<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 26 Jun 2026 16:36:24 +0530</lastBuildDate>
        <atom:link href="https://kannada.asianetnews.com/rss/davanagere" rel="self" type="application/rss+xml"/>
        <item>
            <title><![CDATA[ದಾವಣಗೆರೆ: ರೈಫಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಡಿವೈಎಸ್‌ಪಿ ದುರಂತ ಅಂತ್ಯ!]]></title>
            <link>https://kannada.asianetnews.com/crime/davangere-retired-dysp-ends-in-tragedy-after-shooting-himself-with-rifle/articleshow-ks6obb4</link>
            <guid isPermaLink="true">https://kannada.asianetnews.com/crime/davangere-retired-dysp-ends-in-tragedy-after-shooting-himself-with-rifle/articleshow-ks6obb4</guid>
            <pubDate>Sat, 29 Nov 2025 19:46:54 +0530</pubDate>
            <description><![CDATA[&lt;p&gt;ದಾವಣಗೆರೆಯ ಕೆಟಿಜೆ ನಗರದಲ್ಲಿ, ನಿವೃತ್ತ ಡಿವೈಎಸ್&zwnj;ಪಿ ಹೆಚ್.ವೈ. ತುರಾಯಿ (70) ಅವರು ತಮ್ಮ ವೈಯಕ್ತಿಕ ರೈಫಲ್&zwnj;ನಿಂದ ಗುಂಡು ಹಾರಿಸಿಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. 2014ರಲ್ಲಿ ನಿವೃತ್ತರಾಗಿದ್ದ ಅವರ ಈ ದುರಂತ ಅಂತ್ಯಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kb7zfjter44gn82n33jks6q9,imgname-----------------------2025-11-29t192225.005-1764425714510.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ(ನ.29):&lt;/strong&gt; ಇತ್ತೀಚೆಗೆ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಆತ್ಮ೧ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಗಳ ನಡುವೆಯೇ, ದಾವಣಗೆರೆಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ.&lt;/p&gt;&lt;h2&gt;ವೈಯಕ್ತಿ ರೈಫಲ್&zwnj;ನಿಂದ ಗುಂಡು:&lt;/h2&gt;&lt;p&gt;ನಗರದ ಕೆಟಿಜೆ ನಗರದ ನಿವಾಸಿ ಮತ್ತು ನಿವೃತ್ತ ಡಿವೈಎಸ್&zwnj;ಪಿ ಹೆಚ್.ವೈ. ತುರಾಯಿ (70) ಅವರು ತಮ್ಮ ವೈಯಕ್ತಿಕ ರೈಫಲ್&zwnj;ನಿಂದ ಗುಂಡು ಹಾರಿಸಿಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. 2014 ರಲ್ಲಿ ಪೊಲೀಸ್ ಸೇವೆಯಿಂದ ನಿವೃತ್ತಿ ಹೊಂದಿದ್ದ ತುರಾಯಿ ಅವರು, ತಮ್ಮದೇ ಮನೆಯಲ್ಲಿ ಈ ದುರಂತಕ್ಕೆ ಶರಣಾಗಿದ್ದಾರೆ.&lt;/p&gt;&lt;h3&gt;ಮಗ ಮೇಲ್ಮಹಡಿಯಲ್ಲಿದ್ದಾಗ ನಡೆದ ದುರಂತ:&lt;/h3&gt;&lt;p&gt;ಘಟನೆ ನಡೆದ ಸಂದರ್ಭದಲ್ಲಿ ಮೃತ ಅಧಿಕಾರಿಯ ಮಗ ಮನೆಯ ಮೇಲ್ಮಹಡಿಯಲ್ಲಿಯೇ ಇದ್ದರು ಎಂದು ತಿಳಿದುಬಂದಿದೆ. ಆದರೆ, ತುರಾಯಿ ಅವರ ಈ ದಿಢೀರ್ ಆತ್ಮ೧ಹತ್ಯೆಗೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಕುಟುಂಬ ಅಥವಾ ಇಲಾಖಾ ಒತ್ತಡದಂತಹ ಯಾವುದೇ ಅಂಶಗಳು ಸಾವಿಗೆ ಕಾರಣವೇ ಎಂಬುದರ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.&amp;nbsp;&lt;/p&gt;&lt;p&gt;ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಅಧಿಕಾರಿಯೊಬ್ಬರು ರೈಫಲ್ ಬಳಸಿ ಆತ್ಮ೧ಹತ್ಯೆ ಮಾಡಿಕೊಂಡಿರುವುದು ಪೊಲೀಸ್ ವಲಯದಲ್ಲಿ ತೀವ್ರ ಆಘಾತ ಮತ್ತು ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/davangere-retired-dysp-ends-in-tragedy-after-shooting-himself-with-rifle/articleshow-ks6obb4"/>
        </item>
        <item>
            <title><![CDATA[Harihara: ಹಿಂದೂಗಳ ಆರಾಧ್ಯ ದೈವ ಅಯೋಧ್ಯಾ ರಾಮಮಂದಿರ ಸ್ಫೋಟಕ್ಕೆ ಸಂಚು! ಶಂಕಿತ ಉಗ್ರನ ಬಗ್ಗೆ ಪೊಲೀಸರಿಂದ ಸ್ಫೋಟಕ ಮಾಹಿತಿ]]></title>
            <link>https://kannada.asianetnews.com/karnataka-districts/davanagere-suspected-terrorist-arrested-in-harihar-ayodhya-blast-mystery-revealed-rav/articleshow-0b9wlq8</link>
            <guid isPermaLink="true">https://kannada.asianetnews.com/karnataka-districts/davanagere-suspected-terrorist-arrested-in-harihar-ayodhya-blast-mystery-revealed-rav/articleshow-0b9wlq8</guid>
            <pubDate>Thu, 25 Jun 2026 06:17:52 +0530</pubDate>
            <description><![CDATA[&lt;p&gt;ಹರಿಹರ(Harihara)ದ ಬನ್ನಿಕೋಡಿನಲ್ಲಿ ಮಂಗಳವಾರ ಬಂಧಿಸಲಾದ ಉತ್ತರ ಪ್ರದೇಶ(Uttarapradesh) ಮೂಲದ ಶಂಕಿತ ಉಗ್ರ ಸೋಹೆಲ್&zwnj;(Suspected terrorist Sohail) (20) ವಿಚಾರಣೆ ವೇಳೆ ದೇಶವನ್ನೇ ಬೆಚ್ಚಿ ಬೀಳಿಸುವಂತಹ ಸ್ಫೋಟಕ ಮಾಹಿತಿ ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvy3k3fz1zxbjw1a6mmsx9xk,imgname-----------------------2026-06-25t060937.321-1782348090879.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಹರಿಹರದ ಬನ್ನಿಕೋಡಿನಲ್ಲಿ ಮಂಗಳವಾರ ಉತ್ತರಪ್ರದೇಶದ ಸೋಹೆಲ್&zwnj; (20) ಎಂಬಾತನ ಬಂಧನ&lt;/li&gt; &lt;li&gt;ಈತನ ಮೊಬೈಲ್&zwnj;ನಲ್ಲಿ ಹಿಂದಿ-ಉರ್ದು ಮಿಶ್ರಿತ ಆಡಿಯೋ, ಮೆಸೇಜ್&zwnj;ಗಳು, ಉಗ್ರರ ಚಿತ್ರಗಳು ಪತ್ತೆ&lt;/li&gt; &lt;li&gt;ಪಾಕಿಸ್ತಾನದ ರಾಣಾ ಎಂಬಾತನ ಜತೆ ಸಂವಹನ. ಅಯೋಧ್ಯೆ ಮಂದಿರ ಸ್ಫೋಟಿಸುವ ಇಂಗಿತ&lt;/li&gt; &lt;li&gt;ಪಾಕಿಸ್ತಾನದ ಹಲವು ಉಗ್ರಗಾಮಿ ಸಂಘಟನೆಗಳ ವಾಟ್ಸಾಪ್&zwnj; ಗ್ರೂಪ್&zwnj;ನಲ್ಲಿ ಸಕ್ರಿಯನಾಗಿದ್ದ ಈತ&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ದಾವಣಗೆರೆ (ಜೂ.25): &lt;/strong&gt;ಹರಿಹರ(Harihara)ದ ಬನ್ನಿಕೋಡಿನಲ್ಲಿ ಮಂಗಳವಾರ ಬಂಧಿಸಲಾದ ಉತ್ತರ ಪ್ರದೇಶ(Uttarapradesh) ಮೂಲದ ಶಂಕಿತ ಉಗ್ರ ಸೋಹೆಲ್&zwnj;(Suspected terrorist Sohail) (20) ವಿಚಾರಣೆ ವೇಳೆ ದೇಶವನ್ನೇ ಬೆಚ್ಚಿ ಬೀಳಿಸುವಂತಹ ಸ್ಫೋಟಕ ಮಾಹಿತಿ ಬಯಲಾಗಿದೆ. &lsquo;ಕೋಟ್ಯಂತರ ಹಿಂದುಗಳ ಆರಾಧ್ಯ ದೈವದ ನೆಲೆಯಾದ ಅಯೋಧ್ಯೆಯ ರಾಮಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ನಾನು ಬಯಸಿದ್ದೆ&rsquo; ಎಂದು ಈತ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.&lt;/p&gt;&lt;h2&gt;ಸುಳಿವು ನೀಡಿದ ಉಗ್ರನ ಮೊಬೈಲ್!&lt;/h2&gt;&lt;p&gt;ಉತ್ತರ ಪ್ರದೇಶದ ಸಹರಾನ್&zwnj;ಪುರ ಜಿಲ್ಲೆಯ ಲಖ್ನೋತಿ ಗ್ರಾಮದವನಾದ ಈತನ ಮೊಬೈಲ್ ಜಾಡು ಹಿಡಿದು ಹೋದ ತನಿಖಾಧಿಕಾರಿಗಳಿಗೆ ಆಘಾತಕಾರಿ ಸಂಗತಿಗಳು ದೊರೆತಿವೆ. ಹಿಂದಿ-ಉರ್ದು ಮಿಶ್ರಿತ ಆಡಿಯೋಗಳು, ಮೆಸೇಜ್&zwnj;ಗಳು, ಕೈಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದ ಫೋಟೋಗಳು, ಉಗ್ರರನ್ನು ಹೋಲುವ ಚಿತ್ರಗಳು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಿಸುವ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ, ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸುವಂತಹ ವಿಚಾರ ಹೊಂದಿದ್ದ ಬಗ್ಗೆ ಆತನ ಮೊಬೈಲ್ ಸುಳಿವು ನೀಡಿದೆ.&lt;/p&gt;&lt;h3&gt;ಪಾಕಿಸ್ತಾನದ ರಾಣಾ ಎಂಬುವವನ ಸಂಪರ್ಕದಲ್ಲಿದ್ದ ಉಗ್ರ&lt;/h3&gt;&lt;p&gt;ಪಾಕಿಸ್ತಾನ ಮೂಲದ ರಾಣಾ ಎಂಬ ವ್ಯಕ್ತಿ ಜೊತೆ ಈತ ಉರ್ದುಮಿಶ್ರಿತ ಉತ್ತರ ಪ್ರದೇಶ ಶೈಲಿಯ ಹಿಂದಿಯಲ್ಲಿ ಮಾತನಾಡಿದ್ದು, &lsquo;ನಾನು ಅಯೋಧ್ಯೆಯ ರಾಮಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ಬಯಸಿದ್ದು, ಇದಕ್ಕಾಗಿ ಸ್ಕೆಚ್&zwnj; ಹಾಕುತ್ತಿದ್ದೇನೆ&rsquo; ಎಂದು ತಿಳಿಸಿದ್ದ. ಅಲ್ಲದೆ, ದೇಶದ ರಕ್ಷಣೆ, ಭದ್ರತೆಗೆ ಧಕ್ಕೆ ತರುವಂತಹ ಹಲವು ಸಂದೇಶಗಳನ್ನು ರಾಣಾಗೆ ಕಳಿಸಿದ್ದ. ರಾಣಾ ಜೀ ಎಂಬ ಹೆಸರಿನಲ್ಲಿ ಆತನ ನಂಬರನ್ನು ಸೇವ್ ಮಾಡಿಕೊಂಡಿದ್ದ.&lt;/p&gt;&lt;p&gt;ಜೊತೆಗೆ, ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿರುವುದು ಸಹ ಮೊಬೈಲ್&zwnj;ನಲ್ಲಿ ದಾಖಲಾಗಿದೆ. ಪಾಕ್ ಮೂಲದ ಹಲವು ಉಗ್ರ ಸಂಘಟನೆಗಳ ವಾಟ್ಸಪ್&zwnj; ಗ್ರೂಪ್&zwnj;ಗಳಲ್ಲಿ ಈತ ಸಕ್ರಿಯನಾಗಿದ್ದ. ಮೆಮೊನ್&zwnj; ಆ್ಯಂಡ್ ಜುಟ್ಟೂ 333, ರಾಣಾ ಬಾಯಿ ಗ್ರೂಪ್ 333...., ವಿಐಪಿ ಪಬ್ಲಿಕ್&zwnj; ಚಾನಲ್&zwnj;ಗಳಿಗೆ ಸಬ್&zwnj;ಸ್ಕ್ರೈಬ್&zwnj; ಆಗಿದ್ದಾನೆ. ಅಲ್ಲದೆ, ಮೊಬೈಲ್&zwnj;ನಲ್ಲಿ ಹಲವಾರು ಅಪ್ಲಿಕೇಷನ್&zwnj; ಹೊಂದಿದ್ದು, ಇವುಗಳಲ್ಲಿ ಪಾಕಿಸ್ತಾನ ಮೂಲದ ಮೊಬೈಲ್ ನಂಬರ್&zwnj;ಗಳ ಜೊತೆ ಚಾಟ್&zwnj; ಮಾಡಿರುವುದು ಪತ್ತೆಯಾಗಿದೆ.&lt;/p&gt;&lt;h3&gt;ಸೋಹೆಲ್&zwnj;ಗೆ ನ್ಯಾಯಾಂಗ ಬಂಧನ:&lt;/h3&gt;&lt;p&gt;ಪೇಂಟರ್ ಕೆಲಸಗಾರನ ಹೆಸರಲ್ಲಿ ಕಳೆದ 15-20 ದಿನಗಳಿಂದ ಬನ್ನಿಕೋಡು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಈತನನ್ನು ಮಂಗಳವಾರ ಬೆಳಗಿನ ಜಾವ ಬಂಧಿಸಲಾಗಿತ್ತು. ಬುಧವಾರ ಈತನನ್ನು ತುಮಕೂರಿಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಇತ್ತೀಚೆಗಷ್ಟೇ ತುಮಕೂರಿನಲ್ಲಿ ಅಲ್ಲಾಭಕ್ಷಿ ಎಂಬಾತನನ್ನು ಬಂಧಿಸಲಾಗಿದ್ದು, ಈತನ ಪ್ರಕರಣಕ್ಕೂ, ಆತನ ಬಂಧನಕ್ಕೂ ಸಾಮ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈತನನ್ನು ತುಮಕೂರಿಗೆ ಕರೆದೊಯ್ಯಲಾಗಿತ್ತು. ಬಳಿಕ, ಹರಿಹರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ ಒಂದು ದಿನದ ನ್ಯಾಯಾಂಗ ಬಂಧ&zwnj;ನ ವಿಧಿಸಿದೆ. ಗುರುವಾರ ಮತ್ತೆ ಈತನನ್ನು ಕೋರ್ಟ್&zwnj;ಗೆ ಹಾಜರುಪಡಿಸಲಾಗುವುದು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-suspected-terrorist-arrested-in-harihar-ayodhya-blast-mystery-revealed-rav/articleshow-0b9wlq8"/>
        </item>
        <item>
            <title><![CDATA[ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಶಾಕ್: ಕೋಟಿ ಕೋಟಿ ಆಸ್ತಿ ಪತ್ತೆ, ಎಲ್ಲೆಲ್ಲಿ ದಾಳಿ?]]></title>
            <link>https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru</link>
            <guid isPermaLink="true">https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru</guid>
            <pubDate>Tue, 16 Jun 2026 09:02:10 +0530</pubDate>
            <description><![CDATA[ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಮತ್ತು ಬೆಂಗಳೂರಿನಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಈ ಕಾರ್ಯಾಚರಣೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ghne3sn58e8amfw5e7hkgzhv,imgname-karnataka-lokayukta.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಬೆಂಗಳೂರಿನಲ್ಲಿ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ, ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.&lt;/p&gt;&lt;h2&gt;&lt;strong&gt;ಚಿಕ್ಕಮಗಳೂರು&lt;/strong&gt;&lt;/h2&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿ ಎ.ಸಿ.ಎಫ್.ಶ್ರೀನಿವಾಸ್ ಅವರ ಮನೆ ಮತ್ತು ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್&zwnj;ನಲ್ಲಿರುವ ನಿವಾಸ, ಕಡೂರಿನಲ್ಲಿರುವ ಶ್ರೀನಿವಾಸ್ ಸೋದರಿ ನಿವಾಸಕ್ಕೆ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಲೋಕಾಯುಕ್ತ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.&lt;/p&gt;&lt;h3&gt;&lt;strong&gt;ದಾವಣಗೆರೆ&lt;/strong&gt;&lt;/h3&gt;&lt;p&gt;ದಾವಣಗೆರೆಯಲ್ಲಿ ಮೂವರು ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ್ ಅವರ ಸಿದ್ದವೀರಪ್ಪ ಬಡಾವಣೆಯಲ್ಲಿರೋ ಎರಡು ಮನೆ, NWKRTC ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಅವರ ಸರಸ್ವತಿ ನಗರದಲ್ಲಿ ಮನೆ, ಕೆಆರ್&zwnj;ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗುತ್ತಿದೆ. ದಾವಣಗೆರೆಯ ಶಿವಕುಮಾರ್ ಬಡಾವಣೆಯಲ್ಲಿಯ ಮನೆ, ಹರಪನಹಳ್ಳಿ ಒಂದು ಮನೆ ಮೇಲೆ ದಾಳಿ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆದಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯನಗರ ದಾವಣಗೆರೆಯಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ.&lt;/p&gt;&lt;p&gt;&lt;strong&gt;ಕಲಬುರಗಿ&lt;/strong&gt;&lt;/p&gt;&lt;p&gt;ಕಲಬುರಗಿಯಲ್ಲಿ ಪಂಚಾಯತ್ ರಾಜ್ ಇಲಾಖೆ ನಿವೃತ್ತ ಸುಪರಿಡೆಂಟ್ ಇಂಜಿನಿಯರ್ ಮಾಣಿಕ್ ಕನಕಟ್ಟಿ ಮನೆ ಸೇರಿದಂತೆ ಐದು ಕಡೆ ಮೇಲೆ ದಾಳಿ ನಡೆದಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಮನೆ, ಹುಮ್ನಾಬಾದ್ ನ ಎರಡು ಕಾಂಪ್ಲೆಂಕ್ಸ್ , ಹಳ್ಳಿಖೇಡ ಗ್ರಾಮದ ತೋಟದ ಮನೆಯ ಮೇಲೆ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಬೀದರ ಜಿಲ್ಲೆ ಹುಮನಾಬಾದನಲ್ಲಿ ಎರಡು ಕಾಂಪ್ಲೆಕ್ಸ್, ಹಳ್ಳಿ ಖೇಡನಲ್ಲಿ 20 ಎಕರೆ ತೋಟ, ಕಲಬುರಗಿಯಲ್ಲಿ ಎರಡು ಮನೆ ಸೇರಿದಂತೆ ಆರಂಭದಲ್ಲೇ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಿವೃತ ಅಧಿಕಾರಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರು:&lt;/strong&gt;&lt;/p&gt;&lt;p&gt;ಬೆಂಗಳೂರಿನ ಎರಡು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ರಾಜಣ್ಣ ಅಡಿಷನಲ್ ಡೈರೆಕ್ಟರ್ ಕರ್ನಾಟಕ ಹೌಸಿಂಗ್ ಬೋರ್ಡ್ ಮತ್ತು ಬೆಸ್ಕಾಂ ಎಇಇ ಉದಯ್ ಕುಮಾರ್ ಅವರ ಯಲಹಂಕದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ಇಬ್ಬರು ಅಧಿಕಾರಿಗಳಿಂದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದೆ.&lt;/p&gt;]]></content:encoded>
            <category>davanagere</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru"/>
        </item>
        <item>
            <title><![CDATA[ದಾವಣಗೆರೆ: ಕುಕ್ಕವಾಡ ಅರಣ್ಯದಲ್ಲಿ ಕಬ್ಬಿಣದ ಅದಿರು ದಂಧೆ ಬಯಲು! ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ನಾಲ್ವರು ಅರೆಸ್ಟ್, ಓರ್ವ ಪರಾರಿ!]]></title>
