<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 09 Jun 2026 13:25:41 +0530</lastBuildDate>
        <atom:link href="https://kannada.asianetnews.com/rss/education" rel="self" type="application/rss+xml"/>
        <item>
            <title><![CDATA[ಇಂದು ಮಧ್ಯಾಹ್ನ 12ಕ್ಕೆ ಸಿಇಟಿ ಫಲಿತಾಂಶ ಪ್ರಕಟ; ಮಧ್ಯಾಹ್ನ 2ರ ಬಳಿಕ ವೆಬ್‌ಸೈಟ್‌ನಲ್ಲಿ ಲಭ್ಯ]]></title>
            <link>https://kannada.asianetnews.com/education/cet-result-announced-at-12-noon-today-available-on-website-after-2-pm-mrq/articleshow-0l8hzbw</link>
            <guid isPermaLink="true">https://kannada.asianetnews.com/education/cet-result-announced-at-12-noon-today-available-on-website-after-2-pm-mrq/articleshow-0l8hzbw</guid>
            <pubDate>Sat, 06 Jun 2026 07:04:24 +0530</pubDate>
            <description><![CDATA[2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಯುಜಿ-ಸಿಇಟಿ) ಫಲಿತಾಂಶವನ್ನು ಶನಿವಾರ ಪ್ರಕಟಿಸಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವರು ಮಧ್ಯಾಹ್ನ 12 ಗಂಟೆಗೆ ಫಲಿತಾಂಶದ ವಿವರಗಳನ್ನು ಪ್ರಕಟಿಸಲಿದ್ದು, ಮಧ್ಯಾಹ್ನ 2 ಗಂಟೆಯ ನಂತರ ವಿದ್ಯಾರ್ಥಿಗಳು ಕೆಇಎ ವೆಬ್&zwnj;ಸೈಟ್&zwnj;ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01hwvckcqypdtcman63fx7zk1t,imgname-1.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಯುಜಿ-ಸಿಇಟಿ) ಫಲಿತಾಂಶವನ್ನು ಶನಿವಾರ ಪ್ರಕಟಿಸಲಿದೆ.&lt;/p&gt;&lt;p&gt;ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ, ಫಲಿತಾಂಶದ ವಿವರಗಳನ್ನು ಪ್ರಕಟಿಸಲಿದ್ದಾರೆ. ಮಧ್ಯಾಹ್ನ 2 ಗಂಟೆ ನಂತರ ವೆಬ್&zwnj;ಸೈಟ್&zwnj;ನಲ್ಲಿ ಅಭ್ಯರ್ಥಿಗಳು ತಮ್ಮ ಫಲಿತಾಂಶ ಪಡೆದುಕೊಳ್ಳಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ರಾಜ್ಯಾದ್ಯಂತ 745 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ&lt;/strong&gt;&lt;/h2&gt;&lt;p&gt;ಎಂಜಿನಿಯರಿಂಗ್&zwnj;, ಕೃಷಿ ವಿಜ್ಞಾನ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಈ ಬಾರಿಯ ಪರೀಕ್ಷೆಗೆ ಒಟ್ಟು 3.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಪರೀಕ್ಷೆ ಬರೆದಿದ್ದರು. ಕಳೆದ ಏಪ್ರಿಲ್&zwnj; 23, 24ರಂದು ರಾಜ್ಯಾದ್ಯಂತ 745 ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಸಲಾಗಿತ್ತು.&lt;/p&gt;&lt;h3&gt;&lt;strong&gt;ಫಲಿತಾಂಶವು ಈ ಕೆಳಗಿನ ಲಿಂಕ್&zwnj;ಗಳಲ್ಲಿ ಲಭವಾಗಲಿದೆ&lt;/strong&gt;&lt;/h3&gt;&lt;p&gt;https://keaonline.karnataka.gov.in/ugcet_2026_results/&lt;/p&gt;&lt;p&gt;https://keaonline.karnataka.gov.in/ugcet_2026_result/&lt;/p&gt;&lt;p&gt;https://cetonline.karnataka.gov.in/kea/&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/cet-result-announced-at-12-noon-today-available-on-website-after-2-pm-mrq/articleshow-0l8hzbw"/>
        </item>
        <item>
            <title><![CDATA[ಜೂನ್‌ 21ರ ನೀಟ್ ಮರುಪರೀಕ್ಷೆ ಸೋರಿಕೆ ತಡೆಯಲು ಭಾರತೀಯ ಸೇನೆಯ ನೆರವು, ಕೇಂದ್ರದ ಮಾಸ್ಟರ್ ಪ್ಲಾನ್]]></title>
            <link>https://kannada.asianetnews.com/gallery/education/neet-re-exam-govt-considers-indian-air-force-aircraft-to-secure-and-distribute-question-papers-gdp-5hh0cwp</link>
            <guid isPermaLink="true">https://kannada.asianetnews.com/gallery/education/neet-re-exam-govt-considers-indian-air-force-aircraft-to-secure-and-distribute-question-papers-gdp-5hh0cwp</guid>
            <pubDate>Fri, 29 May 2026 15:11:59 +0530</pubDate>
            <description><![CDATA[&lt;p&gt;ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿವಾದದ ನಂತರ, ಕೇಂದ್ರ ಸರ್ಕಾರವು ಜೂನ್ 21ರ ಮರುಪರೀಕ್ಷೆಯನ್ನು ಸೋರಿಕೆ-ನಿರೋಧಕವಾಗಿ ನಡೆಸಲು ಐತಿಹಾಸಿಕ ಕ್ರಮ ಕೈಗೊಂಡಿದೆ. &amp;nbsp;ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಲು ಭಾರತೀಯ ವಾಯುಪಡೆಯ ವಿಶೇಷ ವಿಮಾನಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfzeh83eztr1skh96nx82t4h,imgname-dharmendra-pradhan-1769508216942.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿವಾದದ ನಂತರ, ಕೇಂದ್ರ ಸರ್ಕಾರವು ಜೂನ್ 21ರ ಮರುಪರೀಕ್ಷೆಯನ್ನು ಸೋರಿಕೆ-ನಿರೋಧಕವಾಗಿ ನಡೆಸಲು ಐತಿಹಾಸಿಕ ಕ್ರಮ ಕೈಗೊಂಡಿದೆ. &amp;nbsp;ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಲು ಭಾರತೀಯ ವಾಯುಪಡೆಯ ವಿಶೇಷ ವಿಮಾನಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ&amp;nbsp;&lt;/p&gt;&lt;img&gt;&lt;p&gt;ನವದೆಹಲಿ: ದೇಶಾದ್ಯಂತ ಭಾರಿ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ (NEET UG) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರ, ಇನ್ಮುಂದೆ ಇಂತಹ ತಪ್ಪು ಮರುಕಳಿಸದಂತೆ ತಡೆಯಲು ಅಭೂತಪೂರ್ವ ಮತ್ತು ಐತಿಹಾಸಿಕ ಕ್ರಮಕ್ಕೆ ಮುಂದಾಗಿದೆ. ಜೂನ್ 21ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯನ್ನು ಅತ್ಯಂತ ದೋಷರಹಿತವಾಗಿ ಹಾಗೂ ಸೋರಿಕೆ ನಿರೋಧಕವಾಗಿ (Leak-Proof) ನಡೆಸುವ ಸಲುವಾಗಿ ಭಾರತೀಯ ಸೇನೆಯ, ಅದರಲ್ಲೂ ಮುಖ್ಯವಾಗಿ ಭಾರತೀಯ ವಾಯುಪಡೆಯ (IAF) ನೆರವು ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶಾದ್ಯಂತ ಅತ್ಯಂತ ಸುರಕ್ಷಿತವಾಗಿ ಮತ್ತು ನಿಗದಿತ ಸಮಯಕ್ಕೆ ಪ್ರಶ್ನೆಪತ್ರಿಕೆಗಳನ್ನು ತಲುಪಿಸಲು ವಾಯುಪಡೆಯ ವಿಶೇಷ ವಿಮಾನಗಳನ್ನು ಬಳಸಿಕೊಳ್ಳುವ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ಅವರು ಅಧಿಕೃತವಾಗಿ ಖಚಿತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಇದಕ್ಕೂ ಮುನ್ನ ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್&zwnj; ಸಿಂಗ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಂವಹನ ಹಾಗೂ ಐಟಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಅತ್ಯುನ್ನತ ಮಟ್ಟದ ತುರ್ತು ಸಭೆಯೊಂದು ನಡೆದಿತ್ತು. ಈ ಸಭೆಯಲ್ಲಿ ಪ್ರಶ್ನೆಪತ್ರಿಕೆ ವಿತರಣಾ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಮತ್ತು ಪರೀಕ್ಷಾ ಭದ್ರತೆಯನ್ನು ತೀವ್ರಗೊಳಿಸಲು ವಾಯುಪಡೆಯನ್ನು ಬಳಸಿಕೊಳ್ಳುವ ಪ್ರಸ್ತಾಪವನ್ನು ಚರ್ಚಿಸಲಾಯಿತು. ಈ ಪ್ರಸ್ತಾವನೆಯ ಅಂತಿಮ ಬ್ಲೂಪ್ರಿಂಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರ ಒಪ್ಪಿಗೆಗಾಗಿ ಕಳುಹಿಸಲಾಗಿದ್ದು, ಪ್ರಧಾನಿಯವರ ಹಸಿರು ನಿಶಾನೆ ಸಿಗುತ್ತಿದ್ದಂತೆಯೇ ವಾಯುಪಡೆ ರಂಗಕ್ಕಿಳಿಯಲಿದೆ.&lt;/p&gt;&lt;img&gt;&lt;p&gt;ಮಾಧ್ಯಮ ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಭದ್ರತಾ ಯೋಜನೆಯ ಕುರಿತು ವಿಸ್ತಾರವಾಗಿ ಮಾತನಾಡಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj;, &quot;ಪರೀಕ್ಷೆಗಳು ಸುಗಮ, ಮುಕ್ತ ಮತ್ತು ಸಂಪೂರ್ಣ ನ್ಯಾಯಯುತವಾಗಿ ನಡೆಯುವಂತೆ ನೋಡಿಕೊಳ್ಳಲು ಸರ್ಕಾರವು ಅಂಚೆ ವ್ಯವಸ್ಥೆ, ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಬಹು ಇಲಾಖೆಗಳನ್ನು ಒಳಗೊಂಡ 'ಇಡೀ ಸರ್ಕಾರದ ವಿಧಾನ'ವನ್ನು ಅನುಸರಿಸುತ್ತಿದೆ,&quot; ಎಂದು ಸ್ಪಷ್ಟಪಡಿಸಿದರು.&lt;/p&gt;&lt;img&gt;&lt;p&gt;&quot;ಜೂನ್ ತಿಂಗಳ ಹವಾಮಾನ ಪರಿಸ್ಥಿತಿ (ತೀವ್ರ ಬೇಸಿಗೆ/ಮುಂಗಾರು ಆರಂಭ), ಸಾಗಣೆಯ ಸವಾಲುಗಳು ಮತ್ತು ಭದ್ರತಾ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಪ್ರಶ್ನೆ ಪತ್ರಿಕೆಗಳ ಸುರಕ್ಷಿತ ಸಾಗಣೆಯಲ್ಲಿ ಭಾರತೀಯ ವಾಯುಪಡೆಯನ್ನು ಒಳಗೊಳ್ಳಲು ನಿರ್ಧರಿಸಲಾಗಿದೆ. ಈ ಹಿಂದೆ ಕೇವಲ ಅಂಚೆ ಇಲಾಖೆ ಮಾಡುತ್ತಿದ್ದ ಕೆಲಸವನ್ನು ಈಗ ಭಾರತೀಯ ವಾಯುಪಡೆಯೂ ಬೆಂಬಲಿಸಲಿದೆ. ಇದರಿಂದಾಗಿ ಎಲ್ಲಾ ಆಯಾಮಗಳನ್ನು ಪರಿಗಣಿಸಿ ಪ್ರಶ್ನೆ ಪತ್ರಿಕೆಗಳು ಯಾವುದೇ ವಿಳಂಬವಿಲ್ಲದೆ, ಸಕಾಲದಲ್ಲಿ ಗಮ್ಯಸ್ಥಾನಗಳನ್ನು ತಲುಪಲಿವೆ,&quot; ಎಂದು ಪ್ರಧಾನ್ ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಮೇ 3ರಂದು ದೇಶಾದ್ಯಂತ ಇರುವ 551 ಕೇಂದ್ರಗಳು ಹಾಗೂ ವಿದೇಶಗಳ 14 ಕೇಂದ್ರಗಳಲ್ಲಿ ಏಕಕಾಲಕ್ಕೆ ನೀಟ್ ಪರೀಕ್ಷೆ ನಡೆದಿತ್ತು. ಆದರೆ ಪರೀಕ್ಷೆಗೂ ಮುನ್ನವೇ ಬಿಹಾರ್ ಸೇರಿದಂತೆ ವಿವಿಧೆಡೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ತನಿಖೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಇದರಿಂದಾಗಿ ದೇಶದ ಸುಮಾರು 23 ಲಕ್ಷ ವೈದ್ಯಕೀಯ ಆಕಾಂಕ್ಷಿಗಳು (Medical Aspirants) ತೀವ್ರ ಆತಂಕಕ್ಕೆ ಒಳಗಾಗಿದ್ದು, ಈಗ ಅನಿವಾರ್ಯವಾಗಿ ಮರುಪರೀಕ್ಷೆ ಬರೆಯುವಂತಾಗಿದೆ.&lt;/p&gt;&lt;img&gt;&lt;p&gt;ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಕಳೆದುಹೋಗಿರುವ ವಿಶ್ವಾಸವನ್ನು ಮರಳಿ ಗಳಿಸಲು ಕೇಂದ್ರ ಸರ್ಕಾರ ಈ ಬಾರಿ ಸೇನೆಯನ್ನು ಬಳಸಿಕೊಳ್ಳುವ ಕಠಿಣ ನಿರ್ಧಾರಕ್ಕೆ ಬಂದಿದೆ. ಮಿಲಿಟರಿ ದರ್ಜೆಯ ಭದ್ರತೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಾಗಿಸುವುದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ಸಾಗಣೆ ವೇಳೆ ನಡೆಯುವ ಭ್ರಷ್ಟಾಚಾರಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ ಎಂದು ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಜೂನ್ 21ರ ಮರುಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಮೋದಿ ಸರ್ಕಾರ ಸರ್ವಸನ್ನದ್ಧವಾಗಿದೆ ಎಂಬ ಸಂದೇಶವನ್ನು ಈ ಹೊಸ ಮಾಸ್ಟರ್ ಪ್ಲಾನ್ ಮೂಲಕ ರವಾನಿಸಲಾಗಿದೆ.&amp;nbsp;&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/education/neet-re-exam-govt-considers-indian-air-force-aircraft-to-secure-and-distribute-question-papers-gdp-5hh0cwp"/>
        </item>
        <item>
            <title><![CDATA[ಮತ್ತೆ 2 ಪರೀಕ್ಷಾ ಎಡವಟ್ಟು: CUET ವೇಳೆ ಭಾರಿ ತಾಂತ್ರಿಕ ಸಮಸ್ಯೆ, 2 ಗಂಟೆ ಪರೀಕ್ಷೆ ವಿಳಂಬ, ಸಿಬಿಎಸ್‌ಇ ಪೋರ್ಟಲ್‌ ಮೇಲೆ ಸೈಬರ್‌ ದಾಳಿ!]]></title>
            <link>https://kannada.asianetnews.com/education/two-major-exam-blunders-cuet-technical-glitch-delays-exam-cbse-portal-hacked-rav/articleshow-7a6vl4o</link>
            <guid isPermaLink="true">https://kannada.asianetnews.com/education/two-major-exam-blunders-cuet-technical-glitch-delays-exam-cbse-portal-hacked-rav/articleshow-7a6vl4o</guid>
            <pubDate>Sun, 31 May 2026 06:25:12 +0530</pubDate>
            <description><![CDATA[&lt;p&gt;ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ನಡೆಸಿದ ಸಿಯುಇಟಿ-ಯುಜಿ ಪರೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ, ಕೆಲವು ಕೇಂದ್ರಗಳಲ್ಲಿ ಪರೀಕ್ಷೆ ರದ್ದಾಗಿದೆ. ಇದರಿಂದಾಗಿ 3,700 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ.. ಇದೇ ವೇಳೆ, ಸಿಬಿಎಸ್&zwnj;ಇ ಮರುಮೌಲ್ಯಮಾಪನ ಪೋರ್ಟಲ್ ಮೇಲೆ ಸೈಬರ್ ದಾಳಿ ವರದಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksxqzjdhtp48yh9kfqzt81gs,imgname-----------------------2026-05-31t061637.804-1780188432816.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.31): &lt;/strong&gt;ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದ ಭಾರೀ ಮುಜುಗರಕ್ಕೆ ಒಳಗಾಗಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್&zwnj;ಟಿಎ) ನಡೆಸಿದ ಕಂಪ್ಯೂಟರ್ ಆಧರಿತ ಸಿಯುಇಟಿ-ಯುಜಿ ಪರೀಕ್ಷೆಯಲ್ಲೂ (ಕಾಮನ್ ಯೂನಿವರ್ಸಿಟಿ ಎಂಟ್ರನ್ಸ್&zwnj; ಎಕ್ಸಾಂ) ತಾಂತ್ರಿಕ ಸಮಸ್ಯೆ ಎದುರಾಗಿ ವಿದ್ಯಾರ್ಥಿಗಳು ಪರದಾಡುವಂತಾದ ಘಟನೆ ಶನಿವಾರ ನಡೆದಿದೆ. ಹೀಗಾಗಿ ಕೆಲ ಕೇಂದ್ರಗಳಲ್ಲಿ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ.&lt;/p&gt;&lt;h2&gt;2 ತಾಸು ತಡವಾಗಿ ಪರೀಕ್ಷೆ, ಕೆಲವೆಡೆ ರದ್ದು&lt;/h2&gt;&lt;p&gt;ದೇಶಾದ್ಯಂತ ಕೇಂದ್ರೀಯ ವಿವಿಗಳಿಗೆ ಪ್ರವೇಶ ಪಡೆಯಲು ಆಯೋಜಿಸಿದ್ದ ಕಂಪ್ಯೂಟರ್&zwnj; ಆಧರಿತ ಸಿಯುಇಟಿ ಪರೀಕ್ಷೆ ವೇಳೆ ಕೆಲ ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಇದರಿಂದ ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿದ್ದ ಮೊದಲ ಸುತ್ತಿನ ಪರೀಕ್ಷೆ ಸುಮಾರು 2 ಗಂಟೆ ವಿಳಂಬವಾಗಿ ನಡೆಯಿತು. ಕೆಲ ಕೇಂದ್ರಗಳಲ್ಲಿ ಪರೀಕ್ಷೆಯನ್ನೇ ರದ್ದು ಮಾಡಬೇಕಾಯಿತು.&lt;/p&gt;&lt;p&gt;ಪರೀಕ್ಷೆಗೆ ಸಹಯೋಗ ನೀಡಿದ್ದ ಟಿಸಿಎಸ್&zwnj; ಕಂಪನಿ ಕಡೆಯಿಂದ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದಾಗಿ ಈ ಗೊಂದಲ ಸೃಷ್ಟಿಯಾಯಿತು ಎಂದು ಎನ್&zwnj;ಟಿಎ ತಿಳಿಸಿದೆ.&lt;/p&gt;&lt;p&gt;ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚಿನ ಸಮಯಾವಕಾಶ ನೀಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ 2ನೇ ಪರೀಕ್ಷೆಯನ್ನು ಸಂಜೆ 4ರಿಂದ ನಡೆಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ.&lt;/p&gt;&lt;h3&gt;3,700 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ:&lt;/h3&gt;&lt;p&gt;ಶನಿವಾರ ಪರೀಕ್ಷೆ ವೇಳೆ ತಾಂತ್ರಿಕ ದೋಷ ಎದುರಾಗಿ ಪರೀಕ್ಷೆ ತಾತ್ಕಾಲಿಕವಾಗಿ ಸ್ಥಗಿತವಾಯಿತು. ಆದರೆ ಮಧ್ಯಾಹ್ನ 3 ಗಂಟೆಗೆ ಶುರುವಾಗಬೇಕಿದ್ದ ಶಿಫ್ಟ್&zwnj;-1 ಪರೀಕ್ಷೆಯನ್ನು, ದೋಷವನ್ನು ಸರಿಪಡಿಸಿ 4 ಗಂಟೆಗೆ ನಡೆಸಲಾಯಿತು. ಅಷ್ಟು ಹೊತ್ತಿನಲ್ಲಾಗಲೇ ಸುಮಾರು 3,700 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಂದ ಹೊರನಡೆದಿದ್ದರು. ಈ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ವ್ಯವಸ್ಥೆ ಮಾಡಲಾಗುವುದು ಎಂದು ಎನ್&zwnj;ಟಿಎ ತಿಳಿಸಿದೆ.&lt;/p&gt;&lt;h3&gt;ಮೋದಿಯಿಂದ ಶಿಕ್ಷಣ ವ್ಯವಸ್ಥೆ ಹಾಳು: ರಾಹುಲ್ ಗಾಂಧಿ ಕಿಡಿ&lt;/h3&gt;&lt;p&gt;ಪರೀಕ್ಷೆ ವಿಳಂಬಕ್ಕೆ ಸಾಮಾಜಿಕ ಜಾಲತಾಣ ಎಕ್ಸ್&zwnj;ನಲ್ಲಿ ಪೋಸ್ಟ್&zwnj; ಹಾಕಿ ಆಕ್ರೋಶ ಹೊರಹಾಕಿರುವ ರಾಹುಲ್&zwnj; ಗಾಂಧಿ, &lsquo;ನೀಟ್&zwnj;, ಸಿಬಿಎಸ್&zwnj;ಇ, ಎಸ್&zwnj;ಎಸ್&zwnj;ಸಿ ಆಯ್ತು, ಇದೀಗ ಸಿಯುಇಟಿ ಹೀಗೆ ನಾಲ್ಕೂ ಪರೀಕ್ಷೆ ನಡೆಸುವಲ್ಲಿ ಸರ್ಕಾರ ವಿಫಲವಾಗಿದೆ. ವಿಶ್ವಗುರು ಎಂದು ಹೇಳಿಕೊಳ್ಳುವವರಿಗೆ ದೇಶದಲ್ಲಿ ಒಂದೇ ಒಂದು ಪರೀಕ್ಷೆ ನಡೆಸಲೂ ಆಗುತ್ತಿಲ್ಲ. ಮೋದಿ ಇಡೀ ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ. ನೀವು ಯಾವ ಪೀಳಿಗೆಯ ಭವಿಷ್ಯ ಹಾಳು ಮಾಡುತ್ತಿದ್ದೀರೋ ಅವರೇ ನಿಮ್ಮನ್ನು ಉತ್ತರದಾಯಿ ಮಾಡಲಿದ್ದಾರೆ&rsquo; ಎಂದು ಕಿಡಿ ಕಾರಿದ್ದಾರೆ.&lt;/p&gt;&lt;h3&gt;ಪೋಷಕರಿಂದಲೂ ಆಕ್ರೋಶ:&lt;/h3&gt;&lt;p&gt;ಪರೀಕ್ಷೆ ವಿಳಂಬ ಕುರಿತು ಕೆಲ ವಿದ್ಯಾರ್ಥಿಗಳು, ಪೋಷಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಳಗ್ಗೆ 9ಕ್ಕೆ ಆರಂಭವಾಗಬೇಕಿದ್ದ ಪರೀಕ್ಷೆ 11 ಗಂಟೆವರೆಗೂ ಆರಂಭವೇ ಆಗಿರಲಿಲ್ಲ. ಯಾರೂ ಸರಿಯಾಗಿ ಮಾಹಿತಿ ನೀಡಲಿಲ್ಲ. ಮಕ್ಕಳು ಪರೀಕ್ಷಾ ಕೇಂದ್ರದಲ್ಲೇ ಉಳಿಯಬೇಕಾಯಿತು. ಎರಡ್ಮೂರು ಗಂಟೆ ಪೋಷಕರು ಬಿಸಿಲಲ್ಲೇ ಕಾಯುವಂತಾಯಿತು ಎಂದು ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;ಮತ್ತೆ 2 ಪರೀಕ್ಷಾ ಎಡವಟ್ಟು!&lt;/p&gt;&lt;p&gt;&lt;strong&gt;ಸಿಬಿಎಸ್&zwnj;ಇ ಪೋರ್ಟಲ್&zwnj; ಮೇಲೆ ಸೈಬರ್&zwnj; ದಾಳಿ&lt;/strong&gt;&lt;/p&gt;&lt;p&gt;&lt;strong&gt;ಪಿಟಿಐ ನವದೆಹಲಿ&lt;/strong&gt;: ಸಿಬಿಎಸ್&zwnj;ಇ(CBSE) ಹಾಗೂ ನೀಟ್(NEET) ಪರೀಕ್ಷಾ ಗೊಂದಲಗಳ ನಡುವೆ ಸಿಬಿಎಸ್&zwnj;ಇ ಮರುಮೌಲ್ಯಮಾಪನ ಪೋರ್ಟಲ್&zwnj;ನ ಪೇಮೆಂಟ್&zwnj; ಸಿಸ್ಟಂ (ಹಣ ಪಾವತಿ ವ್ಯವಸ್ಥೆ) ಮೇಲೆ ಸೈಬರ್&zwnj; ದಾಳಿ ನಡೆದಿದ್ದು, ಇದರಿಂದ ಹಲವು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.&lt;/p&gt;&lt;p&gt;ಪೋರ್ಟಲ್&zwnj;ನಲ್ಲಿ ಮರುಮೌಲ್ಯಮಾಪನದ ಶುಲ್ಕ ಅಸಹಜವಾಗಿ ಪ್ರದರ್ಶನವಾಗುತ್ತಿತ್ತು. ಕೆಲ ಪ್ರಕರಣದಲ್ಲಿ 1 ರು.ನಿಂದ ಕಂಡು ಕೇಳರಿಯದ 67,000-68,000 ರು. ವರೆಗೆ ಶುಲ್ಕ ಕಾಣಿಸಿಕೊಳ್ಳುತ್ತಿತ್ತು. &lsquo;ತಮಾಷೆಗಾಗಿಯೋ ಅಥವಾ ದುರುದ್ದೇಶದಿಂದಲೋ ಹ್ಯಾಕರ್&zwnj;ಗಳು ಈ ರೀತಿ ಮಾಡಿರಬಹುದು&rsquo; ಎಂಬ ಶಂಕೆ ಇದೆ.&lt;/p&gt;&lt;p&gt;ಇದೇ ವೇಳೆ, &lsquo; ಎಚ್&zwnj;ಡಿಎಫ್&zwnj;ಸಿ ಪೇಮೆಂಟ್&zwnj; ಗೇಟ್&zwnj;ವೇ ಸಂಬಂಧಿಸಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಕೆಲಕಾಲ ಆ ಗೇಟ್&zwnj;ವೇ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ&rsquo; ಎಂದೂ ಹೇಳಲಾಗಿದೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/two-major-exam-blunders-cuet-technical-glitch-delays-exam-cbse-portal-hacked-rav/articleshow-7a6vl4o"/>
