<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 26 Aug 2026 06:51:42 +0530</lastBuildDate>
        <atom:link href="https://kannada.asianetnews.com/rss/dharwad" rel="self" type="application/rss+xml"/>
        <item>
            <title><![CDATA[ಧಾರವಾಡದಲ್ಲಿ ಮೂವರು ರೈತರ ಸಾವು: ಸಚಿವರ ಬರ ವೀಕ್ಷಣೆ ವೇಳೆ ಸಂತ್ರಸ್ತರಿಗೆ ಸಿಗದ ಸಾಂತ್ವನ; ಸೌಜನ್ಯಕ್ಕೂ ಬರಲಿಲ್ಲ ಎಂದು ಆಕ್ರೋಶ]]></title>
            <link>https://kannada.asianetnews.com/dharwad/outrage-in-dharwad-minister-santosh-lad-skips-visiting-deceased-farmers-homes-during-drought-assessment-visit-gkn/articleshow-0yczhbw</link>
            <guid isPermaLink="true">https://kannada.asianetnews.com/dharwad/outrage-in-dharwad-minister-santosh-lad-skips-visiting-deceased-farmers-homes-during-drought-assessment-visit-gkn/articleshow-0yczhbw</guid>
            <pubDate>Tue, 18 Aug 2026 22:10:00 +0530</pubDate>
            <description><![CDATA[&lt;p&gt;ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಮೂವರು ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದರೂ, ಜಿಲ್ಲಾಡಳಿತ ಸೌಜನ್ಯಕ್ಕೂ ಅವರ ಮನೆಗೆ ಭೇಟಿ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0avwavsdnyy38f8b2rtr59v,imgname-santosh-lad-1787071179641.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಜಿಲ್ಲಾಡಳಿತ ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದೆಯೇ? ಕಳೆದ ಒಂದೂವರೆ ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಮೂವರು ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದರೂ, ಜಿಲ್ಲಾಧಿಕಾರಿಯಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಸೌಜನ್ಯಕ್ಕೂ ಸಂತ್ರಸ್ತ ಕುಟುಂಬಗಳ ಮನೆಗೆ ಭೇಟಿ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಜಿಲ್ಲೆಯಾದ್ಯಂತ ಬರ ವೀಕ್ಷಣೆ ನಡೆಸುತ್ತಿದ್ದಾರೆ. ಆದರೆ ಬೆನ್ನೆಲುಬು ಮುರಿದು ಆತ್ಮ*ತ್ಯೆಗೆ ಶರಣಾದ ರೈತರ ಬಗ್ಗೆ ಸಚಿವರಿಗೆ ಜಿಲ್ಲಾಡಳಿತ ಮಾಹಿತಿ ನೀಡಿದೆಯೇ ಎಂಬ ಸಂಶಯ ಮೂಡಿದೆ. ಸಚಿವರು ಬರ ವೀಕ್ಷಣೆ ನಡೆಸುತ್ತಿದ್ದರೂ, ಆತ್ಮ*ತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಅಧಿಕಾರಿಗಳು ಹಾಕಿಕೊಂಡಿಲ್ಲ. ಇದು ರೈತ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸಾಲದ ಬಾಧೆ ಹಾಗೂ ಬರದಿಂದಾಗಿ ಮೂವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ.&lt;/p&gt;&lt;p&gt;ವೀರುಪಾಕ್ಷಪ್ಪ (ಧಾರವಾಡ ತಾಲೂಕಿನ ಕಬ್ಬೇನೂರು) ಜುಲೈ 3ರಂದು ಸಾವಿಗೆ ಶರಣಾದರು. ನಾಗಪ್ಪ ಗೂಡದೂರ್ (ಅಣ್ಣಿಗೇರಿ ಪಟ್ಟಣ) ಜುಲೈ 28ರಂದು ಪ್ರಾಣಬಿಟ್ಟರೆ, ಬಸವರಾಜ ಆಗಸ್ಟ್ 17ರಂದು ಜೀವ ಬಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಐದು ಕಿಲೋಮೀಟರ್ ದೂರದಲ್ಲಿದ್ದರೂ ಮಾಹಿತಿ ಇಲ್ಲ&lt;/strong&gt;&lt;/h2&gt;&lt;p&gt;ಸಚಿವ ಸಂತೋಷ್ ಲಾಡ್ ಅವರು ಧಾರವಾಡ ತಾಲೂಕಿನ ಹಾರೋಬೆಳವಡಿಯಲ್ಲಿ ಬರ ವೀಕ್ಷಣೆ ಮಾಡಿದ್ದರು. ಅಲ್ಲಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಕಬ್ಬೇನೂರು ಗ್ರಾಮದಲ್ಲಿ ರೈತ ವೀರುಪಾಕ್ಷಪ್ಪ ಆತ್ಮ*ತ್ಯೆ ಮಾಡಿಕೊಂಡಿದ್ದರು. ಸಚಿವರು ಅಷ್ಟು ಹತ್ತಿರದಲ್ಲಿದ್ದರೂ ಅಧಿಕಾರಿಗಳು ಅವರ ಗಮನಕ್ಕೆ ಈ ವಿಷಯವನ್ನು ತರಲಿಲ್ಲ ಎಂಬುದು ಜಿಲ್ಲಾಡಳಿತದ ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ.&lt;/p&gt;&lt;p&gt;ರೈತರು ಆತ್ಮಹತ್ಯೆ ಮಾಡಿಕೊಂಡು ತಿಂಗಳು ಕಳೆದರೂ ಇಲ್ಲಿಯವರೆಗೆ ಸಂತ್ರಸ್ತ ಕುಟುಂಬಗಳಿಗೆ ಯಾವುದೇ ಪರಿಹಾರ ತಲುಪಿಲ್ಲ. ಮೂವರು ರೈತರಿಗೆ ಪರಿಹಾರ ಕೊಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲವೇ ಅಥವಾ ಜಿಲ್ಲಾಡಳಿತಕ್ಕೆ ಮಾನವೀಯತೆ ಇಲ್ಲವೇ? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ, ಬಾಕಿ ಇರುವ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/dharwad/outrage-in-dharwad-minister-santosh-lad-skips-visiting-deceased-farmers-homes-during-drought-assessment-visit-gkn/articleshow-0yczhbw"/>
        </item>
        <item>
            <title><![CDATA[ಹುಬ್ಬಳ್ಳಿ- ಪುಣೆ- ಪಿಂಪ್ರಿ ನಡುವೆ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ: ಡಿಸ್ಕೌಂಟ್ ಲಭ್ಯ]]></title>
            <link>https://kannada.asianetnews.com/karnataka-districts/daily-nwkrtc-raja-ratha-ac-sleeper-bus-service-starts-between-hubballi-pune-and-pimpri-mrq/articleshow-1eg7rk7</link>
            <guid isPermaLink="true">https://kannada.asianetnews.com/karnataka-districts/daily-nwkrtc-raja-ratha-ac-sleeper-bus-service-starts-between-hubballi-pune-and-pimpri-mrq/articleshow-1eg7rk7</guid>
            <pubDate>Mon, 24 Aug 2026 09:39:13 +0530</pubDate>
            <description><![CDATA[ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿ, ಪುಣೆ ಮತ್ತು ಪಿಂಪ್ರಿ ನಡುವೆ ಪ್ರತಿದಿನ 'ರಾಜರಥ' ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ನೂತನ ಬಸ್ ಸೇವೆಯು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಗುರಿ ಹೊಂದಿದ್ದು, ವೇಳಾಪಟ್ಟಿ, ದರ ಮತ್ತು ಮುಂಗಡ ಬುಕ್ಕಿಂಗ್ ವಿವರಗಳನ್ನು ಒದಗಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rz3b4k9c56tdhe8502fprc,imgname-nwkrtc-raja-ratha-1787544317075.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ -ಪುಣೆ- ಪಿಂಪ್ರಿ ನಡುವೆ ಪ್ರತಿದಿನ ನೂತನ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.&lt;/p&gt;&lt;p&gt;ಈ ಕುರಿತು ಪ್ರಕಟಣೆ ನೀಡಿ, ಉಭಯ ರಾಜ್ಯಗಳ ನಡುವೆ ಪ್ರಯಾಣ ಮಾಡುವವರಿಗೆ ಅನುಕೂಲವಾಗುವಂತೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಈ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಬಸ್ ವೇಳಾ ಪಟ್ಟಿ&lt;/strong&gt;&lt;/h2&gt;&lt;p&gt;ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರತಿದಿನ ರಾತ್ರಿ 9.30ಕ್ಕೆ ಹೊರಡುತ್ತದೆ. ಹೊಸೂರು ಬಸ್ ನಿಲ್ದಾಣದಿಂದ 9.40ಕ್ಕೆ, ನವನಗರ 9.55, ಎಸ್.ಡಿ.ಎಂ. ಆಸ್ಪತ್ರೆ 10.05, ಧಾರವಾಡ ಹೊಸ ಬಸ್ ನಿಲ್ದಾಣದಿಂದ 10.15ಕ್ಕೆ ಹಾಗೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 11.35ಕ್ಕೆ ಹೊರಡುತ್ತದೆ. ಕೊಲ್ಹಾಪುರಕ್ಕೆ ರಾತ್ರಿ1.35ಕ್ಕೆ, ಪುಣೆ ಸ್ವಾರಗೇಟ್ ಬಸ್ ನಿಲ್ದಾಣಕ್ಕೆ ಬೆಳಗ್ಗೆ 6ಕ್ಕೆ ಹಾಗೂ ಪಿಂಪ್ರಿಗೆ 6.30ಕ್ಕೆ ತಲುಪುತ್ತದೆ.&lt;/p&gt;&lt;p&gt;ಪಿಂಪ್ರಿ ಬಸ್ ನಿಲ್ದಾಣದಿಂದ ರಾತ್ರಿ 9.30ಕ್ಕೆ ಹಾಗೂ ಪುಣೆ ಸ್ವಾರಗೇಟ್ ಬಸ್ ನಿಲ್ದಾಣದಿಂದ 10.15ಕ್ಕೆ ಹೊರಡುತ್ತದೆ. ಬೆಳಗಾವಿಗೆ ಮರುದಿನ ಬೆಳಗ್ಗೆ 4.15, ಧಾರವಾಡಕ್ಕೆ 5.40 ಹಾಗೂ ಹುಬ್ಬಳ್ಳಿಗೆ 6.30ಕ್ಕೆ ಆಗಮಿಸುತ್ತದೆ.&lt;/p&gt;&lt;p&gt;ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ ಹುಬ್ಬಳ್ಳಿಯಿಂದ ಪುಣೆಗೆ ₹1202 ಹಾಗೂ ಪಿಂಪ್ರಿಗೆ ₹1252 ನಿಗದಿಪಡಿಸಲಾಗಿದೆ.&lt;/p&gt;&lt;h3&gt;&lt;strong&gt;ಮುಂಗಡ ಬುಕ್ಕಿಂಗ್, ರಿಯಾಯಿತಿ&lt;/strong&gt;&lt;/h3&gt;&lt;p&gt;ಸಾರ್ವಜನಿಕರು www.ksrtc.in ವೆಬ್ ಸೈಟ್, KSRTC Mobile App, ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ಇತರ ಪ್ರಮುಖ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಒಂದೇ ಟಿಕೆಟ್&zwnj;ನಲ್ಲಿ 4 ಅಥವಾ ಹೆಚ್ಚು ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣದರದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಖರೀದಿಸಿದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತದಡಿ-ಅಘನಾಶಿನಿ ಬಾರ್ಜ್&zwnj;ನ ಪ್ರಯಾಣದ ದರ ಪಟ್ಟಿ ಅಳವಡಿಸಲು ಸಿದ್ಧತೆ; ಪ್ರಯಾಣಿಕರಲ್ಲಿ ಗೊಂದಲ&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/daily-nwkrtc-raja-ratha-ac-sleeper-bus-service-starts-between-hubballi-pune-and-pimpri-mrq/articleshow-1eg7rk7"/>
        </item>
        <item>
            <title><![CDATA[Hubballi: ದೋಷಯುಕ್ತ ಪಲ್ಲಂಗ ಮಾರಾಟ; ರಾಯಲ್‌ ಓಕ್‌ಗೆ ದಂಡ ಮತ್ತು ಪರಿಹಾರಕ್ಕೆ ಸೂಚನೆ]]></title>
            <link>https://kannada.asianetnews.com/karnataka-districts/hubballi-sale-of-defective-bed-royaloak-fined-and-ordered-to-pay-compensation-mrq/articleshow-39igprx</link>
            <guid isPermaLink="true">https://kannada.asianetnews.com/karnataka-districts/hubballi-sale-of-defective-bed-royaloak-fined-and-ordered-to-pay-compensation-mrq/articleshow-39igprx</guid>
            <pubDate>Wed, 26 Aug 2026 06:51:38 +0530</pubDate>
            <description><![CDATA[ಹುಬ್ಬಳ್ಳಿಯ ರಾಯಲ್&zwnj; ಓಕ್&zwnj;ನಿಂದ ಖರೀದಿಸಿದ ದೋಷಯುಕ್ತ ಪಲ್ಲಂಗದಿಂದ ತೊಂದರೆಗೊಳಗಾದ ಪೊಲೀಸ್&zwnj; ಪೇದೆಗೆ ಗ್ರಾಹಕರ ಆಯೋಗವು ನ್ಯಾಯ ಒದಗಿಸಿದೆ. ಫಂಗಸ್&zwnj;ನಿಂದ ಕೂಡಿದ್ದ ಪಲ್ಲಂಗವನ್ನು ಬದಲಾಯಿಸಲು ಅಥವಾ ಹಣ ಮರುಪಾವತಿಸಲು ಮತ್ತು ಪರಿಹಾರ ನೀಡಲು ಆಯೋಗವು ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0xtfxxhv4jfp795p19s5wd7,imgname-mancha-1787707258801.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ:&lt;/strong&gt; ಪೊಲೀಸ್&zwnj; ಪೇದೆಯೊಬ್ಬರಿಗೆ ದೋಷಯುಕ್ತ ಪಲ್ಲಂಗ ಮಾರಾಟ ಮಾಡಿದ ಹುಬ್ಬಳ್ಳಿಯ ರಾಯಲ್&zwnj; ಓಕ್&zwnj;ಗೆ ದಂಡ ಮತ್ತು ಪರಿಹಾರಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.&lt;/p&gt;&lt;p&gt;ಯಾಲಕ್ಕಿ ಶೆಟ್ಟರ್&zwnj; ಕಾಲನಿಯ ನಿವಾಸಿ ಬಸವರಾಜ ಮಾಗುಂದನವರ ಪೋಲಿಸ್&zwnj; ಪೇದೆಯಾಗಿದ್ದು, 2024ರ ಜೂ. 17ರಂದು ₹ 59,990 ಬೆಲೆಯ ಒಳಗಡೆ ಬಟ್ಟೆ ಮತ್ತು ಇತ್ಯಾದಿ ಸಾಮಾನುಗಳ ಸೌಲಭ್ಯವಿರುವ ಮರ&zwj;್ಯ ಕಿಂಗ್&zwnj; ಬೆಡ್&zwnj; ಸಮೇತ ಪಲ್ಲಂಗವನ್ನು ಹುಬ್ಬಳ್ಳಿಯ ರಾಯಲ್&zwnj; ಓಕ್&zwnj; ಅವರಿಂದ ಖರೀದಿಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಆ ಪಲ್ಲಂಗದ ಫ್ಲೈವುಡ್&zwnj; ಮೇಲೆ ಫಂಗಸ್&zwnj; ಕಾಣಿಸಿಕೊಂಡಿತ್ತು. ಅದು ಹೆಚ್ಚಾದ ಮೇಲೆ ಆ ಸಂಗತಿಯನ್ನು ರಾಯಲ್&zwnj; ಓಕ್&zwnj;ಗೆ ತಿಳಿಸಿದ್ದರು. ಅದನ್ನು ಪರಿಶೀಲಿಸಿ ಫ್ಲೈವುಡ್&zwnj; ಬದಲಾಯಿಸಿಕೊಟ್ಟರು. ಆದರೂ ಹೊಸ ಫ್ಲೈವುಡ್&zwnj; ಮೇಲೆ ಫಂಗಸ್&zwnj; ಮತ್ತೆ ಕಾಣಿಸಿಕೊಂಡಿತ್ತು.&lt;/p&gt;&lt;h2&gt;&lt;strong&gt;ಆಯೋಗಕ್ಕೆ ದೂರು ಸಲ್ಲಿಸಿದ್ದ ಬಸವರಾಜ ಮಾಗುಂದನವರ&lt;/strong&gt;&lt;/h2&gt;&lt;p&gt;ಆ ಫಂಗಸ್&zwnj; ಕಾಟಿನ ತುಂಬಾ ಆವರಿಸಿ ಬಟ್ಟೆ ಇಟ್ಟ ಜಾಗಕ್ಕೂ ಫಂಗಸ್&zwnj; ಆವರಿಸಿತ್ತು. ಇದರಿಂದ ದೂರುದಾರರ ಬಟ್ಟೆಗಳು ಹಾನಿಯಾದವು. ಈ ವಿಷಯ ರಾಯಲ್&zwnj; ಓಕ್&zwnj; ಗಮನಕ್ಕೆ ತಂದರೂ ಕ್ರಮವಾಗಲಿಲ್ಲ. ಇದನ್ನು ಪ್ರಶ್ನಿಸಿ ಬಸವರಾಜ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಆದೇಶದ ಒಂದು ತಿಂಗಳ ಒಳಗಾಗಿ ದೋಷ ಪೂರಿತ ಪಲ್ಲಂಗ ಬದಲಿಗೆ ಅದೇ ಮೊತ್ತದ ಹೊಸ ಪಲ್ಲಂಗ ಕೊಡಬೇಕು.&lt;/p&gt;&lt;p&gt;ತಪ್ಪಿದರೆ, ಹಣ ಮರಳಿ ಕೊಡಬೇಕು. ಅನಾನುಕೂಲ, ಮಾನಸಿಕ ತೊಂದರೆಗಾಗಿ ₹ 30 ಸಾವಿರ ಪರಿಹಾರ ಮತ್ತು ₹ 10 ಸಾವಿರ ಪ್ರಕರಣದ ವೆಚ್ಚ ಕೊಡುವಂತೆ ಆಯೋಗವು ಉಣಕಲ್&zwnj; ಬಳಿ ಇರುವ ರಾಯಲ್&zwnj; ಓಕ್&zwnj; ಶೋರೂಂಗೆ ಆಯೋಗ ನಿರ್ದೇಶಿಸಿದೆ.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hubballi-sale-of-defective-bed-royaloak-fined-and-ordered-to-pay-compensation-mrq/articleshow-39igprx"/>
        </item>
        <item>
            <title><![CDATA[ಮಾವನ ಸಾವಿನ ಸುದ್ದಿ ಕೇಳಿಯೂ ಹೋಗಲಿಲ್ಲ - ವೈಯಕ್ತಿಕ ದುಃಖ ಬದಿಗಿಟ್ಟು ಕರ್ತವ್ಯದಲ್ಲಿ ಭಾಗಿಯಾದ ಕಮಿಷನರ್]]></title>
            <link>https://kannada.asianetnews.com/dharwad/duty-first-hubballi-commissioner-shashikumar-stays-on-bandobast-duty-after-hearing-of-father-in-laws-death-gkn/articleshow-4akrvuz</link>
            <guid isPermaLink="true">https://kannada.asianetnews.com/dharwad/duty-first-hubballi-commissioner-shashikumar-stays-on-bandobast-duty-after-hearing-of-father-in-laws-death-gkn/articleshow-4akrvuz</guid>
            <pubDate>Sat, 22 Aug 2026 16:35:17 +0530</pubDate>
