<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 09 Aug 2026 16:42:10 +0530</lastBuildDate>
        <atom:link href="https://kannada.asianetnews.com/rss/education" rel="self" type="application/rss+xml"/>
        <item>
            <title><![CDATA[650 ರಿಂದ 500, ಕೊನೆಗೆ 135: ಒಂದೇ ದಿನದಲ್ಲಿ ಮೂರು ಬಾರಿ ಬದಲಾದ NEET ಸ್ಕೋರ್‌, ಕೋರ್ಟ್‌ ಮೆಟ್ಟಿಲೇರಿದ ಅಭ್ಯರ್ಥಿ!]]></title>
            <link>https://kannada.asianetnews.com/india-news/neet-ug-2026-score-changed-thrice-candidate-approaches-delhi-high-court-san/articleshow-0glxl0x</link>
            <guid isPermaLink="true">https://kannada.asianetnews.com/india-news/neet-ug-2026-score-changed-thrice-candidate-approaches-delhi-high-court-san/articleshow-0glxl0x</guid>
            <pubDate>Thu, 30 Jul 2026 19:02:48 +0530</pubDate>
            <description><![CDATA[ನೀಟ್ ಯುಜಿ 2026ರ ಫಲಿತಾಂಶದಲ್ಲಿ ಗಂಭೀರ ಅಕ್ರಮದ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿಯೊಬ್ಬರ ಅಂಕಗಳು 24 ಗಂಟೆಗಳಲ್ಲಿ ಮೂರು ಬಾರಿ ಬದಲಾಗಿವೆ. 650 ರಿಂದ 135ಕ್ಕೆ ಕುಸಿದ ಅಂಕಗಳ ಬಗ್ಗೆ ಅಭ್ಯರ್ಥಿಯು ದೆಹಲಿ ಹೈಕೋರ್ಟ್&zwnj; ಮೆಟ್ಟಿಲೇರಿದ್ದು, ತಮ್ಮ ಮೂಲ ಒಎಂಆರ್ ಶೀಟ್ ಹಾಜರುಪಡಿಸಲು ಕೋರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyk71spv3r7rre60dyd2x1q2,imgname-jantar-mantar-protest-1785203844826.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.30): &lt;/strong&gt;'ನೀಟ್ ಯುಜಿ 2026' (NEET UG) ಪರೀಕ್ಷೆಯ ಫಲಿತಾಂಶ ಪ್ರಕಟಣೆಯಲ್ಲಿ ಒಂದಲ್ಲ ಒಂದು ಎಡವಟ್ಟುಗಳು ಮುಂದುವರಿದಿದ್ದು, ಇದೀಗ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮೌಲ್ಯಮಾಪನ ಪ್ರಕ್ರಿಯೆಯ ವಿರುದ್ಧ ಗಂಭೀರ ಅಕ್ರಮದ ಆರೋಪ ಕೇಳಿಬಂದಿದೆ. ಎನ್&zwnj;ಟಿಎ ಅಧಿಕೃತ ಪೋರ್ಟಲ್&zwnj;ನಲ್ಲಿ ತನ್ನ ಫಲಿತಾಂಶವು ಕೇವಲ 24 ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಬದಲಾಗಿದೆ ಎಂದು ಆರೋಪಿಸಿ ಅಭ್ಯರ್ಥಿಯೊಬ್ಬರು ದೆಹಲಿ ಹೈಕೋರ್ಟ್&zwnj; ಮೆಟ್ಟಿಲೇರಿದ್ದಾರೆ. ಈ ಅರ್ಜಿ ವಿಚಾರಣೆಯು ಶುಕ್ರವಾರ ನಡೆಯಲಿದೆ. ಅರ್ಜಿದಾರ ವಿದ್ಯಾರ್ಥಿಯ ಪ್ರಕಾರ, ಎನ್&zwnj;ಟಿಎ ಪೋರ್ಟಲ್&zwnj;ನಲ್ಲಿ ಪ್ರಕಟವಾದ ಆತನ ಅಂಕಗಳು 24 ಗಂಟೆಯೊಳಗೆ ಮೊದಲು 650 ರಿಂದ 500 ಕ್ಕೆ, ತದನಂತರ 135 ಅಂಕಗಳಿಗೆ ದಿಢೀರ್ ಕುಸಿದಿವೆ.&lt;/p&gt;&lt;h2&gt;&lt;strong&gt;ಒರಿಜಿನಲ್ ಒಎಂಆರ್ ಶೀಟ್ ಹಾಜರುಪಡಿಸಲು ಮನವಿ&lt;/strong&gt;&lt;/h2&gt;&lt;p&gt;ಎನ್&zwnj;ಟಿಎ ಪೋರ್ಟಲ್&zwnj;ನಲ್ಲಿ ಪ್ರದರ್ಶಿಸಲಾಗುತ್ತಿರುವ ಒಎಂಆರ್ (OMR) ಉತ್ತರ ಪತ್ರಿಕೆಯು ಪರೀಕ್ಷೆಯ ಸಮಯದಲ್ಲಿ ತಾವು ಭರ್ತಿ ಮಾಡಿದ ನಿಜವಾದ ಉತ್ತರ ಪತ್ರಿಕೆಯಲ್ಲ ಎಂದು ಅಭ್ಯರ್ಥಿ ಗಂಭೀರ ಆರೋಪ ಮಾಡಿದ್ದಾರೆ. ಸ್ವತಂತ್ರ ಮತ್ತು ಪಾರದರ್ಶಕ ಪರಿಶೀಲನೆಗಾಗಿ, ತಾವು ಬರೆದ ಮೂಲ ಭೌತಿಕ (Original Physical) ಒಎಂಆರ್ ಉತ್ತರ ಪತ್ರಿಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಹಾಗೂ ಅದನ್ನು ಸುರಕ್ಷಿತವಾಗಿ ಕಾಯ್ದಿರಿಸಬೇಕು (Preserve) ಎಂದು ವಿದ್ಯಾರ್ಥಿ ಕೋರಿದ್ದಾರೆ.&lt;/p&gt;&lt;p&gt;ವಕೀಲ ವಿನೀತ್ ಜಿಂದಾಲ್ ಅವರ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಯಲ್ಲಿ, ಮೌಲ್ಯಮಾಪನ ಪ್ರಕ್ರಿಯೆಯ ನಿಷ್ಪಕ್ಷಪಾತ ತನಿಖೆಗೆ ಅನುಕೂಲವಾಗುವಂತೆ ವಿದ್ಯಾರ್ಥಿಯ ಒರಿಜಿನಲ್ ಒಎಂಆರ್ ಶೀಟ್ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎನ್&zwnj;ಟಿಎಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ.&lt;/p&gt;&lt;h2&gt;&lt;strong&gt;24 ಗಂಟೆಯಲ್ಲಿ ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಅರ್ಜಿಯಲ್ಲಿ ನೀಡಲಾದ ವಿವರಗಳ ಪ್ರಕಾರ, ವಿದ್ಯಾರ್ಥಿಯು ಜೂನ್ 21 ರಂದು ನಡೆದ ನೀಟ್ ಯುಜಿ 2026ರ ಮರುಪರೀಕ್ಷೆಗೆ (Re-examination) ಹಾಜರಾಗಿದ್ದ. ಪರೀಕ್ಷೆ ಮುಗಿದ ನಂತರ ಎನ್&zwnj;ಟಿಎ ಬಿಡುಗಡೆ ಮಾಡಿದ ತಾತ್ಕಾಲಿಕ ಮತ್ತು ಅಂತಿಮ ಕೀ ಉತ್ತರಗಳನ್ನು ತಾಳೆ ನೋಡಿದಾಗ, ತನಗೆ ಸುಮಾರು 620 ಅಂಕಗಳು ಬರಬಹುದು ಎಂದು ಅಂದಾಜಿಸಿದ್ದ. ಆದರೆ ಜುಲೈ 16 ರಂದು ಫಲಿತಾಂಶ ಪ್ರಕಟಗೊಂಡಾಗ ಎನ್&zwnj;ಟಿಎ ಪೋರ್ಟಲ್&zwnj;ನಲ್ಲಿ ಆರಂಭದಲ್ಲಿ 650 ಅಂಕಗಳು ಬಂದಿದ್ದವು.&lt;/p&gt;&lt;p&gt;ತದನಂತರ, ಪೋರ್ಟಲ್&zwnj;ನಿಂದ ಲಾಗ್ ಔಟ್ ಆಗಿ ಮತ್ತೊಮ್ಮೆ ಲಾಗ್ ಇನ್ ಮಾಡಿದಾಗ ಆತನ ಅಂಕಗಳು 500 ಕ್ಕೆ ಇಳಿದಿದ್ದವು. ಮರುದಿನ ಪೋರ್ಟಲ್ ಪರಿಶೀಲಿಸಿದಾಗ ಅಂಕಗಳು ಮತ್ತಷ್ಟು ಕುಸಿದು ಕೇವಲ 135 ಅಂಕಗಳಿಗೆ ಬಂದು ತಲುಪಿವೆ ಎಂದು ಅರ್ಜಿದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/neet-ug-2026-score-changed-thrice-candidate-approaches-delhi-high-court-san/articleshow-0glxl0x"/>
        </item>
        <item>
            <title><![CDATA[58 ವಿದ್ಯಾರ್ಥಿಗಳಿಗೆ 5 ಲಕ್ಷ ರು. ಸ್ಕಾಲರ್‌ಶಿಪ್ ವಿತರಣೆ; ಮಕ್ಕಳ ಕನಸಿಗೆ ಸಿಕ್ತು ಬಲ]]></title>
            <link>https://kannada.asianetnews.com/karnataka-districts/bantwal-rs-5-lakh-scholarships-for-58-students-in-bantwal-rotary-club-save-life-charitable-trust-bhadra-gas-agency-mrq/articleshow-2gmvuxf</link>
            <guid isPermaLink="true">https://kannada.asianetnews.com/karnataka-districts/bantwal-rs-5-lakh-scholarships-for-58-students-in-bantwal-rotary-club-save-life-charitable-trust-bhadra-gas-agency-mrq/articleshow-2gmvuxf</guid>
            <pubDate>Mon, 27 Jul 2026 20:36:13 +0530</pubDate>
            <description><![CDATA[&lt;p&gt;ರೋಟರಿ ಕ್ಲಬ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮತ್ತು ಭದ್ರಾ ಗ್ಯಾಸ್ ಏಜೆನ್ಸಿ ಸಹಯೋಗದಲ್ಲಿ 58 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ರೋಟರಿ ಕ್ಲಬ್&zwnj;ನ 58ನೇ ಹಾಗೂ ಭದ್ರಾ ಗ್ಯಾಸ್ ಏಜೆನ್ಸಿಯ 40ನೇ ವರ್ಷದ ಅಂಗವಾಗಿ ಒಟ್ಟು 5 ಲಕ್ಷ ರೂಪಾಯಿ ಮೊತ್ತದ ಸ್ಕಾಲರ್&zwnj;ಶಿಪ್ ನೀಡಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyj1dg0emvnd54wsbra5ev64,imgname-bantwal--1785164382222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಭದ್ರಾ ಗ್ಯಾಸ್ ಏಜೆನ್ಸಿ ಬಂಟ್ವಾಳ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಆಯ್ದ 58 ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್&zwnj;ಶಿಪ್ ವಿತರಣೆ ಕಾರ್ಯಕ್ರಮ ಭಾನುವಾರ ರೋಟರಿ ಸಭಾಂಗಣದಲ್ಲಿ ನಡೆಯಿತು.&lt;/p&gt;&lt;p&gt;ರೋಟರಿ ಕ್ಲಬ್ ಬಂಟ್ವಾಳದ 58ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಹಾಗೂ ಭದ್ರಾ ಗ್ಯಾಸ್ ಏಜೆನ್ಸಿ ಮಾಲೀಕ ಮಂಜುನಾಥ ಆಚಾರ್ಯ ಸಹಯೋಗ ನೀಡಿದರು. ಈ ಬಗ್ಗೆ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಮಾಹಿತಿ ನೀಡಿದರು.&lt;/p&gt;&lt;h2&gt;&lt;strong&gt;ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ&lt;/strong&gt;&lt;/h2&gt;&lt;p&gt;ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ವಿದ್ಯಾರ್ಥಿಗಳು ಹಿರಿಯರು, ಶಿಕ್ಷಕರು ಹಾಗೂ ಸೈನಿಕರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಭವಿಷ್ಯದಲ್ಲಿ ತಾವು ಪಡೆದ ಸಹಾಯಕ್ಕಿಂತ ಹತ್ತು ಪಟ್ಟು ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಂಫರ್ಟ್ ಝೋನ್&zwnj;ನಿಂದ ಹೊರಬಂದು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಜೀವನದ ಪ್ರತಿ ಕ್ಷಣವನ್ನು ಕಲಿಕೆಗೆ ಮೀಸಲಿಟ್ಟು ಗುರಿ ಸಾಧನೆಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಕ್ಕಳ ಅಡ್ಮೀಷನ್&zwnj; ಕ್ಯಾನ್ಸಲ್&zwnj; ಮಾಡಿದ ತಾಯಿಗೆ ರೀಫಂಡ್&zwnj; ನೀಡದ ಸ್ಕೂಲ್&zwnj;, ಭಾರೀ ದಂಡ ವಿಧಿಸಿದ ಕೋರ್ಟ್&zwnj;&lt;/strong&gt;&lt;/p&gt;&lt;h3&gt;&lt;strong&gt;5 ಲಕ್ಷ ರು. ಮೊತ್ತದ ಸ್ಕಾಲರ್&zwnj;ಶಿಪ್ ವಿತರಣೆ&lt;/strong&gt;&lt;/h3&gt;&lt;p&gt;ಭದ್ರಾ ಗ್ಯಾಸ್ ಏಜೆನ್ಸಿ ಮಾಲೀಕ ಹಾಗೂ ರೋಟರಿ ಕ್ಲಬ್&zwnj;ನ ಪೂರ್ವಾಧ್ಯಕ್ಷ ಮಂಜುನಾಥ ಆಚಾರ್ಯ ಮಾತನಾಡಿ, ಭದ್ರಾ ಗ್ಯಾಸ್ ಏಜೆನ್ಸಿಯ 40ನೇ ವರ್ಷದ ಅಂಗವಾಗಿ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಇಂಟರ್&zwj;ಯಾಕ್ಟ್ ಶಾಲೆಗಳ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಒಟ್ಟು 5 ಲಕ್ಷ ರು. ಮೊತ್ತದ ಸ್ಕಾಲರ್&zwnj;ಶಿಪ್ ವಿತರಿಸಲಾಗಿದೆ ಎಂದು ಹೇಳಿದರು.&lt;/p&gt;&lt;p&gt;ಮಧ್ವ ಆಚಾರ್ಯ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಕೃಷ್ಣ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್&zwnj;ನ ಭಾಗ್ಯಶ್ರೀ ಭಂಡಾರ್ಕರ್, ರೋಟರಿ ಕ್ಲಬ್ ಬಂಟ್ವಾಳ ಕಾರ್ಯದರ್ಶಿ ರವಿರಾಜ ಶೆಟ್ಟಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಐತಪ್ಪ ಪೂಜಾರಿ ವಂದಿಸಿದರು. ಸದಸ್ಯ ಅಹಮದ್ ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪರೀಕ್ಷಾ ಸುಧಾರಣೆಗೆ ಮೋದಿ ರಚಿಸಿದ ನೀಲೆಕಿಣಿ ನೇತೃತ್ವದ ಟಾಸ್ಕ್ ಫೋರ್ಸ್&zwnj;ನಲ್ಲಿ ಯಾರಿದ್ದಾರೆ?&lt;/strong&gt;&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bantwal-rs-5-lakh-scholarships-for-58-students-in-bantwal-rotary-club-save-life-charitable-trust-bhadra-gas-agency-mrq/articleshow-2gmvuxf"/>
        </item>
        <item>
            <title><![CDATA[School Holiday: ರಾಜ್ಯದಲ್ಲಿ ಭಾರೀ ಮಳೆ ಆರ್ಭಟ, ಈ ಜಿಲ್ಲೆಗಳ ಕೆಲವು ತಾಲೂಕುಗಳ ಶಾಲೆ-ಕಾಲೇಜುಗಳಿಗೆ ನಾಳೆ ರಜೆ!]]></title>
            <link>https://kannada.asianetnews.com/karnataka-districts/shivamogga-uttara-kannada-school-holiday-heavy-rain-august-3-2026/articleshow-340kxbd</link>
            <guid isPermaLink="true">https://kannada.asianetnews.com/karnataka-districts/shivamogga-uttara-kannada-school-holiday-heavy-rain-august-3-2026/articleshow-340kxbd</guid>
            <pubDate>Sun, 02 Aug 2026 21:42:36 +0530</pubDate>
            <description><![CDATA[ಕರ್ನಾಟಕದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳಲ್ಲಿ ಆಗಸ್ಟ್ 3ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭೂಕುಸಿತದ ಆತಂಕದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz1kz6q8q04x5gj0w58c6ngp,imgname-shivamogga-uttara-kannada-school-holiday-1785687153384.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ (Karnataka) ಮಲೆನಾಡು (Malnad) ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ (Heavy Rain) ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ (Students) ಸುರಕ್ಷತೆಯನ್ನು (Safety) ಗಮನದಲ್ಲಿಟ್ಟುಕೊಂಡು ಶಿವಮೊಗ್ಗ (Shivamogga) ಹಾಗೂ ಉತ್ತರ ಕನ್ನಡ (Uttara Kannada) ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಆಗಸ್ಟ್ 3ರಂದು (ಸೋಮವಾರ) ಶಾಲೆ-ಕಾಲೇಜುಗಳಿಗೆ (Schools &amp;amp; Colleges) ರಜೆ (Holiday) ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಸಾಗರ ತಾಲೂಕಿನ ಶಾಲೆ-ಕಾಲೇಜುಗಳಿಗೆ ರಜೆ&lt;/strong&gt;&lt;/h2&gt;&lt;p&gt;ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagar) ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ, ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ತಾಲೂಕು ಆಡಳಿತವು ರಜೆ ಘೋಷಿಸಿದೆ.&lt;/p&gt;&lt;p&gt;ಸಾಗರ ತಹಶೀಲ್ದಾರ್ (Tahsildar) ಡಾ. ಪ್ರತಿಭಾ (Dr. Prathibha) ಅವರು ಹೊರಡಿಸಿರುವ ಆದೇಶದಂತೆ ಎಲ್ಲಾ ಅಂಗನವಾಡಿ ಕೇಂದ್ರಗಳು (Anganwadi Centres), ಪ್ರಾಥಮಿಕ ಶಾಲೆಗಳು (Primary Schools), ಪ್ರೌಢಶಾಲೆಗಳು (High Schools), ಪದವಿ ಪೂರ್ವ ಕಾಲೇಜುಗಳು (PU Colleges), ಡಿಪ್ಲೊಮಾ ಕಾಲೇಜುಗಳು (Diploma Colleges) ಹಾಗೂ ಐಟಿಐ (ITI) ಕಾಲೇಜುಗಳಿಗೆ ಆಗಸ್ಟ್ 3ರಂದು ರಜೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ಉತ್ತರ ಕನ್ನಡ ಜಿಲ್ಲೆಯ ಎರಡು ತಾಲೂಕುಗಳಿಗೂ ರಜೆ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲೂ ಸುರಿಯುತ್ತಿರುವ ಭಾರೀ ಮಳೆ (Heavy Rain) ಹಿನ್ನೆಲೆ ಜಿಲ್ಲಾಡಳಿತ (District Administration) ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ (Deputy Commissioner) ಲಕ್ಷ್ಮೀ ಪ್ರಿಯಾ (Lakshmi Priya) ಅವರು ಹೊರಡಿಸಿರುವ ಆದೇಶದಂತೆ ದಾಂಡೇಲಿ (Dandeli) ಹಾಗೂ ಜೋಯಿಡಾ (Joida) ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು (Anganwadi Centres), ಪ್ರಾಥಮಿಕ ಶಾಲೆಗಳು (Primary Schools) ಮತ್ತು ಪ್ರೌಢಶಾಲೆಗಳಿಗೆ (High Schools) ಆಗಸ್ಟ್ 3ರಂದು ರಜೆ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಸುರಕ್ಷತೆಗೆ ಮೊದಲ ಆದ್ಯತೆ&lt;/strong&gt;&lt;/h2&gt;&lt;p&gt;ನಿರಂತರ ಮಳೆ (Continuous Rain), ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಹಾಗೂ ಗುಡ್ಡ ಪ್ರದೇಶಗಳಲ್ಲಿ (Hilly Areas) ಭೂಕುಸಿತದ (Landslide) ಆತಂಕ ಇರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪೋಷಕರು (Parents) ಹಾಗೂ ಸಾರ್ವಜನಿಕರು ಜಿಲ್ಲಾಡಳಿತ (District Administration) ಮತ್ತು ಹವಾಮಾನ ಇಲಾಖೆ (Weather Department) ನೀಡುವ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/shivamogga-uttara-kannada-school-holiday-heavy-rain-august-3-2026/articleshow-340kxbd"/>
