<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 27 Apr 2026 16:53:27 +0530</lastBuildDate>
        <atom:link href="https://kannada.asianetnews.com/rss/davanagere" rel="self" type="application/rss+xml"/>
        <item>
            <title><![CDATA[Davangere Bypoll: ಕಾಂಗ್ರೆಸ್‌ಗೆ ಮುಸ್ಲಿಂ ನಾಯಕರ ತಲಾಖ್‌ ಎಚ್ಚರಿಕೆ, ನಮಗೆ ಕಾಂಗ್ರೆಸ್‌ ಅಲ್ಲ, ಕಾಂಗ್ರೆಸ್‌ಗೆ ನಾವು ಬೇಕು]]></title>
            <link>https://kannada.asianetnews.com/politics/davangere-bypoll-crisis-muslim-leaders-threaten-to-quit-congress-over-jabbar-naseer-suspension-rav/articleshow-9imc6cn</link>
            <guid isPermaLink="true">https://kannada.asianetnews.com/politics/davangere-bypoll-crisis-muslim-leaders-threaten-to-quit-congress-over-jabbar-naseer-suspension-rav/articleshow-9imc6cn</guid>
            <pubDate>Thu, 23 Apr 2026 05:32:44 +0530</pubDate>
            <description><![CDATA[&lt;p&gt;ದಾವಣಗೆರೆ ಉಪ ಚುನಾವಣೆ ಬಳಿಕ ಮುಸ್ಲಿಂ ನಾಯಕರನ್ನು ವಜಾಗೊಳಿಸಿದ್ದಕ್ಕೆ ರಾಜ್ಯ ಉಲಮಾ ಮಂಡಳಿ ಕಾಂಗ್ರೆಸ್&zwnj;ಗೆ ತೀವ್ರ ಎಚ್ಚರಿಕೆ. ಈ ನಿರ್ಧಾರ ಹಿಂಪಡೆಯದಿದ್ದರೆ ಪಕ್ಷಕ್ಕೆ 'ತ್ರಿವಳಿ ತಲಾಖ್' ನೀಡುತ್ತೇವೆಂದು ಗುಡುಗಿದೆ. ಮುಂದಿನ ನಿರ್ಧಾರಕ್ಕಾಗಿ ರಾಜ್ಯಮಟ್ಟದ ಉಲಮಾ ಸಮಾವೇಶ ಕರೆಯುವುದಾಗಿ ತಿಳಿಸಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzhdmkgbd5a6zgrtse7mevx,imgname-----------------------2026-04-12t055752.365-1775953695344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.23): &lt;/strong&gt;&lsquo;ದಾವಣಗೆರೆ ಉಪ ಚುನಾವಣೆ ನಂತರ ಅನಗತ್ಯವಾಗಿ ಮುಸ್ಲಿಂ ನಾಯಕರ ಮೇಲೆ ಕೈಗೊಂಡಿರುವ ಕಠಿಣ ನಿರ್ಧಾರಗಳನ್ನು ಹಿಂಪಡೆಯದಿದ್ದರೆ ಕಾಂಗ್ರೆಸ್&zwnj; ಪಕ್ಷಕ್ಕೇ ತ್ರಿವಳಿ ತಲಾಕ್&zwnj; ನೀಡಲಾಗುವುದು. ಅಷ್ಟೇ ಅಲ್ಲ, ಪಕ್ಷದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು.&lt;/p&gt;&lt;p&gt;ಹೀಗಂತ ರಾಜ್ಯ ಉಲಮಾ ಮಂಡಳಿ ಕಾಂಗ್ರೆಸ್&zwnj; ಪಕ್ಷಕ್ಕೆ ಎಚ್ಚರಿಕೆ ನೀಡಿದೆ.&lt;/p&gt;&lt;p&gt;ಬುಧವಾರ ಪಕ್ಷದಿಂದ ಮುಸ್ಲಿಂ ಮುಖಂಡರನ್ನು ವಜಾಗೊಳಿಸಿದ ಕಾಂಗ್ರೆಸ್ ಹೈಕಮಾಂಡ್&zwnj; ವಿರುದ್ಧ ಮುಸ್ಲಿಂ ಧಾರ್ಮಿಕ ನಾಯಕರು, ವಿವಿಧ ಸಂಘಟನೆಗಳು ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್&zwnj; ಪಕ್ಷಕ್ಕೆ ಮುಸ್ಲಿಮರ ಅಗತ್ಯವಿದೆಯೇ ಹೊರತು ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷದ ಅಗತ್ಯವಿಲ್ಲ. ಸಮುದಾಯದ ನಾಯಕರ ಮೇಲೆ ಕೈಗೊಂಡಿರುವ ಕ್ರಮಗಳನ್ನು ಹಿಂಪಡೆಯದಿದ್ದರೆ ಕಾಂಗ್ರೆಸ್&zwnj;ಗೆ ತಲಾಖ್ ನೀಡಲಾಗುವುದು. ಅಷ್ಟೇ ಅಲ್ಲದೆ, ಮುಂದೇನು ಮಾಡಬೇಕು ಎಂದು ಶೀಘ್ರದಲ್ಲೇ ನಡೆಯಲಿರುವ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.&lt;/p&gt;&lt;p&gt;ಜಮೀಯತ್&zwnj; ಉಲಮಾ ನಾರ್ತ್&zwnj; ಬೆಂಗಳೂರು ಅಧ್ಯಕ್ಷ ಮಹಮ್ಮದ್&zwnj; ಸಲಾವುದ್ದೀನ್&zwnj; ಅಯ್ಯುಬಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಹಲವು ದಶಕಗಳ ಹಿಂದೆ ಮುಸ್ಲಿಂ ಸಮುದಾಯದ ಹಿರಿಯರು ಆದೇಶ ಕೊಟ್ಟಂತೆ ಅಂದಿನಿಂದಲೂ ಕಾಂಗ್ರೆಸ್&zwnj;ನೊಂದಿಗೆ ಇದ್ದೇವೆ. ಈಗ ನಮ್ಮ ಸಮುದಾಯದ ಮುಖಂಡರಿಗೆ ಅನ್ಯಾಯ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ. 2028ರಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಸಮುದಾಯದ ಉಲಮಾಗಳು, ಹಿರಿಯರು ಮುಂದೇನು ಮಾಡಬೇಕೆಂದು ನಿರ್ಧಾರಿಸುತ್ತಾರೆ ಎಂದರು.&lt;/p&gt;&lt;h2&gt;ಕಾಂಗ್ರೆಸ್&zwnj; ನಂಬಿಕೊಂಡಿಲ್ಲ:&lt;/h2&gt;&lt;p&gt;ಕಾಂಗ್ರೆಸ್&zwnj; ನಂಬಿಕೊಂಡು ಮುಸ್ಲಿಂ ಸಮುದಾಯ ಅನ್ನ ತಿನ್ನುತ್ತಿದೆ ಎಂದು ಭಾವಿಸಿದರೆ ಅದು ತಪ್ಪು. ನಮ್ಮನ್ನು ಅಲ್ಲಾ (ಭಗವಂತ) ಕಾಪಾಡುತ್ತಾನೆ. ಆತನ ಮೇಲೆ ನಮಗೆ ಭರವಸೆ ಇದೆಯೇ ಹೊರತು ಯಾವ ಮನುಷ್ಯರ ಮೇಲೂ ಅಲ್ಲ. ಯಾವುದೇ ನೋಟಿಸ್&zwnj; ನೀಡದೆ ಸುಳ್ಳು ಆರೋಪಗಳ ಹೇಳಿಕೆಗಳನ್ನು ಆಧರಿಸಿ ಪಕ್ಷದ ಹೈಕಮಾಂಡ್&zwnj; ನಸೀರ್&zwnj; ಅಹ್ಮದ್&zwnj;, ಅಬ್ದುಲ್&zwnj; ಜಬ್ಬಾರ್&zwnj; ಅವರ ವಿರುದ್ಧ ಕ್ರಮಕೈಗೊಂಡಿರುವುದು ಅನ್ಯಾಯ. ಅವರನ್ನು ಮೊಸರಿನಲ್ಲಿ ಬಿದ್ದ ನೊಣವನ್ನು ಹೊರಗೆ ಹಾಕಿದಂತೆ ಪಕ್ಷದಿಂದ ವಜಾ ಮಾಡಿದ್ದು, ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಈ ಇಬ್ಬರು ನಾಯಕರನ್ನು ಹೊರ ಹಾಕಿದ ಕೂಡಲೇ ಕಾಂಗ್ರೆಸ್&zwnj; ಪಕ್ಷಕ್ಕೆ ಒಳಿತಾಗಲಿದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಇಡೀ ಸಮುದಾಯ ಇವರ ಹಿಂದಿದೆ ಎಂಬುದು ಸುರ್ಜೇವಾಲಾ, ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿದೆಯೇ? ಎಲ್ಲ ಉಲಮಾಗಳು ಒಗ್ಗೂಡಿ ಸಮುದಾಯದ ಹಿರಿಯರೊಂದಿಗೆ ಕಾಂಗ್ರೆಸ್&zwnj; ವಿರುದ್ಧ ನಿಲ್ಲುವಂತೆ ಆದೇಶಿಸಿದರೆ ಯಾವ ಮುಸ್ಲಿಂ ನಿಮಗೆ ಓಟು ಕೊಡುತ್ತಾನೆ? ಆಗ ನಿಮ್ಮ ಸ್ಥಿತಿ ಏನು ಎಂಬುದನ್ನು ಮೊದಲು ಅರಿತುಕೊಳ್ಳಿ ಎಂದು ಎಚ್ಚರಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಸಮುದಾಯದ ಮುಖಂಡ ಅಬ್ದುಲ್&zwnj; ರಝಾಕ್&zwnj;, ಕಾಂಗ್ರೆಸ್&zwnj; ಪಕ್ಷ ಅಧಿಕಾರಕ್ಕೆ ಬರಲು ಸಚಿವ ಜಮೀರ್&zwnj; ಅಹ್ಮದ್&zwnj; ಖಾನ್&zwnj;, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್&zwnj; ಅಹ್ಮದ್&zwnj; ಮತ್ತು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಅಬ್ದುಲ್&zwnj; ಜಬ್ಬಾರ್&zwnj; ಏನೆಲ್ಲಾ ಕೆಲಸ ಮಾಡಿದ್ದಾರೆ ಎಂಬುದು ಪಕ್ಷದ ನಾಯಕರಿಗೆ ಗೊತ್ತಿಲ್ಲವೇ? ಎಸ್.