<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 09 Apr 2026 20:05:15 +0530</lastBuildDate>
        <atom:link href="https://kannada.asianetnews.com/rss/education" rel="self" type="application/rss+xml"/>
        <item>
            <title><![CDATA[ಪಿಯುಸಿಯಲ್ಲಿ ಇಂದೂ ಕಾಲೇಜಿನ ರೈತನ ಮಗಳ ಸಾಧನೆಗೆ ರಾಜ್ಯವೇ ಬೆರಗು! ಅವಳಿ ಜವಳಿ ತಮ್ಮನಿಗೂ ಶೇ. 94 ಅಂಕ!]]></title>
            <link>https://kannada.asianetnews.com/education/twin-success-story-karnataka-puc-2026-farmer-daughter-sangeeta-topper-in-puc-arts-brother-scored-ninety-plus-gdp/articleshow-1nnaitb</link>
            <guid isPermaLink="true">https://kannada.asianetnews.com/education/twin-success-story-karnataka-puc-2026-farmer-daughter-sangeeta-topper-in-puc-arts-brother-scored-ninety-plus-gdp/articleshow-1nnaitb</guid>
            <pubDate>Thu, 09 Apr 2026 18:06:51 +0530</pubDate>
            <description><![CDATA[ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ರೈತನ ಮಗಳು ಸಂಗೀತಾ ಶೇಖರಗೌಡ ಪೊಲೀಸ್ ಪಾಟೀಲ್, 2026ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 99.66% ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರ ಅವಳಿ ಸಹೋದರ ಕೂಡ 94% ಅಂಕ ಗಳಿಸಿದ್ದು, ಮುಂದೆ ಎಲ್&zwnj;ಎಲ್&zwnj;ಬಿ ಓದುವ ಕನಸು ಕಂಡಿರುವ ಸಂಗೀತಾ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kns3pkwdthw05kwdvxge6vt6,imgname-sangeeta-topper-in-puc-arts-1775737982861.jpg" type="image/jpeg" height="390" width="690"/>
            <content:encoded><![CDATA[&lt;p&gt;ಕುಕನೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಸಂಗೀತಾ ಶೇಖರಗೌಡ ಪೊಲೀಸ್ ಪಾಟೀಲ್ ಅವರು ಅಪೂರ್ವ ಸಾಧನೆ ಮಾಡಿದ್ದಾರೆ. 99.66 ಶೇಕಡಾ ಅಂಕಗಳನ್ನು ಗಳಿಸಿರುವ ಸಂಗೀತಾ ರಾಜ್ಯದ ಗಮನ ಸೆಳೆದಿದ್ದಾರೆ.&lt;/p&gt;&lt;h2&gt;ರೈತನ ಮಗಳ ಸಾಧನೆ&lt;/h2&gt;&lt;p&gt;ಸಂಗೀತಾ ಅವರು ಕೊಟ್ಟೂರಿನ ಇಂದೂ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ತಮ್ಮ ಪರಿಶ್ರಮ, ಶಿಸ್ತು ಮತ್ತು ದೃಢನಿಶ್ಚಯದ ಮೂಲಕ ಈ ಸಾಧನೆ ಸಾಧಿಸಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಅವರು ರಾಜ್ಯ ಮಟ್ಟದಲ್ಲಿ ಮೆರೆಯುವ ಮೂಲಕ ತಮ್ಮ ಊರು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.&lt;/p&gt;&lt;p&gt;ಸಂಗೀತಾ ಅವರು ರೈತ ಶೇಖರಗೌಡ ಪೊಲೀಸ್ ಪಾಟೀಲ್ ಹಾಗೂ ಅಂಗನವಾಡಿ ಶಿಕ್ಷಕಿ ಶ್ವೇತಾ ಪೊಲೀಸ್ ಪಾಟೀಲ್ ಅವರ ಪುತ್ರಿಯಾಗಿದ್ದು, ತಂದೆ-ತಾಯಿಗೆ ಮೂರನೇ ಮಗಳು. ಕುಟುಂಬದ ಬೆಂಬಲ ಮತ್ತು ಪ್ರೋತ್ಸಾಹವೇ ತನ್ನ ಯಶಸ್ಸಿನ ಹಿಂದೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಅವಳಿ-ಜವಳಿ, ತಮ್ಮನಿಗೂ ಶೇ. 94 ಅಂಕ&lt;/h2&gt;&lt;p&gt;ವಿಶೇಷವೆಂದರೆ, ಸಂಗೀತಾ ಅವರ ಜೊತೆಗೆ ಅವರ ತಮ್ಮ ಕೂಡ 94 ಶೇಕಡಾ ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ. ಇವರಿಬ್ಬರು ಅವಳಿ ಜವಳಿಯಾಗಿದ್ದು, ತಮ್ಮ ಸಹ ಈ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಇಬ್ಬರು ಮಕ್ಕಳ ಸಾಧನೆಯಿಂದ ಕುಟುಂಬದಲ್ಲಿ ಹರ್ಷದ ವಾತಾವರಣ ಮನೆಮಾಡಿದೆ.&lt;/p&gt;&lt;p&gt;ಮುಂದೆ ಕಾನೂನು ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಂಗೀತಾ ಅವರು ಎಲ್&zwnj;ಎಲ್&zwnj;ಬಿ ಓದುವ ಕನಸು ಕಂಡಿದ್ದಾರೆ. ಅವರ ಕನಸಿಗೆ ತಂದೆ ಶೇಖರಗೌಡ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, &ldquo;ಮಗಳ ಓದಿಗಾಗಿ ಬೇಕಾದರೆ ನನ್ನ ಐದು ಎಕರೆ ಜಮೀನನ್ನೂ ಮಾರಲು ಸಿದ್ಧ&rdquo; ಎಂದು ಹೇಳಿರುವುದು ಅವರ ಶಿಕ್ಷಣದ ಮೇಲಿನ ಬದ್ಧತೆಯನ್ನು ತೋರಿಸುತ್ತದೆ.&lt;/p&gt;&lt;p&gt;ಒಟ್ಟಿನಲ್ಲಿ, ಗ್ರಾಮೀಣ ಪರಿಸರದಲ್ಲಿ ಬೆಳೆದ ಸಂಗೀತಾ ತಮ್ಮ ಸಂಕಲ್ಪ, ಪರಿಶ್ರಮ ಮತ್ತು ಕುಟುಂಬದ ಬೆಂಬಲದೊಂದಿಗೆ ರಾಜ್ಯ ಮಟ್ಟದಲ್ಲಿ ಟಾಪರ್ ಆಗಿ ಹೊರಹೊಮ್ಮಿರುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಅವರ ಭವಿಷ್ಯ ಉಜ್ವಲವಾಗಲಿ ಎಂಬ ಆಶಯ ವ್ಯಕ್ತವಾಗಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/twin-success-story-karnataka-puc-2026-farmer-daughter-sangeeta-topper-in-puc-arts-brother-scored-ninety-plus-gdp/articleshow-1nnaitb"/>
        </item>
        <item>
            <title><![CDATA[ಫೇಲ್ ಆದವರಿಗೆ ದ್ವಿತೀಯ ಪಿಯುಸಿ ಪರೀಕ್ಷೆ-2  ದಿನಾಂಕ ಪ್ರಕಟ, ಮರುಮೌಲ್ಯಮಾಪನಕ್ಕೆ ಈ ದಿನದೊಳಗೆ ಅರ್ಜಿ ಸಲ್ಲಿಸಿ]]></title>
            <link>https://kannada.asianetnews.com/education/karnataka-second-puc-exam-2nd-from-april-30th-revaluation-answer-sheet-details-announced-gdp/articleshow-29saewg</link>
            <guid isPermaLink="true">https://kannada.asianetnews.com/education/karnataka-second-puc-exam-2nd-from-april-30th-revaluation-answer-sheet-details-announced-gdp/articleshow-29saewg</guid>
            <pubDate>Thu, 09 Apr 2026 19:25:06 +0530</pubDate>
            <description><![CDATA[ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದ ನಂತರ, ಅಂಕ ಸುಧಾರಿಸಲು ಬಯಸುವ ವಿದ್ಯಾರ್ಥಿಗಳಿಗೆ ಏಪ್ರಿಲ್ 30ರಿಂದ ಎರಡನೇ ಪರೀಕ್ಷೆ ನಡೆಯಲಿದೆ. ಇದರ ಜೊತೆಗೆ, ಉತ್ತರ ಪತ್ರಿಕೆಯ ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದ್ದು, ಈ ವರ್ಷ ಮೂರನೇ ಪರೀಕ್ಷೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jd6vbwbj497jtf9z0rqx0z0g,imgname-madhu-bangarappa.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ&ndash;1ರ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ, ಮುಂದಿನ ಪರೀಕ್ಷೆಗಳ ವೇಳಾಪಟ್ಟಿ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳ ಕುರಿತು ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಯಾವುದೇ ಬೇಸರ ಮಾಡಿಕೊಳ್ಳದೆ ಧೈರ್ಯವಾಗಿ &amp;nbsp;ಫೇಲ್ ಆದ ವಿಷಯಗಳ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಲು ಅವಕಾಶ ಇದೆ.&lt;/p&gt;&lt;h2&gt;ಏಪ್ರಿಲ್ 30ರಿಂದ ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ&lt;/h2&gt;&lt;p&gt;ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ (Exam-2) ಏಪ್ರಿಲ್ 30ರಿಂದ ಆರಂಭವಾಗಿ ಮೇ 13ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಬಾರಿ ಮೂರನೇ ಪರೀಕ್ಷೆ (Exam-3) ನಡೆಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಇನ್ನು ಮುಂದೆ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಕುರಿತು ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದ್ದು, ಈ ವರ್ಷದ ಫಲಿತಾಂಶ ಉತ್ತಮವಾಗಿದ್ದರೆ ಮುಂದಿನ ವರ್ಷದಿಂದ ಕೇವಲ ಎರಡು ಪರೀಕ್ಷೆಗಳನ್ನೇ ನಡೆಸುವ ಯೋಜನೆ ಇದೆ. ಫಲಿತಾಂಶದಲ್ಲಿ ಯಾವುದೇ ಕುಸಿತ ಕಂಡುಬಂದರೆ ಮಾತ್ರ ಮೂರನೇ ಪರೀಕ್ಷೆಯ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.&lt;/p&gt;&lt;h2&gt;ಉತ್ತರ ಪತ್ರಿಕೆಯ ಛಾಯ ಪ್ರತಿಗೆ ಅರ್ಜಿ&lt;/h2&gt;&lt;p&gt;ಪರೀಕ್ಷೆ-1 ಬರೆದ ವಿದ್ಯಾರ್ಥಿಗಳಿಗೆ ತಮ್ಮ ಉತ್ತರ ಪತ್ರಿಕೆಯ ಛಾಯ ಪ್ರತಿಯನ್ನು ಪಡೆಯಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಏಪ್ರಿಲ್ 10ರಿಂದ ಏಪ್ರಿಲ್ 15ರವರೆಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಏಪ್ರಿಲ್ 12ರಿಂದ ಏಪ್ರಿಲ್ 15ರವರೆಗೆ ತಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ಡೌನ್&zwnj;ಲೋಡ್ ಮಾಡಿಕೊಳ್ಳಬಹುದು. ಪ್ರತಿ ವಿಷಯಕ್ಕೆ ಛಾಯ ಪ್ರತಿಯನ್ನು ಪಡೆಯಲು ₹530 ಶುಲ್ಕವನ್ನು ನಿಗದಿಪಡಿಸಲಾಗಿದೆ.&lt;/p&gt;&lt;h2&gt;ಮರುಮೌಲ್ಯಮಾಪನ ಮತ್ತು ಮರುಎಣಿಕೆ&lt;/h2&gt;&lt;p&gt;ಫಲಿತಾಂಶದ ಬಗ್ಗೆ ಅನುಮಾನ ಇರುವ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ (Revaluation) ಮತ್ತು ಮರುಎಣಿಕೆ (Recounting)ಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಗಾಗಿ ಏಪ್ರಿಲ್ 13ರಿಂದ ಏಪ್ರಿಲ್ 19ರವರೆಗೆ ಸಮಯ ನಿಗದಿಪಡಿಸಲಾಗಿದೆ. ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ ₹1670 ಶುಲ್ಕ ವಿಧಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬಹುದು.&lt;/p&gt;&lt;h2&gt;ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶ&lt;/h2&gt;&lt;p&gt;ಒಟ್ಟಿನಲ್ಲಿ, ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ ಹಾಗೂ ಮರುಮೌಲ್ಯಮಾಪನ ವ್ಯವಸ್ಥೆ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಮತ್ತೊಂದು ಅವಕಾಶ ಒದಗಿಸುತ್ತಿದೆ. ವಿದ್ಯಾರ್ಥಿಗಳು ನೀಡಿದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-second-puc-exam-2nd-from-april-30th-revaluation-answer-sheet-details-announced-gdp/articleshow-29saewg"/>
        </item>
        <item>
            <title><![CDATA[ಪಿಯುಸಿ ಫಲಿತಾಂಶ ಪ್ರಕಟ: ರಾಜ್ಯಕ್ಕೆ ದಾಖಲೆಯ ಶೇ.86 ಫಲಿತಾಂಶ, ಇತಿಹಾಸ ಬರೆದ ವಿದ್ಯಾರ್ಥಿಗಳು!]]></title>
            <link>https://kannada.asianetnews.com/education/karnataka-2nd-puc-results-2026-86-percent-pass-record-rise-in-performance-gdp/articleshow-4twesch</link>
            <guid isPermaLink="true">https://kannada.asianetnews.com/education/karnataka-2nd-puc-results-2026-86-percent-pass-record-rise-in-performance-gdp/articleshow-4twesch</guid>
            <pubDate>Thu, 09 Apr 2026 16:03:31 +0530</pubDate>
            <description><![CDATA[ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯವು ಶೇ.86ರಷ್ಟು ದಾಖಲೆಯ ಫಲಿತಾಂಶ ಕಂಡಿದ್ದು, ಕಳೆದ ವರ್ಷಕ್ಕಿಂತ ಶೇ.12.5ರಷ್ಟು ಏರಿಕೆಯಾಗಿದೆ. ಪಾಸ್ ಅಂಕವನ್ನು 35ರಿಂದ 33ಕ್ಕೆ ಇಳಿಸಿರುವುದು ಈ ಸಾಧನೆಗೆ ಪ್ರಮುಖ ಕಾರಣವಾಗಿದ್ದು, ಹಲವು ವಿದ್ಯಾರ್ಥಿಗಳು 600ಕ್ಕೆ 600 ಅಂಕ ಗಳಿಸಿ ಗಮನ ಸೆಳೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knjj4g10h4t6v2eta81nbj5j,imgname----------------------75--1775518236704.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ವೆಬ್&zwnj;ಸೈಟ್&zwnj;ನಲ್ಲಿ ಅಧಿಕೃತವಾಗಿ ಪ್ರಕಟವಾಗಿದೆ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯವು ದಾಖಲೆಯ ಮಟ್ಟದ ಫಲಿತಾಂಶ ಕಂಡಿದ್ದು, ಒಟ್ಟು ಶೇ.86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ.12.5ರಷ್ಟು ಏರಿಕೆ ಕಂಡುಬಂದಿರುವುದು ವಿಶೇಷ.&lt;/p&gt;&lt;h2&gt;ಪಾಸ್&zwnj; ಅಂಕ 35ರಿಂದ 33ಕ್ಕೆ ಇಳಿಸಿರುವುದು ಈ ಸಾಧನೆಗೆ ಕಾರಣ&lt;/h2&gt;&lt;p&gt;ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು 7,10,363 ವಿದ್ಯಾರ್ಥಿಗಳ ಪೈಕಿ ಸುಮಾರು 6.1 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಇದು ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ. ಕಳೆದ ವರ್ಷ ಪಿಯುಸಿ ಫಲಿತಾಂಶ ಶೇ.73.45ರಷ್ಟಿದ್ದು, ಈ ಬಾರಿ ಅದನ್ನು ಮೀರಿ ಫಲಿತಾಂಶ ಪಡೆದುಕೊಳ್ಳುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಫಲಿತಾಂಶದಲ್ಲಿ ಏರಿಕೆಗೆ ಪ್ರಮುಖ ಕಾರಣವಾಗಿ ಪಾಸ್&zwnj; ಅಂಕವನ್ನು 35ರಿಂದ 33ಕ್ಕೆ ಇಳಿಸಿರುವುದು ಗಮನಾರ್ಹವಾಗಿದೆ. .&lt;/p&gt;&lt;p&gt;ಈ ವರ್ಷದ ಫಲಿತಾಂಶವನ್ನು ಮಧ್ಯಾಹ್ನ 3 ಗಂಟೆಗೆ ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿ ಪ್ರಕಟಿಸಲಾಗಿದ್ದು, ಫಲಿತಾಂಶಕ್ಕೂ ಮುನ್ನವೇ ಉತ್ತಮ ಸಾಧನೆ ಆಗಲಿದೆ ಎಂಬ ನಿರೀಕ್ಷೆಯನ್ನು ಶಾಲಾ ಶಿಕ್ಷಣ ಸಚಿವರು ವ್ಯಕ್ತಪಡಿಸಿದ್ದರು. ಅಂತೆಯೇ, ನಿರೀಕ್ಷೆಯಂತೆ ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದೆ.&lt;/p&gt;&lt;p&gt;ಕಳೆದ ವರ್ಷ ಪರೀಕ್ಷೆಗೆ 6,37,805 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 4,68,439 ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದರು. ಸುಮಾರು 1,69,366 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಒಟ್ಟು ಶೇಕಡಾ 73.45ರಷ್ಟು ಫಲಿತಾಂಶ ದಾಖಲಾಗಿತ್ತು. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿತ್ತು.&lt;/p&gt;&lt;h2&gt;600ಕ್ಕೆ 600 ಪಡೆದ ವಿದ್ಯಾರ್ಥಿಗಳು&lt;/h2&gt;&lt;p&gt;ಈ ಬಾರಿಯ ಉತ್ತಮ ಫಲಿತಾಂಶದಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ವಲಯದಲ್ಲಿ ಸಂತಸ ವ್ಯಕ್ತವಾಗಿದೆ. ರಾಜ್ಯದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಕೆಲವು ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಗಳಿಸಿರುವುದು ವಿಶೇಷ. ಅದರಲ್ಲೂ ಕಾಮರ್ಸ್ ವಿಭಾಗದಲ್ಲಿ ಜೈನ್ ಕಾಲೇಜಿನ ವಿದ್ಯಾರ್ಥಿನಿ ಅದಿತಿ ಬಾಪು, ದಕ್ಷಿಣ ಕನ್ನಡದ ಆಳ್ವಾಸ್ ಕಾಲೇಜಿನ ದಿಶಾ ಅವರು 600ಕ್ಕೆ 600 ಅಂಕಗಳನ್ನು ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಸಂಜೆ 6.15ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಮತ್ತಷ್ಟು ಟಾಪರ್ ಗಳ ಮಾಹಿತಿಗಾಗಿ ನಿರೀಕ್ಷಿಸಿ&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-2nd-puc-results-2026-86-percent-pass-record-rise-in-performance-gdp/articleshow-4twesch"/>
        </item>
        <item>
