<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 04 Jun 2026 07:58:25 +0530</lastBuildDate>
        <atom:link href="https://kannada.asianetnews.com/rss/dharwad" rel="self" type="application/rss+xml"/>
        <item>
            <title><![CDATA[ಯೋಗೇಶ್ ಗೌಡ ಹತ್ಯೆ ಪ್ರಕರಣ: ಇನ್ಸ್‌ಪೆಕ್ಟರ್‌ ಟಿಂಗರಿಕರ್‌ರಿಂದ ನಕಲಿ ಸಾಕ್ಷಿ ಸೃಷ್ಟಿ, ಕೋರ್ಟ್‌ನಲ್ಲಿ ಸಿಬಿಐ ವಾದ]]></title>
            <link>https://kannada.asianetnews.com/gallery/karnataka-districts/yogesh-gowda-murder-cbi-opposes-ex-inspector-chennakeshava-tingrikar-bail-alleges-he-smeared-blood-on-fake-weapons-gdp-0i947qp</link>
            <guid isPermaLink="true">https://kannada.asianetnews.com/gallery/karnataka-districts/yogesh-gowda-murder-cbi-opposes-ex-inspector-chennakeshava-tingrikar-bail-alleges-he-smeared-blood-on-fake-weapons-gdp-0i947qp</guid>
            <pubDate>Wed, 27 May 2026 14:36:12 +0530</pubDate>
            <description><![CDATA[&lt;p&gt;ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ, ಆರಂಭಿಕ ತನಿಖಾಧಿಕಾರಿ ಇನ್ಸ್&zwnj;ಪೆಕ್ಟರ್ ಟಿಂಗರಿಕರ್ ನಕಲಿ ಸಾಕ್ಷಿ ಸೃಷ್ಟಿಸಿದ್ದಾರೆ ಎಂದು ಸಿಬಿಐ ಹೈಕೋರ್ಟ್&zwnj;ನಲ್ಲಿ ವಾದಿಸಿದೆ. ತಮ್ಮ 7 ವರ್ಷಗಳ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಟಿಂಗರಿಕರ್ ಮೇಲ್ಮನವಿ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksm77z3g5etxvb6sy3hsf3ss,imgname-yogesh-gowda-murder-case-chennakeshava-tingrikar-1779868892272.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ, ಆರಂಭಿಕ ತನಿಖಾಧಿಕಾರಿ ಇನ್ಸ್&zwnj;ಪೆಕ್ಟರ್ ಟಿಂಗರಿಕರ್ ನಕಲಿ ಸಾಕ್ಷಿ ಸೃಷ್ಟಿಸಿದ್ದಾರೆ ಎಂದು ಸಿಬಿಐ ಹೈಕೋರ್ಟ್&zwnj;ನಲ್ಲಿ ವಾದಿಸಿದೆ. ತಮ್ಮ 7 ವರ್ಷಗಳ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಟಿಂಗರಿಕರ್ ಮೇಲ್ಮನವಿ ಸಲ್ಲಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು: ಧಾರವಾಡದ ಬಿಜೆಪಿ&zwnj; ಮುಖಂಡ ಯೋಗೀಶ್ ಗೌಡ ಕೊಲೆ ನಡೆದಾಗ ಆರಂಭದಲ್ಲಿ ತನಿಖೆ ನಡೆಸಿದ್ದ ಪೊಲೀಸ್ ಇನ್ಸ್&zwnj;ಪೆಕ್ಟರ್ ಚನ್ನಕೇಶವ ಟಿಂಗರಿಕರ್, ನೈಜ ಆರೋಪಿಗಳನ್ನು ಪರಾರಿಯಾಗಲು ಬಿಟ್ಟು, ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ.&zwnj; ಕೊಲೆಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು, ಮರಣೋತ್ತರ ಪರೀಕ್ಷೆ ನಡೆಸಿದಾಗ ದೊರೆತ ರಕ್ತವನ್ನು ನಕಲಿ ಶಸ್ತ್ರಾಸ್ತ್ರಗಳಿಗೆ ಸವರುವ ಮೂಲಕ ಸ್ವತಃ ತಾವೇ ಸಾಕ್ಷಿ&zwnj; ಸೃಷ್ಟಿಸಿದ್ದಾರೆ&zwnj; ಎಂದು ಸಿಬಿಐ ಬಲವಾಗಿ ವಾದಿಸಿದೆ. ಸದರಿ ಪ್ರಕರಣದಲ್ಲಿ ತಮಗೆ ಏಳು ವರ್ಷ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಟಿಂಗರಿಕರ್ ಹೈಕೋರ್ಟ್&zwnj;ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ. ಜತೆಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು&zwnj;&zwnj;&zwnj;&zwnj; ಜಾಮೀನು ಮಂಜೂರು ಮಾಡಬೇಕು&zwnj;&zwnj; ಎಂದು ಮಧ್ಯಂತರ&zwnj;&zwnj; ಮನವಿ ಮಾಡಿದ್ದಾರೆ. ಈ ಪಕ್ರರಣದ ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ ಜಿ)&zwnj; ಎಸ್&zwnj;.ವಿ.&zwnj; ರಾಜು&zwnj; ಈ ವಿಚಾರಗಳನ್ನು ಕೋರ್ಟ್&zwnj; ಗಮನಕ್ಕೆ ತಂದರು.&lt;/p&gt;&lt;img&gt;&lt;p&gt;ಮೇಲ್ಮನವಿ ಸಂಬಂಧ ಸಿಬಿಐ ಪರ ವಾದ ಮಂಡಿಸಿದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ ಜಿ)&zwnj; ಎಸ್&zwnj;.ವಿ.&zwnj; ರಾಜು&zwnj; ಅವರು, ಯೋಗೀಶ್&zwnj;ಗೌಡ&zwnj;ಕೊಲೆ ಪ್ರಕರಣದಲ್ಲಿ ಟಿಂಗರಿಕರ್&zwnj; ತನಿಖಾಧಿಕಾರಿಯಾಗಿದ್ದರು.&zwnj; ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರೂ 7ರಿಂದ 14ನೇ ಆರೋಪಿಗಳನ್ನು ಮೊದಲು ಆರೋಪಿಗಳನ್ನಾಗಿಸಿಲ್ಲ. ಕಾಂಗ್ರೆಸ್&zwnj; ಮುಖಂಡ ವಿನಯ್&zwnj; ಕುಲಕರ್ಣಿ ಅವರ ಹೆಸರು ಹೇಳದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರು ಎಂದರು.&lt;/p&gt;&lt;img&gt;&lt;p&gt;ಅಲ್ಲದೇ,&zwnj; ಸಾಕ್ಷ್ಯ ನಾಶ ಅಪರಾಧಕ್ಕೆ ಐಪಿಸಿ ಸೆಕ್ಷನ್&zwnj; 201 ಮತ್ತು 218 ಅಡಿ ಟಿಂಗರಿಕರ್&zwnj;ಗೆ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಲಾಗಿದೆ. &zwnj;ಈ ಪ್ರಕರಣಕ್ಕೆ ಕಾನೂನಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣ ಶಿಕ್ಷೆ ವಿಧಿಸಲು ಅವಕಾಶವಿದ್ದರೆ ವಿಚಾರಣಾ ನ್ಯಾಯಾಲಯ ವಿಧಿಸುತ್ತಿತ್ತು. ಟೆಂಗರಿಕರ್&zwnj; ಜೈಲಿನಲ್ಲಿ 70ಕ್ಕೂ ಹೆಚ್ಚು ದಿನ ಮಾತ್ರ ಕಳೆದಿದ್ದಾರೆ. ಈ ಹಂತದಲ್ಲಿ ಶಿಕ್ಷೆ ಅಮಾನತು ಮಾಡಿ ಜಾಮೀನು ಮಂಜೂರು ಮಾಡಬಾರದು. ಎರಡು ವರ್ಷದ ನಂತರ ಅರ್ಜಿ ಸಲ್ಲಿಸಲು ಆದೇಶಿಸಬೇಕು. ಮೇಲ್ನೋಟಕ್ಕೆ ಜಾಮೀನು ನೀಡುವ ಹಾಗೂ ಶಿಕ್ಷೆ ಅಮಾನತು ಮಾಡುವ ಪ್ರಕರಣ ಇದೆ ಎಂಬುದನ್ನು ಟೆಂಗರಿಕರ್&zwnj; ನ್ಯಾಯಾಲಯಕ್ಕೆ ತೋರಿಸಬೇಕು ಎಂದು ವಾದಿಸಿದರು.&lt;/p&gt;&lt;img&gt;&lt;p&gt;ಟಿಂಗರಿಕರ್ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ, &zwnj;ಇತರರ ಜೊತೆ ಪಿತೂರಿ ನಡೆಸಿದ ಹಾಗೂ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ಟೆಂಗರಿಕರ್&zwnj; ವಿರುದ್ಧವಿದೆ. ಅದಕ್ಕೆ ಐಪಿಸಿ ಸೆಕ್ಷನ್&zwnj; ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ. ಇವು ಜಾಮೀನು ನೀಡಬಹುದಾದ ಪ್ರಕರಣಗಳಾಗಿವೆ. 2026ರ ಏ.15ರಿಂದ ಟಿಂಗರಿಕರ್&zwnj; ಜೈಲಿನಲ್ಲಿರುವುದರಿಂದ ಸ್ವಯಂಚಾಲಿತವಾಗಿ ಅವರನ್ನು ಅಮಾನತಿನಲ್ಲಿ ಇಡಲಾಗಿದೆ&zwnj; ಎಂದು ವಾದಿಸಿದರು.&lt;/p&gt;&lt;p&gt;ಪ್ರಕರಣದಲ್ಲಿ ಬಸವರಾಜ ಮುತ್ತಗಿ ಮತ್ತು 17ನೇ ಆರೋಪಿಯಾಗಿದ್ದ ಶಿವಾನಂದ ಬಿರಾದಾರ್&zwnj; ಅವರು ಅಪ್ರೂವರ್&zwnj; ಆಗಿದ್ದು, ಅವರ ಸಾಕ್ಷಿಯನ್ನು ಆಧರಿಸಿ ಟೆಂಗರಿಕರ್&zwnj;ಗೆ ಶಿಕ್ಷೆ ವಿಧಿಸಲಾಗಿದೆ.&zwnj; ಹಾಗಾಗಿ, ಶಿಕ್ಷೆ ಅಮಾನತುಪಡಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು. ಈ ಮಧ್ಯೆ ಶಿಕ್ಷೆ ಅಮಾನತಿಗೆ ವಿರೋಧಿಸಿ ಮಧ್ಯಂತರ ಅರ್ಜಿಸಲ್ಲಿಸಿರುವ ಸಂತ್ರಸ್ತರ ಪರ ವಕೀಲರು, ತಾವು ಎಎಸ್&zwnj;ಜಿ ರಾಜು ಅವರ ವಾದವನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ಪೀಠ ವಿಚಾರಣೆಯನ್ನು&zwnj; ಶುಕ್ರವಾರಕ್ಕೆ ಮುಂದೂಡಿತು.&lt;/p&gt;&lt;img&gt;&lt;p&gt;ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ &amp;nbsp;ಯೊಗೇಶ್ ಗೌಡರ್ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದು ಮಾಡುವಂತೆ ಕೋರಿ ಮಾಜಿ ಶಾಸಕ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಗಳ ವಿಚಾರಣೆಯನ್ನು ಹೈಕೋರ್ಟ್ &zwnj;ಜೂ.2ಕ್ಕೆ ಮುಂದೂಡಿದೆ. ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ವಿನಯ್ ಹಾಗೂ ಇಂಡಿ ಹೈಕೋರ್ಟ್&zwnj;ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ. ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿ ಜಾಮೀನು ಮಂಜೂರು ಮಾಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.&zwnj; ಮೇಲ್ಮನವಿಗಳು ನ್ಯಾ.ಸುನೀಲ್ ದತ್ ಯಾದವ್ ಮತ್ತು ನ್ಯಾ. ಎಸ್.ರಾಚಯ್ಯ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಮಧ್ಯಂತರ ಮನವಿ ಕುರಿತು ಆಕ್ಷೇಪಣೆ ಸಲ್ಲಿಸಲು ಸಿಬಿಐ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಪೀಠವು ಜೂ.2ಕ್ಕೆ ಮುಂದೂಡಿತು.&lt;/p&gt;&lt;img&gt;&lt;p&gt;ಇದಕ್ಕೂ&zwnj;&zwnj; ಮುನ್ನ ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಸಿದ್ಧಾರ್ಥ್&zwnj; ಲೂಥ್ರಾ, ಶಿಕ್ಷೆಯಾಗಿರುವುದರಿಂದ &zwnj;ಕುಲಕರ್ಣಿ&zwnj; ಅವರ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸದ್ಯ ಖಾಲಿಯಿರುವ ಅವರ ಸ್ಥಾನಕ್ಕೆ ಮಧ್ಯಂತರ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಣೆ ಮಾಡುವ ಸಾಧ್ಯತೆಯಿದೆ. ಹಾಗಾಗಿ, ಚುನಾವಣೆ ಘೋಷಣೆ ಮಾಡುವುದನ್ನು ತಡೆಯೊಡ್ಡಬೇಕು. &zwnj;ನಮ್ಮ&zwnj; ಮೇಲ್ಮನವಿಗೆ ಸಿಬಿಐ ಇನ್ನೂ ಆಕ್ಷೇಪಣೆ ಸಲ್ಲಿಸಿಲ್ಲ&zwnj; ಎಂದು ವಿವರಿಸಿದರು.&lt;/p&gt;&lt;p&gt;ವಿನಯ್ ಕುಲಕರ್ಣಿ ಪರ ಮತ್ತೊಬ್ಬ ಹಿರಿಯ ವಕೀಲ ಸಿ.ವಿ.&zwnj;ನಾಗೇಶ್&zwnj;, ಆಕ್ಷೇಪಣೆ ಸಲ್ಲಿಸದಿದ್ದರೆ ವಿಚಾರಣೆ ಮುಂದುವರಿಸಲಾಗುವುದು ಎಂಬುದಾಗಿ ನ್ಯಾಯಾಲಯ ಆದೇಶಿಸಬೇಕು ಎಂದು ಕೋರಿದರು.&lt;/p&gt;&lt;p&gt;ಸಿಬಿಐ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ಅವರು, ಆಕ್ಷೇಪಣೆಯನ್ನು ಸಂಜೆ ವೇಳೆಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅದಕ್ಕೆ ಸಿ.ವಿ.ನಾಗೇಶ್&zwnj;, ಶಿಕ್ಷೆ ಅಮಾನತಿಗೆ ಮನವಿ ಮಾಡಲಾಗಿದೆ. ಸಿಬಿಐ ಆಕ್ಷೇಪಣೆ ಸಲ್ಲಿಸದಿದ್ದರೂ ನ್ಯಾಯಾಲಯ ವಿಚಾರಣೆ ಮುಂದುವರಿಸಬಹುದು&zwnj; ಎಂದರು.&lt;/p&gt;&lt;p&gt;ಆಗ ಪ್ರತಿಕ್ರಿಯಿಸಿದ ಪೀಠ, ವಿನಯ್&zwnj; ಕುಲಕರ್ಣಿ ಮತ್ತು ಚಂದ್ರಶೇಖರ್&zwnj; ಇಂಡಿ ಅವರ ಶಿಕ್ಷೆ ಅಮಾನತು ಕೋರಿರುವ ಮನವಿಗಳನ್ನು ರಜಾಕಾಲ ಮುಗಿದ ಬಳಿಕ ವಿಚಾರಣೆ ನಡೆಸಬಹುದು. ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು, ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಸೂಚಿಸಿ ವಿಚಾರಣೆಯನ್ನು ಜೂ.2ಕ್ಕೆ ಮುಂದೂಡಿತು.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/yogesh-gowda-murder-cbi-opposes-ex-inspector-chennakeshava-tingrikar-bail-alleges-he-smeared-blood-on-fake-weapons-gdp-0i947qp"/>
        </item>
        <item>
            <title><![CDATA[ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್ 4500 ಕೋಟಿ ವಂಚನೆ ಪ್ರಕರಣ, ಈಗ ಹುಬ್ಬಳ್ಳಿ ಜನರಿಗೆ ಶಿವಾನಂದನದ್ದೇ ಚಿಂತೆ!]]></title>
            <link>https://kannada.asianetnews.com/gallery/karnataka-districts/belagavi-rs4500-cr-scam-cid-probes-hubballi-roots-of-shivam-associates-owner-shivanand-neelannavar-gdp-0tl9g8z</link>
            <guid isPermaLink="true">https://kannada.asianetnews.com/gallery/karnataka-districts/belagavi-rs4500-cr-scam-cid-probes-hubballi-roots-of-shivam-associates-owner-shivanand-neelannavar-gdp-0tl9g8z</guid>
            <pubDate>Wed, 20 May 2026 18:56:37 +0530</pubDate>
            <description><![CDATA[ಬಹುಕೋಟಿ ಹಗರಣದಲ್ಲಿ ಬಂಧಿತನಾದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ, ಹುಟ್ಟೂರು ಹುಬ್ಬಳ್ಳಿಯೊಂದಿಗೂ ನಂಟು ಹೊಂದಿದ್ದ. ಈತನ ಆ್ಯಪ್&zwnj;ನಲ್ಲಿ ಹುಬ್ಬಳ್ಳಿಯವರೂ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಐಡಿ ತನಿಖೆ ಹುಬ್ಬಳ್ಳಿಯತ್ತ ಮುಖ ಮಾಡುವ ಸಾಧ್ಯತೆ ಇದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krq5p94ds86m971jxpgm633f,imgname-5-1778894185613.png" type="image/jpeg" height="390" width="690"/>
            <content:encoded><![CDATA[ಬಹುಕೋಟಿ ಹಗರಣದಲ್ಲಿ ಬಂಧಿತನಾದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ, ಹುಟ್ಟೂರು ಹುಬ್ಬಳ್ಳಿಯೊಂದಿಗೂ ನಂಟು ಹೊಂದಿದ್ದ. ಈತನ ಆ್ಯಪ್&zwnj;ನಲ್ಲಿ ಹುಬ್ಬಳ್ಳಿಯವರೂ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಐಡಿ ತನಿಖೆ ಹುಬ್ಬಳ್ಳಿಯತ್ತ ಮುಖ ಮಾಡುವ ಸಾಧ್ಯತೆ ಇದೆ.&lt;img&gt;&lt;p&gt;ಹುಬ್ಬಳ್ಳಿ: ಬಹುಕೋಟಿ ಹಗರಣದಲ್ಲಿ ಸಿಲುಕಿ ಬಂಧನಕ್ಕೊಳಗಾಗಿರುವ ಶಿವಂ ಅಸೋಸಿಯೇಟ್ಸ್&zwnj;ನ ಮಾಲೀಕ ಶಿವಾನಂದ ನೀಲಣ್ಣವರ ಊರು ಬಿಟ್ಟಿದ್ದರೂ ಹುಬ್ಬಳ್ಳಿಯಲ್ಲಿನ ನಂಟು ಬಿಟ್ಟಿರಲಿಲ್ಲ. ಆಗಾಗ ಹುಬ್ಬಳ್ಳಿಗೂ ಬರುತ್ತಿದ್ದ. ಹೀಗಾಗಿ ಹುಬ್ಬಳ್ಳಿಗರಿಂದಲೂ ತನ್ನ ಆ್ಯಪ್&zwnj; ಮೂಲಕ ಹೂಡಿಕೆ ಮಾಡಿಸಿದ್ದು, ದುಡ್ಡು ಕಳೆದುಕೊಂಡವರಲ್ಲಿ ಇಲ್ಲೂ ಇದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪ್ರಕರಣ ಕೈಗತ್ತಿಕೊಂಡಿರುವ ಸಿಐಡಿ ಪೊಲೀಸರು ತನಿಖೆಗಾಗಿ ಹುಬ್ಬಳ್ಳಿಯತ್ತ ಮುಖ ಮಾಡುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಶಿವಾನಂದ ನೀಲಣ್ಣವರ ಇಲ್ಲಿನ ಉಣಕಲ್&zwnj; ದುರ್ಗದ ಓಣಿಯವ. ಇಲ್ಲೇ ಐಸ್ಕ್ರಿಂ ಮಾರುತ್ತಿದ್ದ. ಈತನ ತಂದೆ ತೀರಿದ ಬಳಿಕ ಈತನ ಸಹೋದರನಿಗೆ ಹೆಸ್ಕಾಂನಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಸಿಕ್ಕಿದ್ದು, ಇಡೀ ಕುಟುಂಬ ಬೆಳಗಾವಿಗೆ ಹೋಗಿ ಸೆಟ್ಲ್&zwnj; ಆಗಿದೆ. ಆದರೆ, ಅಲ್ಲಿಗೆ ಹೋಗಿ ನೆಲೆಸಿದ್ದರೂ ಕೂಡ ಹುಬ್ಬಳ್ಳಿಯೊಂದಿಗಿನ ನಂಟು ಮಾತ್ರ ಬಿಟ್ಟಿರಲಿಲ್ಲ.&lt;/p&gt;&lt;img&gt;&lt;p&gt;ನೀಲಣ್ಣವರ ಎಂಬ ಅಡ್ರೆಸ್&zwnj; ಹೊಂದಿರುವ ಮನೆತನಗಳು ನಗರದಲ್ಲಿ ಸಾಕಷ್ಟಿವೆ. ಕೆಲವೊಂದಿಷ್ಟು ಜನ ಅವರ ದೂರದ ಸಂಬಂಧಿಕರಿದ್ದಾರೆ. ಹೀಗಾಗಿ ಸಂಬಂಧಿಕರ ಮದುವೆ ಸೇರಿದಂತೆ ಯಾವುದೇ ಶುಭ ಕಾರ್ಯಕ್ರಮ ಅಥವಾ ಅಶುಭ ಕಾರ್ಯಕ್ರಮಕ್ಕೆ ಶಿವಾನಂದ ಹುಬ್ಬಳ್ಳಿಗೆ ಬರುತ್ತಿದ್ದನಂತೆ. ಆಗಾಗ ಬರುತ್ತಿದ್ದ ಶಿವಾನಂದ ಉಣಕಲ್&zwnj;ನ ದೇವಸ್ಥಾನವೊಂದರ ಜಾತ್ರಾ ಮಹೋತ್ಸವಕ್ಕೆ ಇತ್ತೀಚಿಗೆ ದೇಣಿಗೆ ಕೂಡ ನೀಡಿದ್ದನಂತೆ. ಜಾತ್ರಾ ಮಹೋತ್ಸವದಲ್ಲೂ ಭಾಗವಹಿಸಿದ್ದನೆಂದು ಮೂಲಗಳು ತಿಳಿಸುತ್ತವೆ.&lt;/p&gt;&lt;img&gt;&lt;p&gt;ಸದ್ಯ ಈತ 35 ಸಾವಿರ ಜನರಿಂದ ₹ 4500 ಕೋಟಿ ಹೂಡಿಕೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತನಿಖೆ ಮುಂದುವರಿಯುತ್ತಿದ್ದಂತೆ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯುಂಟು. ಅದರಲ್ಲಿ ಹುಬ್ಬಳ್ಳಿಯವರು ಹೂಡಿಕೆ ಮಾಡಿದ್ದಾರೆಯೇ? ಮಾಡಿದ್ದರೆ ಎಷ್ಟು ಜನ ಮಾಡಿರಬಹುದು? ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ, ಹೂಡಿಕೆ ಮಾಡಿದವರು ತಾವೇ ಹೂಡಿಕೆ ಮಾಡಿದ್ದೇವೆ ಎಂದು ಈ ವರೆಗೂ ಬಂದು ಹೇಳಿಕೊಳ್ಳುತ್ತಿಲ್ಲ. ಇದಕ್ಕೆ ಭಯವೂ ಕಾರಣವಿರಬಹುದು ಎಂಬ ವಿಶ್ಲೇಷಣೆ ಕೂಡ ಕೇಳಿ ಬರುತ್ತಿದೆ. ಈ ಕಾರಣದಿಂದ ತನಿಖೆಗಾಗಿ ಸಿಐಡಿ ಪೊಲೀಸರು ಹುಬ್ಬಳ್ಳಿಗೂ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಟ್ಟಿನಲ್ಲಿ ಬೆಳಗಾವಿಯಲ್ಲಿ ಘಟನೆ ನಡೆದರೂ ಅದರಷ್ಟೇ ಚರ್ಚೆ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದಂತೂ ಸತ್ಯ.&lt;/p&gt;&lt;img&gt;&lt;p&gt;ಅತ್ತ ನೀಲಣ್ಣವರ ಬಂಧನವಾಗುತ್ತಿದ್ದಂತೆ ಇತ್ತ ಇಲ್ಲಿನ ಈ ಹೆಸರಿನವರಿಗೆ ಮೊಬೈಲ್&zwnj; ಕರೆಗಳ ಸುರಿಮಳೆಯೇ ಬರುತ್ತಿದೆ. ಬೆಳಗಾವಿಯಲ್ಲಿ ಬಂಧನವಾಗಿದೆಯೆಲ್ಲ ಅವರು ನಿಮ್ಮ ಸಂಬಂಧಿಕರಾಕಾ? ನಿಮ್ಮ ಅಡ್ರೆಸ್&zwnj; ಸೇಮ್&zwnj; ಟು ಸೇಮ್&zwnj; ಐತಲಾ ಅದಕ್ಕೆ ಕೇಳಿದೆ.. ಎಂಬೆಲ್ಲ ಪ್ರಶ್ನೆಗಳ ಸುರಿಮಳೆ ಆಗುತ್ತಿದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/belagavi-rs4500-cr-scam-cid-probes-hubballi-roots-of-shivam-associates-owner-shivanand-neelannavar-gdp-0tl9g8z"/>