ಎಸ್.ಮಲ್ಲಿಕಾರ್ಜುನ, ಒಂದು ಚಹಾ ಕುಡಿದ್ರೂ ಅವರ ಋಣ ಇಟ್ಟುಕೊಳ್ಳಬಾರದು ಅಂದಿದ್ದಾರೆ. ಹಾಗಿದ್ದರೆ ಅವರಿಗೆ ಸತತ 40 ವರ್ಷಗಳ ಕಾಲ ಶಾಮನೂರು ಶಿವಶಂಕರಪ್ಪ ಅವರ ಗೆಲುವಿಗೆ ಮುಸ್ಲಿಂ ಸಮುದಾಯ ಸಹಕರಿಸಿದ್ದು ಗೊತ್ತಿಲ್ಲವೇ? ಯಾಕೆ ಅವರಿಗೆ ಮುಸ್ಲಿಮರ ಸಹಾಯದ ಋಣ ಇಲ್ವಾ ಎಂದು ಪ್ರಶ್ನಿಸಿದರು.&lt;/p&gt;&lt;h2&gt;ಎಸ್&zwnj;ಎಸ್&zwnj;ಎಂ ವಿರುದ್ಧ ಯಾಕೆ ಕ್ರಮ ಇಲ್ಲ?:&lt;/h2&gt;&lt;p&gt;ಟಿಕೆಟ್&zwnj; ಘೋಷಣೆ ಆಗುವುದಕ್ಕೂ ಮೊದಲೇ ಹೋಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಮಲ್ಲಿಕಾರ್ಜುನ್&zwnj; ಮತ್ತವರ ಕುಟುಂಬದ ವಿರುದ್ಧ ಏಕೆ ಹೈಕಮಾಂಡ್&zwnj; ಕ್ರಮಕೈಗೊಂಡಿಲ್ಲ? 2023ರಲ್ಲಿ ಶಿವಮೊಗ್ಗದಲ್ಲಿ ಕುಳಿತು ಯಡಿಯೂರಪ್ಪ ಅವರ ಮಗ ರಾಘವೇಂದ್ರ ಪರ ಮತ ಹಾಕುವಂತೆ ಹೇಳಿದ್ದ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಚುನಾವಣೆ ಫಲಿತಾಂಶ ಬರುವುದಕ್ಕೂ ಮೊದಲೇ ಮುಸ್ಲಿಂ ನಾಯಕರನ್ನು ವಜಾ ಮಾಡಿದ್ದು ಸರಿಯೇ? ಇದು ಮುಸ್ಲಿಂ ಸಮುದಾಯದ ವಿರುದ್ಧದ ಷಡ್ಯಂತ್ರ ಅಲ್ಲದೇ ಮತ್ತೇನು? ನಮ್ಮ&zwnj; ನಾಯಕರ ವಿರುದ್ದ ತೆಗೆದುಕೊಂಡ ಕ್ರಮ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ತಿಂಗಳು ಅರಮನೆ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಉಲಮಾ ಸಮಾವೇಶದಲ್ಲಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಎಚ್ಚರಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಬನ್ನೇರುಘಟ್ಟ ಬಿಲ್ಲಾಲ್&zwnj; ಮಸೀದಿಯ ಮೌಲಾನ ಮಹಮ್ಮದ್&zwnj; ಶಾಕೀರ್ ಉಲ್ಲಾ, ಮೌಲಾನಾ ಮಫ್ತಿ ಸೈಯದ್ ಇಬ್ರಾಹಿಂ ಸೇರಿ ಇತರರಿದ್ದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/davangere-bypoll-crisis-muslim-leaders-threaten-to-quit-congress-over-jabbar-naseer-suspension-rav/articleshow-9imc6cn"/>
        </item>
        <item>
            <title><![CDATA[ದಾವಣಗೆರೆ 'ಕೈ' ಜಗಳ ಬೀದಿಗೆ: ಜಮೀರ್ ಕೆಣಕಿದರೆ 2028ಕ್ಕೆ ಕಾಂಗ್ರೆಸ್‌ಗೆ 20 ಸೀಟೂ ಬರಲ್ಲ; ಸುಬಾನ್ ಖಾನ್ ಗುಡುಗು!]]></title>
            <link>https://kannada.asianetnews.com/politics/davanagere-congress-minority-clash-minister-zameer-ahmed-khan-subhan-khan-warning-sat/articleshow-a3x6szr</link>
            <guid isPermaLink="true">https://kannada.asianetnews.com/politics/davanagere-congress-minority-clash-minister-zameer-ahmed-khan-subhan-khan-warning-sat/articleshow-a3x6szr</guid>
            <pubDate>Thu, 16 Apr 2026 17:42:33 +0530</pubDate>
            <description><![CDATA[&lt;p&gt;ಸಚಿವ ಜಮೀರ್ ಅಹ್ಮದ್ ಅವರನ್ನು ಕೆಣಕಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್&zwnj;ಗೆ 20 ಸೀಟು ಗೆಲ್ಲುವುದೂ ಕಷ್ಟವಾಗಲಿದೆ ಎಂದು ವಿಶ್ವ ಮುಸ್ಲಿಂ ಪರಿಷತ್&zwnj;ನ ಸುಬಾನ್ ಖಾನ್ ಎಚ್ಚರಿಸಿದ್ದಾರೆ. ದಾವಣಗೆರೆ ಉಪಚುನಾವಣೆ ಬಳಿಕ ಅಲ್ಪಸಂಖ್ಯಾತ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb0wxfrjag39ja474wh2e5f,imgname-davanagere-muslim-leaders-meeting-1776339023351.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.16): ದಾ&lt;/strong&gt;ವಣಗೆರೆ ಉಪ ಚುನಾವಣೆಯ ಕುರಿತಾಗಿ ಕಾಂಗ್ರೆಸ್ ಹೈಕಮಾಂಡ್&zwnj;ಗೆ ಸಲ್ಲಿಕೆಯಾದ ವರದಿಯಲ್ಲಿ ಸಚಿವ ಜಮೀರ್ ಅಹ್ಮದ್ ಅವರ ಹೆಸರನ್ನು ಹಾಳು ಮಾಡಲು ಸಂಚು ನಡೆಯುತ್ತಿದೆ. ಒಂದು ವೇಳೆ ಜಮೀರ್ ಅಹ್ಮದ್ ಅವರ ತಲೆದಂಡ ಮಾಡಿದರೆ ಅಥವಾ ಅವರನ್ನು ಕೆಣಕಿದರೆ, 2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್&zwnj;ಗೆ 20 ಸೀಟು ಬರುವುದು ಕೂಡ ಕಷ್ಟವಾಗಲಿದೆ' ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಸುಬಾನ್ ಖಾನ್ ಎಚ್ಚರಿಕೆ ರವಾನಿಸಿದ್ದಾರೆ.&lt;/p&gt;&lt;h3&gt;&lt;strong&gt;ಜಮೀರ್ ಅಹ್ಮದ್ ಕೆಣಕಿದರೆ ಕಾಂಗ್ರೆಸ್&zwnj;ಗೆ ಕಷ್ಟ:&lt;/strong&gt;&lt;/h3&gt;&lt;p&gt;ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಬಾನ್ ಖಾನ್, ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. 'ಸಚಿವ ಜಮೀರ್ ಅಹ್ಮದ್ ಅವರ ಹೆಸರನ್ನು ಹಾಳು ಮಾಡಲು ಸಂಚು ನಡೆಯುತ್ತಿದೆ. ಒಂದು ವೇಳೆ ಜಮೀರ್ ಅಹ್ಮದ್ ಅವರ ತಲೆದಂಡ ಮಾಡಿದರೆ ಅಥವಾ ಅವರನ್ನು ಕೆಣಕಿದರೆ, 2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್&zwnj;ಗೆ 20 ಸೀಟು ಬರುವುದು ಕೂಡ ಕಷ್ಟವಾಗಲಿದೆ' ಎಂದು ಭವಿಷ್ಯ ನುಡಿದಿದ್ದಾರೆ.&lt;/p&gt;&lt;h2&gt;&lt;strong&gt;ಅಬ್ದುಲ್ ಜಬ್ಬಾರ್ ವಿರುದ್ಧದ ಕ್ರಮಕ್ಕೆ ಆಕ್ಷೇಪ:&lt;/strong&gt;&lt;/h2&gt;&lt;p&gt;ಇತ್ತೀಚೆಗೆ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿರುದ್ಧ ಪಕ್ಷ ಕೈಗೊಂಡ ಕ್ರಮದ ಬಗ್ಗೆ ಸುಬಾನ್ ಖಾನ್ ಅಸಮಾಧಾನ ಹೊರಹಾಕಿದ್ದಾರೆ. 'ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಹೇಳಿದ್ದಕ್ಕೆ ಅಬ್ದುಲ್ ಜಬ್ಬಾರ್ ಮೇಲೆ ಕ್ರಮವಾಗಿದೆ. ಮಲ್ಲಿಕಾರ್ಜುನ ಅವರದ್ದು ಹಿತ್ತಾಳೆ ಕಿವಿ. ಅವರ ಸುತ್ತಮುತ್ತ ಇರುವ ಬೆರಳೆಣಿಕೆಯಷ್ಟು ಅಲ್ಪಸಂಖ್ಯಾತ ನಾಯಕರು ಏನು ಹೇಳುತ್ತಾರೋ ಅದನ್ನೇ ಅವರು ಕೇಳುತ್ತಾರೆ' ಎಂದು ಸ್ಥಳೀಯ ನಾಯಕತ್ವದ ವಿರುದ್ಧ ಹರಿಹಾಯ್ದಿದ್ದಾರೆ.