಷೆ&lt;/h2&gt;&lt;p&gt;ವಿಟಿಯು ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಜೂನ್ ಎರಡನೇ ವಾರದಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಆಗಸ್ಟ್ ಮೂರನೇ ವಾರದ ಅಂತ್ಯದವರೆಗೆ ನಡೆಯಲಿವೆ. ಹೊಸ ಪಠ್ಯಕ್ರಮ ಹಾಗೂ ಹಳೆಯ ಪಠ್ಯಕ್ರಮದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕವಾಗಿ ವೇಳಾಪಟ್ಟಿಗಳನ್ನು ಪ್ರಕಟಿಸಲಾಗಿದೆ.&lt;/p&gt;&lt;p&gt;ವಿಶ್ವವಿದ್ಯಾಲಯವು ಈ ವೇಳಾಪಟ್ಟಿಯನ್ನು ತನ್ನ ಅಧೀನದಲ್ಲಿರುವ ಎಲ್ಲಾ ಸಂಯೋಜಿತ ಕಾಲೇಜುಗಳಿಗೆ ರವಾನಿಸಿದ್ದು, ವಿದ್ಯಾರ್ಥಿಗಳ ಗಮನಕ್ಕೆ ತರಲು ಕಾಲೇಜುಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ಸೂಚನೆ ನೀಡಲಾಗಿದೆ. ಜೊತೆಗೆ, ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ತಮ್ಮ ಪರೀಕ್ಷಾ ದಿನಾಂಕಗಳನ್ನು ತಿಳಿದುಕೊಳ್ಳಲು ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿಯೂ ವೇಳಾಪಟ್ಟಿ ಲಭ್ಯವಿದೆ.&lt;/p&gt;&lt;h2&gt;ಅಧಿಕೃತ ವೆಬ್&zwnj;ಸೈಟ್&zwnj; ನಲ್ಲಿ ಮಾಹಿತಿ ಲಭ್ಯ&lt;/h2&gt;&lt;p&gt;ವಿದ್ಯಾರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿಕೃತ ವೆಬ್&zwnj;ಸೈಟ್&zwnj; vtu.ac.in ನಲ್ಲಿ ಪರಿಶೀಲಿಸಬಹುದಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮಕ್ಕೆ ಅನುಗುಣವಾಗಿ ದಿನಾಂಕಗಳನ್ನು ಪರಿಶೀಲಿಸಿ ಸಿದ್ಧತೆ ನಡೆಸುವಂತೆ ವಿಶ್ವವಿದ್ಯಾಲಯ ಸೂಚಿಸಿದೆ. ಈ ಪ್ರಕಟಣೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯಲ್ಲಿ ಸಹಾಯಕವಾಗಲಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/vtu-exam-time-table-2026-released-ug-and-pg-exams-begin-in-june-second-week-gdp/articleshow-lk9hedh"/>
        </item>
        <item>
            <title><![CDATA[ಶೀರ್ಷಾಸನದಲ್ಲಿ ಶಿವತಾಂಡವ ಸ್ತೋತ್ರ: ಶಿರಸಿಯ 8 ವರ್ಷದ ಬಾಲಕನಿಗೆ ಒಲಿದ ಅಂತರಾಷ್ಟ್ರೀಯ ಪ್ರಶಸ್ತಿ]]></title>
            <link>https://kannada.asianetnews.com/education/sirsis-8-year-boy-shiva-tandava-stotram-in-sheershasana-got-international-award-suc/articleshow-nuo44cm</link>
            <guid isPermaLink="true">https://kannada.asianetnews.com/education/sirsis-8-year-boy-shiva-tandava-stotram-in-sheershasana-got-international-award-suc/articleshow-nuo44cm</guid>
            <pubDate>Sat, 02 May 2026 13:37:10 +0530</pubDate>
            <description><![CDATA[ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 8 ವರ್ಷದ ಓಂ ಎನ್ನುವ ಬಾಲಕ, ಶೀರ್ಷಾಸನ ಭಂಗಿಯಲ್ಲಿ ಶಿವ ತಾಂಡವ ಸ್ತೋತ್ರವನ್ನು ಪಠಿಸಿ ಅಂತರಾಷ್ಟ್ರೀಯ ದಾಖಲೆ ಬರೆದಿದ್ದಾನೆ. ಕೇವಲ 3 ನಿಮಿಷ 47 ಸೆಕೆಂಡುಗಳಲ್ಲಿ ಈ ಸ್ತೋತ್ರ ಪಠಿಸಿದ ಈತನ ಸಾಧನೆಗೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ವಿಶ್ವ ದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqkvc6ywnva222mp796dc6e4,imgname-om-n-1777708964828.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವರಿಗೆ ಹುಟ್ಟುತ್ತಲೇ ಯಾವುದೋ ಒಂದು ಕಲೆ ಒಲಿದಿರುತ್ತದೆ. ಅದು ಹೋದ ಜನ್ಮದ ಬಂಧವೇ ಇರಬೇಕು ಎಂದು ಹೇಳುವುದು ಉಂಟು. ಇನ್ನೂ ವರ್ಷ ತುಂಬುವ ಒಳಗೇ ಅದೆನೇನೋ ಸಾಧನೆ ಮಾಡಿರುವ ಮಕ್ಕಳಿದ್ದರೆ, 2-3 ವರ್ಷದಲ್ಲಿಯೇ ದಾಖಲೆ ಬರೆದು ಎಲ್ಲರ ಹುಬ್ಬೇರಿಸುವ ಮಕ್ಕಳೂ ಇರುತ್ತಾರೆ. ಕೆಲವೊಮ್ಮೆ ಮನೆಯ ಸಂಸ್ಕಾರ ಇದಕ್ಕೆ ಕಾರಣವಾದರೂ, ಮತ್ತೆ ಕೆಲವು ಪುಟಾಣಿಗಳಿಗೆ ಅದ್ಹೇಗೆ ಆ ಕಲೆ ಒಲಿಯುತ್ತದೆಯೋ ಆ ದೇವರೇ ಬಲ್ಲ ಎನ್ನುವ ಮಾತುಗಳು ಕೇಳಿಬರುವುದು ಉಂಟು.&lt;/p&gt;&lt;h2&gt;&lt;strong&gt;8 ವರ್ಷದ ಬಾಲಕನ ಸಾಧನೆ&lt;/strong&gt;&lt;/h2&gt;&lt;p&gt;ಅಂಥದ್ದೇ ಒಂದು ಪುಟಾಣಿ ಇದೀಗ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 8 ವರ್ಷದ ಓಂ ಎನ್. ಎನ್ನುವ ಬಾಲಕ ಶಿವ ತಾಂಡವ ಸ್ತೋತ್ರವನ್ನು 3 ನಿಮಿಷ 47 ಸೆಕೆಂಡುಗಳಲ್ಲಿ ಪಠಿಸುವ ಮೂಲಕ ಅಂತರಾಷ್ಟ್ರೀಯ ದಾಖಲೆ ಬರೆದಿದ್ದಾನೆ. ಅಷ್ಟಕ್ಕೂ ಇವನು ಹಾಗೆಯೇ ಇದನ್ನು ಪಠಿಸಿದ್ದಲ್ಲ. ಬದಲಿಗೆ ಶೀರ್ಷಾಸನ ಹಾಕುವ ಮೂಲಕ ಅಂದರೆ ತಲೆಕೆಳಗಾಗಿ ನಿಲ್ಲುವ ಮೂಲಕ, ಕೈಯನ್ನು ಮುಗಿದು ಈ ಸ್ತೋತ್ರ ಹೇಳಿದ್ದಾನೆ. ಬಾಲಕನ ಗಮನಾರ್ಹ ಪ್ರತಿಭೆ ಮತ್ತು ಸಮರ್ಪಣೆಗೆ ಅಂತರರಾಷ್ಟ್ರೀಯ ದಾಖಲೆ ಪುಸ್ತಕದಲ್ಲಿ ಪ್ರತಿಷ್ಠಿತ ವಿಶ್ವ ದಾಖಲೆಯನ್ನು ಗಳಿಸಿಕೊಟ್ಟಿದೆ.