        </item>
        <item>
            <title><![CDATA[ಇನ್ನು ಶಾಲೆಗಳು ಡೊನೆಷನ್ ಪಡೆದರೆ 10 ಪಟ್ಟು ದಂಡ! ಪ್ರವೇಶಕ್ಕೆ ಮುನ್ನ ಮಗು, ಪೋಷಕರ ಟೆಸ್ಟ್ ಮಾಡಿದ್ರೆ ₹25000!]]></title>
            <link>https://kannada.asianetnews.com/education/private-schools-barred-from-accepting-donations-education-commissioner-vikas-kishore-suralkar-issues-order-rav/articleshow-3l5kvym</link>
            <guid isPermaLink="true">https://kannada.asianetnews.com/education/private-schools-barred-from-accepting-donations-education-commissioner-vikas-kishore-suralkar-issues-order-rav/articleshow-3l5kvym</guid>
            <pubDate>Fri, 07 Aug 2026 05:36:21 +0530</pubDate>
            <description><![CDATA[&lt;p&gt;2025-26ನೇ ಸಾಲಿನ ದಾಖಲಾತಿ ಬಳಿಕ ಶುಲ್ಕ ವಿವರ ವೆಬ್&zwnj;ಸೈಟ್&zwnj;ನಲ್ಲಿ ಪ್ರಕಟಿಸುವಂತೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಡೊನೇಷನ್ ಪಡೆದರೆ ಶುಲ್ಕದ 10 ಪಟ್ಟು ದಂಡ ಹಾಗೂ ದಾಖಲಾತಿ ವೇಳೆ ಪೋಷಕರು ಅಥವಾ ಮಕ್ಕಳಿಗೆ ಪರೀಕ್ಷೆ ನಡೆಸಿದರೆ 25 ಸಾವಿರ ರು. ದಂಡ ವಿಧಿಸುವುದಾಗಿ ಎಚ್ಚರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmm9bahna16wfsz4esngcd7f,imgname-private-school-book-price-hike-class-5-english-book-1035-parents-protest-fee-regulation-ncert-vs-private-publishers-3-1774502390325.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.7): &lt;/strong&gt;ಖಾಸಗಿ ಶಾಲೆಗಳು 2025-26ನೇ ಸಾಲಿಗೆ ಮಕ್ಕಳ ದಾಖಲಾತಿ ಮತ್ತು ಶುಲ್ಕ ವಸೂಲಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಆ ಶಾಲೆಗಳು ತಾವು ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ಶಾಲಾ ವೆಬ್&zwnj;ಸೈಟ್&zwnj; ಹಾಗೂ ಇಲಾಖಾ ವೆಬ್&zwnj;ಸೈಟ್&zwnj;ನಲ್ಲಿ ಪ್ರಕಟಿಸಬೇಕೆಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.&lt;/p&gt;&lt;h2&gt;ಡೊನೇಷನ್ ಪಡೆದರೆ ಹತ್ತು ಪಟ್ಟು ದಂಡ!&lt;/h2&gt;&lt;p&gt;ಅಲ್ಲದೆ, ದಾಖಲಾತಿ ಸಮಯದಲ್ಲಿ ಡೊನೇಷನ್&zwnj; ಅಥವಾ ಕ್ಯಾಪಿಟೇಷನ್&zwnj; ಶುಲ್ಕ ಪಡೆದಿರುವುದು ಸಾಬೀತಾದರೆ ಆ ಶುಲ್ಕದ 10 ಪಟ್ಟಿನವರೆಗೆ ದಂಡ ವಿಧಿಸಲು ಸೂಚಿಸಿದೆ. ಅದೇ ರೀತಿ ದಾಖಲಾತಿಗೂ ಮುನ್ನ ಯಾವುದೇ ಮಗು, ಪೋಷಕರನ್ನು ಪರೀಕ್ಷೆಗೆ ಒಳಪಡಿಸಿರುವುದು ಕಂಡು ಬಂದರೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ 25 ಸಾವಿರ ರು. ದಂಡ ವಿಧಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್&zwnj; ಕಿಶೋರ್&zwnj; ಸುರಳ್ಕರ್&zwnj; ಸುತ್ತೋಲೆ ಹೊರಡಿಸಿದ್ದಾರೆ.&lt;/p&gt;&lt;h3&gt;ಶಾಲೆಗೆ ದಾಖಲಾಗುವ ಮಗು ಅಥವಾ ಪೋಷಕರ ಟೆಸ್ಟ್ ಮಾಡಿದ್ರೆ ಭಾರೀ ದಂಡ!&lt;/h3&gt;&lt;p&gt;ಇಲಾಖಾ ಕಾಯ್ದೆ ಹಾಗೂ ನಿಯಮಗಳ ಪ್ರಕಾರ, ಖಾಸಗಿ ಶಾಲೆಗಳು ವಿದ್ಯಾರ್ಥಿಗಳು, ಪೋಷಕರಿಂದ ಯಾವುದೇ ರೀತಿಯ ಡೊನೇಷನ್&zwnj; ಅಥವಾ ಕ್ಯಾಪಿಟೇಷನ್&zwnj; ಶುಲ್ಕ ಪಡೆಯುವುದು ಕಾನೂನು ಬಾಹಿರ. ಅದೇ ರೀತಿ ಯಾವುದೇ ಮಗುವನ್ನು ದಾಖಲಾತಿ ಮಾಡುವಾಗ ಮಕ್ಕಳ ಬುದ್ಧಿವಂತಿಕೆ ಅಥವಾ ಅವರ ಪೋಷಕರ ವಿದ್ಯಾರ್ಹತೆ, ಇತರೆ ವಿಚಾರಗಳ ಪರಿಶೀಲನೆ ಮಾಡುವುದು, ಪರೀಕ್ಷೆಗೆ ಒಳಪಡಿಸುವಂತಹ ಕೆಲಸ ಮಾಡುವಂತಿಲ್ಲ. ದಾಖಲಾತಿ ವೇಳೆ ಮಕ್ಕಳು ಮತ್ತು ಪೋಷಕರಿಗೆ ಯಾವುದೇ ರೀತಿ ಪರೀಕ್ಷೆ ನಡೆಸುವಂತಿಲ್ಲ. ನಿಯಮ ಮೀರಿದರೆ ಮೊದಲ ಬಾರಿಗೆ ತಪ್ಪಿಗೆ 25 ಸಾವಿರ ರು. ದಂಡ, ನಂತರ ಪ್ರತಿ ಪುನರಾವರ್ತಿತ ತಪ್ಪಿಗೆ ತಲಾ 50 ಸಾವಿರ ರು.ನಂತೆ ದಂಡ ವಸೂಲಿ ಮಾಡಲು ಆಯುಕ್ತರು ಸೂಚಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/private-schools-barred-from-accepting-donations-education-commissioner-vikas-kishore-suralkar-issues-order-rav/articleshow-3l5kvym"/>
        </item>
        <item>
            <title><![CDATA[Student Protest: ಜಾರ್ಖಂಡ್‌ನಲ್ಲಿಯೂ ಗೆದ್ದ ಸ್ಟೂಡೆಂಟ್‌ ಪ್ರೊಟೆಸ್ಟ್‌; ಸರ್ಕಾರದ ತಲೆಬಾಗಿಸಿದ ಬೇಡಿಕೆಗಳು ಯಾವುವು?  ಇದೆಯಾ ಕರ್ನಾಟಕಕ್ಕೂ ಈ ಮಾದರಿ ಅಗತ್ಯತೆ?]]></title>
            <link>https://kannada.asianetnews.com/india-news/jharkhand-student-protest-demands-karnataka-model-bmk/articleshow-54qx28y</link>
            <guid isPermaLink="true">https://kannada.asianetnews.com/india-news/jharkhand-student-protest-demands-karnataka-model-bmk/articleshow-54qx28y</guid>
            <pubDate>Sun, 09 Aug 2026 16:25:27 +0530</pubDate>
            <description><![CDATA[&lt;p&gt;ಕಳೆದ 16 ದಿನಗಳಿಂದ ನಡೆಯುತ್ತಿರುವ ಜೆಪಿಎಸ್&zwnj;ಸಿ-ಜೆಎಸ್&zwnj;ಎಸ್&zwnj;ಸಿ ಪರೀಕ್ಷಾ ಅಕ್ರಮಗಳ ವಿರುದ್ಧದ ವಿದ್ಯಾರ್ಥಿ ಪ್ರತಿಭಟನೆ ಮಹತ್ವದ ಘಟ್ಟ ತಲುಪಿದೆ. ಮೂಲಗಳ ಪ್ರಕಾರ, ಪರೀಕ್ಷೆ ರದ್ದು, ಸಿಐಡಿ ತನಿಖೆ ಸೇರಿದಂತೆ ಹಲವು ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzk2jvz859ey42n3stqw5g24,imgname-student-protest-jharkhand-1786272903144.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ 16 ದಿನಗಳಿಂದ ನಡೆಯುತ್ತಿರುವ ಜೆಪಿಎಸ್&zwnj;ಸಿ-ಜೆಎಸ್&zwnj;ಎಸ್&zwnj;ಸಿ ಪರೀಕ್ಷೆಗಳ ಕುರಿತು ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಮಧ್ಯೆ, ಮಹತ್ವದ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಮೂಲಗಳ ಪ್ರಕಾರ, ಸರ್ಕಾರ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪ್ರಮುಖ ಬೇಡಿಕೆಗಳ ಕುರಿತು ಒಪ್ಪಂದಕ್ಕೆ ಬಂದಿದ್ದಾರೆ. ಮೊದಲ ಸಭೆಯ ನಂತರ, ಸರ್ಕಾರವು ಹಲವಾರು ಬೇಡಿಕೆಗಳ ಬಗ್ಗೆ ಸಕಾರಾತ್ಮಕ ನಿಲುವನ್ನು ವ್ಯಕ್ತಪಡಿಸಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕಕ್ಕೂ ಇದೇ ಮಾದರಿ ಬೇಕಿದೆಯಾ? ಎನ್ನುವ ಮಾತು ಸೃಷ್ಟಿಯಾಗಿವೆ. ಅಲ್ಲದೇ ಈ ನಿರ್ಧಾರಗಳ ಔಪಚಾರಿಕ ಘೋಷಣೆ ಇನ್ನೂ ಬಾಕಿ ಇದೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ನೋಡೋಣ ಬನ್ನಿ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳ ಪ್ರಾಥಿಮಿಕ ಬೇಡಿಕೆ ಏನು?&lt;/strong&gt;&lt;/h2&gt;&lt;p&gt;JPSC ಯ 14 ನೇ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸುವುದು ವಿದ್ಯಾರ್ಥಿಗಳ ಪ್ರಾಥಮಿಕ ಬೇಡಿಕೆಯಾಗಿತ್ತು ಎಂದು ಮೂಲಗಳು ತಿಳಿಸಿವೆ . ಸರ್ಕಾರ ಈ ಬೇಡಿಕೆಗೆ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಸ್ವತಂತ್ರ ತನಿಖೆಗೆ ಒತ್ತಾಯಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;90 ದಿನಗಳಲ್ಲಿ ಸಿಐಡಿ ತನಿಖೆಯ ಭರವಸೆ!&lt;/strong&gt;&lt;/h3&gt;&lt;p&gt;ಪರೀಕ್ಷೆಗೆ ಸಂಬಂಧಿಸಿದ ಹಣಕಾಸಿನ ಅಕ್ರಮಗಳ ತನಿಖೆಯನ್ನು ಇಡಿಯಿಂದ ನಡೆಸುವಂತೆ ಮಾಡುವ ಬಗ್ಗೆ ಸರ್ಕಾರ ಮತ್ತು ವಿದ್ಯಾರ್ಥಿಗಳು ಒಪ್ಪಂದಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಈ ವಿಷಯದ ತನಿಖೆಗೆ ಸಂಬಂಧಿಸಿದಂತೆ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳುವುದಾಗಿ ಸಿಐಡಿಗೆ ಭರವಸೆ ನೀಡಲಾಗಿದೆ. ಮೂಲಗಳ ಪ್ರಕಾರ, ಸಿಐಡಿ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಪುರಾವೆಗಳನ್ನು ವಿದ್ಯಾರ್ಥಿಗಳು ಸರ್ಕಾರಕ್ಕೆ ಒದಗಿಸಿದ್ದಾರೆ. ಈಗ ಈ ದಾಖಲೆಗಳ ಆಧಾರದ ಮೇಲೆ ತನಿಖೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.&lt;/p&gt;&lt;h3&gt;&lt;strong&gt;ಜೆಪಿಎಸ್&zwnj;ಸಿ ಸುಧಾರಿಸಲು ವಿಶೇಷ ಸಮಿತಿ ರಚನೆ!&lt;/strong&gt;&lt;/h3&gt;&lt;p&gt;ವಿದ್ಯಾರ್ಥಿಗಳ ಬೇಡಿಕೆಗಳು 14 ನೇ ಜೆಪಿಎಸ್&zwnj;ಸಿ ಪರೀಕ್ಷೆಗೆ ಮಾತ್ರ ಸೀಮಿತವಾಗಿಲ್ಲ. ಅವರು ಇಡೀ ನೇಮಕಾತಿ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಜೆಪಿಎಸ್&zwnj;ಸಿ ಸುಧಾರಣೆಗಾಗಿ ವಿಶೇಷ ಸಮಿತಿ ರಚಿಸಲು ಸಿದ್ಧತೆ ನಡೆಸುತ್ತಿದೆ. ಈ ಸಮಿತಿಯು ಶಿಕ್ಷಣತಜ್ಞರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳನ್ನು ಒಳಗೊಂಡಿರಬಹುದು. ಪರೀಕ್ಷಾ ವ್ಯವಸ್ಥೆ, ಪಾರದರ್ಶಕತೆ ಮತ್ತು ನೇಮಕಾತಿ ಪ್ರಕ್ರಿಯೆ ಸುಧಾರಿಸುವ ಕುರಿತು ಸಮಿತಿಯು ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತದೆ. ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಬಾರದು ಮತ್ತು ಅಭ್ಯರ್ಥಿಗಳ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಾರೆ.&lt;/p&gt;&lt;h3&gt;&lt;strong&gt;ಟಿಡಿಪಿಎಲ್ ಪರೀಕ್ಷೆ ತನಿಖೆ ಮಾಡಲಾಗುತ್ತದೆಯೇ?&lt;/strong&gt;&lt;/h3&gt;&lt;p&gt;ಮೂಲಗಳ ಪ್ರಕಾರ, ಟಿಡಿಪಿಎಲ್ ಸಂಸ್ಥೆ ನಡೆಸುವ ಎಲ್ಲಾ ಪರೀಕ್ಷೆಗಳನ್ನು ತನಿಖೆ ಮಾಡಲು ಸರ್ಕಾರ ಸಿದ್ಧವಾಗಿದೆ. ಇದರರ್ಥ ತನಿಖೆ ವ್ಯಾಪ್ತಿಯು 14 ನೇ ಜೆಪಿಎಸ್&zwnj;ಸಿ ಪರೀಕ್ಷೆಗೆ ಸೀಮಿತವಾಗಿರುವುದಿಲ್ಲ. ಏಜೆನ್ಸಿ ನಡೆಸಿದ ಹಿಂದಿನ ಪರೀಕ್ಷೆಗಳಲ್ಲಿ ಕಂಡುಬಂದ ಯಾವುದೇ ದೂರುಗಳು ಅಥವಾ ಅಕ್ರಮಗಳನ್ನು ಸಹ ತನಿಖೆ ಮಾಡಬಹುದು.&lt;/p&gt;&lt;h3&gt;&lt;strong&gt;ಔಪಚಾರಿಕ ಘೋಷಣೆಯಷ್ಟೇ ಬಾಕಿ!&lt;/strong&gt;&lt;/h3&gt;&lt;p&gt;ವಿದ್ಯಾರ್ಥಿಗಳು ಮತ್ತು ಸರ್ಕಾರದ ನಡುವೆ JPSC-JSSC ಸಮಸ್ಯೆಗೆ ಸಂಬಂಧಿಸಿದಂತೆ ಸರಣಿ ಸಭೆಗಳು ನಡೆದಿವೆ. ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳು ಮತ್ತು ಪುರಾವೆಗಳನ್ನು ಸರ್ಕಾರಕ್ಕೆ ಮಂಡಿಸಿದ್ದಾರೆ. ಹಲವಾರು ಸುತ್ತಿನ ಮಾತುಕತೆಯ ನಂತರ, ಬೇಡಿಕೆಗಳ ಕುರಿತು ಒಪ್ಪಂದಕ್ಕೆ ಬರಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಅದರಂತೆ 14 ನೇ JPSC ಪರೀಕ್ಷೆಯನ್ನು ರದ್ದುಗೊಳಿಸುವುದು, ED ತನಿಖೆ ಮತ್ತು ಸಮಿತಿಯ ರಚನೆಯಂತಹ ನಿರ್ಧಾರಗಳ ಕುರಿತು ಅಧಿಕೃತ ಪ್ರಕಟಣೆಗಳು ಇನ್ನೂ ಬಾಕಿ ಉಳಿದಿವೆ. ಪರಿಣಾಮವಾಗಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಈಗ ಔಪಚಾರಿಕ ಸರ್ಕಾರಿ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/india-news/jharkhand-student-protest-demands-karnataka-model-bmk/articleshow-54qx28y"/>
        </item>
        <item>
            <title><![CDATA[Flipkar: 1 ಲಕ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಫ್ಲಿಪ್‌ ಕಾರ್ಟ್, ಅಕ್ಷಯ ಪಾತ್ರೆ ಬೆಳಗಿನ ಉಪಾಹಾರ ವಿತರಣೆ]]></title>
            <link>https://kannada.asianetnews.com/education/flipkart-and-akshaya-patra-bring-morning-nutrition-to-over-1-lakh-government-school-children-in-karnataka-rav/articleshow-7ogrcmp</link>
            <guid isPermaLink="true">https://kannada.asianetnews.com/education/flipkart-and-akshaya-patra-bring-morning-nutrition-to-over-1-lakh-government-school-children-in-karnataka-rav/articleshow-7ogrcmp</guid>
            <pubDate>Fri, 07 Aug 2026 08:06:04 +0530</pubDate>
