<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 06 Apr 2026 23:51:20 +0530</lastBuildDate>
        <atom:link href="https://kannada.asianetnews.com/rss/dharwad" rel="self" type="application/rss+xml"/>
        <item>
            <title><![CDATA[ಕೊಲ್ಲಿ ಯುದ್ಧ: ಹುಬ್ಬಳ್ಳಿಯ ಸಿರಿಂಜ್‌, ನೀಡಲ್‌ ಫ್ಯಾಕ್ಟರಿಗೆ ಹೊಡೆತ]]></title>
            <link>https://kannada.asianetnews.com/dharwad/hubballi-medical-syringe-factory-production-hit-middle-east-war-impact-san/articleshow-0emacug</link>
            <guid isPermaLink="true">https://kannada.asianetnews.com/dharwad/hubballi-medical-syringe-factory-production-hit-middle-east-war-impact-san/articleshow-0emacug</guid>
            <pubDate>Fri, 03 Apr 2026 09:33:01 +0530</pubDate>
            <description><![CDATA[&lt;p&gt;ಮಧ್ಯಪ್ರಾಚ್ಯ ಯುದ್ಧದಿಂದಾಗಿ ಪೆಟ್ರೋಲಿಯಂ ಉಪ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಸಿರಿಂಜ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಕೊರತೆ ಉಂಟಾಗಿದೆ. ಇದರಿಂದ ಹುಬ್ಬಳ್ಳಿಯ ಪ್ರಮುಖ ಸಿರಿಂಜ್ ತಯಾರಿಕಾ ಘಟಕ ಸೇರಿದಂತೆ ದೇಶದ ಹಲವೆಡೆ ಉತ್ಪಾದನೆ ತೀವ್ರವಾಗಿ ಕುಂಠಿತಗೊಂಡಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01fms28sj06ayrr58ybfnzaypa,imgname-people-temple-cult-commits-mass-suicide.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಾನಂದ ಗೊಂಬಿ&lt;/strong&gt;&lt;/p&gt;&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ (ಏ.3): &lt;/strong&gt;ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಇದೀಗ ವೈದ್ಯಕೀಯ ಕ್ಷೇತ್ರದ ಮೇಲೂ ಆಗುತ್ತಿದೆ. ಪೆಟ್ರೋಲಿಯಂ ಉಪ ಉತ್ಪನ್ನಗಳಿಂದ ತಯಾರಾಗುವ ಸಿರಿಂಜ್&zwnj; ಉತ್ಪಾದನೆ ಕುಂಠಿತಗೊಂಡಿದ್ದು, ಮುಂದೆ ಮಾರುಕಟ್ಟೆಯಲ್ಲಿ ಸಿರಿಂಜ್&zwnj;ಗಳ ಅಭಾವ ಕಂಡು ಬರುವ ಲಕ್ಷಣಗಳು ದಟ್ಟವಾಗಿವೆ. ಇದರಿಂದ ರೋಗಿಗಳಿಗೆ ತೀವ್ರ ಸಂಕಷ್ಟ ಎದುರಾಗಲಿದೆ.&lt;/p&gt;&lt;p&gt;ವೈದ್ಯಕೀಯ ಕ್ಷೇತ್ರದಲ್ಲಿ ಸಿರಿಂಜ್&zwnj;, ನೀಡಲ್&zwnj; ಹಾಗೂ ಐವಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ರೋಗಿಗೆ ಪ್ರಾಥಮಿಕ ಚಿಕಿತ್ಸೆಯಿಂದ ಹಿಡಿದು ಕೊನೆಯವರೆಗೂ ಇವುಗಳ ಅತ್ಯಗತ್ಯ ಇದ್ದೇ ಇರುತ್ತದೆ. ಇವುಗಳ ತಯಾರಿಕೆಗೆ ಕ್ರೂಡ್&zwnj; ಆಯಿಲ್&zwnj;ನಿಂದ ತಯಾರಾಗುವ ಪಾಲಿಪ್ರೊಪಿಲಿನ್&zwnj; (ಪಿಪಿಎ) ಎಂಬ ಪೆಟ್ರೋಲಿಯಂನ ಉಪ ಉತ್ಪನ್ನ ಅಗತ್ಯವಿದೆ. ಗುಜರಾತ್&zwnj;ನ ಜಾಮ್&zwnj;ನಗರ ಹಾಗೂ ಪಾಣಿಪಥದಲ್ಲಿ ಪಾಲಿಪ್ರೊಪಿಲಿನ್&zwnj; ತಯಾರಾಗಿ ದೇಶದ ವಿವಿಧೆಡೆ ಸರಬರಾಜಾಗುತ್ತದೆ. ಆದರೆ, ಕಳೆದ 20 ದಿನಗಳಿಂದ ಈ ಕಚ್ಚಾ ವಸ್ತು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಹೀಗಾಗಿ, ಸಿರಿಂಜ್&zwnj; ಮತ್ತು ನೀಡಲ್&zwnj;, ಐವಿಗಳ ಉತ್ಪಾದನೆ ಕುಂಠಿತಗೊಂಡಿದೆ.&lt;/p&gt;&lt;h2&gt;&lt;strong&gt;ಒಂದೇ ಶಿಫ್ಟ್&zwnj;&lt;/strong&gt;&lt;/h2&gt;&lt;p&gt;ಮಾರುಕಟ್ಟೆಯಲ್ಲಿ ಡಿಸ್ಪೋವ್ಯಾನ್&zwnj;, ಸಿರಿಸೇಫ್&zwnj; ಸೇರಿದಂತೆ ವಿವಿಧ ಬ್ರ್ಯಾಂಡ್&zwnj;ನ ಸಿರಿಂಜ್&zwnj;, ನೀಡಲ್&zwnj; ಲಭ್ಯವಿವೆ. ಹುಬ್ಬಳ್ಳಿಯಲ್ಲಿ ಸಿರಿಸೇಫ್&zwnj; ಎಂಬ ಬ್ಯ್ರಾಂಡ್&zwnj;ನ ಸಿರಿಂಜ್&zwnj; ಹಾಗೂ ನೀಡಲ್&zwnj; ಸಿದ್ಧಪಡಿಸಲಾಗುತ್ತಿದೆ. ಇಲ್ಲಿನ ಪಿಬಿ ರಸ್ತೆಯಲ್ಲಿರುವ ರಕ್ಷಂ ಮೆಡಿಕಲ್&zwnj; ಡಿವೈಸ್&zwnj; ಪ್ರೈವೇಟ್&zwnj; ಲಿಮಿಟೆಡ್&zwnj;ನಲ್ಲಿ ಸಿರಿಂಜ್&zwnj;, ನೀಡಲ್&zwnj; ತಯಾರಾಗುತ್ತವೆ. ರಾಜ್ಯದಲ್ಲಿ ಈ ಬ್ರ್ಯಾಂಡ್&zwnj;ನ ಸಿರಿಂಜ್&zwnj; ಹಾಗೂ ನೀಡಲ್&zwnj; ತಯಾರಾಗುವುದು ಹುಬ್ಬಳ್ಳಿಯಲ್ಲಿ ಮಾತ್ರ. ಇಲ್ಲಿಂದಲೇ ಕರ್ನಾಟಕ ಹಾಗೂ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ರವಾನೆಯಾಗುತ್ತದೆ.&lt;/p&gt;&lt;p&gt;ಪ್ರತಿ ತಿಂಗಳಿಗೆ 150 ಟನ್&zwnj;ಗೂ ಅಧಿಕ ಪಾಲಿಪ್ರೊಪಿಲಿನ್&zwnj; (ಪಿಪಿಎ) ಬೇಕಾಗಿದ್ದರೂ ಸದ್ಯಕ್ಕೆ ಸಿಗುತ್ತಿರುವುದು ಬರೀ 20-30 ಟನ್&zwnj; ಮಾತ್ರ. ಪ್ರತಿನಿತ್ಯ 18 ಲಕ್ಷ ಸಿರಿಂಜ್&zwnj; ಹಾಗೂ ನೀಡಲ್&zwnj; ಉತ್ಪಾದನೆಯಾಗುತ್ತಿತ್ತು. ಆದರೆ, 15-20 ದಿನಗಳಿಂದ ಕಚ್ಚಾ ವಸ್ತು ಸಿಗದ ಕಾರಣ ಬರೀ 4 ಲಕ್ಷ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಮೂರು ಶಿಫ್ಟ್&zwnj;ನಲ್ಲಿ 300 ಕಾರ್ಮಿಕರು ಕೆಲಸದಲ್ಲಿ ತೊಡಗುತ್ತಿದ್ದರು. ಆದರೆ, ಉತ್ಪಾದನೆ ಕಡಿಮೆ ಆಗಿರುವುದರಿಂದ ಒಂದೇ ಶಿಫ್ಟ್&zwnj;ನಲ್ಲಿ 70-100 ಕಾರ್ಮಿಕರು ಮಾತ್ರ ಕೆಲಸದಲ್ಲಿ ತೊಡಗುತ್ತಿದ್ದಾರಂತೆ. ಉಳಿದ ಕಾರ್ಮಿಕರಿಗೆ ಸದ್ಯ ಸಂಬಳವೇನೂ ಕಟ್&zwnj; ಮಾಡುತ್ತಿಲ್ಲ. ಆದರೆ, ಕೆಲಸಕ್ಕೆ ತೆಗೆದುಕೊಂಡಿಲ್ಲ ಎಂದು ಕಂಪನಿ ಮಾಲೀಕರು ತಿಳಿಸುತ್ತಾರೆ.&lt;/p&gt;&lt;h2&gt;&lt;strong&gt;ಅಭಾವ ಸಾಧ್ಯತೆ&lt;/strong&gt;&lt;/h2&gt;&lt;p&gt;ಸದ್ಯಕ್ಕೇನೂ ಸಮಸ್ಯೆಯಿಲ್ಲ. ಉತ್ಪಾದನೆ ಕಡಿಮೆಯಾಗಿದ್ದರೂ ಇರುವ ಸ್ಟಾಕ್&zwnj;ನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಆದರೆ, ಇದು ಎಷ್ಟು ದಿನ ಸಾಧ್ಯ?. ಇನ್ನು, ಉತ್ತರ ಭಾರತದ ಹಲವು ರಾಜ್ಯಗಳ ಸಿರಿಂಜ್&zwnj;, ನೀಡಲ್&zwnj;, ಐವಿ ಸಿದ್ಧಪಡಿಸುವ ಕಾರ್ಖಾನೆಗಳಲ್ಲೂ ಉತ್ಪಾದನೆ ಶೇ.30ಕ್ಕಿಳಿದಿದೆ. ಅಲ್ಲಿಂದಲೂ ಸಮರ್ಪಕ ಸರಬರಾಜು ಆಗುತ್ತಿಲ್ಲ. ಈಗಲೇ ಕಚ್ಚಾ ವಸ್ತುಗಳಿಗೆ ಸಮಸ್ಯೆಯಾಗುತ್ತಿದೆ. ಯುದ್ಧ ಇದೇ ರೀತಿ ಮುಂದುವರಿದರೆ ಇನ್ನೂ ತೊಂದರೆಯಾಗುತ್ತದೆ. ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉಪ ಉತ್ಪನ್ನಗಳಿಂದ ತಯಾರಾಗುವ ವೈದ್ಯಕೀಯ ಕ್ಷೇತ್ರದ ಅಗತ್ಯ ಪರಿಕರಗಳ ಅಭಾವ ಸೃಷ್ಟಿಯಾಗಬಹುದು. ಆಗ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ ಎಂಬ ಆತಂಕ ಕಂಪನಿಯ ಅಧಿಕಾರಿ ವರ್ಗದ್ದು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dharwad</category>
            <dc:creator>Santosh Naik</dc:creator>
            <atom:link href="https://kannada.asianetnews.com/dharwad/hubballi-medical-syringe-factory-production-hit-middle-east-war-impact-san/articleshow-0emacug"/>
        </item>
        <item>
            <title><![CDATA[ಹುಬ್ಬಳ್ಳಿ: ಸರಕು ಸಾಗಾಣಿಕೆಯಲ್ಲಿ ನೈಋತ್ಯ ರೈಲ್ವೆ ದೇಶಕ್ಕೆ ಟಾಪ್, 9487 ಕೋಟಿ ರೂ ದಾಟಿದ ಆದಾಯ, ಏನೆಲ್ಲ ಸಾಗಿಸಿದೆ?]]></title>
            <link>https://kannada.asianetnews.com/state/south-western-railway-tops-india-in-freight-loading-achieves-record-52-46-million-tonnes-gdp/articleshow-3g12sc0</link>
            <guid isPermaLink="true">https://kannada.asianetnews.com/state/south-western-railway-tops-india-in-freight-loading-achieves-record-52-46-million-tonnes-gdp/articleshow-3g12sc0</guid>
            <pubDate>Fri, 03 Apr 2026 13:58:53 +0530</pubDate>
            <description><![CDATA[ಪ್ರಸಕ್ತ ಸಾಲಿನಲ್ಲಿ ನೈಋತ್ಯ ರೈಲ್ವೆ ವಲಯವು 52.46 ಮಿಲಿಯನ್ ಟನ್ ಸರಕು ಸಾಗಿಸಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ₹9,487.88 ಕೋಟಿ ಆದಾಯ ಗಳಿಸಿದ್ದು, ಪ್ರಯಾಣಿಕರ ಸೇವೆ ಮತ್ತು ಸಮಯಪಾಲನೆಯಲ್ಲೂ ಉತ್ತಮ ಸಾಧನೆ ಮಾಡಿದೆ. ಆದಾಗ್ಯೂ, ಭೂಮಿ ಹಸ್ತಾಂತರ ವಿಳಂಬದಂತಹ ಕೆಲವು ಯೋಜನೆಗಳು ಸವಾಲಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn97322y3h1c8h2ykka0yzed,imgname-south-western-railway-freight-record-1775204665438.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ನೈಋತ್ಯ ರೈಲ್ವೆ ವಲಯವು ಪ್ರಸಕ್ತ ಸಾಲಿನಲ್ಲಿ ಸರಕು ಸಾಗಾಣಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದೆ. ಒಟ್ಟು 52.46 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಹೊಸ ದಾಖಲೆ ಬರೆದಿರುವುದಾಗಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ (ಎಜಿಎಂ) ಪಿ. ಅನಂತ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ 50.36 ಮಿಲಿಯನ್ ಟನ್ ಸಾಗಣೆಯೊಂದಿಗೆ ಹೋಲಿಸಿದರೆ, ಈ ಬಾರಿ 6.81 ಮಿಲಿಯನ್ ಟನ್ ಹೆಚ್ಚಳ ಸಾಧಿಸಿರುವುದಾಗಿ ಹೇಳಿದರು. ಒಟ್ಟಾರೆ ಸರಕು ಸಾಗಾಣಿಕೆಯಿಂದ ನೈಋತ್ಯ ರೈಲ್ವೆಗೆ ₹9,487.88 ಕೋಟಿ ಆದಾಯ ಲಭಿಸಿದೆ. ಈ ಸಾಧನೆಯೊಂದಿಗೆ ದೇಶದ ಇತರೆ ರೈಲ್ವೆ ವಲಯಗಳಿಗಿಂತ ಮುಂಚೂಣಿಯಲ್ಲಿದೆ. 20.97 ಮಿಲಿಯನ್ ಟನ್ ಸಾಗಣೆ ಮಾಡಿದ ಉತ್ತರ ಕೇಂದ್ರ ರೈಲ್ವೆ ವಲಯವು ದ್ವಿತೀಯ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;h2&gt;ವಿವಿಧ ಸರಕುಗಳ ಸಾಗಣೆ&lt;/h2&gt;&lt;p&gt;ನೈಋತ್ಯ ರೈಲ್ವೆ ಮೂಲಕ ಕಲ್ಲಿದ್ದಲು, ಕಬ್ಬಿಣ ಅದಿರು, ಸ್ಟೀಲ್, ಖನಿಜ ತೈಲ, ಸಿಮೆಂಟ್, ರಾಸಾಯನಿಕ ಗೊಬ್ಬರ, ಕಂಟೇನರ್&zwnj;ಗಳು ಹಾಗೂ ಆಹಾರ ವಸ್ತುಗಳ ಸೇರಿದಂತೆ ವಿವಿಧ ರೀತಿಯ ಸರಕುಗಳನ್ನು ಸಾಗಿಸಲಾಗಿದೆ. ಇದರಲ್ಲಿ ವಿಶೇಷವಾಗಿ ಕಬ್ಬಿಣ ಅದಿರು, ಕಲ್ಲಿದ್ದಲು ಮತ್ತು ಸ್ಟೀಲ್ ಸಾಗಾಣಿಕೆಯಿಂದ ಹೆಚ್ಚು ಆದಾಯ ಬಂದಿರುವುದಾಗಿ ತಿಳಿಸಿದ್ದಾರೆ.&lt;/p&gt;&lt;h2&gt;ಮೂಲಸೌಕರ್ಯ ವೃದ್ಧಿಗೆ ಕ್ರಮ&lt;/h2&gt;&lt;p&gt;ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಲು ರೈಲ್ವೆ ಇಲಾಖೆ 409 ಗೂಡ್ಸ್ ಟ್ರ್ಯಾಕ್&zwnj;ಗಳನ್ನು ಮೇಲ್ದರ್ಜೆಗೇರಿಸಿದೆ. ಜೊತೆಗೆ, ತೋರಣಗಲ್ಲು&ndash;ರಣಜಿತಪುರ ಮತ್ತು ಬಳ್ಳಾರಿ&ndash;ಚಿಕ್ಕಜಾಜೂರು ಮಾರ್ಗಗಳಲ್ಲಿ ಡಬ್ಲಿಂಗ್ ಕಾರ್ಯಕ್ಕೆ ಅನುಮತಿ ದೊರೆತಿದೆ. ಇದರಿಂದ ಭವಿಷ್ಯದಲ್ಲಿ ಸರಕು ಸಾಗಣೆ ಇನ್ನಷ್ಟು ವೇಗವಾಗಿ ಮತ್ತು ಸುಗಮವಾಗಿ ನಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;h2&gt;ಸಮಯಪಾಲನೆಯಲ್ಲಿ ಉತ್ತಮ ಸಾಧನೆ, ಸೇವೆಯಲ್ಲೂ ಬೆಳವಣಿಗೆ&lt;/h2&gt;&lt;p&gt;ನೈಋತ್ಯ ರೈಲ್ವೆ ಸಮಯಪಾಲನೆಯಲ್ಲಿ ಶೇ. 89.37ರಷ್ಟು ಸಾಧನೆ ಮಾಡಿದ್ದು, ಒಟ್ಟು 3,335 ನಿಮಿಷಗಳನ್ನು ಉಳಿತಾಯ ಮಾಡಿದೆ. ಈ ಸಾಧನೆಯಿಂದ ದೇಶದ ಮಟ್ಟದಲ್ಲಿ 4ನೇ ಸ್ಥಾನ ಪಡೆದಿದೆ. ಪ್ರಯಾಣಿಕರ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು 11 ಹೊಸ ರೈಲುಗಳನ್ನು ಆರಂಭಿಸಲಾಗಿದ್ದು, 4 ರೈಲುಗಳನ್ನು ಎಕ್ಸ್&zwnj;ಪ್ರೆಸ್&zwnj;ನಿಂದ ಸೂಪರ್&zwnj;ಫಾಸ್ಟ್&zwnj;ಗೆ ಮೇಲ್ದರ್ಜೆಗೇರಿಸಲಾಗಿದೆ. ಹಬ್ಬ, ರಜೆ ಮತ್ತು ವಿಶೇಷ ಸಂದರ್ಭಗಳಲ್ಲಿ 471 ವಿಶೇಷ ರೈಲುಗಳನ್ನು ಓಡಿಸಿ 11,322 ಟ್ರಿಪ್&zwnj;ಗಳನ್ನು ನಡೆಸಲಾಗಿದೆ. ಪ್ರಯಾಣಿಕರ ಸಾಗಣೆಯಿಂದ ಒಟ್ಟು ₹3,468 ಕೋಟಿ ಆದಾಯ ಬಂದಿದೆ. ಪ್ರಯಾಣಿಕರ ಸಂಖ್ಯೆಯೂ 165.53 ಮಿಲಿಯನ್&zwnj;ನಿಂದ 176.93 ಮಿಲಿಯನ್&zwnj;ಗೆ ಹೆಚ್ಚಳ ಕಂಡಿದೆ.&lt;/p&gt;&lt;h2&gt;ಭೂಮಿ ಹಸ್ತಾಂತರ ವಿಳಂಬ&lt;/h2&gt;&lt;p&gt;ರಾಜ್ಯದ 10 ಪ್ರಮುಖ ರೈಲ್ವೆ ಯೋಜನೆಗಳಿಗೆ ಒಟ್ಟು 16,945 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 13,675 ಎಕರೆ ಭೂಮಿ ಹಸ್ತಾಂತರಗೊಂಡಿದೆ. ಆದರೆ ಇನ್ನೂ 3,372 ಎಕರೆ ಭೂಮಿ ಹಸ್ತಾಂತರ ಬಾಕಿಯಿದೆ. ವಿಶೇಷವಾಗಿ ಧಾರವಾಡ&ndash;ಬೆಳಗಾವಿ ಹೊಸ ರೈಲು ಮಾರ್ಗ ಯೋಜನೆ ಭೂಮಿ ಹಸ್ತಾಂತರದ ವಿಳಂಬದಿಂದ ಇನ್ನೂ ಆರಂಭವಾಗಿಲ್ಲ ಎಂದು ಪಿ. ಅನಂತ ತಿಳಿಸಿದ್ದಾರೆ.&lt;/p&gt;&lt;h2&gt;ಡೆಮು ರೈಲುಗಳಿಗೆ ಬೇಡಿಕೆ&lt;/h2&gt;&lt;p&gt;ಗ್ರಾಮೀಣ ಪ್ರದೇಶಗಳಲ್ಲಿ ರೈಲು ಸೇವೆಯನ್ನು ಸುಧಾರಿಸಲು 27 ಡೆಮು ರೈಲುಗಳ ಬೋಗಿಗಳನ್ನು ಒದಗಿಸುವಂತೆ ರೈಲ್ವೆ ಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪ್ರತಿ ವರ್ಷ ಕೇವಲ 3&ndash;4 ಕೋಚ್&zwnj;ಗಳು ಮಾತ್ರ ಲಭ್ಯವಾಗುತ್ತಿವೆ, ಇದರಿಂದ ಹುಬ್ಬಳ್ಳಿ ವಿಭಾಗದಲ್ಲಿ ಸ್ಥಳೀಯ ರೈಲು ಸೇವೆ ಆರಂಭಿಸಲು ವಿಳಂಬವಾಗುತ್ತಿದೆ. ರೇಕ್&zwnj;ಗಳ ಪೂರೈಕೆ ಸಿಗುತ್ತಿದ್ದಂತೆ ಸ್ಥಳೀಯ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಧಾನ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ. ಶಾಸೀ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;&lt;p&gt;&amp;nbsp;&lt;/p&gt;&lt;p&gt;SWR records its highest-ever freight loading milestone in FY 2025-26, with freight loading touching 52.46 MT, strengthening India&rsquo;s economy through efficient, sustainable and greener logistics. #Hungry4Cargo #SWRachievements pic.twitter.com/g5G1Kmx4D8&lt;/p&gt;&lt;p&gt;&mdash; South Western Railway (@SWRRLY) April 2, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/state/south-western-railway-tops-india-in-freight-loading-achieves-record-52-46-million-tonnes-gdp/articleshow-3g12sc0"/>
        </item>
        <item>
            <title><![CDATA[ನೀರು ಕಾಯಿಸುವಾಗ ಸ್ವಿಚ್ ಆಫ್ ಮಾಡದೇ 'ವಾಟರ್ ಹೀಟರ್' ಮುಟ್ಟಿದ ಯುವತಿ; ಕರೆಂಟ್ ಶಾಕ್‌ನಿಂದ ಸ್ಥಳದಲ್ಲೇ ಸಾವು!]]></title>
            <link>https://kannada.asianetnews.com/karnataka-districts/dharwad-woman-died-electric-shock-water-heater-coil-devarahubballi-sat/articleshow-3mwd74k</link>
            <guid isPermaLink="true">https://kannada.asianetnews.com/karnataka-districts/dharwad-woman-died-electric-shock-water-heater-coil-devarahubballi-sat/articleshow-3mwd74k</guid>
            <pubDate>Thu, 02 Apr 2026 20:42:41 +0530</pubDate>
