<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 05 Feb 2026 14:25:48 +0530</lastBuildDate>
        <atom:link href="https://kannada.asianetnews.com/rss/economy-money" rel="self" type="application/rss+xml"/>
        <item>
            <title><![CDATA[ಜಾಗತಿಕವಾಗಿ ಭಾರತ ಫೇಮಸ್, ಬ್ರಿಟಿಷರು ಈಗ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನೇ ಹೆಚ್ಚು ಖರೀದಿಸುತ್ತಾರೆ!]]></title>
            <link>https://kannada.asianetnews.com/india-news/india-uk-fta-boost-for-local-businesses-s120b-trade-target-by-2030/articleshow-09iibxo</link>
            <guid isPermaLink="true">https://kannada.asianetnews.com/india-news/india-uk-fta-boost-for-local-businesses-s120b-trade-target-by-2030/articleshow-09iibxo</guid>
            <pubDate>Fri, 25 Jul 2025 21:32:36 +0530</pubDate>
            <description><![CDATA[ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ದೇಶೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ತೆರೆಯಲಿದೆ. ಕೊಲ್ಹಾಪುರಿ ಚಪ್ಪಲಿ, ಹಲಸಿನ ಹಣ್ಣು, ಫೇಣಿ, ಟಾಡಿ ಮುಂತಾದವು ಯುಕೆಗೆ ರಫ್ತಾಗಲಿವೆ. ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು $120 ಬಿಲಿಯನ್&zwnj;ಗೆ ಹೆಚ್ಚಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k114rqw6cdp783vffvxyh1kv,imgname-india-uk-fta-1753458958214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜುಲೈ.25): &lt;/strong&gt;ಭಾರತ ಮತ್ತು ಯುನೈಟೆಡ್ ಕಿಂಗ್&zwnj;ಡಮ್ ನಡುವಿನ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದ (FTA)ಕ್ಕೆ ಅಂತಿಮ ಮೊಹರು ಬಿದ್ದಿದೆ. ಈ ಒಪ್ಪಂದವು ಕೇವಲ ದೊಡ್ಡ ಉತ್ಪಾದನಾ ಕಂಪನಿಗಳಿಗೆ ಮಾತ್ರವಲ್ಲದೆ, ದೇಶದ ಮೂಲೆ ಮೂಲೆಯ ಸ್ಥಳೀಯ ವ್ಯವಹಾರಗಳಿಗೂ ಹೊಸ ಉತ್ತೇಜನ ನೀಡಲಿದೆ. ಸುಂಕಗಳನ್ನು ತೆಗೆದುಹಾಕುವುದರಿಂದ ಬ್ರಿಟಿಷ್ ಉತ್ಪನ್ನಗಳು ಭಾರತದಲ್ಲಿ ದೊಡ್ಡ ಮಾರುಕಟ್ಟೆ ಪಡೆಯಲಿವೆ, ಜೊತೆಗೆ ಭಾರತೀಯ ಉತ್ಪನ್ನಗಳಿಗೆ ಬ್ರಿಟನ್&zwnj;ನ ಬಾಗಿಲುಗಳು ಇನ್ನಷ್ಟು ತೆರೆಯಲಿವೆ.&lt;/p&gt;&lt;p&gt;&lt;strong&gt;ಭಾರತದ ಉತ್ಪನ್ನಗಳಿಗೆ ಬ್ರಿಟನ್&zwnj;ನಲ್ಲಿ ಬೃಹತ್ ಅವಕಾಶ:&lt;/strong&gt;&lt;/p&gt;&lt;p&gt;ಈ ಒಪ್ಪಂದವು ಭಾರತದ ವಿದ್ಯುತ್ ಯಂತ್ರೋಪಕರಣಗಳು, ತುಂಬಿದ ಸರಕುಗಳು ಮತ್ತು ರಾಸಾಯನಿಕಗಳನ್ನು ಯುಕೆ ಮಾರುಕಟ್ಟೆಗಳಿಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಎರಡೂ ದೇಶಗಳು ಪರಸ್ಪರ ವ್ಯವಹಾರ ಮಾಡಲು ಸಮಾನ ಹಕ್ಕುಗಳನ್ನು ಪಡೆಯಲಿದ್ದು, 2030 ರ ವೇಳೆಗೆ ಪ್ರಸ್ತುತ ದ್ವಿಪಕ್ಷೀಯ ವ್ಯಾಪಾರವನ್ನು $56 ಬಿಲಿಯನ್&zwnj;ನಿಂದ ಸುಮಾರು $120 ಬಿಲಿಯನ್&zwnj;ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.&lt;/p&gt;&lt;p&gt;&lt;strong&gt;ಭಾರತದ ಸಾಂಪ್ರದಾಯಿಕ ಉತ್ಪನ್ನಗಳಿಗೆ ಜಾಗತಿಕ ವೇದಿಕೆ:&lt;/strong&gt;&lt;/p&gt;&lt;p&gt;FTA ಒಪ್ಪಂದದ ನಂತರ, ಭಾರತೀಯ ಉತ್ಪನ್ನಗಳ ಸುಮಾರು 99 ಪ್ರತಿಶತದಷ್ಟು ರಫ್ತಿನ ಮೇಲೆ ಯಾವುದೇ ಸುಂಕ ಇರುವುದಿಲ್ಲ. ಇದರಿಂದಾಗಿ ಸುಮಾರು $23 ಬಿಲಿಯನ್ ಮೌಲ್ಯದ ರಫ್ತು ಅವಕಾಶಗಳು ತೆರೆದುಕೊಳ್ಳಲಿವೆ. ಕೊಲ್ಹಾಪುರಿ ಚಪ್ಪಲ್&zwnj;ಗಳಿಂದ ಹಿಡಿದು ಹಲಸಿನ ಹಣ್ಣು, ಗೋವಾದ ಫೇಣಿ, ಮತ್ತು ಬಾಸ್ಮತಿ ಅಕ್ಕಿಯವರೆಗೆ ಎಲ್ಲವೂ ಬ್ರಿಟನ್&zwnj;ಗೆ ದೊಡ್ಡ ಪ್ರಮಾಣದಲ್ಲಿ ರಫ್ತಾಗಲಿವೆ. ಹಣ್ಣುಗಳು, ತರಕಾರಿಗಳು, ಮಾವಿನ ತಿರುಳು, ಮಸಾಲೆಗಳು, ದ್ವಿದಳ ಧಾನ್ಯಗಳು, ಅರಿಶಿನ, ಕರಿಮೆಣಸು, ಏಲಕ್ಕಿ ಮುಂತಾದ ಉತ್ಪನ್ನಗಳು ಯಾವುದೇ ಸುಂಕವಿಲ್ಲದೆ ಬ್ರಿಟನ್&zwnj;ಗೆ ರಫ್ತಾಗಲಿದ್ದು, ಇದು ಬ್ರಿಟನ್&zwnj;ನಲ್ಲಿ ಹಲಸಿನ ಹಣ್ಣು, ರಾಗಿ ಮತ್ತು ಸಾವಯವ ಗಿಡಮೂಲಿಕೆಗಳ ವ್ಯಾಪ್ತಿಯನ್ನು ಹೆಚ್ಚಿಸಲಿದೆ.&lt;/p&gt;&lt;p&gt;&lt;strong&gt;ಕೇರಳದ ಟಾಡಿ, ಗೋವಾದ ಫೇಣಿಗೆ ಯುಕೆ ಪಬ್&zwnj;ಗಳಲ್ಲಿ ಸ್ಥಾನ!&lt;/strong&gt;&lt;/p&gt;&lt;p&gt;FTA ನಂತರ, ಭಾರತದ ವಿಶಿಷ್ಟ ಸಾಂಪ್ರದಾಯಿಕ ಪಾನೀಯಗಳಾದ ಗೋವಾದ ಫೇಣಿ, ನಾಸಿಕ್&zwnj;ನ ವೈನ್ ಮತ್ತು ಕೇರಳದ ಟಾಡಿ (ಕೇರಳದ ಸಾಂಪ್ರದಾಯಿಕ ತೆಂಗಿನ ಕಳ್ಳು) ಬ್ರಿಟನ್&zwnj;ನಲ್ಲಿ ಮನ್ನಣೆ ಪಡೆಯುವ ನಿರೀಕ್ಷೆಯಿದೆ. ಈ ಪಾನೀಯಗಳನ್ನು ಯುಕೆ ಪಬ್&zwnj;ಗಳು ಮತ್ತು ರೆಸ್ಟೋರೆಂಟ್&zwnj;ಗಳಲ್ಲಿ ಜನರು ಸವಿಯಲು ಸಾಧ್ಯವಾಗುತ್ತದೆ. ಭಾರತ ಸರ್ಕಾರವು 2030 ರ ವೇಳೆಗೆ ಆಲ್ಕೊಹಾಲ್ಯುಕ್ತ ಪಾನೀಯಗಳ ರಫ್ತನ್ನು ಪ್ರಸ್ತುತ $370.5 ಮಿಲಿಯನ್&zwnj;ನಿಂದ (ಸುಮಾರು ರೂ. 2,200 ಕೋಟಿ) $1 ಬಿಲಿಯನ್&zwnj;ಗೆ ಹೆಚ್ಚಿಸುವ ಗುರಿ ಹೊಂದಿದೆ.&lt;/p&gt;&lt;p&gt;&lt;strong&gt;ಮೀನುಗಾರಿಕೆ ಮತ್ತು ಕೃಷಿ ವಲಯಕ್ಕೂ ಲಾಭ:&lt;/strong&gt;&lt;/p&gt;&lt;p&gt;ಕೃಷಿ ಉತ್ಪನ್ನಗಳ ಜೊತೆಗೆ, ಮೀನುಗಾರಿಕೆ ವಲಯಕ್ಕೂ ಭಾರಿ ಪ್ರಯೋಜನವಾಗಲಿದೆ. ಆಂಧ್ರಪ್ರದೇಶ, ಒಡಿಶಾ, ಕೇರಳ ಮತ್ತು ತಮಿಳುನಾಡು ಮುಂತಾದ ರಾಜ್ಯಗಳ ಸಮುದ್ರ ಉತ್ಪನ್ನಗಳು ಯುಕೆ ಸಮುದ್ರ ಆಮದು ಮಾರುಕಟ್ಟೆಗೆ ಸುಲಭವಾಗಿ ಪ್ರವೇಶಿಸಲಿವೆ. ಇದಲ್ಲದೆ, ಮಹಾರಾಷ್ಟ್ರದಿಂದ ದ್ರಾಕ್ಷಿ ಮತ್ತು ಈರುಳ್ಳಿ, ಗುಜರಾತ್&zwnj;ನಿಂದ ಕಡಲೆಕಾಯಿ ಮತ್ತು ಹತ್ತಿ, ಪಂಜಾಬ್ ಮತ್ತು ಹರಿಯಾಣದಿಂದ ಬಾಸ್ಮತಿ ಅಕ್ಕಿ, ಮತ್ತು ಕೇರಳ ಹಾಗೂ ಈಶಾನ್ಯ ರಾಜ್ಯಗಳಿಂದ ಮಸಾಲೆಗಳು ಮತ್ತು ಹಣ್ಣುಗಳು ಯುಕೆಗೆ ರಫ್ತಾಗಲಿವೆ.&lt;/p&gt;&lt;p&gt;ಈ ಐತಿಹಾಸಿಕ ಒಪ್ಪಂದವು ಭಾರತ ಮತ್ತು ಬ್ರಿಟನ್ ನಡುವಿನ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದಲ್ಲದೆ, ಭಾರತದ ವೈವಿಧ್ಯಮಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಒದಗಿಸಲಿದೆ.&lt;/p&gt;]]></content:encoded>
            <category>economy-money</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/india-uk-fta-boost-for-local-businesses-s120b-trade-target-by-2030/articleshow-09iibxo"/>
        </item>
        <item>
            <title><![CDATA[RBI Announcement: 500 ರೂ. ನೋಟು ರದ್ದಾಗ್ತಿದ್ಯಾ?  ಆರ್ ಬಿಐ ನೀಡಿದೆ ಮಾಹಿತಿ]]></title>
            <link>https://kannada.asianetnews.com/economy-money/500-rupee-note-really-going-to-be-discontinued-rbi-tell-truth/articleshow-1yvbfp9</link>
            <guid isPermaLink="true">https://kannada.asianetnews.com/economy-money/500-rupee-note-really-going-to-be-discontinued-rbi-tell-truth/articleshow-1yvbfp9</guid>
            <pubDate>Wed, 04 Jun 2025 15:10:29 +0530</pubDate>
            <description><![CDATA[&lt;p&gt;500 ರೂಪಾಯಿ ನೋಟು ಅಮಾನ್ಯವಾಗ್ತಿದೆ. ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದ್ರ ಬಗ್ಗೆ ಆರ್ ಬಿಐ ಹೇಳೋದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jahz9c7qbaxdg8ktwyaq0bbm,imgname-500-rupees.jpg" type="image/jpeg" height="390" width="690"/>