            <link>https://kannada.asianetnews.com/gallery/state/davanagere-shocked-illegal-mining-exposed-in-kukkuwada-forest-4-arrested-rav-19wyvr2</link>
            <guid isPermaLink="true">https://kannada.asianetnews.com/gallery/state/davanagere-shocked-illegal-mining-exposed-in-kukkuwada-forest-4-arrested-rav-19wyvr2</guid>
            <pubDate>Thu, 11 Jun 2026 10:41:01 +0530</pubDate>
            <description><![CDATA[&lt;p&gt;ದಾವಣಗೆರೆ ಜಿಲ್ಲೆಯ ಚನ್ನಗಿರಿ ವಲಯ ವ್ಯಾಪ್ತಿಯ ಕುಕ್ಕವಾಡ ಮೀಸಲು ಅರಣ್ಯದಲ್ಲಿ ನಡೆಯುತ್ತಿದ್ದ ಅಕ್ರಮ ಕಬ್ಬಿಣದ ಅದಿರು ದಂಧೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kttfwzkgcwhq26vhpmpz703w,imgname-whatsapp-image-2026-06-11-at-10.09.20-am--2--1781153037936.jpeg" type="image/jpeg" height="390" width="690"/>
            <content:encoded><![CDATA[&lt;p&gt;ದಾವಣಗೆರೆ ಜಿಲ್ಲೆಯ ಚನ್ನಗಿರಿ ವಲಯ ವ್ಯಾಪ್ತಿಯ ಕುಕ್ಕವಾಡ ಮೀಸಲು ಅರಣ್ಯದಲ್ಲಿ ನಡೆಯುತ್ತಿದ್ದ ಅಕ್ರಮ ಕಬ್ಬಿಣದ ಅದಿರು ದಂಧೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.&lt;/p&gt;&lt;img&gt;&lt;p&gt;ಅಕ್ರಮ ಗಣಿಗಾರಿಕೆ ಮತ್ತು ಸಾಗಾಟದಲ್ಲಿ ತೊಡಗಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನ ಬಂಧಿಸಿದ ಘಟನೆ ದಾವನಗೆರೆ ಜಿಲ್ಲೆಯ ಚನ್ನಗಿರಿ ವಲಯ ವ್ಯಾಪ್ತಿಯ ಕುಕ್ರವಾಡ ಮೀಸಲು ಅರಣ್ಯದಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಆರೋಪಿಗಳು ಮೀಸಲು ಅರಣ್ಯ ಪ್ರದೇಶದಲ್ಲೇ ಕಬ್ಬಿಣದ ಅದಿರು ಕಲ್ಲುಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಬಳಿಕ ಅವುಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಹಲವು ದಿನಗಳಿಂದ ಈ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕಾನೂನುಬಾಹಿರವಾಗಿ ಸಂಗ್ರಹಿಸಿದ ಅದಿರು ಕಲ್ಲುಗಳನ್ನು ಟ್ರ್ಯಾಕ್ಟರ್ ಮತ್ತು ಟ್ರೈಲರ್ ಮೂಲಕ ಸಾಗಿಸಿ ಮಾರಾಟ ಮಾಡಲು ಐವರು ಆರೋಪಿಗಳು ಮುಂದಾಗಿದ್ದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ನಡೆದಿದ್ದು, ಆರೋಪಿಗಳ ಯೋಜನೆ ವಿಫಲವಾಗಿದೆ.&lt;/p&gt;&lt;img&gt;&lt;p&gt;ದಾಳಿ ವೇಳೆ ಐವರ ಪೈಕಿ ಒಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಉಳಿದ ನಾಲ್ವರನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪರಾರಿಯಾದ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.&lt;/p&gt;&lt;img&gt;&lt;p&gt;ಬಂಧಿತರು ಅರಣ್ಯ ಪ್ರದೇಶದಿಂದ ಸಂಗ್ರಹಿಸಿದ್ದ ಕಬ್ಬಿಣದ ಅದಿರು ಕಲ್ಲುಗಳನ್ನು ಸಮೀಪದ ತೋಟವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಬಳಿಕ ಅವುಗಳನ್ನು ಬೇರೆಡೆಗೆ ಸಾಗಿಸುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಬಂಧಿತರನ್ನು ಸಯ್ಯದ್ ಸಗೀರ್ ಅಹ್ಮದ್ ಅಲಿಯಾಸ್ ಕಲೀಮ್, ಪ್ರಸನ್ನ ಅಲಿಯಾಸ್ ತಿಪ್ಪೇಶಪ್ಪ ಉಗ್ರಾಣಿ, ನಜೀಬ್ ಬಿನ್ ಅಬ್ದುಲ್ ಸಾಬ್ ಹಾಗೂ ಮುಕ್ರಂ ಬಿನ್ ಅಬ್ದುಲ್ ರಹೀಮ್ ಎಂದು ಗುರುತಿಸಲಾಗಿದೆ. ಆರೋಪಿಗಳ ಹಿನ್ನೆಲೆ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಾರ್ಯಾಚರಣೆ ವೇಳೆ ಕಬ್ಬಿಣದ ಅದಿರು ತುಂಬಿದ್ದ ಒಂದು ಟ್ರ್ಯಾಕ್ಟರ್ ಟ್ರೈಲರ್&zwnj;ನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಿದ ಅದಿರು ಹಾಗೂ ವಾಹನದ ಮೌಲ್ಯವನ್ನು ಅಂದಾಜು ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಕ್ರಮ ಗಣಿಗಾರಿಕೆ ಜಾಲದ ಸುಳಿವು ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಸಿಬ್ಬಂದಿ, ಇದರ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/davanagere-shocked-illegal-mining-exposed-in-kukkuwada-forest-4-arrested-rav-19wyvr2"/>
        </item>
        <item>
            <title><![CDATA[Davanagere: ಬಾಲಭವನದಲ್ಲಿ ಮತ್ತೆ ಕೂಗಿತು ರೈಲು! ಸಂಸದರ ಪ್ರಯತ್ನದಿಂದ  ‘ಟಾಯ್ ಟ್ರೈನ್’ ಪುನಾರಂಭ]]></title>
            <link>https://kannada.asianetnews.com/karnataka-districts/davanagere-balabhavan-toy-train-restarts-operations-after-track-upgrades-check-timings-and-ticket-prices-gdp/articleshow-1u0sdti</link>
            <guid isPermaLink="true">https://kannada.asianetnews.com/karnataka-districts/davanagere-balabhavan-toy-train-restarts-operations-after-track-upgrades-check-timings-and-ticket-prices-gdp/articleshow-1u0sdti</guid>
            <pubDate>Wed, 17 Jun 2026 18:33:53 +0530</pubDate>
            <description><![CDATA[ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯ ಬಾಲಭವನದಲ್ಲಿ ಸ್ಥಗಿತಗೊಂಡಿದ್ದ ಆಟದ ರೈಲು ಸಂಚಾರವು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಯತ್ನದಿಂದ ಪುನರಾರಂಭಗೊಂಡಿದೆ. ಕೋವಿಡ್ ನಂತರ ದುರಸ್ತಿಗೊಳಗಾಗಿದ್ದ ರೈಲಿನ ಹಳಿಗಳನ್ನು ₹3.09 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಮಂಗಳವಾರದಿಂದ ಮಕ್ಕಳು ಮತ್ತು ಪೋಷಕರಿಗಾಗಿ ಸಂಜೆ ವೇಳೆ ಸಂಚಾರ ಆರಂಭಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvatszxjwnrcv11s5s4gvvmm,imgname-davanagere-balabhavan-toy-train--1--1781701345202.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ದಾವಣಗೆರೆ ನಗರದ ಕಿರಿಯರು ಹಾಗೂ ಪೋಷಕರ ಬಹುದಿನಗಳ ಬೇಡಿಕೆಯೊಂದು ಕೊನೆಗೂ ಈಡೇರಿದೆ. ದಾವಣಗೆರೆಯ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ನಿರಂತರ ಹಾಗೂ ಪ್ರಾಮಾಣಿಕ ಪ್ರಯತ್ನದ ಫಲವಾಗಿ, ಇಲ್ಲಿನ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಜಿಲ್ಲಾ ಬಾಲಭವನದ ಆಕರ್ಷಕ &lsquo;ಟಾಯ್ ಟ್ರೈನ್&rsquo; (ಆಟದ ರೈಲು) ದುರಸ್ತಿ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮಂಗಳವಾರದಿಂದ ರೈಲು ಸಂಚಾರವನ್ನು ಪುನಃ ಆರಂಭಿಸಲಾಗಿದೆ. ನವೀಕೃತಗೊಂಡ ಈ ಆಟದ ರೈಲಿನ ಸಂಚಾರಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.&lt;/p&gt;&lt;h2&gt;ಕೋವಿಡ್ ನಂತರ ಸ್ಥಗಿತಗೊಂಡಿದ್ದ ರೈಲು ಸಂಚಾರ&lt;/h2&gt;&lt;p&gt;ಕಳೆದ 2014-15ನೇ ಸಾಲಿನಲ್ಲಿ ಸುಮಾರು 3.8 ಎಕರೆ ವಿಸ್ತೀರ್ಣದ ವಿಶಾಲ ಪ್ರದೇಶದಲ್ಲಿ ಮಕ್ಕಳ ಮನರಂಜನೆಗಾಗಿಯೇ ಈ ಜಿಲ್ಲಾ ಬಾಲಭವನವನ್ನು ನಿರ್ಮಿಸಲಾಗಿತ್ತು. ಮಕ್ಕಳನ್ನು ವಿಶೇಷವಾಗಿ ಆಕರ್ಷಿಸಲು ಇಲ್ಲಿ ಸುಂದರವಾದ ಟಾಯ್ ಟ್ರೈನ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ನಂತರ ರೈಲಿನ ಇಂಜಿನ್ ಹಾಗೂ ಹಳಿಗಳು (ಟ್ರಾಕ್) ದುರಸ್ತಿಗೊಳಗಾಗಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಇದರ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.&lt;/p&gt;&lt;p&gt;ಬಾಲಭವನಕ್ಕೆ ಬರುವ ಮಕ್ಕಳು ಮತ್ತು ಪೋಷಕರಿಂದ ಈ ಆಟದ ರೈಲನ್ನು ಪುನಾರಂಭಿಸುವಂತೆ ನಿರಂತರವಾಗಿ ಬೇಡಿಕೆಗಳು ಕೇಳಿಬರುತ್ತಿದ್ದವು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ನೇರವಾಗಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಹಳಿಗಳ ದುರಸ್ತಿಗಾಗಿ ವಿಶೇಷ ಮನವಿ ಸಲ್ಲಿಸಿದ್ದರು.&lt;/p&gt;&lt;h2&gt;₹3.09 ಲಕ್ಷ ವೆಚ್ಚದಲ್ಲಿ ಹಳಿಗಳ ಆಧುನೀಕರಣ: ಸುರಕ್ಷತೆಗೆ ಆದ್ಯತೆ&lt;/h2&gt;&lt;p&gt;ಸಂಸದರ ನಿರಂತರ ಅನುಸರಣೆ (Follow-up) ಮತ್ತು ವಿಶೇಷ ಕಾಳಜಿಯ ಫಲವಾಗಿ ಕೇಂದ್ರ ರೈಲ್ವೆ ಇಲಾಖೆಯಿಂದ ₹3,09,745 ಅನುದಾನ ಬಿಡುಗಡೆಯಾಯಿತು. ಈ ಹಣವನ್ನು ಬಳಸಿಕೊಂಡು ಹಳಿಗಳ ದುರಸ್ತಿ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಲಾಗಿದೆ.&lt;/p&gt;&lt;p&gt;ವಿಶೇಷ ತಾಂತ್ರಿಕ ಬದಲಾವಣೆ: ಈ ಹಿಂದೆ ಟ್ರ್ಯಾಕ್&zwnj;ನಲ್ಲಿ ಬಳಸಲಾಗಿದ್ದ ಹಳೆಯ ಮರದ ಸ್ಲೀಪರ್&zwnj;ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಅವುಗಳ ಬದಲಿಗೆ ಅತ್ಯಂತ ಬಾಳಿಕೆ ಬರುವ ಮತ್ತು ಸುರಕ್ಷಿತವಾದ ಸಿಮೆಂಟ್ ಸ್ಲೀಪರ್&zwnj;ಗಳನ್ನು ಅಳವಡಿಸಲಾಗಿದೆ. ಇದಕ್ಕೆ ತಗುಲಿದ ಅಗತ್ಯ ಹೆಚ್ಚುವರಿ ವೆಚ್ಚವನ್ನು ಜಿಲ್ಲಾಡಳಿತದ ನೆರವಿನಿಂದ ಯಶಸ್ವಿಯಾಗಿ ಭರಿಸಲಾಗಿದೆ. ಇದರಿಂದಾಗಿ ಟಾಯ್ ಟ್ರೈನ್ ಸಂಚಾರ ಈಗ ಮತ್ತಷ್ಟು ಸುರಕ್ಷಿತ ಹಾಗೂ ಸುಗಮವಾಗಿದೆ.&lt;/p&gt;&lt;h2&gt;ದಿನನಿತ್ಯದ ಸಂಚಾರದ ಸಮಯ ಮತ್ತು ಟಿಕೆಟ್ ದರ ವಿವರಗಳು:&lt;/h2&gt;&lt;p&gt;ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಬರುವ ಮಕ್ಕಳಿಗೆ ಪ್ರತಿದಿನ ಸಂಜೆ ಈ ರೈಲಿನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ರೈಲಿನ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಅತ್ಯಂತ ಕೈಗೆಟುಕುವ ದರವನ್ನು ನಿಗದಿಪಡಿಸಲಾಗಿದೆ:&lt;/p&gt;&lt;ul&gt; &lt;li&gt;ರೈಲು ಸಂಚಾರದ ಸಮಯ: ಪ್ರತಿದಿನ ಸಂಜೆ 5:00 ಗಂಟೆಯಿಂದ ರಾತ್ರಿ 7:00 ಗಂಟೆಯವರೆಗೆ.&lt;/li&gt; &lt;li&gt;ಮಕ್ಕಳಿಗೆ ಟಿಕೆಟ್ ದರ (18 ವರ್ಷದೊಳಗಿನವರಿಗೆ): ₹5 ಮಾತ್ರ.&lt;/li&gt; &lt;li&gt;ಹಿರಿಯರಿಗೆ ಟಿಕೆಟ್ ದರ (18 ವರ್ಷ ಮೇಲ್ಪಟ್ಟವರಿಗೆ): ₹10 ಮಾತ್ರ.&lt;/li&gt;&lt;/ul&gt;&lt;p&gt;ಈ ಟಿಕೆಟ್ ಮೂಲಕ ಸಂಗ್ರಹವಾಗುವ ಸಂಪೂರ್ಣ ಮೊತ್ತವನ್ನು ಟಾಯ್ ಟ್ರೈನ್&zwnj;ನ ದೈನಂದಿನ ನಿರ್ವಹಣೆ ಮತ್ತು ಇಂಧನದ ವೆಚ್ಚಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಬಾಲಭವನದ ಪ್ರಕಟಣೆ ತಿಳಿಸಿದೆ.&lt;/p&gt;&lt;h2&gt;ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬಾಲಭವನ ಪೂರಕ&lt;/h2&gt;&lt;p&gt;ರಾಜ್ಯ ಬಾಲಭವನ ಸೊಸೈಟಿಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ದಾವಣಗೆರೆಯ ಜಿಲ್ಲಾ ಬಾಲಭವನವು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಇದು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತಂದು, ಅವರಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ವ್ಯಕ್ತಿತ್ವ ವಿಕಸನವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿ ವರ್ಷಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸೃಜನಾತ್ಮಕ ಕಲೆ, ಚಿತ್ರಕಲೆ, ಲೇಖನ ಬರವಣಿಗೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.&lt;/p&gt;&lt;p&gt;ಟಾಯ್ ಟ್ರೈನ್ ಪುನಾರಂಭದ ವೇಳೆ ಮಾತನಾಡಿದ ಸಂಸದರು, &quot;ಈ ಆಟದ ರೈಲು ಪುನಃ ಹಳಿಗಿಳಿದಿರುವುದು ಮಕ್ಕಳಲ್ಲಿ ಅಪಾರ ಸಂತಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆ, ಜ್ಞಾನಾರ್ಜನೆ ಮತ್ತು ಸೃಜನಶೀಲತೆಗೆ ಪೂರಕವಾಗುವಂತಹ ಇನ್ನಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಬಾಲಭವನದಲ್ಲಿ ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು,&quot; ಎಂದು ಭರವಸೆ ನೀಡಿದರು.&lt;/p&gt;&lt;h2&gt;ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಂಬ್ಯುಲೆನ್ಸ್ ಲೋಕಾರ್ಪಣೆ&lt;/h2&gt;&lt;p&gt;ಇದೇ ಪ್ರಮುಖ ಕಾರ್ಯಕ್ರಮದ ಆರಂಭಕ್ಕೂ ಮುನ್ನ, ಸಂಸದರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೂತನ &lsquo;ಆಂಬ್ಯುಲೆನ್ಸ್&rsquo; ವಾಹನವನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಿದರು.&lt;/p&gt;&lt;p&gt;ಈ ಮಹತ್ವದ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ. ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಗಿತ್ತೆ ಮಾಧವ ವಿಠ್ಠಲ ರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜಾನಾಯ್ಕ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್, ಮಹಾನಗರಾಡಳಿತ ಪಾಲಿಕೆ ಆಯುಕ್ತರಾದ ಮಹಾಂತೇಶ ಸೇರಿದಂತೆ ಹಲವು ಪ್ರಮುಖ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/davanagere-balabhavan-toy-train-restarts-operations-after-track-upgrades-check-timings-and-ticket-prices-gdp/articleshow-1u0sdti"/>
        </item>
        <item>
            <title><![CDATA[ಗ್ಯಾರಂಟಿ ಪರಿಷ್ಕರಣೆ ಮಧ್ಯೆ ರಾಜ್ಯದ 16 ಲಕ್ಷ ಜನರ ಪಿಂಚಣಿ ಸ್ಥಗಿತ! ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ವೃದ್ಧರು!]]></title>
            <link>https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr</link>
            <guid isPermaLink="true">https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr</guid>
