<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 13 Sep 2026 07:58:07 +0530</lastBuildDate>
        <atom:link href="https://kannada.asianetnews.com/rss/davanagere" rel="self" type="application/rss+xml"/>
        <item>
            <title><![CDATA[ಮುಳ್ಳು ಚುಚ್ಚಿದ್ರೂ ಹೇಳುತ್ತಿದ್ದ ಮಗಳು, ಈಗ 3 ಅಡಿ ಕಿಟಕಿಯಲ್ಲಿ ಹೆಣವಾಗಿದ್ದಾಳೆ; ನ್ಯಾಯ ಕೇಳಿದ ಅಪ್ಪ!]]></title>
            <link>https://kannada.asianetnews.com/gallery/karnataka-districts/davanagere-team-academy-student-ranjitha-suspicious-death-hostel-sat-04d2s17</link>
            <guid isPermaLink="true">https://kannada.asianetnews.com/gallery/karnataka-districts/davanagere-team-academy-student-ranjitha-suspicious-death-hostel-sat-04d2s17</guid>
            <pubDate>Thu, 03 Sep 2026 13:24:34 +0530</pubDate>
            <description><![CDATA[ದಾವಣಗೆರೆಯ ಟೀಂ ಅಕಾಡೆಮಿ ಹಾಸ್ಟೆಲ್&zwnj;ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಂಜಿತಾ (17) ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳ ಸಾವಿನ ಹಿಂದೆ ಕಾಲೇಜು ಆಡಳಿತ ಮಂಡಳಿಯ ಕೈವಾಡವಿದೆ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1k3ez63njdbg767n13kjssc,imgname-davanagere-student-ranjitha-death-1788421307586.jpg" type="image/jpeg" height="390" width="690"/>
            <content:encoded><![CDATA[ದಾವಣಗೆರೆಯ ಟೀಂ ಅಕಾಡೆಮಿ ಹಾಸ್ಟೆಲ್&zwnj;ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಂಜಿತಾ (17) ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳ ಸಾವಿನ ಹಿಂದೆ ಕಾಲೇಜು ಆಡಳಿತ ಮಂಡಳಿಯ ಕೈವಾಡವಿದೆ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.&lt;img&gt;&lt;p&gt;ವಿದ್ಯಾಭ್ಯಾಸ ಮಾಡಿ ಉನ್ನತ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ 17 ವರ್ಷದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಗರದ ಆಂಜನೇಯ ಬಡಾವಣೆ ಸಮೀಪವಿರುವ 'ಟೀಂ ಅಕಾಡೆಮಿ'ಯ ಹಾಸ್ಟೆಲ್&zwnj;ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ (17) ಅವರ ಕೊನೆಯುಸಿರೆಳೆದ ದುರ್ದೈವಿ.&lt;/p&gt;&lt;p&gt;ಮಗಳ ಸಾವಿನ ಸುತ್ತ ತೀವ್ರ ಸಂಶಯ ವ್ಯಕ್ತಪಡಿಸಿರುವ ಪೋಷಕರು, 'ಕಾಲೇಜು ಆಡಳಿತ ಮಂಡಳಿಯೇ ನಮ್ಮ ಮಗಳನ್ನು ಹೊಡೆದು ಸಾಯಿಸಿದೆ' ಎಂದು ಗಂಭೀರ ಆರೋಪ ಮಾಡಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕಣ್ಣೀರ ಕೋಡಿ ಹರಿಸಿದ ತಂದೆ: &quot;ಮೂರು ಅಡಿ ಕಿಟಕಿಯಲ್ಲಿ ಸಾವು ಹೇಗೆ ಸಾಧ್ಯ?&quot;&lt;/strong&gt;&lt;/p&gt;&lt;p&gt;ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರವತ್ತಿ ಗ್ರಾಮದ ನಿಂಗಪ್ಪ ಮತ್ತು ರೂಪಾ ದಂಪತಿಯ ಪುತ್ರಿಯಾಗಿರುವ ರಂಜಿತಾ, ಮೊದಲ ವರ್ಷದ ಪಿಯುಸಿಯಿಂದಲೂ ಇದೇ ಟೀಂ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಮಗಳ ಪಾರ್ಥಿವ ಶರೀರವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿದ ತಂದೆ ನಿಂಗಪ್ಪ ಅವರ ಮಾತುಗಳು ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸಿದವು.&lt;/p&gt;&lt;img&gt;&lt;p&gt;'ನನ್ನ ಮಗಳಿಗೆ ಕಾಲಿಗೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ತಕ್ಷಣ ನನಗೆ ತಿಳಿಸುತ್ತಿದ್ದಳು. ಹಾಸ್ಟೆಲ್&zwnj;ಗೆ ಹೋದಾಗಲೆಲ್ಲಾ ಪ್ರೀತಿಯಿಂದ ಓಡಿ ಬಂದು ಅಪ್ಪಿಕೊಳ್ಳುತ್ತಿದ್ದಳು. ಘಟನೆ ನಡೆದ ದಿನ ಬೆಳಗ್ಗೆಯೂ ತಾಯಿಗೆ ಕರೆ ಮಾಡಿ ಮಾತನಾಡಿದ್ದಳು. ಅಂತಹ ಮುಗ್ಧ ಮಗಳು ಕೇವಲ ಮೂರು ಅಡಿ ಎತ್ತರದ ಕಿಟಕಿಗೆ ನೇಣು ಬಿಗಿದುಕೊಳ್ಳಲು ಹೇಗೆ ಸಾಧ್ಯ? ಆಕೆಯ ಸಾವಿನ ಹಿಂದೆ ಕಾಲೇಜು ಆಡಳಿತ ಮಂಡಳಿಯ ಕೈವಾಡವಿದೆ. ನನ್ನ ಮಗಳಿಗೆ ಏನೋ ಅನ್ಯಾಯವಾಗಿದೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು' ಎಂದು ತಂದೆ ನಿಂಗಪ್ಪ ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಪೋಷಕರ ಪ್ರತಿಭಟನೆಯ ಆತಂಕ: ಕಾಲೇಜಿಗೆ ಬೀಗ&lt;/strong&gt;&lt;/p&gt;&lt;p&gt;ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಕಾಲೇಜಿನ ಮುಂದೆ ಜಮಾಯಿಸುವ ಸಾಧ್ಯತೆ ಇತ್ತು. ಯಾವುದೇ ಅಹಿತಕರ ಘಟನೆಗಳು ಅಥವಾ ಪ್ರತಿಭಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಟೀಂ ಅಕಾಡೆಮಿ ಆಡಳಿತ ಮಂಡಳಿಯು ಕಾಲೇಜಿಗೆ ದಿಢೀರ್ ರಜೆ ಘೋಷಿಸಿ, ಗೇಟ್&zwnj;ಗಳಿಗೆ ಬೀಗ ಜಡಿದಿದೆ.&lt;/p&gt;&lt;p&gt;&lt;strong&gt;ಆಡಳಿತ ಮಂಡಳಿ ನೀಡಿದ ಸ್ಪಷ್ಟನೆ ಏನು?&lt;/strong&gt;&lt;/p&gt;&lt;p&gt;ಈ ಗಂಭೀರ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಟೀಂ ಅಕಾಡೆಮಿ ಕಾಲೇಜಿನ ಅಧ್ಯಕ್ಷ ಕೆ.ಎಂ. ಮಂಜಪ್ಪ ಅವರು, &lsquo;ರಂಜಿತಾ ನಾಲ್ಕು ದಿನಗಳ ಹಿಂದೆಯಷ್ಟೇ ಊರಿಗೆ ಹೋಗಿ ವಾಪಸ್ ಬಂದಿದ್ದಳು. ಬಂದಾಗಿನಿಂದ ಕೊಂಚ ಮೌನವಾಗಿದ್ದಳು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಘಟನೆಯ ದಿನ ಸಂಜೆ 5:30ಕ್ಕೆ ಹಾಸ್ಟೆಲ್ ಕೊಠಡಿಗೆ ತೆರಳಿದ್ದಳು. ರಾತ್ರಿ 8:30ಕ್ಕೆ ಕೊಠಡಿಯಲ್ಲಿದ್ದ ಇತರ ವಿದ್ಯಾರ್ಥಿನಿಯರು ಬಂದು ನೋಡಿದಾಗ ಒಳಗಿನಿಂದ ಬಾಗಿಲು ತೆರೆದಿರಲಿಲ್ಲ&rsquo; ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಈ ಘಟನೆ ನಂತರ, ವಾರ್ಡನ್ ನಮಗೆ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿಯ ಪೋಷಕರು ದಾವಣಗೆರೆಯಲ್ಲಿರುವ ತಮ್ಮ ಸಂಬಂಧಿಕರನ್ನು ಕಳುಹಿಸಿಕೊಟ್ಟಿದ್ದರು. ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಿಕರ ಸಮ್ಮುಖದಲ್ಲೇ ಬಾಗಿಲು ಒಡೆದು ನೋಡಿದಾಗ ದುರಂತ ಬೆಳಕಿಗೆ ಬಂದಿದೆ. ಕೊಠಡಿಯಲ್ಲಿ ಯಾವುದೇ ಡೆತ್&zwnj;ನೋಟ್ ಲಭ್ಯವಾಗಿಲ್ಲ. ಪೋಷಕರು ಅತೀವ ದುಃಖದಲ್ಲಿದ್ದು, ಭಾವೋದ್ವೇಗದಿಂದ ಆರೋಪ ಮಾಡುತ್ತಿದ್ದಾರೆ. ಸಮಗ್ರ ತನಿಖೆ ನಡೆಯಲಿ, ಸತ್ಯಾಂಶ ಹೊರಬರಲಿ&rsquo; ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಪೊಲೀಸ್ ತನಿಖೆ ಚುರುಕು&lt;/strong&gt;&lt;/p&gt;&lt;p&gt;ಸದ್ಯ ಮೃತ ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನನ್ವಯ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಾಸ್ಟೆಲ್ ಕೊಠಡಿಯನ್ನು ಪರಿಶೀಲಿಸಿದ್ದು, ಸ್ಥಳದಲ್ಲಿದ್ದ ವಿದ್ಯಾರ್ಥಿನಿಯರು ಮತ್ತು ವಾರ್ಡನ್&zwnj;ಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Suvarna News</dc:creator>
            <atom:link href="https://kannada.asianetnews.com/gallery/karnataka-districts/davanagere-team-academy-student-ranjitha-suspicious-death-hostel-sat-04d2s17"/>
        </item>
        <item>
            <title><![CDATA[Success Story: 71 ಬಾರಿ ವರ್ಗಾವಣೆಯಾದರೂ ಮಂಡಿಯೂರದ ಐಎಎಸ್‌/ಐಪಿಎಸ್‌ ಆಫೀಸರ್ಸ್‌; ಅದರಲ್ಲೊಬ್ಬ ಕನ್ನಡತಿ!]]></title>
            <link>https://kannada.asianetnews.com/karnataka-districts/ias-ips-officers-transferred-many-times-for-standing-against-corruption-bmk/articleshow-0guh182</link>
            <guid isPermaLink="true">https://kannada.asianetnews.com/karnataka-districts/ias-ips-officers-transferred-many-times-for-standing-against-corruption-bmk/articleshow-0guh182</guid>
            <pubDate>Thu, 27 Aug 2026 20:47:20 +0530</pubDate>
            <description><![CDATA[ಭಾರತದ ಪ್ರಾಮಾಣಿಕ ಐಎಎಸ್/ಐಪಿಎಸ್ ಅಧಿಕಾರಿಗಳಾದ ಪ್ರದೀಪ್ ಕಸ್ನಿ, ಅಶೋಕ್ ಖೇಮ್ಕಾ, ಮತ್ತು ಕರ್ನಾಟಕದ ಡಿ. ರೂಪಾ ಅವರಂತಹವರು ಭ್ರಷ್ಟಾಚಾರದ ವಿರುದ್ಧ ನಿಂತಿದ್ದಕ್ಕೆ ಪದೇ ಪದೇ ವರ್ಗಾವಣೆಯ ಶಿಕ್ಷೆ ಅನುಭವಿಸಿದ್ದಾರೆ. 71 ಬಾರಿ ವರ್ಗಾವಣೆಗೊಂಡರೂ ತಮ್ಮ ನಿಷ್ಠೆಯಿಂದ ಹಿಂದೆ ಸರಿಯದ ಈ ಅಧಿಕಾರಿಗಳ ಹೋರಾಟದ ಕಥೆಯು ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣಗೊಳಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m11wppdda49s12tyby9jv18c,imgname-honest-officers-1787843795373.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತದ ನಾಗರಿಕ ಸೇವೆ (IAS) ಮತ್ತು ಪೊಲೀಸ್ ಸೇವೆ (IPS) ದೇಶದ ಆಡಳಿತ ಯಂತ್ರದ ಬೆನ್ನೆಲುಬು. ಆದರೆ, ಇದೇ ವ್ಯವಸ್ಥೆಯಲ್ಲಿ ರಾಜಕೀಯ ಒತ್ತಡಗಳಿಗೆ ಮಣಿಯದೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ, ಕಾನೂನಿನ ಚೌಕಟ್ಟಿನಲ್ಲಿ ನಿಷ್ಠೆಯಿಂದ ಕೆಲಸ ಮಾಡುವ ಅಧಿಕಾರಿಗಳಿಗೆ ಸಿಗುವ ಬಹುಮಾನ ಮಾತ್ರ ಪದೇ ಪದೇ ಆಗುವ &quot;ವರ್ಗಾವಣೆ&quot;. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೇಶದ ಅತಿ ಹೆಚ್ಚು ಬಾರಿ ವರ್ಗಾವಣೆಗೊಂಡ ಪ್ರಾಮಾಣಿಕ ಅಧಿಕಾರಿಗಳ ಪಟ್ಟಿ ಕೇವಲ ಅಂಕಿ-ಅಂಶಗಳಲ್ಲ, ಅದು ಅವರು ವ್ಯವಸ್ಥೆಯ ವಿರುದ್ಧ ನಡೆಸಿದ ಧೀಮಂತ ಹೋರಾಟದ ಸಾಕ್ಷಿಯಾಗಿದೆ.&lt;/p&gt;&lt;h2&gt;&lt;strong&gt;ವರ್ಗಾವಣೆಯಲ್ಲಿ ಅರ್ಧಶತಕ ಬಾರಿಸಿದ ಕಲಿಗಳು!&lt;/strong&gt;&lt;/h2&gt;&lt;p&gt;ಈ ಪಟ್ಟಿಯಲ್ಲಿ ಮೊದಲಿಗೆ ಕೇಳಿಬರುವ ಹೆಸರು ಹರಿಯಾಣ ಕೇಡರ್&zwnj;ನ ಐಎಎಸ್ ಅಧಿಕಾರಿ ಪ್ರದೀಪ್ ಕಸ್ನಿ ಅವರದ್ದು. ತಮ್ಮ 34 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಬರೋಬ್ಬರಿ 71 ಬಾರಿ ವರ್ಗಾವಣೆಗೊಂಡ ದಾಖಲೆ ಇವರದ್ದಾಗಿದೆ. ಗುರಗಾಂವ್&zwnj;ನ ನೂರಾರು ಕೋಟಿ ರೂಪಾಯಿಗಳ ಅಕ್ರಮ ಭೂ ಕಬಳಿಕೆಯನ್ನು ಬಯಲಿಗೆಳೆದಿದ್ದ ಕಸ್ನಿ, ಮುಖ್ಯಮಂತ್ರಿಗಳ ಕಚೇರಿಯಿಂದ ಬಂದಿದ್ದ ನಿಯಮಬಾಹಿರ ನೇಮಕಾತಿಗಳಿಗೆ ಸಹಿ ಹಾಕಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಇವರನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ಎತ್ತಿ ಅಬ್ಬರಿಸಲಾಗಿತ್ತು.&lt;/p&gt;&lt;h3&gt;&lt;strong&gt;ದಿಗ್ಗಜ ಖೇಮ್ಕಾ!&lt;/strong&gt;&lt;/h3&gt;&lt;p&gt;ಇವರೊಂದಿಗೆ ಇಡೀ ದೇಶದಲ್ಲೇ ಪ್ರಾಮಾಣಿಕತೆಯ ಪರ್ಯಾಯ ಹೆಸರಾಗಿ ಗುರುತಿಸಿಕೊಂಡವರು ಅಶೋಕ್ ಖೇಮ್ಕಾ (IAS). 1991ರ ಬ್ಯಾಚ್&zwnj;ನ ಈ ಅಧಿಕಾರಿ ಇತ್ತೀಚೆಗಷ್ಟೇ ನಿವೃತ್ತರಾಗುವಷ್ಟರಲ್ಲಿ 57 ರಿಂದ 66 ಬಾರಿ ವರ್ಗಾವಣೆಯ ಶಿಕ್ಷೆ ಅನುಭವಿಸಿದ್ದರು. 2012ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾಡ್ರಾ ಮತ್ತು ಡಿಎಲ್&zwnj;ಎಫ್ ಸಂಸ್ಥೆಯ ನಡುವಿನ ₹58 ಕೋಟಿ ಮೌಲ್ಯದ ಅಕ್ರಮ ಭೂ ವ್ಯವಹಾರದ ಮ್ಯುಟೇಶನ್ ರದ್ದುಗೊಳಿಸಿ ಖೇಮ್ಕಾ ದೇಶಾದ್ಯಂತ ಸಂಚಲನ ಮೂಡಿಸಿದ್ದರು. ಬೀಜ ನಿಗಮದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕೂ ಇವರು ಬೆಲೆ ತೆರಬೇಕಾಯಿತು.&lt;/p&gt;&lt;h3&gt;&lt;strong&gt;ಕರ್ನಾಟಕದ ಹೆಮ್ಮೆ ಡಿ. ರೂಪಾ!&lt;/strong&gt;&lt;/h3&gt;&lt;p&gt;ದಕ್ಷಿಣ ಭಾರತದಲ್ಲೂ ಇಂತಹ ಸಿಂಹಿಣಿಯರಿದ್ದಾರೆ ಎಂಬುದಕ್ಕೆ ಕರ್ನಾಟಕದ ಐಪಿಎಸ್ ಅಧಿಕಾರಿ ಡಿ. ರೂಪಾ ಮೌಡಗಿಲ್ ಅವರೇ ಸಾಕ್ಷಿ. ತಮ್ಮ 26 ವರ್ಷಗಳ ಪೊಲೀಸ್ ಸೇವೆಯಲ್ಲಿ 40 ಕ್ಕೂ ಹೆಚ್ಚು ಬಾರಿ ವರ್ಗಾವಣೆಗೊಂಡಿರುವ ರೂಪಾ, 2017ರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಎಐಎಡಿಎಂಕೆ ನಾಯಕಿ ಶಶಿಕಲಾಗೆ ₹2 ಕೋಟಿ ಲಂಚದ ಪ್ರತಿಯಾಗಿ ನೀಡಲಾಗಿದ್ದ ವಿಐಪಿ ಸೌಲಭ್ಯಗಳನ್ನು ವರದಿ ಸಹಿತ ಬಯಲಿಗೆಳೆದು ಜೈಲು ಆಡಳಿತವನ್ನು ನಡುಗಿಸಿದ್ದರು. ಅಂದಿನ ಮಧ್ಯಪ್ರದೇಶ ಸಿಎಂ ಉಮಾ ಭಾರತಿ ಅವರನ್ನು ಬಂಧಿಸಿದ ಧೀರ ವನಿತೆ ಇವರಾಗಿದ್ದಾರೆ.&lt;/p&gt;&lt;h3&gt;&lt;strong&gt;ತುಕಾರಾಂ ಮುಂಡೆ!&lt;/strong&gt;&lt;/h3&gt;&lt;p&gt;ಇನ್ನು ಮಹಾರಾಷ್ಟ್ರದ ಐಎಎಸ್ ಅಧಿಕಾರಿ ತುಕಾರಾಂ ಮುಂಡೆ ತಮ್ಮ 21 ವರ್ಷಗಳ ವೃತ್ತಿಜೀವನದಲ್ಲಿ 25 ಬಾರಿ ವರ್ಗಾವಣೆಗೊಂಡಿದ್ದಾರೆ. ಸೋಲಾಪುರದಲ್ಲಿ ಅಕ್ರಮ ಮರಳು ಮಾಫಿಯಾ ವಿರುದ್ಧ ಯುದ್ಧ ಸಾರಿದ್ದ ಇವರ ಮೇಲೆ ಕೊಲೆ ಯತ್ನ ನಡೆದಿತ್ತು. ಆದರೂ ಹೆದರದ ಮುಂಡೆ, ನವಿ ಮುಂಬೈನಲ್ಲಿ ರಾಜಕಾರಣಿಗಳ ₹180 ಕೋಟಿಗೂ ಅಧಿಕ ಮೌಲ್ಯದ ಅನಗತ್ಯ ಯೋಜನೆಗಳನ್ನು ರದ್ದುಗೊಳಿಸಿ ಸಾರ್ವಜನಿಕ ಹಣ ಉಳಿಸಿದ್ದರು. ಸದ್ಯ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತದ (FDA) ಕಮಿಷನರ್ ಆಗಿರುವ ಇವರು ಕಲಬೆರಕೆ ದಂಧೆಯ ವಿರುದ್ಧ ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ.&lt;/p&gt;&lt;h3&gt;&lt;strong&gt;ಉತ್ತರ ಪ್ರದೇಶದ ವರದಿ ಹಾಗೂ ಸಾರ್ವಜನಿಕ ಸಂದೇಶ!&lt;/strong&gt;&lt;/h3&gt;&lt;p&gt;ಇವರಷ್ಟೇ ಅಲ್ಲದೆ, ಉತ್ತರ ಪ್ರದೇಶದ ಕೆ.ಎಲ್. ಮೀನಾ (59 ವರ್ಗಾವಣೆ), ವಿಜಯ್ ಸಿಂಗ್ (47 ವರ್ಗಾವಣೆ) ಮತ್ತು ಕಮಲ್ ಸಕ್ಸೇನಾ (48 ವರ್ಗಾವಣೆ) ಅವರ ಇತಿಹಾಸವೂ ಇದೇ ರೀತಿಯ ಸತ್ಯವನ್ನು ಸಾರುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಮೂಟೆ-ಮುಡಿ ಕಟ್ಟುವ ಪರಿಸ್ಥಿತಿ ಬಂದರೂ ಈ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯದ ಹಾದಿಯಲ್ಲಿ ಕಿಂಚಿತ್ತೂ ರಾಜಿ ಮಾಡಿಕೊಳ್ಳಲಿಲ್ಲ.ಈ ಅಧಿಕಾರಿಗಳ ಕಥೆಗಳು ನಮಗೆ ಕೇವಲ ವ್ಯವಸ್ಥೆಯ ಕರಾಳ ಮುಖವನ್ನು ಮಾತ್ರ ತೋರಿಸುವುದಿಲ್ಲ, ಬದಲಿಗೆ ಎಂತಹದ್ದೇ ರಾಜಕೀಯ ಚಂಡಮಾರುತ ಎದ್ದರೂ ಪ್ರಾಮಾಣಿಕತೆಯ ದೀಪವನ್ನು ಉರಿಯುವಂತೆ ಇಡಬಹುದು ಎಂಬ ಭರವಸೆಯನ್ನು ಯುವ ಪೀಳಿಗೆಗೆ ನೀಡುತ್ತವೆ. ವರ್ಗಾವಣೆಗಳು ಇವರ ದೇಹವನ್ನು ಬೇರೆಡೆಗೆ ಕಳುಹಿಸಿರಬಹುದು, ಆದರೆ ಇವರ ನಿಷ್ಠೆಯನ್ನಂತೂ ಬದಲಿಸಲು ಸಾಧ್ಯವಾಗಿಲ್ಲ ಎಂಬುದು ಇಂದಿನ ಆಡಳಿತ ವ್ಯವಸ್ಥೆಗೆ ಒಂದು ದೊಡ್ಡ ಪಾಠವಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/ias-ips-officers-transferred-many-times-for-standing-against-corruption-bmk/articleshow-0guh182"/>
