<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 29 Apr 2026 23:42:49 +0530</lastBuildDate>
        <atom:link href="https://kannada.asianetnews.com/rss/education" rel="self" type="application/rss+xml"/>
        <item>
            <title><![CDATA[ಸಿಇಟಿ ಪರೀಕ್ಷಾ ವಿವಾದ: ಸಿದ್ದರಾಮಯ್ಯಗೆ ನಾಮ, ಜನಿವಾರ, ಕಂಡ್ರೆ ಆಗಲ್ಲ, ಆರ್.ಅಶೋಕ್ ತೀವ್ರ ಆಕ್ರೋಶ]]></title>
            <link>https://kannada.asianetnews.com/state/cet-exam-row-janivara-removal-bjp-leader-r-ashoka-demands-action-over-religious-symbol-controversy-gdp/articleshow-26snkqa</link>
            <guid isPermaLink="true">https://kannada.asianetnews.com/state/cet-exam-row-janivara-removal-bjp-leader-r-ashoka-demands-action-over-religious-symbol-controversy-gdp/articleshow-26snkqa</guid>
            <pubDate>Fri, 24 Apr 2026 19:46:43 +0530</pubDate>
            <description><![CDATA[&lt;p&gt;ಕರ್ನಾಟಕ ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ವಿಪಕ್ಷ ನಾಯಕ ವ್ಯಕ್ತಪಡಿಸಿದ್ದಾರೆ. ಇದು ಹಿಂದೂ ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250719161749,imgname-image-3aa984ee-c8bf-4e84-b547-cdbac43fbdac.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳ ಧಾರ್ಮಿಕ ಚಿಹ್ನೆಗಳ ಬಗ್ಗೆ ಉಂಟಾದ ವಿವಾದಕ್ಕೆ ಸಂಬಂಧಿಸಿ, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರುದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಪರೀಕ್ಷೆಯ ವೇಳೆ ಮೂವರು ವಿದ್ಯಾರ್ಥಿಗಳ ಜನಿವಾರ ತೆಗೆಸಲಾಗಿದೆ ಎಂಬ ಮಾಹಿತಿ ಬಂದಿದೆ. ನಮಗೂ ನಮ್ಮದೇ ಧಾರ್ಮಿಕ ನಂಬಿಕೆಗಳಿವೆ. ಅವನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಜನಿವಾರ ನಮ್ಮ ಧಾರ್ಮಿಕ ಗುರುತು ಎಂದು ಹೇಳಿದರು.&lt;/p&gt;&lt;h2&gt;ಸಿಎಂ ವಿರುದ್ಧ ವಾಗ್ದಾಳಿ&lt;/h2&gt;&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿ, ನಮಗೂ ದೇವರು ಇದೆ, ಅದನ್ನು ಬಿಟ್ಟು ಇರೋಕೆ ಆಗಲ್ಲ&zwnj;. ಸಿದ್ದರಾಮಯ್ಯಗೆ ನಾಮ,ಜನಿವಾರ, ಕಂಡ್ರೆ ಆಗಲ್ಲ. ಇಲ್ಲಿವರೆಗೂ ಎಫ್ ಐಆರ್ ದಾಖಲಾಗಿಲ್ಲ. ಈ ತಕ್ಷಣ ಅರೆಸ್ಟ್ ಮಾಡಿ, ಬೇರೆ ಧರ್ಮದವರಿಗೆ ತೆಗೆಯೋಕೆ ಹೇಳ್ತಿರಾ. ಹಿಂದೂಗಳನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡ್ತಿರಿ. ನಿಮಗೆ ನಾಚಿಕೆ ಇದ್ಯಾ ಸಿದ್ದರಾಯಯ್ಯ ಪಾಕಿಸ್ತಾನ ದಲ್ಲಿ ಇದಾರಾ? ನಿನ್ನೆ ಜನಿವಾರ ತೆಗೆಸಿದ ತಕ್ಷಣ ಪರೀಕ್ಷೆ ಬರೆಯೋ ಉತ್ಸವ ವೇ ಹೋಯ್ತು ಅಂತಿದ್ದಾರೆ, ವಿದ್ಯಾರ್ಥಿಗಳು. ಇನ್ನೂ ಚೆಕ್ ಮಾಡ್ತಿದ್ದೀವಿ ಅಂತಾನೇ ಇದಾರೆ. ಯಾವಾಗ ಎಫ್ ಐಅರ್ ಮಾಡ್ತಿರಿ. ಕಮೀಷನರ್ ಆಫೀಸ್ ಗೆ ಬಂದಮೇಲೆ ಈಗ ಎಫ್ ಐಆರ್ ಮಾಡ್ತಿವಿ ಅಂತಿದ್ದಾರೆ.&amp;nbsp;&lt;/p&gt;&lt;p&gt;ವಿದ್ಯಾರ್ಥಿಗಳ ಮನೋಭಾವದ ಮೇಲೂ ಇದರ ಪರಿಣಾಮ ಬೀರಿದೆ ಎಂದು ಹೇಳಿದ ಆಶೋಕ್, ಜನಿವಾರ ತೆಗೆಸಿದ ನಂತರ ಪರೀಕ್ಷೆ ಬರೆಯುವ ಮನೋಸ್ಥಿತಿ ಇಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಇದು ಅವರ ಭವಿಷ್ಯಕ್ಕೆ ಹಾನಿ ಉಂಟುಮಾಡುವಂತಹ ಸಂಗತಿ. ಜನಿವಾರ ತೆಗೆಯಬೇಡಿ ಎಂದು ವಿದ್ಯಾರ್ಥಿಗಳು ಹೇಳಿದರೂ ಕೇಳದೇ ತೆಗೆಸಿರುವುದು ಅತ್ಯಂತ ಖಂಡನೀಯ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕ್ರಮವಾಗಿದೆ. ತಾಳಿ, ಕಾಲುಂಗುರ ಕೂಡ ಬಿಡಲ್ಲ. ಮೂಗುತಿಗೆ ಪ್ಲಾಸ್ಟರ್ ಹಾಕ್ತಾರೆ. ನಿಮಗೆ ನಾಚಿಕೆ ಆಗಲ್ವಾ.? ಎಂದರು.&lt;/p&gt;&lt;h2&gt;ಪೊಲೀಸರ ಕಾರ್ಯವೈಖರಿಯ ಮೇಲೂ ಅಸಮಾಧಾನ&lt;/h2&gt;&lt;p&gt;ಇಂದು ಜನಿವಾರದ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ನಾಳೆ ಲಿಂಗಾಯತ ಸಮುದಾಯದ ಶಿವದಾರ, ನಂತರ ಒಕ್ಕಲಿಗರ ಉಡುದಾರದ ಮೇಲೂ ಇದೇ ರೀತಿಯ ಕ್ರಮ ಕೈಗೊಳ್ಳಬಹುದು. ಇದು ಅಪಾಯಕಾರಿ ಪ್ರವೃತ್ತಿ ಎಂದು ಎಚ್ಚರಿಸಿದರು.&lt;/p&gt;&lt;p&gt;ಪೊಲೀಸರ ಕಾರ್ಯವೈಖರಿಯ ಮೇಲೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ ನಾನು ಕಮಿಷನರ್ ಕಚೇರಿಗೆ ಬರುತ್ತೇನೆ ಎಂದು ತಿಳಿದ ಬಳಿಕವೇ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಸಂಬಂಧಪಟ್ಟ ಪೊಲೀಸ್ ಇನ್ಸ್&zwnj;ಪೆಕ್ಟರ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಘಟನೆಯ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/state/cet-exam-row-janivara-removal-bjp-leader-r-ashoka-demands-action-over-religious-symbol-controversy-gdp/articleshow-26snkqa"/>
        </item>
        <item>
            <title><![CDATA[ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾದವರಿಗೆ  ಶುಲ್ಕ ರಹಿತ ಮರುಪರೀಕ್ಷೆ, ದಿನಾಂಕ ಪ್ರಕಟಿಸಿದ ಇಲಾಖೆ]]></title>
            <link>https://kannada.asianetnews.com/education/karnataka-sslc-supplementary-exam-2026-will-be-held-from-may-18-to-25th-gdp/articleshow-2aqwggh</link>
            <guid isPermaLink="true">https://kannada.asianetnews.com/education/karnataka-sslc-supplementary-exam-2026-will-be-held-from-may-18-to-25th-gdp/articleshow-2aqwggh</guid>
            <pubDate>Thu, 23 Apr 2026 13:41:17 +0530</pubDate>
            <description><![CDATA[2025&ndash;26ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ನಾಟಕವು ಶೇ. 94.10ರಷ್ಟು ದಾಖಲೆಯ ಉತ್ತೀರ್ಣತೆ ಸಾಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶುಲ್ಕ ರಹಿತ ಮರುಪರೀಕ್ಷೆಯ ಅವಕಾಶವನ್ನು ಕಲ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khqkd32yryq99h4nrfyae4dp,imgname-up-board-exam-2026-1771392371806.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (Karnataka School Examination and Assessment Board) 2025&ndash;26ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ (10ನೇ ತರಗತಿ) ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿ ರಾಜ್ಯದಲ್ಲಿ ದಾಖಲೆಯ ಮಟ್ಟದ ಸಾಧನೆ ಕಂಡುಬಂದಿದೆ. ಒಟ್ಟಾರೆ ಉತ್ತೀರ್ಣ ಪ್ರಮಾಣವು ಶೇಕಡಾ 94.10 ಆಗಿದ್ದು, ಕಳೆದ ವರ್ಷಗಳಿಗಿಂತ ಗಮನಾರ್ಹ ಏರಿಕೆಯನ್ನು ದಾಖಲಿಸಿದೆ.&lt;/p&gt;&lt;h2&gt;ಮರುಪರೀಕ್ಷೆ &amp;nbsp;ವಿವರಗಳು&lt;/h2&gt;&lt;p&gt;ಈ ಬಾರಿ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ (ಪೂರಕ ಪರೀಕ್ಷೆ) ನಡೆಸಲಾಗುತ್ತದೆ. ಪರೀಕ್ಷೆ-2 ಮೇ 18ರಿಂದ ಮೇ 25, 2026ರವರೆಗೆ ನಡೆಯಲಿದೆ. ಈ ಮರುಪರೀಕ್ಷೆಗೆ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಈ ಬಾರಿ ಮರುಪರೀಕ್ಷೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಹಿಂದಿನ ವರ್ಷಗಳಲ್ಲಿ ಪ್ರತಿ ವಿಷಯಕ್ಕೆ ₹250 ಶುಲ್ಕ ವಸೂಲಿಸಲಾಗುತ್ತಿತ್ತು. ಗಮನಾರ್ಹವಾಗಿ, ಈ ಬಾರಿ ಮೂರನೇ ಅವಕಾಶ (ತೃತೀಯ ಪರೀಕ್ಷೆ) ನೀಡಲಾಗುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್&zwnj;ಸೈಟ್&zwnj; karresults.nic.in ನಲ್ಲಿ ಪರಿಶೀಲಿಸಬಹುದು.&lt;/p&gt;&lt;h2&gt;ಮರುಮೌಲ್ಯಮಾಪನ ಮತ್ತು ಮರುಎಣಿಕೆ&lt;/h2&gt;&lt;p&gt;ಫಲಿತಾಂಶದಲ್ಲಿ ಅಸಮಾಧಾನವಿದ್ದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ (Revaluation) ಮತ್ತು ಅಂಕಗಳ ಮರುಎಣಿಕೆ (Re-totalling) ಅವಕಾಶ ಕಲ್ಪಿಸಲಾಗಿದೆ. ಫಲಿತಾಂಶ ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ಈ ಸಂಬಂಧ ಅರ್ಜಿಯನ್ನು kseab.karnataka.gov.in ವೆಬ್&zwnj;ಸೈಟ್ ಮೂಲಕ ಸಲ್ಲಿಸಬಹುದು.&lt;/p&gt;&lt;h2&gt;ಜಿಲ್ಲಾವಾರು ಫಲಿತಾಂಶ&lt;/h2&gt;&lt;p&gt;ಜಿಲ್ಲಾವಾರು ಫಲಿತಾಂಶದಲ್ಲಿ ಕರಾವಳಿ ಭಾಗದ ಜಿಲ್ಲೆಗಳು ಮತ್ತೆ ಮೇಲುಗೈ ಸಾಧಿಸಿವೆ. ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 98.40 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇಕಡಾ 98.18 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು, ಉತ್ತರ ಕನ್ನಡ ಜಿಲ್ಲೆ ಶೇಕಡಾ 98.09 ಫಲಿತಾಂಶದೊಂದಿಗೆ ತೃತೀಯ ಸ್ಥಾನವನ್ನು ಪಡೆದಿದೆ. ಮತ್ತೊಂದೆಡೆ, ಕಲಬುರಗಿ ಜಿಲ್ಲೆ ಶೇಕಡಾ 85.06 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿದೆ.&lt;/p&gt;&lt;p&gt;ಒಟ್ಟಿನಲ್ಲಿ, 2026ರ ಎಸ್ಸೆಸ್ಸೆಲ್ಸಿ ಫಲಿತಾಂಶವು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಪ್ರಗತಿಯನ್ನು ತೋರಿಸುತ್ತಿದೆ. ವಿದ್ಯಾರ್ಥಿಗಳ ಸಾಧನೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಉತ್ತಮ ಫಲಿತಾಂಶ, ಶಿಕ್ಷಣದ ಗುಣಮಟ್ಟದಲ್ಲಿ ಹೆಚ್ಚಳವಾಗುತ್ತಿರುವುದನ್ನು ಸೂಚಿಸುತ್ತದೆ. ಜೊತೆಗೆ, ಮರುಪರೀಕ್ಷೆ ಮತ್ತು ಮರುಮೌಲ್ಯಮಾಪನದಂತಹ ಅವಕಾಶಗಳು ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಸಹಾಯಕವಾಗಿವೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-sslc-supplementary-exam-2026-will-be-held-from-may-18-to-25th-gdp/articleshow-2aqwggh"/>
        </item>
        <item>
            <title><![CDATA[100 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣವನ್ನು ಘೋಷಿಸಿದ ಬೀದರ್‌ ಶಿಕ್ಷಣ ಸಂಸ್ಥೆ]]></title>
            <link>https://kannada.asianetnews.com/karnataka-districts/bidar-shaheen-group-educational-institute-announces-free-pu-education-for-100-students/articleshow-47u1i56</link>
            <guid isPermaLink="true">https://kannada.asianetnews.com/karnataka-districts/bidar-shaheen-group-educational-institute-announces-free-pu-education-for-100-students/articleshow-47u1i56</guid>
            <pubDate>Sun, 26 Apr 2026 10:01:58 +0530</pubDate>
            <description><![CDATA[&lt;p&gt;ಬೀದರ್ ಶಿಕ್ಷಣ ಸಂಸ್ಥೆಯು ಎಸ್&zwnj;ಎಸ್&zwnj;ಎಲ್&zwnj;ಸಿಯಲ್ಲಿ 95%ಕ್ಕೂ ಹೆಚ್ಚು ಅಂಕ ಗಳಿಸಿದ 100 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣವನ್ನು ಘೋಷಿಸಿದೆ. ಈ ಯೋಜನೆಯಲ್ಲಿ ಗ್ರಾಮೀಣ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಫೌಂಡೇಷನ್&zwnj; ಕೋರ್ಸ್&zwnj;ಗಳನ್ನು ಸಹ ನಡೆಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ka2kmz9ezq63cnffyr5h4qqs,imgname-7518c2f3-9195-4ab3-95cb-0b026dfcb5a3--1--1763171794222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&zwnj;: &lt;/strong&gt;ಪ್ರಸಕ್ತ ಸಾಲಿನ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಶೇಕಡ 95ಕ್ಕೂ ಅಧಿಕ ಅಂಕ ಗಳಿಸಿದ ರಾಜ್ಯದ 100 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎರಡು ವರ್ಷದ ಪಿಯು ಶಿಕ್ಷಣವನ್ನು ಉಚಿತವಾಗಿ ನೀಡುವುದಾಗಿ ಇಲ್ಲಿಯ ಶಾಹೀನ್&zwnj; ಶಿಕ್ಷಣ ಸಂಸ್ಥೆಗಳ ಸಮೂಹ ಪ್ರಕಟಿಸಿದೆ.&lt;/p&gt;&lt;p&gt;100 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬೀದರ್&zwnj; ಸೇರಿದಂತೆ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು. ಉಚಿತ ಸ್ಥಾನಗಳಲ್ಲಿ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದಿದ, ತಂದೆಯನ್ನು ಕಳೆದುಕೊಂಡ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಆದ್ಯತೆ ಕೊಡಲಾಗುವುದು ಎಂದು ಶಾಹೀನ್&zwnj; ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್&zwnj; ಖದೀರ್&zwnj; ತಿಳಿಸಿದ್ದಾರೆ.&lt;/p&gt;&lt;p&gt;ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಉಚಿತ ಶಿಕ್ಷಣ ಯೋಜನೆಯ ಉದ್ದೇಶವಾಗಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಎರಡು ವರ್ಷದ ಬೋಧನಾ ಶುಲ್ಕದ ಸಂಪೂರ್ಣ ರಿಯಾಯಿತಿ ಇರಲಿದೆ. ಅರ್ಹ ವಿದ್ಯಾರ್ಥಿಗಳು ಸಮೂಹದ ಪದವಿ ಪೂರ್ವ ಕಾಲೇಜುಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಎಐಸಿಯುಗೆ ಶೇ.100 ಫಲಿತಾಂಶ&lt;/strong&gt;&lt;/h2&gt;&lt;p&gt;ಶಾಲೆ ಬಿಟ್ಟ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮರಳಿ ಮುಖ್ಯವಾಹಿನಿಗೆ ತರಲು ಶಾಹೀನ್&zwnj; ಶಿಕ್ಷಣ ಸಂಸ್ಥೆಗಳ ಸಮೂಹ ಆರಂಭಿಸಿದ ಶೈಕ್ಷಣಿಕ ತುರ್ತು ನಿಗಾ ಘಟಕ (ಎಐಸಿಯು) ಪರಿಣಾಮಕಾರಿ ಫಲಿತಾಂಶ ನೀಡುತ್ತಾ ಮುನ್ನಡೆದಿದೆ. ಶಾಲೆ ಬಿಟ್ಟ 90 ವಿದ್ಯಾರ್ಥಿಗಳು ಇಲ್ಲಿಯ ಶಾಹೀನ್&zwnj; ಪ್ರೌಢಶಾಲೆಯಲ್ಲಿ ಈ ಬಾರಿಯ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 81 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಶಾಹೀನ್&zwnj; ತುರ್ತು ಶೈಕ್ಷಣಿಕ ನಿಗಾ ಘಟಕದಲ್ಲಿ ಓದಿದವರಾಗಿರುವುದು ವಿಶೇಷ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;ವಿಶೇಷ ನಿಗಾ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ ತರುವ ಹಾಗೂ ಅವರ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಶಾಹೀನ್&zwnj; ಶೈಕ್ಷಣಿಕ ತುರ್ತು ನಿಗಾ ಘಟಕದ ಮಾದರಿಯನ್ನು ಪ್ರಶಂಸಿಸಿರುವ ಜಾಗತಿಕ ಮಟ್ಟದ ನಿಯತಕಾಲಿಕೆಯ ಭಾರತೀಯ ಆವೃತ್ತಿಯಾದ ಫೋರ್ಬ್ಸ್&zwnj; ಇಂಡಿಯಾ, ಶಾಹೀನ್&zwnj; ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್&zwnj; ಖದೀರ್&zwnj; ಅವರನ್ನು ''''&lsquo;ಲೀಡರ್&zwnj; ಆಫ್&zwnj; ಟುಮಾರೋ&rsquo; ಎಂದು ಗುರುತಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಎಸ್ಸೆಸ್ಸೆಲ್ಸಿ ಕನ್ನಡದಲ್ಲಿ ಫೇಲಾಗಿದ್ದು ಮಕ್ಕಳಷ್ಟೇ ಅಲ್ಲ; ಅಮುಲಾಗ್ರ ಬದಲಾವಣೆಗೆ ತಜ್ಞರ ಒತ್ತಡ&lt;/strong&gt;&lt;/p&gt;&lt;h3&gt;&lt;strong&gt;ಪ್ರಿ ಪ್ಲಸ್&zwnj; ಟು ಫೌಂಡೇಷನ್&zwnj; ಕೋರ್ಸ್&amp;nbsp;&lt;/strong&gt;&lt;/h3&gt;&lt;p&gt;ಎಸ್&zwnj;ಎಸ್&zwnj;ಎಲ್&zwnj;ಸಿಯಲ್ಲಿ ಉತ್ತೀರ್ಣ, ಅನುತ್ತೀರ್ಣರಾದವರಿಗೆ ವಿಷಯಗಳ ಮೇಲೆ ಹಿಡಿತವಿಲ್ಲದ, ವಿಷಯಗಳನ್ನು ಅರಿತುಕೊಳ್ಳಲಾಗದ ವಿದ್ಯಾರ್ಥಿಗಳ ನೀಟ್&zwnj; / ಜೆಇಇ ಕನಸು ಸಾಕಾರಗೊಳಿಸಲು ಶಾಹೀನ್&zwnj; ಶಿಕ್ಷಣ ಸಂಸ್ಥೆಗಳ ಸಮೂಹ ಮೂರು ವರ್ಷದ ಪ್ರಿ ಪ್ಲಸ್&zwnj; ಟು ಫೌಂಡೇಷನ್&zwnj; ಕೋರ್ಸ್ ಸಹ ಆರಂಭಿಸಿದೆ ಎಂದು ಅಬ್ದುಲ್&zwnj; ಖದೀರ್&zwnj; ತಿಳಿಸಿದ್ದಾರೆ.&lt;/p&gt;&lt;p&gt;ಶಾಹೀನ್&zwnj; ವೆಬ್ಸೈಟ್ &lt;strong&gt;https://shaheengroup.org&lt;/strong&gt; ಹಾಗೂ ಟೋಲ್&zwnj; ಫ್ರೀ ಸಂಖ್ಯೆ&lt;strong&gt; 1800 121 6235&lt;/strong&gt; ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೊನೆಗೂ ಅಂಧ ವಿದ್ಯಾರ್ಥಿನಿಗೆ ಅಂಕದ ಬೆಳಕು ನೀಡಿದ SSLC ಬೋರ್ಡ್! ಫೇಲಾದ ಹುಡಗಿಗೆ ಈಗ 603 ಅಂಕ!&lt;/strong&gt;&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bidar-shaheen-group-educational-institute-announces-free-pu-education-for-100-students/articleshow-47u1i56"/>
        </item>
        <item>
            <title><![CDATA[ಕೊನೆಗೂ ಅಂಧ ವಿದ್ಯಾರ್ಥಿನಿಗೆ ಅಂಕದ ಬೆಳಕು ನೀಡಿದ SSLC ಬೋರ್ಡ್! ಫೇಲಾದ ಹುಡಗಿಗೆ ಈಗ 603 ಅಂಕ!]]></title>
            <link>https://kannada.asianetnews.com/karnataka-districts/karwar-blind-student-lisa-khanam-sslc-result-corrected-603-marks-out-of-625-sat/articleshow-513glvo</link>
            <guid isPermaLink="true">https://kannada.asianetnews.com/karnataka-districts/karwar-blind-student-lisa-khanam-sslc-result-corrected-603-marks-out-of-625-sat/articleshow-513glvo</guid>
            <pubDate>Fri, 24 Apr 2026 16:46:10 +0530</pubDate>