&lt;/p&gt;&lt;h3&gt;&lt;strong&gt;ಮೂರನೆಯ ಕ್ಲಾಸ್​ ವಿದ್ಯಾರ್ಥಿ&lt;/strong&gt;&lt;/h3&gt;&lt;p&gt;ಶಿರಸಿಯ ಇಸಳೂರಿನ ಶ್ರೀನಿಕೇತನ ಶಾಲೆಯ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ ಓಂ. ಮಹಾಶಿವರಾತ್ರಿಯ ಪ್ರಯುಕ್ತ ಓಂ ಶೀರ್ಷಾಸನ ಭಂಗಿಯಲ್ಲಿ ಕೇವಲ ಮೂರು ನಿಮಿಷ 47 ಸೆಕೆಂಡುಗಳಲ್ಲಿ ಶಿವತಾಂಡವ ಸ್ತೋತ್ರವನ್ನ ಪಠಿಸಿ ಎಲ್ಲರ ಗಮನ ಸೆಳೆದಿದ್ದ. ಇದೀಗ ಈ ವಿಶಿಷ್ಟ ಸಾಧನೆಯನ್ನು ಗುರುತಿಸಿದ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಬಾಲಕನಿಗೆ ವಿಶ್ವ ದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟಕ್ಕೂ ಈ ಬಾಲಕನ ಸಾಧನೆ ಇಲ್ಲಿಗೇ ಮುಗಿದಿಲ್ಲ. ಆರು ವರ್ಷದ ಪುಟಾಣಿ ಇರುವಾಗಲೇ ಒಂದು ನಿಮಿಷ 42 ಸೆಕೆಂಡುಗಳಲ್ಲಿ ಏಷ್ಯಾ ಖಂಡದ 48 ದೇಶಗಳ ಹೆಸರು ರಾಜಧಾನಿ ಮತ್ತು ಕರೆನ್ಸಿಗಳನ್ನು ನೋಡದೆ ಸರಾಗವಾಗಿ ಹೇಳಿ ದಾಖಲೆ ನಿರ್ಮಿಸಿದ್ದ.&lt;/p&gt;&lt;p&gt;ಶಿರಸಿಯ ನಿವೃತ್ತ ಸೈನ್ಯಾಧಿಕಾರಿ ಶ್ರೀನಿವಾಸ್ ನಾಯಕ್ ಹಾಗೂ ಉಪನ್ಯಾಸಕಿ ಡಾಕ್ಟರ್ ಅಪರ್ಣ ಕರ್ಕಿ ಅವರ ಪುತ್ರನಾಗಿರುವ ಓಂ ಪ್ರತಿಭೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/education/sirsis-8-year-boy-shiva-tandava-stotram-in-sheershasana-got-international-award-suc/articleshow-nuo44cm"/>
        </item>
        <item>
            <title><![CDATA[ಸಿಬಿಎಸ್‌ಇ ಮಹತ್ವದ ಬದಲಾವಣೆ: ವಿದ್ಯಾರ್ಥಿಗಳಿಗಿದು ಅಚ್ಚರಿಯ ಸುದ್ದಿ!]]></title>
            <link>https://kannada.asianetnews.com/education/cbse-class-12-huge-reduction-in-revaluation-fees-mrq/articleshow-rpoo1d6</link>
            <guid isPermaLink="true">https://kannada.asianetnews.com/education/cbse-class-12-huge-reduction-in-revaluation-fees-mrq/articleshow-rpoo1d6</guid>
            <pubDate>Mon, 18 May 2026 07:23:31 +0530</pubDate>
            <description><![CDATA[&lt;p&gt;ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ: ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಮೌಲ್ಯಮಾಪನಕ್ಕಾಗಿ ಆನ್&zwnj;-ಸ್ಕ್ರೀನ್&zwnj; ಮಾರ್ಕಿಂಗ್&zwnj; (ಒಎಸ್&zwnj;ಎಂ) ವ್ಯವಸ್ಥೆಯನ್ನು ಬಳಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpcztsef23g52m1r7vha11cc,imgname-atal-awasiya-vidyalaya-yojana-up-cbse-result-2026-1776405013967.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್&zwnj;ಇ) 12ನೇ ತರಗತಿಯ ವಿದ್ಯಾರ್ಥಿಗಳಿಗೆ ಶುಭಸುದ್ದಿ ನೀಡಿದ್ದು, ಸ್ಕ್ಯಾನ್&zwnj; ಮಾಡಲಾದ ಉತ್ತರಪತ್ರಿಕೆ ಪಡೆಯುವುದು, ಅಂಕಗಳ ಪರಿಶೀಲನೆ, ಮರುಮೌಲ್ಯಮಾಪಲನದಂತಹ ಸೇವೆಗಳಿಗೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಭಾರೀ ಇಳಿಕೆ ಮಾಡಿದೆ. ಇದು 2026ರಿಂದಲೇ ಜಾರಿಗೆ ಬರಲಿದೆ.&lt;/p&gt;&lt;p&gt;ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಬದಲಾವಣೆ ಮಾಡಿರುವುದಾಗಿ ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಏನೇನು ಬದಲಾವಣೆ?&lt;/strong&gt;&lt;/h2&gt;&lt;p&gt;ಹೊಸ ದರದ ಪ್ರಕಾರ, ಇಷ್ಟುದಿನ ಸ್ಕ್ಯಾನ್&zwnj; ಮಾಡಲಾದ ಉತ್ತರಪತ್ರಿಕೆಯನ್ನು ಪಡೆಯಲು ಪ್ರತಿ ವಿಷಯಕ್ಕೆ 700 ರು. ಪಾವತಿಸುತ್ತಿದ್ದ ವಿದ್ಯಾರ್ಥಿಗಳು ಇನ್ನುಮುಂದೆ ಕೇವಲ 100 ರು. ಪಾವತಿ ಮಾಡಬೇಕಾಗುವುದು. ಅಂತೆಯೇ, ಅಂಕಗಳನ್ನು ಪರಿಶೀಲಿಸಬೇಕಾದಲ್ಲೂ 500 ರು. ಬದಲು 100 ರು. ನೀಡಿದರೆ ಸಾಕು.&lt;/p&gt;&lt;p&gt;ಉತ್ತರಪತ್ರಿಕೆಯ ಮರುಪರಿಶೀಲನೆ ಮಾಡಿಸಬೇಕಾದಲ್ಲಿ ಪ್ರತಿ ಉತ್ತರಕ್ಕೆ 100 ರು. ಪಾವತಿಸುತ್ತಿದ್ದ ಜಾಗದಲ್ಲೀಗ 25 ರು. ಪಾವತಿಸಬೇಕು. ಒಂದೊಮ್ಮೆ ಮರುಪರಿಶೀಲನೆ ಬಳಿಕ ಅಂಕ ಹೆಚ್ಚಿದರೆ, ಪಾವತಿಸಿದ ಅಷ್ಟೂ ಮೊತ್ತವನ್ನು ವಿದ್ಯಾರ್ಥಿಗಳಿಗೆ ಮರಳಿಸಲಾಗುವುದು.&lt;/p&gt;&lt;h3&gt;&lt;strong&gt;ಮೊದಲ ಬಾರಿ ಒಎಸ್&zwnj;ಎಂ&lt;/strong&gt;&lt;/h3&gt;&lt;p&gt;ಆನ್&zwnj;-ಸ್ಕ್ರೀನ್&zwnj; ಮಾರ್ಕಿಂಗ್&zwnj; ಸಿಸ್ಟಂ(ಒಎಸ್&zwnj;ಎಂ) ವ್ಯವಸ್ಥೆಯನ್ನು 12ನೇ ತರಗತಿ ಪರೀಕ್ಷೆ ಮೌಲ್ಯಮಾಪನದ ವೇಳೆ ಇದೇ ಮೊದಲ ಬಾರಿ ಬಳಸಲಾಗಿದೆ. ಇದರಲ್ಲಿ, ವಿದ್ಯಾರ್ಥಿಗಳ ಉತ್ತರಪತ್ರಿಕೆಯನ್ನು ಸ್ಕ್ಯಾನ್&zwnj; ಮಾಡಿ ಪಿಡಿಎಫ್&zwnj; ರೂಪದಲ್ಲಿ ಸಿಬಿಎಸ್&zwnj;ಇ ವೆಬ್&zwnj;ಸೈಟ್&zwnj;ಗೆ ಅಪ್&zwnj;ಲೋಡ್&zwnj; ಮಾಡಲಾಗುತ್ತದೆ. ಶಿಕ್ಷಕರು ಅದನ್ನು ಅಲ್ಲೇ ಪರಿಶೀಲಿಸಿ ಅಂಕ ನೀಡುತ್ತಾರೆ. ಇದು ಪ್ರಕ್ರಿಯೆಯನ್ನು ತ್ವರಿತಗೊಳಿಸುವುದರ ಜತೆಗೆ ಪಾರದರ್ಶಕತೆ ಕಾಯ್ದುಕೊಳ್ಳಲೂ ಸಹಕಾರಿ. ಈ ಬಾರಿ 98 ಉತ್ತರಪತ್ರಿಕೆಗಳನ್ನು ಒಎಸ್&zwnj;ಎಂ ವ್ಯವಸ್ಥೆಯಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಶಾಯಿ ಸರಿಯಾಗಿ ಮೂಡಿರದ ಅಥವಾ ಸ್ಕ್ಯಾನ್&zwnj; ಮಾಡಿದಾಗ ಕೈಬರಹ ಅರ್ಥವಾದಂತೆ ಇದ್ದರೆ ಅಂತಹವುಗಳನ್ನು ಮಾತ್ರ ನೇರವಾಗಿ ಮೌಲ್ಯಮಾಪನಕ್ಕೆ ಒಳಪಡಿಸಲಾಯಿತು.