            <description><![CDATA[&lt;p&gt;ಫ್ಲಿಪ್&zwnj;ಕಾರ್ಟ್ ಫೌಂಡೇಶನ್ ಮತ್ತು ದಿ ಅಕ್ಷಯ ಪಾತ್ರ ಫೌಂಡೇಶನ್ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸರ್ಕಾರಿ ಶಾಲೆಗಳ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬೆಳಗಿನ ಉಪಾಹಾರವನ್ನು ವಿತರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzd0q69e5816zv2tbncn9xsd,imgname-----------------------2026-08-07t075646.762-1786069621038.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7) &lt;/strong&gt;ಫ್ಲಿಪ್&zwnj;ಕಾರ್ಟ್ ಫೌಂಡೇಶನ್ ಮತ್ತು ದಿ ಅಕ್ಷಯ ಪಾತ್ರ ಫೌಂಡೇಶನ್ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸರ್ಕಾರಿ ಶಾಲೆಗಳ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬೆಳಗಿನ ಉಪಾಹಾರವನ್ನು ವಿತರಿಸಲಾಗಿದೆ.&lt;/p&gt;&lt;p&gt;&amp;nbsp;ಅಕ್ಷಯ ಪಾತ್ರ ಸಂಸ್ಥೆಅಕ್ಷಯ ಪಾತ್ರ ಸಂಸ್ಥೆಯ ಮಾರ್ನಿಂಗ್ ನ್ಯೂಟ್ರಿಷನ್ ಪ್ರೋಗ್ರಾಮ್ ಅಡಿಯಲ್ಲಿ ಜಾರಿಗೊಳಿಸಲಾದ ಈ ಯೋಜನೆಯು, ಭಾರತ ಸರ್ಕಾರದ ಪಿಎಂ ಪೋಷಣ್ ಕಾರ್ಯಕ್ರಮಕ್ಕೆ ಪೂರಕವಾಗಿ ನಡೆಯುತ್ತಿದೆ. 21 ಲಕ್ಷಕ್ಕೂ ಹೆಚ್ಚು ಬಾರಿ ಪೌಷ್ಟಿಕಾಂಶಯುಕ್ತ ಉಪಹಾರ ವಿತರಿಸುವ ಮೂಲಕ ಮಕ್ಕಳು ಉತ್ತಮ ಪೌಷ್ಟಿಕಾಂಶ, ಶಕ್ತಿ ಮತ್ತು ಏಕಾಗ್ರತೆಯೊಂದಿಗೆ ತಮ್ಮ ಶಾಲಾ ದಿನವನ್ನು ಪ್ರಾರಂಭಿಸಲು ಈ ಯೋಜನೆ ಸಹಾಯ ಮಾಡಿದೆ.&lt;/p&gt;&lt;p&gt;ಈ ಕುರಿತು ಫ್ಲಿಪ್&zwnj;ಕಾರ್ಟ್ ಗ್ರೂಪ್&zwnj;ನ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್ ಪ್ರತಿಕ್ರಿಯಿಸಿ, ಧೀರ್ಘ ಅನುಭವ ಮತ್ತು ಮಕ್ಕಳ ಜೀವನವನ್ನು ಉತ್ತಮಗೊಳಿಸುವ ಬದ್ಧತೆಯನ್ನು ಹೊಂದಿರುವ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದರಿಂದ ಮಾತ್ರ ಸುಸ್ಥಿರ ಬದಲಾವಣೆ ಸಾಧ್ಯ ಎಂಬ ನಮ್ಮ ನಂಬಿಕೆಗೆ ಈ ಸಹಯೋಗವೇ ಸಾಕ್ಷಿ ಎಂದಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/flipkart-and-akshaya-patra-bring-morning-nutrition-to-over-1-lakh-government-school-children-in-karnataka-rav/articleshow-7ogrcmp"/>
        </item>
        <item>
            <title><![CDATA[ಭಾರತೀಯ ಶಿಕ್ಷಣ ಕ್ಷೇತ್ರದ ‘ದಾದಾ’,  ಮಾಜಿ ರಾಜ್ಯಪಾಲ, ಪದ್ಮಶ್ರೀ ಡಾ. ಡಿ.ವೈ. ಪಾಟೀಲ್ ನಿಧನ!]]></title>
            <link>https://kannada.asianetnews.com/india-news/dy-patil-passes-away-former-governor-and-educationist-padmashree-dr-d-y-patil-dies-in-kolhapur-gdp/articleshow-8spu5lm</link>
            <guid isPermaLink="true">https://kannada.asianetnews.com/india-news/dy-patil-passes-away-former-governor-and-educationist-padmashree-dr-d-y-patil-dies-in-kolhapur-gdp/articleshow-8spu5lm</guid>
            <pubDate>Tue, 04 Aug 2026 13:20:25 +0530</pubDate>
            <description><![CDATA[ಪದ್ಮಶ್ರೀ ಪುರಸ್ಕೃತ, ಬಿಹಾರ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಡಾ. ಡಿ.ವೈ. ಪಾಟೀಲ್ (91) ಅವರು ಕೊಲ್ಲಾಪುರದಲ್ಲಿ ನಿಧನರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಅವರು, 182ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದರು. ಅವರ ಅಗಲಿಕೆಯು ಶೈಕ್ಷಣಿಕ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5vrtjvdzzh4bx4raxx0w5s,imgname-dy-patil--1--1785829550682.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: &lt;/strong&gt;ದೇಶದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಹಾನ್ ನಾಯಕ, ಬಿಹಾರ, ತ್ರಿಪುರ ಹಾಗೂ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ಜ್ಞಾನದೇವ್ ಯಶವಂತರಾವ್ (ಡಿ.ವೈ.) ಪಾಟೀಲ್ (91) ಅವರು ವಯೋಸಹಜ ಅನಾರೋಗ್ಯದಿಂದ ಕೊಲ್ಲಾಪುರದ ಕಸ್ಬಾ ಬಾವ್ಡಾದಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅಭಿಮಾನಿಗಳು ಹಾಗೂ ಶಿಕ್ಷಣ ಪ್ರೇಮಿಗಳಿಂದ ಪ್ರೀತಿಯಿಂದ &quot;ದಾದಾ&quot; ಎಂದೇ ಕರೆಯಲ್ಪಡುತ್ತಿದ್ದ ಡಾ. ಪಾಟೀಲ್ ಅವರ ಅಗಲಿಕೆಯು ಭಾರತೀಯ ಶೈಕ್ಷಣಿಕ ಮತ್ತು ಸಾರ್ವಜನಿಕ ರಂಗದ ಒಂದು ಸುವರ್ಣ ಯುಗದ ಅಂತ್ಯವನ್ನು ಸೂಚಿಸಿದೆ.&lt;/p&gt;&lt;h2&gt;ಅಜ್ಜನ ಅಗಲಿಗೆ ತಿಳಿಸಿದ ಮೊಮ್ಮಕ್ಕಳು&lt;/h2&gt;&lt;p&gt;ಮಾಜಿ ಕಾಂಗ್ರೆಸ್ ನಾಯಕರಾಗಿದ್ದ ಡಾ. ಡಿ.ವೈ. ಪಾಟೀಲ್ ಅವರು ಪುತ್ರರಾದ ಕಾಂಗ್ರೆಸ್ ಎಂಎಲ್&zwnj;ಸಿ ಸತೇಜ್ ಪಾಟೀಲ್, ಸಂಜಯ್ ಪಾಟೀಲ್, ಅಜಿಂಕ್ಯ ಪಾಟೀಲ್ ಹಾಗೂ ಪುತ್ರಿ ಡಾ. ನಂದಿತಾ ಪಾಲ್ಶೆಟ್ಕರ್ ಸೇರಿದಂತೆ ಅಪಾರ ಬಂಧು-ಬಳಗ ಮತ್ತು ಲಕ್ಷಾಂತರ ವಿದ್ಯಾರ್ಥಿಗಳನ್ನು ಅಗಲಿದ್ದಾರೆ. ಅಜ್ಜನ ಅಗಲಿಕೆಯ ಕುರಿತು ತೀವ್ರ ಶೋಕ ವ್ಯಕ್ತಪಡಿಸಿರುವ ಡಿ.ವೈ. ಪಾಟೀಲ್ ಪಿಂಪ್ರಿ ಸಂಸ್ಥೆಯ ಪ್ರೊ-ವೈಸ್ ಚಾನ್ಸೆಲರ್ ಸ್ಮಿತಾ ಜಾಧವ್, &quot;ನಮ್ಮ ಪ್ರೀತಿಯ ಸಂಸ್ಥಾಪಕರು, ಗೌರವಾನ್ವಿತ ಡಾ. ಡಿ.ವೈ. ಪಾಟೀಲ್ ಸರ್ ಅವರ ದುಃಖಕರ ನಿಧನದ ಸುದ್ದಿಯನ್ನು ತೀವ್ರ ಭಾರವಾದ ಹೃದಯದಿಂದ ತಿಳಿಸುತ್ತಿದ್ದೇನೆ. ಅವರ ದೂರದೃಷ್ಟಿಯ ನಾಯಕತ್ವ, ಶಿಕ್ಷಣದ ಬಗೆಗಿನ ಅಚಲ ಬದ್ಧತೆ ಮತ್ತು ಅಸಾಧಾರಣ ಪರಂಪರೆಯು ಅಸಂಖ್ಯಾತ ಜನರ ಜೀವನ ಹಾಗೂ ಸಂಸ್ಥೆಗಳನ್ನು ರೂಪಿಸಿದೆ. ಅವರ ನಿಧನವು ಇಡೀ ಡಿ.ವೈ. ಪಾಟೀಲ್ ಸಮೂಹ ಸಂಸ್ಥೆಗಳ ಕುಟುಂಬಕ್ಕೆ ತುಂಬಲಾರದ ದೊಡ್ಡ ನಷ್ಟವಾಗಿದೆ ಎಂದಿದ್ದಾರೆ&lt;/p&gt;&lt;h2&gt;ಶಿಕ್ಷಣ ರಂಗದ ಅಭೂತಪೂರ್ವ ಸಾಮ್ರಾಜ್ಯ&lt;/h2&gt;&lt;p&gt;ಅಕ್ಟೋಬರ್ 22, 1935 ರಂದು ಜನಿಸಿದ ಡಾ. ಪಾಟೀಲ್ ಅವರು ಶೈಕ್ಷಣಿಕ ಅವಕಾಶಗಳ ವಿಸ್ತರಣೆ ಮತ್ತು ಸಾರ್ವಜನಿಕ ಸೇವೆಗೆ ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಿದ್ದರು.&lt;/p&gt;&lt;h2&gt;182ಕ್ಕೂ ಹೆಚ್ಚು ಸಂಸ್ಥೆಗಳು ವೈವಿಧ್ಯಮಯ ಶಿಕ್ಷಣ&lt;/h2&gt;&lt;p&gt;ತಮ್ಮ ಹೆಮ್ಮೆಯ 'ಡಿ.ವೈ. ಪಾಟೀಲ್ ಗ್ರೂಪ್' ಮೂಲಕ ದೇಶದ ಅತಿ ದೊಡ್ಡ ಖಾಸಗಿ ಶಿಕ್ಷಣ ಜಾಲಗಳಲ್ಲಿ ಒಂದನ್ನು ಅವರು ಕಟ್ಟಿಬೆಳೆಸಿದರು. ವೈದ್ಯಕೀಯ, ಎಂಜಿನಿಯರಿಂಗ್, ಮ್ಯಾನೇಜ್&zwnj;ಮೆಂಟ್, ಕೃಷಿ, ಅಂತರರಾಷ್ಟ್ರೀಯ ಶಾಲೆಗಳು ಸೇರಿದಂತೆ 182 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಹಾಗೂ 7ಡೀಮ್ಡ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ, ವೃತ್ತಿಪರ ಶಿಕ್ಷಣವು ಎಲ್ಲರಿಗೂ ಸಿಗುವಂತೆ ಮಾಡಿದರು.&lt;/p&gt;&lt;h2&gt;ವೈದ್ಯಕೀಯ ಜೊತೆಗೆ ತ್ರಿಪುರ, ಬಿಹಾರ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲ&lt;/h2&gt;&lt;p&gt;ಉನ್ನತ ಶಿಕ್ಷಣ ಮಾತ್ರವಲ್ಲದೆ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ಸಿಗುವಂತೆ ಮಾಡಲು ಹಲವು ಬಹು-ವಿಶೇಷ (Multi-speciality) ಆಸ್ಪತ್ರೆಗಳನ್ನು ನಿರ್ಮಿಸಿದರು. ಶಿಕ್ಷಣ ಕ್ಷೇತ್ರದ ಜೊತೆಗೆ ಡಾ. ಪಾಟೀಲ್ ಅವರು ರಾಜಕೀಯ ಹಾಗೂ ಆಡಳಿತ ರಂಗದಲ್ಲೂ ತಮ್ಮದೇ ಆದ ವಿಶಿಷ್ಟ ಮುದ್ರೆಯೊತ್ತಿದ್ದರು. ಆರಂಭದಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಶಾಸಕರಾಗಿ ಆಯ್ಕೆಯಾಗಿ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗಿದ್ದರು.&lt;/p&gt;&lt;p&gt;ಆಡಳಿತಾತ್ಮಕ ನಾಯಕತ್ವ ಮತ್ತು ಸಾರ್ವಜನಿಕರೊಂದಿಗಿನ ನಿಕಟ ಬಾಂಧವ್ಯಕ್ಕಾಗಿ ಗುರುತಿಸಿಕೊಂಡಿದ್ದ ಅವರನ್ನು ಭಾರತ ಸರ್ಕಾರವು ತ್ರಿಪುರ, ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ರಾಜಪಾಲರನ್ನಾಗಿ ನೇಮಕ ಮಾಡಿತ್ತು.&lt;/p&gt;&lt;p&gt;ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಗೌರವಿಸಿ ಭಾರತ ಸರ್ಕಾರವು 1991 ರಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಶ್ರೀ' ನೀಡಿ ಗೌರವಿಸಿತು. ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ವೃತ್ತಿಪರರನ್ನು, ವೈದ್ಯರನ್ನು ಹಾಗೂ ಎಂಜಿನಿಯರ್&zwnj;ಗಳನ್ನು ದೇಶಕ್ಕೆ ನೀಡಿದ ಸಂಸ್ಥೆಗಳನ್ನು ಸ್ಥಾಪಿಸಿದ ಡಾ. ಡಿ.ವೈ. ಪಾಟೀಲ್ ಅವರ ನಿಧನಕ್ಕೆ ದೇಶದ ರಾಜಕೀಯ ಧುರೀಣರು, ಶಿಕ್ಷಣ ತಜ್ಞರು ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/dy-patil-passes-away-former-governor-and-educationist-padmashree-dr-d-y-patil-dies-in-kolhapur-gdp/articleshow-8spu5lm"/>
        </item>
        <item>
            <title><![CDATA[ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಂದೆ ಆಸ್ತಿ ತನಿಖೆಗೆ ಆರ್‌ಟಿಐ ಕಾರ್ಯಕರ್ತ ದೂರು]]></title>
            <link>https://kannada.asianetnews.com/india-news/how-did-abhijeet-dipkes-father-fund-us-education-rti-activist-seeks-probe-suc/articleshow-drq9rfh</link>
            <guid isPermaLink="true">https://kannada.asianetnews.com/india-news/how-did-abhijeet-dipkes-father-fund-us-education-rti-activist-seeks-probe-suc/articleshow-drq9rfh</guid>
            <pubDate>Sun, 02 Aug 2026 22:43:18 +0530</pubDate>
            <description><![CDATA[&lt;p&gt;ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ಹಾಗೂ ಆದಾಯ ಮೂಲಗಳ ತನಿಖೆಗೆ ಆರ್&zwnj;ಟಿಐ ಕಾರ್ಯಕರ್ತ ದೂರು ನೀಡಿದ್ದು ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyp50hd6g5pjxjmbztnbsvc7,imgname-fotojet---2026-07-29t104912.406-1785302369698.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರದದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ದೇಶಾದ್ಯಂತ ಜೆನ್&zwnj;ಝಿ ಪ್ರತಿಭಟನೆ ಸಂಘಟಿಸಿ ಯಶಸ್ವಿಯಾಗಿರುವ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಸಂಕಷ್ಟ ಶುರುವಾಗಿದೆ. ಅಭಿಜಿತ್ ದೀಪ್ಕೆ ತಂದೆಯ ಆಸ್ತಿ ಹಾಗೂ ಆದಾಯ ಮೂಲಗಳ ತನಿಖೆಗೆ ಆರ್&zwnj;ಟಿಐ ಕಾರ್ಯಕರ್ತ ಅಮಿತ್ ತಿವಾರಿ ದೂರು ನೀಡಿದ್ದಾರೆ. ಅಭಿಜೀತ್ ದೀಪ್ಕೆ ಅವರ ತಂದೆ ಭಗವಾನ್&zwnj;ರಾವ್ ದೀಪ್ಕೆ ಅವರ ಆರ್ಥಿಕ ಮೂಲಗಳ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ದೂರು ನೀಡಿದ್ದಾರೆ. ಮಹಾರಾಷ್ಟ್ರಾ ಕೈಗಾರಿಕಾ ಅಭಿವೃದ್ಧಿ ನಿಗದಮ ನಿವೃತ್ತ ಎಂಜಿನೀಯರ್ ಮಗ ಅಭಿಜಿತ್ ದೀಪ್ಕೆಯನ್ನು ಅಮೆರಿಕಗೆ ಕಳುಹಿಸಿ ಕೋಟ್ಯಾಂತರ ರೂಪಾಯಿ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಲು ಹೇಗೆ ಸಾಧ್ಯವಾಯಿತು ಎಂದು ಆರ್&zwnj;ಟಿಐ ಕಾರ್ಯಕರ್ತ ಪ್ರಶ್ನಿಸಿದ್ದಾರೆ.&amp;nbsp;&lt;/p&gt;&lt;p&gt;ಅಮಿತ್ ತಿವಾರಿ ದೂರು ಇಷ್ಟಕ್ಕೆ ಮುಗಿದಿಲ್ಲ, ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ನೋಂದಾಯಿತ ರಾಜಕೀಯ ಪಕ್ಷವಲ್ಲ. ಆದರೆ ರಾಜಕೀಯ ಪಕ್ಷದ ಹೆಸರಿನಲ್ಲೇ ಕಾರ್ಯಾಚರಣೆ ನಡೆಸುತ್ತಿದೆ. ಇಷ್ಟೇ ಅಲ್ಲ ಫಂಡಿಂಗ್ ಸ್ವೀಕರಿಸುತ್ತಿದೆ. ಇದು ಕಾನೂನುಬಾಹಿರವಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ 1951 ರ ವಿಭಾಗ 29A (Section 29A of RPA, 1951) ಅಡಿಯಲ್ಲಿ ಸಿಜೆಪಿ ನೋಂದಣಿಯಾಗಿದೆಯೇ ಎಂಬುದನ್ನು ಚುನಾವಣಾ ಆಯೋಗ ತಕ್ಷಣವೇ ಪರಿಶೀಲಿಸಬೇಕು ಎಂದು ಅಮಿತ್ ತಿವಾರಿ ಆಗ್ರಹಿಸಿದ್ದಾರೆ. ನೋಂದಣಿ ಆಗದಿದ್ದರೆ ಕೋಟಿ ಕೋಟಿ ರೂಪಾಯಿ ಹಣ ಸಂಗ್ರಹದ ವಿರುದ್ದ ಕಾನೂನು ಕ್ರಮ ಜರುಗಿಸಲು ದೂರಿನಲ್ಲಿ ಆಗ್ರಹಿಸಿದ್ದಾರೆ.&lt;/p&gt;&lt;h2&gt;ವಿದೇಶಿ ಫಂಡಿಂಗ್ ಕೋಲಾಹಲ&lt;/h2&gt;&lt;p&gt;ಈ ಪ್ರತಿಭಟನೆಗೆ ವಿದೇಶಿ ಫಂಡ್​ಗಳು ಬರುತ್ತಿವೆ ಎನ್ನುವ ಗಂಭೀರ ಆರೋಪ ಇದ್ದ ಹಿನ್ನೆಲೆಯಲ್ಲಿ, ಅಭಿಜೀತ್​ ದೀಪ್ಕೆ, ಹೌದು ನನಗೆ ವಿದೇಶಿ ಫಂಡ್​ ಬರ್ತಿರೋದು ನಿಜ. ಹಾಗಿದ್ರೆ ಪ್ರೂವ್​ ಮಾಡಿ. ಒಂದು ವೇಳೆ ಫಂಡಿಂಗ್​ ತೆಗೆದುಕೊಳ್ತಾ ಇದ್ದರೂ ಅದು ಕೇಂದ್ರ ಸರ್ಕಾರಕ್ಕೆ ಗೊತ್ತಾಗಲಿಲ್ಲ ಎಂದರೆ, ಅದು ಅವರ ಲೋಪ ಆದಂತೆ ಎಂದು ಹೇಳುವ ಮೂಲಕ, ತಾವು ಯಾವ ವಿದೇಶಿ ಫಂಡಿಂಗ್​ ಕೂಡ ತೆಗೆದುಕೊಳ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಅದರ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಅಮಿತ್ ತಿವಾರಿ ದೂರು ಹೊಸ ಸಂಚಲನ ಸೃಷ್ಟಿಸಿದೆ.&lt;/p&gt;&lt;p&gt;ಇದೀಗ ಇವರ ಇಡೀ ಕುಟುಂಬದ ತನಿಖೆ ಆಗಬೇಕು, ನಿವೃತ್ತ ಸರ್ಕಾರಿ ನೌಕರ ಒಬ್ಬರು ಅಭಿಜೀತ್​ ದೀಪ್ಕೆಯ ವಿದೇಶಿ ಶಿಕ್ಷಣಕ್ಕೆ ಆ ಪರಿಯಲ್ಲಿ ಹಣ ಖರ್ಚು ಮಾಡಿದ್ದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಬೇಕು ಎಂದು ಸೂರತ್ ಮೂಲದ ಆರ್&zwnj;ಟಿಐ ಕಾರ್ಯಕರ್ತ ಅಮಿತ್ ತಿವಾರಿ , ಅರ್ಜಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ಅಭಿಜೀತ್ ಅವರ ತಂದೆ ಭಗವಾನ್&zwnj;ರಾವ್ ಹಣಕಾಸಿನ ಬಗ್ಗೆ ತನಿಖೆ ನಡೆಸಬೇಕೆಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇವರ ಆರ್ಥಿಕ ಹಿನ್ನೆಲೆಯ ಬಗ್ಗೆ ತನಿಖೆಯ ಅಗತ್ಯವಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಕಾನೂನುಬದ್ಧ ರಕ್ಷಣಾ ನಿಧಿ ಕುರಿತು ಪ್ರಶ್ನೆ&lt;/strong&gt;&lt;/h3&gt;&lt;p&gt;ಇಷ್ಟೇ ಅಲ್ಲದೇ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಕುರಿತು ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿರುವ ಸಿಜೆಪಿ ಪ್ರತಿಭಟನಾಕಾರರಿಗೆ ಘೋಷಿಸಲಾದ ಕಾನೂನು ರಕ್ಷಣಾ ನಿಧಿಯ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, &amp;nbsp;ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಈ ಮಾಹಿತಿಗಳು &amp;nbsp;ಹೊರಬಂದರೆ, ಇನ್ನಷ್ಟು ಹಿನ್ನೆಲೆ ಬೆಳಕಿಗೆ ಬರುವ ಸಾಧ್ಯತೆ ಇದೆ. ನೀಟ್​ ಪರೀಕ್ಷೆಯಿಂದಾಗಿ ಅನ್ಯಾಯಕ್ಕೆ ಒಳಗಾಗಿರುವ ವಿದ್ಯಾರ್ಥಿಗಳ ಹೋರಾಟ ಹಾಗೂ ಪ್ರತಿಭಟನೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮೇಲಿನ ಆರೋಪಗಳು ತೀವ್ರಗೊಳ್ಳುತ್ತಿದೆ. &amp;nbsp;&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/how-did-abhijeet-dipkes-father-fund-us-education-rti-activist-seeks-probe-suc/articleshow-drq9rfh"/>
        </item>
        <item>
            <title><![CDATA[ಕೆಇಎ ಮಹತ್ವದ ಘೋಷಣೆ: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಸಮಯ ಬದಲು!]]></title>