            <content:encoded><![CDATA[&lt;p&gt;ಜನರ ನೆಮ್ಮದಿ ಕೆಡಿಸಿದ್ದ 500ರ ನೋಟಿನ ಬಗ್ಗೆ ಆರ್ ಬಿಐ (RBI) ಸ್ಪಷ್ಟನೆ ನೀಡಿದೆ. ಜನಸಾಮಾನ್ಯರು ನಿಟ್ಟುಸಿರು ಬಿಡುವಂತೆ ಮಾಡಿದೆ. 2026ರೊಳಗೆ 500 ರೂಪಾಯಿ ನೋಟುಗಳನ್ನು ನಿಷೇಧ ಮಾಡಲಾಗುತ್ತೆ ಎನ್ನುವ ಸುದ್ದಿ ಕೇವಲ ವದಂತಿ. ಅದ್ರಲ್ಲಿ ಹುರುಳಿಲ್ಲ ಎಂಬುದನ್ನು ಆರ್ ಬಿಐ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Andhra Pradesh Chief Minister Chandrababu Naidu), ಕೆಲ ದಿನಗಳ ಹಿಂದೆ, ಕೇಂದ್ರ ಸರ್ಕಾರ 500 ಹಾಗೂ ಅದಕ್ಕಿಂತ ಹೆಚ್ಚಿನ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಬೇಕು ಎಂದಿದ್ದರು. ಆರ್ಬಿಐ ಬ್ಯಾಂಕ್ಗಳು ಮತ್ತು ಎಟಿಎಂ ನಿರ್ವಾಹಕರಿಗೆ 100 ಮತ್ತು 200 ರೂಪಾಯಿ ನೋಟುಗಳ ಲಭ್ಯತೆಯನ್ನು ಹೆಚ್ಚಿಸಲು ಸೂಚಿಸಿತ್ತು. ಇದಾದ್ಮೇಲೆ ಗೊಂದಲ ಸೃಷ್ಟಿಯಾಗಿತ್ತು. 500ರ ನೋಟಿನ ಬಗ್ಗೆ ಸಾಕಷ್ಟು ವದಂತಿ ಹಬ್ಬಿತ್ತು. ಯೂಟ್ಯೂಬ್ ಚಾನೆಲ್ ಒಂದು, ಮುಂದಿನ ವರ್ಷ ಮಾರ್ಚ್ 2026 ರ ವೇಳೆಗೆ 500 ರೂಪಾಯಿ ನೋಟು ಸಂಪೂರ್ಣವಾಗಿ ಚಲಾವಣೆಯಲ್ಲಿರೋದಿಲ್ಲ, ಸರ್ಕಾರ ಹೊಸ 500 ರೂಪಾಯಿ ನೋಟುಗಳ ಮುದ್ರಣ ನಿಲ್ಲಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಯನ್ನು ಪ್ರಕಟಿಸಿತ್ತು. ಇದು ಮತ್ತೊಮ್ಮೆ ದೇಶದಲ್ಲಿ ನೋಟು ಅಮಾನ್ಯೀಕರಣದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂಬ ಆತಂಕ ಹುಟ್ಟುಹಾಕಿತ್ತು. ಜನರು 500ರ ನೋಟುಗಳನ್ನು ಪಡೆಯಲು ಹಿಂಜರಿಯುವಂತೆ ಮಾಡಿತ್ತು. ಆದ್ರೀಗ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಆರ್ ಬಿಐ ಈ ಬಗ್ಗೆ ಸ್ಪಷ್ಟನೆ ಜಾರಿಗೊಳಿಸಿದೆ.&lt;/p&gt;&lt;p&gt;ಆರ್ ಬಿಐ ಹೇಳಿದ್ದೇನು? : 500 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ನಿರ್ದೇಶನವನ್ನು ನೀಡಿಲ್ಲ. ನೋಟು ಮಾನ್ಯವಾಗಿಯೇ ಉಳಿದಿದೆ. ಎಲ್ಲಾ ವಹಿವಾಟುಗಳಿಗೆ ದೇಶಾದ್ಯಂತ ಬಳಸಲಾಗುತ್ತಿದೆ. ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ 100 ಮತ್ತು 200 ರೂಪಾಯಿ ನೋಟುಗಳ ಲಭ್ಯತೆಯನ್ನು ಹೆಚ್ಚಿಸುವಂತೆ ಸೂಚಿಸಲು ಕಾರಣ ಅದಕ್ಕಿರುವ ಹೆಚ್ಚಿನ ಬೇಡಿಕೆ. ಈ ನೋಟುಗಳ ಸಂಖ್ಯೆ ಮಾರುಕಟ್ಟೆಯಲ್ಲಿ ಕಡಿಮೆ ಇದೆ ಎನ್ನುವ ದೂರಿದೆ. ಜನಸ ಸಮಸ್ಯೆಗೆ ಪರಿಹಾರವಾಗಿ ಆರ್ ಬಿಐ, ಅದ್ರ ಲಭ್ಯತೆ ಹೆಚ್ಚಿಸುವಂತೆ ಸೂಚನೆ ನೀಡಿತ್ತೇ ವಿನಃ 500 ರೂಪಾಯಿ ನೋಟುಗಳನ್ನು ಅಮಾನ್ಯ ಮಾಡಲಲ್ಲ ಎಂಬುದನ್ನು ಆರ್ ಬಿಐ ಹೇಳಿದೆ.&lt;/p&gt;&lt;p&gt;ಮಹಾತ್ಮ ಗಾಂಧಿ (ಹೊಸ) ಸರಣಿಯ ಹೊಸ 500 ರೂಪಾಯಿ ನೋಟುಗಳನ್ನು ಇನ್ನೂ ಮುದ್ರಿಸಲಾಗುತ್ತಿದೆ ಮತ್ತು ವಿತರಿಸಲಾಗುತ್ತಿದೆ. ಇದು 500 ರೂಪಾಯಿ ಮುಖಬೆಲೆಯ ನಿರಂತರ ಬಳಕೆಯನ್ನು ಒತ್ತಿಹೇಳುತ್ತಿದೆ. ದೀರ್ಘಾವಧಿಯಲ್ಲಿ ಹೆಚ್ಚಿನ ಮೌಲ್ಯದ ನೋಟುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನೀತಿ ನಿರೂಪಕರು ಕೆಲಸ ಮಾಡುತ್ತಿದ್ದರೂ, 500 ರೂಪಾಯಿ ನೋಟನ್ನು ಹಿಂಪಡೆಯುವ ಯಾವುದೇ ಯೋಚನೆ ಆರ್ ಬಿಐಗೆ ಇಲ್ಲ. ಸದ್ಯ ಭಾರತ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುತ್ತಿದೆ. ಕಡಿಮೆ ಮೌಲ್ಯದ ಕರೆನ್ಸಿಗೆ ಆದ್ಯತೆ ನೀಡುತ್ತದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಮಾತನಾಡಿದ್ದಾರೆ. ಡಿಜಿಟಲ್ ಪಾವತಿ ತೀವ್ರವಾಗಿ ಬೆಳೆಯುತ್ತಿದೆ. ಡಿಸೆಂಬರ್ 2024 ರಲ್ಲಿ 23.25 ಲಕ್ಷ ಕೋಟಿ ಮೌಲ್ಯದ 16.73 ಬಿಲಿಯನ್ ವಹಿವಾಟುಗಳನ್ನು ಯುಪಿಐ ಪ್ರಕ್ರಿಯೆಗೊಳಿಸಿದೆ. ಇದು ನವೆಂಬರ್ನಲ್ಲಿ 21.55 ಲಕ್ಷ ಕೋಟಿ ಹೆಚ್ಚಾಗಿದೆ. ವಾರ್ಷಿಕ ಯುಪಿಐ ವಹಿವಾಟುಗಳು ಹೆಚ್ಚಾಗ್ತಾನೆ ಇದೆ. 2024 ರಲ್ಲಿ 172 ಬಿಲಿಯನ್ ತಲುಪಿತ್ತು. 2023ರಕ್ಕೆ ಹೋಲಿಕೆ ಮಾಡಿದ್ರೆ ಇದು ಶೇಕಡಾ 46ರಷ್ಟು ಹೆಚ್ಚಾದಂತಾಗಿದೆ.&lt;/p&gt;]]></content:encoded>
            <category>economy-money</category>
            <dc:creator>Roopa Hegde</dc:creator>
            <atom:link href="https://kannada.asianetnews.com/economy-money/500-rupee-note-really-going-to-be-discontinued-rbi-tell-truth/articleshow-1yvbfp9"/>
        </item>
        <item>
            <title><![CDATA[Old Age Protection: ಇದರಲ್ಲೊಂದು ಕೆಲಸ ಮಾಡಿದ್ರೆ ನಿಮಗೂ ತಿಂಗಳಿಗೆ 3 ಸಾವಿರ ಸಿಗುತ್ತೆ, ಟ್ರೈ ಮಾಡಿ]]></title>
            <link>https://kannada.asianetnews.com/economy-money/pradhan-mantra-shram-yogi-maandhan-yojana-pension-plan/articleshow-8i1hch4</link>
            <guid isPermaLink="true">https://kannada.asianetnews.com/economy-money/pradhan-mantra-shram-yogi-maandhan-yojana-pension-plan/articleshow-8i1hch4</guid>
            <pubDate>Tue, 17 Jun 2025 16:50:16 +0530</pubDate>
            <description><![CDATA[&lt;p&gt;ವೃದ್ಧಾಪ್ಯದಲ್ಲಿ ಆರ್ಥಿಕ ಸ್ಥಿತಿ ದುರ್ಬಲವಾಗಿದ್ರೆ ಜೀವನ ಕಷ್ಟ. ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಕೆಲ ಕೆಲಸಗಾರರಿಗೆ ವಿಶೇಷ ಯೋಜನೆ ಶುರು ಮಾಡಿದ್ದು, ಯೋಜನೆಯಡಿ ನಿಮಗೆ 3 ಸಾವಿರ ರೂಪಾಯಿ ತಿಂಗಳು ಸಿಗುತ್ತೆ. ಆ ಯೋಜನೆ ಡಿಟೇಲ್ಸ್ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jxys7610j7c1xx3jsjmzy1fz,imgname-untitled-design--71--1750158514208.jpg" type="image/jpeg" height="390" width="690"/>
            <content:encoded><![CDATA[&lt;p&gt;ವೃದ್ಧಾಪ್ಯ (old age)ದಲ್ಲಿ ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆ ಒದಗಿಸಲು, ಸರ್ಕಾರ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (Pradhan Mantri Shrama Yogi Maan Dhan Scheme)ಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, 15,000 ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಕಾರ್ಮಿಕರು 60 ವರ್ಷದ ನಂತ್ರ ತಿಂಗಳಿಗೆ 3000 ರೂಪಾಯಿಗಳ ಪಿಂಚಣಿ ಪಡೆಯುತ್ತಾರೆ.&lt;/p&gt;&lt;p&gt;ಯೋಜನೆ ಯಾವಾಗ ಶುರುವಾಗಿದೆ? : ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ (PM-SYM) ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ, ಅಸಂಘಟಿತ ವಲಯದ ಕಾರ್ಮಿಕರು 60 ವರ್ಷದ ನಂತರ 3000 ರೂಪಾಯಿಗಳ ಪಿಂಚಣಿ ಪಡೆಯುತ್ತಾರೆ. ಯೋಜನೆಯಡಿಯಲ್ಲಿ, ಫಲಾನುಭವಿಯು ಪ್ರತಿ ತಿಂಗಳು ಹೂಡಿಕೆ ಮಾಡುವ ಹಣದಷ್ಟೇ ಹಣವನ್ನು ಸರ್ಕಾರ ಸೇರಿಸುತ್ತದೆ. ಉದಾಹರಣೆಗೆ ನೀವು ಈ ಯೋಜನೆಯಲ್ಲಿ ಪ್ರತಿ ತಿಂಗಳು 100 ರೂಪಾಯಿ ಸೇರಿಸಿದ್ರೆ ಸರ್ಕಾರ ಕೂಡ ನಿಮ್ಮ ಹಣಕ್ಕೆ 100 ರೂಪಾಯಿ ಸೇರಿಸುತ್ತದೆ. ಅಂದ್ರೆ ತಿಂಗಳಿಗೆ ನೀವು 200 ರೂಪಾಯಿ ಕೂಡಿಟ್ಟಂತಾಗುತ್ತದೆ.&lt;/p&gt;&lt;p&gt;&lt;strong&gt;ಈ ಯೋಜನೆ ಲಾಭ ಯಾರಿಗೆ ಸಿಗಲಿದೆ? :&lt;/strong&gt; ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಈ ಯೋಜನೆ ಶುರುವಾಗಿದೆ. ಆದ್ರೆ ಅನೇಕರಿಗೆ ಈ ಯೋಜನೆ ಬಗ್ಗೆ ಮಾಹಿತಿ ಇಲ್ಲ. ನೀವು ಈ ಕೆಳಗಿನ ಕೆಲಸದಲ್ಲಿ ಯಾವುದೇ ಕೆಲಸ ಮಾಡ್ತಿದ್ದರೆ ನಿಮಗೆ ಈ ಯೋಜನೆ ಲಾಭ ಸಿಗಲಿದೆ.&lt;/p&gt;&lt;p&gt;&bull; ಮನೆ ಕೆಲಸಗಾರರು&lt;/p&gt;&lt;p&gt;&bull; ಬೀದಿ ವ್ಯಾಪಾರಿಗಳು&lt;/p&gt;&lt;p&gt;&bull; ಚಾಲಕರು&lt;/p&gt;&lt;p&gt;&bull; ಪ್ಲಂಬರ್&zwnj; ಗಳು&lt;/p&gt;&lt;p&gt;&bull; ಟೈಲರ್ ಗಳು&lt;/p&gt;&lt;p&gt;&bull; ಮಧ್ಯಾಹ್ನದ ಊಟ ತಯಾರಿಸುವ ಕೆಲಸಗಾರರು&lt;/p&gt;&lt;p&gt;&bull; ರಿಕ್ಷಾ ಎಳೆಯುವವರು&lt;/p&gt;&lt;p&gt;&bull; ನಿರ್ಮಾಣ ಕಾರ್ಮಿಕರು&lt;/p&gt;&lt;p&gt;&bull; ಕಸ ತೆಗೆಯುವವರು&lt;/p&gt;&lt;p&gt;&bull; ಬೀಡಿ ತಯಾರಕರು&lt;/p&gt;&lt;p&gt;&bull; ಕೈಮಗ್ಗ ಕಾರ್ಮಿಕರು&lt;/p&gt;&lt;p&gt;&bull; ಕೃಷಿ ಕಾರ್ಮಿಕರು&lt;/p&gt;&lt;p&gt;&bull; ಚಮ್ಮಾರರು&lt;/p&gt;&lt;p&gt;&bull; ಬಟ್ಟೆ ಒಗೆಯುವವರು&lt;/p&gt;&lt;p&gt;&bull; ಚರ್ಮದ ಕೆಲಸಗಾರರು&lt;/p&gt;&lt;p&gt;&lt;strong&gt;ಈ ಯೋಜನೆಯಲ್ಲಿರುವ ಷರತ್ತುಗಳು ಏನು? : &lt;/strong&gt;ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಈ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಲಭ್ಯವಿದೆ. ಈ ಅಸಂಘಟಿತ ವಲಯದ ಕಾರ್ಮಿಕರ ಆದಾಯ 15,000 ರೂಪಾಯಿ ಮೀರಬಾರದು. ಹಾಗೆಯೇ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿರಬಾರದು. 