<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 21 Jul 2026 08:18:28 +0530</lastBuildDate>
        <atom:link href="https://kannada.asianetnews.com/rss/education" rel="self" type="application/rss+xml"/>
        <item>
            <title><![CDATA[ಯುಜಿಸಿಇಟಿ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ: ಕೆಇಎಯಿಂದ ಮಹತ್ವದ ಸೂಚನೆ]]></title>
            <link>https://kannada.asianetnews.com/education/kcet-ugcet-2026-provisional-first-round-seat-allotment-result-declared-at-cetonline-karnataka-gov-in-gdp/articleshow-2ca8e0a</link>
            <guid isPermaLink="true">https://kannada.asianetnews.com/education/kcet-ugcet-2026-provisional-first-round-seat-allotment-result-declared-at-cetonline-karnataka-gov-in-gdp/articleshow-2ca8e0a</guid>
            <pubDate>Tue, 14 Jul 2026 10:40:11 +0530</pubDate>
            <description><![CDATA[ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿಸಿಇಟಿ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್&zwnj;ಲೈನ್&zwnj;ನಲ್ಲಿ ಪರಿಶೀಲಿಸಬಹುದು ಮತ್ತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಇಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಲು ಅವಕಾಶವಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k5ca5y49pefrhknrt1f3n653,imgname-cet-seat-blocking-scam-kea-issues-notice-to-351-candidates-for-admission-fraud-1758128699529.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಯುಜಿಸಿಇಟಿ (UGCET) ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆಯ (Provisional Seat Allotment) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಕಟಿಸಿದೆ. ಈ ಬಾರಿ ಪ್ರಾಧಿಕಾರವು ನಿಗದಿಪಡಿಸಿದ್ದ ಸಮಯಕ್ಕಿಂತ ಮುನ್ನವೇ ಫಲಿತಾಂಶವನ್ನು ಬಿಡುಗಡೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅಚ್ಚರಿ ಮೂಡಿಸಿದೆ.&lt;/p&gt;&lt;p&gt;ಎಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ, ಕೃಷಿ, ಫಾರ್ಮಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್&zwnj;ಗಳ ಪ್ರವೇಶಾತಿಗೆ ಸೀಟು ಹಂಚಿಕೆ ಪ್ರಕ್ರಿಯೆ ನಡೆದಿದೆ. ಅಭ್ಯರ್ಥಿಗಳು ಜುಲೈ 9ರವರೆಗೆ ಆನ್&zwnj;ಲೈನ್ ಮೂಲಕ ದಾಖಲಿಸಿದ್ದ ಕಾಲೇಜು ಮತ್ತು ಕೋರ್ಸ್&zwnj;ಗಳ ಆದ್ಯತೆಗಳ (Options Entry) ಆಧಾರದ ಮೇಲೆ ಈ ತಾತ್ಕಾಲಿಕ ಸೀಟುಗಳನ್ನು ಹಂಚಲಾಗಿದೆ.&lt;/p&gt;&lt;h2&gt;ಆಕ್ಷೇಪಣೆ ಸಲ್ಲಿಸಲು ಸಂಜೆ 5ರವರೆಗೆ ಕೊನೆಯ ಅವಕಾಶ&lt;/h2&gt;&lt;p&gt;ಸದ್ಯ ಪ್ರಕಟವಾಗಿರುವುದು ತಾತ್ಕಾಲಿಕ ಫಲಿತಾಂಶವಾಗಿದ್ದು, ಇದರಲ್ಲಿ ಯಾವುದೇ ರೀತಿಯ ಲೋಪದೋಷಗಳು ಅಥವಾ ತಪ್ಪುಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಕೆಇಎ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡಿದೆ. ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳನ್ನು ಇಂದು ಸಂಜೆ 5 ಗಂಟೆಯೊಳಗೆ ಆನ್&zwnj;ಲೈನ್ ಮೂಲಕವೇ ಸಲ್ಲಿಸಬೇಕಾಗಿ ಪ್ರಾಧಿಕಾರ ತಿಳಿಸಿದೆ. ನಿಗದಿತ ಸಮಯದ ನಂತರ ಬರುವ ಯಾವುದೇ ದೂರುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಫಲಿತಾಂಶ ಪರಿಶೀಲಿಸುವುದು ಹೇಗೆ?&lt;/h2&gt;&lt;p&gt;ಅಭ್ಯರ್ಥಿಗಳು ತಮಗೆ ಲಭ್ಯವಾಗಿರುವ ಸೀಟಿನ ವಿವರಗಳನ್ನು ಪರಿಶೀಲಿಸಲು ಕೆಇಎ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಬಹುದು. ವೆಬ್&zwnj;ಸೈಟ್&zwnj;ನಲ್ಲಿ ತಮ್ಮ ಲಾಗಿನ್ ವಿವರಗಳನ್ನು ನಮೂದಿಸುವ ಮೂಲಕ ತಾತ್ಕಾಲಿಕ ಸೀಟು ಹಂಚಿಕೆಯ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ.&lt;/p&gt;&lt;p&gt;ಗಈ ಸುತ್ತಿನಲ್ಲಿ ಸಲ್ಲಿಕೆಯಾಗುವ ಎಲ್ಲಾ ಆಕ್ಷೇಪಣೆ ಹಾಗೂ ದೂರುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆಯ (Final Seat Allotment) ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು ವೆಬ್&zwnj;ಸೈಟ್ ಅನ್ನು ನಿರಂತರವಾಗಿ ಗಮನಿಸುತ್ತಿರಬೇಕು.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/kcet-ugcet-2026-provisional-first-round-seat-allotment-result-declared-at-cetonline-karnataka-gov-in-gdp/articleshow-2ca8e0a"/>
        </item>
        <item>
            <title><![CDATA[ಸರ್ಪಂಚ್ ಕನಸು ನನಸಾಗಿಸಲು ಪುಸ್ತಕ ಹಿಡಿದ ಮಹಿಳೆ – 63ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಪಾಸ್]]></title>
            <link>https://kannada.asianetnews.com/women/63-year-old-woman-passes-class-10-exam-to-become-sarpanchsecures-79-marks/articleshow-5kxkpgl</link>
            <guid isPermaLink="true">https://kannada.asianetnews.com/women/63-year-old-woman-passes-class-10-exam-to-become-sarpanchsecures-79-marks/articleshow-5kxkpgl</guid>
            <pubDate>Mon, 20 Jul 2026 11:52:18 +0530</pubDate>
            <description><![CDATA[&lt;p&gt;ಸಾಧನೆಗೆ ಯಾವುದೇ ವಯಸ್ಸಿನ ಗಡಿ ಇಲ್ಲ. ಯಾರೂ ಬೇಕಾದ್ರೂ ಸಾಧನೆ ಮಾಡ್ಬಹುದು. 63ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆಯೋದು ಸ್ವಲ್ಪ ಕಷ್ಟ ಆದ್ರೂ ಈ ಮಹಿಳೆ ಸಾಧಿಸಿ ತೋರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz2vz9v6fk80krghx22ztdw,imgname-achievement-1784528371003.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಛಲವಿದ್ರೆ, ಆಸಕ್ತಿ ಇದ್ರೆ ಯಾವುದೇ ವಯಸ್ಸಿನಲ್ಲಿ ಕೂಡ ವಿದ್ಯಾಭ್ಯಾಸ ಮುಂದುವರಿಸ್ಬಹುದು. ಇದಕ್ಕೆ ಈ ಮಹಿಳೆ ಸ್ಪೂರ್ತಿ. ವಯಸ್ಸಾಗ್ತಿದ್ದಂತೆ ಜನರು ಓದು, ಪರೀಕ್ಷೆಯಿಂದ ಹಿಂದೆ ಸರಿತಾರೆ. ಆದ್ರೆ 63ನೇ ವಯಸ್ಸಿನಲ್ಲೂ ಓದಿ, ಹತ್ತನೇ ತರಗತಿ ಪಾಸ್ ಆದ ಮಹಿಳೆಯೊಬ್ಬರು, ಓದಿಗೂ ವಯಸ್ಸಿಗೂ ಸಂಬಂಧ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.&lt;/p&gt;&lt;h2&gt;10ನೇ ತರಗತಿಯಲ್ಲಿ ಶೇ 79.6 ಅಂಕ&lt;/h2&gt;&lt;p&gt;ಹರಿಯಾಣದ ಮಹೇಂದ್ರಗಢ ಜಿಲ್ಲೆಯ 63 ವರ್ಷದ ಸುಶೀಲಾ ದೇವಿ ಹತ್ತನೇ ತರಗತಿಯನ್ನು ಯಶಸ್ಸಿಯಾಗಿ ಪಾಸ್ ಆದ ಮಹಿಳೆ. ಐದನೇ ತರಗತಿಯ ನಂತರ ಅವರು ಓದಲು ಸಾಧ್ಯ ಆಗಿರಲಿಲ್ಲ. ಆದ್ರೆ 58 ವರ್ಷಗಳ ನಂತ್ರ ಮತ್ತೆ ಪುಸ್ತಕ ಹಿಡಿದು, ಛಲದಿಂದ ಓದಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) 10 ನೇ ತರಗತಿಯ ಪರೀಕ್ಷೆ ಬರೆದಿದ್ದಾರೆ. ಬರೀ ಪರೀಕ್ಷೆ ಬರೆದಿದ್ದು ಮಾತ್ರವಲ್ಲ ಪರೀಕ್ಷೆಯಲ್ಲಿ ಅವರು ಶೇಕಡಾ 79.6 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಸರಪಂಚ ಹುದ್ದೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಸುಶೀಲಾ ದೇವಿ ಹೇಳಿದ್ದಾರೆ.&lt;/p&gt;&lt;p&gt;ಗಂಡನಿಲ್ಲದೆ ಹೆಂಡತಿ ಎಂದಿಗೂ ಹೋಗಬಾರದ ಸ್ಥಳಗಳಿವು&lt;/p&gt;&lt;p&gt;ಐದನೇ ತರಗತಿಗೆ ಓದು ಬಿಟ್ರೂ ಸುಶೀಲಾ ದೇವಿಗೆ ಓದುವ ಉತ್ಸಾಹ ಕಡಿಮೆಯಾಗಿರಲಿಲ್ಲ. ಮದುವೆಯ ನಂತರವೂ ಅವರು ನಿಯಮಿತವಾಗಿ ಪತ್ರಿಕೆಗಳನ್ನು ಓದುವುದನ್ನು ಮತ್ತು ಜ್ಞಾನದ ಮೂಲಗಳನ್ನು ಹುಡುಕುವುದನ್ನು ಮುಂದುವರೆಸಿದ್ದರು. ಒಂದು ದಿನ, ಅವರ ಮಗ ವಿಷ್ಣು ತಮ್ಮ ತಾಯಿಯ ಶಿಕ್ಷಣದ ಆಸಕ್ತಿಯನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ನಲ್ಲಿ 10 ನೇ ತರಗತಿಯ ಫಾರ್ಮ್ ಭರ್ತಿ ಮಾಡಲು ಸಹಾಯ ಮಾಡಿದನು. ಆರಂಭದಲ್ಲಿ, 10 ನೇ ತರಗತಿಯ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಪಠ್ಯಕ್ರಮವು ಕಷ್ಟಕರವೆಂದು ತೋರುತ್ತಿತ್ತು. ಅವರ ಮಗ, ಹೆಣ್ಣುಮಕ್ಕಳು ಮತ್ತು ಗಂಡನ ಬೆಂಬಲದೊಂದಿಗೆ, ಅವರು ಪರೀಕ್ಷೆ ಬರೆದ್ರು. ಪರೀಕ್ಷೆಗೆ ತಯಾರಿ ನಡೆಸಲು ಅವರು ಪ್ರತಿದಿನ ಮೂರರಿಂದ ನಾಲ್ಕು ಗಂಟೆಗಳ ಕಾಲ ಅಧ್ಯಯನ ಮಾಡಿದರು.&lt;/p&gt;&lt;p&gt;3 ಕೋಟಿ ರೂ.ಕಾರಲ್ಲಿ ಮನೆಗೆಲಸ ಮಾಡಲು ಬರುವಾಕೆ! ಜಾಲತಾಣದಲ್ಲಿ ಈಕೆಯದ್ದೇ ಹವಾ&lt;/p&gt;&lt;p&gt;ಸುಶೀಲಾ ದೇವಿ ಇಂಗ್ಲಿಷ್ನಲ್ಲಿ 89, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 88, ಗಣಿತದಲ್ಲಿ 78, ಚಿತ್ರಕಲೆಯಲ್ಲಿ 76 ಮತ್ತು ಹಿಂದಿಯಲ್ಲಿ 67 ಅಂಕಗಳನ್ನು ಗಳಿಸಿದ್ದಾರೆ. 10 ನೇ ತರಗತಿಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ, ಕನಸುಗಳು ಮತ್ತು ದೃಢಸಂಕಲ್ಪದ ನಡುವೆ ವಯಸ್ಸು ಎಂದಿಗೂ ತಡೆಗೋಡೆಯಾಗಲು ಸಾಧ್ಯವಿಲ್ಲ ಎಂದು ಸುಶೀಲಾ ದೇವಿ ಸಾಬೀತುಪಡಿಸಿದ್ದಾರೆ. ಸರ್ಪಂಚ್ ಹುದ್ದೆಗೆ ಸ್ಪರ್ಧೆ ನಡೆಸುವುದು ಅವರ ಗುರಿಯಾಗಿದ್ದು, ಅದಕ್ಕೆ ಅಗತ್ಯವಿರುವ ಶಿಕ್ಷಣವನ್ನು ಸುಶೀಲಾ ದೇವಿ ಪೂರ್ಣಗೊಳಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Roopa Hegde</dc:creator>
            <atom:link href="https://kannada.asianetnews.com/women/63-year-old-woman-passes-class-10-exam-to-become-sarpanchsecures-79-marks/articleshow-5kxkpgl"/>
        </item>
        <item>
            <title><![CDATA[ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; VTU-Google ನಡುವೆ ಐತಿಹಾಸಿಕ ಒಪ್ಪಂದ]]></title>
            <link>https://kannada.asianetnews.com/education/good-news-for-engineering-students-historic-agreement-between-visvesvaraya-technological-university-and-google-mrq/articleshow-7izgwcv</link>
            <guid isPermaLink="true">https://kannada.asianetnews.com/education/good-news-for-engineering-students-historic-agreement-between-visvesvaraya-technological-university-and-google-mrq/articleshow-7izgwcv</guid>
            <pubDate>Tue, 21 Jul 2026 08:18:24 +0530</pubDate>
            <description><![CDATA[&lt;p&gt;ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಮತ್ತು ಗೂಗಲ್ ನಡುವೆ ಐತಿಹಾಸಿಕ ಒಪ್ಪಂದ ಏರ್ಪಟ್ಟಿದೆ. ಈ ಸಹಭಾಗಿತ್ವದ ಮೂಲಕ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕ್ಲೌಡ್ ಕಂಪ್ಯೂಟಿಂಗ್&zwnj;ನಂತಹ ಆಧುನಿಕ ತಂತ್ರಜ್ಞಾನಗಳಲ್ಲಿ ತರಬೇತಿ ನೀಡಿ, ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky19371xbjy5z4vksh9wbpyy,imgname-engineering-students--1784602008637.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಹಾಗೂ ಜಾಗತಿಕ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ 'ಗೂಗಲ್' ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿದ್ದು, ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಶಿಕ್ಷಣ ಮತ್ತು ಉದ್ಯಮ ವಲಯದ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಜಾಗತಿಕ ಸಹಭಾಗಿತ್ವವು ರೂಪುಗೊಂಡಿದ್ದು, ರಾಜ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಡಿಜಿಟಲ್ ಪರಿವರ್ತನೆಗೆ ಮತ್ತೊಂದು ದಿಟ್ಟ ಹೆಜ್ಜೆಯಿಟ್ಟಿದೆ.&lt;/p&gt;&lt;h2&gt;&lt;strong&gt;ಕೌಶಲ್ಯಾಭಿವೃದ್ಧಿ ಮತ್ತು ತರಬೇತಿಯ ಮೇಲಿನ ಒತ್ತು&lt;/strong&gt;&lt;/h2&gt;&lt;p&gt;ಈ ಒಪ್ಪಂದದ ಮುಖ್ಯ ಉದ್ದೇಶ ವಿಟಿಯು ವ್ಯಾಪ್ತಿಯ ಕಾಲೇಜುಗಳ ಸಾವಿರಾರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ತಂತ್ರಜ್ಞಾನ ಜ್ಞಾನವನ್ನು ತಲುಪಿಸುವುದಾಗಿದೆ. ಇಂದಿನ ವೇಗದ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತಂತ್ರಜ್ಞಾನಾಧಾರಿತ ಶಿಕ್ಷಣವು ಅತ್ಯಗತ್ಯವಾಗಿದ್ದು, ಈ ವೇದಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಭವಿಷ್ಯದ ತಂತ್ರಜ್ಞಾನ ಕೌಶಲ್ಯ ಕಲಿಕೆಗೆ ಅವಕಾಶ ಸೃಷ್ಟಿಯಾಗಲಿದೆ. ವಿಶೇಷವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI), ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಡಿಜಿಟಲ್ ತಂತ್ರಜ್ಞಾನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಡಿಜಿಟಲ್ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ.&lt;/p&gt;&lt;h3&gt;&lt;strong&gt;ಉದ್ಯೋಗಾರ್ಹತೆ ಮತ್ತು ಕೈಗಾರಿಕಾ ಅಗತ್ಯತೆಗಳು&lt;/strong&gt;&lt;/h3&gt;&lt;p&gt;ಪ್ರಸ್ತುತ ಕೈಗಾರಿಕಾ ಕ್ಷೇತ್ರಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಮತ್ತು ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸುವುದು ಈ ತಾಂತ್ರಿಕ ಸಹಭಾಗಿತ್ವದ ಪ್ರಮುಖ ಗುರಿಯಾಗಿದೆ. ಗೂಗಲ್ ಒದಗಿಸುವ ವಿಶೇಷ ತರಬೇತಿಯಿಂದಾಗಿ ವಿದ್ಯಾರ್ಥಿಗಳಿಗೆ ಕೇವಲ ಸೈದ್ಧಾಂತಿಕ ಜ್ಞಾನವಲ್ಲದೇ, ಪ್ರಾಯೋಗಿಕ ಜ್ಞಾನವೂ ದೊರೆತು, ಭವಿಷ್ಯದಲ್ಲಿ ಸಾವಿರಾರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.&lt;/p&gt;&lt;p&gt;&lt;strong&gt;ವಿಶೇಷ ಕಾರ್ಯಕ್ರಮ:&lt;/strong&gt;&lt;/p&gt;&lt;p&gt;ಈ ಮಹತ್ವದ ಒಪ್ಪಂದಕ್ಕೆ ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅವರು ಗೂಗಲ್ ಸಂಸ್ಥೆಯೊಂದಿಗೆ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಗೂಗಲ್ ಫಾರ್ ಎಜುಕೇಷನ್ ಇಂಡಿಯಾದ ಮುಖ್ಯಸ್ಥರಾದ ಸಂಜಯ್ ಜೈನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರಲ್ಲಿ ಓದಿದ ಹುಡುಗ, ಮಾಜಿ ಮೇಯರ್&zwnj; ಬಾಲೆನ್&zwnj; ಷಾ ನೇಪಾಳದ ಮುಂದಿನ ಪ್ರಧಾನಿ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;VTU Results 2026: ಪರೀಕ್ಷೆ ಮುಗಿದ ಐದೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ಇತಿಹಾಸ ಸೃಷ್ಟಿಸಿದ ವಿಟಿಯು!&lt;/strong&gt;&lt;/p&gt;]]></content:encoded>
            <category>education</category>
            <dc:creator>Mahmad Rafik</dc:creator>
            <atom:link href="https://kannada.asianetnews.com/education/good-news-for-engineering-students-historic-agreement-between-visvesvaraya-technological-university-and-google-mrq/articleshow-7izgwcv"/>
        </item>
        <item>
            <title><![CDATA[Hyderbad School Row: ಎರಡನೇ ತರಗತಿ ಮಗುವಿಗೆ 'ಕಲ್ಮಾ' ಪಠಿಸುವಂತೆ ಹೋಮ್ ವರ್ಕ್ ಕೊಟ್ಟ ಶಿಕ್ಷಕಿ!]]></title>
            <link>https://kannada.asianetnews.com/india-news/hyderbad-school-terminates-teachers-who-allegedly-gave-kalma-recitation-as-homework/articleshow-a0ait7f</link>
            <guid isPermaLink="true">https://kannada.asianetnews.com/india-news/hyderbad-school-terminates-teachers-who-allegedly-gave-kalma-recitation-as-homework/articleshow-a0ait7f</guid>
            <pubDate>Thu, 16 Jul 2026 13:20:17 +0530</pubDate>