            <pubDate>Wed, 17 Jun 2026 12:41:12 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಪರಿಶೀಲನೆಯ ನೆಪದಲ್ಲಿ ಸುಮಾರು 16 ಲಕ್ಷ ಫಲಾನುಭವಿಗಳ ಮಾಸಿಕ ಪಿಂಚಣಿಯನ್ನು ಸ್ಥಗಿತಗೊಳಿಸಿದೆ. ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರಂತಹ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಕಳೆದ ಮೂರು ತಿಂಗಳಿಂದ ನಿಂತುಹೋಗಿದ್ದು, ಬಡವರು ಮತ್ತು ಅಸಹಾಯಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k38860vgzn4ast8mffce4zr2,imgname-welfare-pension-1755844903792.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ನೀಡುತ್ತಿದ್ದ ಮಾಸಿಕ ಪಿಂಚಣಿಯನ್ನು (ಮಾಸಾಶನ) ದಿಢೀರನೆ ಸ್ಥಗಿತಗೊಳಿಸಿರುವುದು ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಂತಹ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ನಡುವೆಯೇ, ಬಡವರು ಹಾಗೂ ಅಸಹಾಯಕರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಕಳೆದ ಮೂರು ತಿಂಗಳಿಂದ ರಾಜ್ಯದ ಸುಮಾರು 16 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ಹಣ ತಲುಪುತ್ತಿಲ್ಲ. ರಾಜ್ಯದಲ್ಲಿನ ಈ ಪಿಂಚಣಿ ಸ್ಥಗಿತದ ಸಂಪೂರ್ಣ ವಿವರ, ಕಾರಣಗಳು ಮತ್ತು ಇದರಿಂದ ಜನಸಾಮಾನ್ಯರ ಮೇಲಾಗಿರುವ ಪರಿಣಾಮಗಳ ಕುರಿತಾದ ಸಮಗ್ರ ವರದಿ ಇಲ್ಲಿದೆ.&lt;/p&gt;&lt;h2&gt;16 ಲಕ್ಷ ಜನರಿಗೆ ಬಿಗ್ ಶಾಕ್: ಯಾರೆಲ್ಲ ಸಂಕಷ್ಟದಲ್ಲಿದ್ದಾರೆ?&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 82.71 ಲಕ್ಷ ಪಿಂಚಣಿ ಫಲಾನುಭವಿಗಳಿದ್ದಾರೆ. ಇವರಲ್ಲಿ ಅರ್ಹರಲ್ಲದವರನ್ನು ಪತ್ತೆಹಚ್ಚುವ ನೆಪದಲ್ಲಿ ಸರ್ಕಾರವು ಬರೋಬ್ಬರಿ 16 ಲಕ್ಷ ಜನರನ್ನು ಪಿಂಚಣಿ ಪಟ್ಟಿಯಿಂದ ಕೈಬಿಟ್ಟಿದೆ. ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ಕೆಳಗಿನ ಯೋಜನೆಗಳ ಆಶ್ರಯ ಪಡೆದಿದ್ದವರು ಬೀದಿಗೆ ಬೀಳುವಂತಾಗಿದೆ.&lt;/p&gt;&lt;ul&gt; &lt;li&gt;ವೃದ್ಧಾಪ್ಯ ವೇತನ (ಹಿರಿಯ ನಾಗರಿಕರು)&lt;/li&gt; &lt;li&gt;ವಿಧವಾ ಪಿಂಚಣಿ (ಪತಿಯನ್ನು ಕಳೆದುಕೊಂಡ ಮಹಿಳೆಯರು)&lt;/li&gt; &lt;li&gt;ಸಂಧ್ಯಾ ಸುರಕ್ಷಾ ಯೋಜನೆ&lt;/li&gt; &lt;li&gt;ವಿಕಲಾಂಗರ ಪಿಂಚಣಿ&lt;/li&gt;&lt;/ul&gt;&lt;p&gt;ಪ್ರತಿ ತಿಂಗಳು ಈ 82 ಲಕ್ಷ ಫಲಾನುಭವಿಗಳ ಪಿಂಚಣಿಗಾಗಿ ಸರ್ಕಾರ ಸುಮಾರು 400 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿತ್ತು. ಆದರೆ, ಈಗ 16 ಲಕ್ಷ ಜನರಿಗೆ ಕೊಕ್ ನೀಡಿರುವುದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 150 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಉಳಿತಾಯವಾಗುತ್ತಿದೆ.&lt;/p&gt;&lt;h2&gt;ಪಿಂಚಣಿ ಸ್ಥಗಿತಗೊಳ್ಳಲು ಮುಖ್ಯ ಕಾರಣಗಳೇನು?&lt;/h2&gt;&lt;p&gt;ಸರ್ಕಾರದ ವತಿಯಿಂದ ನಡೆಸಲಾದ ಇಲಾಖಾ ಪರಿಶೀಲನೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಈ ಪಿಂಚಣಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಮುಖ್ಯ ಕಾರಣಗಳು ಕೂಡ ನೀಡಲಾಗಿದೆ.&lt;/p&gt;&lt;p&gt;&lt;strong&gt;ವಿಳಾಸ ಬದಲಾವಣೆ: &lt;/strong&gt;ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ನೀಡಿದ್ದ ವಿಳಾಸದಲ್ಲಿ ಸದ್ಯಕ್ಕೆ ವಾಸವಿಲ್ಲದ ಕಾರಣಕ್ಕಾಗಿ 2.21 ಲಕ್ಷ ಜನರ ಪಿಂಚಣಿ ರದ್ದಾಗಿದೆ.&lt;/p&gt;&lt;p&gt;&lt;strong&gt;ಆದಾಯ ಪ್ರಮಾಣ ಪತ್ರದ ಕೊರತೆ: &lt;/strong&gt;ಕಾಲಮಿತಿಯೊಳಗೆ ಹೊಸ ಆದಾಯ ಪ್ರಮಾಣ ಪತ್ರವನ್ನು (Income Certificate) ಸಲ್ಲಿಸದ ಕಾರಣಕ್ಕೆ 45,853 ಜನರಿಗೆ ಪಿಂಚಣಿ ನಿಲ್ಲಿಸಲಾಗಿದೆ.&lt;/p&gt;&lt;p&gt;&lt;strong&gt;ದಾಖಲೆಗಳ ಕೊರತೆ: &lt;/strong&gt;ಭೌತಿಕ ಪರಿಶೀಲನೆ (Physical Verification) ನಡೆಸುವಾಗ ಸೂಕ್ತ ಮತ್ತು ನಿಖರವಾದ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಅಂದರೆ 13,23,932 ಜನರ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ.&lt;/p&gt;&lt;h2&gt;ಜಿಲ್ಲಾವಾರು ಸ್ಥಗಿತಗೊಂಡ ಪಿಂಚಣಿದಾರರ ವಿವರ&lt;/h2&gt;&lt;p&gt;ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಪಿಂಚಣಿ ಕಳೆದುಕೊಂಡವರ ಸಂಖ್ಯೆ ಅತ್ಯಂತ ಹೆಚ್ಚಾಗಿದ್ದು, ಆ ವಿವರಗಳು ಹೀಗಿವೆ:&lt;/p&gt;&lt;p&gt;ಜಿಲ್ಲೆ ಪಿಂಚಣಿ ಕಳೆದುಕೊಂಡವರ ಸಂಖ್ಯೆ&lt;/p&gt;&lt;ul&gt; &lt;li&gt;ಬೆಳಗಾವಿ 1,38,215 ಜನರು&lt;/li&gt; &lt;li&gt;ಮೈಸೂರು 1,06,305 ಜನರು&lt;/li&gt; &lt;li&gt;ದಾವಣಗೆರೆ 95,297 ಜನರು&lt;/li&gt; &lt;li&gt;ರಾಯಚೂರು 90,995 ಜನರು&lt;/li&gt;&lt;/ul&gt;&lt;h2&gt;ಪ್ರಸ್ತುತ ಪಿಂಚಣಿ ದರಗಳು (ಯಾರಿಗೆ ಎಷ್ಟು ಸಿಗುತ್ತಿತ್ತು?)&lt;/h2&gt;&lt;p&gt;ಸರ್ಕಾರವು ವಿವಿಧ ವರ್ಗದ ಜನರಿಗೆ ನೀಡುತ್ತಿದ್ದ ಮಾಸಿಕ ಆರ್ಥಿಕ ನೆರವಿನ ವಿವರ ಹೀಗಿದೆ.&lt;/p&gt;&lt;p&gt;&lt;strong&gt;ವಿಧವಾ ವೇತನ:&lt;/strong&gt; ಪ್ರತಿ ತಿಂಗಳು 800 ರೂಪಾಯಿಗಳು.&lt;/p&gt;&lt;p&gt;&lt;strong&gt;ವೃದ್ಧಾಪ್ಯ ಪಿಂಚಣಿ:&lt;/strong&gt; 60 ರಿಂದ 65 ವರ್ಷದೊಳಗಿನವರಿಗೆ 800 ರೂಪಾಯಿ ಹಾಗೂ 65 ವರ್ಷ ಮೇಲ್ಪಟ್ಟವರಿಗೆ 1,200 ರೂಪಾಯಿಗಳು.&lt;/p&gt;&lt;p&gt;&lt;strong&gt;ವಿಕಲಾಂಗರ ಪಿಂಚಣಿ:&lt;/strong&gt;&lt;/p&gt;&lt;p&gt;25% ವಿಕಲಾಂಗ ಹೊಂದಿರುವವರಿಗೆ: 800 ರೂಪಾಯಿಗಳು.&lt;/p&gt;&lt;p&gt;50% ವಿಕಲಾಂಗ ಹೊಂದಿರುವವರಿಗೆ: 1,200 ರೂಪಾಯಿಗಳು.&lt;/p&gt;&lt;p&gt;75% ಕಿಂತ ಹೆಚ್ಚು ವಿಕಲಾಂಗ ಹೊಂದಿರುವವರಿಗೆ: 2,000 ರೂಪಾಯಿಗಳು.&lt;/p&gt;&lt;h2&gt;ಕಚೇರಿಗಳಿಗೆ ಅಲೆಯುತ್ತಿರುವ ವೃದ್ಧರು!&lt;/h2&gt;&lt;p&gt;ಮೂರು ತಿಂಗಳಾಯಿತು ಸರ್, ಕೈಗೆ ಒಂದು ರೂಪಾಯಿ ಪಿಂಚಣಿ ಹಣ ಬಂದಿಲ್ಲ. ನೆಮ್ಮದಿ ಕೇಂದ್ರ, ತಹಶೀಲ್ದಾರ್ ಕಚೇರಿ ಅಂತ ಕೇಳಿದ್ರೆ 'ಆ ಆಫೀಸ್&zwnj;ಗೆ ಹೋಗಿ, ಈ ಆಫೀಸ್&zwnj;ಗೆ ಹೋಗಿ' ಅಂತ ಅಲೆದಾಡಿಸುತ್ತಿದ್ದಾರೆ. ವಯಸ್ಸಾದ ಕಾಲದಲ್ಲಿ ನಮಗೆ ನಡೆದಾಡಲು ಶಕ್ತಿಯಿಲ್ಲ. ಬದುಕು ಸಾಗಿಸುವುದು ತುಂಬಾ ಕಷ್ಟವಾಗಿದೆ. ಎಂದು ಪಿಂಚಣಿ ಕಳೆದುಕೊಂಡ ಹಿರಿಯ ನಾಗರಿಕರ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ದೈನಂದಿನ ಮನೆ ಖರ್ಚಿಗೆ, ಕೈಗೊಂದು ಮಾತ್ರೆ-ಔಷಧಿ ಖರೀದಿಸಲು ಈ ಪಿಂಚಣಿ ಹಣವನ್ನೇ ನಂಬಿಕೊಂಡಿದ್ದ ಅಸಹಾಯಕ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಸರ್ಕಾರದ ಈ ಕ್ರಮದಿಂದ ಕಂಗಾಲಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗ್ಯಾರಂಟಿ ಯೋಜನೆಗಳ ಹೊಂದಾಣಿಕೆಗಾಗಿ ಬಡವರ ಪಿಂಚಣಿಗೆ ಕತ್ತರಿ ಹಾಕಲಾಗಿದೆಯೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣವೇ ಪಿಂಚಣಿ ಬಿಡುಗಡೆ ಮಾಡಬೇಕೆಂಬುದು ಸಂತ್ರಸ್ತರ ತೀವ್ರ ಒತ್ತಾಯವಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr"/>
        </item>
        <item>
            <title><![CDATA[ಹೊನ್ನಾಳಿ-ದಾವಣಗೆರೆಗೆ ಬಸವಾಪಟ್ಟಣ ಮೂಲಕ ಹೊಸ ಬಸ್ ಆರಂಭ; ಮಾರ್ಗ, ಸಮಯ ಈ ರೀತಿಯಾಗಿದೆ]]></title>
            <link>https://kannada.asianetnews.com/karnataka-districts/new-bus-service-starts-from-honnali-to-davanagere-via-basavapattana-timing-details-mrq/articleshow-6ikw7gm</link>
            <guid isPermaLink="true">https://kannada.asianetnews.com/karnataka-districts/new-bus-service-starts-from-honnali-to-davanagere-via-basavapattana-timing-details-mrq/articleshow-6ikw7gm</guid>
            <pubDate>Tue, 23 Jun 2026 07:12:45 +0530</pubDate>
            <description><![CDATA[&lt;p&gt;ಶಾಸಕ ಡಿ.ಜಿ. ಶಾಂತನಗೌಡಅವರು ಹೊನ್ನಾಳಿಯಿಂದ ದಾವಣಗೆರೆಗೆ ಬಸವಾಪಟ್ಟಣ ಮಾರ್ಗವಾಗಿ ನೂತನ ಕೆಎಸ್&zwnj;ಆರ್&zwnj;ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ಹೊಸ ಸೇವೆಯು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಹೊನ್ನಾಳಿಯ ಜನತೆಗೆ ಅನುಕೂಲವಾಗಲಿದ್ದು, ಇದರ ಸದುಪಯೋಗ ಪಡೆಯುವಂತೆ ಜನತೆಗೆ ಕರೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs205n0ng9jb07z9wag9rcw,imgname-honnali-bus-1782178649760.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ದೇಶದಲ್ಲಿಯೇ ಕರ್ನಾಟಕ ಸರ್ಕಾರ ಬಡವರಿಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಆ ಮೂಲಕ ದೇಶದಲ್ಲಿನ ಇತರೆ ರಾಜ್ಯಗಳಿಗೂ ಕೂಡ ಮಾದರಿಯಾಗಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿದ್ದು ಸಂತಸದ ಸಂಗತಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.&lt;/p&gt;&lt;p&gt;ಸೋಮವಾರ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಲಾದ ಹೊನ್ನಾಳಿ- ಬೆನಕನಹಳ್ಳಿ- ಕೈಮರ- ದಾಗಿನಕಟ್ಟೆ- ಕತ್ತಲಗೆರೆ ಬಸವಾಪಟ್ಟಣ ಮಾರ್ಗ ಮೂಲಕ ದಾವಣಗೆರೆಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.&lt;/p&gt;&lt;h2&gt;&lt;strong&gt;ಬಸ್ ಸಮಯ ಈ ರೀತಿಯಾಗಿದೆ&lt;/strong&gt;&lt;/h2&gt;&lt;p&gt;ಬೆಳಗ್ಗೆ ಹೊನ್ನಾಳಿಯಿಂದ ಈ ಮಾರ್ಗವಾಗಿ ದಾವಣಗೆರೆಗೆ 4 ಸಿಂಗಲ್ ಟ್ರಿಪ್ ಮಾಡಿ ನಂತರ ಸಂಜೆ 6 ಗಂಟೆಗೆ ಹೊನ್ನಾಳಿಯಿಂದ ಶಿವಮೊಗ್ಗ ತಲುಪಿ, ಸಂಜೆ 7 ಗಂಟೆಗೆ ಶಿವಮೊಗ್ಗದಿಂದ ಹೊನ್ನಾಳಿಗೆ ರಾತ್ರಿ 8 ಗಂಟೆಗೆ ಬಂದು ತಲುಪಲಿದೆ. ಜನತೆ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇ&zwj;ಳಿದರು.&lt;/p&gt;&lt;p&gt;ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ಹೊನ್ನಾಳಿ ಅತ್ಯಂತ ಆಯಕಟ್ಟಿನ ಭೌಗೋಳಿಕ ಪ್ರದೇಶದಲ್ಲಿದೆ. ಇದು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸಂಪರ್ಕ ಕೊಂಡಿಯಂತಿದೆ. ಪ್ರತಿ ದಿನ 250ಕ್ಕೂ ಹೆಚ್ಚು ಬಸ್&zwnj;ಗಳನ್ನು ಹೊನ್ನಾಳಿ ಮಾರ್ಗದ ಮೂಲಕ ಹಾದುಹೋಗುತ್ತಿವೆ. ಪ್ರಸ್ತುತ ಹೊನ್ನಾಳಿ ಡಿಪೋದಲ್ಲಿ ಸುಮಾರು 62 ಬಸ್&zwnj;ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದರು.&lt;/p&gt;&lt;p&gt;ಈ ಸಂದರ್ಭ ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಕಾಂಗ್ರೆಸ್ ಹೊನ್ನಾಳಿ ಬ್ಲಾಕ್ ಅಧಕ್ಷ್ಯ ಸಣ್ಣಕ್ಕಿ ಬಸವನಗೌಡ, ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷ ಆರ್.ನಾಗಪ್ಪ, ಕೆಎಸ್&zwnj;ಆರ್&zwnj;ಟಿಸಿ ಡಿಪೋ ವ್ವವಸ್ಥಾಪಕ ರಾಮಚಂದ್ರಪ್ಪ, ಮೇಲ್ವಿಚಾರಕ ಮಂಜುನಾಥ ಸೇರಿದಂತೆ ಕೆಎಸ್&zwnj;ಆರ್&zwnj;ಟಿಸಿ ಸಿಬ್ಬಂದಿ ಇದ್ದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/new-bus-service-starts-from-honnali-to-davanagere-via-basavapattana-timing-details-mrq/articleshow-6ikw7gm"/>
        </item>
        <item>
            <title><![CDATA[ಆರ್‌ಎಸ್‌ಎಸ್‌ನ ಲೆಕ್ಕ ಕೇಳಿದ ಬೆನ್ನಲ್ಲೇ ಖರ್ಗೆ ಕುಟುಂಬದ ಆಸ್ತಿ ಕೆದಕಿದ ಎಂಪಿ ರೇಣುಕಾಚಾರ್ಯ!]]></title>
            <link>https://kannada.asianetnews.com/politics/rss-registration-row-mp-renukacharya-attacks-priyank-kharge-rav/articleshow-binwl9u</link>
            <guid isPermaLink="true">https://kannada.asianetnews.com/politics/rss-registration-row-mp-renukacharya-attacks-priyank-kharge-rav/articleshow-binwl9u</guid>
            <pubDate>Thu, 18 Jun 2026 07:23:58 +0530</pubDate>
            <description><![CDATA[ಆರೆಸ್ಸೆಸ್ ಟೀಕಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಭದ್ರಾ ಡ್ಯಾಂ ಬಳಿ ಜಿಲೆಟಿನ್ ಬಳಸಿ ಏಕಶಿಲೆ ಸ್ಫೋಟಿಸುತ್ತಿರುವುದು ಡ್ಯಾಂನ ಸುರಕ್ಷತೆಗೆ ಅಪಾಯ ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvc6rz8xhezxqw0zjmj0c9qf,imgname-----------------------2026-06-18t071616.959-1781747449117.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರೆಸ್ಸೆಸ್&zwnj; ಟೀಕಿಸುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ&lt;/p&gt;&lt;p&gt;ಆರೆಸ್ಸೆಸ್&zwnj;ಗೆ ನೂರಾರು ವರ್ಷಗಳ ಇತಿಹಾಸವಿದೆ.&lt;/p&gt;&lt;p&gt;&lt;strong&gt;ದಾವಣಗೆರೆ (ಜೂ.18): &lt;/strong&gt;ಆರೆಸ್ಸೆಸ್ ನೋಂದಣಿ(RSS Registration) ಮಾಡಿಸುವಂತೆ ಮೋಹನ ಭಾಗವತ್&zwnj;(Mohan Bhagwath) ಅವರಿಗೆ ಪತ್ರ ಬರೆದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank kharge)ಗೆ ಅಧಿಕಾರದ ಮದ ಹೆಚ್ಚಾದಂತೆ ಕಾಣುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ(MP Renukacharya) ಹರಿಹಾಯ್ದಿದ್ದಾರೆ.&lt;/p&gt;&lt;p&gt;ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President Mallikarjun kharge)ಯವರ ಮಗ ಎಂಬುದನ್ನು ಬಿಟ್ಟರೆ ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಐಡೆಂಟಿಟಿ ಸಹ ಇಲ್ಲ. ಇಂತಹ ವ್ಯಕ್ತಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಆರೆಸ್ಸೆಸ್(RSS) ಬಗ್ಗೆ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಂಘವನ್ನು ನೋಂದಣಿ ಮಾಡಿಸುವಂತೆ ಪತ್ರ ಬರೆಯಲು ಪ್ರಿಯಾಂಕ್ ಖರ್ಗೆ ಯಾರು? ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲೇ ಆರೆಸ್ಸೆಸ್ ಅಸ್ತಿತ್ವಕ್ಕೆ ಬಂದಿದೆ. ಈ ವಿಚಾರವನ್ನು ಪ್ರಿಯಾಂಕ ಖರ್ಗೆ ಅರಿಯಲಿ ಎಂದರು.&lt;/p&gt;&lt;p&gt;ಆರ್&zwnj;ಡಿಪಿಆರ್&zwnj;, ಐಟಿ ಬಿಟಿ ಸಚಿವರಾಗಿ ಹಿಂದೆ ಇದೇ ಪ್ರಿಯಾಂಕ್ ಖರ್ಗೆ ಮಾಡಿದ ಸಾಧನೆ ಏನು? ರಾಜ್ಯದಲ್ಲಿ ಮಟ್ಕಾ, ಇಸ್ಪೀಟ್&zwnj; ಜೂಜಾಟ ಕೇಂದ್ರಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಇನ್ನೂ ಅನೇಕ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಐಜಿಪಿ, ಎಸ್ಪಿ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಮೊದಲು ಅಂತಹವುಗಳಿಗೆ ಪ್ರಿಯಾಂಕ್ ಖರ್ಗೆ ಕಡಿವಾಣ ಹಾಕಲಿ ಎಂದರು.&lt;/p&gt;&lt;h2&gt;ಆರೆಸ್ಸೆಸ್ ಟೀಕಿಸೋದು ಮೊದಲು ನಿಲ್ಲಿಸಿ:&lt;/h2&gt;&lt;p&gt;ಪ್ರಿಯಾಂಕ್ ಖರ್ಗೆ ನಿಮ್ಮ ಹಾಗೂ ನಿಮ್ಮ ತಂದೆಯ ಆಸ್ತಿ ಹಿಂದೆ ಎಷ್ಟು ಇತ್ತು? ಈಗ ಎಷ್ಟಾಗಿದೆ ಎಂಬುದನ್ನು, ಆಸ್ತಿಯ ಮೂಲ ಏನೆಂಬುದನ್ನು ಮೊದಲು ಬಹಿರಂಗಪಡಿಸಿ. ಪಿಎಫ್ಐ, ಎಸ್&zwnj;ಡಿಪಿಐ ಸಂಘಟನೆಗಳು ನೋಂದಣಿ ಆಗಿದೆಯಾ? ಮೊದಲು ದೇಶದ್ರೋಹಿ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಿ. ದೇಶಭಕ್ತ ಸಂಘಟನೆ ಆರೆಸ್ಸೆಸ್ ಬಗ್ಗೆ ಟೀಕಿಸುವುದನ್ನು ಮೊದಲು ನಿಲ್ಲಿಸಿ ಎಂದು ತಾಕೀತು ಮಾಡಿದರು.&lt;/p&gt;&lt;h3&gt;ಏನು ಕ್ರಮ ಕೈಗೊಂಡಿದ್ದೀರಿ?:&lt;/h3&gt;&lt;p&gt;ಅನಗತ್ಯವಾಗಿ ಹಿಂದುಗಳನ್ನು, ಸಂಘ ಪರಿವಾರವನ್ನು ಕೆಣಕಬೇಡಿ. ಇದೇ ರೀತಿ ನೀವು ಆಟವಾಡುತ್ತಿದ್ದರೆ ಮುಂಬರುವ 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನೆಲಕಚ್ಚುತ್ತದೆ. ವಿಧಾನಸೌಧದ 3ನೇ ಮಹಡಿಯಲ್ಲಿ ಪಾಕ್ ಪರ ಜೈಕಾರ ಹಾಕಿದ್ದ ನಿಮ್ಮ ಪಕ್ಷದ ಮುಖಂಡನ ವಿರುದ್ಧ ಎಫ್ಎಸ್&zwnj;ಎಲ್&zwnj; ವರದಿ ಬಂದಿದೆ. ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಸಂಘವನ್ನು ಕೆಣಕಿದರೆ ಸರ್ವನಾಶವಾಗುತ್ತೀರಿ ಎಂದ ರೇಣುಕಾಚಾರ್ಯ, ಸಂಘವನ್ನು ಟೀಕಿಸಿದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತನಗೆ ಸಿಎಂ ಮಾಡುತ್ತಾರೆಂದು ಪ್ರಿಯಾಂಕ್ ಖರ್ಗೆ ಅವರು ಅಂದುಕೊಂಡಿರಬಹುದು ಎಂದು ಕುಟುಕಿದರು.