40 ವರ್ಷ ಮೇಲ್ಪಟ್ಟ ಕಾರ್ಮಿಕರು ಇದ್ರ ಲಾಭ ಪಡೆಯಲು ಸಾಧ್ಯವಿಲ್ಲ. ಹಾಗೆಯೆ ಉಳಿತಾಯ ಬ್ಯಾಂಕ್ ಖಾತೆ ಅಥವಾ ಜನ-ಧನ್ ಖಾತೆಯ ದಾಖಲೆ ಮತ್ತು ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. ಈ ಹಿಂದೆ ಕೇಂದ್ರ ಸರ್ಕಾರದ ಯಾವುದೇ ಇತರ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆದ ಕಾರ್ಮಿಕರಿಗೆ ಇದ್ರ ಲಾಭ ಸಿಗೋದಿಲ್ಲ.&lt;/p&gt;&lt;p&gt;&lt;strong&gt;ಯೋಜನೆ ಅಡಿ ನಿಮಗೆ ಎಷ್ಟು ಹಣ ಸಿಗುತ್ತದೆ? :&lt;/strong&gt; ಈ ಯೋಜನೆಯಲ್ಲಿ 18 ವರ್ಷ ವಯಸ್ಸಿನ ಅರ್ಜಿದಾರ ತಿಂಗಳಿಗೆ 55 ರೂಪಾಯಿ ಠೇವಣಿ ಇಡಬೇಕು. 19 ವರ್ಷ ವಯಸ್ಸಿನ ಅರ್ಜಿದಾರರು 58 ರೂಪಾಯಿ ಠೇವಣಿ ಇಡಬೇಕು. 20 ವರ್ಷ ವಯಸ್ಸಿನವರು 61 ರೂಪಾಯಿ ಠೇವಣಿ ಹಾಗೂ 21 ವರ್ಷ ವಯಸ್ಸಿನವರು 64 ರೂಪಾಯಿ ಠೇವಣಿ ಇಡಬೇಕು. ನೀವು 22ನೇ ವರ್ಷಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ ಠೇವಣಿ ಹಣ 68 ರೂಪಾಯಿ ಆಗುತ್ತದೆ. ವರ್ಷ ಹೆಚ್ಚಾದಂತೆ ಠೇವಣಿ ಹಣ ಹೆಚ್ಚಾಗುತ್ತದೆ. ನಿಮ್ಮ ವಯಸ್ಸು 35 ವರ್ಷವಾಗಿದ್ದರೆ ನೀವು ಪ್ರತಿ ತಿಂಗಳು 150 ರೂಪಾಯಿ ಠೇವಣಿ ಇಡಬೇಕಾಗುತ್ತದೆ. 36 ವರ್ಷ ವಯಸ್ಸಿನ ಅರ್ಜಿದಾರರು 160 ರೂಪಾಯಿ ಹಾಗೂ 37 ವರ್ಷ ವಯಸ್ಸಿನವರು 170 ರೂಪಾಯಿ ಪಾವತಿಸಬೇಕಾಗುತ್ತದೆ.&lt;/p&gt;&lt;p&gt;&lt;strong&gt;ಎಲ್ಲಿ ಅರ್ಜಿ ಸಲ್ಲಿಸಬೇಕು? : &lt;/strong&gt;ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆಗೆ ನಿಮ್ಮ ಹೆಸರು ನೋಂದಾಯಿಸಿಕೊಳ್ಳಲು ನೀವು ಸಾಮಾನ್ಯ ಸೇವಾ ಕೇಂದ್ರ (CSC) ಕ್ಕೆ ಭೇಟಿ ನೀಡ್ಬೇಕು. ಅಲ್ಲಿ ಕೇಳುವ ದಾಖಲೆಗಳನ್ನು ನೀಡಿ, ಅರ್ಜಿ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು.&lt;/p&gt;]]></content:encoded>
            <category>economy-money</category>
            <dc:creator>Roopa Hegde</dc:creator>
            <atom:link href="https://kannada.asianetnews.com/economy-money/pradhan-mantra-shram-yogi-maandhan-yojana-pension-plan/articleshow-8i1hch4"/>
        </item>
        <item>
            <title><![CDATA[ರೈತರ ಸಾಲ ಮನ್ನಾ ಬಗ್ಗೆ ಆರ್ ಬಿಐ ಆತಂಕ]]></title>
            <link>https://kannada.asianetnews.com/money/states-slip-on-fiscal-targets-on-farm-loan-waivers-gst-says-rbi-pbsib4</link>
            <guid isPermaLink="true">https://kannada.asianetnews.com/money/states-slip-on-fiscal-targets-on-farm-loan-waivers-gst-says-rbi-pbsib4</guid>
            <pubDate>Tue, 26 Nov 2019 17:42:40 +0530</pubDate>
            <description><![CDATA[&lt;p&gt;ನೌಕರರ ವೇತನದ ಮೇಲೆ ಅತಿಯಾದ ವೆಚ್ಚ, ರೈತರ ಸಾಲ ಮನ್ನಾ ಹಾಗೂ ಜಿಎಸ್&zwnj;ಟಿ ಜಾರಿಯಿಂದ ಆದಾಯ ಕೊರತೆಯ ಪ್ರತಿಫಲವಾಗಿ ರಾಜ್ಯಗಳ ಹಣಕಾಸು ಗುರಿ 2017​-18ನೇ ಸಾಲಿನಲ್ಲಿ ಶೇ.031ರಷ್ಟುಕುಸಿದು ಶೇ.3.1ಕ್ಕೆ ಇಳಿಕೆಯಾಗಿದೆ ಎಂದು ಆರ್&zwnj;ಬಿಐ ತಿಳಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-e1c5567d-51ff-4199-af60-228293d3eea7,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ&lt;/strong&gt;: ನೌಕರರ ವೇತನದ ಮೇಲೆ ಅತಿಯಾದ ವೆಚ್ಚ, ರೈತರ ಸಾಲ ಮನ್ನಾ ಹಾಗೂ ಜಿಎಸ್&zwnj;ಟಿ ಜಾರಿಯಿಂದ ಆದಾಯ ಕೊರತೆಯ ಪ್ರತಿಫಲವಾಗಿ ರಾಜ್ಯಗಳ ಹಣಕಾಸು ಗುರಿ 2017​-18ನೇ ಸಾಲಿನಲ್ಲಿ ಶೇ.031ರಷ್ಟುಕುಸಿದು ಶೇ.3.1ಕ್ಕೆ ಇಳಿಕೆಯಾಗಿದೆ ಎಂದು ಆರ್&zwnj;ಬಿಐ ತಿಳಿಸಿದೆ.&amp;nbsp;&lt;/p&gt; &lt;p&gt;ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯುತ್ತಿದ್ದರೂ ಒಟ್ಟು ಹಣಕಾಸು ಕೊರತೆಯನ್ನು ನೀಗಿಸುವಲ್ಲಿ ರಾಜ್ಯ ಸರ್ಕಾರಗಳು ಸತತ ಮೂರನೇ ವರ್ಷವೂ ವಿಫಲವಾಗಿವೆ.&lt;/p&gt; &lt;p&gt;ದೇಶದೆಲ್ಲೆಡೆ ಸಾಲ ಮನ್ನಾವೊಂದೇ ಹಣಕಾಸು ಕೊರತೆಯ ಮೂರನೇ ಒಂದರಷ್ಟು ಪಾಲು ಪಡೆದಿದೆ. ಆದಾಯ ವೆಚ್ಚದ ಶೇ.0.13 ರಷ್ಟು ಹಣವನ್ನು ರೈತರ ಸಾಲ ಮನ್ನಾಕ್ಕೆ ವ್ಯಯಿಸಲಾಗಿದೆ. ರೈತರ ಸಾಲ ಮನ್ನಾ ಮಾಡಿದ ಮಾತ್ರಕ್ಕೆ ಉತ್ಪಾದನೆ ಹೆಚ್ಚಾಗಿದ್ದು ಕಂಡುಬಂದಿಲ್ಲ ಎಂದು ಆರ್&zwnj;ಬಿಐ ಕಳವಳ ವ್ಯಕ್ತಪಡಿಸಿದೆ.&lt;/p&gt;]]></content:encoded>
            <category>economy-money</category>
            <dc:creator>Kannadaprabha News</dc:creator>
            <atom:link href="https://kannada.asianetnews.com/money/states-slip-on-fiscal-targets-on-farm-loan-waivers-gst-says-rbi-pbsib4"/>
        </item>
        <item>
            <title><![CDATA[ಕಿಚ್ಚ ಸುದೀಪ್‌ ಷರತ್ತಿಗೆ ತಲೆ ಬಾಗಿದ ವಾಹಿನಿ; ಕನ್ನಡಿಗರ ಮನ ಗೆದ್ದಿದ್ದು Bigg Boss ಮನೆ ಅಲ್ಲ, ಅರಮನೆ]]></title>
            <link>https://kannada.asianetnews.com/gallery/tv-talk/colors-kannada-kiccha-sudeep-bigg-boss-kannada-seaosn-12-home-tour-dh6uwnw</link>
            <guid isPermaLink="true">https://kannada.asianetnews.com/gallery/tv-talk/colors-kannada-kiccha-sudeep-bigg-boss-kannada-seaosn-12-home-tour-dh6uwnw</guid>
            <pubDate>Sat, 27 Sep 2025 13:03:41 +0530</pubDate>
            <description><![CDATA[&lt;p&gt;ಬಿಗ್&zwnj; ಬಾಸ್&zwnj; ಕನ್ನಡ 12 ಶೋ ಶುರುವಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಬಾರಿಯ ಮನೆ ಹೇಗಿರಲಿದೆ ಎಂಬ ಕುತೂಹಲ ಅನೇಕರಿಗೆ ಇರಬೇಕಲ್ಲ&hellip; &ldquo;ಕನ್ನಡಕ್ಕೆ ಆದ್ಯತೆ ಕೊಟ್ಟರೆ ಮಾತ್ರ ನಾನು ಬಿಗ್&zwnj; ಬಾಸ್&zwnj; ಶೋ ನಡೆಸುತ್ತೇನೆ&rdquo; ಎಂದು ಕಿಚ್ಚ ಸುದೀಪ್&zwnj; ಕಂಡೀಶನ್&zwnj; ಹಾಕಿದ್ದರು. ಈಗ ವಾಹಿನಿ ತಲೆಬಾಗಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k65108a9zkb0dc09ch8yy6c3,imgname-new-project---2025-09-27t125247.556-1758957936969.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj; ಬಾಸ್&zwnj; ಕನ್ನಡ 12 ಶೋ ಶುರುವಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಬಾರಿಯ ಮನೆ ಹೇಗಿರಲಿದೆ ಎಂಬ ಕುತೂಹಲ ಅನೇಕರಿಗೆ ಇರಬೇಕಲ್ಲ&hellip; &ldquo;ಕನ್ನಡಕ್ಕೆ ಆದ್ಯತೆ ಕೊಟ್ಟರೆ ಮಾತ್ರ ನಾನು ಬಿಗ್&zwnj; ಬಾಸ್&zwnj; ಶೋ ನಡೆಸುತ್ತೇನೆ&rdquo; ಎಂದು ಕಿಚ್ಚ ಸುದೀಪ್&zwnj; ಕಂಡೀಶನ್&zwnj; ಹಾಕಿದ್ದರು. ಈಗ ವಾಹಿನಿ ತಲೆಬಾಗಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 12 ಶೋ ಲೋಗೋ ರೂಪುಗೊಳ್ಳುವಾಗ ಅಲ್ಲಿಯೂ ಕೂಡ ಕನ್ನಡದಲ್ಲಿ 12 ನಂಬರ್&zwnj;ನ್ನು ಬರೆಯಲಾಗಿತ್ತು. ಈಗ ಮನೆಯಲ್ಲಿ ಮೈಸೂರಿನ ಅರಮನೆಯ ಪ್ರತಿಬಿಂಬ ಕಾಣ್ತಿದೆ. ಅಂದಹಾಗೆ ದಸರಾ ಕೂಡ ಶುರುವಾಗಿದೆ, ಮೈಸೂರು ಅರಮನೆ ರೀತಿಯಲ್ಲಿ ಬಿಗ್&zwnj; ಬಾಸ್&zwnj; ಮನೆ ರೂಪುಗೊಂಡಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್&zwnj; ಬಾಸ್&zwnj; ಮನೆಯಲ್ಲಿ ಕನ್ನಡದ ಸೊಗಡು, ಸಂಸ್ಕೃತಿ, ಛಾಯೆ ಎದ್ದು ಕಾಣುತ್ತಿದೆ.