&lt;/p&gt;&lt;h2&gt;&lt;strong&gt;ಸಾದಿಕ್ ಪೈಲ್ವಾನ್ ನಾಮಿನೇಷನ್ ರಹಸ್ಯ ಬಯಲು:&lt;/strong&gt;&lt;/h2&gt;&lt;p&gt;ಉಪಚುನಾವಣೆಯಲ್ಲಿ ಸಾದಿಕ್ ಪೈಲ್ವಾನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರ ಹಿಂದೆ ತಮ್ಮ ಕೈವಾಡ ಇರುವುದನ್ನು ಸುಬಾನ್ ಖಾನ್ ಒಪ್ಪಿಕೊಂಡಿದ್ದಾರೆ. 'ಸಾದಿಕ್ ಪೈಲ್ವಾನ್ ನನಗೆ 40 ವರ್ಷದ ಗೆಳೆಯ. ಆತನಿಗೆ ನಾಮಪತ್ರ ಸಲ್ಲಿಸಲು ಹೇಳಿದ್ದೇ ನಾನು, ಅಷ್ಟೇ ಅಲ್ಲ ನಾಮಿನೇಷನ್ ಫೀಸ್ ಕೂಡ ನಾನೇ ಕಟ್ಟಿದ್ದೆ. ಆದರೆ ಆತ ಕೊನೆ ಕ್ಷಣದಲ್ಲಿ ಯು-ಟರ್ನ್ ಹೊಡೆದು ಚುನಾವಣಾ ನಿವೃತ್ತಿ ಘೋಷಿಸಿದ. ಈ ವಿಷಯದಲ್ಲಿ ಜಮೀರ್ ಅಹ್ಮದ್ ಆಗಲಿ, ಅಬ್ದುಲ್ ಜಬ್ಬಾರ್ ಆಗಲಿ ಏನೂ ಹೇಳಿಲ್ಲ. ಜಮೀರ್ ಹೆಸರನ್ನು ಸುಮ್ಮನೆ ಹಾಳು ಮಾಡುತ್ತಿದ್ದಾರೆ' ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;&lt;/p&gt;&lt;h3&gt;&lt;strong&gt;ಸಿಎಂ ಸಿದ್ದರಾಮಯ್ಯ ವಿರುದ್ಧವೂ ಅಸಮಾಧಾನ:&lt;/strong&gt;&lt;/h3&gt;&lt;p&gt;ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿಗಳ ನಡವಳಿಕೆಯನ್ನೂ ಸುಬಾನ್ ಖಾನ್ ಟೀಕಿಸಿದ್ದಾರೆ. &quot;ಉಪಚುನಾವಣೆಗೆ ಇಡೀ ಕ್ಯಾಬಿನೆಟ್ ದಾವಣಗೆರೆಗೆ ಬಂದಿತ್ತು. ಸಿಎಂ ಸಿದ್ದರಾಮಯ್ಯ ಅವರು ಸಾದಿಕ್ ಪೈಲ್ವಾನ್ ಮನೆಯಲ್ಲಿ ಊಟ ಮಾಡಿದರು. ಆದರೆ ಅಲ್ಲಿಂದ ಕೂಗಳತೆ ದೂರದಲ್ಲಿರುವ ಹಿರಿಯ ನಾಯಕ ಅಬ್ದುಲ್ ಜಬ್ಬಾರ್ ಅವರ ಮನೆಗೆ ಹೋಗಲಿಲ್ಲ. ಇದು ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಮಾಡುತ್ತಿರುವ ಅವಮಾನ&quot; ಎಂದು ಕಿಡಿಕಾರಿದರು.&lt;/p&gt;&lt;h2&gt;&lt;strong&gt;ಹೊಸ ಪ್ರಾದೇಶಿಕ ಪಕ್ಷದ ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ನಾಯಕರನ್ನು ಕಡೆಗಣಿಸಿದರೆ ಅಥವಾ ಅವರಿಗೆ ತೊಂದರೆ ನೀಡಿದರೆ ಮತ್ತೊಂದು ಪ್ರಾದೇಶಿಕ ಪಕ್ಷ ಹುಟ್ಟಿಕೊಳ್ಳುವುದು ಖಚಿತ. 'ನಾವು ಚುನಾವಣೆಯಲ್ಲಿ ಗೆಲ್ಲದಿದ್ದರೂ ಪರವಾಗಿಲ್ಲ, ಕಾಂಗ್ರೆಸ್ ಅನ್ನು ಸೋಲಿಸುವ ಕೆಲಸವನ್ನಂತೂ ಮಾಡುತ್ತೇವೆ' ಎಂದು ಅವರು ಎಚ್ಚರಿಸಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, 'ಜಮೀರ್ ಅಹ್ಮದ್ ಅವರು ನಮ್ಮ ಸಂಘಟನೆಗೆ ಬಂದರೆ ಅವರನ್ನು ವಿಶ್ವ ಮುಸ್ಲಿಂ ಪರಿಷತ್&zwnj;ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುತ್ತೇವೆ' ಎಂದು ಆಹ್ವಾನ ನೀಡಿದರು. ದಾವಣಗೆರೆಯಲ್ಲಿ ಸ್ಫೋಟಗೊಂಡಿರುವ ಈ ಭಿನ್ನಮತ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/davanagere-congress-minority-clash-minister-zameer-ahmed-khan-subhan-khan-warning-sat/articleshow-a3x6szr"/>
        </item>
        <item>
            <title><![CDATA[ಯೋಗೇಶ್ ಗೌಡ ಹತ್ಯೆ ಪ್ರಕರಣ, ಕಠಿಣ ಶಿಕ್ಷೆಗೆ ಸಿಬಿಐ ಮನವಿ, ಕಡಿಮೆಗೊಳಿಸುವಂತೆ ಜಡ್ಜ್‌ ಮುಂದೆ ಅಪರಾಧಿಗಳ ಕಣ್ಣೀರು!]]></title>
            <link>https://kannada.asianetnews.com/state/yogesh-gowda-murder-case-sentence-to-be-announced-tomorrow-accused-seek-leniency-in-court-gdp/articleshow-ckzwgl9</link>
            <guid isPermaLink="true">https://kannada.asianetnews.com/state/yogesh-gowda-murder-case-sentence-to-be-announced-tomorrow-accused-seek-leniency-in-court-gdp/articleshow-ckzwgl9</guid>
            <pubDate>Thu, 16 Apr 2026 15:13:37 +0530</pubDate>
            <description><![CDATA[ಯೋಗೇಶ್ ಗೌಡ ಹತ್ಯೆ ಪ್ರಕರಣದ ಶಿಕ್ಷೆ ಪ್ರಕಟಣೆಗೂ ಮುನ್ನ ನಡೆದ ವಿಚಾರಣೆಯಲ್ಲಿ, ಸಿಬಿಐ ಪರ ವಕೀಲರು ಇದೊಂದು ಪೂರ್ವಯೋಜಿತ ರಾಜಕೀಯ ಕೊಲೆ ಎಂದು ವಾದಿಸಿ ಗರಿಷ್ಠ ಶಿಕ್ಷೆಗೆ ಒತ್ತಾಯಿಸಿದರು. ಮತ್ತೊಂದೆಡೆ, ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ ಆರೋಪಿಗಳು ಕೌಟುಂಬಿಕ ಹಾಗೂ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು, ಕನಿಷ್ಠ ಶಿಕ್ಷೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpathx10ykxtavts3pb9v4wk,imgname-yogesh-gowda-vinay-kulkarni-case-1776332370975.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಧಾರವಾಡ: &lt;/strong&gt;ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ನಾಳೆ ಅಂದ್ರೆ ಶುಕ್ರವಾರ ಪ್ರಕಟವಾಗಲಿದೆ. ಇದಕ್ಕೂ ಮುನ್ನ ಇಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರ ನಡುವೆ ತೀವ್ರ ವಾದ-ಪ್ರತಿವಾದಗಳು ನಡೆದವು. ಒಂದೆಡೆ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಸಿಬಿಐ ಪರ ವಕೀಲರು ಒತ್ತಾಯಿಸಿದರೆ, ಮತ್ತೊಂದೆಡೆ ಆರೋಪಿಗಳ ಪರ ವಕೀಲರು ವಿವಿಧ ಕಾರಣಗಳನ್ನು ಮುಂದಿಟ್ಟು ಕನಿಷ್ಠ ಶಿಕ್ಷೆ ನೀಡುವಂತೆ ಮನವಿ ಮಾಡಿದರು.&lt;/p&gt;&lt;h2&gt;ನ್ಯಾಯಾಧೀಶರಿಗೆ ಒದೊಂದು ಕಾರಣ ಕೊಟ್ಟ ಅಪರಾಧಿಗಳು&lt;/h2&gt;&lt;p&gt;ವಿಚಾರಣೆ ಅಂತ್ಯ ಹಂತಕ್ಕೆ ಬಂದಾಗ ನ್ಯಾಯಾಧೀಶರು, &ldquo;ಆರೋಪಿಗಳು ಏನಾದರೂ ಹೇಳಬೇಕೇ?&rdquo; ಎಂದು ಪ್ರಶ್ನಿಸಿದರು. ಈ ವೇಳೆ ಒಬ್ಬೊಬ್ಬರಾಗಿ ಆರೋಪಿಗಳು ಒಂದೊಂದೇ ಕಾರಣ ನೀಡಿ ಕನಿಷ್ಠ ಶಿಕ್ಷೆ ನೀಡುವಂತೆ ಮನವಿ ಮಾಡಿದರು. ಕೆಲವರು ನಾವು ನಿರಪರಾಧಿಗಳು ಎಂದು ಹೇಳಿದರೆ, ಮತ್ತೊಬ್ಬರು ಚಿಕ್ಕ ಮಕ್ಕಳಿದ್ದಾರೆ. ಕುಟುಂಬವನ್ನು ನೋಡಿಕೊಳ್ಳಬೇಕು. ಆರೋಗ್ಯ ಸಮಸ್ಯೆಗಳಿವೆ ಎಂಬ ಕಾರಣಗಳನ್ನು ಮುಂದಿಟ್ಟರು. ಅವರ ವಿಚಿತ್ರ ಹೇಳಿಕೆಗಳು ಈ ಕೆಳಗೆ ನೀಡಲಾಗಿದೆ.