<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 06 Aug 2026 13:54:42 +0530</lastBuildDate>
        <atom:link href="https://kannada.asianetnews.com/rss/dharwad" rel="self" type="application/rss+xml"/>
        <item>
            <title><![CDATA[ಧಾರವಾಡ: ವಿನಯ್ ಕುಲಕರ್ಣಿಗೆ ಜಾಮೀನು, 'ನಾನು ಸುಪ್ರೀಂ ಕೋರ್ಟ್‌ಗೆ ಹೋಗಲ್ಲ' ಎಂದ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ!]]></title>
            <link>https://kannada.asianetnews.com/karnataka-districts/yogesh-gowda-murder-case-deceased-wife-mallamma-refuses-to-move-supreme-court-against-vinay-kulkarni-bail-gdp/articleshow-5gloeag</link>
            <guid isPermaLink="true">https://kannada.asianetnews.com/karnataka-districts/yogesh-gowda-murder-case-deceased-wife-mallamma-refuses-to-move-supreme-court-against-vinay-kulkarni-bail-gdp/articleshow-5gloeag</guid>
            <pubDate>Fri, 31 Jul 2026 15:36:59 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ತೀರ್ಪನ್ನು ಪ್ರಶ್ನಿಸಿ ಮೃತರ ಸಹೋದರ ಸುಪ್ರೀಂ ಕೋರ್ಟ್&zwnj;ಗೆ ಹೋಗಲು ಸಿದ್ಧರಾಗಿದ್ದರೆ, ಪತ್ನಿ ಮಲ್ಲಮ್ಮ ಮಾತ್ರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಾನೂನು ಹೋರಾಟದಿಂದ ಹಿಂದೆ ಸರಿಯುವ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpb2zjc9awx3pq63zmar4x0q,imgname-yogesh-gowda-wife-mallamma-1776341207428.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಜಿಲ್ಲೆಯ ತೀವ್ರ ಕುತೂಹಲ ಕೆರಳಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ, &amp;nbsp;ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್&zwnj;ನಿಂದ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ ಮೃತ ಯೋಗೇಶ್ ಗೌಡ ಅವರ ಸಹೋದರ ಗುರುನಾಥಗೌಡರ್ ಹಾಗೂ ಹೋರಾಟಗಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದರೆ, ಇತ್ತ ಯೋಗೇಶ್ ಗೌಡ ಅವರ ಪತ್ನಿ ಮಲ್ಲಮ್ಮ ಅವರು ಮಾತ್ರ ಅತ್ಯಂತ ಅಚ್ಚರಿಯ ಹಾಗೂ ಭಿನ್ನವಾದ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಸುಪ್ರೀಂ ಕೋರ್ಟ್&zwnj;ಗೆ ಹೋಗುವುದಿಲ್ಲ ಎಂದು ಮಲ್ಲಮ್ಮ ಹೇಳಿಕೆ ನೀಡಿದ್ದಾರೆ.&lt;/p&gt;&lt;h2&gt;ನ್ಯಾಯಾಲಯದ ತೀರ್ಪೇ ಅಂತಿಮ: ನಾವೇನು ಹೇಳಲು ಸಾಧ್ಯ?&lt;/h2&gt;&lt;p&gt;ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಲ್ಲಮ್ಮ, &quot;ಈ ವಿಷಯದಲ್ಲಿ ನಾವೇನು ಹೇಳಲು ಸಾಧ್ಯವಿಲ್ಲ. ಎಲ್ಲವನ್ನೂ ನ್ಯಾಯಾಲಯ ಮತ್ತು ಗೌರವಾನ್ವಿತ ನ್ಯಾಯಾಧೀಶರಿಗೆ ಬಿಟ್ಟಿದ್ದು. ಕೋರ್ಟ್ ಯಾವ ರೀತಿಯ ತೀರ್ಪು ನೀಡುತ್ತದೆ ಎಂಬುದು ಮೊದಲೇ ಯಾರಿಗೂ ಗೊತ್ತಾಗುವುದಿಲ್ಲ. ನ್ಯಾಯಾಲಯದ ತೀರ್ಪೇ ಅಂತಿಮವಾಗುತ್ತದೆ. ಈ ತೀರ್ಪಿನಿಂದ ನಮಗೇನೂ ಹಿನ್ನಡೆಯಾಗಿದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.&lt;/p&gt;&lt;h2&gt;ಮಕ್ಕಳ ಭವಿಷ್ಯಕ್ಕಾಗಿ ಕಾನೂನು ಹೋರಾಟಕ್ಕೆ ಬ್ರೇಕ್!&lt;/h2&gt;&lt;p&gt;ತಮ್ಮ ಮುಂದಿನ ನಡೆಯ ಬಗ್ಗೆ ಮಾತನಾಡುತ್ತಾ, &quot;ನಾನು ಇನ್ಮುಂದೆ ಯಾವುದೇ ರೀತಿಯ ಕಾನೂನು ಹೋರಾಟವನ್ನು ಮುಂದುವರಿಸುವುದಿಲ್ಲ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಾನು ಸರ್ವೋಚ್ಚ ನ್ಯಾಯಾಲಯದ (Supreme Court) ಮೆಟ್ಟಿಲೇರುವುದಿಲ್ಲ. ನನಗೆ ನನ್ನ ಮಕ್ಕಳ ಶಿಕ್ಷಣ, ಅವರ ಉಜ್ವಲ ಭವಿಷ್ಯ ಹಾಗೂ ನನ್ನ ಕ್ಷೇತ್ರದ ಜನರ ಅಭಿವೃದ್ಧಿ ಮುಖ್ಯವಾಗಿದೆ. ಅವರ ಸಲುವಾಗಿ ನಾನು ಈ ಕಾನೂನು ಹೋರಾಟದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಹೋರಾಟ ಕೈಬಿಡುವ ಮುನ್ಸೂಚನೆ ನೀಡಿದರು.&lt;/p&gt;&lt;h2&gt;ಯಾರು ಎಷ್ಟೇ ಕೆಟ್ಟದ್ದು ಮಾಡಿದರೂ ಒಳ್ಳೆಯದನ್ನೇ ಬಯಸುತ್ತೇನೆ&lt;/h2&gt;&lt;p&gt;ನನ್ನ ಜೀವನದಲ್ಲಿ ಯಾರು ಎಷ್ಟೇ ಕೆಟ್ಟದ್ದನ್ನು ಮಾಡಿದ್ದರೂ, ನಾನು ಮಾತ್ರ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ. ದ್ವೇಷ ಸಾಧನೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಇಡೀ ಪ್ರಕರಣದಲ್ಲಿ ಶಾಂತಿಯುತ ನಡೆ ಪ್ರದರ್ಶಿಸಿದರು.&lt;/p&gt;&lt;p&gt;ಒಂದೆಡೆ ಮೃತರ ಸಹೋದರ ಗುರುನಾಥಗೌಡರ್ ಮತ್ತು ಕಾನೂನು ತಜ್ಞರು ಸುಪ್ರೀಂ ಕೋರ್ಟ್&zwnj;ನಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳುತ್ತಿದ್ದರೆ, ಇನ್ನೊಂದೆಡೆ ಸ್ವತಃ ಪತ್ನಿ ಮಲ್ಲಮ್ಮ ಅವರೇ ಹೋರಾಟದಿಂದ ಹಿಂದೆ ಸರಿದಿರುವುದು ಧಾರವಾಡ ರಾಜಕೀಯ ಮತ್ತು ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/yogesh-gowda-murder-case-deceased-wife-mallamma-refuses-to-move-supreme-court-against-vinay-kulkarni-bail-gdp/articleshow-5gloeag"/>
        </item>
        <item>
            <title><![CDATA[ಮಧು ಬಂಗಾರಪ್ಪಗೆ ಮತ್ತೆ ಸಚಿವ ಸ್ಥಾನ; ಸಹೋದರ ಕುಮಾರ್ ಬಂಗಾರಪ್ಪ ಅಚ್ಚರಿಕೆ ಹೇಳಿಕೆ]]></title>
            <link>https://kannada.asianetnews.com/politics/madhu-bangarappa-gets-minister-post-again-kumar-bangarappa-reacts-gkn/articleshow-6b1d202</link>
            <guid isPermaLink="true">https://kannada.asianetnews.com/politics/madhu-bangarappa-gets-minister-post-again-kumar-bangarappa-reacts-gkn/articleshow-6b1d202</guid>
            <pubDate>Mon, 03 Aug 2026 16:49:39 +0530</pubDate>
            <description><![CDATA[&lt;p&gt;ಸಚಿವ ಸಂಪುಟ ವಿಸ್ತರಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಲಭಿಸಿರುವ ಹಿನ್ನೆಲೆಯಲ್ಲಿ ಅವರ ಸಹೋದರ ಹಾಗೂ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಅವರು ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯವಾಗಿ ಭಿನ್ನ ಪಕ್ಷಗಳಲ್ಲಿದ್ದರೂ ಸಹೋದರನ ಯಶಸ್ಸಿಗೆ ಅವರು ಹಾರೈಸಿದ್ದಾರೆ. ಆ ಕುರಿತಾದ ವರದಿ ಇಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz3nk407p3xv570tvm584mhs,imgname-madhu-bangarappa-1785755963398.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ:&lt;/strong&gt; ರಾಜ್ಯ ಕಾಂಗ್ರೆಸ್ ಸರ್ಕಾರದ ನೂತನ ಸಚಿವರ ಲಿಸ್ಟ್ ಪ್ರಕಟವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಮಧು ಬಂಗಾರಪ್ಪ ಅವರಿಗೆ ಮತ್ತೆ ಮಂತ್ರಿಯಾಗುವ ಅವಕಾಶ ಒದಗಿ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಅವರ ಸಹೋದರ ಹಾಗೂ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಕುಟುಂಬದ ಪರವಾಗಿ ತಮ್ಮನಿಗೆ ಶುಭ ಕೋರಿದ್ದಾರೆ.&lt;/p&gt;&lt;h2&gt;&lt;strong&gt;ಕುಟುಂಬದ ಪರವಾಗಿ ಧನ್ಯವಾದ&lt;/strong&gt;&lt;/h2&gt;&lt;p&gt;ನಮ್ಮ ಕುಟುಂಬದ ಕಡೆಯಿಂದ ಮಧು ಬಂಗಾರಪ್ಪಗೆ ಧನ್ಯವಾದಗಳನ್ನು ಹೇಳುತ್ತೇನೆ. ಮಧು ಅವರು ಸೊರಬ ಕ್ಷೇತ್ರಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಯ ಪರವಾಗಿ ಉತ್ತಮ ಕೆಲಸ ಮಾಡಿದ್ದಾರೆ. ಈಗ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಆ ಜವಾಬ್ದಾರಿಯನ್ನು ಅವರು ಚೆನ್ನಾಗಿ ನಿಭಾಯಿಸಿಕೊಂಡು ಹೋಗಲಿ ಎಂದು ನಾನು ಹಾರೈಸುತ್ತೇನೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು. ರಾಜಕೀಯವಾಗಿ ಬದ್ಧ ವೈರಿಗಳಂತೆ ಕಂಡರೂ, ತಮ್ಮನ ಮಂತ್ರಿ ಪದವಿಯ ಬಗ್ಗೆ ಅಣ್ಣ ಕುಮಾರ್ ಬಂಗಾರಪ್ಪ ಅವರು ತೋರಿರುವ ಈ ಸೌಜನ್ಯ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಸರ್ಕಾರದ ಭವಿಷ್ಯದ ಬಗ್ಗೆ ಭವಿಷ್ಯವಾಣಿ&lt;/strong&gt;&lt;/h2&gt;&lt;p&gt;ಇದೇ ವೇಳೆ ರಾಜ್ಯ ಸರ್ಕಾರದ ಆಯಸ್ಸಿನ ಬಗ್ಗೆ ಮಾತನಾಡಿದ ಅವರು, ಈ ಕಾಂಗ್ರೆಸ್ ಸರ್ಕಾರ ಇನ್ನು ಕೇವಲ ಒಂದೂವರೆ ವರ್ಷ ಮಾತ್ರ ಅಧಿಕಾರದಲ್ಲಿ ಇರಲಿದೆ ಎಂದು ಭವಿಷ್ಯ ನುಡಿದರು. ಸರ್ಕಾರವನ್ನು ಉರುಳಿಸುವ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಸರ್ಕಾರವನ್ನು ಬೀಳಿಸುವ ಯಾವುದೇ ಉದ್ದೇಶ ಅಥವಾ ಕಾರ್ಯಕ್ರಮ ಬಿಜೆಪಿ ಮುಂದಿಲ್ಲ. ನಾವು ಸದ್ಯ ಬರಗಾಲದ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಉತ್ತರ ಕರ್ನಾಟಕದಲ್ಲಿ ಬರಗಾಲ ತೀವ್ರವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮೊದಲು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ನಾವು ಸರ್ಕಾರ ಬೀಳಿಸುವ ಕೆಲಸ ಮಾಡಲ್ಲ, ಬದಲಾಗಿ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು.&lt;/p&gt;]]></content:encoded>
            <category>dharwad</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/madhu-bangarappa-gets-minister-post-again-kumar-bangarappa-reacts-gkn/articleshow-6b1d202"/>
        </item>
        <item>
            <title><![CDATA[ತುಂಗಭದ್ರಾ ಎಥೆನಾಲ್ ಘಟಕ ನಮ್ಮೂರಿಗೆ ಬೇಡ, ಕೂಡಲೇ ಸ್ಥಗಿತಗೊಳಿಸಿ; ಗ್ರಾಮಸ್ಥರ ಬೇಡಿಕೆ]]></title>
            <link>https://kannada.asianetnews.com/karnataka-districts/dharwad-karatagi-villagers-have-demanded-tungabhadra-ethanol-plant-which-is-being-constructed-naganakal-be-stopped-mrq/articleshow-8m5clcp</link>
            <guid isPermaLink="true">https://kannada.asianetnews.com/karnataka-districts/dharwad-karatagi-villagers-have-demanded-tungabhadra-ethanol-plant-which-is-being-constructed-naganakal-be-stopped-mrq/articleshow-8m5clcp</guid>
            <pubDate>Wed, 29 Jul 2026 07:38:46 +0530</pubDate>
            <description><![CDATA[ಕಾರಟಗಿಯ ನಾಗನಕಲ್ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ತುಂಗಭದ್ರಾ ಎಥೆನಾಲ್ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಘಟಕದಿಂದ ಪರಿಸರ ಮಾಲಿನ್ಯ, ಆರೋಗ್ಯ ಸಮಸ್ಯೆಗಳು ಮತ್ತು ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಆತಂಕ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kynsyzrnsx40h852bhx2qh3g,imgname-dharwad-1785290784532.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡ: ಕಾರಟಗಿ ಪಟ್ಟಣದ ನಾಗನಕಲ್ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ತುಂಗಭದ್ರಾ ಎಥೆನಾಲ್ ಪ್ರೈವೇಟ್ ಲಿಮಿಟೆಡ್ ಘಟಕ ಸ್ಥಗಿತಗೊಳಿಸಬೇಕು ಎಂದು ನಾಗನಕಲ್ ಗ್ರಾಮಸ್ಥರು ಮಂಗಳವಾರ ಆಗ್ರಹಿಸಿದ್ದಾರೆ.&lt;/p&gt;&lt;p&gt;ಬೇವಿನಾಳ ಗ್ರಾಪಂ ವ್ಯಾಪ್ತಿಯ ನಾಗನಕಲ್ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ತುಂಗಭದ್ರಾ ಎಥೆನಾಲ್ ಘಟಕ ಸ್ಥಗಿತಗೊಳಿಸಿ ಮುಂದೆ ಸಂಭವಿಸಬಹುದಾದ ಅನಾಹುತ ತಡೆಯಬೇಕು ಎಂದು ಒತ್ತಾಯಿಸಿದರು. ಇಲ್ಲಿನ ತಹಸೀಲ್ದಾರ್&zwnj; ಕಚೇರಿಗೆ ಆಗಮಿಸಿದ ಗ್ರಾಮಸ್ಥರು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಸಲ್ಲಿಸಿದರು.&lt;/p&gt;&lt;h2&gt;&lt;strong&gt;ಎಥೆನಾಲ್&zwnj; ಘಟಕ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ&lt;/strong&gt;&lt;/h2&gt;&lt;p&gt;ಗ್ರಾಪಂ ಮಾಜಿ ಸದಸ್ಯ ದಾವಲಸಾಬ್ ಮಾತನಾಡಿ, ಎಥನಾಲ್ ಘಟಕದಿಂದ ಹೊರ ಸೂಸುವ ಮಾಲಿನ್ಯದಿಂದ ನಾಗನಕಲ್ ಗ್ರಾಮವಷ್ಟೇ ಸೇರಿದಂತೆ ಸುತ್ತಲಿನ ರಾಮನಗರ, ಚಳ್ಳೂರು ಕ್ಯಾಂಪ್, ಬೇವಿನಾಳ ಗ್ರಾಮ ಹಾಗೂ 3ಕಿಮೀ ಅನತಿ ದೂರದಲ್ಲಿರುವ ಕಾರಟಗಿ ಪಟ್ಟಣಕ್ಕೂ ಇದರಿಂದ ತೊಂದರೆಯುಂಟಾಗಲಿದೆ. ಯಾವುದೇ ಘಟಕ ಸ್ಥಾಪಿಸಬೇಕಾದರೆ ಜನನಿಬಿಡ ಸ್ಥಳದಿಂದ ದೂರದ ಸ್ಥಳದಲ್ಲಿ ಸ್ಥಾಪಿಸಬೇಕು ಎನ್ನುವುದು ಸರ್ಕಾರ ರೂಪಿಸಿರುವ ಕಾನೂನು ಆದರೆ,ಈಗಿನ ಯೋಜಿತ ಕಾರ್ಖಾನೆಯಿಂದ ನಾಗನಕಲ್ ಗ್ರಾಮದ ಘಟಕದ ರಸ್ತೆಯಲ್ಲಿ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನವಲಿ ರಸ್ತೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಗಳಿದ್ದು ಇಲ್ಲಿನ ವಿದ್ಯಾಭ್ಯಾಸ ಮಾಡುವ ಸಾವಿರಾರು ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗಲಿದೆ. ಅಷ್ಟೇ ಅಲ್ಲ, ಈ ಭಾಗದ ಜೀವನಾಡಿ, ತುಂಗಭದ್ರಾ ಎಡದಂಡೆ ಕಾಲುವೆ.