            <link>https://kannada.asianetnews.com/state/kea-reschedules-kkr-civil-police-constable-exam-timing-on-august-2-for-candidate-convenience-gdp/articleshow-e8bed8d</link>
            <guid isPermaLink="true">https://kannada.asianetnews.com/state/kea-reschedules-kkr-civil-police-constable-exam-timing-on-august-2-for-candidate-convenience-gdp/articleshow-e8bed8d</guid>
            <pubDate>Wed, 29 Jul 2026 14:36:16 +0530</pubDate>
            <description><![CDATA[ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್&zwnj;ಟೇಬಲ್ (CPC) ನೇಮಕಾತಿಯ ಲಿಖಿತ ಪರೀಕ್ಷೆಯ ಸಮಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬದಲಾವಣೆ ಮಾಡಿದೆ. ಆಗಸ್ಟ್ 2ರಂದು ಮಧ್ಯಾಹ್ನ 2:30ಕ್ಕೆ ನಡೆಯಬೇಕಿದ್ದ ಪರೀಕ್ಷೆಯು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಂಜೆ 4:00 ಗಂಟೆಗೆ ಆರಂಭವಾಗಲಿದೆ. ಬೆಳಗಿನ ಅವಧಿಯ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kyjc1wzc8ppfjzt8211kc147,imgname-mixcollage-27-jul-2026-11-34-pm-4866-1785175536620.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್&zwnj;ಟೇಬಲ್ (CPC) ಹುದ್ದೆಗಳ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಮುಂಬರುವ ಆಗಸ್ಟ್ 2ರಂದು (ಭಾನುವಾರ) ನಡೆಯಲಿರುವ ಲಿಖಿತ ಪರೀಕ್ಷೆಯ ಮಧ್ಯಾಹ್ನದ ಅವಧಿಯ ವೇಳಾಪಟ್ಟಿಯಲ್ಲಿ ಪ್ರಾಧಿಕಾರವು ಮಹತ್ವದ ಬದಲಾವಣೆ ಮಾಡಿದ್ದು, ಪರಿಷ್ಕೃತ ಸಮಯವನ್ನು ಪ್ರಕಟಿಸಿದೆ.&lt;/p&gt;&lt;p&gt;ಪೂರ್ವಾಪರ ನಿಗದಿಯಾಗಿದ್ದ ವೇಳಾಪಟ್ಟಿಯ ಪ್ರಕಾರ ಈ ಪರೀಕ್ಷೆಯು ಮಧ್ಯಾಹ್ನ 2:30ಕ್ಕೆ ಆರಂಭವಾಗಬೇಕಿತ್ತು. ಆದರೆ, ಈಗ ಪರಿಷ್ಕೃತ ನಿಯಮದನ್ವಯ ಪರೀಕ್ಷೆಯು ಮಧ್ಯಾಹ್ನದ ಬದಲಿಗೆ ಸಂಜೆ 4:00 ಗಂಟೆಗೆ ಆರಂಭವಾಗಲಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಸಮಯ ಬದಲಾವಣೆಗೆ ಕಾರಣವೇನು?&lt;/h2&gt;&lt;p&gt;ಪರೀಕ್ಷಾ ಪ್ರಾಧಿಕಾರದ ಈ ಹಠಾತ್ ನಿರ್ಧಾರದ ಹಿಂದೆ ಅಭ್ಯರ್ಥಿಗಳ ಹಿತರಕ್ಷಣೆ ಅಡಗಿದೆ. ರಾಜ್ಯದಾದ್ಯಂತ ಹಲವು ಅಭ್ಯರ್ಥಿಗಳಿಗೆ ಬೆಳಗಿನ ಅವಧಿಯಲ್ಲಿ ಒಂದು ಪರೀಕ್ಷಾ ಕೇಂದ್ರ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರಗಳು ನಿಯೋಜನೆಯಾಗಿದ್ದವು. ಕೆಲವು ಅಭ್ಯರ್ಥಿಗಳಿಗೆ ಈ ಎರಡು ಕೇಂದ್ರಗಳ ನಡುವಿನ ಅಂತರವು ಅತ್ಯಂತ ಹೆಚ್ಚಾಗಿದ್ದು, ನಿಗದಿತ ಸಮಯದೊಳಗೆ ತಲುಪುವುದು ತೀವ್ರ ಕಷ್ಟಸಾಧ್ಯವಾಗಿತ್ತು.&lt;/p&gt;&lt;p&gt;ಬೆಳಗಿನ ಪರೀಕ್ಷೆ ಮುಗಿದ ತಕ್ಷಣ, ದೂರದ ಊರು ಅಥವಾ ದೂರದ ಪ್ರದೇಶದಲ್ಲಿರುವ ಮಧ್ಯಾಹ್ನದ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಸಮಯದಲ್ಲಿ ಪ್ರಯಾಣ ಬೆಳೆಸುವುದು ಅಭ್ಯರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಉಂಟುಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆ ಹಾಗೂ ಸಾರಿಗೆ ಸಮಸ್ಯೆಯನ್ನು ಮನಗಂಡ ಹಲವು ಅಭ್ಯರ್ಥಿಗಳು ಮತ್ತು ಪೋಷಕರು ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಅಭ್ಯರ್ಥಿಗಳ ಈ ನ್ಯಾಯಸಮ್ಮತವಾದ ಆತಂಕ ಹಾಗೂ ಹಿತದೃಷ್ಟಿಯನ್ನು ಗಂಭೀರವಾಗಿ ಪರಿಗಣಿಸಿದ ಕೆಇಎ, ಅವರು ನಿರಾಳವಾಗಿ ಪರೀಕ್ಷಾ ಕೇಂದ್ರವನ್ನು ತಲುಪಲು ಅನುಕೂಲವಾಗುವಂತೆ ಪರೀಕ್ಷೆಯನ್ನು ಒಂದೂವರೆ ಗಂಟೆ ತಡವಾಗಿ ಆರಂಭಿಸಲು ನಿರ್ಧರಿಸಿದೆ.&lt;/p&gt;&lt;h2&gt;ಪರಿಷ್ಕೃತ ಪರೀಕ್ಷಾ ಅವಧಿ ಹೀಗಿದೆ:&lt;/h2&gt;&lt;p&gt;ಹೊಸ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 2ರ ಎರಡನೇ ಅವಧಿಯ ಲಿಖಿತ ಪರೀಕ್ಷೆಯು ಸಂಜೆ 4:00 ಗಂಟೆಗೆ ಪ್ರಾರಂಭವಾಗಿ, ಸಂಜೆ 5:30 ರವರೆಗೆ ನಡೆಯಲಿದೆ.&lt;/p&gt;&lt;p&gt;ಪರೀಕ್ಷೆ ನಡೆಯುವ ದಿನಾಂಕ: ಆಗಸ್ಟ್ 2&lt;/p&gt;&lt;p&gt;ಪರಿಷ್ಕೃತ ಆರಂಭಿಕ ಸಮಯ: ಸಂಜೆ 4:00 ಗಂಟೆಗೆ (ಹಳೆಯ ಸಮಯ: ಮಧ್ಯಾಹ್ನ 2:30)&lt;/p&gt;&lt;p&gt;ಪರೀಕ್ಷೆ ಮುಕ್ತಾಯದ ಸಮಯ: ಸಂಜೆ 5:30 ರವರೆಗೆ&lt;/p&gt;&lt;h2&gt;ಬೆಳಗಿನ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ!&lt;/h2&gt;&lt;p&gt;ಇದೇ ವೇಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಭ್ಯರ್ಥಿಗಳಿಗೆ ಮತ್ತೊಂದು ಪ್ರಮುಖ ಸ್ಪಷ್ಟನೆಯನ್ನು ನೀಡಿದೆ. ಮಧ್ಯಾಹ್ನದ ನಂತರದ ಪರೀಕ್ಷಾ ಸಮಯದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದ್ದು, ಅಂದು ಬೆಳಗಿನ ಅವಧಿಯಲ್ಲಿ ನಡೆಯಲಿರುವ ಪರೀಕ್ಷೆಗಳು ಮುಂಚಿತವಾಗಿ ನಿಗದಿಯಾಗಿದ್ದ ವೇಳಾಪಟ್ಟಿಯಂತೆಯೇ ಯಾವುದೇ ಅಡೆತಡೆಯಿಲ್ಲದೆ ನಡೆಯಲಿವೆ. ಬೆಳಗಿನ ಪರೀಕ್ಷೆಯ ಸಮಯದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಕೆಇಎ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಹೀಗಾಗಿ ಅಭ್ಯರ್ಥಿಗಳು ಗೊಂದಲಕ್ಕೊಳಗಾಗದೆ, ಬೆಳಗಿನ ಪರೀಕ್ಷೆಗೆ ಎಂದಿನಂತೆ ಸಿದ್ಧರಾಗುವಂತೆ ಹಾಗೂ ಮಧ್ಯಾಹ್ನದ ಪರೀಕ್ಷೆಗೆ ಸಿಕ್ಕಿರುವ ಹೆಚ್ಚುವರಿ ಸಮಯವನ್ನು ಸದುಪಯೋಗಪಡಿಸಿಕೊಂಡು ಪ್ರಶಾಂತ ಮನಸ್ಸಿನಿಂದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಕೋರಲಾಗಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/state/kea-reschedules-kkr-civil-police-constable-exam-timing-on-august-2-for-candidate-convenience-gdp/articleshow-e8bed8d"/>
        </item>
        <item>
            <title><![CDATA[ಕೊನೆಗೂ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ ಶುರು; ರಾಜ್ಯ ಸರ್ಕಾರ ಮಹತ್ವದ ಆದೇಶ!]]></title>
            <link>https://kannada.asianetnews.com/education/karnataka-govt-schools-introduce-english-medium-for-class-8-in-278-schools-30000-students-to-benefit-rav/articleshow-fdx9bas</link>
            <guid isPermaLink="true">https://kannada.asianetnews.com/education/karnataka-govt-schools-introduce-english-medium-for-class-8-in-278-schools-30000-students-to-benefit-rav/articleshow-fdx9bas</guid>
            <pubDate>Sun, 09 Aug 2026 06:35:49 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರವು 278 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ, 8ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಲು ಅನುಮತಿ ನೀಡಿದೆ. ಇದರಿಂದ 7ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಓದಿ ಅತಂತ್ರರಾಗಿದ್ದ ಸುಮಾರು 30,000 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jrcdtz28y0dd6s8vfgcdfer0,imgname-whatsapp-image-2025-04-09-at-09.57.09.jpeg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;8ನೇ ತರಗತಿಗೆ ಇಂಗ್ಲಿಷ್&zwnj; ಮೀಡಿಯಂ ಮಂಜೂರಾತಿ&lt;/li&gt; &lt;li&gt;278 ಶಾಲೇಲಿ ಆರಂಭ । 30,000 ಮಕ್ಕಳು ನಿರಾಳ&lt;/li&gt;&lt;/ul&gt;&lt;p&gt;----&lt;/p&gt;&lt;p&gt;&lt;strong&gt;ಕನ್ನಡ ಪ್ರಭ ವರದಿ ಫಲಶೃತಿ&lt;/strong&gt;&lt;/p&gt;&lt;p&gt;&lsquo;7ನೇ ಕ್ಲಾಸ್&zwnj; ವರೆಗೆ ಇಂಗ್ಲಿಷ್&zwnj;, 8ನೇ ತರಗತಿಯಿಂದ ಕನ್ನಡ ಮಾಧ್ಯಮ&lsquo;, &lsquo;ಸರ್ಕಾರಿ ಶಾಲೇಲಿ ಕಲಿತ 30 ಸಾವಿರ ಮಕ್ಕಳು ಅತಂತ್ರ&rsquo; ಎಂಬ ಸರಣಿ ವರದಿಗಳನ್ನು &lsquo;ಕನ್ನಡಪ್ರಭ&rsquo; ಜೂ,14 ಹಾಗೂ ಜು.17ರಂದು ಪ್ರಕಟಿಸಿ ಗಮನ ಸೆಳೆದಿತ್ತು,&lt;/p&gt;&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ಹೂವಿನಹಡಗಲಿ (ಆ.9)&lt;/strong&gt;&lt;/p&gt;&lt;p&gt;ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ರಾಜ್ಯ ಸರ್ಕಾರ, ಕೊನೆಗೂ ಇದೇ ಶೈಕ್ಷಣಿಕ ವರ್ಷದಿಂದ ಅನ್ವಯ ಆಗುವಂತೆ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆರಂಭಿಸಿದೆ. ಅರ್ಥಾತ್&zwnj;, ಅವರಿಗೆ 8ನೇ ಕ್ಲಾಸ್&zwnj;ನಲ್ಲೂ ಆಂಗ್ಲ ಮಾಧ್ಯಮದಲ್ಲೇ ಮುಂದುವರಿಯಲು ಮೊದಲ ಬಾರಿ ಅವಕಾಶ ನೀಡಿದೆ.&lt;/p&gt;&lt;p&gt;2019-20ನೇ ಸಾಲಿನಿಂದ ರಾಜ್ಯದ ಒಂದು ಸಾವಿರ ಶಾಲೆಗಳಲ್ಲಿ ಕನ್ನಡ ಮಾಧ್ಯಮದೊಂದಿಗೆ 1ನೇ ತರಗತಿಯಿಂದಲೇ, ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಪ್ರಾರಂಭಿಸಲಾಗಿತ್ತು. ಹೀಗಾಗಿ, ಆಂಗ್ಲ ಮಾಧ್ಯಮದಲ್ಲಿ 7ನೇ ತರಗತಿ ಪಾಸ್&zwnj; ಮಾಡಿರುವ 30 ಸಾವಿರ ಮಕ್ಕಳು, 8ನೇ ತರಗತಿಯಿಂದ ಆಂಗ್ಲ ಮಾಧ್ಯಮ ಇಲ್ಲದೆ ಅತಂತ್ರವಾಗಿದ್ದರು. ಈಗ ಆಗಸ್ಟ್&zwnj; 1ರಂದು ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದ್ದು, ರಾಜ್ಯದ 278 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ, ಆಂಗ್ಲ ಮಾಧ್ಯಮದಲ್ಲಿ 8ನೇ ತರಗತಿ ಆರಂಭಿಸಿದೆ.&lt;/p&gt;&lt;p&gt;ಈ ಕುರಿತು &lsquo;ಕನ್ನಡಪ್ರಭ&rsquo;ವು &lsquo;ಸರ್ಕಾರಿ ಶಾಲೇಲಿ ಕಲಿತ 30 ಸಾವಿರ ಮಕ್ಕಳು ಅತಂತ್ರ&rsquo;, &lsquo;ಖಾಸಗಿ ಶಾಲೆಗಳತ್ತ ಸರ್ಕಾರಿ ಶಾಲೆಯ 30 ಸಾವಿರ ಮಕ್ಕಳು.!&rsquo;, &lsquo;7ನೇ ಕ್ಲಾಸ್&zwnj; ವರೆಗೆ ಇಂಗ್ಲಿಷ್&zwnj;, 8ನೇ ತರಗತಿಯಿಂದ ಕನ್ನಡ ಮಾಧ್ಯಮ.!&rsquo; ಹೀಗೆ ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.&lt;/p&gt;&lt;h2&gt;8ನೇ ತರಗತಿಗೆ ಉನ್ನತೀಕರಣ:&lt;/h2&gt;&lt;p&gt;ರಾಜ್ಯದ ಒಟ್ಟು 1 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಪೈಕಿ, 278 ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಗೆ ಉನ್ನತೀಕರಿಸಿ ಆಂಗ್ಲ ಮಾಧ್ಯಮ ಶಾಲೆಗೆ ಮಂಜೂರಾತಿ ನೀಡಲಾಗಿದೆ. ತರಗತಿವಾರು, ಮಕ್ಕಳ ದಾಖಲಾತಿ ಮತ್ತು ಕರ್ತವ್ಯದಲ್ಲಿ ಇರುವ ಶಿಕ್ಷಕರ ಸಂಖ್ಯೆ ಹಾಗೂ ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಈ ಶಾಲೆಗಳನ್ನು ಉನ್ನತೀಕರಿಸಲಾಗಿದ್ದು, 2026-27ನೇ ಶೈಕ್ಷಣಿಕ ಸಾಲಿನಿಂದಲೇ ಇದು ಜಾರಿಗೆ ಬರಲಿದೆ.&lt;/p&gt;&lt;p&gt;ಕನ್ನಡ ಮಾಧ್ಯಮ ಶಾಲೆಯಲ್ಲೇ 8ನೇ ತರಗತಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಸರ್ಕಾರ ಆದೇಶ ನೀಡಿದೆ. ಅದರಂತೆ ಕ್ರಮಕ್ಕೆ ಮುಂದಾಗುತ್ತೇವೆ.&lt;/p&gt;&lt;p&gt;&lt;strong&gt;- ಕೆ.ಮಂಗಳಾ, ಕ್ಷೇತ್ರ ಶಿಕ್ಷಣಾಧಿಕಾರಿ, ಹೂವಿನಹಡಗಲಿ&lt;/strong&gt;&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/karnataka-govt-schools-introduce-english-medium-for-class-8-in-278-schools-30000-students-to-benefit-rav/articleshow-fdx9bas"/>
        </item>
        <item>
            <title><![CDATA[ಭದ್ರತಾ ಸಲಹೆಗಾರ ಅಜಿತ್ ದೋವಲ್ ದಿಢೀರ್​ ಸಂಸತ್ತಿಗೆ ಎಂಟ್ರಿ: ವಿಪಕ್ಷಗಳು ತಲ್ಲಣ- ಏನಿದರ ವಿಶೇಷತೆ]]></title>
            <link>https://kannada.asianetnews.com/politics/national-security-advisor-ajit-dovals-sudden-entry-into-parliament-what-is-the-reason-behind-it-suc/articleshow-il3ieow</link>
            <guid isPermaLink="true">https://kannada.asianetnews.com/politics/national-security-advisor-ajit-dovals-sudden-entry-into-parliament-what-is-the-reason-behind-it-suc/articleshow-il3ieow</guid>
            <pubDate>Wed, 29 Jul 2026 22:28:09 +0530</pubDate>
