<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Jul 2026 18:43:03 +0530</lastBuildDate>
        <atom:link href="https://kannada.asianetnews.com/rss/dharwad" rel="self" type="application/rss+xml"/>
        <item>
            <title><![CDATA[ಧಾರವಾಡ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟ ಕಾಂಗ್ರೆಸ್-ಬಿಜೆಪಿ ಆಕಾಂಕ್ಷಿಗಳು ಯಾರು?]]></title>
            <link>https://kannada.asianetnews.com/karnataka-districts/disqualification-of-mla-vinay-kulkarni-who-are-the-congress-bjp-aspirants-eyeing-the-dharwad-assembly-constituency-mrq/articleshow-0oitpc1</link>
            <guid isPermaLink="true">https://kannada.asianetnews.com/karnataka-districts/disqualification-of-mla-vinay-kulkarni-who-are-the-congress-bjp-aspirants-eyeing-the-dharwad-assembly-constituency-mrq/articleshow-0oitpc1</guid>
            <pubDate>Mon, 29 Jun 2026 10:12:46 +0530</pubDate>
            <description><![CDATA[ಶಾಸಕ ವಿನಯ ಕುಲಕರ್ಣಿ ಅವರ ಅನರ್ಹತೆಯಿಂದಾಗಿ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಹಲವು ಆಕಾಂಕ್ಷಿಗಳು ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದು, ಕ್ಷೇತ್ರವು ತೀವ್ರ ರಾಜಕೀಯ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw8txtbwk76bh47sjxzsny9d,imgname-dharwad-vinay-kulkarni-1782708103548.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಸವರಾಜ ಹಿರೇಮಠ&lt;/strong&gt;&lt;/p&gt;&lt;p&gt;&lt;strong&gt;ಧಾರವಾಡ: &lt;/strong&gt;ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ವಿನಯ ಕುಲಕರ್ಣಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದರಿಂದ ಧಾರವಾಡ 71ರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಸಿದ್ಧತೆಯ ಗರಿಗೆದರಿದೆ.&lt;/p&gt;&lt;p&gt;ತಮಗಾಗಿರುವ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್&zwnj;ಗೆ ವಿನಯ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರೂ ಮಧ್ಯಂತರ ತಡೆ ಇನ್ನೂ ದೊರೆತಿಲ್ಲ. ಒಂದು ವೇಳೆ ಅಲ್ಲೂ ಅಪರಾಧ ಸಾಬೀತಾದರೆ ಚುನಾವಣಾ ಆಯೋಗ ಮುಂಬರುವ ದಿನಗಳಲ್ಲಿ ಧಾರವಾಡ -71 ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಂಭಾವ್ಯ ಅಭ್ಯರ್ಥಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ.&lt;/p&gt;&lt;p&gt;ಜಿಲ್ಲೆಗೆ ವಿನಯ ಕುಲಕರ್ಣಿ ಪ್ರವೇಶ ನಿಷೇಧ ಇದ್ದಾಗ 2023ರ ವಿಧಾನಸಭಾ ಚುನಾವಣೆ ಪ್ರಚಾರವನ್ನು ಮುನ್ನಡೆಸಿ ಚುನಾವಣೆ ಗೆಲ್ಲಿಸಿಕೊಂಡು ಬರುವಲ್ಲಿ ಶಿವಲೀಲಾ ಕುಲಕರ್ಣಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರ ಶಾಸಕರ ಅನುಪಸ್ಥಿತಿ ಮಧ್ಯೆಯೂ ಕ್ಷೇತ್ರವನ್ನು ಗಮನಿಸುವ ಮೂಲಕ, ಪಕ್ಷದ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಅನುಕಂಪದ ಅಲೆಯೂ ಇದ್ದು, ಉಪ ಚುನಾವಣೆ ನಡೆದರೆ, ಅವರೇ ಕಾಂಗ್ರೆಸ್&zwnj; ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆಗಳು ದಟ್ಟಿವಾಗಿವೆ ಎಂದು ಪಕ್ಷದ ಸ್ಥಳೀಯ ಮುಖಂಡ ಅರವಿಂದ ಏಗನಗೌಡರ ಮಾಹಿತಿ ನೀಡಿದರು.&lt;/p&gt;&lt;h2&gt;&lt;strong&gt;ತವನಪ್ಪ ಅಷ್ಟಗಿ ಉತ್ಸುಕತೆ&lt;/strong&gt;&lt;/h2&gt;&lt;p&gt;ಇದೇ ವೇಳೆ ಕಾಂಗ್ರೆಸ್&zwnj;ನಿಂದ ಸ್ಪರ್ಧಿಸಲು ಜಿಪಂ ಮಾಜಿ ಸದಸ್ಯ, ಕಾಂಗ್ರೆಸ್ಸಿನ ಹಿರಿಯ ಮುಖಂಡ ತವನಪ್ಪ ಅಷ್ಟಗಿ ಸಹ ಉತ್ಸುಕರಾಗಿದ್ದು, ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಮಾತನಾಡಿದ್ದೇನೆ. ಉಪ ಚುನಾವಣೆ ಘೋಷಣೆಯಾದರೆ ಖಂಡಿತ ಸ್ಪರ್ಧಿಸುತ್ತೇನೆ ಎಂದು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.&lt;/p&gt;&lt;h3&gt;&lt;strong&gt;ಬಿಜೆಪಿಯಲ್ಲಿ ಯಾರು?&lt;/strong&gt;&lt;/h3&gt;&lt;p&gt;ಏತನ್ಮಧ್ಯೆ, ಬಿಜೆಪಿ ಸಹ ಉಪ ಚುನಾವಣೆಗೆ ತಯಾರಾಗುತ್ತಿದೆ. ಕಾಂಗ್ರೆಸ್ಸಿನಿಂದ ವಿನಯ ಕುಟುಂಬದ ಸದಸ್ಯರಿಗೆ ಟಿಕೆಟ್&zwnj; ನೀಡಬಹುದು ಎಂಬ ಚಿಂತನೆಯಲ್ಲಿ ಮಹಿಳಾ ಅಭ್ಯರ್ಥಿಗಳು ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಶಾಸಕಿಯಾಗಿ ಕ್ಷೇತ್ರಕ್ಕೆ ಮಾಡಿರುವ ಕಾರ್ಯ, ಪಕ್ಷಕ್ಕಾಗಿ ಶ್ರಮಕ್ಕಾಗಿ ನಾನೂ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಸೀಮಾ ಮಸೂತಿ ಹೇಳುತ್ತಾರೆ. ಅದೇ ರೀತಿ ಸವಿತಾ ಅಮರಶೆಟ್ಟಿ ಸಹ ಆಕಾಂಕ್ಷಿಯಾಗಿದ್ದಾರೆ.&lt;/p&gt;&lt;p&gt;ಸಾಮಾನ್ಯವಾಗಿ ಇಡೀ ಪಕ್ಷವೇ ಉಪಚುನಾವಣೆಗೆ ಹೋರಾಡುವ ಕಾರಣ ಪಕ್ಷವೇ ಮುಖ್ಯ ಎನಿಸುತ್ತದೆಯೇ ಹೊರತು ಸ್ಪರ್ಧಿಸಿರುವ ವ್ಯಕ್ತಿ ನೆಪ ಮಾತ್ರ. ಇಲ್ಲಿ ಅನುಕಂಪ ಸಹ ನಡೆಯೋದಿಲ್ಲ. ಆದ್ದರಿಂದ ಕ್ಷೇತ್ರದ ಶಾಸಕನಾಗಲು ನಾನು ಸಹ ಅರ್ಹನಾಗಿದ್ದೇನೆ ಎಂದು ಮಾಜಿ ಮೇಯರ್&zwnj; ಈರೇಶ ಅಂಚಟಗೇರಿ ಹೇಳುತ್ತಾರೆ. ಇನ್ನು, ಕ್ಷೇತ್ರವನ್ನು ಈ ಮೊದಲು ಪ್ರತಿನಿಧಿಸಿದ್ದ ಮಾಜಿ ಶಾಸಕ ಅಮೃತ ದೇಸಾಯಿ ಸ್ಪರ್ಧಿಸಲಿದ್ದಾರೆಯೇ ಎಂಬುದು ಖಚಿತಗೊಂಡಿಲ್ಲ. ಇದರೊಂದಿಗೆ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಶಶಿಮೌಳಿ ಕುಲಕರ್ಣಿ ನನಗೂ ಟಿಕೆಟ್&zwnj; ಕೊಡಿ ಎಂದು ವರಿಷ್ಠರಿಗೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಪರಿಸಬಹುದು.&lt;/p&gt;&lt;h3&gt;&lt;strong&gt;ತೀವ್ರ ಪೈಪೋಟಿ&lt;/strong&gt;&lt;/h3&gt;&lt;p&gt;ಕಳೆದ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್&zwnj; ಜಯ ಸಾಧಿಸಿದ್ದು, ಧಾರವಾಡ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದರೆ, ಅದೇ ಮಾದರಿಯಲ್ಲಿ ಗೆಲ್ಲಿಸಿಕೊಂಡು ಬರಲು ಮುಖ್ಯಮಂತ್ರಿ ಆದಿಯಾಗಿ ಸರ್ಕಾರವೇ ಪಣ ತೊಡಬಹುದು. ಹಾಗೆಯೇ, ತಾನು ಕಳೆದುಕೊಂಡ ಕ್ಷೇತ್ರವನ್ನು ಬಿಜೆಪಿ ಮರಳಿ ಪಡೆಯಲು ಬಿಜೆಪಿ ಭಗೀರಥ ಪ್ರಯತ್ನ ಮಾಡುವುದರಲ್ಲಿ ಸಂಶಯವೇ ಇಲ್ಲ. ಒಟ್ಟಾರೆ, ಉಪ ಚುನಾವಣೆ ಘೋಷಣೆಯಾದರೆ, ಎರಡು ಪಕ್ಷಗಳಿಂದ ತೀವ್ರ ಪೈಪೋಟಿ ಏರ್ಪಡಲಿದ್ದು, 2028ರ ಚುನಾವಣೆಯ ದಿಕ್ಸೂಚಿಯಾಗಿ ಉಪ ಚುನಾವಣೆ ಪರಿಣಮಿಸುವುದು ಮಾತ್ರ ನಿಶ್ಚಿತ ಎನ್ನುವುದು ರಾಜಕೀಯ ವಿಶ್ಲೇಷಣೆ.&lt;/p&gt;&lt;p&gt;&lt;strong&gt;ಟಿಕೆಟ್ ಆಕಾಂಕ್ಷಿಗಳು&lt;/strong&gt;&lt;/p&gt;&lt;ul&gt; &lt;li&gt;ಶಿವಲೀಲಾ ಕುಲಕರ್ಣಿ&lt;/li&gt; &lt;li&gt;ತವನಪ್ಪ ಅಷ್ಟಗಿ&lt;/li&gt; &lt;li&gt;ಸೀಮಾ ಮಸೂತಿ&lt;/li&gt; &lt;li&gt;ಈರೇಶ ಅಂಚಟಗೇರಿ&lt;/li&gt; &lt;li&gt;ಅಮೃತ ದೇಸಾಯಿ&lt;/li&gt; &lt;li&gt;ಸವಿತಾ ಅಮರಶೆಟ್ಟಿ&lt;/li&gt;&lt;/ul&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/disqualification-of-mla-vinay-kulkarni-who-are-the-congress-bjp-aspirants-eyeing-the-dharwad-assembly-constituency-mrq/articleshow-0oitpc1"/>
        </item>
        <item>
            <title><![CDATA[ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್:  6 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!]]></title>
            <link>https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</link>
            <guid isPermaLink="true">https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</guid>
            <pubDate>Wed, 08 Jul 2026 11:25:56 +0530</pubDate>
            <description><![CDATA[ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಮೆಗಾ ಆಪರೇಷನ್&zwnj;ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx04edrp64anbam01r602epp,imgname-lokayukta-raids-in-across-karnataka-1783489836822.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿದಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಇಂದು ಮುಂಜಾನೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನೂರಾರು ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಈ ಮೆಗಾ ಆಪರೇಷನ್ ಕೈಗೊಂಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;ಧಾರವಾಡ ಮತ್ತು ಶಿವಮೊಗ್ಗ: ಎಸಿಎಫ್ ಕಿರಣ್ ಅಂಗಡಿಗೆ ಶಾಕ್!&lt;/h2&gt;&lt;p&gt;ಶಿವಮೊಗ್ಗದ ಅರಣ್ಯ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಗಿ ಸೇವೆ ಸಲ್ಲಿಸುತ್ತಿರುವ ಕಿರಣ್ ಅಂಗಡಿ ಅವರಿಗೆ ಸೇರಿದ ಧಾರವಾಡ ಮತ್ತು ಶಿವಮೊಗ್ಗದ ಒಟ್ಟು ೫ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಧಾರವಾಡದ ಲೋಕಾ ಎಸ್ಪಿ ಸಿದ್ದಲಿಂಗಪ್ಪ ಹಾಗೂ ಶಿವಮೊಗ್ಗದ ಲೋಕಾಯುಕ್ತ ಇನ್&zwnj;ಸ್ಪೆಕ್ಟರ್ ವೀರಬಸಪ್ಪ ಕುಶಲಾಪೂರ ಮತ್ತು ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರುವ ಐಷಾರಾಮಿ ಮನೆ, ಅಳ್ನಾವರ ರಸ್ತೆಯಲ್ಲಿರುವ ಫಾರ್ಮ್ ಹೌಸ್, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪತ್ನಿಯ ಹೆಸರಿನಲ್ಲಿದೆ ಎನ್ನಲಾದ ಉದ್ಯಮ) ಹಾಗೂ ಅವರ ಸೋದರ ಮಾವನ ಮನೆಗಳ ಮೇಲೆ ಶೋಧ ನಡೆಸಲಾಗುತ್ತಿದೆ.&lt;/p&gt;&lt;h2&gt;ಶಿವಮೊಗ್ಗದ ಕಚೇರಿ ಮೇಲೂ ದಾಳಿ&lt;/h2&gt;&lt;p&gt;ಇತ್ತ ಶಿವಮೊಗ್ಗದ ಆಲ್ಕೋಳ ರಸ್ತೆಯಲ್ಲಿರುವ ಕಿರಣ್ ಅಂಗಡಿ ಅವರ ಅರಣ್ಯ ಸಂಶೋಧನಾ ಕಚೇರಿಯ ಮೇಲೂ ಲೋಕಾಯುಕ್ತ ತಂಡ ತಪಾಸಣೆ ನಡೆಸುತ್ತಿದೆ. ದಾಳಿಯ ವೇಳೆ ಅಧಿಕಾರಿ ಕಿರಣ್ ಅಂಗಡಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಐದು ಜನರ ಅಧಿಕಾರಿಗಳ ತಂಡ ಸದ್ಯ ದಾಖಲೆಗಳನ್ನು ಜಾಲಾಡುತ್ತಿದೆ.&lt;/p&gt;&lt;h2&gt;ರಾಯಚೂರು: ಕೆಬಿಜೆಎನ್&zwnj;ಎಲ್ ಇಇ ಬಸನಗೌಡಗೆ ಸೇರಿದ 7 ಕಡೆ ದಾಳಿ&lt;/h2&gt;&lt;p&gt;ರಾಯಚೂರಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಕಾರ್ಯನಿರ್ವಾಹಕ ಇಂಜಿನಿಯರ್ (EE) ಬಸನಗೌಡ ಅವರ ವಿರುದ್ಧ ಲೋಕಾಯುಕ್ತರು ತನಿಖೆ ತೀವ್ರಗೊಳಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ 7 ಪ್ರತ್ಯೇಕ ತಂಡಗಳು ಏಕಕಾಲದಲ್ಲಿ 7 ಕಡೆ ಧಾಳಿ ನಡೆಸಿವೆ. ಬಸನಗೌಡ ಅವರ ರಾಯಚೂರು ನಗರದ ಎಚ್.ಆರ್.ಬಿ ಲೇಔಟ್&zwnj;ನಲ್ಲಿರುವ ಮನೆ, ಯಕ್ಲಾಸಪುರದ ಸೆಲೆಬ್ರಿಟಿ ಗಾರ್ಡನ್&zwnj;ನಲ್ಲಿರುವ ಅಣ್ಣನ ಮನೆ ಹಾಗೂ ಯಕ್ಲಾಪುರದ ತೋಟದ ಮನೆಯಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ.&lt;/p&gt;&lt;h2&gt;ಬಾರ್ ಮತ್ತು ಪೆಟ್ರೋಲ್ ಬಂಕ್ ಪತ್ತೆ&lt;/h2&gt;&lt;p&gt;ಬಸನಗೌಡ ಅವರ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ನಾಯರಾ ಪೆಟ್ರೋಲ್ ಬಂಕ್, ಅದರ ಪಕ್ಕದಲ್ಲೇ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಗೋದಾಮಿನ (Warehouse) ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ದೇವದುರ್ಗ ತಾಲೂಕಿನ ಚಿಕ್ಕ ಹೊನ್ನಕುಣಿ ವ್ಯಾಪ್ತಿಯ ಕೆಬಿಜೆಎನ್&zwnj;ಎಲ್ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.&lt;/p&gt;&lt;h2&gt;ಚಿತ್ರದುರ್ಗ ಆರ್&zwnj;ಎಫ್&zwnj;ಒ ಮತ್ತು ಪ್ರೊಫೆಸರ್ ಮನೆಗೆ ಅಧಿಕಾರಿಗಳ ಎಂಟ್ರಿ&lt;/h2&gt;&lt;p&gt;ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇಬ್ಬರು ಪ್ರಮುಖ ಅಧಿಕಾರಿಗಳ ಆಸ್ತಿಪಾಸ್ತಿಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿದೆ. ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿರುವ ವಲಯ ಅರಣ್ಯಾಧಿಕಾರಿ (RFO) ದುಗ್ಗಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರೊಫೆಸರ್ ಶಂಕರ್ ಅವರ ಮನೆ ಹಾಗೂ ತೋಟದ ಮೇಲೂ ಲೋಕಾಯುಕ್ತರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.&lt;/p&gt;&lt;h2&gt;ಕಲಬುರಗಿ ಜೇಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಫ್ಲ್ಯಾಟ್ ಮೇಲೆ ದಾಳಿ&lt;/h2&gt;&lt;p&gt;ಕಲಬುರಗಿಯಲ್ಲಿ ಜೆಸ್ಕಾಂ (GESCOM) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಅಮೃತರಾವ್ ಯಲಾಲ್ ಅವರಿಗೆ ಸೇರಿದ ಕಚೇರಿ ಹಾಗೂ ಮನೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ ತಂಡ ದಾಳಿ ಮಾಡಿದೆ. ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿರುವ ನಿವಾಸ, ಬಸವ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಫ್ಲ್ಯಾಟ್, ಮತ್ತು ಕೊತ್ತಂಬರಿ ಲೇಔಟ್&zwnj;ನಲ್ಲಿರುವ ಜೇಸ್ಕಾಂ ಕಚೇರಿಗಳ ಮೇಲೆ ದಾಳಿಯಾಗಿದೆ. ಇದಲ್ಲದೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮನೆಯ ಮೇಲೂ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಎಇಇ ಅಮೃತರಾವ್ ಅವರು ಜಾಗೃತಿ ಕಾಲೋನಿಯಲ್ಲಿ 'ಪ್ಲಾಟಿನಂ ಸ್ಟುಡಿಯೋ' ಎಂಬ ಹೈಟೆಕ್ ಸ್ಟುಡಿಯೋ ಹೊಂದಿದ್ದು, ನಂದೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫ್ಲ್ಯಾಟ್ ಹಾಗೂ ವಿವಿಧೆಡೆ 20 ಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;ತುಮಕೂರು ಸಣ್ಣ ನೀರಾವರಿ ಇಲಾಖೆ ಎಇಇ ಮನೆ ಮೇಲೆ ಲೋಕಾ ದಾಳಿ&lt;/h2&gt;&lt;p&gt;ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇ ಆಗಿರುವ ಮಧುಸೂದನ್ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಮಧುಸೂದನ್ ಮನೆ. ಸಣ್ಣ ನೀರಾವರಿ ಇಲಾಖೆ ತಿಪಟೂರು ಉಪವಿಭಾಗದಲ್ಲಿ ಎಇಇ ಆಗಿ ಕೆಲಸ ಮಾಡುತ್ತಿರುವ ಮಧುಸೂದನ್ ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಲೋಕಾ ದಾಳಿ. ಮಧುಸೂದನ್ ಮನೆಯನ್ನ ಪರಿಶೀಲನೆ ನಡೆಸುತ್ತಿರುವ ಲೋಕಾ ಟೀಮ್. ಸದ್ಯ ಎಲ್ಲಾ ಕಡೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ಚಿನ್ನಾಭರಣ, ನಗದು ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಬೇಕಿದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet"/>
        </item>
        <item>
            <title><![CDATA[Dharwad: ದಪ್ಪಗಿದ್ದೀಯಾ..... ನಿನಗೆ ಮಗು ಆಗಲ್ಲವೆಂದು ಹೀಯಾಳಿಸಿ ಹೆಂಡತಿಯ ಕತ್ತು ಹಿಸುಕಿ ಕೊಂದ ಗಂಡ!]]></title>
            <link>https://kannada.asianetnews.com/karnataka-districts/dharwad-news-man-kills-wife-over-weight-and-dowry-in-navalgund-gdp/articleshow-33f184r</link>
            <guid isPermaLink="true">https://kannada.asianetnews.com/karnataka-districts/dharwad-news-man-kills-wife-over-weight-and-dowry-in-navalgund-gdp/articleshow-33f184r</guid>
            <pubDate>Wed, 01 Jul 2026 11:15:42 +0530</pubDate>
