<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 16 Sep 2026 08:32:30 +0530</lastBuildDate>
        <atom:link href="https://kannada.asianetnews.com/rss/dharwad" rel="self" type="application/rss+xml"/>
        <item>
            <title><![CDATA[ಹುಬ್ಬಳ್ಳಿ ಗಣೇಶೋತ್ಸವಕ್ಕೆ ಸಜ್ಜಾಗುತ್ತಿರುವ ಹೊತ್ತಲ್ಲೇ ಮೂರ್ತಿಕಾರರ ಬದುಕಲ್ಲಿ ಆತಂಕ! ಕಾರಣವೇನು?]]></title>
            <link>https://kannada.asianetnews.com/karnataka-districts/hubballi-ganeshotsava-why-are-idol-makers-worried-rav/articleshow-0sfyaxh</link>
            <guid isPermaLink="true">https://kannada.asianetnews.com/karnataka-districts/hubballi-ganeshotsava-why-are-idol-makers-worried-rav/articleshow-0sfyaxh</guid>
            <pubDate>Mon, 07 Sep 2026 07:30:43 +0530</pubDate>
            <description><![CDATA[&lt;p&gt;ಗಣೇಶೋತ್ಸವದ ಸಂಭ್ರಮಕ್ಕೆ ಹುಬ್ಬಳ್ಳಿ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಸ್ಥಳೀಯ ಮೂರ್ತಿಕಾರರ ಬದುಕಿನಲ್ಲಿ ಇಂತಹ ಸಂದಿಗ್ಧತೆ ಆವರಿಸಿದೆ. ತಯಾರಿಸಿದ ಮೂರ್ತಿಗಳು ಮಾರಾಟವಾಗುತ್ತವೋ, ಬಂಡವಾಳ ವಾಪಸ್ ಬರುತ್ತದೆಯೋ ಇಲ್ಲವೋ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ಇದಕ್ಕೆ ಕಾರಣಗಳೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1wseaftnh2k6gmgd63ezz4j,imgname-hubballi-ganeshotsava-1788746344954.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಜೀಜಅಹ್ಮದ ಬಳಗಾನೂರ&lt;/strong&gt;&lt;/p&gt;&lt;p&gt;ಹುಬ್ಬಳ್ಳಿ (ಸೆ.7): ಗಣೇಶೋತ್ಸವದ ಸಂಭ್ರಮಕ್ಕೆ ಹುಬ್ಬಳ್ಳಿ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಸ್ಥಳೀಯ ಮೂರ್ತಿಕಾರರ ಬದುಕಿನಲ್ಲಿ ಇಂತಹ ಸಂದಿಗ್ಧತೆ ಆವರಿಸಿದೆ.&lt;/p&gt;&lt;p&gt;ಗಣೇಶನ ಮೂರ್ತಿ ರೂಪಿಸಿ ಭಕ್ತರ ಮನೆ-ಮಂದಿರಗಳಿಗೆ ಸಂಭ್ರಮ ತುಂಬಿಸುವ ಕೈಗಳಲ್ಲೀಗ ಲೆಕ್ಕಾಚಾರದ ಆತಂಕ. ವರ್ಷವಿಡೀ ಮಣ್ಣು ಹದಗೊಳಿಸಿ, ರೂಪ ಕೊಟ್ಟು, ಬಣ್ಣ ಬಳಿದು ಹಬ್ಬಕ್ಕಾಗಿ ಸಿದ್ಧಪಡಿಸಿದ ಮೂರ್ತಿಗಳು ಮಾರಾಟವಾಗುತ್ತವೆಯೋ ಇಲ್ಲವೋ ಎಂಬ ಚಿಂತೆ ಒಂದೆಡೆಯಾದರೆ, ಲಕ್ಷಾಂತರ ರುಪಾಯಿ ಸಾಲ ಮಾಡಿ ತೊಡಗಿಸಿದ ಬಂಡವಾಳ ಮರಳುತ್ತದೆಯೇ ಎಂಬ ಭಯ ಮತ್ತೊಂದೆಡೆ.&lt;/p&gt;&lt;h2&gt;ಗಣೇಶೋತ್ಸವಕ್ಕೆ ಮೂರು ತಿಂಗಳ ಹಿಂದೆಯೇ ಹುಬ್ಬಳ್ಳಿಗೆ ಬಂದ ಮೂರ್ತಿಕಾರರು&lt;/h2&gt;&lt;p&gt;: ಕೊಲ್ಕತ್ತಾ ಸೇರಿದಂತೆ ವಿವಿಧೆಡೆಯಿಂದ 10ಕ್ಕೂ ಅಧಿಕ ತಂಡಗಳು ಗಣೇಶೋತ್ಸವಕ್ಕೆ ಎರಡರಿಂದ ಮೂರು ತಿಂಗಳು ಮುಂಚಿತವಾಗಿಯೇ ಹುಬ್ಬಳ್ಳಿಗೆ ಆಗಮಿಸಿವೆ. ಮರಾಠಾ ಗಲ್ಲಿ, ನವನಗರ, ಹಳೇಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜಾಗ ಬಾಡಿಗೆ ಪಡೆದು ತಾತ್ಕಾಲಿಕ ಕಾರ್ಯಾಗಾರ ತೆರೆದಿರುವ ತಂಡಗಳು ಬೃಹತ್ ಹಾಗೂ ವೈವಿಧ್ಯಮಯ ವಿನ್ಯಾಸದ ಮೂರ್ತಿಗಳನ್ನು ತಯಾರಿಸಿ ಮಾರುಕಟ್ಟೆ ಪ್ರವೇಶಿಸಿವೆ.&lt;/p&gt;&lt;h3&gt;ದಶಕಗಳಿಂದ ಇದೇ ಕಾಯಕ ನಂಬಿಕೊಂಡಿರುವ ಕುಟುಂಬಗಳು&lt;/h3&gt;&lt;p&gt;ಹೊಸ ವಿನ್ಯಾಸ, ದೊಡ್ಡ ಗಾತ್ರ ಹಾಗೂ ಆಕರ್ಷಕ ಅಲಂಕಾರಗಳೊಂದಿಗೆ ಹೊರಗಿನಿಂದ ಬಂದವರು ಗ್ರಾಹಕರ ಗಮನ ಸೆಳೆಯುತ್ತಿರುವುದು ದಶಕಗಳಿಂದ ಇದೇ ಕಾಯಕವನ್ನು ನಂಬಿಕೊಂಡಿರುವ ಸ್ಥಳೀಯರಿಗೆ ನೇರ ಸವಾಲಾಗಿದೆ. &quot;ನಾವು ವರ್ಷವಿಡೀ ಈ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತೇವೆ. ಹೊರಗಿನಿಂದ ಬರುವವರು ಮೂರು ತಿಂಗಳು ಕೆಲಸ ಮಾಡಿ ಹಣ ಸಂಪಾದಿಸಿಕೊಂಡು ಮರಳುತ್ತಾರೆ. ಅವರೊಂದಿಗೆ ಬೆಲೆ ಹಾಗೂ ವಿನ್ಯಾಸದಲ್ಲಿ ಪೈಪೋಟಿ ನಡೆಸುವುದು ಕಷ್ಟವಾಗುತ್ತಿದೆ ಎನ್ನುವುದು ಸ್ಥಳೀಯ ಮೂರ್ತಿಕಾರ ಅಳಲು.&lt;/p&gt;&lt;h3&gt;ಪಿಒಪಿ ಮೂರ್ತಿ ನಿರ್ಬಂಧ, ಮಣ್ಣಿನ ಗಣಪನಿಗೆ ಪೈಪೋಟಿ&lt;/h3&gt;&lt;p&gt;ಪೈಪೋಟಿಯಿಂದ ಮಂಕಾದ ಲಾಭ: ಪಿಒಪಿ ಮೂರ್ತಿಗಳ ಮಾರಾಟದ ಮೇಲಿನ ನಿರ್ಬಂಧದಿಂದ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಇದರಿಂದ ತಮ್ಮ ಬದುಕಿಗೆ ಹೊಸ ದಾರಿ ತೆರೆದುಕೊಳ್ಳಲಿದೆ ಎಂದು ಸ್ಥಳೀಯರು ನಿರೀಕ್ಷಿಸಿದ್ದರು. ಆದರೆ, ಹೆಚ್ಚಿದ ಬೇಡಿಕೆಯ ಮಾರುಕಟ್ಟೆಯಲ್ಲೇ ಹೊರರಾಜ್ಯದ ತಂಡಗಳ ಪ್ರವೇಶವಾಗಿರುವುದು ಆ ನಿರೀಕ್ಷೆಗೆ ತಣ್ಣೀರು ಎರಚಿದೆ. ಮಣ್ಣಿನಿಂದ ಮೂರ್ತಿ ರೂಪಿಸುವುದಷ್ಟೇ ಕೆಲಸವಲ್ಲ. ಒಣಗಿಸುವುದು, ಮೇಲ್ಮೈ ಸಮತಟ್ಟಾಗಿಸುವುದು, ಹಲವು ಹಂತಗಳಲ್ಲಿ ಲೇಪನ, ತಿಕ್ಕುವಿಕೆ, ಬಣ್ಣ ಹಾಗೂ ಅಂತಿಮ ಫಿನಿಶಿಂಗ್&zwnj; ವರೆಗೆ ಶ್ರಮಿಸಬೇಕು. ಬಿರುಕು ಬೀಳದಂತೆ ನಿರಂತರ ನಿಗಾ ವಹಿಸಬೇಕಾಗಿರುವುದರಿಂದ ಕಚ್ಚಾ ವಸ್ತು, ಬಣ್ಣ ಹಾಗೂ ಕಾರ್ಮಿಕ ವೆಚ್ಚವೂ ಹೆಚ್ಚುತ್ತಿದೆ.&lt;/p&gt;&lt;p&gt;&lt;strong&gt;ಸ್ಥಳೀಯರ ಮಾರುಕಟ್ಟೆ: &lt;/strong&gt;ಹೊರರಾಜ್ಯದ ಕಲಾವಿದರನ್ನು ಸಂಪೂರ್ಣವಾಗಿ ತಡೆಯುವುದಕ್ಕಿಂತ ಸ್ಥಳೀಯರಿಗೆ ಆದ್ಯತೆ ನೀಡುವ ವ್ಯವಸ್ಥೆ ರೂಪಿಸಬೇಕು ಎಂಬುದು ಮೂರ್ತಿಕಾರರ ಒತ್ತಾಯ. ಕಡಿಮೆ ಬಡ್ಡಿ ದರದ ಸಾಲ, ತರಬೇತಿ, ಶಾಶ್ವತ ಕಾರ್ಯಾಗಾರ, ಮಾರಾಟ ಮಳಿಗೆ ಹಾಗೂ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ತಲೆತಲಾಂತರಗಳಿಂದ ಉಳಿಸಿಕೊಂಡು ಬಂದಿರುವ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯ ಕಲೆ ಮೂರು ತಿಂಗಳ ಪೈಪೋಟಿಯ ನಡುವೆ ನಲುಗುವ ಆತಂಕವಿದೆ.&lt;/p&gt;&lt;p&gt;&lt;strong&gt;₹25 ಲಕ್ಷ ಹೂಡಿಕೆ:&lt;/strong&gt; ಹಳೇ ಮೇದಾರ ಓಣಿಯ ಬಸವರಾಜ ಕುಂಬಾರ ಅವರು ಈ ಬಾರಿ 80ಕ್ಕೂ ಅಧಿಕ ಬೃಹತ್ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಇದಕ್ಕಾಗಿ ಸುಮಾರು ₹25 ಲಕ್ಷ ಹೂಡಿಕೆ ಮಾಡಿದ್ದು, ಈ ವರೆಗೆ 25ರಿಂದ 30 ಮೂರ್ತಿಗಳು ಮಾತ್ರ ಮಾರಾಟವಾಗಿವೆ. ₹10-12 ಲಕ್ಷದಷ್ಟು ಹಣ ವಾಪಸ್ ಬಂದಿದ್ದು, ಸಾಲ ಪಡೆದು ಹೂಡಿಕೆ ಮಾಡಿರುವ ಕಾರಣ ಉಳಿದ ಮೂರ್ತಿಗಳ ಮಾರಾಟದ ಬಗ್ಗೆ ಆತಂಕ ಎದುರಾಗಿದೆ.&lt;/p&gt;&lt;p&gt;ಪಿಒಪಿ ಮೂರ್ತಿಗಳ ಮಾರಾಟಕ್ಕೆ ನಿರ್ಬಂಧ ಇರುವುದರಿಂದ ಸ್ಥಳೀಯರಿಗೆ ಉತ್ತಮ ಆದಾಯದ ನಿರೀಕ್ಷೆಯಿತ್ತು. ಆ ನಿರೀಕ್ಷೆ ಸುಳ್ಳಾಗಿದೆ. ಹೊರರಾಜ್ಯದ ಕಲಾವಿದರ ಹೆಚ್ಚಿದ ಪೈಪೋಟಿಯಿಂದ ಸ್ಥಳೀಯರಿಗೆ ತೀವ್ರ ಹಾನಿಯಾಗುತ್ತಿದೆ ಎಂದು ಗಣೇಶ ಮೂರ್ತಿ ತಯಾರಕ ಚೇತನ ಕುಂಬಾರ ತಿಳಿಸಿದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hubballi-ganeshotsava-why-are-idol-makers-worried-rav/articleshow-0sfyaxh"/>
        </item>
        <item>
            <title><![CDATA[ಬಸ್ ಓಡಿಸುತ್ತಿದ್ದ ಬಾಳೇಶ್‌ಗೆ ಹೃದಯಾಘಾತ; ತಾನು ಓಡಿಸಿದ ಬಸ್‌ನಲ್ಲೇ ಅಂತಿಮಯಾತ್ರೆ ಮಾಡಿಸಿದ ಸಾರಿಗೆ ಇಲಾಖೆ]]></title>
            <link>https://kannada.asianetnews.com/gallery/karnataka-districts/dharwad-driver-balesh-theli-dies-after-heart-attack-transport-department-arranges-his-final-journey-in-bus-rav-2cfce63</link>
            <guid isPermaLink="true">https://kannada.asianetnews.com/gallery/karnataka-districts/dharwad-driver-balesh-theli-dies-after-heart-attack-transport-department-arranges-his-final-journey-in-bus-rav-2cfce63</guid>
            <pubDate>Sun, 13 Sep 2026 10:28:56 +0530</pubDate>
            <description><![CDATA[&lt;p&gt;ಪ್ರಯಾಣಿಕರನ್ನ ಸುರಕ್ಷಿತವಾಗಿ ಮನೆ ತಲುಪಿಸುತ್ತಿದ್ದ ಸಾರಿಗೆ ಬಸ್ ಚಾಲಕ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಾನು ಚಲಾಯಿಸುತ್ತಿದ್ದ ಬಸ್&zwnj;ನಲ್ಲಿ ಶವವಾಗಿ ಮನೆ ತಲುಪಿದ ದೃಶ್ಯ ನೋಡುವವರ ಕಣ್ಣಾಲಿಗಳು ತುಂಬಿ ಬಂದವು. ಧಾರವಾಡ ಸಾರಿಗೆ ಸಿಬ್ಬಂದಿ ಏನು ಮಾಡಿದ್ರು ನೋಡಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2chqsynhea8m3pg3h76ckx8,imgname-dharwad-bus-drivers-heart-attack-case-1789275138005.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಯಾಣಿಕರನ್ನ ಸುರಕ್ಷಿತವಾಗಿ ಮನೆ ತಲುಪಿಸುತ್ತಿದ್ದ ಸಾರಿಗೆ ಬಸ್ ಚಾಲಕ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಾನು ಚಲಾಯಿಸುತ್ತಿದ್ದ ಬಸ್&zwnj;ನಲ್ಲಿ ಶವವಾಗಿ ಮನೆ ತಲುಪಿದ ದೃಶ್ಯ ನೋಡುವವರ ಕಣ್ಣಾಲಿಗಳು ತುಂಬಿ ಬಂದವು. ಧಾರವಾಡ ಸಾರಿಗೆ ಸಿಬ್ಬಂದಿ ಏನು ಮಾಡಿದ್ರು ನೋಡಿ&lt;/p&gt;&lt;img&gt;&lt;p&gt;ಧಾರವಾಡ ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ದಿಢೀರ್ ಹೃದಯಾಘಾತದಿಂದ ಸಾರಿಗೆ ಬಸ್ ಚಾಲಕ ಬಾಳೇಶ್ ತೇಲಿ(38) ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಚಾಲಕ ಸಾವನ್ನಪ್ಪಿದ ಬಳಿಕ ಮೃತದೇಹವನ್ನು ಹುಟ್ಟೂರಿಗೆ ಅಂಬುಲೆನ್ಸ್ ಬದಲು ಸಾರಿಗೆ ಬಸ್&zwnj;ನಲ್ಲೇ ರವಾನಿಸಿದೆ.&lt;/p&gt;&lt;img&gt;&lt;p&gt;ಮೃತ ಬಾಳೇಶ್ ತೇಲಿ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ನಿವಾಸಿಯಾಗಿದ್ದಾರೆ. ಹಲವು ವರ್ಷಗಳಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಕಲಘಟಗಿ ಡಿಪೋದಲ್ಲಿ ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಆದರೆ ಚಿಕ್ಕ ವಯಸ್ಸಿಗೆ ಹಠಾತ್ ಸಂಭವಿಸಿದ ಹೃದಯಾಘಾತದಿಂದ ಮೃತರಾಗಿದ್ದಾರೆ.&lt;/p&gt;&lt;img&gt;&lt;p&gt;ಸಾರಿಗೆ ಇಲಾಖೆ ಸಿಬ್ಬಂದಿ ಚಾಲಕನ ಅಕಾಲಿಕ ಮರಣಕ್ಕೆ ಮರುಗಿದ್ದಾರೆ. ಮೃತದೇಹ ಆಂಬುಲೆನ್ಸ್ ಬದಲು ತಾನು ಚಾಲನೆ ಮಾಡುತ್ತಿದ್ದ ಬಸ್&zwnj;ನಲ್ಲೇ ಅಂತಿಮ ಯಾತ್ರೆ ನಡೆಸಲು ವ್ಯವಸ್ಥೆ ಮಾಡಿದರು. ಅದರಂತೆ ಧಾರವಾಡದಿಂದ ಹುಟ್ಟೂರಿಗೆ ಸಾರಿಗೆ ಇಲಾಖೆ ಬಸ್&zwnj;ನಲ್ಲೇ ಬಾಳೇಶ್ ತೇಲಿ ಮೃತದೇಹ ತಂದು ಸಾರಿಗೆ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.&lt;/p&gt;&lt;img&gt;&lt;p&gt;ಅಂತಿಮಯಾತ್ರೆ ವೇಳೆ ಬಾಳೇಶ್ ತೇಲಿ ಮೃತದೇಹ ಸಾರಿಗೆ ಬಸ್&zwnj;ನಲ್ಲಿಡುತ್ತಿದ್ದಂತೆ ಮಗನ ಶವ ಕಂಡು ಗೋಗರೆದು ಅತ್ತ ತಾಯಿ. ಪ್ರತಿದಿನ ಮಗ ಹುಮ್ಮಸಿನಿಂದ ಕೆಲಸಕ್ಕೆ ಹೋಗುತ್ತಿದ್ದ. ತಾನೇ ಓಡಿಸುತ್ತಿದ್ದ ಬಸ್&zwnj;ನಲ್ಲಿ ತಣ್ಣಗೆ ಮಲಗಿಬಿಟ್ಟ, ನಮ್ಮನ್ನೆಲ್ಲ ಬಿಟ್ಟುಹೋದ ಅಂತಾ ಒಂದೇ ಸಮನೆ ಮಗನ ಸಾವು ಅರಗಿಸಿಕೊಳ್ಳಲಾಗದೆ ಕಣ್ಣೀರಾಕಿದ ತಾಯಿ. ಈ ದೃಶ್ಯದಿಂದ ನೆರೆದವರ ಕಣ್ಣಗಳೂ ತೇವಗೊಂಡವು.&lt;/p&gt;]]></content:encoded>
            <category>dharwad</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/dharwad-driver-balesh-theli-dies-after-heart-attack-transport-department-arranges-his-final-journey-in-bus-rav-2cfce63"/>
        </item>
        <item>
            <title><![CDATA[ಧಾರವಾಡದಲ್ಲಿ  ವಿಚ್ಛೇದನ ವಿಚಾರಣೆ ಮುಗಿಸಿ ಹಿಂತಿರುಗುತ್ತಿದ್ದ ಪತಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!]]></title>
            <link>https://kannada.asianetnews.com/dharwad/dharwad-news-love-marriage-turns-violent-over-divorce-refusal-victim-shifted-to-hubballi-kims-gdp/articleshow-810wgbp</link>
            <guid isPermaLink="true">https://kannada.asianetnews.com/dharwad/dharwad-news-love-marriage-turns-violent-over-divorce-refusal-victim-shifted-to-hubballi-kims-gdp/articleshow-810wgbp</guid>
            <pubDate>Tue, 15 Sep 2026 17:58:04 +0530</pubDate>
            <description><![CDATA[ಧಾರವಾಡದಲ್ಲಿ ವಿಚ್ಛೇದನ ಪ್ರಕರಣದ ವಿಚಾರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಪತಿ ಶಶಿಧರ್ ಶಿರಾಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪತ್ನಿಯ ಕಡೆಯವರೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಶಶಿಧರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2jgdpenhjde7p0v199423fg,imgname-dharwad-divorce-case-1789475084756.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡದಲ್ಲಿ ದಂಪತಿ ನಡುವಿನ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ಕಲಹವೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ನ್ಯಾಯಾಲಯದಲ್ಲಿ ಡಿವೋರ್ಸ್ ಕೇಸ್ ವಿಚಾರಣೆ ಮುಗಿಸಿಕೊಂಡು ವಾಪಸ್ ಮನೆಗೆ ತೆರಳುತ್ತಿದ್ದ ಪತಿಯ ಮೇಲೆಯೇ ಪತ್ನಿಯ ಕಡೆಯವರು ಮಾರಣಾಂತಿಕ ಹಲ್ಲೆ ನಡೆಸಿ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಧಾರವಾಡ ನಗರದ ಎಸ್&zwnj;ಬಿಐ ಮೇನ್ ಬ್ರ್ಯಾಂಚ್ ಸಮೀಪ ನಡೆದಿದೆ.&lt;/p&gt;&lt;p&gt;ಧಾರವಾಡದ ಮೆಹಬೂಬನಗರದ ನಿವಾಸಿಯಾಗಿರುವ ಶಶಿಧರ್ ಶಿರಾಳೆ ಹಲ್ಲೆಗೊಳಗಾದ ದುರ್ಧೈವಿ. ಶಶಿಧರ್ ಹಾಗೂ ಆತನ ಪತ್ನಿ ಕೆಲವು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಕಲಹ ಶುರುವಾಗಿದ್ದವು. ಈ ಹಿನ್ನೆಲೆಯಲ್ಲಿ ಪತಿಯಿಂದ ಬಿಡುಗಡೆ ಕೋರಿ ಪತ್ನಿಯು ಧಾರವಾಡದ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.&lt;/p&gt;&lt;p&gt;ಅರ್ಜಿಯ ವಿಚಾರಣೆಯು ಮಂಗಳವಾರ ನ್ಯಾಯಾಲಯದಲ್ಲಿ ನಿಗದಿಯಾಗಿದ್ದರಿಂದ ಶಶಿಧರ್ ಕೋರ್ಟ್&zwnj;ಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಎಸ್&zwnj;ಬಿಐ ಮುಖ್ಯ ಶಾಖೆಯ ಸಮೀಪ ಸುಮಾರು 6 ಜನರಿದ್ದ ಸಶಸ್ತ್ರ ಗುಂಪೊಂದು ಶಶಿಧರ್ ಅವರನ್ನು ತಡೆದು ಇದ್ದಕ್ಕಿದ್ದಂತೆ ಮನಬಂದತೆ ಹಲ್ಲೆ ನಡೆಸಿದೆ.&lt;/p&gt;&lt;h2&gt;ಖಾಸಗಿ ಭಾಗ, ತಲೆ ಮತ್ತು ಕೈಗೆ ಗಂಭೀರ ಗಾಯ:&lt;/h2&gt;&lt;p&gt;ಸುಮಾರು ಆರು ಜನರಿದ್ದ ಗ್ಯಾಂಗ್ ಶಶಿಧರ್ ಅವರ ಮೇಲೆ ರಕ್ತಸಿಕ್ತ ದಾಳಿ ನಡೆಸಿದ್ದು, ಹಲ್ಲೆಯ ಭರದಲ್ಲಿ ಶಶಿಧರ್ ಅವರ ತಲೆ ಹಾಗೂ ಕೈ ಭಾಗ ಮಾತ್ರವಲ್ಲ ಖಾಸಗಿ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಶಿಧರ್ ಅವರನ್ನು ತಕ್ಷಣವೇ ಸ್ಥಳೀಯರ ನೆರವಿನಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಶಶಿಧರ್ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.&lt;/p&gt;&lt;h2&gt;ಹಲ್ಲೆಗೆ ನಿಖರ ಕಾರಣವೇನು?&lt;/h2&gt;&lt;p&gt;ಪತ್ನಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ, ಶಶಿಧರ್ ಮಾತ್ರ ಡಿವೋರ್ಸ್ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪತ್ನಿಯ ಕಡೆಯವರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧಿಸಿದಂತೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/dharwad/dharwad-news-love-marriage-turns-violent-over-divorce-refusal-victim-shifted-to-hubballi-kims-gdp/articleshow-810wgbp"/>