            <description><![CDATA[&lt;p&gt;Hyderbad School Row: ಹೈದರಾಬಾದ್&zwnj;ನ ಖಾಸಗಿ ಶಾಲೆಯೊಂದರ ಶಿಕ್ಷಕಿಯೊಬ್ಬರು ಎರಡನೇ ತರಗತಿಯ ಹಿಂದೂ ಮಗುವಿಗೆ ಇಸ್ಲಾಮಿಕ್ ಪ್ರಾರ್ಥನೆ ಮಾಡುವಂತೆ ಹೋಂ ವರ್ಕ್ ಕೊಟ್ಟ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪೋಷಕರ ಆಕ್ರೋಶದ ನಂತರ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನ ವಜಾಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmy28afb6e93e4h76j23sdt,imgname-----------------------2026-07-16t131254.229-1784187789647.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್ (ಜು.16): &lt;/strong&gt;2ನೇ ತರಗತಿಯ ಮಕ್ಕಳಿಗೆ ಪಾಠದ ವಿಷಯ ಕೊಡುವ ಬದಲು ಧಾರ್ಮಿಕ ಪಠಣ ಮಾಡುವಂತೆ ಹೋಮ್&zwnj; ವರ್ಕ್ ಕೊಟ್ಟ ಆಘಾತಕಾರಿ ಘಟನೆ ಹೈದರಾಬಾದ್&zwnj;ನ ಖಾಸಗಿ ಶಾಲೆಯೊಂದರಲ್ಲಿ ಬೆಳಕಿಗೆ ಬಂದಿದ್ದು, ಪೋಷಕರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನ ವಜಾಗೊಳಿಸಿದೆ ಎಂದು ಎಎನ್&zwnj;ಐ ವರದಿ ಮಾಡಿದೆ.&lt;/p&gt;&lt;p&gt;ಹೈದರಾಬಾದ್&zwnj;ನ ಸಯೀದಾಬಾದ್&zwnj;ನಲ್ಲಿರುವ 'ಸಕ್ಸಸ್, ದಿ ಸ್ಕೂಲ್&zwnj;ನಲ್ಲಿ ಘಟನೆ ನಡೆದಿದೆ. ಶಾಲೆಯ ಶಿಕ್ಷಕಿ ಶೇಖ್ ಆಯಿಷಾ ಪರ್ವಿನ್ ವಜಾಗೊಂಡಿರುವ ಶಿಕ್ಷಕಿ. ವಜಾಗೊಳಿಸಿ ಬರೆದಿರುವ ಪತ್ರದಲ್ಲಿ 'ಇನ್ನೆಂದು ಸಕ್ಸಸ್ ಗ್ರೂಪ್ ಆಫ್ ಎಜುಕೇಷನ್ ಇನ್&zwnj;ಸ್ಟಿಟ್ಯೂಟ್&zwnj;ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸದಂತೆ ನಿಮ್ಮನ್ನು ಶಾಶ್ವತವಾಗಿ ಅನರ್ಹಗೊಳಿಸಲಾಗಿದೆ' ಎಂದು ಆಡಳಿತ ಮಂಡಳಿಸಿ ತಿಳಿಸಿದೆ.&lt;/p&gt;&lt;h2&gt;ಹಿಂದೂ ಮಗುವಿಗೆ ಇಸ್ಲಾಮಿಕ್ ಪ್ರಾರ್ಥನೆ ಮಾಡುವಂತೆ ಹೋಂ ವರ್ಕ್!&lt;/h2&gt;&lt;p&gt;ಶಾಲೆ ಮುಗಿಯುವ ವೇಳೆ ಮಕ್ಕಳಿಗೆ ಹೋಂ ವರ್ಕ್ ಕೊಡುವುದು ಸಾಮಾನ್ಯ. ಆದರೆ ಹೋಂ ವರ್ಕ್ ಕೊಡುವಾಗ ಮಕ್ಕಳಿಗೆ ಅಂದಿನ ಪಾಠ, ಅಧ್ಯಯನಗಳ ಕುರಿತಾಗಿ ಕೊಡಲಾಗುತ್ತೆ. ಆದರೆ ಶಿಕ್ಷಕಿ ಆಯಿಷಾ ಪರ್ವಿನ್ ಪಾಠದ ಬದಲಿಗೆ ಎರಡನೇ ತರಗತಿಯ ಹಿಂದೂ ಮಗುವಿಗೆ ಕಲ್ಮಾ ಮತ್ತು ಸೂರಾ ಫಾತಿಹಾವನ್ನು ಪಠಿಸುವಂತೆ ಹೋಂ ವರ್ಕ್ ಕೊಟ್ಟಿರುವ ಶಿಕ್ಷಕಿ. ಮಗು ಮನೆಗೆ ಹೋದ ನಂತರ ಪೋಷಕರು ಮಗುವಿನ ಹೋಂ ವರ್ಕ್ ಗಮನಕ್ಕೆ ಬಂದಿದೆ. ಕಲ್ಪಾ ಸೂರಾ ಫಾತಿಹಾ ಪಠಣ ಮಾಡುವಂತೆ ಮಗುವಿಗೆ ಮನೆಕೆಲಸ ಕೊಟ್ಟಿರುವುದು ಕಂಡು ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ಪೋಷಕರು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯವರನ್ನ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ ನಂತರ ವಿವಾದವೆದ್ದಿದೆ. ಅಷ್ಟೇ ಅಲ್ಲದೆ ಇದು ಇತರೆ ಪೋಷಕರಿಗೂ ತಿಳಿದು ಶಾಲಾಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ ಅವರು ಎಕ್ಸ್&zwnj;ನಲ್ಲಿ ಪೋಸ್ಟ್ ಮಾಡಿದ್ದು, 'ಸಕ್ಸಸ್ ಆದರೆ ಭಾಗಶಃ ಮಾತ್ರ&hellip; ಇಂದು ಬೆಳಗ್ಗೆ ಹೈದರಾಬಾದ್&zwnj;ನಲ್ಲಿ ಶಾಲಾ ಶಿಕ್ಷಕಿಯೊಬ್ಬರು ಹಿಂದೂ ಮಗುವಿಗೆ ಇಸ್ಲಾಮಿಕ್ ಪ್ರಾರ್ಥನೆ ಮಾಡುವಂತೆ ಕಲ್ಮಾ, ಇತ್ಯಾದಿ ಪಠಣ ಮಾಡಿ ಹೇಳುವಂತೆ ಹೋಮ್ ವರ್ಕ್ ನೆಪದಲ್ಲಿ ಬಲವಂತದ ಕ್ರಮವನ್ನು ನಾನು ಖಂಡಿಸಿದ ನಂತರ, ಈಗ ಶಾಲೆಯು ಆ ಶಿಕ್ಷಕಿ ಆಯಿಷಾಳನ್ನ ಕೆಲಸದಿಂದ ತೆಗೆದುಹಾಕಿದೆ' ಎಂದು ಬರೆದುಕೊಂಡಿದ್ದಾರೆ. ಆದರೆ ವಜಾಗೊಳಿಸಿದ ಪತ್ರವನ್ನು ಬಿಟ್ಟು ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ ಎಂದು ಬರೆದಿದ್ದಾರೆ.&lt;/p&gt;&lt;p&gt;School Teacher Terminated In #Hyderabad After Alleged Religious Recitation ControversyA controversy has erupted at #SuccessTheSchool in #Saidabad, Hyderabad, after the parents of a Class 2 Hindu student alleged that their child was asked to recite the Kalma and Surah Fateha.&hellip; pic.twitter.com/R4UNcp7Hhe&lt;/p&gt;&lt;p&gt;&mdash; BNN Channel (@Bavazir_network) July 16, 2026&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/hyderbad-school-terminates-teachers-who-allegedly-gave-kalma-recitation-as-homework/articleshow-a0ait7f"/>
        </item>
        <item>
            <title><![CDATA[7ನೇ ಕ್ಲಾಸ್‌ವರೆಗೆ ಇಂಗ್ಲಿಷ್‌ ಮೀಡಿಯಂ, 8ಕ್ಕೆ ಕನ್ನಡ ಮಾಧ್ಯಮ! ಪ್ರೌಢಶಾಲೆಗಳು ಇಲ್ಲದೆ 30,000 ಮಕ್ಕಳು ಅತಂತ್ರ]]></title>
            <link>https://kannada.asianetnews.com/education/english-medium-ends-at-class-7-30-000-students-forced-back-to-kannada-medium-in-class-8-in-karnataka-rav/articleshow-axemy9p</link>
            <guid isPermaLink="true">https://kannada.asianetnews.com/education/english-medium-ends-at-class-7-30-000-students-forced-back-to-kannada-medium-in-class-8-in-karnataka-rav/articleshow-axemy9p</guid>
            <pubDate>Fri, 17 Jul 2026 08:28:51 +0530</pubDate>
            <description><![CDATA[&lt;p&gt;2018-19ರಲ್ಲಿ ಆರಂಭವಾದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 7ನೇ ತರಗತಿ ಪೂರೈಸಿದ ಸುಮಾರು 30 ಸಾವಿರ ವಿದ್ಯಾರ್ಥಿಗಳು, 8ನೇ ತರಗತಿಗೆ ಪ್ರವೇಶವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದಿಂದ 8ನೇ ತರಗತಿಗೆ ಮಂಜೂರಾತಿ ಸಿಗದ ಕಾರಣ, &amp;nbsp;ಅನಿವಾರ್ಯವಾಗಿ ಮತ್ತೆ ಕನ್ನಡ ಮಾಧ್ಯಮಕ್ಕೆ ದಾಖಲು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxpzwpbfh722y0k0agdyn8y1,imgname-----------------------2026-07-17t082255.391-1784256813423.jpg" type="image/jpeg" height="390" width="690"/>
            <content:encoded><![CDATA[&lt;p&gt;--&lt;/p&gt;&lt;p&gt;&lt;strong&gt;ಏನಿದು ಸಮಸ್ಯೆ?&lt;/strong&gt;&lt;/p&gt;&lt;ul&gt; &lt;li&gt;&amp;nbsp;2018- 19ನೇ ಸಾಲಿನಲ್ಲಿ ರಾಜ್ಯಾದ್ಯಂತ 1001 ಸರ್ಕಾರಿ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಿದ್ದ ಸರ್ಕಾರ&lt;/li&gt; &lt;li&gt;&amp;nbsp;ಇಂಗ್ಲಿಷ್&zwnj; ಮಾಧ್ಯಮದಲ್ಲಿ ಓದಿ 7ನೇ ತರಗತಿ ಪೂರೈಸಿದ ಮಕ್ಕಳು. 8ನೇ ತರಗತಿ ಸೇರಲು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಇಲ್ಲ&lt;/li&gt; &lt;li&gt;ಆರ್ಥಿಕ ಶಕ್ತಿ ಇಲ್ಲದ ಕಾರಣ, ಶಾಲೆ ಆರಂಭವಾಗಿ 2 ತಿಂಗಳಾಗಿರುವ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳು ಸೇರ್ಪಡೆ&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!&lt;/strong&gt;&lt;/p&gt;&lt;p&gt;ಸರ್ಕಾರಿ ಆಂಗ್ಲ ಶಾಲೆಯಲ್ಲಿ ಓದಿ 30 ಸಾವಿರ ಮಕ್ಕಳಿಗೆ ಸಮಸ್ಯೆಯಾಗಿರುವ ಕುರಿತು &lsquo;ಕನ್ನಡಪ್ರಭ&rsquo; ಮಾತ್ರ ಜೂ.14ರಂದು ವರದಿ ಪ್ರಕಟಿಸಿತ್ತು.&lt;/p&gt;&lt;p&gt;--&lt;/p&gt;&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ಹೂವಿನಹಡಗಲಿ (ಜು.17):&lt;/strong&gt;&lt;/p&gt;&lt;p&gt;7ನೇ ತರಗತಿ ಉತ್ತೀರ್ಣರಾಗಿರುವ ರಾಜ್ಯದ 1001 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳ 30 ಸಾವಿರ ಮಕ್ಕಳು ಈಗ ಅನಿವಾರ್ಯವಾಗಿ ಕನ್ನಡ ಮಾಧ್ಯಮವನ್ನು ಅಪ್ಪಿಕೊಳ್ಳುವಂತಾಗಿದೆ. ಇಂಗ್ಲಿಷ್&zwnj; ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳನ್ನು ಪಾಲಕರಿಂದ ಅನುಮತಿ ಪತ್ರ ಪಡೆದು ಕನ್ನಡ ಮಾಧ್ಯಮ ಶಾಲೆಗಳಿಗೆ 8ನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ.&lt;/p&gt;&lt;p&gt;ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 2 ತಿಂಗಳು ಕಳೆಯುತ್ತಾ ಬಂದರೂ ಆಂಗ್ಲ ಮಾಧ್ಯಮದ 8ನೇ ತರಗತಿಗೆ ಸರ್ಕಾರ ಮಂಜೂರಾತಿ ನೀಡಿಲ್ಲ. ಈವರೆಗೂ ಈ ಮಕ್ಕಳಿಗೆ ಹಾಜರಾತಿಯೂ ಇಲ್ಲ. ಪಠ್ಯಪುಸ್ತಕಗಳಿಲ್ಲ. ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ನುರಿತ ಶಿಕ್ಷಕರಿಲ್ಲ. ಕೆಲವೆಡೆ ತರಗತಿ ನಡೆಸಲು ಕೊಠಡಿಗಳಿಲ್ಲ.&lt;/p&gt;&lt;p&gt;ಹಾಗಾಗಿ ಮಕ್ಕಳು ವಿಧಿ ಇಲ್ಲದೆ ಕನ್ನಡ ಮಾಧ್ಯಮದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಶಿಕ್ಷಕರೂ ಮುಂದಾಗಿ ಕನ್ನಡ ಮಾಧ್ಯಮಕ್ಕೆ ಇವರನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ರಾಜ್ಯದಲ್ಲಿ 30 ಸಾವಿರ ಮಕ್ಕಳು ಈಗ ತಮ್ಮ ಮುಂದಿನ ಓದನ್ನು ಕನ್ನಡ ಮಾಧ್ಯಮದಲ್ಲಿ ಮಾಡಬೇಕಿದೆ.&lt;/p&gt;&lt;h2&gt;ಪಾಲಕರಿಂದ ಒಪ್ಪಿಗೆ ಪತ್ರ:&lt;/h2&gt;&lt;p&gt;ರಾಜ್ಯದ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ 8ನೇ ತರಗತಿಗೆ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಅಲ್ಲಿ ಆಂಗ್ಲ ಮಾಧ್ಯಮದ ಬದಲು ಕನ್ನಡ ಮಾಧ್ಯಮದಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ನಮ್ಮಲ್ಲಿ ಈವರೆಗೂ ಆಂಗ್ಲ ಮಾಧ್ಯಮ ಶಾಲೆ ಮಂಜೂರಾತಿ ಇಲ್ಲ. ಅಲ್ಲಿಯವರೆಗೂ ಕನ್ನಡ ಮಾಧ್ಯಮದಲ್ಲಿ ದಾಖಲಾತಿ ಪಡೆಯಲು ತಾವು ಅನುಮತಿ ನೀಡಬೇಕು. ಸರ್ಕಾರದಿಂದ ಆಂಗ್ಲ ಮಾಧ್ಯಮ ಶಾಲೆ ಮಂಜೂರಾದ ಬಳಿಕ ವಿದ್ಯಾರ್ಥಿಗಳನ್ನು ಮತ್ತೆ ಆಂಗ್ಲ ಮಾಧ್ಯಮ ಶಾಲೆಗೆ ಮರು ದಾಖಲಾತಿ ಮಾಡಿಕೊಳ್ಳುತ್ತೇವೆ ಎಂದು ಪಾಲಕರಿಂದ ಅನುಮತಿ ಪಡೆದುಕೊಳ್ಳಲಾಗುತ್ತಿದೆ.&lt;/p&gt;&lt;p&gt;ಈ 8ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು ಆನ್&zwnj;ಲೈನ್&zwnj;ನಲ್ಲಿ ಮಾಡಬೇಕಿದೆ. ಇದಕ್ಕಾಗಿ ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್&zwnj; ವ್ಯವಸ್ಥೆ (ಶಾಟ್ಸ್&zwnj; ಆ್ಯಪ್&zwnj;) ಅಪ್&zwnj;ಲೋಡ್&zwnj; ಮಾಡಿದ ಬಳಿಕ ಆ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಬಿಸಿಯೂಟ, ಹಾಲು, ಮೊಟ್ಟೆ ಮತ್ತು ಬಾಳೆಹಣ್ಣು ನೀಡಲು ಅವಕಾಶವಿದೆ.&lt;/p&gt;&lt;h3&gt;ಮರು ದಾಖಲಾತಿ ಮಾಡುತ್ತೇವೆ&lt;/h3&gt;&lt;p&gt;ಸರ್ಕಾರ ಆಂಗ್ಲ ಮಾಧ್ಯಮದ 8ನೇ ತರಗತಿಗೆ ಮಂಜೂರಾತಿ ನೀಡಿಲ್ಲ. ಆ ಮಕ್ಕಳನ್ನು ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮಕ್ಕೆ ದಾಖಲಾತಿ ನಡೆಸುವ ಪ್ರಕ್ರಿಯೆ ನಡೆದಿದೆ. ದಾಖಲಾತಿ ಇಲ್ಲದಿದ್ದರೆ ಅವರಿಗೆ ಹಾಜರಾತಿ ಸಿಗಲ್ಲ. ಆಂಗ್ಲ ಮಾಧ್ಯಮ ಮಂಜೂರು ಆದ ಕೂಡಲೇ ಅವರನ್ನು ಮರು ದಾಖಲಾತಿ ಮಾಡಲಾಗುವುದು.&lt;/p&gt;&lt;p&gt;&lt;strong&gt;-ಕೆ.ಮಂಗಳಾ, ಕ್ಷೇತ್ರ ಶಿಕ್ಷಣಾಧಿಕಾರಿ, ಹೂವಿನಹಡಗಲಿ&lt;/strong&gt;&lt;/p&gt;&lt;p&gt;&lt;strong&gt;ಕನ್ನಡ ಮಾಧ್ಯಮಕ್ಕೆ ದಾಖಲು&lt;/strong&gt;&lt;/p&gt;&lt;p&gt;ವಿದ್ಯಾರ್ಥಿಗಳು 7ನೇ ತರಗತಿ ಆಂಗ್ಲ ಮಾಧ್ಯಮ ಶಾಲೆಯಿಂದ ಪಾಸ್&zwnj; ಆಗಿದ್ದಾರೆ. ಅವರಿಗೆ 8ನೇ ತರಗತಿ ಆಂಗ್ಲ ಮಾಧ್ಯಮ ವ್ಯವಸ್ಥೆ ಇಲ್ಲ. ವಿಧಿ ಇಲ್ಲದೇ ಶಿಕ್ಷಕರು ಪಾಲಕರ ಅನುಮತಿ ಪತ್ರ ಪಡೆದು ಕನ್ನಡ ಮಾಧ್ಯಮದಲ್ಲೇ ಅವರನ್ನು ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;strong&gt;-ಜಯಪ್ರಕಾಶ ನಾರಾಯಣ, ಪಾಲಕ, ಮಾಗಳ ಗ್ರಾಮ.&lt;/strong&gt;&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/english-medium-ends-at-class-7-30-000-students-forced-back-to-kannada-medium-in-class-8-in-karnataka-rav/articleshow-axemy9p"/>
        </item>
        <item>
            <title><![CDATA[IIT Dharwad: ದೇಶದಲ್ಲೇ ಮೊದಲು! ಎಐ ಮೂಲಕ ಉತ್ತರ ಪತ್ರಿಕೆ ಮೌಲ್ಯಮಾಪನ; ಧಾರವಾಡ ಐಐಟಿ ಹೊಸ ಟೆಕ್]]></title>
            <link>https://kannada.asianetnews.com/education/india-s-first-ai-evaluate-answer-sheets-dharwad-iit-develops-new-technology-rav/articleshow-bk89ge8</link>
            <guid isPermaLink="true">https://kannada.asianetnews.com/education/india-s-first-ai-evaluate-answer-sheets-dharwad-iit-develops-new-technology-rav/articleshow-bk89ge8</guid>
            <pubDate>Thu, 16 Jul 2026 05:25:43 +0530</pubDate>
            <description><![CDATA[&lt;p&gt;ಇನ್ಮುಂದೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಶಿಕ್ಷಕರೇ ಬೇಕಾಗಿಲ್ಲ. ಮೌಲ್ಯಮಾಪನಕ್ಕೆ ದಿನಗಟ್ಟಲೆ ಸಮಯವೂ ಬೇಕಾಗಿಲ್ಲ. ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಅಭಿವೃದ್ಧಿಪಡಿಸಿದ &lsquo;ಡಿಜಿಟ್ಯೂಟರ್&zwnj;&rsquo; ಎಐ ತಂತ್ರಜ್ಞಾನದಿಂದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಕ್ಷಣ ಮಾತ್ರದಲ್ಲಿ ಮೌಲ್ಯಮಾಪನ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxm2zr6vz2vbq1zhp7r33whd,imgname-----------------------2026-07-16t050948.275-1784159396059.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡಿಜಿಟ್ಯೂಬರ್&zwnj; ಕೆಲಸ ಹೇಗೆ&lt;/strong&gt;&lt;/p&gt;&lt;p&gt;ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಧಾರವಾಡ ಐಐಟಿ ತಂತ್ರಜ್ಞರಿಂದ ಡಿಜಿಟ್ಯೂಬರ್&zwnj; ಅಭಿವೃದ್ಧಿ&lt;/p&gt;&lt;ul&gt; &lt;li&gt;6- 12ನೇ ತರಗತಿವರೆಗಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇದರ ಅಭಿವೃದ್ಧಿ&lt;/li&gt; &lt;li&gt;ಉತ್ತರಪತ್ರಿಕೆ ಸ್ಕ್ಯಾನ್&zwnj; ಮಾಡಿದರೆ ಈ ತಂತ್ರಜ್ಞಾನ ಮೌಲ್ಯಮಾಪನ ಮಾಡಿ ಅಂಕಗಳನ್ನು ಮಾಡುತ್ತೆ&lt;/li&gt; &lt;li&gt;ಕನ್ನಡ ಮಾತ್ರವಲ್ಲದೇ ಯಾವುದೇ ಭಾಷೆಯನ್ನು ಬೇಕಾದರೂ ಅರಿತು ಮೌಲ್ಯಮಾಪನ ಮಾಡಬಲ್ಲದು&lt;/li&gt; &lt;li&gt;ಪ್ರಾಯೋಗಿಕವಾಗಿ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಮತ್ತು ಗದಗದಲ್ಲಿ ಪರಿಚಯಕ್ಕೆ ನಿರ್ಧಾರ&lt;/li&gt; &lt;li&gt;ಈ ತಂತ್ರಜ್ಞಾನ ಅಭಿವೃದ್ಧಿಗೆ ಹಿಂದಿನ ಸಿಎಂ ಸಿದ್ಧರಾಮಯ್ಯ ಅವಧಿಯಲ್ಲಿ 5 ಕೋಟಿ ಅನುದಾನ&lt;/li&gt;&lt;/ul&gt;&lt;p&gt;&lt;strong&gt;ಬಸವರಾಜ ಹಿರೇಮಠ&lt;/strong&gt;&lt;/p&gt;&lt;p&gt;&lt;strong&gt;ಧಾರವಾಡ (ಜು.16): &lt;/strong&gt;ಇನ್ಮುಂದೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಶಿಕ್ಷಕರೇ ಬೇಕಾಗಿಲ್ಲ. ಮೌಲ್ಯಮಾಪನಕ್ಕೆ ದಿನಗಟ್ಟಲೆ ಸಮಯವೂ ಬೇಕಾಗಿಲ್ಲ. ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಅಭಿವೃದ್ಧಿಪಡಿಸಿದ &lsquo;ಡಿಜಿಟ್ಯೂಟರ್&zwnj;&rsquo; ಎಐ ತಂತ್ರಜ್ಞಾನವು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಕ್ಷಣ ಮಾತ್ರದಲ್ಲಿ ಮೌಲ್ಯಮಾಪನ ಮಾಡಲು ಸಿದ್ಧವಾಗಿದೆ.&lt;/p&gt;&lt;p&gt;ರಾಜ್ಯದ ಶಾಲೆ ಮತ್ತು ಕಾಲೇಜು ಶಿಕ್ಷಣದಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ ಬಳಕೆ ಶುರುವಾಗಿದೆ. ಈ ತಂತ್ರಜ್ಞಾನದ ಮುಂದುವರಿದ ಭಾಗವಾಗಿ ಧಾರವಾಡ ಐಐಟಿ ತಂತ್ರಜ್ಞರು ದೇಶದಲ್ಲೇ ಮೊದಲ ಬಾರಿಗೆ ಸ್ವಯಂಚಾಲಿತವಾಗಿ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ತಂತ್ರಜ್ಞಾನ ಸಂಶೋಧಿಸಿ ಯಶಸ್ವಿಯಾಗಿದ್ದಾರೆ. ಶಿಕ್ಷಕರ ಮೌಲ್ಯಮಾಪನದ ಹೊರೆ ಕಡಿಮೆ ಮಾಡುವುದು, ತರಗತಿಯಲ್ಲಿ ಬೋಧನೆ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಸಮಯ ವಿನಿಯೋಗಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಈ &lsquo;ಡಿಜಿಟ್ಯೂಟರ್&zwnj;&rsquo; ತಂತ್ರಜ್ಞಾನ ಸಿದ್ಧಪಡಿಸಲಾಗಿದೆ.&lt;/p&gt;&lt;h2&gt;ಪ್ರಾಯೋಗಿಕ ಕಾರ್ಯ:&lt;/h2&gt;&lt;p&gt;ಈ ಕುರಿತು ಮಾಹಿತಿ ನೀಡಿದ ಐಐಟಿ ಧಾರವಾಡದ ಸಂಶೋಧನೆ ಮತ್ತು ಅಭಿವೃದ್ಧಿ ಡೀನ್ ಪ್ರೊ.