            <description><![CDATA[&lt;p&gt;ಖಾಕಿ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂಬುದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ, ವೈಯಕ್ತಿಕ ದುಃಖವನ್ನು ಬದಿಗಿಟ್ಟು ಸಾರ್ವಜನಿಕ ಶಾಂತಿ ಕಾಪಾಡಲು ಅವರು ರಸ್ತೆಗೆ ಇಳಿದಿರುವ ಘಟನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mj9s03x68v5xxhqb697g15,imgname-n-shashikumar-1787396678659.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ಖಾಕಿ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂಬುದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ, ವೈಯಕ್ತಿಕ ದುಃಖವನ್ನು ಬದಿಗಿಟ್ಟು ಸಾರ್ವಜನಿಕ ಶಾಂತಿ ಕಾಪಾಡಲು ಅವರು ರಸ್ತೆಗೆ ಇಳಿದಿರುವ ಘಟನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;h2&gt;&lt;strong&gt;ನಡೆದದ್ದೇನು?&lt;/strong&gt;&lt;/h2&gt;&lt;p&gt;ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಮಾವ ವಿರನಾಗಪ್ಪ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಯಾವುದೇ ವ್ಯಕ್ತಿಯಾದರೂ ಆಸ್ಪತ್ರೆಗೆ ಓಡುವುದು ಸಹಜ. ಆದರೆ ಶಶಿಕುಮಾರ್ ಅವರು ಮಾಡಿದ್ದೇ ಬೇರೆ.&lt;/p&gt;&lt;p&gt;ಇಂದು ಹಳೆ ಹುಬ್ಬಳ್ಳಿಯ ಭವಾನಿ ಶಂಕರ ದೇವಸ್ಥಾನದ ವಿಚಾರವಾಗಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದವು. ನಗರದ ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂಬ ಕಾರಣಕ್ಕೆ ಕಮಿಷನರ್ ಶಶಿಕುಮಾರ್ ಅವರು ಸ್ವತಃ ಸ್ಥಳದಲ್ಲಿ ಹಾಜರಿದ್ದು ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು. ಮಾವನ ಸಾವಿನ ಸುದ್ದಿ ಕಿವಿಗೆ ಬಿದ್ದರೂ, ಪ್ರತಿಭಟನೆ ಮುಕ್ತಾಯವಾಗಿ ಪರಿಸ್ಥಿತಿ ಹತೋಟಿಗೆ ಬರುವವರೆಗೂ ಅವರು ಆಸ್ಪತ್ರೆಗೆ ತೆರಳದೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.&lt;/p&gt;&lt;h2&gt;&lt;strong&gt;ಅನಾರೋಗ್ಯದ ನಡುವೆಯೂ ಸೇವೆ&lt;/strong&gt;&lt;/h2&gt;&lt;p&gt;ಕೇವಲ ಕುಟುಂಬದ ದುಃಖ ಮಾತ್ರವಲ್ಲ, ಕಳೆದ ಎರಡು ದಿನಗಳಿಂದ ಶಶಿಕುಮಾರ್ ಅವರ ಆರೋಗ್ಯವೂ ಅಷ್ಟಕಷ್ಟೇ ಇತ್ತು. ಕೈಗೆ ಸಿರಿಂಜ್ (IV Drip) ಹಾಕಿಸಿಕೊಂಡಿದ್ದ ಸ್ಥಿತಿಯಲ್ಲೇ ಅವರು ಕಚೇರಿ ಕೆಲಸ ಹಾಗೂ ಬಂದೋಬಸ್ತ್ ಕೆಲಸಗಳಲ್ಲಿ ಭಾಗಿಯಾಗಿದ್ದರು. ಇಂದು ವೈಯಕ್ತಿಕ ನಷ್ಟದ ನಡುವೆಯೂ ಅವರು ತೋರಿದ 'ಕರ್ತವ್ಯ ಪ್ರಜ್ಞೆ' ಪೊಲೀಸ್ ಇಲಾಖೆಯ ಹೆಮ್ಮೆಯನ್ನು ಹೆಚ್ಚಿಸಿದೆ.&lt;/p&gt;&lt;h2&gt;&lt;strong&gt;ಯಾರು ಈ ಎನ್. ಶಶಿಕುಮಾರ್?&lt;/strong&gt;&lt;/h2&gt;&lt;p&gt;ಎನ್. ಶಶಿಕುಮಾರ್ ಅವರು ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರು. 2007ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಇವರು ಮೂಲತಹ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯವರು. ಬಿಎಸ್ಸಿ (ಕೃಷಿ) ಪದವೀಧರರು. ಮಂಗಳೂರು ಪೊಲೀಸ್ ಕಮಿಷನರ್ ಆಗಿ, ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿ, ಹಾವೇರಿ ಹಾಗೂ ಚಿಕ್ಕಮಗಳೂರು ಎಸ್ಪಿಯಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ಜುಲೈ 2024 ರಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಾರ್ವಜನಿಕರೊಂದಿಗೆ ಸೌಮ್ಯವಾಗಿ ವರ್ತಿಸುವ, ಆದರೆ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಶಶಿಕುಮಾರ್ ಅವರು ಇಂದು ತೋರಿದ ಈ ಕರ್ತವ್ಯ ನಿಷ್ಠೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಕುಟುಂಬಕ್ಕಿಂತ ಕರ್ತವ್ಯವೇ ದೊಡ್ಡದು ಎಂದು ತೋರಿಸಿಕೊಟ್ಟ ಈ ಅಧಿಕಾರಿಗೆ ಸಾರ್ವಜನಿಕರು ಹ್ಯಾಟ್ಸ್&zwnj; ಆಫ್ ಹೇಳುತ್ತಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/dharwad/duty-first-hubballi-commissioner-shashikumar-stays-on-bandobast-duty-after-hearing-of-father-in-laws-death-gkn/articleshow-4akrvuz"/>
        </item>
        <item>
            <title><![CDATA[Khadi and Village Industries: ನಲುಗಿದ ಖಾದಿ ಗ್ರಾಮೋದ್ಯೋಗ, ಬೀದಿಗೆ ಬಿದ್ದ ಕಾರ್ಮಿಕರು: ₹150 ಕೋಟಿ ಪ್ರೋತ್ಸಾಹಧನ ನೀಡದೆ ಸತಾಯಿಸುತ್ತಿರುವ ಸರ್ಕಾರ!]]></title>
            <link>https://kannada.asianetnews.com/karnataka-districts/khadi-tricolour-flag-workers-distress-hubballi-bengeri-pending-incentives-bmk/articleshow-6o2m1zx</link>
            <guid isPermaLink="true">https://kannada.asianetnews.com/karnataka-districts/khadi-tricolour-flag-workers-distress-hubballi-bengeri-pending-incentives-bmk/articleshow-6o2m1zx</guid>
            <pubDate>Fri, 14 Aug 2026 16:59:36 +0530</pubDate>
            <description><![CDATA[ಹುಬ್ಬಳ್ಳಿಯ ರಾಷ್ಟ್ರಧ್ವಜ ತಯಾರಿಕಾ ಘಟಕವು ಸರ್ಕಾರದ ಧ್ವಜ ಸಂಹಿತೆ ತಿದ್ದುಪಡಿ ಮತ್ತು ₹150 ಕೋಟಿ ಪ್ರೋತ್ಸಾಹಧನ ವಿಳಂಬದಿಂದ ತೀವ್ರ ಸಂಕಷ್ಟದಲ್ಲಿದೆ. ಇದರಿಂದಾಗಿ ಖಾದಿ ಧ್ವಜಗಳ ಮಾರಾಟ ಕುಸಿದು, ಅಲ್ಲಿನ ನೇಕಾರರು ಮತ್ತು ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m000hghpz8en4w7dzbwqfk2t,imgname-gemini-ai-1-1786706969142.jpg" type="image/jpeg" height="390" width="690"/>
            <content:encoded><![CDATA[&lt;p&gt;ನಮ್ಮ ದೇಶದ ಹೆಮ್ಮೆಯ ಸಂಕೇತ ತ್ರಿವರ್ಣ ಧ್ವಜ ಆಗಸದಲ್ಲಿ ಆಕಾಶದೆತ್ತರಕ್ಕೆ ಹಾರಾಡುವಾಗ ಪ್ರತಿಯೊಬ್ಬ ಭಾರತೀಯನ ಎದೆಯಲ್ಲೂ ಹೇಳತೀರದ ರೋಮಾಂಚನ ಮೂಡುತ್ತದೆ. ದೆಹಲಿ ಕೆಂಪುಕೋಟೆ, ಸಂಸತ್ ಭವನ, ರಾಷ್ಟ್ರಪತಿ ಭವನದಿಂದ ಹಿಡಿದು ಸಾಗರದಾಚೆಗಿನ ರಾಯಭಾರ ಕಚೇರಿಗಳು ಹಾಗೂ ಮಹಾಸಾಗರಗಳಲ್ಲಿ ಸಂಚರಿಸುವ ಭಾರತೀಯ ನೌಕೆಗಳ ಮೇಲೂ ರಾರಾಜಿಸುವ ಆ ರಾಷ್ಟ್ರಧ್ವಜದ ಹಿಂದೆ ಅಸಂಖ್ಯಾತ ಮಹಿಳೆಯರ ಬೆವರಿನ ಹನಿಗಳಿವೆ. ಆದರೆ, ಆ ಧ್ವಜವನ್ನು ತಮ್ಮ ಉಸಿರಾಗಿಸಿಕೊಂಡು, ಹಗಲಿರುಳು ಚರಕದ ಮುಂದೆ ಕುಳಿತು ನೂಲು ತೆಗೆದು, ಬಣ್ಣದೊಡನೆ ಬೆರೆತು ಖಾದಿ ಬಟ್ಟೆಯಲ್ಲಿ ದೇಶಪ್ರೇಮವನ್ನು ನೇಯುವ ಆ ಬಡ ತಾಯಂದಿರ ಬದುಕು ಇಂದು ಕಾರ್ಮೋಡದಲ್ಲಿ ಮುಳುಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ&lt;/p&gt;&lt;h2&gt;&lt;strong&gt;ಸಂಕಷ್ಟದಲ್ಲಿ ಹುಬ್ಬಳ್ಳಿ ಘಟಕ!&lt;/strong&gt;&lt;/h2&gt;&lt;p&gt;ಇಡೀ ಭಾರತದಲ್ಲಿಯೇ 'ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್' (ಬಿಐಎಸ್) ಮಾನ್ಯತೆ ಪಡೆದ ಏಕೈಕ ಹಾಗೂ ಪ್ರತಿಷ್ಠಿತ ರಾಷ್ಟ್ರಧ್ವಜ ತಯಾರಿಕಾ ಘಟಕವಾದ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ನೇಕಾರರ ಮತ್ತು ಕಾರ್ಮಿಕರ ಕಣ್ಣಲ್ಲಿ ಇಂದು ಕಣ್ಣೀರಿನ ಕೋಡಿ ಹರಿಯುತ್ತಿದೆ. ಗಾಂಧೀಜಿಯವರ ಕನಸಾಗಿದ್ದ ಹಾಗೂ ಸ್ವಾತಂತ್ರ್ಯದ ನೈಜ ಪ್ರತೀಕವಾದ ಖಾದಿಗೆ ಇಂದು ಮಂಕು ಕವಿದಿದ್ದು, ಆ ನೇಕಾರರ ಬದುಕು ತ್ರಿಶಂಕು ಸ್ಥಿತಿಯಲ್ಲಿದೆ. ಬಿಡುವಿಲ್ಲದೆ ದುಡಿಯುವ ಆ ಕೈಗಳಿಗೆ ಇಂದು ಕೂಲಿಯೂ ಇಲ್ಲದೆ, ಹೊಟ್ಟೆಗೆ ಅನ್ನವೂ ಇಲ್ಲದೆ ಕೇವಲ ಹತಾಶೆಯಷ್ಟೇ ಮಿಗಿಲಾಗಿದೆ.&lt;/p&gt;&lt;h3&gt;&lt;strong&gt;ಕಂಟಕವಾದ ಹೊಸ ಕಾಯ್ದೆ!&lt;/strong&gt;&lt;/h3&gt;&lt;p&gt;ಕಳೆದೆರಡು ದಶಕಗಳಿಂದ ಅತ್ಯಂತ ಪವಿತ್ರ ಭಾವನೆಯಿಂದ, ಯಾವುದೇ ಚ್ಯುತಿ ಬಾರದಂತೆ ಧ್ವಜವನ್ನು ಸಿದ್ಧಪಡಿಸುತ್ತಿದ್ದ ಈ ಸಂಸ್ಥೆಗೆ ಈಗ ಎರಡೆರಡು ಆಘಾತಗಳು ಒಟ್ಟಿಗೇ ಎದುರಾಗಿವೆ. ಒಂದು ಕಡೆ ಕೇಂದ್ರ ಸರ್ಕಾರದ 'ಫ್ಲ್ಯಾಗ್ ಕೋಡ್' (ಧ್ವಜ ಸಂಹಿತೆ) ತಿದ್ದುಪಡಿಯಿಂದಾಗಿ ಖಾದಿಯಲ್ಲದ, ಅಂದರೆ ಯಂತ್ರಗಳ ಮೂಲಕ ತಯಾರಾಗುವ ಪ್ಲಾಸ್ಟಿಕ್ ಹಾಗೂ ಪಾಲಿಸ್ಟರ್ ಧ್ವಜಗಳ ಬಳಕೆಗೆ ಮುಕ್ತ ಅವಕಾಶ ನೀಡಲಾಯಿತು. ಪಾಲಿಸ್ಟರ್ ಧ್ವಜಗಳಿಗೆ ಹೋಲಿಸಿದರೆ ನೈಜ ಖಾದಿ ಧ್ವಜಗಳ ತೂಕ ಸ್ವಲ್ಪ ಹೆಚ್ಚು ಹಾಗೂ ಬೆಲೆಯೂ ತುಸು ದುಬಾರಿ. ಹೀಗಾಗಿ ಮಾರುಕಟ್ಟೆಯಲ್ಲಿ ಪಾಲಿಸ್ಟರ್ ಧ್ವಜಗಳ ಅಬ್ಬರ ಹೆಚ್ಚಾಗಿ, ಅಪ್ಪಟ ದೇಶಿ ಸಂಸ್ಕೃತಿಯ ಪ್ರತೀಕವಾದ ಖಾದಿ ತ್ರಿವರ್ಣ ಧ್ವಜಗಳ ಮಾರಾಟ ತೀವ್ರವಾಗಿ ಕುಸಿಯಿತು.&lt;/p&gt;&lt;h3&gt;&lt;strong&gt;ಕುಸಿದ ಆದಾಯ!&lt;/strong&gt;&lt;/h3&gt;&lt;p&gt;ಈ ಬಾರಿಯ ಋತುವಿನಲ್ಲಿ ಬರೋಬ್ಬರಿ ಎರಡು ಕೋಟಿ ರೂಪಾಯಿಗಳ ಧ್ವಜ ಮಾರಾಟದ ಗುರಿಯನ್ನು ಹೊಂದಿದ್ದ ಸಂಸ್ಥೆಗೆ, ಕೇವಲ 88 ಲಕ್ಷ ರೂಪಾಯಿಗಳ ವ್ಯಾಪಾರವಷ್ಟೇ ಆಗಿದೆ. ಯಂತ್ರಗಳ ಭರಾಟೆಯಲ್ಲಿ, ತಮ್ಮ ಕೈಯಾರೆ, ಜೀವತೇದು ನೇಯ್ದ ಖಾದಿ ಬಟ್ಟೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗುತ್ತಿರುವುದನ್ನು ಕಂಡು ಆ ಮುಗ್ಧ ಮಹಿಳಾ ಕಾರ್ಮಿಕರ ಎದೆ ಒಡೆದಿದೆ. ದೇಶದ ಗೌರವವನ್ನು ಕಾಯುವ ಅವರ ಹೊಟ್ಟೆಗೆ ಇಂದು ತಣ್ಣೀರು ಬಟ್ಟೆಯೇ ಗತಿಯಾಗಿದ್ದು, ಅವರ ಭವಿಷ್ಯ ಕಮರಿಹೋಗುತ್ತಿದೆ.&lt;/p&gt;&lt;h3&gt;&lt;strong&gt;ಇನ್ನು ಬಂದಿಲ್ಲ ಪ್ರೋತ್ಸಾಹ ಧನ!&lt;/strong&gt;&lt;/h3&gt;&lt;p&gt;ಈ ಗಾಯದ ಮೇಲೆ ಬರೆ ಎಳೆದಂತೆ, ರಾಜ್ಯ ಸರ್ಕಾರದಿಂದ ನೂಲು ತೆಗೆಯುವವರಿಗೆ ಮತ್ತು ನೇಕಾರರಿಗೆ ಬರಬೇಕಾದ ಪ್ರೋತ್ಸಾಹಧನ ಕೂಡ ಬಿಡುಗಡೆಯಾಗದೆ ವರ್ಷಗಳೇ ಉರುಳಿವೆ. ಬಡ ಕಾರ್ಮಿಕರಿಗೆ ಸೇರಬೇಕಾದ ಈ ಪ್ರೋತ್ಸಾಹಧನದ ಮೊತ್ತ ಬರೋಬ್ಬರಿ 150 ಕೋಟಿ ರೂಪಾಯಿಗಳನ್ನು ತಲುಪಿದೆ. ತಮ್ಮ ಹಕ್ಕಿನ ಹಣಕ್ಕಾಗಿ, ಸುರಿಸಿದ ಬೆವರ ಹನಿಗಾಗಿ ಆ ಶ್ರಮಜೀವಿಗಳು ಚಾತಕ ಪಕ್ಷಿಗಳಂತೆ ದಾರಿ ಕಾಯುತ್ತಿದ್ದಾರೆ. ದುಡಿದ ಹಣವೂ ಸರಿಯಾಗಿ ಕೈಸೇರದೆ, ಸರ್ಕಾರದಿಂದ ಬರಬೇಕಾದ ನೆರವು, ಪ್ರೋತ್ಸಾಹಧನವೂ ಇಲ್ಲದೆ ಆ ಕುಟುಂಬಗಳು ಬೀದಿಗೆ ಬೀಳುವಂತಹ ಅತ್ಯಂತ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;h3&gt;&lt;strong&gt;ನಕಲಿ ಖಾದಿ ಹಾವಳಿ!&lt;/strong&gt;&lt;/h3&gt;&lt;p&gt;ಇಷ್ಟೆಲ್ಲಾ ಸಂಕಟಗಳ ನಡುವೆ, ನಕಲಿ ಖಾದಿಯ ಹಾವಳಿ ಈ ನೇಕಾರರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದ ಸುತ್ತಮುತ್ತಲೂ ನಕಲಿ ಖಾದಿ ಭಂಡಾರಗಳು ತಲೆ ಎತ್ತಿವೆ ಎಂಬುದು ಅರಗಿಸಿಕೊಳ್ಳಲಾಗದ ಕ್ರೂರ ಸತ್ಯ. ನಿಜವಾದ ಖಾದಿಯನ್ನು ನಂಬಿ ಬದುಕುತ್ತಿರುವವರ ಹೊಟ್ಟೆಗೆ ಹೊಡೆದು, ನಕಲಿ ವಸ್ತುಗಳನ್ನು ಮಾರಾಟ ಮಾಡುವ ಜಾಲವನ್ನು ಮಟ್ಟಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಬಹುದೊಡ್ಡ ದುರಂತ. ಸರ್ಕಾರವು ಎಲ್ಲೆಡೆ ನಿಜವಾದ ಖಾದಿ ಧ್ವಜಗಳ ಹಾಗೂ ಖಾದಿ ಬಟ್ಟೆಗಳ ಬಳಕೆಯನ್ನು ಕಡ್ಡಾಯವಾಗಿ ಪ್ರೋತ್ಸಾಹಿಸಬೇಕಿದೆ.&lt;/p&gt;&lt;h3&gt;&lt;strong&gt;ಸರ್ಕಾರ ಮಾಡಬೇಕಾದದ್ದು ಏನು?&lt;/strong&gt;&lt;/h3&gt;&lt;p&gt;ತ್ವರಿತವಾಗಿ 150 ಕೋಟಿ ರೂ.ಗಳ ಬಾಕಿ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿ, ಕಂಗೆಟ್ಟಿರುವ ನೂಲುಗಾರರು ಹಾಗೂ ನೇಕಾರರಲ್ಲಿ ಮತ್ತೆ ಆತ್ಮಸ್ಥೈರ್ಯ ತುಂಬಬೇಕಿದೆ. ಇಲ್ಲವಾದಲ್ಲಿ, ಸ್ವಾತಂತ್ರ್ಯದ ಹೆಮ್ಮೆಯ ಸಂಕೇತವಾಗಿರುವ ಖಾದಿ ಕೇವಲ ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗಬಹುದು. ನಮ್ಮ ನಾಡಿನ ಹೆಮ್ಮೆಯನ್ನು ನೇಯುವ ಆ ಕೈಗಳು ಯಾವತ್ತೂ ಬೇಡುವ ಕೈಗಳಾಗಬಾರದು. ದೇಶದ ಧ್ವಜವನ್ನು ಸದಾ ಎತ್ತರದಲ್ಲಿ ಹಾರುವಂತೆ ಮಾಡುವ ಆ ಶ್ರಮಿಕರ ಬದುಕಿನಲ್ಲೂ ನೆಮ್ಮದಿಯ ತ್ರಿವರ್ಣ ಬಾವುಟ ಎಂದೆಂದಿಗೂ ಹಾರಾಡುವಂತಾಗಲಿ.&lt;/p&gt;]]></content:encoded>
            <category>dharwad</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/khadi-tricolour-flag-workers-distress-hubballi-bengeri-pending-incentives-bmk/articleshow-6o2m1zx"/>
        </item>
        <item>
            <title><![CDATA[ಕೆಎಎಸ್‌ ಅಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ ಅವರಿಂದ 283 ಸರ್ಕಾರಿ ಶಾಲೆಗಳಿಗೆ ಬಣ್ಣ]]></title>
            <link>https://kannada.asianetnews.com/karnataka-districts/dharwad-district-panchayat-deputy-secretary-kas-officer-mallikarjuna-todalbagi-paints-283-government-schools-mrq/articleshow-7asssks</link>
            <guid isPermaLink="true">https://kannada.asianetnews.com/karnataka-districts/dharwad-district-panchayat-deputy-secretary-kas-officer-mallikarjuna-todalbagi-paints-283-government-schools-mrq/articleshow-7asssks</guid>
            <pubDate>Mon, 17 Aug 2026 06:08:00 +0530</pubDate>