            <description><![CDATA[ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನೀಟ್ ಪತ್ರಿಕೆ ಸೋರಿಕೆ ಚರ್ಚೆಯ ವೇಳೆ ಸಂಸತ್ತಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಗಂಭೀರ ಭದ್ರತಾ ವಿಷಯಗಳಿದ್ದಾಗ ಮಾತ್ರ ಕಾಣಿಸಿಕೊಳ್ಳುವ ದೋವಲ್ ಅವರ ಈ ಭೇಟಿಯು, ನೀಟ್ ಪ್ರತಿಭಟನೆಗಳ ಹಿಂದೆ ವಿದೇಶಿ ಕೈವಾಡದಂತಹ ರಾಷ್ಟ್ರೀಯ ಭದ್ರತೆಯ ಆಯಾಮವಿರಬಹುದೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyqcv9mkcqm34fpca94eqsq9,imgname-ajit-doval-1785344140946.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂಸತ್ತಿನ ಉಭಯ ಸದನಗಳಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಈ ಸಮಯದಲ್ಲಿ ಸಂಸದರು, ಸಚಿವರು ಎಲ್ಲರೂ ಬರುವುದು ಸಹಜವೇ. ಅಗತ್ಯ ಬಿದ್ದರೆ ಪ್ರಧಾನಿಯೂ ಬರಬೇಕು. ಆದರೆ, ಇದಾವುದೇ ನಿಯಮ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಅನ್ವಯ ಆಗುವುದಿಲ್ಲ. ಎಲ್ಲಿ, ಯಾವಾಗ ಬೇಕಾದರೂ ಸ್ವಯಂ ಪ್ರೇರಿತವಾಗಿ ಹೋಗುವ ಹಕ್ಕು ಇರುವುದು ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ. ಅದೇ ರೀತಿ, ಭಾರತದ ಜೇಮ್ಸ್​ಬಾಂಡ್​ ಎಂದೇ ಫೇಮಸ್​ ಆಗಿರೋ, ಪಾಕಿಸ್ತಾನದಲ್ಲಿ ಹತ್ತಾರು ವರ್ಷ ಇದ್ದು, ಪಾಕಿಗಳಿಗೇ ಚಳ್ಳೆಹಣ್ಣು ತಿನ್ನಿಸಿ, ಭಾರತದ ಭದ್ರತೆ ಕಾಪಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಇಂದು ಸಂಸತ್​ ಪ್ರವೇಶಿಸಿದ್ದು, ವಿರೋಧ ಪಕ್ಷಗಳಲ್ಲಿ ತಲ್ಲಣ ಹುಟ್ಟಿಸಿದ ಘಟನೆ ನಡೆದಿದೆ.&lt;/p&gt;&lt;p&gt;ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ಅಜಿತ್​ ದೋವಲ್​ ಅವರು ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿ ಮಾಡಿದೆ. ಏಕೆಂದರೆ, ರಾಷ್ಟ್ರೀಯ ಭದ್ರತಾ ಸಲಹೆಗಾರರು ಸಾಮಾನ್ಯವಾಗಿ ಸಂಸತ್ತಿನ ಒಳಗೆ ಕಾಣಿಸಿಕೊಳ್ಳುವುದಿಲ್ಲ. ದೇಶದ ಆಂತರಿಕ ಅಥವಾ ಬಾಹ್ಯ ಭದ್ರತೆಗೆ, ದೇಶಕ್ಕೆ ಅಪಾಯ ಇದೆ ಎನ್ನುವ ಸೂಚನೆಗಳು ಇದ್ದ ಸಂದರ್ಭಗಳಲ್ಲಿ, ಇಂಥ ಅತಿ ಗಂಭೀರ ವಿಚಾರಗಳಿದ್ದಾಗ ಮಾತ್ರ ಅವರು ಕಾಣಿಸಿಕೊಳ್ಳುತ್ತಾರೆ, ಅದು ಕೂಡ ಸಂಸತ್ತಿನಲ್ಲಿ ಅಲ್ಲ, ಬದಲಿಗೆ ಪ್ರಧಾನಿಗಳ ಕಚೇರಿ ಅಥವಾ ಗೃಹ ಸಚಿವಾಲಯದಲ್ಲಿ ಈ ಮಾತುಕತೆ ನಡೆಯುತ್ತದೆ. ಆದರೆ ನೀಟ್​ ಪ್ರತಿಭಟನೆಯ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಇವರು ಸಂಸತ್ತಿಗೆ ಎಂಟ್ರಿ ಕೊಟ್ಟಿರುವುದು ವಿವಿಧ ಊಹಾಪೋಹಗಳಿಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ತಜ್ಞರಿಂದ ವಿಶ್ಲೇಷಣೆ&lt;/strong&gt;&lt;/h2&gt;&lt;p&gt;ಮೊದಲೇ ಹೇಳಿದಂತೆ ದೇಶದ ಭದ್ರತೆಯಂಥ ವಿಚಾರದ ಸಮಯದಲ್ಲಿ ಇವರು ಕಾಣಿಸಿಕೊಳ್ಳುವುದಾದರೆ, ನೀಟ್​ ಪ್ರತಿಭಟನೆಯ ಕುರಿತಾದ ಚರ್ಚೆಯ ಸಮಯದಲ್ಲಿ ಕಾಣಿಸಿಕೊಂಡಿರುವ ಹಿಂದೆ ಇರುವ ಔಚಿತ್ಯದ ಬಗ್ಗೆ ಸಾಕಷ್ಟು ಬಗೆಯಲ್ಲಿ ತಜ್ಞರಿಂದ ವಿಶ್ಲೇಷಣೆಗಳ ಸುರಿಮಳೆಯಾಗುತ್ತಿದೆ. ದೋವಲ್ ಸಂಸತ್ತಿಗೆ ಬಂದ ತಕ್ಷಣ, ವಿವಿಧ ಊಹಾಪೋಹಗಳು ಹುಟ್ಟಿಕೊಂಡವು. ಅವರು ಪ್ರಮುಖ ಭದ್ರತಾ ವಿಷಯದ ಕುರಿತು ಸಚಿವರಿಗೆ ಮಾಹಿತಿ ನೀಡಲು ಬಂದಿದ್ದಾರೆಯೇ ಅಥವಾ ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಯಲಿದೆಯೇ ಎಂಬ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಆದರೆ ಇದರ ಗುಟ್ಟು ರಟ್ಟಾಗಲು ಸಾಧ್ಯವೇ ಇಲ್ಲ.&lt;/p&gt;&lt;h3&gt;&lt;strong&gt;ಏಕಿಷ್ಟು ಪ್ರಾಮುಖ್ಯತೆ?&lt;/strong&gt;&lt;/h3&gt;&lt;p&gt;ಇದು ಏಕಿಷ್ಟು ಚರ್ಚೆಯಾಗುತ್ತಿದೆ ಎನ್ನುವುದಕ್ಕೆ ಕಾರಣವೂ ಇದೆ. ಏಕೆಂದರೆ, ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅದರ ಬಳಿಕ ನಡೆದ ಪ್ರತಿಭಟನೆಗಳ ಹಿಂದಿರುವ ವ್ಯವಸ್ಥಿತ ಪಿತೂರಿ, ಪ್ರತಿಭಟನೆಯ ಹೆಸರಿನಲ್ಲಿ ನಡೆದಿರುವ ವಿದೇಶಿಗಳ ಕೈವಾಡ, ಪಾಕಿಸ್ತಾನಿಗಳು, ಖಲಿಸ್ತಾನಿಗಳ ಬೆಂಬಲ, ಪ್ರತಿಭಟನೆ ಸಮಯದಲ್ಲಿ ಕಂಡು ಬಂದ ವಿವಿಧ ದೇಶಗಳ ಬಾವುಟ, ಪ್ರತಿಭಟನೆಗೆ ಬೆಂಬಲ ಸೂಚಿಸಿ, ಭಾರತದ ವಿರುದ್ಧ ಷಡ್ಯಂತ್ರ ರಚಿಸಿ ಸುಳ್ಳುಸುದ್ದಿ ಹರಡಿದ್ದ 150ಕ್ಕೂ ಅಧಿಕ ಪಾಕಿಸ್ತಾನ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ಗಳು... ಇವೆಲ್ಲವುಗಳ ಬಗ್ಗೆ ದೊಡ್ಡ ಮಟ್ಟದ ತನಿಖೆಯಾಗುತ್ತಿರುವುದಾಗಿ ವರದಿಯಾಗಿದೆ. ಇದು ದೇಶ ಭದ್ರತೆಯ ವಿಷಯವಾಗಿರುವ ಹಿನ್ನೆಲೆಯಲ್ಲಿ, ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಆ ನಂತರದ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಅಜಿತ್​ ದೋವಲ್​ ಅವರ ಅಪರೂಪದ ದರ್ಶನ ನಾನಾ ಚರ್ಚೆಗಳಿಗೆ ಕಾರಣವಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/politics/national-security-advisor-ajit-dovals-sudden-entry-into-parliament-what-is-the-reason-behind-it-suc/articleshow-il3ieow"/>
        </item>
        <item>
            <title><![CDATA[ನೀಟ್ ಪರೀಕ್ಷೆ ಪೇಪರ್ ಲೀಕ್; ಸುಧಾರಣೆ ತರಲು ಶಿರಸಿಯ ನಂದನ್ ನಿಲೇಕಣಿ ನೇಮಿಸಿದ ಪ್ರಧಾನಿ, ಯಾರದು?]]></title>
            <link>https://kannada.asianetnews.com/education/neet-paper-leak-who-is-nandan-nilekani-picked-by-pm-to-lead-exam-reforms-suh/articleshow-ku0e2n0</link>
            <guid isPermaLink="true">https://kannada.asianetnews.com/education/neet-paper-leak-who-is-nandan-nilekani-picked-by-pm-to-lead-exam-reforms-suh/articleshow-ku0e2n0</guid>
            <pubDate>Mon, 27 Jul 2026 11:00:28 +0530</pubDate>
            <description><![CDATA[&lt;p&gt;ನೀಟ್&zwnj; ಪೇಪರ್&zwnj; ಲೀಕ್&zwnj; ಬಳಿಕ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ನಂದನ್&zwnj; ನಿಲೇಕಣಿ ನೇತೃತ್ವದ ಕಾರ್ಯಪಡೆ ರಚನೆಯಾಗಿದ್ದು, ಶಿರಸಿ ಮೂಲದ ಈ ಕನ್ನಡಿಗನ ಉದ್ಯಮ, ಆಧಾರ್&zwnj; ಯೋಜನೆ ಮತ್ತು ವೃತ್ತಿಜೀವನದ ಸಾಧನೆಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyh0mzkrk0jdtwvjjx5h0pab,imgname-neet-paper-leak-who-is-nandan-nilekani-picked-by-pm-to-lead-exam-reforms-1785130024568.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್&zwnj; ಸೇರಿದಂತೆ ರಾಷ್ಟ್ರೀಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪರೀಕ್ಷೆಗಳಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ಕುರಿತು ಶಿಫಾರಸು ಮಾಡಲು ಇನ್ಫೋಸಿಸ್ ಸಹ-ಸಂಸ್ಥಾಪಕ ಹಾಗೂ ಆಧಾರ್&zwnj; ಯೋಜನೆಯ ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ನಂದನ್&zwnj; ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚಿಸಲಾಗಿದೆ.&lt;/p&gt;&lt;p&gt;ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಭದ್ರತೆ ಮತ್ತು ತಂತ್ರಜ್ಞಾನ ಬಳಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯಪಡೆ ಮಹತ್ವದ ಶಿಫಾರಸುಗಳನ್ನು ನೀಡಲಿದೆ. ನಂದನ್&zwnj; ನಿಲೇಕಣಿ ನೇತೃತ್ವದ ಈ ಸಮಿತಿಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಎಸ್&zwnj;. ಸೋಮನಾಥ್&zwnj;, ಗುಪ್ತಚರ ಬ್ಯೂರೋ ಮಾಜಿ ನಿರ್ದೇಶಕ ತಪನ್&zwnj; ಡೇಕಾ, ಐಐಟಿ ಮದ್ರಾಸ್&zwnj; ನಿರ್ದೇಶಕ ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕವಲ್&zwnj; ಹಾಗೂ ಲಾಜಿಸ್ಟಿಕ್ಸ್&zwnj; ತಜ್ಞ ಅಮೃತ್&zwnj; ಲಾಲ್&zwnj; ಮೀನಾ ಸೇರಿದಂತೆ ಹಲವು ಕ್ಷೇತ್ರಗಳ ತಜ್ಞರು ಇದ್ದಾರೆ.&lt;/p&gt;&lt;p&gt;ಈ ಘೋಷಣೆಯ ಬೆನ್ನಲ್ಲೇ ಮತ್ತೊಮ್ಮೆ ನಂದನ್&zwnj; ನಿಲೇಕಣಿ ಯಾರು? ಅವರ ಹಿನ್ನೆಲೆ ಏನು? ಶಿರಸಿಗೂ ಅವರಿಗೂ ಇರುವ ಸಂಬಂಧವೇನು? ಅವರು ಹೇಗೆ ಇನ್ಫೋಸಿಸ್&zwnj; ಸಹ-ಸಂಸ್ಥಾಪಕರಾದರು? ಆಧಾರ್&zwnj; ಯೋಜನೆಯಲ್ಲಿ ಅವರ ಪಾತ್ರವೇನು? ಎಂಬ ಕುತೂಹಲ ಜನರಲ್ಲಿ ಮೂಡಿದೆ.&lt;/p&gt;&lt;h2&gt;ಯಾರಿವರು ನಂದನ್&zwnj; ನಿಲೇಕಣಿ?&lt;/h2&gt;&lt;p&gt;ನಂದನ್&zwnj; ಮೋಹನ್&zwnj;ರಾವ್&zwnj; ನಿಲೇಕಣಿ ಭಾರತದ ಅತ್ಯಂತ ಪ್ರಮುಖ ಉದ್ಯಮಿಗಳು ಹಾಗೂ ತಂತ್ರಜ್ಞಾನ ತಜ್ಞರಲ್ಲಿ ಒಬ್ಬರು. ಇನ್ಫೋಸಿಸ್&zwnj; ಸಂಸ್ಥೆಯನ್ನು ಕಟ್ಟಿದ ಪ್ರಮುಖ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಭಾರತದ ಡಿಜಿಟಲ್&zwnj; ಗುರುತಿನ ವ್ಯವಸ್ಥೆಯಾದ ಆಧಾರ್&zwnj; ಯೋಜನೆ ರೂಪಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.&lt;/p&gt;&lt;p&gt;2009ರಿಂದ 2014ರವರೆಗೆ ಅವರು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ನ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ದೇಶದ ಕೋಟ್ಯಂತರ ಜನರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸುವ ಮಹತ್ವಾಕಾಂಕ್ಷೆಯ ಆಧಾರ್&zwnj; ಯೋಜನೆಯ ಅನುಷ್ಠಾನದಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಂದನ್&zwnj; ನಿಲೇಕಣಿ ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ.&lt;/p&gt;&lt;h2&gt;ಶಿರಸಿ ಮೂಲದ ಕನ್ನಡಿಗ&lt;/h2&gt;&lt;p&gt;ನಂದನ್&zwnj; ನಿಲೇಕಣಿ ಅವರು 1955ರ ಜೂನ್&zwnj; 2ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಅವರ ಕುಟುಂಬದ ಮೂಲ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಿಲೇಕಣಿ ಗ್ರಾಮಕ್ಕೆ ಸೇರಿದೆ. ಅವರ ಪೂರ್ಣ ಹೆಸರು ನಂದನ್&zwnj; ಮೋಹನ್&zwnj;ರಾವ್&zwnj; ನಿಲೇಕಣಿ. ಅವರ ತಂದೆ ಮೋಹನ್&zwnj;ರಾವ್&zwnj; ಹಾಗೂ ತಾಯಿ ದುರ್ಗಾ. ಇದೇ ಕಾರಣಕ್ಕೆ ನಂದನ್&zwnj; ನಿಲೇಕಣಿ ಅವರನ್ನು ಉತ್ತರ ಕನ್ನಡದ ಶಿರಸಿ ಮೂಲದ ಹೆಮ್ಮೆಯ ಕನ್ನಡಿಗ ಎಂದು ಗುರುತಿಸಲಾಗುತ್ತದೆ.&lt;/p&gt;&lt;h2&gt;ಬಿಷಪ್&zwnj; ಕಾಟನ್&zwnj; ಶಾಲೆಯಿಂದ ಐಐಟಿ ಬಾಂಬೆವರೆಗೆ&lt;/h2&gt;&lt;p&gt;ನಂದನ್&zwnj; ನಿಲೇಕಣಿ ತಮ್ಮ ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಬಿಷಪ್&zwnj; ಕಾಟನ್&zwnj; ಬಾಲಕರ ಶಾಲೆಯಲ್ಲಿ ಪಡೆದರು. ಬಳಿಕ ಧಾರವಾಡದ ಕರ್ನಾಟಕ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ನಂತರ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕಲ್&zwnj; ಎಂಜಿನಿಯರಿಂಗ್&zwnj; ಪದವಿ ಪಡೆದರು.&lt;/p&gt;&lt;p&gt;1978ರಲ್ಲಿ ತಮ್ಮ ಎಂಜಿನಿಯರಿಂಗ್&zwnj; ಪದವಿ ಪೂರ್ಣಗೊಳಿಸಿದ ಬಳಿಕ ಮುಂಬೈನ ಪಟ್ನಿ ಕಂಪ್ಯೂಟರ್&zwnj; ಸಿಸ್ಟಮ್ಸ್&zwnj; ಸಂಸ್ಥೆಯಲ್ಲಿ ವೃತ್ತಿಜೀವನ ಆರಂಭಿಸಿದರು. ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಎನ್&zwnj;.ಆರ್&zwnj;. ನಾರಾಯಣ ಮೂರ್ತಿ ಅವರನ್ನು ಭೇಟಿಯಾದರು. ಈ ಪರಿಚಯವೇ ಮುಂದೆ ಭಾರತದ ಐಟಿ ಕ್ಷೇತ್ರದ ಇತಿಹಾಸವನ್ನೇ ಬದಲಿಸುವಂತಹ ದೊಡ್ಡ ಬೆಳವಣಿಗೆಗೆ ಕಾರಣವಾಯಿತು.&lt;/p&gt;&lt;h2&gt;1981ರಲ್ಲಿ ಇನ್ಫೋಸಿಸ್&zwnj; ಸ್ಥಾಪನೆ&lt;/h2&gt;&lt;p&gt;1981ರಲ್ಲಿ ನಂದನ್&zwnj; ನಿಲೇಕಣಿ ಅವರು ಎನ್&zwnj;.ಆರ್&zwnj;. ನಾರಾಯಣ ಮೂರ್ತಿ ಸೇರಿದಂತೆ ಇತರ ಸಹೋದ್ಯೋಗಿಗಳೊಂದಿಗೆ ಸೇರಿ ಇನ್ಫೋಸಿಸ್&zwnj; ಸಂಸ್ಥೆಯನ್ನು ಸ್ಥಾಪಿಸಿದರು. ಕಡಿಮೆ ಸಂಪನ್ಮೂಲಗಳಿಂದ ಆರಂಭವಾದ ಈ ಕಂಪನಿ ಮುಂದೆ ಜಾಗತಿಕ ಮಟ್ಟದ ಪ್ರಮುಖ ಐಟಿ ಸಂಸ್ಥೆಯಾಗಿ ಬೆಳೆದಿತು. ಇನ್ಫೋಸಿಸ್&zwnj;ನ ಬೆಳವಣಿಗೆಯಲ್ಲಿ ನಂದನ್&zwnj; ನಿಲೇಕಣಿ ಅವರ ಪಾತ್ರವೂ ಮಹತ್ವದ್ದಾಗಿದೆ. 2002ರಿಂದ 2007ರವರೆಗೆ ಅವರು ಇನ್ಫೋಸಿಸ್&zwnj;ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರ ಅವಧಿಯಲ್ಲಿ ಕಂಪನಿಯ ಜಾಗತಿಕ ವಿಸ್ತರಣೆ ಮತ್ತಷ್ಟು ವೇಗ ಪಡೆದುಕೊಂಡಿತು. ನಂತರ 2007ರಿಂದ 2011ರವರೆಗೆ ಇನ್ಫೋಸಿಸ್&zwnj;ನ ಸಹ-ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.&lt;/p&gt;&lt;h2&gt;ಆಧಾರ್&zwnj; ಯೋಜನೆಯ ಜವಾಬ್ದಾರಿ&lt;/h2&gt;&lt;p&gt;2009ರಲ್ಲಿ ನಂದನ್&zwnj; ನಿಲೇಕಣಿ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ಸಿಕ್ಕಿತು. ಅಂದಿನ ಪ್ರಧಾನಿ ಮನಮೋಹನ್&zwnj; ಸಿಂಗ್&zwnj; ನೇತೃತ್ವದ ಸರ್ಕಾರದ ಅವಧಿಯಲ್ಲಿ ಅವರನ್ನು UIDAIನ ಮೊದಲ ಅಧ್ಯಕ್ಷರಾಗಿ ನೇಮಿಸಲಾಯಿತು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್&zwnj; ಯೋಜನೆಯ ಅನುಷ್ಠಾನದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಕೋಟ್ಯಂತರ ಜನರನ್ನು ಒಳಗೊಂಡ ಇಂತಹ ಬೃಹತ್&zwnj; ಡಿಜಿಟಲ್&zwnj; ಗುರುತಿನ ವ್ಯವಸ್ಥೆಯನ್ನು ರೂಪಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ತಂತ್ರಜ್ಞಾನ ಮತ್ತು ಆಡಳಿತದ ಸಮನ್ವಯದ ಮೂಲಕ ಯೋಜನೆಯನ್ನು ಮುನ್ನಡೆಸುವಲ್ಲಿ ನಂದನ್&zwnj; ನಿಲೇಕಣಿ ಪ್ರಮುಖ ಪಾತ್ರ ವಹಿಸಿದರು.&lt;/p&gt;&lt;h2&gt;ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆ&lt;/h2&gt;&lt;p&gt;ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದ ಜೊತೆಗೆ ನಂದನ್&zwnj; ನಿಲೇಕಣಿ ರಾಜಕೀಯದಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್&zwnj; ಅಭ್ಯರ್ಥಿಯಾಗಿ ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಚುನಾವಣಾ ಅಫಿಡವಿಟ್&zwnj;ನಲ್ಲಿ ತಮ್ಮ ಕುಟುಂಬದ ಆಸ್ತಿ ವಿವರಗಳನ್ನೂ ಅವರು ಘೋಷಿಸಿದ್ದರು.&lt;/p&gt;&lt;h2&gt;ನಂದನ್&zwnj; ನಿಲೇಕಣಿ ಆಸ್ತಿ ಎಷ್ಟು?&lt;/h2&gt;&lt;p&gt;2014ರ ಚುನಾವಣಾ ಅಫಿಡವಿಟ್&zwnj;ನಲ್ಲಿ ನಂದನ್&zwnj; ನಿಲೇಕಣಿ ಮತ್ತು ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ ಸುಮಾರು ₹8,000 ಕೋಟಿ ಎಂದು ಘೋಷಿಸಲಾಗಿತ್ತು ಎಂದು ವರದಿಯಾಗಿದೆ. ಅವರ ಸಂಪತ್ತಿನ ಪ್ರಮುಖ ಭಾಗ ಇನ್ಫೋಸಿಸ್&zwnj;ನಲ್ಲಿರುವ ಷೇರುಗಳಿಂದ ಬಂದಿದೆ. ಅವರ ಪತ್ನಿ ರೋಹಿಣಿ ನಿಲೇಕಣಿ ಅವರೂ ಖ್ಯಾತ ಸಮಾಜ ಸೇವಕಿ ಮತ್ತು ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ.&amp;nbsp;&lt;/p&gt;&lt;h2&gt;ಈಗ ಮತ್ತೆ ಮಹತ್ವದ ಜವಾಬ್ದಾರಿ&lt;/h2&gt;&lt;p&gt;ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಿಗೆ ಸಂಬಂಧಿಸಿದ ವಿವಾದಗಳ ಬಳಿಕ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷಾ ಸುಧಾರಣೆಯ ಉನ್ನತ ಮಟ್ಟದ ಕಾರ್ಯಪಡೆಗೆ ನಂದನ್&zwnj; ನಿಲೇಕಣಿ ನೇತೃತ್ವ ವಹಿಸಿರುವುದು ಮಹತ್ವ ಪಡೆದಿದೆ.&lt;/p&gt;]]></content:encoded>
            <category>education</category>
            <dc:creator>Sushma Hegde</dc:creator>
            <atom:link href="https://kannada.asianetnews.com/education/neet-paper-leak-who-is-nandan-nilekani-picked-by-pm-to-lead-exam-reforms-suh/articleshow-ku0e2n0"/>
        </item>
        <item>
            <title><![CDATA[ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ]]></title>
            <link>https://kannada.asianetnews.com/entertainment/priyanka-upendra-reacts-to-the-neet-question-paper-leak-issue-videoshow-ntk49ch</link>
            <guid isPermaLink="true">https://kannada.asianetnews.com/entertainment/priyanka-upendra-reacts-to-the-neet-question-paper-leak-issue-videoshow-ntk49ch</guid>
            <pubDate>Wed, 29 Jul 2026 13:12:29 +0530</pubDate>