            <description><![CDATA[ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ, ವರದಕ್ಷಿಣೆ ಹಾಗೂ ದಪ್ಪಗಿದ್ದಾಳೆಂಬ ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮದುವೆಯಾದ ಒಂದು ವರ್ಷದಲ್ಲೇ ನಡೆದ ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಪತಿ ಬಸವರಾಜ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwe34j9n7xqgvfwpdycy1zft,imgname-dharwad-husband-kills-wife-1782884485428.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಹೆಂಡತಿ ದಪ್ಪಗಿದ್ದಾಳೆ, ಆಕೆಗೆ ಮಗು ಹೆರಲು ಶಕ್ತಳಲ್ಲ ಎಂಬ ಕ್ಷುಲ್ಲಕ ಕಾರಣ ಹಾಗೂ ವರದಕ್ಷಿಣೆ ಆಸೆಗೆ ಇಲ್ಲೊಬ್ಬ ಪಾಪಿ ಪತಿ ತನ್ನ ಹೆಂಡತಿಯನ್ನೇ ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಪ್ರಿಯಾಂಕಾ ಕಮಲಾಕರ್ (29) ಕೊಲೆಯಾದ ದುರ್ದೈವಿ ಮಹಿಳೆ. ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ಕೊಂದ ಆರೋಪಿ ಪತಿ ಬಸವರಾಜ್ ವಡ್ಡರ್ ಹಾಗೂ ಆತನಿಗೆ ಸಾಥ್ ನೀಡಿದ ಮೂವರನ್ನು ನವಲಗುಂದ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.&lt;/p&gt;&lt;h2&gt;ಮದುವೆಯಾದ ಒಂದೇ ವರ್ಷಕ್ಕೆ ಶುರುವಾಯ್ತು ನರಕಯಾತನೆ&lt;/h2&gt;&lt;p&gt;ಮೃತ ಪ್ರಿಯಾಂಕಾ ಹಾಗೂ ಆರೋಪಿ ಬಸವರಾಜ್&zwnj; ಅವರ ವಿವಾಹ ಕಳೆದ 2024 ರಲ್ಲಿ ಅದ್ದೂರಿಯಾಗಿ ನಡೆದಿತ್ತು. ಮದುವೆಯಾದ ಮೊದಲ ಕೆಲವು ತಿಂಗಳುಗಳು ಚೆನ್ನಾಗಿಯೇ ಇದ್ದ ಈ ದಂಪತಿಗಳ ಸಂಸಾರದಲ್ಲಿ ತದನಂತರ ಬಿರುಗಾಳಿ ಎದ್ದಿದೆ. ಮದುವೆಯಾದ ಒಂದೇ ವರ್ಷದಲ್ಲಿ ಪತಿ ಬಸವರಾಜ್ ಮತ್ತು ಆತನ ಕುಟುಂಬಸ್ಥರು ಪ್ರಿಯಾಂಕಾಗೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರಂತೆ. ತವರು ಮನೆಯಿಂದ ಇನ್ನಷ್ಟು ಬಂಗಾರ ಹಾಗೂ ಹಣವನ್ನು ತೆಗೆದುಕೊಂಡು ಬರುವಂತೆ ನಿರಂತರವಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ.&lt;/p&gt;&lt;h2&gt;ಶಾರೀರಿಕ ದೌರ್ಬಲ್ಯದ ನೆಪ, ಮೃಗೀಯ ವರ್ತನೆ&lt;/h2&gt;&lt;p&gt;ವರದಕ್ಷಿಣೆ ಕಿರುಕುಳದ ಜೊತೆಗೆ, ಪ್ರಿಯಾಂಕಾ ಕೊಂಚ ದಪ್ಪಗಿದ್ದಾರೆ ಎಂಬ ಕಾರಣವನ್ನು ಇಟ್ಟುಕೊಂಡು ಪತಿ ಬಸವರಾಜ್ ನಿತ್ಯ ಜಗಳ ಕಾಯುತ್ತಿದ್ದನು. &quot;ನೀನು ತುಂಬಾ ದಪ್ಪಗಿದ್ದೀಯಾ, ನಿನಗೆ ಗರ್ಭಿಣಿಯಾಗಲು ಸಾಧ್ಯವಿಲ್ಲ, ನೀನು ಮಗು ಹೆರಲಾರೆ&quot; ಎಂದು ನಿಷ್ಠೂರವಾಗಿ ಚುಚ್ಚಿ ಮಾತನಾಡುತ್ತಾ ಆಕೆಯನ್ನು ಹಿಂಸಿಸುತ್ತಿದ್ದನು. ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ತೀವ್ರ ಗಲಾಟೆ ನಡೆಯುತ್ತಿತ್ತು.&lt;/p&gt;&lt;h2&gt;ಸೋಮವಾರ ರಾತ್ರಿ ಜೋರಾದ ಗಲಾಟೆ&lt;/h2&gt;&lt;p&gt;ಕಳೆದ ಸೋಮವಾರ ರಾತ್ರಿ ಹಣಸಿ ಗ್ರಾಮದ ತಮ್ಮ ನಿವಾಸದಲ್ಲಿ ಪತಿ-ಪತ್ನಿ ನಡುವೆ ಇದೇ ವಿಷಯವಾಗಿ ಮತ್ತೆ ದೊಡ್ಡ ಜಗಳ ನಡೆದಿದೆ. ಈ ವೇಳೆ ಅತಿಯಾಗಿ ಕೋಪಗೊಂಡ ಬಸವರಾಜ್, ಮಾನವೀಯತೆಯನ್ನೇ ಮರೆತು ಪ್ರಿಯಾಂಕಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ಭೀಕರ ಘಟನೆಯನ್ನು ಮುಚ್ಚಿಹಾಕಲು ಆರೋಪಿಗಳು ಪ್ರಯತ್ನ ಪಟ್ಟಿದ್ದಾರೆ. ಪ್ರಿಯಾಂಕಾ ಸಾವಿನ ಸುತ್ತ ಅನುಮಾನ ಬಂದಾಗ ತವರು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.&lt;/p&gt;&lt;h2&gt;ನಾಲ್ವರು ಆರೋಪಿಗಳ ಬಂಧನ&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ನೀಡಿದ ದೂರಿನನ್ವಯ ನವಲಗುಂದ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಯ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮುಖ್ಯ ಆರೋಪಿ ಬಸವರಾಜ್ ವಡ್ಡರ್ ಸೇರಿದಂತೆ ಕೊಲೆ ಹಾಗೂ ಕಿರುಕುಳಕ್ಕೆ ಸಾಥ್ ನೀಡಿದ ಆರೋಪದ ಮೇಲೆ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಬಸವರಾಜ್ (ಪತಿ), ರೇಣವ್ವ, ಸುಭಾಷ್, ಸಿದ್ದರಾಮೇಶ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಸದ್ಯ ಪೊಲೀಸರು ನಾಲ್ಕೂ ಜನ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು, ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/dharwad-news-man-kills-wife-over-weight-and-dowry-in-navalgund-gdp/articleshow-33f184r"/>
        </item>
        <item>
            <title><![CDATA[ಲವ್ ಜಿಹಾದ್ ಆರೋಪ ಹೊತ್ತಿದ್ದ ಯೂಟ್ಯೂಬರ್ ಮುಕಳೆಪ್ಪನಿಂದ ಹಿಂದೂ ಸಂಪ್ರದಾಯದಂತೆ ಪತ್ನಿಯ ಸೀಮಂತ ಶಾಸ್ತ್ರ!]]></title>
            <link>https://kannada.asianetnews.com/dharwad/youtuber-mukaleppa-who-faced-love-zihad-allegations-performs-wifes-seemanta-shashtra-ceremoney-in-hindu-tradition-gkn/articleshow-49s57s7</link>
            <guid isPermaLink="true">https://kannada.asianetnews.com/dharwad/youtuber-mukaleppa-who-faced-love-zihad-allegations-performs-wifes-seemanta-shashtra-ceremoney-in-hindu-tradition-gkn/articleshow-49s57s7</guid>
            <pubDate>Tue, 14 Jul 2026 08:05:10 +0530</pubDate>
            <description><![CDATA[ಖ್ಯಾತ ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಖ್ವಾಜಾ ಶಿರಹಟ್ಟಿ, ತಮ್ಮ ಹಿಂದೂ ಪತ್ನಿ ಗಾಯತ್ರಿ ಅವರ ಸೀಮಂತ ಕಾರ್ಯವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದಾರೆ. ಲವ್ ಜಿಹಾದ್ ಆರೋಪದ ವಿವಾದದ ನಂತರ, ಈ ದಂಪತಿ ಪತ್ನಿಯ ಸಂಪ್ರದಾಯಕ್ಕೆ ಗೌರವ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxf7hygy6p4n5bm99kpwq2q9,imgname-youtuber-mukaleppa-1783996414494.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಉತ್ತರ ಕರ್ನಾಟಕದ ಮನೆಮಾತಾಗಿರುವ ಖ್ಯಾತ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಯಾವುದೇ ವಿವಾದಕ್ಕಾಗಿ ಅಲ್ಲ. ಬದಲಾಗಿ ತಮ್ಮ ಪತ್ನಿಯ ಸೀಮಂತ ಕಾರ್ಯವನ್ನು ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ನೆರವೇರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.&lt;/p&gt;&lt;h2&gt;&lt;strong&gt;ಯಾರು ಈ ಮುಕಳೆಪ್ಪ?&lt;/strong&gt;&lt;/h2&gt;&lt;p&gt;ಧಾರವಾಡ ಮೂಲದ ಖ್ವಾಜಾ ಶಿರಹಟ್ಟಿ, ಸೋಶಿಯಲ್ ಮೀಡಿಯಾದಲ್ಲಿ ಮುಕಳೆಪ್ಪ ಎಂದೇ ಫೇಮಸ್. ಮುಕಳೆಪ್ಪ ರಿಯಲ್ ಟೀಮ್ ಮತ್ತು ಶಂಕರಪ್ಪ ಕಾಮಿಡಿ ಯೂಟ್ಯೂಬ್ ಚಾನೆಲ್&zwnj;ಗಳ ಮೂಲಕ ಉತ್ತರ ಕರ್ನಾಟಕದ ಸೊಗಡಿನ ಕಾಮಿಡಿ ವಿಡಿಯೋಗಳನ್ನು ಮಾಡುತ್ತಾ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ವಿವಾದದ ಹಿನ್ನೆಲೆ&lt;/strong&gt;&lt;/h3&gt;&lt;p&gt;ಕಳೆದ ವರ್ಷ ಸೆಪ್ಟೆಂಬರ್&zwnj;ನಲ್ಲಿ ಖ್ವಾಜಾ ಅವರು ಗಾಯತ್ರಿ ಜಾಲಿಹಾಳ ಎಂಬ ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಖ್ವಾಜಾ ಅವರು ಹಿಂದೂ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಯುವತಿಯನ್ನು ಪುಸಲಾಯಿಸಿ ಮದುವೆಯಾಗಿದ್ದಾರೆ ಎಂದು ಯುವತಿಯ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಆರೋಪಿಸಿದ್ದವು. ಈ ಸಂಬಂಧ ಲವ್ ಜಿಹಾದ್ ಆರೋಪದಡಿ ಧಾರವಾಡ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ಕೂಡ ದಾಖಲಾಗಿತ್ತು.&lt;/p&gt;&lt;h3&gt;&lt;strong&gt;ಹಿಂದೂ ಸಂಪ್ರದಾಯದಂತೆ ಸೀಮಂತ&lt;/strong&gt;&lt;/h3&gt;&lt;p&gt;ಎಲ್ಲಾ ವಿವಾದಗಳು ಮತ್ತು ಪ್ರತಿರೋಧಗಳ ನಡುವೆಯೂ ಈ ದಂಪತಿ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಇದೀಗ ಗಾಯತ್ರಿ ಅವರು ಗರ್ಭಿಣಿಯಾಗಿದ್ದು, ಮುಸ್ಲಿಂ ಧರ್ಮದವರಾಗಿದ್ದರೂ ಖ್ವಾಜಾ ಅವರು ಪತ್ನಿಯ ಆಸೆ ಮತ್ತು ಸಂಪ್ರದಾಯಕ್ಕೆ ಗೌರವ ನೀಡಿ, ಸಂಪೂರ್ಣ ಹಿಂದೂ ವಿಧಿವಿಧಾನದಂತೆ ಸೀಮಂತ ಕಾರ್ಯವನ್ನು ನೆರವೇರಿಸಿದ್ದಾರೆ. ಹಸಿರು ಬಳೆ ತೊಟ್ಟು, ಮೈತುಂಬಾ ಒಡವೆ ಧರಿಸಿದ ಗಾಯತ್ರಿ ಅವರಿಗೆ ಆರತಿ ಎತ್ತಿ, ಸಂಪ್ರದಾಯದಂತೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಈ ಫೋಟೋಗಳು ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ&lt;/strong&gt;&lt;/h3&gt;&lt;p&gt;ಒಂದು ಕಾಲದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಈ ಜೋಡಿಯ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದರೂ, ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಧರ್ಮ ಯಾವುದಾದರೇನು, ಪತ್ನಿಯ ಸಂಪ್ರದಾಯಕ್ಕೆ ಗೌರವ ಕೊಡುವುದು ದೊಡ್ಡ ಗುಣ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ವಿವಾದಗಳ ಸುಳಿಯಲ್ಲಿದ್ದ ಮುಕಳೆಪ್ಪ ಈಗ ಪತ್ನಿಯ ಸೀಮಂತ ಕಾರ್ಯದ ಮೂಲಕ ಹೊಸದೊಂದು ಸಂದೇಶ ಸಾರಲು ಹೊರಟಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/dharwad/youtuber-mukaleppa-who-faced-love-zihad-allegations-performs-wifes-seemanta-shashtra-ceremoney-in-hindu-tradition-gkn/articleshow-49s57s7"/>
        </item>
        <item>
            <title><![CDATA[ಇಂಡೋನೇಷ್ಯಾಕ್ಕೆ ಧಾರವಾಡ ಗೋದಿ ಕೊಟ್ಟ ಮೋದಿ; ಧಾರವಾಡ ವಿವಿ ಶೋಧಿಸಿದ ತಳಿ ಇದು]]></title>
            <link>https://kannada.asianetnews.com/karnataka-districts/indonesia-india-agreement-for-seed-supply-of-dwr-162-variety-of-wheat-rav/articleshow-4f9v05h</link>
            <guid isPermaLink="true">https://kannada.asianetnews.com/karnataka-districts/indonesia-india-agreement-for-seed-supply-of-dwr-162-variety-of-wheat-rav/articleshow-4f9v05h</guid>
            <pubDate>Thu, 09 Jul 2026 05:47:14 +0530</pubDate>
            <description><![CDATA[&lt;p&gt;ಮೂರು ದಿನಗಳ ಕಾಲ ಇಂಡೋನೇಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಆ ದೇಶಕ್ಕೆ 100 ಟನ್&zwnj; ಉತ್ಕೃಷ್ಟ ದರ್ಜೆಯ &lsquo;ಡಿಡಬ್ಲ್ಯುಆರ್&zwnj; 162&rsquo; ತಳಿಯ ಗೋದಿ ಬಿತ್ತನೆ ಬೀಜ ಪೂರೈಸುವುದಾಗಿ ಘೋಷಿಸಿದ್ದಾರೆ. ವಿಶೇಷ ಎಂದರೆ, ಈ &amp;nbsp;ತಳಿಯನ್ನು ಅಭಿವೃದ್ಧಿಪಡಿಸಿದ್ದು ಕರ್ನಾಟಕದ ಧಾರವಾಡದ ಕೃಷಿ ವಿಶ್ವವಿದ್ಯಾಲಯ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx239vcp7wqsk4nef0ga5ar8,imgname-----------------------2026-07-09t053700.781-1783555747221.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಧಾರವಾಡ (ಜು.9): &lt;/strong&gt;ಮೂರು ದಿನಗಳ ಕಾಲ ಇಂಡೋನೇಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಆ ದೇಶಕ್ಕೆ 100 ಟನ್&zwnj; ಉತ್ಕೃಷ್ಟ ದರ್ಜೆಯ &lsquo;ಡಿಡಬ್ಲ್ಯುಆರ್&zwnj; 162&rsquo; ತಳಿಯ ಗೋದಿ ಬಿತ್ತನೆ ಬೀಜಗಳನ್ನು ಪೂರೈಸುವುದಾಗಿ ಘೋಷಿಸಿದ್ದಾರೆ. ವಿಶೇಷ ಎಂದರೆ, ಈ &lsquo;ಡಿಡಬ್ಲ್ಯುಆರ್&zwnj; 162&rsquo; ತಳಿಯನ್ನು ಅಭಿವೃದ್ಧಿಪಡಿಸಿದ್ದು ಕರ್ನಾಟಕದ ಧಾರವಾಡದ ಕೃಷಿ ವಿಶ್ವವಿದ್ಯಾಲಯ!&lt;/p&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಾದೇಶಿಕ ಆಹಾರ ಭದ್ರತೆ ಮತ್ತು ಕೃಷಿ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಗೋಧಿ ಬೀಜ ಪೂರೈಕೆಗೆ ಸಂಬಂಧಿಸಿದಂತೆ ಒಪ್ಪಂದ ಆಗಿದ್ದು, ಇದರ ಭಾಗವಾಗಿ ಧಾರವಾಡದ ಕೃಷಿ ವಿವಿ ಅಭಿವೃದ್ಧಿಪಡಿಸಿದ ಬೀಜಗಳನ್ನು ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.&lt;/p&gt;&lt;p&gt;ಗೋದಿಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದು, ಈ ಪ್ರದೇಶಗಳಲ್ಲಿ ಗೋದಿ ಬೆಳೆಯುವ ಅವಧಿಯುದ್ದಕ್ಕೂ ಉಷ್ಣಾಂಶ ಹೆಚ್ಚಾಗಿರುತ್ತದೆ. ಬೆಳೆ ಅವಧಿ ಕಡಿಮೆ ಇರಬೇಕು ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಗೋದಿ ತಳಿಗಳ ಅಭಿವೃದ್ಧಿಯಾಗಬೇಕು ಎಂಬುದು 1980ರ ದಶಕದಲ್ಲಿ ಪ್ರಮುಖ ಸಂಶೋಧನಾ ಗುರಿಯಾಗಿತ್ತು. ಆಗ ಧಾರವಾಡ ಕೃಷಿ ವಿವಿಯು ಅಂದಿನ ಗೋದಿ ತಳಿ ಶಾಸ್ತ್ರಜ್ಞರು, ಕೃಷಿ ವಿವಿ ವಿಶ್ರಾಂತ ಕುಲಪತಿಗಳೂ ಆದ ಡಾ.ಆರ್.ಆರ್.ಹಂಚಿನಾಳ ನೇತೃತ್ವದಲ್ಲಿ ಗೋದಿ ಸುಧಾರಣಾ ಕಾರ್ಯಕ್ರಮವನ್ನು ಆರಂಭಿಸಿತ್ತು.&lt;/p&gt;&lt;p&gt;ಶಟಲ್ ಬ್ರೀಡಿಂಗ್ ವಿಧಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾದ &lsquo;ಡಿಡಬ್ಲ್ಯುಆರ್ 162&rsquo; ಚಪಾತಿ ಗೋದಿ ತಳಿಯನ್ನು 1993ರಲ್ಲಿ ಭಾರತ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಈ ತಳಿಯು ಎಲೆ ತುಕ್ಕು ಹಾಗೂ ಕಾಂಡ ತುಕ್ಕು ರೋಗಗಳಿಗೆ ಪ್ರತಿರೋಧಕವಾಗಿದ್ದು, ಹೆಚ್ಚಿನ ಇಳುವರಿ ಸಾಮರ್ಥ್ಯ, ಉತ್ತಮ ಧಾನ್ಯದ ಗುಣಮಟ್ಟ ಹಾಗೂ ಬೆಳೆ ಬೆಳವಣಿಗೆಯ ಅವಧಿಯಲ್ಲಿ ಉಷ್ಣ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ವಿಶೇಷ ಗುಣಲಕ್ಷಣಗಳಿಂದಾಗಿ ಈ ತಳಿಯು ಉಷ್ಣ ಹವಾಮಾನದಲ್ಲಿಯೂ ಬೆಳೆಯುವ ಸಾಮರ್ಥ್ಯ ಹೊಂದಿದೆ. 3 ದಶಕದ ಹಿಂದೆ ಬಿಡುಗಡೆಯಾದರೂ, &lsquo;ಡಿಡಬ್ಲ್ಯುಆರ್ 162&rsquo; ಇಂದಿಗೂ ರೈತರ ಅತ್ಯಂತ ಮೆಚ್ಚಿನ ತಳಿಗಳಲ್ಲಿ ಒಂದಾಗಿದೆ.&lt;/p&gt;&lt;p&gt;&lt;strong&gt;ಪರೀಕ್ಷೆಯಲ್ಲಿ ಯಶಸ್ವಿ:&lt;/strong&gt;&lt;/p&gt;&lt;p&gt;ರಾಷ್ಟ್ರೀಯ ಆಹಾರ ಭದ್ರತೆ ಬಲಪಡಿಸುವ ಉದ್ದೇಶದಿಂದ ಇಂಡೋನೇಷ್ಯಾ ಸರ್ಕಾರ ಭಾರತೀಯ ಸಂಶೋಧನಾ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋದಿ ಸುಧಾರಣಾ ಕೇಂದ್ರ ಅಭಿವೃದ್ಧಿಪಡಿಸಿದ ವಿವಿಧ ಗೋದಿ ತಳಿಗಳನ್ನು ತನ್ನ ಉಷ್ಣವಲಯದ ಹವಾಮಾನಕ್ಕೆ ಹೊಂದಾಣಿಕೆ ಪರೀಕ್ಷಿಸಲು ಆಮದು ಮಾಡಿಕೊಂಡಿತ್ತು. ಈ ಪರೀಕ್ಷೆಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಡಿಡಬ್ಲ್ಯುಆರ್ 162 ತಳಿಯು ಇತರ ಎಲ್ಲ ತಳಿಗಳಿಗಿಂತ ಉತ್ತಮ ಇಳುವರಿ ಹಾಗೂ ಗುಣಮಟ್ಟವನ್ನು ಪ್ರದರ್ಶಿಸಿದೆ. ಈ ಅತ್ಯುತ್ತಮ ಫಲಿತಾಂಶ ಗುರುತಿಸಿದ ಇಂಡೋನೇಷ್ಯಾ ಸರ್ಕಾರ 2000ರಲ್ಲಿ ದೊಡ್ಡ ಪ್ರಮಾಣದ ಕ್ಷೇತ್ರ ಪರೀಕ್ಷೆಗಳಿಗಾಗಿ ಈ ತಳಿಯ ಬೀಜಗಳನ್ನು ಆಮದು ಮಾಡಿಕೊಂಡಿತ್ತು. ಜತೆಗೆ, ಈ ತಳಿಯ ಕೃಷಿ ತಂತ್ರಜ್ಞಾನ ಮತ್ತು ನಿರ್ವಹಣೆ ಕುರಿತು ತಾಂತ್ರಿಕ ಮಾರ್ಗದರ್ಶನ ನೀಡಲು ಡಾ.ಆರ್.ಆರ್.ಹಂಚಿನಾಳ ಅವರನ್ನು ಸಲಹೆಗಾರರಾಗಿ ಆಹ್ವಾನಿಸಿತ್ತು.&lt;/p&gt;&lt;p&gt;&lt;strong&gt;ಕಾನೂನು ತೊಡಕು ನಿವಾರಣೆ:&lt;/strong&gt;&lt;/p&gt;&lt;p&gt;ಭಾರತದಲ್ಲಿ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಕಾಯ್ದೆ ಹಾಗೂ ಜೈವಿಕ ವೈವಿಧ್ಯ ಕಾಯ್ದೆ ಜಾರಿಗೆ ಬಂದ ಪರಿಣಾಮ, ಇಂಡೋನೇಷ್ಯಾಗೆ ಉತ್ತಮ ಗುಣಮಟ್ಟದ ಡಿಡಬ್ಲ್ಯುಆರ್ 162 ಬೀಜಗಳನ್ನು ಪೂರೈಸುವಲ್ಲಿ ಕೆಲವು ಅಡೆತಡೆ ಎದುರಾದವು. ಇದರಿಂದ ಇಂಡೋನೇಷ್ಯಾ ಸರ್ಕಾರ ಭಾರತ ಸರ್ಕಾರದೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಿ, ಕಾನೂನುಬದ್ಧ ಹಾಗೂ ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ಬೀಜಗಳ ಪೂರೈಕೆಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಿತ್ತು. ಇದರ ಭಾಗವಾಗಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾಗೆ ಭೇಟಿ ವೇಳೆ ಒಪ್ಪಂದಕ್ಕೆ ಸಹಿಯಾಗಿದೆ.&lt;/p&gt;&lt;p&gt;&lt;strong&gt;ಕೃಷಿ ವಿವಿಗೆ ಹೆಮ್ಮೆ&amp;nbsp;&lt;/strong&gt;&lt;/p&gt;&lt;p&gt;ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಉತ್ಪಾದಿಸಲಾದ 100 ಟನ್ ಉನ್ನತ ಗುಣಮಟ್ಟದ ಡಿಡಬ್ಲ್ಯುಆರ್ 162 ಗೋದಿ ಬೀಜಗಳನ್ನು ಇಂಡೋನೇಷ್ಯಾಗೆ ಪೂರೈಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಕ್ರಮವು ಇಂಡೋನೇಷ್ಯಾದ ಆಹಾರ ಭದ್ರತಾ ಕಾರ್ಯಕ್ರಮಗಳಿಗೆ ಮಹತ್ವದ ಬೆಂಬಲ ಒದಗಿಸಲಿದೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ದೀರ್ಘಕಾಲೀನ ಕೃಷಿ ಸಹಭಾಗಿತ್ವದಲ್ಲಿ ಮಹತ್ವದ ಮೈಲಿಗಲ್ಲು ಹಾಗೂ ಕೃಷಿ ವಿವಿಗೆ ಹೆಮ್ಮೆಯ ಸಂಗತಿಯು ಹೌದು.&lt;/p&gt;&lt;p&gt;&lt;strong&gt;ಡಾ.ಎಂ.ವಿ.ಮಂಜುನಾಥ, ಪ್ರಭಾರಿ ಕುಲಪತಿ, ಧಾರವಾಡ ಕೃಷಿ ವಿವಿ&lt;/strong&gt;&lt;/p&gt;&lt;p&gt;--&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indonesia-india-agreement-for-seed-supply-of-dwr-162-variety-of-wheat-rav/articleshow-4f9v05h"/>
