<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 19 Sep 2026 15:13:24 +0530</lastBuildDate>
        <atom:link href="https://kannada.asianetnews.com/rss/education" rel="self" type="application/rss+xml"/>
        <item>
            <title><![CDATA[ಮರದ ಕೆಳಗೆ ಆರಂಭವಾದ ಶಾಲೆ ಇಂದು ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಉದ್ಯಾನವನ ಕಾರಂಜಿ! ಶಿಕ್ಷಕ ಸುರೇಶ್ ಸಾಧನೆಗೆ ರಾಜ್ಯ ಸರ್ಕಾರದ ಗೌರವ]]></title>
            <link>https://kannada.asianetnews.com/gallery/education/suresh-k-gunderadoddy-govt-school-teacher-2026-27-karnataka-best-teacher-awarded-rav-0q5ezph</link>
            <guid isPermaLink="true">https://kannada.asianetnews.com/gallery/education/suresh-k-gunderadoddy-govt-school-teacher-2026-27-karnataka-best-teacher-awarded-rav-0q5ezph</guid>
            <pubDate>Mon, 07 Sep 2026 12:29:57 +0530</pubDate>
            <description><![CDATA[&lt;p&gt;ಶಾಲೆಗೆ ಕಟ್ಟಡವಿಲ್ಲ, ಬಸ್&zwnj; ಸೌಲಭ್ಯವಿಲ್ಲ, ಗುಡ್ಡಗಾಡು ಪ್ರದೇಶ. ಇಂತಹ ಹಿಂದುಳಿದ ಗ್ರಾಮದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಒಂದೇ ಸಂಕಲ್ಪದೊಂದಿಗೆ ಕಳೆದ 18 ವರ್ಷಗಳಿಂದ ದುಡಿದ ಶಿಕ್ಷಕರೊಬ್ಬರ ಶ್ರಮಕ್ಕೆ 2026-27ನೇ ಸಾಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಗೌರವ ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xacqef22phyh5daytxbeft,imgname-uresh-k-gunderadoddy-govt-school-teacher-1788764118479.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಾಲೆಗೆ ಕಟ್ಟಡವಿಲ್ಲ, ಬಸ್&zwnj; ಸೌಲಭ್ಯವಿಲ್ಲ, ಗುಡ್ಡಗಾಡು ಪ್ರದೇಶ. ಇಂತಹ ಹಿಂದುಳಿದ ಗ್ರಾಮದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಒಂದೇ ಸಂಕಲ್ಪದೊಂದಿಗೆ ಕಳೆದ 18 ವರ್ಷಗಳಿಂದ ದುಡಿದ ಶಿಕ್ಷಕರೊಬ್ಬರ ಶ್ರಮಕ್ಕೆ 2026-27ನೇ ಸಾಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಗೌರವ ಸಿಕ್ಕಿದೆ.&lt;/p&gt;&lt;img&gt;&lt;p&gt;ದೇವದುರ್ಗ ತಾಲೂಕಿನ ಸರ್ಕಾರಿ ಗುಂಡೇರದೊಡ್ಡಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ್ ಕೆ. ಅವರು 2026-27ನೇ ಸಾಲಿನ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ದೇವದುರ್ಗ ತಾಲೂಕಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಂತಾಗಿದೆ.&lt;/p&gt;&lt;img&gt;&lt;p&gt;ಸುಮಾರು 18 ವರ್ಷಗಳ ಹಿಂದೆ ಕರಿಗುಡ್ಡ ಕ್ಲಸ್ಟರ್ ವ್ಯಾಪ್ತಿಯ ಗುಂಡೇರದೊಡ್ಡಿ ಗ್ರಾಮಕ್ಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಜೂರಾದಾಗ ಶಾಲೆಗೆ ಸ್ವಂತ ಕಟ್ಟಡವೇ ಇರಲಿಲ್ಲ. ಮಕ್ಕಳಿಗೆ ಮರದ ಕೆಳಗೆ ಪಾಠ ಮಾಡುವ ಪರಿಸ್ಥಿತಿ ಇತ್ತು ಮಳೆ ಮತ್ತು ಬಿಸಿಲು ತಡೆಯಲು ರಾಮಯ್ಯ ಎನ್ನುವವರೆ ಗುಡಿಸಲಿನಲ್ಲಿ ಶಾಲೆ ನಡೆಯುತ್ತಿತ್ತು.. ಕುಟುಂಬಸ್ಥರು ಕೃಷಿ ಕೆಲಸಕ್ಕೆ ಹೋದಾಗ ಅವರ ಗುಡಿಸಲಿನಲ್ಲಿ ಶಾಲೆ ನಡೆಯುತ್ತಿತ್ತು. ಗ್ರಾಮಕ್ಕೆ ಸಾರಿಗೆ ಬಸ್&zwnj; ಕೂಡ ಬರುತ್ತಿರಲಿಲ್ಲ. ಗುಡ್ಡಗಾಡು ಪ್ರದೇಶವಾಗಿದ್ದರಿಂದ ಮೂಲಸೌಕರ್ಯಗಳ ಕೊರತೆಯೂ ಇತ್ತು. ಆದರೆ ಇಂತಹ ಪರಿಸ್ಥಿತಿಯೇ ಶಿಕ್ಷಕ ಸುರೇಶ್ ಕೆ. ಅವರ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಿತು.&lt;/p&gt;&lt;img&gt;&lt;p&gt;18 ವರ್ಷಗಳ ನಿರಂತರ ಶ್ರಮ&lt;/p&gt;&lt;p&gt;ಕಳೆದ 18 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುರೇಶ್ ಅವರು ಶಾಲೆಯ ಅಭಿವೃದ್ಧಿಯನ್ನು ತಮ್ಮ ಜವಾಬ್ದಾರಿಯೆಂದುಕೊಂಡು ಕೆಲಸ ಮಾಡಿದರು. ಹಂತ ಹಂತವಾಗಿ ಶಾಲೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಪ್ರಯತ್ನ ನಡೆಸಿದರು.&lt;/p&gt;&lt;p&gt;ಗ್ರಾಮಸ್ಥರು, ದಾನಿಗಳು ಹಾಗೂ ಶಾಲೆಯ ಹಿತೈಷಿಗಳ ಸಹಕಾರ ಪಡೆದು ಶಾಲೆಯ ರೂಪವನ್ನೇ ಬದಲಿಸಿದರು. ಇಂದು ಇದೇ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.&lt;/p&gt;&lt;img&gt;&lt;p&gt;ಮಕ್ಕಳು ಪಾಠ ಕಲಿಯುವುದರ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಶಾಲೆಯ ವಾತಾವರಣವನ್ನೇ ಕಲಿಕೆಯ ಭಾಗವನ್ನಾಗಿ ಮಾಡಿದ್ದಾರೆ.&lt;/p&gt;&lt;p&gt;ಪ್ರಶಸ್ತಿಯೊಂದಿಗೆ ಜವಾಬ್ದಾರಿಯೂ ಹೆಚ್ಚಾಗಿದೆ ಸೆಪ್ಟೆಂಬರ್ 5ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್&zwnj;ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿ ಶಿಕ್ಷಕರನ್ನು ಸನ್ಮಾನಿಸಿದರು.&lt;/p&gt;&lt;p&gt;ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಶಿಕ್ಷಕ ಸುರೇಶ್ ಕೆ. ಅವರು, ಗ್ರಾಮೀಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಹಲವು ಬದಲಾವಣೆಗಳನ್ನು ತರಲು ಸಾಧ್ಯವಾಗಿದೆ ಎಂದು ಹೇಳಿದರು.&lt;/p&gt;&lt;p&gt;ಶಾಲೆಯಲ್ಲಿ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಾರಂಜಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲೆಯ ಆವರಣದಲ್ಲಿ ವಿವಿಧ ಗಿಡಮರಗಳನ್ನು ಬೆಳೆಸಲು ಗ್ರಾಮಸ್ಥರೂ ಕೈಜೋಡಿಸಿದ್ದಾರೆ. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದ್ದು, ಇದರೊಂದಿಗೆ ತಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.&lt;/p&gt;&lt;img&gt;&lt;p&gt;ಶಾಲೆಯಲ್ಲಿ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಾರಂಜಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲೆಯ ಆವರಣದಲ್ಲಿ ವಿವಿಧ ಗಿಡಮರಗಳನ್ನು ಬೆಳೆಸಲು ಗ್ರಾಮಸ್ಥರೂ ಕೈಜೋಡಿಸಿದ್ದಾರೆ. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದ್ದು, ಇದರೊಂದಿಗೆ ತಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.&lt;/p&gt;&lt;img&gt;&lt;p&gt;ಒಂದು ಕಾಲದಲ್ಲಿ ಮರದ ಕೆಳಗೆ ಪಾಠ ನಡೆಯುತ್ತಿದ್ದ ಶಾಲೆ ಇಂದು ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವ ಮಟ್ಟಕ್ಕೆ ಬೆಳೆದಿದೆ. ಇದರ ಹಿಂದೆ ಸರ್ಕಾರದ ಯೋಜನೆಗಳಷ್ಟೇ ಅಲ್ಲ, ಒಬ್ಬ ಶಿಕ್ಷಕನ 18 ವರ್ಷಗಳ ನಿರಂತರ ಪರಿಶ್ರಮ, ಗ್ರಾಮಸ್ಥರ ಸಹಕಾರ ಮತ್ತು ಮಕ್ಕಳ ಮೇಲಿನ ಕಾಳಜಿಯೂ ಇದೆ.&lt;/p&gt;&lt;img&gt;&lt;p&gt;ಪ್ರಸ್ತುತ 1ರಿಂದ 5ನೇ ತರಗತಿವರೆಗೆ 43 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಏಕೋಪಾಧ್ಯಾಯ ಶಾಲೆಯಾಗಿದ್ದರೂ ಮಕ್ಕಳ ಕಲಿಕೆಗೆ ಯಾವುದೇ ಕೊರತೆಯಾಗದಂತೆ ಸುರೇಶ್ ಅವರು ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಉದ್ಯಾನವನ, ಕಾರಂಜಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಲೆಯ ಗೋಡೆಗಳ ಮೇಲೂ ಮಹನೀಯರ ಚಿತ್ರಗಳನ್ನು ಬಿಡಿಸಿ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಲಾಗಿದೆ.&lt;/p&gt;&lt;img&gt;&lt;p&gt;ಶಾಲೆ ಗುಡ್ಡಗಾಡು ಪ್ರದೇಶದಲ್ಲಿರುವುದರಿಂದ ನಿರ್ಲಕ್ಷ್ಯಕ್ಕೊಳಗಾಗಿತ್ತು. ಶಾಲೆ ಕಟ್ಟಡವಿರುಲು ಕುಳಿತು ಪಾಠಮಾಡುವಂತಹ ಸ್ವಚ್ಛ ವಾತಾವರಣವೇ ಇರಲಿಲ್ಲ. ಇಂತ ಶಾಲೆಯೊಂದು ಇಂದು ಹೇಗೆ ಬದಲಾಗಿದೆಯೆಂದರೆ ಶಾಲೆಯ ಆವರಣವನ್ನು ಸಂಪೂರ್ಣ ಹಸಿರೀಕರಣಗೊಳಿಸಲಾಗಿದೆ. ಇದರ ಹಿಂದೆ ಶಿಕ್ಷಕ ಸುರೇಶ್ ವಿಶೇಷ ಕಾಳಜಿಯಿದೆ, ಶ್ರಮವಿದೆ ವಿವಿಧ ಗಿಡಮರಗಳನ್ನು ಬೆಳೆಸಿ ಶಾಲೆಯನ್ನು ಪರಿಸರ ಸ್ನೇಹಿ ವಾತಾವರಣವನ್ನಾಗಿ ರೂಪಿಸಿದ್ದಾರೆ.&lt;/p&gt;&lt;img&gt;&lt;p&gt;ಪ್ರಸ್ತು ಶಾಲಾ ಆವರಣದಲ್ಲಿ ಉತ್ತಮ ಕಲಿಕಾ ಉದ್ಯಾನವನ ನಿರ್ಮಿಸಿದ್ದು, ಆವರಣದಲ್ಲಿ 90ಕ್ಕೂ ಹೆಚ್ಚು ಮರಗಳನ್ನು ಬೆಳೆಸಲಾಗಿದ್ದು ಪ್ರತಿಯೊಂದು ಮರಕ್ಕೂ ಕಲಿಕೆಗೆ ಸಂಬಂಧಿಸಿದ ಪೋಸ್ಟರ್ಗಳನ್ನು ಹಾಕಲಾಗಿದೆ. ಇದರಿಂದ ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಯಲು ಅನುಕೂಲವಾಗಿದೆ.&lt;/p&gt;&lt;img&gt;&lt;p&gt;ಇನ್ನೊಂದು ವಿಶೇಷವೆಂದರೆ ಶಾಲಾವರಣದಲ್ಲೇ ತರಕಾರಿ ತೋಟ ಮಾಡಲಾಗಿದ್ದು ಇಲ್ಲಿಯೇ ಬೆಳೆದ ತರಕಾರಿಯನ್ನು ಬಿಸಿಯೂಟ ಬಳಸಲಾಗುತ್ತದೆ! ಸರಿಯಾದ ಮೊಬೈಲ್ ನೆಟ್ವರ್ಕ್ ಸಿಗದ ಗ್ರಾಮದಲ್ಲಿ ಇಂದು ಈ ಶಾಲೆಯಲ್ಲಿ ಓದಿದ ಮಕ್ಕಳು ಪ್ರಸ್ತುತ ಎಂಬಿಬಿಎಸ್, ಬಿ.ಎಡ್, ನರ್ಸಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್&zwnj;ಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಅದಕ್ಕಾಗಿಯೇ ಸುರೇಶ್ ಕೆ. ಅವರಿಗೆ ದೊರೆತಿರುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕೇವಲ ಒಬ್ಬ ಶಿಕ್ಷಕರಿಗೆ ಸಿಕ್ಕ ಗೌರವವಲ್ಲ. ಶಿಕ್ಷಕರು ಮನಸು ಮಾಡಿದರೆ ಗುಡ್ಡಗಾಡಿನ ಯಾವುದೇ ಸೌಲಭ್ಯಗಳಿಲ್ಲದ ಸರ್ಕಾರಿ ಶಾಲೆಯೊಂದನ್ನು ಮಾದರಿ ಶಾಲೆಯನ್ನಾಗಿ ರೂಪಿಸಬಹುದು ಎಂಬುದಕ್ಕೆ ಸಿಕ್ಕಿರುವ ರಾಜ್ಯಮಟ್ಟದ ಮಾನ್ಯತೆಯಾಗಿದೆ.&lt;/p&gt;]]></content:encoded>
            <category>education</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/education/suresh-k-gunderadoddy-govt-school-teacher-2026-27-karnataka-best-teacher-awarded-rav-0q5ezph"/>
        </item>
        <item>
            <title><![CDATA[SSLC ವಿದ್ಯಾರ್ಥಿಗಳೇ ಗಮನಿಸಿ! ಈ ಬಾರಿ ಪ್ರಿಪರೇಟರಿ ಮಾದರಿಯಲ್ಲೇ ಎಸ್‌ಎ-1 ಪರೀಕ್ಷೆ, ಏನಿದು ಹೊಸ ಬದಲಾವಣೆ?]]></title>
            <link>https://kannada.asianetnews.com/education/kseab-to-provide-question-papers-for-sslc-mid-term-exams-rav/articleshow-0r7gbly</link>
            <guid isPermaLink="true">https://kannada.asianetnews.com/education/kseab-to-provide-question-papers-for-sslc-mid-term-exams-rav/articleshow-0r7gbly</guid>
            <pubDate>Fri, 18 Sep 2026 08:56:21 +0530</pubDate>
            <description><![CDATA[&lt;p&gt;SSLC Exam Update: ಎಸ್&zwnj;ಎಸ್&zwnj;ಎಲ್&zwnj;ಸಿ(SSCL) ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ರಾಜ್ಯಮಟ್ಟದ 1ನೇ ಸಂಕಲನಾತ್ಮಕ ಮೌಲ್ಯಮಾಪನವನ್ನು (ಎಸ್&zwnj;ಎ-1) ಸೆ.23 ರಿಂದ 30 ರವರೆಗೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2s8edctas2q93azwq449cn2,imgname-sslc-exam-1789701600666.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.18)&lt;/strong&gt;: ಎಸ್&zwnj;ಎಸ್&zwnj;ಎಲ್&zwnj;ಸಿ(SSCL) ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ರಾಜ್ಯಮಟ್ಟದ 1ನೇ ಸಂಕಲನಾತ್ಮಕ ಮೌಲ್ಯಮಾಪನವನ್ನು (ಎಸ್&zwnj;ಎ-1) ಸೆ.23 ರಿಂದ 30 ರವರೆಗೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.&lt;/p&gt;&lt;h2&gt;ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರಿಪರೇಟರಿ ಮಾದರಿಯಲ್ಲೇ ಎಸ್&zwnj;ಎ-1 ಪರೀಕ್ಷೆ&lt;/h2&gt;&lt;p&gt;ಪೂರ್ವ ಸಿದ್ಧತಾ ಪರೀಕ್ಷೆಯ ಮಾದರಿಯಲ್ಲೇ . ಎಸ್&zwnj;ಎ 1 ನಡೆಸಲು ಸೂಚಿಸಿದ್ದು, ಇದಕ್ಕೆ ಏಕರೂಪವಾದ ಪ್ರಶ್ನೆ ಪತ್ರಿಕೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದಲೇ ಸಿದ್ಧಪಡಿಸಿ ನೀಡಲು ತೀರ್ಮಾನಿಸಲಾಗಿದೆ ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ವೇಳಾಪಟ್ಟಿ ಪ್ರಕಾರ, ಸೆ.23 ಪ್ರಥಮ ಭಾಷೆ, 24ರಂದು ವಿಜ್ಞಾನ, 25ಕ್ಕೆ ತೃತೀಯ ಭಾಷೆ, 26ರಂದು ಸಮಾಜ ವಿಜ್ಞಾನ, 28ಕ್ಕೆ ಗಣಿತ, 29ರಂದು ದ್ವಿತೀಯ ಭಾಷೆ ಮತ್ತು ಕೊನೆಯ ದಿನ ಸೆ.30ರಂದು ದೈಹಿಕ ಶಿಕ್ಷಣ/ವೃತ್ತಿ ಶಿಕ್ಷಣ/ಮೌಲ್ಯ ಶಿಕ್ಷಣ ವಿಷಯಗಳಿಗೆ ಎಸ್&zwnj;ಎ-1 ನಡೆಯಲಿದೆ&lt;/p&gt;&lt;h3&gt;ಸೆ.23ರಿಂದ 30 ವರೆಗೆ ನಡೆಯಲಿದೆ ಪರೀಕ್ಷೆ&lt;/h3&gt;&lt;p&gt;ಮಂಡಳಿ ಸಿದ್ದಪಡಿಸಿದ ಪ್ರಶ್ನೆ ಪತ್ರಿಕೆಗಳನ್ನು ಆಯುಕ್ತರ ಕಚೇರಿ ಮೇಲ್ವಿಚಾರಣೆಯಲ್ಲಿ ವೇಳಾಪಟ್ಟಿಯಂತೆ ಆಯಾ ಪರೀಕ್ಷಾ ದಿನ ಪ್ರೌಢ ಶಾಲೆಗಳ ಮುಖ್ಯಶಿಕ್ಷಕರ ಲಾಗಿನ್&zwnj;ಗೆ ಕಳುಹಿಸಿಕೊಡಲಾಗುತ್ತದೆ. ಅವರು ಅದನ್ನು ಡೌನ್&zwnj;ಲೋಡ್&zwnj; ಮಾಡಿ ಮುದ್ರಿಸಿಕೊಂಡು ಎಸ್&zwnj;ಎ-1 ಪರೀಕ್ಷೆ ನಡೆಸಬೇಕೆಂದು ಸೂಚಿಸಲಾಗಿದೆ.&lt;/p&gt;&lt;p&gt;ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಬಗ್ಗೆ ಭಯ, ಆತಂಕ ಹೋಗಲಾಡಿಸುವುದು ಹಾಗೂ ವಾರ್ಷಿಕ ಪರೀಕ್ಷೆಯನ್ನು ಎಷ್ಟು ಕಟ್ಟುನಿಟ್ಟಾಗಿ ಹಾಗೂ ಪಾರದರ್ಶವಾಗಿ ನಡೆಸಲಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟು ಅಕ್ರಮಗಳ ಬಗ್ಗೆ ಆಲೋಚಿಸದೆ ಉತ್ತಮ ರೀತಿಯಲ್ಲಿ ಪರೀಕ್ಷೆಗೆ ಸಿದ್ಧಗೊಳ್ಳುವಂತೆ ಜಾಗೃತಿ ಮೂಡಿಸುವುದು ಇದರ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/kseab-to-provide-question-papers-for-sslc-mid-term-exams-rav/articleshow-0r7gbly"/>
        </item>
        <item>
            <title><![CDATA[Belagavi: ಕಾಡಿನಲ್ಲೊಂದು ಗುರುದೀಪ: ಅಕ್ಷರ ಸಂತ ನಿಂಗಪ್ಪ ಮೇಷ್ಟ್ರು, 29 ವರ್ಷಗಳಿಂದ ಸೇವೆ]]></title>
            <link>https://kannada.asianetnews.com/karnataka-districts/belagavi-teacher-ningappa-balekundrigi-serving-29-years-in-amagam-village-of-bhimgad-sanctuary-khanapura-mrq/articleshow-3lniog6</link>
            <guid isPermaLink="true">https://kannada.asianetnews.com/karnataka-districts/belagavi-teacher-ningappa-balekundrigi-serving-29-years-in-amagam-village-of-bhimgad-sanctuary-khanapura-mrq/articleshow-3lniog6</guid>
            <pubDate>Sat, 05 Sep 2026 14:21:11 +0530</pubDate>