        </item>
        <item>
            <title><![CDATA[ಹೆಂಡತಿಗೆ ಮುತ್ತೈದೆ ಸಾವು ಕರುಣಿಸಿ, ತಾನೂ ಸಾವಿನಲ್ಲಿ ಒಂದಾದ ಗಂಡ; ಶೋಕದಲ್ಲಿ ಮುಳುಗಿದ ಗ್ರಾಮ!]]></title>
            <link>https://kannada.asianetnews.com/relationship/davanagere-elderly-couple-joined-also-death-means-dies-hours-apart-in-hadadi-village/articleshow-1gz1g9b</link>
            <guid isPermaLink="true">https://kannada.asianetnews.com/relationship/davanagere-elderly-couple-joined-also-death-means-dies-hours-apart-in-hadadi-village/articleshow-1gz1g9b</guid>
            <pubDate>Mon, 10 Aug 2026 13:18:36 +0530</pubDate>
            <description><![CDATA[&lt;p&gt;ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದಜ್ಜಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಅವರ ಪತಿ ಮಲ್ಲಜ್ಜ ಕೂಡ ಪತ್ನಿಯ ಅಗಲಿಕೆಯ ದುಃಖದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾವಿನಲ್ಲೂ ಒಂದಾದ ಈ ವೃದ್ಧ ದಂಪತಿಯ ಹೃದಯವಿದ್ರಾವಕ ಘಟನೆ ಇಡೀ ಗ್ರಾಮದಲ್ಲಿ ಶೋಕವನ್ನುಂಟುಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzna9fkv5r5nqp3qq8rh855j,imgname-davanagere-couple-joined-death-1786348093051.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಆ.10): 'ನೂ&lt;/strong&gt;ರು ಕಾಲ ಜೊತೆಯಾಗಿ ಬಾಳಿ, ಸಾವಿನಲ್ಲೂ ಒಂದಾಗುತ್ತೇವೆ' ಎಂಬ ಮಾತಿಗೆ ನಿದರ್ಶನವೆಂಬಂತೆ ವೃದ್ಧ ದಂಪತಿಯೊಬ್ಬರು ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ ಸಿದ್ದಜ್ಜಿ ಹಾಗೂ ಅವರ ಪತಿ ಮಲ್ಲಜ್ಜ (75) ಮೃತಪಟ್ಟ ವೃದ್ಧ ದಂಪತಿ. ಇಬ್ಬರೂ ಸುದೀರ್ಘ ಕಾಲದ ದಾಂಪತ್ಯ ಜೀವನ ನಡೆಸಿ, ಕೊನೆಗೆ ಸಾವಿನಲ್ಲೂ ಒಂದಾಗುವ ಮೂಲಕ ಇಡೀ ಗ್ರಾಮಸ್ಥರ ಕಣ್ಣಂಚಿನಲ್ಲಿ ನೀರು ತರಿಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಸಿದ್ದಜ್ಜಿ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅವರು ಕೊನೆಯುಸಿರೆಳೆದಿದ್ದರು. ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಸಿದ್ದಜ್ಜಿ ಅವರ ಅಗಲಿಕೆಯಿಂದ ತೀವ್ರ ಶೋಕದಲ್ಲಿ ಮುಳುಗಿದ್ದರು. ಇಂದು (ಆಗಸ್ಟ್ 10) ಬೆಳಗ್ಗೆ ಗ್ರಾಮದಲ್ಲಿ ಸಿದ್ದಜ್ಜಿ ಅವರ ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಇನ್ನೇನು ಅಂತಿಮ ಯಾತ್ರೆ ಆರಂಭವಾಗಬೇಕು ಎನ್ನುವಷ್ಟರಲ್ಲಿ, ಪತ್ನಿಯ ಅಗಲಿಕೆಯ ದುಃಖದಲ್ಲಿದ್ದ ಪತಿ ಮಲ್ಲಜ್ಜ (75) ಅವರ ಆರೋಗ್ಯದಲ್ಲೂ ಏಕಾಏಕಿ ಏರುಪೇರಾಗಿದೆ. ಬೆಳಗ್ಗೆ ಸುಮಾರು 10.30ರ ವೇಳೆಗೆ ಮಲ್ಲಜ್ಜ ಕೂಡ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;h2&gt;&lt;strong&gt;ಕುಟುಂಬಸ್ಥರ ಆಕ್ರಂದನ, ಗ್ರಾಮದಲ್ಲಿ ಶೋಕಸಾಗರ:&lt;/strong&gt;&lt;/h2&gt;&lt;p&gt;ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ಮನೆಯ ಇಬ್ಬರು ಹಿರಿಯರು ಮೃತಪಟ್ಟಿರುವುದು ಕುಟುಂಬಸ್ಥರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಸಂಬಂಧಿಕರ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ದಿನ, ಒಂದೇ ಮನೆಯಿಂದ ದಂಪತಿಗಳಿಬ್ಬರ ಅಂತಿಮ ಯಾತ್ರೆ ಹೊರಡುತ್ತಿರುವುದು ಹದಡಿ ಗ್ರಾಮಸ್ಥರಲ್ಲಿ ಕಂಬನಿ ತರಿಸಿದೆ. ಸದ್ಯ ಹದಡಿ ಗ್ರಾಮದಲ್ಲಿ ವೃದ್ಧ ದಂಪತಿ ಮಲ್ಲಜ್ಜ ಹಾಗೂ ಸಿದ್ದಜ್ಜಿ ಅವರ ಅಂತ್ಯಕ್ರಿಯೆಗೆ ಏಕಕಾಲದಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಗ್ರಾಮದ ಹಿರಿಯರು ಹಾಗೂ ಬಂಧುಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/davanagere-elderly-couple-joined-also-death-means-dies-hours-apart-in-hadadi-village/articleshow-1gz1g9b"/>
        </item>
        <item>
            <title><![CDATA[ನಾಳೆ ದಾವಣಗೆರೆ ಬಂದ್.. ತುರ್ತು ಸೇವೆ ಬಿಟ್ಟ ಎಲ್ಲಾ ಬಂದ್ ಬಂದ್! ಕಾರಣ ಏನು..?]]></title>
            <link>https://kannada.asianetnews.com/davanagere/bhartiya-raitha-okkuta-has-called-for-a-davanagere-bandh-tomorrow-gkn/articleshow-516wil3</link>
            <guid isPermaLink="true">https://kannada.asianetnews.com/davanagere/bhartiya-raitha-okkuta-has-called-for-a-davanagere-bandh-tomorrow-gkn/articleshow-516wil3</guid>
            <pubDate>Sun, 23 Aug 2026 22:22:09 +0530</pubDate>
            <description><![CDATA[&lt;p&gt;ಭದ್ರಾ ನಾಲೆಗಳಿಗೆ ನೀರು ಬಿಡಲು ಆಗ್ರಹಿಸಿ ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ದಾವಣಗೆರೆ ನಗರ ಬಂದ್&zwnj;ಗೆ ಭಾರತೀಯ ರೈತ ಒಕ್ಕೂಟ ಕರೆ ನೀಡಿದೆ. ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದ್ದು, ಖಾಸಗಿ ಬಸ್, ಆಟೋ ಮತ್ತು ವರ್ತಕರ ಸಂಘ ಬೆಂಬಲ ಸೂಚಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qrhy31jg64e1905hgbnxa4,imgname-davanagere-bandh--1--1787503900769.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ಭದ್ರಾ ಜಲಾಶಯದಿಂದ ನಾಲೆಗಳಿಗೆ ತಕ್ಷಣವೇ ನೀರು ಬಿಡಬೇಕೆಂದು ಆಗ್ರಹಿಸಿ 'ಭಾರತೀಯ ರೈತ ಒಕ್ಕೂಟ' ನಾಳೆ (ಸೋಮವಾರ) ದಾವಣಗೆರೆ ನಗರ ಬಂದ್&zwnj;ಗೆ ಕರೆ ನೀಡಿದೆ. ರೈತರ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾಗಿರುವ ಈ ಬಂದ್&zwnj;ಗೆ ಜಿಲ್ಲೆಯ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.&lt;/p&gt;&lt;h2&gt;&lt;strong&gt;ಬಂದ್ ಸಮಯ ಮತ್ತು ಪ್ರತಿಭಟನೆ&lt;/strong&gt;&lt;/h2&gt;&lt;p&gt;ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರ ಬಂದ್&zwnj;ಗೆ ಕರೆ ನೀಡಲಾಗಿದೆ. ಬೆಳಗ್ಗೆ 7 ಗಂಟೆಗೆ ದಾವಣಗೆರೆಯ ಪ್ರಮುಖ ಕೇಂದ್ರವಾದ ಜಯದೇವ ವೃತ್ತದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಆರ್. ಲಿಂಗರಾಜ್ ಮಾತನಾಡಿ, ಬಂದ್&zwnj;ಗೆ ಸಹಕರಿಸುವಂತೆ ವರ್ತಕರು ಮತ್ತು ಉದ್ಯಮಿಗಳಿಗೆ ಮನವಿ ಮಾಡಿದ್ದೇವೆ. ದಲ್ಲಾಳಿಗಳ ಸಂಘ, ಖಾಸಗಿ ಬಸ್ ಮಾಲೀಕರು ಹಾಗೂ ಆಟೋ ಚಾಲಕರ ಸಂಘ ಈಗಾಗಲೇ ನಮಗೆ ಬೆಂಬಲ ಘೋಷಿಸಿವೆ. ಶಾಂತಿಯುತವಾಗಿ ಬಂದ್ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಾವುವು ಲಭ್ಯವಿರುತ್ತವೆ?&lt;/strong&gt;&lt;/h2&gt;&lt;p&gt;ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್&zwnj;ಗಳು. ಹಾಲು ಮಾರಾಟ ಕೇಂದ್ರಗಳು ತೆರೆದಿರಲಿವೆ. ನಗರದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಭದ್ರಾ ಡ್ಯಾಂನಲ್ಲಿ 175 ಅಡಿ ನೀರಿದೆ. ಹಿಂದೆ 150 ಅಡಿ ಇದ್ದಾಗಲೇ ನಾಲೆಗಳಿಗೆ ನೀರು ಬಿಟ್ಟ ಇತಿಹಾಸವಿದೆ. ಆದರೆ ಸರ್ಕಾರ ಈಗ ಅಡಿಕೆ, ತೆಂಗು ಬೆಳೆಗಾರರು ಮತ್ತು ಭತ್ತ ಬೆಳೆಗಾರರ ನಡುವೆ ಗೊಂದಲ ಸೃಷ್ಟಿಸಿ ಎರಡು ಗುಂಪು ಮಾಡುತ್ತಿದೆ ಎಂದು ಆರೋಪಿಸಿದರು.&lt;/p&gt;&lt;h2&gt;&lt;strong&gt;ರೈತರ ಸಂಕಷ್ಟವೇನು?&lt;/strong&gt;&lt;/h2&gt;&lt;p&gt;ಈಗಾಗಲೇ ಜಿಲ್ಲೆಯ ಶೇ. 30ರಷ್ಟು ರೈತರು ಭತ್ತದ ನಾಟಿ ಮಾಡಿದ್ದಾರೆ. ಸಾವಿರಾರು ರೈತರು ಸಸಿ ಮಡಿಗಳನ್ನು ಮಾಡಿ ನಾಟಿಗೆ ಸಿದ್ಧರಾಗಿದ್ದಾರೆ. ನೀರು ಬಿಡದಿದ್ದರೆ ಈ ಸಸಿಗಳು ಒಣಗಿ ಹೋಗುವ ಭೀತಿ ಇದೆ. ಪ್ರಸ್ತುತ ಡ್ಯಾಂಗೆ 4000 ಕ್ಯೂಸೆಕ್ ಒಳಹರಿವು ಇದೆ. ನಮಗೆ ಬೇಕಿರುವುದು ಕೇವಲ 3000 ಕ್ಯೂಸೆಕ್ ನೀರು ಮಾತ್ರ. ಆದರೂ ಸರ್ಕಾರ ವಿಳಂಬ ಮಾಡುತ್ತಿದೆ. ಸಿಎಂ ಜೊತೆ ಮಾತನಾಡುತ್ತೇವೆ ಎಂದು ಅಧಿಕಾರಿಗಳು ಹೇಳಿ ಕಳಿಸಿದ್ದಾರೆಯೇ ಹೊರತು ಇದುವರೆಗೆ ಯಾವುದೇ ತೀರ್ಮಾನ ಮಾಡಿಲ್ಲ. ಹದಿನೈದು ದಿನಗಳಿಂದ ನಾವು ಮನವಿ ಮಾಡುತ್ತಿದ್ದೇವೆ, ನಿನ್ನೆ ರಾಷ್ಟ್ರೀಯ ಹೆದ್ದಾರಿ ತಡೆದರೂ ಸರ್ಕಾರ ಕಣ್ಣು ಬಿಡುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಬಂದ್&zwnj;ಗೆ ಕರೆ ನೀಡಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ. ದಾವಣಗೆರೆಯ ನಾಗರಿಕರು ರೈತರ ಈ ನ್ಯಾಯಯುತ ಹೋರಾಟಕ್ಕೆ ಸಹಕರಿಸಬೇಕು ಎಂದು ಭಾರತೀಯ ರೈತ ಒಕ್ಕೂಟ ಮನವಿ ಮಾಡಿದೆ.&lt;/p&gt;]]></content:encoded>
            <category>davanagere</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/davanagere/bhartiya-raitha-okkuta-has-called-for-a-davanagere-bandh-tomorrow-gkn/articleshow-516wil3"/>
        </item>
        <item>
            <title><![CDATA[BJP: ಬಿವೈವಿಯಿಂದ ವಾರದ ಡೆಡ್‌ಲೈನ್‌; ದಾವಣಗೆರೆ ಅಂಗಳದಿಂದ ಶುರುವಾದ ಈ ಕಿಚ್ಚು ಕಾಂಗ್ರೆಸ್‌ಗೆ ತರಲಿದೆಯೇ ಹೊಸ ಕಂಟಕ?]]></title>
            <link>https://kannada.asianetnews.com/karnataka-districts/by-vijayendra-one-week-deadline-ss-mallikarjun-bp-harish-davanagere-bjp-congress-political-row-bmk/articleshow-7cn3gic</link>
            <guid isPermaLink="true">https://kannada.asianetnews.com/karnataka-districts/by-vijayendra-one-week-deadline-ss-mallikarjun-bp-harish-davanagere-bjp-congress-political-row-bmk/articleshow-7cn3gic</guid>
            <pubDate>Thu, 10 Sep 2026 21:15:04 +0530</pubDate>