            <description><![CDATA[&lt;p&gt;ವಿದ್ಯಾರ್ಥಿಗಳ ಭವಿಷ್ಯ ತುಂಬಾ ಮುಖ್ಯ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಮಾತನಾಡಿದ್ದಾರೆ. ನಿಜಕ್ಕೂ ಈ ಒಂದು ವಿಚಾರ ತುಂಬಾ ಬೇಸರ ತರುವಂತದ್ದು. ನೋವುಂಟು ಮಾಡಿರುವ ವಿಚಾರ ಎಂದು ಪ್ರತಿಕ್ರಿಯಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xaswstm" medium="video" height="768" width="1024"/>
            <content:encoded><![CDATA[&lt;p&gt;&lt;span&gt;ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರಿಯಾಂಕ ಉಪೇಂದ್ರ&amp;nbsp;&lt;/span&gt;&lt;span&gt;ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ&lt;/span&gt;&lt;span&gt;&amp;nbsp;&lt;/span&gt;&lt;span&gt;ಮಾತನಾಡಿದ್ದಾರೆ. ನಿಜಕ್ಕೂ ಈ ಒಂದು ವಿಚಾರ ತುಂಬಾ ಬೇಸರ ತರುವಂತದ್ದು.&lt;/span&gt;&lt;span&gt;ದೇಶಾದ್ಯಂತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು. ವಿದ್ಯಾರ್ಥಿಗಳ ಈ ಪರಿಸ್ಥಿಯನ್ನ ನೋಡಿದ್ರೆ ನಿಜಕ್ಕೂ ನೋವಾಗತ್ತೆ. ಜೊತೆಗೆ ಈ ಒಂದು ವಿಚಾರ ರಾಜಕೀಯ ತಿರುವನ್ನ ಪಡೆದುಕೊಳ್ಳುತ್ತಿದೆ ಎಂಬ ವಿಚಾರವೂ ಕೂಡ ನೋವನ್ನ ಉಂಟು ಮಾಡತ್ತೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ದಕ್ಕಬೇಕು. ವಿದ್ಯಾರ್ಥಿಗಳಿಗೆ ಒಳಿತಾಗಬೇಕು ಎಂದಿದ್ದಾರೆ.&lt;/span&gt;&lt;/p&gt;]]></content:encoded>
            <category>education</category>
            <dc:creator>Roja Manu Patil</dc:creator>
            <atom:link href="https://kannada.asianetnews.com/entertainment/priyanka-upendra-reacts-to-the-neet-question-paper-leak-issue-videoshow-ntk49ch"/>
        </item>
        <item>
            <title><![CDATA[ಗುರು ಪೂರ್ಣಿಮೆಗೆ ನೆಚ್ಚಿನ ಶಿಕ್ಷಕರಿಗಾಗಿ ಮನೆಯಲ್ಲೇ ಮಾಡಿ ಸುಂದರ ಕಾರ್ಡ್​: ಸೂಪರ್​ ಐಡಿಯಾಸ್​ ನಿಮಗಾಗಿ]]></title>
            <link>https://kannada.asianetnews.com/gallery/relationship/make-a-beautiful-card-at-home-for-your-favorite-teacher-on-guru-purnima-super-ideas-for-you-suc-pgwfgwy</link>
            <guid isPermaLink="true">https://kannada.asianetnews.com/gallery/relationship/make-a-beautiful-card-at-home-for-your-favorite-teacher-on-guru-purnima-super-ideas-for-you-suc-pgwfgwy</guid>
            <pubDate>Tue, 28 Jul 2026 22:38:32 +0530</pubDate>
            <description><![CDATA[&lt;p&gt;ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಶಿಕ್ಷಕರಿಗೆ ಕೈಯಿಂದ ಮಾಡಿದ ಕಾರ್ಡ್&zwnj;ಗಳನ್ನು ನೀಡಿ ಗೌರವ ಸಲ್ಲಿಸಿ. 3D ಕಾರ್ಡ್&zwnj;ಗಳು, ಗುರು-ಶಿಷ್ಯರ ರೇಖಾಚಿತ್ರಗಳು, ಶ್ಲೋಕಗಳು ಮತ್ತು ಹೂವಿನ ಅಲಂಕಾರಗಳನ್ನು ಬಳಸಿ ಸುಲಭವಾಗಿ ಹಾಗೂ ಸುಂದರವಾಗಿ ಕಾರ್ಡ್&zwnj;ಗಳನ್ನು ತಯಾರಿಸುವ &amp;nbsp;ಐಡಿಯಾ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymtxh32eadfhzzzwb11x76f,imgname-guru-poornima-1785258230882.jpg" type="image/jpeg" height="390" width="690"/>
            <content:encoded><![CDATA[&lt;p&gt;ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಶಿಕ್ಷಕರಿಗೆ ಕೈಯಿಂದ ಮಾಡಿದ ಕಾರ್ಡ್&zwnj;ಗಳನ್ನು ನೀಡಿ ಗೌರವ ಸಲ್ಲಿಸಿ. 3D ಕಾರ್ಡ್&zwnj;ಗಳು, ಗುರು-ಶಿಷ್ಯರ ರೇಖಾಚಿತ್ರಗಳು, ಶ್ಲೋಕಗಳು ಮತ್ತು ಹೂವಿನ ಅಲಂಕಾರಗಳನ್ನು ಬಳಸಿ ಸುಲಭವಾಗಿ ಹಾಗೂ ಸುಂದರವಾಗಿ ಕಾರ್ಡ್&zwnj;ಗಳನ್ನು ತಯಾರಿಸುವ &amp;nbsp;ಐಡಿಯಾ ನೀಡಲಾಗಿದೆ.&lt;/p&gt;&lt;img&gt;&lt;p&gt;ನಾಳೆ ಅರ್ಥಾತ್​ ಜುಲೈ 29 ಗುರು ಪೂರ್ಣಿಮೆ. ನಿಮ್ಮ ಗುರುಗಳನ್ನು ನೆನಪಿಸಿಕೊಳ್ಳುವ ದಿನವಿದು. ಗುರು ಪೂರ್ಣಿಮಾದಂದು ಶಿಕ್ಷಕರಿಗೆ ಸುಲಭ ಮತ್ತು ಸುಂದರವಾದ ಕೈಯಿಂದ ಮಾಡಿದ ಕಾರ್ಡ್ ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ. 3D ಕಾರ್ಡ್&zwnj;ಗಳು, ವೃತ್ತ ಕಾರ್ಡ್&zwnj;ಗಳು, ಶ್ಲೋಕಗಳು, ಹೂವಿನ ಅಲಂಕಾರಗಳು ಮತ್ತು ಗುರು-ಶಿಷ್ಯ ರೇಖಾಚಿತ್ರಗಳನ್ನು ಬಳಸಿಕೊಂಡು ನೀವು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಸುಂದರವಾಗಿ ಶುಭಾಶಯ ಹೇಳಬಹುದಾಗಿದೆ.&lt;/p&gt;&lt;img&gt;&lt;p&gt;ಗುರು ಪೂರ್ಣಿಮಾದ ವಿಶೇಷ ಸಂದರ್ಭದಲ್ಲಿ ಮಕ್ಕಳು ತಮ್ಮ ಶಿಕ್ಷಕರಿಗೆ ಸುಂದರವಾದ ಕೈಯಿಂದ ಮಾಡಿದ ಕಾರ್ಡ್&zwnj;ಗಳನ್ನು ನೀಡಬಹುದು. ಕಾರ್ಡ್&zwnj;ನಲ್ಲಿ ಗುರು ಮತ್ತು ಶಿಷ್ಯರ ಸುಂದರವಾದ ಚಿತ್ರವನ್ನು ಬಿಡಿ ಮತ್ತು ಅಂಚುಗಳನ್ನು ಹೂವುಗಳು ಮತ್ತು ಎಲೆಗಳಿಂದ ಅಲಂಕರಿಸಿ. ನೀವು ನಿಮ್ಮ ಗುರುಗಳಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಸುಂದರವಾದ ಸಂದೇಶಗಳನ್ನು ಬರೆಯಬಹುದು.&lt;/p&gt;&lt;img&gt;&lt;p&gt;ಸ್ಕೆಚ್ ಪೆನ್ನುಗಳನ್ನು ಬಳಸಿ ಕಾರ್ಡ್&zwnj;ಗಳನ್ನು ರಚಿಸಿ. ನಿಮಗೆ ಚಿತ್ರ ಬಿಡಿಸಲು ಸಾಧ್ಯವಾಗದಿದ್ದರೆ, ವರ್ಣರಂಜಿತ ಪುಸ್ತಕಗಳು, ದೀಪಗಳು ಇತ್ಯಾದಿಗಳನ್ನು ಚಿತ್ರಿಸಲು ಮತ್ತು ಕಾರ್ಡ್&zwnj;ನಲ್ಲಿ &quot;ಗುರು ಪೂರ್ಣಿಮಾ ಶುಭಾಶಯಗಳು&quot; ಎಂದು ಬರೆಯಲು ಪ್ರಯತ್ನಿಸಿ.&lt;/p&gt;&lt;img&gt;&lt;p&gt;ಗುರು ಪೂರ್ಣಿಮಾದಂದು ನಿಮ್ಮ ಶಿಕ್ಷಕರ ಆಶೀರ್ವಾದ ಪಡೆಯುವುದು ಬಹಳ ಮುಖ್ಯವಾಗಿರುತ್ತದೆ. ಆಶೀರ್ವಾದ ಎಂದರೆ ಕೇವಲ ಅವರ ಪಾದಗಳನ್ನು ಸ್ಪರ್ಶಿಸುವುದು ಮಾತ್ರವಲ್ಲದೆ ನಿಮ್ಮ ಹೃದಯಪೂರ್ವಕ ಆಲೋಚನೆಗಳನ್ನು ಕೈಯಿಂದ ಮಾಡಿದ ಕಾರ್ಡ್&zwnj;ನಲ್ಲಿ ಬರೆಯಬಹುದು. ಕೈಯಿಂದ ಮಾಡಿದ ಕಾರ್ಡ್ ನಿಮ್ಮ ಭಾವನೆಗಳನ್ನು ಸೆರೆಹಿಡಿಯುತ್ತದೆ ಮತ್ತು ಶಿಕ್ಷಕರು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಕ್ಷಣವೇ ಅರ್ಥಮಾಡಿಕೊಳ್ಳುತ್ತಾರೆ. ನೀವು ಚಿತ್ರ ಬಿಡಿಸುವಲ್ಲಿ ಉತ್ತಮರಾಗಿದ್ದರೆ, ಸರಳ ಕಾಗದದ ಮೇಲೆ ಮಂಡಲ ಕಲೆಯನ್ನು ರಚಿಸುವ ಮೂಲಕ ನೀವು ಸುಂದರವಾದ ಕಾರ್ಡ್ ಅನ್ನು ರಚಿಸಬಹುದು. ಮಧ್ಯದಲ್ಲಿ ಒಂದು ಜಾಗವನ್ನು ಬಿಡಿ ಮತ್ತು ಅದರ ಮೇಲೆ &quot;ಹ್ಯಾಪಿ ಗುರು ಪೂರ್ಣಿಮಾ&quot; ಎಂದು ಬರೆಯಿರಿ. ನೀವು ಬಯಸಿದರೆ, ನೀವು ವೀಣೆ ಅಥವಾ ನವಿಲು ಗರಿಗಳ ವಿನ್ಯಾಸದ ವರ್ಣರಂಜಿತ ಚಿತ್ರವನ್ನು ಸಹ ಸೇರಿಸಬಹುದು.&lt;/p&gt;&lt;img&gt;&lt;p&gt;ನೀವು ರೇಖಾಚಿತ್ರ ಬರೆಯುವಲ್ಲಿ ತೊಂದರೆ ಅನುಭವಿಸುತ್ತಿದ್ದರೆ, ಪರವಾಗಿಲ್ಲ. ಕಾಗದವನ್ನು ವಿವಿಧ ವಿನ್ಯಾಸಗಳಾಗಿ ಕತ್ತರಿಸುವ ಮೂಲಕ ನೀವು 3D-ಕಾಣುವ ಕಾರ್ಡ್&zwnj;ಗಳನ್ನು ಸಹ ರಚಿಸಬಹುದು. ಗುರು ಪೂರ್ಣಿಮೆಗಾಗಿ ಸುಂದರವಾದ 3D ಹೂವಿನ ವಿನ್ಯಾಸಗಳನ್ನು ರಚಿಸಿ ಮತ್ತು ಸ್ಕೆಚ್ ಪೆನ್&zwnj;ನಿಂದ &quot;ಗುರು ಪೂರ್ಣಿಮಾ&quot; ಎಂದು ಬರೆಯಿರಿ. ನೀವು ಗುರುಗಳ ಪಾದಗಳನ್ನು ಸಹ ಸೆಳೆಯಬಹುದು, ಅದು ತುಂಬಾ ಸುಂದರವಾಗಿ ಕಾಣುತ್ತದೆ.&lt;/p&gt;&lt;img&gt;&lt;p&gt;ನಿಮಗೆ ವಿನ್ಯಾಸ ಅಥವಾ ಕತ್ತರಿಸುವುದು ಹೇಗೆ ಎಂದು ತಿಳಿದಿಲ್ಲದಿದ್ದರೆ, ಸರಳ A4 ಕಾಗದದ ಮೇಲೆ ಗುರುಗಳಿಗೆ ಸಂಬಂಧಿಸಿದ ಶ್ಲೋಕವನ್ನು ಬರೆದು ವಿವಿಧ ಬಣ್ಣಗಳಲ್ಲಿ ಹೂವುಗಳನ್ನು ಅಂಟಿಸಿ. ಈ ಕಾರ್ಡ್ ತುಂಬಾ ಪ್ರಭಾವಶಾಲಿಯಾಗಿ ಕಾಣುತ್ತದೆ ಮತ್ತು ನಿಮ್ಮ ಶಿಕ್ಷಕರು ಖಂಡಿತವಾಗಿಯೂ ಇದನ್ನು ಇಷ್ಟಪಡುತ್ತಾರೆ.&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/make-a-beautiful-card-at-home-for-your-favorite-teacher-on-guru-purnima-super-ideas-for-you-suc-pgwfgwy"/>
        </item>
        <item>
            <title><![CDATA[ಜೀವಾವಧಿ ಶಿಕ್ಷೆ ಪ್ರಸ್ತಾಪ, 10 ಕೋಟಿ ದಂಡ! Anti-Paper Leak ಮಸೂದೆಯಲ್ಲಿ 6 ಪ್ರಮುಖ ಬದಲಾವಣೆ!]]></title>
            <link>https://kannada.asianetnews.com/gallery/india-news/what-is-anti-paper-leak-bill-what-all-changes-have-been-made-in-the-anti-paper-leak-bill-gkn-q7xmseu</link>
            <guid isPermaLink="true">https://kannada.asianetnews.com/gallery/india-news/what-is-anti-paper-leak-bill-what-all-changes-have-been-made-in-the-anti-paper-leak-bill-gkn-q7xmseu</guid>
            <pubDate>Mon, 27 Jul 2026 13:31:04 +0530</pubDate>
            <description><![CDATA[&lt;p&gt;ಇವತ್ತು ಲೋಕಸಭೆಯಲ್ಲಿ Anti-Paper Leak Bill ಮಂಡನೆಯಾಗಿದೆ. ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಈ ತಿದ್ದುಪಡಿ ಮಸೂದೆಯಲ್ಲಿ ಏನಿದೆ? ಏನೆಲ್ಲ ಬದಲಾವಣೆ ಮಾಡಲಾಗಿದೆ ಅನ್ನೋ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyh8n5366gv4jydx9kb1dh7m,imgname-anti-paper-leak-bill-in-loksabha-modi-1785138418789.jpg" type="image/jpeg" height="390" width="690"/>
            <content:encoded><![CDATA[&lt;p&gt;ಇವತ್ತು ಲೋಕಸಭೆಯಲ್ಲಿ Anti-Paper Leak Bill ಮಂಡನೆಯಾಗಿದೆ. ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಈ ತಿದ್ದುಪಡಿ ಮಸೂದೆಯಲ್ಲಿ ಏನಿದೆ? ಏನೆಲ್ಲ ಬದಲಾವಣೆ ಮಾಡಲಾಗಿದೆ ಅನ್ನೋ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ನವದೆಹಲಿ: &lt;/strong&gt;ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ಮಟ್ಟಹಾಕಲು ಮತ್ತು ಪರೀಕ್ಷಾ ವ್ಯವಸ್ಥೆಯ ಮೇಲೆ ನಂಬಿಕೆ ಮರುಸ್ಥಾಪಿಸಲು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮಹತ್ವದ Anti-Paper Leak Bill ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಈ ಮಸೂದೆಯನ್ನು ಮಂಡಿಸಿದ್ದು, ಪೇಪರ್ ಲೀಕ್ ಮಾಡುವ ಕಿರಾತಕರಿಗೆ ನಡುಕ ಹುಟ್ಟಿಸುವಂತಹ ಶಿಕ್ಷೆಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ.&lt;/p&gt;&lt;img&gt;&lt;p&gt;ಈಗಿರುವ ಕಾನೂನಿನ ಪ್ರಕಾರ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ 3 ರಿಂದ 5 ವರ್ಷ ಜೈಲು ಶಿಕ್ಷೆ ಇತ್ತು. ಆದರೆ ಹೊಸ ತಿದ್ದುಪಡಿ ಅನ್ವಯ, ಕನಿಷ್ಠ 5 ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಈ ಹಿಂದೆ ಇದ್ದ 10 ಲಕ್ಷ ರೂಪಾಯಿ ದಂಡವನ್ನು ಈಗ ಐದು ಪಟ್ಟು ಹೆಚ್ಚಿಸಲಾಗಿದ್ದು, 50 ಲಕ್ಷ ರೂಪಾಯಿ ದಂಡ ವಿಧಿಸಲು ಪ್ರಸ್ತಾಪಿಸಲಾಗಿದೆ.&lt;/p&gt;&lt;img&gt;&lt;p&gt;ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುವ ಖಾಸಗಿ ಕಂಪನಿಗಳು ಅಥವಾ ಏಜೆನ್ಸಿಗಳು ಅಕ್ರಮದಲ್ಲಿ ಭಾಗಿಯಾದರೆ ಕಠಿಣ ಶಿಕ್ಷೆ ಆಗಲಿದೆ. ಈ ಹಿಂದೆ ಇದ್ದ 1 ಕೋಟಿ ರೂ. ದಂಡವನ್ನು 5 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಇಂತಹ ಕಂಪನಿಗಳನ್ನು ಸಾರ್ವಜನಿಕ ಪರೀಕ್ಷೆ ನಡೆಸದಂತೆ ನಿಷೇಧಿಸುವ ಅವಧಿಯನ್ನು 4 ವರ್ಷದಿಂದ 8 ವರ್ಷಕ್ಕೆ ಏರಿಸಲಾಗಿದೆ.&lt;/p&gt;&lt;img&gt;&lt;p&gt;ಸಂಘಟಿತವಾಗಿ ನೆಟ್&zwnj;ವರ್ಕ್ ಮಾಡಿಕೊಂಡು ಪೇಪರ್ ಲೀಕ್ ಮಾಡುವ ಗ್ಯಾಂಗ್&zwnj;ಗಳಿಗೆ ಅತಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಕನಿಷ್ಠ 7 ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ಪ್ರಸ್ತಾಪವಿದೆ. ಅಂತಹ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಕನಿಷ್ಠ 10 ಕೋಟಿ ರೂಪಾಯಿ ದಂಡ ವಿಧಿಸಲಾಗುತ್ತದೆ.&lt;/p&gt;&lt;img&gt;&lt;p&gt;ಪೇಪರ್ ಲೀಕ್ ಕೇಸ್&zwnj;ಗಳು ವರ್ಷಗಟ್ಟಲೆ ಎಳೆಯಬಾರದು ಎಂಬ ಕಾರಣಕ್ಕೆ ಸಮಯ ನಿಗದಿ ಮಾಡಲಾಗಿದೆ. ಪೊಲೀಸ್ ಅಥವಾ ವಿಶೇಷ ತನಿಖಾ ದಳ (STF) ಪ್ರಕರಣದ ತನಿಖೆಯನ್ನು 2 ತಿಂಗಳೊಳಗೆ ಪೂರ್ಣಗೊಳಿಸಬೇಕು.ಅಗತ್ಯವಿದ್ದರೆ ಈ ಪ್ರಕರಣಗಳನ್ನು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ (CBI) ವರ್ಗಾಯಿಸಲು ಕೇಂದ್ರಕ್ಕೆ ಅಧಿಕಾರ ನೀಡಲಾಗಿದೆ.&lt;/p&gt;&lt;img&gt;&lt;p&gt;ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕೇಸ್&zwnj;ಗಳ ವಿಚಾರಣೆಗಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್&zwnj;ಗಳನ್ನು ಸ್ಥಾಪಿಸಲಾಗುವುದು. ದೋಷಾರೋಪ ಪಟ್ಟಿ (Chargesheet) ಸಲ್ಲಿಕೆಯಾದ 3 ತಿಂಗಳೊಳಗೆ ವಿಚಾರಣೆ ಮುಗಿಸಿ ತೀರ್ಪು ನೀಡಬೇಕೆಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಮೇಲ್ಮನವಿ ಸಲ್ಲಿಸಬೇಕಾದರೂ ಹೈಕೋರ್ಟ್&zwnj;ನ ಇಬ್ಬರು ನ್ಯಾಯಾಧೀಶರ ಪೀಠದ ಮುಂದೆ ಹೋಗಬೇಕು ಮತ್ತು ಅಲ್ಲಿಯೂ 3 ತಿಂಗಳೊಳಗೆ ವಿಲೇವಾರಿ ಮಾಡಬೇಕು.&lt;/p&gt;&lt;img&gt;&lt;p&gt;ಕಂಪನಿಗಳು ಅಥವಾ ಸಂಸ್ಥೆಗಳು ಅಕ್ರಮದಲ್ಲಿ ಭಾಗಿಯಾದಾಗ, ಆ ಸಂಸ್ಥೆಯ ನಿರ್ದೇಶಕರು ಅಥವಾ ಹಿರಿಯ ಮ್ಯಾನೇಜ್&zwnj;ಮೆಂಟ್&zwnj;ಗೆ ಅಕ್ರಮದ ಬಗ್ಗೆ ತಿಳಿದಿದ್ದರೆ ಅಥವಾ ಅವರೂ ಶಾಮೀಲಾಗಿದ್ದರೆ, ಅವರಿಗೂ ಕನಿಷ್ಠ 5 ವರ್ಷ ಜೈಲು ಮತ್ತು 5 ಕೋಟಿ ರೂ. ದಂಡ ವಿಧಿಸಲಾಗುತ್ತದೆ.&lt;/p&gt;&lt;p&gt;ಬಿಲ್ ಮಂಡನೆಯಾಗುತ್ತಿದ್ದಂತೆ, ಜುಲೈ 20 ರಂದು ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ವಿರೋಧ ಪಕ್ಷಗಳು ಭಾರಿ ಗದ್ದಲ ಸೃಷ್ಟಿಸಿದವು. ಈ ಗದ್ದಲದ ನಡುವೆಯೇ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಒಟ್ಟಾರೆಯಾಗಿ ನೀಟ್ ಮತ್ತು ನೆಟ್ (NET) ಪರೀಕ್ಷೆಗಳ ವಿವಾದದಿಂದ ಮುಖಭಂಗ ಅನುಭವಿಸಿದ್ದ ಕೇಂದ್ರ ಸರ್ಕಾರ, ಈಗ ಕಠಿಣ ಕಾನೂನಿನ ಮೂಲಕ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲು ಮುಂದಾಗಿದೆ.&lt;/p&gt;]]></content:encoded>