            <description><![CDATA[ಧಾರವಾಡ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ತಮ್ಮ 'ಪರಿಸರ ಪ್ರೇಮ ತಂಡ'ದೊಂದಿಗೆ ಸ್ವಂತ ಖರ್ಚಿನಲ್ಲಿ ಬಣ್ಣ ಮಾಸಿದ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳಿಗೆ ಬಣ್ಣ ಬಳಿಯುತ್ತಿದ್ದಾರೆ. ಇಲ್ಲಿಯವರೆಗೆ 283 ಕಟ್ಟಡಗಳನ್ನು ಸುಂದರಗೊಳಿಸಿರುವ ಇವರು, ತಮ್ಮ ಬಾಲ್ಯದ ಅನುಭವದಿಂದ ಪ್ರೇರಿತರಾಗಿ ಈ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m06jb1ngzc6axjkamn5c1a08,imgname-kas-officer-1786926958256.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡ: ಬಣ್ಣ ಮಾಸಿದ ಸರ್ಕಾರಿ ಶಾಲೆಗಳು, ಅಂಗನವಾಡಿ ಕಟ್ಟಡಗಳು ಗಮನಕ್ಕೆ ಬಂದರೆ ಸಾಕು, ಇಲ್ಲೊಬ್ಬ ಕೆಎಎಸ್&zwnj; ಅಧಿಕಾರಿ ತಮ್ಮ &quot;ಪರಿಸರ ಪ್ರೇಮ ತಂಡ&quot; ಕಟ್ಟಿಕೊಂಡು ಸ್ವತಃ ನಿಂತು, ಬಣ್ಣ ಬಳಿದು ಆ ಕಟ್ಟಡವನ್ನು ಸುಂದರಗೊಳಿಸುತ್ತಾರೆ.&lt;/p&gt;&lt;p&gt;ಹೌದು, ಸರ್ಕಾರಿ ಶಾಲೆಯಲ್ಲಿ ಕಲಿತಿರುವ ಪ್ರೀತಿ, ಗೌರವ ಹಾಗೂ ಪರಿಸರ ಪ್ರೇಮಕ್ಕಾಗಿ ಧಾರವಾಡ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆಗಿರುವ ಮಲ್ಲಿಕಾರ್ಜುನ ತೊದಲಬಾಗಿ ಅವರು ಬಣ್ಣ ಮಾಸಿದ ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡಗಳಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಬಣ್ಣ ಬಳಿಯುವ ಮಹತ್&zwnj; ಕಾರ್ಯ ಕೈಗೊಂಡಿದ್ದಾರೆ.&lt;/p&gt;&lt;p&gt;ಪರಿಸರ ಪ್ರೇಮ ಎಂಬ 45 ಜನ ಸಮಾನ ಮನಸ್ಕ ತಂಡವನ್ನು ಕಟ್ಟಿಕೊಂಡು ಇಲ್ಲಿಯ ವರೆಗೆ ಬರೋಬ್ಬರಿ 283 ಕಟ್ಟಡಗಳಿಗೆ ಬಣ್ಣದ ದರ್ಪಣ ಮಾಡಿದ್ದಾರೆ. ಬರೀ ಬಣ್ಣ ಬಳಿಯುವುದು ಮಾತ್ರವಲ್ಲದೇ ಸುಂದರ ಚಿತ್ರ ಬಿಡಿಸಿ, ಕಟ್ಟಡದ ಸುತ್ತ ಸಸಿ ನೆಟ್ಟು ಜನರ ಮನ ಗೆದ್ದಿದ್ದಾರೆ.&lt;/p&gt;&lt;p&gt;ಬಾಗಲಕೋಟಿ ಜಿಲ್ಲೆಯ ಬೀಳಗಿಯಿಂದ ಅವರ ಶಾಲಾ ಸುಧಾರಣಾ ಕನಸು ಆರಂಭವಾಯಿತು. ಅಲ್ಲಿನ 50-60 ಶಾಲಾ ಕಟ್ಟಡಗಳು, ಅಂಗನವಾಡಿಗಳ ಭೌತಿಕ ಸೌಂದರ್ಯದ ಮೆರಗಿಗೆ ಕಾರಣರಾಗಿದ್ದರು. ತದನಂತರ ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಹೊಸನಗರ, ಭದ್ರಾವತಿ ತಾಲೂಕುಗಳಲ್ಲಿ ತಮ್ಮ ಸ್ವಂತ ಹಣದಿಂದ 75 ಶಾಲಾ ಕಟ್ಟಡಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲಿಂದ ಕೊಪ್ಪಳ, ಇದೀಗ ಧಾರವಾಡದಲ್ಲಿ ಈ ಸೇವೆ ಮುಂದುವರಿಸಿದ್ದಾರೆ.&lt;/p&gt;&lt;h2&gt;&lt;strong&gt;ತುಡಿತದ ಮನ&lt;/strong&gt;&lt;/h2&gt;&lt;p&gt;ಅವರು ಸದಾ ಸಕಾರಾತ್ಮಕ ಆಲೋಚನೆ ಹೊಂದಿರುವ ಅಧಿಕಾರಿ. ಜಮಖಂಡಿ ಕವಟಗಿಯಲ್ಲಿ ತಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಮಳೆಯಿಂದ ಸರ್ಕಾರಿ ಶಾಲೆಗಳು ಸೋರಿ ಪುಸ್ತಕಗಳು ಹಾಳಾಗಿದ್ದು ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟುಮಾಡಿತ್ತು. ಮುಂದೊಂದು ದಿನ ಸರ್ಕಾರಿ ಶಾಲೆಗಳ ಸುಧಾರಣೆಗೆ ಏನಾದರೂ ಮಾಡಬೇಕು ಎಂಬುದಕ್ಕೆ ಆ ಘಟನೆ ಪ್ರೇರಣೆಯಾಯಿತು. ಈ ಹಿನ್ನೆಲೆಯಲ್ಲಿ ಈಗ ಸಿಕ್ಕ ಅವಕಾಶ ಬಳಸಿಕೊಂಡು ಸರ್ಕಾರಿ ಶಾಲಾ ಕಟ್ಟಡಗಳಿಗೆ ಬಣ್ಣದ ಅರ್ಪಣೆ ಮಾಡುತ್ತಿದ್ದಾರೆ ಮಲ್ಲಿಕಾರ್ಜುನ.&lt;/p&gt;&lt;h3&gt;&lt;strong&gt;ತಂಡದ ಸಹಕಾರ&lt;/strong&gt;&lt;/h3&gt;&lt;p&gt;ತೊದಲಬಾಗಿ ಅವರು ಶಿವಮೊಗ್ಗದಲ್ಲಿ ಬಣ್ಣದ ದರ್ಪಣ ಮಾಡುತ್ತಿರುವ ಮಾಹಿತಿ ಇತ್ತು. ಜತೆಗೆ ಸಾಮಾಜಿಕ ಜಾಲತಾಣದ ಮೂಲಕ ಅವರು ಪರಿಚಯವಾದರು. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಅವರ ಬಣ್ಣದ ದರ್ಪಣ ಕಾರ್ಯಕ್ಕೆ ಸಂಚಾಲಕರಾಗಿ ನಾನು, ವೀರೇಶ ಹಿರೇಮಠ ಹಾಗೂ ಇನ್ನಿತರರು ಕೈ ಜೋಡಿಸಿದ್ದೇವೆ. ವನಹಳ್ಳಿ, ಹೆಬ್ಬಳ್ಳಿ ಸೇರಿದಂತೆ ಧಾರವಾಡದ 15ಕ್ಕೂ ಹೆಚ್ಚು ಶಾಲೆಗಳಿಗೆ ಬಣ್ಣ ಹಚ್ಚಿದ್ದೇವೆ. ಓರ್ವ ಅಧಿಕಾರಿಯಾಗಿ ಅವರ ಕಾರ್ಯ ಶ್ಲಾಘನೀಯ ಎಂದು ಪರಿಸರ ಪ್ರೇಮ ತಂಡದ ಸಂಚಾಲಕ ಎಲ್&zwnj;.ಐ. ಲಕ್ಕಮ್ಮನವರ ಹೇಳುತ್ತಾರೆ.&lt;/p&gt;&lt;p&gt;ಸೋಮವಾರದಿಂದ ಶನಿವಾರದ ವರೆಗೆ ಕರ್ತವ್ಯ ನಿರ್ವಹಿಸುವುದು, ಭಾನುವಾರ ಮಾತ್ರ ಪರಿಸರ ಪ್ರೇಮ ತಂಡದೊಂದಿಗೆ ಸಮಾಜದ ಋಣ ತೀರುವ ಕಾರ್ಯ ಮಾಡುತ್ತಿದ್ದೇನೆ. ಈ ಕಾರ್ಯ ನನಗೆ ಹೆಮ್ಮೆ, ಸಮಾಧಾನ ತಂದಿದೆ ಎನ್ನುತ್ತಾರೆ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharwad-district-panchayat-deputy-secretary-kas-officer-mallikarjuna-todalbagi-paints-283-government-schools-mrq/articleshow-7asssks"/>
        </item>
        <item>
            <title><![CDATA[ಉಂಡಿ ತಿಂದು ಜೋಕಾಲಿ ಜೀಕಿದ ಮಹಿಳೆಯರು; ಜಾನಪದ ಸಂಶೋಧನಾ ಸಂಸ್ಥೆಯಿಂದ ಹಬ್ಬದ ಸಂಭ್ರಮ]]></title>
            <link>https://kannada.asianetnews.com/karnataka-districts/dharwad-shravana-masa-undi-festival-organized-by-folklore-research-institute-to-convey-the-importance-of-festivals-mrq/articleshow-b75prqt</link>
            <guid isPermaLink="true">https://kannada.asianetnews.com/karnataka-districts/dharwad-shravana-masa-undi-festival-organized-by-folklore-research-institute-to-convey-the-importance-of-festivals-mrq/articleshow-b75prqt</guid>
            <pubDate>Sat, 15 Aug 2026 09:08:42 +0530</pubDate>
            <description><![CDATA[ಧಾರವಾಡದ ಜಾನಪದ ಸಂಶೋಧನಾ ಸಂಸ್ಥೆಯು ಯುವ ಪೀಳಿಗೆಗೆ ಹಬ್ಬಗಳ ಮಹತ್ವ ತಿಳಿಸಲು ನಾಗರ ಪಂಚಮಿಯ ಅಂಗವಾಗಿ 'ಉಂಡಿ ಹಬ್ಬ'ವನ್ನು ಸಡಗರದಿಂದ ಆಚರಿಸಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಬಗೆಬಗೆಯ ಉಂಡಿಗಳನ್ನು ತಂದು, ನಾಗರ ಮೂರ್ತಿಗೆ ಪೂಜೆ ಸಲ್ಲಿಸಿ, ಸಾಂಪ್ರದಾಯಿಕ ಗೀತೆ ಮತ್ತು ಆಟಗಳೊಂದಿಗೆ ಸಂಭ್ರಮಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m01qz30m7wt7sh7dxt9075t9,imgname-dharwad-undi-habba-1786765085716.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ:&lt;/strong&gt; ಶ್ರಾವಣ ಬಂದರೆ ಹಬ್ಬಗಳ ಸರಮಾಲೆ. ಅದರಲ್ಲೂ ಶ್ರಾವಣದ ಮೊದಲ ಹಬ್ಬವಾದ ನಾಗರ ಪಂಚಮಿಯ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಲು ಧಾರವಾಡದ ಜಾನಪದ ಸಂಶೋಧನಾ ಸಂಸ್ಥೆಯು ಶುಕ್ರವಾರ ಉಂಡಿ ಹಬ್ಬದ ಹೆಸರಿನಲ್ಲಿ ಸಡಗರದಿಂದ ಆಚರಿಸಿತು.&lt;/p&gt;&lt;p&gt;ಶೇಂಗಾ ಉಂಡಿ, ರವೆ ಉಂಡಿ, ಎಳ್ಳುಂಡಿ, ಬೇಸನ್ ಉಂಡಿ, ಚುರುಮುರಿ ಉಂಡಿ, ಅಂಟಿನ ಉಂಡಿ, ಕೊಬ್ಬರಿ ಉಂಡಿ... ಒಂದಾ ಎರಡಾ... ತರಹೇವಾರಿ ಉಂಡಿಗಳು ಬಾಯಲ್ಲಿ ನೀರು ತರಿಸಿದವು. ಅದರೊಂದಿಗೆ ಚಕ್ಕಲಿ ಹಾಗೂ ವಿವಿಧ ಬಗೆಯ ಕಾಳುಗಳು ಸೊಗಸು ಇತ್ತು. ಬಗೆ-ಬಗೆಯ ತಿನಿಸುಗಳ ಸಮಾಗಮಕ್ಕೆ ರಂಗಾಯಣದ ಆವರಣ ಸಾಕ್ಷಿಯಾಯಿತು. ಶ್ರಾವಣ ಮಾಸದ ಎರಡನೇ ದಿನವನ್ನು ಉಂಡಿ ಹಬ್ಬವನ್ನಾಗಿ ಆಚರಿಸುವ ಪದ್ಧತಿ ಇದ್ದು ಜಾನಪದ ಸಂಶೋಧನಾ ಸಂಸ್ಥೆಯಿಂದ ಮಹಿಳೆಯರು ಉಂಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.&lt;/p&gt;&lt;h2&gt;&lt;strong&gt;ಪಂಚಮಿಯ ಗೀತೆ&lt;/strong&gt;&lt;/h2&gt;&lt;p&gt;ಹೊಸ ಸೀರೆಗಳನ್ನುಟ್ಟು ಮಹಿಳೆಯರು ತಮ್ಮ ಮನೆಗಳಿಂದ ಬಗೆ-ಬಗೆಯ ಉಂಡಿ ತೆಗೆದುಕೊಂಡು ಬಂದಿದ್ದರು. ಸಾಂಪ್ರದಾಯಿಕ ಶೈಲಿಯ ಆಭರಣ ಧರಿಸಿದ್ದ ಮಹಿಳೆಯರು, ಆವರಣದಲ್ಲಿ ನಾಗರ ಮೂರ್ತಿಗೆ ಹಾಲೆರೆದರು. ನಂತರ ಪಂಚಮಿಯ ಗೀತೆಗಳಿಗೆ ದನಿಯಾದರು. ಮರವೊಂದಕ್ಕೆ ಕಟ್ಟಲಾಗಿದ್ದ ಜೋಕಾಲಿ ಜೀಕಿದರು.&lt;/p&gt;&lt;p&gt;ಬರೀ ನಾಗರ ಪಂಚಮಿ ಅಲ್ಲದೇ ಹಿಂದೂಗಳ ಪ್ರಮುಖ ಹಬ್ಬಗಳ ಸಂಪ್ರದಾಯದ ಮಹತ್ವ ಸಾರುವ ಹಾಗೂ ಯುವ ಪೀಳಿಗೆಗೆ ಹಬ್ಬಗಳ ಮಹತ್ವ, ಪದ್ಧತಿ ತಿಳಿಸಲು ಸಂಸ್ಥೆಯು ಹಲವು ವರ್ಷಗಳಿಂದ ಇಂತಹ ಆಚರಣೆಗಳನ್ನು ಮಾಡುತ್ತಿದೆ. ಜನಪದ ಕಲಾವಿದ ಬಸವಲಿಂಗಯ್ಯ ಹಿರೇಮೇಠ ಅವರು ಈ ಸಂಪ್ರದಾಯ ಹುಟ್ಟು ಹಾಕಿದ್ದು, ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಸಂಸ್ಥೆಯ ವಿಶ್ವೇಶ್ವರಿ ಹಿರೇಮಠ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್&zwnj;ಗೆ ಬಿಗ್&zwnj; ಶಾಕ್; 2110 ಕೋಟಿ ರಹಸ್ಯ&lt;/strong&gt;&lt;/p&gt;&lt;p&gt;ನಾಗರ ಪಂಚಮಿ ಎಂದರೆ ಪೂಜೆ ಮಾತ್ರವಲ್ಲದೆ ಅಲ್ಲಿನ ಖಾದ್ಯಗಳ ಸಂಭ್ರಮವೇ ಬೇರೆ. ಆದ್ದರಿಂದ ಜಾನಪದ ಕೇಂದ್ರ ಆಯೋಜಿಸುತ್ತಿರುವ ಇಂತಹ ಹಬ್ಬಗಳಿಗೆ ಪ್ರತಿ ಬಾರಿ ಸದಸ್ಯತ್ವ ಹೊಂದಿರುತ್ತೇವೆ. ಎಲ್ಲರೂ ಕೂಡಿ ಹಬ್ಬ ಆಚರಿಸಿ, ಖಾದ್ಯ ಸೇವಿಸಿ ಪರಸ್ಪರ ಖುಷಿ ಹಂಚಿಕೊಳ್ಳುತ್ತೇವೆ ಎಂದು ವಿದ್ಯಾ ದೇಸಾಯಿ ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; BPL Card: ಬಿಪಿಎಲ್&zwnj; ಕಾರ್ಡ್&zwnj; ರದ್ದತಿಗೆ ತಾತ್ಕಾಲಿಕ ಸ್ಥಗಿತ! ಆಹಾರ ಸಚಿವ ರಿಜ್ವಾನ್ ಅರ್ಷದ್&zwnj; ಮಹತ್ವದ ಘೋಷಣೆ!&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharwad-shravana-masa-undi-festival-organized-by-folklore-research-institute-to-convey-the-importance-of-festivals-mrq/articleshow-b75prqt"/>
        </item>
        <item>
            <title><![CDATA[ರೈತರು ಬಳಸುವ ರಸಗೊಬ್ಬರ, ಕ್ರಿಮಿನಾಶಕದಿಂದ ಕಿಡ್ನಿ, ಹೃದಯಕ್ಕೆ ಕಂಟಕ: ಕೆಎಂಸಿಆರ್‌ಐ ಅಧ್ಯಯನದಲ್ಲಿ ಆಘಾತಕಾರಿ ಅಂಶ ಬಯಲು!]]></title>
            <link>https://kannada.asianetnews.com/karnataka-districts/indian-farmers-pesticides-chemical-fertilizers-health-risks-kidney-heart-kmcri-study-hubballi/articleshow-bos0cmq</link>
            <guid isPermaLink="true">https://kannada.asianetnews.com/karnataka-districts/indian-farmers-pesticides-chemical-fertilizers-health-risks-kidney-heart-kmcri-study-hubballi/articleshow-bos0cmq</guid>
            <pubDate>Fri, 21 Aug 2026 09:40:14 +0530</pubDate>
            <description><![CDATA[ಹುಬ್ಬಳ್ಳಿಯ ಕೆಎಂಸಿಆರ್&zwnj;ಐ ಧಾರವಾಡ ಜಿಲ್ಲೆಯ ರೈತರ ಮೇಲೆ ನಡೆಸಿದ ಅಧ್ಯಯನದಲ್ಲಿ, ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆಯಿಂದ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಾಗುತ್ತಿರುವುದನ್ನು ಪತ್ತೆಹಚ್ಚಿದೆ. ಕ್ರಿಮಿನಾಶಕ ಸಿಂಪಡಿಸಿದ 15 ದಿನಗಳ ನಂತರವೂ ರೈತರ ರಕ್ತದಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು, ಇದು ಕಿಡ್ನಿ ವೈಫಲ್ಯ ಮತ್ತು ಹೃದ್ರೋಗದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವರದಿ ಎಚ್ಚರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0h80qh82jm3kevtpdb8qpjr,imgname-hubballi-farmers-pesticide-spray-1787285233192.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ- ಶಿವಾನಂದ ಗೊಂಬಿ&lt;/strong&gt;&lt;/p&gt;&lt;p&gt;&lt;strong&gt;ಹುಬ್ಬಳ್ಳಿ (ಆ.21): ಚಿ&lt;/strong&gt;ಕ್ಕಮಕ್ಕಳ ಹೃದಯಾಘಾತದ ಕಾರಣಗಳ ಬಗ್ಗೆ ಇತ್ತೀಚಿಗಷ್ಟೇ ಸಂಶೋಧನೆ ನಡೆಸಿದ್ದ ಇಲ್ಲಿನ ಕೆಎಂಸಿಆರ್&zwnj;ಐ (KMCRI - Karnataka Medical College and Research Institute), ಇದೀಗ ರಸಗೊಬ್ಬರ, ಕ್ರಿಮಿನಾಶಕ ಬಳಕೆಯಿಂದ ರೈತರಿಗೆ ಕಿಡ್ನಿ ವೈಫಲ್ಯ, ಹೃದ್ರೋಗಕ್ಕೆ ತುತ್ತಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ ಕೆಲ ಆಘಾತಕಾರಿ ಅಂಶಗಳನ್ನು ಬಯಲು ಮಾಡಿದೆ.&lt;/p&gt;&lt;p&gt;ರಸಗೊಬ್ಬರ, ಕ್ರಿಮಿನಾಶಕ ಬಳಕೆ ಬಗ್ಗೆ ಪರ-ವಿರೋಧ ಚರ್ಚೆಗಳು ಮೊದಲಿನಿಂದಲೇ ನಡೆಯುತ್ತಲೇ ಇವೆ. ಇವೆಲ್ಲದರ ನಡುವೆಯೇ ಇವುಗಳನ್ನು ಸಿಂಪಡಿಸುವ ರೈತರ ದೇಹದ ಮೇಲೆ ಏನು ಪರಿಣಾಮ ಬೀರುತ್ತಿವೆ ಎಂಬುದರ ಕುರಿತು ಕೆಎಂಸಿಆರ್&zwnj;ಐನ ಬಹುಶಿಸ್ತೀಯ ಅಧ್ಯಯನ ಘಟಕವು ಧಾರವಾಡ ಜಿಲ್ಲೆಯಲ್ಲಿ ಒಂದು ತಿಂಗಳ ಕಾಲ ಸಂಶೋಧನೆ ನಡೆಸಿದೆ.&lt;/p&gt;&lt;h2&gt;&lt;strong&gt;ಏನಿದು ಸಂಶೋಧನೆ:&lt;/strong&gt;&lt;/h2&gt;&lt;p&gt;ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ 13 ರೈತರನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದ ಕೆಎಂಸಿಆರ್&zwnj;ಐ, ಕ್ರಿಮಿನಾಶಕ ಹಾಗೂ ರಸಗೊಬ್ಬರ ಸಿಂಪಡಿಸಿದ ರೈತರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಸಿಂಪಡಣೆಯ ಮೊದಲ ದಿನದಿಂದ ಹಿಡಿದು 15 ದಿನದ ಬಳಿಕವೂ ರೈತರ ರಕ್ತದಲ್ಲಿ ಕ್ರಿಮಿನಾಶಕದ ಅಂಶ ಪತ್ತೆಯಾಗಿದೆ. ರೈತರ ದೇಹಕ್ಕೆ ರಾಸಾಯನಿಕ ಹೇಗೆ ಪ್ರವೇಶಿಸುತ್ತದೆ ಮತ್ತು ದೀರ್ಘಕಾಲದಲ್ಲಿ ಅದರ ಪರಿಣಾಮ ಏನಾಗಬಹುದು ಎಂಬುದರ ಕುರಿತು ಮತ್ತಷ್ಟು ಅಧ್ಯಯನ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಯಾವ ಪರಿಣಾಮ?:&lt;/strong&gt;&lt;/h2&gt;&lt;p&gt;ಕ್ರಿಮಿನಾಶಕಗಳ ಸಂಪರ್ಕದಿಂದ ರೈತರ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಮೂತ್ರಪಿಂಡ, ಹೃದಯ ಹಾಗೂ ಚಯಾಪಚಯ ಸಂಬಂಧಿತ ಆರೋಗ್ಯ ಸಮಸ್ಯೆಗಳ ಕುರಿತು ಹೆಚ್ಚಿನ ಗಮನ ಅಗತ್ಯವಿದೆ. ಕಿಡ್ನಿ ವೈಫಲ್ಯ, ಮಧುಮೇಹ ಅಥವಾ ಹೃದಯ ಕಾಯಿಲೆಗೆ ರಸಗೊಬ್ಬರ, ಕ್ರಿಮಿನಾಶಕವೂ ಕಾರಣವಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಇದೇ ನೇರ ಕಾರಣ ಎಂದು ಈ ಸಣ್ಣ ಪ್ರಮಾಣದ ಅಧ್ಯಯನದಿಂದ ಅಂತಿಮವಾಗಿ ಹೇಳಲು ಸಾಧ್ಯವಿಲ್ಲ. ದೊಡ್ಡ ಪ್ರಮಾಣದ ಮತ್ತು ದೀರ್ಘಾವಧಿಯ ಸಂಶೋಧನೆ ಅಗತ್ಯವಿದೆ ಎಂದು ವೈದ್ಯರ ತಂಡ ಅಭಿಪ್ರಾಯಪಟ್ಟಿದೆ.&lt;/p&gt;&lt;h2&gt;&lt;strong&gt;ದೇಹಕ್ಕೆ ಸೇರುತ್ತಿರುವುದೇಗೆ?&lt;/strong&gt;&lt;/h2&gt;&lt;p&gt;ಕ್ರಿಮಿನಾಶಕ ಸಿಂಪಡಿಸುವಾಗ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳದಿದ್ದರೆ, ಉಸಿರಾಟ ಹಾಗೂ ಚರ್ಮದ ಸಂಪರ್ಕದ ಮೂಲಕ ರಾಸಾಯನಿಕಗಳು ದೇಹಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಸಿಂಪಡಣೆ ಮಾಡುವಾಗ ರೈತರು ಕಡ್ಡಾಯವಾಗಿ ಸುರಕ್ಷತಾ ಸಾಧನ ಬಳಸಬೇಕು. ಮುಖಕ್ಕೆ ಸೂಕ್ತ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸುವ ಜತೆಗೆ ದೇಹವನ್ನು ಸಾಧ್ಯವಾದಷ್ಟು ಸಂಪೂರ್ಣವಾಗಿ ಮುಚ್ಚುವ ಬಟ್ಟೆ ಬಳಸಬೇಕು. ಸಿಂಪಡಣೆ ಮಾಡುವ ಸಂದರ್ಭದಲ್ಲಿ ಆಹಾರ ಅಥವಾ ನೀರು ಸೇವಿಸಬಾರದು. ಯಾರೊಂದಿಗೂ ಮಾತನಾಡಬಾರದು. ಸಿಂಪಡಣೆ ಮುಗಿದ ಬಳಿಕ ಕೈ, ಮುಖ ಹಾಗೂ ದೇಹವನ್ನು ಚೆನ್ನಾಗಿ ತೊಳೆಯಬೇಕು. ಬಟ್ಟೆಗಳಿಗೂ ರಾಸಾಯನಿಕ ತಗುಲಿದ್ದರೆ ಅವುಗಳನ್ನು ಪ್ರತ್ಯೇಕವಾಗಿ ಸ್ವಚ್ಛಗೊಳಿಸಬೇಕು ಎಂದು ಅಧ್ಯಯನ ಸಲಹೆ ಮಾಡುತ್ತದೆ.&lt;/p&gt;&lt;h2&gt;&lt;strong&gt;ದೊಡ್ಡ ಮಟ್ಟದ ಅಧ್ಯಯನ:&lt;/strong&gt;&lt;/h2&gt;&lt;p&gt;ಸದ್ಯ ಧಾರವಾಡ ಜಿಲ್ಲೆಯಲ್ಲಷ್ಟೇ ಅದು ಬರೀ 13 ರೈತರ ಅಧ್ಯಯನವನ್ನಷ್ಟೇ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಮುಂದಿನ ಹಂತದಲ್ಲಿ ದೊಡ್ಡ ಮಟ್ಟದಲ್ಲಿ ಸಂಶೋಧನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ರಾಸಾಯನಿಕಗಳ ಬಳಕೆ ನಿಲ್ಲಿಸುವುದು ಅಸಾಧ್ಯ. ಆದರೆ, ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡುವುದನ್ನು ತಪ್ಪಿಸಬೇಕು. ಸಿಂಪಡಣೆ ವೇಳೆ ಸುರಕ್ಷತಾ ಕ್ರಮ ಪಾಲಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡು ಪರಿಹಾರ ಸೂಚಿಸುವುದು ಅಧ್ಯಯನದ ಮುಖ್ಯ ಉದ್ದೇಶ ಎಂದು ಕೆಎಂಸಿಆರ್&zwnj;ಐ ತಿಳಿಸುತ್ತದೆ.&lt;/p&gt;&lt;p&gt;ಒಟ್ಟಿನಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಕೆ ರೈತರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿರುವುದಂತೂ ಸತ್ಯ.&lt;/p&gt;&lt;p&gt;ಒಂದು ತಿಂಗಳ ಅವಧಿಯಲ್ಲಿ 13 ರೈತರ ರಕ್ತದ ಮಾದರಿ ಪಡೆದು ಪರೀಕ್ಷಿಸಲಾಗಿದೆ. ರಸಗೊಬ್ಬರ, ಕ್ರಿಮಿನಾಶಕ ಸಿಂಪಡಿಸಿದ ಮೊದಲ ದಿನದಿಂದ ಹಿಡಿದು 15 ದಿನದವರೆಗೂ ರಕ್ತದಲ್ಲಿ ರಾಸಾಯನಿಕ ಅಂಶ ಪತ್ತೆಯಾಗಿವೆ. ಈ ಬಗ್ಗೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಅಧ್ಯಯನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆಗ ಇನ್ನಷ್ಟು ನಿಖರತೆ ಪಡೆಯಬಹುದು.&lt;/p&gt;&lt;p&gt;&lt;strong&gt;-ಡಾ. ರಾಮ ಕೌಲಗುಡ್ಡ, ನೋಡಲ್&zwnj; ಅಧಿಕಾರಿ, ಬಹುಶಿಸ್ತೀಯ ಅಧ್ಯಯನ ವಿಭಾಗ, ಕೆಎಂಸಿಆರ್&zwnj;ಐ&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/indian-farmers-pesticides-chemical-fertilizers-health-risks-kidney-heart-kmcri-study-hubballi/articleshow-bos0cmq"/>