            <description><![CDATA[&lt;p&gt;BJP: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಅಸಂವಿಧಾನಾತ್ಮಕ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನಲಾದ ಪ್ರಕರಣ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಚಿವರು ಬೇಷರತ್ ಕ್ಷಮೆಯಾಚಿಸಲು ಒಂದು ವಾರದ ಗಡುವು ನೀಡಿದ್ದು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25ztpe8wsm7zfdw7ek139sn,imgname-byv-1789055031751.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾಖಲೆಗಳ ಸಮೇತ ಹರಿಹಾಯುವುದು, ಆರೋಪ-ಪ್ರತ್ಯಾರೋಪಗಳನ್ನು ಮಾಡುವುದು ರಾಜಕೀಯ ಅಂಗಳದಲ್ಲಿ ಕಾಮನ್. ಆದರೆ ಶಾಸಕರೊಬ್ಬರ ವಿರುದ್ಧವೇ ಅಸಂವಿಧಾನಾತ್ಮಕ ಪದಗಳನ್ನು ಬಳಸಿ ನಿಂದಿಸಿರುವುದು ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಕಾವು ಪಡೆದುಕೊಂಡಿದೆ. ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿಂದಿಸಿದ್ದಾರೆ ಎನ್ನಲಾದ ಪ್ರಕರಣವು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಸಮರ ಸಾರಲು ವೇದಿಕೆಯಾಗಿದೆ. ಈ ವಿಚಾರವಾಗಿ ಸಚಿವ ಮಲ್ಲಿಕಾರ್ಜುನ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದು, ಬಹಿರಂಗ ಕ್ಷಮೆಯಾಚನೆಗೆ ಒಂದು ವಾರದ ಗಡುವು (ಡೆಡ್&zwnj;ಲೈನ್) ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಇತ್ತೀಚೆಗೆ ಶಾಸಕ ಬಿ.ಪಿ. ಹರೀಶ್ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ನಡುವೆ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಮುಂದೆ ವಾಗ್ವಾದ ನಡೆದಿತ್ತು. ಈ ವೇಳೆ ಸಚಿವ ಮಲ್ಲಿಕಾರ್ಜುನ ಅವರು ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಕೆಟ್ಟ ಮತ್ತು ಅಸಂವಿಧಾನಾತ್ಮಕ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ ಎಂಬುದು ಬಿಜೆಪಿ ನಾಯಕರ ಮುಖ್ಯ ಆರೋಪವಾಗಿದೆ. ಅಧಿಕಾರದ ಮದದಲ್ಲಿ ಸಚಿವರು ಜನಪ್ರತಿನಿಧಿಯೊಬ್ಬರಿಗೆ ನೀಡಬೇಕಾದ ಕನಿಷ್ಠ ಗೌರವವನ್ನೂ ನೀಡದೆ, ಸಾರ್ವಜನಿಕವಾಗಿ ಕೆಟ್ಟ ಪದಗಳಿಂದ ನಿಂದಿಸಿರುವುದು ಪ್ರಜಾಪ್ರಭುತ್ವಕ್ಕೆ ಎಸಗಿದ ಅಪಚಾರ ಎಂದು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.&lt;/p&gt;&lt;h3&gt;&lt;strong&gt;ಬಿವೈ ವಿಜಯೇಂದ್ರ ಅವರ ನೇರ ಎಚ್ಚರಿಕೆ!&lt;/strong&gt;&lt;/h3&gt;&lt;p&gt;ಸಚಿವರ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಸಮರ ಸಾರಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, &quot;ಜನಪ್ರತಿನಿಧಿಯೊಬ್ಬರ ವಿರುದ್ಧ ಸಚಿವರು ಬಳಸಿರುವ ಅಸಂವಿಧಾನಾತ್ಮಕ ಪದಗಳು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಮಲ್ಲಿಕಾರ್ಜುನ ಅವರು ತಕ್ಷಣವೇ ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆಯಾಚಿಸಬೇಕು. ಅವರಿಗೆ ನಾವು ಸರಿಯಾಗಿ ಒಂದು ವಾರದ ಸಮಯ ನೀಡುತ್ತಿದ್ದೇವೆ,&quot; ಎಂದು ಗಡುವು ವಿಧಿಸಿದ್ದಾರೆ.&lt;/p&gt;&lt;h3&gt;&lt;strong&gt;ವಾರದ ಡೆಡ್&zwnj;ಲೈನ್&zwnj;ಕೊಟ್ಟ ಬಿವೈವಿ!&lt;/strong&gt;&lt;/h3&gt;&lt;p&gt;ಮುಂದುವರಿದು ಮಾತನಾಡಿದ ವಿಜಯೇಂದ್ರ, ಒಂದು ವಾರದೊಳಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ನಮ್ಮ ಶಾಸಕ ಬಿ.ಪಿ. ಹರೀಶ್ ಅವರ ಬಳಿ ಕ್ಷಮೆಯಾಚಿಸದಿದ್ದರೆ, ಭಾರತೀಯ ಜನತಾ ಪಾರ್ಟಿಯಿಂದ ರಾಜ್ಯಾದ್ಯಂತ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ. ಈ ಸಂಬಂಧ ನಾಳೆ ನಮ್ಮ ಪಕ್ಷದ ಎಲ್ಲಾ ಶಾಸಕರೊಂದಿಗೆ ಸುದೀರ್ಘವಾಗಿ ಚರ್ಚಿಸಿ, ಮುಂದಿನ ಕಠಿಣ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇವೆ,&quot; ಎಂದು ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;&lsquo;ಪಾದಯಾತ್ರೆ ಅಂತ್ಯವಲ್ಲ, ಹೋರಾಟದ ಆರಂಭ!&rsquo;&lt;/strong&gt;&lt;/h3&gt;&lt;p&gt;ಇತ್ತೀಚೆಗೆ ಬಿಜೆಪಿ-ಜೆಡಿಎಸ್ ಕೈಗೊಂಡಿದ್ದ ಪಾದಯಾತ್ರೆಗಳ ಕುರಿತು ಪ್ರಸ್ತಾಪಿಸಿದ ವಿಜಯೇಂದ್ರ, &quot;ಪಾದಯಾತ್ರೆ ಮುಗಿಯಿತು ಎಂದ ತಕ್ಷಣ ನಮ್ಮ ಹೋರಾಟ ನಿಂತಿದೆ ಎಂದು ಕಾಂಗ್ರೆಸ್ ನಾಯಕರು ಭಾವಿಸಬೇಕಿಲ್ಲ. ಪಾದಯಾತ್ರೆ ಹೋರಾಟದ ಅಂತ್ಯವಲ್ಲ, ಅದು ನಮ್ಮ ಸರಣಿ ಹೋರಾಟದ ಆರಂಭವಷ್ಟೇ! ಕಾಂಗ್ರೆಸ್ ಸಚಿವರ ಅಹಂಕಾರದ ಆಡಳಿತ, ಭ್ರಷ್ಟಾಚಾರ ಮತ್ತು ವಿರೋಧ ಪಕ್ಷದ ಶಾಸಕರ ಮೇಲಿನ ಬೆದರಿಕೆ ರಾಜಕಾರಣದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ,&quot; ಎಂದು ಗುಡುಗಿದ್ದಾರೆ.&lt;/p&gt;&lt;h3&gt;&lt;strong&gt;ಮುಂದಿನ ನಡೆ ಏನು?&lt;/strong&gt;&lt;/h3&gt;&lt;p&gt;ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಈ 'ನಿಂದನೆ ವಿವಾದ'ವು ಮುಂಬರುವ ದಿನಗಳಲ್ಲಿ ದಾವಣಗೆರೆ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಭಾರಿ ರಾಜಕೀಯ ಸೃಷ್ಟಿಸುವ ಲಕ್ಷಣಗಳು ಕಾಣಿಸುತ್ತಿವೆ. ಶಾಸಕರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಈಗಾಗಲೇ ರಸ್ತೆಗಿಳಿದು ಪ್ರತಿಭಟನೆ ನಡೆಸಲು ಸಿದ್ಧರಾಗುತ್ತಿದ್ದಾರೆ. ಬಿಜೆಪಿ ಸಶಕ್ತ ವಿರೋಧ ಪಕ್ಷವಾಗಿ ಈ ವಿಚಾರವನ್ನು ಕೈಗೆತ್ತಿಕೊಂಡು ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಲು ತಂತ್ರ ರೂಪಿಸಿದೆ.&lt;/p&gt;]]></content:encoded>
            <category>davanagere</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/by-vijayendra-one-week-deadline-ss-mallikarjun-bp-harish-davanagere-bjp-congress-political-row-bmk/articleshow-7cn3gic"/>
        </item>
        <item>
            <title><![CDATA[ದಾವಣಗೆರೆ ಶಾಸಕ ಸಮರ್ಥ ಶಾಮನೂರು ಕಾರು ಭೀಕರ ಅಪಘಾತ; ಓವರ್‌ಟೇಕ್ ಮಾಡುವಾಗ ಅನಾಹುತ]]></title>
            <link>https://kannada.asianetnews.com/karnataka-districts/davanagere-samarth-shamanuru-car-accident-in-chitradurga-gkn/articleshow-ammsa1f</link>
            <guid isPermaLink="true">https://kannada.asianetnews.com/karnataka-districts/davanagere-samarth-shamanuru-car-accident-in-chitradurga-gkn/articleshow-ammsa1f</guid>
            <pubDate>Mon, 24 Aug 2026 18:25:01 +0530</pubDate>
            <description><![CDATA[&lt;p&gt;ದಾವಣಗೆರೆ ಶಾಸಕ ಸಮರ್ಥ ಶಾಮನೂರು ಅವರ ಕಾರು ಚಿತ್ರದುರ್ಗದ ಹಿರಿಯೂರು ಬಳಿ ಸರಣಿ ಅಪಘಾತಕ್ಕೀಡಾಗಿದ್ದು, ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಮತ್ತೊಂದು ಕಾರಿನಲ್ಲಿದ್ದ ಸಂದೀಪ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಘಟನೆ ಹೇಗೆ ಆಯಿತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0sxby70wzd0ezjzrzsxzkrd,imgname-samarth-shamnuru-1787576056032.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ: &lt;/strong&gt;ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ದಾವಣಗೆರೆ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ಅವರ ಕಾರು ಅಪಘಾತಕ್ಕೀಡಾಗಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಸಂಭವಿಸಿದ ಈ ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಶಾಸಕ ಸಮರ್ಥ ಶಾಮನೂರು ಅವರು ಬೆಂಗಳೂರಿನಿಂದ ದಾವಣಗೆರೆಗೆ ಕಾರಿನಲ್ಲಿ ತೆರಳುತ್ತಿದ್ದರು. ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗೇಟ್ ಸಮೀಪ ಬಂದಾಗ, ಅತಿ ವೇಗವಾಗಿ ಬಂದ ಕಾರೊಂದು ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾಗಿದೆ. ಶಾಸಕರು ಪ್ರಯಾಣಿಸುತ್ತಿದ್ದ ಕಾರು ಕೂಡ ಈ ವೇಳೆ ಹಿಂಬದಿಯಲ್ಲೇ ಬರುತ್ತಿತ್ತು. ಅಪಘಾತದ ಗಡಿಬಿಡಿಯಲ್ಲಿ ಶಾಸಕರ ಕಾರಿಗೆ ಮತ್ತೊಂದು ಎರ್ಟಿಗಾ ಕಾರು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಓರ್ವನಿಗೆ ಗಾಯ, ಬೆಂಗಳೂರಿಗೆ ರವಾನೆ&lt;/strong&gt;&lt;/h2&gt;&lt;p&gt;ಪಲ್ಟಿಯಾದ ಕಾರಿನಲ್ಲಿದ್ದ ಸಂದೀಪ್ (45) ಎಂಬುವವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಸಂದೀಪ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಶಾಸಕ ಸಮರ್ಥ ಶಾಮನೂರು ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ನಂತರ ಮತ್ತೊಂದು ಕಾರಿನಲ್ಲಿ ದಾವಣಗೆರೆಗೆ ಪ್ರಯಾಣ ಮುಂದುವರಿಸಿದ್ದಾರೆ.&lt;/p&gt;&lt;p&gt;ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗದ ಚಾಲನೆ ಮತ್ತು ಅಜಾಗರೂಕತೆಯಿಂದ ಓವರ್ ಟೇಕ್ ಮಾಡಲು ಹೋದದ್ದು ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.&lt;/p&gt;]]></content:encoded>
            <category>davanagere</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/davanagere-samarth-shamanuru-car-accident-in-chitradurga-gkn/articleshow-ammsa1f"/>
        </item>
        <item>
            <title><![CDATA[ಕಮ್ಮಾರಗಟ್ಟೆಯಲ್ಲಿ ಐತಿಹಾಸಿಕ ಕಾರ್ಣಿಕೋತ್ಸವ.. ರೈತರಿಗೆ ಸಿಕ್ಕೇ ಬಿಡ್ತು ಗುಡ್‌ನ್ಯೂಸ್]]></title>
            <link>https://kannada.asianetnews.com/davanagere/kammaragatte-karnika-nudi-pearls-of-earth-to-reach-the-sky-a-warning-of-soaring-prices-devotees-spark-debate-gkn/articleshow-azth8mv</link>
            <guid isPermaLink="true">https://kannada.asianetnews.com/davanagere/kammaragatte-karnika-nudi-pearls-of-earth-to-reach-the-sky-a-warning-of-soaring-prices-devotees-spark-debate-gkn/articleshow-azth8mv</guid>
            <pubDate>Mon, 17 Aug 2026 22:45:52 +0530</pubDate>
            <description><![CDATA[&lt;p&gt;ದಾವಣಗೆರೆಯ ಕಮ್ಮಾರಗಟ್ಟೆಯಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ 'ಭೂಲೋಕದ ಮುತ್ತು ಗಗನಕ್ಕೆ ಏರಿತಲೆ' ಎಂಬ ಭವಿಷ್ಯವಾಣಿ ಕೇಳಿಬಂದಿದೆ. ಇದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸೂಚನೆಯೋ ಅಥವಾ ರೈತರ ಬೆಳೆಗೆ ಸಿಗುವ ಬಂಪರ್ ಬೆಲೆಯ ಮುನ್ಸೂಚನೆಯೋ ಎಂಬ ಚರ್ಚೆ ಭಕ್ತರಲ್ಲಿ ಶುರುವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m08bg5ppkjet4enzbrmmygvx,imgname-kammaragatte-karnika-1786986895062.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ನಾಡಿನಾದ್ಯಂತ ಗರುಡ ಪಂಚಮಿಯ ಸಡಗರ ಮನೆ ಮಾಡಿತ್ತು. ಇತ್ತ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಮೈನವಿರೇಳಿಸುವ ಕಾರ್ಣಿಕೋತ್ಸವ ಜರುಗಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಕಾರ್ಣಿಕದ ಭವಿಷ್ಯವಾಣಿ ಕೇಳಲು ಸಾವಿರಾರು ಭಕ್ತರು ಜಮಾಯಿಸಿದ್ದರು. ಈ ಬಾರಿ ನುಡಿಯಲಾದ ಭವಿಷ್ಯವು ಬೆಲೆ ಏರಿಕೆ ಹಾಗೂ ರೈತರ ಬೆಳೆಯ ವಿಚಾರದಲ್ಲಿ ಭಾರಿ ಕುತೂಹಲ ಮೂಡಿಸಿದೆ.&lt;/p&gt;&lt;h2&gt;&lt;strong&gt;ಏನಿದು ಭವಿಷ್ಯವಾಣಿ?&lt;/strong&gt;&lt;/h2&gt;&lt;p&gt;ಕುಂಬಳೂರಿನ ಗಣಮಗ ದುಂಡ್ಯಪ್ಪ ಅವರು ಬಿಲ್ಲು ಏರಿ ಆಂಜನೇಯ ಸ್ವಾಮಿಯ ಸ್ಮರಣೆ ಮಾಡುತ್ತಾ, &quot;ಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ, ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಚ್ಚರ.. ಪರಾಕ್! ಎಂದು ದೈವವಾಣಿ ನುಡಿದರು.&lt;/p&gt;&lt;p&gt;ಕಾರ್ಣಿಕದ ಈ ನಿಗೂಢ ನುಡಿಗಳನ್ನು ಭಕ್ತರು ಹಾಗೂ ಹಿರಿಯರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಂದರೆ ಭೂಮಿಯಲ್ಲಿ ಬೆಳೆದ ಬೆಳೆಗಳು ಅಥವಾ ಆಹಾರ ಧಾನ್ಯಗಳ ಬೆಲೆ ಗಗನಕ್ಕೆ ಏರಲಿದೆ. ಅಂದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬುದು ಒಂದು ವಿಶ್ಲೇಷಣೆ.&lt;/p&gt;&lt;p&gt;ರೈತರು ಬೆಳೆದ ಮುತ್ತಿನಂತಹ ಬೆಳೆಗೆ (ಧಾನ್ಯಗಳಿಗೆ) ಉತ್ತಮ ಮಾರುಕಟ್ಟೆ ದರ ಸಿಗಲಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಲಾಭವಾಗಲಿದೆ ಎಂಬ ಆಶಾವಾದವೂ ವ್ಯಕ್ತವಾಗಿದೆ. ಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ ಎಂದರೆ ಅಶ್ವಿನಿ ಮಳೆ ಮಾಯವಾಗಿ ಅಥವಾ ಮಳೆ ಕೊರತೆಯಾಗಿ ಬೆಳೆಗಳ ಇಳುವರಿ ಕಡಿಮೆಯಾಗಬಹುದು. ಈ ಕಾರಣದಿಂದ ಬೆಲೆ ಹೆಚ್ಚಾಗಬಹುದು ಎಂಬ ಎಚ್ಚರಿಕೆಯನ್ನೂ ಭಕ್ತರು ಕಾಣುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಮೈಸೂರು ಅರಸರೂ ಕಾಯುತ್ತಿದ್ದ ಕಾರ್ಣಿಕ&lt;/strong&gt;&lt;/h2&gt;&lt;p&gt;ಕಮ್ಮಾರಗಟ್ಟೆಯ ಕಾರ್ಣಿಕಕ್ಕೆ ತನ್ನದೇ ಆದ ಇತಿಹಾಸವಿದೆ. ಹಿಂದೆ ಮೈಸೂರಿನ ಮಹಾರಾಜರು ಕೂಡ ಈ ಗ್ರಾಮದ ಕಾರ್ಣಿಕದ ಭವಿಷ್ಯವಾಣಿಗಾಗಿ ಕಾತರದಿಂದ ಕಾಯುತ್ತಿದ್ದರು ಎಂಬ ಪ್ರತೀತಿ ಇದೆ. ನಾಡಿನ ಸುಭಿಕ್ಷೆ ಮತ್ತು ಮಳೆ-ಬೆಳೆಯ ಬಗ್ಗೆ ಇಲ್ಲಿನ ಭವಿಷ್ಯವಾಣಿ ಅತ್ಯಂತ ನಿಖರವಾಗಿರುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ. ಹೆಳವನಕಟ್ಟೆ ಗಿರಿಯಮ್ಮನ ಸಾನಿಧ್ಯದಲ್ಲಿ ಕಮ್ಮಾರಗಟ್ಟೆ ಮತ್ತು ಕುಂಬಳೂರಿನ ಆಂಜನೇಯ ಸ್ವಾಮಿಯ ನೇತೃತ್ವದಲ್ಲಿ ಈ ಅದ್ಧೂರಿ ಜಾತ್ರೆ ನಡೆಯಿತು. ಮಳೆ ಬಿಡುವು ನೀಡಿದ್ದರಿಂದ ದಾವಣಗೆರೆ ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿದ್ದರು. ವಿಶೇಷವಾಗಿ ನವದಂಪತಿಗಳು ಇಲ್ಲಿನ ಬುಡಮೇಲಾದ ಹುಣಸೆ ಮರಕ್ಕೆ ಮಂಡಕ್ಕಿ ಎರಚಿ ದೇವರಿಗೆ ನಮಿಸಿದರು.&lt;/p&gt;&lt;p&gt;ಒಟ್ಟಾರೆಯಾಗಿ ಕಮ್ಮಾರಗಟ್ಟೆಯ ಈ ಬಾರಿಯ ಕಾರ್ಣಿಕವು ನಾಡಿನ ರೈತರಿಗೆ ಸಮೃದ್ಧಿ ತರಲಿ ಹಾಗೂ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟದಿರಲಿ ಎಂದು ಭಕ್ತರು ಪ್ರಾರ್ಥಿಸಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/davanagere/kammaragatte-karnika-nudi-pearls-of-earth-to-reach-the-sky-a-warning-of-soaring-prices-devotees-spark-debate-gkn/articleshow-azth8mv"/>
        </item>
        <item>
            <title><![CDATA[ದಾವಣಗೆರೆ: ದೇವರ ದರ್ಶನಕ್ಕೆ ಹೋದ ದಲಿತರ ಮೇಲೆ ಗ್ರಾಮಸ್ಥರಿಂದ ಹಲ್ಲೆ, ಬೆಳಲಗೆರೆಯಲ್ಲಿ ನಡೆದಿದ್ದೇನು?]]></title>