            <title><![CDATA[2021ರಲ್ಲಿ 3.2 ಲಕ್ಷ ವೇತನಕ್ಕೆ TCSಗೆ ಕೆಲಸಕ್ಕೆ ಸೇರಿದ ಯುವಕನಿಗೆ ಈಗ ಗೂಗಲ್‌ನಲ್ಲಿ  80 ಲಕ್ಷದ ಉದ್ಯೋಗ]]></title>
            <link>https://kannada.asianetnews.com/jobs/software-engineer-salary-jump-techie-earns-rs-80-lakh-per-year-at-google-says-he-will-retire-by-2031/articleshow-58i4tod</link>
            <guid isPermaLink="true">https://kannada.asianetnews.com/jobs/software-engineer-salary-jump-techie-earns-rs-80-lakh-per-year-at-google-says-he-will-retire-by-2031/articleshow-58i4tod</guid>
            <pubDate>Tue, 31 Mar 2026 13:28:52 +0530</pubDate>
            <description><![CDATA[&lt;p&gt;&lt;strong&gt;Software engineer salary jump: &lt;/strong&gt;ತಮ್ಮ 23ರ ಹರೆಯದಲ್ಲಿ ಟಿಸಿಎಸ್ ಕಂಪನಿಗೆ ವಾರ್ಷಿಕ 3.2 ಲಕ್ಷ ವೇತನಕ್ಕೆ ಕೆಲಸಕ್ಕೆ ಸೇರಿದ ಬೆಂಗಳೂರಿನ ಸಾಫ್ಟ್&zwnj;ವೇರ್ ಡೆವಲಪರ್ ಹೇಗೆ 80 ಲಕ್ಷದ ಗೂಗಲ್ ಉದ್ಯೋಗ ಗಿಟ್ಟಿಸಿದೆ ಎಂಬುದನ್ನು ಹೇಳಿಕೊಂಡಿದ್ದು ಅವರ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn1dyd1nqydry81qg9kp88yb,imgname-google-techie-job-1774943417397.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸಾಫ್ಟ್&zwnj;ವೇರ್ ಡೆವಲಪರ್ ಸ್ಟೋರಿ ಭಾರಿ ವೈರಲ್&lt;/strong&gt;&lt;/h2&gt;&lt;p&gt;ಒಳ್ಳೆಯ ಸ್ಕಿಲ್ ಇದ್ದರೆ ಸಾಫ್ಟ್&zwnj;ವೇರ್ ಇಂಜಿನಿಯರ್&zwnj;ಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ವಾರ್ಷಿಕವಾಗಿ ಕೋಟಿ ಸಮೀಪಿಸುವ ವೇತನವನ್ನೂ ನೀಡಲು ಸಿದ್ಧವಿರುತ್ತವೆ. ಟೆಕ್ ದೈತ್ಯ ಗೂಗಲ್ ಕೂಡ ತನ್ನ ಉದ್ಯೋಗಿಯೊಬ್ಬರಿಗೆ ವಾರ್ಷಿಕ 80 ಲಕ್ಷದ ವೇತನ ನೀಡುತ್ತಿದ್ದು, ಈ ಕೆಲಸ ಗಿಟ್ಟಿಸಿಕೊಂಡ ಯುವಕ ತನ್ನ ಈ ಕೆರಿಯರ್ ಜರ್ನಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಹೌದು ಬೆಂಗಳೂರು ಮೂಲದ ಸಾಫ್ಟ್&zwnj;ವೇರ್ ಡೆವಲಪರ್ ಅಕ್ರಾ ಮಜುಮ್&zwnj;ದಾರ್ ಎಂಬುವವರು ಪ್ರಸ್ತುತ ಗೂಗಲ್&zwnj;ನಲ್ಲಿ ಕೆಲಸ ಮಾಡುತ್ತಿದ್ದು ನಿಷ್ಠೆಯು ವೇತನವನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿಕೊಂಡು ತಮ್ಮ ಇನ್ಸ್ಟಾಗ್ರಾಮ್&zwnj;ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ 23ರ ಹರೆಯದಲ್ಲಿ ಟಿಸಿಎಸ್ ಕಂಪನಿಗೆ ವಾರ್ಷಿಕ 3.2 ಲಕ್ಷ ವೇತನಕ್ಕೆ ಕೆಲಸಕ್ಕೆ ಸೇರಿದ ಅವರು ಎರಡು ವರ್ಷದ ನಂತರ ಕೆಲಸ ತೊರೆದು ಕುಕು ಎಫ್&zwnj;ಎಂಗೆ ಸೇರಿದರು ಅವರ ವೇತನ ವಾರ್ಷಿಕವಾಗಿ 14 ಲಕ್ಷ ಇತ್ತು. ಇದಾದ ನಂತರ ಅವರು ಗೂಗಲ್ ಕೆಲಸ ಗಿಟ್ಟಿಸಿದ್ದು, ಅಲ್ಲಿ ಅವರಿಗೆ ವಾರ್ಷಿಕ ವೇತನ 80 ಲಕ್ಷ ನಿಗದಿ ಮಾಡಲಾಗಿತ್ತು.&lt;/p&gt;&lt;h3&gt;&lt;strong&gt;ವೇತನ 3.2 ಲಕ್ಷದಿಂದ 80 ಲಕ್ಷಕ್ಕೆ ಏರಿಕೆಯಾಗಿದ್ದು ಹೇಗೆ&lt;/strong&gt;&lt;/h3&gt;&lt;p&gt;2021 ರಲ್ಲಿ ಟಿಸಿಎಸ್&zwnj;ನ ನಿಂಜಾ ಕಾರ್ಯಕ್ರಮದ ಮೂಲಕ ಸಹಾಯಕ ಸಿಸ್ಟಮ್ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಕ್ರಾ ರೂ. 3.2 ಲಕ್ಷ ವೇತನ ಗಳಿಸಿದರು. ಆಗಷ್ಟೇ ಕಾಲೇಜು ತೊರೆದಿದ್ದರಿಂದ ತಾನು ವಿಶಾಲ ದೃಷ್ಟಿಯುಳ್ಳ ಮತ್ತು ಕಲಿಯಲು ಉತ್ಸುಕನಾಗಿದ್ದವನಾಗಿದೆ ಎಂದು ಹೇಳಿಕೊಂಡಿದ್ದಾರೆ. ಬಣ್ಣಿಸಿಕೊಂಡರು. 2022 ರಲ್ಲಿ, ಅವರು TCS ನ ಡಿಜಿಟಲ್ ಪ್ರೋಗ್ರಾಂ (ವಿಂಗ್ಸ್ 1) ಅನ್ನು ಪೂರ್ಣಗೊಳಿಸಿದ ನಂತರ ಸಿಸ್ಟಮ್ ಎಂಜಿನಿಯರ್ ಆಗಿ ಬಡ್ತಿ ಪಡೆದರು. ಇದು ಅವರ ಸಂಬಳವನ್ನು ಸುಮಾರು ರೂಪಾಯಿ 7 ಲಕ್ಷಕ್ಕೆ(ವಾರ್ಷಿಕ) ಹೆಚ್ಚಿಸಿತು. ಅದೇ ಸಮಯದಲ್ಲಿ, ಅವರು ಡೇಟಾ ರಚನೆಗಳು ಮತ್ತು ಅಲ್ಗಾರಿದಮ್&zwnj;ಗಳು (DSA) ಗಾಗಿ ಗಂಭೀರವಾಗಿ ತಯಾರಿ ನಡೆಸಲು ಪ್ರಾರಂಭಿಸಿದರು, ಇದು ಉತ್ಪನ್ನ ಆಧಾರಿತ ತಾಂತ್ರಿಕ ಪಾತ್ರಗಳಿಗೆ ನಿರ್ಣಾಯಕವೆಂದು ವ್ಯಾಪಕವಾಗಿ ಪರಿಗಣಿಸಲಾದ ಕೌಶಲ್ಯವಾಗಿದೆ.&lt;/p&gt;&lt;p&gt;2023 ರ ಹೊತ್ತಿಗೆ, ಮಜುಂದರ್ ಅವರು ಪ್ರತಿದಿನ ಐದರಿಂದ ಆರು ಗಂಟೆಗಳ ಕಾಲ DSA( data structures and algorithms) ಅಭ್ಯಾಸಕ್ಕೆ ಮೀಸಲಿಡುತ್ತಿದ್ದರು ಮತ್ತು 380 ಕ್ಕೂ ಹೆಚ್ಚು ಲೀಟ್&zwnj;ಕೋಡ್ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಹೀಗಾಗಿ ಜನವರಿ 2024 ರಲ್ಲಿ, ಅವರು ಟಿಸಿಎಸ್&zwnj;ನ ಹೊರಗೆ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿದರು. ಆದರೆ ತಮ್ಮ ಮೊದಲ ಆಫರ್&zwnj;ಗಾಗಿ ಸುಮಾರು ಎಂಟು ತಿಂಗಳು ಕಾಯುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಹಲವಾರು ವಿಫಲ ಸಂದರ್ಶನಗಳ ಹೊರತಾಗಿಯೂ, ಅವರು ಅಂತಿಮವಾಗಿ ಬೆಂಗಳೂರು ಮೂಲದ ಉತ್ಪನ್ನ ಸ್ಟಾರ್ಟ್ಅಪ್ ಕುಕು ಎಫ್&zwnj;ಎಂನಲ್ಲಿ ಒಂದು ಕೆಲಸ ಗಿಟ್ಟಿಸಿದರು. ಅಲ್ಲಿ ಅವರ ವೇತನ ಸುಮಾರು ರೂ 14ರಿಂದ 15 ಎಲ್&zwnj;ಪಿಎಗೆ ಏರಿತು.&lt;/p&gt;&lt;p&gt;ಆದರೆ ಅವರಿಗೆ ದೊಡ್ಡ ಟರ್ನಿಂಗ್ ಪಾಯಿಂಟ್&zwnj; ಆಗಿದ್ದು,2025 ರಲ್ಲಿ. ಹೌದು ಅಕ್ರಾ ಮಜುಂದರ್ ಅವರು ವಾರ್ಷಿಕ 80 ಲಕ್ಷ ಪ್ಯಾಕೇಜ್&zwnj;ನೊಂದಿಗೆ ಗೂಗಲ್&zwnj;ಗೆ ಕೆಲಸಕ್ಕೆ ಸೇರಿದರು. ಇದನ್ನು ಅವರ ವೃತ್ತಿಜೀವನದ ಅತಿದೊಡ್ಡ ಬೆಳವಣಿಗೆ ಎಂದು ಕರೆದಿದ್ದಾರೆ.. ಆಫರ್ ಪಡೆದ ನಂತರವೂ ಅವರು ಗ್ರಾಫ್&zwnj;ಗಳು, ಪ್ರಯತ್ನಗಳು ಮತ್ತು ಡೈನಾಮಿಕ್ ಪ್ರೋಗ್ರಾಮಿಂಗ್&zwnj;ನಂತಹ ಮುಂದುವರಿದ ವಿಷಯಗಳನ್ನು ಒಳಗೊಂಡು ತಮ್ಮ ಲೀಟ್&zwnj;ಕೋಡ್ ಸಂಖ್ಯೆಯನ್ನು 750ಕ್ಕೆ ದಾಟಿಸಿದ್ದಾರೆ ಎಂದು ಅವರು ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಇರಾನ್ ಯುದ್ಧ: ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್&zwnj;ಗೆ 4 ಡಾಲರ್&zwnj;ಗೆ ಏರಿಕೆ&lt;/strong&gt;&lt;/p&gt;&lt;p&gt;ಪ್ರತಿಯೊಬ್ಬ ಬಿಟೆಕ್ ವಿದ್ಯಾರ್ಥಿಯಂತೆ ನನಗೂ ಕಾಲೇಜಿನಲ್ಲಿ ಗೂಗಲ್&zwnj;ನಲ್ಲಿ ಕೆಲಸ ಮಾಡುವ ಕನಸು ಇತ್ತು . ಆದರೆ ಮಾರ್ಗದರ್ಶನದ ಕೊರತೆ ಮತ್ತು ಟೈಯರ್ -3 ಕಾಲೇಜಿನ ನಿರ್ಬಂಧಗಳಿಂದಾಗಿ, ನಾನು ಟಿಸಿಎಸ್&zwnj;ನಲ್ಲಿ 3.2 ಎಲ್&zwnj;ಪಿಎಗೆ ಸೇರಿದೆ ಎಂದು ಮಜುಂದರ್ ಹೇಳಿದರು. ಇದು ಕೇವಲ ಆರಂಭ ಎಂದು ಹೇಳಿದ ಅವರು ಐದು ವರ್ಷಗಳಲ್ಲಿ ನಿವೃತ್ತಿ ಹೊಂದಿ ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವ ಆಶಯವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಇವರ ಪೋಸ್ಟ್&zwnj; ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಅವರನ್ನು ಅಭಿನಂದಿಸಿದ್ದಾರೆ. ಆದರೆ ಅವರ ಹೇಳಿಕೆಗಳಿಗೆ ಅನೇಕರು ಸಂದೇಹ ವ್ಯಕ್ತಪಡಿಸಿದ್ದಾರೆ. ಕೇವಲ 15 ಲಕ್ಷದಿಂದ 80 ಲಕ್ಷಕ್ಕೆ ಸ್ಯಾಲರಿ ಏರಿಕೆಯಾದ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ರೂ. 15 ಲಕ್ಷದಿಂದ ರೂ. 80 ಲಕ್ಷಕ್ಕೆ ವೇತನ ಹೆಚ್ಚಳ ನಿಜವಾಗಿಯೂ ಅಚ್ಚರಿ ಎನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಟಿಸಿಎಸ್&zwnj;ನಲ್ಲಿ ಹದಿನಾಲ್ಕು ವರ್ಷ ಕಳೆದಿದ್ದು, ನಿಮ್ಮ ಸಂಬಳದ ಒಂಬತ್ತನೇ ಒಂದು ಭಾಗವನ್ನು ನಾನು ಗಳಿಸುತ್ತಿದ್ದೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಷ್ಟೊಂದು ವೇತನ ಇರುವವರು ಯಾರು ಹೇಳಿಕೊಳ್ಳುವುದಿಲ್ಲ ಇದು ಸುಳ್ಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಮೆರಿಕಾ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್: ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಟ್ರಂಪ್ ಕಿಡಿ&lt;/strong&gt;&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Arka Mazumder (@push__to__prod)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Anusha Kb</dc:creator>
            <atom:link href="https://kannada.asianetnews.com/jobs/software-engineer-salary-jump-techie-earns-rs-80-lakh-per-year-at-google-says-he-will-retire-by-2031/articleshow-58i4tod"/>
        </item>
        <item>
            <title><![CDATA[ಪೆನ್​ ಒಳಗೆ ಸಂಪೂರ್ಣ ಸಿಲೇಬಸ್​ ಕಾಪಿ: ಪರೀಕ್ಷೆಯಲ್ಲಿ ಸಿಕ್ಕಬಿದ್ದ ಭಾವಿ ಲಾಯರ್!​  ಟ್ಯಾಲೆಂಟ್​ಗೆ​ ಪೊಲೀಸರೂ ಸುಸ್ತು]]></title>
            <link>https://kannada.asianetnews.com/world-news/a-law-student-cheat-during-law-exam-by-carving-tiny-notes-onto-pens-suc/articleshow-64871mf</link>
            <guid isPermaLink="true">https://kannada.asianetnews.com/world-news/a-law-student-cheat-during-law-exam-by-carving-tiny-notes-onto-pens-suc/articleshow-64871mf</guid>
            <pubDate>Sun, 05 Apr 2026 19:10:02 +0530</pubDate>
            <description><![CDATA[&lt;p&gt;&amp;nbsp;ಕಾನೂನು ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಮಾಡಲು ವಿನೂತನ ಉಪಾಯ ಬಳಸಿದ್ದಾನೆ. ಆತ ತನ್ನೆಲ್ಲಾ ಪೆನ್ನುಗಳ ಮೇಲೆ ಸೂಜಿಯಿಂದ ಇಡೀ ಪಠ್ಯಕ್ರಮವನ್ನು ಕೆತ್ತಿ, ಪರೀಕ್ಷಾ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಪೆನ್ನುಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆತನ ಬುದ್ಧಿವಂತಿಕೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knexwq5nzv5ktnefw2ek400a,imgname-copy-chit-1775396347061.jpg" type="image/jpeg" height="390" width="690"/>
            <content:encoded><![CDATA[&lt;p&gt;ಪರೀಕ್ಷೆಯ ಸಮಯದಲ್ಲಿ ಏನೆಲ್ಲಾ ತಲೆ ಉಪಯೋಗಿಸಿ ಕಾಪಿ ಮಾಡುವ ವಿದ್ಯಾರ್ಥಿಗಳನ್ನು ನೀವು ನೋಡಿರುತ್ತೀರಿ. ಕೆಲವೊಮ್ಮೆ ಕಾಪಿ ಮಾಡುವ ವಿಧಾನವನ್ನು ನೋಡಿದಾಗ ಅಬ್ಬಬ್ಬಾ ಎನ್ನಿಸುವುದು ಇದೆ. ಇದೇ ಬುದ್ಧಿಯನ್ನು ಪರೀಕ್ಷೆಗೆ ಓದಿ ಬರೆಯುವುದಕ್ಕೆ ಉಪಯೋಗಿಸಿದ್ರೆ ಸುಲಭವಾಗಿ ಟಾಪ್​ 1 ಬರ್ತಿದ್ದ ಎಂದು ಎನ್ನಿಸುವುದು ಉಂಟು. ಆ ಪರಿಯ ಟ್ಯಾಲೆಂಟ್​ಗಳನ್ನು ನೋಡಿ ಸುಸ್ತಾಗುವುದೂ ಉಂಟು. ಕೈ ಮೇಲೆ, ಚಿಕ್ಕ ಚೀಟಿಯಲ್ಲಿ, ತೊಡೆಯ ಮೇಲೆ, ಷರ್ಟ್​ ಮೇಲೆ, ಬಟ್ಟೆ ಮೇಲೆ... ಹೀಗೆ ಎಲ್ಲೆಲ್ಲಿ ಜಾಗ ಸಿಗುತ್ತೋ ಎಲ್ಲಾ ಕಡೆ ಕಾಪಿ ಬರೆದುಕೊಂಡು ಪರೀಕ್ಷೆ ಬರೆದವರೂ ಇದ್ದಾರೆ, ಹಲವರು ತಗ್ಲಾಕ್ಕೊಂಡು ಡಿಬಾರ್​ ಆದೋರೂ ಇದ್ದಾರೆ.&lt;/p&gt;&lt;h2&gt;&lt;strong&gt;ಅಬ್ಬಬ್ಬಾ, ಇದೆಂಥ ನಕಲು?&lt;/strong&gt;&lt;/h2&gt;&lt;p&gt;ಆದರೆ, ಇವೆಲ್ಲಕ್ಕಿಂತಲೂ ಮಿಗಿಲಾದ ಘಟನೆಯೊಂದು ನಡೆದಿದೆ. ಇಲ್ಲಿ ಭಾವಿ ಕ್ರಿಮಿನಲ್​ ಲಾಯರ್​, ಅರ್ಥಾತ್​ ಕಾನೂನು ಪರೀಕ್ಷೆಯ ವಿದ್ಯಾರ್ಥಿಯೊಬ್ಬ ಎಲ್ಲಾ ಪುಸ್ತಕಗಳ ಸಿಲೇಬಸ್​ಗಳನ್ನೇ ಬರೆದುಕೊಂಡಿದ್ದ. ಅದೂ ಎಲ್ಲಿ ಅಂತೀರಾ, ಪೆನ್ನಿನ ಒಳಗೆ. ಇದನ್ನು ನೋಡಿದ ತನಿಖಾಧಿಕಾರಿಗಳೇ ಸುಸ್ತು ಬಿದ್ದು ಹೋಗಿದ್ದಾರೆ. ಪರೀಕ್ಷೆಯ ಸಮಯದಲ್ಲಿ ತನಿಖಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ ಈ ಪುಣ್ಯಾತ್ಮ. ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಈತನ ಟ್ಯಾಲೆಂಟ್​ ನೋಡಿ ಪೊಲೀಸರೂ ಸುಸ್ತಾಗಿ ಹೋಗಿದ್ದಾರಂತೆ. ಅಷ್ಟಕ್ಕೂ ಈ ವಿದ್ಯಾರ್ಥಿ, ಸೂಜಿಯನ್ನು ಬಳಸಿ ಪ್ಲಾಸ್ಟಿಕ್&zwnj;ನಲ್ಲಿ ಪಠ್ಯವನ್ನು ಬರೆದಿದ್ದಾನೆ ಬಳಿಕ ಸೂಕ್ಷ್ಮ ಬರವಣಿಗೆಯನ್ನು ಗೋಚರಿಸುವಂತೆ ಮಾಡಲು ಶಾಯಿಯನ್ನು ಉಜ್ಜಿದ್ದಾನೆ ಎಂದಿದ್ದಾರೆ ಅಲ್ಲಿಯ ಪ್ರೊಫೆಸರ್ ಯೋಲಾಂಡಾ ಡಿ ಲುಚಿ.&lt;/p&gt;&lt;h3&gt;&lt;strong&gt;ಸೋಷಿಯಲ್​ ಮೀಡಿಯಾದಲ್ಲಿ ಶೇರ್​&lt;/strong&gt;&lt;/h3&gt;&lt;p&gt;ಪೆನ್​ ಒಳಗೆ ಚಿಕ್ಕದ್ದಾಗಿ ಸಂಪೂರ್ಣ ಸಿಲೇಬಸ್​ ಬರೆದುಕೊಳ್ಳುವುದು ಕಡಿಮೆ ವಿಷಯವೇನಲ್ಲ. ಇವನೇನಾದ್ರೂ ಸಿಕ್ಕಿಬೀಳದೇ ಇದ್ದಿದ್ದರೆ ವರ್ಲ್ಡ್​ ಫೇಮಸ್​ ಕ್ರಿಮಿನಲ್​ ಲಾಯರ್​ ಆಗ್ತಿದ್ದ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಇದು ನಡೆದಿರುವುದು ಸ್ಪೇನ್​ನಲ್ಲಿ. ಮಲಗಾ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಈ ಜಾಣ್ಮೆಗೆ ಮೂಕವಿಸ್ಮಿತರಾಗಿರುವ ತನಿಖಾಧಿಕಾರಿಗಳು ಈ ಪೆನ್​ಗಳ ಫೋಟೋ ಹೊಡೆದು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಅದೀಗ ಪ್ರಪಂಚಾದ್ಯಂತ ಭಾರಿ ವೈರಲ್​ ಆಗುತ್ತಿದೆ. ಎಲ್ಲಾ ಪೆನ್​ಗಳನ್ನು ಸಾಕ್ಸ್​ನಲ್ಲಿ ಅಡಗಿಸಿಕೊಂಡಿದ್ದ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಟ್ಯಾಲೆಂಟ್​ಗೆ ನೆಟ್ಟಿಗರೂ ಫಿದಾ&lt;/strong&gt;&lt;/h3&gt;&lt;p&gt;ಇವನಿಗೆ ಬೈಯೋದು ಬಿಟ್ಟು, ನೆಟ್ಟಿಗರ ಪೈಕಿ ಹಲವರು ಈತನ ಟ್ಯಾಲೆಂಟ್​ ಅನ್ನೇ ಹೊಗಳುತ್ತಿದ್ದಾರೆ. ಇಷ್ಟು ಸಿಲೇಬಸ್​ ಬರೆಯಲು ಆತ ಎಷ್ಟು ಶ್ರಮ ಪಟ್ಟಿರಬಹುದು, ಆತ ಹೇಗೆಲ್ಲಾ ತಲೆ ಉಪಯೋಗಿಸಬಹುದು ಎನ್ನುತ್ತಿದ್ದಾರೆ. ಪರೀಕ್ಷೆಯಲ್ಲಿ ಪ್ರಶ್ನೆ ಬಂದಾಗ, ಆ ಪ್ರಶ್ನೆಗೆ ತಕ್ಕ ಉತ್ತರ ಎಲ್ಲಿದೆ ಎಂದು ಹುಡುಕುವುದಕ್ಕಾಗಿ ಆದರೂ ಆತನಿಗೆ ಬುದ್ಧಿ ಬೇಕಲ್ವಾ ಅಂತಿರೋ ನೆಟ್ಟಿಗರು, ಈತನನ್ನು ಬೇರೆ ಬುದ್ಧಿವಂತಿಕೆ ಕೆಲಸಕ್ಕೆ ಬಳಸಿಕೊಳ್ಳಬಹುದಿತ್ತು. ದೇಶಕ್ಕೆ ಬೇಕಾಗಿರುವ ಕೆಲವೊಂದು ನಿಗೂಢ ಕೆಲಸಕ್ಕೆ ಈತನನ್ನು ಉಪಯೋಗ ಪಡಿಸಿಕೊಳ್ಳಬಹುದಿತ್ತು ಎಂದೆಲ್ಲಾ ಹೇಳುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Suchethana D</dc:creator>
            <atom:link href="https://kannada.asianetnews.com/world-news/a-law-student-cheat-during-law-exam-by-carving-tiny-notes-onto-pens-suc/articleshow-64871mf"/>
        </item>
        <item>
            <title><![CDATA[Breaking: ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವುದಿಲ್ಲ; ಮುಂದಿನ ರಿಸಲ್ಟ್ ದಿನಾಂಕ ನಾಳೆ ಸಂಜೆ ಘೋಷಣೆ!]]></title>
            <link>https://kannada.asianetnews.com/state/karnataka-2nd-puc-results-postponed-due-to-assembly-by-elections-new-date-updates-sat/articleshow-agvgeld</link>
            <guid isPermaLink="true">https://kannada.asianetnews.com/state/karnataka-2nd-puc-results-postponed-due-to-assembly-by-elections-new-date-updates-sat/articleshow-agvgeld</guid>
            <pubDate>Mon, 06 Apr 2026 19:15:42 +0530</pubDate>