&lt;/p&gt;&lt;h3&gt;&amp;nbsp;ಭದ್ರಾ ಡ್ಯಾಂ ಬಳಿ ಜಿಲೆಟಿನ್ ಬಳಸಿ ಏಕಶಿಲೆ ಸ್ಫೋಟ: ಆರೋಪ&lt;/h3&gt;&lt;p&gt;ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಡ್ಯಾಂ ಬಲ ನಾಲೆಯಿಂದ ಕೇವಲ 800 ಮೀಟರ್ ದೂರದಲ್ಲಿ ಏಕಶಿಲೆಯನ್ನು ಜಿಲೆಟಿನ್&zwnj; ಕಡ್ಡಿಗಳನ್ನು ಇಟ್ಟು ಸ್ಫೋಟಿಸಿದ್ದು, ಇನ್ನೂ ನಾಲ್ಕೈದು ಸಲ ಸ್ಫೋಟಿಸುವ ಮಾಹಿತಿ ಇದೆ. ಇದು ಡ್ಯಾಂಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.18ರ ಮಧ್ಯಾಹ್ನ 2 ಗಂಟೆಗೆ ಜಿಲ್ಲೆಯ ರೈತರ ಒಕ್ಕೂಟದ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ರೈತ ಮುಖಂಡರು, ಅಚ್ಚುಕಟ್ಟು ರೈತರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಲಿದ್ದೇವೆ ಎಂದರು.&lt;/p&gt;&lt;p&gt;ಜಿಲೆಟಿನ್ ಇಟ್ಟು ಏಕಶಿಲೆ ಸ್ಫೋಟಿಸಿದರೆ ಭದ್ರಾ ಡ್ಯಾಂಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಜಾಕ್ ವೆಲ್ ನಿರ್ಮಿಸಲು ಏಕಶಿಲೆ ಸ್ಫೋಟಿಸುವ ಕೆಲಸವಾಗುತ್ತಿದೆ. ಜಾಕ್&zwnj;ವೆಲ್&zwnj; ಹೆಸರಲ್ಲಿ ಭದ್ರಾ ಡ್ಯಾಂ ಭದ್ರಗೊಳಿಸುವ ಕೆಲಸ ಆಗಬಾರದು. ಕುಡಿಯುವ ನೀರು ಪೂರೈಸಲು ನಮ್ಮ ವಿರೋಧವಿಲ್ಲ. ಆದರೆ, ಅಚ್ಚುಕಟ್ಟು ರೈತರು, ಭದ್ರಾ ಡ್ಯಾಂಗೆ ಸಂಕಷ್ಟ ತಂದೊಡ್ಡುವುದಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಚಪಡಿಸಿದರು.&lt;/p&gt;&lt;p&gt;ಭದ್ರಾ ಡ್ಯಾಂ ನೀರನ್ನೇ ನೆಚ್ಚಿಕೊಂಡು ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದಲೂ ಜಿಲೆಟಿನ್ ಬಳಸಿ, ಏಕಶಿಲೆ ಸ್ಫೋಟಿಸುತ್ತಿದ್ದಾರೆ. ಜೂ.18ರಂದು ಸ್ಥಳ ಪರಿಶೀಲಿಸಿದ ನಂತರ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ, ಭದ್ರಾ ಡ್ಯಾಂ ಅಭದ್ರಗೊಳಿಸದಂತೆ ಒತ್ತಾಯಿಸಲಿದ್ದೇವೆ. ಒಂದುವೇಳೆ ಭದ್ರಾ ಡ್ಯಾಂಗೆ ಅಪಾಯವಾದರೆ ಲಕ್ಷಾಂತರ ಹೆಕ್ಟೇರ್&zwnj; ಭೂಮಿಯನ್ನು, ಭದ್ರಾ ಡ್ಯಾಂ ನೀರನ್ನೇ ಅವಲಂಭಿಸಿದ ರೈತರ ಪಾಡೇನು ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.&lt;/p&gt;&lt;p&gt;ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಬಿಜೆಪಿ ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳ್, ಎನ್.ಎಚ್.ಹಾಲೇಶ ನಾಯ್ಕ, ಜಯರುದ್ರಪ್ಪ ಇತರರು ಇದ್ದರು.&lt;/p&gt;&lt;p&gt;ಕಾಂಗ್ರೆಸ್ಸಿಗೆ ಹೊನ್ನಾಳಿ, ದಾವಣಗೆರೆಯಷ್ಟೇ ಅಲ್ಲ, ಇಡೀ ರಾಜ್ಯದಲ್ಲೇ ನರ ನಾಡಿ ಇಲ್ಲದಂತಾಗಿದೆ. ಅಭಿವೃದ್ಧಿ ಕಾಮಗಾರಿ ಮರೀಚಿಕೆಯಾಗಿವೆ. ಬಿಡದಿ ರೈತ ಭೂಮಿಯನ್ನು ಕಬಳಿಸಲು ಹೊರಟಿರುವುದು ಸರಿಯಲ್ಲ. ಈ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮಾತನಾಡುತ್ತಾರೆ. ನಿಮ್ಮ ಟೌನ್ ಶಿಪ್ ಯೋಜನೆ, ಕೈಗಾರಿಕಾ ಕಾರಿಡಾರನ್ನು ಬಂಜರು ಭೂಮಿಯಲ್ಲಿ ಮಾಡಿ. ಸಮೃದ್ಧವಾಗಿರುವ ಬಿಡದಿ ಕೃಷಿ ಭೂಮಿಯಲ್ಲಲ್ಲ.&lt;/p&gt;&lt;p&gt;&lt;strong&gt;- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.&lt;/strong&gt;&lt;/p&gt;&lt;p&gt;-&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/rss-registration-row-mp-renukacharya-attacks-priyank-kharge-rav/articleshow-binwl9u"/>
        </item>
        <item>
            <title><![CDATA[ಹುಬ್ಬಳ್ಳಿಯ NWKRTC ಚೀಫ್ ಮೆಕ್ಯಾನಿಕ್ ಮನೆಯಲ್ಲಿ 40 ಲಕ್ಷ ನಗದು, ಚಿನ್ನಾಭರಣ ಪತ್ತೆ]]></title>
            <link>https://kannada.asianetnews.com/gallery/karnataka-districts/karnataka-lokayukta-raid-today-davanagere-40-lakh-cash-gold-jewellery-found-at-nwkrtc-chief-mechanic-s-house-mrq-f7g235x</link>
            <guid isPermaLink="true">https://kannada.asianetnews.com/gallery/karnataka-districts/karnataka-lokayukta-raid-today-davanagere-40-lakh-cash-gold-jewellery-found-at-nwkrtc-chief-mechanic-s-house-mrq-f7g235x</guid>
            <pubDate>Tue, 16 Jun 2026 10:27:37 +0530</pubDate>
            <description><![CDATA[ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆಯ NWKRTC ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ ನಿವಾಸದಲ್ಲಿ ಲಕ್ಷಾಂತರ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದ್ದು, ಹಲವು ಅಧಿಕಾರಿಗಳ ವಿರುದ್ಧ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv7cbrhrsfbx1ftrmee75ne5,imgname-davanagere-lokayukta-raid--2--1781585535544.jpg" type="image/jpeg" height="390" width="690"/>
            <content:encoded><![CDATA[ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆಯ NWKRTC ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ ನಿವಾಸದಲ್ಲಿ ಲಕ್ಷಾಂತರ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದ್ದು, ಹಲವು ಅಧಿಕಾರಿಗಳ ವಿರುದ್ಧ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ.&lt;img&gt;&lt;p&gt;ಇಂದು ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿರುವ ಹುಬ್ಬಳ್ಳಿಯ NWKRTC ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ ಮನೆಯಲ್ಲಿ ಲಕ್ಷಾಂತರ ನಗದು, ಚಿನ್ನ, ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಸುಮಾರು 40 ಲಕ್ಷ ನಗದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ಇಂದು ಬೆಳಗ್ಗೆಯೇ ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಸಿದ್ದೇಶ್ವರ ಹೆಬ್ಬಾಳ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದರು. ಸಿದ್ದೇಶ್ವರ್ ಅವರಿಗೆ ಸಂಬಂಧಿಸಿದ ವಾಹನಗಳ ಪರಿಶೀಲನೆಯನ್ನು ಸಹ ಅಧಿಕಾರಿಗಳು ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ ಪಿ ಎಂ.ಎಸ್. ಕೌಲಾಪುರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.&lt;/p&gt;&lt;img&gt;&lt;p&gt;1. ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ್&lt;/p&gt;&lt;p&gt;2. NWKRTC ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ&lt;/p&gt;&lt;p&gt;3. ಆರ್&zwnj;ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ&lt;/p&gt;&lt;img&gt;&lt;p&gt;ಇದೇ ವೇಳೆ ಈ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಬೆಳಗಾವಿ, ಹುಬ್ಬಳ್ಳಿ, ವಿಜಯನಗರ ದಾವಣಗೆರೆಯಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ಆರಂಭದಲ್ಲಿಯೇ ಕೋಟಿ ಕೋಟಿ ಮೌಲ್ಯದ ಆಸ್ತಿಯ ದಾಖಲೆಗಳು ಲಭ್ಯವಾಗಿವೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಬೀದರ್ ಜಿಲ್ಲೆಯ ಹುಮ್ನಾಬಾದ್&zwnj;ನಲ್ಲಿರುವ ಪಂಚಾಯತ್ ರಾಜ್ ಇಲಾಖೆ ನಿವೃತ್ತ ಸುಪರಿಡೆಂಟ್ ಇಂಜಿನಿಯರ್ ಮಾಣಿಕ್ ಕನಕಟ್ಟಿ ವಿರುದ್ಧವೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮಾಣಿಕ್ ಕನಕಟ್ಟಿ ಬೀದರ್ ಜಿಲ್ಲೆ ಹಳ್ಳಿ ಖೇಡನಲ್ಲಿ 20 ಎಕರೆ ತೋಟ, ಕಲಬುರಗಿಯಲ್ಲಿ ಎರಡು ಮನೆ ಹೊಂದಿದ್ದಾರೆ. ಸದ್ಯ ಮಾಣಿಕ ಕನಕಟ್ಟಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;]]></content:encoded>
            <category>davanagere</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/karnataka-lokayukta-raid-today-davanagere-40-lakh-cash-gold-jewellery-found-at-nwkrtc-chief-mechanic-s-house-mrq-f7g235x"/>
        </item>
        <item>
            <title><![CDATA[Harihara: ಪಾಕ್ ಉಗ್ರರ ಜೊತೆ ನಂಟು ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಅರೆಸ್ಟ್!]]></title>
            <link>https://kannada.asianetnews.com/karnataka-districts/uttara-pradesh-sohail-arrested-in-davanagere-connection-with-pakistani-terrorists-rav/articleshow-fgg2wp9</link>
            <guid isPermaLink="true">https://kannada.asianetnews.com/karnataka-districts/uttara-pradesh-sohail-arrested-in-davanagere-connection-with-pakistani-terrorists-rav/articleshow-fgg2wp9</guid>
            <pubDate>Wed, 24 Jun 2026 05:55:56 +0530</pubDate>
            <description><![CDATA[&lt;p&gt;ದಾವಣಗೆರೆಯ ಬನ್ನಿಕೋಡು ಗ್ರಾಮದಲ್ಲಿ ಪೇಂಟರ್ ಸೋಗಿನಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸೊಹೇಲ್&zwnj;ನನ್ನು ಬಂಧಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ, ಪಾಕಿಸ್ತಾನಿ ಉಗ್ರರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಈತನನ್ನು ವಶಕ್ಕೆ ಪಡೆಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvvfykwke1a1zzngayc2sjqb,imgname----------------------80--1782260387731.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾವಣಗೆರೆ (ಜೂ.24): ಪೇಂಟಿಂಗ್ ಕೆಲಸ ಮಾಡುವ ನೆಪದಲ್ಲಿ ಹರಿಹರ ತಾಲೂಕು ಬನ್ನಿಕೋಡು ಗ್ರಾಮದಲ್ಲಿ ಕಳೆದ 20-25 ದಿನಗಳಿಂದ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನನ್ನು ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ ನೇತೃತ್ವದಲ್ಲಿ ಮಂಗಳವಾರ ಬೆಳಗಿನ ಜಾವ ವಶಕ್ಕೆ ಪಡೆಯಲಾಗಿದೆ.&lt;/p&gt;&lt;h2&gt;ಪೇಂಟಿಂಗ್ ಮಾಡುವ ನೆಪದಲ್ಲಿ ಅಡಗಿದ್ದ ಶಂಕಿತ&lt;/h2&gt;&lt;p&gt;ಉತ್ತರ ಪ್ರದೇಶದ ಸಹರಾನ್&zwnj;ಪುರ ಜಿಲ್ಲೆಯ ಲಖ್ನೋತಿ ಗ್ರಾಮ ಮೂಲದ ಸೊಹೇಲ್&zwnj; (22) ಬಂಧಿತ ಶಂಕಿತ ಉಗ್ರ. ಬೆಳ್ಳೂಡಿಯ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಉತ್ತರ ಪ್ರದೇಶದ ಏಳೆಂಟು ಕೆಲಸಗಾರರು ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ರೆಡ್ ಆಕ್ಸೈಡ್&zwnj; ಪೇಂಟಿಂಗ್&zwnj; ಕೆಲಸ ಮಾಡುತ್ತಿದ್ದ ಈ ಕಾರ್ಮಿಕರ ಪೈಕಿ ಓರ್ವನ ಸಹೋದರನೇ ಸೊಹೇಲ್. ಉತ್ತರ ಪ್ರದೇಶದಿಂದ ತನ್ನ ಸಹೋದರ ಕೆಲಸ ಮಾಡುತ್ತಿದ್ದ ಬನ್ನಿಕೋಡು ಗ್ರಾಮಕ್ಕೆ ಬಂದು, ಇಲ್ಲೇ ವಾಸವಿದ್ದ. ಇಲ್ಲಿ ಏನೂ ಅರಿಯದವನಂತಿದ್ದ ಸೊಹೇಲ್&zwnj;ನ ಜನ್ಮ ಜಾಲಾಡಿದ್ದ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಬಂಧಿಸಿದ್ದಾರೆ.&lt;/p&gt;&lt;h3&gt;ಸೋಷಿಯಲ್ ಮೀಡಿಯಾ ಮೂಲಕ ಪಾಕ್ ನಂಟು&lt;/h3&gt;&lt;p&gt;ಇನ್&zwnj;ಸ್ಟಾಗ್ರಾಂನಲ್ಲಿ ಪಾಕಿಸ್ತಾನ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಹಾಗೂ ಕರೆ ಮಾಡಿ ಮಾತನಾಡುತ್ತಿದ್ದ, ಪಾಕ್&zwnj; ಮೂಲದ ಭಾರತ ವಿರೋಧಿ ವಾಟ್ಸಪ್ ಗ್ರೂಪ್ ಆದ ರಾಣಾದಲ್ಲಿ ಸೊಹೇಲ್ ಸಕ್ರಿಯನಾಗಿದ್ದ. ತಿಂಗಳ ಹಿಂದಷ್ಟೇ ತುಮಕೂರು ಮೂಲಕ ಅಲ್ಲಾಭಕ್ಷಿ ಹಾಗೂ ದಾವಣಗೆರೆಯ ಜಮೀರ್ ಖಾನ್ ಎಂಬ ಶಂಕಿತ ಉಗ್ರರನ್ನು ತುಮಕೂರು ಪೊಲೀಸರು ಬಂಧಿಸಿದ್ದರು.&amp;nbsp;&lt;/p&gt;&lt;p&gt;ಕೇಂದ್ರ ಗುಪ್ತಚರ ಇಲಾಖೆ ನಸುಕಿನಲ್ಲಿ ಬನ್ನಿಕೋಡು ಗ್ರಾಮದಲ್ಲಿದ್ದ ಈಗ ಮತ್ತೊಬ್ಬನನ್ನು ಬಂಧಿಸಿ, ತುಮಕೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸೊಹೇಲ್ ವಾಸಿಸುತ್ತಿದ್ದ ಮನೆ ಮೇಲೆ ದಾಳಿ ಮಾಡಿ, 8 ಆರೋಪಿಗಳನ್ನು ವಶಕ್ಕೆ ಪಡೆದರು. ಉಳಿದವರನ್ನು ಬಿಟ್ಟು, ಸೊಹೇಲ್&zwnj;ನನ್ನು ಬಂಧಿಸಿ, ತುಮಕೂರು ಪೊಲೀಸರ ವಶಕ್ಕೆ ನೀಡಲಾಗಿದೆ. ಸೊಹೇಲ್&zwnj;ನನ್ನು ಎನ್ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-pradesh-sohail-arrested-in-davanagere-connection-with-pakistani-terrorists-rav/articleshow-fgg2wp9"/>
        </item>
        <item>
            <title><![CDATA[ದಾವಣಗೆರೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ 19ರ ಹರೆಯದ ನವ ವಿವಾಹಿತೆ ಮೃತದೇಹ ಪತ್ತೆ]]></title>
            <link>https://kannada.asianetnews.com/karnataka-districts/newly-married-woman-found-dead-under-suspicious-circumstances-in-davanagere/articleshow-ghx2rd3</link>
            <guid isPermaLink="true">https://kannada.asianetnews.com/karnataka-districts/newly-married-woman-found-dead-under-suspicious-circumstances-in-davanagere/articleshow-ghx2rd3</guid>
            <pubDate>Sun, 21 Jun 2026 15:51:36 +0530</pubDate>
            <description><![CDATA[&lt;p&gt;19ರ ಹರೆಯದ ಅಮೂಲ್ಯ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಘಟನೆ ಬಳಿಕ ಪತಿ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಅಮೂಲ್ಯ ಬಾಳಲ್ಲಿ ಏನಾಯಿತು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmv2at3w4vhpcjjqtjxj2xk,imgname-death-of-newly-married-teen-1782037162818.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.21) &lt;/strong&gt;ಅನುಮಾನಸ್ಪದ ರೀತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾದ ಘಟನೆ ದಾವಣಗೆರೆ ನಗರದ ರಾಮನಗರದಲ್ಲಿ ನಡೆದಿದೆ. ದಾವಣಗೆರೆ ತಾಲೂಕು ಕೈದಾಳೆ ಗ್ರಾಮದ ನಿವಾಸಿ 19ರ ಹರೆಯದ ಅಮೂಲ್ಯ ಶವವಾಗಿ ಪತ್ತೆಯಾಗಿದ್ದಾಳೆ. ಬಾಡಿಗೆ ಮನೆಯಲ್ಲಿ ಅಮೂಲ್ಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಬೆನ್ನಲ್ಲೇ ಅಮೂಲ್ಯ ಪತಿ ಧನುಷ್ ಹಾಗೂ ಆತನ ಪೋಷಕರು ನಾಪತ್ತೆಯಾಗಿದ್ದಾರೆ. ದಾವಣೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ಪ್ರೀತಿಸಿ ಮದುವೆಯಾಗಿದ್ದ ಅಮೂಲ್ಯ&lt;/h2&gt;&lt;p&gt;ಅಮೂಲ್ಯ ಹಾಗೂ ಧನುಷ್ ಪ್ರೀತಿಯಲ್ಲಿ ಬಿದ್ದಿದ್ದರು. ಅಪ್ರಾಪ್ತ ವಯಸ್ಸಿನಲ್ಲಿ ಧನುಷ್ ಪ್ರೀತಿಯ ಬಲೆಗೆ ಬಿದ್ದಿದ್ದ ಅಮೂಲ್ಯ 18 ತುಂಬಿದ ಬೆನ್ನಲ್ಲೇ ಮದುವೆಯಾಗಿದ್ದರು. ಅಮೂಲ್ಯ ಮದುವೆಯಾಗಿ ಒಂದು ವರ್ಷ ಉರುಳಿದೆ. ಅಷ್ಟರಲ್ಲೇ ಸಂಸಾರದಲ್ಲಿ ಸಮಸ್ಯೆಗಳು ತೀವ್ರಗೊಂಡಿದೆ ಎನ್ನಲಾಗುತ್ತಿದೆ. ರಾಮನಗರ ಬಾಡಿಗೆ ಮನೆಯಲ್ಲಿ ಧನುಷ್ ಹಾಗೂ ಅಮೂಲ್ಯ ಜೋಡಿ ವಾಸವಿತ್ತು. ಮೃತ ಅಮೂಲ್ಯ ಪತಿ ಧನುಷ್ ದಾವಣಗೆರೆಯ ಹೂವಿನ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ.&lt;/p&gt;&lt;p&gt;ಜೂನ್ 20ರ ರಾತ್ರಿ ಅಮೂಲ್ಯ ಮೃತದೇಹ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ. ಮಗಳ ಸಾವಿನ ಸುದ್ದಿ ಕೇಳಿ ಪೋಷಕರು ಕಂಗಾಲಾಗಿದ್ದಾರೆ. ಅಮೂಲ್ಯ ಪತಿ ಧನುಷ್ ಹಾಗೂ ಆತನ ಪೋಷಕರ ವಿರುದ್ದ ಆರೋಪಗಳು ಕೇಳಿಬಂದಿದೆ. ಇತ್ತ ಪೋಷಕರು ದಾವಣೆಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;h2&gt;ಧನುಷ್ ಹಾಗೂ ಪೋಷಕರು ನಾಪತ್ತೆ&lt;/h2&gt;&lt;p&gt;ಅಮೂಲ್ಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಇತ್ತ ಪತಿ ಧನುಷ್ ಹಾಗೂ ಆತನ ಪೋಷಕರು ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಧನುಷ್ ಹಾಗೂ ಆತನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>davanagere</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/newly-married-woman-found-dead-under-suspicious-circumstances-in-davanagere/articleshow-ghx2rd3"/>