            <link>https://kannada.asianetnews.com/karnataka-districts/belalagere-villagers-assault-dalits-who-visited-a-temple-incident-reported-in-davanagere-rav/articleshow-d43rx8l</link>
            <guid isPermaLink="true">https://kannada.asianetnews.com/karnataka-districts/belalagere-villagers-assault-dalits-who-visited-a-temple-incident-reported-in-davanagere-rav/articleshow-d43rx8l</guid>
            <pubDate>Sun, 02 Aug 2026 08:44:50 +0530</pubDate>
            <description><![CDATA[&lt;p&gt;ದಾವಣಗೆರೆ ಜಿಲ್ಲೆಯ ಬೆಳಲಗೆರೆ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ದಲಿತ ಸಮುದಾಯದ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹಾಕದಂತೆ ಎಚ್ಚರಿಕೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz06tyyqe8hfas04t439ymyq,imgname-----------------------2026-08-02t083152.555-1785639828439.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಆ.2):&lt;/strong&gt; ದೇವಸ್ಥಾನ ಪ್ರವೇಶ ಮಾಡಿದರು ಎಂಬ ಕಾರಣಕ್ಕೆ ದಲಿತ ಸಮುದಾಯದವರ ಮೇಲೆ ಹಲ್ಲೆ ಮಾಡಿದ್ದರಿಂದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಬೆಳಲಗೆರೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;h2&gt;ದೇವರ ದರ್ಶನ ಮಾಡಿ ಹೊರಬರುತ್ತಿದ್ದಂತೆ ಹಲ್ಲೆ&lt;/h2&gt;&lt;p&gt;ಬೆಳಲಗೆರೆಯಲ್ಲಿ ಶುಕ್ರವಾರ ಊರ ಹೊರಗೆ ಎಡೆ ಇಟ್ಟು ಬರುವಾಗ ದಲಿತ ಸಮುದಾಯದ ಐದಾರು ಯುವಕರು ಗ್ರಾಮದ ದೊಡ್ಡಯ್ಯ ದೇವಸ್ಥಾನ(Doddaiah Temple)ಕ್ಕೆ ಹೋಗಿ, ದೇವರ ದರ್ಶನ ಮಾಡಿ, ಕೈಮುಗಿದು ಹೊರ ಬರುತ್ತಿದ್ದರು. ಈ ವೇಳೆ ಮತ್ತೊಂದು ಜಾತಿಯ ಜನರು ಅದಕ್ಕೆ ಆಕ್ಷೇಪಿಸಿದ್ದಾರೆ. ಘಟನೆಯಲ್ಲಿ ದಲಿತ ಯುವಕರನ್ನು ಹಗ್ಗಗಳಿಂದ ಕಟ್ಟಿ ಹಾಕಿ, ಹಲ್ಲೆ ಮಾಡಿದ್ದಾರೆಂದು ಗ್ರಾಮದ ದಲಿತರು ಆರೋಪಿಸಿದ್ದಾರೆ.&lt;/p&gt;&lt;p&gt;ಅಜ್ಜಿ ಹಬ್ಬ ಆಚರಿಸಿ, ಸಿಹಿ ಅಡುಗೆ ಮಾಡಿ, ಎಡೆ ಸಹಿತವಾಗಿ ಅಮ್ಮನನ್ನು ಹರಿಜನ ಕಾಲನಿಯ ಎಲ್ಲರೂ ಒಂದೇ ಕಡೆ ಅಮ್ಮನನ್ನು (ಕೇಲು) ತಂದಿಟ್ಟು, ಪೂಜಿಸುತ್ತಾರೆ. ನಂತರ ಅವುಗ&zwj;ಳನ್ನು ಒಟ್ಟಿಗೆ ಭಜನೆ, ಮೆರವಣಿಗೆಯಲ್ಲಿ ಕೊಂಡೊಯ್ದು ಗ್ರಾಮದ ಗಡಿಭಾಗಕ್ಕೆ ಇಟ್ಟು ಬರುವ ಪದ್ಧತಿಯಂತೆ ಶುಕ್ರವಾರವೂ ಆಚರಿಸಲಾಯಿತು.&lt;/p&gt;&lt;h3&gt;ಬಸವಾಪಟ್ಟಣ ಪೊಲೀಸರು ಬರುತ್ತಿದ್ದಂತೆ ಹಗ್ಗ ಬಿಚ್ಚಿದ ಗ್ರಾಮಸ್ಥರು&lt;/h3&gt;&lt;p&gt;ಈ ವೇಳೆ ಬಸವಾಪಟ್ಟಣ ಪೊಲೀಸರು ವಾಹನ ಬರುತ್ತಿರುವುದನ್ನು ಗಮನಿಸಿ, ಹಗ್ಗ ಬಿಚ್ಚಿದ್ದಾರೆ. ನಂತರ ಹಲ್ಲೆಗೆ ಒಗೊಳಗಾದ ಯುವಕರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣಕ್ಕೂ ಕಾರಣವಾಯಿತು.&lt;/p&gt;&lt;p&gt;ಶನಿವಾರ ಬೆಳಲಗೆರೆ ಗ್ರಾಮಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿದರು. ಇನ್ನು ಮುಂದೆ ಗ್ರಾಮದ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹಾಕಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಅಧಿಕಾರಿಗಳು ನೀಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸದ್ಯಕ್ಕೆ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belalagere-villagers-assault-dalits-who-visited-a-temple-incident-reported-in-davanagere-rav/articleshow-d43rx8l"/>
        </item>
        <item>
            <title><![CDATA[SSLC ಟಾಪರ್ಸ್‌ಗಳಿಗೆ ಉಚಿತ ದೆಹಲಿ ಪ್ರವಾಸದ ಭಾಗ್ಯ; ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಗ್ಯಾರಂಟಿ!]]></title>
            <link>https://kannada.asianetnews.com/karnataka-districts/davanagere-mp-prabha-mallikarjun-promise-free-delhi-tour-for-sslc-toppers-sat/articleshow-e2xxr9k</link>
            <guid isPermaLink="true">https://kannada.asianetnews.com/karnataka-districts/davanagere-mp-prabha-mallikarjun-promise-free-delhi-tour-for-sslc-toppers-sat/articleshow-e2xxr9k</guid>
            <pubDate>Sun, 13 Sep 2026 07:58:02 +0530</pubDate>
            <description><![CDATA[ದಾವಣಗೆರೆ ಲೋಕಸಭಾ ಕ್ಷೇತ್ರದ ಎಸ್ಸೆಸ್ಸೆಲ್ಸಿ ಟಾಪರ್ ವಿದ್ಯಾರ್ಥಿಗಳನ್ನು ಉಚಿತವಾಗಿ ದೆಹಲಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಘೋಷಿಸಿದ್ದಾರೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಈ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳಿಗೆ ಸಂಸತ್ ಭವನ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ನೋಡುವ ಅವಕಾಶ ಸಿಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c995qvya46atbcmdwng385,imgname-davanagere-sslc-toppers-delhi-tour-1789266269944.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ/ದಾವಣಗೆರೆ (ಸೆ.13): ವಿ&lt;/strong&gt;ಜಯನಗರ ಜಿಲ್ಲೆಯ ಹರಪನಹಳ್ಳಿ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟಾಪರ್ ವಿದ್ಯಾರ್ಥಿಗಳನ್ನು ಮುಂದಿನ ತಿಂಗಳು ಉಚಿತವಾಗಿ ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದ್ದಾರೆ.&lt;/p&gt;&lt;p&gt;ಪಟ್ಟಣದ ತರಳಬಾಳು ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು, ದಾವಣಗೆರೆ ಲೋಕಸಭಾ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಿಹಿಸುದ್ದಿ ನೀಡಿದ್ದಾರೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ದೇಶದ ಆಡಳಿತ ಕೇಂದ್ರದ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳು:&lt;/strong&gt;&lt;/h2&gt;&lt;p&gt;ಶಿಕ್ಷಕರ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, 'ಯುವ ಪೀಳಿಗೆಯನ್ನು ಸರಿಯಾದ ಹಾದಿಯಲ್ಲಿ ನಡೆಸಿ ದೇಶದ ಭವಿಷ್ಯ ರೂಪಿಸುವ ಅದ್ಭುತ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಶಿಕ್ಷಕರು ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ಬೋಧಿಸುವವರಲ್ಲ, ಬದಲಿಗೆ ಮಕ್ಕಳಲ್ಲಿ ಸಂಸ್ಕಾರ, ನೈತಿಕ ಮೌಲ್ಯ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯನ್ನು ಬಿತ್ತುವ ನೈಜ ಶಿಲ್ಪಿಗಳು' ಎಂದು ಬಣ್ಣಿಸಿದರು.&lt;/p&gt;&lt;p&gt;ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ಇಂತಹ ಪ್ರೋತ್ಸಾಹಕ ಕ್ರಮಗಳು ಅತ್ಯಗತ್ಯವಾಗಿದ್ದು, ದೆಹಲಿ ಪ್ರವಾಸದ ವೇಳೆ ವಿದ್ಯಾರ್ಥಿಗಳಿಗೆ ಸಂಸತ್ ಭವನ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮದಲ್ಲಿ ತಾಲೂಕಿನ ಗಣ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ನೂರಾರು ಶಿಕ್ಷಕರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>davanagere</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/davanagere-mp-prabha-mallikarjun-promise-free-delhi-tour-for-sslc-toppers-sat/articleshow-e2xxr9k"/>
        </item>
        <item>
            <title><![CDATA[Chicken Farm Attack: ದ್ವೇಷಕ್ಕೆ ಬಲಿಯಾದವಾ ಮೂಕ ಪ್ರಾಣಿಗಳು? 830 ಕೋಳಿಗಳಿಗೆ ವಿಷವಿಕ್ಕಿದ ಕಿಡಿಗೇಡಿಗಳು! ಕಂಗಾಲಾದ ರೈತ!]]></title>
            <link>https://kannada.asianetnews.com/karnataka-districts/ramagondanahalli-farmer-830-chickens-die-after-poison-mixed-in-feed-rs-3-lakh-loss-bmk/articleshow-g2y8g7p</link>
            <guid isPermaLink="true">https://kannada.asianetnews.com/karnataka-districts/ramagondanahalli-farmer-830-chickens-die-after-poison-mixed-in-feed-rs-3-lakh-loss-bmk/articleshow-g2y8g7p</guid>
            <pubDate>Mon, 31 Aug 2026 15:47:01 +0530</pubDate>
            <description><![CDATA[ರಾಮಗೊಂಡನಹಳ್ಳಿ ಗ್ರಾಮದ ರೈತ ಪ್ರಕಾಶ್ ಅವರು ಸಾಕಿದ್ದ 830 ನಾಟಿ ಕೋಳಿಗಳಿಗೆ ಕಿಡಿಗೇಡಿಗಳು ವಿಷವಿಕ್ಕಿ ಕೊಂದಿದ್ದಾರೆ. ಈ ಘಟನೆಯಿಂದಾಗಿ ಸಾಲ ಮಾಡಿ ಕೋಳಿ ಸಾಕಾಣಿಕೆ ಮಾಡುತ್ತಿದ್ದ ರೈತನಿಗೆ ಎರಡೂವರೆ ಲಕ್ಷಕ್ಕೂ ಅಧಿಕ ನಷ್ಟವಾಗಿದ್ದು, ಜೀವನೋಪಾಯಕ್ಕೆ ದಾರಿ ಕಾಣದೆ ಕಂಗಾಲಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1bn4c9xbprvde8we0z4pzca,imgname-chicken-form-attack-1788171399485.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಣ್ಣ ಮಟ್ಟದ ಕೃಷಿ ಅಥವಾ ಉಪಕಸುಬುಗಳನ್ನು ನೆಚ್ಚಿಕೊಂಡು ಸ್ವಾವಲಂಬಿ ಜೀವನ ನಡೆಸಲು ಹೊರಟ ಸಣ್ಣ ರೈತರಿಗೆ ಹಳ್ಳಿಗಾಡಿನಲ್ಲಿ ಎದುರಾಗುವ ಸಂಕಷ್ಟಗಳು ಒಂದೆರಡಲ್ಲ. ನಿಸರ್ಗದ ವಿಕೋಪ, ಬೆಲೆ ಸಿಗದ ಸಂಕಟ ಒಂದೆಡೆಯಾದರೆ, ಮಾನವನ ಅಸೂಯೆ ಮತ್ತು ದ್ವೇಷದ ಕಿಚ್ಚು ಶ್ರಮಜೀವಿಗಳ ಬದುಕನ್ನೇ ಬಲಿಪಡೆಯುವ ಹಂತಕ್ಕೆ ತಲುಪುತ್ತಿರುವುದು ಅತ್ಯಂತ ದುರಂತದ ಸಂಗತಿ. ಇಂತಹದ್ದೇ ಒಂದು ಘೋರ ಹಾಗೂ ಮನಕಲಕುವ ಘಟನೆ ರಾಮಗೊಂಡನಹಳ್ಳಿಯಲ್ಲಿ ಸಂಭವಿಸಿದ್ದು, ಕಿಡಿಗೇಡಿಗಳ ಅಟ್ಟಹಾಸಕ್ಕೆ ಬರೋಬ್ಬರಿ 830 ನಾಟಿ ಕೋಳಿಗಳು ದಾರುಣವಾಗಿ ಬಲಿಯಾಗಿವೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ!&lt;/strong&gt;&lt;/h2&gt;&lt;p&gt;ರಾಮಗೊಂಡನಹಳ್ಳಿ ಗ್ರಾಮದ ಪ್ರಕಾಶ್ ಎಂಬ ಶ್ರಮಜೀವಿ ರೈತರು ತಮ್ಮ ಜೀವನೋಪಾಯಕ್ಕಾಗಿ ನಾಟಿ ಕೋಳಿ ಸಾಕಾಣಿಕೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಯಾವುದೇ ಖಾಯಂ ಉದ್ಯೋಗವಿಲ್ಲದಿದ್ದರೂ, ಸ್ವಂತ ಕಾಲುಗಳ ಮೇಲೆ ನಿಂತು ಕುಟುಂಬವನ್ನು ಸಾಕಿ ಸಲಹುವ ಸದುದ್ದೇಶದಿಂದ ಕಳೆದ ಮೂರು ತಿಂಗಳುಗಳಿಂದ ಅತ್ಯಂತ ಕಾಳಜಿಯಿಂದ ಕೋಳಿಗಳನ್ನು ಸಾಕುತ್ತಿದ್ದರು. ಕೋಳಿಗಳ ಆರೋಗ್ಯ, ಅವುಗಳ ಆಹಾರ ಮತ್ತು ನಿರ್ವಹಣೆಗೆ ಹಗಲಿರುಳು ಶ್ರಮಿಸುತ್ತಿದ್ದ ಪ್ರಕಾಶ್ ಅವರಿಗೆ, ಈ ಕೋಳಿಗಳೇ ಬದುಕಿನ ಭರವಸೆಯಾಗಿದ್ದವು.&lt;/p&gt;&lt;h3&gt;&lt;strong&gt;ರಾಕ್ಷಸೀಯ ಪ್ರವೃತ್ತಿ!&lt;/strong&gt;&lt;/h3&gt;&lt;p&gt;ಆದರೆ, ಈ ಶ್ರಮ ಮತ್ತು ಯಶಸ್ಸನ್ನು ಸಹಿಸದ ಕೆಲವು ಕಿಡಿಗೇಡಿಗಳು ತಮ್ಮ ರಾಕ್ಷಸೀಯ ಪ್ರವೃತ್ತಿಯನ್ನು ಮೆರೆದಿದ್ದಾರೆ. ಕೋಳಿ ಸಾಕಾಣಿಕೆ ಫಾರಂಗೆ ಅಕ್ರಮವಾಗಿ ನುಗ್ಗಿದ ದುಷ್ಕರ್ಮಿಗಳು, ಕೋಳಿಗಳಿಗೆ ನೀಡುವ ಆಹಾರದಲ್ಲಿ ಭೀಕರ ವಿಷವನ್ನು ಬೆರೆಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ವಿಷಪೂರಿತ ಆಹಾರವನ್ನು ಸೇವಿಸಿದ 830 ನಾಟಿ ಕೋಳಿಗಳು ಕೆಲವೇ ಸಮಯದಲ್ಲೇ ರಕ್ತ ಕಾರುತ್ತಾ, ತೀವ್ರ ತರಹದ ನರಳಾಟದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿವೆ.&lt;/p&gt;&lt;h3&gt;&lt;strong&gt;ಎರಡೂವರೆ ಲಕ್ಷಕ್ಕೂ ಅಧಿಕ ನಷ್ಟ, ರೈತನ ಆಕ್ರಂದನ!&lt;/strong&gt;&lt;/h3&gt;&lt;p&gt;ಕಳೆದ ಮೂರು ತಿಂಗಳುಗಳಿಂದ ಪ್ರಕಾಶ್ ಅವರು ಈ ಕೋಳಿ ಸಾಕಾಣಿಕೆಗಾಗಿ ವಿವಿಧ ಮೂಲಗಳಿಂದ ಹಾಗೂ ಬ್ಯಾಂಕ್, ಕೈಸಾಲದ ಮೂಲಕ ಬಂಡವಾಳ ಹೂಡಿದ್ದರು. ಕೋಳಿಗಳು ಮಾರಾಟದ ಹಂತಕ್ಕೆ ತಲುಪಿ, ಕೈಗೆ ಹಣ ಸಿಗುವ ಭರವಸೆಯಲ್ಲಿದ್ದ ಹಂತದಲ್ಲೇ ಈ ದುರಂತ ಸಂಭವಿಸಿದೆ. ಒಂದೇ ದಿನದಲ್ಲಿ 830 ಕೋಳಿಗಳು ಮೃತಪಟ್ಟಿರುವುದರಿಂದ ರೈತನಿಗೆ ಅಂದಾಜು ಎರಡೂವರೆ ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ. ಸಾಲ ಮಾಡಿ ಹೂಡಿದ್ದ ಬಂಡವಾಳವೆಲ್ಲವೂ ಕಣ್ಣೆದುರೇ ಮಣ್ಣುಪಾಲಾಗಿದ್ದು, ಹತಾಶರಾದ ರೈತ ಪ್ರಕಾಶ್ ಅವರ ಆಕ್ರಂದನ ಮುಗಿಲು ಮುಟ್ಟಿದೆ. &quot;ಯಾರೋ ಮಾಡಿದ ದ್ವೇಷಕ್ಕೆ ನನ್ನ ಮೂಕ ಪ್ರಾಣಿಗಳನ್ನು ಬಲಿ ತೆಗೆದುಕೊಂಡರು, ಈಗ ಸಾಲ ತೀರಿಸುವುದು ಹೇಗೆ? ಕುಟುಂಬವನ್ನು ನಡೆಸುವುದು ಹೇಗೆ?&quot; ಎಂದು ಪ್ರಕಾಶ್ ಅವರು ಕಣ್ಣೀರಿಡುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಅಧಿಕಾರಿಗಳ ಭೇಟಿ ಹಾಗೂ ಪರಿಶೀಲನೆ!&lt;/strong&gt;&lt;/h3&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶುವೈದ್ಯರು ಮೃತಪಟ್ಟ ಕೋಳಿಗಳ ಮಾದರಿಯನ್ನು ಸಂಗ್ರಹಿಸಿದ್ದು, ಆಹಾರದಲ್ಲಿ ಬೆರೆಸಲಾದ ವಿಷದ ತೀವ್ರತೆಯನ್ನು ಪತ್ತೆಹಚ್ಚಲು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪ್ರಾಣಿಗಳ ಮೇಲಿನ ಈ ರೀತಿಯ ಭೀಕರ ದಾಳಿಯನ್ನು ಕಂಡು ಅಧಿಕಾರಿಗಳೂ ಸಹ ಕಂಬನಿ ಮಿಡಿದಿದ್ದಾರೆ.&lt;/p&gt;&lt;h3&gt;&lt;strong&gt;ನ್ಯಾಯ ಮತ್ತು ಪರಿಹಾರಕ್ಕಾಗಿ ಆಗ್ರಹ!&lt;/strong&gt;&lt;/h3&gt;&lt;p&gt;ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ಪೋಲೀಸರು ದೂರು ಸ್ವೀಕರಿಸಿ, ತನಿಖೆ ಚುರುಕುಗೊಳಿಸಿದ್ದು, ಈ ಕೃತ್ಯದ ಹಿಂದೆ ಇರುವ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ಕೂಡ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ಬಡ ರೈತ ಪ್ರಕಾಶ್ ಅವರಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯು ತಕ್ಷಣವೇ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು ಹಾಗೂ ಮೂಕ ಪ್ರಾಣಿಗಳನ್ನು ಬಲಿಪಡೆದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/ramagondanahalli-farmer-830-chickens-die-after-poison-mixed-in-feed-rs-3-lakh-loss-bmk/articleshow-g2y8g7p"/>