        </item>
        <item>
            <title><![CDATA[ಸಿಇಟಿ ಫಲಿತಾಂಶ: ಟಾಪ್‌ 1000 ರ್‍ಯಾಂಕ್‌ನಲ್ಲಿ ಕನ್ನಡ ಮಾಧ್ಯಮದವರು ಬರೀ 9 ವಿದ್ಯಾರ್ಥಿಗಳು]]></title>
            <link>https://kannada.asianetnews.com/state/cet-results-2026-only-9-kannada-medium-students-in-top-1000-ranks-mrq/articleshow-7dxtgv7</link>
            <guid isPermaLink="true">https://kannada.asianetnews.com/state/cet-results-2026-only-9-kannada-medium-students-in-top-1000-ranks-mrq/articleshow-7dxtgv7</guid>
            <pubDate>Sun, 07 Jun 2026 07:10:00 +0530</pubDate>
            <description><![CDATA[&lt;p&gt;ಸಿಇಟಿ ಫಲಿತಾಂಶದಲ್ಲಿ ಸರ್ಕಾರಿ ಪಿಯು ಕಾಲೇಜು ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಾಧನೆ ಅತ್ಯಂತ ಕಳಪೆಯಾಗಿದೆ. ಎಂಜಿನಿಯರಿಂಗ್ ವಿಭಾಗದ ಟಾಪ್ 1000 ರ&zwj;್ಯಾಂಕ್&zwnj;ಗಳಲ್ಲಿ ಸರ್ಕಾರಿ ಕಾಲೇಜುಗಳಿಂದ ಕೇವಲ 12 ಮತ್ತು ಕನ್ನಡ ಮಾಧ್ಯಮದಿಂದ ಕೇವಲ 9 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯೂ ತೃಪ್ತಿಕರವಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಂಕಿ-ಅಂಶಗಳು ತಿಳಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktfvn51ath46ctaqcwwthqm1,imgname-cet-1780796265514.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಪ್ರಸಕ್ತ ಸಾಲಿನ ಸಿಇಟಿ ಫಲಿತಾಂಶದಲ್ಲಿ ಸರ್ಕಾರಿ ಪಿಯು ಕಾಲೇಜು ಹಾಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸಾಧನೆ ಬಹಳ ಕಳಪೆಯಾಗಿರುವುದು ಕಂಡು ಬಂದಿದೆ.&lt;/p&gt;&lt;p&gt;ಈ ವರ್ಷ ಸರ್ಕಾರಿ ಕಾಲೇಜುಗಳಿಂದ ಒಟ್ಟು 7,620 ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು. ಈ ಪೈಕಿ ಎಂಜಿನಿಯರಿಂಗ್&zwnj; ವಿಭಾಗದಲ್ಲಿ ಟಾಪ್&zwnj; 1000 ರ್&zwj;ಯಾಂಕ್&zwnj;ನೊಳಗೆ ಕೇವಲ 12 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಅದರಲ್ಲಿ ಬೆಂಗಳೂರು ನಗರದ 5, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಿಂದ ತಲಾ 2 ಮತ್ತು ಚಿತ್ರದುರ್ಗ, ಕಲಬುರಗಿ ಮತ್ತು ಮೈಸೂರಿನಿಂದ ತಲಾ ಒಬ್ಬರು ಸೇರಿದ್ದಾರೆ. ಇನ್ನು, 5000 ರ್&zwj;ಯಾಂಕ್&zwnj;ನೊಳಗೆ ಸರ್ಕಾರಿ ಕಾಲೇಜುಗಳ 53, ಅಗ್ರ 10 ಸಾವಿರ ರ&zwj;್ಯಾಂಕ್&zwnj;ಗಳಲ್ಲಿ 108 ವಿದ್ಯಾರ್ಥಿಗಳು ಮಾತ್ರ ಇದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂಕಿ-ಅಂಶಗಳನ್ನು ನೀಡಿದೆ.&lt;/p&gt;&lt;h2&gt;&lt;strong&gt;ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು&lt;/strong&gt;&lt;/h2&gt;&lt;p&gt;ಅದೇ ರೀತಿ, ಕನ್ನಡ ಮಾಧ್ಯಮದ ಸಾಧನೆ ಇನ್ನೂ ಕಳಪೆಯಾಗಿದ್ದು, ಟಾಪ್ 1000 ರ&zwj;್ಯಾಂಕ್&zwnj;ಗಳಲ್ಲಿ ಕೇವಲ ಒಂಬತ್ತು ವಿದ್ಯಾರ್ಥಿಗಳು, ಟಾಪ್ 5000ದಲ್ಲಿ 75 ವಿದ್ಯಾರ್ಥಿಗಳು ಮತ್ತು ಟಾಪ್ 10,000ರಲ್ಲಿ 226 ವಿದ್ಯಾರ್ಥಿಗಳು ಮಾತ್ರ ಸ್ಥಾನ ಪಡೆದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯೂ ತೃಪ್ತಿಕರವಾಗಿಲ್ಲ. ಟಾಪ್ 1000 ರ&zwj;್ಯಾಂಕ್&zwnj;ಗಳಲ್ಲಿ ಕೇವಲ 79 ವಿದ್ಯಾರ್ಥಿಗಳು, 5000 ರ್&zwj;ಯಾಂಕ್&zwnj;ನಲ್ಲಿ 499 ವಿದ್ಯಾರ್ಥಿಗಳು ಮತ್ತು 10000 ರ್&zwj;ಯಾಂಕ್&zwnj;ನಲ್ಲಿ 1292 ವಿದ್ಯಾರ್ಥಿಗಳು ಮಾತ್ರ ಇದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.&lt;/p&gt;&lt;p&gt;--&lt;/p&gt;&lt;h3&gt;&lt;strong&gt;ಹಿಜಾಬ್&zwnj;-ಜನಿವಾರ ವಿವಾದದಲ್ಲಿ ಸರಾಸರಿ ಅಂಕ&lt;/strong&gt;&lt;/h3&gt;&lt;p&gt;ಜನಿವಾರ ಮತ್ತು ಹಿಜಾಬ್&zwnj; ತೆಗೆಯುವಂತೆ ಒತ್ತಾಯಿಸಿದ ಪ್ರಕರಣಗಳಲ್ಲಿ ಕೆಲ ವಿಷಯಗಳ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಉಳಿದ ವಿಷಯಗಳಲ್ಲಿ ಪಡೆದ ಅಂಕಗಳ ಸರಾಸರಿ ಅಂಕ ಲೆಕ್ಕ ಹಾಕಿ ನೀಡಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಈ ಎರಡು ಪ್ರಕರಣಗಳಲ್ಲಿ ಸಮಸ್ಯೆಯಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮತ್ತು ಸರಾಸರಿ ಅಂಕ ಯಾವುದಾದರೂ ಒಂದು ಆಯ್ಕೆಗೆ ಅವಕಾಶ ನೀಡಲಾಗಿತ್ತು. ಅವರು ಸರಾಸರಿ ಅಂಕ ನೀಡುವ ಆಯ್ಕೆಗೆ ಲಿಖಿತ ಒಪ್ಪಿಗೆ ನೀಡಿದ್ದರು. ಅದರಂತೆ ಹಿಜಾಬ್&zwnj; ತೆಗೆಯುವಂತೆ ಒತ್ತಾಯಿಸಿದ ಕಾರಣಕ್ಕೆ ಓರ್ವ ವಿದ್ಯಾರ್ಥಿನಿ ಮಾತ್ರ ಮೊದಲ ದಿನದ ಪರೀಕ್ಷೆಗೆ ಹಾಜರಾಗಿರಲಿಲ್ಲ. ಅವರು ಎರಡನೇ ದಿನದ ಪರೀಕ್ಷೆಗೆ ಹಾಜರಾಗಿದ್ದರು. ಹಾಗಾಗಿ ಹಾಜರಾದ ವಿಷಯಗಳಲ್ಲಿ ಪಡೆದ ಅಂಕಗಳ ಸರಾಸರಿ ಲೆಕ್ಕ ಹಾಕಿ ಹಾಜರಾಗದ ವಿಷಯಗಳಿಗೆ ಅಂಕ ನೀಡಲಾಗಿದೆ.&lt;/p&gt;&lt;p&gt;ಅದೇ ರೀತಿ ಜನಿವಾರ ತೆಗೆಯುವಂತೆ ಒತ್ತಾಯಿಸಿದ ಪ್ರಕರಣದಲ್ಲಿ ನಾಲ್ವರು ವಿದ್ಯಾರ್ಥಿಗಳು ಎಲ್ಲ ವಿಷಯಗಳಿಗೂ ಹಾಜರಾಗಿದ್ದರು. ಆದರೂ ಸರ್ಕಾರದ ನಿರ್ದೇಶನದಂತೆ ಅವರಿಗೆ ಸಮಸ್ಯೆಯಾದ ದಿನದ ವಿಷಯದಲ್ಲಿ ಮರು ಪರೀಕ್ಷೆಗೆ ಅವಕಾಶ ನೀಡುವುದಾಗಿ ತಿಳಿಸಲಾಗಿತ್ತು. ಆದರೆ, ಅವರು ಎಲ್ಲ ವಿಷಯಗಳಿಗೂ ಮರು ಪರೀಕ್ಷೆ ಕೋರಿದ್ದರು. ಇದಕ್ಕೆ ಸರ್ಕಾರ ಒಪ್ಪಲಿಲ್ಲ. ಅವರು ಎಲ್ಲ ಪರೀಕ್ಷೆಗಳಿಗೂ ಹಾಜರಾಗಿದ್ದರಿಂದ ಅದರ ಮೌಲ್ಯಮಾನದಲ್ಲಿ ಬಂದ ಅಂಕಗಳನ್ನೇ ಪರಿಗಣಿಸಲಾಗಿದೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದರು.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cet-results-2026-only-9-kannada-medium-students-in-top-1000-ranks-mrq/articleshow-7dxtgv7"/>
        </item>
        <item>
            <title><![CDATA[ಬೆಂಗಳೂರು IISc-ವಾಧ್ವಾನಿ ಫೌಂಡೇಶನ್ ಜಂಟಿ ಹೆಜ್ಜೆ: ದೇಶದ ಅತ್ಯಾಧುನಿಕ ಆವಿಷ್ಕಾರ ಕೇಂದ್ರ, ಡೀಪ್-ಟೆಕ್ ರಂಗಕ್ಕೆ ಭಾರಿ ಬಲ!]]></title>
            <link>https://kannada.asianetnews.com/gallery/education/iisc-bengaluru-launches-wadhwani-innovation-centre-to-accelerate-india-s-deep-tech-and-quantum-startups-gdp-8297awm</link>
            <guid isPermaLink="true">https://kannada.asianetnews.com/gallery/education/iisc-bengaluru-launches-wadhwani-innovation-centre-to-accelerate-india-s-deep-tech-and-quantum-startups-gdp-8297awm</guid>
            <pubDate>Fri, 29 May 2026 14:06:18 +0530</pubDate>
            <description><![CDATA[&lt;p&gt;ಬೆಂಗಳೂರಿನ ಐಐಎಸ್&zwnj;ಸಿ ಆವರಣದಲ್ಲಿ 'ವಾಧ್ವಾನಿ-ಐಐಎಸ್&zwnj;ಸಿ ಇನ್ನೋವೇಶನ್ ಸೆಂಟರ್' ಉದ್ಘಾಟನೆಗೊಂಡಿದೆ. ಈ ಕೇಂದ್ರವು ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್&zwnj;ನಂತಹ ಡೀಪ್-ಟೆಕ್ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಲಿದ್ದು, ಸ್ಟಾರ್ಟ್&zwnj;ಅಪ್&zwnj;ಗಳಿಗೆ ಬೆಂಬಲ ನೀಡುತ್ತದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssd7ytg624za5k9gfvrds46,imgname-iisc--2--1780042955600.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಐಐಎಸ್&zwnj;ಸಿ ಆವರಣದಲ್ಲಿ 'ವಾಧ್ವಾನಿ-ಐಐಎಸ್&zwnj;ಸಿ ಇನ್ನೋವೇಶನ್ ಸೆಂಟರ್' ಉದ್ಘಾಟನೆಗೊಂಡಿದೆ. ಈ ಕೇಂದ್ರವು ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್&zwnj;ನಂತಹ ಡೀಪ್-ಟೆಕ್ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಲಿದ್ದು, ಸ್ಟಾರ್ಟ್&zwnj;ಅಪ್&zwnj;ಗಳಿಗೆ ಬೆಂಬಲ ನೀಡುತ್ತದೆ. &amp;nbsp;&lt;/p&gt;&lt;img&gt;&lt;p&gt;ಬೆಂಗಳೂರಿನ ಹೆಮ್ಮೆಯ ಸಂಸ್ಥೆಯಾದ ಇಂಡಿಯನ್ ಇನ್&zwnj;ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್&zwnj;ಸಿ) ಆವರಣದಲ್ಲಿ ದೇಶದ ಸಂಶೋಧನೆ ಹಾಗೂ ನಾವೀನ್ಯತೆ (Innovation) ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಅತ್ಯಾಧುನಿಕ 'ವಾಧ್ವಾನಿ-ಐಐಎಸ್&zwnj;ಸಿ ಇನ್ನೋವೇಶನ್ ಸೆಂಟರ್' ಅನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಹಾಗೂ ಖ್ಯಾತ ವಿಜ್ಞಾನಿ ಎ.ಎಸ್. ಕಿರಣ್ ಕುಮಾರ್ ಅವರು ಈ ನೂತನ ಕೇಂದ್ರಕ್ಕೆ ಚಾಲನೆ ನೀಡಿದರು. ಈ ಉದ್ಘಾಟನಾ ಸಮಾರಂಭದಲ್ಲಿ ವಾಧ್ವಾನಿ ಫೌಂಡೇಶನ್&zwnj;ನ ಸಿಇಒ ಡಾ. ಅಜಯ್ ಕೆಲಾ ಮತ್ತು ವಾಧ್ವಾನಿ ಇನ್ನೋವೇಶನ್ ನೆಟ್&zwnj;ವರ್ಕ್&zwnj;ನ (WIN) ವ್ಯವಸ್ಥಾಪಕ ನಿರ್ದೇಶಕ ಡಾ. ಶಿರ್ಷೇಂದು ಮುಖರ್ಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.&lt;/p&gt;&lt;img&gt;&lt;p&gt;ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆಗೆ ಹೊಸ ವೇಗ ನೀಡಲು ಸ್ಥಾಪಿತವಾಗಿರುವ ಈ ಕೇಂದ್ರದ ಪ್ರಮುಖ ಕಾರ್ಯಸೂಚಿಗಳು ಹೀಗಿವೆ:&lt;/p&gt;&lt;p&gt;&lt;strong&gt;ಡೀಪ್-ಟೆಕ್ ಆವಿಷ್ಕಾರಗಳಿಗೆ ಪ್ರೋತ್ಸಾಹ: &lt;/strong&gt;ಕೃತಕ ಬುದ್ಧಿಮತ್ತೆ (AI) ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್&zwnj;ನಂತಹ ಸುಧಾರಿತ ಡೀಪ್-ಟೆಕ್ ಆವಿಷ್ಕಾರಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು.&lt;/p&gt;&lt;p&gt;&lt;strong&gt;ಸ್ಟಾರ್ಟ್&zwnj;ಅಪ್&zwnj;ಗಳಿಗೆ ಸಕಾಲಿಕ ನೆರವು: &lt;/strong&gt;ಹೊಸ ಆಲೋಚನೆಗಳನ್ನು ಹೊಂದಿರುವ ಉದಯೋನ್ಮುಖ ಸ್ಟಾರ್ಟ್&zwnj;ಅಪ್&zwnj;ಗಳಿಗೆ ತಾಂತ್ರಿಕ ಹಾಗೂ ಆರ್ಥಿಕ ಮಾರ್ಗದರ್ಶನ ನೀಡುವುದು.&lt;/p&gt;&lt;p&gt;&lt;strong&gt;ಅಕಾಡೆಮಿಯಾ-ಕೈಗಾರಿಕೆ ಸಮನ್ವಯ: &lt;/strong&gt;ಶೈಕ್ಷಣಿಕ ಸಂಸ್ಥೆಗಳ ಸಂಶೋಧನೆಗಳನ್ನು ಉದ್ಯಮ ರಂಗದ (Industries) ಅಗತ್ಯತೆಗಳಿಗೆ ತಕ್ಕಂತೆ ರೂಪಿಸಲು ಎರಡೂ ವಲಯಗಳ ನಡುವೆ ದಾರಿದೀಪವಾಗಿ ಕೆಲಸ ಮಾಡುವುದು.&lt;/p&gt;&lt;p&gt;&lt;strong&gt;₹1,400 ಕೋಟಿ ರಾಷ್ಟ್ರೀಯ ಕಾರ್ಯಕ್ರಮದ ಭಾಗ: &lt;/strong&gt;&amp;gt; ಈ ನೂತನ ಕೇಂದ್ರವನ್ನು ಕಳೆದ ವರ್ಷ ವಾಧ್ವಾನಿ ಫೌಂಡೇಶನ್ ಘೋಷಿಸಿದ್ದ ಬೃಹತ್ ₹1,400 ಕೋಟಿ ಮೊತ್ತದ ರಾಷ್ಟ್ರೀಯ ಕಾರ್ಯಕ್ರಮದ ಒಪ್ಪಂದದ ಅಡಿಯಲ್ಲೇ ಐಐಎಸ್&zwnj;ಸಿ ಆವರಣದಲ್ಲಿ ತಲೆಎತ್ತಿದೆ.&lt;/p&gt;&lt;img&gt;&lt;p&gt;ಇನ್ನೋವೇಶನ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರು, &quot;ಕೇವಲ ಅತ್ಯಾಧುನಿಕ ತಂತ್ರಜ್ಞಾನವನ್ನು ಆವಿಷ್ಕರಿಸಿದರೆ ಸಾಲದು, ಆ ತಂತ್ರಜ್ಞಾನವು ದೇಶದ ಪ್ರಗತಿಗೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಒಳಿತಿಗೆ ಹೇಗೆ ಬಳಕೆಯಾಗುತ್ತದೆ ಎಂಬುದು ಮುಖ್ಯ,&quot; ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ಬಾಹ್ಯಾಕಾಶ ರಂಗದಲ್ಲಿ ಡಾ. ವಿಕ್ರಮ್ ಸಾರಾಭಾಯ್ ಹಾಗೂ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಡಾ. ಹೋಮಿ ಭಾಭಾ ಅವರು ಹೊಂದಿದ್ದ ದೂರದೃಷ್ಟಿಯನ್ನು ಸ್ಮರಿಸಿದ ಅವರು, &quot;ಇಂದಿನ ಜಗತ್ತಿನಲ್ಲಿ ಕ್ವಾಂಟಮ್ ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ ಮಟ್ಟದ ನಾಯಕನನ್ನಾಗಿ ಬೆಳೆಸಲು ಸರ್ಕಾರ ಮತ್ತು ದಾನಿಗಳ ಜಂಟಿ ಬೆಂಬಲ ಅತ್ಯಗತ್ಯ&quot; ಎಂದರು.&lt;/p&gt;&lt;p&gt;ವಾಧ್ವಾನಿ ಫೌಂಡೇಶನ್ ಸಿಇಒ ಡಾ. ಅಜಯ್ ಕೆಲಾ ಮಾತನಾಡಿ, &quot;ಭಾರತದಲ್ಲಿ ವಿಶ್ವದರ್ಜೆಯ ಸಂಶೋಧನಾ ಪ್ರತಿಭೆಗಳಿದ್ದಾರೆ. ಆದರೆ, ಸಂಶೋಧಕರ ಈ ಅಮೂಲ್ಯ ಐಡಿಯಾಗಳು ಕೇವಲ ಪ್ರಯೋಗಾಲಯದ ಫೈಲ್&zwnj;ಗಳಿಗೆ ಸೀಮಿತವಾಗಬಾರದು. ಅವುಗಳನ್ನು ಆದಷ್ಟು ಬೇಗ ವಾಣಿಜ್ಯ ಉತ್ಪನ್ನಗಳನ್ನಾಗಿ ಪರಿವರ್ತಿಸಿ, ಮಾರುಕಟ್ಟೆಗೆ ತರಲು ಮತ್ತು ಯಶಸ್ವಿ ಸ್ಟಾರ್ಟ್&zwnj;ಅಪ್&zwnj;ಗಳನ್ನಾಗಿ ರೂಪಿಸಲು ನಾವು ಐಐಎಸ್&zwnj;ಸಿಯಂತಹ ಜಾಗತಿಕ ಸಂಸ್ಥೆಯ ಜೊತೆ ಕೈಜೋಡಿಸಿದ್ದೇವೆ&quot; ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಈ ಉದ್ಘಾಟನೆಯ ಅಂಗವಾಗಿ ಐಐಎಸ್&zwnj;ಸಿ ಆವರಣದಲ್ಲಿ 'ಕ್ವಾಂಟಮ್ ಪಿಚ್ ಫೆಸ್ಟ್ 2026' ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇದಿಕೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಂಶೋಧಕರು ಹಾಗೂ ನವೋದ್ಯಮಿಗಳು ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕಮ್ಯುನಿಕೇಶನ್ ಕ್ಷೇತ್ರಕ್ಕೆ ಸಂಬಂಧಿಸಿದ ತಮ್ಮ ನಾವೀನ್ಯತೆಯ ಐಡಿಯಾಗಳನ್ನು ಹೂಡಿಕೆದಾರರ (Investors) ಮುಂದೆ ಪ್ರಸ್ತುತಪಡಿಸಿದರು. ಇಲ್ಲಿ ಆಯ್ಕೆಯಾಗುವ ಅತ್ಯುತ್ತಮ ಯೋಜನೆಗಳಿಗೆ ಐಐಎಸ್&zwnj;ಸಿ ವತಿಯಿಂದ ಉನ್ನತ ಮಟ್ಟದ ಮಾರ್ಗದರ್ಶನ ಮತ್ತು ಇನ್&zwnj;ಕ್ಯೂಬೇಶನ್ (Incubation) ಸೌಲಭ್ಯ ಸಿಗಲಿದೆ.&lt;/p&gt;&lt;img&gt;&lt;p&gt;ಇದೇ ಮಹತ್ವದ ಸಂದರ್ಭದಲ್ಲಿ 'ಇನ್&zwnj;ಕ್ಯೂಬೇಟ್' (Incubate) ಎಂಬ ಹೊಸ ಡಿಜಿಟಲ್ ಪ್ಲಾಟ್&zwnj;ಫಾರ್ಮ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಕ್ವಾಂಟಮ್ ತಂತ್ರಜ್ಞಾನದ ಆರಂಭಿಕ ಹಂತದ ಕಲ್ಪನೆಗಳು ಮತ್ತು ರಿಸರ್ಚ್&zwnj;ಗಳನ್ನು ವ್ಯವಸ್ಥಿತವಾಗಿ ಪೋಷಿಸಿ, ಅವುಗಳನ್ನು ದೊಡ್ಡ ಉದ್ದಿಮೆಗಳನ್ನಾಗಿ ಬೆಳೆಸುವುದು ಈ ಪ್ಲಾಟ್&zwnj;ಫಾರ್ಮ್&zwnj;ನ ಮುಖ್ಯ ಕಾರ್ಯಸೂಚಿಯಾಗಿದೆ. ಸಂಶೋಧಕರಿಗೆ ವಿಶ್ವದರ್ಜೆಯ ಮೂಲಸೌಕರ್ಯ ಹಾಗೂ ಪರಿಣಿತರ ಮಾರ್ಗದರ್ಶನ ನೀಡುವ ಮೂಲಕ ಭಾರತವನ್ನು ಜಾಗತಿಕ 'ಡೀಪ್-ಟೆಕ್' ಹಬ್ (Global Deep-Tech Hub) ಆಗಿ ರೂಪಿಸುವುದೇ ಈ ಇಡೀ ಯೋಜನೆಯ ಆಶಯವಾಗಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/education/iisc-bengaluru-launches-wadhwani-innovation-centre-to-accelerate-india-s-deep-tech-and-quantum-startups-gdp-8297awm"/>
        </item>
        <item>
            <title><![CDATA[1993 To 2026: ಒಂದೇ  ಶಾಲೆಯಲ್ಲಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕ!]]></title>
            <link>https://kannada.asianetnews.com/karnataka-districts/koppal-s-kanakareddy-madinala-teacher-who-retired-after-serving-in-the-same-school-for-33-years-tippanala-kanakagiri-mrq/articleshow-99vzsnx</link>
            <guid isPermaLink="true">https://kannada.asianetnews.com/karnataka-districts/koppal-s-kanakareddy-madinala-teacher-who-retired-after-serving-in-the-same-school-for-33-years-tippanala-kanakagiri-mrq/articleshow-99vzsnx</guid>
            <pubDate>Mon, 01 Jun 2026 06:25:43 +0530</pubDate>
