<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 04 Jun 2026 08:00:33 +0530</lastBuildDate>
        <atom:link href="https://kannada.asianetnews.com/rss/davanagere" rel="self" type="application/rss+xml"/>
        <item>
            <title><![CDATA[ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ; ಬಿಜೆಪಿ ಕಾರ್ಯಕರ್ತರಿಗೆ ರೇಣುಕಾಚಾರ್ಯ ಕರೆ]]></title>
            <link>https://kannada.asianetnews.com/karnataka-districts/mp-renukacharya-asks-bjp-workers-to-promote-modi-government-achievements-gvd/articleshow-01gu75z</link>
            <guid isPermaLink="true">https://kannada.asianetnews.com/karnataka-districts/mp-renukacharya-asks-bjp-workers-to-promote-modi-government-achievements-gvd/articleshow-01gu75z</guid>
            <pubDate>Tue, 02 Jun 2026 17:47:16 +0530</pubDate>
            <description><![CDATA[&lt;p&gt;ಮೋದಿ ಅವರ ಆಡಳಿತದ ಸಾಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವ ಕೆಲಸ ಮಾಡಬೇಕು ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke9gvn831sm04q06yrjpv529,imgname-----------------------2026-01-06t165158.634-1767698715907.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊನ್ನಾಳಿ (ಜೂ.02):&lt;/strong&gt; ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಸಾಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.&lt;/p&gt;&lt;p&gt;ಬಿಜೆಪಿ ಹೊನ್ನಾಳಿ ಮಂಡಲ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿಯಿಂದ ಆಗಿರುವಂತಹ ಅಭಿವೃದ್ಧಿ ಕೆಲಸಗಳ ಬಗ್ಗೆ ಯಾವುದೇ ಕಾರಣಕ್ಕೂ ಕಾರ್ಯಕರ್ತರು ನಿರ್ಲಕ್ಷ ಮಾಡದೇ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಬೇಕು. ನಮ್ಮ ತಾಲೂಕಿನಲ್ಲಿ ಈ ಹಿಂದೆ ಅಭಿವೃದ್ಧಿ ಪರ್ವ ನಡೆದರೂ ಕಾರ್ಯಕರ್ತರು ಹೆಚ್ಚಿನ ಪ್ರಚಾರ ಮಾಡದಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಬಿಜೆಪಿ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ನೋಡಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ತಾಕೀತು ಮಾಡಿದರು.&lt;/p&gt;&lt;h2&gt;&lt;strong&gt;ಹೆಚ್ಚು ಅನುದಾನ&lt;/strong&gt;&lt;/h2&gt;&lt;p&gt;ಪಕ್ಷ ಸಂಘಟನೆಯಲ್ಲಿ ಬಿಜೆಪಿ ಸದಾ ಮುಂದಿದೆ. ಇದೇ ರೀತಿ ಜನಪರ ಯೋಜನೆಗಳು ಜಾರಿಯಾದಾಗ ವ್ಯವಸ್ಥಿತ ರೀತಿಯಲ್ಲಿ ಪ್ರಚಾರವೂ ಆಗಬೇಕು. ಮೂರನೇ ಬಾರಿಗೆ ಪ್ರಧಾನಿ ಆಗಿರುವ ನರೇಂದ್ರ ಮೋದಿ ಇಂದು ವಿಶ್ವಕ್ಕೆ ನಾಯಕರಾಗಿ ಹೊರಹೊಮ್ಮಿದ್ದಾರೆ. ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ದೇಶಗಳ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುವುದೇ ಇದಕ್ಕೆ ಉದಾಹರಣೆ ಎಂದ ಅವರು, ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ತಾಲೂಕಿಗೆ ₹5000 ಕೋಟಿಗೂ ಹೆಚ್ಚು ಅನುದಾನದ ಕಾಮಗಾರಿಗಳು ನಡೆದಿವೆ. ಅವುಗಳ ಪ್ರಚಾರ ಮಾಡಬೇಕು ಎಂದು ಹೇಳಿದರು.&lt;/p&gt;&lt;p&gt;ಶಿವಮೊಗ್ಗ ವಿಭಾಗದ ಸಾಮಾಜಿಕ ಜಾಲತಾಣದ ಪ್ರಮುಖ್ಯಸ್ಥ ಪ್ರಶಾಂತ್ ಕೊಂಡಜ್ಜಿ ಸಾಮಾಜಿಕ ಜಾಲತಾಣದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದರು. ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಮುಖಂಡರಾದ ಕೆ.ಪಿ. ಕುಬೇಂದ್ರಪ್ಪ, ಎಸ್.ಎಸ್. ಬೀರಪ್ಪ, ಸಿ.ಆರ್. ಶಿವಾನಂದ್, ಮಾರುತಿ ನಾಯ್ಕ, ಪಾಲಾಪಕ್ಷಪ್ಪ, ನೆಲಹೊನ್ನೆ ಮಂಜುನಾಥ, ಕೆ.ಇ. ನಾಗರಾಜ್&zwnj; ಇತರರು ಇದ್ದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-renukacharya-asks-bjp-workers-to-promote-modi-government-achievements-gvd/articleshow-01gu75z"/>
        </item>
        <item>
            <title><![CDATA[Davanagere: RSI ಮೋಸ ಆರೋಪಕ್ಕೆ ಟ್ಚಿಸ್ಟ್, ಖಾಕಿ ಜೊತೆಯೇ ಯುವತಿಯ ರಂಗಿನಾಟ! ಪೊಲೀಸರೇ ಇವಳ ಟಾರ್ಗೆಟ್?]]></title>
            <link>https://kannada.asianetnews.com/karnataka-districts/twist-in-chitradurga-rsi-marriage-fraud-case-woman-accused-of-honey-trapping-police-personnel-gdp/articleshow-0zllli9</link>
            <guid isPermaLink="true">https://kannada.asianetnews.com/karnataka-districts/twist-in-chitradurga-rsi-marriage-fraud-case-woman-accused-of-honey-trapping-police-personnel-gdp/articleshow-0zllli9</guid>
            <pubDate>Mon, 18 May 2026 13:26:52 +0530</pubDate>
            <description><![CDATA[ಚಿತ್ರದುರ್ಗದ ಡಿಎಆರ್&zwnj; RSI ವರುಣ್&zwnj;ಕುಮಾರ್ ವಿರುದ್ಧ ಯುವತಿಯೊಬ್ಬಳು ಮದುವೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ದೂರು ನೀಡಿದ್ದಳು. ಇದೀಗ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಯುವತಿಯೇ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿ ಹನಿಟ್ರ್ಯಾಪ್ ಮಾಡುತ್ತಿದ್ದಾಳೆ ಎಂದು RSI ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krx14byn16j59mdwcjn6zx9g,imgname-chitradurga-rsi-varun-kumar-case-1779090730965.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ : &lt;/strong&gt;ಮದುವೆಯ ಆಮಿಷವೊಡ್ಡಿ ಚಿತ್ರದುರ್ಗ ಡಿಎಆರ್&zwnj; (DAR) ವಿಭಾಗದ RSI ವಿರುದ್ಧ ಯುವತಿ ನೀಡಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ RSI ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದರೂ, ಇದೀಗ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಹೊರಬಂದಿದ್ದು, ಯುವತಿಯ ಮೇಲೆಯೇ ಮೋಸದ ಆರೋಪಗಳು ಕೇಳಿಬರುತ್ತಿವೆ.&lt;/p&gt;&lt;p&gt;ಚಿತ್ರದುರ್ಗದಲ್ಲಿ ಡಿಎಆರ್&zwnj; RSI ಆಗಿ ಸೇವೆ ಸಲ್ಲಿಸುತ್ತಿರುವ ದಾವಣಗೆರೆ ಮೂಲದ ವರುಣ್&zwnj;ಕುಮಾರ್ ವಿರುದ್ಧ, ಮದುವೆಯ ಭರವಸೆ ನೀಡಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ದೂರು ಹೊರಬಿದ್ದ ತಕ್ಷಣವೇ ಪ್ರಕರಣವು ಚರ್ಚೆಗೆ ಗ್ರಾಸವಾಗಿತ್ತು.&lt;/p&gt;&lt;h2&gt;ಮಹತ್ವದ ಫೋಟೋಗಳನ್ನು ಬಿಡುಗಡೆ ಮಾಡಿದ ವರುಣ್&zwnj; &amp;nbsp;ಕುಟುಂಬಸ್ಥರು&lt;/h2&gt;&lt;p&gt;ಇದೀಗ RSI ವರುಣ್&zwnj;ಕುಮಾರ್ ಕುಟುಂಬಸ್ಥರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ಫೋಟೋಗಳನ್ನು ಬಿಡುಗಡೆ ಮಾಡಿ, ಯುವತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಯುವತಿ ಪೊಲೀಸ್ ಸಿಬ್ಬಂದಿಯನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮೂಲಕ ಹಣ ವಸೂಲಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾಳೆ ಎಂದು &amp;nbsp;ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;p&gt;ಕುಟುಂಬಸ್ಥರ ಪ್ರಕಾರ, ಯುವತಿ ಮೊದಲು ಇನ್&zwnj;ಸ್ಟಾಗ್ರಾಂ ಮೂಲಕ ವರುಣ್&zwnj;ಕುಮಾರ್ ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿದ್ದಳು. ನಂತರ ಆಕೆಯ ವರ್ತನೆ ಬಗ್ಗೆ ಅನುಮಾನಗೊಂಡ ವರುಣ್ ದೂರವಾಗಲು ಯತ್ನಿಸಿದ್ದಾನೆ. ಇದಾದ ಬಳಿಕ ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದು, ಇಲ್ಲವಾದರೆ 10 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಮತ್ತೋರ್ವ ಪೊಲೀಸ್ ಪೇದೆಗೆ ಮೋಸ ಮಾಡಿದ್ದಾಳೆ ಎಂಬ ಆರೋಪ&lt;/h2&gt;&lt;p&gt;ಹಣ ನೀಡಲು ಒಪ್ಪದಿದ್ದ ಹಿನ್ನೆಲೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂಬುದು ಕುಟುಂಬಸ್ಥರ ವಾದ. ಅಲ್ಲದೆ, ಇದೇ ರೀತಿಯಲ್ಲಿ ಈ ಯುವತಿ ಈ ಹಿಂದೆಯೂ ದಾವಣಗೆರೆಯಲ್ಲಿ ಒಬ್ಬ ಯುವಕನಿಗೆ ಹಾಗೂ ಮತ್ತೋರ್ವ ಪೊಲೀಸ್ ಪೇದೆಗೆ ಮೋಸ ಮಾಡಿದ್ದಾಳೆ ಎಂಬ ಆರೋಪವನ್ನೂ ಅವರು ಮುಂದಿಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಎಂದು ಮತ್ತೋರ್ವ ಪೊಲೀಸ್ ಸಿಬ್ಬಂದಿಯೊಂದಿಗೆ ಇರುವ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸುತ್ತಿದ್ದಾಳೆ. ಅನೇಕ ಯುವಕರು ಆಕೆಯ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.&lt;/p&gt;&lt;p&gt;ಇದರ ನಡುವೆ, ದೂರು ದಾಖಲಾದ ದಿನದಿಂದ RSI ವರುಣ್&zwnj;ಕುಮಾರ್ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ವರುಣ್&zwnj;ಗೆ ಏನೇ ಅನಾಹುತವಾದರೂ ಅದಕ್ಕೆ ಆ ಯುವತಿಯೇ ಹೊಣೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಮಗ್ರ ತನಿಖೆ ಅಗತ್ಯವಿದೆ ಎಂದು ಆಗ್ರಹಿಸಿರುವ ಕುಟುಂಬಸ್ಥರು, ತಮ್ಮ ಮಗನಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಒಟ್ಟಾರೆ, ಮದುವೆ ಆಮಿಷ, ಲೈಂಗಿಕ ದೌರ್ಜನ್ಯ ಆರೋಪ ಮತ್ತು ಹನಿಟ್ರ್ಯಾಪ್ ಆರೋಪಗಳ ನಡುವೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಯ ಫಲಿತಾಂಶವೇ ಸತ್ಯವನ್ನು ಹೊರತರುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/twist-in-chitradurga-rsi-marriage-fraud-case-woman-accused-of-honey-trapping-police-personnel-gdp/articleshow-0zllli9"/>
        </item>
        <item>
            <title><![CDATA[ಜಮೀರ್ ಅಹಮದ್ ಆಡಿಯೋ ವಿವಾದಕ್ಕೆ ಬಿಗ್ ಟ್ವಿಸ್ಟ್: ದಾವಣಗೆರೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊಹಮ್ಮದ್ ಸಿರಾಜ್!]]></title>
            <link>https://kannada.asianetnews.com/state/zameer-ahmed-khan-audio-row-mohammed-siraj-lodges-in-davanagere-cen-police-complaint-sat/articleshow-2id4mrb</link>
            <guid isPermaLink="true">https://kannada.asianetnews.com/state/zameer-ahmed-khan-audio-row-mohammed-siraj-lodges-in-davanagere-cen-police-complaint-sat/articleshow-2id4mrb</guid>