            <description><![CDATA[ಬೆಳಗಾವಿಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದ ಅಮಗಾಂವ ಗ್ರಾಮದಲ್ಲಿ ಶಿಕ್ಷಕ ನಿಂಗಪ್ಪ ಬಾಳೇಕುಂದ್ರಿಗಿ ಅವರು ಕಳೆದ 29 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಸವಾಲುಗಳನ್ನು ಎದುರಿಸಿ, ಗ್ರಾಮಸ್ಥರ ಪ್ರೀತಿ ಗಳಿಸಿ, ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವರ್ಗಾವಣೆ ಬಯಸದೆ ಅದೇ ಶಾಲೆಯಲ್ಲಿ ನಿವೃತ್ತರಾಗುವ ಇಂಗಿತ ಹೊಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1rbs3mvmccaz8zm430c0022,imgname-belagavi-teacher-ningappa-1788597800603.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀಶೈಲ ಮಠದ&lt;/strong&gt;&lt;/p&gt;&lt;p&gt;&lt;strong&gt;ಬೆಳಗಾವಿ: ನ&lt;/strong&gt;ಗರ ಪ್ರದೇಶದ ಶಾಲೆಗಳಿಗೆ ನೇಮಕವಾಗಲು ಬಯಸುವ ಶಿಕ್ಷಕರ ನಡುವೆ, ಕಳೆದ 29 ವರ್ಷಗಳಿಂದ ದಟ್ಟ ಕಾನನದ ಮಕ್ಕಳಿಗೆ ಅಕ್ಷರ ಸಂತರಾಗಿ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ನಿಂಗಪ್ಪ ಬಾಳೇಕುಂದ್ರಿಗಿ ಅವರು. ಶಿಕ್ಷಕ ವೃತ್ತಿಯನ್ನು ಹೀಗೂ ಮಾಡಬಹುದು ಎಂಬ ಹೆಗ್ಗುರತನ್ನು ಮಾಡಿಕೊಟ್ಟಿದ್ದಾರೆ ಇವರು.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯ ಪ್ರದೇಶದ ಅಮಗಾಂವ ಗ್ರಾಮದ ಸರ್ಕಾರಿ ಮರಾಠಿ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಅವರು, 1997ರ ಜನವರಿ 6ರಂದು ಇದೇ ಶಾಲೆಯಲ್ಲಿ ಸೇವೆ ಆರಂಭಿಸಿದ್ದರು.&lt;/p&gt;&lt;p&gt;ನೆಟ್&zwnj;ವರ್ಕ್, ಬಸ್ ಸಂಪರ್ಕವಿಲ್ಲದ ಹಾಗೂ ಅತಿಹೆಚ್ಚು ಮಳೆ ಬೀಳುವ ಅಮಗಾಂವದಲ್ಲೇ ತಮ್ಮ ಸೇವೆಯ 29 ವರ್ಷಗಳನ್ನು ಕಳೆದಿದ್ದಾರೆ. ಮುಂದಿನ ಐದು ವರ್ಷಗಳ ಬಳಿಕ ಇದೇ ಶಾಲೆಯಲ್ಲಿ ನಿವೃತ್ತರಾಗುವ ಉದ್ದೇಶ ಮತ್ತು ಇಂಗಿತ ಹೊಂದಿದ್ದಾರೆ.&lt;/p&gt;&lt;h2&gt;&lt;strong&gt;1997ರಿಂದ ಅಮಗಾಂವದಲ್ಲೇ ಸೇವೆ&lt;/strong&gt;&lt;/h2&gt;&lt;p&gt;1997ರಲ್ಲಿ ಶಿಕ್ಷಕರಾಗಿ ನೇಮಕವಾದಾಗ ಅಮಗಾಂವ ಎಲ್ಲಿದೆ ಎಂಬುದೇ ಗೊತ್ತಿರಲಿಲ್ಲ. ಚಿಕಲೆಯಿಂದ ಸುಮಾರು 12 ಕಿಮೀ ನಡೆದುಕೊಂಡು ಸಂಜೆ ಗ್ರಾಮ ತಲುಪಿದ್ದೆ. ಆಗ ಶಾಲೆಯಲ್ಲಿ ಇಬ್ಬರು ಮರಾಠಿ ಶಿಕ್ಷಕರಿದ್ದರು. ನನಗೆ ಮರಾಠಿ ಬರುತ್ತಿರಲಿಲ್ಲ. ಕನ್ನಡದಲ್ಲೇ ಗ್ರಾಮಸ್ಥರನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡು, ಮಕ್ಕಳಿಗೆ ಚಾಕೋಲೇಟ್ ಕೊಟ್ಟು ಆತ್ಮೀಯನಾದೆ. ಅಂದಿನಿಂದ ಆರಂಭವಾದ ಸೇವೆ ಇಂದಿಗೂ ಮುಂದುವರಿದಿದೆ ಎಂದು ನಿಂಗಪ್ಪ ಮೇಷ್ಟ್ರು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ಶಿಕ್ಷಕರಾಗಿ ಮಕ್ಕಳಿಗೆ ಪಾಠ ಹೇಳುವುದರ ಜತೆಗೆ ಗ್ರಾಮಸ್ಥರ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಇವರು, ಸರ್ಕಾರ ಮತ್ತು ಗ್ರಾಮಸ್ಥರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಕ್ಕಾಗಿ ಅಧಿಕಾರಿಗಳ ಗಮನ ಸೆಳೆಯುವುದಲ್ಲದೆ, ಗ್ರಾಮದಲ್ಲಿನ ತಂಟೆ-ತಕರಾರುಗಳನ್ನೂ ಬಗೆಹರಿಸಿದ್ದಾರೆ.&lt;/p&gt;&lt;h3&gt;&lt;strong&gt;ವಾರಕ್ಕೊಮ್ಮೆ ಮಾತ್ರ ಊರಿಗೆ ತೆರಳುವ ಶಿಕ್ಷಕ ನಿಂಗಪ್ಪ&lt;/strong&gt;&lt;/h3&gt;&lt;p&gt;ಕಾಡಿನ ನಡುವೆ ಸೇವೆ ಸಲ್ಲಿಸುವುದು ನಿಂಗಪ್ಪ ಅವರಿಗೆ ಹಲವು ಸವಾಲುಗಳನ್ನು ತಂದಿದೆ. ಹುಲಿ, ಚಿರತೆ, ಕರಡಿ, ಕಾಡುಹಂದಿ ಸೇರಿದಂತೆ ಹಲವು ವನ್ಯಪ್ರಾಣಿಗಳನ್ನು ಕಂಡಿರುವ ಅವರು, ಒಮ್ಮೆ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿಸಿಕೊಂಡು ಗ್ರಾಮಸ್ಥರ ನೆರವಿನಿಂದ ಬದುಕುಳಿದಿದ್ದಾರೆ.&lt;/p&gt;&lt;p&gt;ಬೈಕ್&zwnj;ನಲ್ಲಿ ಸಂಚರಿಸುವಾಗ ಹಲವು ಬಾರಿ ಬಿದ್ದು ಗಾಯಗೊಂಡರೂ ಊರು ಬಿಟ್ಟಿಲ್ಲ. ಗ್ರಾಮಸ್ಥರು ತಮ್ಮ ಪ್ರೀತಿ ಮತ್ತು ಗೌರವದಿಂದ ಅವರಿಗಾಗಿ ಉಚಿತವಾಗಿ ಮನೆ ನಿರ್ಮಿಸಿಕೊಟ್ಟಿದ್ದಾರೆ. 29 ವರ್ಷಗಳ ಸೇವೆಯಲ್ಲಿ ಒಮ್ಮೆಯೂ ವರ್ಗಾವಣೆಗೆ ಅರ್ಜಿ ಸಲ್ಲಿಸಿಲ್ಲ. ಪ್ರತಿ ಶನಿವಾರ ಹಾಗೂ ರಜಾ ದಿನಗಳಲ್ಲಿ ಮಾತ್ರ ಬೆಳಗಾವಿಯಲ್ಲಿರುವ ಕುಟುಂಬದ ಬಳಿಗೆ ತೆರಳುವ ಇವರು, ಉಳಿದ ದಿನಗಳನ್ನು ಅಮಗಾಂವದಲ್ಲೇ ಕಳೆಯುತ್ತಾರೆ.&lt;/p&gt;&lt;p&gt;ಬೆಳಗಾವಿಯ ವಡಗಾವಿಯಲ್ಲಿ ಪತ್ನಿ ರತ್ನಾ ಹಾಗೂ ಮಕ್ಕಳೊಂದಿಗೆ ಕುಟುಂಬ ಹೊಂದಿರುವ ನಿಂಗಪ್ಪ ಅವರಿಗೆ ಕುಟುಂಬದ ಸಂಪೂರ್ಣ ಬೆಂಬಲವಿದ್ದು, ಅಮಗಾಂವದ ಜನರ ಪ್ರೀತಿ, ಗೌರವವೇ ನನ್ನನ್ನು ಇಲ್ಲಿಯೇ ಉಳಿಸಿದೆ ಎನ್ನುತ್ತಾರೆ ಅವರು.&lt;/p&gt;&lt;p&gt;--------&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-teacher-ningappa-balekundrigi-serving-29-years-in-amagam-village-of-bhimgad-sanctuary-khanapura-mrq/articleshow-3lniog6"/>
        </item>
        <item>
            <title><![CDATA[ಶಾಸಕ ಉಮೇಶ್ ಮೇಟಿ ಸೊಸೆಗೆ ಅಕ್ರಮವಾಗಿ 75 ಸಾವಿರ ಸಂಬಳ? ಪುತ್ರಿಯನ್ನೇ ವಜಾ ಮಾಡಿದ ತಂದೆ]]></title>
            <link>https://kannada.asianetnews.com/karnataka-districts/karnataka-sacks-congress-mla-umesh-metis-niece-over-rs-75000-salary-row-suc/articleshow-59sgqu0</link>
            <guid isPermaLink="true">https://kannada.asianetnews.com/karnataka-districts/karnataka-sacks-congress-mla-umesh-metis-niece-over-rs-75000-salary-row-suc/articleshow-59sgqu0</guid>
            <pubDate>Tue, 15 Sep 2026 21:39:19 +0530</pubDate>
            <description><![CDATA[ಬಾಗಲಕೋಟೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಡಾ. ಅಂಕಿತಾ, ಎಂಡಿ ವ್ಯಾಸಂಗ ಮಾಡುತ್ತಲೇ 'ನಮ್ಮ ಕ್ಲಿನಿಕ್' ವೈದ್ಯಾಧಿಕಾರಿಯಾಗಿ ಸರ್ಕಾರಿ ವೇತನ ಪಡೆಯುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದರು. ಈ ಅಕ್ರಮ ಮತ್ತು ಅನಧಿಕೃತ ಗೈರುಹಾಜರಿ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ, ಸ್ವತಃ ಅವರ ತಂದೆಯೇ ಮಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2jx8aaw0trczs5qtcg3m61r,imgname-dr.ankitha-1789488539996.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಹಾಗೂ ಕಾಂಗ್ರೆಸ್ ಶಾಸಕ ಉಮೇಶ್ ಮೇಟಿ ಅವರ ಸೊಸೆ ಡಾ. ಅಂಕಿತಾ ಯರಗಲ್ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಅಂಕಿತಾ ಅವರ ತಂದೆಯೇ, ಖುದ್ದು ಮಗಳನ್ನು ಕೆಲಸದಿಂದ ಬಿಡುಗಡೆಗೊಳಿಸಿರುವ ಕುತೂಹಲದ ಘಟನೆ ನಡೆದಿದೆ. ಡಾ. ಅಂಕಿತಾ ಯರಗಲ್ ಅವರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ಇವರು, ಪೂರ್ಣಾವಧಿ ಸ್ನಾತಕೋತ್ತರ ವ್ಯಾಸಂಗ ಅರ್ಥಾತ್​ ಎಂಡಿ ಪದವಿ ಮಾಡುತ್ತಿದ್ದರೂ, ಪ್ರತಿ ತಿಂಗಳು ಸರ್ಕಾರದಿಂದ 75 ಸಾವಿರ ರೂಪಾಯಿ ವೇತನ ಪಡೆಯುತ್ತಿರುವ ಗಂಭೀರ ಆರೋಪ ಕೇಳಿಬಂದಿತ್ತು.&lt;/p&gt;&lt;p&gt;ಡಾ. ಅಂಕಿತಾ ಯರಗಲ್ ಅವರು 2025ರ ಸೆಪ್ಟೆಂಬರ್&zwnj;ನಿಂದ ಬಾಗಲಕೋಟೆಯ ವಾಂಬೆ ಕಾಲೋನಿಯ &lsquo;ನಮ್ಮ ಕ್ಲಿನಿಕ್&rsquo;ಗೆ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದರು.ಆದರೆ ಮರುವರ್ಷ ಅರ್ಥಾತ್​ 2026ರ ಮಾರ್ಚ್&zwnj;ನಲ್ಲಿ ಬಾಗಲಕೋಟೆಯ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪ್ಯಾಥಾಲಜಿ ಕೋರ್ಸ್&zwnj;ಗೆ ಪ್ರವೇಶ ಪಡೆದಿದ್ದಾರೆ. ಏಪ್ರಿಲ್​ನಿಂದ ತರಗತಿಗಳಿಗೆ ಹಾಜರು ಕೂಡ ಆಗುತ್ತಿದ್ದಾರೆ. ನಿಯಮಗಳ ಪ್ರಕಾರ ಬೆಳಗ್ಗೆ 9 ರಿಂದ ಸಂಜೆ 4:30 ರವರೆಗೆ ಕ್ಲಿನಿಕ್&zwnj;ನಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅಂಕಿತಾ, ಕಾಲೇಜಿನಲ್ಲಿ ಪೂರ್ಣಾವಧಿ ಶಿಕ್ಷಣ ಪಡೆಯುತ್ತಿರುವುದರಿಂದ ಕ್ಲಿನಿಕ್&zwnj;ಗೆ ಸರಿಯಾಗಿ ಹಾಜರಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಸಿಗದೆ ವಾಂಬೆ ಕಾಲೋನಿಯ ನಮ್ಮ ಕ್ಲಿನಿಕ್ ಬಹುತೇಕ ಬಂದ್ ಆದ ಸ್ಥಿತಿಯಲ್ಲಿದೆ ಎಂಬ ಆರೋಪ ಕೇಳಿಬಂದಿತ್ತು.&lt;/p&gt;&lt;h2&gt;&lt;strong&gt;ಸರ್ಕಾರದ ನಿಯಮಾವಳಿ ಏನಿದೆ?&lt;/strong&gt;&lt;/h2&gt;&lt;p&gt;ಸರ್ಕಾರಿ ನಿಯಮಾವಳಿ ಪ್ರಕಾರ ಎಂ.ಡಿ. ವ್ಯಾಸಂಗ ಮಾಡುತ್ತಾ ಸರ್ಕಾರಿ ಸೇವೆಯ ವೇತನ ಪಡೆಯುವುದು ಕಾನೂನುಬಾಹಿರವಾಗಿದೆ. ಈ ಬಗ್ಗೆ ಡಾ. ರಾಜಕುಮಾರ ಯರಗಲ್ ಮಾತ್ರ ನುಣುಚಿಕೊಳ್ಳೋ ಕೆಲಸ ಮಾಡುತ್ತಿದ್ದಾರೆ ಎಂಬೆಲ್ಲಾ ಆರೋಪಗಳು ಕೇಳಿಬಂದಿದ್ದವು. ಆರೋಗ್ಯ ಇಲಾಖೆ ಸಹ ಈ ಬಗ್ಗೆ ಮೌನವಾಗಿದ್ದು, ಇಷ್ಟೆಲ್ಲ ಅಕ್ರಮ ಬಯಲಾದ್ರೂ ಡಿಎಚ್&zwnj;ಓ ಯರಗಲ್ ವಿರುದ್ಧವಾಗಲಿ ಅಥವಾ ಅವರ ಮಗಳ ವಿರುದ್ಧವಾಗಲಿ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಗಂಭೀರ ಆರೋಪ ಮಾಡಲಾಗಿತ್ತು.&lt;/p&gt;&lt;h3&gt;&lt;strong&gt;ಕರ್ತವ್ಯದಿಂದ ಬಿಡುಗಡೆ&lt;/strong&gt;&lt;/h3&gt;&lt;p&gt;ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ, ಇದೀಗ ವೈದ್ಯಾಧಿಕಾರಿ ಡಾ. ಅಂಕಿತಾ ಯರಗಲ್​​ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ್ ಅರ್ಥಾತ್​ ಅಂಕಿತಾ ಅವರ ತಂದೆಯೇ ಆದೇಶ ಹೊರಡಿಸಿದ್ದಾರೆ. ಡಾ. ಅಂಕಿತಾ ಯರಗಲ್, ನಮ್ಮ ಕ್ಲಿನಿಕ್&zwnj;ನಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, 2023ರ ಮಾರ್ಚ್ 23ರಿಂದ ಬಾಗಲಕೋಟೆ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪೆಥಾಲಜಿ ಅಧ್ಯಯನ ಮಾಡುತ್ತಿದ್ದರು. ಈ ಅವಧಿಯಲ್ಲಿ ಎರಡೂ ಕಡೆ ಹಾಜರಾತಿ ಸಹಿ ಮಾಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದು ಮತ್ತು ಅನಧಿಕೃತ ಗೈರು ಹಾಜರಿ ಕರ್ತವ್ಯ ಲೋಪಕ್ಕೆ ಕಾರಣವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು, ಸೇವೆಯಿಂದ ಬಿಡುಗಡೆ ಮಾಡಲಾಗಿದೆ.&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/karnataka-sacks-congress-mla-umesh-metis-niece-over-rs-75000-salary-row-suc/articleshow-59sgqu0"/>
        </item>
        <item>
            <title><![CDATA[3 ವರ್ಷಗಳಲ್ಲಿ 1.55 ಕೋಟಿ ವಿದ್ಯಾರ್ಥಿಗಳ ದಾಖಲಾತಿ ಕುಸಿತ: ಶಿಕ್ಷಣ ಕ್ಷೇತ್ರದ ಶಾಕಿಂಗ್ ಸತ್ಯ ಬಿಚ್ಚಿಟ್ಟ TISS ವರದಿ!]]></title>
            <link>https://kannada.asianetnews.com/education/school-enrolment-drops-by-1-55-crore-in-india-tiss-sottter-2025-report-highlights-gdp/articleshow-5g4oaa1</link>
            <guid isPermaLink="true">https://kannada.asianetnews.com/education/school-enrolment-drops-by-1-55-crore-in-india-tiss-sottter-2025-report-highlights-gdp/articleshow-5g4oaa1</guid>
            <pubDate>Tue, 08 Sep 2026 16:08:43 +0530</pubDate>
            <description><![CDATA[ಟಾಟಾ ಇನ್&zwnj;ಸ್ಟಿಟ್ಯೂಟ್&zwnj;ನ 2025ರ ವರದಿಯು ಭಾರತದ ಶಾಲಾ ಶಿಕ್ಷಣದಲ್ಲಿ ಆತಂಕಕಾರಿ ಚಿತ್ರಣವನ್ನು ನೀಡಿದೆ. ಕಳೆದ ಮೂರು ವರ್ಷಗಳಲ್ಲಿ 1.55 ಕೋಟಿ ವಿದ್ಯಾರ್ಥಿಗಳ ದಾಖಲಾತಿ ಕುಸಿದಿದ್ದು, ಶಿಕ್ಷಕರ ಸಂಖ್ಯೆ ಹೆಚ್ಚಾಗಿದ್ದರೂ ಗಣಿತ, ವಿಜ್ಞಾನದಂತಹ ವಿಷಯವಾರು ಶಿಕ್ಷಕರ ತೀವ್ರ ಕೊರತೆ ಮತ್ತು ಬಹು-ದರ್ಜೆ ತರಗತಿಗಳ ಹೆಚ್ಚಳದಂತಹ ಗಂಭೀರ ಸವಾಲುಗಳನ್ನು ವರದಿ ಎತ್ತಿ ತೋರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1h1tkte3nb184snqwxx381r,imgname-school-1788352483149.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಟಾಟಾ ಇನ್&zwnj;ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಪ್ರಕಟಿಸಿರುವ &lsquo;ಸ್ಟೇಟ್ ಆಫ್ ಟೀಚರ್ಸ್, ಟೀಚಿಂಗ್ ಅಂಡ್ ಟೀಚರ್ ಎಜುಕೇಶನ್ ಫಾರ್ ಇಂಡಿಯಾ&rsquo; 2025 ವರದಿಯ ಪ್ರಕಾರ, ಭಾರತದಲ್ಲಿ ಶಾಲಾ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. 2021-22 ಮತ್ತು 2024-25ರ ನಡುವಿನ ಮೂರು ವರ್ಷಗಳ ಅವಧಿಯಲ್ಲಿ ಶಾಲಾ ಮಕ್ಕಳ ಸಂಖ್ಯೆ ಸತತ 1.55 ಕೋಟಿಯಷ್ಟು ಕುಸಿದಿದ್ದು, 26.5 ಕೋಟಿಯಿಂದ 23.2 ಕೋಟಿಗೆ ಇಳಿಕೆಯಾಗಿದೆ. UDISE+ 2024-25 ದತ್ತಾಂಶ, ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಹಾಗೂ 10 ರಾಜ್ಯಗಳ 499 ಶಾಲೆಗಳಲ್ಲಿ ಕೈಗೊಂಡ ಸಮೀಕ್ಷೆಯನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.&lt;/p&gt;&lt;h2&gt;ವರದಿಯ ಪ್ರಮುಖ ಮುಖ್ಯಾಂಶಗಳು:&lt;/h2&gt;&lt;p&gt;&lt;strong&gt;ಶಿಕ್ಷಕರ ಸಂಖ್ಯೆ ಹೆಚ್ಚಿದ್ದರೂ ವಿಷಯವಾರು ಕೊರತೆ:&lt;/strong&gt; ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ, ಬೋಧನಾ ಸಿಬ್ಬಂದಿ ಸಂಖ್ಯೆಯಲ್ಲಿ ಸುಮಾರು 6 ಲಕ್ಷ ಹೆಚ್ಚಳವಾಗಿರುವುದರಿಂದ ಸರಾಸರಿ ವಿದ್ಯಾರ್ಥಿ-ಶಿಕ್ಷಕರ ಅನುಪಾತ ಸುಧಾರಿಸಿದೆ. ಆದರೆ, ವಿಷಯವಾರು ಶಿಕ್ಷಕರ ತೀವ್ರ ಅಭಾವ ಇನ್ನೂ ಮುಂದುವರಿದಿದೆ. ಸಮೀಕ್ಷೆಗೆ ಒಳಪಟ್ಟ ಶಾಲೆಗಳಲ್ಲಿ ಶೇ. 35 ರಷ್ಟು ಶಾಲೆಗಳು ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದರೆ, ಶೇ. 31 ರಷ್ಟು ಶಾಲೆಗಳಲ್ಲಿ ಇಂಗ್ಲಿಷ್ ಹಾಗೂ ಶೇ. 30 ರಷ್ಟು ಶಾಲೆಗಳಲ್ಲಿ ಪ್ರಾದೇಶಿಕ ಭಾಷಾ ಶಿಕ್ಷಕರ ಕೊರತೆಯಿದೆ.&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ ಮತ್ತು ಬೋಧನೆಯಲ್ಲಿ ಅಂತರ:&lt;/h2&gt;&lt;p&gt;ಶಿಕ್ಷಕರ ಶೈಕ್ಷಣಿಕ ಅರ್ಹತೆಗೂ ಅವರು ಬೋಧಿಸುವ ವಿಷಯಕ್ಕೂ ದೊಡ್ಡ ಅಂತರವಿರುವುದು ಕಂಡುಬಂದಿದೆ. ಶಾಲೆಯಲ್ಲಿ ಗಣಿತ ಬೋಧಿಸುವ ಶಿಕ್ಷಕರಲ್ಲಿ ಕೇವಲ ಶೇ. 51 ರಷ್ಟು ಮಂದಿ ಮಾತ್ರ ಪದವಿ ಮಟ್ಟದಲ್ಲಿ ಗಣಿತವನ್ನು ಅಭ್ಯಾಸ ಮಾಡಿದ್ದಾರೆ.&lt;/p&gt;&lt;h2&gt;ಹೆಚ್ಚಿದ ಬಹು-ದರ್ಜೆ ತರಗತಿಗಳು :&lt;/h2&gt;&lt;p&gt;ಶಿಕ್ಷಕರ ಒಟ್ಟಾರೆ ಸಂಖ್ಯೆ ಹೆಚ್ಚಿದ್ದರೂ, ಒಬ್ಬನೇ ಶಿಕ್ಷಕ ಒಂದಕ್ಕಿಂತ ಹೆಚ್ಚು ತರಗತಿಗಳ (ಶ್ರೇಣಿಗಳ) ವಿದ್ಯಾರ್ಥಿಗಳಿಗೆ ಒಟ್ಟಿಗೆ ಬೋಧಿಸುವ 'ಬಹು-ದರ್ಜೆ ತರಗತಿಗಳ' ಪ್ರಮಾಣ ಹೆಚ್ಚಾಗಿದೆ. 2023 ರಲ್ಲಿ ಇಂತಹ ಸರ್ಕಾರಿ ಪ್ರಾಥಮಿಕ ಶಾಲೆಗಳ ಪ್ರಮಾಣ ಶೇ. 38 ರಷ್ಟಿದ್ದರೆ, 2025 ರ ವೇಳೆಗೆ ಇದು ಶೇ. 50 ಕ್ಕಿಂತಲೂ ಅಧಿಕಕ್ಕೆ ಏರಿಕೆಯಾಗಿದೆ.&lt;/p&gt;&lt;h2&gt;ಬೋಧನಾ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಏರಿಕೆ:&lt;/h2&gt;&lt;p&gt;ದೇಶದ ಬೋಧನಾ ಕಾರ್ಯಪಡೆಯಲ್ಲಿ ಮಹಿಳಾ ಶಿಕ್ಷಕರ ಪಾಲು ಶೇ. 51 ರಿಂದ ಶೇ. 54 ಕ್ಕೆ ಏರಿದೆ. ಆದರೆ ಇಲ್ಲೂ ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಡುವೆ ಭಾರಿ ಅಂತರವಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಶೇ. 47 ರಷ್ಟು ಮಹಿಳಾ ಶಿಕ್ಷಕರಿದ್ದರೆ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಶೇ. 67 ರಷ್ಟಿದೆ.&lt;/p&gt;&lt;p&gt;ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಬೋಧಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ವಿಷಯಾಧಾರಿತ ಶಿಕ್ಷಕರ ನೇಮಕಾತಿ ಮತ್ತು ಬಹು-ದರ್ಜೆ ಬೋಧನೆಯಂತಹ ಮೂಲಭೂತ ಸವಾಲುಗಳನ್ನು ತಕ್ಷಣವೇ ಪರಿಹರಿಸಬೇಕಾದ ಅಗತ್ಯವಿದೆ ಎಂಬುದನ್ನು ಈ ಅಧ್ಯಯನ ಬೆಟ್ಟುಮಾಡಿ ತೋರಿಸಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/school-enrolment-drops-by-1-55-crore-in-india-tiss-sottter-2025-report-highlights-gdp/articleshow-5g4oaa1"/>
        </item>
        <item>
            <title><![CDATA[Education: KPS ಸೇರಿ 956 ಶಾಲೆಗಳಲ್ಲಿ ಮಕ್ಕಳಿಗೆ ಹಣಕ್ಲಾಸು! ರಾಜ್ಯ ಸರ್ಕಾರದ ಮಹತ್ವದ ಆದೇಶ]]></title>
            <link>https://kannada.asianetnews.com/education/karnataka-to-introduce-financial-literacy-in-government-schools-rav/articleshow-9r4az7l</link>