            <description><![CDATA[&lt;p&gt;ರಾಜ್ಯ ವಿಧಾನಸಭಾ ಉಪ ಚುನಾವಣೆಗಳ ಹಿನ್ನೆಲೆಯಲ್ಲಿ, ನಾಳೆ ಪ್ರಕಟವಾಗಬೇಕಿದ್ದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಅಧಿಕೃತವಾಗಿ ಮುಂದೂಡಲಾಗಿದೆ. ಚುನಾವಣಾ ನೀತಿ ಸಂಹಿತೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knhgn8a8jcrcqgdd0mfd7802,imgname-puc-exam-result-postponed-1775483134278.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.06): ದ್ವಿ&lt;/strong&gt;ತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪ್ರಮುಖ ಸುದ್ದಿಯೊಂದು ಇಲ್ಲಿದೆ. ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಗಳ ಹಿನ್ನೆಲೆಯಲ್ಲಿ, ನಾಳೆ ಪ್ರಕಟವಾಗಬೇಕಿದ್ದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಅಧಿಕೃತವಾಗಿ ಮುಂದೂಡಲಾಗಿದೆ.&lt;/p&gt;&lt;h3&gt;&lt;strong&gt;ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ಗೆ ಮಂಡಳಿ ಅಧ್ಯಕ್ಷರ ಮಾಹಿತಿ:&lt;/strong&gt;&lt;/h3&gt;&lt;p&gt;ಫಲಿತಾಂಶ ಮುಂದೂಡಿಕೆಯ ಕುರಿತಾದ ಈ ಮಹತ್ವದ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಅಧ್ಯಕ್ಷರಾದ ಪ್ರಕಾಶ್ ನಿಟ್ಟಾಲಿ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ಗೆ ಖಚಿತಪಡಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಮುಂದೂಡಿಕೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ವಿಧಾನಸಭಾ ಉಪ ಚುನಾವಣೆಗಳು ನಡೆಯುತ್ತಿರುವುದರಿಂದ, ಫಲಿತಾಂಶ ಪ್ರಕಟಿಸಲು ಅನುಮತಿ ಕೋರಿ ಮಂಡಳಿಯು ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಫಲಿತಾಂಶ ಘೋಷಣೆಯು ನೀತಿ ಸಂಹಿತೆಯ ಅಡಿಯಲ್ಲಿ ಬರುವ ಸಾಧ್ಯತೆ ಇರುವುದರಿಂದ ಅಥವಾ ಚುನಾವಣಾ ಕರ್ತವ್ಯದಲ್ಲಿ ಅಧಿಕಾರಿಗಳು ನಿರತರಾಗಿರುವುದರಿಂದ ಫಲಿತಾಂಶವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಲಾಗಿದೆ.&lt;/p&gt;&lt;h3&gt;&lt;strong&gt;ಹೊಸ ದಿನಾಂಕ ಯಾವಾಗ ಘೋಷಣೆ?&lt;/strong&gt;&lt;/h3&gt;&lt;p&gt;ನಾಳೆ (ಅಂದರೆ ಈ ಹಿಂದೆ ನಿಗದಿಯಾಗಿದ್ದ ದಿನಾಂಕದಂದು) ಸಂಜೆ ಮಂಡಳಿಯು ಅಧಿಕೃತ ಸಭೆ ನಡೆಸಿ, ಫಲಿತಾಂಶ ಪ್ರಕಟಿಸುವ ಹೊಸ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಒಂದೆರಡು ದಿನಗಳ ಅಂತರದಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;ಪರೀಕ್ಷೆಯ ವಿವರಗಳು:&lt;/strong&gt;&lt;/h2&gt;&lt;ul&gt; &lt;li&gt;ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದ್ದವು.&lt;/li&gt; &lt;li&gt;ರಾಜ್ಯದ ಒಟ್ಟು 1217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.&lt;/li&gt; &lt;li&gt;ಒಟ್ಟು ವಿದ್ಯಾರ್ಥಿಗಳು: 7,10,363 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.&lt;/li&gt; &lt;li&gt;ಮೌಲ್ಯಮಾಪನ ಪೂರ್ಣ: ಪರೀಕ್ಷೆ ಮುಗಿದ ಬೆನ್ನಲ್ಲೇ ಮಂಡಳಿಯು ಯುದ್ಧೋಪಾದಿಯಲ್ಲಿ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿತ್ತು. ಫಲಿತಾಂಶ ಪ್ರಕಟಿಸಲು ಮಂಡಳಿಯು ಎಲ್ಲಾ ರೀತಿಯ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಂಡಿದೆ.&lt;/li&gt;&lt;/ul&gt;&lt;h3&gt;&lt;strong&gt;ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ:&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಫಲಿತಾಂಶ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಈ ಮುಂದೂಡಿಕೆ ಕೊಂಚ ಆತಂಕ ಮೂಡಿಸಿದೆ. ಉನ್ನತ ಶಿಕ್ಷಣದ ಪ್ರವೇಶಾತಿಗಳು ಮತ್ತು ಸಿಇಟಿ (CET) ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ನಡುವೆ ಪಿಯುಸಿ ಫಲಿತಾಂಶವು ಅತ್ಯಂತ ನಿರ್ಣಾಯಕವಾಗಿದೆ. ಮಂಡಳಿಯು ವಿದ್ಯಾರ್ಥಿಗಳಿಗೆ ಧೃತಿಗೆಡದಂತೆ ಸೂಚಿಸಿದ್ದು, ಅಧಿಕೃತ ವೆಬ್&zwnj;ಸೈಟ್ ಮೂಲಕ ಮಾತ್ರ ಫಲಿತಾಂಶದ ಮಾಹಿತಿಯನ್ನು ಪಡೆಯುವಂತೆ ತಿಳಿಸಿದೆ. ನಾಳೆ ಸಂಜೆ ಹೊತ್ತಿಗೆ ವಿದ್ಯಾರ್ಥಿಗಳ ಈ ಕಾಯುವಿಕೆಗೆ ಒಂದು ಸ್ಪಷ್ಟ ಉತ್ತರ ಸಿಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-2nd-puc-results-postponed-due-to-assembly-by-elections-new-date-updates-sat/articleshow-agvgeld"/>
        </item>
        <item>
            <title><![CDATA[Karnataka PUC result: ಫೇಲ್ ಆದವರಿಗೆ ದ್ವಿತೀಯ ಪಿಯುಸಿ ಪರೀಕ್ಷೆ-2  ದಿನಾಂಕ ಪ್ರಕಟ, ಮರುಮೌಲ್ಯಮಾಪನಕ್ಕೆ ಈ ದಿನದೊಳಗೆ ಅರ್ಜಿ ಸಲ್ಲಿಸಿ]]></title>
            <link>https://kannada.asianetnews.com/education/karnataka-2nd-puc-result-today-april-9-2026-check-live-updates-toppers-and-pass-percentage-gdp/liveblog-updates-ankrk2z</link>
            <guid isPermaLink="true">https://kannada.asianetnews.com/education/karnataka-2nd-puc-result-today-april-9-2026-check-live-updates-toppers-and-pass-percentage-gdp/liveblog-updates-ankrk2z</guid>
            <pubDate>Thu, 09 Apr 2026 19:25:06 +0530</pubDate>
            <description><![CDATA[&lt;p&gt;ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದ ದ್ವಿತೀಯ ಪಿಯುಸಿ (PUC II) ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯನಿರ್ಣಯ ಮಂಡಳಿ (KSEAB) ಈ ಮಹತ್ವದ ಫಲಿತಾಂಶವನ್ನು ಪ್ರಕಟಿಸಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್&zwnj;ಸೈಟ್ https://karresults.nic.in ನಲ್ಲಿ ಸುಲಭವಾಗಿ ಪರಿಶೀಲಿಸಬಹುದು.&amp;nbsp;&lt;/p&gt;&lt;p&gt;ಇದಕ್ಕಾಗಿ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ, ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ &lsquo;Submit&rsquo; ಬಟನ್ ಒತ್ತಿದ ತಕ್ಷಣ ಅಂಕಪಟ್ಟಿ ಪರದೆ ಮೇಲೆ ಪ್ರದರ್ಶವಾಗುತ್ತದೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿಧ ಮಾರ್ಗಗಳಲ್ಲಿ ಫಲಿತಾಂಶ ಲಭ್ಯವಿರುತ್ತದೆ. ಕರ್ನಾಟಕ ಒನ್ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಜೊತೆಗೆ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕವೂ ಫಲಿತಾಂಶ ಮಾಹಿತಿ ರವಾನೆಯಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jd6vbwbj497jtf9z0rqx0z0g,imgname-madhu-bangarappa.jpg" type="image/jpeg" height="390" width="690"/>
            <category>education</category>
            <dc:creator>Asianet News</dc:creator>
            <atom:link href="https://kannada.asianetnews.com/education/karnataka-2nd-puc-result-today-april-9-2026-check-live-updates-toppers-and-pass-percentage-gdp/liveblog-updates-ankrk2z"/>
        </item>
        <item>
            <title><![CDATA[ದ್ವಿತೀಯ ಪಿಯುಸಿ ರಿಸಲ್ಟ್ ಇಂದು ಪ್ರಕಟಣೆ ಆಗಲ್ಲ, ಉಪಚುನಾವಣೆ ಕಾರಣವೇ? ಫಲಿತಾಂಶದ ಹೊಸ ದಿನಾಂಕ ಯಾವಾಗ? ಇಲ್ಲಿದೆ ಮಾಹಿತಿ]]></title>
            <link>https://kannada.asianetnews.com/state/karnataka-second-puc-1-result-announcement-postponed-rav/articleshow-cc05u78</link>
            <guid isPermaLink="true">https://kannada.asianetnews.com/state/karnataka-second-puc-1-result-announcement-postponed-rav/articleshow-cc05u78</guid>
            <pubDate>Tue, 07 Apr 2026 05:11:19 +0530</pubDate>
            <description><![CDATA[&lt;p&gt;PUC result postponed ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಣೆಯನ್ನು ಮುಂದೂಡಲಾಗಿದೆ. ಉಪಚುನಾವಣೆ ನೀತಿ ಸಂಹಿತೆಯ ಕಾರಣ ನೀಡಿ ಚುನಾವಣಾ ಆಯೋಗದ ಅನುಮತಿಗಾಗಿ ಕಾಯುತ್ತಿರುವುದಾಗಿ ಮಂಡಳಿ ತಿಳಿಸಿದ್ದು, ಫಲಿತಾಂಶದ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knjj4g10h4t6v2eta81nbj5j,imgname----------------------75--1775518236704.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.7): &lt;/strong&gt;ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಂಗಳವಾರ(ಏ.7) ಪ್ರಕಟಿಸಬೇಕಿದ್ದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನು ಮುಂದೂಡಿದೆ. ಫಲಿತಾಂಶ ಪ್ರಕಟಣೆ ಯಾವಾಗ ಎಂಬುದನ್ನು ಶೀಘ್ರ ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಉಪಚುನಾವಣೆ ಕಾರಣವೇ?&lt;/h2&gt;&lt;p&gt;ಇದೇ ಮೊದಲ ಬಾರಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಕ್ಕೂ ಮೊದಲೇ ಫಲಿತಾಂಶ ಪ್ರಕಟಣೆಗೆ ಸಂಭಾವ್ಯ ದಿನಾಂಕವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರೇ ಪ್ರಕಟಿಸಿದ್ದರು. ಆದರೆ, ದಾವಣಗೆರೆ, ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಫಲಿತಾಂಶ ಪ್ರಕಟಣೆ ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.&lt;/p&gt;&lt;h3&gt;ಯಾವಾಗ ಫಲಿತಾಂಶ?&lt;/h3&gt;&lt;p&gt;ಮಂಡಳಿ ಅಧಿಕಾರಿಗಳು ಹೇಳುತ್ತಿರುವ ಪ್ರಕಾರ, ಉಪಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆಗೆ ಅನುಮತಿ ಕೋರಿ ಚುನಾವಣಾ ಯೋಗಕ್ಕೆ ಪತ್ರ ಬರೆಯಲಾಗಿದೆ. ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಹಾಗಾಗಿ ಏ.7ರಂದು ಫಲಿತಾಂಶ ಪ್ರಕಟಣೆ ಆಗುವುದಿಲ್ಲ. ಆದರೆ, ಮಂಗಳವಾರ ಆಯೋಗದಿಂದ ಪ್ರತಿಕ್ರಿಯೆ ಬಂದರೆ ಏ.8 ಬುಧವಾರ ಪ್ರಕಟಿಸಲಾಗುವುದೇ ಅಥವಾ ಇನ್ನೂ ವಿಳಂಬ ಆಗಲಿದೆಯೇ ಎನ್ನುವ ಬಗ್ಗೆ ಮಂಗಳವಾರ ಸಂಜೆ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.&amp;nbsp;&lt;/p&gt;&lt;p&gt;ಆದರೆ ಆಯೋಗದ ಉನ್ನತ ಮೂಲಗಳ ಪ್ರಕಾರ ಫಲಿತಾಂಶ ಪ್ರಕಟಣೆಗೆ ಅಭ್ಯಂತರವಿಲ್ಲ ಎಂದು ಮಂಡಳಿ ಪತ್ರಕ್ಕೆ ಈಗಾಗಲೇ ಹಿಂಬರಹದ ಪ್ರತಿಕ್ರಿಯೆ ನೀಡಲಾಗಿದೆ. ಉಪಚುನಾವಣೆ ಮತದಾನ ಮುಗಿಯುವವರೆಗೂ ಸಚಿವರು ಲಭ್ಯವಾಗದ ಕಾರಣ ಫಲಿತಾಂಶ ಪ್ರಕಟಣೆ ಮುಂದೂಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-second-puc-1-result-announcement-postponed-rav/articleshow-cc05u78"/>
        </item>
        <item>
            <title><![CDATA[ಲಕ್ಷ ಲಕ್ಷ ಶುಲ್ಕ ಪಡೆದರೂ ಬೇಸಿಕ್ ಗ್ರಾಮರ್ ಮಿಸ್ಟೇಕ್: DSP ಶಾಲೆಯ ಎಲ್‌ಕೆಜಿ ಮಗುವಿನ ಡೈರಿಯಲ್ಲಿ ನೂರೆಂಟು ತಪ್ಪು]]></title>
            <link>https://kannada.asianetnews.com/education/basic-grammar-mistake-by-prestigious-school-despite-receiving-lakhs-of-fees/articleshow-d87ohiw</link>
            <guid isPermaLink="true">https://kannada.asianetnews.com/education/basic-grammar-mistake-by-prestigious-school-despite-receiving-lakhs-of-fees/articleshow-d87ohiw</guid>
            <pubDate>Wed, 08 Apr 2026 13:08:01 +0530</pubDate>
            <description><![CDATA[&lt;p&gt;ದೆಹಲಿ ಪಬ್ಲಿಕ್ ಸ್ಕೂಲ್&zwnj;ನಲ್ಲಿ ಓದುತ್ತಿರುವ ಮಗಳ ಡೈರಿಯಲ್ಲಿ ಶಿಕ್ಷಕರು ಮಾಡಿದ ವ್ಯಾಕರಣ ದೋಷವನ್ನು ಪೋಷಕರೊಬ್ಬರು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ದುಬಾರಿ ಶುಲ್ಕ ಪಡೆದು ಕಳಪೆ ಶಿಕ್ಷಣ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knnzzk2qwgh84r5we54d7cbh,imgname-basic-grammar-mistakes-by-prestigious-school-1775633419351.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಖಾಸಗಿ ಶಾಲೆಯ ಅವಾಂತರಕ್ಕೆ ರೋಸಿ ಹೋದ ಪೋಷಕರು:&lt;/strong&gt;&lt;/h2&gt;&lt;p&gt;ಇಂದು ಶಾಲೆಗಳು ಕೇವಲ ಪಾಠ ಮಾಡುವ ಕೇಂದ್ರಗಳಾಗಿ ಉಳಿದಿಲ್ಲ, ಇಂದು ಕೋಟ್ಯಾಂತರ ವ್ಯವಹಾರ ಮಾಡುವ ಉದ್ಯಮವಾಗಿ ಶಿಕ್ಷಣ ಸಂಸ್ತೆಗಳು ಬದಲಾಗಿವೆ. ಪ್ರಮುಖ ಮಹಾನಗರಿಗಳಲ್ಲಿ ಒಂದು ಎಲ್&zwnj;ಕೆಜಿಗೆ ಹೋಗುವ ಮಗುವಿನ ವಾರ್ಷಿಕ ಶುಲ್ಕವೇ ಲಕ್ಷ ದಾಟುತ್ತಿದೆ. ಅನೇಕ ಪೋಷಕರು ತಮ್ಮ ಮಕ್ಕಳು ಕೂಡ ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಣ ಪಡೆಯಬೇಕು ಒಳ್ಳೆಯ ಉದ್ಯೋಗ ಪಡೆದು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಹೊಟ್ಟೆ ಬಟ್ಟೆ ಕಟ್ಟಿ, ತಮ್ಮೆಲ್ಲಾ ಆಸೆಗಳನ್ನೆಲ್ಲಾ ಬದಿಗೊತ್ತಿ ಸಾಲ ಸೋಲ ಮಾಡಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳನ್ನು ಓದಿಸುತ್ತಿದ್ದಾರೆ. ಆದರೆ ಇಷ್ಟೊಂದು ವೆಚ್ಚ ಮಾಡಿ ಓದಿಸಿದ ನಂತರವೂ ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯದೇ ಹೋದರೆ ಏನು ಪ್ರಯೋಜನ? ಅಲ್ಲವೇ?&lt;/p&gt;&lt;p&gt;ಹಾಗೆಯೇ ಇಲ್ಲೊಂದು ಕಡೆ ಪೋಷಕರೊಬ್ಬರು ದೆಹಲಿ ಪಬ್ಲಿಕ್ ಸ್ಕೂಲ್&zwnj;ನಲ್ಲಿ ಓದುತ್ತಿರುವ ತಮ್ಮ ಪುತ್ರಿಯ ಡೈರಿಯಲ್ಲಿರುವ ಗ್ರ್ಯಾಮರ್ (ವ್ಯಾಕರಣ) ತಪ್ಪುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ.&lt;/p&gt;&lt;h3&gt;&lt;strong&gt;ಪಾಠ ಮಾಡುವ ಟೀಚರ್&zwnj;ಗೆ ಗೊತ್ತಿಲ್ಲ ಕನಿಷ್ಟ ಗ್ರ್ಯಾಮರ್&lt;/strong&gt;&lt;/h3&gt;&lt;p&gt;ನಾನು ಇವತ್ತು ಮಗುವಿನ ಶಾಲೆಯ ಡೈರಿಯನ್ನು ನೋಡುತ್ತಿದ್ದೆ. ನಾನು ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಬಯಸುತ್ತೇನೆ. ಶಾಲಾ ಮಕ್ಕಳ ಪುಸ್ತಕಗಳು ಬ್ಯಾಗ್&zwnj;ಗಳು ಎಷ್ಟು ದುಬಾರಿ ಎಂಬ ಬಗ್ಗೆ ನಾನು ಕಳೆದ ವಾರದಿಂದಲೂ ವಿಡಿಯೋ ಮಾಡುತ್ತಿದೆ. ಅವೆಲ್ಲಾ ಪಕ್ಕಕ್ಕಿಡೋಣ ಇಲ್ಲಿ ನೋಡಿ, ಇದೇನು ಇದು 400 ರೂಪಾಯಿಯ ಸ್ಕೂಲ್ ನೋಟ್ ಬುಕ್, ಇದು ಇದರಲ್ಲಿ ಟೀಚರ್ ಏನು ಬರೆದಿದ್ದಾರೆ ನೋಡಿ. 