        </item>
        <item>
            <title><![CDATA[organ donation registration ಅಂಗಾಂಗ ದಾನ ನೋಂದಣೀಲಿ ರಾಜ್ಯಕ್ಕೆ ಧಾರವಾಡ ನಂಬರ್ ಒನ್!]]></title>
            <link>https://kannada.asianetnews.com/karnataka-districts/dharwad-ranks-first-in-the-karnataka-for-organ-donation-registration-rav/articleshow-f3mmmw8</link>
            <guid isPermaLink="true">https://kannada.asianetnews.com/karnataka-districts/dharwad-ranks-first-in-the-karnataka-for-organ-donation-registration-rav/articleshow-f3mmmw8</guid>
            <pubDate>Thu, 13 Aug 2026 07:24:01 +0530</pubDate>
            <description><![CDATA[ಆರೋಗ್ಯ ಇಲಾಖೆಯ ಜಾಗೃತಿ ಅಭಿಯಾನದ ಫಲವಾಗಿ ಕರ್ನಾಟಕದಲ್ಲಿ 67,632 ಜನರು ಅಂಗಾಂಗ ದಾನಕ್ಕೆ ವಾಗ್ದಾನ ಮಾಡಿದ್ದಾರೆ. ಈ ಪೈಕಿ, 12,534 ನೋಂದಣಿಗಳೊಂದಿಗೆ ಧಾರವಾಡ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಸ್ಥಳೀಯ ಮಟ್ಟದ ಅಭಿಯಾನದ ಯಶಸ್ಸನ್ನು ಸಾಬೀತುಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwcrs2rhkb9tjf2x5kqhevf,imgname-----------------------2026-08-13t071541.528-1786585572440.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಜೀಜಅಹ್ಮದ ಬಳಗಾನೂರ&lt;/strong&gt;&lt;/p&gt;&lt;p&gt;ಹುಬ್ಬಳ್ಳಿ (ಆ.13): ಆರೋಗ್ಯ ಇಲಾಖೆಯ ನಿರಂತರ ಜಾಗೃತಿ ಅಭಿಯಾನದ ಫಲವಾಗಿ ರಾಜ್ಯದಲ್ಲಿ ಬರೋಬ್ಬರಿ 67,632 ಮಂದಿ ಅಂಗಾಂಗ ದಾನದ ವಾಗ್ದಾನ ಮಾಡಿದ್ದಾರೆ. ಧಾರವಾಡ ಜಿಲ್ಲೆವೊಂದರಲ್ಲಿಯೇ 12,534 ಜನರು ನೋಂದಣಿ ಮಾಡಿಸಿದ್ದು, ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.&lt;/p&gt;&lt;p&gt;ಅಂಗಾಂಗ ದಾನವು ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಅಥವಾ ಮರಣದ ನಂತರ ತನ್ನ ಆರೋಗ್ಯಕರ ಅಂಗಗಳನ್ನು ಮತ್ತೊಬ್ಬ ರೋಗಿಯ ಜೀವ ಉಳಿಸಲು ನೀಡುವ ಒಂದು ವೈದ್ಯಕೀಯ ಪ್ರಕ್ರಿಯೆಯಾಗಿದೆ. 18 ವರ್ಷ ಮೇಲ್ಪಟ್ಟ ಯಾರಾದರೂ ಅಂಗಾಂಗ ನೋಂದಣಿ ಮಾಡಿಸಿಕೊಳ್ಳಬಹುದು. ಈ ಕುರಿತು ಆರೋಗ್ಯ ಇಲಾಖೆಯು ನಿರಂತರವಾಗಿ ಜನಜಾಗೃತಿ, ಅಭಿಯಾನ ಸೇರಿದಂತೆ ವಿಭಿನ್ನ ಕಾರ್ಯಕ್ರಮ ಆಯೋಜಿಸಿದ ಪರಿಣಾಮ ಇಂದು ಅದು ಪ್ರತಿಫಲ ನೀಡಲು ಆರಂಭಿಸಿದೆ.&lt;/p&gt;&lt;h2&gt;ವಿಜಯನಗರಕ್ಕೆ ಕೊನೆಯ ಸ್ಥಾನ&lt;/h2&gt;&lt;p&gt;ಧಾರವಾಡದ ನಂತರ ಬಳ್ಳಾರಿ (12,222) ದ್ವಿತೀಯ, ಗದಗ (6,070) ತೃತೀಯ ಸ್ಥಾನದಲ್ಲಿವೆ. ಕ್ರಮವಾಗಿ ಬೆಂಗಳೂರು 5,702, ವಿಜಯಪುರ 2,960, ಬೆಳಗಾವಿ 2,957, ದಕ್ಷಿಣ ಕನ್ನಡ 2,581 ಹಾಗೂ ಕೋಲಾರ 2,031, ಕೊಪ್ಪಳ 1,972, ಬಾಗಲಕೋಟೆ ಹಾಗೂ ಹಾವೇರಿಯಲ್ಲಿ ತಲಾ 1,667, ಉಡುಪಿ 1,256, ಮೈಸೂರು 1,195 ಮತ್ತು ಕಲಬುರಗಿಯಲ್ಲಿ 1,085 ನೋಂದಣಿಯಾಗಿವೆ. ವಿಜಯನಗರ ಜಿಲ್ಲೆಯಲ್ಲಿ 301 ನೋಂದಣಿಯಾಗುವ ಮೂಲಕ ಕೊನೆಯ ಸ್ಥಾನ ಪಡೆದಿದೆ.&lt;/p&gt;&lt;h3&gt;ಜಾಗೃತಿಯ ಫಲ:&lt;/h3&gt;&lt;p&gt;ಆರೋಗ್ಯ ಇಲಾಖೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯತಂತ್ರದಡಿ ಶಾಲಾ- ಕಾಲೇಜು, ಶಿಕ್ಷಣ ಸಂಸ್ಥೆ ಹಾಗೂ ವಿವಿಧ ಸಮುದಾಯ ಸಂಘಟನೆಗಳ ಸಹಕಾರದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಶಿಬಿರಗಳಲ್ಲಿ ಕ್ಯೂಆರ್&zwnj; ಕೋಡ್&zwnj; ಮೂಲಕವೂ ಆನ್&zwnj;ಲೈನ್&zwnj;ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;p&gt;&lt;strong&gt;ಒಬ್ಬ ದಾನಿ 8 ಜೀವಕ್ಕೆ ಆಸರೆ:&lt;/strong&gt;&lt;/p&gt;&lt;p&gt;ಒಬ್ಬ ಮೃತ ಅಂಗಾಂಗ ದಾನಿಯಿಂದ 8 ಜನರ ಜೀವ ಉಳಿಸಬಹುದು. ಮೆದುಳಿನ ಕಾರ್ಯ ಶಾಶ್ವತವಾಗಿ ಸ್ಥಗಿತಗೊಂಡಿರುವುದು ವೈದ್ಯಕೀಯವಾಗಿ ದೃಢಪಟ್ಟ ಬಳಿಕ, ಕಾನೂನುಬದ್ಧ ಪ್ರಕ್ರಿಯೆ ಮತ್ತು ಕುಟುಂಬದ ಒಪ್ಪಿಗೆಯೊಂದಿಗೆ ಹೃದಯ, ಯಕೃತ್ತು, ಮೂತ್ರಪಿಂಡ, ಶ್ವಾಸಕೋಶ ಸೇರಿದಂತೆ ವಿವಿಧ ಅಂಗಾಂಗಗಳನ್ನು ಕಸಿ ಮಾಡಬಹುದಾಗಿದೆ. ಕಣ್ಣುಗಳ ದಾನವೂ ಮತ್ತೊಬ್ಬರ ಬದುಕಿಗೆ ಬೆಳಕು ನೀಡಬಲ್ಲದು.&lt;/p&gt;&lt;p&gt;&lt;strong&gt;ಎನ್&zwnj;ಒಟಿಟಿಒ ಅಭಿಯಾನಕ್ಕೆ ಪೂರಕ:&lt;/strong&gt;&lt;/p&gt;&lt;p&gt;ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದ ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಎನ್&zwnj;ಒಟಿಟಿಒ) 2023ರಿಂದ ದೇಶಾದ್ಯಂತ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ಪೂರಕವಾಗಿ ಧಾರವಾಡ ಆರೋಗ್ಯ ಇಲಾಖೆ ಸ್ಥಳೀಯ ಮಟ್ಟದಲ್ಲಿ ಅಭಿಯಾನ ನಡೆಸುತ್ತಿದೆ. ಜಿಲ್ಲೆಯಲ್ಲಿ 2024ರಲ್ಲಿ 4, 2025ರಲ್ಲಿ 4 ಹಾಗೂ 2026ರಲ್ಲಿ ಓರ್ವ ಸೇರಿದಂತೆ ಒಟ್ಟು 9 ವಾಗ್ದಾನದಾರರ ಅಂಗಾಂಗಗಳನ್ನು ಕಸಿ ಪ್ರಕ್ರಿಯೆಗೆ ಬಳಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.&lt;/p&gt;&lt;p&gt;&lt;strong&gt;ನಿರಂತರ ಜಾಗೃತಿಯಿಂದ ಯಶಸ್ಸು:&lt;/strong&gt;&lt;/p&gt;&lt;p&gt;ಆರಂಭಿಕ ಹಂತದಲ್ಲಿ ಅಂಗಾಂಗ ದಾನಕ್ಕೆ ವಾಗ್ದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಅಂಗಾಂಗ ದಾನದಿಂದ ಮತ್ತೊಬ್ಬರ ಜೀವ ಉಳಿಸಬಹುದು ಎಂಬ ಸಂದೇಶವನ್ನು ಆರೋಗ್ಯ ಮೇಳ, ಶಿಬಿರ, ವಿಶೇಷ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಜನರಿಗೆ ತಲುಪಿಸಿದ ಪರಿಣಾಮ ನೋಂದಣಿ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಳೆದ 2 ವರ್ಷಗಳಿಂದ ಧಾರವಾಡ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.&lt;/p&gt;&lt;p&gt;ಡಾ. ಪರಶುರಾಮ ಎಫ್.ಕೆ. ಜಿಲ್ಲಾ ಆರೋಗ್ಯಾಧಿಕಾರಿ, ಧಾರವಾಡ&lt;/p&gt;&lt;p&gt;&lt;strong&gt;ಅಗ್ರ 10 ಜಿಲ್ಲೆಗಳು&lt;/strong&gt; ಜಿಲ್ಲೆ ನೋಂದಣಿ&lt;/p&gt;&lt;ol&gt; &lt;li&gt;ಧಾರವಾಡ 12,534&lt;/li&gt; &lt;li&gt;ಬಳ್ಳಾರಿ 12,222&lt;/li&gt; &lt;li&gt;ಗದಗ 6,070&lt;/li&gt; &lt;li&gt;ಬೆಂಗಳೂರು 5,702&lt;/li&gt; &lt;li&gt;ವಿಜಯಪುರ 2,960&lt;/li&gt; &lt;li&gt;ಬೆಳಗಾವಿ 2,957&lt;/li&gt; &lt;li&gt;ದಕ್ಷಿಣ ಕನ್ನಡ 2,581&lt;/li&gt; &lt;li&gt;ಕೋಲಾರ 2,031&lt;/li&gt; &lt;li&gt;ಕೊಪ್ಪಳ 1,972&lt;/li&gt; &lt;li&gt;ಬಾಗಲಕೋಟೆ 1,667&lt;/li&gt; &lt;li&gt;ಹಾವೇರಿ 1,667&lt;/li&gt;&lt;/ol&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharwad-ranks-first-in-the-karnataka-for-organ-donation-registration-rav/articleshow-f3mmmw8"/>
        </item>
        <item>
            <title><![CDATA[50 ವರ್ಷದ ಅವಧಿಗೆ ಹುಬ್ಬಳ್ಳಿ ಸೇರಿ 11 ಏರ್‌ಪೋರ್ಟ್‌ ಖಾಸಗಿಗೆ ನೀಡಲು ನಿರ್ಧಾರ Hubballi]]></title>
            <link>https://kannada.asianetnews.com/india-news/govt-plans-to-lease-11-airports-in-country-including-hubballi-varanasi-tirupati-under-public-private-partnership-ppp-mrq/articleshow-flzsgez</link>
            <guid isPermaLink="true">https://kannada.asianetnews.com/india-news/govt-plans-to-lease-11-airports-in-country-including-hubballi-varanasi-tirupati-under-public-private-partnership-ppp-mrq/articleshow-flzsgez</guid>
            <pubDate>Tue, 25 Aug 2026 08:48:31 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರವು ಕರ್ನಾಟಕದ ಹುಬ್ಬಳ್ಳಿ, ವಾರಾಣಸಿ ಮತ್ತು ತಿರುಪತಿ ಸೇರಿದಂತೆ ದೇಶದ 11 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ (ಪಿಪಿಪಿ) ಗುತ್ತಿಗೆ ನೀಡಲು ಯೋಜಿಸಿದೆ. ಈ ವಿಮಾನ ನಿಲ್ದಾಣಗಳನ್ನು ಐದು ಗುಚ್ಛಗಳಾಗಿ ವಿಂಗಡಿಸಿ, 50 ವರ್ಷಗಳ ಅವಧಿಗೆ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpmggt34x2s6c4tw2m7ewesf,imgname-hubballi-airport--1--1776657393764.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಕರ್ನಾಟಕದ ಹುಬ್ಬಳ್ಳಿ, ಉತ್ತರಪ್ರದೇಶದ ವಾರಾಣಸಿ ಹಾಗೂ ಆಂಧ್ರಪ್ರದೇಶದ ತಿರುಪತಿ ಸೇರಿ ದೇಶದ 11 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ- ಖಾಸಗಿ ಪಾಲುದಾರಿಕೆಯಡಿ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲು ಕೇಂದ್ರ ಸರ್ಕಾರ ಯೋಜಿಸಿದೆ.&lt;/p&gt;&lt;p&gt;11 ವಿಮಾನ ನಿಲ್ದಾಣಗಳನ್ನು ಐದು ಗುಚ್ಛಗಳಾಗಿ ಮಾಡಿ, ಅವನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡುವುದು ಸರ್ಕಾರದ ಉದ್ದೇಶ. ಇದರಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಗುತ್ತಿಗೆ ಪಡೆದ ಕಂಪನಿಗಳೇ ಹೂಡಿಕೆ ಮಾಡಿ, ಮೂಲಸೌಕರ್ಯವನ್ನು ಪ್ರಯಾಣಿಕರಿಗೆ ಕಲ್ಪಿಸಿ ನಿರ್ವಹಣೆ ಮಾಡಲಿವೆ. ಇದರಿಂದ ಸರ್ಕಾರದ ಬೊಕ್ಕಸದ ಮೇಲೆ ಹೊರೆ ತಪ್ಪಿದಂತಾಗುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಸ್ತಾವಕ್ಕೆ ಆ.4ರಂದೇ ಸಾರ್ವಜನಿಕ ಖಾಸಗಿ ಪಾಲುದಾರಿಕೆ ಪರಿಶೀಲನಾ ಸಮಿತಿ ತಾತ್ವಿಕ ಒಪ್ಪಿಗೆ ಕೊಟ್ಟಿದೆ.&lt;/p&gt;&lt;p&gt;ತಿರುಪತಿ ಏರ್&zwnj;ಪೋರ್ಟ್ ಅನ್ನು ತಿರುಚಿರಾಪಳ್ಳಿ ಹಾಗೂ ಹುಬ್ಬಳ್ಳಿಯನ್ನು ಭುವನೇಶ್ವರ ವಿಮಾನ ನಿಲ್ದಾಣದ ಜತೆಗೂಡಿಸಿ ಹಂಚಿಕೆ ಮಾಡಲಾಗುತ್ತದೆ. ಗಯಾ, ಕುಶಿನಗರಗಳ ಜತೆ ವಾರಾಣಸಿ ವಿಮಾನ ನಿಲ್ದಾಣವನ್ನು ಹಂಚಲಾಗುತ್ತದೆ. ಈ ಗುತ್ತಿಗೆ ಅವಧಿ 50 ವರ್ಷ. 2018-19ರಲ್ಲೂ ಸರ್ಕಾರ ಆರು ವಿಮಾನ ನಿಲ್ದಾಣಗಳನ್ನು ಇದೇ ರೀತಿ ಗುತ್ತಿಗೆ ಕೊಟ್ಟಿತ್ತು.&lt;/p&gt;&lt;h2&gt;&lt;strong&gt;ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ಮಧ್ಯೆ ಪ್ರತಿನಿತ್ಯ ವಿಮಾನ ಸೇವೆ&lt;/strong&gt;&lt;/h2&gt;&lt;p&gt;ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಯಾಣಿಕರಿಗಾಗಿ ಇಂಡಿಗೋ ಏರ್&zwnj;ಲೈನ್ಸ್ ಸಂಸ್ಥೆ ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ಮಧ್ಯೆ ಪ್ರತಿನಿತ್ಯ ವಿಮಾನ ಸೇವೆ ಆರಂಭಿಸುವ ಸಿಹಿ ಸುದ್ದಿ ನೀಡಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್&zwnj; ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ಏರ್&zwnj;ಲೈನ್ಸ್ ಅ.1ರಿಂದಲೇ ಪ್ರತಿದಿನ ವಿಮಾನ ಸಂಚಾರ ಆರಂಭಿಸುವುದಾಗಿ ಪ್ರಕಟಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹುಬ್ಬಳ್ಳಿ- ಪುಣೆ- ಪಿಂಪ್ರಿ ನಡುವೆ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ: ಮುಂಗಡ ಬುಕ್ಕಿಂಗ್&zwnj;ನಲ್ಲಿ ಡಿಸ್ಕೌಂಟ್ ಲಭ್ಯ&lt;/strong&gt;&lt;/p&gt;&lt;p&gt;ಈ ಮಹಾನಗರಗಳ &lrm;&lrm;ಪ್ರಯಾಣಿಕರ ಅನುಕೂಲ ಹಾಗೂ ಜನರ ಬೇಡಿಕೆ ಗಮನದಲ್ಲಿಟ್ಟುಕೊಂಡು ಸಚಿವ ಪ್ರಹ್ಲಾದ್ ಜೋಶಿ ಅವರು ದೆಹಲಿ-ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ ಸೇವೆ ಆರಂಭಿಸುವಂತೆ ಇತ್ತೀಚೆಗೆ ಇಂಡಿಗೋ ಏರ್&zwnj;ಲೈನ್ಸ್ ಅಧಿಕಾರಿಗಳ ಗಮನ ಸೆಳೆದಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ISRO ಉಡಾವಣಾ ವಾಹನ ತಯಾರಿಕೆ ಖಾಸಗಿ ವಲಯಕ್ಕೆ? ಕಾಂಗ್ರೆಸ್&zwnj; ಕಿಡಿ, ಬಿಜೆಪಿ ಸಮರ್ಥನೆ&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/govt-plans-to-lease-11-airports-in-country-including-hubballi-varanasi-tirupati-under-public-private-partnership-ppp-mrq/articleshow-flzsgez"/>
        </item>
        <item>
            <title><![CDATA[Dharwad Protest: ನಾವು ಮಾಡಿದ್ದಾದರೂ ಏನು ಅಪರಾಧ ಸ್ವಾಮಿ?  ಧಾರವಾಡ ಬೀದಿಯಲ್ಲಿ ಕನಸುಗಳ ಹೊಸಕಿ ಹಾಕಿತಾ ಖಾಕಿ ದರ್ಪ! ನೊಂದ ಉದ್ಯೋಗಾಂಕ್ಷಿಗಳಿಂದ ಸ್ಟ್ರೇಟ್‌ ಸವಾಲ್!]]></title>
            <link>https://kannada.asianetnews.com/karnataka-districts/dharwad-job-aspirants-police-highhandedness-protest-youths-and-job-seekers-question-police-action-bmk/articleshow-gg6dxlk</link>
            <guid isPermaLink="true">https://kannada.asianetnews.com/karnataka-districts/dharwad-job-aspirants-police-highhandedness-protest-youths-and-job-seekers-question-police-action-bmk/articleshow-gg6dxlk</guid>
            <pubDate>Tue, 18 Aug 2026 16:51:34 +0530</pubDate>
            <description><![CDATA[&lt;p&gt;ಸರ್ಕಾರಿ ಉದ್ಯೋಗಕ್ಕಾಗಿ ಧಾರವಾಡದಲ್ಲಿ ಶಾಂತಿಯುತ ಪ್ರತಿಭಟನೆಗೆ ಮುಂದಾದ ಉದ್ಯೋಗಾಂಕ್ಷಿಗಳ ಧ್ವನಿಯನ್ನು ಪೊಲೀಸ್ ಇಲಾಖೆ ಹತ್ತಿಕ್ಕಿದೆ. ಪ್ರತಿಭಟನೆಗೆ ಅನುಮತಿ ನಿರಾಕರಿಸಿ, ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ಅವರನ್ನು ಬಂಧಿಸುವ ಮೂಲಕ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ವ್ಯವಸ್ಥೆಯ ವಿರುದ್ಧ ಯುವ ಸಮೂಹದ ನೋವು ಮತ್ತು ಅಸಹಾಯಕತೆಯನ್ನು ಬಿಂಬಿಸುತ್ತದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0a9mt3t0envt50x5pnwb3js,imgname-dharwad-police-protest--1787052058746.jpg" type="image/jpeg" height="390" width="690"/>