            <description><![CDATA[&lt;p&gt;ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ, 25 ವರ್ಷದ ಯುವತಿಯೊಬ್ಬಳು ವಾಟರ್ ಹೀಟರ್ ಕಾಯಿಲ್&zwnj;ನಿಂದ ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿದ್ದಾಳೆ. ಸ್ನಾನಕ್ಕೆ ನೀರು ಕಾಯಿಸಿದ ನಂತರ ಸ್ವಿಚ್ ಆಫ್ ಮಾಡದೆ ಕಾಯಿಲ್ ತೆಗೆಯಲು ಯತ್ನಿಸಿದಾಗ ಈ ದುರಂತ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn7bnnagdwxm9z1v5xrg9ads,imgname--water-heater-shock-hubballi-women-death-1775142360400.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ (ಏ.02): ವಿ&lt;/strong&gt;ದ್ಯುತ್ ಉಪಕರಣಗಳನ್ನು ಬಳಸುವಾಗ ಸಣ್ಣ ನಿರ್ಲಕ್ಷ್ಯ ವಹಿಸಿದರೂ ಅದು ಎಂತಹ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಧಾರವಾಡ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನೀರು ಕಾಯಿಸಲು ಹೋಗಿ ವಾಟರ್ ಹೀಟರ್ ಕಾಯಿಲ್&zwnj;ನಿಂದ ವಿದ್ಯುತ್ ಸ್ಪರ್ಶಗೊಂಡು 25 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿರುವ ಧಾರುಣ ಘಟನೆ ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ ಜರುಗಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಮೃತ ದುರ್ದೈವಿಯನ್ನು ನಿವೇದಿತಾ (25) ಎಂದು ಗುರುತಿಸಲಾಗಿದೆ. ಎಂದಿನಂತೆ ಮನೆಯಲ್ಲಿ ಕೆಲಸ ಮುಗಿಸಿ ಸ್ನಾನಕ್ಕಾಗಿ ನೀರು ಕಾಯಿಸಲು ನಿವೇದಿತಾ ಮುಂದಾಗಿದ್ದರು. ವಿದ್ಯುತ್ ಚಾಲಿತ ವಾಟರ್ ಹೀಟರ್ ಕಾಯಿಲ್ (Immersion Rod) ಮೂಲಕ ನೀರು ಕಾಯಿಸಿದ್ದರು. ನೀರು ಕಾಯಿಸಿದ ನಂತರ, ಸ್ವಿಚ್ ಆಫ್ ಮಾಡದೆ ಅಥವಾ ಸರಿಯಾದ ಎಚ್ಚರಿಕೆ ವಹಿಸದೆ ನೀರಿನಿಂದ ಕಾಯಿಲ್ ಹೊರತೆಗೆಯಲು ಪ್ರಯತ್ನಿಸಿದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.&lt;/p&gt;&lt;p&gt;ಕಾಯಿಲ್ ನೀರಿನಲ್ಲಿದ್ದಾಗಲೇ ಅಥವಾ ಅದನ್ನು ಹೊರತೆಗೆಯುವ ಗಡಿಬಿಡಿಯಲ್ಲಿ ವಿದ್ಯುತ್ ಸ್ಪರ್ಶಗೊಂಡಿದೆ (Electric Shock). ಶಾಕ್ ಹೊಡೆದ ರಭಸಕ್ಕೆ ನಿವೇದಿತಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಮನೆಯವರು ಮತ್ತು ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ನಿವೇದಿತಾ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ತನಿಖೆ ಮತ್ತು ಗ್ರಾಮದಲ್ಲಿ ಶೋಕ:&lt;/strong&gt;&lt;/h2&gt;&lt;p&gt;ಈ ಘಟನೆ ಕುರಿತು ಮಾಹಿತಿ ಪಡೆದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕಾಲಿಕವಾಗಿ ಸಾವನ್ನಪ್ಪಿದ ಯುವತಿಯ ಸಾವಿನಿಂದ ಇಡೀ ದೇವರಹುಬ್ಬಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಕೇವಲ 25 ವರ್ಷದ ತುಂಬು ಯೌವನದ ಯುವತಿಯನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;h2&gt;&lt;strong&gt;ವಿದ್ಯುತ್ ಹೀಟರ್ ಬಳಸುವಾಗ ಈ ಎಚ್ಚರಿಕೆ ವಹಿಸಿ:&lt;/strong&gt;&lt;/h2&gt;&lt;ul&gt; &lt;li&gt;ಮಳೆಗಾಲ ಮತ್ತು ಚಳಿಗಾಲದ ಸಂದರ್ಭದಲ್ಲಿ ಮನೆಗಳಲ್ಲಿ ವಾಟರ್ ಹೀಟರ್ ಕಾಯಿಲ್&zwnj;ಗಳ ಬಳಕೆ ಹೆಚ್ಚಾಗಿರುತ್ತದೆ. ಆದರೆ, ಇವುಗಳ ಬಳಕೆಯಲ್ಲಿ ಅತಿಯಾದ ಜಾಗರೂಕತೆ ಅಗತ್ಯ.&lt;/li&gt; &lt;li&gt;ನೀರು ಕಾಯಿಸುವ ಮೊದಲು ಬಕೆಟ್ ಪ್ಲಾಸ್ಟಿಕ್ ಇರಲಿ ಮತ್ತು ಶಾಕ್ ಹೊಡೆಯುವ ಸಾಧ್ಯತೆ ಇಲ್ಲದಂತೆ ಪರೀಕ್ಷಿಸಿ.&lt;/li&gt; &lt;li&gt;ನೀರು ಕಾಯಿಸಿದ ನಂತರ ಮೊದಲು ಪ್ಲಗ್ ಪಾಯಿಂಟ್&zwnj;ನಿಂದ ಸ್ವಿಚ್ ಆಫ್ ಮಾಡಬೇಕು.&lt;/li&gt; &lt;li&gt;ವೈರ್ ಎಲ್ಲೂ ಕಟ್ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.&lt;/li&gt; &lt;li&gt;ಪ್ಲಗ್ ತೆಗೆದ ನಂತರವೇ ನೀರಿನಿಂದ ಕಾಯಿಲ್ ಹೊರತೆಗೆಯಿರಿ.&lt;/li&gt;&lt;/ul&gt;&lt;p&gt;ಸಣ್ಣ ತಾಂತ್ರಿಕ ದೋಷ ಅಥವಾ ಅಜಾಗರೂಕತೆ ಇಂತಹ ದೊಡ್ಡ ಬೆಲೆ ತೆರುವಂತೆ ಮಾಡುತ್ತದೆ. ಸದ್ಯ ಧಾರವಾಡ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/dharwad-woman-died-electric-shock-water-heater-coil-devarahubballi-sat/articleshow-3mwd74k"/>
        </item>
        <item>
            <title><![CDATA[ಹುಬ್ಬಳ್ಳಿ ಲವ್ ಜಿಹಾದ್ ಕೇಸಿಗೆ ಟ್ವಿಸ್ಟ್: ಸಮೀರನ ಅತ್ಯಾ*ಚಾರ, ಬ್ಲ್ಯಾಕ್‌ಮೇಲ್ ತಂತ್ರ ಬಿಚ್ಚಿಟ್ಟ ಸಂತ್ರಸ್ತ ಯುವತಿ!]]></title>
            <link>https://kannada.asianetnews.com/gallery/karnataka-districts/hubballi-gym-trainer-sameer-physically-used-blackmail-case-love-jihad-allegation-victim-statement-sat-ahqxfqc</link>
            <guid isPermaLink="true">https://kannada.asianetnews.com/gallery/karnataka-districts/hubballi-gym-trainer-sameer-physically-used-blackmail-case-love-jihad-allegation-victim-statement-sat-ahqxfqc</guid>
            <pubDate>Fri, 03 Apr 2026 15:51:30 +0530</pubDate>
            <description><![CDATA[&lt;p&gt;ಹುಬ್ಬಳ್ಳಿಯಲ್ಲಿ, ಜಿಮ್ ಟ್ರೈನರ್ ಸಮೀರ್ ಮುಲ್ಲಾ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾ*ಚಾರ ಎಸಗಿ, ವಿಡಿಯೋ ಮಾಡಿ ಬ್ಲ್ಯಾಕ್&zwnj;ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಪ್ರಕರಣವನ್ನು ಹಿಂದೂ ಸಂಘಟನೆಗಳು 'ಲವ್ ಜಿಹಾದ್' ಎಂದು ಆಕ್ರೋಶ ಹೊರಹಾಕಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn9cpgn4cmv65skyr9qx8c8a,imgname-hubballi-sameer-mulla-1775210545827.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿಯಲ್ಲಿ, ಜಿಮ್ ಟ್ರೈನರ್ ಸಮೀರ್ ಮುಲ್ಲಾ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾ*ಚಾರ ಎಸಗಿ, ವಿಡಿಯೋ ಮಾಡಿ ಬ್ಲ್ಯಾಕ್&zwnj;ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಪ್ರಕರಣವನ್ನು ಹಿಂದೂ ಸಂಘಟನೆಗಳು 'ಲವ್ ಜಿಹಾದ್' ಎಂದು ಆಕ್ರೋಶ ಹೊರಹಾಕಿವೆ.&lt;/p&gt;&lt;img&gt;&lt;p&gt;&lt;strong&gt;ಧಾರವಾಡ/ಹುಬ್ಬಳ್ಳಿ (ಏ.03): ವಾ&lt;/strong&gt;ಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನಿಂಗ್ ಮಾಡುವ ನೆಪದಲ್ಲಿ ಹಿಂದೂ ಹುಡುಗಿಯರನ್ನು ಪ್ರೀತಿ ಮಾಡುವುದಾಗಿ ನಂಬಿಸಿ ಅತ್ಯಾ*ಚಾರ ಮಾಡಿ, ಅದರ ವಿಡಿಯೋ ತೋರಿಸಿ ಬೆದರಿಕೆ ಹಾಕಿ ಲವ್ ಜಿಹಾದ್ ಮಾಡತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.&amp;nbsp;&lt;/p&gt;&lt;p&gt;ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ನಂಬಿಸಿ, ಅಮಲು ಪದಾರ್ಥ ನೀಡಿ ಅತ್ಯಾ*ಚಾರ ಎಸಗಿದ ಜಿಮ್ ಟ್ರೈನರ್ ಸಮೀರ್&zwnj;ನ ಕೃತ್ಯವನ್ನು ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ಸಂತ್ರಸ್ತ ಯುವತಿ, ಜಿಮ್ ಟ್ರೈನರ್ ಸಮೀರ್ ಎಸಗಿರುವ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. 'ಸಮೀರ್ ಅಕ್ಕ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆಯಾಗಿದ್ದರು. ಅವಳ ಮೂಲಕವೇ ಸಮೀರ್ ಪರಿಚಯವಾಗಿದ್ದ. ನಾವು ಸ್ನೇಹಿತರಾಗಿ ಬರ್ತ್&zwnj;ಡೇ ಪಾರ್ಟಿ, ವೀಕೆಂಡ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದೆವು. ಈ ವೇಳೆ ಸಮೀರ್ ಕೂಡ ಬರುತ್ತಿದ್ದರಿಂದ ನಮ್ಮ ನಡುವೆ ಆತ್ಮೀಯತೆ ಬೆಳೆದಿತ್ತು' ಎಂದು ಯುವತಿ ತಿಳಿಸಿದ್ದಾಳೆ.&lt;/p&gt;&lt;img&gt;&lt;p&gt;'ಒಂದು ದಿನ ತೈಸೀಮ್ ಅವರ ತಮ್ಮ ಸಮೀರ್ ಮುಲ್ಲಾ ತನನ್ನ ಪಿಕ್ ಮಾಡುವುಂತೆ ತನ್ನ ಮನೆಗೆ ಕರೆಸಿಕೊಂಡು ನನಗೆ ಅಮಲು ಪದಾರ್ಥ ಬೆರೆಸಿದ ಪಾನೀಯ ನೀಡಿದ್ದನು. ನಾನು ಪ್ರಜ್ಞೆ ತಪ್ಪಿದಾಗ ನನ್ನ ಮೇಲೆ ಅತ್ಯಾ*ಚಾರ ಎಸಗಿ, ಅದನ್ನು ವಿಡಿಯೋ ಮಾಡಿಕೊಂಡಿದ್ದನು. ಇದು ನನಗೆ ಮೊದಲು ಗೊತ್ತಿರಲಿಲ್ಲ. ನಂತರ ಆತನೇ ವಿಡಿಯೋ ತೋರಿಸಿ ಬ್ಲ್ಯಾಕ್&zwnj;ಮೇಲ್ ಮಾಡಲು ಶುರು ಮಾಡಿದಾಗ ನನ್ನ ಮೇಲಾದ ದೌರ್ಜನ್ಯದ ಅರಿವಾಯಿತು. ಆ ವಿಡಿಯೋ ಇಟ್ಟುಕೊಂಡು ನನಗೆ ಮೋಸ ಮಾಡಿದ್ದಾನೆ' ಎಂದು ಯುವತಿ ಕಣ್ಣೀರು ಹಾಕಿದ್ದಾಳೆ.&lt;/p&gt;&lt;img&gt;&lt;p&gt;ಈ ವಿಷಯ ತಿಳಿಯುತ್ತಿದ್ದಂತೆಯೇ ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಮಧ್ಯಪ್ರವೇಶಿಸಿದ್ದಾರೆ. ಯುವಕ ಸಮೀರ್&zwnj;ನನ್ನು ಹಿಡಿದು ವಿಚಾರಣೆ ನಡೆಸಿದ ಸಂಘಟನೆಯವರು, ನಂತರ ಆತನನ್ನು ಹಳೆ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಜಿಮ್&zwnj;ಗಳು ಈಗ ಲವ್ ಜಿಹಾದ್&zwnj;ನ ಕೇಂದ್ರಗಳಾಗುತ್ತಿವೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.&lt;/p&gt;&lt;img&gt;&lt;p&gt;ಇನ್ನು ಸಮೀರ್&zwnj;ನನ್ನು ಪೊಲೀಸರಿಗೆ ಒಪ್ಪಿಸಿದ್ದರಿಂದ ರೊಚ್ಚಿಗೆದ್ದ ಆತನ ಕುಟುಂಬಸ್ಥರು ಮತ್ತು ಬೆಂಬಲಿಗರು, ವಿಕಾಸ ನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಯುವತಿಯ ಪೋಷಕರು ಮತ್ತು ಸಂಬಂಧಿಕರ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, 'ನಿಮ್ಮ ಮಗಳೇ ನಮ್ಮ ಹುಡುಗನ ಹಿಂದೆ ಬಂದಿದ್ದಾಳೆ, ಅದಕ್ಕೆ ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ' ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಸದ್ಯ ಸಮೀರ್ ಪೊಲೀಸ್ ವಶದಲ್ಲಿದ್ದಾನೆ. ಯುವತಿಯ ಮನೆಯವರು ತಮಗಾದ ಅನ್ಯಾಯ ಮತ್ತು ಹಲ್ಲೆಯ ವಿರುದ್ಧ ದೂರು ನೀಡಿದ್ದಾರೆ. ಹುಬ್ಬಳ್ಳಿಯ ವಿಕಾಸ ನಗರ ಮತ್ತು ವಿಜಯನಗರದ ಸುತ್ತಮುತ್ತ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ಇನ್ನು ಆರೋಪಿ ಸಮೀರ್ ಮುಲ್ಲಾನ ಮೊಬೈಲ್ ಅನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಹಲವು ಪ್ರಗ್ನೆನ್ಸಿ ಸ್ಕ್ಯಾನಿಂಗ್ ರಿಪೋರ್ಟ್&zwnj;ಗಳು ಕೂಡ ಲಭ್ಯವಾಗಿವೆ. ಹಲವು ಹುಡುಗಿಯರನ್ನು ಈತ ಹೀಗೆಯೇ ಅತ್ಯಾ*ಚಾರಕ್ಕೆ ಬಳಸಿಕೊಂಡು ಲವ್ ಜಿಹಾದ್&zwnj;ಗೆ ಬಲವಂತ ಮಾಡಿದ್ದಾನೆ ಎಂಬ ಆರೋಪಗಳಿಗೆ ಸಾಕ್ಷಿ ಸಿಕ್ಕಂತಾಗಿವೆ.&lt;/p&gt;&lt;img&gt;&lt;p&gt;ಜಿಮ್ ಟ್ರೈನರ್ ಆಗಿದ್ದ ಸಮೀರ್ ಮುಲ್ಲಾನ ಬಳಿ ಮಹಿಳೆಯರ ಗರ್ಭ ನಿರೋಧಕ ಮಾತ್ರೆಗಳು ಕೂಡ ಲಭ್ಯವಾಗಿವೆ. ಆದರೆ, ಆತನ ಅಕ್ಕ ತೈಸಿಮ್ ಮುಲ್ಲಾ ನನ್ನ ತಮ್ಮ ಇನ್ನೂ 24 ವರ್ಷದವನು. ಆತನ ಮೇಲೆ ಗಂಭೀರ ಆರೋಪ ಮಾಡುವುದು ಸರಿಯಲ್ಲ. ಗರ್ಭ ನಿರೋಧಕ ಮಾತ್ರೆ ಇಟ್ಟುಕೊಳ್ಳುವ ಪ್ರಮೇಯ ಆತನಿಗಿಲ್ಲ ಎಂದೆಲ್ಲಾ ವಾದ ಮಾಡಿದ್ದಾಳೆ. ಆದರೆ, ಇದೀಗ ಸಂತ್ರಸ್ತೆಯೇ ಅತ್ಯಾ*ಚಾರ ಪ್ರಕರಣದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಕರಣ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿದೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/hubballi-gym-trainer-sameer-physically-used-blackmail-case-love-jihad-allegation-victim-statement-sat-ahqxfqc"/>
        </item>
        <item>
            <title><![CDATA[ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!]]></title>
            <link>https://kannada.asianetnews.com/karnataka-districts/hubballi-gym-trainer-assaulted-over-alleged-love-jihad-gdp-videoshow-c1wai9n</link>
            <guid isPermaLink="true">https://kannada.asianetnews.com/karnataka-districts/hubballi-gym-trainer-assaulted-over-alleged-love-jihad-gdp-videoshow-c1wai9n</guid>
            <pubDate>Sat, 04 Apr 2026 13:52:04 +0530</pubDate>
            <description><![CDATA[&lt;p&gt;ಹುಬ್ಬಳ್ಳಿಯಲ್ಲಿ ಜಿಮ್ ಓನರ್ ಸಮೀರ್ ಎಂಬಾತ ಹಿಂದೂ ಯುವತಿಯನ್ನು ಪ್ರೀತಿಯ ನಾಟಕವಾಡಿ ಮೋಸಗೊಳಿಸಿದ್ದಾನೆ. ಆಕೆಗೆ ಮತ್ತು ಬರುವ ಔಷಧಿ ನೀಡಿ, ದೌರ್ಜನ್ಯ ಎಸಗಿ, ಅದನ್ನು ಚಿತ್ರೀಕರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದನು. ಈ ವಿಷಯ ತಿಳಿದ ಹಿಂದೂ ಸಂಘಟನೆಗಳು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xa48z9a" medium="video" height="768" width="1024"/>
            <content:encoded><![CDATA[&lt;p&gt;ಚೋಟ ಮುಂಬೈ ಹುಬ್ಬಳ್ಳಿಯಲ್ಲಿ ಏನಾದ್ರೂ ಸುದ್ದಿಯಾಗುತ್ತೆ.. ಅದರಲ್ಲೂ ಕೋಮು ಸಂಘರ್ಷದ ವಿಷಯ ಬಂದ್ರೆ ಹೊತ್ತಿ ಉರಿಯೋದಕ್ಕೆ ಶುರುವಾಗಿಬಿಡುತ್ತೆ.. ಇವತ್ತು ಇದೇ ಹುಬ್ಬಳ್ಳಿ ಒಂದು ಲವ್​ ಜಿಹಾದ್​​ ಕೇಸ್​​​ನಲ್ಲಿ ಮತ್ತೆ ಸುದ್ದಿಯಾಗಿದೆ.. ಜಿಮ್​ಗೆ ಬಂದ ಹಿಂದೂ ಯುವತಿಯನ್ನ ಟಾರ್ಗೆಟ್​​ ಮಾಡಿಕೊಂಡ ಜಿಮ್​​​ ಓನರ್​​​ ಒಬ್ಬ ಆಕೆಯನ್ನ ಪ್ರೀತಿಯಂಬ ಖೆಡ್ಡಾಗೆ ಬೀಳಿಸಿಕೊಂಡು ನಂತರ ಆಕೆಯನ್ನ ಬ್ಲ್ಯಾಕ್​ಮೇಲ್​​​ ಮಾಡೋದಕ್ಕೆ ಹೊರಟಿದ್ದಾನೆ.. ಆದ್ರೆ ಇವತ್ತು ಹಿಂದೂ ಸಂಘಟನೆಗಳು ಅವನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.. ಆದ್ರೆ ಇಷ್ಟಕ್ಕೆ ಎಲ್ಲಾ ಮುಗಿಯಲಿಲ್ಲ.. ಇಲ್ಲಿಂದಲೇ ಒಂದು ಹೈಡ್ರಾಮಾ ಶುರುವಾಗಿದ್ದು.. ಅಷ್ಟಕ್ಕೂ ಆ ಜಿಮ್​​​ ಓನರ್​​ ಯಾರು..? ಅವನಿಂದ ಮೋಸ ಹೋದ ಹುಡುಗಿ ಯಾರು..? ಹುಬ್ಬಳ್ಳಿ ಇವತ್ತು ಹೊತ್ತಿ ಉರಿದ್ದಿದ್ದೇಕೆ ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​​.ಐ.ಆರ್..&amp;nbsp;&lt;/p&gt;&lt;p&gt;ಆಕೆ ತನ್ನ ಪಾಡಿಗೆ ಕಾಲೇಜು.. ಮನೆ ಅಂತ ಇದ್ದವಳು.. ಮೂರು ವರ್ಷದ ಹಿಂದೆ ಜಿಮ್​ಗೆ ಸೇರಬೇಕು ಅನ್ನೋ ಯೋಚನೆ ಮಾಡ್ತಾಳೆ.. ಆಗ ಈ ಸಮೀರ್​ನ ಅಕ್ಕ ತೈಸಿಮ್​​ನ ಪರಿಚಯವಾಗುತ್ತೆ.. ಅಕ್ಕ ಸಮೀರ್​​ನನ್ನ ಪರಿಚಯ ಮಾಡಿಸುತ್ತಾಳೆ.. ಇಬ್ಬರೂ ನಂತರ ಸ್ನೇಹಿತರಾಗ್ತಾರೆ.. ಸಮೀರ್​ ಆಕೆಯ ಜೊತೆ ಪ್ರೀತಿಯ ನಾಟಕವಾಡ್ತಾನೆ.. ನಂತರ ಒಂದು ದಿನ ಮನೆಗೆ ಕರೆಸಿಕೊಂಡು ಮತ್ತು ಬರೋ ಔಷಧಿ ಕೊಟ್ಟು ಮಾಡಬಾರದನ್ನ ಮಾಡಿಬಿಡ್ತಾನೆ.. ಅಷ್ಟೇ ಅಲ್ಲ ಅದನ್ನ ಚಿತ್ರಿಸಿಕೊಳ್ತಾನೆ ಕೂಡ.. ಆದ್ರೆ ಇದೆಲ್ಲಾ ಆಗಿ ಸ್ವಲ್ಪ ದಿನಕ್ಕೇ ಆ ನೀಚ ಖುಷಿಗೆ ಬ್ಲ್ಯಾಕ್​​​ಮೇಲ್​ ಮಾಡೋದಕ್ಕೆ ಶುರು ಮಾಡ್ತಾನೆ.. ಆತನಿಂದ ಆ ಹೆಣ್ಣುಮಗಳು ನರಕ ನೋಡ್ತಾಳೆ.. ಈ ವಿಷ್ಯಾ ಅದೇಗೋ ಹಿಂದೂ ಸಂಘಟನೆಯವರಿಗೆ ಗೊತ್ತಾಗಿ ಸೀದಾ ಸಮೀರ್​ ಮನೆಯ ಬಳಿ ಹೋಗ್ತಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-gym-trainer-assaulted-over-alleged-love-jihad-gdp-videoshow-c1wai9n"/>
        </item>
        <item>
            <title><![CDATA[ಹುಬ್ಬಳ್ಳಿ ಲವ್ ಜಿಹಾದ್: ತಮ್ಮ ಸಮೀರ್‌ಗೆ ಹಿಂದೂ ಯುವತಿಯರನ್ನು ಪೂರೈಸುತ್ತಿದ್ದಳಾ ಅಕ್ಕ ತೈಸೀಮ್? ಸ್ಫೋಟಕ ಮಾಹಿತಿ!]]></title>