        </item>
        <item>
            <title><![CDATA[ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿದ್ದ ಯಾದಗಿರಿ ಯುವಕನಿಗೆ ಹೃದಯಾಘಾತ]]></title>
            <link>https://kannada.asianetnews.com/karnataka-districts/a-young-man-from-yadagir-who-was-preparing-for-a-competitive-exam-in-dharwad-suffered-a-heart-attack-mrq/articleshow-1bow90k</link>
            <guid isPermaLink="true">https://kannada.asianetnews.com/karnataka-districts/a-young-man-from-yadagir-who-was-preparing-for-a-competitive-exam-in-dharwad-suffered-a-heart-attack-mrq/articleshow-1bow90k</guid>
            <pubDate>Thu, 04 Jun 2026 07:58:19 +0530</pubDate>
            <description><![CDATA[&lt;p&gt;ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯಾದಗಿರಿ ಮೂಲದ ಯುವಕನೊಬ್ಬ ಧಾರವಾಡದಲ್ಲಿ ಹೃದಯಾಘಾತದಿಂದ ಮೃತಪಟ್ಟರೆ, ಮತ್ತೊಂದು ಘಟನೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕನಕಗಿರಿ ತಾಲೂಕಿನ ಯುವತಿಯೊಬ್ಬಳು ಆತ್ಮ*ಹತ್ಯೆಗೆ ಶರಣಾಗಿದ್ದಾಳೆ. ಈ ಎರಡೂ ದುರಂತ ಘಟನೆಗಳು ಕುಟುಂಬದಲ್ಲಿ ಶೋಕವನ್ನುಂಟು ಮಾಡಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt870ffrwm930mf12fzmkbrg,imgname-youth-death-1780539735544.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ&lt;/strong&gt;: ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಧಾರವಾಡಕ್ಕೆ ಬಂದಿದ್ದ, ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ಮೂಲದ 25 ವರ್ಷದ ಮಾರುತಿ ಕಲಬುರಗಿ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.&lt;/p&gt;&lt;p&gt;ಮಾರುತಿ ಕಳೆದ ಮೂರು ವರ್ಷಗಳಿಂದ ಧಾರವಾಡದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಪಡೆಯುತ್ತಿದ್ದನು. ಉತ್ತಮ ಭವಿಷ್ಯದ ಕನಸು ಹೊತ್ತು ಸ್ವಗ್ರಾಮ ತೊರೆದು ಧಾರವಾಡಕ್ಕೆ ಬಂದಿದ್ದ ಆತ, ನಗರದಲ್ಲಿ ಬಾಡಿಗೆ ಕೊಠಡಿ ಮಾಡಿಕೊಂಡು ವಾಸಿಸುತ್ತಿದ್ದನು. ಕೊಠಡಿಯಲ್ಲಿದ್ದ ವೇಳೆ ಬುಧವಾರ ನಸುಕಿನಲ್ಲಿ ಮಾರುತಿಗೆ ಎದೆನೋವು ಕಾಣಿಸಿಕೊಂಡಿದೆ. ಆತನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ತೀವ್ರ ಹೃದಯಾಘಾತದಿಂದ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಘಟನೆ ತಿಳಿಯುತ್ತಿದ್ದಂತೆ ಮಾರುತಿ ಕುಟುಂಬದವರು ಧಾರವಾಡಕ್ಕೆ ಆಗಮಿಸಿದ್ದಾರೆ. ಮಗನ ಅಕಾಲಿಕ ನಿಧನದಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಹೊಟ್ಟೆ ನೋವು ತಾಳದೆ ಅವಿವಾಹಿತೆ ನೇಣಿಗೆ ಶರಣು&lt;/strong&gt;&lt;/h2&gt;&lt;p&gt;ಕನಕಗಿರಿ: ಹೊಟ್ಟೆ ನೋವು ತಾಳಲಾರದೆ ಅವಿವಾಹಿತೆ ಮನನೊಂದು ನೇಣಿಗೆ ಶರಣಾದ ಘಟನೆ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಬುಧವಾರ ನಡೆದಿದೆ. ಗೌರಮ್ಮ ಜೆಂಜೆರಿ(19) ನೇಣಿಗೆ ಶರಣಾದ ಯುವತಿ. 20 ದಿನಗಳ ಹಿಂದೆ ಮುರ್ಲಾನಹಳ್ಳಿ ಗ್ರಾಮದ ಯಮನೂರಸ್ವಾಮಿ ಜೊತೆ ಗೌರಮ್ಮಳ ವಿವಾಹ ನಿಶ್ಚಯ ಮಾಡಲಾಗಿತ್ತು.&amp;nbsp;&lt;/p&gt;&lt;p&gt;ಗೌರಮ್ಮಳಿಗೆ ಸುಮಾರು 2-3 ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಕಡಿಮೆ ಆಗಿಲ್ಲ. ಇದರಿಂದ ಮಾನಸಿಕ ನೊಂದಿದ್ದ ಗೌರಮ್ಮ ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಹುಲಿಗೆಮ್ಮ ಜಿಂಜೆರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/a-young-man-from-yadagir-who-was-preparing-for-a-competitive-exam-in-dharwad-suffered-a-heart-attack-mrq/articleshow-1bow90k"/>
        </item>
        <item>
            <title><![CDATA[Cockroach Janata Part: ಕಾಕ್ರೋಚ್ ಭಯ ಕಾಂಗ್ರೆಸ್‌ಗೆ ಹೊರತು ಬಿಜೆಪಿಗಲ್ಲ; ಪ್ರಲ್ಹಾದ್ ಜೋಶಿ ಕೊಟ್ಟ ಉತ್ತರ ಕೇಳಿ ಶಾಕ್!]]></title>
            <link>https://kannada.asianetnews.com/politics/congress-distracted-by-cockroach-janata-party-not-bjp-union-minister-pralhad-joshi-rav/articleshow-1xwnha2</link>
            <guid isPermaLink="true">https://kannada.asianetnews.com/politics/congress-distracted-by-cockroach-janata-party-not-bjp-union-minister-pralhad-joshi-rav/articleshow-1xwnha2</guid>
            <pubDate>Sun, 24 May 2026 09:24:45 +0530</pubDate>
            <description><![CDATA[ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, 'ಕಾಕ್ರೋಚ್ ಜನತಾ ಪಾರ್ಟಿ'ಯಿಂದ ಕಾಂಗ್ರೆಸ್&zwnj;ಗೆ ಭಯವಾಗಿದೆ, ಬಿಜೆಪಿಗಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸುವ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksc1kyc2kekz510z7s84gnwd,imgname-----------------------2026-05-24t091104.437-1779594557826.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಮೇ.24):&lt;/strong&gt; ಕಾಕ್ರೋಚ್ ಜನತಾ ಪಾರ್ಟಿ(Cockroach Janata Party) ದಿಢೀರ್ ಸೃಷ್ಟಿಯಿಂದ ವಿಚಲಿತ ಆಗಿರುವುದು ಕಾಂಗ್ರೆಸ್(Congress) ಪಕ್ಷವೇ ಹೊರತು ಬಿಜೆಪಿ(BJP ) ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.&lt;/p&gt;&lt;p&gt;ಮಾದ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್&zwnj; ಅದಾಗಲೇ ಸಂಪೂರ್ಣ ಕಳೆದು ಹೋಗಿದೆ. ಇನ್ನು ಕಾಕ್ರೋಚ್ ತನ್ನನ್ನೆಲ್ಲಿ ಹುದುಗಿಸುತ್ತದೋ? ಎಂಬ ಭಯ ಅವರದು ಎಂದು ಚಾಟಿ ಬೀಸಿದರು.&lt;/p&gt;&lt;p&gt;ಯಾವುದೇ ಮೂಲಗಳಿಂದ ದೇಶದ ಭದ್ರತೆಗೆ ಮತ್ತು ಕಾನೂನು ಸುವ್ಯವಸ್ಥೆಗೆ, ನಾಗರಿಕರಿಗೆ ಧಕ್ಕೆಯಾದರೆ ಗಮನಿಸಬೇಕಾದದ್ದು ಸರ್ಕಾರದ ಕರ್ತವ್ಯ. ಅದರಂತೆ ಸರ್ಕಾರದ ಸಂಬಂಧಿತ ಇಲಾಖೆ ಕ್ರಮ ಕೈಗೊಂಡಿದೆ. ಇದರಲ್ಲಿ ಬಿಜೆಪಿ ವಿಚಲಿತ ಆಗುವ ಪ್ರಶ್ನೆಯೇ ಇಲ್ಲ ಎಂದರು&lt;/p&gt;&lt;h2&gt;ಪ್ರತ್ಯೇಕ ಪಾಲಿಕೆಗೆ ಬೆಂಬಲ: ಜೋಶಿ&lt;/h2&gt;&lt;p&gt;16ನೇ ಹಣಕಾಸು ಆಯೋಗದಂತೆ ದೊಡ್ಡ ಮಹಾನಗರ ಹೆಚ್ಚು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಬಿಜೆಪಿಯದ್ದಾಗಿತ್ತು. ಆದರೆ ಧಾರವಾಡಿಗರು ಪ್ರತ್ಯೇಕ ಪಾಲಿಕೆ ಬಗ್ಗೆ ಭಾವನಾತ್ಮಕವಾಗಿ ಬೇಕು ಎನ್ನುತ್ತಿದ್ದಾರೆ. ಹೀಗಾಗಿ, ಅವರ ಹೋರಾಟಕ್ಕೆ ತಮ್ಮದು ಬೆಂಬಲ ಇದೆ. ಪ್ರತ್ಯೇಕ ಪಾಲಿಕೆ ಆಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು,.&lt;/p&gt;&lt;p&gt;ಈ ಸಂಬಂಧ ರಾಜ್ಯಪಾಲರನ್ನು ಕಂಡು ಪ್ರತ್ಯೇಕ ಪಾಲಿಕೆಯಾಗಲಿ ಎಂದು ಮನವಿ ಸಲ್ಲಿಸಿದ್ದೇವೆ. ಭಾವನಾತ್ಮಕ ವಿಷಯವಾಗಿರುವುದರಿಂದ ಆದಷ್ಟು ಬೇಗ ಪೆಂಡಿಂಗ್&zwnj; ಇರುವ ಪ್ರಸ್ತಾವನೆ ಕ್ಲಿಯರ್&zwnj; ಮಾಡಲು ಮನವಿ ಮಾಡಿದ್ದೇವೆ. ಆದರೆ, ಕಾಂಗ್ರೆಸ್ ನಾಯಕರು ಈ ವಿಚಾರವಾಗಿ ರಾಜ್ಯಪಾಲರ ಬಳಿ ಹೋಗಲಿಲ್ಲ. ಇದೀಗ ಕಾಂಗ್ರೆಸ್&zwnj; ಇಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/congress-distracted-by-cockroach-janata-party-not-bjp-union-minister-pralhad-joshi-rav/articleshow-1xwnha2"/>
        </item>
        <item>
            <title><![CDATA[ಬೆಳಗಾವಿ ಶಿವಂ ಅಸೋಸಿಯೇಟ್ಸ್ 4500 ಕೋಟಿ ರೂ ಹಗರಣ ಸಿಐಡಿಗೆ, ಪ್ರಕರಣ ಬೆಳಕಿಗೆ ಬರಲು ಕಾರಣ 15 ಸಾವಿರ ಬಂದೂಕು!]]></title>
            <link>https://kannada.asianetnews.com/gallery/karnataka-districts/shivanand-neelannavar-shivam-associates-rs4500-crore-scam-cid-probe-intensifies-in-belagavi-gdp-2ve7m8u</link>
            <guid isPermaLink="true">https://kannada.asianetnews.com/gallery/karnataka-districts/shivanand-neelannavar-shivam-associates-rs4500-crore-scam-cid-probe-intensifies-in-belagavi-gdp-2ve7m8u</guid>
            <pubDate>Sun, 17 May 2026 12:35:09 +0530</pubDate>
            <description><![CDATA[ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪದಡಿ ಬಂಧನಕ್ಕೊಳಗಾಗಿದ್ದು, ಪ್ರಕರಣದ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ. ಆರ್&zwnj;ಬಿಐ ನಿಯಮ ಉಲ್ಲಂಘಿಸಿ, 'ಅಕ್ಯೂಮೆನ್' ಆ್ಯಪ್ ಮೂಲಕ 35 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿ ವಂಚಿಸಿದ ಆರೋಪ ಇವರ ಮೇಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krnmvt25r1gkn62x0hb3kqy2,imgname-shivam-associates-shivanand-neelannavar--4--1778842986565.jpg" type="image/jpeg" height="390" width="690"/>
            <content:encoded><![CDATA[ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪದಡಿ ಬಂಧನಕ್ಕೊಳಗಾಗಿದ್ದು, ಪ್ರಕರಣದ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ. ಆರ್&zwnj;ಬಿಐ ನಿಯಮ ಉಲ್ಲಂಘಿಸಿ, 'ಅಕ್ಯೂಮೆನ್' ಆ್ಯಪ್ ಮೂಲಕ 35 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿ ವಂಚಿಸಿದ ಆರೋಪ ಇವರ ಮೇಲಿದೆ.&lt;img&gt;&lt;p&gt;ಬೆಳಗಾವಿ: ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪದಡಿ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಿಐಡಿ ತನಿಖೆ ವೇಗ ಪಡೆದುಕೊಂಡಿದೆ. ಪ್ರಕರಣದ ತನಿಖೆಗೆ ಸಿಐಡಿ ಡಿಐಜಿ ಡಾ. ಭೀಮಾಶಂಕರ ಗುಳೇದ್ ಸ್ವತಃ ಅಖಾಡಕ್ಕಿಳಿದಿದ್ದು, ಬೆಂಗಳೂರಿನಿಂದ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿದ್ದಾರೆ. ಜಿಲ್ಲಾಡಳಿತದ ವರದಿ ಹಾಗೂ ಪೊಲೀಸ್ ತನಿಖೆಯ ಪ್ರಗತಿ ಕುರಿತು ಅವರು ಮಾಹಿತಿ ಸಂಗ್ರಹಿಸಲಿದ್ದು, ಬಳಿಕ ಮುಂದಿನ ಕ್ರಮಗಳ ಬಗ್ಗೆ ಸಿಐಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.&lt;/p&gt;&lt;img&gt;&lt;p&gt;ಆರ್&zwnj;ಬಿಐ ನಿಯಮ ಉಲ್ಲಂಘಿಸಿ ಸುಮಾರು 35 ಸಾವಿರ ಜನರಿಂದ ಸಾವಿರಾರು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಶಿವಾನಂದ ನೀಲಣ್ಣವರನ್ನು ಶುಕ್ರವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಉಪವಿಭಾಗಾಧಿಕಾರಿ ಶ್ರವಣ ನಾಯಿಕ ಅವರ ನೇತೃತ್ವದಲ್ಲಿ ಕಂದಾಯ, ಸಹಕಾರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಶಿವಾನಂದ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ದೀರ್ಘಕಾಲ ಪರಿಶೀಲನೆ ನಡೆಸಿದರು. ದಿನಪೂರ್ತಿ ನಡೆದ ತಪಾಸಣೆಯ ಬಳಿಕ ರಾತ್ರಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಎಸಿಪಿ ಸತ್ಯ ನಾಯಿಕ ಹಾಗೂ ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ಬಂಧನ ಮಾಡಲಾಯಿತು. ಬಂಧನದ ಬಳಿಕ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮೊದಲು ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.&lt;/p&gt;&lt;img&gt;&lt;p&gt;ಶಿವಬಸವ ನಗರದಲ್ಲಿರುವ ಕಚೇರಿಯಲ್ಲಿ ಸುಮಾರು 12 ಗಂಟೆಗಳ ಕಾಲ ನಡೆದ ಪರಿಶೀಲನೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳು ಪತ್ತೆಯಾಗಿವೆ. ಎರಡು ಮೂಟೆಗಳಷ್ಟು ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಲ್ಯಾಪ್&zwnj;ಟಾಪ್, ಕಂಪ್ಯೂಟರ್, ಮೊಬೈಲ್, ಪೆನ್&zwnj;ಡ್ರೈವ್ ಸೇರಿದಂತೆ ಹಲವು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಆನ್&zwnj;ಲೈನ್ ಹಣದ ವ್ಯವಹಾರಗಳ ಕುರಿತಂತೆ ವಿಶೇಷವಾಗಿ ಪರಿಶೀಲನೆ ನಡೆಸಲಾಗಿದೆ.&lt;/p&gt;&lt;img&gt;&lt;p&gt;ಈ ಪ್ರಕರಣದಲ್ಲಿ ಬಡ್ಸ್ ಆ್ಯಕ್ಟ್ ಸೆಕ್ಷನ್ 21 ಹಾಗೂ ಕೆಪಿಐಡಿ ಕಾಯ್ದೆಯ ಸೆಕ್ಷನ್ 9 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನಿರ್ದೇಶನದ ಮೇರೆಗೆ ಸಹಕಾರ ಇಲಾಖೆಯ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. FIR ಪ್ರಕಾರ, 2016ರಲ್ಲಿ ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಸಂಸ್ಥೆ ಆರಂಭಿಸಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಲಾಗಿದೆ. ಹೆಚ್ಚಿನ ಬಡ್ಡಿ ಮತ್ತು ಲಾಭದ ಆಮಿಷವೊಡ್ಡಿ ಸಾವಿರಾರು ಕೋಟಿ ರೂಪಾಯಿ ಹಣ ಸಂಗ್ರಹಿಸಿ, ಅದರ ಒಂದು ಭಾಗವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಉಳಿದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡು ವಂಚನೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.&lt;/p&gt;&lt;img&gt;&lt;p&gt;ಶಿವಾನಂದ ನೀಲಣ್ಣವರ &lsquo;ಅಕ್ಯೂಮೆನ್&rsquo; ಎಂಬ ಆ್ಯಪ್ ಅಭಿವೃದ್ಧಿಪಡಿಸಿ ಅದರ ಮೂಲಕ ಜನರಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ. ಈ ಆ್ಯಪ್ ಮೂಲಕವೇ ಸುಮಾರು 35 ಸಾವಿರ ಜನರಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.&lt;/p&gt;&lt;h2&gt;ತನಿಖೆಗೆ ಕಾರಣವಾದ ಹೇಳಿಕೆ&lt;/h2&gt;&lt;p&gt;&ldquo;ನನ್ನ ಬಳಿ 15 ಸಾವಿರ ಬಂದೂಕುಗಳಿವೆ&rdquo; ಎಂಬ ಶಿವಾನಂದ ನೀಡಿದ ವಿವಾದಾತ್ಮಕ ಹೇಳಿಕೆಯೇ ತನಿಖೆಗೆ ಪ್ರಮುಖ ಕಾರಣವಾಯಿತು. ಈ ಕುರಿತು ಅನಾಮಧೇಯ ವ್ಯಕ್ತಿಯೊಬ್ಬರು ಸೆಬಿಗೆ ಪತ್ರ ಬರೆದಿದ್ದು, ಅದು ಸಿಐಡಿಗೆ ರವಾನೆಯಾಯಿತು. ನಂತರ ಸಿಐಡಿ ಸೂಚನೆ ಮೇರೆಗೆ ಪ್ರಾಥಮಿಕ ಪರಿಶೀಲನೆ ಆರಂಭವಾಗಿದ್ದು, ವಂಚನೆಯ ಜಾಲ ಬಯಲಾಗಿದೆ.