            <content:encoded><![CDATA[&lt;p&gt;ನಮ್ಮ ಹಣೆಬರಹ ಬದಲಿಸಬೇಕಾದ ವ್ಯವಸ್ಥೆಯೇ ನಮ್ಮ ಬದುಕನ್ನು ಬೀದಿಗೆ ತಳ್ಳುತ್ತಿದೆಯಲ್ಲಾ, ನಾವು ಮಾಡಿದ್ದಾದರೂ ಏನು ಅಪರಾಧ ಸ್ವಾಮಿ?&quot; ಇದು ಇಂದು ಧಾರವಾಡದ ಮಿಚಿಗಿನ್ ಕಂಪೌಂಡ್ ಹಾಗೂ ಜಯನಗರದ ರಸ್ತೆಗಳಲ್ಲಿ ಕೇಳಿಬಂದ ನೊಂದ ಉದ್ಯೋಗಾಕಾಂಕ್ಷಿಗಳ ಆಕ್ರಂದನ ಭರಿತ ನೇರ ಸವಾಲು. ತಮ್ಮ ಹಕ್ಕುಗಳಿಗಾಗಿ, ಸರ್ಕಾರಿ ಉದ್ಯೋಗದ ನ್ಯಾಯಯುತ ಕನಸುಗಳಿಗಾಗಿ ಶಾಂತಿಯುತವಾಗಿ ಸತ್ಯಾಗ್ರಹ ನಡೆಸಲು ಮುಂದಾದ ಯುವ ಸಮೂಹದ ಧ್ವನಿಯನ್ನು ಇಂದು ಮತ್ತೊಮ್ಮೆ ಖಾಕಿ ದರ್ಪದ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದು ತಮ್ಮ ಅಳಲನ್ನು ವಿವಿಧ ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಳ್ಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಕನಸುಗಳ ಹೊಸಕಿ ಹಾಕಿದ 'ಅನುಮತಿ ನಿರಾಕರಣೆ'!&lt;/strong&gt;&lt;/h2&gt;&lt;p&gt;ಸರ್ಕಾರಿ ಖಾಲಿ ಹುದ್ದೆಗಳ ಭರ್ತಿ, ಕೆಪಿಎಸ್&zwnj;ಸಿ ಅಕ್ರಮಗಳ ತನಿಖೆ ಹಾಗೂ ಬಾಧಿತ ಕಾನ್&zwnj;ಸ್ಟೆಬಲ್ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ ಇಂದು ಧಾರವಾಡದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಗಲಿರುಳು ಪುಸ್ತಕ ಹಿಡಿದು ಕಣ್ಣು ಸವೆಸಿದ ಯುವಕರು ತಮ್ಮ ನೋವನ್ನು ಸರ್ಕಾರದ ಗಮನಕ್ಕೆ ತರಲು ಬಯಸಿದ್ದರು. ಆದರೆ, ಕೊನೆ ಕ್ಷಣದಲ್ಲಿ 'ಸೂಕ್ಷ್ಮ ಪ್ರದೇಶ', 'ಆಸ್ಪತ್ರೆಗಳಿವೆ' ಎಂಬ ಕಾರಣ ನೀಡಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸ್ ಇಲಾಖೆಯ ಧೋರಣೆ ವಿದ್ಯಾರ್ಥಿಗಳ ಆಸೆಗೆ ತಣ್ಣೀರೆರಚಿದೆ. ನಮ್ಮ ನೋವನ್ನು ಹೇಳಿಕೊಳ್ಳಲು ನಮಗೆ ಜಾಗವೂ ಇಲ್ಲವೇ? ನಾವು ಕಳ್ಳರೇ, ದರೋಡೆಕೋರರೇ? ಎಂದು ಉದ್ಯೋಗಾಕಾಂಕ್ಷಿಗಳು ಸಮಾಜವನ್ನು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಕಾಂತಕುಮಾರ್ ಅರೆಸ್ಟ್: ಹತ್ತಿಕ್ಕಲ್ಪಟ್ಟ ಯುವ ಧ್ವನಿ!&lt;/strong&gt;&lt;/h3&gt;&lt;p&gt;ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿ, ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದ ಅಕ್ಸಾ (AKSSA) ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಯಕನನ್ನು ಅರೆಸ್ಟ್ ಮಾಡಿ, ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸುವ ಮೂಲಕ ಯುವಕರ ಧ್ವನಿಯನ್ನು ಅಡಗಿಸಲು ಯತ್ನಿಸಲಾಗಿದೆ. ಈ ಖಾಕಿ ನಡೆ ಉದ್ಯೋಗಾಕಾಂಕ್ಷಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ತಮಗಾಗಿ ಧ್ವನಿ ಎತ್ತುವವರನ್ನು ಜೈಲಿಗಟ್ಟಿದರೆ, ತಮ್ಮ ಅಸಹಾಯಕತೆಯನ್ನು ಕೇಳುವವರಾರು ಎಂಬ ಆತಂಕ ಜಯನಗರದ ಸುತ್ತಮುತ್ತಲಿನ ವಿದ್ಯಾರ್ಥಿಗಳಲ್ಲಿ ಮನೆಮಾಡಿದೆ.&lt;/p&gt;&lt;h3&gt;&lt;strong&gt;ಹೆತ್ತವರ ಆಸೆ ಮತ್ತು ಬೀದಿಯ ಕಣ್ಣೀರು!&lt;/strong&gt;&lt;/h3&gt;&lt;p&gt;ಹಳ್ಳಿಯಲ್ಲಿ ಹೊಟ್ಟೆ ಕಟ್ಟಿ, ಸಾಲ ಮಾಡಿ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಓದಲು ಧಾರವಾಡಕ್ಕೆ ಕಳುಹಿಸಿದ್ದಾರೆ. &quot;ಮಗ ಸಾಹೇಬನಾಗಿ ಮನೆಗೆ ಬರುತ್ತಾನೆ, ಕಷ್ಟ ತೀರಿಸುತ್ತಾನೆ&quot; ಎಂದು ಹೆತ್ತವರು ದಿನ ಎಣಿಸುತ್ತಿದ್ದಾರೆ. ಆದರೆ ಇಲ್ಲಿ ವಯಸ್ಸು ಮೀರುತ್ತಿದ್ದರೂ ಪರೀಕ್ಷೆಗಳಿಲ್ಲ, ಉದ್ಯೋಗಗಳಿಲ್ಲ. ಕೊನೆಗೆ ನ್ಯಾಯ ಕೇಳಲು ಬೀದಿಗಿಳಿದರೆ ಸಿಗುತ್ತಿರುವುದು ಸಾಂತ್ವನವಲ್ಲ, ಬದಲಿಗೆ ಖಾಕಿ ದರ್ಪದ ಬೂಟುಗಾಲುಗಳು ಮತ್ತು ಬಂಧನದ ಭೀತಿ.&lt;/p&gt;&lt;h3&gt;&lt;strong&gt;ವ್ಯವಸ್ಥೆಗೆ ವಿದ್ಯಾರ್ಥಿಗಳ ಸ್ಟ್ರೇಟ್ ಸವಾಲ್!&lt;/strong&gt;&lt;/h3&gt;&lt;p&gt;ಇಂದು ಧಾರವಾಡದ ಬೀದಿಗಳಲ್ಲಿ ನೊಂದ ವಿದ್ಯಾರ್ಥಿಗಳು ವ್ಯವಸ್ಥೆಗೆ ನೇರ ಸವಾಲು ಹಾಕುತ್ತಿದ್ದಾರೆ, ಅದೇನೆಂದರೆ ನಾವೇನು ಉಚಿತ ಭಾಗ್ಯಗಳನ್ನು ಕೇಳುತ್ತಿಲ್ಲ, ನಮ್ಮ ಅರ್ಹತೆಗೆ ತಕ್ಕ ಉದ್ಯೋಗ ಕೇಳುತ್ತಿರುವುದು ಅಪರಾಧವೇ? ನಿಯಮಗಳ ಹೆಸರಿನಲ್ಲಿ ಪ್ರತಿಭಟನೆಯ ಹಕ್ಕನ್ನೇ ಕಸಿದುಕೊಳ್ಳುವ ನೀವು, ನಮ್ಮ ಭವಿಷ್ಯ ಹಾಳಾಗುತ್ತಿರುವಾಗ ಎಲ್ಲಿ ಹೋಗಿದ್ದಿರಿ? ಖಾಕಿ ದರ್ಪದಿಂದ ನಮ್ಮ ಶರೀರಕ್ಕೆ ನೋವು ನೀಡಬಹುದು, ಆದರೆ ನಮ್ಮ ಉದ್ಯೋಗದ ಹಸಿವನ್ನು ನೀಗಿಸಲು ನಿಮ್ಮಿಂದ ಸಾಧ್ಯವೇ? ಧಾರವಾಡದ ಮಿಚಿಗಿನ್ ಕಂಪೌಂಡ್ ಬಳಿ ಇಂದು ನಿರ್ಮಾಣವಾಗಿರುವ ಬಿಗುವಿನ ವಾತಾವರಣ ಕೇವಲ ಒಂದು ಪ್ರತಿಭಟನೆಯ ಹತ್ತಿಕ್ಕುವಿಕೆಯಲ್ಲ, ಇದು ಇಡೀ ರಾಜ್ಯದ ನಿರುದ್ಯೋಗಿ ಯುವಕರ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು. ಈ ಕಣ್ಣೀರು, ಈ ಆಕ್ರೋಶ ವ್ಯವಸ್ಥೆಯನ್ನು ಸುಟ್ಟು ಬೂದಿ ಮಾಡುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ನ್ಯಾಯ ನೀಡಬೇಕಿದೆ ಎಂದು ವಿದ್ಯಾರ್ಥಿಗಳು ಸಾಲು-ಸಾಲು ಪ್ರಶ್ನೆಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/dharwad-job-aspirants-police-highhandedness-protest-youths-and-job-seekers-question-police-action-bmk/articleshow-gg6dxlk"/>
        </item>
        <item>
            <title><![CDATA['ನನ್ನ ಮುಂದೆಯೇ ನಿಂತು ಪತ್ರ ಟೈಪ್ ಮಾಡಿಸಿ ಸಹಿ ಹಾಕಿಸಿದ್ರು..'  ಸಭಾಪತಿ ಸ್ಥಾನಕ್ಕೆ ರಾಜೀನಾಮೆ, ಹೊರಟ್ಟಿ  ಸ್ಫೋಟಕ ಹೇಳಿಕೆ]]></title>
            <link>https://kannada.asianetnews.com/politics/basavaraj-horatti-stated-that-he-resigned-speaker-due-to-pressure-from-chief-minister-rav/articleshow-i34cpmg</link>
            <guid isPermaLink="true">https://kannada.asianetnews.com/politics/basavaraj-horatti-stated-that-he-resigned-speaker-due-to-pressure-from-chief-minister-rav/articleshow-i34cpmg</guid>
            <pubDate>Wed, 12 Aug 2026 05:26:00 +0530</pubDate>
            <description><![CDATA[&lt;p&gt;ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಮುಖ್ಯಮಂತ್ರಿಗಳು ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದಿದ್ದಾರೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿದ್ದಾಗಲೂ ಒತ್ತಡ ಹೇರಿ, ತಮ್ಮ ಮುಂದೆಯೇ ರಾಜೀನಾಮೆ ಪತ್ರ ಟೈಪ್ ಮಾಡಿಸಿ ಸಹಿ ಹಾಕಿಸಿಕೊಂಡರು ಎಂದು ಅವರು ಬೇಸರ ವ್ಯಕ್ತಪಡಿಸಿದ್ರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzddjkqzwtagmjb148m78wrw,imgname-basavaraj-horatti-1786083102463.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ನನ್ನ ಮುಂದೆಯೇ ಪತ್ರ ಟೈಪ್&zwnj; ಮಾಡಿಸಿ ಸಹಿ ಹಾಕ್ಸಿದ್ರು&lt;/li&gt; &lt;li&gt;ಆಸ್ಪತ್ರೆಯಲ್ಲಿದ್ದಾಗಲೂ ರಾಜೀನಾಮೆಗೆ ಒತ್ತಾಯಿಸಿದ್ದರು&lt;/li&gt;&lt;/ul&gt;&lt;p&gt;&lt;strong&gt;ಹುಬ್ಬಳ್ಳಿ (ಆ.12):&lt;/strong&gt; ವಿಧಾನಪರಿಷತ್&zwnj; ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರೂ ಮುಖ್ಯಮಂತ್ರಿ ಅವರು ಒತ್ತಡ ಹೇರಿ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡುವಂತೆ ಮಾಡಿದರು. ರಾಜೀನಾಮೆ ಪತ್ರವನ್ನೂ ಟೈಪ್&zwnj; ಮಾಡಿಸಿಕೊಂಡು ಬಂದು ಸಹಿ ಮಾಡುವಂತೆ ಒತ್ತಡ ಹಾಕಿದರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.&lt;/p&gt;&lt;h2&gt;ಸಿಎಂ ಒತ್ತಡ ಹೇರಿದ್ರಿಂದ ಅನಿವಾರ್ಯವಾಗಿ ರಾಜೀನಾಮೆ&lt;/h2&gt;&lt;p&gt;ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಸ್ಥಾನಕ್ಕೆ ಆ.14ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಈ ಕುರಿತು ಒಪ್ಪಂದವೂ ಆಗಿತ್ತು. ಆ.7ರಂದೇ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಾಕಷ್ಟು ಒತ್ತಡ ಹೇರಿದ್ದರಿಂದ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು ಎಂದರು. ನಾನು ಆಸ್ಪತ್ರೆಯಲ್ಲಿದ್ದಾಗಲೂ ದೂರವಾಣಿ ಮೂಲಕ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ನನ್ನ ಮುಂದೆಯೇ ರಾಜೀನಾಮೆ ಪತ್ರವನ್ನು ಟೈಪ್ ಮಾಡಿಸಿಕೊಂಡು ಬಂದು ಅದಕ್ಕೆ ಸಹಿ ಮಾಡುವಂತೆ ಒತ್ತಾಯಿಸಿದರು. ಪರಿಸ್ಥಿತಿಯ ಕಾರಣದಿಂದಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h3&gt;ಮನಸಿಗೆ ನೋವಾಗಿದೆ&lt;/h3&gt;&lt;p&gt;ರಾಜ್ಯ ಸರ್ಕಾರದ ನಡೆ ತಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇನ್ನು ಮುಂದೆ ಸಾಮಾನ್ಯ ಸದಸ್ಯನಾಗಿ ಸದನದಲ್ಲಿ ಭಾಗವಹಿಸುತ್ತೇನೆ ಎಂದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/basavaraj-horatti-stated-that-he-resigned-speaker-due-to-pressure-from-chief-minister-rav/articleshow-i34cpmg"/>
        </item>
        <item>
            <title><![CDATA[Mahadayi protest farmer case: 28 ಮಹದಾಯಿ ರೈತ ಹೋರಾಟಗಾರರ ಮೇಲೆ ಕೇಸ್‌! ಏನಿದು ಪ್ರಕರಣ?]]></title>
            <link>https://kannada.asianetnews.com/karnataka-districts/karnataka-government-has-registered-a-new-case-against-28-mahadayi-activists-and-farmer-activists-mrq/articleshow-mpq75h3</link>
            <guid isPermaLink="true">https://kannada.asianetnews.com/karnataka-districts/karnataka-government-has-registered-a-new-case-against-28-mahadayi-activists-and-farmer-activists-mrq/articleshow-mpq75h3</guid>
            <pubDate>Wed, 19 Aug 2026 06:11:21 +0530</pubDate>
            <description><![CDATA[ಮಹದಾಯಿ ಯೋಜನೆಗಾಗಿ ಬೆಂಗಳೂರಿನ ಅರಣ್ಯ ಭವನದ ಎದುರು ಧರಣಿ ನಡೆಸಿದ್ದ ರೈತ ಹೋರಾಟಗಾರರ ಮೇಲೆ ಸರ್ಕಾರ ಹೊಸದಾಗಿ ಕೇಸ್ ದಾಖಲಿಸಿದೆ. ಗಲಭೆಕೋರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರ, ನೀರಿಗಾಗಿ ಹೋರಾಡಿದ 28 ರೈತರ ಮೇಲೆ ಕೇಸ್ ದಾಖಲಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m01w6p621rynetz6stdgwzf4,imgname-dk-shivakunmar-1786769529026.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಾನಂದ ಗೊಂಬಿ&lt;/strong&gt;&lt;/p&gt;&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ರೈತ ಹೋರಾಟಗಾರರ ಮೇಲಿನ ಕೇಸ್&zwnj; ಹಿಂಪಡೆಯುತ್ತೇವೆಂದು ಹೇಳುವ ಸರ್ಕಾರ ಇದೀಗ ಮಹದಾಯಿ ಹೋರಾಟಗಾರರ ಮೇಲೆ ಹೊಸದಾಗಿ ಕೇಸ್&zwnj; ದಾಖಲಿಸಿದೆ. ರೈತರಿಗೆ ನೋಟಿಸ್ ಬಂದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸ್&zwnj; ಠಾಣೆ ಮೇಲೆ ದಾಳಿ ನಡೆಸಿದವರ ಕೇಸ್&zwnj; ಹಿಂಪಡೆಯುವ ಸರ್ಕಾರ, ನಮ್ಮ ಮೇಲೆ ಏಕೆ ಕೇಸ್&zwnj; ದಾಖಲಿಸಿದೆ ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್&zwnj; ಸರ್ಕಾರ ರೈತರು, ಕನ್ನಡಪರ, ಪೊಲೀಸ್&zwnj; ಠಾಣೆ ದಾಳಿ ನಡೆಸಿದ ಗಲಭೆಕೋರರ ಮೇಲೆ ದಾಖಲಾಗಿದ್ದ ಕೇಸ್&zwnj;ಗಳನ್ನು ಈ ಹಿಂದೆ ವಾಪಸ್ ಪಡೆದಿದೆ. ಆದರೆ, ಕಳೆದ 11 ವರ್ಷದಿಂದ ಹೋರಾಟ ನಡೆಸುತ್ತಿರುವ ಮಹದಾಯಿ ಹೋರಾಟಗಾರರ ಮೇಲೆ ಹದಿನೈದು ದಿನದ ಹಿಂದೆಯಷ್ಟೇ ಮತ್ತೆ ಹೊಸ ಕೇಸ್&zwnj; ದಾಖಲಿಸಿದೆ.&lt;/p&gt;&lt;h2&gt;&lt;strong&gt;ಏನಿದು ಕೇಸ್&zwnj;?&lt;/strong&gt;&lt;/h2&gt;&lt;p&gt;ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ 11 ವರ್ಷಗಳಿಂದಲೂ ನಿರಂತರವಾಗಿ ನರಗುಂದ ಹಾಗೂ ನವಲಗುಂದದಲ್ಲಿ ಧರಣಿ ನಡೆಯುತ್ತಿದೆ. ಇಲ್ಲಿನ ಹೋರಾಟಗಾರರು ಆಗಾಗ ಬೆಂಗಳೂರು, ದೆಹಲಿಗಳಲ್ಲಿ ಧರಣಿ ನಡೆಸಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಯೋಜನೆಗೆ ಕೇಂದ್ರ ಸರ್ಕಾರದ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ನೀಡದೆ ಇರುವುದನ್ನು ಖಂಡಿಸಿ 2025ರ ಡಿಸೆಂಬರ್&zwnj;ನಲ್ಲಿ ಬೆಂಗಳೂರಿನ ಅರಣ್ಯ ಭವನದ ಎದುರು ಹೋರಾಟಗಾರರು ಧರಣಿ ನಡೆಸಿದ್ದರು. ಆಗ ರೈತರನ್ನು ಸಮಾಧಾನಪಡಿಸಿದ್ದ ಅಲ್ಲಿನ ಅಧಿಕಾರಿಗಳು, ಶೀಘ್ರವೇ ಸಭೆ ನಡೆಸಲಾಗುವುದು. ಅಂದಿನ ಸಭೆಗೆ ರೈತರು ಬಂದು ಮನವಿ ಸಲ್ಲಿಸಬೇಕೆಂದು ತಿಳಿಸಿದ್ದರು. ಅದರಂತೆ ಇಲ್ಲಿನ ಹೋರಾಟಗಾರರು, ಸಭೆ ನಡೆಯುವ ದಿನವೂ ತೆರಳಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು. ಅಂದು ನಡೆದ ಸಭೆಯಲ್ಲಿ ಯೋಜನೆಗೆ ಅನುಮತಿಯೇನೂ ಸಿಗಲಿಲ್ಲ. ಆದರೆ ಸಭೆ ನಡೆಸಿ ತೀರ್ಮಾನಿಸುವಂತೆ ಆಗ್ರಹಿಸಿ ಈ ಮೊದಲು ನಡೆಸಿದ್ದ ಧರಣಿಯಿಂದಾಗಿ ರೈತರ ಮೇಲೆ ಕೇಸ್&zwnj; ದಾಖಲಾಗಿದೆ.&lt;/p&gt;&lt;h3&gt;&lt;strong&gt;ಎಷ್ಟು ಜನರ ಮೇಲೆ ಕೇಸ್&zwnj;?&lt;/strong&gt;&lt;/h3&gt;&lt;p&gt;ನರಗುಂದ, ನವಲಗುಂದ, ಗದಗ ಸೇರಿದಂತೆ ಈ ಭಾಗದಿಂದ ಅಲ್ಲಿ ಧರಣಿ ನಡೆಸಲು ತೆರಳಿದ್ದ 28 ಜನರ ಮೇಲೆ ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಕೇಸ್&zwnj; ದಾಖಲಾಗಿದೆ. ರೈತ ಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ, ರಮೇಶ, ಮಲ್ಲಣ್ಣ ಅಲಕೇರ್&zwnj;, ಅಶೋಕ ಸತ್ಯಪ್ಪನವರ, ಶರಣಪ್ಪ ಲಕ್ಕುಂಡಿ, ನಿಂಗಪ್ಪ ಹೊನ್ನಗೌಡರ, ಹೇಮಾವತಿ ಗಾಳಿ, ಮಾದೇಗೌಡ್ರ ಬೋವಿ, ಶಿವಪ್ಪ ಸತ್ಯಪ್ಪನವರ ಸೇರಿದಂತೆ 28 ಜನರ ಮೇಲೆ ಕೇಸ್&zwnj; ದಾಖಲಾಗಿದೆ. ಇವರ ಮೇಲೆ ಸರ್ಕಾರಿ ಕೆಲಸ ಹಾಗೂ ಸಾರ್ವಜನಿಕ ಕೆಲಸಕ್ಕೆ ಅಡ್ಡಿ, ಬೆದರಿಕೆ, ಅಕ್ರಮ ಪ್ರವೇಶ ಸೇರಿದಂತೆ ವಿವಿಧ ಕಲಂಗಳ ಮೇಲೆ ಪ್ರಕರಣ ದಾಖಲಿಸಿದ್ದರಿಂದ ಎಲ್ಲರಿಗೂ ಇದೀಗ ಕೋರ್ಟ್&zwnj; ಸಮನ್ಸ್&zwnj; ಜಾರಿ ಮಾಡಿದೆ.&lt;/p&gt;&lt;h3&gt;&lt;strong&gt;ಪ್ರಕರಣ ಹಿಂಪಡೆಯುವಂತೆ ಒತ್ತಾಯ&lt;/strong&gt;&lt;/h3&gt;&lt;p&gt;ಸರ್ಕಾರ ರೈತರ ಮೇಲೆ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳುತ್ತಲೇ ಮತ್ತೆ ಪ್ರಕರಣ ದಾಖಲಿಸಿದೆ. ಹಳೇಹುಬ್ಬಳ್ಳಿ ಪೊಲೀಸ್&zwnj; ಠಾಣೆ, ಡಿಜೆ ಹಳ್ಳಿ, ಕೆಜಿ ಹಳ್ಳಿಗಳಲ್ಲಿ ಗಲಭೆಯ ಪ್ರಕರಣವನ್ನು ಸರ್ಕಾರ ಹಿಂಪಡೆದಿದೆ. ಆದರೆ ನೀರಿಗಾಗಿ ನಡೆಸಿದ ಹೋರಾಟಗಾರರ ಕೇಸ್&zwnj; ದಾಖಲಿಸುತ್ತದೆ ಎಂದರೆ ಎಷ್ಟು ಸರಿ ಎಂದು ಪ್ರಶ್ನಿಸಿರುವ ಹೋರಾಟಗಾರರು, ಈ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ನ್ಯಾಯಯುತ ಬೇಡಿಕೆಯನ್ನಿಟ್ಟುಕೊಂಡು ಹೋರಾಟ&lt;/strong&gt;&lt;/p&gt;&lt;p&gt;ಮಹದಾಯಿ ಯೋಜನೆ ಜಾರಿಗೆ ವನ್ಯಜೀವಿ ಮಂಡಳಿ ಅನುಮತಿ ನೀಡದಿರುವುದನ್ನು ಖಂಡಿಸಿ ಅರಣ್ಯ ಭವನದ ಎದುರು ಧರಣಿ ನಡೆಸಿದ್ದ 28 ಜನರ ಮೇಲೆ ಕೇಸ್&zwnj; ದಾಖಲಿಸಿದ್ದು ಸಮನ್ಸ್&zwnj; ಬಂದಿವೆ. ನ್ಯಾಯಯುತ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ನಡೆಸಿದ್ದೇವೆ. ಕೇಸ್&zwnj; ಹಿಂಪಡೆಯಬೇಕು ಎಂದು ರೈತಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/karnataka-government-has-registered-a-new-case-against-28-mahadayi-activists-and-farmer-activists-mrq/articleshow-mpq75h3"/>