        </item>
        <item>
            <title><![CDATA[ಪಾಕಿಸ್ತಾನಕ್ಕೆ ನಂಬರ್ ಹೇಗೆ ಸಿಕ್ಕಿತೋ ಗೊತ್ತಿಲ್ಲ, ಏನಾಗಿದೆ ಗೊತ್ತಿಲ್ಲ, ಶಂಕಿತ ಉಗ್ರ ಸುಹೇಲ್ ಸಹೋದರ]]></title>
            <link>https://kannada.asianetnews.com/karnataka-districts/davanagere-suhail-held-in-terror-probe-brother-denies-knowledge-of-pakistan-connection/articleshow-gv65yp3</link>
            <guid isPermaLink="true">https://kannada.asianetnews.com/karnataka-districts/davanagere-suhail-held-in-terror-probe-brother-denies-knowledge-of-pakistan-connection/articleshow-gv65yp3</guid>
            <pubDate>Thu, 25 Jun 2026 10:10:27 +0530</pubDate>
            <description><![CDATA[&lt;p&gt;ದಾವಣೆಗೆರೆಯಲ್ಲಿ ಶಂಕಿತ ಉಗ್ರ ಸುಹೇಲ್ ಬಂಧನ ಜನರಲ್ಲಿ ಆತಂಕ ಹೆಚ್ಚಿಸಿದೆ. ದಾವಣಗೆರೆಯಲ್ಲಿ ಕುಳಿತು ಪಾಕಿಸ್ತಾನ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಆರೋಪದಡಿ ಸುಹೇಲ್ ಬಂಧನವಾಗಿದೆ. ಇದರ ಬೆನ್ನಲ್ಲೇ ಆತನ ನಂಬರ್ ಪಾಕಿಸ್ತಾನದ ಗ್ರೂಪ್&zwnj;ಗಳಲ್ಲಿ ಹೇಗೆ ಬಂತೋ ಗೊತ್ತಿಲ್ಲ ಎಂದ ಸಹೋದರ ಹೇಳಿದ್ದಾನೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvy3k3fz1zxbjw1a6mmsx9xk,imgname-----------------------2026-06-25t060937.321-1782348090879.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣೆಗೆರ (ಜೂ.25) &lt;/strong&gt;ಆಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಪಾಕಿಸ್ತಾನ ಉಗ್ರರ ಜೊತೆ ಸಂಚು ರೂಪಿಸಿ ದಾವಣೆಗೆರೆಯಲ್ಲಿ ಅರೆಸ್ಟ್ ಆಗಿರುವ ಶಂಕಿತ ಉಗ್ರ ಸೊಹೆಲ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಶಂಕಿತ ಉಗ್ರ ಸೊಹೇಲ್ ಬಂಧನ ಪ್ರಕರಣ ಕುರಿತು ಸಹೋದರ ಶೋಯೆಬ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾನೆ. ಎರಡು ತಿಂಗಳ ಹಿಂದೆ ಸುಹೇಲ್&zwnj;ಗೆ ಮೊಬೈಲ್ ಕೊಡಿಸಿದ್ದೆ. ಆದರೆ ಪಾಕಿಸ್ತಾನ ಮೂಲದ ಗ್ರೂಪ್&zwnj;ಗಳಿಗೆ ಈತನ ನಂಬರ್ ಹೇಗೆ ಆ್ಯಡ್ ಆಯ್ತು ಗೊತ್ತಿಲ್ಲ ಎಂದು ಶೋಯೆಬ್ ಹೇಳಿದ್ದಾರೆ. ನಾವು ಉತ್ತರಪ್ರದೇಶದ ಸಹರಾನ್&zwnj;ಪುರ ಜಿಲ್ಲೆಯವರು. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲಾಗಿದೆ. ನನ್ನ ಐಡಿ ಬಳಸಿ ಆತನಿಗೆ ಸಿಮ್ ಕೊಡಿಸಲಾಗಿದೆ ಎಂದು ಶೋಯೆಬ್ ಹೇಳಿದ್ದಾನೆ.&lt;/p&gt;&lt;h2&gt;ಏನಾಯ್ತೋ ಗೊತ್ತಿಲ್ಲ, ಹೇಗಾಯ್ತೋ ಗೊತ್ತಿಲ್ಲ, ಏನಿದೆಯೋ ಗೊತ್ತಿಲ್ಲ&lt;/h2&gt;&lt;p&gt;ನಮ್ಮ ತಂದೆ ತಾಯಿಗೆ ಒಟ್ಟು ಹತ್ತು ಜನ ಮಕ್ಕಳು. ಆರು ಸಹೋದರಿಯರು ಹಾಗೂ ನಾಲ್ವರು ಸಹೋದರರು. ಸುಹೇಲ್ ಕೊನೆಯವನು, ಆತನ ವಯಸ್ಸು ಕಡಿಮೆ ಇದೆ. ಹೀಗಾಗಿ ನನ್ನ ಆಧಾರ್ ಕಾರ್ಡ್ ಬಳಸಿ ಸಿಮ್ ಕೊಡಿಸಿದ್ದೆ. ಆತನ ಆಧಾರ್ ಕಾರ್ಡ್ ಸೇರಿದಂತೆ ಎಲ್ಲರ ಆಧಾರ್ ಕಾರ್ಡ್ ವಿಳಾಸ ಅಪ್&zwnj;ಡೇಟ್ ಮಾಡಿದ್ದೇವೆ. ಈ ಹಿಂದೆ ದೆಹಲಿ, ನೋಯ್ಡಾ ಸೇರಿ ಹಲವೆಡೆ ಕೆಲಸ ಮಾಡಿದ್ದೇವೆ. ಪಾಕಿಸ್ತಾನದ ಗ್ರೂಪ್&zwnj;ಗಳಲ್ಲಿ ಯಾರು ಆತನ ಆ್ಯಡ್ ಮಾಡಿದ್ದಾರೆ ಗೊತ್ತಿಲ್ಲ. ಅದರಲ್ಲಿ ಏನು ಮಾತುಕತೆ ಆಗಿದೆ ಗೊತ್ತಿಲ್ಲ. ಪೊಲೀಸರು ಆಗಮಿಸಿ ನಮ್ಮ 8 ಜನರನ್ನು ಕರೆದುಕೊಂಡು ಹೋಗಿದ್ರು. ಬಳಿಕ ಆತನ ಮೊಬೈಲ್&zwnj;ನಲ್ಲಿ&zwnj; ಏನು ಪತ್ತೆಯಾಗಿದೆಯೋ ಗೊತ್ತಿಲ್ಲ. ತಮ್ಮನ ಅರೆಸ್ಟ್ ಮಾಡಿ ಕೋರ್ಟ್&zwnj;ಗೆ ಹಾಜರು ಪಡಿಸಿ ಜೈಲಿಗೆ ಕಳಿಸಿದರು ಎಂದು ಶೋಯೆಬ್ ಹೇಳಿದ್ದಾನೆ.&lt;/p&gt;&lt;p&gt;ನಮ್ಮ ತಂದೆ ತಾಯಿಗೆ ವಿಷಯ ತಿಳಿಸಿದ್ದೇವೆ. ಉತ್ತರ ಪ್ರದೇಶದಲ್ಲಿರುವ ಅವರು ನಾಳೆ ಅಥವಾ ನಾಡಿದ್ದು ಬರಬಹುದು ಎಂದು ಸುಹೇಲ್ ಸಹೋದರ ಶೋಯೆಬ್&zwnj; ಹೇಳಿದ್ದಾನೆ. ಇತ್ತ ಸುಹೇಲ್ ಜೊತೆ ದಾವಣೆಗೆರೆ ಕೆಲಸಕ್ಕೆ ಸೇರಿದ ಜಹೇದ್ ಅರೆಸ್ಟ್ ಕುರಿತು ಪ್ರತಕ್ರಿಯಿಸಿದ್ದಾನೆ.&lt;/p&gt;&lt;h2&gt;ನಾವು ಕಾರ್ಮಿಕರು ನಮಗೇನು ಗೊತ್ತಿಲ್ಲ&lt;/h2&gt;&lt;p&gt;ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಶಂಕಿತ ಉಗ್ರ ಸುಹೇಲ್ ಬಂಧನ ಪ್ರಕರಣ ಸಂಬಂಧ ಸುಹೇಲ್ ಜೊತೆ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಬಹುತೇಕ ಎಲ್ಲಾ ಉದ್ಯೋಗಿಗಳು ಒಕ್ಕೊರಲಿನಿಂದ ನಮಗೇನು ಗೊತ್ತಿಲ್ಲ, ನಾವು ಕಾರ್ಮಿಕರು ಎಂದಿದ್ದಾರೆ. ನಾವು ಹತ್ತು ಹದಿನೈದು ದಿನಗಳ ಹಿಂದೆ ಕೆಲಸಕ್ಕೆ ಆಗಮಿಸಿದ್ದೇವೆ. ಅವರು ಇಬ್ಬರು ಸಹೋದರರು ಇದ್ದರು. ಇಬ್ಬರು ಈಗ ಇಲ್ಲಿಂದ ಹೋಗಿದ್ದಾರೆ . ಹೆಚ್ಚಿನ ಮಾಹಿತಿ ನಮಗೆ ಗೊತ್ತಿಲ್ಲ ಎಂದು ಸಹೋದ್ಯೋಗಿ ಜಹೇದ್ ಹೇಳಿದ್ದಾನೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>davanagere</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/davanagere-suhail-held-in-terror-probe-brother-denies-knowledge-of-pakistan-connection/articleshow-gv65yp3"/>
        </item>
        <item>
            <title><![CDATA[ನನ್ನದು ಒಂದೇ ಒಂದು ಆಸೆ...... ಭಾವನಾತ್ಮಕ ಪತ್ರ ಬರೆದು ತುಮಕೂರಿನಲ್ಲಿ ದಾವಣಗೆರೆ ಮೂಲದ ವಿದ್ಯಾರ್ಥಿ ಸಾವು!]]></title>
            <link>https://kannada.asianetnews.com/karnataka-districts/karnataka-news-tumakuru-shocker-sit-engineering-student-from-davanagere-self-death-in-hostel-gdp/articleshow-lfgrgq8</link>
            <guid isPermaLink="true">https://kannada.asianetnews.com/karnataka-districts/karnataka-news-tumakuru-shocker-sit-engineering-student-from-davanagere-self-death-in-hostel-gdp/articleshow-lfgrgq8</guid>
            <pubDate>Mon, 22 Jun 2026 16:28:49 +0530</pubDate>
            <description><![CDATA[ತುಮಕೂರಿನ ಎಸ್&zwnj;ಐಟಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ವೆಂಕಟೇಶ್, ಬಿಸಿಎಂ ಹಾಸ್ಟೆಲ್&zwnj;ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್&zwnj;ನಲ್ಲಿ, ತನ್ನ ಕುಟುಂಬದ ಐದು ಮಂದಿ ಸದಾ ಒಟ್ಟಾಗಿರಬೇಕೆಂಬ ಕೊನೆಯಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುಟುಂಬ ಕಲಹದ ಶಂಕೆಯನ್ನು ಹುಟ್ಟುಹಾಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqf7vp6ncxxcexkq6806njw,imgname-davanagere-1782125424326.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ವಿದ್ಯಾ ನಗರಿ ತುಮಕೂರಿನಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ನಗರದ ಪ್ರಸಿದ್ಧ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹಿಂದುಳಿದ ವರ್ಗಗಳ (BCM) ವಸತಿ ನಿಲಯದಲ್ಲಿ ಸಾವಿಗೆ ಶರಣಾಗಿದ್ದಾನೆ. ಅದಕ್ಕೂ ಮುನ್ನ ಆತ ಪೋಷಕರಿಗೆ ಬರೆದಿಟ್ಟಿರುವ ಡೆತ್ ನೋಟ್ ಮಾತ್ರ ಎಂತವರನ್ನೂ ಕಣೀರಲ್ಲಿ ಮುಳುಗುವಂತೆ ಮಾಡಬಹುದು.&lt;/p&gt;&lt;h2&gt;ಕೊಠಡಿಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣು&lt;/h2&gt;&lt;p&gt;ಮೃತರನ್ನು ಮೂಲತಃ ದಾವಣಗೆರೆ ಜಿಲ್ಲೆಯ ದೊಣ್ಣೆಹಳ್ಳಿ ಗ್ರಾಮದ ಜಿ. ಇ ವೆಂಕಟೇಶ್ (25) ಎಂದು ಗುರುತಿಸಲಾಗಿದೆ. ವೆಂಕಟೇಶ್ ತುಮಕೂರು ನಗರದ ಪ್ರಖ್ಯಾತ ಎಸ್&zwnj;ಐಟಿ (SIT) ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ನಗರದ ಉಪ್ಪಾರಹಳ್ಳಿಯಲ್ಲಿರುವ ಬಿಸಿಎಂ (BCM) ಹಾಸ್ಟೆಲ್&zwnj;ನಲ್ಲಿ ಉಳಿದುಕೊಂಡಿದ್ದ ಅವರು, ಕೊಠಡಿಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ನೇಣು ಬಿಗಿದುಕೊಂಡಿದ್ದಾನೆ. ಇಂದು (ಸೋಮವಾರ) ಬೆಳಿಗ್ಗೆ ಸಹಪಾಠಿಗಳು ಕೊಠಡಿಗೆ ಬಂದು ನೋಡಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h2&gt;ನೀವು ಐದು ಜನ ಒಟ್ಟಿಗೆ ಇರಬೇಕು, ಮನ ಕಲಕುವ ಕೊನೆಯ ಆಸೆ!&lt;/h2&gt;&lt;p&gt;ವಿದ್ಯಾರ್ಥಿ ವೆಂಕಟೇಶ್ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ಸಾವಿಗೂ ಮುನ್ನ ಅವರು ತಮ್ಮ ಹೆತ್ತ ಪೋಷಕರು ಹಾಗೂ ಕುಟುಂಬಸ್ಥರನ್ನು ಉದ್ದೇಶಿಸಿ ಭಾವನಾತ್ಮಕ ಡೆತ್ ನೋಟ್ (Death Note) ಒಂದನ್ನು ಬರೆದಿಟ್ಟಿದ್ದಾರೆ.&lt;/p&gt;&lt;h2&gt;ಡೆತ್ ನೋಟ್&zwnj;ನಲ್ಲಿ ಏನಿದೆ?&lt;/h2&gt;&lt;p&gt;ನನ್ನದು ಒಂದೇ ಒಂದು ಆಸೆ. ನೀವು ಐದು ಜನ ಯಾವಾಗಲೂ ಒಟ್ಟಿಗೆ ಇರಬೇಕೆಂಬುದೇ ನನ್ನ ಕೊನೆಯ ಆಸೆ. ಒಬ್ಬರನ್ನೊಬ್ಬರು ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡಿ, ಯಾರೂ ಬೇರೆಯಾಗಬೇಡಿ. ಸದಾ ಹೀಗೆಯೇ ಒಗ್ಗಟ್ಟಿನಿಂದ ಇರಬೇಕು ಎನ್ನುವುದೇ ನನ್ನ ಕೊನೆಯ ಹಾರೈಕೆ... ಇಂತಿ ನಿಮ್ಮ ಪ್ರೀತಿಯ ಮಗ.&lt;/p&gt;&lt;p&gt;&mdash; ಮೃತ ವಿದ್ಯಾರ್ಥಿ ವೆಂಕಟೇಶ್ ಬರೆದಿರುವ ನೋಟ್&lt;/p&gt;&lt;p&gt;ಕುಟುಂಬದಲ್ಲಿ ಎಲ್ಲರೂ ಒಟ್ಟಾಗಿ ಇರಬೇಕೆಂದು ಮಗ ಕೊನೆಯದಾಗಿ ಕೇಳಿಕೊಂಡಿರುವ ಈ ಮಾತುಗಳು ಇಡೀ ಕುಟುಂಬವನ್ನು ಕಣ್ಣೀರಿನ ಕಡಲಲ್ಲಿ ಮುಳುಗಿಸಿದೆ. ಕುಟುಂಬದ ಆಂತರಿಕ ಕಲಹ ಅಥವಾ ಮತ್ಯಾವುದೋ ಗೊಂದಲಗಳು ವಿದ್ಯಾರ್ಥಿಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದ್ದವೇ ಎಂಬ ಅನುಮಾನಗಳು ಈ ಡೆತ್ ನೋಟ್&zwnj;ನಿಂದ ಮೂಡುತ್ತಿವೆ.&lt;/p&gt;&lt;h2&gt;ಸ್ಥಳಕ್ಕೆ ಜಯನಗರ ಪೊಲೀಸರ ಭೇಟಿ&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಿಗುತ್ತಿದ್ದಂತೆಯೇ ತುಮಕೂರಿನ ಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ದಾವಣಗೆರೆಯಲ್ಲಿರುವ ಮೃತನ ಪೋಷಕರಿಗೆ ಅಧಿಕೃತ ಮಾಹಿತಿ ನೀಡಿದ್ದು, ಕಣ್ಣೀರು ಹಾಕುತ್ತಲೇ ಪೋಷಕರು ತುಮಕೂರಿನತ್ತ ಧಾವಿಸುತ್ತಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯ ಸಾವಿನ ಹಿಂದಿರುವ ನೈಜ ಕಾರಣವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-news-tumakuru-shocker-sit-engineering-student-from-davanagere-self-death-in-hostel-gdp/articleshow-lfgrgq8"/>
        </item>
        <item>
            <title><![CDATA[ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ 2028ಕ್ಕೆ ಪೂರ್ಣ: ರೈಲ್ವೆ ರಾಜ್ಯ ಸಚಿವ ಸೋಮಣ್ಣ]]></title>
            <link>https://kannada.asianetnews.com/karnataka-districts/v-somanna-railway-review-meeting-bengaluru-tumakuru-chitradurga-davanagere-direct-line-to-completion-by-2028-gdp/articleshow-mbk1sz3</link>
            <guid isPermaLink="true">https://kannada.asianetnews.com/karnataka-districts/v-somanna-railway-review-meeting-bengaluru-tumakuru-chitradurga-davanagere-direct-line-to-completion-by-2028-gdp/articleshow-mbk1sz3</guid>
            <pubDate>Wed, 10 Jun 2026 13:32:50 +0530</pubDate>