            <pubDate>Mon, 01 Jun 2026 20:55:00 +0530</pubDate>
            <description><![CDATA[&lt;p&gt;ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಅವರ ಆಪ್ತ ಮೊಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ, ಸಿರಾಜ್ ದಾವಣಗೆರೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಆಡಿಯೋ ನಕಲಿಯಾಗಿದ್ದು, ತಮ್ಮ ತೇಜೋವಧೆ ಮಾಡಲು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1wjmse4pjfh5k9hx0d9smy,imgname-zameer-ahmed-khan-and-mohammed-siraj-1780327469869.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.01): ಮಾ&lt;/strong&gt;ಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಅವರ ಆಪ್ತ ಮೊಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ ಬೆನ್ನಲ್ಲೇ, ಪ್ರಕರಣ ಈಗ ಕಾನೂನು ಸಮರದ ರೂಪ ಪಡೆದುಕೊಂಡಿದೆ. ತಮ್ಮ ವಿರುದ್ಧ ಸುಳ್ಳು ಆಡಿಯೋ ಸೃಷ್ಟಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮೊಹಮ್ಮದ್ ಸಿರಾಜ್ ಅವರು ದಾವಣಗೆರೆಯ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;h2&gt;&lt;strong&gt;ತೇಜೋವಧೆಯ ಹುನ್ನಾರ:&lt;/strong&gt;&lt;/h2&gt;&lt;p&gt;ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೊಹಮ್ಮದ್ ಸಿರಾಜ್, &quot;ನಾನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (KMDC) ನಾಮನಿರ್ದೇಶಿತ ಸದಸ್ಯನಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ, ರಾಜಕೀಯ ದುರುದ್ದೇಶದಿಂದ ನಮ್ಮನ್ನು ಗುರಿಯಾಗಿಸಿಕೊಂಡು ಈ ನಕಲಿ ಆಡಿಯೋ ಸೃಷ್ಟಿಸಲಾಗಿದೆ,&quot; ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ನಕಲಿ ಧ್ವನಿ ಸೃಷ್ಟಿ ಆರೋಪ:&lt;/strong&gt;&lt;/h2&gt;&lt;p&gt;ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿ ತನ್ನದಲ್ಲ ಎಂದು ಸ್ಪಷ್ಟಪಡಿಸಿದ ಸಿರಾಜ್, &quot;ನನ್ನ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ನಡುವಿನ ಬಾಂಧವ್ಯವನ್ನು ಹಾಳು ಮಾಡಲು ಮತ್ತು ಸಾರ್ವಜನಿಕವಾಗಿ ನಮ್ಮ ಗೌರವಕ್ಕೆ ಧಕ್ಕೆ ತರಲು ಯಾರೋ ಕಿಡಿಗೇಡಿಗಳು ತಂತ್ರಜ್ಞಾನ ಬಳಸಿ ಸುಳ್ಳು ಧ್ವನಿಯನ್ನು ಸೃಷ್ಟಿಸಿದ್ದಾರೆ. ದೂರವಾಣಿ ಮೂಲಕ ಚರ್ಚಿಸಿದಂತೆ ಬಿಂಬಿಸಲಾಗಿರುವ ಈ ಆಡಿಯೋ ಸಂಪೂರ್ಣ ಸೃಷ್ಟಿತವಾದದ್ದು,&quot; ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಕಠಿಣ ಕ್ರಮಕ್ಕೆ ಆಗ್ರಹ:&lt;/strong&gt;&lt;/h2&gt;&lt;p&gt;ರಾಜಕೀಯ ಲಾಭಕ್ಕಾಗಿ ಇಂತಹ ನೀಚ ಕೃತ್ಯ ಎಸಗಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಿರಾಜ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಜಮೀರ್ ಅಹ್ಮದ್ ಖಾನ್ ಈಗಾಗಲೇ ಇದನ್ನು ಎಐ (AI) ಸೃಷ್ಟಿತ ನಕಲಿ ಆಡಿಯೋ ಎಂದು ಹೇಳಿದ್ದು, ಈಗ ಸಿರಾಜ್ ಕೂಡ ಅಧಿಕೃತವಾಗಿ ದೂರು ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಸದ್ಯ ದಾವಣಗೆರೆ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆಡಿಯೋದ ಅಸಲಿಯತ್ತು ತಿಳಿಯಲು ತನಿಖೆ ಆರಂಭಿಸಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/zameer-ahmed-khan-audio-row-mohammed-siraj-lodges-in-davanagere-cen-police-complaint-sat/articleshow-2id4mrb"/>
        </item>
        <item>
            <title><![CDATA[ಬೆಂಗಳೂರು ಮುಂಬೈ ನಡುವೆ ಹೊಸ ದ್ವಿಸಾಪ್ತಾಹಿಕ ಎಕ್ಸಪ್ರೆಸ್‌ ರೈಲು ಆರಂಭ, ಸಚಿವ ಜೋಶಿ ಚಾಲನೆ, ವೇಳಾಪಟ್ಟಿ ಇಲ್ಲಿದೆ]]></title>
            <link>https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8</link>
            <guid isPermaLink="true">https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8</guid>
            <pubDate>Sun, 17 May 2026 20:29:20 +0530</pubDate>
            <description><![CDATA[ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಹೊಸ ದ್ವಿಸಪ್ತಾಹಿಕ ವಿಶೇಷ ರೈಲಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದ್ದಾರೆ. ಈ ರೈಲು ಸೇವೆಯು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮತ್ತು ದಾವಣಗೆರೆ ಭಾಗದ ಪ್ರಯಾಣಿಕರಿಗೆ ಮುಂಬೈ ಹಾಗೂ ಪುಣೆಗೆ ಪ್ರಯಾಣಿಸಲು ಹೆಚ್ಚು ಅನುಕೂಲಕರವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krv6zk5wx9t8zxpzhr580ac2,imgname-pralhad-joshi-flags-off-train-1779029757116.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಲ್&zwnj;, ಮುಂಬೈ ನಡುವೆ ಹುಬ್ಬಳ್ಳಿ ಮುಖಾಂತರ ಸಂಚರಿಸುವ ನೂತನ ವಿಶೇಷ ರೈಲಿಗೆ (06557) ಮೇ 17ರಂದು ಸಂಜೆ ನಗರದ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ ತೋರಿದರು.&lt;/p&gt;&lt;h2&gt;ಯಾವ ಊರೆಲ್ಲ ಹಾದು ಹೋಗಲಿದೆ?&lt;/h2&gt;&lt;p&gt;ಬೆಂಗಳೂರಿನಿಂದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ಮುಂಬೈಗೆ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಸಂಚರಿಸುವಂತೆ ಜೋಶಿ ಮನವಿ ಮೇರೆಗೆ ಈ ರೈಲಿಗೆ ಅನುಮೋದನೆ ನೀಡಲಾಗಿತ್ತು. ಈ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲು ರೈಲು ಮಾರ್ಗದ (16553/16554) ಮೇ 23ರಿಂದ ಬೆಂಗಳೂರು ಮತ್ತು ಮೇ 24ರಿಂದ ಮುಂಬೈನಿಂದ ಪ್ರಾರಂಭವಾಗಲಿದೆ.&lt;/p&gt;&lt;h2&gt;ಯಾವಾಗ ಎಲ್ಲಿಂದ ಹೊರಡಲಿದೆ?&lt;/h2&gt;&lt;p&gt;ಪ್ರತಿ ಶನಿವಾರ ಮತ್ತು ಮಂಗಳವಾರ ಬೆಂಗಳೂರಿನಿಂದ ಪ್ರತಿ ಭಾನುವಾರ ಮತ್ತು ಬುಧವಾರ ಮುಂಬೈನಿಂದ ರೈಲು ಸಂಚರಿಸಲಿದೆ. ಈ ಹೊಸ ರೈಲು ಸೇವೆಯು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ದಾವಣಗೆರೆ ಭಾಗದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕಾಗಿ ಮುಂಬೈ ಹಾಗೂ ಪುಣೆಗೆ ಪ್ರಯಾಣಿಸುವವರಿಗೆ ವರದಾನವಾಗಲಿದೆ.&lt;/p&gt;&lt;p&gt;ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಚಿವ ಪ್ರಹ್ಲಾದ ಜೋಶಿ ಅವರು, ಪ್ರಧಾನಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ತುಂಬುತ್ತಿದ್ದು, ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಸುಗಮ, ಸುರಕ್ಷಿತ ಹಾಗೂ ವೇಗದಾಯಕವಾಗುತ್ತಿದೆ. ಕರ್ನಾಟಕದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ನಮ್ಮಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು ರಾಜ್ಯದ ಪ್ರತಿಯೊಂದು ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ,ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ ,ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಸಮಸ್ತ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ಹುಬ್ಬಳ್ಳಿ ಮುಖಾಂತರ ಸಂಪರ್ಕದ ಹೊಸ ಕ್ರಾಂತಿ!&amp;nbsp;ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿಯ ಮೂಲಕ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲು ಪ್ರಾರಂಭ.ಇಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್, ಮುಂಬೈ ನಡುವೆ&hellip; pic.twitter.com/NddQEBPea4&lt;/p&gt;&lt;p&gt;&mdash; Pralhad Joshi (@JoshiPralhad) May 17, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8"/>
        </item>
        <item>
            <title><![CDATA[ಕಿಚ್ಚ ಸುದೀಪ್ ಅವರನ್ನು ಬೆಳೆಸಿದಂತೆ ನನ್ನನ್ನೂ ಬೆಳೆಸಿ: ಸಂಚಿತ್ ಸಂಜೀವ್ ಮನವಿ ಮಾಡಿದ್ದೇನು?]]></title>
            <link>https://kannada.asianetnews.com/sandalwood/raise-me-like-you-raised-kichcha-sudeep-says-sanchith-sanjeev-gvd/articleshow-5bmz4p3</link>
            <guid isPermaLink="true">https://kannada.asianetnews.com/sandalwood/raise-me-like-you-raised-kichcha-sudeep-says-sanchith-sanjeev-gvd/articleshow-5bmz4p3</guid>
            <pubDate>Mon, 25 May 2026 18:50:33 +0530</pubDate>
            <description><![CDATA[&lt;p&gt;ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅಭಿನಯದ ಕನ್ನಡ ಚಲನಚಿತ್ರ &quot;ಮ್ಯಾಂಗೋ ಪಚ್ಚ&quot; ಇದೇ ಜೂನ್ 5ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆ ಚಿತ್ರದ ನಾಯಕ ಸಂಚಿತ್ ಸಂಜೀವ್..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfmpbk7fyxwezk6xs8ay08j,imgname-bk-1779715223142.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮೇ.25):&lt;/strong&gt; ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅಭಿನಯದ ಕನ್ನಡ ಚಲನಚಿತ್ರ &quot;ಮ್ಯಾಂಗೋ ಪಚ್ಚ&quot; ಇದೇ ಜೂನ್ 5ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆ ಚಿತ್ರದ ನಾಯಕ ಸಂಚಿತ್ ಸಂಜೀವ್ ಹಾಗೂ ತಂಡವು ನಿಟ್ಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿತು. ಹೊಂಡದ ಸರ್ಕಲ್&zwnj;ನ ರಾಜವೀರ ಮದಕರಿ ನಾಯಕ ವೃತ್ತಕ್ಕೆ ತೆರಳಿ ಮದಕರಿ ನಾಯಕ ಪುತ್ಥಳಿ ಸೇರಿದಂತೆ ವಿವಿಧ ವೃತ್ತಗಳಲ್ಲಿನ ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.&lt;/p&gt;&lt;p&gt;ಅನಂತರ ತ್ರಿಶೂಲ್ ಚಿತ್ರಮಂದಿರದಲ್ಲಿ ನಟ ಸಂಚಿತ್ ಸಂಜೀವ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ದಾವಣಗೆರೆಗೆ ಬಂದಿರುವುದು ನನಗೆ ಬಹಳ ಖುಷಿಯಾಗಿದೆ. ಎಲ್ಲೆಡೆ ಸಿನಿಮಾ ಪ್ರಚಾರ ಮಾಡಿ ಬಂದಿದ್ದೇನೆ. ಆದರೆ, ದಾವಣಗೆರೆ ಜನತೆ ನನಗೆ ಬಹಳ ತುಂಬಾನೆ ಪ್ರೀತಿ, ವಿಶ್ವಾಸ, ಅಭಿಮಾನ, ಪ್ರೋತ್ಸಾಹ ನೀಡುತ್ತಿದ್ದೀರಿ. ನಾನು ಈಗ ತಾನೇ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೇನೆ. ಈಗಾಗಲೇ ನನ್ನ ಭಾವ ಕಿಚ್ಚ ಸುದೀಪ್ ಅವರನ್ನು ಬೆಳೆಸಿ ಅಂತರ ರಾಷ್ಟ್ರಿಯಮಟ್ಟಕ್ಕೆ ಕಳುಹಿಸಿದ್ದೀರಿ. ಅದರಂತೆಯೇ ನನಗೂ ಆರ್ಶೀರ್ವದಿಸಿ ಬೆಳೆಸಿ, ಹಾಗೆಯೇ ನಮ್ಮ ಚಿತ್ರತಂಡಕ್ಕೂ ಸಹಾ ಪ್ರೋತ್ಸಾಹ ನೀಡಿರಿ ಎಂದು ಮನವಿ ಮಾಡಿದರು.