ಕಾಗಟಗಿ ತಾಲೂಕಿನ ಬಹುಗ್ರಾಮ ಕುಡಿವ ನೀರಿನ ಕೆರೆ ಇದ್ದು ಘಟಕದ ವಿಸ್ತರಣೆಯಿಂದ ಕಲ್ಲಿದ್ದಲು ಉರಿಸುವುದರಿಂದ ಪರಿಸರ ಮಾಲಿನ್ಯ, ಗಾಳಿ ಮತ್ತು ನೀರಿನ ಗುಣಮಟ್ಟದ ಹಾನಿ, ಭೂಗರ್ಭ ಜಲಮಟ್ಟದ ಕುಸಿತ, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದ್ದು, ಇಷ್ಟೆಲ್ಲ ನಿಯಮ ಗಾಳಿಗೆ ತೂರಿದ್ದರು, ಪರಿಸರ ಮಾಲಿನ್ಯ ತಡೆಗಟ್ಟಬೇಕಾದ ಜವಾಬ್ದಾರಿಯುತ ಮಾಲಿನ್ಯ ಮಂಡಳಿ ಹೇಗೆ ಅನುಮತಿ ನೀಡಿದೆಯೇ ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಗ್ರಾಮದ ಮುಖಂಡ ಚನ್ನನಗೌಡ,ವೀರಭದ್ರ ಗೌಡ ಮತ್ತು ಅಮರೇಶ್ ಪವಾರ್ ಮಾತನಾಡಿ, ಇಂಥದೊಂದು ಅಪಾಯಕಾರಿ ಬೃಹತ್ ಕಾರ್ಖಾನೆ ಆರಂಭಿಸಿದ್ದರೂ ಇಲ್ಲಿನ ಸ್ಥಳೀಯ ಗ್ರಾಮಗಳ ಜನರಿಗೆ ಮುಂಚಿತವಾಗಿ ಇದರ ವಿಷಯ ತಿಳಿಸಿಲ್ಲ ಹಾಗೂ ಸಂಬಂಧಿಸಿದ ಅಧಿಕಾರಿಗಳು ಏಕಾಏಕಿ ಸಭೆ ಮಾಡಿರುತ್ತಾರೆ ಅಲ್ಲದೇ ಸ್ಥಳೀಯ ಜನರ ಬದಲಿಗೆ ಘಟಕದ ಮಾಲೀಕರ ಸಂಬಂಧಿ ಹಾಗೂ ಹಣದ ಪ್ರಭಾವ ಬಳಸಿ ಘಟಕ ಮಾಲೀಕರು ಜನವಸತಿ ಹತ್ತಿರವೇ ಈ ಘಟಕ ಸ್ಥಾಪಿಸುತ್ತಿದ್ದು, ಇದರಿಂದ ಸುತ್ತಲಿನ ಕುಡಿವ ನೀರಿನ ಮೂಲ ಬಳಸುವ ಸಾಧ್ಯತೆ ಇದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಆದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಕ್ಷ್ಮವಾಗಿ ಇನ್ನೊಮ್ಮೆ ಪರಿಶೀಲಿಸಬೇಕಾಗಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆ ಗಮನದಲಿಟ್ಟುಕೊಂಡು, ತುಂಗಭದ್ರಾ ಎಥೆನಾಲ್ ಘಟಕದ ಸಾಮರ್ಥ ಹೆಚ್ಚಳಕ್ಕೆ ಯಾವುದೇ ರೀತಿಯ ಅನುಮತಿ ನೀಡಬಾರದು ಎಂದು ಆಗ್ರಹಿಸುತ್ತಿದ್ದು, ಒಂದು ವೇಳೆ ನಮ್ಮ ಧ್ವನಿಗೆ ಬೆಲೆ ಕೊಡದೇ ನಮ್ಮ ಬದುಕಿನ ಜತೆ ಚೆಲ್ಲಾಟವಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಗ್ರೇಡ್-2 ತಹಶೀಲ್ದಾರ್ ಷಣ್ಮುಖಪ್ಪ ಮನವಿ ಪತ್ರ ಸ್ವೀಕರಿಸಿದರು.&lt;/strong&gt;&lt;/h2&gt;&lt;p&gt;ಈ ಸಂದರ್ಭದಲ್ಲಿ ನಾಗರಾಜ ದಳಪತಿ, ಭೀಮಣ್ಣ ಭೋವಿ, ಯಮನೂರಸಾಬ್ ಕಲ್ಮಂಗಿ, ದೇವಪ್ಪ ಮಡಿವಾಳ, ಶ್ಯಾಮೀದಸಾಬ್ ಕನಕಗಿರಿ, ಪಂಪನಗೌಡ ಮೋಕಾಶಿ, ನಾಗರಾಜ ಪನ್ನಾಪುರ, ಭೋಗಪ್ಪ ನವಲಿ, ಸಿದ್ದಪ್ಪ ಪನ್ನಾಪುರ, ಶ್ಯಾಮಣ್ಣ ಕುರುಹೀನಶೆಟ್ಟಿ, ಹನುಮಂತಪ್ಪ ಚಲುವಾದಿ, ಸಿದ್ದಪ್ಪ, ಪಂಪಪಾತಿ ನಾಯಕ, ಪ್ರಭಾಕರ್ ಅಡವಿಬಾವಿ, ಭೀಮೇಶ್ ರಾಗಲಪರವಿ, ಅಭಿಷೇಕ್ ಅದಾಪುರ, ವಿಜಯಕುಮಾರ್ ಗುಂಜಳ್ಳಿ, ಮಲರೆಡ್ದೆಪ್ಪ, ರಾಹುಲ್ ಛಲವಾದಿ, ಮಲ್ಲು ಕುರಿ, ಹನುಮೇಶ್ ಭೋವಿ, ಶಿವಕುಮಾರ್ ತೊಟ್ಟಿಮನಿ, ಅಮರೇಶ್ ಕಾರಟಗಿ, ಕಾಶಿಮ್ ಸಾಬ್, ಮುದಿಯಪ್ಪ ತಳವಾರ, ಸಿದ್ದಪ್ಪ ಸಂಕನಾಳ ಇನ್ನಿತರರು ಇದ್ದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharwad-karatagi-villagers-have-demanded-tungabhadra-ethanol-plant-which-is-being-constructed-naganakal-be-stopped-mrq/articleshow-8m5clcp"/>
        </item>
        <item>
            <title><![CDATA[ಹುಬ್ಬಳ್ಳಿ: 101 ವರ್ಷ ವಯಸ್ಸು, 40 ನಿಮಿಷದ ಸರ್ಜರಿ, ಮರುದಿನ ಡಿಸ್ಚಾರ್ಜ್! ದೇಶದ ಮೊದಲ ಯಶಸ್ವಿ ಕೀಲು ಚಿಕಿತ್ಸೆ!]]></title>
            <link>https://kannada.asianetnews.com/karnataka-districts/successful-joint-surgery-for-a-101-year-old-man-at-hubballi-rav/articleshow-9hziycx</link>
            <guid isPermaLink="true">https://kannada.asianetnews.com/karnataka-districts/successful-joint-surgery-for-a-101-year-old-man-at-hubballi-rav/articleshow-9hziycx</guid>
            <pubDate>Fri, 17 Jul 2026 10:57:07 +0530</pubDate>
            <description><![CDATA[&lt;p&gt;ದೇಶದಲ್ಲೇ ಮೊದಲ ಬಾರಿಗೆ ಶತಾಯುಷಿಗೆ ಅಪರೂಪದ ರೀತಿಯ ಸೊಂಟದ ಕೀಲು (Hip Joint) ಮುರಿತಕ್ಕೆ ಹುಬ್ಬಳ್ಳಿಯ ಎಲುಬು ಕೀಲು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxq8efc0z7avs4ff11kgzgs2,imgname-----------------------2026-07-17t105242.095-1784265784704.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಹುಬ್ಬಳ್ಳಿ (ಜು.17): &lt;/strong&gt;ದೇಶದಲ್ಲೇ ಮೊದಲ ಬಾರಿಗೆ ಶತಾಯುಷಿಗೆ ಅಪರೂಪದ ರೀತಿಯ ಸೊಂಟದ ಕೀಲು (Hip Joint) ಮುರಿತಕ್ಕೆ ಹುಬ್ಬಳ್ಳಿಯ ಎಲುಬು ಕೀಲು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.&lt;/p&gt;&lt;h2&gt;ಶತಾಯುಷಿಗೆ ಶಸ್ತ್ರ ಚಿಕಿತ್ಸೆ:&lt;/h2&gt;&lt;p&gt;ಇಲ್ಲಿನ ದಾಜಿಬಾನಪೇಟೆಯಲ್ಲಿ ಇರುವ ಎಲುಬು ಕೀಲು ಮತ್ತು ಮಲ್ಟಿಸ್ವೆಷಾಲಿಟಿ ಆಸ್ಪತ್ರೆಯ ತಜ್ಞ ಡಾ। ಭಾಸ್ಕರ್ ರಾವ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಶಿಗ್ಗಾಂವಿ ತಾಲೂಕಿನ ಚಿಕ್ಕಬೆಂಡಿಗೇರಿಯ ಶತಾಯುಷಿ, 101 ವರ್ಷದ ನಿವೃತ್ತ ಶಿಕ್ಷಕ ಇಮಾಮಸಾಬ್ ತಮ್ಮ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಎಡಭಾಗದ ಹಿಪ್ ಜಾಯಿಂಟ್&zwnj; ಸಮೀಪ ಅಪರೂಪದ ರೀತಿಯ ಫ್ರಾಕ್ಚರ್ ಆಗಿರುವುದು ದೃಢಪಟ್ಟಿತ್ತು. ರೋಗಿ ಮತ್ತೆ ಸಹಜವಾಗಿ ನಡೆಯಬೇಕಾದರೆ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಯೇ ಶಾಶ್ವತ ಪರಿಹಾರ ಆಗಿತ್ತು ಎಂದು ವಿವರಿಸಿದರು.&lt;/p&gt;&lt;h3&gt;ಈ ಶಸ್ತ್ರಚಿಕಿತ್ಸೆ ಹಿರಿಯ ನಾಗರಿಕರಲ್ಲಿ ಹೆಚ್ಚು ಅಪಾಯ&lt;/h3&gt;&lt;p&gt;ಈ ಶಸ್ತ್ರಚಿಕಿತ್ಸೆ ಹಿರಿಯ ನಾಗರಿಕರಲ್ಲಿ ಹೆಚ್ಚು ಅಪಾಯಕಾರಿ. ಹೃದಯ ತಜ್ಞರು, ಫಿಸಿಷಿಯನ್ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರ ಸಮನ್ವಯದೊಂದಿಗೆ ರೋಗಿಯನ್ನು ಸಂಪೂರ್ಣವಾಗಿ ಸಿದ್ಧಪಡಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ದೇಶದಲ್ಲಿಯೇ ಮೊದಲ ಪ್ರಕರಣವಾಗಿದೆ. ಜೂ.7ರಂದು 40 ನಿಮಿಷ ಶಸ್ತ್ರಚಿಕಿತ್ಸೆ ನಡೆಸಿದ್ದು ರೋಗಿಯು ಮರುದಿನವೇ ವಾಕರ್&zwnj; ಸಹಾಯದಿಂದ ನಡೆಯಲು ಆರಂಭಿಸಿದ್ದಾರೆ ಎಂದರು.&lt;/p&gt;&lt;p&gt;. ಶಸ್ತ್ರಚಿಕಿತ್ಸೆಗೆ 4ರಿಂದ 5 ಲಕ್ಷ ರು. ತಗುಲಿದರೆ ನಮ್ಮ ಆಸ್ಪತ್ರೆಯಲ್ಲಿ ₹1.40 ಲಕ್ಷದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/successful-joint-surgery-for-a-101-year-old-man-at-hubballi-rav/articleshow-9hziycx"/>
        </item>
        <item>
            <title><![CDATA[ತಪ್ಪು ಮಾಡದಿದ್ದರೆ ಜೈಲಿಗೆ ಹೋಗುವ ಭಯವೇಕೆ? 'ಜೈಲಿಗೆ ಕಳಿಸುವ ಸಂಕಲ್ಪ' ಎಂಬ ಸಿಎಂ ಡಿಕೆಶಿ ಹೇಳಿಕೆಗೆ ಜೋಶಿ ಹೇಳಿದ್ದೇನು?]]></title>
            <link>https://kannada.asianetnews.com/politics/pralhad-joshi-reacts-dk-shivakumar-s-statement-about-bidadi-township-row-rav/articleshow-ak3s0s2</link>
            <guid isPermaLink="true">https://kannada.asianetnews.com/politics/pralhad-joshi-reacts-dk-shivakumar-s-statement-about-bidadi-township-row-rav/articleshow-ak3s0s2</guid>
            <pubDate>Fri, 17 Jul 2026 11:33:58 +0530</pubDate>
            <description><![CDATA[ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೈಲು ಭಯದ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಪ್ರಾಮಾಣಿಕರಾಗಿದ್ದರೆ ಜೈಲಿನ ಭಯವೇಕೆ ಎಂದು ಪ್ರಶ್ನಿಸಿರುವ ಅವರು, ಬಿಡದಿ ಟೌನ್&zwnj;ಶಿಪ್ ಯೋಜನೆಯಲ್ಲಿ ಡಿಕೆಶಿಗಿರುವ ವಿಶೇಷ ಆಸಕ್ತಿಯ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxqa0xvzr9xx0ymeybvbwe4f,imgname-----------------------2026-07-17t112018.239-1784267437951.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಜು.17): &lt;/strong&gt;ಮುಖ್ಯಮಂತ್ರಿ ಡಿಕೆ ಶಿವಕುಮಾರ್&zwnj;(DK Shivakumar) ಅವರನ್ನು ಯಾರೂ ಜೈಲಿಗೆ ಕಳಿಸುತ್ತಿಲ್ಲ. ಪ್ರಾಮಾಣಿಕರಾಗಿದ್ದರೆ ಅವರಿಗೆ ಯಾಕೆ ಅದರ ಭಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.&lt;/p&gt;&lt;h2&gt;ಅವರಿಗೇಕೆ ಜೈಲಿಗೆ ಹೋಗುವ ಭಯ?&lt;/h2&gt;&lt;p&gt;ಅವರ ಹೇಳಿಕೆಗಳೆಲ್ಲವೂ ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಒಂದು ಪ್ರಯತ್ನ ಎಂದೂ ತೀಕ್ಷ್ಣವಾಗಿ ಹೇಳಿದ್ದಾರೆ. ಜೈಲಿಗೆ ಕಳುಹಿಸುವ ಸಂಕಲ್ಪ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಪರಾಧ ಮಾಡಿದವರು ಮಾತ್ರ ಜೈಲಿಗೆ ಹೋಗುತ್ತಾರೆ. ಹಾಗಾದರೆ ಶಿವಕುಮಾರ್&zwnj; ಏನು ತಪ್ಪು ಮಾಡಿದ್ದಾರಾ? ಭ್ರಷ್ಟಾಚಾರ ಎಸಗಿದ್ದಾರಾ? ವಿನಾಕಾರಣ ಅವರಿಗೇಕೆ ಜೈಲಿಗೆ ಹೋಗುವ ಭಯ? ಈಗೇಕೆ ಆ ಬಗ್ಗೆ ಮಾತನಾಡುತ್ತಿದ್ದೀರಿ ಎಂದರು. ಭ್ರಷ್ಟಾಚಾರ ಮತ್ತು ತಪ್ಪು ಮಾಡಿದ ಯಾರೇ ಆಗಲಿ ಜೈಲಿಗೆ ಹೋಗುತ್ತಾರೆ. ನಾವೇನೂ ಅವರನ್ನು ಜೈಲಿಗೆ ಕಳಿಸಲು ನೋಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Bidadi Township Row: ಹೆಚ್&zwnj;ಡಿಕೆ ಪ್ರಾರಂಭಿಸಿದ್ದರೆ ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ?&lt;/p&gt;&lt;p&gt;ಅವರು ತಪ್ಪು ಮಾಡಿ, ಭ್ರಷ್ಟಾಚಾರ ಎಸಗಿ ಜೈಲಿಗೆ ಹೋದರೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;h3&gt;ಹಿಂದಿನ ಮುಖ್ಯಮಂತ್ರಿ ಇರದಿದ್ದ ಬಿಡದಿ ಟೌನ್​​ಶಿಪ್​ʼ ಆಸಕ್ತಿ ನಿಮಗೇಕೆ?&lt;/h3&gt;&lt;p&gt;ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡದಿ ಟೌನ್&zwnj;ಶಿಪ್ ಕುರಿತಾಗಿ ಇಷ್ಟೊಂದು ಆಸಕ್ತಿ ತೋರಿಸಿದ್ದಿಲ್ಲ. ಆದರೆ ಅವರಿಗಿಲ್ಲದ ಆಸಕ್ತಿ ಇವರಿಗೇಕೆ ಬಂತು? ಅಂದರೆ ಇದರಲ್ಲೇನೋ ಡೀಲ್ ಆಗಿದೆ ಎಂಬ ಸಂಶಯ ಬರುತ್ತದೆ ಅಲ್ಲವೇ? ಈ ಬಗ್ಗೆ ಏಕೆ ಉತ್ತರಿಸುತ್ತಿಲ್ಲ. ಮಾಜಿ ಪ್ರಧಾನಿ ಎಚ್&zwnj;.ಡಿ.ದೇವೇಗೌಡರ ಆರೋಪಕ್ಕೆ ಸ್ಪಷ್ಟನೆ ಕೊಡುವುದು ಬಿಟ್ಟು ಅವರ ಮೇಲೇಕೆ ರೇಗಾಡುತ್ತಿದ್ದೀರಿ ಎಂದು ಜೋಶಿ ತರಾಟೆಗೆ ತೆಗೆದುಕೊಂಡರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/pralhad-joshi-reacts-dk-shivakumar-s-statement-about-bidadi-township-row-rav/articleshow-ak3s0s2"/>
        </item>
        <item>
            <title><![CDATA[BRTS ಅವ್ಯವಸ್ಥೆ: ಧಾರವಾಡದಲ್ಲಿ ಮೊಳಗಿದ ಎಚ್ಚರಿಕೆ ಗಂಟೆ, ಜಾಣ ಕುರುಡರಂತೆ ವರ್ತನೆ!]]></title>
            <link>https://kannada.asianetnews.com/karnataka-districts/dharwad-public-protests-against-brts-chaos-mrq/articleshow-az38tkh</link>
            <guid isPermaLink="true">https://kannada.asianetnews.com/karnataka-districts/dharwad-public-protests-against-brts-chaos-mrq/articleshow-az38tkh</guid>
            <pubDate>Thu, 06 Aug 2026 06:20:06 +0530</pubDate>