ಕೋಟೇಶ್ವರ ರಾವ್, ಶಿಕ್ಷಣ ಇಲಾಖೆಗೆ ಪ್ರತಿ ಬಾರಿ ಎಸ್ಸೆಸ್ಸೆಲ್ಸಿ, ಪಿಯುಸಿಯಂತಹ ಬೋರ್ಡ್&zwnj; ಪರೀಕ್ಷೆಗಳ ಸಮಯದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಯನ್ನು ಕರಾರುವಕ್ಕಾಗಿ ಹಾಗೂ ಸ್ವಯಂಚಾಲಿತವಾಗಿ ಮೌಲ್ಯಮಾಪನ ಮಾಡಲು ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿಯೇ ಧಾರವಾಡ ಐಐಟಿ ಈ ತಂತ್ರಜ್ಞಾನ ಸಿದ್ಧಪಡಿಸುವ ಜವಾಬ್ದಾರಿ ಹೊತ್ತಿದ್ದು, ₹5 ಕೋಟಿ ಅನುದಾನದೊಂದಿಗೆ ನಾವು &lsquo;ಡಿಜಿಟ್ಯೂಟರ್&rsquo; ನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದೇವೆ. ಜತೆಗೆ, ಅದು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಕಾರ್ಯ ಮಾಡಲು ಸಿದ್ಧವಾಗಿದೆ ಎಂದರು.&lt;/p&gt;&lt;h3&gt;ಸ್ಕ್ಯಾನ್&zwnj;, ಅಪಲೋಡ್&zwnj;:&lt;/h3&gt;&lt;p&gt;ಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ 6ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಈ ತಂತ್ರಜ್ಞಾನ ವಿನ್ಯಾಸಗೊಳಿಸಲಾಗಿದೆ. ಉತ್ತರ ಪತ್ರಿಕೆಗಳನ್ನು ಈ ಸಾಫ್ಟವೇರ್&zwnj; ಮೂಲಕ ಸ್ಕ್ಯಾನ್&zwnj; ಮಾಡಿದರೆ ಸಾಕು, ಅದು ವಿದ್ಯಾರ್ಥಿಗಳು ಬರೆದ ಉತ್ತರ ಆಧರಿಸಿ ಅಂಕ ನೀಡುತ್ತದೆ. ಪ್ರಾಯೋಗಿಕ ಹಂತದ ಭಾಗವಾಗಿ ಇದನ್ನು ಸೆಪ್ಟೆಂಬರ್&zwnj;ನಿಂದ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಮತ್ತು ಗದಗದಲ್ಲಿ ಪರಿಚಯಿಸಲಾಗುವುದು. ಶಾಲಾಮಟ್ಟದಲ್ಲಿ ಎಐ ಆಧಾರಿತ ಉತ್ತರ ಪತ್ರಿಕೆ ಮೌಲ್ಯಮಾಪನ ವ್ಯವಸ್ಥೆ ಜಾರಿಗೊಳಿಸುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಲಿದೆ ಎಂದ ಪ್ರೊ.ರಾವ್ ಹೆಮ್ಮೆ ವ್ಯಕ್ತಪಡಿಸಿದರು. ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಆಗುವ ನಿರೀಕ್ಷೆ ಹೆಚ್ಚಿದೆ ಎಂದರು.&lt;/p&gt;&lt;h3&gt;ಪ್ರಶ್ನೆ ಕೇಳಿದರೂ ಉತ್ತರ:&lt;/h3&gt;&lt;p&gt;&lsquo;ಡಿಜಿಟ್ಯೂಟರ್&rsquo; ಬಗ್ಗೆ &lsquo;ಕನ್ನಡಪ್ರಭ&rsquo;ಕ್ಕೆ ಹೆಚ್ಚಿನ ಮಾಹಿತಿ ಒದಗಿಸಿದ ಐಐಟಿ ಶೈಕ್ಷಣಿಕ ಡೀನ್ ಪ್ರೊ.ನವೀನ್ ಎಂ.ಬಿ., ಸ್ವಯಂಚಾಲಿತ ಮೌಲ್ಯಮಾಪನ ಸಾಧನಕ್ಕಿಂತ &lsquo;ಡಿಜಿಟ್ಯೂಟರ್&zwnj;&rsquo; ಹೆಚ್ಚಿನ ಕಾರ್ಯ ಮಾಡಲಿದೆ. ಇದು ಸಮಗ್ರ ಎಐ-ಚಾಲಿತ ಶೈಕ್ಷಣಿಕ ಸಹಾಯಕವು ಹೌದು. ವಿದ್ಯಾರ್ಥಿಗಳು ಟೈಪ್ ಮಾಡುವ ಮೂಲಕ ಅಥವಾ ಧ್ವನಿ ಆಜ್ಞೆಗಳ ಮೂಲಕ ಪ್ರಶ್ನೆಗಳನ್ನೂ ಕೇಳಬಹುದು. ಇದು ಕನ್ನಡ ಮಾತ್ರವಲ್ಲದೇ ಭಾರತೀಯ ಎಲ್ಲ ಭಾಷೆಗಳನ್ನು ಅರಿತು ಪರಿಹಾರ ಒದಗಿಸುತ್ತದೆ. ಈ ತಂತ್ರಜ್ಞಾನವು ವಸ್ತುನಿಷ್ಠ ಮತ್ತು ವಿವರಣಾತ್ಮಕ ಉತ್ತರಗಳನ್ನು ಮೌಲ್ಯಮಾಪನ ಮಾಡಲಿದೆ. ಮೌಲ್ಯಮಾಪನಕ್ಕಾಗಿ ಖರ್ಚು ಮಾಡುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ &lsquo;ಡಿಜಿಟ್ಯೂಟರ್&rsquo;, ಶಿಕ್ಷಕರು ಬೋಧನೆ, ಮಾರ್ಗದರ್ಶನ ಮತ್ತು ಕಲಿಕೆಯ ಫಲಿತಾಂಶ ಸುಧಾರಿಸುವತ್ತ ಹೆಚ್ಚು ಗಮನ ಹರಿಸುವುದನ್ನು ನಿರೀಕ್ಷಿಸಲಾಗಿದೆ ಎಂದರು.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/india-s-first-ai-evaluate-answer-sheets-dharwad-iit-develops-new-technology-rav/articleshow-bk89ge8"/>
        </item>
        <item>
            <title><![CDATA[ಬರೋಬ್ಬರಿ 3 ಕೋಟಿ ರೂಪಾಯಿ ಸ್ಕಾಲರ್‍‌ಶಿಪ್ ಗೆದ್ದ ವಿದ್ಯಾರ್ಥಿನಿ..!]]></title>
            <link>https://kannada.asianetnews.com/education/rs-3-crore-lincoln-scholarship-bihars-shreya-kaushik-wins-gkn/articleshow-bv3fokc</link>
            <guid isPermaLink="true">https://kannada.asianetnews.com/education/rs-3-crore-lincoln-scholarship-bihars-shreya-kaushik-wins-gkn/articleshow-bv3fokc</guid>
            <pubDate>Fri, 17 Jul 2026 10:19:59 +0530</pubDate>
            <description><![CDATA[&lt;p&gt;ಪ್ರತಿಭೆಗೆ ಬಡತನ ಅಡ್ಡಿಯಾಗದು ಎಂಬ ಮಾತನ್ನು ಬಿಹಾರದ 18 ವರ್ಷದ ವಿದ್ಯಾರ್ಥಿನಿ ಶ್ರೇಯಾ ಕೌಶಿಕ್ ಸಾಬೀತುಪಡಿಸಿದ್ದಾರೆ. ಬಿಹಾರದ ಸಿವಾನ್ ಮೂಲದ ಶ್ರೇಯಾ, ಅಮೆರಿಕದ ಪ್ರತಿಷ್ಠಿತ 'ಲಿಂಕನ್ ಸ್ಕಾಲರ್&zwnj;ಶಿಪ್' (Lincoln Scholarship)ಗೆ ಆಯ್ಕೆಯಾಗುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq6f9b4adz2ggj1ywes481n,imgname-shreya-kaushik-wins-rs-3-crore-lincoln-scholarship-1784263714029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಾಟ್ನಾ: &lt;/strong&gt;ಪ್ರತಿಭೆಗೆ ಬಡತನ ಅಡ್ಡಿಯಾಗದು ಎಂಬ ಮಾತನ್ನು ಬಿಹಾರದ 18 ವರ್ಷದ ವಿದ್ಯಾರ್ಥಿನಿ ಶ್ರೇಯಾ ಕೌಶಿಕ್ ಸಾಬೀತುಪಡಿಸಿದ್ದಾರೆ. ಬಿಹಾರದ ಸಿವಾನ್ ಮೂಲದ ಶ್ರೇಯಾ, ಅಮೆರಿಕದ ಪ್ರತಿಷ್ಠಿತ 'ಲಿಂಕನ್ ಸ್ಕಾಲರ್&zwnj;ಶಿಪ್' (Lincoln Scholarship)ಗೆ ಆಯ್ಕೆಯಾಗುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಈ ಪ್ರತಿಷ್ಠಿತ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಏಕೈಕ ಭಾರತೀಯ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.&lt;/p&gt;&lt;h2&gt;&lt;strong&gt;3 ಕೋಟಿ ರೂಪಾಯಿ ವಿದ್ಯಾರ್ಥಿವೇತನ!&lt;/strong&gt;&lt;/h2&gt;&lt;p&gt;ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಈ ವಿದ್ಯಾರ್ಥಿವೇತನವು ಶ್ರೇಯಾ ಅವರ ಅಮೆರಿಕದ ಉನ್ನತ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲಿದೆ. ಅಮೆರಿಕದ ಕೆಂಟುಕಿಯಲ್ಲಿರುವ 'ಸೆಂಟರ್ ಕಾಲೇಜ್'ನಲ್ಲಿ (Centre College) ಪದವಿ ಶಿಕ್ಷಣ ಪಡೆಯಲು ಈ ಹಣ ಬಳಕೆಯಾಗಲಿದೆ.&lt;/p&gt;&lt;h2&gt;&lt;strong&gt;ಏನಿದು ಲಿಂಕನ್ ಸ್ಕಾಲರ್&zwnj;ಶಿಪ್?&lt;/strong&gt;&lt;/h2&gt;&lt;p&gt;ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಗೌರವಾರ್ಥವಾಗಿ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇದು ಜಗತ್ತಿನಾದ್ಯಂತ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ಸ್ಕಾಲರ್&zwnj;ಶಿಪ್&zwnj;ಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಇಡೀ ವಿಶ್ವದಾದ್ಯಂತ ಕೇವಲ 10 ವಿದ್ಯಾರ್ಥಿಗಳನ್ನು ಮಾತ್ರ ಈ ಪ್ರೋಗ್ರಾಂಗೆ ಆಯ್ಕೆ ಮಾಡಲಾಗುತ್ತದೆ. ಶೈಕ್ಷಣಿಕ ಸಾಧನೆ, ನಾಯಕತ್ವದ ಗುಣಗಳು ಮತ್ತು ಸಮಾಜ ಸೇವೆಗೆ ಬದ್ಧತೆ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಈ ಗೌರವ ನೀಡಲಾಗುತ್ತದೆ. ಈ ಸ್ಕಾಲರ್&zwnj;ಶಿಪ್ ವಿದ್ಯಾರ್ಥಿಯ ಬೋಧನಾ ಶುಲ್ಕ (Tuition fees), ವಸತಿ, ಊಟ, ಪುಸ್ತಕಗಳು, ಆರೋಗ್ಯ ವಿಮೆ, ಪ್ರಯಾಣ ವೆಚ್ಚ ಹಾಗೂ ಇತರ ವೈಯಕ್ತಿಕ ವೆಚ್ಚಗಳನ್ನು ಸಂಪೂರ್ಣವಾಗಿ ಭರಿಸುತ್ತದೆ.&lt;/p&gt;&lt;h2&gt;&lt;strong&gt;ಶ್ರೇಯಾ ಕೌಶಿಕ್ ಅವರ ಶೈಕ್ಷಣಿಕ ಪ್ರಯಾಣ&lt;/strong&gt;&lt;/h2&gt;&lt;p&gt;ಬಿಹಾರದ ಸಿವಾನ್&zwnj;ನಲ್ಲಿ ಜನಿಸಿದ ಶ್ರೇಯಾ, ನಂತರ ದೆಹಲಿಗೆ ತೆರಳಿ ಅಲ್ಲಿನ ಆಯಾ ನಗರದ 'ಸರ್ವೋದಯ ಕನ್ಯಾ ವಿದ್ಯಾಲಯ'ದಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದರು. 13ನೇ ವಯಸ್ಸಿನಲ್ಲೇ ಅವರು 'ಡೆಕ್ಸ್ಟೆರಿಟಿ ಗ್ಲೋಬಲ್' (Dexterity Global) ಎಂಬ ಸಂಸ್ಥೆಯನ್ನು ಸೇರಿದರು. ಈ ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಮತ್ತು ಶೈಕ್ಷಣಿಕ ಮಾರ್ಗದರ್ಶನ ನೀಡುತ್ತದೆ. ಈ ತರಬೇತಿಯೇ ಶ್ರೇಯಾ ಅವರಿಗೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಯಿತು.&lt;/p&gt;&lt;h3&gt;&lt;strong&gt;ಸಮಾಜಕ್ಕೆ ಮರಳಿಸುವ ಹಂಬಲ&lt;/strong&gt;&lt;/h3&gt;&lt;p&gt;ತನ್ನ ಈ ಸಾಧನೆಯ ಬಗ್ಗೆ ಮಾತನಾಡಿದ ಶ್ರೇಯಾ, ಅಬ್ರಹಾಂ ಲಿಂಕನ್ ಅವರ ಹೆಸರಿನಲ್ಲಿರುವ ಈ ವಿದ್ಯಾರ್ಥಿವೇತನ ಪಡೆಯುವುದು ನನಗೆ ದೊರೆತ ದೊಡ್ಡ ಗೌರವ. ನನ್ನ ಪರಿಸ್ಥಿತಿಯನ್ನು ಮೀರಿ ಬೆಳೆಯಲು ನನಗೆ ಸಿಕ್ಕ ಮಾರ್ಗದರ್ಶನ ಮತ್ತು ತರಬೇತಿ ಕಾರಣ. ನನ್ನ ಶಿಕ್ಷಣ ಮುಗಿದ ನಂತರ ಸಮಾಜದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಡೆಕ್ಸ್ಟೆರಿಟಿ ಗ್ಲೋಬಲ್ ಸಂಸ್ಥೆಯ ಸಿಇಒ ಶರದ್ ವಿವೇಕ್ ಸಾಗರ್ ಅವರು ಶ್ರೇಯಾ ಅವರನ್ನು ಅಭಿನಂದಿಸಿದ್ದು, ಸರಿಯಾದ ಮಾರ್ಗದರ್ಶನ ಸಿಕ್ಕರೆ ಪ್ರತಿಭಾವಂತ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಸಂಸ್ಥೆಗಳನ್ನು ತಲುಪಬಲ್ಲರು ಎಂಬುದಕ್ಕೆ ಶ್ರೇಯಾ ಅವರೇ ಸಾಕ್ಷಿ ಎಂದು ಶ್ಲಾಘಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/education/rs-3-crore-lincoln-scholarship-bihars-shreya-kaushik-wins-gkn/articleshow-bv3fokc"/>
        </item>
        <item>
            <title><![CDATA[ಅತಿಥಿ ಉಪನ್ಯಾಸಕರ ನೇಮಕಾತಿ ಆರಂಭ; ಅರ್ಜಿಯಲ್ಲಿ ಈ ತಪ್ಪು ಮಾಡಿದ್ರೆ ಕ್ರಿಮಿನಲ್ ಕೇಸ್]]></title>
            <link>https://kannada.asianetnews.com/education/today-good-news-recruitment-of-guest-lecturers-in-government-collages-begins-how-to-apply/articleshow-dailpws</link>
            <guid isPermaLink="true">https://kannada.asianetnews.com/education/today-good-news-recruitment-of-guest-lecturers-in-government-collages-begins-how-to-apply/articleshow-dailpws</guid>
            <pubDate>Tue, 14 Jul 2026 09:45:34 +0530</pubDate>
            <description><![CDATA[&lt;p&gt;ಮಾಸ್ಟರ್ ಡಿಗ್ರಿ ಮಾಡ್ಕೊಂಡು ಕೆಲಸಕ್ಕಾಗಿ ಅಲೆದಾಟ ನಡೆಸ್ತಿರೋರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ರಾಜ್ಯದಲ್ಲಿರುವ ವಿವಿಧ ಸರ್ಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxfd9a1mgegkjq6s3bnftyef,imgname-lecturer-1784002422836.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಶಿಕ್ಷಕ ವೃತ್ತಿಯನ್ನು ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ (Guest Lecturers) ಹುದ್ದೆಗಳ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆಯು ಅಧಿಕೃತವಾಗಿ ಚಾಲನೆ ನೀಡಿದೆ.&lt;/p&gt;&lt;p&gt;2026-27ನೇ ಶೈಕ್ಷಣಿಕ ಸಾಲಿನ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿ ಕುರಿತಾದ ಪ್ರಮುಖ ದಿನಾಂಕಗಳು, ಅರ್ಹತೆ ಮತ್ತು ಇತರ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಪ್ರಮುಖ ದಿನಾಂಕಗಳು&lt;/strong&gt;&lt;/h2&gt;&lt;ul&gt; &lt;li&gt;ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಲು ಕೊನೆಯ ದಿನ: ಜುಲೈ 18, 2025&lt;/li&gt; &lt;li&gt;ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಣೆ: ಜುಲೈ 19&lt;/li&gt; &lt;li&gt;ಅರ್ಜಿ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ: ಜುಲೈ 19 ರಿಂದ 22 ರವರೆಗೆ&lt;/li&gt; &lt;li&gt;ತಾತ್ಕಾಲಿಕ ವರ್ಕ್&zwnj;ಲೋಡ್ (Workload) ಪಟ್ಟಿ ಪ್ರಕಟಣೆ: ಜುಲೈ 25&lt;/li&gt; &lt;li&gt;ಕೌನ್ಸಿಲಿಂಗ್ ಮೆರಿಟ್ ಪಟ್ಟಿ ಪ್ರಕಟಣೆ: ಜುಲೈ 26&lt;/li&gt; &lt;li&gt;ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ: ಜುಲೈ 28&lt;/li&gt;&lt;/ul&gt;&lt;h2&gt;&lt;strong&gt;ಅರ್ಹತೆಗಳೇನಿರಬೇಕು?&lt;/strong&gt;&lt;/h2&gt;&lt;ul&gt; &lt;li&gt;ಸ್ನಾತಕೋತ್ತರ ಪದವಿಯಲ್ಲಿ (PG) ಕನಿಷ್ಠ 55% ಅಂಕಗಳನ್ನು ಹೊಂದಿರಬೇಕು (ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ 50% ಅಂಕಗಳು ಕಡ್ಡಾಯ).&lt;/li&gt; &lt;li&gt;NET/K-SET/SLET ಅಥವಾ PhD ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು&lt;/li&gt; &lt;li&gt;ಕಳೆದ ವರ್ಷ (2025-26) ಅರ್ಜಿ ಸಲ್ಲಿಸಿದವರೂ ಸಹ ಈ ಬಾರಿ ಹೊಸದಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯ&lt;/li&gt;&lt;/ul&gt;&lt;h3&gt;&lt;strong&gt;ಆಯ್ಕೆ ಪ್ರಕ್ರಿಯೆ ಮತ್ತು ಮೆರಿಟ್ ಲೆಕ್ಕಾಚಾರ&lt;/strong&gt;&lt;/h3&gt;&lt;p&gt;ಒಟ್ಟು 100 ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. PhD ಹೊಂದಿದ್ದರೆ 12 ಅಂಕ, NET/K-SET/SLET ಇದ್ದರೆ 9 ಅಂಕ ಹಾಗೂ M.Phil ಹೊಂದಿದ್ದರೆ 6 ಅಂಕಗಳನ್ನು ನೀಡಲಾಗುತ್ತದೆ. ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡಿದ ಅನುಭವವಿದ್ದರೆ ಪ್ರತಿ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 48 ಅಂಕಗಳನ್ನು ನೀಡಲಾಗುತ್ತದೆ. (ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಸೇವಾನುಭವವನ್ನು ಪರಿಗಣಿಸಲಾಗುವುದಿಲ್ಲ). ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ನೀಡಲಾಗುತ್ತದೆ.&lt;/p&gt;&lt;p&gt;ಈ ಬಾರಿ ಆಯ್ಕೆಯಾಗುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ ಇಲಾಖೆಯು ಮಹತ್ವದ ಸೌಲಭ್ಯವೊಂದನ್ನು ನೀಡಿದೆ. ಸೇವಾವಧಿಯಲ್ಲಿ ಅವರಿಗೆ 90 ದಿನಗಳ ಕಾಲ ವೇತನ ಸಹಿತ ಮಾತೃತ್ವ ರಜೆ ಲಭ್ಯವಿರಲಿದೆ.ಅರ್ಜಿ ಸಲ್ಲಿಸುವಾಗ ಯಾವುದೇ ಸುಳ್ಳು ಮಾಹಿತಿ ನೀಡಬಾರದು ಅಥವಾ ನಕಲಿ ದಾಖಲೆಗಳನ್ನು ಸಲ್ಲಿಸಬಾರದು. ಒಂದು ವೇಳೆ ತಪ್ಪು ಮಾಹಿತಿ ಕಂಡುಬಂದಲ್ಲಿ ಅಭ್ಯರ್ಥಿತನ ರದ್ದುಪಡಿಸುವುದಲ್ಲದೆ, ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಸಾಮಾನ್ಯ, ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಇಲಾಖೆಯ ಅಧಿಕೃತ ವೆಬ್&zwnj;ಸೈಟ್ ಅನ್ನು ನಿರಂತರವಾಗಿ ಪರಿಶೀಲಿಸಲು ಸೂಚಿಸಲಾಗಿದೆ.&lt;/p&gt;]]></content:encoded>
            <category>education</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/education/today-good-news-recruitment-of-guest-lecturers-in-government-collages-begins-how-to-apply/articleshow-dailpws"/>
        </item>
        <item>
            <title><![CDATA[ಹೂವಿನಹಡಗಲಿ: 632 ಸರ್ಕಾರಿ ಶಾಲೆಗಳ ದುಸ್ಥಿತಿ, ಅಪಾಯದಲ್ಲಿ ಮಕ್ಕಳ ಅಕ್ಷರಾಭ್ಯಾಸ!]]></title>
            <link>https://kannada.asianetnews.com/education/huvinahadagali-classrooms-in-632-government-schools-dilapidated-students-education-at-risk/articleshow-kz77kz9</link>
            <guid isPermaLink="true">https://kannada.asianetnews.com/education/huvinahadagali-classrooms-in-632-government-schools-dilapidated-students-education-at-risk/articleshow-kz77kz9</guid>
            <pubDate>Sat, 18 Jul 2026 08:07:18 +0530</pubDate>