&lt;/p&gt;&lt;p&gt;ಚಿತ್ರದ ಮತ್ತೊಬ್ಬ ನಟ, ಜೈ ಮಾತನಾಡಿ, ನಿಮ್ಮ ಪ್ರೋತ್ಸಾಹ ನೋಡಿ ನನಗೆ ಬಹಳ ತುಂಬಾ ಖುಷಿ ಆಗುತ್ತಿದೆ. ನನ್ನ ಪ್ರಕಾರ ಜೂ.5 ರಿಂದ ನಮ್ಮ ಚಿತ್ರಕ್ಕೆ ಇದೇ ರೀತಿ ಪ್ರೋತ್ಸಾಹ ಸಿಗುತ್ತೆ ಅನಿಸುತ್ತಿದೆ. ಅಂದಿನಿಂದ ನಮ್ಮ ಸಿನಿಮಾದ ಹಬ್ಬ ಶುರು. ಎಲ್ಲರೂ ಸಿನಿಮಾ ನೋಡಿ ಹಬ್ಬದಂತೆ ಸಂಭ್ರಮಿಸೋಣ ಎಂದರು.&lt;/p&gt;&lt;h2&gt;&lt;strong&gt;ಮಾಸ್ ಹೀರೋ ಆಗಿ ಬೆಳಗುತ್ತಾರೆ&lt;/strong&gt;&lt;/h2&gt;&lt;p&gt;ನಟ, ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು ಮಾತನಾಡಿ, ಜೂನ್ 5ರಂದು ಬಿಡುಗಡೆಯಾಗುವ ನಮ್ಮ ಸಿನಿಮಾ &quot;ಮ್ಯಾಂಗೋ ಪಚ್ಚ&quot; ಹಿಟ್ ಆಗುವುದು ಪಕ್ಕಾ ಗ್ಯಾರಂಟಿ. ಉತ್ತರ ಕರ್ನಾಟಕದಿಂದ ಹಿಡಿದು ಇಲ್ಲಿಯವರೆಗೂ ಅಭಿಮಾನಿಗಳು ತುಂಬಾನೇ ಪ್ರೋತ್ಸಾಹ ನೀಡಿದ್ದಾರೆ. ಚಿತ್ರದ ನಾಯಕ ಸಂಚಿತ್ ಅವರು ಚಿಕ್ಕವರಿದ್ದಾಗಿನಿಂದಲೂ ಕೂಡ ಸುದೀಪ್ ಅವರ ಅಭಿನಯ ನೋಡಿಕೊಂಡು ಬೆಳೆದಿದ್ದಾರೆ. ಅವರಂತೆಯೇ ಇವರೂ ಮಾಸ್ ಹೀರೋ ಆಗಿ ಬೆಳಗುತ್ತಾರೆ ಎಂದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/raise-me-like-you-raised-kichcha-sudeep-says-sanchith-sanjeev-gvd/articleshow-5bmz4p3"/>
        </item>
        <item>
            <title><![CDATA[Davanagere: ಪ್ರಧಾನಿ ಮೋದಿಯಿಂದ ದೇಶಕ್ಕೆ ದೊಡ್ಡ ಗಂಡಾಂತರ, ಒಳಿತು ಮಾಡುವುದಿದ್ದರೆ ತಕ್ಷಣ ರಾಜೀನಾಮೆ ಕೊಡಲಿ: ಕಾಂಗ್ರೆಸ್ ಮುಖಂಡ]]></title>
            <link>https://kannada.asianetnews.com/politics/pm-modi-failed-in-every-sector-should-resign-immediately-kpcc-d-basavaraj-demands-rav/articleshow-5dhpkwe</link>
            <guid isPermaLink="true">https://kannada.asianetnews.com/politics/pm-modi-failed-in-every-sector-should-resign-immediately-kpcc-d-basavaraj-demands-rav/articleshow-5dhpkwe</guid>
            <pubDate>Fri, 29 May 2026 13:38:11 +0530</pubDate>
            <description><![CDATA[&lt;p&gt;ಬೆಲೆ ಏರಿಕೆ, ವಿದೇಶಾಂಗ ನೀತಿ, ಆರ್ಥಿಕತೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ತಕ್ಷಣವೇ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮೋದಿ ಅಧಿಕಾರದಲ್ಲಿ ಮುಂದುವರಿದರೆ ದೇಶಕ್ಕೆ ದೊಡ್ಡ ಗಂಡಾಂತರವಿದೆ ಎಂದು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssc13s4zeypz21w3fw8djpz,imgname-----------------------2026-05-29t133051.907-1780041682723.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮೇ.29): &lt;/strong&gt;ಬೆಲೆ ಏರಿಕೆ, ವಿದೇಶ ವ್ಯವಹಾರ, ಆರ್ಥಿಕ ಕ್ಷೇತ್ರ ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲೂ ಸಂಪೂರ್ಣ ವಿಫಲವಾದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಒಳಿತು ಮಾಡುವುದಿದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಒತ್ತಾಯಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಜನರ ಹಿತದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮೋದಿಯವರು ಇದೇ ರೀತಿ ಅಧಿಕಾರದಲ್ಲಿ ಮುಂದುವರಿದರೆ ದೇಶಕ್ಕೆ ದೊಡ್ಡ ಗಂಡಾಂತರ ತಪ್ಪಿದ್ದಲ್ಲ ಎಂದರು.&lt;/p&gt;&lt;p&gt;ಮಧ್ಯ ಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ ತಿಂಗಳಾದರೂ ತೈಲ, ಅನಿಲ ಬೆಲೆ ಹೆಚ್ಚಳದ ಬಗ್ಗೆ ನರೇಂದ್ರ ಮೋದಿಯವರಿಗೆ ಗೊತ್ತಿರಲಿಲ್ಲ. ಆದರೆ, ಪಂಚ ರಾಜ್ಯಗಳ ಚುನಾವಣಾ ಪ್ರಚಾರದ ವೇಳೆಯೂ ಅದೆಲ್ಲಾ ನೆನಪಿಗೆ ಬರಲಿಲ್ಲ. ಐದೂ ರಾಜ್ಯಗಳ ಚುನಾವಣೆ ಮುಗಿದು, ಫಲಿತಾಂಶ ಬರುತ್ತಿದ್ದಂತೆ ಜ್ಞಾನೋದಯವಾಗಿ, ಪೆಟ್ರೋಲ್&zwnj;-ಡೀಸೆಲ್&zwnj; ಬಳಕೆ ಕಡಿಮೆ ಮಾಡಿ ಎಂಬ ಹೇಳಿಕೆ ಜೊತೆಗೆ ಅದರ ದರ ಹೆಚ್ಚಿಸಿದ್ದಾರೆ ಎಂದು ಅವರು ಟೀಕಿಸಿದರು.&lt;/p&gt;&lt;p&gt;ಮಿತವ್ಯಯದ ಬಗ್ಗೆ ದೇಶ ವಾಸಿಗಳಿಗೆ ಉಪದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಐದು ದೇಶಗಳ ವಿದೇಶ ಪ್ರವಾಸ ಕೈಗೊಂಡಿದ್ದು, ಇದಕ್ಕೆ ನೂರಾರು ಕೋಟಿ ರು. ಖರ್ಚು ಮಾಡುತ್ತಿದ್ದಾರೆ. ವಿದೇಶ ಪ್ರವಾಸ ಕೈಗೊಳ್ಳುವುದು ಅದಾನಿ ವ್ಯವಹಾರ ಸ್ಥಾಪನೆಗೆ ಹೊರತು, ದೇಶದ ಹಿತದೃಷ್ಟಿಯಿಂದ ಅಲ್ಲ. ಅದಾನಿ ಅಮೇರಿಕಾದ ಜೊತೆಗೆ ವ್ಯವಹಾರ ಸಂಬಂಧ ಹೊಂದಿರುವ ಕಾರಣಕ್ಕೆ ಮೋದಿ ಈಗ ಅಮೇರಿಕಾ ಹೇಳಿದಂತೆ ಕೇಳುತ್ತಿದ್ದಾರೆ ಎಂದು ದೂರಿದರು.&lt;/p&gt;&lt;p&gt;ಮೋದಿ ಸರ್ಕಾರದ ವಿದೇಶಾಂಗ ನೀತಿಗಳ ಪರಿಣಾಮವಾಗಿ ದೇಶ ಇಂದು ಸಂಕಷ್ಟಗಳನ್ನು ಅನುಭವಿಸುತ್ತಿದೆ. ನೆರೆಯ ದೇಶಗಳ ಜೊತೆಗೆ ಉತ್ತಮ ಸಂಬಂಧವನ್ನೇ ಹೊಂದಿಲ್ಲ. ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆಯಿಂದ ಜಗತ್ತಿನ ಮುಂದೆ ಭಾರತ ತಲೆ ತಗ್ಗಿಸುವಂತಾಗಿದೆ. ನರೇಂದ್ರ ಮೋದಿಯೆಂದರೆ ದುಬಾರಿ ಎನ್ನುವಂತೆ ತೈಲ, ಅನಿಲ ಬೆಲೆ ದಿನದಿನಕ್ಕೂ ಏರಿಕೆಯಾಗುತ್ತಿದ್ದು, ಜನಜೀವನಕ್ಕೆ ಒಂದಲ್ಲ ಒಂದು ರೀತಿ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ ಎಂದು ಆರೋಪಿಸಿದರು.&lt;/p&gt;&lt;p&gt;ಕಾಂಗ್ರೆಸ್ ಪಕ್ಷದ ಮುಖಂಡರಾದ ಇಂಟೆಕ್ ಅಧ್ಯಕ್ಷ ಕೆ.ಎಂ.ಮಂಜುನಾಥ, ಬಿ.ಎಚ್.ಉದಯಕುಮಾರ, ಡಿ.ಶಿವಕುಮಾರ, ಡಿ.ಕೇಶವ ನಾಯ್ಕ, ಬಿ.ಎಸ್.ಸುರೇಶ ಇತರರು ಇದ್ದರು.&lt;/p&gt;&lt;p&gt;ಅಚ್ಚೇ ದಿನ್&zwnj; ಅಂತಲೇ ಹೇಳಿಕೊಂಡೇ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಇರುವವರೆಗೂ ದೇಶಕ್ಕೆ ಅಚ್ಚೇ ದಿನ್ ಬರಲಿಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಜನರ ಒಳ್ಳೆಯದು ಮಾಡಬೇಕೆಂಬ ಕನಿಷ್ಠ ಕಾಳಜಿಯೇನಾದರೂ ನರೇಂದ್ರ ಮೋದಿ ಅವರಿಗೆ ಇದ್ದರೆ ತಕ್ಷಣವೇ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಕಾರ ಮಾಡಲಿ.&lt;/p&gt;&lt;p&gt;- ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/pm-modi-failed-in-every-sector-should-resign-immediately-kpcc-d-basavaraj-demands-rav/articleshow-5dhpkwe"/>
        </item>
        <item>
            <title><![CDATA[ಮನೆ ಮುಂದೆ ನಿಂತಿದ್ದ ದಾವಣಗೆರೆ ಶಿಕ್ಷಕನ ಬಲಿ ಪಡೆದ ಸಿಡಿಲು, ಹೃದಯಾಘಾತದಿಂದ ಕುಸಿದು ಬಿದ್ದು ಸಾವು]]></title>
            <link>https://kannada.asianetnews.com/karnataka-districts/davanagere-teacher-dies-after-lightning-strike-triggered-cardiac-arrest-near-home/articleshow-e1yrmyg</link>
            <guid isPermaLink="true">https://kannada.asianetnews.com/karnataka-districts/davanagere-teacher-dies-after-lightning-strike-triggered-cardiac-arrest-near-home/articleshow-e1yrmyg</guid>
            <pubDate>Mon, 18 May 2026 13:12:04 +0530</pubDate>
            <description><![CDATA[&lt;p&gt;ದಾವಣೆಗೆರೆ ಶಿಕ್ಷಕ ಮನೆ ಮುಂದೆ ನಿಂತಿದ್ದಂತೆ ಬಡಿದ ಸಿಡಿಲಿನ ಅಬ್ಬರಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಾಲೆ ಮುಖ್ಯೋಪಾದ್ಯಯರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕನ ಸಾವು ಇಡೀ ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krx0f9m200mbb4gkw4rcnrvw,imgname-tragic-lightning-incident-1779090040450.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣೆಗೆರೆ (ಮೇ.28)&lt;/strong&gt; ಕರ್ನಾಟಕದ ಹಲೆವೆಡೆ ಭಾರಿ ಗಾಳಿ ಮಳೆ, ಸಿಡಿಲು ಅಬ್ಬರಿಸುತ್ತಿದೆ. ಹೆಲೆವೆಡೆ ಈಗಾಗಲೇ ಆಲಿಕಲ್ಲು ಮಳೆ ಸುರಿದಿದೆ. ಇತ್ತ ಭಾರಿ ಸಿಡಿಲಿಗೆ ಜಾನುವಾರುಗಳು ಮೃತಪಟ್ಟಿದೆ. ಇದೀಗ ದಾವಣೆಗರೆಯಲ್ಲಿ ಶಾಲೆಯ ಮುಖ್ಯೋಪಾದ್ಯಾಯ ಸಿಡಿಲಿನ ಅಬ್ಬರಕ್ಕೆ ಕುಸಿದು ಬಿದ್ದು ಹೃದಯಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮಲೆಕುಂಬಳೂರು ಗ್ರಾಮದ ಸರ್ಕಾರಿ ಶಾಲೆಯ ಹೆಡ್&zwnj;ಮಾಸ್ಟರ್ ಆಗಿದ್ದ ನಾಗರಾಜಪ್ಪ ಮೃತಪಟ್ಟಿದ್ದಾರೆ.&lt;/p&gt;&lt;h2&gt;ಮನೆ ಮುಂದೆ ನಿಂತಿದ್ದಾಗ ಸಿಡಿಲು&lt;/h2&gt;&lt;p&gt;ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಲೆಕಂಬಳೂರು ಗ್ರಾಮದಲ್ಲಿ ಹೆಡ್ ಮಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜಪ್ಪ ಭಾನುವಾರ ರಜೆ ಕಾರಣ ತಮ್ಮ ವೈಯುಕ್ತಿಕ ಕೆಲಸ ಕಾರ್ಯ ಮುಗಿಸಲು ಪಟ್ಟಣಕ್ಕೆ ತೆರಳಿದ್ದರು. ಎಲ್ಲಾ ಕೆಲಸಗಳನ್ನು ಮುಗಿಸಿ ಮನೆಗೆ ಬರುತ್ತಿದ್ದಂತೆ ಮಳೆ ಶುರುವಾಗಿದೆ. ಮಳೆ ಆರಂಭವಾಗುತ್ತಿದ್ದಂತೆ ನಾಗರಾಜಪ್ಪ ಮನೆ ಸೇರಿಕೊಂಡಿದ್ದಾರೆ.&lt;/p&gt;&lt;p&gt;ಮಳೆ ಜೊತೆ ಸಿಡಿಲು ಕೂಡ ಆರಂಭಗೊಂಡಿದೆ. ಮನೆಯ ಮುಂದೆ ನಿಂತು ಗಾಳಿ ಮಳೆ ಹಾಗೂ ಪರಿಸ್ಥಿತಿ ಅವಲೋಕಿಸುತ್ತಿದ್ದರು. ಇದೇ ವೇಳೆ ಭಾರಿ ಸಿಡಿಲು ಶಬ್ದ ಕೇಳಿದೆ. ಒಮ್ಮೆಲೆ ಸಿಡಿಲಿನ ಶಬ್ಬಕ್ಕೆ ನಾಗರಾಜಪ್ಪ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ನಾಗರಾಜಪ್ಪ ಕುಸಿದು ಬಿದ್ದ ಬೆನ್ನಲ್ಲೇ ಕುಟುಂಬಸ್ಥರು ಮನೆ ಒಳಗಿನಿಂದ ಓಡಿ ಬಂದಿದ್ದಾರೆ.&lt;/p&gt;&lt;p&gt;ನಾಗರಾಜಪ್ಪಗೆ ತೀವ್ರ ಹೃದಯಾಘಾತವಾಗಿದೆ. ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನವೇ ನಾಗರಾಜಪ್ಪ ಮೃತಪಟ್ಟಿದ್ದಾರೆ. ವೈದ್ಯರು ಪರಿಶೀಲಿಸಿ ನಾಗರಾದಪ್ಪ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. 55 ವರ್ಷದ ನಾಗರಾಜಪ್ಪ ಸಿಡಿಲಿನ ಅಬ್ಬರದಲ್ಲಿ ಕುಸಿದು ಬಿದ್ದು ಹೃದಾಯಾಘಾತಕ್ಕೆ ನಿಧನರಾಗಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.&lt;/p&gt;&lt;h2&gt;ರಾಯಚೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು&lt;/h2&gt;&lt;p&gt;ರಾಯಚೂರು ಜಿಲ್ಲೆ ಲಿಂಗಸೂಗೂರು ತಾ&zwnj;. ಕೋಮಲಾಪುರ್ ಗ್ರಾಮದಲ್ಲಿ ಸಿಡಿಲು ಬಡಿದು ಕರಿಯಪ್ಪ ಗೆನ್ನಾಕಿಹಾಳ್ (45) ಮೃತಪಟ್ಟ ಘಟನೆ ನಡೆದಿದೆ. ಇದೇ ವೇಳೆ ಪಕ್ಕದಲ್ಲಿದ್ದ ಮತ್ತೊಬ್ಬ ಬಸವರಾಜ್&zwnj;ಗೆ ಗಂಭೀರ ಗಾಯವಾಗಿದೆ. ಗ್ರಾಮದಲ್ಲಿ ಟ್ರಾಕ್ಟರ್ ಗೆ ಗೊಬ್ಬರ ತುಂಬುತ್ತಿದ್ದಾಗ ಕರಿಯಪ್ಪ ಹಾಗೂ ಬಸವರಾಜ್&zwnj;ಗೆ ಸಿಡಿಲು ಬಡಿದಿದೆ. ಈ ವೇಳೆ ಸಿಡಿಲು ಬಡಿದು ಕರಿಯಪ್ಪ ಸ್ಥಳದಲ್ಲೇ ಮೃತಪಟ್ಟಿರೆ, ಬಸವರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;h2&gt;ಕಾರವಾರದಲ್ಲಿ ಸಿಡಿಲು ಬಡಿದು ಜಾನುವಾರು ಸಾವು&lt;/h2&gt;&lt;p&gt;ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಸಿಡಿಲು ಬಡಿದು ಜಾನುವಾರುಗಳು ಸಾವುಕಂಡಿದೆ. ರೋಮನ್ ಬಾವಟಿಸ್ ದಾಲ್ಮೆತ್ ಅವರಿಗೆ ಸೇರಿದ ಮೂರು ಜಾನುವಾರು ಸಾವು ಕಂಡಿದೆ. ಸಿಡಿಲಿನ ಅಬ್ಬರಕ್ಕೆ ಪಶುಸಂಗೋಪನೆಯನ್ನೇ ಅವಲಂಬಿತವಾದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತಕ್ಷಣ ಪರಿಹಾರ ಒದಗಿಸುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>davanagere</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/davanagere-teacher-dies-after-lightning-strike-triggered-cardiac-arrest-near-home/articleshow-e1yrmyg"/>