&lt;/p&gt;&lt;img&gt;&lt;p&gt;ಶಿವಾನಂದ ನೀಲಣ್ಣವರ ಮೂಲತಃ ಹುಬ್ಬಳ್ಳಿ ಬಳಿಯ ಉಣಕಲ್ ಗ್ರಾಮದವನು. ತಂದೆ ಮಾಜಿ ಸೈನಿಕ, ಅಪ್ಪನ ನಿಧನ ನಂತರ ಸಹೋದರನಿಗೆ ಉದ್ಯೋಗ ಸಿಕ್ಕಿತ್ತು. ಹೀಗಾಗಿ ಬೆಳಗಾವಿಗೆ ಎಲ್ಲರೂ ಶಿಫ್ಟ್ ಆಗಿದ್ದರು. ಆರಂಭದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಆತ, ನಂತರ ಐಸ್ ಕ್ರೀಂ ವ್ಯಾಪಾರ, ಫ್ಯಾಕ್ಟರಿ ಆರಂಭಿಸಿದ. 2016ರಲ್ಲಿ ಸಾಲ ಪಡೆದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬಳಿಕ ಜನರಿಂದ ಠೇವಣಿ ಸಂಗ್ರಹಿಸಲು ಮುಂದಾದ. ಶಿವಾನಂದ ನೀಲಣ್ಣವರ ಚಾರ್ಟರ್ಡ್ ಅಕೌಂಟೆಂಟ್ ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ ಸುಮಾರು ₹300 ರಿಂದ ₹400 ಕೋಟಿ ಮೊತ್ತದ ಬ್ಯಾಲೆನ್ಸ್ ಶೀಟ್ ಪತ್ತೆಯಾಗಿದೆ. ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್, ಮೀನುಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದೇವೆ ಎಂದು ಆತ ಹೇಳಿಕೊಂಡಿದ್ದರೂ, ಅದರ ಬಗ್ಗೆ ಸ್ಪಷ್ಟ ದಾಖಲೆಗಳು ಅನುಮಾನಾಸ್ಪದವಾಗಿವೆ.&lt;/p&gt;&lt;img&gt;&lt;p&gt;ಈ ಪ್ರಕರಣ ಕೇವಲ ಬೆಳಗಾವಿಗೆ ಸೀಮಿತವಾಗದೇ ಅಂತರ್ ಜಿಲ್ಲೆ ಹಾಗೂ ಅಂತರ್ ರಾಜ್ಯ ಮಟ್ಟಕ್ಕೆ ವ್ಯಾಪಿಸಿರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಹೂಡಿಕೆ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡುವಂತೆ ಮನವಿ ಮಾಡಲಾಗಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ಸೆಕ್ಷನ್&zwnj;ಗಳನ್ನು ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲು ಶಿಫಾರಸು ಮಾಡುವುದಾಗಿ ಹೇಳಿದ್ದರು. ಪ್ರಾಥಮಿಕ ತನಿಖೆಯಲ್ಲಿ ಸಂಸ್ಥೆ ಆರ್&zwnj;ಬಿಐಯಲ್ಲಿ ನೋಂದಾಯಿತವಾಗಿಲ್ಲ ಎಂಬುದು ಬಹಿರಂಗವಾಗಿದೆ. ಬಂಧನದ ವೇಳೆ ಶಿವಾನಂದ ನೀಲಣ್ಣವರ, &ldquo;ಓಂ ನಮಃ ಶಿವಾಯ&hellip; ಎಲ್ಲರಿಗೂ ಒಳ್ಳೆಯದಾಗಲಿ. ಕೋಟ್ಯಂತರ ರೂಪಾಯಿ ವಂಚನೆ ಆರೋಪ ಸತ್ಯವೋ ಸುಳ್ಳೋ ನನಗೆ ಗೊತ್ತಿಲ್ಲ&rdquo; ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಬಂಧನದ ಸಮಯದಲ್ಲಿ ಕೊರಳಲ್ಲಿದ್ದ ರುದ್ರಕ್ಷಿ ಮಾಲೆ, ಚಿನ್ನದ ಉಂಗುರ, ಸರ ತೆಗೆಸಿ ಕುಟುಂಬಸ್ಥರಿಗೆ ಪೊಲೀಸರು ನೀಡಿದರು.&lt;/p&gt;&lt;p&gt;₹4,500 ಕೋಟಿ ವಂಚನೆ ಆರೋಪ ಪ್ರಕರಣವು ರಾಜ್ಯದ ಗಮನ ಸೆಳೆದಿದ್ದು, ಸಾವಿರಾರು ಹೂಡಿಕೆದಾರರ ಭವಿಷ್ಯ ಪ್ರಶ್ನಾರ್ಥಕವಾಗಿದೆ. ಸಿಐಡಿ ತನಿಖೆ ಮುಂದುವರಿದಂತೆ ಇನ್ನಷ್ಟು ಮಹತ್ವದ ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/shivanand-neelannavar-shivam-associates-rs4500-crore-scam-cid-probe-intensifies-in-belagavi-gdp-2ve7m8u"/>
        </item>
        <item>
            <title><![CDATA[ಹುಬ್ಬಳ್ಳಿಯಲ್ಲಿ ಭೀಕರ ಘಟನೆ: ಮೊಬೈಲ್‌ ಚಾರ್ಜ್‌ ಹಾಕಬೇಡ ಎಂದ ಮಾವನನ್ನೇ ಕೊಂದ ಅಳಿಯ!]]></title>
            <link>https://kannada.asianetnews.com/crime/worker-killed-over-mobile-charging-row-at-hubballi-gvd/articleshow-37bdk7b</link>
            <guid isPermaLink="true">https://kannada.asianetnews.com/crime/worker-killed-over-mobile-charging-row-at-hubballi-gvd/articleshow-37bdk7b</guid>
            <pubDate>Fri, 22 May 2026 17:35:13 +0530</pubDate>
            <description><![CDATA[&lt;p&gt;ಶೆಡ್&zwnj;ನಲ್ಲಿ ಮೊಬೈಲ್&zwnj; ಚಾರ್ಜ್&zwnj; ಹಾಕಬೇಡ ಎಂದ ಮೇಸ್ತ್ರಿಯನ್ನೇ ಕಟ್ಟಡ ಕಾರ್ಮಿಕ ಕಬ್ಬಿಣದ ರಾಡ್&zwnj;ನಿಂದ ಹೊಡೆದು ಕೊಲೆ ಮಾಡಿದ ಘಟನೆ ತಡರಾತ್ರಿ ತಾಲೂಕಿನ ರೇವಡಿಹಾಳದಲ್ಲಿ ನಡೆದಿದೆ. ಛಬ್ಬಿ ಗ್ರಾಮದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5p48hs215m8hwn7vvxgyt5p,imgname-fotojet---2025-09-21t180335.851-1758458038050.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಮೇ.22):&lt;/strong&gt; ಶೆಡ್&zwnj;ನಲ್ಲಿ ಮೊಬೈಲ್&zwnj; ಚಾರ್ಜ್&zwnj; ಹಾಕಬೇಡ ಎಂದ ಮೇಸ್ತ್ರಿಯನ್ನೇ ಕಟ್ಟಡ ಕಾರ್ಮಿಕ ಕಬ್ಬಿಣದ ರಾಡ್&zwnj;ನಿಂದ ಹೊಡೆದು ಕೊಲೆ ಮಾಡಿದ ಘಟನೆ ತಡರಾತ್ರಿ ತಾಲೂಕಿನ ರೇವಡಿಹಾಳದಲ್ಲಿ ನಡೆದಿದೆ. ಛಬ್ಬಿ ಗ್ರಾಮದ ದಾದಾಪೀರ ಕೋಲಕಾರ (38) ಹ*ತ್ಯೆಗೀಡಾದ ವ್ಯಕ್ತಿ. ಈತನ ಅಳಿಯ ಹಾಗೂ ಕಾರ್ಮಿಕ ಅಜೀಂ ಜಮಾಖಾನೆ ಹತ್ಯೆ ಮಾಡಿದ್ದು ಇದೀಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.&lt;/p&gt;&lt;p&gt;ದಾದಾಪೀರ ಹಾಗೂ ಅಜೀಂ ಛಬ್ಬಿ ಗ್ರಾಮದವರಾಗಿದ್ದು, ಇಬ್ಬರೂ ಸಂಬಂಧಿಕರೇ (ಮಾವ-ಅಳಿಯ) ಆಗಿದ್ದಾರೆ. ಮಾವ ಸೆಂಟ್ರಿಂಗ್&zwnj; ಮಾಡಿದರೆ, ಅಳಿಯ ಸಹಾಯಕನಾಗಿದ್ದ. ದಾದಾಪೀರ ಅಜೀಂನಿಗೆ ಮುಂಗಡವಾಗಿ ಹಣ ನೀಡಿದ್ದ. ಈ ಕುರಿತು ಸಣ್ಣ ಜಗಳವಾಗಿತ್ತು. ಬಳಿಕ ಶೆಡ್&zwnj;ನಲ್ಲಿ ಮೊಬೈಲ್&zwnj; ಚಾರ್ಜ್&zwnj; ಹಾಕಲು ಅಜೀಂ ತೆರಳಿದಾಗ ದಾದಾಪೀರ ಇಲ್ಲಿ ಚಾರ್ಜ್&zwnj; ಹಾಕಬೇಡ. ಅಲ್ಲಿ ಬೆಲೆಬಾಳುವ ವಸ್ತುಗಳಿರುತ್ತವೆ. ಏನಾದರೂ ಆದರೆ ಸಮಸ್ಯೆ ಎಂದು ಆಕ್ಷೇಪಿಸಿದ್ದಾನೆ. ಇದಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.&lt;/p&gt;&lt;p&gt;ಮಾತಿಗೆ ಮಾತು ಬೆಳೆದು ನಾನು ಕೊಟ್ಟಿರುವ ಮುಂಗಡ ಹಣ ಕೊಡು. ಕೆಲಸಕ್ಕೆ ಬರಬೇಡ ಎಂದು ದಾದಾಪೀರ ಹೇಳಿದನಂತೆ. ಇದರಿಂದ ಕುಪಿತಗೊಂಡ ಅಜೀಂ ತಕ್ಷಣವೇ ಅಲ್ಲೇ ಇದ್ದ ಕಬ್ಬಿಣದ ರಾಡ್&zwnj; ತೆಗೆದುಕೊಂಡು ದಾದಾಪೀರನ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಆತ ಅಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಉಳಿದ ಕಾರ್ಮಿಕರು ಕೆಎಂಸಿಆರ್&zwnj;ಐಗೆ ತೆಗೆದುಕೊಂಡು ಬಂದಿದ್ದಾರೆ. ಆದರೆ, ಅಷ್ಟರೊಳಗೆ ಆತ ಕೊನೆಯುಸಿರೆಳೆದಿದ್ದ ಎಂದು ಪೊಲೀಸ್&zwnj; ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ಆರೋಪಿ ವಶಕ್ಕೆ&lt;/strong&gt;&lt;/h2&gt;&lt;p&gt;ಈ ನಡುವೆ ಪರಾರಿಯಾಗಿದ್ದ ಆರೋಪಿ ಅಜೀಂನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.&lt;/p&gt;]]></content:encoded>
            <category>dharwad</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/worker-killed-over-mobile-charging-row-at-hubballi-gvd/articleshow-37bdk7b"/>
        </item>
        <item>
            <title><![CDATA[ಬೆಂಗಳೂರು ಮುಂಬೈ ನಡುವೆ ಹೊಸ ದ್ವಿಸಾಪ್ತಾಹಿಕ ಎಕ್ಸಪ್ರೆಸ್‌ ರೈಲು ಆರಂಭ, ಸಚಿವ ಜೋಶಿ ಚಾಲನೆ, ವೇಳಾಪಟ್ಟಿ ಇಲ್ಲಿದೆ]]></title>
            <link>https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8</link>
            <guid isPermaLink="true">https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8</guid>
            <pubDate>Sun, 17 May 2026 20:29:20 +0530</pubDate>
            <description><![CDATA[ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಹೊಸ ದ್ವಿಸಪ್ತಾಹಿಕ ವಿಶೇಷ ರೈಲಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದ್ದಾರೆ. ಈ ರೈಲು ಸೇವೆಯು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮತ್ತು ದಾವಣಗೆರೆ ಭಾಗದ ಪ್ರಯಾಣಿಕರಿಗೆ ಮುಂಬೈ ಹಾಗೂ ಪುಣೆಗೆ ಪ್ರಯಾಣಿಸಲು ಹೆಚ್ಚು ಅನುಕೂಲಕರವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krv6zk5wx9t8zxpzhr580ac2,imgname-pralhad-joshi-flags-off-train-1779029757116.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಲ್&zwnj;, ಮುಂಬೈ ನಡುವೆ ಹುಬ್ಬಳ್ಳಿ ಮುಖಾಂತರ ಸಂಚರಿಸುವ ನೂತನ ವಿಶೇಷ ರೈಲಿಗೆ (06557) ಮೇ 17ರಂದು ಸಂಜೆ ನಗರದ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ ತೋರಿದರು.&lt;/p&gt;&lt;h2&gt;ಯಾವ ಊರೆಲ್ಲ ಹಾದು ಹೋಗಲಿದೆ?&lt;/h2&gt;&lt;p&gt;ಬೆಂಗಳೂರಿನಿಂದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ಮುಂಬೈಗೆ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಸಂಚರಿಸುವಂತೆ ಜೋಶಿ ಮನವಿ ಮೇರೆಗೆ ಈ ರೈಲಿಗೆ ಅನುಮೋದನೆ ನೀಡಲಾಗಿತ್ತು. ಈ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲು ರೈಲು ಮಾರ್ಗದ (16553/16554) ಮೇ 23ರಿಂದ ಬೆಂಗಳೂರು ಮತ್ತು ಮೇ 24ರಿಂದ ಮುಂಬೈನಿಂದ ಪ್ರಾರಂಭವಾಗಲಿದೆ.&lt;/p&gt;&lt;h2&gt;ಯಾವಾಗ ಎಲ್ಲಿಂದ ಹೊರಡಲಿದೆ?&lt;/h2&gt;&lt;p&gt;ಪ್ರತಿ ಶನಿವಾರ ಮತ್ತು ಮಂಗಳವಾರ ಬೆಂಗಳೂರಿನಿಂದ ಪ್ರತಿ ಭಾನುವಾರ ಮತ್ತು ಬುಧವಾರ ಮುಂಬೈನಿಂದ ರೈಲು ಸಂಚರಿಸಲಿದೆ. ಈ ಹೊಸ ರೈಲು ಸೇವೆಯು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ದಾವಣಗೆರೆ ಭಾಗದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕಾಗಿ ಮುಂಬೈ ಹಾಗೂ ಪುಣೆಗೆ ಪ್ರಯಾಣಿಸುವವರಿಗೆ ವರದಾನವಾಗಲಿದೆ.&lt;/p&gt;&lt;p&gt;ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಚಿವ ಪ್ರಹ್ಲಾದ ಜೋಶಿ ಅವರು, ಪ್ರಧಾನಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ತುಂಬುತ್ತಿದ್ದು, ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಸುಗಮ, ಸುರಕ್ಷಿತ ಹಾಗೂ ವೇಗದಾಯಕವಾಗುತ್ತಿದೆ. ಕರ್ನಾಟಕದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ನಮ್ಮಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು ರಾಜ್ಯದ ಪ್ರತಿಯೊಂದು ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ,ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ ,ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಸಮಸ್ತ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ಹುಬ್ಬಳ್ಳಿ ಮುಖಾಂತರ ಸಂಪರ್ಕದ ಹೊಸ ಕ್ರಾಂತಿ!&amp;nbsp;ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿಯ ಮೂಲಕ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲು ಪ್ರಾರಂಭ.ಇಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್, ಮುಂಬೈ ನಡುವೆ&hellip; pic.twitter.com/NddQEBPea4&lt;/p&gt;&lt;p&gt;&mdash; Pralhad Joshi (@JoshiPralhad) May 17, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8"/>
        </item>
        <item>
            <title><![CDATA['ಇದು ಬೊಂಬೆಯಾಟವಯ್ಯ..' ನಿಜವಾಯ್ತು ಬೊಂಬೆ ಭವಿಷ್ಯ! ಸಿಎಂ ಕುರ್ಚಿ ಬದಲಾವಣೆಗೆ ಮುಂಚೆಯೇ ನುಡಿ!]]></title>
            <link>https://kannada.asianetnews.com/gallery/state/clay-doll-s-prediction-comes-true-karnataka-cm-change-buzz-linked-to-dharwad-village-ritual-rav-5t6c3nq</link>
            <guid isPermaLink="true">https://kannada.asianetnews.com/gallery/state/clay-doll-s-prediction-comes-true-karnataka-cm-change-buzz-linked-to-dharwad-village-ritual-rav-5t6c3nq</guid>
            <pubDate>Fri, 29 May 2026 12:18:45 +0530</pubDate>
            <description><![CDATA[&lt;p&gt;ಧಾರವಾಡದ ಹನುಮನಕೊಪ್ಪ ಗ್ರಾಮದಲ್ಲಿ ಯುಗಾದಿ ದಿನ ಮಣ್ಣಿನ ಬೊಂಬೆ ನೀಡಿದ್ದ ಭವಿಷ್ಯ ಈಗ ನಿಜವಾಗ್ತಿದೆಯಾ? ಸಿಎಂ ಬದಲಾವಣೆ ಚರ್ಚೆ ನಡುವೆ ವೈರಲ್ ಆದ ಭಯಾನಕ ಸಂಪ್ರದಾಯದ ರೋಚಕ ಕಥೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kss6yrr0x7m0zjcksa1w9c7b,imgname-----------------------2026-05-29t120144.837-1780036363008.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡದ ಹನುಮನಕೊಪ್ಪ ಗ್ರಾಮದಲ್ಲಿ ಯುಗಾದಿ ದಿನ ಮಣ್ಣಿನ ಬೊಂಬೆ ನೀಡಿದ್ದ ಭವಿಷ್ಯ ಈಗ ನಿಜವಾಗ್ತಿದೆಯಾ? ಸಿಎಂ ಬದಲಾವಣೆ ಚರ್ಚೆ ನಡುವೆ ವೈರಲ್ ಆದ ಭಯಾನಕ ಸಂಪ್ರದಾಯದ ರೋಚಕ ಕಥೆ!&lt;/p&gt;&lt;img&gt;&lt;p&gt;ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿವರ್ಷ ಯುಗಾದಿ ಅಮವಾಸ್ಯೆ ದಿನ ನಡೆಯುವ ವಿಚಿತ್ರ ಆಚರಣೆ ಇದೀಗ ಮತ್ತೆ ರಾಜ್ಯದ ಗಮನ ಸೆಳೆದಿದೆ. ಹಳ್ಳದ ಮಣ್ಣಿನಿಂದ ನಾಲ್ಕು ದಿಕ್ಕುಗಳಿಗೆ ನಾಲ್ಕು ಬೊಂಬೆಗಳನ್ನು ನಿರ್ಮಿಸಿ, ಮರುದಿನ ಬೆಳಿಗ್ಗೆ ಗ್ರಾಮಸ್ಥರು ಅವುಗಳ ಸ್ಥಿತಿಯನ್ನು ಪರಿಶೀಲಿಸುವ ಪದ್ಧತಿ ವರ್ಷಗಳಿಂದ ನಡೆದುಕೊಂಡು ಬಂದಿದೆ.ಸ&lt;/p&gt;&lt;img&gt;&lt;p&gt;ಯಾವ ದಿಕ್ಕಿನ ಬೊಂಬೆಗೆ ಪೆಟ್ಟು ಬೀಳುತ್ತದೆಯೋ, ಆ ದಿಕ್ಕಿನ ನಾಯಕನಿಗೆ ದೊಡ್ಡ ಸಂಕಷ್ಟ ಅಥವಾ ರಾಜಕೀಯ ಬದಲಾವಣೆ ಕಾದಿದೆ ಎಂಬ ನಂಬಿಕೆ ಗ್ರಾಮಸ್ಥರದ್ದು. ಈ ಬಾರಿ ಕರ್ನಾಟಕ ದಿಕ್ಕಿನ ಬೊಂಬೆಗೆ ಪೆಟ್ಟಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯ ಸೂಚನೆ ಎಂದು ಜನರು ಚರ್ಚೆ ಆರಂಭಿಸಿದ್ದರು.&lt;/p&gt;&lt;img&gt;&lt;p&gt;ಬೊಂಬೆಗೆ ಪೆಟ್ಟಾದ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಗರಿಗೆದರಿದ್ದು, ಹನುಮನಕೊಪ್ಪದ ಬೊಂಬೆ ಭವಿಷ್ಯ ಮತ್ತೆ ವೈರಲ್ ಆಗಿದೆ. 'ಈ ಬಾರಿ ದೊಡ್ಡ ನಾಯಕನ ಸ್ಥಾನ ಕದಿಯಲಿದೆ' ಎಂದು ಗ್ರಾಮಸ್ಥರು ಹೇಳಿದ್ದ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಕುರಿತ ರಾಜಕೀಯ ಚಟುವಟಿಕೆಗಳು ವೇಗ ಪಡೆದಿರುವ ಬೆನ್ನಲ್ಲೇ, 'ಬೊಂಬೆ ಹೇಳಿದ್ದು ನಿಜವಾಯ್ತಾ?' ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ಗ್ರಾಮಸ್ಥರ ಪ್ರಕಾರ, ಈ ಆಚರಣೆಯ ಹಿಂದೆ ಹಲವು ದಶಕಗಳ ವಿಚಿತ್ರ ಘಟನೆಗಳ ಸರಮಾಲೆಯಿದೆ. ಹಿಂದೆ ಉತ್ತರ ದಿಕ್ಕಿನ ಬೊಂಬೆಗೆ ಪೆಟ್ಟಾಗಿದ್ದ ವರ್ಷದಲ್ಲೇ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಡೆದಿತ್ತು ಎನ್ನಲಾಗುತ್ತದೆ.&lt;/p&gt;&lt;img&gt;&lt;p&gt;ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧಿಕಾರ ಬದಲಾವಣೆಗೂ ಮುನ್ನ ಬೊಂಬೆ ಮುನ್ಸೂಚನೆ ನೀಡಿತ್ತು ಎಂಬ ನಂಬಿಕೆ ಸ್ಥಳೀಯರಲ್ಲಿ ಗಟ್ಟಿಯಾಗಿದೆ. ಹೀಗಾಗಿ ಈ ಆಚರಣೆಯನ್ನು ಕೇವಲ ಮೂಢನಂಬಿಕೆ ಎಂದು ತಳ್ಳಿ ಹಾಕದ ಜನರು, ಪ್ರತಿವರ್ಷವೂ ಭಕ್ತಿಭಾವದಿಂದ &ldquo;ಫಲ ಹಾಕುವ&rdquo; ಸಂಪ್ರದಾಯ ಮುಂದುವರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಈ ವರ್ಷದ ಬೊಂಬೆ ಭವಿಷ್ಯ ಈಗ ರಾಜ್ಯ ರಾಜಕೀಯದ ಹೈವೋಲ್ಟೇಜ್ ಚರ್ಚೆಯಾಗಿದೆ. ಕರ್ನಾಟಕ ನಾಯಕನ ಬೊಂಬೆಗೆ ಪೆಟ್ಟು ಎಂಬ ವಿಚಾರ ಹೊರಬಿದ್ದ ಬಳಿಕ, ಮುಖ್ಯಮಂತ್ರಿ ಕುರ್ಚಿ ಕಾದಾಟಕ್ಕೂ ಇದು ಸಂಬಂಧವಿದೆಯೇ ಎಂಬ ಕುತೂಹಲ ಹೆಚ್ಚಿದೆ. ಹನುಮನಕೊಪ್ಪದ ಮಣ್ಣಿನ ಬೊಂಬೆಗಳು ಹೇಳುವ ಭವಿಷ್ಯ ಕೇವಲ ಯಾದೃಚ್ಛಿಕವೇ? ಅಥವಾ ನಿಜವಾಗಿಯೂ ರಾಜಕೀಯ ಭೂಕಂಪದ ಮುನ್ಸೂಚನೆಯೇ? ಎಂಬ ಪ್ರಶ್ನೆ ಈಗ ಜನರನ್ನು ಕಾಡತೊಡಗಿದೆ.&lt;/p&gt;]]></content:encoded>