            <description><![CDATA[&lt;p&gt;ಉತ್ತರ ಕನ್ನಡದ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್, ಪರೀಕ್ಷಾ ಮಂಡಳಿಯ ತಪ್ಪಿನಿಂದಾಗಿ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ 'ಗೈರು' ಎಂದು ನಮೂದಿಸಿ ಫೇಲ್ ಆಗಿದ್ದರು. ಮಾಧ್ಯಮಗಳ ವರದಿ ನಂತರ, ಮಂಡಳಿಯು ತಪ್ಪನ್ನು ಸರಿಪಡಿಸಿ ಫಲಿತಾಂಶ ಪ್ರಕಟಿಸಿದ್ದು, ಲೀಸಾ 603 ಅಂಕಗಳನ್ನು ಗಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpzk6scp23c2smvy7hzwvca7,imgname-sirsi-blind-sslc-student-lisa-khanam-1777029309846.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ (ಏ.24): ಕ&lt;/strong&gt;ರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಡವಟ್ಟಿನಿಂದಾಗಿ ಕಣ್ಣೀರು ಹಾಕಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್&zwnj;ಗೆ ಅಂತಿಮವಾಗಿ ನ್ಯಾಯ ಸಿಕ್ಕಿದೆ. ಪರೀಕ್ಷೆಗೆ ಹಾಜರಾಗಿದ್ದರೂ 'ಗೈರು' ಎಂದು ನಮೂದಿಸಿ ವಿದ್ಯಾರ್ಥಿನಿಯನ್ನು ಫೇಲ್ ಮಾಡಿದ್ದ ಪರೀಕ್ಷಾ ಪ್ರಾಧಿಕಾರ, ಈಗ ತನ್ನ ತಪ್ಪನ್ನು ಸರಿಪಡಿಸಿಕೊಂಡು ಹೊಸ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಫಲಿತಾಂಶದ ಪ್ರಕಾರ ಲೀಸಾ ಖಾನಮ್ ಬರೋಬ್ಬರಿ 603 ಅಂಕಗಳನ್ನು ಗಳಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ: ಪರೀಕ್ಷಾ ಮಂಡಳಿಯ ಎಡವಟ್ಟು&lt;/strong&gt;&lt;/h3&gt;&lt;p&gt;ಶಿರಸಿಯ ಇಂದಿರಾ ನಗರದ ಯುನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಲೀಸಾ ಖಾನಮ್ ಜನ್ಮಜಾತ ಅಂಧತ್ವ ಹೊಂದಿದ್ದರೂ ಓದಿನಲ್ಲಿ ಅತ್ಯಂತ ಪ್ರತಿಭಾವಂತೆ. ಈ ಬಾರಿ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆ ಬರೆದಿದ್ದ ಲೀಸಾ, ಎಲ್ಲಾ ವಿಷಯಗಳ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಗುರುವಾರ ಫಲಿತಾಂಶ ಪ್ರಕಟವಾದಾಗ ಲೀಸಾ ಆಘಾತಕ್ಕೊಳಗಾಗಿದ್ದರು. ಸಮಾಜ ವಿಜ್ಞಾನ (Social Science) ಪರೀಕ್ಷೆಗೆ ಹಾಜರಾಗಿದ್ದರೂ, ಫಲಿತಾಂಶದಲ್ಲಿ 'ಗೈರು' (Absent) ಎಂದು ನಮೂದಿಸಿ ಅವರನ್ನು ಫೇಲ್ ಮಾಡಲಾಗಿತ್ತು.&lt;/p&gt;&lt;h3&gt;&lt;strong&gt;ಕಣ್ಣೀರು ಹಾಕಿದ್ದ ಲೀಸಾ; ಸಾಕ್ಷ್ಯ ನೀಡಿದ ಪ್ರವೇಶ ಪತ್ರ&lt;/strong&gt;&lt;/h3&gt;&lt;p&gt;ಪ್ರಾಧಿಕಾರದ ಈ ಎಡವಟ್ಟಿನಿಂದ ಲೀಸಾ ಮತ್ತು ಅವರ ಪೋಷಕರು ಕಂಗಾಲಾಗಿದ್ದರು. ಆದರೆ ಛಲ ಬಿಡದ ಲೀಸಾ, ತನ್ನ ಪರೀಕ್ಷಾ ಪ್ರವೇಶ ಪತ್ರದ (Hall Ticket) ಮೇಲೆ ಮೇಲ್ವಿಚಾರಕರು ಮಾಡಿದ್ದ ಸಹಿಯನ್ನು ತೋರಿಸಿ ತಾನು ಪರೀಕ್ಷೆಗೆ ಹಾಜರಾಗಿದ್ದನ್ನು ಸಾಬೀತುಪಡಿಸಿದ್ದರು. 84% ಕ್ಕೂ ಅಧಿಕ ಅಂಕ ಗಳಿಸಬೇಕಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಸಣ್ಣ ತಾಂತ್ರಿಕ ದೋಷದಿಂದ ಫೇಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾಧ್ಯಮಗಳಲ್ಲಿ ಈ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪರೀಕ್ಷಾ ಪ್ರಾಧಿಕಾರ ತಕ್ಷಣವೇ ಮೌಲ್ಯಮಾಪನದ ದಾಖಲೆಗಳನ್ನು ಪರಿಶೀಲಿಸಿತು.&lt;/p&gt;&lt;h2&gt;&lt;strong&gt;ಈಗ ಲೀಸಾ ಜಿಲ್ಲೆಗೆ ಟಾಪರ್!&lt;/strong&gt;&lt;/h2&gt;&lt;p&gt;ಪರೀಕ್ಷಾ ಪ್ರಾಧಿಕಾರವು ಈಗ ತನ್ನ ತಪ್ಪನ್ನು ಸರಿಪಡಿಸಿಕೊಂಡು ಲೀಸಾ ಖಾನಮ್ ಅವರ ಪರಿಷ್ಕೃತ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಫಲಿತಾಂಶದಲ್ಲಿ ಲೀಸಾ 625 ಕ್ಕೆ 603 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಅಂಧ ವಿದ್ಯಾರ್ಥಿಗಳ ಪೈಕಿ ಲೀಸಾ ಖಾನಮ್ ಇದೀಗ ಜಿಲ್ಲೆಗೆ ಟಾಪರ್ ಆಗಿದ್ದಾಳೆ. ಇನ್ನು ಫೇಲಾಗಿದ್ದ ವಿಷಯ ಸಮಾಜ ವಿಜ್ಞಾನ ವಿಷಯದಲ್ಲಿ ಅವರಿಗೆ 97 ಅಂಕಗಳು ಲಭಿಸಿವೆ.&lt;/p&gt;&lt;h3&gt;&lt;strong&gt;ಲೀಸಾ ಖಾನಮ್ ಅವರ ಅಂಕಗಳ ವಿವರ:&lt;/strong&gt;&lt;/h3&gt;&lt;ul&gt; &lt;li&gt;ಕನ್ನಡ: 100/100&lt;/li&gt; &lt;li&gt;ಉರ್ದು : 124&lt;/li&gt; &lt;li&gt;ಇಂಗ್ಲಿಷ್: 92&lt;/li&gt; &lt;li&gt;ಎಕನಾಮಿಕ್ಸ್: 98&lt;/li&gt; &lt;li&gt;ಪೊಲಿಟಿಕಲ್ ಸೈನ್ಸ್: 92&lt;/li&gt; &lt;li&gt;ಸಮಾಜ ವಿಜ್ಞಾನ: 97&lt;/li&gt; &lt;li&gt;&lt;strong&gt;ಒಟ್ಟು ಅಂಕಗಳು: 603 / 625&lt;/strong&gt;&lt;/li&gt;&lt;/ul&gt;&lt;p&gt;ತಾನು ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಎಂದು ತಿಳಿದಾಗ ಮರುಗಿದ್ದ ಲೀಸಾ, ಈಗ 603 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದನ್ನು ಕಂಡು ಪೋಷಕರು ಮತ್ತು ಶಾಲೆಯ ಶಿಕ್ಷಕರು ಸಂಭ್ರಮಿಸಿದ್ದಾರೆ. ದೃಷ್ಟಿ ಇಲ್ಲದಿದ್ದರೂ ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು ಎಂಬುದನ್ನು ಲೀಸಾ ತೋರಿಸಿಕೊಟ್ಟಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಬೇಕಿದ್ದ ಪ್ರತಿಭೆಗೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karwar-blind-student-lisa-khanam-sslc-result-corrected-603-marks-out-of-625-sat/articleshow-513glvo"/>
        </item>
        <item>
            <title><![CDATA[SSLC ಲೀ ಹಳಗನ್ನಡ ನಡುಗನ್ನಡ: ಮಕ್ಕಳು ಗಡಗಡ! ಕನ್ನಡ ವಿಷಯದಲ್ಲೂ ಫೇಲ್ ಆಗಲು ಇದೇ ಕಾರಣವೇ?]]></title>
            <link>https://kannada.asianetnews.com/state/modern-students-vs-ancient-scripts-the-challenge-of-reading-old-kannada-in-sslc-exams-rav/articleshow-7a8dug3</link>
            <guid isPermaLink="true">https://kannada.asianetnews.com/state/modern-students-vs-ancient-scripts-the-challenge-of-reading-old-kannada-in-sslc-exams-rav/articleshow-7a8dug3</guid>
            <pubDate>Tue, 28 Apr 2026 13:38:16 +0530</pubDate>
            <description><![CDATA[&lt;p&gt;ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅನುತ್ತೀರ್ಣರಾಗಲು ಪಠ್ಯಪುಸ್ತಕದಲ್ಲಿನ ಅಧಿಕ ವ್ಯಾಕರಣದ ಹೊರೆ ಮತ್ತು ಹಳಗನ್ನಡ, ನಡುಗನ್ನಡ ಪಾಠಗಳ ಕಠಿಣತೆಯೇ ಪ್ರಮುಖ ಕಾರಣವೆಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq9hv608pbygn414p3qfx6xf,imgname--------------------------------33--1777363425287.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಿಂಗರಾಜು ಕೋರಾ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಏ.28): &lt;/strong&gt;ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ವ್ಯಾಕರಣಕ್ಕೆ ಸಂಬಂಧಿಸಿದ ಹೆಚ್ಚು ಅಧ್ಯಾಯಗಳ ಹೊರೆ, ಹಳಗನ್ನಡ, ನಡುಗನ್ನಡ ಪಾಠಗಳ ಕಠಿಣತೆಯೇ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳಲು ಪ್ರಮುಖ ಕಾರಣ ಎನ್ನುವುದು ಸ್ವತಃ ಪ್ರೌಢಶಾಲಾ ಕನ್ನಡ ಭಾಷಾ ಬೋಧಕ ಶಿಕ್ಷಕರ ಅಭಿಪ್ರಾಯ.&lt;/p&gt;&lt;p&gt;ಅಲ್ಲದೆ, ಶಾಲಾ ಹಂತದಲ್ಲಿ ಭಾಷೆಯನ್ನು ಭಾಷೆಯಾಗಿ ಕಲಿಸುವ ಪಠ್ಯ ವಿಷಯಗಳಿಗಿಂತ ದೀರ್ಘವಾದ ಸಾಹಿತ್ಯಕ ಗದ್ಯಗಳು, ಭಾಷಾ ವಿದ್ವತ್&zwnj;ಗೆ ಸಂಬಂಧಿಸಿದ ಅಂಶಗಳನ್ನು ಹೆಚ್ಚು ಅಡಕವಾಗಿಸಿರುವುದು ಕೂಡ ಮಕ್ಕಳಿಗೆ ಹೊರೆಯಾಗುತ್ತಿದೆ. ಜೊತೆಗೆ ಕಲಿಕೆ ಕಷ್ಟವಾಗುತ್ತಿದೆ ಎನ್ನುತ್ತಾರೆ ವಿಷಯ ತಜ್ಞರು.&lt;/p&gt;&lt;p&gt;ಸುಮಾರು 180 ಪುಟಗಳ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಎಂಟು ಗದ್ಯ, ಎಂಟು ಪದ್ಯ, ಆರು ಪೂರಕ ಅಧ್ಯಯನ ಪಾಠಗಳಿವೆ. ಇವುಗಳಲ್ಲಿ ಹಳಗನ್ನಡ, ನಡುಗನ್ನಡಕ್ಕೆ ಸಂಬಂಧಿಸಿದ ಕೆಲ ಅಧ್ಯಾಯಗಳು ಕಠಿಣವಾಗಿವೆ ಎನ್ನುವುದು ಬಿಟ್ಟರೆ ಶಿಕ್ಷರ ಬೇರೆ ಆಕ್ಷೇಪವಿಲ್ಲ. ಆದರೆ, ಈ ಗದ್ಯ, ಪದ್ಯ ವಿಷಯಗಳಿಗಿಂತ ಸಂಧಿ, ಸಮಾಸ, ರಗಳೆ, ಛಂದಸ್ಸು, ಅಲಂಕಾರ, ಷಟ್ಪದಿ, ವಿಭಕ್ತಿ ಪ್ರತ್ಯಯ, ತತ್ಸಮ ತದ್ಭವ, ವೃತ್ತಗಳು, ತದ್ಧಿತಾಂತಗಳು, ವಾಕ್ಯಪ್ರಕಾರ ಹೀಗೆ ವ್ಯಾಕರಣಕ್ಕೆ ಸಂಬಂಧಿಸಿದ ವಿಷಯಗಳು ದೊಡ್ಡದಾಗಿವೆ. ಪ್ರೌಢ ಶಾಲೆಯಲ್ಲಿ 8, 9 ಮತ್ತು 10 ಈ ಮೂರೂ ತರಗತಿಯಲ್ಲಿ ನಿಯಮಿತವಾಗಿ ಕಲಿಸಬೇಕಾದ ಎಲ್ಲಾ ವ್ಯಾಕರಣಗಳನ್ನೂ ಒಟ್ಟಾಗಿ 10ನೇ ತರಗತಿಗೇ ತಂದಿಟ್ಟಿರುವುದು ಮಕ್ಕಳಿಗೆ ಬಹಳ ಕಷ್ಟವಾಗುತ್ತಿದೆ.&lt;/p&gt;&lt;p&gt;ಒಂದೊಂದೂ ವ್ಯಾಕರಣಗಳನ್ನು ಅರ್ಥ ಮಾಡಿಕೊಳ್ಳುವವರೆಗೆ ಬಹಳ ಕಷ್ಟದಾಯಕ. ಕೆಲವೊಂದು ವ್ಯಾಕರಣಗಳು ಶಿಕ್ಷಕರಿಗೇ ತಿಳಿದಿರುವುದಿಲ್ಲ. ಅವುಗಳನ್ನು ಮೊದಲು ತಾವು ಅರ್ಥಮಾಡಿಕೊಂಡು ಬೋಧಿಸುವುದು ಒಂದು ಸವಾಲಾದರೆ, ಮಕ್ಕಳಿಗೆ ಅರ್ಥವಾಗಿಸುವುದು, ಕಲಿಸುವುದು ಇನ್ನೂ ದೊಡ್ಡ ಸವಾಲಾಗಿದೆ. ವ್ಯಾಕರಣ ಭಾಗದಲ್ಲಿ ಅಭ್ಯಾಸಕ್ಕೆ ಅಗತ್ಯಕ್ಕಿಂತ ಹೆಚ್ಚು ಅಂಶಗಳನ್ನು ನೀಡಲಾಗಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರ ಶಾಲೆಯೊಂದರ ಹೆಸರೇಳಲಿಚ್ಛಿಸದ ಕನ್ನಡ ವಿಷಯ ಶಿಕ್ಷಕ.&lt;/p&gt;&lt;h2&gt;ಕಠಿಣ ವ್ಯಾಕರಣಕ್ಕೆ 19 ಅಂಕ:&amp;nbsp;&lt;/h2&gt;&lt;p&gt;ಒಂದೆಡೆ 10ನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ವ್ಯಾಕರಣಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇರಿಸಲಾಗಿದೆ. ಗದ್ಯ, ಪದ್ಯ ವಿಷಯಗಳ ಅಧ್ಯಯನಕ್ಕಿಂತ ಹೆಚ್ಚು ಸಮಯವನ್ನು ಮಕ್ಕಳು ಈ ಹತ್ತಾರು ವ್ಯಾಕರಣಗಳನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೇ ಕಳೆಯುತ್ತಾರೆ. ಅದರಲ್ಲೂ ಕಲಿಕಾ ಮಟ್ಟ ಕಡಿಮೆ ಇರುವವರಿಗೆ ಅಥವಾ ಹಿಂದುಳಿದವರಿಗೆ ಇವುಗಳು ಅರ್ಥವಾಗುವುದೇ ಕಷ್ಟ. ಕೊನೆಗೆ ಇಷ್ಟೆಲ್ಲಾ ವ್ಯಾಕರಣ ಓದಿಕೊಂಡಿದ್ದಕ್ಕೆ ಪರೀಕ್ಷೆಯಲ್ಲಿ ಮಕ್ಕಳಿಗೆ ಕೇವಲ 19 ಅಂಕಗಳಿಗೆ ಮಾತ್ರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉಳಿದಂತೆ ಗದ್ಯ ಮತ್ತು ಪದ್ಯ ಪಾಠಗಳಿಗೆ ತಲಾ 28 ಅಂಕ, ಪೂರಕ ಅಧ್ಯಯನದ ಅಧ್ಯಾಯಗಳಿಗೆ 9 ಅಂಕ, ಅಪಠಿತ ಗದ್ಯಕ್ಕೆ 4, ಪತ್ರ ಬರವಣಿಗೆ, ಪ್ರಬಂಧ ರಚನೆಗೆ ತಲಾ 5 ಅಂಕ ಸೇರಿ ಅಧ್ಯಾಯವಾರು 100 ಅಂಕಗಳಿಗೆ ಪ್ರಶ್ನೆಗಳನ್ನು ನಿಗದಿಪಡಿಸಲಾಗಿದೆ.&lt;/p&gt;&lt;p&gt;ಇನ್ನು, ಮಕ್ಕಳು ಕನ್ನಡಲ್ಲಿ ಫೇಲಾಗುತ್ತಿರುವುದಕ್ಕೆ ಶಿಕ್ಷಕರು ನೀಡುವ ಇನ್ನಿತರೆ ಕಾರಣಗಳ ಪೈಕಿ ಹಿಂದಿ, ಇಂಗ್ಲೀಷ್&zwnj; ಭಾಷಾ ವಿಷಯಗಳಿಗೆ ಹೋಲಿಸಿದರೆ ಕನ್ನಡ ಭಾಷೆಯ ಪಠ್ಯಪುಸ್ತಕ ಅಷ್ಟು ಸರಳವಾಗಿಲ್ಲದಿರುವುದು. ಘಟಕ ಪರೀಕ್ಷೆ ಬದಲಾಗಿ ಪಾಠ ಆಧಾರಿತ ಮೌಲ್ಯಾಂಕನ ಮಾಡುವುದು. ದೀರ್ಘವಾದ ಗದ್ಯಗಳು ಮತ್ತು ಪ್ರಶ್ನೋತ್ತರಗಳು, ಪಠ್ಯದ ಪುಟಗಳ ಸಂಖ್ಯೆಯೇ ದೊಡ್ಡದಿರುವುದು ಕೂಡ ಮಕ್ಕಳಿಗೆ ಓದಿನಲ್ಲಿ ನಿರಾಸಕ್ತಿ ಹುಟ್ಟಿಸುತ್ತಿದೆ ಎಂಬ ಅಭಿಪ್ರಾಯಗಳು ಸೇರಿವೆ. ಜೊತೆಗೆ ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ಸರಿಯಾಗಿ ಕನ್ನಡ ಬೋಧನೆ ಆಗುತ್ತಿಲ್ಲ. ವಿಷಯ ಶಿಕ್ಷಕರ ಕೊರತೆಯೂ ಇದಕ್ಕೆ ಕಾರಣ ಎನ್ನುವುದು ಶಿಕ್ಷಕರ ಅಭಿಪ್ರಾಯ.&lt;/p&gt;&lt;p&gt;--&lt;/p&gt;&lt;p&gt;ಪ್ರೌಢ ಶಾಲಾ ಹಂತದ ಕನ್ನಡ ಭಾಷಾ ಪಠ್ಯದಲ್ಲಿ ಪಠ್ಯಕ್ರಮ ಹೆಚ್ಚೇನೂ ಇಲ್ಲ. ಆದರೆ, ವಿಷಯಗಳಲ್ಲಿ ಕಠಿಣತೆಯ ಮಟ್ಟ ಜಾಸ್ತಿ ಇದೆ. ಹಳಗನ್ನಡ, ನಡುಗನ್ನಡವೇ ಶೇ.50ರಿಂದ 60ರಷ್ಟಿದೆ. ಹೊಸಗನ್ನಡ ಶೇ.20ರಿಂದ 30ಕ್ಕೆ ಸೀಮಿತ ಮಾಡಿದ್ದಾರೆ. ಸಾಹಿತ್ಯ ಸರಳವಾಗಿ ಹಾಗೂ ಹೊಸಗನ್ನಡದಲ್ಲಿ ಇದ್ದರೆ ಮಕ್ಕಳಿಗೆ ಕಲಿಯಲು ಸಾಧ್ಯವಾಗುತ್ತದೆ. ಆಡು ಭಾಷೆಗಿಂತ ಹೆಚ್ಚು ಕಠಿಣ ಭಾಷೆ ಇಟ್ಟಾಗ ಮಕ್ಕಳಿಗೆ ಕಷ್ಟವಾಗುತ್ತದೆ. ಕೆಲವು ವಿಷಯಗಳನ್ನು ಶಿಕ್ಷಕರೇ ಅಥೈಸಲಾಗದಷ್ಟು ಕಠಿಣವಾಗಿವೆ. ಹಾಗಾಗಿ ಕನ್ನಡದಲ್ಲಿ ಹೆಚ್ಚು ಮಕ್ಕಳು ಫೇಲಾಗುತ್ತಿದ್ದಾರೆ ಎನ್ನುವುದು ನನ್ನ ಭಾವನೆ.&lt;/p&gt;&lt;p&gt;ಮಂಜುನಾಥ್&zwnj;, ಪ್ರೌಢ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕನ್ನಡ ಭಾಷಾ ಶಿಕ್ಷಕರು&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/modern-students-vs-ancient-scripts-the-challenge-of-reading-old-kannada-in-sslc-exams-rav/articleshow-7a8dug3"/>
        </item>
        <item>
            <title><![CDATA[ಬೆಂಗಳೂರು: 'AI' ಅಬ್ಬರಕ್ಕೆ ನಲುಗಿದ ಸಾಫ್ಟ್‌ವೇರ್ ಪ್ರಾಜೆಕ್ಟ್; ಐಟಿ ಕಂಪನಿಗೆ ಮೀಸಲಾಗಿದ್ದ ಜಾಗ ಈಗ ವೈದ್ಯಕೀಯ ಕಾಲೇಜು ಪಾಲು!]]></title>
            <link>https://kannada.asianetnews.com/bengaluru-urban/ai-disruption-bengaluru-it-land-converted-to-medical-college-karnataka-govt-san/articleshow-8h89kza</link>
            <guid isPermaLink="true">https://kannada.asianetnews.com/bengaluru-urban/ai-disruption-bengaluru-it-land-converted-to-medical-college-karnataka-govt-san/articleshow-8h89kza</guid>
            <pubDate>Wed, 29 Apr 2026 23:42:42 +0530</pubDate>
            <description><![CDATA[&lt;p&gt;ಕೃತಕ ಬುದ್ಧಿಮತ್ತೆಯ (AI) ಪ್ರಭಾವದಿಂದಾಗಿ ಬೆಂಗಳೂರಿನಲ್ಲಿ ದಶಕದ ಹಿಂದಿನ ಐಟಿ ಪಾರ್ಕ್ ಯೋಜನೆಯನ್ನು ಕೈಬಿಡಲಾಗಿದೆ. ಇದರ ಪರಿಣಾಮವಾಗಿ, ಕಾಡುಬೀಸನಹಳ್ಳಿಯ 9 ಎಕರೆ ಭೂಮಿಯಲ್ಲಿ ಸಾಫ್ಟ್&zwnj;ವೇರ್ ಕಂಪನಿಯ ಬದಲು, 410 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4sc0g9xs8432v2a3jnm5a2v,imgname-gettyimages-2207141986-1757493084477.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.29): &lt;/strong&gt;ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನವು ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದಲ್ಲಿ ತರುತ್ತಿರುವ ಭಾರಿ ಬದಲಾವಣೆಗಳ ಪರಿಣಾಮವಾಗಿ, ದಶಕಗಳ ಹಿಂದಿನ ಸಾಫ್ಟ್&zwnj;ವೇರ್ ಯೋಜನೆಯೊಂದನ್ನು ಹೂಡಿಕೆದಾರರು ಕೈಬಿಟ್ಟಿದ್ದಾರೆ. ಇದರ ಪರಿಣಾಮವಾಗಿ, ಬೆಂಗಳೂರು ಪೂರ್ವ ಭಾಗದಲ್ಲಿ ಐಟಿ ಕಂಪನಿಗೆ ಮೀಸಲಾಗಿದ್ದ ಒಂಬತ್ತು ಎಕರೆ ಭೂಮಿಯನ್ನು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಬಳಸಿಕೊಳ್ಳಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.&lt;/p&gt;&lt;p&gt;ಸಪ್ತಗಿರಿ ಶಿಕ್ಷಣ ಸಂಸ್ಥೆಗಳ ಸಮೂಹದ ಉದ್ಯಮಿ ಜಿ. ದಯಾನಂದ್ ಅವರಿಗೆ ಸೇರಿದ 'ಮೈಸೂರು ಐಟಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ಸಾಫ್ಟ್&zwnj;ವೇರ್ ಅಭಿವೃದ್ಧಿ ಮತ್ತು ಬಿಪಿಒ (BPO) ಕೇಂದ್ರವನ್ನು ಸ್ಥಾಪಿಸಲು 2006 ರಲ್ಲಿಯೇ ಸರ್ಕಾರದ ಅನುಮೋದನೆ ಪಡೆದಿತ್ತು. ಇದಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವರ್ತೂರು ಹೋಬಳಿಯ ಕಾಡುಬೀಸನಹಳ್ಳಿಯಲ್ಲಿ ಒಟ್ಟು 9.9 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು (2007 ರಲ್ಲಿ 3.5 ಎಕರೆ ಮತ್ತು 2014 ರಲ್ಲಿ 6.4 ಎಕರೆ).&lt;/p&gt;&lt;h2&gt;&lt;strong&gt;ಯೋಜನೆ ಕೈಬಿಡಲು ಕಾರಣಗಳೇನು?&lt;/strong&gt;&lt;/h2&gt;&lt;p&gt;ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರೈತರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಕಾನೂನು ಹೋರಾಟಗಳು ಇತ್ತೀಚಿನವರೆಗೂ ಮುಂದುವರಿದಿದ್ದವು. ಸುಪ್ರೀಂ ಕೋರ್ಟ್ ಕಳೆದ ವರ್ಷವಷ್ಟೇ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಿತ್ತು. ನ್ಯಾಯಾಲಯದ ಪ್ರಕರಣಗಳು ಮುಗಿಯುವ ಹೊತ್ತಿಗೆ ಐಟಿ ಕ್ಷೇತ್ರದ ಚಿತ್ರಣವೇ ಬದಲಾಗಿತ್ತು. ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಕಂಪನಿಯು, &quot;ಮಾರುಕಟ್ಟೆಯಲ್ಲಿನ ಭಾರಿ ಬದಲಾವಣೆಗಳಿಂದ ಐಟಿ ಕ್ಷೇತ್ರ ಈಗ ಮಂದಗತಿಯಲ್ಲಿದೆ. ಆಟೋಮೇಷನ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಸಾಂಪ್ರದಾಯಿಕ ಐಟಿ ಮತ್ತು ಬಿಪಿಒ ಕೆಲಸಗಳನ್ನು ಆಪೋಶನ ತೆಗೆದುಕೊಳ್ಳುತ್ತಿವೆ. ಐಟಿ ಕ್ಷೇತ್ರದಲ್ಲಿ ನೇಮಕಾತಿ ಸುಮಾರು ಶೇ. 7 ರಷ್ಟು ಕುಸಿದಿದೆ ಮತ್ತು ಪ್ರಮುಖ ಐಟಿ ಸಂಸ್ಥೆಗಳಲ್ಲಿ ಭಾರಿ ಉದ್ಯೋಗ ಕಡಿತ ವರದಿಯಾಗಿದೆ. ಈ ಸಮಯದಲ್ಲಿ ಹೆಚ್ಚುವರಿ ಐಟಿ ಮೂಲಸೌಕರ್ಯಗಳನ್ನು ನಿರ್ಮಿಸುವುದರಲ್ಲಿ ಯಾವುದೇ ಅರ್ಥವಿಲ್ಲ&quot; ಎಂದು ಕಂಪನಿ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ವೈದ್ಯಕೀಯ ಕಾಲೇಜಿಗೆ ಮರುರೂಪು&lt;/strong&gt;&lt;/h2&gt;&lt;p&gt;ಸಾಫ್ಟ್&zwnj;ವೇರ್ ಕಂಪನಿ ಲಾಭದಾಯಕವಲ್ಲ ಎಂದು ಅರಿತ ಉದ್ಯಮಿ ದಯಾನಂದ್ ಅವರು, ಅದೇ ಜಾಗದಲ್ಲಿ &quot;ಅತ್ಯಾಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಹಾಗೂ ಬಹುಶಿಸ್ತೀಯ ತಂತ್ರಜ್ಞಾನ ಸಂಸ್ಥೆ&quot;ಯನ್ನು ಸ್ಥಾಪಿಸುವ ಹೊಸ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟರು. ಸರ್ಕಾರವು ಇದಕ್ಕೆ ಇತ್ತೀಚೆಗೆ ಹಸಿರು ನಿಶಾನೆ ತೋರಿಸಿದೆ.&lt;/p&gt;&lt;p&gt;ಯೋಜನೆಯ ಉದ್ದೇಶ ಬದಲಾದ ಬೆನ್ನಲ್ಲೇ ಹೂಡಿಕೆಯ ಮೊತ್ತವೂ ಗಣನೀಯವಾಗಿ ಹೆಚ್ಚಾಗಿದೆ. ಈ ಹಿಂದೆ ಸಾಫ್ಟ್&zwnj;ವೇರ್ ಯೋಜನೆಗಾಗಿ 44.97 ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಈಗ ನಿರ್ಮಾಣವಾಗಲಿರುವ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕಾಗಿ 410 ಕೋಟಿ ರೂ. ಹೂಡಿಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/ai-disruption-bengaluru-it-land-converted-to-medical-college-karnataka-govt-san/articleshow-8h89kza"/>
        </item>
        <item>
            <title><![CDATA[ಸರ್ಕಾರ ಘೋಷಿಸಿದ SSLC ತೃತೀಯ ಭಾಷೆ ಗ್ರೇಡ್ ಆಸೆಗೆ 'ಹಿಂದಿ'ಯಲ್ಲಿ ಫೇಲಾದ 9,481 ವಿದ್ಯಾರ್ಥಿಗಳು!]]></title>