        </item>
        <item>
            <title><![CDATA[28 ವರ್ಷಗಳ ನಂತ್ರ ಒಂದೆಡೆ ಸೇರಿ ಶಿಕ್ಷಕರಿಗೆ ಪಾದಪೂಜೆ ನೆರವೇರಿಸಿದ ವಿದ್ಯಾರ್ಥಿಗಳು]]></title>
            <link>https://kannada.asianetnews.com/karnataka-districts/1998-batch-sslc-students-come-together-after-28-year-to-perform-foot-worship-to-their-teachers-drr-school-davanagere-mrq/articleshow-fdalnrn</link>
            <guid isPermaLink="true">https://kannada.asianetnews.com/karnataka-districts/1998-batch-sslc-students-come-together-after-28-year-to-perform-foot-worship-to-their-teachers-drr-school-davanagere-mrq/articleshow-fdalnrn</guid>
            <pubDate>Wed, 27 May 2026 09:35:32 +0530</pubDate>
            <description><![CDATA[&lt;p&gt;ಡಿಆರ್&zwnj;ಆರ್ ಶಾಲೆಯ 1998ರ ಸಾಲಿನ ಕನ್ನಡ ಮಾಧ್ಯಮದ ಹಿರಿಯ ವಿದ್ಯಾರ್ಥಿಗಳು 28 ವರ್ಷಗಳ ನಂತರ ಒಂದೆಡೆ ಸೇರಿದರು. ಈ ಸ್ನೇಹ ಸಮ್ಮಿಲನದಲ್ಲಿ ತಮ್ಮ ಶಿಕ್ಷಕರಿಗೆ ಪಾದಪೂಜೆ ನೆರವೇರಿಸಿ, ಗುರುಕಾಣಿಕೆ ಸಲ್ಲಿಸುವ ಮೂಲಕ ಅಪೂರ್ವ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksksk2f14xnpy92cqs0sz2wp,imgname-davanagere-students-1779854576097.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ&lt;/strong&gt;: ನಗರದ ಡಿಆರ್&zwnj;ಆರ್ ಶಾಲೆಯಲ್ಲಿ 28 ವರ್ಷಗಳ ನಂತರ 1998ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಕನ್ನಡ ಮಾಧ್ಯಮದ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಶಾಲೆ ಆವರಣದಲ್ಲಿ ನಡೆಯಿತು. ಹಳೆಯ ವಿದ್ಯಾರ್ಥಿಗಳು ಸೇರಿ ಶಿಕ್ಷಕರ ಪಾದಪೂಜೆ ನೆರವೇರಿಸಿ ಗುರುಕಾಣಿಕೆ ಸಲ್ಲಿಸಿದರು.&lt;/p&gt;&lt;p&gt;ಶಾಲೆ ಮುಖ್ಯ ಶಿಕ್ಷಕ ಭೋಜರಾಜ್ ಯಾದವ್&zwnj; ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಗುರುವಂದನೆಯಂಥ ಕಾರ್ಯಕ್ರಮ ಮಾಡುತ್ತಿರುವುದು ಅವರಿಗೆ ನಮ್ಮ ಶಾಲೆ ಕಲಿಸಿದ ಸಂಸ್ಕಾರದ ಧ್ಯೋತಕವಾಗಿದೆ ಎಂದರು.&lt;/p&gt;&lt;h2&gt;&lt;strong&gt;ಶಾಲೆ ಕಲಿಸಿದ ಸಂಸ್ಕೃತಿ ಮತ್ತು ಸಂಸ್ಕಾರ&lt;/strong&gt;&lt;/h2&gt;&lt;p&gt;ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಈ ಹಿರಿಯ ವಿದ್ಯಾರ್ಥಿಗಳು 28 ವರ್ಷಗಳ ಹಿಂದೆ ಓದಿ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಇದು ಅವರಿಗೆ ನಮ್ಮ ಶಾಲೆ ಕಲಿಸಿದ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿವಿಧ ಹುದ್ದೆಗಳನ್ನು ಅಲಂಕರಿಸಿ ತಮ್ಮ ಜೀವನವನ್ನು ಕಟ್ಟಿಕೊಂಡು ತಮಗೆ ಮತ್ತು ತಾವು ಓದಿದ ಶಾಲೆಗೆ ಹೆಸರು ಮತ್ತು ಕೀರ್ತಿ ತಂದಿರುವುದು ತುಂಬಾ ಹೆಮ್ಮೆಯ ವಿಷಯ. ಇಂದು ಸಚಿವರಾಗಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಹಾ ಇದೇ ಶಾಲೆ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿದರು.&lt;/p&gt;&lt;p&gt;ಇದನ್ನೂ ಓದಿ:&amp;nbsp;&lt;/p&gt;&lt;p&gt;ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ನಾಗಪನಿ ನಾಯಕ್, ಪ್ರದೀಪ್, ಪ್ರಭುದೇವ್, ಹಿರಿಯ ವಿದ್ಯಾರ್ಥಿಗಳಾದ ದೀಪ, ಹೇಮಾ, ರಾಘವೇಂದ್ರ, ತಿಪ್ಪೇಶ್ ಸೇರಿದಂತೆ ಸುಮಾರು 48 ಹಿರಿಯ ವಿದ್ಯಾರ್ಥಿಗಳು ಮತ್ತು 26 ಶಿಕ್ಷಕರು ಭಾಗವಹಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;60 ವರ್ಷದ ಬಳಿಕ ಗೆಳೆಯರ ಭೇಟಿ; ಪದವಿ ಮುಗಿದಾಗ ಇದ್ದಿದ್ದು 122, ಈಗ ಉಳಿದಿರೋದು 12 ಜನ ಮಾತ್ರ&lt;/strong&gt;&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/1998-batch-sslc-students-come-together-after-28-year-to-perform-foot-worship-to-their-teachers-drr-school-davanagere-mrq/articleshow-fdalnrn"/>
        </item>
        <item>
            <title><![CDATA['ಸಚಿವ ಸ್ಥಾನ ಸಿಕ್ಕರೆ ನಾನು ಹಿಂದೆ ಸರಿಯಲ್ಲ': ಮನದೊಳಗಿನ ಮಂತ್ರಿಗಿರಿ ಆಸೆ ಬಿಚ್ಚಿಟ್ಟ ಯುವ ಶಾಸಕ ಸಮರ್ಥ ಶಾಮನೂರು]]></title>
            <link>https://kannada.asianetnews.com/state/samarth-shamanur-mla-expresses-desire-for-karnataka-cabinet-berth-sat/articleshow-gmifosd</link>
            <guid isPermaLink="true">https://kannada.asianetnews.com/state/samarth-shamanur-mla-expresses-desire-for-karnataka-cabinet-berth-sat/articleshow-gmifosd</guid>
            <pubDate>Mon, 01 Jun 2026 14:26:43 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ಅವರು ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಕ್ಕರೆ ರಾಜ್ಯ ಮತ್ತು ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ವೇಗ ನೀಡಬಹುದು ಎಂದು ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km5fzpd411xqef0f51cv2vx9,imgname-davanagere-samarth-shamanur-1774006032804.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.01): ರಾ&lt;/strong&gt;ಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಚರ್ಚೆಗಳು ಮುನ್ನೆಲೆಗೆ ಬರುತ್ತಿದ್ದಂತೆ, ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಈಗ ಈ ಪಟ್ಟಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಯುವ ಶಾಸಕ ಸಮರ್ಥ ಶಾಮನೂರು ಅವರ ಹೆಸರು ಹೊಸ ಸೇರ್ಪಡೆಯಾಗಿದೆ. ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುವುದಾಗಿ ಹೇಳುವ ಮೂಲಕ ಅವರು ತಮ್ಮ ರಾಜಕೀಯ ಆಕಾಂಕ್ಷೆಯನ್ನು ಬಹಿರಂಗಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಅಧಿಕಾರ ಸಿಕ್ಕರೆ ಅಭಿವೃದ್ಧಿಗೆ ವೇಗ:&lt;/strong&gt;&lt;/h3&gt;&lt;p&gt;ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮರ್ಥ ಶಾಮನೂರು, 'ಸಚಿವ ಸ್ಥಾನ ಸಿಕ್ಕರೆ ನಾನು ಖಂಡಿತವಾಗಿಯೂ ಹಿಂದೆ ಸರಿಯುವುದಿಲ್ಲ. ಸಚಿವ ಸ್ಥಾನ ಸಿಕ್ಕರೆ ರಾಜ್ಯದಿಂದ ಮತ್ತು ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರ ಹಾಗೂ ಜಿಲ್ಲೆಯ ಕೆಲಸಗಳನ್ನು ಮಾಡುವುದಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಅಧಿಕಾರವಿದ್ದರೆ ಜನರ ಕೆಲಸಗಳನ್ನು ಇನ್ನಷ್ಟು ವೇಗವಾಗಿ ಮಾಡಬಹುದು' ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಹೈಕಮಾಂಡ್ ನಿರ್ಧಾರಕ್ಕೆ ಗೌರವ:&lt;/strong&gt;&lt;/h2&gt;&lt;p&gt;ಮೊದಲ ಬಾರಿ ಆಯ್ಕೆಯಾದ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, 'ಸಚಿವ ಸ್ಥಾನ ಕೊಡೋದು ಬಿಡೋದು ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟ ವಿಚಾರ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಆದರೆ, ಜವಾಬ್ದಾರಿ ನೀಡಿದರೆ ಅದನ್ನು ನಿಭಾಯಿಸಲು ನಾನು ಸಿದ್ಧ' ಎಂದರು.&lt;/p&gt;&lt;h2&gt;&lt;strong&gt;ಯಾರು ತಾನೇ 'ಬೇಡ' ಅಂತಾರೆ?&lt;/strong&gt;&lt;/h2&gt;&lt;p&gt;ತಮ್ಮ ಆಸೆಯನ್ನು ಹಾಸ್ಯಮಯವಾಗಿ ಹಾಗೂ ನೇರವಾಗಿಯೇ ವ್ಯಕ್ತಪಡಿಸಿದ ಸಮರ್ಥ, 'ಸಚಿವ ಸ್ಥಾನ ಕೊಟ್ಟರೆ ಯಾರು ತಾನೇ ಚನ್ನಾಗಿಲ್ಲ ಅಂತ ಹೇಳ್ತಾರೆ ಹೇಳಿ? ರಾಜಕೀಯದಲ್ಲಿರುವ ಪ್ರತಿಯೊಬ್ಬರಿಗೂ ಜನಸೇವೆ ಮಾಡಲು ದೊಡ್ಡ ಜವಾಬ್ದಾರಿ ಬೇಕೆಂಬ ಆಸೆ ಇರುತ್ತದೆ. ನನಗೂ ಆ ಆಸೆಯಿದೆ. ಹೊಸಬರಿಗೆ ಅವಕಾಶ ನೀಡಿದರೆ ಹೊಸ ಹುರುಪಿನಿಂದ ಕೆಲಸ ಮಾಡಬಹುದು' ಎಂದು ಸಚಿವ ಸ್ಥಾನದ ಮೇಲಿನ ಒಲವನ್ನು ವ್ಯಕ್ತಪಡಿಸಿದರು.&lt;/p&gt;&lt;p&gt;ದಾವಣಗೆರೆಯ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದಿರುವ ಸಮರ್ಥ ಶಾಮನೂರು ಅವರು ಶಾಸಕರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಸಚಿವ ಸ್ಥಾನದ ಬಗ್ಗೆ ಇಷ್ಟೊಂದು ಸ್ಪಷ್ಟವಾಗಿ ಹೇಳಿಕೆ ನೀಡಿರುವುದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯನವರ ಸಂಪುಟದಲ್ಲಿ ಯುವ ಮುಖಗಳಿಗೆ ಅವಕಾಶ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>davanagere</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/samarth-shamanur-mla-expresses-desire-for-karnataka-cabinet-berth-sat/articleshow-gmifosd"/>
        </item>
        <item>
            <title><![CDATA[ಕಾಂಗ್ರೆಸ್‌ನಲ್ಲಿ ಆಡಿಯೋ ಕಿಚ್ಚು: ಜಮೀರ್ ಅಹಮದ್ ವಿರುದ್ಧ ಶಾಸಕ ಸಮರ್ಥ ಶಾಮನೂರು ಕೆಂಡ; ನಕಲಿ ಎಂದ ಮಾಜಿ ಸಚಿವ!]]></title>
            <link>https://kannada.asianetnews.com/state/zameer-ahmed-khan-political-strategy-audio-viral-samarth-shamanur-reaction-congress-rift-sat/articleshow-itq9xh8</link>