'ಐಮ್ ಸ್ಟಡಿ ಇನ್ ಕ್ಲಾಸ್ ಎಲ್&zwnj;ಕೆಜಿ' ನಂತರ ಮೈ ಸ್ಕೂಲ್ಸ್ ನೇಮ್ ಎಂದು ಬರೆದಿದ್ದಾರೆ. ಇಂತಹ ಬೇಸಿಕ್ ವ್ಯಾಕರಣವನ್ನೇ ಇಲ್ಲಿ ತಪ್ಪಾಗಿ ಬರೆಯಲಾಗಿದೆ. ಇಲ್ಲಿ ನಾನು ಶಿಕ್ಷಕಿಯನ್ನು ದೂರುತ್ತಿಲ್ಲ. ಇಂತಹ ಶಿಕ್ಷಕರನ್ನು ಸೇವೆಗೆ ತೆಗೆದುಕೊಂಡ ಮ್ಯಾನೇಜ್&zwnj;ಮೆಂಟ್ ಬಗ್ಗೆ ದೂರುತ್ತಿದ್ದೇನೆ. ಇಲ್ಲಿ ಕಡಿಮೆ ಸ್ಯಾಲರಿಗೆ ಶಿಕ್ಷಕರು ಕೆಲಸ ಮಾಡುತ್ತಾರೆ. ಇದರಿಂದ ಶಾಲೆಗೆ ಒಳ್ಳೆಯ ಪ್ರಾಫಿಟ್ ಬರುತ್ತದೆ. ಆದರೆ ಇವರು ಹೀಗೆ ನಮ್ಮ ಮಕ್ಕಳಿಗೆ ತಪ್ಪು ತಪ್ಪಾಗಿ ಹೇಳಿಕೊಟ್ಟರೆ ನಾವು ಕಟ್ಟುವ ದುಬಾರಿ ಶುಲ್ಕದ ಪ್ರಯೋಜನ ಏನು? ಹೀಗಾಗಿ ಮಗುವನ್ನು ಖಾಸಗಿ ಶಾಲೆಯಿಂದ ತೆಗೆದು ಹಾಕಿ ಸರ್ಕಾರಿ ಶಾಲೆಗೆ ದಾಖಲಿಸುತ್ತೇನೆ. ಇಂತಹ ಇಂಗ್ಲೀಷ್&zwnj;ನ್ನು ನನ್ನ ಮಗು ಹೇಗಿದ್ದರೂ ಕಲಿಯುತ್ತದೆ ಜೊತೆಗೆ ಮಧ್ಯಾಹ್ನದ ಬಿಸಿಯೂಟವೂ ದೊರೆಯುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಅನೇಕ ಪೋಷಕರು ಆತಂಕಗೊಂಡಿದ್ದು, ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.&lt;/p&gt;&lt;h3&gt;&lt;strong&gt;ನೆಟ್ಟಿಗರು ಕಾಮೆಂಟ್ ಗಳಲ್ಲಿ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಖಾಸಗಿ ಶಾಲೆಯ ಶಿಕ್ಷಕರಿಗಿಂತ ಸರ್ಕಾರಿ ಶಾಲೆಯ ಶಿಕ್ಷಕರು ಹೆಚ್ಚು ಅರ್ಹತೆ ಪಡೆದಿರುತ್ತಾರೆ. ಅವರು ಸರ್ಕಾರಿ ಕೆಲಸ ಗಿಟ್ಟಿಸುವುದಕ್ಕಾಗಿ ಹಲವು ಕಠಿಣ ಪರೀಕ್ಷೆಗಳನ್ನು ಪಾಸು ಮಾಡಿದ ನಂತರವೇ ಅವರಿಗೆ ಈ ಉದ್ಯೋಗ ದೊರೆಯುತ್ತದೆ. ಖಾಸಗಿ ಶಾಲೆಗಳು ಹಾಗಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಇದರಲ್ಲಿ ತಪ್ಪಿಲ್ಲ ಇದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕೆಲವರು ಇದನ್ನು ವ್ಯಂಗ್ಯ ಮಾಡಿದ್ದು, ನನ್ನ ಶಾಲೆಯ ಹೆಸರು ಡಾಲ್ಫಿನ್ ಪಬ್ಲಿಕ್ ಸ್ಕೂಲ್ ಈ ವಾಕ್ಯ ವ್ಯಾಕರಣಬದ್ಧವಾಗಿ ಸರಿಯಾಗಿದೆ ಎಂದು ಒಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;&lt;strong&gt;ಬಾಗಲಕೋಟೆ: ಯುವ ಪ್ರೇಮಿಗಳು ಸಾವಿಗೆ ಶರಣು: ಗೆಳತಿ ಮೃತಪಟ್ಟ ವಿಚಾರ ತಿಳಿದು ಗೆಳೆಯನೂ ಸಾವು&lt;/strong&gt;&lt;/p&gt;&lt;p&gt;&quot;My school&rsquo;s name (ನನ್ನ ಶಾಲೆಯ ಹೆಸರು) ವಾಸ್ತವವಾಗಿ ಸರಿಯಾಗಿದೆ. ನಾವು ಸ್ವಾಧೀನವನ್ನು ತೋರಿಸಲು ಅಪಾಸ್ಟ್ರಫಿ + s(apostrophe + s )ಅನ್ನು ಬಳಸುತ್ತೇವೆ. ಹೆಸರು ಶಾಲೆಗೆ ಸೇರಿದೆ. ನಾವು teacher&rsquo;s name ಅಥವಾ student&rsquo;s name ಎಂದು ಹೇಳುವಂತೆಯೇ ಇದು ಎಂದು ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಡಿವೋರ್ಸ್&zwnj; ಪಡೆದ ಮಗಳ ಅದ್ದೂರಿ ಸ್ವಾಗತದ ಹಿಂದೆ ಕರಾಳ ಮುಖ: ನಿವೃತ್ತ ಜಡ್ಜ್ ಪುತ್ರಿಯ ವಿಚ್ಛೇದನ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಮಾವ&lt;/strong&gt;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Dinu Maurya (@dinu_maurya75)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>education</category>
            <dc:creator>Anusha Kb</dc:creator>
            <atom:link href="https://kannada.asianetnews.com/education/basic-grammar-mistake-by-prestigious-school-despite-receiving-lakhs-of-fees/articleshow-d87ohiw"/>
        </item>
        <item>
            <title><![CDATA[10 ಸೆಕೆಂಡ್‌ಗೊಂದು 'ಬಟ್ಟೆ ಮಡಚುವ ಯಂತ್ರ' ಕಂಡುಹಿಡಿದ ಹೈಸ್ಕೂಲ್ ವಿದ್ಯಾರ್ಥಿ! ವಿಡಿಯೋ ವೈರಲ್]]></title>
            <link>https://kannada.asianetnews.com/technology/high-school-student-invents-clothes-folding-machine-manual-device-viral-video-sat/articleshow-ee1xu1v</link>
            <guid isPermaLink="true">https://kannada.asianetnews.com/technology/high-school-student-invents-clothes-folding-machine-manual-device-viral-video-sat/articleshow-ee1xu1v</guid>
            <pubDate>Mon, 30 Mar 2026 20:52:55 +0530</pubDate>
            <description><![CDATA[&lt;p&gt;ಶಾಲಾ ವಿದ್ಯಾರ್ಥಿಯೊಬ್ಬ ಕಡಿಮೆ ಖರ್ಚಿನಲ್ಲಿ ಬಟ್ಟೆ ಮಡಚುವ ಯಂತ್ರವನ್ನು ಆವಿಷ್ಕರಿಸಿದ್ದಾನೆ. ಕಾರ್ಡ್&zwnj;ಬೋರ್ಡ್&zwnj;ನಂತಹ ಸರಳ ವಸ್ತುಗಳಿಂದ ತಯಾರಿಸಿದ ಈ ಸಾಧನವು, ಕೆಲವೇ ಸೆಕೆಂಡುಗಳಲ್ಲಿ ಶರ್ಟ್ ಹಾಗೂ ಪಂಚೆಯಂತಹ ಬಟ್ಟೆಗಳನ್ನು ಅಚ್ಚುಕಟ್ಟಾಗಿ ಮಡಚುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmzn7p8zzrvh1bnepp0m79v8,imgname-student-invents-clothes-folding-machine-1774883952927.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಜಮಾನಾ ಅಂದ್ರೆ ಅದು ಸ್ಟಾರ್ಟ್&zwnj;ಅಪ್&zwnj;ಗಳ ಕಾಲ. ಹೊಸ ಹೊಸ ಐಡಿಯಾಗಳೊಂದಿಗೆ ಯುವ ಉದ್ಯಮಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಆದರೆ, ಇಂತಹ ಅದ್ಭುತ ಆವಿಷ್ಕಾರಗಳು ಕೇವಲ ದೊಡ್ಡ ದೊಡ್ಡ ಲ್ಯಾಬ್&zwnj;ಗಳಲ್ಲಿ ಮಾತ್ರವಲ್ಲ, ಶಾಲಾ ತರಗತಿಗಳಿಂದಲೂ ಮೂಡಿಬರಬಹುದು ಎಂಬುದಕ್ಕೆ ಈ ಶಾಲಾ ಬಾಲಕನೇ ಸಾಕ್ಷಿ. ಬಟ್ಟೆ ಒಗೆಯಲು ವಾಷಿಂಗ್ ಮಷಿನ್ ಬಂದ ಮೇಲೆ ಗೃಹಿಣಿಯರ ಕೆಲಸ ಅರ್ಧಕ್ಕರ್ಧ ಕಡಿಮೆಯಾಗಿತ್ತು. ಆದರೆ, ಒಗೆದ ಬಟ್ಟೆಗಳನ್ನು ಮಡಚಿಡುವುದು ಇಂದಿಗೂ ಒಂದು ದೊಡ್ಡ ತಲೆನೋವಿನ ಕೆಲಸವೇ. ಈಗ ಈ ಕೆಲಸವನ್ನೂ ಸುಲಭಗೊಳಿಸಲು ಪುಟ್ಟ ವಿದ್ಯಾರ್ಥಿಯೊಬ್ಬ ಮಾದರಿ ಯಂತ್ರವೊಂದನ್ನು ಸಿದ್ಧಪಡಿಸಿದ್ದಾನೆ.&lt;/p&gt;&lt;h3&gt;&lt;strong&gt;ಬಟ್ಟೆ ಮಡಚುವ ಯಂತ್ರದ ವಿಶೇಷತೆ ಏನು?&lt;/strong&gt;&lt;/h3&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಈ ಬಾಲಕನ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಶಾಲಾ ಸಮವಸ್ತ್ರದಲ್ಲಿರುವ ಈ ವಿದ್ಯಾರ್ಥಿ, ತಾನು ತಯಾರಿಸಿದ ಸಾಧನವನ್ನು ಬಳಸಿ ಹೇಗೆ ಅತಿ ವೇಗವಾಗಿ ಬಟ್ಟೆಗಳನ್ನು ಮಡಚಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದ್ದಾನೆ. ಈ ಸಾಧನವನ್ನು ತಯಾರಿಸಲು ಆತ ಬಳಸಿರುವುದು ಕೇವಲ ಸರಳ ವಸ್ತುಗಳನ್ನು ಮಾತ್ರ. ಫ್ಲಾಟ್ ಬೋರ್ಡ್&zwnj;ಗಳು (ಕಾರ್ಡ್&zwnj;ಬೋರ್ಡ್ ಅಥವಾ ಪ್ಲೈವುಡ್), ಹಿಂಜ್&zwnj;ಗಳು (ಕೀಲುಗಳು) ಮತ್ತು ಲಿವರ್ ಸಿಸ್ಟಮ್&zwnj;ನಂತಹ ಸಾಮಾನ್ಯ ವಸ್ತುಗಳಿಂದ ಈ 'ಲೋ ಕಾಸ್ಟ್' ಯಂತ್ರ ತಯಾರಾಗಿದೆ.&lt;/p&gt;&lt;p&gt;ಇದರಲ್ಲಿ ಎಡ, ಬಲ ಮತ್ತು ಕೆಳಭಾಗದಲ್ಲಿ ಮೂರು ಪ್ಯಾನೆಲ್&zwnj;ಗಳಿವೆ. ವಿಡಿಯೋದಲ್ಲಿ ಬಾಲಕ ಮೊದಲು ಒಂದು ಶರ್ಟ್ ಅನ್ನು ಈ ಸಾಧನದ ಮೇಲಿಡುತ್ತಾನೆ. ನಂತರ ಎಡ ಮತ್ತು ಬಲ ಪ್ಯಾನೆಲ್&zwnj;ಗಳನ್ನು ಮಡಚಿದಾಗ ಶರ್ಟ್&zwnj;ನ ತೋಳುಗಳು ಸರಿಯಾಗಿ ಒಳಕ್ಕೆ ಮಡಚಿಕೊಳ್ಳುತ್ತವೆ. ಕೊನೆಯಲ್ಲಿ ಕೆಳಗಿನ ಪ್ಯಾನೆಲ್ ಅನ್ನು ಮೇಲಕ್ಕೆ ತಳ್ಳಿದಾಗ ಇಡೀ ಶರ್ಟ್ ಅಚ್ಚುಕಟ್ಟಾದ ಚೌಕಾಕಾರಕ್ಕೆ ಮಡಚಲ್ಪಡುತ್ತದೆ. ಶರ್ಟ್ ಮಾತ್ರವಲ್ಲದೆ ಪಂಚೆಯನ್ನು ಕೂಡ ಈ ಸಾಧನದಲ್ಲಿ ಮಡಚಿ ತೋರಿಸುವ ಮೂಲಕ ಈತ ಎಲ್ಲರ ಹುಬ್ಬೇರಿಸಿದ್ದಾನೆ.&lt;/p&gt;&lt;h2&gt;&lt;strong&gt;ಕಡಿಮೆ ಸಮಯದಲ್ಲಿ ಕೆಲಸ ಪೂರ್ಣ:&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ನಾವು ಕೈಯಿಂದ ಒಂದು ಶರ್ಟ್ ಮಡಚಲು ಕನಿಷ್ಠ 30 ರಿಂದ 40 ಸೆಕೆಂಡ್ ತೆಗೆದುಕೊಳ್ಳುತ್ತೇವೆ. ಆದರೆ ಈ ಸಾಧನದ ಸಹಾಯದಿಂದ ಕೇವಲ 5 ರಿಂದ 10 ಸೆಕೆಂಡುಗಳಲ್ಲಿ ಕೆಲಸ ಮುಗಿಯುತ್ತದೆ. ಮನೆಯಲ್ಲಿ ಹೆಚ್ಚು ಬಟ್ಟೆಗಳಿದ್ದಾಗ ಅಥವಾ ಸಮಯದ ಅಭಾವವಿದ್ದಾಗ ಈ ಸಾಧನ ಅತ್ಯಂತ ಉಪಯುಕ್ತವಾಗಲಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Sarcastic_Doctorrr (@sarcastic_doctorrr)&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ನೆಟ್ಟಿಗರ ಮೆಚ್ಚುಗೆಯ ಮಹಾಪೂರ:&lt;/strong&gt;&lt;/h3&gt;&lt;p&gt;'Sarcastic_Doctorrr' ಎಂಬ ಇನ್&zwnj;ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಬಾಲಕನ ಬುದ್ಧಿವಂತಿಕೆಯನ್ನು ಕೊಂಡಾಡುತ್ತಿದ್ದಾರೆ. &quot;ನಮ್ಮ ದೇಶದ ಪ್ರತಿಭೆಗಳಿಗೆ ಸರಿಯಾದ ಪ್ರೋತ್ಸಾಹ ಸಿಕ್ಕರೆ ಜಗತ್ತನ್ನೇ ಗೆಲ್ಲಬಹುದು&quot; ಎಂದು ಒಬ್ಬರು ಕಾಮೆಂಟ್ ಮಾಡಿದರೆ, &quot;ಇದು ಪ್ರತಿಯೊಂದು ಮನೆಯಲ್ಲೂ ಇರಬೇಕಾದ ಅವಶ್ಯಕ ಸಾಧನ&quot; ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ದೊಡ್ಡ ಕಂಪನಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಂಡುಹಿಡಿಯುವ ಯಂತ್ರಗಳಿಗಿಂತಲೂ, ಇಂತಹ ಮಣ್ಣಿನ ಮಕ್ಕಳ ಆವಿಷ್ಕಾರಗಳು ಹೆಚ್ಚು ಪ್ರಾಯೋಗಿಕವಾಗಿರುತ್ತವೆ ಎಂಬುದು ಹಲವರ ಮಾತು. ಈ ಪುಟ್ಟ ಪ್ರತಿಭೆಯು ಮುಂದೊಂದು ದಿನ ದೊಡ್ಡ ಮಟ್ಟದ ಸ್ಟಾರ್ಟ್&zwnj;ಅಪ್ ಆರಂಭಿಸಿದರೂ ಆಶ್ಚರ್ಯವಿಲ್ಲ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/technology/high-school-student-invents-clothes-folding-machine-manual-device-viral-video-sat/articleshow-ee1xu1v"/>
        </item>
        <item>
            <title><![CDATA[ತಾಯಿ ನಿಧನದಲ್ಲೂ ದಿಶಾ ಸಾಧನೆ, ಅಮ್ಮನಿಲ್ಲದೆ 3 ಪರೀಕ್ಷೆ, 600/600 ಪಡೆದು ರಾಜ್ಯಕ್ಕೆ ಟಾಪರ್ ಆಳ್ವಾಸ್ ವಿದ್ಯಾರ್ಥಿನಿ!]]></title>
            <link>https://kannada.asianetnews.com/education/inspiring-story-karnataka-puc-topper-disha-scores-600-out-of-600-despite-mother-demise-gdp/articleshow-fypla2g</link>
            <guid isPermaLink="true">https://kannada.asianetnews.com/education/inspiring-story-karnataka-puc-topper-disha-scores-600-out-of-600-despite-mother-demise-gdp/articleshow-fypla2g</guid>
            <pubDate>Thu, 09 Apr 2026 17:00:52 +0530</pubDate>
            <description><![CDATA[2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ, ಪರೀಕ್ಷೆಯ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರ ಈ ಸಾಧನೆ ಮನೋಬಲ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದ್ದು, ಅನೇಕರಿಗೆ ಸ್ಪೂರ್ತಿದಾಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knry9zda37pxj6d2pj2wrpd9,imgname---------------------------1775732325802.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ಪರಿಪೂರ್ಣ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶೇ.100 ಫಲಿತಾಂಶದೊಂದಿಗೆ ಅವರು ಸಾಧಿಸಿರುವ ಈ ಸಾಧನೆ ರಾಜ್ಯದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;p&gt;ದಿಶಾ ಅವರ ಈ ಸಾಧನೆ ಕೇವಲ ಅಂಕಗಳ ಮಟ್ಟದಲ್ಲೇ ವಿಶಿಷ್ಟವಲ್ಲ, ಅದಕ್ಕೆ ಕಾರಣವಾದ ಹಿನ್ನಲೆ ಇನ್ನಷ್ಟು ಮನಕಲುಕುವಂತಿದೆ. ಪರೀಕ್ಷೆ ಬರೆಯುತ್ತಿದ್ದ ಸಮಯದಲ್ಲಿ ಅವರು ತಾಯಿಯನ್ನು ಕಳೆದುಕೊಂಡರು ಆದರೂ ಮನೋಬಲ ಕಳೆದುಕೊಳ್ಳದೆ ಉಳಿದ ಪರೀಕ್ಷೆಗಳನ್ನು ಬರೆದು ಈ ಮಹತ್ವದ ಸಾಧನೆ ಮಾಡಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ.&lt;/p&gt;&lt;h2&gt;ಮೂರು ಪರೀಕ್ಷೆ &amp;nbsp;ಬರೆದ ನಂತರ ತಾಯಿ ನಿಧನ&lt;/h2&gt;&lt;p&gt;ದಿಶಾ ಅವರು ಮೂರು ಪರೀಕ್ಷೆಗಳನ್ನು ಬರೆದ ನಂತರ ಅವರ ತಾಯಿ ನಿಧನರಾಗಿದ್ದರು. ಈ ದುಃಖದ ನಡುವೆಯೂ ದಿಶಾ ಧೈರ್ಯ ಕಳೆದುಕೊಳ್ಳದೆ ಉಳಿದ ಪರೀಕ್ಷೆಗಳಿಗೆ ಹಾಜರಾಗಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ತಾಯಿಯ ಪ್ರೇರಣೆ ಮತ್ತು ಆಶೀರ್ವಾದವೇ ತನ್ನ ಯಶಸ್ಸಿನ ಹಿಂದಿನ ಶಕ್ತಿ ಎಂದು ದಿಶಾ ಹೇಳಿದ್ದಾರೆ&lt;/p&gt;&lt;p&gt;ಫಲಿತಾಂಶ ಬಂದ ಖುಷಿಯನ್ನು &amp;nbsp;ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗೆ ಹಂಚಿಕೊಂಡ ದಿಶಾ, &amp;nbsp;ಕಾಲೇಜಿಗೆ, ಉಪನ್ಯಾಸಕರಿಗೆ ಥ್ಯಾಂಕ್ಯೂ. ನಾನು ಇದನ್ನು ನಿರೀಕ್ಷಿಸಿದ್ದೆ ಆದ್ರೆ ಭಯ ಕೂಡ ಇತ್ತು. ಇಂಗ್ಲಿಷ್ ಬಗ್ಗೆ ಸ್ವಲ್ಪ ಭಯ ಇತ್ತು. ಇಂಗ್ಲಿಷ್ ನಲ್ಲಿ 100 ಕ್ಕೆ ನೂರು ತೆಗೆದುಕೊಳ್ಳುವುದು ಕಷ್ಟ ಅಂದುಕೊಂಡಿದ್ದೆ. ಬೇರೆ ವಿಷಯಗಳ ಬಗ್ಗೆ ನೂರಕ್ಕೆ ನೂರು ಬರುವ ಧೈರ್ಯ ಇತ್ತು.&lt;/p&gt;&lt;p&gt;ಮೂರು ಪರೀಕ್ಷೆ ಬರೆದ ನಂತ್ರ ತಾಯಿಯನ್ನು ಕಳೆದುಕೊಂಡೆ. ಆ ಸಂದರ್ಬದಲ್ಲಿ ಏನು ಮಾಡಬೇಕೆಂದು ತಿಳಿಯಲಿಲ್ಲ. ಯಾವ ಕಡೆ ಗಮನ ಕೊಡಬೇಕೆಂದು ಮೊದಲಗೆ &amp;nbsp;ತೋಚಲಿಲ್ಲ. ಅದಾದ ನಂತರ ಒಂದನ್ನು ಕಳೆದುಕೊಂಡೆ. ಆದ್ರೆ ಶಕ್ತಿ ಇಲ್ಲ. &amp;nbsp;ಆದರೆ ನನ್ನ ಲೆಕ್ಚರ್&zwnj;ಗಳು ತುಂಬಾ ಬೆನ್ನೆಲುಬಾಗಿ ನಿಂತ್ರು. &amp;nbsp; ಅಮ್ಮ ಬಿದ್ದು ತಲೆಗೆ ಪೆಟ್ಟಾಗಿತ್ತು. ಹೀಗಾಗಿ ಕಳೆದುಕೊಂಡೆ.&lt;/p&gt;&lt;p&gt;ನನ್ನ ತಾಯಿ ಈಗ ಇದ್ದಿದ್ರೆ ತುಂಬಾ ಖುಷಿ &amp;nbsp;ಪಡುತ್ತಿದ್ರು. &amp;nbsp;ಹೇಗೆ ಹೇಳಬೇಕೆಂದು ಅರ್ಥ ಆಗುತ್ತಿಲ್ಲ. ನಾನು ಇಲ್ಲದ ಅಮ್ಮನಿಗೋಸ್ಕರವಾದ್ರೂ ಪರೀಕ್ಷೆ ಬರೆದು ಸಾಧನೆ ಮಾಡಬೇಕು ಎಂದು ದೃಢ ನಿಶ್ಚಯ ಮಾಡಿದೆ. ಅದಕ್ಕೆ ತುಂಬಾ ಕಷ್ಟಪಟ್ಟು ಏನಾದ್ರೂ ಆಗಲಿ. ಬೇಕು ಅಂತ ಡಿಸೈಡ್ ಮಾಡಿದೆ.&lt;/p&gt;&lt;p&gt;ತಾಯಿ ಸದಾ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನಾನು ಭಯ ಆಗುತ್ತಿದೆ ಎಂತ ಹೇಳುತ್ತಿದ್ದೆ ಆಗ ನೀನು ಕಷ್ಟಪಟ್ಟು ಓದುತ್ತಿದ್ದೀಯ, ದೇವರು ಇದ್ದಾನೆ, ಹೆದರಬೇಡ&rsquo; ಅವನು ಕೊಡ್ತಾನೆ ಬಿಡು. ಅವನು ಯಾರ ಹಣೆಯಲ್ಲಿ ಬರೆದಿದ್ದಾನೆ ಅವರಿಗೆ ಸಿಗುತ್ತೆ. ಅಮ್ಮ ಈಗ ಇದ್ದಿದ್ರೆ ಏನು ಹೇಳುತ್ತಿದ್ದರು ಎಂದು ನನಗೆ ಗೊತ್ತಿಲ್ಲ. ಆದ್ರೆ ತುಂಬಾ ಖುಷಿ ಪಡುತ್ತಿದ್ದರು. &amp;nbsp;ಅವರ ಮಾತುಗಳು ನನಗೆ ಸದಾ ಧೈರ್ಯ ನೀಡುತ್ತವೆ ಎಂದು ಭಾವುಕರಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಅಮ್ಮನಿಗೆ ನನ್ನ ಬಗ್ಗೆ ಇದ್ದ ಕನಸೆಂದರೆ ನಾನು ಒಳ್ಳೆ ರೀತಿಯಲ್ಲಿ ಓದಿ ಅವರಿಗಾಗಿ ಮನೆ ಕಟ್ಟಿಸಿ ಚಂದದಲ್ಲಿ ಬದುಕಬೇಕೆಂಬ ಆಸೆ ಅಮ್ಮನಿಗಿತ್ತು. ಮೇ ನಲ್ಲಿ ಸಿಎ ಪರೀಕ್ಷೆ ಇದೆ ಅದನ್ನು ಸಾಧಿಸಬೇಕೆಂದುಕೊಂಡಿದ್ದೇನೆ. ಅಮ್ಮ ಈಗ ನನ್ನನ್ನು ನೋಡುತ್ತಿರಬಹುದು. &ldquo; ಅಮ್ಮ ನಾನು ಸಾಧಿಸಿಬಿಟ್ಟೆ&rdquo; ಇಷ್ಟೇ ಹೇಳಬಹುದಷ್ಟೇ. ಎಂದು ಭಾವುಕರಾದರು.&amp;nbsp;&lt;/p&gt;&lt;h2&gt;ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿ&lt;/h2&gt;&lt;p&gt;ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿ ದಿಶಾ ತಮ್ಮ ಪರಿಶ್ರಮ, ಶಿಸ್ತು ಮತ್ತು ಸಂಕಲ್ಪದಿಂದ ಈ ಸಾಧನೆ ಸಾಧಿಸಿದ್ದು, ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿದಾಯಕ ಮಾದರಿಯಾಗಿದ್ದಾರೆ. ಕುಟುಂಬದ ದುಃಖದ ನಡುವೆಯೂ ಗುರಿಯತ್ತ ಕೇಂದ್ರೀಕರಿಸಿ ಸಾಧನೆ ಮಾಡಬಹುದೆಂಬುದಕ್ಕೆ ದಿಶಾ ಬದುಕು ಉತ್ತಮ ಉದಾಹರಣೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/inspiring-story-karnataka-puc-topper-disha-scores-600-out-of-600-despite-mother-demise-gdp/articleshow-fypla2g"/>