&lt;/p&gt;&lt;img&gt;&lt;p&gt;ಕಿಚ್ಚ ಸುದೀಪ್&zwnj; ಅವರು ಮನೆಯೊಳಗಡೆ ಎಂಟ್ರಿ ಕೊಟ್ಟಿದ್ದಾರೆ. &ldquo;ನಮ್ಮ ರಿಚ್&zwnj; ಆಗಿರೋ ಕರ್ನಾಟಕವನ್ನು ಒಂದೇ ಕಡೆ ನೋಡಿದ್ರೆ ಹೇಗಿರುತ್ತದೆ ಅಂತ ನೀವು ನೋಡಬೇಕು ಅಂದರೆ ಈ ಬಾರಿ ಬಿಗ್&zwnj; ಬಾಸ್&zwnj; ಕನ್ನಡ 12 ನೋಡಿ. ಒಂದು ಅರಮನೆ ಉಳಿಸಿಕೊಳ್ಳಲು ಎಷ್ಟೋ ಯುದ್ಧಗಳು ಆಗಿವೆ. ಈ ಮನೆಯನ್ನು ತಮ್ಮನ್ನು ತಾವು ಉಳಿಸಿಕೊಳ್ಳಲು ಎಷ್ಟೋ ಯುದ್ಧಗಳು ನಡೆಯೋದಿದೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್&zwnj; ಬಾಸ್&zwnj; ಮನೆಯಲ್ಲಿ ಅಸಲಿ ಹಬ್ಬ ಈಗ ಶುರು&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮನೆ ಎಂಟ್ರಿಯಲ್ಲಿ ಮೈಸೂರು ಅರಮನೆ ರೀತಿ ಡಿಸೈನ್&zwnj; ಇದೆ. ಒಳಗಡೆ ಯಕ್ಷಗಾನದ ಫೋಟೋ ಹಾಕಲಾಗಿದೆ. ಇನ್ನೊಂದು ಕಡೆ ಟಿಪ್ಪು ಸುಲ್ತಾನ್&zwnj; ಹುಲಿಯ ಜೊತೆಗೆ ಹೋರಾಡುವ ಫೋಟೋ ಇದೆ. ಅಷ್ಟೇ ಅಲ್ಲದೆ ಆನೆಯ ಫೋಟೋ ಕೂಡ ಇದೆ.&lt;/p&gt;&lt;img&gt;&lt;p&gt;&lt;strong&gt;ಈ ಮನೆಯನ್ನು ನೋಡಿ ಅನೇಕರು ಸೋಶಿಯಲ್&zwnj; ಮೀಡಿಯಾದಲ್ಲಿ ಕಾಮೆಂಟ್&zwnj; ಮಾಡಿದ್ದಾರೆ.&lt;/strong&gt;&lt;/p&gt;&lt;ul&gt; &lt;li&gt;ಕನ್ನಡ, ಕನ್ನಡತನಕ್ಕೆ ಆದ್ಯತೆ, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಒತ್ತು, ಕನ್ನಡದ ಬೇರುಗಳಿಗೆ ಪ್ರಾಮುಖ್ಯತೆ, ಮನೆ ಮಾತ್ರ ಸೈಕ್ ಆಗಿ ಇದೆ&lt;/li&gt; &lt;li&gt;ಇಷ್ಟೊಂದು ಇನೋವೇಟಿವ್ ಆಗಿ ಇದೆ ಈ ಬಾರಿ ಮನೆಯಿದೆ. ಆದರೆ ನೋಡ್ಬೇಕು ಮನೆಗೆ ತಕ್ಕಂತಹ ಸ್ಪರ್ಧಿಗಳು ಬರ್ತಾರಾ ಎಂದು ಕಾದು ನೋಡಬೇಕಿದೆ.&lt;/li&gt;&lt;/ul&gt;&lt;img&gt;&lt;ul&gt; &lt;li&gt;ಬಿಗ್ ಬಾಸ್ ಸೀಸನ್ ಹನ್ನೆರಡು, ಬಿಗ್ ಬಾಸ್ ಅರಮನೇನ ನೋಡೋಕೆ ಸಾಲದು ಕಣ್ಣೆರಡು&lt;/li&gt; &lt;li&gt;ಮಹಿಳೆಯರು ಸೀರೆ ತೊಟ್ಟು ಕೊಂಕುಮ ಬೊಟ್ಟು ಇಟ್ಕೊಂಡು, ಅರಮನೆಯೊಳಗಡೆ ಬರಬೇಕು, ನಮ್ಮ ಸಂಸ್ಕೃತಿಯ ಹಬ್ಬವನ್ನು ಬಿಗ್&zwnj; ಬಾಸ್&zwnj; ಮನೆಗೂ ಚೆಲ್ಲಿ ಶುಭ ಕಾರ್ಯ ಆರಂಭವಾಗಲಿ&lt;/li&gt;&lt;/ul&gt;&lt;img&gt;&lt;p&gt;ಈ ಮನೆಯಲ್ಲಿ ಅಂಬಾರಿ ಫೋಟೋ ಇದೆ, ಆನೆಯ ಫೋಟೋ ಇದೆ. ಒಟ್ಟಿನಲ್ಲಿ ನಮ್ಮ ನಾಡಿನ ಕಥೆಯನ್ನು ಹೇಳುವ ಫೋಟೋಗಳು ಇಲ್ಲಿವೆ. ಇನ್ನು ಟಿಪ್ಪು ಹಾಗೂ ಹುಲಿ ನಡುವೆ ಫೈಟ್&zwnj; ಆಗುವ ಫೋಟೋ ಕೂಡ ಇದೆ. ಹುಲಿಯ ಚಿತ್ರದ ನಡುವೆ ಒಂದಿಷ್ಟು ಅಕ್ಷರಗಳನ್ನು ಬರೆಯಲಾಗಿದೆ. ಬಿಗ್&zwnj; ಬಾಸ್&zwnj; ಮನೆಯಲ್ಲಿ ಯಾವೆಲ್ಲ ಶಬ್ದಗಳನ್ನು ಜಾಸ್ತಿ ಬರೆಯಲಾಗುವುದೋ ಆ ಶಬ್ದಗಳು ಇಲ್ಲಿವೆ.&lt;/p&gt;&lt;img&gt;&lt;p&gt;ಅರಮನೆಯಂಥ ಮನೆ, ಅದ್ಭುತ ಸೆಟ್&zwnj;, ಮನೆ ತುಂಬ ಬೆಳಕು, ಗಾರ್ಡನ್&zwnj; ಏರಿಯಾ, ಬೆಡ್&zwnj;ರೂಮ್&zwnj; ಏರಿಯಾ, ಲಿವಿಂಗ್&zwnj; ಏರಿಯಾ, ಕಿಚನ್&zwnj;, ಸ್ವಿಮ್ಮಿಂಗ್&zwnj; ಪೂಲ್&zwnj;, ಬಾಲ್ಕನಿ, ವಾಶ್&zwnj;ರೂಮ್&zwnj; ಏರಿಯಾ ಎಂದು ಇಲ್ಲಿ ಭವ್ಯವಾದ ಅರಮನೆ ರೆಡಿಯಾಗಿದೆ. ಬಿಗ್&zwnj; ಬಾಸ್&zwnj; ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಮನೆ ರೆಡಿ ಆಗಿದೆ.&amp;nbsp;&lt;/p&gt;&lt;img&gt;&lt;p&gt;ಸೆಪ್ಟೆಂಬರ್&zwnj; 28ರಂದು ಸಂಜೆ 6 ಗಂಟೆಗೆ ಈ ಶೋನ ಆರಂಭ ಆಗಿದೆ. ಒಟ್ಟಿನಲ್ಲಿ ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಬರ್ತಾರೆ? ಹೇಗಿರಲಿದೆ ಎಂಬ ಕುತೂಹಲ ಶುರುವಾಗಿದೆ.&lt;/p&gt;&lt;img&gt;&lt;p&gt;ಕನ್ನಡಿಗರಿಗೆ, ಕನ್ನಡಕ್ಕೆ ಬೆಲೆ ಕೊಡಬೇಕು ಎನ್ನೋದು ಕಿಚ್ಚ ಸುದೀಪ್&zwnj; ಆಶಯವಾಗಿತ್ತು. ನನಗೆ ಬೆಂಗಳೂರಿನಲ್ಲಿರುವ ಆಫೀಸ್&zwnj;ನಿಂದ ಯಾವುದೇ ಸಮಸ್ಯೆ ಇರಲಿಲ್ಲ, ಮೇಲಿನವರು ನಡೆದುಕೊಳ್ಳೋದು ನೋಡಿ ನನಗೆ ಬೇಸರ ಆಗಿತ್ತು. ಹೀಗಾಗಿ ಬಿಗ್&zwnj; ಬಾಸ್&zwnj; ಶೋ ನಡೆಸಿಕೊಡೋದು ಬೇಡ ಎಂದು ಹಿಂದೆ ಸರಿದಿದ್ದೆ ಎಂದು ಅವರು ಹೇಳಿದ್ದರು.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Colors Kannada Official (@colorskannadaofficial)&lt;/p&gt;&lt;p&gt;&lt;/p&gt;]]></content:encoded>
            <category>economy-money</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/colors-kannada-kiccha-sudeep-bigg-boss-kannada-seaosn-12-home-tour-dh6uwnw"/>
        </item>
        <item>
            <title><![CDATA[Indian Rupee vs USD: ರೂಪಾಯಿ ಕುಸಿದರೂ ಪ್ರಗತಿಯತ್ತ ಭಾರತ: ನಿಜಕ್ಕೂ ಏನಾಗುತ್ತಿದೆ?‌]]></title>
            <link>https://kannada.asianetnews.com/india-news/india-progresses-despite-rupee-fall-whats-really-happening-rav/articleshow-fedo2qp</link>
            <guid isPermaLink="true">https://kannada.asianetnews.com/india-news/india-progresses-despite-rupee-fall-whats-really-happening-rav/articleshow-fedo2qp</guid>
            <pubDate>Thu, 18 Dec 2025 12:36:16 +0530</pubDate>
            <description><![CDATA[&lt;p&gt;ಡಾಲರ್ ಎದುರು ಭಾರತೀಯ ರೂಪಾಯಿ ಐತಿಹಾಸಿಕ ಕುಸಿತ ಕಂಡರೂ, ದೇಶದ ಆರ್ಥಿಕತೆ 8.2%ರಷ್ಟು ಪ್ರಬಲ ಬೆಳವಣಿಗೆ ಸಾಧಿಸಿದೆ. ಈ ಲೇಖನವು, ಡಾಲರ್ ಬೇಡಿಕೆ, ವಿದೇಶಿ ಹೂಡಿಕೆ ಹಿಂತೆಗೆತದಂತಹ ರೂಪಾಯಿ ಕುಸಿತದ ಕಾರಣ ಮತ್ತು ಆಂತರಿಕ ಉತ್ಪಾದನೆ ಜಿಡಿಪಿ ಹೇಗೆ ಹೆಚ್ಚಿಸುತ್ತದೆಂದು ವಿವರಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcr3t2kkec0b6y1eg3th32p5,imgname-whatsapp-image-2025-12-18-at-11.57.34-am-1766040865395.jpeg" type="image/jpeg" height="390" width="690"/>
            <content:encoded><![CDATA[&lt;p&gt;ಗಿರೀಶ್ ಲಿಂಗಣ್ಣ&lt;/p&gt;&lt;p&gt;(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)&lt;/p&gt;&lt;p&gt;ಡಿಸೆಂಬರ್&zwnj; 16ರಂದು ಭಾರತೀಯ ರೂಪಾಯಿ ಡಾಲರ್&zwnj; ಎದುರು 91 ರೂಪಾಯಿ ಮೌಲ್ಯಕ್ಕೆ ಕುಸಿದಿತ್ತು. ಇದೊಂದು ಐತಿಹಾಸಿಕ ಕನಿಷ್ಠ ಮೌಲ್ಯವಾಗಿದ್ದು, ಎಲ್ಲರನ್ನೂ ಆತಂಕಕ್ಕೆ ಗುರಿ ಮಾಡಿದೆ. ನಿರಂತರ ನಾಲ್ಕು ದಿನಗಳ ಕಾಲ ನಮ್ಮ ರೂಪಾಯಿ ಪ್ರತಿದಿನವೂ ಕುಸಿತ ಕಾಣುತ್ತಾ ಸಾಗಿದ್ದು, ಪ್ರತಿಯೊಂದು ಡಾಲರ್&zwnj; ಹಿಂದೆಂದಿಗಿಂತಲೂ ಹೆಚ್ಚು ಹೆಚ್ಚು ದುಬಾರಿಯಾಗುತ್ತಿದೆ. ಇಷ್ಟಾದರೂ ಒಂದು ಒಗಟಿನಂತಹ ಪ್ರಶ್ನೆ ಕಾಡುತ್ತಲೇ ಇದೆ: ರೂಪಾಯಿ ಹೀಗೆ ದಿನೇ ದಿನೇ ಕುಸಿಯುತ್ತಿದ್ದರೂ, ಭಾರತದ ಆರ್ಥಿಕತೆ ಮಾತ್ರ ಕಳೆದ ತ್ರೈಮಾಸಿಕದಲ್ಲಿ 8.2% ಪ್ರಬಲ ಬೆಳವಣಿಗೆ ಸಾಧಿಸಿದೆ. ಇದು ಭಾರತವನ್ನು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯನ್ನಾಗಿಸಿದೆ. ಈ ಎರಡೂ ಬೆಳವಣಿಗೆಗಳು ಒಂದೇ ಸಮಯದಲ್ಲಿ ಉಂಟಾಗಲು ಹೇಗೆ ಸಾಧ್ಯ? ಈಗ ತಜ್ಞರಲ್ಲೂ ಗೊಂದಲ ಮೂಡಿಸಿರುವ ಈ ವೈರುಧ್ಯವನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನ ನಡೆಸೋಣ.