        </item>
        <item>
            <title><![CDATA[ಮಗಳು ವೈಶಾಲಿ ಜನ್ಮದಿನಕ್ಕೆ ಮೈಸೂರು ಆನೆ ದತ್ತು ಕೊಡಿಸಿದ ಅಪ್ಪ ಶಾಸಕ ವಿನಯ್ ಕುಲಕರ್ಣಿ!]]></title>
            <link>https://kannada.asianetnews.com/karnataka-districts/mysuru-zoo-mla-vinay-kulkarni-daughter-vaishali-adopts-elephant-rs-3-lakh-sat/articleshow-9e66068</link>
            <guid isPermaLink="true">https://kannada.asianetnews.com/karnataka-districts/mysuru-zoo-mla-vinay-kulkarni-daughter-vaishali-adopts-elephant-rs-3-lakh-sat/articleshow-9e66068</guid>
            <pubDate>Fri, 11 Sep 2026 11:36:01 +0530</pubDate>
            <description><![CDATA[ರಾಷ್ಟ್ರೀಯ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ವಿನಯ್ ಕುಲಕರ್ಣಿ ಅವರು ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ 3 ಲಕ್ಷ ರು. ಪಾವತಿಸಿ ಭಾರತೀಯ ಆನೆಯನ್ನು ದತ್ತು ಸ್ವೀಕರಿಸಿದ್ದಾರೆ. ಶಾಸಕ ವಿನಯ್ ಕುಲಕರ್ಣಿ ಅವರ ಪುತ್ರಿ ವೈಶಾಲಿಯವರ ಜನ್ಮದಿನದ ಅಂಗವಾಗಿ ಕುಟುಂಬ ಸಮೇತ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದತ್ತು ಸ್ವೀಕಾರ ನಡೆಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m27gpgrnsx89j7fc2avetrbw,imgname-mla-vinay-kulkarni-vaishali-kulkarni-1789106275093.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಸೆ.11): ಮೈ&lt;/strong&gt;ಸೂರು ನಗರದ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ವಿನಯ್&zwnj; ಕುಲಕರ್ಣಿ ಅವರು 3 ಲಕ್ಷ ರು. ಪಾವತಿಸಿ ಭಾರತೀಯ ಆನೆಯನ್ನು ದತ್ತು ಸ್ವೀಕರಿಸಿದ್ದಾರೆ. ಈ ಮಹತ್ವದ ಕೊಡುಗೆಯನ್ನು ಮೃಗಾಲಯ ಪ್ರಾಧಿಕಾರವು ಶ್ಲಾಘಿಸಿದೆ. ದತ್ತು ಸ್ವೀಕಾದ ವೇಳೆ ಶಾಸಕ ವಿನಯ್&zwnj; ಕುಲಕರ್ಣಿ ಮತ್ತು ಕುಟುಂಬ ವರ್ಗದವರು ಇದ್ದರು.&lt;/p&gt;&lt;p&gt;ಶಾಸಕ ವಿನಯ್ ಕುಲಕರ್ಣಿ ಅವರು ತಮ್ಮ ಮಗಳು ವೈಶಾಲಿ ಅವರ ಜನ್ಮದಿನದ ಅಂಗವಾಗಿ ಕುಟುಂಬ ಸಮೇತರಾಗಿ ಭೇಟಿ ಮಾಡಿದ್ದರು.ಈ ವೇಳೆ ವಿವಿಧೆಡೆ ಸಂಚಾರ ಮಾಡಿದ ನಂತರ ಮೈಸೂರು ಮೃಗಾಲಯಕ್ಕೆ ಭೇಟಿ ಮಾಡಿದ್ದಾರೆ. ಈ ವೇಳೆ ವೈಶಾಲಿ ಕುಲಕರ್ಣಿ ಅವರು ಆನೆಯನ್ನು ದತ್ತು ಸ್ವೀಕಾರ ಮಾಡಿದ್ದಾರೆ. ಇದೇ ವೇಳೆ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಉಳಿದ ಇಬ್ಬರು ಮಕ್ಕಳು ಕೂಡ ಹಾಜರಿದ್ದರು.&lt;/p&gt;&lt;h2&gt;&lt;strong&gt;6 ವರ್ಷಗಳ ಬಳಿಕ ಧಾರವಾಡ ಪ್ರವೇಶ&lt;/strong&gt;&lt;/h2&gt;&lt;p&gt;ಇನ್ನು ಶಾಸಕ ವಿನಯ್ ಕುಲಕರ್ಣಿ ಅವರು ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊ*ಲೆ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಆದರೆ, ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದು, ಬರೋಬ್ಬರಿ 6 ವರ್ಷಗಳ ಬಳಿಕ ತಮ್ಮ ಸ್ವಂತ ಕ್ಷೇತ್ರ ಧಾರವಾಡಕ್ಕೆ ಪ್ರವೇಶ ಕೊಟ್ಟಿದ್ದಾರೆ. ಈ ಮೂಲಕ ಸುಮಾರು 6 ವರ್ಷಗಳ ಬಳಿಕ ತಮ್ಮ ಸ್ವಂತ ಊರಿನಲ್ಲಿ ಕುಟುಂಬದೊಂದಿಗೆ ಸಮಯ ಕಳೆದಿದ್ದಾರೆ. ಇದೀಗ ಎಲ್ಲರೊಂದಿಗೆ ಮೈಸೂರು ಕಡೆಗೆ ಪ್ರವಾಸ ಬಂದಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mysuru-zoo-mla-vinay-kulkarni-daughter-vaishali-adopts-elephant-rs-3-lakh-sat/articleshow-9e66068"/>
        </item>
        <item>
            <title><![CDATA[ಧಾರವಾಡದಲ್ಲಿ ಎಬಿವಿಪಿ, ಆರ್‌ಎಸ್ಎಸ್ ಕಾರ್ಯಕರ್ತರ ಬಂಧನ, ಠಾಣೆಗೆ ಧಾವಿಸಿದ ಶಾಸಕ ಬೆಲ್ಲದ್]]></title>
            <link>https://kannada.asianetnews.com/karnataka-districts/abvp-and-rss-workers-arrested-in-dharwad-mla-arvind-bellad-rushes-to-police-station/articleshow-abphtei</link>
            <guid isPermaLink="true">https://kannada.asianetnews.com/karnataka-districts/abvp-and-rss-workers-arrested-in-dharwad-mla-arvind-bellad-rushes-to-police-station/articleshow-abphtei</guid>
            <pubDate>Sun, 30 Aug 2026 19:45:40 +0530</pubDate>
            <description><![CDATA[&lt;p&gt;ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ. ಎಬಿವಿಪಿ, ಆರ್&zwnj;ಎಸ್ಎಸ್ ಕಾರ್ಯಕರ್ತರ ಬಂಧನಕ್ಕೆ ಆಕ್ರೋಶಗಳು ಹೆಚ್ಚಾಗುತ್ತಿದೆ. ಠಾಣೆಗೆ ಶಾಸಕ ಅರವಿಂದ್ ಬೆಲ್ಲದ್ ಬೇಟಿ ನೀಡಿ ಪೊಲೀಸ್ ಕ್ರಮ ಪ್ರಶ್ನಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m19gbb37xwkjxx01808j2n02,imgname-arvind-bellad-1788099275879.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ (ಆ.30)&lt;/strong&gt; ಧಾರವಾಡದಲ್ಲಿ ಎಬಿವಿಪಿ, ಆರ್&zwnj;ಎಸ್ಎಸ್ ಕಾರ್ಯಕರ್ತರ ಬಂಧನ ಇದೀಗ ತೀವ್ರ ಕೋಲಾಹಲ ಸೃಷ್ಟಿಸಿದೆ. ನಟ ಪ್ರಕಾಶ್ ಕಾರ್ಯಕ್ರಮ ವಿಚಾರದಲ್ಲಿ ಶುರುವಾದ ಜಟಾಪಟಿ ಬೆನ್ನಲ್ಲೇ ಪೊಲೀಸರು ಆರ್&zwnj;ಎಸ್ಎಸ್ ಹಾಗೂ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಶಹರ ಪೊಲೀಸ್ ಠಾಣೆಗೆ ಧಾವಿಸಿದ ಶಾಸಕ ಅರವಿಂದ್ ಬೆಲ್ಲದ್ ಆಕ್ರೋಶ ಹೊರಹಾಕಿದ್ದಾರೆ. ಆರ್&zwnj;ಎಸ್ಎಸ್&zwnj;ಗೆ ದಿಕ್ಕಾರ್ ಕೂಗಿದವರನ್ನು ಬಂಧನ ಮಾಡಿಲ್ಲ ಯಾಕೆ ಎಂದು ಬೆಲ್ಲದ್ ಪೊಲೀಸರ ಪ್ರಶ್ನಿಸಿದ್ದಾರೆ. ಇದೇ ವೇಳೆ ಗಾಯಗೊಂಡ ಕಾರ್ಯಕರ್ತರನ್ನು ಅರವಿಂದ್ ಬೆಲ್ಲದ್ ಬೇಟಿ ಮಾಡಿದ್ದಾರೆ.&lt;/p&gt;&lt;h2&gt;ಏನಿದು ಗಲಾಟೆ&lt;/h2&gt;&lt;p&gt;ಧಾರವಾಡದ ವಿದ್ಯಾವರ್ತನ ಸಂಘದಲ್ಲಿ ಆಯೋದಿಸಿದ್ದ ಮನುಷ್ಯತ್ವದೆಡೆಗೆ ಸಮುದಾಯ ಕಾರ್ಯಕ್ರಮದಲ್ಲಿ ವಿವಾದ ಶುರುವಾಗಿದೆ. ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಲು ಮುಂದಾದ ಬಿಜೆಪಿ ಕಾರ್ಯಕರ್ತನನ್ನು ಹೊರಗೆ ಕಳುಹಿಸಲಾಗಿದೆ. ಆಯೋಜಕರ ನಡೆ, ಕಾರ್ಯಕ್ರಮದ ವಿರುದ್ಧ ಬಿಜೆಪಿ, ಎಬಿವಿಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಆಯೋಜಕರು ಹಾಗೂ ಬಿಜೆಪಿ ಕಾರ್ಯಕರ್ತನ ನಡುವೆ ವಾಗ್ವಾದ ತೀವ್ರಗೊಂಡಿದೆ. ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಪರಿಣಾಮ ಪ್ರಕಾಶ್ ರಾಜ್&zwnj;ಗೆ ಘೇರಾವ್ ಹಾಕಲು ಎಬಿವಿಪಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ಉದ್ವಿಘ್ನಗೊಂಡು ಜಪಾಟಿ ನಡೆದಿದೆ.ಇತ್ತ ಪೊಲೀಸರು ಎಬಿವಿಪಿ, ಆರ್&zwnj;ಎಸ್ಎಸ್, ಬಿಜೆಪಿ ಕಾರ್ಯಕರ್ತರ ಬಂಧಿಸಿದ್ದಾರೆ.&lt;/p&gt;&lt;p&gt;ಪ್ರಕಾಶ್ ರಾಜ್&zwnj;ಗೆ ಧಿಕ್ಕಾರ ಕೂಗಿದ ಕಾರಣಕ್ಕೆ ಕಾರ್ಯಕರ್ತರ ಅರೆಸ್ಟ್ ಮಾಡೋದಾದರೆ, ಆರ್&zwnj;ಎಸ್ಎಸ್&zwnj;ಗೆ ಧಿಕ್ಕಾರ ಕೂಗಿದವರನ್ನು ಯಾಕೆ ಬಂಧಿಸಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ಪ್ರಶ್ನಿಸಿದ್ದಾರೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ, ಸಮಾಜ ವಿರೋಧಿ, ಧರ್ಮ ವಿರೋಧಿ ಪ್ರಕಾಶ್ ರಾಜ್ ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಕೆಲವರು ಆರ್&zwnj;ಎಸ್ಎಸ್ ವಿರುದ್ದ ಘೋಷಣೆ ಕೂಗಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ನಮ್ಮವರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಅರವಿಂದ್ ಬೆಲ್ಲದ್ ಆಕ್ರೋಶ ಹೊರಹಾಕಿದ್ದಾರೆ. ಈ ಸರ್ಕಾರಕ್ಕೆ ಏನು ಹೇಳಿದರೂ ಕೇಳುವುದಿಲ್ಲ. ಮಾನವ ಹಕ್ಕು ಆಯೋಗಕ್ಕೆ ಎಬಿವಿಪಿ ಕಾರ್ಯಕರ್ತನ ಮೆಲೆ ಹಲ್ಲೆ ಮಾಡಿರುವ ವಿಡಿಯೋ ಕೊಡುತ್ತೆವೆ ಎಂದು ಅರವಿಂದ್ ಬೆಲ್ಲದ್ ಎಚ್ಚರಿಸಿದ್ದಾರೆ.&lt;/p&gt;&lt;p&gt;ಘಟನೆಯಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಭಾರತ್ ಮಾತಾ ಕಿ ಜೈ ಘೋಷಣೆಗಳು ಮೊಳಗಿದೆ. ಮತ್ತೊಂದೆಡೆ ಆರ್&zwnj;ಎಸ್ಎಸ್ ದಿಕ್ಕಾರ ಘೋಷಣೆಗಳು ಮೊಳಗಿದೆ. ಶಹರ ಪೊಲೀಸ್ ಠಾಣೆ ಮುಂದೆ ಅರವಿಂದ್ ಬೆಲ್ಲದ್ ಸೇರಿದಂತೆ ಕಾರ್ಯಕರ್ತರು ಜಮಾಯಿಸಿ ಕ್ರಮ ಖಂಡಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಬಿಗು ಬಂದೋಬಸ್ತ್ ನಡೆಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/abvp-and-rss-workers-arrested-in-dharwad-mla-arvind-bellad-rushes-to-police-station/articleshow-abphtei"/>
        </item>
        <item>
            <title><![CDATA[ಹುಬ್ಬಳ್ಳಿ ಗಣೇಶೋತ್ಸವ: ಫ್ಲೈಓವರ್ ದಾಟಲಿವೆಯೇ ಬೃಹತ್ ಗಣಪತಿಗಳು?  ಪರ‍್ಯಾಯ ಮಾರ್ಗ]]></title>
            <link>https://kannada.asianetnews.com/karnataka-districts/hubballi-ganeshotsva-alternative-route-for-4-big-ganesha-idols-flyover-under-construction-mrq/articleshow-ali6fug</link>
            <guid isPermaLink="true">https://kannada.asianetnews.com/karnataka-districts/hubballi-ganeshotsva-alternative-route-for-4-big-ganesha-idols-flyover-under-construction-mrq/articleshow-ali6fug</guid>
            <pubDate>Sun, 06 Sep 2026 06:30:32 +0530</pubDate>
            <description><![CDATA[ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್, ಗಣೇಶ ವಿಸರ್ಜನಾ ಮೆರವಣಿಗೆಗೆ ಅಡ್ಡಿಯಾಗುವುದಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸ್ಪಷ್ಟಪಡಿಸಿದ್ದಾರೆ. 18 ಅಡಿ ಎತ್ತರದವರೆಗಿನ ಗಣಪತಿಗಳು ಹಳೆಯ ಮಾರ್ಗದಲ್ಲೇ ಸಾಗಲಿದ್ದು, ಅದಕ್ಕಿಂತ ಎತ್ತರದ ನಾಲ್ಕು ಬೃಹತ್ ಗಣಪತಿಗಳಿಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1s6ra3aqkrbb7j65wem4b1p,imgname-hubballi-1788626085994.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ: ಗಣೇಶ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಚೆನ್ನಮ್ಮ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಮುಂಭಾಗ ನಿರ್ಮಿಸುತ್ತಿರುವ ಫ್ಲೈಓವರ್ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಶನಿವಾರ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.&lt;/p&gt;&lt;h2&gt;&lt;strong&gt;ನಾಲ್ಕು ಬೃಹತ್ ಗಣಪತಿಗಳಿಗೆ ಮಾತ್ರ ಪರ&zwj;್ಯಾಯ ಮಾರ್ಗ&lt;/strong&gt;&lt;/h2&gt;&lt;p&gt;ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಲೈಓವರ್&zwnj;ನಿಂದ 16ರಿಂದ 18 ಅಡಿ ಎತ್ತರದ ಗಣಪತಿಗಳ ವಿಸರ್ಜನಾ ಮೆರವಣಿಗೆಗೆ ಯಾವುದೇ ತೊಂದರೆಯಾಗುವುದಿಲ್ಲ. 18 ಅಡಿಗೂ ಎತ್ತರದ ನಾಲ್ಕು ಬೃಹತ್ ಗಣಪತಿಗಳಿಗೆ ಮಾತ್ರ ಪರ&zwj;್ಯಾಯ ಮಾರ್ಗ ಕಲ್ಪಿಸಲಾಗುವುದು ಎಂದರು.&lt;/p&gt;&lt;p&gt;ಹುಬ್ಬಳ್ಳಿಯ ಗಣೇಶೋತ್ಸವ ರಾಜ್ಯದಲ್ಲೇ ವಿಜೃಂಭಣೆಯಿಂದ ನಡೆಯುತ್ತಿದ್ದು, ಈ ಬಾರಿ 25 ಅಡಿಗೂ ಎತ್ತರದ 3-4 ಬೃಹತ್ ಗಣಪತಿಗಳ ವಿಸರ್ಜನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ, ಪೊಲೀಸ್, ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿಗೆ ಮಾರ್ಗಗಳ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಗಣಪತಿಗಳ ವಿಸರ್ಜನೆ&lt;/strong&gt;&lt;/h3&gt;&lt;p&gt;ಸೆ. 14ರಂದು ಪ್ರತಿಷ್ಠಾಪನೆಯಾಗುವ 5 ದಿನಗಳ ಗಣಪತಿಗಳ ವಿಸರ್ಜನೆ ಸೆ. 18ರಿಂದ ಆರಂಭವಾಗಲಿದೆ. 7 ದಿನಗಳ ಗಣಪತಿಗಳ ವಿಸರ್ಜನೆ ಸೆ. 20ರಂದು, 9 ದಿನಗಳ ಗಣಪತಿಗಳ ವಿಸರ್ಜನೆ ಸೆ. 22ರಂದು ಹಾಗೂ 12 ದಿನಗಳ ಗಣಪತಿಗಳ ವಿಸರ್ಜನೆ ಸೆ. 25ರಂದು ನಡೆಯಲಿದೆ. ಈ ವೇಳೆ ಬೃಹತ್ ಗಣಪತಿಗಳಿಗೆ ವಿಶೇಷ ಮಾರ್ಗ ಕಲ್ಪಿಸಲಾಗುವುದು ಎಂದರು.&lt;/p&gt;&lt;p&gt;ಪ್ರತಿ ವರ್ಷದಂತೆ 16ರಿಂದ 18 ಅಡಿ ಎತ್ತರದ ಗಣಪತಿಗಳು ಚೆನ್ನಮ್ಮ ವೃತ್ತದ ಮೂಲಕವೇ ಸಾಗಲಿವೆ. 18 ಅಡಿಗೂ ಎತ್ತರದ ನಾಲ್ಕು ಗಣಪತಿಗಳನ್ನು ದೇಶಪಾಂಡೆ ನಗರದ ಮೇಲ್ಭಾಗದ ಮೂಲಕ ಪರ&zwj;್ಯಾಯ ಮಾರ್ಗ ಕಲ್ಪಿಸಲಾಗಿದ್ದು, ಅಗತ್ಯವಿದ್ದಲ್ಲಿ ತಾತ್ಕಾಲಿಕ ಡಿವೈಡರ್&zwnj;ಗಳನ್ನು ಒಂದು ದಿನ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.&lt;/p&gt;&lt;p&gt;ಈ ವೇಳೆ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಡಿಸಿಪಿಗಳಾದ ರವೀಶ್ ಸಿ.ಆರ್., ಶ್ರುತಿ ಎನ್.ಎಸ್., ಆರ್&zwnj;ಎಫ್&zwnj;ಒ ಆರ್.ಎಸ್. ಉಪ್ಪಾರ ಸೇರಿದಂತೆ ಮಹಾಮಂಡಳದ ಪದಾಧಿಕಾರಿಗಳಾದ ಎಸ್&zwnj;.ಎಸ್. ಕಮಡೊಳ್ಳಿಶೆಟ್ಡರ್, ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಚನ್ನಬಸಪ್ಪ ಧಾರವಾಡಶೆಟ್ಟರ, ಮುಖಂಡರಾದ ರವಿ ನಾಯ್ಕ, ಪರಶುರಾಮ ಪೂಜಾರ ಸೇರಿದಂತೆ ಹಲವರಿದ್ದರು.&lt;/p&gt;&lt;p&gt;&lt;strong&gt;ಅಧಿಕಾರಿಗಳೊಂದಿಗೆ ಪರಿಶೀಲನೆ&lt;/strong&gt;&lt;/p&gt;&lt;p&gt;ಚೆನ್ನಮ್ಮ ವೃತ್ತದ ಬಳಿ ಫ್ಲೈಓವರ್&zwnj;ನಿಂದ ಗಣೇಶ ಮೆರವಣಿಗೆಗೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಶಾಸಕ ಟೆಂಗಿನಕಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಸ್ಕಾಂನ ಲ್ಯಾಡರ್&zwnj; ಬಳಸಿ ಫ್ಲೈಓವರ್&zwnj;ನ ಎತ್ತರ ಅಳೆಯಲಾಯಿತು. ಯಾವ ಮಾರ್ಗದಲ್ಲಿ ಮೆರವಣಿಗೆ ನಡೆಸಿದರೆ ಸುಗಮವಾಗಲಿದೆ ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.&lt;/p&gt;&lt;p&gt;&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hubballi-ganeshotsva-alternative-route-for-4-big-ganesha-idols-flyover-under-construction-mrq/articleshow-ali6fug"/>
        </item>
        <item>
            <title><![CDATA[Hubli- Dharwad: ಎನ್. ಶಶಿಕುಮಾರ್ ದಿಢೀರ್ ಎಕ್ಸಿಟ್, ಸ್ಥಳ ರಹಿತ ವರ್ಗಾವಣೆ; ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಭೂಷಣ್ ಗುಲಾಬರಾವ್ ಕಮಿಷನರ್]]></title>
            <link>https://kannada.asianetnews.com/karnataka-districts/hubballi-dharwad-police-commissioner-change-bhushan-gulabrao-appointed-n-shashikumar-transferred-bmk/articleshow-dxfd6a3</link>