            <guid isPermaLink="true">https://kannada.asianetnews.com/education/karnataka-to-introduce-financial-literacy-in-government-schools-rav/articleshow-9r4az7l</guid>
            <pubDate>Wed, 16 Sep 2026 06:21:40 +0530</pubDate>
            <description><![CDATA[&lt;p&gt;ಕರ್ನಾಟಕ ಪಬ್ಲಿಕ್&zwnj; ಶಾಲೆಗಳು(ಕೆಪಿಎಸ್&zwnj;) ಸೇರಿ ಒಟ್ಟು 956 ಶಾಲೆಗಳಲ್ಲಿನ 8 ರಿಂದ 12ನೇ ತರಗತಿ ವರೆಗಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿಂಗ್&zwnj;, ಡಿಜಿಟಲ್&zwnj; ವ್ಯವಹಾರ, ಷೇರು ಮಾರುಕಟ್ಟೆ ಕಾರ್ಯವೈಖರಿ, ಹಣಕಾಸು ವಂಚನೆ ತಡೆ ಸೇರಿ &lsquo;ಹಣಕಾಸು ಸಾಕ್ಷರತಾ ಶಿಕ್ಷಣ&rsquo; ದೊರೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2kv12mxa9thbbd473rmdyha,imgname-government-schools-1789519760029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಿಂಗರಾಜು ಕೋರಾ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಸೆ.16): &lt;/strong&gt;ಕರ್ನಾಟಕ ಪಬ್ಲಿಕ್&zwnj; ಶಾಲೆಗಳು(KPS) ಸೇರಿ ಒಟ್ಟು 956 ಶಾಲೆಗಳಲ್ಲಿನ 8 ರಿಂದ 12ನೇ ತರಗತಿ ವರೆಗಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿಂಗ್&zwnj;, ಡಿಜಿಟಲ್&zwnj; ವ್ಯವಹಾರ, ಷೇರು ಮಾರುಕಟ್ಟೆ ಕಾರ್ಯವೈಖರಿ, ಹಣಕಾಸು ವಂಚನೆ ತಡೆ ಸೇರಿ &lsquo;ಹಣಕಾಸು ಸಾಕ್ಷರತಾ ಶಿಕ್ಷಣ&rsquo; ದೊರೆಯಲಿದೆ.&lt;/p&gt;&lt;h2&gt;956 ಶಾಲೆಗಳಲ್ಲಿ ಮಕ್ಕಳಿಗೆ ಹಣಕ್ಲಾಸು! ಸರ್ಕಾರದ ಮಹತ್ವದ ಆದೇಶ&lt;/h2&gt;&lt;p&gt;ಈ ಸಂಬಂಧ ರಾಜ್ಯ ಯೋಜನಾ ನಿರ್ದೇಶನಾಲಯ ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 307 ಕೆಪಿಎಸ್&zwnj; ಶಾಲೆಗಳು ಹಾಗೂ ಏಷ್ಯನ್&zwnj; ಡೆವಲಪ್&zwnj;ಮೆಂಟ್ ಬ್ಯಾಂಕ್&zwnj; (ಎಡಿಬಿ) ನೆರವಿನಿಂದ ಅಭಿವೃದ್ಧಿಪಡಿಸಲಾಗಿರುವ ಶಾಲೆಗಳು ಸೇರಿ ಒಟ್ಟು 956 ಶಾಲೆಗಳಲ್ಲಿ ಮಕ್ಕಳಿಗೆ ಹಣಕಾಸು ಸಾಕ್ಷರತಾ ಶಿಕ್ಷಣ ನೀಡಲು ಆದೇಶಿಸಿದೆ.&lt;/p&gt;&lt;h3&gt;ಮಕ್ಕಳಿಗೆ ಬ್ಯಾಂಕಿಂಗ್, ಹೂಡಿಕೆ, ಅರಿವು ಶಿಕ್ಷಣ&lt;/h3&gt;&lt;p&gt;ವಿದ್ಯಾರ್ಥಿಗಳಿಗೆ ಪ್ರೌಢಾವಸ್ಥೆಯಲ್ಲೇ ವೈಯಕ್ತಿಕ ಹಣಕಾಸಿನ ನಿರ್ವಹಣೆ, ಬ್ಯಾಂಕಿಂಗ್&zwnj; ವ್ಯವಸ್ಥೆಯ ಅರಿವು, ಉಳಿತಾಯ, ಬಂಡವಾಳ ಸೇರಿ ಸೂಕ್ತ ಹಣಕಾಸು ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯದ ಕುರಿತು ಪ್ರಾಯೋಗಿಕ ಜೀವನ ಕೌಶಲ್ಯ ಬೆಳೆಸುವ ಪರಿಕಲ್ಪನೆಯೊಂದಿಗೆ ಹಣಕಾಸು ವ್ಯವಹಾರಗಳ ಕುರಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ 2026-27ನೇ ಸಾಲಿನ ಇನ್ನೋವೇಷನ್&zwnj; ಪ್ರಾಜೆಕ್ಟ್&zwnj; ರೆಕ್ಯುರಿಂಗ್&zwnj;(ಪಿಎಬಿ) ಯೋಜನೆ ಅಡಿ ರಾಜ್ಯದ ಒಂದಷ್ಟು ಶಾಲೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ಶಾಲೆಗೆ 5000 ರು. ಘಟಕ ವೆಚ್ಚದಂತೆ ಒಟ್ಟು 47.80 ಲಕ್ಷ ರು. ಅನುದಾನ ಒದಗಿಸಲಾಗಿದೆ. ಈ ಕಾರ್ಯಕ್ರಮ ಅನುಷ್ಠಾನಕ್ಕೆ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಬಿಇಒಗಳು ಕ್ರಮ ವಹಿಸಬೇಕೆಂದು ರಾಜ್ಯ ಯೋಜನಾ ನಿರ್ದೇಶಕರು ಸೂಚಿಸಿದ್ದಾರೆ.&lt;/p&gt;&lt;h3&gt;ಹಣಕಾಸು ಸಾಕ್ಷರತೆಯಲ್ಲಿ ಏನೇನು ಕಲಿಕೆ?:&lt;/h3&gt;&lt;p&gt;ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್&zwnj;ನ ಪರಿಕಲ್ಪನೆಗಳು, ಡಿಜಿಟಲ್&zwnj; ಹಣಕಾಸು ವ್ಯವಹಾರಗಳು, ಬಜೆಟ್&zwnj; ತಯಾರಿಕೆ, ವೆಚ್ಚ, ಉಳಿತಾಯದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತದೆ. ವೈಯಕ್ತಿಕ ಹಣಕಾಸು ನಿರ್ವಹಿಸುವ ಹಾಗೂ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸುವುದು, ಹಣಕಾಸು ವಂಚನೆ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ.&lt;/p&gt;&lt;p&gt;ಇವುಗಳ ಅನುಷ್ಠಾನಕ್ಕಾಗಿ ಈ ಯೋಜನೆ ವ್ಯಾಪ್ತಿಯ ಪ್ರತಿ ಶಾಲೆಯಲ್ಲೂ ಪ್ರತಿ ತಿಂಗಳಿಗೆ ಒಂದು ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ಕಡ್ಡಾಯವಾಗಿ ನಡೆಸಬೇಕು. ಶಾಲೆಗಳಿಗೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಚಾರ್ಟರ್ಡ್&zwnj; ಅಕೌಂಟೆಂಟ್&zwnj;ಗಳು, ಹಣಕಾಸು ಸಲಹೆಗಾರರು, ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರಗಳ ಪರಿಣಿತರೊಂದಿಗೆ ಸಮನ್ವಯ ಸಾಧಿಸಿ ಉಳಿತಾಯದ ಅಭ್ಯಾಸ, ಡಿಜಿಟಲ್&zwnj; ಪಾವತಿ, ಜವಾಬ್ದಾರಿಯುತ ಸಾಲ ಪಡೆಯುವಿಕೆ, ವಿಮೆ, ತೆರಿಗೆ, ಹೂಡಿಕೆ, ಉಳಿತಾಯದ ಮೂಲಭೂತ ಅಂಶಗಳು, ಹಣಕಾಸು ವಂಚನೆ ತಡೆ ಕುರಿತು ಸಂವಾದದ ಮೂಲಕ ಅರಿವು ಮೂಡಿಸಬೇಕೆಂದು ತಿಳಿಸಲಾಗಿದೆ.&lt;/p&gt;&lt;h3&gt;ಬಿಎಸ್&zwnj;ಇಗೆ ಶೈಕ್ಷಣಿಕ ಭೇಟಿ&lt;/h3&gt;&lt;p&gt;ಬಂಡವಾಳ ಮಾರುಕಟ್ಟೆ ಕುರಿತು ಅರಿವು ಈ ಕಾರ್ಯಕ್ರಮದ ಪ್ರಮುಖ ಭಾಗಿದ್ದು, ವಿದ್ಯಾರ್ಥಿಗಳಿಗೆ ಷೇರುಗಳು, ವಹಿವಾಟು ಹಾಗೂ ಹೂಡಿಕೆ ಕುರಿತು ಕಾರ್ಯಕ್ರಮಗಳ ಮೂಲಕ ತಿಳಿಸಿಕೊಡಬೇಕು. ಸಾಧ್ಯವಾದಲ್ಲಿ ಬೆಂಗಳೂರು ಷೇರು ವಿನಿಮಯ ಕೇಂದ್ರ ಅಥವಾ ಸಮಾನ ಹಣಕಾಸು ಮಾರುಕಟ್ಟೆ ಸಂಸ್ಥೆಗಳಿಗೆ ಶೈಕ್ಷಣಿಕ ಭೇಟಿ ಏರ್ಪಡಿಸಿ ಷೇರು ಮಾರುಕಟ್ಟೆ ಕಾರ್ಯವೈಖರಿ ಹಾಗೂ ಹಣಕಾಸು ವ್ಯವಸ್ಥೆಗಳ ಕುರಿತು ಪ್ರಾಯೋಗಿಕ ತಿಳಿವಳಿಕೆ ನೀಡಬೇಕೆಂದು ಸೂಚಿಸಲಾಗಿದೆ.&lt;/p&gt;&lt;p&gt;ಜತೆಗೆ ಶಾಲೆಗಳಲ್ಲೇ ವಿದ್ಯಾರ್ಥಿಗಳಿಗೆ ಬಜೆಟ್&zwnj; ತಯಾರಿ ಅಭ್ಯಾಸಗಳು, ಸರಳ ಬಡ್ಡಿ ಲೆಕ್ಕಾಚಾರಗಳು, ಉಳಿತಾಯ ಕುರಿತು ಜಾಗೃತಿ ಚಟುವಟಿಕೆ, ಪೋಸ್ಟರ್&zwnj; ರಚನೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಬೇಕು. ಯುಪಿಐ, ಎಟಿಎಂ ಬಳಕೆಯ ಪ್ರಾಯೋಗಿಕ ಪ್ರದರ್ಶನಗಳು, ಅಣಕು ಬ್ಯಾಂಕಿಂಗ್&zwnj; ಚಟುವಟಿಕೆಗಳು, ಬ್ಯಾಂಕುಗಳಿಗೆ ಶೈಕ್ಷಣಿಕ ಭೇಟಿಗಳನ್ನು ಆಯೋಜಿಸಬೇಕು. ಉದ್ಯಮಶೀಲತೆ ಮತ್ತು ಸ್ಟಾರ್ಟ್&zwnj;ಅಪ್&zwnj; ಪರಿಚಯ ಕಾರ್ಯಕ್ರಮಗಳನ್ನು ಶಿಕ್ಷಕರು ರೂಪಿಸಿ ಅನುಷ್ಠಾನಗೊಳಿಸಬೇಕು. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಕರು ಮಕ್ಕಳಿಗೆ ಹಣಕಾಸು ಸಾಕ್ಷರತಾ ಶಿಕ್ಷಣದ ಕುರಿತು ಜ್ಞಾನ ಪರೀಕ್ಷೆ ನಡೆಸಿ ಫಲಿತಾಂಶವನ್ನು ಬ್ಲಾಕ್&zwnj; ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬೇಕೆಂದು ನಿರ್ದೇಶನ ನೀಡಲಾಗಿದೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/karnataka-to-introduce-financial-literacy-in-government-schools-rav/articleshow-9r4az7l"/>
        </item>
        <item>
            <title><![CDATA[ಹಾಡುತ್ತಾ, ಆಡುತ್ತಾ ಇಂಗ್ಲಿಷ್ ಕಲಿಕೆ: ಮುದ್ದಾಬಳ್ಳಿ ಮಕ್ಕಳ ನೆಚ್ಚಿನ ಶಿಕ್ಷಕ ಮಹ್ಮದ್ ಇಸ್ಮಾಯಿಲ್]]></title>
            <link>https://kannada.asianetnews.com/education/koppal-muddaballi-teacher-mahmad-ismail-inspires-rural-students-to-learn-english-youtube-gvd/articleshow-g6oaie4</link>
            <guid isPermaLink="true">https://kannada.asianetnews.com/education/koppal-muddaballi-teacher-mahmad-ismail-inspires-rural-students-to-learn-english-youtube-gvd/articleshow-g6oaie4</guid>
            <pubDate>Sat, 05 Sep 2026 15:47:19 +0530</pubDate>
            <description><![CDATA[&lt;p&gt;ಕೊಪ್ಪಳದ ಮುದ್ದಾಬಳ್ಳಿಯ ಶಿಕ್ಷಕ ಮಹ್ಮದ್ ಇಸ್ಮಾಯಿಲ್ ಅವರು YouTube, ಸ್ಮಾರ್ಟ್ ಕ್ಲಾಸ್ ಮತ್ತು ಭಾಷಾ ಆಟಗಳ ಮೂಲಕ ಗ್ರಾಮೀಣ ಮಕ್ಕಳಿಗೆ ಸರಳ ಹಾಗೂ ಪರಿಣಾಮಕಾರಿಯಾಗಿ ಇಂಗ್ಲಿಷ್ ಕಲಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1rh4jmxbvkrkhveew6sp25r,imgname-chc-1788603419293.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಸೆ.05):&lt;/strong&gt; ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯ ಶಿಕ್ಷಕ ಮಹ್ಮದ್ ಇಸ್ಮಾಯಿಲ್ ಅವರು ಯೂಟ್ಯೂಬ್, ಸ್ಮಾರ್ಟ್ ಕ್ಲಾಸ್ ಮತ್ತು ಭಾಷಾ ಆಟಗಳ ಮೂಲಕ ಮಕ್ಕಳಿಗೆ ಸರಳವಾಗಿ ಇಂಗ್ಲಿಷ್ ಕಲಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಇದೇ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇಸ್ಮಾಯಿಲ್, ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.&lt;/p&gt;&lt;p&gt;ಹಾಡು, ಆಟ ಹಾಗೂ ಪರಸ್ಪರ ಸಂವಹನದ ಮೂಲಕ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡಲು ಕಲಿಯುತ್ತಿದ್ದಾರೆ. ಯಾವುದೇ ಭಾಷಾ ಕಲಿಕೆಯು ಆಲಿಸುವಿಕೆ, ಬಳಕೆ, ನಿರಂತರ ಸಂವಹನ, ಬರವಣಿಗೆ, ಓದು ಮತ್ತು ಮನನದ ಮೂಲಕ ಮಾತ್ರ ಸಾಧ್ಯ ಎಂಬುದನ್ನು ಅರಿತುಕೊಂಡಿರುವ ಅವರು, ಇದೇ ತಂತ್ರವನ್ನು ಬೋಧನೆಯಲ್ಲಿ ಅಳವಡಿಸಿಕೊಂಡಿದ್ದಾರೆ.&lt;/p&gt;&lt;p&gt;ಸ್ವಂತ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ಇಸ್ಮಾಯಿಲ್, ತರಗತಿಯಲ್ಲಿ ವೈವಿಧ್ಯಮಯ ಚಟುವಟಿಕೆ ಮಾಡಿಸುವ ಜತೆಗೆ, ಮನೆಯಲ್ಲಬ ಮಕ್ಕಳು ಚಟುವಟಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸ್ವತಃ ಚಾರ್ಟ್&zwnj;ಗಳನ್ನು ತಯಾರಿಸಿ, ವಿಷಯವನ್ನು ವಿಶ್ಲೇಷಿಸಿ, ಇಂಗ್ಲಿಷ್&zwnj;ನಲ್ಲಿಯೇ ತರಗತಿಯ ಮುಂದೆ ಪ್ರಸ್ತುತಪಡಿಸುತ್ತಾರೆ.&lt;/p&gt;&lt;h2&gt;&lt;strong&gt;ಇತರ ಶಿಕ್ಷಕರಿಗೂ ಮಾದರಿ&lt;/strong&gt;&lt;/h2&gt;&lt;p&gt;ಇಸ್ಮಾಯಿಲ್ ಅವರ ಪ್ರಯತ್ನ ಗ್ರಾಮೀಣ ಮಕ್ಕಳಿಗೆ ಭಾಷೆ ಕಲಿಯುವಿಕೆಯನ್ನು ಸರಳ, ಆಸಕ್ತಿದಾಯಕ ಮತ್ತು ಪರಿಣಾಮಕಾರಿಯನ್ನಾಗಿಸಿದೆ. ಅವರ ವಿಭಿನ್ನ ಬೋಧನಾ ಕ್ರಮ ಇತರ ಶಿಕ್ಷಕರಿಗೂ ಮಾದರಿಯಾಗಿದೆ. ಪ್ರಶ್ನೋತ್ತರ, ಗುಂಪು ಚರ್ಚೆ, ಪದ ಆಟ, ಅಭಿನಯ ಮತ್ತು ಸರಳ ಸಂಭಾಷಣೆಗಳ ಮೂಲಕ ಮಕ್ಕಳನ್ನು ಮಾತನಾಡಲು ಉತ್ತೇಜಿಸುತ್ತಾರೆ.&lt;/p&gt;&lt;p&gt;ತಪ್ಪುಗಳಾದರೂ ಹಿಂಜರಿಯದೆ ಪ್ರಯತ್ನಿಸುವ ವಾತಾವರಣ ನಿರ್ಮಿಸಿರುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಾಗಿದೆ. ಪೋಷಕರಿಗೂ ಮಕ್ಕಳ ಚಟುವಟಿಕೆಗಳನ್ನು ಗಮನಿಸಿ ಪ್ರೋತ್ಸಾಹಿಸುವಂತೆ ತಿಳಿಸುತ್ತಿದ್ದಾರೆ. ಇದರಿಂದ ಶಾಲೆ ಮತ್ತು ಮನೆಯ ಕಲಿಕೆಯ ನಡುವಿನ ಸಂಪರ್ಕವೂ ಬಲಗೊಂಡಿದೆ. ಇಂತಹ ಪ್ರಯತ್ನಗಳು ಮಕ್ಕಳ ಭವಿಷ್ಯ ರೂಪಿಸುತ್ತಿವೆ.&lt;/p&gt;]]></content:encoded>
            <category>education</category>
            <dc:creator>Govindaraj S</dc:creator>
            <atom:link href="https://kannada.asianetnews.com/education/koppal-muddaballi-teacher-mahmad-ismail-inspires-rural-students-to-learn-english-youtube-gvd/articleshow-g6oaie4"/>
        </item>
        <item>
            <title><![CDATA[Most Educated Cricketer: ಧೋನಿ, ಕೊಹ್ಲಿ ಅಲ್ಲ, ಟೀಂ ಇಂಡಿಯಾದ ಅತಿ ಹೆಚ್ಚು ಓದಿದ ಆಟಗಾರ ಆರ್‌ಸಿಬಿಯ ಈ ಸ್ಟಾರ್ ಕ್ರಿಕೆಟಿಗ!]]></title>
            <link>https://kannada.asianetnews.com/gallery/cricket-sports/venkatesh-iyer-education-mba-ca-and-phd-the-most-educated-indian-cricketer-kvn-grl0mum</link>
            <guid isPermaLink="true">https://kannada.asianetnews.com/gallery/cricket-sports/venkatesh-iyer-education-mba-ca-and-phd-the-most-educated-indian-cricketer-kvn-grl0mum</guid>
            <pubDate>Sat, 19 Sep 2026 15:13:20 +0530</pubDate>
            <description><![CDATA[&lt;p&gt;ಟೀಂ ಇಂಡಿಯಾದಲ್ಲಿ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕ್ರೇಜ್ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಇವರೆಲ್ಲಾ ಆಟದಲ್ಲಿ ಮುಂದಿದ್ದರೂ, ಓದಿನಲ್ಲಿ ಸ್ವಲ್ಪ ಹಿಂದೆಯೇ ಇದ್ದಾರೆ. ಹಾಗಾದರೆ ನಮ್ಮ ತಂಡದಲ್ಲಿ ಅತಿ ಹೆಚ್ಚು ಓದಿರುವ ಆಟಗಾರ ಯಾರು ಅಂತ ನಿಮಗೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krtwx5tghvjscz1x4jxk6gv9,imgname-venkatesh-iyer-1779019192144.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾದಲ್ಲಿ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕ್ರೇಜ್ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಇವರೆಲ್ಲಾ ಆಟದಲ್ಲಿ ಮುಂದಿದ್ದರೂ, ಓದಿನಲ್ಲಿ ಸ್ವಲ್ಪ ಹಿಂದೆಯೇ ಇದ್ದಾರೆ. ಹಾಗಾದರೆ ನಮ್ಮ ತಂಡದಲ್ಲಿ ಅತಿ ಹೆಚ್ಚು ಓದಿರುವ ಆಟಗಾರ ಯಾರು ಅಂತ ನಿಮಗೆ ಗೊತ್ತಾ?&lt;/p&gt;&lt;img&gt;&lt;p&gt;ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಯುವ ಆಟಗಾರ ಇಶಾನ್ ಕಿಶನ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್ ಆಟಗಾರ ಮೊಹಮ್ಮದ್ ಸಿರಾಜ್ ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿದ್ದಾರೆ. ಇವರೆಲ್ಲಾ ದೊಡ್ಡ ದೊಡ್ಡ ಡಿಗ್ರಿ ಮಾಡಿದ್ದಾರೆ ಅಂತ ನೀವು ಅಂದುಕೊಂಡರೆ ಅದು ತಪ್ಪು. ಇವರೆಲ್ಲರಿಗೂ ಸ್ಪೋರ್ಟ್ಸ್ ಕೋಟಾದಡಿ ಈ ಕೆಲಸ ಸಿಕ್ಕಿದೆ. ಆದರೆ ಆರ್&zwnj;ಸಿಬಿಯ ಯುವ ಆಟಗಾರ ವೆಂಕಟೇಶ್ ಅಯ್ಯರ್ ಕಥೆ ಬೇರೆ. ಇವರು ಆಟ ಮತ್ತು ಓದು ಎರಡನ್ನೂ ಅದ್ಭುತವಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಓದಿರುವ ಆಟಗಾರ ಇವರೇ.&lt;/p&gt;&lt;img&gt;&lt;p&gt;ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ, ಅದೊಂದು ಧರ್ಮ. ಧೋನಿ, ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಸ್ಟಾರ್ ಆಟಗಾರರು ಮೈದಾನದಲ್ಲಿ ಅಬ್ಬರಿಸಿದರೂ ಓದಿನಲ್ಲಿ ಸ್ವಲ್ಪ ಹಿಂದೆ ಉಳಿದಿದ್ದಾರೆ. ಆದರೆ ವೆಂಕಟೇಶ್ ಅಯ್ಯರ್ ಆಟ ಮತ್ತು ಓದು ಎರಡರಲ್ಲೂ ಸೂಪರ್ ಸ್ಟಾರ್. ಇವರು ಶೀಘ್ರದಲ್ಲೇ ತಮ್ಮ ಹೆಸರಿನ ಮುಂದೆ 'ಡಾಕ್ಟರ್' ಸೇರಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಇವರು ಫೈನಾನ್ಸ್&zwnj;ನಲ್ಲಿ ಪಿಎಚ್&zwnj;ಡಿ (PhD) ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಫೈನಾನ್ಸ್&zwnj;ನಲ್ಲಿ ಎಂಬಿಎ (MBA) ಮುಗಿಸಿದ್ದಾರೆ. ಎಂಬಿಎ ಬಳಿಕ ಪ್ರಸಿದ್ಧ 'ಡೆಲಾಯ್ಟ್' (Deloitte) ಕಂಪನಿಯಲ್ಲಿ ಕೆಲಸ ಕೂಡ ಸಿಕ್ಕಿತ್ತು. ಆದರೆ ಕ್ರಿಕೆಟ್ ಮೇಲಿನ ಪ್ರೀತಿಗಾಗಿ ಆ ಕೆಲಸ ಬಿಟ್ಟರು. ಜೊತೆಗೆ ಚಾರ್ಟರ್ಡ್ ಅಕೌಂಟೆಂಟ್ (CA) ಇಂಟರ್ಮೀಡಿಯೇಟ್ ಪರೀಕ್ಷೆಯನ್ನೂ ಇವರು ಪಾಸ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್&zwnj;ನ (IPL) ದುಬಾರಿ ಆಟಗಾರರಲ್ಲಿ ವೆಂಕಟೇಶ್ ಅಯ್ಯರ್ ಕೂಡ ಒಬ್ಬರು. 