            <link>https://kannada.asianetnews.com/state/karnataka-sslc-results-2026-third-language-hindi-failure-stats-high-court-verdict-sat/articleshow-8u6dfbe</link>
            <guid isPermaLink="true">https://kannada.asianetnews.com/state/karnataka-sslc-results-2026-third-language-hindi-failure-stats-high-court-verdict-sat/articleshow-8u6dfbe</guid>
            <pubDate>Thu, 23 Apr 2026 15:04:08 +0530</pubDate>
            <description><![CDATA[ಎಸ್&zwnj;ಎಸ್&zwnj;ಎಲ್&zwnj;ಸಿ ಫಲಿತಾಂಶ ಪ್ರಕಟವಾಗಿದ್ದು, ತೃತೀಯ ಭಾಷೆಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರ ವಿವಾದಕ್ಕೆ ಕಾರಣವಾಗಿತ್ತು. ಹೈಕೋರ್ಟ್ ಮಧ್ಯಪ್ರವೇಶಿಸಿ ಅಂಕಗಳನ್ನೇ ನೀಡಲು ಆದೇಶಿಸಿದ್ದರಿಂದ, ವಿಶೇಷವಾಗಿ ಹಿಂದಿ ವಿಷಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpwtvngtw2991dp4x87908ws,imgname-sslc-result-hindi-subject-fail-1776936670745.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.23): ರಾ&lt;/strong&gt;ಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ ಎಸ್&zwnj;ಎಸ್&zwnj;ಎಲ್&zwnj;ಸಿ (SSLC) ಪರೀಕ್ಷೆಯ ಫಲಿತಾಂಶ ಅಂತಿಮವಾಗಿ ಪ್ರಕಟವಾಗಿದೆ. ಈ ಬಾರಿಯ ಫಲಿತಾಂಶ ಕೇವಲ ಅಂಕಗಳ ಕಾರಣಕ್ಕಲ್ಲದೆ, ತೃತೀಯ ಭಾಷೆಯ ಮೌಲ್ಯಮಾಪನ ವಿಚಾರದಲ್ಲಿ ನಡೆದ ಕಾನೂನು ಸಮರದಿಂದಾಗಿ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ತೃತೀಯ ಭಾಷೆಯಾಗಿ ಹಿಂದಿ ಆಯ್ಕೆ ಮಾಡಿಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಸರ್ಕಾರದ &lsquo;ಗ್ರೇಡ್&rsquo; ಪದ್ಧತಿಯ ಯಡವಟ್ಟಿಗೆ ಹೈಕೋರ್ಟ್ ಬೀಸಿದ ಚಾಟಿಯ ಬಿಸಿ ಎಸ್&zwnj;ಎಸ್&zwnj;ಎಲ್&zwnj;ಸಿ ಮಕ್ಕಳಿಗೆ ಬರೆ ಹಾಕಿದೆ.&lt;/p&gt;&lt;h3&gt;&lt;strong&gt;ಫಲಿತಾಂಶದ ಅಂಕಿ-ಅಂಶಗಳು:&lt;/strong&gt;&lt;/h3&gt;&lt;p&gt;ಈ ವರ್ಷ ಒಟ್ಟು 7,69,751 ವಿದ್ಯಾರ್ಥಿಗಳು ತೃತೀಯ ಭಾಷೆ ಪರೀಕ್ಷೆ ಬರೆದಿದ್ದರು. ಈ ಪೈಕಿ 7,58,623 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಒಟ್ಟು 11,128 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.&lt;/p&gt;&lt;p&gt;ಅದರಲ್ಲೂ ವಿಶೇಷವಾಗಿ, ತೃತೀಯ ಭಾಷೆಯಾಗಿ ಹಿಂದಿಯನ್ನು ಆಯ್ಕೆ ಮಾಡಿಕೊಂಡಿದ್ದ 7,02,009 ವಿದ್ಯಾರ್ಥಿಗಳ ಪೈಕಿ 6,92,528 ಮಂದಿ ಉತ್ತೀರ್ಣರಾಗಿದ್ದಾರೆ. ಆದರೆ, ಬರೋಬ್ಬರಿ 9,481 ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಫೇಲ್ ಆಗುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾದವರ ಪೈಕಿ ಬಹುಪಾಲು ವಿದ್ಯಾರ್ಥಿಗಳು ಹಿಂದಿ ಭಾಷೆಯವರೇ ಆಗಿರುವುದು ಗಮನಾರ್ಹ.&lt;/p&gt;&lt;h2&gt;&lt;strong&gt;ಏನಿದು ಗ್ರೇಡ್ ಮತ್ತು ಅಂಕಗಳ ವಿವಾದ?&lt;/strong&gt;&lt;/h2&gt;&lt;p&gt;ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲೇ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ತೃತೀಯ ಭಾಷೆ ಮತ್ತು ಎನ್&zwnj;ಎಸ್&zwnj;ಕ್ಯೂಎಫ್ ವಿಷಯಗಳಿಗೆ ಅಂಕಗಳ ಬದಲು &lsquo;ಗ್ರೇಡ್&rsquo; ನೀಡಲಾಗುವುದು ಎಂದು ಘೋಷಿಸಿದ್ದರು. ಹಿಂದಿ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಫೇಲ್ ಆಗುತ್ತಿರುವುದರಿಂದ ಅವರ ಮೇಲಿನ ಒತ್ತಡ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಸರ್ಕಾರದ ವಾದವಾಗಿತ್ತು. ಆದರೆ, ಈ ನಿರ್ಧಾರದಿಂದ ಮಕ್ಕಳ ಭವಿಷ್ಯದ ಮೇಲೆ ಹಾಗೂ ಒಂದು ವರ್ಷಗಳ ಕಾಲ ಹಿಂದಿ ಭಾಷೆ ಅಧ್ಯಯನ ಮಾಡಿದವರ ಫಲಿತಾಂಶ ಕಡಿಮೆ ಆಗುತ್ತದೆಂದು ಪೋಷಕರು ಹಾಗೂ ಕೆಲವು ವಿದ್ಯಾರ್ಥಿಗಳು ಕೋರ್ಟ್ ಮೆಟ್ಟೊಲೇರಿದ್ದರು.&lt;/p&gt;&lt;h3&gt;&lt;strong&gt;ಹೈಕೋರ್ಟ್ ಮಧ್ಯಪ್ರವೇಶ ಮತ್ತು ತಪರಾಕಿ:&lt;/strong&gt;&lt;/h3&gt;&lt;p&gt;ಸರ್ಕಾರದ ಈ ದಿಢೀರ್ ಬದಲಾವಣೆಯನ್ನು ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ್ ಹಾಗೂ ಉಡುಪಿಯ ಅನುಷಾ ಮತ್ತು ಸುದೀಕ್ಷಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಪರೀಕ್ಷೆಯ ಅಧಿಸೂಚನೆ ಹೊರಡಿಸಿದಾಗ ಇದ್ದ ನಿಯಮವನ್ನು ಮಧ್ಯದಲ್ಲಿ ಬದಲಿಸುವುದು ಕಾನೂನುಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಪೀಠ, 'ಪಂದ್ಯ ಆರಂಭವಾದ ಮೇಲೆ ನಿಯಮ ಬದಲಿಸಲು ಸಾಧ್ಯವಿಲ್ಲ' ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿತು. ಅಂತಿಮವಾಗಿ, ಈ ವರ್ಷ ಅಂಕಗಳನ್ನೇ ನೀಡಬೇಕು ಎಂದು ಕೋರ್ಟ್ ಆದೇಶಿಸಿತು. ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನೂ ತಿರಸ್ಕರಿಸಿದ ಕೋರ್ಟ್, ಸರ್ಕಾರದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.&lt;/p&gt;&lt;h3&gt;&lt;strong&gt;ಮಕ್ಕಳ ಹಿತದೃಷ್ಟಿಯಿಂದ ಅಂಕ ನೀಡಲು ಸರ್ಕಾರ ಸಮ್ಮತಿ:&lt;/strong&gt;&lt;/h3&gt;&lt;p&gt;ಕಾನೂನು ಹೋರಾಟದಲ್ಲಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ಮತ್ತು ಫಲಿತಾಂಶ ವಿಳಂಬವಾಗುವುದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹೈಕೋರ್ಟ್ ಆದೇಶದಂತೆ ಅಂಕಗಳನ್ನೇ ನೀಡಲು ನಿರ್ಧರಿಸಿದರು. 'ನಮಗೆ ಮಕ್ಕಳ ಭವಿಷ್ಯ ಮುಖ್ಯ, ಹೀಗಾಗಿ ಕೋರ್ಟ್ ನಿರ್ದೇಶನದಂತೆ ಅಂಕ ಮತ್ತು ಗ್ರೇಡ್ ಎರಡನ್ನೂ ನೀಡುತ್ತಿದ್ದೇವೆ' ಎಂದು ಸಚಿವರು ಸ್ಪಷ್ಟಪಡಿಸಿದ್ದರು. ಇನ್ನು ಫಲಿತಾಂಶವು ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿಯೇ ಅಂದರೆ ಏಪ್ರಿಲ್ 23 ರಂದೇ ಪ್ರಕಟವಾಗುವಂತಾಯಿತು. ತೃತೀಯ ಭಾಷೆಯಲ್ಲಿ ಅಂಕಗಳನ್ನು ನೀಡಿದ ಕಾರಣ, ಒಟ್ಟು ತೃತೀಯ ಭಾಷೆಯಲ್ಲಿ 11 ಸಾವಿರಕ್ಕೂ ಅಧಿಕ ಮಕ್ಕಳು ಫೇಲ್ ಆಗಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-sslc-results-2026-third-language-hindi-failure-stats-high-court-verdict-sat/articleshow-8u6dfbe"/>
        </item>
        <item>
            <title><![CDATA[ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಶಿಕ್ಷಣ ಇಲಾಖೆ ನಿಷೇಧ; ಹೊಸ ಮಾರ್ಗಸೂಚಿ ಪ್ರಕಟ, ನಿಯಮ ಮೀರಿದರೆ ಕ್ರಮ!]]></title>
            <link>https://kannada.asianetnews.com/state/karnataka-education-department-bans-obscene-songs-and-dance-at-schools-sat/articleshow-93sbai0</link>
            <guid isPermaLink="true">https://kannada.asianetnews.com/state/karnataka-education-department-bans-obscene-songs-and-dance-at-schools-sat/articleshow-93sbai0</guid>
            <pubDate>Tue, 28 Apr 2026 17:05:08 +0530</pubDate>
            <description><![CDATA[&lt;p&gt;ಮಕ್ಕಳ ನೈತಿಕ ಬೆಳವಣಿಗೆಯ ಮೇಲೆ ಆಗುವ ದುಷ್ಪರಿಣಾಮವನ್ನು ತಡೆಯಲು, ರಾಜ್ಯ ಶಿಕ್ಷಣ ಇಲಾಖೆಯು ಎಲ್ಲಾ ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡು ಮತ್ತು ಅಸಭ್ಯ ನೃತ್ಯಗಳನ್ನು ಕಡ್ಡಾಯವಾಗಿ ನಿಷೇಧಿಸಿದೆ. ಈ ಹೊಸ ಮಾರ್ಗಸೂಚಿಯ ಅನ್ವಯ, ಸ್ಪೂರ್ತಿದಾಯಕ ಗೀತೆಗಳಿಗೆ ಮಾತ್ರ ಅವಕಾಶ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq9xy1b0zes2h1qyee8ncn1g,imgname-karnataka-bans-school-obscene-dance-1777376101728.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): ಶಾ&lt;/strong&gt;ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಭ್ಯತೆಯ ಗೆರೆ ದಾಟುತ್ತಿದ್ದ ಹಾಡು ಮತ್ತು ನೃತ್ಯಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಈಗ ಬ್ರೇಕ್ ಹಾಕಿದೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಅಶ್ಲೀಲ ಸಾಹಿತ್ಯವಿರುವ ಹಾಡುಗಳು ಹಾಗೂ ಅಸಭ್ಯ ನೃತ್ಯಗಳನ್ನು ಕಡ್ಡಾಯವಾಗಿ ನಿಷೇಧಿಸಿ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ:&lt;/strong&gt;&lt;/h3&gt;&lt;p&gt;ಶಾಲಾ ವಾರ್ಷಿಕೋತ್ಸವ ಅಥವಾ ಪ್ರತಿಭಾ ಕಾರಂಜಿಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಸಿನಿಮಾ ಶೈಲಿಯ ಅಶ್ಲೀಲ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುತ್ತಿರುವ ದೂರುಗಳು ಕೇಳಿಬಂದಿದ್ದವು. ಇದು ವಿದ್ಯಾರ್ಥಿಗಳ ನೈತಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಗಂಭೀರವಾದ ದುಷ್ಪರಿಣಾಮ ಬೀರಲಿದೆ ಎಂದು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಇಲಾಖೆ, ಶೈಕ್ಷಣಿಕ ವಾತಾವರಣದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.&lt;/p&gt;&lt;h2&gt;&lt;strong&gt;ಹೊಸ ಮಾರ್ಗಸೂಚಿಯ ಮುಖ್ಯಾಂಶಗಳು:&lt;/strong&gt;&lt;/h2&gt;&lt;p&gt;ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಲಾಗಿದೆ:&lt;/p&gt;&lt;p&gt;&lt;strong&gt;ಹಾಡುಗಳ ಆಯ್ಕೆ: &lt;/strong&gt;ಶಾಲಾ ಕಾರ್ಯಕ್ರಮಗಳಲ್ಲಿ ಬಳಸುವ ಹಾಡುಗಳು ಸ್ಪೂರ್ತಿದಾಯಕವಾಗಿರಬೇಕು. ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ, ರಾಷ್ಟ್ರೀಯ ಅಭಿಮಾನವನ್ನು ಮೂಡಿಸುವ ಹಾಗೂ ಸಕಾರಾತ್ಮಕ ಸಾಹಿತ್ಯವಿರುವ ಸಂಗೀತಕ್ಕೆ ಮಾತ್ರ ಆದ್ಯತೆ ನೀಡಬೇಕು.&lt;/p&gt;&lt;p&gt;&lt;strong&gt;ಅಶ್ಲೀಲತೆಗೆ ಅವಕಾಶವಿಲ್ಲ: &lt;/strong&gt;ದ್ವಂದ್ವಾರ್ಥ ನೀಡುವ ಅಥವಾ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಚಲನಚಿತ್ರದ ಹಾಡುಗಳಿಗೆ ಮಕ್ಕಳ ನೃತ್ಯ ಇನ್ನು ಮುಂದೆ ಸಾರ್ವಜನಿಕವಾಗಿ ನಿಷೇಧಿಸಲಾಗಿದೆ.&lt;/p&gt;&lt;p&gt;&lt;strong&gt;ಸಭ್ಯ ವಸ್ತ್ರಧಾರಣೆ: &lt;/strong&gt;ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ವಿದ್ಯಾರ್ಥಿಗಳು ಸಭ್ಯ ಹಾಗೂ ಸೂಕ್ತವಾದ ಉಡುಪುಗಳನ್ನು ಧರಿಸಬೇಕು. ಪ್ರದರ್ಶನದ ನೆಪದಲ್ಲಿ ಅರೆಬರೆ ಅಥವಾ ಅಸಭ್ಯ ವಸ್ತ್ರಗಳನ್ನು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ.&lt;/p&gt;&lt;p&gt;&lt;strong&gt;ಸಕಾರಾತ್ಮಕ ಸಾಹಿತ್ಯ: &lt;/strong&gt;ಮಕ್ಕಳಲ್ಲಿ ರಾಷ್ಟ್ರಪ್ರೇಮ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವಂತಹ ಜಾನಪದ, ದೇಶಭಕ್ತಿ ಗೀತೆ ಹಾಗೂ ಪರಿಸರ ಪರವಾದ ಗೀತೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತೆ ಶಾಲೆಗಳಿಗೆ ನಿರ್ದೇಶಿಸಲಾಗಿದೆ.&lt;/p&gt;&lt;h3&gt;&lt;strong&gt;ಶಿಕ್ಷಣ ಇಲಾಖೆಯ ಎಚ್ಚರಿಕೆ:&lt;/strong&gt;&lt;/h3&gt;&lt;p&gt;ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಜವಾಬ್ದಾರಿಯನ್ನು ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗಳಿಗೆ ನೀಡಲಾಗಿದೆ. ಒಂದು ವೇಳೆ ಯಾವುದಾದರೂ ಶಾಲೆಯಲ್ಲಿ ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅಶ್ಲೀಲ ನೃತ್ಯ ಅಥವಾ ಕಾರ್ಯಕ್ರಮ ಆಯೋಜಿಸಿದರೆ, ಅಂತಹ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಂಬಂಧಪಟ್ಟ ಶಿಕ್ಷಕರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.&lt;/p&gt;&lt;p&gt;ಶೈಕ್ಷಣಿಕ ಕೇಂದ್ರಗಳಾದ ಶಾಲೆಗಳು ಕೇವಲ ಅಂಕಗಳನ್ನು ಗಳಿಸುವ ಕಾರ್ಖಾನೆಗಳಾಗದೆ, ಉತ್ತಮ ಸಂಸ್ಕೃತಿ ಮತ್ತು ನೈತಿಕತೆಯನ್ನು ಕಲಿಸುವ ವೇದಿಕೆಗಳಾಗಬೇಕು ಎಂಬುದು ಈ ಆದೇಶದ ಮುಖ್ಯ ಉದ್ದೇಶವಾಗಿದೆ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-education-department-bans-obscene-songs-and-dance-at-schools-sat/articleshow-93sbai0"/>
        </item>
        <item>
            <title><![CDATA[SSLCಯಲ್ಲಿ ಜಸ್ಟ್‌ ಪಾಸ್‌, ಫೇಲ್‌ ಆದವರಿಗೆ ಉಂಟು ವಿವಿಧ ಕೋರ್ಸ್; ಧೃತಿಗೆಡುವ ಅಗತ್ಯವೇ ಇಲ್ಲ]]></title>
            <link>https://kannada.asianetnews.com/education/there-are-various-courses-for-those-who-just-passed-and-failed-in-sslc-mrq/articleshow-9odg0hw</link>
            <guid isPermaLink="true">https://kannada.asianetnews.com/education/there-are-various-courses-for-those-who-just-passed-and-failed-in-sslc-mrq/articleshow-9odg0hw</guid>
            <pubDate>Mon, 27 Apr 2026 08:10:10 +0530</pubDate>
            <description><![CDATA[&lt;p&gt;SSLC ಫಲಿತಾಂಶದಲ್ಲಿ ಕಡಿಮೆ ಅಂಕ ಪಡೆದ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೃತಿಗೆಡುವ ಅಗತ್ಯವಿಲ್ಲ. ಅವರಿಗಾಗಿ ಐಟಿಐ ಸೇರಿದಂತೆ ಹಲವಾರು ತರಬೇತಿ ಸಂಸ್ಥೆಗಳು ಉದ್ಯೋಗಾವಕಾಶದ ಬಾಗಿಲು ತೆರೆದಿವೆ. ಈ ಕೋರ್ಸ್&zwnj;ಗಳನ್ನು ಪೂರ್ಣಗೊಳಿಸಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉತ್ತಮ ಭವಿಷ್ಯರೂಪಿಸಿಕೊಳ್ಳಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpcztsef23g52m1r7vha11cc,imgname-atal-awasiya-vidyalaya-yojana-up-cbse-result-2026-1776405013967.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೋಮರಡ್ಡಿ ಅಳವಂಡಿ ಕೊಪ್ಪಳ&lt;/strong&gt;&lt;/p&gt;&lt;p&gt;ಈಗಷ್ಟೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಪ್ಪಳ ಜಿಲ್ಲೆಗೆ ಈ ವರ್ಷ ಬಂಪರ್ ಫಲಿತಾಂಶ ಬಂದಿದೆ. ಇದರಲ್ಲಿ ಫೇಲ್&zwnj;, ಜಸ್ಟ್&zwnj; ಪಾಸಾದವರು ಧೃತಿಗೆಡುವ ಅಗತ್ಯವಿಲ್ಲ, ಅವರಿಗೂ ಅತ್ಯುತ್ತಮ ಅವಕಾಶ ಇದೆ.&lt;/p&gt;&lt;p&gt;ಹೀಗಾಗಿ ಕಡಿಮೆ ಅಂಕ ಬಂದಿದೆ ಎಂದು ಕೊರಗುತ್ತಾ ಕುಳಿತುಕೊಳ್ಳುವ ಬದಲು ಅತ್ಯುತ್ತಮ ಅವಕಾಶ ಸದ್ಬಳಕೆ ಮಾಡಿಕೊಂಡು ಬದುಕಿನಲ್ಲಿ ಯಶಸ್ವಿಯಾಗಲು ಸಾವಿರಾರು ಮಾರ್ಗಗಳಿವೆ.&lt;/p&gt;&lt;h2&gt;&lt;strong&gt;ರಾಜ್ಯಾದ್ಯಂತ 1500 ಐಟಿಐ ಕಾಲೇಜು&lt;/strong&gt;&lt;/h2&gt;&lt;p&gt;ರಾಜ್ಯಾದ್ಯಂತ 1500 ಐಟಿಐ ಕಾಲೇಜು ಇದ್ದು, ಇದರಲ್ಲಿ 270 ಸರ್ಕಾರಿ, 190 ಅನುದಾನಿತ ಹಾಗೂ ಉಳಿದವು ಖಾಸಗಿಯಾಗಿವೆ. ಇಲ್ಲಿ ಜಸ್ಟ್ ಪಾಸ್&zwnj; ಮತ್ತು ಫೇಲಾದವರಿಗೂ ಕೋರ್ಸ್ ಇವೆ. ಅಷ್ಟೇ ಅಲ್ಲ ಬೆಂಗಳೂರಿನ ಟೋಯೋಟಾ ಸಂಸ್ಥೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.50 ರಷ್ಟು ಅಂಕ ಪಡೆದವರಿಗೆ ಉಚಿತ ವಸತಿ, ಊಟದೊಂದಿಗೆ ತರಬೇತಿ ಶಿಕ್ಷಣ ನೀಡುತ್ತದೆ. ನಂತರ ಉದ್ಯೋಗಾವಕಾಶ ನೀಡುತ್ತದೆ. ಇಂತಹ ನೂರಾರು ಸಂಸ್ಥೆಗಳು ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಪಡೆದಿದ್ದರೂ ಅವಕಾಶ ನೀಡಲು ತರಬೇತಿ ನಡೆಸುತ್ತಿವೆ.&amp;nbsp;&lt;/p&gt;&lt;p&gt;ಐಟಿಐ ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರತಿ ಕಾಲೇಜಿನಲ್ಲಿಯೂ ಜೆಸ್ಟ್ ಪಾಸ್ ಆದವರಿಗೆ ವಿವಿಧ 13 ತರಬೇತಿ ಕೋರ್ಸ್ ಇರುತ್ತವೆ. ಫೇಲಾದವರಿಗೆ ಎರಡು ಕೋರ್ಸ್&zwnj;ಗಳಿವೆ. ಐಟಿಐ ಸಂಸ್ಥೆಯಲ್ಲಿ ತರಬೇತಿ ಪಡೆದ ಬಳಿಕ ತಾಂತ್ರಿಕ ಶಿಕ್ಷಣಾಧಾರಿತ ಉದ್ಯೋಗವಕಾಶ ಸಹ ಪಡೆಯಬಹುದಾಗಿದೆ. ರೇಲ್ವೆ, ರಕ್ಷಣಾ, ಬಿಎಚ್ ಇಎಲ್, ಎಸ್ಎಐಎಲ್, ಎಚ್ಎಎಲ್ ಮತ್ತು ರಾಜ್ಯದ ವಿದ್ಯುತ್ ಮಂಡಳಿಗಳಲ್ಲಿ ತಾಂತ್ರಿಕ ಸಹಾಯಕ ಮತ್ತು ಟೆಕ್ನಿಶಿಯನ್ ಆಗಿ ಕೆಲಸ ಪಡೆಯಬಹುದು. ಇದಲ್ಲದೆ ಖಾಸಗಿ ವಲಯದಲ್ಲಿಯೂ ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಮ್ಯಾನುಪ್ಯಾಕ್ಟರಿಂಗ್, ಕೈಗಾರಿಕೆಗಳಲ್ಲಿ ಪಿಟ್ಟರ್, ಆಟೋ ಮೆಕ್ಯಾನಿಕ್ ಸೇರಿದಂತೆ ಅನೇಕ ಅವಕಾಶಗಳು ಇವೆ.&lt;/p&gt;&lt;p&gt;ಐಟಿಐ ಮುಗಿಸಿದ ಮೇಲೆ ಅಪ್ರೆಂಟಿಸ್ ನಂತರ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ 5 ವರ್ಷ ಸೇವೆ ಮಾಡಿದವರನ್ನೇ ಐಟಿಐ ಕಾಲೇಜುಗಳಿಗೆ ಜೂನಿಯರ್ ಟ್ರೇನಿಂಗ್ ಆಫೀಸರ್ ಎಂದು ರಾಜ್ಯ ಸರ್ಕಾರವೇ ನೇಮಕ ಮಾಡಿಕೊಳ್ಳುತ್ತದೆ.&lt;/p&gt;&lt;p&gt;ಎಸ್ಸೆಸ್ಸೆಲ್ಸಿ ಫೇಲಾದವರಿಗೆ ಸೀಟ್ ಮೆಟಲ್ ವರ್ಕರ್ ಮತ್ತು ವೆಲ್ಡರ್ ಎನ್ನುವ ಎರಡು ಕೋರ್ಸ್ ಇವೆ. ಈ ಕೋರ್ಸ್ ನಲ್ಲಿ ಐಟಿಐ ಪೂರ್ಣಗೊಳಿಸಲು ಅವಕಾಶ ಇದೆ. ನಂತರ ಡಿಪ್ಲೋಮಾ ಮಾಡಲು ಅರ್ಹತೆ ಪಡೆಯುತ್ತಾರೆ.&lt;/p&gt;&lt;p&gt;ಹೀಗಾಗಿ, ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಬಂದಿದೆ ಮತ್ತು ಫೇಲಾಗಿದ್ದೇವೆ ಎಂದು ಧೃತಿಗೆಡದೆ ಇಂತಹ ಕೋರ್ಸ್&zwnj;ಗಳಿಗೆ ಪ್ರವೇಶ ಪಡೆಯಬಹುದಾಗಿದೆ.&lt;/p&gt;&lt;h3&gt;&lt;strong&gt;ಧೃತಿಗೆಡುವ ಅಗತ್ಯವೇ ಇಲ್ಲ&lt;/strong&gt;&lt;/h3&gt;&lt;p&gt;ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿದ್ದೇವೆ, ಕಡಿಮೆ ಅಂಕ ಬಂದಿವೆ ಎಂದು ಧೃತಿಗೆಡುವ ಅಗತ್ಯವೇ ಇಲ್ಲ. ಅವರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಕಷ್ಟು ಅವಕಾಶ ನೀಡುತ್ತದೆ. ಕೋರ್ಸ್ ಸಹ ಇವೆ. ಐಟಿಐಯಲ್ಲಿ ಪಾಸಾದ ಮತ್ತು ಫೇಲಾದವರಿಗೂ ಅವಕಾಶ ಉಂಟು ಎಂದು ಕುಕನೂರ ಐಟಿಐ ಜೂನಿಯರ್ ಟ್ರೇನಿಂಗ್ ಆಫೀಸರ್ ರಾಜೇಶ ಬಳ್ಳಾರಿ ತಿಳಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/there-are-various-courses-for-those-who-just-passed-and-failed-in-sslc-mrq/articleshow-9odg0hw"/>