            <link>https://kannada.asianetnews.com/gallery/karnataka-districts/hubballi-love-jihad-exclusive-sameer-mulla-targetted-hindu-girls-with-sister-taisim-s-help-sat-gnwnbqp</link>
            <guid isPermaLink="true">https://kannada.asianetnews.com/gallery/karnataka-districts/hubballi-love-jihad-exclusive-sameer-mulla-targetted-hindu-girls-with-sister-taisim-s-help-sat-gnwnbqp</guid>
            <pubDate>Fri, 03 Apr 2026 21:37:01 +0530</pubDate>
            <description><![CDATA[&lt;p&gt;ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪದಡಿ ಬಂಧಿತನಾಗಿರುವ ಸಮೀರ್ ಮುಲ್ಲಾ ಪ್ರಕರಣದಲ್ಲಿ ಆತನ ಸಹೋದರಿ ತೈಸೀಮ್ ಮುಲ್ಲಾಳೇ ಕಿಂಗ್&zwnj;ಪಿನ್ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. ಸಂತ್ರಸ್ತ ಯುವತಿಯನ್ನು ತನ್ನ ಸಹೋದರನಿಗೆ ಪರಿಚಯಿಸಿ, ಪಾರ್ಟಿಗಳಲ್ಲಿ ಏಕಾಂಗಿಯಾಗಿ ಬಿಡುತ್ತಿದ್ದಳು ಎನ್ನಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kna1gfj811mpyxdjcm8g0x6b,imgname-hubballi-samer-mulla-love-jihad-case-1775232368200.jpg" type="image/jpeg" height="390" width="690"/>
            <content:encoded><![CDATA[&lt;p&gt;ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪದಡಿ ಬಂಧಿತನಾಗಿರುವ ಸಮೀರ್ ಮುಲ್ಲಾ ಪ್ರಕರಣದಲ್ಲಿ ಆತನ ಸಹೋದರಿ ತೈಸೀಮ್ ಮುಲ್ಲಾಳೇ ಕಿಂಗ್&zwnj;ಪಿನ್ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. ಸಂತ್ರಸ್ತ ಯುವತಿಯನ್ನು ತನ್ನ ಸಹೋದರನಿಗೆ ಪರಿಚಯಿಸಿ, ಪಾರ್ಟಿಗಳಲ್ಲಿ ಏಕಾಂಗಿಯಾಗಿ ಬಿಡುತ್ತಿದ್ದಳು ಎನ್ನಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಧಾರವಾಡ/ಹುಬ್ಬಳ್ಳಿ (ಏ.03): &lt;/strong&gt;ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪದಡಿ ಬಂಧಿತನಾಗಿರುವ ಸಮೀರ್ ಮುಲ್ಲಾ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಕೇವಲ ಪ್ರೀತಿಯ ನಾಟಕವಾಡಿ ಅತ್ಯಾ*ಚಾರ ಎಸಗಿದ್ದಲ್ಲದೆ, ಈತ ಅನೇಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿದ್ದ ಎನ್ನುವ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ. ಅಚ್ಚರಿಯ ವಿಷಯವೆಂದರೆ, ಈತನ ಈ ಕೃತ್ಯಗಳಿಗೆ ಸ್ವತಃ ಈತನ ಸಹೋದರಿಯೇ ಸಾಥ್ ನೀಡುತ್ತಿದ್ದಳು ಎಂಬ ದೂರು ಕೇಳಿಬಂದಿದೆ.&lt;/p&gt;&lt;img&gt;&lt;p&gt;ಈ ಪ್ರಕರಣದಲ್ಲಿ ಸಮೀರ್ ಮುಲ್ಲಾ ಎನ್ನುವ ಆರೋಪಿಗೆ ಆತನ ಸಹೋದರಿ ತೈಸೀಮ್ ಮುಲ್ಲಾ ಪ್ರಮುಖವಾಗಿ ಸಾಥ್ ನೀಡುತ್ತಿದ್ದಳು ಎನ್ನಲಾಗಿದೆ. ಸಂತ್ರಸ್ತೆ ಯುವತಿ ಮೊದಲು ತೈಸೀಮ್ ಮುಲ್ಲಾಳನ್ನು ಏರೋಬಿಕ್ಸ್ ಕ್ಲಾಸ್&zwnj;ನಲ್ಲಿ ಪರಿಚಯ ಮಾಡಿಕೊಂಡಿದ್ದಳು. ಅಲ್ಲಿಂದ ಶುರುವಾದ ಇವರ ಸ್ನೇಹವನ್ನು ತೈಸೀಮ್ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡಿದ್ದಾಳೆ. ಸಂತ್ರಸ್ತ ಯುವತಿಯನ್ನು ತನ್ನ ಸಹೋದರ ಸಮೀರ್&zwnj;ಗೆ ಪರಿಚಯಿಸಿದ್ದೇ ಈ ತೈಸೀಮ್ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ತೈಸೀಮ್ ಮುಲ್ಲಾ ಸಂತ್ರಸ್ತ ಯುವತಿಯೊಂದಿಗೆ ಅತಿಯಾದ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಯಾವುದೇ ಬರ್ತ್&zwnj;ಡೇ ಪಾರ್ಟಿ ಇರಲಿ ಅಥವಾ ಹೋಟೆಲ್&zwnj;ಗಳಿಗೆ ಹೋಗುವ ಸಂದರ್ಭವಿರಲಿ, ತೈಸೀಮ್ ಸಂತ್ರಸ್ತೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದಳು. ಅಲ್ಲಿ ತನ್ನ ಸಹೋದರ ಸಮೀರ್&zwnj;ನನ್ನು ಕರೆಸಿ, ಅವರಿಬ್ಬರ ನಡುವೆ ಸಂಬಂಧ ಬೆಳೆಯುವಂತೆ ಮಾಡುತ್ತಿದ್ದಳು. ಪಾರ್ಟಿಯ ಮಧ್ಯದಲ್ಲಿ ತೈಸೀಮ್ ತನ್ನ ಪತಿಯೊಂದಿಗೆ ಅಲ್ಲಿಂದ ಹೊರಟು ಹೋಗಿ, ಸಂತ್ರಸ್ತ ಯುವತಿಯನ್ನು ಸಮೀರ್ ಜೊತೆ ಏಕಾಂಗಿಯಾಗಿ ಬಿಡುತ್ತಿದ್ದಳು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;img&gt;&lt;p&gt;ಪೊಲೀಸರು ವಶಕ್ಕೆ ಪಡೆದಿರುವ ಸಮೀರ್ ಮುಲ್ಲಾನ ಮೊಬೈಲ್ ಫೋನ್ ಈಗ ಹತ್ತಾರು ರಹಸ್ಯಗಳನ್ನು ಹೊರಹಾಕುತ್ತಿದೆ. ಈತನ ಮೊಬೈಲ್&zwnj;ನಲ್ಲಿ ಹತ್ತಾರು ಹಿಂದೂ ಯುವತಿಯರ ಫೋಟೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಕೇವಲ ಒಬ್ಬ ಯುವತಿಯಲ್ಲದೆ, ಜಿಮ್&zwnj;ಗೆ ಬರುತ್ತಿದ್ದ ಮತ್ತು ಇತರ ಸಂಪರ್ಕಗಳ ಮೂಲಕ ಪರಿಚಯವಾಗಿದ್ದ ಹಲವಾರು ಹಿಂದೂ ಯುವತಿಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ ಎಂಬ ಸಂಶಯ ದಟ್ಟವಾಗಿದೆ.&lt;/p&gt;&lt;img&gt;&lt;p&gt;ಈಗಾಗಲೇ ಸಾರ್ವಜನಿಕವಾಗಿರುವ ಕೆಲವು ವಿಡಿಯೋಗಳಲ್ಲಿ ತೈಸೀಮ್ ಮುಲ್ಲಾ, ಆಕೆಯ ಪತಿ, ಸಮೀರ್ ಮತ್ತು ಸಂತ್ರಸ್ತ ಯುವತಿ ಒಟ್ಟಾಗಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋಗಳು ಈ ಪ್ರಕರಣದಲ್ಲಿ ತೈಸೀಮ್ ಮತ್ತು ಆಕೆಯ ಪತಿಯ ಪಾತ್ರವಿರುವುದನ್ನು ಪುಷ್ಟೀಕರಿಸುವಂತಿದೆ. ಪ್ರೀತಿಯ ಹೆಸರಿನಲ್ಲಿ ಯುವತಿಯರನ್ನು ಸೆಳೆದು, ನಂತರ ಅತ್ಯಾ*ಚಾರ ಎಸಗಿ ಬ್ಲ್ಯಾಕ್&zwnj;ಮೇಲ್ ಮಾಡುವ ಈ ವ್ಯವಸ್ಥಿತ ಜಾಲದ ಬಗ್ಗೆ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ. ಹಿಂದೂ ಸಂಘಟನೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮೀರ್ ಮಾತ್ರವಲ್ಲದೆ ಆತನಿಗೆ ಸಾಥ್ ನೀಡಿದ ಕುಟುಂಬಸ್ಥರನ್ನೂ ಬಂಧಿಸಬೇಕೆಂದು ಒತ್ತಾಯಿಸಿವೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/hubballi-love-jihad-exclusive-sameer-mulla-targetted-hindu-girls-with-sister-taisim-s-help-sat-gnwnbqp"/>
        </item>
        <item>
            <title><![CDATA[₹6 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆ ಡಿಸಿ ಭರತ್ ಕುಮಾರ್!]]></title>
            <link>https://kannada.asianetnews.com/karnataka-districts/hubballi-commercial-tax-dc-bharat-kumar-hegde-arrested-lokayukta-trap-bribe-sat/articleshow-gpdyo6w</link>
            <guid isPermaLink="true">https://kannada.asianetnews.com/karnataka-districts/hubballi-commercial-tax-dc-bharat-kumar-hegde-arrested-lokayukta-trap-bribe-sat/articleshow-gpdyo6w</guid>
            <pubDate>Mon, 30 Mar 2026 14:27:11 +0530</pubDate>
            <description><![CDATA[ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಭರತ್ ಕುಮಾರ್ ಹೆಗ್ಡೆ ಅವರು ಉದ್ಯಮಿಯೊಬ್ಬರಿಂದ ₹6 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇನ್&zwnj;ಪುಟ್ ಟ್ಯಾಕ್ಸ್ ಕ್ರೆಡಿಟ್ ಪ್ರಕರಣವನ್ನು ಮುಚ್ಚಿಹಾಕಲು ಈ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmyzbb930rs41tsyr4jnj4y4,imgname-dharwad-dc-lokayukta-trap-1774861004067.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ/ಹುಬ್ಬಳ್ಳಿ (ಮಾ.30): ಭ್ರ&lt;/strong&gt;ಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ (DC) ಆರು ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.&lt;/p&gt;&lt;p&gt;ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಭರತ್ ಕುಮಾರ್ ಹೆಗ್ಡೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿ. ಅಂಕೋಲಾ ಮೂಲದ ಉದ್ಯಮಿ ವಿಶ್ವಜಿತ್ ನಾಯಕ್ ಎಂಬುವವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಈ ದಾಳಿ ನಡೆಸಿದ್ದಾರೆ.&lt;/p&gt;&lt;h3&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h3&gt;&lt;p&gt;ದೂರುದಾರರಾದ ವಿಶ್ವಜಿತ್ ನಾಯಕ್ ಅವರು 2019 ರಲ್ಲಿ ಎಂಟು ಟಿಪ್ಪರ್&zwnj;ಗಳನ್ನು ಖರೀದಿಸಿದ್ದರು. ಈ ವಾಹನಗಳ ಖರೀದಿಗೆ ಸಂಬಂಧಿಸಿದಂತೆ ಅವರಿಗೆ ಸುಮಾರು 60 ಲಕ್ಷ ರೂಪಾಯಿಗಳ ಇನ್&zwnj;ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಲಭ್ಯವಿತ್ತು. ಈ ಪೈಕಿ ವಿಶ್ವಜಿತ್ ಅವರು 34 ಲಕ್ಷ ರೂಪಾಯಿಗಳ ಇನ್&zwnj;ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಪಡೆದುಕೊಂಡಿದ್ದರು. ಆದರೆ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ಪ್ರಕ್ರಿಯೆಯು ಕಾನೂನುಬಾಹಿರವಾಗಿದೆ ಮತ್ತು ಇನ್&zwnj;ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ವಿಶ್ವಜಿತ್ ಅವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದರು.&lt;/p&gt;&lt;h2&gt;&lt;strong&gt;ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ:&lt;/strong&gt;&lt;/h2&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಕುಮಾರ್ ಹೆಗ್ಡೆ ಅವರು ವಿಶ್ವಜಿತ್ ನಾಯಕ್ ಅವರಿಗೆ ಈಗಾಗಲೇ ನಾಲ್ಕು ಬಾರಿ ನೋಟಿಸ್ ನೀಡಿ ವಿಚಾರಣೆಗೆ ಕರೆಸಿದ್ದರು. ಇಂದು (ಸೋಮವಾರ) ಐದನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ &quot;ಪ್ರಕರಣವನ್ನು ಕ್ಲೋಸ್ ಮಾಡಬೇಕಾದರೆ ಹಣದೊಂದಿಗೆ ಬನ್ನಿ&quot; ಎಂದು ಅಧಿಕಾರಿ ಭರತ್ ಕುಮಾರ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.&lt;/p&gt;&lt;p&gt;ಲಂಚ ನೀಡಲು ಇಚ್ಛಿಸದ ವಿಶ್ವಜಿತ್ ನಾಯಕ್ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಯೋಜನೆಯಂತೆ ಇಂದು ವಿಶ್ವಜಿತ್ ಅವರಿಂದ 6 ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭರತ್ ಕುಮಾರ್ ಹೆಗ್ಡೆ ಅವರನ್ನು ಬಂಧಿಸಿದ್ದಾರೆ.&lt;/p&gt;&lt;h3&gt;&lt;strong&gt;ಲೋಕಾಯುಕ್ತ ತಂಡದ ಮಿಂಚಿನ ಕಾರ್ಯಾಚರಣೆ:&lt;/strong&gt;&lt;/h3&gt;&lt;p&gt;ಬೆಂಗಳೂರು ಲೋಕಾಯುಕ್ತ ಎಸ್&zwnj;ಪಿ ಶಿವಪ್ರಕಾಶ ದೇವರಾಜ್ ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಡಿವೈಎಸ್&zwnj;ಪಿಗಳಾದ ಮಲ್ಲಿಕಾರ್ಜುನ ಚುಕ್ಕಿ, ಪ್ರದೀಪ್ ಕುಮಾರ್ ಹಾಗೂ ಇನ್ಸ್&zwnj;ಪೆಕ್ಟರ್ ರಾಜು ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಬಂಧಿತ ಅಧಿಕಾರಿಯಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಕಚೇರಿಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hubballi-commercial-tax-dc-bharat-kumar-hegde-arrested-lokayukta-trap-bribe-sat/articleshow-gpdyo6w"/>
        </item>
        <item>
            <title><![CDATA[ಹುಬ್ಬಳ್ಳಿ-ಹೈದರಾಬಾದ್‌ಗೆ  ಮಧ್ಯೆ ರಾಜರಥ ಎಸಿ ಸ್ಲೀಪರ್ ಬಸ್ ಆರಂಭ, ಸಮಯ, ಟಿಕೆಟ್ ದರ ಸಂಪೂರ್ಣ ಮಾಹಿತಿ ಇಲ್ಲಿದೆ]]></title>
            <link>https://kannada.asianetnews.com/karnataka-districts/hubballi-hyderabad-rajarath-ac-sleeper-bus-launched-check-timings-fare-and-route-details-gdp/articleshow-k41a64h</link>
            <guid isPermaLink="true">https://kannada.asianetnews.com/karnataka-districts/hubballi-hyderabad-rajarath-ac-sleeper-bus-launched-check-timings-fare-and-route-details-gdp/articleshow-k41a64h</guid>
            <pubDate>Thu, 02 Apr 2026 14:59:59 +0530</pubDate>
            <description><![CDATA[ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವೆ ಹೊಸ ರಾಜರಥ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ಗದಗ, ಕೊಪ್ಪಳ, ರಾಯಚೂರು ಮಾರ್ಗವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಹಾಗೂ ವಿಶೇಷ ರಿಯಾಯಿತಿಗಳು ಲಭ್ಯವಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn6r3vs55h7zn7mhvxwm40rn,imgname-hubballi-bus-1775121854245.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ:&lt;/strong&gt; ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮಹತ್ವದ ಹೆಜ್ಜೆ ಇಟ್ಟಿದ್ದು, ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವಿನ ನೂತನ ರಾಜರಥ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.&lt;/p&gt;&lt;h2&gt;ಪ್ರಯಾಣಿಕರ ಬೇಡಿಕೆಗೆ ಸ್ಪಂದನೆ&lt;/h2&gt;&lt;p&gt;ವಾಣಿಜ್ಯ, ಉದ್ಯೋಗ, ವಿದ್ಯಾಭ್ಯಾಸ ಸೇರಿದಂತೆ ವಿವಿಧ ಅಗತ್ಯಗಳಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಅನೇಕರು ಹೈದರಾಬಾದ್&zwnj;ಗೆ ನಿಯಮಿತವಾಗಿ ಸಂಚರಿಸುತ್ತಿದ್ದಾರೆ. ಈ ಹಿನ್ನೆಲೆ, ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಬಸ್ ಗದಗ, ಕೊಪ್ಪಳ, ಗಂಗಾವತಿ, ರಾಯಚೂರು, ಝಡ್ ಚರ್ಲಾ ಹಾಗೂ ಮೆಹಬೂಬ್ ನಗರ ಮಾರ್ಗವಾಗಿ ಸಂಚರಿಸಲಿದೆ.&lt;/p&gt;&lt;p&gt;ವೇಳಾಪಟ್ಟಿ ವಿವರ ಹುಬ್ಬಳ್ಳಿ (ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ): ಪ್ರತಿದಿನ ಸಂಜೆ 7:30ಕ್ಕೆ ಹೊರಟು, ಮರುದಿನ ಬೆಳಗ್ಗೆ 7:00ಕ್ಕೆ ಹೈದರಾಬಾದ್ ಮಹಾತ್ಮ ಗಾಂಧಿ ಬಸ್ ನಿಲ್ದಾಣ ತಲುಪುತ್ತದೆ. ಹೈದರಾಬಾದ್ (ಮಹಾತ್ಮ ಗಾಂಧಿ ಬಸ್ ನಿಲ್ದಾಣ): ರಾತ್ರಿ 9:15ಕ್ಕೆ ಹೊರಟು, ಮರುದಿನ ಬೆಳಗ್ಗೆ 8:15ಕ್ಕೆ ಹುಬ್ಬಳ್ಳಿ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ ತಲುಪುತ್ತದೆ. ಪ್ರಯಾಣ ದರ ಮತ್ತು ಸೌಲಭ್ಯಗಳು, ಈ ರಾಜರಥ ಎಸಿ ಸ್ಲೀಪರ್ ಬಸ್&zwnj;ನ ಒಟ್ಟು ಪ್ರಯಾಣ ದರ ₹1602 ಆಗಿದ್ದು, ಇದರಲ್ಲಿ ಅಪಘಾತ ಪರಿಹಾರ ವಿಮೆ, ಟೋಲ್ ಶುಲ್ಕ ಸೇರಿದಂತೆ ಎಲ್ಲಾ ಸೌಲಭ್ಯಗಳು ಒಳಗೊಂಡಿವೆ.&lt;/p&gt;&lt;h2&gt;ಟಿಕೆಟ್ ಬುಕ್ಕಿಂಗ್ ಸೌಲಭ್ಯ&lt;/h2&gt;&lt;p&gt;ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲು ಕೆಳಗಿನ ಮಾರ್ಗಗಳನ್ನು &amp;nbsp;ಅನುಸರಿಸಬಹುದು&lt;/p&gt;&lt;p&gt;ಅಧಿಕೃತ ವೆಬ್&zwnj;ಸೈಟ್: www.ksrtc.in KSRTC ಮೊಬೈಲ್ ಆಪ್ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ ಹೊಸೂರು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳು ವಿಶೇಷ ರಿಯಾಯಿತಿಗಳು ಒಂದೇ ಟಿಕೆಟ್&zwnj;ನಲ್ಲಿ 4 ಅಥವಾ ಹೆಚ್ಚಿನ ಆಸನಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ 5% ರಿಯಾಯಿತಿ ಲಭ್ಯ. ಹೋಗುವ ಮತ್ತು ಬರುವ ಪ್ರಯಾಣವನ್ನು ಒಂದೇ ಟಿಕೆಟ್&zwnj;ನಲ್ಲಿ ಬುಕ್ ಮಾಡಿದರೆ, ಹಿಂದಿರುಗುವ ಪ್ರಯಾಣದ ದರದಲ್ಲಿ 10% ರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಗಳನ್ನ ಸಂಪರ್ಕಿಸಬಹುದು: &amp;nbsp;7760991682 / 7760991674&lt;/p&gt;&lt;p&gt;ಹುಬ್ಬಳ್ಳಿ&ndash;ಹೈದರಾಬಾದ್ ನಡುವೆ ಆರಂಭವಾದ ಈ ರಾಜರಥ ಎಸಿ ಸ್ಲೀಪರ್ ಬಸ್ ಸೇವೆ, ಉತ್ತರ ಕರ್ನಾಟಕ ಮತ್ತು ತೆಲಂಗಾಣ ನಡುವಿನ ಪ್ರಯಾಣವನ್ನು ಇನ್ನಷ್ಟು ಸುಗಮ ಮತ್ತು ಆರಾಮದಾಯಕವಾಗಿಸುವ ನಿರೀಕ್ಷೆಯಿದೆ. ಪ್ರಯಾಣಿಕರು ಈ ಹೊಸ ಸೇವೆಯನ್ನು ಬಳಸಿಕೊಂಡು ಅನುಕೂಲ ಪಡೆದುಕೊಳ್ಳಬಹುದು.&lt;/p&gt;&lt;p&gt;&amp;nbsp;&lt;/p&gt;&lt;p&gt;ರಾಜರಥ ನೂತನ ಎಸಿ ಸ್ಲಿಪರ್ ಸಾರಿಗೆ ಸೇವೆಹುಬ್ಬಳ್ಳಿ  ಹೈದರಾಬಾದ್&amp;nbsp;ಆನ್&zwnj;ಲೈನ್ ಬಸ್ ಟಿಕೆಟ್ ಬುಕಿಂಗ್ ಗಾಗಿ https://t.co/P8O6ADKul2 ಗೆ ಭೇಟಿ ನೀಡಿ. #rajrathabus #hubballi #hyderabad #Gadag #Koppala #Gangavati #PublicTransport #BookTicket #raichur@PriyangaMadhan @RLR_BTM @HubliCityeGroup pic.twitter.com/BnwWtOEhj8&lt;/p&gt;&lt;p&gt;&mdash; North Western Karnataka Road Transport Corporation (@nw_krtc) April 1, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-hyderabad-rajarath-ac-sleeper-bus-launched-check-timings-fare-and-route-details-gdp/articleshow-k41a64h"/>