2021ರಲ್ಲಿ ಇವರು ಐಪಿಎಲ್&zwnj;ಗೆ ಎಂಟ್ರಿ ಕೊಟ್ಟರು. ಆಗ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ ಇವರನ್ನು ಕೇವಲ 20 ಲಕ್ಷ ರೂ. ಮೂಲಬೆಲೆಗೆ ಖರೀದಿಸಿತ್ತು. ಮೊದಲ ಸೀಸನ್&zwnj;ನಲ್ಲೇ ಅಬ್ಬರಿಸಿದ ಇವರು ಕೆಕೆಆರ್ ತಂಡವನ್ನು ಫೈನಲ್&zwnj;ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರಿಂದಾಗಿ ಮುಂದಿನ ವರ್ಷವೇ ಕೆಕೆಆರ್ ಇವರ ಸಂಭಾವನೆಯನ್ನು 20 ಲಕ್ಷದಿಂದ ಬರೋಬ್ಬರಿ 8 ಕೋಟಿ ರೂ.ಗೆ ಏರಿಸಿತು. ಇದು ಶೇ. 3900ರಷ್ಟು ಬೃಹತ್ ಏರಿಕೆ.&lt;/p&gt;&lt;img&gt;&lt;p&gt;2025ರ ಐಪಿಎಲ್ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಲು ಹಲವು ತಂಡಗಳು ಪೈಪೋಟಿ ನಡೆಸಿದ್ದವು. ಆಗ ಕೆಕೆಆರ್ ಬರೋಬ್ಬರಿ 23.75 ಕೋಟಿ ರೂ. ನೀಡಿ ಇವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ 2026ರ ಸೀಸನ್&zwnj;ಗೂ ಮುನ್ನ ಕೆಕೆಆರ್ ಇವರನ್ನು ಕೈಬಿಟ್ಟಿತು. ಆಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೇವಲ 7 ಕೋಟಿ ರೂ.ಗೆ ಇವರನ್ನು ಖರೀದಿಸಿತು. ಹೀಗೆ ಇವರು ಐಪಿಎಲ್ ಮೂಲಕ ಇದುವರೆಗೆ 55 ಕೋಟಿ ರೂ. ಸಂಪಾದಿಸಿದ್ದಾರೆ. ದೇಶೀಯ ಕ್ರಿಕೆಟ್&zwnj;ನಲ್ಲಿ ಮಧ್ಯಪ್ರದೇಶ ತಂಡದ ಆಲ್&zwnj;ರೌಂಡರ್ ಆಗಿ ಮಿಂಚುತ್ತಿರುವ ಇವರು, ಆರ್&zwnj;ಸಿಬಿ (RCB) ಸತತ ಎರಡನೇ ಬಾರಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;&lt;img&gt;&lt;p&gt;ವೆಂಕಟೇಶ್ ಅಯ್ಯರ್ ಅವರಂತೆಯೇ ಮಾಜಿ ಕ್ರಿಕೆಟಿಗ ಆವಿಷ್ಕಾರ್ ಸಾಲ್ವಿ ಕೂಡ ಪಿಎಚ್&zwnj;ಡಿ ಮಾಡಿದ್ದಾರೆ. ಅಯ್ಯರ್ ಫೈನಾನ್ಸ್&zwnj;ನಲ್ಲಿ ಪಿಎಚ್&zwnj;ಡಿ ಮಾಡುತ್ತಿದ್ದರೆ, ಸಾಲ್ವಿ ಆಸ್ಟ್ರೋಫಿಸಿಕ್ಸ್&zwnj;ನಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದಿದ್ದಾರೆ. ಇವರ ಮಟ್ಟಿಗೆ ಪಿಎಚ್&zwnj;ಡಿ ಮಾಡದಿದ್ದರೂ, ಡಿಗ್ರಿ ಮುಗಿಸಿದ ಹಲವು ಕ್ರಿಕೆಟಿಗರಿದ್ದಾರೆ. ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಮೆಕ್ಯಾನಿಕಲ್ ಇಂಜಿನಿಯರಿಂಗ್, ಜಾವಗಲ್ ಶ್ರೀನಾಥ್ ಇನ್ಸ್ಟ್ರುಮೆಂಟಲ್ ಟೆಕ್ನಾಲಜಿ ಮುಗಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಕೂಡ ಬಿ.ಟೆಕ್ ಓದಿದ್ದಾರೆ. ಇಂದಿನ ಯುವ ಆಟಗಾರರು ಕೂಡ ಆಟ ಮತ್ತು ಓದನ್ನು ಅದ್ಭುತವಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಸೀಸನ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದ ವೆಂಕಟೇಶ್ ಅಯ್ಯರ್, ಇದೀಗ ಬೆಂಗಳೂರು ತಂಡಕ್ಕೆ ಸತತ ಹ್ಯಾಟ್ರಿಕ್ ಟ್ರೋಫಿ ಗೆಲ್ಲಿಸಿಕೊಡಲು ಪಣ ತೊಟ್ಟಿದ್ದಾರೆ. ಅಂದಹಾಗೆ ಇದುವರೆಗೂ ಯಾವ ತಂಡವು ಐಪಿಎಲ್&zwnj;ನಲ್ಲಿ ಸತತ ಮೂರು ಬಾರಿ ಚಾಂಪಿಯನ್ ಆಗಿಲ್ಲ.&lt;/p&gt;]]></content:encoded>
            <category>education</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/venkatesh-iyer-education-mba-ca-and-phd-the-most-educated-indian-cricketer-kvn-grl0mum"/>
        </item>
        <item>
            <title><![CDATA[ಪಾಠ ಹೇಳುವುದಷ್ಟೇ ಅಲ್ಲ, ಶಾಲೆಯನ್ನೇ ಬದಲಿಸಿದ ಶಿಕ್ಷಕ: ಮಕ್ಕಳ ಕಲಿಕೆಗೆ ಹೊಸ ಸ್ಪರ್ಶ!]]></title>
            <link>https://kannada.asianetnews.com/education/koppal-adavibhavi-government-school-teacher-manjunath-hiremath-leads-by-example-education-sports-gvd/articleshow-icgh8f5</link>
            <guid isPermaLink="true">https://kannada.asianetnews.com/education/koppal-adavibhavi-government-school-teacher-manjunath-hiremath-leads-by-example-education-sports-gvd/articleshow-icgh8f5</guid>
            <pubDate>Sat, 05 Sep 2026 15:29:23 +0530</pubDate>
            <description><![CDATA[&lt;p&gt;ಅಡವಿಭಾವಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ನಾಗಯ್ಯ ಹಿರೇಮಠ ಶಿಕ್ಷಣದ ಜೊತೆಗೆ ಸಾಹಿತ್ಯ, ಕ್ರೀಡೆ, ಪರಿಸರ ಸಂರಕ್ಷಣೆ, ತಂತ್ರಜ್ಞಾನ ಆಧಾರಿತ ಬೋಧನೆ ಹಾಗೂ ಶಾಲಾಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1rg3qc7ft7asaqvb8a4gbfm,imgname-bj-1788602342791.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹನುಮಸಾಗರ (ಸೆ.05):&lt;/strong&gt; ಅಡವಿಭಾವಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ನಾಗಯ್ಯ ಹಿರೇಮಠ ಶಿಕ್ಷಣದ ಜೊತೆಗೆ ಸಾಹಿತ್ಯ, ಕ್ರೀಡೆ, ಪರಿಸರ ಸಂರಕ್ಷಣೆ, ತಂತ್ರಜ್ಞಾನ ಆಧಾರಿತ ಬೋಧನೆ ಹಾಗೂ ಶಾಲಾಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. 2008ರ ಜುಲೈ 16ರಂದು ಶಿಕ್ಷಕ ವೃತ್ತಿಗೆ ಸೇರ್ಪಡೆಯಾದ ಅವರು ಹನಮಗಿರಿ ಶಾಲೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ಅಡವಿಭಾವಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದರು.&lt;/p&gt;&lt;p&gt;ದಾನಿಗಳು ಹಾಗೂ ಗ್ರಾಮಸ್ಥರನ್ನು ಸಂಪರ್ಕಿಸಿ ಸುಮಾರು ₹2.50 ಲಕ್ಷ ಮೌಲ್ಯದ ವಿವಿಧ ಸಾಮಗ್ರಿಗಳನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್&zwnj;ಗಳು, ಫ್ಯಾನ್&zwnj;ಗಳು, ಅಲಮಾರಿಗಳು, ಖುರ್ಚಿ, ಟೇಬಲ್, ತಟ್ಟೆ, ಲೋಟ ಸೇರಿದಂತೆ ಅಗತ್ಯ ಪರಿಕರಗಳನ್ನು ಶಾಲೆಗೆ ಒದಗಿಸುವ ಮೂಲಕ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿದ್ದಾರೆ.&lt;/p&gt;&lt;p&gt;ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್&zwnj;ಗಳ ಮೂಲಕ ಪರಿಣಾಮಕಾರಿ ಬೋಧನೆ ಮಾಡುತ್ತಿದ್ದಾರೆ. ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ಶೈಕ್ಷಣಿಕ ಪ್ರವಾಸ, ಹೊರಸಂಚಾರ ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳಲ್ಲಿ ಕಲಿಕೆಯ ಕುತೂಹಲ ಹೆಚ್ಚಿಸಿದ್ದಾರೆ.&lt;/p&gt;&lt;p&gt;ಪ್ರತಿವರ್ಷ ಶಾಲೆಯ ವಿದ್ಯಾರ್ಥಿಗಳು ಇನ್ಸ್ಫೈರ್&zwnj; (INSPIRE Award)ಗೆ ಆಯ್ಕೆಯಾಗುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರತಿವರ್ಷ ಸುಮಾರು ಐದು ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ಶಾಲೆಗೆ ಆಯ್ಕೆಯಾಗುವಂತೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.&lt;/p&gt;&lt;p&gt;ನಲಿ-ಕಲಿ, ಇಂಗ್ಲಿಷ್ ಬೈಲಿಂಗ್ವಲ್ ಸೇರಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಎಂಆರ್&zwnj;ಪಿ (Master Resource Person) ಆಗಿ ಕಾರ್ಯನಿರ್ವಹಿಸಿರುವ ಅವರು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಶಿಕ್ಷಕರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಬಿಎಲ್&zwnj;ಒ ಆಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದು, ಶಿಕ್ಷಕ ವೃತ್ತಿಯೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಕೈಯಲ್ಲಿ ಪುಸ್ತಕ, ಮೈದಾನದಲ್ಲಿ ಕ್ರೀಡೆ&lt;/strong&gt;&lt;/h2&gt;&lt;p&gt;ಸಾಹಿತ್ಯದ ಮೇಲೂ ವಿಶೇಷ ಆಸಕ್ತಿ ಹೊಂದಿರುವ ಅವರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Govindaraj S</dc:creator>
            <atom:link href="https://kannada.asianetnews.com/education/koppal-adavibhavi-government-school-teacher-manjunath-hiremath-leads-by-example-education-sports-gvd/articleshow-icgh8f5"/>
        </item>
        <item>
            <title><![CDATA[38 ವರ್ಷದ ಸೇವೆ, ಕೊನೆ ಗಂಟೆ ಬಾರಿಸಿದ ದಾಸ್ ಅಂಕಲ್: ಬೆಂಗಳೂರಿನ ಭಾವುಕ ವಿಡಿಯೋ ಹಂಚಿದ ಮಹೀಂದ್ರಾ]]></title>
            <link>https://kannada.asianetnews.com/bengaluru-urban/anand-mahindra-shares-viral-video-of-bengaluru-schools-das-uncle-retiring-after-38-years-gkn/articleshow-ihgidp7</link>
            <guid isPermaLink="true">https://kannada.asianetnews.com/bengaluru-urban/anand-mahindra-shares-viral-video-of-bengaluru-schools-das-uncle-retiring-after-38-years-gkn/articleshow-ihgidp7</guid>
            <pubDate>Wed, 09 Sep 2026 18:43:05 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಉದ್ಯಮಿ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಅವರ ವಿಡಿಯೋ ಕಂಡು ಎಲ್ಲರ ಕಣ್ಣಾಲೆಗಳು ಒದ್ದೆ ಆಗಿದೆ. ಅಂಥದ್ದೇನಿದೆ ಆ ವಿಡಿಯೋದಲ್ಲಿ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m234s9a30nxxra5mm7g53ve3,imgname-anand-mahindra-1788959565121.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕೆಲವು ಬೀಳ್ಕೊಡುಗೆಗಳು ಕೇವಲ ಸಾಮಾನ್ಯ ವಿದಾಯವಾಗಿರುವುದಿಲ್ಲ. ಅವು ಪ್ರೀತಿ, ಗೌರವ ಮತ್ತು ಬದುಕಿನ ಸಾರ್ಥಕತೆಯ ಸಂಕೇತವಾಗಿರುತ್ತವೆ. ಇಂತಹದ್ದೇ ಒಂದು ಅಪರೂಪದ ಹಾಗೂ ಕಣ್ಣಂಚಲಿ ನೀರು ತರಿಸುವ ಸುಂದರ ಕ್ಷಣದ ವಿಡಿಯೋವನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸದ್ಯ ಇದು ನೆಟ್ಟಿಗರ ಮನಗೆದ್ದಿದೆ.&lt;/p&gt;&lt;p&gt;ಬೆಂಗಳೂರಿನ ಪ್ರತಿಷ್ಠಿತ ಬಿಷಪ್ ಕಾಟನ್ ಗರ್ಲ್ಸ್ ಶಾಲೆಯಲ್ಲಿ (Bishop Cotton Girls&rsquo; School) ಬರೋಬ್ಬರಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ 'ದಾಸ್ ಅಂಕಲ್' ಎಂಬ ಶಾಲಾ ಸಿಬ್ಬಂದಿಗೆ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ನೀಡಿದ ಅದ್ಭುತ ಬೀಳ್ಕೊಡುಗೆ ಇದಾಗಿದೆ.&lt;/p&gt;&lt;h2&gt;&lt;strong&gt;ಕೊನೆಯ ಗಂಟೆ ಬಾರಿಸಿ ಕಣ್ಮನ ಸೆಳೆದ 'ದಾಸ್ ಅಂಕಲ್'&lt;/strong&gt;&lt;/h2&gt;&lt;p&gt;ವಿದ್ಯಾರ್ಥಿಗಳಿಂದ ಪ್ರೀತಿಯಿಂದ &quot;ದಾಸ್ ಅಂಕಲ್&quot; ಎಂದೇ ಕರೆಯಲ್ಪಡುತ್ತಿದ್ದ ಶಾಲಾ ಅಟೆಂಡೆಂಟ್, 38 ವರ್ಷಗಳ ಸುದೀರ್ಘ ಸೇವೆಯ ನಂತರ ನಿವೃತ್ತರಾಗಿದ್ದರು. ತಮ್ಮ ಕೊನೆಯ ಕೆಲಸದ ದಿನದಂದು, ಅವರು ತಮ್ಮ ವಾಚ್ ನೋಡಿಕೊಂಡು, ಶಾಲೆಯ ಆ ದೊಡ್ಡ ಗಂಟೆಯನ್ನು ಕೊನೆಯ ಬಾರಿಗೆ ಬಾರಿಸುತ್ತಾರೆ.&lt;/p&gt;&lt;p&gt;ಅವರು ಗಂಟೆ ಬಾರಿಸುತ್ತಿದ್ದಂತೆ ಶಾಲೆಯ ನೂರಾರು ವಿದ್ಯಾರ್ಥಿನಿಯರು ಒಟ್ಟಾಗಿ ಕೌಂಟ್&zwnj;ಡೌನ್ (ಎಣಿಕೆ) ಮಾಡಿ, ಜೋರಾಗಿ ಚಪ್ಪಾಳೆ ತಟ್ಟಿ, ಹರ್ಷೋದ್ಗಾರ ವ್ಯಕ್ತಪಡಿಸಿದರು. ಶಿಕ್ಷಕರೂ ಸಹ ವಿದ್ಯಾರ್ಥಿಗಳೊಂದಿಗೆ ಸೇರಿ ಚಪ್ಪಾಳೆ ತಟ್ಟುತ್ತಾ ಅವರಿಗೆ ಗೌರವ ಸಲ್ಲಿಸಿದರು. ತಲೆಮಾರುಗಳ ಕಾಲ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಂಡಿದ್ದ ದಾಸ್ ಅಂಕಲ್ ಅವರ ಮುಖದಲ್ಲಿದ್ದ ಹೆಮ್ಮೆ ಮತ್ತು ಶಾಲೆಯ ಮೇಲಿನ ಅವರ ನಂಟು ವಿಡಿಯೋದಲ್ಲಿ ಎದ್ದು ಕಾಣುತ್ತಿತ್ತು.&lt;/p&gt;&lt;h2&gt;&lt;strong&gt;ಆನಂದ್ ಮಹೀಂದ್ರಾ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಈ ಭಾವನಾತ್ಮಕ ವಿಡಿಯೋವನ್ನು ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, ವಿದ್ಯಾರ್ಥಿಗಳು ಮತ್ತು ಶಾಲೆಯ ಸಂಸ್ಕೃತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.&lt;/p&gt;&lt;h2&gt;&lt;strong&gt;ಮಹೀಂದ್ರಾ ಅವರ ಮಾತುಗಳಲ್ಲಿ&lt;/strong&gt;&lt;/h2&gt;&lt;p&gt;&quot;&lt;strong&gt;ಒಂದು ಕೊನೆಯ ಗಂಟೆ. ಜೀವಮಾನದ ಸೇವೆ.&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಶಾಲೆಯ ಈ ಹೃದಯಸ್ಪರ್ಶಿ ಕ್ಷಣ ನಡೆದು ಸುಮಾರು ಒಂದು ವರ್ಷದ ನಂತರ ಈಗಷ್ಟೇ ನನ್ನ ಕಣ್ಣಿಗೆ ಬಿತ್ತು.&lt;/strong&gt;&lt;/p&gt;&lt;p&gt;&lt;strong&gt;38 ವರ್ಷಗಳ ಸುದೀರ್ಘ ಸೇವೆಯ ನಂತರ, ಪ್ರೀತಿಯಿಂದ 'ದಾಸ್ ಅಂಕಲ್' ಎಂದೇ ಕರೆಯಲ್ಪಡುವ ಶಾಲಾ ಅಟೆಂಡೆಂಟ್ ನಿವೃತ್ತರಾಗುತ್ತಿದ್ದರು.&lt;/strong&gt;&lt;/p&gt;&lt;p&gt;&lt;strong&gt;ತಮ್ಮ ಕೊನೆಯ ದಿನದಂದು, ಅವರು ವಾಚ್ ನೋಡಿಕೊಂಡು, ಕೊನೆಯ ಬಾರಿಗೆ ಶಾಲೆಯ ದೊಡ್ಡ ಗಂಟೆಯನ್ನು ಬಾರಿಸಿದರು.&lt;/strong&gt;&lt;/p&gt;&lt;p&gt;&lt;strong&gt;ವಿದ್ಯಾರ್ಥಿಗಳು ಪ್ರತಿ ಬಾರಿಯ ಗಂಟೆಯ ನಾದವನ್ನು ಎಣಿಸುತ್ತಾ, ನಂತರ ಶಿಕ್ಷಕರೊಂದಿಗೆ ಸೇರಿ ಸಂಭ್ರಮದಿಂದ ಚಪ್ಪಾಳೆ ತಟ್ಟಿ ಜೈಕಾರ ಹಾಕಿದರು.&lt;/strong&gt;&lt;/p&gt;&lt;p&gt;&lt;strong&gt;ಅವರ ಮುಖದಲ್ಲಿದ್ದ ಹೆಮ್ಮೆ ಮತ್ತು ಶಾಲೆಯೊಂದಿಗಿನ ಅವರ ಬಾಂಧವ್ಯದ ಆಳ ಎದ್ದು ಕಾಣುತ್ತಿತ್ತು. ಇದನ್ನು ನೋಡಿ ನಾನೂ ಭಾವುಕನಾದೆ.&lt;/strong&gt;&lt;/p&gt;&lt;p&gt;&lt;strong&gt;ಯಾವುದೇ ಪಾತ್ರವಿರಲಿ, ನಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುವುದನ್ನು ಮತ್ತು ಅವರ ಘನತೆಯನ್ನು ಎತ್ತಿಹಿಡಿಯುವುದನ್ನು ನಮ್ಮ ಶಾಲೆಗಳು ಕಲಿಸಿದಾಗ, ನಮ್ಮ ಭವಿಷ್ಯದ ಬಗ್ಗೆ ನಾವು ಆಶಾವಾದಿಗಳಾಗಿರಲು ಎಲ್ಲಾ ಕಾರಣಗಳೂ ಸಿಗುತ್ತವೆ.&lt;/strong&gt;&lt;/p&gt;&lt;p&gt;&lt;strong&gt;ಆನಂದ್ ಮಹೀಂದ್ರಾ, ಉದ್ಯಮಿ&lt;/strong&gt;&lt;/p&gt;&lt;p&gt;ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕಾಯಕವೇ ಕೈಲಾಸ. ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ, ಪ್ರಾಮಾಣಿಕ ಸೇವೆಗೆ ಸಿಗುವ ಇಂತಹ ಗೌರವ ನಿಜಕ್ಕೂ ಅಮೂಲ್ಯ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಅಟೆಂಡೆಂಟ್ 38 ವರ್ಷಗಳ ಕಾಲ ಮಾಡಿದ ನಿಸ್ವಾರ್ಥ ಸೇವೆಗೆ ಆ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ನೀಡಿದ ಈ ಗೌರವ, ಸಮಾಜಕ್ಕೆ ದೊಡ್ಡ ಸಂದೇಶ ರವಾನಿಸಿದೆ.&lt;/p&gt;&lt;p&gt;A final bell. A lifetime of service.I only just came across this moving moment from Bishop Cotton Girls&rsquo; School in Bengaluru, nearly a year after it happened.A school attendant, affectionately known as &ldquo;Das Uncle,&rdquo; was retiring after 38 years of service.On his final day,&hellip; pic.twitter.com/jSQRzJbZqu&lt;/p&gt;&lt;p&gt;&mdash; anand mahindra (@anandmahindra) September 7, 2026&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/anand-mahindra-shares-viral-video-of-bengaluru-schools-das-uncle-retiring-after-38-years-gkn/articleshow-ihgidp7"/>
        </item>
        <item>
            <title><![CDATA[Teachers Day Special: ಮಕ್ಕಳ ಮನಸ್ಸಷ್ಟೇ ಅಲ್ಲ, ಕ್ಯಾನ್ಸರನ್ನೇ ಗೆಲ್ಲುತ್ತಿರುವ ಈ ಶಿಕ್ಷಕಿ ಯಾರು?]]></title>
            <link>https://kannada.asianetnews.com/education/teacher-al-nagaveni-continues-teaching-despite-cancer-inspires-students-in-davanagere-gvd/articleshow-k4gpton</link>
            <guid isPermaLink="true">https://kannada.asianetnews.com/education/teacher-al-nagaveni-continues-teaching-despite-cancer-inspires-students-in-davanagere-gvd/articleshow-k4gpton</guid>