        </item>
        <item>
            <title><![CDATA[ಮಾರಾಟಕ್ಕಿದೆ ಈ ಪರೀಕ್ಷಾ ಕೇಂದ್ರ!  300 ರೂ. ಕೊಟ್ರೆ ಸಾಕು, ಓದದೇ IAS, IPS, IFS ಅಧಿಕಾರಿಯಾಗಲು ದಾರಿ]]></title>
            <link>https://kannada.asianetnews.com/education/exam-hall-for-sale-civil-services-aspirants-allowed-to-cheat-for-rs-300-in-maharashtra-suc/articleshow-eyk2hi2</link>
            <guid isPermaLink="true">https://kannada.asianetnews.com/education/exam-hall-for-sale-civil-services-aspirants-allowed-to-cheat-for-rs-300-in-maharashtra-suc/articleshow-eyk2hi2</guid>
            <pubDate>Fri, 24 Apr 2026 19:35:44 +0530</pubDate>
            <description><![CDATA[&lt;p&gt;&amp;nbsp;ಬಿ.ಎ. ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಮೇಲ್ವಿಚಾರಕರಿಗೆ 300 ರೂಪಾಯಿ ಲಂಚ ನೀಡಿ, ಮೊಬೈಲ್ ಫೋನ್ ಬಳಸಿ ನಕಲು ಮಾಡಿದ್ದಾರೆ. ಲಂಚ ನೀಡಲು ನಿರಾಕರಿಸಿದ ಕೆಲವು ವಿದ್ಯಾರ್ಥಿಗಳು ತಮಗೂ ಉಚಿತವಾಗಿ ನಕಲು ಮಾಡಲು ಅವಕಾಶ ನೀಡಬೇಕೆಂದು ಪ್ರತಿಭಟಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpzwr1g9je3rjff5azv7jqr0,imgname-bribe-ai-generated-photo-1777039312393.jpg" type="image/jpeg" height="390" width="690"/>
            <content:encoded><![CDATA[&lt;p&gt;ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ಮಾಡುವುದು ಮಾಮೂಲು. ಕಾಪಿ ಮಾಡುವುದಕ್ಕಾಗಿ ವಿದ್ಯಾರ್ಥಿಗಳು ವಿವಿಧ ರೀತಿಯ ಟ್ಯಾಲೆಂಟ್​ ಉಪಯೋಗಿಸುವುದು ಇದ್ದೇ ಇದೆ. ಆದರೆ ಇಲ್ಲೊಂದು ಆಘಾತಕಾರಿ ಘಟನೆಯಲ್ಲಿ ಸಿವಿಲ್​ ಸರ್ವಿಸ್​ ಅಭ್ಯರ್ಥಿಗಳು ಲಂಚ ಕೊಟ್ಟು ಮೊಬೈಲ್​ ನೋಡಿ ಪರೀಕ್ಷೆ ಬರೆದಿದ್ದಾರೆ! ಭಾವಿ ಐಎಎಸ್​​, ಐಪಿಎಸ್​ ಸೇರಿದಂತೆ ವಿವಿಧ ಉನ್ನತ ಅಧಿಕಾರಿಗಳಾಗುವ ಈ ಅಭ್ಯರ್ಥಿಗಳು 300 ರೂಪಾಯಿ ಕೊಟ್ಟು ಮೊಬೈಲ್​ ನೋಡಿ ಬಿಎ ಸಿವಿಲ್​ ಸರ್ವಿಸ್​ ಪರೀಕ್ಷೆ ಬರೆದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಬಿ.ಎ. ಸಿವಿಲ್ ಸರ್ವೀಸಸ್ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಒಳಗೆ ಅನ್ಯಾಯದ ಅಭ್ಯಾಸಗಳಲ್ಲಿ ತೊಡಗಿರುವುದು ಕಂಡುಬಂದಿದೆ.&lt;/p&gt;&lt;h2&gt;&lt;strong&gt;ಮೊಬೈಲ್​ ಫೋನ್​ ಬಳಕೆ- ಏನಿದು ಬಿಎ ಸಿವಿಲ್​ ಸರ್ವಿಸ್​ ಎಕ್ಸಾಂ?&lt;/strong&gt;&lt;/h2&gt;&lt;p&gt;ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಅವರು ತಮ್ಮ ಮೊಬೈಲ್ ಫೋನ್&zwnj;ಗಳನ್ನು ಬಳಸುವ ಮೂಲಕ ಇವರು ವಂಚನೆ ಮಾಡಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಿದವರು ಅಲ್ಲಿಯ ಮೇಲ್ವಿಚಾರಕರು. ಪ್ರತಿಯೊಬ್ಬರಿಂದ 300 ರೂಪಾಯಿ ಪಡೆದು ಮೊಬೈಲ್​ ನೋಡಲು ಅವಕಾಶ ಕಲ್ಪಿಸಲಾಗಿದೆ. ಕೇಳಿದ ಪ್ರಶ್ನೆಗಳಿಗೆ ಗೂಗಲ್​ ಸರ್ಚ್​ ಮಾಡಿ ಉತ್ತರ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇದು ಎಷ್ಟು ವರ್ಷಗಳಿಂದ, ಇನ್ನು ಎಲ್ಲೆಲ್ಲಿ ನಡೆಯುತ್ತಿವೆಯೋ ಆ ದೇವರಿಗೇ ಗೊತ್ತು. ಇಂಥ ಮಾರಾಟಕ್ಕಿರುವ ಪರೀಕ್ಷಾ ಕೇಂದ್ರಗಳು ಇನ್ನೆಲ್ಲೆಲ್ಲಿ ನಿರಾತಂಕವಾಗಿ ನಡೆಯುತ್ತಿದೆ ಎನ್ನುವುದು ಸೂಕ್ತ ತನಿಖೆ ಮಾಡಿದರಷ್ಟೇ ತಿಳಿಯಲಿದೆ. ಆದರೆ, ಇಲ್ಲಿ ಆದ ಒಂದು ಚಿಕ್ಕ ಎಡವಟ್ಟಿನಿಂದಾಗಿ ಮೋಸದ ಜಾಲ ಬೆಳಕಿಗೆ ಬಂದಿದೆ.&lt;/p&gt;&lt;p&gt;ನಾಗರಿಕ ಸೇವೆಗಳಲ್ಲಿ ಬಿಎ (ಬ್ಯಾಚುಲರ್ ಆಫ್ ಆರ್ಟ್ಸ್) ಎಂಬುದು 3 ವರ್ಷಗಳ ಪದವಿಪೂರ್ವ ಪದವಿಯಾಗಿದ್ದು, ಸಾಂಪ್ರದಾಯಿಕ ಶೈಕ್ಷಣಿಕ ಅಧ್ಯಯನಗಳನ್ನು ಯುಪಿಎಸ್&zwnj;ಸಿ ನಾಗರಿಕ ಸೇವೆಗಳ ಪರೀಕ್ಷೆಯಂತಹ ಸ್ಪರ್ಧಾತ್ಮಕ ಸರ್ಕಾರಿ ಪರೀಕ್ಷೆಗಳಿಗೆ ಕೇಂದ್ರೀಕೃತ ತಯಾರಿಯೊಂದಿಗೆ ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸಾಮಾಜಿಕ ವಿಜ್ಞಾನ, ಇತಿಹಾಸ ಮತ್ತು ಸಾರ್ವಜನಿಕ ನೀತಿಯ ಮೂಲಭೂತ ತಿಳಿವಳಿಕೆಯನ್ನು ಒದಗಿಸುತ್ತದೆ, ಇದು ಸಾರ್ವಜನಿಕ ಆಡಳಿತದಲ್ಲಿ ವೃತ್ತಿಜೀವನಕ್ಕೆ ನೇರ ಪೂರ್ವಸಿದ್ಧತಾ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಇವರಿಗೆ ಭವಿಷ್ಯದಲ್ಲಿ ಸಿವಿಲ್​ ಸರ್ವಿಸ್​ ಅಧಿಕಾರಿಗಳಾಗಲು ದಾರಿ ಸುಗಮವಾಗುತ್ತದೆ!&lt;/p&gt;&lt;h3&gt;&lt;strong&gt;ಬೆಳಕಿಗೆ ಬಂದದ್ದು ಹೇಗೆ?&lt;/strong&gt;&lt;/h3&gt;&lt;p&gt;ಈ ಘಟನೆ ಏಪ್ರಿಲ್ 22 ರಂದು ಮುಲ್&zwnj;ನಲ್ಲಿರುವ ಮತ್ತು ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಸರ್ವೋದಯ ಕಾಲೇಜಿನಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿದ್ಯಾರ್ಥಿಗಳು ಗೂಗಲ್ ಮತ್ತು ಎಐ ಪರಿಕರಗಳಲ್ಲಿ ಉತ್ತರಗಳನ್ನು ಹುಡುಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ. ಅಷ್ಟಕ್ಕೂ ಕೆಲವು ಅಭ್ಯರ್ಥಿಗಳು 300 ರೂಪಾಯಿ ನೀಡಲು ನಿರಾಕರಿಸಿದ್ದರು. ಹಾಗೆಂದು ಅವರು ಮೊಬೈಲ್​ ನೋಡದೇ ಇದರ ವಿರುದ್ಧ ಪ್ರತಿಭಟಿಸಿದ್ದು ಅಂತಲ್ಲ. ತಮಗೆ ಲಂಚ ನೀಡಲು ಆಗುವುದಿಲ್ಲ. ಹಾಗೆಯೇ ಮೊಬೈಲ್​ ನೋಡಲು ಅವಕಾಶ ಕಲ್ಪಿಸಬೇಕು ಎನ್ನುವುದು ಇವರ ಹಟವಾಗಿತ್ತು. ಆದರೆ, ಅದನ್ನು ನಿರಾಕರಿಸಿದಾಗ, ಆ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ಮಾಡಿದರು. ಇದು ದೊಡ್ಡದಾದಾಗ, ಪೊಲೀಸರ ಪ್ರವೇಶವಾಗಿದೆ. ಆಗ ಅಸಲಿಯತ್ತು ಬೆಳಕಿಗೆ ಬಂದಿದೆ.&lt;/p&gt;&lt;h3&gt;&lt;strong&gt;ನೀತಿ ಸಂಹಿತೆ ಉಲ್ಲಂಘನೆ&lt;/strong&gt;&lt;/h3&gt;&lt;p&gt;ನಾಗರಿಕ ಸೇವಕರಾಗಲು ಬಯಸುವ ವಿದ್ಯಾರ್ಥಿಗಳು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬುದು ಕಳವಳಕಾರಿ. ಭಾರತದಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ವಂಚನೆ ಮತ್ತು ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಸರಿಯಾದ ಆಸನ ವ್ಯವಸ್ಥೆ ಕೂಡ ಇರಲಿಲ್ಲ. ಈ ಕೇಂದ್ರದಲ್ಲಿ ಸುಮಾರು 400 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ, ಒಂದು ಸೀಟಿನಲ್ಲಿ ಮೂವರು ವಿದ್ಯಾರ್ಥಿಗಳು ತುಂಬಿರುತ್ತಾರೆ. ಸ್ಥಳಾವಕಾಶದ ಕೊರತೆಯಿಂದಾಗಿ, ಕೆಲವರು ಪರೀಕ್ಷೆ ಬರೆಯಲು ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು. ಇದಲ್ಲದೆ, ಪರೀಕ್ಷಾರ್ಥಿಗಳಿಗೆ ಕೇಂದ್ರದಲ್ಲಿ ಶೌಚಾಲಯ ಸೌಲಭ್ಯವಿಲ್ಲ.&lt;/p&gt;&lt;h3&gt;&lt;strong&gt;ಹೀಗಿದೆ ವ್ಯವಸ್ಥೆ&lt;/strong&gt;&lt;/h3&gt;&lt;p&gt;ವಿಷಾದಕರವೆಂದರೆ, ಕಳೆದ ಕೆಲವು ವರ್ಷಗಳಿಂದ, ವಿದ್ಯಾರ್ಥಿಗಳು ಸಭಾಂಗಣಗಳ ಒಳಗೆ ಬಹಿರಂಗವಾಗಿ ನಕಲು ಮಾಡುವುದು ಮತ್ತು ಒಳಗಿನವರು ದೊಡ್ಡ ಹಗರಣಗಳಲ್ಲಿ ಭಾಗಿಯಾಗಿರುವ ವ್ಯವಸ್ಥಿತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಪಟ್ಟಣದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಕೆಲವು ಸಂಘಟನಾ ಅಧಿಕಾರಿಗಳು ಇಂತಹ ಘಟನೆಗಳು ನಡೆಯಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರೂ, ಇತರರು ಇನ್ನೂ ಈ ವಿಷಯದ ಬಗ್ಗೆ ಪೂರ್ವಭಾವಿ ನಿರ್ಧಾರ ತೆಗೆದುಕೊಂಡಿಲ್ಲ! ಹೀಗಿದೆ ನಮ್ಮ ವ್ಯವಸ್ಥೆ!&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/education/exam-hall-for-sale-civil-services-aspirants-allowed-to-cheat-for-rs-300-in-maharashtra-suc/articleshow-eyk2hi2"/>
        </item>
        <item>
            <title><![CDATA[SSLC Results 2026: ಶೇ.94.1ರಷ್ಟು ಮಕ್ಕಳು ಪಾಸ್, ದಕ್ಷಿಣ ಕನ್ನಡ ಪ್ರಥಮ, ಕಲಬುರಗಿ ಲಾಸ್ಟ್!]]></title>
            <link>https://kannada.asianetnews.com/state/karnataka-sslc-results-2026-state-records-historic-94-1-percents-students-pass-percentage-rav/articleshow-fqo2a1l</link>
            <guid isPermaLink="true">https://kannada.asianetnews.com/state/karnataka-sslc-results-2026-state-records-historic-94-1-percents-students-pass-percentage-rav/articleshow-fqo2a1l</guid>
            <pubDate>Fri, 24 Apr 2026 07:00:31 +0530</pubDate>
            <description><![CDATA[2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ರಾಜ್ಯವು ಶೇ.88.73ರಷ್ಟು ಐತಿಹಾಸಿಕ ಫಲಿತಾಂಶ ದಾಖಲಿಸಿದೆ. ಈ ಬಾರಿ ಯಾವುದೇ ಗ್ರೇಸ್ ಅಂಕಗಳನ್ನು ನೀಡದೆ, ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದು, ಸರ್ಕಾರಿ ಶಾಲೆಗಳ ಪ್ರದರ್ಶನದಲ್ಲಿಯೂ ಭಾರೀ ಸುಧಾರಣೆ ಕಂಡುಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpyhjcbqz6vdtz4kxh11axp8,imgname--------------------------------2--1776994038135.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಏ.24): ದ್ವಿತೀಯ ಪಿಯುಸಿ ಪರೀಕ್ಷೆಯಂತೆ ರಾಜ್ಯದಲ್ಲಿ ಈ ಬಾರಿಯ(2025-26) ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಕೂಡ ಐತಿಹಾಸಿಕ ಶೇ.88.73 ರಷ್ಟು ಫಲಿತಾಂಶ ದಾಖಲಾಗಿದೆ. ಹೈಕೋರ್ಟ್&zwnj; ಆದೇಶದಂತೆ ಹಿಂದಿ ಸೇರಿ ತೃತೀಯ ಭಾಷಾ ವಿಷಯಗಳಿಗೂ ಅಂಕಗಳನ್ನೇ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಸೇರಿ ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.&lt;/p&gt;&lt;p&gt;ಈ ಬಾರಿ ಪರೀಕ್ಷೆ ಬರೆದಿದ್ದ ಒಟ್ಟು 8,56,516 ವಿದ್ಯಾರ್ಥಿಗಳ ಪೈಕಿ 7,60,002 ಮಂದಿ ಉತ್ತೀರ್ಣರಾಗಿದ್ದು, ಶೇ.88.73ರಷ್ಟು ಫಲಿತಾಂಶ ದಾಖಲಾಗಿದೆ. ಈ ಪೈಕಿ ಶಾಲಾ ಅಥವಾ ತರಗತಿ ವಿದ್ಯಾರ್ಥಿಗಳಲ್ಲಿ ಶೇ.94.1ರಷ್ಟು ಮಂದಿ ಪಾಸಾಗಿದ್ದಾರೆ. ಕೋವಿಡ್&zwnj; ವರ್ಷದಲ್ಲಿ ಸಾಮೂಹಿಕ ತೇರ್ಗಡೆಯಿಂದ ಶೇ.99.99 ರಷ್ಟು ಫಲಿತಾಂಶ ಬಂದಿದ್ದು ಬಿಟ್ಟರೆ 2021-22ನೇ ಸಾಲಿನಲ್ಲಿ ಒಟ್ಟಾರೆ ಫಲಿತಾಂಶ ಶೇ.85.63 ಮತ್ತು ಹೊಸಬರ ಫಲಿತಾಂಶ ಶೇ.89.36 ರಷ್ಟು ಬಂದಿದ್ದೇ ಈವರೆಗಿನ ದಾಖಲೆಯಾಗಿತ್ತು. ಆ ದಾಖಲೆ ಈ ಬಾರಿ ಮುರಿದಿದೆ.&lt;/p&gt;&lt;h2&gt;ಗ್ರೇಸ್&zwnj; ಅಂಕವಿಲ್ಲದೆ ಉತ್ತಮ ಫಲಿತಾಂಶ:&lt;/h2&gt;&lt;p&gt;ಮತ್ತೊಂದು ವಿಶೇಷವೆಂದರೆ ಪರೀಕ್ಷಾ ಅಕ್ರಮ ತಡೆಗೆ ವೆಬ್&zwnj;ಕಾಸ್ಟಿಂಗ್&zwnj; ಜಾರಿಗೊಳಿಸಿದ ಬಳಿಕ ಎರಡು ವರ್ಷ ಕುಸಿತ ಕಂಡಿದ್ದ ಫಲಿತಾಂಶ ಮೂರನೇ ವರ್ಷ ದಾಖಲೆ ಮಟ್ಟದಲ್ಲಿ ಹೆಚ್ಚಾಗಿರುವುದು. ಅಲ್ಲದೆ, ಕಳೆದೆರಡು ವರ್ಷ ಕ್ರಮವಾಗಿ ಶೇ.20 ಮತ್ತು ಶೇ.10ರಷ್ಟು ಗ್ರೇಸ್&zwnj; ಅಂಕ ನೀಡಲಾಗಿತ್ತು. ಈ ಬಾರಿ ಯಾವುದೇ ಗ್ರೇಸ್&zwnj; ಅಂಕ ನೀಡದೆಯೇ ದಾಖಲೆ ಫಲಿತಾಂಶ ಬಂದಿದೆ. ಕಳೆದ ವರ್ಷ ಪರೀಕ್ಷೆ 1ರ ಶೇ.62.34 ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ.26.34 ರಷ್ಟು ಫಲಿತಾಂಶ ಹೆಚ್ಚಾಗಿದೆ.&lt;/p&gt;&lt;p&gt;ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗುರುವಾರ ಮಲ್ಲೇಶ್ವರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದರು.&lt;/p&gt;&lt;h3&gt;ಗಂಡುಮಕ್ಕಳ ಫಲಿತಾಂಶ ಸುಧಾರಣೆ:&lt;/h3&gt;&lt;p&gt;ಈ ಬಾರಿಯ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ಲಿಂಗವಾರು, ನಗರ, ಗ್ರಾಮೀಣ, ಕಾಲೇಜುವಾರು ಹೀಗೆ ವಿಭಜಿತ ಮಾದರಿಯಲ್ಲಿ ನೀಡಲಾಗಿದೆ. ಆ ಪ್ರಕಾರ, ಎಂದಿನಂತೆ ಹೆಣ್ಣು ಮಕ್ಕಳೇ ಮೇಲುಗೈ. ಆದರೆ, ಗಂಡು ಮಕ್ಕಳ ಫಲಿತಾಂಶದಲ್ಲಿ ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಭಾರೀ ಏರಿಕೆ ಕಂಡುಬಂದಿದೆ. ಪರೀಕ್ಷೆ ಬರೆದಿದ್ದ ಒಟ್ಟು 3.92 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳಲ್ಲಿ 3.77 ಲಕ್ಷಕ್ಕೂ ಹೆಚ್ಚು (ಶೇ.96.18) ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಅದೇ ರೀತಿ ಪರೀಕ್ಷೆಗೆ ಹಾಜರಾಗಿದ್ದ 3.77 ಲಕ್ಷ ಗಂಡು ಮಕ್ಕಳಲ್ಲಿ 3.46 ಲಕ್ಷಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿ ಶೇ.91.94ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ ಶೇ.94.80 ರಷ್ಟು, ಗ್ರಾಮೀಣ ಭಾಗದ ಶೇ.93.2 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲಾವಾರು ದಕ್ಷಿಣ ಕನ್ನಡ ಜಿಲ್ಲೆ ಶೇ.98.4ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಶೇ.85.06 ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಆದರೆ, ಕಳೆದ ಬಾರಿಗಿಂತ ಫಲಿತಾಂಶ ಶೇ.18 ರಷ್ಟು ಸುಧಾರಿಸಿದೆ.&lt;/p&gt;&lt;p&gt;ಸರ್ಕಾರಿ ಶಾಲೆಗಳ ಫಲಿತಾಂಶ ಭಾರೀ ಏರಿಕೆ:&lt;/p&gt;&lt;p&gt;ಈ ಬಾರಿ ಸರ್ಕಾರಿ ಪ್ರೌಢಶಾಲೆಗಳ ಫಲಿತಾಂಶದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ಶೇ.77ರಷ್ಟಿದ್ದ ಸರ್ಕಾರಿ ಶಾಲೆಗಳ ಮಕ್ಕಳ ಉತ್ತೀರ್ಣ ಪ್ರಮಾಣ ಈ ಬಾರಿ ಶೇ.93.97ಕ್ಕೆ ಏರಿದೆ. ಶೇ.75.04ರಷ್ಟಿದ್ದ ಅನುದಾನಿತ ಶಾಲೆಗಳ ಫಲಿತಾಂಶ ಕೂಡ ಶೇ.92.44 ರಷ್ಟಾಗಿದೆ. ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಎಂದಿನಂತೆ ಹೆಚ್ಚಿನ ಫಲಿತಾಂಶ ಬಂದಿದ್ದು, ಶೇ.95.4 ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಫಲಿತಾಂಶ ಶೇ.87.31ರಷ್ಟಿತ್ತು.&lt;/p&gt;&lt;p&gt;&lt;strong&gt;2,393 ಸರ್ಕಾರಿ ಶಾಲೆಗಳಲ್ಲಿ ಶೇ.100 ಫಲಿತಾಂಶ:&lt;/strong&gt;&lt;/p&gt;&lt;p&gt;ಈ ಬಾರಿ ಒಟ್ಟು 6,176 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದರೆ, 27 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಈ ಪೈಕಿ 2,393 ಸರ್ಕಾರಿ ಶಾಲೆಗಳಲ್ಲಿ ಎಲ್ಲರೂ ಪಾಸಾಗುವ ಮೂಲಕ ಶೇ.100ರಷ್ಟು ಫಲಿತಾಂಶ ದಾಖಲಾಗಿದೆ. ಅದೇ ರೀತಿ ಸತತ ಎರಡನೇ ವರ್ಷವೂ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಕಂಡು ಬಂದಿಲ್ಲ. ಉಳಿದಂತೆ 2959 ಅನುದಾನ ರಹಿತ ಮತ್ತು 824 ಅನುದಾನಿತ ಶಾಲೆಗಳಲ್ಲೂ ಶೇ.100ರಷ್ಟು ಫಲಿತಾಂಶ ಬಂದಿದೆ. ಆದರೆ, 5 ಅನುದಾನಿತ ಮತ್ತು 22 ಅನುದಾನರಹಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ ಎಂದು ಸಚಿವ ಮಧು ಬಂಗಾರಪ್ಪ ವಿವರಿಸಿದರು.&lt;/p&gt;&lt;p&gt;ಮಾಧ್ಯಮವಾರು ಕನ್ನಡ ಮಾಧ್ಯಮದಲ್ಲಿ ಓದಿದವರಲ್ಲಿ ಶೇ.92.6, ಆಂಗ್ಲ ಮಾಧ್ಯಮದವರು ಶೇ.96.16 ರಷ್ಟು ಮಂದಿ ಉತ್ತಿರ್ಣರಾಗಿದ್ದಾರೆ. ಉರ್ದು, ಮರಾಠಿ, ತೆಲುಗು, ತಮಿಳು, ಹಿಂದಿ ಮಾಧ್ಯಮಗಳಲ್ಲಿ ಕನಿಷ್ಠ ಶೇ.88.89ರಿಂದ ಗರಿಷ್ಠ ಶೇ.96.77 ರವರೆಗೆ ಫಲಿತಾಂಶ ಬಂದಿದೆ.&lt;/p&gt;&lt;p&gt;&lt;strong&gt;ದ.ಕ. ಪ್ರಥಮ, ಕಲಬುರಗಿ ಲಾಸ್ಟ್&zwnj;:&lt;/strong&gt;&lt;/p&gt;&lt;p&gt;ಜಿಲ್ಲಾವಾರು ಫಲಿತಾಂಶದಲ್ಲಿ(ಹೊಸಬರು) ದಕ್ಷಿಣ ಕನ್ನಡ ಶೇ.98.4ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಉಳಿಸಿಕೊಂಡಿದೆ. ಉಡುಪಿ ಶೇ.98.18ರಷ್ಟು ಫಲಿತಾಂಶ ಪಡೆದು ಎರಡನೇ ಮತ್ತು ಶೇ.98.09 ಫಲಿತಾಂಶದೊಂದಿಗೆ ಉತ್ತರ ಕನ್ನಡ 2ನೇ ಮೂರನೇ ಸ್ಥಾನ ಪಡೆದಿದೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಉಳಿಸಿಕೊಂಡಿದ್ದರೂ ಫಲಿತಾಂಶದಲ್ಲಿ ಭಾರೀ ಪ್ರಮಾಣದ ಸುಧಾರಣೆಯಾಗಿದೆ. ಕಳೆದ ಬಾರಿ ಮೂರೂ ಪರೀಕ್ಷೆಗಳಿಂದ ಶೇ.56ರಷ್ಟಿದ್ದ ಈ ಜಿಲ್ಲೆಯ ಫಲಿತಾಂಶ ಈ ಬಾರಿ ಪರೀಕ್ಷೆ 1ರಲ್ಲೇ ಶೇ.85.06ರಷ್ಟಾಗಿದೆ. ಉಳಿದೆಲ್ಲ ಶೈಕ್ಷಣಿಕ ಜಿಲ್ಲೆಗಳ ಫಲಿತಾಂಶ ಶೇ.90ಕ್ಕಿಂತ ಹೆಚ್ಚು ದಾಖಲಾಗಿದೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-sslc-results-2026-state-records-historic-94-1-percents-students-pass-percentage-rav/articleshow-fqo2a1l"/>
        </item>
        <item>
            <title><![CDATA[ಪಿಯುಸಿಯಲ್ಲೂ ಪ್ರಾಚಿ ಟಾಪರ್‌: ಮುಖದ ಮೇಲಿನ ಕೂದಲಿನ ಕಾರಣಕ್ಕೆ ಟ್ರೋಲ್ ಮಾಡಿದವರಿಗೆ ಅಂಕಗಳ ಉತ್ತರ]]></title>
            <link>https://kannada.asianetnews.com/education/prachi-nigam-again-topper-top-score-answer-to-her-troller/articleshow-kv5r59r</link>
            <guid isPermaLink="true">https://kannada.asianetnews.com/education/prachi-nigam-again-topper-top-score-answer-to-her-troller/articleshow-kv5r59r</guid>
            <pubDate>Mon, 27 Apr 2026 14:12:44 +0530</pubDate>