        </item>
        <item>
            <title><![CDATA[ಲೆಕ್ಕಕ್ಕಿಲ್ಲದ ಹಿಂದಿ ಪರೀಕ್ಷೆ ಇಂದು: ಫಲಿತಾಂಶದಲ್ಲಿ ಇಳಿಕೆ ಆತಂಕ, ವಿದ್ಯಾರ್ಥಿಗಳು ಹೇಳೋದೇನು?]]></title>
            <link>https://kannada.asianetnews.com/state/sslc-hindi-exam-today-concerns-over-result-decline-as-marks-go-uncounted-rav/articleshow-iph6wnu</link>
            <guid isPermaLink="true">https://kannada.asianetnews.com/state/sslc-hindi-exam-today-concerns-over-result-decline-as-marks-go-uncounted-rav/articleshow-iph6wnu</guid>
            <pubDate>Tue, 31 Mar 2026 07:51:46 +0530</pubDate>
            <description><![CDATA[&lt;p&gt;ರಾಜ್ಯ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಮೊತ್ತದಿಂದ ಕೈಬಿಟ್ಟು ಗ್ರೇಡ್ ನೀಡುವ ಹಠಾತ್ ನಿರ್ಧಾರ ಕೈಗೊಂಡಿದೆ. ಈ ಕ್ರಮದಿಂದ ವರ್ಷವಿಡೀ ಶ್ರಮಪಟ್ಟು ಓದಿದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದು, ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿ ಶಿಕ್ಷಣ ಸಚಿವರಿಗೆ ಪತ್ರ ಚಳವಳಿ ಶುರು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn0tzb06ynnceb502v9djwdq,imgname----------------------7--1774923525126.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿದ್ದಲಿಂಗ ಕಿಣಗಿ&lt;/strong&gt;&lt;/p&gt;&lt;p&gt;&amp;nbsp;ಸಿಂದಗಿ: ರಾಜ್ಯ ಶಿಕ್ಷಣ ಇಲಾಖೆ ಈ ಬಾರಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿಯೇ ಏಕಾಏಕಿ ಮಕ್ಕಳ ಭಾವನೆಯನ್ನು ಕೆರಳಿಸುವ ಆದೇಶ ಹೊರಡಿಸಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100 ಅಂಕದ ಹಿಂದಿ ವಿಷಯವನ್ನು 625 ಅಂಕದ ಪಟ್ಟಿಯಿಂದ ಹೊರಗಿಟ್ಟು ಕೇವಲ 525ಕ್ಕೆ ಸೀಮಿತಗೊಳಿಸಿ ಹಿಂದಿ ವಿಷಯಕ್ಕೆ ಗ್ರೇಡ್ ನೀಡುವ ಪದ್ಧತಿಯನ್ನು ಕೈಗೊಂಡಿರುವುದು ಪಾಲಕರು, ಶಿಕ್ಷಕರು ಮತ್ತು ಮುಖ್ಯವಾಗಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ.&lt;/p&gt;&lt;p&gt;ಈ ಕುರಿತು ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಗೆ ಪತ್ರ ಚಳವಳಿ ಕೈಗೊಂಡಿದ್ದಾರೆ. ಶಿಕ್ಷಣ ಎನ್ನುವುದು ಮಕ್ಕಳಿಗೆ ಪೂರಕವಾಗಿರಬೇಕೆ ಹೊರತು ಬೇರೆ ಯಾವುದಕ್ಕೆ ಸೀಮಿತವಾಗಿರಬಾರದು. ಮಾ.31 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿಂದಿ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ನಾವು ವರ್ಷ ಪೂರ್ತಿ ಹಿಂದಿ ಕಲಿತಿದ್ದೇವೆ. ಎಲ್ಲ ತರಗತಿ, ತರಬೇತಿ, ಟೇಸ್ಟ್, ಸೆಮಿನಾರ್&zwnj;, ನಿಯೋಜನಾ ಕಾರ್ಯ ಸೇರಿದಂತೆ ಅನೇಕ ಸರಣಿ ಪರೀಕ್ಷೆ ಬರೆದಿದ್ದೇವೆ. ಏಕಾಏಕಿ ಸರ್ಕಾರ ಈ ಬಾರಿ ಹಿಂದಿಗೆ ಅಂಕವಿಲ್ಲ ಪಾಸಾದರೇನು? ಫೇಲಾದರೇನು? ಗ್ರೇಡ್ ನೀಡುತ್ತೇವೆ ಎನ್ನುವುದು ಯಾವ ನ್ಯಾಯ ಎಂದು ವಿದ್ಯಾರ್ಥಿಗಳು ಕನ್ನಡಪ್ರಭದೊಂದಿಗೆ ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಸರ್ಕಾರ ಈ ಕ್ರಮವನ್ನು ಕೈ ಬಿಡಬೇಕು ನಮಗೆ 625 ಅಂಕಕ್ಕೆ 625ರ ಪಟ್ಟಿ ನೀಡಬೇಕು, ಹೊರತು 525 ಅಂಕದ ಪಟ್ಟಿ ನಮಗೆ ಬೇಡ ಎಂದಿದ್ದಾರೆ.&lt;/p&gt;&lt;p&gt;ಮಕ್ಕಳು ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ನೋವು, ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಸೂಕ್ತಕ್ರಮ ಜರುಗಿಸಬೇಕು. ಮಕ್ಕಳ ಮನಸಿಗೆ ಘಾಸಿಯಾಗದಂತೆ ಅವರ ಭವಿಷ್ಯಕ್ಕೆ ಹೊಸ ಭಾಷೆ ನೀಡಬೇಕು ಎನ್ನುವುದು ಶೈಕ್ಷಣಿಕ ಪ್ರೇಮಿಗಳ ಕಾಳಜಿ. ಇಂದು ನಡೆಯಲಿರುವ ಪರೀಕ್ಷೆಗೆ ಯಾವ ಮಕ್ಕಳು ಗೈರಾಗಬಾರದು. ಕಡ್ಡಾಯವಾಗಿ ಎಲ್ಲ ಮಕ್ಕಳು ಪರೀಕ್ಷೆ ಬರಿಯಲೇ ಬೇಕೆಂದು ತಮಗೆ ಶುಭವಾಗಲಿ ಎನ್ನುವುದು ಕನ್ನಡಪ್ರಭ ಕಾಳಜಿ.&lt;/p&gt;&lt;p&gt;\B2025-26ನೇ ಸಾಲಿಗೆ ನಾವು ಎಸ್ಸೆಸ್ಸೆಲ್ಸಿ ಓದುತ್ತಿದ್ದೇವೆ. ಒಟ್ಟು 6 ವಿಷಯಗಳು. ಎಲ್ಲ ವಿಷಯಗಳನ್ನು ಶ್ರದ್ಧೆಯಿಂದ ಕಲಿತಿದ್ದೇವೆ. ಪರೀಕ್ಷೆಗಳು ಈಗಾಗಲೇ ಪ್ರಾರಂಭವಾಗಿವೆ. ನಾವು ಇಲ್ಲಿಯವರೆಗೆ ಬರೆದ ವಿಷಯಗಳ ಪರೀಕ್ಷೆಗಳು ಚೆನ್ನಾಗಿ ಆಗಿವೆ. ಆದರೆ, ಸರ್ಕಾರ ಹಿಂದಿ ವಿಷಯದ ಬಗ್ಗೆ ಹೊರಡಿಸಿರುವ ಆದೇಶ ನಮಗೆ ಆತಂಕ ಮೂಡಿಸಿದೆ. ಸರ್ಕಾರ ನಮ್ಮ ಭವಿಷ್ಯದ ಕಡೆ ಗಮನ ಹರಿಸಬೇಕಿತ್ತು. ಇದು ಸರಿಯಾದ ಕ್ರಮವಲ್ಲ.&lt;/p&gt;&lt;p&gt;-&lt;strong&gt;ರಾಧಾ ಪೂಜಾರಿ, \Bಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ.&lt;/strong&gt;&lt;/p&gt;&lt;p&gt;ನಾವು ಪ್ರತಿ ದಿನ ಶಾಲೆಗೆ ಹೋಗಿದ್ದೇವೆ. ಎಲ್ಲ ವಿಷಯವನ್ನು ಚೆನ್ನಾಗಿ ಕಲಿತಿದ್ದೇವೆ. ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಹಿಂದಿ ವಿಷಯವನ್ನು ಅಧ್ಯಯನ ಮಾಡಿದ್ದೇವೆ. ಏಕೆ ಹಿಂದಿ ವಿಷಯವನ್ನು ಈ ರೀತಿ ಸರ್ಕಾರ ಮಾಡಿದೆ? ಗ್ರೇಡ್ ಬೇಡ ನಮಗೆ ಹಿಂದಿ ಪರೀಕ್ಷೆಯಲ್ಲಿ ನಮಗೆ ಬಂದ ಅಂಕಗಳು ನಮಗೆ ಬೇಕು ಅಷ್ಟೇ ಸರ್ಕಾರ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುವುದು ಸಲ್ಲದು.&lt;/p&gt;&lt;p&gt;&lt;strong&gt;-ರಮೇಶ ಪಾಟೀಲ, \Bಎಸ್ಸೆಸ್ಸೆಲ್ಸಿ ವಿದ್ಯಾರ್ಥಿ.&lt;/strong&gt;&lt;/p&gt;&lt;p&gt;ನಮಗೆ ಇಂಗ್ಲಿಷ್&zwnj; ಮತ್ತು ಗಣಿತ ಸ್ವಲ್ಪ ಕಷ್ಟವಾಗಿದೆ. ಆದರೂ ಅಧ್ಯಯನ ಮಾಡಿದ್ದೇವೆ. ಹಿಂದಿ ಮತ್ತು ಕನ್ನಡ ಸರಳ ಭಾಷೆ ಇಂಗ್ಲೀಷ ಮತ್ತು ಗಣಿತ ವಿಷಯದಲ್ಲಿ ಕಡಿಮೆ ಅಂಕ ಬಂದರೂ ಹಿಂದಿಯಲ್ಲಿ ನಾವು ಹೆಚ್ಚು ಅಂಕ ಪಡೆಯುತ್ತೇವೆ. ಇದರಿಂದ ನಮ್ಮ ಫಲಿತಾಂಶದಲ್ಲಿಯೂ ಏರಿಕೆಯಾಗುತ್ತದೆ. ಹಿಂದಿ ಅಂಕ ಪರಿಗಣನೆಗೆ ತಗೆದುಕೊಳ್ಳಬೇಕು. ಸರ್ಕಾರದ ಈ ಕ್ರಮ ಸರಿಯಲ್ಲ.&lt;/p&gt;&lt;p&gt;&lt;strong&gt;-ಆಕಾಶ ಬಿರಾದಾರ,\B ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ.&lt;/strong&gt;&lt;/p&gt;&lt;p&gt;ಸರ್ಕಾರ ಈ ಆದೇಶವನ್ನು ಕಳೆದ ವರ್ಷದ ಶೈಕ್ಷಣಿಕ ಸಾಲಿನಲ್ಲಿಯೇ ಹೊರಡಿಸಬೇಕಿತ್ತು. ಇದರಿಂದ ಮಕ್ಕಳ ಭಾವನೆಗಳಲ್ಲಿ ಹೆಚ್ಚು ಬದಲಾವಣೆಯಾಗುತಿತ್ತು. ಒಂದು ವೇಳೆ ಕಳೆದ ಸಾಲಿನಲ್ಲಿಯೆ ಗ್ರೇಡ್ ಕೊಟ್ಟಿದ್ದರೇ ಮಕ್ಕಳು ಅವರ ಕಷ್ಟದ ವಿಷಯದ ಕಡೆಗೆ ಹೆಚ್ಚು ಮುತುವರ್ಜಿ ವಹಿಸುತ್ತಿದ್ದರು. ಹಿಂದಿಯನ್ನು ಎಲ್ಲ ವಿಷಯಗಳಂತೆ ಮಕ್ಕಳು ಪ್ರಸ್ತುತ ಅಧ್ಯಯನ ಮಾಡಿದ್ದಾರೆ. ಅದಕ್ಕೆ ಗ್ರೇಡ್ ನೀಡುವುದಾಗಿ ಹೇಳಿದರೇ ಅವರು ಈ ವಿಷಯಕ್ಕೆ ಹಾಕಿದ ಶ್ರಮಕ್ಕೆ ಯಾರು ಫಲ ನೀಡುವರು? ಇದು ಬೇಡ ಈ ಬಾರಿ ಮಕ್ಕಳ ಹಿತಾಸಕ್ತಿಯಿಂದ ಅವರ ಶ್ರಮಕ್ಕೆ ಬೆಲೆ ಸಿಗಲಿ ಮುಂದೆ ಅನುಭವಿಗಳು ಚರ್ಚಿಸಿ ಕ್ರಮ ತೆಗೆದುಕೊಳ್ಳಲಿ. ಸರ್ಕಾರ ಸಮಾಜ ಮತ್ತು ನಾವು ಮಕ್ಕಳಿಗಾಗಿ ದುಡಿಯೋಣ ಅವರ ಭವಿಷ್ಯದ ಕಡೆಗೆ ಗಮನಹರಿಸೋಣ. ಇದು ಸರ್ಕಾರಕ್ಕೆ ನಮ್ಮ ಗೌರವದ ಮನವಿ.\B&lt;/p&gt;&lt;p&gt;&lt;strong&gt;-ಹೆಸರು ಹೇಳಲು ಇಚ್ಛಿಸದ ಖಾಸಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು.&lt;/strong&gt;&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/sslc-hindi-exam-today-concerns-over-result-decline-as-marks-go-uncounted-rav/articleshow-iph6wnu"/>
        </item>
        <item>
            <title><![CDATA[ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್, ಯಾವ ಜಿಲ್ಲೆಗೆ ಎಷ್ಟು ಬಂತು?]]></title>
            <link>https://kannada.asianetnews.com/education/karnataka-2nd-puc-results-2026-record-86-percent-pass-records-in-pass-percentage-udupi-tops-yadgir-last-gdp/articleshow-kkd7goh</link>
            <guid isPermaLink="true">https://kannada.asianetnews.com/education/karnataka-2nd-puc-results-2026-record-86-percent-pass-records-in-pass-percentage-udupi-tops-yadgir-last-gdp/articleshow-kkd7goh</guid>
            <pubDate>Thu, 09 Apr 2026 18:56:26 +0530</pubDate>
            <description><![CDATA[ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯವು ಶೇ.86.48ರಷ್ಟು ದಾಖಲೆಯ ಫಲಿತಾಂಶವನ್ನು ಕಂಡಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಮತ್ತು ಅಂಕಪಟ್ಟಿಯನ್ನು ವೆಬ್&zwnj;ಸೈಟ್&zwnj;, ಮೊಬೈಲ್&zwnj; ಆ್ಯಪ್&zwnj; ಹಾಗೂ ಡಿಜಿಲಾಕರ್ ಮೂಲಕ ಪಡೆಯಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01knpt14mstbjt02epwnhmcbys,imgname-puc-result-2026-1775660733081.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ 3 ಗಂಟೆಗೆ ಪ್ರಕಟಣೆಯಾಗಿದ್ದು ರಾಜ್ಯಕ್ಕೆ ದಾಖಲೆಯ ಶೇ.86.48 ರಿಸಲ್ಟ್ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 13.03% ಏರಿಕೆ ಕಂಡಿದೆ. ಈ ಬಗ್ಗೆ ಸಂಜೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಐತಿಹಾಸಿಕ ಸಾಧನೆ ಖುಷಿ ವ್ಯಕ್ತಪಡಿಸಿದ್ದು, ಈ ಬಾರಿ ಡಿಜಿಟಲ್ ಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಅದರಂತೆ ಮಧ್ಯಾಹ್ನ 3 ಗಂಟೆಗೆ ವೆಬ್&zwnj;ಸೈಟ್&zwnj;, ಮೊಬೈಲ್&zwnj; ಆ್ಯಪ್&zwnj;ನಲ್ಲಿ ಫಲಿತಾಂಶ ಪ್ರಕಟವಾಗಿತ್ತು.&lt;/p&gt;&lt;p&gt;ಕಲಾ ವಿಭಾಗ 72.86 %&lt;/p&gt;&lt;p&gt;ವಾಣಿಜ್ಯ ವಿಭಾಗ 88.04%&lt;/p&gt;&lt;p&gt;ವಿಜ್ಞಾನ ವಿಭಾಗ 91.69 %&lt;/p&gt;&lt;h2&gt;ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್&zwnj;&lt;/h2&gt;&lt;p&gt;ಈ ಬಾರಿ ರಾಜ್ಯದಲ್ಲಿ ಉಡುಪಿ ಮೊದಲ ಸ್ಥಾನ 96.39%, &amp;nbsp;ಎರಡನೇ ಸ್ಥಾನ ದಕ್ಷಿಣ ಕನ್ನಡ 96.35% &amp;nbsp;ಮತ್ತು ಯಾದಗಿರಿ ಕೊನೆಯ ಸ್ಥಾನ&zwnj; - 71.21% ಫಲಿತಾಂಶ ಬಂದಿದೆ.&lt;/p&gt;&lt;h2&gt;ಜಿಲ್ಲಾವಾರು ಫಲಿತಾಂಶ&lt;/h2&gt;&lt;ol&gt; &lt;li&gt;ಉಡುಪಿ &ndash; 96.39%&lt;/li&gt; &lt;li&gt;ದಕ್ಷಿಣ ಕನ್ನಡ &ndash; 96.35%&lt;/li&gt; &lt;li&gt;ಕೊಡಗು &ndash; 92.34%&lt;/li&gt; &lt;li&gt;ವಿಜಯಪುರ &ndash; 92%&lt;/li&gt; &lt;li&gt;ಉತ್ತರ ಕನ್ನಡ &ndash; 91.78%&lt;/li&gt; &lt;li&gt;ಬೆಂಗಳೂರು ಗ್ರಾಮಾಂತರ &ndash; 91.00%&lt;/li&gt; &lt;li&gt;ಚಿಕ್ಕಮಗಳೂರು &ndash; 90.80%&lt;/li&gt; &lt;li&gt;ಬೆಂಗಳೂರು ದಕ್ಷಿಣ &ndash; 90.55%&lt;/li&gt; &lt;li&gt;ಚಿಕ್ಕಬಳ್ಳಾಪುರ &ndash; 90.24%&lt;/li&gt; &lt;li&gt;ಬೆಂಗಳೂರು ಉತ್ತರ &ndash; 90.05%&lt;/li&gt; &lt;li&gt;ಹಾಸನ &ndash; 89.71%&lt;/li&gt; &lt;li&gt;ಮಂಡ್ಯ &ndash; 88.85%&lt;/li&gt; &lt;li&gt;ರಾಮನಗರ &ndash; 87.90%&lt;/li&gt; &lt;li&gt;ಕೋಲಾರ &ndash; 87.38%&lt;/li&gt; &lt;li&gt;ಶಿವಮೊಗ್ಗ &ndash; 87.62%&lt;/li&gt; &lt;li&gt;ತುಮಕೂರು &ndash; 86.89%&lt;/li&gt; &lt;li&gt;ಕೊಪ್ಪಳ &ndash; 86.80%&lt;/li&gt; &lt;li&gt;ಚಾಮರಾಜನಗರ &ndash; 84.68%&lt;/li&gt; &lt;li&gt;ಮೈಸೂರು &ndash; 84.80%&lt;/li&gt; &lt;li&gt;ಬೀದರ್ &ndash; 84.61%&lt;/li&gt; &lt;li&gt;ಬಾಗಲಕೋಟೆ &ndash; 84.12%&lt;/li&gt; &lt;li&gt;ಹಾವೇರಿ &ndash; 84.11%&lt;/li&gt; &lt;li&gt;ಧಾರವಾಡ &ndash; 83.31%&lt;/li&gt; &lt;li&gt;ಚಿಕ್ಕೋಡಿ &ndash; 83.10%&lt;/li&gt; &lt;li&gt;ದಾವಣಗೆರೆ &ndash; 81.99%&lt;/li&gt; &lt;li&gt;ಬೆಳಗಾವಿ &ndash; 80.32%&lt;/li&gt; &lt;li&gt;ಚಿತ್ರದುರ್ಗ &ndash; 79.12%&lt;/li&gt; &lt;li&gt;ಬಳ್ಳಾರಿ &ndash; 78.69%&lt;/li&gt; &lt;li&gt;ಕಲಬುರಗಿ &ndash; 76.97%&lt;/li&gt; &lt;li&gt;ಗದಗ &ndash; 76.65%&lt;/li&gt; &lt;li&gt;ರಾಯಚೂರು &ndash; 74.09%&lt;/li&gt; &lt;li&gt;ಯಾದಗಿರಿ &ndash; 71.21%&lt;/li&gt;&lt;/ol&gt;&lt;h2&gt;ಬಾಲಕಿಯರೇ ಮೇಲುಗೈ&lt;/h2&gt;&lt;p&gt;ಒಟ್ಟು 6,48,853 ಪರೀಕ್ಷೆಗೆ ನೋಂದಾವಣೆ ಮಾಡಿಕೊಂಡಿದ್ದರು. 16,653 ಮಂದಿ ಪರೀಕ್ಷೆಗೆ ಹಾಜರಾಗಿಲ್ಲ. ಎಂದಿನಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದು, ಶೇಕಾಡ 88.70% ಬಾಲಕಿಯರು ಉತ್ತೀರ್ಣರಾಗಿದ್ದು, ಶೇಕಾಡ 83.65% ಬಾಲಕರು ಉತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ ಶೇಕಾಡ 85% ವಿಧ್ಯಾರ್ಥಿಗಳು ಉತ್ತೀರ್ಣರಾದರೆ ಗ್ರಾಮೀಣ ಪ್ರದೇಶದಲ್ಲಿ ಶೇಕಾಡ 87.62% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.&lt;/p&gt;&lt;p&gt;ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು https://karresults.nic.in ವೆಬ್&zwnj;ಸೈಟ್ ಮತ್ತು &lsquo;ಕರ್ನಾಟಕ ಒನ್&zwnj;&rsquo; ಮೊಬೈಲ್&zwnj; ಆ್ಯಪ್&zwnj; , ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್&zwnj; ಸಂಖ್ಯೆಗೆ ವಾಟ್ಸಪ್&zwnj;/ಎಸ್&zwnj;ಎಂಎಸ್ ಮೂಲಕ ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆಯ ಸಮಯದಲ್ಲೇ ಅವರ ಅಂಕಪಟ್ಟಿಗಳನ್ನೂ ಡಿಜಿಲಾಕರ್&zwnj; ನಲ್ಲಿ ಅಪ್&zwnj;ಲೋಡ್&zwnj; ಮಾಡಲಾಗಿದೆ. https://www.digilocker.gov.in ಮೂಲಕ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಡೌನ್&zwnj;ಲೋಡ್&zwnj; ಮಾಡಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.&lt;/p&gt;]]></content:encoded>
            <category>education</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-2nd-puc-results-2026-record-86-percent-pass-records-in-pass-percentage-udupi-tops-yadgir-last-gdp/articleshow-kkd7goh"/>
        </item>
        <item>
            <title><![CDATA[ಮನೆಗೆಲಸದಿಂದ ಏರ್‌ಲೈನ್ಸ್‌ವರೆಗೆ:  21ನೇ ವಯಸ್ಸಿಗೆ ಅಕ್ಷರ ಕಲಿತಾ ಅರ್ಚನಾ ಇಂದು ವಿಮಾನಯಾನ ಸಂಸ್ಥೆ ಉದ್ಯೋಗಿ]]></title>