            <pubDate>Sat, 05 Sep 2026 16:04:45 +0530</pubDate>
            <description><![CDATA[&lt;p&gt;ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬೋಧನೆ ಮುಂದುವರಿಸಿರುವ ಶಿಕ್ಷಕಿ ಎ.ಎಲ್. ನಾಗವೇಣಿ ಅವರು ಬಡ ಮಕ್ಕಳ ಶಿಕ್ಷಣಕ್ಕೂ ನೆರವಾಗುತ್ತಾ, ಶಿಕ್ಷಕ ವೃತ್ತಿಗೆ ಮಾನವೀಯತೆ ಮತ್ತು ಸೇವೆಯ ಹೊಸ ಅರ್ಥ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1rj2aj3nqbhqnmkkq0020tr,imgname-vjbv-1788604394051.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಸೆ.05): &lt;/strong&gt;ಮಾರಣಾಂತಿಕ ಕ್ಯಾನ್ಸರ್ ಕಾಯಿಲೆ ಬಂದರೂ ಎದೆಗುಂದದೇ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಲೇ, ಆಸ್ಪತ್ರೆಯಲ್ಲಿದ್ದರೆ ಆನ್&zwnj; ಲೈನ್&zwnj;ನಲ್ಲಿ, ಚಿಕಿತ್ಸೆ ಪಡೆದು ಬಂದ ನಂತರ ಮತ್ತೆ ಎಂದಿನಂತೆ ಶಾಲೆಗೆ ಹೋಗಿ ನೋವಿನಲ್ಲೂ ಮಕ್ಕಳಲ್ಲೇ ದೇವರನ್ನು ಕಾಣುತ್ತಾ, ಬೋಧಿಸುವ ಮೂಲಕ ವೃತ್ತಿಗೆ ಮತ್ತಷ್ಟು ಮೆರಗು ತರುವ ಕೆಲಸವನ್ನು ದಾವಣಗೆರೆಯ ಶ್ರೀರಾಮ ಬಡಾವಣೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮಾಡುತ್ತ ಶಿಕ್ಷಕ ವೃತ್ತಿಯ ಗೌರವ ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.&lt;/p&gt;&lt;p&gt;ದಾವಣಗೆರೆ ವಾಸಿಯಾದ ಎ.ಎಲ್.ನಾಗವೇಣಿ 2022ರಲ್ಲಿ ತಮಗೆ ಕ್ಯಾನ್ಸರ್ 2ನೇ ಹಂತದಲ್ಲಿ ಇರುವುದು ತಿಳಿದಿದ್ದಾರೆ. ಆದರೂ, ಎದೆಗುಂದಲಿಲ್ಲ. ಪತಿ ಎಸ್.ಕೆ.ಪ್ರಹ್ಲಾದ್&zwnj; ರಾಜ್ಯ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ. ತಂದೆ ಶಿಕ್ಷಕರಾಗಿದ್ದ ದಿವಂಗತ ಎ.ಲಿಂಗಪ್ಪ ಇಲ್ಲಿನ ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ. ತಾಯಿಯೂ ಶಿಕ್ಷಕಿಯಾಗಿ ನಿವೃತ್ತಿ ಆದವರು.&lt;/p&gt;&lt;p&gt;ದಾವಣಗೆರೆ ವಿವಿಯಲ್ಲಿ 2015ರಲ್ಲಿ ಎಂ.ಎ. ಸ್ನಾತಕೋತ್ತರ ಇಂಗ್ಲಿಷ್ ಭಾಷೆಯಲ್ಲಿ ರ್ಯಾಂಕ್, 3 ಚಿನ್ನದ ಪದಕ ಪಡೆದು, ಶಿಕ್ಷಕ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎ.ಎಲ್. ನಾಗವೇಣಿ ಅವರು ಕೆಎಎಸ್&zwnj; ಅಧಿಕಾರಿ ಆಗಬಹುದಿತ್ತು. ಆದರೆ, ಹೆತ್ತವರ ಆಸೆಯಂತೆ ಶಿಕ್ಷಕಿಯಾಗಿ ಆ ವೃತ್ತಿಗೆ ಮತ್ತಷ್ಟು ಮೆರಗು ತರುತ್ತಿದ್ದಾರೆ.&lt;/p&gt;&lt;p&gt;ದಾವಣಗೆರೆ ನಿಟುವಳ್ಳಿಯ ಶ್ರೀರಾಮ ಬಡಾವಣೆಯ ಶಾಲೆಯ ಇಂಗ್ಲಿಷ್ ಭಾಷಾ ಹಾಗೂ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ನಾಗವೇಣಿಯವರ ಮಕ್ಕಳಿಗೆ ಪಾಠದ ಜೊತೆಮೌಲ್ಯ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ವಿಜ್ಞಾನ ಪ್ರಯೋಗ, ದೈಹಿಕ ಶಿಕ್ಷಣ, ಇಲಾಖೆ ಪ್ರತಿ ಕಾರ್ಯಕ್ರಮಕ್ಕೂ ಮಕ್ಕಳನ್ನು ಸನ್ನದ್ಧಗೊಳಿಸುತ್ತಿದ್ದಾರೆ. ಕೋವಿಡ್ ವೇಳೆ ಬಡ, ಶ್ರಮಿಕ ಪಾಲಕರ ಪಾಲಿಗೆ ಅನ್ನದಾತೆಯಾಗಿ, ಮಕ್ಕಳಿಗೆ ಅಕ್ಷರದಾತೆ ಆದವರು. ತಮ್ಮ ಮದುವೆ ವೇಳೆ ಪತಿಗೆ ತಮ್ಮ ವೇತನದ ಶೇ.10ರಷ್ಟನ್ನು ಬಡಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡುವ ಮಾತು ಕೊಟ್ಟಂತೆ ಇಂದಿಗೂ ನಾಗವೇಣಿ ನುಡಿದಂತೆ ನಡೆಯುತ್ತಿದ್ದಾರೆ.&lt;/p&gt;&lt;p&gt;ಕುಟುಂಬ, ಸ್ನೇಹಿತರು, ಬಂಧು-ಬಳಗದಿಂದ ವಿವಿಧ ಸರ್ಕಾರಿ ಶಾಲೆಗಳಿಗೆ, ಕೊಡುಗೆಗಳ ರೂಪದಲ್ಲಿ ₹4 ಲಕ್ಷ ಮೌಲ್ಯದ ದೇಣಿಗೆ, ಅವಶ್ಯಕ ಸಾಮಗ್ರಿ ಕೊಡಿಸಿದ್ದಾರೆ. ಬಡವರ ಮಕ್ಕಳು ಶಾಲೆಯಿಂದ ದೂರ ಉಳಿಯಬಾರದೆಂದು ನಿತ್ಯವೂ ಬೆಳಗ್ಗೆ 8.30ಕ್ಕೆ ಮನೆಯಿಂದ ಕಾರಿನಲ್ಲಿ ಹೊರಟು, ತಮ್ಮ ಶಾಲೆಯ ಏಳೆಂಟು ಮಕ್ಕಳನ್ನು ಅವರ ಗುಡಿಸಲು, ಶೆಡ್&zwnj; ಬಳಿ ಹೋಗಿ, ಶಾಲೆಗೆ ಕರೆದೊಯ್ಯುತ್ತಾರೆ. ವಾಪಸ್&zwnj; ಆ ಮಕ್ಕಳನ್ನು ಮನೆಗೆ ಬಿಟ್ಟು, ಸಂಜೆ 6 ಗಂಟೆ ಹೊತ್ತಿಗೆ ಮನೆಗೆ ಮರಳುತ್ತಾರೆ. ಮಕ್ಕಳಿಗೆ ಪಾಠ ಮಾಡುತ್ತಿದ್ದರೆ, ಮಕ್ಕಳೊಂದಿಗೆ ಇದ್ದರೆ ನನಗೆ ಕಾಯಿಲೆಯೇ ಬಾಧಿಸದು ಎನ್ನುತ್ತಾರೆ ನಾಗವೇಣಿಯವರು.&lt;/p&gt;&lt;h2&gt;&lt;strong&gt;ಮತ್ತಷ್ಟು ಅಭಿಮಾನ&lt;/strong&gt;&lt;/h2&gt;&lt;p&gt;2022ರಲ್ಲಿ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಬಂದರೂ ಧೃತಿಗೆಡದೇ ಸೂಕ್ತ ಚಿಕಿತ್ಸೆ ಪಡೆದು ಶಿಕ್ಷಕ ವೃತ್ತಿ ಮುಂದುವರಿಸುತ್ತಿದ್ದಾರೆ. ಕ್ಯಾನ್ಸರ್&zwnj;ಗೆ ಚಿಕಿತ್ಸೆ ನೀಡುತ್ತಿರುವ ಪ್ರಸಿದ್ಧ ವೈದ್ಯರಿಗೆ ತೋರಿಸಲು ಬೆಂಗಳೂರಿಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಮಾತನಾಡುತ್ತಾ ತಮ್ಮ ತಂದೆ ಎ.ಲಿಂಗಪ್ಪನವರು ಅಂದಾಗ ತಮ್ಮ ಗುರುಗಳ ಮಗಳಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ವೈದ್ಯರು ಧನ್ಯತಾಭಾವ ತೋರಿದ್ದು ಗುರು ವೃತ್ತಿ ಬಗ್ಗೆ ನಾಗವೇಣಿಯವರಲ್ಲಿ ಮತ್ತಷ್ಟು ಅಭಿಮಾನ ಮೂಡಿಸಿತು.&lt;/p&gt;&lt;p&gt;ಹಲವಾರು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ನಾಗವೇಣಿಯವರು ಕ್ಯಾನ್ಸರ್ ಎದುರು ಹೋರಾಡುತ್ತಲೇ ಮಕ್ಕಳಿಗೆ ಭವಿಷ್ಯ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ವಿದ್ಯಾರ್ಥಿನಿಯರ ಪೈಕಿ ಯಾರದ್ದೇ ಮನೆಯಲ್ಲಿ ಮೊದಲ ಶುಭ ಕಾರ್ಯವಾದರೆ ಸೀರೆ, ಅರಿಷಿಣ, ಕುಂಕುಮ, ಬಳೆ ತಲುಪಿಸುವ ಮೂಲಕ ಮಾತೃಸ್ಥಾನದಲ್ಲಿ ನಾಗವೇಣಿ ನಿಲ್ಲುತ್ತಾರೆ.&lt;/p&gt;&lt;p&gt;ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿಯಾದ ಪತಿ ಎಸ್.ಕೆ. ಪ್ರಹ್ಲಾದ್ ಜೊತೆಗೆ ದಾವಣಗೆರೆಯಲ್ಲಿ ಶಿಕ್ಷಕಿ ನಾಗವೇಣಿ ಇದ್ದು, ಹೈಕೋರ್ಟ್ ಲಾಯರ್&zwnj; ಆಗಿ ಮಗಳು ಪಿ.ಎನ್.ಪ್ರಾರ್ಥನಾ ಕೆಲಸ ಮಾಡುತ್ತಿದ್ದರೆ, ಮಗ ಪಿ.ಎನ್.ಕಾರ್ತಿಕೇಯನ್&zwnj; ಬೆಂಗಳೂರಿನಲ್ಲಿ ಬಿಬಿಎ ಓದುತ್ತಿದ್ದಾರೆ. ತಮ್ಮ ಹಳೆಯ ವಿದ್ಯಾರ್ಥಿಯೊಬ್ಬನಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದಾರೆ. 8ನೇ ತರಗತಿ ನಂತರ ಮುಂದೆ ಓದುವ ತಮ್ಮ ವಿದ್ಯಾರ್ಥಿಗಳು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಪಿಯುಸಿವರೆಗೆ ತಾವೇ ಶಾಲಾ- ಕಾಲೇಜು ಶುಲ್ಕ ಕಟ್ಟಿ, ನೆರವಾಗುತ್ತಾರೆ. ಬೋಧನೆಯಲ್ಲೂ ವೈಶಿಷ್ಟ್ಯ ಹೊಂದಿರುವ ಎಲ್.ನಾಗವೇಣಿಯವರೆಂದರೆ ಮಕ್ಕಳಿಗೂ ಹೆತ್ತ ತಾಯಿಗಿಂತಲೂ ಹೆಚ್ಚು ಎಂಬಷ್ಟರ ಮಟ್ಟಿಗೆ ಪ್ರೀತಿ, ಸೆಳೆತ.&lt;/p&gt;]]></content:encoded>
            <category>education</category>
            <dc:creator>Govindaraj S</dc:creator>
            <atom:link href="https://kannada.asianetnews.com/education/teacher-al-nagaveni-continues-teaching-despite-cancer-inspires-students-in-davanagere-gvd/articleshow-k4gpton"/>
        </item>
        <item>
            <title><![CDATA[ಕನ್ನಡಿಗ ನಂದನ್ ನಿಲೇಕಣಿ ಸಮಿತಿಯಿಂದ ಮಾಸಾಂತ್ಯಕ್ಕೆ  ನೀಟ್‌ ಸುಧಾರಣಾ ವರದಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ]]></title>
            <link>https://kannada.asianetnews.com/india-news/neet-reforms-nandan-nilekani-committee-to-submit-first-interim-report-soon-centre-informs-supreme-court-gdp/articleshow-lqdzn7b</link>
            <guid isPermaLink="true">https://kannada.asianetnews.com/india-news/neet-reforms-nandan-nilekani-committee-to-submit-first-interim-report-soon-centre-informs-supreme-court-gdp/articleshow-lqdzn7b</guid>
            <pubDate>Sat, 19 Sep 2026 08:09:29 +0530</pubDate>
            <description><![CDATA[ನೀಟ್&zwnj; ಪರೀಕ್ಷಾ ಸುಧಾರಣೆಗಾಗಿ ರಚಿಸಲಾದ ನಂದನ್&zwnj; ನಿಲೇಕಣಿ ನೇತೃತ್ವದ ಸಮಿತಿಯು ಈ ತಿಂಗಳಾಂತ್ಯಕ್ಕೆ ಸುಪ್ರೀಂ ಕೋರ್ಟ್&zwnj;ಗೆ ಮಧ್ಯಂತರ ವರದಿ ಸಲ್ಲಿಸಲಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಶಾಶ್ವತ ಸಿಬ್ಬಂದಿ ನೇಮಕಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಎನ್&zwnj;ಟಿಎ ಘಟಕಕ್ಕೆ ಭೇಟಿ ನೀಡುವುದಾಗಿ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyff8zbaam2z5prem6evb875,imgname-chatgpt-image-jul-26--2026--08-33-47-pm-1785078250858.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ನೀಟ್&zwnj; ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸಲಹೆ ನೀಡಲು ಕನ್ನಡಿಗ ನಂದನ್&zwnj; ನಿಲೇಕಣಿ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು ಈ ತಿಂಗಳ ಕೊನೆಯಲ್ಲಿ ಮೊದಲ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್&zwnj;ಗೆ ಮಾಹಿತಿ ನೀಡಿದೆ.&lt;/p&gt;&lt;p&gt;ಸಾಲುಸಾಲು ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆ ನೀಡಿದ ಬೆನ್ನಲ್ಲೇ ಜು.26ಕ್ಕೆ ನಿಲೇಕಣಿ ಸಮಿತಿ ರಚಿಸಲಾಗಿತ್ತು. ಈ ಬಗ್ಗೆ ನೀಟ್&zwnj; ಅಕ್ರಮಗಳ ಕುರಿತ ವಿಚಾರಣೆ ವೇಳೆ ಮಾಹಿತಿ ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, &lsquo;ನಿಲೇಕಣಿ ಸಮಿತಿಯು ಇಸ್ರೋದ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದ ಹಿಂದಿನ ಸಮಿತಿಯ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದೆ&rsquo; ಎಂದು ನ್ಯಾ। ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠಕ್ಕೆ ತಿಳಿಸಿದರು.&lt;/p&gt;&lt;p&gt;ಇದಕ್ಕೆ ಪ್ರತಿಕ್ರಿಯಿಸಿದ ಪೀಠ, &lsquo;ವ್ಯವಸ್ಥೆಯಲ್ಲಿ ಶಾಶ್ವತ ಸಿಬ್ಬಂದಿ ಹಾಗೂ ಪ್ರತ್ಯೇಕ ವಿಭಾಗಗಳು ಇರಬೇಕು. ನಿಯೋಜಿತ ಸಿಬ್ಬಂದಿಯ ಬಳಕೆ ಕಡಿಮೆ ಇರಬೇಕು. ಪರೀಕ್ಷೆ ನಡೆಸುವ ಸಂಪೂರ್ಣ ಪ್ರಕ್ರಿಯೆಯನ್ನು ಸಂಸ್ಥೀಕರಣಗೊಳಿಸುವತ್ತ ಗಮನಹರಿಸಬೇಕು&rsquo; ಎಂದು ಸರ್ಕಾರಕ್ಕೆ ಸಲಹೆ ನೀಡಿತು. ಜತೆಗೆ, ನೀಟ್&zwnj; ಪರೀಕ್ಷೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್&zwnj;ಟಿಎ) ನವೀಕರಿಸಲಾದ ಘಟಕಕ್ಕೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸುವುದಾಗಿ ಪೀಠದಲ್ಲಿದ್ದ ನ್ಯಾಯಮೂರ್ತಿಗಳು ಹೇಳಿದರು.&lt;/p&gt;&lt;h2&gt;ಯುಜಿಸಿ ನೆಟ್&zwnj; 3 ವಿಷಯಗಳ ಮರು ಪರೀಕ್ಷೆ ಫಲಿತಾಂಶ ಪ್ರಕಟ&lt;/h2&gt;&lt;p&gt;ನವದೆಹಲಿ: ಮೂಲ ಪರೀಕ್ಷೆಯಲ್ಲಿ ಸರಣಿ ದೋಷಗಳ ಹಿನ್ನೆಲೆ ಸೆ.9ರಂದು ಮರು ಪರೀಕ್ಷೆ ಎದುರಿಸಿದ್ದ ಯುಜಿಸಿ ನೆಟ್&zwnj;ನ ಇಂಗ್ಲೀಷ್&zwnj;, ವಾಣಿಜ್ಯ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ.&lt;/p&gt;&lt;p&gt;ಯುಜಿಸಿ ನೆಟ್&zwnj; ಜೂನ್&zwnj;ನಲ್ಲಿ ನಡೆಸಿದ್ದ ಈ ಮೂರು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಹಲವಾರು ದೋಷಗಳ ಬಗ್ಗೆ ದೂರು ಬಂದ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕಳೆದ ತಿಂಗಳು ಮರುಪರೀಕ್ಷೆಯನ್ನ ಘೋಷಿಸಿ ಈ ತಿಂಗಳ 9 ರಂದು ಪರೀಕ್ಷೆ ನಡೆಸಿತ್ತು. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶ, ಅಂಕಪಟ್ಟಿಗಳನ್ನು ಅಧಿಕೃತ ವೆಬ್&zwnj;ಸೈಟ್&zwnj; ಮೂಲಕ ಡೌನ್&zwnj;ಲೋಡ್&zwnj; ಮಾಡಿಕೊಳ್ಳಬಹುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎಕ್ಸ್&zwnj;ನಲ್ಲಿ ಮಾಹಿತಿ ಹಂಚಿಕೊಂಡಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/neet-reforms-nandan-nilekani-committee-to-submit-first-interim-report-soon-centre-informs-supreme-court-gdp/articleshow-lqdzn7b"/>
        </item>
        <item>
            <title><![CDATA[68ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಶಾಲೆಗೆ, 7ನೇ ತರಗತಿ ಪರೀಕ್ಷೆಯಲ್ಲಿ ಫಸ್ಟ್‌ ಕ್ಲಾಸ್‌ ಜಸ್ಟ್‌ ಮಿಸ್]]></title>
            <link>https://kannada.asianetnews.com/entertainment/68-year-old-national-award-winning-actor-returns-to-school-misses-first-class-in-class-7-exam-suh/articleshow-ns7ew1y</link>
            <guid isPermaLink="true">https://kannada.asianetnews.com/entertainment/68-year-old-national-award-winning-actor-returns-to-school-misses-first-class-in-class-7-exam-suh/articleshow-ns7ew1y</guid>
            <pubDate>Wed, 09 Sep 2026 13:40:05 +0530</pubDate>
            <description><![CDATA[&lt;p&gt;ಶಾಲೆಯಲ್ಲಿ ಫಸ್ಟ್ ರ&zwj;್ಯಾಂಕ್, ಯಾವಾಗಲೂ ಫ್ರಂಟ್ ಬೆಂಚ್&zwnj;ನಲ್ಲಿ ಕುಳಿತುಕೊಳ್ಳುತ್ತಿದ್ದ ವಿದ್ಯಾರ್ಥಿ. ಆದರೆ ಬಡತನದ ಕಾರಣ 4ನೇ ತರಗತಿಯಲ್ಲೇ ಶಿಕ್ಷಣಕ್ಕೆ ವಿದಾಯ ಹೇಳಬೇಕಾಯಿತು. ಪುಸ್ತಕ ಹಿಡಿಯಬೇಕಿದ್ದ ಬಾಲಕ ಮುಂದೆ ಸಿನಿಮಾ ಲೋಕ ಪ್ರವೇಶಿಸಿ ನೂರಾರು ಸಿನಿಮಾಗಳಲ್ಲಿ ನಟಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m22fj0p6x4wgdm5y0166zqap,imgname-68-year-old-national-award-winning-actor-returns-to-school-misses-first-class-in-class-7-exam-1788937306822.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಾಲೆಯಲ್ಲಿ ಫಸ್ಟ್ ರ&zwj;್ಯಾಂಕ್, ಯಾವಾಗಲೂ ಫ್ರಂಟ್ ಬೆಂಚ್&zwnj;ನಲ್ಲಿ ಕುಳಿತುಕೊಳ್ಳುತ್ತಿದ್ದ ವಿದ್ಯಾರ್ಥಿ. ಆದರೆ ಬಡತನದ ಕಾರಣ 4ನೇ ತರಗತಿಯಲ್ಲೇ ಶಿಕ್ಷಣಕ್ಕೆ ವಿದಾಯ ಹೇಳಬೇಕಾಯಿತು. ಕೈಯಲ್ಲಿ ಪುಸ್ತಕ ಹಿಡಿಯಬೇಕಿದ್ದ ಬಾಲಕ ಮುಂದೆ ಸಿನಿಮಾ ಲೋಕ ಪ್ರವೇಶಿಸಿ ನೂರಾರು ಸಿನಿಮಾಗಳಲ್ಲಿ ನಟಿಸಿದರು. ರಾಷ್ಟ್ರಮಟ್ಟದ ಗೌರವವನ್ನೂ ಪಡೆದರು. ಆದರೆ ಬಾಲ್ಯದ ಒಂದು ಆಸೆ ಮಾತ್ರ ಅವರ ಮನಸ್ಸಿನಲ್ಲೇ ಉಳಿದಿತ್ತು ಮತ್ತೆ ಓದಬೇಕು ಎಂಬುದು. ಅದಕ್ಕಾಗಿಯೇ 68ನೇ ವಯಸ್ಸಿನಲ್ಲಿ ಇಂದ್ರನ್ಸ್ ಮತ್ತೆ ಶಾಲೆಗೆ ಮರಳಿದರು.&lt;/p&gt;&lt;h2&gt;ಫಸ್ಟ್ ರ&zwj;್ಯಾಂಕ್ ಪಡೆಯುತ್ತಿದ್ದ ವಿದ್ಯಾರ್ಥಿ&lt;/h2&gt;&lt;p&gt;ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಇಂದ್ರನ್ಸ್&zwnj; ಅವರ ಬಾಲ್ಯದ ಕಥೆ ಅನೇಕರಿಗೆ ಗೊತ್ತಿಲ್ಲ. ಅವರು ಓದಿನಲ್ಲಿ ಬಹಳ ಮುಂದಿದ್ದರು. ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ಫಸ್ಟ್ ರ&zwj;್ಯಾಂಕ್ ಪಡೆಯುತ್ತಿದ್ದ ಅವರು ಫ್ರಂಟ್ ಬೆಂಚ್&zwnj;ನಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ಬಡತನ ಅವರ ವಿದ್ಯಾಭ್ಯಾಸಕ್ಕೆ ದೊಡ್ಡ ಅಡ್ಡಿಯಾಯಿತು. ಕೇರಳದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕುಟುಂಬದಲ್ಲಿ ಏಳು ಮಕ್ಕಳಲ್ಲಿ ಒಬ್ಬರಾಗಿದ್ದ ಇಂದ್ರನ್ಸ್&zwnj;ಗೆ ಶಾಲೆಯ ಯೂನಿಫಾರ್ಮ್ ಮತ್ತು ಪುಸ್ತಕಗಳನ್ನೂ ಖರೀದಿಸುವುದು ಕಷ್ಟವಾಗಿತ್ತು. ಹೀಗಾಗಿ 4ನೇ ತರಗತಿಯ ನಂತರ ಶಾಲೆ ಬಿಡಬೇಕಾಯಿತು.