&lt;/p&gt;&lt;p&gt;ರೂಪಾಯಿಯನ್ನು ಭಾರತೀಯ ರೂಪಾಯಿಗೆ ಇಟ್ಟಿರುವ ದರ ಪಟ್ಟಿ ಎಂದು ಭಾವಿಸೋಣ. ರೂಪಾಯಿ ಮೌಲ್ಯ 91ಕ್ಕೆ ಕುಸಿದಿದೆ ಎಂದರೆ, ಒಂದು ಡಾಲರ್&zwnj; ಅನ್ನು ಖರೀದಿಸಲು ಹಿಂದೆ 85 ಅಥವಾ 86 ರೂಪಾಯಿ ನೀಡಬೇಕಿತ್ತು. ಈಗ ಒಂದು ಡಾಲರ್&zwnj;ಗೆ 91 ರೂಪಾಯಿ ನೀಡಬೇಕು. ಡಾಲರ್&zwnj;ಗೆ ಬೇಡಿಕೆ ಹೆಚ್ಚಾಗಿರುವುದರಿಂದಲೇ ಈ ಬೆಳವಣಿಗೆ ಉಂಟಾಗಿದೆ. ಭಾರತೀಯ ಆಮದುದಾರರು, ವಿದೇಶಗಳಿಂದ ಉತ್ಪನ್ನಗಳನ್ನು ಖರೀದಿಸುವ ಉದ್ಯಮಗಳು ಈಗಾಗಲೇ ತಮ್ಮ ಡಾಲರ್&zwnj; ಸಂಗ್ರಹವನ್ನು ಹೆಚ್ಚಿಸುತ್ತಿವೆ. ಈ ಪ್ರಕ್ರಿಯೆಯನ್ನು ʼಹೆಡ್ಜಿಂಗ್&zwnj;ʼ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿ ಮಾನ್ಸೂನ್&zwnj; ಆರಂಭಗೊಳ್ಳುವ ಮುನ್ನ ಕೊಡೆಗಳನ್ನು ಖರೀದಿಸಿ ಇಡುವಂತಹ ಪ್ರಕ್ರಿಯೆ. ರೂಪಾಯಿ ಮೌಲ್ಯ ಇನ್ನಷ್ಟು ಕುಸಿತಗೊಳ್ಳುವ ಆತಂಕ ಅವರಿಗಿದೆ. ಆದ್ದರಿಂದಲೇ ಆಮದುದಾರರು, ಉದ್ಯಮಿಗಳು ಇಂದೇ ಹೆಚ್ಚು ಡಾಲರ್&zwnj; ಸಂಗ್ರಹಿಸಿಟ್ಟು, ನಾಳೆ ಇನ್ನೂ ಹೆಚ್ಚು ಹಣ ನೀಡುವುದನ್ನು ತಪ್ಪಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ. ಡಾಲರ್&zwnj; ಖರೀದಿಗೆ ಇಂದು ಉಂಟಾಗಿರುವ ಅವಸರವೇ ರೂಪಾಯಿ ಮೌಲ್ಯವನ್ನು ಇನ್ನಷ್ಟು ಕೆಳಗೆ ತಳ್ಳುತ್ತಿದೆ.&lt;/p&gt;&lt;p&gt;ಇನ್ನು ವಿದೇಶೀ ಹೂಡಿಕೆದಾರರೂ ಈ ವರ್ಷ ಭಾರತೀಯ ಮಾರುಕಟ್ಟೆಗಳಿಂದ 18 ಬಿಲಿಯನ್&zwnj; ಡಾಲರ್&zwnj;ಗೂ ಹೆಚ್ಚಿನ ಮೊತ್ತವನ್ನು ಹಿಂಪಡೆದಿದ್ದು, ಇದು ಭಾರತ ಇತಿಹಾಸದಲ್ಲಿ ಕಂಡ ಅತ್ಯಧಿಕ ಹೊರ ಹರಿವಾಗಿದೆ. ಈ ಹೂಡಿಕೆದಾರರು ತಮ್ಮ ಭಾರತೀಯ ಷೇರುಗಳನ್ನು ಮಾರಾಟ ಮಾಡಿ, ಆ ಹಣವನ್ನು ತಮ್ಮ ದೇಶಕ್ಕೆ ಒಯ್ಯುತ್ತಿದ್ದಾರೆ. ಅಲ್ಲಿ ಅವರು ರೂಪಾಯಿಯನ್ನು ಡಾಲರ್&zwnj; ಆಗಿ ಪರಿವರ್ತಿಸುತ್ತಾರೆ. ಹೆಚ್ಚಿನ ಜನರು ಡಾಲರ್&zwnj; ಹೊಂದಲು ಬಯಸುತ್ತಿದ್ದಾರೆ ಎಂದರೆ, ಡಾಲರ್&zwnj; ಹೆಚ್ಚು ದುಬಾರಿಯಾಗಿ, ರೂಪಾಯಿ ಅಗ್ಗವಾಗುತ್ತದೆ. ಈ ಒತ್ತಡದ ಮೇಲೆ ಅಮೆರಿಕ ಭಾರತೀಯ ಉತ್ಪನ್ನಗಳ ಮೇಲೆ ವಿಧಿಸಿರುವ ಹೆಚ್ಚುವರಿ 50% ಸುಂಕವೂ ಸೇರಿಕೊಂಡಿದೆ. ಇದು ಅಮೆರಿಕನ್&zwnj; ಗ್ರಾಹಕರಿಗೆ ನಮ್ಮ ರಫ್ತು ಉತ್ಪನ್ನಗಳನ್ನು ದುಬಾರಿಯಾಗಿಸಿದೆ. ಇದರಿಂದ ನಾವು ಕಡಿಮೆ ಮಾರಾಟ ನಡೆಸಿ, ನಮ್ಮ ಡಾಲರ್&zwnj; ಆದಾಯವೂ ಕಡಿಮೆಯಾಗಿದೆ. ಆದರೆ ನಮಗೆ ತೈಲ, ಇಲೆಕ್ಟ್ರಾನಿಕ್ಸ್&zwnj; ಮತ್ತು ರಸಗೊಬ್ಬರಗಳ ಆಮದಿಗೆ ಡಾಲರ್&zwnj; ಬೇಕೇ ಬೇಕು. ಎಲ್ಲರಿಗೂ ಬೇಕಾದ ವಸ್ತು ಅಪರೂಪವಾದಾಗ ಸಹಜವಾಗಿಯೇ ಅದರ ಬೆಲೆ ಹೆಚ್ಚಾಗುತ್ತದೆ.&lt;/p&gt;&lt;p&gt;ಭಾರತದ ಕೇಂದ್ರೀಯ ಬ್ಯಾಂಕ್&zwnj; ಆಗಿರುವ ರಿಸರ್ವ್&zwnj; ಬ್ಯಾಂಕ್&zwnj; ತನ್ನ ವಿದೇಶೀ ವಿನಿಮಯ ಸಂಗ್ರಹದಲ್ಲಿರುವ ಡಾಲರ್&zwnj;ಗಳನ್ನು ಮಾರಾಟ ಮಾಡುವ ಮೂಲಕ ರೂಪಾಯಿಗೆ ಬೆಂಬಲ ನೀಡಿದೆ. ಯಾವಾಗ ಆರ್&zwnj;ಬಿಐ ಮಾರುಕಟ್ಟೆಗೆ ಡಾಲರ್&zwnj;ಗಳನ್ನು ಬಿಡುಗಡೆಗೊಳಿಸುತ್ತದೋ, ಆಗ ಪೂರೈಕೆ ಹೆಚ್ಚಾಗಿ, ಡಾಲರ್&zwnj; ಬೆಲೆ ಕಡಿಮೆಯಾಗುತ್ತದೆ. ಇದರಿಂದ ರೂಪಾಯಿಗೆ ಬೆಂಬಲ ಲಭಿಸುತ್ತದೆ. ರಿಸರ್ವ್&zwnj; ಬ್ಯಾಂಕ್&zwnj; ಈ ಕ್ರಮವನ್ನು ಫೆಬ್ರವರಿ, ಅಕ್ಟೋಬರ್&zwnj; ಮತ್ತು ನವೆಂಬರ್&zwnj; ತಿಂಗಳುಗಳಲ್ಲಿ ಕೈಗೊಂಡಿತ್ತು. ವರದಿಗಳ ಪ್ರಕಾರ, ಆರ್&zwnj;ಬಿಐ ಈಗಲೂ ಮತ್ತೊಮ್ಮೆ ಈ ಕ್ರಮಕ್ಕೆ ಮುಂದಾಗಿದೆ. ಆದರೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಡಾಲರ್&zwnj; ಬಿಡುಗಡೆಗೊಳಿಸುವುದರಿಂದ ರೂಪಾಯಿಯ ಕುಸಿತವನ್ನು ತಡೆಯಲು ಸಾಧ್ಯವಾಗಿಲ್ಲ. ವ್ಯಾಪಾರಿಗಳು ಆರ್&zwnj;ಬಿಐ ದೊಡ್ಡ ಮಟ್ಟದಲ್ಲಿ ಮಧ್ಯಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಿದ್ದಾರೆ. ಆದರೆ ಇಲ್ಲಿ ಒಂದು ಗಮನಿಸಬೇಕಾದ ಅಂಶವಿದೆ. ಪ್ರತಿ ಬಾರಿ ಆರ್&zwnj;ಬಿಐ ಡಾಲರ್&zwnj;ಗಳನ್ನು ಮಾರಾಟ ಮಾಡಿದಾಗಲೂ, ನಮ್ಮ ವಿದೇಶೀ ವಿನಿಮಯ ಸಂಗ್ರಹ ಕಡಿಮೆಯಾಗುತ್ತದೆ. ಆದ್ದರಿಂದ ಆರ್&zwnj;ಬಿಐ ರೂಪಾಯಿಯ ರಕ್ಷಣೆ ಮತ್ತು ವಿದೇಶೀ ವಿನಿಮಯ ಸಂಗ್ರಹಗಳ ನಡುವೆ ಸಮತೋಲನ ಸಾಧಿಸಬೇಕು.&lt;/p&gt;&lt;p&gt;ಇಲ್ಲಿ ಒಂದು ಆಸಕ್ತಿಕರ ಅಂಶವಿದೆ. ಇಷ್ಟೆಲ್ಲ ರೂಪಾಯಿ ಮೌಲ್ಯ ಕುಸಿತದ ಹೊರತಾಗಿಯೂ, ಭಾರತದ ಜಿಡಿಪಿ ಕಳೆದ ತ್ರೈಮಾಸಿಕದಲ್ಲಿ 8.2% ಪ್ರಗತಿ ಸಾಧಿಸಿದೆ. ಈ ಅವಧಿಯಲ್ಲಿ ಜಾಗತಿಕ ಪ್ರಗತಿ ಕೇವಲ 3.2% ಇತ್ತು. ಹಿಂದೆ&zwnj; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್&zwnj; ಭಾರತದ ಆರ್ಥಿಕತೆ ಒಂದು ಮೃತ ಆರ್ಥಿಕತೆ ಎಂದು ಟೀಕಿಸಿದ್ದಕ್ಕೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್&zwnj; ಈಗ ತಿರುಗೇಟು ನೀಡಿದ್ದಾರೆ. ಒಂದು ಮೃತ ಆರ್ಥಿಕತೆ ಇಷ್ಟು ವೇಗವಾಗಿ ಪ್ರಗತಿ ಸಾಧಿಸಿ, ಕ್ರೆಡಿಟ್&zwnj; ರೇಟಿಂಗ್&zwnj; ಮೇಲ್ದರ್ಜೆ ಹೊಂದಲು ಸಾಧ್ಯವೇ? ಎಂದು ನಿರ್ಮಲಾ ಸೀತಾರಾಮನ್&zwnj; ಪ್ರಶ್ನಿಸಿದ್ದಾರೆ. ಜಿಡಿಪಿ ನಿಜಕ್ಕೂ ಏನನ್ನು ಅಳೆಯುತ್ತದೆ ಎನ್ನುವುದರಲ್ಲಿ ಈ ಪ್ರಶ್ನೆಗೆ ಉತ್ತರವಿದೆ. ಜಿಡಿಪಿ ಭಾರತದ ಒಳಗೆ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಅಳೆಯುತ್ತದೆ. ಇದು ಉತ್ಪಾದನೆ, ಕೃಷಿ, ಸೇವೆ ಮತ್ತು ನಿರ್ಮಾಣದಂತಹ ಹಲವಾರು ಕ್ಷೇತ್ರಗಳನ್ನು ಒಳಗೊಂಡಿದೆ.&zwnj; ಜಾಗತಿಕ ವಿನಿಮಯ ಮಾರುಕಟ್ಟೆಗಳಲ್ಲಿ ರೂಪಾಯಿಗೆ ಏನೇ ಆದರೂ, ಈ ಆಂತರಿಕ ಉತ್ಪಾದನೆಯ ಇಂಜಿನ್ ಮಾತ್ರ ನಿರಂತರವಾಗಿ ಚಲಿಸುತ್ತಿರುತ್ತದೆ.&lt;/p&gt;&lt;p&gt;ಇದನ್ನು ಬೇರೊಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ: ಒಂದು ಸ್ಥಳೀಯ ಚಹಾ ಅಂಗಡಿ, ಬೆಂಗಳೂರಿನಲ್ಲೊಂದು ಸಾಫ್ಟ್&zwnj;ವೇರ್&zwnj; ಕಂಪನಿ, ಪಂಜಾಬಿನಲ್ಲೊಂದು ಅಕ್ಕಿಯ ಮಿಲ್&zwnj;, ಮತ್ತು ಇತರ ಲಕ್ಷಾಂತರ ಉದ್ಯಮಗಳು ದೇಶದೊಳಗೇ ತಮ್ಮ ಉತ್ಪಾದನೆ ಮತ್ತು ಮಾರಾಟ ನಡೆಸುತ್ತಿವೆ ಎಂದುಕೊಳ್ಳೋಣ. ನೀವು ಸ್ಥಳೀಯ ಚಹಾ ಅಂಗಡಿಯಿಂದ ಚಹಾ ಕೊಂಡಾಗ, ಅಥವಾ ನಿಮ್ಮ ಪೋಷಕರು ಒಂದು ಭಾರತದಲ್ಲೇ ನಿರ್ಮಾಣವಾದ ಹೊಸ ಫೋನ್&zwnj; ಕೊಂಡಾಗ, ಅಥವಾ ದೇಶದೊಳಗೇ ಒಂದು ಪ್ರವಾಸ ಯೋಜಿಸಿದಾಗ, ಇವೆಲ್ಲ ಹಣವೂ ಜಿಡಿಪಿಗೆ ಕೊಡುಗೆ ನೀಡುತ್ತವೆ. ಡಾಲರ್&zwnj; ಎದುರು ರೂಪಾಯಿ ಮೌಲ್ಯ ಈ ಆಂತರಿಕ ಆರ್ಥಿಕ ಚಟುವಟಿಕೆಗಳನ್ನು ನೇರವಾಗಿ ತಡೆಗಟ್ಟುವುದಿಲ್ಲ. ಭಾರತದ ಯುವ ಜನತೆ ನಿರಂತರವಾಗಿ ಖರೀದಿ ಮಾಡುತ್ತಿದ್ದಾರೆ, ಉದ್ಯಮಗಳು ಹೂಡಿಕೆ ಮಾಡುತ್ತಿವೆ, ಮತ್ತು ಸರ್ಕಾರವೂ ಮೂಲಭೂತ ಸೌಕರ್ಯಗಳಿಗಾಗಿ ವೆಚ್ಚ ಮಾಡುತ್ತಿದೆ. ಇವೆಲ್ಲವೂ ಅಭಿವೃದ್ಧಿಗೆ ಚಾಲನೆ ನೀಡುತ್ತವೆ.&lt;/p&gt;&lt;p&gt;ಹಾಗೆಂದು ದುರ್ಬಲ ರೂಪಾಯಿಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲವೆನ್ನಲು ಸಾಧ್ಯವಿಲ್ಲ. ಆಮದು ಉತ್ಪನ್ನಗಳ ಬೆಲೆ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಪೆಟ್ರೋಲ್&zwnj; ಬೆಲೆಯಿಂದ, ಲ್ಯಾಪ್&zwnj;ಟಾಪ್&zwnj; ಮತ್ತು ಸ್ಮಾರ್ಟ್&zwnj; ಫೋನ್&zwnj; ತನಕ ಎಲ್ಲದರ ಬೆಲೆ ಹೆಚ್ಚಳವಾಗುತ್ತದೆ. ನೀವೇನಾದರೂ ವಿದೇಶದಲ್ಲಿ ವ್ಯಾಸಂಗ ನಡೆಸಲು ಉದ್ದೇಶಿಸಿದ್ದರೆ, ಅಲ್ಲಿನ ಶುಲ್ಕ ಹೆಚ್ಚಾಗುತ್ತದೆ. ಇನ್ನು ವಿದೇಶ ಪ್ರವಾಸಕ್ಕೆ ಯೋಜನೆ ರೂಪಿಸಿದರೆ ಅದರಿಂದ ನಿಮ್ಮ ಕಿಸೆಗೆ ಹೆಚ್ಚಿನ ಬಿಸಿ ಮುಟ್ಟುತ್ತದೆ. ಅದೃಷ್ಟವಶಾತ್&zwnj; ಭಾರತದ ಹಣದುಬ್ಬರ ಸದ್ಯಕ್ಕೆ ನಿಯಂತ್ರಣದಲ್ಲಿದ್ದು, ತಕ್ಷಣವೇ ಆತಂಕಕ್ಕೆ ಒಳಗಾಗುವ ಯಾವುದೇ ಅವಶ್ಯಕತೆಯಿಲ್ಲ. ಸರ್ಕಾರವೂ ಭಾರತದಲ್ಲಿರುವ ಬಲವಾದ ಮೂಲಭೂತ ಅಂಶಗಳು, ಪ್ರಬಲ ಆಂತರಿಕ ಬೇಡಿಕೆ, ಮತ್ತು ಜಗತ್ತು ಭಾರತದ ಸಾಮರ್ಥ್ಯವನ್ನು ಗುರುತಿಸಿರುವುದು ಇದಕ್ಕೆ ಕಾರಣ ಎಂದಿದೆ. ನಾವು ಈಗ ಬುದ್ಧಿವಂತಿಕೆಯಿಂದ ಆಲೋಚಿಸಿ, ಲೆಕ್ಕಾಚಾರ ಹಾಕಿ ಮುಂದಿನ ಹೆಜ್ಜೆಗಳನ್ನು ಇಡಬೇಕು. ಅಮೆರಿಕದ ಜೊತೆಗೆ ಒಂದು ವ್ಯಾಪಾರ ಒಪ್ಪಂದ ಏರ್ಪಟ್ಟರೆ, ಅದರಿಂದ ರಫ್ತಿಗೆ ಉತ್ತೇಜನ ಲಭಿಸಿ, ಡಾಲರ್&zwnj; ಒಳ ಹರಿವು ಹೆಚ್ಚಾಗಿ, ಒಂದಷ್ಟು ನೆಮ್ಮದಿ ಏರ್ಪಡಬಹುದು. ಆರ್&zwnj;ಬಿಐ ಸಹ ತನ್ನ ವಿದೇಶೀ ವಿನಿಮಯವನ್ನು ಕಡಿಮೆಗೊಳಿಸದೆ, ಕಾರ್ಯತಂತ್ರದ ನಡೆಯಿಂದ ಮಧ್ಯಪ್ರವೇಶ ಮಾಡಬೇಕು.&lt;/p&gt;&lt;p&gt;ಆದ್ದರಿಂದ, ಭಾರತದ ಆರ್ಥಿಕತೆ ಪ್ರಗತಿ ಹೊಂದುತ್ತಿರುವ ಸಂದರ್ಭದಲ್ಲೂ ರೂಪಾಯಿ ಮೌಲ್ಯ ಕುಸಿಯಬಹುದು. ಯಾಕೆಂದರೆ, ಆರ್ಥಿಕತೆ ಮತ್ತು ರೂಪಾಯಿ ಮೌಲ್ಯಗಳು ಒಂದನ್ನೇ ಅಳೆಯುವ ಮಾಪಕಗಳಲ್ಲ. ಒಂದು ನಮ್ಮ ಹಣಕ್ಕಿರುವ ಬಾಹ್ಯ ಮೌಲ್ಯವನ್ನು ಸೂಚಿಸಿದರೆ, ಇನ್ನೊಂದು ನಮ್ಮ ಆಂತರಿಕ ಉತ್ಪಾದನಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಆದರೆ ಇವೆರಡೂ ಮುಖ್ಯವಾದ ಅಂಶಗಳೇ ಆಗಿವೆಯಾದರೂ, ಎರಡೂ ಯಾವಾಗಲೂ ಜೊತೆಯಾಗಿ ಹೆಜ್ಜೆ ಇಡುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡರೆ, ನಮಗೆ ಗೊಂದಲಕಾರಿ ಅಂಶಗಳ ಬದಲು ಸಮಗ್ರ ಚಿತ್ರಣ ಲಭಿಸುತ್ತದೆ.&lt;/p&gt;&lt;p&gt;(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)&lt;/p&gt;]]></content:encoded>