            <link>https://kannada.asianetnews.com/gallery/women/learned-to-read-write-at-21-housemaid-inspires-many-by-changing-her-job-as-an-airport-staff-oluzyvn</link>
            <guid isPermaLink="true">https://kannada.asianetnews.com/gallery/women/learned-to-read-write-at-21-housemaid-inspires-many-by-changing-her-job-as-an-airport-staff-oluzyvn</guid>
            <pubDate>Tue, 07 Apr 2026 16:57:33 +0530</pubDate>
            <description><![CDATA[&lt;p&gt;&lt;strong&gt;from housemaid to airline staff: &lt;/strong&gt;ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkt0fnyhtempc7y3r595ex8,imgname-inspiring-story--4--1775560048318.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;from housemaid to airline staff: &lt;/strong&gt;ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ.&amp;nbsp;&lt;/p&gt;&lt;img&gt;&lt;p&gt;ಎಲ್ಲರಿಗೂ ಬದುಕು ಒಂದೇ ರೀತಿಯ ಅವಕಾಶಗಳನ್ನು ನೀಡುವುದಿಲ್ಲ, ಕೆಲವರಿಗೆ ಅವಕಾಶಗಳು ತಾನಾಗೇ ಬಂದರೆ ಮತ್ತೆ ಕೆಲವರು ಅವಕಾಶವನ್ನು ತಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ತಾವಾಗೇ ಅವಕಾಶ ಸೃಷ್ಟಿಸಿದವರ ಬದುಕು ಅನೇಕರಿಗೆ ಸ್ಫೂರ್ತಿ ತುಂಬುತ್ತದೆ. ಜೊತೆಗೆ ಮನಸ್ಸಿದ್ದರೆ ಯಾರೋ ಊಹಿಸಲೂ ಕೂಡ ಆಗದಿರುವುದನ್ನು ಮಾಡಬಹುದು ಎಂಬುದಕ್ಕೆ ಇಲ್ಲೊಬ್ಬರು ಯುವತಿಯ ಬದುಕು ಸಾಕ್ಷಿಯಾಗಿದೆ. ಹೌದು ನಮ್ಮಲ್ಲನೇಕರು ಮಕ್ಕಳ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಾರೆ. ಇಂದು ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಖಾಸಗಿ ಶಾಲೆಗಳಲ್ಲಿ ಎಲ್&zwnj;ಕೆಜಿ ಯುಕೆಜಿ ಮಕ್ಕಳ ವಾರ್ಷಿಕ ಶಾಲಾ ಶುಲ್ಕವೇ ಲಕ್ಷ ದಾಟಿದೆ.&lt;/p&gt;&lt;img&gt;&lt;p&gt;ಆದರೆ ಪೊಷಕರೇ ಇಲ್ಲದ ಮಕ್ಕಳು ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕಾಗುತ್ತದೆ. ಅವರಿಗೆ ಇಂತಹ ಶಾಲೆಗಳನ್ನು ಕನಸುಗಳಲ್ಲಿ ಊಹಿಸುವುದಕ್ಕೂ ಸಾಧ್ಯವಿಲ್ಲ, ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ. ಹೌದು ಆಕೆಯ ಹೆಸರು ಅರ್ಚನಾ ಪಾಟೀಲ್, ಆಕೆಯ ವಯಸ್ಸಿನ ಎಲ್ಲರೂ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡುವ ಸಮಯದಲ್ಲಿ ಆಕೆ ಕುಟುಂಬ ಸದಸ್ಯರ ತುತ್ತಿನ ಚೀಲ ತುಂಬಿಸುವುದಕ್ಕಾಗಿ ಮನೆ ಕೆಲಸದವಳಾಗಿ ಕೆಲಸ ಮಾಡಬೇಕಿತ್ತು. ಆಕೆಯ ಮಾತಿನಲ್ಲೇ ಆಕೆಯ ಯಶೋಗಾಥೆಯನ್ನು ಕೇಳುವುದಾದರೆ...&lt;/p&gt;&lt;img&gt;&lt;p&gt;ನಾನು 21 ವರ್ಷ ತುಂಬುವವರೆಗೆ ಶಾಲೆಯ ಮೆಟ್ಟಿಲುಗಳನ್ನೇ ಹತ್ತಿದವಳಲ್ಲ, ಆದರೆ ಇಂದು ಮುಂಬೈನಂತಹ ಮಹಾನಗರಿಯಲ್ಲಿ ನಾನು ಮನೆ ಹೊಂದಿದ್ದೇನೆ. ಅದು ನನ್ನ ಸ್ವಂತ ಹಣ, ಬೆವರು ರಕ್ತ ಹಾಗೂ ಧೈರ್ಯದಿಂದ ಸಂಪಾದಿಸಿದ್ದು. ನನ್ನ ಅಮ್ಮ ಒಬ್ಬರು ಅಂಧೆ, ನನ್ನ ಅಪ್ಪ ಕುಡಿತಕ್ಕೆ ದಾಸನಾಗಿದ್ದ. ನಾನು ಬಡತನದಲ್ಲೇ ಬೆಳೆದೆ. ಹೀಗಾಗಿ ಬಾಲ್ಯದಲ್ಲೇ ನಾನು ಮನೆಕೆಲಸದವಳಾಗಿ ಕೆಲಸಕ್ಕೆ ಸೇರಿಕೊಂಡೆ. ಒಂದು ದಶಕದ ಕಾಲ ನಾನು ನನ್ನ ಕುಟುಂಬವನ್ನು ಸಲಹುವುದಕ್ಕಾಗಿ ಕೆಲಸ ಮಾಡಿದೆ. ನನ್ನ ಸೋದರರನ್ನು ಶಾಲೆಗೆ ಕಳುಹಿಸಿದೆ. ಆದರೆ 2020ರಲ್ಲಿ ನನ್ನ ಬದುಕು ಬದಲಾಯ್ತು.&lt;/p&gt;&lt;img&gt;&lt;p&gt;ಆ ವರ್ಷ ನಾನು ನನ್ನ 16 ವರ್ಷದ ಸೋದರನನ್ನು ಕಳೆದುಕೊಂಡೆ. ಬ್ರೈನ್ ಟ್ಯೂಮರ್ ಆದ ಒಂದೇ ವಾರಕ್ಕೆ ಆತ ನಮ್ಮನ್ನು ಬಿಟ್ಟು ಹೋದ. ಇದು ನನಗೆ ನಾನು ಸೋತೆ ಎಂಬ ಭಾವನೆ ಮೂಡಿಸಿತು. ನಾನು ನನ್ನ ಸೋದರನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ಹತಾಶೆ ಮೂಡಿತು. ಇದರಿಂದ ನನಗೆ ಖಿನ್ನತೆ ಉಂಟಾಯ್ತು. ಆದರೆ ನನ್ನ ಸೋದರ ಸಾಯುವ ಮೊದಲು ಕೊನೆಯದಾಗಿ ಹೇಳಿದ ಮಾತು ನನಗೆ ನೆನಪಾಯ್ತು. ನಾನು ನೀನು ಖುಷಿಯಾಗಿರುವುದನ್ನು ನೊಡಲು ಬಯಸುವೆ. ನೀನು ನಿನ್ನ ಕನಸುಗಳನ್ನು ಪೂರೈಸಿದಾಗ ಮಾತ್ರ ನೀನು ಖುಷಿಯಾಗಿರಬಹುದು ಎಂದು ಆತ ಹೇಳಿದ್ದ. ಈ ಮಾತು ನೆನಪಾಗಿ ಯಾರೂ ಯೋಚಿಸದೇ ಇರುವುದನ್ನು ಮಾಡುವುದಕ್ಕೆ ಸಿದ್ಧಳಾದೆ.&lt;/p&gt;&lt;p&gt;ನನ್ನ ವಯಸ್ಸಿನ ಎಲ್ಲರೂ ಪದವಿ ಓದುತ್ತಿರುವ ಸಮಯದಲ್ಲಿ ನಾನು ನನ್ನ ಬದುಕಿನ ಮೊದಲ ಅಕ್ಷರಗಳನ್ನು ಕಲಿಯುವುದಕ್ಕೆ ಶುರು ಮಾಡಿದೆ. ನಾನು ಕೈಬರಹವನ್ನು ಸರಿಪಡಿಸುವುದಕ್ಕೆ ರಾತ್ರಿಯೆಲ್ಲಾ ಎಚ್ಚರವಿದ್ದು, ಅಭ್ಯಾಸ ಮಾಡಿದೆ. 2021ರಲ್ಲಿ 65 ಶೇಕಡಾ ಅಂಕಗಳೊಂದಿಗೆ ನಾನು ನನ್ನ 10ನೇ ತರಗತಿಯನ್ನು ಪಾಸು ಮಾಡಿದೆ. 2023ರಲ್ಲಿ 12ನೇ ತರಗತಿ ಪಾಸು ಮಾಡಿದೆ. ಈಗ ನನ್ನ ವಯಸ್ಸು 26 ನಾನೀಗ ನನ್ನ ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದೇನೆ.&lt;/p&gt;&lt;img&gt;&lt;p&gt;ಕೆಲ ತಿಂಗಳ ಹಿಂದಷ್ಟೇ ನಾನು ಒಂದು ಅಂತಾರಾಷ್ಟ್ರೀಯ ಏರ್&zwnj;ಲೈನ್ಸ್&zwnj;ನಲ್ಲಿ ಗ್ರೌಂಡ್ ಸ್ಟಾಪ್ ಆಗಿ ಕೆಲಸಕ್ಕೆ ಸೇರಿದೆ. ಕೆಲಸಕ್ಕೆ ಸೇರಿದ ಮೊದಲ ದಿನ ನಾನು ಮಾಡಿದ ಮೊದಲ ಕೆಲಸ ಎಂದರೆ ನಮ್ಮದೆಂದು ಕರೆಯುವ ಒಂದು ಮನೆಯೊಂದಕ್ಕೆ ಡೆಪಾಸಿಟ್ ಮಾಡಿದ್ದು, ಬಳಿಕ ನಾನು ಅದರ ಕೀಯನ್ನು ನನ್ನ ಅಮ್ಮನ ಕೈಗೆ ಇತ್ತಾಗ ಆಕೆಗೆ ಮನೆಯನ್ನು ನೋಡುವುದಕ್ಕೆ ಸಾಧ್ಯವಿರಲಿಲ್ಲ, ಆದರೆ ನಾನು ಅವಳ ಕಣ್ಣುಗಳಲ್ಲಿ ಹೆಮ್ಮೆಯನ್ನು ಕಂಡೆ. ಜೊತೆಗೆ ನಾನು ಒಂದು ನಿರ್ಧಾರಕ್ಕೆ ಬಂದೇ ಜೀವನ ಹೇಗೆಯೇ ಇರಲಿ ಆದರೆ ಬದುಕು ನಿಲ್ಲಬಾರದು ಎಂದು.&lt;/p&gt;&lt;p&gt;ನಾನು ನನ್ನ ಶಿಕ್ಷಣವನ್ನು ಮುಂದುವರಿಸಬೇಕು. ದೊಡ್ಡ ಕಚೇರಿಯಲ್ಲಿ ಕೆಲಸ ಮಾಡಬೇಕು, ನನ್ನ ಪೋಷಕರನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯಬೇಕು ಹೀಗೆ ಕನಸುಗಳಿವೆ. ಇವೆಲ್ಲಾ ಕನಸುಗಳನ್ನು ಈಡೇರಿಸಲು ಸ್ವಲ್ಪ ಸಮಯ ಬೇಕು. ಆದರೆ ನಾನು ಇಷ್ಟೊಂದು ದೊಡ್ಡ ಕನಸು ಕಾಣಬಲ್ಲೆ ಎಂಬುದೇ ನನ್ನ ಜೀವನದ ದೊಡ್ಡ ಸಾಧನೆಯಾಗಿದೆ ಎಂದು ಅರ್ಚನಾ ಪಾಟೀಲ್ ಹೇಳಿಕೊಂಡಿದ್ದಾರೆ. ಇವರ ಕತೆ ಈಗ ಅನೇಕರಿಗೆ ಸ್ಪೂರ್ತಿಯಾಗಿದೆ.&lt;/p&gt;]]></content:encoded>
            <category>education</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/women/learned-to-read-write-at-21-housemaid-inspires-many-by-changing-her-job-as-an-airport-staff-oluzyvn"/>
        </item>
        <item>
            <title><![CDATA[ಡಿಗ್ರಿ ಇಲ್ಲದಿದ್ದರೂ ಕೈತುಂಬಾ ಸಂಪಾದನೆ:  45 ನಿಮಿಷದ ಕೆಲಸಕ್ಕೆ 900 ರೂಪಾಯಿ ಚಾರ್ಜ್ ಮಾಡಿದ ಕಾರ್‌ಪೆಂಟರ್‌]]></title>
            <link>https://kannada.asianetnews.com/jobs/no-ai-threat-these-jobs-better-than-software-jobs-hourly-work-pays-in-thousands/articleshow-qpezcgg</link>
            <guid isPermaLink="true">https://kannada.asianetnews.com/jobs/no-ai-threat-these-jobs-better-than-software-jobs-hourly-work-pays-in-thousands/articleshow-qpezcgg</guid>
            <pubDate>Tue, 07 Apr 2026 18:09:30 +0530</pubDate>
            <description><![CDATA[&lt;p&gt;&lt;strong&gt;high demand blue collar jobs: &lt;/strong&gt;ಕೃತಕ ಬುದ್ಧಿಮತ್ತೆಯಿಂದಾಗಿ (ಎಐ) ಸಾಫ್ಟ್&zwnj;ವೇರ್ ಉದ್ಯೋಗಗಳು ಅಪಾಯದಲ್ಲಿರುವಾಗ, ಕಾರ್ಪೆಂಟರ್&zwnj;, ಪ್ಲಂಬರ್&zwnj;ಗಳಂತಹ ಬ್ಲೂ ಕಾಲರ್ ಉದ್ಯೋಗಗಳಿಗೆ ನಗರಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.ಇವರು ಗಂಟೆಗೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkdz9cmbra0cr2n110c198v,imgname-gettyimages-1391182652-1775547426196.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಎಐ ಯುಗದಲ್ಲಿ ಬೆಳಗಿದ ಬ್ಲೂ ಕಾಲರ್ ಬದುಕು&lt;/strong&gt;&lt;/h2&gt;&lt;p&gt;ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದ ವ್ಯಾಪಕ ಬೆಳವಣಿಗೆಯಿಂದಾಗಿ ಇಂದು ಹಲವು ಕಂಪನಿಗಳು ತಮ್ಮ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. ಇದರ ಪರಿಣಾಮ ಸಾವಿರಾರು ಜನ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಸಾಮೂಹಿಕ ಉದ್ಯೋಗ ಕಡಿತದಿಂದಾಗಿ ವೈಟ್&zwnj; ಕಾಲರ್ ಉದ್ಯೋಗಿಳೆಂದೇ ಕರೆಯಲ್ಪಡುವ ಸಾಫ್ಟ್&zwnj;ವೇರ್ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದರೆ ಇತ್ತ ಎಐ ಟಚ್ ಮಾಡಲು ಕೂಡ ಸಾಧ್ಯವಿಲ್ಲದ ಉದ್ಯೋಗಗಳನ್ನು ಮಾಡುತ್ತಿರುವ ಹೆಚ್ಚೇನು ಓದದ ಉದ್ಯೋಗಿಗಳು ದಿನಕ್ಕೆ ಗಂಟೆಗೆ ಸಾವಿರಾರು ರೂಪಾಯಿಗಳನ್ನು ದುಡಿಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಸಾಫ್ಟ್&zwnj;ವೇರ್ ಉದ್ಯೋಗಿಗಳಿಗಿಂತ ಬಡಗಿ, ಪ್ಲಂಬರ್&zwnj;ಗಳೇ ಈಗ 'ಕಿಂಗ್&lt;/strong&gt;&lt;/h3&gt;&lt;p&gt;ಹೌದು ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರೊಬ್ಬರು ಈ ಬ್ಲೂ ಕಾಲರ್ ಜಾಬ್ ಉದ್ಯೋಗಿಗಳ ಕೆಲಸ ಹಾಗೂ ಸಂಪಾದನೆಯ ಬಗ್ಗೆ ಬರೆದುಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ಹೌದು ಕಾರ್&zwnj;ಪೆಂಟರ್&zwnj;ಗಳು(ಮರದ ಕೆಲಸ ಮಾಡುವ ಬಡಗಿ) ಪ್ಲಂಬರ್&zwnj;ಗಳು, ವೈರಿಂಗ್ ಮಾಡುವವರಿಗೆ ನಗರ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ನಗರಗಳಲ್ಲಿ ಅವರನ್ನು ಹುಡುಕುವುದೇ ಒಂದು ದೊಡ್ಡ ಕೆಲಸ ಇದರ ಜೊತೆಗೆ ಅವರಿಗೆ ಕೇವಲ ಕೆಲ ಗಂಟೆಗಳ ಕೆಲಸಕ್ಕೆ ಸಾಕಷ್ಟು ಮೊತ್ತದ ಹಣ ನೀಡಬೇಕಾಗುತ್ತದೆ. ಹಾಗೆಯೇ ಇಲ್ಲಿ ಈ ಉದ್ಯೋಗದ ಬಗ್ಗೆ ಹೇಳಿಕೊಂಡಿದ್ದು ಅವರ ಪೋಸ್ಟ್&zwnj; ಎಕ್ಸ್&zwnj;ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.&lt;/p&gt;&lt;h3&gt;&lt;strong&gt;ವೈರಲ್ ಪೋಸ್ಟ್ ಬಿಚ್ಚಿಟ್ಟ ಅಚ್ಚರಿಯ ಸತ್ಯ!&lt;/strong&gt;&lt;/h3&gt;&lt;p&gt;@GurugramDeals ಎಂಬುವವರು ಈ ಪೋಸ್ಟ್ ಮಾಡಿದ್ದು, ತಮ್ಮ ಪೋಸ್ಟ್&zwnj;ನಲ್ಲಿ ಹೀಗೆ ಬರೆದಿದ್ದಾರೆ. ಕೆಲವು ಕಪಾಟುಗಳನ್ನು ಅಳವಡಿಸುವ ಮತ್ತು ಒಂದೆರಡು ಪೇಟಿಂಗ್ ಚಿತ್ರಗಳನ್ನು ನೇತುಹಾಕುವ 45 ನಿಮಿಷಗಳ ಕೆಲಸಕ್ಕೆ ಬಡಗಿಗೆ 900 ರೂ. ಪಾವತಿಸಲಾಯಿತು. ಬ್ಲೂ ಕಾಲರ್ ಉದ್ಯೋಗಕ್ಕೆ ಭವಿಷ್ಯವಿದೆ, ಯುವಕರಿಗೆಇತರ ಬಳಕೆಯಲ್ಲಿಲ್ಲದ ಪದವಿಗಳಿಗಿಂತ ಕೌಶಲ್ಯ ಆಧಾರಿತ ತರಬೇತಿಗೆಆದ್ಯತೆ ನೀಡಬೇಕು. ಇವುಗಳಿಗೆ ಎಐನಿಂದ ಯಾವುದೇ ಬೆದರಿಕೆ ಇರುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ. ಜೊತೆಗೆ ಅನೇಕರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಗಂಟೆಯ ಕೆಲಸಕ್ಕೆ ಸಾವಿರಗಳಲ್ಲಿ ಸಂಭಾವನೆ&lt;/strong&gt;&lt;/p&gt;&lt;p&gt;ನಿಜ ಫಾಲ್ಸ್ ಸೀಲಿಂಗ್ ಎಲೆಕ್ಟ್ರಿಕ್ ವೈರಿಂಗ್&zwnj;ಗಾಗಿ ಸುಮಾರು 30000 ರೂಪಾಯಿ ಪಾವತಿಸಬೇಕಾಯಿತು ಮತ್ತು ಅವನು ಮಾಡಿದ ಕೆಲಸವನ್ನು ನೋಡಿ ನಾನು ಮೋಡಿಗೊಂಡೆ, ನನಗೂ ಅದನ್ನು ಮಾಡಬೇಕು ಎನಿಸಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕಳೆದ ತಿಂಗಳು, ಮುಂಬೈನ ವ್ಯಕ್ತಿಯೊಬ್ಬರು ತಮ್ಮ ಸೊಸೈಟಿಯ ಪ್ಲಂಬರ್ ಮೀರಾ ರಸ್ತೆ, ಬೋರಿವಲಿ ಮತ್ತು ಕಂಡಿವಲಿ ಪಟ್ಟಣಗಳಲ್ಲಿ ಕೆಲಸ ಮಾಡುತ್ತಾ ವರ್ಷಕ್ಕೆ 18 ಲಕ್ಷ ರೂ. (LPA) ಗಳಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಆ ಪ್ಲಂಬರ್ ಚೆನ್ನಾಗಿ ಸಂಪಾದಿಸುತ್ತಿದ್ದಿದ್ದಲ್ಲದೆ, ದುಬಾರಿ ಕಾರು ಖರೀದಿಸಿದ್ದರು, ಮನೆ ಕಟ್ಟಿದ್ದರು ಮತ್ತು ಕೃಷಿಭೂಮಿಯನ್ನು ಸಹ ಖರೀದಿಸಿದ್ದರು, ಇವೆಲ್ಲವನ್ನೂ ಅವರ ಸ್ವಂತ ಅನುಕೂಲಕ್ಕೆ ತಕ್ಕಂತೆ ಮಾಡಿದ್ದರು ಎಂದು ಅವರು ಹೇಳಿಕೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;21ನೇ ವಯಸ್ಸಿಗೆ ಅಕ್ಷರಾಭ್ಯಾಸ: ಏರ್&zwnj;ಪೋರ್ಟ್ ಸ್ಟಾಫ್ ಆಗಿ ಬದುಕು ಬಲಿಸಿಕೊಂಡ ಮನೆಗೆಲಸದ ಹುಡುಗಿ&lt;/strong&gt;&lt;/p&gt;&lt;p&gt;ಬೆಂಗಳೂರಿನಲ್ಲಿ ಇದು ತುಂಬಾ ಸಾಮಾನ್ಯವಾಗಿದೆ ನೀವು ಯಾವುದೇ ಎಲೆಕ್ಟ್ರಿಷಿಯನ್/ಬಡಗಿ/ಪ್ಲಂಬರ್&zwnj;ನ್ನು ಕರೆಯುತ್ತೀರಿ. ಅವರು 1-2 ಗಂಟೆಗಳ ಕೆಲಸಕ್ಕೆ 1000-2000 ಕೇಳುತ್ತಾರೆ. ಅದರ ಮೇಲೆ, ಅವರು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅಲ್ಲ, ಅವರ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಜನರು ಬ್ಲೂ-ಕಾಲರ್ ಕೆಲಸ ಹಾಗೂ ಕೆಲಸಗಾರರನ್ನು ಗೌರವಿಸಲು ಪ್ರಾರಂಭಿಸಿದರೆ ಅದು ಉತ್ತಮ ಆಯ್ಕೆಯಾಗುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭಾರತದ ಈ ಸಮುದಾಯದಲ್ಲಿ ಮದುವೆಗೂ ಮೊದಲೇ ಯುವತಿ ಗರ್ಭಿಣಿ ಆದರಷ್ಟೇ ಮದುವೆ&lt;/strong&gt;&lt;/p&gt;&lt;p&gt;ನಮಗೆ ಹೋಲಿಸಿದರೆ ವಿಯೆಟ್ನಾಂ ಉತ್ಪಾದನೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಇದೇ ಕಾರಣ. ಅವರು ದೊಡ್ಡ ದೊಡ್ಡ ಡಿಗ್ರಿಯ ಉನ್ನತ ಶಿಕ್ಷಣದ ಬದಲು ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯತ್ತ ಹೆಚ್ಚಿನ ಗಮನಹರಿಸಿದರು ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಬ್ಲೂ ಕಾಲರ್ ಜಾಬ್&zwnj;ಗಳಿಗೆ ಇರುವ ಉದ್ಯೋಗವಕಾಶಗಳು ನಗರಗಳಲ್ಲಿ ಧಾರಾಳವಾಗಿದ್ದಲ್ಲದೇ ಅವರ ಸಂಪಾದನೆಯೂ ಚೆನ್ನಾಗಿರುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Paid the carpenter Rs. 900 for a 45 minute job installing some shelves and hanging a couple of paintings. Blue collar jobs are the future, skill based training for the youth should be prioritised over other obsolete degrees. No threat from AI either.&lt;/p&gt;&lt;p&gt;&mdash; Bhandari ka Vyang (@GurugramDeals) April 5, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Anusha Kb</dc:creator>
            <atom:link href="https://kannada.asianetnews.com/jobs/no-ai-threat-these-jobs-better-than-software-jobs-hourly-work-pays-in-thousands/articleshow-qpezcgg"/>
        </item>
        <item>
            <title><![CDATA[Breaking: PUC ವಿದ್ಯಾರ್ಥಿಗಳೇ ಗಮನಿಸಿ: ನಾಳೆ ಪ್ರಕಟವಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ]]></title>
            <link>https://kannada.asianetnews.com/state/karnataka-2nd-puc-results-2026-to-be-declared-tomorrow-check-details-san/articleshow-r7ue3ra</link>