            <description><![CDATA[ಧಾರವಾಡದ ವಿದ್ಯಾಗಿರಿ ಬಳಿ ಬಿಆರ್&zwnj;ಟಿಎಸ್&zwnj;ನಿಂದ ಉಂಟಾಗುತ್ತಿರುವ ನಿರಂತರ ಅಪಘಾತ ಮತ್ತು ಅವ್ಯವಸ್ಥೆಯನ್ನು ಖಂಡಿಸಿ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಜಂಕ್ಷನ್&zwnj; ಅಭಿವೃದ್ಧಿ ಹಾಗೂ ರೋಡ್ ಬ್ರೇಕರ್&zwnj; ಅಳವಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kza8gtz5m08p6vr94zafy8q2,imgname-brts-1785977138149.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಬಿಆರ್&zwnj;ಟಿಎಸ್&zwnj;ನಿಂದ (BRTS Bus) ಆಗುತ್ತಿರುವ ತೊಂದರೆಗೆ ಪರಿಹಾರ ಕೋರಿ ವಿದ್ಯಾಗಿರಿ ಬಳಿ ಕೆಲ ಹೊತ್ತು ರಸ್ತೆ ತಡೆದು ನವಲೂರು, ವಿದ್ಯಾಗಿರಿ ಹಾಗೂ ಸತ್ತೂರು ಭಾಗದ ಸಾರ್ವಜನಿಕರು ಪ್ರತಿಭಟಿಸಿದರು.&lt;/p&gt;&lt;p&gt;ಸುಗಮ ಹಾಗೂ ವೇಗದ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಗ ಆಗುತ್ತಿರುವ ಸಮಸ್ಯೆಗಳಿಗೆ ಉತ್ತರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಏನು ಅವ್ಯವಸ್ಥೆ?&lt;/strong&gt;&lt;/h2&gt;&lt;p&gt;ಬಿಆರ್&zwnj;ಟಿಎಸ್&zwnj;ನಿಂದಾಗಿ ಅವಳಿ ನಗರದ ಮಧ್ಯೆ ನಿತ್ಯ ಅಪಘಾತಗಳಾಗುತ್ತಿದ್ದು ಜನರು ಭಯಭೀತರಾಗಿದ್ದಾರೆ. ಖಾಸಗಿ ವಾಹನಗಳಲ್ಲಿ ಸಂಚರಿಸುವ ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದರೂ ಬಿಆರ್&zwnj;ಟಿಎಸ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅವಘಡ ನಡೆದಾಗಲೂ ಸ್ಥಳಕ್ಕೆ ಬರುತ್ತಿಲ್ಲ. ದೂರವಾಣಿ ಮೂಲಕ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್ ಮುಸ್ತಾಕ, ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿ ಶ್ರೀಶೈಲ, ಸತ್ತೂರ ಬಳಿ ಇರುವ ಜಂಕ್ಷನ್&zwnj;ನ್ನು ಶೀಘ್ರವೇ ಅಭಿವೃದ್ಧಿಗೊಳಿಸಲಾಗುವುದು, ಬಸ್&zwnj;ಗಳ ವೇಗ ಕಡಿಮೆಗೊಳಿಸಲು ರೋಡ್ ಬ್ರೇಕರ್&zwnj; ಅಳವಡಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.&lt;/p&gt;&lt;p&gt;ಪ್ರತಿಭಟನೆಯಲ್ಲಿ ಪುಂಡಲೀಕ ತಳವಾರ, ಗುರುಪ್ರಸಾದ ಕರಡೆಣ್ಣವರ, ಫಕ್ಕೀರಗೌಡ ಪಾಟೀಲ, ನವೀನ ದೇಶಮುಖ, ವರುಣ ಸಂಕನಗೌಡರ, ಸೇರಿದಂತೆ ಸತ್ತೂರು, ಉದಯನಗರ, ವನಸಿರಿ ನಗರ ನಿವಾಸಿಗಳಿದ್ದರು.&lt;/p&gt;&lt;h3&gt;&lt;strong&gt;ಎಲ್ಲರೂ ಜಾಣ ಕುರುಡರು&lt;/strong&gt;&lt;/h3&gt;&lt;p&gt;ಬಿಆರ್&zwnj;ಟಿಎಸ್ ಕಾರಿಡಾರಿನಲ್ಲಿ ಅನೇಕ ಅಪಘಾತ, ಟ್ರಾಫಿಕ್&zwnj; ಜಾಮ್&zwnj; ಸೇರಿ ಅನೇಕ ಸಮಸ್ಯೆಗಳಾದರೂ ಎಂದಿಗೂ ಟ್ರಾಫಿಕ್&zwnj; ಇನ್&zwnj;ಸ್ಪೆಕ್ಟರ್&zwnj; ಆಗಮಿಸಿ ಸಾರ್ವಜನಿಕರ ಅಳಲು ಕೇಳಿಲ್ಲ. ಯೋಜನೆಯಿಂದ ಜನರಿಗೆ ಇಷ್ಟೆಲ್ಲಾ ಅವಾಂತರಗಳು ಆಗುತ್ತಿದ್ದರೂ ಸಂಸದರು, ಶಾಸಕರು, ಸಚಿವರು ಹಾಗೂ ಜನಪ್ರತಿನಿಧಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದೇಕೆ? ಎಂದು ಸಾರ್ವಜನಿಕರು ಪ್ರಶ್ನಿಸಿದರು.&lt;/p&gt;]]></content:encoded>
            <category>dharwad</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/dharwad-public-protests-against-brts-chaos-mrq/articleshow-az38tkh"/>
        </item>
        <item>
            <title><![CDATA[ನೀಟ್ ಹೋರಾಟದ ಹಿಂದೆ ದೇಶದ್ರೋಹಿಗಳು, ವಿದೇಶಿ ಶಕ್ತಿಗಳ ಕೈವಾಡ? ಮುತಾಲಿಕ್ ಸ್ಫೋಟಕ ಹೇಳಿಕೆ!]]></title>
            <link>https://kannada.asianetnews.com/karnataka-districts/foreign-funding-linked-to-cockroach-janta-party-protests-what-said-pramod-muthalik-rav/articleshow-cvu2dg0</link>
            <guid isPermaLink="true">https://kannada.asianetnews.com/karnataka-districts/foreign-funding-linked-to-cockroach-janta-party-protests-what-said-pramod-muthalik-rav/articleshow-cvu2dg0</guid>
            <pubDate>Sat, 25 Jul 2026 13:15:03 +0530</pubDate>
            <description><![CDATA[&lt;p&gt;ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಗತ್ಯವಿಲ್ಲ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ವಿದೇಶಿ ಶಕ್ತಿಗಳು, ಸಿಜೆಪಿ ಮತ್ತು ಖಾಲಿಸ್ತಾನಿಗಳು ಹೈಜಾಕ್ ಮಾಡಿವೆ ಎಂದು ಆರೋಪಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j64gr25wnsxgapr2ehp85sa3,imgname-1--8-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಜು.25):&lt;/strong&gt; ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಪ್ರಧಾನ್ ರಾಜೀನಾಮೆ ಅಗತ್ಯವಿಲ್ಲ ಎಂದು ಹೇಳಿರುವುದು ರಾಜ್ಯದಲ್ಲಿ ಸಂಚಲ ಸೃಷ್ಟಿಸಿದೆ.&lt;/p&gt;&lt;h2&gt;ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದೇನು?&lt;/h2&gt;&lt;p&gt;ನಿಜವಾದ ನೀಟ್ ವಿದ್ಯಾರ್ಥಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಪ್ರಧಾನ್ ರಾಜೀನಾಮೆ ಅಗತ್ಯವಿಲ್ಲ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕೇಂದ್ರ ಸರ್ಕಾರ ಹಠಿಣ ನಿರ್ದಾರ ತೆಗೆದುಕೊಂಡಿದೆ. ಹೀಗಾಗಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಗತ್ಯವಿಲ್ಲ ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡರು.&lt;/p&gt;&lt;h3&gt;ಸಿಜೆಪಿ ಹಿಂದೆ ವಿದೇಶಿ ಶಕ್ತಿಗಳ ಕೈವಾಡ&lt;/h3&gt;&lt;p&gt;ವಿದೇಶಿ ಶಕ್ತಿಗಳು ವಿದ್ಯಾರ್ಥಿಗಳ ನೀಟ್ ಹೋರಾಟವನ್ನ ಹೈಜಾಕ್ ಮಾಡಿದ್ದಾರೆ. ವಿದೇಶಗಳಿಂದ ಕಾಕ್ರೋಚ್ ಜನತಾ ಪಾರ್ಟಿಗೆ ನೂರಾರು ಕೋಟಿ ಫಂಡಿಂಗ್ ಆಗಿದೆ. ಭಾರತದ ಶತ್ರುಗಳು ಸಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ, ಖಾಲಿಸ್ತಾನಿಗಳು ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. ಇದರೊಂದಿಗೆ ಕೇಂದ್ರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿರುವುದು ಕೂಡ ವಿರೋಧಕ್ಕೆ ಕಾರಣವಾಗಿದೆ. ತಕ್ಷಣ ಮರು ಪರೀಕ್ಷೆ ನಡೆಸಿ ಫಲಿತಾಂಶ ನೀಡಲಾಗಿದೆ. ಇದಾದಮೇಲೆ ಪ್ರತಿಭಟನೆ ನಡೆಸುವ ಅವಶ್ಯವೇನು? ಎಂದು ಪ್ರಶ್ನಸಿದರು.&lt;/p&gt;&lt;p&gt;&lt;strong&gt;ಕಾಂಗ್ರೆಸ್ ವಿರುದ್ಧ ವಾಗ್ದಾಳಿ&lt;/strong&gt;&lt;/p&gt;&lt;p&gt;ಕಾಂಗ್ರೆಸ್&zwnj;ಗೆ ನೈತಿಕತೆ, ಯೋಗ್ಯತೆ ಇಲ್ಲ. ಶಿಕ್ಷಣಕ್ಕೆ ಕಾಂಗ್ರೆಸ್ ಕೊಡೂಗೆ ಏನು? ಮತಾಂಧರ ಪಠ್ಯ ಕ್ರಮದಿಂದಾಗಿ ದೇಶದ್ರೋಹಿಗಳು ಹುಟ್ಟಿಕೊಂಡಿವೆ. ಗುಲಾಮಗಿರಿ ಶಿಕ್ಷಣ ಕಲಿಸಿರುವುದು ಕಾಂಗ್ರೆಸ್&zwnj;ನ ಸಾಧನೆ. ರಾಜ್ಯ ಕಾಂಗ್ರೆಸ್ ಮೂರು ಸಾವಿರ ಅತಿಥಿ ಶಿಕ್ಷಕರಿಗೆ ಸಂಬಂಳ ನೀಡಿಲ್ಲ. ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುವ ಕಾಂಗ್ರೆಸ್ ತನ್ನದೇ ಸರ್ಕಾರ ಆಡಳಿತವಿರುವ ಕಾಂಗ್ರೆಸ್&zwnj;ನಲ್ಲಿ ಕೆಪಿಎಸ್&zwnj;ಸಿ ಹಗರಣವಾಗಿದೆ. ಪಶುವೈದ್ಯರ ಹುದ್ದೆಗೆ ಲಕ್ಷ ಲಕ್ಷ ಹಣಕ್ಕೆ ಮಾರಾಟ ಮಾಡಲಾಗಿದೆ ಈ ಬಗ್ಗೆ ರಾಹುಲ್ ಗಾಂಧಿ ಪಟಾಲಂ ಏನು ಹೇಳುತ್ತಾರೆ. ಇದಕ್ಕಾಗಿ ಯಾರು ರಾಜೀನಾಮೆ ಕೊಡುತ್ತಾರೆ? ಈ ಹಿಂದೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿದ್ದಾಗ ಕಾನೂನು ಮಸೂದೆ ಯಾಕೆ ತರಲಿಲ್ಲ? ಮೋದಿ ಈಗ ಮಸೂದೆ ಜಾರಿಗೆ ತಂದಿದ್ದಾರೆ. ಇನ್ಮುಂದೆ ತಪ್ಪು ಮಾಡಿದವರಿಗೆ ಹತ್ತು ವರ್ಷ ಶಿಕ್ಷೆ ಆಗಲಿದೆ. ಇಷ್ಟೆಲ್ಲ ಬದಲಾವಣೆ ತಂದಂಥ ಮೋದಿ ವಿರುದ್ಧ ಕಾಂಗ್ರೆಸ್ ಮಾತನಾಡುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ವಿದ್ಯಾರ್ಥಿಗಳ ಹೋರಾಟದ ನೆಪದಲ್ಲಿ ಇದರಲ್ಲಿ ತುಕುಡೆ ಗ್ಯಾಂಗ್ ನುಸುಳಿದೆ, 2500 ಕ್ರಿಮಿನಲ್ ಗಳು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆ ವೇಳೆ ಹಿಂಸಾಚಾರ ನಡೆಸುವುದು, ಪಾರ್ಲಿಮೆಂಟ್&zwnj;ಗೆ ನುಗ್ಗುವ ಯತ್ನ, ಪೊಲೀಸರ ಮೇಲೆ ಕಲ್ಲು ತೂರಾಟದಂತಹ ಕೃತ್ಯಗಳು ಈ ದೇಶದ್ರೋಹಿಗಳಿಂದಲೇ ನಡೆದಿವೆ. ಮೋದಿಯವರನ್ನ ಟಾರ್ಗೆಟ್ ಮಾಡಿ ಪ್ರತಿಭಟನೆ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/foreign-funding-linked-to-cockroach-janta-party-protests-what-said-pramod-muthalik-rav/articleshow-cvu2dg0"/>
        </item>
        <item>
            <title><![CDATA[ವಿನಯ್ ಕುಲಕರ್ಣಿಗೆ ಖುಲಾಯಿಸಿದ ಅದೃಷ್ಟ; ರಾಜ್ಯ ಸಂಪುಟ ವಿಸ್ತರಣೆ ಬೆನ್ನಲ್ಲೇ ಶಾಸಕ ಸ್ಥಾನ ಮರುಸ್ಥಾಪನೆ!]]></title>
            <link>https://kannada.asianetnews.com/karnataka-districts/dharwad-mla-vinay-kulkarni-disqualification-stayed-karnataka-assembly-notification-khs/articleshow-eixzebk</link>
            <guid isPermaLink="true">https://kannada.asianetnews.com/karnataka-districts/dharwad-mla-vinay-kulkarni-disqualification-stayed-karnataka-assembly-notification-khs/articleshow-eixzebk</guid>
            <pubDate>Mon, 03 Aug 2026 19:59:42 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲಿಯೇ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನದ ಅನರ್ಹತೆಯನ್ನು ಕರ್ನಾಟಕ ವಿಧಾನಸಭೆ ಸಚಿವಾಲಯ ಹಿಂಪಡೆದಿದೆ. ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ಹೈಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ, ಅವರ ಶಾಸಕತ್ವವನ್ನು ಮರುಸ್ಥಾಪಿಸಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz40edphcnbqjahwmaqbmp99,imgname-dharwad-mla-vinay-kulkarni--1--1785767343825.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.03): ಧಾ&lt;/strong&gt;ರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ (Dharwad Assembly Constituency) ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರಿಗೆ ಬಹುದೊಡ್ಡ ಕಾನೂನು ಸಮಾಧಾನ ದೊರಕಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ (High Court of Karnataka) ತಡೆ ನೀಡಿದ ಹಿನ್ನೆಲೆಯಲ್ಲಿ, ಅವರ ಶಾಸಕತ್ವದ ಅನರ್ಹತೆಯನ್ನು (Disqualification) ಹಿಂಪಡೆದು ಕರ್ನಾಟಕ ವಿಧಾನಸಭೆ ಸಚಿವಾಲಯ ಅಧಿಕೃತ ಅಧಿಸೂಚನೆ (Notification) ಹೊರಡಿಸಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಕುರಿತ ವಿಶೇಷ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ಆಧಾರದ ಮೇಲೆ, ಭಾರತೀಯ ಸಂವಿಧಾನದ ವಿಧಿ 191(1)(e) ಮತ್ತು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 8ರ ಅಡಿಯಲ್ಲಿ (Representation of the People Act, 1951) ಮೇ 02ರಂದು ವಿನಯ್ ಕುಲಕರ್ಣಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ವಿಧಾನಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು.&lt;/p&gt;&lt;h2&gt;&lt;strong&gt;ಹೈಕೋರ್ಟ್ ನೀಡಿದ ತಡೆಜ್ಞೆ&lt;/strong&gt;&lt;/h2&gt;&lt;p&gt;ವಿಚಾರಣಾ ನ್ಯಾಯಾಲಯದ ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಅವರು ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ (CRL.A-764/2026) ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠವು ಜುಲೈ 31ರಂದು ಕೆಳನ್ಯಾಯಾಲಯದ ಶಿಕ್ಷೆಯ ಆದೇಶಕ್ಕೆ ತಡೆ ನೀಡಿದೆ (Stay Order).&lt;/p&gt;&lt;h2&gt;&lt;strong&gt;ವಿಧಾನಸಭೆಯಿಂದ ಅಧಿಕೃತ ಅಧಿಸೂಚನೆ&lt;/strong&gt;&lt;/h2&gt;&lt;p&gt;ಹೈಕೋರ್ಟ್ ನೀಡಿರುವ ತಡೆಜ್ಞೆಯ ಆದೇಶವನ್ನು ಆಧರಿಸಿ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ (M.K. Vishalakshi) ಅವರು ಆಗಸ್ಟ್ 03ರಂದು ನೂತನ ಅಧಿಸೂಚನೆ ಹೊರಡಿಸಿದ್ದಾರೆ. 'ಹೈಕೋರ್ಟ್&zwnj; ನೀಡಿರುವ ತಡೆಜ್ಞೆಯ ಆದೇಶದ ಹಿನ್ನೆಲೆಯಲ್ಲಿ, ವಿನಯ್ ಕುಲಕರ್ಣಿ ಅವರ ಅನರ್ಹತೆಯ ಅಧಿಸೂಚನೆಯು ತಕ್ಷಣದಿಂದ ಜಾರಿಗೆ ಬರುವಂತೆ ರದ್ದಾಗಿದೆ. ನ್ಯಾಯಾಂಗದ ಮುಂದಿನ ತೀರ್ಪುಗಳಿಗೆ ಒಳಪಟ್ಟು ಅವರ ಶಾಸಕತ್ವವನ್ನು ಮರುಸ್ಥಾಪಿಸಲಾಗಿದೆ' ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.&lt;/p&gt;&lt;p&gt;ಈ ಮೂಲಕ ವಿನಯ್ ಕುಲಕರ್ಣಿ ಅವರು ಧಾರವಾಡ ಕ್ಷೇತ್ರದ ಶಾಸಕರಾಗಿ ತಮ್ಮ ಅಧಿಕೃತ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಹಸಿರು ನಿಶಾನೆ ಸಿಕ್ಕಂತಾಗಿದೆ. ವಿಧಾನಸಭೆ ಸಚಿವಾಲಯದ ಈ ಆದೇಶದ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗ (Election Commission of India) ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೂ (CEO) ರವಾನಿಸಲಾಗಿದೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/dharwad-mla-vinay-kulkarni-disqualification-stayed-karnataka-assembly-notification-khs/articleshow-eixzebk"/>
        </item>
        <item>
            <title><![CDATA[Hubballi: ಆ್ಯಪ್ ಆಧಾರಿತ ಆಟೋ ಸೇವೆ ಸ್ಥಗಿತಗೊಳಿಸುವಂತೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ]]></title>
            <link>https://kannada.asianetnews.com/karnataka-districts/drivers-protest-in-hubballi-demanding-suspension-of-app-based-auto-services-mrq/articleshow-gpemx6g</link>