&lt;/p&gt;&lt;p&gt;ಅಪರಾಧಿಗಳು ಏನಾದರೂ ಹೇಳಿವುದಿದೆಯಾ? ಎಂದು ಜಡ್ಜ್ ಕೇಳಿದರು. ಎ2 ಅಪರಾಧಿ ವಿಕ್ರಮ್ ನಾನು ನಿರಪರಾಧಿ ಸಾರ್.. ನನಗರ ಐದು ವರ್ಷದ ಮಗು ಇದೆ ಸಾರ್ ಎಂದ. ಇನ್ನು ಎ3 ಅಪರಾಧಿ ಕೀರ್ತಿ ಕುಮಾರ್ ಸ್ವೀಟ್ ಮಾರ್ಟ್ ರಿಯಲ್ ಎಸ್ಟೇಟ್ ಎಏಜೆಂಟ್ ಆಗಿದ್ದೆ ಸಾರ್ ನಾನು ತಪ್ಪು ಮಾಡಿಲ್ಲ ಎಂದ. ಎ4 ಅಪರಾಧಿ ಸಂದೀಪ್ ನನಗೆ ಚಿಕ್ಕ ಮಕ್ಕಳಿದ್ದಾರೆ, ನಾನು ತಪ್ಪು ಮಾಡಿಲ್ಲ ಸಾರ್ ಎಂದ ಎ5 ವಿನಾಯಕ್ ನಾನು ರಿಯಲ್ ಎಸ್ಟೇಟ್ ಏಜೆಂಟ್ ಸಾರ್ ನಾನು ಮಾಡಿಲ್ಲ ಸಾರ್ ಎಂದ. ಎ6 ಮಹಾಬಲೇಶ ನನಗೆ ಒಂದು ವರ್ಷದ, ಮೂರು ವರ್ಷ ದ ಮಕ್ಳಳಿದ್ದಾರೆ. ನಾನು ದುಡಿದೇ ನಮ್ಮ ಕುಟುಂಬ ನಡಿಯಬೇಕು ಸಾರ್ ಎಂದು ಕಣ್ಣೀರು ಹಾಕಿದ್ದಾನೆ.&lt;/p&gt;&lt;p&gt;ಎ7 - ಸಂತೋಷ್ ನಾನು ಆಟೋ ಡ್ರೈವರ್ ಆಗಿದ್ದೇನೆ ಸಾರ್, ಕುಟುಂಬ ಕಷ್ಟದಲ್ಲಿ ಇದೆ ಸಾರ್ ಎಂದ, ಎ8 - ದಿನೇಶ್, ನಾನು ಆಟೋ ಡ್ರೈವರ್, ನನ್ನ ಕುಟುಂಬಕ್ಕೆ ನಾನೇ ಆಧಾರ ಸಾರ್ ಎಂದ. ಎ9 ಅಶ್ವಥ್ ನನ್ನ ತಾಯಿ ನೋಡಿಕೋಳ್ಳೋರು ಯಾರು ಇಲ್ಲ ಸಾರ್ ಎಂದ. ಎ10 ಸುನಿಲ್ - 8 ವರ್ಷದ ಮಗು ಇದೆ ಸಾರ್, ಕಡಿಮೆ&zwnj; ಶಿಕ್ಷೆ ಕೊಡಿ ಸಾರ್ ಎಂದು ಮನವಿ ಮಾಡಿದ. ಎ11 - ನಜೀರ್, ಲೋ ಬಿಪಿಬಿ ಇದೆ ಕಡಿಮೆ&zwnj; ಶಿಕ್ಷೆ ಕೊಡಿ ಸಾರ್ ಎಂದ , ಎ12 ಷನಾವಜ್ - ಟೈಲರ್ ಕೆಲಸ ಮಾಡ್ತಾ ಇದ್ದೆ ಸಾರ್. ಕಡಿಮೆ &zwnj;ಶಿಕ್ಷೆ ಕೊಡಿ ಎಂದ. ಎ 13 ನೂತನ್ ಆರೋಗ್ಯ ಸರಿಯಿಲ್ಲ, ಆಪರೇಷನ್ ಆಗಿದೆ ಸಾರ್ ಎಂದ. ಎ14 - ತಾಯಿ ಸಾಕಬೇಕು ಸಾರ್ ಎಂದ.&lt;/p&gt;&lt;p&gt;ಇನ್ನು ಪ್ರಕರಣ ಪ್ರಭಾವಿ ವ್ಯಕ್ತಿ ಎ 15 ವಿನಯ್ ಕುಲಕರ್ಣಿ, ನಾನು ಯಾರಿಗೂ ಅನ್ಯಾಯ ಮಾಡಿಲ್ಲ&zwnj;ಸಾರ್. ನಾನು ಕ್ಷೇತ್ರದಲ್ಲಿ ಇಲ್ಲ ಅಂದ್ರೂ ಜನ ಗೆಲ್ಲಿಸಿದ್ದಾರೆ. ಮೂರು ಜನ ಮಕ್ಕಳಿದ್ದಾರೆ. ನನ್ನ ಕ್ಷೇತ್ರದ ಜನಕ್ಕೆ&zwnj; ಅನ್ಯಾಯ ಆಗಿದೆ ಸಾರ್. ರಾಜಕೀಯ ದ್ವೇಷದಿಂದ ಈ ಪರಿಸ್ಥಿತಿ ಬಂದಿದೆ ಸಾರ್. ಮೂರು ಬಾರಿ ಶಾಸಕ, ಒಂದ್ಸಾರಿ ಮಿನಿಸ್ಟರ್ ಆಗಿದ್ದೇನೆ. ಕೃಷಿ ಕೆಲಸ ಮಾಡ್ತಾ ಬೆಳೆದವನು ಸಾರ್ ಎಂದು ಕೋರ್ಟ್ ಮುಂದೆ ಹೇಳಿಕೆ. ಈ ವೇಳೆ ಬೇರೆ ಏನಾದರೂ ಹೇಳೋದಿದ್ಯಾ ? ಎಂದು ಜಡ್ಜ್ ಕೇಳಿದ್ದಕ್ಕೆ ಏನಿಲ್ಲ ಅಂತ ತಲೆ ಅಲ್ಲಾಡಿಸ್ತಾ ವಿನಯ್ ಕುಲಕರ್ಣಿ ಹಿಂದೆ ಸರಿದರು.&lt;/p&gt;&lt;p&gt;ಎ16 ಚಂದು ಮಾಮ, ನನ್ನ ಮಗ ಬೇರೆ ಇದ್ದಾನೆ, ನಾನು ನನ್ನ ಹೆಂಡತಿ ಇದ್ದೇವೆ. ಇಬ್ಬರೂ ಹಾರ್ಟ್ ಪೇಷೆಂಟ್. ಹೀಗಾಗಿ ಕಡಿಮೆ ಶಿಕ್ಷೆ ಕೊಡಿ ಎಂದ. A17ವಿಕಾಸ್ ಕಲಬುರಗಿ ಐದು ವರ್ಷದ ಮಗ ಇದ್ದಾನೆ ಸಾರ್, ಎಲೆಕ್ಟ್ರಿಕಲ್ ಗುತ್ತಿದಾರ ಇದ್ದೆ, ಕಡಿಮೆ ಶಿಕ್ಷೆ ಕೊಡಿ ಸಾರ್ ಎಂದ. ಇನ್ನು ಇನ್ಸ್ಪೆಕ್ಟರ್ ಟಿಂಗರಿಕರ್, ನನ್ನ ಸರ್ವೀಸ್ ನಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ.ನನ್ನ ಸರ್ವೀಸ್ ಗೆ ಅವಾರ್ಡ್ ಬಂದಿತ್ತು.ದಯೆತೋರಿಸಿ ಶಿಕ್ಷೆ ಕಡಿಮೆ ಮಾಡಿ ಸಾರ್ ಎಂದಿದ್ದಾನೆ.&lt;/p&gt;&lt;h2&gt;ವಕೀಲರ ವಾದ&lt;/h2&gt;&lt;p&gt;ವಿನಯ್ ಕುಲಕರ್ಣಿ ಹಾಗೂ ಚಂದ್ರಶೇಖರ್ ಇಂಡಿ ಪರವಾಗಿ ವಕೀಲ ಶ್ಯಾಂ ಸುಂದರ್ ವಾದ ಮಂಡಿಸಿದರು. ಸಿ.ವಿ. ನಾಗೇಶ್ ಅವರಿಗೆ ಅನಾರೋಗ್ಯ ಇರುವ ಹಿನ್ನೆಲೆ ಅವರು ಹಾಜರಾಗಲು ಸಾಧ್ಯವಾಗದ ಕಾರಣ ಶ್ಯಾಂ ಸುಂದರ್ ವಾದ ಮಂಡಿಸಿದರು. ಎಲ್ಲಾ ಆರೋಪಿಗಳ ಪರ ವಕೀಲರು ಸಹ ತಮ್ಮ ವಾದಗಳಲ್ಲಿ ಆರೋಪಿಗಳಿಗೆ ಕಡಿಮೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.&lt;/p&gt;&lt;h2&gt;ಕೋಲ್ಡ್ ಬ್ಲಡೆಡ್ ಕೊಲೆ ಎಂದ &amp;nbsp;ಸಾಲಿಸಿಟರ್ ಜನರಲ್&lt;/h2&gt;&lt;p&gt;ಇದಕ್ಕೆ ಪ್ರತಿಯಾಗಿ ಸಿಬಿಐ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಎಸ್. ಹೇಮಾ ಹಾಗೂ ಶಿವಾನಂದ ಪೆರ್ಲಾ ವಾದ ಮಂಡಿಸಿದರು. ಜೊತೆಗೆ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ವಾದಿಸಿದರು. ಈ ಪ್ರಕರಣದಲ್ಲಿ ಕಾನೂನಿನ ಪ್ರಕಾರ ಗರಿಷ್ಠ ಶಿಕ್ಷೆ ವಿಧಿಸಬೇಕು. ಇದು ಪೂರ್ವಯೋಜಿತ, ಕೋಲ್ಡ್ ಬ್ಲಡೆಡ್ ಕೊಲೆ. ರಾಜಕೀಯ ದುರುದ್ದೇಶದಿಂದ ಯೋಗೇಶ್ ಗೌಡರನ್ನು ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಿದರು.&lt;/p&gt;&lt;p&gt;ಯೋಗೇಶ್ ಗೌಡ ಸಾರ್ವಜನಿಕ ಜೀವನದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಅವರ ಹತ್ಯೆಯ ನಂತರ ಸಾಕ್ಷಿಗಳನ್ನು ನಾಶಪಡಿಸುವ ಪ್ರಯತ್ನ ನಡೆದಿದೆ. ಆರೋಪಿಗಳಿಗೆ ಹಣ ನೀಡುವುದು, ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದು ಸೇರಿದಂತೆ ಹಲವಾರು ಅಕ್ರಮಗಳು ನಡೆದಿವೆ ಎಂದು ಸಿಬಿಐ ವಾದಿಸಿತು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಟರ್&zwnj;ನ್ನೇ ಹೆದರಿಸುವ ಮಟ್ಟಿಗೆ ಘಟನೆಗಳು ನಡೆದಿವೆ. ಆದ್ದರಿಂದ ಗಂಭೀರ ಶಿಕ್ಷೆ ಅಗತ್ಯ ಎಂದು ಎಸ್.ವಿ. ರಾಜು ಹೇಳಿದರು. ಆದಾಗ್ಯೂ, ಈ ಪ್ರಕರಣವನ್ನು &lsquo;ವಿರಳಾತಿವಿರಳ&rsquo; ಪ್ರಕರಣವೆಂದು ಪರಿಗಣಿಸುವ ಅಗತ್ಯ ಇಲ್ಲದ ಹಿನ್ನೆಲೆಯಲ್ಲಿ ಮರಣದಂಡನೆ ಕೇಳದೇ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದರು.&lt;/p&gt;&lt;h2&gt;ಆರೋಪಿಗಳ ಪರ ವಕೀಲರಿಂದ ವಿವಿಧ ಕಾರಣ&lt;/h2&gt;&lt;p&gt;ಇನ್ನೊಂದೆಡೆ ಆರೋಪಿಗಳ ಪರ ವಕೀಲರು ವಿವಿಧ ವೈಯಕ್ತಿಕ ಹಾಗೂ ಮಾನವೀಯ ಕಾರಣಗಳನ್ನು ಮುಂದಿಟ್ಟರು. ಎ8ರಿಂದ ಎ14ರವರ ಪರ ವಕೀಲ ಎಸ್. ಶಂಕರಪ್ಪ, &ldquo;ಅವರಿಗೆ ಚಿಕ್ಕ ಮಕ್ಕಳಿದ್ದು ಕುಟುಂಬದ ಹೊಣೆಗಾರಿಕೆ ಇದೆ. ಹೀಗಾಗಿ ಕನಿಷ್ಠ ಶಿಕ್ಷೆ ನೀಡಬೇಕು,&rdquo; ಎಂದು ವಾದಿಸಿದರು. ಎ2ರಿಂದ ಎ7ರವರ ಪರ ವಕೀಲ ಪರಮೇಶ್ವರ್ ಕೂಡ ಇದೇ ವಾದವನ್ನು ಮುಂದಿಟ್ಟರು.&lt;/p&gt;&lt;p&gt;ವಿನಯ್ ಕುಲಕರ್ಣಿ ಪರವಾಗಿ ವಾದಿಸಿದ ಶ್ಯಾಂ ಸುಂದರ್, &ldquo;ಈ ಪ್ರಕರಣ ಗರಿಷ್ಠ ಶಿಕ್ಷೆ ನೀಡುವಂತಹುದಲ್ಲ. ನ್ಯಾಯಾಲಯ ನೀಡುವ ಶಿಕ್ಷೆ ವ್ಯಕ್ತಿಯನ್ನು ಸುಧಾರಿಸಲು ಸಹಾಯ ಮಾಡಬೇಕೇ ಹೊರತು ಕೇವಲ ದಂಡನೆಗಾಗಿ ಇರಬಾರದು. ವಿನಯ್ ಕುಲಕರ್ಣಿ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ. ಅವರು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದು, 3 ಸಾವಿರಾರು ಹಸುಗಳನ್ನು ಸಾಕುತ್ತಿದ್ದಾರೆ. ಯಾವುದೇ ವ್ಯಕ್ತಿಗೆ 14 ವರ್ಷಗಳ ಶಿಕ್ಷೆ ಸಾಕಷ್ಟು ಸುಧಾರಣೆಗೆ ಕಾರಣವಾಗಬಹುದು. ಅವರ ಕುಟುಂಬ, ಮಕ್ಕಳ ಭವಿಷ್ಯವನ್ನು ಪರಿಗಣಿಸಿ ಕಡಿಮೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ಚಂದ್ರಶೇಖರ್ ಇಂಡಿ ಪರವಾಗಿ ಕೂಡ ವಾದಿಸಿದ ಶ್ಯಾಂ ಸುಂದರ್, &ldquo;ಅವರಿಗೆ ಈಗಾಗಲೇ 65 ವರ್ಷ ವಯಸ್ಸಾಗಿದೆ. ಅವರ ವಯಸ್ಸನ್ನು ಪರಿಗಣಿಸಿ ಕನಿಷ್ಠ ಶಿಕ್ಷೆ ವಿಧಿಸಬೇಕು,&rdquo; ಎಂದು ಕೋರಿದರು.