            <guid isPermaLink="true">https://kannada.asianetnews.com/karnataka-districts/hubballi-dharwad-police-commissioner-change-bhushan-gulabrao-appointed-n-shashikumar-transferred-bmk/articleshow-dxfd6a3</guid>
            <pubDate>Sat, 29 Aug 2026 17:52:28 +0530</pubDate>
            <description><![CDATA[ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಸ್ಥಳ ನಿಯೋಜಿಸದೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಬೋರ್ಸೆ ಭೂಷಣ್ ಗುಲಾಬರಾವ್ ಅವರನ್ನು ನೂತನ ಕಮಿಷನರ್ ಆಗಿ ನೇಮಿಸಲಾಗಿದೆ. ಸೈಬರ್ ಕ್ರೈಮ್, ಡ್ರಗ್ಸ್ ಜಾಲದಂತಹ ಸವಾಲುಗಳನ್ನು ಎದುರಿಸಲಿರುವ ಗುಲಾಬರಾವ್ ಅವರ ಮೇಲೆ ಅವಳಿ ನಗರದ ಜನತೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m16qgsbssgsgdas4ctspme2a,imgname-hubballi-dharwad-commissioner-1788006131065.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್&zwnj;ನಲ್ಲಿ ಮಹತ್ವದ ಬದಲಾವಣೆ: ನೂತನ ಕಮಿಷನರ್ ಆಗಿ ಬೋರ್ಸೆ ಭೂಷಣ್ ಗುಲಾಬರಾವ್ ನೇಮಕಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ನಡೆದಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಬೋರ್ಸೆ ಭೂಷಣ್ ಗುಲಾಬರಾವ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಈ ಹಿಂದೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್. ಶಶಿಕುಮಾರ್ ಅವರನ್ನು ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿದೆ. ಆದರೆ, ಶಶಿಕುಮಾರ್ ಅವರಿಗೆ ಯಾವುದೇ ಹೊಸ ಸ್ಥಳವನ್ನು ನಿಯೋಜಿಸದೆ ಸರ್ಕಾರ ಆದೇಶ ಹೊರಡಿಸಿರುವುದು ಪೊಲೀಸ್ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ವರ್ಗಾವಣೆ ಮತ್ತು ಆಡಳಿತಾತ್ಮಕ ಹಿನ್ನೆಲೆ!&lt;/strong&gt;&lt;/h2&gt;&lt;p&gt;ಶಶಿಕುಮಾರ್ ಅವರ ವರ್ಗಾವಣೆ ಪ್ರಕ್ರಿಯೆಯು ಸರ್ಕಾರದ ನಿಯಮಿತ ಆಡಳಿತಾತ್ಮಕ ವರ್ಗಾವಣೆಗಳ ಭಾಗವಾಗಿದೆ ಎಂದು ಹೇಳಲಾಗುತ್ತಿದ್ದರೂ, ಅವರಿಗೆ ಯಾವುದೇ ಹೊಸ ಹುದ್ದೆ ತೋರಿಸದಿರುವುದು ಈಗ ಚರ್ಚೆಗೆ ಪುಷ್ಠಿ ನೀಡಿದೆ. ಇದೇ ಸಮಯದಲ್ಲಿ, ಬೆಳಗಾವಿ ನಗರದ ಪೊಲೀಸ್ ಕಮಿಷನರ್ ಆಗಿ ಹಾಗೂ ಸೈಬರ್ ಕ್ರೈಮ್ ವಿಭಾಗಗಳಲ್ಲಿ ಸುದೀರ್ಘ ಅನುಭವ ಹೊಂದಿರುವ ಬೋರ್ಸೆ ಭೂಷಣ್ ಗುಲಾಬರಾವ್ ಅವರಿಗೆ ಹುಬ್ಬಳ್ಳಿ-ಧಾರವಾಡದ ಜವಾಬ್ದಾರಿಯನ್ನು ವಹಿಸಲಾಗಿದೆ.&lt;/p&gt;&lt;h3&gt;&lt;strong&gt;ನೂತನ ಕಮಿಷನರ್ ಬೋರ್ಸೆ ಭೂಷಣ್ ಗುಲಾಬರಾವ್ ಪರಿಚಯ!&lt;/strong&gt;&lt;/h3&gt;&lt;p&gt;ಬೋರ್ಸೆ ಭೂಷಣ್ ಗುಲಾಬರಾವ್ ಅವರು 2009ರ ಬ್ಯಾಚ್&zwnj;ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ಇವರು ಕರ್ನಾಟಕ ಕೆಡರ್&zwnj;ನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕಠಿಣ ನಿರ್ಧಾರಗಳು ಮತ್ತು ತಾಂತ್ರಿಕ ಆಧಾರಿತ ತನಿಖಾ ಶೈಲಿಯಿಂದ ಇಲಾಖೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅಪರಾಧ ವಿಭಾಗ, ಸೈಬರ್ ಕ್ರೈಮ್, ನಾರ್ಕೋಟಿಕ್ಸ್ ಮತ್ತು ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಇವರು ಅಪಾರ ಪರಿಣತಿ ಹೊಂದಿದ್ದಾರೆ. ಈ ಹಿಂದೆ ವಿವಿಧ ಜಿಲ್ಲೆಗಳಲ್ಲಿ ಎಸ್&zwnj;ಪಿ ಹಾಗೂ ಸೈಬರ್ ಅಪರಾಧ ತನಿಖಾ ದಳದ (CID) ಡಿಐಜಿಯಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ.&lt;/p&gt;&lt;h3&gt;&lt;strong&gt;ಮುಂದಿರುವ ಸವಾಲುಗಳು ಮತ್ತು ಆದ್ಯತೆಗಳು!&lt;/strong&gt;&lt;/h3&gt;&lt;p&gt;ಹುಬ್ಬಳ್ಳಿ-ಧಾರವಾಡ ವಾಣಿಜ್ಯ ನಗರಿಯಾಗಿದ್ದು, ಇಲ್ಲಿನ ಕಾನೂನು ಸುವ್ಯವಸ್ಥೆ ನಿರ್ವಹಿಸುವುದು ಯಾವುದೇ ಅಧಿಕಾರಿಗೆ ದೊಡ್ಡ ಸವಾಲಾಗಿದೆ. ನೂತನ ಕಮಿಷನರ್ ಭೂಷಣ್ ಅವರ ಮುಂದೆ ಹಲವು ಪ್ರಮುಖ ಸವಾಲುಗಳಿವೆ. ಅವುಗಳೆನೆಂದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನ್&zwnj;ಲೈನ್ ವಂಚನೆಗಳನ್ನು ತಡೆಯಲು ತಮ್ಮ ಸೈಬರ್ ಪರಿಣತಿಯನ್ನು ಬಳಸಿಕೊಳ್ಳಬೇಕಿದೆ. ಇದಲ್ಲದೇ, ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಡ್ರಗ್ಸ್ ಮತ್ತು ಮಾದಕ ದ್ರವ್ಯ ಜಾಲವನ್ನು ಸಂಪೂರ್ಣವಾಗಿ ಹತ್ತಿಕ್ಕುವುದು ಇವರ ಪ್ರಮುಖ ಆದ್ಯತೆಯಾಗಲಿದೆ.&lt;/p&gt;&lt;h3&gt;&lt;strong&gt;ಸಂಚಾರ ದಟ್ಟಣೆ ನಿರ್ವಹಣೆ!&lt;/strong&gt;&lt;/h3&gt;&lt;p&gt;ಅವಳಿ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು. ಹಾಗೂ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವೆ ನಂಬಿಕೆ ಹೆಚ್ಚಿಸಿ, ಜನಸ್ನೇಹಿ ವಾತಾವರಣ ನಿರ್ಮಿಸುವುದು. ಬೋರ್ಸೆ ಭೂಷಣ್ ಗುಲಾಬರಾವ್ ಅವರ ಆಡಳಿತ ವೈಖರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯವಿದೆ. ಅವಳಿ ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಲಗಾಮು ಹಾಕಲು ಮತ್ತು ರೌಡಿಸಂ ಮುಕ್ತ ವಾತಾವರಣ ನಿರ್ಮಿಸಲು ಹೊಸ ಕಮಿಷನರ್ ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳಲಿರುವ ನೂತನ ಕಮಿಷನರ್, ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿ ಹಾಗೂ ಸುರಕ್ಷತೆಗೆ ಹೊಸ ಆಯಾಮ ನೀಡಲಿದ್ದಾರೆ ಎನ್ನಲಾಗಿದೆ.&lt;/p&gt;]]></content:encoded>
            <category>dharwad</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/hubballi-dharwad-police-commissioner-change-bhushan-gulabrao-appointed-n-shashikumar-transferred-bmk/articleshow-dxfd6a3"/>
        </item>
        <item>
            <title><![CDATA[Dharwad: ಕೋನರೆಡ್ಡಿ ಎಸ್ಕಾರ್ಟ್ ವಿವಾದ; ಗೃಹ ಇಲಾಖೆ ಸೈಲೆಂಟ್, ಕಾರ್ಯಕರ್ತ ವೈಲೆಂಟ್! ಪೈಸೆ ಪೈಸೆಯೂ ವಸೂಲಿ ಮಾಡಿ ಎಂದು ಲೋಕಾಯುಕ್ತಕ್ಕೆ ದೂರು!]]></title>
            <link>https://kannada.asianetnews.com/karnataka-districts/mla-nh-konaraddi-police-escort-vehicle-misuse-lokayukta-kshrc-complaint-public-funds-diesel-xpense-recovery-bmk/articleshow-et9cq1g</link>
            <guid isPermaLink="true">https://kannada.asianetnews.com/karnataka-districts/mla-nh-konaraddi-police-escort-vehicle-misuse-lokayukta-kshrc-complaint-public-funds-diesel-xpense-recovery-bmk/articleshow-et9cq1g</guid>
            <pubDate>Sat, 05 Sep 2026 11:06:46 +0530</pubDate>
            <description><![CDATA[&lt;p&gt;ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಕಾನೂನುಬಾಹಿರವಾಗಿ ಪೊಲೀಸ್ 'ಎಸ್ಕಾರ್ಟ್' ವಾಹನ ಬಳಸಿಕೊಂಡಿದ್ದಾರೆಂಬ ಆರೋಪದ ಮೇಲೆ ಲೋಕಾಯುಕ್ತ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಮಾಬುಸಾಬ್ ಯರಗುಪ್ಪಿ ಅವರು ಈ ದೂರು ಸಲ್ಲಿಸಿದ್ದು, ಶಾಸಕರಿಂದಲೇ ವಾಹನದ ಸಂಪೂರ್ಣ ವೆಚ್ಚವನ್ನು ವಸೂಲಿ ಮಾಡುವಂತೆ ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1r11v01gxjf8d64rs128sk0,imgname-nh-konareddy-1788586552321.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡ: ನವಲಗುಂದ ಕ್ಷೇತ್ರದ ಜಾತ್ಯತೀತ ಜನತಾದಳ (ಜೆಡಿಎಸ್) ಹಾಗೂ ಪ್ರಸ್ತುತ ಕಾಂಗ್ರೆಸ್ ಶಾಸಕರಾಗಿರುವ ಎನ್.ಹೆಚ್. ಕೋನರಡ್ಡಿ ಅವರು ತಮಗಿಲ್ಲದ ಅಧಿಕಾರವನ್ನು ಚಲಾಯಿಸಿ, ಕಾನೂನುಬಾಹಿರವಾಗಿ ಪೊಲೀಸ್ 'ಎಸ್ಕಾರ್ಟ್' (Escort) ವಾಹನಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಶಾಸಕರ ವಿರುದ್ಧ ಲೋಕಾಯುಕ್ತ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (KSHRC) ಅಧಿಕೃತ ದೂರು ದಾಖಲಾಗಿದ್ದು, ಉತ್ತರ ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಕಾರ್ಯಕರ್ತ ಮಾಬುಸಾಬ್ ಯರಗುಪ್ಪಿ ಅವರು ಈ ದೂರನ್ನು ಸಲ್ಲಿಸಿದವರಾಗಿದ್ದು, ಶಾಸಕರು ಸಾರ್ವಜನಿಕರ ತೆರಿಗೆ ಹಣವನ್ನು ತಮ್ಮ ವೈಯಕ್ತಿಕ ವೈಭವಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಗೃಹ ಇಲಾಖೆಯ ಮೌನ, ಕಮಿಷನ್ ಮೆಟ್ಟಿಲೇರಿದ ದೂರು!&lt;/strong&gt;&lt;/h2&gt;&lt;p&gt;ಮಾಬುಸಾಬ್ ಯರಗುಪ್ಪಿ ಅವರು ಈ ಹಿಂದೆ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರೀಕ್ಷಕರಿಗೆ (IGP) ಸುದೀರ್ಘ ದೂರು ಸಲ್ಲಿಸಿದ್ದರು. ನಿಯಮಾವಳಿಗಳ ಪ್ರಕಾರ, ಸಚಿವ ಸ್ಥಾನ ಅಥವಾ ನಿರ್ದಿಷ್ಟ ಸಾಂವಿಧಾನಿಕ ಉನ್ನತ ಹುದ್ದೆಯಲ್ಲಿರುವವರಿಗೆ ಹಾಗೂ ಜೀವಾಪಾಯದ ಭೀತಿಯಿರುವ ಗಣ್ಯರಿಗೆ ಮಾತ್ರ ಭದ್ರತೆಯ ದೃಷ್ಟಿಯಿಂದ ಪೊಲೀಸ್ ಎಸ್ಕಾರ್ಟ್ ವಾಹನ ಮತ್ತು ಸಿಬ್ಬಂದಿಯನ್ನು ನೀಡಲಾಗುತ್ತದೆ. ಆದರೆ, ಶಾಸಕ ಕೋನರಡ್ಡಿ ಅವರು ಯಾವುದೇ ಮಾನ್ಯತೆ ಅಥವಾ ಸರ್ಕಾರಿ ಸಚಿವರ ದರ್ಜೆ ಇಲ್ಲದಿದ್ದರೂ ಅಕ್ರಮವಾಗಿ ಪೊಲೀಸ್ ವಾಹನಗಳನ್ನು ತಮ್ಮ ಬೆಂಗಾವಲಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.&lt;/p&gt;&lt;h3&gt;&lt;strong&gt;ಸೈಲೆಂಟಾದ ಗೃಹ ಇಲಾಖೆ!&lt;/strong&gt;&lt;/h3&gt;&lt;p&gt;ಆದರೆ, ಗೃಹ ಇಲಾಖೆ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ಈ ದೂರಿನ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸದೆ, ಆಡಳಿತಾರೂಢ ಪ್ರಭಾವಕ್ಕೆ ಒಳಗಾಗಿ ಸುಮ್ಮನಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗೃಹ ಇಲಾಖೆಯಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ, ದೂರುದಾರರು ಇದೀಗ ಲೋಕಾಯುಕ್ತ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವ ಮೂಲಕ ಶಾಸಕರ ವಿರುದ್ಧ ತನಿಖೆಗೆ ಪಟ್ಟು ಹಿಡಿದಿದ್ದಾರೆ.&lt;/p&gt;&lt;h3&gt;&lt;strong&gt;'ಪೈಸೆ ಪೈಸೆಯನ್ನೂ ಶಾಸಕರಿಂದಲೇ ವಸೂಲಿ ಮಾಡಿ'!&lt;/strong&gt;&lt;/h3&gt;&lt;p&gt;ದೂರಿನಲ್ಲಿ ಅತ್ಯಂತ ಮುಖ್ಯವಾಗಿ ಸಾರ್ವಜನಿಕರ ಹಣದ ದುರ್ಬಳಕೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ. ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಕಾನೂನುಬಾಹಿರವಾಗಿ ಬಳಸಿದ ಬೆಂಗಾವಲು ವಾಹನಗಳಿಗೆ ವೆಚ್ಚವಾದ ಪೂರ್ತಿ ಹಣವನ್ನು ಅವರ ಖಾಸಗಿ ಜೇಬಿನಿಂದಲೇ ಭರಿಸಬೇಕು ಎಂದು ಮಾಬುಸಾಬ್ ಒತ್ತಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ಡೀಸೆಲ್ ಬಿಲ್ ವಸೂಲಿ; &lt;/strong&gt;ಶಾಸಕರ ಎಸ್ಕಾರ್ಟ್ ವಾಹನ ಸಂಚಾರಕ್ಕಾಗಿ ಸರ್ಕಾರಿ ಖಜಾನೆಯಿಂದ ವೆಚ್ಚವಾದ ಸಾವಿರಾರು ರೂಪಾಯಿ ಡೀಸೆಲ್ ಹಣ.&lt;/p&gt;&lt;p&gt;&lt;strong&gt;ಸಿಬ್ಬಂದಿ ವೇತನ; &lt;/strong&gt;ವಾಹನದ ಜೊತೆ ನಿಯೋಜನೆಗೊಂಡಿದ್ದ ಚಾಲಕ ಹಾಗೂ ಪೊಲೀಸ್ ಸಿಬ್ಬಂದಿಯ ಕರ್ತವ್ಯದ ಅವಧಿಯ ವೇತನ.&lt;/p&gt;&lt;p&gt;&lt;strong&gt;ರಿಪೇರಿ ಮತ್ತು ನಿರ್ವಹಣೆ;&lt;/strong&gt; ಈ ಅವಧಿಯಲ್ಲಿ ವಾಹನದ ಸವಕಳಿ, ರಿಪೇರಿ ಮತ್ತು ಕಾಯ್ದುಕೊಳ್ಳುವಿಕೆಗೆ ತಗುಲಿದ ಸಂಪೂರ್ಣ ವೆಚ್ಚ.&lt;/p&gt;&lt;p&gt;ಈ ಎಲ್ಲಾ ವೆಚ್ಚಗಳನ್ನು ಪೈಸೆ ಪೈಸೆಯಾಗಿ ಲೆಕ್ಕ ಹಾಕಿ, ಶಾಸಕ ಎನ್.ಹೆಚ್. ಕೋನರಡ್ಡಿ ಅವರಿಂದಲೇ ವಸೂಲಿ ಮಾಡಿ ಪುನಃ ಸರ್ಕಾರದ ಖಜಾನೆಗೆ ಜಮೆ ಮಾಡಬೇಕು ಎಂದು ದೂರುದಾರರು ಆಯೋಗವನ್ನು ಆಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಹೆಚ್ಚಿದ ರಾಜಕೀಯ ಕಾವು!&lt;/strong&gt;&lt;/h3&gt;&lt;p&gt;ಸಾಮಾನ್ಯ ಜನ ಸಾಮಾನ್ಯರು ಕಟ್ಟುವ ಆಸ್ತಿ ತೆರಿಗೆ, ಜಿಎಸ್&zwnj;ಟಿ ಮತ್ತು ವಿವಿಧ ರೂಪದ ತೆರಿಗೆ ಹಣವನ್ನು ಜನಪ್ರತಿನಿಧಿಗಳು ತಮ್ಮ 'ವಿಐಪಿ ಕಲ್ಚರ್' ಹಾಗೂ ವೈಯಕ್ತಿಕ ದೌಲತ್ತಿಗಾಗಿ ಬಳಸುವುದು ಕಾನೂನುಬಾಹಿರ ಮತ್ತು ನೈತಿಕತೆಗೆ ಬಾಹಿರ. ಈ ರೀತಿಯ ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆಗೆ ತಕ್ಷಣವೇ ಬ್ರೇಕ್ ಬೀಳಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲೂ ಕೇಳಿಬರುತ್ತಿದೆ.&lt;/p&gt;&lt;h3&gt;&lt;strong&gt;ಶಾಸಕರಿಗೆ ಮುಜುಗರ!&lt;/strong&gt;&lt;/h3&gt;&lt;p&gt;ಲೋಕಾಯುಕ್ತಕ್ಕೆ ದೂರು ದಾಖಲಾಗಿರುವುದರಿಂದ ಶಾಸಕ ಕೋನರಡ್ಡಿ ಅವರಿಗೆ ಮುಜುಗರ ಉಂಟಾಗಿದ್ದು, ತನಿಖಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಗೃಹ ಇಲಾಖೆ ಕಣ್ಣು ಮುಚ್ಚಿ ಕುಳಿತರೂ, ಲೋಕಾಯುಕ್ತ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆಯೇ ಎಂಬುದು ನವಲಗುಂದ ಕ್ಷೇತ್ರದಾದ್ಯಂತ ತೀವ್ರ ಕುತೂಹಲ ಸೃಷ್ಟಿಸಿದೆ.&lt;/p&gt;]]></content:encoded>
            <category>dharwad</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/mla-nh-konaraddi-police-escort-vehicle-misuse-lokayukta-kshrc-complaint-public-funds-diesel-xpense-recovery-bmk/articleshow-et9cq1g"/>
        </item>
        <item>
            <title><![CDATA[ಬಸ್‌ ದರ ಏರಿಕೆ ಮಾಡೋದಲ್ಲ, ಇರೋ ಬಸ್‌ ಸರಿ ಮಾಡಿ: ಮತ್ತೊಮ್ಮೆ ಟಾರ್ಚ್‌ ಬೆಳಕಲ್ಲಿ ಓಡಿದ ಸರ್ಕಾರಿ ಬಸ್‌]]></title>
            <link>https://kannada.asianetnews.com/karnataka-districts/nwkrrtc-bus-headlight-fails-runs-on-mobile-torchlight-dharwad-san/articleshow-ggqrgmz</link>
            <guid isPermaLink="true">https://kannada.asianetnews.com/karnataka-districts/nwkrrtc-bus-headlight-fails-runs-on-mobile-torchlight-dharwad-san/articleshow-ggqrgmz</guid>
            <pubDate>Sun, 06 Sep 2026 08:47:40 +0530</pubDate>