            <guid isPermaLink="true">https://kannada.asianetnews.com/karnataka-districts/drivers-protest-in-hubballi-demanding-suspension-of-app-based-auto-services-mrq/articleshow-gpemx6g</guid>
            <pubDate>Wed, 05 Aug 2026 07:43:04 +0530</pubDate>
            <description><![CDATA[ಹುಬ್ಬಳ್ಳಿಯಲ್ಲಿ, ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ಆಟೋ ಚಾಲಕರು ಓಲಾ, ಊಬರ್&zwnj;ನಂತಹ ಆ್ಯಪ್ ಆಧಾರಿತ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಆ್ಯಪ್&zwnj;ಗಳಿಂದ ತಮ್ಮ ಆದಾಯ ಕುಸಿದು ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿ, ಸರ್ಕಾರ ತಕ್ಷಣವೇ ಇವುಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kz7twfc7904facgf3g0efhq4,imgname-hubballi-1785895730567.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ಓಲಾ, ಊಬರ್, ರ&zwj;್ಯಾಪಿಡೊ, ನಮ್ಮ ಯಾತ್ರಿ ಸೇರಿದಂತೆ ವಿವಿಧ ಆ್ಯಪ್&zwnj;ಗಳ ಮೂಲಕ ಆಟೋ ಸೇವೆ ನಡೆಸುತ್ತಿರುವ ವ್ಯವಸ್ಥೆ ಸ್ಥಗಿತಗೊಳಿಸಲು ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ಆಟೋ ಚಾಲಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ಇಲ್ಲಿನ ಡಾ. ಬಿ.ಆರ್&zwnj;. ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಹಸೀಲ್ದಾರ್&zwnj;ಗೆ ಮನವಿ ಸಲ್ಲಿಸಿದರು.&lt;/p&gt;&lt;h2&gt;&lt;strong&gt;ಜೀವನೋಪಾಯಕ್ಕೆ ತೀವ್ರ ತೊಂದರೆ&lt;/strong&gt;&lt;/h2&gt;&lt;p&gt;ಈ ವೇಳೆ ಒಕ್ಕೂಟದ ಧಾರವಾಡ ಜಿಲ್ಲಾಧ್ಯಕ್ಷ ರಮೇಶ ಹೆಳವರ ಮಾತನಾಡಿ, ಈ ಆ್ಯಪ್&zwnj;ಗಳಿಂದ ಸಾಂಪ್ರದಾಯಿಕ ಆಟೋ ಚಾಲಕರ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಜೀವನೋಪಾಯಕ್ಕೆ ತೀವ್ರ ತೊಂದರೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h3&gt;&lt;strong&gt;ಆ್ಯಪ್ ಆಧಾರಿತ ಆಟೊ ಸೇವೆ ವಿರುದ್ಧ ಆಕ್ರೋಶ&lt;/strong&gt;&lt;/h3&gt;&lt;p&gt;ಆ್ಯಪ್ ಕಂಪನಿಗಳು ಬೇಕಾಬಿಟ್ಟಿ ನಿಯಮ ರೂಪಿಸಿ, ಪ್ರಯಾಣಿಕರು ಹಾಗೂ ಚಾಲಕರಿಂದ ವಿವಿಧ ರೀತಿಯ ಸೇವಾ ಶುಲ್ಕ ವಸೂಲಿ ಮಾಡುತ್ತಿವೆ. ರಾಜ್ಯ ಸರ್ಕಾರ ಆಟೋ ಹಾಗೂ ಟ್ಯಾಕ್ಸಿ ಕ್ಷೇತ್ರಕ್ಕೆ ಸ್ಪಷ್ಟ ನೀತಿ ರೂಪಿಸದೆ ಇರುವುದರಿಂದ ಸಾವಿರಾರು ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವು ಕೂಡಲೇ ಎಲ್ಲ ಆ್ಯಪ್ ಆಧಾರಿತ ಆಟೊ ಸೇವೆಗಳನ್ನು ರಾಜ್ಯದಲ್ಲಿ ನಿಷೇಧಿಸಿ ಆಟೋ ಚಾಲಕರ ಹಿತಾಸಕ್ತಿ ಕಾಪಾಡಬೇಕು ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತೆಲಂಗಾಣದಲ್ಲಿ ಮಳೆ ತಡೆಗೆ ಶಿವಮೊಗ್ಗದಲ್ಲಿ ಮಾಟಮಂತ್ರ: ಶಾಸಕನ ವಿರುದ್ಧ ಗಂಭೀರ ಆರೋಪ&lt;/strong&gt;&lt;/p&gt;&lt;p&gt;ಒಕ್ಕೂಟದ ರಾಜ್ಯಾಧ್ಯಕ್ಷ ಜಿ. ನಾರಾಯಣಸ್ವಾಮಿ, ಹುಬ್ಬಳ್ಳಿ ಅಧ್ಯಕ್ಷ ರಾಜು ತಳವಾರ, ಪದಾಧಿಕಾರಿಗಳಾದ ದೇವರಾಜ ಕಾಮಕರ, ಬಸಯ್ಯ ಶಿವಪ್ಪಯ್ಯನಮಠ, ಹನುಮಂತ ಉಣಕಲ್, ಲಕ್ಷ್ಮಣ ಮಡ್ಲಿ, ಮಂಜುನಾಥ ಭಜಂತ್ರಿ, ಅಶೋಕ ಬೂದಳ್ಳಿ, ವೀರೇಶ ಜುಂಜಣ್ಣವರ, ಶಂಭು ಕೋಟಿ, ಬಾಪೂಗೌಡ, ಷಣ್ಮುಖ ಬ್ಯಾಹಟ್ಟಿ, ಮಂಜುನಾಥ ಹುಬ್ಬಳ್ಳಿ, ಶಿವರಾಜ ಸೇರಿದಂತೆ ಹಲವರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;'ಬನ್ರಪ್ಪಾ ನಿಮ್ ಜತೆ ನಾನಿದ್ದೀನಿ.. ಅದೇನ್ ಪ್ರಾಬ್ಲಂ ಹೇಳಿ ಎಂದ ಸಿಎಂ; ಕಾರಿಂದ ಇಳಿದು ಮರದ ಕೆಳಗೆ ಜೆನ್&zwnj;ಝೀ ದೂರು ಸ್ವೀಕರಿಸಿದ ಡಿಕೆಶಿ&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/drivers-protest-in-hubballi-demanding-suspension-of-app-based-auto-services-mrq/articleshow-gpemx6g"/>
        </item>
        <item>
            <title><![CDATA[ವಿನಯ್ ಕುಲಕರ್ಣಿಗೆ ಹೈಕೋರ್ಟ್ ರಿಲೀಫ್,  ಸುಪ್ರೀಂ ಮೆಟ್ಟಿಲೇರಲು ಹೋರಾಟಗಾರ ಬಸವರಾಜ್ ಕೊರವರ್ ನಿರ್ಧಾರ!]]></title>
            <link>https://kannada.asianetnews.com/karnataka-districts/vinay-kulkarni-gets-high-court-relief-in-yogesh-gowda-murder-case-basavaraj-koravar-statement-gdp/articleshow-i7kdok2</link>
            <guid isPermaLink="true">https://kannada.asianetnews.com/karnataka-districts/vinay-kulkarni-gets-high-court-relief-in-yogesh-gowda-murder-case-basavaraj-koravar-statement-gdp/articleshow-i7kdok2</guid>
            <pubDate>Fri, 31 Jul 2026 13:54:19 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಆದೇಶವನ್ನು ಪ್ರಶ್ನಿಸಿ, ಸಾಕ್ಷಿ ನಾಶದ ಪ್ರಯತ್ನಗಳು ನಡೆಯುತ್ತಿರುವ ಕಾರಣ ಸುಪ್ರೀಂ ಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೋರಾಟಗಾರ ಬಸವರಾಜ್ ಕೊರವರ್ ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvm1myp07zphzeav5nvk8y8,imgname-basavaraj-koravar-vinay-kulkarni-1785485906902.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಜಿಲ್ಲೆಯ ಬಹುಚರ್ಚಿತ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್&zwnj;ನಿಂದ ಜಾಮೀನು ಮಂಜೂರಾಗಿದೆ. ಹೈಕೋರ್ಟ್&zwnj;ನ ಈ ಆದೇಶದ ಬೆನ್ನಲ್ಲೇ ಪ್ರಕರಣದ ಮುಂಚೂಣಿ ಹೋರಾಟಗಾರ ಬಸವರಾಜ್ ಕೊರವರ್ ಅವರು ತಮ್ಮ ಮುಂದಿನ ಕಾನೂನು ಹೋರಾಟದ ಹಾದಿಯನ್ನು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಆದೇಶದ ಪ್ರತಿ ಪರಿಶೀಲಿಸಿ ಮುಂದಿನ ತೀರ್ಮಾನ: ಬಸವರಾಜ್ ಕೊರವರ್&lt;/h2&gt;&lt;p&gt;ನ್ಯಾಯಾಲಯದ ಆದೇಶದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಸವರಾಜ್ ಕೊರವರ್, &quot;ಹೈಕೋರ್ಟ್ ಯಾವ ಆಧಾರದ ಮೇಲೆ ಮತ್ತು ಯಾವ ಪ್ರಮುಖ ಅಂಶಗಳನ್ನು ಪರಿಗಣಿಸಿ ಈ ತಡೆಯಾಜ್ಞೆ ನೀಡಿದೆ ಎಂಬುದು ನಮಗೆ ಇನ್ನು ಪೂರ್ಣವಾಗಿ ತಿಳಿದಿಲ್ಲ. ಆದೇಶದ ಪ್ರತಿಯನ್ನು ನಾವು ಸಂಪೂರ್ಣವಾಗಿ ಪರಿಶೀಲಿಸಲಿದ್ದೇವೆ. ನ್ಯಾಯಾಲಯದ ಮುಂದೆ ಬಲವಾದ ಸಾಕ್ಷ್ಯಗಳನ್ನು ಮಂಡಿಸುವಲ್ಲಿ ನಾವು ಎಲ್ಲಾದರೂ ವಿಫಲವಾಗಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ತದನಂತರ, ಮೃತ ಯೋಗೇಶ್ ಗೌಡ ಅವರ ಸಹೋದರ ಗುರುನಾಥಗೌಡರ್ ಹಾಗೂ ಅವರ ಕುಟುಂಬದ ಪರವಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ತಿಳಿಸಿದರು.&lt;/p&gt;&lt;h2&gt;ಸಾಕ್ಷಿಗಳನ್ನು ಹೈಜಾಕ್ ಮಾಡಿದರೂ ಧೃತಿಗೆಡದ ಸಾಕ್ಷಿಗಳು!&lt;/h2&gt;&lt;p&gt;ಪ್ರಕರಣದ ತನಿಖಾ ಹಂತದ ಸವಾಲುಗಳನ್ನು ಸ್ಮರಿಸಿದ ಅವರು, &quot;ಇದು ಅತ್ಯಂತ ವಿಶೇಷ ಹಾಗೂ ಸೂಕ್ಷ್ಮ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ಸಾಕಷ್ಟು ಸಾಕ್ಷಿಗಳನ್ನು ಹೈಜಾಕ್ ಮಾಡಿರುವ ಆಘಾತಕಾರಿ ಸಾಕ್ಷ್ಯಗಳು ಲಭ್ಯವಿದ್ದವು. ಇಷ್ಟೆಲ್ಲಾ ಬೆದರಿಕೆ ಹಾಗೂ ಒತ್ತಡಗಳ ನಡುವೆಯೂ ಸಾಕ್ಷಿದಾರರು ಸ್ವತಃ ನ್ಯಾಯಾಲಯಕ್ಕೆ ಬಂದು ಧೈರ್ಯದಿಂದ ಸಾಕ್ಷಿ ನುಡಿದಿದ್ದರು. ಈ ಎಲ್ಲಾ ಬಲವಾದ ಸಾಕ್ಷ್ಯಗಳನ್ನು ಹೈಕೋರ್ಟ್ ಗಣನೆಗೆ ತೆಗೆದುಕೊಂಡಿರಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಈಗ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಬೇಸರ ತರಿಸಿದೆ ಎಂದರು.&lt;/p&gt;&lt;h2&gt;ಇಂದಿಗೂ ನಡೆಯುತ್ತಿದೆ ಸಾಕ್ಷಿ ನಾಶದ ಯತ್ನ: ಸುಪ್ರೀಂಗೆ ಮೇಲ್ಮನವಿ&lt;/h2&gt;&lt;p&gt;ಈ ಪ್ರಕರಣದಲ್ಲಿ ಸಾಕ್ಷಿ ನಾಶಪಡಿಸುವ ಮತ್ತು ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ಇಂದಿಗೂ ನಿರಂತರವಾಗಿ ನಡೆಯುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ಇನ್ನು ವಿನಯ್ ಕುಲಕರ್ಣಿ ಅವರ ಧಾರವಾಡ ಜಿಲ್ಲೆ ಪ್ರವೇಶದ ಕುರಿತಾದ ಪ್ರಶ್ನೆ ಸದ್ಯಕ್ಕೆ ಉದ್ಭವಿಸುವುದಿಲ್ಲ. ನ್ಯಾಯಾಲಯದ ಸಂಪೂರ್ಣ ಆದೇಶದ ಪ್ರತಿ ಕೈ ಸೇರಿದ ನಂತರವೇ ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಉತ್ತರ ನೀಡಲಾಗುವುದು ಎಂದು ಬಸವರಾಜ್ ಕೊರವರ್ ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/vinay-kulkarni-gets-high-court-relief-in-yogesh-gowda-murder-case-basavaraj-koravar-statement-gdp/articleshow-i7kdok2"/>
        </item>
        <item>
            <title><![CDATA[ಧಾರವಾಡ: ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು, ಸುಪ್ರೀಂ ಮೆಟ್ಟಿಲೇರಲು ಯೋಗೇಶ್ ಗೌಡ ಸಹೋದರನ ಚಿಂತನೆ!]]></title>
            <link>https://kannada.asianetnews.com/karnataka-districts/yogesh-gowda-murder-case-vinay-kulkarni-gets-bail-family-gurunath-gowda-to-challenge-verdict-in-supreme-court-gdp/articleshow-kwshkt1</link>
            <guid isPermaLink="true">https://kannada.asianetnews.com/karnataka-districts/yogesh-gowda-murder-case-vinay-kulkarni-gets-bail-family-gurunath-gowda-to-challenge-verdict-in-supreme-court-gdp/articleshow-kwshkt1</guid>
            <pubDate>Fri, 31 Jul 2026 13:12:45 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮೃತರ ಸಹೋದರ ಗುರುನಾಥಗೌಡರ್ ನಿರ್ಧರಿಸಿದ್ದು, ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd0c4911kmv10hee03q82wy,imgname-vinay-kulkarni-1776405582113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್&zwnj; ಜಾಮೀನು ಮಂಜೂರು ಮಾಡಿದೆ. &amp;nbsp; ಈ ಮೂಲ ಅವರ ಜೀವಾವಧಿ ಶಿಕ್ಷೆ ರದ್ದಾಗಿ ಜೈಲಿನಿಂದ ಬಿಡುಗಡೆಯಾಗುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮೃತರ ಸಹೋದರ ಗುರುನಾಥಗೌಡರ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿ, ತಮ್ಮ ಮುಂದಿನ ಕಾನೂನು ಹೋರಾಟದ ಕುರಿತು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ನಮಗೂ ಕಾನೂನು ಇದೆ, ಅವರಿಗೂ ಕಾನೂನು ಇದೆ: ಗುರುನಾಥಗೌಡರ್&lt;/h2&gt;&lt;p&gt;ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ದೊರೆತಿರುವ ಕುರಿತು ಪ್ರತಿಕ್ರಿಯಿಸಿದ ಗುರುನಾಥಗೌಡರ್, &quot;ನಮ್ಮ ವಕೀಲರು ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ವಿಷಯವನ್ನು ನಮಗೆ ಖಚಿತಪಡಿಸಿದ್ದಾರೆ. ಈ ದೇಶದಲ್ಲಿ ನಮಗೂ ಕಾನೂನು ಇದೆ, ಅವರಿಗೂ ಕಾನೂನು ಇದೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿಂದಲೇ ನಾವು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದೆವು, ನಮಗೆ ನ್ಯಾಯವೂ ಸಿಕ್ಕಿತ್ತು. ಈಗ ಅವರು ಹೈಕೋರ್ಟ್ ಮೊರೆ ಹೋಗಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;ಸುಪ್ರೀಂ ಕೋರ್ಟ್&zwnj;ನಲ್ಲಿ ಕಾನೂನು ಸಮರಕ್ಕೆ ಸಿದ್ಧತೆ&lt;/h2&gt;&lt;p&gt;ನ್ಯಾಯಾಲಯ ಯಾವ ಕಾರಣಗಳಿಗಾಗಿ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ನೀಡಿದೆ ಎಂಬುದು ನಮಗೆ ಇನ್ನು ಪೂರ್ಣವಾಗಿ ತಿಳಿದಿಲ್ಲ. ಆದೇಶದ ಪ್ರತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ನಾವು ನಮ್ಮ ಮುಂದಿನ ನಡೆಯನ್ನು ಇಡಲಿದ್ದೇವೆ. ಈ ಕುರಿತು ಹಿರಿಯ ಹೋರಾಟಗಾರ ಬಸವರಾಜ್ ಕೊರವರ ಅವರ ಜೊತೆ ಸುದೀರ್ಘವಾಗಿ ಚರ್ಚಿಸಿ, ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;&lt;h2&gt;ನಿರಂತರವಾಗಿ ಸಾಗಲಿದೆ ನ್ಯಾಯಕ್ಕಾಗಿ ಹೋರಾಟ&lt;/h2&gt;&lt;p&gt;ಹೈಕೋರ್ಟ್ ಆದೇಶದಿಂದ ನಮಗೆ ಯಾವುದೇ ಹಿನ್ನಡೆಯಾಗಿಲ್ಲ. ನಮ್ಮ ಹೋರಾಟದ ಹಾದಿ ನಮಗೆ ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ನಾವು ಧೃತಿಗೆಡುವುದಿಲ್ಲ. ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ದಿವಂಗತ ಸಹೋದರನಿಗೆ ನ್ಯಾಯ ಸಿಗುವವರೆಗೂ ನಮ್ಮ ಕಾನೂನಾತ್ಮಕ ಹೋರಾಟ ನಿರಂತರವಾಗಿ ನಡೆಯುತ್ತದೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದು ಖಚಿತ ಎಂದು ಗುರುನಾಥಗೌಡರ್ ನುಡಿದರು.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/yogesh-gowda-murder-case-vinay-kulkarni-gets-bail-family-gurunath-gowda-to-challenge-verdict-in-supreme-court-gdp/articleshow-kwshkt1"/>