&lt;/p&gt;&lt;p&gt;2014ರಲ್ಲಿ ಇದನ್ನು ಪರಿಚಯಿಸಲಾಗಿತ್ತಾದರೂ ತಾಂತ್ರಿಕ ಹಾಗೂ ಮೂಲಸೌಕರ್ಯ ಕೊರತೆಯಿಂದಾಗಿ ಪೂರ್ಣಪ್ರಮಾಣದ ಅಳವಡಿಕೆ ಸಾಧ್ಯವಾಗಿರಲಿಲ್ಲ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/cbse-class-12-huge-reduction-in-revaluation-fees-mrq/articleshow-rpoo1d6"/>
        </item>
        <item>
            <title><![CDATA[ನೀಟ್ ಮರುಪರೀಕ್ಷೆ ಘೋಷಣೆಯಾದ ಬೆನ್ನಲ್ಲೇ ವಿದ್ಯಾರ್ಥಿಗಳ ಸರಣಿ ಆತ್ಮ*ಹತ್ಯೆ,  ಇದು ವ್ಯವಸ್ಥೆಯ ಕೊಲೆ: ರಾಹುಲ್ ಕಿಡಿ]]></title>
            <link>https://kannada.asianetnews.com/gallery/education/neet-paper-leak-row-rahul-gandhi-slams-government-as-student-death-rise-across-india-gdp-wzsrnp6</link>
            <guid isPermaLink="true">https://kannada.asianetnews.com/gallery/education/neet-paper-leak-row-rahul-gandhi-slams-government-as-student-death-rise-across-india-gdp-wzsrnp6</guid>
            <pubDate>Sat, 16 May 2026 13:28:14 +0530</pubDate>
            <description><![CDATA[&lt;p&gt;ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ನಂತರ ದೇಶದ ಹಲವೆಡೆ ವಿದ್ಯಾರ್ಥಿಗಳು ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದು, ಇದನ್ನು 'ವ್ಯವಸ್ಥೆಯ ಕೊಲೆ' ಎಂದು ಕರೆದಿರುವ ರಾಹುಲ್ ಗಾಂಧಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ರದ್ದು, ಮರುಪರೀಕ್ಷೆ ಘೋಷಣೆ .&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqvrztfr4rv455ksbv8t1zz,imgname-neet-exam-1778917343055.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ನಂತರ ದೇಶದ ಹಲವೆಡೆ ವಿದ್ಯಾರ್ಥಿಗಳು ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದು, ಇದನ್ನು 'ವ್ಯವಸ್ಥೆಯ ಕೊಲೆ' ಎಂದು ಕರೆದಿರುವ ರಾಹುಲ್ ಗಾಂಧಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ರದ್ದು, ಮರುಪರೀಕ್ಷೆ ಘೋಷಣೆ .&lt;/p&gt;&lt;img&gt;&lt;p&gt;&lt;strong&gt;ನವದೆಹಲಿ: &lt;/strong&gt;ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ನಂತರ ಪರೀಕ್ಷೆ ರದ್ದಾದ ದಿನದಿಂದ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಆತ್ಮ*ಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಆಘಾತಕಾರಿ ಘಟನೆ ನಡೆಯುತ್ತಿದೆ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಈ ಘಟನೆ ಆತ್ಮ*ಹತ್ಯೆ ಅಲ್ಲ ಇದು ವ್ಯವಸ್ಥೆಯ ಕೊಲೆ ಎಂದು ಕಿಡಿಕಾರಿದ್ದಾರೆ.&lt;/p&gt;&lt;img&gt;&lt;p&gt;ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ 21 ವರ್ಷದ ರಿತಿಕ್ ಮಿಶ್ರಾ ಆತ್ಮ*ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಇನ್ನು ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಲ್ಲ ಎಂಬುದು ರಿತಿಕ್ ಅವರ ಕೊನೆಯ ಮಾತುಗಳಾಗಿದ್ದವು. ಮೂರನೇ ಬಾರಿ ನೀಟ್ ಪರೀಕ್ಷೆಗೆ ಹಾಜರಾಗಿದ್ದ ಈ ಯುವಕ, ಪರೀಕ್ಷೆ ರದ್ದಾದ ಬಳಿಕ ತೀವ್ರ ಮನನೊಂದು ಖಿನ್ನತೆಗೆ ಒಳಗಾಗಿದ್ದನು. ಗೋವಾದಲ್ಲಿಯೂ ಇದೇ ರೀತಿಯ ಘಟನೆಯೊಂದು ನಡೆದಿದೆ. ಈ ಯುವಕರು ಪರೀಕ್ಷೆಯಲ್ಲಿ ಸೋತಿಲ್ಲ. ಅವರನ್ನು ಭ್ರಷ್ಟ ವ್ಯವಸ್ಥೆಯೇ ಕೊಂದಿದೆ. ಇದು ಆತ್ಮ*ಹತ್ಯೆಯಲ್ಲ &ndash; ಇದು ವ್ಯವಸ್ಥೆಯ ಕೊಲೆ, ಎಂದು ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಪರೀಕ್ಷಾ ಹಗರಣಗಳ ಬಗ್ಗೆ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.&lt;/p&gt;&lt;img&gt;&lt;p&gt;2015ರಿಂದ 2026ರವರೆಗೆ ಒಟ್ಟು 148 ಪರೀಕ್ಷಾ ಹಗರಣಗಳು ನಡೆದಿವೆ. 