            <description><![CDATA[ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು ಮತ್ತು ತುಮಕೂರು ಭಾಗದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ, ಬಹುನಿರೀಕ್ಷಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವನ್ನು 2028ರೊಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಘೋಷಿಸಿದರು. ಜೊತೆಗೆ, ತುಮಕೂರು-ರಾಯದುರ್ಗ ಯೋಜನೆ ಮತ್ತು 32 ಆರ್&zwnj;ಒಬಿ/ಆರ್&zwnj;ಯುಬಿ ಕಾಮಗಾರಿಗಳ ಪ್ರಗತಿಯನ್ನೂ ಪರಿಶೀಲಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01ktr8pzmb8s9xfx9jv0bed22g,imgname-v-somanna--1--1781078392458.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ಭಾಗಗಳಲ್ಲಿ ನಡೆಯುತ್ತಿರುವ ಹಾಗೂ ಪ್ರಸ್ತಾವಿತ ರೈಲ್ವೆ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಂಗಳವಾರ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಸಮೀಕ್ಷಾ ಸಭೆ ನಡೆಸಿದರು. ಈ ಪರಿಶೀಲನೆಯಲ್ಲಿ ರಸ್ತೆ ಮೇಲ್ಸೇತುವೆಗಳು (ROB), ರಸ್ತೆ ಕೆಳಸೇತುವೆಗಳು (RUB) ಮತ್ತು ಪಾದಚಾರಿ ಮೇಲ್ಸೇತುವೆಗಳು (FOB) ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳು ಒಳಗೊಂಡಿದ್ದವು. ಈ ವೇಳೆ ಕರ್ನಾಟಕ ಬಹುನಿರೀಕ್ಷಿತ ಹೊಸ ರೈಲು ಯೋಜನೆಯಾದ ತುಮಕೂರು ಚಿತ್ರದುರ್ಗ ದಾವಣಗೆರೆ ನೇರ ರೈಲು ಮಾರ್ಗವು 2028ರಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.&lt;/p&gt;&lt;h2&gt;ಸಚಿವರ ಸ್ವಕ್ಷೇತ್ರ ತುಮಕೂರಿನಲ್ಲಿ 32 ಆರ್&zwnj;ಒಬಿ, ಆರ್&zwnj;ಯುಬಿ ಕಾಮಗಾರಿ: 2026-27ರ ಗಡುವು&lt;/h2&gt;&lt;p&gt;ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 32 ROB ಮತ್ತು RUB ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪಂಡಿತನಹಳ್ಳಿ, ಮೈದಾಳ, ಬಡ್ಡಿಹಳ್ಳಿ, ಬಟವಾಡಿ, ಹೆಗ್ಗೆರೆ, ಮಲ್ಲಸಂದ್ರ, ಬೆಂಚೆಗೆರೆ, ನಿಟ್ಟೂರು-ಮೈಸೂರು ಮಾರ್ಗ, ನಂದಿಹಳ್ಳಿ ಗೇಟ್ ಹಾಗೂ ಹಾಸನ ಮತ್ತು ಬಿದಿರೆಗುಡಿ ಕಡೆಗೆ ಬಿಎಚ್ ರಸ್ತೆಯಲ್ಲಿನ ಸೇತುವೆಗಳು ಪ್ರಮುಖವಾಗಿವೆ. ಈ ಎಲ್ಲಾ ಕಾಮಗಾರಿಗಳನ್ನು 2026&ndash;27ರೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.&lt;/p&gt;&lt;h2&gt;ರೂ. 1,801 ಕೋಟಿ ವೆಚ್ಚದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ&lt;/h2&gt;&lt;p&gt;ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಇಲಾಖೆಯ ನಡುವೆ 50:50 ವೆಚ್ಚ ಹಂಚಿಕೆ ಮಾದರಿಯಡಿಯಲ್ಲಿ ಒಟ್ಟು 1,801 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳ್ಳುತ್ತಿರುವ 191 ಕಿ.ಮೀ. ಉದ್ದದ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಯನ್ನು ಸಚಿವರು ಸೂಕ್ಷ್ಮವಾಗಿ ಪರಿಶೀಲಿಸಿದರು. ಈ ಯೋಜನೆಯು ಮಧ್ಯ ಕರ್ನಾಟಕದ ಕನೆಕ್ಟಿವಿಟಿಗೆ ಹೊಸ ಕ್ರಾಂತಿಯನ್ನೇ ತರಲಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿನ ಶೇ.92ಕ್ಕಿಂತ ಹೆಚ್ಚು ಭಾಗವನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿರುವುದಾಗಿ ಸಚಿವರು ತಿಳಿಸಿದರು. ಉರುಕೆರೆ&ndash;ತಿಮ್ಮರಾಜನಹಳ್ಳಿ (13.31 ಕಿ.ಮೀ.) ವಿಭಾಗ ಪೂರ್ಣಗೊಂಡಿದ್ದು, ಕಾರ್ಯಾಚರಣೆಗೆ ಸಿದ್ಧವಾಗಿದೆ. ಸಂಪೂರ್ಣ ಯೋಜನೆಯನ್ನು ಫೆಬ್ರವರಿ 2028ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.&lt;/p&gt;&lt;h2&gt;&amp;nbsp;ರೂ. 2,496 ಕೋಟಿ ವೆಚ್ಚದ ತುಮಕೂರು-ರಾಯದುರ್ಗ ಅಂತರರಾಜ್ಯ ಯೋಜನೆ&amp;nbsp;&lt;/h2&gt;&lt;p&gt;ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಬೆಸೆಯುವ ಅತ್ಯಂತ ಮಹತ್ವಾಕಾಂಕ್ಷೆಯ 206 ಕಿ.ಮೀ. ಉದ್ದದ ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಪ್ರಗತಿಯನ್ನು ಸಭೆಯಲ್ಲಿ ಮುನ್ನೆಲೆಗೆ ತರಲಾಯಿತು. ಈ ಬೃಹತ್ ಯೋಜನೆಗೆ ಒಟ್ಟು 2,496 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿದೆ.&lt;/p&gt;&lt;p&gt;ಈ ಯೋಜನೆಯ ಒಟ್ಟು ಉದ್ದದ ಪೈಕಿ ಈಗಾಗಲೇ 83 ಕಿ.ಮೀ. ರೈಲು ಮಾರ್ಗ ಯಶಸ್ವಿಯಾಗಿ ಕಾರ್ಯಾರಂಭ ಮಾಡಿದೆ. ಪ್ರಸ್ತುತ ಪ್ರಗತಿಯಲ್ಲಿರುವ ತುಮಕೂರು-ಉರುಕೆರೆ ವಿಭಾಗವು ಶಾಸನಬದ್ಧ ಸುರಕ್ಷತಾ ತಪಾಸಣೆಯಲ್ಲಿ (Statutory Safety Inspection) ಉತ್ತೀರ್ಣಗೊಂಡಿದ್ದು, ಪಾವಗಡ-ದೊಡ್ಡಹಳ್ಳಿ ವಿಭಾಗವು ಉದ್ಘಾಟನೆಗೆ ಸಂಪೂರ್ಣ ಸಜ್ಜಾಗಿದೆ. ಇನ್ನುಳಿದ ಮಾರ್ಗಗಳ ಕಾಮಗಾರಿಗಳು ಅತ್ಯಂತ ವೇಗವಾಗಿ ಪ್ರಗತಿಯಲ್ಲಿದ್ದು, ಶೇ. 97 ಕ್ಕೂ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.&lt;/p&gt;&lt;p&gt;ಉಳಿದ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರಗೊಳಿಸಲು, ರಸ್ತೆ ಮುಚ್ಚುವಿಕೆ ಮತ್ತು ತಿರುವುಗಳಿಗೆ ಸಮಯೋಚಿತ ಅನುಮೋದನೆ ಪಡೆಯಲು ಹಾಗೂ ವಿದ್ಯುತ್ ಮಾರ್ಗಗಳು, ನೀರಿನ ಪೈಪ್&zwnj;ಲೈನ್&zwnj;ಗಳು ಮತ್ತು ಅರಣ್ಯ ಅನುಮತಿಗಳಂತಹ ಉಪಯುಕ್ತತೆ ಸ್ಥಳಾಂತರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಅತ್ಯವಶ್ಯಕ ಎಂದು ಸೋಮಣ್ಣ ಒತ್ತಿ ಹೇಳಿದರು. ಈ ಸಭೆಯಲ್ಲಿ ನೈಋತ್ಯ ರೈಲ್ವೆಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮಾ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/v-somanna-railway-review-meeting-bengaluru-tumakuru-chitradurga-davanagere-direct-line-to-completion-by-2028-gdp/articleshow-mbk1sz3"/>
        </item>
        <item>
            <title><![CDATA[ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್: ಪ್ರಯಾಣಕ್ಕೆ ಲಕ್ಷುರಿ ಕೋಚ್‌ ರೆಡಿ, ಒಳಾಂಗಣ ವಿನ್ಯಾಸದ ವಿಡಿಯೋ ವೈರಲ್]]></title>
            <link>https://kannada.asianetnews.com/gallery/state/bengaluru-mumbai-vande-bharat-express-sleeper-first-ac-coach-inside-photos-gdp-nh56vbs</link>
            <guid isPermaLink="true">https://kannada.asianetnews.com/gallery/state/bengaluru-mumbai-vande-bharat-express-sleeper-first-ac-coach-inside-photos-gdp-nh56vbs</guid>
            <pubDate>Thu, 18 Jun 2026 12:23:36 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆಯು ಮುಂಬೈ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ 'ವಂದೇ ಭಾರತ್ ಸ್ಲೀಪರ್' ರೈಲನ್ನು ಆರಂಭಿಸಲಿದೆ. ಈ ಪ್ರೀಮಿಯಂ ರೈಲು, ಪ್ರಸ್ತುತ ರೈಲುಗಳಿಗಿಂತ ವೇಗವಾಗಿರಲಿದ್ದು, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಆಧುನಿಕ ಸೌಕರ್ಯಗಳಾದ ಖಾಸಗಿ ಕ್ಯಾಬಿನ್&zwnj;ಗಳು ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcq8pmmdze2dnzk112k8558,imgname-vande-bharat-bengaluru-mumbai--5--1781764741780.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರೈಲ್ವೆಯು ಮುಂಬೈ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ 'ವಂದೇ ಭಾರತ್ ಸ್ಲೀಪರ್' ರೈಲನ್ನು ಆರಂಭಿಸಲಿದೆ. ಈ ಪ್ರೀಮಿಯಂ ರೈಲು, ಪ್ರಸ್ತುತ ರೈಲುಗಳಿಗಿಂತ ವೇಗವಾಗಿರಲಿದ್ದು, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಆಧುನಿಕ ಸೌಕರ್ಯಗಳಾದ ಖಾಸಗಿ ಕ್ಯಾಬಿನ್&zwnj;ಗಳು ಇದೆ.&lt;/p&gt;&lt;img&gt;&lt;p&gt;ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷಿ 'ವಂದೇ ಭಾರತ್' ಕ್ರಾಂತಿ ಈಗ ಹೊಸ ಹಂತಕ್ಕೆ ಕಾಲಿಡುತ್ತಿದೆ. ದೇಶದ ಎರಡು ಪ್ರಮುಖ ಆರ್ಥಿಕ ರಾಜಧಾನಿಗಳಾದ ಮುಂಬೈ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ ಮುಂಬರುವ 'ವಂದೇ ಭಾರತ್ ಸ್ಲೀಪರ್' ರೈಲು ಸಂಚಾರ ಆರಂಭಿಸಲಿದೆ. ಸಾಂಪ್ರದಾಯಿಕ ರಾತ್ರಿ ಪ್ರಯಾಣದ ರೈಲುಗಳಿಗೆ ಹೋಲಿಸಿದರೆ, ಇದು ಅತ್ಯಂತ ವೇಗದ ಮತ್ತು ಹೆಚ್ಚು ಆರಾಮದಾಯಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಿದೆ. ಮುಂದಿನ ಪೀಳಿಗೆಯ ಸುದೀರ್ಘ ಪ್ರಯಾಣದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಈ ಪ್ರೀಮಿಯಂ ರೈಲು ಸೇವೆಗೆ ಹಸಿರು ನಿಶಾನೆ ನೀಡಿದೆ.ರಾತ್ರಿ ಪ್ರಯಾಣಕ್ಕೆ ಹೊಸ ಮೆರುಗು&lt;/p&gt;&lt;img&gt;&lt;p&gt;ಪ್ರಸ್ತುತ ಚಾಲ್ತಿಯಲ್ಲಿರುವ ವಂದೇ ಭಾರತ್ ಚೇರ್ ಕಾರ್ (ಕುಳಿತುಕೊಳ್ಳುವ ವ್ಯವಸ್ಥೆ) ರೈಲುಗಳಿಗಿಂತ ಈ ಸ್ಲೀಪರ್ ಆವೃತ್ತಿಯು ಸಂಪೂರ್ಣ ಭಿನ್ನವಾಗಿದೆ. ಇದನ್ನು ವಿಶೇಷವಾಗಿ ರಾತ್ರಿ ವೇಳೆ ಪ್ರಯಾಣಿಸುವ ಜನರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ವೇಗ ಮತ್ತು ಪ್ರಯಾಣಿಕರ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ.&lt;/p&gt;&lt;p&gt;&lt;strong&gt;ಆಧುನಿಕ ಫಸ್ಟ್ ಎಸಿ ಕೋಚ್: &lt;/strong&gt;ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ರೈಲಿನ ಮೊದಲ ಎಸಿ ಕೋಚ್&zwnj;ನ ದೃಶ್ಯಗಳು ಎಲ್ಲರ ಗಮನ ಸೆಳೆಯುತ್ತಿವೆ.&lt;/p&gt;&lt;p&gt;&lt;strong&gt;ಸುರಕ್ಷಿತ ಮೆಟ್ಟಿಲುಗಳ ವಿನ್ಯಾಸ: &lt;/strong&gt;ಹಳೆಯ ರೈಲುಗಳಲ್ಲಿ ಮೇಲಿನ ಬರ್ತ್&zwnj;ಗಳನ್ನು ಹತ್ತಲು ಕಡಿದಾದ ಕಷ್ಟಕರ ಏಣಿಗಳಿರುತ್ತಿದ್ದವು. ಆದರೆ, ವಂದೇ ಭಾರತ್ ಸ್ಲೀಪರ್&zwnj;ನಲ್ಲಿ ಮೇಲಿನ ಬರ್ತ್&zwnj;ಗಳನ್ನು ಸುಲಭವಾಗಿ ಹತ್ತಲು ಪ್ರತ್ಯೇಕ ಮತ್ತು ಸುರಕ್ಷಿತ ಮೆಟ್ಟಿಲುಗಳನ್ನು ಒದಗಿಸಲಾಗಿದೆ. ಈ ರೈಲಿನ ಫಸ್ಟ್ ಎಸಿ ಕೋಚ್ ಸಂಪೂರ್ಣ ಖಾಸಗಿ ಕ್ಯಾಬಿನ್&zwnj;ಗಳು (Private Cabins), ಮೇಲಿನ ಬರ್ತ್&zwnj;ಗಳಿಗೆ ಸುಲಭವಾಗಿ ಹತ್ತಲು ಆಧುನಿಕ ಮೆಟ್ಟಿಲುಗಳು, ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಅತ್ಯಾಧುನಿಕ ಪ್ರೀಮಿಯಂ ಒಳಾಂಗಣ ವಿನ್ಯಾಸವನ್ನು ಒಳಗೊಂಡಿರಲಿದೆ.&lt;/p&gt;&lt;p&gt;&lt;strong&gt;ಪ್ರೀಮಿಯಂ ಒಳಾಂಗಣ&lt;/strong&gt;: ಈ ಬೋಗಿಗಳಲ್ಲಿ ಸ್ಲೈಡಿಂಗ್ ಕಂಪಾರ್ಟ್&zwnj;ಮೆಂಟ್ ಬಾಗಿಲುಗಳು, ಅತ್ಯಾಧುನಿಕ ಬೆಳಕಿನ ವ್ಯವಸ್ಥೆ (Modern Lighting) ಮತ್ತು ಕಣ್ಣಿಗೆ ತಂಪು ನೀಡುವ ಸುಂದರ ಒಳಾಂಗಣ ವಿನ್ಯಾಸವಿದೆ.&lt;/p&gt;&lt;p&gt;&lt;strong&gt;ಸೌಕರ್ಯಗಳು:&lt;/strong&gt; ಆರಾಮದಾಯಕವಾದ ಮಲಗುವ ಸೀಟುಗಳು, ನವೀಕರಿಸಿದ ಫಿಟ್ಟಿಂಗ್&zwnj;ಗಳು ಮತ್ತು ಪ್ರಯಾಣಿಕ ಸ್ನೇಹಿ ವಿನ್ಯಾಸಗಳು ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಪ್ರಯಾಣದ ಅನುಭವ ನೀಡಲಿವೆ.&lt;/p&gt;&lt;img&gt;&lt;p&gt;ಪ್ರಸ್ತುತ ಈ ಮಾರ್ಗದಲ್ಲಿ ಚಲಿಸುವ ಸಾಮಾನ್ಯ ರೈಲುಗಳು ಮುಂಬೈನಿಂದ ಬೆಂಗಳೂರನ್ನು ತಲುಪಲು ಸುಮಾರು 20 ಗಂಟೆಗಳಿಗಿಂತಲೂ ಅಧಿಕ ಸಮಯ ತೆಗೆದುಕೊಳ್ಳುತ್ತವೆ. ಆದರೆ, ಹೊಸ ವಂದೇ ಭಾರತ್ ಸ್ಲೀಪರ್ ರೈಲು ಈ ಪ್ರಯಾಣದ ಸಮಯವನ್ನು ಕೇವಲ 14 ರಿಂದ 16 ಗಂಟೆಗಳಿಗೆ ಕಡಿತಗೊಳಿಸುವ ಸಾಧ್ಯತೆಯಿದೆ. ಅಂದರೆ ಪ್ರಯಾಣಿಕರಿಗೆ ಸರಿಸುಮಾರು 4 ರಿಂದ 5 ಗಂಟೆಗಳ ಸಮಯ ಉಳಿತಾಯವಾಗಲಿದೆ. ರೈಲಿನ ಸರಾಸರಿ ವೇಗವನ್ನು ಕಾಯ್ದುಕೊಳ್ಳುವ ಸಲುವಾಗಿ, ಇದಕ್ಕೆ ಅತ್ಯಂತ ಸೀಮಿತ ನಿಲುಗಡೆಗಳನ್ನು (Stoppages) ಮಾತ್ರ ನೀಡಲಾಗುವುದು ಎನ್ನಲಾಗಿದೆ. ಆದರೆ, ಭಾರತೀಯ ರೈಲ್ವೆ ಇಲಾಖೆಯು ಅಂತಿಮ ವೇಳಾಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಯಾಣಿಕರ ಸಾಮರ್ಥ್ಯ: &lt;/strong&gt;ಈ ಸ್ಲೀಪರ್ ರೈಲು ಒಟ್ಟು 16 ಸಂಪೂರ್ಣ ಹವಾನಿಯಂತ್ರಿತ (AC) ಬೋಗಿಗಳನ್ನು ಹೊಂದಿರಲಿದ್ದು, ಒಂದೇ ಬಾರಿಗೆ 823 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.&lt;/p&gt;&lt;p&gt;&lt;strong&gt;ಸುಧಾರಿತ ತಂತ್ರಜ್ಞಾನ: &lt;/strong&gt;ರಾತ್ರಿ ವೇಳೆಯ ಪ್ರಯಾಣದಲ್ಲಿ ಯಾವುದೇ ಗದ್ದಲವಿಲ್ಲದೆ ಸುಗಮ ಸವಾರಿಯನ್ನು ಖಚಿತಪಡಿಸಿಕೊಳ್ಳಲು ಇದರಲ್ಲಿ ಸುಧಾರಿತ 'ಸಸ್ಪೆನ್ಷನ್ ತಂತ್ರಜ್ಞಾನ'ವನ್ನು ಬಳಸಲಾಗಿದೆ.&lt;/p&gt;&lt;p&gt;&lt;strong&gt;ಸ್ವಯಂಚಾಲಿತ ಬಾಗಿಲುಗಳು ಮತ್ತು ನೈರ್ಮಲ್ಯ: &lt;/strong&gt;ರೈಲಿನಲ್ಲಿ ಆಟೋಮ್ಯಾಟಿಕ್ ಬಾಗಿಲುಗಳು, ಬಯೋ-ವ್ಯಾಕ್ಯೂಮ್ ಶೌಚಾಲಯಗಳು ಮತ್ತು ಅತ್ಯಾಧುನಿಕ ಸುರಕ್ಷತಾ ಫೀಚರ್&zwnj;ಗಳು ಲಭ್ಯವಿರಲಿವೆ.&lt;/p&gt;&lt;p&gt;&lt;strong&gt;ರೈಲಿನ ಮಾರ್ಗ ಯಾವುದು?&lt;/strong&gt;&lt;/p&gt;&lt;p&gt;ವಿವಿಧ ಮಾರ್ಗಗಳ ಜೋಡಣೆಯ ಬಗ್ಗೆ ಸದ್ಯ ಚರ್ಚೆಗಳು ನಡೆಯುತ್ತಿವೆಯಾದರೂ, ರೈಲ್ವೆ ಮಂಡಳಿಯು ಅಧಿಕೃತ ಮಾರ್ಗಸೂಚಿಯನ್ನು ಇನ್ನು ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಪ್ರಾಥಮಿಕ ವರದಿಗಳ ಪ್ರಕಾರ ಈ ರೈಲು ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ಕೈಗಾರಿಕಾ ಹಾಗೂ ಸಾಂಸ್ಕೃತಿಕ ಕೇಂದ್ರಗಳನ್ನು ಸಂಪರ್ಕಿಸಲಿದೆ. ಲೋಕಾರ್ಪಣೆ ದಿನಾಂಕ ಹತ್ತಿರ ಬಂದಾಗ ನಿಖರವಾದ ನಿಲುಗಡೆಗಳ ಮಾಹಿತಿ ಸಿಗಲಿದೆ. ಈ ರೈಲು ಕರ್ನಾಟಕದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರಗಳ ಪ್ರಮುಖ ಮಾರ್ಗದ ಮೂಲಕ ಮುಂಬೈ ತಲುಪುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದರೂ, ರೈಲ್ವೆ ಇಲಾಖೆಯು ಇದರ ಉದ್ಘಾಟನಾ ದಿನಾಂಕ, ದರ ಪಟ್ಟಿ ಅಥವಾ ಟಿಕೆಟ್ ಕಾಯ್ದಿರಿಸುವಿಕೆಯ ವೇಳಾಪಟ್ಟಿಯನ್ನು ಇನ್ನು ಪ್ರಕಟಿಸಿಲ್ಲ. ಆದ್ದರಿಂದ, ಪ್ರಸ್ತುತ ಐಆರ್&zwnj;ಸಿಟಿಸಿ (IRCTC) ಆಪ್ ಅಥವಾ ಕೌಂಟರ್&zwnj;ಗಳಲ್ಲಿ ಬುಕಿಂಗ್ ಲಭ್ಯವಿರುವುದಿಲ್ಲ. ರೇಕ್ (Rake) ಹಂಚಿಕೆ ಮತ್ತು ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ನಂತರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.&lt;/p&gt;&lt;img&gt;&lt;p&gt;ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು, ಭಾರತದ ಪ್ರಮುಖ ನಗರಗಳ ನಡುವೆ ವಿಶ್ವದರ್ಜೆಯ ಪ್ರೀಮಿಯಂ ರಾತ್ರಿ ಸಂಪರ್ಕವನ್ನು ಕಲ್ಪಿಸುವ ಭಾರತೀಯ ರೈಲ್ವೆಯ ಬೃಹತ್ ದೃಷ್ಟಿಕೋನದ ಒಂದು ಭಾಗವಾಗಿದೆ. ಈಗಾಗಲೇ ಚೇರ್ ಕಾರ್ ಮೂಲಕ ದೇಶಾದ್ಯಂತ ಕ್ರಾಂತಿ ಸೃಷ್ಟಿಸಿರುವ ವಂದೇ ಭಾರತ್, ಇದೀಗ ಸ್ಲೀಪರ್ ಕೋಚ್&zwnj;ಗಳ ಮೂಲಕ ರಾತ್ರಿ ಪ್ರಯಾಣದ ವ್ಯಾಖ್ಯಾನವನ್ನೇ ಬದಲಾಯಿಸಲು ಸಜ್ಜಾಗಿದೆ. ಈ ಮಾರ್ಗವು ದೇಶದಲ್ಲೇ ಸ್ಲೀಪರ್ ರೈಲು ಪಡೆಯಲಿರುವ ಎರಡನೇ ಅತ್ಯಂತ ನಿರೀಕ್ಷಿತ ಮಾರ್ಗವಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/bengaluru-mumbai-vande-bharat-express-sleeper-first-ac-coach-inside-photos-gdp-nh56vbs"/>
        </item>
        <item>
            <title><![CDATA[ಹುಬ್ಬಳ್ಳಿ-ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ, 5 ಜಿಲ್ಲೆಯ ಪ್ರವಾಸಿಗರಿಗೆ ಇದೊಂದು ಆಫರ್!]]></title>
            <link>https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm</link>
            <guid isPermaLink="true">https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm</guid>
            <pubDate>Wed, 17 Jun 2026 12:01:04 +0530</pubDate>