            <category>economy-money</category>
            <dc:creator>Girish Linganna</dc:creator>
            <atom:link href="https://kannada.asianetnews.com/india-news/india-progresses-despite-rupee-fall-whats-really-happening-rav/articleshow-fedo2qp"/>
        </item>
        <item>
            <title><![CDATA[ಕೇರಳ ದೇಶದ ಮೊದಲ ಕಡುಬಡತನ ಮುಕ್ತ ರಾಜ್ಯ]]></title>
            <link>https://kannada.asianetnews.com/india-news/kerala-becomes-the-first-extreme-poverty-free-state-in-india/articleshow-krom5ip</link>
            <guid isPermaLink="true">https://kannada.asianetnews.com/india-news/kerala-becomes-the-first-extreme-poverty-free-state-in-india/articleshow-krom5ip</guid>
            <pubDate>Mon, 27 Oct 2025 05:56:36 +0530</pubDate>
            <description><![CDATA[&lt;p&gt;ದೇಶದ ಮೊದಲ ಸಾಕ್ಷರ ರಾಜ್ಯ ಎಂಬ ಹಿರಿಮೆ ಹೊಂದಿದ್ದ ಕೇರಳ, ಇದೀಗ ದೇಶದ ಮೊದಲ ಕಡುಬಡತನ ಮುಕ್ತ ರಾಜ್ಯ ಎಂಬ ಹೆಗ್ಗಳಿಕೆಯತ್ತ ಹೆಜ್ಜೆ ಇಟ್ಟಿದೆ. ಈ ಕುರಿತು, ರಾಜ್ಯ ಸಂಸ್ಥಾಪನಾ ದಿನವಾದ ನ.1ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k864kwtrvc22cq242efek6cq,imgname-pinarayi-vijayan-1761142764376.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ:&lt;/strong&gt; ದೇಶದ ಮೊದಲ ಸಾಕ್ಷರ ರಾಜ್ಯ ಎಂಬ ಹಿರಿಮೆ ಹೊಂದಿದ್ದ ಕೇರಳ, ಇದೀಗ ದೇಶದ ಮೊದಲ ಕಡುಬಡತನ ಮುಕ್ತ ರಾಜ್ಯ ಎಂಬ ಹೆಗ್ಗಳಿಕೆಯತ್ತ ಹೆಜ್ಜೆ ಇಟ್ಟಿದೆ. ಈ ಕುರಿತು, ರಾಜ್ಯ ಸಂಸ್ಥಾಪನಾ ದಿನವಾದ ನ.1ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.&lt;/p&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್&zwnj;, &lsquo;ನ.1ರಂದು ಕೇರಳವನ್ನು ಕಡುಬಡತನ ಮುಕ್ತ ಭಾರತದ ಮೊದಲ ರಾಜ್ಯವೆಂದು ಘೋಷಿಸಲಾಗುವುದು. 2021ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂಥದ್ದೊಂದು ಸಾಧನೆ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಅದರಂತೆ ನಾವೀಗ ಸಾಧನೆ ಮಾಡಿದ್ದೇವೆ&rsquo; ಎಂದು ಹೇಳಿದ್ದಾರೆ.&lt;/p&gt;&lt;h2&gt;ಕಡುಬಡತನ ಎಂದರೇನು?:&lt;/h2&gt;&lt;p&gt;ವಿಶ್ವಸಂಸ್ಥೆ ಮತ್ತು ಭಾರತ ಸರ್ಕಾರದ ಅಂಕಿ ಅಂಶಗಳ ಅನ್ವಯ ದೈನಂದಿನ 190 ರು.ಗಿಂತ ಕಡಿಮೆ ಆದಾಯದ ಕುಟುಂಬಗಳನ್ನು ಕಡುಬಡತನದ ಕುಟುಂಬ ಎಂದು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ಕಡುಬಡವರು ಪತ್ತೆ:&lt;/p&gt;&lt;p&gt;2021ರಲ್ಲಿ ನೀತಿ ಆಯೋಗ ಬಿಡುಗಡೆ ಮಾಡಿದ್ದ ವರದಿ ಅನ್ವಯ ಕೇರಳದ ಒಟ್ಟು ಜನಸಂಖ್ಯೆಯಲ್ಲಿ ಶೇ.0.7ರಷ್ಟು ಜನರು ಕಡುಬಡತನದಲ್ಲಿ ಇದ್ದರು. ಈ ಹಿನ್ನೆಲೆಯಲ್ಲಿ ಅಂಥ 64,006 ಕುಟುಂಬಗಳನ್ನು ಗುರುತಿಸಿ ಅವರ ಕಷ್ಟ ನಿವಾರಿಸಲು ಸರ್ಕಾರ 1,000 ಕೋಟಿ ರು.ಗಳ ಯೋಜನೆ ಹಮ್ಮಿಕೊಂಡಿತ್ತು.&lt;/p&gt;&lt;h3&gt;ಏನೇನು ಕೊರತೆ?:&lt;/h3&gt;&lt;p&gt;ಸರ್ಕಾರ ಗುರುತಿಸಿದ 64006 ಕುಟುಂಬಗಳು, ಆಹಾರ, ಆರೋಗ್ಯ, ಜೀವನೋಪಾಯ, ವಸತಿ, ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ಸಮಸ್ಯೆ ಹೊಂದಿದ್ದು ಪ್ರಾಥಮಿಕ ಅಧ್ಯಯನದಲ್ಲಿ ಕಂಡುಬಂದಿತ್ತು.&lt;/p&gt;&lt;p&gt;ಪರಿಹಾರಕ್ಕೆ ಕ್ರಮ:&lt;/p&gt;&lt;p&gt;ಹೀಗೆ ಕಡುಬಡವರೆಂದು ಪತ್ತೆಯಾದ ಕುಟುಂಬಗಳನ್ನು ಪತ್ತೆ ಮಾಡಿ ಒಟ್ಟು 20,648 ಕುಟುಂಬಗಳಿಗೆ ನಿತ್ಯ ಆಹಾರ, 2,210 ಕುಟುಂಬಗಳಿಗೆ ಬಿಸಿಯೂಟ, 85,721 ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿತ್ತು. ಜೊತೆಗೆ 5,400ಕ್ಕೂ ಅಧಿಕ ಮನೆಗಳ ನಿರ್ಮಾಣ, 5,522 ಮನೆಗಳ ದುರಸ್ತಿ, 2,713 ನಿರಾಶ್ರಿತ ಕುಟುಂಬಗಳಿಗೆ ಮನೆ ನಿರ್ಮಿಸಲು ಜಾಗ ಮಾಡಿಕೊಡಲಾಗಿತ್ತು. 21,263 ಜನರಿಗೆ ಮೊದಲ ಬಾರಿ ಪಡಿತರ ಕಾರ್ಡ್&zwnj;, ಆಧಾರ್&zwnj; ಕಾರ್ಡ್&zwnj; ಹಾಗೂ ಪಿಂಚಣಿ ಮಾಡಿಸಿಕೊಡಲಾಯಿತು. 4,394 ಕುಟುಂಬಗಳಿಗೆ ಜೀವನೋಪಾಯ ಯೋಜನೆ ಒದಗಿಸಲಾಗಿದೆ&rsquo; ಈ ಮೂಲಕ ಈ ಎಲ್ಲಾ ಕುಟುಂಬಗಳನ್ನು ಕಡುಬಡತನಿಂದ ಹೊರತರಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.&lt;/p&gt;&lt;p&gt;ತಲಾದಾಯ: 2024-25ರಲ್ಲಿ ಭಾರತದಲ್ಲಿ ಒಬ್ಬ ವ್ಯಕ್ತಿಯ ವಾರ್ಷಿಕ ಸರಾಸರಿ ಆದಾಯ 2,05,324 ರು. ಕೇರಳೀಯರ ವಾರ್ಷಿಕ ಸರಾಸರಿ ಆದಾಯ 3,72,783 ರು. ನಷ್ಟಿತ್ತು. ಅಂದರೆ ರಾಷ್ಟ್ರೀಯ ಸರಾಸರಿಗಿಂತ ಬಹಳ ಹೆಚ್ಚು.&lt;/p&gt;]]></content:encoded>
            <category>economy-money</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/kerala-becomes-the-first-extreme-poverty-free-state-in-india/articleshow-krom5ip"/>
        </item>
        <item>
            <title><![CDATA[ಕೇವಲ 1% ಜನರ ಕೈಯಲ್ಲಿ ಭಾರತದ 40% ಸಂಪತ್ತು, ವಿಶ್ವ ಅಸಮಾನತೆ ವರದಿ 2026 ರ ಭಯಾನಕ ಚಿತ್ರ!]]></title>
            <link>https://kannada.asianetnews.com/india-news/world-inequality-report-2026-indiatop-1-percents-own-40-percents-of-wealth/articleshow-kss57pd</link>
            <guid isPermaLink="true">https://kannada.asianetnews.com/india-news/world-inequality-report-2026-indiatop-1-percents-own-40-percents-of-wealth/articleshow-kss57pd</guid>
            <pubDate>Fri, 12 Dec 2025 20:58:57 +0530</pubDate>
            <description><![CDATA[&lt;p&gt;&lt;strong&gt;World Inequality Report 2026: &lt;/strong&gt;ವಿಶ್ವ ಅಸಮಾನತೆ ವರದಿ 2026 ರ ಪ್ರಕಾರ, ಭಾರತವು ತೀವ್ರ ಆದಾಯ ಅಸಮಾನತೆಯನ್ನು ಎದುರಿಸುತ್ತಿದೆ. ದೇಶದ ಕೇವಲ 1% ಶ್ರೀಮಂತರು ಒಟ್ಟು ಸಂಪತ್ತಿನ 40% ಭಾಗವನ್ನು ಹೊಂದಿದ್ದರೆ, ಆದಾಯ, ಸಂಪತ್ತು ಮತ್ತು ಲಿಂಗ ಅಸಮಾನತೆಗಳು ಆಳವಾಗಿ ಬೇರೂರಿವೆ ಎಂದು ವರದಿ ಬಹಿರಂಗಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kc9jhyavsnpas787ngq6na28,imgname-----------------------2025-12-12t205309.697-1765553011035.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಡಿ.12)&lt;/strong&gt;: ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಆರ್ಥಿಕ ಅಂತರವು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಈ ಕುರಿತು ಬಿಡುಗಡೆಯಾಗಿರುವ 'ವಿಶ್ವ ಅಸಮಾನತೆ ವರದಿ 2026' (World Inequality Report 2026) ಭಯಾನಕ ಚಿತ್ರಣವನ್ನು ನೀಡಿದೆ.&lt;/p&gt;&lt;h2&gt;ಕೇವಲ 1% ಜನರ ಕೈಯಲ್ಲಿ ಭಾರತದ 40% ಸಂಪತ್ತು!&lt;/h2&gt;&lt;p&gt;ಇತ್ತೀಚಿನ ವರದಿಯ ಪ್ರಕಾರ, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಅಸಮಾನತೆಯನ್ನು ಹೊಂದಿರುವ ದೇಶ ಎಂಬ ಸ್ಥಾನ ಪಡೆದಿದೆ. ದೇಶದ ಒಟ್ಟು ಸಂಪತ್ತಿನ ಬಹುಪಾಲು ಭಾಗವು ಕೆಲವೇ ವ್ಯಕ್ತಿಗಳ ಒಡೆತನದಲ್ಲಿದೆ ಎಂದು ವರದಿ ಹೇಳುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತದ ಅತ್ಯಂತ ಶ್ರೀಮಂತ ಶೇ. 10 ರಷ್ಟು ಜನರು ದೇಶದ ಸಂಪತ್ತಿನ ಸರಿಸುಮಾರು ಶೇ. 65 ರಷ್ಟು ಪಾಲನ್ನು ಹೊಂದಿದ್ದರೆ, ಕೇವಲ ಶೇ. 