        </item>
        <item>
            <title><![CDATA[ಬೆಂಗಳೂರು–ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ರೈಲು ಕುಷ್ಟಗಿಗೆ ವಿಸ್ತರಿಸಲು ಒತ್ತಾಯ!]]></title>
            <link>https://kannada.asianetnews.com/karnataka-districts/kushtagi-demand-direct-train-to-bengaluru-swr-urged-to-extend-hubballi-superfast-express-gdp/articleshow-osm4bkk</link>
            <guid isPermaLink="true">https://kannada.asianetnews.com/karnataka-districts/kushtagi-demand-direct-train-to-bengaluru-swr-urged-to-extend-hubballi-superfast-express-gdp/articleshow-osm4bkk</guid>
            <pubDate>Fri, 21 Aug 2026 14:19:23 +0530</pubDate>
            <description><![CDATA[&lt;p&gt;ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು, ಬೆಂಗಳೂರು&ndash;ಹುಬ್ಬಳ್ಳಿ ಸೂಪರ್&zwnj;ಫಾಸ್ಟ್ ರೈಲನ್ನು ಕುಷ್ಟಗಿವರೆಗೆ ವಿಸ್ತರಿಸಿ, ರಾಜಧಾನಿಗೆ ನೇರ ಸಂಪರ್ಕ ಕಲ್ಪಿಸಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯಿಂದ ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಕಡಿಮೆ ವೆಚ್ಚದಲ್ಲಿ, ಸುರಕ್ಷಿತವಾಗಿ ಬೆಂಗಳೂರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzqn8j2c22bzrg9s4m376k2c,imgname-hubballi-ankola-train-double-track-new-project--3--1786426705996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುಷ್ಟಗಿ: &lt;/strong&gt;ಬೆಂಗಳೂರು&ndash;ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್&zwnj;ಫಾಸ್ಟ್ ರೈಲು ಸಂಖ್ಯೆ 20688/20687 ಅನ್ನು ಗದಗ ಹಾಗೂ ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿವರೆಗೆ ವಿಸ್ತರಿಸಿ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ. ಅನಂತ ಅವರಿಗೆ ಮನವಿ ಸಲ್ಲಿಸಿದರು.&lt;/p&gt;&lt;h2&gt;2025ರ ಮೇ.15ರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ನಿತ್ಯ ರೈಲು ಸಂಚಾರ&lt;/h2&gt;&lt;p&gt;ಪ್ರಮುಖರು ಮಾತನಾಡಿ, ಕುಷ್ಟಗಿ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸಬೇಕೆಂಬ ಜನರ ಏಳು ದಶಕಗಳ ಬೇಡಿಕೆ ಗದಗ&ndash;ವಾಡಿ ರೈಲ್ವೆ ಯೋಜನೆಯ ಮೂಲಕ ಈಡೇರಿದೆ. 2025ರ ಮೇ.15ರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ನಿತ್ಯ ರೈಲು ಸಂಚಾರ ಆರಂಭವಾಗಿದ್ದು, ಇದರಿಂದ ತಾಲೂಕಿನ ಜನರಿಗೆ ಅನುಕೂಲವಾಗಿದೆ. ಆದರೆ ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ಇಲ್ಲದಿರುವುದರಿಂದ ಸಾರ್ವಜನಿಕರು ಸರ್ಕಾರಿ ಹಾಗೂ ಖಾಸಗಿ ಬಸ್&zwnj; ಅವಲಂಬಿಸುವಂತಾಗಿದೆ. ಪ್ರತಿದಿನ ಬೆಂಗಳೂರಿಗೆ ತೆರಳುವ ಜನರಿಗೆ ಹೆಚ್ಚಿನ ಹಣ ವ್ಯಯಿಸಿ ಪ್ರಯಾಣಿಸಬೇಕಾಗಿದ್ದು ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸೇವೆ ಆರಂಭಿಸಬೇಕು ಎಂದು ತಿಳಿಸಿದರು.&lt;/p&gt;&lt;p&gt;ಪ್ರತ್ಯೇಕವಾಗಿ ಹೊಸ ರೈಲು ಆರಂಭಿಸುವ ಬದಲು ಬೆಂಗಳೂರು&ndash;ಹುಬ್ಬಳ್ಳಿ ನಡುವೆ ಈಗಾಗಲೇ ಸಂಚರಿಸುತ್ತಿರುವ ಸೂಪರ್&zwnj;ಫಾಸ್ಟ್ ರೈಲು ಸಂಖ್ಯೆ 20688/20687 ಅನ್ನು ಗದಗ ಹಾಗೂ ತಳಕಲ್ ಜಂಕ್ಷನ್ ಮಾರ್ಗವಾಗಿ ಕುಷ್ಟಗಿವರೆಗೆ ವಿಸ್ತರಿಸಬಹುದು. ಇದರಿಂದ ರೈಲ್ವೆ ಇಲಾಖೆಗೆ ಹೆಚ್ಚುವರಿ ಪ್ರಯಾಣಿಕರು ದೊರೆಯುವುದರ ಜತೆಗೆ ಕುಷ್ಟಗಿ ಭಾಗದ ಜನರ ಬಹುದಿನಗಳ ಬೇಡಿಕೆಯೂ ಈಡೇರಲಿದೆ ಎಂದರು.&lt;/p&gt;&lt;p&gt;ಬೆಂಗಳೂರಿನಿಂದ ರಾತ್ರಿ ಹೊರಟು ಬೆಳಗ್ಗೆ ಕುಷ್ಟಗಿ ತಲುಪುವ ಹಾಗೂ ಸಂಜೆ ಕುಷ್ಟಗಿಯಿಂದ ಬೆಂಗಳೂರಿನತ್ತ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಿದರೆ ಸಾರ್ವಜನಿಕರಿಗೆ ರಾತ್ರಿ ಪ್ರಯಾಣದ ಸೌಲಭ್ಯ ದೊರೆಯಲಿದೆ. ಪ್ರಸ್ತುತ ಬಸ್&zwnj;ಗಳಲ್ಲಿ ಪ್ರಯಾಣಿಸುವವರಿಗೆ ಹೋಲಿಸಿದರೆ ರೈಲು ಪ್ರಯಾಣ ಸುರಕ್ಷಿತ, ಕಡಿಮೆ ವೆಚ್ಚದ ಹಾಗೂ ಹೆಚ್ಚು ಆರಾಮದಾಯಕವಾಗಲಿದೆ ಎಂದು ತಿಳಿಸಿದರು.&lt;/p&gt;&lt;p&gt;ಕುಷ್ಟಗಿಗೆ ಬೆಂಗಳೂರು ರೈಲು ಸಂಪರ್ಕ ಕಲ್ಪಿಸಿದರೆ ಕುಷ್ಟಗಿ ತಾಲೂಕಿನ ಜನರಿಗೆ ಮಾತ್ರವಲ್ಲದೆ ಗಜೇಂದ್ರಗಡ, ಇಲಕಲ್, ಯಲಬುರ್ಗಾ, ಕುಕನೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರಿಗೂ ಅನುಕೂಲವಾಗಲಿದೆ. ಗದಗ ಜಿಲ್ಲೆಯ ವಿವಿಧ ಭಾಗಗಳ ಪ್ರಯಾಣಿಕರೂ ಈ ರೈಲು ಸೇವೆ ಬಳಸಿಕೊಳ್ಳಬಹುದಾಗಿದೆ.&lt;/p&gt;&lt;p&gt;ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೂ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಹೋರಾಟ ಸಮಿತಿ ಪ್ರಮುಖ ಭರತೇಶ ಜೋಷಿ, ಎನ್&zwnj;.ಎಸ್&zwnj;.ಘೋರ್ಪಡೆ, ಮಂಜುನಾಥ ಎಂ, ಉಮೇಶ ಮಂಗಳೂರು, ಸುರೇಶಗೌಡ ಕುಂಟನಗೌಡರ, ಮಲ್ಲಣ್ಣ ಪಲ್ಲೇದ, ವಿರೇಶ ಕರಡಿ ಸೇರಿದಂತೆ ಅನೇಕರು ಇದ್ದರು.&lt;/p&gt;&lt;p&gt;&lt;img&gt;&lt;/p&gt;&lt;p&gt;ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಬೆಂಗಳೂರು&ndash;ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್&zwnj;ಫಾಸ್ಟ್ ರೈಲು ಸಂಖ್ಯೆ 20688/20687 ಅನ್ನು ಗದಗ ಹಾಗೂ ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿವರೆಗೆ ವಿಸ್ತರಿಸಿ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ. ಅನಂತ ಅವರಿಗೆ ಮನವಿ ಸಲ್ಲಿಸಿದರು.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kushtagi-demand-direct-train-to-bengaluru-swr-urged-to-extend-hubballi-superfast-express-gdp/articleshow-osm4bkk"/>
        </item>
        <item>
            <title><![CDATA[ಹುಬ್ಬಳ್ಳಿ-ವಾರಣಾಸಿ ರೈಲು ಸೇವೆ ವಾರಕ್ಕೆ 3 ದಿನ ವಿಸ್ತರಣೆ, ಯಾರಿಗೆಲ್ಲ ಅನುಕೂಲ? ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ!]]></title>
            <link>https://kannada.asianetnews.com/karnataka-districts/hubballi-varanasi-train-service-increased-to-3-days-a-week-high-tech-upgrade-approved-for-hubballi-railway-station-gdp/articleshow-p6x78ui</link>
            <guid isPermaLink="true">https://kannada.asianetnews.com/karnataka-districts/hubballi-varanasi-train-service-increased-to-3-days-a-week-high-tech-upgrade-approved-for-hubballi-railway-station-gdp/articleshow-p6x78ui</guid>
            <pubDate>Thu, 13 Aug 2026 09:49:03 +0530</pubDate>
            <description><![CDATA[ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿಗೆ ಸ್ಪಂದಿಸಿ, ಹುಬ್ಬಳ್ಳಿ-ವಾರಣಾಸಿ ರೈಲು ಸೇವೆಯನ್ನು ವಾರಕ್ಕೆ ಮೂರು ದಿನಗಳಿಗೆ ವಿಸ್ತರಿಸಲು ಮತ್ತು ವಿಶ್ವದ ಅತಿ ಉದ್ದದ ಪ್ಲಾಟ್&zwnj;ಫಾರ್ಮ್ ಹೊಂದಿರುವ ಹುಬ್ಬಳ್ಳಿ ನಿಲ್ದಾಣವನ್ನು 'ಹೈಟೆಕ್' ಸೌಲಭ್ಯಗಳೊಂದಿಗೆ ವಿಶ್ವದರ್ಜೆಗೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವು ಉತ್ತರ ಕರ್ನಾಟಕದ ಯಾತ್ರಿಕರು ಮತ್ತು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwnc2mn2dfwfs7a080me8tb,imgname-hubballi-railway-station-1786594593429.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ:&lt;/strong&gt; ಉತ್ತರ ಕರ್ನಾಟಕದ ಜನತೆಗೆ ಹಾಗೂ ಧಾರ್ಮಿಕ ಯಾತ್ರಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ವಾರಣಾಸಿ ರೈಲು (ರೈಲು ಸಂಖ್ಯೆ: 07323/07324) ಸೇವೆಯನ್ನು ಶೀಘ್ರದಲ್ಲೇ ವಾರಕ್ಕೆ ಮೂರು ದಿನಗಳಿಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ. ಅಲ್ಲದೆ, ವಿಶ್ವದ ಅತಿ ಉದ್ದದ ಪ್ಲಾಟ್&zwnj;ಫಾರ್ಮ್ ಹೊಂದಿರುವ ಹುಬ್ಬಳ್ಳಿ ರೈಲು ನಿಲ್ದಾಣವನ್ನು ಅತ್ಯಾಧುನಿಕ 'ಹೈಟೆಕ್' ಸೌಲಭ್ಯಗಳೊಂದಿಗೆ ವಿಶ್ವದರ್ಜೆಗೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ.&lt;/p&gt;&lt;h2&gt;ಪ್ರಹ್ಲಾದ್ ಜೋಶಿ ಮನವಿಗೆ ವೈಷ್ಣವ್ ಸಕಾರಾತ್ಮಕ ಸ್ಪಂದನೆ:&lt;/h2&gt;&lt;p&gt;ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಉತ್ತರ ಕರ್ನಾಟಕ ಹಾಗೂ ಪುಣ್ಯಕ್ಷೇತ್ರ ಕಾಶಿ (ವಾರಣಾಸಿ) ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವಂತೆ ಸುದೀರ್ಘ ಚರ್ಚೆ ನಡೆಸಿ ಮನವಿ ಪತ್ರ ಸಲ್ಲಿಸಿದರು. ಪ್ರಸ್ತುತ ವಾರಕ್ಕೆ ಒಂದು ದಿನ ಮಾತ್ರ ಸಂಚರಿಸುತ್ತಿರುವ ಹುಬ್ಬಳ್ಳಿ-ವಾರಣಾಸಿ ರೈಲು ಸೇವೆಯನ್ನು ಶೀಘ್ರದಲ್ಲೇ ಮೂರು ದಿನಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿದರು. ಜೋಶಿ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ್, ಶೀಘ್ರದಲ್ಲೇ ಹೆಚ್ಚುವರಿ ದಿನಗಳ ರೈಲು ಸಂಚಾರದ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ತಿಳಿಸಿದರು.&lt;/p&gt;&lt;h2&gt;ಯಾರಿಗೆಲ್ಲ ಅನುಕೂಲ?&lt;/h2&gt;&lt;p&gt;ಶ್ರಾವಣ ಮಾಸದ ಈ ಪವಿತ್ರ ಸಮಯದಲ್ಲಿ ಕಾಶಿ ಮತ್ತು ವಾರಣಾಸಿಗೆ ಧಾರ್ಮಿಕ ಯಾತ್ರೆ ಕೈಗೊಳ್ಳುವ ಉತ್ತರ ಕರ್ನಾಟಕದ ಭಕ್ತಾದಿಗಳಿಗೆ ಈ ನಿರ್ಧಾರದಿಂದ ಅತ್ಯಂತ ಹೆಚ್ಚಿನ ಅನುಕೂಲವಾಗಲಿದೆ. ಕೇವಲ ಯಾತ್ರಿಕರು ಮಾತ್ರವಲ್ಲದೆ, ಪ್ರವಾಸಿಗರು, ಉದ್ಯೋಗಿಗಳು ಹಾಗೂ ವಾಣಿಜ್ಯ ಮತ್ತು ವ್ಯಾಪಾರ ಉದ್ದೇಶಕ್ಕಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೂ ರೈಲು ಸಂಚಾರದ ಆವರ್ತನ (Frequency) ಹೆಚ್ಚಳದಿಂದ ಸಾರಿಗೆ ಸಂಪರ್ಕ ಸುಲಭವಾಗಲಿದೆ.&lt;/p&gt;&lt;h2&gt;ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ 'ಹೈಟೆಕ್' ರೂಪಾಂತರ:&lt;/h2&gt;&lt;p&gt;ಇದೇ ವೇಳೆ ಹುಬ್ಬಳ್ಳಿ ರೈಲು ನಿಲ್ದಾಣವನ್ನು ಮತ್ತಷ್ಟು ಆಧುನೀಕರಿಸಲು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ನಿಲ್ದಾಣದ ಆವರಣದಲ್ಲಿ ಸುಧಾರಿತ ಪಾರ್ಕಿಂಗ್ ವ್ಯವಸ್ಥೆ, ಮಲ್ಟಿಪ್ಲೆಕ್ಸ್, ಶಾಪಿಂಗ್ ಮಾಲ್, ರೆಸ್ಟೋರೆಂಟ್&zwnj;ಗಳು, ವಾಣಿಜ್ಯ ಮಳಿಗೆಗಳು ಹಾಗೂ ವಿಶ್ವದರ್ಜೆಯ ಪ್ರಯಾಣಿಕ ಸೌಲಭ್ಯಗಳನ್ನು ಕಲ್ಪಿಸುವಂತೆ ಜೋಶಿ ಒತ್ತಾಯಿಸಿದ್ದು, ಇದನ್ನು ಪರಿಗಣಿಸಿ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ.&lt;/p&gt;&lt;h2&gt;ಪ್ರಧಾನಿ ಮೋದಿ ಹಾಗೂ ರೈಲ್ವೆ ಸಚಿವರಿಗೆ ಧನ್ಯವಾದ:&lt;/h2&gt;&lt;p&gt;ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ಹಾಗೂ ಯಾತ್ರಿಕರ ಹಿತದೃಷ್ಟಿಯಿಂದ ಈ ಪ್ರಮುಖ ನಿರ್ಧಾರ ಕೈಗೊಂಡಿದ್ದಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-varanasi-train-service-increased-to-3-days-a-week-high-tech-upgrade-approved-for-hubballi-railway-station-gdp/articleshow-p6x78ui"/>
        </item>
        <item>
            <title><![CDATA[ಹುಬ್ಬಳ್ಳಿ ಆಂಕೋಲಾ ನಡುವೆ ₹18,424 ಕೋಟಿ ವೆಚ್ಚದ ಹೊಸ ರೈಲ್ವೆ ಯೋಜನೆ; ಬರೋಬ್ಬರಿ 57 ಸುರಂಗ ನಿರ್ಮಾಣ]]></title>
            <link>https://kannada.asianetnews.com/gallery/karnataka-districts/hubballi-ankola-railway-line-revived-govt-issues-notification-for-163-km-double-line-with-57-tunnels-ptu4n6o</link>
            <guid isPermaLink="true">https://kannada.asianetnews.com/gallery/karnataka-districts/hubballi-ankola-railway-line-revived-govt-issues-notification-for-163-km-double-line-with-57-tunnels-ptu4n6o</guid>
            <pubDate>Tue, 11 Aug 2026 11:14:34 +0530</pubDate>
            <description><![CDATA[&lt;p&gt;ದಶಕಗಳ ಕನಸಾದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಪರಿಷ್ಕೃತ ರೂಪದಲ್ಲಿ ಮರುಚಾಲನೆ ನೀಡಲಾಗಿದ್ದು, 163 ಕಿ.ಮೀ. ಉದ್ದದ ವಿದ್ಯುದೀಕೃತ ಜೋಡಿ ಮಾರ್ಗಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಪಶ್ಚಿಮ ಘಟ್ಟದ ಪರಿಸರ ಹಾನಿ ತಗ್ಗಿಸಲು 57 ಸುರಂಗ ಪ್ರಸ್ತಾಪಿಸಲಾಗಿದ್ದು, ಅರಣ್ಯ ಇಲಾಖೆಯ ಅನುಮತಿಗಳು ಬೇಕಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzqm7mtqtrh1gz16gh0by5ep,imgname-hubballi-ankola-train-double-track-new-project-1786425627468.jpg" type="image/jpeg" height="390" width="690"/>