            <description><![CDATA[&lt;p&gt;ಹುಬ್ಬಳ್ಳಿಯಿಂದ ಅತ್ತಿಗೇರಿಗೆ ತೆರಳುತ್ತಿದ್ದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನ ಹೆಡ್&zwnj;ಲೈಟ್&zwnj; ಕೈಕೊಟ್ಟ ಪರಿಣಾಮ, ಚಾಲಕನು ಪ್ರಯಾಣಿಕರ ಮೊಬೈಲ್&zwnj; ಟಾರ್ಚ್&zwnj; ಬೆಳಕಿನಲ್ಲೇ ಬಸ್ಸನ್ನು ಗುಡಗೇರಿ ಮತ್ತು ಅತ್ತಿಗೇರಿಗೆ ಸುರಕ್ಷಿತವಾಗಿ ತಲುಪಿಸಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1tbd8tf66f4nmh56yhxnzm6,imgname-ksrtc-bus-1788664521551.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಕುಂದಗೋಳ (ಧಾರವಾಡ)&lt;/strong&gt;&lt;/p&gt;&lt;p&gt;ಜುಲೈನಲ್ಲಿ ಕಲಬುರಗಿಯಿಂದ ಚಿಂಚೋಳಿವರೆಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸು ಹೆಡ್&zwnj;ಲೈಟ್&zwnj; ಕೆಟ್ಟು ಮೊಬೈಲ್&zwnj; ಟಾರ್ಚ್&zwnj;ನಲ್ಲಿ ಚಲಿಸಿದ ಘಟನೆ ಮಾಸುವ ಮುನ್ನವೇ ಧಾರವಾಡ ಜಿಲ್ಲೆಯಲ್ಲಿಯೂ ಅಂಥದ್ದೇ ಘಟನೆ ಮರುಕಳಿಸಿದೆ. ಈ ಬಾರಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನ ಹೆಡ್&zwnj;ಲೈಟ್&zwnj; ಕೆಟ್ಟುನಿಂತ ಪರಿಣಾಮ ಮೊಬೈಲ್&zwnj; ಟಾರ್ಚ್&zwnj;ನಲ್ಲಿ ಬಸ್ಸು ಸಂಚರಿಸಿದೆ. ಇದು ಸಾರ್ವಜನಿಕ ಸಾರಿಗೆಯ ಸುರಕ್ಷತೆ ವಿಚಾರವಾಗಿ ಸಾಕಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ.&lt;/p&gt;&lt;p&gt;ಶುಕ್ರವಾರ ಸಂಜೆ ಹುಬ್ಬಳ್ಳಿಯಿಂದ ಅತ್ತಿಗೇರಿಗೆ ತೆರಳುತ್ತಿದ್ದ ಬಸ್&zwnj; ರಾತ್ರಿ 8.05ಕ್ಕೆ ಹೊರಟಿತ್ತು. ರಾತ್ರಿ 9.20ಕ್ಕೆ ಗುಡಗೇರಿ ತಲುಪಬೇಕಿದ್ದ ಬಸ್&zwnj; ಸಂಶಿ ನಿಲ್ದಾಣ ಸಮೀಪ ಬರುತ್ತಿದ್ದಂತೆ ಹೆಡ್&zwnj;ಲೈಟ್&zwnj; ಕೈಕೊಟ್ಟಿದೆ. ಇದರಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಚಾಲಕ ಅದನ್ನು ಸರಿಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪರ್ಯಾಯವಾಗಿ ಏನು ಮಾಡಬೇಕೆಂಬ ಗೊಂದಲ ಉಂಟಾಯಿತು. ಬಸ್ಸಿನಲ್ಲಿದ್ದ ಜನರು ಇದು ಕೊನೆಯ ಬಸ್&zwnj; ಆಗಿದ್ದರಿಂದ ಹೇಗಾದರೂ ತಮ್ಮ ಗ್ರಾಮ ತಲುಪಿಸಬೇಕೆಂದು ಕೋರಿದರು.&lt;/p&gt;&lt;p&gt;ಸಂಶಿಯಿಂದ ಗುಡಗೇರಿಗೆ ಸಾಮಾನ್ಯವಾಗಿ 20 ನಿಮಿಷಗಳ ಪ್ರಯಾಣವಿದೆ. ಆದರೆ, ಹೆಡ್&zwnj;ಲೈಟ್&zwnj; ಇಲ್ಲದೆ ಕತ್ತಲಲ್ಲಿ ಸಂಚರಿಸುವುದು ಅಪಾಯಕಾರಿ ಆಗಿದ್ದರಿಂದ ಪ್ರಯಾಣಿಕರು ತಮ್ಮ ಮೊಬೈಲ್&zwnj; ಫೋನ್&zwnj; ಟಾರ್ಚ್&zwnj; ಬೆಳಕು ಆನ್&zwnj; ಮಾಡಿ ಚಾಲಕನಿಗೆ ನೆರವಾದರು. ಮೊಬೈಲ್&zwnj; ಬೆಳಕಿನ ಆಸರೆಯಲ್ಲೇ ಚಾಲಕ ನಿಧಾನವಾಗಿ ಹಾಗೂ ಎಚ್ಚರಿಕೆಯಿಂದ ಬಸ್&zwnj; ಚಲಾಯಿಸಿ, ಸುಮಾರು ಒಂದು ಗಂಟೆ ಪ್ರಯಾಸಪಟ್ಟು ಪ್ರಯಾಣಿಕರನ್ನು ಸುರಕ್ಷಿತವಾಗಿ ಗುಡಗೇರಿ ತಲುಪಿಸಿದರು.&lt;/p&gt;&lt;p&gt;ಬಳಿಕ ಗುಡಗೇರಿಯಿಂದ ಅತ್ತಿಗೇರಿಗೂ ಇದೇ ರೀತಿಯಲ್ಲಿ ಮೊಬೈಲ್&zwnj; ಬೆಳಕಿನ ನೆರವಿನಿಂದ ಸಂಚರಿಸಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಚಾಲಕ ತಿಳಿಸಿದ್ದಾರೆ.&lt;/p&gt;&lt;p&gt;ರಾತ್ರಿ ವೇಳೆ ಗ್ರಾಮೀಣ ಮಾರ್ಗಗಳಿಗೆ ಬಸ್&zwnj;ಗಳನ್ನು ನಿಯೋಜಿಸುವ ಮುನ್ನ ಡಿಪೋದಲ್ಲಿ ಸಮರ್ಪಕ ತಾಂತ್ರಿಕ ತಪಾಸಣೆ ನಡೆಸಬೇಕು. ಸುಸ್ಥಿತಿಯಲ್ಲಿರುವ ಬಸ್&zwnj;ಗಳನ್ನು ಮಾತ್ರ ಸಂಚಾರಕ್ಕೆ ಬಿಡಬೇಕು ಎಂದು ಸ್ಥಳೀಯ ನಿವಾಸಿ ಮೋಹನ್&zwnj; ಬೂದಿಹಾಳ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಸಂಯಮದಿಂದ ಬಸ್&zwnj; ಚಲಾಯಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿದ ಚಾಲಕನ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/nwkrrtc-bus-headlight-fails-runs-on-mobile-torchlight-dharwad-san/articleshow-ggqrgmz"/>
        </item>
        <item>
            <title><![CDATA[ಬಾಗಿಲಲ್ಲಿ ಯಾರೋ ತಂದಿಟ್ಟ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ ಮುಸ್ಲಿಂ ಕುಟುಂಬ]]></title>
            <link>https://kannada.asianetnews.com/karnataka-districts/dharwad-a-divine-surprise-kutubuddin-belagali-welcomes-doorstep-ganesha-with-traditional-hindu-rituals-in-kundgol-mrq/articleshow-hogm1f3</link>
            <guid isPermaLink="true">https://kannada.asianetnews.com/karnataka-districts/dharwad-a-divine-surprise-kutubuddin-belagali-welcomes-doorstep-ganesha-with-traditional-hindu-rituals-in-kundgol-mrq/articleshow-hogm1f3</guid>
            <pubDate>Wed, 16 Sep 2026 08:32:24 +0530</pubDate>
            <description><![CDATA[&lt;p&gt;ಮುಸ್ಲಿಂ ಕುಟುಂಬವೊಂದರ ಮನೆ ಬಾಗಿಲಲ್ಲಿ ಅಪರಿಚಿತರು ಗಣೇಶನ ಮೂರ್ತಿಯನ್ನು ಇಟ್ಟು ಹೋಗಿದ್ದರು. ಈ ಮೂರ್ತಿಯನ್ನು ಕುತುಬುದ್ದೀನ್&zwnj; ಬೆಳಗಲಿ ಅವರ ಕುಟುಂಬವು ಹಿಂದೂ ಸಂಪ್ರದಾಯದಂತೆ ಮನೆಯಲ್ಲೇ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಭಾವೈಕ್ಯತೆ ಮೆರೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2m2g1gt2hxkffkgrszg3309,imgname-dharwad-ganesha-1789527590426.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡ: ಮುಸ್ಲಿಂ ವ್ಯಕ್ತಿಯೊಬ್ಬ ತಮ್ಮ ಮನೆಯ ಬಾಗಿಲು ಬಳಿ ಅಪರಿಚಿತರು ಇಟ್ಟುಹೋಗಿದ್ದ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡುವ ಮೂಲಕ ಭಾವೈಕ್ಯತೆ ಮೆರೆದ ಅಪರೂಪದ ಪ್ರಸಂಗ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಡೆದಿದೆ.&lt;/p&gt;&lt;p&gt;ಗಣೇಶ ಚತುರ್ಥಿಯ ದಿನವಾದ ಸೋಮವಾರ ಬೆಳ್ಳಂಬೆಳಗ್ಗೆ ಯರಗುಪ್ಪಿ ಗ್ರಾಮದ ಕುತುಬುದ್ದೀನ್&zwnj; ಬೆಳಗಲಿ ಅವರ ಮನೆಯ ಬಾಗಿಲಿನ ಹೊರಗೆ ಯಾರೋ ಗಣೇಶನ ವಿಗ್ರಹ ಇಟ್ಟು ಹೋಗಿದ್ದರು. ಬಾಗಿಲು ತೆರೆಯುತ್ತಿದ್ದಂತೆ ಗಣೇಶನ ವಿಗ್ರಹ ಕಣ್ಣಿಗೆ ಬಿದ್ದಿದೆ. ಬಳಿಕ ಕುತುಬುದ್ದೀನ್&zwnj; ಊರಲ್ಲಿರುವ ಹಿಂದೂ ಸಮುದಾಯದ ಹಿರಿಯರಿಗೆ ಕೇಳಿದ್ದಾರೆ. ಕೆಲವರು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಬಹುದು ಎಂದು ಸಲಹೆ ನೀಡಿದರೆ, ನಿಮಗೆ ಸಾಧ್ಯವಾಗದಿದ್ದರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶ ಮಂಟಪದಲ್ಲಿಯೂ ಇಡಬಹುದು ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಮನೆಯಲ್ಲೇ ಪ್ರತಿಷ್ಠಾಪಿಸಿ ಪೂಜೆ&lt;/strong&gt;&lt;/h2&gt;&lt;p&gt;ಮನೆಯವರೆಗೂ ಬಂದಿರುವ ಗಣೇಶನನ್ನು ಮನೆಯಲ್ಲೇ ಪ್ರತಿಷ್ಠಾಪಿಸಿ ಪೂಜೆ ಮಾಡಲು ಕುತುಬುದ್ದೀನ್&zwnj; ನಿರ್ಧರಿಸಿದ್ದಾರೆ. ಊರಿನ ವೀರಭದ್ರಯ್ಯ ಶಾಸ್ತ್ರೀಗಳ ನೇತೃತ್ವದಲ್ಲಿ ಮನೆಯಲ್ಲೇ ಪ್ರತಿಷ್ಠಾಪಿಸಿ ಪೂಜೆ ಮಾಡಿ ನೈವೇದ್ಯ ಮಾಡಿದ್ದಾರೆ. ಹಿಂದೂಗಳ ಮನೆಯಲ್ಲಿ ಮಾಡಿದಂತೆ ಸಿಹಿ ಖಾದ್ಯ ಮಾಡಿ ನೈವೇದ್ಯ ಮಾಡುತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದು ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರಿತು.&lt;/p&gt;&lt;p&gt;ಹಿಂದೂ ಮತ್ತು ಮುಸ್ಲಿಂ ಸಮಾಜ ಬಾಂಧವರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಮನೆ ಬಾಗಿಲಿಗೆ ಬಂದ ಗಣೇಶನನ್ನು ಪ್ರತಿಷ್ಠಾಪಿಸಿದ್ದೇನೆ. ಹಿಂದೂ ಸಂಪ್ರದಾಯದಂತೆ ಪೂಜೆ ಪುನಸ್ಕಾರ, ನೈವೇದ್ಯ ಮಾಡಿದ್ದೇನೆ. ಈ ವರ್ಷ 3ನೆಯ ದಿನ ವಿಸರ್ಜನೆ ಮಾಡಲಾಗುವುದು ಎಂದು ಕುತುಬುದ್ದೀನ್&zwnj; ಬೆಳಗಲಿ ತಿಳಿಸಿದರು. ಊರಿನ ಜನರು ಇವರ ಮನೆಗೆ ಆಗಮಿಸಿ ಗಣೇಶನನ್ನು ವೀಕ್ಷಿಸಿ, ಪ್ರಸಾದ ಸ್ವೀಕರಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಏರ್&zwnj;ಪೋರ್ಟ್&zwnj; ಸಮೀಪದ 8 ಕೋಟಿ ಮೌಲ್ಯದ 1.80 ಎಕ್ರೆ ಭೂಮಿಯನ್ನು ದಾನ ಮಾಡಿದ ಇನಾಯತ್ ಅಲಿ ಕುಟುಂಬ&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharwad-a-divine-surprise-kutubuddin-belagali-welcomes-doorstep-ganesha-with-traditional-hindu-rituals-in-kundgol-mrq/articleshow-hogm1f3"/>
        </item>
        <item>
            <title><![CDATA[ಪುಣೆ ರೈಲು ಸಂಚಾರದಲ್ಲಿ ವ್ಯತ್ಯಯ: ಸೆ.19 ರಿಂದ 15 ದಿನ ಬ್ಲಾಕ್, 42 ರೈಲುಗಳು ರದ್ದು, ಕರ್ನಾಟಕದ ಹಲವು ಮಾರ್ಗ ಚೇಂಜ್]]></title>
            <link>https://kannada.asianetnews.com/india-news/indian-railway-pune-rail-block-42-trains-cancelled-routes-diverted-from-sept-19-to-oct-4th-karnataka-service-impacts-gdp/articleshow-ilcttg0</link>
            <guid isPermaLink="true">https://kannada.asianetnews.com/india-news/indian-railway-pune-rail-block-42-trains-cancelled-routes-diverted-from-sept-19-to-oct-4th-karnataka-service-impacts-gdp/articleshow-ilcttg0</guid>
            <pubDate>Wed, 09 Sep 2026 12:21:51 +0530</pubDate>
            <description><![CDATA[ಹಡಪ್ಸರ್ ಮತ್ತು ಘೋರ್ಪಾಡಿ ನಡುವಿನ ಮೂರನೇ ರೈಲು ಮಾರ್ಗದ ಕಾಮಗಾರಿಯಿಂದಾಗಿ, ಕೇಂದ್ರ ರೈಲ್ವೆಯು 15 ದಿನಗಳ ಬೃಹತ್ ಮೂಲಸೌಕರ್ಯ ಬ್ಲಾಕ್ ಘೋಷಿಸಿದೆ. ಇದರಿಂದಾಗಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಪುಣೆ ಮಾರ್ಗದ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ, ಮಾರ್ಗ ಬದಲಾವಣೆ ಮಾಡಲಾಗಿದೆ ಮತ್ತು ಭಾಗಶಃ ರದ್ದುಪಡಿಸಲಾಗಿದೆ. ಕರ್ನಾಟಕಕ್ಕೆ ಸಂಪರ್ಕಿಸುವ ರೈಲುಗಳ ಮೇಲೂ ಇದು ಪರಿಣಾಮ ಬೀರಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1k7yjhpkndq1fsj837ckq5c,imgname-indian-railway--2--1788426013238.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: ಹಡಪ್ಸರ್ ಮತ್ತು ಘೋರ್ಪಾಡಿ ರೈಲು ನಿಲ್ದಾಣಗಳ ನಡುವೆ ಮೂರನೇ ರೈಲು ಮಾರ್ಗದ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ, ಕೇಂದ್ರ ರೈಲ್ವೆಯು ಬೃಹತ್ ಮೂಲಸೌಕರ್ಯ ಬ್ಲಾಕ್ (Mega Infrastructure Block) ಘೋಷಿಸಿದೆ. ಪರಿಣಾಮವಾಗಿ, ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಒಟ್ಟು 15 ದಿನಗಳ ಕಾಲ ಪುಣೆ ಭಾಗದ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ.&lt;/p&gt;&lt;p&gt;ಈ ಸಮಯದಲ್ಲಿ ಪುಣೆ ಮತ್ತು ಹಡಪ್ಸರ್ ಯಾರ್ಡ್&zwnj;ಗಳಲ್ಲಿ ಎಂಜಿನಿಯರಿಂಗ್, ಸಿಗ್ನಲಿಂಗ್, ದೂರಸಂಪರ್ಕ ಹಾಗೂ ಓವರ್&zwnj;ಹೆಡ್ ವೈರಿಂಗ್ ಕಾಮಗಾರಿಗಳು ನಡೆಯಲಿವೆ. ಇದರಿಂದಾಗಿ ದೂರದೂರಿನ ಹಲವು ಎಕ್ಸ್&zwnj;ಪ್ರೆಸ್ ರೈಲುಗಳು, ಉಪನಗರ (Suburban) ಮತ್ತು ಡೆಮು (DEMU) ರೈಲು ಸೇವೆಗಳ ರದ್ದು, ಮಾರ್ಗ ಬದಲಾವಣೆ ಮತ್ತು ಭಾಗಶಃ ರದ್ದತಿ (Short Termination/Origination) ಮಾಡಲಾಗಿದೆ.&lt;/p&gt;&lt;h2&gt;ಕರ್ನಾಟಕಕ್ಕೆ ಸಂಪರ್ಕಿಸುವ ರೈಲುಗಳ ವಿವರ:&lt;/h2&gt;&lt;p&gt;ಕರ್ನಾಟಕದ ಮೂಲಕ ಹಾದುಹೋಗುವ ಮತ್ತು ಪ್ರಮುಖ ನಿಲ್ದಾಣಗಳನ್ನು ತಲುಪುವ ಹಲವು ಎಕ್ಸ್&zwnj;ಪ್ರೆಸ್&zwnj; ರೈಲುಗಳ ಮಾರ್ಗದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ:&lt;/p&gt;&lt;p&gt;ರೈಲು ಸಂಖ್ಯೆ 11302 (KSR ಬೆಂಗಳೂರು - CSMT ಮುಂಬೈ ಎಕ್ಸ್&zwnj;ಪ್ರೆಸ್): ಸೆಪ್ಟೆಂಬರ್ 22ಕ್ಕೆ ಸೋಲಾಪುರ-ಕುರ್ದುವಾಡಿ-ಮಿರಜ್-ಸತಾರಾ-ಪುಣೆ ಮಾರ್ಗವಾಗಿ ಸಂಚರಿಸಲಿದೆ. ಅಕ್ಟೋಬರ್ 3: ಈ ರೈಲನ್ನು ಸೋಲಾಪುರದಲ್ಲೇ ಕೊನೆಗೊಳಿಸಲಾಗುತ್ತದೆ (ಸೋಲಾಪುರ-ಮುಂಬೈ ನಡುವೆ ರದ್ದು).&lt;/p&gt;&lt;p&gt;ರೈಲು ಸಂಖ್ಯೆ 11301 (CSMT ಮುಂಬೈ - KSR ಬೆಂಗಳೂರು ಎಕ್ಸ್&zwnj;ಪ್ರೆಸ್): ಅಕ್ಟೋಬರ್ 4ರಂದು ಈ ರೈಲು ಮುಂಬೈ ಬದಲಿಗೆ ಸೋಲಾಪುರದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ.&lt;/p&gt;&lt;p&gt;ರೈಲು ಸಂಖ್ಯೆ 22686 (ಚಂಡೀಗಢ - ಯಶವಂತಪುರ ಎಕ್ಸ್&zwnj;ಪ್ರೆಸ್): ಅಕ್ಟೋಬರ್ 3ರಂದು ಮನ್ಮಾಡ್-ಕಷ್ಟಿ-ದೌಂಡ್-ಕುರ್ದುವಾಡಿ-ಪಂಢರಪುರ-ಮಿರಜ್ ಮಾರ್ಗವಾಗಿ ಸಂಚರಿಸಲಿದೆ.&lt;/p&gt;&lt;p&gt;ರೈಲು ಸಂಖ್ಯೆ 12781 (ಮೈಸೂರು - ಹಜರತ್ ನಿಜಾಮುದ್ದೀನ್ ಎಕ್ಸ್&zwnj;ಪ್ರೆಸ್): ಸೆಪ್ಟೆಂಬರ್ 18 ಮತ್ತು ಅಕ್ಟೋಬರ್ 2: ಕೊಲ್ಹಾಪುರ-ಮಿರಜ್-ಕುರ್ದುವಾಡಿ-ದೌಂಡ್-ಅಹಲ್ಯಾನಗರ-ಮನ್ಮಾಡ್ ಮಾರ್ಗವಾಗಿ ಸಂಚರಿಸಲಿದೆ.&lt;/p&gt;&lt;p&gt;ರೈಲು ಸಂಖ್ಯೆ 20669 (ಹುಬ್ಬಳ್ಳಿ - ಪುಣೆ ಎಕ್ಸ್&zwnj;ಪ್ರೆಸ್): ಅಕ್ಟೋಬರ್ 4ರಂದು ಈ ರೈಲು ಸತಾರಾ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ (ಸತಾರಾ-ಪುಣೆ ನಡುವೆ ರದ್ದು).&lt;/p&gt;&lt;p&gt;ರೈಲು ಸಂಖ್ಯೆ 20674 (ಪುಣೆ - ಕೊಲ್ಹಾಪುರ ಎಕ್ಸ್&zwnj;ಪ್ರೆಸ್): ಅಕ್ಟೋಬರ್ 4ರಂದು ಈ ರೈಲು ಪುಣೆ ಬದಲಿಗೆ ಸತಾರಾ ನಿಲ್ದಾಣದಿಂದ ಹೊರಡಲಿದೆ.&lt;/p&gt;&lt;h2&gt;ರದ್ದಾದ ಪ್ರಮುಖ ರೈಲುಗಳು (ಒಟ್ಟು 42 ರೈಲುಗಳು):&lt;/h2&gt;&lt;p&gt;12116 ಸೋಲಾಪುರ - CSMT ಮುಂಬೈ ಎಕ್ಸ್&zwnj;ಪ್ರೆಸ್: ಅಕ್ಟೋಬರ್ 3&lt;/p&gt;&lt;p&gt;12115 CSMT ಮುಂಬೈ - ಸೋಲಾಪುರ ಎಕ್ಸ್&zwnj;ಪ್ರೆಸ್: ಅಕ್ಟೋಬರ್ 4&lt;/p&gt;&lt;p&gt;12114 ನಾಗ್ಪುರ - ಪುಣೆ ಎಕ್ಸ್&zwnj;ಪ್ರೆಸ್: ಅಕ್ಟೋಬರ್ 2&lt;/p&gt;&lt;p&gt;12113 ಪುಣೆ - ನಾಗ್ಪುರ ಎಕ್ಸ್&zwnj;ಪ್ರೆಸ್: ಅಕ್ಟೋಬರ್ 3&lt;/p&gt;&lt;p&gt;11041 ದಾದರ್ - ಸಾಯಿನಗರ ಶಿರಡಿ ಎಕ್ಸ್&zwnj;ಪ್ರೆಸ್: ಅಕ್ಟೋಬರ್ 3&lt;/p&gt;&lt;p&gt;11042 ಸಾಯಿನಗರ ಶಿರಡಿ - ದಾದರ್ ಎಕ್ಸ್&zwnj;ಪ್ರೆಸ್: ಅಕ್ಟೋಬರ್ 4&lt;/p&gt;&lt;p&gt;12169/12170 ಪುಣೆ - ಸೋಲಾಪುರ - ಪುಣೆ ಎಕ್ಸ್&zwnj;ಪ್ರೆಸ್: ಸೆಪ್ಟೆಂಬರ್ 19 ರಿಂದ 23, ಅಕ್ಟೋಬರ್ 3 ಮತ್ತು 4&lt;/p&gt;&lt;p&gt;12136/12135 ನಾಗ್ಪುರ - ಪುಣೆ - ನಾಗ್ಪುರ ಎಕ್ಸ್&zwnj;ಪ್ರೆಸ್: ಅಕ್ಟೋಬರ್ 3 ಮತ್ತು 4&lt;/p&gt;&lt;p&gt;22105/22106 CSMT - ಪುಣೆ - CSMT ಎಕ್ಸ್&zwnj;ಪ್ರೆಸ್: ಅಕ್ಟೋಬರ್ 4&lt;/p&gt;&lt;p&gt;11007/11008 CSMT - ಪುಣೆ - CSMT ಎಕ್ಸ್&zwnj;ಪ್ರೆಸ್: ಅಕ್ಟೋಬರ್ 4&lt;/p&gt;&lt;p&gt;11029/11030 CSMT - ಕೊಲ್ಹಾಪುರ - CSMT ಎಕ್ಸ್&zwnj;ಪ್ರೆಸ್: ಅಕ್ಟೋಬರ್ 4&lt;/p&gt;&lt;p&gt;11026/11025 ಅಮರಾವತಿ - ಪುಣೆ - ಅಮರಾವತಿ ಎಕ್ಸ್&zwnj;ಪ್ರೆಸ್: ಅಕ್ಟೋಬರ್ 3 ಮತ್ತು 4&lt;/p&gt;&lt;p&gt;12158/12157 ಸೋಲಾಪುರ - ಪುಣೆ - ಸೋಲಾಪುರ ಎಕ್ಸ್&zwnj;ಪ್ರೆಸ್: ಅಕ್ಟೋಬರ್ 4&lt;/p&gt;&lt;p&gt;12127/12128 CSMT - ಪುಣೆ - CSMT ಎಕ್ಸ್&zwnj;ಪ್ರೆಸ್: ಅಕ್ಟೋಬರ್ 4&lt;/p&gt;&lt;p&gt;11423/11424 ಪುಣೆ - ಸಾಯಿನಗರ ಶಿರಡಿ - ಪುಣೆ ಎಕ್ಸ್&zwnj;ಪ್ರೆಸ್: ಅಕ್ಟೋಬರ್ 4&lt;/p&gt;&lt;p&gt;ಸ್ಥಳೀಯ DEMU ಹಾಗೂ ಉಪನಗರ ರೈಲುಗಳು: ಪುಣೆ-ದೌಂಡ್, ಪುಣೆ-ಬಾರಾಮತಿ, ಪುಣೆ-ಸತಾರಾ, ಅಹ್ಮದ್&zwnj;ನಗರ-ಬೀಡ್ ಹಾಗೂ ಪುಣೆ-ಲೋನಾವಾಲಾ ಮಾರ್ಗದ ವಿವಿಧ ಸೇವೆಯನ್ನು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 5 ರವರೆಗೆ ಹಂತ-ಹಂತವಾಗಿ ರದ್ದುಗೊಳಿಸಲಾಗಿದೆ.&lt;/p&gt;&lt;h2&gt;ಮಾರ್ಗ ಬದಲಾಯಿಸಲಾದ ಪ್ರಮುಖ ರೈಲುಗಳು (ಒಟ್ಟು 25 ರೈಲುಗಳು):&lt;/h2&gt;&lt;p&gt;12221/12222 ಪುಣೆ - ಹೌರಾ - ಪುಣೆ ಎಕ್ಸ್&zwnj;ಪ್ರೆಸ್: ಲೋನಾವಾಲಾ-ಕರ್ಜತ್-ಪನ್ವೇಲ್-ಕಲ್ಯಾಣ್-ಇಗತ್&zwnj;ಪುರಿ-ಮನ್ಮಾಡ್ ಮಾರ್ಗ.