            <category>dharwad</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/clay-doll-s-prediction-comes-true-karnataka-cm-change-buzz-linked-to-dharwad-village-ritual-rav-5t6c3nq"/>
        </item>
        <item>
            <title><![CDATA[ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ರಾಜ್ಯದಲ್ಲೇ ಮೊದಲ ಬಾರಿಗೆ ಮೊಬೈಲ್ ಕಮಾಂಡ್ ಪೋಸ್ಟ್ ವಾಹನ ನಿಯೋಜನೆ]]></title>
            <link>https://kannada.asianetnews.com/karnataka-districts/hubballi-airport-becomes-first-in-karnataka-to-deploy-high-tech-mobile-command-post-vehicle-gdp/articleshow-f6p1nta</link>
            <guid isPermaLink="true">https://kannada.asianetnews.com/karnataka-districts/hubballi-airport-becomes-first-in-karnataka-to-deploy-high-tech-mobile-command-post-vehicle-gdp/articleshow-f6p1nta</guid>
            <pubDate>Tue, 19 May 2026 12:41:43 +0530</pubDate>
            <description><![CDATA[ಹುಬ್ಬಳ್ಳಿ ವಿಮಾನ ನಿಲ್ದಾಣವು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಅತ್ಯಾಧುನಿಕ 'ಮೊಬೈಲ್ ಕಮಾಂಡ್ ಪೋಸ್ಟ್' ವಾಹನವನ್ನು ಪಡೆದಿದೆ. ರಾಜ್ಯದಲ್ಲೇ ಇಂತಹ ಸೌಲಭ್ಯ ಪಡೆದ ಮೊದಲ ವಿಮಾನ ನಿಲ್ದಾಣ ಇದಾಗಿದ್ದು, ಈ ವಾಹನವು ಸುಧಾರಿತ ಸಂವಹನ ಮತ್ತು 360-ಡಿಗ್ರಿ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzh0smrk1cgtgzwn4yjaqfa,imgname-mobile-command-post-vehicle-1779174499992.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ&lt;/strong&gt;: ತುರ್ತು ಪರಿಸ್ಥಿತಿಗಳು, ಅಪಘಾತಗಳು ಅಥವಾ ಅಪಹರಣದಂತಹ ಕ್ಲಿಷ್ಟಕರ ರಕ್ಷಣಾ ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿಭಾಯಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ 'ಮೊಬೈಲ್ ಕಮಾಂಡ್ ಪೋಸ್ಟ್' (MCP) ವಾಹನವನ್ನು ನಿಯೋಜಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ವ್ಯಾಪ್ತಿಯಲ್ಲಿ ಇಂತಹ ಹೈಟೆಕ್ ಸೌಲಭ್ಯವನ್ನು ಪಡೆದುಕೊಂಡ ರಾಜ್ಯದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಹುಬ್ಬಳ್ಳಿ ಪಾತ್ರವಾಗಿದೆ.&lt;/p&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಅವರು, ಸುಮಾರು 87 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮೊಬೈಲ್ ವಾಹನವನ್ನು ಸಿದ್ಧಪಡಿಸಲಾಗಿದ್ದು, ಇದರೊಳಗೆ ಒಂದೇ ಸಲಕ್ಕೆ 10 ಜನರು ಕುಳಿತು ಕಾರ್ಯನಿರ್ವಹಿಸಬಹುದಾದ ಆಸನ ಸಾಮರ್ಥ್ಯವಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೇ ಮೊದಲ ಆದ್ಯತೆ ಏಕೆ?&lt;/h2&gt;&lt;p&gt;ಪ್ರಸ್ತುತ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಕರ್ನಾಟಕದಲ್ಲಿ ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ ಮತ್ತು ಮೈಸೂರು ಸೇರಿದಂತೆ ಒಟ್ಟು ನಾಲ್ಕು ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿದೆ. ಇವುಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವೇ ಅತ್ಯಂತ ಹೆಚ್ಚು ಪ್ರಯಾಣಿಕರ ಸಂಚಾರವನ್ನು ಹೊಂದಿರುವುದರಿಂದ, ಕಮಾಂಡ್ ಪೋಸ್ಟ್ ವಾಹನದ ನಿಯೋಜನೆಗಾಗಿ ಮೊದಲ ಆದ್ಯತೆಯ ಮೇರೆಗೆ ಇದನ್ನು ಆಯ್ಕೆ ಮಾಡಲಾಗಿದೆ.&lt;/p&gt;&lt;p&gt;ಸುಧಾರಿತ ಸಂವಹನ ಮತ್ತು ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರುವ ಈ ವಾಹನವು, ಯಾವುದೇ ತುರ್ತು ಸಂದರ್ಭ ಎದುರಾದರೂ ಅಧಿಕಾರಿಗಳು ಸ್ಥಳದಲ್ಲೇ ಇದ್ದು ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಸುಸಜ್ಜಿತ ಸಭೆಯ ಕೇಂದ್ರವಾಗಿ (Meeting Hub) ಕಾರ್ಯನಿರ್ವಹಿಸಲಿದೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅಧಿಕಾರಿಗಳು ತಮ್ಮ ಕಚೇರಿಗಳಿಂದ ಕಾರ್ಯನಿರ್ವಹಿಸುವುದು ಕಷ್ಟಕರವಾದಾಗ, ವಿವಿಧ ರಕ್ಷಣಾ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಈ MCP ವಾಹನವು ಪ್ರಮುಖ ಕೊಂಡಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಸುತ್ತಮುತ್ತಲಿನ ಪ್ರದೇಶಗಳ ಮೇಲೆ 360-ಡಿಗ್ರಿ ಕಣ್ಣು!&lt;/h2&gt;&lt;p&gt;ಈ ಕಮಾಂಡ್ ಪೋಸ್ಟ್ ವಾಹನವು ತಾಂತ್ರಿಕವಾಗಿ ಅತ್ಯಂತ ಬಲಿಷ್ಠವಾಗಿದ್ದು, ಈ ಕೆಳಗಿನ ಪ್ರಮುಖ ಸೌಲಭ್ಯಗಳನ್ನು ಹೊಂದಿದೆ:&lt;/p&gt;&lt;h3&gt;ಅಡೆತಡೆಯಿಲ್ಲದ ಸಂವಹನ:&lt;/h3&gt;&lt;p&gt;ವಾಹನವು ವೆರಿ ಹೈ ಫ್ರೀಕ್ವೆನ್ಸಿ (VHF) ಮತ್ತು ಆಲ್ಟ್ರಾ ಹೈ ಫ್ರೀಕ್ವೆನ್ಸಿ (UHF) ಸಂವಹನ ವ್ಯವಸ್ಥೆಗಳನ್ನು ಹೊಂದಿದೆ. ಇದು ಏರ್ ಟ್ರಾಫಿಕ್ ಕಂಟ್ರೋಲ್ (ATC), ಅಗ್ನಿಶಾಮಕ ದಳ ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ನೆರವಾಗುತ್ತದೆ.&lt;/p&gt;&lt;h3&gt;ಸ್ಯಾಟಲೈಟ್ ಲಿಂಕ್:&lt;/h3&gt;&lt;p&gt;ಮೊಬೈಲ್ ನೆಟ್&zwnj;ವರ್ಕ್ ಇಲ್ಲದ ಪ್ರದೇಶಗಳಲ್ಲೂ ಸಂವಹನ ಕಡಿತಗೊಳ್ಳದಂತೆ ತಡೆಯಲು ಇದರಲ್ಲಿ ಉಪಗ್ರಹ ಲಿಂಕ್&zwnj;ಗಳು ಮತ್ತು ಹೈ-ಸ್ಪೀಡ್ ವೈಫೈ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ.&lt;/p&gt;&lt;h3&gt;ನೇರ ದೃಶ್ಯಾವಳಿಗಳ ವೀಕ್ಷಣೆ &amp;nbsp;:&lt;/h3&gt;&lt;p&gt;ವಾಹನದ ಒಳಭಾಗದಲ್ಲಿ ಬೃಹತ್ ವಿಡಿಯೋ ಗೋಡೆಗಳು ಮತ್ತು ಮಲ್ಟಿಪಲ್ ಮಾನಿಟರ್&zwnj;ಗಳನ್ನು ಅಳವಡಿಸಲಾಗಿದೆ. ಇವು ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್&zwnj;ಗಳು ಸೆರೆಹಿಡಿಯುವ ದೃಶ್ಯಗಳನ್ನು ನೇರವಾಗಿ ಪ್ರಸಾರ ಮಾಡುತ್ತವೆ. ಇದು ಅಧಿಕಾರಿಗಳಿಗೆ ವಿಮಾನ ನಿಲ್ದಾಣ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ 360-ಡಿಗ್ರಿ ದೃಶ್ಯಾವಳಿಯನ್ನು ಒದಗಿಸಿ, ನಿಖರ ನಿಗಾ ಇಡಲು ಸಹಾಯ ಮಾಡುತ್ತದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-airport-becomes-first-in-karnataka-to-deploy-high-tech-mobile-command-post-vehicle-gdp/articleshow-f6p1nta"/>
        </item>
        <item>
            <title><![CDATA[Modern Muslim League: ಕಾಂಗ್ರೆಸ್‌ ಆಧುನಿಕ ಮುಸ್ಲಿಂ ಲೀಗ್‌; ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ!]]></title>
            <link>https://kannada.asianetnews.com/politics/prahlad-joshi-criticizes-congress-calls-it-modern-muslim-league-rav/articleshow-fpbbcmg</link>
            <guid isPermaLink="true">https://kannada.asianetnews.com/politics/prahlad-joshi-criticizes-congress-calls-it-modern-muslim-league-rav/articleshow-fpbbcmg</guid>
            <pubDate>Sun, 24 May 2026 07:26:20 +0530</pubDate>
            <description><![CDATA[&lt;p&gt;ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗಲಭೆಕೋರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು ತುಷ್ಟೀಕರಣದ ರಾಜಕಾರಣ ಎಂದು ಆರೋಪಿಸಿ, ಕಾಂಗ್ರೆಸ್ ಪಕ್ಷವನ್ನು 'ಆಧುನಿಕ ಮುಸ್ಲಿಂ ಲೀಗ್' ಎಂದು ಟೀಕಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knhhjx5p4f2zsycpnn9zjadz,imgname-pralhad-joshi-1775484105909.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಮೇ.24): &lt;/strong&gt;ರಾಜ್ಯ ಸರ್ಕಾರ ವಿವಿಧ 52 ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬುದು ಸಾಬೀತಾಗಿದೆ. ಇದು ಕಾಂಗ್ರೆಸ್&zwnj;ನ ತುಷ್ಟೀಕರಣದ ಪರಾಕಾಷ್ಟೆಯಾಗಿದೆ ಎಂದು ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾಂಗ್ರೆಸ್&zwnj; ಆಧುನಿಕ ಮುಸ್ಲಿಂ ಲೀಗ್&zwnj; ಪಕ್ಷವಾಗಿ ಮಾರ್ಪಡುತ್ತಿದೆ ಎಂದು ಕಿಡಿಕಾರಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋರಿಕೆಗೆ ಕನ್ನಡ, ರೈತ ಹಾಗೂ ಹಿಂದೂ ಹೋರಾಟಗಾರರ ಕೆಲವು ಪ್ರಕರಣಗಳನ್ನು ಸೇರಿಸಲಾಗಿದೆ. ಆದರೆ ದೇವಸ್ಥಾನ ಅಪವಿತ್ರಗೊಳಿಸಿದವರು, ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದವರು, ಗಲಭೆ ಸೃಷ್ಟಿಸಿದವರ ವಿರುದ್ಧದ ಗಂಭೀರ ಪ್ರಕರಣಗಳನ್ನು ವಾಪಸ್ ಪಡೆದಿರುವುದು ಸರ್ಕಾರದ ದುರುದ್ದೇಶವನ್ನು ಬಯಲಿಗೆಳೆಯುತ್ತದೆ ಎಂದು ಆರೋಪಿಸಿದರು.&lt;/p&gt;&lt;p&gt;ಹುಬ್ಬಳ್ಳಿಯಲ್ಲಿ ನಡೆದ ಗಲಭೆ, ಹಲ್ಲೆ, ಕಲ್ಲುತೂರಾಟ ಹಾಗೂ ಬೆಂಗಳೂರಿನ ಗಲಭೆ ಪ್ರಕರಣಗಳನ್ನು ಕೈಬಿಡಲು ಸರ್ಕಾರ ಪ್ರಯತ್ನಿಸಿದ್ದು, ಈ ಬಗ್ಗೆ ನ್ಯಾಯಾಲಯವೇ ಪ್ರಶ್ನಿಸಿರುವುದು ಸರ್ಕಾರದ ನಿಲುವಿಗೆ ತೀವ್ರ ಚಾಟಿ ಬೀಸಿದಂತಾಗಿದೆ ಎಂದು ಹೇಳಿದರು.&lt;/p&gt;&lt;p&gt;ರೈತರ, ಕನ್ನಡಪರ ಹೋರಾಟಗಳ ಮೇಲೆ ಹಾಕಿರುವ ಕೇಸ್&zwnj;ಗಳನ್ನು ಹಿಂಪಡೆಯುವುದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ. ಆದರೆ ಗಲಭೆ ಸೃಷ್ಟಿಸಿ ಶಾಂತಿ ಕದಡಿದವರ ಮೇಲಿರುವ ಕೇಸ್&zwnj;ಗಳನ್ನು ಹಿಂಪಡೆಯುವುದು ಸರಿಯಲ್ಲ ಎಂದರು.&lt;/p&gt;&lt;h2&gt;ಮುಸ್ಲಿಂ ಕಾಲನಿಗಳಿಗಷ್ಟೇ ಅನುದಾನ&lt;/h2&gt;&lt;p&gt;ರಾಜ್ಯ ಸರ್ಕಾರ ಕೇವಲ ಮುಸ್ಲಿಂ ಕಾಲನಿಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿದ್ದು, ಅಲ್ಪಸಂಖ್ಯಾತರ ಕಾಲೇಜು, ಶಾಲೆ ಹಾಗೂ ವಸತಿ ನಿಲಯಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಇದು ಕಾಂಗ್ರೆಸ್&zwnj;ನ ಸ್ಪಷ್ಟ ತುಷ್ಟೀಕರಣ ನೀತಿಯ ಸಾಕ್ಷಿ ಎಂದು ಜೋಶಿ ಆರೋಪಿಸಿದರು.&lt;/p&gt;&lt;p&gt;ಕಾಂಗ್ರೆಸ್ ಪಕ್ಷ ಇಂದು ಆಧುನಿಕ ಮುಸ್ಲಿಂ ಲೀಗ್ ಆಗಲು ಹೊರಟಿದೆ. ಅದರ ಚಿಂತನೆಗಳಲ್ಲಿ ಜಿನ್ನಾ ಮನೋಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಟೀಕಿಸಿದರು.&lt;/p&gt;&lt;h3&gt;ಕಾಂಗ್ರೆಸ್&zwnj;ಗೆ ನೀತಿಯೇ ಇಲ್ಲ&lt;/h3&gt;&lt;p&gt;ಎಸ್&zwnj;ಐಆರ್ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಟೀಕಿಸಿದ ಅವರು, 'ರಾಹುಲ್ ಗಾಂಧಿ ಪ್ರತಿದಿನ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ. ಕೇರಳದಲ್ಲಿ ಸ್ವಾಗತಿಸುವ ನೀತಿ, ತಮಿಳುನಾಡಿನಲ್ಲಿ ಮೌನ, ಬೇರೆಡೆ ವಿರೋಧ &ndash; ಕಾಂಗ್ರೆಸ್ ದಿವಾಳಿ ರಾಜಕಾರಣದ ಉದಾಹರಣೆ. ರಾಹುಲ್ ಗಾಂಧಿ ನಿರಂತರ ಸೋಲಿನಿಂದ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.&lt;/p&gt;&lt;p&gt;ವಿಧಾನ ಪರಿಷತ್&zwnj; ಮಾಜಿ ಸದಸ್ಯ ನಾಗರಾಜ ಛಬ್ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ದರೋಡೆಕೋರ ಕಾಂಗ್ರೆಸ್&zwnj;&lt;/strong&gt;&lt;/p&gt;&lt;p&gt;ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್&zwnj; ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ₹10 ತೆರಿಗೆ ಇಳಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಏಕೆ ಇಳಿಸಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು. ಜನನ- ಮರಣ ಪ್ರಮಾಣ ಪತ್ರದ ಬೆಲೆಯನ್ನು 5ರಿಂದ 50ಕ್ಕೆ ರಾಜ್ಯ ಸರ್ಕಾರ ಏರಿಸಿದೆ. ಸತ್ತವರಿಂದಲೂ ಲೂಟಿ ಮಾಡುವ ದರೋಡೆಕೋರ ಸರ್ಕಾರವಿದು ಎಂದು ಕಿಡಿಕಾರಿದರು.&lt;/p&gt;&lt;p&gt;ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೈಲಬೆಲೆ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಇಲ್ಲ-ಸಲ್ಲದ ಆರೋಪ ಮಾಡುತ್ತಾರೆ. ಪ್ರತಿಲೀಟರ್&zwnj; ಪೆಟ್ರೋಲ್&zwnj;ಗೆ ಕೇಂದ್ರದ ತೆರಿಗೆ ₹3 ಇದ್ದರೆ, ರಾಜ್ಯ ಸರ್ಕಾರದ್ದು ₹27.8 ಆಗಿದೆ. ಡೀಸೆಲ್&zwnj;ಗೆ ಕೇಂದ್ರದ ತೆರಿಗೆ ಶೂನ್ಯ. ರಾಜ್ಯದ್ದು ₹14 ಇದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್&zwnj; ಅಧಿಕಾರಕ್ಕೆ ಪೆಟ್ರೋಲ್&zwnj; ತೆರಿಗೆಯಲ್ಲಿ ₹10 ಇಳಿಸುವುದಾಗಿ ಭರವಸೆ ನೀಡಿದ್ದರು. ಅದನ್ನೇಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.&lt;/p&gt;&lt;p&gt;ಕಾಂಗ್ರೆಸ್&zwnj; ಆಡಳಿತಕ್ಕೆ ಬಂದಾಗಿನಿಂದಾಗಿ ಪ್ರತಿಯೊಂದು ವಸ್ತುವಿನ ಬೆಲೆಯನ್ನೂ ಏರಿಸಿದೆ. ಜನನಮರಣ ಪ್ರಮಾಣ ಪತ್ರದ ಮೇಲೂ ಏರಿಸಿಕೊಂಡಿದೆ ಎಂದು ಟೀಕಿಸಿದರು.&lt;/p&gt;&lt;p&gt;&lt;strong&gt;ಇಂಧನ ಸಮಸ್ಯೆ ಇಲ್ಲ&lt;/strong&gt;&lt;/p&gt;&lt;p&gt;ಪೆಟ್ರೋಲ್- ಡೀಸೆಲ್ ಲಭ್ಯತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಮಧ್ಯಪ್ರಾಚ್ಯದ ಅವಲಂಬನೆ ಕಡಿಮೆ ಮಾಡಿ ಈಗ 42 ಮೂಲಗಳಿಂದ ಇಂಧನ ತರಿಸಲಾಗುತ್ತಿದೆ. ವೆಚ್ಚ ಹೆಚ್ಚಾದರೂ ದೇಶದ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/prahlad-joshi-criticizes-congress-calls-it-modern-muslim-league-rav/articleshow-fpbbcmg"/>
        </item>
        <item>
            <title><![CDATA[ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್‌ನಿಂದ ಐಷಾರಾಮಿ ಕಾರು ಉಡುಗೊರೆ ಪಡೆದ ಕರವೇ ಜಿಲ್ಲಾಧ್ಯಕ್ಷಗೆ ಸಿಐಡಿ ನೋಟಿಸ್‌!]]></title>
            <link>https://kannada.asianetnews.com/gallery/karnataka-districts/shivam-associates-scam-shivanand-neelannavar-luxury-car-gift-to-karnataka-rakshana-vedike-leder-under-cid-scanner-gdp-gzbo2ug</link>
            <guid isPermaLink="true">https://kannada.asianetnews.com/gallery/karnataka-districts/shivam-associates-scam-shivanand-neelannavar-luxury-car-gift-to-karnataka-rakshana-vedike-leder-under-cid-scanner-gdp-gzbo2ug</guid>
            <pubDate>Tue, 19 May 2026 17:37:16 +0530</pubDate>