            <description><![CDATA[&lt;p&gt;ತಿಪ್ಪನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಕನಕರೆಡ್ಡಿ ಮಾದಿನಾಳ ಅವರು ಸತತ 33 ವರ್ಷಗಳ ಕಾಲ ಸೇವೆ ಸಲ್ಲಿಸಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಅವಧಿಯಲ್ಲಿ ಸ್ಮಾರ್ಟ್&zwnj;ಕ್ಲಾಸ್, ಕಂಪ್ಯೂಟರ್ ಶಿಕ್ಷಣದಂತಹ ಸೌಲಭ್ಯಗಳನ್ನು ಒದಗಿಸಿ, ಇದೀಗ ಸೇವೆಯಿಂದ ನಿವೃತ್ತರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt0an5e79pyjt4xef9vqq955,imgname-kanakagiri-1780275123655.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಂ. ಪ್ರಹ್ಲಾದ್ ಕನಕಗಿರಿ&lt;/strong&gt;&lt;/p&gt;&lt;p&gt;&lt;strong&gt;ಕೊಪ್ಪಳ: &lt;/strong&gt;ಮುಖ್ಯ ಶಿಕ್ಷಕರೊಬ್ಬರು 33 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ, ತಿಂಗಳ ಹಿಂದೆ ಹಿರಿಯ ಮುಖ್ಯೋಪಾಧ್ಯಾಯರಾಗಿ ಬೇರೆ ಶಾಲೆಗೆ ವರ್ಗಾವಣೆಗೊಂಡು ಮೇ 30ರಂದು ನಿವೃತ್ತರಾಗಿದ್ದಾರೆ.&lt;/p&gt;&lt;p&gt;ಹೌದು, ತಾಲೂಕಿನ ತಿಪ್ಪನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತತ 33 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಕನಕರೆಡ್ಡಿ ಮಾದಿನಾಳ ಅವರು ತಿಂಗಳ ಹಿಂದೆ ಹಿರಿಯ ಮುಖ್ಯೋಪಾಧ್ಯಾಯರಾಗಿ ಮುಂಬಡ್ತಿ ಹೊಂದಿದ ಹಿನ್ನೆಲೆಯಲ್ಲಿ ಪಕ್ಕದ ಜೀರಾಳ ಗ್ರಾಮದ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡರು. ಒಂದೇ ತಿಂಗಳಲ್ಲಿ ನಿವೃತ್ತಿ ಹೊಂದಿದರು.&lt;/p&gt;&lt;p&gt;ಕನಕರೆಡ್ಡಿ ಅವರು 1993 ಜೂನ್ ತಿಂಗಳಲ್ಲಿ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅಂದು ಶಾಲೆ ವಾತಾವರಣ, ಕೊಠಡಿ, ನೋಡುವಂತಿರಲಿಲ್ಲ. ಕ್ರಮೇಣ ಗ್ರಾಮದ ಹಿರಿಯರ ಹಾಗೂ ಯುವಕರ ಜತೆ ಸಮನ್ವಯತೆ ಕಾಯ್ದುಕೊಂಡು ಕಲಿಕೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಮುಂದಾದರು. ಆನಂತರ 2015ಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡು ಗ್ರಾಮಸ್ಥರ, ಸರ್ಕಾರ ಮತ್ತು ಇಲಾಖೆಯ ಸಹಕಾರದಿಂದ ಹೊಸ ಕೊಠಡಿ ನಿರ್ಮಾಣ, ಬಿಸಿಯೂಟ, ಸಮತಟ್ಟಾದ ಮೈದಾನ ಸೇರಿ ನಾನಾ ಕಾರ್ಯ ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಿದರು.&lt;/p&gt;&lt;h2&gt;ಪಾಠದ ಜೊತೆ ಶಾಲೆಯಲ್ಲಿ ಅಭಿವೃದ್ಧಿ ಕೆಲಸ&lt;/h2&gt;&lt;p&gt;11 ವರ್ಷಗಳ ಮುಖ್ಯಶಿಕ್ಷಕರಾಗಿ ಸೇವೆಯಲ್ಲಿದ್ದಾಗ 6 ಮತ್ತು 7ನೇ ತರಗತಿ ಮಕ್ಕಳಿಗೆ ಸ್ಮಾರ್ಟ್&zwnj;ಕ್ಲಾಸ್, ಸೋಲಾರ್&zwnj; ಕಂಪನಿಗಳ ಜತೆ ಮಾತುಕತೆ ನಡೆಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಾಲಾ ಕಾಂಪೌಂಡ್ ನಿರ್ಮಾಣ, ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಶಾಲೆಗೆ ಬೇಕಾದ ಅಗತ್ಯ ಸಾಮಗ್ರಿ ಪಡೆದರು. ಸದ್ಯ ಶಾಲೆಯ 6 ಕಂಪ್ಯೂಟರ್&zwnj;ಗಳ ಮೂಲಕ ವಿದ್ಯಾರ್ಥಿಗಳಿಗೆ ಗಣಕಯಂತ್ರ ತರಬೇತಿ ನೀಡಲಾಗುತ್ತಿದೆ.&lt;/p&gt;&lt;p&gt;ತಾಲೂಕಿನಲ್ಲೆ ಹೆಚ್ಚು ಸರ್ಕಾರಿ ನೌಕರಿದಾರರನ್ನು ತಿಪ್ಪನಾಳ ಗ್ರಾಮ ಹೊಂದಿದೆ. ಬಡ, ಹಿಂದುಳಿದ ಮಕ್ಕಳು ಮುನ್ನಲೆಗೆ ತಂದು ನೌಕರರದಾರರನ್ನಾಗಿ ಮಾಡಲು ಮುಖ್ಯಶಿಕ್ಷಕ ಕನಕರೆಡ್ಡಿ ಪಾತ್ರ ದೊಡ್ಡದಿದೆ. ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ತಿಪ್ಪನಾಳ ಸರ್ಕಾರಿ ಶಾಲೆ ತಿರುಗಿ ನೋಡುವಂತೆ ಮಾಡಿರುವುದಕ್ಕೆ ಖುಷಿ ತಂದಿದೆ ಎಂದು ಹಿರಿಯ ಶಿಕ್ಷಕ ಶಿವಾನಂದ ಬೆಲ್ಲದ್ ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಮುಖ್ಯಶಿಕ್ಷಕ ಕನಕರೆಡ್ಡಿ ಭಾವುಕ ಮಾತು&lt;/strong&gt;&lt;/h3&gt;&lt;p&gt;ನಾನು ಮೂಲ ಕೃಷಿಕ. ಪಿಯುಸಿ ಮುಗಿಸಿದ್ದರಿಂದ ಶಿಕ್ಷಕ ವೃತ್ತಿಗೆ ಬಂದೆ. ಬಳಿಕ ಮಾವನವರಾದ ಹೇಮರೆಡ್ಡಿ ಶಿವನಗುಂಡಿ ಮಾರ್ಗದರ್ಶನದಲ್ಲಿ ತಿಪ್ಪನಾಳ ಶಾಲೆ ಆಯ್ಕೆ ಮಾಡಿಕೊಂಡು ಬಡ, ಹಿಂದುಳಿದ ಮಕ್ಕಳಿಗೆ ಓದು, ಬರಹ ಕಲಿಸಿದೆ. ಎಲ್ಲರೊಟ್ಟಿಗೆ ಬೆರೆತು ಶಾಲೆ ಅಭಿವೃದ್ಧಿಪಡಿಸಲು ಶ್ರಮಿಸಿದ್ದೇನೆ. ತಿಪ್ಪನಾಳ ಶಾಲೆಯಲ್ಲಿ 33 ವರ್ಷ ಹಿರಿಯ ಮುಖ್ಯೋಪಾಧ್ಯಾಯನಾಗಿ ಜೀರಾಳದಲ್ಲಿ 1 ತಿಂಗಳ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ ಎಂದು ನಿವೃತ್ತ ಮುಖ್ಯಶಿಕ್ಷಕ ಕನಕರೆಡ್ಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/koppal-s-kanakareddy-madinala-teacher-who-retired-after-serving-in-the-same-school-for-33-years-tippanala-kanakagiri-mrq/articleshow-99vzsnx"/>
        </item>
        <item>
            <title><![CDATA[KAAMS app for teachers: ಕರ್ನಾಟಕದ ಸರ್ಕಾರಿ ಶಿಕ್ಷಕರಿಗೆ ಹೊಸ ಹಾಜರಾತಿ ನಿಯಮ; ಫೇಸ್‌, ಲೊಕೇಶನ್‌ ಹಾಜರಾತಿ ಕಡ್ಡಾಯ!]]></title>
            <link>https://kannada.asianetnews.com/education/karnataka-teacher-facial-recognition-and-location-attendance-mandatory/articleshow-9goxu4k</link>
            <guid isPermaLink="true">https://kannada.asianetnews.com/education/karnataka-teacher-facial-recognition-and-location-attendance-mandatory/articleshow-9goxu4k</guid>
            <pubDate>Sun, 31 May 2026 09:07:58 +0530</pubDate>
            <description><![CDATA[&lt;p&gt;ರಾಜ್ಯ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕರಿಗೆ ಲೊಕೇಶನ್ ಮತ್ತು ಫೇಸ್ ಆಧರಿತ 'ಕೆಎಎಎಂಎಸ್&zwnj;' ಆ್ಯಪ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದ ಪ್ರಕಾರ, ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗದಿದ್ದರೆ ಅಥವಾ ಬೇಗ ನಿರ್ಗಮಿಸಿದರೆ, ಅದನ್ನು ರಜೆ ಎಂದು ಪರಿಗಣಿಸಿ ಕಠಿಣ ಕ್ರಮ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksy16s2112m6fz4vydev1qbg,imgname-----------------------2026-05-31t085645.476-1780198106177.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಜುನಾಥ ಕೆ.ಎಂ.&lt;/p&gt;&lt;p&gt;&lt;strong&gt;&amp;nbsp;ಬಳ್ಳಾರಿ (ಮೇ.31): &lt;/strong&gt;ಇನ್ನು ಮುಂದೆ ಸರ್ಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ ನಾನಾ ಕಾರಣವೊಡ್ಡಿ ಶಾಲೆಗೆ ತಡವಾಗಿ ಬರುವಂತಿಲ್ಲ. ಶಾಲೆಗೆ ಚಕ್ಕರ್ ಹೊಡೆದು ಅಲ್ಲಲ್ಲಿ ಓಡಾಡುವಂತಿಲ್ಲ.&lt;/p&gt;&lt;p&gt;ರಾಜ್ಯ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಿಂದ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ. ನಿರ್ದಿಷ್ಟ ಸಮಯ ಮೀರಿ ಶಾಲೆಗೆ ಹಾಜರಾದರೆ ಆ ದಿನ ಆಕಸ್ಮಿಕ ರಜೆಯೆಂದೇ ಪರಿಗಣಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಅಡ್ವಾನ್ಸ್&zwnj; ಅಟೆಂಡೆನ್ಸ್ ಮ್ಯಾನೇಜ್&zwnj;ಮೆಂಟ್ ಸಿಸ್ಟಮ್ (ಕೆಎಎಎಂಎಸ್&zwnj;) ಆ್ಯಪ್&zwnj; ರೂಪಿಸಲಾಗಿದೆ.&lt;/p&gt;&lt;p&gt;ಶುಕ್ರವಾರದಿಂದಲೇ ರಾಜ್ಯಾದ್ಯಂತ ಈ ನಿಯಮ ಜಾರಿಗೊಂಡಿದೆ. ಇನ್ಮುಂದೆ ಸರ್ಕಾರಿ ಶಾಲೆ ಶಿಕ್ಷಕರು ನಿರ್ದಿಷ್ಟ ಅವಧಿಯೊಳಗೆ ಶಾಲೆಗೆ ಹಾಜರಾಗಿ ದಿನಕ್ಕೆರೆಡು ಬಾರಿ ಲೊಕೇಶನ್, ಫೇಸ್ ಆಧರಿತ ಹಾಜರಾತಿ ಹಾಕಬೇಕಾಗಿದೆ. ಸರ್ಕಾರದ ಈ ನಿಲುವನ್ನು ಪೋಷಕರು, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರ ವಲಯ ಸ್ವಾಗತಿಸಿದೆ. ಇನ್ನೊಂದು ತಿಂಗಳಲ್ಲಿ ವಿದ್ಯಾರ್ಥಿಗಳಿಗೂ ಎಐ ಆಧಾರಿತ ಹಾಜರಾತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.&lt;/p&gt;&lt;h2&gt;ಹೊಂದಾಣಿಕೆಗೆ ಕುತ್ತು:&lt;/h2&gt;&lt;p&gt;ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ಪೈಕಿ ಕೆಲವರು ಶಾಲೆಗೆ ಹಾಜರಾಗದೆ ಹಾಜರಾತಿ ಪಡೆದುಕೊಂಡು ಸಂಬಳ ಮಾಡಿಕೊಳ್ಳುತ್ತಿದ್ದರು. ಕೆಲವರು ಮುಖ್ಯಗುರುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹಾಜರಾತಿ ಪಡೆದುಕೊಂಡರೆ, ಇನ್ನು ಕೆಲವರು ಸಂಘಟನೆ ಹೆಸರಿನಲ್ಲಿ ಓಡಾಡಿಕೊಂಡು ಶಾಲೆಗೆ ಗೈರಾಗುತ್ತಿದ್ದರು. ಶಾಲೆಗೆ ಗೈರಾಗುವುದನ್ನೇ ಕಾಯಕ ಮಾಡಿಕೊಂಡ ಅನೇಕ ಶಿಕ್ಷಕರು ಶಾಲೆಯ ಮುಖ ನೋಡುವುದೇ ಅಪರೂಪ ಎನ್ನುವಂತಾಗಿತ್ತು.&lt;/p&gt;&lt;h3&gt;ಬೇಗ ಹೋದರು ತೊಂದರೆ:&lt;/h3&gt;&lt;p&gt;ಶಿಕ್ಷಕರ ಕಡ್ಡಾಯ ಹಾಜರಾತಿ ಸಂಬಂಧ ಕೈಗೊಂಡ ತಂತ್ರಜ್ಞಾನ ಆಧರಿತ ಹಾಜರಾತಿ ಬಗ್ಗೆ ನಿರ್ಲಕ್ಷಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಿಗದಿತ ಶಾಲಾ ಅವಧಿ ಮುಗಿಯುವ ಮುನ್ನವೇ ಚೆಕ್&zwnj;ಔಟ್ ಆದಲ್ಲಿ ಆರಂಭಿಕ ನಿರ್ಗಮನ (Early Departure) ಎಂದು ಪರಿಗಣಿಸಿ, ಅದನ್ನು ಕರ್ತವ್ಯದ ಅವಗಣನೆ ಅಥವಾ ಕರ್ತವ್ಯ ಲೋಪ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಅರ್ಧ ದಿನದ ರಜೆ ಕಡಿತವಾಗಲಿದೆ.&lt;/p&gt;&lt;p&gt;ಶಾಲೆಯ ಅಧಿಕೃತ ಮುಕ್ತಾಯದ ಸಮಯಕ್ಕಿಂತ ತೀರಾ ಮುಂಚಿತವಾಗಿ (ಉದಾಹರಣೆಗೆ ಮಧ್ಯಾಹ್ನದ ಅವಧಿಯಲ್ಲಿ) ಯಾವುದೇ ಪೂರ್ವಾನುಮತಿ ಇಲ್ಲದೇ ಚೆಕ್&zwnj;ಔಟ್ ಆದರೆ ಆ ದಿನದ ದ್ವಿತೀಯಾರ್ಧವನ್ನು ಅರ್ಧ ದಿನದ ರಜೆ, ಅರ್ಧದಿನದ ಆಕಸ್ಮಿಕ ರಜೆ (ಸಿಎಲ್) ಎಂದು ಪರಿಗಣಿಸಲಾಗುವುದು. ರಜೆಯ ಖಾತೆಯಲ್ಲಿ ಆಕಸ್ಮಿಕ ರಜೆ ಬಾಕಿ ಇಲ್ಲದಿದ್ದರೆ, ಅದನ್ನು ಗಳಿಕೆ ರಜೆ (ಇಎಲ್) ಅಥವಾ ವೇತನ ರಹಿತ ರಜೆ ಎಂದು ಬದಲಾಯಿಸಲಾಗುತ್ತದೆ.&lt;/p&gt;&lt;p&gt;&lt;strong&gt;ಬಿಇಒ ನೋಟಿಸ್:&lt;/strong&gt;&lt;/p&gt;&lt;p&gt;ಒಂದು ತಿಂಗಳಲ್ಲಿ ಮೂರು ಬಾರಿ ತಡವಾಗಿ ಬರುವುದು ಮತ್ತು ಬೇಗ ಹೋಗುವುದು ಮಾಡಿದಲ್ಲಿ 1 ದಿನದ ಆಕಸ್ಮಿಕ ರಜೆ ಕಡಿತಗೊಳಿಸಲಾಗುವುದು. ​ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೇ ಬೇಗ ಚೆಕ್&zwnj;ಔಟ್ ಆಗುವುದು ಸತತ ಕಂಡುಬಂದಲ್ಲಿ ಅದನ್ನು &lsquo;ಅನಧಿಕೃತ ಗೈರುಹಾಜರಿ&rsquo; ಎಂದು ಪರಿಗಣಿಸಿ, ಬಿಇಒ ಅಥವಾ ಡಿಡಿಪಿಐ ಮಟ್ಟದಲ್ಲಿ ಕಾರಣ ಕೇಳುವ ನೋಟಿಸ್ ನೀಡಲಾಗುತ್ತದೆ. ​ಇದು ಸೇವಾ ವರದಿ ಮತ್ತು ವಾರ್ಷಿಕ ವೇತನ ಬಡ್ತಿ ಮೇಲೆಯೂ ಪ್ರಭಾವ ಬೀರಲಿದೆ.&lt;/p&gt;&lt;p&gt;&lt;strong&gt;ರಿಯಾಯಿತಿ ದರ ಅರ್ಧ ಗಂಟೆಗೆ ಹೆಚ್ಚಿಸಲಿ:&lt;/strong&gt;&lt;/p&gt;&lt;p&gt;ಶಾಲೆ ಬೆಳಗ್ಗೆ 9:45ಕ್ಕೆ ಆರಂಭ ಆಗುವುದಾದರೆ, 9:55 ಅಥವಾ 10 ಗಂಟೆ ಒಳಗೆ Check-in ಮಾಡಲು ಅವಕಾಶವಿದೆ. ಆದರೆ, ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಿಗೆ ಶಿಕ್ಷಕರು ತಲುಪುವುದು ಕಷ್ಟವಾಗಲಿದೆ. 15 ನಿಮಿಷಗಳ ರಿಯಾಯಿತಿ ಸಮಯ ಅರ್ಧಗಂಟೆಗೆ ಹೆಚ್ಚಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.&lt;/p&gt;&lt;p&gt;----&lt;/p&gt;&lt;p&gt;&lt;strong&gt;ಕ್ರಮ ಎದುರಿಸಿ&lt;/strong&gt;&lt;/p&gt;&lt;p&gt;ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಲಾಗಿದೆ. ಶಿಕ್ಷಕರು ಇಲಾಖೆಯ ಸೂಚನೆಯಂತೆ ನಿಗದಿತ ಸಮಯಕ್ಕೆ ಹಾಜರಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಇಲಾಖೆ ಕ್ರಮ ಎದುರಿಸಬೇಕು.&lt;/p&gt;&lt;p&gt;-ಬಿ.ಉಮಾದೇವಿ, ಡಿಡಿಪಿಐ ಬಳ್ಳಾರಿ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/karnataka-teacher-facial-recognition-and-location-attendance-mandatory/articleshow-9goxu4k"/>
        </item>
        <item>
            <title><![CDATA[Jobs: ಎಐ ಜಮಾನಾದಲ್ಲೂ ಈ ಉದ್ಯೋಗಗಳು ಸೇಫ್! ಯಾವುವು ಗೊತ್ತಾ?]]></title>
            <link>https://kannada.asianetnews.com/gallery/life/the-unstoppable-careers-why-these-professions-are-safe-from-the-ai-revolution-dw6z28f</link>
            <guid isPermaLink="true">https://kannada.asianetnews.com/gallery/life/the-unstoppable-careers-why-these-professions-are-safe-from-the-ai-revolution-dw6z28f</guid>
            <pubDate>Sat, 30 May 2026 20:22:53 +0530</pubDate>
            <description><![CDATA[&lt;p&gt;AI-proof jobs: ಕೃತಕ ಬುದ್ಧಿಮತ್ತೆ (AI) ಕ್ರಾಂತಿಯಿಂದಾಗಿ ಅನೇಕರ ಉದ್ಯೋಗಕ್ಕೆ ಕುತ್ತು ಬಂದಿದೆ. ಆದರೆ ಎಐ ಎಷ್ಟೇ ಮುಂದುವರಿದರೂ, ಮುಂದಿನ ಹಲವು ದಶಕಗಳ ಕಾಲ ಸುರಕ್ಷಿತವಾಗಿರುವ ಕೆಲವು ಉದ್ಯೋಗಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswnh6mxg3bfzytymsr0vh9g,imgname-jobs-1779950568506-1780152310429.jpg" type="image/jpeg" height="390" width="690"/>
            <content:encoded><![CDATA[&lt;p&gt;AI-proof jobs: ಕೃತಕ ಬುದ್ಧಿಮತ್ತೆ (AI) ಕ್ರಾಂತಿಯಿಂದಾಗಿ ಅನೇಕರ ಉದ್ಯೋಗಕ್ಕೆ ಕುತ್ತು ಬಂದಿದೆ. ಆದರೆ ಎಐ ಎಷ್ಟೇ ಮುಂದುವರಿದರೂ, ಮುಂದಿನ ಹಲವು ದಶಕಗಳ ಕಾಲ ಸುರಕ್ಷಿತವಾಗಿರುವ ಕೆಲವು ಉದ್ಯೋಗಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಮುಂದಿನ 100 ವರ್ಷಗಳ ಕಾಲ ಶೇ.100ರಷ್ಟು ಭದ್ರತೆ&lt;/strong&gt;ಕೃತಕ ಬುದ್ಧಿಮತ್ತೆ (AI) ಬಂದ ಮೇಲೆ ಉದ್ಯೋಗ ಭದ್ರತೆ ಅನ್ನೋದು ಮಾಯವಾಗಿದೆ. ಐಟಿಯಿಂದ ಹಿಡಿದು ಹಲವು ಕ್ಷೇತ್ರಗಳಲ್ಲಿ ಎಐ ಬಳಕೆ ಹೆಚ್ಚಾಗಿದ್ದು, ಮನುಷ್ಯರು ಮಾಡುತ್ತಿದ್ದ ಕೆಲಸವನ್ನು ಅದೇ ಮಾಡುತ್ತಿದೆ. ಇದರಿಂದಾಗಿ ಸಣ್ಣ ಸ್ಟಾರ್ಟ್&zwnj;ಅಪ್&zwnj;ಗಳಿಂದ ಹಿಡಿದು ದೊಡ್ಡ ಕಂಪನಿಗಳವರೆಗೆ ಉದ್ಯೋಗ ಕಡಿತ ಮಾಡುತ್ತಿವೆ. ಆದರೆ, ಎಐ ಎಷ್ಟೇ ವೇಗವಾಗಿ ಬೆಳೆದರೂ ಕೆಲವು ಉದ್ಯೋಗಗಳನ್ನು ಮುಟ್ಟಲು ಸಾಧ್ಯವಿಲ್ಲ. ಮುಂದಿನ 100 ವರ್ಷಗಳ ಕಾಲ ಶೇ.100ರಷ್ಟು ಭದ್ರತೆ ಇರುವ ಆ ಉದ್ಯೋಗಗಳ ಬಗ್ಗೆ ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;&lt;strong&gt;ವೆಲ್ಡರ್ ಅಥವಾ ಪ್ಲಂಬರ್ ಉದ್ಯೋಗ&lt;/strong&gt;ಈಗ ಎಲ್ಲೆಲ್ಲೂ 'ಕೃತಕ ಬುದ್ಧಿಮತ್ತೆ' (AI)ದ್ದೇ ಮಾತು. ChatGPT, ಜೆಮಿನಿಯಂತಹ ಟೂಲ್&zwnj;ಗಳಿಂದಾಗಿ ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳಿಂದ ಹಿಡಿದು ಕಂಟೆಂಟ್ ರೈಟರ್&zwnj;ಗಳವರೆಗೆ 'ನನ್ನ ಕೆಲಸ ಹೋಗುತ್ತಾ?' ಎಂಬ ಭಯದಲ್ಲಿದ್ದಾರೆ. ಆದರೆ, ಪ್ಲಂಬಿಂಗ್, ಎಲೆಕ್ಟ್ರಿಕಲ್, ಬಡಗತನದಂತಹ ಕೈಕೆಲಸಗಳನ್ನು ಯಾವುದೇ ಟೆಕ್ನಾಲಜಿ ಅಥವಾ ರೋಬೋಟ್&zwnj;ಗಳು ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಕೋಡಿಂಗ್ ಮಾಡುವವರಿಗಿಂತ ವೆಲ್ಡರ್ ಅಥವಾ ಪ್ಲಂಬರ್ ಉದ್ಯೋಗ ಹೆಚ್ಚು ಸುರಕ್ಷಿತ. ಪ್ಲಂಬರ್&zwnj;ಗಳು, ಎಲೆಕ್ಟ್ರಿಷಿಯನ್&zwnj;ಗಳು, ಬಡಗಿಗಳು, ಕಟ್ಟಡ ಕಾರ್ಮಿಕರು ಮತ್ತು ಆರ್ಕಿಟೆಕ್ಟ್&zwnj;ಗಳ ಕೆಲಸಕ್ಕೆ ಸದ್ಯಕ್ಕೆ ಧಕ್ಕೆ ಇಲ್ಲ. ಯಾಕೆಂದರೆ ಪ್ರತಿ ಮನೆಯ ನಿರ್ಮಾಣ, ರಿಪೇರಿ ವಿಭಿನ್ನವಾಗಿರುತ್ತದೆ. ಇದಕ್ಕೆ ಬೇಕಾದ ದೈಹಿಕ ಕೌಶಲ್ಯ ಮತ್ತು ಸ್ಥಳಕ್ಕೆ ತಕ್ಕಂತೆ ಯೋಚಿಸುವ ಸಾಮರ್ಥ್ಯ ರೋಬೋಟ್&zwnj;ಗಳಿಗೆ ಇನ್ನೂ ಬಂದಿಲ್ಲ.&lt;/p&gt;&lt;img&gt;&lt;p&gt;ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿಗಳಲ್ಲಿ, ಎಐ ಕೇವಲ ಡೇಟಾ ನೀಡಬಲ್ಲದು, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.&amp;nbsp;&lt;strong&gt;ಸಿಇಒಗಳು ಮತ್ತು ಬಿಸಿನೆಸ್ ಲೀಡರ್&zwnj;ಗಳು: &lt;/strong&gt;ಒಂದು ಸಂಸ್ಥೆಯ ಭವಿಷ್ಯದ ಯೋಜನೆ, ಸಂಸ್ಕೃತಿ ಮತ್ತು ಮಾನವ ಸಂಪನ್ಮೂಲವನ್ನು ನಿರ್ವಹಿಸಲು ನಾಯಕತ್ವದ ಗುಣಗಳು ಅತ್ಯಗತ್ಯ. ರಾಜಕೀಯ &lt;strong&gt;ನಾಯಕರು ಮತ್ತು ನೀತಿ ನಿರೂಪಕರು: &lt;/strong&gt;ಕಾನೂನುಗಳನ್ನು ರೂಪಿಸಲು, ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಯೋಜನೆಗಳನ್ನು ಜಾರಿಗೊಳಿಸಲು ಸಾಮಾಜಿಕ ತಿಳುವಳಿಕೆ ಬೇಕು. ಹೀಗಾಗಿ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮನುಷ್ಯರೇ ಆಡಳಿತಗಾರರಾಗಿರುತ್ತಾರೆ. ಯಂತ್ರಗಳು ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ.&lt;/p&gt;&lt;img&gt;&lt;p&gt;&lt;strong&gt;ಶಿಕ್ಷಣ ಕ್ಷೇತ್ರ&lt;/strong&gt;&lt;strong&gt;ಶಿಕ್ಷಕರು ಮತ್ತು ಪ್ರಾಧ್ಯಾಪಕರು: &lt;/strong&gt;ಎಐ ಒಂದು ಪಾಠವನ್ನು ಹೇಳಿಕೊಡಬಹುದು, ಆದರೆ ವಿದ್ಯಾರ್ಥಿಯ ವೈಯಕ್ತಿಕ ಪ್ರತಿಭೆಯನ್ನು ಗುರುತಿಸಿ, ಅವನನ್ನು ಪ್ರೋತ್ಸಾಹಿಸಿ, ಉತ್ತಮ ಶಿಸ್ತು ಕಲಿಸುವ 'ಗುರು' ಆಗಲು ಸಾಧ್ಯವಿಲ್ಲ.&amp;nbsp;&lt;strong&gt;ಸ್ಪೋರ್ಟ್ಸ್ ಕೋಚ್&zwnj;ಗಳು: &lt;/strong&gt;ಕ್ರೀಡಾಪಟುಗಳ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಅರಿತು, ಅವರನ್ನು ಉತ್ತೇಜಿಸಿ ಗೆಲ್ಲುವಂತೆ ಮಾಡುವ ಕಲೆ ಮನುಷ್ಯರಿಗೆ ಮಾತ್ರ ಸಾಧ್ಯ.&lt;/p&gt;]]></content:encoded>
            <category>education</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/the-unstoppable-careers-why-these-professions-are-safe-from-the-ai-revolution-dw6z28f"/>
        </item>
        <item>