1 ರಷ್ಟು ಜನರು ಒಟ್ಟು ಸಂಪತ್ತಿನ ಸರಿಸುಮಾರು ಶೇ. 40 ರಷ್ಟು ಪಾಲನ್ನು ಹೊಂದಿದ್ದಾರೆ. ಈ ದತ್ತಾಂಶವು ದೇಶದಲ್ಲಿ ಸಂಪತ್ತಿನ ವಿತರಣೆಯು ಅತ್ಯಂತ ಅಸಮತೋಲನದಿಂದ ಕೂಡಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.&lt;/p&gt;&lt;h3&gt;ವಿಶ್ವ ಅಸಮಾನತೆ ವರದಿ 2026: ವರದಿಯಲ್ಲೇನಿದೆ?&lt;/h3&gt;&lt;p&gt;ಅರ್ಥಶಾಸ್ತ್ರಜ್ಞರಾದ ಲ್ಯೂಕಸ್ ಚಾನ್ಸೆಲ್, ರಿಕಾರ್ಡೊ ಗೊಮೆಜ್ ಕ್ಯಾರೆರಾ, ರೊವೈಡಾ ಮೊಶ್ರೀಫ್ ಮತ್ತು ಥಾಮಸ್ ಪಿಕೆಟ್ಟಿ ಸಹ-ಲೇಖಕರಾಗಿರುವ ಈ ವರದಿಯು, ವಿಶ್ವ ಅಸಮಾನತೆ ವರದಿಯ ಮೂರನೇ ಆವೃತ್ತಿಯಾಗಿದೆ. ವಿಶ್ವಾದ್ಯಂತ 200 ಕ್ಕೂ ಹೆಚ್ಚು ಸಂಶೋಧಕರು ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ವರದಿಯ ಸಂಶೋಧನೆಗಳ ಪ್ರಕಾರ, ಭಾರತವು ಆದಾಯ ಅಸಮಾನತೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ ಮತ್ತು ಕೇವಲ ಶೇಕಡಾ 1 ರಷ್ಟು ಜನಸಂಖ್ಯೆಯು ದೇಶದ ಶೇಕಡಾ 40 ರಷ್ಟು ಸಂಪತ್ತನ್ನು ಹೊಂದಿದೆ.&lt;/p&gt;&lt;p&gt;ವರದಿಯು ಭಾರತದಲ್ಲಿ ಆದಾಯ ಮತ್ತು ಲಿಂಗ ಅಸಮಾನತೆಯು ಪ್ರಮುಖ ಸವಾಲನ್ನು ಒಡ್ಡಿದೆ ಎಂದು ಗಮನಸೆಳೆದಿದೆ. ದೇಶದಲ್ಲಿ ಸರಾಸರಿ ವಾರ್ಷಿಕ ತಲಾ ಆದಾಯ ಸುಮಾರು 6,200 ಯುರೋಗಳು (ಪಿಪಿಪಿ) ಮತ್ತು ಸರಾಸರಿ ಸಂಪತ್ತು ಸುಮಾರು 28,000 ಯುರೋಗಳು (ಪಿಪಿಪಿ) ಎಂದು ಅಂಕಿಅಂಶಗಳು ಸೂಚಿಸುತ್ತವೆ. ಈ ಅಂಕಿಅಂಶಗಳು ಸಾಮಾನ್ಯ ಜನರ ಆದಾಯ ಮತ್ತು ಸಂಪತ್ತು ಎರಡೂ ಸಾಕಷ್ಟು ಸೀಮಿತವಾಗಿವೆ ಎಂದು ತೋರಿಸುತ್ತದೆ. ಇದಲ್ಲದೆ, ದೇಶದಲ್ಲಿ ಮಹಿಳೆಯರ ಕೆಲಸದ ಭಾಗವಹಿಸುವಿಕೆ (Women's Labour Participation) ಕೇವಲ ಶೇ. 15.7 ರಷ್ಟಿದೆ. ಕಳೆದ 10 ವರ್ಷಗಳಲ್ಲಿ ಈ ಅಂಕಿ ಅಂಶವು ಸುಧಾರಿಸಿಲ್ಲ. ಒಟ್ಟಾರೆಯಾಗಿ, ಆದಾಯ, ಸಂಪತ್ತು ಮತ್ತು ಲಿಂಗ ಎಂಬ ಮೂರು ಹಂತಗಳಲ್ಲಿ ಭಾರತದಲ್ಲಿ ಆಳವಾದ ಅಸಮಾನತೆ ಅಸ್ತಿತ್ವದಲ್ಲಿದೆ ಎಂದು ವರದಿ ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category>economy-money</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/world-inequality-report-2026-indiatop-1-percents-own-40-percents-of-wealth/articleshow-kss57pd"/>
        </item>
        <item>
            <title><![CDATA[ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?]]></title>
            <link>https://kannada.asianetnews.com/video/economy-money/gst-2-0-masterplan-how-modi-big-move-impacts-your-pocket-and-india-s-economy-sat-vgpfqtt</link>
            <guid isPermaLink="true">https://kannada.asianetnews.com/video/economy-money/gst-2-0-masterplan-how-modi-big-move-impacts-your-pocket-and-india-s-economy-sat-vgpfqtt</guid>
            <pubDate>Sat, 06 Sep 2025 15:59:47 +0530</pubDate>
            <description><![CDATA[ಜಿಎಸ್​ಟಿ 2.0 ಜಾರಿಯ ಹಿಂದಿನ ಲೆಕ್ಕಾಚಾರವೇನು? ಸರ್ಕಾರಕ್ಕೆ ನಷ್ಟವಾಗುತ್ತಿದ್ದರೂ ಈ ತೆರಿಗೆ ಕಡಿತ ಏಕೆ? ಈ ಸ್ಟೋರಿ ನೋಡಿದ್ರೆ, ನೀವೇ ಉತ್ತರ ಕೊಡ್ತೀರ.]]></description>
            <media:content url="https://geo.dailymotion.com/player/x1tbu.html?video=x9q2tw4" medium="video" height="768" width="1024"/>
            <content:encoded><![CDATA[&lt;p&gt;ಇದು ಅಕ್ಷರಶಃ ಮಾಸ್ಟರ್ ಪ್ಲಾನ್. ಆದ್ರೆ ಈ ಪ್ಲಾನ್ ಹುಟ್ಟಿಕೊಂಡಿದ್ದು ಹೋದ ವಾರಾನೋ, ಕಳೆದ ತಿಂಗಳೋ ಅಲ್ಲ.. ಜಿಎಸ್​ಟಿ ಅನ್ನೋ ಅದ್ದೂರಿ ಮಂತ್ರದಂಡ ಯಾವತ್ತು ಜನ್ಮ ಪಡೀತೋ ಅವತ್ತೇ. ದೇಶದ ಭಂಡಾರ ಯಾವಾಗ ಏನಾಗ್ಬೇಕು, ಹೇಗೆ ತುಂಬಬೇಕು ಅನ್ನೋದರ ಭವಿಷ್ಯ ದರ್ಶನ ಮಾಡಿಯೇ, ಅವತ್ತು ಒಂದು ನಿಲುವು ತಳೆದಿತ್ತು ಮೋದಿ ಪಡೆ. ಈಗದು ಅಸ್ತಿತ್ವಕ್ಕೆ ಬಂದಿದೆ. ಹಾಗಾದ್ರೆ, ಅದರ ಪರಿಣಾಮ ನಮ್ಮ ನಿಮ್ಮ ಮೇಲೆ ಹೇಗಾಗುತ್ತೆ? ಯಾವುದು ಸಸ್ತಾ? ಏನೇನು ದುಬಾರಿ? ನಮ್ಮ ನಿಮ್ಮ ಜೇಬಲ್ಲಿ ಉಳಿಯೋದೆಷ್ಟು ರೊಕ್ಕ? ಅದೆಲ್ಲದರ ಇನ್ ಡೆಪ್ತ್ ಡೀಟೇಲ್ ಇಲ್ಲಿದೆ ನೋಡಿ.&lt;/p&gt;&lt;p&gt;ನಿಜ, ಹಬ್ಬ ಧಾಮ್ ಧೂಮ್ ಅನ್ನೋ ಹಾಗೆ ನಡೆಯುತ್ತೆ.. ಮನೆ ಹೊಸ ಹೊಸ ವಸ್ತುಗಳಿಂದ ಝಗಮಗ ಅನ್ನುತ್ತೆ, ಇನ್ಮುಂದೆ ನಮ್ಮ ಹಣ ಕೂಡ ಅಷ್ಟೋ ಇಷ್ಟೋ ಸೇವ್ ಆಗುತ್ತೆ. ಸೋ, &amp;nbsp;ನಮಗೇನೋ ಲಾಭ ನಿಜ.. ಆದ್ರೆ ದೇಶದ ಬೊಕ್ಕಸಕ್ಕೆ? &amp;nbsp;ಈ ತೆರಿಗೆ ಕಡಿತದಿಂದ ಸರ್ಕಾರಕ್ಕೆ ನಷ್ಟವೂ ಆಗುತ್ತೆ ವೀಕ್ಷಕರೇ. ಆದ್ರೆ ಆ ನಷ್ಟ ಲೆಕ್ಕಾಚಾರದ ಹಿಂದೊಂದು ನಿಗೂಢ ರಹಸ್ಯ ಅಡಗಿದೆ. ಅದೇನು ಅನ್ನೋದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ ತೆರೆದಿಡ್ತೀವಿ. ಅರ್ಥಕ್ರಾಂತಿಯಂತೆ ಭಾಸವಾಗ್ತಾ ಇರೋ, ಈ ಜಿಎಸ್ಟಿ 2.0 ಹೊಸ ಚರಿತ್ರೆ ಸೃಷ್ಟಿಸೋಕಂತಲೇ, ಎಂಟ್ರಿ ಕೊಡ್ತಾ ಇದೆ. ಆದ್ರೆ ಈ ತೆರಿಗೆ ಕಡಿತದಿಂದ ಸರ್ಕಾರಕ್ಕೆ ನಷ್ಟವೂ ಆಗುತ್ತೆ. ಆದ್ರೆ &amp;nbsp;ಈ ನಷ್ಟದ ಬಗ್ಗೆ, ಸರ್ಕಾರ ಹೇಳೋ ಮಾತೇ ಬೇರೆ.&lt;/p&gt;&lt;p&gt;ಆ ಅನುಮಾನ ಮತ್ಯಾವುದೂ ಅಲ್ಲ.. ಜಿಎಸ್​ಟಿ 2.0 ಜಾರಿಗೆ ಬಂದಿದೆ. ಆದ್ರೆ ಈಗ್ಲೇ ಯಾಕೆ ಜಾರಿಗ್ ಬಂತು? ಇದೇ ಹೊತ್ತಲ್ಲೇ ಯಾಕೆ ಸರ್ಕಾರ ಈ ನಿರ್ಧಾರವನ್ನ &amp;nbsp;ತಗೊಂಡಿದೆ? ಇದರ ಹಿಂದೆಯೂ ಒಂದು ಲೆಕ್ಕಾಚಾರ ಇದ್ಯಾ? ಹೌದು.. ಇದೆ.. ಒಂದು ಚಾಣಾಕ್ಷ ತಂತ್ರಗಾರಿಕೆಯೇ ಅಡಿದೆ. ಭಾರತದಲ್ಲಿ ತೆರಿಗೆ ಸುಧಾರಣೆ ಅಸ್ತಿತ್ವಕ್ಕೆ ಬಂದಿದೆ. &amp;nbsp;ಭಾರತ ಅನ್ನೋ ಬೃಹತ್ ರಾಷ್ಟ್ರದಲ್ಲಿ ಸಂಚಲನಾತ್ಮಕ ಸಂಗತಿ ಸಂಭವಿಸಿದೆ. ಇದೇ ಹೊತ್ತಲ್ಲೇ, ಹೊರಗಿನಿಂದಲೂ ಒಂದು ಮೇಲಾಟ ನಡೆದಿತ್ತು.. ಅದರ ಪರಿಣಾಮ ಇದರ ಮೇಲೆ ಉಂಟಾಗಿದ್ಯಾ? ಈ ಸ್ಟೋರಿ ನೋಡಿದ್ರೆ, ನೀವೇ ಉತ್ತರ ಕೊಡ್ತೀರ. ಭಾರತ ಇಟ್ಟ ಒಂದು ಹೆಜ್ಜೆ, ಎಂಥಾ ಇತಿಹಾಸ ಬರೆಯೋಕೆ ಹೊರಟಿದೆ ಅಂತ.. ಇದಾಗಿತ್ತು ಇವತ್ತಿನ ಸುವರ್ಣ ಫೋಕಸ್.. ನಮಸ್ಕಾರ..&lt;/p&gt;]]></content:encoded>
            <category>economy-money</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/video/economy-money/gst-2-0-masterplan-how-modi-big-move-impacts-your-pocket-and-india-s-economy-sat-vgpfqtt"/>
        </item>
        <item>
            <title><![CDATA['ವಿಶ್ವದ ಅಭಿವೃದ್ಧಿಗೆ ಅಮೆರಿಕಕ್ಕಿಂತ ಭಾರತದ ಕೊಡುಗೆ ಹೆಚ್ಚು' ಸತ್ತ ಅರ್ಥಿಕತೆ ಎಂದ ಟ್ರಂಪ್‌ಗೆ ಆರ್‌ಬಿಐ ಗವರ್ನರ್ ತಿರುಗೇಟು!]]></title>
            <link>https://kannada.asianetnews.com/india-news/trump-tariffs-threatens-on-india-over-russia-oil-rbi-governor-defends-economy/articleshow-x54zvhk</link>
            <guid isPermaLink="true">https://kannada.asianetnews.com/india-news/trump-tariffs-threatens-on-india-over-russia-oil-rbi-governor-defends-economy/articleshow-x54zvhk</guid>
            <pubDate>Wed, 06 Aug 2025 21:39:23 +0530</pubDate>