            <content:encoded><![CDATA[&lt;p&gt;ದಶಕಗಳ ಕನಸಾದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಪರಿಷ್ಕೃತ ರೂಪದಲ್ಲಿ ಮರುಚಾಲನೆ ನೀಡಲಾಗಿದ್ದು, 163 ಕಿ.ಮೀ. ಉದ್ದದ ವಿದ್ಯುದೀಕೃತ ಜೋಡಿ ಮಾರ್ಗಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಪಶ್ಚಿಮ ಘಟ್ಟದ ಪರಿಸರ ಹಾನಿ ತಗ್ಗಿಸಲು 57 ಸುರಂಗ ಪ್ರಸ್ತಾಪಿಸಲಾಗಿದ್ದು, ಅರಣ್ಯ ಇಲಾಖೆಯ ಅನುಮತಿಗಳು ಬೇಕಾಗಿವೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಕನ್ನಡ (ಆ.11): ಉ&lt;/strong&gt;ತ್ತರ ಕನ್ನಡದ ದಶಕಗಳ ಕನಸಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಪರಿಷ್ಕೃತ ರೂಪದಲ್ಲಿ ಬಂದಿದ್ದು, 163 ಕಿಮೀ ಉದ್ದದ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.&lt;/p&gt;&lt;p&gt;ಹಳೆಯ ಏಕಹಳಿ ಯೋಜನೆಗೆ ಬದಲಾಗಿ ಇದೀಗ ವಿದ್ಯುದೀಕೃತ ಬ್ರಾಡಗೇಜ್ ಡಬಲ್&zwnj;ಲೈನ್ ನಿರ್ಮಾಣದ ಪರಿಷ್ಕೃತ ಪ್ರಸ್ತಾವನೆ ರೂಪಿಸಲಾಗಿದೆ. ಸುಮಾರು ₹18,424 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿ ಕಡಿಮೆ ಮಾಡುವ ಉದ್ದೇಶದಿಂದ 57 ಸುರಂಗಗಳನ್ನು ನಿರ್ಮಿಸುವ ಪ್ರಸ್ತಾವವಿದೆ. ಒಟ್ಟು 163 ಕಿಮೀ ಉದ್ದದ ಈ ಯೋಜನೆಗೆ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ, ಖಾಸಗಿ ಮತ್ತು ಅರಣ್ಯ ಭೂಮಿ ಒಳಗೊಳ್ಳಲಿದೆ.&lt;/p&gt;&lt;img&gt;&lt;p&gt;&lt;strong&gt;ಅಧಿಸೂಚನೆ ಹೊರಡಿಸಲಾದ ಗ್ರಾಮಗಳ ವಿವರ:&lt;/strong&gt;&lt;/p&gt;&lt;p&gt;ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ ನಗರಪಾಲಿಕೆ, ಬಿಂದಾಳ, ಗಬ್ಬೂರ, ಹಳಿಯಾಳ, ಕೊಟಗೊಂಡ ಹುಣಶಿ, ಅಜ್ಜನಪುರ, ಬುಡರಸಿಂಗಿ, ಮಾವನೂರ, ಗಿರಿಯಾಲ, ಕಾತನೂರ, ಚನ್ನಾಪುರ, ರಾಮಾಪುರ ಹಾಗೂ ಚಾವರಗುಡ್ಡ. ಕಲಘಟಗಿ ತಾಲೂಕಿನ ಚಳಮಟ್ಟಿ, ಮಿಶ್ರಿಕೋಟಿ, ಉಗ್ಗಿನಕೇರಿ, ಕಾಮಧೇನು, ಹಾರೋಗೇರಿ, ರಾಮನಾಳ, ದಾಸ್ತಿಕೊಪ್ಪ, ಮಡ್ಕಿಹೊನ್ನಿಹಳ್ಳಿ, ಬೆಂಡಿಗೇರಿ, ಕಲಘಟಗಿ, ಮಚ್ಚಾಪುರ, ಗಳಗಿನಕಟ್ಟಿ, ದೇವಿಕೊಪ್ಪ, ಜುಂಜನಬೈಲ್, ತಂಬೂರ ಹಾಗೂ ಸಂಗಟಿಕೊಪ್ಪ.&lt;/p&gt;&lt;img&gt;&lt;p&gt;ಉತ್ತರ ಕನ್ನಡದಲ್ಲಿ ಯಲ್ಲಾಪುರ ತಾಲೂಕಿನ ಹೊಸಳ್ಳಿ, ಕಿರವತ್ತಿ, ಕೋಳಿಕೇರಿ, ರಾಮನಕೊಪ್ಪ, ಕನ್ನಡಗಲ್, ಸಹಸ್ರಳ್ಳಿ, ಕೊಂಡೆಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಗೋಪದಮನೆ, ಹಿತ್ತಲಕಾರಗದ್ದೆ, ಇಡಗುಂದಿ, ಜೋಗದಮನೆ, ಕೊಮ್ಮಾಡಿ, ಅರಬೈಲ್, ತೆಲಂಗಾರ, ವಜ್ರಳ್ಳಿ, ಹೊನ್ನಗದ್ದೆ, ಅಂಬಾಗಾವ, ಗುಳ್ಳಾಪುರ, ಕೊಡ್ಲಗದ್ದೆ, ಕಳಚೆ ಹಾಗೂ ಮಾವಿನಮನೆ. ಅಂಕೋಲಾ ತಾಲೂಕಿನ ಸುಂಕಸಾಳ, ಕಟ್ಟಿನಹಕ್ಕಲ, ಹೆಬ್ಬುಳ, ಕವಳಳ್ಳಿ, ಅಗಸೂರ, ಹೆಗ್ಗಾರಮಕ್ಕಿಗದ್ದೆ, ಅಡ್ಲೂರ, ನವಗದ್ದೆ, ಬೊಗ್ರಿಬೈಲ, ಅಲಗೇರಿ, ಶಿರಕುಳಿ, ಬಾಳೆಗುಳಿ, ಶೆಡಗೇರಿ, ಹೊಸಗದ್ದೆ, ಬೋಳೆ ಹಾಗೂ ಅಂಕೋಲಾ.&lt;/p&gt;&lt;img&gt;&lt;p&gt;ಆದರೆ ಹೊಸ ಅಧಿಸೂಚನೆ ಬಂದಿರುವುದರಿಂದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದರ್ಥವಲ್ಲ. ಅರಣ್ಯ, ವನ್ಯಜೀವಿ ಹಾಗೂ ಇತರ ಅಗತ್ಯ ಅನುಮತಿಗಳು ಇನ್ನೂ ದೊರೆಯಬೇಕಿದೆ. ಆದರೂ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಹೊಸ ರೂಪದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವುದು ಉತ್ತರ ಕನ್ನಡದ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ. ಅಧಿಸೂಚನೆ ಹೊರಡಿಸಿರುವುದರಿಂದ ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಈ ಯೋಜನೆ ಜಾರಿಯಾಗಲಿದೆ ಎಂದು ನಾನು ಹಿಂದಿನಿಂದ ಹೇಳುತ್ತಾ ಬಂದಿದ್ದೇನೆ. ಈ ರೈಲ್ವೇ ಮಾರ್ಗಕ್ಕೆ ಇನ್ನೂ ಹಲವು ಪರವಾನಿಗೆ ಬೇಕಾಗಲಿದೆ ಎನ್ನುತ್ತಾರೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.&lt;/p&gt;&lt;img&gt;&lt;p&gt;&lt;strong&gt;ಜಾರ್ಜ್&zwnj; ಫರ್ನಾಂಡಿಸ್ ಸಂತಸ:&lt;/strong&gt;&lt;/p&gt;&lt;p&gt;ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅಧಿಸೂಚನೆ ಹೊರಡಿಸಿರುವುದು ಸಂತಸಕರ ಸಂಗತಿ ಎಂದು ಉತ್ತರಕನ್ನಡ ಜಿಲ್ಲಾ ರೈಲ್ವೆ ಸೇವಾ ಸೇವಾ ಸಮಿತಿ ಅಧ್ಯಕ್ಷ ಜಾರ್ಜ್&zwnj; ಫರ್ನಾಂಡಿಸ್ ತಿಳಿಸಿದ್ದಾರೆ. ಬಹುಕಾಲದಿಂದ ಈ ರೈಲ್ವೆ ಮಾರ್ಗಕ್ಕಾಗಿ ಜಿಲ್ಲೆಯ ಜನತೆ ಕಂಡ ಕನಸು ಈಗ ಮೊಳಕೆಯೊಡೆಯುತ್ತಿದೆ. ರೈಲ್ವೆ ಮಾರ್ಗಕ್ಕಾಗಿ ಪ್ರಯತ್ನಿಸುತ್ತಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಬಂಧಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ವರದಿ- ವಸಂತಕುಮಾರ್ ಕತಗಾಲ&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/hubballi-ankola-railway-line-revived-govt-issues-notification-for-163-km-double-line-with-57-tunnels-ptu4n6o"/>
        </item>
        <item>
            <title><![CDATA[ಯೋಗೇಶ್ ಗೌಡ ಕೊಲೆ ಪ್ರಕರಣ: ಬೇಲ್ ಸಿಕ್ಕ ಜೋಶ್, ಧಾರವಾಡದ ಗಡಿ ದಾಟಲು ವಿನಯ್ ಕುಲಕರ್ಣಿ ಹೊಸ ಅಸ್ತ್ರ!]]></title>
            <link>https://kannada.asianetnews.com/state/yogesh-gowda-murder-case-ex-minister-vinay-kulkarni-moves-court-to-relax-bail-condition-and-dharwad-entry-gdp/articleshow-sr39yl4</link>
            <guid isPermaLink="true">https://kannada.asianetnews.com/state/yogesh-gowda-murder-case-ex-minister-vinay-kulkarni-moves-court-to-relax-bail-condition-and-dharwad-entry-gdp/articleshow-sr39yl4</guid>
            <pubDate>Thu, 06 Aug 2026 13:54:34 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿ, ತಮ್ಮ ಜಾಮೀನು ಷರತ್ತು ಸಡಿಲಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಾಕ್ಷಿ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿರುವ ಧಾರವಾಡ ಜಿಲ್ಲಾ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01epnp7p5c4qkwwsmwkcxgqjmj,imgname-yogesh-gowda--vinay-kulkarni-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ, ತಮ್ಮ ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಮತ್ತೆ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. ಸಾಕ್ಷಿ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿರುವ ಧಾರವಾಡ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಅವರು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ.&lt;/p&gt;&lt;p&gt;ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಈಗಾಗಲೇ ಹೈಕೋರ್ಟ್&zwnj;ನಿಂದ ಜಾಮೀನು ಲಭಿಸಿದೆ. ಆದರೆ, ಈ ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಮತ್ತು ಸಾಕ್ಷಿ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ (ಐಪಿಸಿ ಸೆಕ್ಷನ್ 195A ಅಡಿಯಲ್ಲಿ) ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಾಕ್ಷಿ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಜಾಮೀನು ನೀಡುವ ವೇಳೆ, &quot;ಧಾರವಾಡ ಜಿಲ್ಲೆಗೆ ಪ್ರವೇಶಿಸಬಾರದು&quot; ಎಂಬ ಕಠಿಣ ಷರತ್ತನ್ನು ವಿಧಿಸಿತ್ತು.&lt;/p&gt;&lt;h2&gt;ಷರತ್ತು ಸಡಿಲಿಕೆಗೆ ಮನವಿ&lt;/h2&gt;&lt;p&gt;ಇದೀಗ ಧಾರವಾಡ ಜಿಲ್ಲೆಗೆ ಪ್ರವೇಶಿಸಲು ವಿಧಿಸಲಾಗಿರುವ ಈ ಕಠಿಣ ಷರತ್ತಿನಿಂದ ತಮಗೆ ವಿನಾಯಿತಿ ನೀಡಬೇಕು ಮತ್ತು ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಕೋರಿ ವಿನಯ್ ಕುಲಕರ್ಣಿ ಅವರು ಬೆಂಗಳೂರಿನ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್ ಕೋರ್ಟ್&zwnj;ಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಜನಸೇವೆ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಈ ಷರತ್ತು ಅಡ್ಡಿಯಾಗುತ್ತಿದ್ದು, ಅದನ್ನು ಸಡಿಲಗೊಳಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿರುವ ನ್ಯಾಯಾಲಯವು, ಸಿಬಿಐ ಹಾಗೂ ಪ್ರಾಸಿಕ್ಯೂಷನ್ ಆಕ್ಷೇಪಣೆಗಳನ್ನು ಆಲಿಸಿದ ನಂತರ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.&lt;/p&gt;&lt;h2&gt;ಘಟನೆ ಹಿನ್ನೆಲೆ:&lt;/h2&gt;&lt;p&gt;ಬರೋಬ್ಬರಿ ಹತ್ತು ವರ್ಷಗಳ ಹಿಂದೆ ನಡೆದಿದ್ದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಹೈಕೋರ್ಟ್&zwnj; ದ್ವಿಸದಸ್ಯ ಪೀಠ ಜುಲೈ 31ರಂದು ನೀಡಿರುವ ಮಹತ್ವದ ಆದೇಶ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲು ಪಾಲಾಗಿದ್ದ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ದೊಡ್ಡ ನಿರಾಳತೆ ತಂದುಕೊಟ್ಟಿತ್ತು. ಈ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಸೇರಿ 17 ಮಂದಿಯನ್ನು ಅಪರಾಧಿ ಎಂದಿದ್ದ ನ್ಯಾಯಾಲಯ ಕಳೆದ ಏ.17ರಂದು ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ಸೆಷೆನ್ಸ್&zwnj; ನ್ಯಾಯಾಲಯ ಆದೇಶ ಹೊರಡಿಸಿತ್ತು. ಹೀಗಾಗಿ, ವಿನಯ ಕುಲಕರ್ಣಿ ಅವರಿಗೆ ಶಾಸಕ ಸ್ಥಾನ ಹೋಗುವುದಲ್ಲದೇ ಜೀವನಪೂರ್ತಿ ಜೈಲು ಪಾಲಾಗುವ ದೊಡ್ಡ ಕಂಟಕ ಎದುರಾಗಿತ್ತು. ಸುದೀರ್ಘ ಕಾನೂನು ಹೋರಾಟದ ನಂತರ ಹೈಕೋರ್ಟ್&zwnj; ಅವರಿಗೆ ಜಾಮೀನು ಮಂಜೂರು ಮಾಡಿದೆ.&lt;/p&gt;&lt;p&gt;2016ರ ಜೂನ್&zwnj; 15ರಂದು ಧಾರವಾಡದ ಸಪ್ತಾಪೂರದ ಅವರದ್ದೇಯಾದ ಜಿಮ್&zwnj;ನಲ್ಲಿ ಯೋಗೀಶಗೌಡನ ಬರ್ಬರ ಹತ್ಯೆಯಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರಿಂದ ತನಿಖೆ ನಡೆದಿತ್ತು. ನಂತರ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಈ ಪ್ರಕರಣದಲ್ಲಿ ವಿನಯ ಕುಲಕರ್ಣಿ 2020ರಲ್ಲಿ ಬಂಧನಕ್ಕೆ ಒಳಗಾದರು. ತದನಂತರ 2021ರಲ್ಲಿ ಜಾಮೀನು ಪಡೆದಿದ್ದರು. ಆದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಸುಪ್ರಿಂ ಕೋರ್ಟ್&zwnj; ಇವರ ಜಾಮೀನು ರದ್ದುಗೊಳಿಸಿತ್ತು. ಎರಡು ಕಡೆಯಿಂದ ವಾದ-ಪ್ರತಿವಾದ ಹಾಗೂ ಸಾಕ್ಷಿಗಳ ವಿಚಾರಣೆ ನಡೆದು ಕಳೆದ ಏ. 17ರಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಸೆಷೆನ್ಸ್&zwnj; ನ್ಯಾಯಾಲಯ ಆದೇಶ ನೀಡಿತ್ತು.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/state/yogesh-gowda-murder-case-ex-minister-vinay-kulkarni-moves-court-to-relax-bail-condition-and-dharwad-entry-gdp/articleshow-sr39yl4"/>
        </item>
        <item>
            <title><![CDATA[Dharwad: ಡಿಸಿ ಕಚೇರಿಯಲ್ಲಿ ನೌಕರನ ಆತ್ಮ*ತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪ್ರಧಾನಿ ಮೋದಿಗೆ ಪತ್ರ ಬರೆದು ಕೈ ಕೊಯ್ದುಕೊಂಡ ನೌಕರ!]]></title>
            <link>https://kannada.asianetnews.com/karnataka-districts/karnataka-news-dharwad-dc-office-employee-suicide-attempt-letter-to-pm-modi-big-twist-bmk/articleshow-tbl2t9l</link>
            <guid isPermaLink="true">https://kannada.asianetnews.com/karnataka-districts/karnataka-news-dharwad-dc-office-employee-suicide-attempt-letter-to-pm-modi-big-twist-bmk/articleshow-tbl2t9l</guid>
            <pubDate>Tue, 18 Aug 2026 22:04:53 +0530</pubDate>
            <description><![CDATA[&lt;p&gt;ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಆಘಾತಕಾರಿ ತಿರುವು ಸಿಕ್ಕಿದೆ. ಸ್ನೇಹದ ಸೋಗಿನಲ್ಲಿ ಪರಿಚಯವಾದ ನೆರೆಹೊರೆಯವರು ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ, ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ್ದೇ ಈ ಕೃತ್ಯಕ್ಕೆ ಕಾರಣವೆಂದು ತನಿಖೆಯಿಂದ ತಿಳಿದುಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0avhptva9s47zbs21a1pm4d,imgname-dc-office-1787070831451.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡ ಜಿಲ್ಲಾಧಿಕಾರಿ (ಡಿಸಿ) ಕಚೇರಿ ಸಭಾಂಗಣದಲ್ಲಿ ನೌಕರನೊಬ್ಬ ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಮೊದಲು ಇದೊಂದು ಸಾಮಾನ್ಯ ಘಟನೆ ಅಥವಾ ಕಚೇರಿಯ ಒತ್ತಡದಿಂದ ನಡೆದಿದ್ದಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಪ್ರಕರಣಕ್ಕೆ ಅತ್ಯಂತ ಆಘಾತಕಾರಿ ಹಾಗೂ ರೋಚಕ ಟ್ವಿಸ್ಟ್ ದೊರೆತಿದೆ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಆತ್ಮಹತ್ಯೆಗೆ ಯತ್ನಿಸಿದ ನೌಕರನನ್ನು ಶಿವಪ್ರಸಾದ್ ಪಾಟೀಲ್ ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿಯ ರಾಮತೀರ್ಥನಗರದ ನಿವಾಸಿಯಾಗಿರುವ ಶಿವಪ್ರಸಾದ್, ಸದ್ಯ ಧಾರವಾಡದ ಕಲ್ಯಾಣ ನಗರದಲ್ಲಿ ವಾಸವಾಗಿದ್ದು, ಖಾದಿ ಗ್ರಾಮೋದ್ಯೋಗ ಇಲಾಖೆಯಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರವಾಡದ ಡಿಸಿ ಕಚೇರಿಯ ಸಭಾಂಗಣದಲ್ಲಿದ್ದಾಗ ಇವರು ಇದ್ದಕ್ಕಿದ್ದಂತೆ ಚಾಕುವಿನಿಂದ ತಮ್ಮ ಕೈ ಕೊಯ್ದುಕೊಂಡು ರಕ್ತಸ್ರಾವ ಮಾಡಿಕೊಂಡಿದ್ದರು. ತಕ್ಷಣ ಜಾಗರೂಕರಾದ ಸಿಬ್ಬಂದಿ ಹಾಗೂ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಸದ್ಯ ಶಿವಪ್ರಸಾದ್ ಚೇತರಿಸಿಕೊಂಡು ಸುರಕ್ಷಿತವಾಗಿದ್ದಾರೆ.&lt;/p&gt;&lt;h3&gt;&lt;strong&gt;ಸ್ನೇಹದ ಹೆಸರಿನಲ್ಲಿ ಶುರುವಾಯ್ತು ಕಿರುಕುಳ!&lt;/strong&gt;&lt;/h3&gt;&lt;p&gt;ಶಿವಪ್ರಸಾದ್ ವಾಸವಿದ್ದ ರೂಮ್&zwnj; ಪಕ್ಕದಲ್ಲೇ ಸಂಗಪ್ಪ ತೇಲಿ, ನೇತ್ರಾ ಪೂಜಾರ್ ಹಾಗೂ ಸುಮಾ ಪೂಜಾರ್ ಎಂಬ ಯುವತಿಯರು ವಾಸವಾಗಿದ್ದರು. ಆರಂಭದಲ್ಲಿ ಶಿವಪ್ರಸಾದ್ ಅವರನ್ನು &quot;ಸಾರ್&quot; ಎಂದು ಗೌರವದಿಂದ ಪರಿಚಯ ಮಾಡಿಕೊಂಡಿದ್ದ ಈ ಮೂವರು, ಕ್ರಮೇಣ ಅವರೊಂದಿಗೆ ನಿಕಟ ಸ್ನೇಹ ಬೆಳೆಸಿಕೊಂಡಿದ್ದರು. ಆದರೆ, ದಿನಗಳು ಕಳೆದಂತೆ ಈ ಸ್ನೇಹ ವಿಷವಾಗಿ ಬದಲಾಯಿತು. ಆ ಮೂವರು ಶಿವಪ್ರಸಾದ್ ಅವರನ್ನು ವೈಯಕ್ತಿಕವಾಗಿ ಹಿಯಾಳಿಸಲು ಪ್ರಾರಂಭಿಸಿದರು. &quot;ನೀನು ಅನುಕಂಪದ ಆಧಾರದ ಮೇಲೆ ನೌಕರಿ ಪಡೆದ ಅನಕ್ಷರಸ್ಥ&quot; ಎಂದು ಪದೇ ಪದೇ ಚುಚ್ಚುಮಾತುಗಳಿಂದ ನಿಂದಿಸುತ್ತಿದ್ದರು. ಇಷ್ಟಕ್ಕೇ ನಿಲ್ಲದೆ, ಶಿವಪ್ರಸಾದ್ ಅವರು ತಮ್ಮ ಸ್ವಂತ ಕೊಠಡಿಯಲ್ಲಿ (ರೂಮ್&zwnj;) ಕಾಲ ಕಳೆಯುತ್ತಿದ್ದ ಕ್ಷಣಗಳ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲು ತೊಡಗಿದರು.&lt;/p&gt;&lt;h3&gt;&lt;strong&gt;ಪ್ರಧಾನಿ ಮೋದಿಗೆ ಪತ್ರ; ವಾಟ್ಸಾಪ್ ಗ್ರೂಪ್&zwnj;ನಲ್ಲಿ ಪೋಸ್ಟ್!&lt;/strong&gt;&lt;/h3&gt;&lt;p&gt;ಪಕ್ಕದ ಕೊಠಡಿಯವರ ನಿರಂತರ ಮಾನಸಿಕ ಕಿರುಕುಳ ಮತ್ತು ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆಯಿಂದ ಶಿವಪ್ರಸಾದ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇನ್ನು ಬದುಕಲು ಸಾಧ್ಯವಿಲ್ಲ ಎಂಬ ಹಂತಕ್ಕೆ ತಲುಪಿದ ಅವರು, ನೇರವಾಗಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಣ್ಣೀರಿನ ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಇವರೇ ನನ್ನ ಸಾವಿಗೆ ಕಾರಣ ಎಂದು ಬರೆದಿದ್ದ ಸಂತ್ರಸ್ತ!&lt;/strong&gt;&lt;/h3&gt;&lt;p&gt;ನನ್ನ ಸಾವಿಗೆ ಸಂಗಪ್ಪ ತೇಲಿ, ನೇತ್ರಾ ಪೂಜಾರ್ ಮತ್ತು ಸುಮಾ ಪೂಜಾರ್ ಅವರೇ ಕಾರಣ. ಅವರು ನನ್ನನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ. ನನ್ನ ಸಾವಿನ ನಂತರ ನನ್ನ ಕುಟುಂಬಕ್ಕೆ ನೀವೇ ನ್ಯಾಯ ಕೊಡಿಸಬೇಕು,&quot; ಎಂದು ಪ್ರಧಾನಿಗಳಿಗೆ ಮನವಿ ಮಾಡಿದ್ದರು. ಈ ಪತ್ರವನ್ನು ಬರೆದ ನಂತರ, ಅದನ್ನು ತಮ್ಮ ಕಚೇರಿಯ ಅಧಿಕೃತ ವಾಟ್ಸಾಪ್ ಗ್ರೂಪ್&zwnj;ಗೆ ಪೋಸ್ಟ್ ಮಾಡಿ, ಬಳಿಕ ಡಿಸಿ ಕಚೇರಿಯಲ್ಲಿಯೇ ಚಾಕುವಿನಿಂದ ಕೈ ಕೊಯ್ದುಕೊಂಡಿದ್ದರು.&lt;/p&gt;&lt;h3&gt;&lt;strong&gt;ಪೊಲೀಸರ ತನಿಖೆ ಚುರುಕು!&lt;/strong&gt;&lt;/h3&gt;&lt;p&gt;ಕಚೇರಿಯ ವಾಟ್ಸಾಪ್ ಗ್ರೂಪ್&zwnj;ನಲ್ಲಿ ಪತ್ರ ನೋಡಿ ಸಿಬ್ಬಂದಿ ಆತಂಕಗೊಳ್ಳುವಷ್ಟರಲ್ಲಿ ಈ ದುರಂತ ಸಂಭವಿಸಿತ್ತು. ಸದ್ಯ ಶಿವಪ್ರಸಾದ್ ಅಪಾಯದಿಂದ ಪಾರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪತ್ರದಲ್ಲಿ ಹೆಸರಿಸಲಾದ ಸಂಗಪ್ಪ ತೇಲಿ, ನೇತ್ರಾ ಪೂಜಾರ್ ಮತ್ತು ಸುಮಾ ಪೂಜಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಖಾಸಗಿ ವಿಡಿಯೋ ಬೆದರಿಕೆ ಮತ್ತು ಮಾನಸಿಕ ಕಿರುಕುಳದ ಕೋನದಲ್ಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/karnataka-news-dharwad-dc-office-employee-suicide-attempt-letter-to-pm-modi-big-twist-bmk/articleshow-tbl2t9l"/>