            <description><![CDATA[&lt;p&gt;10ನೇ ತರಗತಿಯಲ್ಲಿ ಟಾಪರ್ ಆಗಿದ್ದಕ್ಕೆ ತನ್ನ ಮುಖದ ಮೇಲಿನ ಕೂದಲಿನ ಕಾರಣಕ್ಕೆ ಟ್ರೋಲ್ ಆಗಿದ್ದ ಪ್ರಾಚಿ ನಿಗಮ್, ಇದೀಗ ಪಿಯುಸಿಯಲ್ಲೂ 91.2% ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಟ್ರೋಲ್&zwnj;ಗಳನ್ನು ಕಡೆಗಣಿಸಿ, ಅಧ್ಯಯನದತ್ತ ಗಮನಹರಿಸಿದ ಅವರ ಯಶೋಗಾಥೆ ಅನೇಕರಿಗೆ ಸ್ಫೂರ್ತಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq6z6mptmhmsgghfayspr7t3,imgname-prachi-nigam-1777276768985.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಟ್ರೋಲ್&zwnj;ಗಳಿಗೆ ತಲೆಕೆಡಿಸಿಕೊಳ್ಳದೇ ಶೈಕ್ಷಣಿಕ ಶಿಖರವೇರಿದ ಸೀತಾಪುರದ ಸುಪುತ್ರಿ.&lt;/strong&gt;&lt;/h2&gt;&lt;p&gt;ಉತ್ತರ ಪ್ರದೇಶದ ವಿದ್ಯಾರ್ಥಿನಿ ಪ್ರಾಚಿ ನಿಗಮ್ ಯಾರಿಗೆ ಗೊತ್ತಿಲ್ಲ ಹೇಳಿ. 10ನೇ ತರಗತಿಯಲ್ಲಿ ಅತ್ಯುತ್ತಮವಾಗಿ ಸ್ಕೋರ್&zwnj; ಮಾಡಿ ಸಾಧನೆ ಮಾಡಿದವರು ಪ್ರಾಚಿ ನಿಗಮ್. ಆದರೆ ಕೆಲವು ಕಿಡಿಗೇಡಿಗಳು ಆಕೆಯನ್ನು ಗುರುತಿಸಿದ್ದು ಆಕೆಯ ಸಾಧನೆಯ ಬದಲಾಗಿ ಆಕೆಯ ಮುಖದ ಮೇಲಿದ್ದ ಅತೀಯಾದ ಕೂದಲಿನ ಕಾರಣಕ್ಕೆ. ಆದರೆ ತಮ್ಮ ಉತ್ತಮ ಅಂಕಕ್ಕೆ ಶ್ಲಾಘಿಸದೇ ತಮ್ಮನ್ನು ಟ್ರೋಲ್ ಮಾಡಿದ ನೆಟ್ಟಿಗರಿಗೆ ಆಕೆ ಅಂಕಗಳಿಂದಲೇ ತಿರುಗೇಟು ನೀಡಿದ್ದರು. ಹೌದು ಎರಡು ವರ್ಷಗಳ ಹಿಂದೆ 10ನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಟಾಪರ್ ಆಗಿರುವ ಪ್ರಾಚಿ ಈಗ ಉತ್ತರ ಪ್ರದೇಶ ಪಿಯು ಬೋರ್ಡ್ ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ಪಾಸಾಗುವ ಮೂಲಕ ಟ್ರೋಲಿಗರಿಗೆ ಉತ್ತರ ನೀಡಿದ್ದಾರೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಾಚಿ ನಿಗಮ್ ಅವರು 91.2 ಶೇಕಡಾ ಅಂಕ ಗಳಿಸಿದ್ದಾರೆ.&lt;/p&gt;&lt;p&gt;ಉತ್ತರ ಪ್ರದೇಶದ ಸೀತಾಪುರ ಮೂಲದವರಾದ ಪ್ರಾಚೀ ನಿಗಮ್ ಅವರು ತಮ್ಮ ನೋಟದ ಬಗ್ಗೆ ಸೋಶಿಯಲ್ ಮೀಡಿಯಾದ ಟ್ರೋಲ್&zwnj;ಗಳನ್ನೆಲ್ಲಾ ಕಡೆಗಣಿಸಿ ತಮ್ಮ ಗುರಿಯನ್ನು ಅಧ್ಯಯನದತ್ತ ಕೇಂದ್ರಿಕರಿಸಿದ್ದು, ಮತ್ತೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಗಣಿತದಲ್ಲಿ 99 ಅಂಕ, ಹಿಂದಿಯಲ್ಲಿ 96 ಹಾಗೂ ರಸಾಯನಶಾಸ್ತ್ರದಲ್ಲಿ 95 ಹಾಗೂ ಭೌತಶಾಸ್ತ್ರದಲ್ಲಿ 93 ಅಂಕ ಗಳಿಸಿದ್ದು, ಮುಂದೆ ಎಂಜಿನಿಯರ್ ಪ್ರವೇಶ ಪರೀಕ್ಷೆಗೆ ಸಿದ್ಧರಾಗಿದ್ದಾರೆ.&lt;/p&gt;&lt;p&gt;ಇದಕ್ಕೂ ಮೊದಲು ಅವರು 10ನೇ ತರಗತಿ ಪರೀಕ್ಷೆಯಲ್ಲಿ ಅವರು 600 ಅಂಕಗಳಲ್ಲಿ 591 ಅಂಕ ಗಳಿಸಿದ್ದಾರೆ. ಆದರೆ ಎಸ್&zwnj;ಎಸ್ಎಲ್&zwnj;ಸಿ ಫಲಿತಾಂಶದ ವೇಳೆ ಅವರು ಅನಗತ್ಯ ಕಾರಣಕ್ಕೆ ಟ್ರೋಲ್ ಆಗಿದ್ದರು. ಆದರೆ ಆಕೆ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಓದಿನತ್ತ ಗಮನಹರಿಸಿದ ಪರಿಣಾಮ ಆಕೆ ಈಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕ ಗಳಿಸುವ ಮೂಲಕ ಟಾಪರ್&zwnj; ಆಗಿ ಹೊರ ಹೊಮ್ಮಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪಾಕಿಸ್ತಾನದಲ್ಲಿ ಅಪರಿಚಿತ ಗನ್&zwnj;ಮ್ಯಾನ್&zwnj;ಗಳಿಂದ ಮುಂದುವರಿದ ಉಗ್ರರ ಬೇಟೆ: ಹಫೀಜ್ ಸಯೀದ್ ಆಪ್ತ ಸಹಚರ ಅಫ್ರಿದಿ ಗುಂಡಿಗೆ ಬಲಿ&lt;/strong&gt;&lt;/p&gt;&lt;p&gt;ಮುಂದೆ ಇಂಜಿನಿಯರಿಂಗ್&zwnj;ನಲ್ಲಿ ಕೆರಿಯರ್ ಮುಂದುವರೆಸಲು ಬಯಸಿರುವ ಅವರು ಐಐಟಿ ಜೆಇಇಯತ್ತ ಗಮನ ಕೇಂದ್ರಿಕರಿಸಿದ್ದಾರೆ. ಅವರ ಈ ಪ್ರಯಾಣವು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆ, ನಿರಂತರತೆ ಹಾಗೂ ಸ್ಪೂರ್ತಿಯ ಸಂಕೇತವಾಗಿದೆ. ಶೈಕ್ಷಣಿಕ ಅರ್ಹತೆ ಆತ್ಮವಿಶ್ವಾಸದ ಮುಂದೆ ಈ ಡಿಜಿಟಲ್ ಟ್ರೋಲಿಂಗ್ ಏನು ಅಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಅನಗತ್ಯ ಕಾರಣಕ್ಕೆ ಟ್ರೋಲ್ ಆಗಿದ್ದಕ್ಕೆ ಪ್ರಾಚಿ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಉತ್ತರ ಪ್ರದೇಶ ಪರೀಕ್ಷಾ ಬೋರ್ಡ್&zwnj; ಫಲಿತಾಂಶ ಹೊರ ಬಂದಾಗ ನನ್ನ ಫೋಟೋ ವೈರಲ್ ಆಯ್ತು, ಅನೇಕರು ನನಗೆ ಟ್ರೋಲ್ ಮಾಡಿದರು. ಆದರೆ ಅದೇ ಸಮಯದಲ್ಲಿ ಅನೇಕರು ನನಗೆ ಬೆಂಬಲಿಸಿದರು ಅವರಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದು ಪ್ರಾಚಿ ಹೇಳಿದ್ದಾರೆ. ಜೊತೆಗೆ ದೇವರು ನನ್ನನ್ನು ಯಾವ ರೀತಿ ಸೃಷ್ಟಿಸಿದ್ದಾರೋ ಅದರ ಬಗ್ಗೆ ನನಗೆ ಬೇಸರವಿಲ್ಲ. ನನಗೆ ಅದರಲ್ಲಿ ತೃಪ್ತಿ ಇದೆ. ಚಾಣಕ್ಯನನ್ನೂ ಸಹ ಟ್ರೋಲ್ ಮಾಡಲಾಗಿತ್ತು ಆದರೆ ಅವನು ಅದನ್ನು ಲೆಕ್ಕಿಸಲಿಲ್ಲ, ನನ್ನಲ್ಲೇನೋ ವ್ಯತ್ಯಾಸವಿದೆ ಎಂದು ನೀವು ಭಾವಿಸಿದರೂ ಅದು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಪ್ರಾಚೀ ದಿಟ್ಟತನದ ಉತ್ತರ ನೀಡುವ ಮೂಲಕ ಎಲ್ಲರ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು.&lt;/p&gt;&lt;p&gt;ಅದೇನೆ ಇರಲಿ ಪ್ರಂಪಂಚದಲ್ಲಿ ವ್ಯಕ್ತಿತ್ವಕ್ಕಿಂತ ಬಾಹ್ಯ ಸೌಂದರ್ಯಕ್ಕೆ ಮರಳಾಗುವವರೆ ಹೆಚ್ಚು. ಆದರೆ ಕೊನೆಗೆ ಉಳಿಯುವುದು ನಾವು ಮಾಡಿದ ಸಾಧನೆಗಳು ಹಾಗೂ ವ್ಯಕ್ತಿತ್ವವೇ ಹೊರತು ಸೌಂದರ್ಯವಲ್ಲ ಎಂಬುದು ಅನೇಕರ ಅನುಭವಕ್ಕೆ ಬಂದಿರಬಹುದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಮುಖಕ್ಕೆ ಕೇಕ್ ಹಚ್ಚಿದ್ದಕ್ಕೆ ಬಿತ್ತು ಮೂರು ಹೆಣ:ಮೂವರು ಸ್ನೇಹಿತರ ಮೇಲೆ ಗುಂಡಿನ ಮಳೆಗರೆದ ಬರ್ತ್&zwnj;ಡೇ ಬಾಯ್!&lt;/p&gt;]]></content:encoded>
            <category>education</category>
            <dc:creator>Anusha Kb</dc:creator>
            <atom:link href="https://kannada.asianetnews.com/education/prachi-nigam-again-topper-top-score-answer-to-her-troller/articleshow-kv5r59r"/>
        </item>
        <item>
            <title><![CDATA[SSLCಯಲ್ಲಿ ಟೈಲರ್ ಮಗಳು ಇಂದು ರಾಜ್ಯಕ್ಕೆ ಟಾಪರ್: ಕಾಫಿನಾಡಿನ ಬೃಂದಾ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕಿ ಕೀರ್ತಿ!]]></title>
            <link>https://kannada.asianetnews.com/education/sslc-topper-brinda-625-marks-chikkamagaluru-st-marys-school-gvd/articleshow-pdnu8vv</link>
            <guid isPermaLink="true">https://kannada.asianetnews.com/education/sslc-topper-brinda-625-marks-chikkamagaluru-st-marys-school-gvd/articleshow-pdnu8vv</guid>
            <pubDate>Thu, 23 Apr 2026 18:29:26 +0530</pubDate>
            <description><![CDATA[&lt;p&gt;ಎಸ್ಎಸ್ಎಲ್&zwnj;ಸಿ ಫಲಿತಾಂಶದಲ್ಲಿ ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿ ಕಾಫಿನಾಡಿಗೆ ಕೀರ್ತಿ ತಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpx6rncre90f7vqqy30vxtph,imgname-nvvmv-1776949155224.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಏ.23):&lt;/strong&gt; ರಾಜ್ಯದ ಎಸ್ಎಸ್ಎಲ್&zwnj;ಸಿ ಫಲಿತಾಂಶದಲ್ಲಿ ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿ ಕಾಫಿನಾಡಿಗೆ ಕೀರ್ತಿ ತಂದಿದ್ದಾರೆ. ಬೃಂದಾ ಅವರ ಈ ಐತಿಹಾಸಿಕ ಸಾಧನೆಯ ಹಿಂದೆ ತಂದೆಯ ಕಠಿಣ ದುಡಿಮೆ ಮತ್ತು ತಾಯಿಯ ನಿರಂತರ ಪ್ರಾರ್ಥನೆಯ ಬೆಂಬಲವಿದೆ.&lt;/p&gt;&lt;p&gt;&lt;strong&gt;ಹೆತ್ತವರ ಕನಸು ನನಸು: &lt;/strong&gt;ಟೈಲರಿಂಗ್ ವೃತ್ತಿ ಮಾಡುತ್ತಿರುವ ಬೃಂದಾ ಅವರ ತಂದೆ ಮಂಜುನಾಥ್ ಮಗಳ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ್ದು, ಇಂದು ಮಗಳ ಸಾಧನೆಯಿಂದ ಅವರ ಪರಿಶ್ರಮಕ್ಕೆ ಸಾರ್ಥಕತೆ ಸಿಕ್ಕಂತಾಗಿದೆ. ಒಬ್ಬಳೆ ಮಗಳನ್ನು ಕಷ್ಟಪಟ್ಟು ಖಾಸಗಿ ಶಾಲೆಯಾದ ಸೆಂಟ್ ಮೇರಿಸ್ ನಲ್ಲಿ ಓದಿಸುತ್ತಿದ್ದರು.&lt;/p&gt;&lt;p&gt;ತಾಯಿ ಹರ್ಷಿಣಿ ಅವರು ಮಾತನಾಡುತ್ತಾ, ಮಗಳು ಎಲ್ಕೆಜಿಯಿಂದಲೂ ಓದಿನಲ್ಲಿ ಮುಂದಿದ್ದರೂ ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೇ ಪ್ರಥಮ ಬರಬೇಕೆಂಬುದು ಮಗಳು ಮತ್ತು ಶಾಲೆಯ ದೊಡ್ಡ ಕನಸಾಗಿತ್ತು, ಅದು ಇಂದು ನನಸಾಗಿದೆ ಎಂದು ಭಾವುಕರಾಗಿ ನುಡಿದರು. ಯಾವುದೇ ಪಠ್ಯವನ್ನು ಬಾಯಿಪಾಠ ಮಾಡದೆ, ವಿಷಯವನ್ನು ಅರ್ಥೈಸಿಕೊಂಡು ಓದುತ್ತಿದ್ದ ಬೃಂದಾ ಅವರ ಯಶಸ್ಸಿನಲ್ಲಿ ಶಾಲೆಯ ಶಿಕ್ಷಕರು ಹಾಗೂ ಗುರುಗಳಾದ ಮೀರಾ ಮತ್ತು ನಾಗೇಂದ್ರ ಅವರ ಮಾರ್ಗದರ್ಶನ ಬಹುಮುಖ್ಯವಾಗಿದೆ ಎಂದು ಅವರು ಸ್ಮರಿಸಿದರು.&lt;/p&gt;&lt;h2&gt;&lt;strong&gt;ಇಂಜಿನಿಯರ್ ಆಗುವ ಗುರಿ&lt;/strong&gt;&lt;/h2&gt;&lt;p&gt;ಬೃಂದಾ ಅವರು ತಮ್ಮ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ಪೋಷಕರು, ಶಿಕ್ಷಕರು ಮತ್ತು ಶಾಲಾ ಮ್ಯಾನೇಜ್ಮೆಂಟ್ ನೀಡಿದ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ ಎಂದು ಸಂತಸ ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ನೀಡುತ್ತಿದ್ದ ವಿಶೇಷ ತರಬೇತಿ ಹಾಗೂ ಎಕ್ಸ್ಟ್ರಾ ಮೆಟೀರಿಯಲ್ಸ್&zwnj;ಗಳು ಕಲಿಕೆಗೆ ಸಹಕಾರಿಯಾಗಿದ್ದವು ಎಂದು ತಿಳಿಸಿದರು.&lt;/p&gt;&lt;p&gt;ಅಲ್ಲದೇ ಮುಂದೆ ಇಂಜಿನಿಯರ್ ಆಗುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ಶಾಲೆಯ ಮುಖ್ಯಸ್ಥರಾದ ಜೆರಾಲ್ಡ್ ಲೋಬೋ ಅವರು ಇಡೀ ತಂಡದ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಿದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಬೃಂದಾ ಅವರ ತಾಯಿ, ಸೋಲಿಗೆ ಅಂಜದೆ ತಮಗೆ ತಾವೇ ಚಾಲೆಂಜ್ ಹಾಕಿಕೊಂಡು ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Govindaraj S</dc:creator>
            <atom:link href="https://kannada.asianetnews.com/education/sslc-topper-brinda-625-marks-chikkamagaluru-st-marys-school-gvd/articleshow-pdnu8vv"/>
        </item>
        <item>
            <title><![CDATA[ತೃತೀಯ ಭಾಷೆಗೆ ಗ್ರೇಡ್, ರಾಜ್ಯ ಸರ್ಕಾರ ತರಾತುರಿ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಲು ಕಾರಣವೇನು?]]></title>
            <link>https://kannada.asianetnews.com/state/hindi-imposition-row-why-high-court-stayed-karnataka-govt-grading-policy-3rd-language/articleshow-pe8736p</link>
            <guid isPermaLink="true">https://kannada.asianetnews.com/state/hindi-imposition-row-why-high-court-stayed-karnataka-govt-grading-policy-3rd-language/articleshow-pe8736p</guid>
            <pubDate>Thu, 23 Apr 2026 19:59:41 +0530</pubDate>
            <description><![CDATA[&lt;p&gt;ತೃತೀಯ ಭಾಷೆಗೆ ಗ್ರೇಡ್, ರಾಜ್ಯ ಸರ್ಕಾರ ತರಾತುರಿಗೆ ಹೈಕೋರ್ಟ್ ಬ್ರೇಕ್ ಹಾಕಲು ಕಾರಣವೇನು?, ಪೋಷಕರು, ಶೈಕ್ಷಣಿಕ ತಜ್ಞರು ಹೇಳುತ್ತಿರುವುದೇನು? ಹಿಂದಿ ಭಾಷೆಗೆ ಗ್ರೇಡ್ ಸಿಸ್ಟಮ್ ಸಾಧಕ ಬಾಧಕಗಳೇನು?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpca3w440bgpyyt6vq3ksgj3,imgname-----------------------2026-04-17t050003.796-1776382242948.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.23) &lt;/strong&gt;ರಾಜ್ಯದಲ್ಲಿ ಹಿಂದಿ ಭಾಷೆಗೆ ಪರೀಕ್ಷೆಯಲ್ಲಿ ಅಂಕದ ಬದಲು ಗ್ರೇಡ್ ನೀಡುವ ಮೂಲಕ ಹೊಸ ಪದ್ಧತಿ ಜಾರಿಗೊಳಿಸಲು ಪ್ರಯತ್ನಿಸಿದ ಕಾಂಗ್ರೆಸ್ ಸರ್ಕಾರದ ಪ್ರಯತ್ನಕ್ಕೆ ಹೈಕೋರ್ಟ್ ತಡೆ ನೀಡಿದೆ. ಭಾರಿ ಚರ್ಚೆ, ವಿವಾದಕ್ಕೂ ಕಾರಣವಾಗಿದ್ದ ಈ ನಿರ್ಧಾರವನ್ನು ಹೈಕೋರ್ಟ್ ಮಾನ್ಯ ಮಾಡಲಿಲ್ಲ. ಇಷ್ಟೇ ಅಲ್ಲ, ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟಡ್ ಗರಂ ಆಗಿತ್ತು. ಪರೀಕ್ಷಾ ಅಧಿಸೂಚನೆ ಹೊರಡಿಸುವಾಗಲೇ ಗ್ರೇಡ್ ಪದ್ಧತಿ ಕುರಿತು ಪ್ರಕಟಿಸಬೇಕಿತ್ತು, ಪರೀಕ್ಷೆ ಮುಗಿದ ಬಳಿಕ ಈ ನಿರ್ಧಾರ ಯಾಕೆ ಎಂದು ಹೈಕೋರ್ಟ್, ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಜೊತೆಗೆ ಅಂಕ ಪದ್ಥತಿಯನ್ನೇ ಮುಂದುವರಿಸುವಂತೆ ಸೂಚಿಸಿದೆ.&lt;/p&gt;&lt;h2&gt;ಏನಿದು ಗ್ರೇಡ್ ಸಿಸ್ಟಮ್?&lt;/h2&gt;&lt;p&gt;ರಾಜ್ಯ ಸರ್ಕಾರ ಹಿಂದಿ ಸೇರಿದಂತೆ ತೃತೀಷ ಭಾಷೆಗಳಿಗೆ 100 ಅಂಕಗಳನ್ನು ನೀಡುವ ಬದಲು ಎ, ಬಿ,ಸಿ, ಡಿ ಗ್ರೇಡ್ ನೀಡುವ ಪದ್ಧತಿಗೆ ಮುಂದಾಗಿತ್ತು. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದರು. ಈ ಗ್ರೇಡ್ ಅಂತಿಮ ಎಸ್&zwnj;ಎಸ್&zwnj;ಎಲ್&zwnj;ಸಿ ಶೇಕಡಾವಾರು ಅಂಕಗಳಲ್ಲಿ ಪರಿಗಣಿಸಲಾಗುವುದಿಲ್ಲ ಎಂದಿತ್ತು. 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿರುವ ನಡುವೆ ಸರ್ಕಾರದಿಂದ ಈ ಪ್ರಕಟಣೆ ಹೊರಬಿದ್ದಿತ್ತು. ಇದು ವಿದ್ಯಾರ್ಥಿಗಳಲ್ಲಿ ತೀವ್ರ ಗೊಂದಲ ಸೃಷ್ಟಿಸಿದ್ದು ಮಾತ್ರವಲ್ಲ, ಪೋಷಕರಲ್ಲಿ ಆತಂಕ ಹೆಚ್ಚಿಸಿತ್ತು. ದಿಢೀರ್ ಪರೀಕ್ಷಾ ಪದ್ಧತಿಯಲ್ಲಿನ ಬದಲಾವಣೆ ಶಿಕ್ಷಣ ತಜ್ಞರನ್ನು ಆಕ್ರೋಶಗೊಳಿಸಿತ್ತು.&lt;/p&gt;&lt;p&gt;ಸರ್ಕಾರದ ಈ ಮಹತ್ವದ ಬದಲಾವಣೆಯಲ್ಲಿ , ಒಟ್ಟು ಎಸ್&zwnj;ಎಸ್&zwnj;ಎಲ್&zwnj;ಸಿ ಅಂಕಗಳು 625 ರಿಂದ 525 ಕ್ಕೆ ಇಳಿಕೆ ಮಾಡಲಾಗುತ್ತದೆ. ಅಂದರೆ ಅಂತಿಮ ಅಂಕಗಳ ಲೆಕ್ಕಾಚಾರದಿಂದ ತೃತೀಯ ಭಾಷೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿತ್ತು.&lt;/p&gt;&lt;h2&gt;ಹೊಸ ಗ್ರೇಡ್ ಪದ್ಧತಿ ಕುರಿತು ಸರ್ಕಾರ ಹೇಳಿದ್ದೇನು?&lt;/h2&gt;&lt;p&gt;ಕಳೆದ ಶೈಕ್ಷಣಿಕ ವರ್ಷದಲ್ಲಿ 1.65 ಲಕ್ಷ ವಿದ್ಯಾರ್ಥಿಗಳು ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ತೃತೀಯ ಭಾಷೆಗಳಿಂದ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ಹಾಗೂ ದ್ವಿಭಾಷಾ ಪದ್ಧತಿಯತ್ತ ಸಾಗಲು ಇದು ಮಹತ್ವದ ಹೆಜ್ಜೆಯಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಗಳ ಮೇಲೆ &quot;ಹಿಂದಿ ಹೇರಿಕೆ&quot; ಆಗುತ್ತಿದೆ ಎಂದು ದೀರ್ಘಕಾಲದಿಂದ ದೂರುತ್ತಿದ್ದ ಕನ್ನಡ ಪರ ಸಂಘಟನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ ಎಂದಿತ್ತು.&lt;/p&gt;&lt;p&gt;ಏಪ್ರಿಲ್ 10, 2026 ರಂದು, ಅಂದರೆ ಪರೀಕ್ಷೆಗಳು ಮುಗಿದ 8 ದಿನಗಳ ನಂತರ ಸರ್ಕಾರವು ಈ ಗ್ರೇಡಿಂಗ್ ನೀತಿಗಾಗಿ ಕರಡು ಲಿಖಿತ ಆದೇಶವನ್ನು ಹೊರಡಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ರಮವು &quot;ಹಿಂದಿ ವಿರೋಧಿ ಅಲ್ಲ&quot;, ಬದಲಿಗೆ ಭವಿಷ್ಯದಲ್ಲಿ ಕೇವಲ ಎರಡು ಭಾಷೆಗಳನ್ನು ಮಾತ್ರ ಎಸ್&zwnj;ಎಸ್&zwnj;ಎಲ್&zwnj;ಸಿ ಅಂಕಗಳಿಗೆ ಪರಿಗಣಿಸುವ ದೊಡ್ಡ ಯೋಜನೆಯ ಭಾಗವಾಗಿದೆ ಎಂದಿದ್ದರು. ರಾಜ್ಯದ ಮಕ್ಕಳ ಭವಿಷ್ಯದ ದೃಷ್ಟಿ ಹಾಗೂ ರಾಜ್ಯದಲ್ಲಿ ಕರ್ನಾಟಕ ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದಿದ್ದರು.ಹಿಂದಿಯನ್ನು ಈಗಲೂ ಬೋಧಿಸಲಾಗುತ್ತದೆ, ಜೊತೆಗೆ ಪರೀಕ್ಷಿಸಲಾಗುತ್ತದೆ. ಆದರೆ ಅಂಕಗಳ ಬದಲಿಗೆ ಕೇವಲ ಗ್ರೇಡ್ ನೀಡಲಾಗುತ್ತದೆ ಎಂದಿದ್ದರು.&lt;/p&gt;&lt;p&gt;ರಾಜ್ಯ ಸರ್ಕಾರದ ಈ ಗ್ರೇಡಿಂಗ್ ನಿರ್ಧಾರಕ್ಕೆ ವಿದ್ಯಾರ್ಥಿಗಳು,ಪೋಷಕರು ಮಾತ್ರವಲ್ಲ ರಾಜ್ಯದ ವಿಪಕ್ಷಗಳು ಅಕ್ಷೇಪ ವ್ಯಕ್ತಪಡಿಸಿತ್ತು. ತರಾತುರಿಯಲ್ಲಿ ತೆಗೆದುಕೊಂಡು ಈ ನಿರ್ಧಾರ ಹಾಗೂ ಮಕ್ಕಳ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿತ್ತು.&lt;/p&gt;&lt;h2&gt;ಬಿಜೆಪಿ ತಿರುಗೇಟು&lt;/h2&gt;&lt;p&gt;ವಿದ್ಯಾರ್ಥಿಗಳು ಎಲ್ಲಾ ತಯಾರಿಯೊಂದಿಗೆ ಪರೀಕ್ಷೆ ಬರೆಯುತ್ತಿರುವ ನಡುವೆ ಈ ಅಧಿಸೂಚನೆ ಗೊಂದಲಕ್ಕೆ ಎಡೆ ಮಾಡಿದೆ. ಇದು ವಿದ್ಯಾರ್ಥಿ ವಿರೋಧಿ ನಿರ್ಧಾರ ಎಂದು ಬಿಜೆಪಿ ಕರೆದಿದೆ. ಇದೇ ವೇಳೆ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು. ಪರೀಕ್ಷೆಯ ಮಧ್ಯೆ ನಿಯಮಗಳನ್ನು ಬದಲಾಯಿಸುವುದು ಪೋಷಕರಿಗೆ ರಾಜ್ಯ ಮಂಡಳಿಯ ಮೇಲಿರುವ ನಂಬಿಕೆಯನ್ನು ಕುಗ್ಗಿಸುತ್ತದೆ. ಇದರಿಂದ ಇದರಿಂದ ಸ್ಟೇಟ್ ಸಿಲೆಬಸ್ ಮೇಲಿನ ನಂಬಿಕೆ ಇಲ್ಲವಾಗಲಿದೆ. ಇದು ಅಪಾಯಕ್ಕೆ ಸೂಚನೆ ನೀಡಲಿದೆ. ಕಾರಣ ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಬಿಎಸ್&zwnj;ಇ ಅಥವಾ ಐಸಿಎಸ್&zwnj;ಇ ಕಡೆಗೆ ಹೋಗುವಂತೆ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.&lt;/p&gt;&lt;h2&gt;ಜೆಡಿಎಸ್ ಪ್ರತಿಕ್ರಿಯೆ&lt;/h2&gt;&lt;p&gt;ವಿದ್ಯಾರ್ಥಿಗಳ ಭವಿಷ್ಯದ ಕುರಿತು ತೆಗೆದುಕೊಳ್ಳುವ ಮಹತ್ವದ ನಿರ್ಧಾರದ ವಿಚಾರದಲ್ಲಿ ಸಂಪುಟವನ್ನು ಯಾಕೆ ಸಂಪರ್ಕಿಸಲಿಲ್ಲ. ತಜ್ಞರನ್ನು ಸಮಿತಿ ಈ ವಿಚಾರಗಳ ಚರ್ಚೆ ಯಾಕೆ ನಡೆದಿಲ್ಲ. ಈ ಕುರಿತು ಶಾಲೆಗಳಿಗೆ ಮುನ್ಸೂಚನೆ ಯಾಕೆ ನೀಡಲಿಲ್ಲ ಎಂದು ಪ್ರಶ್ನಿಸಿತ್ತು. ಇದು ಗಡಿಬಿಡಿಯ ನಿರ್ಧಾರ. ಶೈಕ್ಷಣಿಕವಾಗಿ ತಪ್ಪು ಎಂದು ಜೆಡಿಎಸ್ ಕರೆದಿದೆ. ಇದು ನಿಜವಾದ ಶೈಕ್ಷಣಿಕ ಸುಧಾರಣೆಗಿಂತ ವೋಟ್ ಬ್ಯಾಂಕ್ ರಾಜಕೀಯದಿಂದ ಪ್ರೇರಿತವಾಗಿದೆ ಎಂದು ಹೇಳಿದೆ.