&lt;/p&gt;&lt;p&gt;ಇನ್ಸ್&zwnj;ಪೆಕ್ಟರ್ ಚನ್ನಕೇಶವ ಟಿಂಗರಿಕರ್ ಪರವಾಗಿ ವಕೀಲ ಬಾಲನ್ ವಾದಿಸಿ, &ldquo;ಕೊಲೆಯಲ್ಲಿ ಅವರ ನೇರ ಪಾತ್ರ ಇಲ್ಲ. ಮಾರಕಾಸ್ತ್ರಗಳ ವಿಚಾರದಲ್ಲಿ ಸುಳ್ಳು ಸಾಕ್ಷಿಗಳ ಆರೋಪ ಮಾತ್ರ ಇದೆ. ಅವರ ವಿರುದ್ಧ ಬಲವಾದ ಸಾಕ್ಷಿಗಳಿಲ್ಲ. ಕೊಲೆಗೂ ಮುನ್ನ ಉತ್ತಮ ಸೇವೆಗಾಗಿ ಅವರಿಗೆ ಪ್ರಶಸ್ತಿಗಳೂ ದೊರೆತಿವೆ,&rdquo; ಎಂದು ವಿವರಿಸಿದರು. ಜೊತೆಗೆ, ಕುಟುಂಬದ ಪರಿಸ್ಥಿತಿಯನ್ನು ಗಮನಿಸಿ ಶಿಕ್ಷೆ ಕಡಿಮೆ ಮಾಡಬೇಕೆಂದು ಮನವಿ ಮಾಡಿದರು. ಇದೇ ವೇಳೆ, ಪ್ರಾಸಿಕ್ಯೂಷನ್ ಪರವಾಗಿ ಕೆ.ಎಸ್. ಹೇಮಾ, &ldquo;ಮೃತ ಯೋಗೇಶ್ ಗೌಡರ ಮಕ್ಕಳಿಗೆ ಪರಿಹಾರ ನೀಡಬೇಕು,&rdquo; ಎಂದು ಮನವಿ ಮಾಡಿದರು. ಆದರೆ ಆರೋಪಿಗಳ ಪರ ವಕೀಲ ಶ್ಯಾಂ ಸುಂದರ್, ಪರಿಹಾರ ನೀಡುವ ಅಗತ್ಯವಿಲ್ಲ ಎಂದು ವಾದಿಸಿದರು.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/state/yogesh-gowda-murder-case-sentence-to-be-announced-tomorrow-accused-seek-leniency-in-court-gdp/articleshow-ckzwgl9"/>
        </item>
        <item>
            <title><![CDATA[ಕುರ್ಚಿ ಕದನದ ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನ: ಮಾಜಿ  ಸಚಿವ ಎಂ.ಪಿ.ರೇಣುಕಾಚಾರ್ಯ]]></title>
            <link>https://kannada.asianetnews.com/karnataka-districts/mp-renukacharya-congress-government-crisis-karnataka-gvd/articleshow-drf5thx</link>
            <guid isPermaLink="true">https://kannada.asianetnews.com/karnataka-districts/mp-renukacharya-congress-government-crisis-karnataka-gvd/articleshow-drf5thx</guid>
            <pubDate>Wed, 15 Apr 2026 21:11:15 +0530</pubDate>
            <description><![CDATA[&lt;p&gt;ಸಿಎಂ ಸಿದ್ದರಾಮಯ್ಯ ಹಾಗೂ ದೆಹಲಿ ಹೈಕಮಾಂಡ್ ಬಳಿ ತೀವ್ರ ಲಾಬಿ ಮಾಡುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೆಷ್ಟು ದಿನ ಇರುತ್ತದೋ ಗೊತ್ತಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hdhfz324m04r6b3rspzafr9t,imgname-mp.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.15):&lt;/strong&gt; ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ನಂತರ ಸಿಎಂ ಕುರ್ಚಿಗಾಗೂ ಹಾಗೂ ಮಂತ್ರಿ ಸ್ಥಾನಕ್ಕಾಗಿ 38 ಶಾಸಕರು ಸಿಎಂ ಸಿದ್ದರಾಮಯ್ಯ ಹಾಗೂ ದೆಹಲಿ ಹೈಕಮಾಂಡ್ ಬಳಿ ತೀವ್ರ ಲಾಬಿ ಮಾಡುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೆಷ್ಟು ದಿನ ಇರುತ್ತದೋ ಗೊತ್ತಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿ ಸ್ಥಾನಕ್ಕೆ 38 ಶಾಸಕರು ತಮ್ಮದೇ ಪ್ರಯತ್ನ ನಡೆಸಿದ್ದಾರೆ.&lt;/p&gt;&lt;p&gt;3-4 ಸಲ ಶಾಸಕರಾದವರು ದೆಹಲಿಗೆ ಪ್ರಯಾಣ ಮಾಡಿದ್ದು, ಮೊದಲ ಸಲ ಶಾಸಕರಾದವರೂ ಮಂತ್ರಿ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆ. ಹಿರಿಯ ಶಾಸಕರಿಗೆ ಪಕ್ಷಕ್ಕೆ ಮುಜುಗರ ತಂದರೆ ಕ್ರಮದ ಎಚ್ಚರಿಕೆ ನೀಡದ ಡಿಸಿಎಂ ಡಿ.ಕೆ.ಶಿವಕುಮಾರ ಮೊದಲ ಸಲ ಶಾಸಕರಾದವರ ಬಗ್ಗೆ ಮೆದುಧೋರಣೆ ತೋರುತ್ತಾರೆ ಎಂದರು. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಸತ್ತೇ ಹೋಗಿದೆ. ಸಿಎಂ ಕುರ್ಚಿಗಾಗಿ ಆಂತರಿಕ ಕಚ್ಚಾಟ ನಿರಂತರ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಿಷ್ಕ್ರಿಯ ಸಚಿವರಿಗೆ ಕೈಬಿಡಿ, ಹೊಸ ಮುಖಗಳಿಗೆ ಅ&zwj;ವಕಾಶ ನೀಡಿ, 2-3 ಸಲ ಶಾಸಕರಾದವರಿಗೆ ಸಚಿವ ಸ್ಥಾನ ಕೊಡಬೇಕೆಂಬು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮೇಲೆ ಶಾಸಕರು ಒತ್ತಡ ಹೇರುತ್ತಿದ್ದಾರೆ.&lt;/p&gt;&lt;p&gt;ಇದೆಲ್ಲ ಕಾಂಗ್ರೆಸ್&zwnj; ಸರ್ಕಾರದ ಪತನಕ್ಕೆ ಇನ್ನು ಹೆಚ್ಚು ದಿನಗಳಿಲ್ಲವೆಂಬ ಸಂದೇಶ ನೀಡುತ್ತಿವೆ ಎಂದು ಅವರು ತಿಳಿಸಿದರು. ಬೇಸಿಗೆಯಿಂದ ಜನರು ರೋಸಿಹೋಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಏಳುತ್ತಿದೆ. ಕುರ್ಚಿ ಕಿತ್ತಾಟ ಕೈಬಿಟ್ಟು, ಜನರಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು, ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದ ಸರ್ಕಾರ ನಿಷ್ಕ್ರಿಯವಾಗಿದೆ. ಉಪ ಚುನಾವಣೆಯ ನಂತರ ಕಾಂಗ್ರೆಸ್ಸಿನ ಭಿನ್ನಮತ ಸ್ಫೋಟಗೊಂಡಿದೆ. ಹಿಂದೆ ಸಚಿವ ಕೆ.ಎನ್. ರಾಜಣ್ಣಗೆ ವಿವರಣೆ ಸಹ ಕೇಳದೇ, ಸಂಪುಟದಿಂದ ಕಾಂಗ್ರೆಸ್ಸಿನ ನಾಯಕರು ಕಿತ್ತು ಹಾಕಿದ್ದರು. ಈಗ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನದಿಂದ ಕೆ.ಅಬ್ದುಲ್ ಜಬ್ಬಾರ್&zwnj; ಅವರನ್ನು ರಾಜೀನಾಮೆ ಕೊಡುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.&lt;/p&gt;&lt;p&gt;ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್&zwnj;ಗೂ ಆ ಸ್ಥಾನದಿಂದ ಕಿತ್ತು ಹಾಕಿದ್ದಾರೆ. ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್&zwnj;ಗೆ ಭೇಟಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರೂ ಜಮೀರ್ ಭೇಟಿ ಮಾಡಿಲ್ಲ. ಮಂಗಳವಾರ ರಾತ್ರಿ ವೇಳೆಗೆ ಸಂಪುಟದಿಂದ ಜಮೀರ್&zwnj;ಗೂ ಕಿತ್ತು ಹಾಕುತ್ತಾರೆ. ಕಾಂಗ್ರೆಸ್ ಸರ್ಕಾರ ದಿಕ್ಕು ದೆಸೆ ಇಲ್ಲದಂತಾಗಿದೆ. ಸ್ವಾರ್ಥ, ಸಿಎಂ ಕುರ್ಚಿಗಾಗಿ ಕದನ, ಮಂತ್ರಿ ಸ್ಥಾನಕ್ಕೆ ಲಾಬಿ ಇಂತಹದ್ದರಲ್ಲಿ ಮಗ್ನವಾದ ಕಾಂಗ್ರೆಸ್ ಸರ್ಕಾರ ಬಹುಮತ ಕೊಟ್ಟ ಜನರ ಋಣ ತೀರಿಸುವ ಕೆಲಸ ಸಿಎಂ, ಡಿಸಿಎಂ, ಸಚಿವರು ಯಾರೂ ಸಹ ಮಾಡುತ್ತಿಲ್ಲ ಎಂದು ಅವರು ದೂರಿದರು.