            <guid isPermaLink="true">https://kannada.asianetnews.com/state/zameer-ahmed-khan-political-strategy-audio-viral-samarth-shamanur-reaction-congress-rift-sat/articleshow-itq9xh8</guid>
            <pubDate>Mon, 01 Jun 2026 15:11:20 +0530</pubDate>
            <description><![CDATA[&lt;p&gt;ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋವೊಂದು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಇದು ಎಐ ತಂತ್ರಜ್ಞಾನದಿಂದ ಸೃಷ್ಟಿಯಾದ ನಕಲಿ ಆಡಿಯೋ ಎಂದು ಜಮೀರ್ ಸ್ಪಷ್ಟನೆ ನೀಡಿದರೆ, ದಾವಣಗೆರೆ ಶಾಸಕ ಸಮರ್ಥ ಶಾಮನೂರು ಹೈಕಮಾಂಡ್ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt18sjeptfzsyydha77ez7xk,imgname-bz-zameer-ahmed-khan-vs-samarth-shamanur--1--1780306725334.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ದಾವಣಗೆರೆ (ಜೂ.01): ರಾ&lt;/strong&gt;ಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಬಾಂಬ್ ಸಿಡಿದಿದೆ. ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಇದು ಕಾಂಗ್ರೆಸ್ ಪಕ್ಷದ ಒಳಗಿನ ಭಿನ್ನಮತವನ್ನು ಬೀದಿಗೆ ತಂದಿದೆ. ಈ ಆಡಿಯೋ ವಿಚಾರವಾಗಿ ದಾವಣಗೆರೆಯ ನೂತನ ಶಾಸಕ ಸಮರ್ಥ ಶಾಮನೂರು ಅವರು ಜಮೀರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹೈಕಮಾಂಡ್ ತನಿಖೆಗೆ ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಆಡಿಯೋ ವಿವಾದ?&lt;/strong&gt;&lt;/h2&gt;&lt;p&gt;ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟ್ಟರ್) ನಲ್ಲಿ ಸುಮಾರು 3 ನಿಮಿಷ 51 ಸೆಕೆಂಡ್ ಅವಧಿಯ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ಇದರಲ್ಲಿ ಜಮೀರ್ ಅಹಮದ್ ಅವರು ತಮ್ಮ ಆಪ್ತ ಮೊಹಮ್ಮದ್ ಸಿರಾಜ್ ಎಂಬುವವರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಆಡಿಯೋದಲ್ಲಿ, 'ಬಹಳಷ್ಟು ವಾರ್ಡ್&zwnj;ಗಳಲ್ಲಿ ಎಸ್&zwnj;ಡಿಪಿಐ (ಕುಕ್ಕರ್ ಗುರುತು) ಹವಾ ಇದೆ. ಒತ್ತಾಯಪೂರ್ವಕವಾಗಿ ಯಾರಿಗೂ ಕಾಂಗ್ರೆಸ್&zwnj;ಗೆ ವೋಟ್ ಹಾಕಲು ಕರೆಯಬೇಡಿ. ಸಾದಿಕ್ ಪೈಲ್ವಾನ್ ವಾರ್ಡ್&zwnj;ನಲ್ಲಿ ಕಾಂಗ್ರೆಸ್&zwnj;ಗೆ ಮೈನಸ್ ಆಗಬೇಕು. ಮನೆಯಿಂದ ಹೊರಬಂದವರಿಗೆ ಎಸ್&zwnj;ಡಿಪಿಐ ಅಥವಾ ಪಕ್ಷೇತರರಿಗೆ ಮತ ಹಾಕುವಂತೆ ಹೇಳಿ' ಎಂಬ ಅಂಶಗಳಿವೆ. ಇದು ಸ್ವಪಕ್ಷದ ಅಭ್ಯರ್ಥಿಗಳಿಗೇ ಹಿನ್ನಡೆ ಉಂಟುಮಾಡುವ ಷಡ್ಯಂತ್ರ ಎಂಬ ಆರೋಪಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಇದು ಎಐ ಸೃಷ್ಟಿಸಿದ ನಕಲಿ ಆಡಿಯೋ: ಜಮೀರ್ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ಈ ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಜಮೀರ್ ಅಹಮದ್ ಖಾನ್, 'ವೈರಲ್ ಆಗಿರುವ ಆಡಿಯೋ ಸಂಪೂರ್ಣ ನಕಲಿ. ಇತ್ತೀಚಿನ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಕಿಡಿಗೇಡಿಗಳು ನನ್ನ ಧ್ವನಿಯನ್ನು ಅನುಕರಿಸಿ ಈ ರೀತಿ ಮಾಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರವಾಗಿದ್ದು, ಗೊಂದಲ ಸೃಷ್ಟಿಸಲು ಈ ರೀತಿ ಮಾಡಲಾಗಿದೆ. ಇದರ ಬಗ್ಗೆ ಸೈಬರ್ ಠಾಣೆಗೆ ದೂರು ನೀಡುತ್ತೇನೆ. ಯಾವ ತನಿಖೆಗಾದರೂ ನಾನು ಸಿದ್ಧ' ಎಂದು ಸವಾಲು ಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಸತ್ಯ ಹೇಗೆ ಷಡ್ಯಂತ್ರವಾಗುತ್ತದೆ? ಸಮರ್ಥ ಶಾಮನೂರು ಪ್ರಶ್ನೆ&lt;/strong&gt;&lt;/h2&gt;&lt;p&gt;ಜಮೀರ್ ಅಹಮದ್ ಅವರ 'ನಕಲಿ ಆಡಿಯೋ' ಹೇಳಿಕೆಗೆ ದಾವಣಗೆರೆಯಲ್ಲಿ ಶಾಸಕ ಸಮರ್ಥ ಶಾಮನೂರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 'ಚುನಾವಣೆ ಸಮಯದಲ್ಲಿ ಇದೆಲ್ಲವೂ 'ಓಪನ್ ಸೀಕ್ರೆಟ್' ಆಗಿತ್ತು. ಸತ್ಯ ಸಂಗತಿಗಳು ಹೊರಬಂದಾಗ ಅದನ್ನು ಷಡ್ಯಂತ್ರ ಎನ್ನುವುದು ಸರಿಯಲ್ಲ. ಪ್ರತಿ ಚುನಾವಣೆಯಲ್ಲಿ ಎ ಟೀಂ, ಬಿ ಟೀಂ ಎಂಬುದು ಇರುತ್ತದೆ. ಆದರೆ ಆಡಿಯೋದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಹಾಗೂ ಕಾಂಗ್ರೆಸ್&zwnj;ಗೆ ವಿರುದ್ಧವಾಗಿ ಮಾತನಾಡಿರುವುದು ಸ್ಪಷ್ಟವಾಗಿದೆ. ಇವರು ಷಡ್ಯಂತ್ರದಿಂದಲೇ ಗೆಲ್ಲಲು ಸಾಧ್ಯ' ಎಂದು ಕಿಡಿ ಕಾರಿದ್ದಾರೆ.&lt;/p&gt;&lt;h3&gt;&lt;strong&gt;ಫಾರೆನ್ಸಿಕ್ ಲ್ಯಾಬ್&zwnj;ಗೆ (FSL) ಕಳುಹಿಸಿ ತನಿಖೆ ಮಾಡಲಿ&lt;/strong&gt;&lt;/h3&gt;&lt;p&gt;ಮುಂದುವರಿದು ಮಾತನಾಡಿದ ಅವರು, 'ನಾನು ರಾಜಕೀಯಕ್ಕೆ ಹೊಸಬನಿರಬಹುದು, ಆರಂಭದಲ್ಲೇ ಈ ರೀತಿ ಬೆನ್ನಿಗೆ ಇರಿಯುವ ಕೆಲಸ ಮಾಡಿದರೆ ಕೆಲಸ ಮಾಡಲು ಕಷ್ಟವಾಗುತ್ತದೆ. ಎಸ್&zwnj;ಡಿಪಿಐ ಮತ್ತು ಪಕ್ಷೇತರರನ್ನು ಜಮೀರ್ ಒಗ್ಗೂಡಿಸಿದ್ದಾರಾ? ಎಲ್ಲರೂ ಒಗ್ಗೂಡಿ ಬರಬೇಕಿತ್ತಲ್ಲವೇ? ಈ ಆಡಿಯೋವನ್ನು ಫಾರೆನ್ಸಿಕ್ ಲ್ಯಾಬ್&zwnj;ಗೆ (FSL) ಕಳುಹಿಸಿ ತನಿಖೆ ಮಾಡಲಿ. ಹೈಕಮಾಂಡ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಏನೇ ಷಡ್ಯಂತ್ರ ಮಾಡಿದರೂ ನನ್ನನ್ನು ತಾಯಿ ದುಗ್ಗಮ್ಮನೇ ಕಾಪಾಡಿದಳು' ಎಂದು ಭಾವುಕರಾಗಿ ನುಡಿದರು.&lt;/p&gt;]]></content:encoded>
            <category>davanagere</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/zameer-ahmed-khan-political-strategy-audio-viral-samarth-shamanur-reaction-congress-rift-sat/articleshow-itq9xh8"/>
        </item>
        <item>
            <title><![CDATA[ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಚಿಗಟೇರಿ ಆಸ್ಪತ್ರೆಗೆ ದಿಢೀರ್ ಭೇಟಿ! ಅಲ್ಲಿ ನಡೆದ ಘಟನೆ ಏನು?]]></title>
            <link>https://kannada.asianetnews.com/state/davanagere-mp-dr-prabha-mallikarjun-makes-surprise-visit-to-chigateri-hospital-rav/articleshow-nf6go7u</link>
            <guid isPermaLink="true">https://kannada.asianetnews.com/state/davanagere-mp-dr-prabha-mallikarjun-makes-surprise-visit-to-chigateri-hospital-rav/articleshow-nf6go7u</guid>
            <pubDate>Sun, 17 May 2026 07:23:42 +0530</pubDate>
            <description><![CDATA[ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ವಾರ್ಡ್&zwnj;ಗಳಲ್ಲಿ ರೋಗಿಗಳ ಆರೋಗ್ಯ ವಿಚಾರಿಸಿ, ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ಅವರು, ಗುಣಮಟ್ಟದ ಸೇವೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01krsszewr52e3kw1qkk2eq345,imgname-----------------------2026-05-17t071750.019-1778982566808.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮೇ.17):&lt;/strong&gt; ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಶನಿವಾರ ಇಲ್ಲಿನ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಿಭಾಗಗಳು ಹಾಗೂ ವಾರ್ಡ್&zwnj;ಗಳಲ್ಲಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.&lt;/p&gt;&lt;p&gt;ಆಸ್ಪತ್ರೆಯ ಪ್ರತಿಯೊಂದು ವಾರ್ಡ್&zwnj;ಗೆ ಭೇಟಿ ನೀಡಿದ ಸಂಸದರು, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿ, ಅವರಿಗೆ ನೀಡಲಾಗುತ್ತಿರುವ ವೈದ್ಯಕೀಯ ಸೇವೆಗಳ ಕುರಿತು ಮಾಹಿತಿ ಪಡೆದರು. ಜೊತೆಗೆ ರೋಗಿಗಳ ಸಮಸ್ಯೆಗಳು ಹಾಗೂ ಆಸ್ಪತ್ರೆಯಲ್ಲಿನ ಮೂಲ ಸೌಲಭ್ಯಗಳು, ಸೇವಾವೈಖರಿ ಬಗ್ಗೆ ತಿಳಿದುಕೊಂಡರು.&lt;/p&gt;&lt;p&gt;ಆಸ್ಪತ್ರೆಯಲ್ಲಿ ಸ್ವಚ್ಛತೆ, ಔಷಧಿಗಳ ಲಭ್ಯತೆ, ವೈದ್ಯರು ಹಾಗೂ ಸಿಬ್ಬಂದಿ ಕಾರ್ಯವೈಖರಿ ಸೇರಿದಂತೆ ವಿವಿಧ ವ್ಯವಸ್ಥೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.&lt;/p&gt;&lt;p&gt;ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉತ್ತಮ ಚಿಕಿತ್ಸೆ ಮತ್ತು ಮಾನವೀಯ ಸೇವೆ ದೊರಕುವುದು ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯ ಆಡಳಿತ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು. ಆಸ್ಪತ್ರೆಯ ಕ್ಯಾಂಟೀನ್&zwnj;ಗೆ ಭೇಟಿ ನೀಡಿ, ಸ್ವಚ್ಛತೆ ಪರಿಶೀಲನೆ ನಡೆಸಿದರು.&lt;/p&gt;&lt;p&gt;ಸಂಸದರ ದಿಢೀರ್ ಭೇಟಿ ಹಿನ್ನೆಲೆ ಆಸ್ಪತ್ರೆ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿ ಚಟುವಟಿಕೆ ಕಂಡುಬಂದಿತು. ರೋಗಿಗಳು ಹಾಗೂ ಸಾರ್ವಜನಿಕರು ಸಂಸದರ ಈ ಪರಿಶೀಲನಾ ಕ್ರಮವನ್ನು ಸ್ವಾಗತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/davanagere-mp-dr-prabha-mallikarjun-makes-surprise-visit-to-chigateri-hospital-rav/articleshow-nf6go7u"/>
        </item>
        <item>
            <title><![CDATA[ಗಂಗಾ-ಪಂಚಮಿ ಮಾತಿಗೆ ಮರುಳಾದ್ರೆ ಸರ್ವಸ್ವವೂ ಉಡೀಸ್; ನಿರ್ಜನ ಪ್ರದೇಶಕ್ಕೆ ಎಂಟ್ರಿಯಾದ್ರೆ ಕ್ಲೋಸ್!]]></title>
            <link>https://kannada.asianetnews.com/gallery/karnataka-districts/davangere-honeytrap-gang-targeting-wealthy-youth-busted-five-people-including-two-women-arrested-mrq-omwxpu0</link>
            <guid isPermaLink="true">https://kannada.asianetnews.com/gallery/karnataka-districts/davangere-honeytrap-gang-targeting-wealthy-youth-busted-five-people-including-two-women-arrested-mrq-omwxpu0</guid>
            <pubDate>Sat, 16 May 2026 12:36:09 +0530</pubDate>
            <description><![CDATA[&lt;p&gt;ಯುವಕರನ್ನೇ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಐವರ ಗ್ಯಾಂಗ್&zwnj; ಅನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳಿಂದ ಪೊಲೀಸರು 10.20 ಲಕ್ಷ ಮೌಲ್ಯದ ಚಿನ್ನ, ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಜಾಲದಿಂದ ಇನ್ನಷ್ಟು ಮಂದಿ ಮೋಸ ಹೋಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqs2sysxmg6wjgrpfxfv9q4,imgname-honeytrap-gang-1778914519001.jpg" type="image/jpeg" height="390" width="690"/>