            <description><![CDATA[&lt;p&gt;ಶಿವಂ ಅಸೋಸಿಯೇಟ್ಸ್&zwnj;ನ ₹4500 ಕೋಟಿ ಠೇವಣಿ ವಂಚನೆ ಪ್ರಕರಣವು ಹೊಸ ತಿರುವು ಪಡೆದಿದೆ. ಸಾರ್ವಜನಿಕರ ಹಣದಿಂದ ಪ್ರಭಾವಿ ವ್ಯಕ್ತಿಯೊಬ್ಬರಿಗೆ ₹1.5 ಕೋಟಿ ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಈ ಕುರಿತು ತನಿಖೆ ನಡೆಸುತ್ತಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks01hhp0nx8rf77mkrkn8swz,imgname-shivanand-neelannavar--1--1779191826111.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಂ ಅಸೋಸಿಯೇಟ್ಸ್&zwnj;ನ ₹4500 ಕೋಟಿ ಠೇವಣಿ ವಂಚನೆ ಪ್ರಕರಣವು ಹೊಸ ತಿರುವು ಪಡೆದಿದೆ. ಸಾರ್ವಜನಿಕರ ಹಣದಿಂದ ಪ್ರಭಾವಿ ವ್ಯಕ್ತಿಯೊಬ್ಬರಿಗೆ ₹1.5 ಕೋಟಿ ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಈ ಕುರಿತು ತನಿಖೆ ನಡೆಸುತ್ತಿದೆ. &amp;nbsp;&lt;/p&gt;&lt;img&gt;&lt;p&gt;ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧದ ₹4500 ಕೋಟಿ ಬಹುಕೋಟಿ ಠೇವಣಿ ವಂಚನೆ ಪ್ರಕರಣದ ತನಿಖೆ ಹೊಸ ತಿರುವು ಪಡೆದಿದ್ದು, ಸಾರ್ವಜನಿಕರ ಠೇವಣಿ ಹಣದಿಂದ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಲಾಗಿದೆಯೇ ಎಂಬ ಅನುಮಾನ ಮೂಡಿದೆ. ಇದನ್ನು ಸಿಐಡಿ ಗಂಭೀರವಾಗಿ ಪರಿಗಣಿಸಿದೆ.&lt;/p&gt;&lt;img&gt;&lt;p&gt;ಕಳೆದ ಡಿ.27ರಂದು ಬೆಳಗಾವಿಯ ಸರದಾರ್ಸ್ ಕಾಲೇಜು ಮೈದಾನದಲ್ಲಿ ನಡೆದ ಬೆಳಗಾವಿ ಉತ್ಸವ ಕಾರ್ಯಕ್ರಮವನ್ನು ಶಿವಂ ಅಸೋಸಿಯೇಟ್ಸ್ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ದ ಜಿಲ್ಲಾಧ್ಯಕ್ಷ ಆರ್.ಅಭಿಲಾಷ್&zwnj;ಗೆ ಸುಮಾರು ₹1.5 ಕೋಟಿ ಮೌಲ್ಯದ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾಗಿದೆ. ಈ ಕಾರು ಸಾರ್ವಜನಿಕರ ಠೇವಣಿ ಹಣದಿಂದ ಖರೀದಿಸಿ ನೀಡಲಾಗಿದೆಯೇ ಎಂಬ ಶಂಕೆ ಹಿನ್ನೆಲೆಯಲ್ಲಿ ಕಾರಿನ ಮೂಲ, ಹಣದ ಹರಿವು ಹಾಗೂ ಉಡುಗೊರೆ ವ್ಯವಹಾರದ ಕುರಿತು ತನಿಖೆ ನಡೆಸಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.&lt;/p&gt;&lt;img&gt;&lt;p&gt;ಸಿಐಡಿ ಅಧಿಕಾರಿಗಳು ಕಾರ್&zwnj;ನ ತನಿಖೆಗೆ ಅಗತ್ಯವಾಗಬಹುದು. ಆದ್ದರಿಂದ ಅದನ್ನು ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕೆಂದು ಆರ್.ಅಭಿಲಾಷ್&zwnj;ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಐಷಾರಾಮಿ ಕಾರ್&zwnj; ಸ್ವೀಕರಿಸಿದ ಸಂದರ್ಭದ ಫೋಟೋ ಹಾಗೂ ವಿಡಿಯೋಗಳನ್ನು ಅಭಿಲಾಷ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆ ಪೋಸ್ಟ್&zwnj;ಗಳನ್ನು ಅಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಆಯೋಜಿಸಿದ್ದ ಸ್ವಚ್ಛ ಬೆಳಗಾವಿ ಸಂಭ್ರಮ ಕಾರ್ಯಕ್ರಮದಲ್ಲಿಯೂ ಆಯೋಜಕರಿಗೆ ಕಾರು ಉಡುಗೊರೆ ನೀಡುವುದಾಗಿ ಶಿವಾನಂದ ನೀಲಣ್ಣವರ ಭರವಸೆ ನೀಡಿದ್ದರು. ಆ ಭರವಸೆ ಪ್ರಕಾರ ಕಾರು ನೀಡಲಾಗಿದೆಯೇ? ಅಥವಾ ಕೇವಲ ಘೋಷಣೆಯಷ್ಟೇ ಆಗಿತ್ತೇ? ಎಂಬುದರ ತನಿಖೆ ವೇಳೆ ಪರಿಶೀಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.&lt;/p&gt;&lt;img&gt;&lt;p&gt;ಸಿಐಡಿ ಅಧಿಕಾರಿಗಳು ಈಗ ಶಿವಂ ಅಸೋಸಿಯೇಟ್ಸ್ ಮೂಲಕ ಸಂಗ್ರಹಿಸಲಾದ ಹಣ ಎಲ್ಲೆಲ್ಲಿ ಬಳಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಣ ಬಳಸಲಾಗಿದೆಯೇ? ಉಡುಗೊರೆಗಳ ರೂಪದಲ್ಲಿ ಪ್ರಭಾವಿ ವ್ಯಕ್ತಿಗಳಿಗೆ ವಿತರಿಸಲಾಗಿದೆಯೇ? ಎಂಬ ಅಂಶಗಳನ್ನೂ ತನಿಖೆ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ವಹಿವಾಟಿನ ಶಂಕೆ ವ್ಯಕ್ತವಾಗಿದ್ದು, 35 ಸಾವಿರಕ್ಕೂ ಹೆಚ್ಚು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಶಿವಾನಂದ ನೀಲಣ್ಣವರ ಸದ್ಯ ಸಿಐಡಿ ಕಸ್ಟಡಿಯಲ್ಲಿದ್ದು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.&lt;/p&gt;&lt;img&gt;&lt;p&gt;ಶಿವಾನಂದ ನೀಲಣ್ಣನವರ್ ವಿರುದ್ಧ ಬೆಳಗಾವಿ ಪೊಲೀಸರು ಅಲರ್ಟ್ ಆಗಿ ಈತನ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಂತೆ ಎಚ್ಚೆತ್ತ ಕಡೂರು ಪೊಲೀಸರು ಠಾಣೆಗೆ ನೀಡಿದ್ದ ನಾಮಫಲಕದಲ್ಲಿದ್ದ ಶಿವಾನಂದ ನೀಲಣ್ಣವರ್ ಹೆಸರನ್ನು ಅಳಿಸಿ ಪೊಲೀಸ್ ಇಲಾಖೆ ಸಹಾಯವಾಣಿ ತುರ್ತು ಸಂಖ್ಯೆಗಳನ್ನು ನಮೂದಿಸಿದೆ. 2 ತಿಂಗಳ ಹಿಂದಷ್ಟೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಯುವ ಜಾಗೃತಿ ಹೆಸರಲ್ಲಿ ದೊಡ್ಡ ಕಾರ್ಯಕ್ರಮವನ್ನು ಶಿವಾನಂದ ನೀಲಣ್ಣವರ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಪಟ್ಟಣದ ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಶಿವಾನಂದ ನೀಲಣ್ಣವರ್ ಫ್ಲೆಕ್ಸ್ ಗಳು ರಾರಾಜಿಸುತ್ತಿತ್ತು.&lt;/p&gt;&lt;img&gt;&lt;p&gt;ಅಂದಿನ ವೇದಿಕೆ ಕಾರ್ಯಕ್ರಮದಲ್ಲಿ ಮನಸ್ಸು ಮಾಡಿದರೆ 224 ಕ್ಷೇತ್ರಗಳಿಗೆ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಿಸಿ ನಾನು ರಾಜ್ಯದ ಸಿ.ಎಂ. ಆಗಬಲ್ಲೆ ಎಂಬ ಶಿವಾನಂದ ನೀಲಣ್ಣವರ್ ಮಾತುಗಳು ಸಾಕಷ್ಟು ವೈರಲ್ ಆಗಿತ್ತು.ಕೆಲ ದಿನಗಳ ಹಿಂದೆ ಕಡೂರುಠಾಣೆಗೆ ಬೋರ್ಡ್ ನೀಡಿ ಕೊಡುಗೆ ಶಿವಾನಂದ ನೀಲಣ್ಣವರ್, ಸಮಾಜ ಸೇವಕ ಎಂದು ಬರೆಸಲಾಗಿತ್ತು. ವಂಚನೆ ಪ್ರಕರಣದ ಹಿನ್ನಲೆಯಲ್ಲಿ ಎಚ್ಚೆತ್ತ ಪೊಲೀಸರು ಆತನ ಹೆಸರಿನ ಜಾಗಕ್ಕೆ ರೇಡಿಯಂ ಸ್ಟಿಕರ್ ನಿಂದ ಮುಚ್ಚಿ, ತುರ್ತು ಕರೆ 112 ಮತ್ತು ಮಕ್ಕಳ ಸಹಾಯವಾಣಿ 1098 ನಂಬರ್ ಬರೆಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/shivam-associates-scam-shivanand-neelannavar-luxury-car-gift-to-karnataka-rakshana-vedike-leder-under-cid-scanner-gdp-gzbo2ug"/>
        </item>
        <item>
            <title><![CDATA[ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಕುಷ್ಟಗಿಯವರೆಗೆ ವಿಸ್ತರಿಸಲು ಹೆಚ್ಚಿದ ಒತ್ತಾಯ, ಪ್ರಯೋಜನವೇನು?]]></title>
            <link>https://kannada.asianetnews.com/gallery/karnataka-districts/demand-mounts-to-extend-bengaluru-hubballi-superfast-express-to-kushtagi-gdp-kiasa7k</link>
            <guid isPermaLink="true">https://kannada.asianetnews.com/gallery/karnataka-districts/demand-mounts-to-extend-bengaluru-hubballi-superfast-express-to-kushtagi-gdp-kiasa7k</guid>
            <pubDate>Wed, 27 May 2026 09:37:44 +0530</pubDate>
            <description><![CDATA[&lt;p&gt;ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯು ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk9bp62qv9cthntcjy9jaten,imgname-chittur-railway-station-1773062002775.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯು ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಕುಷ್ಟಗಿ: ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಒತ್ತಾಯಿಸಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ಅವರಿಗೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದರು. ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿರೇಶ ಬಂಗಾರಶೆಟ್ಟರ ಮಾತನಾಡಿ, ಬೆಂಗಳೂರು ಹುಬ್ಬಳ್ಳಿ ಚಲಿಸುವ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸಬೇಕು ಎಂದರು.&lt;/p&gt;&lt;img&gt;&lt;p&gt;ಗದಗ ರೈಲ್ವೆ ಹೋರಾಟ ಸಮಿತಿಯವರು ಈಗಾಗಲೇ ಆಂದೋಲನ ಪ್ರಾರಂಭಿಸಿದ್ದು, ಈ ರೈಲನ್ನು ಗದಗಕ್ಕೆ ವಿಸ್ತರಿಸುವಂತೆ ಒತ್ತಾಯಿಸಿ ಹಲವಾರು ಮನವಿ ಸಲ್ಲಿಸಿದ್ದಾರೆ. ಮುಂದಿನ ಹಂತವಾಗಿ, ಈ ರೈಲನ್ನು ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಗೆ ವಿಸ್ತರಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.ಈ ಸೌಲಭ್ಯ ಕುಷ್ಟಗಿ ತಾಲೂಕು ಮಾತ್ರವಲ್ಲದೆ,ಗಜೇಂದ್ರಗಡ, ಇಲಕಲ್, ಯಲಬುರ್ಗಾ, ಕುಕನೂರು ಮತ್ತು ಗದಗ ಜಿಲ್ಲೆಯ ಜನರಿಗೂ ಪ್ರಯೋಜನ ನೀಡುತ್ತದೆ. ಇದು ವೈದ್ಯಕೀಯ ಅಗತ್ಯ, ಹೈಕೋರ್ಟ್, ಶಿಕ್ಷಣ ಮತ್ತು ವ್ಯವಹಾರಕ್ಕೆ ಅನುಕೂಲಕರವಾಗಲಿದೆ ಕಾರ್ಮಿಕರಿಗೂ ಇದು ಪ್ರಯೋಜನ ನೀಡುತ್ತದೆ ಎಂದರು.&lt;/p&gt;&lt;img&gt;&lt;p&gt;ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್&zwnj;ಗಳಿಂದ ಅಕ್ರಮವಾಗಿ ಅಧಿಕ ಶುಲ್ಕ ವಿಧಿಸುವುದನ್ನು ಇದು ತಡೆಯುತ್ತದೆ. ಬೆಂಗಳೂರು-ಹುಬ್ಬಳ್ಳಿ ರೈಲನ್ನು ಗದಗ ಮೂಲಕ ಕುಷ್ಟಗಿಗೆ ವಿಸ್ತರಿಸುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಸರ್ಕಾರಿ ಮತ್ತು ಖಾಸಗಿ ಬಸ್&zwnj;ಗಳಲ್ಲಿ ಬೆಂಗಳೂರಿಗೆ ಪ್ರತಿ ದಿನ ಪ್ರಯಾಣಿಸುವ ಜನರಿಗೆ ಸಹಕಾರಿಯಾಗಲಿದೆ ಎಂದರು. ಕಳೆದ ವರ್ಷ ಮೇ 15ರಂದು ಗದಗ-ವಾಡಿ ರೈಲ್ವೆ ಯೋಜನೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಪರ್ಕ ಸಕ್ರಿಯಗೊಳಿಸಿದ ನಂತರ, ಕುಷ್ಟಗಿ-ಬೆಂಗಳೂರು ಸಂಪರ್ಕದ ಬೇಡಿಕೆ ಬಲವಾಗಿ ಕೇಳಿಬರುತ್ತಿದ್ದು, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಹಲವಾರು ಮನವಿ ಸಲ್ಲಿಸಲಾಗಿದೆ. ಕುಷ್ಟಗಿಗೆ ರೈಲು ಸೇವೆ ಆರಂಭವಾಗಿ ವರ್ಷ ಕಳೆದರೂ ಮತ್ತೊಂದು ರೈಲು ಸಂಪರ್ಕ ಪಡೆಯುವ ಕನಸು ಇನ್ನೂ ನನಸಾಗಿಲ್ಲ ಎಂದರು.&lt;/p&gt;&lt;img&gt;&lt;p&gt;ಕುಷ್ಟಗಿಯಿಂದ ಹುಬ್ಬಳ್ಳಿಗೆ ಒಂದೇ ಒಂದು ರೈಲು ಚಲಿಸುತ್ತದೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ನಿಲ್ದಾಣ ಬೆಳಗ್ಗೆ 6-7 ಮತ್ತು ರಾತ್ರಿ 8-9 ರವರೆಗೆ ಮಾತ್ರ ಪ್ರಯಾಣಿಕರು ಇರುತ್ತಿದ್ದು ಉಳಿದ ಸಮಯಗಳಲ್ಲಿ ನಿರ್ಜನ ಪ್ರದೇಶವಾಗಿರುತ್ತದೆ. ಆದ್ದರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ಮತ್ತೊಂದು ರೈಲು ಮತ್ತು ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಪರ್ಕದ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಈ ಕುರಿತು ಈಗಾಗಲೆ ಸಂಬಂಧಿಸಿದ ಸಚಿವರಿಗೆ ಹಾಗೂ ಸಂಸದರಿಗೂ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಶ್ರೀಧರ ಘೋರ್ಪಡೆ, ಮಂಜುನಾಥ ಮಹಾಲಿಂಗಪೂರ, ಬಸವರಾಜ ಸಾಲಿಮಠ ಸೇರಿದಂತೆ ಅನೇಕರು ಇದ್ದರು.&lt;/p&gt;&lt;img&gt;&lt;p&gt;ಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಕುಡಿಯುವ ನೀರಿನ ಸೌಲಭ್ಯ, ಕಳ್ಳತನ ಪ್ರಕರಣಗಳ ತಡೆಗೆ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಬೇಕಿದೆ, ರೈಲ್ವೆ ಪೊಲೀಸರನ್ನು ನಿಯೋಜಿಸಬೇಕು ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ, ನಿರಂತರ ವಿದ್ಯುತ್ ಒದಗಿಸುವುದು, ಕುಷ್ಟಗಿಯಿಂದ ಹುಬ್ಬಳ್ಳಿಗೆ ಬೆಳಗ್ಗೆ 7 ಗಂಟೆಗೆ ರೈಲು ಓಡಿಸಬೇಕಿದೆ, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮೊದಲನೆ ಪ್ಲಾಟ್ ಫಾರಂಗೆ ನಿಲ್ಲುವಂತೆ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.&lt;/p&gt;&lt;p&gt;ಕುಷ್ಟಗಿ ಬೆಂಗಳೂರು ರೈಲು ಸೇವೆ ಹಾಗೂ ಕುಷ್ಟಗಿ ಹುಬ್ಬಳ್ಳಿ ಇನ್ನೊಂದು ರೈಲು ಸೇವೆ ಜತೆಗೆ ಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಕುರಿತು ಕೊಪ್ಪಳ ಸಂಸದರು ಒತ್ತಾಯಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ತುರ್ತು ಸಭೆ ಮಾಡಿ ಸಾಧಕ ಭಾಧಕ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ತಿಳಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/demand-mounts-to-extend-bengaluru-hubballi-superfast-express-to-kushtagi-gdp-kiasa7k"/>
        </item>
        <item>
            <title><![CDATA[Love Jihad ಎಲ್ಲರಂತಲ್ಲ ನನ್ನ... ಎಂದು ಹಿಂದೆ ಹೋದವಳಿಗೆ ಬೆತ್ತಲು ಮಾಡಿದ! ಹಿಂದೂ ಸಂಘಟನೆಗೆ ಸಿಕ್ಕಿಬಿದ್ದ ಹುಬ್ಬಳ್ಳಿಯವ]]></title>
            <link>https://kannada.asianetnews.com/crime/another-love-jihad-in-hubballi-hindu-organisation-found-muslim-youth-suc/articleshow-km3osfh</link>
            <guid isPermaLink="true">https://kannada.asianetnews.com/crime/another-love-jihad-in-hubballi-hindu-organisation-found-muslim-youth-suc/articleshow-km3osfh</guid>
            <pubDate>Mon, 25 May 2026 12:15:42 +0530</pubDate>
            <description><![CDATA[ಹುಬ್ಬಳ್ಳಿಯಲ್ಲಿ 'ಲವ್ ಜಿಹಾದ್' ಪ್ರಕರಣಗಳು ಹೆಚ್ಚುತ್ತಿದ್ದು, ಐಷಾರಾಮಿ ಜೀವನದ ಆಮಿಷವೊಡ್ಡಿ ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಲಾಗುತ್ತಿದೆ. ಮಾದಕ ದ್ರವ್ಯ ನೀಡಿ, ಅಶ್ಲೀಲ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡುವ ಜಾಲದ ಬಗ್ಗೆ ಈ ಲೇಖನ ಎಚ್ಚರಿಸುತ್ತದೆ. ಇತ್ತೀಚೆಗೆ ನಡೆದ ಸಾಜಿದ್ ಉಣಕಲ್ ಪ್ರಕರಣವೂ ಸೇರಿದಂತೆ, ಇಂತಹ ಘಟನೆಗಳ ಬಗ್ಗೆ ಪೊಲೀಸರು ಮತ್ತು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksexy7gvrbzwxpdxdxb5jq20,imgname-love-jihad-1779691363867.jpg" type="image/jpeg" height="390" width="690"/>
            <content:encoded><![CDATA[&lt;p&gt;ಥಳುಕು ಬಳುಕು, ಬಣ್ಣಬಣ್ಣದ ಮಾತು, ಐಷಾರಾಮಿ ಕಾರು, ಬೈಕು, ಹೀರೋಗಳ ಸ್ಟೈಲ್​ನಲ್ಲಿ ಹೇರ್​ಸ್ಟೈಲ್​, ದಿನವೂ ಪಿಕ್​ ಅಪ್​ ಡ್ರಾಪ್​, ಶ್ರೀಮಂತಿಕೆ, ಇಂಥ ಕನಸನ್ನು ಕಾಣುವುದು ಎಲ್ಲಿಯವರೆಗೆ ಹಿಂದೂ ಯುವತಿಯರು ಬಿಡುವುದಿಲ್ಲವೋ ಅಲ್ಲಿಯವರೆಗೆ ಅಂಥವರೇ ಬೆತ್ತಲಾಗುವುದು ಗ್ಯಾರೆಂಟಿ ಎನ್ನುವುದು ಪದೇ ಪದೇ ಸಾಬೀತಾಗುತ್ತಿದ್ದರೂ ನನ್ನವ ಎಲ್ಲರಂಥವನಲ್ಲ ಎಂದರೆ ನಿಮ್ಮ ವಿಡಿಯೋಗಳು ಪೋ*ರ್ನ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಆಗಿಯೋ, ಇಲ್ಲವೇ ಮಕ್ಕಳನ್ನು ಹೆರುವ ಮಷಿನ್​ ಆಗಿಯೋ, ಬೀದಿಗೆ ಬರುವುದೋ ಕೊನೆಗೆ ಆ*ತ್ಮಹತ್ಯೆ ಒಂದೇ ದಾರಿ ಎಂದುಕೊಳ್ಳುವುದೋ ತಪ್ಪಲ್ಲ ಎಂದು ಪೊಲೀಸರು, ಹಿಂದೂ ಸಂಘಟನೆಗಳು ದಿನನಿತ್ಯವೂ ಎಚ್ಚರಿಕೆಯನ್ನು ಕೊಡುತ್ತಲೇ ಇದ್ದಾರೆ.&lt;/p&gt;&lt;p&gt;ಅದೆಷ್ಟೋ ಹಿಂದೂ ಯುವತಿಯರು ನರಕದ ಬಾಯಿಗೆ ಹೋಗಿ ಹೇಳಿಕೊಳ್ಳಲಾಗದ ಸಂಕಷ್ಟ ಅನುಭವಿಸುತ್ತ ಕೊನೆಗೆ ಸಾವಿನ ಹಾದಿ ಹಿಡಿದಿರುವ ಬಗ್ಗೆ ಪೊಲೀಸರು ಪತ್ರಿಕಾಗೋಷ್ಠಿ ಮಾಡಿ ಎಚ್ಚರ ಕೊಡುತ್ತಲೇ ಇದ್ದರೂ, ನಾನು ಎಜುಕೇಟೆಡ್​, ನನಗೆ ಇವೆಲ್ಲಾ ಬುದ್ಧಿಮಾತು ನಿಮ್ಮಿಂದ ಕಲಿಯಬೇಕಿಲ್ಲ ಎನ್ನುವ ಯುವತಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.&lt;/p&gt;&lt;h2&gt;&lt;strong&gt;ಲವ್​ ಜಿಹಾದ್​ ಕೇಂದ್ರ&lt;/strong&gt;&lt;/h2&gt;&lt;p&gt;ಇದಾಗಲೇ ಹುಬ್ಬಳ್ಳಿಯ ಲವ್​ ಜಿಹಾದ್​ ಕೇಂದ್ರವಾಗಿದೆ. ಹುಬ್ಬಳ್ಳಿಯ ಜಿಮ್​ ಓನರ್​ ಸಮೀರ್​ ಮುಲ್ಲಾ ಸೇರಿದಂತೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೊಬೈಲ್​ಗಳಲ್ಲಿ ಹಿಂದೂ ಯುವತಿಯರ ಅಶ್ಲೀಲ ಫೋಟೋಗಳು ಪತ್ತೆಯಾಗಿವೆ. ಕೆಲವೊಂದನ್ನು ಖುದ್ದು ಯುವತಿಯರೇ ಖುಷಿಯಿಂದ ತೆಗೆದುಕೊಂಡರೆ, ಇನ್ನು ಕೆಲವು ಮಾದಕ ದ್ರವ್ಯ ನೀಡಿಯೋ ಅಥವಾ ಇನ್ನೇನೋ ಕೊಟ್ಟು ಯುವತಿಯರನ್ನು ಬೆತ್ತಲು ಮಾಡಿ, ರೇ*ಪ್ ಮಾಡಿರುವ ವಿಡಿಯೋ ಅವು. ಇಷ್ಟಾದರೂ ಯುವತಿಯರು ಥಳಕು ಬಳುಕಿನದ್ದಕ್ಕೆ ಮೊರೆ ಹೋಗುತ್ತಿರುವುದು ಹುಬ್ಬಳ್ಳಿಯಿಂದಲೇ ವರದಿಯಾಗಿದೆ. ​&lt;/p&gt;&lt;h3&gt;&lt;strong&gt;ಬ್ರೈನ್​ವಾಷ್​&lt;/strong&gt;&lt;/h3&gt;&lt;p&gt;ಕಾಲೇಜು ಯುವತಿಯೊಬ್ಬಳ ಬ್ರೈನ್​ವಾಷ್​ ಮಾಡಿ ಆಕೆಯನ್ನುತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಸಾಜಿದ್ ಉಣಕಲ್ ಎಂಬಾತ ಹಿಂದೂ ಸಂಘಟನೆ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹುಬ್ಬಳ್ಳಿಯ ಸಾಗರ್ ಕಾಲೋನಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿರುವ ಈತ ಆಕೆಗೆ ಮಾದಕ ದ್ರವ್ಯ ನೀಡಿ ಬೆತ್ತಲುಮಾಡಿದ್ದ ಎನ್ನುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಜರಂಗದಳ, ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನ ಮನೆಗೆ ತೆರಳಿ ಯುವಕನಿಗೆ ಥಳಿಸಿ ಯುವತಿಯನ್ನು ಮನೆಗೆ ಕಳುಹಿಸಿದ್ದಾರೆ. ಈ ಸಂಬಂಧ ಅಶೋಕ ನಗರ ಠಾಣೆ ಪೊಲೀಸರು ಸಾಜಿದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dharwad</category>