&lt;/p&gt;&lt;h2&gt;&lt;strong&gt;ಖಜಾನೆ ಖಾಲಿ&lt;/strong&gt;&lt;/h2&gt;&lt;p&gt;ಉಪ ಚುನಾವಣೆ ವೇಳೆ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಮಾಡಲಿಲ್ಲ. ರಾಜ್ಯದ ಜನರ ಮೇಲೆ ಆರ್ಥಿಕ ಹೊರೆ ಹೊರಿಸುವ ಗ್ಯಾರಂಟಿ ಹೆಸರಲ್ಲಿ ಚುನಾವಣೆ ಮಾಡಿದ್ದಾರೆ. ಗ್ಯಾರಂಟಿಗಾಗಿ ₹56 ಸಾವಿರ ಕೋಟಿ ಹೊಂದಿಸುವುದಕ್ಕೂ ಈ ಸರ್ಕಾರಕ್ಕೆ ಆಗುತ್ತಿಲ್ಲ. ರಾಜ್ಯದ ಜನರ ಮೇಲೆ ಕಾಂಗ್ರೆಸ್ ಸರ್ಕಾರ ಎಷ್ಟು ಲಕ್ಷ ಕೋಟಿ ರು. ಸಾಲ ಹೊರಿಸಿದೆದೆ ಎಂಬುದೂ ಜನರಿಗೆ ಗೊತ್ತಿದೆ. ಕಾಂಗ್ರೆಸ್ಸಿನ ಅಧಿಕಾರಸ್ಥರ ಮನೆ ಖಜಾನೆ, ತಿಜೋರಿ ತುಂಬಿದ್ದರೆ, ರಾಜ್ಯದ ಖಜಾನೆ ಖಾಲಿಯಾಗಿದೆ. ಶೇ.60 ಕಮೀಷನ್&zwnj;ನ ಈ ಸರ್ಕಾರದಿಂದಲೇ ಜನ ರೋಸಿ ಹೋಗಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಅಭಿವೃದ್ಧಿ ವಿಚಾರದಲ್ಲಿ ದೇಶವನ್ನು 20 ವರ್ಷ ಮುಂದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಯ್ದಿದೆ. ಸಿದ್ದರಾಮಯ್ಯನವರು ತಮ್ಮ ಸರ್ಕಾರ ಕೇಂದ್ರಕ್ಕಿಂತಲೂ ಆರ್ಥಿಕವಾಗಿ ಸದೃಢವೆಂದು ಹೇಳಿಕೊಳ್ಳುವುದು ಸರಿಯಲ್ಲ. ಕೇಂದ್ರಕ್ಕೆ ನಿಮ್ಮ ಸರ್ಕಾರ ಯಾವುದರಲ್ಲೂ ಸರಿಸಾಟಿಯಲ್ಲ. ವಿಧಾನಸೌಧದಲ್ಲಿ ರಾಜ್ಯದ ಜನರ, ಜನರ ಸಮಸ್ಯೆ ಬಗ್ಗೆ ಚರ್ಚೆಯನ್ನೇ ಮಾಡುತ್ತಿಲ್ಲ. ಸಚಿವ ಪ್ರಿಯಾಂಕ ಖರ್ಗೆಗೆ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್&zwnj;, ಬಿಜೆಪಿಯನ್ನು ಟೀಕಿಸುವುದನ್ನು ಬಿಟ್ಟರೇ, ತನ್ನದೇ ಇಲಾಖೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಲಾಖೆ ಮಹತ್ವ ಸಹ ಪ್ರಿಯಾಂಕ್&zwnj;ಗೆ ಅರಿವಿಲ್ಲ ಎಂದು ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-renukacharya-congress-government-crisis-karnataka-gvd/articleshow-drf5thx"/>
        </item>
        <item>
            <title><![CDATA[ನಾಯಕರ ತಲೆದಂಡಕ್ಕೆ ಕೈ ವಿರುದ್ಧ ಮುಸ್ಲಿಮರು ಕಿಡಿ; ಬಿಜೆಪಿಯ ರಾಘವೇಂದ್ರ ಪರ ಪ್ರಚಾರ ಮಾಡಿದ್ದ ಶಾಮನೂರು ಮೇಲೇಕೆ ಕ್ರಮ ಆಗಿರಲಿಲ್ಲ?]]></title>
            <link>https://kannada.asianetnews.com/politics/karnataka-politics-muslims-community-outraged-at-congress-over-leaders-ouster-rav/articleshow-ffiqteu</link>
            <guid isPermaLink="true">https://kannada.asianetnews.com/politics/karnataka-politics-muslims-community-outraged-at-congress-over-leaders-ouster-rav/articleshow-ffiqteu</guid>
            <pubDate>Fri, 17 Apr 2026 04:28:07 +0530</pubDate>
            <description><![CDATA[&lt;p&gt;2024ರಲ್ಲಿ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಮತಯಾಚನೆ ಮಾಡಿದ್ದ ದಿ.ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳದ ಕಾಂಗ್ರೆಸ್&zwnj;, ಈಗ ಮುಸ್ಲಿಂ ನಾಯಕರನ್ನು ವಜಾ ಮಾಡಿದ್ದೇಕೆ ಎಂದು ಮುಸ್ಲಿಂ ಮುಖಂಡ ಶಬ್ಬೀರ್ ಅಹ್ಮದ್ ನದ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzhdmkgbd5a6zgrtse7mevx,imgname-----------------------2026-04-12t055752.365-1775953695344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;2024ರಲ್ಲಿ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಮತಯಾಚನೆ ಮಾಡಿದ್ದ ದಿ.ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳದ ಕಾಂಗ್ರೆಸ್&zwnj;, ಈಗ ಮುಸ್ಲಿಂ ನಾಯಕರನ್ನು ವಜಾ ಮಾಡಿದ್ದೇಕೆ ಎಂದು ಮುಸ್ಲಿಂ ಮುಖಂಡ ಶಬ್ಬೀರ್ ಅಹ್ಮದ್ ನದ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಗುರುವಾರ ನಗರದಲ್ಲಿ ಉಲಮಾ ಎ ಕರ್ನಾಟಕ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.&lt;/p&gt;&lt;p&gt;2013, 2018, 2023, 2024ರ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪರ ಬಲವಾಗಿ ನಿಂತುಕೊಂಡಿತ್ತು. ಆದರೆ ಈಗ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ನಿರ್ಲಕ್ಷ್ಯ ಮಾಡಿದೆ. ನಮ್ಮ ನಾಯಕರನ್ನು ವಜಾ ಮಾಡುತ್ತಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದರಿಂದ ಆಶ್ಚರ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್&zwnj; ಪಕ್ಷ ಒಂದು ಕುಟುಂಬಕ್ಕಾಗಿ ಮುಸ್ಲಿಮರನ್ನು ಕೈಬಿಟ್ಟು, ಆ ಸಮುದಾಯದ ಮುಖಂಡರ ಮೇಲೆ ಕ್ರಮ ಕೈಗೊಳ್ಳುತ್ತಿದೆ. ಕಾಂಗ್ರೆಸ್&zwnj; ನಡೆ ಸ್ವೀಕಾರಾರ್ಹವಲ್ಲ. ಇದರಿಂದ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ಬೇಸರವಿದೆ. ಎಲ್ಲವನ್ನೂ ಸಮುದಾಯದ ಜನರು ನೋಡುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು.&lt;/p&gt;&lt;p&gt;ಉಲಮಾ ಎ ಕರ್ನಾಟಕ ಅಧ್ಯಕ್ಷ ಇಫ್ತಿಖಾರ್ ಖಾಸ್ಮೀ ಮಾತನಾಡಿ, ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ಕ್ರಮಗಳು ಖಂಡನೀಯ. 2023ರ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲು ಒತ್ತಾಯ ಮಾಡಲಾಗಿತ್ತು. ಆಗ ಶಾಮನೂರು ಶಿವಶಂಕರಪ್ಪ ಅವರು ಮುಂದೆ ಮುಸ್ಲಿಮರಿಗೆ ನೀಡುವ ಭರವಸೆ ನೀಡಿದ್ದರು. ಬಾಗಲಕೋಟೆಯಲ್ಲಿ ಮೇಟಿ ಅವರು ನಿಧನದ ನಂತರ ಅವರ ಮಗನಿಗೆ ಟಿಕೆಟ್&zwnj; ನೀಡಿದರು. ದಾವಣಗೆರೆಯಲ್ಲಿ ಶಾಮನೂರು ಅವರ ಮೊಮ್ಮಗನಿಗೆ ನೀಡಿದ್ದಾರೆ. ಇದು ಮುಸ್ಲಿಮರಿಗೆ ನೋವುಂಟು ಮಾಡಿದೆ ಎಂದರು.