        </item>
        <item>
            <title><![CDATA[ಹುಬ್ಬಳ್ಳಿ ಲವ್‌ ಜಿಹಾದ್ ಪ್ರಕರಣ: ಸಮೀರ್‌ ಮೊಬೈಲ್ ನಲ್ಲಿ ಹಲವು ವಿಡಿಯೋ, ಹಿಂದೂ ಯುವತಿಯರ ಸಂಪರ್ಕಕ್ಕೆ ಅಕ್ಕನೇ ಸಾಥ್!]]></title>
            <link>https://kannada.asianetnews.com/karnataka-districts/hubballi-love-jihad-case-gym-trainer-sameer-mulla-accused-of-exploitation-and-forced-abortions-gdp/articleshow-k987fr3</link>
            <guid isPermaLink="true">https://kannada.asianetnews.com/karnataka-districts/hubballi-love-jihad-case-gym-trainer-sameer-mulla-accused-of-exploitation-and-forced-abortions-gdp/articleshow-k987fr3</guid>
            <pubDate>Sat, 04 Apr 2026 09:23:29 +0530</pubDate>
            <description><![CDATA[ಹುಬ್ಬಳ್ಳಿಯ ಜಿಮ್&zwnj; ಟ್ರೈನರ್&zwnj; ಸಮೀರ್&zwnj; ಮುಲ್ಲಾ ವಿರುದ್ಧ ಲವ್&zwnj; ಜಿಹಾದ್&zwnj; ಆರೋಪ ಕೇಳಿಬಂದಿದ್ದು, ಆತ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಖುಷಿ ಎಂಬ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿ, ಹಲವು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಕೇಳಿಬಂದಿದ್ದು, ಆತನ ಮೊಬೈಲ್&zwnj;ನಲ್ಲಿದ್ದ ವಿಡಿಯೋಗಳು ಸಾಕ್ಷಿಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knb9xjmmm3810ys3g25brn5c,imgname-hubballi-love-jihad-case--1--1775274740372.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿಯಲ್ಲಿ ಮತ್ತೆ ಲವ್&zwnj; ಜಿಹಾದ್&zwnj; ಆರೋಪ ಸದ್ದು ಮಾಡಿದ್ದು, ವಿಜಯನಗರದ ಜಿಮ್&zwnj; ಟ್ರೈನರ್&zwnj; ಸಮೀರ್&zwnj; ಮುಲ್ಲಾನ ಜಾತಕ ಒಂದೊಂದಾಗಿ ಹೊರಬರುತ್ತಿದೆ. ಹಿಂದೂ ಯುವತಿಯರನ್ನು ಪರಿಚಯ ಮಾಡಿಕೊಂಡು ಲವ್&zwnj; ಜಿಹಾದ್&zwnj;ಗೆ ಯತ್ನಿಸಿದ್ದಾನೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಹಲವು ವಿಡಿಯೋಗಳು ಆತನ ಮೊಬೈಲ್&zwnj;ನಲ್ಲಿ ಲಭ್ಯವಾಗಿದೆ. ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ, ದೌರ್ಜನ್ಯ ಮತ್ತು ಬಲವಂತದ ಗರ್ಭಪಾತಗಳ ಆರೋಪಗಳು ಆತನ ಮೇಲೆ ಕೇಳಿಬಂದಿದೆ.&lt;/p&gt;&lt;p&gt;ವಿಜಯನಗರದ ಜಿಮ್&zwnj; ಟ್ರೈನರ್&zwnj; ಸಮೀರ್&zwnj; ಮುಲ್ಲಾ ತನ್ನ ಸಂಪರ್ಕ ವಲಯದ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಲವ್&zwnj; ಜಿಹಾದ್ ನಡೆಸಿದ್ದು. ಅವನ ಮೊಬೈಲ್ ಫೋನ್&zwnj;ನಲ್ಲಿ ಹಲವು ಯುವತಿಯರೊಂದಿಗೆ ನಡೆದ ವಾಟ್ಸಪ್ ಚಾಟ್&zwnj;ಗಳು, ಫೋಟೋಗಳು ಮತ್ತು ಕೆಲವು ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.&lt;/p&gt;&lt;h2&gt;ಖುಷಿಗೆ 8 ರಿಂದ 10 ಬಾರಿ ಗರ್ಭಪಾತ ಮಾತ್ರೆ ನೀಡಿರುವ ಸಮೀರ್&lt;/h2&gt;&lt;p&gt;ಖುಷಿ ಕಲಬುರಗಿ ಎಂಬ ಯುವತಿಯೊಂದಿಗೆ ಸಮೀರ್ ಮುಲ್ಲಾ ಹೊಂದಿದ್ದ ಸಂಬಂಧವು ಈ ಪ್ರಕರಣದ ಕೇಂದ್ರಬಿಂದುವಾಗಿದೆ. ಖುಷಿಯನ್ನು ಪುಸಲಾಯಿಸಿ, ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಇದೆ. ಇದಲ್ಲದೆ, ಪ್ರತೀ ಬಾರಿ ದೌರ್ಜನ್ಯ ನಂತರ ಗರ್ಭಪಾತ ಮಾಡಲು ಬಲವಂತ ಮಾಡುತ್ತಿದ್ದನೆಂದು ಹೇಳಲಾಗಿದೆ. ಖುಷಿಗೆ 8 ರಿಂದ 10 ಬಾರಿ ಗರ್ಭಪಾತ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.&lt;/p&gt;&lt;p&gt;ಮಾತ್ರೆಗಳನ್ನು ಸೇವಿಸಲು ಖುಷಿ ನಿರಾಕರಿಸಿದಾಗ, ಸಮೀರ್ ಮುಲ್ಲಾ ಒತ್ತಡ ಹೇರುತ್ತಿದ್ದನು ಮತ್ತು ಬೆದರಿಕೆ ಹಾಕುತ್ತಿದ್ದನು ಎಂಬುದು ಆರೋಪದ ಭಾಗವಾಗಿದೆ. ಮಾತ್ರೆ ತೆಗೆದುಕೊಳ್ಳುವ ದೃಶ್ಯವನ್ನು ವಿಡಿಯೋ ರೂಪದಲ್ಲಿ ದಾಖಲಿಸಿ ತನಗೆ ಕಳುಹಿಸುವಂತೆ ಕೂಡ ಸೂಚಿಸುತ್ತಿದ್ದನೆಂದು ಹೇಳಲಾಗಿದೆ. ಈ ರೀತಿಯ ವಿಡಿಯೋಗಳು ಇದೀಗ ಬಹಿರಂಗಗೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದೆ&lt;/p&gt;&lt;h2&gt;ತಂಗಿಯ ಸಾಥ್, &amp;nbsp;ಸಮೀರ್ ಗೆ ಹುಡುಗಿರ ಪರಿಚಯ&lt;/h2&gt;&lt;p&gt;ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಸಮೀರ್ ಮುಲ್ಲಾಗೆ ಯುವತಿಯರನ್ನು ಪರಿಚಯ ಮಾಡಿಸುತ್ತಿದ್ದವರಲ್ಲಿ ಅವನ ಸಹೋದರಿಯ ಪಾತ್ರವಿದೆ ಎಂಬ ಆರೋಪ. ತೈಸಿಮ್ ಮುಲ್ಲಾ ಎಂಬ ಸಮೀರ್&zwnj;ನ ಸಹೋದರಿ, ತನ್ನ ಪರಿಚಯದ ಯುವತಿಯರನ್ನು ಅವನಿಗೆ ಪರಿಚಯಿಸುತ್ತಿದ್ದಳು ಎನ್ನಲಾಗಿದೆ. ಖುಷಿ ಕಲಬುರಗಿಯನ್ನು ಸಹ ತೈಸಿಮ್ ಮುಲ್ಲಾ ಸಮೀರ್&zwnj;ಗೆ ಪರಿಚಯ ಮಾಡಿಕೊಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;p&gt;ಆರಂಭದಲ್ಲಿ ಖುಷಿ ಏರೋಬಿಕ್ ಕ್ಲಾಸ್&zwnj;ಗೆ ಹಾಜರಾಗುತ್ತಿದ್ದಳು. ಇದೇ ಸಂದರ್ಭದಲ್ಲಿಯೇ ಪರಿಚಯ ಬೆಳೆಯಿತು. ಬಳಿಕ ಖುಷಿಯನ್ನು ಪಾರ್ಟಿಗಳು, ಹೋಟೆಲ್&zwnj;ಗಳಿಗೆ ಕರೆದುಕೊಂಡು ಹೋಗಿ, ಸಮೀರ್ ಜೊತೆ ಸಮಯ ಕಳೆಯುವಂತೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಮೂಲಕ ಇಬ್ಬರ ಮಧ್ಯೆ ಸಂಬಂಧ ಬೆಳೆಸಲು ತೈಸಿಮ್ ಮುಲ್ಲಾ ಸಹಕರಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೈಸಿಮ್ ಮುಲ್ಲಾ, ಆಕೆಯ ಪತಿ, ಸಮೀರ್ ಮತ್ತು ಖುಷಿ ಸೇರಿಕೊಂಡಿರುವ ವಿಡಿಯೋಗಳು ಕೂಡ ಇದೀಗ ಹೊರಬಂದಿವೆ. ಈ ಎಲ್ಲಾ ಬೆಳವಣಿಗೆಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಲವ್&zwnj; ಜಿಹಾದ್&zwnj;ಗೆ ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಅಮಾಯಕ ಹಿಂದೂ ಯುವತಿಯರನ್ನು ಮೋಸದ ಬಲೆಗೆ ಸಿಲುಕಿಸುತ್ತಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.&lt;/p&gt;&lt;p&gt;ಸಮೀರ್&zwnj;ನ ವಿರುದ್ಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಪ್ರಕರಣ ದಾಖಲಿಸಿದರೆ, ನನ್ನ ಸಹೋದರನ ಮೇಲೆ ಸುಳ್ಳು ಆರೋಪ ಮಾಡಿ ಮನೆಗೆ ಬಂದು ಅವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಿಡ್ನ್ಯಾಪ್&zwnj; ಮಾಡಿದ್ದಾರೆ ಎಂದು ಸಮೀರ್&zwnj; ಸಹೋದರಿ ತೈಸಿಮ್&zwnj; ಅಶೋಕ ನಗರ ಪೊಲೀಸ್&zwnj; ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-love-jihad-case-gym-trainer-sameer-mulla-accused-of-exploitation-and-forced-abortions-gdp/articleshow-k987fr3"/>
        </item>
        <item>
            <title><![CDATA[ಹುಬ್ಬಳ್ಳಿ Love Jihad ಕೇಸ್​ಗೆ ಟ್ವಿಸ್ಟ್​: ಮಲಗಿದ್ದು ಯಾರಂತ ಅವಳ ಫೋನ್​ ನೋಡಿ ಅಂದ ಸಮೀರ್​; ಅಕ್ಕ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/hubballi-sameer-mulla-love-jihad-case-sister-and-himself-accusing-girl-suc/articleshow-knhllg7</link>
            <guid isPermaLink="true">https://kannada.asianetnews.com/karnataka-districts/hubballi-sameer-mulla-love-jihad-case-sister-and-himself-accusing-girl-suc/articleshow-knhllg7</guid>
            <pubDate>Sat, 04 Apr 2026 13:24:43 +0530</pubDate>
            <description><![CDATA[ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಮೇಲೆ ಲವ್ ಜಿಹಾದ್, ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಮೀರ್ ಸಹೋದರಿ ಇದು ಪ್ರೀತಿ ಸಂಬಂಧ ಎಂದಿದ್ದರೆ, ಸಂತ್ರಸ್ತೆಯ ಮೊಬೈಲ್ ಪರಿಶೀಲಿಸಿದರೆ ಸತ್ಯ ಹೊರಬರಲಿದೆ ಎಂದು ಸಮೀರ್ ಹೇಳಿದ್ದಾನೆ. ಈ ಘಟನೆಯು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knbqjaq4szebjhrb4ypsk0wj,imgname-hubballi-love-jihad-1775289051876.jpg" type="image/jpeg" height="390" width="690"/>
            <content:encoded><![CDATA[&lt;p&gt;​ಹತ್ತಾರು ಬಾರಿ ಗರ್ಭಪಾತ, ಹಲವಾರು ಹಿಂದೂ ಯುವತಿಯರಿಗೆ ಮೋಸ, ಮೊಬೈಲ್​ನಲ್ಲಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​, ಲವ್​ ಜಿಹಾದ್​ ಮಾಡಿ ಹಿಂದೂ ಯುವತಿಯರ ದುರ್ಬಳಕೆ... ಹೀಗೆ ಹಲವಾರು ಆರೋಪ ಹೊತ್ತಿರುವ ಹುಬ್ಬಳ್ಳಿಯ ಸಮೀರ್​ ಮುಲ್ಲಾನ ಕೇಸ್ ಕ್ಷಣಕ್ಷಣಕ್ಕೂ ಬಾರಿ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಹುಬ್ಬಳ್ಳಿಯ ವಿಜಯನಗರದ ಜಿಮ್&zwnj; ಟ್ರೈನರ್&zwnj; ಸಮೀರ್&zwnj; ಮುಲ್ಲಾ ಹಿಂದೂ ಯುವತಿಯರನ್ನು ಪರಿಚಯ ಮಾಡಿಕೊಂಡು ಲವ್&zwnj; ಜಿಹಾದ್&zwnj;ಗೆ ಯತ್ನಿಸಿದ್ದಾನೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಹಲವು ವಿಡಿಯೋಗಳು ಆತನ ಮೊಬೈಲ್&zwnj;ನಲ್ಲಿ ಲಭ್ಯವಾಗಿರುವುದಾಗಿ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಇದೀಗ ಆತನ ಸಹೋದರಿ ತೈಸೀಮ್ ಮುಲ್ಲಾ ಒಂದೆಡೆ ಪ್ರತಿಕ್ರಿಯೆ ನೀಡಿದ್ದರೆ, ಎಸ್&zwnj;ಎಸ್&zwnj;ಕೆ ಸಮಾಜದವರು ತನ್ನ ಮೇಲೆ ಹಲ್ಲೆ ಮಾಡಿದ್ದು, ಅಸಲಿಯತ್ತು ಏನೆಂದು ಗೊತ್ತಾಗಬೇಕಿದ್ದರೆ ಸಂತ್ರಸ್ತೆ ಎಂದುಕೊಂಡಿರುವವಳ ಮೊಬೈಲ್​ ಚೆಕ್​ ಮಾಡಿ ಎಂದಿದ್ದಾನೆ ಸಮೀರ್​.&lt;/p&gt;&lt;h2&gt;&lt;strong&gt;ಅಕ್ಕ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಮಾಧ್ಯಮಗಳ ಮುಂದೆ ಬಂದು ಹೇಳಿಕೆ ಕೊಟ್ಟಿರುವ ಸಮೀರ್ ಸಹೋದರಿ ತೈಸೀಮ್ ಮುಲ್ಲಾ, ಸಮೀರ್ ಮತ್ತು ಖುಷಿ ಕಳೆದ ಮೂರು ವರ್ಷಗಳಿಂದ ಪರಿಚಯದಲ್ಲಿದ್ದಾರೆ. ಅವರು ರಿಲೇಶನ್&zwnj;ಶಿಪ್&zwnj;ನಲ್ಲಿ ಇದ್ದರು. ಲವ್​ ಜಿಹಾದ್​ ಎನ್ನೋದನ್ನು ತಲೆಯಿಂದ ಕಿತ್ತುಹಾಕಿ. ಅವಳ ಫೋನ್​ ಬೇಕಿದ್ರೆ ನೋಡಿ. ಅವರಿಬ್ಬರೂ ಸಿಕ್ಕಾಪಟ್ಟೆ ಸುತ್ತಾಡಿದ್ದಾರೆ. ಅದನ್ನೆಲ್ಲಾ ಅವಳೇ ವಿಡಿಯೋ ಮಾಡಿಟ್ಟುಕೊಂಡಿದ್ದಾಳೆ. ಇದರಲ್ಲಿ ಲವ್​ ಜಿಹಾದ್​, ಗಿಹಾದ್​ ಏನೂ ಇಲ್ಲ. ಯುವತಿಯ ಕುಟುಂಬದವರೊಂದಿಗೆ ನಮ್ಮ ಕುಟುಂಬ ಅನ್ಯೋನ್ಯವಾಗಿದ್ದು, ಒಟ್ಟಿಗೆ ಪ್ರವಾಸ ಹಾಗೂ ಶಾಪಿಂಗ್ ಕೂಡ ಮಾಡುತ್ತಿದ್ದೆವು ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಮಾರಣಾಂತಿಕ ಹಲ್ಲೆ&lt;/strong&gt;&lt;/h3&gt;&lt;p&gt;ಎಸ್&zwnj;ಎಸ್&zwnj;ಕೆ ಸಮಾಜದ ಕೆಲವರು ಬೆಳಗ್ಗೆ 7 ಗಂಟೆಗೆ ಸಮೀರ್&zwnj;ರನ್ನು ಅಪಹರಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ನೂರು ಜನರು ಸೇರಿ ದನದ ಶೆಡ್&zwnj;ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ನಮ್ಮ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಸಮೀರ್​ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಅದೇ ಇನ್ನೊಂದೆಡೆ ನೇರ ಪ್ರಸಾರದಲ್ಲಿ ಬಂದಿರೋ ಸಮೀರ್​, ಖುಷಿ ತುಂಬಾ ಒಳ್ಳೆಯ ಹುಡುಗಿರಿ. ಆಕಿ ಬೇರೆಯವರ ಒತ್ತಡಕ್ಕೆ ಬಂದು ಇಂಥ ಹೇಳಿಕೆ ಕೊಟ್ಟಿದ್ದಾಳೆ. ಆಕಿ ಫೋನ್​ ಚೆಕ್​ ಮಾಡಿ ಎಂದಿದ್ದಾನೆ. ಅವಳಿಗೆ ಮಾತ್ರೆ ಕೊಟ್ಟಿರೋದಾಗಿ ಹೇಳುತ್ತಿದ್ದಾಳೆ. ಆದ್ರೆ ಅವಳ ಮೊಬೈಲ್​, ನನ್ನ ಮೊಬೈಲ್​ ಚೆಕ್​ ಮಾಡಿ. ನನ್ನ ಮೊಬೈಲ್​ನಲ್ಲಿ ಒಂದೇ ಒಂದು ವಿಡಿಯೋ ಇಲ್ಲ. ಅವಳ ಮೊಬೈಲ್​ ಚೆಕ್​ ಮಾಡಿದ್ರೆ ಯಾರು ಮಲಗಿದ್ದು ಅಂತ ಗೊತ್ತಾಗತ್ತೆ. ಪ್ರಜ್ಞೆ ತಪ್ಪಿಸಿದ್ರೆ ಅವಳು ಮೊದಲು ಮಲಗಬೇಕಿತ್ತು. ಅವಳೇ ಮೊದಲು ಮಲಗಿದ್ರೆ ಅವಳ ಮೊಬೈಲ್​ನಿಂದ ವಿಡಿಯೋ ಹೇಗೆ ರೆಕಾರ್ಡ್​ ಆಗ್ತಿತ್ತು ಎಂದು ಪ್ರಶ್ನಿಸಿದ್ದಾನೆ. ಅವಳು ಯಾರದ್ದೋ ಒತ್ತಡದಲ್ಲಿ ಹೀಗೆಲ್ಲಾ ಹೇಳ್ತಿದ್ದಾಳೆ ಎಂದಿದ್ದಾನೆ.&lt;/p&gt;&lt;h3&gt;&lt;strong&gt;ನೆಟ್ಟಿಗರು ಏನಂತಿದ್ದಾರೆ?&lt;/strong&gt;&lt;/h3&gt;&lt;p&gt;ಆದರೆ ಈತನ ಮಾತಿಗೆ ಸಿಕ್ಕಾಪಟ್ಟೆ ನೆಗೆಟಿವ್​ ಕಮೆಂಟ್ಸ್​ ಬರುತ್ತಿದೆ. ನೀನು ತುಂಬಾ ಚಾಲಾಕಿ ಕಣೋ. ಅವಳನ್ನು ಮಲಗಿಸಿ ಅವಳ ಫೋನ್​ನಿಂದಲೇ ರೆಕಾರ್ಡ್​ ಮಾಡಿಕೊಂಡಿದ್ಯಾ. ಯಾವ ಹೆಣ್ಣು ತಾನೇ ತಾನು ಇನ್ನೊಬ್ಬನ ಜೊತೆ ಮಲಗೋದನ್ನೆಲ್ಲಾ ರೆಕಾರ್ಡ್​ ಮಾಡಿಕೊಳ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ನೀನು ಸರಿಯಾಗಿ ಇದ್ದರೆ ನಿನಗೆ ಈ ಗತಿ ಬರುತ್ತಿರಲಿಲ್ಲ. ಹಿಂದೂ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವವರಿಗೆ ಇದೇ ಶಾಸ್ತಿ ಆಗ್ಬೇಕು ಎಂದು ಹೇಳುತ್ತಿದ್ದಾರೆ. ಆದರೆ ಇದೇ ವೇಳೆ ಹಿಂದೂ ಬುದ್ಧಿಯನ್ನು ಕೈಯಲ್ಲಿ ಇಟ್ಟುಕೊಳ್ಳದೇ ಇಂಥವರ ಹಿಂದೆ ಹೋಗುವ ಹಿಂದೂ ಯುವತಿಯರ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ದುಬಾರಿ ಬೈಕ್​, ಕಾರು, ಸಿನಿಮಾ ಹೀರೋ ರೀತಿ ಗೆಟಪ್​ ಮಾಡಿಕೊಂಡು ಬಿಟ್ಟರೆ ಅವರ ಹಿಂದೆ ಬೀಳುವ ಹಿಂದೂ ಯುವತಿಯರಿಗೆ ಇವುಗಳೆಲ್ಲಾ ಪಾಠ ಆಗಬೇಕು ಎನ್ನುವ ಮಾತು ಕೇಳಿಬರುತ್ತಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Asianet Suvarna News (@asianetsuvarnanews)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>dharwad</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/hubballi-sameer-mulla-love-jihad-case-sister-and-himself-accusing-girl-suc/articleshow-knhllg7"/>