&lt;/p&gt;&lt;p&gt;11078/11077 ಜಮ್ಮು ತಾವಿ - ಪುಣೆ - ಜಮ್ಮು ತಾವಿ ಎಕ್ಸ್&zwnj;ಪ್ರೆಸ್: ಮನ್ಮಾಡ್-ಕಲ್ಯಾಣ್-ಪನ್ವೇಲ್-ಲೋನಾವಾಲಾ ಮಾರ್ಗ.&lt;/p&gt;&lt;p&gt;22159 CSMT - MGR ಚೆನ್ನೈ ಸೆಂಟ್ರಲ್ ಎಕ್ಸ್&zwnj;ಪ್ರೆಸ್: (ಸೆಪ್ಟೆಂಬರ್ 19-23, ಅಕ್ಟೋಬರ್ 4) ಕಲ್ಯಾಣ್-ಇಗತ್ಪುರಿ-ಮನ್ಮಾಡ್-ದೌಂಡ್ ಮಾರ್ಗ.&lt;/p&gt;&lt;p&gt;12780 ನಿಜಾಮುದ್ದೀನ್ - ವಾಸ್ಕೋ ಡ ಗಾಮಾ ಎಕ್ಸ್&zwnj;ಪ್ರೆಸ್: ಮನ್ಮಾಡ್-ದೌಂಡ್-ಕುರ್ದುವಾಡಿ-ಮಿರಾಜ್ ಮಾರ್ಗ.&lt;/p&gt;&lt;p&gt;11019 CSMT - ಭುವನೇಶ್ವರ ಎಕ್ಸ್&zwnj;ಪ್ರೆಸ್: ಪುಣೆ-ಸತಾರಾ-ಮಿರಜ್-ಕುರ್ದುವಾಡಿ-ಸೋಲಾಪುರ ಮಾರ್ಗ.&lt;/p&gt;&lt;p&gt;16340 ನಾಗರ್&zwnj;ಕೋಯಿಲ್ - LTT ಎಕ್ಸ್&zwnj;ಪ್ರೆಸ್: ಸೋಲಾಪುರ-ದೌಂಡ್-ಅಹಲ್ಯಾನಗರ-ಮನ್ಮಾಡ್-ಕಲ್ಯಾಣ್ ಮಾರ್ಗ.&lt;/p&gt;&lt;p&gt;12164 MGR ಚೆನ್ನೈ - LTT ಎಕ್ಸ್&zwnj;ಪ್ರೆಸ್: ಸೋಲಾಪುರ-ದೌಂಡ್-ಅಹಲ್ಯಾನಗರ-ಮನ್ಮಾಡ್-ಕಲ್ಯಾಣ್ ಮಾರ್ಗ.&lt;/p&gt;&lt;p&gt;11013 LTT - ಕೊಯಮತ್ತೂರು ಎಕ್ಸ್&zwnj;ಪ್ರೆಸ್: ಪುಣೆ-ಸತಾರಾ-ಮಿರಜ್-ಸೋಲಾಪುರ ಮಾರ್ಗ.&lt;/p&gt;&lt;p&gt;16332 ತಿರುವನಂತಪುರಂ - LTT ಎಕ್ಸ್&zwnj;ಪ್ರೆಸ್: ದೌಂಡ್-ಮನ್ಮಾಡ್-ಇಗತ್&zwnj;ಪುರಿ-ಕಲ್ಯಾಣ್ ಮಾರ್ಗ.&lt;/p&gt;&lt;h2&gt;ಮಧ್ಯಂತರ ನಿಲ್ದಾಣಗಳಲ್ಲಿ ಕೊನೆಗೊಳ್ಳುವ/ಆರಂಭಗೊಳ್ಳುವ (Short Termination) ರೈಲುಗಳು:&lt;/h2&gt;&lt;p&gt;22944/22943 ಇಂದೋರ್ - ದೌಂಡ್ - ಇಂದೋರ್ ಎಕ್ಸ್&zwnj;ಪ್ರೆಸ್: ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 4 ರವರೆಗೆ ಖಡ್ಕಿ (Khadki) ನಿಲ್ದಾಣದಲ್ಲೇ ಕೊನೆಗೊಂಡು, ಅಲ್ಲಿಂದಲೇ ಪ್ರಯಾಣ ಆರಂಭಿಸಲಿದೆ.&lt;/p&gt;&lt;p&gt;20495/20496 ಜೋಧ್&zwnj;ಪುರ - ಹಡಪ್ಸರ್ - ಜೋಧಪುರ ಎಕ್ಸ್&zwnj;ಪ್ರೆಸ್: ಖಡ್ಕಿ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ.&lt;/p&gt;&lt;p&gt;17014/17013 ಕಾಜಿಪೇಟೆ - ಹಡಪ್ಸರ್ - ಕಾಜಿಪೇಟೆ ಎಕ್ಸ್&zwnj;ಪ್ರೆಸ್: ದೌಂಡ್ / ಕುರ್ದುವಾಡಿ ನಿಲ್ದಾಣಗಳಲ್ಲಿ ಕೊನೆಗೊಳ್ಳಲಿದೆ.&lt;/p&gt;&lt;p&gt;11426/11425 ಕೊಲ್ಹಾಪುರ - ಪುಣೆ - ಕೊಲ್ಹಾಪುರ ಎಕ್ಸ್&zwnj;ಪ್ರೆಸ್: ಜೆಜುರಿ (Jejuri) ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ.&lt;/p&gt;&lt;p&gt;22846/22845 ಹಟಿಯಾ - ಪುಣೆ - ಹಟಿಯಾ ಎಕ್ಸ್&zwnj;ಪ್ರೆಸ್: ದೌಂಡ್ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ.&lt;/p&gt;&lt;p&gt;22172/22171 ರಾಣಿ ಕಮಲಪತಿ - ಪುಣೆ ಎಕ್ಸ್&zwnj;ಪ್ರೆಸ್: ದೌಂಡ್ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ.&lt;/p&gt;&lt;p&gt;12940/12939 ಜೈಪುರ - ಪುಣೆ - ಜೈಪುರ ಎಕ್ಸ್&zwnj;ಪ್ರೆಸ್: ಖಡ್ಕಿ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ.&lt;/p&gt;&lt;p&gt;12494/12493 ನಿಜಾಮುದ್ದೀನ್ - ಮೀರಜ್ - ನಿಜಾಮುದ್ದೀನ್ ಎಕ್ಸ್&zwnj;ಪ್ರೆಸ್: ಖಡ್ಕಿ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ.&lt;/p&gt;&lt;h2&gt;ಪ್ರಯಾಣಿಕರಿಗೆ ಸಲಹೆ:&lt;/h2&gt;&lt;p&gt;ಪ್ರಯಾಣವನ್ನು ಯೋಜಿಸುವ ಮೊದಲು ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವಿಚಾರಣಾ ಪೋರ್ಟಲ್ ಅಥವಾ NTES App ಮೂಲಕ ತಮ್ಮ ರೈಲಿನ ನೈಜ ಸಮಯ ಮತ್ತು ಸಂಚಾರ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಕೇಂದ್ರ ರೈಲ್ವೆ ಮನವಿ ಮಾಡಿದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/indian-railway-pune-rail-block-42-trains-cancelled-routes-diverted-from-sept-19-to-oct-4th-karnataka-service-impacts-gdp/articleshow-ilcttg0"/>
        </item>
        <item>
            <title><![CDATA[Guidelines: ಹುಬ್ಬಳ್ಳಿ- ಧಾರವಾಡದಲ್ಲಿ ಗಣೇಶ ಉತ್ಸವಕ್ಕೆ ಹೊಸ ಗೈಡ್‌ಲೈನ್ಸ್; ಆಯುಧ ಹಿಡಿದರೆ 10 ಲಕ್ಷ ಬಾಂಡ್!  80 ಡೆಸಿಬಲ್ ದಾಟಿದರೆ ಡಿಜೆ ಬಂದ್!]]></title>
            <link>https://kannada.asianetnews.com/karnataka-districts/hubballi-ganesh-festival-police-rules-ganesh-idol-height-dj-timing-firecracker-80-decibel-anti-stabbing-squad-bmk/articleshow-lgo7iy9</link>
            <guid isPermaLink="true">https://kannada.asianetnews.com/karnataka-districts/hubballi-ganesh-festival-police-rules-ganesh-idol-height-dj-timing-firecracker-80-decibel-anti-stabbing-squad-bmk/articleshow-lgo7iy9</guid>
            <pubDate>Mon, 07 Sep 2026 16:57:19 +0530</pubDate>
            <description><![CDATA[&lt;p&gt;ಪೊಲೀಸ್ ಕಮಿಷನರೇಟ್ ಗಣೇಶ ಚತುರ್ಥಿ ಹಬ್ಬಕ್ಕೆ ಹೊಸ, ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಡಿಜೆ ಸೌಂಡ್&zwnj;ಗೆ ರಾತ್ರಿ 10 ಗಂಟೆಯ ಗಡುವು, 80 ಡೆಸಿಬಲ್ ಮಿತಿ, ಅಪಾಯಕಾರಿ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ. ಶಾಂತಿ ಕದಡುವವರ ವಿರುದ್ಧ 'ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್' ರಚಿಸಲಾಗಿದ್ದು, ಮಾರಕಾಸ್ತ್ರಗಳೊಂದಿಗೆ ಸಿಕ್ಕಿಬಿದ್ದರೆ 10 ಲಕ್ಷ ರೂಪಾಯಿ ಬಾಂಡ್ ಹಾಕುವ ಎಚ್ಚರಿಕೆ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xsrz699zm81yf2r4vpbfec,imgname-sp-hubballi-1788780248264.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ; ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಂಪ್ರದಾಯಿಕ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಶಾಂತಿ ಮತ್ತು ಸೌಹಾರ್ದ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯನ್ನುದ್ದೇಶಿಸಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ರಾವ್ ಬೋರಸೆ ಅವರು, ಹಬ್ಬದ ಸಂಭ್ರಮವನ್ನು ಸುರಕ್ಷಿತವಾಗಿ, ನಿಯಮಬದ್ಧವಾಗಿ ಹಾಗೂ ಪ್ರೀತಿಯಿಂದ ಆಚರಿಸಲು ಸಾರ್ವಜನಿಕರು ಮತ್ತು ಗಣೇಶ ಮಂಡಳಿಗಳಿಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಿದರು.&lt;/p&gt;&lt;h2&gt;&lt;strong&gt;ಕರ್ನಾಟಕ ನನ್ನ ಕರ್ಮಭೂಮಿ!&lt;/strong&gt;&lt;/h2&gt;&lt;p&gt;ಸಭೆಯ ಆರಂಭದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡ ಕಮಿಷನರ್ ಭೂಷಣ್ ಬೋರಸೆ, ಮಹಾರಾಷ್ಟ್ರ ನನ್ನ ಜನ್ಮಭೂಮಿಯಾಗಿದ್ದರೆ, ಕರ್ನಾಟಕ ನನ್ನ ಕರ್ಮಭೂಮಿಯಾಗಿದೆ. ಹಿಂದೆ ಬೆಳಗಾವಿಯಲ್ಲಿ ನನಗೆ ಸಾರ್ವಜನಿಕರಿಂದ ಸಿಕ್ಕ ಪ್ರೀತಿ ಮತ್ತು ಸಹಕಾರ ಇಲ್ಲೂ ಸಿಗುತ್ತದೆ ಎಂಬ ಬಲವಾದ ನಂಬಿಕೆ ನನಗಿದೆ. ಹುಬ್ಬಳ್ಳಿ-ಧಾರವಾಡದ ಗಣೇಶೋತ್ಸವವು ಅತ್ಯಂತ ವಿಶಿಷ್ಟವಾದದ್ದು, ಈ ಹಬ್ಬವು ಕೇವಲ ಸ್ಥಳೀಯ ಆಚರಣೆಯಾಗದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಕನಸಾಗಿದೆ&quot; ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಮೂರ್ತಿಯ ಎತ್ತರ ಮತ್ತು ಮೆರವಣಿಗೆ ಸುರಕ್ಷತೆ!&lt;/strong&gt;&lt;/h3&gt;&lt;p&gt;ಹಬ್ಬದ ಸಿದ್ಧತೆಗಳ ಕುರಿತು ಮಾತನಾಡುತ್ತಾ, ಮೂರ್ತಿಗಳ ಎತ್ತರದ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದರು. &quot;12 ರಿಂದ 15 ಅಡಿ ಎತ್ತರದ ಗಣಪತಿ ಮೂರ್ತಿಗಳಿದ್ದರೆ ಪೆಂಡಾಲ್ ಹಾಗೂ ಮೆರವಣಿಗೆಯ ಸಮಯದಲ್ಲಿ ನಿರ್ವಹಣೆ ಮಾಡಲು ಸೂಕ್ತವಾಗಿರುತ್ತದೆ. ಅನೇಕ ಕಡೆಗಳಲ್ಲಿ ಅತಿಯಾದ ದೊಡ್ಡ ಮೂರ್ತಿಗಳಿಂದಾಗಿ ಅನಾಹುತಗಳು ಸಂಭವಿಸಿವೆ. ಒಂದು ವೇಳೆ 15 ಅಡಿಗಿಂತ ಹೆಚ್ಚಿನ ಎತ್ತರದ ಮೂರ್ತಿಯಿದ್ದರೆ, ಅದನ್ನು ಸ್ಥಳಾಂತರಿಸುವಾಗ ಅತ್ಯಂತ ಜಾಗರೂಕತೆ ವಹಿಸಬೇಕು. ವಿದ್ಯುತ್ ಕಂಬಗಳು ಮತ್ತು ತಂತಿಗಳಿಂದ ಅಪಾಯವಾಗದಂತೆ ಎಚ್ಚರ ವಹಿಸುವುದು ಕಡ್ಡಾಯ,&quot; ಎಂದು ತಿಳಿಸಿದರು. ಅಲ್ಲದೆ, ಪೆಂಡಾಲ್ ಹಾಕಲು ಹಾಗೂ ಮೆರವಣಿಗೆ ನಡೆಸಲು ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.&lt;/p&gt;&lt;h3&gt;&lt;strong&gt;ಅಶ್ಲೀಲ ಹಾಡು, ಕುಡಿತ ಮತ್ತು ಡಿಜೆ ನಿಯಮಗಳು!&lt;/strong&gt;&lt;/h3&gt;&lt;p&gt;ಹಬ್ಬದ ವಾತಾವರಣವು ಕಲುಷಿತಗೊಳ್ಳಬಾರದು ಎಂಬ ಉದ್ದೇಶದಿಂದ ಕಮಿಷನರ್ ಹಲವು ಖಡಕ್ ನಿಯಮಗಳನ್ನು ಘೋಷಿಸಿದರು:&lt;/p&gt;&lt;p&gt;&lt;strong&gt;ಡಿಜೆ ನಿಯಮ;&lt;/strong&gt; ರಾತ್ರಿ 10 ಗಂಟೆಗೆ ಸರಿಯಾಗಿ ಎಲ್ಲಾ ಡಿಜೆ ಸೌಂಡ್ ಸಿಸ್ಟಮ್&zwnj;ಗಳನ್ನು ಬಂದ್ ಮಾಡಬೇಕು. 10 ಗಂಟೆಯ ನಂತರ ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ನೀಡಲಾಗುವುದಿಲ್ಲ.&lt;/p&gt;&lt;p&gt;&lt;strong&gt;ಶಬ್ದ ಮಾಲಿನ್ಯ ನಿಯಮ;&lt;/strong&gt; ಶಬ್ದದ ಪ್ರಮಾಣ 80 ಡೆಸಿಬಲ್ ದಾಟಿದರೆ ತಕ್ಷಣವೇ ಸೌಂಡ್ ಸಿಸ್ಟಮ್ ಬಂದ್ ಮಾಡಿಸಲಾಗುವುದು. ಜನರು ಚೆನ್ನಾಗಿ, ಜೋರಾಗಿ ಡ್ಯಾನ್ಸ್ ಮಾಡಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಕರ್ಕಶ ಶಬ್ದ ಮಾಡಿ ಇತರರಿಗೆ ತೊಂದರೆ ಕೊಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಹಾಡುಗಳು ಮತ್ತು ಸಂಸ್ಕೃತಿ;&lt;/strong&gt; ಮೆರವಣಿಗೆಯ ವೇಳೆಯಲ್ಲಿ ಯಾವುದೇ ರೀತಿಯ ಅಶ್ಲೀಲ ಅಥವಾ ಸಮಾಜಕ್ಕೆ ಮುಜುಗರ ತರುವ ಹಾಡುಗಳನ್ನು ಹಾಕುವಂತಿಲ್ಲ.&lt;/p&gt;&lt;p&gt;&lt;strong&gt;ಸಂಪೂರ್ಣ ಮದ್ಯಪಾನ ನಿಷೇಧ;&lt;/strong&gt; ಕುಡಿದ ಅಮಲಿನಲ್ಲಿ ಹಬ್ಬ ಆಚರಣೆ ಮಾಡಲು ಅಥವಾ ರಂಪಾಟ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ.&lt;/p&gt;&lt;p&gt;&lt;strong&gt;ಸಂಚಾರ ನಿಯಮ;&lt;/strong&gt; ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಗೊಂದಲ ಉಂಟಾಗದಂತೆ ಸಂಚಾರಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ.&lt;/p&gt;&lt;h3&gt;&lt;strong&gt;ಪಟಾಕಿ ಮತ್ತು ಅಸಭ್ಯ ವರ್ತನೆಗೆ ಬ್ರೇಕ್!&lt;/strong&gt;&lt;/h3&gt;&lt;p&gt;ಮೆರವಣಿಗೆಯಲ್ಲಿ ಅಪಾಯಕಾರಿ ಪಟಾಕಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 'ರಾಕೆಟ್ ಪಟಾಕಿ' ಹಾರಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಮೆರವಣಿಗೆಯ ಸಮಯದಲ್ಲಿ ಸಾರ್ವಜನಿಕರ ಅಥವಾ ಇತರೆ ಆಚರಣೆ ಮಾಡುತ್ತಿರುವವರ ಮೈಮೇಲೆ ಪಟಾಕಿ ಎಸೆಯುವ ಪುಂಡಾಟಿಕೆ ನಡೆಸಿದರೆ, ಅಂತಹ ಘಟನೆಯ ಒಂದು ಫೋಟೋ ಅಥವಾ ವೀಡಿಯೋ ಪೊಲೀಸ್ ಇಲಾಖೆಗೆ ಕಳುಹಿಸಿದರೆ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.&lt;/p&gt;&lt;h3&gt;&lt;strong&gt;'ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್' ರಚನೆ!&lt;/strong&gt;&lt;/h3&gt;&lt;p&gt;ಹಬ್ಬದ ನೆಪದಲ್ಲಿ ನಗರದಲ್ಲಿ ಶಾಂತಿ ಭಂಗ ತರಲು ಯತ್ನಿಸುವವರ ಮತ್ತು ಚಾಕು, ಚೂರಿಗಳಂತಹ ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರನ್ನು ಬೆದರಿಸುವವರ ವಿರುದ್ಧ ಹೋರಾಡಲು 'ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್' (Anti-Stabbing Squad) ರಚಿಸಲಾಗಿದೆ. ಹಬ್ಬದ ವೇಳೆ ಚಾಕು ಅಥವಾ ಮಾರಕಾಸ್ತ್ರಗಳೊಂದಿಗೆ ಯಾರಾದರೂ ಸಿಕ್ಕಿಬಿದ್ದರೆ ಅವರಿಗೆ 10 ಲಕ್ಷ ರೂಪಾಯಿಗಳ ಶೂರಿಟಿ ಬಾಂಡ್ ಹಾಕಿಸಲಾಗುತ್ತದೆ. ಮುಂದಿನ ಬಾರಿ ಮತ್ತೆ ಅಂತಹ ಕೃತ್ಯದಲ್ಲಿ ಸಿಕ್ಕಿಬಿದ್ದರೆ ಬೃಹತ್ ಮೊತ್ತದ ದಂಡ ಮತ್ತು ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕಮಿಷನರ್ ಭೂಷಣ್ ಬೋರಸೆ ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/hubballi-ganesh-festival-police-rules-ganesh-idol-height-dj-timing-firecracker-80-decibel-anti-stabbing-squad-bmk/articleshow-lgo7iy9"/>
        </item>
        <item>
            <title><![CDATA[BCM: ಅಧಿಕಾರಿ ಕೇವಲ ಮುಖವಾಡವಾ? ಒಬ್ಬ ತಾಲೂಕು ಅಧಿಕಾರಿಗೆ ಇಷ್ಟೊಂದು ಧೈರ್ಯ ಬರಲು ಹೇಗೆ ಸಾಧ್ಯ? ವಿದ್ಯಾರ್ಥಿನಿಯರು ಬಯಲಿಗೆಳೆದ ಧಾರವಾಡ ಹಾಸ್ಟೆಲ್ ಹಗರಣ!]]></title>
            <link>https://kannada.asianetnews.com/karnataka-districts/dharwad-hostel-scam-bcm-bribery-allegations-students-video-evidence-vinay-kulkarni-hostel-seat-corruption-karnataka/articleshow-liodbfc</link>
            <guid isPermaLink="true">https://kannada.asianetnews.com/karnataka-districts/dharwad-hostel-scam-bcm-bribery-allegations-students-video-evidence-vinay-kulkarni-hostel-seat-corruption-karnataka/articleshow-liodbfc</guid>
            <pubDate>Fri, 04 Sep 2026 17:56:25 +0530</pubDate>