            <description><![CDATA[&lt;p&gt;ಹೂವಿನಹಡಗಲಿ ತಾಲೂಕಿನ ಸರ್ಕಾರಿ ಶಾಲೆಗಳ ಸುರಕ್ಷತೆಯ ಕುರಿತು ನಡೆಸಿದ ಪರಿಶೀಲನೆಯಲ್ಲಿ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ತಾಲೂಕಿನ 166 ಶಾಲೆಗಳ ಪೈಕಿ 183 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳ ಜೀವಕ್ಕೆ ಅಪಾಯವನ್ನುಂಟುಮಾಡುವ ಸ್ಥಿತಿಯಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxsh4yx5w29zfc92caf9yekq,imgname-----------------------2026-07-18t080147.557-1784342018981.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ಹೂವಿನಹಡಗಲಿ (ಜು.18):&lt;/strong&gt; ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಪ್ರತಿ ಸರ್ಕಾರಿ ಶಾಲೆ ಸುರಕ್ಷಿತ ಎಂಬ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದು ಸರ್ಕಾರಕ್ಕೆ ವರದಿ ನೀಡಬೇಕೆಂಬ ಸೂಚನೆ ನೀಡಿತ್ತು. ತಾಲೂಕಿನಲ್ಲಿ 166 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದು, 1466 ಕೊಠಡಿಗಳಿವೆ. ಇದರಲ್ಲಿ 811 ಗುಣಮಟ್ಟದ ಕೊಠಡಿಗಳಿವೆ. ಉಳಿದಂತೆ 65 ಕೊಠಡಿಗಳು ದೊಡ್ಡ ಪ್ರಮಾಣದಲ್ಲಿ ದುರಸ್ತಿಯಾಗಬೇಕಿದೆ. 384 ಸಣ್ಣ ಪುಟ್ಟ ದುರಸ್ತಿ ಆಗಬೇಕಿದೆ. 183 ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಇಂತಹ ಅಪಾಯದಡಿ ಮಕ್ಕಳು ಅಕ್ಷರಾಭ್ಯಾಸ ಮಾಡುವ ಪರಿಸ್ಥಿತಿ ತಲೆದೋರಿದೆ.&lt;/p&gt;&lt;p&gt;ತಾಲೂಕಿನ 1466 ಶಾಲಾ ಕೊಠಡಿಗಳಲ್ಲಿ 1443 ಕೋಣೆಗಳಿಗೆ ಸುರಕ್ಷಿತ ಎಂಬ ಪ್ರಮಾಣಪತ್ರ ಸಿಕ್ಕಿದೆ. ಇನ್ನು ಹಿರೇಮಲ್ಲನಕೆರೆ ಕ್ಲಸ್ಟರ್&zwnj;ನ 23 ಕೋಣೆಗಳ ಸುರಕ್ಷಿತ ಪ್ರಮಾಣಪತ್ರ ಬರಬೇಕಿದೆ. ಈ ಸುರಕ್ಷಿತ ಪ್ರಮಾಣಪತ್ರಗಳನ್ನು ನೀಡಲು ಜಿಪಂ ಎಂಜಿನಿಯರಿಂಗ್&zwnj; ಇಲಾಖೆ, ಲೋಕೋಪಯೋಗಿ ಮತ್ತು ಕೆಆರ್&zwnj;ಐಡಿಎಲ್&zwnj;ಗೆ ನೀಡಲಾಗಿತ್ತು.&lt;/p&gt;&lt;p&gt;ಪಟ್ಟಣದ ಷಾ ಪೂಜಾಜಿ ವನೇಚಂದ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 1ರಿಂದ 7ನೇ ತರಗತಿ ವರೆಗಿನ ಮೊದಲ ಸರ್ಕಾರಿ ಶಾಲೆಯಾಗಿತ್ತು. ಆರಂಭದಲ್ಲೇ ನೂರಾರು ವಿದ್ಯಾರ್ಥಿಗಳ ದಾಖಲಾತಿ ಹೊಂದಿತ್ತು. ಈಗ ಕೇವಲ ಬೆರಳೆಣಿಕೆಯಷ್ಟು ಮಾತ್ರ ಮಕ್ಕಳಿದ್ದಾರೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಈ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಶಾಲೆಯಲ್ಲಿ ಕೇವಲ 19 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಜತೆಗೆ ಈ ಶಾಲೆಯಲ್ಲಿ 20ಕ್ಕೂ ಹೆಚ್ಚು ಕೋಣೆಗಳಿದ್ದರೂ ಯಾವ ಕೋಣೆಯೂ ಸುರಕ್ಷಿತವಾಗಿಲ್ಲ.&lt;/p&gt;&lt;p&gt;ಆರ್&zwnj;ಸಿಸಿಯ ಸಿಮೆಂಟ್&zwnj; ಚಕ್ಕೆಗಳು ಮಕ್ಕಳ ಮೇಲೆ ಕಳಚಿ ಬೀಳುತ್ತಿವೆ. ಸುರಕ್ಷಿತ ಪ್ರಮಾಣಪತ್ರದಲ್ಲಿ ಯಾವ ಕೋಣೆಯೂ ಸುರಕ್ಷಿತವಾಗಿಲ್ಲ ಎಂಬ ವರದಿ ಬಂದಿದೆ. ಈ ಶಾಲೆಯ ಮಕ್ಕಳನ್ನು ಪಟ್ಟಣದಲ್ಲಿರುವ ಸೊಪ್ಪಿನ ವೀರಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಸುವ ಚಿಂತನೆ ನಡೆದಿದೆ.&lt;/p&gt;&lt;p&gt;ತಾಲೂಕಿನ ಬೂದನೂರು, ಉತ್ತಂಗಿ ಸೇರಿದಂತೆ ಇತರೆ ಸರ್ಕಾರಿ ಪ್ರೌಢ ಶಾಲೆಗಳ ಕೋಣೆಗಳು ಸುರಕ್ಷಿತವಾಗಿಲ್ಲ. ಮಳೆ ಬಂದಾಗ ಸೋರುತ್ತಿವೆ. ಇದಕ್ಕೆ ಅಕ್ಷರ ಆವಿಷ್ಕಾರ ಯೋಜನೆಯಲ್ಲಿ ಚಾವಣಿಗೆ ತಗಡು ಹಾಕಿದ್ದಾರೆ. ಆದರೆ ಕೆಳಗಿನ ಸಿಮೆಂಟ್&zwnj; ತುಂಡುಗಳು ಮಕ್ಕಳ ಮೈ ಮೇಲೆ ಬೀಳುವ ಅಪಾಯ ಎದುರಾಗಿದೆ.&lt;/p&gt;&lt;p&gt;ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಗಣಿ ಬಾಧಿತ ಪ್ರದೇಶಕ್ಕೆ ಒಳ ಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ದುರಸ್ತಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಗ್ರಾಮೀಣ ಭಾಗದ ಬಡ ಮಕ್ಕಳ ಅಕ್ಷರ ಕಲಿಕೆಗೆ ಆಸರೆಯಾಗಬೇಕೆಂಬ ಆಶಯವನ್ನು ಶಿಕ್ಷಣ ಪ್ರೇಮಿಗಳ ಹೊಂದಿದ್ದಾರೆ.&lt;/p&gt;&lt;p&gt;ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕೊಠಡಿಗಳು ಸುರಕ್ಷಿತ ಪ್ರಮಾಣಪತ್ರ ಪಡೆಯಬೇಕೆಂಬ ಸೂಚನೆ ಮೇರೆಗೆ ಕೋಣೆಗಳ ಸುಸ್ಥಿತಿ ಕುರಿತು ವರದಿ ಕೇಳಿದಾಗ ಜಿಪಂ ಎಂಜಿನಿಯರಿಂಗ್&zwnj;, ಕೆಆರ್&zwnj;ಐಡಿಎಲ್&zwnj; ಹಾಗೂ ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್&zwnj;ಗಳ ವರದಿ ಪ್ರಕಾರ 183 ಶಾಲೆ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಗಳಾ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/huvinahadagali-classrooms-in-632-government-schools-dilapidated-students-education-at-risk/articleshow-kz77kz9"/>
        </item>
        <item>
            <title><![CDATA[Crocodile In Hostel: ಕೋಟಾ ಹಾಸ್ಟೆಲ್ ಕಿಚನ್‌ಗೆ ನುಗ್ಗಿದ ಮೊಸಳೆ; ವಿದ್ಯಾರ್ಥಿಗಳು, ಸಿಬ್ಬಂದಿ ಶಾಕ್]]></title>
            <link>https://kannada.asianetnews.com/gallery/viral/crocodile-enters-kota-hostel-kitchen-causing-panic-among-students-suh-mfpfc21</link>
            <guid isPermaLink="true">https://kannada.asianetnews.com/gallery/viral/crocodile-enters-kota-hostel-kitchen-causing-panic-among-students-suh-mfpfc21</guid>
            <pubDate>Sun, 19 Jul 2026 16:42:43 +0530</pubDate>
            <description><![CDATA[&lt;p&gt;ಕೋಟಾದ ಬೋರ್ಖೆಡಾ ಪ್ರದೇಶದಲ್ಲಿರುವ ಬಾಲಕರ ಹಾಸ್ಟೆಲ್ ಒಂದರ ಮೆಸ್&zwnj;ಗೆ ನಾಲ್ಕು ಅಡಿ ಉದ್ದದ ಮೊಸಳೆಯೊಂದು ನುಗ್ಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwnvfkxhh0zzcmnz5cfsarq,imgname-crocodile-enters-kota-boys--hostel-mess-1ecdd8dc24064b3eb5e72706aea5a69c-1784447614589.png" type="image/jpeg" height="390" width="690"/>
            <content:encoded><![CDATA[&lt;p&gt;ಕೋಟಾದ ಬೋರ್ಖೆಡಾ ಪ್ರದೇಶದಲ್ಲಿರುವ ಬಾಲಕರ ಹಾಸ್ಟೆಲ್ ಒಂದರ ಮೆಸ್&zwnj;ಗೆ ನಾಲ್ಕು ಅಡಿ ಉದ್ದದ ಮೊಸಳೆಯೊಂದು ನುಗ್ಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.&lt;/p&gt;&lt;img&gt;&lt;p&gt;ರಾಜಸ್ಥಾನದ ಕೋಟಾದಲ್ಲಿರುವ ಬಾಲಕರ ಹಾಸ್ಟೆಲ್ ಒಂದಕ್ಕೆ ಶುಕ್ರವಾರ ಮಧ್ಯಾಹ್ನ ಅನಿರೀಕ್ಷಿತ ಅತಿಥಿಯೊಂದು ಬಂದಿತ್ತು. ಹಾಸ್ಟೆಲ್&zwnj;ನ ಬೇಸ್&zwnj;ಮೆಂಟ್&zwnj;ನಲ್ಲಿದ್ದ ಮೆಸ್&zwnj;ಗೆ ಮೊಸಳೆಯೊಂದು ನುಗ್ಗಿ, ಅಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರಲ್ಲಿ ಆತಂಕ ಸೃಷ್ಟಿಸಿತ್ತು.&lt;/p&gt;&lt;p&gt;ವರದಿ ಪ್ರಕಾರ, ಬೋರ್ಖೆಡಾ ಪ್ರದೇಶದ ಕೋರಲ್ ಪಾರ್ಕ್ ಬಳಿಯ ಹಾಸ್ಟೆಲ್&zwnj;ನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಡುಗೆ ತಯಾರಿಸುತ್ತಿದ್ದಾಗ ಸುಮಾರು ನಾಲ್ಕು ಅಡಿ ಉದ್ದದ ಈ ಸರೀಸೃಪ ಸದ್ದಿಲ್ಲದೆ ಅಡುಗೆ ಮನೆಗೆ ನುಗ್ಗಿದೆ.&lt;/p&gt;&lt;p&gt;ಮೊಸಳೆಯನ್ನು ನೋಡಿದ ಅಡುಗೆಯವರು ತಕ್ಷಣವೇ ಪ್ರಾಣ ಉಳಿಸಿಕೊಳ್ಳಲು ಹೊರಗೆ ಓಡಿ ಬಂದಿದ್ದಾರೆ. ಇದನ್ನು ನೋಡಿದ ಇತರ ಸಿಬ್ಬಂದಿ ಕೂಡ ಹೊರಗೆ ಓಡಿದ್ದಾರೆ.&lt;/p&gt;&lt;img&gt;&lt;p&gt;ಹಾಸ್ಟೆಲ್&zwnj;ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಮೊಸಳೆಯ ಪ್ರವೇಶದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ, ಸರೀಸೃಪವು ಮೆಟ್ಟಿಲುಗಳ ಮೂಲಕ ನಿಧಾನವಾಗಿ ಕೆಳಗೆ ಇಳಿದು ಬೇಸ್&zwnj;ಮೆಂಟ್&zwnj;ನಲ್ಲಿರುವ ಮೆಸ್&zwnj;ಗೆ ಪ್ರವೇಶಿಸುವುದನ್ನು ಕಾಣಬಹುದು.&lt;/p&gt;&lt;p&gt;ಈ ಸುದ್ದಿ ಹಾಸ್ಟೆಲ್&zwnj;ನಾದ್ಯಂತ ಹರಡುತ್ತಿದ್ದಂತೆ, ಹಲವು ವಿದ್ಯಾರ್ಥಿಗಳು ಈ ವಿಚಿತ್ರ ದೃಶ್ಯವನ್ನು ನೋಡಲು ಸ್ಥಳಕ್ಕೆ ದೌಡಾಯಿಸಿದರು. ಕೆಲವರು ಮೊಸಳೆಯನ್ನು ತಾವೇ ಹಿಡಿಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ, ಹೆದರಿದ ಮೊಸಳೆಯು ಅಡುಗೆ ಮನೆಯ ಸುತ್ತಲೂ ಚಲಿಸಲು ಪ್ರಾರಂಭಿಸಿದ್ದರಿಂದ, ಎಲ್ಲರೂ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾಯಿತು.&lt;/p&gt;&lt;p&gt;ತರಬೇತಿ ಪಡೆದ ರಕ್ಷಣಾ ಸಿಬ್ಬಂದಿ ಬರುವವರೆಗೂ ಆತಂಕದ ವಾತಾವರಣವಿತ್ತು.&lt;/p&gt;&lt;img&gt;&lt;p&gt;ಮೊಸಳೆ ಕಾಣಿಸಿಕೊಂಡ ತಕ್ಷಣ ಹಾಸ್ಟೆಲ್ ಆಡಳಿತ ಮಂಡಳಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆ.&lt;/p&gt;&lt;p&gt;ಸ್ಥಳಕ್ಕೆ ತಲುಪಿದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸಾಕಷ್ಟು ಪ್ರಯತ್ನದ ನಂತರ, ತಂಡವು ಜನರಿಗೆ ಅಥವಾ ಪ್ರಾಣಿಗೆ ಯಾವುದೇ ಹಾನಿಯಾಗದಂತೆ ಸರೀಸೃಪವನ್ನು ಸುರಕ್ಷಿತವಾಗಿ ಸೆರೆಹಿಡಿಯಿತು.&lt;/p&gt;&lt;p&gt;ಅರಣ್ಯ ಇಲಾಖೆ ಸಿಬ್ಬಂದಿ ವೀರೇಂದ್ರ ಸಿಂಗ್ ಅವರ ಪ್ರಕಾರ, ರಕ್ಷಣೆಯ ನಂತರ ಮೊಸಳೆಯನ್ನು ಚಂಬಲ್ ನದಿಗೆ ಬಿಡಲಾಯಿತು.&lt;/p&gt;&lt;p&gt;ಕಟ್ಟಡದ ಸಮೀಪ ಹಾದುಹೋಗುವ ದೊಡ್ಡ ಚರಂಡಿಯಿಂದ ಮೊಸಳೆ ಹಾಸ್ಟೆಲ್ ಪ್ರವೇಶಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕ ಬಳಕೆದಾರರು ತಮಾಷೆಯ ಕಾಮೆಂಟ್&zwnj;ಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಕೆಲವರು, ಮೊಸಳೆಯು ಊಟದ ಮೆನು ಪರಿಶೀಲಿಸಲು ಅಥವಾ ಅಡುಗೆಮನೆಯನ್ನು ಪರೀಕ್ಷಿಸಲು ಬಂದಿದೆ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಆಹಾರದ ವಾಸನೆಯನ್ನು ಹಿಡಿದು ಬಂದಿರಬೇಕು ಎಂದಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗದಿದ್ದಕ್ಕೆ ಹಲವರು ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;&lt;p&gt;ಕೆಲವರು ಇದು ಮೊಸಳೆಯಲ್ಲ, ಉಡ (monitor lizard) ಇರಬಹುದು ಎಂದು ವಾದಿಸಿದ್ದರು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇದು ಮೊಸಳೆಯೇ ಎಂದು ಖಚಿತಪಡಿಸಿ, ಅದನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಯಾವುದೇ ಅನಾಹುತವಿಲ್ಲದೆ ಈ ಘಟನೆ ಅಂತ್ಯಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನಿರಾಳರಾಗಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/viral/crocodile-enters-kota-hostel-kitchen-causing-panic-among-students-suh-mfpfc21"/>
        </item>
        <item>
            <title><![CDATA[ಶಾಲೆಗಳಲ್ಲಿ ಕಡ್ಡಾಯ ಲೈಂಗಿಕ ಶಿಕ್ಷಣ? ಮಹತ್ವದ ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ]]></title>
            <link>https://kannada.asianetnews.com/india-news/central-government-tells-supreme-court-it-is-considering-comprehensive-sex-education-in-schools-suh/articleshow-mx3mixg</link>
            <guid isPermaLink="true">https://kannada.asianetnews.com/india-news/central-government-tells-supreme-court-it-is-considering-comprehensive-sex-education-in-schools-suh/articleshow-mx3mixg</guid>
            <pubDate>Tue, 14 Jul 2026 17:11:48 +0530</pubDate>
            <description><![CDATA[&lt;p&gt;ದೇಶದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣ (Comprehensive Sex Education - CSE) ಪರಿಚಯಿಸುವ ಮಹತ್ವದ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ. ಈ ಕುರಿತು ತಜ್ಞರ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದ್ದು, ಸುಪ್ರೀಂ ಕೋರ್ಟ್&zwnj;ಗೆ ಮಾಹಿತಿ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxg6wh1d72sz3b74wzs2wrrc,imgname-central-government-tells-supreme-court-it-is-considering-comprehensive-sex-education-in-schools-1784029266989.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣ (Comprehensive Sex Education - CSE) ಪರಿಚಯಿಸುವ ಮಹತ್ವದ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ. ಈ ಕುರಿತು ತಜ್ಞರ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದ್ದು, ಸುಪ್ರೀಂ ಕೋರ್ಟ್&zwnj;ಗೆ ಮಾಹಿತಿ ನೀಡಿದೆ. ನ್ಯಾಯಾಲಯದ ಅನುಮೋದನೆ ಸಿಕ್ಕ ಬಳಿಕ ದೇಶಾದ್ಯಂತ ಹೊಸ ಪಠ್ಯಕ್ರಮ ಜಾರಿಗೆ ಬರುವ ಸಾಧ್ಯತೆಯಿದೆ.&lt;/p&gt;&lt;h2&gt;ಸುಪ್ರೀಂ ಕೋರ್ಟ್&zwnj;ಗೆ ಕೇಂದ್ರದ ಮಾಹಿತಿ&lt;/h2&gt;&lt;p&gt;ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠದ ಮುಂದೆ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು, ತಜ್ಞರ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ನ್ಯಾಯಾಲಯದ ಅನುಮೋದನೆ ಬಳಿಕ ಶಿಫಾರಸುಗಳನ್ನು ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಈ ವರದಿ POCSO ಕಾಯ್ದೆಯಡಿ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಕರ ಗರ್ಭಧಾರಣೆ, ಹದಿಹರೆಯದವರ ಸಮ್ಮತಿಯ ಸಂಬಂಧಗಳು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಸಿದ್ಧಪಡಿಸಲಾಗಿದೆ.&lt;/p&gt;&lt;h2&gt;ಸಮಗ್ರ ಲೈಂಗಿಕ ಶಿಕ್ಷಣ ಎಂದರೇನು?&lt;/h2&gt;&lt;p&gt;ಇದು ಕೇವಲ ಸಂತಾನೋತ್ಪತ್ತಿ ಅಥವಾ ಜೀವಶಾಸ್ತ್ರದ ಪಾಠವಲ್ಲ. ಸಮಗ್ರ ಲೈಂಗಿಕ ಶಿಕ್ಷಣ ಎಂದರೆ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಅವರ ವಯಸ್ಸಿಗೆ ತಕ್ಕ ರೀತಿಯಲ್ಲಿ ವೈಜ್ಞಾನಿಕ ಹಾಗೂ ಆರೋಗ್ಯಕರ ಮಾಹಿತಿಯನ್ನು ನೀಡುವ ಪಠ್ಯಕ್ರಮ.&lt;/p&gt;&lt;p&gt;ಇದರಲ್ಲಿ ದೇಹದ ಅರಿವು, ವೈಯಕ್ತಿಕ ಸುರಕ್ಷತೆ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ, ನೈರ್ಮಲ್ಯ, ಪ್ರೌಢಾವಸ್ಥೆಯ ಬದಲಾವಣೆಗಳು, ಸಂಬಂಧಗಳು, ಒಪ್ಪಿಗೆ (Consent), ಲಿಂಗ ಸಮಾನತೆ, ಸಂತಾನೋತ್ಪತ್ತಿ, ಆರೋಗ್ಯ, ಆನ್&zwnj;ಲೈನ್ ಸುರಕ್ಷತೆ, ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಇತ್ಯಾದಿ ವಿಷಯಗಳನ್ನು ಹಂತ ಹಂತವಾಗಿ ಕಲಿಸಲಾಗುತ್ತದೆ.&lt;/p&gt;&lt;h2&gt;ತಜ್ಞರ ಸಮಿತಿಯ ಪ್ರಮುಖ ಶಿಫಾರಸುಗಳು&lt;/h2&gt;&lt;p&gt;26 ಸದಸ್ಯರ ರಾಷ್ಟ್ರೀಯ ತಜ್ಞರ ಸಮಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, TISS, NCPCR, NALSA, ವಿವಿಧ ಸಚಿವಾಲಯಗಳು, ವೈದ್ಯಕೀಯ ತಜ್ಞರು, ಕ್ಲಿನಿಕಲ್ ಮನಶ್ಶಾಸ್ತ್ರಜ್ಞರು ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.&lt;/p&gt;&lt;h2&gt;ಸಮಿತಿ ನೀಡಿರುವ ಪ್ರಮುಖ ಶಿಫಾರಸುಗಳು:&lt;/h2&gt;&lt;p&gt;ಸಮಗ್ರ ಲೈಂಗಿಕ ಶಿಕ್ಷಣವನ್ನು ಶಾಲೆಗಳ ಮೂಲ ಪಠ್ಯಕ್ರಮದ ಭಾಗವಾಗಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಜಾಗೃತಿಯನ್ನು ಪಠ್ಯದಲ್ಲಿ ಸೇರಿಸಬೇಕು. ಪ್ರಾಥಮಿಕ ಹಂತದಿಂದಲೇ ದೇಹದ ಸುರಕ್ಷತೆ, ಸ್ವಚ್ಛತೆ, ದೇಹದ ಭಾಗಗಳು ಹಾಗೂ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ಕಲಿಸಬೇಕು. NCERT ದೇಶಾದ್ಯಂತ ಒಂದೇ ರೀತಿಯ ಪಠ್ಯಕ್ರಮ ಹಾಗೂ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಬೇಕು. ಪ್ರತಿ ಶಾಲೆಯಲ್ಲಿ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು. ಪ್ರಾಥಮಿಕ ಹಂತದಿಂದಲೇ ವಾರಕ್ಕೆ ಎರಡು ಬಾರಿ 15&ndash;20 ನಿಮಿಷಗಳ ಕಡ್ಡಾಯ ತರಗತಿಗಳನ್ನು ನಡೆಸಬೇಕು.&lt;/p&gt;&lt;h2&gt;NEP 2020ಗೂ ಹೊಂದಾಣಿಕೆ&lt;/h2&gt;&lt;p&gt;ಈ ಪಠ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಗೆ ಹೊಂದುವಂತೆ ರೂಪಿಸುವಂತೆ ಸಮಿತಿ ಸಲಹೆ ನೀಡಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯದ ಬಗ್ಗೆ, ವಿಮರ್ಶಾತ್ಮಕ ಚಿಂತನೆ ಜೊತೆ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಆರೋಗ್ಯಕರ ಸಂಬಂಧಗಳ ಅರಿವು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.&lt;/p&gt;&lt;h2&gt;ಪೋಷಕರಿಗೂ ಜಾಗೃತಿ ಕಾರ್ಯಕ್ರಮ&lt;/h2&gt;&lt;p&gt;ಈ ಶಿಕ್ಷಣ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಸಮಿತಿ ಹೇಳಿದೆ. ಪೋಷಕರು, ಪಾಲಕರು ಹಾಗೂ ಶಿಕ್ಷಕರಿಗಾಗಿ ನಿಯಮಿತ ಜಾಗೃತಿ ಸಭೆಗಳನ್ನು ಆಯೋಜಿಸಿ, ಮಕ್ಕಳ ಬೆಳವಣಿಗೆಯ ಹಂತಗಳ ಜೊತೆ ವಯಸ್ಸಿಗೆ ತಕ್ಕ ಲೈಂಗಿಕ ಶಿಕ್ಷಣದ ಮಹತ್ವ, ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸುವಂತೆ ಶಿಫಾರಸು ಮಾಡಲಾಗಿದೆ.&lt;/p&gt;&lt;h2&gt;ಏಕೆ ಅಗತ್ಯ ಈ ಶಿಕ್ಷಣ?&lt;/h2&gt;&lt;p&gt;ತಜ್ಞರ ಅಭಿಪ್ರಾಯದಲ್ಲಿ ಸಮಗ್ರ ಲೈಂಗಿಕ ಶಿಕ್ಷಣದಿಂದ:&lt;/p&gt;&lt;p&gt;ಮಕ್ಕಳು ಲೈಂಗಿಕ ದೌರ್ಜನ್ಯವನ್ನು ಗುರುತಿಸಲು ಸಾಧ್ಯವಾಗುತ್ತದೆ.&lt;/p&gt;&lt;p&gt;ಅಸುರಕ್ಷಿತ ಸಂದರ್ಭಗಳನ್ನು ವರದಿ ಮಾಡಲು ಆತ್ಮವಿಶ್ವಾಸ ಬೆಳೆಯುತ್ತದೆ.&lt;/p&gt;&lt;p&gt;ತಪ್ಪು ಮಾಹಿತಿಯಿಂದ ದೂರ ಉಳಿಯಬಹುದು.&lt;/p&gt;&lt;p&gt;ಆರೋಗ್ಯಕರ ಸಂಬಂಧಗಳ ಅರಿವು ಮೂಡುತ್ತದೆ.&lt;/p&gt;&lt;p&gt;ಸಂತಾನೋತ್ಪತ್ತಿ ಹಾಗೂ ಲೈಂಗಿಕ ಆರೋಗ್ಯದ ಬಗ್ಗೆ ಸರಿಯಾದ ತಿಳುವಳಿಕೆ ಸಿಗುತ್ತದೆ.&lt;/p&gt;&lt;p&gt;ಆನ್&zwnj;ಲೈನ್ ಅಪಾಯಗಳ ಬಗ್ಗೆ ಜಾಗೃತಿ ಹೆಚ್ಚುತ್ತದೆ.&lt;/p&gt;&lt;p&gt;ತಜ್ಞರು ಸ್ಪಷ್ಟಪಡಿಸಿರುವಂತೆ, ಈ ಶಿಕ್ಷಣದ ಉದ್ದೇಶ ಮಕ್ಕಳನ್ನು ಅಥವಾ ಯುವಜನರನ್ನು ಲೈಂಗಿಕ ಚಟುವಟಿಕೆಗೆ ಪ್ರೋತ್ಸಾಹಿಸುವುದಲ್ಲ; ಬದಲಾಗಿ ಅವರಿಗೆ ಸರಿಯಾದ ಮಾಹಿತಿ, ಸುರಕ್ಷತೆ ಮತ್ತು ಜೀವನ ಕೌಶಲ್ಯಗಳನ್ನು ನೀಡುವುದಾಗಿದೆ. ಈ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದರೆ, ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಮಹತ್ವದ ಬದಲಾವಣೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>education</category>