&lt;/p&gt;&lt;h2&gt;ಹೊಟ್ಟೆಪಾಡಿಗಾಗಿ ಟೈಲರಿಂಗ್, ಅಲ್ಲಿಂದ ಸಿನಿಮಾ&lt;/h2&gt;&lt;p&gt;ಶಾಲೆ ಬಿಟ್ಟ ಬಳಿಕ ಜೀವನ ಸಾಗಿಸಲು ಇಂದ್ರನ್ಸ್ ಟೈಲರಿಂಗ್ ಕಲಿತರು. ತಮ್ಮ ಸಹೋದರನೊಂದಿಗೆ ಸಣ್ಣ ಟೈಲರಿಂಗ್ ಅಂಗಡಿಯನ್ನೂ ನಡೆಸಿದರು. ಬಟ್ಟೆ ಹೊಲಿಯುವ ಕೌಶಲ್ಯವೇ ಮುಂದೆ ಅವರನ್ನು ಸಿನಿಮಾ ಕ್ಷೇತ್ರದತ್ತ ಕರೆದೊಯ್ದಿತು. 1981ರಲ್ಲಿ &lsquo;Choothattam&rsquo; ಚಿತ್ರದ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶಿಸಿದ ಅವರು ಆರಂಭದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದರು. ನಂತರ ಸಣ್ಣಪುಟ್ಟ ಪಾತ್ರಗಳ ಮೂಲಕ ನಟನೆಯತ್ತ ಹೆಜ್ಜೆ ಇಟ್ಟರು.&lt;/p&gt;&lt;h2&gt;ಕಾಮಿಡಿ ನಟನಾಗಿ ಟೈಪ್&zwnj;ಕಾಸ್ಟ್ ಆಗಿದ್ದ ಇಂದ್ರನ್ಸ್&lt;/h2&gt;&lt;p&gt;1990ರ ದಶಕದಲ್ಲಿ ಇಂದ್ರನ್ಸ್&zwnj; ಅವರು ಪ್ರೇಕ್ಷಕರಿಗೆ ಪರಿಚಿತ ಮುಖವಾದರು. ಅವರ ವಿಭಿನ್ನ ನಟನೆ ಮತ್ತು ಕಾಮಿಡಿ ಟೈಮಿಂಗ್&zwnj;ನಿಂದ ಜನಪ್ರಿಯತೆ ಗಳಿಸಿದರು. ಆದರೆ ಆರಂಭದಲ್ಲಿ ಅವರನ್ನು ಹೆಚ್ಚಾಗಿ ಕಾಮಿಡಿ ಪಾತ್ರಗಳಿಗೇ ಸೀಮಿತಗೊಳಿಸಲಾಗುತ್ತಿತ್ತು. ವರ್ಷಗಳ ಕಾಲ ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ನಂತರ ಅವರು ವಿಭಿನ್ನ ಹಾಗೂ ಗಂಭೀರ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಆರಂಭಿಸಿದರು. ತಮ್ಮ ವೃತ್ತಿಜೀವನದಲ್ಲಿ ಅವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಎಂದು Moneycontrol ವರದಿ ತಿಳಿಸಿದೆ.&lt;/p&gt;&lt;h2&gt;&lsquo;ಆಳೊರಕ್ಕಂ&rsquo; ತಂದುಕೊಟ್ಟ ದೊಡ್ಡ ತಿರುವು&lt;/h2&gt;&lt;p&gt;ಇಂದ್ರನ್ಸ್&zwnj; ಅವರ ವೃತ್ತಿಜೀವನದಲ್ಲಿ &lsquo;Aalorukkam&rsquo; ಸಿನಿಮಾ ಪ್ರಮುಖ ತಿರುವು ನೀಡಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರ &lsquo;Home&rsquo; ಸಿನಿಮಾದ ಅಭಿನಯಕ್ಕಾಗಿ 2023ರ National Film Awardsನಲ್ಲಿ Special Mention ಗೌರವ ಪಡೆದರು. ಬಾಲ್ಯದಲ್ಲಿ ಬಡತನದಿಂದ ಪುಸ್ತಕ ಹಿಡಿಯಲು ಸಾಧ್ಯವಾಗದಿದ್ದ ವ್ಯಕ್ತಿ, ಮುಂದೆ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಭಿನಯಕ್ಕಾಗಿ ಗುರುತಿಸಿಕೊಂಡರು.&lt;/p&gt;&lt;h2&gt;68ನೇ ವಯಸ್ಸಿನಲ್ಲಿ ಮತ್ತೆ ಕೈಗೆತ್ತಿಕೊಂಡರು ಪುಸ್ತಕ&lt;/h2&gt;&lt;p&gt;ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗ ತಲುಪಿದರೂ ಬಾಲ್ಯದಲ್ಲಿ ಅರ್ಧಕ್ಕೆ ನಿಂತ ಶಿಕ್ಷಣದ ಕನಸು ಇಂದ್ರನ್ಸ್&zwnj; ಅವರನ್ನು ಕಾಡುತ್ತಲೇ ಇತ್ತು. ಹೀಗಾಗಿ 2024ರಲ್ಲಿ 68ನೇ ವಯಸ್ಸಿನಲ್ಲಿ ಅವರು ಮತ್ತೆ ಶಿಕ್ಷಣ ಮುಂದುವರಿಸಲು ನಿರ್ಧರಿಸಿದರು. ಕೇರಳ ಸ್ಟೇಟ್ ಲಿಟರಸಿ ಮಿಷನ್ ನಡೆಸಿದ 7ನೇ ತರಗತಿ ಸಮಾನತಾ ಪರೀಕ್ಷೆಗೆ ಅವರು ಹಾಜರಾದರು. ತಿರುವನಂತಪುರಂನ ಅಟ್ಟಕುಲಂಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪರೀಕ್ಷೆ ಬರೆದರು.&lt;/p&gt;&lt;h2&gt;ಶೂಟಿಂಗ್ ನಡುವೆ ಓದು... ಕುಟುಂಬವೇ ಶಿಕ್ಷಕರು&lt;/h2&gt;&lt;p&gt;ಸಿನಿಮಾ ಶೂಟಿಂಗ್&zwnj;ಗಳ ನಡುವಿನ ಬಿಡುವಿನ ಸಮಯದಲ್ಲೇ ಇಂದ್ರನ್ಸ್&zwnj; ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದರು. ನಿಯಮಿತ ತರಗತಿಗಳಿಗೆ ಹಾಜರಾಗಲು ಸಮಯದ ಕೊರತೆಯಿದ್ದ ಕಾರಣ, ಬಹುತೇಕ ಮನೆಯಲ್ಲೇ ಕುಟುಂಬ ಸದಸ್ಯರಿಂದ ಪಾಠ ಕಲಿತಿದ್ದರು. ಪರೀಕ್ಷೆಗೆ ಮುನ್ನ ಅವರು &ldquo;ಭಯವಾಗುತ್ತಿದೆ, ಬರೆಯುತ್ತೇನೆ, ನೋಡೋಣ&rdquo; ಎಂಬ ರೀತಿಯಲ್ಲಿ ತಮ್ಮ ಆತಂಕವನ್ನೂ ವ್ಯಕ್ತಪಡಿಸಿದ್ದರು. ಆದರೂ ಓದನ್ನು ಮುಂದುವರಿಸುವ ಅವರ ನಿರ್ಧಾರದಲ್ಲಿ ಯಾವುದೇ ಹಿಂಜರಿಕೆ ಇರಲಿಲ್ಲ.&lt;/p&gt;&lt;h2&gt;7ನೇ ತರಗತಿ ಪರೀಕ್ಷೆಯಲ್ಲಿ ಪಾಸ್&lt;/h2&gt;&lt;p&gt;ಇಂದ್ರನ್ಸ್&zwnj; ಅವರ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿತು. 500ಕ್ಕೆ 297 ಅಂಕಗಳೊಂದಿಗೆ 59.4% ಗಳಿಸಿ 7ನೇ ತರಗತಿ ಸಮಾನತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ಮೂಲಕ ಅವರು 10ನೇ ತರಗತಿ ಸಮಾನತಾ ಪರೀಕ್ಷೆ ಬರೆಯಲು ಅರ್ಹತೆ ಪಡೆದರು. 2024ರಲ್ಲಿ ನಡೆದ ಈ ಪರೀಕ್ಷೆಯಲ್ಲಿ ಒಟ್ಟು 1,007 ಮಂದಿ ಉತ್ತೀರ್ಣರಾಗಿದ್ದರು.&lt;/p&gt;&lt;h2&gt;&lsquo;ತಡವಾಯಿತು&rsquo; ಎಂದು ಕನಸನ್ನು ಕೈಬಿಡಲಿಲ್ಲ&lt;/h2&gt;&lt;p&gt;4ನೇ ತರಗತಿಯಲ್ಲೇ ನಿಂತುಹೋಗಿದ್ದ ಶಿಕ್ಷಣದ ಪಯಣವನ್ನು 68ನೇ ವಯಸ್ಸಿನಲ್ಲಿ ಮತ್ತೆ ಆರಂಭಿಸಿದ ಇಂದ್ರನ್ಸ್&zwnj; ಅವರ ಕಥೆ ನಿಜಕ್ಕೂ ವಿಶೇಷ. ಬಡತನದಿಂದಾಗಿ ಬಾಲ್ಯದಲ್ಲಿ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಅದೇ ವ್ಯಕ್ತಿ ಮುಂದೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ನಟನಾದರು. ಆದರೆ ಯಶಸ್ಸಿನ ನಡುವೆಯೂ ಬಾಲ್ಯದ ಶಿಕ್ಷಣದ ಕನಸನ್ನು ಮರೆಯಲಿಲ್ಲ. ಜೀವನದಲ್ಲಿ ಕೆಲವರ ಪ್ರಯಾಣ ನೇರವಾಗಿರುವುದಿಲ್ಲ. ಕೆಲವೊಮ್ಮೆ ಕನಸುಗಳು ನಿಂತುಹೋಗುತ್ತವೆ. ಕೆಲವೊಮ್ಮೆ ಪರಿಸ್ಥಿತಿಗಳು ನಮ್ಮನ್ನು ಬೇರೆ ದಾರಿಗೆ ಕರೆದೊಯ್ಯುತ್ತವೆ. ಆದರೆ ಮತ್ತೆ ಆರಂಭಿಸಲು ಎಂದಿಗೂ ತಡವಾಗುವುದಿಲ್ಲ ಎಂಬುದನ್ನು ಇಂದ್ರನ್ಸ್&zwnj; ಅವರ ಜೀವನ ಮತ್ತೊಮ್ಮೆ ನೆನಪಿಸುತ್ತದೆ.&lt;/p&gt;]]></content:encoded>
            <category>education</category>
            <dc:creator>Sushma Hegde</dc:creator>
            <atom:link href="https://kannada.asianetnews.com/entertainment/68-year-old-national-award-winning-actor-returns-to-school-misses-first-class-in-class-7-exam-suh/articleshow-ns7ew1y"/>
        </item>
        <item>
            <title><![CDATA[ಕಿವಿ ಕೇಳಲ್ಲ, ಮಾತು ಬರಲ್ಲ: ಅಮ್ಮನಿಗೆ ಮಗನೇ ಶಿಕ್ಷಕನಾದ,  22 ವರ್ಷಗಳ ನಂತರ SSLC ಪರೀಕ್ಷೆಯಲ್ಲಿ ಶೇ.82 ಅಂಕ ಗಳಿಸಿದ ತಾಯಿ]]></title>
            <link>https://kannada.asianetnews.com/india-news/renu-hans-from-jammu-her-son-became-her-teacher-she-achieved-success-by-securing-82-percent-marks-in-exam-gkn/articleshow-ok3g0qt</link>
            <guid isPermaLink="true">https://kannada.asianetnews.com/india-news/renu-hans-from-jammu-her-son-became-her-teacher-she-achieved-success-by-securing-82-percent-marks-in-exam-gkn/articleshow-ok3g0qt</guid>
            <pubDate>Tue, 15 Sep 2026 13:11:08 +0530</pubDate>
            <description><![CDATA[&lt;p&gt;ಇದೊಂದು ಸ್ಫೂರ್ತಿದಾಯಕ ಕತೆ. ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಕನಸುಗಳಿಗೆ ಎಕ್ಸ್&zwnj;ಪೈರಿ ಡೇಟ್&zwnj; ಇಲ್ಲ ಎಂಬ ಮಾತಿದೆ. ಈ ಕತೆಯಲ್ಲಿ ಅಮ್ಮನ ಕನಸುಗಳಿಗೆ ಮಗನೇ ಶಿಕ್ಷಕನಾದ. ರಿಸಲ್ಟ್&zwnj; ಏನು ಅಂದರೆ 22 ವರ್ಷಗಳ ಹಿಂದೆ ಅರ್ಧಕ್ಕೆ ನಿಂತಿದ್ದ ಅಮ್ಮನ ಕನಸು ಇಂದು ನನಸಾಗಿದೆ. ಏನದು ಸ್ಟೋರಿ.. ಇಲ್ಲಿದೆ ಕಂಪ್ಲೀಟ್&zwnj; ಮಾಹಿತಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2j055a4t6032gtq905wkb65,imgname-renu-hans-story-1789458027844.jpg" type="image/jpeg" height="390" width="690"/>
            <content:encoded><![CDATA[&lt;p&gt;ಇದೊಂದು ಸ್ಫೂರ್ತಿದಾಯಕ ಕತೆ. ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಕನಸುಗಳಿಗೆ ಎಕ್ಸ್&zwnj;ಪೈರಿ ಡೇಟ್&zwnj; ಇಲ್ಲ ಎಂಬ ಮಾತಿದೆ. ಈ ಕತೆಯಲ್ಲಿ ಅಮ್ಮನ ಕನಸುಗಳಿಗೆ ಮಗನೇ ಶಿಕ್ಷಕನಾದ. ರಿಸಲ್ಟ್&zwnj; ಏನು ಅಂದರೆ 22 ವರ್ಷಗಳ ಹಿಂದೆ ಅರ್ಧಕ್ಕೆ ನಿಂತಿದ್ದ ಅಮ್ಮನ ಕನಸು ಇಂದು ನನಸಾಗಿದೆ. ಏನದು ಸ್ಟೋರಿ.. ಇಲ್ಲಿದೆ ಕಂಪ್ಲೀಟ್&zwnj; ಮಾಹಿತಿ..&lt;/p&gt;&lt;p&gt;ಅದೊಂದು ಕನಸು.. ಅಮ್ಮನ ಮನಸ್ಸಿನಲ್ಲಿ ಬರೋಬ್ಬರಿ 22 ವರ್ಷಗಳಿಂದ ಕೊಳೆಯುತ್ತಿತ್ತು.. ಆದರೆ ಸಾಧನೆಗೆ ವಯಸ್ಸಿನ ಮಿತಿ ಇಲ್ಲ ನೋಡಿ.. ಅಂತೆಯೇ ಇಲ್ಲೊಬ್ಬ 45 ವರ್ಷದ ಮಹಿಳೆಯೊಬ್ಬರು ಅದನ್ನು ಸಾಬೀತು ಮಾಡಿ ತೋರಿಸಿದ್ದಾರೆ.. ಹೆಸರು ರೇಣು ಹನ್ಸ್&zwnj;. ಹುಟ್ಟಿನಿಂದಲೇ ಮಾತು ಬರಲ್ಲ, ಕಿವಿ ಕೇಳಿಲ್ಲ. ದೇಹದ ನ್ಯೂನತೆಗಳನ್ನ ಮೆಟ್ಟಿನಿಂತು 10ನೇ ತರಗತಿ ಬೋರ್ಡ್&zwnj; ಪರೀಕ್ಷೆಯಲ್ಲಿ ಶೇಕಡಾ 82 ಅಂಕಗಳಿಸಿ ಇಡೀ ದೇಶವೇ ಬೆರಗಾಗುವಂತೆ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಅಮ್ಮನ ಕನಸಿಗೆ ನೀರೆರೆದ ಮಗ&lt;/strong&gt;&lt;/h2&gt;&lt;p&gt;ರೇಣು ಹನ್ಸ್ ಮೂಲತಃ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚಾವಲ್ಗಾಮ್ ಗ್ರಾಮದವರು. ಇವರು ಕಾಶ್ಮೀರಿ ಪಂಡಿತ್ ಕುಟುಂಬದವರು. 1990ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಿಂದಾಗಿ ಜಮ್ಮುವಿಗೆ ವಲಸೆ ಬಂದು ನೆಲೆಸಿದರು. ಮದುವೆಗೂ ಮುನ್ನ ರೇಣು 10ನೇ ತರಗತಿ ಪರೀಕ್ಷೆ ಬರೆದಿದ್ದರು. ಅಂದಿನ ಪರಿಸ್ಥಿತಿಯಲ್ಲಿ ಅವರಿಗೆ ಪಾಸ್&zwnj; ಮಾಡಲು ಆಗಿರಲಿಲ್ಲ. ನಂತರ ಮದುವೆ, ಸಂಸಾರದ ಜವಾಬ್ದಾರಿ, ಕುಟುಂಬದ ಕಷ್ಟಗಳ ನಡುವೆ ವಿದ್ಯಾಭ್ಯಾಸ ನಿಂತುಹೋಗಿತ್ತು. ಆದರೆ ಆ ತಾಯಿಗೆ ಕಲಿಯಬೇಕೆಂಬ ಆಸೆ ಜೀವಂತವಾಗಿತ್ತು.&lt;/p&gt;&lt;h2&gt;&lt;strong&gt;ತಾಯಿಗೆ ಶಿಕ್ಷಕನಾದ ಮಗ&lt;/strong&gt;&lt;/h2&gt;&lt;p&gt;ಅಮ್ಮನ ಕನಸಿಗೆ ರೆಕ್ಕೆ ಕೊಟ್ಟಿದ್ದು ಪುತ್ರ ನಮನ್ ಕೌಲ್. ನನ್ನಮ್ಮ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಬಾರದು, ಶಿಕ್ಷಣ ಮುಗಿಸಿ ಸ್ವಾವಲಂಬಿಯಾಗಬೇಕು ಎಂಬುದು ಮಗನ ಹಂಬಲವಾಗಿತ್ತು. ಪಿಯುಸಿಯಲ್ಲಿ ಸೈನ್ಸ್&zwnj; ಓದುತ್ತಿರುವ ನಮನ್&zwnj;, ತನ್ನ ಕಠಿಣ ಅಭ್ಯಾಸಗಳ ನಡುವೆಯೂ ಅಮ್ಮನಿಗೆ ಪಾಠ ಹೇಳಿಕೊಡಲು ನಿರ್ಧರಿಸಿದ. ಪ್ರತಿದಿನ ಸಂಜೆ ಮತ್ತು ರಾತ್ರಿ ಆಕೆಗೆ ಹೇಳಬೇಕಾಗಿದ್ದ ವಿಷಯವನ್ನು ತಿಳಿಸಿಕೊಡುತ್ತಿದ್ದ.&lt;/p&gt;&lt;p&gt;ಸಂಕೇತಗಳ ಮೂಲಕ, ಬರವಣಿಗೆಯ ಮೂಲಕ ತಾಯಿಯ ಪ್ರತಿಯೊಂದು ಸಂಶಯಗಳನ್ನು ಬಗೆಹರಿಸುತ್ತಿದ್ದ. ಒಂದೇ ಮನೆಯಲ್ಲಿ, ಒಂದೇ ಕೋಣೆಯಲ್ಲಿ ತಾಯಿ 10ನೇ ತರಗತಿಗೆ ಓದುತ್ತಿದ್ದರೆ, ಮಗ ಪಕ್ಕದಲ್ಲೇ ಕುಳಿತು 12ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಇನ್ನು, ರೇಣು ಅವರು ಪರೀಕ್ಷೆಗೆ ನೋಂದಾಯಿಸುವುದೂ ಕೂಡ ಅಷ್ಟು ಸುಲಭವಾಗಿರಲಿಲ್ಲ. ಜಮ್ಮು-ಕಾಶ್ಮೀರ ಶಾಲಾ ಶಿಕ್ಷಣ ಮಂಡಳಿ (JKBOSE) ಕಚೇರಿಗೆ ಅಲೆದಾಡಿ, ಹಳೆಯ ನಿಯಮಗಳ ಬದಲಾವಣೆಯ ನಡುವೆಯೂ ಹೇಗೋ ಪ್ರಯತ್ನಿಸಿ ಅಮ್ಮನಿಗೆ ಪರೀಕ್ಷೆ ಬರೆಸಲು ಅವಕಾಶ ಗಿಟ್ಟಿಸಿಕೊಂಡಿದ್ದ.&lt;/p&gt;&lt;h2&gt;&lt;strong&gt;ಮುಂದೇನಾಯ್ತು?&lt;/strong&gt;&lt;/h2&gt;&lt;p&gt;ಕಳೆದ ಏಪ್ರಿಲ್&zwnj;ನಲ್ಲಿ 10ನೇ ತರಗತಿ ಪರೀಕ್ಷೆಗೆ ರೇಣು ಹಾಜರಾಗಿದ್ದರು. ಆರಂಭದಲ್ಲಿ ಸ್ವಲ್ಪ ಭಯಗೊಂಡರೂ ಮಗ ಆತ್ಮವಿಶ್ವಾಸ ತುಂಬಿದ್ದರಿಂದ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾದರು. ಕೊನೆಗೆ ಪರೀಕ್ಷೆಯ ರಿಸಲ್ಟ್&zwnj; ಕೂಡ ಬಂತು. ಖುಷಿಯ ವಿಚಾರ, ಸ್ಫೂರ್ತಿದಾಯಕ ಸುದ್ದಿ ಏನೆಂದರೆ ಅವರು ಪರೀಕ್ಷೆಯಲ್ಲಿ ಶೇಕಡಾ 82 ಅಂಕ ಗಳಿಸಿದ್ದಾರೆ. ಪ್ರಸ್ತುತ ಜಮ್ಮುವಿನ ಲೋವರ್ ರೂಪ್ ನಗರದ ಸಣ್ಣ ಸರ್ಕಾರಿ ಫ್ಲಾಟ್&zwnj;ನಲ್ಲಿ ವಾಸಿಸುತ್ತಿರುವ ಈ ಕುಟುಂಬ, ಬಡತನ ಮತ್ತು ದೈಹಿಕ ನ್ಯೂನತೆಗಳಿಂದ ಬದುಕುತ್ತಿದೆ. ರೇಣು ಪತಿ ಬಬ್ಲು ಕೌಲ್ ಕೂಡ ಶ್ರವಣ ಮತ್ತು ವಾಕ್ ದೋಷವುಳ್ಳವರಾಗಿದ್ದಾರೆ. ಮನೆಯಲ್ಲೇ ಟೈಲರಿಂಗ್ ಕೆಲಸ ಮಾಡಿ ಮುನ್ನಡೆಸುತ್ತಿದ್ದಾರೆ. 45ನೇ ವಯಸ್ಸಿನಲ್ಲಿ ರೇಣು ಗಳಿಸಿರುವ ಈ 82% ಅಂಕ ಕೇವಲ ಒಂದು ಅಂಕಪಟ್ಟಿಯಲ್ಲ. 22 ವರ್ಷಗಳ ಕಾಯುವಿಕೆ, ಕಠಿಣ ಪರಿಶ್ರಮ ಮತ್ತು ತಾಯಿ-ಮಗನ ನಡುವಿನ ಅಪರೂಪದ ಪ್ರೀತಿಗೆ ಸಂದ ಐತಿಹಾಸಿಕ ಜಯ ಎಂದು ಬಣ್ಣಿಸಲಾಗುತ್ತಿದೆ.&lt;/p&gt;]]></content:encoded>
            <category>education</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/renu-hans-from-jammu-her-son-became-her-teacher-she-achieved-success-by-securing-82-percent-marks-in-exam-gkn/articleshow-ok3g0qt"/>
        </item>
        <item>
            <title><![CDATA[ಬೆಂಗಳೂರಿನ ಸರ್ಕಾರಿ ಶಾಲೆ ಸಮಯ ಬದಲಾವಣೆ ಸಾಧ್ಯತೆ: ಸಚಿವರಿಗೆ ಶಿಕ್ಷಕರ ಮನವಿ ಸಲ್ಲಿಕೆ]]></title>
            <link>https://kannada.asianetnews.com/bengaluru-urban/possible-change-in-timings-for-bengaluru-government-schools-due-to-traffic-teachers-submit-request-to-minister-mrq/articleshow-plygla0</link>
            <guid isPermaLink="true">https://kannada.asianetnews.com/bengaluru-urban/possible-change-in-timings-for-bengaluru-government-schools-due-to-traffic-teachers-submit-request-to-minister-mrq/articleshow-plygla0</guid>
            <pubDate>Sun, 13 Sep 2026 11:41:12 +0530</pubDate>
            <description><![CDATA[&lt;p&gt;ಬೆಂಗಳೂರಿನ ಸರ್ಕಾರಿ ಶಾಲಾ ಸಮಯವನ್ನು ಬದಲಾಯಿಸುವಂತೆ ಶಿಕ್ಷಕರು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ. ಪ್ರಸ್ತುತ 10.30 ರಿಂದ 4.30 ರವರೆಗೆ ಸರ್ಕಾರ ಶಾಲೆಗಳು ಕಾರ್ಯನಿರ್ವಹಿಸುತ್ತವೆ. ಈ ಸಮಯ ಬದಲಾವಣೆಗೆ ಶಿಕ್ಷಕರು ಮನವಿ ಮಾಡಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cnx3gk1bgs4bxq30c18z3z,imgname-bengaluru-school-1789279505939.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯ ಸರ್ಕಾರ ಬೆಂಗಳೂರಿನ ಸರ್ಕಾರಿ ಶಾಲೆಗಳ ಸಮಯ (ವೇಳಾಪಟ್ಟಿ) ಪರಿಷ್ಕರಿಸುವ ಸಾಧ್ಯತೆಗಳಿವೆ. ಶಾಲೆಗಳ ಆರಂಭ ಮತ್ತು ಮುಕ್ತಾಯದ ಸಮಯವನ್ನು ಪರಿಷ್ಕರಣೆ ಮಾಡುವಂತೆ ಶಿಕ್ಷಣ ಸಚಿವರ ಮಧು ಬಂಗಾರಪ್ಪ ಅವರಿಗೆ ಶಿಕ್ಷಕರು ಮನವಿ ಮಾಡಿಕೊಂಡಿದ್ದರು. ಮನವಿ ಸ್ಪೀಕರಿಸಿರುವ ಶಿಕ್ಷಣ ಸಚಿವರು, ಈ ವಿಷಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸೋದಾಗಿ ಭರವಸೆಯನ್ನು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಕರ ಮನವಿ ಏನು?&lt;/strong&gt;&lt;/h2&gt;&lt;p&gt;ಬೆಂಗಳೂರಿನ ಟ್ರಾಫಿಕ್&zwnj;ನಿಂದ ಶಾಲೆಗೆ ನಿಗಧಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಶಾಲೆಯ ಸಮಯದಲ್ಲಿ ಬದಲಾವಣೆಯಾದ್ರೆ ಸೂಕ್ತ ಎಂದು ಸರ್ಕಾರಿ ಶಾಲೆ ಶಿಕ್ಷಕರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳು ಬೆಳಗ್ಗೆ 10.30ಕ್ಕೆ ಆರಂಭವಾಗಿ ಸಂಜೆ 4.30ಕ್ಕೆ ಕೊನೆಯಾಗುತ್ತವೆ. ಆದ್ರೆ ಖಾಸಗಿ ಶಾಲೆಗಳು ಬೆಳಗ್ಗೆ 8.45 ರಿಂದ ಮಧ್ಯಾಹ್ನ 3.45ರವರೆಗೆ ಕಾರ್ಯನಿರ್ವಹಿಸುತ್ತವೆ.&lt;/p&gt;&lt;p&gt;ಸರ್ಕಾರಿ ಶಾಲೆಗಳು 10.30ಕ್ಕೆ ಆರಂಭವಾಗುವ ಕಾರಣ ಎಲ್ಲಾ ದಿನಗಳಲ್ಲಿಯೂ ಬೆಂಗಳೂರಿನ ಟ್ರಾಫಿಕ್ ಎದುರಿಸಬೇಕಾಗುತ್ತದೆ. ಕೆಲ ಶಿಕ್ಷಕರಂತೂ ಬೆಳಗ್ಗೆ ಮತ್ತು ಸಜೆ ಸೇರಿ ದಿನಕ್ಕೆ ಎರಡೂವರೆಯಿಂದ ಮೂರು ಗಂಟೆಯಷ್ಟು ಸಮಯವನ್ನು ಟ್ರಾಫಿಕ್&zwnj;ನಲ್ಲಿ ಕಳೆಯುವಂತಾಗಿದೆ. ಟ್ರಾಫಿಕ್&zwnj;ನಿಂದ ಬೆಳಗ್ಗೆ ಕನಿಷ್ಠ ಒಂದೂವರೆ ಗಂಟೆ ಮುಂಚೆಯೇ ಮನೆಯಿಂದ ಹೊರಡಬೇಕಾಗುತ್ತದೆ ಎಂದು ಶಿಕ್ಷಕರೊಬ್ಬರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಈಗಿನ ವೇಳಾಪಟ್ಟಿ ತರಗತಿಗಳ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಶಿಕ್ಷಕರು ಹೇಳುತ್ತಾರೆ. ಮಕ್ಕಳಿಗೆ ಹಾಲು, ಮೊಟ್ಟೆ ಮತ್ತು ಬಿಸಿಯೂಟ ವಿತರಣೆ ಮಾಡಲು ಕನಿಷ್ಠ 1 ಗಂಟೆ ಬೇಕಾಗುತ್ತದೆ. ಬೆಂಗಳೂರಿನ ಶಾಲೆಗಳಿಗೆ ಬೆಳಗ್ಗೆ 8.30 ರಿಂದ ಮಧ್ಯಾಹ್ನ3.30 ಸೂಕ್ತ ಸಮಯವಾಗಿದೆ. ಟ್ರಾಫಿಕ್ ಹೆಚ್ಚಾಗುವ ಮುನ್ನವೇ ಮಕ್ಕಳು ಸಹ ಮನೆ ಸೇರಿಕೊಳ್ಳುತ್ತಾರೆ ಎಂದು ಮತ್ತೋರ್ವ ಶಿಕ್ಷಕರು ಹೇಳುತ್ತಾರೆ.&lt;/p&gt;&lt;h3&gt;&lt;strong&gt;ಖಾಸಗಿ ಶಾಲೆಗಳ ಸಿಬ್ಬಂದಿಗೂ ಪ್ರಶಸ್ತಿ&lt;/strong&gt;&lt;/h3&gt;&lt;p&gt;ಈ ನಡುವೆ ಖಾಸಗಿ ಶಾಲೆಗಳ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಪ್ರಶಸ್ತಿಗೆ ಪರಿಗಣಿಸಬೇಕು ಎಂಬ ಬೇಡಿಕೆ ಇದೆ. ಈ ಸಂಬಂಧ ಸರ್ಕಾರಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಈ ಕುರಿತು ಶೀಘ್ರದಲ್ಲಿಯೇ ತೀರ್ಮಾನ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರಿನ ಈ ರಸ್ತೆಯಲ್ಲಿ ಓಡಾಡೋಕೆ ಆಗ್ತಾನೇ ಇಲ್ಲ ಸ್ವಾಮಿ! ದುರಸ್ತಿ ಮಾಡುವಂತೆ ಪಿಎಂ ಮೋದಿಗೆ ಪತ್ರ&lt;/strong&gt;&lt;/p&gt;]]></content:encoded>