            <title><![CDATA[ತುಮಕೂರು ವಿವಿ ಘಟಿಕೋತ್ಸವದಲ್ಲಿ ಎಡವಟ್ಟು; ಚಿನ್ನದ ಪದಕ ನೀಡಬೇಕಾದ ಗುತ್ತಿಗೆದಾರ ನಾಪತ್ತೆ, ವಿದ್ಯಾರ್ಥಿಗಳಿಗೆ ನಿರಾಸೆ]]></title>
            <link>https://kannada.asianetnews.com/gallery/education/tumakuru-university-gold-medal-row-gives-cash-check-instead-of-gold-medal-student-outraged-rav-gelvpcm</link>
            <guid isPermaLink="true">https://kannada.asianetnews.com/gallery/education/tumakuru-university-gold-medal-row-gives-cash-check-instead-of-gold-medal-student-outraged-rav-gelvpcm</guid>
            <pubDate>Thu, 04 Jun 2026 11:42:32 +0530</pubDate>
            <description><![CDATA[&lt;p&gt;ತುಮಕೂರು ವಿಶ್ವವಿದ್ಯಾಲಯದ 19 ನೇ ಘಟಿಕೋತ್ಸವದಲ್ಲಿ ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲು ಹಣದ ಚೆಕ್ ನೀಡಿರುವುದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿನ್ನದ ಪದಕ ತಯಾರಿಕೆ, ವಿತರಣೆಗೆ ಗುತ್ತಿಗೆ ನೀಡಿದ್ದ ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ಹಣದೊಂದಿಗೆ ನಾಪತ್ತೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt8kp4y453vdtj3yhj0h6sth,imgname-----------------------2026-06-04t113130.241-1780553028548.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು ವಿಶ್ವವಿದ್ಯಾಲಯದ 19 ನೇ ಘಟಿಕೋತ್ಸವದಲ್ಲಿ ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲು ಹಣದ ಚೆಕ್ ನೀಡಿರುವುದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿನ್ನದ ಪದಕ ತಯಾರಿಕೆ, ವಿತರಣೆಗೆ ಗುತ್ತಿಗೆ ನೀಡಿದ್ದ ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ಹಣದೊಂದಿಗೆ ನಾಪತ್ತೆ!&lt;/p&gt;&lt;img&gt;&lt;p&gt;ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆಯುವ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯವರು ಮಾಡಿದ ಯಡವಟ್ಟಿನಿಂದ ನಿರಾಸೆ ಉಂಟು ಮಾಡಿದ್ದು ವಿದ್ಯಾರ್ಥಿಗಳ ಅಸಮಾಧಾನ, ಆಕ್ರೋಶ ವ್ಯಕ್ತವಾಗಿದೆ..&lt;/p&gt;&lt;p&gt;ಹೌದು ಹಲವು ವರ್ಷಗಳಿಂದ ಕಠಿಣ ಶ್ರಮವಹಿಸಿ ಅಧ್ಯಯನ ಮಾಡಿ ಇದೀಗ ಚಿನ್ನದ ಪದಕ ಪಡೆಯುವ ಹಿಗ್ಗಿನಲ್ಲಿದ್ದರು ವಿದ್ಯಾರ್ಥಿಗಳು. ಆದರೆ ವಿಶ್ವವಿದ್ಯಾಲಯದ ಬೇಜವಾಬ್ದಾರಿ ಯಡವಟ್ಟಿನಿಂದಾಗಿ ಕೊನೆ ಕ್ಷಣದಲ್ಲಿ ಚಿನ್ನದ ಪದಕದ ಬದಲಿಗೆ ಹಣದ ಚೆಕ್&zwnj;ಗಳನ್ನು ನೀಡಿ ಕೈತೊಳೆದುಕೊಂಡಿರುವ ಆರೋಪ ಕೇಳಿಬಂದಿದ್ದು, ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ...&lt;/p&gt;&lt;img&gt;&lt;p&gt;ಚಿನ್ನದ ಪದಕ ನೀಡಬೇಕಾದ ಗುತ್ತಿಗೆದಾರನೇ ನಾಪತ್ತೆ!&lt;/p&gt;&lt;p&gt;ತುಮಕೂರು ವಿವಿ ಆಡಳಿತ ಮಂಡಳಿಯು ಚಿನ್ನದ ಪದಕಗಳ ತಯಾರಿಕೆ ಮತ್ತು ವಿತರಣೆಗಾಗಿ ಮಧ್ಯಪ್ರದೇಶ ಮೂಲದ ವ್ಯಕ್ತಿಗೆ ಗುತ್ತಿಗೆ ನೀಡಲಾಗಿತ್ತು. ಸುಮಾರು 7 ಲಕ್ಷ 90 ಸಾವಿರ ರೂಪಾಯಿ ವೆಚ್ಚದಲ್ಲಿ 119 ಚಿನ್ನ ಲೇಪಿತ ಬೆಳ್ಳಿ ಪದಕಗಳನ್ನು ತಯಾರಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಘಟಿಕೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಗುತ್ತಿಗೆದಾರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಇದರ ಪರಿಣಾಮ ಪದಕಗಳು ವಿಶ್ವವಿದ್ಯಾಲಯಕ್ಕೆ ತಲುಪಲೇ ಇಲ್ಲ. ಆದ್ದರಿಂದ ಆಡಳಿತ ಮಂಡಳಿ ಪದಕಗಳ ಬದಲಿಗೆ ಹಣದ ಚೆಕ್ ನೀಡಿ ಕೈತೊಳೆದುಕೊಂಡಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಚಿನ್ನದ ಪದಕ ನೀಡುವ ಬದಲು ಹಣದ ಚೆಕ್ ನೀಡಿದ ವಿವಿ ಆಡಳಿತ ಮಂಡಳಿ ಕ್ರಮಕ್ಕೆ ವಿದ್ಯಾರ್ಥಿಗಳು ವೇದಿಕೆಯ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಮಗೆ ಹಣ ಬೇಡ, ನಾವು ಗಳಿಸಿದ ಚಿನ್ನದ ಪದಕವೇ ಬೇಕು' ಎಂದು ಪಟ್ಟು ಹಿಡಿದರು. ಗುತ್ತಿಗೆದಾರನ ವಂಚನೆ, ತುಮಕೂರು ವಿವಿ ಆಡಳಿತ ಮಂಡಳಿ ಯಡವಟ್ಟಿನಿಂದಾಗಿ ನಮಗೆ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟಿಕೋತ್ಸವದಲ್ಲಾದ ಈ ಘಟನೆ ಚರ್ಚೆಗೆ ಅನುಮಾನಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ತುಮಕೂರು ವಿವಿ ಆಡಳಿತ ಮಂಡಳಿ ಚಿನ್ನದ ಪದಕಗಳ ತಯಾರಿಕೆಗೆ ಮಧ್ಯಪ್ರದೇಶ ಮೂಲದ ವ್ಯಕ್ತಿಗೆ ಗುತ್ತಿಗೆ ನೀಡಿರುವುದು ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಹೇಳುವಂತೆ, ಕರ್ನಾಟಕದಲ್ಲೇ ಹಲವು ಸಂಸ್ಥೆಗಳು, ಗುತ್ತಿಗೆದಾರರು ಲಭ್ಯವಿದ್ದರೂ ಅನ್ಯರಾಜ್ಯದ ವ್ಯಕ್ತಿಗೆ ಯಾವ ಆಧಾರದ ಮೇಲೆ ಗುತ್ತಿಗೆ ನೀಡಲಾಯಿತು?&amp;nbsp;&lt;/p&gt;&lt;img&gt;&lt;p&gt;ಆತನ ಹಿನ್ನೆಲೆ, ವಿಶ್ವಾಸಾರ್ಹತೆ ಪರಿಶೀಲಿಸಲಾಗಿತ್ತೇ? ಎಂಬ ಪ್ರಶ್ನೆಗಳು ಕೇಳಿಬಂದಿವೆ. ಅಲ್ಲದೇ ಇಷ್ಟೊಂದು ಮಹತ್ವದ ಘಟಿಕೋತ್ಸವಕ್ಕೆ ಸಂಬಂಧಿಸಿದ ಕೆಲಸ ನೀಡುವಾಗ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮುಂದಾಲೋಚನೆ ಮಾಡಿರಲಿಲ್ಲವೇ ಎಂಬ ಟೀಕೆಗಳೂ ವ್ಯಕ್ತವಾಗಿವೆ.&lt;/p&gt;&lt;img&gt;&lt;p&gt;ಇನ್ನೂ ಮಧ್ಯಪ್ರದೇಶ ಮೂಲದ ವ್ಯಕ್ತಿ ₹7.90 ಲಕ್ಷ ಮೊತ್ತದ ಗುತ್ತಿಗೆ ಪಡೆದು ಘಟಿಕೋತ್ಸವದ ಕೊನೆಯ ಕ್ಷಣದಲ್ಲಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿರುವುದು ಅನುಮಾನಗಳಿಗೆ ಮತ್ತಷ್ಟು ಎಡೆಮಾಡಿಕೊಟ್ಟಿದೆ. ಈ ಪ್ರಕರಣದಲ್ಲಿ ಯಾವುದೇ ಅವ್ಯವಹಾರ ಅಥವಾ ನಿರ್ಲಕ್ಷ್ಯ ನಡೆದಿದೆಯೇ ಎಂಬ ಅನುಮಾನವನ್ನು ಕೆಲ ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಗುತ್ತಿಗೆ ನೀಡಿದ ಪ್ರಕ್ರಿಯೆಯಿಂದ ಹಿಡಿದು ಹಣಕಾಸಿನ ವ್ಯವಹಾರಗಳವರೆಗೆ ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಘಟಿಕೋತ್ಸವದ ಸಂಭ್ರಮದ ದಿನವೇ ವಿದ್ಯಾರ್ಥಿಗಳಿಗೆ ನಿರಾಸೆಯಾಗಿರುವುದರಿಂದ ಈ ಪ್ರಕರಣದ ಸತ್ಯಾಂಶ ಹೊರಬರಬೇಕು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/education/tumakuru-university-gold-medal-row-gives-cash-check-instead-of-gold-medal-student-outraged-rav-gelvpcm"/>
        </item>
        <item>
            <title><![CDATA[ಐದು ವಿಭಾಗಗಳಲ್ಲಿ ಬೆಂಗಳೂರಿನ ನಯನಾ ಗೋಪಿ ನಂ.1; 7 ವಿಭಾಗಗಳಲ್ಲೂ ಟಾಪ್ 1 ರ್‍ಯಾಂಕ್‌ ಬೆಂಗ್ಳೂರು ಪಾಲು]]></title>
            <link>https://kannada.asianetnews.com/education/cet-results-bengaluru-s-nayana-gopi-number-1-in-five-categories-bengaluru-shares-top-1-rank-in-all-7-categories-mrq/articleshow-gysupag</link>
            <guid isPermaLink="true">https://kannada.asianetnews.com/education/cet-results-bengaluru-s-nayana-gopi-number-1-in-five-categories-bengaluru-shares-top-1-rank-in-all-7-categories-mrq/articleshow-gysupag</guid>
            <pubDate>Sun, 07 Jun 2026 07:29:27 +0530</pubDate>
            <description><![CDATA[&lt;p&gt;ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ-26 ಫಲಿತಾಂಶವನ್ನು ಪ್ರಕಟಿಸಿದೆ. ಎಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿದಂತೆ ಎಲ್ಲಾ ಏಳು ವಿಭಾಗಗಳಲ್ಲೂ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಪ್ರಥಮ ರ್&zwj;ಯಾಂಕ್&zwnj; ಪಡೆದಿದ್ದು, 2.92 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೌನ್ಸೆಲಿಂಗ್&zwnj;ಗೆ ಅರ್ಹತೆ ಪಡೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktfwt9f7qbtw8s35qymnzj7e,imgname-nayana-gopi-1780797482471.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನಲ್ಲಿ ವಿವಿಧ ವೃತ್ತಿಪರ ಕೋರ್ಸುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳ ಪ್ರವೇಶಕ್ಕೆ ಏಪ್ರಿಲ್&zwnj;ನಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಯುಜಿಸಿಇಟಿ-26) ಫಲಿತಾಂಶ ಪ್ರಕಟವಾಗಿದ್ದು, ಎಂಜಿನಿಯರಿಂಗ್&zwnj;, ಬಿಎಸ್ಸಿ ಕೃಷಿ ಸೇರಿ ಎಲ್ಲ ಏಳೂ ವಿಭಾಗಗಳಲ್ಲೂ ಬೆಂಗಳೂರಿನ ಎರಡು ಕಾಲೇಜುಗಳ ಮೂವರು ವಿದ್ಯಾರ್ಥಿಗಳು ಪ್ರಥಮ ರ್&zwj;ಯಾಂಕ್&zwnj; ಪಡೆದಿದ್ದಾರೆ.&lt;/p&gt;&lt;p&gt;ಬೆಂಗಳೂರಿನ ಶಿವನಗರದ ಬೇಸ್&zwnj; ಪಿಯು ಕಾಲೇಜಿನ ವಿದ್ಯಾರ್ಥಿನಿ ನಯನ ಗೋಪಿ ಪಶು ವೈದ್ಯಕೀಯ, ಬಿಎಸ್ಸಿ ನರ್ಸಿಂಗ್&zwnj;, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಬಿ ಫಾರ್ಮಾ, ಫಾರ್ಮಾ ಡಿ ಈ ಐದೂ ವಿಭಾಗಳಲ್ಲಿ ಪ್ರಥಮ ರ್&zwj;ಯಾಂಕ್&zwnj; ಪಡೆದಿದ್ದಾರೆ. ಎಂಜಿನಿಯರಿಂಗ್&zwnj; ವಿಭಾಗದಲ್ಲಿ ಜಯನಗರದ ಆರ್&zwnj;.ವಿ.ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್&zwnj;, ಅದೇ ಕಾಲೇಜಿನ ನಿನಾದ್&zwnj; ವಸಿಷ್ಠ್ ಕೃಷಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್&zwj;ಯಾಂಕ್&zwnj; ಪಡೆದಿದ್ದಾರೆ. ಒಟ್ಟು 2.09 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಕೌನ್ಸೆಲಿಂಗ್&zwnj; ಮೂಲಕ ಬೇರೆ ಬೇರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಈ ಬಾರಿ ಅರ್ಹತೆ ಪಡೆದಿದ್ದಾರೆ.&lt;/p&gt;&lt;p&gt;ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮಲ್ಲೇಶ್ವರದ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಫಲಿತಾಂಶ ಪ್ರಕಟಿಸಿದರು.&lt;/p&gt;&lt;h2&gt;&lt;strong&gt;ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಸಾಧನೆ&lt;/strong&gt;&lt;/h2&gt;&lt;p&gt;ಈ ಬಾರಿ ಫಲಿತಾಶಂದ ವಿಶೇಷವೆಂದರೆ ಪಶುವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್&zwnj; ವಿಭಾಗಗಳಲ್ಲಿ ವಿಜಯಪುರದ ಬಿಜಾಪುರ ಸರ್ಕಾರಿ ಬಾಲಕರ ಪಿಯು ಕಾಲೇಜಿನ ಬಸವರಾಜ್&zwnj; ಆವತಿ 4ನೇ ರ್&zwj;ಯಾಂಕ್&zwnj;, ಬಿ ಫಾರ್ಮಾ ಮತ್ತು ಫಾರ್ಮಾ ಡಿಯಲ್ಲಿ 6ನೇ ರ್&zwj;ಯಾಂಕ್&zwnj;, ಯೋಗ ಮತ್ತು ನ್ಯಾಚುರೋಪತಿಯಲ್ಲಿ 10ನೇ ರ್&zwj;ಯಾಂಕ್&zwnj; ತಮ್ಮದಾಗಿಸಿಕೊಂಡಿದ್ದಾರೆ. ತನ್ಮೂಲಕ ಈ ಬಾರಿಯ ಸಿಟಿಇಯಲ್ಲಿ ಟಾಪ್&zwnj; 10 ರ್&zwj;ಯಾಂಕ್&zwnj;ಗಳಲ್ಲಿ ಸ್ಥಾನ ಪಡೆದ ಸರ್ಕಾರಿ ಕಾಲೇಜಿನ ಏಕೈಕ ವಿದ್ಯಾರ್ಥಿ ಎನಿಸಿದ್ದಾನೆ.&lt;/p&gt;&lt;p&gt;ಮೊದಲ 5 ರ್&zwj;ಯಾಂಕ್&zwnj;ಗಳಲ್ಲಿ ಓರ್ವ ಸಿಬಿಎಸ್&zwnj;ಇ ವಿದ್ಯಾರ್ಥಿ ಹೊರತುಪಡಿಸಿದರೆ ಉಳಿದೆಲ್ಲರೂ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಾಗಿರುವುದು ಮತ್ತೊಂದು ವಿಶೇಷ. ಎಲ್ಲ ವಿಭಾಗಗಳಲ್ಲೂ ಟಾಪ್&zwnj; 10 ರ್&zwj;ಯಾಂಕ್&zwnj;ಗಳು ಖಾಸಗಿ ಕಾಲೇಜು ವಿದ್ಯಾರ್ಥಿಗಳ ಪಾಲಾಗಿವೆ. ಮೊದಲ 5 ರ್&zwj;ಯಾಂಕ್&zwnj; ಬೆಂಗಳೂರು, ದಾವಣಗೆರೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳು ಪಡೆದಿದ್ದಾರೆ.&lt;/p&gt;&lt;p&gt;ಈ ಬಾರಿ ಎಲ್ಲಾ ಏಳೂ ವಿಭಾಗಗಳಲ್ಲಿ ಮೊದಲ10 ರ್&zwj;ಯಾಂಕ್&zwnj;ಗಳಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲರೂ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಬಾರಿ ಸಿಬಿಎಸ್&zwnj;ಇ ಪಠ್ಯಕ್ರಮದ ವಿದ್ಯಾರ್ಥಿಗಳೇ ಹೆಚ್ಚು ಟಾಪರ್&zwnj;ಗಳಾಗಿದ್ದರು.&lt;/p&gt;&lt;h3&gt;&lt;strong&gt;ಒಟ್ಟು 2.92 ಲಕ್ಷ ಮಂದಿ ಕೌನ್ಸೆಲಿಂಗ್&zwnj;ಗೆ ಅರ್ಹರು&lt;/strong&gt;&lt;/h3&gt;&lt;p&gt;ಈ ಬಾರಿ ಸಿಇಟಿಗೆ ನೋಂದಣಿಯಾಗಿದ್ದ 3.30 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ 3,09,014 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಒಟ್ಟು 2,92,782 ಮಂದಿ ಬೇರೆ ಬೇರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ ಎಂಜಿನಿಯರಿಂಗ್&zwnj; ಕೋರ್ಸು ಪ್ರವೇಶಕ್ಕೆ 2,82,603 ವಿದ್ಯಾರ್ಥಿಗಳು, ಬಿಎಸ್ಸಿ (ಕೃಷಿ, ತೋಟಗಾರಿಕೆ, ಆಹಾರ ವಿಜ್ಞಾನ) ಪ್ರವೇಶಕ್ಕೆ 2,09,220 ಮಂದಿ, ಪಶುವೈದ್ಯಕೀಯಕ್ಕೆ 2,12,909, ಬಿ-ಫಾರ್ಮಾಗೆ 2,86,965, ಫಾರ್ಮಾ-ಡಿ ಪ್ರವೇಶಕ್ಕೆ 2,86,965, ಬಿಎಸ್ಸಿ ನರ್ಸಿಂಗ್&zwnj; ಕೋರ್ಸು ಪ್ರವೇಶಕ್ಕೆ 2,18,785 ವಿದ್ಯಾರ್ಥಿಗಳು ಮತ್ತು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸು ಪ್ರವೇಶಕ್ಕೆ 2,12,730 ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ ವಿವರಿಸಿದರು.&lt;/p&gt;&lt;p&gt;ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ -1 ಮತ್ತು 2 ಪರೀಕ್ಷೆಗಳ ಪೈಕಿ ಯಾವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಬಂದಿದೆಯೋ ಅದನ್ನು ಪರಿಗಣಿಸಿ ರ್&zwj;ಯಾಂಕಿಂಗ್&zwnj; ನೀಡಲಾಗಿದೆ. ಸಿಇಟಿ ಬರೆದಿದ್ದ ರಾಜ್ಯದ ಸಿಬಿಎಸ್&zwnj;ಇ, ಐಸಿಎಸ್&zwnj;ಇ 12ನೇ ತರಗತಿ ವಿದ್ಯಾರ್ಥಿಗಳ ಅಂಕಗಳನ್ನು ನೇರವಾಗಿ ಆಯಾ ಮಂಡಳಿ ವೆಬ್&zwnj;ಸೈಟ್&zwnj;ನಿಂದ ಪಡೆಯಲಾಗಿದೆ. ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಮಾತ್ರ ಅಂಕ ದಾಖಲಿಸಲು ಅವಕಾಶ ನೀಡಲಾಗಿತ್ತು ಎಂದು ಸಚಿವರು ತಿಳಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುಷ್ಬು ಗೋಯಲ್&zwnj; ಚೌಧರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್&zwnj;.ಪ್ರಸನ್ನ, ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್&zwnj; ಗದ್ಯಾಳ ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಎಂಜಿನಿಯರಿಂಗ್&zwnj; ತನಿಷಾ, ಕೃಷಿ ವಿಜ್ಞಾನ ನಿನಾದ್&zwnj;, 5 ವಿಭಾಗಗಳಲ್ಲಿ ನಯನ ಟಾಪರ್&zwnj;&lt;/strong&gt;&lt;/p&gt;&lt;p&gt;ಎಂಜಿನಿಯರಿಂಗ್&zwnj; ವಿಭಾಗದಲ್ಲಿ ಜಯನಗರ 3ನೇ ಹಂತದ ಆರ್&zwnj;.ವಿ.ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್&zwnj; (99.44 ಮೆರಿಟ್&zwnj;), ಇದೇ ಕಾಲೇಜಿನ ನಿನಾದ್&zwnj; ವಸಿಷ್ಠ್&zwnj;(98.75 ಮೆರಿಟ್&zwnj;) ಕೃಷಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್&zwj;ಯಾಂಕ್&zwnj; ಪಡೆದಿದ್ದಾರೆ. ಪಶುವೈದ್ಯಕೀಯ, ಬಿಎಸ್ಸಿ ನರ್ಸಿಂಗ್&zwnj;, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಬಿ ಫಾರ್ಮಾ, ಫಾರ್ಮಾ ಡಿ ವಿಭಾಗಳಲ್ಲಿ ಶಿವನಗರದ ಬೇಸ್&zwnj; ಪಿಯು ಕಾಲೇಜಿನ ವಿದ್ಯಾರ್ಥಿನಿ ನಯನ ಗೋಪಿ (ಒಟ್ಟು ಮೆರಿಟ್&zwnj; 100) ಪ್ರಥಮ ರ್&zwj;ಯಾಂಕ್&zwnj; ಪಡೆದಿದ್ದಾರೆ. ಈ ಐದು ವಿಭಾಗಗಳ ಪೈಕಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ (99.83 ಮೆರಿಟ್&zwnj;) ಹೊರತುಪಡಿಸಿ ಉಳಿದೆಲ್ಲವುಗಳಲ್ಲೂ ದಾವಣಗೆರೆಯ ಶ್ರೀ ಎಂವಿ ಪಿಯು ಕಾಲೇಜಿನ ಅಮೂಲ್ಯ ಒಟ್ಟು 100 ಮೆರಿಟ್&zwnj; ಅಂಕ ಪಡೆದು ಎರಡನೇ ರ್&zwj;ಯಾಂಕ್&zwnj; ಪಡೆದಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/cet-results-bengaluru-s-nayana-gopi-number-1-in-five-categories-bengaluru-shares-top-1-rank-in-all-7-categories-mrq/articleshow-gysupag"/>
        </item>
        <item>
            <title><![CDATA[ಶಿಕ್ಷಕರಿಗೆ ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ! ಶಾಲೆಗೆ ತಡವಾಗಿ ಬರುವ ಶಿಕ್ಷಕರಿಗೆ ಶಾಕ್]]></title>
            <link>https://kannada.asianetnews.com/state/karnataka-introduces-ai-based-attendance-for-government-school-teachers-latecomers-face-leave-deduction-kvn/articleshow-hh2k5c9</link>
            <guid isPermaLink="true">https://kannada.asianetnews.com/state/karnataka-introduces-ai-based-attendance-for-government-school-teachers-latecomers-face-leave-deduction-kvn/articleshow-hh2k5c9</guid>
            <pubDate>Sun, 31 May 2026 07:50:02 +0530</pubDate>