        </item>
        <item>
            <title><![CDATA[ದಾವಣಗೆರೆ: ಅಭಿಮಾನಿಗಳಿಂದಲೇ ₹4.74 ಲಕ್ಷ ಮೊತ್ತದ ಟಾಕ್ಸಿಕ್ ಸಿನಿಮಾದ ಟಿಕೆಟ್ ಖರೀದಿ]]></title>
            <link>https://kannada.asianetnews.com/karnataka-districts/davanagere-rocking-star-yash-fans-buy-tickets-for-toxic-movie-worth-rs-4-point-74-lakh-mrq/articleshow-gru0dqg</link>
            <guid isPermaLink="true">https://kannada.asianetnews.com/karnataka-districts/davanagere-rocking-star-yash-fans-buy-tickets-for-toxic-movie-worth-rs-4-point-74-lakh-mrq/articleshow-gru0dqg</guid>
            <pubDate>Wed, 26 Aug 2026 05:53:02 +0530</pubDate>
            <description><![CDATA[ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅವರ ಅಭಿಮಾನಿಗಳ ಸಂಘವು ಸಂಭ್ರಮಾಚರಣೆ ಹಮ್ಮಿಕೊಂಡಿದೆ. ತ್ರಿಶೂಲ್ ಮತ್ತು ತ್ರಿನೇತ್ರ ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ ಫ್ಯಾನ್ ಶೋ ಆಯೋಜಿಸಲಾಗಿದ್ದು, ಅಭಿಮಾನಿಗಳೇ ಲಕ್ಷಾಂತರ ರೂಪಾಯಿ ಮೌಲ್ಯದ ಟಿಕೆಟ್&zwnj;ಗಳನ್ನು ಖರೀದಿಸಿ ವಿಜಯೋತ್ಸವಕ್ಕೆ ಸಜ್ಜಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0xq422kf2esd2xm4wc0yg72,imgname-davanagere-yasg-fans-1787703724115.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ರಾಕಿಂಗ್ ಸ್ಟಾರ್ ಖ್ಯಾತಿಯ ಯಶ್ ಅಭಿನಯದ ಟಾಕ್ಸಿಕ್ ಚಿತ್ರ ಆ. 26 ರಂದು ಬಿಡುಗಡೆ ಪ್ರಯುಕ್ತ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಸಂತೋಷ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳದಿಂದ ಟಾಕ್ಸಿಕ್ ಚಿತ್ರದ ಬಿಡುಗಡೆಯನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದರು.&lt;/p&gt;&lt;p&gt;ತ್ರಿನೇತ್ರ, ತ್ರಿಶೂಲ್, ಗೀತಾಂಜಲಿ ಹಾಗೂ ಎಸ್&zwnj;ಎಸ್ ಮಾಲ್&zwnj;ನಲ್ಲಿ ಟಾಕ್ಸಿಕ್ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಸಂತೋಷ ಉಂಟು ಮಾಡಿದೆ ಎಂದರು.&lt;/p&gt;&lt;h2&gt;&lt;strong&gt;ಒಟ್ಟು ₹4.74 ಲಕ್ಷ ಮೊತ್ತದ ಟಿಕೆಟ್ ಖರೀದಿ&lt;/strong&gt;&lt;/h2&gt;&lt;p&gt;ತ್ರಿಶೂಲ್ ಮತ್ತು ತ್ರಿನೇತ್ರ ಚಿತ್ರಮಂದಿರದಲ್ಲಿ ಬೆಳಗಿನ ಜಾವ 6ಕ್ಕೆ ಫ್ಯಾನ್ ಶೋ ನಡೆಯುತ್ತಿದೆ. 5.30ಕ್ಕೆ ಎರಡೂ ಚಿತ್ರಮಂದಿರಗಳ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಂಭ್ರಮೋತ್ಸವ ನಡೆಸಲಾಗುವುದು. ಫ್ಯಾನ್ ಷೋಗಾಗಿ ಎರಡೂ ಚಿತ್ರಮಂದಿರಗಳ ಟಿಕೆಟ್&zwnj;ಗಳನ್ನು ಅಭಿಮಾನಿಗಳೇ ಖರೀದಿ ಮಾಡಿದ್ದೇವೆ. ಒಟ್ಟು ₹4.74 ಲಕ್ಷ ಮೊತ್ತದ ಟಿಕೆಟ್ ಖರೀದಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಯಶ್ ಅಭಿನಯದ ಚಿತ್ರ ಬಿಡುಗಡೆಗೆ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಾ ಇದ್ದೇವೆ. ಅತಿ ಹೆಚ್ಚಿನ ಬಜೆಟ್&zwnj;ನ ಚಿತ್ರ ಖಂಡಿತವಾಗಿಯೂ ಯಶಸ್ವಿ ಆಗುತ್ತದೆ ಎಂಬ ವಿಶ್ವಾಸ ಇದೆ. ಮುಂದಿನ ದಿನಗಳಲ್ಲಿ ಯಶ್ ಅವರ ಅಪೇಕ್ಷೆಯಂತೆ ಸಾಮಾಜಿಕ ಸೇವಾ ಕಾರ್ಯಗಳ ಮಾಡಲಾಗುವುದು ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;12 ಸಾವಿರಕ್ಕೂ ಹೆಚ್ಚು ಸ್ಕ್ರೀನ್&zwnj;ಗಳಲ್ಲಿ ಟಾಕ್ಸಿಕ್ ರಿಲೀಸ್; ಧುರಂದರ್ ದಾಖಲೆ ಉಡೀಸ್&lt;/strong&gt;&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಅಭಿಮಾನಿಗಳ ಸಂಘದ ನರೇಶ್, ವಿನಯ್ ಕುಮಾರ್, ಸಂದೀಪ್, ರಾಕೇಶ್ ಕುಮಾರ್, ಸಚಿನ್, ಶಿವು, ವಿಜಯ್, ನರೇಂದ್ರ, ವೀರೇಂದ್ರ, ಮೋಹನ್ ಇತರರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಊರ್ವಶಿ ಚಿತ್ರಮಂದಿರ ನೆಲಸಮ ಪ್ರಕ್ರಿಯೆ ಸದ್ಯಕ್ಕಿಲ್ಲ; ಹೈಕೋರ್ಟ್&zwnj;ನಿಂದ ತಾತ್ಕಾಲಿಕ ತಡೆಯಾಜ್ಞೆ!&lt;/strong&gt;&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-rocking-star-yash-fans-buy-tickets-for-toxic-movie-worth-rs-4-point-74-lakh-mrq/articleshow-gru0dqg"/>
        </item>
        <item>
            <title><![CDATA[ದಾವಣಗೆರೆ: ಸೆಲ್ಫೀ ವಿಡಿಯೋ ಮಾಡಿಬ್ಯಾಂಕ್ ಉದ್ಯೋಗಿ ನಾಪತ್ತೆ! ತುಂಗಾ ಕಾಲುವೆಯಲ್ಲಿ ಬೈಕ್ ಪತ್ತೆ! ಸ್ಥಳಕ್ಕೆ ಎಂಪಿ ರೇಣುಕಾಚಾರ್ಯ ಭೇಟಿ]]></title>
            <link>https://kannada.asianetnews.com/karnataka-districts/davanagere-private-bank-employee-missing-after-recording-selfiee-video-rav/articleshow-hs66eyf</link>
            <guid isPermaLink="true">https://kannada.asianetnews.com/karnataka-districts/davanagere-private-bank-employee-missing-after-recording-selfiee-video-rav/articleshow-hs66eyf</guid>
            <pubDate>Sun, 30 Aug 2026 11:36:52 +0530</pubDate>
            <description><![CDATA[ದಾವಣಗೆರೆಯ ಖಾಸಗಿ ಬ್ಯಾಂಕ್ ಉದ್ಯೋಗಿ ಮೋಹನ್ ಕುಮಾರ್, ಸಹೋದ್ಯೋಗಿಗಳ ಕಿರುಕುಳ ಮತ್ತು ಸಾಲದ ಒತ್ತಡದಿಂದ ನೊಂದು ಸೆಲ್ಫೀ ವಿಡಿಯೋ ಮಾಡಿ ನಾಪತ್ತೆಯಾಗಿದ್ದಾರೆ. ತುಂಗಾ ಕಾಲುವೆಯಲ್ಲಿ ಅವರ ಬೈಕ್ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m18mc6m1cc1g2jr4zxzd8tzg,imgname-----------------------2026-08-30t113246.908-1788069943937.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾವಣಗೆರೆ(ಆ.30) ಸಿಬ್ಬಂದಿ ಕಿರುಕುಳ, ಸಾಲ, ಪ್ರಮೋಶನ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ನೊಂದ ಖಾಸಗಿ ಬ್ಯಾಂಕ್ ಸಿಬ್ಬಂದಿಯೊಬ್ಬರ ಸೆಲ್ಫೀ ವಿಡಿಯೋ ಮಾಡಿ ನಾಪತ್ತೆಯಾದ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಅರ್&zwnj;ಡಿ ಮೋಹನ್ ಕುಮಾರ್(37) ನಾಪತ್ತೆಯಾಗಿರುವ ವ್ಯಕ್ತ. ಬೈಕ್ ಸಮೇತ ತುಂಗಾ ಕಾಲುವೆಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.&lt;/p&gt;&lt;h2&gt;ನಾಪತ್ತೆಯಾಗಿರೋ ವ್ಯಕ್ತಿ ಸೆಲ್ಫೀ ವಿಡಿಯೋದಲ್ಲಿ ಹೇಳಿದ್ದೇನು?&lt;/h2&gt;&lt;p&gt;ನಾಪತ್ತೆಯಾಗಿರುವ ವ್ಯಕ್ತಿ ತನ್ನ ನಿರ್ಧಾರಕ್ಕೆ ಮುನ್ನ ಸೇಲ್ಫಿ ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ, ನನ್ನ ಸಾವಿಗೆ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ, ನನಗೆ ಸಾಲವಿದೆ. ಸಾಲ ಮಾಡಿ ಕೊಟ್ರೇಶ್ ಎಂಬುವರ ಬಳಿ ಮಾರ್ಕ್ಸ್ ಕಾರ್ಡ್ ಮಾಡಿಕೊಂಡಿದ್ದೇನೆ. ಪ್ರಮೋಶನ್ ಬರಲಿಲ್ಲ. ಇತ್ತ ಸಾಲ ಸಿಕ್ಕಾಪಟ್ಟೆ ಆಗಿದೆ. ನನ್ನ ಸಾಲಕ್ಕೆ ಬ್ಯಾಂಕ್ ಸಿಬ್ಬಂದಿ ಕಾರಣ. ನನ್ನ ಸಹ ಸಿಬ್ಬಂದಿಗಳಾದ ತಿಪ್ಪೇಶ್, ಮಾರ್ಕ್ಸ್&zwnj; ಕಾರ್ಡ್ ಮಾಡಿಕೊಡುವ ಕೊಟ್ರೇಶ್ ಕಾರಣ. ನನ್ನಿಂದ ಹೀಗಾಗಿ ನೊಂದು ಸಾಯುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವಿಗೆ ಬ್ಯಾಂಕ್ ಸಿಬ್ಬಂದಿಗಳೇ ಕಾರಣ. ಲಂಚ ಪಡೆದು ಎಲ್ಲರೂ ಸೇರಿ ಮೋಸ ಮಾಡಿದರು ಎಂದು ವಿಡಿಯೋದಲ್ಲಿ ಮೋಹನ್ ಕಣ್ಣೀರು ಹಾಕುತ್ತಾ ನನಗೆ ನ್ಯಾಯ ಕೊಡಿಸಬೇಕು ಅಂತಾ ಎಂಪಿ ರೇಣುಕಾಚಾರ್ಯ ಅವರಿಗೆ ಮೋಹನ್ ಮನವಿ ಮಾಡಿದ್ದಾನೆ.&lt;/p&gt;&lt;h3&gt;ಬೈಕ್ ಸಮೇತ ತುಂಗಾ ಕಾಲುವೆ ಹಾರಿದ್ನಾ ಮೋಹನ್?&lt;/h3&gt;&lt;p&gt;ಶೋಧ ಕಾರ್ಯಾಚರಣೆ ವೇಳೆ ತುಂಗಾ ನದಿಯಲ್ಲಿ ನಾಪತ್ತೆಯಾಗಿರುವ ಮೋಹನ್ ಬಳಸುತ್ತಿದ್ದ ಬೈಕ್ ಪತ್ತೆಯಾಗಿರುವುದರಿಂದ ಬೈಕ್ ಸಮೇತ ತುಂಗಾ ಕಾಲುವೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕರಣ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶೋಧಕಾರ್ಯ ಮುಂದುವರಿದಿದೆ.&lt;/p&gt;&lt;p&gt;&lt;strong&gt;ಎಂಪಿ ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ&lt;/strong&gt;&lt;/p&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.&lt;/p&gt;]]></content:encoded>
            <category>davanagere</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/davanagere-private-bank-employee-missing-after-recording-selfiee-video-rav/articleshow-hs66eyf"/>
        </item>
        <item>
            <title><![CDATA[Teachers Day Special: ಮಕ್ಕಳ ಮನಸ್ಸಷ್ಟೇ ಅಲ್ಲ, ಕ್ಯಾನ್ಸರನ್ನೇ ಗೆಲ್ಲುತ್ತಿರುವ ಈ ಶಿಕ್ಷಕಿ ಯಾರು?]]></title>
            <link>https://kannada.asianetnews.com/education/teacher-al-nagaveni-continues-teaching-despite-cancer-inspires-students-in-davanagere-gvd/articleshow-k4gpton</link>
            <guid isPermaLink="true">https://kannada.asianetnews.com/education/teacher-al-nagaveni-continues-teaching-despite-cancer-inspires-students-in-davanagere-gvd/articleshow-k4gpton</guid>
            <pubDate>Sat, 05 Sep 2026 16:04:45 +0530</pubDate>
            <description><![CDATA[&lt;p&gt;ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬೋಧನೆ ಮುಂದುವರಿಸಿರುವ ಶಿಕ್ಷಕಿ ಎ.ಎಲ್. ನಾಗವೇಣಿ ಅವರು ಬಡ ಮಕ್ಕಳ ಶಿಕ್ಷಣಕ್ಕೂ ನೆರವಾಗುತ್ತಾ, ಶಿಕ್ಷಕ ವೃತ್ತಿಗೆ ಮಾನವೀಯತೆ ಮತ್ತು ಸೇವೆಯ ಹೊಸ ಅರ್ಥ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1rj2aj3nqbhqnmkkq0020tr,imgname-vjbv-1788604394051.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಸೆ.05): &lt;/strong&gt;ಮಾರಣಾಂತಿಕ ಕ್ಯಾನ್ಸರ್ ಕಾಯಿಲೆ ಬಂದರೂ ಎದೆಗುಂದದೇ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಲೇ, ಆಸ್ಪತ್ರೆಯಲ್ಲಿದ್ದರೆ ಆನ್&zwnj; ಲೈನ್&zwnj;ನಲ್ಲಿ, ಚಿಕಿತ್ಸೆ ಪಡೆದು ಬಂದ ನಂತರ ಮತ್ತೆ ಎಂದಿನಂತೆ ಶಾಲೆಗೆ ಹೋಗಿ ನೋವಿನಲ್ಲೂ ಮಕ್ಕಳಲ್ಲೇ ದೇವರನ್ನು ಕಾಣುತ್ತಾ, ಬೋಧಿಸುವ ಮೂಲಕ ವೃತ್ತಿಗೆ ಮತ್ತಷ್ಟು ಮೆರಗು ತರುವ ಕೆಲಸವನ್ನು ದಾವಣಗೆರೆಯ ಶ್ರೀರಾಮ ಬಡಾವಣೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮಾಡುತ್ತ ಶಿಕ್ಷಕ ವೃತ್ತಿಯ ಗೌರವ ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.&lt;/p&gt;&lt;p&gt;ದಾವಣಗೆರೆ ವಾಸಿಯಾದ ಎ.ಎಲ್.ನಾಗವೇಣಿ 2022ರಲ್ಲಿ ತಮಗೆ ಕ್ಯಾನ್ಸರ್ 2ನೇ ಹಂತದಲ್ಲಿ ಇರುವುದು ತಿಳಿದಿದ್ದಾರೆ. ಆದರೂ, ಎದೆಗುಂದಲಿಲ್ಲ. ಪತಿ ಎಸ್.ಕೆ.ಪ್ರಹ್ಲಾದ್&zwnj; ರಾಜ್ಯ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ. ತಂದೆ ಶಿಕ್ಷಕರಾಗಿದ್ದ ದಿವಂಗತ ಎ.ಲಿಂಗಪ್ಪ ಇಲ್ಲಿನ ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ. ತಾಯಿಯೂ ಶಿಕ್ಷಕಿಯಾಗಿ ನಿವೃತ್ತಿ ಆದವರು.&lt;/p&gt;&lt;p&gt;ದಾವಣಗೆರೆ ವಿವಿಯಲ್ಲಿ 2015ರಲ್ಲಿ ಎಂ.ಎ. ಸ್ನಾತಕೋತ್ತರ ಇಂಗ್ಲಿಷ್ ಭಾಷೆಯಲ್ಲಿ ರ್ಯಾಂಕ್, 3 ಚಿನ್ನದ ಪದಕ ಪಡೆದು, ಶಿಕ್ಷಕ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎ.ಎಲ್. ನಾಗವೇಣಿ ಅವರು ಕೆಎಎಸ್&zwnj; ಅಧಿಕಾರಿ ಆಗಬಹುದಿತ್ತು. ಆದರೆ, ಹೆತ್ತವರ ಆಸೆಯಂತೆ ಶಿಕ್ಷಕಿಯಾಗಿ ಆ ವೃತ್ತಿಗೆ ಮತ್ತಷ್ಟು ಮೆರಗು ತರುತ್ತಿದ್ದಾರೆ.&lt;/p&gt;&lt;p&gt;ದಾವಣಗೆರೆ ನಿಟುವಳ್ಳಿಯ ಶ್ರೀರಾಮ ಬಡಾವಣೆಯ ಶಾಲೆಯ ಇಂಗ್ಲಿಷ್ ಭಾಷಾ ಹಾಗೂ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ನಾಗವೇಣಿಯವರ ಮಕ್ಕಳಿಗೆ ಪಾಠದ ಜೊತೆಮೌಲ್ಯ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ವಿಜ್ಞಾನ ಪ್ರಯೋಗ, ದೈಹಿಕ ಶಿಕ್ಷಣ, ಇಲಾಖೆ ಪ್ರತಿ ಕಾರ್ಯಕ್ರಮಕ್ಕೂ ಮಕ್ಕಳನ್ನು ಸನ್ನದ್ಧಗೊಳಿಸುತ್ತಿದ್ದಾರೆ. ಕೋವಿಡ್ ವೇಳೆ ಬಡ, ಶ್ರಮಿಕ ಪಾಲಕರ ಪಾಲಿಗೆ ಅನ್ನದಾತೆಯಾಗಿ, ಮಕ್ಕಳಿಗೆ ಅಕ್ಷರದಾತೆ ಆದವರು. ತಮ್ಮ ಮದುವೆ ವೇಳೆ ಪತಿಗೆ ತಮ್ಮ ವೇತನದ ಶೇ.10ರಷ್ಟನ್ನು ಬಡಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡುವ ಮಾತು ಕೊಟ್ಟಂತೆ ಇಂದಿಗೂ ನಾಗವೇಣಿ ನುಡಿದಂತೆ ನಡೆಯುತ್ತಿದ್ದಾರೆ.