            <description><![CDATA[ನೈಋತ್ಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 20 ಮತ್ತು 21 ರಂದು ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು 5 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಪ್ರವಾಸಿಗರಿಗೆ ಅನುಕೂಲಕರವಾದ ವೇಳಾಪಟ್ಟಿಯನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khp601b9hctbmkhxep8fe8wz,imgname-indian-railway--2--1771344758121.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಹುಬ್ಬಳ್ಳಿ ಮತ್ತು ಪ್ರವಾಸಿ ತಾಣಗಳಿರುವ ಚಿಕ್ಕಮಗಳೂರು ನಡುವೆ ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ವಾರಾಂತ್ಯದ ದಿನಗಳಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹಾಗೂ ರೈಲುಗಳಲ್ಲಿನ ಹೆಚ್ಚುವರಿ ಜನದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಜೂನ್ 20 ಮತ್ತು 21 ರಂದು ಈ ಎರಡೂ ನಗರಗಳ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ರೈಲು ಉತ್ತರ ಮತ್ತು ಮಧ್ಯ ಕರ್ನಾಟಕದ ಒಟ್ಟು 5 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಮಾನ್ಸೂನ್ ಪ್ರಕೃತಿ ಸವಿಯಲು ಇದೊಂದು ಆಫರ್ ನೀಡಿದಂತಿದೆ. ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ಅನುಕೂಲಕರವಾದ ಈ ರೈಲಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.&lt;/p&gt;&lt;h2&gt;ರೈಲಿನ ವೇಳಾಪಟ್ಟಿ ಮತ್ತು ಸಂಚಾರದ ವಿವರ&lt;/h2&gt;&lt;p&gt;ಈ ವಿಶೇಷ ರೈಲನ್ನು ಜೂನ್ 20 (ಶನಿವಾರ) ಮತ್ತು ಜೂನ್ 21 (ಭಾನುವಾರ) ರಂದು ಒಟ್ಟು ಎರಡು ಟ್ರಿಪ್&zwnj;ಗಳ ಕಾಲ ಓಡಿಸಲಾಗುತ್ತಿದೆ.&lt;/p&gt;&lt;p&gt;ಹುಬ್ಬಳ್ಳಿ - ಚಿಕ್ಕಮಗಳೂರು ವಿಶೇಷ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 07341): ಜೂನ್ 20 ಮತ್ತು 21 ರಂದು ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಟು, ಅದೇ ದಿನ ಬೆಳಗ್ಗೆ 11:15 ಕ್ಕೆ ಚಿಕ್ಕಮಗಳೂರು ನಿಲ್ದಾಣವನ್ನು ತಲುಪಲಿದೆ.&lt;/p&gt;&lt;p&gt;ಚಿಕ್ಕಮಗಳೂರು - ಹುಬ್ಬಳ್ಳಿ ವಿಶೇಷ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 07342): ಜೂನ್ 20 ಮತ್ತು 21 ರಂದು ಚಿಕ್ಕಮಗಳೂರಿನಿಂದ ಸಂಜೆ 5:30 ಕ್ಕೆ ಹೊರಟು, ಅದೇ ದಿನ ರಾತ್ರಿ 11:20 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ತಲುಪಲಿದೆ.&lt;/p&gt;&lt;h2&gt;ಎಲ್ಲೆಲ್ಲಿ ನಿಲುಗಡೆ ಇರಲಿದೆ? (ಮಾರ್ಗ ಮತ್ತು ನಿಲ್ದಾಣಗಳು)&lt;/h2&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಮಾರ್ಗಮಧ್ಯೆ ಪ್ರಮುಖ ನಗರಗಳು ಸೇರಿದಂತೆ ಒಟ್ಟು 15 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.&lt;/p&gt;&lt;p&gt;ಪ್ರಮುಖ ನಿಲುಗಡೆಗಳು: ಕುಂದಗೋಳ, ಸಂಶಿ (ಸೌಂಶಿ), ಯಳವಿಗಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು(ಚಿತ್ರದುರ್ಗ), ರಾಮಗಿರಿ, ಅಜ್ಜಂಪುರ, ಬೀರೂರು, ಕಡೂರು, ಬಿಸ್ಲೆಹಳ್ಳಿ, ಸಖರಾಯಪಟ್ಟಣ ಹಾಗೂ ಕಣಿವೆಹಳ್ಳಿ.&lt;/p&gt;&lt;h2&gt;ಬೋಗಿಗಳ ವಿವರ&amp;nbsp;&lt;/h2&gt;&lt;p&gt;ಈ ವಿಶೇಷ ರೈಲು ಒಟ್ಟು 10 ಬೋಗಿಗಳನ್ನು (Coaches) ಒಳಗೊಂಡಿರುತ್ತದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೋಗಿಗಳನ್ನು ವಿನ್ಯಾಸಗೊಳಿಸಲಾಗಿದೆ:&lt;/p&gt;&lt;ul&gt; &lt;li&gt;1 ಸ್ಲೀಪರ್ ಕ್ಲಾಸ್ ಬೋಗಿ (Sleeper Class)&lt;/li&gt; &lt;li&gt;7 ಸಾಮಾನ್ಯ ದರ್ಜೆ ಬೋಗಿಗಳು (General Coach)&lt;/li&gt; &lt;li&gt;2 ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ ದಿವ್ಯಾಂಗರ ವಿಶೇಷ ಕಂಪಾರ್ಟ್&zwnj;ಮೆಂಟ್ ಬೋಗಿಗಳು.&lt;/li&gt;&lt;/ul&gt;&lt;h2&gt;ಪ್ರವಾಸಿಗರಿಗೆ &amp;nbsp;ಸೂಕ್ತ ಸಮಯದ ಪ್ಲಾನಿಂಗ್!&lt;/h2&gt;&lt;p&gt;ನೈಋತ್ಯ ರೈಲ್ವೆ ಅಧಿಕಾರಿಗಳು ಈ ರೈಲಿನ ವೇಳಾಪಟ್ಟಿಯನ್ನು ಪ್ರವಾಸಿಗರಿಗೆ ಅತ್ಯಂತ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಿದ್ದಾರೆ.&lt;/p&gt;&lt;p&gt;ರೈಲು ಬೆಳಗ್ಗೆ 11:15ಕ್ಕೆ ಚಿಕ್ಕಮಗಳೂರು ತಲುಪುವುದರಿಂದ, ಪ್ರವಾಸಿಗರು ಆರಾಮವಾಗಿ &amp;nbsp;ಮಧ್ಯಾಹ್ನದ ವೇಳೆಗೆ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್&zwnj;ಗಿರಿ ಮುಂತಾದ ಕಡೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಲು ಸಾಕಷ್ಟು ಸಮಯ ಸಿಗುತ್ತದೆ.&lt;/p&gt;&lt;p&gt;ಇನ್ನು ಹಿಂದಿರುಗುವಾಗ ಭಾನುವಾರ ಸಂಜೆ 5:30ಕ್ಕೆ ರೈಲು ಇರುವುದರಿಂದ, ವೀಕೆಂಡ್&zwnj;ನಲ್ಲಿ ಇಡೀ ದಿನ ಸುತ್ತಾಡಿ, ಯಾವುದೇ ಆತುರವಿಲ್ಲದೇ ಆರಾಮವಾಗಿ ರೈಲು ಹತ್ತಿ ರಾತ್ರಿಯೊಳಗೆ ಹುಬ್ಬಳ್ಳಿಗೆ ತಲುಪಬಹುದಾಗಿದೆ. ಸಾರ್ವಜನಿಕರು ಹಾಗೂ ಪ್ರಕೃತಿ ಪ್ರೇಮಿಗಳು ಈ ವಿಶೇಷ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಕೋರಿದೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm"/>
        </item>
        <item>
            <title><![CDATA[4 ವಿಧಗಳಲ್ಲಿ ತ್ಯಾಜ್ಯ ವಿಂಗಡಿಸದಿದ್ದರೆ ಪ್ರಕರಣ ದಾಖಲಿಸಿ ದಂಡ ಹಾಕಿ; ಮುಖ್ಯಾಧಿಕಾರಿ ಎಚ್ಚರಿಕೆ]]></title>
            <link>https://kannada.asianetnews.com/karnataka-districts/davanagere-honnali-file-a-case-and-fine-if-waste-is-not-segregated-in-4-ways-chief-officer-warns-mrq/articleshow-qzgpong</link>
            <guid isPermaLink="true">https://kannada.asianetnews.com/karnataka-districts/davanagere-honnali-file-a-case-and-fine-if-waste-is-not-segregated-in-4-ways-chief-officer-warns-mrq/articleshow-qzgpong</guid>
            <pubDate>Wed, 10 Jun 2026 07:23:29 +0530</pubDate>
            <description><![CDATA[&lt;p&gt;ಪುರಸಭೆಯು ಘನತ್ಯಾಜ್ಯ ನಿರ್ವಹಣಾ ನಿಯಮದ ಅಡಿಯಲ್ಲಿ ತ್ಯಾಜ್ಯವನ್ನು 4 ವಿಧಗಳಲ್ಲಿ ವಿಂಗಡಿಸುವುದನ್ನು ಕಡ್ಡಾಯಗೊಳಿಸಿದೆ. ಈ ನಿಯಮ ಪಾಲಿಸದ ಸಾರ್ವಜನಿಕರು ಮತ್ತು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಟಿ.ಲೀಲಾವತಿ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktqkfezm3gc332pcky8cpmbm,imgname-garbage-1781056125940.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ:&amp;nbsp;&lt;/strong&gt; ಘನತ್ಯಾಜ್ಯ ನಿರ್ವಹಣಾ ನಿಯಮ- 2026ರಂತೆ ಇನ್ನು ಮುಂದೆ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಹೋಟೆಲ್ ಮಾಲೀಕರು, ವಾಣಿಜ್ಯ ಉದ್ದಿಮೆದಾರರು, ಬೀದಿಬದಿ ವ್ಯಾಪಾರಸ್ಥರು ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ 4 ವಿಧದ ತ್ಯಾಜ್ಯಗಳಾದ ಹಸಿತ್ಯಾಜ್ಯ, ಒಣತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಅಥವಾ ಅಪಾಯಕಾರಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕ್ರಮಬದ್ದವಾಗಿ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ತಿಳಿಸಿದರು.&lt;/p&gt;&lt;h2&gt;&lt;strong&gt;ಹೊನ್ನಾಳಿ ಪುರಸಭೆ ವ್ಯಾಪ್ತಿ&lt;/strong&gt;&lt;/h2&gt;&lt;p&gt;ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘನತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಘನತ್ಯಾಜ್ಯ ನಿರ್ವಹಣಾ ನಿಯಮ 2026 ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕಾಗಿದೆ. ಆದ್ದರಿಂದ ಹೊನ್ನಾಳಿ ಪುರಸಭೆ ವ್ಯಾಪ್ತಿಯ ಎಲ್ಲ ತ್ಯಾಜ್ಯ ಉತ್ಪಾದಕರಿಗೆ ಕರಪತ್ರಗಳು, ಬ್ಯಾನರ್&zwnj;ಗಳು, ದಿನಪತ್ರಿಕೆಗಳು, ಕಸ ಸಂಗ್ರಹಿಸುವ ಪುರಸಭೆ ವಾಹನಗಳ ಧ್ವನಿವರ್ಧಕಗಳ ಮೂಲಕ ಈಗಾಗಲೇ ಸಾರ್ವಜನಿಕರು, ವರ್ತಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ ಎಂದರು.&lt;/p&gt;&lt;p&gt;ಆದರೆ, ಹಲವಾರು ಜನ ಖಾಲಿ ನಿವೇಶನ, ಚರಂಡಿಗಳು, ರಸ್ತೆ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಇಡೀ ನಗರದ ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ. ಇದು ಪುರಸಭೆ ಗಮನಕ್ಕೆ ಬಂದಿದೆ. ಜನರು ತಮ್ಮ, ಕಚೇರಿ, ಅಂಗಡಿಗಳಿಂದ ಪ್ರತಿನಿತ್ಯ ಉತ್ಪತ್ತಿಯಾಗುವ 4 ವಿಧದ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ತಪ್ಪದೇ ನಿತ್ಯ ಬೆಳಗ್ಗೆ ಪುರಸಭೆಯಿಂದ ಬರುವ ಕಸ ಸಂಗ್ರಹ ವಾಹನಗಳಿಗೆ ಕಡ್ಡಾಯವಾಗಿ ನೀಡಬೇಕು ಎಂದರು.&lt;/p&gt;&lt;p&gt;ಬಟ್ಟೆ ಅಂಗಡಿ, ಗ್ಯಾರೇಜ್, ಮೆಡಿಕಲ್ ಶಾಪ್, ಪ್ರಾವಿಜನ್ ಸ್ಟೋರ್ಸ್&zwnj;, ಹಣ್ಣು, ತರಕಾರಿ ಅಂಗಡಿ, ಹೋಟೆಲ್&zwnj;ಗಳಲ್ಲಿ ಬೀದಿಬದಿ ವ್ಯಾಪಾರಿಗಳು ಇತರೆ ಯಾವುದೇ ವಾಣಿಜ್ಯ ಉದ್ದಿಮೆದಾರರು ಪುರಸಭೆಯಿಂದ ಉದ್ದಿಮೆ, ಪರವಾನಗಿಯನ್ನು ಪಡೆಯುವುದು, ತಂಬಾಕು ಉತ್ಪನ್ನ ಮಾರಾಟಗಾರರು ಪ್ರತ್ಯೇಕ ತಂಬಾಕು ಮಾರಾಟ ಪರವಾನಗಿ ಕಡ್ಡಾಯವಾಗಿ ಪಡೆದು ವ್ಯವಹಾರ ಸ್ಥಳದಲ್ಲಿ ಉತ್ಪತ್ತಿ ಆಗುವ ತ್ಯಾಜ್ಯಗಳನ್ನು ಶೇಖರಿಸಿಡಬೇಕು. ಬಳಿಕ ಪ್ರತಿದಿನ ತಮ್ಮ ಬಳಿ ಬರುವ ಪುರಸಭೆ ವಾಹನಕ್ಕೆ ನೀಡಬೇಕು ಎಂದರು.&lt;/p&gt;&lt;h3&gt;&lt;strong&gt;ಸಾರ್ವಜನಿಕರಲ್ಲಿ ಮನವಿ&lt;/strong&gt;&lt;/h3&gt;&lt;p&gt;ವ್ಯಾಪಾರಸ್ಥರು ವ್ಯಾಪಾರದ ಸ್ಥಳದಲ್ಲಿ ಗ್ರಾಹಕರು ಎಸೆದುಹೋದ ಟೀ ಲೋಟ, ತಂಬಾಕು ಚೀಟಿ, ಹಣ್ಣಿನ ಸಿಪ್ಪೆಗಳನ್ನು ರಸ್ತೆಯಲ್ಲಿ ಎಸೆಯದೇ ನಿಗದಿಪಡಿಸಿದ ಬುಟ್ಟಿಗಳಲ್ಲಿ ಹಾಕುವಂತೆ ಕ್ರಮಕೈಗೊಳ್ಳಬೇಕು. ಈ ಮೂಲಕ ನಗರದ ಸ್ವಚ್ಛತೆಗೆ ಸಾರ್ವಜನಿಕರ ಆರೋಗ್ಯ ರಕ್ಷಣೆ, ಉತ್ತಮ ಜೀವನಕ್ಕೆ ಮತ್ತು ಸರ್ಕಾರದ ಆದೇಶಗಳನ್ನು ಅನುಷ್ಠಾನಗೊಳಿಸಲು ಪುರಸಭೆ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-honnali-file-a-case-and-fine-if-waste-is-not-segregated-in-4-ways-chief-officer-warns-mrq/articleshow-qzgpong"/>
        </item>
        <item>
            <title><![CDATA[Davanagere Horror: ಮಹಿಳೆಗೆ ಮತ್ತು ಬರಿಸುವ ಪಾನೀಯ ನೀಡಿ ಹೊಲಕ್ಕೆ ಹೊತ್ತೊಯ್ದು  ಸಾಮೂಹಿಕ ಬಲತ್ಕಾರ: ಬೆತ್ತಲೆ ವಿಡಿಯೋ ಮಾಡಿ ವಿಕೃತಿ]]></title>
            <link>https://kannada.asianetnews.com/crime/davangere-woman-assaulted-video-leaked-by-miscreants-rav/articleshow-r2kbf5y</link>
            <guid isPermaLink="true">https://kannada.asianetnews.com/crime/davangere-woman-assaulted-video-leaked-by-miscreants-rav/articleshow-r2kbf5y</guid>
            <pubDate>Wed, 10 Jun 2026 12:02:10 +0530</pubDate>
            <description><![CDATA[&lt;p&gt;ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಪತಿಯೊಂದಿಗೆ ಜಗಳವಾಡಿ ಮನೆಬಿಟ್ಟ ಮಹಿಳೆಗೆ, ಯುವಕನೊಬ್ಬ ಪಾನೀಯ ನೀಡಿ ಬಳಿಕ ಸಾಮೂಹಿಕ ಅತ್ಯಾ೧ಚಾರ ಎಸಗಲಾಗಿದೆ. ಈ ಘಟನೆಯ ವಿಡಿಯೋಗಳು ಹರಿದಾಡಿದ ನಂತರ ಸಂತ್ರಸ್ತೆ ದೂರು ನೀಡಿದ್ದು, ಪೊಲೀಸರು 10 ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktr3gf676bn3cdv8jh85pn05,imgname-----------------------2026-06-10t115714.000-1781072936135.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.10): &lt;/strong&gt;ಮಹಿಳೆಯನ್ನು ಹೊಲವೊಂದಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾ೧ಚಾರ ಎಸಗಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂ.3ರ ಸಂಜೆ ಪತಿ ಕುಡಿದು ಬಂದಿದ್ದರಿಂದ ಗಂಡನೊಂದಿಗೆ ಜಗಳವಾಡಿ ರಾತ್ರಿಯೇ ತನ್ನ ಅಣ್ಣನ ಮನೆಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.&lt;/p&gt;&lt;h2&gt;ಜೂನ್ 3ರ ಸಂಜೆ ನಡೆದಿದ್ದಾದರೂ ಏನು?&lt;/h2&gt;&lt;p&gt;ಜೂನ್ 3ರ ಸಂಜೆ ಸಂತ್ರಸ್ತ ಮಹಿಳೆ ಪತಿ ವಿಪರೀತ ಕುಡಿದು ಬಂದಿದ್ದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇದರಿಂದ ಮನನೊಂದು ಸಂತ್ರಸ್ತ ಮಹಿಳೆ ಅದೇ ರಾತ್ರಿ ತನ್ನ ಅಣ್ಣನ ಮನೆಗೆ ಹೋಗಲು ಮನೆಯಿಂದ ಹೊರನಡೆದಿದ್ದಾಳೆ. ಈ ವೇಳೆ ಗ್ರಾಮದ ಚಿಕನ್ ಅಂಗಡಿ ಸಮೀಪ ಕುಳಿತು ಅಳುತ್ತಿದ್ದ ಮಹಿಳೆಯನ್ನು ಗಮನಿಸಿದ ಯುವಕನೊಬ್ಬ ಮಾತನಾಡಿಸಿ ಸಮಾಧಾನಪಡಿಸುವ ನೆಪದಲ್ಲಿ ಕುಡಿಯಲು 7ಅಪ್ ನೀಡಿದ್ದಾನೆ. ಆದರೆ ಆ ಪಾನೀಯ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮಹಿಳೆಗೆ ತಲೆ ಸುತ್ತಿ ಮತ್ತು ಬಂದಂತಾಗಿದ್ದು, ಬಳಿಕ ಏನಾಯಿತು ಎಂಬುದು ನೆನಪಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.&lt;/p&gt;&lt;h3&gt;ಜಮೀನೊಂದಕ್ಕೆ ಹೊತ್ತೊಯ್ದು ಬಲತ್ಕಾರ&lt;/h3&gt;&lt;p&gt;ಆ ನಂತರ ಮಹಿಳೆ ಎಚ್ಚರವಿಲ್ಲದಂತಾಗಿದ್ದಾಳೆ. ಇತ್ತ ಕಾಮುಕರು ಇದೇ ಸರಿಯಾದ ಸಮಯವೆಂದು ಬೈಕ್&zwnj;ನಲ್ಲಿ ಮಹಿಳೆಯನ್ನ ಕೂರಿಸಿಕೊಂಡು ಜಮೀನೊಂದಕ್ಕೆ ಕರೆದೊಯ್ಯಲಾಗಿದ್ದು, ಹಲವರು ಸೇರಿ ಸಾಮೂಹಿಕ ಬಲತ್ಕಾರ ಮಾಡಿ ಎಸಗಿರುವ ಆರೋಪ ಕೇಳಿಬಂದಿದೆ.&lt;/p&gt;&lt;h3&gt;ನಸುಕಿನ ಜಾವ ಎಚ್ಚರವಾದಾಗ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆ&lt;/h3&gt;&lt;p&gt;ಮುಂಜಾನೆ ಸುಮಾರು 3.20ರ ವೇಳೆಗೆ ಮಹಿಳೆಗೆ ಎಚ್ಚರವಾಗಿದೆ. ಇಲ್ಲಿ ಹೇಗೆ ಬಂದೆ, ಏನಾಯ್ತು ಎಂದು ತೋಚದೇ ಅಲ್ಲಿಂದ ಮಹಿಳೆ ಅಣ್ಣನ ಮನೆಗೆ ತಲುಪಿದ್ದಾಳೆ. ಆದರೆ ಘಟನೆ ಅಲ್ಲಿಗೇ ಮುಗಿದಿಲ್ಲ. ಜೂನ್ 8ರಂದು ಮಹಿಳೆಯ ಅಣ್ಣನ ಮಗ ಕರೆ ಮಾಡಿ, ಆಕೆಯ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳು ಮೊಬೈಲ್&zwnj;ಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಮಾಹಿತಿ ನೀಡಿದಾಗಲೇ ಮಹಿಳೆ ಆಘಾತಕ್ಕೊಳಗಾಗಿದ್ದಾಳೆ. ಜೂನ್ 9ರಂದು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 10 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>davanagere</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/davangere-woman-assaulted-video-leaked-by-miscreants-rav/articleshow-r2kbf5y"/>
        </item>
        <item>
            <title><![CDATA[CPI ದ್ವೇಷಕ್ಕೆ 40-50 ಜನರ ವಿರುದ್ದ ಸುಳ್ಳು ರೇ*ಪ್ ಕೇಸ್..!  ಪೊಲೀಸ್ ಅಧಿಕಾರಿಯ ಮೇಲೆ ಗಂಭೀರ ಆರೋಪ]]></title>
            <link>https://kannada.asianetnews.com/karnataka-districts/channagiri-villagers-accuse-police-officer-of-false-cases-seek-justice-kvn/articleshow-r8og92f</link>
            <guid isPermaLink="true">https://kannada.asianetnews.com/karnataka-districts/channagiri-villagers-accuse-police-officer-of-false-cases-seek-justice-kvn/articleshow-r8og92f</guid>
            <pubDate>Wed, 24 Jun 2026 10:46:51 +0530</pubDate>