        </item>
        <item>
            <title><![CDATA[ಧಾರವಾಡ-ಬೆಳಗಾವಿ ರೈಲು ಮಾರ್ಗ ಭೂಸ್ವಾಧೀನ ಕ್ಷಿಪ್ರಗತಿಯಲ್ಲಿ ಮುಗಿಸಲು, ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ]]></title>
            <link>https://kannada.asianetnews.com/karnataka-districts/karnataka-railway-updates-direct-dharwad-belagavi-rail-project-fast-tracked-londa-yard-work-delays-12-trains-gdp/articleshow-lrete5g</link>
            <guid isPermaLink="true">https://kannada.asianetnews.com/karnataka-districts/karnataka-railway-updates-direct-dharwad-belagavi-rail-project-fast-tracked-londa-yard-work-delays-12-trains-gdp/articleshow-lrete5g</guid>
            <pubDate>Wed, 29 Jul 2026 07:43:57 +0530</pubDate>
            <description><![CDATA[ಧಾರವಾಡ-ಬೆಳಗಾವಿ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಸಚಿವ ಎಂ.ಬಿ. ಪಾಟೀಲ್&zwnj; ಸೂಚಿಸಿದ್ದಾರೆ. ಮತ್ತೊಂದೆಡೆ, ಲೋಂಡಾ ಯಾರ್ಡ್&zwnj;ನಲ್ಲಿನ ನವೀಕರಣ ಕಾಮಗಾರಿಯಿಂದಾಗಿ ಅನಿರೀಕ್ಷಿತವಾಗಿ 12 ರೈಲುಗಳು ತಡವಾಗಿ ಸಂಚರಿಸಿದ್ದು, ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxz1z8x5tsce76phwyt24182,imgname-indian-railways-1-1784527430565.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಧಾರವಾಡ-ಬೆಳಗಾವಿ ರೈಲು ಮಾರ್ಗ ಅಭಿವೃದ್ಧಿ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಮುಗಿಸಬೇಕಾಗಿದೆ. ಹೀಗಾಗಿ ಬಾಕಿಯಿರುವ ಭೂಸ್ವಾಧೀನ ಸೇರಿ ಇನ್ನಿತರ ವಿಚಾರಗಳ ಕುರಿತ ಸಮಸ್ಯೆ ನಿವಾರಿಸಲು ಖುದ್ದು ಭೇಟಿ ನೀಡುವಂತೆ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಕಾರ್ಯದರ್ಶಿ ಅವರಿಗೆ ಸಚಿವ ಎಂ.ಬಿ. ಪಾಟೀಲ್&zwnj; ಸೂಚಿಸಿದ್ದಾರೆ.&lt;/p&gt;&lt;p&gt;ಖನಿಜ ಭವನದಲ್ಲಿ ಮಂಗಳವಾರ ರಾಜ್ಯದ ರೈಲ್ವೆ, ವಿಮಾನ ನಿಲ್ದಾಣ ಸೇರಿ ಇನ್ನಿತರ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಎಂ.ಬಿ. ಪಾಟೀಲ್&zwnj;, ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಧಾರವಾಡದ ಮಮ್ಮಿಗಟ್ಟಿ ಸಮೀಪ ಭೂಸ್ವಾಧೀನ ಸಮಸ್ಯೆಯಿದೆ. ಅದನ್ನು ಶೀಘ್ರ ಬಗೆಹರಿಸಿ ಭೂಸ್ವಾಧೀನ ಮಾಡಿಕೊಂಡು ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಹೀಗಾಗಿ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಕಾರ್ಯದರ್ಶಿ ಆರ್&zwnj;. ವಿಶಾಲ್&zwnj; ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಭೂ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶಿಸಿದರು.&lt;/p&gt;&lt;h2&gt;ರೈಲ್ವೆ ಕಾಮಗಾರಿಯಿಂದ ಬ್ಲಾಕ್&zwnj; ಬರ್ಸ್ಟ್&zwnj;: 12 ರೈಲು ವಿಳಂಬ&lt;/h2&gt;&lt;p&gt;ಹುಬ್ಬಳ್ಳಿ: ಲೋಂಡಾ ಯಾರ್ಡ್&zwnj;ನಲ್ಲಿ ನವೀಕರಣ ಕಾಮಗಾರಿಯಿಂದಾಗಿ ಅನಿರೀಕ್ಷಿತವಾಗಿ ಬ್ಲಾಕ್&zwnj; ಬರ್ಸ್ಟ್&zwnj; ಆದಕಾರಣ ಈ ಮಾರ್ಗವಾಗಿ ಸಂಚರಿಸಬೇಕಾದ ಬರೋಬ್ಬರಿ 12 ರೈಲುಗಳು ತಡವಾಗಿ ಚಲಿಸಿವೆ.&lt;/p&gt;&lt;p&gt;ಲೋಂಡಾ ಯಾರ್ಡ್&zwnj;ನಲ್ಲಿ ನವೀಕರಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಮೊದಲು ಎರಡಿದ್ದ ಫ್ಲಾರ್ಟ್&zwnj;ಫಾರ್ಮ್&zwnj;ನ್ನು ಮೂರಕ್ಕೇರಿಸಲಾಗುತ್ತಿದೆ. ನಿಗದಿತ ಕಾಮಗಾರಿ ವೇಳೆ ಅನಿರೀಕ್ಷಿತವಾಗಿ 8 ಗಂಟೆ ತಡವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ರೈಲು ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಹಲವು ರೈಲುಗಳು ಅಲ್ಲಲ್ಲಿ ನಿಲುಗಡೆಯಾಗಿದ್ದರೆ, ಮತ್ತೆ ಕೆಲ ರೈಲುಗಳ ವೇಳಾಪಟ್ಟಿಯನ್ನೇ ಬದಲಾಯಿಸಲಾಗಿದೆ.&lt;/p&gt;&lt;h2&gt;12 ರೈಲುಗಳ ವಿಳಂಬ:&lt;/h2&gt;&lt;p&gt;ನಿಜಾಮುದ್ದೀನ್&zwnj;-ವಾಸ್ಕೋಡಿಗಾಮಾ ಎಕ್ಸ್&zwnj;ಪ್ರೆಸ್- 221 ನಿಮಿಷ, ದಾದರ-ಹುಬ್ಬಳ್ಳಿ ಎಕ್ಸ್&zwnj;ಪ್ರೆಸ್- 221 ನಿಮಿಷ, ಬೆಂಗಳೂರು-ಬೆಳಗಾವಿ ಎಕ್ಸ್&zwnj;ಪ್ರೆಸ್-355 ನಿಮಿಷ, ಬೆಂಗಳೂರು-ಸಾಂಗ್ಲಿ ಎಕ್ಸ್&zwnj;ಪ್ರೆಸ್ -222 ನಿಮಿಷ, ಬೆಂಗಳೂರು-ಜೋಧಪುರ ಎಕ್ಸ್&zwnj;ಪ್ರೆಸ್- 237 ನಿಮಿಷ, ಮೈಸೂರು-ಬೆಳಗಾವಿ -245 ನಿಮಿಷ, ದಾದರ-ಪುದುಚೇರಿ ಎಕ್ಸ್&zwnj;ಪ್ರೆಸ್ -165 ನಿಮಿಷ, ಮಿರಜ್&zwnj;- ಹುಬ್ಬಳ್ಳಿ ಪ್ಯಾಸೆಂಜರ್&zwnj;-147 ನಿಮಿಷ, ಸಿಕಂದರಾಬಾದ್&zwnj;- ಬೆಳಗಾವಿ -222 ನಿಮಿಷ, ವಾಸ್ಕೋಡಿಗಾಮಾ-ಶಾಲಿಮಾರ್&zwnj; ಎಕ್ಸ್&zwnj;ಪ್ರೆಸ್ -123 ನಿಮಿಷ, ತಿರುಪತಿ-ಛತ್ರಪತಿ ಶಾಹು ಮಹಾರಾಜ ಟರ್ಮಿನಲ್&zwnj; ಎಕ್ಸ್&zwnj;ಪ್ರೆಸ್ -184 ನಿಮಿಷ, ಅಜ್ಮೀರ್&zwnj;-ಬೆಂಗಳೂರು ಎಕ್ಸ್&zwnj;ಪ್ರೆಸ್- 158 ನಿಮಿಷ ತಡೆ ಹಿಡಿಯಲಾಗಿತ್ತು.&lt;/p&gt;&lt;p&gt;ಇದಲ್ಲದೇ, ಬೆಳಗಾವಿ-ಬೆಂಗಳೂರು ಎಕ್ಸ್&zwnj;ಪ್ರೆಸ್&zwnj; ರೈಲನ್ನು -150 ನಿಮಿಷ ತಡವಾಗಿ ಮರು ನಿಗದಿಪಡಿಸಲಾಗಿತ್ತು. ಆದರೆ ಬೆಳಗಾವಿಯಿಂದ -192 ನಿಮಿಷ ತಡವಾಗಿ ಚಲಿಸಿತು. ಬೆಳಗಾವಿ-ಮೈಸೂರು ಎಕ್ಸ್&zwnj;ಪ್ರೆಸ್ ರೈಲು ಬೆಳಗಾವಿಯಿಂದಲೇ -235 ನಿಮಿಷ ತಡವಾಗಿ ಚಲಿಸಿತು.&lt;/p&gt;&lt;h2&gt;ರದ್ದತಿ:&lt;/h2&gt;&lt;p&gt;ಈ ನಡುವೆ ಸೋಲ್ಲಾಪುರ- ಧಾರವಾಡ ಪ್ಯಾಸೆಂಜರ್&zwnj;ನ್ನು ನವಲೂರು ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳಿಸಿದ್ದರೆ, ಪಂಡರಾಪುರ-ಧಾರವಾಡ ರೈಲನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಮಧ್ಯಾಹ್ನದ ನಂತರ ಸುಗಮ ಸಂಚಾರ ಶುರುವಾಯಿತು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-railway-updates-direct-dharwad-belagavi-rail-project-fast-tracked-londa-yard-work-delays-12-trains-gdp/articleshow-lrete5g"/>
        </item>
        <item>
            <title><![CDATA[ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ!]]></title>
            <link>https://kannada.asianetnews.com/karnataka-districts/dharwad-to-bengaluru-100-cows-meat-transported-in-a-lorry-seized/articleshow-nl6tvhe</link>
            <guid isPermaLink="true">https://kannada.asianetnews.com/karnataka-districts/dharwad-to-bengaluru-100-cows-meat-transported-in-a-lorry-seized/articleshow-nl6tvhe</guid>
            <pubDate>Sun, 19 Jul 2026 11:56:54 +0530</pubDate>
            <description><![CDATA[ಧಾರವಾಡದಲ್ಲಿ 100ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ, ಶಿವಮೊಗ್ಗದ ರಿಪ್ಪನ್&zwnj;ಪೇಟೆಯಲ್ಲಿ ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxwgmwrpw8xve1b4jyyv1dyq,imgname-----------------------2026-07-19t114248.666-1784442155798.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ/ಶಿವಮೊಗ್ಗ (ಜು.19)&lt;/strong&gt;: ಸುಮಾರು 100ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ ಅವುಗಳ ಮಾಂಸವನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಪ್ರಕರಣವನ್ನು ಉಪ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.&lt;/p&gt;&lt;p&gt;ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರ ಸಹಾಯದಿಂದ ಉಪ ನಗರ ಪೊಲೀಸರು ಪ್ರಕರಣ ಬೆಳಕಿಗೆ ತಂದು ದೂರು ದಾಖಲಿಸಿದ್ದಾರೆ.&lt;/p&gt;&lt;p&gt;ಬೆಳಗಾವಿಯ ಆಟೋ ನಗರದಲ್ಲಿ ಅಮೂಲ್ ಫ್ಯಾಕ್ಟರಿಯಲ್ಲಿ ಈ ಹತ್ಯೆ ಮಾಡಿ ಮಾಂಸವನ್ನು ಬೆಂಗಳೂರಿನ ನೀಲಸಂದ್ರಕ್ಕೆ ಕಳುಹಿಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಕೆಲಗೇರಿ ಬೈಪಾಸ್&zwnj; ಬಳಿ ಲಾರಿಯನ್ನು ನಿಲ್ಲಿಸಿ ಪರಿಶೀಲಿಸಿದಾಗ ಈ ವಿಷಯ ಗೊತ್ತಾಗಿದೆ. ಮಾಂಸ ಸಾಗಿಸುತ್ತಿದ್ದ ಲಾರಿ ಚಾಲಕ ಹಾಗೂ ಕ್ಲೀನರ್&zwnj;ನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಉಪ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;ಜಾನುವಾರು ಕಳ್ಳತನದ ಆರೋಪಿಗಳ ಬಂಧನ&lt;/h2&gt;&lt;p&gt;ರಿಪ್ಪನ್&zwnj;ಪೇಟೆ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವು ದಿನಗಳಿಂದ ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು' ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ್ದ. ಇನ್ನೋವಾ ಕಾರನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಶಿವಮೊಗ್ಗ ಮೂಲದ ಸುಹೇಲ್, ಮಹಮ್ಮದ್ ಇಸ್ರಾರ್ ಖಾನ್ ಬಂಧಿತರು. ಜು.3ರಂದು ಸಾಗರ ರಸ್ತೆಯ ಪಕ್ಕದಲ್ಲಿ ಮಲಗಿದ್ದ ರಾಸುವನ್ನು ಬೆಳಗಿನ ಜಾವ ವಾಹನವೊಂದರಲ್ಲಿ ಹೊತ್ತೊಯ್ದಿದ್ದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಹೊಸನಗರ ವೃತ್ತ ನಿರೀಕ್ಷಕ ಗೌಡಪ್ಪ ಗೌಡ&zwnj;ರ್, ಪಿಎಸ್&zwnj;ಐ ರಾಜುರೆಡ್ಡಿ, ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಗೋ ಕಳ್ಳತನ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharwad-to-bengaluru-100-cows-meat-transported-in-a-lorry-seized/articleshow-nl6tvhe"/>
        </item>
        <item>
            <title><![CDATA[ಹೃದಯ ವಿದ್ರಾವಕ ಘಟನೆ.. ಮಗನ ಅಗಲಿಕೆ ನೋವು ತಾಳಲಾರದೇ ಕುಸಿದುಬಿದ್ದು ಪ್ರಾಣಬಿಟ್ಟ ಅಮ್ಮ]]></title>
            <link>https://kannada.asianetnews.com/dharwad/dharwad-heart-breaking-incident-in-tejaswinagar-together-in-death-mother-and-son-gkn/articleshow-nspuadm</link>
            <guid isPermaLink="true">https://kannada.asianetnews.com/dharwad/dharwad-heart-breaking-incident-in-tejaswinagar-together-in-death-mother-and-son-gkn/articleshow-nspuadm</guid>
            <pubDate>Thu, 23 Jul 2026 12:13:02 +0530</pubDate>
            <description><![CDATA[&lt;p&gt;ಹೊಟ್ಟೆ ನೋವಿನಿಂದ ಮಗ ಹೋದರೆ, ಮಗನ ಅಗಲಿಕೆಯ ನೋವಿನಿಂದ ತಾಯಿ ಹೋದರು. ಸಾವಿನಲ್ಲೂ ಈ ಕರುಳ ಬಳ್ಳಿ ಬೇರ್ಪಡಲಿಲ್ಲ ಎಂಬುದು ಮಾತ್ರ ಈ ಘಟನೆಯ ಅತ್ಯಂತ ಕರುಣಾಜನಕ ಸತ್ಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky6vc09fn5z864nr9jcqk7sn,imgname-dharwad-mother-and-son-1784788943151.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ವಿಧಿಯಾಟ ಎಷ್ಟು ಕ್ರೂರ ಎಂಬುದಕ್ಕೆ ಧಾರವಾಡದ ತೇಜಸ್ವಿನಗರದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ. ತನ್ನನ್ನು ಹೆತ್ತು ಹೊತ್ತು ಸಲಹಿದ ತಾಯಿಯನ್ನು ಅಗಲಿ ಮಗ ಹೋಗಿದ್ದರೆ, ಅತ್ತ ಮಗನ ಅಗಲಿಕೆಯ ನೋವು ತಾಳಲಾರದೆ ತಾಯಿಯೂ ಸಹ ಪ್ರಾಣಬಿಟ್ಟಿದ್ದಾರೆ. ಒಂದೇ ದಿನ, ಒಂದೇ ಮನೆಯಲ್ಲಿ ನಡೆದ ಎರಡು ಸಾವುಗಳು ಇಡೀ ಬಡಾವಣೆಯನ್ನೇ ಕಣ್ಣೀರಲ್ಲಿ ಮುಳುಗಿಸಿವೆ.&lt;/p&gt;&lt;h2&gt;&lt;strong&gt;ನೋವಿಗೆ ಬೆದರಿ ಮಗನ ಆತ್ಮ*ತ್ಯೆ&lt;/strong&gt;&lt;/h2&gt;&lt;p&gt;ಧಾರವಾಡ ನಗರದ ತೇಜಸ್ವಿನಗರದ ನಿವಾಸಿ ಮೆಹಬೂಬ್ ಸಾಬ್ ನದಾಫ್ (47) ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಎಷ್ಟೇ ಚಿಕಿತ್ಸೆ ಪಡೆದರೂ ನೋವು ಮಾತ್ರ ಕಡಿಮೆಯಾಗಿರಲಿಲ್ಲ. ಈ ಅಸಹನೀಯ ನೋವನ್ನು ತಡೆಯಲಾರದೆ ಮೆಹಬೂಬ್ ಸಾಬ್ ಬುಧವಾರ ಬೆಳಗ್ಗೆ ರಾಜೀವ್ ಗಾಂಧಿನಗರದ ಬಳಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.&lt;/p&gt;&lt;h2&gt;&lt;strong&gt;ಮಗನ ಶವಯಾತ್ರೆ ವೇಳೆ ಕುಸಿದುಬಿದ್ದ ತಾಯಿ&lt;/strong&gt;&lt;/h2&gt;&lt;p&gt;ರೈಲ್ವೆ ಪೊಲೀಸರು ಮರಣೋತ್ತರ ಪರೀಕ್ಷೆ ಮುಗಿಸಿ ಸಂಜೆ ವೇಳೆಗೆ ಮೆಹಬೂಬ್ ಸಾಬ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು. ಮನೆಯಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿತ್ತು. ಸಂಜೆ ಸರಿಯಾಗಿ 7 ಗಂಟೆಗೆ ಮಗನ ಅಂತಿಮಯಾತ್ರೆ ಹೊರಡಬೇಕಿತ್ತು. ಇನ್ನೇನು ಮಗನ ಶವವನ್ನು ಮನೆಯಿಂದ ಹೊರತೆಗೆಯಬೇಕು ಎನ್ನುವಷ್ಟರಲ್ಲಿ, ಅಲ್ಲಿಯವರೆಗೆ ಕಣ್ಣೀರು ಸುರಿಸುತ್ತಾ ಮೌನವಾಗಿದ್ದ ತಾಯಿ ಮುಗುಟಬಿ (68) ನದಾಫ್ ಆಘಾತದಿಂದ ಕುಸಿದುಬಿದ್ದಿದ್ದಾರೆ. ಮಗನ ಅಗಲಿಕೆಯ ದುಃಖ ಆ ಜೀವಕ್ಕೆ ಸಹಿಸಲು ಸಾಧ್ಯವಾಗಲಿಲ್ಲ. ನೋಡನೋಡುತ್ತಿದ್ದಂತೆಯೇ ತಾಯಿ ಮುಗುಟಬಿ ಪ್ರಾಣಪಕ್ಷಿ ಹಾರಿಹೋಗಿದೆ.&lt;/p&gt;&lt;h2&gt;&lt;strong&gt;ಸಾವಿನಲ್ಲೂ ಮಗನನ್ನು ಹಿಂಬಾಲಿಸಿದ ತಾಯಿ&lt;/strong&gt;&lt;/h2&gt;&lt;p&gt;ಮಗನ ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದ ಕುಟುಂಬಸ್ಥರು ಮತ್ತು ಬಂಧುಗಳಿಗೆ ಈಗ ತಾಯಿಯ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದ ಆಘಾತ ನೀಡಿತು. ಅಂತಿಮವಾಗಿ, ಸಂಬಂಧಿಕರು ಮತ್ತು ಬಡಾವಣೆಯ ಜನರು ಮೊದಲು ಮಗ ಮೆಹಬೂಬ್ ಸಾಬ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದರು. ಬಳಿಕ ತಡರಾತ್ರಿ ತಾಯಿ ಮುಗುಟಬಿ ಅವರ ಅಂತ್ಯಕ್ರಿಯೆಯನ್ನೂ ಪೂರೈಸಲಾಯಿತು.&lt;/p&gt;&lt;p&gt;ಹಡೆದವ್ವನ ಪ್ರೀತಿ ಎಂಥದ್ದು ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಂತಿದೆ. ಮಗ ಹೋದ ಮೇಲೆ ನನಗೇಕೆ ಈ ಬದುಕು ಎಂದು ಆ ತಾಯಿ ಮಗನನ್ನೇ ಹಿಂಬಾಲಿಸಿ ಹೋದಂತೆ ಭಾಸವಾಗುತ್ತಿತ್ತು. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ನೋವಿನ ಕಥೆ ಕೇಳಿ ಪ್ರತಿಯೊಬ್ಬರ ಕಣ್ಣಾಲಿಗಳು ತೇವವಾಗುತ್ತಿವೆ. ಹೊಟ್ಟೆ ನೋವಿನಿಂದ ಮಗ ಹೋದರೆ, ಮಗನ ಅಗಲಿಕೆಯ ನೋವಿನಿಂದ ತಾಯಿ ಹೋದರು. ಸಾವಿನಲ್ಲೂ ಈ ಕರುಳ ಬಳ್ಳಿ ಬೇರ್ಪಡಲಿಲ್ಲ ಎಂಬುದು ಮಾತ್ರ ಈ ಘಟನೆಯ ಅತ್ಯಂತ ಕರುಣಾಜನಕ ಸತ್ಯ.&lt;/p&gt;]]></content:encoded>