            <content:encoded><![CDATA[&lt;p&gt;ಯುವಕರನ್ನೇ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಐವರ ಗ್ಯಾಂಗ್&zwnj; ಅನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳಿಂದ ಪೊಲೀಸರು 10.20 ಲಕ್ಷ ಮೌಲ್ಯದ ಚಿನ್ನ, ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಜಾಲದಿಂದ ಇನ್ನಷ್ಟು ಮಂದಿ ಮೋಸ ಹೋಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ದಾವಣಗೆರೆಯಲ್ಲಿ ಆಕ್ಟಿವ್ ಆಗಿದ್ದ ಹನಿಟ್ರ್ಯಾಪ್ ಗ್ಯಾಂಗ್&zwnj;ನ ಐವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದು, ಪ್ರಾಥಮಿಕ ತನಿಖೆಯಲ್ಲಿ ಗ್ಯಾಂಗ್&zwnj; ಸದಸ್ಯರ ಅಸಲಿ ಮುಖವಾಡ ಬಯಲಾಗಿದೆ.&lt;/p&gt;&lt;img&gt;&lt;p&gt;ಜಗದೀಶ್ (35), ಗಂಗಾ ಮಲ್ಲೇಶ್ ನಾಯ್ಕ (25), ವೆಂಕಟೇಶ್ (30), ಪಂಚಮಿ (34) ಮತ್ತು ಸುರೇಶ್ ಬಂಧಿತ ಆರೋಪಿಗಳು. ಈ ತಂಡದಲ್ಲಿದ್ದ ಗಂಗಾ ಮತ್ತು ಪಂಚಮಿ ಮೊದಲು ಆರ್ಥಿಕವಾಗಿ ಸದೃಢವಾಗಿರುವ ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದರು. ನಂತರ ನಯವಾದ ಮಾತುಗಳಿಂದ ಯುವಕರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಪ್ರತಿಷ್ಟಿತ ಮನೆತನದ ಯುವಕನೋರ್ವನ ಪರಿಚಯವನ್ನು ಪಂಚಮಿ ಮಾಡಿಕೊಂಡಿದ್ದಳು. ಯುವಕನ್ನು ಪುಸಲಾಯಿಸಿ ಶಿವನಹಳ್ಳಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಳು. ಈ ವೇಳೆ ಗಂಗಾ, ಜಗದೀಶ್, ವೆಂಕಟೇಶ್ ಮತ್ತು ಸುರೇಶ್ ದಾಳಿ ನಡೆಸಿದ್ದಾರೆ. ಯುವಕನ ಮೇಲೆ ಹಲ್ಲೆ ನಡೆಸಿ ಆತ ಧರಿಸಿದ ಚಿನ್ನಾಭರಣ, ಆತನಲ್ಲಿದ್ದ ಹಣ ಪಡೆದುಕೊಂಡು ಪರಾರಿಯಾಗಿದ್ದರು.&lt;/p&gt;&lt;img&gt;&lt;p&gt;ಈ ಸಂಬಂಧ ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ 10.20 ಲಕ್ಷ ರೂಪಾಯಿ ಮೌಲ್ಯದ 80.16ಗ್ರಾಂ ಚಿನ್ನ, 8 ಲಕ್ಷ ರೂ. ಮೌಲ್ಯದ ಇನೋವಾ ಕಾರ್ ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ರೀತಿ ಬೇರೆಯವರಿಗೆ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/davangere-honeytrap-gang-targeting-wealthy-youth-busted-five-people-including-two-women-arrested-mrq-omwxpu0"/>
        </item>
        <item>
            <title><![CDATA[‘ಲೋ ನವೀನ’ ಸಿನಿಮಾ ಹಳ್ಳಿ ಸೊಗಡಿನಿಂದ ಪ್ರೇಕ್ಷಕರ ಮನಗೆದ್ದಿದೆ: ನವೀನ್ ಸಜ್ಜು ಹರ್ಷ]]></title>
            <link>https://kannada.asianetnews.com/sandalwood/naveen-sajjus-lo-naveena-kannada-movie-response-davanagere-gvd/articleshow-pfvoscb</link>
            <guid isPermaLink="true">https://kannada.asianetnews.com/sandalwood/naveen-sajjus-lo-naveena-kannada-movie-response-davanagere-gvd/articleshow-pfvoscb</guid>
            <pubDate>Wed, 27 May 2026 23:48:19 +0530</pubDate>
            <description><![CDATA[&lt;p&gt;&lsquo;ಲೋ ನವೀನ&rsquo; ಸಿನಿಮಾವು ಮಂಡ್ಯ, ಮೈಸೂರು ಭಾಗದ ಹಳ್ಳಿ ಸೊಗಡನ್ನು ಮನರಂಜನಾತ್ಮಕವಾಗಿ ತೆರೆಯ ಮೇಲೆ ತಂದ ಸಿನಿಮಾ ಆಗಿದ್ದು, ಎಲ್ಲ ಕಡೆ ಪ್ರೇಕ್ಷಕರ ಗಮನ ಸೆಳೆದು ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ ಎಂದು ನವೀನ್ ಸಜ್ಜು ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kre08z8mfp65ybznpdfp747p,imgname-cjc-1778586516756.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮೇ.27): &lt;/strong&gt;&lsquo;ಲೋ ನವೀನ&rsquo; ಸಿನಿಮಾವು ಮಂಡ್ಯ, ಮೈಸೂರು ಭಾಗದ ಹಳ್ಳಿ ಸೊಗಡನ್ನು ಮನರಂಜನಾತ್ಮಕವಾಗಿ ತೆರೆಯ ಮೇಲೆ ತಂದ ಸಿನಿಮಾ ಆಗಿದ್ದು, ಎಲ್ಲ ಕಡೆ ಪ್ರೇಕ್ಷಕರ ಗಮನ ಸೆಳೆದು ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ ಎಂದು ಚಿತ್ರದ ನಾಯಕ ನಟ ನವೀನ್ ಸಜ್ಜು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಬದುಕಿನ ಕಥೆಯ ನೈಜ ಚಿತ್ರಣ, ಪ್ರೀತಿ, ಸ್ನೇಹ, ಕುಟುಂಬ ಬಾಂಧವ್ಯ, ಗ್ರಾಮೀಣ ಯುವಕ ಜೀವನಶೈಲಿಯನ್ನು ಮನಮುಟ್ಟುವಂತಹ ಕಥೆ ಒಳಗೊಂಡ &lsquo;ಲೋ ನವೀನ&rsquo; ಪ್ರೇಕ್ಷಕರ ಮನ ಗೆಲ್ಲುತ್ತಿದೆ ಎಂದರು.&lt;/p&gt;&lt;p&gt;ಧನುರ್ಧಾರಿ ಪವನ್&zwnj; ಚಿತ್ರವನ್ನು ನಿರ್ದೇಶಿಸಿದ್ದು, ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಕೀರ್ತಿ ಸ್ವಾಮಿ, ಬೆನ್ ಚಿಕ್ಕ ಸ್ವಾಮಿ ಹಾಗೂ ಎನ್ಎಸ್&zwnj; ಸ್ಟುಡಿಯೋಸ್&zwnj; ನಿರ್ಮಾಣ ಮಾಡಿರುವ ಚಿತ್ರ ಇದಾಗಿದೆ. ಒಟ್ಟು 8 ಹಾಡುಗಳಿರುವ &lsquo;ಲೋ ನವೀನ&rsquo;ದಲ್ಲಿ ವರ್ಷ ಗಿರಿಧರ್, ರೇಷ್ಮಾ ಗೌಡ, ಪ್ರಕಾಶ ತುಮ್ಮಿನಾಡು, ಅಪೂರ್ವಶ್ರೀ, ಅಭಿಜಿತ್ ಗೌಡ, ಮಲ್ಲರಾಜು ಮಾರಸಿಂಗನಹಳ್ಳಿ ಸೇರಿದಂತೆ ಹಲವಾರು ಹೊಸ ಕಲಾವಿದರು ಅಭಿನಯಿಸಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಮೇ 15ರಂದು ರಾಜ್ಯಾದ್ಯಂತ ತೆರೆ ಕಂಡ &lsquo;ಲೋ ನವೀನ&rsquo; ಮೈಸೂರು, ಮಂಡ್ಯ ಹಾಗೂ ಇತರೆ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾ ಇದಾಗಿದೆ. ನಾಯಕನಾಗಿ ತಾವು ಅಭಿನಯಿಸಿದ ಮೊದಲ ಚಿತ್ರಕ್ಕೆ ಜನರಿಂದ ಉತ್ತಮ ಸ್ಪಂದನೆ, ಪ್ರೋತ್ಸಾಹ ವ್ಯಕ್ತವಾಗುತ್ತಿದೆ. ಇದು ತಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್&zwnj;&lt;/strong&gt;&lt;/h2&gt;&lt;p&gt;ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಹೊಸ ಅಲೆ ಎಬ್ಬಿಸುತ್ತಿರುವ ಈ ಚಿತ್ರದ ಮೊದಲಾರ್ಧದಲ್ಲಿ ಹಳ್ಳಿ ಸೊಗಡಿನ ಭರಪೂರ ಕಾಮಿಡಿ ಹಾಗೂ ತುಂಟಾಟ ಪ್ರೇಕ್ಷಕರನ್ನು ನಗಿಸಿದರೆ, ದ್ವಿತೀಯಾರ್ಧದಲ್ಲಿ ಕಥೆ ಕೊಂಚ ಗಂಭೀರ ತಿರುವು ಪಡೆದುಕೊಳ್ಳುತ್ತದೆ. ಚಿತ್ರಕ್ಕೆ ತಾವೇ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳು ಚಿತ್ರದ ದೊಡ್ಡ ಫ್ಲಸ್ ಪಾಯಿಂಟ್. ಅದರಲ್ಲೂ ವಿಶೇಷವಾಗಿ ಎಚ್.ಡಿ.ಕೋಟೆ ಗ್ರಾಮೀಣ ಪ್ರತಿಭೆಗಳಾದ ಚಮ್ಮಮ್ಮ ಹಾಗೂ ಲಕ್ಷಮ್ಮ ಹಾಡಿರುವ ಜನಪದ ಶೈಲಿಯ ಕೋಣಾಣೆ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್&zwnj;ನಲ್ಲಿದ್ದು, ಪ್ರೇಕ್ಷಕರ ಮನಗೆದ್ದಿದೆ ಎಂದು ನವೀನ ಸಜ್ಜು ಹೇಳಿದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/naveen-sajjus-lo-naveena-kannada-movie-response-davanagere-gvd/articleshow-pfvoscb"/>
        </item>
        <item>
            <title><![CDATA[ದೆವ್ವ-ಗಾಳಿ ಅಂತ ದೇವಸ್ಥಾನ ಸುತ್ತಾಡ್ತಿದ್ದಾಗಲೇ ಅಪ್ರಾಪ್ತೆಗೆ ಹೆರಿಗೆ; ಟ್ರ್ಯಾಕ್ಟರ್ ಮಂಜಣ್ಣ ಅರೆಸ್ಟ್!]]></title>
            <link>https://kannada.asianetnews.com/karnataka-districts/rape-of-minor-on-the-pretext-of-marriage-tractor-driver-arrested-jagaluru-davanagere-mrq/articleshow-sbahnbz</link>
            <guid isPermaLink="true">https://kannada.asianetnews.com/karnataka-districts/rape-of-minor-on-the-pretext-of-marriage-tractor-driver-arrested-jagaluru-davanagere-mrq/articleshow-sbahnbz</guid>
            <pubDate>Mon, 18 May 2026 10:25:56 +0530</pubDate>
            <description><![CDATA[&lt;p&gt;ಮದುವೆ ಆಮಿಷವೊಡ್ಡಿ ಅಪ್ರಾಪ್ತೆಯ ಮೇಲೆ ಅತ್ಯಾ*ಚಾರವೆಸಗಿದ ಟ್ರ್ಯಾಕ್ಟರ್ ಚಾಲಕನನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ. ಪೋಷಕರು ಮೂಢನಂಬಿಕೆಯಿಂದ ದೆವ್ವದ ಕಾಟವೆಂದು ಭಾವಿಸಿದ್ದರೆ, ದೇವಸ್ಥಾನದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಾಗ ಸತ್ಯ ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krwpwh8rfjsrwt9p7f9gctmy,imgname-arrested-1779079988504.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ:&amp;nbsp;&lt;/strong&gt; ಮದುವೆಯ ಆಮಿಷವೊಡ್ಡಿ 16 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾ*ಚಾರವೆಸಗಿ, ಆಕೆ ಗರ್ಭಿಣಿಯಾಗಿ ಹೆರಿಗೆಯಾಗುವವರೆಗೂ ಇಡೀ ಕೃತ್ಯ ಮುಚ್ಚಿಟ್ಟಿದ್ದ ಟ್ರ್ಯಾಕ್ಟರ್ ಚಾಲಕನೊಬ್ಬನ ಘೋರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.&lt;/p&gt;&lt;p&gt;ಬೋಗಳೆರಹಟ್ಟಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ಮಂಜಣ್ಣ (30) ಬಂಧಿತ ಆರೋಪಿ. ಜಗಳೂರು ಪೊಲೀಸರು ಮಂಜಣ್ಣನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯಕ್ಕೆ ಕಾಮುಕ ಮಂಜಣ್ಣನನ್ನು ದಾವಣಗೆರೆ ಜಿಲ್ಲಾ ಕಾರಾಗೃಹಕ್ಕೆ ರವಾನಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೂಢನಂಬಿಕೆ- ದೇವಸ್ಥಾನ ಆವರಣದಲ್ಲಿ ಹೆರಿಗೆ ನೋವು!:&lt;/strong&gt;&lt;/h2&gt;&lt;p&gt;ಕೆಲವು ತಿಂಗಳುಗಳಿಂದ ಅಪ್ರಾಪ್ತೆಯು ತೀವ್ರ ಕೈ-ಕಾಲು ಬಾವು ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಆದರೆ, ತೀವ್ರ ಮೂಢನಂಬಿಕೆಗೆ ಒಳಗಾಗಿದ್ದ ಆಕೆಯ ಪೋಷಕರು, ಮಗಳಿಗೆ ದೆವ್ವವೋ, ಭೂತದ ಗಾಳಿ ಸೋಕಿದೆ ಎಂದು ಭಾವಿಸಿದ್ದರು. ಇದಕ್ಕಾಗಿ ಉಕ್ಕಡಗಾತ್ರಿ ಹಾಗೂ ನಾಯಕನಹಟ್ಟಿ ಬಳಿಯ ಬೋಸದೇವರಹಟ್ಟಿ ದೇವಾಲಯಗಳಿಗೆ ಮಗಳನ್ನು ಕರೆದೊಯ್ದು ಪೂಜೆ, ಹರಕೆ ಮಾಡಿಸಿ, ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.&lt;/p&gt;&lt;p&gt;ದೇವಸ್ಥಾನದವರ ಸೂಚನೆಯಂತೆ ನಾಯಕನಹಟ್ಟಿಯ ಅಜ್ಜಯ್ಯನ ಗುಡಿಗೆ ಬಂದಾಗ ಬಾಲಕಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಪೋಷಕರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಅಪ್ರಾಪ್ತೆಯ ಆರೋಗ್ಯ ತಪಾಸಣೆ ನಡೆಸಿದ್ದಾರೆ. ''ಮಗಳಿಗೆ ದೆವ್ವದ ಗಾಳಿ ಸೋಕಿದೆ'' ಎಂದು ನಂಬಿ ದೇವಸ್ಥಾನಗಳಿಗೆ ಅಲೆಯುತ್ತಿದ್ದ ಹೆತ್ತವರಿಗೆ, ಸರ್ಕಾರಿ ಆಸ್ಪತ್ರೆ ವೈದ್ಯರು ನೀಡಿದ ಮಾಹಿತಿ ಬರಸಿಡಿಲು ಬಡಿದಂತಾಗಿದೆ. &quot;ನಿಮ್ಮ ಮಗಳು 9 ತಿಂಗಳ ಗರ್ಭಿಣಿ&quot; ಎಂದು ವೈದ್ಯರು ತಿಳಿಸಿದಾಗ ಅಪ್ರಾಪ್ತೆಯ ಹೆತ್ತವರಿಗೆ ಆಘಾತ ತಂದಿದೆ. ಇದರ ಮಧ್ಯೆಯೇ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡುವಷ್ಟರಲ್ಲೇ ಮಧ್ಯಾಹ್ನ 4.30ರ ಸುಮಾರಿಗೆ ಅಪ್ರಾಪ್ತೆಯು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.