87 ಪರೀಕ್ಷೆಗಳು ರದ್ದಾಗಿದ್ದು, ಸುಮಾರು 9 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಹಾನಿಗೊಳಗಾಗಿದೆ. ಈ 148 ಪ್ರಕರಣಗಳಲ್ಲಿ ಕೇವಲ ಒಂದೇ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. ಸಿಬಿಐ 17 ಪ್ರಕರಣಗಳನ್ನು, ಇಡಿ 11 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದರೂ, ಯಾರಿಗೂ ಶಿಕ್ಷೆಯಾಗಿಲ್ಲ. ವಿಶೇಷವಾಗಿ NEET, AIPMT ಸೇರಿದಂತೆ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲೇ 15 ಹಗರಣಗಳು ನಡೆದಿವೆ ಎಂದು ರಾಹುಲ್ ಆರೋಪಿಸಿದರು.&lt;/p&gt;&lt;p&gt;ಇದಲ್ಲದೆ, ಯಾವುದೇ ಜವಾಬ್ದಾರಿಯುತ ಅಧಿಕಾರಿ ಅಥವಾ ಸಚಿವರು ರಾಜೀನಾಮೆ ನೀಡದಿರುವುದನ್ನು ಪ್ರಶ್ನಿಸಿದರು. ಅವರನ್ನು ಕೆಲಕಾಲಕ್ಕೆ ಸ್ಥಾನದಿಂದ ತೆಗೆದುಹಾಕಿ, ನಂತರ ಮರು ನೇಮಕ ಮಾಡಲಾಗುತ್ತಿದೆ. ಹಗರಣ ನಡೆಸುವವರಿಗೆ ಬಹುಮಾನ ಸಿಗುತ್ತಿದ್ದು, ಪರಿಶ್ರಮ ಪಡುವ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.&lt;/p&gt;&lt;img&gt;&lt;p&gt;ಉತ್ತರ ಪ್ರದೇಶದ ರಿತಿಕ್ ಮಿಶ್ರಾ ಗುರುವಾರ ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಯಾವುದೇ ಆತ್ಮ*ಹತ್ಯೆ ಪತ್ರ ಪತ್ತೆಯಾಗದಿದ್ದರೂ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಪರೀಕ್ಷೆ ರದ್ದಾದ ನಂತರ ಅವರು ತೀವ್ರ ಒತ್ತಡದಲ್ಲಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಬಾರಿ ಉತ್ತಮ ಅಂಕಗಳನ್ನು ಗಳಿಸುವ ವಿಶ್ವಾಸ ರಿತಿಕ್ ಅವರಿಗೆ ಇತ್ತು ಎಂದು ಅವರ ತಂದೆ ಅನೂಪ್ ಮಿಶ್ರಾ ಹೇಳಿದ್ದಾರೆ.&lt;/p&gt;&lt;p&gt;ಇದೇ ಸಂದರ್ಭದಲ್ಲಿ, ರಾಜಸ್ಥಾನದ ಸಿಕಾರ್&zwnj;ನಲ್ಲಿ 22 ವರ್ಷದ ಪ್ರದೀಪ್ ಮಹಿಚ್ ಎಂಬ ವಿದ್ಯಾರ್ಥಿ ಕೂಡ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮೂರನೇ ಪ್ರಯತ್ನದಲ್ಲಿ 650 ಅಂಕಗಳನ್ನು ನಿರೀಕ್ಷಿಸಿದ್ದ ಅವರು, ಪರೀಕ್ಷೆ ರದ್ದಾದ ಸುದ್ದಿ ಕೇಳಿ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಅವರು ತಮ್ಮ ಸಹೋದರಿಯ ಸ್ಕಾರ್ಫ್ ಬಳಸಿ ನೇಣು ಬಿಗಿದುಕೊಂಡಿದ್ದರೆ ಎಂದು ವರದಿ ತಿಳಿಸಿದೆ.&lt;/p&gt;&lt;p&gt;ಇನ್ನು ದೆಹಲಿಯ ಆಜಾದ್&zwnj;ಪುರದಲ್ಲಿಯೂ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಗೋವಾದ ಮಾರ್ಗೋವ್&zwnj;ನಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬನು ಶೈಕ್ಷಣಿಕ ಒತ್ತಡವನ್ನು ಉಲ್ಲೇಖಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.&lt;/p&gt;&lt;img&gt;&lt;p&gt;ಪ್ರಶ್ನೆ ಪತ್ರಿಕೆ ಸೋರಿಯಾದ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮೇ 3ರಂದು ನಡೆದ ನೀಟ್-ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಈ ನಿರ್ಧಾರವು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್&zwnj;ಟಿಎ ಸ್ಪಷ್ಟಪಡಿಸಿತ್ತು.&lt;/p&gt;&lt;img&gt;&lt;p&gt;ಇನ್ನು ನೀಟ್ ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲು ತೀರ್ಮಾನಿಸಲಾಗೊದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ. ಜೊತೆಗೆ, ಮುಂದಿನ ವರ್ಷದಿಂದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಮಾದರಿಯಲ್ಲಿ ನಡೆಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಸಿಬಿಐ ತನಿಖೆಗೂ ಕೇಂದ್ರ ಸರ್ಕಾರ ಆದೇಶ ನೀಡಿದೆ.&lt;/p&gt;&lt;p&gt;ಒಟ್ಟಿನಲ್ಲಿ, ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲಿನ ಪ್ರಶ್ನೆಗಳು ಹಾಗೂ ಹಗರಣಗಳ ಸರಮಾಲೆ ಇವೆಲ್ಲವೂ ಶಿಕ್ಷಣ ವ್ಯವಸ್ಥೆಯ ಗಂಭೀರ ಸಂಕಷ್ಟವನ್ನು ಬಯಲಿಗೆಳೆಯುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಮುಂದಿನ ದೊಡ್ಡ ಸವಾಲಾಗಿ ಪರಿಣಮಿಸಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/education/neet-paper-leak-row-rahul-gandhi-slams-government-as-student-death-rise-across-india-gdp-wzsrnp6"/>
        </item>
        <item>
            <title><![CDATA[NEET Scam: ಪ್ರಶ್ನೆಪತ್ರಿಕೆ ತಯಾರಿಸಿದ ಟೀಚರೇ ಲೀಕ್ ಮಾಡಿದ್ರು! ಸಿಬಿಐ ಬಲೆಗೆ ಬಿದ್ದ ಮತ್ತೊಬ್ಬ ಶಿಕ್ಷಕಿ]]></title>
            <link>https://kannada.asianetnews.com/india-news/neet-paper-leak-cbi-arrests-question-setter-teacher/articleshow-y19yttl</link>
            <guid isPermaLink="true">https://kannada.asianetnews.com/india-news/neet-paper-leak-cbi-arrests-question-setter-teacher/articleshow-y19yttl</guid>
            <pubDate>Sat, 16 May 2026 19:38:38 +0530</pubDate>