&lt;/p&gt;&lt;p&gt;ಕುಟುಂಬ, ಸ್ನೇಹಿತರು, ಬಂಧು-ಬಳಗದಿಂದ ವಿವಿಧ ಸರ್ಕಾರಿ ಶಾಲೆಗಳಿಗೆ, ಕೊಡುಗೆಗಳ ರೂಪದಲ್ಲಿ ₹4 ಲಕ್ಷ ಮೌಲ್ಯದ ದೇಣಿಗೆ, ಅವಶ್ಯಕ ಸಾಮಗ್ರಿ ಕೊಡಿಸಿದ್ದಾರೆ. ಬಡವರ ಮಕ್ಕಳು ಶಾಲೆಯಿಂದ ದೂರ ಉಳಿಯಬಾರದೆಂದು ನಿತ್ಯವೂ ಬೆಳಗ್ಗೆ 8.30ಕ್ಕೆ ಮನೆಯಿಂದ ಕಾರಿನಲ್ಲಿ ಹೊರಟು, ತಮ್ಮ ಶಾಲೆಯ ಏಳೆಂಟು ಮಕ್ಕಳನ್ನು ಅವರ ಗುಡಿಸಲು, ಶೆಡ್&zwnj; ಬಳಿ ಹೋಗಿ, ಶಾಲೆಗೆ ಕರೆದೊಯ್ಯುತ್ತಾರೆ. ವಾಪಸ್&zwnj; ಆ ಮಕ್ಕಳನ್ನು ಮನೆಗೆ ಬಿಟ್ಟು, ಸಂಜೆ 6 ಗಂಟೆ ಹೊತ್ತಿಗೆ ಮನೆಗೆ ಮರಳುತ್ತಾರೆ. ಮಕ್ಕಳಿಗೆ ಪಾಠ ಮಾಡುತ್ತಿದ್ದರೆ, ಮಕ್ಕಳೊಂದಿಗೆ ಇದ್ದರೆ ನನಗೆ ಕಾಯಿಲೆಯೇ ಬಾಧಿಸದು ಎನ್ನುತ್ತಾರೆ ನಾಗವೇಣಿಯವರು.&lt;/p&gt;&lt;h2&gt;&lt;strong&gt;ಮತ್ತಷ್ಟು ಅಭಿಮಾನ&lt;/strong&gt;&lt;/h2&gt;&lt;p&gt;2022ರಲ್ಲಿ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಬಂದರೂ ಧೃತಿಗೆಡದೇ ಸೂಕ್ತ ಚಿಕಿತ್ಸೆ ಪಡೆದು ಶಿಕ್ಷಕ ವೃತ್ತಿ ಮುಂದುವರಿಸುತ್ತಿದ್ದಾರೆ. ಕ್ಯಾನ್ಸರ್&zwnj;ಗೆ ಚಿಕಿತ್ಸೆ ನೀಡುತ್ತಿರುವ ಪ್ರಸಿದ್ಧ ವೈದ್ಯರಿಗೆ ತೋರಿಸಲು ಬೆಂಗಳೂರಿಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಮಾತನಾಡುತ್ತಾ ತಮ್ಮ ತಂದೆ ಎ.ಲಿಂಗಪ್ಪನವರು ಅಂದಾಗ ತಮ್ಮ ಗುರುಗಳ ಮಗಳಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ವೈದ್ಯರು ಧನ್ಯತಾಭಾವ ತೋರಿದ್ದು ಗುರು ವೃತ್ತಿ ಬಗ್ಗೆ ನಾಗವೇಣಿಯವರಲ್ಲಿ ಮತ್ತಷ್ಟು ಅಭಿಮಾನ ಮೂಡಿಸಿತು.&lt;/p&gt;&lt;p&gt;ಹಲವಾರು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ನಾಗವೇಣಿಯವರು ಕ್ಯಾನ್ಸರ್ ಎದುರು ಹೋರಾಡುತ್ತಲೇ ಮಕ್ಕಳಿಗೆ ಭವಿಷ್ಯ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ವಿದ್ಯಾರ್ಥಿನಿಯರ ಪೈಕಿ ಯಾರದ್ದೇ ಮನೆಯಲ್ಲಿ ಮೊದಲ ಶುಭ ಕಾರ್ಯವಾದರೆ ಸೀರೆ, ಅರಿಷಿಣ, ಕುಂಕುಮ, ಬಳೆ ತಲುಪಿಸುವ ಮೂಲಕ ಮಾತೃಸ್ಥಾನದಲ್ಲಿ ನಾಗವೇಣಿ ನಿಲ್ಲುತ್ತಾರೆ.&lt;/p&gt;&lt;p&gt;ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿಯಾದ ಪತಿ ಎಸ್.ಕೆ. ಪ್ರಹ್ಲಾದ್ ಜೊತೆಗೆ ದಾವಣಗೆರೆಯಲ್ಲಿ ಶಿಕ್ಷಕಿ ನಾಗವೇಣಿ ಇದ್ದು, ಹೈಕೋರ್ಟ್ ಲಾಯರ್&zwnj; ಆಗಿ ಮಗಳು ಪಿ.ಎನ್.ಪ್ರಾರ್ಥನಾ ಕೆಲಸ ಮಾಡುತ್ತಿದ್ದರೆ, ಮಗ ಪಿ.ಎನ್.ಕಾರ್ತಿಕೇಯನ್&zwnj; ಬೆಂಗಳೂರಿನಲ್ಲಿ ಬಿಬಿಎ ಓದುತ್ತಿದ್ದಾರೆ. ತಮ್ಮ ಹಳೆಯ ವಿದ್ಯಾರ್ಥಿಯೊಬ್ಬನಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದಾರೆ. 8ನೇ ತರಗತಿ ನಂತರ ಮುಂದೆ ಓದುವ ತಮ್ಮ ವಿದ್ಯಾರ್ಥಿಗಳು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಪಿಯುಸಿವರೆಗೆ ತಾವೇ ಶಾಲಾ- ಕಾಲೇಜು ಶುಲ್ಕ ಕಟ್ಟಿ, ನೆರವಾಗುತ್ತಾರೆ. ಬೋಧನೆಯಲ್ಲೂ ವೈಶಿಷ್ಟ್ಯ ಹೊಂದಿರುವ ಎಲ್.ನಾಗವೇಣಿಯವರೆಂದರೆ ಮಕ್ಕಳಿಗೂ ಹೆತ್ತ ತಾಯಿಗಿಂತಲೂ ಹೆಚ್ಚು ಎಂಬಷ್ಟರ ಮಟ್ಟಿಗೆ ಪ್ರೀತಿ, ಸೆಳೆತ.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/education/teacher-al-nagaveni-continues-teaching-despite-cancer-inspires-students-in-davanagere-gvd/articleshow-k4gpton"/>
        </item>
        <item>
            <title><![CDATA[ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಶುಲ್ಕ: ದಾವಣಗೆರೆಯ Zudio ಮಳಿಗೆಗೆ ₹ 30,000 ದಂಡ]]></title>
            <link>https://kannada.asianetnews.com/business/district-consumer-commission-extra-charge-for-carry-bag-davanagere-s-zudio-store-fined-rs-30000-mrq/articleshow-kt50rh0</link>
            <guid isPermaLink="true">https://kannada.asianetnews.com/business/district-consumer-commission-extra-charge-for-carry-bag-davanagere-s-zudio-store-fined-rs-30000-mrq/articleshow-kt50rh0</guid>
            <pubDate>Thu, 13 Aug 2026 07:22:14 +0530</pubDate>
            <description><![CDATA[ದಾವಣಗೆರೆಯಲ್ಲಿ, ಗ್ರಾಹಕರಿಂದ ಕ್ಯಾರಿ ಬ್ಯಾಗ್&zwnj;ಗೆ ಹೆಚ್ಚುವರಿಯಾಗಿ ₹10 ಶುಲ್ಕ ವಿಧಿಸಿದ್ದಕ್ಕಾಗಿ ಜುಡಿಯೊ ಮಳಿಗೆಗೆ ಜಿಲ್ಲಾ ಗ್ರಾಹಕರ ಆಯೋಗ ₹30,000 ದಂಡ ವಿಧಿಸಿದೆ. ಕ್ಯಾರಿ ಬ್ಯಾಗ್&zwnj;ಗೆ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಮತ್ತು ಸೇವಾ ನ್ಯೂನತೆ ಎಂದು ಆಯೋಗ ತೀರ್ಪು ನೀಡಿದ್ದು, ಈ ಆದೇಶ ಎಲ್ಲಾ ಮಳಿಗೆಗಳಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kgc3d4218vgg858de1meqkrm,imgname-zudio--3--1769932755009.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ:&lt;/strong&gt; ಗ್ರಾಹಕರಿಂದ ಕ್ಯಾರಿ ಬ್ಯಾಗ್&zwnj;ಗೆ ಹೆಚ್ಚುವರಿಯಾಗಿ ದಂಡ ಅಥವಾ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಹಾಗೂ ಸೇವೆಯಲ್ಲಾದ ನಿರ್ಲಕ್ಷ್ಯ ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ.&lt;/p&gt;&lt;p&gt;ಪಿ.ಜೆ. ಬಡಾವಣೆಯ ಎವಿಕೆ ರಸ್ತೆಯ ಜುಡಿಯೊ (ತೋಶಾನಿ ಎಂಪೋರಿಯಂ ಅವೆನ್ಯೂ) ಮಳಿಗೆಯಲ್ಲಿ ಬಟ್ಟೆ ಖರೀದಿಸಿದ್ದ ದೂರುದಾರ ರಾಜೇಂದ್ರ ಎಂಬವರಿಂದ ಕ್ಯಾರಿ ಬ್ಯಾಗ್&zwnj;ಗಾಗಿ ಹೆಚ್ಚುವರಿಯಾಗಿ ₹10 ವಸೂಲಿ ಮಾಡಿದ್ದಕ್ಕಾಗಿ ಆಯೋಗವು ಈ ಆದೇಶ ಹೊರಡಿಸಿದೆ.&lt;/p&gt;&lt;h2&gt;&lt;strong&gt;ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು&lt;/strong&gt;&lt;/h2&gt;&lt;p&gt;ಜುಡಿಯೊ ಮಳಿಗೆಯಲ್ಲಿ ಬಟ್ಟೆಗಳನ್ನು ಖರೀದಿಸಿದ ರಾಜೇಂದ್ರ ಅವರಿಂದ ಕ್ಯಾರಿ ಬ್ಯಾಗ್&zwnj;ಗೆ ಹೆಚ್ಚುವರಿಯಾಗಿ ₹10 ಶುಲ್ಕ ಪಡೆಯಲಾಗಿತ್ತು. ಇದರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಆಯೋಗವು, ಗ್ರಾಹಕರಿಂದ ಕ್ಯಾರಿ ಬ್ಯಾಗ್ ಶುಲ್ಕ ವಸೂಲಿ ಮಾಡುವುದು ಕಾನೂನುಬಾಹಿರ ಹಾಗೂ ಸೇವಾ ಲೋಪ ಎಂದು ಸ್ಪಷ್ಟಪಡಿಸಿದೆ.&lt;/p&gt;&lt;p&gt;ಸೇವೆಯಲ್ಲಾದ ನಿರ್ಲಕ್ಷ್ಯ, ಅನ್ಯಾಯದ ವ್ಯಾಪಾರ ಮತ್ತು ದೂರಿನ ಖರ್ಚು ಸೇರಿ ದೂರುದಾರರಿಗೆ ಒಟ್ಟು ₹10,000 ಪರಿಹಾರ ಹಾಗೂ ಪಾವತಿಸಿದ್ದ ₹10 ಹಿಂತಿರುಗಿಸುವಂತೆ ಜುಡಿಯೊ ಸಂಸ್ಥೆಗೆ ಆಯೋಗ ಆದೇಶಿಸಿದೆ. ಇದರೊಂದಿಗೆ ಗ್ರಾಹಕ ಕಾನೂನು ನೆರವು ಖಾತೆಗೆ ₹20,000 ಜಮಾ ಮಾಡಲು ಸಹ ಸೂಚಿಸಿದೆ. ಒಟ್ಟು ₹30,000 ಮೊತ್ತವನ್ನು ಆದೇಶದ ದಿನಾಂಕದಿಂದ ಒಂದು ತಿಂಗಳೊಳಗೆ ಪಾವತಿಸಲು ಆದೇಶಿಸಲಾಗಿದೆ.&lt;/p&gt;&lt;h3&gt;&lt;strong&gt;ಎಲ್ಲಾ ಮಳಿಗೆಗಳಿಗೂ ಆದೇಶ ಅನ್ವಯ:&lt;/strong&gt;&lt;/h3&gt;&lt;p&gt;ಉತ್ಪನ್ನಗಳನ್ನು ಖರೀದಿಸುವ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ಕ್ಯಾರಿ ಬ್ಯಾಗ್&zwnj;ಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಈ ಆದೇಶವು ಕೇವಲ ಸದರಿ ಮಳಿಗೆಗೆ ಮಾತ್ರವಲ್ಲದೆ ಎಲ್ಲಾ ಸಗಟು ವ್ಯಾಪಾರಿಗಳು, ರಿಟೇಲ್ ಮಾರಾಟಗಾರರು, ದೊಡ್ಡ ಮಾಲ್&zwnj;ಗಳು, ಮೋರ್, ರಿಲಯನ್ಸ್, ಟ್ರೆಂಡ್ಸ್ ಹಾಗೂ ಇನ್ನಿತರ ಎಲ್ಲಾ ಮಾರಾಟ ಮಳಿಗೆಗಳಿಗೂ ಅನ್ವಯಿಸುತ್ತದೆ ಎಂದು ಆಯೋಗ ತಿಳಿಸಿದೆ.&lt;/p&gt;&lt;p&gt;ಈ ಆದೇಶವನ್ನು ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ, ಸದಸ್ಯ ಸಿ.ಎಸ್. ತ್ಯಾಗರಾಜನ್ ಅವರನ್ನು ಒಳಗೊಂಡ ಪೀಠವು ಹೊರಡಿಸಿದೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಚ್ಚರಿಯ ಬೆಳವಣಿಗೆ: ZUDIO ಶಾಪಿಂಗ್&zwnj;ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು! ಕಾರಣ ಏನು?&lt;/strong&gt;&lt;/p&gt;]]></content:encoded>
            <category>davanagere</category>
            <dc:creator>Mahmad Rafik</dc:creator>
            <atom:link href="https://kannada.asianetnews.com/business/district-consumer-commission-extra-charge-for-carry-bag-davanagere-s-zudio-store-fined-rs-30000-mrq/articleshow-kt50rh0"/>
        </item>
        <item>
            <title><![CDATA[Davanagere: ಅಪರಿಚಿತ ವಾಹನ ಡಿಕ್ಕಿ, ಚಿರತೆಗೆ ಗಾಯ; ರಕ್ಷಣೆಗೆ ಬಂದ ಅರಣ್ಯ ಸಿಬ್ಬಂದಿ ಮೇಲೆ ದಾಳಿ]]></title>
            <link>https://kannada.asianetnews.com/karnataka-districts/leopard-injured-after-being-hit-by-an-unidentified-vehicle-in-davanagere-on-national-highway-48-sns/articleshow-mhf7uep</link>
            <guid isPermaLink="true">https://kannada.asianetnews.com/karnataka-districts/leopard-injured-after-being-hit-by-an-unidentified-vehicle-in-davanagere-on-national-highway-48-sns/articleshow-mhf7uep</guid>
            <pubDate>Tue, 08 Sep 2026 10:38:32 +0530</pubDate>
            <description><![CDATA[ದಾವಣಗೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆಯೊಂದು ಗಾಯಗೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ಮುಳ್ಳು ಹಂದಿಗಳನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯು ಬಂಧಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1zp7d7sje6772cxmqnqtkrd,imgname-leopard--1--1788843635961.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆಗೆ ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಆನಗೋಡ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಹೆದ್ದಾರಿ ರಸ್ತೆ ಪಕ್ಕದ ಚರಂಡಿಯಲ್ಲಿ ಬಿದ್ದು ತೀವ್ರ ನೋವಿನಿಂದ ಚಡಪಡಿಸುತ್ತಿರುವ ಚಿರತೆಯನ್ನು ಕಂಡು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸ್ಥಳಾಂತರಕ್ಕೆ ಕ್ರಮಕೈಗೊಂಡಿದ್ದರು.&lt;/p&gt;&lt;p&gt;ಗಾಯಗೊಂಡಿದ್ದ ಚಿರತೆ ಅರವಳಿಕೆ ನೀಡಿ ಸ್ಥಳಾಂತರ ಮಾಡುವ ಕಾರ್ಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಡಿದ್ದು, ಆದರೆ ಅರವಳಿಕೆ ನೀಡಿದ ಸಂದರ್ಭದಲ್ಲಿ ಮತ್ತಷ್ಟು ವ್ಯಾಘ್ರವಾಗಿ ರಕ್ಷಣೆಗೆ ಬಂದ ಅರಣ್ಯ ಸಿಬ್ಬಂದಿ ಮೇಲೆಯೇ ದಾಳಿ ಮಾಡಲು ಮುಂದಾಗಿತ್ತು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಚಿರತೆಯ ಹಿಂದಿನ ಕಾಲಿಗೆ ಗಂಭೀರ ಗಾಯವಾಗಿರುವ ಪರಿಣಾಮ, ಕೆಲ ಸಮಯದಲ್ಲೇ ರಸ್ತೆಪಕ್ಕ ಬಂದು ಕುಳಿತುಕೊಂಡಿತ್ತು.&lt;/p&gt;&lt;p&gt;&lt;img&gt;&lt;/p&gt;&lt;p&gt;ಆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡು ನರಳುತ್ತಿದ್ದ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಶಿಫ್ಟ್ ಮಾಡುವ ಕೆಲಸ ಮಾಡಿದ್ದಾರೆ. ಚಿರತೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಹಂಪಿ ಬಳಿಯ ಕಮಲಾಪುರ ಝೂಲಾಜಿಕಲ್ ಪಾರ್ಕ್ ಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;p&gt;ಮಧ್ಯರಾತ್ರಿ ಹೆದ್ದಾರಿಯಲ್ಲಿ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಚಿರತೆ ಗಾಯಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದ್ದು, 20ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಚಿರತೆ ರಕ್ಷಣಾ ಕಾರ್ಯ ನಡೆಸಿದ್ದಾರೆ. ಹೊಸಪೇಟೆಯಿಂದ ಆಗಮಿಸಿದ ಅರವಳಿಕೆ ತಜ್ಞರು ಚಿರತೆಗೆ ಅರವಳಿಕೆ ನೀಡಿ ಸೆರೆ ಹಿಡಿದಿದ್ದಾರೆ.&lt;/p&gt;&lt;p&gt;ಇನ್ನು, ಘಟನೆಯಲ್ಲಿ ಅರಣ್ಯ ಇಲಾಖೆ ವಾಚರ್ ಮರುಳಸಿದ್ದಪ್ಪ ಮೇಲೆ ಚಿರತೆ ದಾಳಿ ಮಾಡಿದ್ದು, ಅದೃಷ್ಟವಶಾತ್ ವಾಚರ್ ಮರುಳಸಿದ್ದಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಚರ್ ಮರುಳಸಿದ್ದಪ್ಪ ಕೈ, ಭುಜಕ್ಕೆ ಚಿರತೆ ಕಚ್ಚಿದ್ದು, ಅವರಿಗೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಎಸಿಎಫ್ ಆನಂದ ಅವರು ಆಸ್ಪತ್ರೆಗೆ ಭೇಟಿ ನೀಡಿ ಮರುಳಸಿದ್ದಪ್ಪ ಆರೋಗ್ಯ ವಿಚಾರಿಸಿದ್ದಾರೆ.&lt;/p&gt;&lt;h2&gt;&lt;strong&gt;ಮುಳ್ಳು ಹಂದಿ ಬೇಟೆಗಾರರ ಬಂಧನ&lt;/strong&gt;&lt;/h2&gt;&lt;p&gt;ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಭಾಗ, ತರೀಕೆರೆ ವಲಯದ ಹುಣಸಘಟ್ಟ ವ್ಯಾಪ್ತಿಯ ಅರಣ್ಯದಲ್ಲಿ ಮುಳ್ಳು ಹಂದಿ ಬೇಟೆಗಾರರನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧನ ಮಾಡಿದ್ದಾರೆ. ಮೂರು ಮುಳ್ಳು ಹಂದಿಗಳನ್ನು ಬೇಟೆಯಾಡಿದ ಆರೋಪ ಮೇರೆಗೆ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದು, ಸಾವೆಮರಡಿ ಕಾವಲ್ ಗ್ರಾಮದ ಸುರೇಶ್ ಎಂಬುವರ ಕೊಟ್ಟಿಗೆಯಲ್ಲಿ ಹಂದಿಗಳ ಕಳೇಬರಗಳು ಪತ್ತೆಯಾಗಿದ್ದವು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ , ಸುರೇಶ್, ಸಂತೋಷ್, ಅಭಿ ಎಂಬುವರ ಅರೆಸ್ಟ್ ಮಾಡಿದ್ದಾರೆ. ಘಟನೆಯಲ್ಲಿ ಇನ್ನೋರ್ವ ಆರೋಪಿ ಶಂಕ&zwnj;ರ್ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಉಪ ವಲಯ ಅರಣ್ಯಾಧಿಕಾರಿ ಕೆ.ಉಮೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ನಡೆಸಲಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/leopard-injured-after-being-hit-by-an-unidentified-vehicle-in-davanagere-on-national-highway-48-sns/articleshow-mhf7uep"/>