            <category>education</category>
            <dc:creator>Mahmad Rafik</dc:creator>
            <atom:link href="https://kannada.asianetnews.com/bengaluru-urban/possible-change-in-timings-for-bengaluru-government-schools-due-to-traffic-teachers-submit-request-to-minister-mrq/articleshow-plygla0"/>
        </item>
        <item>
            <title><![CDATA[ಶಿವಮೊಗ್ಗ: ಕನ್ನಡ ಶಾಲೆಗಳಿಗೆ ಅನುದಾನ ಕೇಳಿ ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ!]]></title>
            <link>https://kannada.asianetnews.com/education/shivamogga-teacher-blood-letter-to-education-minister-madhu-bangarappa-rav/articleshow-rgcgcgy</link>
            <guid isPermaLink="true">https://kannada.asianetnews.com/education/shivamogga-teacher-blood-letter-to-education-minister-madhu-bangarappa-rav/articleshow-rgcgcgy</guid>
            <pubDate>Wed, 09 Sep 2026 08:06:02 +0530</pubDate>
            <description><![CDATA[1995ರ ನಂತರದ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಶಿಕಾರಿಪುರದ ಶಿಕ್ಷಕ ಪ್ರಶಾಂತ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಬೇಡಿಕೆ ಈಡೇರದಿದ್ದರೆ, ನವೆಂಬರ್ 1 ರಂದು ಇತರ ಶಿಕ್ಷಕರೂ ರಕ್ತದಲ್ಲಿ ಪತ್ರ ಬರೆಯುವುದಾಗಿ ಎಚ್ಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m22061snd8tx33e8vr7dwq6q,imgname-shivamogga-teaher-blood-letter-1788921186101.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಸೆ.9):&lt;/strong&gt; 1995ರ ನಂತರದ ಸರ್ಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಿಕಾರಿಪುರದ ಶಿಕ್ಷಕರೊಬ್ಬರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.&lt;/p&gt;&lt;h2&gt;ಕನ್ನಡ ಶಾಲೆಗಳಿಗೆ ಅನುದಾನ ಇಲ್ಲ, ರಕ್ತದಲ್ಲಿ ಪತ್ರ ಬರೆದು ಶಿಕ್ಷಕ ಮನವಿ!&lt;/h2&gt;&lt;p&gt;ಶಿಕಾರಿಪುರದ ಕನ್ನಡ ಮಾಧ್ಯಮ ಶಾಲೆ ಶಿಕ್ಷಕ ಪ್ರಶಾಂತ್ ಅವರು ಸಿರೆಂಜ್ ಮೂಲಕ ತಮ್ಮ ರಕ್ತವನ್ನು ಹೊರತೆಗೆದು ಪತ್ರ ಬರೆದಿದ್ದಾರೆ. ಕನ್ನಡ ಶಾಲೆಗಳಿಗೆ ಅನುದಾನ ನೀಡುವಂತೆ ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರಿಂದ ಬೆಂಗಳೂರಿನಲ್ಲಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆ ಸಂದರ್ಭ ಕನ್ನಡ ಶಾಲೆಗಳಿಗೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h3&gt;ಶಿಕ್ಷಕರು ಎಚ್ಚರಿಕೆ&lt;/h3&gt;&lt;p&gt;ಮೊದಲು ತಾನು ಸ್ವತಃ ತನ್ನ ರಕ್ತದಿಂದ ಪತ್ರ ಬರೆಯುತ್ತಿರುವುದಾಗಿ ತಿಳಿಸಿರುವ ಶಿಕ್ಷಕ ಪ್ರಶಾಂತ್, ಬೇಡಿಕೆ ಈಡೇರದಿದ್ದರೆ ನವೆಂಬರ್ 1ರಂದು ಕನ್ನಡ ಶಾಲೆಗಳ ಉಳಿದ ಶಿಕ್ಷಕರು ಸಹ ತಮ್ಮ ರಕ್ತದಿಂದಲೇ ಪತ್ರ ಬರೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;----&lt;/p&gt;&lt;p&gt;ನನ್ನ ರಕ್ತದಲ್ಲೇ ಕನ್ನಡವಿದೆ ಎಂದು ಸಚಿವ ಮಧು ಬಂಗಾರಪ್ಪ ಈ ಹಿಂದೆ ಹೇಳಿದ್ದರು. ಇದೇ ಕಾರಣಕ್ಕೆ ಅವರಿಗೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದೇನೆ. ಸದ್ಯದ ಸ್ಥಿತಿಯಲ್ಲಿ ಅನುದಾನವಿಲ್ಲದೆ ಕನ್ನಡ ಶಾಲೆಗಳಿಗೆ ರಕ್ತವೆ ಇಲ್ಲದಂತಾಗಿದೆ.&lt;/p&gt;&lt;p&gt;&lt;strong&gt;-ಪ್ರಶಾಂತ್, ಕನ್ನಡ ಮಾಧ್ಯಮ ಶಾಲೆ ಶಿಕ್ಷಕ, ಶಿಕಾರಿಪುರ.&lt;/strong&gt;&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/shivamogga-teacher-blood-letter-to-education-minister-madhu-bangarappa-rav/articleshow-rgcgcgy"/>
        </item>
        <item>
            <title><![CDATA[ನಗರದ ಸರ್ಕಾರಿ ಶಾಲಾ ಮಕ್ಕಳಿ 2 ದಿನ ಗ್ರಾಮ ವಾಸ್ತವ್ಯ: ಸರ್ಕಾರದ ಮಹತ್ವದ ಆದೇಶ, ಏನಿದು ಯೋಜನೆ? ಯಾವಾಗ ಜಾರಿ?]]></title>
            <link>https://kannada.asianetnews.com/education/karnataka-government-implement-gramanubhava-to-introduce-rural-life-to-urban-students-rav/articleshow-vrx5ckb</link>
            <guid isPermaLink="true">https://kannada.asianetnews.com/education/karnataka-government-implement-gramanubhava-to-introduce-rural-life-to-urban-students-rav/articleshow-vrx5ckb</guid>
            <pubDate>Wed, 09 Sep 2026 07:32:39 +0530</pubDate>
            <description><![CDATA[ರಾಜ್ಯ ಸರ್ಕಾರವು 'ಗ್ರಾಮಾನುಭವ' ಎಂಬ ಹೊಸ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ನಗರ ಪ್ರದೇಶದ 8, 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳನ್ನು ಎರಡು ದಿನಗಳ ಕಾಲ ಹಳ್ಳಿಗಳಿಗೆ ಕರೆದೊಯ್ದು, ಅಲ್ಲಿನ ಕೃಷಿ, ಸಂಸ್ಕೃತಿ ಮತ್ತು ಜೀವನಶೈಲಿಯ ನೇರ ಅನುಭವವನ್ನು ನೀಡಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m21y8gzdy09ja9ymp97nrmdk,imgname-karnataka-government-implement-gramanubhava-1788919170029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.9) &lt;/strong&gt;ರಾಜ್ಯದ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ನಗರ ಪ್ರದೇಶಗಳ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 8, 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳನ್ನು ಹಳ್ಳಿಗಳಿಗೆ ಕರೆದೊಯ್ದು ಗ್ರಾಮೀಣ ಜೀವನದ ವಿಶಿಷ್ಟ ಅನುಭವ ಒದಗಿಸುವ ಉದ್ದೇಶದಿಂದ &lsquo;ಗ್ರಾಮಾನುಭವ&rsquo; ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿದೆ.&lt;/p&gt;&lt;h2&gt;&lsquo;ಗ್ರಾಮಾನುಭವ&rsquo; ಯೋಜನೆ&lt;/h2&gt;&lt;p&gt;ನಗರಪ್ರದೇಶಗಳ ಎಲ್ಲಾ ಪಿಎಂಶ್ರೀ ಮತ್ತು ಕೆಪಿಎಸ್&zwnj; ಶಾಲೆಗಳು ಹಾಗೂ 800ಕ್ಕಿಂತ ಹೆಚ್ಚಿನ ದಾಖಲಾತಿ ಹೊಂದಿರುವ ಇತರೆ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು 160 ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 2.46 ಕೋಟಿ ರು. ವೆಚ್ಚದಲ್ಲಿ ಈ ಗ್ರಾಮಾನುಭವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.&lt;/p&gt;&lt;p&gt;ಈ ಕಾರ್ಯಕ್ರಮದಡಿ ವಿದ್ಯಾರ್ಥಿಗಳನ್ನು ಹಳ್ಳಿಗಳಿಗೆ ಕರೆದೊಯ್ದು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಗ್ರಾಮೀಣ ಜೀವನದ ವಿಶಿಷ್ಟ ಅನುಭವ ಒದಗಿಸಲಾಗುತ್ತದೆ.&lt;/p&gt;&lt;h3&gt;ನಗರ ವಿದ್ಯಾರ್ಥಿಗಳು ಗ್ರಾಮ ವಾಸ್ತವ್ಯ&lt;/h3&gt;&lt;p&gt;ಒಂದು ರಾತ್ರಿ ಸೇರಿದಂತೆ ಎರಡು ದಿನಗಳ ಕಾಲ ಗ್ರಾಮದಲ್ಲಿಯೇ ಉಳಿದುಕೊಳ್ಳುವ ಮಕ್ಕಳಿಗೆ ಗ್ರಾಮೀಣದ ಜನಜೀವನ, ಕೃಷಿ ಚಟುವಟಿಕೆಗಳು, ಸಾಂಸ್ಕೃತಿಕ ಜಗತ್ತಿನ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿಯೂ ಸೆಪ್ಟೆಂಬರ್&zwnj;ನಿಂದ ಡಿಸೆಂಬರ್&zwnj; ಒಳಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಈ ಭೇಟಿ ಕುರಿತು ಶಾಲಾ ಮಟ್ಟದ ಸಂವಹನ ಚಟುವಟಿಕೆಗಳನ್ನು ನಡೆಸಬೇಕೆಂದು ಸೂಚಿಸಲಾಗಿದೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/karnataka-government-implement-gramanubhava-to-introduce-rural-life-to-urban-students-rav/articleshow-vrx5ckb"/>
        </item>
        <item>
            <title><![CDATA[ಕೆಪಿಎಸ್‌ಸಿ ನೇಮಕಾತಿ ಅಕ್ರಮ:  ಶಿವಶಂಕರಪ್ಪ ಸಾಹುಕಾರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ]]></title>
            <link>https://kannada.asianetnews.com/state/kpsc-veterinary-officer-recruitment-scam-karnataka-high-court-rejects-ex-chairman-shivashankarappa-sahukar-s-bail-gdp/articleshow-z8vsbm4</link>
            <guid isPermaLink="true">https://kannada.asianetnews.com/state/kpsc-veterinary-officer-recruitment-scam-karnataka-high-court-rejects-ex-chairman-shivashankarappa-sahukar-s-bail-gdp/articleshow-z8vsbm4</guid>
            <pubDate>Mon, 07 Sep 2026 17:22:12 +0530</pubDate>
            <description><![CDATA[ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಕೆಪಿಎಸ್&zwnj;ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕೃತ್ಯದಿಂದ ಕೆಪಿಎಸ್&zwnj;ಸಿ ಮೇಲಿನ ಸಾರ್ವಜನಿಕರ ವಿಶ್ವಾಸ ನಾಶವಾಗಿದೆ ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ, ಸಾಹುಕಾರ್ ಅವರು ಅಕ್ರಮವಾಗಿ ನೂರಾರು ಎಕರೆ ಆಸ್ತಿ ಸಂಪಾದಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ದಾಖಲೆ ಬಿಡುಗಡೆ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx6f30f9v04b846swtjxw1vh,imgname-kpsc-chairman-shivashankarappa-sahukar-1783702323689.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮಾನತುಗೊಂಡಿರುವ ಕೆಪಿಎಸ್&zwnj;ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿ ಈ ಮಹತ್ವದ ಆದೇಶ ಹೊರಡಿಸಿದೆ.&lt;/p&gt;&lt;h2&gt;ಕೋರ್ಟ್ ವಿಚಾರಣೆ ಹಾಗೂ ಹೈಕೋರ್ಟ್ ತರಾಟೆ:&lt;/h2&gt;&lt;p&gt;ವಿಚಾರಣೆ ವೇಳೆ ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, &quot;ಶಿವಶಂಕರಪ್ಪ ಅವರು ಈ ಹಗರಣದಲ್ಲಿ ಭಾಗಿಯಾಗಿಲ್ಲ. ಅವರ ವಯಸ್ಸನ್ನು ಪರಿಗಣಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು,&quot; ಎಂದು ಮನವಿ ಮಾಡಿದರು. ಆದರೆ, ಸರ್ಕಾರದ ಪರ ವಕೀಲ ಬಿ.ಎನ್. ಜಗದೀಶ್ ಅವರು ಸಿಐಡಿ (CID) ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು.&lt;/p&gt;&lt;p&gt;ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, &quot;ಇದೊಂದು ವ್ಯವಸ್ಥಿತ ವಂಚನೆಯಾಗಿದ್ದು, ಹಗರಣದಲ್ಲಿ ಅಧ್ಯಕ್ಷರು, ಪರೀಕ್ಷಾ ನಿಯಂತ್ರಕರು ಮತ್ತು ಮಧ್ಯವರ್ತಿಗಳು ಭಾಗಿಯಾಗಿದ್ದಾರೆ,&quot; ಎಂದು ಗಂಭೀರವಾಗಿ ಪರಿಗಣಿಸಿದರು. ಅರ್ಜಿ ವಜಾಗೊಳಿಸುವಾಗ ಹೈಕೋರ್ಟ್ ಕೆಪಿಎಸ್&zwnj;ಸಿ ಮಾಜಿ ಅಧ್ಯಕ್ಷರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. &quot;ಇಂತಹ ಕೃತ್ಯಗಳಿಂದಾಗಿ ಕೆಪಿಎಸ್&zwnj;ಸಿ ಮೇಲಿದ್ದ ಸಾರ್ವಜನಿಕರ ವಿಶ್ವಾಸವೇ ನಾಶವಾಗಿದೆ. ರಾತ್ರಿ-ಹಗಲು ಕಷ್ಟಪಟ್ಟು ಓದಿದ ಅಭ್ಯರ್ಥಿಗಳ ಕಥೆ ಏನಾಗಬೇಕು?&quot; ಎಂದು ಪೀಠ ಪ್ರಶ್ನಿಸಿತು. ನೀಟ್ ಪರೀಕ್ಷೆ ಅಕ್ರಮಗಳಿಂದ ಕೆಲ ವಿದ್ಯಾರ್ಥಿಗಳು ಆತ್ಮHತ್ಯೆ ಮಾಡಿಕೊಂಡಿದ್ದನ್ನು ಹಾಗೂ ದೇಶಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದನ್ನು ಉಲ್ಲೇಖಿಸಿದ ಕೋರ್ಟ್, ಈ ಅಕ್ರಮದಲ್ಲೂ ಅರ್ಜಿದಾರರ ಕುಟುಂಬಸ್ಥರೇ ಭಾಗಿಯಾಗಿರುವುದು ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿತು.&lt;/p&gt;&lt;h2&gt;ಶರಣು ಐಟಿ ಅವರಿಂದ ಸಾಹುಕಾರ್ ಅಕ್ರಮ ಆಸ್ತಿ ದಾಖಲೆ ಬಿಡುಗಡೆ:&lt;/h2&gt;&lt;p&gt;ಇನ್ನೊಂದೆಡೆ, ಶಿವಶಂಕರಪ್ಪ ಸಾಹುಕಾರ್ ಅವರ ಅಕ್ರಮ ಆಸ್ತಿ ಸಂಪಾದನೆ ಕುರಿತು ಕಲಬುರಗಿಯ ಸಾಮಾಜಿಕ ಕಾರ್ಯಕರ್ತ ಶರಣು ಐಟಿ ಗಂಭೀರ ಆರೋಪಗಳನ್ನು ಮಾಡಿ, ಪ್ರಮುಖ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. 2019ರಲ್ಲಿ ಕೆಪಿಎಸ್&zwnj;ಸಿ ಸದಸ್ಯರಾಗಿ ನೇಮಕವಾಗುವ ಮೊದಲು, ಸಾಹುಕಾರ್ ಕಲಬುರಗಿಯ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಮಾಸಿಕ ₹6,000 ವೇತನಕ್ಕೆ ಕೆಲಸ ಮಾಡುತ್ತಿದ್ದರು. ಆದರೆ, ಹುದ್ದೆಗೆ ಬಂದ ಬಳಿಕ ಕೋಟಿ ಕೋಟಿ ಮೌಲ್ಯದ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಶರಣು ಐಟಿ ಆರೋಪಿಸಿದ್ದಾರೆ.&lt;/p&gt;&lt;p&gt;ಸಾಹುಕಾರ್ ಅವರಿಗೆ ಇದ್ದ ಪಿತ್ರಾರ್ಜಿತ ಆಸ್ತಿ ಕೇವಲ 4 ಎಕರೆ ಮಾತ್ರ. ಆದರೆ ಕೆಪಿಎಸ್&zwnj;ಸಿ ಸದಸ್ಯ ಹಾಗೂ ಅಧ್ಯಕ್ಷರಾದ ಬಳಿಕ ತಮ್ಮ, ಹೆಂಡತಿ ಮತ್ತು ಮಗನ ಹೆಸರಿನಲ್ಲಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 100 ಎಕರೆಗೂ ಹೆಚ್ಚು ಕೃಷಿ ಜಮೀನು ಖರೀದಿಸಿದ್ದಾರೆ ಎಂದು ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ. ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದು ಈ ಆಸ್ತಿಗಳನ್ನು ಮಾಡಲಾಗಿದೆ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆದರೆ ಅವರ ಮತ್ತಷ್ಟು ಅಕ್ರಮ ಆಸ್ತಿಗಳು ಹೊರಬರಲಿವೆ ಎಂದು ಶರಣು ಐಟಿ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/state/kpsc-veterinary-officer-recruitment-scam-karnataka-high-court-rejects-ex-chairman-shivashankarappa-sahukar-s-bail-gdp/articleshow-z8vsbm4"/>
        </item>
        <item>
            <title><![CDATA[ಮೊಟ್ಟೆಯಿಂದ ಚಿಟ್ಟೆಯವರೆಗೆ: ಶಿಕ್ಷಣದಲ್ಲಿ ವಿನೂತನ ಪ್ರಯೋಗಕ್ಕೆ ಹೆಸರಾದ ಶಿಕ್ಷಕಿ!]]></title>