            <dc:creator>Sushma Hegde</dc:creator>
            <atom:link href="https://kannada.asianetnews.com/india-news/central-government-tells-supreme-court-it-is-considering-comprehensive-sex-education-in-schools-suh/articleshow-mx3mixg"/>
        </item>
        <item>
            <title><![CDATA[ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್‌ರು; ಆ ಊರಿನಲ್ಲಿ ವಾತಾವರಣವನ್ನಷ್ಟೇ ಅಲ್ಲ ಹೊಸ ಇತಿಹಾಸ ಸೃಷ್ಟಿಸಿದ ರೈತನ ಮಕ್ಕಳು!]]></title>
            <link>https://kannada.asianetnews.com/education/one-house-four-police-officers-farmers-children-make-village-proud-bmk/articleshow-nvi0get</link>
            <guid isPermaLink="true">https://kannada.asianetnews.com/education/one-house-four-police-officers-farmers-children-make-village-proud-bmk/articleshow-nvi0get</guid>
            <pubDate>Fri, 17 Jul 2026 16:42:56 +0530</pubDate>
            <description><![CDATA[&lt;p&gt;ತೀವ್ರ ಬಡತನದ ನಡುವೆಯೂ, ವೃದ್ಧ ರೈತನೊಬ್ಬ ತನ್ನ ನಾಲ್ವರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ತಂದೆಯ ಕಷ್ಟವನ್ನು ಅರಿತ ಮಕ್ಕಳು, ಸ್ವಂತ ಪರಿಶ್ರಮದಿಂದ ಓದಿ, ನಾಲ್ವರೂ ಪೊಲೀಸ್ ಇಲಾಖೆಗೆ ಸೇರಿ ಇತಿಹಾಸ ಸೃಷ್ಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqwaqvdvp6kvtmwgf74xe38,imgname-police-1784286633837.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಪುಟ್ಟ ಹಳ್ಳಿ. ಅಲ್ಲಿನ ಮುರಿದು ಬಿದ್ದ ಹಳೇ ಮನೆಯೊಂದರ ಮುಂದೆ ಅಂದು ಇಡೀ ಗ್ರಾಮವೇ ನೆರೆದಿತ್ತು. ಸದಾ ಸಾಲದ ಸುಳಿಗೆ ಸಿಲುಕಿ, ಹರಿದ ಅಂಗಿ, ತೇಪೆ ಹಾಕಿದ ಚಪ್ಪಲಿ ಧರಿಸಿ ತಲೆ ತಗ್ಗಿಸಿ ನಡೆಯುತ್ತಿದ್ದ ವೃದ್ಧ ರೈತನ ಕಣ್ಣುಗಳಿಂದ ಅಂದು ನೀರು ನಿಲ್ಲುತ್ತಿರಲಿಲ್ಲ. ಆದರೆ ಆ ಕಣ್ಣೀರಿನಲ್ಲಿ ಅಂದು ಹತಾಶೆ ಇರಲಿಲ್ಲ, ಬದಲಿಗೆ ಜಗತ್ತನ್ನೇ ಗೆದ್ದ ಹೆಮ್ಮೆಯಿತ್ತು! ಏಕೆಂದರೆ, ಬಡತನದ ಕಾರಣಕ್ಕೆ ಸಮಾಜ ಯಾರನ್ನು ಕಡೆಗಣಿಸಿತ್ತೋ, ಅದೇ ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್&zwnj;ರು ಒಟ್ಟಿಗೆ ಖಾಕಿ ಉಡುಪು ಧರಿಸಿ ಆ ವೃದ್ಧ ತಂದೆಯ ಮುಂದೆ ತಲೆ ಎತ್ತಿ ನಿಂತಿದ್ದರು.&lt;/p&gt;&lt;h2&gt;&lt;strong&gt;ಬಡತನದ ಕತ್ತಲಲ್ಲಿ ಬೆಂದ ಬಾಲ್ಯ!&lt;/strong&gt;&lt;/h2&gt;&lt;p&gt;ಅತ್ತರ್ ಸಿಂಗ್ ಮತ್ತು ಅವರ ಪತ್ನಿ ರಾಜ್ವಂತಿ ದೇವಿಗೆ ದುಬಾರಿ ಶಿಕ್ಷಣದ ಅರಿವಿರಲಿಲ್ಲ. ಹೊಲದಲ್ಲಿ ಹಗಲಿರುಳು ಕಷ್ಟಪಟ್ಟರೂ ದಿನದ ಕೊನೆಯಲ್ಲಿ ಕೈಗೆ ಸಿಗುತ್ತಿದ್ದುದು ಕೇವಲ ಕೆಲವು ರೂಪಾಯಿಗಳು ಮಾತ್ರ. ಮೂವರು ಹೆಣ್ಣುಮಕ್ಕಳು ಹುಟ್ಟಿದಾಗ, ಇವರ ಮದುವೆ ಮಾಡುವುದು ಹೇಗೆ? ಈ ಬಡತನದಲ್ಲಿ ಇವರನ್ನು ಸಾಕುವುದು ಹೇಗೆ? ಎಂದು ಸಮಾಜ ನಿಟ್ಟುಸಿರು ಬಿಟ್ಟಿತ್ತು. ಆದರೆ ಆ ವೃದ್ಧ ತಂದೆ ತನ್ನ ಹೊಟ್ಟೆಗೆ ಬಟ್ಟೆ ಕಟ್ಟಿಯಾದರೂ ಮಕ್ಕಳ ಕೈಗೆ ಪುಸ್ತಕ ನೀಡಿದರು. ತಂದೆಯ ಪಾದದ ಬಿರುಕುಗಳು ಮತ್ತು ತಾಯಿಯ ಕಣ್ಣೀರನ್ನು ಕಂಡ ಮಕ್ಕಳಿಗೆ ಒಂದೇ ಹಠವಿತ್ತು. ಅದೇನೆಂದರೆ, ನಮ್ಮ ತಂದೆಯ ಹೆಗಲ ಮೇಲಿರುವ ಬಡತನದ ಈ ನೊಗ ನಾವೇ ಮುರಿಯಬೇಕು.&lt;/p&gt;&lt;p&gt;ಕೋಚಿಂಗ್&zwnj;ಗೆ ಇರಲಿಲ್ಲ ಹಣ!&lt;/p&gt;&lt;p&gt;ಕೋಚಿಂಗ್ ಸೆಂಟರ್&zwnj;ಗೆ ಹೋಗಲು ಹಣವಿರಲಿಲ್ಲ, ಸರಿಯಾದ ಸ್ಟಡಿ ಮೆಟೀರಿಯಲ್ ಇರಲಿಲ್ಲ. ಆದರೆ ಅವರ ಬಳಿ ಬೆಂಕಿಯಂತಹ ಛಲವಿತ್ತು. ಹಳ್ಳಿಯ ಕತ್ತಲ ರಾತ್ರಿಯಲ್ಲಿ ಒಂದೇ ದೀಪದ ಬೆಳಕಿನಲ್ಲಿ ಹಳೆಯ ಪುಸ್ತಕಗಳನ್ನು ನಾಲ್ವರೂ ಒಟ್ಟಿಗೆ ಹಂಚಿಕೊಂಡು ಓದಿದರು. ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆಗಾಗಿ ಬೆಳಗಿನ ಜಾವ 4 ಗಂಟೆಗೆ ಬರಿಗಾಲಿನಲ್ಲೇ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ ಓಡಿ ರಕ್ತ ಮತ್ತು ಬೆವರನ್ನು ಒಂದಾಗಿಸಿದರು.&lt;/p&gt;&lt;h3&gt;&lt;strong&gt;ಸಮಾಜದ ಬಡತನ ಮಂಡಿಯೂರಿದ ಕ್ಷಣ!&lt;/strong&gt;&lt;/h3&gt;&lt;p&gt;ಇವರ ಕಠಿಣ ಪರಿಶ್ರಮದ ಮುಂದೆ ವಿಧಿ ಕೂಡ ಸೋಲಲೇಬೇಕಾಯಿತು. ಮೊದಲಿಗೆ ಹಿರಿಯ ಮಗಳು ಸುದೇಶ್ ಚಂಡೀಗಢ ಪೊಲೀಸ್&zwnj; ಕಾನ್&zwnj;ಸ್ಟೆಬಲ್ ಆಗಿ ಆಯ್ಕೆಯಾಗಿ ಇತಿಹಾಸ ಬರೆದರು. ಅವಳ ಹಾದಿಯನ್ನೇ ಹಿಡಿದು ಎರಡನೇ ಮಗಳು ಊರ್ಮಿಳಾ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಸೇರಿಕೊಂಡರೆ, ಮೂರನೇ ಮಗಳು ಮೋನಿಕಾ ದೆಹಲಿ ಪೊಲೀಸ್&zwnj; ಇಲಾಖೆಗೆ ಸಿಂಹಿಣಿಯಂತೆ ಹೆಜ್ಜೆ ಇಟ್ಟರು. ಕೊನೆಯಲ್ಲಿ ಕಿರಿಯ ಮಗ ಅಂಕಿತ್ ಹರಿಯಾಣ ಪೊಲೀಸ್ ಪಡೆಗೆ ಸೇರ್ಪಡೆಯಾದರು. ಇಡೀ ದೇಶದ ಇತಿಹಾಸದಲ್ಲೇ ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್&zwnj;ರು ಒಟ್ಟಿಗೆ ದೇಶಸೇವೆಗೆ ನಿಂತ ಅತ್ಯಂತ ಅಪರೂಪದ ಘಟನೆ ಇದಾಯಿತು.&lt;/p&gt;&lt;h3&gt;&lt;strong&gt;ಕಣ್ಣೀರ ಧಾರೆ ಹರಿದ ಆ ಮಹಾ ಕ್ಷಣ!&lt;/strong&gt;&lt;/h3&gt;&lt;p&gt;ನಾಲ್ವರೂ ಒಟ್ಟಿಗೆ ತರಬೇತಿ ಮುಗಿಸಿ, ತಲೆಯ ಮೇಲೊಂದು ಖಾಕಿ ಕ್ಯಾಪ್, ಮೈಮೇಲೆ ಖಡಕ್ ಯೂನಿಫಾರ್ಮ್ ಧರಿಸಿ ತಮ್ಮ ಹಳ್ಳಿಯ ಮನೆಗೆ ಬಂದಾಗ ಇಡೀ ಗ್ರಾಮವೇ ಕಣ್ಣೀರು ಹಾಕಿತು. ಸದಾ ಬಡತನದಿಂದ ತಲೆ ತಗ್ಗಿಸಿ ನಡೆಯುತ್ತಿದ್ದ ಆ ವೃದ್ಧ ತಂದೆಯ ಮುಂದೆ ನಿಂತು, ಈ ನಾಲ್ಕು ಜನ ಮಕ್ಕಳು ಒಟ್ಟಿಗೆ ಹಸ್ತ ಎತ್ತಿ 'ಸೆಲ್ಯೂಟ್' ಹೊಡೆದಾಗ ಆ ತಂದೆಯ ಎದೆ ಹೆಮ್ಮೆಯಿಂದ ಉಬ್ಬಿತು. ತನ್ನ ಹರಿದ ಅಂಗಿಯ ಹೆಗಲ ಮೇಲೆ ಮುಖ ಮುಚ್ಚಿಕೊಂಡು, ಆನಂದಬಾಷ್ಪ ಸುರಿಸುತ್ತಾ ಆ ತಂದೆ ಬಿಕ್ಕಿ ಬಿಕ್ಕಿ ಅತ್ತರು. ನನ್ನ ಮಕ್ಕಳು ಕೇವಲ ನನ್ನ ಸಾಲ ತೀರಿಸಲಿಲ್ಲ, ನನ್ನ ಜನ್ಮವನ್ನೇ ಸಾರ್ಥಕಗೊಳಿಸಿದರು. ಇಡೀ ದೇಶ ಕಾಯುವ ಜವಾಬ್ದಾರಿ ಇಂದು ನನ್ನ ಮಕ್ಕಳ ಮೇಲಿದೆ,&quot; ಎಂದು ತಂದೆ ಅತ್ತಾಗ ಅಲ್ಲಿ ನೆರೆದಿದ್ದ ಇಡೀ ಹಳ್ಳಿಯ ಕಣ್ಣುಗಳು ತೇವವಾಗಿದ್ದವು.&lt;/p&gt;]]></content:encoded>
            <category>education</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/education/one-house-four-police-officers-farmers-children-make-village-proud-bmk/articleshow-nvi0get"/>
        </item>
        <item>
            <title><![CDATA[Mangaluru: ಸೇಂಟ್ ಅಲೋಶಿಯಸ್ ಶಾಲೆಗೆ 1983ರ ಬ್ಯಾಚ್‌ನಿಂದ ರೂ. 65 ಲಕ್ಷದ ವಿದ್ಯಾರ್ಥಿವೇತನ ದತ್ತಿ ಕೊಡುಗೆ!]]></title>
            <link>https://kannada.asianetnews.com/dakshina-kannada/st-aloysius-high-school-1983-batch-65-lakh-scholarship-endowment-mangalore-san/articleshow-pbcotdp</link>
            <guid isPermaLink="true">https://kannada.asianetnews.com/dakshina-kannada/st-aloysius-high-school-1983-batch-65-lakh-scholarship-endowment-mangalore-san/articleshow-pbcotdp</guid>
            <pubDate>Tue, 14 Jul 2026 18:34:31 +0530</pubDate>
            <description><![CDATA[&lt;p&gt;ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ 1983ರ ಬ್ಯಾಚ್&zwnj;ನ ಹಳೆಯ ವಿದ್ಯಾರ್ಥಿಗಳು 43 ವರ್ಷಗಳ ನಂತರ ಒಂದೆಡೆ ಸೇರಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು 65 ಲಕ್ಷ ರೂಪಾಯಿಗಳ ಬೃಹತ್ ವಿದ್ಯಾರ್ಥಿವೇತನ ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxgbk07j20q055d7pvh80dv9,imgname-st-aloysius-class-of-1983-1784034197745.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು (ಜು.154): ಸೇಂಟ್ ಅಲೋಶಿಯಸ್ ಪ್ರೌಢಶಾಲೆಯಿಂದ ಉತ್ತೀರ್ಣರಾಗಿ ಸುಮಾರು 43 ವರ್ಷಗಳ ನಂತರ ಒಂದೆಡೆ ಸೇರಿದ 1983ರ ಬ್ಯಾಚ್&zwnj;ನ ಹಳೆಯ ವಿದ್ಯಾರ್ಥಿಗಳು, ಮುಂದಿನ ತಲೆಮಾರುಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಬರೋಬ್ಬರಿ 65 ಲಕ್ಷ ರೂಪಾಯಿಗಳ ಬೃಹತ್ ವಿದ್ಯಾರ್ಥಿವೇತನ ದತ್ತಿ ನಿಧಿಯನ್ನು (Scholarship Endowment) ಸಂಸ್ಥೆಗೆ ಕೊಡುಗೆಯಾಗಿ ನೀಡಿದ್ದಾರೆ. ಸೇಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಯ 146 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಹಳೆಯ ವಿದ್ಯಾರ್ಥಿಗಳ ನಿರ್ದಿಷ್ಟ ಬ್ಯಾಚ್&zwnj;ವೊಂದರಿಂದ ಸ್ಥಾಪನೆಯಾದ ಮೊದಲ ಸ್ವಾವಲಂಬಿ ದತ್ತಿ ನಿಧಿ ಇದಾಗಿದೆ ಎಂದು ಅಂದಾಜಿಸಲಾಗಿದೆ. ಈ ನಿಧಿಯು ಕಾಲಾನಂತರದಲ್ಲಿ ಮತ್ತಷ್ಟು ಬೆಳೆಯಲಿದ್ದು, ಅರ್ಹ ವಿದ್ಯಾರ್ಥಿಗಳಿಗೆ ನಿರಂತರ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿದೆ.&lt;/p&gt;&lt;p&gt;ಮೊದಲ ವರ್ಷದ ವಿದ್ಯಾರ್ಥಿವೇತನ ವಿತರಣೆ&lt;/p&gt;&lt;p&gt;ಅಲೋಶಿಯಸ್ ಗೊನ್ಜಾಗಾ ಅವರ ವಾರ್ಷಿಕ ಹಬ್ಬದ ಆಚರಣೆಯ ಸಂದರ್ಭದಲ್ಲಿ ಚೊಚ್ಚಲ 'ಸೇಂಟ್ ಅಲೋಶಿಯಸ್ ಕ್ಲಾಸ್ ಆಫ್ 1983 ವಿದ್ಯಾರ್ಥಿವೇತನ' ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ವರ್ಷ ಅಶ್ವಿನ್ ಶೆಟ್ಟಿಗಾರ್, ಎಂ.ಎ. ಅಬ್ದುಲ್ ಅಜಾಜ್ ಶಯಾನ್ ಮತ್ತು ಶರೋನ್ ಡಿಕೋಸ್ಟಾ ಅವರು ಈ ವಿದ್ಯಾರ್ಥಿವೇತನವನ್ನು ಸ್ವೀಕರಿಸಿದರು. ಮತ್ತೊಬ್ಬ ಅರ್ಹ ವಿದ್ಯಾರ್ಥಿ ಸ್ನಿಥಿಕ್ ಚೂರಿಯಾ ಅವರಿಗೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ಕಚೇರಿಯಲ್ಲಿ ನಂತರ ಈ ವಿದ್ಯಾರ್ಥಿವೇತನವನ್ನು ಹಸ್ತಾಂತರಿಸಲಾಯಿತು.&lt;/p&gt;&lt;p&gt;ವಾಟ್ಸಾಪ್ ಗ್ರೂಪ್&zwnj;ನಿಂದ ಆರಂಭವಾದ ಕನಸು&lt;/p&gt;&lt;p&gt;ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪರಸ್ಪರ ಸಂಪರ್ಕ ಕಳೆದುಕೊಂಡಿದ್ದ ಈ ಬ್ಯಾಚ್&zwnj;ನ ಭಾರತ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಸುಮಾರು 70 ಕ್ಕೂ ಹೆಚ್ಚು ಸಹಪಾಠಿಗಳು 2024 ರಲ್ಲಿ ಸೋಶಿಯಲ್&zwnj; ಮೀಡಿಯಾ ಮೂಲಕ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಕೇವಲ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಪುನರ್ಮಿಲನ ಕೂಟವಾಗಿ ಆರಂಭವಾದ ಇವರ ಒಡನಾಟ, ಕೊನೆಗೆ ಸಮಾಜಮುಖಿ ಕಾರ್ಯವೊಂದಕ್ಕೆ ನಾಂದಿ ಹಾಡಿತು. ಅಂದಿನ ರೆಕ್ಟರ್ ಆಗಿದ್ದ ದಿವಂಗತ ಫಾದರ್ ಮೆಲ್ವಿನ್ ಪಿಂಟೋ ಅವರ ಮಾರ್ಗದರ್ಶನದೊಂದಿಗೆ, 2025 ರ ಏಪ್ರಿಲ್&zwnj;ನಲ್ಲಿ ಈ ದತ್ತಿ ನಿಧಿಯನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು.&lt;/p&gt;&lt;p&gt;ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ&lt;/p&gt;&lt;p&gt;ಈ 65 ಲಕ್ಷ ರೂಪಾಯಿಗಳ ಬೃಹತ್ ನಿಧಿಯನ್ನು ಹಣಕಾಸು ವಲಯದಲ್ಲಿ ಕೆಲಸ ಮಾಡುತ್ತಿರುವ ಈ ಬ್ಯಾಚ್&zwnj;ನ ಹಳೆಯ ವಿದ್ಯಾರ್ಥಿಗಳ ಮಾರ್ಗದರ್ಶನದೊಂದಿಗೆ ಆಯ್ದ ಸುರಕ್ಷಿತ ಹಣಕಾಸು ಮಾರುಕಟ್ಟೆ ಸಾಧನಗಳಲ್ಲಿ (Financial Market Instruments) ಹೂಡಿಕೆ ಮಾಡಲಾಗಿದೆ.&lt;/p&gt;&lt;p&gt;ಮೂಲ ನಿಧಿಗೆ ಯಾವುದೇ ಧಕ್ಕೆ ಬರದಂತೆ ಕೇವಲ ಈ ಹೂಡಿಕೆಯಿಂದ ಬರುವ ವಾರ್ಷಿಕ ಬಡ್ಡಿಯನ್ನು ಮಾತ್ರ ವಿದ್ಯಾರ್ಥಿವೇತನಕ್ಕಾಗಿ ಬಳಸಲಾಗುತ್ತದೆ. ಮೂಲ ನಿಧಿಯು ಭವಿಷ್ಯದಲ್ಲಿ ಬರಲಿರುವ ದೇಣಿಗೆಗಳು ಮತ್ತು ಹೂಡಿಕೆಯ ಆದಾಯದೊಂದಿಗೆ ನಿರಂತರವಾಗಿ ಬೆಳೆಯುತ್ತಾ ಸಾಗುತ್ತದೆ. 10 ನೇ ತರಗತಿಯಿಂದ ಹಿಡಿದು ದ್ವಿತೀಯ ಪಿಯುಸಿವರೆಗಿನ ಒಟ್ಟು 12 ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಿರಂತರವಾಗಿ ನೆರವು ನೀಡುವುದು ಈ ಯೋಜನೆಯ ದೀರ್ಘಾವಧಿಯ ಗುರಿಯಾಗಿದೆ.&lt;/p&gt;&lt;p&gt;ಗುರುಗಳಿಗೆ ಗೌರವ ಸಮರ್ಪಣೆ&lt;/p&gt;&lt;p&gt;ಇದೇ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮಾಜಿ ಸಹಾಯಕ ಮುಖ್ಯೋಪಾಧ್ಯಾಯರಾದ ಶಂಭು ಶೆಟ್ಟಿ ಮತ್ತು ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿಯರಾದ ಲಿಡ್ವಿನ್ ಡಿಸೋಜಾ ಹಾಗೂ ಸೆಲಿನ್ ರೇಗೋ ಅವರನ್ನು ಹಳೆಯ ವಿದ್ಯಾರ್ಥಿಗಳು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಶಂಭು ಶೆಟ್ಟಿ ಅವರು ಕಿರಿಯ ಪೀಳಿಗೆಯು ಈ ಸತ್ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. &quot;ಒಂದು ಬೀಜವನ್ನು ಬಿತ್ತುವುದು ತುಂಬಾ ಸುಲಭ. ಆದರೆ ಅದನ್ನು ಪೋಷಿಸಿ, ಮರವಾಗಿಸಿ ಬೆಳೆಸುವುದೇ ನಿಜವಾದ ಸವಾಲು&quot; ಎಂದರು.&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Santosh Naik</dc:creator>
            <atom:link href="https://kannada.asianetnews.com/dakshina-kannada/st-aloysius-high-school-1983-batch-65-lakh-scholarship-endowment-mangalore-san/articleshow-pbcotdp"/>
        </item>
        <item>
            <title><![CDATA['ಕಾಕ್ರೋಚ್'​ ಪಕ್ಷದ ನಾಯಕ ಅಭಿಜೀತ್ ದೀಪ್ಕೆ ಅನಿರ್ದಿಷ್ಟ ಉಪವಾಸ ಆರಂಭ: ಅವರು ಹೇಳಿದ್ದೇನು?]]></title>
            <link>https://kannada.asianetnews.com/india-news/cjps-abhijeet-dipke-announces-indefinite-hunger-strike-after-wangchuk-moved-to-hospital-suc/articleshow-qlcz4ks</link>
            <guid isPermaLink="true">https://kannada.asianetnews.com/india-news/cjps-abhijeet-dipke-announces-indefinite-hunger-strike-after-wangchuk-moved-to-hospital-suc/articleshow-qlcz4ks</guid>
            <pubDate>Sat, 18 Jul 2026 13:40:05 +0530</pubDate>