        </item>
        <item>
            <title><![CDATA[ಹಳ್ಳಿಗೇರಿ ಪರಿಸರದಲ್ಲಿ 63 ಕೀಟ-ಜೇಡ ಪ್ರಭೇದಗಳ ದಾಖಲೆ: ಬಯಲಾಯ್ತು ಅಪರೂಪದ ರಹಸ್ಯಗಳು]]></title>
            <link>https://kannada.asianetnews.com/karnataka-districts/dharwad-63-insect-and-spider-species-recorded-in-halligeri-village-environment-mrq/articleshow-viysec1</link>
            <guid isPermaLink="true">https://kannada.asianetnews.com/karnataka-districts/dharwad-63-insect-and-spider-species-recorded-in-halligeri-village-environment-mrq/articleshow-viysec1</guid>
            <pubDate>Tue, 25 Aug 2026 08:04:02 +0530</pubDate>
            <description><![CDATA[&lt;p&gt;ಹಳ್ಳಿಗೇರಿಯಲ್ಲಿ ನಡೆದ ಕ್ಷೇತ್ರ ಕಾರ್ಯಾಗಾರದಲ್ಲಿ, 35ಕ್ಕೂ ಹೆಚ್ಚು ಕೀಟ ಮತ್ತು 28ಕ್ಕೂ ಅಧಿಕ ಜೇಡ ಪ್ರಭೇದಗಳನ್ನು ಗುರುತಿಸಲಾಗಿದೆ. ಈ ಯಶಸ್ವಿ ಕಾರ್ಯಕ್ರಮದ ಫಲವಾಗಿ, ಸ್ಥಳೀಯ ಜೀವವೈವಿಧ್ಯ ದಾಖಲಾತಿಯ ಮಹತ್ವವನ್ನು ಸಾರುವುದರ ಜೊತೆಗೆ, ಅಪರೂಪದ ಕೀಟ ಪ್ರಪಂಚದ ಉದ್ಯಾನ ನಿರ್ಮಾಣಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0vbvghzzs985m0d7d8t1pxp,imgname-spider-species-1787624800830.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಸಮೀಪದ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್&zwnj;ನಲ್ಲಿ ಎರಡು ದಿನಗಳ ಕಾಲ ನೇಚರ್ ರಿಸರ್ಚ್ ಸೆಂಟರ್ ಆಯೋಜಿಸಿದ್ದ ಕ್ಷೇತ್ರ ಕಾರ್ಯಾಗಾರದಲ್ಲಿ ಪರಿಸರಾಸಕ್ತರು, ಸಂಶೋಧಕರು, ವಿದ್ಯಾರ್ಥಿಗಳು ಸೇರಿದಂತೆ 35ಕ್ಕೂ ಹೆಚ್ಚು ಜನರು ಸ್ಥಳೀಯ ಜೀವವೈವಿಧ್ಯ ದಾಖಲಾತಿ ಮಹತ್ವ, ರೀತಿ-ನೀತಿಗಳನ್ನು ಅರಿತುಕೊಂಡರು.&lt;/p&gt;&lt;h2&gt;&lt;strong&gt;ಜೇಡಗಳ ತಜ್ಞ ಅಥರ್ವ ಕುಲಕರ್ಣಿ&lt;/strong&gt;&lt;/h2&gt;&lt;p&gt;ಈ ಸಮಯದಲ್ಲಿ 35ಕ್ಕೂ ಹೆಚ್ಚು ಕೀಟ ಪ್ರಭೇದಗಳು ಹಾಗೂ 28ಕ್ಕೂ ಅಧಿಕ ಜೇಡ ಪ್ರಭೇದಗಳನ್ನು ಪುಣೆಯ ಎಂಟಮಾನ್ ಇನ್&zwnj;ಸ್ಟಿಟ್ಯೂಟ್&zwnj; ನಿರ್ದೇಶಕರು ಹಾಗೂ ಕೀಟತಜ್ಞ ಈಶಾನ ಪಹಾಡೆ ಹಾಗೂ ಜೇಡಗಳ ತಜ್ಞ ಅಥರ್ವ ಕುಲಕರ್ಣಿ ಗುರುತಿಸಿ ದಾಖಲಿಸುವಲ್ಲಿ ಯಶಸ್ವಿಯಾದರು.&lt;/p&gt;&lt;p&gt;ಕೀಟಗಳು ಮತ್ತು ಜೇಡಗಳ ಬಗ್ಗೆ ಸಮುದಾಯಗಳ ಸಹಭಾಗಿತ್ವದಲ್ಲಿ ಸಮೀಕ್ಷೆ, ಅಧ್ಯಯನ ಮತ್ತು ದಾಖಲೆ, ಜೀವ ವೈವಿಧ್ಯ ಮಂಡಳಿಗೆ, ಜನ ವಿಜ್ಞಾನಕ್ಕೆ ಅಪರೂಪದ ಆಕರವಾಗಿವೆ. ಐ-ನ್ಯಾಚುರಾಲಿಸ್ಟ್ ಆಪ್&zwnj;ನಲ್ಲಿ ಸಮಗ್ರ ಮಾಹಿತಿ ಕ್ರೊಡೀಕರಿಸಿ ಸದ್ಯದಲ್ಲೇ ದಾಖಲಿಸಲಾಗುವುದು ಎಂದು ಈಶಾನ್&zwnj; ಹೇಳಿದರು.&lt;/p&gt;&lt;h3&gt;&lt;strong&gt;ಅಪರೂಪದ ಚಿಟ್ಟೆ, ಹ್ಯಾತೆ, ಜೇಡ, ಜೇನು ಮತ್ತು ಕೀಟ ಪ್ರಪಂಚದ ಉದ್ಯಾನ&lt;/strong&gt;&lt;/h3&gt;&lt;p&gt;ಹಿರಿಯ ಪರಿಸರವಾದಿ ಪಂಚಾಕ್ಷರಿ ಹಿರೇಮಠ ನೇತೃತ್ವದಲ್ಲಿ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್&zwnj;ನಲ್ಲಿ ಅಪರೂಪದ ಚಿಟ್ಟೆ, ಹ್ಯಾತೆ, ಜೇಡ, ಜೇನು ಮತ್ತು ಕೀಟ ಪ್ರಪಂಚದ ಉದ್ಯಾನ ರೂಪಿಸಲು ಇದೇ ಸಂದರ್ಭದಲ್ಲಿ ಎಂಟಮಾನ್ ಇನ್&zwnj;ಸ್ಟಿಟ್ಯೂಟ್&zwnj; ಒಡಂಬಡಿಕೆಗೆ ಸಹಿ ಹಾಕಿತು.&lt;/p&gt;&lt;p&gt;ಡಾ. ಧೀರಜ್&zwnj; ವೀರನಗೌಡರ, ಕೃಷ್ಣಕುಮಾರ ಭಾಗವತ, ಆರ್.ಜಿ. ತಿಮ್ಮಾಪೂರ ಸೇರಿದಂತೆ ಕಲಕೇರಿ ಸಂಗೀತ ವಿದ್ಯಾಲಯ ಹಾಗೂ ಬಾಲಬಳಗ ಶಾಲೆಯ, ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು, ಪಾಲ್ಗೊಂಡಿದ್ದರು. ಸಂಚಾಲಕ ಹರ್ಷವರ್ಧನ ಶೀಲವಂತ ಸಂಯೋಜಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Greater Coucal: ಹಿಚ್ಕಡದಲ್ಲಿ ಅಪರೂಪದ ಅತಿಥಿ; ಹಸಿರು ಪರಿಸರಕ್ಕೆ ಮನಸೋತ ಕೃಷ್ಣ ಪಕ್ಷಿ&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharwad-63-insect-and-spider-species-recorded-in-halligeri-village-environment-mrq/articleshow-viysec1"/>
        </item>
        <item>
            <title><![CDATA[ಮಹಾರಾಷ್ಟ್ರದಲ್ಲೇ ಉಳಿದ ಚೆನ್ನಮ್ಮ, ರಾಯಣ್ಣ ಸೇರಿ ಕರ್ನಾಟಕದ 2 ಲಕ್ಷಕ್ಕೂ ಹೆಚ್ಚು ಇತಿಹಾಸ ದಾಖಲೆಗಳು; ವಾಪಸ್ ತರಲು ಆಗ್ರಹ]]></title>
            <link>https://kannada.asianetnews.com/state/karnataka-2-lakh-history-documents-modi-script-maharashtra-archives-kda-action/articleshow-yoef2gi</link>
            <guid isPermaLink="true">https://kannada.asianetnews.com/state/karnataka-2-lakh-history-documents-modi-script-maharashtra-archives-kda-action/articleshow-yoef2gi</guid>
            <pubDate>Mon, 10 Aug 2026 08:58:17 +0530</pubDate>
            <description><![CDATA[&lt;p&gt;ಕರ್ನಾಟಕದ ಸಾಂಸ್ಕೃತಿಕ, ರಾಜಕೀಯ ಹಾಗೂ ಸಾಮಾಜಿಕ ಇತಿಹಾಸಕ್ಕೆ ಸಂಬಂಧಿಸಿದ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಅಮೂಲ್ಯ ಐತಿಹಾಸಿಕ ದಾಖಲೆಗಳು ನೆರೆಯ ಮಹಾರಾಷ್ಟ್ರದ ದಾಖಲೆ ಭಂಡಾರಗಳಲ್ಲಿ ಬಂಧಿಯಾಗಿವೆ! ರಾಜ್ಯ ಸರ್ಕಾರಗಳ ದಶಕಗಳ ನಿರ್ಲಕ್ಷ್ಯದಿಂದಾಗಿ ಈ ಅಮೂಲ್ಯ ನಿಧಿಗಳು ಅಲ್ಲಿಯೇ ಉಳಿದಿದ್ದು, ದಿನಕಳೆದಂತೆ ಶಿಥಿಲಗೊಳ್ಳುತ್ತಿವೆ. ಇವುಗಳನ್ನು ಮರಳಿ ತರಲು ಇತಿಹಾಸಕಾರರು ಹಾಗೂ ಸಂಶೋಧಕರು ಒತ್ತಾಯಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzmtwctp8tfd2s8jethwe1sg,imgname-karnataka-history-document-in-maharashtra-1786331935574.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಬಸವರಾಜ ಹಿರೇಮಠ&lt;/strong&gt;&lt;/p&gt;&lt;p&gt;&lt;strong&gt;ಧಾರವಾಡ (ಆ.10): ಕ&lt;/strong&gt;ರ್ನಾಟಕದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಇತಿಹಾಸಕ್ಕೆ ಸಂಬಂಧಿಸಿದ 2 ಲಕ್ಷಕ್ಕೂ ಹೆಚ್ಚು ಅಮೂಲ್ಯ ದಾಖಲೆಗಳು ಮಹಾರಾಷ್ಟ್ರದ ವಿವಿಧ ದಾಖಲೆ ಭಂಡಾರಗಳಲ್ಲಿ ಅಡಗಿವೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಈ ದಾಖಲೆಗಳು ಅಲ್ಲಿಯೇ ಉಳಿದಿದ್ದು, ಮರಳಿ ಕರುನಾಡಿಗೆ ತರಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕಿದೆ.&lt;/p&gt;&lt;p&gt;ದಶಕಗಳಿಂದ ಇತಿಹಾಸಕಾರರು, ಲೇಖಕರು ಮತ್ತು ಸಂಶೋಧಕರು ಪದೇ ಪದೇ ಮನವಿ ಮಾಡಿದರೂ ರಾಜ್ಯದಲ್ಲಿ ಈ ವರೆಗೆ ಆಡಳಿತ ನಡೆಸಿದವರು ಈ ಅಮೂಲ್ಯ ದಾಖಲೆಗಳನ್ನು ಮರಳಿ ಪಡೆಯಲು ಅಥವಾ ಕನಿಷ್ಠ ಪಕ್ಷ ಅವುಗಳ ಡಿಜಿಟಲ್ ಪ್ರತಿಗಳನ್ನಾದರೂ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದೇ ಕನ್ನಡಿಗರ ದುರ್ದೈವ. ಕಾಲಕ್ರಮೇಣ ಹಲವು ದಾಖಲೆಗಳು ಶಿಥಿಲಗೊಂಡಿವೆ ಎಂದು ಇತಿಹಾಸಕಾರರು ಬೇಸರ ವ್ಯಕ್ತಪಡಿಸುತ್ತಾರೆ.&lt;/p&gt;&lt;h2&gt;&lt;strong&gt;ಹಲವು ಪ್ರಶ್ನೆಗೆ ಉತ್ತರ:&lt;/strong&gt;&lt;/h2&gt;&lt;p&gt;ಪುಣೆ, ಕೊಲ್ಲಾಪುರ ಮತ್ತು ಮುಂಬೈನಲ್ಲಿರುವ ಮಹಾರಾಷ್ಟ್ರ ರಾಜ್ಯ ದಾಖಲೆ ಭಂಡಾರ ಹಾಗೂ ಸಂಶೋಧನಾ ಗ್ರಂಥಾಲಯಗಳಲ್ಲಿರುವ ಈ ದಾಖಲೆಗಳು, 100 ವರ್ಷಗಳಿಗೂ ಹೆಚ್ಚಿನ ಹಳೆಯದಾದ &lsquo;ಮೋಡಿ ಲಿಪಿ&rsquo;ಯಲ್ಲಿವೆ. ಇವುಗಳಲ್ಲಿ ಕಿತ್ತೂರು ದಂಗೆಯ ನಂತರದ ಬೆಳವಣಿಗೆ, ಪೇಶ್ವೆ ಮತ್ತು ಕನ್ನಡ ಆಡಳಿತಗಾರರ ನಡುವಿನ ಸಂಬಂಧ, ಉತ್ತರ ಕರ್ನಾಟಕದಲ್ಲಿ ಬ್ರಿಟಿಷರ ತೆರಿಗೆ ಪದ್ಧತಿ, ಮೈಸೂರು ಸಂಸ್ಥಾನ ಮತ್ತು ಮರಾಠ ಆಡಳಿತಗಾರರ ನಡುವಿನ ಬಾಂಧವ್ಯ ಹಾಗೂ ಟಿಪ್ಪು ಸುಲ್ತಾನ್ ಮತ್ತು ಇಂದಿನ ಮಹಾರಾಷ್ಟ್ರದ ನಡುವಿನ ಸಂಪರ್ಕದಂತಹ ಹಲವು ಬಗೆಹರಿಯದ ಐತಿಹಾಸಿಕ ಪ್ರಶ್ನೆಗಳಿಗೂ ಉತ್ತರಗಳಿವೆ ಎಂದು ಇತಿಹಾಸಕಾರರು ತಿಳಿಸುತ್ತಾರೆ.&lt;/p&gt;&lt;h2&gt;&lt;strong&gt;ಮೌಲ್ಯಯುತ ಸಾಕ್ಷ್ಯಗಳಿವು:&lt;/strong&gt;&lt;/h2&gt;&lt;p&gt;ಕರ್ನಾಟಕ ಏಕೀಕರಣಗೊಂಡು ಐದು ದಶಕಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ, ಆಮಟೂರು ಬಾಳಪ್ಪ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ದಾಖಲೆಗಳು ಇನ್ನೂ ಕನ್ನಡಿಗರಿಗೆ ಪೂರ್ತಿಯಾಗಿ ಲಭ್ಯವಿಲ್ಲ. ಉತ್ತರ ಕರ್ನಾಟಕದ ಇತಿಹಾಸ ಅರ್ಥ ಮಾಡಿಕೊಳ್ಳಲು ಮತ್ತು ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಈ ದಾಖಲೆಗಳು ಅತ್ಯಗತ್ಯ. ಜತೆಗೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವು ಸುಪ್ರೀಂಕೋರ್ಟ್&zwnj;ನಲ್ಲಿ ಬಾಕಿಯಿರುವ ಹಿನ್ನೆಲೆಯಲ್ಲಿ, ಬ್ರಿಟಿಷ್ ಕಾಲದ ಗಡಿ ನಿರ್ಣಯಕ್ಕೆ ಸಂಬಂಧಿಸಿದ ದಾಖಲೆಗಳು ಮೌಲ್ಯಯುತ ಐತಿಹಾಸಿಕ ಸಾಕ್ಷ್ಯಗಳಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ದಾಖಲೆ ತರುವ ನಿಟ್ಟಿನಲ್ಲಿ ಶೀಘ್ರ ಗಮನ ಹರಿಸಬೇಕಿದೆ ಎನ್ನುವುದು ರಾಜ್ಯದ ಇತಿಹಾಸಕಾರರ ಆಶಯವಾಗಿದೆ.&lt;/p&gt;&lt;h2&gt;&lt;strong&gt;ಪ್ರಯತ್ನ ವಿಫಲ:&lt;/strong&gt;&lt;/h2&gt;&lt;p&gt;2016ರಲ್ಲಿ ಕರ್ನಾಟಕದ ಇತಿಹಾಸಕಾಸಕಾರರ ತಂಡವೊಂದು ಆ ದಾಖಲೆಗಳ ಸಂಗ್ರಹ ಪರಿಶೀಲಿಸಲು ಮಹಾರಾಷ್ಟ್ರಕ್ಕೆ ಭೇಟಿ ನೀಡಿತ್ತು. ಆದರೆ, ದಾಖಲೆಗಳ ಪ್ರಮಾಣವು ಹೆಚ್ಚಿದ್ದು ಜತೆಗೆ ಅವು ಮೋಡಿ ಲಿಪಿಯಲ್ಲಿ ಇದ್ದರಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಆ ಇಲಾಖೆಯು, ಮಹಾರಾಷ್ಟ್ರದಿಂದ ಮೂಲ ದಾಖಲೆಗಳನ್ನು ಮರಳಿ ಪಡೆಯಲು ಹಾಗೂ ಮೋಡಿ ಲಿಪಿಯಲ್ಲಿ ಪರಿಣತರನ್ನು ತರಬೇತಿಗೊಳಿಸಲು ಮತ್ತು ಆ ವಿಷಯವನ್ನು ಕನ್ನಡಕ್ಕೆ ಅನುವಾದಿಸಲು ಅನುದಾನ ಮಂಜೂರು ಮಾಡುವಂತೆ ಕರ್ನಾಟಕ ಸರ್ಕಾರವನ್ನು ಕೋರಿತು. ಆದರೆ, ಈ ಪ್ರಸ್ತಾವನೆಯು ಮುಂದೆ ಸಾಗಲಿಲ್ಲ ಎಂದು ತಿಳಿದು ಬಂದಿದೆ.&lt;/p&gt;&lt;h3&gt;&lt;strong&gt;ಮೋಡಿ ಲಿಪಿಯನ್ನು ಓದಬಲ್ಲ ತಜ್ಞರು ಕಡಿಮೆ: ಬಿಳಿಮಲೆ&lt;/strong&gt;&lt;/h3&gt;&lt;p&gt;ಕರ್ನಾಟಕದ ಪರಂಪರೆ ಸಂರಕ್ಷಿಸಲು ಈ ದಾಖಲೆಗಳನ್ನು ಮರಳಿ ಪಡೆಯುವುದು ಅತ್ಯಗತ್ಯ ಎಂದು ಹೇಳಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಬಲ್ಲ ವಿದ್ವಾಂಸರು ನಮ್ಮಲ್ಲಿದ್ದರೂ, ಮೋಡಿ ಲಿಪಿಯನ್ನು ಓದಬಲ್ಲ ತಜ್ಞರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಂತಹ ಪರಿಣತಿಯಿಲ್ಲದೇ, ಈ ದಾಖಲೆಗಳು ಲಭ್ಯವಾಗದಂತೆಯೇ ಉಳಿಯುತ್ತವೆ. ತರಬೇತಿ ಪಡೆದ ವಿದ್ವಾಂಸರ ಪಡೆಯನ್ನು ಸಿದ್ಧಪಡಿಸಲು ಕಲಬುರಗಿ, ಧಾರವಾಡ, ಮೈಸೂರು ಮತ್ತು ಬೆಂಗಳೂರಿನಲ್ಲಿ ಮೋಡಿ ಲಿಪಿ ತರಬೇತಿ ಕಾರ್ಯಕ್ರಮ ಆಯೋಜಿಸಲು ಪ್ರಾಧಿಕಾರ ಯೋಜಿಸಿದೆ. ಮಹಾರಾಷ್ಟ್ರದಿಂದ ಈ ದಾಖಲೆ ಪಡೆಯಲು ಸರ್ಕಾರಿ ಅನುಮೋದನೆ ಮತ್ತು ಅನುದಾನ ಪಡೆಯುವ ಉದ್ದೇಶವನ್ನೂ ಪ್ರಾಧಿಕಾರ ಹೊಂದಿದೆ ಎಂದು ತಿಳಿಸಿದರು.&lt;/p&gt;&lt;h3&gt;&lt;strong&gt;ಅನುದಾನ ಒದಗಿಸಿ: ಸಾವಂತ&lt;/strong&gt;&lt;/h3&gt;&lt;p&gt;ಈ ದಾಖಲೆಗಳ ಲಭ್ಯತೆಯಿಲ್ಲದೆ ಕರ್ನಾಟಕದ ಇತಿಹಾಸ ಅಪೂರ್ಣ. ಕಾಲಕ್ರಮೇಣ ಇವುಗಳಲ್ಲಿ ಅನೇಕ ದಾಖಲೆಗಳು ಶಿಥಿಲಗೊಂಡಿವೆ. ಅವುಗಳನ್ನು ಎಚ್ಚರಿಕೆಯಿಂದ ಸಂರಕ್ಷಿಸಿ, ಡಿಜಿಟಲೀಕರಣಗೊಳಿಸಬೇಕು ಮತ್ತು ಅನುವಾದಿಸಬೇಕು. ಈ ಪ್ರಮುಖ ಪರಂಪರೆ ಸಂರಕ್ಷಣಾ ಯೋಜನೆಗೆ ಅಗತ್ಯವಾದ ಅನುದಾನ ಒದಗಿಸಲು ಸರ್ಕಾರ ಹಿಂಜರಿಯಬಾರದು ಎಂದು ಮೋಡಿ ಲಿಪಿ ತಜ್ಞ ಡಾ। ಎಸ್&zwnj;.ವೈ.ಸಾವಂತ ಸರ್ಕಾರದ ಗಮನ ಸೆಳೆದರು.&lt;/p&gt;&lt;p&gt;&lt;strong&gt;ಶೀಘ್ರ ದಾಖಲೆ ತರಿಸಲಿ&lt;/strong&gt;&lt;/p&gt;&lt;p&gt;ಬ್ರಿಟಿಷ್ ಆಳ್ವಿಕೆಯಲ್ಲಿ ಈಗಿನ ಉತ್ತರ ಕರ್ನಾಟಕದ 19 ಜಿಲ್ಲೆಗಳು ಬಾಂಬೆ ಪ್ರೆಸಿಡೆನ್ಸಿ ಮತ್ತು ಹೈದರಾಬಾದ್ ಸಂಸ್ಥಾನದಲ್ಲಿದ್ದವು. ಹೀಗಾಗಿ ಈ ಪ್ರದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆ ದಾಖಲಿಸುವ ಆಡಳಿತಾತ್ಮಕ ದಾಖಲೆಗಳು ಮಹಾರಾಷ್ಟ್ರದಲ್ಲಿಯೇ ಉಳಿದಿವೆ. ಇದು ರಾಜ್ಯದ ಐತಿಹಾಸಿಕ ಸಂಶೋಧನೆಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ದಾಖಲೆಗಳನ್ನು ಪಡೆಯಲು ಶೀಘ್ರ ಯೋಜನೆ ರೂಪಿಸಲಿ.&lt;/p&gt;&lt;p&gt;&lt;strong&gt;ಶಂಕರ ಹಲಗತ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-2-lakh-history-documents-modi-script-maharashtra-archives-kda-action/articleshow-yoef2gi"/>
        </item>
    </channel>
</rss>