&lt;/p&gt;&lt;h2&gt;ಪೋಷಕರು ಹಾಗೂ ಶಾಲೆಗಳ ಪ್ರತಿಕ್ರಿಯೆ ಏನು&lt;/h2&gt;&lt;p&gt;ರಾಜ್ಯ ಸರ್ಕಾರದ ದಿಢೀರ್ ನಿರ್ಧಾರ ಪೋಷಕರು, ಶಾಲಾ ಆಡಳಿತ ಮಂಡಳಿಗಳನ್ನು ರೊಚ್ಚಿಗೆಬ್ಬಿಸಿತ್ತು. ಕಾರಣ ಖಾಸಗಿ ಶಾಲೆಗಳು ಈ ಕೊನೆಯ ಕ್ಷಣದ ಬದಲಾವಣೆಯಿಂದ ಕೋಪಗೊಂಡಿತ್ತು. ಇದು ಅವರ ಯೋಜನೆ, ಆಂತರಿಕ ಪರೀಕ್ಷೆಗಳು ಮತ್ತು ಪೋಷಕರೊಂದಿಗಿನ ಸಂವಹನವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಆಕ್ರೋಶ ಹೊರಹಾಕಿತ್ತು. ವಿದ್ಯಾರ್ಥಿಗಳ ಅಂಕ ಪದ್ಧತಿಗೆ ಅನುಗುಣವಾಗಿ ಅಭ್ಯಾಸ ಮಾಡಿರುತ್ತಾರೆ. ದಿಢೀರ್ ಗ್ರೇಡ್ ಪದ್ಧತಿ ಅವರ ಮಾರ್ಕ್ಸ್ ಕಾರ್ಡ್ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿತ್ತು. ಹಿಂದಿಯನ್ನು ಕಲಿಯುವಲ್ಲಿ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳಬಹುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಥವಾ ಬೇರೆ ಮಂಡಳಿಗಳಿಗೆ ಬದಲಾದಾಗ ತೊಂದರೆ ಅನುಭವಿಸಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಹಿಂದಿಯಲ್ಲಿ ತಾವು ಪಟ್ಟ ಶ್ರಮವು ಇನ್ನು ಮುಂದೆ ಒಟ್ಟು ಶೇಕಡಾವಾರು ಅಂಕಗಳಿಗೆ ಸಹಾಯ ಮಾಡುವುದಿಲ್ಲ ಎಂಬ ವಿಷಯದಿಂದ ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ - ಈ ಹಠಾತ್ ನಿಯಮ ಬದಲಾವಣೆಯು ಒತ್ತಡ ಮತ್ತು ಗೊಂದಲವನ್ನು ಉಂಟುಮಾಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು.&lt;/p&gt;&lt;p&gt;ಹಿಂದಿ ಶಿಕ್ಷಕರು ಸರ್ಕಾರದ ಈ ನಿರ್ಧಾರ ಕುರಿತು ಆತಂಕ ಹೊರಹಾಕಿದ್ದರು. ಒಮ್ಮೆ ಹಿಂದಿಗೆ ಅಂಕಗಳು ಇಲ್ಲವಾದರೆ, ಶಾಲೆಗಳು ಹಿಂದಿ ಬೋಧನಾ ಅವಧಿಯನ್ನು ಕಡಿತಗೊಳಿಸುತ್ತವೆ. ಬಳಿಕ ನಿಧಾನವಾಗಿ ಹಿಂದಿ ಶಿಕ್ಷಕರನ್ನು ನೇಮಿಸಿಕೊಳ್ಳುವುದನ್ನೇ ನಿಲ್ಲಿಸುತ್ತವೆ . ಇದು ವಿಷಯವನ್ನು ಕಾಗದದ ಮೇಲಷ್ಟೇ ಉಳಿಸಿ ಪ್ರಾಯೋಗಿಕವಾಗಿ ಅರ್ಥಹೀನವಾಗಿಸುತ್ತದೆ ಎಂದಿದ್ದಾರೆ.&lt;/p&gt;&lt;p&gt;ಕನ್ನಡ ಪರ ಸಂಘಟನೆಗಳು ಈ ಬದಲಾವಣೆಯನ್ನು ಬೆಂಬಲಿಸಿವೆ, ಇದನ್ನು ಕನ್ನಡವನ್ನು ರಕ್ಷಿಸುವ ಮತ್ತು ಹಿಂದಿಯನ್ನು ಕಡ್ಡಾಯ ವಿಷಯವಾಗಿ ಹೇರುವುದನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಎಂದು ನೋಡುತ್ತಿವೆ ಎಂದಿತ್ತು. ಆದರೆ ಕೇವಲ ಕನ್ನಡ ಹಾಗೂ ಹಿಂದಿ ಹೇರಿಕೆ ವಿಚಾರ ಮಾತ್ರ ಇಲ್ಲಿ ಉಳಿದಿಲ್ಲ. ಇದು ವಿದ್ಯಾರ್ಥಿಗಳ ಕಲಿಕೆ ಹಾಗೂ ಭವಿಷ್ಯದ ಪ್ರಶ್ನೆಯಾಗಿದೆ.&lt;/p&gt;&lt;p&gt;ಗ್ರೇಡಿಂಗ್ ಬದಲಾವಣೆಯು ಶೈಕ್ಷಣಿಕವಾಗಿ ಹಿಂದಿಯ ಪ್ರಾಮುಖ್ಯತೆಯನ್ನು ದುರ್ಬಲಗೊಳಿಸಿರುವ ನಿರ್ಧಾರ ಹಾಗೂ ತಡವಾಗಿ ನಿಯಮ ಬದಲಾಯಿಸಿ ಪರೀಕ್ಷೆಗಳಿಗೆ ಅಡ್ಡಿಪಡಿಸಿದ್ದಕ್ಕಾಗಿ ಸರ್ಕಾರ ಟೀಕೆಗೆ ಗುರಿಯಾಗಿದೆ. ಅನೇಕರು ಇದನ್ನು ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಮಾಡಿದ ರಾಜಕೀಯ ತಂತ್ರ ಎಂದು ಕರೆದಿದ್ದಾರೆ.&lt;/p&gt;&lt;h2&gt;ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛಾಟಿ&lt;/h2&gt;&lt;p&gt;ಹೈಕೋರ್ಟ್ ತೆಗೆದುಕೊಂಡ ಈ ನಿರ್ಧಾರ ಅಷ್ಟೇ ವೇಗದಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾ.ಇಎಸ್ ಇಂದಿರೇಶ್ ಅವರಿದ್ದ ಪೀಠ ಈ ಅರ್ಜಿ ವಿಚಾರಣೆ ನಡೆಸಿ ಮಹತ್ವದ ಆದೇಶ ನೀಡಿದೆ. ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು.&lt;/p&gt;&lt;p&gt;ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಗ್ರೇಡಿಂಗ್ ಪದ್ಧತಿ ಬಳಸುವ ಯೋಜನೆಯನ್ನು ಮುಂದುವರಿಸದಂತೆ ತನ್ನ ಆದೇಶದಲ್ಲಿ ಹೇಳಿದೆ. ಎಸ್&zwnj;ಎಸ್&zwnj;ಎಲ್&zwnj;ಸಿ (10ನೇ ತರಗತಿ) ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳನ್ನು ನೀಡುವಂತೆ ತಿಳಿಸಿದೆ. ಇದರಿಂದ ವಿದ್ಯಾರ್ಥಿಗಳನ್ನು ಸರಿಯಾಗಿ ಪರೀಕ್ಷಿಸಬಹುದು ಎಂದಿದೆ.&lt;/p&gt;&lt;p&gt;ಅಂಕಗಳ ಬದಲಿಗೆ ಗ್ರೇಡ್&zwnj;ಗಳನ್ನು ನೀಡಿದಾಗ, ವಿದ್ಯಾರ್ಥಿಗಳು ಆ ಭಾಷೆಯನ್ನು ಸರಿಯಾಗಿ ಓದಲು ಅಥವಾ ಬರೆಯಲು ಸಾಧ್ಯವಾಗದಿದ್ದರೂ ಸಹ 10ನೇ ತರಗತಿಯಲ್ಲಿ ಉತ್ತೀರ್ಣರಾಗಬಹುದು. ಇದು ರಾಜ್ಯದ ಒಟ್ಟಾರೆ ಶಿಕ್ಷಣದ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ.ಈ ನಿಯಮ ಬದಲಾವಣೆಯು ಕನ್ನಡವನ್ನು ರಕ್ಷಿಸುವ ಸುಳ್ಳು ಭರವಸೆಯಾಗಿತ್ತು. ವಾಸ್ತವದಲ್ಲಿ, ಇದು ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಬದಲು ಅವರಿಗೆ ಹಾನಿ ಮಾಡಿದೆ ಎಂದಿದೆ.&lt;/p&gt;&lt;p&gt;ಸಂಖ್ಯಾತ್ಮಕ ಅಂಕಗಳನ್ನು ತೆಗೆದುಹಾಕುವ ಮೂಲಕ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಸಿಬಿಎಸ್&zwnj;ಇ (CBSE) ಮತ್ತು ಐಸಿಎಸ್&zwnj;ಇ (ICSE) ಶಾಲಾ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಅಗತ್ಯವಿದ್ದ ಪ್ರೋತ್ಸಾಹವನ್ನು ಕಸಿದುಕೊಳ್ಳಲು ಸರ್ಕಾರ ಯೋಜಿಸಿತ್ತು.&lt;/p&gt;&lt;p&gt;2024ರ ಅಂಕಿ ಅಂಶದ ಪ್ರಕಾರ, ನಿಜವಾದ ಸಮಸ್ಯೆ ಕಳಪೆ ಬೋಧನೆಯಲ್ಲಿದೆ. 1.32 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡವನ್ನು ಮೊದಲ ಭಾಷೆಯಾಗಿ ಆರಿಸಿಕೊಂಡಾಗ ಅದರಲ್ಲಿ ಅನುತ್ತೀರ್ಣರಾಗಿದ್ದಾರೆ, ಆದರೆ ತೃತೀಯ ಭಾಷೆಯಾಗಿ ಆರಿಸಿಕೊಂಡಾಗ ಕೇವಲ 1,992 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ. ಸಂಸ್ಕೃತ, ಹಿಂದಿ ಅಥವಾ ಇಂಗ್ಲಿಷ್ ಅನ್ನು ಮೊದಲ ಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳು ಆ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ - ಆದರೆ ಇನ್ನೂ ಕನ್ನಡದಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ ಎಂಬುದು ಇದರಿಂದ ತಿಳಿದುಬರುತ್ತದೆ. ಸಮಸ್ಯೆ ಇರುವುದು ಕನ್ನಡವನ್ನು ಬೋಧಿಸುತ್ತಿರುವ ವಿಧಾನದಲ್ಲೇ ಹೊರತು, ಅದು ಯಾವ ಭಾಷಾ ಸ್ಥಾನದಲ್ಲಿದೆ ಎಂಬುದರಲ್ಲಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.&lt;/p&gt;&lt;h2&gt;ಹೈಕೋರ್ಟ್ ಆದೇಶದಲ್ಲಿನ ವಿಸ್ತೃತ ವಿವರ&lt;/h2&gt;&lt;p&gt;ನ್ಯಾಯಮೂರ್ತಿ ಐ.ಎಸ್. ಇಂದಿರೇಶ್ ಅವರ ಪೀಠವು ಈ ಶೈಕ್ಷಣಿಕ ವರ್ಷಕ್ಕೆ ಹಿಂದಿ ಸೇರಿದಂತೆ ತೃತೀಯ ಭಾಷೆಯ ವಿಷಯಗಳಿಗೆ ಗ್ರೇಡ್&zwnj;ಗಳ ಬದಲಿಗೆ ಅಂಕಗಳನ್ನೇ ನೀಡಲು ಸರ್ಕಾರಕ್ಕೆ ಆದೇಶಿಸಿದೆ. ವರ್ಷದ ಮಧ್ಯದಲ್ಲಿ ನಿಯಮಗಳನ್ನು ಬದಲಾಯಿಸುವುದು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತೆ. ಇದು ಮೆರಿಟ್ ಲಿಸ್ಟ್ ಮತ್ತು ಕಾಲೇಜು ಪ್ರವೇಶದ ಮೇಲೆ ಪರಿಣಾಮ ಬೀರುತ್ತದೆ. ಅಂಕಗಳು ಪಾರದರ್ಶಕ ಮತ್ತು ನ್ಯಾಯಯುತವಾಗಿವೆ ಎಂದಿತು.&lt;/p&gt;&lt;p&gt;ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ಪರೀಕ್ಷೆಗಳು ನಡೆದವು, ಆದರೆ ಅಧಿಕೃತ ಲಿಖಿತ ಆದೇಶವು ಪರೀಕ್ಷೆಗಳು ಮುಗಿದ ನಂತರ ಅಂದರೆ ಏಪ್ರಿಲ್ 10 ರಂದು ಬಂದಿದೆ ಎಂದು ನ್ಯಾಯಾಲಯವು ಎತ್ತಿ ತೋರಿಸಿದೆ. ಘಟನೆಯ ನಂತರ ನಿಯಮಗಳನ್ನು ಬದಲಾಯಿಸುವುದು ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬರನ್ನು ಉತ್ತೀರ್ಣರನ್ನಾಗಿ ಮಾಡುವುದು ಮಾತ್ರವೇ ವಿದ್ಯಾರ್ಥಿಗಳ ಮೌಲ್ಯಮಾಪನ ವಿಧಾನವನ್ನು ಬದಲಾಯಿಸಲು ಸರಿಯಾದ ಕಾರಣವಲ್ಲ ಎಂದು ನ್ಯಾಯಾಲಯ ಹೇಳಿದೆ.&lt;/p&gt;&lt;p&gt;ಸರ್ಕಾರವು ಈ ಬಗ್ಗೆ ಮರುಪರಿಶೀಲಿಸುವಂತೆ ನ್ಯಾಯಾಲಯವನ್ನು ಕೇಳಿದಾಗ, ನ್ಯಾಯಾಲಯವು ತನ್ನ ನಿರ್ಧಾರಕ್ಕೆ ಬದ್ಧವಾಗಿ ಉಳಿಯಿತು - ಅಕ್ಟೋಬರ್ 28, 2025 ರಂದು ಪರೀಕ್ಷಾ ಸೀಸನ್ ಪ್ರಾರಂಭವಾಗುವ ಮೊದಲು ಇದ್ದ ನಿಯಮಗಳ ಪ್ರಕಾರವೇ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಬೇಕು ಎಂದು ಹೇಳಿದೆ.&lt;/p&gt;&lt;p&gt;2025-26ರ ವಿದ್ಯಾರ್ಥಿಗಳನ್ನು ರಕ್ಷಿಸುತ್ತದೆ: 625 ಅಂಕಗಳ ಪರೀಕ್ಷೆಗೆ ತಯಾರಿ ನಡೆಸಿದ ವಿದ್ಯಾರ್ಥಿಗಳನ್ನು ಅದೇ ರೀತಿಯಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ವರ್ಷದ ಆರಂಭದಲ್ಲಿ ಭರವಸೆ ನೀಡಿದ ನಿಯಮಗಳಿಗೆ ಬದ್ಧವಾಗಿರುವ ಮೂಲಕ ಇದು ನ್ಯಾಯವನ್ನು ಕಾಪಾಡುತ್ತದೆ.&lt;/p&gt;&lt;p&gt;ಶ್ರೇಯಾಂಕಗಳ ನ್ಯಾಯವನ್ನು ಕಾಪಾಡುತ್ತದೆ: ಗ್ರೇಡ್&zwnj;ಗಳ ಬದಲಿಗೆ ಅಂಕಗಳನ್ನು ಬಳಸುವುದರಿಂದ ಅಂತಿಮ ಶೇಕಡಾವಾರು ಮತ್ತು ಕಾಲೇಜು ಪ್ರವೇಶಗಳು ಹಿಂದಿನ ವರ್ಷಗಳಂತೆಯೇ ಸ್ಥಿರವಾಗಿರುವುದನ್ನು ಖಚಿತಪಡಿಸುತ್ತದೆ.&lt;/p&gt;&lt;p&gt;ನಿಯಮಗಳನ್ನು ಪಾಲಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತದೆ: ವರ್ಷದ ಅರ್ಧದಲ್ಲಿ ಅಥವಾ ಪರೀಕ್ಷೆಗಳು ಮುಗಿದ ನಂತರ ಸರ್ಕಾರವು ಪರೀಕ್ಷಾ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ನಿರ್ಧಾರವು ತೋರಿಸುತ್ತದೆ.&lt;/p&gt;&lt;p&gt;ಉತ್ತಮವಾಗಿ ಸಾಧಿಸುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ: ತಮ್ಮ ಒಟ್ಟು ಅಂಕಗಳನ್ನು ಹೆಚ್ಚಿಸಿಕೊಳ್ಳಲು ಹಿಂದಿಯಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಈ ಕೊನೆಯ ಕ್ಷಣದ ಬದಲಾವಣೆಯಿಂದ ನಷ್ಟ ಅನುವಿಸುತ್ತಾರೆ.&lt;/p&gt;&lt;p&gt;ರಾಜ್ಯ ಮಂಡಳಿಯ ವಿಶ್ವಾಸಾರ್ಹತೆಯನ್ನು ಕಾಪಾಡುತ್ತದೆ: ಪೋಷಕರು ಈಗಾಗಲೇ ಸಿಬಿಎಸ್&zwnj;ಇ ಅಥವಾ ಐಸಿಎಸ್&zwnj;ಇಗೆ ಬದಲಾಗುವ ಬಗ್ಗೆ ಯೋಚಿಸುತ್ತಿರುವಾಗ, ಇದು ರಾಜ್ಯ ಮಂಡಳಿಯ ಮೇಲಿನ ನಂಬಿಕೆ ಕುಸಿಯುವುದನ್ನು ತಡೆಯುತ್ತದೆ.&lt;/p&gt;&lt;p&gt;ಭವಿಷ್ಯದ ಬಗ್ಗೆ ಇನ್ನೂ ಗೊಂದಲವಿದೆ: ಸರ್ಕಾರವು ಇನ್ನೂ ದ್ವಿಭಾಷಾ ಪದ್ಧತಿಗೆ ಬದಲಾಗಲು ಬಯಸುತ್ತಿರುವುದರಿಂದ, ಮುಂದಿನ ವರ್ಷದ ನಿಯಮಗಳು ಏನಾಗಿರುತ್ತವೆ ಎಂಬ ಬಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಇನ್ನೂ ಖಚಿತತೆಯಿಲ್ಲ.&lt;/p&gt;&lt;h2&gt;ವೈಫಲ್ಯ ಮುಚ್ಚಿಹಾಕುವ ಪ್ರಯತ್ನ&lt;/h2&gt;&lt;p&gt;ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು &quot;ಹಿಂದಿಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ&quot; ಎಂಬ ರಾಜಕೀಯ ವಾದವನ್ನು ಬಳಸಿಕೊಂಡಿದೆ. 2025ರಲ್ಲಿ ಕರ್ನಾಟಕದ ಉತ್ತೀರ್ಣ ದರವು ಕೇವಲ 62.34% ಇತ್ತು - ಇದು ಕಳೆದ ಇಪ್ಪತ್ತು ವರ್ಷಗಳಲ್ಲಿ ಎರಡನೇ ಅತ್ಯಂತ ಕೆಟ್ಟ ಫಲಿತಾಂಶವಾಗಿದೆ.&lt;/p&gt;&lt;p&gt;ತೃತೀಯ ಭಾಷೆಯ (ಸಾಮಾನ್ಯವಾಗಿ ಹಿಂದಿ) ಪ್ರಾಮುಖ್ಯತೆಯನ್ನು ಕಡಿಮೆ ಮಾಡುವುದರಿಂದ ಕರ್ನಾಟಕದ ವಿದ್ಯಾರ್ಥಿಗಳು ಕೆಲಸಕ್ಕಾಗಿ ಇತರ ರಾಜ್ಯಗಳಿಗೆ ತೆರಳಲು, ಭಾರತೀಯ ಸೇನೆಯನ್ನು ಸೇರಲು ಅಥವಾ ನೀಟ್ (NEET) ಮತ್ತು ಜೆಇಇ (JEE) ನಂತಹ ರಾಷ್ಟ್ರೀಯ ಪರೀಕ್ಷೆಗಳಲ್ಲಿ ಸ್ಪರ್ಧಿಸಲು ಕಷ್ಟವಾಗುತ್ತದೆ. ಇದು ಪೋಷಕರು ತಮ್ಮ ಮಕ್ಕಳನ್ನು ಕರ್ನಾಟಕ ರಾಜ್ಯ ಮಂಡಳಿಯಿಂದ ಸಿಬಿಎಸ್&zwnj;ಇ ಅಥವಾ ಐಸಿಎಸ್&zwnj;ಇಯಂತಹ ಕೇಂದ್ರ ಮಂಡಳಿಗಳಿಗೆ ಸ್ಥಳಾಂತರಿಸಲು ಪ್ರೇರೇಪಿಸುತ್ತದೆ ಮತ್ತು ಕನ್ನಡ ಶಾಲೆಗಳ ಬೇಡಿಕೆಯನ್ನು ತಗ್ಗಿಸುತ್ತದೆ.&lt;/p&gt;&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಗಳ ಅವಧಿಯಲ್ಲಿ (2013-2018 ಮತ್ತು 2023 ರಿಂದ ಇಲ್ಲಿಯವರೆಗೆ), ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ - 2016 ರಲ್ಲಿ 2,959 ಸರ್ಕಾರಿ ಶಾಲೆಗಳು , 2025 ರಲ್ಲಿ 25,000 ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಯೋಜನೆ , ಮತ್ತು 2026 ರಲ್ಲಿ 600 ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಯೋಜನೆಗಳಿವೆ. ಅದೇ ಸಮಯದಲ್ಲಿ, ಉರ್ದು ಸಂಸ್ಥೆಗಳಿಗಾಗಿಯೇ ವಿಶೇಷವಾಗಿ 400 ಕೋಟಿ ರೂಪಾಯಿ ನೀಡಲಾಯಿತು. ಅಂಗನವಾಡಿ ಶಿಕ್ಷಕರಿಗೆ ಉರ್ದು ಭಾಷಾ ಸಾಮರ್ಥ್ಯವನ್ನು ಕಡ್ಡಾಯಗೊಳಿಸಲಾಯಿತು ಮತ್ತು ರಂಜಾನ್&zwnj;ಗೆ ಅನುಕೂಲವಾಗುವಂತೆ ಪರೀಕ್ಷಾ ವೇಳಾಪಟ್ಟಿಗಳನ್ನು ಬದಲಾಯಿಸಲಾಯಿತು.&lt;/p&gt;&lt;p&gt;ಹೊಸ ನಿಯಮದ ಅಡಿಯಲ್ಲಿ, 4,000ಕ್ಕೂ ಹೆಚ್ಚು ಉರ್ದು ಮಾಧ್ಯಮದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ತೃತೀಯ ಭಾಷೆಯಾದ ಕನ್ನಡವನ್ನು ಸುಲಭವಾಗಿ ಬಿಡಬಹುದಾಗಿತ್ತು. ಇದರರ್ಥ ಮುಸ್ಲಿಂ ವಿದ್ಯಾರ್ಥಿಗಳ ತಲೆಮಾರುಗಳು ಕನ್ನಡವನ್ನು ಕಲಿಯದೆಯೇ ಬೆಳೆಯುತ್ತಿದ್ದವು. ಆದರೆ ಸರ್ಕಾರವು ಇತರ ಸಂದರ್ಭಗಳಲ್ಲಿ ಇದೇ ರಾಜ್ಯ ಭಾಷೆಯನ್ನು ರಕ್ಷಿಸುವುದಾಗಿ ಹೇಳಿಕೊಳ್ಳುತ್ತದೆ. ಇದು &quot;ಕನ್ನಡ ಫಸ್ಟ್&quot; ಕಲ್ಪನೆಗೆ ಮತ್ತು ಸಮುದಾಯಗಳ ನಡುವಿನ ಏಕತೆಗೆ ನೇರವಾಗಿ ಧಕ್ಕೆ ತರುತ್ತದೆ.&lt;/p&gt;&lt;p&gt;ಈ ಗೊಂದಲ ಮತ್ತು ಪರೀಕ್ಷಾ ಅವಧಿಯ ಮಧ್ಯದಲ್ಲಿ ಹಠಾತ್ ನಿಯಮ ಬದಲಾವಣೆಯು 8 ಲಕ್ಷ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡಿದೆ. ಈ ನೀತಿಯು ಒಂದು ಸಮುದಾಯವು ಕಠಿಣ ಭಾಷಾ ಅವಶ್ಯಕತೆಗಳಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುವಂತೆ ವಿನ್ಯಾಸಗೊಳಿಸಿದಂತಿದೆ. ಅದೇ ಸಮಯದಲ್ಲಿ ಎಸ್&zwnj;ಎಸ್&zwnj;ಎಲ್&zwnj;ಸಿ ಉತ್ತೀರ್ಣರಾಗಲು ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಮಾನದಂಡಗಳನ್ನು ಕಡಿಮೆ ಮಾಡುವ ಮೂಲಕ ಎಸ್&zwnj;ಸಿ (ಪರಿಶಿಷ್ಟ ಜಾತಿ) ಮತ್ತು ಒಬಿಸಿ (ಇತರ ಹಿಂದುಳಿದ ವರ್ಗಗಳು) ಸಮುದಾಯಗಳ ಅರ್ಹ ವಿದ್ಯಾರ್ಥಿಗಳಿಗೆ ಪರಿಸ್ಥಿತಿಯನ್ನು ಕಠಿಣಗೊಳಿಸುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/hindi-imposition-row-why-high-court-stayed-karnataka-govt-grading-policy-3rd-language/articleshow-pe8736p"/>
        </item>
        <item>
            <title><![CDATA[ಅಂಧ ವಿದ್ಯಾರ್ಥಿನಿ ಬಾಳಲ್ಲಿ ಆಟವಾಡಿದ SSLC ಬೋರ್ಡ್ ಎಡವಟ್ಟುರಾಯರು; 84% ಪರ್ಸೆಂಟೇಜ್ ಅಂಕ ಗಳಿಸಿದರೂ ಫೇಲ್!]]></title>
            <link>https://kannada.asianetnews.com/gallery/karnataka-districts/karnataka-sslc-result-error-blind-student-lieza-khanam-failed-despite-scoring-84-percent-sat-qzwr205</link>
            <guid isPermaLink="true">https://kannada.asianetnews.com/gallery/karnataka-districts/karnataka-sslc-result-error-blind-student-lieza-khanam-failed-despite-scoring-84-percent-sat-qzwr205</guid>
            <pubDate>Thu, 23 Apr 2026 18:10:01 +0530</pubDate>
            <description><![CDATA[ಶಿರಸಿಯ ಅಂಧ ವಿದ್ಯಾರ್ಥಿನಿ ಲೀಜಾ ಖಾನಮ್, ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ 526 ಅಂಕಗಳನ್ನು ಗಳಿಸಿ ಶೇ. 84.16 ಫಲಿತಾಂಶ ಪಡೆದಿದ್ದಾಳೆ. ಆದರೆ, ಪರೀಕ್ಷಾ ಪ್ರಾಧಿಕಾರವು ಸಮಾಜ ವಿಜ್ಞಾನ ವಿಷಯಕ್ಕೆ ಗೈರುಹಾಜರಿ ಎಂದು ತಪ್ಪಾಗಿ ನಮೂದಿಸಿದ್ದರಿಂದ, ಆಕೆಯನ್ನು 'ಫೇಲ್' ಎಂದು ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpx4w1fws66knm7zccj68r63,imgname-uttara-kannada-sslc-blind-student-fail-1776947168764.jpg" type="image/jpeg" height="390" width="690"/>
            <content:encoded><![CDATA[ಶಿರಸಿಯ ಅಂಧ ವಿದ್ಯಾರ್ಥಿನಿ ಲೀಜಾ ಖಾನಮ್, ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ 526 ಅಂಕಗಳನ್ನು ಗಳಿಸಿ ಶೇ. 84.16 ಫಲಿತಾಂಶ ಪಡೆದಿದ್ದಾಳೆ. ಆದರೆ, ಪರೀಕ್ಷಾ ಪ್ರಾಧಿಕಾರವು ಸಮಾಜ ವಿಜ್ಞಾನ ವಿಷಯಕ್ಕೆ ಗೈರುಹಾಜರಿ ಎಂದು ತಪ್ಪಾಗಿ ನಮೂದಿಸಿದ್ದರಿಂದ, ಆಕೆಯನ್ನು 'ಫೇಲ್' ಎಂದು ಘೋಷಿಸಲಾಗಿದೆ.&lt;img&gt;&lt;p&gt;&lt;strong&gt;ಉತ್ತರ ಕನ್ನಡ (ಏ.23): ಎ&lt;/strong&gt;ಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಮತ್ತು ಪರೀಕ್ಷಾ ಪ್ರಾಧಿಕಾರದ ಅಚಾತುರ್ಯವೊಂದು ಬೆಳಕಿಗೆ ಬಂದಿದೆ. ಹಗಲಿರುಳು ಶ್ರಮಪಟ್ಟು ಅಭ್ಯಾಸ ಮಾಡಿ, ಅತ್ಯುತ್ತಮ ಅಂಕ ಗಳಿಸಿದರೂ ಸಹ, ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯದಿಂದಾಗಿ ಅಂಧ ವಿದ್ಯಾರ್ಥಿನಿಯೊಬ್ಬಳನ್ನು 'ಫೇಲ್' ಎಂದು ಘೋಷಿಸಿರುವುದು ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಂದಿರಾ ನಗರದ ಯುನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಜಾ ಖಾನಮ್ ಈ ಅನ್ಯಾಯಕ್ಕೆ ಒಳಗಾದ ಪ್ರತಿಭೆ. ಲೀಜಾ ಹುಟ್ಟಿನಿಂದಲೇ ಅಂಧತ್ವ ಹೊಂದಿದ್ದರೂ, ತನ್ನ ದೈಹಿಕ ಮಿತಿಯನ್ನು ಮೀರಿ ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂಬ ಛಲ ಹೊಂದಿದ್ದವಳು. ಇತ್ತೀಚೆಗೆ ನಡೆದ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಲೀಜಾ ಅತ್ಯಂತ ಅದ್ಭುತವಾಗಿ ಪ್ರದರ್ಶನ ನೀಡಿದ್ದಾಳೆ. ಆದರೆ ಫಲಿತಾಂಶ ಬಂದಾಗ ಆಕೆಗೆ ಹಾಗೂ ಆಕೆಯ ಪೋಷಕರಿಗೆ ಆಘಾತ ಕಾದಿತ್ತು.&lt;/p&gt;&lt;img&gt;&lt;p&gt;ಲೀಜಾ ಖಾನಮ್ ಪಡೆದ ಅಂಕಗಳು ಯಾವುದೇ ಸಾಮಾನ್ಯ ವಿದ್ಯಾರ್ಥಿಗೂ ಮಾದರಿಯಾಗುವಂತಿವೆ:&lt;/p&gt;&lt;ul&gt; &lt;li&gt;ಉರ್ದು: 124&lt;/li&gt; &lt;li&gt;ಕನ್ನಡ: 100&lt;/li&gt; &lt;li&gt;ಇಂಗ್ಲಿಷ್: 92&lt;/li&gt; &lt;li&gt;ಎಕನಾಮಿಕ್ಸ್: 98&lt;/li&gt; &lt;li&gt;ಪೊಲಿಟಿಕಲ್ ಸೈನ್ಸ್: 92&lt;/li&gt;&lt;/ul&gt;&lt;p&gt;ಒಟ್ಟು 625 ಅಂಕಗಳಿಗೆ ಲೀಜಾ ಬರೋಬ್ಬರಿ 526 ಅಂಕಗಳನ್ನು ಗಳಿಸಿದ್ದಾಳೆ. ಅಂದರೆ ಶೇಕಡಾ 84.16ರಷ್ಟು ಫಲಿತಾಂಶ ಆಕೆಯದ್ದಾಗಿದೆ. ಆದರೆ, ಫಲಿತಾಂಶದ ಪಟ್ಟಿಯಲ್ಲಿ ಆಕೆಯನ್ನು 'FAIL' (NC - Not Completed) ಎಂದು ನಮೂದಿಸಲಾಗಿದೆ.&lt;/p&gt;&lt;img&gt;&lt;p&gt;ಲೀಜಾ ಎಲ್ಲಾ ಪರೀಕ್ಷೆಗಳಿಗೂ ಹಾಜರಾಗಿದ್ದಾಳೆ. ಆದರೆ ಪರೀಕ್ಷಾ ಪ್ರಾಧಿಕಾರವು ಸೋಷಿಯಲ್ ಸೈನ್ಸ್ (ಸಮಾಜ ವಿಜ್ಞಾನ) ವಿಷಯಕ್ಕೆ ವಿದ್ಯಾರ್ಥಿನಿ ಗೈರು ಹಾಜರಾಗಿದ್ದಾಳೆ (NA - Not Available) ಎಂದು ನಮೂದಿಸಿದೆ. ಈ ಒಂದು ಸಣ್ಣ ಎಡವಟ್ಟಿನಿಂದಾಗಿ ಅಷ್ಟೊಂದು ಅಂಕ ಪಡೆದರೂ ಲೀಜಾ ಫಲಿತಾಂಶದಲ್ಲಿ ಫೇಲ್ ಎಂದು ಬಂದಿದೆ.&lt;/p&gt;&lt;p&gt;&lt;strong&gt;ದಾಖಲೆ ಇದ್ದರೂ ನಿರ್ಲಕ್ಷ್ಯ:&lt;/strong&gt;&lt;/p&gt;&lt;p&gt;ತಾನು ಪರೀಕ್ಷೆಗೆ ಹಾಜರಾಗಿರುವ ಬಗ್ಗೆ ಲೀಜಾ ಬಳಿ ಭದ್ರವಾದ ಪುರಾವೆಯಿದೆ. ಪರೀಕ್ಷಾ ಪ್ರವೇಶ ಪತ್ರದ (Hall Ticket) ಮೇಲೆ ಆಯಾ ದಿನದ ಪರೀಕ್ಷಾ ಮೇಲ್ವಿಚಾರಕರು ಸಹಿ ಮಾಡಿದ್ದಾರೆ. ಈ ಪ್ರವೇಶ ಪತ್ರವನ್ನು ಹಿಡಿದು ಲೀಜಾ ಮತ್ತು ಆಕೆಯ ಪೋಷಕರು ಇಂದು ಕಣ್ಣೀರು ಹಾಕುತ್ತಿದ್ದಾರೆ. &lsquo;ನಾನು ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದೇನೆ, ನನ್ನ ಬಳಿ ಸಹಿ ಇರುವ ಹಾಲ್ ಟಿಕೆಟ್ ಕೂಡ ಇದೆ. ಹೀಗಿದ್ದರೂ ನನ್ನನ್ನು ಫೇಲ್ ಮಾಡಿರುವುದು ಮನಸ್ಸಿಗೆ ತುಂಬಾ ನೋವು ತಂದಿದೆ&rsquo; ಎಂದು ಲೀಜಾ ಅಳಲು ತೋಡಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ಒಬ್ಬ ಅಂಧ ವಿದ್ಯಾರ್ಥಿನಿ ಇಷ್ಟೊಂದು ಸಾಧನೆ ಮಾಡಿದಾಗ ಬೆನ್ನು ತಟ್ಟಬೇಕಾದ ಸರ್ಕಾರಿ ವ್ಯವಸ್ಥೆ, ಆಕೆಯ ಭವಿಷ್ಯದ ಜೊತೆ ಆಟವಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಿರಸಿಯ ಯುನಿಯನ್ ಉರ್ದು ಶಾಲೆಯ ಶಿಕ್ಷಕರು ಮತ್ತು ಪೋಷಕರು ಕೂಡಲೇ ಈ ತಪ್ಪು ತಿದ್ದಿ ಲೀಜಾಗೆ ನ್ಯಾಯ ಒದಗಿಸಬೇಕೆಂದು ಪರೀಕ್ಷಾ ಮಂಡಳಿಯನ್ನು ಒತ್ತಾಯಿಸಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ತಾಂತ್ರಿಕ ದೋಷವನ್ನು ಸರಿಪಡಿಸಿ, ಲೀಜಾ ಖಾನಮ್ ಅವರ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಬೇಕಿದೆ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/karnataka-sslc-result-error-blind-student-lieza-khanam-failed-despite-scoring-84-percent-sat-qzwr205"/>