        </item>
        <item>
            <title><![CDATA[ಬೆಚ್ಚಿಬಿದ್ದ ಹುಬ್ಬಳ್ಳಿ: ಇನ್ನೊಂದು Love Jihad ಪ್ರಕರಣ- ಪ್ರೀತಿ ಹೆಸರಲ್ಲಿ ರೇ*ಪ್​; ದೂರು ದಾಖಲು]]></title>
            <link>https://kannada.asianetnews.com/crime/another-love-jihad-case-in-hubballi-video-record-blackmail-suc/articleshow-ng48x5f</link>
            <guid isPermaLink="true">https://kannada.asianetnews.com/crime/another-love-jihad-case-in-hubballi-video-record-blackmail-suc/articleshow-ng48x5f</guid>
            <pubDate>Sun, 05 Apr 2026 19:42:55 +0530</pubDate>
            <description><![CDATA[&lt;p&gt;ಹುಬ್ಬಳ್ಳಿಯ ಜಿಮ್ ಓನರ್ ಸಮೀರ್ ಮುಲ್ಲಾ ಲವ್ ಜಿಹಾದ್ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, ಅದೇ ಜಿಮ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾದ ಮುಫೀಸ್ ಮಿಯಾನ್ನಾವರ್ ಎಂಬಾತನ ವಿರುದ್ಧ ಮತ್ತೊಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಅ*ತ್ಯಾಚಾರ ಎಸಗಿ, ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಯುವತಿ ದೂರು ನೀಡಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knezny2433hc0ystegh19z2b,imgname-musiff-miyannavar-1775398221892.jpg" type="image/jpeg" height="390" width="690"/>
            <content:encoded><![CDATA[&lt;p&gt;ಎರಡು ದಿನಗಳಿಂದ ಹುಬ್ಬಳ್ಳಿಯ ಜಿಮ್​ ಓನರ್​ ಸಮೀರ್​ ಮುಲ್ಲಾ ಲವ್​ ಜಿಹಾದ್​ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಹಲವಾರು ಹಿಂದೂ ಯುವತಿಯರಿಗೆ ಮೋಸ ಮಾಡಿ, ಅವರ ಮೇಲೆ ಅ*ತ್ಯಾಚಾರ ಮಾಡಿ, ಗರ್ಭಪಾತ ಮಾಡಿಸಿರುವ ಭಯಾನಕ ಘಟನೆ ನಡೆದಿದ್ದು, ತನಿಖೆಯಿಂದ ಆತ ಹಾಗೂ ಅವನಿಗೆ ಹಿಂದೂ ಯುವತಿಯರನ್ನು ಪೂರೈಸುತ್ತಿದ್ದ ಆರೋಪದ ಮೇಲೆ ಅಕ್ಕ ಇಬ್ಬರ ವಿರುದ್ಧವೂ ತನಿಖೆ ನಡೆಯುತ್ತಿದೆ. ತಾನು ತುಂಬಾ ಅಮಾಯಕ, ಹೆಣ್ಣು ಮಕ್ಕಳ ರಕ್ಷಣೆ ಮಾಡ್ತಿರೋದೇ ನನಗೆ ಮುಳುವಾಯ್ತು ಎಂದೆಲ್ಲಾ ಪುಂಗಿ ಬಿಡುವ ಸಮೀರ್​ನ ಮೊಬೈಲ್​ನಲ್ಲಿ ಡಿಲೀಟ್​ ಮಾಡಿರೋ ಫೋಟೋಗಳು, ವಿಡಿಯೋಗಳ ರಿಕವರಿ ನಡೆಯುತ್ತಿದ್ದು, ಅವುಗಳ ಪೈಕಿ ಕೆಲವನ್ನು ನೋಡಿ ಇದಾಗಲೇ ಪೊಲೀಸರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;h2&gt;&lt;strong&gt;ಇನ್ನೊಂದು ಲವ್​ ಜಿಹಾದ್​&lt;/strong&gt;&lt;/h2&gt;&lt;p&gt;ಈ ಕೇಸ್​ ಇನ್ನೂ ನಡೆಯುತ್ತಿರುವಾಗಲೇ ಇನ್ನೊಂದು ಲವ್​ ಜಿಹಾದ್​ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮುಫೀಸ್ ಮಿಯಾನ್ನಾವರ್ ಎಂಬಾತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆತನ ಮೇಲೆ ಯುವತಿ ದೂರು ದಾಖಲು ಮಾಡಿದ್ದಾಳೆ. ಈತ ಕೂಡ ಸಮೀರ್​ನ ಜಿಮ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಇನ್ನಷ್ಟೇ ವಿವರ ಬಹಿರಂಗಗೊಳ್ಳಬೇಕಿದೆ. ಯುವತಿ ಹೇಳಿರುವ ಪ್ರಕಾರ, ಈತ ತನ್ನನ್ನು ಪ್ರೀತಿಸುವುದಾಗಿ ಹೇಳಿದ್ದ. ಆಮೇಲೆ ಅದು ನಾಟಕ ಎನ್ನುವುದು ಗೊತ್ತಾಯಿತು. ಈತ ಪ್ರೀತಿಸಿರುವುದಾಗಿ ನಂಬಿಕ ರೇ*ಪ್​ ಮಾಡಿದ್ದಾನೆ ಎಂದಿದ್ದಾಳೆ. ಸ್ನೇಹಿತೆಯೊಬ್ಬಳು ಈತನನ್ನು ಪರಿಚಯ ಮಾಡಿಸಿದ್ಲು. ಅಲ್ಲಿಂದ ಲವ್​ ಶುರುವಾಯ್ತು. ಆಮೇಲೆ ಪ್ರೀತಿ ಮಾಡ್ತೇನೆ ಎಂದಿದ್ದ. ನಾನೂ ನಂಬಿದ್ದೆ ಎಂದಿದ್ದಾಳೆ ಯುವತಿ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಮದುವೆಗೂ ಸಿದ್ಧತೆ&lt;/strong&gt;&lt;/h3&gt;&lt;p&gt;ಪೊಲೀಸರು ಹೇಳಿರುವ ಪ್ರಕಾರ, ಇವರಿಬ್ಬರೂ ಧಾರವಾಡದಲ್ಲಿ ರಿಜಿಸ್ಟ್ರಾರ್ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಯುವತಿ ಕುಟುಂಬಸ್ಥರಿಗೆ ಆತನ ಮೇಲೆ ಅನುಮಾನ ಬಂದು ಮದುವೆ ನಿಲ್ಲಿಸಿದ್ದಾರೆ. ವಿಷಯ ತಿಳಿಯುತ್ತಲೇ ತಮ್ಮಿಬ್ಬರ ಆ ಕ್ರಿಯೆಯ ವಿಡಿಯೋ ಮಾಡಿಕೊಂಡಿದ್ದ ಮುಫೀಸ್, ಅದನ್ನು ಲೀಕ್​ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.&lt;/p&gt;&lt;h3&gt;&lt;strong&gt;ಒಂಟಿಯಾಗಿದ್ದಾಗ ಹೋಗ್ತಿದ್ದ&lt;/strong&gt;&lt;/h3&gt;&lt;p&gt;ಯುವತಿ ಮನೆಯಲ್ಲಿ ಒಂಟಿಯಾಗಿದ್ದ ವೇಳೆ&zwnj; ಹೋಗುತ್ತಿದ್ದ. ಅಲ್ಲಿ ಅ*ತ್ಯಾಚಾರ ಎಸಗುತ್ತಿದ್ದ. ವಿಷಯ ಯಾರಿಗಾದರೂ ತಿಳಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಜೀವ ಭಯದ ಹಿನ್ನೆಲೆ ದೂರು ನೀಡಲು ಹಿಂದೇಟು ಹಾಕಿದ್ದಳು. ಆದರೆ ಆದರೆ ಸಮೀರ್ ಮುಲ್ಲಾನ ಲವ್ ಜಿಹಾದ್ ಪ್ರಕರಣ ಹೊರ ಬಂದ&zwnj; ಬಳಿಕ ದೂರು ದಾಖಲಿಸಲು ಮುಂದೆ ಬಂದಿರೋ ಯುವತಿ, ಸಂಘಟನೆಯವರ ನೆರವಿನಿಂದ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲು ಮಾಡಿದ್ದಾಳೆ ಎನ್ನಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dharwad</category>
            <dc:creator>Suchethana D</dc:creator>
            <atom:link href="https://kannada.asianetnews.com/crime/another-love-jihad-case-in-hubballi-video-record-blackmail-suc/articleshow-ng48x5f"/>
        </item>
        <item>
            <title><![CDATA[ಜಿಮ್‌ನಲ್ಲಿ ಹಿಂದೂ ಯುವತಿಯರಿಗೆ 'ಬ್ಯಾಡ್ ಟಚ್' ಮಾಡ್ತಿದ್ದ ಸಾಬಿರ್; ಟ್ರೈನರ್ ಬಾಲ ಕಟ್ ಮಾಡಿದ ಬಜರಂಗದಳ!]]></title>
            <link>https://kannada.asianetnews.com/gallery/karnataka-districts/dharwad-fitness-gym-trainer-sabir-misbehavior-with-hindu-women-allegation-bajrang-dal-protest-sat-nzk1qan</link>
            <guid isPermaLink="true">https://kannada.asianetnews.com/gallery/karnataka-districts/dharwad-fitness-gym-trainer-sabir-misbehavior-with-hindu-women-allegation-bajrang-dal-protest-sat-nzk1qan</guid>
            <pubDate>Mon, 30 Mar 2026 21:34:05 +0530</pubDate>
            <description><![CDATA[&lt;p&gt;ಧಾರವಾಡದ ಜಿಮ್&zwnj; ಟ್ರೈನರ್ ಸಾಬಿರ್ ಹಿಂದೂ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಬಜರಂಗದಳದ ಕಾರ್ಯಕರ್ತರು ಜಿಮ್&zwnj;ಗೆ ಬೀಗ ಜಡಿದು ಪ್ರತಿಭಟಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmzq9nv712sshdeavdhkzaas,imgname-dharwad-gym-trainer-sabir-1774886115175.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡದ ಜಿಮ್&zwnj; ಟ್ರೈನರ್ ಸಾಬಿರ್ ಹಿಂದೂ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಬಜರಂಗದಳದ ಕಾರ್ಯಕರ್ತರು ಜಿಮ್&zwnj;ಗೆ ಬೀಗ ಜಡಿದು ಪ್ರತಿಭಟಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಧಾರವಾಡ (ಮಾ.30): ವಿ&lt;/strong&gt;ದ್ಯಾಕಾಶಿ ಧಾರವಾಡದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಮರಾಠ ಕಾಲೋನಿಯಲ್ಲಿರುವ 'ಫಿಟ್ನೆಸ್ ಫಸ್ಟ್' (Fitness First) ಜಿಮ್&zwnj;ನಲ್ಲಿ ತರಬೇತುದಾರನೊಬ್ಬ ಹಿಂದೂ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ಜಿಮ್&zwnj;ಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಧಾರವಾಡದ ಮರಾಠ ಕಾಲೋನಿಯಲ್ಲಿರುವ ಈ ಜಿಮ್&zwnj;ನಲ್ಲಿ ಸಾಬಿರ್ ಎಂಬಾತ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಈತ ಕಳೆದ ಕೆಲವು ಸಮಯದಿಂದ ಜಿಮ್&zwnj;ಗೆ ಬರುವ ಹಿಂದೂ ಯುವತಿಯರನ್ನೇ ಗುರಿಯಾಗಿಸಿಕೊಂಡು (Target) ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ತರಬೇತಿ ನೀಡುವ ನೆಪದಲ್ಲಿ ಯುವತಿಯರ ಮೈಕೈ ಮುಟ್ಟುವುದು, 'ಬ್ಯಾಡ್ ಟಚ್' (Bad Touch) ಮಾಡುವುದು ಹಾಗೂ ಅಸಭ್ಯವಾಗಿ ವರ್ತಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತರು ದೂರಿದ್ದಾರೆ.&lt;/p&gt;&lt;img&gt;&lt;p&gt;ಅಪರಾಧದ ಹಾದಿ ಹಿಡಿದಿದ್ದ ಸಾಬಿರ್ ಎಂಬ ಈ ಟ್ರೈನರ್, ಯುವತಿಯರು ಬಳಸುವ ಶೌಚಾಲಯ ಹಾಗೂ ಸ್ನಾನದ ಗೃಹಗಳ (Bathroom) ಬಳಿಯೂ ಸುಳಿದಾಡುತ್ತಿದ್ದ ಎನ್ನಲಾಗಿದೆ. ಯುವತಿಯರು ಒಳಗಿದ್ದಾಗ ಬೇಕಂತಲೇ ಅಲ್ಲಿಗೆ ಹೋಗಿ ಬರುವುದು ಮತ್ತು ಅಸಭ್ಯ ಸನ್ನೆಗಳನ್ನು ಮಾಡುತ್ತಿದ್ದ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಜಿಮ್&zwnj;ಗೆ ಹೋಗುವ ಯುವತಿಯೊಬ್ಬರಾದ ಶೃತಿ ಬೆಳ್ಳಕ್ಕಿ ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದು, ಟ್ರೈನರ್&zwnj;ನ ವರ್ತನೆಯಿಂದಾಗಿ ಮಹಿಳೆಯರು ಜಿಮ್&zwnj;ಗೆ ಹೋಗಲು ಭಯಪಡುವಂತಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಸಾಬಿರ್&zwnj;ನ ಈ ಕಿರುಕುಳದ ಬಗ್ಗೆ ಮಾಹಿತಿ ತಿಳಿದ ಬಜರಂಗದಳದ ಕಾರ್ಯಕರ್ತರು ಇಂದು ಮರಾಠ ಕಾಲೋನಿಯ ಜಿಮ್&zwnj;ಗೆ ಮುತ್ತಿಗೆ ಹಾಕಿದರು. ಈ ಹಿಂದೆಯೇ ಸಾಬಿರ್&zwnj;ನ ವರ್ತನೆಯ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು, ಆದರೂ ಆತ ತನ್ನ ಬುದ್ಧಿ ಬಿಟ್ಟಿರಲಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಜಿಮ್&zwnj;ನಲ್ಲಿದ್ದವರನ್ನು ಹೊರಗೆ ಕಳುಹಿಸಿದ ಕಾರ್ಯಕರ್ತರು ಜಿಮ್&zwnj;ಗೆ ಬೀಗ ಜಡಿದಿದ್ದಾರೆ. ಆರೋಪಿ ಸಾಬಿರ್ ಸ್ಥಳಕ್ಕೆ ಬರಬೇಕು ಮತ್ತು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ.&lt;/p&gt;&lt;img&gt;&lt;p&gt;ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ಧಾರವಾಡದ ಉಪನಗರ (Upanagar) ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಯುವತಿಯರಿಂದ ಅಧಿಕೃತ ದೂರು ಪಡೆದ ನಂತರ ಎಫ್&zwnj;ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ಧಾರವಾಡದಲ್ಲಿ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/dharwad-fitness-gym-trainer-sabir-misbehavior-with-hindu-women-allegation-bajrang-dal-protest-sat-nzk1qan"/>
        </item>
        <item>
            <title><![CDATA[ತೈಲ ಬೆಲೆ ಏರಿಕೆಗೆ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸದ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಸಚಿವ ಸಂತೋಷ್ ಲಾಡ್]]></title>
            <link>https://kannada.asianetnews.com/politics/santhosh-lad-dharwad-speech-petrol-diesel-oil-price-hike-central-govt-failure-sat/articleshow-okzx9bp</link>
            <guid isPermaLink="true">https://kannada.asianetnews.com/politics/santhosh-lad-dharwad-speech-petrol-diesel-oil-price-hike-central-govt-failure-sat/articleshow-okzx9bp</guid>
            <pubDate>Wed, 01 Apr 2026 19:27:10 +0530</pubDate>
            <description><![CDATA[&lt;p&gt;ಇಂಧನ ತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ತೈಲ ಸಂಗ್ರಹಣಾ ವೈಫಲ್ಯವೇ ಕಾರಣ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ. ಅಲ್ಲದೆ, ಖಾಸಗಿ ಕಂಪನಿಗಳು ಗ್ಯಾಸ್ ದರ ಹೆಚ್ಚಿಸಿದ್ದು, ಶೆಲ್ ಬಂಕ್&zwnj;ಗಳಲ್ಲಿ ದರ ಇಳಿಸಲು ಸೂಚಿಸಿರುವುದಾಗಿ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn4n9wm657f0b59qkxwg9k61,imgname-minister-santosh-lad-1775051797126.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ (ಏ.01): ದೇ&lt;/strong&gt;ಶದಲ್ಲಿ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿರುವುದೇ ದಿನೇ ದಿನೇ ಎಲ್&zwnj;ಪಿಜಿ (LPG), ಪೆಟ್ರೋಲ್ ಮತ್ತು ಡೀಸೆಲ್ ಇಂಧನ ತೈಲ ಬೆಲೆಗಳ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಧಾರವಾಡದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮ್ಮ ದೇಶದಲ್ಲಿ 2014ರಲ್ಲಿ ಯುಪಿಎ ಸರ್ಕಾರವಿದ್ದಾಗ ದೇಶದಲ್ಲಿ 5.3 ಮಿಲಿಯನ್ ಮೆಟ್ರಿಕ್ ಟನ್ ತೈಲ ಸಂಗ್ರಹಣಾ ಸಾಮರ್ಥ್ಯವಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಳೆದ 12 ವರ್ಷಗಳಲ್ಲಿ ಈ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸಂಗ್ರಹಣೆಯನ್ನು 6 ಮಿಲಿಯನ್ ಮೆಟ್ರಿಕ್ ಟನ್ ಅಧಿಕ ಮಾಡಬೇಕು ಎಂದು ಯೋಜಿಸಿದ್ದರು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ' ಎಂದು ಟೀಕಿಸಿದರು.&lt;/p&gt;&lt;p&gt;ಚೀನಾ ಮತ್ತು ಜಪಾನ್&zwnj;ನಂತಹ ದೇಶಗಳು ಈಗಾಗಲೇ ಒಂದು ವರ್ಷಕ್ಕೆ ಬೇಕಾಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಂಡಿವೆ. ಆದರೆ ಭಾರತದಲ್ಲಿ ಅಂತಹ ದೂರದೃಷ್ಟಿಯ ಕೊರತೆಯಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದ್ದು, ಇದಕ್ಕೆ ಕೇಂದ್ರದ ತಪ್ಪು ನೀತಿಗಳೇ ಕಾರಣ ಎಂದು ಅವರು ಪ್ರತಿಪಾದಿಸಿದರು.&lt;/p&gt;&lt;h2&gt;ದಾವಣಗೆರೆ ಉಪ ಚುನಾವಣೆ ಮತ್ತು ಮುಸ್ಲಿಂ ಸಮುದಾಯ:&lt;/h2&gt;&lt;p&gt;ದಾವಣಗೆರೆ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಸಚಿವರು, 'ರಾಜಕೀಯದಲ್ಲಿ ಅಸಮಾಧಾನಗಳು ಇರುವುದು ಸಹಜ. ಆದರೆ ಈಗಾಗಲೇ ರಾಜ್ಯ ನಾಯಕರು ಮುಸ್ಲಿಂ ಸಮುದಾಯದ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಸಮಾಧಾನಗೊಂಡಿದ್ದ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಇವತ್ತಿನಿಂದ ನಾನು ಕೂಡ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ನಮಗಿದೆ' ಎಂದು ಭರವಸೆ ವ್ಯಕ್ತಪಡಿಸಿದರು.