            <category>dharwad</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/dharwad/dharwad-heart-breaking-incident-in-tejaswinagar-together-in-death-mother-and-son-gkn/articleshow-nspuadm"/>
        </item>
        <item>
            <title><![CDATA[ಯೋಗೇಶ್ ಗೌಡ ಹತ್ಯೆ ಕೇಸ್: ಜಾಮೀನು ಕೋರಿ ವಿನಯ್‌ ಕುಲಕರ್ಣಿ ಅರ್ಜಿ ಇಂದು ಹೈಕೋರ್ಟ್‌ ತೀರ್ಪು]]></title>
            <link>https://kannada.asianetnews.com/state/yogesh-gowda-murder-case-karnataka-high-court-to-pronounce-verdict-today-on-vinay-kulkarni-bail-sentence-plea-gdp/articleshow-nwpepud</link>
            <guid isPermaLink="true">https://kannada.asianetnews.com/state/yogesh-gowda-murder-case-karnataka-high-court-to-pronounce-verdict-today-on-vinay-kulkarni-bail-sentence-plea-gdp/articleshow-nwpepud</guid>
            <pubDate>Fri, 31 Jul 2026 08:50:59 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ, ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್&zwnj;ಗೆ ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ಈ ಮನವಿಯ ಕುರಿತ ತೀರ್ಪನ್ನು ಹೈಕೋರ್ಟ್ ಶುಕ್ರವಾರ ಪ್ರಕಟಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp7v1w3ssae3zg146z32qbb3,imgname-vinay-kulkarni-and-yogesh-gowda--1--1776232231033.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು&lt;/strong&gt;: ಧಾರವಾಡದ ಬಿಜೆಪಿ&zwnj; ಮುಖಂಡ ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಅಮಾನತ್ತಿನಲ್ಲಿಟ್ಟು, ಜಾಮೀನು ನೀಡಬೇಕೆಂಬ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಧ್ಯಂತರ&zwnj;&zwnj; ಮನವಿ ಕುರಿತ ತೀರ್ಪನ್ನು ಹೈಕೋರ್ಟ್ ಶುಕ್ರವಾರ ಪ್ರಕಟಿಸಲಿದೆ.&lt;/p&gt;&lt;p&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಹೈಕೋರ್ಟ್&zwnj;ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ. ಹಾಗೆಯೇ,&zwnj;&zwnj;&zwnj;&zwnj;&zwnj;&zwnj;&zwnj; ಶಿಕ್ಷೆಯನ್ನು ಅಮಾನತಿನಲ್ಲಿಟ್ಟು&zwnj;&zwnj;&zwnj;&zwnj; ಜಾಮೀನು ಮಂಜೂರು ಮಾಡಬೇಕು&zwnj;&zwnj; ಎಂದು ಮಧ್ಯಂತರ&zwnj;&zwnj; ಮನವಿ ಮಾಡಿದ್ದಾರೆ.&lt;/p&gt;&lt;p&gt;ಈ ಮಧ್ಯಂತರ ಮನವಿ&zwnj; ಕುರಿತು ಕುಲಕರ್ಣಿ ಹಾಗೂ ಸಿಬಿಐ ಪರ ವಕೀಲರ ವಾದ ಆಲಿಸಿ&zwnj; ಜು.9ರಂದು&zwnj; ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ ಅವರ ಪೀಠ ಶುಕ್ರವಾರ ಪ್ರಕಟಿಸಲಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ:&lt;/h2&gt;&lt;p&gt;2016ರಲ್ಲಿ ನಡೆದಿದ್ದ ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ವಿನಯ್ ಕುಲಕರ್ಣಿ ಸೇರಿ ಒಟ್ಟು 17 ಮಂದಿ ಆರೋಪಿಗಳನ್ನು 2026ರ ಏ.15ರಂದು ಅಪರಾಧಿಗಳು ಎಂದು ನಿರ್ಧರಿಸಿ, ಏ.17ರಂದು ವಿನಯ್&zwnj; ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.&amp;nbsp;&lt;/p&gt;&lt;h2&gt;ಮುಂದೇನು?&lt;/h2&gt;&lt;p&gt;ಶಿಕ್ಷೆ ರದ್ದಾದರೆ ಶಾಸಕ ಸ್ಥಾನ ಉಳಿಯುವ ಜೊತೆಗೆ. ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಶಿಕ್ಷೆ ರದ್ದಾಗದಿದ್ದರೆ ಮುಂದಿನ ಹಂತದಲ್ಲಿ ವಿನಯ್ ಕುಲಕರ್ಣಿಯವರು ಮೇಲಿನ ಹಂತದ ನ್ಯಾಯಾಲಯಕ್ಕೆ ಅಂದರೆ, ಸುಪ್ರೀಂ ಕೋರ್ಟ್&zwnj; ಮೊರೆ ಹೋಗುವ ಅವಕಾಶವಿದೆ. ಅಲ್ಲಿಯೂ ಇದೇ ತೀರ್ಪು ಬಂದರೆ ಜೀವಾವಧಿ ಶಿಕ್ಷೆ &amp;nbsp;ಅನುಭವಿಸಲೇಬೇಕು. ಇದರ ಜೊತೆಗೆ ಶಾಸಕ ಸ್ಥಾನ ರದ್ದಾಗಿರುವುದರಿಂದ ವಿನಯ್ ಶಾಸಕರಾಗಿ ಆಯ್ಕೆಯಾದ ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.&lt;/p&gt;&lt;p&gt;ಇತ್ತ ಉಪ ಚುನಾವಣೆ ನಡೆದರೆ ಕಾಂಗ್ರೆಸ್&zwnj;ನಿಂದ ವಿನಯ್ ಕುಲಕರ್ಣಿ ಪತ್ನಿಗೆ ಟಿಕೆಟ್&zwnj; ನೀಡುವ ಸಾಧ್ಯತೆ &amp;nbsp;ಜಾಸ್ತಿ ಇದೆ. ಪತ್ನಿ ನಿರಾಕರಿಸಿದರೆ ಪುತ್ರಿಯರು ಸ್ಪರ್ಧೆ ಮಾಡುವ ಸಾಧ್ಯತೆಯೂ ಇದೆ. ಇತ್ತೀಚೆಗೆ ಉಪ ಚುನಾವಣೆ ಚರ್ಚೆ ವೇಳೆ ಪತ್ನಿಯ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇಂದಿನ ತೀರ್ಪು &amp;nbsp;ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/state/yogesh-gowda-murder-case-karnataka-high-court-to-pronounce-verdict-today-on-vinay-kulkarni-bail-sentence-plea-gdp/articleshow-nwpepud"/>
        </item>
        <item>
            <title><![CDATA[SWRಯಿಂದ ಜುಲೈನಲ್ಲಿ ದಾಖಲೆ! 4.69 ಮಿಲಿಯನ್ ಟನ್ ಸರಕು ಸಾಗಣೆಗೆ ಬಂದ ಆದಾಯ ಎಷ್ಟು?]]></title>
            <link>https://kannada.asianetnews.com/state/south-western-railway-has-created-historic-record-by-transporting-4-69-million-tonnes-of-freight-in-month-of-july-mrq/articleshow-qwcgb3p</link>
            <guid isPermaLink="true">https://kannada.asianetnews.com/state/south-western-railway-has-created-historic-record-by-transporting-4-69-million-tonnes-of-freight-in-month-of-july-mrq/articleshow-qwcgb3p</guid>
            <pubDate>Tue, 04 Aug 2026 07:27:51 +0530</pubDate>
            <description><![CDATA[&lt;p&gt;ನೈಋತ್ಯ ರೈಲ್ವೆಯು ಜುಲೈ ತಿಂಗಳಲ್ಲಿ 4.69 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಈ ಅವಧಿಯಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಸೇವೆಯಿಂದ ಒಟ್ಟು ₹793.31 ಕೋಟಿ ಆದಾಯ ಗಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz57gmgkaq8yrseyv6z3c912,imgname-indian-railways-goods-1785808310803.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ: ನೈಋತ್ಯ ರೈಲ್ವೆ ಜುಲೈ ತಿಂಗಳಲ್ಲಿ ದಾಖಲೆಯ ಮಟ್ಟದ 4.69 ಮಿಲಿಯನ್ ಟನ್ (ಎಂಟಿ) ಸರಕು ಸಾಗಣೆ ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಜುಲೈ ತಿಂಗಳ ಇತಿಹಾಸದಲ್ಲೇ ಇದು ಅತ್ಯಧಿಕ ಸರಕು ಸಾಗಣೆಯಾಗಿದ್ದು, 2026-27ನೇ ಹಣಕಾಸು ವರ್ಷದ ಜುಲೈ ಅಂತ್ಯದ ವರೆಗೆ ಒಟ್ಟು ಸರಕು ಸಾಗಣೆ 17.19 ಮಿಲಿಯನ್ ಟನ್&zwnj;ಗೆ ತಲುಪಿದೆ.&lt;/p&gt;&lt;p&gt;ಜುಲೈ ತಿಂಗಳಲ್ಲಿ ನೈಋತ್ಯ ರೈಲ್ವೆ ₹793.31 ಕೋಟಿ ಒಟ್ಟು ಆದಾಯ ಗಳಿಸಿದ್ದು, ಇದರಲ್ಲಿ ಸರಕು ಸಾಗಣೆಯಿಂದ ₹449.27 ಕೋಟಿ ಹಾಗೂ ಪ್ರಯಾಣಿಕರ ಸೇವೆಯಿಂದ ₹303.54 ಕೋಟಿ ಆದಾಯ ಲಭಿಸಿದೆ. ಇದೇ ಅವಧಿಯಲ್ಲಿ 1.47 ಕೋಟಿ (14.76 ಮಿಲಿಯನ್) ಪ್ರಯಾಣಿಕರು ರೈಲು ಸೇವೆ ಬಳಸಿದ್ದಾರೆ.&lt;/p&gt;&lt;h2&gt;&lt;strong&gt;ಕಬ್ಬಿಣದ ಅದಿರು&lt;/strong&gt;&lt;/h2&gt;&lt;p&gt;ಸರಕು ಸಾಗಣೆಯಲ್ಲಿ ಕಬ್ಬಿಣದ ಅದಿರು 1.97 ಮಿಲಿಯನ್ ಟನ್&zwnj;ನೊಂದಿಗೆ ಶೇ. 22.4ರಷ್ಟು, ಉಕ್ಕು 1.05 ಮಿಲಿಯನ್ ಟನ್&zwnj;ನೊಂದಿಗೆ ಶೇ. 20.6ರಷ್ಟು ಹಾಗೂ ಖನಿಜ ತೈಲ ಮತ್ತು ಇತರೆ ಸರಕು ಸಾಗಣೆಯಲ್ಲಿಯೂ ಗಮನಾರ್ಹ ಬೆಳವಣಿಗೆ ದಾಖಲಾಗಿದೆ.&lt;/p&gt;&lt;h3&gt;&lt;strong&gt;ಪ್ರಯಾಣಿಕರ ಸೇವೆಯಿಂದ ₹1,203.73 ಕೋಟಿ ಆದಾಯ&lt;/strong&gt;&lt;/h3&gt;&lt;p&gt;2026-27ನೇ ಹಣಕಾಸು ವರ್ಷದ ಜುಲೈವರೆಗೆ ಒಟ್ಟು ಆದಾಯ ₹3,031.84 ಕೋಟಿಗೆ ತಲುಪಿದ್ದು, ಇದರಲ್ಲಿ ಸರಕು ಸಾಗಣೆಯಿಂದ ₹1,650.32 ಕೋಟಿ ಹಾಗೂ ಪ್ರಯಾಣಿಕರ ಸೇವೆಯಿಂದ ₹1,203.73 ಕೋಟಿ ಆದಾಯ ಬಂದಿದೆ. ಇದೇ ಅವಧಿಯಲ್ಲಿ 6.15 ಕೋಟಿ (61.56 ಮಿಲಿಯನ್) ಪ್ರಯಾಣಿಕರು ನೈಋತ್ಯ ರೈಲ್ವೆ ಸೇವೆ ಬಳಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 4.18ರಷ್ಟು ಹೆಚ್ಚಳವಾಗಿದೆ.&lt;/p&gt;&lt;p&gt;ಸರಕು ಸಾಗಣೆಯಲ್ಲಿನ ದಾಖಲೆ ಸಾಧನೆ, ಆದಾಯದಲ್ಲಿ ಸ್ಥಿರ ಬೆಳವಣಿಗೆ ಹಾಗೂ ಪ್ರಯಾಣಿಕರ ಸಂಖ್ಯೆಯ ಏರಿಕೆ ಕಾರ್ಯಾಚರಣಾ ದಕ್ಷತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಗ್ರಾಹಕ ಸ್ನೇಹಿ ಸೇವೆಗಳ ಫಲವಾಗಿದೆ. ಮುಂದಿನ ದಿನಗಳಲ್ಲೂ ಇದೇ ಸಾಧನೆಯನ್ನು ಮತ್ತಷ್ಟು ಉತ್ತಮಗೊಳಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/south-western-railway-has-created-historic-record-by-transporting-4-69-million-tonnes-of-freight-in-month-of-july-mrq/articleshow-qwcgb3p"/>
        </item>
        <item>
            <title><![CDATA[₹17.20 ಕೋಟಿ ವೆಚ್ಚದಲ್ಲಿ ಅಳ್ನಾವರ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಪ್ರಧಾನಿ ಮೋದಿ ಲೋಕಾರ್ಪಣೆ]]></title>
            <link>https://kannada.asianetnews.com/karnataka-districts/pm-modi-inaugurated-alnavar-railway-station-high-tech-upgrade-gvd/articleshow-rliiapm</link>
            <guid isPermaLink="true">https://kannada.asianetnews.com/karnataka-districts/pm-modi-inaugurated-alnavar-railway-station-high-tech-upgrade-gvd/articleshow-rliiapm</guid>