            <description><![CDATA[ಕರ್ನಾಟಕ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕರಿಗೆ ಲೊಕೇಶನ್ ಮತ್ತು ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ (KAAMS ಆ್ಯಪ್) ಜಾರಿಗೆ ತಂದಿದೆ. ಈ ಹೊಸ ನಿಯಮದ ಪ್ರಕಾರ, ನಿಗದಿತ ಸಮಯಕ್ಕೆ ಹಾಜರಾಗದಿದ್ದರೆ ಅಥವಾ ಅವಧಿಗೆ ಮುನ್ನ ನಿರ್ಗಮಿಸಿದರೆ ಅದನ್ನು ರಜೆ ಎಂದು ಪರಿಗಣಿಸಲಾಗುತ್ತದೆ ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpctzq1rzv9nwwday2tnjycp,imgname-nipun-shikshak-sarthi-yojana-technology-teacher-training-model-1776399932472.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಜುನಾಥ ಕೆ.ಎಂ. ಕನ್ನಡಪ್ರಭ&lt;/p&gt;&lt;p&gt;ಬಳ್ಳಾರಿ: ಇನ್ನು ಮುಂದೆ ಸರ್ಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ ನಾನಾ ಕಾರಣವೊಡ್ಡಿ ಶಾಲೆಗೆ ತಡವಾಗಿ ಬರುವಂತಿಲ್ಲ. ಶಾಲೆಗೆ ಚಕ್ಕರ್ ಹೊಡೆದು ಅಲ್ಲಲ್ಲಿ ಓಡಾಡುವಂತಿಲ್ಲ.&lt;/p&gt;&lt;p&gt;ರಾಜ್ಯ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಿಂದ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ. ನಿರ್ದಿಷ್ಟ ಸಮಯ ಮೀರಿ ಶಾಲೆಗೆ ಹಾಜರಾದರೆ ಆ ದಿನ ಆಕಸ್ಮಿಕ ರಜೆಯೆಂದೇ ಪರಿಗಣಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಅಡ್ವಾನ್ಸ್&zwnj; ಅಟೆಂಡೆನ್ಸ್ ಮ್ಯಾನೇಜ್&zwnj;ಮೆಂಟ್ ಸಿಸ್ಟಮ್ (ಕೆಎಎಎಂಎಸ್&zwnj;) ಆ್ಯಪ್&zwnj; ರೂಪಿಸಲಾಗಿದೆ.&lt;/p&gt;&lt;p&gt;ಶುಕ್ರವಾರದಿಂದಲೇ ರಾಜ್ಯಾದ್ಯಂತ ಈ ನಿಯಮ ಜಾರಿಗೊಂಡಿದೆ. ಇನ್ಮುಂದೆ ಸರ್ಕಾರಿ ಶಾಲೆ ಶಿಕ್ಷಕರು ನಿರ್ದಿಷ್ಟ ಅವಧಿಯೊಳಗೆ ಶಾಲೆಗೆ ಹಾಜರಾಗಿ ದಿನಕ್ಕೆರೆಡು ಬಾರಿ ಲೊಕೇಶನ್, ಫೇಸ್ ಆಧರಿತ ಹಾಜರಾತಿ ಹಾಕಬೇಕಾಗಿದೆ. ಸರ್ಕಾರದ ಈ ನಿಲುವನ್ನು ಪೋಷಕರು, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರ ವಲಯ ಸ್ವಾಗತಿಸಿದೆ. ಇನ್ನೊಂದು ತಿಂಗಳಲ್ಲಿ ವಿದ್ಯಾರ್ಥಿಗಳಿಗೂ ಎಐ ಆಧಾರಿತ ಹಾಜರಾತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.&lt;/p&gt;&lt;h2&gt;&lt;strong&gt;ಹೊಂದಾಣಿಕೆಗೆ ಕುತ್ತು:&lt;/strong&gt;&lt;/h2&gt;&lt;p&gt;ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ಪೈಕಿ ಕೆಲವರು ಶಾಲೆಗೆ ಹಾಜರಾಗದೆ ಹಾಜರಾತಿ ಪಡೆದುಕೊಂಡು ಸಂಬಳ ಮಾಡಿಕೊಳ್ಳುತ್ತಿದ್ದರು. ಕೆಲವರು ಮುಖ್ಯಗುರುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹಾಜರಾತಿ ಪಡೆದುಕೊಂಡರೆ, ಇನ್ನು ಕೆಲವರು ಸಂಘಟನೆ ಹೆಸರಿನಲ್ಲಿ ಓಡಾಡಿಕೊಂಡು ಶಾಲೆಗೆ ಗೈರಾಗುತ್ತಿದ್ದರು. ಶಾಲೆಗೆ ಗೈರಾಗುವುದನ್ನೇ ಕಾಯಕ ಮಾಡಿಕೊಂಡ ಅನೇಕ ಶಿಕ್ಷಕರು ಶಾಲೆಯ ಮುಖ ನೋಡುವುದೇ ಅಪರೂಪ ಎನ್ನುವಂತಾಗಿತ್ತು.&lt;/p&gt;&lt;h3&gt;&lt;strong&gt;ಬೇಗ ಹೋದರು ತೊಂದರೆ:&lt;/strong&gt;&lt;/h3&gt;&lt;p&gt;ಶಿಕ್ಷಕರ ಕಡ್ಡಾಯ ಹಾಜರಾತಿ ಸಂಬಂಧ ಕೈಗೊಂಡ ತಂತ್ರಜ್ಞಾನ ಆಧರಿತ ಹಾಜರಾತಿ ಬಗ್ಗೆ ನಿರ್ಲಕ್ಷಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಿಗದಿತ ಶಾಲಾ ಅವಧಿ ಮುಗಿಯುವ ಮುನ್ನವೇ ಚೆಕ್&zwnj;ಔಟ್ ಆದಲ್ಲಿ ಆರಂಭಿಕ ನಿರ್ಗಮನ (Early Departure) ಎಂದು ಪರಿಗಣಿಸಿ, ಅದನ್ನು ಕರ್ತವ್ಯದ ಅವಗಣನೆ ಅಥವಾ ಕರ್ತವ್ಯ ಲೋಪ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಅರ್ಧ ದಿನದ ರಜೆ ಕಡಿತವಾಗಲಿದೆ.&lt;/p&gt;&lt;p&gt;ಶಾಲೆಯ ಅಧಿಕೃತ ಮುಕ್ತಾಯದ ಸಮಯಕ್ಕಿಂತ ತೀರಾ ಮುಂಚಿತವಾಗಿ (ಉದಾಹರಣೆಗೆ ಮಧ್ಯಾಹ್ನದ ಅವಧಿಯಲ್ಲಿ) ಯಾವುದೇ ಪೂರ್ವಾನುಮತಿ ಇಲ್ಲದೇ ಚೆಕ್&zwnj;ಔಟ್ ಆದರೆ ಆ ದಿನದ ದ್ವಿತೀಯಾರ್ಧವನ್ನು ಅರ್ಧ ದಿನದ ರಜೆ, ಅರ್ಧದಿನದ ಆಕಸ್ಮಿಕ ರಜೆ (ಸಿಎಲ್) ಎಂದು ಪರಿಗಣಿಸಲಾಗುವುದು. ರಜೆಯ ಖಾತೆಯಲ್ಲಿ ಆಕಸ್ಮಿಕ ರಜೆ ಬಾಕಿ ಇಲ್ಲದಿದ್ದರೆ, ಅದನ್ನು ಗಳಿಕೆ ರಜೆ (ಇಎಲ್) ಅಥವಾ ವೇತನ ರಹಿತ ರಜೆ ಎಂದು ಬದಲಾಯಿಸಲಾಗುತ್ತದೆ.&lt;/p&gt;&lt;h3&gt;&lt;strong&gt;ಬಿಇಒ ನೋಟಿಸ್:&lt;/strong&gt;&lt;/h3&gt;&lt;p&gt;ಒಂದು ತಿಂಗಳಲ್ಲಿ ಮೂರು ಬಾರಿ ತಡವಾಗಿ ಬರುವುದು ಮತ್ತು ಬೇಗ ಹೋಗುವುದು ಮಾಡಿದಲ್ಲಿ 1 ದಿನದ ಆಕಸ್ಮಿಕ ರಜೆ ಕಡಿತಗೊಳಿಸಲಾಗುವುದು. ​ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೇ ಬೇಗ ಚೆಕ್&zwnj;ಔಟ್ ಆಗುವುದು ಸತತ ಕಂಡುಬಂದಲ್ಲಿ ಅದನ್ನು &lsquo;ಅನಧಿಕೃತ ಗೈರುಹಾಜರಿ&rsquo; ಎಂದು ಪರಿಗಣಿಸಿ, ಬಿಇಒ ಅಥವಾ ಡಿಡಿಪಿಐ ಮಟ್ಟದಲ್ಲಿ ಕಾರಣ ಕೇಳುವ ನೋಟಿಸ್ ನೀಡಲಾಗುತ್ತದೆ. ​ಇದು ಸೇವಾ ವರದಿ ಮತ್ತು ವಾರ್ಷಿಕ ವೇತನ ಬಡ್ತಿ ಮೇಲೆಯೂ ಪ್ರಭಾವ ಬೀರಲಿದೆ.&lt;/p&gt;&lt;h3&gt;&lt;strong&gt;ರಿಯಾಯಿತಿ ದರ ಅರ್ಧ ಗಂಟೆಗೆ ಹೆಚ್ಚಿಸಲಿ:&lt;/strong&gt;&lt;/h3&gt;&lt;p&gt;ಶಾಲೆ ಬೆಳಗ್ಗೆ 9:45ಕ್ಕೆ ಆರಂಭ ಆಗುವುದಾದರೆ, 9:55 ಅಥವಾ 10 ಗಂಟೆ ಒಳಗೆ Check-in ಮಾಡಲು ಅವಕಾಶವಿದೆ. ಆದರೆ, ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಿಗೆ ಶಿಕ್ಷಕರು ತಲುಪುವುದು ಕಷ್ಟವಾಗಲಿದೆ. 15 ನಿಮಿಷಗಳ ರಿಯಾಯಿತಿ ಸಮಯ ಅರ್ಧಗಂಟೆಗೆ ಹೆಚ್ಚಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.&lt;/p&gt;&lt;p&gt;----&lt;/p&gt;&lt;p&gt;ಕ್ರಮ ಎದುರಿಸಿ&lt;/p&gt;&lt;p&gt;ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಲಾಗಿದೆ. ಶಿಕ್ಷಕರು ಇಲಾಖೆಯ ಸೂಚನೆಯಂತೆ ನಿಗದಿತ ಸಮಯಕ್ಕೆ ಹಾಜರಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಇಲಾಖೆ ಕ್ರಮ ಎದುರಿಸಬೇಕು.&lt;/p&gt;&lt;p&gt;-ಬಿ.ಉಮಾದೇವಿ, ಡಿಡಿಪಿಐ ಬಳ್ಳಾರಿ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-introduces-ai-based-attendance-for-government-school-teachers-latecomers-face-leave-deduction-kvn/articleshow-hh2k5c9"/>
        </item>
        <item>
            <title><![CDATA[OSM ಪೋರ್ಟಲ್ ಹಗರಣದ ಬೆನ್ನಲ್ಲೇ ಕೇಂದ್ರ ಆಪರೇಷನ್‌: CBSE ಅಧ್ಯಕ್ಷ, ಕಾರ್ಯದರ್ಶಿ ವರ್ಗಾವಣೆ; ಭ್ರಷ್ಟಾಚಾರದ ಕುರಿತು ತನಿಖೆ]]></title>
            <link>https://kannada.asianetnews.com/education/cbse-osm-portal-scam-chairman-secretary-transferred-inquiry-committee-formed-san/articleshow-iyod2zt</link>
            <guid isPermaLink="true">https://kannada.asianetnews.com/education/cbse-osm-portal-scam-chairman-secretary-transferred-inquiry-committee-formed-san/articleshow-iyod2zt</guid>
            <pubDate>Tue, 02 Jun 2026 18:21:24 +0530</pubDate>
            <description><![CDATA[&lt;p&gt;ಸಿಬಿಎಸ್ಇಯ 'ಆನ್-ಸ್ಕ್ರೀನ್ ಮಾರ್ಕಿಂಗ್' (OSM) ಪೋರ್ಟಲ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮತ್ತು ತಾಂತ್ರಿಕ ವೈಫಲ್ಯಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyeemmq0wg1yd9kc9g7wwwn,imgname-cbse-class-12-marksheet-controversy-board-exam-trust-crisis-osm-revaluation-student-anxiety-1780211995287.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ (ಜೂ.2): ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ಇತ್ತೀಚೆಗೆ ಜಾರಿಗೆ ತಂದಿದ್ದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಾದ 'ಆನ್-ಸ್ಕ್ರೀನ್ ಮಾರ್ಕಿಂಗ್' (OSM) ಪೋರ್ಟಲ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಭಾರಿ ಆಡಳಿತಾತ್ಮಕ ಕ್ರಮ ಕೈಗೊಂಡಿದೆ. ಮಂಡಳಿಯ ಇಬ್ಬರು ಉನ್ನತ ಅಧಿಕಾರಿಗಳಾದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಒಎಸ್ಎಂ ಸೇವೆಗಳ ಟೆಂಡರ್ ಪ್ರಕ್ರಿಯೆಯ ತನಿಖೆಗಾಗಿ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಕಳೆದ ಕೆಲವು ವಾರಗಳಿಂದ ಸಿಬಿಎಸ್ಇ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆ, ಆನ್&zwnj;ಲೈನ್ ಪೋರ್ಟಲ್&zwnj;ನಲ್ಲಿನ ತಾಂತ್ರಿಕ ದೋಷಗಳು ಮತ್ತು ಖಾಸಗಿ ವೆಂಡರ್ (Vendor) ಆಯ್ಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ದಿಢೀರ್ ಕ್ರಮಕ್ಕೆ ಮುಂದಾಗಿದೆ.&lt;/p&gt;&lt;p&gt;ಸಿಬಿಎಸ್ಇ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಶಿಸ್ತುಕ್ರಮ ಜರುಗಿಸಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಮಂಡಳಿಯ ಒಟ್ಟಾರೆ ಕಾರ್ಯನಿರ್ವಹಣೆ ಮತ್ತು ಪರೀಕ್ಷಾ ಸುಧಾರಣೆಗಳ ನೇತೃತ್ವ ವಹಿಸಿದ್ದ ಸಿಬಿಎಸ್ಇ ಅಧ್ಯಕ್ಷ ರಾಹುಲ್ ಸಿಂಗ್ (IAS) ಹಾಗೂ ಮಂಡಳಿಯ ಆಡಳಿತ, ಹಣಕಾಸು ಮತ್ತು ಸಂಯೋಜನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಾರ್ಯದರ್ಶಿ ಹಿಮಾಂಶು ಗುಪ್ತಾ (IAS) ಅವರನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿದೆ. ದೇಶದ ಅತ್ಯಂತ ದೊಡ್ಡ ಶಾಲಾ ಪರೀಕ್ಷಾ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.&lt;/p&gt;&lt;p&gt;ದೇಶಾದ್ಯಂತ ತಲ್ಲಣ ಮೂಡಿಸಿದ್ದ ಸಿಬಿಎಸ್ಇ ಡಿಜಿಟಲ್ ವ್ಯವಸ್ಥೆ&lt;/p&gt;&lt;p&gt;ಇತ್ತೀಚೆಗೆ ಸಿಬಿಎಸ್ಇ 10 ಮತ್ತು 12 ನೇ ತರಗತಿಯ ಫಲಿತಾಂಶಗಳು ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಒಎಸ್ಎಂ (OSM) ಪೋರ್ಟಲ್&zwnj;ನಲ್ಲಿ ಉತ್ತರ ಪತ್ರಿಕೆಗಳನ್ನು ನೋಡುವಾಗ ಪುಟಗಳು ಮಸುಕಾಗಿರುವುದು (Blurred), ಪ್ರಮುಖ ವಿಭಾಗಗಳೇ ಕಾಣೆಯಾಗಿರುವುದು (Missing Sections) ಹಾಗೂ ಪೋರ್ಟಲ್ ಸಂಪೂರ್ಣವಾಗಿ ಕ್ರ್ಯಾಶ್ ಆಗಿರುವುದು ಬೆಳಕಿಗೆ ಬಂದಿತ್ತು. ಇದರಿಂದಾಗಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.&lt;/p&gt;&lt;p&gt;ಈ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆಯನ್ನು ಮಂಡಳಿಯು ಅತ್ಯಂತ ಆತುರವಾಗಿ ಮತ್ತು ಸೂಕ್ತ ಪರೀಕ್ಷೆಗಳನ್ನು ನಡೆಸದೇ ಜಾರಿಗೆ ತಂದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ, ಈ ಡಿಜಿಟಲ್ ಮೌಲ್ಯಮಾಪನ ಕಾಂಟ್ರಾಕ್ಟ್ ಅನ್ನು ಖಾಸಗಿ ವೆಂಡರ್&zwnj;ಗೆ ನೀಡಿದ ಟೆಂಡರ್ ಪ್ರಕ್ರಿಯೆ, ಸೈಬರ್ ಭದ್ರತೆಯ ದೋಷಗಳು ಹಾಗೂ ಮರು-ಮೌಲ್ಯಮಾಪನ (Re-evaluation) ಪ್ರಕ್ರಿಯೆಯಲ್ಲಿ ಉಂಟಾದ ಭಾರಿ ವಿಳಂಬದ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ವಿವಾದ ತಾರಕಕ್ಕೇರಿದಾಗ ಸಿಬಿಎಸ್ಇ ಮಂಡಳಿಯು ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ, ಹಲವು ಸ್ಪಷ್ಟೀಕರಣಗಳನ್ನು ನೀಡಿತ್ತಲ್ಲದೆ, ವಿದ್ಯಾರ್ಥಿಗಳ ಪ್ರತಿ ದೂರನ್ನು ಪರಿಶೀಲಿಸುವುದಾಗಿ ಹೇಳಿತ್ತು. ಆದರೂ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ತಣ್ಣಗಾಗಿರಲಿಲ್ಲ.&lt;/p&gt;&lt;p&gt;ಉನ್ನತ ಮಟ್ಟದ ಸಮಿತಿಯಿಂದ ಸಮಗ್ರ ತನಿಖೆ&lt;/p&gt;&lt;p&gt;ಈ ಇಡೀ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಒಎಸ್ಎಂ (OSM) ಸೇವೆಗಳ ಖರೀದಿ ಮತ್ತು ಗುತ್ತಿಗೆ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಖಾಸಗಿ ಕಂಪನಿಗೆ ಡಿಜಿಟಲ್ ಮೌಲ್ಯಮಾಪನದ ಕಾಂಟ್ರಾಕ್ಟ್ ಅನ್ನು ನಿಯಮಾನುಸಾರ ನೀಡಲಾಗಿದೆಯೇ? ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ಲಾ ಅಧಿಕೃತ ನಿಯಮಗಳನ್ನು ಪಾಲಿಸಲಾಗಿದೆಯೇ? ಮತ್ತು ತಾಂತ್ರಿಕ ವೈಫಲ್ಯಕ್ಕೆ ಕಾರಣ ಯಾರು? ಎಂಬಿತ್ಯಾದಿ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Santosh Naik</dc:creator>
            <atom:link href="https://kannada.asianetnews.com/education/cbse-osm-portal-scam-chairman-secretary-transferred-inquiry-committee-formed-san/articleshow-iyod2zt"/>
        </item>
        <item>
            <title><![CDATA[ರಾಜ್ಯದ ಸರ್ಕಾರಿ ಶಾಲೆಗಳಲ್ಲಿ  ಮೊದಲ ಹಂತದಲ್ಲಿ 40,067 ಅತಿಥಿ ಶಿಕ್ಷಕರ ನೇಮಕಾತಿಗೆ ಶಾಲಾ ಶಿಕ್ಷಣ ಇಲಾಖೆ ಆದೇಶ!]]></title>
            <link>https://kannada.asianetnews.com/education/karnataka-education-alert-government-orders-recruitment-of-40067-guest-teachers-in-first-phase-gdp/articleshow-kty0iv1</link>
            <guid isPermaLink="true">https://kannada.asianetnews.com/education/karnataka-education-alert-government-orders-recruitment-of-40067-guest-teachers-in-first-phase-gdp/articleshow-kty0iv1</guid>
            <pubDate>Sat, 30 May 2026 14:43:27 +0530</pubDate>
            <description><![CDATA[ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು, ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ಸಾಲಿಗೆ ಮೊದಲ ಹಂತದಲ್ಲಿ 40,067 ಅತಿಥಿ ಶಿಕ್ಷಕರನ್ನು ನೇಮಿಸಲು ಅಧಿಕೃತ ಆದೇಶ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk0aw4652cznfg6mvkv4b98z,imgname----------------------74--1772759158980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ನಲುಗುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ರಾಜ್ಯ ಸರ್ಕಾರವು ದೊಡ್ಡ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ತಡೆಯಲು, ಮೊದಲ ಹಂತದಲ್ಲಿ ಒಟ್ಟು 40,067 ಅತಿಥಿ ಶಿಕ್ಷಕರನ್ನು (Guest Teachers) ತಕ್ಷಣದಿಂದಲೇ ನೇಮಕ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;h2&gt;51 ಸಾವಿರ ಹುದ್ದೆಗಳಿಗೆ ಅನುಮೋದನೆ:&lt;/h2&gt;&lt;p&gt;ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ 60,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿಯಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ, 2026-27ನೇ ಶೈಕ್ಷಣಿಕ ಸಾಲಿಗೆ ಒಟ್ಟು 51,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರವು ಈ ಹಿಂದೆ ಹಸಿರು ನಿಶಾನೆ ನೀಡಿತ್ತು. ಇದರಲ್ಲಿ 40,000 ಪ್ರಾಥಮಿಕ ಹಾಗೂ 11,000 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಸೇರಿವೆ.&lt;/p&gt;&lt;p&gt;ಸರ್ಕಾರದ ಈ ಅನುಮೋದನೆಯನ್ವಯ, ಶಾಲಾ ಶಿಕ್ಷಣ ಇಲಾಖೆಯು ಇದೀಗ ಮೊದಲ ಹಂತದಲ್ಲಿ 40,067 ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ತೋರಿಸಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳು 30,337 ಅತಿಥಿ ಶಿಕ್ಷಕರ ನೇಮಕಾತಿ ಮತ್ತು ಸರ್ಕಾರಿ ಪ್ರೌಢ ಶಾಲೆಗಳು: 9,730 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದೆ. ಉಳಿದ ಹುದ್ದೆಗಳನ್ನು ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಹಂತ-ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.&lt;/p&gt;&lt;h2&gt;ಗೌರವ ಸಂಭಾವನೆ ಮತ್ತು ಆಯ್ಕೆಯ ಮಾನದಂಡಗಳು&lt;/h2&gt;&lt;p&gt;ನೇಮಕಗೊಳ್ಳುವ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆಯ ಜೊತೆಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ. ಆಯ್ಕೆಯಾಗುವ ಪ್ರತಿ ಅತಿಥಿ ಶಿಕ್ಷಕರಿಗೆ ಮಾಸಿಕ ₹12,000 ಗೌರವ ಸಂಭಾವನೆಯನ್ನು ನಿಗದಿಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಆಯ್ಕೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಿಗೆ (Headmasters) ವಹಿಸಲಾಗಿದೆ.&lt;/p&gt;&lt;p&gt;ಆದ್ಯತೆಯ ನಿಯಮಗಳು: ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ಮತ್ತು ಮೆರಿಟ್ (ಅಂಕಗಳ ಆಧಾರ) ಅನ್ನು ಪರಿಗಣಿಸಬೇಕು. ಇದರೊಂದಿಗೆ ಈ ಹಿಂದೆ ಬೋಧನಾ ವೃತ್ತಿಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.&lt;/p&gt;&lt;p&gt;ನಡತೆ ಪ್ರಮುಖ ಅರ್ಹತೆ: ಶಾಲೆಗಳಲ್ಲಿ ಮಕ್ಕಳ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಕೇವಲ ಉತ್ತಮ ಗುಣ ಹಾಗೂ ಸತ್ಪ್ರಜೆ ಎನಿಸಿಕೊಳ್ಳುವಂತಹ ನಡತೆ ಇರುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.&lt;/p&gt;&lt;h2&gt;ಬಿಇಒಗಳಿಗೆ ಕಠಿಣ ಎಚ್ಚರಿಕೆ ನೀಡಿದ ಶಿಕ್ಷಣ ಇಲಾಖೆ&lt;/h2&gt;&lt;p&gt;ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ಮತ್ತು ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ ನಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಠಿಣ ನಿಲುವು ತಳೆದಿದೆ.&lt;/p&gt;&lt;h2&gt;ಇಲಾಖೆಯ ಕಟ್ಟುನಿಟ್ಟಿನ ಎಚ್ಚರಿಕೆ:&lt;/h2&gt;&lt;p&gt;ಈ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು, ಭ್ರಷ್ಟಾಚಾರ ಅಥವಾ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ, ಅದಕ್ಕೆ ಸಂಬಂಧಪಟ್ಟ ತಾಲೂಕು ಅಥವಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ (BEO) ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಂತಹ ಅಧಿಕಾರಿಗಳ ವಿರುದ್ಧ ಇಲಾಖೆಯ ನಿಯಮಾವಳಿಗಳ ಪ್ರಕಾರ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಪ್ರಕಟಣೆ ಎಚ್ಚರಿಸಿದೆ. ರಾಜ್ಯ ಸರ್ಕಾರದ ಈ ಸಕಾಲಿಕ ನಿರ್ಧಾರದಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಬಹುಮಟ್ಟಿಗೆ ನೀಗಲಿದ್ದು, ಹೊಸ ಶೈಕ್ಷಣಿಕ ವರ್ಷದಲ್ಲಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-education-alert-government-orders-recruitment-of-40067-guest-teachers-in-first-phase-gdp/articleshow-kty0iv1"/>