            <guid isPermaLink="true">https://kannada.asianetnews.com/state/karnataka-2nd-puc-results-2026-to-be-declared-tomorrow-check-details-san/articleshow-r7ue3ra</guid>
            <pubDate>Wed, 08 Apr 2026 11:22:38 +0530</pubDate>
            <description><![CDATA[&lt;p&gt;ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಏಪ್ರಿಲ್ 9 ರಂದು ಪ್ರಕಟಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಚಿತಪಡಿಸಿದ್ದಾರೆ. ಉಪ ಚುನಾವಣೆ ಮುಗಿದ ನಂತರ ಸಂಜೆ ವೇಳೆಗೆ ಫಲಿತಾಂಶ ಘೋಷಣೆಯಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9a73fb7wwtwyhk4yw2h84by,imgname-sslc-puc-exam-1762353331558.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.8): &lt;/strong&gt;ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್ 9) ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದ್ದು, ಈ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ನಾಳೆ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಸಂಜೆ ವೇಳೆಗೆ ಸಚಿವರು ಫಲಿತಾಂಶವನ್ನು ಘೋಷಿಸಲಿದ್ದಾರೆ. ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಬಾರಿಯ ಫಲಿತಾಂಶವು ಅತ್ಯುತ್ತಮವಾಗಿ ಬರಲಿದೆ ಎಂದು ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;p&gt;ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದ್ದವು. ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ 7,10,363 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದೀಗ ತಮ್ಮ ಭವಿಷ್ಯದ ಅಂಕಪಟ್ಟಿಗಾಗಿ ಕಾಯುತ್ತಿದ್ದಾರೆ. ಯಾವುದೇ ಲೋಪದೋಷವಿಲ್ಲದೆ ಅತ್ಯಂತ ಪಾರದರ್ಶಕವಾಗಿ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ಮಂಡಳಿ ಫಲಿತಾಂಶ ನೀಡಲು ಸರ್ವ ಸನ್ನದ್ಧವಾಗಿದೆ.&lt;/p&gt;&lt;h2&gt;&lt;strong&gt;ಫಲಿತಾಂಶ ನೋಡುವುದು ಹೇಗೆ? (Step-by-Step Guide)&lt;/strong&gt;&lt;/h2&gt;&lt;p&gt;ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಲೇಜಿಗೆ ಅಲೆಯಬೇಕಿಲ್ಲ. ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ಮೊಬೈಲ್&zwnj;ನಲ್ಲೇ ರಿಸಲ್ಟ್ ನೋಡಬಹುದು:&lt;/p&gt;&lt;p&gt;&lt;strong&gt;ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ: &lt;/strong&gt;ಮೊದಲು ಅಧಿಕೃತ ವೆಬ್&zwnj;ಸೈಟ್ karresults.nic.in ಗೆ ಲಾಗ್ ಇನ್ ಆಗಿ.&lt;/p&gt;&lt;p&gt;&lt;strong&gt;ಲಿಂಕ್ ಕ್ಲಿಕ್ ಮಾಡಿ: &lt;/strong&gt;ಮುಖಪುಟದಲ್ಲಿ ಕಾಣುವ &lsquo;Karnataka 2nd PUC Result 2026&rsquo; ಲಿಂಕ್ ಮೇಲೆ ಕ್ಲಿಕ್ ಮಾಡಿ.&lt;/p&gt;&lt;p&gt;&lt;strong&gt;ಮಾಹಿತಿ ಭರ್ತಿ ಮಾಡಿ: &lt;/strong&gt;ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಿಖರವಾಗಿ ನಮೂದಿಸಿ.&lt;/p&gt;&lt;p&gt;&lt;strong&gt;ಸಲ್ಲಿಸಿ: &lt;/strong&gt;ಮಾಹಿತಿ ಭರ್ತಿ ಮಾಡಿದ ನಂತರ &lsquo;Submit&rsquo; ಬಟನ್ ಒತ್ತಿರಿ.&lt;/p&gt;&lt;p&gt;&lt;strong&gt;ಡೌನ್&zwnj;ಲೋಡ್ ಮಾಡಿ: &lt;/strong&gt;ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸಲಿದೆ. ಭವಿಷ್ಯದ ಬಳಕೆಗಾಗಿ ಇದನ್ನು ಡೌನ್&zwnj;ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>education</category>
            <dc:creator>Santosh Naik</dc:creator>
            <atom:link href="https://kannada.asianetnews.com/state/karnataka-2nd-puc-results-2026-to-be-declared-tomorrow-check-details-san/articleshow-r7ue3ra"/>
        </item>
        <item>
            <title><![CDATA[ಸರ್ಕಾರಿ ಶಾಲೆಗೆ 'ಅಡಿಕೆ'ಯೇ ಬಂಡವಾಳ! ಅನುದಾನಕ್ಕಾಗಿ ಕೈಚಾಚದೆ, ಸ್ವಾವಲಂಬಿಯಾದ ಈ ಸ್ಕೂಲ್ ರಾಜ್ಯಕ್ಕೇ ಮಾಡೆಲ್!]]></title>
            <link>https://kannada.asianetnews.com/state/chikkamagaluru-govt-school-becomes-self-reliant-grows-areca-nut-plantation-to-fund-education-sat/articleshow-suece9e</link>
            <guid isPermaLink="true">https://kannada.asianetnews.com/state/chikkamagaluru-govt-school-becomes-self-reliant-grows-areca-nut-plantation-to-fund-education-sat/articleshow-suece9e</guid>
            <pubDate>Mon, 06 Apr 2026 20:55:04 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಶ್ರೀನಿವಾಸಪುರ ಗ್ರಾಮದ ಸರ್ಕಾರಿ ಶಾಲೆಯೊಂದು ಮುಚ್ಚುವ ಹಂತ ತಲುಪಿತ್ತು. ಆದರೆ, ಶಿಕ್ಷಕರು ಮತ್ತು ಗ್ರಾಮಸ್ಥರು ಸೇರಿ ಶಾಲಾ ಜಾಗದಲ್ಲಿ ಅಡಿಕೆ ತೋಟ ನಿರ್ಮಿಸಿ, ಅದರಿಂದ ಬರುವ ಆದಾಯದಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸಿ, ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಈ ಸ್ಪೂರ್ತಿ ಕಥೆ ತಿಳಿಯಲು ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knhnwxt443s0gtag2g8azk5q,imgname-chikkamagaluru-school-1775488628548.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಏ.06): &lt;/strong&gt;ಇಂದು ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಅಭಾವ ಮತ್ತು ಮಕ್ಕಳ ದಾಖಲಾತಿ ಕುಸಿತದಿಂದಾಗಿ ಬೀಗ ಹಾಕುವ ಸ್ಥಿತಿಗೆ ತಲುಪಿವೆ. ಆದರೆ, ಕಾಫಿನಾಡು ಚಿಕ್ಕಮಗಳೂರಿನ ಒಂದು ಪುಟ್ಟ ಗ್ರಾಮದ ಶಾಲೆ ಮಾತ್ರ ಈ ಎಲ್ಲಾ ಸವಾಲುಗಳನ್ನು ಮೀರಿ ನಿಂತಿದೆ. &lsquo;ಸರ್ಕಾರದ ಅನುದಾನ ಬರಲಿ&quot;&rsquo; ಎಂದು ಕಾಯುವ ಬದಲು, ತನ್ನ ಕಾಲ ಮೇಲೆ ತಾನು ನಿಲ್ಲುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.&lt;/p&gt;&lt;h3&gt;&lt;strong&gt;ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಈಗ ಹೊಸ ಚೈತನ್ಯ!&lt;/strong&gt;&lt;/h3&gt;&lt;p&gt;ಚಿಕ್ಕಮಗಳೂರು ತಾಲೂಕಿನ ಶ್ರೀನಿವಾಸಪುರ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯೇ ಈ ಸಾಧನೆಯ ಹರಿಕಾರ. ಕೇವಲ 30 ಮನೆಗಳಿರುವ ಈ ಪುಟ್ಟ ಗ್ರಾಮದ ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಕೇವಲ 30 ಮಕ್ಕಳು ಓದುತ್ತಿದ್ದಾರೆ. ಒಂದೊಮ್ಮೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಆದರೆ, ಈ ಶಾಲೆಯ ಮುಖ್ಯ ಶಿಕ್ಷಕ ಚಂದ್ರೇಗೌಡ ಮತ್ತು ಸಹ ಶಿಕ್ಷಕಿ ಲಾವಣ್ಯ ಅವರು ಈ ಶಾಲೆಯ ಭವಿಷ್ಯವನ್ನೇ ಬದಲಿಸುವ ಪಣ ತೊಟ್ಟರು.&lt;/p&gt;&lt;h2&gt;&lt;strong&gt;ಶಾಲೆಗಿದೆ 'ಅಡಿಕೆ' ಆಸರೆ: ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ!&lt;/strong&gt;&lt;/h2&gt;&lt;p&gt;ಶಾಲೆಯ ಅಭಿವೃದ್ಧಿಗೆ ಕೇವಲ ದಾನಿಗಳನ್ನೇ ನಂಬುವ ಬದಲು, ಶಾಶ್ವತ ಆದಾಯದ ಮೂಲವಿರಲಿ ಎಂದು ಶಿಕ್ಷಕರು ಮತ್ತು ಗ್ರಾಮಸ್ಥರು ನಿರ್ಧರಿಸಿದರು. ಶಾಲೆಯ ಮುಂಭಾಗದಲ್ಲಿದ್ದ ಒಂದು ಎಕರೆ ಗ್ರಾಮ ಠಾಣಾ ಜಾಗವನ್ನು ಶಾಲೆಯ ಖಾತೆಗೆ ವರ್ಗಾಯಿಸಿಕೊಂಡರು. ಅಲ್ಲಿ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಿ, ಅರ್ಧ ಎಕರೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ಹಾಗೂ ಉಳಿದ ಅರ್ಧ ಎಕರೆಯಲ್ಲಿ ಸುಮಾರು 312 ಅಡಿಕೆ ಗಿಡಗಳನ್ನು ಮತ್ತು ನಾಲ್ಕು ತೆಂಗಿನ ಗಿಡಗಳನ್ನು ನೆಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ನೀರಿಗಾಗಿ ಹೋರಾಟ, ಈಗ ಫಲ ನೀಡಲು ಸಿದ್ಧ:&lt;/strong&gt;&lt;/h3&gt;&lt;p&gt;ಅಡಿಕೆ ತೋಟಕ್ಕೆ ನೀರುಣಿಸಲು ಮೊದಲು 500 ಅಡಿ ಬೋರ್ ಕೊರೆಸಿದರೂ ನೀರು ಸಿಗಲಿಲ್ಲ. ಆದರೆ ಧೃತಿಗೆಡದ ಶಿಕ್ಷಕರು ಅಂದೇ ಸಂಜೆ ಮತ್ತೊಂದು ಬೋರ್ ಕೊರೆಸಿದರು. 150 ಅಡಿಯಲ್ಲಿ ನೀರು ಲಭ್ಯವಾಯಿತು. ಇಂದು ಆ ಅಡಿಕೆ ತೋಟ ನಳನಳಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ವಾರ್ಷಿಕವಾಗಿ 3 ರಿಂದ 4 ಲಕ್ಷ ರೂಪಾಯಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ.&lt;/p&gt;&lt;h3&gt;&lt;strong&gt;ಮಕ್ಕಳಿಗೆ ವಿಮಾನ ಪ್ರವಾಸದ ಕನಸು!&lt;/strong&gt;&lt;/h3&gt;&lt;ul&gt; &lt;li&gt;ಈ ತೋಟದಿಂದ ಬರುವ ಆದಾಯವನ್ನು ಕೇವಲ ಶಾಲೆಯ ಕಟ್ಟಡ ದುರಸ್ತಿಗೆ ಮಾತ್ರವಲ್ಲದೆ, ಮಕ್ಕಳ ಉನ್ನತ ಶಿಕ್ಷಣಕ್ಕೆ ಬಳಸಲು ಯೋಜನೆ ರೂಪಿಸಲಾಗಿದೆ.&lt;/li&gt; &lt;li&gt;&lt;strong&gt;ಸ್ಮಾರ್ಟ್ ಕ್ಲಾಸ್ ಆರಂಭ: &lt;/strong&gt;ಆಧುನಿಕ ಉಪಕರಣಗಳ ಮೂಲಕ ಗುಣಮಟ್ಟದ ಶಿಕ್ಷಣ.&lt;/li&gt; &lt;li&gt;&lt;strong&gt;ಪೂರ್ವ ಪ್ರಾಥಮಿಕ ಶಿಕ್ಷಣ: &lt;/strong&gt;ಎಲ್ ಕೆ ಜಿ (LKG) ಮತ್ತು ಯು ಕೆ ಜಿ (UKG) ತರಗತಿಗಳನ್ನು ಆರಂಭಿಸಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವುದು.&lt;/li&gt; &lt;li&gt;&lt;strong&gt;ವಿಮಾನ ಪ್ರವಾಸ: &lt;/strong&gt;ಈ ಶಾಲೆಯ ಮಕ್ಕಳನ್ನು ವಿಮಾನದ ಮೂಲಕ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಬೇಕು ಎಂಬುದು ಶಿಕ್ಷಕರ ವಿಶಿಷ್ಟ ಕನಸಾಗಿದೆ.&lt;/li&gt;&lt;/ul&gt;&lt;h2&gt;&lt;strong&gt;ಗ್ರಾಮಸ್ಥರ ಬೆಂಬಲವೇ ಶಕ್ತಿ:&lt;/strong&gt;&lt;/h2&gt;&lt;p&gt;ಈ ಮಹತ್ವಾಕಾಂಕ್ಷಿ ಕಾರ್ಯದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ಹಾಗೂ ಗ್ರಾಮಸ್ಥರು ಶಿಕ್ಷಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸರ್ಕಾರಿ ಶಾಲೆ ಎಂದರೆ ನಿರ್ಲಕ್ಷ್ಯ ಎನ್ನುವ ಕಾಲದಲ್ಲಿ, ದೃಷ್ಟಿಕೋನ ಬದಲಾದರೆ ಎಂತಹ ಕ್ರಾಂತಿ ಮಾಡಬಹುದು ಎಂಬುದಕ್ಕೆ ಶ್ರೀನಿವಾಸಪುರ ಶಾಲೆ ಸಾಕ್ಷಿಯಾಗಿದೆ. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಲು ಹೊರಟಿರುವ ಈ ತಂಡದ ಕಾರ್ಯಕ್ಕೆ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಮಾದರಿಯು ರಾಜ್ಯದ ಇತರ ಶಾಲೆಗಳಿಗೂ ಪ್ರೇರಣೆಯಾಗಲಿ ಎಂಬುದು ಶಿಕ್ಷಣ ಪ್ರೇಮಿಗಳ ಆಶಯ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/chikkamagaluru-govt-school-becomes-self-reliant-grows-areca-nut-plantation-to-fund-education-sat/articleshow-suece9e"/>
        </item>
        <item>
            <title><![CDATA[ಸಿಬಿಎಸ್‌ಇ 6ನೇ ಕ್ಲಾಸ್‌ನಿಂದ ತ್ರಿಭಾಷೆ ಕಲಿಕೆ ಕಡ್ಡಾಯ; ದ್ವಿಭಾಷಾ ಸೂತ್ರದತ್ತ ಕರ್ನಾಟಕ ಒಲವು ತೋರಿದ ಬೆನ್ನಲ್ಲೇ ಹೊಸ ಬದಲಾವಣೆ ಜಾರಿ]]></title>
            <link>https://kannada.asianetnews.com/india-news/cbse-mandates-three-language-formula-from-class-6-new-changes-implemented-as-karnataka-leans-towards-bilingual-policy/articleshow-vd05zgm</link>
            <guid isPermaLink="true">https://kannada.asianetnews.com/india-news/cbse-mandates-three-language-formula-from-class-6-new-changes-implemented-as-karnataka-leans-towards-bilingual-policy/articleshow-vd05zgm</guid>
            <pubDate>Sat, 04 Apr 2026 05:38:22 +0530</pubDate>
            <description><![CDATA[&lt;p&gt;ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್&zwnj;ಇ) 2026-27ನೇ ಸಾಲಿನಿಂದ 6ನೇ ತರಗತಿಗೆ ತ್ರಿಭಾಷಾ ಸೂತ್ರವನ್ನು ಮತ್ತು 9ನೇ ತರಗತಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಎರಡು ಹಂತದ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಈ ಹೊಸ ನೀತಿಯಡಿ, ಮೂರು ಭಾಷೆಗಳ ಅಧ್ಯಯನ ಕಡ್ಡಾಯವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6m2ptcdd3d6vg19n81ffya,imgname-cbse-new-curriculum-2026-27-1775117622092.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.4): &lt;/strong&gt;ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ದ್ವಿಭಾಷಾ ಸೂತ್ರದ ಅಳವಡಿಕೆಗೆ ಕ್ರಮ ಕೈಗೊಳ್ಳುತ್ತಿರುವ ನಡುವೆಯೇ, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿಬಿಎಸ್&zwnj;ಇ) 6ನೇ ತರಗತಿಯಿಂದ ತ್ರಿಭಾಷಾ ಸೂತ್ರದ ಹಂತಬದ್ಧ ಅನುಷ್ಠಾನಕ್ಕೆ ಮುಂದಾಗಿದೆ. 2026-27ರ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ.&lt;/p&gt;&lt;p&gt;ಇದರ ಜೊತೆಗೆ 9ನೇ ತರಗತಿಯಿಂದ ಗಣಿತ ಮತ್ತು ವಿಜ್ಞಾನಕ್ಕೆ 2 ಸ್ತರದ ಪರೀಕ್ಷಾ ವ್ಯವಸ್ಥೆ ಪ್ರಾರಂಭಿಸುತ್ತಿರುವುದಾಗಿಯೂ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.&lt;/p&gt;&lt;h2&gt;ಏನೇನು ಬದಲಾವಣೆ?:&lt;/h2&gt;&lt;p&gt;ರಾಷ್ಟ್ರೀಯ ಶಿಕ್ಷಣ ನೀತಿ (ಎನ್&zwnj;ಇಪಿ) ಅಡಿಯಲ್ಲಿ ತ್ರಿಭಾಷಾ ಸೂತ್ರವನ್ನು 2026ರಿಂದ 6ನೇ ತರಗತಿಗೆ ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಭಾಷೆಗಳನ್ನು ಆರ್&zwnj;1, ಆರ್&zwnj;2, ಆರ್&zwnj; 3 ಎಂಬ 3 ವಿಧದಲ್ಲಿ ವಿಂಗಡಿಸಲಾಗುತ್ತದೆ. ಈ 3 ಭಾಷೆಗಳಲ್ಲಿ 2 ಭಾಷೆಗಳು ಕಡ್ಡಾಯವಾಗಿ ಭಾರತೀಯ ಮೂಲದ್ದಾಗಿರಬೇಕು. 3ನೇ ಭಾಷೆಯ ಅಧ್ಯಯನವೂ ಕಡ್ಡಾಯ.&lt;/p&gt;&lt;p&gt;ಆದರೆ ವಿದೇಶಿ ಶಾಲೆಗಳಿಂದ ಹಿಂದಿರುಗುವ ವಿದ್ಯಾರ್ಥಿಗಳಿಗೆ, ಅಲ್ಲಿ 8 ಅಥವಾ 9ನೇ ತರಗತಿಯವರೆಗೆ ಅಧ್ಯಯನ ಮಾಡಿದ 3ನೇ ಭಾಷೆ ದೇಶೀಯ ಶಾಲೆಗಳಲ್ಲಿ ಲಭ್ಯವಿಲ್ಲದಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಅನುಮೋದಿತ ಮಾನದಂಡಗಳ ಪ್ರಕಾರ ವಿನಾಯಿತಿ ನೀಡಬಹುದು. ಆದರೂ ಅವರು ಯೋಜನೆಯಂತೆ ನಿಗದಿಪಡಿಸಿದ ಒಟ್ಟು ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.&lt;/p&gt;&lt;h3&gt;ಗಣಿತ-ವಿಜ್ಞಾನಕ್ಕೆ 2 ಹಂತದ ಪರೀಕ್ಷೆ:&lt;/h3&gt;&lt;p&gt;9ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ 3 ಗಂಟೆಗಳ, 80 ಅಂಕದ ಸಾಮಾನ್ಯ ಪರೀಕ್ಷೆ ಇರುತ್ತದೆ. ಇದನ್ನು ಕಡ್ಡಾಯವಾಗಿ ಎಲ್ಲರೂ ಬರೆಯಬೇಕು. ಆದರೆ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಪ್ರಾವೀಣ್ಯ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ 25 ಅಂಕಗಳ, 1 ಗಂಟೆಯ ಪರೀಕ್ಷೆ ನಡೆಸಲಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಮತ್ತು ಕೌಶಲ ಪಡೆಯುವಂತೆ ರೂಪಿಸಲಾಗಿರುತ್ತದೆ. ಆದರೆ ಇದು ಐಚ್ಛಿಕ, ಇಷ್ಟವಿದ್ದವರು ಮಾತ್ರ ಬರೆಯಬಹುದು.