        </item>
        <item>
            <title><![CDATA[ಹುಬ್ಬಳ್ಳಿ: ರೇಪ್‌ ಕೇಸ್ ಮುಚ್ಚಿಹಾಕಿ ಅಪ್ರಾಪ್ತೆಗೆ ಜನನಿಸಿದ ಮಗು ಮಾರಿದ ವೈದ್ಯರು!]]></title>
            <link>https://kannada.asianetnews.com/karnataka-districts/hubballi-minor-conceives-second-time-within-a-year-of-delivering-baby-police-probe-begins-rav/articleshow-4lh7g31</link>
            <guid isPermaLink="true">https://kannada.asianetnews.com/karnataka-districts/hubballi-minor-conceives-second-time-within-a-year-of-delivering-baby-police-probe-begins-rav/articleshow-4lh7g31</guid>
            <pubDate>Fri, 17 Jul 2026 07:26:02 +0530</pubDate>
            <description><![CDATA[&lt;p&gt;ಬಲತ್ಕಾರಕ್ಕ ಗರ್ಭಿಣಿಯಾಗಿದ್ದ ಅಪ್ರಾಪ್ತೆ ಜನ್ಮ ನೀಡಿದ ಪ್ರಕರಣ ಮುಚ್ಚಿಹಾಕಿದ್ದಲ್ಲದೇ ಆಕೆಗೆ ಜನಿಸಿದ ಮಗು ಸ್ವತಃ ವೈದ್ಯರೇ ಮಾರಾಟ ಮಾಡಿರುವ ಹೇಯಕೃತ್ಯ &amp;nbsp;ನಡೆದಿದ್ದು, ಆರೋಪಿ ಸೇರಿ, ಬಾಲಕಿಯ ತಂದೆ-ತಾಯಿ, ಇಬ್ಬರು ಖಾಸಗಿ ವೈದ್ಯರ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxpw897mrt9ehkgqq452vmr6,imgname-----------------------2026-07-17t071940.591-1784252998900.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಹು.17): &lt;/strong&gt;ಬಲತ್ಕಾರಕ್ಕ ಗರ್ಭಿಣಿಯಾಗಿದ್ದ ಅಪ್ರಾಪ್ತೆ ಜನ್ಮ ನೀಡಿದ ಪ್ರಕರಣವನ್ನು ಮುಚ್ಚಿಹಾಕಿದ್ದಲ್ಲದೇ ಆಕೆಗೆ ಜನಿಸಿದ ಮಗುವನ್ನು ಸ್ವತಃ ವೈದ್ಯರೇ ಮಾರಾಟ ಮಾಡಿರುವ ಹೇಯಕೃತ್ಯ ಹುಬ್ಬಳ್ಳಿಯಲ್ಲಿ ನಡೆದಿದ್ದು, ಆರೋಪಿ ಸೇರಿ, ಬಾಲಕಿಯ ತಂದೆ-ತಾಯಿ, ಇಬ್ಬರು ಖಾಸಗಿ ವೈದ್ಯರ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ಅಪ್ರಾಪ್ತ ಬಾಲಕಿ ಎರಡು ಬಾರಿ ಗರ್ಭಿಣಿ!&lt;/h2&gt;&lt;p&gt;15 ವರ್ಷ 6 ತಿಂಗಳ ಬಾಲಕಿಗೆ ಕರೀಂ ಎಂಬ ಆರೋಪಿ ಪುಸಲಾಯಿಸಿ ಉಣಕಲ್ಲ ರೈಲ್ವೆ ಬ್ರಿಡ್ಜ್ ಹತ್ತಿರ ಕರೆದುಕೊಂಡು ಹೋಗಿ 2025 ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬಲತ್ಕರಿಸಿದ್ದಾನೆ.. ಆಕೆ ಗರ್ಭಿಣಿಯಾಗಿದ್ದ ವಿಷಯ ತಂದೆ-ತಾಯಿಗೆ ಗೊತ್ತಿದ್ದರೂ ಪೊಲೀಸರಿಗೆ ತಿಳಿಸದೆ ಮರೆ ಮಾಚಿದ್ದಾರೆ. ಅಲ್ಲದೆ ಮಗುವನ್ನು ಬೇರೆಯವರಿಗೆ ಕೊಟ್ಟಿದ್ದಾರೆ. ಇದೀಗ ಈ ಅಪ್ರಾಪ್ತೆ ಮತ್ತೆ ಗರ್ಭಿಣಿಯಾಗಿದ್ದಾಳೆ ಎಂದು ದೂರಿನಲ್ಲಿ ನಮೂದಾಗಿದೆ.&lt;/p&gt;&lt;h3&gt;ವೈದ್ಯರ ಹೇಯಕೃತ್ಯ ಪ್ರಕರಣ ದಾಖಲು&lt;/h3&gt;&lt;p&gt;ಪಾಲಕರಿಂದ ಯಾವುದೇ ದಾಖಲಾತಿ ಪಡೆಯದೆ ವೈದ್ಯರು ಚಿಕಿತ್ಸೆ ನೀಡಿದ್ದು, ಇಲಾಖೆಗಳಿಗೆ ಮಾಹಿತಿ ಒದಗಿಸದೆ ಅಪರಾಧ ಮರೆಮಾಚಿದ ಚಳ್ಳಮಟ್ಟಿ ಗ್ರಾಮದ ವೈದ್ಯ ಮತ್ತು ನಗರದ ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಕಾಶ ಕೊಡ್ಲಿವಾಡ ಪ್ರಕರಣ ದಾಖಲಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hubballi-minor-conceives-second-time-within-a-year-of-delivering-baby-police-probe-begins-rav/articleshow-4lh7g31"/>
        </item>
        <item>
            <title><![CDATA[ಹೈಪ್ರೊಫೈಲ್ ಮರ್ಡರ್‌ಗೆ ಬೆಚ್ಚಿಬಿದ್ದ ಧಾರವಾಡ, ವೈದ್ಯ ಪತಿಗೆ ಅನಸ್ತೇಷಿಯಾ ಕೊಟ್ಟು ವೈದ್ಯೆ ಪತ್ನಿ ಕೊಂದಿರುವ ಶಂಕೆ!]]></title>
            <link>https://kannada.asianetnews.com/gallery/karnataka-districts/dharwad-doctor-wife-injects-anaesthesia-to-kill-husband-psychiatrist-dr-kiran-honnannavar-gdp-7vmqor1</link>
            <guid isPermaLink="true">https://kannada.asianetnews.com/gallery/karnataka-districts/dharwad-doctor-wife-injects-anaesthesia-to-kill-husband-psychiatrist-dr-kiran-honnannavar-gdp-7vmqor1</guid>
            <pubDate>Thu, 16 Jul 2026 09:36:20 +0530</pubDate>
            <description><![CDATA[&lt;p&gt;ಧಾರವಾಡದ ಪ್ರತಿಷ್ಠಿತ ಅಪಾರ್ಟ್&zwnj;ಮೆಂಟ್&zwnj;ನಲ್ಲಿ, ನೇತ್ರತಜ್ಞೆ ಡಾ. ಪ್ರಿಯಾಂಕಾ ತನ್ನ ಪತಿ, ಅರವಳಿಕೆ ತಜ್ಞ ಡಾ. ಕಿರಣ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಈ ಕೃತ್ಯವನ್ನು ಮುಚ್ಚಿಹಾಕಲು ತನ್ನ 8 ವರ್ಷದ ಮಗನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸದ್ಯ ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmgsprn3tp4etzx39t16m1h,imgname-dharwad-doctor-murder-case--4--1784173878035.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡದ ಪ್ರತಿಷ್ಠಿತ ಅಪಾರ್ಟ್&zwnj;ಮೆಂಟ್&zwnj;ನಲ್ಲಿ, ನೇತ್ರತಜ್ಞೆ ಡಾ. ಪ್ರಿಯಾಂಕಾ ತನ್ನ ಪತಿ, ಅರವಳಿಕೆ ತಜ್ಞ ಡಾ. ಕಿರಣ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಈ ಕೃತ್ಯವನ್ನು ಮುಚ್ಚಿಹಾಕಲು ತನ್ನ 8 ವರ್ಷದ ಮಗನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸದ್ಯ ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ.&lt;/p&gt;&lt;img&gt;&lt;p&gt;ಒಂದೆಡೆ ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ಪತಿ. ಮತ್ತೊಂದೆಡೆ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಮಗುವನ್ನು ನೋಡದೇ ಕುಳಿತಿರುವ ತಾಯಿ. ಮತ್ತೊಂದು ಕಡೆ ಸಹೋದರರನ್ನು ಕಳೆದುಕೊಂಡು ರೋದಿಸುತ್ತಿರುವ ಸಹೋದರಿಯರು. ಈ ಭೀಕರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಧಾರವಾಡದ ಪ್ರತಿಷ್ಠಿತ ರಂಕಾ ಸ್ಟೆಲ್ಲೋ ಅಪಾರ್ಟ್&zwnj;ಮೆಂಟ್. ಡಾ. ಕಿರಣ ಹೊನ್ನಣ್ಣನವರ ಹಾಗೂ ಡಾ. ಪ್ರಿಯಾ ಇಬ್ಬರು ಶ್ರೀಮಂತರೇ. ಆದರೆ, ಇವರ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಆದರೆ, ಇದು ಕೊಲೆಯ ಹಂತಕ್ಕೆ ಬರುತ್ತದೆ ಎಂದು ತಿಳಿದಿರಲಿಲ್ಲವಂತೆ. ಪತಿಯ ಕುತ್ತಿಗೆ ಎರಡು ಬದಿಗೆ ಚಾಕುವಿನಿಂದ ಇರಿದಿದ್ದು ರಕ್ತದ ಮಡುವಿನಲ್ಲಿ ಮೃತದೇಹ ಬಿದ್ದರೂ, ಅತ್ತ ಮಗು ರಕ್ತಸ್ರಾವದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಡಾ. ಪ್ರಿಯಾ ಮಂಚದ ಮೇಲೆ ಮೊಬೈಲ್ ನೋಡುತ್ತಾ ಕುಳಿತಿರುವುದು ಎಲ್ಲರಲ್ಲಿ ದಿಗ್ಭ್ರಮೆ ಮೂಡಿಸಿದೆ.&lt;/p&gt;&lt;img&gt;&lt;p&gt;ಖಾಸಗಿ ಆಸ್ಪತ್ರೆಯೊಂದರಲ್ಲಿ ಅರವಳಿಕೆ ತಜ್ಞರಾಗಿ (ಅನಸ್ತೇಷಿಯಾ ಎಕ್ಸ್&zwnj;ಪರ್ಟ್) ಸೇವೆ ಸಲ್ಲಿಸುತ್ತಿದ್ದ ಡಾ. ಕಿರಣ್ ಹೊನ್ನಣ್ಣವರ್ (45) ಅವರನ್ನು ಅವರ ಪತ್ನಿ, ನೇತ್ರತಜ್ಞೆ ಡಾ. ಪ್ರಿಯಾಂಕಾ (40) ಚಾಕುವಿನಿಂದ ಕುತ್ತಿಗೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ಬಾರಾಕೊಟ್ರಿ ಬಳಿಯ 'ರಂಕಾ ಸ್ಟೆಲ್ಲೋ' ಅಪಾರ್ಟ್&zwnj;ಮೆಂಟ್&zwnj;ನಲ್ಲಿ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ, ಈ ರಾಕ್ಷಸಿ ಕೃತ್ಯವನ್ನು ಮುಚ್ಚಿಹಾಕಲು ತನ್ನ 8 ವರ್ಷದ ಪುತ್ರ ನೇಹಿತ್ (ನಿಯತ್) ಮೇಲೂ ಚಾಕುವಿನಿಂದ ದಾಳಿ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಸದ್ಯ ಮಗು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;ಕೊಲೆಯಾದ ಡಾ. ಕಿರಣ್ ಹೊನ್ನಣ್ಣವರ್ ಅವರಿಗೆ ಇದು ಎರಡನೇ ಮದುವೆಯಾಗಿತ್ತು ಎಂದು ತಿಳಿದುಬಂದಿದೆ. ಮೊದಲ ಪತ್ನಿಯೊಂದಿಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ (ಡಿವೋರ್ಸ್) ಪಡೆದಿದ್ದ ಕಿರಣ್, ನಂತರ ಪ್ರಿಯಾಂಕಾಳನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದರು. ಇಬ್ಬರೂ ಉನ್ನತ ವೃತ್ತಿಯಲ್ಲಿದ್ದರೂ ಕಳೆದ ಒಂದೂವರೆ ವರ್ಷದಿಂದ ಇವರ ನಡುವೆ ತೀವ್ರ ಕೌಟುಂಬಿಕ ಕಲಹ ನಡೆಯುತ್ತಿತ್ತು. ಈ ಹಿಂದೆ ಇಬ್ಬರ ಜಗಳ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆಗ ಉಪನಗರ ಠಾಣೆಯ ಪೊಲೀಸರು ಹಾಗೂ ಕುಟುಂಬಸ್ಥರು ಸೇರಿ ಇಬ್ಬರಿಗೂ ರಾಜಿ ಸಂಧಾನ ಮಾಡಿಸಿ ಮತ್ತೆ ಒಂದಾಗಿ ಬಾಳುವಂತೆ ಕಳುಹಿಸಿಕೊಟ್ಟಿದ್ದರು.&lt;/p&gt;&lt;img&gt;&lt;p&gt;ಡಾ. ಕಿರಣ್ ಅವರು ಮೊನ್ನೆ ರಾತ್ರಿ ನೈಟ್ ಡ್ಯೂಟಿಗೆ ತೆರಳಿದ್ದರು. ಮರುದಿನ ಬೆಳಗ್ಗೆ ಸುಮಾರು 11 ಗಂಟೆಗೆ ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದ ಅವರು ತೀವ್ರ ಆಯಾಸದಿಂದ ಬೆಡ್&zwnj;ರೂಮ್&zwnj;ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಪತಿಯನ್ನು ಕೊಲ್ಲಲು ಮೊದಲೇ ಸಂಚು ರೂಪಿಸಿದ್ದ ಪ್ರಿಯಾಂಕಾ, ಕಿರಣ್ ಮಲಗಿದ್ದಾಗಲೇ ಅವರಿಗೆ ಅರವಳಿಕೆ (ಅನಸ್ತೇಷಿಯಾ) ಇಂಜೆಕ್ಷನ್ ನೀಡಿದ್ದಾಳೆ ಎನ್ನಲಾಗಿದೆ. ಕಿರಣ್ ಪ್ರಜ್ಞೆ ತಪ್ಪುತ್ತಿದ್ದಂತೆ ಚಾಕುವಿನಿಂದ ಅವರ ಕುತ್ತಿಗೆಯ ಭಾಗಕ್ಕೆ ಬರ್ಬರವಾಗಿ ಇರಿದು ಕೊಂದಿದ್ದಾಳೆ. ಕಿರಣ್ ಅವರ ಮೃತದೇಹ ಬೆಡ್&zwnj;ರೂಮ್ ಗಾದಿಯ ಮೇಲೆ ಅರೆಬೆತ್ತಲೆ ಸ್ಥಿತಿಯಲ್ಲಿ, ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಮಂಗಳವಾರ ಸಂಜೆಯಿಂದಲೇ ಡಾ. ಕಿರಣ್ ಅವರಿಗೆ ಬರುತ್ತಿದ್ದ ದೂರವಾಣಿ ಕರೆಗಳನ್ನು ಪತ್ನಿ ಪ್ರಿಯಾಂಕಾಳೇ ಸ್ವೀಕರಿಸುತ್ತಿದ್ದುದರಿಂದ, ಕೊಲೆ ಮಂಗಳವಾರ ರಾತ್ರಿಯೇ ನಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಬುಧವಾರ ಸಂಜೆ 4 ಗಂಟೆಗೆ ಮಗ ನೇಹಿತ್ ಶಾಲೆಯಿಂದ ಮನೆಗೆ ಮರಳಿದ್ದಾನೆ. ಮನೆಗೆ ಬಂದ ಮಗನಿಗೆ ತಂದೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿ, ಆತ ಎಲ್ಲಿ ಹೊರಗೆ ಹೋಗಿ ವಿಷಯ ತಿಳಿಸುತ್ತಾನೋ ಎಂಬ ಭಯದಿಂದ ಪಾಪಿ ತಾಯಿ ಪ್ರಿಯಾಂಕಾ ಮಗನ ಮೇಲೂ ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿದ್ದಾಳೆ. ಮತ್ತೊಂದು ರೂಮ್&zwnj;ನಲ್ಲಿ ಮಗನಿಗೆ ಚಾಕು ಇರಿದು ಆತನೂ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಕರಗದ ಆಕೆ, ಮಗುವಿನ ಪಕ್ಕದಲ್ಲೇ ಕುಳಿತು ಮೊಬೈಲ್&zwnj;ನಲ್ಲಿ ರೀಲ್ಸ್ ನೋಡುತ್ತಾ ಕ್ರೂರತ್ವ ಮೆರೆದಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ (ಕಮಿಷನರ್) ಎನ್. ಶಶಿಕುಮಾರ್ ಹಾಗೂ ಉಪನಗರ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಅಪಾರ್ಟ್&zwnj;ಮೆಂಟ್&zwnj;ಗೆ ಪ್ರವೇಶಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ನೇಹಿತ್ ಇನ್ನು ಉಸಿರಾಡುತ್ತಿರುವುದನ್ನು ಖುದ್ದಾಗಿ ಗಮನಿಸಿದ ಕಮಿಷನರ್ ಶಶಿಕುಮಾರ್ ಅವರೇ ಸ್ವತಃ ಮಗುವನ್ನು ಎತ್ತಿಕೊಂಡು ಓಡಿ ಬಂದು ಆಸ್ಪತ್ರೆಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.&lt;/p&gt;&lt;img&gt;&lt;p&gt;ಡಾ. ಪ್ರಿಯಾ ಅವರನ್ನು ಪೊಲೀಸರು ವಿಚಾರಿಸಿದಾಗ ವಿಚಿತ್ರವಾಗಿ ವರ್ತಿಸಿದ್ದಾಳೆ. ಈ ಘಟನೆ ಬಳಿಕ ತಾನೂ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಲು ಯತ್ನಿಸಿರುವ ಬಗ್ಗೆಯೂ ಕುರುಹುಗಳು ಪತ್ತೆಯಾಗಿವೆ. ಇನ್ನು ಮನೆಯ ಬಹುತೇಕ ಕಡೆಗಳಲ್ಲಿ ಬಳೆಗಳು ಒಡೆದು ಬಿದ್ದಿರುವುದು ಪತ್ತೆಯಾಗಿದೆ. ಪತಿ-ಪತ್ನಿ ನಡುವೆ ಸಂಘರ್ಷ ನಡೆದಿತ್ತಾ ಎನ್ನುವ ಅನುಮಾನ. ಪೊಲೀಸರು ಸ್ಥಳಕ್ಕೆ ಹೋದಾಗ ಆಕೆಯೂ ಸ್ವತಃ ಇಂಜೆಕ್ಟ್ ಮಾಡಿಕೊಂಡು ಬೆಡ್ ಮೇಲೆ ಮೊಬೈಲ್&zwnj;ನಲ್ಲಿ ಬ್ಯುಸಿಯಾಗಿದ್ದಳು ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿ ಪ್ರಿಯಾಂಕಾಳನ್ನು ವಶಕ್ಕೆ ಪಡೆದು ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ಹೆಬ್ಬಾಳದ ಡಾ. ಕಿರಣ ಹಾಗೂ ವಿಜಯಪುರ ಜಿಲ್ಲೆಯ ಡಾ. ಪ್ರಿಯಾಗೆ 10 ವರ್ಷದ ನಿಹಿತ್&zwnj; ಎಂಬ ಮಗನಿದ್ದಾನೆ. ಡಾ. ಕಿರಣಗೆ ನಿರಂತರವಾಗಿ ಕರೆ ಮಾಡಿದರೂ ಸ್ವೀಕರಿಸದೆ ಇರುವುದರಿಂದ ಅನುಮಾನಗೊಂಡ ಕುಟುಂಬಸ್ಥರು ಮಗನ ಮನೆಗೆ ಬಂದಿದ್ದಾರೆ. ಮನೆಗೆ ಬಂದ ಬಳಿಕ ಮಗನನ್ನು ಕರೆದರು ಬಾಗಿಲು ತೆರದಿಲ್ಲ. ಹಲವು ಕದ ತಟ್ಟಿದ್ದಾರೆ. ಆದರೂ ಸಹ ಬಾಗಿಲನ್ನು ತೆರದಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಗಿಲು ತಟ್ಟಿದಾಗ ಡಾ. ಪ್ರಿಯಾ ತೆರದಿದ್ದಾಳೆ. ಒಳ ಹೋಗಿ ನೋಡಿದರೆ ರಕ್ತಸಿಕ್ತ ಕಲೆಗಳನ್ನು ನೋಡಿ ಪೊಲೀಸರು ಬೆಡ್&zwnj;ರೂಮ್&zwnj; ನೋಡಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕೊಲೆ ಡಾ. ಪ್ರಿಯಾ ಮಾಡಿದ್ದಾಳೆಂದು ಕಿರಣ ಕುಟುಂಬಸ್ಥರು ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;&quot;ಕೌಟುಂಬಿಕ ಸಮಸ್ಯೆಯಿಂದಲೇ ಈ ಭೀಕರ ಘಟನೆ ನಡೆದಿರುವ ಶಂಕೆ ಇದೆ. ಸದ್ಯ ತೀವ್ರ ಆಘಾತದಲ್ಲಿರುವ ಹಾಗೂ ಆಸ್ಪತ್ರೆಗೆ ದಾಖಲಾಗಿರುವ ಆರೋಪಿ ಪ್ರಿಯಾಂಕಾ ಗುಣಮುಖಳಾದ ನಂತರ ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಮಗುವಿನ ಹೇಳಿಕೆಯನ್ನೂ ಪಡೆಯಬೇಕಿದೆ, ತನಿಖೆಯ ನಂತರವಷ್ಟೇ ಸಂಪೂರ್ಣ ಸತ್ಯ ಹೊರಬರಲಿದೆ,&quot; ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/dharwad-doctor-wife-injects-anaesthesia-to-kill-husband-psychiatrist-dr-kiran-honnannavar-gdp-7vmqor1"/>
        </item>
        <item>
            <title><![CDATA[ಹುಬ್ಬಳ್ಳಿ: 101 ವರ್ಷ ವಯಸ್ಸು, 40 ನಿಮಿಷದ ಸರ್ಜರಿ, ಮರುದಿನ ಡಿಸ್ಚಾರ್ಜ್! ದೇಶದ ಮೊದಲ ಯಶಸ್ವಿ ಕೀಲು ಚಿಕಿತ್ಸೆ!]]></title>
            <link>https://kannada.asianetnews.com/karnataka-districts/successful-joint-surgery-for-a-101-year-old-man-at-hubballi-rav/articleshow-9hziycx</link>
            <guid isPermaLink="true">https://kannada.asianetnews.com/karnataka-districts/successful-joint-surgery-for-a-101-year-old-man-at-hubballi-rav/articleshow-9hziycx</guid>
            <pubDate>Fri, 17 Jul 2026 10:57:07 +0530</pubDate>
            <description><![CDATA[&lt;p&gt;ದೇಶದಲ್ಲೇ ಮೊದಲ ಬಾರಿಗೆ ಶತಾಯುಷಿಗೆ ಅಪರೂಪದ ರೀತಿಯ ಸೊಂಟದ ಕೀಲು (Hip Joint) ಮುರಿತಕ್ಕೆ ಹುಬ್ಬಳ್ಳಿಯ ಎಲುಬು ಕೀಲು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq8efc0z7avs4ff11kgzgs2,imgname-----------------------2026-07-17t105242.095-1784265784704.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಹುಬ್ಬಳ್ಳಿ (ಜು.17): &lt;/strong&gt;ದೇಶದಲ್ಲೇ ಮೊದಲ ಬಾರಿಗೆ ಶತಾಯುಷಿಗೆ ಅಪರೂಪದ ರೀತಿಯ ಸೊಂಟದ ಕೀಲು (Hip Joint) ಮುರಿತಕ್ಕೆ ಹುಬ್ಬಳ್ಳಿಯ ಎಲುಬು ಕೀಲು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.&lt;/p&gt;&lt;h2&gt;ಶತಾಯುಷಿಗೆ ಶಸ್ತ್ರ ಚಿಕಿತ್ಸೆ:&lt;/h2&gt;&lt;p&gt;ಇಲ್ಲಿನ ದಾಜಿಬಾನಪೇಟೆಯಲ್ಲಿ ಇರುವ ಎಲುಬು ಕೀಲು ಮತ್ತು ಮಲ್ಟಿಸ್ವೆಷಾಲಿಟಿ ಆಸ್ಪತ್ರೆಯ ತಜ್ಞ ಡಾ। ಭಾಸ್ಕರ್ ರಾವ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಶಿಗ್ಗಾಂವಿ ತಾಲೂಕಿನ ಚಿಕ್ಕಬೆಂಡಿಗೇರಿಯ ಶತಾಯುಷಿ, 101 ವರ್ಷದ ನಿವೃತ್ತ ಶಿಕ್ಷಕ ಇಮಾಮಸಾಬ್ ತಮ್ಮ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಎಡಭಾಗದ ಹಿಪ್ ಜಾಯಿಂಟ್&zwnj; ಸಮೀಪ ಅಪರೂಪದ ರೀತಿಯ ಫ್ರಾಕ್ಚರ್ ಆಗಿರುವುದು ದೃಢಪಟ್ಟಿತ್ತು. ರೋಗಿ ಮತ್ತೆ ಸಹಜವಾಗಿ ನಡೆಯಬೇಕಾದರೆ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಯೇ ಶಾಶ್ವತ ಪರಿಹಾರ ಆಗಿತ್ತು ಎಂದು ವಿವರಿಸಿದರು.&lt;/p&gt;&lt;h3&gt;ಈ ಶಸ್ತ್ರಚಿಕಿತ್ಸೆ ಹಿರಿಯ ನಾಗರಿಕರಲ್ಲಿ ಹೆಚ್ಚು ಅಪಾಯ&lt;/h3&gt;&lt;p&gt;ಈ ಶಸ್ತ್ರಚಿಕಿತ್ಸೆ ಹಿರಿಯ ನಾಗರಿಕರಲ್ಲಿ ಹೆಚ್ಚು ಅಪಾಯಕಾರಿ. ಹೃದಯ ತಜ್ಞರು, ಫಿಸಿಷಿಯನ್ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರ ಸಮನ್ವಯದೊಂದಿಗೆ ರೋಗಿಯನ್ನು ಸಂಪೂರ್ಣವಾಗಿ ಸಿದ್ಧಪಡಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ದೇಶದಲ್ಲಿಯೇ ಮೊದಲ ಪ್ರಕರಣವಾಗಿದೆ. ಜೂ.7ರಂದು 40 ನಿಮಿಷ ಶಸ್ತ್ರಚಿಕಿತ್ಸೆ ನಡೆಸಿದ್ದು ರೋಗಿಯು ಮರುದಿನವೇ ವಾಕರ್&zwnj; ಸಹಾಯದಿಂದ ನಡೆಯಲು ಆರಂಭಿಸಿದ್ದಾರೆ ಎಂದರು.&lt;/p&gt;&lt;p&gt;. ಶಸ್ತ್ರಚಿಕಿತ್ಸೆಗೆ 4ರಿಂದ 5 ಲಕ್ಷ ರು. ತಗುಲಿದರೆ ನಮ್ಮ ಆಸ್ಪತ್ರೆಯಲ್ಲಿ ₹1.40 ಲಕ್ಷದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/successful-joint-surgery-for-a-101-year-old-man-at-hubballi-rav/articleshow-9hziycx"/>