        </item>
        <item>
            <title><![CDATA[ಬೆಲೆ ಕುಸಿತ: ಟೊಮ್ಯಾಟೋ 1 ರೂ, ಕೊತ್ತಂಬರಿ 3 ರೂ, ಲೋಡ್‌ ತಂದು ರಸ್ತೆಗೆ ಎಸೆದ ರೈತ!]]></title>
            <link>https://kannada.asianetnews.com/karnataka-districts/karnataka-tomato-and-coriander-price-crash-farmers-dump-crops-amid-severe-losses-gdp/articleshow-n15b15y</link>
            <guid isPermaLink="true">https://kannada.asianetnews.com/karnataka-districts/karnataka-tomato-and-coriander-price-crash-farmers-dump-crops-amid-severe-losses-gdp/articleshow-n15b15y</guid>
            <pubDate>Mon, 24 Aug 2026 07:15:51 +0530</pubDate>
            <description><![CDATA[ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿದಿದ್ದರಿಂದ ಬೆಳಗಾವಿಯಲ್ಲಿ ರೈತರು ಬೆಳೆಯನ್ನು ರಸ್ತೆಗೆ ಎಸೆದರೆ, ದಾವಣಗೆರೆಯಲ್ಲಿ ಟೊಮ್ಯಾಟೋಗೆ ಕೆಜಿಗೆ ಕೇವಲ 1 ರೂ. ಸಿಕ್ಕಿದ್ದರಿಂದ ಕಟಾವು ಮಾಡದೆ ಗಿಡದಲ್ಲೇ ಬಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rphwne24j3veesfw9h2c98,imgname-kottabmari-1787535356589.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿ/ ದಾವಣಗೆರೆ: ಹಾಕಿದ ಬಂಡವಾಳವೂ ಬಾರದೆ ರೈತರು ತಾವು ಬೆಳೆದ ಕೊತ್ತಂಬರಿ ಸೊಪ್ಪು ಮತ್ತು ಟೊಮ್ಯಾಟೋ ಬೆಳೆಯನ್ನು ರಸ್ತೆ ಬಿಸಾಡಿದ ಘಟನೆಯು ಭಾನುವಾರ ನಡೆದಿದೆ.&lt;/p&gt;&lt;p&gt;ಬೆಳಗಾವಿಯ ರಾಯಭಾಗದಲ್ಲಿ 2 ದಿನಗಳ ಹಿಂದೆ ಕಟ್ಟಿಗೆ 10ರಿಂದ 15 ರು.ವರೆಗೆ ಮಾರಾಟವಾಗುತ್ತಿದ್ದ ಕೊತ್ತಂಬರಿ ಸೊಪ್ಪಿಗೆ ಶನಿವಾರ ಸಂಜೆ 10 ರು.ಗೆ ಮೂರು ಕಟ್ಟುಗಳು ಮಾರಾಟವಾಗುತ್ತಿದ್ದವು. ಆದರೆ ಭಾನುವಾರ 3ರಿಂದ 5 ರು.ಗೆ ಕುಸಿತವಾಗಿದೆ. ಪರಿಣಾಮ ಖರ್ಚು ಮಾಡಿದ್ದ ಮೊತ್ತವೂ ಬಾರದ ಹಿನ್ನೆಲೆ ಅಸಮಾಧಾನದಿಂದ ರೈತರು, ಸೊಪ್ಪನ್ನು ರಸ್ತೆ ಬಿಸಾಡಿದ್ದಾರೆ.&lt;/p&gt;&lt;h2&gt;ಟೊಮ್ಯಾಟೋ ಕೇಜಿಗೆ ₹1:&lt;/h2&gt;&lt;p&gt;ಮತ್ತೊಂದೆಡೆ ದಾವಣಗೆರೆಯಲ್ಲಿ ಟೊಮ್ಯಾಟೋ ಬೆಲೆ ದಿಢೀರ್&zwnj; ಕುಸಿತವು ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. ಕೇಜಿಗೆ ಕೇವಲ 1 ರು.ಗೆ ಕುಸಿತದಿಂದಾಗಿ 80 ಸಾವಿರ ರು.ನಿಂದ 1 ಲಕ್ಷ ರು.ವರೆಗೆ ಬಂಡವಾಳ ಹೂಡಿದ್ದ ಕಿಂಚಿತ್ತೂ ಮೊತ್ತ ದೊರೆಯದ ಕಾರಣ ಕಟಾವು ಮಾಡದೆ ಗಿಡಗಳಲ್ಲಿಯೇ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ಕೈಗೆ ಬಂದಿದ್ದ ಟೊಮ್ಯಾಟೋ ಫಸಲು ಮಣ್ಣುಪಾಲಾಗುತ್ತಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ತಾಲೂಕುಗಳಲ್ಲಿ ರೈತರಿಗೆ ದಿಕ್ಕು ತೋಚದಂತಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-tomato-and-coriander-price-crash-farmers-dump-crops-amid-severe-losses-gdp/articleshow-n15b15y"/>
        </item>
        <item>
            <title><![CDATA[Supreme Court: ಮಾಡಾಳು ವಿರೂಪಾಕ್ಷಪ್ಪನಿಗೆ ಮತ್ತೆ ಕಾನೂನು ಸಂಕಷ್ಟ? ಕ್ಲೀನ್‌ಚಿಟ್ ನೀಡಿದ ಹೈ ಕೋರ್ಟ್‌ಗೆ ಸುಪ್ರೀಂ ಚಾಟಿ!]]></title>
            <link>https://kannada.asianetnews.com/karnataka-districts/madal-virupakshappa-corruption-case-supreme-court-high-court-clean-chit-rs-6-crore-cash-prashanth-madal-ksdl-case-bmk/articleshow-r3rr023</link>
            <guid isPermaLink="true">https://kannada.asianetnews.com/karnataka-districts/madal-virupakshappa-corruption-case-supreme-court-high-court-clean-chit-rs-6-crore-cash-prashanth-madal-ksdl-case-bmk/articleshow-r3rr023</guid>
            <pubDate>Wed, 09 Sep 2026 18:09:58 +0530</pubDate>
            <description><![CDATA[&lt;p&gt;ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಭ್ರಷ್ಟಾಚಾರ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಕ್ಲೀನ್&zwnj;ಚಿಟ್&zwnj;ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಲೋಕಾಯುಕ್ತದ ಮೇಲ್ಮನವಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಇಂತಹ ಗಂಭೀರ ಪ್ರಕರಣಗಳನ್ನು ರದ್ದುಗೊಳಿಸುವುದು ಭ್ರಷ್ಟರಿಗೆ ತಪ್ಪು ಮಾದರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m232wm75z7mtx9v8vwe67yqz,imgname-madalu-virupakshappa-1788957577444.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಕ್ಲೀನ್&zwnj;ಚಿಟ್ ಆದೇಶಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೋರ್ಟ್) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಲೋಕಾಯುಕ್ತ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಹೈಕೋರ್ಟ್&zwnj;ನ ನಿರ್ಧಾರ ಅಸ್ವಾಭಾವಿಕವಾದದ್ದು ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.&lt;/p&gt;&lt;h2&gt;&lt;strong&gt;ಸುಪ್ರೀಂಕೋರ್ಟ್ ಪೀಠದ ಗಂಭೀರ ಆಕ್ಷೇಪ!&lt;/strong&gt;&lt;/h2&gt;&lt;p&gt;ನ್ಯಾಯಮೂರ್ತಿ ಅಹ್ಸನುದ್ದೀನ್ ಅಮಾನುಲ್ಲಾ ನೇತೃತ್ವದ ದ್ವಿಸದಸ್ಯ ಪೀಠವು ಲೋಕಾಯುಕ್ತ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಹೈಕೋರ್ಟ್&zwnj;ನ ತೀರ್ಪನ್ನು ಬಲವಾಗಿ ಆಕ್ಷೇಪಿಸಿದ ನ್ಯಾಯಪೀಠ, &quot;ಇಂತಹ ಗಂಭೀರ ಭ್ರಷ್ಟಾಚಾರದ ಪ್ರಕರಣಗಳನ್ನು ರದ್ದುಗೊಳಿಸಿದರೆ, ಭವಿಷ್ಯದಲ್ಲಿ ಲಂಚ ಪಡೆಯುವ ಭ್ರಷ್ಟರಿಗೆ ಅದೊಂದು ತಪ್ಪು ಮಾದರಿಯಾಗುತ್ತದೆ&quot; ಎಂದು ತೀವ್ರ ಕಳವಳ ವ್ಯಕ್ತಪಡಿಸಿತು. ಹೈಕೋರ್ಟ್ ಈ ಪ್ರಕರಣದಲ್ಲಿ ನೀಡಿರುವ ಆದೇಶ ಅಸ್ವಾಭಾವಿಕವಾಗಿದ್ದು, ಲಂಚಕೋರರಿಗೆ ಧೈರ್ಯ ನೀಡುವಂತಿದೆ ಎಂದು ಅಭಿಪ್ರಾಯಪಟ್ಟ ಪೀಠವು ವಿಚಾರಣೆಯನ್ನು ಮುಂದೂಡಿತು.&lt;/p&gt;&lt;h3&gt;&lt;strong&gt;ಏನಿದು ಮಾಡಾಳು ಲಂಚದ ಪ್ರಕರಣ?&lt;/strong&gt;&lt;/h3&gt;&lt;p&gt;ಈ ಭ್ರಷ್ಟಾಚಾರದ ಜಾಲ ಬಯಲಿಗೆ ಬಂದದ್ದು ೨೦೨೩ ರ ಮಾರ್ಚ್ ೨ ರಂದು. ಕೆಎಸ್&zwnj;ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಂದ ೪೦ ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳು ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಅಲ್ಲಿಂದ ಮುಂದೆ ಲೋಕಾಯುಕ್ತ ನಡೆಸಿದ ದಾಳಿ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಪ್ರಶಾಂತ್ ಹಾಗೂ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಬರೋಬ್ಬರಿ ೬.೧ ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿತ್ತು. ಈ ಬೃಹತ್ ಪ್ರಮಾಣದ ಅಕ್ರಮ ಹಣ ಪತ್ತೆಯಾದ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪ್ರಕರಣದ ಗಂಭೀರತೆ ಅರಿತು ಮಾಡಾಳು ವಿರೂಪಾಕ್ಷಪ್ಪ ಅವರು ಕೆಎಸ್&zwnj;ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತವು, ವಿರೂಪಾಕ್ಷಪ್ಪ ಅವರನ್ನು ಎ-೧ (ಮೊದಲ ಆರೋಪಿ) ಹಾಗೂ ಅವರ ಮಗ ಪ್ರಶಾಂತ್ ಅವರನ್ನು ಎ-೨ (ಎರಡನೇ ಆರೋಪಿ) ಎಂದು ಹೆಸರಿಸಿ ನ್ಯಾಯಾಲಯಕ್ಕೆ ಸುದೀರ್ಘ ಚಾರ್ಜ್&zwnj;ಶೀಟ್ (ದೋಷಾರೋಪಣೆ ಪಟ್ಟಿ) ಸಲ್ಲಿಸಿತ್ತು.&lt;/p&gt;&lt;h3&gt;&lt;strong&gt;ಹೈಕೋರ್ಟ್ ನೀಡಿದ್ದ ಕ್ಲೀನ್&zwnj;ಚಿಟ್ ಮತ್ತು ಲೋಕಾ ಮೇಲ್ಮನವಿ!&lt;/strong&gt;&lt;/h3&gt;&lt;p&gt;ಚಾರ್ಜ್&zwnj;ಶೀಟ್ ಸಲ್ಲಿಕೆಯಾದ ನಂತರ, ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಾಡಾಳು ವಿರೂಪಾಕ್ಷಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ೨೦೨೩ ರ ಡಿಸೆಂಬರ್ ೨೦ ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, &quot;ಮಾಡಾಳು ವಿರೂಪಾಕ್ಷಪ್ಪ ಅವರು ಸ್ವತಃ ನೇರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲು ಸ್ಪಷ್ಟ ಆರೋಪ ಹಾಗೂ ಆಧಾರಪೂರ್ವಕ ಸಾಕ್ಷ್ಯಗಳಿಲ್ಲ&quot; ಎಂದು ಹೇಳಿ ಅವರ ವಿರುದ್ಧದ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಕ್ಲೀನ್&zwnj;ಚಿಟ್ ನೀಡಿತ್ತು.&lt;/p&gt;&lt;h3&gt;&lt;strong&gt;ಬಿಡದ ಸಂಕಷ್ಟ!&lt;/strong&gt;&lt;/h3&gt;&lt;p&gt;ಹೈಕೋರ್ಟ್&zwnj;ನ ಈ ನಿರ್ಧಾರವನ್ನು ಸವಾಲಾಗಿ ಸ್ವೀಕರಿಸಿದ ಲೋಕಾಯುಕ್ತ ಸಂಸ್ಥೆಯು ತಕ್ಷಣವೇ ಸುಪ್ರೀಂಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿತು. ಇದೀಗ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶಕ್ಕೆ ಆಕ್ಷೇಪ ಎತ್ತಿರುವುದರಿಂದ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗುವ ಲಕ್ಷಣಗಳು ದಟ್ಟವಾಗಿವೆ.&lt;/p&gt;]]></content:encoded>
            <category>davanagere</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/madal-virupakshappa-corruption-case-supreme-court-high-court-clean-chit-rs-6-crore-cash-prashanth-madal-ksdl-case-bmk/articleshow-r3rr023"/>
        </item>
        <item>
            <title><![CDATA['ನನ್ನ ಕಣ್ಣು ಕುರುಡು ಅಂದ್ಕೊಂಡ್ರಾ?..' ನಾಡಗೀತೆ ಹಾಡುತ್ತಿದ್ದರೂ ಎದ್ದು ನಿಲ್ಲದ ಅಧಿಕಾರಿಗಳಿಗೆ ಸಿಎಂ ಕ್ಲಾಸ್!]]></title>
            <link>https://kannada.asianetnews.com/karnataka-districts/cm-dk-shivakumar-warns-jagalur-officials-over-irresponsibility-during-nadageete-singing-rav/articleshow-s5awem3</link>
            <guid isPermaLink="true">https://kannada.asianetnews.com/karnataka-districts/cm-dk-shivakumar-warns-jagalur-officials-over-irresponsibility-during-nadageete-singing-rav/articleshow-s5awem3</guid>
            <pubDate>Wed, 12 Aug 2026 09:54:54 +0530</pubDate>
            <description><![CDATA[ವಿಧಾನಸೌಧದಿಂದ ನಡೆಸಿದ ವಿಡಿಯೋ ಸಂವಾದದಲ್ಲಿ, ನಾಡಗೀತೆ ಹಾಡುವಾಗ ಎದ್ದು ನಿಲ್ಲದ ಜಗಳೂರು ತಾಲೂಕಿನ ಅಧಿಕಾರಿಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಮನಿಸಿದರು. 'ನನ್ನ ಕಣ್ಣು ಕುರುಡಲ್ಲ' ಎಂದು ಹೇಳುವ ಮೂಲಕ, ನಾಡಗೀತೆಗೆ ಅಗೌರವ ತೋರಿದ ಅಧಿಕಾರಿಗಳಿಗೆ ಅವರು ತರಾಟೆಗೆ ತೆಗೆದುಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kzt2kcjskg7psgdrxfp3f4ks,imgname-----------------------2026-08-12t093942.427-1786507801177.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ದಾವಣಗೆರೆ (ಆ.12): &lt;/strong&gt;ನಾಡಗೀತೆಗೆ ಹಾಡುವಾಗ ಕುಳಿತುಕೊಂಡಿದ್ದ ಜಗಳೂರು ತಾಲೂಕು ಅಧಿಕಾರಿಗಳು, ನೌಕರರಿಗೆ ವಿಧಾನಸಾಧದ ಬ್ಯಾಂಕ್ವೆಟ್ ಹಾಲ್&zwnj;ನಿಂದಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.&lt;/p&gt;&lt;h2&gt;ನಾಡಗೀತೆ ಹಾಡುತ್ತಿದ್ದರೂ ಎದ್ದು ನಿಲ್ಲದ ಅಧಿಕಾರಿಗಳು!&lt;/h2&gt;&lt;p&gt;ಮಂಗಳವಾರ ಸಿಎಂ ಡಿ.ಕೆ.ಶಿವಕುಮಾರ್&zwnj; ವಿಧಾನಸೌಧದಿಂದ ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರ ವೀಡಿಯೋ ಸಂವಾದ ಹಮ್ಮಿಕೊಂಡಿದ್ದರು. ಸಂವಾದ ಆರಂಭಕ್ಕೂ ಮುನ್ನ ನಾಡಗೀತೆಯನ್ನು ಹಾಡಲಾಯಿತು. ಈ ವೇಳೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಧಿಕಾರಿಗಳು ನಾಡಗೀತೆ ಹಾಡುತ್ತಿದ್ದರೂ ಎದ್ದು ನಿಂತಿರಲಿಲ್ಲ.&lt;/p&gt;&lt;h3&gt;ನನ್ನ ಕಣ್ಣು ಕುರುಡು ಅಂದ್ಕೊಂಡಿದ್ದೀರಾ? ಸಿಎಂ ಗರಂ&lt;/h3&gt;&lt;p&gt;ಉಪ ವಿಭಾಗಾಧಿಕಾರಿ ಸಂತೋಷ್, ಜಗಳೂರು ತಹಸೀಲ್ದಾರ್ ಗುರುಬಸಪ್ಪ, ತಾಪಂ ಇಒ ಕೆಂಚಪ್ಪ ಸೇರಿದಂತೆ ಹಲವಾರು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಿಎಂ, ಬಳಿಕ &lsquo;ನನ್ನ ಕಣ್ಣು ಕುರುಡು ಅಂತಾ ಕೆಲವು ಜನ ತಿಳಿದುಕೊಂಡಿರಬಹುದು. ಜಗಳೂರಿನವರಿಗೆ ಪಾಪ ನಿಂತುಕೊಂಡು ನಾಡಗೀತೆಗೆ ಗೌರವ ಸಲ್ಲಿಸಲಾಗುತ್ತಿಲ್ಲ. ನಾಡಗೀತೆ ನಡೆಯಬೇಕಾದರೆ ಇನ್ನೂ ಕುಳಿತುಕೊಂಡೇ ಇದ್ದರು. ನಾನು ನನ್ನ ಮೇಲೆಯೇ ವಾಚ್ ಇಟ್ಟುಕೊಂಡಿದ್ದೇನೆ. ನನಗೆ ಇಲ್ಲಿಂದ ಜಗಳೂರು ಕಾಣುವುದಿಲ್ಲ ಅಂತಾ ಅಂದುಕೊಳ್ಳಬೇಡಿ&rsquo; ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/cm-dk-shivakumar-warns-jagalur-officials-over-irresponsibility-during-nadageete-singing-rav/articleshow-s5awem3"/>