&lt;/p&gt;&lt;p&gt;ಕಾಂಗ್ರೆಸ್&zwnj;ಗಾಗಿ ಮುಸ್ಲಿಂ ಮುಖಂಡರು ದಾವಣಗೆರೆ, ಬಾಗಲಕೋಟೆಯಲ್ಲಿ ಕೆಲಸ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ಮೊದಲು ಶೋಕಾಸ್ ನೋಟಿಸ್ ನೀಡಬೇಕಿತ್ತು. ಆದರೆ ಕಾಂಗ್ರೆಸ್ ನೇರವಾಗಿ ಶಿಸ್ತು ಕ್ರಮದ ಮೂಲಕ ದಾಳಿ ನಡೆಸಿದೆ. ಜಬ್ಬಾರ್ ಮತ್ತು ನಜೀರ್ ಅಹ್ಮದ್ ಮೇಲೆ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ಕ್ರಮ ಸರಿಯಲ್ಲ ಎಂದು ಟೀಕಿಸಿದರು.&lt;/p&gt;&lt;p&gt;ಮೌಲಾನಾ ಖಾರಿ ಝುಲ್ಫಿಕರ್ ಅಹ್ಮದ್ ನೂರಿ ಮಾತನಾಡಿ, ದಾವಣಗೆರೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಭರವಸೆ ನೀಡಿದ್ದರು. ಆದರೆ, ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮೌಲಾನಾ ಝೈನುಲ್ ಆಬಿದಿನ್, ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮೌಲಾನಾ ಸೈಯದ್ ಆಸಿಮ್ ಅಬ್ದುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-politics-muslims-community-outraged-at-congress-over-leaders-ouster-rav/articleshow-ffiqteu"/>
        </item>
        <item>
            <title><![CDATA[ಕಾಂಗ್ರೆಸ್‌, ಮಿತ್ರಪಕ್ಷಗಳಿಂದ 75 ಕೋಟಿ ನಾರಿಶಕ್ತಿಗೆ ಅವಮಾನ: ಎಂ.ಪಿ.ರೇಣುಕಾಚಾರ್ಯ ಆಕ್ರೋಶ]]></title>
            <link>https://kannada.asianetnews.com/karnataka-districts/mp-renukacharya-women-reservation-bill-congress-reaction-gvd/articleshow-fl3lwws</link>
            <guid isPermaLink="true">https://kannada.asianetnews.com/karnataka-districts/mp-renukacharya-women-reservation-bill-congress-reaction-gvd/articleshow-fl3lwws</guid>
            <pubDate>Wed, 22 Apr 2026 00:25:24 +0530</pubDate>
            <description><![CDATA[&lt;p&gt;ಮೋದಿ ಅವರಿಗೆ ಮಾಡಿದ ಅವಮಾನ ಅಲ್ಲ. ಬದಲಿಗೆ ಭಾರತ ದೇಶದ ಸುಮಾರು 75 ಕೋಟಿ ನಾರಿಶಕ್ತಿಗೆ ಮಾಡಿದ ಅವಮಾನ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke9gvn831sm04q06yrjpv529,imgname-----------------------2026-01-06t165158.634-1767698715907.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊನ್ನಾಳಿ (ಏ.22): &lt;/strong&gt;ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲುಂಟಾದ ಕೂಡಲೇ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಮುಖಂಡರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಡಿದ ಅವಮಾನ ಅಲ್ಲ. ಬದಲಿಗೆ ಭಾರತ ದೇಶದ ಸುಮಾರು 75 ಕೋಟಿ ನಾರಿಶಕ್ತಿಗೆ ಮಾಡಿದ ಅವಮಾನ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ತಮ್ಮ ಹೊನ್ನಾಳಿಯ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸತ್ತಿನಲ್ಲಿ ಮಸೂದೆ ಜಾರಿಯಾಗದೇ ವಿಫಲವಾಗಿದೆ. ಇದು ಮಹಿಳಾ ಸಬಲೀಕರಣದ ಕನಸುಗಳಿಗೆ ಬಿದ್ದ ಭಾರಿ ಹೊಡೆತವಾಗಿದೆ. ಸಂಸತ್ತಿನಲ್ಲಿ ಮಸೂದೆ ಬಿದ್ದ ಕೂಡಲೇ ಕಾಂಗ್ರೆಸ್ ನಾಯಕರು ಚಪ್ಪಾಳೆ ತಟ್ಟಿ ಕೆಟ್ಟ ವರ್ತನೆ ತೋರಿದ್ದರಿಂದ ಮಹಿಳೆಯರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಂತಾಗಿದೆ. ಇದರಿಂದ ಮಹಿಳೆಯರ ಹಕ್ಕುಗಳನ್ನು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಕಸಿದುಕೊಂಡಂತಾಗಿದೆ.&lt;/p&gt;&lt;h2&gt;&lt;strong&gt;ಮಹಿಳೆಯರಿಗೆ ಆದ್ಯತೆ&lt;/strong&gt;&lt;/h2&gt;&lt;p&gt;ಕೂಡಲೇ ಕಾಂಗ್ರೆಸ್ ಹಾಗೂ ಇತರ ಮಿತ್ರಪಕ್ಷಗಳು ಬೇಷರತ್ತಾಗಿ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. 12ನೇ ಶತಮಾಣದಲ್ಲಿ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅ&zwj;ವರೂ ಮಹಿಳೆಯರಿಗೆ ಮೀಸಲಾತಿ ನೀಡಿದರೆ ಸೌಟು ಹಿಡಿಯುವ ಕೈಯಲ್ಲಿ ದೇಶದ ಆಡಳಿತ ನಡೆಸುವ ಅವಕಾಶವೂ ಸಿಕ್ಕಂತಾಗುತ್ತದೆ, ಆದ್ದರಿಂದ ಎಲ್ಲ ರಂಗದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದ್ದರು.&lt;/p&gt;&lt;p&gt;ಆದರೆ ಕಾಂಗ್ರೆಸ್ ಪಕ್ಷ ಯಾರ ಮಾತಿಗೂ ಮನ್ನಣೆ ನೀಡದೇ ಮಹಿಳೆಯರ ಹಕ್ಕನ್ನು ಕಸಿದುಕೊಂಡಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸ್ವತಃ ಮಹಿಳೆಯರಾಗಿದ್ದರೂ ಅವರು ಕೂಡ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡದೇ ಇರುವುದು ಅತ್ಯಂತ ದುರ್ದೈವದ ಸಂಗತಿ ಎಂದರು.&lt;/p&gt;&lt;p&gt;ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಡಳಿತಾವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗಾಮ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ತರುವ ಮೂಲಕ ಅವರು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದರು ಎಂದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-renukacharya-women-reservation-bill-congress-reaction-gvd/articleshow-fl3lwws"/>
        </item>
        <item>
            <title><![CDATA[ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತುರ್ತುಗತಿ, ಪ್ರಕ್ರಿಯೆ ಪಾರದರ್ಶಕವಾಗಿಲ್ಲ: ಸಂಸದೆ ಡಾ.ಪ್ರಭಾ]]></title>
            <link>https://kannada.asianetnews.com/karnataka-districts/prabha-mallikarjun-women-reservation-bill-criticism-lok-sabha-gvd/articleshow-fte5cb1</link>
            <guid isPermaLink="true">https://kannada.asianetnews.com/karnataka-districts/prabha-mallikarjun-women-reservation-bill-criticism-lok-sabha-gvd/articleshow-fte5cb1</guid>