            <dc:creator>Suchethana D</dc:creator>
            <atom:link href="https://kannada.asianetnews.com/crime/another-love-jihad-in-hubballi-hindu-organisation-found-muslim-youth-suc/articleshow-km3osfh"/>
        </item>
        <item>
            <title><![CDATA[ಹುಬ್ಬಳ್ಳಿಯಲ್ಲಿ ದುರಂತ: ಕಾಣೆಯಾಗಿದ್ದ 9 ವರ್ಷದ ಬಾಲಕ ನಿರ್ಮಾಣ ಹಂತದ ಗುಂಡಿಯಲ್ಲಿ ಶವವಾಗಿ ಪತ್ತೆ]]></title>
            <link>https://kannada.asianetnews.com/karnataka-districts/hubballi-missing-boy-balaji-found-dead-construction-pit-ashoka-nagar-news-san/articleshow-l3z2kti</link>
            <guid isPermaLink="true">https://kannada.asianetnews.com/karnataka-districts/hubballi-missing-boy-balaji-found-dead-construction-pit-ashoka-nagar-news-san/articleshow-l3z2kti</guid>
            <pubDate>Wed, 20 May 2026 22:37:58 +0530</pubDate>
            <description><![CDATA[ಹುಬ್ಬಳ್ಳಿಯ ವಿಜಯನಗರದಲ್ಲಿ ಆಟವಾಡಲು ಹೋಗಿದ್ದ 9 ವರ್ಷದ ಬಾಲಕ, ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಬಾಲಕನ ಸ್ನೇಹಿತರು ಭಯದಿಂದ ವಿಷಯ ಮುಚ್ಚಿಟ್ಟಿದ್ದು, ಪೋಷಕರು ದೂರು ನೀಡಿದ ನಂತರ ಪೊಲೀಸರ ತನಿಖೆಯಿಂದ ಈ ದುರಂತ ಘಟನೆ ಬೆಳಕಿಗೆ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks34edfb8rh9xp46k4zww1en,imgname-hubballi-child-1779295532523.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಮೇ.20): &lt;/strong&gt;ಆಟವಾಡಲು ಹೋದ ಮಗ ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಪೋಷಕರು ದಿನವಿಡೀ ಹುಡುಕಾಟ ನಡೆಸಿದ್ದರು. ಆದರೆ, ಇಂದು ಆ ಬಾಲಕ ನಿರ್ಮಾಣ ಹಂತದ ಕಟ್ಟಡದ ಕಂದಕದಲ್ಲಿ ಶವವಾಗಿ ಪತ್ತೆಯಾಗುವ ಮೂಲಕ ಹೆತ್ತವರ ಪಾಲಿಗೆ ಕಡು ಕತ್ತಲು ಆವರಿಸಿದೆ. ಮನೆ ನಿರ್ಮಾಣಕ್ಕಾಗಿ ತೆಗೆದು ಹಾಗೆಯೇ ಬಿಟ್ಟಿದ್ದ ಆಳವಾದ ಗುಂಡಿಗೆ ಬಿದ್ದು ಒಂಬತ್ತು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ಸಂಭವಿಸಿದೆ.&lt;/p&gt;&lt;p&gt;ಹುಬ್ಬಳ್ಳಿಯ ಉದಯ ನಗರದ ನಿವಾಸಿಯಾದ ಬಾಲಾಜಿ (9) ಮೃತಪಟ್ಟ ದುರ್ದೈವಿ ಬಾಲಕ. ಕಟ್ಟಡ ನಿರ್ಮಿಸುವವರ ಬೇಜವಾಬ್ದಾರಿತನ ಹಾಗೂ ಆಟದ ಮೋಜಿನಲ್ಲಿ ಗೆಳೆಯರು ಮಾಡಿದ ಒಂದು ಸಣ್ಣ ತಪ್ಪು ಈ ಕಂದನ ಪ್ರಾಣಪಕ್ಷಿ ಹಾರಿಹೋಗಲು ಕಾರಣವಾಗಿದೆ.&lt;/p&gt;&lt;p&gt;ಪೊಲೀಸರ ತನಿಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಸೋಮವಾರ ಬಾಲಾಜಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಾ ವಿಜಯನಗರದ ಕಡೆಗೆ ಹೋಗಿದ್ದ. ಅಲ್ಲಿನ ಒಂದು ಪಾಳುಬಿದ್ದ ಹಾಗೂ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಆವರಣದಲ್ಲಿ ತೆಂಗಿನಕಾಯಿ ಕೀಳಲು ಈ ಬಾಲಕರು ಮುಂದಾಗಿದ್ದಾರೆ. ಈ ವೇಳೆ ಮನೆ ನಿರ್ಮಾಣಕ್ಕಾಗಿ ಪಿಲ್ಲರ್ (ಕಾಲಂ) ಹಾಕಲು ತೆಗೆಯಲಾಗಿದ್ದ ಆಳವಾದ ಗುಂಡಿಯ ಬಳಿ ತೆರಳಿದಾಗ, ದುರದೃಷ್ಟವಶಾತ್ ಬಾಲಾಜಿ ಕಾಲು ಜಾರಿ ನೇರವಾಗಿ ಗುಂಡಿಯೊಳಗೆ ಬಿದ್ದಿದ್ದಾನೆ.&lt;/p&gt;&lt;h2&gt;&lt;strong&gt;ಬಾಲಕ ಬೀಳುತ್ತಿದ್ದಂತೆ ಹೆದರಿ ಓಡಿಹೋದ ಗೆಳೆಯರು!&lt;/strong&gt;&lt;/h2&gt;&lt;p&gt;ಬಾಲಾಜಿ ಗುಂಡಿಗೆ ಬೀಳುತ್ತಿದ್ದಂತೆ ತೀವ್ರ ಭೀತಿಗೊಳಗಾದ ಆತನ ಸ್ನೇಹಿತರು, ಯಾರಿಗಾದರೂ ವಿಷಯ ತಿಳಿದರೆ ತಮಗೆ ಬೈಯಬಹುದು ಅಥವಾ ಶಿಕ್ಷೆಯಾಗಬಹುದು ಎಂಬ ಭಯದಿಂದ ಅಲ್ಲಿಂದ ತಕ್ಷಣವೇ ಎಸ್ಕೇಪ್ ಆಗಿದ್ದಾರೆ. ಇತ್ತ ಮಗ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಬಾಲಾಜಿಯ ಪೋಷಕರು ದಿನವಿಡೀ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದಿದ್ದಾಗ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಅಶೋಕನಗರ ಠಾಣೆಯ ಪೊಲೀಸರು, ನಿನ್ನೆ ಬಾಲಾಜಿ ಜೊತೆ ಆಟವಾಡುತ್ತಿದ್ದ ಸ್ನೇಹಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ತಾವೆಲ್ಲರೂ ತೆಂಗಿನಕಾಯಿ ತೆಗೆಯಲು ಹೋಗಿದ್ದಾಗ ಬಾಲಾಜಿ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾಗಿ ಬಾಲಕರು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.&lt;/p&gt;&lt;p&gt;ಗೆಳೆಯರು ನೀಡಿದ ಮಾಹಿತಿಯ ಆಧಾರದ ಮೇಲೆ ಇಂದು ಬೆಳಿಗ್ಗೆ ಪೊಲೀಸರು ಮತ್ತು ಸ್ಥಳೀಯರು ವಿಜಯನಗರದ ಆ ಕಟ್ಟಡದ ಬಳಿ ತೆರಳಿ ತಪಾಸಣೆ ನಡೆಸಿದಾಗ, ಕಾಲಂ ಗುಂಡಿಯಲ್ಲಿ ಬಾಲಾಜಿಯ ಮೃತದೇಹ ಪತ್ತೆಯಾಗಿದೆ. ಮಗನ ಶವವನ್ನು ನೋಡಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಕರುಣಾಜನಕ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಪೊಲೀಸರ ಭೇಟಿ; ತನಿಖೆ ಚುರುಕು&lt;/strong&gt;&lt;/h2&gt;&lt;p&gt;ಸ್ಥಳಕ್ಕೆ ಅಶೋಕನಗರ ಪೊಲೀಸ್ ನಿರಕ್ಷಕರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಾರ್ವಜನಿಕರ ಸಹಾಯದಿಂದ ಬಾಲಕನ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dharwad</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/hubballi-missing-boy-balaji-found-dead-construction-pit-ashoka-nagar-news-san/articleshow-l3z2kti"/>
        </item>
        <item>
            <title><![CDATA[ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ಹಿನ್ನೆಲೆ, ಬೆಂಗಳೂರಿಂದ ಹೊರಡುವ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ!]]></title>
            <link>https://kannada.asianetnews.com/karnataka-districts/south-western-railway-announced-temporary-disruption-in-train-services-on-the-bengaluru-hubballi-route-till-june-9-gdp/articleshow-mds3plm</link>
            <guid isPermaLink="true">https://kannada.asianetnews.com/karnataka-districts/south-western-railway-announced-temporary-disruption-in-train-services-on-the-bengaluru-hubballi-route-till-june-9-gdp/articleshow-mds3plm</guid>
            <pubDate>Mon, 01 Jun 2026 13:00:46 +0530</pubDate>
            <description><![CDATA[ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ, ಮೇ 30 ರಿಂದ ಜೂನ್ 8 ರವರೆಗೆ ಬೆಂಗಳೂರು-ಹುಬ್ಬಳ್ಳಿ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಸಿದ್ಧಗಂಗಾ ಇಂಟರ್&zwnj;ಸಿಟಿ ಮತ್ತು ವಾಸ್ಕೋ ಎಕ್ಸ್&zwnj;ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ತಡವಾಗಿ ಸಂಚರಿಸಲಿದ್ದು, ಹರಿಹರ-ಹೊಸಪೇಟೆ ಪ್ಯಾಸೆಂಜರ್ ರೈಲಿನ ಮಾರ್ಗವನ್ನು ಬದಲಾಯಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksz1f811dj78k4605scn6mrt,imgname-railway--2--1780231938081.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರೈಲ್ವೆ ಪ್ರಯಾಣಿಕರೇ ಗಮನಿಸಿ, ನೀವು ಮುಂದಿನ ಕೆಲವು ದಿನಗಳಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿ ಮಾರ್ಗವಾಗಿ ಪ್ರಯಾಣಿಸಲು ಯೋಜಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಅತ್ಯಾವಶ್ಯಕ ಕಾಮಗಾರಿ ನಡೆಯುತ್ತಿರುವುದರಿಂದ, ಮೇ 30 ರಿಂದ ಜೂನ್ 8 ರವರೆಗೆ (ಒಟ್ಟು 10 ದಿನಗಳ ಕಾಲ) ಈ ಮಾರ್ಗದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಮುಖವಾಗಿ ಸಿದ್ಧಗಂಗಾ ಇಂಟರ್&zwnj;ಸಿಟಿ, ವಾಸ್ಕೋ ಎಕ್ಸ್&zwnj;ಪ್ರೆಸ್ ಸೇರಿದಂತೆ ಒಟ್ಟು 6 ಪ್ರಮುಖ ರೈಲುಗಳ ಸಂಚಾರ ತಡವಾಗಲಿದ್ದು, ಕೆಲವು ರೈಲುಗಳ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ.&lt;/p&gt;&lt;h2&gt;ಸಂಚಾರ ವ್ಯತ್ಯಯಕ್ಕೆ ಕಾರಣವೇನು?&lt;/h2&gt;&lt;p&gt;ನೈರುತ್ಯ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ದಾವಣಗೆರೆ ರೈಲ್ವೆ ನಿಲ್ದಾಣದ ಯಾರ್ಡ್&zwnj;ನಲ್ಲಿ ಪಾದಚಾರಿ ಮೇಲ್ಸೇತುವೆ (Foot Over Bridge) ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲುಗಳ ಸಂಚಾರವನ್ನು ನಿಯಂತ್ರಿಸುವುದು, ಮರು ವೇಳಾಪಟ್ಟಿ ಸಿದ್ಧಪಡಿಸುವುದು ಹಾಗೂ ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸುವುದು ಅನಿವಾರ್ಯವಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;h2&gt;ರೈಲುಗಳ ಸಂಚಾರ ವ್ಯತ್ಯಯದ ಸಂಪೂರ್ಣ ವಿವರಗಳು:&lt;/h2&gt;&lt;p&gt;ಕಾಮಗಾರಿಯ ಅವಧಿಯಲ್ಲಿ ತಡವಾಗಿ ಓಡಲಿರುವ ಹಾಗೂ ಮಾರ್ಗ ಬದಲಾವಣೆ ಮಾಡಲಾಗಿರುವ ರೈಲುಗಳ ಪಟ್ಟಿ ಮತ್ತು ಅವುಗಳ ವಿವರ ಇಲ್ಲಿದೆ:&lt;/p&gt;&lt;p&gt;1. ವಾಸ್ಕೋ-ಡ-ಗಾಮಾ - ಯಶವಂತಪುರ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 17310)&lt;/p&gt;&lt;p&gt;ದಿನಾಂಕ: ಮೇ 30 ರಿಂದ ಜೂನ್ 8 ರವರೆಗೆ&lt;/p&gt;&lt;p&gt;ಬದಲಾವಣೆ: ವಾಸ್ಕೋ-ಡ-ಗಾಮಾದಿಂದ ಹೊರಡುವ ಈ ದೈನಂದಿನ ಎಕ್ಸ್&zwnj;ಪ್ರೆಸ್ ರೈಲನ್ನು ಮಾರ್ಗಮಧ್ಯೆ 100 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ (ತಡವಾಗಲಿದೆ).&lt;/p&gt;&lt;p&gt;2. ಉದಯಪುರ ಸಿಟಿ - ಮೈಸೂರು ಹಮ್ಸಫರ್ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 19667)&lt;/p&gt;&lt;p&gt;ದಿನಾಂಕ: ಜೂನ್ 1 ರಂದು (ಸೋಮವಾರ)&lt;/p&gt;&lt;p&gt;ಬದಲಾವಣೆ: ಉದಯಪುರ ಸಿಟಿಯಿಂದ ಹೊರಡುವ ಈ ಸಾಪ್ತಾಹಿಕ ರೈಲನ್ನು ಮಾರ್ಗಮಧ್ಯೆ 120 ನಿಮಿಷಗಳ ಕಾಲ (2 ಗಂಟೆ) ನಿಯಂತ್ರಣದಲ್ಲಿಡಲಾಗುತ್ತದೆ.&lt;/p&gt;&lt;p&gt;3. ಧಾರವಾಡ - ಕೆಎಸ್ಆರ್ ಬೆಂಗಳೂರು ಸಿದ್ದಗಂಗಾ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 12726)&lt;/p&gt;&lt;p&gt;ದಿನಾಂಕ: ಮೇ 31 ರಿಂದ ಜೂನ್ 9 ರವರೆಗೆ&lt;/p&gt;&lt;p&gt;ಬದಲಾವಣೆ: ಉತ್ತರ ಕರ್ನಾಟಕ ಭಾಗದ ಪ್ರಮುಖ ರೈಲಾದ ಧಾರವಾಡದಿಂದ ಹೊರಡುವ ಸಿದ್ದಗಂಗಾ ದೈನಂದಿನ ಇಂಟರ್&zwnj;ಸಿಟಿ ಎಕ್ಸ್&zwnj;ಪ್ರೆಸ್ ರೈಲನ್ನು ಮಾರ್ಗಮಧ್ಯೆ 50 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.&lt;/p&gt;&lt;p&gt;4. ಅರಸೀಕೆರೆ - ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 16213)&lt;/p&gt;&lt;p&gt;ದಿನಾಂಕ: ಮೇ 31 ರಿಂದ ಜೂನ್ 9 ರವರೆಗೆ&lt;/p&gt;&lt;p&gt;ಬದಲಾವಣೆ: ಅರಸೀಕೆರೆ ನಿಲ್ದಾಣದಿಂದ ಹೊರಡುವ ಈ ದೈನಂದಿನ ಎಕ್ಸ್&zwnj;ಪ್ರೆಸ್ ರೈಲನ್ನು ಮಾರ್ಗಮಧ್ಯೆ 30 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ.&lt;/p&gt;&lt;p&gt;5. ಕೆಎಸ್ಆರ್ ಬೆಂಗಳೂರು - ಮೈಸೂರು ಒಡೆಯರ್ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 12614)&lt;/p&gt;&lt;p&gt;ದಿನಾಂಕ: ಮೇ 31 ರಿಂದ ಜೂನ್ 9 ರವರೆಗೆ&lt;/p&gt;&lt;p&gt;ಬದಲಾವಣೆ: ಈ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ (ಮರು-ವೇಳಾಪಟ್ಟಿ) ಪ್ರಯಾಣ ಆರಂಭಿಸಲಿದೆ.&lt;/p&gt;&lt;h2&gt;ಹರಿಹರ - ಹೊಸಪೇಟೆ ರೈಲು ಮಾರ್ಗ ಬದಲಾವಣೆ (ದಾವಣಗೆರೆ ನಿಲುಗಡೆ ರದ್ದು)&lt;/h2&gt;&lt;p&gt;ಕಾಮಗಾರಿಯ ಕಾರಣದಿಂದಾಗಿ ಒಂದು ಪ್ಯಾಸೆಂಜರ್ ರೈಲಿನ ಮಾರ್ಗವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಅದರ ವಿವರ ಹೀಗಿದೆ:&lt;/p&gt;&lt;p&gt;ರೈಲು ವಿವರ: ಹರಿಹರ - ಹೊಸಪೇಟೆ ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ: 56529)&lt;/p&gt;&lt;p&gt;ಅವಧಿ: ಮೇ 31 ರಿಂದ ಜೂನ್ 9 ರವರೆಗೆ&lt;/p&gt;&lt;p&gt;ಬದಲಾದ ಮಾರ್ಗ: ಈ ರೈಲು ಹರಿಹರ, ಅಮರಾವತಿ ಕಾಲೋನಿ ಮತ್ತು ತೆಲಿಗಿ ನಿಲ್ದಾಣಗಳ ಪರ್ಯಾಯ ಮಾರ್ಗದ ಮೂಲಕ ಸಂಚರಿಸಲಿದೆ.&lt;/p&gt;&lt;h3&gt;ಪ್ರಮುಖ ಸೂಚನೆ:&amp;nbsp;&lt;/h3&gt;&lt;p&gt;ಮಾರ್ಗ ಬದಲಾವಣೆಯಾಗಿರುವುದರಿಂದ, ಈ ಅವಧಿಯಲ್ಲಿ ಈ ರೈಲಿಗೆ ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.&lt;/p&gt;&lt;p&gt;ರೈಲುಗಳ ಸಮಯ ಹಾಗೂ ಮಾರ್ಗದಲ್ಲಿ ಆಗಿರುವ ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ತಮ್ಮ ಪ್ರಯಾಣವನ್ನು ಯೋಜಿಸಬೇಕಾಗಿ ನೈರುತ್ಯ ರೈಲ್ವೆ ವಿನಂತಿಸಿದೆ. ರೈಲುಗಳ ನಿಖರವಾದ ಸಮಯದ ಮಾಹಿತಿಗಾಗಿ ಪ್ರಯಾಣಿಕರು ಅಧಿಕೃತ ರೈಲ್ವೆ ವಿಚಾರಣಾ ಅಪ್ಲಿಕೇಶನ್ (NTES) ಅಥವಾ ಹತ್ತಿರದ ರೈಲ್ವೆ ನಿಲ್ದಾಣದ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/south-western-railway-announced-temporary-disruption-in-train-services-on-the-bengaluru-hubballi-route-till-june-9-gdp/articleshow-mds3plm"/>
        </item>
        <item>
            <title><![CDATA[ವೀರಶೈವ- ಲಿಂಗಾಯತ ಸಮಾಜ ಒಡೆಯಲು ಯತ್ನ: ಸಂಸದ ಜಗದೀಶ ಶೆಟ್ಟರ್ ಆರೋಪ]]></title>
            <link>https://kannada.asianetnews.com/karnataka-districts/mp-jagadish-shettar-on-veerashaiva-lingayat-unity-gvd/articleshow-uql0g0t</link>
            <guid isPermaLink="true">https://kannada.asianetnews.com/karnataka-districts/mp-jagadish-shettar-on-veerashaiva-lingayat-unity-gvd/articleshow-uql0g0t</guid>
            <pubDate>Mon, 01 Jun 2026 20:51:32 +0530</pubDate>