        </item>
        <item>
            <title><![CDATA[ತಪ್ಪು ಮಾಡದಿದ್ದರೆ ಜೈಲಿಗೆ ಹೋಗುವ ಭಯವೇಕೆ? 'ಜೈಲಿಗೆ ಕಳಿಸುವ ಸಂಕಲ್ಪ' ಎಂಬ ಸಿಎಂ ಡಿಕೆಶಿ ಹೇಳಿಕೆಗೆ ಜೋಶಿ ಹೇಳಿದ್ದೇನು?]]></title>
            <link>https://kannada.asianetnews.com/politics/pralhad-joshi-reacts-dk-shivakumar-s-statement-about-bidadi-township-row-rav/articleshow-ak3s0s2</link>
            <guid isPermaLink="true">https://kannada.asianetnews.com/politics/pralhad-joshi-reacts-dk-shivakumar-s-statement-about-bidadi-township-row-rav/articleshow-ak3s0s2</guid>
            <pubDate>Fri, 17 Jul 2026 11:33:58 +0530</pubDate>
            <description><![CDATA[ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೈಲು ಭಯದ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಪ್ರಾಮಾಣಿಕರಾಗಿದ್ದರೆ ಜೈಲಿನ ಭಯವೇಕೆ ಎಂದು ಪ್ರಶ್ನಿಸಿರುವ ಅವರು, ಬಿಡದಿ ಟೌನ್&zwnj;ಶಿಪ್ ಯೋಜನೆಯಲ್ಲಿ ಡಿಕೆಶಿಗಿರುವ ವಿಶೇಷ ಆಸಕ್ತಿಯ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxqa0xvzr9xx0ymeybvbwe4f,imgname-----------------------2026-07-17t112018.239-1784267437951.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಜು.17): &lt;/strong&gt;ಮುಖ್ಯಮಂತ್ರಿ ಡಿಕೆ ಶಿವಕುಮಾರ್&zwnj;(DK Shivakumar) ಅವರನ್ನು ಯಾರೂ ಜೈಲಿಗೆ ಕಳಿಸುತ್ತಿಲ್ಲ. ಪ್ರಾಮಾಣಿಕರಾಗಿದ್ದರೆ ಅವರಿಗೆ ಯಾಕೆ ಅದರ ಭಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.&lt;/p&gt;&lt;h2&gt;ಅವರಿಗೇಕೆ ಜೈಲಿಗೆ ಹೋಗುವ ಭಯ?&lt;/h2&gt;&lt;p&gt;ಅವರ ಹೇಳಿಕೆಗಳೆಲ್ಲವೂ ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಒಂದು ಪ್ರಯತ್ನ ಎಂದೂ ತೀಕ್ಷ್ಣವಾಗಿ ಹೇಳಿದ್ದಾರೆ. ಜೈಲಿಗೆ ಕಳುಹಿಸುವ ಸಂಕಲ್ಪ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಪರಾಧ ಮಾಡಿದವರು ಮಾತ್ರ ಜೈಲಿಗೆ ಹೋಗುತ್ತಾರೆ. ಹಾಗಾದರೆ ಶಿವಕುಮಾರ್&zwnj; ಏನು ತಪ್ಪು ಮಾಡಿದ್ದಾರಾ? ಭ್ರಷ್ಟಾಚಾರ ಎಸಗಿದ್ದಾರಾ? ವಿನಾಕಾರಣ ಅವರಿಗೇಕೆ ಜೈಲಿಗೆ ಹೋಗುವ ಭಯ? ಈಗೇಕೆ ಆ ಬಗ್ಗೆ ಮಾತನಾಡುತ್ತಿದ್ದೀರಿ ಎಂದರು. ಭ್ರಷ್ಟಾಚಾರ ಮತ್ತು ತಪ್ಪು ಮಾಡಿದ ಯಾರೇ ಆಗಲಿ ಜೈಲಿಗೆ ಹೋಗುತ್ತಾರೆ. ನಾವೇನೂ ಅವರನ್ನು ಜೈಲಿಗೆ ಕಳಿಸಲು ನೋಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Bidadi Township Row: ಹೆಚ್&zwnj;ಡಿಕೆ ಪ್ರಾರಂಭಿಸಿದ್ದರೆ ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ?&lt;/p&gt;&lt;p&gt;ಅವರು ತಪ್ಪು ಮಾಡಿ, ಭ್ರಷ್ಟಾಚಾರ ಎಸಗಿ ಜೈಲಿಗೆ ಹೋದರೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;h3&gt;ಹಿಂದಿನ ಮುಖ್ಯಮಂತ್ರಿ ಇರದಿದ್ದ ಬಿಡದಿ ಟೌನ್​​ಶಿಪ್​ʼ ಆಸಕ್ತಿ ನಿಮಗೇಕೆ?&lt;/h3&gt;&lt;p&gt;ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡದಿ ಟೌನ್&zwnj;ಶಿಪ್ ಕುರಿತಾಗಿ ಇಷ್ಟೊಂದು ಆಸಕ್ತಿ ತೋರಿಸಿದ್ದಿಲ್ಲ. ಆದರೆ ಅವರಿಗಿಲ್ಲದ ಆಸಕ್ತಿ ಇವರಿಗೇಕೆ ಬಂತು? ಅಂದರೆ ಇದರಲ್ಲೇನೋ ಡೀಲ್ ಆಗಿದೆ ಎಂಬ ಸಂಶಯ ಬರುತ್ತದೆ ಅಲ್ಲವೇ? ಈ ಬಗ್ಗೆ ಏಕೆ ಉತ್ತರಿಸುತ್ತಿಲ್ಲ. ಮಾಜಿ ಪ್ರಧಾನಿ ಎಚ್&zwnj;.ಡಿ.ದೇವೇಗೌಡರ ಆರೋಪಕ್ಕೆ ಸ್ಪಷ್ಟನೆ ಕೊಡುವುದು ಬಿಟ್ಟು ಅವರ ಮೇಲೇಕೆ ರೇಗಾಡುತ್ತಿದ್ದೀರಿ ಎಂದು ಜೋಶಿ ತರಾಟೆಗೆ ತೆಗೆದುಕೊಂಡರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/pralhad-joshi-reacts-dk-shivakumar-s-statement-about-bidadi-township-row-rav/articleshow-ak3s0s2"/>
        </item>
        <item>
            <title><![CDATA[IIT Dharwad: ದೇಶದಲ್ಲೇ ಮೊದಲು! ಎಐ ಮೂಲಕ ಉತ್ತರ ಪತ್ರಿಕೆ ಮೌಲ್ಯಮಾಪನ; ಧಾರವಾಡ ಐಐಟಿ ಹೊಸ ಟೆಕ್]]></title>
            <link>https://kannada.asianetnews.com/education/india-s-first-ai-evaluate-answer-sheets-dharwad-iit-develops-new-technology-rav/articleshow-bk89ge8</link>
            <guid isPermaLink="true">https://kannada.asianetnews.com/education/india-s-first-ai-evaluate-answer-sheets-dharwad-iit-develops-new-technology-rav/articleshow-bk89ge8</guid>
            <pubDate>Thu, 16 Jul 2026 05:25:43 +0530</pubDate>
            <description><![CDATA[&lt;p&gt;ಇನ್ಮುಂದೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಶಿಕ್ಷಕರೇ ಬೇಕಾಗಿಲ್ಲ. ಮೌಲ್ಯಮಾಪನಕ್ಕೆ ದಿನಗಟ್ಟಲೆ ಸಮಯವೂ ಬೇಕಾಗಿಲ್ಲ. ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಅಭಿವೃದ್ಧಿಪಡಿಸಿದ &lsquo;ಡಿಜಿಟ್ಯೂಟರ್&zwnj;&rsquo; ಎಐ ತಂತ್ರಜ್ಞಾನದಿಂದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಕ್ಷಣ ಮಾತ್ರದಲ್ಲಿ ಮೌಲ್ಯಮಾಪನ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxm2zr6vz2vbq1zhp7r33whd,imgname-----------------------2026-07-16t050948.275-1784159396059.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡಿಜಿಟ್ಯೂಬರ್&zwnj; ಕೆಲಸ ಹೇಗೆ&lt;/strong&gt;&lt;/p&gt;&lt;p&gt;ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಧಾರವಾಡ ಐಐಟಿ ತಂತ್ರಜ್ಞರಿಂದ ಡಿಜಿಟ್ಯೂಬರ್&zwnj; ಅಭಿವೃದ್ಧಿ&lt;/p&gt;&lt;ul&gt; &lt;li&gt;6- 12ನೇ ತರಗತಿವರೆಗಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇದರ ಅಭಿವೃದ್ಧಿ&lt;/li&gt; &lt;li&gt;ಉತ್ತರಪತ್ರಿಕೆ ಸ್ಕ್ಯಾನ್&zwnj; ಮಾಡಿದರೆ ಈ ತಂತ್ರಜ್ಞಾನ ಮೌಲ್ಯಮಾಪನ ಮಾಡಿ ಅಂಕಗಳನ್ನು ಮಾಡುತ್ತೆ&lt;/li&gt; &lt;li&gt;ಕನ್ನಡ ಮಾತ್ರವಲ್ಲದೇ ಯಾವುದೇ ಭಾಷೆಯನ್ನು ಬೇಕಾದರೂ ಅರಿತು ಮೌಲ್ಯಮಾಪನ ಮಾಡಬಲ್ಲದು&lt;/li&gt; &lt;li&gt;ಪ್ರಾಯೋಗಿಕವಾಗಿ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಮತ್ತು ಗದಗದಲ್ಲಿ ಪರಿಚಯಕ್ಕೆ ನಿರ್ಧಾರ&lt;/li&gt; &lt;li&gt;ಈ ತಂತ್ರಜ್ಞಾನ ಅಭಿವೃದ್ಧಿಗೆ ಹಿಂದಿನ ಸಿಎಂ ಸಿದ್ಧರಾಮಯ್ಯ ಅವಧಿಯಲ್ಲಿ 5 ಕೋಟಿ ಅನುದಾನ&lt;/li&gt;&lt;/ul&gt;&lt;p&gt;&lt;strong&gt;ಬಸವರಾಜ ಹಿರೇಮಠ&lt;/strong&gt;&lt;/p&gt;&lt;p&gt;&lt;strong&gt;ಧಾರವಾಡ (ಜು.16): &lt;/strong&gt;ಇನ್ಮುಂದೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಶಿಕ್ಷಕರೇ ಬೇಕಾಗಿಲ್ಲ. ಮೌಲ್ಯಮಾಪನಕ್ಕೆ ದಿನಗಟ್ಟಲೆ ಸಮಯವೂ ಬೇಕಾಗಿಲ್ಲ. ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಅಭಿವೃದ್ಧಿಪಡಿಸಿದ &lsquo;ಡಿಜಿಟ್ಯೂಟರ್&zwnj;&rsquo; ಎಐ ತಂತ್ರಜ್ಞಾನವು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಕ್ಷಣ ಮಾತ್ರದಲ್ಲಿ ಮೌಲ್ಯಮಾಪನ ಮಾಡಲು ಸಿದ್ಧವಾಗಿದೆ.&lt;/p&gt;&lt;p&gt;ರಾಜ್ಯದ ಶಾಲೆ ಮತ್ತು ಕಾಲೇಜು ಶಿಕ್ಷಣದಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ ಬಳಕೆ ಶುರುವಾಗಿದೆ. ಈ ತಂತ್ರಜ್ಞಾನದ ಮುಂದುವರಿದ ಭಾಗವಾಗಿ ಧಾರವಾಡ ಐಐಟಿ ತಂತ್ರಜ್ಞರು ದೇಶದಲ್ಲೇ ಮೊದಲ ಬಾರಿಗೆ ಸ್ವಯಂಚಾಲಿತವಾಗಿ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ತಂತ್ರಜ್ಞಾನ ಸಂಶೋಧಿಸಿ ಯಶಸ್ವಿಯಾಗಿದ್ದಾರೆ. ಶಿಕ್ಷಕರ ಮೌಲ್ಯಮಾಪನದ ಹೊರೆ ಕಡಿಮೆ ಮಾಡುವುದು, ತರಗತಿಯಲ್ಲಿ ಬೋಧನೆ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಸಮಯ ವಿನಿಯೋಗಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಈ &lsquo;ಡಿಜಿಟ್ಯೂಟರ್&zwnj;&rsquo; ತಂತ್ರಜ್ಞಾನ ಸಿದ್ಧಪಡಿಸಲಾಗಿದೆ.&lt;/p&gt;&lt;h2&gt;ಪ್ರಾಯೋಗಿಕ ಕಾರ್ಯ:&lt;/h2&gt;&lt;p&gt;ಈ ಕುರಿತು ಮಾಹಿತಿ ನೀಡಿದ ಐಐಟಿ ಧಾರವಾಡದ ಸಂಶೋಧನೆ ಮತ್ತು ಅಭಿವೃದ್ಧಿ ಡೀನ್ ಪ್ರೊ.ಕೋಟೇಶ್ವರ ರಾವ್, ಶಿಕ್ಷಣ ಇಲಾಖೆಗೆ ಪ್ರತಿ ಬಾರಿ ಎಸ್ಸೆಸ್ಸೆಲ್ಸಿ, ಪಿಯುಸಿಯಂತಹ ಬೋರ್ಡ್&zwnj; ಪರೀಕ್ಷೆಗಳ ಸಮಯದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಯನ್ನು ಕರಾರುವಕ್ಕಾಗಿ ಹಾಗೂ ಸ್ವಯಂಚಾಲಿತವಾಗಿ ಮೌಲ್ಯಮಾಪನ ಮಾಡಲು ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿಯೇ ಧಾರವಾಡ ಐಐಟಿ ಈ ತಂತ್ರಜ್ಞಾನ ಸಿದ್ಧಪಡಿಸುವ ಜವಾಬ್ದಾರಿ ಹೊತ್ತಿದ್ದು, ₹5 ಕೋಟಿ ಅನುದಾನದೊಂದಿಗೆ ನಾವು &lsquo;ಡಿಜಿಟ್ಯೂಟರ್&rsquo; ನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದೇವೆ. ಜತೆಗೆ, ಅದು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಕಾರ್ಯ ಮಾಡಲು ಸಿದ್ಧವಾಗಿದೆ ಎಂದರು.&lt;/p&gt;&lt;h3&gt;ಸ್ಕ್ಯಾನ್&zwnj;, ಅಪಲೋಡ್&zwnj;:&lt;/h3&gt;&lt;p&gt;ಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ 6ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಈ ತಂತ್ರಜ್ಞಾನ ವಿನ್ಯಾಸಗೊಳಿಸಲಾಗಿದೆ. ಉತ್ತರ ಪತ್ರಿಕೆಗಳನ್ನು ಈ ಸಾಫ್ಟವೇರ್&zwnj; ಮೂಲಕ ಸ್ಕ್ಯಾನ್&zwnj; ಮಾಡಿದರೆ ಸಾಕು, ಅದು ವಿದ್ಯಾರ್ಥಿಗಳು ಬರೆದ ಉತ್ತರ ಆಧರಿಸಿ ಅಂಕ ನೀಡುತ್ತದೆ. ಪ್ರಾಯೋಗಿಕ ಹಂತದ ಭಾಗವಾಗಿ ಇದನ್ನು ಸೆಪ್ಟೆಂಬರ್&zwnj;ನಿಂದ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಮತ್ತು ಗದಗದಲ್ಲಿ ಪರಿಚಯಿಸಲಾಗುವುದು. ಶಾಲಾಮಟ್ಟದಲ್ಲಿ ಎಐ ಆಧಾರಿತ ಉತ್ತರ ಪತ್ರಿಕೆ ಮೌಲ್ಯಮಾಪನ ವ್ಯವಸ್ಥೆ ಜಾರಿಗೊಳಿಸುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಲಿದೆ ಎಂದ ಪ್ರೊ.ರಾವ್ ಹೆಮ್ಮೆ ವ್ಯಕ್ತಪಡಿಸಿದರು. ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಆಗುವ ನಿರೀಕ್ಷೆ ಹೆಚ್ಚಿದೆ ಎಂದರು.&lt;/p&gt;&lt;h3&gt;ಪ್ರಶ್ನೆ ಕೇಳಿದರೂ ಉತ್ತರ:&lt;/h3&gt;&lt;p&gt;&lsquo;ಡಿಜಿಟ್ಯೂಟರ್&rsquo; ಬಗ್ಗೆ &lsquo;ಕನ್ನಡಪ್ರಭ&rsquo;ಕ್ಕೆ ಹೆಚ್ಚಿನ ಮಾಹಿತಿ ಒದಗಿಸಿದ ಐಐಟಿ ಶೈಕ್ಷಣಿಕ ಡೀನ್ ಪ್ರೊ.ನವೀನ್ ಎಂ.ಬಿ., ಸ್ವಯಂಚಾಲಿತ ಮೌಲ್ಯಮಾಪನ ಸಾಧನಕ್ಕಿಂತ &lsquo;ಡಿಜಿಟ್ಯೂಟರ್&zwnj;&rsquo; ಹೆಚ್ಚಿನ ಕಾರ್ಯ ಮಾಡಲಿದೆ. ಇದು ಸಮಗ್ರ ಎಐ-ಚಾಲಿತ ಶೈಕ್ಷಣಿಕ ಸಹಾಯಕವು ಹೌದು. ವಿದ್ಯಾರ್ಥಿಗಳು ಟೈಪ್ ಮಾಡುವ ಮೂಲಕ ಅಥವಾ ಧ್ವನಿ ಆಜ್ಞೆಗಳ ಮೂಲಕ ಪ್ರಶ್ನೆಗಳನ್ನೂ ಕೇಳಬಹುದು. ಇದು ಕನ್ನಡ ಮಾತ್ರವಲ್ಲದೇ ಭಾರತೀಯ ಎಲ್ಲ ಭಾಷೆಗಳನ್ನು ಅರಿತು ಪರಿಹಾರ ಒದಗಿಸುತ್ತದೆ. ಈ ತಂತ್ರಜ್ಞಾನವು ವಸ್ತುನಿಷ್ಠ ಮತ್ತು ವಿವರಣಾತ್ಮಕ ಉತ್ತರಗಳನ್ನು ಮೌಲ್ಯಮಾಪನ ಮಾಡಲಿದೆ. ಮೌಲ್ಯಮಾಪನಕ್ಕಾಗಿ ಖರ್ಚು ಮಾಡುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ &lsquo;ಡಿಜಿಟ್ಯೂಟರ್&rsquo;, ಶಿಕ್ಷಕರು ಬೋಧನೆ, ಮಾರ್ಗದರ್ಶನ ಮತ್ತು ಕಲಿಕೆಯ ಫಲಿತಾಂಶ ಸುಧಾರಿಸುವತ್ತ ಹೆಚ್ಚು ಗಮನ ಹರಿಸುವುದನ್ನು ನಿರೀಕ್ಷಿಸಲಾಗಿದೆ ಎಂದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/india-s-first-ai-evaluate-answer-sheets-dharwad-iit-develops-new-technology-rav/articleshow-bk89ge8"/>
        </item>
        <item>
            <title><![CDATA[ಗುಟ್ಕಾ ಉಗಿಯಲು ಬಗ್ಗಿದ ಯುವಕನ ತಲೆಗೆ ಗುದ್ದಿದ ಟಿಪ್ಪರ್; ರಸ್ತೆಗೆ ಬಿದ್ದ ರುಂಡ, ಬಸ್ಸಿನಲ್ಲಿ ನೇತಾಡಿದ ಮುಂಡ!]]></title>
            <link>https://kannada.asianetnews.com/karnataka-districts/hubballi-kundgol-bus-accident-iti-student-pakkiresh-death-gutka-splitting-by-window/articleshow-e0xi0pi</link>
            <guid isPermaLink="true">https://kannada.asianetnews.com/karnataka-districts/hubballi-kundgol-bus-accident-iti-student-pakkiresh-death-gutka-splitting-by-window/articleshow-e0xi0pi</guid>
            <pubDate>Wed, 01 Jul 2026 21:08:17 +0530</pubDate>
            <description><![CDATA[ಕುಂದಗೋಳದ ಹೊರವಲಯದಲ್ಲಿ, ಕೆಎಸ್&zwnj;ಆರ್&zwnj;ಟಿಸಿ ಬಸ್ಸಿನ ಕಿಟಕಿಯಿಂದ ಗುಟ್ಕಾ ಉಗುಳಲು ತಲೆ ಹೊರಹಾಕಿದ 17 ವರ್ಷದ ಐಟಿಐ ವಿದ್ಯಾರ್ಥಿಗೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಯ ಶಿರಚ್ಛೇದವಾಗಿ, ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwf564hjzpd3xas39q7sdd4w,imgname-hubballi-bus-accident-1782920188466.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ (ಜು.01): ಕೆ&lt;/strong&gt;ಎಸ್&zwnj;ಆರ್&zwnj;ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕಿಟಕಿಯಿಂದ ದೇಹದ ಭಾಗಗಳನ್ನು ಹೊರಹಾಕುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಒಂದು ಭೀಕರ ಅಪಘಾತವೇ ಸಾಕ್ಷಿಯಾಗಿದೆ. ಚಲಿಸುವ ಬಸ್&zwnj;ನ ಕಿಟಕಿಯಿಂದ ಹೊರಗೆ ತಲೆ ಹಾಕಿದ್ದ ವಿದ್ಯಾರ್ಥಿಯೊಬ್ಬ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ತಲೆಯ ರುಂಡವೇ ಕಟ್ ಆಗಿ ಬಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಮೃತಪಟ್ಟ ವಿದ್ಯಾರ್ಥಿಯನ್ನು ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ನಿವಾಸಿ ಪಕ್ಕಿರೇಶ್ (17) ಎಂದು ಗುರುತಿಸಲಾಗಿದೆ. ಈತ ಐಟಿಐ ವಿದ್ಯಾರ್ಥಿಯಾಗಿದ್ದು, ಇಂದು ಹುಬ್ಬಳ್ಳಿಯಿಂದ ತನ್ನ ಗ್ರಾಮವಾದ ಶಿರೂರಿಗೆ ತೆರಳಲು ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ಹತ್ತಿದ್ದನು.&lt;/p&gt;&lt;h2&gt;&lt;strong&gt;ಅಪಘಾತ ಸಂಭವಿಸಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಪಕ್ಕಿರೇಶ್ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದನು. ಬಸ್ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ಚಲಿಸುತ್ತಿದ್ದಾಗ, ಗುಟ್ಕಾ ಉಗುಳುವ ಉದ್ದೇಶದಿಂದ ಆತ ಕಿಟಕಿಯ ಹೊರಗೆ ತಲೆಯನ್ನು ಹಾಕಿದ್ದಾನೆ ಎನ್ನಲಾಗಿದೆ. ಇದೇ ಸಮಯದಲ್ಲಿ ಬಸ್ಸಿನ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಕಿಟಕಿಯಿಂದ ಹೊರಗಿದ್ದ ಪಕ್ಕಿರೇಶ್ ಅವರ ತಲೆಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ ವಿದ್ಯಾರ್ಥಿಯ ಶಿರವು ದೇಹದಿಂದ ಬೇರ್ಪಟ್ಟಿದ್ದು, ರಸ್ತೆಗೆ ಬಿದ್ದಿದೆ. ದೇಹವು ಬಸ್ಸಿನ ಕಿಟಕಿಯ ಬಳಿಯೇ ನೇತಾಡುತ್ತಿದ್ದ ದೃಶ್ಯ ಸ್ಥಳೀಯರಲ್ಲಿ ಮತ್ತು ಸಹ ಪ್ರಯಾಣಿಕರಲ್ಲಿ ನಡುಕ ಹುಟ್ಟಿಸುವಂತಿತ್ತು. ಘಟನೆಯ ತೀವ್ರತೆಗೆ ಬಸ್ ನಿಲ್ದಾಣದ ಬಳಿ ನೆರೆದಿದ್ದ ಜನರು ದಿಕ್ಕೆಟ್ಟು ಹೋಗಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ಭೇಟಿ ಮತ್ತು ತನಿಖೆ:&lt;/strong&gt;&lt;/h2&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರಿಗೆ ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಪ್ರಯಾಣದ ವೇಳೆ ಕಿಟಕಿಯಿಂದ ಕೈ ಅಥವಾ ತಲೆಯನ್ನು ಹೊರಹಾಕುವುದು ಮೃತ್ಯುವನ್ನು ಆಹ್ವಾನಿಸಿದಂತೆ. ವಿಶೇಷವಾಗಿ ಯುವಜನತೆ ಮತ್ತು ವಿದ್ಯಾರ್ಥಿಗಳು ಬಸ್ ಅಥವಾ ರೈಲುಗಳಲ್ಲಿ ಪ್ರಯಾಣಿಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಒಂದು ಕ್ಷಣದ ಅಜಾಗರೂಕತೆ ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡುತ್ತದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಶಿರೂರು ಗ್ರಾಮದ ಬಡ ಕುಟುಂಬದ ಈ ವಿದ್ಯಾರ್ಥಿಯ ಸಾವು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.&lt;/p&gt;]]></content:encoded>