&lt;/p&gt;&lt;h3&gt;&lt;strong&gt;ಮದುವೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ&lt;/strong&gt;&lt;/h3&gt;&lt;p&gt;ಅಪ್ರಾಪ್ತೆ ಮಗಳಿಗೆ ಮಗು ಜನಿಸಿದ್ದರಿಂದ ಆತಂಕಕ್ಕೊಳಗಾದ ಪೋಷಕರು ಆಕೆಯನ್ನು ಸಮಾಧಾನಪಡಿಸಿ, ವಿಚಾರಿಸಿದ್ದಾರೆ. ಆಗ ಪೋಷಕರ ಹೊಲಕ್ಕೆ ಟ್ರ್ಯಾಕ್ಟರ್ ಉಳುಮೆ ಮಾಡಲು ಬರುತ್ತಿದ್ದ ಮಂಜಣ್ಣ ಅಪ್ರಾಪ್ತೆಯೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಬಯಲಾಗಿದೆ. ಹೊಲಕ್ಕೆ ಬರುತ್ತಿದ್ದ ಮಂಜಣ್ಣ ಅಪ್ರಾಪ್ತೆಯೊಂದಿಗೆ ಮೊಬೈಲ್&zwnj;ನಲ್ಲಿ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ. 2025ರ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ &quot;ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ&quot; ಎಂದು ನಂಬಿಸಿದ್ದಾನೆ.&lt;/p&gt;&lt;p&gt;ಅಪ್ರಾಪ್ತೆಯ ಪ್ರತಿರೋಧದ ನಡುವೆಯೂ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದರಿಂದ ಪ್ರಾಣಭಯಕ್ಕೆ ಹೆದರಿ ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದಾಗಿ ಅಪ್ರಾಪ್ತೆ ಪೋಷಕರಿಗೆ ತಿಳಿಸಿದ್ದಾಳೆ.&lt;/p&gt;&lt;h3&gt;&lt;strong&gt;ಜಿಲ್ಲಾ ಜೈಲಿಗೆ ಆರೋಪಿ&lt;/strong&gt;&lt;/h3&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತೆಯ ತಂದೆ ನೀಡಿದ ದೂರು ಆಧರಿಸಿ ಜಗಳೂರು ಪೊಲೀಸ್ ಠಾಣೆ ಇನ್&zwnj;ಸ್ಪೆಕ್ಟರ್ ನೇತೃತ್ವದ ತಂಡ ಭಾನುವಾರ ಕಾರ್ಯಾಚರಣೆ ನಡೆಸಿ ಆರೋಪಿ ಮಂಜಣ್ಣನನ್ನು ಬಂಧಿಸಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ದಾವಣಗೆರೆ ಜಿಲ್ಲಾ ಜೈಲಿಗೆ ಕಳುಹಿಸಲಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/rape-of-minor-on-the-pretext-of-marriage-tractor-driver-arrested-jagaluru-davanagere-mrq/articleshow-sbahnbz"/>
        </item>
        <item>
            <title><![CDATA[ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಟೀಕಿಸೋದು ಖರ್ಗೆಗೆ ಶೋಭೆ ತರೋದಿಲ್ಲ: ಎಂ.ಪಿ.ರೇಣುಕಾಚಾರ್ಯ]]></title>
            <link>https://kannada.asianetnews.com/karnataka-districts/mp-renukacharya-slams-priyank-kharge-over-sir-voter-list-remarks-gvd/articleshow-tt8xqrv</link>
            <guid isPermaLink="true">https://kannada.asianetnews.com/karnataka-districts/mp-renukacharya-slams-priyank-kharge-over-sir-voter-list-remarks-gvd/articleshow-tt8xqrv</guid>
            <pubDate>Tue, 19 May 2026 00:26:29 +0530</pubDate>
            <description><![CDATA[&lt;p&gt;ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಜವಾಬ್ದಾರಿಯುತ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kry39hsvp3k16cygbtpw4rey,imgname-bb-1779126552379.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊನ್ನಾಳಿ (ಮೇ.19): &lt;/strong&gt;ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಜವಾಬ್ದಾರಿಯುತ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.&lt;/p&gt;&lt;p&gt;ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಸರಿಸುಮಾರು 90 ಲಕ್ಷ ನಕಲಿ ಮಾತದಾರರನ್ನು ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್&zwnj;ಐಆರ್) ಫಲವಾಗಿ ಕೈಬಿಡಲಾಗಿದೆ. ಇದರ ಪರಿಣಾಮವಾಗಿ ಸಂವಿಧಾನದ ಆಶಯದಂತೆ ಈಗ ನೈಜ ಮತದಾರರಿಂದಾಗಿ ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಗಿದೆ. ಇದು ಕಾಂಗ್ರೆಸ್&zwnj;ಗೆ ಸಹಿಸಲಾಗುತ್ತಿಲ್ಲ. ಈ ಕಾರಣಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.&lt;/p&gt;&lt;p&gt;ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಎನ್ನುವ ಕಾರಣದಿಂದ ಪ್ರಿಯಾಂಕ್&zwnj; ಕಾಂಗ್ರೆಸ್&zwnj;ನಲ್ಲಿ ಪ್ರಶ್ನಾತೀತ ನಾಯಕರಂತೆ ವರ್ತಿಸುತ್ತಿದ್ದಾರೆ. ಆಪರೇಷನ್ ಸಿಂದೂರ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಅನಗತ್ಯ ಮಾತನಾಡುವುದು ಸರಿಯಲ್ಲ. ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಬೆಲೆ ಏರಿಕೆಯಂತಹ ಪ್ರಸಂಗವನ್ನು ದೇಶ ಏದುರಿಸಬೇಕಾಗಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಹಣ ಅಪವ್ಯಯ&lt;/strong&gt;&lt;/h2&gt;&lt;p&gt;ಕಳೆದ 3 ವರ್ಷಗಳಿಂದ ಬಡವರಿಗೆ ಮನೆಗಳನ್ನು ಹಂಚಿಲ್ಲ, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಇದೀಗ ಕಾಂಗ್ರೆಸ್&zwnj;ನವರಿಗೆ ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿ ಕಾಡಲಾರಂಭಿಸಿದೆ. ಈ ಹಿನ್ನೆಲೆ ತಮ್ಮ ಸರ್ಕಾರದ ವೈಫಲ್ಯತೆಗಳನ್ನು ಮರೆಮಾಚಲು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾ ಕಾಲಕಳೆಯುತ್ತಿದ್ದಾರೆ. ಸರ್ಕಾರದ ಸಾಧನ ಸಮಾವೇಶಗಳನ್ನು ಮಾಡುತ್ತಾ ಜನರ ಹಣ ಅಪವ್ಯಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.&lt;/p&gt;&lt;p&gt;ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ, ಪುದುಚೇರಿ, ಅಸ್ಸಾಂ, ತಮಿಳುನಾಡು ರಾಜ್ಯಗಳಲ್ಲಿ ಜನ ಸಂಪೂರ್ಣವಾಗಿ ಕಾಂಗ್ರೆಸ್ ಅನ್ನು ಧಿಕ್ಕರಿಸಿದ್ದಾರೆ. ಕೊಲ್ಲಿ ಯುದ್ಧದ ಪರಿಣಾಮಗಳನ್ನು ಅಂತರ ರಾಷ್ಟ್ರೀಯಮಟ್ಟದಲ್ಲಿ ಜನ ಎದುರಿಸುತ್ತಿದ್ದಾರೆ. ಆದರೆ, ಭಾರತದಲ್ಲಿ ನರೇಂದ್ರ ಮೋದಿಯವರು ತಮ್ಮ ಚಾಣಾಕ್ಷ ಆಡಳಿತ ವೈಖರಿಯಿಂದ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ ಎಂದರು.&lt;/p&gt;&lt;p&gt;ಪ್ರಸ್ತುತ ಕಾಂಗ್ರೆಸ್&zwnj;ನಲ್ಲಿ ಎರಡು-ಮೂರು ಸಚಿವರು ಪೈಪೋಟಿಗೆ ಬಿದ್ದವರಂತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಹೊರತು, ಅವರ ಖಾತೆಗಳ ಬಗ್ಗೆ, ಅಭಿವೃದ್ಧಿ ಬಗ್ಗೆ ಕಿಂಚ್ಚಿತ್ತೂ ಗಮನಹರಿಸುತ್ತಿಲ್ಲ.- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-renukacharya-slams-priyank-kharge-over-sir-voter-list-remarks-gvd/articleshow-tt8xqrv"/>
        </item>
        <item>
            <title><![CDATA[ಜಮೀರ್-ಸಿರಾಜ್ ಆಡಿಯೋದಲ್ಲಿ ಬಿಜೆಪಿ ಅಭ್ಯರ್ಥಿ ಹೆಸರು: ಸ್ಫೋಟಕ ಟ್ವಿಸ್ಟ್ ಕೊಟ್ಟ ಶ್ರೀನಿವಾಸ ದಾಸಕರಿಯಪ್ಪ]]></title>
            <link>https://kannada.asianetnews.com/karnataka-districts/zameer-ahmed-mohammad-siraj-viral-audio-controversy-srinivas-dasakariyappa-reaction-sat/articleshow-u2a6z5l</link>
            <guid isPermaLink="true">https://kannada.asianetnews.com/karnataka-districts/zameer-ahmed-mohammad-siraj-viral-audio-controversy-srinivas-dasakariyappa-reaction-sat/articleshow-u2a6z5l</guid>
            <pubDate>Tue, 02 Jun 2026 19:36:09 +0530</pubDate>
            <description><![CDATA[&lt;p&gt;ದಾವಣಗೆರೆ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ವೈರಲ್ ಆಡಿಯೋ ಕುರಿತು ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಪ್ರತಿಕ್ರಿಯಿಸಿದ್ದಾರೆ. ಆಡಿಯೋದಲ್ಲಿನ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಅವರು, ಅದೊಂದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km35yzfz3520ddfxgb8whhag,imgname-screenshot-2026-03-19-181406-1773928414719.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.02): ದಾ&lt;/strong&gt;ವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಜಿಲ್ಲೆಯ ರಾಜಕೀಯ ವಲಯದಲ್ಲಿ ಈಗ ಜಮೀರ್ ಅಹ್ಮದ್ ಮತ್ತು ಮೊಹಮ್ಮದ್ ಸಿರಾಜ್ ನಡುವಿನದ್ದು ಎನ್ನಲಾದ ಆಡಿಯೋ ಸಂಭಾಷಣೆ ಭಾರಿ ಸಂಚಲನ ಮೂಡಿಸಿದೆ. ಈ ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ನನ್ನ ಬಗ್ಗೆ ಮಾತನಾಡಿರುವುದು ಸತ್ಯಕ್ಕೆ ದೂರವಾದದ್ದು:&lt;/strong&gt;&lt;/h3&gt;&lt;p&gt;ದಾವಣಗೆರೆಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, 'ವೈರಲ್ ಆಗಿರುವ ಆಡಿಯೋದಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆದರೆ ನನ್ನ ಬಗ್ಗೆ ಅಲ್ಲಿ ಮಾತನಾಡಿರುವ ವಿಚಾರಗಳು ಸತ್ಯಕ್ಕೆ ಮೈಲಿ ದೂರದಲ್ಲಿವೆ. ಮೊಹಮ್ಮದ್ ಸಿರಾಜ್ ಅವರು ಸುಮಾರು ಒಂದು ವರ್ಷದ ಹಿಂದೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಸಿಕ್ಕಾಗ ನಮಸ್ಕಾರ ಹೇಳಿದ್ದರು. ಅದು ಬಿಟ್ಟರೆ ಚುನಾವಣೆ ವೇಳೆಯಲ್ಲಿ ಅವರು ನನಗೆ ಎಲ್ಲಿಯೂ ಸಿಕ್ಕಿಲ್ಲ. ಇನ್ನು ಜಮೀರ್ ಅಹ್ಮದ್ ಅವರ ಪರಿಚಯವೇ ನನಗೆ ಇಲ್ಲ' ಎಂದು ಆಡಿಯೋ ಸಂಭಾಷಣೆಯನ್ನು ತಳ್ಳಿಹಾಕಿದರು.&lt;/p&gt;&lt;h2&gt;&lt;strong&gt;ಒಪ್ಪಂದ ಮಾಡಿಕೊಂಡಿದ್ದರೆ ನಾವು ಗೆಲ್ಲುತ್ತಿದ್ದೆವು:&lt;/strong&gt;&lt;/h2&gt;&lt;p&gt;ಆಡಿಯೋದಲ್ಲಿ ಒಪ್ಪಂದದ ಕುರಿತು ಕೇಳಿಬರುತ್ತಿರುವ ಆರೋಪಗಳಿಗೆ ಕಿಡಿಕಾರಿದ ಅವರು, 'ಒಂದು ವೇಳೆ ನಾವು ಯಾರೊಂದಿಗಾದರೂ ಒಪ್ಪಂದ ಮಾಡಿಕೊಂಡಿದ್ದರೆ ಇವತ್ತು ನಾವೇ ಗೆಲ್ಲುತ್ತಿದ್ದೆವು. ನಾನೊಬ್ಬ ಬಡವನ ಮಗನಾಗಿ ಚುನಾವಣೆ ಮಾಡಿದ್ದೇನೆ. ದಾವಣಗೆರೆಯ ಜನ ನನಗೆ 64 ಸಾವಿರ ಮತಗಳನ್ನು ನೀಡಿದ್ದಾರೆ. ಅವರು ಹೇಗೆ ಚುನಾವಣೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಣ, ಹೆಂಡ ಮತ್ತು ಸೀರೆ ಹಂಚಿ ಚುನಾವಣೆ ಗೆದ್ದಿದ್ದಾರೆ' ಎಂದು ಎದುರಾಳಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.&lt;/p&gt;&lt;h3&gt;&lt;strong&gt;ಕಾಲು ಬಿದ್ದಿದ್ದರೆ ಅದು ವೈರಲ್ ಆಗುತ್ತಿರಲಿಲ್ಲವೇ?