        </item>
        <item>
            <title><![CDATA[ಉಚಿತ ಬಸ್​ ಪಾಸ್​ಗೆ ಅರ್ಜಿ ಸಲ್ಲಿಸೋದು ಹೇಗೆ? ವಿದ್ಯಾರ್ಥಿಗಳಿಗೆ ಹಂತ ಹಂತದ ಮಾಹಿತಿ ಇಲ್ಲಿದೆ]]></title>
            <link>https://kannada.asianetnews.com/gallery/karnataka-districts/how-to-apply-for-a-free-bus-pass-here-is-step-by-step-information-for-students-suc-ly3meqo</link>
            <guid isPermaLink="true">https://kannada.asianetnews.com/gallery/karnataka-districts/how-to-apply-for-a-free-bus-pass-here-is-step-by-step-information-for-students-suc-ly3meqo</guid>
            <pubDate>Thu, 04 Jun 2026 13:26:16 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿದ್ದಾರೆ. ಈ ಮೊದಲು ಶುಲ್ಕವಿದ್ದ ಬಸ್ ಪಾಸ್&zwnj;ಗಳು ಈಗ ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿದ್ದು, ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt8sw7sjcvj3fkf6rt7qwqkf,imgname-free-pass-1780559519537.jpg" type="image/jpeg" height="390" width="690"/>
            <content:encoded><![CDATA[ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿದ್ದಾರೆ. ಈ ಮೊದಲು ಶುಲ್ಕವಿದ್ದ ಬಸ್ ಪಾಸ್&zwnj;ಗಳು ಈಗ ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿದ್ದು, ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.&lt;img&gt;&lt;p&gt;ನಿನ್ನೆ (ಮೇ 4) ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್​ ಅವರು ಪ್ರಮಾಣ ವಚನ ಸ್ವೀಕರಿಸುತ್ತಲೇ ಆರು ಘೋಷಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಮುಖ್ಯವಾದದ್ದು ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​. ಈ ಮೊದಲು 150 ರೂಪಾಯಿಗಳಿಂದ 1,830 ರೂಪಾಯಿಗಳವರೆಗೆ ಈ ದರವಿತ್ತು. ಅದೀಗ ಸಂಪೂರ್ಣ ಮನ್ನಾ ಮಾಡಿ ನೂತನ ಸಿಎಂ ಡಿಕೆಶಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹೆಣ್ಣುಮಕ್ಕಳಿಗೆ ಇದಾಗಲೇ ಫ್ರೀ ಇದ್ದು, ಗಂಡು ಮಕ್ಕಳು ಉಚಿತವಾಗಿ ಇನ್ನು ಪಾಸ್​ ಪಡೆಯಬಹುದು.&lt;/p&gt;&lt;img&gt;&lt;p&gt;ಈ ಮೊದಲು 150 ರೂ. ಸೇವಾ ಶುಲ್ಕ ಸೇರಿ ಒಟ್ಟೂ ಮೊತ್ತ ಹೀಗಿದ್ದವು.&lt;/p&gt;&lt;p&gt;1 ರಿಂದ 7ನೇ ತರಗತಿ 150 ರೂ.&lt;/p&gt;&lt;p&gt;8 ರಿಂದ 10ನೇ ತರಗತಿ (ಬಾಲಕರಿಗೆ) 750 ರೂ.&lt;/p&gt;&lt;p&gt;11 ಮತ್ತು 12ನೇ ತರಗತಿ (ಪಿಯುಸಿ) &ndash; 1,050 ರೂ.&lt;/p&gt;&lt;p&gt;ಪದವಿ ಮತ್ತು ಸ್ನಾತಕೋತ್ತರ &ndash; 1,300 ರೂ.&lt;/p&gt;&lt;p&gt;ತಾಂತ್ರಿಕ ಮತ್ತು ವೈದ್ಯಕೀಯ &ndash; 1,830 ರೂ. ಇತ್ತು.&lt;/p&gt;&lt;p&gt;ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 150 ರೂ. ಸೇವಾ ಶುಲ್ಕ ಮಾತ್ರ ಇತ್ತು. ಈಗ ಎಲ್ಲರಿಗೂ ಫ್ರೀ.&lt;/p&gt;&lt;img&gt;&lt;p&gt;ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅದರ ಲಿಂಕ್​: https://sevasindhuservices.karnataka.gov.in/buspassservices/&lt;/p&gt;&lt;p&gt;ತಮ್ಮ ಮೊಬೈಲ್ ಫೋನ್ , ಸೈಬರ್ ಸೆಂಟರ್ ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.&lt;/p&gt;&lt;p&gt;ಸೈಬರ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸುವವರಿಗೆ ಫಾರ್ಮ್ ಗೆ 10 ರೂ. ಹಾಗೂ ಆನ್ ಲೈನ್ ಸೇವೆಗಾಗಿ 100 ರೂ. ಸೇವಾ ಶುಲ್ಕ ವಿಧಿಸಲಾಗುತ್ತದೆ.&lt;/p&gt;&lt;img&gt;&lt;p&gt;ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಆಧಾರ್ ಕಾರ್ಡ್ , ಪ್ರಸ್ತುತ ಶೈಕ್ಷಣಿಕ ವರ್ಷದ ಕಾಲೇಜು ಅಥವಾ ಶಾಲಾ ಪ್ರವೇಶಾತಿ ರಶೀದಿ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು ಅಗತ್ಯವಾಗಿವೆ. ಆನ್ ಲೈನ್ ಅರ್ಜಿ ಸಲ್ಲಿಸಿದ ಬಳಿಕ ವಿದ್ಯಾರ್ಥಿಯು ತನ್ನ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ (ಪ್ರಾಂಶುಪಾಲರು ಅಥವಾ ಮುಖ್ಯೋಪಾಧ್ಯಾಯರು) ಸಹಿ ಮತ್ತು ಸಂಸ್ಥೆಯ ಸೀಲು ಪಡೆದುಕೊಳ್ಳಬೇಕು.&lt;/p&gt;&lt;p&gt;ನಂತರ ಅರ್ಜಿಯನ್ನು ಬಿಎಂಟಿಸಿ- ಕೆಎಸ್​ಆರ್​ಟಿಸಿ ಪಾಸ್ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಅರ್ಜಿ ಅನುಮೋದನೆಯಾದ ಬಳಿಕ ವಿದ್ಯಾರ್ಥಿಯ ಮೊಬೈಲ್ ಸಂಖ್ಯೆಗೆ ಎಸ್ ಎಂಎಸ್ ಸಂದೇಶ ಕಳುಹಿಸಲಾಗುತ್ತದೆ.ಮೊಬೈಲ್ ಗೆ ಸಂದೇಶ ಬಂದ ನಂತರ ಬೆಂಗಳೂರಿನ ವಿದ್ಯಾರ್ಥಿಗಳು ಮೆಜೆಸ್ಟಿಕ್ , ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಹಾಗೂ ಆನೇಕಲ್ ಬಸ್ ನಿಲ್ದಾಣಗಳ ಟಿಟಿಎಂಸಿ ಕೇಂದ್ರಗಳಿಗೆ ಭೇಟಿ ನೀಡಿ ಬಸ್ ಪಾಸ್ ಪಡೆದುಕೊಳ್ಳಬಹುದು.&lt;/p&gt;&lt;img&gt;&lt;p&gt;ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ತಮ್ಮ ಮೊಬೈಲ್ ಫೋನ್ , ಸೈಬರ್ ಸೆಂಟರ್ ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.&lt;/p&gt;&lt;p&gt;ಸೈಬರ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸುವವರಿಗೆ ಫಾರ್ಮ್ ಗೆ 10 ರೂ. ಹಾಗೂ ಆನ್ ಲೈನ್ ಸೇವೆಗಾಗಿ 100 ರೂ. ಸೇವಾ ಶುಲ್ಕ ವಿಧಿಸಲಾಗುತ್ತದೆ.&lt;/p&gt;&lt;img&gt;&lt;p&gt;ಕ.ರಾ.ರ.ಸಾ.ನಿಗಮ ವ್ಯಾಪ್ತಿಯ 123 ಪಾಸ್ ವಿತರಣಾ ಕೌಂಟರ್&zwnj;ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್&zwnj;ಸೈಟ್&zwnj;ನಲ್ಲಿ ಒದಗಿಸಲಾಗಿದೆ. ನಿಗಮದ ವೆಬ್ ಸೈಟ್ ವಿಳಾಸ: https://ksrtc.karnataka.gov.in/studentpass&lt;/p&gt;&lt;p&gt;ಹೆಚ್ಚಿನ ಮಾಹಿತಿಗೆ ಸೇವಾ ಸಿಂಧು ಪೋರ್ಟ್​ https://ksrtc.karnataka.gov.in/50/%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%20%E0%B2%AC%E0%B2%B8%E0%B3%8D%E2%80%8C%20%E0%B2%AA%E0%B2%BE%E0%B2%B8%E0%B3%8D/kn&lt;/p&gt;&lt;p&gt;ಕ್ಲಿಕ್​ &amp;nbsp;ಮಾಡಿ&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/karnataka-districts/how-to-apply-for-a-free-bus-pass-here-is-step-by-step-information-for-students-suc-ly3meqo"/>
        </item>
        <item>
            <title><![CDATA[ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ, ಮಹತ್ವದ ಹೆಜ್ಜೆಗೆ ಸಕಾರಾತ್ಮಕ ಫಲಿತಾಂಶ!]]></title>
            <link>https://kannada.asianetnews.com/karnataka-districts/kannada-mandatory-for-medical-students-in-mangaluru-kmc-dean-welcomes-decision-gdp/articleshow-mzuxncb</link>
            <guid isPermaLink="true">https://kannada.asianetnews.com/karnataka-districts/kannada-mandatory-for-medical-students-in-mangaluru-kmc-dean-welcomes-decision-gdp/articleshow-mzuxncb</guid>
            <pubDate>Mon, 08 Jun 2026 18:41:23 +0530</pubDate>
            <description><![CDATA[ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (KMC), ರೋಗಿಗಳೊಂದಿಗೆ ಉತ್ತಮ ಸಂವಹನ ಮತ್ತು ಚಿಕಿತ್ಸೆಯ ಗುಣಮಟ್ಟವನ್ನು ಹೆಚ್ಚಿಸಲು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪ್ರಾವೀಣ್ಯತೆಯನ್ನು ಕಡ್ಡಾಯಗೊಳಿಸಿದೆ. ಕಳೆದ 10-15 ವರ್ಷಗಳಿಂದಲೇ ಜಾರಿಯಲ್ಲಿರುವ ಈ ನಿಯಮದ ಅಡಿಯಲ್ಲಿ, ಹೊರರಾಜ್ಯದ ವಿದ್ಯಾರ್ಥಿಗಳಿಗೆ ಮೊದಲ ವರ್ಷದಿಂದಲೇ ವ್ಯವಸ್ಥಿತ ಭಾಷಾ ತರಬೇತಿ ನೀಡಲಾಗುತ್ತಿದ್ದು, ಇದು ಅತ್ಯಂತ ಸಕಾರಾತ್ಮಕ ಫಲಿತಾಂಶ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktknm2erqr6b88e68zzk5fq2,imgname-kmc-mnagaluru-1780924156376.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವಿಯಾಗಲು ಮತ್ತು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸ್ಥಳೀಯ ಭಾಷಾ ಕೌಶಲ್ಯ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪ್ರಾವೀಣ್ಯತೆಯನ್ನು ಕಡ್ಡಾಯಗೊಳಿಸಿರುವ ನಿಯಮಕ್ಕೆ ವಿದ್ಯಾರ್ಥಿಗಳಿಂದ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (KMC) ಡೀನ್ ಆದ ಡಾ. ಬಿ. ಉನ್ನಿಕೃಷ್ಣನ್ ಅವರು ತಿಳಿಸಿದ್ದಾರೆ.&lt;/p&gt;&lt;p&gt;ಆಸ್ಪತ್ರೆಗೆ ಬರುವ ರೋಗಿಗಳ ಸಂಕಷ್ಟಗಳನ್ನು ಆಲಿಸಲು ಮತ್ತು ಅವರ ಆರೋಗ್ಯದ ಹಿನ್ನೆಲೆಯನ್ನು (Case History) ನಿಖರವಾಗಿ ದಾಖಲಿಸಿಕೊಳ್ಳಲು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಅರ್ಥವಾಗುವುದು ಅತ್ಯಂತ ಅನಿವಾರ್ಯ. ಭಾಷೆ ಬಾರದಿದ್ದರೆ ಆಸ್ಪತ್ರೆಯಲ್ಲಿ ಯಾವುದೇ ಪ್ರಕರಣಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;&lt;h2&gt;ಸಂವಹನ ಅಂತರ ನಿವಾರಣೆಗೆ ಕಡ್ಡಾಯ ನಿಯಮ&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಹೊರರಾಜ್ಯಗಳಿಂದ ಬರುವ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸ್ಥಳೀಯ ರೋಗಿಗಳ ನಡುವೆ ಸಂವಹನ ಕೊರತೆ ಎದ್ದು ಕಾಣುತ್ತಿತ್ತು. ಈ ಸಂವಹನ ಅಂತರವನ್ನು ಮನಗಂಡ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಸೂಪರಿಂಟೆಂಡೆಂಟ್ ಅವರು ಇತ್ತೀಚೆಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದರು.&lt;/p&gt;&lt;p&gt;ಆದರೆ, ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಕಳೆದ 10 ರಿಂದ 15 ವರ್ಷಗಳಿಂದಲೇ ಕನ್ನಡ ತರಗತಿಗಳನ್ನು ಶೈಕ್ಷಣಿಕ ಪಠ್ಯಕ್ರಮದ (Curriculum) ಒಂದು ಅವಿಭಾಜ್ಯ ಭಾಗವಾಗಿಸಲಾಗಿದೆ. ವೆನ್ಲಾಕ್ ಬೋಧನಾ ಆಸ್ಪತ್ರೆಯು ಈ ನಿಟ್ಟಿನಲ್ಲಿ ಕೆಎಂಸಿ ಕಾಲೇಜಿನೊಂದಿಗೆ ಅಧಿಕೃತ ಒಪ್ಪಂದವನ್ನು ಹೊಂದಿದೆ ಎಂದು ಡಾ. ಉನ್ನಿಕೃಷ್ಣನ್ ಮಾಹಿತಿ ನೀಡಿದರು.&lt;/p&gt;&lt;h2&gt;ಮೊದಲ ವರ್ಷದಿಂದಲೇ ವ್ಯವಸ್ಥಿತ ಭಾಷಾ ತರಬೇತಿ&lt;/h2&gt;&lt;p&gt;ದೇಶದ ವಿವಿಧ ಮೂಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಮೊದಲ ವರ್ಷದಿಂದಲೇ ವ್ಯವಸ್ಥಿತವಾಗಿ ಕನ್ನಡ ಭಾಷಾ ತರಬೇತಿ ನೀಡುವುದನ್ನು ಕೆಎಂಸಿ ಕಾಲೇಜು ಖಚಿತಪಡಿಸಿದೆ.&lt;/p&gt;&lt;p&gt;ಕಾಲೇಜಿನಲ್ಲಿ ಒಟ್ಟು 250 ವೈದ್ಯಕೀಯ ಸೀಟುಗಳಿದ್ದು, ಈ ಪೈಕಿ ಸುಮಾರು 80 ರಿಂದ 100 ವಿದ್ಯಾರ್ಥಿಗಳು ಕರ್ನಾಟಕ ಮೂಲದವರಾಗಿದ್ದಾರೆ. ಇದರಲ್ಲಿ ಅಖಿಲ ಭಾರತ ಕೋಟಾ (AIQ) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) 52 ಸೀಟುಗಳ ಕೋಟಾದ ಮೂಲಕ ಪ್ರವೇಶ ಪಡೆದ ಸ್ಥಳೀಯ ಅಭ್ಯರ್ಥಿಗಳು ಸೇರಿದ್ದಾರೆ. ಉಳಿದ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಆಸ್ಪತ್ರೆಯ ವಾತಾವರಣಕ್ಕೆ ಒಗ್ಗಿಕೊಳ್ಳಲು ವಿಶೇಷ ಭಾಷಾ ತರಗತಿಗಳನ್ನು ನಡೆಸಲಾಗುತ್ತಿದೆ.&lt;/p&gt;&lt;p&gt;ಹೊರರಾಜ್ಯದ ವಿದ್ಯಾರ್ಥಿಗಳು ಇಲ್ಲಿನ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ಸ್ಥಳೀಯರೊಂದಿಗೆ ಯಾವುದೇ ಮುಜುಗರವಿಲ್ಲದೆ ನಿರರ್ಗಳವಾಗಿ ಸಂವಹನ ನಡೆಸಲು ಅನುಕೂಲವಾಗುವಂತೆ ನಾವು ವಿಶೇಷ ಕನ್ನಡ ತರಗತಿಗಳನ್ನು ರೂಪಿಸಿದ್ದೇವೆ ಎಂದು ಡೀನ್ ವಿವರಿಸಿದರು.&lt;/p&gt;&lt;h2&gt;ಪ್ರಾಯೋಗಿಕ ಕಲಿಕೆ ಮತ್ತು ಸಾಂಸ್ಕೃತಿಕ ಪ್ರೋತ್ಸಾಹ&lt;/h2&gt;&lt;p&gt;ಈ ಭಾಷಾ ತರಬೇತಿಯು ಕೇವಲ ಸೈದ್ಧಾಂತಿಕವಾಗಿರದೆ, ಪ್ರಾಥಮಿಕವಾಗಿ ದಿನನಿತ್ಯದ ಸಂವಹನದ (Communication) ಮೇಲೆ ಹೆಚ್ಚಿನ ಗಮನ ಹರಿಸುತ್ತದೆ. ಇದರೊಂದಿಗೆ ರೋಗಿಗಳ ಚೀಟಿ ಅಥವಾ ಮೂಲಭೂತ ವಿವರಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುವಂತೆ ಮೂಲಭೂತ ಬರವಣಿಗೆಯ ಕೌಶಲ್ಯಗಳಿಗೂ (Writing Skills) ತರಬೇತಿಯಲ್ಲಿ ಒತ್ತು ನೀಡಲಾಗುತ್ತಿದೆ.&lt;/p&gt;&lt;p&gt;&lt;strong&gt;ವಿಶೇಷ ಪಠ್ಯಪುಸ್ತಕಗಳು&lt;/strong&gt;: ಕಾಲೇಜಿನಲ್ಲಿ ನುರಿತ ಕನ್ನಡ ಶಿಕ್ಷಕರಿದ್ದು, ವಿದ್ಯಾರ್ಥಿಗಳ ಸುಲಭ ಕಲಿಕೆಗಾಗಿ ಇಂಗ್ಲಿಷ್&zwnj;ನಿಂದ ಕನ್ನಡಕ್ಕೆ ಭಾಷಾಂತರ ಹೊಂದಿರುವ ವಿಶೇಷ ಭಾಷಾ ಕಲಿಕೆಯ ಕೈಪಿಡಿ ಹಾಗೂ ಪುಸ್ತಕಗಳನ್ನು ಒದಗಿಸಲಾಗುತ್ತಿದೆ.&lt;/p&gt;&lt;p&gt;&lt;strong&gt;ಅಧ್ಯಾಪಕರ ಬೆಂಬಲ: &lt;/strong&gt;ಕೆಎಂಸಿ ಕಾಲೇಜಿನ ಸುಮಾರು 90% ರಿಂದ 95% ರಷ್ಟು ಬೋಧಕ ಸಿಬ್ಬಂದಿ (Faculty) ಕನ್ನಡ ಮಾತನಾಡುವವರಾಗಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳು ದೈನಂದಿನ ವಾರ್ಡ್&zwnj;ಗಳ ಸಂದರ್ಶನದ ಸಮಯದಲ್ಲಿ ಕನ್ನಡವನ್ನು ಪ್ರಾಯೋಗಿಕವಾಗಿ ಕಲಿಯಲು ಅಧ್ಯಾಪಕರು ಸಕ್ರಿಯವಾಗಿ ಬೆಂಬಲ ನೀಡುತ್ತಿದ್ದಾರೆ.&lt;/p&gt;&lt;p&gt;ಪದವಿಪೂರ್ವ (Undergraduate) ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಿಂದ ಬಂದಿದ್ದರೂ, ವೆನ್ಲಾಕ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಬಹುತೇಕ ಹಿರಿಯ ವೈದ್ಯರು ಮತ್ತು ತಜ್ಞ ಸಲಹೆಗಾರರು (Consultants) ಕರ್ನಾಟಕದವರೇ ಆಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮಂಗಳೂರು ಮೂಲದವರೇ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯ ಸೂಕ್ಷ್ಮತೆಗಳನ್ನು ಕಲಿಯಲು ಮತ್ತಷ್ಟು ಸುಲಭವಾಗಿದೆ. ಭಾಷಾ ತರಬೇತಿಯ ಜೊತೆಗೆ, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಗೌರವ ಮೂಡಿಸಲು ಸಂಸ್ಥೆಯಲ್ಲಿ ಪ್ರತಿವರ್ಷ 'ಕನ್ನಡ ದಿವಸ' ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಡಗರದಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kannada-mandatory-for-medical-students-in-mangaluru-kmc-dean-welcomes-decision-gdp/articleshow-mzuxncb"/>
        </item>
        <item>
            <title><![CDATA[ನೀಟ್ ಪ್ರಶ್ನೆ ಪತ್ರಿಕೆ ವಾಯುಪಡೆಯ ಮಿ-17ನಲ್ಲಿ ರವಾನೆ, ಪೇಪರ್ ತಯಾರಿಸಿದವರಿಗೆ ಜೂನ್21ರವರೆಗೆ ಗೃಹಬಂಧನ!]]></title>
            <link>https://kannada.asianetnews.com/education/neet-re-exam-air-force-mi-17-choppers-to-transport-question-papers-amid-leak-prevention-isolated-paper-setters-gdp/articleshow-pzu79h2</link>
            <guid isPermaLink="true">https://kannada.asianetnews.com/education/neet-re-exam-air-force-mi-17-choppers-to-transport-question-papers-amid-leak-prevention-isolated-paper-setters-gdp/articleshow-pzu79h2</guid>
            <pubDate>Tue, 09 Jun 2026 13:25:34 +0530</pubDate>