            <category>dharwad</category>
            <dc:creator>Suvarna News</dc:creator>
            <atom:link href="https://kannada.asianetnews.com/karnataka-districts/hubballi-kundgol-bus-accident-iti-student-pakkiresh-death-gutka-splitting-by-window/articleshow-e0xi0pi"/>
        </item>
        <item>
            <title><![CDATA[ಮಳೆ ಕೊರತೆಯಿಂದ ಬೆಳೆ ಒಣಗುತ್ತಿದೆ; ಮೋಡ ಬಿತ್ತನೆ ಮಾಡುವಂತೆ ಶಾಸಕ ಕೋನರೆಡ್ಡಿ ಪತ್ರ]]></title>
            <link>https://kannada.asianetnews.com/karnataka-districts/navalagund-mla-nh-konaraddi-letter-to-the-government-for-cloud-seeding-to-overcome-the-rain-deficit-mrq/articleshow-hcyncgm</link>
            <guid isPermaLink="true">https://kannada.asianetnews.com/karnataka-districts/navalagund-mla-nh-konaraddi-letter-to-the-government-for-cloud-seeding-to-overcome-the-rain-deficit-mrq/articleshow-hcyncgm</guid>
            <pubDate>Mon, 06 Jul 2026 11:36:24 +0530</pubDate>
            <description><![CDATA[ಧಾರವಾಡ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದಾಗ, ಶಾಸಕ ಎನ್&zwnj;.ಎಚ್&zwnj;. ಕೋನರಡ್ಡಿ ಮೋಡ ಬಿತ್ತನೆಗೆ ಆಗ್ರಹಿಸಿದ್ದರು. ಆದರೆ, ಜುಲೈ ತಿಂಗಳಲ್ಲಿ ಸುರಿದ ಅನಿರೀಕ್ಷಿತ ಮಳೆಯು ಒಣಗುತ್ತಿದ್ದ ಬೆಳೆಗಳಿಗೆ ಮರುಜೀವ ನೀಡಿ, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwv0d9q8acy16tp15hpvp99p,imgname-nh-konaraddi--1--1783317833447.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಮಳೆ ಕೊರತೆ ಎದುರಿಸುತ್ತಿರುವ ಧಾರವಾಡ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ನವಲಗುಂದ ಶಾಸಕ ಎನ್&zwnj;.ಎಚ್&zwnj;. ಕೋನರಡ್ಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಜಿಲ್ಲೆಯ ಮೇಲುಸ್ತುವಾರಿ ಆಗಿರುವ ಸತೀಶ ಜಾರಕಿಹೊಳಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.&lt;/p&gt;&lt;p&gt;ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಪ್ರತಿಶತ ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿದ್ದು, ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮೋಡಗಳಿದ್ದರೂ ಮಳೆ ಸುರಿಯದೇ ರೈತರು ನಿರಾಶರಾಗುತ್ತಿದ್ದಾರೆ. ಮಳೆಯ ಕೊರತೆ ಬರೀ ಕೃಷಿಗೆ ಮಾತ್ರವಲ್ಲದೇ ಕುಡಿಯುವ ನೀರು, ಜಾನುವಾರುಗಳಿಗೆ ನೀರು, ಮೇವಿಗೂ ಕೊರತೆ ಉಂಟಾಗಿದೆ. ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಂತೂ ತೀವ್ರ ಮಳೆ ಕೊರತೆ ಉಂಟಾಗಿ ಬೆಳೆಗಳು ಒಣಗಿ ಹೋಗಿವೆ. ರೈತರು ಟ್ಯಾಂಕರ್&zwnj; ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.&lt;/p&gt;&lt;p&gt;ಆದ್ದರಿಂದ ರಾಜ್ಯ ಸರ್ಕಾರ ರೈತರ ಪರ ನಿಲ್ಲಬೇಕಿದೆ. ಹವಾಮಾನ ತಜ್ಞರ ಸಲಹೆ ಮೇರೆಗೆ ಧಾರವಾಡ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಶೀಘ್ರವಾಗಿ ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕೈಗೊಂಡು ಮಳೆ ಕೊರತೆ ನೀಗಿಸಬೇಕು ಎಂದು ಕೋನರಡ್ಡಿ ಮನವಿ ಮಾಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇನ್ನು, ಹಾವೇರಿ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಜು. 7ರಿಂದ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದ್ದು, ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಸಹ ಒಪ್ಪಿಗೆ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು.&lt;/p&gt;&lt;h2&gt;&lt;strong&gt;ರೈತರಲ್ಲಿ ಹೊಸ ಭರವಸೆ ಮೂಡಿಸಿದ ಜುಲೈ ತಿಂಗಳ ಮಳೆ!&lt;/strong&gt;&lt;/h2&gt;&lt;p&gt;ವಾಡಿಕೆಗಿಂತ ಕಡಿಮೆ ಮಳೆಯಿಂದಾಗಿ ತೀವ್ರ ಆತಂಕದಲ್ಲಿದ ಜಿಲ್ಲೆಯ ರೈತರಿಗೆ ಜುಲೈ ತಿಂಗಳಿಂದ ಶುರುವಾಗಿರುವ ನಿರಂತರ ಮಳೆಯು ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಮಾಡಿದೆ. ಇನ್ನೇನು ಬೆಳೆಗಳು ಒಣಗಿ ಹೋದವು ಎನ್ನುವಷ್ಟರಲ್ಲಿ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್&zwnj;ನಂತೆ ಮಳೆ ರೈತರಲ್ಲಿ ಕೃಷಿ ಬಗ್ಗೆ ಮತ್ತಷ್ಟು ಭರವಸೆ ಮೂಡಿಸಿದೆ.&lt;/p&gt;&lt;p&gt;ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಕೆಲವು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಬೆಳೆಗಳು ಮತ್ತೆ ಚಿಗುರಿ ನಿಂತಿವೆ. ಹೀಗಾಗಿ ರೈತ ಸಮುದಾಯದ ಆತ್ಮಸ್ಥೈರ್ಯ ಚಿಗುರಿದೆ. ಜಿಲ್ಲೆಯಲ್ಲಿ ಶೇ. 80ರಷ್ಟು ಬಿತ್ತನೆಯಾಗಿದ್ದು, ಹುಟ್ಟಿದ್ದ ಬೆಳೆಗಳ ಬೆಳವಣಿಗೆಯಾಗಲು ತೇವಾಂಶದ ಅಗತ್ಯವಿತ್ತು. ಆದರೆ, ಇಡೀ ಜೂನ್&zwnj; ತಿಂಗಳು ಮಳೆಯಾಗದೇ ರೈತರು ತೀವ್ರ ಕಂಗಾಲಾಗಿದ್ದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/navalagund-mla-nh-konaraddi-letter-to-the-government-for-cloud-seeding-to-overcome-the-rain-deficit-mrq/articleshow-hcyncgm"/>
        </item>
        <item>
            <title><![CDATA[ಬೆಂಗಳೂರು-ಮುಂಬೈ ವಂದೇ ಭಾರತ್: ಕಲಬುರಗಿ ಮಾರ್ಗ ಬದಲಾವಣೆ ಮಾಡಿ ಬೇರೆ ಕಡೆ ತಿರುಗಿಸಲು ಹುನ್ನಾರ ನಡೀತಿದ್ಯಾ?]]></title>
            <link>https://kannada.asianetnews.com/karnataka-districts/bengaluru-mumbai-vande-bharat-sleeper-row-over-route-change-kalaburagi-divert-via-hubballi-gdp/articleshow-ibffheh</link>
            <guid isPermaLink="true">https://kannada.asianetnews.com/karnataka-districts/bengaluru-mumbai-vande-bharat-sleeper-row-over-route-change-kalaburagi-divert-via-hubballi-gdp/articleshow-ibffheh</guid>
            <pubDate>Thu, 16 Jul 2026 13:10:39 +0530</pubDate>
            <description><![CDATA[ಕೇಂದ್ರ ಸರ್ಕಾರ ಘೋಷಿಸಿದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿನ ಮಾರ್ಗವನ್ನು ಕಲಬುರಗಿಯಿಂದ ಹುಬ್ಬಳ್ಳಿ-ಬೆಳಗಾವಿಗೆ ಬದಲಾಯಿಸಲು ನಡೆಯುತ್ತಿರುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸಲಾಗಿದೆ. ಈ ರಾಜಕೀಯ ಒತ್ತಡಕ್ಕೆ ಮಣಿದು ಮಾರ್ಗ ಬದಲಿಸಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knzr06zjsgm9tffs2c0e3qf0,imgname-indian-railways-2026-reforms-vande-bharat-sleeper-hydrogen-train-ticket-refund-cancellation-board-change-policy-5-1775960595442.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು-ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲನ್ನು ಕಲಬುರಗಿ ಮಾರ್ಗವಾಗಿ ಸಂಚರಿಸುವಂತೆ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದರೂ, ಇದೀಗ ಆ ಮಾರ್ಗವನ್ನು ಹುಬ್ಬಳ್ಳಿ-ಬೆಳಗಾವಿ ಕಡೆಗೆ ಬದಲಾಯಿಸಲು ನಡೆಯುತ್ತಿರುವ ಯತ್ನವನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಹಾಗೂ ಟೀಮ್ ಯುವಾ ಸಂಘಟನೆಯ ಸಂಚಾಲಕ ವಿನಯ್ ಕುಮಾರ್ ಮಾಳಗೆ ತೀವ್ರವಾಗಿ ಖಂಡಿಸಿದ್ದಾರೆ.&lt;/p&gt;&lt;h2&gt;ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ವಿರುದ್ಧ ಆರೋಪ&lt;/h2&gt;&lt;p&gt;ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಏ.27, 2026ರಂದು ಕಲಬುರಗಿ ಮಾರ್ಗವಾಗಿ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಈ ಮಾರ್ಗವನ್ನು ಹುಬ್ಬಳ್ಳಿ-ಬೆಳಗಾವಿ ಕಡೆಗೆ ಬದಲಾಯಿಸಲು ಒತ್ತಡ ಹೇರುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ ವಾಗಿದೆ ಎಂದು ಆರೋಪಿಸಿದ್ದಾರೆ.&lt;/p&gt;&lt;p&gt;ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಿಜೆಪಿ ನಾಯಕರು ನಿರಂತರವಾಗಿ ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿದ ಮಾಳಗೆ, ಈ ಹಿಂದೆ ರಾಯಚೂರಿಗೆ ಮಂಜೂರಾಗಬೇಕಿದ್ದ ಐಐಟಿ ಹಾಗೂ ಏಮ್ಸ್ ಸಂಸ್ಥೆಗಳನ್ನು ಹುಬ್ಬಳ್ಳಿ - ಧಾರವಾಡಕ್ಕೆ ಸ್ಥಳಾಂತರಿಸುವ ಮೂಲಕ ಈ ಭಾಗದ ಯುವಕರಿಗೆ ಅನ್ಯಾಯ ಮಾಡ ಲಾಗಿದೆ ಎಂದು ಟೀಕಿಸಿದರು.&lt;/p&gt;&lt;p&gt;ಬೀದರ್ ಜಿಲ್ಲೆಯಲ್ಲಿಯೂ ಹೆಚ್&zwnj;ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ, ಬಿಎಸ್&zwnj;ಎಫ್ ತರಬೇತಿ ಕೇಂದ್ರ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ಎನ್&zwnj;ಐಎಂಜೆಡ್) ಯೋಜನೆಗಳು ಬಿಜೆಪಿ ನಾಯಕರ ನಿರ್ಲಕ್ಷ್ಯದಿಂದ ಕೈತಪ್ಪಿವೆ ಎಂದು ಆರೋಪಿಸಿದರು.&lt;/p&gt;&lt;p&gt;ಬೆಂಗಳೂರು - ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಯಾವುದೇ ಕಾರಣಕ್ಕೂ ಕಲಬುರಗಿ ಮಾರ್ಗದಿಂದ ಬದಲಾಗಬಾರದು. ಕಲ್ಯಾಣ ಕರ್ನಾಟಕದ ಎಲ್ಲ ಸಂಸದರು, ಶಾಸಕರು ಹಾಗೂ ಪಕ್ಷಾತೀತ ನಾಯಕರು ಒಗ್ಗಟ್ಟಿನಿಂದ ಈ ಪ್ರಸ್ತಾವನೆಯನ್ನು ವಿರೋಧಿಸಿ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಕಲಬುರಗಿ ಮಾರ್ಗವನ್ನೇ ಅಂತಿಮಗೊಳಿಸುವಂತೆ ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದರು. ಒಂದು ವೇಳೆ ಕೇಂದ್ರ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು ರೈಲು ಮಾರ್ಗ ಬದಲಾಯಿಸಿದರೆ, ಕಲ್ಯಾಣ ಕರ್ನಾಟಕ ಭಾಗದಾದ್ಯಂತ ಸಾರ್ವಜನಿಕರು, ಯುವಕರು ಹಾಗೂ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿನಯ್ ಕುಮಾರ್ ಮಾಳಗೆ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-mumbai-vande-bharat-sleeper-row-over-route-change-kalaburagi-divert-via-hubballi-gdp/articleshow-ibffheh"/>
        </item>
        <item>
            <title><![CDATA[ನೈಋತ್ಯ ರೈಲ್ವೆ ಜೂನ್‌ ಒಂದೇ ತಿಂಗಳಲ್ಲಿ ದಾಖಲೆಯ  ₹733 ಕೋಟಿ ಆದಾಯ! ವಿಶೇಷ ರೈಲುಗಳ ಸೇವೆ ಆ.31 ರವರೆಗೆ ವಿಸ್ತರಣೆ]]></title>
            <link>https://kannada.asianetnews.com/state/south-western-railway-shatters-records-earns-rs-733-crore-in-june-2026-with-highest-ever-freight-loading-gdp/articleshow-k2v48nn</link>
            <guid isPermaLink="true">https://kannada.asianetnews.com/state/south-western-railway-shatters-records-earns-rs-733-crore-in-june-2026-with-highest-ever-freight-loading-gdp/articleshow-k2v48nn</guid>
            <pubDate>Fri, 03 Jul 2026 14:13:05 +0530</pubDate>
            <description><![CDATA[ನೈಋತ್ಯ ರೈಲ್ವೆ ವಲಯವು ಜೂನ್ ತಿಂಗಳಲ್ಲಿ ₹733.23 ಕೋಟಿ ಆದಾಯ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಈ ದಾಖಲೆಯ ಆದಾಯಕ್ಕೆ 4.18 ಮಿಲಿಯನ್ ಟನ್ ಸರಕು ಸಾಗಣೆ ಮತ್ತು 1.48 ಕೋಟಿ ಪ್ರಯಾಣಿಕರ ಸಂಚಾರ ಪ್ರಮುಖ ಕಾರಣವಾಗಿದೆ. ಇದೇ ವೇಳೆ, ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ವಿಶೇಷ ರೈಲುಗಳ ಸೇವೆಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kskwmr6j1s6bpbzecn2z2mhr,imgname-indian-railway-1779857776850.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ: ನೈಋತ್ಯ ರೈಲ್ವೆ (SWR) ವಲಯವು ಜೂನ್ ತಿಂಗಳಲ್ಲಿ ತನ್ನ ಇತಿಹಾಸದಲ್ಲೇ ಅತ್ಯಧಿಕ ಸರಕು ಸಾಗಣೆ ಸಾಧನೆ ಮಾಡುವ ಮೂಲಕ ಆದಾಯದಲ್ಲಿ ಹೊಸ ದಾಖಲೆ ಬರೆದಿದೆ. ಸರಕು ಸಾಗಣೆ ಕಾರ್ಯಾಚರಣೆ ಹಾಗೂ ಪ್ರಯಾಣಿಕರ ಸಂಚಾರದಲ್ಲಿ ಕಂಡುಬಂದ ಗಮನಾರ್ಹ ಪ್ರಗತಿಯಿಂದಾಗಿ, ಜೂನ್ 2026ರ ಒಂದೇ ತಿಂಗಳಲ್ಲಿ ರೈಲ್ವೆ ವಲಯವು ಒಟ್ಟು ₹733.23 ಕೋಟಿ ಆದಾಯವನ್ನು ರಫ್ತು ಮಾಡಿಕೊಂಡಿದೆ. ಇದು ಕಳೆದ ವರ್ಷದ ಜೂನ್ ತಿಂಗಳ ಆದಾಯಕ್ಕೆ ಹೋಲಿಸಿದರೆ ₹11.22 ಕೋಟಿಗಳಷ್ಟು ಅಧಿಕವಾಗಿದೆ.&lt;/p&gt;&lt;h2&gt;ದಾಖಲೆಯ ಸರಕು ಸಾಗಣೆ ಮತ್ತು ವ್ಯಾಗನ್ ಲೋಡಿಂಗ್&lt;/h2&gt;&lt;p&gt;ಪ್ರಸಕ್ತ ವರ್ಷದ ಜೂನ್&zwnj;ನಲ್ಲಿ ನೈಋತ್ಯ ರೈಲ್ವೆಯು ಒಟ್ಟು 4.18 ಮಿಲಿಯನ್ ಟನ್ (MT) ಸರಕನ್ನು ಸಾಗಿಸಿದೆ. ಜೂನ್ 2025 ರಲ್ಲಿ ಈ ಪ್ರಮಾಣವು 3.98 ಮಿಲಿಯನ್ ಟನ್ ಇತ್ತು. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸರಕು ಸಾಗಣೆಯಲ್ಲಿ ಶೇ. 5.2 ರಷ್ಟು ಪ್ರಗತಿ ದಾಖಲಾಗಿದೆ.&lt;/p&gt;&lt;p&gt;ಇದೇ ಅವಧಿಯಲ್ಲಿ ದೈನಂದಿನ ವ್ಯಾಗನ್ ಲೋಡಿಂಗ್&zwnj;ನಲ್ಲೂ ಅತ್ಯುತ್ತಮ ಸಾಧನೆ ಕಂಡುಬಂದಿದ್ದು, ಪ್ರತಿದಿನ ಸರಾಸರಿ 2,221 ವ್ಯಾಗನ್&zwnj;ಗಳನ್ನು ಲೋಡ್ ಮಾಡಲಾಗಿದೆ. ಕಳೆದ ವರ್ಷ ದಿನಕ್ಕೆ 2,143 ವ್ಯಾಗನ್&zwnj;ಗಳನ್ನು ಲೋಡ್ ಮಾಡಲಾಗುತ್ತಿತ್ತು. ಪ್ರಮುಖವಾಗಿ ಕಬ್ಬಿಣದ ಅದಿರು, ಉಕ್ಕು, ಖನಿಜ ತೈಲ, ಸಿಮೆಂಟ್ ಮತ್ತು ಕಂಟೇನರ್&zwnj;ಗಳನ್ನು ಈ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಸಾಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h2&gt;ವಿವಿಧ ಮೂಲಗಳಿಂದ ಹರಿದುಬಂದ ಆದಾಯದ ವಿವರ:&lt;/h2&gt;&lt;p&gt;ನೈಋತ್ಯ ರೈಲ್ವೆಗೆ ಒಟ್ಟು ಲಭಿಸಿದ ₹733.23 ಕೋಟಿ ಆದಾಯದಲ್ಲಿ ವಿವಿಧ ವಿಭಾಗಗಳ ಪಾಲು ಹೀಗಿದೆ:&lt;/p&gt;&lt;p&gt;ಸರಕು ಸಾಗಣೆ (Freight): ₹402.61 ಕೋಟಿ&lt;/p&gt;&lt;p&gt;ಪ್ರಯಾಣಿಕರ ಸಂಚಾರ (Passenger Traffic): ₹290.43 ಕೋಟಿ (ಶೇ. 15.08 ರಷ್ಟು ಅಭಿವೃದ್ಧಿ)&lt;/p&gt;&lt;p&gt;ಕೋಚಿಂಗ್ ಮತ್ತು ಪಾರ್ಸೆಲ್ ಸೇವೆ: ₹26.66 ಕೋಟಿ ಹಾಗೂ ₹14.30 ಕೋಟಿ&lt;/p&gt;&lt;p&gt;ಇತರ ಮೂಲಗಳು: ₹13.53 ಕೋಟಿ&lt;/p&gt;&lt;p&gt;14.85 ಮಿಲಿಯನ್ ಪ್ರಯಾಣಿಕರ ಸಂಚಾರ: ಕಳೆದ ತಿಂಗಳು ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು 14.85 ದಶಲಕ್ಷ (1.48 ಕೋಟಿಗೂ ಅಧಿಕ) ಜನರು ಪ್ರಯಾಣಿಸಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 4.36 ರಷ್ಟು ಪ್ರಗತಿಯಾಗಿದೆ.&lt;/p&gt;&lt;h2&gt;ಪ್ರಯಾಣಿಕರ ಗಮನಕ್ಕೆ: ವಿಶೇಷ ರೈಲುಗಳ ಸೇವೆ ಆಗಸ್ಟ್ 31 ರವರೆಗೆ ವಿಸ್ತರಣೆ&lt;/h2&gt;&lt;p&gt;ಇದೇ ವೇಳೆ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಪ್ರಸ್ತುತ ಸಂಚರಿಸುತ್ತಿರುವ ಕೆಲವು ಸಾಪ್ತಾಹಿಕ ವಿಶೇಷ ರೈಲುಗಳ ಸೇವೆಯನ್ನು ಆಗಸ್ಟ್ 31, 2026 ರವರೆಗೆ ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.&lt;/p&gt;&lt;p&gt;ಹುಬ್ಬಳ್ಳಿ - ಕೊಲ್ಲಂ - ಹುಬ್ಬಳ್ಳಿ (07313/07314): ಈ ವಿಶೇಷ ರೈಲಿನ ಸೇವೆಯನ್ನು ಹೆಚ್ಚುವರಿ 5 ಟ್ರಿಪ್&zwnj;ಗಳ ಕಾಲ ವಿಸ್ತರಿಸಲಾಗಿದೆ.&lt;/p&gt;&lt;p&gt;SMVT ಬೆಂಗಳೂರು - ತಿರುವನಂತಪುರಂ - SMVT ಬೆಂಗಳೂರು (06523/06524): ಇದರ ಸೇವೆಯನ್ನೂ ಸಹ ಹೆಚ್ಚುವರಿ 5 ಟ್ರಿಪ್&zwnj;ಗಳಿಗೆ ವಿಸ್ತರಿಸಲಾಗಿದೆ.&lt;/p&gt;&lt;p&gt;SMVT ಬೆಂಗಳೂರು - ತಿರುವನಂತಪುರಂ ಸಾಪ್ತಾಹಿಕ ವಿಶೇಷ ರೈಲು (06547/06548): ಈ ರೈಲಿನ ಸೇವೆಯನ್ನು ಹೆಚ್ಚುವರಿ 4 ಟ್ರಿಪ್&zwnj;ಗಳ ಅವಧಿಗೆ ವಿಸ್ತರಿಸಲಾಗಿದ್ದು, ಪ್ರಯಾಣಿಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/state/south-western-railway-shatters-records-earns-rs-733-crore-in-june-2026-with-highest-ever-freight-loading-gdp/articleshow-k2v48nn"/>