        </item>
        <item>
            <title><![CDATA[Davanagere: 'ಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ, ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಚ್ಚರ'; ಆತಂಕ ಮೂಡಿಸಿದ ನಾಗರಪಂಚಮಿ ಕಾರ್ಣಿಕ]]></title>
            <link>https://kannada.asianetnews.com/karnataka-districts/karnikotsava-held-at-kammaragatta-in-davanagere-prophecy-the-pearl-of-the-earth-has-ascended-to-the-sky-was-uttered-sns/articleshow-ymgg072</link>
            <guid isPermaLink="true">https://kannada.asianetnews.com/karnataka-districts/karnikotsava-held-at-kammaragatta-in-davanagere-prophecy-the-pearl-of-the-earth-has-ascended-to-the-sky-was-uttered-sns/articleshow-ymgg072</guid>
            <pubDate>Tue, 18 Aug 2026 09:16:30 +0530</pubDate>
            <description><![CDATA[&lt;p&gt;ದಾವಣಗೆರೆಯ ಕಮ್ಮಾರಗಟ್ಟೆಯಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ 'ಭೂಲೋಕದ ಮುತ್ತು ಗಗನಕ್ಕೇರಿತಲೆ' ಎಂಬ ಭವಿಷ್ಯವಾಣಿ ನುಡಿಯಲಾಗಿದೆ. ಇದು ಮಳೆ ಕೊರತೆ ಹಾಗೂ ಆಹಾರಧಾನ್ಯಗಳ ಬೆಲೆ ಏರಿಕೆಯ ಮುನ್ಸೂಚನೆ ಎಂದು ವಿಶ್ಲೇಷಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09fckx67xftmh2d1egpyjr8,imgname-davanagere-karnika-1787024527270.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಗರುಡ ಪಂಚಮಿಯಂದು ಸಂಭ್ರಮದ ಕಾರ್ಣಿಕೋತ್ಸವ ನಡೆಯಿತು. ಕುಂಬಳೂರಿನ ಗಣಮಗ ದುಂಡ್ಯಪ್ಪ 'ಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ, ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಚ್ಚರ' ಎಂಬ ಭವಿಷ್ಯವಾಣಿಯನ್ನು ನುಡಿದರು.&lt;/p&gt;&lt;h2&gt;ಕಮ್ಮಾರಗಟ್ಟೆಯಲ್ಲಿ ಸಂಭ್ರಮದ ಕಾರ್ಣಿಕೋತ್ಸವ&lt;/h2&gt;&lt;p&gt;ಹೆಳವನಕಟ್ಟೆ ಗಿರಿಯಮ್ಮನ ಸಾನಿಧ್ಯದಲ್ಲಿ ಕಮ್ಮಾರಗಟ್ಟೆಯ ಮತ್ತು ಕುಂಬಳೂರಿನ ಆಂಜನೇಯ ಸ್ವಾಮಿಯ ನೇತೃತ್ವದಲ್ಲಿ, ಸುತ್ತಮುತ್ತಲ ಗ್ರಾಮಗಳ ದೇವಾನುದೇವತೆಗಳು ಸಮ್ಮುಖದಲ್ಲಿ ಅದ್ಧೂರಿ ಜಾತ್ರೆಯು ನಡೆಯಿತು. ಸುತ್ತಮುತ್ತಲಿನ ಗ್ರಾಮಗಳ ನವದಂಪತಿಗಳು ಬುಡಮೇಲಾದ ಹುಣಸೆಮರಕ್ಕೆ ಮಂಡಕ್ಕಿ ಎರಚಿ, ಆಂಜನೇಯ ಸ್ವಾಮಿಯ ದರ್ಶನ ಪಡೆದರು. ಜಾತ್ರೆಯಲ್ಲಿ ತಮಗೆ ಇಷ್ಟವಾದ ತಿಂಡಿ, ತಿನಿಸು ಖರಿದೀಸಿದರು. ಮಳೆ ಬಿಡುವು ನೀಡಿದ್ದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.&lt;/p&gt;&lt;h2&gt;ಬೆಲೆ ಏರಿಕೆ ಮುನ್ಸೂಚನೆ ನೀಡಿತಾ ಭವಿಷ್ಯವಾಣಿ?&lt;/h2&gt;&lt;p&gt;ಕಮ್ಮಾರಗಟ್ಟೆಯ ಕಾರ್ಣಿಕೋತ್ಸವದಲ್ಲಿ ಕಾರ್ಣಿಕದ ಭವಿಷ್ಯವಾಣಿಗಾಗಿ ಮೈಸೂರಿನ ಅರಸರು ಕಾಯುತ್ತಿದ್ದರು ಎಂಬ ಪ್ರತೀತಿ ಇದೆ. ಹೀಗಾಗಿ ಇದು ಮಹತ್ವವನ್ನು ಪಡೆದಿದೆ ಎನ್ನುತ್ತಾರೆ ಭಕ್ತರು.&lt;/p&gt;&lt;p&gt;'ಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ, ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಚ್ಚರ'&amp;nbsp;ಅಂದರೆ ಅಶ್ವಿನಿ ಮಳೆ ಮಾಯವಾಗಿ ಮಳೆ ಕೊರತೆ ಆಗಿದ್ದು ಆಹಾರಧಾನ್ಯಗಳು ಗಗನಕ್ಕೇರುತ್ತೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತೆ ಎಂಬ ಭವಿಷ್ಯವಾಣಿ ಇದಾಗಿದೆ ಅಂತಾ ಭಕ್ತರು ವಿಶ್ಲೇಷಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಅದ್ಧೂರಿ ನಗರ ಪಂಚಮಿ ಹಬ್ಬ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಗ ಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಕಾರವಾರ ಸೇರಿ ವಿವಿಧ ಕಡೆ ನಾಗ ದೇವಾಲಯಕ್ಕೆ ತೆರಳಿದ ಭಕ್ತರು ನಾಗರ ವಿಗ್ರಹಕ್ಕೆ ಹಾಲು ಹಾಕಿ ಪುನೀತರಾದರು. ಕಾರವಾರದ ಪ್ರತಿಷ್ಠಿತ ನಾಗನಾಥ ದೇವಾಲಯದಲ್ಲಿ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ನಾಗರ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಿದರು. ದೇವಾಲಯ&zwnj; ಆಡಳಿತ ಸಮೀತಿಯಿಂದ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿತ್ತು.&lt;/p&gt;&lt;h2&gt;ಹಾಲಿನ ಅಭಿಷೇಕ, ವಿವಿಧ ನೈವೇದ್ಯ&lt;/h2&gt;&lt;p&gt;ಆಚರಿಸಲಾಯಿತು. ಭಕ್ತರು ನಾಗದೇವರಿಗೆ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿ ಮತ್ತು ವಿವಿಧ ನೈವೇದ್ಯಗಳನ್ನು ಅರ್ಪಿಸಿದರು ದೇವಾಲಯದ ಮುಂಭಾಗದ ನಾಗರಕಟ್ಟೆಗೆ ಭಕ್ತರು ಕುಟುಂಬ ಸಮೇತರಾಗಿ ಬಂದು ನಾಗ ದೇವರಿಗೆ ಪೂಜೆ ಮಾಡಿದರು. ಭಕ್ತರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿ, ವಿವಿಧ ರೀತಿಯ ನೈವೇದ್ಯಗಳನ್ನು ಅರ್ಪಿಸುವುದರಿಂದ ದೇವರು ಪ್ರಸನ್ನನಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಮನೆ ಮಾಡಿದೆ.&lt;/p&gt;&lt;p&gt;&lt;/p&gt;]]></content:encoded>
            <category>davanagere</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/karnikotsava-held-at-kammaragatta-in-davanagere-prophecy-the-pearl-of-the-earth-has-ascended-to-the-sky-was-uttered-sns/articleshow-ymgg072"/>
        </item>
        <item>
            <title><![CDATA[ದಾವಣಗೆರೆ ಹೊರವಲಯದ 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧಾರ: ಎಲ್ಲಿ?]]></title>
            <link>https://kannada.asianetnews.com/karnataka-districts/davanagere-a-new-layout-on-a-200-acre-area-on-karur-outskirts-minister-s-s-mallikarjun-mrq/articleshow-yvu1nrb</link>
            <guid isPermaLink="true">https://kannada.asianetnews.com/karnataka-districts/davanagere-a-new-layout-on-a-200-acre-area-on-karur-outskirts-minister-s-s-mallikarjun-mrq/articleshow-yvu1nrb</guid>
            <pubDate>Sat, 12 Sep 2026 07:58:06 +0530</pubDate>
            <description><![CDATA[&lt;p&gt;ದಾವಣಗೆರೆ ಹೊರವಲಯದ ಕರೂರಿನಲ್ಲಿ 200 ಎಕರೆ ಪ್ರದೇಶದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಆದ್ಯತೆ ನೀಡಿ ಹೊಸ ಲೇಔಟ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m29f6q567r9c48n33gkcndk0,imgname-davanagere--1789171817638.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ದಾವಣಗೆರೆ ಹೊರ ವಲಯದ ಕರೂರು ಪ್ರದೇಶದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.&lt;/p&gt;&lt;p&gt;ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯ ನಂತರ ಸಭೆಯ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿ, ಕರೂರು ಪ್ರದೇಶದಲ್ಲಿ ಸುಮಾರು 200 ಎಕರೆ ಜಾಗವನ್ನು ಗುರುತಿಸಿದ್ದು, ಅಲ್ಲಿ ಹೊಸ ಲೇಔಟ್&zwnj; ನಿರ್ಮಿಸಲಾಗುವುದು ಎಂದರು.&lt;/p&gt;&lt;p&gt;ಬಡವರು, ಮಧ್ಯಮ ವರ್ಗದವರಿಗೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ಕರೂರು ಪ್ರದೇಶದ ಲೇಔಟ್ ಅಭಿವೃದ್ಧಿಪಡಿಸಲಾಗುವುದು. ಪ್ರಾಧಿಕಾರದಿಂದ ದಾವಣಗೆರೆ-ಹರಿಹರದಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅವರು ತಿಳಿಸಿದರು.&lt;/p&gt;&lt;p&gt;ಇದಕ್ಕೂ ಮುನ್ನ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ನಡೆದ ದೂಡಾ ಸಭೆಯಲ್ಲಿ ದಾವಣಗೆರೆ-ಹರಿಹರ ನಗರಗಳ ಸಮಗ್ರ ಅಭಿವೃದ್ಧಿ, ಮೂಲ ಸೌಕರ್ಯಗಳ ಸುಧಾರಣೆ ಹಾಗೂ ಸಾರ್ವಜನಿಕರ ಅಗತ್ಯತೆಗಳಿಗೆ ಅನುಗುಣವಾಗಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆಯಾಯಿತು.&lt;/p&gt;&lt;p&gt;ಜಿಲ್ಲಾ ಕೇಂದ್ರದ ವಿವಿಧ ಭಾಗಗಳ ಅಗತ್ಯತೆಗಳನ್ನು ಗುರುತಿಸಿ, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವುದು, ಕೈಗೊಂಡಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವದಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳಿಂದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಶಾಸಕ ಸಮರ್ಥ ಶಾಮನೂರು ಮಾಹಿತಿ ಪಡೆದರು.&lt;/p&gt;&lt;p&gt;ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ಮೂಲಕ ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಭಿವೃದ್ಧಿ ಕಾಮಗಾರಿಗಳ ಅನುಷ್ಟಾನದಲ್ಲಿ ಯಾವುದೇ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಂಡು, ಕಾಮಗಾರಿಗಳ ಗುಣಮಟ್ಟದ ಮೇಲೂ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.&lt;/p&gt;&lt;p&gt;ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಎಚ್.ಟಿ.ಶೇಖರ, ದೂಡಾ ಆಯುಕ್ತರಾದ ರೇಣುಕಾ, ಪಾಲಿಕೆ ಆಯುಕ್ತ ಡಾ.ಮಹಾಂತೇಶ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿದ್ದರು.&lt;/p&gt;&lt;h2&gt;&lt;strong&gt;ಮತ್ತೆ ಶಾಸಕ ಹರೀಶ್&zwnj; ವಿರುದ್ಧ ಹರಿಹಾಯ್ದ ಸಚಿವ ಎಸ್ಸೆಸ್ಸೆಂ&lt;/strong&gt;&lt;/h2&gt;&lt;p&gt;ದಾವಣಗೆರೆ: ಅವನಿಗೆ ಕೆಲಸ ಇಲ್ಲ ಅಂದ್ರೆ, ನನಗೆ ಕೆಲಸ ಇಲ್ಲವಾ? ಫಸ್ಟ್ ಆಫ್ ಆಲ್ ರೈತರನ್ನು ದಿಕ್ಕು ತಪ್ಪಿಸದೇ, ಕರೆಕ್ಟ್ ಆಗಿ ಏನಿದೆ ಅಂತಾ ವಾಸ್ತವವನ್ನು ಹೇಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪರೋಕ್ಷವಾಗಿ ಹರಿಹರ ಶಾಸಕ ಬಿ.ಪಿ.ಹರೀಶ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.&lt;/p&gt;&lt;p&gt;ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಏನು ಪ್ರತಿಭಟನೆ ಮಾಡುತ್ತಾರೆ? ಕರೆಕ್ಟ್ ಆಗಿ ಏನಿದೆ ವಾಸ್ತವ ವಿಚಾರ ರೈತರಿಗೆ ತಿಳಿಸುವ ಕೆಲಸ ಮಾಡಲಿ ಎಂದರು.&lt;/p&gt;&lt;p&gt;ಭದ್ರಾ ಡ್ಯಾಂನ ಎಡ ಮತ್ತು ಬಲ ದಂಡೆ ಅಚ್ಚುಕಟ್ಟು ರೈತರು ಕುಳಿತು ಮಾತನಾಡಿಯೆಂದು ಭದ್ರಾ ಕಾಡಾ ಸಮಿತಿ ಸಭೆಯಲ್ಲಿ ಹೇಳಿದ್ದೇನೆ. ಆ ಸಭೆಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ನೀರಾವರಿ ತಜ್ಞ ಪ್ರೊ.ಸಿ.ನರಸಿಂಹಪ್ಪ ಸೇರಿದಂತೆ ಎಲ್ಲಾ ಶಾಸಕರೂ ಭಾಗವಹಿಸಿದ್ದು, ಅಂದಿನ ಸಭೆಯಲ್ಲಿ ಏನೂ ಮಾತನಾಡಲಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು. ಎಲ್ಲಾ ಕುಂದು ಕೊರತೆ ಪ್ರಾಕ್ಟಿಕಲ್ ಆಗಿ ಸಾಲ್ವ್ ಮಾಡಿ ಹೋಗಬೇಕು. ಅದನ್ನು ಬಿಟ್ಟು ಮಂತ್ರಿಯನ್ನು ಕೇಳಿ ಅಂತಾ ಹೇಳುವುದು ಶಾಸಕನ ಕೆಲಸವಲ್ಲ. ಎಲ್ಲರೂ ಸೇರಿ, ಜೊತೆಗೆ ಕುಳಿತು ಮಾತನಾಡಿ, ಕೆಲಸ ಮಾಡಬೇಕು. ಎಲ್ಲರಿಗೂ ಬಾಯಿ ಇದೆ. ನಾಲಿಗೆ ಇದೆಯಲ್ಲ. ಆದರೆ, ನಾಲಿಗೆಗೆ ಎಲುಬು ಇಲ್ಲ ಎಂದು ಅವರು ಹರಿಹಾಯ್ದರು.&lt;/p&gt;&lt;p&gt;ಗಣೇಶ ಹಬ್ಬದಲ್ಲಿ ಡಿಜೆ ಅನುಮತಿ ನೀಡುವ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದಾರೆ. ಡಿಜೆ ಬಗ್ಗೆ ಪೊಲೀಸ್ ಇಲಾಖೆಯವರೇ ಒಂದು ಹೇಳುತ್ತಾರೆ. ಜಿಲ್ಲಾಡಳಿತವೇ ಒಂದು ರೀತಿ ಹೇಳುತ್ತಿದೆ. ನಾಳೆ ಅಥವಾ ನಾಡಿದ್ದು ಈ ಬಗ್ಗೆ ಸಭೆ ಮಾಡಿ, ಕೂಲಂಕುಷವಾಗಿ ಪರಿಶೀಲಿಸುತ್ತೇವೆ ಎಂದು ಎಸ್ಸೆಸ್ ಮಲ್ಲಿಕಾರ್ಜುನ ತಿಳಿಸಿದರು.&lt;/p&gt;&lt;p&gt;ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮುಖಂಡರಾದ ಬೂದಾಳ್ ಬಾಬು, ಎ.ಬಿ.ರಹೀಂ ಸಾಬ್&zwnj;, ಎ.ನಾಗರಾಜ ಇತರರು ಇದ್ದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-a-new-layout-on-a-200-acre-area-on-karur-outskirts-minister-s-s-mallikarjun-mrq/articleshow-yvu1nrb"/>
        </item>
    </channel>
</rss>