            <pubDate>Fri, 17 Jul 2026 18:42:58 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆಯು ದೇಶದ ಆರ್ಥಿಕತೆಗೆ ಬಲ ನೀಡಿದೆ. ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭಾರತೀಯ ರೈಲ್ವೆ ಕೊಡುಗೆ ಅಪಾರವಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxr391bw5jv5af4bakqeq4yc,imgname-ch-1784293918076.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ (ಜು.17):&lt;/strong&gt; ಭಾರತೀಯ ರೈಲ್ವೆಯು ದೇಶದ ಆರ್ಥಿಕತೆಗೆ ಬಲ ನೀಡಿದೆ. ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭಾರತೀಯ ರೈಲ್ವೆ ಕೊಡುಗೆ ಅಪಾರವಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಇಂದು (ಜುಲೈ 17) ಮಧ್ಯಾಹ್ನ ಅಳ್ನಾವರ ರೈಲು ನಿಲ್ದಾಣದಲ್ಲಿ ಅಮೃತ್ ಭಾರತ ರೈಲು ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ ಅಳ್ನಾವರ ರೈಲು ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.&lt;/p&gt;&lt;p&gt;ಇಂದು ಅಮೃತ್ ಭಾರತ್ ರೈಲು ನಿಲ್ದಾಣ ಪುನರ್ ಅಭಿವೃದ್ಧಿ ಯೋಜನೆಯಡಿ ದೇಶದಾದ್ಯಂತ 75 ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅದರಲ್ಲಿ ರಾಜ್ಯದ ಬಂಟ್ವಾಳ, ಬಾದಾಮಿ, ಕೊಪ್ಪಳ ಹಾಗೂ ಅಳ್ನಾವರ ರೈಲು ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ರೈಲು ನಿಲ್ದಾಣಗಳು ಹೊಂದಿವೆ. ಹೈಡ್ರೋಜನ್ ರೈಲಿಗೆ ಚಾಲನೆ ನೀಡಲಾಗಿದ್ದು, ಭಾರತ ದೇಶ ಕೂಡ ಹೈಡ್ರೋಜನ್ ರೈಲು ಹೊಂದಿದ ದೇಶಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಅಳ್ನಾವರ ರೈಲು ನಿಲ್ದಾಣವನ್ನು ರೂ.17.20 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಳಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಅತ್ಯುತ್ತಮ ಸೇವೆಗಳನ್ನು ಒದಗಿಸಲಾಗುತ್ತಿದೆ. ರೈಲ್ವೆ ವಿದ್ಯುದ್ಧೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲದೇ ರೈಲುಗಳಿಗೆ ಸಹ ಆಧುನಿಕ ಸ್ಪರ್ಶ ಕಲ್ಪಿಸಲಾಗಿದೆ. ಭಾರತೀಯ ರೈಲ್ವೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ರಾಜ್ಯದ ಜನರ ಏಳಿಗೆಗೆ ರೈಲ್ವೆ ಸೇವೆ ಪೂರಕವಾಗಿದೆ. ಸಶಕ್ತ, ಸಮೃದ್ಧ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ರಾಜ್ಯಪಾಲರು ಹೇಳಿದರು.&lt;/p&gt;&lt;p&gt;ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಇಂದು ಅಮೃತ್ ಭಾರತ ರೈಲು ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ರಾಜ್ಯದ 4 ಕಡೆಗಳಲ್ಲಿ ರೈಲು ನಿಲ್ದಾಣಗಳನ್ನು ನವೀಕರಣಗೊಳಿಸಲಾಗಿದೆ. ಬಂಟ್ವಾಳ, ಬಾದಾಮಿ, ಅಳ್ನಾವರ ಮತ್ತು ಕೊಪ್ಪಳ ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿಪಡಿಸಲಾಗಿದೆ. ಅಳ್ನಾವರ ರೈಲು ನಿಲ್ದಾಣವನ್ನು ರೂ.17.20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.&lt;/p&gt;&lt;p&gt;ವಿಮಾನ ನಿಲ್ದಾಣಗಳಂತೆ ರೈಲು ನಿಲ್ದಾಣಗಳನ್ನು ನವೀಕೃತಗೊಳಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಲಿಫ್ಟ್, ಪಾದಚಾರಿ ಮೇಲ್ಸೇತುವೆ, ದಿವ್ಯಾಂಗ ಸ್ನೇಹಿ ಸೌಲಭ್ಯ ಸೇರಿದಂತೆ ಇತರೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿರುತ್ತದೆ ಎಂದು ಅವರು ತಿಳಿಸಿದರು. ದೇಶದಾದ್ಯಂತ 75 ರೈಲು ನಿಲ್ದಾಣಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ&zwnj;. ಅಲ್ಲದೇ ಕೆಳ ಮತ್ತು ಮೇಲ್ಸೇತುವೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅಳ್ನಾವರ ಹಾಗೂ ದಾಂಡೇಲಿ ರೈಲು ಮಾರ್ಗದ ಭೂ ಸ್ವಾಧೀನ ಮಾಡಿಕೊಡಬೇಕಿದೆ. ಈ ಹಿಂದೆ ಧಾರವಾಡ, ಹುಬ್ಬಳ್ಳಿ ರೈಲು ನಿಲ್ದಾಣಗಳನ್ನು ನವೀಕರಣಗೊಳಿಸಲಾಗಿತ್ತು. ಜಗತ್ತಿನಲ್ಲಿ ರೈಲ್ವೆ ಲೇನ್ ನಲ್ಲಿ ಭಾರತ ಮೊದಲ ಸ್ಥಾನ ಪಡೆದಿದೆ.&lt;/p&gt;&lt;p&gt;ರೈಲ್ವೆ ವಿದ್ಯುದ್ಧೀಕರಣ ಕೂಡ ಪೂರ್ಣಗೊಂಡಿದೆ. ಇಂದು ಡಿಸೇಲ್ ಇಂಜಿನ್ ರೈಲುಗಳು ಬಂದ್ ಆಗಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು &zwnj;ನೀಡಲಾಗಿದೆ. ವಂದೇ ಭಾರತ್ ರೈಲುಗಳಿಗೆ ಉತ್ತಮ ಬೇಡಿಕೆಯಿದೆ. ಜಮ್ಮು ಮತ್ತು ಕಾಶ್ಮೀರ ಜೋಡಿಸುವ ಕಾರ್ಯ ಕೂಡ ಆಗಿದೆ. ದೇಶದ ರೈಲ್ವೆ ಬಜೆಟ್ ದೊಡ್ಡದಾಗಿದೆ. ಜಗತ್ತಿನಲ್ಲಿ ಹೈಡ್ರೋಜನ್ ರೈಲು ಹೊಂದಿದ 4 ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. ಭಾರತ ದೇಶವು ಹಸಿರು ಹೈಡ್ರೋಜನ್ ಉತ್ಪಾದನೆಯ ಹಬ್ ಆಗಲಿದೆ. ಕಳೆದ 14 ವರ್ಷಗಳಲ್ಲಿ ದೇಶದಲ್ಲಿ ಪರಿಣಾಮಕಾರಿ ಬದಲಾವಣೆಯಾಗಿದೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಹೇಳಿದರು.&lt;/p&gt;&lt;p&gt;ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ವರ್ಚುವಲ್ ಆಗಿ ರೈಲು ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು ಪುನರಾಭಿವೃದ್ಧಿಗೊಂಡ ಅಳ್ನಾವರ ರೈಲು ನಿಲ್ದಾಣದ ಶಿಲಾನ್ಯಾಸವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಚಿತ್ರಕಲೆ, ಪ್ರಬಂಧ, ಆಶು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಾಸಕರಾದ ಪ್ರದೀಪ ಶೆಟ್ಟರ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ನೈರುತ್ಯ ರೈಲ್ವೆಯ ಮಹಾ ಪ್ರಬಂಧಕರಾದ ಅನಂತ್ ಪಿ., ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.&lt;/p&gt;&lt;p&gt;ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಭಾರತ್ ನಿಲ್ದಾಣ ಯೋಜನೆ (ABSS) ಅಡಿಯಲ್ಲಿ ಧಾರವಾಡ ಜಿಲ್ಲೆಯ ಅಳ್ನಾವರ ರೈಲು ನಿಲ್ದಾಣವನ್ನು ₹17.20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಂಪೂರ್ಣವಾಗಿ ಪುನರ್ ಅಭಿವೃದ್ಧಿಪಡಿಸಲಾಗಿದೆ. ಬ್ರಿಟಿಷರ ಕಾಲದ ಈ ಐತಿಹಾಸಿಕ ನಿಲ್ದಾಣಕ್ಕೆ ಈಗ ವಿಮಾನ ನಿಲ್ದಾಣದ ಮಾದರಿಯಲ್ಲಿ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆಗೊಳಿಸಿದ್ದಾರೆ.&lt;/p&gt;&lt;h2&gt;&lt;strong&gt;₹17.20 ಕೋಟಿ ವೆಚ್ಚದ ನವೀಕೃತ ಅಳ್ನಾವರ ರೈಲು ನಿಲ್ದಾಣದ ಪ್ರಮುಖ ವಿಶೇಷತೆಗಳು :&lt;/strong&gt;&lt;/h2&gt;&lt;p&gt;&lt;strong&gt;ನಿಲ್ದಾಣದ ಮೂಲಸೌಕರ್ಯ ಮತ್ತು ಸುಂದರೀಕರಣ: &lt;/strong&gt;ಆಧುನಿಕ ಕಟ್ಟಡ ಮತ್ತು ಮುಂಭಾಗ (Facade): ನಿಲ್ದಾಣದ ಮುಖ್ಯ ಕಟ್ಟಡವನ್ನು ವಿಸ್ತರಿಸಲಾಗಿದ್ದು, ಪ್ರಾದೇಶಿಕ ಕಲೆ ಮತ್ತು ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಆಕರ್ಷಕ ಪ್ರವೇಶ ದ್ವಾರ ಹಾಗೂ ಮುಂಭಾಗದ ವಿನ್ಯಾಸವನ್ನು ಮಾಡಲಾಗಿದೆ.&lt;/p&gt;&lt;p&gt;&lt;strong&gt;ಸುಧಾರಿತ ಸಂಚಾರ ಪ್ರದೇಶ (Circulating Area): &lt;/strong&gt;ಸುಮಾರು 4,500 ಚದರ ಮೀಟರ್ ಪ್ರದೇಶದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಸುಸಜ್ಜಿತ ಪಾರ್ಕಿಂಗ್&zwnj;ಗಾಗಿ ವಿಶಾಲವಾದ ಜಾಗವನ್ನು ಅಭಿವೃದ್ಧಿಪಡಿಸಲಾಗಿದೆ.&lt;/p&gt;&lt;p&gt;&lt;strong&gt;ಸುಂದರ ಆವರಣ:&lt;/strong&gt; ನಿಲ್ದಾಣದ ಸುತ್ತಮುತ್ತ ಆಕರ್ಷಕ ವರ್ಣಚಿತ್ರಗಳು (Murals), ಹಸಿರು ಗಿಡಗಳ ಲ್ಯಾಂಡ್&zwnj;ಸ್ಕೇಪಿಂಗ್ ಮತ್ತು ಪರಿಸರ ಸ್ನೇಹಿ ಎಲ್&zwnj;ಇಡಿ (LED) ದೀಪಗಳ ವ್ಯವಸ್ಥೆ ಮಾಡಲಾಗಿದೆ.&lt;/p&gt;&lt;p&gt;&lt;strong&gt;ಪ್ರಯಾಣಿಕರ ಸೌಕರ್ಯಗಳು ಹೊಸ ಬುಕ್ಕಿಂಗ್ ಕೇಂದ್ರ:&lt;/strong&gt; ಸಾರ್ವಜನಿಕರಿಗೆ ಟಿಕೆಟ್ ಪಡೆಯಲು ಅನುಕೂಲವಾಗುವಂತೆ 200 ಚದರ ಮೀಟರ್ ವಿಸ್ತೀರ್ಣದ ಸುಸಜ್ಜಿತ ಡಿಜಿಟಲ್ ಟಿಕೆಟ್ ಕೌಂಟರ್&zwnj;ಗಳನ್ನು ಸ್ಥಾಪಿಸಲಾಗಿದೆ.&lt;/p&gt;&lt;p&gt;&lt;strong&gt;ವಿಶಾಲ ನಿರೀಕ್ಷಣಾ ಹಾಲ್ ಮತ್ತು ಲೌಂಜ್: &lt;/strong&gt;ಪ್ರಯಾಣಿಕರು ವಿಶ್ರಮಿಸಲು ಹವಾನಿಯಂತ್ರಿತ (AC) ಕಾಯುವ ಕೋಣೆಗಳು, ಮಹಿಳೆಯರಿಗಾಗಿ ಪ್ರತ್ಯೇಕ ಬೇಬಿ-ಫೀಡಿಂಗ್ (ಸ್ತನ್ಯಪಾನ) ಕೊಠಡಿ ಮತ್ತು ಪ್ರತ್ಯೇಕ ಎಕ್ಸಿಕ್ಯೂಟಿವ್ ಲೌಂಜ್&zwnj;ಗಳನ್ನು ನಿರ್ಮಿಸಲಾಗಿದೆ.&lt;/p&gt;&lt;p&gt;&lt;strong&gt;ಹೊಸ ಪ್ಲಾಟ್&zwnj;ಫಾರ್ಮ್ ಶೆಲ್ಟರ್&zwnj;ಗಳು: &lt;/strong&gt;ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಪ್ಲಾಟ್&zwnj;ಫಾರ್ಮ್ 1 ಮತ್ತು 2ಕ್ಕೆ ಸುಧಾರಿತ ರೂಫ್ ಶೆಲ್ಟರ್&zwnj;ಗಳನ್ನು ಅಳವಡಿಸಲಾಗಿದೆ.&lt;/p&gt;&lt;p&gt;&lt;strong&gt;ಆಧುನಿಕ ಶೌಚಾಲಯಗಳು: &lt;/strong&gt;ನಿಲ್ದಾಣ ಹಾಗೂ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಸ್ವಚ್ಛ ಹಾಗೂ ಅತ್ಯಾಧುನಿಕ ಶೌಚಾಲಯ ಬ್ಲಾಕ್&zwnj;ಗಳನ್ನು ನಿರ್ಮಿಸಲಾಗಿದೆ.&lt;/p&gt;&lt;p&gt;&lt;strong&gt;ಸುಲಭ ಸಂಚಾರ ಮತ್ತು ದಿವ್ಯಾಂಗ ಸ್ನೇಹಿ ಸೌಲಭ್ಯಗಳು 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ (FOB): &lt;/strong&gt;ಪ್ರಯಾಣಿಕರು ಒಂದು ಪ್ಲಾಟ್&zwnj;ಫಾರ್ಮ್&zwnj;ನಿಂದ ಮತ್ತೊಂದಕ್ಕೆ ಸುರಕ್ಷಿತವಾಗಿ ದಾಟಲು 12 ಮೀಟರ್ ಅಗಲದ ಬೃಹತ್ ಫುಟ್ ಓವರ್ ಬ್ರಿಡ್ಜ್ ನಿರ್ಮಿಸಲಾಗಿದೆ.&lt;/p&gt;&lt;p&gt;&lt;strong&gt;ಲಿಫ್ಟ್ ಸೌಕರ್ಯ: &lt;/strong&gt;ಹಿರಿಯ ನಾಗರಿಕರು ಮತ್ತು ರೋಗಿಗಳ ಅನುಕೂಲಕ್ಕಾಗಿ 2 ಹೊಸ ಲಿಫ್ಟ್&zwnj;ಗಳನ್ನು ಅಳವಡಿಸಲಾಗಿದೆ.&lt;/p&gt;&lt;p&gt;&lt;strong&gt;ದಿವ್ಯಾಂಗ ಸ್ನೇಹಿ ವ್ಯವಸ್ಥೆ: &lt;/strong&gt;ದೈಹಿಕ ವಿಕಲಚೇತನರಿಗಾಗಿ ವಿಶೇಷ ರ&zwj;್ಯಾಂಪ್&zwnj;ಗಳು (Ramps), ಸುಲಭವಾಗಿ ಗುರುತಿಸಬಹುದಾದ ಗೈಡೆನ್ಸ್ ಪಾತ್&zwnj;ವೇಗಳು, ಪ್ರತ್ಯೇಕ ಶೌಚಾಲಯಗಳು ಮತ್ತು ಟ್ಯಾಕ್ಟೈಲ್ ಟೈಲ್ಸ್ (Tactile Tiles) ಅಳವಡಿಸಲಾಗಿದೆ.&lt;/p&gt;&lt;p&gt;&lt;strong&gt;ಡಿಜಿಟಲ್ ಮತ್ತು ಮಾಹಿತಿ ವ್ಯವಸ್ಥೆ ಮಾಹಿತಿ ಫಲಕಗಳು:&lt;/strong&gt; ನಿಲ್ದಾಣದ ಒಳಗೆ ಮತ್ತು ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ರೈಲುಗಳ ಆಗಮನ-ನಿರ್ಗಮನ ಹಾಗೂ ಕೋಚ್&zwnj;ಗಳ ಸ್ಥಾನವನ್ನು ನಿಖರವಾಗಿ ತೋರಿಸುವ ಎಲ್&zwnj;ಇಡಿ ಇಂಡಿಕೇಟರ್ ಬೋರ್ಡ್&zwnj;ಗಳನ್ನು ಅಳವಡಿಸಲಾಗಿದೆ.&lt;/p&gt;&lt;p&gt;&lt;strong&gt;ಉಚಿತ ವೈ-ಫೈ: &lt;/strong&gt;ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರಿಗೆ ಹೈ-ಸ್ಪೀಡ್ ಉಚಿತ ವೈ-ಫೈ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ.&lt;/p&gt;&lt;p&gt;ಈ ಎಲ್ಲ ಹೈಟೆಕ್ ಬದಲಾವಣೆಗಳ ಮೂಲಕ ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್&zwnj;ಗಳಲ್ಲಿ ಒಂದಾದ ಅಳ್ನಾವರ ನಿಲ್ದಾಣವು (LWR) ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಜಾಗತಿಕ ಮಟ್ಟದ ಪ್ರಯಾಣದ ಅನುಭವವನ್ನು ನೀಡುತ್ತಿದೆ.&lt;/p&gt;]]></content:encoded>
            <category>dharwad</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/pm-modi-inaugurated-alnavar-railway-station-high-tech-upgrade-gvd/articleshow-rliiapm"/>
        </item>
        <item>
            <title><![CDATA[ಧಾರವಾಡ ವೈದ್ಯೆ ತಾಯಿಯಿಂದ ಚಾಕು ಇರಿತಕ್ಕೊಳಗಾದ ಮಗು ಗುಣಮುಖ; ಪೊಲೀಸ್ ಕಮಿಷನರ್ ಶಶಿಕುಮಾರ್‌ಗೆ ಹ್ಯಾಟ್ಸಾಫ್!]]></title>
            <link>https://kannada.asianetnews.com/karnataka-districts/dharwad-doctors-couple-son-boy-nihet-recovers-after-mother-stabbing-police-commissioner-shashi-kumar-heroic-act-sat/articleshow-sh4zpmk</link>
            <guid isPermaLink="true">https://kannada.asianetnews.com/karnataka-districts/dharwad-doctors-couple-son-boy-nihet-recovers-after-mother-stabbing-police-commissioner-shashi-kumar-heroic-act-sat/articleshow-sh4zpmk</guid>
            <pubDate>Tue, 21 Jul 2026 12:37:17 +0530</pubDate>
            <description><![CDATA[ಧಾರವಾಡದಲ್ಲಿ ವೈದ್ಯ ಪತ್ನಿಯಿಂದ ನಡೆದ ಗಂಡನ ಕೊಲೆ ಮತ್ತು ಮಗನ ಮೇಲಿನ ಹಲ್ಲೆ ಪ್ರಕರಣದಲ್ಲಿ, ತಾಯಿಯಿಂದಲೇ ಭೀಕರ ಚಾಕು ಇರಿತಕ್ಕೊಳಗಾಗಿದ್ದ 8 ವರ್ಷದ ಬಾಲಕ ನಿಹೇತ್ ಸಂಪೂರ್ಣ ಗುಣಮುಖನಾಗಿದ್ದಾನೆ. ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಸಮಯಪ್ರಜ್ಞೆಯಿಂದ ಮಗುವಿನ ಜೀವ ಉಳಿದಿದ್ದು, ಅವರ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky1qm7wqrqwykwfxfc132r0q,imgname-dharwad-doctors-couple-child-safe-1784617246615.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ (ಜು.21): ಇ&lt;/strong&gt;ಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಧಾರವಾಡದ ವೈದ್ಯ ಪತ್ನಿಯಿಂದ (Doctor's Wife) ಗಂಡನ ಕೊಲೆ ಹಾಗೂ ಮಗನಿಗೆ ಚಾಕು ಇರಿತ ಪ್ರಕರಣಕ್ಕೆ (Husband Murder &amp;amp; Son Stabbing Case) ಸಂಬಂಧಿಸಿದಂತೆ ಒಂದು ಸುಖಾಂತ್ಯದ ಸುದ್ದಿ ಹೊರಬಿದ್ದಿದೆ. ತನ್ನದೇ ಹೆತ್ತ ತಾಯಿಯಿಂದ ಭೀಕರವಾಗಿ ಚಾಕು ಇರಿತಕ್ಕೊಳಗಾಗಿದ್ದ 8 ವರ್ಷದ ಬಾಲಕ ನಿಹೇತ್ (Nihet) ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ.&lt;/p&gt;&lt;h2&gt;&lt;strong&gt;ಆಸ್ಪತ್ರೆಯಲ್ಲಿ ಆಟವಾಡುತ್ತಿರುವ ಪುಟಾಣಿ ನಿಹೇತ್:&lt;/strong&gt;&lt;/h2&gt;&lt;p&gt;ಕಳೆದ ಜುಲೈ 15 ರಂದು ನಡೆದ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಿಹೇತ್&zwnj;ನನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿತ್ತು. ಹೊಟ್ಟೆ ಹಾಗೂ ದೇಹದ ಭಾಗಗಳಿಗೆ ಚಾಕು ಇರಿತವಾಗಿದ್ದರಿಂದ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ, ವೈದ್ಯರ ಸತತ ಪ್ರಯತ್ನ ಹಾಗೂ ಮಗುವಿನ ಜೀವಾಲೆಗೆ ಜಯ ಸಿಕ್ಕಿದ್ದು, ನಿಹೇತ್ ಈಗ ಆಸ್ಪತ್ರೆಯಲ್ಲೇ ಆಟವಾಡುತ್ತಿದ್ದಾನೆ. ಪುಟಾಣಿ ಬಾಲಕ ಚೇತರಿಸಿಕೊಂಡಿರುವುದು ವೈದ್ಯಕೀಯ ತಂಡ ಹಾಗೂ ಪೊಲೀಸ್ ಇಲಾಖೆಯಲ್ಲಿ ಹರ್ಷ ಮೂಡಿಸಿದೆ.