            <link>https://kannada.asianetnews.com/education/vijayapura-basavarajeshwari-chimmalagi-brings-digital-innovation-to-rural-science-education-gvd/articleshow-zc89f8w</link>
            <guid isPermaLink="true">https://kannada.asianetnews.com/education/vijayapura-basavarajeshwari-chimmalagi-brings-digital-innovation-to-rural-science-education-gvd/articleshow-zc89f8w</guid>
            <pubDate>Sat, 05 Sep 2026 15:10:40 +0530</pubDate>
            <description><![CDATA[&lt;p&gt;ಬುದ್ನಿ ಸರ್ಕಾರಿ ಶಾಲೆಯ ಶಿಕ್ಷಕಿ ಬಸವರಾಜೇಶ್ವರಿ ಚಿಮ್ಮಲಗಿ ಅವರು AI, ಡಿಜಿಟಲ್ ತಂತ್ರಜ್ಞಾನ, ಅನುಭವಾತ್ಮಕ ಕಲಿಕೆ ಮತ್ತು ಪ್ರಕೃತಿ ಅಧ್ಯಯನದ ಮೂಲಕ ಗ್ರಾಮೀಣ ಮಕ್ಕಳಿಗೆ ವಿಜ್ಞಾನವನ್ನು ಆಸಕ್ತಿದಾಯಕವಾಗಿ ಕಲಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1rf1b2d1ct3j953a5yjqdx1,imgname-bkb-1788601216077.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಸವನಬಾಗೇವಾಡಿ (ಸೆ.05): &lt;/strong&gt;ಶಿಕ್ಷಣವೆಂದರೆ ಕೇವಲ ತರಗತಿಯ ನಾಲ್ಕು ಗೋಡೆಗಳ ನಡುವೆ ಪುಸ್ತಕದ ಪುಟಗಳನ್ನು ಓದುವುದಷ್ಟೇ ಅಲ್ಲ, ಅದು ಮಗುವಿನ ಕುತೂಹಲ ಕೆರಳಿಸಿ, ಪ್ರಕೃತಿಯೊಂದಿಗೆ ಬೆಸೆದು, ಅನುಭವ ಹಾಗೂ ತಂತ್ರಜ್ಞಾನ ಮೂಲಕ ಜ್ಞಾನ ಕಟ್ಟಿಕೊಡುವ ಒಂದು ಸುಂದರ ಪಯಣ. ಈ ತತ್ವ ಅಳವಡಿಸಿಕೊಂಡು ಬಸವನಬಾಗೇವಾಡಿ ಅಖಂಡ ತಾಲೂಕಿನ ಬುದ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಸವರಾಜೇಶ್ವರಿ ಎಸ್. ಚಿಮ್ಮಲಗಿ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ತೀವ್ರ ಆಸಕ್ತಿ ಮೂಡಿಸಲು, ಸಂತಸದ ಕಲಿಕೆ ಸಾಕಾರಗೊಳಿಸಲು ಹಾಗೂ ಡಿಜಿಟಲ್ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಬಳಸಲು ಹಲವು ವಿನೂತನ ಪ್ರಯೋಗಗಳನ್ನು ಮಾಡಿದ್ದಾರೆ.&lt;/p&gt;&lt;p&gt;ವಿದ್ಯಾರ್ಥಿಗಳನ್ನು ಪರಿಸರದೊಂದಿಗೆ ನೇರವಾಗಿ ತೊಡಗಿಸಲು ಬುದ್ನಿಯ ಪ್ರಾಣಿ ವೈವಿಧ್ಯತೆಯ ಅಧ್ಯಯನ ಯೋಜನೆ ಕೈಗೊಳ್ಳಲಾಯಿತು. ಈ ಯೋಜನೆಯಲ್ಲಿ ವಿದ್ಯಾರ್ಥಿಗಳೇ ವಿಜ್ಞಾನಿಗಳಾಗಿ ಬದಲಾದರು. ಶಾಲೆಯ ಸುತ್ತಮುತ್ತಲಿನ ಹಾಗೂ ಗ್ರಾಮದ ವಿವಿಧ ಪ್ರಾಣಿ, ಕೀಟ ಹಾಗೂ ಪಕ್ಷಿಗಳ ಛಾಯಾಚಿತ್ರಗಳನ್ನು ಮಕ್ಕಳು ಸ್ವತಃ ತೆಗೆದು, ಅವುಗಳ ಗುರುತಿಸುವಿಕೆ ಮತ್ತು ದತ್ತಾಂಶ ಸಂಗ್ರಹ ಮಾಡಿದರು. ಈ ಎಲ್ಲಾ ಮಾಹಿತಿಯನ್ನು ಡಿಜಿಟಲ್ ಆ್ಯಪ್&zwnj;ನಲ್ಲಿ ಯಶಸ್ವಿಯಾಗಿ ದಾಖಲಿಸಿದ್ದಾರೆ.&lt;/p&gt;&lt;p&gt;ವಿಜ್ಞಾನವನ್ನು ಕೇವಲ ಚಿತ್ರಗಳಲ್ಲಿ ನೋಡುವುದಕ್ಕಿಂತ ಪ್ರತ್ಯಕ್ಷವಾಗಿ ನೋಡಿ ಕಲಿಯುವುದು ಹೆಚ್ಚು ಪರಿಣಾಮಕಾರಿ. ಶಾಲೆಯಲ್ಲಿ ಒಲಿಯಾಂಡರ್ ಹಾಕ್ ಪತಂಗದ ಸಂಪೂರ್ಣ ಜೀವನಚಕ್ರವನ್ನು ವಿದ್ಯಾರ್ಥಿಗಳೊಂದಿಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆ. ಮೊಟ್ಟೆಯಿಂದ ಹಿಡಿದು ಕಂಬಳಿಹುಳು, ಕೋಶಾವಸ್ಥೆ ಹಾಗೂ ಚಿಟ್ಟೆಯಾಗಿ ಹೊರಬರುವವರೆಗಿನ ಪ್ರತಿಯೊಂದು ಹಂತವನ್ನು ಮಕ್ಕಳು ಕಣ್ಣಾರೆ ಕಂಡು, ಪ್ರಕೃತಿಯ ವಿಸ್ಮಯ ಅನುಭವಿಸಿ ತಿಳಿಯುವಂತೆ ಶಿಕ್ಷಕಿ ಬಸವರಾಜೇಶ್ವರಿ ಮಾಡಿದ್ದಾರೆ.&lt;/p&gt;&lt;p&gt;ವಿಜಯಪುರ ಜಿಲ್ಲೆಯ ಡಿ.ಎಸ್.ಇ.ಆರ್.ಟಿ ಉಸ್ತುವಾರಿಯಲ್ಲಿ ತರಗತಿ ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ವಿಶೇಷ ಶೈಕ್ಷಣಿಕ ವಿಡಿಯೋಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಈ ವೀಡಿಯೊಗಳನ್ನು ರಾಜ್ಯಮಟ್ಟದ ಡಿಕ್ಷಾ ಪೋರ್ಟಲ್&zwnj;ನಲ್ಲಿ ಅಪ್&zwnj;ಲೋಡ್ ಮಾಡಲಾಗಿದೆ. ಇದು ಈ ಶಾಲೆಯ ಮಕ್ಕಳಿಗೆ ಮಾತ್ರವಲ್ಲದೆ ಇಡೀ ರಾಜ್ಯದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವೀಕ್ಷಿಸಿ ಕಲಿಯಲು ಸಹಕಾರಿಯಾಗಿದೆ.&lt;/p&gt;&lt;h2&gt;&lt;strong&gt;ಸಂತಸದ ಕಲಿಕೆಗೆ ಆದ್ಯತೆ&lt;/strong&gt;&lt;/h2&gt;&lt;p&gt;ಇಲಾಖೆ ಕೈಗೊಂಡ ಅನುಭವಾತ್ಮಕ ವಿಜ್ಯಾನ ಕಲಿಕೆ , ಇ-ಕಂಟೆಂಟ್ ಸೃಜನೆ ಇತರ ತರಬೇತಿಗಳಲ್ಲಿ ಪರಿಚಯಿಸಿದ ನೂತನ ಬೋಧನಾ ಪದ್ಧತಿಗಳನ್ನು ಶಾಲೆಯಲ್ಲಿ ಸಕ್ರಿಯವಾಗಿ ಜಾರಿಗೆ ತಂದಿದ್ದಾರೆ. ಬೋಧನೆಯಲ್ಲಿ ನೀರಸತೆ ಹೋಗಲಾಡಿಸಿ, ಚಟುವಟಿಕೆ ಆಧಾರಿತ ಮತ್ತು ಸಂತಸದ ಕಲಿಕೆಗೆ ಆದ್ಯತೆ ನೀಡಿದ್ದಾರೆ. 21ನೇ ಶತಮಾನದ ಕೌಶಲ್ಯದಾರಿತ ಕಲಿಕೆ, ಕಲಾ ಸಮ್ಮಿಳಿತ ಕಲಿಕೆ, ಜೀವನ ಚಕ್ರಗಳ ವೀಕ್ಷಣೆ, ಮಾದರಿಗಳ ಸಂಗ್ರಹಣೆ, ಆನ್ಲೈನ್ ಕಾರ್ಯಗಾರ, ತಂತ್ರಜ್ಞಾನ ಆಧಾರಿತ ಕಲಿಕೆ , ದೀಕ್ಷಾ ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸೃಜಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಆಲೋಚನೆ, ಸೃಜನಶೀಲತೆ ಮತ್ತು ತಂಡಕಾರ್ಯದ ಸಾಮರ್ಥ್ಯ ಬೆಳೆಸುವಂತೆ ಮಾಡುತ್ತಿದ್ದಾರೆ.&lt;/p&gt;&lt;p&gt;ತರಬೇತಿಗಳಲ್ಲಿ ಕಲಿತ ನೂತನ ವಿಷಯಗಳನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳುತ್ತ, ತರಗತಿಯನ್ನು ಡಿಜಿಟಲ್ ಸ್ನೇಹಿಯಾಗಿಸಲಾಗಿದೆ. ಕಠಿಣವಾದ ವೈಜ್ಞಾನಿಕ ಪ್ರಯೋಗಗಳು ಮತ್ತು ಸಿದ್ಧಾಂತಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸಲು ವಿವಿಧ ಎಐ (AI) ಉಪಕರಣಗಳು ಹಾಗೂ ಸಿಮ್ಯುಲೇಶನ್&zwnj;ಗಳನ್ನು ಬಳಸಿಕೊಳ್ಳುತ್ತಿದ್ದಾರೆ ಈ ಶಿಕ್ಷಕಿ.&lt;/p&gt;&lt;p&gt;ಬಸವರಾಜೇಶ್ವರಿ ಚಿಮ್ಮಲಗಿ ಶಿಕ್ಷಕಿ ಅವರು ಎಲ್ಲ ವಿಷಯದಲ್ಲಿ ಪರಿಣಿತರಿದ್ದಾರೆ. ಅವರು ಮಕ್ಕಳಿಗೆ ಪ್ರಾಯೋಗಿಕವಾಗಿ ಪಾಠ ಬೋಧನೆ ಮಾಡುತ್ತಾರೆ. ನಮ್ಮಲ್ಲಿ ಕೋಣೆಗಳ ಕೊರತೆ ಇದ್ದರೂ ಅದನ್ನು ಲೆಕ್ಕಿಸದೇ ಅವರು ಮಕ್ಕಳೊಂದಿಗೆ ಮಕ್ಕಳಾಗಿ ಆಕರ್ಷಕವಾಗಿ ತಮ್ಮ ಬೋಧನೆ ಮಾಡುತ್ತಾರೆ.&lt;strong&gt;-ಸಿ.ಆರ್.ಗಿರಗಾಂವಿ, ಮುಖ್ಯ ಗುರುಗಳು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬುದ್ನಿ&lt;/strong&gt;&lt;/p&gt;&lt;p&gt;ನಾನು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಆರ್.ಐ.ಇ) ಅಧ್ಯಯನ ಮಾಡಿದ್ದೇನೆ. ಅಲ್ಲಿ ವಿವಿಧ ಮಾದರಿಗಳೊಂದಿಗೆ ಅತ್ಯುತ್ತಮವಾಗಿ ಅಲ್ಲಿನ ಶಿಕ್ಷಕ ಬಳಗ ಮಾಡುತ್ತಾರೆ. ಇದು ನನಗೆ ಪ್ರೇರಣೆ. ಶಿಕ್ಷಕ ವೃತ್ತಿ ಗೌರವ ವೃತ್ತಿ. ಮಕ್ಕಳಿಗೆ ಏನಾದರೂ ಹೊಸತನ ಕೊಡುವ ಆಶಯ ನಾನು ಹೊಂದಿದ್ದೇನೆ.ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬೋಧಿಸಬೇಕೆಂಬ ಉದ್ದೇಶ ನನ್ನದು.&lt;strong&gt;-ಬಸವರಾಜೇಶ್ವರಿ ಚಿಮ್ಮಲಗಿ. ಶಿಕ್ಷಕಿ&lt;/strong&gt;&lt;/p&gt;&lt;p&gt;ಶಿಕ್ಷಕಿ ಬಸವರಾಜೇಶ್ವರಿ ಚಿಮ್ಮಲಗಿ ಅವರು ಕ್ರಿಯಾಶೀಲರಾಗಿ ವಿಜ್ಞಾನ ವಿಷಯ ಮಕ್ಕಳಿಗೆ ಮನಮುಟ್ಟುವಂತೆ ಡಿಜಿಟಲ್ ತಂತ್ರಜ್ಞಾನ ಬಳಕೆ ಮಾಡಿ ಬೋಧನೆ ಮಾಡುತ್ತಾರೆ. ಈಗಾಗಲೇ ಇವರು ಮಾಡಿರುವ ವಿಡಿಯೋಗಳು ದೀಕ್ಷಾ ಆ್ಯಪ್ ನಲ್ಲಿ ಆಪಲೋಡ್ ಆಗಿವೆ. ಇಡೀ ಜಗತ್ತು ಇವುಗಳನ್ನು ನೋಡಬಹುದು. ಇತರೇ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.&lt;strong&gt;-ರೇಣುಕಾ ಕಲಬುರ್ಗಿ, ಕ್ಷೇತ್ರಶಿಕ್ಷಣಾಧಿಕಾರಿಗಳು, ಬಸವನಬಾಗೇವಾಡಿ.&lt;/strong&gt;&lt;/p&gt;]]></content:encoded>
            <category>education</category>
            <dc:creator>Govindaraj S</dc:creator>
            <atom:link href="https://kannada.asianetnews.com/education/vijayapura-basavarajeshwari-chimmalagi-brings-digital-innovation-to-rural-science-education-gvd/articleshow-zc89f8w"/>
        </item>
        <item>
            <title><![CDATA[8 ಪಿಜಿ ಕೋರ್ಸ್ ರದ್ದುಗೊಳಿಸಿದ ಸರ್ಕಾರ; ಎಂಎ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರಕ್ಕೆ ಅನುಮತಿಯೇ ಇಲ್ಲ!]]></title>
            <link>https://kannada.asianetnews.com/karnataka-districts/karnataka-folklore-university-govt-orders-immediate-halt-to-8-pg-courses-run-without-approval-sat/articleshow-zg7lp16</link>
            <guid isPermaLink="true">https://kannada.asianetnews.com/karnataka-districts/karnataka-folklore-university-govt-orders-immediate-halt-to-8-pg-courses-run-without-approval-sat/articleshow-zg7lp16</guid>
            <pubDate>Thu, 10 Sep 2026 12:10:41 +0530</pubDate>
            <description><![CDATA[ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸರ್ಕಾರದ ಅನುಮೋದನೆ ಇಲ್ಲದೆ 2018-19ರಿಂದ ಎಂಟು ಸ್ನಾತಕೋತ್ತರ ಕೋರ್ಸ್&zwnj;ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಉನ್ನತ ಶಿಕ್ಷಣ ಇಲಾಖೆಯು ಈ ಕೋರ್ಸ್&zwnj;ಗಳ ಪ್ರವೇಶಾತಿಯನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಸಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2507accbsfwfed8brgmvmfx,imgname-karnataka-folklore-university-haveri-1789021890956.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ- ನಾರಾಯಣ ಹೆಗಡೆ&lt;/strong&gt;&lt;/p&gt;&lt;p&gt;&lt;strong&gt;ಹಾವೇರಿ: &lt;/strong&gt;ಸರ್ಕಾರ ಹಾಗೂ ರಾಜ್ಯಪಾಲರ ಅನುಮೋದನೆ ಪಡೆಯದೇ, ನಿಯಮಾವಳಿಗಳನ್ನೂ ರಚಿಸದೆ 2018-19ನೇ ಸಾಲಿನಿಂದ ಎಂಟು ಸ್ನಾತಕೋತ್ತರ ಪದವಿ ಕೋರ್ಸ್&zwnj;ಗಳನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆಸಿರುವುದು ಬೆಳಕಿಗೆ ಬಂದಿದ್ದು, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೀಗ ಈ ಎಲ್ಲ ಕೋರ್ಸ್&zwnj;ಗಳ ಪ್ರವೇಶಾತಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆ ಖಡಕ್&zwnj; ಸೂಚನೆ ನೀಡಿದೆ.&lt;/p&gt;&lt;p&gt;ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಸೆ.8ರಂದು ಉನ್ನತ ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ನೋಟಿಸ್&zwnj;ನಲ್ಲಿ ವಿಶ್ವವಿದ್ಯಾಲಯದ ಕಾರ್ಯವೈಖರಿ ಕುರಿತು ಗಂಭೀರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮದ ಪ್ರಕರಣ 43(2)ರ ಉಪಬಂಧಗಳನ್ನು ಉಲ್ಲಂಘಿಸಿ ಅಗತ್ಯ ಅನುಮೋದನೆ ಪಡೆಯದೇ ಕೋರ್ಸ್&zwnj;ಗಳನ್ನು ಆರಂಭಿಸಿರುವುದು ಗಂಭೀರ ಲೋಪ ಎಂದು ಸರ್ಕಾರ ತಿಳಿಸಿದೆ.&lt;/p&gt;&lt;h2&gt;&lt;strong&gt;ಯಾವ್ಯಾವ ಕೋರ್ಸ್&zwnj;ಗಳು?:&lt;/strong&gt;&lt;/h2&gt;&lt;p&gt;ವಿಶ್ವವಿದ್ಯಾಲಯವು ಸರ್ಕಾರ ಹಾಗೂ ಕುಲಾಧಿಪತಿಗಳ ಅನುಮೋದನೆ ಪಡೆಯದೇ ಆರಂಭಿಸಿದ್ದಾಗಿ ಉಲ್ಲೇಖಿಸಿರುವ ಎಂಟು ಕೋರ್ಸ್&zwnj;ಗಳೆಂದರೆ, ಎಂ.ಎ. ಕನ್ನಡ ಮತ್ತು ಜಾನಪದ, ಎಂ.ಎ. ಇಂಗ್ಲಿಷ್&zwnj;, ಎಂ.ಎ. ಅರ್ಥಶಾಸ್ತ್ರ, ಎಂ.ಎ. ಸಮಾಜಶಾಸ್ತ್ರ, ಮಾಸ್ಟರ್&zwnj; ಆಫ್&zwnj; ಸೋಷಿಯಲ್&zwnj; ವರ್ಕ್&zwnj;, ಮಾಸ್ಟರ್&zwnj; ಆಫ್&zwnj; ಪರ್ಫಾರ್ಮಿಂಗ್&zwnj; ಆರ್ಟ್ಸ್&zwnj;, ಮಾಸ್ಟರ್&zwnj; ಆಫ್&zwnj; ವಿಷ್ಯುಯಲ್&zwnj; ಆರ್ಟ್ಸ್&zwnj;, ಎಂ.ಎ. ಮಹಿಳಾ ಅಧ್ಯಯನ.&lt;/p&gt;&lt;p&gt;ಈ ಕೋರ್ಸ್&zwnj;ಗಳಿಗೆ ಮೊದಲು ನಿಯಮಾವಳಿಗಳನ್ನು ರೂಪಿಸಿ ಕುಲಾಧಿಪತಿಗಳ ಅನುಮೋದನೆ ಪಡೆಯಬೇಕಿತ್ತು. ಆದರೆ ಅಂತಹ ಅನುಮೋದನೆ ಪಡೆಯುವ ಮೊದಲೇ 2018-19ರಿಂದ ಕೋರ್ಸ್&zwnj;ಗಳನ್ನು ಆರಂಭಿಸಿ, ಬಳಿಕ ಘಟನೋತ್ತರ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ.&lt;/p&gt;&lt;h2&gt;&lt;strong&gt;ಶಿಸ್ತು ಕ್ರಮದ ಎಚ್ಚರಿಕೆ:&amp;nbsp;&lt;/strong&gt;&lt;/h2&gt;&lt;p&gt;ಈ ಸಂಬಂಧ ವಿಶ್ವವಿದ್ಯಾಲಯದ ವಿರುದ್ಧ ನಿಯಮಾನುಸಾರ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಒಂದು ವಾರದೊಳಗೆ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಇಷ್ಟೇ ಅಲ್ಲದೆ, ಸರ್ಕಾರದ ಸೂಚನೆಗಳನ್ನು ಪಾಲಿಸದೇ ವಿಳಂಬ ಮಾಡಿದಲ್ಲಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಅವರು ಕುಲಸಚಿವರಿಗೆ ನೀಡಿದ ನೋಟಿಸ್&zwnj;ನಲ್ಲಿ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;ಪ್ರವೇಶಕ್ಕೆ ತಕ್ಷಣ ಬ್ರೇಕ್&zwnj;:&lt;/h2&gt;&lt;p&gt;ಅನುಮೋದನೆ ಇಲ್ಲದೆ 2018-19ರಿಂದ ನಡೆಸಲಾಗುತ್ತಿರುವ ಎಂಟು ಕೋರ್ಸ್&zwnj;ಗಳ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಸರ್ಕಾರ ಸ್ಪಷ್ಟ ಆದೇಶ ನೀಡಿದೆ. ಇದರ ಜತೆಗೆ ಈ ಎಂಟು ಕೋರ್ಸ್&zwnj;ಗಳಿಗೆ ಈವರೆಗೆ ಎಷ್ಟು ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳಲಾಗಿದೆ ಎಂಬುದರ ವಿಷಯವಾರು ಸಂಪೂರ್ಣ ವಿವರವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.&lt;/p&gt;&lt;h3&gt;&lt;strong&gt;ಬೋಧಕ, ಬೋಧಕೇತರ ಸಿಬ್ಬಂದಿಗೂ ಸಂಕಷ್ಟ&lt;/strong&gt;&lt;/h3&gt;&lt;p&gt;ಅನುಮೋದನೆ ಇಲ್ಲದ ಕೋರ್ಸ್&zwnj;ಗಳನ್ನು ನಡೆಸಲು ವಿಶ್ವವಿದ್ಯಾಲಯದಲ್ಲಿ ನಿಯೋಜನೆ ಅಥವಾ ನೇಮಕ ಮಾಡಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ತಕ್ಷಣದಿಂದಲೇ ವಿಶ್ವವಿದ್ಯಾಲಯದ ಸೇವೆಯಿಂದ ಬಿಡುಗಡೆ ಅಥವಾ ವಜಾಗೊಳಿಸುವಂತೆ ಸೂಚಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.&lt;/p&gt;&lt;h2&gt;&lt;strong&gt;ಘಟನೋತ್ತರ ಅನುಮೋದನೆಗೆ ಪ್ರಸ್ತಾವನೆ&lt;/strong&gt;&lt;/h2&gt;&lt;p&gt;ವಿಶ್ವವಿದ್ಯಾಲಯವು 2024ರ ಜೂನ್&zwnj; ಹಾಗೂ 2025ರ ಮಾರ್ಚ್&zwnj;ನಲ್ಲಿ ಈ ಕೋರ್ಸ್&zwnj;ಗಳ ಕರಡು ನಿಯಮಾವಳಿಗಳಿಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ದಾಖಲೆಗಳನ್ನು ಪರಿಶೀಲಿಸಿದಾಗ, ಅಗತ್ಯ ಅನುಮೋದನೆ ಇಲ್ಲದೆಯೇ ಹಲವು ವರ್ಷಗಳಿಂದ ಕೋರ್ಸ್&zwnj;ಗಳು ನಡೆಯುತ್ತಿರುವ ಅಂಶ ಬಹಿರಂಗವಾಗಿದೆ. ಋಣಾತ್ಮಕ ವಿಷಗಳಿಂದಲೇ ಸುದ್ದಿಯಲ್ಲಿರುವ ಜಾನಪದ ವಿವಿಯ ಈ ಎಡವಟ್ಟಿನಿಂದ ನೂರಾರು ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುವ ಸಾಧ್ಯತೆಯಿದೆ. 8 ವರ್ಷಗಳಿಂದ ಈ ಕೋರ್ಸ್&zwnj; ಓದಿರುವ ವಿದ್ಯಾರ್ಥಿಗಳ ಭವಿಷ್ಯವೂ ಅತಂತ್ರವಾಗುವ ಆತಂಕ ಎದುರಾಗಿದೆ.&lt;/p&gt;&lt;h3&gt;&lt;strong&gt;ನೋಟಿಸ್&zwnj; ನೀಡಿದೆ:&lt;/strong&gt;&lt;/h3&gt;&lt;p&gt;8 ಕೋರ್ಸ್&zwnj; ಅನುಮೋದನೆ ಪಡೆಯಬೇಕಿತ್ತು. ಆದರೆ, ಆಗಿನ ಕುಲಸಚಿವರು ರಾಜ್ಯಪಾಲರ ಅನುಮೋದನೆ ಪಡೆಯದೇ 8 ಕೋರ್ಸ್&zwnj; ಆರಂಭಿಸಿದ್ದರು. ಈಗ ಸರ್ಕಾರದ ಗಮನಕ್ಕೆ ಬಂದಿದ್ದರಿಂದ ಆ 8 ಕೋರ್ಸ್&zwnj;ಗಳನ್ನು ಸ್ಥಗಿತ ಮಾಡುವಂತೆ ತಿಳಿಸಿ ನೋಟಿಸ್&zwnj; ನೀಡಿದೆ. ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಜಾನಪದ ವಿವಿ ಕುಲಸಚಿವ ಗುರುಪ್ರಸಾದ್&zwnj; ತಿಳಿಸಿದರು.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-folklore-university-govt-orders-immediate-halt-to-8-pg-courses-run-without-approval-sat/articleshow-zg7lp16"/>
        </item>
    </channel>
</rss>