        </item>
        <item>
            <title><![CDATA[ಎಸ್‌ಎಸ್‌ಎಲ್‌ಸಿ ಫಲಿತಾಂಶ:  625 ಕ್ಕೆ 625 ಪಡೆದ ವಿದ್ಯಾರ್ಥಿಗಳಿವರು,  620ಕ್ಕಿಂತ ಹೆಚ್ಚು ಪಡೆದವರೆಷ್ಟು?]]></title>
            <link>https://kannada.asianetnews.com/education/karnataka-sslc-results-2026-confirmed-that-7-students-achieved-a-perfect-score-of-625-gdp/articleshow-sk89gsz</link>
            <guid isPermaLink="true">https://kannada.asianetnews.com/education/karnataka-sslc-results-2026-confirmed-that-7-students-achieved-a-perfect-score-of-625-gdp/articleshow-sk89gsz</guid>
            <pubDate>Thu, 23 Apr 2026 14:18:57 +0530</pubDate>
            <description><![CDATA[ಕರ್ನಾಟಕ ಎಸ್&zwnj;ಎಸ್&zwnj;ಎಲ್&zwnj;ಸಿ 2025-26ರ ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ ಶೇ.94.10 ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದಿದ್ದು, ಒಟ್ಟು 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಲೇಖನವು ಟಾಪರ್&zwnj;ಗಳ ಪಟ್ಟಿ ಮತ್ತು ಅಂಕಗಳ ವಿಶ್ಲೇಷಣೆಯನ್ನು ಒದಗಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpwrbrszawx1rve3rd02a58p,imgname-karnataka-sslc-results-1776934052671.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಎಸ್&zwnj;ಎಸ್&zwnj;ಎಲ್&zwnj;ಸಿ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ದಾಖಲೆಯ ಶೇ.94.10 ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಮತ್ತು ಕಲಬುರಗಿ ಕೊನೆಯ ಸ್ಥಾನ ಪಡೆದಿದೆ. 2024-25ನೇ ಸಾಲಿನೊಂದಿಗೆ ಹೋಲಿಸಿದರೆ, 2025-26ರಲ್ಲಿ ಅತಿ ಹೆಚ್ಚು ಅಂಕಗಳಾದ 625 ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆದಾಗ್ಯೂ, ಒಟ್ಟಾರೆ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿದ್ದು, ರಾಜ್ಯದ ವಿದ್ಯಾರ್ಥಿಗಳ ಸಾಧನೆ ಉನ್ನತ ಮಟ್ಟದಲ್ಲಿಯೇ ಮುಂದುವರಿದಿದೆ.&lt;/p&gt;&lt;h2&gt;2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಕಗಳ ವಿಂಗಡಣೆ ಹೀಗಿದೆ&lt;/h2&gt;&lt;p&gt;625ರಲ್ಲಿ 625 ಅಂಕಗಳನ್ನು 7 ವಿದ್ಯಾರ್ಥಿಗಳು ಪಡೆದಿದ್ದಾರೆ. 624 ಅಂಕಗಳನ್ನು 21 ವಿದ್ಯಾರ್ಥಿಗಳು, 623 ಅಂಕಗಳನ್ನು 28 ವಿದ್ಯಾರ್ಥಿಗಳು, 622 ಅಂಕಗಳನ್ನು 74 ವಿದ್ಯಾರ್ಥಿಗಳು, 621 ಅಂಕಗಳನ್ನು 98 ವಿದ್ಯಾರ್ಥಿಗಳು ಹಾಗೂ 620 ಅಂಕಗಳನ್ನು 150 ವಿದ್ಯಾರ್ಥಿಗಳು ಗಳಿಸಿದ್ದಾರೆ.&lt;/p&gt;&lt;p&gt;ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (Karnataka School Examination and Assessment Board) ನಡೆಸಿದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 7 ವಿದ್ಯಾರ್ಥಿಗಳು 625ರಲ್ಲಿ 625 ಅಂಕಗಳನ್ನು ಪಡೆದು ಶೇಕಡಾ 100 ಫಲಿತಾಂಶ ದಾಖಲಿಸಿದ್ದಾರೆ.&lt;/p&gt;&lt;h2&gt;2025-26ನೇ ಸಾಲು&lt;/h2&gt;&lt;p&gt;625 ಅಂಕಗಳು &ndash; 7 ವಿದ್ಯಾರ್ಥಿಗಳು&lt;/p&gt;&lt;p&gt;624 ಅಂಕಗಳು &ndash; 21 ವಿದ್ಯಾರ್ಥಿಗಳು&lt;/p&gt;&lt;p&gt;623 ಅಂಕಗಳು &ndash; 28 ವಿದ್ಯಾರ್ಥಿಗಳು&lt;/p&gt;&lt;p&gt;622 ಅಂಕಗಳು &ndash; 74 ವಿದ್ಯಾರ್ಥಿಗಳು&lt;/p&gt;&lt;p&gt;621 ಅಂಕಗಳು &ndash; 98 ವಿದ್ಯಾರ್ಥಿಗಳು&lt;/p&gt;&lt;p&gt;620 ಅಂಕಗಳು &ndash; 150 ವಿದ್ಯಾರ್ಥಿಗಳು&lt;/p&gt;&lt;h2&gt;625 ಪಡೆದವರ ಪಟ್ಟಿ&lt;/h2&gt;&lt;p&gt;ಈ ಸಾಧನೆ ಮಾಡಿದ ವಿದ್ಯಾರ್ಥಿಗಳಲ್ಲಿ ಚಿಕ್ಕೋಡಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ, ಉಡುಪಿ ಜಿಲ್ಲೆಯ ಶಂಕರನಾರಾಯಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರೀತಂ ಪೂಜಾರಿ, ದಾವಣಗೆರೆ ಜಿಲ್ಲೆಯ ಶ್ರೀ ವಿದ್ಯಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭರತ್ ಜಿ., ಚಿಕ್ಕಮಗಳೂರು ಜಿಲ್ಲೆಯ ಸೈಂಟ್ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಬೃಂದಾ ಎಂ., ಬೆಂಗಳೂರು ಉತ್ತರ ಜಿಲ್ಲೆಯ ಸದಾಶಿವನಗರದ ಪೂರ್ಣಪ್ರಜ್ಞಾ ಪ್ರೌಢಶಾಲೆಯ ವಿದ್ಯಾರ್ಥಿ ಧನುಷ್ ಸುಧೀರ್, ವಿಜಯಪುರ ಜಿಲ್ಲೆಯ ನಾಗರಬೆತ್ತದ ಆಕ್ಸ್&zwnj;ಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸೌಜನ್ಯಾ ಬಸವರಾಜ್ ಹಾಗೂ ರಾಯಚೂರು ಜಿಲ್ಲೆಯ ಮಾನ್ವಿಯ ಬಿವಿಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸುಖದೇವ ಸೇರಿದ್ದಾರೆ.&lt;/p&gt;&lt;p&gt;ಇದು ವಿದ್ಯಾರ್ಥಿಗಳಲ್ಲಿನ ಸ್ಪರ್ಧಾತ್ಮಕ ಮನೋಭಾವ ಮತ್ತು ಶೈಕ್ಷಣಿಕ ಮಟ್ಟದ ಏರಿಕೆಯನ್ನು ತೋರಿಸುತ್ತದೆ. ಒಟ್ಟಿನಲ್ಲಿ, ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶವು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಪ್ರತಿಬಿಂಬಿಸುತ್ತಿದ್ದು, ಉನ್ನತ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳ ಸಾಧನೆ ಎಲ್ಲರ ಗಮನ ಸೆಳೆಯುತ್ತಿದೆ.&lt;/p&gt;&lt;h2&gt;2024-25ನೇ ಸಾಲಿನಲ್ಲಿ ಅಂಕ ಪಡೆದ ವಿದ್ಯಾರ್ಥಿಗಳು&lt;/h2&gt;&lt;p&gt;625 ಅಂಕಗಳು &ndash; 22 ವಿದ್ಯಾರ್ಥಿಗಳು&lt;/p&gt;&lt;p&gt;624 ಅಂಕಗಳು &ndash; 65 ವಿದ್ಯಾರ್ಥಿಗಳು&lt;/p&gt;&lt;p&gt;623 ಅಂಕಗಳು &ndash; 108 ವಿದ್ಯಾರ್ಥಿಗಳು&lt;/p&gt;&lt;p&gt;622 ಅಂಕಗಳು &ndash; 189 ವಿದ್ಯಾರ್ಥಿಗಳು&lt;/p&gt;&lt;p&gt;621 ಅಂಕಗಳು &ndash; 259 ವಿದ್ಯಾರ್ಥಿಗಳು&lt;/p&gt;&lt;p&gt;620 ಅಂಕಗಳು &ndash; 327 ವಿದ್ಯಾರ್ಥಿಗಳು&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-sslc-results-2026-confirmed-that-7-students-achieved-a-perfect-score-of-625-gdp/articleshow-sk89gsz"/>
        </item>
        <item>
            <title><![CDATA[100 ರೂ.ನೋಟನ್ನು ಹರಿಯದೆ ಅರ್ಧ ಮಾಡೋದು ಹೇಗೆ? UPSC ಇಂಟರ್ವ್ಯೂನಲ್ಲಿ ಕೇಳಿದ ಈ ಟ್ರಿಕಿ ಪ್ರಶ್ನೆಗೆ ಉತ್ತರ ಗೊತ್ತೇ?]]></title>
            <link>https://kannada.asianetnews.com/gallery/life/upsc-interview-brain-teaser-the-logical-way-to-split-a-100-rupee-note-u6e36kx</link>
            <guid isPermaLink="true">https://kannada.asianetnews.com/gallery/life/upsc-interview-brain-teaser-the-logical-way-to-split-a-100-rupee-note-u6e36kx</guid>
            <pubDate>Fri, 24 Apr 2026 16:05:37 +0530</pubDate>
            <description><![CDATA[&lt;p&gt;IAS interview tricky questions in Kannada: ಒಂದು ನೂರು ರೂಪಾಯಿ ನೋಟನ್ನು ಹರಿಯದೆಯೇ ಅಥವಾ ಮಡಚದೆಯೇ ಅರ್ಧ ಮಾಡಲು ಸಾಧ್ಯವೇ? ಕೇಳಲು ವಿಚಿತ್ರ ಎನಿಸಿದರೂ, UPSC ಇಂಟರ್ವ್ಯೂನಲ್ಲಿ ಕೇಳಲಾದ ಈ ಟ್ರಿಕಿ ಪ್ರಶ್ನೆಗೆ ಆ ಒಂದು ಜಾಣ್ಮೆಯ ಉತ್ತರ ಎಲ್ಲರನ್ನೂ ಚಕಿತಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpzgk9vv3ca5eavjp8n32kjy,imgname-thumbnail---2026-04-24t155805.114-1777026574202.jpg" type="image/jpeg" height="390" width="690"/>
            <content:encoded><![CDATA[&lt;p&gt;IAS interview tricky questions in Kannada: ಒಂದು ನೂರು ರೂಪಾಯಿ ನೋಟನ್ನು ಹರಿಯದೆಯೇ ಅಥವಾ ಮಡಚದೆಯೇ ಅರ್ಧ ಮಾಡಲು ಸಾಧ್ಯವೇ? ಕೇಳಲು ವಿಚಿತ್ರ ಎನಿಸಿದರೂ, UPSC ಇಂಟರ್ವ್ಯೂನಲ್ಲಿ ಕೇಳಲಾದ ಈ ಟ್ರಿಕಿ ಪ್ರಶ್ನೆಗೆ ಆ ಒಂದು ಜಾಣ್ಮೆಯ ಉತ್ತರ ಎಲ್ಲರನ್ನೂ ಚಕಿತಗೊಳಿಸಿದೆ.&lt;/p&gt;&lt;img&gt;&lt;p&gt;UPSC ಇಂಟರ್ವ್ಯೂನಲ್ಲಿ ಕೇಳುವ ಪ್ರಶ್ನೆಗಳು ಅಭ್ಯರ್ಥಿಯ ಐಕ್ಯೂ (IQ) ಮತ್ತು ಆಲೋಚನಾ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಅಂತಹ ಅತ್ಯಂತ ಕ್ಲಿಷ್ಟಕರ ಮತ್ತು ಆಸಕ್ತಿದಾಯಕ ಪ್ರಶ್ನೆ ಹಾಗೂ ಅದಕ್ಕೆ ಸಂಬಂಧಿಸಿದ ಉತ್ತರ ಇಲ್ಲಿದೆ. ಅಭ್ಯರ್ಥಿಗಳ ಸಮಯಪ್ರಜ್ಞೆ ಮತ್ತು ತಾರ್ಕಿಕ ಆಲೋಚನಾ ವಿಧಾನವನ್ನು (Logical Thinking) ಪರೀಕ್ಷಿಸಲು ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದರ ಭಾಗವಾಗಿ, &quot;ಒಂದು 100 ರೂಪಾಯಿ ನೋಟನ್ನು ಹರಿಯದೆಯೇ ಅಥವಾ ಮಡಚದೆಯೇ (Without folding or tearing) ಅರ್ಧ ಮಾಡುವುದು ಹೇಗೆ?&quot; ಎಂಬ ಪ್ರಶ್ನೆ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ಸಿವಿಲ್ ಸರ್ವೀಸಸ್ ಇಂಟರ್ವ್ಯೂ ಎಂದರೆ ಅತ್ಯಂತ ಕಠಿಣವಾದ ಪರೀಕ್ಷೆ. ಇಲ್ಲಿ ಕೇವಲ ಅಭ್ಯರ್ಥಿಯ ಜ್ಞಾನವನ್ನಷ್ಟೇ ಅಲ್ಲ, ಅವರ ವ್ಯಕ್ತಿತ್ವ ಮತ್ತು ಕಠಿಣ ಪರಿಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕೂಡ ಗಮನಿಸಲಾಗುತ್ತದೆ. ಅದಕ್ಕಾಗಿಯೇ ಕೆಲವೊಮ್ಮೆ ಇಂಟರ್ವ್ಯೂ ಬೋರ್ಡ್ ಅಭ್ಯರ್ಥಿಗಳನ್ನು ಗೊಂದಲಕ್ಕೀಡುಮಾಡುವಂತಹ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಪ್ರಶ್ನೆ ಬಹಳ ಚರ್ಚೆಯಲ್ಲಿದೆ: &ldquo;ನಿಮ್ಮ ಹತ್ತಿರ ಒಂದು ನೂರು ರೂಪಾಯಿ ನೋಟು ಇದೆ. ಅದನ್ನು ನೀವು ಮಡಚಬಾರದು, ಹರಿಯಬಾರದು. ಹಾಗಾದರೆ ಅದನ್ನು ಅರ್ಧ ಮಾಡುವುದು ಹೇಗೆ?&rdquo;&lt;/p&gt;&lt;img&gt;&lt;p&gt;ಅನೇಕರು ಇದನ್ನು ಕೇಳಿದ ತಕ್ಷಣ ಭೌತಿಕವಾಗಿ ನೋಟನ್ನು ಹೇಗೆ ವಿಭಜಿಸುವುದು ಎಂದು ಆಲೋಚಿಸುತ್ತಾರೆ. ಆದರೆ, ಈ ಪ್ರಶ್ನೆಯ ಹಿಂದೆ ಇರುವುದು ಭೌತಿಕ ಬದಲಾವಣೆಯಲ್ಲ, ಬದಲಾಗಿ ಲಾಜಿಕಲ್ ಆಲೋಚನೆ. ಈ ಪ್ರಶ್ನೆಗೆ ಸರಿಯಾದ ಉತ್ತರ ಆ 100 ರೂಪಾಯಿ ನೋಟನ್ನು ಚಿಲ್ಲರೆಯಾಗಿ ಬದಲಾಯಿಸುವುದು (Exchange for change). ನೀವು ಆ ನೋಟನ್ನು ನೀಡಿ ಎರಡು 50 ರೂಪಾಯಿ ನೋಟುಗಳನ್ನು ಪಡೆದರೆ, ಅದು ಅಕ್ಷರಶಃ ಅರ್ಧವಾದಂತೆಯೇ ಸರಿ. ಇಲ್ಲಿ ನೋಟನ್ನು ಹರಿಯುವ ಅಥವಾ ಮಡಚುವ ಅಗತ್ಯವಿಲ್ಲ, ಆದರೆ ಆ ಮೌಲ್ಯವನ್ನು (Value) ನೀವು ಯಶಸ್ವಿಯಾಗಿ ಅರ್ಧ ಮಾಡಿದ್ದೀರಿ.&lt;/p&gt;&lt;img&gt;&lt;p&gt;ಪ್ರೆಸೆನ್ಸ್ ಆಫ್ ಮೈಂಡ್: ಅಭ್ಯರ್ಥಿ ಎಷ್ಟು ಜಾಗರೂಕರಾಗಿದ್ದಾರೆ ಎಂದು ತಿಳಿಯಲು.ಔಟ್ ಆಫ್ ದಿ ಬಾಕ್ಸ್ ಥಿಂಕಿಂಗ್: ಒಂದು ಸಮಸ್ಯೆಗೆ ಸಾಮಾನ್ಯ ಮಾರ್ಗಗಳಿಗಿಂತ ಭಿನ್ನವಾದ ಕೋನದಲ್ಲಿ ಪರಿಹಾರ ಹುಡುಕಬಲ್ಲರೇ ಎಂದು ಪರೀಕ್ಷಿಸಲು.ಕಮ್ಯುನಿಕೇಶನ್ ಸ್ಕಿಲ್ಸ್: ಕ್ಲಿಷ್ಟಕರ ವಿಷಯವನ್ನು ಎಷ್ಟು ಸರಳವಾಗಿ ಮತ್ತು ಆತ್ಮವಿಶ್ವಾಸದಿಂದ ವಿವರಿಸುತ್ತಾರೆ ಎಂದು ಗಮನಿಸಲು.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ ಹೇಳುವುದಾದರೆ, UPSC ಇಂಟರ್ವ್ಯೂನಲ್ಲಿ ಕೇಳುವ ಪ್ರಶ್ನೆಗಳು ಯಾವತ್ತೂ ನೇರವಾಗಿ ಇರುವುದಿಲ್ಲ. ಆದರೆ, ಶಾಂತವಾಗಿ ಆಲೋಚಿಸಿದರೆ ಉತ್ತರ ನಮ್ಮ ಕಣ್ಣಮುಂದೆಯೇ ಇರುತ್ತದೆ. ಇಂತಹ ಟ್ರಿಕಿ ಪ್ರಶ್ನೆಗಳು ಎದುರಾದಾಗ ಗಾಬರಿಪಡದೆ ಆಲೋಚಿಸುವುದೇ ಯಶಸ್ಸಿನ ಮೊದಲ ಮೆಟ್ಟಿಲು.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Kanchan Dogra ⭐️ (@kanchan_dogra_8)&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/upsc-interview-brain-teaser-the-logical-way-to-split-a-100-rupee-note-u6e36kx"/>
        </item>
        <item>
            <title><![CDATA[SSLC 19000 ಮಕ್ಕಳು ಕನ್ನಡದಲ್ಲೇ ಫೇಲ್‌! ಕರ್ನಾಟಕದಲ್ಲೇ ಇದ್ದು ಕನ್ನಡ ಮಾತನಾಡುವ ಮಕ್ಕಳೇ ಕನ್ನಡದಲ್ಲಿ ಅನುತ್ತೀರ್ಣ]]></title>
            <link>https://kannada.asianetnews.com/state/sslc-shock-19-000-students-fail-in-kannada-subject-despite-living-in-karnataka/articleshow-xivk2cb</link>
            <guid isPermaLink="true">https://kannada.asianetnews.com/state/sslc-shock-19-000-students-fail-in-kannada-subject-despite-living-in-karnataka/articleshow-xivk2cb</guid>
            <pubDate>Sat, 25 Apr 2026 05:58:05 +0530</pubDate>
            <description><![CDATA[ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಿದ್ದರೂ, ಉಳಿದೆಲ್ಲಾ ವಿಷಯಗಳಿಗಿಂತ ಪ್ರಥಮ ಭಾಷೆ ಕನ್ನಡದಲ್ಲೇ 19 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದು ಕನ್ನಡ ಭಾಷಾ ಬೋಧನೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq10871vnh3waqtvywj4bbfj,imgname--------------------------------10--1777076542523.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಿಂಗರಾಜು ಕೋರಾ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಏ.25)&lt;/strong&gt;: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಐತಿಹಾಸಿಕ ದಾಖಲೆ ಫಲಿತಾಂಶದ ಖುಷಿಯ ವಿಚಾರದ ನಡುವೆ ಉಳಿದೆಲ್ಲಾ ವಿಷಯಗಳಿಗಿಂತ ಪ್ರಥಮ ಭಾಷಾ ವಿಷಯಗಳಲ್ಲೇ ಅತಿ ಹೆಚ್ಚು, ಅದರಲ್ಲೂ ಕನ್ನಡದಲ್ಲಿ 19 ಸಾವಿರಕ್ಕೂ ಹೆಚ್ಚು ಮಕ್ಕಳು ಅನುತ್ತೀರ್ಣರಾಗಿರುವ ಸಂಗತಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಈ ಪೈಕಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಂಡು ಫೇಲಾದವರ ಸಂಖ್ಯೆ 18,678 ಇದ್ದರೆ, ಕನ್ನಡವನ್ನು ತೃತೀಯ ಭಾಷೆಯಾಗಿ ತೆಗೆದುಕೊಂಡು ಫೇಲಾದವರ ಸಂಖ್ಯೆ 289. ಇನ್ನು ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡಿದ್ದವರ ಪೈಕಿ ಕೂಡ ನೂರಾರು ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಹಾಗಾಗಿ ಕನ್ನಡದಲ್ಲಿ ಒಟ್ಟಾರೆ ಫೇಲಾದವರ ಸಂಖ್ಯೆ 19 ಸಾವಿರ ದಾಟಲಿದೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಇದು, ಕರ್ನಾಟಕದ ಶಾಲೆಗಳಲ್ಲಿ ಇತರೆ ವಿಷಯಗಳಿಗಿಂತ ಕನ್ನಡ ಭಾಷಾ ಬೋಧನೆಗೆ ಕಡಿಮೆ ಪ್ರಾಧಾನ್ಯತೆ ನೀಡಲಾಗುತ್ತಿದೆಯಾ ಎನ್ನುವ ಆತಂಕ, ಅನುಮಾನ ಹುಟ್ಟುಹಾಕಿದೆ. ಅಲ್ಲದೆ, ಕನ್ನಡ ಭಾಷೆ ಬೋಧಿಸುವ ಶಿಕ್ಷಕ ವರ್ಗ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯವೂ ಇದಾಗಿದೆ.&lt;/p&gt;&lt;h2&gt;7,48,660 ಮಂದಿ ಉತ್ತೀರ್ಣ:&lt;/h2&gt;&lt;p&gt;ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಗುರುವಾರ ಪ್ರಕಟಿಸಿದ ವಿಷಯವಾರು ಫಲಿತಾಂಶದ ಅಂಕಿ-ಅಂಶಗಳನ್ನು ಅವಲೋಕಿಸಿದಾಗ, ಕಳೆದ ಬಾರಿ ಟಾಪ್&zwnj; 3ನೇ ಸ್ಥಾನದಲ್ಲಿದ್ದ ಪ್ರಥಮ ಭಾಷಾ ಫಲಿತಾಂಶ ಈ ಬಾರಿ ಉಳಿದೆಲ್ಲಾ ವಿಷಯಗಳ ಫಲಿತಾಂಶಕ್ಕಿಂತ ಕಡಿಮೆ ಇದೆ. ಪ್ರಥಮ ಭಾಷಾ ವಿಷಯಗಳಲ್ಲಿ ಒಟ್ಟಾರೆ 7,69,926 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 7,48,660 ವಿದ್ಯಾರ್ಥಿಗಳು(ಶೇ.97.24) ಉತ್ತೀರ್ಣರಾಗಿದ್ದಾರೆ. ಉಳಿದ 21,266 ವಿದ್ಯಾರ್ಥಿಗಳು(ಶೇ.2.76) ಫೇಲಾಗಿದ್ದಾರೆ.&lt;/p&gt;&lt;p&gt;ಉಳಿದಂತೆ ದ್ವಿತೀಯ ಭಾಷೆಯಲ್ಲಿ ಶೇ.98.13ರಷ್ಟು, ತೃತೀಯ ಭಾಷೆಯಲ್ಲಿ ಶೇ.98.55, ಗಣಿತದಲ್ಲಿ ಶೇ.97.98, ವಿಜ್ಞಾನದಲ್ಲಿ ಶೇ.97.80, ಸಮಾಜ ವಿಜ್ಞಾನ ವಿಷಯದಲ್ಲಿ ಶೇ.97.85ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.&lt;/p&gt;&lt;h3&gt;ಪ್ರಥಮ ಭಾಷೆಯಲ್ಲೇ ಕನ್ನಡದ ರಿಸಲ್ಟ್&zwnj; ಕನಿಷ್ಠ&lt;/h3&gt;&lt;p&gt;ಪ್ರಥಮ ಭಾಷಾ ವಿಷಯದ ಫಲಿತಾಂಶವೇ ಕಡಿಮೆ ಬಂದಿರುವಾಗ ಅದರಲ್ಲೂ ಕನ್ನಡವನ್ನು ಪ್ರಥಮ ಭಾಷೆಯಾಗಿ ಅಧ್ಯಯನ ಮಾಡಿ ಫೇಲಾದವರೇ ಹೆಚ್ಚು. ಕನ್ನಡ ಭಾಷಾ ವಿಷಯದಲ್ಲಿ ಪರೀಕ್ಷೆ ಬರೆದಿದ್ದ 6,07,275 ವಿದ್ಯಾರ್ಥಿಗಳಲ್ಲಿ 5,88,597 ಮಂದಿ(ಶೇ.96.92) ಪಾಸಾಗಿದ್ದು, ಉಳಿದ 18,678 ಮಂದಿ ಅನುತ್ತೀರ್ಣಗೊಂಡಿದ್ದಾರೆ.