            <description><![CDATA[&lt;p&gt;&lt;strong&gt;CBI arrests teacher NEET: &lt;/strong&gt;ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಮತ್ತೋರ್ವರನ್ನ ಬಂಧನ ಮಾಡಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದ ಪುಣೆಯ ಜೀವಶಾಸ್ತ್ರ ಶಿಕ್ಷಕಿಯನ್ನೇ ಈಗ ಅರೆಸ್ಟ್ ಮಾಡಲಾಗಿದೆ. ತನಿಖೆ ಬೇರೆ ರಾಜ್ಯಗಳಿಗೂ ವಿಸ್ತರಿಸಿದ್ದು, ವಿದ್ಯಾರ್ಥಿಗಳ ಆ*ತ್ಮಹ*ತ್ಯೆ ವಿಚಾರವಾಗಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krrccbvcdnq1e31fc1yvhh8x,imgname-teacher-arrest-leak-neet-1778934755180.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ:&lt;/strong&gt; ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (NTA) ತೀವ್ರ ಮುಜುಗರ ಉಂಟುಮಾಡಿದೆ. ಈಗ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ನೇಮಕಗೊಂಡಿದ್ದ ಪುಣೆಯ ಜೀವಶಾಸ್ತ್ರ ಶಿಕ್ಷಕಿ ಮನಿಷಾ ಗುರುನಾಥ್ ಅವರನ್ನೇ ಸಿಬಿಐ ಬಂಧಿಸಿದೆ. ಈ ಮೂಲಕ ಹಗರಣದ ತನಿಖೆ ಮತ್ತೊಂದು ಹಂತಕ್ಕೆ ತಲುಪಿದೆ.&amp;nbsp;&lt;/p&gt;&lt;p&gt;ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಸಮಿತಿಯಲ್ಲಿದ್ದ ರಸಾಯನಶಾಸ್ತ್ರ ಶಿಕ್ಷಕ ಪಿ.ವಿ. ಕುಲಕರ್ಣಿ ಅವರನ್ನು ನಿನ್ನೆ ಪುಣೆಯಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ, ಪ್ರಾಣಿಶಾಸ್ತ್ರ (Zoology) ಮತ್ತು ಸಸ್ಯಶಾಸ್ತ್ರ (Botany) ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದ್ದ ತಂಡದಲ್ಲಿದ್ದ ಮನಿಷಾ ಗುರುನಾಥ್ ಕೂಡ ಸಿಬಿಐ ಬಲೆಗೆ ಬಿದ್ದಿದ್ದಾರೆ.&lt;/p&gt;&lt;h2&gt;&lt;strong&gt;ಎನ್&zwnj;ಟಿಎಯ ಉನ್ನತ ಅಧಿಕಾರಿಗಳಿಗೂ ತನಿಖೆಯ ಬಿಸಿ ತಟ್ಟುವ ಸಾಧ್ಯತೆ&amp;nbsp;&lt;/strong&gt;&lt;/h2&gt;&lt;p&gt;ಈ ಮೊದಲೇ ಪುಣೆ ಮತ್ತು ನಾಸಿಕ್&zwnj;ನಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಮನಿಷಾ ಅವರೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ. ಪತ್ರಿಕೆ ಸಿದ್ಧಪಡಿಸಿದವರೇ ಬಂಧನಕ್ಕೊಳಗಾಗುತ್ತಿರುವುದು ಎನ್&zwnj;ಟಿಎ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ಎನ್&zwnj;ಟಿಎಯ ಕೆಲವು ಉನ್ನತ ಅಧಿಕಾರಿಗಳಿಗೂ ತನಿಖೆಯ ಬಿಸಿ ತಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.&lt;/p&gt;&lt;p&gt;ಕೇರಳ ಸೇರಿದಂತೆ ಏಳು ರಾಜ್ಯಗಳಿಗೆ ಸೋರಿಕೆಯ ಜಾಲ ಹಬ್ಬಿದೆ. ಪ್ರಶ್ನೆಪತ್ರಿಕೆಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಿದವರ ಮೇಲೂ ಸಿಬಿಐ ಕಣ್ಣಿಟ್ಟಿದೆ. ಕೆಲವು ಕೋಚಿಂಗ್ ಸೆಂಟರ್&zwnj;ಗಳು ಕೂಡ ಸಿಬಿಐ ರಡಾರ್&zwnj;ನಲ್ಲಿವೆ. ಕೇರಳದ ಪತ್ತನಂತಿಟ್ಟದಲ್ಲಿ ರಾಜ್ಯ ಗುಪ್ತಚರ ಇಲಾಖೆ ಕೆಲವು ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದೆ.&lt;/p&gt;&lt;h3&gt;&lt;strong&gt;ವಿದ್ಯಾರ್ಥಿ ಆ*ತ್ಮಹ*ತ್ಯೆ&lt;/strong&gt;&lt;/h3&gt;&lt;p&gt;ಇದೇ ವೇಳೆ, ರಾಜಸ್ಥಾನದ ಸಿಕರ್&zwnj;ನಲ್ಲಿ ನೀಟ್ ಪರೀಕ್ಷೆ ಬರೆದಿದ್ದ ಪ್ರದೀಪ್ ಮೇಘ್ವಾಲ್ ಎಂಬ ವಿದ್ಯಾರ್ಥಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಪರೀಕ್ಷೆ ರದ್ದಾದ ಮೇಲೆ ಮನನೊಂದು ಆತ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, &quot;ಇದು ವಿದ್ಯಾರ್ಥಿಗಳ ಕೊ*ಲೆ, ಇದಕ್ಕೆ ಸರ್ಕಾರವೇ ಹೊಣೆ&quot; ಎಂದು ತೀವ್ರವಾಗಿ ಟೀಕಿಸಿದ್ದಾರೆ.&lt;/p&gt;&lt;p&gt;ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರೇ ಬಂಧನಕ್ಕೊಳಗಾಗಿರುವುದು ಇದೊಂದು ವ್ಯವಸ್ಥಿತ ಭ್ರಷ್ಟಾಚಾರ ಎಂಬುದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಆರೋಪಿಸಿದೆ. ಇಷ್ಟೆಲ್ಲಾ ಅನಾಹುತವಾದರೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಥವಾ ಕೇಂದ್ರ ಸರ್ಕಾರ ಹೊಣೆ ಹೊತ್ತುಕೊಳ್ಳಲು ಸಿದ್ಧವಿಲ್ಲ ಎಂದು ಕಿಡಿಕಾರಿದೆ.&lt;/p&gt;]]></content:encoded>
            <category>education</category>
            <dc:creator>Ashwini HR</dc:creator>
            <atom:link href="https://kannada.asianetnews.com/india-news/neet-paper-leak-cbi-arrests-question-setter-teacher/articleshow-y19yttl"/>
        </item>
        <item>
            <title><![CDATA[ಹಾಸ್ಟೆಲ್‌ ಸೀಲಿಂಗ್‌ ಫ್ಯಾನ್‌ಗೆ ಕಬ್ಬಿಣದ ಪಂಜರ ಹಾಕಿದ್ರು; ಕೇಕೆ ಹಾಕಿ ನಕ್ಕ ಕೆಲವರು; ಆದರೆ ಉದ್ದೇಶ ಬೇರೆ ಐತಿ]]></title>
            <link>https://kannada.asianetnews.com/india-news/ceiling-fan-cage-guard-metal-grills-for-safety-purpose-in-hostel-video-viral/articleshow-yf4lgoi</link>