&lt;/p&gt;&lt;p&gt;ಹೆಚ್ಚುವರಿ ಪತ್ರಿಕೆಯ ಅಂಕಗಳನ್ನು ಒಟ್ಟು ಅಂಕಗಳ ಲೆಕ್ಕದಲ್ಲಿ (ಓವರಾಲ್&zwnj; ಅಗ್ರಿಗೇಟ್&zwnj;) ಸೇರಿಸಲಾಗುವುದಿಲ್ಲ. ಬದಲಿಗೆ, ಶೇ.50 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಅರ್ಹತೆಯನ್ನು ಅಂಕಪಟ್ಟಿಯಲ್ಲಿ ಪ್ರತ್ಯೇಕವಾಗಿ ತೋರಿಸಲಾಗುತ್ತದೆ. ಈ ಪದ್ಧತಿ 2026-27ರ ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾರಂಭವಾಗುತ್ತದೆ. ಈ ಮಾದರಿಯನ್ನು ಅನ್ವಯಿಸಿದ 10ನೇ ತರಗತಿ ವಿದ್ಯಾರ್ಥಿಗಳ ಮೊದಲ ಬೋರ್ಡ್ ಪರೀಕ್ಷೆಗಳು 2028ರಲ್ಲಿ ನಡೆಯುತ್ತವೆ.&lt;/p&gt;&lt;p&gt;&lt;strong&gt;3 ಭಾಷೆಗಳ ಕಲಿಕೆ&lt;/strong&gt;&lt;/p&gt;&lt;p&gt;- ಶಾಲೆಗಳಲ್ಲಿ ಮೂರೂ ಭಾಷೆಗಳನ್ನು ಕಲಿಸಬೇಕೆಂಬ ಸೂಚನೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದೆ&lt;/p&gt;&lt;p&gt;- ಅದರಂತೆ 2026ನೇ ಸಾಲಿನಿಂದ ಸಿಬಿಎಸ್&zwnj;ಇ 6ನೇ ತರಗತಿಗಳಲ್ಲಿ ತ್ರಿಭಾಷಾ ಸೂತ್ರ ಅನುಷ್ಠಾನ&lt;/p&gt;&lt;p&gt;- ಆರ್&zwnj;1, ಆರ್&zwnj;2 ಹಾಗೂ ಆರ್&zwnj;3 ಎಂಬ ಹೆಸರಿನಲ್ಲಿ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಕಡ್ಡಾಯವಾಗಿ ಜಾರಿ&lt;/p&gt;&lt;p&gt;- ಮೂರು ಭಾಷೆಗಳ ಪೈಕಿ ಎರಡು ಭಾರತೀಯ ಭಾಷೆಯಾಗಿರಬೇಕು. ಆರ್&zwnj;3 ಭಾಷೆಗೆ ಪುಸ್ತಕ ಬಿಡುಗಡೆ&lt;/p&gt;&lt;p&gt;- ಕರ್ನಾಟಕದಲ್ಲಿ ತೃತೀಯ ಭಾಷೆ ಅಂಕ ಪರಿಗಣನೆ ಮಾಡದಿರಲು ನಿರ್ಧರಿಸಿದ ಬೆನ್ನಲ್ಲೇ ಈ ಕ್ರಮ&lt;/p&gt;&lt;p&gt;&lt;strong&gt;ಗಣಿತ, ವಿಜ್ಞಾನಕ್ಕೆ 2 ಸ್ತರದ ಪರೀಕ್ಷೆ&lt;/strong&gt;&lt;/p&gt;&lt;p&gt;- ಸಿಬಿಎಸ್&zwnj;ಇ ಶಾಲೆಗಳಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಅತ್ಯಂತ ಪ್ರಮುಖವಾದ ಬದಲಾವಣೆ&lt;/p&gt;&lt;p&gt;- 2026-27ನೇ ಸಾಲಿನಿಂದ 9ನೇ ತರಗತಿ ಮಕ್ಕಳಿಗೆ 2 ಸ್ತರದ ಹೊಸ ಪರೀಕ್ಷಾ ವಿಧಾನದ ಪರಿಚಯ&lt;/p&gt;&lt;p&gt;- 9ನೇ ತರಗತಿಯ ಎಲ್ಲ ಮಕ್ಕಳು 3 ಗಂಟೆಗಳ 80 ಅಂಕಗಳ ಸಾಮಾನ್ಯ ಪರೀಕ್ಷೆ ಬರೆವುದು ಕಡ್ಡಾಯ&lt;/p&gt;&lt;p&gt;- ಗಣಿತ, ವಿಜ್ಞಾನದಲ್ಲಿ ಹೆಚ್ಚಿನ ಪ್ರಾವೀಣ್ಯ ಬಯಸುವವರಿಗೆ 25 ಅಂಕದ 1 ಗಂಟೆಯ ಮತ್ತೊಂದು ಪರೀಕ್ಷೆ&lt;/p&gt;&lt;p&gt;- ಇದು ಐಚ್ಛಿಕ. ಒಟ್ಟು ಅಂಕಗಳಿಗೆ ಸೇರಿಸುವುದಿಲ್ಲ. ಹೆಚ್ಚಿನ ಜ್ಞಾನ ಬೇಕು ಎನ್ನುವವರಷ್ಟೇ ಬರೆಯಬಹುದು&lt;/p&gt;]]></content:encoded>
            <category>education</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/cbse-mandates-three-language-formula-from-class-6-new-changes-implemented-as-karnataka-leans-towards-bilingual-policy/articleshow-vd05zgm"/>
        </item>
        <item>
            <title><![CDATA[ಕರ್ಣ ಧಾರಾವಾಹಿ ನಟಿ ರಿಯಾ ಸಾಧನೆ: ಪಿಯುಸಿಯಲ್ಲಿ ಶೇ.97 ಅಂಕದೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಪಾಸಾದ ಅಂಕಿತಾ ಜಯರಾಮ್]]></title>
            <link>https://kannada.asianetnews.com/gallery/tv-talk/ankitha-jayaram-2nd-puc-result-97-percent-zee-kannada-karna-serial-actress-riya-success-sat-wuuk41f</link>
            <guid isPermaLink="true">https://kannada.asianetnews.com/gallery/tv-talk/ankitha-jayaram-2nd-puc-result-97-percent-zee-kannada-karna-serial-actress-riya-success-sat-wuuk41f</guid>
            <pubDate>Thu, 09 Apr 2026 20:05:10 +0530</pubDate>
            <description><![CDATA[&lt;p&gt;ಜೀ ಕನ್ನಡದ 'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್, ನಟನೆಯ ಜೊತೆಗೆ ಶಿಕ್ಷಣದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು ತಮ್ಮ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್&zwnj;ನಲ್ಲಿ ಉತ್ತೀರ್ಣರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kns9vrjxk1zdwvbfctt4x676,imgname-ankitha-jayarama-1775744442973.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೀ ಕನ್ನಡದ 'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್, ನಟನೆಯ ಜೊತೆಗೆ ಶಿಕ್ಷಣದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು ತಮ್ಮ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್&zwnj;ನಲ್ಲಿ ಉತ್ತೀರ್ಣರಾಗಿದ್ದಾರೆ.&lt;/p&gt;&lt;img&gt;&lt;p&gt;ಜೀ ಕನ್ನಡ ವಾಹಿನಿಯ ಅತಿಹೆಚ್ಚು ಟಿಆರ್&zwnj;ಪಿ ಹೊಂದಿರುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಆಗಿರುವ ರಿಯಾ ಅಲಿಯಾಸ್ ಜಯರಾಮ್ ಅಂಕಿತಾ ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್&zwnj;ನಲ್ಲಿ ಉತ್ತೀರ್ಣರಾಗಿದ್ದಾರೆ. ಧಾರಾವಾಹಿ ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸುತ್ತಾ ರೀಲ್&zwnj;ನಲ್ಲಿ ಮಾತ್ರವಲ್ಲ ರಿಯಲ್ ಲೈಫ್&zwnj;ನಲ್ಲೂ ಸಿಕ್ಕಾಪಟ್ಟ ಜಾಣೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅಂಕಿತಾ, It wasn't easy. ಭಗವಂತ ಗುರು ರಾಯರ ಆಶೀರ್ವಾದ ನಿಮ್ಮೆಲ್ಲರ ಪ್ರೀತಿಯ ಶುಭ ಹಾರೈಕೆಯಿಂದ ದ್ವಿತೀಯ ಪಿ.ಯೂ.ಸಿ ಯಲ್ಲಿ ಶೇಕಡ 97% ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ನಿಮ್ಮ ಪ್ರೀತಿಯ ಅಂಕಿತ. ನಿಮ್ಮೆಲ್ಲರ ಪ್ರೀತಿಯ ಶುಭಾಶೀರ್ವಾದ ಸದಾ ಕಾಲ ಹೀಗೆ ಇರಲಿ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ, ಅಭಿಮಾನಿಗಳೂ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಫೇಸ್&zwnj;ಬುಕ್&zwnj;ನಲ್ಲಿ ಅಂಕಿತಾ ತಂದೆ ಜಯರಾಮ್ ಅವರು, ಮಗಳಿಂದ ಅಪ್ಪನಿಗೆ ಹುಟ್ದಬ್ಬದ ಕಾಣಿಕೆ. #Distinction97%. ಇದು ಕಂಡ_ಕನಸು_ನನಸಾದ_ಸುದಿನ. ಭಗವಂತನ ಗುರು ರಾಯರ ಆಶೀರ್ವಾದ ನಿಮ್ಮೆಲ್ಲರ ಪ್ರೀತಿಯ ಶುಭ ಹಾರೈಕೆಯಿಂದ ದ್ವೀತೀಯ ಪಿ.ಯೂ.ಸಿ ಯಲ್ಲಿ ಶೇಕಡ #97% ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾಳೆ. ನನ್ನ ಮಗಳು ನನ್ನ ಹೆಮ್ಮೆ. ಶುಭವಾಗಲಿ ಕಂದ... ಎಂದು ಬರೆದುಕೊಂಡು ಮಗಳಿಗೆ ಶುಭ ಹಾರೈಸಿ, ಆಶೀರ್ವಾದ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಕರ್ಣ ಧಾರಾವಾಹಿಯ ರಿಯಾ ಅರ್ಥಾತ್​ ಅಂಕಿತಾ ಜಯರಾಮ್​ (Ankitha Jayarama) ಅವರು, ಇದಾಗಲೇ ಹಲವು ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ಬಾಲ ನಟಿಯಾಗಿ ನಟಿಸಿ, ವೀಕ್ಷಕರ ಮನ ಗೆದ್ದವರು. ಇವರು ಈ ಹಿಂದೆ ನವೀನ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ &lsquo;ಭೂಮಿಗೆ ಬಂದ ಭಗವಂತ&rsquo; ಧಾರಾವಾಹಿಯಲ್ಲಿ ನವೀನ್ ಕೃಷ್ಣ ಅವರ ಮಗಳು ಪ್ರಣೀತಾ ಪಾತ್ರದಲ್ಲಿ ನಟಿಸಿದ್ದರು. ಆಗಲೂ ನಾಡಿನ ಜನತೆಯ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆಗಿದ್ದಳು. ಆಗ ತಾನು ಅಭ್ಯಾಸ ಮಾಡುತ್ತಿದ್ದಂತೆ, ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಳು.&lt;/p&gt;&lt;img&gt;&lt;p&gt;ಅಂಕಿತಾ ಅವರು ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಮೊದಲಾದ ಸ್ಟಾರ್ ನಟರ ಸಿನಿಮಾಗಳಾದ ಭರಾಟೆ, ಕ್ರಾಂತಿ, ಯುವರತ್ನ, ರತ್ನನ್ ಪ್ರಪಂಚ, ವೇದ, ಶೋಕಿವಾಲ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ವಿಜಯ್ ರಾಘವೇಂದ್ರ ಅಭಿನಯದ &lsquo;ಹಕೂನ ಮಟಾಟ&rsquo; ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಕಳೆದ ವರ್ಷ ಬಿಡುಗಡೆಯಾದ &lsquo;ಕಾಗದ&rsquo; ಎನ್ನುವ ಸಿನಿಮಾದಲ್ಲಿ ಅಂಕಿತಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಟೀನೇಜ್ ಪ್ರೇಮಕತೆಯಾಗಿದ್ದು, ಈ ಸಿನಿಮಾದಲ್ಲಿ ಅಂಕಿತಾ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದರು.&lt;/p&gt;&lt;img&gt;&lt;p&gt;ಇದೀಗ 16 ವರ್ಷ ವಯಸ್ಸಿನ ಅಂಕಿತಾ ಸದ್ಯ ಪಿಯುಸಿಯಲ್ಲಿ ಶೇ.97 ಪರ್ಸೆಂಟ್ ಅಂಕಗಳನ್ನು ಗಳಿಸಿದ್ದಾಳೆ. ಪಿಯುಸಿಯಲ್ಲಿ ವಾಣಿಜ್ಯ (ಕಾಮರ್ಸ) ವಿಭಾಗದಲ್ಲಿ ಅಧ್ಯಯನ ಮಾಡಿದ್ದು, 6 ವಿಷಯಗಳಲ್ಲಿಯೂ 90ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾಳೆ. ಇನ್ನು ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ತೆಗೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪ್ರಸ್ತುತ ಕರ್ಣ ಧಾರಾವಾಹಿಯಲ್ಲಿ ರಿಯಾ ಪಾತ್ರಧಾರಿಯಾಗಿ ಅಂಕಿತಾ ಜನರಿಗೆ ಹೆಚ್ಚು ಹತ್ತಿರವಾಗುತ್ತಿದ್ದಾಳೆ. ಅಲ್ಲಿ ಕರ್ಣನ ತಮ್ಮ ಸಂಜಯ್ ಆರಂಭದಲ್ಲಿ ಅಪ್ಪನ ಪ್ರಭಾವದಿಂದ ತುಂಬಾ ಕೆಟ್ಟವನಾಗಿದ್ದರೂ, ರಿಯಾ ಅವನನ್ನು ಬದಲಾಯಿಸುವ ಕಾರ್ಯಕ್ಕೆ ಕೈ ಹಾಕಿದ್ದಾಳೆ. ರಿಯಾ ಕೈಗೆ ಸಿಕ್ಕು ಸಂಜಯ್ ಬದಲಾಗುತ್ತಿದ್ದಾನೆ. ಇಬ್ಬರ ನಡುವೆಯೂ ಪ್ರೇಮವೂ ಬೆಳೆಯಬಹುದು ಎಂಬುದು ಕಂಡುಬರುತ್ತಿದೆ.&lt;/p&gt;]]></content:encoded>
            <category>education</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/ankitha-jayaram-2nd-puc-result-97-percent-zee-kannada-karna-serial-actress-riya-success-sat-wuuk41f"/>
        </item>
        <item>
            <title><![CDATA[Karnataka 2nd PUC result 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ದಿನಾಂಕ ಫಿಕ್ಸ್, ರಿಸಲ್ಟ್ ನೋಡೋದು ಸುಲಭ, ಇಲ್ಲಿದೆ ಲಿಂಕ್]]></title>
            <link>https://kannada.asianetnews.com/state/karnataka-2nd-puc-result-2026-date-announced-on-april-9th-rav/articleshow-z0l0fgq</link>
            <guid isPermaLink="true">https://kannada.asianetnews.com/state/karnataka-2nd-puc-result-2026-date-announced-on-april-9th-rav/articleshow-z0l0fgq</guid>
            <pubDate>Tue, 07 Apr 2026 12:14:18 +0530</pubDate>
            <description><![CDATA[&lt;p&gt;2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಏಪ್ರಿಲ್ 9 ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ, ಮೌಲ್ಯನಿರ್ಣಯ ಮಂಡಳಿ ಖಚಿತಪಡಿಸಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್&zwnj;ಸೈಟ್ karresults.nic.in ನಲ್ಲಿ ತಮ್ಮ ರಿಜಿಸ್ಟ್ರೇಶನ್ ನಂಬರ್ ಬಳಸಿ ಫಲಿತಾಂಶವನ್ನು ವೀಕ್ಷಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkacbby3vrrvffjpjjtsnt8,imgname-whatsapp-image-2026-04-07-at-12.01.33-pm-1775543659902.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಏ.7): &lt;/strong&gt;ಲಕ್ಷಾಂತರ ವಿದ್ಯಾರ್ಥಿಗಳು ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ಮುಹೂರ್ತ ನಿಗದಿಯಾಗಿದ್ದು, ಏಪ್ರಿಲ್ 9ರಂದು ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ.&lt;/p&gt;&lt;p&gt;ಹೌದು, ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಹಿರಿಯ ಅಧಿಕಾರಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ exclusive ಮಾಹಿತಿ ನೀಡಿದ್ದಾರೆ. ಅಂದು ಬೆಳಿಗ್ಗೆ ಮಂಡಳಿಯು ಸುದ್ದಿಗೋಷ್ಠಿ ನಡೆಸಿದ ಬಳಿಕ ವೆಬ್&zwnj;ಸೈಟ್&zwnj;ನಲ್ಲಿ ಫಲಿತಾಂಶ ಲಭ್ಯವಾಗಲಿದೆ.&lt;/p&gt;&lt;h2&gt;ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದಿದ್ದ ಪಿಯು ಪರೀಕ್ಷೆ&lt;/h2&gt;&lt;p&gt;ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದ್ದವು. ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಇದೀಗ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;h3&gt;ಫಲಿತಾಂಶ ನೋಡುವುದು ಹೇಗೆ?&lt;/h3&gt;&lt;p&gt;ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶ ತಿಳಿಯಲು ಕಾಲೇಜಿಗೆ ಹೋಗಬೇಕಿಲ್ಲ, ಮನೆಯಲ್ಲೇ ಕುಳಿತು ಫಲಿತಾಂಶ ತಿಳಿಯಬಹುದಾಗಿದೆ. ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ಆನ್&zwnj;ಲೈನ್&zwnj;ನಲ್ಲಿ ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಬಹುದು.&lt;/p&gt;&lt;p&gt;&lt;strong&gt;ಹಂತ 1:&lt;/strong&gt; ಮೊದಲು ಅಧಿಕೃತ ವೆಬ್&zwnj;ಸೈಟ್ karresults.nic.in ಗೆ ಭೇಟಿ ನೀಡಿ.&lt;/p&gt;&lt;p&gt;&lt;strong&gt;ಹಂತ 2:&lt;/strong&gt; ಮುಖಪುಟದಲ್ಲಿ ಕಾಣಿಸುವ &lsquo;Karnataka 2nd PUC Result 2026&rsquo; ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.&lt;/p&gt;&lt;p&gt;&lt;strong&gt;ಹಂತ 3:&lt;/strong&gt; ನಿಮ್ಮ ರಿಜಿಸ್ಟ್ರೇಶನ್ ನಂಬರ್ (Registration Number) ಮತ್ತು ಜನ್ಮ ದಿನಾಂಕವನ್ನು (Date of Birth) ನಿಖರವಾಗಿ ನಮೂದಿಸಿ.&lt;/p&gt;&lt;p&gt;&lt;strong&gt;ಹಂತ 4:&lt;/strong&gt; ಮಾಹಿತಿ ಭರ್ತಿ ಮಾಡಿದ ನಂತರ &lsquo;Submit&rsquo; ಬಟನ್ ಒತ್ತಿರಿ.&lt;/p&gt;&lt;p&gt;&lt;strong&gt;ಹಂತ 5: &lt;/strong&gt;ತಕ್ಷಣವೇ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸಲಿದೆ. ಇದನ್ನು ಡೌನ್&zwnj;ಲೋಡ್ ಮಾಡಿಕೊಂಡು ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು.&lt;/p&gt;&lt;p&gt;ಮೌಲ್ಯಮಾಪನ ಪ್ರಕ್ರಿಯೆಯು ಸಮರೋಪಾದಿಯಲ್ಲಿ ನಡೆದಿದ್ದು, ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ ಫಲಿತಾಂಶ ನೀಡಲು ಮಂಡಳಿ ಸಜ್ಜಾಗಿದೆ.&lt;/p&gt;]]></content:encoded>
            <category>education</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/karnataka-2nd-puc-result-2026-date-announced-on-april-9th-rav/articleshow-z0l0fgq"/>
        </item>
    </channel>
</rss>