            <description><![CDATA[ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಂತರ, ಜೂನ್ 21ರ ಮರುಪರೀಕ್ಷೆಗೆ ಕೇಂದ್ರ ಸರ್ಕಾರ ಅಭೂತಪೂರ್ವ ಭದ್ರತೆ ಒದಗಿಸಿದೆ. ಪ್ರಶ್ನೆಪತ್ರಿಕೆ ಸಾಗಣೆಗೆ ವಾಯುಪಡೆಯ ಮಿ-17 ಹೆಲಿಕಾಪ್ಟರ್&zwnj;ಗಳನ್ನು ಬಳಸಲಾಗುತ್ತಿದ್ದು, ಪತ್ರಿಕೆ ಸಿದ್ಧಪಡಿಸುವ ತಂಡವನ್ನು ಪರೀಕ್ಷೆ ಮುಗಿಯುವವರೆಗೂ ರಹಸ್ಯ ಸ್ಥಳದಲ್ಲಿ ಇರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01fx25njwhnp2q0xf0h78z5wm1,imgname-befunky-collage--30-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್-ಯುಜಿ (NEET-UG 2026) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬೆನ್ನಲ್ಲೇ, ಮುಂಬರುವ ಜೂನ್ 21ರ ಮರುಪರೀಕ್ಷೆಯನ್ನು ಅತ್ಯಂತ ಪಾರದರ್ಶಕ ಹಾಗೂ ಲೋಪದೋಷರಹಿತವಾಗಿ ನಡೆಸಲು ಕೇಂದ್ರ ಸರ್ಕಾರ ಅಭೂತಪೂರ್ವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷಾ ವ್ಯವಸ್ಥೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆಗಾಗಿ ಭಾರತೀಯ ವಾಯುಪಡೆಯ (IAF) ಅತ್ಯಾಧುನಿಕ ಮಿ-17 ಹೆಲಿಕಾಪ್ಟರ್&zwnj;ಗಳು ಸೇರಿದಂತೆ ಸೇನಾ ಭದ್ರತೆಯನ್ನು ಬಳಸಿಕೊಳ್ಳಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ನಿರ್ಧಾರ ಕೈಗೊಂಡಿದೆ.&lt;/p&gt;&lt;h2&gt;ಇತಿಹಾಸದಲ್ಲೇ ಮೊದಲ ಪ್ರಯೋಗ: ವಾಯುಪಡೆಯ &lsquo;ಮಿ-17&rsquo; ಕಾವಲು!&lt;/h2&gt;&lt;p&gt;ಇತ್ತೀಚಿನ ಪೇಪರ್ ಲೀಕ್ ಹಗರಣದಿಂದಾಗಿ ದೇಶದ ಪರೀಕ್ಷಾ ವ್ಯವಸ್ಥೆಯ ಮೇಲೆಯೇ ವಿದ್ಯಾರ್ಥಿಗಳು ಮತ್ತು ಪೋಷಕರು ಕಳೆದುಕೊಂಡಿರುವ ವಿಶ್ವಾಸವನ್ನು ಮರಳಿ ಗಳಿಸುವುದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಈಗ ಪ್ರತಿಷ್ಠೆಯ ಸವಾಲಾಗಿದೆ. ಈ ಕುರಿತು ಮಾಹಿತಿ ನೀಡಿರುವ NTA ಮಹಾನಿರ್ದೇಶಕ ಅಭಿಷೇಕ್ ಸಿಂಗ್, ಜೂನ್ 21ರಂದು ನಡೆಯಲಿರುವ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ನಿಗದಿತ ಕೇಂದ್ರಗಳಿಗೆ ಅತ್ಯಂತ ಸುರಕ್ಷಿತವಾಗಿ ತಲುಪಿಸಲು ಭಾರತೀಯ ವಾಯುಪಡೆಯ ವಿಮಾನಗಳು ಹಾಗೂ ಹೆಲಿಕಾಪ್ಟರ್&zwnj;ಗಳ ನೆರವು ಪಡೆಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ರಕ್ಷಣಾ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ದೇಶದ ಅತ್ಯಂತ ಆಯಕಟ್ಟಿನ 18 ಪ್ರಮುಖ ಸ್ಥಳಗಳಿಂದ ಪ್ರಶ್ನೆಪತ್ರಿಕೆಗಳ ಪ್ಯಾಕೆಟ್&zwnj;ಗಳನ್ನು ವಾಯುಪಡೆಯ ಮಿ-17 ಹೆಲಿಕಾಪ್ಟರ್&zwnj;ಗಳ ಮೂಲಕ ವಿವಿಧ ವಿತರಣಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಕೇವಲ ವೈಮಾನಿಕ ಸಾಗಣೆ ಅಷ್ಟೇ ಅಲ್ಲದೆ, ಹೆಲಿಕಾಪ್ಟರ್&zwnj;ನಿಂದ ಇಳಿಸಿದ ನಂತರ ಪ್ರತಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವವರೆಗಿನ ಪ್ರತಿಯೊಂದು ಹಂತದಲ್ಲೂ ಸಶಸ್ತ್ರ ಸೇನಾ ಪಡೆಯ ಕಠಿಣ ಕಾವಲು ಇರಲಿದೆ.&lt;/p&gt;&lt;h2&gt;ರಹಸ್ಯ ಸ್ಥಳದಲ್ಲಿ ಪತ್ರಿಕೆ ಸಿದ್ಧಪಡಿಸುವವರ &lsquo;ಲಾಕ್&zwnj;ಡೌನ್&rsquo;:&lt;/h2&gt;&lt;p&gt;ಪ್ರಶ್ನೆಪತ್ರಿಕೆ ಸಾಗಣೆಗಿಂತಲೂ ಮುಂಚಿತವಾಗಿ, ಅದು ಸಿದ್ಧವಾಗುವ ಹಂತದಲ್ಲೇ ಸೋರಿಕೆಯಾಗದಂತೆ ತಡೆಯಲು ಕೇಂದ್ರ ಶಿಕ್ಷಣ ಸಚಿವಾಲಯ ಅತ್ಯಂತ ಕಠಿಣ ಹೆಜ್ಜೆ ಇಟ್ಟಿದೆ. ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವವರು (Paper Setters), ಅವುಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡುವವರು ಹಾಗೂ ವಿವಿಧ ಭಾಷೆಗಳಿಗೆ ಅನುವಾದಿಸುವ ಕಾರ್ಯದಲ್ಲಿ ತೊಡಗಿರುವ ಇಡೀ ತಂಡವನ್ನು ಈಗಾಗಲೇ ಅತ್ಯಂತ ಸುರಕ್ಷಿತ ಮತ್ತು ರಹಸ್ಯ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.&lt;/p&gt;&lt;h2&gt;ಪರೀಕ್ಷೆ ಮುಗಿಯುವವರೆಗೂ ಹೌಸ್ ಅರೆಸ್ಟ್!&lt;/h2&gt;&lt;p&gt;ಜೂನ್ 21ರಂದು ಪರೀಕ್ಷೆ ಮುಗಿಯುವವರೆಗೂ ಈ ಇಡೀ ಸಿಬ್ಬಂದಿ ವರ್ಗ ಬಾಹ್ಯ ಪ್ರಪಂಚದಿಂದ ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿರುತ್ತಾರೆ. ಇವರ ಭದ್ರತಾ ನಿಯಮಗಳು ಹೀಗಿವೆ:&lt;/p&gt;&lt;p&gt;&lt;strong&gt;ಡಿಜಿಟಲ್ ಗಡಿಪಾರು: &lt;/strong&gt;ಈ ರಹಸ್ಯ ವಲಯದಲ್ಲಿರುವ ಯಾರೊಬ್ಬರಿಗೂ ಮೊಬೈಲ್ ಫೋನ್, ಲ್ಯಾಪ್&zwnj;ಟಾಪ್, ಸ್ಮಾರ್ಟ್&zwnj;ವಾಚ್ ಸೇರಿದಂತೆ ಯಾವುದೇ ವೈಯಕ್ತಿಕ ಸಂವಹನ ಸಾಧನಗಳನ್ನು ಬಳಸಲು ಅನುಮತಿಯಿಲ್ಲ.&lt;/p&gt;&lt;p&gt;&lt;strong&gt;ಇಂಟರ್ನೆಟ್ ಜ್ಯಾಮರ್:&lt;/strong&gt; ಇಡೀ ಆವರಣದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಅಥವಾ ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒಳಪಡಿಸಲಾಗಿದೆ.&lt;/p&gt;&lt;p&gt;&lt;strong&gt;24 ಗಂಟೆ ಹದ್ದಿನ ಕಣ್ಣು: &lt;/strong&gt;ವಿಶೇಷ ಅನುಮತಿ ಇರುವವರನ್ನು ಹೊರತುಪಡಿಸಿ ಯಾರಿಗೂ ಈ ರಹಸ್ಯ ಸ್ಥಳಕ್ಕೆ ಪ್ರವೇಶವಿಲ್ಲ. ಇಡೀ ಪ್ರದೇಶದ ಮೇಲೆ ಸಿಸಿಟಿವಿ ಹಾಗೂ ಭದ್ರತಾ ಸಿಬ್ಬಂದಿ ಮೂಲಕ 24 ಗಂಟೆಯೂ ಹದ್ದಿನ ಕಣ್ಣು ಇಡಲಾಗಿದೆ.&lt;/p&gt;&lt;p&gt;ಇದು ಕೇವಲ ಮೊದಲ ಹಂತದ ಭದ್ರತೆಯಾಗಿದ್ದು, ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ನಕಲು ತಡೆಯಲು ಇನ್ನೂ ಹತ್ತಾರು ಕಠಿಣ ಉಪಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಈ ಹಿಂದೆ ಏನಾಗಿತ್ತು?&lt;/h2&gt;&lt;p&gt;ದೇಶಾದ್ಯಂತ ವೈದ್ಯಕೀಯ ಕೋರ್ಸ್&zwnj;ಗಳ (MBBS/BDS) ಪ್ರವೇಶಕ್ಕಾಗಿ ಮೇ 3ರಂದು ಲಕ್ಷಾಂತರ ವಿದ್ಯಾರ್ಥಿಗಳು ನೀಟ್-ಯುಜಿ ಪರೀಕ್ಷೆ ಬರೆದಿದ್ದರು. ಆದರೆ, ಬಿಹಾರ ಸೇರಿದಂತೆ ದೇಶದ ಹಲವೆಡೆ ಪ್ರಶ್ನೆಪತ್ರಿಕೆ ಸೋರಿಕೆಯಾದ ಗಂಭೀರ ದೂರುಗಳು ಸಾಬೀತಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಮೇ 27ರಂದು ಇಡೀ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಇದು ದೇಶಾದ್ಯಂತ ಭಾರಿ ವಿದ್ಯಾರ್ಥಿ ಆಕ್ರೋಶ ಹಾಗೂ ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು. ಇದೀಗ ಆ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡು, ಜೂನ್ 21ರಂದು ಸಕಲ ಸೈನಿಕ ಭದ್ರತೆಯೊಂದಿಗೆ ಮರುಪರೀಕ್ಷೆ ನಡೆಸಲು ಸರ್ಕಾರ ಸಜ್ಜಾಗಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/neet-re-exam-air-force-mi-17-choppers-to-transport-question-papers-amid-leak-prevention-isolated-paper-setters-gdp/articleshow-pzu79h2"/>
        </item>
        <item>
            <title><![CDATA[COMEDK Results 2026: ಕಾಮೆಡ್‌ಕೆ ರಿಸಲ್ಟ್ ಟಾಪ್‌ 10 ರ್‍ಯಾಂಕಲ್ಲಿ ಕನ್ನಡಿಗರಿಲ್ಲ ಸ್ಥಾನ!]]></title>
            <link>https://kannada.asianetnews.com/education/comedk-results-2026-no-karnataka-students-in-top-10-ranks-sparks-discussion-among-aspirants-and-parents-rav/articleshow-r4bm37c</link>
            <guid isPermaLink="true">https://kannada.asianetnews.com/education/comedk-results-2026-no-karnataka-students-in-top-10-ranks-sparks-discussion-among-aspirants-and-parents-rav/articleshow-r4bm37c</guid>
            <pubDate>Sat, 30 May 2026 08:00:28 +0530</pubDate>
            <description><![CDATA[ಕಾಮೆಡ್&zwnj;-ಕೆ 2026ರ ಯುಜಿಇಟಿ ಫಲಿತಾಂಶ ಪ್ರಕಟವಾಗಿದ್ದು, ಅಗ್ರ 10 ರ&zwj;್ಯಾಂಕ್&zwnj;ಗಳು ಸಂಪೂರ್ಣವಾಗಿ ಹೊರ ರಾಜ್ಯದ ವಿದ್ಯಾರ್ಥಿಗಳ ಪಾಲಾಗಿವೆ. ಜಾರ್ಖಂಡ್&zwnj;ನ ವಿದ್ಯಾರ್ಥಿಗಳು ಐದು ರ&zwj;್ಯಾಂಕ್&zwnj;ಗಳನ್ನು ಪಡೆದು ಮೇಲುಗೈ ಸಾಧಿಸಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆ ಶೀಘ್ರದಲ್ಲೇ ಆನ್&zwnj;ಲೈನ್&zwnj;ನಲ್ಲಿ ಆರಂಭವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01h2j8fa9kmqsb71g1sg6vxnh7,imgname-comedk-1686387534131.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.30): &lt;/strong&gt;ಖಾಸಗಿ ಎಂಜಿನಿಯರಿಂಗ್&zwnj; ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶಕ್ಕೆ ಕಾಮೆಡ್&zwnj;-ಕೆ ನಡೆಸಿದ್ದ 2026ನೇ ಸಾಲಿನ ಯುಜಿಇಟಿ ಮತ್ತು ಯೂನಿಗೇಜ್&zwnj; ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಮೊದಲ 10 ರ್&zwj;ಯಾಂಕ್&zwnj;ಗಳು ಹೊರ ರಾಜ್ಯದ ವಿದ್ಯಾರ್ಥಿಗಳ ಪಾಲಾಗಿವೆ. ಈ ಪೈಕಿ ಐದು ರ್&zwj;ಯಾಂಕ್&zwnj;ಗಳನ್ನು ಜಾರ್ಖಂಡ್&zwnj; ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.&lt;/p&gt;&lt;p&gt;ರಾಜ್ಯದ 150 ಎಂಜಿನಿಯರಿಂಗ್&zwnj; ಕಾಲೇಜುಗಳು ಮತ್ತು ದೇಶದ ವಿವಿಧ ಸದಸ್ಯ ವಿವಿಗಳಲ್ಲಿನ ಎಂಜಿನಿಯರಿಂಗ್&zwnj; ಸೀಟುಗಳ ಪ್ರವೇಶಕ್ಕೆ ಮೇ 9ರಂದು ದೇಶಾದ್ಯಂತ 171 ನಗರಗಳಲ್ಲಿನ 303 ಕೇಂದ್ರಗಳಲ್ಲಿ ಈ ಬಾರಿಯ ಕಾಮೆಡ್&zwnj;-ಕೆ ಯುಜಿಇಟಿ ಮತ್ತು ಯೂನಿಗೇಜ್&zwnj; ಪರೀಕ್ಷೆ ನಡೆಸಲಾಗಿತ್ತು. ನೋಂದಣಿಯಾಗಿದ್ದ 1.30 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಪೈಕಿ 1,10,774 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರೆಲ್ಲರ ಫಲಿತಾಂಶ, ರ್&zwj;ಯಾಂಕ್&zwnj; ಕಾರ್ಡ್&zwnj; ಅನ್ನು ವೆಬ್&zwnj;ಸೈಟ್&zwnj; www.comedk.orgನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಲಾಗಿನ್&zwnj; ಮೂಲಕ ಪಡೆಯಬಹುದು ಎಂದು ಕಾಮೆಡ್&zwnj;-ಕೆ ತಿಳಿಸಿದೆ.&lt;/p&gt;&lt;p&gt;3,497 ಕರ್ನಾಟಕದ ವಿದ್ಯಾರ್ಥಿಗಳು ಸೇರಿ ಒಟ್ಟು 11,207 ಮಂದಿ 90ರಿಂದ 100ನೇ ಪರ್ಸೆಂಟೈಲ್&zwnj; ನಡುವೆ ಫಲಿತಾಂಶ ಪಡೆದಿದ್ದಾರೆ. 80ರಿಂದ 90ರ ಪರ್ಸೆಂಟೈಲ್&zwnj; ನಡುವೆ 11,385, 70 ರಿಂದ 80ನೇ ಪರ್ಸೆಂಟೈಲ್ ನಡುವೆ 10,940 ಅಭ್ಯರ್ಥಿಗಳಿದ್ದಾರೆ ಎಂದು ಕಾಮೆಡ್&zwnj; ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ। ಎಸ್.ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಈ ವರ್ಷವೂ ಕೌನ್ಸೆಲಿಂಗ್ ಪ್ರಕ್ರಿಯೆ ಸಂಪೂರ್ಣವಾಗಿ ಆನ್&zwnj;ಲೈನ್&zwnj;ನಲ್ಲಿ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ತಮ್ಮ ಲಾಗಿನ್ ಮೂಲಕ ವೆಬ್&zwnj;ಸೈಟ್&zwnj;ನಲ್ಲಿ ಅಪ್&zwnj;ಲೋಡ್ ಮಾಡಬೇಕು. ಕೌನ್ಸೆಲಿಂಗ್ ದಿನಾಂಕಗಳ ಅಪ್&zwnj;ಡೇಟ್&zwnj;ಗಾಗಿ ವೆಬ್&zwnj;ಸೈಟ್&zwnj; ವೀಕ್ಷಿಸುತ್ತಿರಿ. ಲಭ್ಯವಿರುವ ಸೀಟ್ ಸಂಖ್ಯೆ, ಶುಲ್ಕ, ಕೌನ್ಸೆಲಿಂಗ್ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಟಾಪ್&zwnj; 6ರಲ್ಲಿ 5 ರ್&zwj;ಯಾಂಕ್&zwnj; ಜಾರ್ಖಂಡ್&zwnj; ಪಾಲು&lt;/h2&gt;&lt;p&gt;ಜಾರ್ಖಂಡ್&zwnj;ನ ರಾಂಚಿಯ ದರ್ಶಿಲ್ ಮೋದಿ ಮೊದಲ ರ್&zwj;ಯಾಂಕ್&zwnj; ಪಡೆದಿದ್ದರೆ, ಅದೇ ರಾಜ್ಯದ ಪ್ರಿಯಾನುಜ್ ಭಾಗ್ಬಾತಿ, ಆರ್ಶ್&zwnj; ಪರಾಶರ್&zwnj;, ಇಶಾಂಕ್&zwnj; ಅಗರ್ವಾಲ್&zwnj; ಮತ್ತು ಅನಿಲ್&zwnj; ಶುಲ್ಕಾ ಕ್ರಮವಾಗಿ 2, 4, 5 ಮತ್ತು 6ನೇ ರ್&zwj;ಯಾಂಕ್&zwnj; ತಮ್ಮದಾಗಿಸಿಕೊಂಡಿದ್ದಾರೆ. 3ನೇ ರ್&zwj;ಯಾಂಕ್&zwnj; ಉತ್ತರಾಖಂಡದ ವಿದ್ಯಾರ್ಥಿ ಶ್ರೇಷ್ಠ ಗುಪ್ತಾ ಪಾಲಾಗಿದೆ. ಉಳಿದಂತೆ ಆಂಧ್ರದ ನರೇಂದ್ರ ಬಾಬು ಗರಿ ಮಹಿತ್, ಛತ್ತೀಸ್&zwnj;ಗಢದ ದೃಷ್ಟಿ ಸಚ್ದಿಯೋ, ಪಂಜಾಬ್&zwnj;ನ ಮಾನಸ್ ಜಿಂದಾಲ್, ಬಿಹಾರದ ಆದಿತ್ಯ ಕುಮಾರ್ ಕ್ರಮವಾಗಿ 7, 8, 9 ಮತ್ತು 10ನೇ ರ್&zwj;ಯಾಂಕ್&zwnj; ಪಡೆದಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/comedk-results-2026-no-karnataka-students-in-top-10-ranks-sparks-discussion-among-aspirants-and-parents-rav/articleshow-r4bm37c"/>
        </item>
        <item>
            <title><![CDATA[ಭವಿಷ್ಯದ ಎಐ ತಜ್ಞರನ್ನು ರೂಪಿಸಲು ಮುಂದಾದ ಕಾಗ್ನಿಜೆಂಟ್, ಯುವ ಎಂಜಿನಿಯರ್‌ಗಳಿಗೆ ಬಂಪರ್ ಅವಕಾಶ!]]></title>
            <link>https://kannada.asianetnews.com/gallery/technology/cognizant-launches-ace-team-program-in-india-to-build-future-ai-engineers-gdp-ttxsusw</link>
            <guid isPermaLink="true">https://kannada.asianetnews.com/gallery/technology/cognizant-launches-ace-team-program-in-india-to-build-future-ai-engineers-gdp-ttxsusw</guid>
            <pubDate>Wed, 03 Jun 2026 15:24:08 +0530</pubDate>
            <description><![CDATA[&lt;p&gt;ಖ್ಯಾತ ಐಟಿ ಸಂಸ್ಥೆ 'ಕಾಗ್ನಿಜೆಂಟ್' ಭಾರತದಲ್ಲಿ 'ಏಸ್ ಟೀಮ್' ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಮೂಲಕ ಉನ್ನತ ಸಾಮರ್ಥ್ಯದ ಎಂಜಿನಿಯರ್&zwnj;ಗಳಿಗೆ ಆಧುನಿಕ ಎಐ ತಂತ್ರಜ್ಞಾನದ ತರಬೇತಿ ನೀಡಿ, ಗ್ರಾಹಕರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಪಡೆಯನ್ನು ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kabb5d09prsq0q91tg21r8bw,imgname-cognizant-prohance-1763464885255.jpg" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ಐಟಿ ಸಂಸ್ಥೆ 'ಕಾಗ್ನಿಜೆಂಟ್' ಭಾರತದಲ್ಲಿ 'ಏಸ್ ಟೀಮ್' ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಮೂಲಕ ಉನ್ನತ ಸಾಮರ್ಥ್ಯದ ಎಂಜಿನಿಯರ್&zwnj;ಗಳಿಗೆ ಆಧುನಿಕ ಎಐ ತಂತ್ರಜ್ಞಾನದ ತರಬೇತಿ ನೀಡಿ, ಗ್ರಾಹಕರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಪಡೆಯನ್ನು ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಕೃತಕ ಬುದ್ಧಿಮತ್ತೆ ಈಗ ಪ್ರಯೋಗದ ಹಂತವನ್ನು ದಾಟಿ, ವಾಸ್ತವ ಕೆಲಸಗಳಲ್ಲಿ ಬಳಕೆಯಾಗುವ ಹಂತಕ್ಕೆ ತಲುಪಿದೆ. ಭವಿಷ್ಯದಲ್ಲಿ ಇದನ್ನು ಸಮರ್ಥವಾಗಿ ನಿಭಾಯಿಸಲೆಂದೇ 'ಎಐ ಬಿಲ್ಡರ್&zwnj;'ಗಳ ಪಡೆಯನ್ನು ಕಟ್ಟಲು ಮುಂದಾಗಿರುವ ಖ್ಯಾತ ಐಟಿ ಸೇವಾ ಸಂಸ್ಥೆ 'ಕಾಗ್ನಿಜೆಂಟ್' ಹೊಸ ಕಾರ್ಯಕ್ರಮವನ್ನು ಪರಿಚಯಿಸಿದೆ. ಭಾರತದಲ್ಲಿ ಇದನ್ನು ಆರಂಭಿಸಲಾಗಿದ್ದು, ಇದಕ್ಕೆ 'ಕಾಗ್ನಿಜೆಂಟ್ ಏಸ್ ಟೀಮ್' ಎಂದು ಹೆಸರಿಡಲಾಗಿದೆ. ಅತ್ಯುತ್ತಮ ಎಂಜಿನಿಯರಿಂಗ್ ಮಿದುಳುಗಳನ್ನು ಒಟ್ಟುಗೂಡಿಸಿ, ಅವರಿಗೆ ಆಧುನಿಕ ಎಐ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಟ್ಟು, ಕಂಪನಿಯ ಗ್ರಾಹಕರಿಗೆ ಅತ್ಯಾಧುನಿಕ ಡಿಜಿಟಲ್ ಪರಿಹಾರಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ.&lt;/p&gt;&lt;img&gt;&lt;p&gt;ಇದೊಂದು ವಿಶಿಷ್ಟವಾದ ನೇಮಕಾತಿ ಹಾಗೂ ತರಬೇತಿ ಕಾರ್ಯಕ್ರಮವಾಗಿದೆ. ಉನ್ನತ ಸಾಮರ್ಥ್ಯ ಹೊಂದಿರುವ ಎಂಜಿನಿಯರ್&zwnj;ಗಳನ್ನು ಆಯ್ಕೆ ಮಾಡಿ, ಅವರನ್ನು ಆಧುನಿಕ ಎಐ ಪರಿಕರಗಳ ಮೂಲಕ ತರಬೇತುಗೊಳಿಸಲಾಗುತ್ತದೆ.&lt;/p&gt;&lt;p&gt;ಈ ಏಸ್ ಟೀಮ್ ಸದಸ್ಯರು ಕೇವಲ ಬೆಂಚ್&zwnj;ನಲ್ಲಿ ಕೂರುವುದಿಲ್ಲ; ಬದಲಾಗಿ ಅವರು ನೇರವಾಗಿ ಗ್ರಾಹಕರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಅತ್ಯಂತ ಪ್ರಮುಖ ಪ್ರಾಜೆಕ್ಟ್&zwnj;ಗಳಲ್ಲಿ ಕೆಲಸ ಮಾಡಲಿದ್ದಾರೆ. ಇದು ಕಾಗ್ನಿಜೆಂಟ್&zwnj;ನ ಉತ್ಪಾದಕತೆಯನ್ನು ಹೆಚ್ಚಿಸುವ ಜೊತೆಗೆ, ಭವಿಷ್ಯದ ದೊಡ್ಡ ತಂತ್ರಜ್ಞಾನ ಯೋಜನೆಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ತರಲು ಸಹಾಯ ಮಾಡಲಿದೆ.&lt;/p&gt;&lt;p&gt;ಈ ಹೊಸ ಹೆಜ್ಜೆಯ ಕುರಿತು ಮಾತನಾಡಿರುವ ಕಾಗ್ನಿಜೆಂಟ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ರಾಜೇಶ್ ವಾರಿಯರ್, &quot;ಉದ್ಯಮಗಳು ಈಗ ಎಐ ಪ್ರಯೋಗಗಳಿಂದಾಚೆ ಬಂದು ನೈಜ ಜಗತ್ತಿನಲ್ಲಿ ಎಐ ಅಳವಡಿಸಿಕೊಳ್ಳಲು ಮುಂದಾಗಿವೆ. ಈ ಬೇಡಿಕೆಯನ್ನು ಪೂರೈಸಲು ಬಲವಾದ ಎಂಜಿನಿಯರಿಂಗ್ ಕೌಶಲ್ಯವಿರುವ ಯುವಕರ ಅಗತ್ಯವಿದೆ. 'ಏಸ್ ಟೀಮ್' ಮೂಲಕ ನಾವು ಅಂತಹ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲಿದ್ದೇವೆ. ಇದು ನಮ್ಮ ಕಂಪನಿಯನ್ನು ಸಂಪೂರ್ಣವಾಗಿ ಎಐ ಆಧಾರಿತ ಸಂಸ್ಥೆಯನ್ನಾಗಿ ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ,&quot; ಎಂದು ವಿವರಿಸಿದರು.&lt;/p&gt;&lt;img&gt;&lt;p&gt;ಈ 'ಏಸ್ ಟೀಮ್'ಗೆ ಸೇರಲು ಬಯಸುವ ಅಭ್ಯರ್ಥಿಗಳು ಯಾವ ಕಾಲೇಜಿನಲ್ಲಿ ಓದಿದ್ದಾರೆ ಎಂಬುದು ಮುಖ್ಯವಲ್ಲ. ಬದಲಾಗಿ, ಅವರಲ್ಲಿ ಎಐ ಕುರಿತ ಜ್ಞಾನ, ತಾಂತ್ರಿಕ ಸಾಮರ್ಥ್ಯ ಹಾಗೂ ಸಂವಹನ ಕೌಶಲ್ಯ ಹೇಗಿದೆ ಎಂಬುದರ ಆಧಾರದ ಮೇಲೆ ಕಟ್ಟುನಿಟ್ಟಾದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.&lt;/p&gt;&lt;p&gt;ಅಭ್ಯರ್ಥಿಗಳಿಗೆ ಸಂವಹನ, ಆಪ್ಟಿಟ್ಯೂಡ್ ಮತ್ತು ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿಶೇಷವಾಗಿ ಫುಲ್-ಸ್ಟಾಕ್ ಎಐ ಡೆವಲಪ್&zwnj;ಮೆಂಟ್, ಡೇಟಾ ಸ್ಟ್ರಕ್ಚರ್, ಪ್ರಾಂಪ್ಟ್ ಎಂಜಿನಿಯರಿಂಗ್ ಮತ್ತು ಏಜೆಂಟಿಕ್ ಎಐ ನಂತಹ ಆಧುನಿಕ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.&lt;/p&gt;&lt;img&gt;&lt;p&gt;ಆಯ್ಕೆಯಾದ ಅಭ್ಯರ್ಥಿಗಳು 'ಫುಲ್-ಸ್ಟಾಕ್ ಎಐ ಎಂಜಿನಿಯರ್&zwnj;'ಗಳಾಗಿ ಕಂಪನಿಗೆ ಸೇರಿಕೊಳ್ಳಲಿದ್ದು, ಅವರಿಗೆ ವಿಭಿನ್ನವಾದ ವೃತ್ತಿಜೀವನ ಮತ್ತು ಉತ್ತಮ ಪ್ರಾಜೆಕ್ಟ್&zwnj;ಗಳು ಸಿಗಲಿವೆ.&lt;/p&gt;&lt;p&gt;ಪ್ರಾರಂಭಿಕ ಹಂತದಲ್ಲಿ, ಈ ಕಾರ್ಯಕ್ರಮವು ಕಾಗ್ನಿಜೆಂಟ್&zwnj;ನಿಂದ ಈಗಾಗಲೇ ಆಫರ್ ಲೆಟರ್ ಪಡೆದಿರುವ ಅಭ್ಯರ್ಥಿಗಳು, ಟಿಯರ್&zwnj;-1 ಸಂಸ್ಥೆಗಳ ಪದವೀಧರರು ಹಾಗೂ ಆಯ್ದ ಆಫ್-ಕ್ಯಾಂಪಸ್ ಅಭ್ಯರ್ಥಿಗಳಿಗೆ ಲಭ್ಯವಿದೆ.&lt;/p&gt;&lt;p&gt;ಮುಂಬರುವ ದಿನಗಳಲ್ಲಿ ಪ್ರೀಮಿಯಂ ಕಾಲೇಜುಗಳು, ಪಾಲುದಾರ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ 1 ರಿಂದ 3 ವರ್ಷಗಳ ಅನುಭವವಿರುವವರಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸುವ ಯೋಜನೆಯನ್ನು ಕಾಗ್ನಿಜೆಂಟ್ ಹಾಕಿಕೊಂಡಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/technology/cognizant-launches-ace-team-program-in-india-to-build-future-ai-engineers-gdp-ttxsusw"/>