            <description><![CDATA[&lt;p&gt;ದೊಡ್ಡದಾಗಿ ಬೆಳೆದಿರುವ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಚಿಂತನೆಯಾಗಬೇಕಿದೆ. ಸದ್ಯ ತಮ್ಮ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ವೀರಶೈವ ಮತ್ತು ಲಿಂಗಾಯತ ಒಂದೇ ಸಮಾಜ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hw6qx6pf4tna05fn0ccz4bzy,imgname-1.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಜೂ.01):&lt;/strong&gt; ದೊಡ್ಡದಾಗಿ ಬೆಳೆದಿರುವ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಚಿಂತನೆಯಾಗಬೇಕಿದೆ. ಸದ್ಯ ತಮ್ಮ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ವೀರಶೈವ ಮತ್ತು ಲಿಂಗಾಯತ ಒಂದೇ ಸಮಾಜ. ಇದರಲ್ಲಿ ಪ್ರತ್ಯೇಕ ವಿಷಯವೇ ಬರುವುದಿಲ್ಲ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.&lt;/p&gt;&lt;p&gt;ಅವರು ಇಲ್ಲಿನ ಸವಾಯಿ ಗಂಧರ್ವ ಸಭಾಭವನದಲ್ಲಿ ವೀರಶೈವ ಲಿಂಗಾಯತ ಸೇವಾ ಸಮಿತಿಯಿಂದ ನಡೆದ ವೀರಶೈವ ಲಿಂಗಾಯತ ಒಳಪಂಗಡಗಳ ಸಮಾಜದ ಎಸ್&zwnj;ಎಸ್&zwnj;ಎಲ್&zwnj;ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.&lt;/p&gt;&lt;p&gt;ಸಮಾಜದ ಮುಂಚೂಣಿ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ನಮ್ಮವರನ್ನೇ ಬಳಕೆ ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಹಾಗಾಗಿ, ಸಮಾಜ ಒಂದಾಗಿದ್ದರೆ ಮಾತ್ರ ಇದೆಲ್ಲವನ್ನೂ ಸಮರ್ಥವಾಗಿ ಮೆಟ್ಟಿ ನಿಲ್ಲಲು ಸಾಧ್ಯವಾಗಲಿದೆ. ಅಲ್ಲದೇ, ಸಾಮಾಜಿಕವಾಗಿ ಹಿಂದುಳಿದ ಸಮಾಜದ ಬಂಧುಗಳನ್ನು ಮೇಲೆತ್ತಲು ಸಾಧ್ಯವಾಗಲಿದೆ ಎಂದರು.&lt;/p&gt;&lt;p&gt;ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಮಾಜದ ಬಂಧುಗಳು ಒಗ್ಗಟ್ಟಿನ ಹೋರಾಟದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಪ್ರಯತ್ನ ಮಾಡಬೇಕಿದೆ. ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸಮಾಜ ಸೇರ್ಪಡೆಯಾದರೆ ಹೆಚ್ಚಿನ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ ಎಂದರು.&lt;/p&gt;&lt;h2&gt;&lt;strong&gt;ನಡೆದು ಬಂದ ದಾರಿ ಭಿನ್ನ&lt;/strong&gt;&lt;/h2&gt;&lt;p&gt;ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಧರ್ಮಾಚರಣೆ, ನಡೆದು ಬಂದ ದಾರಿ ಭಿನ್ನವಾಗಿದೆ. ಬಸವಣ್ಣವರ ಹಾಕಿಕೊಟ್ಟು ತತ್ವಾದರ್ಶ, ಮಾರ್ಗದರ್ಶನದಲ್ಲಿ ಸಮಾಜ ಮುನ್ನಡೆದಿದೆ. ಬೇರೆ ಯಾವ ಸಮಾಜವನ್ನೂ ದ್ವೇಷ ಮಾಡದ ಸಮಾಜ ವೀರಶೈವ ಲಿಂಗಾಯತ ಸಮಾಜವಾಗಿದ್ದು, ಎಲ್ಲರೂ ನಮ್ಮವರು ಎಂದು ಸಮಾಜದಲ್ಲಿ ಸಹಬಾಳ್ವೆ ನಡೆಸುತ್ತಿದೆ ಎಂದರು.&lt;/p&gt;&lt;p&gt;ಸಮಾಜದ ಮಕ್ಕಳು ಎತ್ತರಕ್ಕೆ ಬೆಳೆಯಬೇಕು ಎಂಬ ಸುದುದ್ದೇಶದಿಂದ ಮಕ್ಕಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸಮಾಜದ ಮಕ್ಕಳು ಮನೆ ಮತ್ತು ಸಮಾಜಕ್ಕೆ ಸೀಮಿತವಾಗದೇ, ಭಾರತ ಮಾತೆಯ ಮಕ್ಕಳಾಗಿ ಬೆಳೆಯಬೇಕು ಎಂದರು.&lt;/p&gt;&lt;p&gt;ವೀರಶೈವ ಲಿಂಗಾಯತ ಸೇವಾ ಸಮಿತಿಯ ಮಲ್ಲಿಕಾರ್ಜುನ ಸಾಹುಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ಎಸ್&zwnj;ಎಸ್ಎಲ್&zwnj;ಸಿ ಹಾಗೂ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೇ, ಬಿಲ್ಡರ್&zwnj; ಆ್ಯಂಡ್&zwnj; ಡೆವಲಪರ್&zwnj; ವೀರೇಶ ಉಂಡಿ, ಸಿಪಿಐ ಮುರಗೇಶ ಚನ್ನಣ್ಣವರ, ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ, ಉದ್ಯಮಿ ನಾಗರಾಜ ಗೌರಿ, ನಾಗೇಶ ಅಣ್ಣಿಗೇರಿ, ಮಂಜುನಾಥ ಮುನವಳ್ಳಿ ಅವರನ್ನು ಸನ್ಮಾನಿಸಲಾಯಿತು.&lt;/p&gt;]]></content:encoded>
            <category>dharwad</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-jagadish-shettar-on-veerashaiva-lingayat-unity-gvd/articleshow-uql0g0t"/>
        </item>
        <item>
            <title><![CDATA[ಶಿವಂ ಅಸೋಸಿಯೇಟ್ಸ್ ₹4,500 ಕೋಟಿ ಹಗರಣ,  ಕೋರ್ಟ್‌ನಲ್ಲಿ ಕಣ್ಣೀರು, ಬೆಳಗಾವಿಯಿಂದ ಬೆಂಗಳೂರಿಗೆ ಆರೋಪಿ ಶಿಫ್ಟ್!]]></title>
            <link>https://kannada.asianetnews.com/karnataka-districts/belagavi-rs4500-crore-scam-kingpin-shivanand-neelannavar-handed-over-to-cid-custody-shifted-to-bengaluru-gdp/articleshow-vdarpow</link>
            <guid isPermaLink="true">https://kannada.asianetnews.com/karnataka-districts/belagavi-rs4500-crore-scam-kingpin-shivanand-neelannavar-handed-over-to-cid-custody-shifted-to-bengaluru-gdp/articleshow-vdarpow</guid>
            <pubDate>Tue, 19 May 2026 15:47:55 +0530</pubDate>
            <description><![CDATA[&lsquo;ಶಿವಂ ಅಸೋಸಿಯೇಟ್ಸ್&rsquo; ಸಂಸ್ಥೆಯ ₹4,500 ಕೋಟಿ ವಂಚನೆ ಪ್ರಕರಣದ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ್&zwnj;ನನ್ನು 10 ದಿನಗಳ ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಹೂಡಿಕೆದಾರರಿಂದ ಮೊದಲ ಅಧಿಕೃತ ದೂರು ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzvgexpt4bdd8gcn5zk079s,imgname-shivanand-neelannavar-1779185499030.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯ ₹4,500 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ, ಸಂಸ್ಥೆಯ ಮುಖ್ಯಸ್ಥ ಶಿವಾನಂದ ನೀಲಣ್ಣವರ್&zwnj;ನನ್ನು ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಆರ್ಥಿಕ ಅಪರಾಧಗಳ ತನಿಖಾ ದಳದ (CID) ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.&lt;/p&gt;&lt;p&gt;ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಿಂದ ಹೊರಟ ಸಿಐಡಿ ಅಧಿಕಾರಿಗಳ ತಂಡ, ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ಬೆಂಗಳೂರಿನ ಮುಖ್ಯ ಕಚೇರಿಗೆ ಶಿಫ್ಟ್ ಮಾಡಿದೆ. ಒಂದು ಕಾರಿನಲ್ಲಿ ಆರೋಪಿಯನ್ನು ಕೂರಿಸಲಾಗಿದ್ದರೆ, ಮತ್ತೊಂದು ಕಾರಿನಲ್ಲಿ ಜಪ್ತಿ ಮಾಡಲಾದ ಮಹತ್ವದ ದಾಖಲೆಗಳು, ಕಂಪ್ಯೂಟರ್, ಲ್ಯಾಪ್&zwnj;ಟಾಪ್, ಪೆನ್ ಡ್ರೈವ್ ಹಾಗೂ ಮೊಬೈಲ್&zwnj; ಫೋನ್&zwnj;ಗಳನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿದೆ.&lt;/p&gt;&lt;h2&gt;ಕಾಗವಾಡ ಠಾಣೆಯಲ್ಲಿ ದಾಖಲಾಯ್ತು ಮೊದಲ ಅಧಿಕೃತ ಖಾಸಗಿ ದೂರು!&lt;/h2&gt;&lt;p&gt;ಇಷ್ಟು ದಿನ ಸಾಮಾಜಿಕ ಜಾಲತಾಣಗಳು ಹಾಗೂ ಇಲಾಖೆಯ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಯುತ್ತಿತ್ತು. ಆದರೆ ಪ್ರಕರಣ ಸಿಐಡಿಗೆ ಹಸ್ತಾಂತರವಾಗುತ್ತಿದ್ದಂತೆ, ಕಾಗವಾಡ ಪೊಲೀಸ್ ಠಾಣೆಯಲ್ಲಿ ಹೂಡಿಕೆದಾರನೊಬ್ಬನಿಂದ ಮೊದಲ ಅಧಿಕೃತ ಖಾಸಗಿ ದೂರು ದಾಖಲಾಗಿದೆ. ಕೃಷ್ಣಾ ಅಪ್ಪಣ್ಣ ಅಪ್ರಾಜ್ ಎಂಬುವವರು ದೂರು ನೀಡಿದ ಮೊದಲ ವ್ಯಕ್ತಿಯಾಗಿದ್ದಾರೆ.&lt;/p&gt;&lt;p&gt;ದೂರಿನ ವಿವರಗಳ ಪ್ರಕಾರ, &quot;ಪ್ರತಿ ತಿಂಗಳು ಶೇ. 36ರಷ್ಟು ಭಾರಿ ಬಡ್ಡಿ ನೀಡುವುದಾಗಿ ಶಿವಾನಂದ ನೀಡಿದ್ದ ಆಮಿಷಕ್ಕೆ ಒಳಗಾಗಿದ್ದ ಕೃಷ್ಣಾ ಅಪ್ರಾಜ್, ಕಳೆದ ಏಪ್ರಿಲ್ ತಿಂಗಳಿನಲ್ಲಿ ಹಂತ ಹಂತವಾಗಿ ಒಟ್ಟು 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು. ಆದರೆ ಠೇವಣಿ ಪಡೆದ ನಂತರ ಹೆಚ್ಚಿನ ಬಡ್ಡಿ ನೀಡದೆ ವಂಚಿಸಲಾಗಿದೆ,&quot; ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h2&gt;ಬೆಂಗಳೂರಿಗೆ ಶಿಫ್ಟ್ ಮಾಡಲು ಸಿಐಡಿ ನೀಡಿದ ಕಾರಣಗಳೇನು?&lt;/h2&gt;&lt;p&gt;ಪ್ರಕರಣದ ತನಿಖೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಿಐಡಿ ಅಧಿಕಾರಿಗಳು, ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲು ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ಯಲು ನ್ಯಾಯಾಲಯದ ಅನುಮತಿ ಕೋರಿದ್ದರು. ಸಿಐಡಿ ತನ್ನ ಅರ್ಜಿಯಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿತ್ತು:&lt;/p&gt;&lt;p&gt;ಶಿವಾನಂದ ನೀಲಣ್ಣವರ್ ನಡೆಸುತ್ತಿದ್ದ ಆರ್ಥಿಕ ವ್ಯವಹಾರಗಳು ಕೇವಲ ಬೆಳಗಾವಿಗೆ ಸೀಮಿತವಾಗಿಲ್ಲ, ಇದು ಅಂತರ ಜಿಲ್ಲಾ ಹಾಗೂ ಅಂತರರಾಜ್ಯ ಮಟ್ಟದ ಜಾಲವನ್ನು ಹೊಂದಿದೆ. ವೆಬ್&zwnj;ಸೈಟ್ ಹಾಗೂ ಮೊಬೈಲ್ ಆ್ಯಪ್&zwnj;ಗಳ ಮೂಲಕ ಹಣದ ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಇಷ್ಟು ದೊಡ್ಡ ಮಟ್ಟದ ಹಣದ ಮೂಲ ಯಾವುದು? ಡಿಜಿಟಲ್ ವ್ಯವಹಾರಗಳು ಹೇಗೆ ನಡೆದಿವೆ? ವಿವಿಧ ಬ್ಯಾಂಕ್ ಖಾತೆಗಳು, ರಿಯಲ್ ಎಸ್ಟೇಟ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾದ ಹಣದ ವರ್ಗಾವಣೆ ಕುರಿತು ಸಮಗ್ರ ವಿಚಾರಣೆಯಾಗಬೇಕಿದೆ.&lt;/p&gt;&lt;p&gt;ಪ್ರಾಥಮಿಕ ತನಿಖೆಯ ಪ್ರಕಾರ, 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯು ಆರ್&zwnj;ಬಿಐ (RBI) ನೋಂದಣಿ ಹೊಂದಿರಲಿಲ್ಲ. ಆದರೂ &quot;ಒಂದು ಲಕ್ಷ ರೂಪಾಯಿ ಹೂಡಿಕೆಗೆ ಪ್ರತಿ ತಿಂಗಳು 3 ಪರ್ಸೆಂಟ್ ಲಾಭ&quot; ಎಂಬ ಆಮಿಷ ಒಡ್ಡಿ ಸುಮಾರು 35 ಸಾವಿರಕ್ಕೂ ಹೆಚ್ಚು ಜನರಿಂದ ₹1,000 ಕೋಟಿಗೂ ಅಧಿಕ ಹಣದ ವ್ಯವಹಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;ನ್ಯಾಯಾಲಯದಲ್ಲಿ ನಡೆದ ವಾದವೇನು?&lt;/h2&gt;&lt;p&gt;ಸಿಐಡಿ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರಾದ ಗಂಗಾಧರ ಅವರು ಆರೋಪಿಯನ್ನು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು. ವಿಚಾರಣೆ ವೇಳೆ ನ್ಯಾಯಾಧೀಶರು ಶಿವಾನಂದ ನೀಲಣ್ಣವರ ಆರೋಗ್ಯದ ಬಗ್ಗೆ ಪ್ರಶ್ನಿಸಿದರು. ಆಗ ನನಗೆ ಬಿಪಿ ಇದೆ ಎಂದು ಆರೋಪಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಂಬಂಧಪಟ್ಟ ವೈದ್ಯರಿಂದ ಚಿಕಿತ್ಸೆ, ಮಾತ್ರೆ ಸೇರಿದಂತೆ ಅಗತ್ಯ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.&lt;/p&gt;&lt;p&gt;ಈ ವೇಳೆ ಶಿವಾನಂದ, 35 ಸಾವಿರ ಜನರಿಗೆ ಹಣ ಬೇಡ, ನಾನು ಬೇಕಾಗಿದ್ದೇನೆ ಎಂದು ಭಾವುಕರಾಗಿ ಹೇಳಿದರು. ಈ ಮಾತಿಗೆ ತಕ್ಷಣ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನೀವು ಜನರಿಗೆ ಬೇಕಾಗಿರಬಹುದು. ನೀವು ಒಳ್ಳೆಯ ಕೆಲಸ ಮಾಡಿರಬಹುದು. ಅದು ನನಗೆ ಗೊತ್ತಿಲ್ಲ. ಆದರೆ ಅಮಾಯಕ ಜನರಿಗೆ ಅನ್ಯಾಯ ಆಗಬಾರದು. ಸರ್ಕಾರ ಜನರ ತಂದೆ-ತಾಯಿ ಇದ್ದಂತೆ. ಅವರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಕಟ್ಟುನಿಟ್ಟಾಗಿ ಹೇಳಿದರು. ನ್ಯಾಯಾಧೀಶರು ವಿಚಾರಣೆ ವೇಳೆ ಸಮಾಜದಲ್ಲಿ ಈ ಹಿಂದೆ ನಡೆದ ಅನೇಕ ಹಣಕಾಸು ವಂಚನೆ ಪ್ರಕರಣಗಳನ್ನು ಉಲ್ಲೇಖಿಸಿದಂತೆ ಮಾತನಾಡಿದರು.&lt;/p&gt;&lt;p&gt;ಸಾಕಷ್ಟು ಜನ ಹಣ ಪಡೆದು ಓಡಿ ಹೋಗಿರುವ ಉದಾಹರಣೆಗಳಿವೆ. ಇತಿಹಾಸದಿಂದ ಪಾಠ ಕಲಿಯಲು ಈ ರೀತಿಯ ಕಾನೂನುಗಳನ್ನು ತರಲಾಗಿದೆ. ಕಾನೂನಿನ ಅಡಿಯಲ್ಲಿ ನೀವು ಏನು ಮಾಡಿದ್ದೀರೋ ಅದು ಉಳಿಯುತ್ತದೆ ಎಂದು ತಿಳಿಸಿದರು. ಈ ವೇಳೆ, ಧರ್ಮೋ ರಕ್ಷತಿ ರಕ್ಷಿತಃ ಎಂಬ ಸಂಸ್ಕೃತ ಶ್ಲೋಕವನ್ನೂ ಉಲ್ಲೇಖಿಸಿ, ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ಮಹತ್ವವನ್ನು ನ್ಯಾಯಾಧೀಶರು ನೆನಪಿಸಿದರು.&lt;/p&gt;&lt;h2&gt;ಕೋರ್ಟ್ ಆವರಣದಲ್ಲಿ ಕಣ್ಣೀರಿಟ್ಟ ಆರೋಪಿ&lt;/h2&gt;&lt;p&gt;ವಿಚಾರಣೆ ಮುಗಿದು ಕೋರ್ಟ್ ಹಾಲ್&zwnj;ನಿಂದ ಹೊರಗೆ ಬರುತ್ತಿದ್ದಂತೆ, ಆವರಣದಲ್ಲಿ ನಿಂತಿದ್ದ ತನ್ನ ಸಹೋದರನನ್ನು ಕಂಡು ಶಿವಾನಂದ ನೀಲಣ್ಣವರ ತೀವ್ರ ಭಾವುಕರಾಗಿ ಕಣ್ಣೀರಿಟ್ಟರು. ಇದನ್ನು ಕಂಡು ಕೆಲ ಕ್ಷಣ ನ್ಯಾಯಾಲಯದ ಆವರಣದಲ್ಲಿ ಸಂಪೂರ್ಣ ಮೌನ ಆವರಿಸಿತ್ತು.&lt;/p&gt;&lt;h2&gt;ಸಿಐಡಿ ಮುಂದಿರುವ ಸವಾಲುಗಳೇನು?&lt;/h2&gt;&lt;p&gt;ಈ ಬೃಹತ್ ಹಗರಣದಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋದ ಸಾವಿರಾರು ಜನರಲ್ಲಿ ಬಹುತೇಕರು ಇನ್ನೂ ಅಧಿಕೃತವಾಗಿ ದೂರು ನೀಡಲು ಮುಂದೆ ಬಂದಿಲ್ಲ. ಇದು ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸಾರ್ವಜನಿಕರು ಯಾವುದೇ ಭಯವಿಲ್ಲದೆ ಮುಂದೆ ಬಂದು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ &quot;ನನ್ನ ಬಳಿ 15 ಸಾವಿರ ಬಂದೂಕುಗಳಿವೆ&quot; ಎಂದು ಶಿವಾನಂದ ಹೇಳಿದ್ದ ಹಳೆಯ ವಿಡಿಯೋ ಕೂಡ ಈಗ ಸಿಐಡಿ ತನಿಖೆಯ ವ್ಯಾಪ್ತಿಯಲ್ಲಿದೆ. ಈ ಹಣ ಯಾರ ಖಾತೆಗೆ ಹೋಗಿದೆ? ಯಾರ ಹೆಸರಲ್ಲಿ ಆಸ್ತಿ ಖರೀದಿಯಾಗಿದೆ? ಈ ಜಾಲದ ಹಿಂದೆ ರಾಜಕೀಯ ಅಥವಾ ಆರ್ಥಿಕ ಪ್ರಭಾವಿಗಳ ಹಸ್ತವಿದೆಯೇ? ಎಂಬ ಪ್ರಶ್ನೆಗಳಿಗೆ ಸಿಐಡಿ ಈಗ ಉತ್ತರ ಹುಡುಕಬೇಕಿದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/belagavi-rs4500-crore-scam-kingpin-shivanand-neelannavar-handed-over-to-cid-custody-shifted-to-bengaluru-gdp/articleshow-vdarpow"/>
        </item>
        <item>
            <title><![CDATA[ಕರಾವಳಿ, ಮಲೆನಾಡನ್ನೂ ಮೀರಿಸಿದ ಗದಗ ಮಳೆ ಅಬ್ಬರ: ಭಾನುವಾರ ಜಿಲ್ಲಾವಾರು ಎಷ್ಟು ಮಳೆಯಾಗಿದೆ ವಿವರ ನೋಡಿ!]]></title>
            <link>https://kannada.asianetnews.com/gallery/state/karnataka-weather-update-heavy-rain-in-gadag-dharwad-mangalore-imd-report-sat-xfa43ha</link>
            <guid isPermaLink="true">https://kannada.asianetnews.com/gallery/state/karnataka-weather-update-heavy-rain-in-gadag-dharwad-mangalore-imd-report-sat-xfa43ha</guid>
            <pubDate>Mon, 18 May 2026 13:25:38 +0530</pubDate>
            <description><![CDATA[ಕಳೆದ 24 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಉತ್ತಮ ಮಳೆಯಾಗಿದ್ದು, ಗದಗ ಜಿಲ್ಲೆಯಲ್ಲಿ ಮೇಘಸ್ಫೋಟದ ಮಾದರಿಯಲ್ಲಿ 82.4 ಮಿಮೀ ದಾಖಲೆ ಮಳೆಯಾಗಿದೆ. ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡಿನಲ್ಲೂ ವರುಣನ ಸಿಂಚನವಾಗಿದ್ದು, ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krv6wag915g31p9ppzq2qzgx,imgname-screenshot-2026-05-17-195924-1779029649929.png" type="image/jpeg" height="390" width="690"/>