            <description><![CDATA[ನೀಟ್&zwnj; ಯುಜಿ ಹಗರಣವನ್ನು ವಿರೋಧಿಸಿ 21 ದಿನಗಳಿಂದ ಉಪವಾಸ ನಿರತರಾಗಿದ್ದ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಹೋರಾಟವನ್ನು 'ಕಾಕ್ರೋಚ್&zwnj; ಜನತಾ ಪಾರ್ಟಿ' ಸಂಸ್ಥಾಪಕ ಅಭಿಜೀತ್ ದೀಪ್ಕೆ ಮುಂದುವರೆಸಿದ್ದು, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxt49hf32370kemhsznpgyjj,imgname-cjp-1784362092003.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ: ದೇಶದಲ್ಲಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಇತ್ತೀಚೆಗೆ ನಡೆದ ನೀಟ್&zwnj; ಯುಜಿ-2026 ಮೊದಲ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆಸೋರಿಕೆ ಹಗರಣ ವಿಚಾರಗಳನ್ನು ವಿರೋಧಿಸಿ, ಸತತ 21 ದಿನಗಳಿಂದ ಉಪವಾಸ ನಿರತರಾಗಿದ್ದ ಶಿಕ್ಷಣ ಪರಿವರ್ತಕ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಹೀಗೇ ಮುಂದುವರೆದರೆ ಅವರ ಪ್ರಾಣಕ್ಕೆ ಅಪಾಯ ಎನ್ನುವ ಕಾರಣಕ್ಕೆ, ಅವರನ್ನು ಆಸ್ಪತ್ರೆಗೆ ಅಡ್ಮಿಟ್​ ಮಾಡಲಾಗಿದೆ.&lt;/p&gt;&lt;p&gt;ಉಪವಾಸದಿಂದ ಸೋನಮ್&zwnj; ವಾಂಗ್ಚುಕ್&zwnj; ಅವರ ದೇಹ ತೂಕ ಆರೋಗ್ಯ 9ಕೆ.ಜಿಯಷ್ಟಿ ಇಳಿದಿದ್ದು, ಉಸಿರಾಟ ತೊಂದರೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿದು ಆರೋಗ್ಯ ಕ್ಷೀಣವಾಗಿದೆ. ವೈದ್ಯಕೀಯ ಸೇವೆ ನೀಡಿ ಜೀವ ಉಳಿಸಲು ಹಸ್ತಕ್ಷೇಪ ಮಾಡಬೇಕು ಎಂದು ಸರ್ಕಾರಕ್ಕೆ ದೆಹಲಿ ಹೈಕೋರ್ಟ್&zwnj; ಆದೇಶ ನೀಡಿದ ಬೆನ್ನಲ್ಲೇ ಹಾಗೂ ತಜ್ಞ ವೈದ್ಯರ ಸಲಹೆಯಂತೆ ಅವರನ್ನು ಶಿಫ್ಟ್​ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಕಾಕ್ರೋಚ್&zwnj; ಜನತಾ ಪಾರ್ಟಿ ಸಂಸ್ಥಾಪಕನಿಂದ ಉಪವಾಸ&lt;/strong&gt;&lt;/h2&gt;&lt;p&gt;ಇದರ ಬೆನ್ನಲ್ಲೇ, ಈ ಹೋರಾಟಕ್ಕೆ ಕಾರಣೀಕರ್ತರಾಗಿರುವ, ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾಕ್ರೋಚ್&zwnj; ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೋನಮ್ ವಾಂಗ್ಚುಕ್ ಅವರು ಉಪವಾಸ ಕೈಗೊಂಡಿರುವ ಜಾಗದಲ್ಲಿಯೇ ತಾವು ಉಪವಾಸ ಮುಂದುವರೆಸುವುದಾಗಿ ಹೇಳಿದ್ದಾರೆ. ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿರುವ ಅಭಿಜೀತ್​ ಅವರು, ಇದರ ಜೊತೆಗೆ, ನಾಡಿದ್ದು ಅಂದರೆ ಜುಲೈ 20ರಂದು ನಿಗದಿಯಂತೆ ಸಂಸತ್&zwnj; ಚಲೋ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ದೆಹಲಿಯ ಜಂತರ್ ಮಂತರ್&zwnj;ನಿಂದ ಪ್ರತಿಭಟನೆ ನಡೆಸುತ್ತಿದೆ. ಸೋನಮ್&zwnj; ವಾಂಗ್ಚುಕ್&zwnj; ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ ಬೆನ್ನಲ್ಲೇ, ಈ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿರುವ CJP ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಈ ಕುರಿತು ಘೋಷಣೆ ಹೊರಡಿಸಿದ್ದು, &quot;ತಮ್ಮ ನೇತೃತ್ವದ ಈ ಹೋರಾಟ ಮುಂದುವರೆಯಲಿದ್ದು, ಇಂದಿನಿಂದ (ಜುಲೈ18 ಶನಿವಾರ) ತಾವು ಅನಿರ್ದಿಷ್ಟಾವಧಿಗೆ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದು, ಜುಲೈ 20 ರಂದು ಸಂಸತ್ತಿಗೆ ನಡೆಸಲು ಉದ್ದೇಶಿಸಿರುವ ಮೆರವಣಿಗೆ ನಿಗದಿಯಂತೆ ನಡೆಯಲಿದೆ. ಅಲ್ಲದೆ, ಈ ಪ್ರತಿಭಟನೆಗಳೊಂದಿಗೆ ತಮ್ಮ ಉಪವಾಸವೂ ಮುಂದುವರೆಯಲಿದೆ&quot; ಎಂದು ಎಕ್ಸ್​ನಲ್ಲಿ CJP ತಿಳಿಸಿದೆ.&lt;/p&gt;&lt;h3&gt;&lt;strong&gt;ಅನಿರ್ದಿಷ್ಟಾವಧಿ ಉಪವಾಸ&lt;/strong&gt;&lt;/h3&gt;&lt;p&gt;ನಾನು ಇಂದಿನಿಂದ ನನ್ನ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತಿದ್ದೇನೆ. ಯಾರೂ ಹಿಂದೆ ಸರಿಯಬೇಡಿ ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಈ ಚಳವಳಿ ದೊಡ್ಡದಾಗಿ ಬೆಳೆಯುತ್ತದೆ. ಅವರು ಗಂಭೀರ ತಪ್ಪು ಮಾಡಿದ್ದಾರೆ. ಎಲ್ಲರೂ ಜಂತರ್ ಮಂತರ್&zwnj;ಗೆ ಬರಬೇಕೆಂದು ನಾನು ಒತ್ತಾಯಿಸುತ್ತೇನೆ; ನಮ್ಮ ಚಳವಳಿ ಇಲ್ಲಿಂದ ಮುಂದುವರಿಯುತ್ತದೆ ಮತ್ತು ಜುಲೈ 20 ರಂದು ನಿಗದಿಯಾಗಿರುವ ನಮ್ಮ ಮೆರವಣಿಗೆಯೊಂದಿಗೆ ನಾವು ಮುಂದುವರಿಯುತ್ತೇವೆ&quot; ಎಂದು ಅಭಿಜೀತ್​ ದೀಪ್ಕೆ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/cjps-abhijeet-dipke-announces-indefinite-hunger-strike-after-wangchuk-moved-to-hospital-suc/articleshow-qlcz4ks"/>
        </item>
        <item>
            <title><![CDATA[26ನೇ ವಯಸ್ಸಿನಲ್ಲಿ ಕೋಟ್ಯಾಧಿಪತಿ, ಒಂದೇ ದಿನದಲ್ಲಿ ₹77 ಕೋಟಿ ಗಳಿಸಿದ ಸಿದ್ಧಾರ್ಥ ಸಕ್ಸೇನಾ]]></title>
            <link>https://kannada.asianetnews.com/viral/from-iit-to-millionaire-meet-siddhartha-saxena-who-earned-rs-77-crore-in-a-single-day-suh/articleshow-sq7rhso</link>
            <guid isPermaLink="true">https://kannada.asianetnews.com/viral/from-iit-to-millionaire-meet-siddhartha-saxena-who-earned-rs-77-crore-in-a-single-day-suh/articleshow-sq7rhso</guid>
            <pubDate>Wed, 15 Jul 2026 10:50:13 +0530</pubDate>
            <description><![CDATA[&lt;p&gt;ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಸಿದ್ಧಾರ್ಥ ಸಕ್ಸೇನಾ, AI ಸ್ಟಾರ್ಟ್&zwnj;ಅಪ್ Merlin ಮೂಲಕ ಕೇವಲ 26ನೇ ವಯಸ್ಸಿನಲ್ಲಿ ಒಂದೇ ದಿನದಲ್ಲಿ ಸುಮಾರು ₹77 ಕೋಟಿ ಗಳಿಸಿ ಕೋಟ್ಯಾಧಿಪತಿಯಾದ ಯಶೋಗಾಥೆ ಇದೀಗ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxj37dt55brfneqnt8hs47y1,imgname-from-iit-to-millionaire-meet-siddhartha-saxena-who-earned-rs-77-crore-in-a-single-day-1784092538693.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಐಟಿ ಕಾನ್ಪುರದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದ ಯುವಕ ಇಂದು ಭಾರತದ ಯಶಸ್ವಿ AI ಉದ್ಯಮಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. Merlin AI ಸಹ-ಸಂಸ್ಥಾಪಕ ಸಿದ್ಧಾರ್ಥ ಸಕ್ಸೇನಾ ಅವರು ಒಂದೇ ದಿನದಲ್ಲಿ ಸುಮಾರು 8 ಮಿಲಿಯನ್ ಅಮೆರಿಕನ್ ಡಾಲರ್&zwnj; (ಸುಮಾರು ₹77 ಕೋಟಿ) ಗಳಿಸಿ, ಕೇವಲ 26ನೇ ವಯಸ್ಸಿನಲ್ಲೇ ಮಿಲಿಯನೇರ್ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ವಿರಾಜ್ ಅಲಾ ನಡೆಸಿದ ಸ್ಟ್ರೀಟ್-ಸ್ಟೈಲ್ ಸಂದರ್ಶನದಲ್ಲಿ ಮಾತನಾಡಿದ ಸಿದ್ಧಾರ್ಥ, ತಮ್ಮ ಶಿಕ್ಷಣ, ವೃತ್ತಿ ಮತ್ತು ಉದ್ಯಮಶೀಲತೆಯ ಪಯಣದ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು.&lt;/p&gt;&lt;h2&gt;ಐಐಟಿಯಿಂದ AI ಲೋಕದವರೆಗೆ&lt;/h2&gt;&lt;p&gt;ರಾಜಸ್ಥಾನ ಮೂಲದ ಸಿದ್ಧಾರ್ಥ ಸಕ್ಸೇನಾ, ಐಐಟಿ ಕಾನ್ಪುರದಲ್ಲಿ ಕಂಪ್ಯೂಟರ್ ಸೈನ್ಸ್&zwnj;ನಲ್ಲಿ ಪದವಿ ಪಡೆದಿದ್ದಾರೆ. ಐಐಟಿ ಕಾನ್ಪುರದ ಕಂಪ್ಯೂಟರ್ ಸೈನ್ಸ್ ಕೋರ್ಸ್&zwnj;ಗೆ ಪ್ರವೇಶ ಪಡೆಯುವುದು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕಿಂತಲೂ 20 ಪಟ್ಟು ಕಷ್ಟ ಎಂದು ಅವರು ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;2019ರಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ, Envestnet, Yodlee, Wadhwani AI, ಫಿನ್ಲೆಂಡ್&zwnj;ನ Aalto University ಹಾಗೂ Jumio Corporation ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಮೆಷಿನ್ ಲರ್ನಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವ ಗಳಿಸಿದರು.&lt;/p&gt;&lt;h2&gt;ಒಂದೇ ದಿನದಲ್ಲಿ ₹77 ಕೋಟಿ!&lt;/h2&gt;&lt;p&gt;ತಮ್ಮ ಜೀವನದ ಅತಿದೊಡ್ಡ ಆರ್ಥಿಕ ಸಾಧನೆ ಬಗ್ಗೆ ಮಾತನಾಡಿದ ಸಿದ್ಧಾರ್ಥ, &quot;ನಾನು ಒಂದೇ ದಿನದಲ್ಲಿ 8 ಮಿಲಿಯನ್ ಡಾಲರ್ ಗಳಿಸಿದ್ದೇನೆ&quot; ಎಂದು ಹೇಳಿದ್ದಾರೆ. ಈ ಸಾಧನೆಯಿಂದ ಕೇವಲ 26ನೇ ವಯಸ್ಸಿನಲ್ಲಿ ಮಿಲಿಯನೇರ್ ಆಗಿದ್ದೇನೆ ಎಂದೂ ತಿಳಿಸಿದ್ದಾರೆ.&lt;/p&gt;&lt;p&gt;ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಭಾರತದ AI ಸ್ಟಾರ್ಟ್&zwnj;ಅಪ್ ಕ್ಷೇತ್ರದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;Merlin AI ಯಶಸ್ಸಿನ ಕಥೆ&lt;/h2&gt;&lt;p&gt;2022ರಲ್ಲಿ ತಮ್ಮ ಐಐಟಿ ಸಹಪಾಠಿಗಳಾದ ಪ್ರತ್ಯುಷ್ ರೈ ಮತ್ತು ಸಿರ್ಸೇಂದು ಸರ್ಕಾರ್ ಅವರೊಂದಿಗೆ ಸೇರಿ Merlin ಎಂಬ AI ಆಧಾರಿತ Chrome Extension ಅನ್ನು ಆರಂಭಿಸಿದರು. ಬಳಕೆದಾರರ ಉತ್ಪಾದಕತೆ ಹೆಚ್ಚಿಸಲು ವಿನ್ಯಾಸಗೊಳಿಸಿರುವ ಈ AI ಉತ್ಪನ್ನ ಇಂದು ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಕಂಪನಿಯ ಮೌಲ್ಯ ಸುಮಾರು 50 ಮಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ಇದರ ಜೊತೆಗೆ, ಸಿದ್ಧಾರ್ಥ Thyn ಎಂಬ ಮತ್ತೊಂದು AI ಸ್ಟಾರ್ಟ್&zwnj;ಅಪ್&zwnj;ನ ಸಹ-ಸಂಸ್ಥಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.&lt;/p&gt;&lt;h2&gt;ಯಶಸ್ಸಿನ ಹಿಂದಿನ ಮನಸ್ಥಿತಿ&lt;/h2&gt;&lt;p&gt;ಉದ್ಯಮಶೀಲತೆಯಲ್ಲಿ ಯಶಸ್ಸು ಸಾಧಿಸಲು ಕೇವಲ ತಾಂತ್ರಿಕ ಜ್ಞಾನ ಸಾಕಾಗುವುದಿಲ್ಲ ಎಂದು ಸಿದ್ಧಾರ್ಥ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಅವರ ಪ್ರಕಾರ, ಅನೇಕ ಭಾರತೀಯರು &quot;ಕೊರತೆಯ ಮನಸ್ಥಿತಿ&quot; (Scarcity Mindset) ಯಿಂದ ಹೊರಬಂದು &quot;ಸಮೃದ್ಧಿಯ ಮನಸ್ಥಿತಿ&quot; (Abundance Mindset) ಬೆಳೆಸಿಕೊಳ್ಳಬೇಕು. ದೊಡ್ಡ ಕನಸು ಕಾಣುವುದು, ಲೆಕ್ಕಾಚಾರದ ಅಪಾಯಗಳನ್ನು ತೆಗೆದುಕೊಳ್ಳುವುದು ಮತ್ತು ಅವಕಾಶಗಳತ್ತ ಗಮನ ಹರಿಸುವುದೇ ಯಶಸ್ಸಿನ ಗುಟ್ಟು ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;16ನೇ ವಯಸ್ಸಿನಲ್ಲಿ ಈ ಕನಸೇ ಇರಲಿಲ್ಲ&lt;/h2&gt;&lt;p&gt;16 ವರ್ಷದಾಗಿದ್ದಾಗ ನೀವು AI ಮೂಲಕ ಕೋಟ್ಯಾಧಿಪತಿಯಾಗುತ್ತೇನೆ ಎಂದು ಊಹಿಸಿದ್ದೀರಾ?&quot; ಎಂಬ ಪ್ರಶ್ನೆಗೆ ಸಿದ್ಧಾರ್ಥ ನಗುತ್ತಾ &quot;ಖಂಡಿತ ಇಲ್ಲ&quot; ಎಂದು ಉತ್ತರಿಸಿದ್ದಾರೆ.&lt;/p&gt;&lt;p&gt;ಐಐಟಿ ತರಗತಿಯಿಂದ ಆರಂಭವಾದ ಅವರ ಪಯಣ ಇಂದು ಜಾಗತಿಕ AI ಉದ್ಯಮದ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿದೆ. ತಾಂತ್ರಿಕ ಪರಿಣತಿ, ನಿರಂತರ ಪರಿಶ್ರಮ ಮತ್ತು ಧೈರ್ಯಶಾಲಿ ಉದ್ಯಮಶೀಲ ನಿರ್ಧಾರಗಳು ಜೀವನವನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಸಿದ್ಧಾರ್ಥ ಸಕ್ಸೇನಾ ಅವರ ಯಶೋಗಾಥೆ ಸ್ಪೂರ್ತಿದಾಯಕ ಉದಾಹರಣೆಯಾಗಿದೆ.&lt;/p&gt;]]></content:encoded>
            <category>education</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/from-iit-to-millionaire-meet-siddhartha-saxena-who-earned-rs-77-crore-in-a-single-day-suh/articleshow-sq7rhso"/>
        </item>
        <item>
            <title><![CDATA[Breaking: NEET-UG 2026 ಫಲಿತಾಂಶ ಪ್ರಕಟಿಸಿದ NTA, 11.21 ಲಕ್ಷ ವಿದ್ಯಾರ್ಥಿಗಳ ಅರ್ಹತೆ]]></title>
            <link>https://kannada.asianetnews.com/education/nta-declares-neet-ug-2026-re-exam-results-direct-link-to-download-san/articleshow-tglbhho</link>
            <guid isPermaLink="true">https://kannada.asianetnews.com/education/nta-declares-neet-ug-2026-re-exam-results-direct-link-to-download-san/articleshow-tglbhho</guid>
            <pubDate>Thu, 16 Jul 2026 23:17:35 +0530</pubDate>
            <description><![CDATA[&lt;p&gt;ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜೂನ್ 21ರಂದು ನಡೆಸಿದ ರೀ-ನೀಟ್ ಯುಜಿ 2026 ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, 11.21 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಈ ಮರುಪರೀಕ್ಷೆ ನಡೆದಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxp0d575a1nyan3vmd596b2c,imgname-neet-ug-result-2026-1784223798501.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.16): &lt;/strong&gt;ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ (Re-NEET UG 2026) ಮರುಪರೀಕ್ಷೆಯ ಫಲಿತಾಂಶವನ್ನು ಗುರುವಾರ ರಾತ್ರಿ ಪ್ರಕಟ ಮಾಡಿದ್ದು, 11.21 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಎನ್&zwnj;ಟಿಎ ಈ ಫಲಿತಾಂಶವನ್ನು ಪ್ರಕಟ ಮಾಡಿದೆ.&lt;/p&gt;&lt;p&gt;ಜೂನ್ 21ರಂದು ನಡೆದ ಮರುಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು, ಫಲಿತಾಂಶ ಪ್ರಕಟವಾದ ತಕ್ಷಣ ತಮ್ಮ ಅಪ್ಲಿಕೇಶನ್ ಸಂಖ್ಯೆ (Application Number) ಮತ್ತು ಪಾಸ್&zwnj;ವರ್ಡ್ ಅಥವಾ ಜನ್ಮ ದಿನಾಂಕ ಹಾಗೂ ಸೆಕ್ಯೂರಿಟಿ ಪಿನ್ ನಮೂದಿಸಿ ಲಾಗಿನ್ ಆಗುವ ಮೂಲಕ ತಮ್ಮ ಸ್ಕೋರ್&zwnj;ಕಾರ್ಡ್&zwnj;ಗಳನ್ನು ಡೌನ್&zwnj;ಲೋಡ್ ಮಾಡಿಕೊಳ್ಳಬಹುದು. ಫಲಿತಾಂಶದ ಜೊತೆಗೆ ನೀಟ್ ಯುಜಿ 2026ರ ಕಟ್&zwnj;-ಆಫ್ (Cut-off) ಅನ್ನೂ ಸಹ ಎನ್&zwnj;ಟಿಎ ತನ್ನ ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿ ಬಿಡುಗಡೆ ಮಾಡಲಿದೆ.&lt;/p&gt;&lt;p&gt;ಇದಕ್ಕೂ ಮುನ್ನ ಎನ್&zwnj;ಟಿಎ ಜುಲೈ 13ರಂದು ಒಎಂಆರ್ (OMR) ರೆಸ್ಪಾನ್ಸ್ ಶೀಟ್&zwnj;ಗಳನ್ನು ಬಿಡುಗಡೆ ಮಾಡಿತ್ತು. ಜೂನ್ 25ರಂದು ತಾತ್ಕಾಲಿಕ ಉತ್ತರ ಪತ್ರಿಕೆಯನ್ನು (Provisional Answer Key) ಪ್ರಕಟಿಸಲಾಗಿತ್ತು. ಈ ಉತ್ತರ ಪತ್ರಿಕೆಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಜೂನ್ 28, 2026ರ ವರೆಗೆ ಅವಕಾಶ ನೀಡಲಾಗಿತ್ತು.&lt;/p&gt;&lt;h2&gt;&lt;strong&gt;Re-NEET UG 2026 ಫಲಿತಾಂಶ ಪರಿಶೀಲಿಸುವುದು ಹೇಗೆ?&lt;/strong&gt;&lt;/h2&gt;&lt;ul&gt; &lt;li&gt;ಫಲಿತಾಂಶ ಪ್ರಕಟವಾದ ನಂತರ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶ ಪಡೆಯಬಹುದು:&lt;/li&gt; &lt;li&gt;ಮೊದಲಿಗೆ ಅಧಿಕೃತ ವೆಬ್&zwnj;ಸೈಟ್ neet.nta.nic.in ಗೆ ಭೇಟಿ ನೀಡಿ.&lt;/li&gt; &lt;li&gt;ಹೋಮ್ ಪೇಜ್&zwnj;ನಲ್ಲಿರುವ 'Candidate Activity' ವಿಭಾಗದ ಅಡಿಯಲ್ಲಿ NEET UG 2026 Result ಲಿಂಕ್ ಮೇಲೆ ಕ್ಲಿಕ್ ಮಾಡಿ.&lt;/li&gt; &lt;li&gt;ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್&zwnj;ವರ್ಡ್ ಅಥವಾ ಜನ್ಮ ದಿನಾಂಕ ಮತ್ತು ಸೆಕ್ಯೂರಿಟಿ ಪಿನ್ ಅನ್ನು ನಮೂದಿಸಿ.&lt;/li&gt; &lt;li&gt;ವಿವರಗಳನ್ನು ಸಲ್ಲಿಸಿದ (Submit) ನಂತರ ನಿಮ್ಮ ಸ್ಕೋರ್&zwnj;ಕಾರ್ಡ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.&lt;/li&gt; &lt;li&gt;ಭವಿಷ್ಯದ ಉಲ್ಲೇಖಕ್ಕಾಗಿ ಸ್ಕೋರ್&zwnj;ಕಾರ್ಡ್ ಅನ್ನು ಡೌನ್&zwnj;ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.&lt;/li&gt;&lt;/ul&gt;&lt;h2&gt;&lt;strong&gt;ಸ್ಕೋರ್&zwnj;ಕಾರ್ಡ್&zwnj;ನಲ್ಲಿ ಲಭ್ಯವಿರುವ ವಿವರಗಳು&lt;/strong&gt;&lt;/h2&gt;&lt;p&gt;ನೀಟ್ ಮರುಪರೀಕ್ಷೆಯ ಸ್ಕೋರ್&zwnj;ಕಾರ್ಡ್&zwnj;ನಲ್ಲಿ ಅಭ್ಯರ್ಥಿಯ ಹೆಸರು, ಅಪ್ಲಿಕೇಶನ್ ಸಂಖ್ಯೆ, ರೋಲ್ ಸಂಖ್ಯೆ, ಪರೀಕ್ಷೆ ನಡೆದ ದಿನಾಂಕ, ಟೆಸ್ಟ್ ಬುಕ್&zwnj;ಲೆಟ್ ಕೋಡ್, ವಿಷಯವಾರು ಪ್ರತಿಕ್ರಿಯೆಗಳು, ದಾಖಲಾದ ಉತ್ತರಗಳು ಹಾಗೂ ಅಭ್ಯರ್ಥಿಯ ಭಾವಚಿತ್ರ ಮತ್ತು ಸಹಿ ಒಳಗೊಂಡಿರುತ್ತದೆ.&lt;/p&gt;&lt;h2&gt;&lt;strong&gt;ಪರೀಕ್ಷೆ ರದ್ದು ಮತ್ತು ಮರುಪರೀಕ್ಷೆಯ ಹಿನ್ನೆಲೆ&lt;/strong&gt;&lt;/h2&gt;&lt;p&gt;ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಮೂಲತಃ ಮೇ 3ರಂದು ನೀಟ್ ಯುಜಿ 2026ರ ಪರೀಕ್ಷೆಯನ್ನು ನಡೆಸಿತ್ತು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ (Paper Leak) ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ತದನಂತರ ಜೂನ್ 21ರಂದು ದೇಶಾದ್ಯಂತ ಹಲವು ಕೇಂದ್ರಗಳಲ್ಲಿ ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.&lt;/p&gt;&lt;p&gt;ಮತ್ತೊಂದೆಡೆ, ಮೇ 3ರಂದು ರದ್ದಾದ ಪರೀಕ್ಷೆಯ ಶುಲ್ಕವನ್ನು ಮರುಪಾವತಿ (Fee Refund) ಮಾಡಲು ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸುವಂತೆ ಎನ್&zwnj;ಟಿಎ ಸೂಚಿಸಿದೆ. ಬ್ಯಾಂಕ್ ವಿವರಗಳನ್ನು ಸಲ್ಲಿಸಲು ಜುಲೈ 31, 2026ರ ವರೆಗೆ ಕಾಲಾವಕಾಶ ನೀಡಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈಗಾಗಲೇ ಸುಮಾರು 11.46 ಲಕ್ಷ ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಸಬ್ಮಿಟ್ ಮಾಡಿದ್ದಾರೆ.&lt;/p&gt;&lt;p&gt;ಅಭ್ಯರ್ಥಿಗಳು ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿ ಪ್ರಕಟವಾಗುವ ಅಂತಿಮ ಪ್ರಕಟಣೆ ಮತ್ತು ಮಾಹಿತಿಯನ್ನು ಮಾತ್ರ ನಂಬಬೇಕು ಹಾಗೂ ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಕಿವಿಗೊಡಬಾರದು ಎಂದು ಎನ್&zwnj;ಟಿಎ ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;NTA Declares Result of NEET (UG) 202611.21 lakh candidates qualify;Results declared in time for counselling and Medical College Admissions;Toppers from almost all States and Union Territories;More than 58 per cent of qualified candidates are women;Examination conducted in&hellip;&lt;/p&gt;&lt;p&gt;&mdash; National Testing Agency (@NTA_Exams) July 16, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Santosh Naik</dc:creator>