            <guid isPermaLink="true">https://kannada.asianetnews.com/india-news/ceiling-fan-cage-guard-metal-grills-for-safety-purpose-in-hostel-video-viral/articleshow-yf4lgoi</guid>
            <pubDate>Sun, 03 May 2026 12:34:50 +0530</pubDate>
            <description><![CDATA[&lt;p&gt;Ceiling Fan Cage Guard For Safety in Hostel: ಶಾಲೆ ಹಾಸ್ಟೆಲ್&zwnj;ವೊಂದಕ್ಕೆ ಸೀಲಿಂಗ್&zwnj; ಫ್ಯಾನ್&zwnj;ಗೆ ಈಗ ಕಬ್ಬಿಣದ ಪಂಜರ ಹಾಕಲಾಗಿದೆ. ಇದನ್ನು ನೋಡಿ ಅನೇಕರು ನಕ್ಕಿದ್ದಾರೆ. ಶಾಲೆಯಲ್ಲಿ ಹೀಗೆಲ್ಲ ಮಾಡ್ತಾರಾ ಎಂದು ಕೆಲವರು ಆಶ್ಚರ್ಯಪಟ್ಟಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqpae54s7c7c11py3gz4a3jy,imgname-new-project---2026-05-03t123403.884-1777791866009.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ ಹಾಸ್ಟೆಲ್&zwnj;ವೊಂದರಲ್ಲಿ ಸೀಲಿಂಗ್ ಫ್ಯಾನ್&zwnj;ಗಳ ಸುತ್ತ ರಕ್ಷಣಾತ್ಮಕ ಲೋಹದ ಪಂಜರಗಳನ್ನು (metal cages) ಅಳವಡಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ. ಯಾಕೆ ಈ ರೀತಿ ಮಾಡಲಾಗಿದೆ ಎಂದು ಜನರಲ್ಲಿ ಕುತೂಹಲಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಕೆಲವರು ನಕ್ಕಿದ್ದಾರೆ.&lt;/p&gt;&lt;h2&gt;ಸೀಲಿಂಗ್&zwnj; ಫ್ಯಾನ್&zwnj;ಗೆ ಕಬ್ಭಿಣದ ಪಂಜರ&lt;/h2&gt;&lt;p&gt;ಹೌದು, ಸೀಲಿಂಗ್&zwnj; ಫ್ಯಾನ್&zwnj; ಸುತ್ತ ಕಬ್ಬಿಣದ ಪಂಜರ ಹಾಕಲಾಗಿದೆ. ಈ ರೀತಿ ಯಾರೂ ಮಾಡಿರೋದಿಲ್ಲ. ಕೆಲವರಿಗೆ ಈ ವಿಷಯ ನಿಜಕ್ಕೂ ನಗು ತರಿಸಿದೆ. ಸುರಕ್ಷತಾ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆಯಂತೆ. ಹೌದು, ವಿದ್ಯಾರ್ಥಿಗಳು ಸಣ್ಣ ಪುಟ್ಟ ಕಾರಣಕ್ಕೆ ಆತ್ಮ*ಹತ್ಯೆ ಮಾಡಿಕೊಳ್ತಾರೆ. ಹೀಗಾಗಿ ಮುಂಜಾಗ್ರತೆಯಿಂದ ಈ ಕ್ರಮ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೆ ಖರ್ಚು ಮಾಡಿರೋದು ಎಲ್ಲರ ಗಮನ ಸೆಳೆಯಲಾಗಿದೆ.&lt;/p&gt;&lt;h2&gt;ಎಷ್ಟು ಖರ್ಚು ಆಯ್ತು?&lt;/h2&gt;&lt;p&gt;ಆ ಕಬ್ಬ ಪಂಜರಗಳನ್ನು ಹಾಕಲು ಸುಮಾರು ₹12,000 ಖರ್ಚು ಮಾಡಲಾಗಿದೆಯಂತೆ, ಆದರೆ ಸೀಲಿಂಗ್ ಫ್ಯಾನ್&zwnj;ಗಳ ಬೆಲೆ ಹೆಚ್ಚು ಕಡಿಮೆ 3000 ರೂ ಇರಬಹುದು. ಕೆಲವರು ಮಾತ್ರ ಇದು ಈ ಅತಿಯಾದ ರಕ್ಷಣೆ ಎಂದು ಜೋಕ್ ಮಾಡಿದರೆ, ಇನ್ನು ಕೆಲವರು ತರಗತಿಗಳಲ್ಲಿ ಸುರಕ್ಷತೆ ಮಾಡಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ.&lt;/p&gt;&lt;h2&gt;ಜೋಕ್&zwnj; ಮಾಡಿದ ಕೆಲವರು&lt;/h2&gt;&lt;p&gt;ಈಗ ಈ ವಿಡಿಯೋ, ಫೋಟೋಗಳು ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗ್ತಿದೆ. ಅನೇಕರು ಇದನ್ನು 'ದೇಸಿ ಜುಗಾಡ್' ಮತ್ತು 'ಓವರ್ ಇಂಜಿನಿಯರಿಂಗ್'ನ ಮಿಶ್ರಣ ಎಂದು ಕರೆದರೆ, ಮತ್ತೆ ಕೆಲವರು ಈ ಶಾಲೆಯ ನಿರ್ಧಾರದ ಹಿಂದಿನ ಉದ್ದೇಶವನ್ನು ಶ್ಲಾಘಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by INDIALAST24HR__ (@indialast24hr__)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Padmashree Bhat</dc:creator>
            <atom:link href="https://kannada.asianetnews.com/india-news/ceiling-fan-cage-guard-metal-grills-for-safety-purpose-in-hostel-video-viral/articleshow-yf4lgoi"/>
        </item>
        <item>
            <title><![CDATA[Breaking:  ಪ್ರಶ್ನೆ ಪತ್ರಿಕೆ ಸೋರಿಕೆ ಮೇ 3 ರಂದು ನಡೆದಿದ್ದ ನೀಟ್  ಪರೀಕ್ಷೆ ರದ್ದು, ಸಿಬಿಐ ತನಿಖೆಗೆ ಆದೇಶ]]></title>
            <link>https://kannada.asianetnews.com/education/neet-2026-exam-conducted-on-may-3-cancelled-after-paper-leak-in-rajasthan-cbi-to-probe-gdp/articleshow-yhpkuoh</link>
            <guid isPermaLink="true">https://kannada.asianetnews.com/education/neet-2026-exam-conducted-on-may-3-cancelled-after-paper-leak-in-rajasthan-cbi-to-probe-gdp/articleshow-yhpkuoh</guid>
            <pubDate>Tue, 12 May 2026 13:00:23 +0530</pubDate>