&lt;/p&gt;&lt;h2&gt;&lt;strong&gt;ದೇವದೂತನಂತೆ ಬಂದ ಕಮಿಷನರ್ ಎನ್. ಶಶಿಕುಮಾರ್ :&lt;/strong&gt;&lt;/h2&gt;&lt;p&gt;ಈ ಮಗು ಇಂದು ಬದುಕಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ (Police Commissioner) ಎನ್. ಶಶಿಕುಮಾರ್ (IPS Shashi Kumar) ಅವರ ಸಮಯಪ್ರಜ್ಞೆ. ಜುಲೈ 15 ರಂದು ಮಹಿಳೆ ತನ್ನ ಗಂಡನನ್ನು ಕೊಲೆ ಮಾಡಿ, ಮಗನಿಗೂ ಚಾಕು ಇರಿದಿದ್ದಳು. ಮಗು ರಕ್ತದ ಮಡುವಿನಲ್ಲಿ (Pool of Blood) ಒದ್ದಾಡುತ್ತಿದ್ದರೂ, ಆ ಪಾಪಿ ತಾಯಿ ಕಿಂಚಿತ್ತೂ ಮನ ಮಿಡಿಯದೆ ಪಕ್ಕದಲ್ಲೇ ಕುಳಿತು ಮೊಬೈಲ್ ನೋಡುತ್ತಿದ್ದಳು.&lt;/p&gt;&lt;p&gt;ಸ್ಥಳಕ್ಕೆ ಭೇಟಿ ನೀಡಿದ್ದ ಕಮಿಷನರ್ ಶಶಿಕುಮಾರ್ ಅವರು, ಮಗುವಿನ ಸ್ಥಿತಿ ಕಂಡು ಮರುಗಿದ್ದರು. ಆಂಬುಲೆನ್ಸ್&zwnj;ಗೆ ಕಾಯುತ್ತಾ ನಿಲ್ಲದ ಕಮಿಷನರ್, ರಕ್ತದ ಮಡುವಿನಲ್ಲಿದ್ದ ಮಗುವನ್ನು ಎದೆಗಪ್ಪಿಕೊಂಡು (Hold Close to Chest) ತಾವೇ ಆಸ್ಪತ್ರೆಗೆ ಓಡಿಸಿದ್ದರು. ಪೊಲೀಸ್ ಅಧಿಕಾರಿ ಎಂಬ ಗತ್ತು ಬಿಟ್ಟು ಒಬ್ಬ ತಂದೆಯಂತೆ ಮಗುವನ್ನು ಎತ್ತಿಕೊಂಡು ಹೋಗಿ ತುರ್ತು ಚಿಕಿತ್ಸೆಗೆ (Emergency Treatment) ವ್ಯವಸ್ಥೆ ಮಾಡಿದ್ದರು. ಕಮಿಷನರ್ ಅವರ ಈ ಒಂದು ಮಾನವೀಯ ನಡೆ (Humanitarian Act) ಇಂದು ಒಂದು ಅಮಾಯಕ ಜೀವವನ್ನು ಉಳಿಸಿದೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರ ಮೆಚ್ಚುಗೆ :&lt;/strong&gt;&lt;/h2&gt;&lt;p&gt;ಮಗು ಗುಣಮುಖನಾಗಿರುವ ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದೆ. &quot;ಖಾಕಿ ಉಡುಪಿನ ಹಿಂದೆ ಒಬ್ಬ ಕರುಣಾಮಯಿ ತಂದೆಯಿದ್ದಾರೆ&quot; ಎಂದು ಜನರು ಕೊಂಡಾಡುತ್ತಿದ್ದಾರೆ. ತನ್ನ ಸ್ವಂತ ತಾಯಿಯೇ ರಾಕ್ಷಸಿಯಂತೆ ವರ್ತಿಸಿದಾಗ, ಅಪರಿಚಿತ ಪೊಲೀಸ್ ಅಧಿಕಾರಿಯೊಬ್ಬರು ದೇವದೂತನಂತೆ ಬಂದು ಮಗುವಿನ ಜೀವ ಉಳಿಸಿರುವುದು ನಿಜಕ್ಕೂ ವಿಶೇಷ. ಸದ್ಯ ಮಗು ಆಪತ್ತಿನಿಂದ ಪಾರಾಗಿದ್ದು, ಶೀಘ್ರವೇ ಸಂಪೂರ್ಣ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/dharwad-doctors-couple-son-boy-nihet-recovers-after-mother-stabbing-police-commissioner-shashi-kumar-heroic-act-sat/articleshow-sh4zpmk"/>
        </item>
        <item>
            <title><![CDATA[ಯೋಗೇಶ್ ಗೌಡ ಕೊಲೆ ಪ್ರಕರಣ: ಬೇಲ್ ಸಿಕ್ಕ ಜೋಶ್, ಧಾರವಾಡದ ಗಡಿ ದಾಟಲು ವಿನಯ್ ಕುಲಕರ್ಣಿ ಹೊಸ ಅಸ್ತ್ರ!]]></title>
            <link>https://kannada.asianetnews.com/state/yogesh-gowda-murder-case-ex-minister-vinay-kulkarni-moves-court-to-relax-bail-condition-and-dharwad-entry-gdp/articleshow-sr39yl4</link>
            <guid isPermaLink="true">https://kannada.asianetnews.com/state/yogesh-gowda-murder-case-ex-minister-vinay-kulkarni-moves-court-to-relax-bail-condition-and-dharwad-entry-gdp/articleshow-sr39yl4</guid>
            <pubDate>Thu, 06 Aug 2026 13:54:34 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿ, ತಮ್ಮ ಜಾಮೀನು ಷರತ್ತು ಸಡಿಲಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಾಕ್ಷಿ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿರುವ ಧಾರವಾಡ ಜಿಲ್ಲಾ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01epnp7p5c4qkwwsmwkcxgqjmj,imgname-yogesh-gowda--vinay-kulkarni-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ, ತಮ್ಮ ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಮತ್ತೆ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. ಸಾಕ್ಷಿ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿರುವ ಧಾರವಾಡ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಅವರು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ.&lt;/p&gt;&lt;p&gt;ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಈಗಾಗಲೇ ಹೈಕೋರ್ಟ್&zwnj;ನಿಂದ ಜಾಮೀನು ಲಭಿಸಿದೆ. ಆದರೆ, ಈ ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಮತ್ತು ಸಾಕ್ಷಿ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ (ಐಪಿಸಿ ಸೆಕ್ಷನ್ 195A ಅಡಿಯಲ್ಲಿ) ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಾಕ್ಷಿ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಜಾಮೀನು ನೀಡುವ ವೇಳೆ, &quot;ಧಾರವಾಡ ಜಿಲ್ಲೆಗೆ ಪ್ರವೇಶಿಸಬಾರದು&quot; ಎಂಬ ಕಠಿಣ ಷರತ್ತನ್ನು ವಿಧಿಸಿತ್ತು.&lt;/p&gt;&lt;h2&gt;ಷರತ್ತು ಸಡಿಲಿಕೆಗೆ ಮನವಿ&lt;/h2&gt;&lt;p&gt;ಇದೀಗ ಧಾರವಾಡ ಜಿಲ್ಲೆಗೆ ಪ್ರವೇಶಿಸಲು ವಿಧಿಸಲಾಗಿರುವ ಈ ಕಠಿಣ ಷರತ್ತಿನಿಂದ ತಮಗೆ ವಿನಾಯಿತಿ ನೀಡಬೇಕು ಮತ್ತು ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಕೋರಿ ವಿನಯ್ ಕುಲಕರ್ಣಿ ಅವರು ಬೆಂಗಳೂರಿನ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್ ಕೋರ್ಟ್&zwnj;ಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಜನಸೇವೆ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಈ ಷರತ್ತು ಅಡ್ಡಿಯಾಗುತ್ತಿದ್ದು, ಅದನ್ನು ಸಡಿಲಗೊಳಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿರುವ ನ್ಯಾಯಾಲಯವು, ಸಿಬಿಐ ಹಾಗೂ ಪ್ರಾಸಿಕ್ಯೂಷನ್ ಆಕ್ಷೇಪಣೆಗಳನ್ನು ಆಲಿಸಿದ ನಂತರ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.&lt;/p&gt;&lt;h2&gt;ಘಟನೆ ಹಿನ್ನೆಲೆ:&lt;/h2&gt;&lt;p&gt;ಬರೋಬ್ಬರಿ ಹತ್ತು ವರ್ಷಗಳ ಹಿಂದೆ ನಡೆದಿದ್ದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಹೈಕೋರ್ಟ್&zwnj; ದ್ವಿಸದಸ್ಯ ಪೀಠ ಜುಲೈ 31ರಂದು ನೀಡಿರುವ ಮಹತ್ವದ ಆದೇಶ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲು ಪಾಲಾಗಿದ್ದ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ದೊಡ್ಡ ನಿರಾಳತೆ ತಂದುಕೊಟ್ಟಿತ್ತು. ಈ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಸೇರಿ 17 ಮಂದಿಯನ್ನು ಅಪರಾಧಿ ಎಂದಿದ್ದ ನ್ಯಾಯಾಲಯ ಕಳೆದ ಏ.17ರಂದು ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ಸೆಷೆನ್ಸ್&zwnj; ನ್ಯಾಯಾಲಯ ಆದೇಶ ಹೊರಡಿಸಿತ್ತು. ಹೀಗಾಗಿ, ವಿನಯ ಕುಲಕರ್ಣಿ ಅವರಿಗೆ ಶಾಸಕ ಸ್ಥಾನ ಹೋಗುವುದಲ್ಲದೇ ಜೀವನಪೂರ್ತಿ ಜೈಲು ಪಾಲಾಗುವ ದೊಡ್ಡ ಕಂಟಕ ಎದುರಾಗಿತ್ತು. ಸುದೀರ್ಘ ಕಾನೂನು ಹೋರಾಟದ ನಂತರ ಹೈಕೋರ್ಟ್&zwnj; ಅವರಿಗೆ ಜಾಮೀನು ಮಂಜೂರು ಮಾಡಿದೆ.&lt;/p&gt;&lt;p&gt;2016ರ ಜೂನ್&zwnj; 15ರಂದು ಧಾರವಾಡದ ಸಪ್ತಾಪೂರದ ಅವರದ್ದೇಯಾದ ಜಿಮ್&zwnj;ನಲ್ಲಿ ಯೋಗೀಶಗೌಡನ ಬರ್ಬರ ಹತ್ಯೆಯಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರಿಂದ ತನಿಖೆ ನಡೆದಿತ್ತು. ನಂತರ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಈ ಪ್ರಕರಣದಲ್ಲಿ ವಿನಯ ಕುಲಕರ್ಣಿ 2020ರಲ್ಲಿ ಬಂಧನಕ್ಕೆ ಒಳಗಾದರು. ತದನಂತರ 2021ರಲ್ಲಿ ಜಾಮೀನು ಪಡೆದಿದ್ದರು. ಆದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಸುಪ್ರಿಂ ಕೋರ್ಟ್&zwnj; ಇವರ ಜಾಮೀನು ರದ್ದುಗೊಳಿಸಿತ್ತು. ಎರಡು ಕಡೆಯಿಂದ ವಾದ-ಪ್ರತಿವಾದ ಹಾಗೂ ಸಾಕ್ಷಿಗಳ ವಿಚಾರಣೆ ನಡೆದು ಕಳೆದ ಏ. 17ರಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಸೆಷೆನ್ಸ್&zwnj; ನ್ಯಾಯಾಲಯ ಆದೇಶ ನೀಡಿತ್ತು.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/state/yogesh-gowda-murder-case-ex-minister-vinay-kulkarni-moves-court-to-relax-bail-condition-and-dharwad-entry-gdp/articleshow-sr39yl4"/>
        </item>
        <item>
            <title><![CDATA[ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್‌ಗೆ ಹುಬ್ಬಳ್ಳಿ ಮಾರ್ಗದ ಕೂಗು: ಏನಿದು ಹೊಸ ತಿರುವು?]]></title>
            <link>https://kannada.asianetnews.com/karnataka-districts/sleeper-vande-bharat-via-tumakuru-davanagere-hubballi-belagavi-route-instead-of-kalaburgi-mrq/articleshow-uudiggg</link>
            <guid isPermaLink="true">https://kannada.asianetnews.com/karnataka-districts/sleeper-vande-bharat-via-tumakuru-davanagere-hubballi-belagavi-route-instead-of-kalaburgi-mrq/articleshow-uudiggg</guid>
            <pubDate>Thu, 23 Jul 2026 06:20:39 +0530</pubDate>
            <description><![CDATA[ಬೆಂಗಳೂರು-ಮುಂಬೈ ಮಧ್ಯೆ ಸಂಚರಿಸಲಿರುವ ಪ್ರಸ್ತಾವಿತ ಸ್ಲೀಪರ್ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲನ್ನು, ಕಲಬುರ್ಗಿ ಬದಲು ತುಮಕೂರು-ದಾವಣಗೆರೆ-ಹುಬ್ಬಳ್ಳಿ-ಬೆಳಗಾವಿ ಮಾರ್ಗದ ಮೂಲಕ ಓಡಿಸಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದೆ. ಉತ್ತರ ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಈ ಮಾರ್ಗವು ಅತ್ಯಗತ್ಯ ಎಂದು ಸಂಸ್ಥೆ ಪ್ರತಿಪಾದಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwvpw86m72sv1fyv5jhzwm5q,imgname-bengaluru-mumbai-vande-bharat-sleeper-1783341392083.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ:&lt;/strong&gt; ಬೆಂಗಳೂರು-ಮುಂಬೈ ಮಧ್ಯೆ ಸಂಚರಿಸಲಿರುವ ಪ್ರಸ್ತಾವಿತ ಸ್ಲೀಪರ್ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ತುಮಕೂರು-ದಾವಣಗೆರೆ- ಹುಬ್ಬಳ್ಳಿ- ಬೆಳಗಾವಿ- ಪುಣೆ ಮಾರ್ಗದ ಮೂಲಕ ಸಂಚರಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮನವಿ ಮಾಡಿದೆ.&lt;/p&gt;&lt;h2&gt;&lt;strong&gt;ತುಮಕೂರು-ದಾವಣಗೆರೆ-ಹುಬ್ಬಳ್ಳಿ- ಬೆಳಗಾವಿ-ಪುಣೆ ಮಾರ್ಗ&lt;/strong&gt;&lt;/h2&gt;&lt;p&gt;ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಪತ್ರ ಬರೆದಿರುವ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಉತ್ತರ ಕರ್ನಾಟಕದ ಜನರ ನ್ಯಾಯಸಮ್ಮತ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ ರೈಲನ್ನು ಕಲಬುರ್ಗಿ-ಸೊಲ್ಲಾಪುರ ಮಾರ್ಗದಲ್ಲಿ ಸಂಚರಿಸುವ ಕುರಿತು ಘೊಷಣೆ ಮಾಡಲಾಗಿದೆ. ಆದರೆ, ಉತ್ತರ ಕರ್ನಾಟಕದ ಜನತೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಬಹುಕಾಲದ ಬೇಡಿಕೆಯಂತೆ ಈ ರೈಲನ್ನು ತುಮಕೂರು-ದಾವಣಗೆರೆ-ಹುಬ್ಬಳ್ಳಿ- ಬೆಳಗಾವಿ-ಪುಣೆ ಮಾರ್ಗದಲ್ಲಿ ಓಡಿಸುವುದು ಅಗತ್ಯವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.&lt;/p&gt;&lt;p&gt;ಈ ಮಾರ್ಗವು ರಾಜ್ಯದ ಪ್ರಮುಖ ಕೈಗಾರಿಕೆ, ಶೈಕ್ಷಣಿಕ, ವಾಣಿಜ್ಯ, ಕೃಷಿ, ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಪಾದನಾ ಚಟುವಟಿಕೆಗಳ ಕೇಂದ್ರವಾಗಿದೆ. ಹುಬ್ಬಳ್ಳಿ- ಧಾರವಾಡ, ದಾವಣಗೆರೆ ಮತ್ತು ಬೆಳಗಾವಿ ನಗರಗಳು ಉತ್ತರ ಕರ್ನಾಟಕದ ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರಗಳಾಗಿವೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಪ್ರಯಾಣಿಕರು ಈ ಮಾರ್ಗವನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ ರೈಲನ್ನು ತುಮಕೂರು-ದಾವಣಗೆರೆ-ಹುಬ್ಬಳ್ಳಿ-ಬೆಳಗಾವಿ-ಪುಣೆ ಮಾರ್ಗದ ಮೂಲಕವೇ ಸಂಚರಿಸುವಂತೆ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವಾಲಯ ಶೀಘ್ರ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಹಾಗೂ ಗೌರವ ಕಾರ್ಯದರ್ಶಿ ಉದಯ ರೇವಣಕರ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/sleeper-vande-bharat-via-tumakuru-davanagere-hubballi-belagavi-route-instead-of-kalaburgi-mrq/articleshow-uudiggg"/>
        </item>
    </channel>
</rss>