        </item>
        <item>
            <title><![CDATA[ಫೋರ್ಬ್ಸ್ ಏಷ್ಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ 17 ರ ಹರೆಯದ ಬಾಲಕಿ, ಜಾಗತಿಕ ಮಟ್ಟದಲ್ಲಿ ಮಿಂಚಿದವಳು ಯಾರೀಕೆ?!]]></title>
            <link>https://kannada.asianetnews.com/gallery/karnataka-districts/bengaluru-teen-divaa-uthkarsha-makes-it-to-forbes-30-under-30-asia-list-gdp-xicsmzq</link>
            <guid isPermaLink="true">https://kannada.asianetnews.com/gallery/karnataka-districts/bengaluru-teen-divaa-uthkarsha-makes-it-to-forbes-30-under-30-asia-list-gdp-xicsmzq</guid>
            <pubDate>Thu, 04 Jun 2026 15:56:47 +0530</pubDate>
            <description><![CDATA[&lt;p&gt;ಬೆಂಗಳೂರಿನ 17 ವರ್ಷದ ವಿದ್ಯಾರ್ಥಿನಿ ದಿವಾ ಉತ್ಕರ್ಷ, ತಮ್ಮ 'ಪ್ರಾಜೆಕ್ಟ್ ಸೂರ್ಯ' ಸಂಸ್ಥೆಯ ಮೂಲಕ ಮಾಡಿದ ಸಮಾಜ ಸೇವೆಗಾಗಿ 'ಫೋರ್ಬ್ಸ್ 30 ಅಂಡರ್ 30 ಏಷ್ಯಾ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ಸಹೋದರನಿಗೆ ಟೈಪ್ 1 ಮಧುಮೇಹ ಪತ್ತೆಯಾದ ನಂತರ ಪ್ರೇರಿತರಾಗಿ ಸ್ಥಾಪಿಸಿದ ಈ ಸಂಸ್ಥೆ ನೆರವು ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt91rc4tnq6hh64p1rw8kv00,imgname-divaa-uthkarsha-1780567781529.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ 17 ವರ್ಷದ ವಿದ್ಯಾರ್ಥಿನಿ ದಿವಾ ಉತ್ಕರ್ಷ, ತಮ್ಮ 'ಪ್ರಾಜೆಕ್ಟ್ ಸೂರ್ಯ' ಸಂಸ್ಥೆಯ ಮೂಲಕ ಮಾಡಿದ ಸಮಾಜ ಸೇವೆಗಾಗಿ 'ಫೋರ್ಬ್ಸ್ 30 ಅಂಡರ್ 30 ಏಷ್ಯಾ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ಸಹೋದರನಿಗೆ ಟೈಪ್ 1 ಮಧುಮೇಹ ಪತ್ತೆಯಾದ ನಂತರ ಪ್ರೇರಿತರಾಗಿ ಸ್ಥಾಪಿಸಿದ ಈ ಸಂಸ್ಥೆ ನೆರವು ನೀಡಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ 17 ವರ್ಷದ ಪ್ರತಿಭಾವಂತ ವಿದ್ಯಾರ್ಥಿನಿ ದಿವಾ ಉತ್ಕರ್ಷ ಅವರು ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ತಮ್ಮ 'ಪ್ರಾಜೆಕ್ಟ್ ಸೂರ್ಯ' (Project Surya) ಎಂಬ ಲಾಭರಹಿತ ಸಂಸ್ಥೆಯ (NGO) ಮೂಲಕ ಸಮಾಜದಲ್ಲಿ ಮಾಡಿರುವ ಗಣನೀಯ ಬದಲಾವಣೆಯನ್ನು ಗುರುತಿಸಿ, ಫೋರ್ಬ್ಸ್ ಸಂಸ್ಥೆಯು ಸಾಮಾಜಿಕ ಪರಿಣಾಮ (Social Impact) ವಿಭಾಗದ ಅಡಿಯಲ್ಲಿ 'ಫೋರ್ಬ್ಸ್ 30 ಅಂಡರ್ 30 ಏಷ್ಯಾ' ಪಟ್ಟಿಯಲ್ಲಿ ಇವರಿಗೆ ಸ್ಥಾನ ನೀಡಿದೆ. ವಿಶೇಷವೆಂದರೆ, ಈ ವರ್ಷ ಈ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ದಿವಾ ಪಾತ್ರರಾಗಿದ್ದಾರೆ. ಬೆಂಗಳೂರಿನ ಬಸವೇಶ್ವರನಗರದಲ್ಲಿರುವ 'ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್' (NAFL) ಶಾಲೆಯಲ್ಲಿ ಇತ್ತೀಚೆಗಷ್ಟೇ 12ನೇ ತರಗತಿಯನ್ನು ಪೂರ್ಣಗೊಳಿಸಿರುವ ದಿವಾ, ಪ್ರಸ್ತುತ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾದಲ್ಲಿ ಕೈಗಾರಿಕಾ ಎಂಜಿನಿಯರಿಂಗ್ (Industrial Engineering) ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಈ ಸಾಧನೆಯ ಹಿಂದಿನ ಪ್ರೇರಣೆಯ ಕುರಿತು ಮಾತನಾಡಿರುವ ದಿವಾ, &quot;ನನ್ನ ಈ ಜಾಗತಿಕ ಮನ್ನಣೆಗೆ ನನ್ನ ಲಾಭರಹಿತ ಸಂಸ್ಥೆಯಾದ 'ಪ್ರಾಜೆಕ್ಟ್ ಸೂರ್ಯ' ಕಾರಣ. 2021 ರಲ್ಲಿ ನಾನು 13 ವರ್ಷದವಳಾಗಿದ್ದಾಗ, ನನ್ನ ಕಿರಿಯ ಸಹೋದರ ಸೂರ್ಯನಿಗೆ 'ಟೈಪ್ 1 ಮಧುಮೇಹ' (Type 1 Diabetes) ಇರುವುದು ಪತ್ತೆಯಾಯಿತು. ಈ ಕಾಯಿಲೆಯ ರೋಗನಿರ್ಣಯ, ಚಿಕಿತ್ಸೆ ಮತ್ತು ಅದರಿಂದ ನಮ್ಮ ಕುಟುಂಬ ಎದುರಿಸಿದ ಆರ್ಥಿಕ ಹಾಗೂ ಭಾವನಾತ್ಮಕ ಭಾರವನ್ನು ನಾನು ಹತ್ತಿರದಿಂದ ನೋಡಿದೆ. ಆಗ, ಯಾವುದೇ ಆರ್ಥಿಕ ಬೆಂಬಲವಿಲ್ಲದೆ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ ಭಾರತದ ಲಕ್ಷಾಂತರ ಬಡ ಹಾಗೂ ಕಡಿಮೆ ಆದಾಯದ ಕುಟುಂಬಗಳ ವಾಸ್ತವ ಸ್ಥಿತಿ ಏನಿರಬಹುದು ಎಂಬ ಆಲೋಚನೆ ನನ್ನಲ್ಲಿ ಮೂಡಿತು. ಅದೇ 'ಪ್ರಾಜೆಕ್ಟ್ ಸೂರ್ಯ' ಹುಟ್ಟಿಕೊಳ್ಳಲು ಕಾರಣವಾಯಿತು&quot; ಎಂದು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಈ ಸಂಸ್ಥೆಯನ್ನು ಅಧಿಕೃತವಾಗಿ ಸ್ಥಾಪಿಸುವ ಮುನ್ನ ದಿವಾ, ತಮ್ಮ ಪೋಷಕರಾದ ಉತ್ಕರ್ಷ ಲೋಕೇಶ್ ಮತ್ತು ಪಲ್ಲವಿ ಉತ್ಕರ್ಷ ಅವರ ಬೆಂಬಲದೊಂದಿಗೆ ಭಾರತದಲ್ಲಿ ಟೈಪ್ 1 ಮಧುಮೇಹದ ಸ್ಥಿತಿಗತಿಗಳ ಬಗ್ಗೆ ಸಮಗ್ರ ಸಂಶೋಧನಾ ಅಧ್ಯಯನವೊಂದನ್ನು ನಡೆಸಿದ್ದರು. ಭಾರತದಲ್ಲಿ ಮಧುಮೇಹ ನಿರ್ವಹಣೆ ಎಷ್ಟು ದುಬಾರಿ ಎಂಬುದನ್ನು ದಿವಾ ಅಂಕಿ-ಅಂಶಗಳ ಸಮೇತ ವಿವರಿಸುತ್ತಾರೆ.&lt;/p&gt;&lt;p&gt;&lt;strong&gt;ನಿರಂತರ ಚಿಕಿತ್ಸೆಯ ಅಗತ್ಯ: &lt;/strong&gt;ಟೈಪ್ 1 ಮಧುಮೇಹವು ಜೀವಿತಾವಧಿಯ ಆರೋಗ್ಯ ಸ್ಥಿತಿಯಾಗಿದ್ದು, ರೋಗಿಗಳು ಬದುಕಲು ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.&lt;/p&gt;&lt;p&gt;&lt;strong&gt;ಆರ್ಥಿಕ ಹೊರೆ: &lt;/strong&gt;ಭಾರತದಲ್ಲಿ ಮಧ್ಯಮ ಆದಾಯದ ಕುಟುಂಬವೊಂದರ ಒಟ್ಟು ಗಳಿಕೆಯ ಸುಮಾರು ಶೇ. 18 ರಷ್ಟು ಭಾಗ ಕೇವಲ ಈ ಕಾಯಿಲೆಯ ನಿರ್ವಹಣೆಗೆ ಖರ್ಚಾಗುತ್ತದೆ.&lt;/p&gt;&lt;p&gt;&lt;strong&gt;ಸೌಲಭ್ಯಗಳ ಕೊರತೆ: &lt;/strong&gt;ಇಂತಹ ಶೇ. 80 ಕ್ಕೂ ಹೆಚ್ಚು ಕುಟುಂಬಗಳಿಗೆ ಯಾವುದೇ ಸರ್ಕಾರಿ ಸಬ್ಸಿಡಿಗಳು ಅಥವಾ ಆರೋಗ್ಯ ವಿಮೆಯ (Health Insurance) ಸೌಲಭ್ಯಗಳು ಲಭ್ಯವಿರುವುದಿಲ್ಲ.&lt;/p&gt;&lt;p&gt;&lt;strong&gt;ಆತಂಕಕಾರಿ ಸಾವುಗಳು: &lt;/strong&gt;ಸೂಕ್ತ ರೋಗನಿರ್ಣಯ ಮತ್ತು ಚಿಕಿತ್ಸೆಯ ಕೊರತೆಯಿಂದಾಗಿ 2022 ರ ಒಂದೇ ವರ್ಷದಲ್ಲಿ ಭಾರತದಲ್ಲಿ 35,860 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ&lt;/p&gt;&lt;img&gt;&lt;p&gt;ಕಳೆದ ನಾಲ್ಕು ವರ್ಷಗಳಲ್ಲಿ ಈ ಯುವ ನೇತೃತ್ವದ ಸಂಸ್ಥೆಯು ಸಮಾಜದ ಮೇಲೆ ಬೀರಿದ ಪ್ರಭಾವ ಅದ್ಭುತವಾಗಿದೆ. ಅನುದಾನಗಳು, ಸಾಂಸ್ಥಿಕ ಪಾಲುದಾರಿಕೆಗಳು ಮತ್ತು ತಳಮಟ್ಟದ ನಿಧಿಸಂಗ್ರಹಣೆಯ (Fundraising) ಮೂಲಕ ಸಂಸ್ಥೆಯು ₹20 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿದೆ. ಈ ಹಣದ ನೆರವು ಮತ್ತು ಸ್ವಯಂಸೇವಕರ ಶ್ರಮದಿಂದಾಗಿ ಜಾಗೃತಿ ಅಭಿಯಾನಗಳ ಮೂಲಕ ಬರೋಬ್ಬರಿ 4,02,000 ಕ್ಕೂ ಹೆಚ್ಚು ಜನರನ್ನು ತಲುಪಲಾಗಿದೆ. ಅಲ್ಲದೆ, ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದ 3,190 ಮಕ್ಕಳಿಗೆ ಸಂಸ್ಥೆಯು ನೇರ ಆರ್ಥಿಕ ಮತ್ತು ವೈದ್ಯಕೀಯ ಸಹಾಯವನ್ನು ಒದಗಿಸಿದೆ. ನಿಯಮಿತ ಚಿಕಿತ್ಸೆಗೆ ಒದ್ದಾಡುತ್ತಿದ್ದ ಬಡ ಕುಟುಂಬಗಳ ಆರೋಗ್ಯ ರಕ್ಷಣೆಗಾಗಿ ಪ್ರಾಜೆಕ್ಟ್ ಸೂರ್ಯ ವತಿಯಿಂದ ಉಚಿತವಾಗಿ 4,500 ಇನ್ಸುಲಿನ್ ವೈಲ್ಸ್&zwnj;ಗಳು, 2,500 ಗ್ಲೂಕೋಸ್ ಮಾನಿಟರಿಂಗ್ ಸ್ಟ್ರಿಪ್ಸ್&zwnj;ಗಳು ಹಾಗೂ 1,000 ಇನ್ಸುಲಿನ್ ಸಿರಿಂಜ್&zwnj;ಗಳನ್ನು ವಿತರಿಸಲಾಗಿದೆ. ಕೇವಲ ನಗರ ಪ್ರದೇಶಗಳಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲೂ ಕ್ರಾಂತಿ ಮಾಡಿರುವ ಈ ಸಂಸ್ಥೆಯು, 200 ಕ್ಕೂ ಹೆಚ್ಚು ಆಶಾ (ASHA) ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡಿದ್ದು, ಅವರ ಮೂಲಕ 49,500 ಕ್ಕೂ ಹೆಚ್ಚು ಹಳ್ಳಿಗರಲ್ಲಿ ಮಧುಮೇಹದ ಕುರಿತು ಯಶಸ್ವಿಯಾಗಿ ಜಾಗೃತಿ ಮೂಡಿಸಿದೆ. ಇದರೊಂದಿಗೆ, ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಿಗೆ 1,020 ಕ್ಕೂ ಹೆಚ್ಚು ಉಚಿತ ಗ್ಲೂಕೋಸ್ ತಪಾಸಣೆಗಳನ್ನು ಸಹ ಯಶಸ್ವಿಯಾಗಿ ನಡೆಸಲಾಗಿದೆ.&lt;/p&gt;&lt;img&gt;&lt;p&gt;ದಿವಾ ಉತ್ಕರ್ಷ ಮತ್ತು ಅವರ ತಂಡದ ಶ್ರಮ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ನ್ಯೂಯಾರ್ಕ್&zwnj;ನಲ್ಲಿರುವ ವಿಶ್ವಸಂಸ್ಥೆಯ (UN) ಪ್ರಧಾನ ಕಚೇರಿ, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟ (IDF) ಆಯೋಜಿಸಿದ ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ದಿವಾ ತಮ್ಮ ಸಂಸ್ಥೆಯ ಕಾರ್ಯವೈಖರಿಯನ್ನು ಪ್ರದರ್ಶಿಸಿ ಪ್ರಶಂಸೆ ಗಳಿಸಿದ್ದಾರೆ.&lt;/p&gt;&lt;p&gt;ಪ್ರಸ್ತುತ 'ಪ್ರಾಜೆಕ್ಟ್ ಸೂರ್ಯ' ಸಂಸ್ಥೆಯು ಜಾಗತಿಕವಾಗಿ ವಿಸ್ತರಿಸಿದ್ದು ಬೆಂಗಳೂರು, ನವದೆಹಲಿ, ವಾರಣಾಸಿ, ಮುಂಬೈ, ಗಾಜಿಯಾಬಾದ್ ಸೇರಿದಂತೆ ಭಾರತದ ವಿವಿಧ ನಗರಗಳ ಜೊತೆಗೆ ಅಮೆರಿಕಾ, ಕೆನಡಾ, ಮೊರಾಕೊ, ಯುಎಇ (UAE) ಮತ್ತು ನೈಜೀರಿಯಾ ದೇಶಗಳಲ್ಲಿ ಒಟ್ಟು 9 ಕ್ಕೂ ಹೆಚ್ಚು ಸಕ್ರಿಯ ವಿಭಾಗಗಳನ್ನು (Chapters) ಹೊಂದಿದೆ. ಈ ಇಡೀ ಜಾಲವನ್ನು 120 ಕ್ಕೂ ಹೆಚ್ಚು ಸಾಮಾನ್ಯ ಸ್ವಯಂಸೇವಕರು ಹಾಗೂ 35 ಕ್ಕೂ ಹೆಚ್ಚು ಸಮರ್ಪಿತ ಪ್ರೌಢಶಾಲಾ ವಿದ್ಯಾರ್ಥಿ ಸ್ವಯಂಸೇವಕರು ಮುನ್ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಫೋರ್ಬ್ಸ್ ಪಟ್ಟಿಗೆ ಸೇರುವ ಮುನ್ನವೇ ದಿವಾ ಅವರ ಸಮಾಜಸೇವೆಯನ್ನು ಗುರುತಿಸಿ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗಿದೆ.&lt;/p&gt;&lt;p&gt;&lt;strong&gt;ಡಯಾನಾ ಪ್ರಶಸ್ತಿ (2023): &lt;/strong&gt;ಬ್ರಿಟಿಷ್ ರಾಜಮನೆತನದ ವತಿಯಿಂದ ನೀಡಲಾಗುವ ಪ್ರತಿಷ್ಠಿತ 'ಡಯಾನಾ ಪ್ರಶಸ್ತಿ'ಗೆ (Diana Award) ಇವರು ಭಾಜನರಾಗಿದ್ದಾರೆ.&lt;/p&gt;&lt;p&gt;&lt;strong&gt;ಜಾಗತಿಕ ವಿದ್ಯಾರ್ಥಿ ಪ್ರಶಸ್ತಿ (Global Student Prize): &lt;/strong&gt;Chegg.org ಆಯೋಜಿಸಿದ್ದ ಈ ಪ್ರಶಸ್ತಿಗಾಗಿ ವಿಶ್ವದ 140 ದೇಶಗಳ 11,000 ಕ್ಕೂ ಹೆಚ್ಚು ಅರ್ಜಿದಾರರ ಪೈಕಿ ಅಗ್ರ 10 ಜಾಗತಿಕ ಫೈನಲಿಸ್ಟ್&zwnj;ಗಳಲ್ಲಿ ದಿವಾ ಒಬ್ಬರಾಗಿ ಆಯ್ಕೆಯಾಗಿದ್ದರು.&lt;/p&gt;&lt;p&gt;&lt;strong&gt;ವಿಶ್ವ ಸುಸ್ಥಿರತಾ ಪ್ರಶಸ್ತಿ (2024): &lt;/strong&gt;ಆಮ್ಸ್ಟರ್&zwnj;ಡ್ಯಾಮ್&zwnj;ನಲ್ಲಿ ನಡೆದ ವಿಶ್ವ ಸುಸ್ಥಿರತಾ ಪ್ರಶಸ್ತಿಗಳ (World Sustainability Awards) 'ಯುವ ಸಾಮಾಜಿಕ ವಿಭಾಗ'ದಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ಕೇವಲ ಐದು ವ್ಯಕ್ತಿಗಳಲ್ಲಿ ದಿವಾ ಕೂಡ ಒಬ್ಬರಾಗಿದ್ದರು.&lt;/p&gt;&lt;p&gt;ಯಾವುದೇ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆ ಇರಲಿ, ಪ್ರತಿಯೊಬ್ಬರಿಗೂ ಗುಣಮಟ್ಟದ ಇನ್ಸುಲಿನ್ ಮತ್ತು ಮಧುಮೇಹ ನಿರ್ವಹಣಾ ಸಂಪನ್ಮೂಲಗಳು ಸಮಾನವಾಗಿ ಸಿಗಬೇಕು ಎಂಬ ಒಂದೇ ಒಂದು ಉದಾತ್ತ ಚಿಂತನೆಯೊಂದಿಗೆ ಆರಂಭವಾದ ದಿವಾ ಉತ್ಕರ್ಷ ಅವರ ಈ ಯಶೋಗಾಥೆ, ಇಂದಿನ ಯುವ ಪೀಳಿಗೆಗೆ ನಿಜಕ್ಕೂ ಹೆಮ್ಮೆಯ ಪ್ರೇರಣೆಯಾಗಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bengaluru-teen-divaa-uthkarsha-makes-it-to-forbes-30-under-30-asia-list-gdp-xicsmzq"/>
        </item>
        <item>
            <title><![CDATA[ಬೆಂಗಳೂರು: ಹಲಸಿನ ಹಣ್ಣಿನ ಆಸೆಗಾಗಿ ಮರ ಹತ್ತಿದ ಪ್ರಶಸ್ತಿ ವಿಜೇತ ಬಳ್ಳಾರಿ ಮೂಲದ ಜಿಕೆವಿಕೆ ಕೃಷಿ ವಿದ್ಯಾರ್ಥಿ ಸಾವು!]]></title>
            <link>https://kannada.asianetnews.com/karnataka-districts/award-winning-gkvk-bengaluru-msc-agriculture-student-akash-dies-falling-from-tree-gdp/articleshow-zydgxy2</link>
            <guid isPermaLink="true">https://kannada.asianetnews.com/karnataka-districts/award-winning-gkvk-bengaluru-msc-agriculture-student-akash-dies-falling-from-tree-gdp/articleshow-zydgxy2</guid>
            <pubDate>Fri, 05 Jun 2026 19:23:22 +0530</pubDate>
            <description><![CDATA[ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಹಲಸಿನ ಹಣ್ಣು ಕೀಳಲು ಮರ ಹತ್ತಿದ್ದ ಎಂ.ಎಸ್ಸಿ ವಿದ್ಯಾರ್ಥಿ ಆಕಾಶ್, ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ರಾಷ್ಟ್ರಪತಿ ಪ್ರಶಸ್ತಿ ವಿಜೇತ, ಪ್ರತಿಭಾವಂತನಾಗಿದ್ದ ಈ ಯುವಕನ ಅಕಾಲಿಕ ಮರಣವು ಎಲ್ಲೆಡೆ ಶೋಕವನ್ನುಂಟುಮಾಡಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktc0sy7h38bppqeh4p624w1w,imgname-msc-agriculture-student-akash-dies-1780667447537.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜಧಾನಿಯ ಪ್ರತಿಷ್ಠಿತ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಮಧ್ಯರಾತ್ರಿ ಭೀಕರ ದುರಂತವೊಂದು ನಡೆದಿದೆ. ಹಲಸಿನ ಹಣ್ಣು ಕೀಳಲು ಹೋಗಿ ಮರದಿಂದ ಕೆಳಗೆ ಬಿದ್ದ ಕೃಷಿ ವಿಶ್ವವಿದ್ಯಾಲಯದ ಎಂ.ಎಸ್ಸಿ (M.Sc Agriculture) ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನವರಾದ ಆಕಾಶ್ (23) ಮೃತಪಟ್ಟ ದುರ್ದೈವಿಯಾಗಿದ್ದಾನೆ.&lt;/p&gt;&lt;p&gt;ರೈತಾಪಿ ಕುಟುಂಬದಿಂದ ಬಂದು, ಕಷ್ಟಪಟ್ಟು ಓದಿ ಸರ್ಕಾರಿ ಸೀಟು ಪಡೆದುಕೊಂಡು ಬೆಂಗಳೂರಿನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಹಲಸಿನ ಹಣ್ಣಿನ ಸಣ್ಣ ಆಸೆಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವುದು ಇಡೀ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ.&lt;/p&gt;&lt;h2&gt;ಮಧ್ಯರಾತ್ರಿ ನಡೆದಿದ್ದೇನು?&lt;/h2&gt;&lt;p&gt;ಪೊಲೀಸ್ ಮೂಲಗಳ ಪ್ರಕಾರ, ಈ ಘಟನೆಯು ರಾತ್ರಿ 12:00 ರಿಂದ 1:00 ಗಂಟೆಯ ಅವಧಿಯಲ್ಲಿ ಜಿಕೆವಿಕೆ ಕ್ಯಾಂಪಸ್ ಆವರಣದಲ್ಲಿ ನಡೆದಿದೆ. ನಿನ್ನೆ ರಾತ್ರಿ ವಿದ್ಯಾರ್ಥಿ ಆಕಾಶ್ ಮರದಲ್ಲಿದ್ದ ಹಲಸಿನ ಹಣ್ಣನ್ನು ಕೀಳುವ ಆಸೆಯಿಂದ ಜಿಕೆವಿಕೆ ಆವರಣದ ದೊಡ್ಡ ಮರವನ್ನು ಹತ್ತಿದ್ದ ಎನ್ನಲಾಗಿದೆ. ಆದರೆ, ಮಧ್ಯರಾತ್ರಿಯ ಕತ್ತಲಿನಲ್ಲಿ ಆಯತಪ್ಪಿ ಮರದ ಮೇಲಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ರಭಸಕ್ಕೆ ಆಕಾಶ್ ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರವಾದ ಪೆಟ್ಟಾಗಿದೆ.&lt;/p&gt;&lt;p&gt;ಘಟನೆಯ ವಿಷಯ ತಿಳಿಯುತ್ತಿದ್ದಂತೆ ಆಕಾಶ್ ಜೊತೆಯಲ್ಲಿದ್ದ ಸ್ನೇಹಿತರು ಮತ್ತು ಸಹಪಾಠಿಗಳು ತಕ್ಷಣವೇ ಆತನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಮೃತಪಟ್ಟಿದ್ದಾನೆ.&lt;/p&gt;&lt;h2&gt;ರಾಷ್ಟ್ರಪತಿ ಪ್ರಶಸ್ತಿ ವಿಜೇತ ಪ್ರತಿಭಾವಂತ ಯುವಕ!&lt;/h2&gt;&lt;p&gt;ಮೃತ ಆಕಾಶ್ ಕೇವಲ ಓದಿನಲ್ಲಿ ಮಾತ್ರವಲ್ಲದೆ ಇತರೆ ಚಟುವಟಿಕೆಗಳಲ್ಲೂ ಅತ್ಯಂತ ಮುಂಚೂಣಿಯಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು. ಕಾಲೇಜಿನ ಎನ್.ಎಸ್.ಎಸ್ (NSS) ವಿಭಾಗದಲ್ಲಿ ಅತ್ಯುತ್ತಮ ಸ್ವಯಂಸೇವಕನಾಗಿ ಗುರುತಿಸಿಕೊಂಡಿದ್ದ ಈತನಿಗೆ ರಾಷ್ಟ್ರಪತಿಯವರಿಂದ &quot;ಉತ್ತಮ ಸ್ವಯಂಸೇವಕ&quot; ಪ್ರಶಸ್ತಿ ಲಭಿಸಿತ್ತು. ಅಷ್ಟೇ ಅಲ್ಲದೆ, 2024 ರ ಗಣರಾಜ್ಯೋತ್ಸವದ (Republic Day Parade) ಪರೇಡ್&zwnj;ನಲ್ಲಿ ಕರ್ನಾಟಕ ರಾಜ್ಯವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ಕೀರ್ತಿ ತಂದಿದ್ದನು. ಬಡತನದ ಹಿನ್ನೆಲೆಯುಳ್ಳ ರೈತ ಕುಟುಂಬದಿಂದ ಬಂದಿದ್ದ ಆಕಾಶ್, ಇಡೀ ಗ್ರಾಮಕ್ಕೆ ಹಾಗೂ ಕಾಲೇಜಿಗೆ ಹೆಮ್ಮೆಯಾಗಿದ್ದನು. ಆತನ ಅಕಾಲಿಕ ಮರಣವು ಕುಟುಂಬದ ದೊಡ್ಡ ಶಕ್ಷಿಯನ್ನೇ ಕಳೆದುಕೊಂಡಂತಾಗಿದೆ.&lt;/p&gt;&lt;h2&gt;ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು&lt;/h2&gt;&lt;p&gt;ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಯಲಹಂಕ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಕೆವಿಕೆ ಆವರಣದಲ್ಲಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಮೃತರ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಯಲಹಂಕ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಈ ದುರಂತ ಘಟನೆಗೆ ಸಂಬಂಧಿಸಿದಂತೆ ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/award-winning-gkvk-bengaluru-msc-agriculture-student-akash-dies-falling-from-tree-gdp/articleshow-zydgxy2"/>
        </item>
    </channel>
</rss>