&lt;/p&gt;&lt;p&gt;ಇನ್ನು ಪ್ರಥಮ ಭಾಷೆಯಾಗಿ ಇನ್ನಿತರೆ ಭಾಷೆಗಳನ್ನು ಅಧ್ಯಯನ ಮಾಡಿದವರ ಪೈಕಿ ಇಂಗ್ಲಿಷ್&zwnj; ಭಾಷೆಯಲ್ಲಿ (ಇಂಗ್ಲಿಷ್&zwnj; ಎನ್&zwnj;ಸಿಇಆರ್&zwnj;ಟಿ ಸೇರಿ) ಶೇ.98.38, ಹಿಂದಿಯಲ್ಲಿ ಶೇ.98.15, ಮರಾಠಿ ಶೇ.97.16, ಸಂಸ್ಕೃತ ಶೇ.99.99, ತಮಿಳು ಮತ್ತು ತೆಲುಗು ಶೇ.100 ಮತ್ತು ಉರ್ದುವನ್ನು ಪ್ರಥಮ ಭಾಷೆಯಾಗಿ ಓದಿದವರಲ್ಲಿ ಶೇ.98.44 ರಷ್ಟು ಮಕ್ಕಳು ಪಾಸಾಗಿದ್ದಾರೆ. ತನ್ಮೂಲಕ ವಿಷಯವಾರು ಫಲಿತಾಂಶದಲ್ಲಿ ಪ್ರಥಮ ಭಾಷಾ ಫಲಿತಾಂಶವೇ ಅತಿ ಕಡಿಮೆಯಾದರೆ, ಪ್ರಥಮ ಭಾಷಾ ಪಟ್ಟಿಯಲ್ಲಿ ಬರುವ ಒಂಬತ್ತು ವಿಷಯಗಳಲ್ಲಿ ಕನ್ನಡ ಭಾಷೆಯಲ್ಲಿ ಅನುತ್ತೀರ್ಣ ಪ್ರಮಾಣ ಇನ್ನೂ ದೊಡ್ಡದಾಗಿದೆ.&lt;/p&gt;&lt;p&gt;&lt;strong&gt;ಅಧಿಕಾರಿಗಳು ಏನಂತಾರೆ?&lt;/strong&gt;&lt;/p&gt;&lt;p&gt;ಇತರೆ ವಿಷಯಗಳಿಗೆ ಹೋಲಿಸಿದರೆ\B ಪ್ರಥಮ ಭಾಷಾ ವಿಷಯದ ಫಲಿತಾಂಶ ಸ್ವಲ್ಪ ಕಡಿಮೆ ಇರುವುದು ನಿಜ. ಹಾಗಂತ ಭಾರೀ ವ್ಯತ್ಯಾಸವೇನೂ ಇಲ್ಲ. ಶೇ.1ಕ್ಕಿಂತ ಕಡಿಮೆಯೇ ಇದೆ. ಉಳಿದೆಲ್ಲಾ ವಿಷಯಗಳಿಗೆ 100 ಅಂಕಗಳಿಗೆ ಪರೀಕ್ಷೆ ಇದ್ದರೆ, ಕನ್ನಡ ಸೇರಿ ಪ್ರಥಮ ಭಾಷೆಯ ಎಲ್ಲಾ ವಿಷಯಗಳಲ್ಲಿ 125 ಅಂಕಗಳಿಗೆ ಮಕ್ಕಳು ಪರೀಕ್ಷೆ ಬರೆಯುತ್ತಾರೆ. ಇದೂ ಕೂಡ ಕಾರಣ ಇರಬಹುದು. ಆದರೂ, ಕನ್ನಡದಲ್ಲೇ ಕಡಿಮೆ ಫಲಿತಾಂಶವನ್ನು ಒಪ್ಪಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ ಎನ್ನುತ್ತಾರೆ ಇಲಾಖೆಯ ಉನ್ನತ ಅಧಿಕಾರಿಗಳು.&lt;/p&gt;&lt;p&gt;--------&lt;/p&gt;&lt;p&gt;&lt;strong&gt;ಪ್ರಥಮ ಭಾಷಾ ವಿಷಯಗಳ ಫಲಿತಾಂಶ(2025-26&lt;/strong&gt;&lt;/p&gt;&lt;p&gt;ವಿಷಯ ಹಾಜರಾತಿ ಪಾಸ್&zwnj; ಶೇ.&lt;/p&gt;&lt;p&gt;ಕನ್ನಡ 6,07,275 5,88,597 96.92%&lt;/p&gt;&lt;p&gt;ಇಂಗ್ಲಿಷ್&zwnj; 1,23,143 1,21,155 98.38%&lt;/p&gt;&lt;p&gt;ಉರ್ದು 21,405 21,072 98.44%&lt;/p&gt;&lt;p&gt;ಸಂಸ್ಕೃತ 7,694 7,693 99.99%&lt;/p&gt;&lt;p&gt;ಮರಾಠಿ 8,630 8,385 97.16%&amp;nbsp;&lt;/p&gt;&lt;p&gt;ಹಿಂದಿ 1079 1059 98.15%&lt;/p&gt;&lt;p&gt;ತಮಿಳು 287 287 100%&lt;/p&gt;&lt;p&gt;ತೆಲುಗು 126 126 100%&lt;/p&gt;&lt;p&gt;(ಅಗತ್ಯವಿದ್ದರೆ ಬಳಸಿ)&lt;/p&gt;&lt;p&gt;ವಿಷಯವಾರು ಫಲಿತಾಂಶ&lt;/p&gt;&lt;p&gt;&lt;strong&gt;ವಿಷಯ ಫಲಿತಾಂಶ&lt;/strong&gt;&lt;/p&gt;&lt;p&gt;ಪ್ರಥಮ ಭಾಷೆ ಶೇ.97.24&lt;/p&gt;&lt;p&gt;ದ್ವಿತೀಯ ಭಾಷೆ ಶೇ.98.13&lt;/p&gt;&lt;p&gt;ತೃತೀಯ ಭಾಷೆ ಶೇ.98.55&lt;/p&gt;&lt;p&gt;ಗಣಿತ ಶೇ.97.98&lt;/p&gt;&lt;p&gt;ವಿಜ್ಞಾನ ಶೇ.97.80&lt;/p&gt;&lt;p&gt;ಸಮಾಜ ವಿಜ್ಞಾನ ಶೇ.97.85&lt;/p&gt;&lt;h3&gt;ಸುಧಾರಣೆಗೆ ಗಮನ&lt;/h3&gt;&lt;p&gt;ನಮ್ಮ ಭಾಷೆಯ ಬೋಧನೆ ಹಾಗೂ ಕಲಿಕೆಗೆ ನಾವು ಹೆಚ್ಚು ಆದ್ಯತೆ ನೀಡುವುದನ್ನು ಮರೆಯುತ್ತಿದ್ದೇವಾ ಎನ್ನುವ ಪ್ರಶ್ನೆ ಈ ಫಲಿತಾಂಶದಿಂದ ಉದ್ಭವಿಸುತ್ತಿದೆ. ಮುಖ್ಯಮಂತ್ರಿ ಅವರು ಎಸ್ಸೆಸ್ಸೆಲ್ಸಿ ಓದುವಾಗ ಹಿಂದಿಗೆ ಅಂಕ ಇರಲಿಲ್ಲ, ಗ್ರೇಡಿಂಗ್&zwnj; ಇತ್ತು. ನಾನು ಓದುವಾಗ ಕೇವಲ 50 ಅಂಕಗಳಿಗೆ ಪರೀಕ್ಷೆ ಇತ್ತು. ಈಗಿನ ಮಕ್ಕಳು 100 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದಾರೆ. ಹಾಗಾಗಿಯೇ ಇತರೆ ಭಾಷಾ ಕಲಿಕೆಯಿಂದ ಮಕ್ಕಳಿಗೆ ಆಗುತ್ತಿರುವ ಒತ್ತಡ ಹೇಗೆ ಕಡಿಮೆ ಮಾಡಬೇಕೆಂದು ಇಲಾಖೆ ಮುಂದಿನ ದಿನಗಳಲ್ಲಿ ವೈಜ್ಞಾನಿಕವಾದ ಅಂಕಿ ಅಂಶಗಳೊಂದಿಗೆ ಸೂಕ್ತ ನಿರ್ಧಾರ ಬರಲಿದೆ. ಕನ್ನಡ ಭಾಷಾ ವಿಷಯದಲ್ಲೂ ಫಲಿತಾಂಶ ಸುಧಾರಣೆಗೆ ಹೆಚ್ಚು ಗಮನ ಹರಿಸಲಾಗುವುದು.&lt;/p&gt;&lt;p&gt;&lt;strong&gt;- ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ&lt;/strong&gt;&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/sslc-shock-19-000-students-fail-in-kannada-subject-despite-living-in-karnataka/articleshow-xivk2cb"/>
        </item>
        <item>
            <title><![CDATA[ಬಿಜೆಪಿಯನ್ನೂ ತೊರೆದ್ರಾ ರಾಘವ್​ ಚಡ್ಡಾ? ಜಾಲತಾಣದಲ್ಲಿ ವೈರಲ್​ ಆಗ್ತಿದೆ ಈ ವಿಡಿಯೋ- ಏನಿದರ ಅಸಲಿಯತ್ತು?]]></title>
            <link>https://kannada.asianetnews.com/politics/ai-video-created-by-an-educational-platform-of-raghav-chadda-where-is-says-he-left-bjp-suc/articleshow-yafdrqa</link>
            <guid isPermaLink="true">https://kannada.asianetnews.com/politics/ai-video-created-by-an-educational-platform-of-raghav-chadda-where-is-says-he-left-bjp-suc/articleshow-yafdrqa</guid>
            <pubDate>Sun, 26 Apr 2026 17:51:37 +0530</pubDate>
            <description><![CDATA[&lt;p&gt;ಆಪ್ ಸಂಸದ ರಾಘವ್ ಚಡ್ಡಾ ಬಿಜೆಪಿ ತೊರೆದು ಹೊಸ ಪಕ್ಷ ಸೇರುತ್ತಿರುವ ವಿಡಿಯೋ ವೈರಲ್ ಆಗಿದೆ. &amp;nbsp;ಇದರಲ್ಲಿ ಅವರು ನಿಮಗೆಲ್ಲಾ ತಿಳಿದಿರುವಂತೆ ನಾನು ನಿನ್ನೆ ಬಿಜೆಪಿ ಜಾಯಿನ್​ ಆಗಿದ್ದೇನೆ. ಆದರೆ ಇವತ್ತು ಬಿಜೆಪಿ ಬಿಡುತ್ತಿದ್ದೇನೆ ಮತ್ತು ಹೊಸ ಪಕ್ಷ ಸೇರುತ್ತಿದ್ದೇನೆ ಎಂದಿದ್ದಾರೆ. &amp;nbsp;ಏನಿದರ ಅಸಲಿಯತ್ತು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq4vh1pfhjd2sxwxcndxjkn2,imgname-raghav-chadda-1777205806799.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಮ್​ ಆದ್ಮಿ ಪಕ್ಷದ ಸಂಸದ, ನಟಿ ಪರಿಣೀತಿ ಚೋಪ್ರಾ ಪತಿ, ರಾಘವ್​ ಚಡ್ಡಾ ಇದಾಗಲೇ AAP ತೊರೆದು ಬಿಜೆಪಿ ಸೇರಿದ್ದಾರೆ. ತಮ್ಮ ಜೊತೆ, ಆರು APP ಸಂಸದರನ್ನೂ ಅವರು ಕರೆದುಕೊಂಡು ಹೋಗಿ ಆಪ್​ಗೆ ಭಾರಿ ಶಾಕ್​ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಪಕ್ಷಾಂತರ ಮಾಡಿರುವ ಚಡ್ಡಾ ಸೇರಿದಂತೆ ಎಲ್ಲಾ ಏಳು ಸಂಸದರ ರಾಜ್ಯಸಭಾ ಸದಸ್ಯತ್ವ ರದ್ದುಗೊಳಿಸುವಂತೆ ಸಭಾಪತಿಗಳಿಗೆ ಪಕ್ಷ ಮನವಿ ಮಾಡಿದೆ. ಸುಪ್ರೀಂಕೋರ್ಟ್​ ವಕೀಲ ಕಪಿಲ್&zwnj; ಸಿಬಲ್&zwnj; ಅವರ ಸಲಹೆ ಪಡೆದು, ಪಕ್ಷಾಂತರ ಮಾಡುತ್ತಿರುವ ಸಂಸದರ ಸದಸ್ಯತ್ವ ರದ್ದುಗೊಳಿಸುವಂತೆ ಉಪರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಪಕ್ಷ ಇದಾಗಲೇ ತಿಳಿಸಿದೆ. ದ್ರೋಹ ಮಾಡಿರುವ ಏಳು ಸಂಸದರ ಸದಸ್ಯತ್ವ ರದ್ದಗೊಳಿಸುವಂತೆ ಕೋರಿ ನಾವು ರಾಜ್ಯಭಾ ಸಭಾಪತಿಗಳಿಗೆ ಪತ್ರ ಬರೆದಿದ್ದೇವೆ. ಈ ಸಂಬಂಧ ತಜ್ಞರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪಕ್ಷ ತಿಳಿಸಿದೆ.&lt;/p&gt;&lt;h2&gt;&lt;strong&gt;ಹೊಸ ಪಕ್ಷ ಸೇರುತ್ತಿದ್ದೇನೆ&lt;/strong&gt;&lt;/h2&gt;&lt;p&gt;ಇದರ ಬೆನ್ನಲ್ಲೇ ರಾಘವ್​ ಚಡ್ಡಾ ಅವರದ್ದು ಎನ್ನಲಾದ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ಅವರು ನಿಮಗೆಲ್ಲಾ ತಿಳಿದಿರುವಂತೆ ನಾನು ನಿನ್ನೆ ಬಿಜೆಪಿ ಜಾಯಿನ್​ ಆಗಿದ್ದೇನೆ. ಆದರೆ ಇವತ್ತು ಬಿಜೆಪಿ ಬಿಡುತ್ತಿದ್ದೇನೆ ಮತ್ತು ಹೊಸ ಪಕ್ಷ ಸೇರುತ್ತಿದ್ದೇನೆ ಎಂದು ಅದರಲ್ಲಿ ಉಲ್ಲೇಖವಾಗಿದೆ. ಅದನ್ನು ನೋಡಿದವರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಅವರು ಹೊಸ ಪಕ್ಷದ ಹೆಸರು ಹೇಳಿದಾಗ ಹಲವರಿಗೆ ಅಸಲಿಯತ್ತು ಏನೆಂದು ತಿಳಿದಿದೆ. ಏಕೆಂದರೆ ಆ ಪಕ್ಷದ ಹೆಸರು ಯಾರಿಗೂ ಗೊತ್ತೇ ಇಲ್ವಲ್ಲಾ ಅದಕ್ಕೇನೇ.&lt;/p&gt;&lt;h3&gt;&lt;strong&gt;ಏನಿದು ವಿಡಿಯೋ ಅಸಲಿಯತ್ತು?&lt;/strong&gt;&lt;/h3&gt;&lt;p&gt;ಅಷ್ಟಕ್ಕೂ ಹೇಳಿಕೇಳಿ ಇದು ಎಐ ಯುಗ. ಯಾರ ಬಾಯಲ್ಲಿ, ಏನು ಬೇಕಾದರೂ ಹೇಳಿಸಬಹುದು, ಯಾರಿಂದ ಏನು ಬೇಕಾದರೂ ಮಾಡಿಸಬಹುದು. ಅಸಲಿ ವಿಡಿಯೋ ಯಾವುದು, ನಕಲಿ ವಿಡಿಯೋ ಯಾವುದು ಎಂದು ತಿಳಿಯುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಈ ನಕಲಿ ವಿಡಿಯೋಗಳು ಇರುತ್ತವೆ. ಕೆಲವೊಮ್ಮೆ ಇದು ಎಐ ವಿಡಿಯೋ ಎಂದು ತಿಳಿದಿದ್ದರೂ ಅಂಥ ರಾಜಕಾರಣಿ ಅಥವಾ ಸೆಲೆಬ್ರಿಟಿ ವಿರೋಧಿಗಳು ದುರುದ್ದೇಶಪೂರ್ವಕವಾಗಿ ಆ ವಿಡಿಯೋ ಹರಿಬಿಟ್ಟು ಅದನ್ನು ನಿಜ ಎಂದು ನಂಬಿಸುವ ಪ್ರಯತ್ನವನ್ನೂ ಮಾಡುವುದನ್ನು ಸೋಷಿಯಲ್​ ಮೀಡಿಯಾದಲ್ಲಿ ನೋಡುತ್ತಲೇ ಇರಬಹುದು.&lt;/p&gt;&lt;h3&gt;&lt;strong&gt;ಏನಿದು ಹೊಸ ಪಕ್ಷ&lt;/strong&gt;&lt;/h3&gt;&lt;p&gt;ಆದರೆ,, ಇಲ್ಲಿ ರಾಘವ್​ ಚಡ್ಡಾ ಅವರ ಈ ರೀತಿ ಹೇಳಿಕೆಯ ವಿಡಿಯೋ ವೈರಲ್​ ಮಾಡಿದ್ದು, ಭಾರತದ ಪ್ರಸಿದ್ಧ ಒಂದು ಭಾರತೀಯ ಆನ್&zwnj;ಲೈನ್ ಶೈಕ್ಷಣಿಕ ವೇದಿಕೆ. ಪ್ರಾಥಮಿಕವಾಗಿ MBA (CAT) ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಹೆಸರುವಾಸಿಯಾಗಿರುವ ಈ ವೇದಿಕೆ ಇಂಥ ಕಿತಾಪತಿ ಮಾಡಿದೆ. ಬಿಜೆಪಿ ಬಿಟ್ಟು ಈ ಶಿಕ್ಷಣ ಸಂಸ್ಥೆಯನ್ನು ನಾನು ಸೇರುತ್ತಿದ್ದೇನೆ. ಏಕೆಂದರೆ, ಎಲ್ಲರಿಗೂ ಅರ್ಹ ಶಿಕ್ಷಣ ಸಿಗಬೇಕು, ಎಲ್ಲರೂ ಉನ್ನತ ಶಿಕ್ಷಣ ಪಡೆದು ಮುಂದೆ ಬರಬೇಕು, ಅದಕ್ಕಾಗಿ ನಾನು ಇದನ್ನು ಸೇರುತ್ತಿದ್ದೇನೆ ಎಂದು ಚಡ್ಡಾ ಹೇಳಿದಂತೆ ಎಐ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ನೋಡಿದ ಕೆಲವು ಶಿಕ್ಷಣ ಸಂಸ್ಥೆಗಳು ನಮಗೂ ಹೀಗೆಯೇ ಮಾಡಿಕೊಡಿ ಎಂದು ಕಮೆಂಟ್​ನಲ್ಲಿ ಹಾಕುತ್ತಿದ್ದರೆ, ನಾವು ರೆಡಿ ಅದಕ್ಕೆ ದುಡ್ಡು ಎಷ್ಟು ಕೊಡುತ್ತಿದ್ದೀರಿ ಎಂದು ಕಮೆಂಟ್ಸ್​ನಲ್ಲಿಯೇ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದಾರೆ!&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/politics/ai-video-created-by-an-educational-platform-of-raghav-chadda-where-is-says-he-left-bjp-suc/articleshow-yafdrqa"/>
        </item>
        <item>
            <title><![CDATA[ಬಣ್ಣ ಬಣ್ಣದ ಬಲೂನ್‌ ಮಾರಿ ಬದುಕುತ್ತಿರುವವನ ಮಗಳಿಗೆ  623 ಅಂಕ! ಗ್ಯಾರೇಜ್‌ನಲ್ಲಿ ಕೆಲಸ ಮಾಡುವವನ ಮಗನಿಗೆ 98%!]]></title>
            <link>https://kannada.asianetnews.com/education/balloon-seller-daughter-secures-state-2nd-rank-in-sslc-2026-inspiring-success-story-from-tumakuru-gdp/articleshow-z20hhvi</link>
            <guid isPermaLink="true">https://kannada.asianetnews.com/education/balloon-seller-daughter-secures-state-2nd-rank-in-sslc-2026-inspiring-success-story-from-tumakuru-gdp/articleshow-z20hhvi</guid>
            <pubDate>Thu, 23 Apr 2026 15:40:26 +0530</pubDate>
            <description><![CDATA[ಮಧುಗಿರಿ ಪಟ್ಟಣದ ವಿದ್ಯಾರ್ಥಿನಿ ಹಿತಾಶ್ರೀ ಡಿ., ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಲೂನ್ ಮಾರಾಟ ಮಾಡಿ ಜೀವನ ಸಾಗಿಸುವ ತಂದೆಯ ಮಗಳಾದ ಇವರು, ಆರ್ಥಿಕ ಸಂಕಷ್ಟಗಳ ನಡುವೆಯೂ ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpwwtn3jetprypp25mqrzg5d,imgname-success-story-from-tumakuru-1776938734706.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ 2025&ndash;26ನೇ ಶೈಕ್ಷಣಿಕ ಸಾಲಿನ ಎಸ್&zwnj;ಎಸ್&zwnj;ಎಲ್&zwnj;ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆಯಲ್ಲಿ ಹೆಮ್ಮೆ &amp;nbsp;ಪಡುವಂತಹ ಸಾಧನೆಯೊಂದು ಬೆಳಕಿಗೆ ಬಂದಿದೆ. ಸಾಮಾನ್ಯ ಕುಟುಂಬದಿಂದ ಬಂದಿದ್ದರೂ, ಅಪಾರ ಸಂಕಲ್ಪ ಮತ್ತು ಶ್ರಮದಿಂದ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ವಿದ್ಯಾರ್ಥಿನಿಯ ಕಥೆ ಎಲ್ಲರ ಗಮನ ಸೆಳೆಯುತ್ತಿದೆ.&lt;/p&gt;&lt;p&gt;ಮಧುಗಿರಿ ಪಟ್ಟಣದ ಚಿರೆಕ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಹಿತಾಶ್ರೀ ಡಿ., ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ 625ರಲ್ಲಿ 623 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅವಳ ಈ ಸಾಧನೆ ಕೇವಲ ವೈಯಕ್ತಿಕ ಜಯವಲ್ಲ; ಬಡತನದ ನಡುವೆಯೂ ಶಿಕ್ಷಣದ ಮಹತ್ವವನ್ನು ಎತ್ತಿಹಿಡಿಯುವ ಪ್ರೇರಣಾದಾಯಕ ಉದಾಹರಣೆಯಾಗಿದೆ.&lt;/p&gt;&lt;h2&gt;ಆರ್ಥಿಕ ಸಂಕಷ್ಟಗಳ ನಡುವೆ ಗೆದ್ದ ಮಗಳು&lt;/h2&gt;&lt;p&gt;ಹಿತಾಶ್ರೀಯ ತಂದೆ ದಿನನಿತ್ಯ ಬಣ್ಣಬಣ್ಣದ ಬಲೂನ್&zwnj;ಗಳನ್ನು ಮಾರಾಟ ಮಾಡಿ ಕುಟುಂಬವನ್ನು ನಡೆಸುವ ಸಾಮಾನ್ಯ ವ್ಯಾಪಾರಿ. ಆರ್ಥಿಕ ಸಂಕಷ್ಟಗಳ ನಡುವೆಯೂ ಮಗಳ ವಿದ್ಯಾಭ್ಯಾಸಕ್ಕೆ ಯಾವುದೇ ಅಡ್ಡಿಯಾಗದಂತೆ ಶ್ರಮಿಸಿದ ಅವರ ಪರಿಶ್ರಮ ಇಂದು ಫಲ ತಂದಿದೆ. ಬಲೂನ್ ಮಾರಾಟದಿಂದ ಬಂದ ಸಣ್ಣ ಆದಾಯದಲ್ಲೇ ಮಗಳನ್ನು ಓದಿಸಿ ದೊಡ್ಡ ಸಾಧನೆ ಮಾಡಿಸಬೇಕು ಎಂಬ ಅವರ ಕನಸು ಈಗ ನನಸಾಗಿದೆ.&lt;/p&gt;&lt;p&gt;ಕಷ್ಟದ ಪರಿಸ್ಥಿತಿಗಳ ನಡುವೆಯೂ ಹಿತಾಶ್ರೀ ತನ್ನ ಓದಿನಲ್ಲಿ ನಿರಂತರ ಪರಿಶ್ರಮ ತೋರಿದ್ದು, ಸಮಯವನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿದ್ದಾಳೆ. ದಿನನಿತ್ಯದ ಸವಾಲುಗಳನ್ನು ಎದುರಿಸುತ್ತಾ, ಗುರಿಯತ್ತ ಗಮನ ಹರಿಸಿದ ಅವಳ ದೃಢಸಂಕಲ್ಪವೇ ಇಂತಹ ಅಸಾಧಾರಣ ಫಲಿತಾಂಶಕ್ಕೆ ಕಾರಣವಾಗಿದೆ. ರಾಜ್ಯದ ಟಾಪ್ 28 ವಿದ್ಯಾರ್ಥಿಗಳ ಪೈಕಿ ಸ್ಥಾನ ಪಡೆದಿರುವುದು ಅವಳ ಪ್ರತಿಭೆಗೆ ಸಾಕ್ಷಿಯಾಗಿದೆ.&lt;/p&gt;&lt;h2&gt;ಅನೇಕರಿಗೆ ಸ್ಫೂರ್ತಿ&lt;/h2&gt;&lt;p&gt;ಈ ಸಾಧನೆಗೆ ಶಾಲೆಯ ಶಿಕ್ಷಕರು, ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. &ldquo;ಬಣ್ಣದ ಬಲೂನ್ ಮಾರುವ ಮನೆಯಲ್ಲೂ ಜ್ಞಾನದ ಬೆಳಕು ಹಬ್ಬಬಹುದು&rdquo; ಎಂಬುದನ್ನು ಹಿತಾಶ್ರೀ ತನ್ನ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾಳೆ. ಹಿತಾಶ್ರೀಯ ಸಾಧನೆ ಅನೇಕ ಬಡ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಂತಿದ್ದು, ಪರಿಶ್ರಮ ಮತ್ತು ದೃಢ ನಿಶ್ಚಯ ಇದ್ದರೆ ಯಾವುದೇ ಅಡೆತಡೆಗಳು ಗುರಿಯನ್ನು ತಲುಪುವುದನ್ನು ತಡೆಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡುತ್ತದೆ.&lt;/p&gt;&lt;h2&gt;ಬೈಕ್ ಗ್ಯಾರೇಜ್&zwnj;ನಲ್ಲಿ ಮೆಕ್ಯಾನಿಕ್ ಮಗನ ಸಾಧನೆ&lt;/h2&gt;&lt;p&gt;ಹಾವೇರಿ ಜಿಲ್ಲೆಯಲ್ಲೊಂದು ಪ್ರೇರಣಾದಾಯಕ ಸಾಧನೆಯ ಕಥೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಕಠಿಣ ಪರಿಸ್ಥಿತಿಗಳ ನಡುವೆಯೂ ಪರಿಶ್ರಮದಿಂದ ಶ್ರೇಷ್ಠ ಫಲಿತಾಂಶ ಸಾಧಿಸಿರುವ ವಿದ್ಯಾರ್ಥಿಯೊಬ್ಬನ ಕಥೆ ಹಲವರಿಗೆ ಸ್ಪೂರ್ತಿಯಾಗಿದೆ.&lt;/p&gt;&lt;p&gt;ಹಾವೇರಿ ತಾಲೂಕು ನೆಗಳೂರು ಗ್ರಾಮದ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ಭರತ್ ಬಸವರಾಜ ಹಿರೇಮಠ ಅವರು ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ 98 ಶೇಕಡಾ ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಡಿಮೆ ಸೌಲಭ್ಯಗಳ ನಡುವೆಯೂ ಉನ್ನತ ಗುರಿಯನ್ನು ಸಾಧಿಸಿರುವ ಭರತ್ ಅವರ ಸಾಧನೆಗೆ ಶಿಕ್ಷಕರು, ಗ್ರಾಮಸ್ಥರು ಮತ್ತು ಬಂಧು-ಬಳಗದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;ಭರತ್ ಅವರ ತಂದೆ ಬೈಕ್ ಗ್ಯಾರೇಜ್&zwnj;ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಮನೆಮಠಗಳಲ್ಲಿ ಅಡುಗೆ ಕೆಲಸ ಮಾಡಿ ಕುಟುಂಬವನ್ನು ನಡೆಸುತ್ತಿದ್ದಾರೆ. ಇಂತಹ ಆರ್ಥಿಕ ಸಂಕಷ್ಟಗಳ ನಡುವೆಯೂ ಮಗನ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಬರದಂತೆ ಪೋಷಕರು ಶ್ರಮಿಸಿದ್ದು, ಇಂದು ಅದರ ಫಲವಾಗಿ ಭರತ್ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಮಾತನಾಡಿದ ಭರತ್, &ldquo;ನನ್ನ ತಂದೆ ಗ್ಯಾರೇಜ್&zwnj;ನಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಾರೆ. ತಾಯಿ ಅಡುಗೆ ಕೆಲಸ ಮಾಡಿ ನನ್ನನ್ನು ಓದಿಸಿದ್ದಾರೆ. ಅವರ ಪರಿಶ್ರಮವೇ ನನಗೆ ಪ್ರೇರಣೆ. ನಾನು 98% ಅಂಕಗಳನ್ನು ಪಡೆದಿದ್ದೇನೆ. ಇನ್ನೂ ಹೆಚ್ಚು ಅಂಕಗಳು ಬರಬೇಕೆಂದು ನಿರೀಕ್ಷಿಸಿದ್ದೆ. ಆದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದಾಗಿ ಯೋಚಿಸುತ್ತಿದ್ದೇನೆ&rdquo; ಎಂದು ಹೇಳಿದ್ದಾರೆ.&lt;/p&gt;&lt;p&gt;ಮುಂದಿನ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿದ ಅವರು, &ldquo;ನನಗೆ ವೈದ್ಯರಾಗುವ ಅಥವಾ ಉದ್ಯಮಿಯಾಗುವ ಕನಸಿದೆ. ಆದರೆ ವಿಜ್ಞಾನ ವಿಭಾಗಕ್ಕೆ ಸೇರ್ಪಡೆಯಾಗಲು ಅಗತ್ಯವಿರುವ ಶುಲ್ಕ ಕಟ್ಟಲು ನಮ್ಮಲ್ಲಿ ಹಣದ ಕೊರತೆ ಇದೆ. ಆದರೂ ನಾನು ಪಡೆದ ಅಂಕಗಳ ಆಧಾರದ ಮೇಲೆ ಮುಂದಿನ ಅವಕಾಶಗಳನ್ನು ಹುಡುಕಲು ಪ್ರಯತ್ನಿಸುತ್ತೇನೆ&rdquo; ಎಂದು ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಭರತ್ ಅವರ ಸಾಧನೆ, ಆರ್ಥಿಕ ಅಡಚಣೆಗಳು ಇದ್ದರೂ ದಿಟ್ಟ ಮನಸ್ಸು ಮತ್ತು ಪರಿಶ್ರಮದಿಂದ ದೊಡ್ಡ ಗುರಿಗಳನ್ನು ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಿಯಾದ ಪ್ರೋತ್ಸಾಹ ಮತ್ತು ಸಹಾಯ ದೊರೆತರೆ ಅವರು ಇನ್ನಷ್ಟು ಎತ್ತರಗಳನ್ನು ಮುಟ್ಟುವುದು ಖಚಿತ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/balloon-seller-daughter-secures-state-2nd-rank-in-sslc-2026-inspiring-success-story-from-tumakuru-gdp/articleshow-z20hhvi"/>
        </item>
    </channel>
</rss>