            <description><![CDATA[&lt;p&gt;ಧಾರವಾಡದ ಬಿಸಿಎಂ ಹಾಸ್ಟೆಲ್&zwnj;ನಲ್ಲಿ ಲಂಚ ಪಡೆದು ಸೀಟು ಹಂಚಿಕೆ ಮಾಡುತ್ತಿದ್ದ ಹಗರಣವನ್ನು ವಿದ್ಯಾರ್ಥಿನಿಯರೇ ವಿಡಿಯೋ ಸಮೇತ ಬಯಲಿಗೆಳೆದಿದ್ದಾರೆ. ಶಾಸಕ ವಿನಯ್ ಕುಲಕರ್ಣಿ ಮಧ್ಯಪ್ರವೇಶಿಸಿ ಅಧಿಕಾರಿಯನ್ನು ಅಮಾನತುಗೊಳಿಸಲು ಸೂಚಿಸಿದ್ದು, ಈ ಭ್ರಷ್ಟಾಚಾರದ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1p63g0vedpfjwskgae05e8p,imgname-vinay-kulkarni-1788524740635.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡ; ವಿದ್ಯಾಕಾಶಿ ಧಾರವಾಡದ ನೆಲದಲ್ಲಿ ಇವತ್ತು ಬಡ ತಂದೆ-ತಾಯಂದಿರ ಕಣ್ಣೀರು ಮತ್ತು ಹಳ್ಳಿಯ ಹೆಣ್ಣುಮಕ್ಕಳ ಆಕ್ರೋಶದ ಶಾಪ ಏಕಕಾಲಕ್ಕೆ ಮೊಳಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಬಿಸಿಎಂ) ಹಾಸ್ಟೆಲ್&zwnj;ನಲ್ಲಿ ನಡೆದ ಲಂಚಾವತಾರದ ಕರಾಳ ದಂಧೆ ಇಡೀ ವ್ಯವಸ್ಥೆಯ ಅಸಲಿ ಮುಖವಾಡವನ್ನು ಕಳಚಿ ಬೆತ್ತಲಾಗಿಸಿದೆ. ಶೇ. 90ಕ್ಕೂ ಹೆಚ್ಚು ಅಂಕ ಪಡೆದು, ತಲೆಯಲ್ಲೊಂದು ಜ್ಞಾನದ ಜ್ಯೋತಿ ಹೊತ್ತು ಬಂದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟು ಸಿಗುತ್ತಿಲ್ಲ. ಆದರೆ, ಶೇ. 70ರಷ್ಟು ಅಂಕ ಗಳಿಸಿದರೂ ಕಂತೆ ಕಂತೆ ಲಂಚದ ಹಣ ಎಸೆದವರಿಗೆ ಮಾತ್ರ ಹಾಸ್ಟೆಲ್&zwnj;ನ ರೂಮುಗಳು ರಾಜಾತಿಥ್ಯ ನೀಡುತ್ತಿವೆ. ಈ ಮಹಾವಂಚನೆಯನ್ನು ಹೆಣ್ಣುಮಕ್ಕಳೇ ರಹಸ್ಯ ಕಾರ್ಯಾಚರಣೆಯ ಮೂಲಕ ವಿಡಿಯೋ ಸಮೇತ ಬಯಲಿಗೆಳೆದಿದ್ದಾರೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಧಾರವಾಡ ತಾಪಂನಲ್ಲಿ ಅಧಿಕಾರಿಗಳ ಸಭೆ!&lt;/strong&gt;&lt;/h2&gt;&lt;p&gt;ಧಾರವಾಡ ತಾಲೂಕು ಪಂಚಾಯತಿಯಲ್ಲಿ ಶಾಸಕ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಎಂದಿನಂತೆ ಅಧಿಕಾರಿಗಳ ಬೂಟಾಟಿಕೆಯ ವರದಿಗಳೊಂದಿಗೆ ಸಾಗುತ್ತಿತ್ತು. ಆದರೆ, ಸಭೆಯ ಒಳಗೆ ಹತ್ತಾರು ಬಡ ವಿದ್ಯಾರ್ಥಿನಿಯರು ನೇರವಾಗಿ ನುಗ್ಗಿದಾಗ ಇಡೀ ಸನ್ನಿವೇಶದ ಗಾಂಭೀರ್ಯವೇ ಬದಲಾಯಿತು. ವಿದ್ಯಾರ್ಥಿನಿಯರು ತಮ್ಮ ಮೊಬೈಲ್&zwnj;ನಲ್ಲಿದ್ದ ವಿಡಿಯೋ ಸಾಕ್ಷಿಯನ್ನು ಶಾಸಕರ ಮುಂದಿಟ್ಟು, ನಮಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಕೊಡಿ ಎಂದು ಧ್ವನಿ ಎತ್ತಿದರು. ಬಿಸಿಎಂ ತಾಲೂಕಾ ಅಧಿಕಾರಿ ಕೇಸರಿ ಎಂಬಾತ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ವಿದ್ಯಾರ್ಥಿಗಳಿಂದಲೇ ನೇರವಾಗಿ ಹಣ ಪಡೆಯುತ್ತಿದ್ದ ದೃಶ್ಯ ಆ ವಿಡಿಯೋದಲ್ಲಿತ್ತು.&lt;/p&gt;&lt;h3&gt;&lt;strong&gt;ಗರಂ ಆದ ಶಾಸಕ!&lt;/strong&gt;&lt;/h3&gt;&lt;p&gt;ಇದನ್ನು ನೋಡುತ್ತಿದ್ದಂತೆ ತೀವ್ರವಾಗಿ ಗರಂ ಆದ ಶಾಸಕ ವಿನಯ್ ಕುಲಕರ್ಣಿ, ನನ್ನ ಕ್ಷೇತ್ರದಲ್ಲೇ, ನನ್ನ ಮಾತೇ ನಡೆಯದಂತೆ ಹಣ ಪಡೆದು ಹಾಸ್ಟೆಲ್ ಕೊಡ್ತೀರಾ? 90% ಬಂದವನಿಗೆ ಸಿಗದ ಹಾಸ್ಟೆಲ್ 70% ಬಂದವನಿಗೆ ಹೇಗೆ ಸಿಕ್ತು? ಎಂದು ಸಾಮಾನ್ಯವಾಗಿ ಗದರಿದ್ದಾರೆ. ಅಷ್ಟೇ ಅಲ್ಲದೆ, ಧಾರವಾಡ ಗ್ರಾಮೀಣ ಭಾಗದಲ್ಲಿ ಬಡವರಿಂದ 20 ಸಾವಿರ ಅಲ್ಲ, 50 ಸಾವಿರ ರೂಪಾಯಿ ವರೆಗೂ ಲಂಚ ಕೀಳಲಾಗುತ್ತಿದೆ ಎಂದು ಸ್ವತಃ ಶಾಸಕರೇ ಹೇಳುತ್ತಿರುವುದು ಶೋಚನೀಯ ಸ್ಥಿತಿ. ಕೂಡಲೇ ಭ್ರಷ್ಟ ಅಧಿಕಾರಿ ಕೇಸರಿಯನ್ನು ಅಮಾನತು ಮಾಡುವಂತೆ ಸ್ಥಳದಲ್ಲೇ ಜಿಲ್ಲಾ ಪಂಚಾಯತಿ ಸಿಇಓಗೆ ಕಡಕ್ ಸೂಚನೆ ನೀಡಿದರು. ಆದರೆ ಇವತ್ತು ಇಡೀ ರಾಜ್ಯ ಕೇಳಬೇಕಾದ ಅತ್ಯಂತ ಗಂಭೀರ ಹಾಗೂ ವಿಶ್ಲೇಷಣಾತ್ಮಕ ಪ್ರಶ್ನೆ ಏನು? ಎಂದು ನೋಡೋಣ ಬನ್ನಿ.&lt;/p&gt;&lt;h3&gt;&lt;strong&gt;ಕೇಳಬೇಕಾದ ಪ್ರಶ್ನೆ ಏನು?&lt;/strong&gt;&lt;/h3&gt;&lt;p&gt;ಕೇವಲ ಒಬ್ಬ ತಾಲೂಕು ಅಧಿಕಾರಿಗೆ ಇಷ್ಟೊಂದು ದೊಡ್ಡ ಧೈರ್ಯ ಬರಲು ಹೇಗೆ ಸಾಧ್ಯ? ಸಿಸಿಟಿವಿಗಳಿರುವ ಕಾಲದಲ್ಲಿ, ಮೊಬೈಲ್ ಕ್ಯಾಮೆರಾಗಳ ಕಣ್ಗಾವಲಿರುವ ಜಗತ್ತಿನಲ್ಲಿ ಬಡ ಹೆಣ್ಣುಮಕ್ಕಳಿಂದ ಬಹಿರಂಗವಾಗಿ ಸಾವಿರಾರು ರೂಪಾಯಿ ಲಂಚ ಕೀಳಲು ಕೇವಲ ಒಬ್ಬ ತಾಲೂಕು ಅಧಿಕಾರಿ ಸಿದ್ಧನಾಗುತ್ತಾನೆ ಎಂದರೆ, ಅವನ ಬೆನ್ನ ಹಿಂದೆ ಇರುವ ಆ ಕರಾಳ ಶಕ್ತಿ ಯಾವುದು? ಖಂಡಿತವಾಗಿಯೂ ಈ ಅಧಿಕಾರಿ ಕೇವಲ ಒಂದು ಮುಖವಾಡ ಅಷ್ಟೇ ಅನಿಸುತ್ತೆ ಅಲ್ವಾ? ಈತ ವಸೂಲಿ ಮಾಡುವ ಲಂಚದ ಕಂತೆಗಳು ಕೇವಲ ಇವನ ಜೇಬು ಸೇರುತ್ತಿಲ್ಲ, ಇದರ ದೊಡ್ಡ ಪಾಲು ಮೇಲಧಿಕಾರಿಗಳಿಗೆ ಹಾಗೂ ಇವರನ್ನು ವರ್ಗಾವಣೆ ಮಾಡಿಸುವ ರಾಜಕೀಯ ಶಕ್ತಿಗಳಿಗೂ ತಲುಪುತ್ತಿರುತ್ತದೆಯಾ ಎನ್ನುವ ಪ್ರಶ್ನೆ ಎಲ್ಲೆಡೆ ಮೂಡುತ್ತಿದೆ.&lt;/p&gt;&lt;h3&gt;&lt;strong&gt;ಸಸ್ಪೆಂಡ್&zwnj; ಕಣ್ಣೊರೆಸುವ ತಂತ್ರವೆ?&lt;/strong&gt;&lt;/h3&gt;&lt;p&gt;ಇವತ್ತು ಇವನ ಬಾಯಿ ಮುಚ್ಚಿಸಲು ಸಸ್ಪೆಂಡ್ ಎಂಬ ನಾಟಕವಾಡಲಾಗಿದೆ. ಕೆಲವೇ ತಿಂಗಳುಗಳಲ್ಲಿ ಇವನು ಮತ್ಯಾರದ್ದೋ ಕಾಲು ಹಿಡಿದು, ಮತ್ತೊಂದು ಕಡೆಗೆ ಪೋಸ್ಟಿಂಗ್ ಪಡೆದು ವಾಪಸ್ ಬರುತ್ತಾನೆ. ಮತ್ತೆ ಬಂದು ಬಡವರನ್ನು ಲೂಟಿ ಮಾಡುತ್ತಾನೆ. ಧಾರವಾಡದ ಹಾಸ್ಟೆಲ್&zwnj;ಗಳಲ್ಲಿ ಇಂತಹ ಅನ್ಯಾಯಗಳು ಇದೇ ಮೊದಲೇನಲ್ಲ. ಈ ಹಿಂದೆ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳು ತಮಗೆ ದಿನನಿತ್ಯ ಕೊಡುವ ಊಟದಲ್ಲಿ ಕನಿಷ್ಠ ಮಟ್ಟದ ತರಕಾರಿ ಇಲ್ಲ, ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂದು ಬೀದಿಗಿಳಿದು ಹೋರಾಟ ಮಾಡಿದ್ದರು. ಬಡ ಮಕ್ಕಳ ಹೊಟ್ಟೆಗೆ ಹಾಕುವ ಬೇಳೆ, ತರಕಾರಿಯ ಹಣದಲ್ಲೂ ಕಮಿಷನ್ ತಿನ್ನುವ ಭ್ರಷ್ಟರು ತುಂಬಿಹೋಗಿದ್ದಾರೆ. ಗ್ರೌಂಡ್ ಲೆವೆಲ್&zwnj;ನಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ.&lt;/p&gt;&lt;h3&gt;&lt;strong&gt;ನೆನಪಾಗುತ್ತಾರೆ ಅರಸರು!&lt;/strong&gt;&lt;/h3&gt;&lt;p&gt;ಇವತ್ತು ನಮಗೆ ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನೆನಪಾಗುತ್ತಾರೆ. ಹಳ್ಳಿಯ ಬಡವನ ಮಗನೂ ಪಟ್ಟಣಕ್ಕೆ ಬಂದು ಗೌರವದಿಂದ ಓದಲಿ ಎಂಬುದು ಅವರ ಕನಸಾಗಿತ್ತು. ಆದರೆ ಇವತ್ತಿನ ಭ್ರಷ್ಟರು ಆ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ. ಕೂಲಿ-ನಾಲಿ ಮಾಡಿ ಬದುಕುವ ಬಡ ತಂದೆ ತನ್ನ ಮಗಳ ಓದಿಗೆ 50 ಸಾವಿರ ಲಂಚ ಎಲ್ಲಿಂದ ತರಬೇಕು? ಅವರಿಗೂ ಒಂದು ಬದುಕಿದೆ, ಅದನ್ನು ನೀವು ಕಣ್ಣು ಬಿಟ್ಟು ನೋಡಬೇಕಿದೆ. ಈ ವಿದ್ಯಾರ್ಥಿನಿಯರ ಶಾಪ ನಿಮ್ಮನ್ನು ಸುಮ್ಮನೆ ಬಿಡಲ್ಲ. ಕೇವಲ ಸಸ್ಪೆಂಡ್ ಶಿಕ್ಷೆಯಲ್ಲ, ಇದು ಇಲಾಖೆಯ ತನಿಖೆಯಿಂದ ತಪ್ಪಿಸಿಕೊಳ್ಳುವ ದಾರಿ. ಇಡೀ ಜಿಲ್ಲೆಯ ಹಾಸ್ಟೆಲ್ ದಂಧೆಯ ಬಗ್ಗೆ ನ್ಯಾಯಾಲಯದ ನಿಗಾದಲ್ಲಿ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು. ಶಿಕ್ಷಣ ಬಡವನ ಭಿಕ್ಷೆಯಲ್ಲ, ಅದು ಅವನ ಹಕ್ಕು.&lt;/p&gt;]]></content:encoded>
            <category>dharwad</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/dharwad-hostel-scam-bcm-bribery-allegations-students-video-evidence-vinay-kulkarni-hostel-seat-corruption-karnataka/articleshow-liodbfc"/>
        </item>
        <item>
            <title><![CDATA[ದೇಶದಲ್ಲಿ 1 ಬಿಲಿಯನ್ ಡಾಲರ್ ಬಿಸಿನೆಸ್ ಮಾಡಿ ದಾಖಲೆ ಬರೆದ ಅಮೆಜಾನ್ ನೌ: ಪಡುಬಿದ್ರಿ, ಧಾರವಾಡಕ್ಕೂ ಸೇವೆಯ ಲಗ್ಗೆ!]]></title>
            <link>https://kannada.asianetnews.com/india-news/amazon-now-hits-1-billion-doller-run-rate-in-india-expands-to-tier-2-and-tier-3-cities-gdp/articleshow-opee44e</link>
            <guid isPermaLink="true">https://kannada.asianetnews.com/india-news/amazon-now-hits-1-billion-doller-run-rate-in-india-expands-to-tier-2-and-tier-3-cities-gdp/articleshow-opee44e</guid>
            <pubDate>Tue, 15 Sep 2026 17:07:46 +0530</pubDate>
            <description><![CDATA[ಆನ್&zwnj;ಲೈನ್ ಶಾಪಿಂಗ್ ದೈತ್ಯ ಅಮೆಜಾನ್&zwnj;ನ 'ಅಮೆಜಾನ್ ನೌ' ಸೇವೆಯು ಕಳೆದ ಮೂರು ತಿಂಗಳಲ್ಲಿ 1 ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ದಾಟಿದೆ. ಈ ಅತಿವೇಗದ ಡೆಲಿವರಿ ಸೇವೆಯು ಇದೀಗ ಧಾರವಾಡ, ಪಡುಬಿದ್ರಿಯಂತಹ 60ಕ್ಕೂ ಹೆಚ್ಚು ಸಣ್ಣ ನಗರಗಳಿಗೂ ವಿಸ್ತರಿಸಿದ್ದು, ಅಮೆಜಾನ್ ಇಂಡಿಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿ ಹೊರಹೊಮ್ಮಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv2y6y081ne08mp1rtx43hqv,imgname-amazon-pink-dot-seal-1781436479496.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಆನ್&zwnj;ಲೈನ್ ಶಾಪಿಂಗ್ ದೈತ್ಯ ಅಮೆಜಾನ್&zwnj;ನ ಅತಿವೇಗದ ಡೆಲಿವರಿ ಸೇವೆಯಾದ 'ಅಮೆಜಾನ್ ನೌ' ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಸೇವೆಯ ವಾರ್ಷಿಕ ಒಟ್ಟು ವಹಿವಾಟು ಬರೋಬ್ಬರಿ 1 ಬಿಲಿಯನ್ ಡಾಲರ್ ದಾಟಿದೆ ಎಂದು ಕಂಪನಿ ಅಧಿಕೃತವಾಗಿ ಪ್ರಕಟಿಸಿದೆ.&lt;/p&gt;&lt;p&gt;ಸೇವೆ ಆರಂಭವಾದಾಗಿನಿಂದಲೂ ಪ್ರತಿ ತ್ರೈಮಾಸಿಕದಲ್ಲೂ ಗ್ರಾಹಕರಿಂದ ಬರುವ ಆರ್ಡರ್&zwnj;ಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ. ಈ ಮೂಲಕ 'ಅಮೆಜಾನ್ ನೌ', ಅಮೆಜಾನ್ ಇಂಡಿಯಾದ ಇತಿಹಾಸದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ವಿಭಾಗವಾಗಿ ಹೊರಹೊಮ್ಮಿದೆ.&lt;/p&gt;&lt;h2&gt;ಟಿಯರ್&zwnj;-2, ಟಿಯರ್&zwnj;-3 ನಗರಗಳಿಗೂ ವಿಸ್ತರಣೆ:&lt;/h2&gt;&lt;p&gt;ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗಿದ್ದ ಈ 'ಡೆಲಿವರಿ-ಇನ್-ಮಿನಿಟ್ಸ್' (ಕೆಲವೇ ನಿಮಿಷಗಳಲ್ಲಿ ವಿತರಣೆ) ಸೇವೆಯನ್ನು ಕೇವಲ 10 ವಾರಗಳಲ್ಲಿ 4 ಪಟ್ಟಿಗಿಂತಲೂ ಹೆಚ್ಚಿನ ನಗರಗಳಿಗೆ ವಿಸ್ತರಿಸಲಾಗಿದೆ. ಪ್ರಸ್ತುತ ಕರ್ನಾಟಕದ ಪಡುಬಿದ್ರಿ, ಧಾರವಾಡ ಸೇರಿದಂತೆ ದೇಶದ ತಿರುಪತಿ, ಗುಂಟೂರು, ಗುರುದಾಸ್&zwnj;ಪುರ, ಜಲಂಧರ್, ವೆಲ್ಲೂರ್, ವಾರಂಗಲ್ ಹಾಗೂ ಬರ್ಹಾಂಪುರದಂತಹ 60ಕ್ಕೂ ಹೆಚ್ಚು ದ್ವಿತೀಯ ಮತ್ತು ತೃತೀಯ ಸ್ತರದ ನಗರಗಳಿಗೂ ಈ ಸೇವೆ ವಿಸ್ತರಣೆಯಾಗಿದೆ.&lt;/p&gt;&lt;p&gt;ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ಈ ಸಾಧನೆ ಮಾಡಲಾಗಿದ್ದು, ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ದೇಶದ ಒಟ್ಟು 100 ನಗರಗಳಿಗೆ ಸೇವೆಯನ್ನು ತಲುಪಿಸುವ ಬೃಹತ್ ಗುರಿಯನ್ನು ಕಂಪನಿ ಹೊಂದಿದೆ. ಇದಕ್ಕಾಗಿ ಅಮೆಜಾನ್ ದೇಶಾದ್ಯಂತ 750ಕ್ಕೂ ಹೆಚ್ಚು ಮೈಕ್ರೋ-ಫುಲ್&zwnj;ಫಿಲ್&zwnj;ಮೆಂಟ್ ಹಾಗೂ ಅರ್ಬನ್ ಫುಲ್&zwnj;ಫಿಲ್&zwnj;ಮೆಂಟ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಸುಸಜ್ಜಿತ ನೆಟ್&zwnj;ವರ್ಕ್ ನಿರ್ಮಿಸಿದೆ.&lt;/p&gt;&lt;h2&gt;ದಿನಸಿಯಿಂದ ಎಲೆಕ್ಟ್ರಾನಿಕ್ಸ್&zwnj;ವರೆಗೆ ಎಲ್ಲವೂ ಕೆಲವೇ ನಿಮಿಷಗಳಲ್ಲಿ ಲಭ್ಯ&lt;/h2&gt;&lt;p&gt;'ಅಮೆಜಾನ್ ನೌ' ಮೂಲಕ ಮಾರಾಟಗಾರರು ದೈನಂದಿನ ಅಗತ್ಯ ವಸ್ತುಗಳನ್ನು ಗ್ರಾಹಕರಿಗೆ ನಿಮಿಷಗಳಲ್ಲಿಯೇ ತಲುಪಿಸುತ್ತಿದ್ದಾರೆ. ತಾಜಾ ಹಣ್ಣು-ತರಕಾರಿಗಳು, ದಿನಸಿ ವಸ್ತುಗಳು, ಫ್ರೋಜನ್ ಫುಡ್, ಸೌಂದರ್ಯವರ್ಧಕಗಳು, ಫ್ಯಾಷನ್ ಉತ್ಪನ್ನಗಳು ಹಾಗೂ ಸಣ್ಣ ಗೃಹೋಪಯೋಗಿ ಮತ್ತು ಅಡುಗೆಮನೆ ಉಪಕರಣಗಳನ್ನು ಗ್ರಾಹಕರು ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಪಡೆಯಬಹುದಾಗಿದೆ.&lt;/p&gt;&lt;p&gt;ಈ ಅಭೂತಪೂರ್ವ ಯಶಸ್ಸಿನ ಬಗ್ಗೆ ಮಾತನಾಡಿದ ಅಮೆಜಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್, &quot;ಅಲ್ಪಾವಧಿಯಲ್ಲೇ ಅಮೆಜಾನ್ ನೌ 1 ಬಿಲಿಯನ್ ಡಾಲರ್ ವಹಿವಾಟು ದಾಟಿರುವುದು ನಮಗೆ ಅತೀವ ಸಂತಸ ತಂದಿದೆ. ಪ್ರತಿ ತ್ರೈಮಾಸಿಕದಲ್ಲೂ ಆರ್ಡರ್&zwnj;ಗಳು ದ್ವಿಗುಣಗೊಳ್ಳುತ್ತಿರುವುದು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ದೀಪಾವಳಿ ಹೊತ್ತಿಗೆ ಉತ್ತರದ ಗುರುದಾಸ್&zwnj;ಪುರದಿಂದ ದಕ್ಷಿಣದ ವೆಂಬಯಂವರೆಗೂ, ಒಟ್ಟು 100 ನಗರಗಳಿಗೆ ಈ ಸೇವೆಯನ್ನು ತಲುಪಿಸಲು ನಾವು ಸಿದ್ಧರಾಗಿದ್ದೇವೆ. ಈ ಹಬ್ಬದ ಸೀಸನ್&zwnj;ನಲ್ಲಿ ಗ್ರಾಹಕರು ಅತಿ ಹೆಚ್ಚು ಉತ್ಪನ್ನಗಳನ್ನು ಅತಿ ವೇಗವಾಗಿ ಪಡೆಯಲಿದ್ದಾರೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಭವಿಷ್ಯದ ಬೃಹತ್ ಯೋಜನೆ&lt;/h2&gt;&lt;p&gt;ಜೂನ್ 2026ರಲ್ಲೇ ಅಮೆಜಾನ್, ಭಾರತದ 300ಕ್ಕೂ ಹೆಚ್ಚು ನಗರಗಳಿಗೆ 'ಅಮೆಜಾನ್ ನೌ' ಸೇವೆಯನ್ನು ವಿಸ್ತರಿಸುವ ಮೂಲಕ ದೇಶದ ಅತಿ ದೊಡ್ಡ 'ಡೆಲಿವರಿ-ಇನ್-ಮಿನಿಟ್ಸ್' ನೆಟ್&zwnj;ವರ್ಕ್ ನಿರ್ಮಿಸುವ ಗುರಿಯನ್ನು ಘೋಷಿಸಿತ್ತು. ಪ್ರಸ್ತುತ ಹತ್ತಾರು ಸಾವಿರ ಉತ್ಪನ್ನಗಳನ್ನು ಕೆಲವೇ ನಿಮಿಷಗಳು ಅಥವಾ ಗಂಟೆಗಳಲ್ಲಿ ತಲುಪಿಸುತ್ತಿರುವ ಅಮೆಜಾನ್, 10 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ಅದೇ ದಿನ ಡೆಲಿವರಿ ಹಾಗೂ 40 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು ಮರುದಿನ ಡೆಲಿವರಿ ಮಾಡುತ್ತಿದೆ. ಜೊತೆಗೆ ಪ್ರೈಮ್ ಸದಸ್ಯರಿಗೆ ಉಚಿತ ಡೆಲಿವರಿ ಸೌಲಭ್ಯವನ್ನೂ ಯಶಸ್ವಿಯಾಗಿ ಮುಂದುವರಿಸುತ್ತಿದೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/amazon-now-hits-1-billion-doller-run-rate-in-india-expands-to-tier-2-and-tier-3-cities-gdp/articleshow-opee44e"/>
        </item>
        <item>
            <title><![CDATA[ಹುಬ್ಬಳ್ಳಿ-ಧಾರವಾಡ ನಗರದಲ್ಲಿ 5 ದಿನ ಮದ್ಯ ಮಾರಾಟ, ಸಾಗಾಟಕ್ಕೆ ನಿಷೇಧ; ಯಾವ್ಯಾವ ದಿನ?]]></title>
            <link>https://kannada.asianetnews.com/karnataka-districts/ganesha-festival-ban-on-liquor-sale-and-transport-in-hubballi-dharwad-city-for-5-days-mrq/articleshow-osh65rs</link>
            <guid isPermaLink="true">https://kannada.asianetnews.com/karnataka-districts/ganesha-festival-ban-on-liquor-sale-and-transport-in-hubballi-dharwad-city-for-5-days-mrq/articleshow-osh65rs</guid>
            <pubDate>Sat, 12 Sep 2026 07:36:31 +0530</pubDate>
            <description><![CDATA[ಗಣೇಶೋತ್ಸವದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಪೊಲೀಸ್ ಆಯುಕ್ತರು 5 ಹಂತಗಳಲ್ಲಿ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ, ರಾಣಿ ಚೆನ್ನಮ್ಮ ಮೈದಾನದಲ್ಲಿ ಸೆ. 14ರಿಂದ ಮೂರು ದಿನಗಳ ಕಾಲ ಸಾಂಸ್ಕೃತಿಕ ವೈಭವದೊಂದಿಗೆ ಗಣೇಶೋತ್ಸವ ಆಚರಿಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr65x5jgmac7xtedc2cekj3d,imgname-alcohol--9--1778323985999.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 5 ಹಂತಗಳಲ್ಲಿ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯ ಸೇವನೆಯನ್ನು ನಿಷೇಧಿಸಿ ಹು-ಧಾ ನಗರ ಪೊಲೀಸ್&zwnj; ಆಯುಕ್ತ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಭೂಷಣ್ ಬೊರಸೆ ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಗಣೇಶ ಹಬ್ಬದ ಆಚರಣೆ ಸೆ.14ರಿಂದ 25ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾನೂನು ಮತ್ತು ಸುವ್ಯವಸ್ಥೆ ಹಿನ್ನೆಲೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಯಾವಾಗ ಮದ್ಯ ನಿಷೇಧ?&lt;/strong&gt;&lt;/h2&gt;&lt;p&gt;ಸೆ.13ರ ರಾತ್ರಿ 11.59 ರಿಂದ ಸೆ.15ರ ಬೆಳಗ್ಗೆ 6ರ ವರೆಗೆ, ಸೆ.17ರ ರಾತ್ರಿ 11.59ರಿಂದ ಸೆ. 19ರ ಬೆಳಗ್ಗೆ 6ರ ವರೆಗೆ, ಸೆ.19ರ ರಾತ್ರಿ 11.59ರಿಂದ ಸೆ.21ರ ಬೆಳಗ್ಗೆ 6ರ ವರೆಗೆ, ಸೆ. 21ರ ರಾತ್ರಿ 11.59ರಿಂದ ಸೆ.23ರ ಬೆಳಗ್ಗೆ 6ರ ವರೆಗೆ, ಸೆ.24ರ ರಾತ್ರಿ 11.59ರಿಂದ ಸೆ. 26ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ, ಸಾಗಾಟ ಹಾಗೂ ಸೇವನೆ ನಿಷೇಧಿಸಲಾಗಿದೆ.&lt;/p&gt;&lt;h3&gt;&lt;strong&gt;ರಾಣಿ ಚೆನ್ನಮ್ಮ ಮೈದಾನದಲ್ಲಿ ಸೆ. 14ರಿಂದ ಗಣೇಶೋತ್ಸವ&lt;/strong&gt;&lt;/h3&gt;&lt;p&gt;ರಾಣಿ ಚೆನ್ನಮ್ಮ ಮೈದಾನ ಗಣೇಶೋತ್ಸವ ಮಂಡಳಿ ವತಿಯಿಂದ ಸೆ. 14ರಿಂದ 16ರ ವರೆಗೆ ಮೂರು ದಿನಗಳ ಕಾಲ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಗಣೇಶೋತ್ಸವ ಆಚರಿಸಲಾಗುವುದು ಎಂದು ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜಯ ಬಡಸ್ಕರ ತಿಳಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ, ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಪ್ರತಿಬಿಂಬಿಸುವ ಮಾದರಿ ಉತ್ಸವವನ್ನಾಗಿ ರೂಪಿಸುವುದು ಮಂಡಳಿಯ ಆಶಯವಾಗಿದೆ ಎಂದರು.