            <category>education</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/india-news/what-is-anti-paper-leak-bill-what-all-changes-have-been-made-in-the-anti-paper-leak-bill-gkn-q7xmseu"/>
        </item>
        <item>
            <title><![CDATA[US Education: ಅಮೆರಿಕದಲ್ಲಿ ಓದಿ ಅಲ್ಲೇ ಕೆಲಸ ಮಾಡಬೇಕಾ? ₹95 ಲಕ್ಷ ಶುಲ್ಕ ಕಟ್ಟಲು ಸಿದ್ಧರಾಗಿ!  ಟ್ರಂಪ್ ಹೊಸ ಪ್ಲಾನ್!]]></title>
            <link>https://kannada.asianetnews.com/education/donald-trump-considers-100000-doller-fee-for-foreign-students-to-work-in-us-after-studies-rav/articleshow-sqmwuwo</link>
            <guid isPermaLink="true">https://kannada.asianetnews.com/education/donald-trump-considers-100000-doller-fee-for-foreign-students-to-work-in-us-after-studies-rav/articleshow-sqmwuwo</guid>
            <pubDate>Fri, 31 Jul 2026 15:02:17 +0530</pubDate>
            <description><![CDATA[&lt;p&gt;ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು, ನಂತರ ಅಲ್ಲೇ ಉದ್ಯೋಗ ಮಾಡಬೇಕೆನ್ನುವುದು ಕನಸು ಹೊತ್ತು ಹಲವು ವಿದೇಶಿ ವಿದ್ಯಾರ್ಥಿಗಳಿಗೆ ಡೊನಾಲ್ಡ್ ಟ್ರಂಪ್ ಆಡಳಿತ ಶಾಕ್ ನೀಡುವ &amp;nbsp;ಸಾಧ್ಯತೆಯಿದೆ. ವರದಿಗಳ ಪ್ರಕಾರ, ಇಂತಹ ವಿದ್ಯಾರ್ಥಿಗಳಿಂದ &amp;nbsp;95 ಲಕ್ಷ ರೂ.ಶುಲ್ಕ ವಸೂಲಿ ಮಾಡುವ ಪ್ರಸ್ತಾಪವೊಂದು ಚರ್ಚೆಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvqzanqbxjnzjnnd7xjn96d,imgname-----------------------2026-07-31t145623.870-1785490025143.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕದಲ್ಲಿ ಓದಿ, ಅಲ್ಲೇ ಕೆಲಸ ಹುಡುಕಿ ಜೀವನ ರೂಪಿಸಿಕೊಳ್ಳಬೇಕು ಎಂಬುದು ಇಂದಿನ ಬಹುತೇಕ ಯುವಕರ ಕನಸು. ಇಂಥ ಕನಸು ಹೊತ್ತು ಅಮೆರಿಕ ಹೋಗುವ ವಿದೇಶಿ ವಿದ್ಯಾರ್ಥಿಗಳಿಗೆ ಡೊನಾಲ್ಡ್ ಶಾಕ್ ಕೊಟ್ಟಿದ್ದಾನೆ. ವಿಷ್ಯ ಏನಪ್ಪಂದ್ರೆ, ಯಾರು ಅಮೆರಿಕದಲ್ಲಿ ಶಿಕ್ಷಣ ಉದ್ಯೋಗದ ಕನಸು ಕಟ್ಟಿಕೊಂಡು ದೇಶಕ್ಕೆ ಬರ್ತಾರೋ ಅಂಥ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹಾಕುವ ಪ್ಲಾನ್ ಮಾಡಲಾಗಿದೆ.&lt;/p&gt;&lt;p&gt;ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಆಡಳಿತವು ವಿದೇಶಿ ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರ ವರ್ಕ್ ಪರ್ಮಿಟ್ ನೀಡಲು ಬರೋಬ್ಬರಿ 1 ಲಕ್ಷ ಡಾಲರ್, ಅಂದರೆ ಸುಮಾರು 95 ಲಕ್ಷ ರೂಪಾಯಿ ಶುಲ್ಕ ವಿಧಿಸುವ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಇದನ್ನ ಟ್ರಂಪ್ ಸರ್ಕಾರವು ಗಂಭೀರವಾಗಿ ಪರಿಗಣಿಸುತ್ತಿದೆ. ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ಭಾರತದಂತಹ ದೇಶಗಳಿಂದ ಶೈಕ್ಷಣಿಕ ಸಾಲ ಪಡೆದು ಅಮೆರಿಕಕ್ಕೆ ಹೋಗುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ. ಓದಿನ ನಂತರ ಒಂದಷ್ಟು ವರ್ಷ ಕೆಲಸ ಮಾಡಿ ಸಾಲ ತೀರಿಸುವ ಮತ್ತು ಅನುಭವ ಗಳಿಸುವ ಅವರ ಪ್ಲಾನ್&zwnj;ಗಳಿಗೆ ಟ್ರಂಪ್&zwnj;ನ ಈ ಪ್ರಸ್ತಾಪ ತಣ್ಣೀರೆರಚಬಹುದು.&lt;/p&gt;&lt;h2&gt;ವಿದೇಶಿ ವಿದ್ಯಾರ್ಥಿಗಳೇ ಟ್ರಂಪ್ ಟಾರ್ಗೆಟ್?&lt;/h2&gt;&lt;p&gt;ಟ್ರಂಪ್ ಆಡಳಿತದ ಈ ಚಿಂತನೆಯು 'ಅಮೆರಿಕನ್ ಫಸ್ಟ್' ನೀತಿಯ ಮುಂದುವರಿದ ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಮೆರಿಕದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ನಂತರ ದೇಶದಲ್ಲಿಯೇ ಉಳಿದು ಕೆಲಸ ಮಾಡಲು ಇಚ್ಛಿಸುವವರಿಗೆ ಮಾತ್ರ ಈ ದುಬಾರಿ ಶುಲ್ಕ ಅನ್ವಯವಾಗಲಿದೆ ಎಂದು ವರದಿಗಳು ಹೇಳಿವೆ. ಸದ್ಯಕ್ಕೆ ಇದೊಂದು ಪ್ರಸ್ತಾಪವಾಗಿದ್ದು, ಇನ್ನೂ ಚರ್ಚೆಯ ಹಂತದಲ್ಲಿದೆ. ಒಂದು ವೇಳೆ ಈ ಪ್ರಸ್ತಾಪ ಕಾನೂನಾಗಿ ಬದಲಾದರೆ, ಅಮೆರಿಕವು ಉನ್ನತ ಶಿಕ್ಷಣಕ್ಕೆ ಅತ್ಯಂತ ದುಬಾರಿ ದೇಶವಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ. ಇದು ಅಮೆರಿಕದ ಉನ್ನತ ಶಿಕ್ಷಣ ವ್ಯವಸ್ಥೆಯ ಆಕರ್ಷಣೆಯನ್ನೇ ಕಡಿಮೆ ಮಾಡಬಹುದು. ಆಗ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಅಮೆರಿಕದ ಬದಲು ಕೆನಡಾ, ಆಸ್ಟ್ರೇಲಿಯಾ ಅಥವಾ ಯುರೋಪ್ ದೇಶಗಳತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಸದ್ಯಕ್ಕೆ ಇದೊಂದು ಪ್ರಸ್ತಾಪವಷ್ಟೇ ಆಗಿದ್ದರೂ, ಟ್ರಂಪ್ ಆಡಳಿತದ ಹಿಂದಿನ ಕಠಿಣ ವಲಸೆ ನೀತಿಗಳ ಹಿನ್ನೆಲೆ ನೋಡಿದರೆ ಇದು ನಿಜವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಸುದ್ದಿ ಹೊರಬೀಳುತ್ತಿದ್ದಂತೆ ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿ ಸಮುದಾಯದಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ.&lt;/p&gt;]]></content:encoded>
            <category>education</category>
            <dc:creator>Ravi Janekal</dc:creator>
            <atom:link href="https://kannada.asianetnews.com/education/donald-trump-considers-100000-doller-fee-for-foreign-students-to-work-in-us-after-studies-rav/articleshow-sqmwuwo"/>
        </item>
        <item>
            <title><![CDATA[ಶಿಕ್ಷಣ ಕ್ಷೇತ್ರಕ್ಕೆ ಎಚ್ಚರಿಕೆ ಗಂಟೆ: ಬಿಹಾರ, ಉತ್ತರ ಪ್ರದೇಶಕ್ಕಿಂತ ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಶಾಲಾ ಡ್ರಾಪ್‌ಔಟ್ ಹೆಚ್ಚಳ]]></title>
            <link>https://kannada.asianetnews.com/gallery/education/new-central-report-karnataka-faces-challenge-in-retaining-girl-students-in-high-schools-u0lfml2</link>
            <guid isPermaLink="true">https://kannada.asianetnews.com/gallery/education/new-central-report-karnataka-faces-challenge-in-retaining-girl-students-in-high-schools-u0lfml2</guid>
            <pubDate>Tue, 28 Jul 2026 16:36:01 +0530</pubDate>
            <description><![CDATA[&lt;p&gt;Karnataka Girl Student Dropout: ಒಂದು ಕಾಲದಲ್ಲಿ ಶಿಕ್ಷಣದಲ್ಲಿ ಹಿಂದುಳಿದಿದ್ದ ಬಿಹಾರವೇ ಸುಧಾರಣೆ ಕಾಣುತ್ತಿದ್ದರೆ, ಪ್ರಗತಿಪರ ಎನ್ನಿಸಿಕೊಳ್ಳುವ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಬಿಡುತ್ತಿರುವುದು ಆತಂಕಕಾರಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gre00cqmtc4047c5wyxztx68,imgname-girl-student-1675507020531.jpg" type="image/jpeg" height="390" width="690"/>
            <content:encoded><![CDATA[&lt;p&gt;Karnataka Girl Student Dropout: ಒಂದು ಕಾಲದಲ್ಲಿ ಶಿಕ್ಷಣದಲ್ಲಿ ಹಿಂದುಳಿದಿದ್ದ ಬಿಹಾರವೇ ಸುಧಾರಣೆ ಕಾಣುತ್ತಿದ್ದರೆ, ಪ್ರಗತಿಪರ ಎನ್ನಿಸಿಕೊಳ್ಳುವ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಬಿಡುತ್ತಿರುವುದು ಆತಂಕಕಾರಿಯಾಗಿದೆ.&lt;/p&gt;&lt;img&gt;&lt;p&gt;&lt;strong&gt;ಆಘಾತಕಾರಿ ವಿಷಯ ಬಹಿರಂಗ&lt;/strong&gt;ಒಂಬತ್ತು ಮತ್ತು ಹತ್ತನೇ ತರಗತಿಯ (ಸೆಕಂಡರಿ ಸ್ಕೂಲ್) ಹಂತದಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಬಿಡುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ದೇಶದ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿದ UDISE+ 2025-26 ವರದಿಯು ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ರಾಜ್ಯಗಳೆಂದು ಕರೆಯಲ್ಪಡುವ ಬಿಹಾರ ಮತ್ತು ಉತ್ತರ ಪ್ರದೇಶಗಳಿಗಿಂತಲೂ ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಡ್ರಾಪೌಟ್ (ಶಾಲೆ ಬಿಡುವವರ ಸಂಖ್ಯೆ) ದರ ಹೆಚ್ಚಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;&lt;strong&gt;ವರದಿಯ ಮುಖ್ಯಾಂಶಗಳು&lt;/strong&gt;ವರದಿಯ ಪ್ರಕಾರ, 2025-26ರ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದಲ್ಲಿ ಸೆಕಂಡರಿ ಹಂತದಲ್ಲಿ ಹೆಣ್ಣು ಮಕ್ಕಳ ಡ್ರಾಪೌಟ್ ದರವು ಶೇ. 13.9 ರಷ್ಟಿದೆ. ಇದು ದೇಶದ ಸರಾಸರಿ ಶೇ. 8 ಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದರೂ (2023-24 ರಲ್ಲಿ ಶೇ. 19.6, 2024-25 ರಲ್ಲಿ ಶೇ. 14.6 ಇತ್ತು), ಇತರ ರಾಜ್ಯಗಳ ಪ್ರಗತಿಗೆ ಹೋಲಿಸಿದರೆ ಈ ಬದಲಾವಣೆ ಆಶಾದಾಯಕವಾಗಿಲ್ಲ ಎಂದು ವರದಿ ತಿಳಿಸಿದೆ.&lt;/p&gt;&lt;img&gt;&lt;p&gt;&lt;strong&gt;ಬಿಹಾರದಲ್ಲಿ ಸುಧಾರಣೆ, ಕರ್ನಾಟಕದಲ್ಲಿ ಹಿನ್ನಡೆ&lt;/strong&gt;ಒಂದು ಕಾಲದಲ್ಲಿ ಶಿಕ್ಷಣದಲ್ಲಿ ತೀರಾ ಹಿಂದುಳಿದಿದ್ದ ಬಿಹಾರ, ಈಗ ಡ್ರಾಪೌಟ್ ನಿಯಂತ್ರಣದಲ್ಲಿ ಗಣನೀಯ ಸಾಧನೆ ಮಾಡಿದೆ. ಬಿಹಾರದಲ್ಲಿ ಹೆಣ್ಣು ಮಕ್ಕಳ ಡ್ರಾಪೌಟ್ ದರವು ಶೇ. 25.1 ರಿಂದ ಶೇ. 9.1 ಕ್ಕೆ ಇಳಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಇದು ಶೇ. 7.3 ರಷ್ಟಿದೆ. ದಕ್ಷಿಣ ಭಾರತದ ಇತರ ರಾಜ್ಯಗಳಾದ ಕೇರಳ (ಶೇ. 3) ಮತ್ತು ತಮಿಳುನಾಡು (ಶೇ. 3.2) ಅತ್ಯುತ್ತಮ ಸಾಧನೆ ಮಾಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿವೆ. ಅಸ್ಸಾಂ ಮತ್ತು ಕರ್ನಾಟಕ ಎರಡೂ ಶೇ. 13.9 ರಷ್ಟು ಡ್ರಾಪೌಟ್ ದರದೊಂದಿಗೆ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.&lt;/p&gt;&lt;img&gt;&lt;p&gt;&lt;strong&gt;ಕಾರಣಗಳೇನು?&lt;/strong&gt;ಹೆಣ್ಣು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಬಿಡಲು ಆರ್ಥಿಕ ಸಂಕಷ್ಟಗಳು, ಕುಟುಂಬದ ಜವಾಬ್ದಾರಿಗಳು, ಬಾಲ್ಯ ವಿವಾಹಗಳು, ಶಾಲೆಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯದ ಕೊರತೆ ಮತ್ತು ಕೆಲವು ಸಾಮಾಜಿಕ ಕಾರಣಗಳು ಪ್ರಮುಖವಾಗಿವೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಮುಂದುವರಿಸಲು ಸರ್ಕಾರ, ಶಾಲೆಗಳು ಮತ್ತು ಪೋಷಕರು ಸಮನ್ವಯದಿಂದ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/education/new-central-report-karnataka-faces-challenge-in-retaining-girl-students-in-high-schools-u0lfml2"/>
        </item>
        <item>
            <title><![CDATA[ಶಿವಮೊಗ್ಗ: ಮಕ್ಕಳಿಗೆ ಪೌಷ್ಟಿಕ ಮೊಟ್ಟೆ ಖರೀದಿ: ಶಿಕ್ಷಕರ ಜೇಬಿಗೆ ಕತ್ತರಿ..!]]></title>
            <link>https://kannada.asianetnews.com/karnataka-districts/financial-burden-on-teachers-soaring-egg-prices-force-school-staff-to-pay-out-of-pocket-in-shivamogga-kvn/articleshow-v3iofqz</link>
            <guid isPermaLink="true">https://kannada.asianetnews.com/karnataka-districts/financial-burden-on-teachers-soaring-egg-prices-force-school-staff-to-pay-out-of-pocket-in-shivamogga-kvn/articleshow-v3iofqz</guid>
            <pubDate>Mon, 27 Jul 2026 11:33:50 +0530</pubDate>
            <description><![CDATA[ಹೊಸನಗರ ತಾಲೂಕಿನ ಶಾಲೆಗಳಲ್ಲಿ ಸರ್ಕಾರದ ಮೊಟ್ಟೆ ವಿತರಣೆ ಯೋಜನೆಯಿಂದಾಗಿ ಶಿಕ್ಷಕರು ತಮ್ಮ ಕೈಯಿಂದ ಹಣ ಹಾಕುವಂತಾಗಿದೆ. ಇದರ ಜೊತೆಗೆ, ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳಾದರೂ 60ಕ್ಕೂ ಹೆಚ್ಚು ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕಗಳು ತಲುಪಿಲ್ಲ, ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyh2jeb493wspe2yb0sqxtx5,imgname-egg-bhagya-1785132038499.jpg" type="image/jpeg" height="390" width="690"/>