            <description><![CDATA[ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ, ಮೇ 3 ರಂದು ನಡೆದಿದ್ದ ನೀಟ್ ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಕೇಂದ್ರ ಸರ್ಕಾರವು ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರು ಪರೀಕ್ಷೆ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ದೃಢಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqnnhfv7fs8c5dpv3x6agkp7,imgname-----------------------2026-05-03t062849.326-1777769955175.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ರಾಜಸ್ತಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮೇ 3 ರಂದು ದೇಶದಾದ್ಯಂತ ನಡೆದ NEET UG 2026 ಪರೀಕ್ಷೆಯನ್ನು ಅನ್ನು ರದ್ದುಗೊಳಿಸಲಾಗಿದೆ. ಪಾರದರ್ಶಕತೆ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಮರು ಪರೀಕ್ಷೆ ನಡೆಸಲಾಗುವುದು ಈ ಸುದ್ದಿ ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮತ್ತು ಸಂಬಂಧಿತ ಸಂಸ್ಥೆಗಳು ತಕ್ಷಣ ಕ್ರಮ ಕೈಗೊಂಡಿದ್ದು, ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದೆ. ಈ ಘಟನೆ ಭಾರತದ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;&lt;h2&gt;ಮತ್ತೆ ಪರೀಕ್ಷೆ ನಡೆಸುವುದಾಗಿ ಘೋಷಣೆ&lt;/h2&gt;&lt;p&gt;ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದ ಬೆನ್ನಲ್ಲೇ NTA ಪರೀಕ್ಷೆಯನ್ನು ಮತ್ತೆ ನಡೆಸುವುದಾಗಿ ದೃಢಪಡಿಸಿದೆ. ಹೊಸ ನೋಂದಣಿ ಅಗತ್ಯವಿಲ್ಲ ಮತ್ತು ಶುಲ್ಕವನ್ನು ಕೂಡ ಕಟ್ಟುವ ಅಗತ್ಯವಿಲ್ಲ ಎಂದಿದೆ. ಸೋರಿಕೆ ಆರೋಪದ ಹಿನ್ನೆಲೆಯಲ್ಲಿ 2026 ರ ನೀಟ್ ಯುಜಿಯನ್ನು ರದ್ದುಗೊಳಿಸಲಾಗಿದೆ ಎಂದು ಎನ್&zwnj;ಟಿಎ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಮೇ 3 ರಂದು ನಡೆದ ಪರೀಕ್ಷೆಯ ಪಾರದರ್ಶಕತೆ ಬಗ್ಗೆ ಕೇಂದ್ರ ಸಂಸ್ಥೆಗಳಿಂದ ಬಂದ ಮಾಹಿತಿಗಳು ಕಳವಳಕಾರಿಯಾಗಿದ್ದು, ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಇದರಿಂದ ತೊಂದರೆಗೊಳಗಾಗಿರುವುದರಿಂದ, ಸರ್ಕಾರ ಈಗ ಮಧ್ಯಪ್ರವೇಶಿಸಿ, ಸಿಬಿಐ ತನಿಖೆಗೆ ಆದೇಶಿಸಿದೆ ಮತ್ತು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮರು ಸ್ಠಾಒಇಸಲು ಮತ್ತೊಮ್ಮೆ ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ.&lt;/p&gt;&lt;p&gt;ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ ಎಂದು ಅದು ಹೇಳಿದ್ದು, ಹೀಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಮೇ 3 ರಂದು ದೇಶದಾದ್ಯಂತ ನಡೆಸಲಾದ NEET UG 2026 ಪರೀಕ್ಷೆಯನ್ನು ರದ್ದುಗೊಳಿಸಿದೆ ಮತ್ತು ಮರು ಪರೀಕ್ಷೆಗೆ ಹೊಸ ದಿನಾಂಕಗಳನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ಘೋಷಿಸಿದೆ.&lt;/p&gt;&lt;p&gt;ಸರ್ಕಾರವು ಈ ವಿಷಯವನ್ನು ಸಮಗ್ರ ತನಿಖೆಗಾಗಿ ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ. ಅಭ್ಯರ್ಥಿಗಳಿಗೆ ಹೊಸ ನೋಂದಣಿ ಅಗತ್ಯವಿಲ್ಲ, ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕವನ್ನು ವಿಧಿಸಲಾಗುವುದಿಲ್ಲ ಮತ್ತು ಅಸ್ತಿತ್ವದಲ್ಲಿರುವ ನೋಂದಣಿ ಡೇಟಾ ಮತ್ತು ಪರೀಕ್ಷಾ ಕೇಂದ್ರಗಳನ್ನು ಮುಂದುವರಿಸಲಾಗುವುದು ಎಂದು NTA ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳು ಈಗಾಗಲೇ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುವುದು ಎಂದು ಸಂಸ್ಥೆ ಹೇಳಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/neet-2026-exam-conducted-on-may-3-cancelled-after-paper-leak-in-rajasthan-cbi-to-probe-gdp/articleshow-yhpkuoh"/>
        </item>
        <item>
            <title><![CDATA[ಶಾಲೆಗಳಲ್ಲಿ ದಿನಪತ್ರಿಕೆ ಓದು ಕಡ್ಡಾಯ, ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಸರ್ಕಾರಕ್ಕೆ ಪತ್ರ]]></title>
            <link>https://kannada.asianetnews.com/education/mandatory-newspaper-reading-in-karnataka-schools-child-rights-activist-suggests-key-improvements-gdp/articleshow-zybnmo8</link>
            <guid isPermaLink="true">https://kannada.asianetnews.com/education/mandatory-newspaper-reading-in-karnataka-schools-child-rights-activist-suggests-key-improvements-gdp/articleshow-zybnmo8</guid>
            <pubDate>Sat, 02 May 2026 14:18:21 +0530</pubDate>