&lt;/p&gt;&lt;p&gt;ಕಳೆದ ವರ್ಷ ಗಣೇಶೋತ್ಸವ ಹಾಗೂ ವಿಸರ್ಜನಾ ಮೆರವಣಿಗೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 300ಕ್ಕೂ ಅಧಿಕ ಕಲಾವಿದರು ವಿವಿಧ ಸಾಂಸ್ಕೃತಿಕ ಮೇಳಗಳಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮೆರುಗು ತಂದಿದ್ದರು. ಡಿಜೆ ಬಳಸದೆ ಇದ್ದರೂ ಜನರ ಉತ್ಸಾಹ ಮತ್ತು ಸಂಭ್ರಮಕ್ಕೆ ಯಾವುದೇ ಕೊರತೆಯಾಗಿರಲಿಲ್ಲ ಎಂದು ಹೇಳಿದರು.&lt;/p&gt;&lt;p&gt;ಈ ಬಾರಿ ಸೆ. 14ರಂದು ಬೆಳಗ್ಗೆ 9 ಗಂಟೆಗೆ ಮೂರುಸಾವಿರ ಮಠದ ಆವರಣದಿಂದ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ಆರಂಭವಾಗಲಿದ್ದು, ರಾಣಿ ಚೆನ್ನಮ್ಮ ಮೈದಾನಕ್ಕೆ ಮೂರ್ತಿಯನ್ನು ಕರೆತಂದು ಮಧ್ಯಾಹ್ನ 12 ಗಂಟೆಗೆ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗುವುದು. ಸೆ. 14 ಮತ್ತು 15ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ ನಿರಂತರ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿದೆ ಎಂದರು.&lt;/p&gt;&lt;p&gt;ಸೆ. 16ರಂದು ಮಧ್ಯಾಹ್ನ 12 ಗಂಟೆಗೆ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಸಾರ್ವಜನಿಕ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ ಜಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಮೆರವಣಿಗೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಮೇಳಗಳು ಪ್ರಮುಖ ಆಕರ್ಷಣೆಯಾಗಲಿವೆ. ಸಂಜೆ 5ರ ವೇಳೆಗೆ ಹೊಸೂರಿನ ಬಾವಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ ಎಂದರು.&lt;/p&gt;&lt;p&gt;ಹು-ಧಾ ಮಹಾನಗರ ಪಾಲಿಕೆಯಿಂದ ಉತ್ಸವಕ್ಕೆ ಅನುಮತಿ ದೊರೆತಿದ್ದು, ಉತ್ಸವದ ಯಶಸ್ವಿ ಆಯೋಜನೆಗೆ ಸ್ವಾಗತ ಸಮಿತಿ ಹಾಗೂ ಉತ್ಸವ ಸಮಿತಿ ರಚಿಸಲಾಗಿದೆ. ಮಹಾದೇವ ಕರಮರಿ, ನಂದಕುಮಾರ ಹಾಗೂ ಡಾ. ವಿ.ಎಸ್.ವಿ. ಪ್ರಸಾದ್ ಮಹಾಪೋಷಕರಾಗಿದ್ದು, 41 ಸದಸ್ಯರ ಉತ್ಸವ ಸಮಿತಿಗೆ ಉದ್ಯಮಿ ಗೌತಮ ಬಾಫಣಾ ಅಧ್ಯಕ್ಷರಾಗಿದ್ದಾರೆ ಎಂದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಹಾದೇವ ಕರಮರಿ, ಗೌತಮ ಬಾಫಣಾ, ರವಿ ದಂಡಿನ, ರಮೇಶ ಕದಂ ಸೇರಿ ಹಲವರಿದ್ದರು.&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ganesha-festival-ban-on-liquor-sale-and-transport-in-hubballi-dharwad-city-for-5-days-mrq/articleshow-osh65rs"/>
        </item>
        <item>
            <title><![CDATA[Police: ಮರಳು ಲಾರಿಗೆ ಲಂಚ ಪಡೆದ ಪೊಲೀಸರು ಲೋಕಾಯುಕ್ತ ಬಲೆಗೆ; ಇಬ್ಬರ ಬಂಧನ, ಇಬ್ಬರು ಪರಾರಿ!]]></title>
            <link>https://kannada.asianetnews.com/karnataka-districts/dharwad-lokayukta-raid-police-constable-bribe-sand-lorry-30000-bmk/articleshow-ql3xlg9</link>
            <guid isPermaLink="true">https://kannada.asianetnews.com/karnataka-districts/dharwad-lokayukta-raid-police-constable-bribe-sand-lorry-30000-bmk/articleshow-ql3xlg9</guid>
            <pubDate>Fri, 28 Aug 2026 23:00:18 +0530</pubDate>
            <description><![CDATA[ಧಾರವಾಡದಲ್ಲಿ ಅಕ್ರಮ ಮರಳು ಲಾರಿ ಬಿಡಲು ₹30,000 ಲಂಚ ಪಡೆದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇಬ್ಬರು ಪೊಲೀಸರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ದಾಳಿಯ ಸುಳಿವು পেয়ে ಇತರೆ ಇಬ್ಬರು ಕಾನ್&zwnj;ಸ್ಟೇಬಲ್&zwnj;ಗಳು ಪರಾರಿಯಾಗಿದ್ದು, ನಾಲ್ವರ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m14pqf7m8yn0jnwpp0b2e500,imgname-dharwad-police-1787938192628.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡ; ಅಕ್ರಮ ಮರಳು ಸಾಗಾಟದ ಲಾರಿ ಬಿಡಲು ಕಮಿಷನ್ ದಂದೆಗೆಿಳಿದು ಲಕ್ಷಾಂತರ ರೂಪಾಯಿ ಲಂಚದ ಆಸೆಗೆ ಬಿದ್ದಿದ್ದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಲಂಚ ಪಡೆಯುತ್ತಿದ್ದ ಹೆಡ್ ಕಾನ್&zwnj;ಸ್ಟೇಬಲ್ ಹಾಗೂ ಕಾನ್&zwnj;ಸ್ಟೇಬಲ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದು, ದಾಳಿಯ ಸುಳಿವು ಸಿಗುತ್ತಿದ್ದಂತೆ ಮತ್ತಿಬ್ಬರು ಕಾನ್&zwnj;ಸ್ಟೇಬಲ್&zwnj;ಗಳು ಸ್ಥಳದಿಂದ ಪರಾರಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;30 ಸಾವಿರ ಲಂಚದ ಬೇಡಿಕೆ!&lt;/strong&gt;&lt;/h2&gt;&lt;p&gt;ಕೊಪ್ಪಳ ಜಿಲ್ಲೆಯಿಂದ ಧಾರವಾಡದ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದರು. ಮರಳು ಸಾಗಾಟಕ್ಕೆ ಅನುಮತಿ ನೀಡಲು ಹಾಗೂ ಲಾರಿಯನ್ನು ಮುಂದಕ್ಕೆ ಬಿಡಲು ಇಬ್ಬರು ಪೊಲೀಸರು ಕಮಿಷನ್ ರೂಪದಲ್ಲಿ ಹಣದ ಬೇಡಿಕೆ ಇಟ್ಟಿದ್ದರು. ಮರಳು ಲಾರಿಯ ಮಾಲೀಕರಾದ ಕೊಪ್ಪಳ ಮೂಲದ ಹಣಮಂತ ಎಂಬುವವರಿಂದ ಲಾರಿ ಬಿಡಲು ಬರೋಬ್ಬರಿ 30,000 ರೂಪಾಯಿ ಲಂಚಕ್ಕೆ ಬೇಡಿಕೆಯಿಡಲಾಗಿತ್ತು. ನಗದು ರೂಪದಲ್ಲಿ ಹಣ ನೀಡಲು ಸಾಧ್ಯವಾಗದಿದ್ದಾಗ, ಡಿಜಿಟಲ್ ಪಾವತಿ ವ್ಯವಸ್ಥೆಯಾದ &lsquo;ಫೋನ್ ಪೇ&rsquo; (PhonePe) ಮೂಲಕವೇ ಲಂಚದ ಹಣವನ್ನು ವರ್ಗಾಯಿಸಿಕೊಳ್ಳಲಾಗಿತ್ತು.&lt;/p&gt;&lt;h3&gt;&lt;strong&gt;ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿತ್ತು ದೂರು!&lt;/strong&gt;&lt;/h3&gt;&lt;p&gt;ಪೋಲಿಸರ ಈ ಅಕ್ರಮ ಮತ್ತು ಸುಲಿಗೆಯ ವಿರುದ್ಧ ಬೇಸತ್ತ ಲಾರಿ ಮಾಲೀಕ ಹಣಮಂತ ಅವರು ತಕ್ಷಣವೇ ಧಾರವಾಡ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ಲೋಕಾಯುಕ್ತ ಎಸ್&zwnj;ಪಿ (SP) ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಅಧಿಕಾರಿಗಳ ಸಜ್ಜಿತ ತಂಡವು ಕಾರ್ಯಾಚರಣೆಗೆ ಯೋಜನೆ ರೂಪಿಸಿತ್ತು.&lt;/p&gt;&lt;h3&gt;&lt;strong&gt;ಇಬ್ಬರು ವಶಕ್ಕೆ, ಇಬ್ಬರು ಪೇದೆಗಳು ಪರಾರಿ!&lt;/strong&gt;&lt;/h3&gt;&lt;p&gt;ದಾಳಿಯ ಸಮಯದಲ್ಲಿ, ಡಿಜಿಟಲ್ ರೂಪದಲ್ಲಿ ಹಣ ಪಡೆದು ಅಕ್ರಮ ಎಸಗಿದ್ದ ಹೆಡ್ ಕಾನ್&zwnj;ಸ್ಟೇಬಲ್ ಹಸನ್ ಸಾಬ್ ನದಾಪ್ ಹಾಗೂ ಕಾನ್&zwnj;ಸ್ಟೇಬಲ್ ಇಕ್ಬಾಲ್ ನದಾಪ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಲು ಸ್ಥಳಕ್ಕೆ ಬರುತ್ತಿದ್ದ ಸುಳಿವು ಸಿಗುತ್ತಿದ್ದಂತೆಯೇ, ಸ್ಥಳದಲ್ಲಿದ್ದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಮತ್ತಿಬ್ಬರು ಸಿಬ್ಬಂದಿಗಳಾದ ಗಿರೀಶ್ ಮನಸೂರ್ ಹಾಗೂ ಅಬ್ದುಲ್ ಎಂಬ ಕಾನ್&zwnj;ಸ್ಟೇಬಲ್&zwnj;ಗಳು ಅಧಿಕಾರಿಗಳ ಕಣ್ಣು ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ನಾಲ್ವರ ಮೇಲೆಯೂ ಎಫ್&zwnj;ಐಆರ್ ದಾಖಲು!&lt;/strong&gt;&lt;/h3&gt;&lt;p&gt;ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರು ಪೊಲೀಸ್ ಸಿಬ್ಬಂದಿಗಳ ಮೇಲೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಾನೂನುಬದ್ಧ ಪ್ರಕರಣ (FIR) ದಾಖಲಾಗಿದೆ. ಬಂಧಿತರಾಗಿರುವ ಹಸನ್ ಸಾಬ್ ನದಾಪ್ ಮತ್ತು ಇಕ್ಬಾಲ್ ನದಾಪ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೊಂದೆಡೆ, ದಾಳಿಯ ವೇಳೆ ಸ್ಥಳದಿಂದ ಕಾಲ್ಕಿತ್ತಿರುವ ಗಿರೀಶ್ ಮನಸೂರ್ ಹಾಗೂ ಅಬ್ದುಲ್ ಅವರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸರೇ ಈ ರೀತಿ ಲಂಚದ ದಂದೆಗೆ ಇಳಿದು ಲೋಕಾ ಬಲೆಗೆ ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>dharwad</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/dharwad-lokayukta-raid-police-constable-bribe-sand-lorry-30000-bmk/articleshow-ql3xlg9"/>
        </item>
        <item>
            <title><![CDATA[ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್‌ ಆಯುಕ್ತರಿಗೆ ಗಾಂಜಾ ಕೇಸ್, ಕೊಲೆ ಆರೋಪಿಗಳಿಂದ ಸನ್ಮಾನ! ಫೋಟೋ ವೈರಲ್]]></title>
            <link>https://kannada.asianetnews.com/karnataka-districts/hubballi-dharwad-new-police-commissioner-felicitated-by-accused-in-ganja-and-murder-cases-photo-goes-viral-rav/articleshow-rgxincu</link>
            <guid isPermaLink="true">https://kannada.asianetnews.com/karnataka-districts/hubballi-dharwad-new-police-commissioner-felicitated-by-accused-in-ganja-and-murder-cases-photo-goes-viral-rav/articleshow-rgxincu</guid>
            <pubDate>Sun, 06 Sep 2026 13:45:24 +0530</pubDate>
            <description><![CDATA[&lt;p&gt;ಹುಬ್ಬಳ್ಳಿ-ಧಾರವಾಡದ ನೂತನ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರಿಗೆ ಗಾಂಜಾ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳು ಸನ್ಮಾನಿಸಿರುವ ಘಟನೆ ನಡೆದಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಗಳು ಆಯುಕ್ತರ ಕಚೇರಿಯನ್ನು ಹೇಗೆ ಪ್ರವೇಶಿಸಿದರು ಎಂಬ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1twafx9ebcfdf34rtzymer2,imgname-bhushan-borase-felicitated-by-accused-1788682256297.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ-ಧಾರವಾಡ (ಸೆ.6): ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್&zwnj; ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಭೂಷಣ್ ಬೋರಸೆ ಅವರಿಗೆ ಗಾಂಜಾ ಪ್ರಕರಣದ ಆರೋಪಿ ಹಾಗೂ ಗೌರಿ ಲಂಕೇಶ್&zwnj; ಕೊಲೆ ಪ್ರಕರಣದ ಆರೋಪಿ ಸನ್ಮಾನ ಮಾಡಿರುವ ಘಟನೆ ನಡೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.&lt;/p&gt;&lt;p&gt;ಎನ್&zwnj;ಡಿಪಿಎಸ್&zwnj; ಪ್ರಕರಣ(NDPS Case)ದಲ್ಲಿ ಆರೋಪಿ ಎನ್ನಲಾದ ಖೇತ್&zwnj;ಸಿಂಗ್ ರಾಜಪುರೋಹಿತ ಎಂಬುವವರು ಆಯುಕ್ತರಿಗೆ ಹೂಗುಚ್ಛ ನೀಡಿ ಸನ್ಮಾನ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ ಗೌರಿ ಲಂಕೇಶ್&zwnj; ಕೊಲೆ ಪ್ರಕರಣ(Gouri Lankesh Murder case)ದ ಆರೋಪಿಯಾಗಿದ್ದ ಅಮಿತ್ ಬದ್ದಿ ಎಂಬುವವರು ಕೂಡ ಆಯುಕ್ತರನ್ನು ಸನ್ಮಾನಿಸಿರುವ ಫೋಟೋ ವೈರಲ್ ಆಗಿದೆ.&lt;/p&gt;&lt;h2&gt;ಆಯುಕ್ತರ ಕಚೇರಿಗೇ ಪ್ರವೇಶ ಹೇಗೆ?&lt;/h2&gt;&lt;p&gt;ಈ ಮೊದಲು ಕಮಿಷನರ್ ಆಗಿದ್ದ ಎನ್&zwnj; ಶಶಿಕುಮಾರ್ ಇತ್ತೀಚೆಗೆ ವರ್ಗಾವಣೆಗೊಂಡರು. ಅವರ ಸ್ಥಾನಕ್ಕೆ ನೂತನ ಆಯುಕ್ತರಾಗಿ ಭೂಷಣ್ ಬೋರಸೆ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಇಂತಹ ಆರೋಪಿಗಳು ಪೊಲೀಸ್&zwnj; ಆಯುಕ್ತರ ಕಚೇರಿಗೆ ಪ್ರವೇಶಿಸಿ ಸನ್ಮಾನ ಮಾಡಲು ಹೇಗೆ ಸಾಧ್ಯವಾಯ್ತು? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.&lt;/p&gt;&lt;p&gt;ರೌಡಿಶೀಟರ್&zwnj;ಗಳು, ಪಾತಕ ಹಿನ್ನೆಲೆಯುಳ್ಳವರು ಹಾಗೂ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರು ಪ್ರಭಾವಿ ವ್ಯಕ್ತಿಗಳೊಂದಿಗೆ ದೋಸ್ತಿ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಹೊಸದಾಗಿ ಆಯುಕ್ತರಾಗಿ ಬಂದವರಿಗೆ ಇಂಥವರ ಹಿನ್ನೆಲೆ ಬಗ್ಗೆ ಮಾಹಿತಿ ಇರೋದಿಲ್ಲ ಒಪ್ಪೋಣ ಆದರೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ? ಎಂಬ ಪ್ರಶ್ನೆ ಉದ್ಬವಿಸಿದೆ. ಅಪರಾಧ ಹಿನ್ನೆಲೆಯುಳ್ಲವರು ಪೊಲೀಸ್ ಕಚೇರಿ ಪ್ರವೇಶಿಸಲು, ಅದರಲ್ಲೂ ಕಮಿಷನರ್ ಬಳಿ ಬರಲು ಭಯ ಪಡುತ್ತಾರೆ. ಆದರೆ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇಬ್ಬರು ಪೊಲೀಸ್ ಕಚೇರಿಗೆ ಬಂದು ಕಮಿಷನರ್&zwnj;ಗೆ ಹೂಗುಚ್ಚ ನೀಡಿ ಸನ್ಮಾನಿಸುತ್ತಿರುವುದು ಅಚ್ಚರಿ ಹುಟ್ಟಿಸಿದೆ.&lt;/p&gt;&lt;h3&gt;ಡ್ರಗ್ಸ್ ವಿರುದ್ಧ ಗುಡುಗಿದ್ದ ಕಮಿಷನರ್&zwnj;ಗೆ ಪೆಡ್ಲರ್&zwnj;ಗಳಿಂದ್ಲೇ ಸನ್ಮಾನ!&lt;/h3&gt;&lt;p&gt;ಭೂಷಣ್ ಬೋರಸೆ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್&zwnj; ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಇದೀಗ ಡ್ರಗ್ಸ್ ಪ್ರಕರಣದ ಆರೋಪಿಯಿಂದಲೇ ನೂತನ ಆಯುಕ್ತರಿಗೆ ಸನ್ಮಾನ ನಡೆದಿರುವ ಫೋಟೋಗಳು ವೈರಲ್ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>dharwad</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/hubballi-dharwad-new-police-commissioner-felicitated-by-accused-in-ganja-and-murder-cases-photo-goes-viral-rav/articleshow-rgxincu"/>
        </item>
        <item>
            <title><![CDATA[ಆಸ್ತಿ ಮಾಲೀಕರೇ ಎಚ್ಚರ! ನಕಲಿ ದಾಖಲೆ ಸೃಷ್ಟಿಸಿ ಯಾರದೋ ಆಸ್ತಿ ಮಂಗಮಾಯ ಮಾಡೋ ಗ್ಯಾಂಗ್ ಇದು!]]></title>
            <link>https://kannada.asianetnews.com/karnataka-districts/hubballi-dharwad-plot-resale-racket-involving-forged-documents-exposed-rav/articleshow-ygdfvxd</link>
            <guid isPermaLink="true">https://kannada.asianetnews.com/karnataka-districts/hubballi-dharwad-plot-resale-racket-involving-forged-documents-exposed-rav/articleshow-ygdfvxd</guid>
            <pubDate>Thu, 10 Sep 2026 08:41:54 +0530</pubDate>