            <content:encoded><![CDATA[&lt;p&gt;ರಿಪ್ಪನ್&zwj;ಪೇಟೆ: ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆ ನೀಗಿಸುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರ ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ಸರ್ಕಾರಿ ಮತ್ತು ಅನುದಾನಿತ ಕಿರಿಯ ಹಿರಿಯ ಪ್ರಾಥಮಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುವ ಮೊಟ್ಟೆ, ಬಾಳೆಹಣ್ಣಿನ ವಿತರಣೆಯಿಂದ ಶಿಕ್ಷಕರು ತಮ್ಮ ಕೈಯಿಂದ ಹಣ ಹಾಕುವ ಮೂಲಕ ಜೇಬಿಗೆ ಕತ್ತರಿ ಬಿದ್ದಿದೆ!&lt;/p&gt;&lt;p&gt;ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ 264 ಶಾಲೆಗಳು ಬರುತ್ತಿದ್ದು ಒಂದರಿಂದ ಎಸ್.ಎಸ್.ಎಲ್.ಸಿ.ವರೆಗೆ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಕಿರಿಯ ಮತ್ತು ಹಿರಿಯ ಪ್ರೌಢಶಾಲೆಗಳಲ್ಲಿ 13.775 ವಿದ್ಯಾರ್ಥಿಗಳಿಗೆ ವಾರದ ಎರಡು ದಿನ ಸರ್ಕಾರದಿಂದ ಉಚಿತವಾಗಿ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವ ಯೋಜನೆಗೆ ಶಿಕ್ಷಕ ವರ್ಗ ತಮ್ಮ ಕಿಸೆಯಿಂದ ಹಣ ಹಾಕುವಂತಾಗಿದೆ.&lt;/p&gt;&lt;p&gt;ಮೊಟ್ಟೆ ಒಂದಕ್ಕೆ ಸರ್ಕಾರ 6 ರು.ಗಳನ್ನು ನೀಡುತ್ತಿದೆ. ಆದರೆ, ಅಂಗಡಿಗಳಲ್ಲಿ ಮೊಟ್ಟೆಯ ಬೆಲೆ ಈಗ 8 ರಿಂದ 9 ರು. ಬೆಲೆ ಇದೆ. ಹೆಚ್ಚುವರಿ ವೆಚ್ಚವನ್ನು ಶಿಕ್ಷಕರೆ ಭರಿಸಿ, ಮೊಟ್ಟೆ ಖರೀದಿಸಿ ತಂದು ಮಕ್ಕಳಿಗೆ ನೀಡಬೇಕಾಗಿದೆ. ಇದರಿಂದಾಗಿ ಶಿಕ್ಷಕರು ತಮ್ಮ ಜೇಬಿನಿಂದ ಹೆಚ್ಚುವರಿ ತಲಾ ಒಂದು ಮೊಟ್ಟಗೆ 2.80 ತೆರಬೇಕಾಗಿದೆ.&lt;/p&gt;&lt;p&gt;ಪ್ರೇಮ್&zwj;ಜಿ ಫೌಂಡೇಷನ್ ವತಿಯಿಂದ ವಾರದ ನಾಲ್ಕು ದಿನ ಉಚಿತ ಮೊಟ್ಟೆ ಪೂರೈಕೆಯಾದರೆ ಉಳಿದ ಎರಡು ದಿನ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮೊಟ್ಟೆ ವಿತರಣೆಗಾಗಿ ತಮ್ಮ ಕೈಯಿಂದ ಹಣ ಹಾಕಿ ಮೊಟ್ಟೆ ತಂದು ವಿತರಣೆ ಮಾಡಬೇಕಾಗಿದೆ ಎಂದು ಕೆಲಶಾಲೆಯ ಶಿಕ್ಷಕರು ತಮ್ಮ ನೋವಿನ ಕತೆಯನ್ನು ಮಾಧ್ಯಮದವರಲ್ಲಿ ಹಂಚಿಕೊಂಡರು.&lt;/p&gt;&lt;h2&gt;&lt;strong&gt;60 ಕ್ಕೂ ಆಧಿಕ ಶಾಲೆಗಳಿಗೆ ಇನ್ನೂ ಇಲ್ಲ ಪಠ್ಯಪುಸ್ತಕ&lt;/strong&gt;&lt;/h2&gt;&lt;p&gt;ಈಗಾಗಲೇ ಶಾಲಾ ಕಾಲೇಜು ಆರಂಭಗೊಂಡು ಎರಡು ತಿಂಗಳು ಕಳೆಯುತ್ತಾ ಬಂದರೂ ಹೊಸನಗರ ತಾಲೂಕಿನ 60 ಕ್ಕೂ ಅಧಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಬಂದಿಲ್ಲ ಎನ್ನಲಾಗಿದೆ.&lt;/p&gt;&lt;p&gt;ರಾಜ್ಯ ಸರ್ಕಾರ ಶಾಲೆ ಆರಂಭದ ದಿನವೇ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸರಬರಾಜು ಮಾಡಲಾಗುತ್ತದೆ. ಕೆಲವು ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯಪಸ್ತಕ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಧಿಕಾರಿ ವರ್ಗ ಹಾಗೂ ಶಾಲೆಯ ಶಿಕ್ಷಕರು ಹೇಳುವಂತೆ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಕೆಲವು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯತ್ತ ಬಂದು ದಾಖಲಾಗುವುದರಿಂದಾಗಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎನ್ನುತ್ತಾರೆ.&lt;/p&gt;&lt;p&gt;ಕಳೆದ ವರ್ಷದ ದಾಖಲಾತಿಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಪಠ್ಯಪುಸ್ತಕ ಸರಬರಾಜು ಮಾಡಲಾಗಿದೆ.ಈಗ ಶಾಲೆ ಪ್ರಾರಂಭಗೊಂಡಿದ್ದು ಕೆಲವು ವಿದ್ಯಾರ್ಥಿಗಳು ಹೊಸದಾಗಿ ಬಂದು ಪ್ರವೇಶ ಪಡೆದ ಕಾರಣ ಮಕ್ಕಳ ಅಂಕಿ ಅಂಶವನ್ನು ತಾಲೂಕು ಮಟ್ಟದ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಿ ಅಗತ್ಯ ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಿದರೆ ಆಗ ಸಂಬಂಧ ಪಟ್ಟ ಅಧಿಕಾರಿವರ್ಗ ತಕ್ಷಣ ಕ್ರಮಕೈಗೊಳ್ಳವ ಮೂಲಕ ಅಕ್ಕ ಪಕ್ಕದ ಶಾಲೆಗಳಲ್ಲಿ ಹೆಚ್ಚುವರಿ ಪಠ್ಯಪುಸ್ತಕಗಳನ್ನು ಪಡೆದು ವಿತರಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.&lt;/p&gt;&lt;p&gt;ಒಟ್ಟಾರೆಯಾಗಿ ಹೊಸನಗರ ತಾಲೂಕಿನ ಕೆಲವು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳು ಆರಂಭಗೊಂಡಿದ್ದು, ಕೊರತೆಯಿರುವ ಪಠ್ಯ ಪುಸ್ತಕವನ್ನು ತಕ್ಷಣವೇ ಸರಬರಾಜು ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಅದಷ್ಟು ಬೇಗ ಸಮಸ್ಯೆಯಾಗದಂತೆ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು ಎನ್ನಲಾಗಿದೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/financial-burden-on-teachers-soaring-egg-prices-force-school-staff-to-pay-out-of-pocket-in-shivamogga-kvn/articleshow-v3iofqz"/>
        </item>
        <item>
            <title><![CDATA[ಹಗಲಲ್ಲಿ ಪುಸ್ತಕ, ಇರುಳಲ್ಲಿ ಪೆಟ್ರೋಲ್​ ಬಂಕ್​ನಲ್ಲಿ ಕಾಯಕ: ಜೆನ್​ Z ಯುವತಿಯ ಮನಮಿಡಿಯುವ ಜೀವನಗಾಥೆ]]></title>
            <link>https://kannada.asianetnews.com/jobs/college-by-day-petrol-pump-by-night-students-grit-inspires-thousands/articleshow-vgkmuh3</link>
            <guid isPermaLink="true">https://kannada.asianetnews.com/jobs/college-by-day-petrol-pump-by-night-students-grit-inspires-thousands/articleshow-vgkmuh3</guid>
            <pubDate>Sun, 02 Aug 2026 19:00:37 +0530</pubDate>
            <description><![CDATA[&lt;p&gt;ಹಗಲು ಕಾಲೇಜಿನಲ್ಲಿ ಓದು, ರಾತ್ರಿ 10 ಗಂಟೆಯವರೆಗೆ ಪೆಟ್ರೋಲ್ ಬಂಕ್&zwnj;ನಲ್ಲಿ ಕೆಲಸ. ತನ್ನ ಶಿಕ್ಷಣದ ವೆಚ್ಚವನ್ನು ತಾನೇ ಭರಿಸಲು ವಿದ್ಯಾರ್ಥಿನಿಯೊಬ್ಬಳು ನಡೆಸುತ್ತಿರುವ ಹೋರಾಟ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ಆಕೆಯ ಕಥೆ ಪರಿಶ್ರಮ, ಆತ್ಮವಿಶ್ವಾಸ ಮತ್ತು ಅರೆಕಾಲಿಕ ಉದ್ಯೋಗಗಳ ಅಗತ್ಯತೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz14f7ks6q00e5qc7yg5b18h,imgname-she-goes-college-by-day--works-till-10-pm-at-petrol-pump-for-her-college-fees--1--1785670901368.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿಕ್ಷಣಕ್ಕಾಗಿ ಕಠಿಣ ಹಾದಿ ಹಿಡಿದ ಯುವತಿ!&lt;/strong&gt;&lt;/p&gt;&lt;p&gt;&lt;strong&gt;ಮಹಾರಾಷ್ಟ್ರ:&lt;/strong&gt; ಉನ್ನತ ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಆದರೆ ಆ ಕನಸನ್ನು ನನಸಾಗಿಸಲು ಕೆಲವರು ಎದುರಿಸುವ ಸವಾಲುಗಳು ಸಾಮಾನ್ಯರಿಗೆ ಊಹಿಸಲಾಗದಷ್ಟು ಕಠಿಣವಾಗಿರುತ್ತವೆ. ಅಂತಹ ಪ್ರೇರಣಾದಾಯಕ ಕಥೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹಗಲು ತರಗತಿಗಳಿಗೆ ಹಾಜರಾಗುವುದರ ಜೊತೆಗೆ ರಾತ್ರಿ 10 ಗಂಟೆಯವರೆಗೆ ಪೆಟ್ರೋಲ್ ಬಂಕ್&zwnj;ನಲ್ಲಿ ಕೆಲಸ ಮಾಡಿ ತನ್ನ ಶಿಕ್ಷಣದ ವೆಚ್ಚವನ್ನು ತಾನೇ ಭರಿಸುತ್ತಿದ್ದಾಳೆ.&lt;/p&gt;&lt;p&gt;&lt;strong&gt;ಒಂದು ಸಾಮಾನ್ಯ ಭೇಟಿ ಬಿಚ್ಚಿಟ್ಟ ಅಸಾಮಾನ್ಯ ಕಥೆ..!&lt;/strong&gt;&lt;/p&gt;&lt;p&gt;ರಾತ್ರಿ ವೇಳೆ ಶೆಲ್ ಪೆಟ್ರೋಲ್ ಬಂಕ್&zwnj;ಗೆ ಕಾರಿಗೆ ಇಂಧನ ತುಂಬಿಸಿಕೊಳ್ಳಲು ಬಂದ ವ್ಯಕ್ತಿಯೊಬ್ಬರು ವಿದ್ಯಾರ್ಥಿನಿಯೊಂದಿಗೆ ಮಾತುಕತೆ ನಡೆಸಿದಾಗ ಆಕೆಯ ಬದುಕಿನ ನಿಜವಾದ ಹೋರಾಟ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮೂಲದ ಈ ಯುವತಿ ಕಾಲೇಜು ಓದಿಗಾಗಿ ನಗರಕ್ಕೆ ಬಂದಿದ್ದು, ಕುಟುಂಬದ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ಉದ್ಯೋಗವನ್ನು ಆಯ್ಕೆ ಮಾಡಿಕೊಂಡಿದ್ದಾಳೆ.&lt;/p&gt;&lt;p&gt;&lt;strong&gt;ಹಗಲು ಓದು... ರಾತ್ರಿ ದುಡಿಮೆ!&lt;/strong&gt;&lt;/p&gt;&lt;p&gt;ವಿದ್ಯಾರ್ಥಿನಿ ಬೆಳಗ್ಗೆ ಕಾಲೇಜು ತರಗತಿಗಳಿಗೆ ಹಾಜರಾಗುತ್ತಾಳೆ. ಸಂಜೆ ಪೆಟ್ರೋಲ್ ಬಂಕ್&zwnj;ನಲ್ಲಿ ಕೆಲಸ ಆರಂಭಿಸಿ ರಾತ್ರಿ 10 ಗಂಟೆಯವರೆಗೆ ಸೇವೆ ಸಲ್ಲಿಸುತ್ತಾಳೆ. ವಾರಾಂತ್ಯದಲ್ಲಿ ಬೆಳಗ್ಗೆ ಹಾಗೂ ಸಂಜೆ ಎರಡೂ ಪಾಳಿಗಳಲ್ಲಿ ಕೆಲಸ ಮಾಡಿ ಕಾಲೇಜು ಶುಲ್ಕ, ವಸತಿ ಮತ್ತು ದಿನನಿತ್ಯದ ಖರ್ಚುಗಳನ್ನು ನಿರ್ವಹಿಸುತ್ತಾಳೆ. ತನ್ನ ಗುರಿಯತ್ತ ಅಚಲವಾಗಿ ಸಾಗುತ್ತಿರುವ ಆಕೆಯ ದೃಢಸಂಕಲ್ಪ ಅನೇಕರಿಗೆ ಸ್ಫೂರ್ತಿಯಾಗಿದೆ.&lt;/p&gt;&lt;p&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರ..&lt;/strong&gt;&lt;/p&gt;&lt;p&gt;ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿಯ ಮನ ಗೆದ್ದಿದೆ. ಅನೇಕರು ವಿದ್ಯಾರ್ಥಿನಿಯ ಪರಿಶ್ರಮ, ಆತ್ಮವಿಶ್ವಾಸ ಮತ್ತು ಆತ್ಮನಿರ್ಭರತೆಯನ್ನು ಕೊಂಡಾಡಿದ್ದಾರೆ. ಕೆಲವರು ಆಕೆಯ ಶಿಕ್ಷಣಕ್ಕೆ ನೆರವು ನೀಡಲು ಮುಂದಾಗಿದ್ದರೆ, ಇನ್ನೂ ಹಲವರು ಇಂತಹ ವಿದ್ಯಾರ್ಥಿಗಳಿಗೆ ಸಮಾಜ ಮತ್ತು ಸಂಸ್ಥೆಗಳು ಹೆಚ್ಚಿನ ಬೆಂಬಲ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ಭಾರತದಲ್ಲಿ ಅರೆಕಾಲಿಕ ಉದ್ಯೋಗದ ಅಗತ್ಯತೆ..!&lt;/strong&gt;&lt;/p&gt;&lt;p&gt;ಈ ಘಟನೆ ಮತ್ತೊಮ್ಮೆ ವಿದ್ಯಾರ್ಥಿಗಳಿಗಾಗಿ ಅರೆಕಾಲಿಕ ಉದ್ಯೋಗಗಳ ಅಗತ್ಯವನ್ನು ಚರ್ಚೆಗೆ ತಂದಿದೆ. ವಿದೇಶಗಳಲ್ಲಿ ವಿದ್ಯಾರ್ಥಿಗಳು ಓದಿನ ಜೊತೆಗೆ ಉದ್ಯೋಗ ಮಾಡುವುದು ಸಾಮಾನ್ಯ. ಭಾರತದಲ್ಲೂ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಸಂಸ್ಥೆಗಳು ಇಂತಹ ಅವಕಾಶಗಳನ್ನು ಹೆಚ್ಚಿಸಿದರೆ, ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.&lt;/p&gt;&lt;p&gt;&lt;strong&gt;ಪರಿಶ್ರಮಕ್ಕೆ ಪರ್ಯಾಯವಿಲ್ಲ!&lt;/strong&gt;&lt;/p&gt;&lt;p&gt;ಈ ವಿದ್ಯಾರ್ಥಿನಿಯ ಕಥೆ ಕೇವಲ ವೈರಲ್ ಪೋಸ್ಟ್ ಅಲ್ಲ. ಗುರಿ ಸ್ಪಷ್ಟವಾಗಿದ್ದರೆ ಯಾವುದೇ ಪರಿಸ್ಥಿತಿಯಲ್ಲೂ ಕನಸನ್ನು ಸಾಕಾರಗೊಳಿಸಬಹುದು ಎಂಬುದಕ್ಕೆ ಇದು ಜೀವಂತ ಉದಾಹರಣೆ. ಆಕೆಯ ಹೋರಾಟ ಸಾವಿರಾರು ಯುವಕರಿಗೆ ಧೈರ್ಯ, ಪರಿಶ್ರಮ ಮತ್ತು ಆತ್ಮವಿಶ್ವಾಸದ ಮಹತ್ವವನ್ನು ನೆನಪಿಸುತ್ತದೆ.&lt;/p&gt;]]></content:encoded>
            <category>education</category>
            <dc:creator>Chandrashekar GS</dc:creator>
            <atom:link href="https://kannada.asianetnews.com/jobs/college-by-day-petrol-pump-by-night-students-grit-inspires-thousands/articleshow-vgkmuh3"/>
        </item>
        <item>
            <title><![CDATA[ದಕ್ಷಿಣ ಭಾರತದ 17ರ ವಿದ್ಯಾರ್ಥಿಗೆ ಸಿಕ್ಕಿತು ಬರೋಬ್ಬರಿ 3.55 ಕೋಟಿ ರೂ ಐವಿ ಲೀಗ್ ಸ್ಕಾಲರ್‌ಶಿಪ್]]></title>
            <link>https://kannada.asianetnews.com/india-news/south-indian-17-year-old-student-secures-rs-3-55-crore-ivy-league-education-scholarship/articleshow-wefmvhe</link>
            <guid isPermaLink="true">https://kannada.asianetnews.com/india-news/south-indian-17-year-old-student-secures-rs-3-55-crore-ivy-league-education-scholarship/articleshow-wefmvhe</guid>
            <pubDate>Sun, 09 Aug 2026 16:42:05 +0530</pubDate>
            <description><![CDATA[&lt;p&gt;17ರ ವಿದ್ಯಾರ್ಥಿಯ ಮುಂದಿನ ಸಂಪೂರ್ಣ ವಿದ್ಯಾಭ್ಯಾಸದ ಖರ್ಚು ವೆಚ್ಚಕ್ಕೆ ಬರೋಬ್ಬರಿ 3.55 ಕೋಟಿ ರೂ ಸ್ಕಾಲರ್&zwnj;ಶಿಪ್ ಸಿಕ್ಕಿದೆ. ಅಮೆರಿಕದ ಪ್ರತಿಷ್ಠಿತ ಐವಿ ಲೀಗ್ ಶಿಕ್ಷಣ ಸಂಸ್ಥೆಯ ಸ್ಕಾಲರ್&zwnj;ಶಿಪ್ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzk3fy7vv2j3weey89pbpz68,imgname-pranav-ilango-earns-rs-3.55-crore-scholarship-1786273855739.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಆ.09) &lt;/strong&gt;ದೇಶ ವಿದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಹಲವು ಸ್ಕಾಲರ್&zwnj;ಶಿಫ್ ಲಭ್ಯವಿದೆ. ತಮ್ಮ ಪ್ರತಿಭೆ, ಸಾಮರ್ಥ್ಯ ಸಾಬೀತು ಪಡಿಸಿದರೆ ಮುಂದಿನ ವಿದ್ಯಾಭ್ಯಾಸ ಸಂಪೂರ್ಣ ಉಚಿತವಾಗಲಿದೆ. ಇದೀಗ ತಮಿಳುನಾಡಿನ 17 ವರ್ಷದ ವಿದ್ಯಾರ್ಥಿ ಪ್ರಣವ್ ಇಳಂಗೋ ಭರ್ಜರಿ ಜಾಕ್&zwnj;ಪಾಟ್ ಪಡೆದಿದ್ದಾರೆ. ಅಮೆರಿಕದ ಪ್ರತಿಷ್ಠಿತ ಐವಿ ಲೀಗ್ ಶಿಕ್ಷಣ ಸಂಸ್ಥೆಯ ಬ್ರೌನ್ ವಿಶ್ವವಿದ್ಯಾಲಯದಿಂದ 3.55 ಕೋಟಿ ರೂಪಾಯಿ ಸ್ಕಾಲರ್&zwnj;&zwnj;ಶಿಪ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಉನ್ನತ ಶಿಕ್ಷಣ ಪಡೆಯಲು ಪ್ರಣವ್ ಇಳಂಗೋಗೆ 3.55 ಕೋಟಿ ರೂಪಾಯಿ ಸಂಪೂರ್ಣ ವೆಚ್ಚದ ಸ್ಕಾಲರ್&zwnj;ಶಿಪ್ ನೀಡಿದೆ.&lt;/p&gt;&lt;h2&gt;ಎಲ್ಲಾ ಖರ್ಚು ವೆಚ್ಚ ಭರಿಸಲಿದೆ ಸ್ಕಾಲರ್&zwnj;ಶಿಪ್&lt;/h2&gt;&lt;p&gt;ಪ್ರಣವ್ ಇಳಂಗೋ ಒಟ್ಟು 3.55 ಕೋಟಿ ರೂಪಾಯಿ ಸ್ಕಾಲರ್&zwnj;ಶಿಪ್ ಪಡೆದಿದ್ದಾರೆ. ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷಗಳ ಪದವಿ, ವಸತಿ, ಜೀವನ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಈ ಸ್ಕಾಲರ್&zwnj;ಶಿಪ್ ಭರಿಸಲಿದೆ. ತಮಿಳುನಾಡಿನ ಈರೋಡಿನಲ್ಲಿರುವ ಸಿಎಸ್ ಅಕಾಡೆಮಿ ವಿದ್ಯಾರ್ಥಿಯಾಗಿರುವ ಪ್ರಣವ್ ಇದೀಗ ಅಮೆರಿಕಲ್ಲಿ ಶಿಕ್ಷಣ ಮುಂದುವರಿಸಲಿದ್ದಾರೆ. ಕಳೆದ 5 ವರ್ಷಗಳಿಂದ ಸತತ ತರಬೇತಿ ಮಾರ್ಗದರ್ಶನ ಪಡೆದಿರುವ ಪ್ರಣವ್ ಇದೀಗ ಅಸಾಧ್ಯ ಸ್ಕಾಲರ್&zwnj;ಶಿಪ್ ಪಡೆದುಯವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;17ರ ಪೋರ ಪ್ರಣವ್ ಸತತ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಐಜಿಸಿಎಸ್ಇ (IGCSE) ಮಾಥ್ಸ್ ವಿಶಷಯದಲ್ಲಿ ವರ್ಲ್ ಟಾಪರ್ ಹಾಗೂ ಕೇಂಬ್ರಿಡ್ಡ್ ಉತ್ತಮ ಕಲಿಕಾ ಪ್ರಶಸ್ತಿ ಪಡೆದಿದ್ದಾರೆ. ಗಣಿತ ಹಾಗೂ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಪ್ರಣವ್ ಡೇಟಾ ಸೈನ್ಸ್ ಹಾಗೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪ್ರಣವ್ ಪಬ್ಲಿಕ್ ಹೆಲ್ತ್ ಹಾಗೂ ಅಪ್ಲೈಡ್ ಮ್ಯಾಥಮ್ಯಾಟಿಕ್ಸ್ ವಿಷಯದಲ್ಲಿ ಪದವಿ ಪಡೆಯಲಿದ್ದಾರೆ. ಗಣಿತದ ಅಂಕಿ ಅಂಶ, ಡೇಟಾ ಬಳಸಿಕೊಂಡು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವುದು, ಸಮಸ್ಯೆಗಳಿಗೆ ಹರಿಹಾರ ಕಂಡುಕೊಳ್ಳುವ ಕುರಿತು ಅಧ್ಯಯನ ನಡೆಸಲಿದ್ದಾರೆ.&lt;/p&gt;&lt;p&gt;ಬ್ರೌನ್ ವಿಶ್ವವಿದ್ಯಾಲಯದ 3.55 ಕೋಟಿ ರೂಪಾಯಿ ಸ್ಕಾಲರ್&zwnj;ಶಿಪ್&zwnj;ಗೆ ಪಾತ್ರರಾಗಿರುವ ಪ್ರಣವ್ ಇಳಂಗೋ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಅತ್ಯುತ್ತಮ ಹಾಗೂ ಅತ್ಯಂತ ಅಮೂಲ್ಯ ಅವಕಾಶವಾಗಿದೆ. ನನ್ನ ಜೀವನ, ಕರಿಯರ್ ಎಲ್ಲವನ್ನೂ ಬದಲಾಯಿಸುವ ಅವಕಾಶ ಎಂದು ನಾನು ಭಾವಿಸಿದ್ದೇನೆ. ಅತ್ಯುತ್ತಮ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಭಾರತದಲ್ಲಿ ಸೇವೆ ನೀಡಬೇಕು. ಇದಕ್ಕಾಗಿ ನಾನು ಎಲ್ಲಾ ಶ್ರಮವಹಿಸುತ್ತೇನೆ ಎಂದು ಪ್ರಣವ್ ಇಳಂಗೋ ಹೇಳಿದ್ದಾರೆ&lt;/p&gt;]]></content:encoded>
            <category>education</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/south-indian-17-year-old-student-secures-rs-3-55-crore-ivy-league-education-scholarship/articleshow-wefmvhe"/>
        </item>
    </channel>
</rss>