            <description><![CDATA[ರಾಜ್ಯದ ಶಾಲೆಗಳಲ್ಲಿ ದಿನಪತ್ರಿಕೆ ಓದನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರವನ್ನು ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಸ್ವಾಗತಿಸಿದ್ದಾರೆ. ಈ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ಪ್ರತಿ ಶಾಲೆಗೆ 15 ರಿಂದ 90 ವಿವಿಧ ಪತ್ರಿಕೆಗಳನ್ನು ಒದಗಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಚರ್ಚೆಯನ್ನು ಪ್ರೋತ್ಸಾಹಿಸುವಂತಹ ಹಲವು ಸಲಹೆಗಳನ್ನು ಅವರು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jjqzwpv2gc937ah69vbhys9d,imgname-old-texture-newspapers-stack-23-2149318872.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದ ಶಾಲೆಗಳಲ್ಲಿ ದಿನಪತ್ರಿಕೆ ಓದನ್ನು ಕಡ್ಡಾಯಗೊಳಿಸುವ ವಿಚಾರ ಇದೀಗ ಗಮನ ಸೆಳೆಯುತ್ತಿದೆ. ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಅವರು ಸರ್ಕಾರಕ್ಕೆ ಪತ್ರ ಬರೆದು, ಈ ನಿರ್ಧಾರವನ್ನು ಸ್ವಾಗತಿಸುವ ಜೊತೆಗೆ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.&lt;/p&gt;&lt;p&gt;ಪ್ರತಿದಿನ ಕನಿಷ್ಠ 15 ನಿಮಿಷಗಳ ಕಾಲ ವಿದ್ಯಾರ್ಥಿಗಳು ದಿನಪತ್ರಿಕೆ ಓದುವಂತೆ ಮಾಡುವ ಸರ್ಕಾರದ ನಿರ್ಧಾರವು ಅತ್ಯಂತ ಶ್ಲಾಘನೀಯ. ಇದು ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವುದಲ್ಲದೆ, ಅವರ ಸಾಮಾನ್ಯ ಜ್ಞಾನವನ್ನು ವೃದ್ಧಿಸುವುದಕ್ಕೂ ಹಾಗೂ ಭಾಷಾ ಪ್ರಾವೀಣ್ಯವನ್ನು ಹೆಚ್ಚಿಸುವುದಕ್ಕೂ ಇದು ಬಹಳ ಸಹಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;ಕನಿಷ್ಠ 15 ರಿಂದ 90 ವಿವಿಧ ದಿನಪತ್ರಿಕೆ ವ್ಯವಸ್ಥೆ&lt;/h2&gt;&lt;p&gt;ಆದರೆ, ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲು ಕೆಲವು ಮೂಲಭೂತ ಬದಲಾವಣೆಗಳು ಅಗತ್ಯವಿದೆ ಎಂದು ನಾಗಸಿಂಹ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಅನೇಕ ಶಾಲೆಗಳಲ್ಲಿ ಕೇವಲ ಒಂದು ಅಥವಾ ಎರಡು ದಿನಪತ್ರಿಕೆಗಳಷ್ಟೇ ಲಭ್ಯವಿರುವುದರಿಂದ, ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಮಾಹಿತಿಯನ್ನು ಅರಿಯುವ ಅವಕಾಶ ಸೀಮಿತವಾಗುತ್ತಿದೆ. ಹೀಗಾಗಿ, ಪ್ರತಿಯೊಂದು ಶಾಲೆಯಲ್ಲೂ ಕನಿಷ್ಠ 15 ರಿಂದ 90 ವಿವಿಧ ದಿನಪತ್ರಿಕೆಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಇಷ್ಟವಾದ ದಿನಪತ್ರಿಕೆಗಳನ್ನು ಆಯ್ಕೆಮಾಡಿ ಓದುವ ಅವಕಾಶ ಕಲ್ಪಿಸಬೇಕು. ದಿನಪತ್ರಿಕೆ ಓದಿಗೆ ಪ್ರತ್ಯೇಕ ಸಮಯವನ್ನು ನಿಗದಿಪಡಿಸುವುದು ಅಗತ್ಯವಾಗಿದ್ದು, ಕೇವಲ ಒಬ್ಬ ವಿದ್ಯಾರ್ಥಿ ಸುದ್ದಿ ಓದುವ ಪದ್ಧತಿಗೆ ಸೀಮಿತವಾಗದೆ, ಎಲ್ಲಾ ವಿದ್ಯಾರ್ಥಿಗಳೂ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ವಿದ್ಯಾರ್ಥಿಗಳಲ್ಲಿ ಓದುವ ಅಭ್ಯಾಸ ಬೆಳೆಸುವುದು ಮುಖ್ಯ&lt;/h2&gt;&lt;p&gt;ವಿದ್ಯಾರ್ಥಿಗಳು ಓದಿದ ಸುದ್ದಿಗಳ ಕುರಿತು ಚರ್ಚೆ ನಡೆಸಲು ಶಿಕ್ಷಕರು ಪ್ರೋತ್ಸಾಹಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಹಾಗೆಯೇ, ಶಾಲೆಗಳಲ್ಲಿ ದಿನಪತ್ರಿಕೆಗಳನ್ನು ಸರಿಯಾಗಿ ಸಂಗ್ರಹಿಸಲು ಮತ್ತು ಅವುಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ.&lt;/p&gt;&lt;p&gt;ರಜಾದಿನಗಳಲ್ಲಿ ಬಂದ ದಿನಪತ್ರಿಕೆಗಳನ್ನು ಮರುದಿನ ವಿದ್ಯಾರ್ಥಿಗಳು ಓದುವ ಅವಕಾಶ ನೀಡಬೇಕು. ವಿದ್ಯಾರ್ಥಿಗಳಲ್ಲಿ ಓದುವ ಅಭ್ಯಾಸ ಹೆಚ್ಚಾದಂತೆ, ಮಾಧ್ಯಮಗಳು ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆ ಕುರಿತ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಸರ್ಕಾರ ಸೂಚನೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ, ಶಿಕ್ಷಣ ಇಲಾಖೆ ಪ್ರತೀ ತಿಂಗಳು ಕನಿಷ್ಠ ಒಮ್ಮೆಯಾದರೂ ಶಾಲೆಗಳಿಗೆ ಭೇಟಿ ನೀಡಿ ಈ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಬೇಕು. ವಿದ್ಯಾರ್ಥಿಗಳು ದಿನಪತ್ರಿಕೆಗಳ &ldquo;ವಾಚಕರ ವಾಣಿ&rdquo; ವಿಭಾಗಕ್ಕೆ ಪತ್ರಗಳನ್ನು ಬರೆಯುವಂತೆ ಶಿಕ್ಷಕರು ಉತ್ತೇಜಿಸುವುದು, ಅವರ ಬರವಣಿಗೆ ಕೌಶಲ್ಯವನ್ನು ಮತ್ತಷ್ಟು ಬೆಳೆಸಲು ಸಹಾಯಕವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ದಿನಪತ್ರಿಕೆ ಓದನ್ನು ಕಡ್ಡಾಯಗೊಳಿಸುವ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ನಾಗಸಿಂಹ ಅವರು, ಅದನ್ನು ಸಮರ್ಥವಾಗಿ ಜಾರಿಗೆ ತರುವ ಮೂಲಕ ವಿದ್ಯಾರ್ಥಿಗಳ ಜ್ಞಾನ, ಚಿಂತನೆ ಹಾಗೂ ವ್ಯಕ್ತಿತ್ವ ವಿಕಾಸವನ್ನು ಇನ್ನಷ್ಟು ಉತ್ತೇಜಿಸಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/mandatory-newspaper-reading-in-karnataka-schools-child-rights-activist-suggests-key-improvements-gdp/articleshow-zybnmo8"/>
        </item>
    </channel>
</rss>