&lt;/p&gt;&lt;h3&gt;&lt;strong&gt;ಡಿಕೆಶಿ ವಿರುದ್ಧ ಘೋಷಣೆ ವಿಚಾರ:&lt;/strong&gt;&lt;/h3&gt;&lt;p&gt;ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕೆಲವರು ಘೋಷಣೆ ಕೂಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಸಂತೋಷ್ ಲಾಡ್ ನಿರಾಕರಿಸಿದರು. 'ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸಾರ್ವಜನಿಕ ಜೀವನದಲ್ಲಿ ಅಥವಾ ಪಕ್ಷದ ಒಳಗಡೆ ಇಂತಹ ಸಣ್ಣಪುಟ್ಟ ವಿಷಯಗಳು ಬಂದಾಗ ಪಕ್ಷದ ಹೈಕಮಾಂಡ್ ಅದನ್ನು ಗಮನಿಸುತ್ತದೆ ಮತ್ತು ಸರಿಪಡಿಸುತ್ತದೆ' ಎಂದು ಅವರು ಚುಟುಕಾಗಿ ಉತ್ತರಿಸಿದರು.&lt;/p&gt;&lt;h3&gt;&lt;strong&gt;ಶೆಲ್ ಪೆಟ್ರೋಲ್ ಬಂಕ್&zwnj;ಗಳಲ್ಲಿ ದರ ಕಡಿತಕ್ಕೆ ಸೂಚನೆ-ಮುನಿಯಪ್ಪ&lt;/strong&gt;&lt;/h3&gt;&lt;p&gt;ಬಾಗಲಕೋಟೆಯಲ್ಲಿ ಉಪಚುನಾವಣಾ ಪ್ರಚಾರಕ್ಕೆ ಬಂದ ವೇಳೆ ಮಾಧ್ಯಮಗಳೊಂದಿಗೆ ರಾಜ್ಯದಲ್ಲಿನ ಗ್ಯಾಸ್ ಸಮಸ್ಯೆ ವಿಚಾರದ ಬಗ್ಗೆ ಮಾತನಾಡಿದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಜನರು ಸುಮ್ಮನೆ ಆತಂಕಪಡುತ್ತಿದ್ದಾರೆ. ನಮ್ಮ ಬಳಿ ಪ್ರತಿನಿತ್ಯ 3000 ಆಟೋ ಗ್ಯಾಸ್ ತಗೊಳ್ತಾಯಿದ್ದರು. ಅಷ್ಟು ವ್ಯವಸ್ಥೆಯನ್ನು ಮಾಡಿದ್ದೀವಿ. ಅದರದ್ದೇನು ಪ್ರಾಬ್ಲಮ್ ಇಲ್ಲ. ಆದರೆ, ಯಾರು ಈ ಗೌರ್ನಮೆಂಟ್ ಕಂಪನಿಗಳು ಬಿಟ್ಟು ಪ್ರೈವೇಟ್ ಕಂಪನಿಗಳ ಹತ್ರ ಹೋಗ್ತಾ ಇದ್ದಾರೆ, ಹೀಗಾಗಿ ಪ್ರೈವೇಟ್ ಕಂಪನಿಯವರು ರೇಟ್ ಜಾಸ್ತಿ ಮಾಡಿದ್ದಾರೆ. ಹೀಗಾಗಿ ಜನರು ಅಲ್ಲಿ ಬಿಟ್ಟು ಇಲ್ಲಿ ಬರುತ್ತಿದ್ದಾರೆ. ಅದು ಆತಂಕ ಇರೋದು ಎಂದರು.&amp;nbsp;&lt;/p&gt;&lt;p&gt;ಈ ಬಗ್ಗೆ ಪ್ರೈವೇಟ್ ಕಂಪನಿವರೆಗೂ ಕೂಡ ಹೇಳ್ತಾ ಇದ್ದೇವೆ. ಇಂತಹ ಕಷ್ಟ ಪರಿಸ್ಥಿತಿಯಲ್ಲಿ ಗೌರ್ನಮೆಂಟ್ ಏನ್ ರೇಟ್ ಕೊಡುತ್ತೋ ಅದೇ ರೀತಿ ಕೊಡಬೇಕು. ಕೇಂದ್ರದ ಮಂತ್ರಿಗಳಿಗೂ ಕೂಡ ಮಾತನಾಡಿದ್ದೇನೆ, ಈ ಬಗ್ಗೆ ಲೆಟರ್ ಕೂಡ ಬರೆದಿದ್ದೇನೆ. ಏನು ಖಾಸಗಿ ಕಂಪನಿಗಳಿವೆ ಅವು ಸಹ ಇದೇ ರೀತಿ ಮಾಡಬೇಕು. ಸರ್ಕಾರ ಕೊಡೋ ರೇಟ್ ಗೆ ಕೊಡಬೇಕು. ಆತಂಕವನ್ನೂ ಮಾಡಕೂಡದು, ಹೆಚ್ಚಿಗೆ ಸಹ ಮಾಡಕೂಡದು. ಹೆಚ್ಚಿಗೆ ಮಾಡಿದ್ರೆ ಕಾನೂನು ಕ್ರಮ ಜರುಗಿಸುತ್ತೇವೆ. ಜೊತೆಗೆ ಶೆಲ್ ಪೆಟ್ರೋಲ್ ಬಂಕ್ ಗಳಲ್ಲಿನ ದರ ಕಡಿಮೆ ಮಾಡಬೇಕು ಅಂತ ಸರ್ಕಾರಕ್ಕೆ ಹೇಳಿದಿನಿ ಎಂದು ಸಚಿವ ಮುನಿಯಪ್ಪ ಮಾಹಿತಿ ನೀಡಿದರು.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/santhosh-lad-dharwad-speech-petrol-diesel-oil-price-hike-central-govt-failure-sat/articleshow-okzx9bp"/>
        </item>
        <item>
            <title><![CDATA[SSLC ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಗ್ರೇಡಿಂಗ್,  ಕೈ ಸರ್ಕಾರಕ್ಕೆ ಜ್ಞಾನದ ಕೊರತೆ: ಹೊರಟ್ಟಿ ಕಿಡಿ]]></title>
            <link>https://kannada.asianetnews.com/state/lack-of-knowledge-basavaraj-horatti-slams-congress-over-hindi-marks-removal-rav/articleshow-pha5h88</link>
            <guid isPermaLink="true">https://kannada.asianetnews.com/state/lack-of-knowledge-basavaraj-horatti-slams-congress-over-hindi-marks-removal-rav/articleshow-pha5h88</guid>
            <pubDate>Tue, 31 Mar 2026 08:26:39 +0530</pubDate>
            <description><![CDATA[&lt;p&gt;ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಅಂಕಗಳ ಬದಲು ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಖಂಡಿಸಿದ್ದಾರೆ. ಈ ನೀತಿಯು ತಜ್ಞರೊಂದಿಗೆ ಚರ್ಚಿಸದೆ ಜಾರಿಗೆ ತಂದಿದ್ದು, &amp;nbsp;ಇದು ಹಿಂದಿ ಸೇರಿದಂತೆ ಇತರೆ ತೃತೀಯ ಭಾಷೆಗಳಿಗೂ ಹೊಡೆತ ಬೀಳಲಿದೆ ಎಂದು ಆಕ್ರೋಶ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk5svbf6f4tfqqayhk4c203f,imgname----------------------90--1772942634470.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಮಾ.31): &lt;/strong&gt;ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಅಂಕ ತೆಗೆದು ಗ್ರೇಡಿಂಗ್&zwnj; ನೀಡುವ ನಿರ್ಣಯ ಕೈಗೊಂಡಿರುವ ರಾಜ್ಯ ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲ. ಈ ನೀತಿ ಕೈಬಿಟ್ಟು ಮೊದಲಿನ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಕಿಡಿಕಾರಿದ್ದಾರೆ.&lt;/p&gt;&lt;p&gt;ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆಗೆ ಗ್ರೇಡ್​ ನೀಡುವ ಶಿಕ್ಷಣ ಇಲಾಖೆಯ ದಿಢೀರ್​ ನಿರ್ಧಾರ ಖಂಡನಾರ್ಹ. ಹಿಂದಿ ಭಾಷೆ ಅಲ್ಲದೇ ಕೆಲವೆಡೆ ತೃತೀಯ ಭಾಷೆಯಾಗಿ ಕನ್ನಡ, ಸಂಸ್ಕೃತ, ಉರ್ದು, ಇಂಗ್ಲಿಷ್, ಮರಾಠಿ ಭಾಷೆಗಳಿವೆ. ಈ ನೀತಿಯಿಂದಾಗಿ ಈ ಎಲ್ಲ ಭಾಷೆಗಳಿಗೂ ಹೊಡೆತ ಬೀಳಲಿದೆ. ಈಗಾಗಲೇ ಶಿಕ್ಷಕರು ಒಂದು ವರ್ಷ ಮಕ್ಕಳಿಗೆ ಹಿಂದಿ ವಿಷಯದಲ್ಲಿ ಪಾಠ ಮಾಡಿದ್ದಾರೆ. ಈಗ ಮಕ್ಕಳ ಪರೀಕ್ಷಾ ಸಮಯದಲ್ಲೇ ತರಾತುರಿಯಲ್ಲಿ ತಜ್ಞರೊಂದಿಗೆ ಚರ್ಚಿಸದೇ ಈ ನಿರ್ಧಾರ ತಗೆದುಕೊಂಡರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;ದ್ವಿಭಾಷಾ ನೀತಿ ಸರಿಯಲ್ಲ:&lt;/h2&gt;&lt;p&gt;ಮಕ್ಕಳ ಕಲಿಕೆಯ ವಿಷಯದಲ್ಲಿ ದ್ವಿಭಾಷಾ ನೀತಿ ಸರಿಯಲ್ಲ. ಆಡಳಿತ ಭಾಷೆ ಮಾಡುವಂತೆ ನಾನು ಒತ್ತಾಯಿಸುವುದಿಲ್ಲ. ಆದರೆ, ಶಾಲಾ-ಕಾಲೇಜುಗಳಲ್ಲಿ ಕಲಿಯುವ ವಿಷಯದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಈಗ ಹಿಂದಿ ಭಾಷೆಗೆ ಅಂಕ ತೆಗೆದು ಗ್ರೇಡ್&zwnj; ನೀಡಿದ್ದಾರೆ. ಮುಂದೆ ಎಲ್ಲ ಭಾಷೆಗಳಿಗೂ ಗ್ರೇಡ್ ಕೇಳುತ್ತಾರೆ. ನೀಡಲು ಆಗುತ್ತದೆಯೇ ಎಂದು ಹೊರಟ್ಟಿ ಪ್ರಶ್ನಿಸಿದರು.&lt;/p&gt;&lt;p&gt;1960ರಿಂದ ಬಂದ ಪದ್ಧತಿ ಬದಲಿಸುತ್ತಿರುವುದು ಸರಿಯಲ್ಲ. ಬೇರೆ ರಾಜ್ಯಗಳಲ್ಲಿ ಇಂಗ್ಲಿಷ್&zwnj; ಹೊರತುಪಡಿಸಿದರೆ ಹಿಂದಿ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಾರೆ. ಹಾಗಾಗಿ ಈ ನಿರ್ಣಯ ಕೈಬಿಟ್ಟು ಮೊದಲಿನ ಪದ್ಧತಿ ಮುಂದುವರಿಸಿಕೊಂಡು ಹೋಗುವಂತೆ ಮುಖ್ಯಮಂತ್ರಿಗೆ ಒತ್ತಾಯಿಸುವೆ. ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಕಾರ್ಯದರ್ಶಿಗಳೊಂದಿಗೆ ಮಾತನಾಡಿರುವೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೊರಟ್ಟಿ ತಿಳಿಸಿದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/lack-of-knowledge-basavaraj-horatti-slams-congress-over-hindi-marks-removal-rav/articleshow-pha5h88"/>
        </item>
        <item>
            <title><![CDATA[ಹುಬ್ಬಳ್ಳಿಯ ಮತ್ತೊಬ್ಬ ಜಿಮ್ ಟ್ರೈನರ್ ಮುಫೀಸ್‌ನಿಂದ 'ಲವ್ ಜಿಹಾದ್': ಕಾಂಗ್ರೆಸ್ ಮುಖಂಡನ ನಂಟು ಬಿಚ್ಚಿಟ್ಟ ಸಂತ್ರಸ್ತೆ]]></title>
            <link>https://kannada.asianetnews.com/karnataka-districts/karnataka-hubballi-love-jihad-gym-trainer-mufisa-case-victim-video-scandal-sat/articleshow-qok5smz</link>
            <guid isPermaLink="true">https://kannada.asianetnews.com/karnataka-districts/karnataka-hubballi-love-jihad-gym-trainer-mufisa-case-victim-video-scandal-sat/articleshow-qok5smz</guid>
            <pubDate>Mon, 06 Apr 2026 14:56:56 +0530</pubDate>
            <description><![CDATA[&lt;p&gt;ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ, ಜಿಮ್ ಟ್ರೈನರ್ ಮುಫೀಸ್ ಮೀಯನ್ನವರ್ ಎಂಬಾತ ಹಿಂದೂ ಯುವತಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ, ಅತ್ಯಾ*ಚಾರ ಎಸಗಿ, ಹಳೆಯ ವಿಡಿಯೋಗಳಿಂದ ಬ್ಲ್ಯಾಕ್&zwnj;ಮೇಲ್ ಮಾಡುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆ ವಿಡಿಯೋ ಮೂಲಕ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knh1t92ak4am3c0zh6wq8977,imgname-hubballi-love-jihad--1--1775467570250.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಏ.06): ವಾ&lt;/strong&gt;ಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಆಘಾತಕಾರಿ 'ಲವ್ ಜಿಹಾದ್' ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣ ಬೆಳಕಿಗೆ ಬಂದಿದೆ. ಜಿಮ್ ಟ್ರೈನರ್ ಮುಫೀಸ್ ಮೀಯನ್ನವರ್ ಎಂಬಾತ ಹಿಂದೂ ಯುವತಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ, &amp;nbsp;ಎಸಗಿ, ಈಗ ಹಳೆಯ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್&zwnj;ಮೇಲ್ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;p&gt;&lt;strong&gt;ಹಳೆಯ ವಿಡಿಯೋ ಬಿಡುಗಡೆ: ಸಂತ್ರಸ್ತೆಯ ಕಣ್ಣೀರು&lt;/strong&gt;&lt;/p&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಸಹನಾ ಸ್ವತಃ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 'ನಾನು ಮುಫೀಸ್ ಜೊತೆ ಸಂಪರ್ಕದಲ್ಲಿದ್ದಾಗ ಆತ ಒತ್ತಾಯಪೂರ್ವಕವಾಗಿ ನನ್ನಿಂದ ವಿಡಿಯೋ ಮಾಡಿಸಿದ್ದನು. ಈಗ ಆ ವಿಡಿಯೋವನ್ನು ಕಾಂಗ್ರೆಸ್&zwnj;ನ ಕೆಲವು ಯುವ ಮುಖಂಡರು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಮುಫೀಸ್ ನನ್ನನ್ನು ರಿಜಿಸ್ಟರ್ ಮದುವೆಯಾಗಲು ಒತ್ತಾಯಿಸುತ್ತಿದ್ದ' ಎಂದು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸಂಘಟನೆಗಳ ಮಧ್ಯಪ್ರವೇಶ ಮತ್ತು ಜಾಗೃತಿ&lt;/strong&gt;&lt;/h2&gt;&lt;p&gt;ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಈ ಹಿಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕೆಯ ಮನೆಗೆ ಭೇಟಿ ನೀಡಿ ಮುಫೀಸ್&zwnj;ನ ಹಿನ್ನೆಲೆ ಮತ್ತು ಆತನ ನೈಜ ಉದ್ದೇಶದ ಬಗ್ಗೆ ಎಚ್ಚರಿಸಿದ್ದರು. ಈ ಸಮಯದಲ್ಲಿ ಮುಫೀಸ್ ಸಂತ್ರಸ್ತೆಯ ಮೇಲೆ ಒತ್ತಡ ಹೇರಿ, ಆಕೆಯ ಕುಟುಂಬದ ವಿರುದ್ಧವೇ ವಿಡಿಯೋ ಹೇಳಿಕೆ ನೀಡುವಂತೆ ಮಾಡಿದ್ದ ಎನ್ನಲಾಗಿದೆ. ಈಗ ಅದೇ ಹಳೆಯ ವಿಡಿಯೋಗಳನ್ನು ಆತನ ಪರವಾಗಿರುವ ರಾಜಕೀಯ ಮುಖಂಡರು ಹಂಚಿಕೊಳ್ಳುತ್ತಿದ್ದಾರೆ ಎಂಬುದು ಸಂತ್ರಸ್ತೆಯ ಗಂಭೀರ ದೂರು ಆಗಿದೆ.&lt;/p&gt;&lt;h3&gt;&lt;strong&gt;ರಣರಾಗಿಣಿ ಮಹಿಳಾ ಘಟಕದ ಭೇಟಿ ಮತ್ತು ಆಕ್ರೋಶ&lt;/strong&gt;&lt;/h3&gt;&lt;p&gt;ಪ್ರಕರಣದ ಗಂಭೀರತೆ ಅರಿತ 'ರಣರಾಗಿಣಿ ಮಹಿಳಾ ಘಟಕ'ದ ಪದಾಧಿಕಾರಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಘಟಕದ ಅಧ್ಯಕ್ಷೆ ಭವ್ಯಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, 'ಇದು ಇಡೀ ಸ್ತ್ರೀ ಕುಲಕ್ಕೆ ಆದ ಅವಮಾನ. ಆರೋಪಿ ಮುಫೀಸ್ ಹೆಣ್ಣುಮಕ್ಕಳನ್ನು ಭೋಗದ ವಸ್ತುವಿನಂತೆ ಕಾಣುತ್ತಿದ್ದಾನೆ. ಈತನ ಹಿಂದೆ ದೊಡ್ಡ ಜಾಲವೇ ಇದೆ' ಎಂದು ಆರೋಪಿಸಿದರು. 'ಶಾಹಿನ್ ಗ್ಯಾಂಗ್ ರಾಜ್ಯದಲ್ಲಿ ಬೇರು ಬಿಟ್ಟಿದೆ. ಹಿಂದೂ ಹೆಣ್ಣುಮಕ್ಕಳನ್ನು ಮುಸ್ಲಿಂ ಯುವಕರೊಂದಿಗೆ ಸ್ನೇಹ ಬೆಳೆಸುವಂತೆ ಪ್ರೇರೇಪಿಸಲು ಮುಸ್ಲಿಂ ಯುವತಿಯರಿಗೆ ಹಣ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಆರೋಪಿ ಸಮೀರ್ ಅಕ್ಕನ ಪಾತ್ರವೂ ದೊಡ್ಡದಿದೆ, ಆಕೆಯನ್ನು ಮೊದಲು ಬಂಧಿಸಬೇಕು' ಎಂದು ರಣರಾಗಿಣಿ ಮಹಿಳಾ ಸಂಘಟನೆ ಅಧ್ಯಕ್ಷೆ ಭವ್ಯಗೌಡ ತಿಳಿಸಿದರು.&lt;/p&gt;&lt;h3&gt;&lt;strong&gt;ಯುವತಿ ಹಾಗೂ ಮಹಿಳಾ ಸಂಘಟನೆ ಪ್ರಮುಖ ಬೇಡಿಕೆಗಳು&lt;/strong&gt;&lt;/h3&gt;&lt;ul&gt; &lt;li&gt;&lt;strong&gt;ಬಂಧನ:&lt;/strong&gt; ಆರೋಪಿ ಮುಫೀಸ್ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಆತನ ಅಕ್ಕನನ್ನು ತಕ್ಷಣವೇ ಬಂಧಿಸಬೇಕು.&lt;/li&gt; &lt;li&gt;&lt;strong&gt;ಫಾಸ್ಟ್ ಟ್ರ್ಯಾಕ್ ಕೋರ್ಟ್&lt;/strong&gt;: ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಿ ಶೀಘ್ರವಾಗಿ ಶಿಕ್ಷೆ ವಿಧಿಸಬೇಕು.&lt;/li&gt; &lt;li&gt;&lt;strong&gt;ಬೆದರಿಕೆ ಕರೆಗಳು&lt;/strong&gt;: ದೂರು ನೀಡಿದ ನಂತರವೂ ಸಂತ್ರಸ್ತೆಗೆ ಬೆದರಿಕೆ ಕರೆಗಳು ಬರುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು.&lt;/li&gt;&lt;/ul&gt;&lt;p&gt;ಸದ್ಯ ಸಂತ್ರಸ್ತೆ ಮುಫೀಸ್ ವಿರುದ್ಧ ಅತ್ಯಾ*ಚಾರ ಮತ್ತು ವಂಚನೆಯ ದೂರು ದಾಖಲಿಸಿದ್ದು, ಹುಬ್ಬಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರಾಜ್ಯಾದ್ಯಂತ ವಕೀಲರ ಸಮೂಹ ಸಂತ್ರಸ್ತೆಯ ಕುಟುಂಬಕ್ಕೆ ಕಾನೂನು ನೆರವು ನೀಡಲು ಮುಂದೆ ಬಂದಿದೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-hubballi-love-jihad-gym-trainer-mufisa-case-victim-video-scandal-sat/articleshow-qok5smz"/>
        </item>
        <item>
            <title><![CDATA[Love Jihadಗೆ ಹೊಸ ರೂಪ ಕೊಟ್ಟ ಸಮೀರ್ ಫ್ಯಾಮಿಲಿ! ಡೌಟೇ ಬರದಂತೆ ಮನೆಯಲ್ಲಿ ಹಿಂದೂ ದೇವರ ಪೂಜೆ]]></title>
            <link>https://kannada.asianetnews.com/relationship/hubballi-love-jihad-case-sameer-family-worships-hindu-gods-suc/articleshow-qzy2t5f</link>
            <guid isPermaLink="true">https://kannada.asianetnews.com/relationship/hubballi-love-jihad-case-sameer-family-worships-hindu-gods-suc/articleshow-qzy2t5f</guid>
            <pubDate>Sun, 05 Apr 2026 20:10:18 +0530</pubDate>