            <atom:link href="https://kannada.asianetnews.com/education/nta-declares-neet-ug-2026-re-exam-results-direct-link-to-download-san/articleshow-tglbhho"/>
        </item>
        <item>
            <title><![CDATA[ಬೆಂಗಳೂರಲ್ಲಿ ದೇಶದ ಮೊದಲ AI University ಸ್ಥಾಪನೆ: ಸಿಎಂ ಡಿಕೆಶಿ ಘೋಷಣೆ, ಜಾಗತಿಕ ಇತಿಹಾಸಕ್ಕೆ ಸಜ್ಜಾದ ಕರ್ನಾಟಕ!]]></title>
            <link>https://kannada.asianetnews.com/education/cm-dk-shivakumar-announcement-karnataka-to-establish-india-s-first-government-sponsored-ai-university-in-bengaluru-gdp/articleshow-x72oz15</link>
            <guid isPermaLink="true">https://kannada.asianetnews.com/education/cm-dk-shivakumar-announcement-karnataka-to-establish-india-s-first-government-sponsored-ai-university-in-bengaluru-gdp/articleshow-x72oz15</guid>
            <pubDate>Tue, 14 Jul 2026 13:33:41 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಗೂಗಲ್ ಐಓ ಕನೆಕ್ಟ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಘೋಷಣೆ ಮಾಡಿದ್ದು, ಕರ್ನಾಟಕವನ್ನು 'ಜವಾಬ್ದಾರಿಯುತ ಎಐ' ತಂತ್ರಜ್ಞಾನದ ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxftcx4yvqy0kezxmdfw64hh,imgname-cm-dk-shivakumar-ai-university-in-bengaluru--1--1784016172188.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ತಂತ್ರಜ್ಞಾನ ಲೋಕದ ಜಾಗತಿಕ ರಾಜಧಾನಿ ಎನಿಸಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರು ಮುಡಿಗೆ ಈಗ ಮತ್ತೊಂದು ಗರಿ ಸಿಗಲಿದೆ. ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ 'ಜವಾಬ್ದಾರಿಯುತ ಎಐ' (Responsible AI) ತಂತ್ರಜ್ಞಾನದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.&lt;/p&gt;&lt;p&gt;ಬೆಂಗಳೂರಿನ ಮಾದಾವರದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (BIEC) ಮಂಗಳವಾರ ನಡೆದ ಪ್ರತಿಷ್ಠಿತ &lsquo;ಗೂಗಲ್ ಐಓ ಕನೆಕ್ಟ್ 2026&rsquo; (Google I/O Connect 2026) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಕೇವಲ ಒಂದು ವಾರದ ಹಿಂದಷ್ಟೇ ಅಂದರೆ ಜುಲೈ 8ರಂದು ಮಾನ್ಯತಾ ಟೆಕ್ ಪಾರ್ಕ್&zwnj;ನಲ್ಲಿ ನಡೆದ ಜಿಎಸ್&zwnj;ಸಿ (GCC) ಮುಖಂಡರ ಸಭೆಯಲ್ಲಿ ಎಐ ವಿವಿ ಸ್ಥಾಪನೆಯ ಚಿಂತನೆ ಇದೆ ಎಂಬ ವಿಚಾರವನ್ನು ಹಂಚಿಕೊಂಡಿದ್ದ ಸಿಎಂ ಡಿಕೆಶಿ, ಇದೀಗ ಕೇವಲ ಏಳೇ ದಿನಗಳಲ್ಲಿ ಅದನ್ನು ಅಧಿಕೃತ ಘೋಷಣೆ ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರಕ್ಕೆ ಇರುವ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಕರ್ನಾಟಕವನ್ನು 'ಎಐ-ನೇಟಿವ್' ರಾಜ್ಯವನ್ನಾಗಿ ರೂಪಿಸುವುದೇ ನಮ್ಮ ಗುರಿ: ಡಿಕೆಶಿ&lt;/h2&gt;&lt;p&gt;ಕಾರ್ಯಕ್ರಮದಲ್ಲಿ ನೆರೆದಿದ್ದ ಜಾಗತಿಕ ಐಟಿ ತಜ್ಞರನ್ನುದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಜಗತ್ತಿನ ಅತ್ಯಂತ ಸುಂದರ ಹಾಗೂ ಬೃಹತ್ ತಂತ್ರಜ್ಞಾನದ ಇಕೋ ಸಿಸ್ಟಮ್ ನಮ್ಮ ಬೆಂಗಳೂರಿನಲ್ಲಿದೆ. ಇಂದು ಇಡೀ ಜಗತ್ತನ್ನು ಎಐ ಆಳುತ್ತಿದ್ದು, ಭವಿಷ್ಯದ ಪ್ರತಿಯೊಂದು ತಂತ್ರಜ್ಞಾನದ ಬೆಳವಣಿಗೆಗೆ ಎಐ ಒಂದೇ ಉತ್ತರವಾಗಿದೆ. ವಿಶ್ವಕ್ಕೆ ಬೇಕಾದ ಇಂತಹ ನಾವೀನ್ಯತೆಯ ತಂತ್ರಜ್ಞಾನದ ಉತ್ತರವನ್ನು ನಮ್ಮ ಬೆಂಗಳೂರು ನೀಡಲಿದೆ. ಕರ್ನಾಟಕವನ್ನು ಸಂಪೂರ್ಣ 'ಎಐ-ನೇಟಿವ್' ರಾಜ್ಯವನ್ನಾಗಿ ಪರಿವರ್ತಿಸುವುದು ನಮ್ಮ ಆಶಯವಾಗಿದೆ ಎಂದರು.&lt;/p&gt;&lt;h2&gt;ಆಡಳಿತ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆಯ ಕ್ರಾಂತಿ&lt;/h2&gt;&lt;p&gt;ಪ್ರಸ್ತಾವಿತ ಎಐ ವಿಶ್ವವಿದ್ಯಾಲಯವು ಕೇವಲ ಶಿಕ್ಷಣಕ್ಕೆ ಸೀಮಿತವಾಗಿರದೆ, ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ರಂಗ ಹಾಗೂ ಸರ್ಕಾರದ ನಡುವೆ ಬಲವಾದ ಸಹಯೋಗವನ್ನು ಬೆಳೆಸಲಿದೆ. ಮುಂಬರುವ ದಿನಗಳಲ್ಲಿ ಪ್ರಮುಖ ವಲಯಗಳಲ್ಲಿ ಎಐ ತಂತ್ರಜ್ಞಾನವನ್ನು ಸಂಯೋಜಿಸಲು ಸರ್ಕಾರ ಬೃಹತ್ ಯೋಜನೆ ರೂಪಿಸಿದೆ.&lt;/p&gt;&lt;ul&gt; &lt;li&gt;ಎಐ-ಸಹಾಯದ ಬೋಧನಾ (AI-Assisted Teaching) ಪದ್ಧತಿಯನ್ನು ಜಾರಿಗೆ ತಂದು ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಕೌಶಲ್ಯ ತರಬೇತಿ ನೀಡುವುದು.&lt;/li&gt; &lt;li&gt;ಗ್ರಾಮೀಣ ಹಾಗೂ ನಗರ ಭಾಗದ ಆಸ್ಪತ್ರೆಗಳಲ್ಲಿ ರೋಗಗಳ ಮುಂಚಿತ ಪತ್ತೆ (Early Detection) ಮತ್ತು ಅತ್ಯಾಧುನಿಕ ವೈದ್ಯಕೀಯ ಬೆಂಬಲಕ್ಕಾಗಿ ಎಐ ಬಳಕೆ.&lt;/li&gt; &lt;li&gt;ಹವಾಮಾನ ವೈಪರೀತ್ಯ ಮತ್ತು ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ರೈತರಿಗೆ ನೈಜ ಸಮಯದ ಎಐ-ಚಾಲಿತ ಕೃಷಿ ಸಲಹಾ ಸೇವೆಗಳನ್ನು ಒದಗಿಸುವುದು.&lt;/li&gt; &lt;li&gt;ಸಾರ್ವಜನಿಕ ಸೇವೆಗಳ ವಿತರಣೆಯನ್ನು ಹಸ್ತಕ್ಷೇಪ ರಹಿತ, ಜನಸ್ನೇಹಿ ಹಾಗೂ ಅತಿ ವೇಗವಾಗಿ ಮಾಡಲು ಕೃತಕ ಬುದ್ಧಿಮತ್ತೆಯ ಬಳಕೆ.&lt;/li&gt; &lt;li&gt;ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEs) ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಅಗತ್ಯವಿರುವ ಎಐ ಪರಿಕರಗಳನ್ನು ಒದಗಿಸುವುದು.&lt;/li&gt;&lt;/ul&gt;&lt;h2&gt;ಗೂಗಲ್ ಸಂಸ್ಥೆಗೆ ಮುಕ್ತ ಆಹ್ವಾನ ಹಾಗೂ ಮೂಲಸೌಕರ್ಯ ವಿಸ್ತರಣೆ&lt;/h2&gt;&lt;p&gt;ಎಐ ಸಂಶೋಧನೆ ಮತ್ತು ನವೀನ ಆವಿಷ್ಕಾರಗಳಿಗೆ ಒತ್ತು ನೀಡುತ್ತಿರುವ ಕರ್ನಾಟಕ ಸರ್ಕಾರ, ಎಐ ಕ್ಷೇತ್ರದಲ್ಲಿ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸುವಂತೆ ಜಾಗತಿಕ ತಂತ್ರಜ್ಞಾನ ದೈತ್ಯ 'ಗೂಗಲ್' ಸಂಸ್ಥೆಗೆ ಆಹ್ವಾನ ನೀಡಿದೆ. ರಾಜ್ಯದಲ್ಲಿ ಡೇಟಾ ಸೆಂಟರ್&zwnj;ಗಳ (Data Centers) ವಿಸ್ತರಣೆಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಹಾಗೂ ಬೆಂಬಲವನ್ನು ಸರ್ಕಾರ ನೀಡಲಿದೆ. ಇದರೊಂದಿಗೆ ರಾಜ್ಯದ ಎಐ ಸ್ಟಾರ್ಟ್&zwnj;ಅಪ್&zwnj;ಗಳಿಗೆ ವಿಶೇಷ ಪ್ರೋತ್ಸಾಹ ಧನ ಹಾಗೂ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಾಗತಿಕ ಕಂಪನಿಗಳನ್ನು ಕರ್ನಾಟಕದತ್ತ ಸೆಳೆಯಲು ಸರ್ಕಾರ ಮುಂದಾಗಿದೆ.&lt;/p&gt;&lt;h2&gt;ಕೇವಲ ಒಂದು ವಾರದಲ್ಲೇ ಘೋಷಣೆ!&lt;/h2&gt;&lt;p&gt;ಕಳೆದ ವಾರ ಬುಧವಾರ (ಜುಲೈ 8) ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ &lsquo;ಕ್ಯಾಟಲಿಸ್ಟ್ ಕನೆಕ್ಟ್&rsquo; ಸಭೆಯಲ್ಲಿ ಸಿಎಂ/ಡಿಸಿಎಂ ಅವರು ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ಮುಖಂಡರೊಂದಿಗೆ ಈ ಬಗ್ಗೆ ಪ್ರಾಥಮಿಕ ಚರ್ಚೆ ನಡೆಸಿದ್ದರು. ಇದೀಗ ಗೂಗಲ್ ವೇದಿಕೆಯಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಿರುವುದು ಸರ್ಕಾರದ ತಾಂತ್ರಿಕ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೆಂಗಳೂರು ಕೇವಲ ಭಾರತದ ಐಟಿ ಹಬ್ ಆಗಿ ಉಳಿಯದೆ, ವಿಶ್ವದ ಪ್ರಮುಖ ಮತ್ತು ಜವಾಬ್ದಾರಿಯುತ ಎಐ ಆವಿಷ್ಕಾರಗಳ ಜಾಗತಿಕ ಕೇಂದ್ರವಾಗಬೇಕು ಎಂಬ ಸರ್ಕಾರದ ಸಂಕಲ್ಪಕ್ಕೆ ಈ ನೂತನ ಎಐ ವಿಶ್ವವಿದ್ಯಾಲಯವು ಭದ್ರ ಬುನಾದಿ ಹಾಕಲಿದೆ.&lt;/p&gt;&lt;h2&gt;&lt;strong&gt;ಡಿಕೆಶಿ ಟ್ವೀಟ್ ಮಾಡಿ ಸ್ಪಷ್ಟನೆ&lt;/strong&gt;&lt;/h2&gt;&lt;p&gt;&ldquo;ವಿಶ್ವದ ಐದು ಅಗ್ರ AI ನಗರಗಳಲ್ಲಿ ಒಂದಾಗಿ ಮತ್ತು ಭಾರತದ ಸುಮಾರು 40% ಯುನಿಕಾರ್ನ್ ಸ್ಟಾರ್ಟ್&zwnj;ಅಪ್&zwnj;ಗಳಿಗೆ ನೆಲೆಯಾಗಿರುವ ಬೆಂಗಳೂರು ಕರ್ನಾಟಕದ ಪ್ರತಿಭೆ, ನಾವೀನ್ಯತೆ ಪರಿಸರ ವ್ಯವಸ್ಥೆ ಮತ್ತು ಉದ್ಯಮಶೀಲತಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಈ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ ಇದ್ದರೂ, ನಮ್ಮ ದೃಷ್ಟಿಕೋನವು ತುಂಬಾ ದೊಡ್ಡದಾಗಿದೆ. ಕರ್ನಾಟಕವನ್ನು ಭಾರತದ AI ರಾಜಧಾನಿಯನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ. ಈ ದೃಷ್ಟಿಕೋನವನ್ನು ವಾಸ್ತವಕ್ಕೆ ತಿರುಗಿಸಲು, ನಾವು ಭಾರತದ ಮೊದಲ ಸರ್ಕಾರಿ ನೇತೃತ್ವದ AI ವಿಶ್ವವಿದ್ಯಾಲಯ ಮತ್ತು AI ನಾವೀನ್ಯತೆ ಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ. ನಾವು ಶಾಲಾ ಹಂತದಿಂದ AI ಶಿಕ್ಷಣವನ್ನು ಪರಿಚಯಿಸುತ್ತಿದ್ದೇವೆ ಮತ್ತು AI ಆರ್ಥಿಕತೆಗೆ ಶಕ್ತಿ ತುಂಬಲು ಕರ್ನಾಟಕದ ಕರಾವಳಿ ಮತ್ತು ಬೆಂಗಳೂರಿನ ಬಳಿ ಮುಂದಿನ ಪೀಳಿಗೆಯ ಹಸಿರು ದತ್ತಾಂಶ ಕೇಂದ್ರಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಬೆಂಗಳೂರು ಮೀರಿದ ದೃಷ್ಟಿಕೋನದ ಮೂಲಕ, ಜಾಗತಿಕ ಅವಕಾಶಗಳು ನಮ್ಮ ರಾಜ್ಯದ ಪ್ರತಿಯೊಂದು ಪ್ರದೇಶದಾದ್ಯಂತ ಪ್ರತಿಭಾನ್ವಿತ ಯುವಜನರನ್ನು ತಲುಪುವಂತೆ ನಾವು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶ್ವ ದರ್ಜೆಯ ತಂತ್ರಜ್ಞಾನ ಕೇಂದ್ರಗಳನ್ನು ಸಹ ರಚಿಸುತ್ತಿದ್ದೇವೆ. ತಂತ್ರಜ್ಞಾನವು ಎಂದಿಗೂ ಮಾನವೀಯತೆಯನ್ನು ಬದಲಾಯಿಸಬಾರದು ಎಂದು ನಾನು ದೃಢವಾಗಿ ನಂಬುತ್ತೇನೆ. ಜನರನ್ನು ಸಬಲೀಕರಣಗೊಳಿಸುವುದು ಮತ್ತು ಜೀವನವನ್ನು ಸುಧಾರಿಸುವುದು ಇದರ ನಿಜವಾದ ಉದ್ದೇಶವಾಗಿದೆ. ನಮ್ಮ ರೈತರಿಗೆ ಕನ್ನಡದಲ್ಲಿ AI-ಸಕ್ರಿಯಗೊಳಿಸಿದ ಕೃಷಿ ಸಲಹಾ ಸೇವೆಗಳನ್ನು ಒದಗಿಸುವುದರಿಂದ ಹಿಡಿದು ಗ್ರಾಮೀಣ ಆರೋಗ್ಯ ರಕ್ಷಣೆಯನ್ನು ಬಲಪಡಿಸುವುದು ಮತ್ತು ಶಿಕ್ಷಣವನ್ನು ಪರಿವರ್ತಿಸುವವರೆಗೆ, ತಂತ್ರಜ್ಞಾನವು ಪ್ರತಿಯೊಬ್ಬ ನಾಗರಿಕರಿಗೂ ಸೇವೆ ಸಲ್ಲಿಸುತ್ತದೆ ಎಂದು ದೃಡಪಡಿಸುತ್ತೇವೆ.&rdquo;&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/cm-dk-shivakumar-announcement-karnataka-to-establish-india-s-first-government-sponsored-ai-university-in-bengaluru-gdp/articleshow-x72oz15"/>
        </item>
        <item>
            <title><![CDATA[KEA KRIES Recruitment 2026 ರಾಜ್ಯದ ಮೊರಾರ್ಜಿ ಶಾಲೆಗೆ ಶಿಕ್ಷಕರ ನೇಮಕಾತಿ: 1087 ಹುದ್ದೆಗಳ ಬೃಹತ್ ಅವಕಾಶ!]]></title>
            <link>https://kannada.asianetnews.com/jobs/karnataka-residential-educational-institutions-society-teacher-recruitment-2026-official-notification-out-gdp/articleshow-y46pqxx</link>
            <guid isPermaLink="true">https://kannada.asianetnews.com/jobs/karnataka-residential-educational-institutions-society-teacher-recruitment-2026-official-notification-out-gdp/articleshow-y46pqxx</guid>
            <pubDate>Thu, 16 Jul 2026 13:25:48 +0530</pubDate>
            <description><![CDATA[ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) 1,087 ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ನೇಮಕಾತಿಯನ್ನು ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kh8qzb2x32px2pc6ct0y5ras,imgname-bihar-teacher-recruitment-2026-1770893847645.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) ವತಿಯಿಂದ ಖಾಲಿ ಇರುವ ಬೃಹತ್ ಸಂಖ್ಯೆಯ ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ನೇಮಕಾತಿಯನ್ನು ನಡೆಸುತ್ತಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್&zwnj;ಲೈನ್&zwnj; ಮೂಲಕ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;ಹುದ್ದೆಗಳ ವಿವರ:&lt;/h2&gt;&lt;p&gt;ಸಂಸ್ಥೆಯ ಹೆಸರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES)&lt;/p&gt;&lt;p&gt;ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)&lt;/p&gt;&lt;p&gt;ಒಟ್ಟು ಹುದ್ದೆಗಳು: 1,087&lt;/p&gt;&lt;p&gt;ಹುದ್ದೆಯ ಹೆಸರು: ಶಿಕ್ಷಕರು&lt;/p&gt;&lt;p&gt;ಉದ್ಯೋಗ ಸ್ಥಳ: ಕರ್ನಾಟಕ&lt;/p&gt;&lt;h2&gt;ಹುದ್ದೆಗಳ ವರ್ಗೀಕರಣ:&lt;/h2&gt;&lt;p&gt;ಶಿಕ್ಷಕರು (ಕಲ್ಯಾಣ ಕರ್ನಾಟಕ &ndash; KK): 320 ಹುದ್ದೆಗಳು&lt;/p&gt;&lt;p&gt;ಶಿಕ್ಷಕರು (ಉಳಿಕೆ ಮೂಲ ವೃಂದ &ndash; RPC): 767 ಹುದ್ದೆಗಳು&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ:&lt;/h2&gt;&lt;p&gt;ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ (Graduation), ಬಿಎ (BA), ಅಥವಾ ಬಿಎಸ್ಸಿ (B.Sc), ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.&lt;/p&gt;&lt;h2&gt;ವಯಸ್ಸಿನ ಮಿತಿ:&lt;/h2&gt;&lt;p&gt;ಕನಿಷ್ಠ ವಯಸ್ಸು: 18 ವರ್ಷಗಳು&lt;/p&gt;&lt;p&gt;ಗರಿಷ್ಠ ವಯಸ್ಸು: 45 ವರ್ಷಗಳು&lt;/p&gt;&lt;h2&gt;ವಯೋಮಿತಿ ಸಡಿಲಿಕೆ:&lt;/h2&gt;&lt;p&gt;ಒಬಿಸಿ, 2A, 2B, 3A, 3B ಅಭ್ಯರ್ಥಿಗಳಿಗೆ: 03 ವರ್ಷ&lt;/p&gt;&lt;p&gt;SC/ST ಅಭ್ಯರ್ಥಿಗಳಿಗೆ: 05 ವರ್ಷ&lt;/p&gt;&lt;p&gt;PWD (ವಿಕಲಚೇತನ) ಅಭ್ಯರ್ಥಿಗಳಿಗೆ: 10 ವರ್ಷ&lt;/p&gt;&lt;h2&gt;ಮಾಸಿಕ ವೇತನ:&lt;/h2&gt;&lt;p&gt;49,050 ರಿಂದ-99,400 ಮಾಸಿಕ ವೇತನ ನೀಡಲಾಗುತ್ತದೆ.&lt;/p&gt;&lt;h2&gt;ಅರ್ಜಿ ಶುಲ್ಕದ ವಿವರ:&lt;/h2&gt;&lt;p&gt;ಸಾಮಾನ್ಯ, OBC, 2A, 2B, 3A, 3B ಅಭ್ಯರ್ಥಿಗಳಿಗೆ: 750 ರು.&lt;/p&gt;&lt;p&gt;ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ: 500 ರು.&lt;/p&gt;&lt;p&gt;ಪಾವತಿ ವಿಧಾನ: ಆನ್&zwnj;ಲೈನ್ ಮೂಲಕ&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?&lt;/h2&gt;&lt;p&gt;ಲಿಖಿತ ಪರೀಕ್ಷೆ: ಪತ್ರಿಕೆ-1 ಮತ್ತು ಪತ್ರಿಕೆ-2 (OMR ಆಫ್&zwnj;ಲೈನ್ ಮಾದರಿ)&lt;/p&gt;&lt;p&gt;ಸಹಿಷ್ಣುತೆ ಪರೀಕ್ಷೆ ಮತ್ತು ದೈಹಿಕ ಗುಣಮಟ್ಟ ಪರೀಕ್ಷೆ&lt;/p&gt;&lt;p&gt;ವೈದ್ಯಕೀಯ ಪರೀಕ್ಷೆ&lt;/p&gt;&lt;h2&gt;ಅರ್ಜಿ ಸಲ್ಲಿಸುವುದು ಹೇಗೆ?&lt;/h2&gt;&lt;p&gt;ಅರ್ಜಿ ಸಲ್ಲಿಸುವ ಮುನ್ನ KEA ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.&lt;/p&gt;&lt;p&gt;ನಿಮ್ಮ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಐಡಿ ಪ್ರೂಫ್, ಶೈಕ್ಷಣಿಕ ದಾಖಲೆಗಳು, ರೆಸ್ಯೂಮ್ ಮತ್ತು ಫೋಟೋಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ.&lt;/p&gt;&lt;p&gt;ವೆಬ್&zwnj;ಸೈಟ್&zwnj;ನಲ್ಲಿ ನೀಡಲಾದ KRIES ಆನ್&zwnj;ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.&lt;/p&gt;&lt;p&gt;ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ದಾಖಲೆಗಳನ್ನು ಅಪ್&zwnj;ಲೋಡ್ ಮಾಡಿ.&lt;/p&gt;&lt;p&gt;ನಿಮ್ಮ ಪ್ರವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್&zwnj;ಲೈನ್ ಮೂಲಕ ಪಾವತಿಸಿ.&lt;/p&gt;&lt;h2&gt;ಪ್ರಮುಖ ದಿನಾಂಕಗಳು:&lt;/h2&gt;&lt;p&gt;ಆನ್&zwnj;ಲೈನ್ ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ: ಜುಲೈ 15-2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್&zwnj; 13-2026&lt;/p&gt;&lt;p&gt;ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಆಗಸ್ಟ್&zwnj; 14-2026&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-residential-educational-institutions-society-teacher-recruitment-2026-official-notification-out-gdp/articleshow-y46pqxx"/>