        </item>
        <item>
            <title><![CDATA[ಜೀವನದ ಕೊನೆಯ ಸೆಲ್ಫಿ: ಅರಬೈಲ್ ಘಾಟ್‌ನಲ್ಲಿ ಅಂತ್ಯವಾದ ಸ್ನೇಹಯಾತ್ರೆ, ಮೃತರ ಫೋಟೋ ರಿಲೀಸ್ ಮಾಡಿದ ಜಿಲ್ಲಾಡಳಿತ!]]></title>
            <link>https://kannada.asianetnews.com/gallery/karnataka-districts/yallapur-arbail-ghat-accident-cruiser-lorry-collision-7-food-delivery-boys-dead-dharwad-nt2kgih</link>
            <guid isPermaLink="true">https://kannada.asianetnews.com/gallery/karnataka-districts/yallapur-arbail-ghat-accident-cruiser-lorry-collision-7-food-delivery-boys-dead-dharwad-nt2kgih</guid>
            <pubDate>Thu, 09 Jul 2026 19:38:48 +0530</pubDate>
            <description><![CDATA[&lt;p&gt;ಉತ್ತರ ಕನ್ನಡದ ಅರಬೈಲ್ ಘಾಟ್&zwnj;ನಲ್ಲಿ ಲಾರಿ ಮತ್ತು ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಧಾರವಾಡ ಮೂಲದ ಏಳು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಕರ್ಣ ಪ್ರವಾಸಕ್ಕೆ ಹೊರಟಿದ್ದ ಡೆಲಿವರಿ ಬಾಯ್ಸ್ ತಂಡದ ವಾಹನವು ಅಪಘಾತವಾಗಿದ್ದು, ಮೃತರ ಫೋಟೋಗಳನ್ನು ಜಿಲ್ಲಾಡಳಿತ ಹಂಚಿಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3jk5zf2ffxtv0t141ek2zf,imgname-uttara-kannada-arabail-ghat-accident--2--1783605336047.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡದ ಅರಬೈಲ್ ಘಾಟ್&zwnj;ನಲ್ಲಿ ಲಾರಿ ಮತ್ತು ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಧಾರವಾಡ ಮೂಲದ ಏಳು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಕರ್ಣ ಪ್ರವಾಸಕ್ಕೆ ಹೊರಟಿದ್ದ ಡೆಲಿವರಿ ಬಾಯ್ಸ್ ತಂಡದ ವಾಹನವು ಅಪಘಾತವಾಗಿದ್ದು, ಮೃತರ ಫೋಟೋಗಳನ್ನು ಜಿಲ್ಲಾಡಳಿತ ಹಂಚಿಕೊಂಡಿದೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಕನ್ನಡ (ಜು.09): &lt;/strong&gt;ಬೆಳ್ಳಂಬೆಳಗ್ಗೆ ಅರಬೈಲ್ ಘಟ್ಟ ಪ್ರದೇಶದಲ್ಲಿ ಜವರಾಯನ ಅಟ್ಟಹಾಸ ನಡೆದಿದೆ. ಪ್ರವಾಸಕ್ಕೆಂದು ಖುಷಿಯಿಂದ ಹೊರಟಿದ್ದ ಸ್ನೇಹಿತರ ತಂಡವೊಂದು ಮನೆಗೆ ಶವವಾಗಿ ಮರಳುವಂತಾದ ಎದೆನಡುಗಿಸುವ ಘಟನೆ ಸಂಭವಿಸಿದೆ. ಲಾರಿ ಮತ್ತು ತೂಫಾನ್ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಧಾರವಾಡ ಮೂಲದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಫೋಟೋಗಳನ್ನು ಜಿಲ್ಲಾಡಳಿತವು ಬಿಡುಗಡೆ ಮಾಡಿದೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಗೋಕರ್ಣ, ಮುರುಡೇಶ್ವರ ಮತ್ತು ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ಒಟ್ಟು ಒಂಬತ್ತು ಜನ ಸ್ನೇಹಿತರು ಕ್ರೂಸರ್ ವಾಹನದಲ್ಲಿ ಹೊರಟಿದ್ದರು. ಇಂದು ಮುಂಜಾನೆ ಸುಮಾರು ಧಾರವಾಡದಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದಾಗ, ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್&zwnj;ನಲ್ಲಿ ಮಂಗಳೂರಿನಿಂದ ಕುಡತನಿ ಕಡೆಗೆ ಬರುತ್ತಿದ್ದ ಲಾರಿಗೆ ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, 7 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ದೇವಸ್ಥಾನದಲ್ಲಿ ತೆಗೆಸಿಕೊಂಡಿದ್ದ ಸೆಲ್ಫಿಯೇ ಕೊನೆಯಾಯ್ತು!&lt;/strong&gt;&lt;/p&gt;&lt;p&gt;ಮೃತಪಟ್ಟವರೆಲ್ಲರೂ ಧಾರವಾಡದ ವಿವಿಧ ಕಂಪನಿಗಳಲ್ಲಿ 'ಡೆಲಿವರಿ ಬಾಯ್ಸ್' ಆಗಿ ಕೆಲಸ ಮಾಡುತ್ತಿದ್ದ ಸ್ನೇಹಿತರು. ಕೆಲಸದ ಒತ್ತಡದಿಂದ ಸ್ವಲ್ಪ ವಿರಾಮ ಪಡೆಯಲು ಗೋಕರ್ಣ, ಧರ್ಮಸ್ಥಳ ಪ್ರವಾಸಕ್ಕೆ ಯೋಜಿಸಿದ್ದರು. ಪ್ರವಾಸಕ್ಕೆ ಹೊರಡುವ ಮುನ್ನ ಧಾರವಾಡದ ಕೆಸಿಡಿ ಸರ್ಕಲ್ ಬಳಿಯ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ದರ್ಶನ ಪಡೆದ ಬಳಿಕ ಎಲ್ಲರೂ ಸೇರಿ ಒಂದು ಗ್ರೂಪ್ ಸೆಲ್ಫಿ ತೆಗೆದುಕೊಂಡಿದ್ದರು. ದುರದೃಷ್ಟವಶಾತ್, ಆ ಫೋಟೋ ಅವರ ಜೀವನದ ಕೊನೆಯ ಸೆಲ್ಫಿಯಾಗಿದೆ. ದೇವರ ಆಶೀರ್ವಾದ ಪಡೆದು ಹೊರಟವರು ಅರ್ಧ ಹಾದಿಯಲ್ಲೇ ಸಾವಿನ ದವಡೆಗೆ ಸಿಲುಕಿರುವುದು ಸಂಕಟ ಮೂಡಿಸಿದೆ.&lt;/p&gt;&lt;img&gt;&lt;p&gt;&lt;strong&gt;ಮೃತರ ವಿವರ:&lt;/strong&gt;&lt;/p&gt;&lt;ul&gt; &lt;li&gt;ಸಂಜಯ್ ಅಂಗಡಿ (33) - ಚಾಲಕ&lt;/li&gt; &lt;li&gt;ಅಭಿಷೇಕ ಈಶ್ವರ (28)&lt;/li&gt; &lt;li&gt;ಅಭಿಷೇಕ ಮಡಬಾವಿ (26)&lt;/li&gt; &lt;li&gt;ಬಸವರಾಜ (48)&lt;/li&gt; &lt;li&gt;ಅಕ್ಷಯ್ (26)&lt;/li&gt; &lt;li&gt;ಮಂಜುನಾಥ ಚುಲಕಿ (32)&lt;/li&gt; &lt;li&gt;ಸಚಿನ್ (28)&lt;/li&gt;&lt;/ul&gt;&lt;p&gt;ಗಾಯಾಳುಗಳಾದ ಶಿವರಾಜ್ ಮಡಿವಾಳ್ ಮತ್ತು ಚೆನ್ನಬಸಯ್ಯ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬದುಕುಳಿದ ಶಿವರಾಜ್ ಹೇಳಿಕೆ:&lt;/strong&gt;&lt;/p&gt;&lt;p&gt;ಅಪಘಾತದಲ್ಲಿ ಬದುಕುಳಿದ ಶಿವರಾಜ್ ಮಾತನಾಡಿ, 'ನಾವು ರಾತ್ರಿ 11 ಗಂಟೆಗೆ ಧಾರವಾಡದಿಂದ ಹೊರಟಿದ್ದೆವು. ನಾವೆಲ್ಲರೂ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದೆವು. ಘಟನೆಯ ಸಮಯದಲ್ಲಿ ನಾನು ಮಲಗಿದ್ದೆ, ಒಮ್ಮೆಲೇ ಜೋರಾಗಿ ಶಬ್ದವಾಯಿತು. ಕಣ್ಣು ಬಿಟ್ಟು ನೋಡಿದಾಗ ಅಪಘಾತವಾಗಿತ್ತು. ನಾನು ಮತ್ತು ಚನ್ನಬಸು ಮಾತ್ರ ಬದುಕಿದ್ದೇವೆ, ಉಳಿದವರೆಲ್ಲಾ ನಮ್ಮ ಕಣ್ಣ ಮುಂದೆಯೇ ಪ್ರಾಣ ಬಿಟ್ಟರು' ಎಂದು ಕಣ್ಣೀರಿಟ್ಟಿದ್ದಾರೆ.&amp;nbsp;&lt;/p&gt;&lt;p&gt;ಇನ್ನು ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳನ್ನು ವಿಚಾರಿಸಿದ್ದಾರೆ. ಜೊತೆಗೆ, ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಲಾರಿ ಚಾಲಕನ ಪ್ರತಿಕ್ರಿಯೆ:&lt;/strong&gt;&lt;/p&gt;&lt;p&gt;ಲಾರಿ ಚಾಲಕ ಸಮ್ಸೀರ್ ಪ್ರಕಾರ, ಅರಬೈಲ್ ಘಾಟ್ ಹತ್ತುವಾಗ ಎದುರುಗಡೆಯಿಂದ ಬಂದ ಕ್ರೂಸರ್ ವಾಹನ ಅತ್ಯಂತ ವೇಗವಾಗಿತ್ತು. ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದರೂ ಸಹ ವೇಗವಾಗಿ ಬಂದ ಕ್ರೂಸರ್ ನೇರವಾಗಿ ಲಾರಿಗೆ ಗುದ್ದಿದೆ ಎಂದು ತಿಳಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಕೆಲವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟರು.&lt;/p&gt;&lt;img&gt;&lt;p&gt;&lt;strong&gt;ಸ್ಥಳಕ್ಕೆ ಅಧಿಕಾರಿಗಳ ಭೇಟಿ:&lt;/strong&gt;&lt;/p&gt;&lt;p&gt;ಘಟನೆ ನಡೆದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಎಸ್ಪಿ ದೀಪನ್ ಮತ್ತು ಸಿಇಒ ದಿಲೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ಶಿವರಾಮ್ ಹೆಬ್ಬಾರ್ ಅವರು ಯಲ್ಲಾಪುರ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಶೀಘ್ರವಾಗಿ ಮುಗಿಸಿ ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/yallapur-arbail-ghat-accident-cruiser-lorry-collision-7-food-delivery-boys-dead-dharwad-nt2kgih"/>
        </item>
        <item>
            <title><![CDATA[ಧಾರವಾಡ ಡೆಲಿವರಿ ಬಾಯ್ ಸ್ನೇಹಿತರು ಯಲ್ಲಾಪುರ ಭೀಕರ ಅಪಘಾತದಲ್ಲಿ ಮೃತ್ಯು, ಭೀಕರತೆ ಬಿಚ್ಚಿಟ್ಟ ಫೋಟೋಗಳು!]]></title>
            <link>https://kannada.asianetnews.com/gallery/karnataka-districts/dharwad-delivery-boys-group-killed-in-horrific-cruiser-lorry-crash-at-yellapura-arabail-ghat-last-selfie-goes-viral-gdp-ozqapq2</link>
            <guid isPermaLink="true">https://kannada.asianetnews.com/gallery/karnataka-districts/dharwad-delivery-boys-group-killed-in-horrific-cruiser-lorry-crash-at-yellapura-arabail-ghat-last-selfie-goes-viral-gdp-ozqapq2</guid>
            <pubDate>Thu, 09 Jul 2026 08:53:56 +0530</pubDate>
            <description><![CDATA[ಧಾರವಾಡದಿಂದ ಧಾರ್ಮಿಕ ಪ್ರವಾಸಕ್ಕೆ ಹೊರಟಿದ್ದ ಏಳು ಸ್ನೇಹಿತರು ಯಲ್ಲಾಪುರದ ಅರಬೈಲ್ ಘಾಟ್&zwnj;ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx2dey9dbwmn0d47fv2y89mx,imgname-uttar-kannada-road-accident-1783566399789.jpg" type="image/jpeg" height="390" width="690"/>
            <content:encoded><![CDATA[ಧಾರವಾಡದಿಂದ ಧಾರ್ಮಿಕ ಪ್ರವಾಸಕ್ಕೆ ಹೊರಟಿದ್ದ ಏಳು ಸ್ನೇಹಿತರು ಯಲ್ಲಾಪುರದ ಅರಬೈಲ್ ಘಾಟ್&zwnj;ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.&lt;img&gt;&lt;p&gt;&lt;strong&gt;ಕಾರವಾರ/ಯಲ್ಲಾಪುರ&lt;/strong&gt;: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಪ್ರದೇಶದಲ್ಲಿ ಗುರುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರಿದ್ದ ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಗೋಕರ್ಣ, ಮುರುಡೇಶ್ವರ ಹಾಗೂ ಧರ್ಮಸ್ಥಳದ ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕಾಗಿ ಹೊರಟಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಮೃತಪಟ್ಟವರೆಲ್ಲರೂ ಧಾರವಾಡದಲ್ಲಿ ಡೆಲಿವರಿ ಬಾಯ್ಸ್ ಕೆಲಸ ಮಾಡುತ್ತಿದ್ದ ಸ್ನೇಹಿತರಾಗಿದ್ದಾರೆ. ಪ್ರತಿನಿತ್ಯದ ಕೆಲಸದ ಒತ್ತಡದಿಂದ ಕೊಂಚ ಬಿಡುವು ಮಾಡಿಕೊಂಡು, ದೇವಸ್ಥಾನಗಳ ದರ್ಶನ ಹಾಗೂ ಪ್ರವಾಸದ ಖುಷಿಯಲ್ಲಿದ್ದ ಯುವಕರಿಗೆ ವಿಧಿಯೇ ಸಂಚು ರೂಪಿಸಿತ್ತು. ಒಟ್ಟು 9 ಜನರಿದ್ದ ಈ ಸ್ನೇಹಿತರ ತಂಡವು ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಕರಾವಳಿಯತ್ತ ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ಬಂದ ಲಾರಿ, ಇವರು ಚಲಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.&lt;/p&gt;&lt;img&gt;&lt;p&gt;ಪ್ರವಾಸ ಹೊರಡುವ ಮುನ್ನ ಈ ಸ್ನೇಹಿತರು ಧಾರವಾಡದ ಪ್ರಸಿದ್ಧ ಕೆ.ಸಿ.ಡಿ (KCD) ಸರ್ಕಲ್ ಬಳಿ ಇರುವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದರು. ಸುಖಕರ ಪ್ರಯಾಣಕ್ಕಾಗಿ ಗಣಪತಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ದೇವಸ್ಥಾನದ ಮುಂಭಾಗದಲ್ಲೇ ಎಲ್ಲರೂ ಒಟ್ಟಾಗಿ ಅತ್ಯಂತ ಸಡಗರದಿಂದ ಸೆಲ್ಫಿ ಫೋಟೋವನ್ನೂ ತೆಗೆದುಕೊಂಡಿದ್ದರು. ಆದರೆ, ಆ ದೇವರ ದರ್ಶನ ಹಾಗೂ ಸೆಲ್ಫಿ ಫೋಟೋವೇ ಆ ಸ್ನೇಹಿತರ ಪಾಲಿಗೆ ಕೊನೆಯಾಗುವುದೆಂದು ಯಾರೂ ಊಹಿಸಿರಲಿಲ್ಲ. ದೇವರಲ್ಲಿ ಮಾಡಿದ ಪ್ರಾರ್ಥನೆ ಫಲಿಸಲಿಲ್ಲ. ಕೆಲವೇ ಗಂಟೆಗಳಲ್ಲಿ ಜವರಾಯ ಜೀವ ಕಸಿದುಕೊಂಡಿದ್ದಾನೆ.&lt;/p&gt;&lt;img&gt;&lt;p&gt;ಅಪಘಾತದ ಭೀಕರತೆಗೆ ಕ್ರೂಸರ್ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, 6 ಜನ ಸ್ಥಳದಲ್ಲೇ ಜೀವ ಬಿಟ್ಟಿದ್ದು ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.&lt;/p&gt;&lt;ul&gt; &lt;li&gt;ಬಸವರಾಜ್ (48 ವರ್ಷ)&lt;/li&gt; &lt;li&gt;ಅಭಿಷೇಕ್ ಈಶ್ವರ್ (28 ವರ್ಷ)&lt;/li&gt; &lt;li&gt;ಅಕ್ಷಯ (26 ವರ್ಷ)&lt;/li&gt; &lt;li&gt;ಅಭಿಷೇಕ್ (26 ವರ್ಷ)&lt;/li&gt; &lt;li&gt;ಸಂಜೀವ / ಸಂಜಯ ಅಂಗಡಿ (33 ವರ್ಷ - ಕ್ರೂಸರ್ ಚಾಲಕ)&lt;/li&gt; &lt;li&gt;ಮಂಜುನಾಥ ಚುಲಕಿ (32 ವರ್ಷ)&lt;/li&gt; &lt;li&gt;ಸಚಿನ್ ಹೆಬ್ಬಳ್ಳಿ(26 - ಕಿಮ್ಸ್ ಆಸ್ಪತ್ರೆಯಲ್ಲಿ ಸಾವು)&lt;/li&gt;&lt;/ul&gt;&lt;p&gt;ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಶಿವರಾಜ್ ದುರ್ಗಪ್ಪ ಮಡಿವಾಳ್ (22 ವರ್ಷ), ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28 ವರ್ಷ) ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.&lt;/p&gt;&lt;img&gt;&lt;p&gt;ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಯಲ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಹೊರತೆಗೆಯಲಾಯಿತು. ಸದ್ಯ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಧಾರವಾಡದ ಇವರ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/dharwad-delivery-boys-group-killed-in-horrific-cruiser-lorry-crash-at-yellapura-arabail-ghat-last-selfie-goes-viral-gdp-ozqapq2"/>
        </item>
        <item>
            <title><![CDATA[₹17.20 ಕೋಟಿ ವೆಚ್ಚದಲ್ಲಿ ಅಳ್ನಾವರ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಪ್ರಧಾನಿ ಮೋದಿ ಲೋಕಾರ್ಪಣೆ]]></title>
            <link>https://kannada.asianetnews.com/karnataka-districts/pm-modi-inaugurated-alnavar-railway-station-high-tech-upgrade-gvd/articleshow-rliiapm</link>
            <guid isPermaLink="true">https://kannada.asianetnews.com/karnataka-districts/pm-modi-inaugurated-alnavar-railway-station-high-tech-upgrade-gvd/articleshow-rliiapm</guid>