            <description><![CDATA[&lt;p&gt;ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವೈಯಕ್ತಿಕ ದ್ವೇಷದಿಂದ ಸುಮಾರು 50 ಜನರ ಮೇಲೆ ಸುಳ್ಳು ಅ*ತ್ಯಾ*ಚಾ*ರ ಮತ್ತು ಪ್ರಾಣ ಬೆದರಿಕೆ ಕೇಸ್ ದಾಖಲಿಸಿದ್ದಾರೆ ಎಂದು ಹೊನ್ನೆಮರದಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ನಮ್ಮೆಲ್ಲರನ್ನೂ ಸಾಮೂಹಿಕವಾಗಿ ಎನ್&zwnj;ಕೌಂಟರ್&zwnj; ಮಾಡಿ ಅಥವಾ ಇಚ್ಛಾಮರಣಕ್ಕೆ ಅನುಮತಿ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfn5e8vsnjzannk5wac0x5pk,imgname-delhi-honeytrap-sex-extortion-gang-minor-pocso-fake-rape-investigation-02-1769163137913.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾವಣಗೆರೆ: ವೈಯಕ್ತಿಕ ದ್ವೇಷದಿಂದ ಸುಮಾರು 40-50 ಜನರ ಮೇಲೆ ಅಮಾಯಕ ಮಹಿಳೆಯಿಂದ ಅ*ತ್ಯಾ*ಚಾ*ರ, ಪ್ರಾಣ ಬೆದರಿಕೆ ಕೇಸ್ ದಾಖಲಿಸಿದ ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವಿರುದ್ಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗೆ ಸುಳ್ಳು ಕೇಸ್ ಹಾಕುವ ಬದಲು, ನಮ್ಮೆಲ್ಲರನ್ನೂ ಸಾಮೂಹಿಕವಾಗಿ ಎನ್&zwnj;ಕೌಂಟರ್&zwnj; ಮಾಡಿ ಎಂದು ಚನ್ನಗಿರಿ ತಾಲೂಕು ಹೊನ್ನೆಮರದಹಳ್ಳಿ ಗ್ರಾಮಸ್ಥರು ಒಕ್ಕೊರಲಿನಿಂದ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಮಂಗ&zwj;ಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಬಿ.ಆರ್.ರಘು, ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ರವೀಶ್ ಗ್ರಾಮದ ಸುಮಾರು 40-50 ಜನರ ವಿರುದ್ಧ ಅ*ತ್ಯಾ*ಚಾ*ರ, ಕೊಲೆ ಬೆದರಿಕೆಯಂತಹ ಸುಳ್ಳು ಕೇಸ್&zwnj;ಗಳನ್ನು ಗ್ರಾಮದ ಅಮಾಯಕ ಮಹಿಳೆ ಮುಖಾಂತರ ಕೊಡಿಸಿದ್ದಾರೆ. ಅದೇ ಮಹಿಳೆ ತಮ್ಮಿಂದ ಹೀಗೆ ಸುಳ್ಳು ಕೇಸ್ ಮಾಡಿಸಿದ್ದಾರೆಂಬುದಾಗಿ ಗ್ರಾಮಸ್ಥರ ಸಮ್ಮುಖದಲ್ಲೇ ಹೇಳುತ್ತಿದ್ದಾರೆ. ಜವಾಬ್ದಾರಿಯುತ ಅಧಿಕಾರಿ ಈ ಮಟ್ಟಕ್ಕೆ ದ್ವೇಷ ಸಾಧಿಸುವುದು ಯಾವ ಕಾರಣಕ್ಕೆ ಎಂದರು.&lt;/p&gt;&lt;p&gt;ಸದರಿ ಕೇಸ್&zwnj;ಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ, ತನಿಖೆ ಎದುರಿಸಲು ತಾವು ಸಿದ್ಧರಿದ್ದೇವೆ. ಸಿಪಿಐ ರವೀಶ ಹಾಗೂ ಅಧಿಕಾರಿ, ಸಿಬ್ಬಂದಿ ದೌರ್ಜನ್ಯ ಎಸಗದೇ, ಕಾನೂನು ಕ್ರಮ ಕೈಗೊಳ್ಳಲಿ. ತಮ್ಮಗಳ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದರೂ ನಮಗ್ಯಾರಿಗೂ ನೋಟೀಸ್ ನೀಡಿಲ್ಲ. ಯಾವುದೇ ಸಮನ್ಸ್&zwnj; ಅಥ&zwj;ವಾ ನೋಟೀಸ್ ನೀಡದೇ ಜಾಮೀನು ರಹಿತ ವಾರೆಂಟ್ ಹೊರಟಿಸಿರುವ ವಿಚಾರ ನಿಷ್ಟಾವಂತ, ಪ್ರಾಮಾಣಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೂಲಕ ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಕೇಸ್&zwnj;ಗೆ ಸಂಬಂಧಿಸಿದಂತೆ ನ್ಯಾಯಾಲಯ ಅಥವಾ ಪೊಲೀಸರಿಂದ ಕರೆ ಬಂದರೆ ಸ್ವಯಂಪ್ರೇರಿತರಾಗಿ ಸುಳ್ಳು ಕೇಸ್&zwnj;ನಲ್ಲಿ ಹೆಸರಿಸಲಾದ ಎಲ್ಲರೂ ವಿಚಾರಣೆಗೆ ಹಾಜರಾಗುತ್ತೇವೆ. ನಾವು ಕಾನೂನನ್ನು ಗೌರವಿಸುವವರು. ಎಲ್ಲಿಯೂ ಓಡಿ ಹೋಗುವವರಲ್ಲ. ಕಾನೂನು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ, ಬಂಧನ ಅಥವಾ ವಿಚಾರಣೆಯ ಸಂದರ್ಭದಲ್ಲಿ ನಮ್ಮ ಕಾನೂನುಬದ್ಧ ಹಕ್ಕುಗಳನ್ನೂ ಗೌರವಿಸಬೇಕು. ನಮ್ಮಗಳ ಪೈಕಿ ಯಾರೊಬ್ಬರ ಮೇಲಾದರೂ ಅಕ್ರಮವಾಗಿ ಒತ್ತಡ ಹೇರುವುದು, ದೌರ್ಜನ್ಯ ಎಸಗುವುದು, ಕಾನೂನುಬಾಹಿರ ಕ್ರಮ ಕೈಗೊಂಡರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನೇರ ಹೊಣೆ ಎಂದು ಅವರು ಎಚ್ಚರಿಸಿದರು.&lt;/p&gt;&lt;p&gt;ನಮ್ಮ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯಾದರೆ ಅದಕ್ಕೆ ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ರವೀಶ್ ನೇರ ಕಾರಣ. ವೃತ್ತ ನಿರೀಕ್ಷಕ ರವೀಶ್&zwnj;ರಿಂದ ಆಗುತ್ತಿರುವ ನಿರಂತರ ದೌರ್ಜನ್ಯ, ಸುಳ್ಳು ಕೇಸ್&zwnj;ಗಳು, ಜೀವ ಬೆದರಿಕೆ ವಿರುದ್ಧ ನ್ಯಾಯಕ್ಕಾಗಿ ನಾವು ಹೋರಾಟ ನಡೆಸಿದ್ದೇವೆ. ನಮಗೆ ನ್ಯಾಯ ಸಿಗದಿದ್ದರೆ ಇಡೀ ಗ್ರಾಮಸ್ಥರು ಸಾಮೂಹಿಕವಾಗಿ ನೇಣಿಗೆ ಶರಣಾಗಲು ಸಿದ್ಧರಿದ್ದೇವೆ. ಇಚ್ಛಾಮರಣಕ್ಕೆ ನ್ಯಾಯಾಲಯ ಅನುಮತಿ ನೀಡಬೇಕು. ವೃತ್ತ ನಿರೀಕ್ಷಕ ರವೀಶರಿಂದ ನಮಗೆ ಅನ್ಯಾಯ, ತೊಂದರೆಯಾಗುತ್ತಿದೆ. ನಮಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಸಾರ್ವಜನಿಕವಾಗಿ ನಮ್ಮ ಧ್ವನಿ ಎತ್ತುತ್ತಿದ್ದೇವೆ ಎಂದು ಅವರು ಹೇಳಿದರು.&lt;/p&gt;&lt;p&gt;ಹೊನ್ನೇಮರದಹಳ್ಳಿ ಗ್ರಾಮದ ಮಹಿಳೆಯರು, ಗ್ರಾಮಸ್ಥರ ಮೇಲೆ ಚನ್ನಗಿರಿ ಪೊಲೀಸ್ ಇನ್ಸ್&zwnj;ಪೆಕ್ಟರ್ ರವೀಶ್ ಈಚೆಗೆ ನಡೆಸಿದ ದೌರ್ಜನ್ಯ ಖಂಡಿಸಿ ಈವರೆಗೆ ನೀಡಿದ ದೂರುಗಳ ಮೇಲೆ ಯಾವುದೇ ಕ್ರಮವಾಗಿಲ್ಲ. ಗ್ರಾಮಸ್ಥರು ಆರ್&zwnj;ಟಿಐ ಮೂಲಕ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿದಾಗ, ಗ್ರಾಮಸ್ಥರ ಮೇಲೆಯೇ ಅ*ತ್ಯಾ*ಚಾ*ರ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲು ಮಾಡಿಸಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;ಕಳೆದ ಏಳೆಂಟು ತಿಂಗಳಿನಿಂದ ಸಿಪಿಐ ರವೀಶ ತಮ್ಮ ಅಧಿಕಾರವನ್ನು ನಿರಂತರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಿಪಿಐ ರವೀಶ್ ಆರೋಪ ಮಾಡಿರುವ 25 ಜನರಲ್ಲಿ ಒಂದೇ ಕುಟುಂಬದ ಅಪ್ಪ, ಮಕ್ಕಳು ಇದ್ದಾರೆ. 60-70 ವರ್ಷದ ವಯಸ್ಸಿನವರೂ ಇದ್ದಾರೆ. ಮದುವೆ ನಿಶ್ಚಯವಾದ ಯುವಕರಿದ್ದಾರೆ. 40-45 ವರ್ಷದ ಮಹಿಳೆಯರೂ ಸೇರಿದ್ದಾರೆ. ಮುಗ್ದರ ಮೇಲಿನ ದೌರ್ಜನ್ಯಕ್ಕೆ ಕ್ರಾಂತಿಯೊಂದೇ ಮಾರ್ಗವಾಗಿದೆ. ವ್ಯವಸ್ಥೆ ಬದಲಾಗಬೇಕೆಂದರೆ ಬಲಿದಾನ ಅನಿವಾರ್ಯವೆಂದು ನಾವು ಭಾವಿಸಿದ್ದೇವೆ. ಹಾಗಾಗಿ, ನಾವು ನ್ಯಾಯಾಲಯದಿಂದ ಯಾವುದೇ ಜಾಮೀನು ಪಡೆಯಬಾರದೆಂದು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.&lt;/p&gt;&lt;p&gt;ಹೊನ್ನೇಮರದಹಳ್ಳಿ ವಾಸಿಗಳಾದ ಎಸ್.ಆರ್. ಶಾಂತವೀರಪ್ಪ, ಎಲ್.ಎಸ್.ಚಂದ್ರಪ್ಪ, ಜಿ.ಬಿ.ರುದ್ರೇಶ, ಬಿ.ಜೆ.ಶಿವರಾಜ, ಬಿ.ಆರ್. ವೀರಭದ್ರಪ್ಪ, ಜಿ.ಎಸ್. ರವಿ, ಬಿ.ಟಿ.ಮಧು, ಎನ್.ಕೆ. ಮಹೇಂದ್ರ, ಜೆ.ಆರ್.ಚೇತನ್, ಎಚ್.ವಿ.ರಂಗನಾಥ, ಎಲ್.ಎಸ್.ಸಿದ್ದೇಶ, ಖಾದರ್, ಆರ್.ಎಂ.ಸಂಜು, ಎ.ಸಿ.ಸಾಗರ್, ಸಂಜಯ್ ಇತರರು ಇದ್ದರು.&lt;/p&gt;&lt;h2&gt;&lt;strong&gt;ನಾವೆಲ್ಲರೂ ಅನುಮತಿ ಪಡೆದು ಸಾವಿಗೆ ಶರಣಾಗ್ತೇವೆ&lt;/strong&gt;&lt;/h2&gt;&lt;p&gt;ರಾಷ್ಟ್ರಪತಿ, ರಾಜ್ಯಪಾಲರು, ಸುಪ್ರೀಂ ಕೋರ್ಟ್&zwnj;, ಹೈಕೋರ್ಟ್, ಜಿಲ್ಲಾ, ತಾಲೂಕು ನ್ಯಾಯಮೂರ್ತಿಗಳು, ಪ್ರಧಾನಿ, ಸಿಎಂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಸಂಬಂಧಿಸಿದ ಇತರೆ ಇಲಾಖೆಗೆ ಪತ್ರ ಬರೆಯುತ್ತಿದ್ದೇವೆ. ನಮ್ಮ ಪ್ರಕರಣದ ಕಾನೂನಾತ್ಮಕ ಪ್ರಕ್ರಿಯೆಗೆ ಸಾರ್ವಜನಿಕ ಹಣ ವ್ಯಯಿಸುವುದು ಬೇಡ, ನ್ಯಾಯಾಲಯದ ಸಮಯ ಹಾಳು ಮಾಡುವುದೂ ಬೇಡ. ಸುಳ್ಳು ಕೇಸಿನಿಂದಾಗಿ ನಮ್ಮನ್ನು ಜೈಲಿನಲ್ಲಿಟ್ಟು ಊಟ ಹಾಕುವುದೂ ಬೇಡ. ಬದಲಿಗೆ ಈ ಹಣವನ್ನು ದೌರ್ಜನ್ಯಕ್ಕೆ ಒಳಗಾಗುವ ಹೆಣ್ಣುಮಕ್ಕಳ ಭವಿಷ್ಯಕ್ಕೆ ಬಳಸಲಿ. ನಮ್ಮ ಆಸ್ತಿಗಳನ್ನೂ ಸರ್ಕಾರದ ಹೆಸರಿಗೆ ಬರೆದು, ನಾವೆಲ್ಲರೂ ಅನುಮತಿ ಪಡೆದು ಸಾವಿಗೆ ಶರಣಾಗಲು ನಿರ್ಧರಿಸಿದ್ದೇವೆ ಎಂದು ಯುವಕ ಬಿ.ಆರ್.ರಘು ಹೇಳಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/channagiri-villagers-accuse-police-officer-of-false-cases-seek-justice-kvn/articleshow-r8og92f"/>
        </item>
        <item>
            <title><![CDATA[ಪಿಂಚಣಿ, ಮನೆ ಮಾರಾಟ ಮಾಡಿ ಭಾರತೀಯ ಯೋಧರ ಕಲ್ಯಾಣಕ್ಕಾಗಿ ₹10 ಲಕ್ಷ ರೂಪಾಯಿ ದೇಣಿಗೆ ! ಈ ನಿವೃತ್ತ ಶಿಕ್ಷಕಿ, ಹೋರಾಟಗಾರ್ತಿ ಯಾರು ಗೊತ್ತಾ?]]></title>
            <link>https://kannada.asianetnews.com/karnataka-districts/davanagere-retired-teacher-karibasamma-donated-rs-10-lakh-for-the-welfare-of-indian-soldiers-rav/articleshow-tpol3yn</link>
            <guid isPermaLink="true">https://kannada.asianetnews.com/karnataka-districts/davanagere-retired-teacher-karibasamma-donated-rs-10-lakh-for-the-welfare-of-indian-soldiers-rav/articleshow-tpol3yn</guid>
            <pubDate>Tue, 23 Jun 2026 04:47:15 +0530</pubDate>
            <description><![CDATA[ದಯಾಮರಣಕ್ಕಾಗಿ ಹೋರಾಟ ನಡೆಸುತ್ತಿರುವ ದಾವಣಗೆರೆಯ ನಿವೃತ್ತ ಶಿಕ್ಷಕಿ ಕರಿಬಸಮ್ಮ ಅವರು, ತಮ್ಮ ಪಿಂಚಣಿ ಹಾಗೂ ಮನೆ ಮಾರಾಟದ ಹಣದಿಂದ ₹10 ಲಕ್ಷವನ್ನು ಭಾರತೀಯ ಸೇನೆಯ ಯೋಧರ ಕಲ್ಯಾಣಕ್ಕಾಗಿ ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಜಿಲ್ಲಾಧಿಕಾರಿಗಳ ಮೂಲಕ 'ಭಾರತ್ ಕೆ ವೀರ್' ನಿಧಿಗೆ ತಲುಪಿಸಲಾಗುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kvrsrmzbprg6ep81yx02g35p,imgname----------------------52--1782170014698.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.22): &lt;/strong&gt;ದಯಾ ಮರಣಕ್ಕಾಗಿ ಹೋರಾಟ ನಡೆಸಿರುವ ದಾವಣಗೆರೆಯ ವಯೋವೃದ್ಧ, ನಿವೃತ್ತ ಶಿಕ್ಷಕಿ ಕರಿಬಸಮ್ಮ(Davanagere karibasamma) ಅವರು ಭಾರತೀಯ ಸೇನೆ(Indian army)ಯ ಯೋಧರ ಕಲ್ಯಾಣಕ್ಕಾಗಿ ₹10 ಲಕ್ಷ ದೇಣಿಯನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ನೀಡಿದರು. ಕರಿಬಸಮ್ಮ ಅವರ ಹಳೆಯ ವಿದ್ಯಾರ್ಥಿ, ವಿಧಾನ ಪರಿಷತ್&zwnj; ಮಾಜಿ ಮುಖ್ಯ ಸಚೇತಕ ಡಾ। ಎ.ಎಚ್.ಶಿವಯೋಗಿಸ್ವಾಮಿ ಇದ್ದರು&lt;/p&gt;&lt;h2&gt;ಯಾರು ಕರಿಬಸಮ್ಮ? ಹಿನ್ನೆಲೆ ಏನು?&lt;/h2&gt;&lt;p&gt;ದಯಾಮರಣಕ್ಕೆ ಹೋರಾಟ ನಡೆಸುವ ಮೂಲಕ ದಯಾಮರಣ ಹೋರಾಟಗಾರ್ತಿ ಅಂತಲೇ ನಿವೃತ್ತ ಶಿಕ್ಷಕಿ ಕರಿಬಸಮ್ಮ ಹೆಸರಾಗಿದ್ದಾರೆ. ತಮ್ಮ ನಿವೃತ್ತಿ ವೇತನದ (ಪಿಂಚಣಿ) ಹಣ ಹಾಗೂ ಸ್ವಂತ ಮನೆಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ₹10 ಲಕ್ಷವನ್ನು ವೀರಯೋಧರ ಕಲ್ಯಾಣಕ್ಕಾಗಿ ನೀಡಿರುವುದು ಇತರರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದೆ.&lt;/p&gt;&lt;h3&gt;ಭಾರತ್&zwnj; ಕೆ ವೀರ್&zwnj;ಗೆ ತಲುಪಿಸುವ ಭರವಸೆ&lt;/h3&gt;&lt;p&gt;ಈ ಮೊತ್ತವನ್ನು ಕೇಂದ್ರ ಸರ್ಕಾರದ ಅಧಿಕೃತ ನಿಧಿಯಾದ &lsquo;ಭಾರತ್ ಕೆ ವೀರ್&rsquo; ಗೆ ತಲುಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ವೇಳೆ ಕರಿಬಸಮ್ಮ ಅವರ ಹಳೆಯ ವಿದ್ಯಾರ್ಥಿ, ವಿಧಾನ ಪರಿಷತ್&zwnj; ಮಾಜಿ ಮುಖ್ಯ ಸಚೇತಕ ಡಾ। ಎ.ಎಚ್.ಶಿವಯೋಗಿಸ್ವಾಮಿ ಇದ್ದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-retired-teacher-karibasamma-donated-rs-10-lakh-for-the-welfare-of-indian-soldiers-rav/articleshow-tpol3yn"/>
        </item>
        <item>
            <title><![CDATA[Davanagere: ಜಿಮ್ ಮುಗಿಸಿ ಮನೆಗೆ ಬಂದ 26 ವರ್ಷದ ಬಾಡಿ ಬಿಲ್ಡರ್ ಸುಶೀಲ್ ಕುಸಿದು ಸಾವು]]></title>
            <link>https://kannada.asianetnews.com/gallery/karnataka-districts/davanagere-26-year-old-bodybuilder-sushil-kumar-collapses-and-dies-after-returning-home-from-gym-mrq-u8cbl9l</link>
            <guid isPermaLink="true">https://kannada.asianetnews.com/gallery/karnataka-districts/davanagere-26-year-old-bodybuilder-sushil-kumar-collapses-and-dies-after-returning-home-from-gym-mrq-u8cbl9l</guid>
            <pubDate>Wed, 17 Jun 2026 08:35:12 +0530</pubDate>
            <description><![CDATA[&lt;p&gt;ಜಿಮ್ ಮುಗಿಸಿ ಮನೆಗೆ ಬಂದ 26 ವರ್ಷದ ಬಾಡಿ ಬಿಲ್ಡರ್ ಸುಶೀಲಕುಮಾರ್ ದಿಢೀರ್ ಕುಸಿದುಬಿದ್ದು ಮೃತಪಟ್ಟಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಇವರು ಅಂತರಾಷ್ಟ್ರೀಯ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ಈ ಘಟನೆಯು ಅತಿಯಾದ ದೇಹ ಕಸರತ್ತಿನ ಅಪಾಯಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv9ranrxh8mcv8ys2ms64kqw,imgname-death--3--1781665191709.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಿಮ್ ಮುಗಿಸಿ ಮನೆಗೆ ಬಂದ 26 ವರ್ಷದ ಬಾಡಿ ಬಿಲ್ಡರ್ ಸುಶೀಲಕುಮಾರ್ ದಿಢೀರ್ ಕುಸಿದುಬಿದ್ದು ಮೃತಪಟ್ಟಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಇವರು ಅಂತರಾಷ್ಟ್ರೀಯ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ಈ ಘಟನೆಯು ಅತಿಯಾದ ದೇಹ ಕಸರತ್ತಿನ ಅಪಾಯಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ದಾವಣಗೆರೆ: ಜಿಮ್ ಮುಗಿಸಿಕೊಂಡು ಮನೆಗೆ ಬಂದ ಬಾಡಿ ಬಿಲ್ಡರ್&zwnj;ವೊಬ್ಬರು ದಿಢೀರನೇ ಕುಸಿದುಬಿದ್ದು ಮೃತಪಟ್ಟ ಘಟನೆ ಇಲ್ಲಿನ ಕೆಟಿಜೆ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಕೆಟಿಜೆ ನಗರದ ವಾಸಿ ಸುಶೀಲಕುಮಾರ (26) ಮೃತ ಬಾಡಿ ಬಿಲ್ಡರ್. ಎಂದಿನಂತೆ&zwnj; ಜಿಮ್ ಮುಗಿಸಿ ಮನೆಗೆ ಬಂದ ಸುಶೀಲಕುಮಾರ ಕೆಲ ಕ್ಷಣದಲ್ಲೇ ಕುಸಿದು ಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ತಕ್ಷಣವೇ ಸುಶೀಲಕುಮಾರಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಸುಶೀಲ ಕುಮಾರ ಉಸಿರು ನಿಂತಿತ್ತು ಎನ್ನಲಾಗಿದೆ. ನನ್ನ ಮಗ ಕಸರತ್ತು ಮಾಡಿಕೊಂಡಿ ಚೆನ್ನಾಗಿಯೇ ಇದ್ದ. ಈಗ ನೋಡಿದ್ರೆ ನಮ್ಮೊಂದಿಗೆ ಮಗ ಇಲ್ಲ ಅನ್ನೋದನ್ನು ನಂಬೋದಕ್ಕೆ ಆಗುತ್ತಿಲ್ಲ ಎಂದು ಸುಶೀಲ್ ತಾಯಿ ಕಣ್ಣೀರು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ನಿರಂತರ ಜಿಮ್ ಮಾಡಿದ್ದರಿಂದ ಸದೃಢವಾಗಿದ್ದ ಸುಶೀಲ್ ಕುಮಾರ್ ದೇಹದಾರ್ಢ್ಯ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ವಿಜೇತರಾಗಿದ್ದರು. ಹಾಗಾಗಿ ದಾವಣೆಗೆರೆಯ ಎಲ್ಲಾ ಜಿಮ್&zwnj;ಗಳಲ್ಲಿಯೂ ಸುಶೀಲ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು ಎಂದು ಗೆಳೆಯರು ಹೇಳುತ್ತಾರೆ. ರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಿದ್ದ ಸುಶೀಲ್ ಕುಮಾರ್, ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿದ್ದರು.&lt;/p&gt;&lt;img&gt;&lt;p&gt;ಇತ್ತೀಚೆಗಷ್ಟೇ ಆರು ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದನು. ಇದೀಗ ಸುಶೀಲ್ ಕುಮಾರ್ ಸಾವು ಹಲವು ಚರ್ಚೆಗಳಿಗೆ ಕಾರಣವಾಗುತ್ತಿದೆ. ಅತಿಯಾದ ದೇಹ ಕಸರತ್ತು ಪ್ರಾಣಕ್ಕೆ ಕುತ್ತು ತಂದಿದೆಯಾ ಎಂಬ ಮಾತುಗಳು ಕೇಳಿ ಬಂದಿದೆ. ಈ ಹಿಂದೆ ಜಿಮ್&zwnj;ನಲ್ಲಿಯೇ ಯುವಕರು ಕೊನೆಯುಸಿರೆಳೆದಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.&lt;/p&gt;]]></content:encoded>
            <category>davanagere</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/davanagere-26-year-old-bodybuilder-sushil-kumar-collapses-and-dies-after-returning-home-from-gym-mrq-u8cbl9l"/>
        </item>
    </channel>
</rss>