            <content:encoded><![CDATA[ಕಳೆದ 24 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಉತ್ತಮ ಮಳೆಯಾಗಿದ್ದು, ಗದಗ ಜಿಲ್ಲೆಯಲ್ಲಿ ಮೇಘಸ್ಫೋಟದ ಮಾದರಿಯಲ್ಲಿ 82.4 ಮಿಮೀ ದಾಖಲೆ ಮಳೆಯಾಗಿದೆ. ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡಿನಲ್ಲೂ ವರುಣನ ಸಿಂಚನವಾಗಿದ್ದು, ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.&lt;img&gt;&lt;p&gt;&lt;strong&gt;ಬೆಂಗಳೂರು (ಮೇ 18): ರಾ&lt;/strong&gt;ಜ್ಯದಲ್ಲಿ ಬಿಸಿಲಿನ ಬೇಗೆಯ ನಡುವೆಯೇ ವರುಣ ದೇವ ತಂಪೆರೆದಿದ್ದಾನೆ. ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಒಳನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರುವ ಬಗ್ಗೆ ಬೆಂಗಳೂರು ಹವಾಮಾನ ಕೇಂದ್ರ (IMD) ಮಾಹಿತಿ ನೀಡಿದೆ. ವಿಶೇಷವಾಗಿ ಗದಗ ಜಿಲ್ಲೆಯಲ್ಲಿ ಮೇಘಸ್ಫೋಟದ ಮಾದರಿಯಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.&lt;/p&gt;&lt;img&gt;&lt;p&gt;ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಉತ್ತರ ಒಳನಾಡಿನ ಗದಗ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಗದಗ ವೀಕ್ಷಣಾಲಯದಲ್ಲಿ ಬರೊಬ್ಬರಿ 82.4 ಮಿಮೀ ಮಳೆ ದಾಖಲಾಗಿದ್ದರೆ, ಜಿಲ್ಲೆಯ ಹುಲಿಕೋಟೆ ಕೆವಿಕೆ ಕೇಂದ್ರದಲ್ಲಿ 18.0 ಮಿಮೀ ಮಳೆಯಾಗಿದೆ. ಗುಡುಗು ಮತ್ತು ಮಿಂಚಿನ ಸಹಿತ ಸುರಿದ ಈ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.&lt;/p&gt;&lt;p&gt;ಉತ್ತರ ಒಳನಾಡಿನ ಧಾರವಾಡದಲ್ಲಿ 20.0 ಮಿಮೀ&lt;/p&gt;&lt;p&gt;ಕೊಪ್ಪಳದ ಯಲಬುರ್ಗಾದಲ್ಲಿ 19.0 ಮಿಮೀ ಮಳೆಯಾಗುವ ಮೂಲಕ ವರುಣನ ಅಬ್ಬರ ಕಂಡುಬಂದಿದೆ.&lt;/p&gt;&lt;img&gt;&lt;p&gt;ಕರಾವಳಿ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿದ್ದು, ಮಂಗಳೂರು ವಿಮಾನ ನಿಲ್ದಾಣದ ಬಳಿ 13.8 ಮಿಮೀ ಮಳೆಯಾಗಿದೆ.&amp;nbsp;&lt;/p&gt;&lt;p&gt;ಮಲೆನಾಡು ಭಾಗದ ಶಿವಮೊಗ್ಗದ ನವುಲೆಯಲ್ಲಿ 19.5 ಮಿಮೀ ಹಾಗೂ ಇರುವಾಕಿಯಲ್ಲಿ 19.5 ಮಿಮೀ ಮಳೆಯಾಗಿದೆ.&amp;nbsp;&lt;/p&gt;&lt;p&gt;ಚಿಕ್ಕಮಗಳೂರಿನ ಮುಡಿಗೆರೆಯಲ್ಲಿ 3.0 ಮಿಮೀ ಮತ್ತು ಬಾಳೆಹೊನ್ನೂರಿನಲ್ಲಿ ಸಾಧಾರಣ ಮಳೆಯಾಗಿದೆ.&amp;nbsp;&lt;/p&gt;&lt;p&gt;ಶಿರಸಿಯಲ್ಲಿ 10.5 ಮಿಮೀ ಮಳೆಯಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆರಾಯ ತಂಪೆರೆದಿದ್ದಾನೆ.&lt;/p&gt;&lt;img&gt;&lt;p&gt;ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೇಳಿಕೊಳ್ಳುವಂತಹ ಭಾರಿ ಮಳೆಯಾಗದಿದ್ದರೂ, ಎಚ್&zwnj;ಎಎಲ್ (HAL) ವಿಮಾನ ನಿಲ್ದಾಣದ ಸುತ್ತಮುತ್ತ 1.4 ಮಿಮೀ ಸಾಧಾರಣ ಮಳೆಯಾಗಿದೆ. ನಗರದ ಹಲವೆಡೆ ಕ್ಯುಮುಲೋನಿಂಬಸ್ (CB) ಮೋಡಗಳು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ.&lt;/p&gt;&lt;img&gt;&lt;p&gt;ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ (TSRA) ಸಂಭವಿಸಿದ್ದು, ಹವಾಮಾನ ಕೇಂದ್ರದ ರೇಡಾರ್&zwnj;ಗಳಲ್ಲಿ ಕ್ಯುಮುಲೋನಿಂಬಸ್ ಮೋಡಗಳ ತೀವ್ರತೆ ಕಂಡುಬಂದಿದೆ. ಕಲಬುರಗಿ, ಬೆಳಗಾವಿ, ಚಿತ್ರದುರ್ಗ ಮತ್ತು ವಿದ್ಯಾ ನಗರದ ಭಾಗಗಳಲ್ಲಿ ಮೋಡಗಳು ಕವಿದಿದ್ದು, ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆಯಿದೆ. ರೈತರಿಗೆ ಈ ಮಳೆ ಮಿಶ್ರಫಲ ನೀಡಿದ್ದು, ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಕೃಷಿಕರಲ್ಲಿ ಹರ್ಷ ಮೂಡಿಸಿದೆ. ಆದರೆ ಅಕಾಲಿಕ ಗುಡುಗು ಮಿಂಚಿನ ಬಗ್ಗೆ ಜನರು ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಸೂಚಿಸಿದೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-update-heavy-rain-in-gadag-dharwad-mangalore-imd-report-sat-xfa43ha"/>
        </item>
        <item>
            <title><![CDATA[ಶಿವಾನಂದ ನೀಲಣ್ಣವರ ಬಹುಕೋಟಿ ವಂಚನೆ ಪ್ರಕರಣ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ಶಿಕ್ಷಕ ಸಮುದಾಯಕ್ಕೆ ₹ 200 ಕೋಟಿ ದೋಖಾ!]]></title>
            <link>https://kannada.asianetnews.com/karnataka-districts/hubballi-investment-scam-school-teachers-swindled-of-rd200-crore-by-colleagues-turned-agents-gdp/articleshow-yqy52no</link>
            <guid isPermaLink="true">https://kannada.asianetnews.com/karnataka-districts/hubballi-investment-scam-school-teachers-swindled-of-rd200-crore-by-colleagues-turned-agents-gdp/articleshow-yqy52no</guid>
            <pubDate>Thu, 21 May 2026 17:56:18 +0530</pubDate>
            <description><![CDATA[ಧಾರವಾಡ ಜಿಲ್ಲೆಯಲ್ಲಿ ಶಾಲಾ ಶಿಕ್ಷಕರನ್ನೇ ಗುರಿಯಾಗಿಸಿಕೊಂಡು ₹200 ಕೋಟಿಗೂ ಅಧಿಕ ಮೊತ್ತದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭದ ಆಮಿಷವೊಡ್ಡಿ ಹುಬ್ಬಳ್ಳಿಯ ಶಿಕ್ಷಕರೇ ಏಜೆಂಟರಂತೆ ಕಾರ್ಯನಿರ್ವಹಿಸಿ ಹಣ ಸಂಗ್ರಹಿಸಿದ್ದಾರೆ. ನೌಕರಿಗೆ ಕುತ್ತು ಬರುವ ಭಯದಿಂದ ಸಂತ್ರಸ್ತ ಶಿಕ್ಷಕರು ದೂರು ನೀಡಲು ಹಿಂಜರಿಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khwg2ha6enj6kehht736qa8y,imgname-mumbai-immigration-officer-crypto-investment-fraud-79-lakh-loss-whatsapp-eg-plan-scam-cyber-crime-case-2-1771556652358.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ:ಶಿವಾನಂದ ಗೊಂಬಿ&lt;/p&gt;&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ಬೆಳಗಾವಿಯ ಶಿವಂ ಅಸೋಸಿಯೇಟ್ಸ್&zwnj; ಮಾಲೀಕ ಶಿವಾನಂದ ನೀಲಣ್ಣವರ 35 ಸಾವಿರ ಜನರಿಂದ ₹ 4500 ಕೋಟಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಅಂಥದ್ದೇ ಪ್ರಕರಣವೊಂದು ಧಾರವಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶಾಲಾ ಶಿಕ್ಷಕರೇ ಇಲ್ಲಿ ಟಾರ್ಗೇಟ್&zwnj; ಆಗಿದ್ದು, ಶಿಕ್ಷಕ ವೃಂದಕ್ಕೆ ₹ 200 ಕೋಟಿಗೂ ಅಧಿಕ ಹಣ ವಂಚನೆಯಾಗಿದೆ. ಶಿಕ್ಷಕ ಸಮುದಾಯವೇ ಹೆಚ್ಚಾಗಿರುವುದರಿಂದ ನೌಕರಿಗೆ ಎಲ್ಲಿ ಕುತ್ತು ಬರುತ್ತದೆ ಎಂದುಕೊಂಡು ಯಾರೂ ದೂರು ಕೊಡಲು ಮುಂದೆ ಬಂದಿಲ್ಲ. ಇಲ್ಲಿ ಶಿಕ್ಷಕರಿಗೆ ಶಿಕ್ಷಕರೇ ಏಜೆಂಟ್&zwnj;ರಂತೆ ಕೆಲಸ ಮಾಡಿ ವಂಚಿಸಿದ್ದಾರೆ. ಏಳೆಂಟು ವರ್ಷದ ಹಿಂದಿನಿಂದಲೂ ನಡೆದುಕೊಂಡು ಬಂದ ಪ್ರಕರಣ ಇದ್ದಾಗಿದ್ದು ನೀಲಣ್ಣವರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇ ಪ್ರಕರಣದ ಕುರಿತು ಇದೀಗ ಚರ್ಚೆ ಶುರುವಾಗಿದೆ.&lt;/p&gt;&lt;h2&gt;ಹುಬ್ಬಳ್ಳಿಯೇ ಕೇಂದ್ರ ಸ್ಥಾನ:&lt;/h2&gt;&lt;p&gt;ಹುಬ್ಬಳ್ಳಿಯನ್ನೇ ಕೇಂದ್ರವನ್ನಾಗಿಟ್ಟುಕೊಂಡು ನಡೆದ ಈ ಹಗರಣ ಉತ್ತರ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರಕ್ಕೂ ವ್ಯಾಪಿಸಿದೆ. ಹುಬ್ಬಳ್ಳಿಯ ಮೂವರು ಶಿಕ್ಷಕರು ಬರೋಬ್ಬರಿ ನಾಲ್ಕೈದು ವರ್ಷ ನೆಪ ಮಾತ್ರಕ್ಕೆ ಶಾಲೆಗೆ ಹೋಗಿ ಅನ್ಯ ಜಿಲ್ಲೆ, ಶಾಲೆಗಳ ಶಿಕ್ಷಕರನ್ನು ನಂಬಿಸಿ ಹಣ ಹೂಡಿಕೆ ಮಾಡಿಸಿದ್ದಾರೆ. ಇವರ ಈ ಕೆಲಸಕ್ಕೆ ಅಂದಿನ ಬಿಇಒ ಒಬ್ಬರು ಸಾಥ್ ನೀಡಿದ್ದರು ಎನ್ನುವ ಮಾತುಗಳು ದಟ್ಟವಾಗಿವೆ.&lt;/p&gt;&lt;h2&gt;ವಂಚನೆ ನಡೆದಿರುವುದು ಹೀಗೆ&lt;/h2&gt;&lt;p&gt;ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ದೊಡ್ಡ ಮಟ್ಟದ ಬಡ್ಡಿ ಬರುತ್ತದೆ. ಮೂರೇ ವರ್ಷದಲ್ಲಿ ನಿಮ್ಮ ಹಣ ದುಪ್ಪಟ್ಟು ಆಗುತ್ತದೆ ಎಂದು ನಂಬಿಸಿ ಹಣ ಪಡೆಯಲಾಗಿದೆ ಎಂದು ಮೂಲಗಳು ತಿಳಿಸುತ್ತವೆ. ಹೂಡಿಕೆ ಮಾಡಿದ ಶಿಕ್ಷಕರಿಗೆ ಯಾವುದೇ ಷೇರುಗಳ ಖರೀದಿ, ಕಂಪನಿಯ ಹೆಸರು, ಹೂಡಿಕೆಯ ಮೊತ್ತ ಇತ್ಯಾದಿ ದಾಖಲೆ ಯಾರಿಗೂ ನೀಡಿಲ್ಲ.&lt;/p&gt;&lt;h2&gt;ಯಾರಿಗೆ ಹೇಗೆ ಕೊಟ್ಟಿದ್ದು?&lt;/h2&gt;&lt;p&gt;ಮುಂಬೈ ಸಂಪರ್ಕ ಇರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮತ್ತು ಕೊಲ್ಲಾಪುರದ ವ್ಯಕ್ತಿಗಳಿಗೆ (ಇವರ ಅಕೌಂಟಿಗೆ ನೂರಾರು ಆರ್&zwnj;ಟಿಜಿಎಸ್&zwnj;, ಚೆಕ್, ಫೋನ್ ಪೇ ಮೂಲಕ ಜಮಾ ಮಾಡಿದ ದಾಖಲೆಗಳಿವೆ) ಇಬ್ಬರು ಏಜೆಂಟರ ಖಾತೆಗೆ ಶಿಕ್ಷಕರಿಂದ ಹಣ ವರ್ಗಾಯಿಸಿದ್ದಾರೆ. ಇನ್ನು ಹಣ ಹಾಕಿಸಿರುವ ಹುಬ್ಬಳ್ಳಿಯ ಮೂವರು ಶಿಕ್ಷಕರು. ತಾವು ಮಾತ್ರ ಎಲ್ಲೂ ನೇರವಾಗಿ ಹಣ ಪಡೆದಿಲ್ಲ. ಏಜಂಟ್&zwnj;ರಿಗೆ ಹಣ ವರ್ಗಾವಣೆ ಮಾಡಿದವರು ಅದರ ರಶೀದಿಯನ್ನು ತಮ್ಮ ವಾಟ್ಸ್&zwnj;ಆ್ಯಪ್&zwnj;ಗೆ ತರಿಸಿಕೊಂಡಿದ್ದಾರೆ.&lt;/p&gt;&lt;p&gt;ಆರಂಭದಲ್ಲಿ ಕೆಲವು ಪ್ರಮುಖ ಶಿಕ್ಷಕರಿಗೆ ಬಡ್ಡಿ ಸಂದಾಯವಾಗಿದೆ. ಇದನ್ನು ನಂಬಿದ ಎಷ್ಟೋ ಶಿಕ್ಷಕರು ತಮ್ಮ ಪೂರ್ಣ ಪ್ರಮಾಣದ ಸಂಬಳವನ್ನೇ ಹೂಡಿಕೆ ಮಾಡಿದ್ದಾರೆ. ಕೆಲವರು ತಮ್ಮ ಸೈಟ್ ಮಾರಿ ಹಣ ಕಟ್ಟಿದ್ದರೆ, ಕೆಲವರು ಮಕ್ಕಳ ಮದುವೆಗೆಂದು ಕಾಯ್ದಿರಿಸಿದ್ದ ಹಣ, ಪಿಂಚಣಿ ಮೊತ್ತ ಕಟ್ಟಿರುವುದುಂಟು. ಸೊಸೈಟಿಯಲ್ಲಿ ಸಾಲ ಮಾಡಿ ಹಣ ಕಟ್ಟಿದ್ದಾರೆ. ಬರೀ ಶಿಕ್ಷಕರಷ್ಟೇ ಅಲ್ಲ, ಮೂವರು ಬಿಇಒ, ವಿವಿಧ ಜಿಲ್ಲೆಯ ಶಿಕ್ಷಣ ಇಲಾಖೆ ನೌಕರರೂ ಇದರಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಹೀಗೆ ಹೂಡಿಕೆ ಮಾಡಿಸಿರುವ ಹುಬ್ಬಳ್ಳಿ ಶಿಕ್ಷಕರು ದೊಡ್ಡ ಮಟ್ಟದ ಕಮೀಷನ್ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.&lt;/p&gt;&lt;h2&gt;ಪೊಲೀಸ್ ಬಾಗಿ?&lt;/h2&gt;&lt;p&gt;ದುಡ್ಡು ಹಾಕಿಸಿಕೊಂಡಿರುವ ಏಜೆಂಟರು ನಾಪತ್ತೆಯಾಗಿದ್ದು, ಮೊಬೈಲ್&zwnj; ಕೂಡ ಸ್ವಿಚ್&zwnj; ಆಫ್&zwnj; ಆಗಿವೆ. ಇಲ್ಲಿ ಮಧ್ಯವರ್ತಿಗಳಂತೆ ಕೆಲಸ ಮಾಡಿದ್ದ ಶಿಕ್ಷಕರನ್ನು ಕರೆದುಕೊಂಡು ಚಿಕ್ಕೋಡಿ ವ್ಯಕ್ತಿಯ ಮನೆಗೆ ಇಲ್ಲಿನ ಕೆಲ ಶಿಕ್ಷಕರು ತೆರಳಿದ್ದರು. ಅವರ ಹತ್ತಿರದ ಸಂಬಂಧಿಯೂ ಆಗಿದ್ದ ಆಗಿನ ಪಿಎಸ್&zwnj;ಐ ಅವರು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ನಷ್ಟ ಅನುಭವಿಸಿದ್ದಾರೆ. ನಿಮ್ಮ ದುಡ್ಡು ವಾಪಸ್&zwnj; ಕೊಡ್ತಾರೆ ಎಂದು ರಾಜಿ ಮಾಡಿಸಿ ಕಳುಹಿಸಿದ್ದಾರೆ. ಈ ಘಟನೆ ನಡೆದು ಒಂದೂವರೆ ವರ್ಷವೇ ಕಳೆದಿದೆ. ಆದರೆ ಈ ವರೆಗೂ ದುಡ್ಡು ಬಂದಿಲ್ಲ. ಏಜಂಟರು ಸಿಗುತ್ತಿಲ್ಲ.&lt;/p&gt;&lt;p&gt;ದೊಡ್ಡಮಟ್ಟದ ಹಣದ ವಹಿವಾಟು ಸರ್ಕಾರಿ ನೌಕರಿಗೆ ಕುತ್ತು ತಂದೀತು ಎನ್ನುವ ಅಳುಕಿನಿಂದ ಯಾವುದೇ ಶಿಕ್ಷಕರು ಬಾಯಿ ಬಿಡುತ್ತಿಲ್ಲ. ಏನೆಲ್ಲಾ ದಾಖಲೆಗಳು ಇದ್ದರೂ ಪೊಲೀಸರಿಗೆ ದೂರು ನೀಡುತ್ತಿಲ್ಲ. ಆದರೆ, ಹೂಡಿಕೆ ಮಾಡಿಸಿದವರನ್ನು ನಿತ್ಯವೂ ಪೀಡಿಸುತ್ತಿದ್ದಾರೆ.&lt;/p&gt;&lt;p&gt;ಇದೀಗ ನೀಲಣ್ಣವರ ಪ್ರಕರಣದಿಂದ ದುಡ್ಡು ಕಳೆದುಕೊಂಡಿರುವ ಶಿಕ್ಷಕರಿಗೆ ಧೈರ್ಯ ಬಂದಿದ್ದು, ತಾವು ದೂರು ಕೊಟ್ಟರೆ ತಮ್ಮ ದುಡ್ಡು ವಾಪಸ್&zwnj; ಬರಬಹುದೇನೋ ಎಂಬ ಯೋಚನೆಯಲ್ಲಿದ್ದಾರೆ. ಅಲ್ಲದೇ, ಪೊಲೀಸ್&zwnj; ಠಾಣೆ ಮೆಟ್ಟಿಲೇರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.&lt;/p&gt;&lt;p&gt;ಶಿಕ್ಷಕರನ್ನು ನಂಬಿ ನಾನು ಆಸ್ತಿ, ಚಿನ್ನ ಮಾರಿ, ಸಾಲ ಮಾಡಿ ಬರೋಬ್ಬರಿ ₹36 ಲಕ್ಷ ಹೂಡಿಕೆ ಮಾಡಿರುವೆ. ಏಜಂಟನ ಅಕೌಂಟಿಗೆ ಹಣ ವರ್ಗಾವಣೆ ಮಾಡಿರುವೆ. ಬಿಇಒಗಳು ಸೇರಿದಂತೆ ಆರೇಳು ಜನ ಶಿಕ್ಷಕರು ಭಾಗಿಯಾಗಿ ಶಿಕ್ಷಕ ಸಮುದಾಯಕ್ಕೆ ವಂಚಿಸಿದ್ದಾರೆ. ಈ ಹಗರಣದ ಬಗ್ಗೆಯೂ ಸೂಕ್ತ ತನಿಖೆಯಾಗಲಿ.&lt;/p&gt;&lt;p&gt;ಹೆಸರು ಹೇಳಲಿಚ್ಚಿಸದ ಶಿಕ್ಷಕಿ&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-investment-scam-school-teachers-swindled-of-rd200-crore-by-colleagues-turned-agents-gdp/articleshow-yqy52no"/>
        </item>
        <item>
            <title><![CDATA[ಮುಗಿದಿಲ್ಲ ಹಿಜಾಬ್ v ಕೇಸರಿ ವಿವಾದ: ಹುಬ್ಬಳ್ಳಿಯ ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಹಂಚಿ ಶ್ರೀರಾಮ ಸೇನೆ ಪ್ರತಿಭಟನೆ!]]></title>
            <link>https://kannada.asianetnews.com/karnataka-districts/sriram-sene-protest-against-hijab-in-hubballi-by-donning-saffron-shawls-rav/articleshow-ztlmb16</link>
            <guid isPermaLink="true">https://kannada.asianetnews.com/karnataka-districts/sriram-sene-protest-against-hijab-in-hubballi-by-donning-saffron-shawls-rav/articleshow-ztlmb16</guid>
            <pubDate>Tue, 02 Jun 2026 10:26:34 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್&zwnj;ಗೆ ಅವಕಾಶ ನೀಡಿದ್ದನ್ನು ವಿರೋಧಿಸಿ, ಶ್ರೀರಾಮಸೇನಾ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ಹಂಚಿ ಪ್ರತಿಭಟಿಸಿತು. ಸರ್ಕಾರ ಈ ನಿರ್ಧಾರ ಹಿಂಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3aa5xmhtzmkrwrw1gtt27m,imgname-----------------------2026-06-02t101306.486-1780375426996.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಶಾಲೆ-ಕಾಲೇಜಲ್ಲಿ ಅವಕಾಶ ನೀಡಿದ್ದಕ್ಕೆ ಆಕ್ರೋಶ&lt;/li&gt; &lt;li&gt;ವಿದ್ಯಾರ್ಥಿಗಳಿಗೆ ಶ್ರೀರಾಮಸೇನಾಯಿಂದ ಶಾಲು&lt;/li&gt;&lt;/ul&gt;&lt;p&gt;&lt;strong&gt;ಹುಬ್ಬಳ್ಳಿ (ಜೂ.2):&lt;/strong&gt; ರಾಜ್ಯ ಸರ್ಕಾರ(Karnataka government) ಶಾಲಾ-ಕಾಲೇಜುಗಳಲ್ಲಿ ಹಿಜಾಬ್&zwnj;(Hijab)ಗೆ ಅವಕಾಶ ನೀಡಿರುವುದನ್ನು ಖಂಡಿಸಿ ಸೋಮವಾರ ಶ್ರೀರಾಮಸೇನಾ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ(Sri Rama Sena Hindu Rashtra Coordination Committee) ನಗರದ ಕನಕದಾಸ ಶಿಕ್ಷಣ ಸಮಿತಿಯ ಕಾಲೇಜು, ಮಹಿಳಾ ವಿದ್ಯಾಪೀಠ ಸೇರಿದಂತೆ ಹಲವೆಡೆ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಂಚುವ ಮೂಲಕ ಪ್ರತಿಭಟಿಸಿತು.&lt;/p&gt;&lt;h2&gt;ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಚಿಹ್ನೆಗಳಿಂದ ಮುಕ್ತವಾಗಿರಬೇಕು&lt;/h2&gt;&lt;p&gt;ಈ ವೇಳೆ ಶ್ರೀಧರ ಕಲಬುರ್ಗಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಚಿಹ್ನೆಗಳಿಂದ ಮುಕ್ತವಾಗಿರಬೇಕು ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ನಿಯಮಗಳು ಅನ್ವಯವಾಗಬೇಕು ಎಂದು ಈ ಹಿಂದಿನ ಬಿಜೆಪಿ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್&zwnj; ಹಾಕಿಕೊಂಡು ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಜತೆಗೆ ಶಾಲೆಗಳಲ್ಲಿ ಸಮವಸ್ತ್ರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿತ್ತು. ಆದರೆ ಕಾಂಗ್ರೆಸ್&zwnj; ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್&zwnj;ಗೆ ಅವಕಾಶ ನೀಡಿರುವುದು ಖಂಡನಾರ್ಹ.&lt;/p&gt;&lt;h3&gt;ರಾಜ್ಯ ಸರ್ಕಾರ ನಿರ್ಧಾರ ಹಿಂಪಡೆಯದಿದ್ದರೆ ಹೋರಾಟ ತೀವ್ರ&lt;/h3&gt;&lt;p&gt;ಇದನ್ನು ವಿರೋಧಿಸಿ ಶ್ರೀರಾಮಸೇನಾ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ರಾಜ್ಯಾದ್ಯಂತ ಎಲ್ಲ ಕೇಸರಿ ಶಾಲು ವಿತರಿಸುತ್ತಿದ್ದೇವೆ. ರಾಜ್ಯ ಸರ್ಕಾರ ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಶಾಲಾ- ಕಾಲೇಜುಗಳಲ್ಲಿ ಶ್ರೀರಾಮಸೇನೆಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/sriram-sene-protest-against-hijab-in-hubballi-by-donning-saffron-shawls-rav/articleshow-ztlmb16"/>
        </item>
    </channel>
</rss>