            <pubDate>Fri, 17 Jul 2026 18:42:58 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆಯು ದೇಶದ ಆರ್ಥಿಕತೆಗೆ ಬಲ ನೀಡಿದೆ. ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭಾರತೀಯ ರೈಲ್ವೆ ಕೊಡುಗೆ ಅಪಾರವಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxr391bw5jv5af4bakqeq4yc,imgname-ch-1784293918076.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ (ಜು.17):&lt;/strong&gt; ಭಾರತೀಯ ರೈಲ್ವೆಯು ದೇಶದ ಆರ್ಥಿಕತೆಗೆ ಬಲ ನೀಡಿದೆ. ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭಾರತೀಯ ರೈಲ್ವೆ ಕೊಡುಗೆ ಅಪಾರವಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಇಂದು (ಜುಲೈ 17) ಮಧ್ಯಾಹ್ನ ಅಳ್ನಾವರ ರೈಲು ನಿಲ್ದಾಣದಲ್ಲಿ ಅಮೃತ್ ಭಾರತ ರೈಲು ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ ಅಳ್ನಾವರ ರೈಲು ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.&lt;/p&gt;&lt;p&gt;ಇಂದು ಅಮೃತ್ ಭಾರತ್ ರೈಲು ನಿಲ್ದಾಣ ಪುನರ್ ಅಭಿವೃದ್ಧಿ ಯೋಜನೆಯಡಿ ದೇಶದಾದ್ಯಂತ 75 ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅದರಲ್ಲಿ ರಾಜ್ಯದ ಬಂಟ್ವಾಳ, ಬಾದಾಮಿ, ಕೊಪ್ಪಳ ಹಾಗೂ ಅಳ್ನಾವರ ರೈಲು ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ರೈಲು ನಿಲ್ದಾಣಗಳು ಹೊಂದಿವೆ. ಹೈಡ್ರೋಜನ್ ರೈಲಿಗೆ ಚಾಲನೆ ನೀಡಲಾಗಿದ್ದು, ಭಾರತ ದೇಶ ಕೂಡ ಹೈಡ್ರೋಜನ್ ರೈಲು ಹೊಂದಿದ ದೇಶಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಅಳ್ನಾವರ ರೈಲು ನಿಲ್ದಾಣವನ್ನು ರೂ.17.20 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಳಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಅತ್ಯುತ್ತಮ ಸೇವೆಗಳನ್ನು ಒದಗಿಸಲಾಗುತ್ತಿದೆ. ರೈಲ್ವೆ ವಿದ್ಯುದ್ಧೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲದೇ ರೈಲುಗಳಿಗೆ ಸಹ ಆಧುನಿಕ ಸ್ಪರ್ಶ ಕಲ್ಪಿಸಲಾಗಿದೆ. ಭಾರತೀಯ ರೈಲ್ವೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ರಾಜ್ಯದ ಜನರ ಏಳಿಗೆಗೆ ರೈಲ್ವೆ ಸೇವೆ ಪೂರಕವಾಗಿದೆ. ಸಶಕ್ತ, ಸಮೃದ್ಧ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ರಾಜ್ಯಪಾಲರು ಹೇಳಿದರು.&lt;/p&gt;&lt;p&gt;ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಇಂದು ಅಮೃತ್ ಭಾರತ ರೈಲು ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ರಾಜ್ಯದ 4 ಕಡೆಗಳಲ್ಲಿ ರೈಲು ನಿಲ್ದಾಣಗಳನ್ನು ನವೀಕರಣಗೊಳಿಸಲಾಗಿದೆ. ಬಂಟ್ವಾಳ, ಬಾದಾಮಿ, ಅಳ್ನಾವರ ಮತ್ತು ಕೊಪ್ಪಳ ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿಪಡಿಸಲಾಗಿದೆ. ಅಳ್ನಾವರ ರೈಲು ನಿಲ್ದಾಣವನ್ನು ರೂ.17.20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.&lt;/p&gt;&lt;p&gt;ವಿಮಾನ ನಿಲ್ದಾಣಗಳಂತೆ ರೈಲು ನಿಲ್ದಾಣಗಳನ್ನು ನವೀಕೃತಗೊಳಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಲಿಫ್ಟ್, ಪಾದಚಾರಿ ಮೇಲ್ಸೇತುವೆ, ದಿವ್ಯಾಂಗ ಸ್ನೇಹಿ ಸೌಲಭ್ಯ ಸೇರಿದಂತೆ ಇತರೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿರುತ್ತದೆ ಎಂದು ಅವರು ತಿಳಿಸಿದರು. ದೇಶದಾದ್ಯಂತ 75 ರೈಲು ನಿಲ್ದಾಣಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ&zwnj;. ಅಲ್ಲದೇ ಕೆಳ ಮತ್ತು ಮೇಲ್ಸೇತುವೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅಳ್ನಾವರ ಹಾಗೂ ದಾಂಡೇಲಿ ರೈಲು ಮಾರ್ಗದ ಭೂ ಸ್ವಾಧೀನ ಮಾಡಿಕೊಡಬೇಕಿದೆ. ಈ ಹಿಂದೆ ಧಾರವಾಡ, ಹುಬ್ಬಳ್ಳಿ ರೈಲು ನಿಲ್ದಾಣಗಳನ್ನು ನವೀಕರಣಗೊಳಿಸಲಾಗಿತ್ತು. ಜಗತ್ತಿನಲ್ಲಿ ರೈಲ್ವೆ ಲೇನ್ ನಲ್ಲಿ ಭಾರತ ಮೊದಲ ಸ್ಥಾನ ಪಡೆದಿದೆ.&lt;/p&gt;&lt;p&gt;ರೈಲ್ವೆ ವಿದ್ಯುದ್ಧೀಕರಣ ಕೂಡ ಪೂರ್ಣಗೊಂಡಿದೆ. ಇಂದು ಡಿಸೇಲ್ ಇಂಜಿನ್ ರೈಲುಗಳು ಬಂದ್ ಆಗಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು &zwnj;ನೀಡಲಾಗಿದೆ. ವಂದೇ ಭಾರತ್ ರೈಲುಗಳಿಗೆ ಉತ್ತಮ ಬೇಡಿಕೆಯಿದೆ. ಜಮ್ಮು ಮತ್ತು ಕಾಶ್ಮೀರ ಜೋಡಿಸುವ ಕಾರ್ಯ ಕೂಡ ಆಗಿದೆ. ದೇಶದ ರೈಲ್ವೆ ಬಜೆಟ್ ದೊಡ್ಡದಾಗಿದೆ. ಜಗತ್ತಿನಲ್ಲಿ ಹೈಡ್ರೋಜನ್ ರೈಲು ಹೊಂದಿದ 4 ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. ಭಾರತ ದೇಶವು ಹಸಿರು ಹೈಡ್ರೋಜನ್ ಉತ್ಪಾದನೆಯ ಹಬ್ ಆಗಲಿದೆ. ಕಳೆದ 14 ವರ್ಷಗಳಲ್ಲಿ ದೇಶದಲ್ಲಿ ಪರಿಣಾಮಕಾರಿ ಬದಲಾವಣೆಯಾಗಿದೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಹೇಳಿದರು.&lt;/p&gt;&lt;p&gt;ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ವರ್ಚುವಲ್ ಆಗಿ ರೈಲು ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು ಪುನರಾಭಿವೃದ್ಧಿಗೊಂಡ ಅಳ್ನಾವರ ರೈಲು ನಿಲ್ದಾಣದ ಶಿಲಾನ್ಯಾಸವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಚಿತ್ರಕಲೆ, ಪ್ರಬಂಧ, ಆಶು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಾಸಕರಾದ ಪ್ರದೀಪ ಶೆಟ್ಟರ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ನೈರುತ್ಯ ರೈಲ್ವೆಯ ಮಹಾ ಪ್ರಬಂಧಕರಾದ ಅನಂತ್ ಪಿ., ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.&lt;/p&gt;&lt;p&gt;ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಭಾರತ್ ನಿಲ್ದಾಣ ಯೋಜನೆ (ABSS) ಅಡಿಯಲ್ಲಿ ಧಾರವಾಡ ಜಿಲ್ಲೆಯ ಅಳ್ನಾವರ ರೈಲು ನಿಲ್ದಾಣವನ್ನು ₹17.20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಂಪೂರ್ಣವಾಗಿ ಪುನರ್ ಅಭಿವೃದ್ಧಿಪಡಿಸಲಾಗಿದೆ. ಬ್ರಿಟಿಷರ ಕಾಲದ ಈ ಐತಿಹಾಸಿಕ ನಿಲ್ದಾಣಕ್ಕೆ ಈಗ ವಿಮಾನ ನಿಲ್ದಾಣದ ಮಾದರಿಯಲ್ಲಿ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆಗೊಳಿಸಿದ್ದಾರೆ.&lt;/p&gt;&lt;h2&gt;&lt;strong&gt;₹17.20 ಕೋಟಿ ವೆಚ್ಚದ ನವೀಕೃತ ಅಳ್ನಾವರ ರೈಲು ನಿಲ್ದಾಣದ ಪ್ರಮುಖ ವಿಶೇಷತೆಗಳು :&lt;/strong&gt;&lt;/h2&gt;&lt;p&gt;&lt;strong&gt;ನಿಲ್ದಾಣದ ಮೂಲಸೌಕರ್ಯ ಮತ್ತು ಸುಂದರೀಕರಣ: &lt;/strong&gt;ಆಧುನಿಕ ಕಟ್ಟಡ ಮತ್ತು ಮುಂಭಾಗ (Facade): ನಿಲ್ದಾಣದ ಮುಖ್ಯ ಕಟ್ಟಡವನ್ನು ವಿಸ್ತರಿಸಲಾಗಿದ್ದು, ಪ್ರಾದೇಶಿಕ ಕಲೆ ಮತ್ತು ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಆಕರ್ಷಕ ಪ್ರವೇಶ ದ್ವಾರ ಹಾಗೂ ಮುಂಭಾಗದ ವಿನ್ಯಾಸವನ್ನು ಮಾಡಲಾಗಿದೆ.&lt;/p&gt;&lt;p&gt;&lt;strong&gt;ಸುಧಾರಿತ ಸಂಚಾರ ಪ್ರದೇಶ (Circulating Area): &lt;/strong&gt;ಸುಮಾರು 4,500 ಚದರ ಮೀಟರ್ ಪ್ರದೇಶದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಸುಸಜ್ಜಿತ ಪಾರ್ಕಿಂಗ್&zwnj;ಗಾಗಿ ವಿಶಾಲವಾದ ಜಾಗವನ್ನು ಅಭಿವೃದ್ಧಿಪಡಿಸಲಾಗಿದೆ.&lt;/p&gt;&lt;p&gt;&lt;strong&gt;ಸುಂದರ ಆವರಣ:&lt;/strong&gt; ನಿಲ್ದಾಣದ ಸುತ್ತಮುತ್ತ ಆಕರ್ಷಕ ವರ್ಣಚಿತ್ರಗಳು (Murals), ಹಸಿರು ಗಿಡಗಳ ಲ್ಯಾಂಡ್&zwnj;ಸ್ಕೇಪಿಂಗ್ ಮತ್ತು ಪರಿಸರ ಸ್ನೇಹಿ ಎಲ್&zwnj;ಇಡಿ (LED) ದೀಪಗಳ ವ್ಯವಸ್ಥೆ ಮಾಡಲಾಗಿದೆ.&lt;/p&gt;&lt;p&gt;&lt;strong&gt;ಪ್ರಯಾಣಿಕರ ಸೌಕರ್ಯಗಳು ಹೊಸ ಬುಕ್ಕಿಂಗ್ ಕೇಂದ್ರ:&lt;/strong&gt; ಸಾರ್ವಜನಿಕರಿಗೆ ಟಿಕೆಟ್ ಪಡೆಯಲು ಅನುಕೂಲವಾಗುವಂತೆ 200 ಚದರ ಮೀಟರ್ ವಿಸ್ತೀರ್ಣದ ಸುಸಜ್ಜಿತ ಡಿಜಿಟಲ್ ಟಿಕೆಟ್ ಕೌಂಟರ್&zwnj;ಗಳನ್ನು ಸ್ಥಾಪಿಸಲಾಗಿದೆ.&lt;/p&gt;&lt;p&gt;&lt;strong&gt;ವಿಶಾಲ ನಿರೀಕ್ಷಣಾ ಹಾಲ್ ಮತ್ತು ಲೌಂಜ್: &lt;/strong&gt;ಪ್ರಯಾಣಿಕರು ವಿಶ್ರಮಿಸಲು ಹವಾನಿಯಂತ್ರಿತ (AC) ಕಾಯುವ ಕೋಣೆಗಳು, ಮಹಿಳೆಯರಿಗಾಗಿ ಪ್ರತ್ಯೇಕ ಬೇಬಿ-ಫೀಡಿಂಗ್ (ಸ್ತನ್ಯಪಾನ) ಕೊಠಡಿ ಮತ್ತು ಪ್ರತ್ಯೇಕ ಎಕ್ಸಿಕ್ಯೂಟಿವ್ ಲೌಂಜ್&zwnj;ಗಳನ್ನು ನಿರ್ಮಿಸಲಾಗಿದೆ.&lt;/p&gt;&lt;p&gt;&lt;strong&gt;ಹೊಸ ಪ್ಲಾಟ್&zwnj;ಫಾರ್ಮ್ ಶೆಲ್ಟರ್&zwnj;ಗಳು: &lt;/strong&gt;ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಪ್ಲಾಟ್&zwnj;ಫಾರ್ಮ್ 1 ಮತ್ತು 2ಕ್ಕೆ ಸುಧಾರಿತ ರೂಫ್ ಶೆಲ್ಟರ್&zwnj;ಗಳನ್ನು ಅಳವಡಿಸಲಾಗಿದೆ.&lt;/p&gt;&lt;p&gt;&lt;strong&gt;ಆಧುನಿಕ ಶೌಚಾಲಯಗಳು: &lt;/strong&gt;ನಿಲ್ದಾಣ ಹಾಗೂ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಸ್ವಚ್ಛ ಹಾಗೂ ಅತ್ಯಾಧುನಿಕ ಶೌಚಾಲಯ ಬ್ಲಾಕ್&zwnj;ಗಳನ್ನು ನಿರ್ಮಿಸಲಾಗಿದೆ.&lt;/p&gt;&lt;p&gt;&lt;strong&gt;ಸುಲಭ ಸಂಚಾರ ಮತ್ತು ದಿವ್ಯಾಂಗ ಸ್ನೇಹಿ ಸೌಲಭ್ಯಗಳು 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ (FOB): &lt;/strong&gt;ಪ್ರಯಾಣಿಕರು ಒಂದು ಪ್ಲಾಟ್&zwnj;ಫಾರ್ಮ್&zwnj;ನಿಂದ ಮತ್ತೊಂದಕ್ಕೆ ಸುರಕ್ಷಿತವಾಗಿ ದಾಟಲು 12 ಮೀಟರ್ ಅಗಲದ ಬೃಹತ್ ಫುಟ್ ಓವರ್ ಬ್ರಿಡ್ಜ್ ನಿರ್ಮಿಸಲಾಗಿದೆ.&lt;/p&gt;&lt;p&gt;&lt;strong&gt;ಲಿಫ್ಟ್ ಸೌಕರ್ಯ: &lt;/strong&gt;ಹಿರಿಯ ನಾಗರಿಕರು ಮತ್ತು ರೋಗಿಗಳ ಅನುಕೂಲಕ್ಕಾಗಿ 2 ಹೊಸ ಲಿಫ್ಟ್&zwnj;ಗಳನ್ನು ಅಳವಡಿಸಲಾಗಿದೆ.&lt;/p&gt;&lt;p&gt;&lt;strong&gt;ದಿವ್ಯಾಂಗ ಸ್ನೇಹಿ ವ್ಯವಸ್ಥೆ: &lt;/strong&gt;ದೈಹಿಕ ವಿಕಲಚೇತನರಿಗಾಗಿ ವಿಶೇಷ ರ&zwj;್ಯಾಂಪ್&zwnj;ಗಳು (Ramps), ಸುಲಭವಾಗಿ ಗುರುತಿಸಬಹುದಾದ ಗೈಡೆನ್ಸ್ ಪಾತ್&zwnj;ವೇಗಳು, ಪ್ರತ್ಯೇಕ ಶೌಚಾಲಯಗಳು ಮತ್ತು ಟ್ಯಾಕ್ಟೈಲ್ ಟೈಲ್ಸ್ (Tactile Tiles) ಅಳವಡಿಸಲಾಗಿದೆ.&lt;/p&gt;&lt;p&gt;&lt;strong&gt;ಡಿಜಿಟಲ್ ಮತ್ತು ಮಾಹಿತಿ ವ್ಯವಸ್ಥೆ ಮಾಹಿತಿ ಫಲಕಗಳು:&lt;/strong&gt; ನಿಲ್ದಾಣದ ಒಳಗೆ ಮತ್ತು ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ರೈಲುಗಳ ಆಗಮನ-ನಿರ್ಗಮನ ಹಾಗೂ ಕೋಚ್&zwnj;ಗಳ ಸ್ಥಾನವನ್ನು ನಿಖರವಾಗಿ ತೋರಿಸುವ ಎಲ್&zwnj;ಇಡಿ ಇಂಡಿಕೇಟರ್ ಬೋರ್ಡ್&zwnj;ಗಳನ್ನು ಅಳವಡಿಸಲಾಗಿದೆ.&lt;/p&gt;&lt;p&gt;&lt;strong&gt;ಉಚಿತ ವೈ-ಫೈ: &lt;/strong&gt;ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರಿಗೆ ಹೈ-ಸ್ಪೀಡ್ ಉಚಿತ ವೈ-ಫೈ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ.&lt;/p&gt;&lt;p&gt;ಈ ಎಲ್ಲ ಹೈಟೆಕ್ ಬದಲಾವಣೆಗಳ ಮೂಲಕ ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್&zwnj;ಗಳಲ್ಲಿ ಒಂದಾದ ಅಳ್ನಾವರ ನಿಲ್ದಾಣವು (LWR) ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಜಾಗತಿಕ ಮಟ್ಟದ ಪ್ರಯಾಣದ ಅನುಭವವನ್ನು ನೀಡುತ್ತಿದೆ.&lt;/p&gt;]]></content:encoded>
            <category>dharwad</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/pm-modi-inaugurated-alnavar-railway-station-high-tech-upgrade-gvd/articleshow-rliiapm"/>
        </item>
        <item>
            <title><![CDATA[ಧಾರವಾಡ ವೈದ್ಯ ಪತಿ ಕೊಂದ ವೈದ್ಯೆ ಪತ್ನಿ; ರಕ್ತ ಹರಿದು ಒದ್ದಾಡುತ್ತಿದ್ದ ಮಗನ ಪಕ್ಕ ಕೂತು ರೀಲ್ಸ್ ನೋಡ್ತಿದ್ದ ತಾಯಿ!]]></title>
            <link>https://kannada.asianetnews.com/gallery/karnataka-districts/dharwad-doctor-kiran-honnannavar-murdered-by-wife-priyanka-son-attacked-s6tsisn</link>
            <guid isPermaLink="true">https://kannada.asianetnews.com/gallery/karnataka-districts/dharwad-doctor-kiran-honnannavar-murdered-by-wife-priyanka-son-attacked-s6tsisn</guid>
            <pubDate>Wed, 15 Jul 2026 20:56:47 +0530</pubDate>
            <description><![CDATA[&lt;p&gt;ಧಾರವಾಡದಲ್ಲಿ, ವೈದ್ಯೆಯೊಬ್ಬರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಮ್ಮ ವೈದ್ಯ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಎಂಟು ವರ್ಷದ ಮಗನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ಆಯುಕ್ತರು ಉಸಿರಾಡುತ್ತಿದ್ದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxk4hmz0f3h7rap087kenv8d,imgname-dharwad-doctor-murder-case-1784127476704.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡದಲ್ಲಿ, ವೈದ್ಯೆಯೊಬ್ಬರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಮ್ಮ ವೈದ್ಯ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಎಂಟು ವರ್ಷದ ಮಗನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ಆಯುಕ್ತರು ಉಸಿರಾಡುತ್ತಿದ್ದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ವಿ&lt;/strong&gt;ದ್ಯಾಕಾಶಿ ಧಾರವಾಡದಲ್ಲಿ ನಾಗರಿಕರು ಅಕ್ಷರಶಃ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳಗಳು ಸಹಜ, ಆದರೆ ಇಲ್ಲಿ ಪತ್ನಿಯೇ ರಾಕ್ಷಸಿಯಾಗಿ ಬದಲಾಗಿದ್ದಾಳೆ. ವೃತ್ತಿಯಲ್ಲಿ ವೈದ್ಯರಾಗಿರುವ ಪತಿಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಪತ್ನಿ, ಹತ್ತು ವರ್ಷದ ಪುಟ್ಟ ಮಗನ ಮೇಲೂ ಪ್ರಾಣಾಂತಿಕ ದಾಳಿ ನಡೆಸಿದ್ದಾಳೆ.&lt;/p&gt;&lt;img&gt;&lt;p&gt;&lt;strong&gt;ಅಪಾರ್ಟ್&zwnj;ಮೆಂಟ್&zwnj;ನಲ್ಲಿ ನಡೆದ ಹೈಡ್ರಾಮಾ:&lt;/strong&gt;&lt;/p&gt;&lt;p&gt;ಧಾರವಾಡದ ಕೆವಿವಿ ರಸ್ತೆಯಲ್ಲಿರುವ ಬಾರಾಕೊಟ್ರಿ ಬಡಾವಣೆಯ 'ರಂಕಾ ಕೆಸ್ಟೆಲ್ಲೋ' ಅಪಾರ್ಟ್&zwnj;ಮೆಂಟ್&zwnj;ನಲ್ಲಿ ಈ ಭೀಕರ ಘಟನೆ ನಡೆದಿದೆ. ಚಿರಾಯು ಆಸ್ಪತ್ರೆಯ ವೈದ್ಯರಾಗಿದ್ದ ಡಾ. ಕಿರಣ್ ಹೊನ್ನಣ್ಣವರ್ (45) ಹತ್ಯೆಯಾದ ದುರ್ದೈವಿ. ಇವರ ಪತ್ನಿ ಪ್ರಿಯಾಂಕಾ ಕೂಡ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಏನೋ ಕಿರಿಕಿರಿ ಅಥವಾ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪ್ರಿಯಾಂಕಾ ತನ್ನ ಪತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾಳೆ.&lt;/p&gt;&lt;img&gt;&lt;p&gt;&lt;strong&gt;ಮಗುವಿನ ಮೇಲೂ ಕ್ರೂರ ದಾಳಿ:&lt;/strong&gt;&lt;/p&gt;&lt;p&gt;ಪತಿಯನ್ನು ಒಂದು ಕೋಣೆಯಲ್ಲಿ ಕೊಂದ ಬಳಿಕ ಈಕೆಯ ಕ್ರೌರ್ಯ ಅಲ್ಲಿಗೆ ನಿಲ್ಲಲಿಲ್ಲ. ಮತ್ತೊಂದು ಕೋಣೆಯಲ್ಲಿದ್ದ ಎಂಟು ವರ್ಷದ ಮಗ ನೇಹಿತ್ ಮೇಲೂ ಚಾಕುವಿನಿಂದ ಮನಬಂದಂತೆ ಇರಿದಿದ್ದಾಳೆ. ರಕ್ತದ ಮಡುವಿನಲ್ಲಿ ಉಸಿರಾಡಲು ಒದ್ದಾಡುತ್ತಿದ್ದ ಮಗುವಿನ ಪಕ್ಕದಲ್ಲೇ ಕುಳಿತು ಈಕೆ ಅತ್ಯಂತ ನಿರ್ಲಜ್ಜವಾಗಿ ತನ್ನ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದಳು ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;&lt;strong&gt;ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸಮಯಪ್ರಜ್ಞೆ:&lt;/strong&gt;&lt;/p&gt;&lt;p&gt;ಇನ್ನು ಅಪಾರ್ಟ್&zwnj;ಮೆಂಟ್&zwnj;ನಲ್ಲಿದ್ದ ನೆರೆಹೊರೆ ಹಾಗೂ ಇತರರು ಪೊಲೀಸರಿಗೆ ಕೊಲೆಯಾದ ಘಟನೆ ಬಗ್ಗೆ ಮಾಹಿತಿ ನೀಡಿದರೂ, ಮಗುವನ್ನು ಉಳಿಸುವ ಪ್ರಯತ್ನ ಮಾಡಿಲ್ಲ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ, ಮಗು ನೇಹಿತ್ ಇನ್ನು ಉಸಿರಾಡುತ್ತಿರುವುದನ್ನು ಗಮನಿಸಿದರು. ತಕ್ಷಣವೇ ತಡಮಾಡದೆ ಮಗುವನ್ನು ತಮ್ಮ ಕೈಯಲ್ಲೇ ಹೊತ್ತುಕೊಂಡು ಕೆಳಗೆ ತಂದು ಆಸ್ಪತ್ರೆಗೆ ರವಾನಿಸಿದ್ದಾರೆ.&lt;/p&gt;&lt;img&gt;&lt;p&gt;ಜೊತೆಗೆ, ನೆರೆಹೊರೆಯವರೂ ಕೂಡ ವೈದ್ಯರು ಇದ್ದೀರಿ. ಒಂದು ಮಗುವನ್ನು ಉಳಿಸುವ ಸಣ್ಣ ಪ್ರಯತ್ನವನ್ನಾದರೂ ಮಾಡಬಾರದೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಮಗು ಸಾವು ಬದುಕಿನ ಮಧ್ಯೆ ಖಾಸಗಿ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದೆ. ಪೊಲೀಸ್ ಕಮಿಷನರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಸಹೋದರಿಯರ ಆಕ್ರಂದನ, ಪತ್ನಿ ವಶಕ್ಕೆ:&lt;/strong&gt;&lt;/p&gt;&lt;p&gt;ಘಟನಾ ಸ್ಥಳಕ್ಕೆ ಡಾ. ಕಿರಣ್ ಅವರ ಸಹೋದರಿಯರು ಧಾವಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ವಿದ್ಯಾಗಿರಿ ಮತ್ತು ಉಪನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾರ್ಟ್&zwnj;ಮೆಂಟ್&zwnj;ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಪತ್ನಿ ಪ್ರಿಯಾಂಕಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಸುಸಂಸ್ಕೃತ ಕುಟುಂಬದಲ್ಲಿ ನಡೆದ ಈ ರಕ್ತಸಿಕ್ತ ಅಧ್ಯಾಯ ಇಡೀ ಧಾರವಾಡವನ್ನು ಸ್ತಬ್ಧಗೊಳಿಸಿದೆ.&lt;/p&gt;]]></content:encoded>