            <description><![CDATA[ಭಾರತೀಯ ಆರ್ಥಿಕತೆಯು ವಿಶ್ವದ ಅಭಿವೃದ್ಧಿಗೆ ಅಮೆರಿಕಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರ್&zwnj;ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ದೇಶದ ನಾಗರಿಕರ ಹಿತಾಸಕ್ತಿಯೇ ಆರ್&zwnj;ಬಿಐಗೆ ಅತ್ಯುನ್ನತ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k1zxgee1nnga4mtgq9qtpy9g,imgname-rbi-governor-sanjay-malhotra-statement-1754491533761.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್/ನವದೆಹಲಿ: '&lt;/strong&gt;ಭಾರತೀಯ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ವಿಶ್ವದ ಅಭಿವೃದ್ಧಿಗೆ ಅಮೆರಿಕಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ' ಎಂದು ಆರ್&zwnj;ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ&lt;/p&gt;&lt;p&gt;ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತ ಉಕ್ರೇನ್ ಯುದ್ಧದಲ್ಲಿ ಮಾಸ್ಕೋಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿ, ಭಾರತದ ಮೇಲಿನ ಸುಂಕವನ್ನು ಮತ್ತೆ ಹೆಚ್ಚಿಸುವ ಬೆದರಿಕೆ ಹಾಕಿದ್ದಾರೆ. ಭಾರತದ ಆರ್ಥಿಕತೆಯನ್ನು 'ಸತ್ತ ಆರ್ಥಿಕತೆ' ಎಂದು ಕರೆದಿರುವ ಟ್ರಂಪ್&zwnj;ರ ಹೇಳಿಕೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್&zwnj;ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;&lt;strong&gt;ಭಾರತದ ಕೊಡುಗೆ ಅಮೆರಿಕಕ್ಕಿಂತ ಹೆಚ್ಚು:&lt;/strong&gt;&lt;/p&gt;&lt;p&gt;ಭಾರತೀಯ ಆರ್ಥಿಕತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದ ಅಭಿವೃದ್ಧಿಗೆ ಅಮೆರಿಕಕ್ಕಿಂತ ಹೆಚ್ಚಿನ ಕೊಡುಗೆ (18%) ನೀಡುತ್ತಿದೆ ಎಂದು ಪಿಟಿಐ ವರದಿಗೆ ತಿಳಿಸಿದ್ದಾರೆ. 2025ರಲ್ಲಿ ಭಾರತದ ಆರ್ಥಿಕತೆ 6.5% ದರದಲ್ಲಿ ಬೆಳೆಯಲಿದೆ, ಆದರೆ ಜಾಗತಿಕ ಬೆಳವಣಿಗೆಯ ದರ ಕೇವಲ 3% ಎಂದು ಅಂದಾಜಿಸಲಾಗಿದೆ, ಎಂದವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ನಾಗರಿಕರ ಹಿತಾಸಕ್ತಿಯೇ ಮುಖ್ಯ:&lt;/strong&gt;&lt;/p&gt;&lt;p&gt;ದೇಶದ ನಾಗರಿಕರ, ವಿಶೇಷವಾಗಿ ಕೆಳಮಟ್ಟದ ಜನರ ಕಲ್ಯಾಣವೇ ಆರ್&zwnj;ಬಿಐಗೆ ಅತ್ಯುನ್ನತ ಆದ್ಯತೆ ಎಂದು ಮಲ್ಹೋತ್ರಾ ಸ್ಪಷ್ಟಪಡಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಯಿಂದ ದೇಶೀಯ ಹಣದುಬ್ಬರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಅವರು, ಅಗತ್ಯವಿದ್ದರೆ ಸರ್ಕಾರ ಸುಂಕ ಕಡಿಮೆ ಮಾಡುವ ಮೂಲಕ ಜನರಿಗೆ ಪರಿಹಾರ ನೀಡಬಹುದು ಎಂದು ಸೂಚಿಸಿದ್ದಾರೆ. ಭಾರತದ ಜನರ ಹಿತಾಸಕ್ತಿಗಾಗಿ ನಾವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಕೆಳಮಟ್ಟದ ಜನರೂ ಸೇರಿದಂತೆ ದೇಶದ ನಾಗರಿಕರೇ ನಮ್ಮ ಅಸ್ತಿತ್ವಕ್ಕೆ ಮೂಲ ಕಾರಣ ಎಂದು ಮಲ್ಹೋತ್ರಾ ಒತ್ತಿ ಹೇಳಿದ್ದಾರೆ.&lt;/p&gt;&lt;p&gt;ಈ ಬೆಳವಣಿಗೆಯು ಭಾರತ-ಅಮೆರಿಕ ಆರ್ಥಿಕ ಸಂಬಂಧಗಳಲ್ಲಿ ಮತ್ತಷ್ಟು ಉದ್ವಿಗ್ನತೆಯನ್ನು ಹೆಚ್ಚಿಸಿದೆ.&lt;/p&gt;]]></content:encoded>
            <category>economy-money</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/trump-tariffs-threatens-on-india-over-russia-oil-rbi-governor-defends-economy/articleshow-x54zvhk"/>
        </item>
        <item>
            <title><![CDATA[ನಿಮ್ಮ ಬಳಿಯೂ 2 ಸಾವಿರ ರೂಪಾಯಿ ನೋಟಿದ್ಯಾ? ಆರ್ ಬಿಐ ಬಿಗ್ ಅಪ್ಡೇಟ್  ಇದು]]></title>
            <link>https://kannada.asianetnews.com/gallery/economy-money/what-is-the-rbi-big-update-on-rs-2000-note-ytzoegr</link>
            <guid isPermaLink="true">https://kannada.asianetnews.com/gallery/economy-money/what-is-the-rbi-big-update-on-rs-2000-note-ytzoegr</guid>
            <pubDate>Thu, 05 Feb 2026 13:27:22 +0530</pubDate>
            <description><![CDATA[&lt;p&gt;ನೋಟ್ ಬ್ಯಾನ್ ಸಂದರ್ಭದಲ್ಲಿ ಅನೇಕರಿಗೆ ಆಸರೆಯಾಗಿದ್ದ 2 ಸಾವಿರ ರೂಪಾಯಿ ನೋಟು ಈಗ ಕಣ್ಮರೆಯಾಗ್ತಿದೆ. ಈಗಾಗಲೇ ಆರ್ ಬಿಐ ಅದ್ರ ಮುದ್ರಣ ನಿಲ್ಲಿಸಿದ್ದು, ಬ್ಯಾಂಕ್ ಕೂಡ ನೋಟು ಪಡೆಯುತ್ತಿಲ್ಲ. ಈಗ ಅದ್ರ ಬಗ್ಗೆ ಮತ್ತೊಂದು ಅಪ್ಡೇಟ್ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgpcjw467gvpjtps1e6v85h3,imgname-rs-2000-note-1770277924998.jpg" type="image/jpeg" height="390" width="690"/>
            <content:encoded><![CDATA[&lt;p&gt;ನೋಟ್ ಬ್ಯಾನ್ ಸಂದರ್ಭದಲ್ಲಿ ಅನೇಕರಿಗೆ ಆಸರೆಯಾಗಿದ್ದ 2 ಸಾವಿರ ರೂಪಾಯಿ ನೋಟು ಈಗ ಕಣ್ಮರೆಯಾಗ್ತಿದೆ. ಈಗಾಗಲೇ ಆರ್ ಬಿಐ ಅದ್ರ ಮುದ್ರಣ ನಿಲ್ಲಿಸಿದ್ದು, ಬ್ಯಾಂಕ್ ಕೂಡ ನೋಟು ಪಡೆಯುತ್ತಿಲ್ಲ. ಈಗ ಅದ್ರ ಬಗ್ಗೆ ಮತ್ತೊಂದು ಅಪ್ಡೇಟ್ ಬಂದಿದೆ.&lt;/p&gt;&lt;img&gt;&lt;p&gt;ನವೆಂಬರ್ 2016 ರಲ್ಲಿ ಸರ್ಕಾರ ನೋಟು ರದ್ದತಿ ಘೋಷಿಸಿತ್ತು. ರಾತ್ರೋರಾತ್ರಿ 500 ಮತ್ತು 1000 ರೂಪಾಯಿ ಮುಖ ಬೆಲೆಯ ನೋಟುಗಳ ಚಲಾವಣೆಗೆ ನಿಷೇಧ ಹೇರಿತ್ತು. ಈ ಸಂದರ್ಭದಲ್ಲಿ ದೇಶದ ಜನರು ತೀವ್ರ ನಗದು ಕೊರತೆ ಎದುರಿಸಬೇಕಾಯ್ತು. ಈ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಆರ್ಥಿಕತೆಯಲ್ಲಿ ನಗದು ಚಲಾವಣೆ ಹೆಚ್ಚಿಸಲು, ಜೊತೆಗೆ ಜನರಿಗೆ ನೋಟಿನ ಬದಲಾವಣೆ ಸುಲಭವಾಗಲಿ ಎನ್ನುವ ಕಾರಣಕ್ಕೆ ಸರ್ಕಾರ 2000 ರೂಪಾಯಿ ಮುಖಬೆಲೆಯ ನೋಟನ್ನು ಪರಿಚಯಿಸಿತ್ತು.&lt;/p&gt;&lt;img&gt;&lt;p&gt;2018-19 ರ ಹೊತ್ತಿಗೆ ದೇಶ ಸಹಜ ಸ್ಥಿತಿಗೆ ಮರಳಿತ್ತು. ದೇಶದಲ್ಲಿ ನಗದು ಬಿಕ್ಕಟ್ಟಿಗೆ ಮುಕ್ತಿ ಸಿಕ್ಕಿತ್ತು. ಇದಾದ್ಮೇಲೆ ಆರ್ಬಿಐ, 2000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಮೇ 2023 ರಲ್ಲಿ, ಆರ್ಬಿಐ ಕ್ಲೀನ್ ನೋಟ್ ನೀತಿಯಡಿಯಲ್ಲಿ 2000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು.&lt;/p&gt;&lt;img&gt;&lt;p&gt;ಆರ್ ಬಿಐ ಘೋಷಣೆ ನಂತ್ರ 2000 ರೂಪಾಯಿ ನೋಟುಗಳಲ್ಲಿ ಸರಿಸುಮಾರು ಶೇಕಡಾ 98 ರಷ್ಟು ನೋಟುಗಳು ಈಗಾಗಲೇ ಆರ್ಬಿಐಗೆ ಮರಳಿವೆ. ಪ್ರಸ್ತುತ, ಕೇವಲ 5,669 ಕೋಟಿ ಮೌಲ್ಯದ ನೋಟುಗಳು ಮಾತ್ರ ಮಾರ್ಕೆಟ್ ನಲ್ಲಿ ಚಲಾವಣೆಯಲ್ಲಿವೆ. ತಜ್ಞರ ಪ್ರಕಾರ, 2000 ರೂಪಾಯಿ ಮುಖಬೆಲೆ ನೋಟುಗಳು 2026 ರವರೆಗೆ ಕಾನೂನುಬದ್ಧವಾಗಿ ಉಳಿಯಲಿವೆ. ಆದ್ರೆ ಅವುಗಳ ಪ್ರಾಯೋಗಿಕ ಬಳಕೆ ಗಮನಾರ್ಹವಾಗಿ ಕಡಿಮೆಯಾಗಿದೆ.&lt;/p&gt;&lt;img&gt;&lt;p&gt;ನಿಮ್ಮ ಬಳಿ 2000 ರೂಪಾಯಿ ನೋಟಿದ್ರೆ ಭಯಪಡುವ ಅಗತ್ಯವಿಲ್ಲ. ನೋಟುಗಳು ಕಾನೂನುಬದ್ಧವಾಗಿ ಮಾನ್ಯವಾಗಿದೆ. ಆದ್ರೆ ಅಕ್ಟೋಬರ್ 7, 2023 ರ ನಂತ್ರ ಯಾವುದೇ ಸಾಮಾನ್ಯ ಬ್ಯಾಂಕ್ನಲ್ಲಿ 2000 ನೋಟುಗಳ ವಿನಿಮಯ ಆಗ್ತಿಲ್ಲ. ಅಂದ್ರೆ ಯಾವುದೇ ಬ್ಯಾಂಕ್ ನೀವು ನೀಡುವ 2 ಸಾವಿರ ರೂಪಾಯಿ ನೋಟನ್ನು ಪಡೆಯುತ್ತಿಲ್ಲ.&lt;/p&gt;&lt;img&gt;&lt;p&gt;ನಿಮ್ಮ ಬಳಿ ಈಗ್ಲೂ 2 ಸಾವಿರ ರೂಪಾಯಿ ಮುಖಬೆಲೆ ನೋಟಿದ್ದರೆ ನೀವು ಅದನ್ನು ಬದಲಿಸಿಕೊಳ್ಳಲು ಒಂದು ಆಯ್ಕೆ ಇದೆ. ನೀವು ಆರ್ ಬಿಐ (RBI) ನ 19 ಗೊತ್ತುಪಡಿಸಿದ ಕಚೇರಿಗಳಲ್ಲಿ ಒಂದರಲ್ಲಿ 2000 ರೂಪಾಯಿ ನೋಟುಗಳನ್ನು ಠೇವಣಿ ಮಾಡಬಹುದು. ಈ ಕಚೇರಿಗಳು ಬೆಂಗಳೂರು, ಅಹಮದಾಬಾದ್, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ತಿರುವನಂತಪುರಂ ಮತ್ತು ಬೇಲಾಪುರದಲ್ಲಿವೆ.&lt;/p&gt;&lt;img&gt;&lt;p&gt;2000 ರೂಪಾಯಿ ನೋಟು ಇನ್ನೂ ಮಾನ್ಯವಾಗಿದೆ. ಆದ್ರೆ ಮಾರ್ಕೆಟ್ ನಲ್ಲಿ ಅದ್ರ ಚಲಾವಣೆ ಕಣ್ಮರೆಯಾಗ್ತಿದೆ. ನೀವು 2 ಸಾವಿರ ರೂಪಾಯಿ ನೀಡಿದ್ರೆ ಅದನ್ನು ವ್ಯಾಪಾರಸ್ಥರು ಪಡೆಯುತ್ತಿಲ್ಲ. ಮುಂದೆ ಸಮಸ್ಯೆ ಎದುರಿಸುವ ಬದಲು ಈಗ್ಲೇ ನೋಟು ವಿನಿಮಯಕ್ಕೆ ಮುಂದಾದ್ರೆ ಒಳ್ಳೆಯದು. ಸಾಸಿವೆ ಡಬ್ಬದಲ್ಲಿ, ಬೀರುವಿನಲ್ಲಿ, ಹಳೆ ಪರ್ಸ್ ನಲ್ಲಿ 2 ಸಾವಿರ ರೂಪಾಯಿ ನೋಟಿದ್ರೆ ಅದನ್ನು ಆರ್ ಬಿಐ ಕಚೇರಿಗೆ ತೆಗೆದುಕೊಂಡು ಹೋಗಿ ನೋಟು ವಿನಿಮಯ ಮಾಡ್ಕೊಳ್ಳಿ.&lt;/p&gt;]]></content:encoded>
            <category>economy-money</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/economy-money/what-is-the-rbi-big-update-on-rs-2000-note-ytzoegr"/>
        </item>
    </channel>
</rss>