            <description><![CDATA[ಹುಬ್ಬಳ್ಳಿ ಜಿಮ್ ಓನರ್ ಸಮೀರ್ ಮುಲ್ಲಾ, ಹಿಂದೂ ಯುವತಿಯರನ್ನು ಪ್ರೀತಿಯ ನಾಟಕವಾಡಿ ವಂಚಿಸುತ್ತಿದ್ದ ಪ್ರಕರಣ ಬಯಲಾಗಿದೆ. ಆತನ ಮೊಬೈಲ್​ನಲ್ಲಿ ಯುವತಿಯರ ಫೋಟೋಗಳು ಪತ್ತೆಯಾಗಿದ್ದು, ಇದೇ ವೇಳೆ ಆತನ ಸಹಚರನ ಮೇಲೂ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಈ ಪ್ರಕರಣಗಳು ಕರ್ನಾಟಕದಲ್ಲಿ 'ದಿ ಕೇರಳ ಸ್ಟೋರಿ'ಯ ವಾಸ್ತವತೆಯನ್ನು ನೆನಪಿಸುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knf194py8n66h1qwbvxctwta,imgname-love-jihad-sameer-1775399899870.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿಯ ಜಿಮ್​ ಓನರ್​ ಸಮೀರ್​ ಮುಲ್ಲಾನ ಕಾ*ಮಕಾಂಡಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಇದಾಗಲೇ ಆತನನ್ನು ನಂಬಿ ಹಲವಾರು ಬಾರಿ ಗರ್ಭಪಾತ ಮಾಡಿಸಿಕೊಂಡ ಯುವತಿಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇಂಥ ಸಮೀರ್​ಗಳು ಅದೆಷ್ಟು ಮಂದಿ ಅಡಗಿಕುಳಿತಿದ್ದಾರೋ ಎನ್ನುವ ಬಗ್ಗೆ ಕರ್ನಾಟಕದ ಪೊಲೀಸರು ತನಿಖೆ ಮಾಡಬೇಕಿದೆಯಷ್ಟೇ. ಎಲ್ಲರಂತಲ್ಲ ನನ್ನ ಸಮೀರಾ ಎಂದು ತುಂಡುಡುಗೆ ತೊಟ್ಟು ಆತನ ಜೊತೆ ಈಜುಕೊಳದಲ್ಲಿ, ಅಕ್ಕ-ಪಕ್ಕ ನಿಂತು. ಇನ್ನೆಲ್ಲೋ ನಿಂತು ಫೋಟೋಗೇ ಪೋಸ್​ ಕೊಟ್ಟ ಹಿಂದೂ ಹುಡುಗಿಯರು ಆತನ ಮೊಬೈಲ್​ ಫೋನ್​ನಲ್ಲಿ ಸ್ಟೋರ್​ ಆಗಿ ನಿಂತಿವೆ. ಇವೆಲ್ಲವೂ ಈಗ ಬಹಿರಂಗಗೊಂಡಿದೆ. ಎಲ್ಲರ ಬಾಯಲ್ಲೂ ಒಂದೇ ಮಾತು. ನನ್ನ ಸ್ನೇಹಿತೆ ಮೂಲಕ ಈತನ ಪರಿಚಯವಾಯ್ತು, ಪರಿಚಯ ಪ್ರೀತಿಗೆ ತಿರುಗಿತು ಎನ್ನೋದು. ದಿ ಕೇರಳ ಸ್ಟೋರಿ ಎಲ್ಲಾ ಅಂತೆ ಕಂತೆಗಳು ಎಂದವರೇ ಈಗ ಖುದ್ದು ನಮ್ಮದೇ ಕರ್ನಾಟಕದಲ್ಲಿ, ಈ ರೀತಿ ಆಗ್ತಿರೋದನ್ನು ನೋಡಿ ಬೆಚ್ಚಿ ಬೀಳುವಂತಾಗಿದೆ.&lt;/p&gt;&lt;h2&gt;&lt;strong&gt;ಸುಲಭದಲ್ಲಿ ಬಲೆ ಬೀಳೋ ಹಿಂದೂ ಯುವತಿಯರು!&lt;/strong&gt;&lt;/h2&gt;&lt;p&gt;ನೋಡಲು ಸ್ಮಾರ್ಟ್​ ಲುಕ್​, ದುಬಾರಿ ಬೈಕೋ, ದುಬಾರಿ ಕಾರೋ, ದುಬಾರಿ ವಾಚೋ, ಬಾಲಿವುಡ್​ ಸ್ಟಾರ್​​ಗಳ ರೀತಿಯಲ್ಲಿ ಹೇರ್​ಸ್ಟೈಲ್​ ಮಾಡಿಕೊಂಡೋ, ಬಟ್ಟೆ ಧರಿಸಿಕೊಂಡೋ ಬಂದು ನಿಂತುಬಿಟ್ಟರೆ ಸಾಕು ಅಂಥವರ ಬಲೆಗೆ ಸುಲಭದಲ್ಲಿ ಹಿಂದೂ ಯುವತಿಯರು ಬೀಳುತ್ತಿರುವುದು ದೊಡ್ಡ ದುರಂತ ಎಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅದೇನೇ ಇರಲಿ. ಇದೀಗ ಈ ಸಮೀರನ ಫ್ಯಾಮಿಲಿಯ ಮತ್ತೊಂದು ಭಯಾನಕ ಕೃತ್ಯ ಬಯಲಿಗೆ ಬಂದಿದೆ. ಯಾವುದೇ ಕಾರಣಕ್ಕೂ ಇದು ಲವ್ ಜಿಹಾದ್​ ಅಲ್ಲ, ನಮ್ಮದು ಸಾಮರಸ್ಯದ ಫ್ಯಾಮಿಲಿ ಎಂದುಕೊಳ್ಳಲಿ ಎನ್ನುವ ಕಾರಣಕ್ಕೋ ಏನೋ, ಮನೆಯಲ್ಲಿ ಹಿಂದೂ ದೇವರ ಪೂಜೆ ಮಾಡ್ತೇವೆ. ನಮಗೆ ಎಲ್ಲಾ ದೇವರೂ ಒಂದೇ ಅಂತಿದೆ ಈ ಫ್ಯಾಮಿಲಿ. ಮನೆಯಲ್ಲಿಯೂ ಹಿಂದೂ ದೇವರ ಫೋಟೋ ಇದೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಹಿಂದೂ ಹಬ್ಬಗಳಲ್ಲಿ ಭಾಗಿ&lt;/strong&gt;&lt;/h3&gt;&lt;p&gt;ಅಷ್ಟೇ ಅಲ್ಲದೇ ಈ ಸಮೀರ ಹಿಂದೂ ಹಬ್ಬಗಳಲ್ಲಿ ಭಾಗಿಯಾಗಿರುವ ಫೋಟೋಗಳು ಇವೆ. ನಾನು ಹೆಣ್ಣುಮಕ್ಕಳ ರಕ್ಷಣೆ ಮಾಡ್ತಿರೋದೇ ತಪ್ಪಾಯ್ತು, ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸ್ತಾ ಇದ್ದಾರೆ. ನೋಡಿ ನನ್ನ ಮೊಬೈಲ್​ನಲ್ಲಿ ಯಾವುದೇ ವಿಡಿಯೋಗಳು ಇಲ್ಲ, ಇನ್ನೆಲ್ಲಿ ಲೀಕ್​ ಮಾಡೋದು ಎಂದು ಅಮಾಯಕನಂತೆ ಲೈವ್​ನಲ್ಲಿ ಬಂದು ಕೇಳಿದ್ದಾನೆ ಸಮೀರ. ಆದರೆ ಡಿಲೀಟೆಡ್​ ವಿಡಿಯೋಗಳು ರಿಕವರಿ ಮಾಡಿಕೊಳ್ಳಬಹುದು ಎಂದು ಆತನಿಗೆ ಅರಿವಿಗೆ ಬಂದಿರಲಿಕ್ಕಿಲ್ಲ. ಅಥವಾ ಬಣ್ಣ ಬಣ್ಣದ ಮಾತನ್ನಾಡಿ ಹಿಂದೂ ಯುವತಿಯರನ್ನು ಸುಲಭದಲ್ಲಿ ಮರಳು ಮಾಡುವಷ್ಟು ಸುಲಭ ಇಂಥ ಮಾತು ಅಂದುಕೊಂಡಿದ್ದನೋ ಏನೋ. ಒಟ್ಟಿನಲ್ಲಿ ಕರ್ನಾಟದಲ್ಲಿ ಈ ಕೇಸ್​ ಯಾವ ರೀತಿಯ ತನಿಖೆ ಆಗುತ್ತದೆ ಎನ್ನುವುದು ಇನ್ನಷ್ಟಾ ಕಾದು ನೋಡಬೇಕಿದೆ.&lt;/p&gt;&lt;h3&gt;&lt;strong&gt;ಇನ್ನೊಂದು ಪ್ರಕರಣ ಬೆಳಕಿಗೆ...&lt;/strong&gt;&lt;/h3&gt;&lt;p&gt;ಅದೇ ಇನ್ನೊಂದೆಡೆ, ಸಮೀರನ ಬಣ್ಣ ಬಯಲಾಗುತ್ತಿದ್ದಂತೆಯೇ ಬೇರೆ ಬೇರೆ ಕೇಸ್​ಗಳೂ ಓಪನ್​ ಆಗುತ್ತಿವೆ. ಇದಾಗಲೇ ಇನ್ನೊಂದು ಲವ್​ ಜಿಹಾದ್​ (Love Jihad) ಪ್ರಕರಣ ಬೆಳಕಿಗೆ ಬಂದಿದೆ. ಮುಫೀಸ್ ಮಿಯಾನ್ನಾವರ್ ಎಂಬಾತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆತನ ಮೇಲೆ ಯುವತಿ ದೂರು ದಾಖಲು ಮಾಡಿದ್ದಾಳೆ. ಈತ ಕೂಡ ಸಮೀರ್​ನ ಜಿಮ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಇನ್ನಷ್ಟೇ ವಿವರ ಬಹಿರಂಗಗೊಳ್ಳಬೇಕಿದೆ. ಯುವತಿ ಹೇಳಿರುವ ಪ್ರಕಾರ, ಈತ ತನ್ನನ್ನು ಪ್ರೀತಿಸುವುದಾಗಿ ಹೇಳಿದ್ದ. ಆಮೇಲೆ ಅದು ನಾಟಕ ಎನ್ನುವುದು ಗೊತ್ತಾಯಿತು. ಈತ ಪ್ರೀತಿಸಿರುವುದಾಗಿ ನಂಬಿಕ ರೇ*ಪ್​ ಮಾಡಿದ್ದಾನೆ ಎಂದಿದ್ದಾಳೆ. ಸ್ನೇಹಿತೆಯೊಬ್ಬಳು ಈತನನ್ನು ಪರಿಚಯ ಮಾಡಿಸಿದ್ಲು. ಅಲ್ಲಿಂದ ಲವ್​ ಶುರುವಾಯ್ತು. ಆಮೇಲೆ ಪ್ರೀತಿ ಮಾಡ್ತೇನೆ ಎಂದಿದ್ದ. ನಾನೂ ನಂಬಿದ್ದೆ ಎಂದಿದ್ದಾಳೆ ಯುವತಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dharwad</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/hubballi-love-jihad-case-sameer-family-worships-hindu-gods-suc/articleshow-qzy2t5f"/>
        </item>
        <item>
            <title><![CDATA[ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ]]></title>
            <link>https://kannada.asianetnews.com/gallery/dharwad/pramod-muthalik-visits-love-jihad-victim-home-threatens-hubballi-bandh-titnszt</link>
            <guid isPermaLink="true">https://kannada.asianetnews.com/gallery/dharwad/pramod-muthalik-visits-love-jihad-victim-home-threatens-hubballi-bandh-titnszt</guid>
            <pubDate>Sat, 04 Apr 2026 20:35:14 +0530</pubDate>
            <description><![CDATA[&lt;p&gt;ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ, ಜಿಮ್&zwj;&zwnj;ಗೆ ಬರುತ್ತಿದ್ದ ಹಿಂದೂ ಹುಡುಗಿಯರ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಮೀರ್ ಮುಲ್ಲಾ ಪ್ರಕರಣ ಕುರಿತು ಮುತಾಲಿಕ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kncfw8q3688w8wb1vpb29ydn,imgname-hubballi-case-pramod-muthalik-1775314543324.png" type="image/jpeg" height="390" width="690"/>
            <content:encoded><![CDATA[&lt;p&gt;ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ, ಜಿಮ್&zwj;&zwnj;ಗೆ ಬರುತ್ತಿದ್ದ ಹಿಂದೂ ಹುಡುಗಿಯರ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಮೀರ್ ಮುಲ್ಲಾ ಪ್ರಕರಣ ಕುರಿತು ಮುತಾಲಿಕ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಹುಬ್ಬಳ್ಳಿ ಜಿಮ್ ಟ್ರೇನರ್ ಸಮೀರ್ ಮುಲ್ಲಾ ಲವ್ ಜಿಹಾದ್ ಪ್ರಕರಣ ಹಿಂದೂ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಏಳರಿಂದ ಎಂಟು ಹಿಂದೂ ಹುಡುಗಿರಿಯನ್ನು ಲೈಂಗಿಕವಾಗಿ ಬಳಿಸಿಕೊಂಡು ಬಳಿಕ ಗರ್ಭಪಾತ ಮಾತ್ರೆ ನೀಡುತ್ತಿದ್ದ ಆರೋಪಿ ಸಮೀರ್ ಮುಲ್ಲಾ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಸಂತ್ರಸ್ತೆ ಮನೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ಸಮೀರ್ ಮುಲ್ಲಾ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವ ಬದಲು ಸಮೀರ್ ಮುಲ್ಲಾನನ್ನು ಹಿಡಿದುಕೊಟ್ಟ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸಮೀರ್ ಮುಲ್ಲಾ ಹಾಗೂ ಆತನ ಸಹೋದರಿಯನ್ನು ಅರೆಸ್ಟ್ ಮಾಡಬೇಕು. ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯಬೇಕು. ಇಲ್ಲದಿದ್ದರೆ ಹುಬ್ಬಳ್ಳಿ ಬಂದ್&zwnj;ಗೆ ಕರೆ ನೀಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.&lt;/p&gt;&lt;img&gt;&lt;p&gt;ಸಂತ್ರಸ್ತೆ ಮನೆಯವರ ಜೊತೆ ಮಾತನಾಡಿದ ಬಳಿಕ ಮಾಧ್ಯಮಕ್ಕೆ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಭಯಾನಕ ಲವ್ ಜಿಹಾದ್ ಕೇಸ್ ಬೆಳಕಿಗೆ ಬಂದಿದೆ. ಜಿಮ್&zwnj;ಗೆ ಬರುವ ಹಿಂದೂ ಯುವತಿಯರನ್ನು ಪುಸಲಾಯಿಸಿದ್ದಾನೆ. ಮತ್ತು ಬರೋ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಎಳೆಂಟು ಹುಡುಗಿಯರ ಜೊತೆ ಹೀಗೆ ಮಾಡಿದ್ದಾನೆ. ಬಳಿಕ ಲೈವ್ ಆಗಿ ಗರ್ಭಪಾತ ಮಾತ್ರೆ ತೆಗೆದುಕೊಳ್ಳಲು ಬೆದರಿಸಿದ್ದಾನೆ ಎಂದು ಮುತಾಲಿಕ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಆರೋಪಿ ಸಮೀರ್ ಮುಲ್ಲಾಪ್ರಕರಣ ಗೊತ್ತಾಗುತ್ತಿದ್ದಂತೆ ನಮ್ಮ ಕಾರ್ಯಕರ್ತರು ಅವರ ಮನೆಗೆ ಹೋಗಿದ್ದರು. ಪ್ರಮುಖವಾಗಿ ಮೊಬೈಲ್ ಪಡೆಯಲು ಹೋಗಿದ್ದರು. ಯಾಕಾಂದ್ರೆ ಎಲ್ಲಾ ಸಾಕ್ಷಿ ನಾಶ ಮಾಡಿದ್ರೆ ಪೊಲೀಸರು ಸುಳ್ಳು ಅಂತಾರೆ. ಹೀಗಾಗಿ ಮೊಬೈಲ್ ಪಡೆಯಲು ಆತನ ಮನೆಗೆ ಹೋಗಿದ್ದರು. ನಮ್ಮವರು ಆತನನ್ನು ಹಿಡಿದು ತಂದು ಪೊಲೀಸರಿಗೊಪ್ಪಿಸಿದ್ದಾರೆ. ನಮ್ಮ ಕಾರ್ಯಕರ್ತರು ಸರಿಯಾಗಿಯೇ ನಡೆದುಕೊಂಡಿದ್ದಾರೆ ಎಂದು ಮುತಾಲಿಕ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಇಂತಹ ಪ್ರಕರಣಗಳಿಗೆ ಮುಲ್ಲಾ ಮೌಲ್ವಿಗಳು ಸಪೋರ್ಟ್ ಮಾಡುತ್ತಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.ಆದರೆ ಪೊಲೀಸರು ಆರೋಪಿಯನ್ನು ಹಿಡಿದುಕೊಟ್ಟವರ ಮೇಲೆ ಕೇಸ್ ಹಾಕುತ್ತಾರೆ. ನಮ್ಮ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ. ಕೂಡಲೇ ಕೇಸ್ ವಾಪಸ ಪಡೆಯಬೇಕು. ಈ ಹಗರಣ ಸಂಪೂರ್ಣ ಬಯಲಾಗಬೇಕು ಎಂದಿದ್ದಾರೆ.&lt;/p&gt;&lt;img&gt;&lt;p&gt;ಕಾಂಗ್ರೆಸ್ ನಾಯಕರ ಮಾತು ಕೇಳಿ ಪ್ರಕರಣ ದಾರಿತಪ್ಪಿಸಬಾರದು. ಗೃಹ ಸಚಿವರು ಜಿಮ್ ಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಮೀರ್ ಮುಲ್ಲಾನನ್ನು ಬಂಧಿಸಬೇಕು. ಆತನ ಸಹೋದರಿಯನ್ನು ಕೂಡಾ ಬಂಧಿಸಬೇಕು. ಯುವತಿ ಮನೆಗೆ ಬಂದು ದಾಂದಲೆ ಮಾಡ್ತಾರೆ ಅಂದ್ರೆ ಎಷ್ಟು ಸೊಕ್ಕು ಅವರಿಗೆ. ಅವರು ನಡೆಸುತ್ತಿದ್ದ ಜಿಮ್ ನ್ನು ಬಂದ್ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಕಾಂಗ್ರೆಸ್ ನಾಯಕರ ಮಾತು ಕೇಳಿ ಪ್ರಕರಣ ದಾರಿತಪ್ಪಿಸಬಾರದು&lt;/h2&gt;]]></content:encoded>
            <category>dharwad</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/dharwad/pramod-muthalik-visits-love-jihad-victim-home-threatens-hubballi-bandh-titnszt"/>
        </item>
        <item>
            <title><![CDATA[ಆತ್ಮೀಯವಾಗಿದ್ದ ಹಿಂದೂ ಕುಟುಂಬದ ಯುವತಿ ಜೊತೆಗೆ ಜಿಮ್ ಟ್ರೈನರ್ ಲವ್‌ಜಿಹಾದ್  ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಗಲಾಟೆ!]]></title>
            <link>https://kannada.asianetnews.com/karnataka-districts/hubballi-tension-over-love-jihad-allegation-clash-between-two-families-several-injured-gdp/articleshow-vhiv41w</link>
            <guid isPermaLink="true">https://kannada.asianetnews.com/karnataka-districts/hubballi-tension-over-love-jihad-allegation-clash-between-two-families-several-injured-gdp/articleshow-vhiv41w</guid>
            <pubDate>Fri, 03 Apr 2026 13:23:32 +0530</pubDate>
            <description><![CDATA[ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ಪ್ರೇಮ ಪ್ರಕರಣವು ಲವ್ ಜಿಹಾದ್ ಆರೋಪಕ್ಕೆ ತಿರುಗಿದೆ. ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದು, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn91svqgztd5n4787p2n4pk9,imgname-hubballi-love-jihad-case-1775199121136.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ನಗರದಲ್ಲಿ ಲವ್ ಜಿಹಾದ್ ಆರೋಪದ ಕೇಳಿಬಂದಿದ್ದು, ಎರಡೂ ಕಡೆಯವರಿಂದ ಗಲಾಟೆಯಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಘಟನೆ ನಡೆದಿದೆ. ಜಿಮ್&zwnj; ಟ್ರೈನರ್ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ಸಂಬಂಧದಿಂದ ಆರಂಭವಾದ ವಿಚಾರ ಎರಡು ಕುಟುಂಬಗಳ ನಡುವೆ ಗಲಾಟೆಗೆ ಕಾರಣವಾಗಿ, ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ವಿಕಾಸ್ ನಗರದಲ್ಲಿ ವಾಸವಾಗಿರುವ ಹಿಂದೂ ಯುವತಿ ಹಾಗೂ ವಿಜಯನಗರ ನಿವಾಸಿಯಾದ ಮುಸ್ಲಿಂ ಯುವಕ ಸಮೀರ್ ನಡುವೆ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ. ಈ ಪರಿಚಯ ಜಿಮ್&zwnj;ನಲ್ಲಿ ಆರಂಭವಾಗಿ ನಂತರ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು.&lt;/p&gt;&lt;h2&gt;ವಿಚಾರ ತಿಳಿದು ಮಧ್ಯಪ್ರವೇಶ&lt;/h2&gt;&lt;p&gt;ಇವರಿಬ್ಬರ ಪ್ರೀತಿಯ ವಿಚಾರದ ಬಗ್ಗೆ ಯುವತಿಯ ಮನೆಯವರಿಗೆ ಮಾಹಿತಿ ಸಿಕ್ಕ ಬಳಿಕ ವಿಷಯ ಗಂಭೀರ ರೂಪ ಪಡೆದುಕೊಂಡಿದೆ. ಇದೇ ವೇಳೆ ವಿಚಾರ ತಿಳಿದ ಹಿಂದೂಪರ ಸಂಘಟನೆಗಳು ಮಧ್ಯಪ್ರವೇಶ ಮಾಡಿ, ಯುವಕ ಸಮೀರ್&zwnj;ನನ್ನು ವಿಚಾರಣೆ ನಡೆಸಿದ ಬಳಿಕ ಹಳೆ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬೆಳವಣಿಗೆಯಿಂದ ಆಕ್ರೋಶಗೊಂಡ ಯುವಕನ ಕುಟುಂಬಸ್ಥರು, ವಿಕಾಸ್ ನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿದರೆಂದು ಆರೋಪಿಸಲಾಗಿದೆ. ಈ ವೇಳೆ ಯುವತಿಯ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇನ್ನೊಂದೆಡೆ, ಯುವತಿಯ ಮನೆಯವರೂ ಯುವಕನ ಮನೆಗೆ ತೆರಳಿ ಪ್ರಶ್ನಿಸಿ ಗಲಾಟೆ ಮಾಡಿಕೊಂಡಿದ್ದಾರೆ. ಈ ಪರಸ್ಪರ ಗಲಾಟೆಯಲ್ಲಿ ಎರಡೂ ಕಡೆಯವರಿಗೂ ಗಾಯಗಳಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ಪೊಲೀಸರ ಹಸ್ತಕ್ಷೇಪ&lt;/h2&gt;&lt;p&gt;ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಎರಡೂ ಕುಟುಂಬಗಳ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಈ ಕುರಿತು ಮಾತನಾಡಿದ ಆಯುಕ್ತರು, &ldquo;ಯುವತಿ ಮನೆಯವರು ಯುವಕನ ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಯುವಕನ ಮನೆಯವರೂ ಯುವತಿ ಮನೆಗೆ ಹೋಗಿ ಗಲಾಟೆ ನಡೆಸಿದ್ದಾರೆ. ಎರಡೂ ಕಡೆಯವರಿಗೂ ಗಾಯಗಳಾಗಿವೆ. ಸದ್ಯಕ್ಕೆ ಯಾರೂ ಅಧಿಕೃತ ದೂರು ನೀಡಿಲ್ಲ. ಏನೇ ಸಮಸ್ಯೆ ಇದ್ದರೂ ಕಾನೂನು ಮಾರ್ಗವೇ ಅನುಸರಿಸಬೇಕು,&rdquo; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಜಿಮ್ ಟ್ರೈನರ್ ಮೇಲೂ ಆರೋಪ&lt;/h2&gt;&lt;p&gt;ಈ ಪ್ರಕರಣದ ಹಿನ್ನಲೆಯಲ್ಲಿ, ಜಿಮ್&zwnj;ಗಳಲ್ಲಿ ಯುವತಿಯರನ್ನು ಟಾರ್ಗೆಟ್ ಮಾಡಿ ಲವ್ ಜಿಹಾದ್ ನಡೆಸಲಾಗುತ್ತಿದೆ ಎಂದು ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಸಂಬಂಧಿಸಿದ ಜಿಮ್ ಟ್ರೈನರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ನೂರಾರು ಕಾರ್ಯಕರ್ತರು ಠಾಣೆ ಮುಂದೆ ಸೇರಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತರು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಮನಗೊಳಿಸಿದರು.&lt;/p&gt;&lt;h2&gt;ಎರಡೂ ಮನೆಯವರು ಚಿರಪರಿಚಿತರು&lt;/h2&gt;&lt;p&gt;ಪ್ರಕರಣ ಸಂಬಂಧ ಸಮೀರ್ ಸಹೋದರಿ ತೈಸಿಮ್ ಮುಲ್ಲಾ ಪ್ರತಿಕ್ರಿಯೆ ನೀಡಿ, ಆಕೆ ಕಲಬುರ್ಗಿ ಹುಡುಗಿ ಸಮೀರ್ ಎಂಬಾತ ನನ್ನ ತಮ್ಮ. ಇವರಿಬ್ಬರೂ ಮೂರು ವರ್ಷದಿಂದ ರಿಲೇಶನ್ ಶಿಪ್ ನಲ್ಲಿದ್ದಾರೆ. ಎಸ್ ಎಸ್ ಕೆ ಸಮಾಜದವರು ನಮ್ಮ ಮನೆಗೆ ಬಂದು ನನ್ನ ತಮ್ಮನನ್ನ ಕಿಡ್ನ್ಯಾಪ್ ಮಾಡಿದ್ದಾರೆ. ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಅನ್ಯೋನ್ಯವಾಗಿದ್ದರು. ನಾವೆಲ್ಲ ಸೇರಿಯೇ ಪ್ರವಾಸಕ್ಕೆ, ಶಾಪಿಂಗ್ಗೆ ಹೋಗ್ತಿದ್ವಿ . 23 ವರ್ಷದ ನನ್ನ ತಮ್ಮನನ್ನು ಬೆಳಗ್ಗೆ 7 ಗಂಟೆಗೆ ಕಿಡ್ನಾಪ್ ಮಾಡಿದ್ದಾರೆ. ನನ್ನ ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅವನಿಗಾಗಿ ಎಲ್ಲಾ ಕಡೆಗಳಲ್ಲೂ ಹುಡುಕಿದ್ದೇವೆ. ದನದ ಶೇಡ್ಡಿಗೆ ಕರೆದು ನೂರು ಜನರಿಂದ ಹಲ್ಲೆ ಮಾಡಲಾಗಿದೆ. ಅನಂತರ ನಾವು ಹುಡುಗಿಯ ಮನೆಗೆ ಸಹ ಹೋಗಿದ್ವಿ. ಯುವತಿಯ ಮನೆ ಬಳಿ ಗಲಾಟೆ ಆಗಿದೆ. ಯುವತಿಯ ಮನೆಯವರು ಮೊದಲೆಲ್ಲ ನಮ್ಮ ಮನೆಗೆ ಬಂದು ಹೋಗಿದ್ದಾರೆ. ನಮ್ಮ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಹಿನ್ನೆಲೆ ಎಲ್ಲರೂ ಆತಂಕದಲ್ಲಿದ್ದಾರೆ. ಹೀಗಾಗಿ ನಾವು ಯುವತಿಯ ಮನೆಗೂ ಕೂಡ ಹೋಗಿದ್ವಿ. ಎಸ್ ಎಸ್ ಕೆ ಸಮಾಜದವರಿಗೆ ನಮ್ಮ ಅನ್ಯೋನ್ಯತೆ ಬಗ್ಗೆ ಏನು ಗೊತ್ತಿಲ್ಲ. ನಮ್ಮ ತಮ್ಮ ನನ್ನ ಅಪಹರಿಸಿದ ಹಿನ್ನೆಲೆ ನಾವು ಈಗಾಗಲೇ ದೂರು ದಾಖಲಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.&lt;/p&gt;&lt;h2&gt;ಯುವತಿ ತಾಯಿ ಗಂಭೀರ ಆರೋಪ&lt;/h2&gt;&lt;p&gt;ಮಾಧ್ಯಮಗಳೆದರು ಯುವತಿ ತಾಯಿ ರಾಜೇಶ್ವರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೀಮ್ ಟ್ರೈನರ್ ಸಮೀರ್ ನನ್ನ ಮಗಳಿಗೆ ತಲೆ ಕೆಡೆಸಿದ್ದಾನೆ. ಮೂರು ನಾಲ್ಕು ವರ್ಷಗಳಿಂದ ನನ್ ಮಗಳು ಜಿಮ್ ಗೆ ಹೋಗುತ್ತಿದ್ದಳು. ತಂಗಿ ಇದ್ದಂತೆ, ನಮ್ಮ ಮಗಳು ಇದ್ದಂತೆ ಎಂದು ಸಮೀರ್ ಕುಟುಂಬಸ್ಥರು ಹೇಳುತ್ತಿದ್ರು. ನನ್ನ ಮಗಳ ಮೇಲೆ ಹಿಪ್ನೋಟೈಸ್ ಮಾಡಲಾಗಿದೆ. ಎನರ್ಜಿ ಡ್ರಿಂಕ್ಸ್ ನಲ್ಲಿ ಮಾತ್ರೆ ಹಾಕಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಅದನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇತ್ತಿಚೆಗೆ ನನ್ನ ಮಗಳು ಹೇಳಿದಾಗಲೇ ಗೊತ್ತಾಗಿದೆ. ಕಳೆದ ನಾಲ್ಕೈದು ದಿನದಿಂದ ನನ್ನ ಮಗಳಿಗೆ ಸಮೀರ್ ಮತ್ತು ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆ. ಇಂದು ನಮ್ಮನ್ನು ಸುಟ್ಟ ಹಾಕಲು ಸಮೀರ್ ಕುಟುಂಬಸ್ಥರು ಬಂದಿದ್ರು. ಪೆಟ್ರೋಲ್ ಹಾಕಿ ತಲವಾರ್ ತೆಗೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;&lt;h2&gt;ಪರಿಸ್ಥಿತಿ ನಿಯಂತ್ರಣದಲ್ಲಿ&lt;/h2&gt;&lt;p&gt;ಪ್ರಸ್ತುತ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸರು ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-tension-over-love-jihad-allegation-clash-between-two-families-several-injured-gdp/articleshow-vhiv41w"/>
        </item>
        <item>
            <title><![CDATA[Hubballi: ನೈಋತ್ಯ ರೈಲ್ವೆಯಿಂದ ದಾಖಲೆಗಳ ಮೇಲೆ ದಾಖಲೆ;  ಆದಾಯ ಕೇಳಿದ್ರೆ ಶಾಕ್ ಆಗ್ತೀರಿ!]]></title>
            <link>https://kannada.asianetnews.com/business/hubballi-south-western-railway-s-revenue-increased-from-rs-8489-crore-to-rs-9488-crore-mrq/articleshow-ye2prb1</link>
            <guid isPermaLink="true">https://kannada.asianetnews.com/business/hubballi-south-western-railway-s-revenue-increased-from-rs-8489-crore-to-rs-9488-crore-mrq/articleshow-ye2prb1</guid>
            <pubDate>Thu, 02 Apr 2026 08:00:42 +0530</pubDate>
            <description><![CDATA[&lt;p&gt;2025-26ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆಯು ಸರಕು ಸಾಗಣೆ, ಆದಾಯ ಮತ್ತು ಮೂಲಸೌಕರ್ಯದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ವಲಯದ ಒಟ್ಟು ಆದಾಯ ₹9,488 ಕೋಟಿಗೆ ಏರಿಕೆಯಾಗಿದ್ದು, 52.46 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ep9p8sh2a80sc76bkshcnwvy,imgname-123321590-1634500793387727-3472662509831927947-n-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;2025&ndash;26ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ ಸರಕು ಸಾಗಣೆ, ಆದಾಯ ಉತ್ಪಾದನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿ, ಕಾರ್ಯಕ್ಷಮತೆಯಲ್ಲಿ ಹೊಸ ದಾಖಲೆ ಸ್ಥಾಪಿಸಿದೆ.&lt;/p&gt;&lt;p&gt;ಈ ಅವಧಿಯಲ್ಲಿ ವಲಯವು ₹5,347.40 ಕೋಟಿ ಮೌಲ್ಯದ ಸರಕು ಸಾಗಣೆ ಆದಾಯ ದಾಖಲಿಸಿದ್ದು, 2024-25ರಲ್ಲಿ ₹4,672 ಕೋಟಿಗಳ ಹಿಂದಿನ ದಾಖಲೆ ಮೀರಿಸಿದೆ. ಒಟ್ಟು ಆದಾಯವು ₹8,489 ಕೋಟಿಯಿಂದ ₹9,488 ಕೋಟಿಗೆ ಏರಿಕೆಯಾಗಿದೆ.&lt;/p&gt;&lt;p&gt;ಪ್ರಯಾಣಿಕರ ವಿಭಾಗದಲ್ಲಿ ಆದಾಯವು ₹3,172.5 ಕೋಟಿಯಿಂದ ₹3,468 ಕೋಟಿಗೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ 165.53 ಮಿಲಿಯನ್&zwnj;ನಿಂದ 176.93 ಮಿಲಿಯನ್&zwnj;ಗೆ ಹೆಚ್ಚಳವಾಗಿದೆ. ಇತರ ಆದಾಯ ಮೂಲಗಳಲ್ಲಿ, ಇತರ ಕೋಚಿಂಗ್ ಆದಾಯ ₹329.5 ಕೋಟಿಗೆ ಏರಿದ್ದು, ಪಾರ್ಸೆಲ್ ಆದಾಯ ₹166.4 ಕೋಟಿಯಿಂದ ₹170.4 ಕೋಟಿಗೆ ಹೆಚ್ಚಾಗಿದೆ. ವಾಣಿಜ್ಯ ವಿವಿಧ ಆದಾಯವು ₹92.82 ಕೋಟಿಯಿಂದ ₹121.08 ಕೋಟಿಗೆ ಏರಿಕೆಯಾಗಿ ಗಮನಾರ್ಹ ಬೆಳವಣಿಗೆ ದಾಖಲಿಸಿದೆ. ಜತೆಗೆ, ಟಿಕೆಟ್ ಪರಿಶೀಲನೆ ಆದಾಯವು ₹53.61 ಕೋಟಿಯಿಂದ ₹70.76 ಕೋಟಿಗೆ ಏರಿಕೆಯಾಗಿ ಒಟ್ಟು ಆದಾಯ ವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ.&lt;/p&gt;&lt;h2&gt;&lt;strong&gt;45.65 ಮಿಲಿಯನ್ ಟನ್&zwnj;ನಿಂದ 52.46 ಮಿಲಿಯನ್ ಟನ್&zwnj;ಗೆ ಏರಿಕೆ&lt;/strong&gt;&lt;/h2&gt;&lt;p&gt;2025-26ರಲ್ಲಿ ಸರಕು ಸಾಗಣೆಯ ಕಾರ್ಯಕ್ಷಮತೆ ಎಲ್ಲ ಸ್ಥರಗಳಲ್ಲಿ ಏರಿಕೆಯ ಪ್ರವೃತ್ತಿ ಸಾಧಿಸಿದೆ. ಒಟ್ಟು ಲೋಡಿಂಗ್ 45.65 ಮಿಲಿಯನ್ ಟನ್&zwnj;ನಿಂದ 52.46 ಮಿಲಿಯನ್ ಟನ್&zwnj;ಗೆ ಏರಿಕೆಯಾಗಿ 6.81 ಮಿಲಿಯನ್ ಟನ್&zwnj;ಗಳ (ಶೇ. 14.9) ಬೆಳವಣಿಗೆ ದಾಖಲಿಸಿದೆ. ಕಬ್ಬಿಣದ ಅದಿರು 20.98 ಮಿಲಿಯನ್ ಟನ್&zwnj;ನೊಂದಿಗೆ ಅತಿ ಹೆಚ್ಚು ಕೊಡುಗೆ ನೀಡಿದರೆ, ಕಬ್ಬಿಣ ಮತ್ತು ಸಿದ್ಧ ಉಕ್ಕು 10.95 ಮಿಲಿಯನ್ ಟನ್ ಲೋಡಿಂಗ್ ಸಾಧಿಸಿದೆ, ಇದು ಶೇ. 29.4 ಏರಿಕೆ ಸೂಚಿಸುತ್ತದೆ.&lt;/p&gt;&lt;p&gt;ಕಲ್ಲಿದ್ದಲು ಲೋಡಿಂಗ್ 8.92 ಮಿಲಿಯನ್ ಟನ್&zwnj;ನಿಂದ 10.31 ಮಿಲಿಯನ್ ಟನ್&zwnj;ಗೆ ಏರಿಕೆಯಾಗಿ ಶೇ. 15.6ರಷ್ಟು ಬೆಳವಣಿಗೆ ದಾಖಲಿಸಿದೆ. ಉಕ್ಕಿನ ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಲ್ಲಿ ಶೇ 88.1 ಅತಿ ಹೆಚ್ಚು ಶೇಕಡಾವಾರು ಬೆಳವಣಿಗೆ ಕಂಡುಬಂದಿದೆ. ಇತರ ಸರಕುಗಳಲ್ಲಿ, ರಸಗೊಬ್ಬರ ಲೋಡಿಂಗ್ 1.13 ಮಿಲಿಯನ್ ಟನ್&zwnj;ನಿಂದ 1.18 ಮಿಲಿಯನ್ ಟನ್&zwnj;ಗೆ ಏರಿಕೆಯಾಗಿದೆ. ಕಂಟೇನರ್ ಸಂಚಾರವು 0.82 ಮಿಲಿಯನ್ ಟನ್&zwnj;ನಿಂದ 0.99 ಮಿಲಿಯನ್ ಟನ್&zwnj;ಗೆ ಏರಿಕೆಯಾಗಿ ಶೇ. 21 ಬೆಳವಣಿಗೆ ದಾಖಲಿಸಿದೆ. ಆಹಾರ ಧಾನ್ಯಗಳ ಲೋಡಿಂಗ್ ಕೂಡ 0.46 ಮಿಲಿಯನ್ ಟನ್&zwnj;ನಿಂದ 0.50 ಮಿಲಿಯನ್ ಟನ್&zwnj;ಗೆ ಏರಿಕೆಯಾಗಿದೆ.&lt;/p&gt;&lt;h3&gt;&lt;strong&gt;ಶೇ. 13ರಷ್ಟು ಕೊಡುಗೆ&lt;/strong&gt;&lt;/h3&gt;&lt;p&gt;ಇದೇ ಅವಧಿಯಲ್ಲಿ ಭಾರತೀಯ ರೈಲ್ವೆಯ ಒಟ್ಟು ಸರಕು ಸಾಗಣೆ 1,615 ಮಿಲಿಯನ್ ಟನ್&zwnj;ನಿಂದ 1,667.8 ಮಿಲಿಯನ್ ಟನ್&zwnj;ಗೆ ಏರಿಕೆಯಾಗಿದ್ದು, ಈ ಹೆಚ್ಚುವರಿ ಸಾಗಣೆಯಲ್ಲಿ ನೈಋತ್ಯ ರೈಲ್ವೆ ಸುಮಾರು ಶೇ. 13ರಷ್ಟು ಕೊಡುಗೆ ನೀಡಿದೆ. ಮಾ. 31ರಂದು ಒಂದೇ ದಿನದಲ್ಲಿ 31 ರೇಕ್&zwnj; ಲೋಡ್ ಮಾಡುವ ಮೂಲಕ ಫಿನಿಶ್ಡ್ ಸ್ಟೀಲ್&zwnj;ನಲ್ಲಿ ಹೊಸ ದಾಖಲೆ ನಿರ್ಮಿಸಲಾಗಿದ್ದು, 2025ರ 29 ರೇಕ್&zwnj;ಗಳ ಹಿಂದಿನ ದಾಖಲೆ ಮೀರಿಸಲಾಗಿದೆ.&lt;/p&gt;&lt;p&gt;ಮೂಲಸೌಕರ್ಯ ಅಭಿವೃದ್ಧಿಯಲ್ಲಿಯೂ ನೈಋತ್ಯ ರೈಲ್ವೆ ಗಮನಾರ್ಹ ಪ್ರಗತಿ ಸಾಧಿಸಿದೆ. ವರ್ಷದಲ್ಲಿ 53 ರೂಟ್ ಕಿ.ಮೀ. ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಒಟ್ಟು ವಿದ್ಯುದ್ದೀಕೃತ ಮಾರ್ಗದ ಉದ್ದ 3,339 ಕಿಮೀ ಆಗಿದೆ. ಇದರ ಜತೆಗೆ, 24 ಕಿಮೀ ಹೊಸ ರೈಲ್ವೆ ಮಾರ್ಗಗಳನ್ನು ಪ್ರಾರಂಭಿಸಲಾಗಿದ್ದು, 78.1 ಕಿಲೋಮೀಟರ್ ಡಬಲ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ಸಾಮರ್ಥ್ಯ ಹೆಚ್ಚಳ ಮತ್ತು ಸಂಪರ್ಕ ಸುಧಾರಣೆ ಸಾಧ್ಯವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಬಕ-ಪುತ್ತೂರು ರೈಲು ನಿಲ್ದಾಣದಲ್ಲಿ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರು. ಮಂಜೂರು&lt;/strong&gt;&lt;/p&gt;&lt;p&gt;ಸರಕು ಸಾಗಣೆ, ಆದಾಯ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಧಿಸಿದ ಈ ಯಶಸ್ಸುಗಳು ನೈಋತ್ಯ ರೈಲ್ವೆಯ ಶ್ರೇಷ್ಠತೆ ಮತ್ತು ದಕ್ಷತೆಗೆ ಬದ್ಧತೆಯನ್ನು ತೋರಿಸುತ್ತವೆ. ಈ ಸಾಧನೆಗಳೊಂದಿಗೆ ನೈಋತ್ಯ ರೈಲ್ವೆ ಭವಿಷ್ಯದಲ್ಲಿಯೂ ಉತ್ತಮ ಸಂಪರ್ಕ ಹಾಗೂ ನಿರಂತರ ಸೇವೆಗಳನ್ನು ಒದಗಿಸುವಲ್ಲಿ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;SWR job notification Kannada row: ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ; ಹಿಂದಿ, ಆಂಗ್ಲ ಭಾಷೆಯಲ್ಲಿ ಹೊರಡಿಸಿದ್ದಅಧಿಸೂಚನೆಗೆ ತಡೆ&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/business/hubballi-south-western-railway-s-revenue-increased-from-rs-8489-crore-to-rs-9488-crore-mrq/articleshow-ye2prb1"/>
        </item>
        <item>
            <title><![CDATA[ಹಿಂದುಗಳು ಜಾತಿ, ಮತಭೇದ ಮರೆತು ಒಂದಾಗಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ]]></title>
            <link>https://kannada.asianetnews.com/karnataka-districts/mla-basanagouda-yatnal-love-jihad-statement-hubballi-gvd/articleshow-yqo5vcb</link>
            <guid isPermaLink="true">https://kannada.asianetnews.com/karnataka-districts/mla-basanagouda-yatnal-love-jihad-statement-hubballi-gvd/articleshow-yqo5vcb</guid>
            <pubDate>Mon, 06 Apr 2026 23:51:15 +0530</pubDate>
            <description><![CDATA[&lt;p&gt;ಹಿಂದೂ ಹೆಣ್ಣು ಮಕ್ಕಳು ಲವ್&zwnj; ಜಿಹಾದ್&zwnj;ಗೆ ಬಲಿಯಾಗದಂತೆ ನೋಡಿಕೊಳ್ಳುವುದು ಹಾಗೂ ಅವರನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2p8y50hy1cyydz1b1tjek6g,imgname-basanagowda-patil-yatnal-1755241714705.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಏ.06): &lt;/strong&gt;ಜಾತಿ, ಮತ ಭೇದ ಮರೆತು ಹಿಂದೂಗಳೆಲ್ಲ ಒಂದಾಗುವ ಮೂಲಕ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ. ಜತೆಗೆ ಹಿಂದೂ ಹೆಣ್ಣು ಮಕ್ಕಳು ಲವ್&zwnj; ಜಿಹಾದ್&zwnj;ಗೆ ಬಲಿಯಾಗದಂತೆ ನೋಡಿಕೊಳ್ಳುವುದು ಹಾಗೂ ಅವರನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಅವರು ಇಲ್ಲಿನ ನಗರದ ಹಳೇ ಹುಬ್ಬಳ್ಳಿ ಆನಂದ ನಗರ ವೃತ್ತದಲ್ಲಿ ಶ್ರೀರಾಮ ಉತ್ಸವ ಸಮಿತಿ ಚಾರಿಟೇಬಲ್&zwnj; ಟ್ರಸ್ವ್&zwnj; ವತಿಯಿಂದ ಆಯೋಜಿಸಲಾಗಿದ್ದ 12ನೇ ವರ್ಷದ ಶ್ರೀರಾಮ ನವಮಿ ಹಾಗೂ ಹನುಮ ಜಯಂತಿ ಅಂಗವಾಗಿ ನಡೆದ ಬೃಹತ್&zwnj; ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.&lt;/p&gt;&lt;p&gt;ಸಮಾಜದಲ್ಲಿ ಹಿಂದೂ ಯುವತಿಯರು ಲವ್&zwnj; ಜಿಹಾದ್&zwnj;ಗೆ ಬಲಿಯಾಗುವ ಸಂಶಯ ಕಂಡು ಬಂದಲ್ಲಿ ತಕ್ಷಣವೇ ಆ ಯುವತಿಯ ಕುಟುಂಬದ ಗಮನಕ್ಕೆ ತರಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಕರ್ನಾಟಕದ ಹಿಂದೂ ಯುವತಿಯರು ಲವ್&zwnj; ಜಿಹಾದ್&zwnj;ಗೆ ಬಲಿಯಾಗುವುದು ನಿಶ್ಚಿತ ಎಂದರು. ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಜಿಮ್&zwnj; ಟ್ರೈನಿಂಗ್&zwnj; ನೆಪದಲ್ಲಿ ಹಿಂದೂ ಯುವತಿಯರನ್ನು ಲವ್&zwnj; ಜಿಹಾದ್&zwnj;ಗೆ ಬಳಸಿಕೊಳ್ಳುವ ಕೃತ್ಯಗಳು ನಡೆಯುತ್ತಿವೆ.&lt;/p&gt;&lt;p&gt;ಹಿಂದೂಗಳು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಹಿಂದೂಪರ ಸಂಘಟನೆಗಳು ಎಲ್ಲೆಡೆ ಜಾಗೃತಿ ಮೂಡಿಸುವ ಮೂಲಕ ಹೆಣ್ಣುಮಕ್ಕಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದರು. ಸಮಾವೇಶದ ಬಳಿಕ ಹಳೇ ಹುಬ್ಬಳ್ಳಿ ಮಂಜುನಾಥ ಸರ್ಕಲ್&zwnj;ದಿಂದ ಆನಂದನಗರ ಸರ್ಕಲ್&zwnj; ವರೆಗೆ ಶ್ರೀರಾಮ ನವಮಿ ಹಾಗೂ ಹನುಮ ಜಯಂತಿಯ ಬೃಹತ್&zwnj; ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಯುವಕರು, ಹಿಂದೂಪರ ಕಾರ್ಯಕರ್ತರು ಭಾಗವಹಿಸಿದ್ದರು.&lt;/p&gt;&lt;p&gt;ಟ್ರಸ್ವ್&zwnj; ಕಮಿಟಿಯ ಅಧ್ಯಕ್ಷ ಸಂಜೀವಗೌಡ ಮಾಳಗಿ, ಅಮರ ಪಾಟೀಲ, ಅರುಣಕುಮಾರ ಮಠ, ಕುಮಾರ ಹಕಾರಿ, ಸಂಜು ಬಿರಾದಾರ, ರಮೇಶ ಕುಲಕರ್ಣಿ, ವಿ.ಕೆ. ಪಾಟೀಲ, ಕಿರಣ ಪೂಜಾರ, ಚಂದ್ರಶೇಖರ ದವಳಗಿ, ಗೌರಿಶಂಕರ ಮೋಟ, ನಾರಾಯಣ ಮಿಸ್ಕಿನ್&zwnj; ಸೇರಿದಂತೆ ಹಲವರಿದ್ದರು.&lt;/p&gt;&lt;h2&gt;&lt;strong&gt;2028ಕ್ಕೆ ನಾನೇ ಸಿಎಂ: ಯತ್ನಾಳ&lt;/strong&gt;&lt;/h2&gt;&lt;p&gt;ಮುಂದೆ 2028ಕ್ಕೆ ನಮ್ಮದೇ ಸರ್ಕಾರ ಆಡಳಿತಕ್ಕೆ ಬರಲಿದೆ. ಆಗ ನಾನೇ ಮುಖ್ಯಮಂತ್ರಿಯಾಗುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು. ಜತೆಗೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ತಂದೆ-ಮಗ ನಿರ್ಧರಿಸುವುದಿಲ್ಲ. ನಾನು ಹೈಕಮಾಂಡ್&zwnj;ಗೆ ಹೆದರಿಸಿ ನಾಯಕನಾಗಿಲ್ಲ. ಜನರಿಂದ ನಾಯಕನಾದವನು. ಹೋದಲ್ಲೆಲ್ಲ ನನ್ನನ್ನೇ ಸಿಎಂ ಅಭ್ಯರ್ಥಿ ಎಂದು ಜನರು ಘೋಷಣೆ ಮಾಡುತ್ತಿದ್ದಾರೆ. 2028ಕ್ಕೆ ನಾನು ಸಿಎಂ ಆಗೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>dharwad</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mla-basanagouda-yatnal-love-jihad-statement-hubballi-gvd/articleshow-yqo5vcb"/>
        </item>
    </channel>
</rss>