        </item>
        <item>
            <title><![CDATA[2ನೇ ಕ್ಲಾಸ್‌ ಹಿಂದೂ ಮಗುವಿಗೆ ಇಸ್ಲಾಮಿಕ್ 'ಕಲ್ಮಾ' ಹೋಮ್‌ವರ್ಕ್; ಶಾಲೆಯ ವಿರುದ್ಧ ಭುಗಿಲೆದ್ದ ಆಕ್ರೋಶ!]]></title>
            <link>https://kannada.asianetnews.com/india-news/hyderabad-school-kalma-homework-row-madhavi-latha-slams-management-san/articleshow-z7zbhg1</link>
            <guid isPermaLink="true">https://kannada.asianetnews.com/india-news/hyderabad-school-kalma-homework-row-madhavi-latha-slams-management-san/articleshow-z7zbhg1</guid>
            <pubDate>Thu, 16 Jul 2026 20:07:34 +0530</pubDate>
            <description><![CDATA[&lt;p&gt;ಹೈದರಾಬಾದ್&zwnj;ನ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗೆ ಇಸ್ಲಾಮಿಕ್ ಪ್ರಾರ್ಥನೆಯನ್ನು ಹೋಮ್&zwnj;ವರ್ಕ್ ಆಗಿ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕಿ ಮಾಧವಿ ಲತಾ, ಇದು ಧಾರ್ಮಿಕ ಹೇರಿಕೆ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxnnp4zjjwmxtm7dwca56d2v,imgname-kalma-homework-1784212558834.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್ (ಜು.16): &lt;/strong&gt;ಯಾರೊಬ್ಬರ ಮೇಲೂ ಯಾವುದೇ ಧರ್ಮವನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದು ಹೇಳಿರುವ ಬಿಜೆಪಿ ನಾಯಕಿ ಮಾಧವಿ ಲತಾ, ಹೈದರಾಬಾದ್&zwnj;ನ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗೆ ಇಸ್ಲಾಮಿಕ್ ಧಾರ್ಮಿಕ ಪ್ರಾರ್ಥನೆಯನ್ನು ಹೋಮ್&zwnj;ವರ್ಕ್ ಆಗಿ ನೀಡಿದ ಶಿಕ್ಷಕಿಯ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲೆಯೊಂದರ ಎರಡನೇ ತರಗತಿಯ 6 ವರ್ಷದ ಹಿಂದೂ ವಿದ್ಯಾರ್ಥಿಯೊಬ್ಬ ಬುಧವಾರ ಮನೆಗೆ ಮರಳಿದಾಗ, ಆತನ ಹೋಮ್&zwnj;ವರ್ಕ್ ಡೈರಿಯಲ್ಲಿ ಇಸ್ಲಾಮಿಕ್ ಧರ್ಮದ &quot;ಮೊದಲ ಹಾಗೂ ಎರಡನೇ ಕಲ್ಮಾ&quot; ಮತ್ತು &quot;ಫಾತಿಹಾ&quot; ಓದುವಂತೆ ಶಿಕ್ಷಕಿ ಸೂಚನೆ ಬರೆದಿದ್ದರು ಎಂದು ಪೋಷಕರು ಆರೋಪಿಸಿದ ಬೆನ್ನಲ್ಲೇ ಈ ವಿವಾದ ಭುಗಿಲೆದ್ದಿದೆ. ಇಸ್ಲಾಮಿಕ್ ನಂಬಿಕೆಯ ಪ್ರಮುಖ ಘೋಷಣೆಯನ್ನು 'ಕಲ್ಮಾ' ಎನ್ನಲಾಗುತ್ತದೆಯಲ್ಲದೆ, ಪವಿತ್ರ ಕುರಾನ್&zwnj;ನ ಮೊದಲ ಅಧ್ಯಾಯವನ್ನು 'ಸೂರತ್ ಅಲ್-ಫಾತಿಹಾ' ಎನ್ನಲಾಗುತ್ತದೆ.&lt;/p&gt;&lt;h2&gt;&lt;strong&gt;'ಹಿಂದೂ ವಿದ್ಯಾರ್ಥಿಗಳು ಭಯದಲ್ಲೇ ಕಲಿಯಬೇಕೇ?'&lt;/strong&gt;&lt;/h2&gt;&lt;p&gt;ಸಂತ್ರಸ್ತ ಮಗುವಿನ ಪೋಷಕರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ವಶಕ್ಕೆ ಒಳಗಾದ ಬಿಜೆಪಿ ನಾಯಕಿ ಮಾಧವಿ ಲತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, &quot;ಹಿಂದೂ ವಿದ್ಯಾರ್ಥಿಗಳು ಯಾವಾಗಲೂ ಇಂತಹ ಭಯದ ವಾತಾವರಣದಲ್ಲೇ ಕಲಿಯಬೇಕೇ? ಸಂವಿಧಾನದ ನಿಯಮಗಳು ಮತ್ತು ಕಾಯ್ದೆಗಳನ್ನು ಪಾಲಿಸದ ಈ ಶಾಲೆಯ ವಿರುದ್ಧ ತೆಲಂಗಾಣ ಸರ್ಕಾರ ಯಾವ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂಬುದು ನನ್ನ ಏಕೈಕ ಪ್ರಶ್ನೆಯಾಗಿದೆ. ನಮ್ಮ ಮೂಲಭೂತ ಹಕ್ಕುಗಳ ಅಡಿಯಲ್ಲಿ ಯಾವುದೇ ಧರ್ಮವನ್ನು ಯಾರ ಮೇಲೂ ಬಲವಂತವಾಗಿ ಹೇರುವಂತಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೂ 2ನೇ ತರಗತಿಯ ಪುಟ್ಟ ಮಗುವಿನ ಮೇಲೆ ಇದನ್ನು ಹೇರಲಾಗಿದೆ,&quot; ಎಂದು ಕಿಡಿಕಾರಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಕಿಯ ವಜಾ ಪರಿಹಾರವಲ್ಲ&lt;/strong&gt;&lt;/h2&gt;&lt;p&gt;ವಿವಾದದ ಬೆನ್ನಲ್ಲೇ ತಪ್ಪಿತಸ್ಥ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿಯು ಸೇವೆಯಿಂದ ವಜಾಗೊಳಿಸಿದೆ ಎಂದು ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಆದರೆ ಈ ಕ್ರಮದ ಬಗ್ಗೆ ತೃಪ್ತಿ ವ್ಯಕ್ತಪಡಿಸದ ಮಾಧವಿ ಲತಾ, ಶಿಕ್ಷಕಿಯನ್ನು ಕೆಲಸದಿಂದ ವಜಾಗೊಳಿಸುವುದು ಇದಕ್ಕೆ ಸರಿಯಾದ ಪರಿಹಾರವೇ? ನಮ್ಮನ್ನು ಸುಮ್ಮನಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆಯೇ? ಹಿಂದೂಗಳು ನಂಬಿಕೆಯಿಂದ ಇಸ್ಲಾಮಿಕ್ ಮ್ಯಾನೇಜ್&zwnj;ಮೆಂಟ್ ನಡೆಸುವ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ. ಅಲ್ಲಿನ ಹಿಂದೂಗಳು ಆ ಶಾಲೆಯನ್ನು ಪ್ರೀತಿಯಿಂದ ನಂಬಿದ್ದಾರೆ. ಈಗ ಅವರ ನಂಬಿಕೆಯ ಕಥೆಯೇನು? ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಆದರೆ ಮಕ್ಕಳು ನೆಮ್ಮದಿಯಿಂದ ಕಲಿಯಲು ಸರ್ಕಾರವಾಗಲಿ ಅಥವಾ ಕಾನೂನಾಗಲಿ ಯಾವುದೇ ರಕ್ಷಣೆ ನೀಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ಶಾಲೆ ಭಗವದ್ಗೀತೆ ಓದಿಸುತ್ತದೆಯೇ?&lt;/strong&gt;&lt;/h2&gt;&lt;p&gt;&quot;ನಮ್ಮ ದೇಶವು ಸಂವಿಧಾನದ ಅಡಿಯಲ್ಲಿ ನಡೆಯುವುದು ಅತ್ಯಂತ ಮುಖ್ಯವಾಗಿದೆ. ಇಂತಹ ಸಂಸ್ಥೆಗಳು ಸಂವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ನೋಡಿಕೊಳ್ಳಬೇಕು. ನಾನು ಈಗ ಅದೇ ಶಾಲೆಯ ಮ್ಯಾನೇಜ್&zwnj;ಮೆಂಟ್ ಮತ್ತು ಶಿಕ್ಷಕಿಗೆ ಕೇಳುತ್ತೇನೆ; ಈಗ ನೀವು ಶಾಲೆಯಲ್ಲಿ ಭಗವದ್ಗೀತೆ ಓದಿಸಲು ಪ್ರಾರಂಭಿಸುತ್ತೀರಾ? ಆಗ ಅವರು ಸುಮ್ಮನಿರುತ್ತಾರೆಯೇ? ಹಾಗಾಗಿ ಕೇವಲ ಶಿಕ್ಷಕಿಯನ್ನು ಕೆಲಸದಿಂದ ತೆಗೆಯುವುದು ಇದಕ್ಕೆ ಪರಿಹಾರವಲ್ಲ. ಹಿಂದೂ ಮಗುವಿಗೆ ತನ್ನ ಹಕ್ಕು ಸಿಗಬೇಕು. ಹಿಂದೂ ಮಕ್ಕಳು ಯಾವುದೇ ಭಯವಿಲ್ಲದೆ ಶಾಲೆಗೆ ಹೋಗಿ ನೆಮ್ಮದಿಯಿಂದ ಓದಿಕೊಂಡು ಬರಲು ಸಾಧ್ಯವಿಲ್ಲವೇ? ಇಲ್ಲಿ ಯಾವುದೇ ಮುಸ್ಲಿಂ ಮಗುವಿಗೆ ಬಲವಂತ ಮಾಡಲಾಗಿಲ್ಲ. ಹಾಗಾಗಿ ಇದು ಕೇವಲ ಒಬ್ಬ ಶಿಕ್ಷಕಿಯ ತಪ್ಪಲ್ಲ, ಇದು ವ್ಯವಸ್ಥಿತವಾದ ಸಾಂಸ್ಥಿಕ ಸಮಸ್ಯೆ,&quot; ಎಂದು 2024ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಧವಿ ಲತಾ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ರಾಜಿಯಾಗದ ಪೋಷಕರು - ಪ್ರಕರಣ ಸದ್ಯಕ್ಕೆ ಸುಖಾಂತ್ಯ&lt;/strong&gt;&lt;/h2&gt;&lt;p&gt;ಈ ಮಧ್ಯೆ, ಶಾಲಾ ಮ್ಯಾನೇಜ್&zwnj;ಮೆಂಟ್ ತೆಗೆದುಕೊಂಡಿರುವ ಶಿಸ್ತುಕ್ರಮದ ಬಗ್ಗೆ ತಾವು ತೃಪ್ತಿ ಹೊಂದಿದ್ದು, ವಿವಾದ ಸದ್ಯಕ್ಕೆ ಬಗೆಹರಿದಿದೆ ಎಂದು ಮಗುವಿನ ಪೋಷಕರು ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ಪೋಷಕರು ಈವರೆಗೆ ಪೊಲೀಸ್ ಠಾಣೆಗೆ ಯಾವುದೇ ಅಧಿಕೃತ ದೂರು ನೀಡಿಲ್ಲ ಮತ್ತು ಶಾಲೆಯ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂದು ಹೈದರಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಮತ್ತೊಂದೆಡೆ, ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್&zwnj;ಪಿ) ನಾಯಕರು ಶಾಲಾ ಶಿಕ್ಷಕಿಯ ಈ ಧಾರ್ಮಿಕ ಹೇರಿಕೆಯ ಹೋಮ್&zwnj;ವರ್ಕ್ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ಸಂಬಂಧಪಟ್ಟ ಶಾಲೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/hyderabad-school-kalma-homework-row-madhavi-latha-slams-management-san/articleshow-z7zbhg1"/>
        </item>
        <item>
            <title><![CDATA[ದೇಶದ ಗಮನ ಸೆಳೀತಿರೋ ಉಪವಾಸ ನಿರತ ವಾಂಗ್‌ಚುಕ್ ಮನೆ: ಬಗೆದಷ್ಟೂ ಕೌತುಕಗಳ ಕೇಂದ್ರ]]></title>
            <link>https://kannada.asianetnews.com/gallery/india-news/sonam-wangchuk-ladakh-house-inside-photo-that-stay-warm-without-heater-see-waterless-composting-toilet-suc-zsrz1pg</link>
            <guid isPermaLink="true">https://kannada.asianetnews.com/gallery/india-news/sonam-wangchuk-ladakh-house-inside-photo-that-stay-warm-without-heater-see-waterless-composting-toilet-suc-zsrz1pg</guid>
            <pubDate>Fri, 17 Jul 2026 19:21:38 +0530</pubDate>
            <description><![CDATA[ಶಿಕ್ಷಣ ಸುಧಾರಕ ಸೋನಮ್ ವಾಂಗ್&zwnj;ಚುಕ್ ಅವರ ಉಪವಾಸ ಸತ್ಯಾಗ್ರಹದ ನಡುವೆ, ಲಡಾಖ್&zwnj;ನಲ್ಲಿರುವ ಅವರ ಪರಿಸರ ಸ್ನೇಹಿ ಮನೆ ಗಮನ ಸೆಳೆಯುತ್ತಿದೆ. ಮಣ್ಣು ಮತ್ತು ಮರದಿಂದ ನಿರ್ಮಿಸಲಾದ ಈ ಮನೆಯು, ಹೀಟರ್ ಇಲ್ಲದೆಯೇ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಬೆಚ್ಚಗಿರುತ್ತದೆ ಮತ್ತು ಸುಸ್ಥಿರ ಜೀವನಕ್ಕೆ ಮಾದರಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxr582tcwet6k7b1w4ttmvmp,imgname-sonam-wangchuk-01-1784295983947.jpg" type="image/jpeg" height="390" width="690"/>
            <content:encoded><![CDATA[ಶಿಕ್ಷಣ ಸುಧಾರಕ ಸೋನಮ್ ವಾಂಗ್&zwnj;ಚುಕ್ ಅವರ ಉಪವಾಸ ಸತ್ಯಾಗ್ರಹದ ನಡುವೆ, ಲಡಾಖ್&zwnj;ನಲ್ಲಿರುವ ಅವರ ಪರಿಸರ ಸ್ನೇಹಿ ಮನೆ ಗಮನ ಸೆಳೆಯುತ್ತಿದೆ. ಮಣ್ಣು ಮತ್ತು ಮರದಿಂದ ನಿರ್ಮಿಸಲಾದ ಈ ಮನೆಯು, ಹೀಟರ್ ಇಲ್ಲದೆಯೇ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಬೆಚ್ಚಗಿರುತ್ತದೆ ಮತ್ತು ಸುಸ್ಥಿರ ಜೀವನಕ್ಕೆ ಮಾದರಿಯಾಗಿದೆ.&lt;img&gt;&lt;p&gt;ಪ್ರಸಿದ್ಧ ಶಿಕ್ಷಣ ಸುಧಾರಕ ಮತ್ತು ಎಂಜಿನಿಯರ್ ಸೋನಮ್ ವಾಂಗ್&zwnj;ಚುಕ್, ಪ್ರಸ್ತುತ ತಮ್ಮ ಉಪವಾಸ ಸತ್ಯಾಗ್ರಹದಿಂದಾಗಿ ಸುದ್ದಿಯಲ್ಲಿದ್ದಾರೆ. ಏತನ್ಮಧ್ಯೆ, ಲಡಾಖ್&zwnj;ನಲ್ಲಿರುವ ಅವರ ವಿಶಿಷ್ಟ ಮನೆಯೂ ಚರ್ಚೆಯ ವಿಷಯವಾಗಿದೆ. ಯೂಟ್ಯೂಬರ್ ಅಮಿತಾ ಚೋಗಿಯಾ ನೇಗಿ ಅವರ ಹಳೆಯ ವಿಡಿಯೋ ಮೂಲಕ ಈ ಮನೆಯ ಚಿತ್ರಗಳು ಕಾಣಿಸಿಕೊಂಡಿವೆ. ಸುಮಾರು ಮೂರು ವರ್ಷಗಳ ಹಿಂದೆ, ಸೋನಮ್ ವಾಂಗ್&zwnj;ಚುಕ್ ಲಡಾಖ್&zwnj;ನಲ್ಲಿರುವ ತಮ್ಮ ಮನೆಯನ್ನು ಈ ವಿಡಿಯೋದಲ್ಲಿ ವಿವರಿಸಿದ್ದರು.&lt;/p&gt;&lt;img&gt;&lt;p&gt;ಮಣ್ಣು ಮತ್ತು ಮರದಿಂದ ಮಾಡಲ್ಪಟ್ಟ ಸೋನಮ್ ವಾಂಗ್&zwnj;ಚುಕ್ ಅವರ ಎರಡು ಅಂತಸ್ತಿನ ಮನೆ ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದೆ. ಹೀಟರ್ ಇಲ್ಲದೆ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಇದು ಬೆಚ್ಚಗಿರುತ್ತದೆ. ಇದಲ್ಲದೆ, ಈ ಹೆಚ್ಚು ನೀರಿನ ದಕ್ಷತೆಯ ಮನೆಯಲ್ಲಿ ನೀರಿನ ಬದಲಿಗೆ ಮರದ ಪುಡಿಯನ್ನು ಬಳಸುವ ಫ್ಲಶ್ ಅಲ್ಲದ ಶೌಚಾಲಯವೂ ಇದೆ. ಈ ವೈಶಿಷ್ಟ್ಯಗಳು ಸುಸ್ಥಿರ ಜೀವನಕ್ಕೆ ಹೊಸ ಉದಾಹರಣೆಯನ್ನು ನೀಡುತ್ತವೆ ಮತ್ತು ಇದನ್ನು ವಿಶ್ವದ ಅತ್ಯಂತ ವಿಶಿಷ್ಟ ಮನೆಗಳಲ್ಲಿ ಒಂದನ್ನಾಗಿ ಮಾಡುತ್ತವೆ.&lt;/p&gt;&lt;img&gt;&lt;p&gt;ಲಡಾಖ್&zwnj;ನ ಹಿಮದಿಂದ ಆವೃತವಾದ ಪರ್ವತಗಳ ನಡುವೆ ಮಣ್ಣಿನಿಂದ ನಿರ್ಮಿಸಲಾದ ಸೋನಮ್ ವಾಂಗ್&zwnj;ಚುಕ್ ಅವರ ಮನೆ ಸಾಂಪ್ರದಾಯಿಕ ಟಿಬೆಟಿಯನ್ ಮತ್ತು ಲಡಾಖಿ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಇದರ ಬಾಹ್ಯ ವಿನ್ಯಾಸದ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ದೊಡ್ಡ, ಮರದ ಚೌಕಟ್ಟಿನ ಗಾಜಿನ ಕಿಟಕಿಗಳು, ಇದು ಸಂಪೂರ್ಣ ಮುಂಭಾಗವನ್ನು ಗ್ರಿಡ್ ಮಾದರಿಯಲ್ಲಿ ವ್ಯಾಪಿಸಿದೆ. ಈ ಗಾಜಿನ ಹೊರಭಾಗವು ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಸಂಪೂರ್ಣವಾಗಿ ಕಪ್ಪು ಒಳಗಿನ ಗೋಡೆಯನ್ನು ಮರೆಮಾಡುತ್ತದೆ.&lt;/p&gt;&lt;img&gt;&lt;p&gt;ತೀವ್ರ ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಡಲು ಯಾವುದೇ ಹೀಟರ್&zwnj;ಗಳನ್ನು ಬಳಸಲಾಗುವುದಿಲ್ಲ. ಬದಲಾಗಿ, ಕಪ್ಪು ಗೋಡೆಯು ನೀರಿನ ಬಾಟಲಿಗಳನ್ನು ಇರಿಸುತ್ತದೆ. ಈ ಬಾಟಲಿಗಳು ದಿನವಿಡೀ ಸೂರ್ಯನ ಬೆಳಕನ್ನು ಮತ್ತು ಶಾಖವನ್ನು ಹೀರಿಕೊಳ್ಳುತ್ತವೆ, ರಾತ್ರಿಯಲ್ಲಿ 18 ರಿಂದ 20 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ನಿರ್ವಹಿಸುತ್ತವೆ.&lt;/p&gt;&lt;img&gt;&lt;p&gt;ಮನೆಯ ವಾಸದ ಪ್ರದೇಶವು ಸಾಂಪ್ರದಾಯಿಕ ಮಣ್ಣಿನ ಗೋಡೆಗಳು ಮತ್ತು ಸುಂದರವಾದ ಮರದ ಸೀಲಿಂಗ್&zwnj;ನ ಅದ್ಭುತ ಸಂಯೋಜನೆಯಾಗಿದೆ. ಈ ಮಣ್ಣಿನ ಗೋಡೆಗಳು ನೈಸರ್ಗಿಕವಾಗಿ ಕೋಣೆಯ ತಾಪಮಾನವನ್ನು ನಿಯಂತ್ರಿಸುತ್ತವೆ, ಆದರೆ ಸಂಕೀರ್ಣವಾಗಿ ಕೆತ್ತಿದ ಮರದ ಸೀಲಿಂಗ್ ಅದಕ್ಕೆ ಬೆಚ್ಚಗಿನ ಮತ್ತು ಸಾಂಪ್ರದಾಯಿಕ ಭಾವನೆಯನ್ನು ನೀಡುತ್ತದೆ. ಈ ತೆರೆದ ಮತ್ತು ಗಾಳಿಯಾಡುವ ಪ್ರದೇಶವು ಆಧುನಿಕ ಸೋಫಾಗಳು, ಸುಂದರವಾದ ವಿಂಟೇಜ್ ಪಿಯಾನೋ ಮತ್ತು ಊಟಕ್ಕಾಗಿ ಕಡಿಮೆ ಎತ್ತರದ ಸಾಂಪ್ರದಾಯಿಕ ಊಟದ ಟೇಬಲ್&zwnj;ನಿಂದ ಸಜ್ಜುಗೊಂಡಿದೆ. ದೊಡ್ಡ ಕಿಟಕಿಗಳಿಂದ ಸುರಿಯುವ ಹೇರಳವಾದ ನೈಸರ್ಗಿಕ ಬೆಳಕು ಜಾಗವನ್ನು ಮತ್ತಷ್ಟು ಹೆಚ್ಚಿಸುತ್ತದೆ.&lt;/p&gt;&lt;img&gt;&lt;p&gt;ಸೋನಮ್ ವಾಂಗ್&zwnj;ಚುಕ್ ಅವರ ಮನೆಯಲ್ಲಿರುವ ಮಲಗುವ ಕೋಣೆ ಸರಳತೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಒಂದು ಉದಾಹರಣೆಯಾಗಿದೆ. ಮಣ್ಣಿನ ಗೋಡೆಗಳು ಕೋಣೆಗೆ ಶಾಂತ ಮತ್ತು ಸಾಂಪ್ರದಾಯಿಕ ಭಾವನೆಯನ್ನು ನೀಡುತ್ತವೆ, ಕೆತ್ತಿದ ಹಸಿರು ಚೌಕಟ್ಟಿನೊಂದಿಗೆ ಸುಂದರವಾದ ಗಾಜಿನ ಕಿಟಕಿಯಿಂದ ಎದ್ದು ಕಾಣುತ್ತವೆ. ಕೋಣೆಯ ಮಧ್ಯದಲ್ಲಿ ಇರಿಸಲಾಗಿರುವ ಸ್ವಚ್ಛವಾದ ಮರದ ಹಾಸಿಗೆ ಮತ್ತು ಅದರ ಮೇಲೆ ಪ್ರಕಾಶಮಾನವಾದ ನೀಲಿ ಹಾಳೆ ಜಾಗಕ್ಕೆ ಆಕರ್ಷಕ ನೋಟವನ್ನು ನೀಡುತ್ತದೆ. ಮರದ ಬಾಗಿಲುಗಳು, ತೆರೆದ ಕಿಟಕಿ ಮತ್ತು ಸಂಕೀರ್ಣವಾದ ವರ್ಣಚಿತ್ರಗಳನ್ನು ಹೊಂದಿರುವ ಸಾಂಪ್ರದಾಯಿಕ ಮರದ ಎದೆಯು ಮಲಗುವ ಕೋಣೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.&lt;/p&gt;&lt;img&gt;&lt;p&gt;ಮಲಗುವ ಕೋಣೆಯ ಇನ್ನೊಂದು ಭಾಗಕ್ಕೆ ಸಂಬಂಧಿಸಿದಂತೆ, ತಿಳಿ ಮರದಿಂದ ಮಾಡಿದ ದೊಡ್ಡ ಮತ್ತು ಸುಂದರವಾದ ವಾರ್ಡ್ರೋಬ್ ಕೋಣೆಗೆ ನೈಸರ್ಗಿಕ ನೋಟವನ್ನು ನೀಡುತ್ತದೆ. ವಾರ್ಡ್ರೋಬ್&zwnj;ಗೆ ನೇರವಾಗಿ ಪಕ್ಕದಲ್ಲಿರುವ ಕಿರಿದಾದ ಮರದ ಕಿಟಕಿಯು ಸಾಕಷ್ಟು ಬೆಳಕನ್ನು ನೀಡುತ್ತದೆ. ತೆರೆದ ಮರದ ಕಪಾಟುಗಳು ವರ್ಣರಂಜಿತ ಪುಸ್ತಕಗಳಿಂದ ಅಲಂಕರಿಸಲ್ಪಟ್ಟ ಮಿನಿ ಗ್ರಂಥಾಲಯದಂತಹ ಭಾವನೆಯನ್ನು ಸೃಷ್ಟಿಸುತ್ತವೆ. ಸೊಗಸಾದ ಮರದ ಸೀಲಿಂಗ್ ಮತ್ತು ಮಣ್ಣಿನ ಗೋಡೆಗಳು ಈ ಮೂಲೆಯನ್ನು ಪ್ರಶಾಂತವಾಗಿಸುತ್ತವೆ.&lt;/p&gt;&lt;p&gt;ಮನೆಯ ಸ್ನಾನಗೃಹವು ಆಧುನಿಕ ಸೌಲಭ್ಯಗಳು ಮತ್ತು ಪರಿಸರ ಸ್ನೇಹಪರತೆಗೆ ಒಂದು ಸುಂದರ ಉದಾಹರಣೆಯಾಗಿದೆ. ಮರದ ಕೌಂಟರ್&zwnj;ಟಾಪ್ ಮೇಲೆ ಸ್ಟೈಲಿಶ್ ಬಿಳಿ ಸೆರಾಮಿಕ್ ವಾಶ್&zwnj;ಬೇಸಿನ್ ಇದೆ, ಅದರ ಮೇಲೆ ಹೃದಯ ಆಕಾರದ ಕನ್ನಡಿ ಇದೆ, ಮತ್ತು ಡಿಸೈನರ್ ಟೈಲ್ಸ್ ಗೋಡೆಗಳನ್ನು ಅಲಂಕರಿಸುತ್ತವೆ. ಆಧುನಿಕ ವಿದ್ಯುತ್ ಗೀಸರ್ ಬಿಸಿನೀರನ್ನು ಒದಗಿಸುತ್ತದೆ ಮತ್ತು ಬಿದಿರಿನ ಬ್ಲೈಂಡ್&zwnj;ಗಳನ್ನು ಹೊಂದಿರುವ ಕಿಟಕಿಯು ವಾತಾಯನ ಮತ್ತು ಬೆಳಕನ್ನು ಒದಗಿಸುತ್ತದೆ.&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/india-news/sonam-wangchuk-ladakh-house-inside-photo-that-stay-warm-without-heater-see-waterless-composting-toilet-suc-zsrz1pg"/>
        </item>
    </channel>
</rss>