            <category>dharwad</category>
            <dc:creator>Suvarna News</dc:creator>
            <atom:link href="https://kannada.asianetnews.com/gallery/karnataka-districts/dharwad-doctor-kiran-honnannavar-murdered-by-wife-priyanka-son-attacked-s6tsisn"/>
        </item>
        <item>
            <title><![CDATA[Hubballi: 1909ರಲ್ಲಿ 13 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶತಮಾನ ಕಂಡ ಶಾಲೆಗೆ ಹೊಸ ರೂಪ]]></title>
            <link>https://kannada.asianetnews.com/karnataka-districts/hale-hubballi-govt-primary-school-history-of-115-years-now-set-to-get-a-modern-look-with-a-new-building-mrq/articleshow-ulby90t</link>
            <guid isPermaLink="true">https://kannada.asianetnews.com/karnataka-districts/hale-hubballi-govt-primary-school-history-of-115-years-now-set-to-get-a-modern-look-with-a-new-building-mrq/articleshow-ulby90t</guid>
            <pubDate>Thu, 16 Jul 2026 08:56:13 +0530</pubDate>
            <description><![CDATA[115 ವರ್ಷಗಳ ಇತಿಹಾಸ ಹೊಂದಿರುವ ಹಳೇಹುಬ್ಬಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 19, ಇದೀಗ ₹2.50 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡದೊಂದಿಗೆ ಆಧುನಿಕ ರೂಪ ಪಡೆಯಲು ಸಜ್ಜಾಗಿದೆ. ಸಿದ್ಧಾರೂಢರು ಅಡಿಗಲ್ಲು ಹಾಕಿದ್ದ ಈ ಶಾಲೆಯು, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 12 ಕೊಠಡಿಗಳುಳ್ಳ ಸ್ಮಾರ್ಟ್&zwnj; ಶಾಲೆಯಾಗಿ ಅಭಿವೃದ್ಧಿ ಹೊಂದಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxmf316php4xnewxnvaakqe7,imgname-hubballi-school-1784172086485.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಜೀಜಅಹ್ಮದ ಬಳಗಾನೂರ&lt;/strong&gt;&lt;/p&gt;&lt;p&gt;&lt;strong&gt;ಹುಬ್ಬಳ್ಳಿ:&lt;/strong&gt; ಒಂದು ಶತಮಾನಕ್ಕೂ ಹೆಚ್ಚು ಕಾಲ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವ ಹಳೇಹುಬ್ಬಳ್ಳಿ ಇಂಡಿಪಂಪ್&zwnj;ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 19 ಇದೀಗ ಆಧುನಿಕ ಕಟ್ಟಡದೊಂದಿಗೆ ಹೊಸ ರೂಪ ಪಡೆಯಲು ಸಜ್ಜಾಗಿದೆ. 115 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯ ಹಳೆ ಕಟ್ಟಡವನ್ನು ಈಗಾಗಲೇ ಕೆಡವಲಾಗುತ್ತಿದ್ದು, ಶೀಘ್ರದಲ್ಲೇ ₹2.50 ಕೋಟಿ ವೆಚ್ಚದಲ್ಲಿ ನೂತನ ಜಿ+2 ಮಾದರಿಯ ಕಟ್ಟಡ ನಿರ್ಮಾಣ ಆರಂಭವಾಗಲಿದೆ.&lt;/p&gt;&lt;p&gt;ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್&zwnj;ಐಡಿಎಲ್) ಈ ಕಾಮಗಾರಿ ಕೈಗೆತ್ತಿಕೊಂಡಿದೆ. ಹೊಸ ಕಟ್ಟಡದಲ್ಲಿ ಒಟ್ಟು 12 ವಿಶಾಲ ಕೊಠಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಹೊಂದಿ ಸ್ಮಾರ್ಟ್&zwnj; ಶಾಲೆಯಾಗಿ ಕಂಗೊಳಿಸಲಿದೆ.&lt;/p&gt;&lt;h2&gt;&lt;strong&gt;ಸಿದ್ಧಾರೂಢರಿಂದ ಅಡಿಗಲ್ಲು:&lt;/strong&gt;&lt;/h2&gt;&lt;p&gt;1909ರಲ್ಲಿ ಈ ಶಾಲೆ ಸ್ಥಾಪನೆಯಾಗಿದ್ದು, ಸದ್ಗುರು ಶ್ರೀಸಿದ್ಧಾರೂಢರು ಈ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದ್ದರು. ಆರಂಭದಲ್ಲಿ ಕೇವಲ 13 ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಆರಂಭಿಸಿದ ಈ ಶಾಲೆ ಇಂದು ಸಾವಿರಾರು ಕುಟುಂಬಗಳ ನೆನಪುಗಳ ಕೇಂದ್ರವಾಗಿದೆ. ಕೃಷ್ಣಾಪುರ ಓಣಿ, ನವ ಅಯೋಧ್ಯಾ ನಗರ, ಹೆಗ್ಗೇರಿ ಸೇರಿದಂತೆ ಹಳೆ ಹುಬ್ಬಳ್ಳಿಯ ಬಡಾವಣೆಗಳ ಬಡ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.&lt;/p&gt;&lt;p&gt;&lt;strong&gt;ಒಂದೇ ಕೊಠಡಿಯಲ್ಲಿ ಪ್ರಾರಂಭ:&lt;/strong&gt;&lt;/p&gt;&lt;p&gt;ಆರಂಭದಲ್ಲಿ ಒಂದೇ ಕೊಠಡಿಯಲ್ಲಿದ್ದ ಶಾಲೆ, 1930ರಲ್ಲಿ ಬಾಂಬೆ ಸರ್ಕಾರದ ಅವಧಿಯಲ್ಲಿ 6 ಕೊಠಡಿಗಳ ಸುಸಜ್ಜಿತ ಕಟ್ಟಡವಾಗಿ ವಿಸ್ತರಿಸಿತು. ನಂತರದ 5-6 ದಶಕಗಳ ಕಾಲ ಈ ಶಾಲೆಯಲ್ಲಿ ಪ್ರತಿ ವರ್ಷ ಸರಾಸರಿ 700ರಿಂದ 900 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.&lt;/p&gt;&lt;p&gt;&lt;strong&gt;ಶಿಥಿಲಗೊಂಡ ಕಟ್ಟಡಕ್ಕೆ ಮುಕ್ತಿ:&lt;/strong&gt;&lt;/p&gt;&lt;p&gt;ಪ್ರಸ್ತುತ ಎಲ್&zwnj;ಕೆಜಿ, ಯುಕೆಜಿ ಸೇರಿದಂತೆ 225 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಕಾಲಕ್ರಮೇಣ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ವಿದ್ಯಾರ್ಥಿಗಳ ಸುರಕ್ಷತೆ ಪ್ರಶ್ನೆಯಾಗಿತ್ತು. 2023ರಲ್ಲಿ ಎಚ್.ಎಂ. ಕುಂದರಗಿ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಹಲವು ಬಾರಿ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹೊಸ ಕಟ್ಟಡಕ್ಕಾಗಿ ಮನವಿ ಮಾಡಲಾಗಿತ್ತು. ಅದರ ಫಲವಾಗಿ ಇದೀಗ ಮಾದರಿ ಶಾಲಾ ಕಟ್ಟಡಕ್ಕೆ ₹2.50 ಕೋಟಿ ಅನುದಾನ ಮಂಜೂರಾಗಿದೆ.&lt;/p&gt;&lt;p&gt;&lt;strong&gt;ಸಾಧಕರನ್ನು ರೂಪಿಸಿದ ಶಾಲೆ:&lt;/strong&gt;&lt;/p&gt;&lt;p&gt;ಈ ಶಾಲೆಯಲ್ಲಿ ಶಿಕ್ಷಣ ಪಡೆದ ಅನೇಕರು ವೈದ್ಯರು, ವಕೀಲರು, ಸರ್ಕಾರಿ ಅಧಿಕಾರಿಗಳು ಹಾಗೂ ಸಶಸ್ತ್ರ ಪಡೆಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಶಿವಾನಂದ ಗಾಮನಗಟ್ಟಿ, ಭಾರತೀಯ ಅರಣ್ಯ ಸೇವೆ (ಐಎಫ್&zwnj;ಎಸ್) ಅಧಿಕಾರಿ ರಾಜೇಂದ್ರ ಗಾರವಾಡ ಹಾಗೂ ಸುಬೇದಾರ್ ಶಿವಾಜಿ ಗಾಂವ್ಕರ್ ಸೇರಿದಂತೆ ಹಲವರು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು.&lt;/p&gt;&lt;p&gt;&lt;strong&gt;ವರ್ಷದೊಳಗೆ ಕಾಮಗಾರಿ ಪೂರ್ಣ&lt;/strong&gt;&lt;/p&gt;&lt;p&gt;ಈಗಾಗಲೇ ಹಳೆಯ ಕಟ್ಟಡ ತೆರವು ಕಾರ್ಯ ಆರಂಭವಾಗಿದ್ದು, ಇನ್ನೂ 8-10 ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ. ಬಳಿಕ ಹೊಸ ಕಟ್ಟಡ ನಿರ್ಮಾಣ ಆರಂಭವಾಗಲಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಹೊಂದಿದೆ. ಸದ್ಯ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ಹುಬ್ಬಳ್ಳಿಯ ವಿದ್ಯುತ್ ನಗರದಲ್ಲಿರುವ ಸರ್ಕಾರಿ ಶಾಲೆ ನಂ.9ಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ &quot;ಕನ್ನಡಪ್ರಭ&quot;ಕ್ಕೆ ತಿಳಿಸಿದರು.&lt;/p&gt;&lt;p&gt;ಸಿರಿಗೇರಿ ಕುಟುಂಬವು ಶಾಲೆಯ ನಿರ್ಮಾಣಕ್ಕೆ ಜಾಗವನ್ನು ದಾನ ಮಾಡಿತ್ತು. ಆರಂಭದಲ್ಲಿ 1ರಿಂದ 5ನೇ ತರಗತಿ ವರೆಗಿದ್ದ ಶಾಲೆಯಲ್ಲಿ ಬಳಿಕ 7ನೇ ತರಗತಿ ವರೆಗೆ ಶಿಕ್ಷಣ ನೀಡಲಾಗುತ್ತಿತ್ತು. ಒಂದೇ ಶೈಕ್ಷಣಿಕ ವರ್ಷದಲ್ಲಿ ಸುಮಾರು 850 ವಿದ್ಯಾರ್ಥಿಗಳು ಓದಿದ ದಾಖಲೆಗಳಿವೆ ಎಂದು ಶಾಲೆಯ ಮುಖ್ಯೋಪಾಧ್ಯಯರಾದ ಎಚ್.ಎಂ.ಕುಂದರಗಿ ಹೇಳುತ್ತಾರೆ&lt;/p&gt;&lt;p&gt;ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಉಳಿವಿಗೆ ಆದ್ಯತೆ ನೀಡಿದೆ. ಈ ಶಾಲೆಯ ಸ್ಥಿತಿ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ₹2.5 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಲಾಗಿದೆ. ವರ್ಷದೊಳಗೆ ಸುಸಜ್ಜಿತ ಮಾದರಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hale-hubballi-govt-primary-school-history-of-115-years-now-set-to-get-a-modern-look-with-a-new-building-mrq/articleshow-ulby90t"/>
        </item>
        <item>
            <title><![CDATA[ಬೆಂಗಳೂರು ರೈಲ್ವೆ ಟ್ರ್ಯಾಕ್‌ಗೆ ಬಂತು ದೇಶದ 2ನೇ ವಂದೇ ಭಾರತ್ ಸ್ಲೀಪರ್ ರೈಲು; ಮುಂಬೈಗೆ ಹೋಗಲು ಗ್ರೀನ್ ಸಿಗ್ನಲ್ ಬಾಕಿ]]></title>
            <link>https://kannada.asianetnews.com/karnataka-districts/indian-railway-bengaluru-mumbai-vande-bharat-sleeper-train-features-route-details/articleshow-w3gpz0o</link>
            <guid isPermaLink="true">https://kannada.asianetnews.com/karnataka-districts/indian-railway-bengaluru-mumbai-vande-bharat-sleeper-train-features-route-details/articleshow-w3gpz0o</guid>
            <pubDate>Thu, 02 Jul 2026 17:14:35 +0530</pubDate>
            <description><![CDATA[&lt;p&gt;ಬೆಂಗಳೂರು ಮತ್ತು ಮುಂಬೈ ನಡುವೆ ಸಂಚರಿಸಲಿರುವ ದೇಶದ ಎರಡನೇ 'ವಂದೇ ಭಾರತ್ ಸ್ಲೀಪರ್' ರೈಲು ಬೆಂಗಳೂರಿಗೆ ಆಗಮಿಸಿದೆ. ಬಿಇಎಂಎಲ್&zwnj;ನಿಂದ ತಯಾರಿಸಲ್ಪಟ್ಟ ಈ ರೈಲು, ಪರೀಕ್ಷಾರ್ಥ ಸಂಚಾರಕ್ಕಾಗಿ ಬಂದಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಸೇವೆ ಆರಂಭಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwha8fjwsgd3rvftjch0gpag,imgname-bengaluru-mumbai-vande-bharat-train-1782992617052.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.02): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಈಗ ಶುಭ ಸುದ್ದಿ ಸಿಕ್ಕಿದೆ. ಭಾರತೀಯ ರೈಲ್ವೆಯ ಅತ್ಯಂತ ಮಹತ್ವಾಕಾಂಕ್ಷೆಯ 'ವಂದೇ ಭಾರತ್ ಸ್ಲೀಪರ್' (Vande Bharat Sleeper) ರೈಲಿನ ಎರಡನೇ ಸೆಟ್ ಬೆಂಗಳೂರಿಗೆ ಆಗಮಿಸಿದೆ. ಕೆಸರಿ ಮತ್ತು ಬೂದು ಬಣ್ಣದ ಈ ಅದ್ಭುತ ರೈಲು ಇದೀಗ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ.&lt;/p&gt;&lt;p&gt;ಬೆಂಗಳೂರಿನ ಬಿಇಎಂಎಲ್ (BEML) ಘಟಕದಲ್ಲಿ ತಯಾರಾದ ಈ ರೈಲು, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ತಂತ್ರಜ್ಞಾನವನ್ನು ಒಳಗೊಂಡಿದೆ. ಸದ್ಯ ಈ ರೈಲು ಪರೀಕ್ಷಾರ್ಥ ಸಂಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಶೀಘ್ರದಲ್ಲೇ ಕೆಎಸ್ಆರ್ ಬೆಂಗಳೂರು ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಅಧಿಕೃತವಾಗಿ ಸಂಚರಿಸಲಿದೆ.&lt;/p&gt;&lt;h2&gt;&lt;strong&gt;ದೇಶದ ಎರಡನೇ ಸ್ಲೀಪರ್ ರೈಲು:&lt;/strong&gt;&lt;/h2&gt;&lt;p&gt;ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು 2026ರ ಜನವರಿಯಲ್ಲಿ ಹೌರಾ ಮತ್ತು ಕಾಮಾಕ್ಯ ನಡುವೆ ಸಂಚಾರ ಆರಂಭಿಸಿತ್ತು. ಅದು ಕೇವಲ 6 ಗಂಟೆಗಳ ಪ್ರಯಾಣದ ಸಮಯವನ್ನು ಉಳಿತಾಯ ಮಾಡಿ ಯಶಸ್ವಿಯಾಗಿದೆ. ಇದೀಗ ಅದರ ಬೆನ್ನಲ್ಲೇ ಬೆಂಗಳೂರು ಮತ್ತು ಮುಂಬೈ ನಡುವೆ ಎರಡನೇ ಸ್ಲೀಪರ್ ರೈಲು ಹಳಿ ಏರಲು ಸಿದ್ಧವಾಗುತ್ತಿದೆ. ನೈಋತ್ಯ ರೈಲ್ವೆಯ (SWR) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಖಾಸಗಿ ಮಾಧ್ಯಮವೊಮದಕ್ಕೆ ನೀಡಿರುವ ಮಾಹಿತಿ ಪ್ರಕಾರ, ಈ ರೈಲು ಪ್ರಸ್ತುತ ಬಿಇಎಂಎಲ್ (BEML) ವಶದಲ್ಲಿದ್ದು, ಅಂತಿಮ ಹಂತದ ಪರೀಕ್ಷೆಗಳಿಗಾಗಿ ಬೆಂಗಳೂರಿನ ಎಸ್ಎಂವಿಟಿ (SMVT) ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಎಲ್ಲಾ ಪರೀಕ್ಷೆಗಳು ಮುಗಿದ ನಂತರ ಇದನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು.&lt;/p&gt;&lt;h2&gt;&lt;strong&gt;ಯಾವೆಲ್ಲಾ ನಗರಗಳಿಗೆ ಸಂಪರ್ಕ?&lt;/strong&gt;&lt;/h2&gt;&lt;p&gt;ಬೆಂಗಳೂರು ಮತ್ತು ಮುಂಬೈ ನಡುವಿನ ಈ ರೈಲು ಕೇವಲ ಎರಡು ನಗರಗಳಿಗೆ ಮಾತ್ರವಲ್ಲದೆ, ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರಗಳಿಗೂ ವರದಾನವಾಗಲಿದೆ. ಜೊತೆಗೆ ಮಹಾರಾಷ್ಟ್ರದ ಪುಣೆ ನಗರಕ್ಕೂ ಸುಲಭ ಸಂಪರ್ಕ ಕಲ್ಪಿಸಲಿದೆ. ಈ ರೈಲಿನ ಸಂಚಾರದಿಂದ ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ವೇಗ ಸಿಗುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;ವಂದೇ ಭಾರತ್ ಸ್ಲೀಪರ್ ರೈಲಿನ ಟಾಪ್ ವೈಶಿಷ್ಟ್ಯಗಳು:&lt;/strong&gt;&lt;/h2&gt;&lt;h3&gt;&lt;strong&gt;ಈ ಹೊಸ ರೈಲು ಸಾಮಾನ್ಯ ರೈಲುಗಳಿಗಿಂತ ಸಂಪೂರ್ಣ ಭಿನ್ನವಾಗಿದ್ದು, ವಿಮಾನದ ಮಾದರಿಯ ಸೌಕರ್ಯಗಳನ್ನು ಹೊಂದಿದೆ.&lt;/strong&gt;&lt;/h3&gt;&lt;p&gt;&lt;strong&gt;ಕೋಚ್&zwnj;ಗಳ ವಿವರ: &lt;/strong&gt;ಈ ರೈಲು ಒಟ್ಟು 16 ಕೋಚ್&zwnj;ಗಳನ್ನು ಹೊಂದಿದೆ. ಇದರಲ್ಲಿ 11 ಕೋಚ್&zwnj;ಗಳು 3-ಟೈರ್ ಎಸಿ (3-Tier AC), 4 ಕೋಚ್&zwnj;ಗಳು 2-ಟೈರ್ ಎಸಿ (2-Tier AC) ಮತ್ತು 1 ಕೋಚ್ 1ನೇ ದರ್ಜೆಯ ಎಸಿ (1st AC) ಸೌಲಭ್ಯವನ್ನು ಹೊಂದಿದೆ.&lt;/p&gt;&lt;p&gt;&lt;strong&gt;ಪ್ರಯಾಣಿಕರ ಸಾಮರ್ಥ್ಯ: &lt;/strong&gt;ಒಟ್ಟು 823 ಪ್ರಯಾಣಿಕರು ಏಕಕಾಲದಲ್ಲಿ ಈ ರೈಲಿನಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದು.&lt;/p&gt;&lt;p&gt;&lt;strong&gt;ಸೂಪರ್ ಫಾಸ್ಟ್ ವೇಗ: &lt;/strong&gt;ಇದು ಸೆಮಿ ಹೈಸ್ಪೀಡ್ ರೈಲಾಗಿದ್ದು, ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.&lt;/p&gt;&lt;p&gt;&lt;strong&gt;ಸುಧಾರಿತ ಬರ್ತ್&zwnj;ಗಳು:&lt;/strong&gt; ಪ್ರಯಾಣಿಕರ ನಿದ್ರೆಯ ಸೌಕರ್ಯಕ್ಕಾಗಿ ಬರ್ತ್&zwnj;ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಕುಶನ್ ಮತ್ತು ಎರ್ಗೋನಾಮಿಕ್ ವಿನ್ಯಾಸವು ಪ್ರಯಾಣವನ್ನು ಹಿತವಾಗಿಸುತ್ತದೆ.&lt;/p&gt;&lt;p&gt;&lt;strong&gt;ಆಧುನಿಕ ತಂತ್ರಜ್ಞಾನ: &lt;/strong&gt;ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳು (Automatic Doors) ಮತ್ತು ಶಬ್ದ ಮುಕ್ತ ಪ್ರಯಾಣಕ್ಕಾಗಿ 'ನಾಯ್ಸ್ ರಿಡಕ್ಷನ್' ತಂತ್ರಜ್ಞಾನ ಬಳಸಲಾಗಿದೆ.&lt;/p&gt;&lt;p&gt;&lt;strong&gt;ಸುರಕ್ಷತೆ (Kavach): &lt;/strong&gt;ರೈಲು ಅಪಘಾತಗಳನ್ನು ತಡೆಯುವ 'ಕವಚ' (Kavach) ವ್ಯವಸ್ಥೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಚಾಲಕರ ಜೊತೆ ಮಾತನಾಡಲು 'ಟಾಕ್-ಬ್ಯಾಕ್' ಸಿಸ್ಟಮ್ ಅಳವಡಿಸಲಾಗಿದೆ.&lt;/p&gt;&lt;p&gt;&lt;strong&gt;ನೈರ್ಮಲ್ಯಕ್ಕೆ ಆದ್ಯತೆ: &lt;/strong&gt;ರೈಲಿನಲ್ಲಿ ಹೆಚ್ಚಿನ ನೈರ್ಮಲ್ಯವನ್ನು ಕಾಪಾಡಲು ಡಿಸ್&zwnj;ಇನ್&zwnj;ಫೆಕ್ಟೆಂಟ್ (Disinfectant) ತಂತ್ರಜ್ಞಾನ ಮತ್ತು ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆ ಇದೆ.&lt;/p&gt;&lt;p&gt;&lt;strong&gt;ವೈಮಾನಿಕ ವಿನ್ಯಾಸ: &lt;/strong&gt;ರೈಲಿನ ಹೊರಭಾಗವು ಏರೋಡೈನಾಮಿಕ್ ಫಿನಿಶ್ ಹೊಂದಿದ್ದು, ನೋಡಲು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ.&lt;/p&gt;&lt;h2&gt;&lt;strong&gt;ಯಾವಾಗ ಸಂಚಾರ ಆರಂಭ?&lt;/strong&gt;&lt;/h2&gt;&lt;p&gt;ಸದ್ಯ ಬಿಇಎಂಎಲ್ ಇಂಜಿನಿಯರ್&zwnj;ಗಳು ಈ ರೈಲಿನ ಮೇಲೆ ಎಲ್ಲಾ ರೀತಿಯ ಸುರಕ್ಷತಾ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಅಂತಿಮ ಹಂತದ ಪರೀಕ್ಷೆಗಳು ಮುಗಿದು ರೈಲ್ವೆ ಮಂಡಳಿಯಿಂದ ಒಪ್ಪಿಗೆ ಸಿಕ್ಕ ಕೂಡಲೇ ಈ ರೈಲು ಅಧಿಕೃತವಾಗಿ ಉದ್ಘಾಟನೆಯಾಗಲಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಬೆಂಗಳೂರು-ಮಂಬೈ ನಡುವೆ ನೀವು ಈ ಅತ್ಯಾಧುನಿಕ ರೈಲಿನಲ್ಲಿ ನಿದ್ರಿಸುತ್ತಾ ಪ್ರಯಾಣಿಸಬಹುದು!&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/indian-railway-bengaluru-mumbai-vande-bharat-sleeper-train-features-route-details/articleshow-w3gpz0o"/>
        </item>
    </channel>
</rss>