            <description><![CDATA[ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಹುಡಾ) ಹಂಚಿಕೆಯಾದ, ಮಾಲೀಕರು ಇಲ್ಲದ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿರುವ ಜಾಲ ಪತ್ತೆಯಾಗಿದೆ. ಈ ಹಗರಣವನ್ನು ತಡೆಯಲು ಮತ್ತು ಅಸಲಿ ವಾರಸುದಾರರನ್ನು ಪತ್ತೆಹಚ್ಚಲು ಹುಡಾ ಇದೀಗ ಸಮೀಕ್ಷೆ ನಡೆಸಲು ಮುಂದಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24mmqqvdn1w84catkw5041p,imgname-hubballi-dharwad-1789009747707.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಾನಂದ ಗೊಂಬಿ&lt;/strong&gt;&lt;/p&gt;&lt;p&gt;ಹುಬ್ಬಳ್ಳಿ (ಸೆ.10): ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶನಗಳಿಗೆ ಮಾಲೀಕರು ಇಲ್ಲದೆ ಇರುವುದನ್ನು ಪತ್ತೆ ಹಚ್ಚಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವುದನ್ನು ತಡೆಯಲು ಸಮೀಕ್ಷೆ ನಡೆಸಲು ಹುಡಾ ಮುಂದಾಗಿದೆ.&lt;/p&gt;&lt;h2&gt;ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳ ಮಾರಾಟ!&lt;/h2&gt;&lt;p&gt;ಹುಡಾದಿಂದ 20-30 ವರ್ಷಗಳ ಹಿಂದೆ ಮಹಾನಗರದಲ್ಲಿ ನಿರ್ಮಿಸಿರುವ ಲೇಔಟ್&zwnj;ಗಳ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದುಂಟು. ಈ ನಿಟ್ಟಿನಲ್ಲಿ ಅಧಿಕಾರಿಯೊಬ್ಬರ ವಿರುದ್ಧ ಕ್ರಮವೂ ಆಗಿದೆ. ಆದರೆ ಅಷ್ಟಕ್ಕೆ ಅದು ಸ್ಥಗಿತಗೊಂಡಿದೆ.&lt;/p&gt;&lt;h3&gt;ಹುಡಾದಲ್ಲಿ ಏನಾಗುತ್ತಿದೆ?&lt;/h3&gt;&lt;p&gt;ಹುಡಾದಿಂದ ನಿವೇಶನ ಪಡೆದರೆ 10 ವರ್ಷ ಯಾರಿಗೂ ಪರಭಾರೆ ಹಾಗೂ ಮಾರಾಟ ಮಾಡುವಂತಿಲ್ಲ ಎಂಬುದು ನಿಯಮವಿದೆ. ಈ ಹಿಂದೇ ಹುಡಾಕ್ಕೆ ಸಂಪೂರ್ಣ ಹಣ ಸಂದಾಯ ಮಾಡಿ ಸರ್ಕಾರಿ ಸಿಬ್ಬಂದಿ, ಮಧ್ಯಮ ವರ್ಗದವರು ನಿವೇಶನ ಪಡೆದಿದ್ದಾರೆ. ಇದರಲ್ಲಿ ಹಲವರು ಮೃತಪಟ್ಟಿದ್ದಾರೆ. ಮೂಲ ಮಾಲೀಕರ ವಾರಸುದಾರರು ಇದ್ದರೂ ತಮ್ಮವರ ಹೆಸರಿನಲ್ಲಿ ನಿವೇಶನ ಇದೆ ಎಂಬ ಮಾಹಿತಿಯೇ ಅವರಿಗಿಲ್ಲ. ಹೀಗಾಗಿ ಹಲವು ನಿವೇಶನಗಳಲ್ಲಿ ಗಿಡ-ಗಂಟಿ ಬೆಳೆದ ಪಾಳು ಬಿದ್ದಿವೆ.&lt;/p&gt;&lt;h3&gt;ಖಾಲಿ ನಿವೇಶನ ಪತ್ತೆ ಹಚ್ಚಿ ಮಾರಾಟ&lt;/h3&gt;&lt;p&gt;ಇಂತಹ ವಾರಸುದಾರರಿಗೆ ತಿಳಿಯದೇ ಇರುವ ನಿವೇಶನ ಪತ್ತೆ ಹಚ್ಚಿ ತಾವೇ ವಾರಸುದಾರರು ಎಂಬಂತೆ ನಕಲಿ ದಾಖಲೆ ಸೃಷ್ಟಿಸಲಾಗುತ್ತಿದೆ. ಬಳಿಕ ಆ ನಿವೇಶನವನ್ನು ತಮ್ಮಲ್ಲಿಯೇ ಒಬ್ಬರ ಹೆಸರಿನಲ್ಲಿ ಖರೀದಿಸಿ ನೋಂದಣಿ ಮಾಡಿಸಿ, ಮತ್ತೊಬ್ಬರಿಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ವ್ಯವಸ್ಥಿತ ಜಾಲಕ್ಕೆ ಹುಡಾ ಸಿಬ್ಬಂದಿಯೇ ಸಾಥ್&zwnj; ನೀಡಿದ್ದು ಬಹಿರಂಗಗೊಂಡಿದೆ. ಆ ಸಿಬ್ಬಂದಿ ವಿರುದ್ಧ ಕ್ರಮವೂ ಆಗಿದೆ.&lt;/p&gt;&lt;h3&gt;ಬೆಳಕಿಗೆ ಬಂದಿದ್ದು ಹೇಗೆ?&lt;/h3&gt;&lt;p&gt;ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡುತ್ತಿರುವ ಕುರಿತು ಇತ್ತೀಚಿಗೆ ಮಾಜಿ ಸೈನಿಕರೊಬ್ಬರು ಬಯಲಿಗೆ ತಂದಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಸರಿಸುಮಾರು 150-200ಕ್ಕೂ ಅಧಿಕ ಸೈಟುಗಳು ಈ ರೀತಿ ಮಾಡಿರುವುದು ಬೆಳಕಿಗೆ ಬಂದಿತು. ಬಳಿಕ ಆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಆದರೆ ಆ ಸಿಬ್ಬಂದಿಯೊಬ್ಬರದೇ ತಪ್ಪಲ್ಲ. ಅದಕ್ಕೆ ಹೊರಗಿನ ಕೆಲ ಕಾಣದ ಕೈಗಳು ಕೆಲಸ ಮಾಡಿದ್ದುಂಟು. ಆದರೆ ಅವರ ಮೇಲೆ ಯಾವುದೇ ಕ್ರಮವಾಗಿಲ್ಲ. ಜತೆಗೆ ಇನ್ನಷ್ಟು ಸಿಬ್ಬಂದಿಯೂ ಇದೆ ಎಂಬ ಆರೋಪವೂ ಕೇಳಿ ಬಂದಿದ್ದುಂಟು. ಆ ಬಗ್ಗೆ ಯಾವುದೇ ಕ್ರಮಗಳಾಗುತ್ತಿಲ್ಲ ಎಂಬ&lt;/p&gt;&lt;p&gt;ಶಾಕೀರ ಸನದಿ ಅಧ್ಯಕ್ಷರಾಗಿದ್ದ ವೇಳೆ ಇದರ ವಿರುದ್ಧ ಕಂಪ್ಲೆಂಟ್&zwnj; ಕೂಡ ಕೊಡಲಾಗಿತ್ತು. ಇದೀಗ ರಾಬರ್ಟ್&zwnj; ದದ್ದಾಪುರಿ ಅವರು ಅಧ್ಯಕ್ಷರಾಗಿದ್ದು ಅವರು ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ.&lt;/p&gt;&lt;p&gt;ಆಗ ವಾರಸುದಾರರು ಇಲ್ಲದ ಸುಮಾರು 150ರಿಂದ 200ಕ್ಕೂ ಅಧಿಕ ನಿವೇಶನಗಳನ್ನೂ ನಕಲಿ ದಾಖಲೆ ಸೃಷ್ಟಿಸಿ ಮರು ಮಾರಾಟ ಮಾಡಲಾಗಿತ್ತು ಎಂದು ಹೇಳಲಾಗಿತ್ತು. ಹಾಗಾದರೆ ವಾರಸುದಾರರು ಇಲ್ಲದ ಎಷ್ಟು ನಿವೇಶನಗಳು ಇನ್ನು ಹುಡಾ ಬಳಿ ಇವೆ ಎಂಬ ಬಗ್ಗೆ ಸಮೀಕ್ಷೆ ನಡೆಸಬೇಕು. ಜತೆಗೆ ಮೂಲಮಾಲೀಕರ ವಾರಸುದಾರರು ಇದ್ದಲ್ಲಿ ಅವರಿಗೆ ಈ ಸೈಟು ನೀಡುವ ಪ್ರಕ್ರಿಯೆ ಆಗಬೇಕು. ಶುದ್ಧ ಕ್ರಿಯಾಪತ್ರ ನೀಡುವ ಬಗ್ಗೆ ಹುಡಾ ಯೋಚನೆ ಮಾಡಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.&lt;/p&gt;&lt;p&gt;ಹಿಂದೆ ನಕಲಿ ದಾಖಲೆ ಸಿದ್ಧಪಡಿಸಿ ಮರು ಮಾರಾಟ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯೊಬ್ಬರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇದೀಗ ಆ ರೀತಿ ಪ್ರಕರಣ ಮುಂದೆ ಆಗದಂತೆ ತಡೆಯಲು ಶೀಘ್ರದಲ್ಲಿಯೇ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.&lt;/p&gt;&lt;h3&gt;ರಾಬರ್ಟ್&zwnj; ದದ್ದಾಪುರಿ, ಅಧ್ಯಕ್ಷ, ಹುಡಾ&lt;/h3&gt;&lt;p&gt;ವಾರಸುದಾರರು ಇಲ್ಲದ ಸೈಟ್&zwnj;ಗಳ ನಕಲಿ ದಾಖಲೆ ಸೃಷ್ಟಿಸಿ ಮರುಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿತು. ಈ ಸಂಬಂಧ ದೂರು ಕೂಡ ದಾಖಲಿಸಲಾಗಿತ್ತು. ಕ್ರಮಕೈಗೊಳ್ಳಬೇಕು ಎನ್ನುವಷ್ಟರಲ್ಲೇ ನಮ್ಮ ಅಧಿಕಾರವಧಿ ಮುಕ್ತಾಯಗೊಂಡಿತು. ಹಿಂದಿನ ಲೇಔಟ್&zwnj;ಗಳ ಶುದ್ಧ ಕ್ರಯಪತ್ರ ಮಾಡಿ ಕೊಡುವುದು ಉತ್ತಮ.&lt;/p&gt;&lt;p&gt;&lt;strong&gt;ಶಾಕೀರ ಸನದಿ, ನಿಕಟ ಪೂರ್ವ ಅಧ್ಯಕ್ಷ, ಹುಡಾ&lt;/strong&gt;&lt;/p&gt;]]></content:encoded>
            <category>dharwad</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hubballi-dharwad-plot-resale-racket-involving-forged-documents-exposed-rav/articleshow-ygdfvxd"/>
        </item>
        <item>
            <title><![CDATA[ಕೊಲ್ಲಾಪುರದಿಂದ ಧಾರವಾಡಕ್ಕೆ ಬಂದ ರೈಲಿನ ಬೋಗಿಯಲ್ಲಿ ಅರೆಬೆತ್ತಲೆ ಮಹಿಳೆಯ ಶವ ಪತ್ತೆ! ಬೆಚ್ಚಿಬಿದ್ದ ರೈಲ್ವೆ ಸಿಬ್ಬಂದಿ!]]></title>
            <link>https://kannada.asianetnews.com/karnataka-districts/woman-dead-body-found-in-kolhapur-to-dharwad-train-railway-staff-shocked-rav/articleshow-z9lf030</link>
            <guid isPermaLink="true">https://kannada.asianetnews.com/karnataka-districts/woman-dead-body-found-in-kolhapur-to-dharwad-train-railway-staff-shocked-rav/articleshow-z9lf030</guid>
            <pubDate>Sun, 30 Aug 2026 13:49:03 +0530</pubDate>
            <description><![CDATA[&lt;p&gt;ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಕೊಲ್ಲಾಪುರದಿಂದ ಬಂದ ರೈಲಿನ ಬೋಗಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಆಸನದ ಕೆಳಗೆ ಅರೆಬೆತ್ತಲೆ, ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದ್ದು, ಬಲ ತ್ಕಾರ ವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m18vj4r82g1qzzyjfh2eqwtz,imgname-1-1788077478664.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ (ಆ.30)&lt;/strong&gt;: ರೈಲ್ವೆ ಬೋಗಿಯಲ್ಲಿ ಅರೆಬೆತ್ತಲೆಯಲ್ಲಿ ಮಲಗಿದಂತಿರುವ ಮಹಿಳೆಯ ಶವ ಪತ್ತೆಯಾದ ಘಟನೆ ಇಂದು ಬೆಳಗ್ಗೆ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.&lt;/p&gt;&lt;h2&gt;ರೈಲ್ವೆ ಸೀಟಿನ ಕೆಳಗೆ ಶವ ಕಂಡು ಸಿಬ್ಬಂದಿ ಶಾಕ್!&lt;/h2&gt;&lt;p&gt;ಕೊಲ್ಲಾಪುರದಿಂದ ಧಾರವಾಡಕ್ಕೆ ಇಂದು ಬೆಳಗ್ಗೆ ಬಂದಿದ್ದ ರೈಲಿನಲ್ಲಿ ಘಟನೆ ನಡೆದಿದೆ. ಪ್ರಯಾಣಿಕರು ಇಳಿಯುತ್ತಿದ್ದಂತೆ ರೈಲ್ವೆ ಸಿಬ್ಬಂದಿ ಬೋಗಿಗಳ ತಪಾಸಣೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಸೀಟಿನ ಕೆಳಗೆ ಮಲಗಿದಂತೆ ರಕ್ತಸಿಕ್ತ ಸ್ಥಿತಿಯಲ್ಲಿ ಮಹಿಳೆಯ ಶವ ಕಂಡು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಇದೇ ರೈಲಿನಲ್ಲಿ ಮಹಿಳೆ ಪ್ರಯಾಣಿಸಿದ್ದು ರಾತ್ರಿ ಒಂಟಿಯಾಗಿ ಪ್ರಯಾಣಿಸುವುದು ತಿಳಿದು ದುಷ್ಕರ್ಮಿಗಳು ಬಲತ್ಕಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆ ಎಲ್ಲಿಯವರು? ಎಲ್ಲಿಗೆ ಪ್ರಯಾಣ ಬೆಳಸಿದ್ದರು ಎಂಬ ಬಗ್ಗೆ ಗುರುತು ಸಿಕ್ಕಿಲ್ಲ.&lt;/p&gt;&lt;h2&gt;ಸ್ಥಳಕ್ಕೆ ರೈಲ್ವೆ ಪೊಲೀಸರು ದೌಡು&lt;/h2&gt;&lt;p&gt;ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ರೈಲ್ವೆ ಪೊಲೀಸರು, ಮೃತ ಮಹಿಳೆಯ ಗುರುತು ಪತ್ತೆ ಹಚ್ಚಲು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಹಿಳೆ ಎಲ್ಲಿಂದ ರೈಲ್ವೆಗೆ ಹತ್ತಿದ್ದಾಳೆ. ಬಲತ್ಕಾರ ಮಾಡಿ ಕೊಂದಿರುವ ದುಷ್ಕರ್ಮಿಗಳು ಯಾರು ಎಂಬ ಬಗ್ಗೆ ತನಿಖೆ, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿರುವ ಪೊಲೀಸರು. ಧಾರವಾಡ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;]]></content:encoded>
            <category>dharwad</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/woman-dead-body-found-in-kolhapur-to-dharwad-train-railway-staff-shocked-rav/articleshow-z9lf030"/>
        </item>
        <item>
            <title><![CDATA[ಆದಾಯದಲ್ಲಿ ನೈಋತ್ಯ ರೈಲ್ವೆಗೆ  ಗೋಲ್ಡನ್ ಆಗಸ್ಟ್: ₹805.70 ಕೋಟಿ ಮಾಸಿಕ ಆದಾಯ ಗಳಿಸಿ ಹೊಸ ದಾಖಲೆ!]]></title>
            <link>https://kannada.asianetnews.com/state/south-western-railway-records-golden-august-with-rs-805-70-crore-monthly-revenue-gdp/articleshow-z9ofhl9</link>
            <guid isPermaLink="true">https://kannada.asianetnews.com/state/south-western-railway-records-golden-august-with-rs-805-70-crore-monthly-revenue-gdp/articleshow-z9ofhl9</guid>
            <pubDate>Thu, 03 Sep 2026 16:20:08 +0530</pubDate>
            <description><![CDATA[ನೈಋತ್ಯ ರೈಲ್ವೆಯು 2026ರ ಆಗಸ್ಟ್&zwnj;ನಲ್ಲಿ ₹805.70 ಕೋಟಿ ಆದಾಯ ಗಳಿಸಿ 'ಸುವರ್ಣ ಆಗಸ್ಟ್' ಸಾಧನೆ ಮಾಡಿದೆ. ಈ ಮೂಲಕ, ಪ್ರಸಕ್ತ ಹಣಕಾಸು ವರ್ಷದ ಒಟ್ಟು ಆದಾಯ ₹3,850.05 ಕೋಟಿಗೆ ತಲುಪಿದೆ. ಇದೇ ತಿಂಗಳಲ್ಲಿ, 4.48 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಸ್ಥಾಪಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1k7yjhpkndq1fsj837ckq5c,imgname-indian-railway--2--1788426013238.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ನೈಋತ್ಯ ರೈಲ್ವೆ (SWR) 2026ರ ಆಗಸ್ಟ್ ತಿಂಗಳಿನಲ್ಲಿ ಸರ್ವತೋಮುಖ ಪ್ರಗತಿ ಸಾಧಿಸುವ ಮೂಲಕ 'ಸುವರ್ಣ ಆಗಸ್ಟ್' ಸಾಧನೆಗೆ ಭಾಜನವಾಗಿದೆ. ಈ ಅವಧಿಯಲ್ಲಿ ವಲಯವು ₹805.70 ಕೋಟಿ ಮಾಸಿಕ ಒಟ್ಟು ಆದಾಯವನ್ನು ಕಲೆಹಾಕಿದೆ. ಈ ಮೂಲಕ, ಪ್ರಸಕ್ತ 2026-27ನೇ ಹಣಕಾಸು ವರ್ಷದ ಆಗಸ್ಟ್ ಅಂತ್ಯದ ವೇಳೆಗೆ ನೈಋತ್ಯ ರೈಲ್ವೆಯ ಒಟ್ಟು ಆದಾಯವು ₹3,850.05 ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯ ₹3,757.85 ಕೋಟಿ ಆದಾಯಕ್ಕೆ ಹೋಲಿಸಿದರೆ, ಈ ಬಾರಿ ₹92.20 ಕೋಟಿ (ಶೇ. 2.45) ಹೆಚ್ಚುವರಿ ಗಳಿಕೆಯೊಂದಿಗೆ ಬಲವಾದ ವೃದ್ಧಿ ದಾಖಲಿಸಿದೆ.&lt;/p&gt;&lt;h2&gt;ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ&lt;/h2&gt;&lt;p&gt;ಸ್ಥಾಪನೆಯಾದ ದಿನದಿಂದಲೂ ಆಗಸ್ಟ್ ತಿಂಗಳಿನಲ್ಲಿ ದಾಖಲಾದ ಅತ್ಯಂತ ಗರಿಷ್ಠ ಪ್ರಮಾಣದ ಸರಕು ಲೋಡಿಂಗ್ ಸಾಧನೆಯನ್ನು ನೈಋತ್ಯ ರೈಲ್ವೆ ಈ ಬಾರಿ ಮಾಡಿದೆ. ಆಗಸ್ಟ್ ಒಂದೇ ತಿಂಗಳಿನಲ್ಲಿ 4.48 ಮಿಲಿಯನ್ ಟನ್ (MT) ಸರಕು ಸಾಗಣೆ ಮಾಡಲಾಗಿದ್ದು, ಇದು ಕಳೆದ ವರ್ಷದ ಆಗಸ್ಟ್&zwnj;ಗೆ ಹೋಲಿಸಿದರೆ ಶೇ. 6.3 ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಆಗಸ್ಟ್ ಅಂತ್ಯದವರೆಗಿನ ಒಟ್ಟು ಸರಕು ಸಾಗಣೆಯು 21.67 MT ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ. 5.8 ರಷ್ಟು ನಿರಂತರ ಏರಿಕೆ ಕಂಡಿದೆ.&lt;/p&gt;&lt;h2&gt;ವಲಯವಾರು ಸರಕು ಸಾಗಣೆ ಪ್ರಗತಿ ವಿವರ:&lt;/h2&gt;&lt;p&gt;ಇಂಧನ ಮತ್ತು ಭಾರೀ ಕೈಗಾರಿಕಾ ವಲಯದ ಕಚ್ಚಾ ವಸ್ತುಗಳ ಸಾಗಣೆಯಲ್ಲಿ ಕಂಡುಬಂದ ಗಣನೀಯ ಏರಿಕೆಯು ಈ ಸಾರ್ವಕಾಲಿಕ ದಾಖಲೆಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;ಆಹಾರ ಧಾನ್ಯಗಳ ರವಾನೆಯಲ್ಲಿ ಶೇ. 118.4 ರಷ್ಟು ಅಭೂತಪೂರ್ವ ಏರಿಕೆ ಕಂಡುಬಂದಿದ್ದು, ಸಾಗಣೆ ಪ್ರಮಾಣ 0.038 MT ನಿಂದ 0.083 MT ಗೆ ಜಿಗಿದಿದೆ. ಕಲ್ಲಿದ್ದಲು ಸಾಗಣೆಯಲ್ಲಿ ಶೇ. 37.4 ರಷ್ಟು ಅಸಾಧಾರಣ ಹೆಚ್ಚಳವಾಗಿದ್ದು, ಲೋಡಿಂಗ್ ಪ್ರಮಾಣ 0.75 MT ನಿಂದ 1.03 MT ಗೆ ಏರಿಕೆಯಾಗಿದೆ. ಸಿಮೆಂಟ್ ಸಾಗಣೆಯಲ್ಲಿ ಶೇ. 25 (0.04 MT) ಹಾಗೂ ಉಕ್ಕಿನ ಉತ್ಪನ್ನಗಳಲ್ಲಿ ಶೇ. 18.1 ರಷ್ಟು (1.11 MT) ಪ್ರಗತಿ ದಾಖಲಾಗಿದೆ.&lt;/p&gt;&lt;p&gt;ಇತರ ವಲಯಗಳು: ಕಂಟೇನರ್ ಟ್ರಾಫಿಕ್&zwnj;ನಲ್ಲಿ ಶೇ. 13.6 (0.10 MT), ಖನಿಜ ತೈಲ ಸಾಗಣೆಯಲ್ಲಿ ಶೇ. 6.9 (0.19 MT) ಹಾಗೂ ಇತರ ಸರಕುಗಳ ಸಾಗಣೆಯಲ್ಲಿ ಶೇ. 29.6 (1.08 MT) ನಷ್ಟು ಚೇತರಿಕೆ ಕಂಡುಬಂದಿದೆ.&lt;/p&gt;&lt;p&gt;ಸಂಚಿತ ಆಧಾರದಲ್ಲಿ (ಆಗಸ್ಟ್ ಅಂತ್ಯದವರೆಗೆ) ಕಬ್ಬಿಣದ ಅದಿರು ಪ್ರಮುಖ ಕೊಡುಗೆ ನೀಡುತ್ತಿದ್ದು, ಒಟ್ಟು 8.48 MT (+4.8%) ಸಾಗಣೆಯಾಗಿದೆ. ಇದಲ್ಲದೆ, ಸಂಚಿತ ಉಕ್ಕು 4.82 MT (+7.6%) ಮತ್ತು ಕಲ್ಲಿದ್ದಲು 4.46 MT (+9.7%) ಸಾಗಣೆಯಾಗಿ ರೈಲ್ವೆ ಜಾಲಕ್ಕೆ ಶಕ್ತಿ ತುಂಬಿವೆ.&lt;/p&gt;&lt;h2&gt;ವಿಭಾಗವಾರು ಆದಾಯ ಗಳಿಕೆ:&lt;/h2&gt;&lt;p&gt;ಆಗಸ್ಟ್ ತಿಂಗಳಲ್ಲಿ ಸಂಸ್ಥೆಯ ಬ್ಯಾಲೆನ್ಸ್ ಶೀಟ್&zwnj;ಗೆ ಸರಕು ಸಾಗಣೆ ಮತ್ತು ಪ್ರಯಾಣಿಕರ ಸೇವೆಗಳೆರಡೂ ಪ್ರಮುಖ ಬೆನ್ನೆಲುಬಾಗಿ ನಿಂತಿವೆ.&lt;/p&gt;&lt;p&gt;ಸರಕು ವಿಭಾಗ: ಆಗಸ್ಟ್ ತಿಂಗಳೊಂದರಲ್ಲೇ ಸರಕು ಕಾರ್ಯಾಚರಣೆಯಿಂದ ₹417.08 ಕೋಟಿ ಆದಾಯ ಬಂದಿದ್ದು, ಪ್ರಸಕ್ತ ಸಾಲಿನ ಸಂಚಿತ ಸರಕು ಆದಾಯ ₹2,074.36 ಕೋಟಿಗೆ ತಲುಪಿದೆ.&lt;/p&gt;&lt;p&gt;ಪ್ರಯಾಣಿಕರ ವಿಭಾಗ: ಆಗಸ್ಟ್&zwnj;ನಲ್ಲಿ ಸುಮಾರು 1.5 ಕೋಟಿ ಪ್ರಯಾಣಿಕರು ರೈಲು ಸೇವೆ ಬಳಸಿದ್ದು, ₹348.97 ಕೋಟಿ ಆದಾಯ ಬಂದಿದೆ. ಇದರೊಂದಿಗೆ ಈ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ವಿಭಾಗದ ಒಟ್ಟು ಆದಾಯ ₹1,552.70 ಕೋಟಿಗೆ ಜಿಗಿದಿದೆ. ಇದು ಕಳೆದ ವರ್ಷಕ್ಕಿಂತ ಶೇ. 13.51 ರಷ್ಟು ಗಮನಾರ್ಹ ಬೆಳವಣಿಗೆಯಾಗಿದೆ (ಒಟ್ಟು 7.6 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ).&lt;/p&gt;&lt;p&gt;ರೈಲ್ವೆ ವಲಯದ ಈ ಐತಿಹಾಸಿಕ ಸಾಧನೆ ಮತ್ತು ಶ್ರೇಷ್ಠ ಕಾರ್ಯಕ್ಷಮತೆಗಾಗಿ ನೈಋತ್ಯ ರೈಲ್ವೆ ಮಹಾಪ್ರಬಂಧಕ (GM) ಪಿ. ಅನಂತ್ ಅವರು ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಶ್ರಮಿಕರ ನಿರಂತರ ಶ್ರಮವನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.&lt;/p&gt;]]></content:encoded>
            <category>dharwad</category>
            <dc:creator>Gowthami K</dc:creator>
            <atom:link href="https://kannada.asianetnews.com/state/south-western-railway-records-golden-august-with-rs-805-70-crore-monthly-revenue-gdp/articleshow-z9ofhl9"/>
        </item>
    </channel>
</rss>