&lt;/strong&gt;&lt;/h3&gt;&lt;p&gt;ಆಡಿಯೋದಲ್ಲಿ ಶ್ರೀನಿವಾಸ ದಾಸಕರಿಯಪ್ಪ ನನಗೆ ಕಾಲು ಬಿದ್ದರು ಎಂಬ ಮಾತಿನ ಬಗ್ಗೆ ಪ್ರಶ್ನಿಸಿದ ಅವರು, 'ನಾನು ಯಾರ ಕಾಲಿಗೂ ಬಿದ್ದಿಲ್ಲ. ಒಂದು ವೇಳೆ ಸಿರಾಜ್ ಅವರ ಕಾಲು ಬಿದ್ದಿದ್ದರೆ ಅದು ಅಂದೇ ಫೋಟೋ ಅಥವಾ ವಿಡಿಯೋ ಮೂಲಕ ವೈರಲ್ ಆಗುತ್ತಿರಲಿಲ್ಲವೇ? ಇದೆಲ್ಲವೂ ಸುಳ್ಳು ಸುದ್ದಿ' ಎಂದರು. ಅಲ್ಲದೆ, ಮುಸ್ಲಿಂ ಮತಗಳ ಧ್ರುವೀಕರಣದ ಬಗ್ಗೆ ಮಾತನಾಡುತ್ತಾ, 'ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಅವರು ಎಸ್&zwnj;ಡಿಪಿಐಗೆ ಮತ ಹಾಕಿದ್ದಾರೆಯೇ ಹೊರತು, ಬಿಜೆಪಿಯನ್ನು ಗೆಲ್ಲಿಸಬೇಕು ಎಂಬ ಉದ್ದೇಶದಿಂದ ಅಲ್ಲ' ಎಂದು ವಿಶ್ಲೇಷಿಸಿದರು.&lt;/p&gt;&lt;h2&gt;&lt;strong&gt;ಎಐ (AI) ಸೃಷ್ಟಿ ಬಗ್ಗೆ ತನಿಖೆಯಾಗಲಿ:&lt;/strong&gt;&lt;/h2&gt;&lt;p&gt;ಮೊಹಮ್ಮದ್ ಸಿರಾಜ್ ಅವರು ಈ ಆಡಿಯೋ 'ಎಐ ಸೃಷ್ಟಿ' (Deepfake) ಎಂದು ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ದಾಸಕರಿಯಪ್ಪ, 'ಈ ಬಗ್ಗೆ ಕೂಲಂಕುಷ ತನಿಖೆಯಾಗಲಿ. ಅಸಲಿಗೆ ಈ ಆಡಿಯೋವನ್ನು ಯಾರು ಹೊರಗೆ ಬಿಟ್ಟಿದ್ದಾರೆ ಎಂಬುದು ಪತ್ತೆಯಾಗಬೇಕು. ಅವರು ನನಗೇಕೆ ಫೋನ್ ಮಾಡುತ್ತಾರೆ ಮತ್ತು ನಾನು ಅವರ ಹತ್ತಿರ ಮಾತನಾಡುವ ಅಗತ್ಯವೇನಿದೆ? ಸತ್ಯಾಸತ್ಯತೆ ಹೊರಬರಲು ಉನ್ನತ ಮಟ್ಟದ ತನಿಖೆ ಅಗತ್ಯ' ಎಂದು ಒತ್ತಾಯಿಸಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಈ ವೈರಲ್ ಆಡಿಯೋ ದಾವಣಗೆರೆ ರಾಜಕೀಯದಲ್ಲಿ ಹೊಸ ಆಯಾಮ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>davanagere</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/zameer-ahmed-mohammad-siraj-viral-audio-controversy-srinivas-dasakariyappa-reaction-sat/articleshow-u2a6z5l"/>
        </item>
        <item>
            <title><![CDATA[ಮಚ್ಚಿನಿಂದ ಕೊಚ್ಚಿ ದಾವಣಗೆರೆಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ]]></title>
            <link>https://kannada.asianetnews.com/karnataka-districts/ex-gram-panchayat-member-hacked-to-death-in-davanagere-police-probe-underway/articleshow-xg57rh0</link>
            <guid isPermaLink="true">https://kannada.asianetnews.com/karnataka-districts/ex-gram-panchayat-member-hacked-to-death-in-davanagere-police-probe-underway/articleshow-xg57rh0</guid>
            <pubDate>Sat, 16 May 2026 08:47:11 +0530</pubDate>
            <description><![CDATA[&lt;p&gt;ಯುವತಿ ವಿಚಾರವಾಗಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಪ್ರಕರಣದಲ್ಲಿ ಯುವತಿ ವಿಚಾರ ಮುನ್ನಲೆಗೆ ಬಂದಿದ್ದು, ಪೊಲೀಸ್ ತನಿಖೆ ಆರಂಭಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kaks678j5ve3ckp96xgg11zz,imgname-ambulance-1763748027666.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮೇ.16)&lt;/strong&gt; ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರು ಕ್ಯಾಂಪ್ ಬಳಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆಯಾಗಿದೆ. ತಡ ರಾತ್ರಿ ಅಪ್ಪ ಹಾಗೂ ಮಗ ಇಬ್ಬರು ಸೇರಿ 43ರ ಹರೆಯದ ಆತಾಉಲ್ಲಾ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಹತ್ಯೆ ಬಳಿಕ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಯುವಚಿ ವಿಚಾರವಾಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ನಲ್ಲೂರ್ ಕ್ಯಾಂಪ್&zwnj;ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.&lt;/p&gt;&lt;p&gt;ಆತಾಉಲ್ಲಾ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ. ಯುವತಿ ವಿಚಾರವಾಗಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಾದ ದಸ್ತಗಿರ್ ಹಾಗೂ ಜಬಿಉಲ್ಲಾ ಹಲವು ಆತಾಉಲ್ಲಾಗೆ ವಾರ್ನಿಂಗ್ ಮಾಡಿದ್ದರು ಎನ್ನಲಾಗಿದೆ. ಯುವತಿ ವಿಚಾರವಾಗಿ ಜಗಳವೂ ನಡೆದಿತ್ತು ಅನ್ನೋ ಮಾತುಗಳು ಕೇಳಿಬಂದಿದೆ. ಎಚ್ಚರಿಕೆ ಬಳಿಕವೂ ಆತಾಉಲ್ಲಾ ತನ್ನ ಬುದ್ದಿ ಬಿಟ್ಟಿರಲಿಲ್ಲ. ಹೀಗಾಗಿ ನಿನ್ನೆ (ಮೇ.15) ತಡ ರಾತ್ರಿ ದಸ್ತಗಿರ್ ಹಾಗೂ ಜಬಿಉಲ್ಲಾ ಇಬ್ಬರು ಸೇರಿ ಮಾರಾಕಾಸ್ತ್ರಗಳ ಮೂಲಕ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.&lt;/p&gt;&lt;h2&gt;ಹಿಂಬದಿಯಿಂದ ಬಂದು ದಾಳಿ&lt;/h2&gt;&lt;p&gt;ನಲ್ಲೂರ್ ಕ್ಯಾಂಪ್ ಬಳಿ ಇರುವ ಬೇಕರಿ ಬಳಿ ಆತಾಉಲ್ಲಾ ನಿಂತಿದ್ದ. ರಾತ್ರಿ ವೇಳೆ ಕೆಲ ಸ್ನೇಹಿತರು, ಆಪ್ತರ ಜೊತೆ ಮಾತುಕತೆ ನಡೆಸಿದ್ದ ಅತಾಉಲ್ಲಾ ಬಳಿಕ ಬೇಕರಿ ಬಳಿ ಬಂದಿು ನಿಂತಿದ್ದ. ಬೇಕರಿಯಿಂದ ಮನೆಗೆ ತೆರಳಲು ಸಿದ್ಧವಾಗುತ್ತಿದ್ದಂತೆ ದಸ್ತಗಿರ್ ಹಾಗೂ ಜಬಿಉಲ್ಲಾ ಹಿಂಬದಿಯಿಂದ ದಾಳಿ ಮಾಡಿದ್ದಾರೆ. ಮಚ್ಚಿನಿಂದ ದಾಳಿ ಮಾಡಿದ್ದಾರೆ, ಭೀಕರ ದಾಳಿಯಲ್ಲಿ ಆತಾಉಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>davanagere</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/ex-gram-panchayat-member-hacked-to-death-in-davanagere-police-probe-underway/articleshow-xg57rh0"/>
        </item>
        <item>
            <title><![CDATA[ಬಿಜೆಪಿಗೆ SDPI ಸಹಕಾರ ಆರೋಪ; ಕಾಂಗ್ರೆಸ್ ನಾಯಕರಿಗೆ ಅಫ್ಸರ್ ಕೊಡ್ಲಿಪೇಟೆ ಎಚ್ಚರಿಕೆ!]]></title>
            <link>https://kannada.asianetnews.com/politics/wont-tolerate-misinformation-sdpi-leader-afsar-kodlipete-warns-congress-davanagere-by-election-row-rav/articleshow-z92s2h4</link>
            <guid isPermaLink="true">https://kannada.asianetnews.com/politics/wont-tolerate-misinformation-sdpi-leader-afsar-kodlipete-warns-congress-davanagere-by-election-row-rav/articleshow-z92s2h4</guid>
            <pubDate>Thu, 04 Jun 2026 08:00:26 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ 19 ಸಾವಿರಕ್ಕೂ ಅಧಿಕ ಮತ ಪಡೆದ ಎಸ್&zwnj;ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ, ತಮ್ಮ ಪಕ್ಷ ಬಿಜೆಪಿಗೆ ಸಹಕರಿಸಿದೆ ಮತ್ತು ಹಣಬಲವಿಲ್ಲದೆ ಇಷ್ಟು ಮತ ಹೇಗೆ ಬಂದವು ಎಂಬ ಕಾಂಗ್ರೆಸ್ ನಾಯಕರ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt874zhj92eacpt1kygzs3g7,imgname-----------------------2026-06-04t075352.436-1780539883057.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.4)&lt;/strong&gt;: ದಾವಣಗೆರೆ ದಕ್ಷಿಣ(Davanagere south) ಕ್ಷೇತ್ರದ ಉಪ ಚುನಾವಣೆ(By-election 2026)ಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸಿ ಬಂದರೂ, 19 ಸಾವಿರಕ್ಕೂ ಅಧಿಕ ಮತ ಪಡೆದ ಎಸ್&zwnj;ಡಿಪಿಐ ಅಭ್ಯರ್ಥಿ(SDPI Candidate) ಜನರ ಪ್ರೀತಿಗೆ ಪಾತ್ರವಾಗಿರುವುದು ಕಾಂಗ್ರೆಸ್ ನಾಯಕರಿಗೆ ಅಸಹನೀಯವಾಗಿದೆ ಎಂದು ಎಸ್&zwnj;ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ತಿರುಗೇಟು ನೀಡಿದ್ದಾರೆ.&lt;/p&gt;&lt;p&gt;ಹಣ ಇಲ್ಲದವನಿಗೆ ಇಷ್ಟು ಮತ ಹೇಗೆ ಬಂದವು, ಎಸ್&zwnj;ಡಿಪಿಐ ಇಲ್ಲಿ ಬಿಜೆಪಿಗೆ ಸಹಕರಿಸಲು ಸ್ಪರ್ಧಿಸಿದೆಯೆಂಬ ಕಾಂಗ್ರೆಸ್ಸಿನ ನಾಯಕರ ಹೇಳಿಕೆಗಳು ಕ್ಷೇತ್ರದ ಜನರ ತೀರ್ಪನ್ನೇ ಅವಮಾನಿಸಿವೆ. ಎಸ್&zwnj;ಡಿಪಿಐ ವಿರುದ್ಧ ಕಾಂಗ್ರೆಸ್ಸಿನ ಅಧಿಕಾರಸ್ಥರು, ಮುಖಂಡರ ಇಂತಹ ಅಪಪ್ರಚಾರಗಳನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.&lt;/p&gt;&lt;h2&gt;ನಮ್ಮ ಬಳಿ ಹಣ ಬಲ ಇರಲಿಲ್ಲ, ಜನರ ವಿಶ್ವಾಸ ಇತ್ತು&lt;/h2&gt;&lt;p&gt;ರಾಜಕೀಯವನ್ನು ಹಣದಿಂದಲೇ ಅಳೆಯುವ ಮನೋಭಾವವೇ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ನಮ್ಮ ಬಳಿ ಹಣ ಬಲ ಇರಲಿಲ್ಲ. ಆದರೆ, ಜನರ ವಿಶ್ವಾಸ ಮತ್ತು ಸ್ವಾಭಿಮಾನವೇ ನಮ್ಮ ಶಕ್ತಿಯಾಗಿದೆ. 19 ಸಾವಿರ ಮತಗಳನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತಾವು ಪಡೆದಿದ್ದು, ಅವು ಖರೀದಿಸಿದ ಮತಗಳಲ್ಲ. ಜನರು ನೀಡಿದ ಸ್ವಾಭಿಮಾನದ ಮತಗಳು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಎಸ್&zwnj;ಡಿಪಿಐ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಸಹಕರಿಸಿದೆಯೆಂಬ ಆರೋಪವು ಸಂಪೂರ್ಣ ಆಧಾರರಹಿತ ಹಾಗೂ ಹಾಸ್ಯಾಸ್ಪದ. ಎಸ್&zwnj;ಡಿಪಿಐ ಪ್ರತಿನಿತ್ಯವೂ ಬಿಜೆಪಿ ಹಾಗೂ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಯಾವುದೇ ರಾಜಿ ಇಲ್ಲದೇ, ಹೋರಾಟ ಮಾಡುವಂತಹ ರಾಜಕೀಯ ಪಕ್ಷವೆಂದು ಇಡೀ ದೇಶದಲ್ಲೇ ಗುರುತಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಂಡುವ ಕಾಂಗ್ರೆಸ್ ಪಕ್ಷ ನಮ್ಮ ಮೇಲೆ ಆರೋಪ ಮಾಡಲು ಯಾವ ನೈತಿಕತೆ ಉಳಿಸಿಕೊಂಡಿದೆ ಎಂದು ಅವರು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ನಾವು ಸಂವಿಧಾನ, ಸಾಮಾಜಿಕ ನ್ಯಾಯ ಮತ್ತು ಅಹಿಂದ ವರ್ಗಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಿತಾಂಶವು ಪರಂಪರಾಗತ ಪಕ್ಷಗಳ ವಿರುದ್ಧ ಜನರ ಅಸಮಾಧಾನವನ್ನು ತೋರಿಸಿದೆ. ಕಾಂಗ್ರೆಸ್ ನಾಯಕರು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುವ ಬದಲು ತಮ್ಮ ಆತ್ಮ ಪರಿಶೀಲನೆ ಮಾಡಿಕೊಳ್ಳಬೇಕು. ದಾವಣಗೆರೆ ದಕ್ಷಿಣ ಕ್ಷೇತ್ರದ ಸ್ವಾಭಿಮಾನಿ ಮತದಾರರಿಗೆ ಅಭಿನಂದಿಸುತ್ತೇವೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ದಕ್ಷಿಣ ಕ್ಷೇತ್ರದ ಜನರ ಬೆಂಬಲವೇ ನಮ್ಮ ಶಕ್ತಿ. ನಿಮ್ಮ ಹಕ್ಕುಗಳಿಗಾಗಿ ನಮ್ಮ ಹೋರಾಟ ನಡೆಯುತ್ತದೆ. ನಮ್ಮ ವಿರುದ್ಧ ಕಾಂಗ್ರೆಸ್ಸಿನ ಮಾಜಿ ಸಚಿವ ಎಸ್&zwnj;.ಎಸ್&zwnj;. ಮಲ್ಲಿಕಾರ್ಜುನ ಸೇರಿದಂತೆ ಕೆಲವು ಮುಖಂಡರು ಮಾಡಿರುವ ಆರೋಪ ಕಾಂಗ್ರೆಸ್ಸಿಗರ ಮನಸ್ಥಿತಿಯನ್ನು ತೋರಿಸುತ್ತದೆ. ಇಲ್ಲಿ 19 ಸಾವಿರಕ್ಕೂ ಅಧಿಕ ಮತ ಪಡೆದ ಎಸ್&zwnj;ಡಿಪಿಐ ಅಭ್ಯರ್ಥಿ ಜನರ ಪ್ರೀತಿಗೆ ಪಾತ್ರವಾಗಿರುವುದು ಕಾಂಗ್ರೆಸ್ಸಿಗರಿಗೆ ಸಹಿಸಲಾಗುತ್ತಿಲ್ಲ ಎಂದು ಎಸ್&zwnj;ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/wont-tolerate-misinformation-sdpi-leader-afsar-kodlipete-warns-congress-davanagere-by-election-row-rav/articleshow-z92s2h4"/>
        </item>
    </channel>
</rss>