            <pubDate>Sat, 18 Apr 2026 21:19:19 +0530</pubDate>
            <description><![CDATA[&lt;p&gt;ಮಹಿಳಾ ಮೀಸಲಾತಿ ಮಸೂದೆಯನ್ನು ತುರ್ತುಗತಿಯಲ್ಲಿ, ಸಮಗ್ರ ಚರ್ಚೆ ಮತ್ತು ಸಲಹೆಗಳಿಲ್ಲದೇ ಮುಂದುವರಿಸಲಾಗುತ್ತಿರುವ ಕ್ರಮ ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9w6z5160aem7gm6r1vmpash,imgname-----------------------2025-11-12t193149.597-1762957169702.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.18):&lt;/strong&gt; ಮಹಿಳಾ ಮೀಸಲಾತಿ ಮಸೂದೆಯನ್ನು ತುರ್ತುಗತಿಯಲ್ಲಿ, ಸಮಗ್ರ ಚರ್ಚೆ ಮತ್ತು ಸಲಹೆಗಳಿಲ್ಲದೇ ಮುಂದುವರಿಸಲಾಗುತ್ತಿರುವ ಕ್ರಮ ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ನವದೆಹಲಿಯ ಸಂಸತ್ತಿನಲ್ಲಿ ನಡೆಯುತ್ತಿರುವ ಮೂರು ಮಸೂದೆಗಳ ಮಂಡನೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು &ldquo;ಮೂರು ಮಸೂದೆಗಳನ್ನು ಮೂರು ದಿನಗಳಲ್ಲಿ ತರಲಾಗಿದೆ. ಯಾವುದೇ ಮುಕ್ತ ಶಾಸನಾತ್ಮಕ ಸಲಹೆ ಇಲ್ಲ, ಎಲ್ಲಾ ಪಕ್ಷಗಳೊಂದಿಗೆ ಚರ್ಚೆ ನಡೆದಿಲ್ಲ. ಚರ್ಚೆಗೆ ಕೆಲವೇ ದಿನಗಳ ಮೊದಲು ಪಠ್ಯ ಹಂಚಲಾಗಿದೆ. ಇದು ಸೂಕ್ಷ್ಮ ಆಡಳಿತವಲ್ಲ, ರಾಷ್ಟ್ರೀಯ ಒಪ್ಪಿಗೆಯನ್ನು ಅಗತ್ಯವಿರುವ ವಿಷಯದಲ್ಲಿ ತುರ್ತು ನಿರ್ಧಾರ ಮಾಡುವ ಕ್ರಮವಾಗಿದೆ&rdquo; ಎಂದು ಹೇಳಿದರು.&lt;/p&gt;&lt;p&gt;ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, &ldquo;ಮಸೂದೆ ಕುರಿತು ವಿವರಿಸುವ ಮೊದಲು ಎಲ್ಲಾ ಪಕ್ಷಗಳ ಅಭಿಪ್ರಾಯವನ್ನು ಏಕೆ ಕೇಳಲಿಲ್ಲ?&rdquo; ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವದಲ್ಲಿ ಸಂವಾದ ಮತ್ತು ಸಹಕಾರ ದೇಶದ ಸಮೃದ್ಧಿಗೆ ಅವಶ್ಯಕ ಎಂದು ಅವರು ಹೇಳಿದರು.&lt;/p&gt;&lt;p&gt;ಮಹಿಳಾ ಮೀಸಲಾತಿ ಕುರಿತು ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದ ಅವರು, &ldquo;ರಾಜೀವ್ ಗಾಂಧಿ ಅವರ ಕಾಲದಲ್ಲೇ 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಗ್ರಾಮೀಣ ಮಟ್ಟದಲ್ಲಿ ಮಹಿಳಾ ಪ್ರತಿನಿಧಿತ್ವವನ್ನು ವಿಸ್ತರಿಸಲಾಗಿದೆ. ನಮ್ಮ ಬದ್ಧತೆ ಯಾವತ್ತೂ ಷರತ್ತುಬದ್ಧವಾಗಿರಲಿಲ್ಲ&rdquo; ಎಂದರು.&lt;/p&gt;&lt;h2&gt;&lt;strong&gt;ಮರು ವಿನ್ಯಾಸಗೊಳಿಸುವುದು ಸೂಕ್ತವಲ್ಲ&lt;/strong&gt;&lt;/h2&gt;&lt;p&gt;ಪ್ರಸ್ತುತ ಮಸೂದೆ ಕುರಿತು ಅವರು ಗಂಭೀರ ಆಕ್ಷೇಪ ವ್ಯಕ್ತಪಡಿಸಿ, &ldquo;ನಾರಿ ಶಕ್ತಿ&rdquo; ಎಂಬ ಹೆಸರಿನಲ್ಲಿ &ldquo;ನಾರಿ ಪ್ರತೀಕ್ಷಾ&rdquo; ಸೃಷ್ಟಿಯಾಗುವ ಅಪಾಯವಿದೆ. ಜನಗಣತಿ ನವೀಕರಣವಿಲ್ಲದೆ, ವಲಸೆ ಕುರಿತ ಸ್ಪಷ್ಟ ಮಾಹಿತಿಯಿಲ್ಲದೆ, ಮುಂದಿನ ದಶಕಗಳ ರಾಜಕೀಯ ಪ್ರತಿನಿಧಿತ್ವವನ್ನು ಮರು ವಿನ್ಯಾಸಗೊಳಿಸುವುದು ಸೂಕ್ತವಲ್ಲ&rdquo; ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ಕರ್ನಾಟಕದ ಪರವಾಗಿ ಮಾತನಾಡಿದ ಅವರು, &ldquo;ಕರ್ನಾಟಕವು ದೇಶದ ಜಿಡಿಪಿಗೆ ಸುಮಾರು 9% ಕೊಡುಗೆ ನೀಡುತ್ತದೆ. ಶಿಕ್ಷಣ, ಆರೋಗ್ಯ ಹಾಗೂ ಜನಸಂಖ್ಯಾ ನಿಯಂತ್ರಣದಲ್ಲಿ ಪ್ರಗತಿ ಸಾಧಿಸಿರುವ ರಾಜ್ಯಕ್ಕೆ ಕಡಿಮೆ ಪ್ರತಿನಿಧಿತ್ವ ನೀಡುವುದು ನ್ಯಾಯವೇ?&rdquo; ಎಂದು ಪ್ರಶ್ನಿಸಿದರು. ಮಸೂದೆದಲ್ಲಿ ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ನೀಡದಿರುವುದನ್ನು ಅವರು ಟೀಕಿಸಿ, &ldquo;ಇದು ಸಂಪೂರ್ಣ ಪ್ರತಿನಿಧಿತ್ವವಲ್ಲ, ಆಯ್ದ ಪ್ರತಿನಿಧಿತ್ವ ಮಾತ್ರ&rdquo; ಎಂದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/prabha-mallikarjun-women-reservation-bill-criticism-lok-sabha-gvd/articleshow-fte5cb1"/>
        </item>
        <item>
            <title><![CDATA[Davanagere By-Election 2026: ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯವಲ್ಲ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡ!]]></title>
            <link>https://kannada.asianetnews.com/state/if-zameer-resign-congress-wont-win-even-20-seats-muslim-leader-warns-of-forming-a-new-party-rav/articleshow-g2gxmnq</link>
            <guid isPermaLink="true">https://kannada.asianetnews.com/state/if-zameer-resign-congress-wont-win-even-20-seats-muslim-leader-warns-of-forming-a-new-party-rav/articleshow-g2gxmnq</guid>
            <pubDate>Sat, 18 Apr 2026 09:14:06 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ತಲೆದಂಡವಾದರೆ, ಮುಸ್ಲಿಂ ಸಮುದಾಯ ಕಾಂಗ್ರೆಸ್&zwnj;ನಿಂದ ದೂರ ಸರಿದು ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟಲಿದೆ ಎಂದು ವಿಶ್ವ ಮುಸ್ಲಿಂ ಪರಿಷತ್ ರಾಜ್ಯಾಧ್ಯಕ್ಷ ಸುಭಾನ್ ಖಾನ್ ಎಚ್ಚರಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfatd0ymgc3x29zh49jndvx,imgname-----------------------2026-04-18t091021.800-1776483644446.jpg" type="image/jpeg" height="390" width="690"/>
            <content:encoded><![CDATA[&lt;p&gt;- ಮುಸ್ಲಿಂ ಸಮುದಾಯ ಕಾಂಗ್ರೆಸ್ಸಿಂದ ದೂರಾಗಿ, ಹೊಸ ಪಕ್ಷ ಕಟ್ಟಲಿದೆ: ಸುಭಾನ್ ಖಾನ್&lt;/p&gt;&lt;p&gt;-&lt;strong&gt;ದಾವಣಗೆರೆ (ಏ.18): &lt;/strong&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಬೆಳವಣಿಗೆ ಆಧಾರದಲ್ಲಿ ಸಚಿವ ಜಮೀರ್ ಅಹಮ್ಮದ್ ತಲೆದಂಡವಾದರೆ ವಿಧಾನಸಭೆ ಚುನಾವಣೆ-2028ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ 20-30 ಕ್ಷೇತ್ರಗಳನ್ನು ಗೆಲ್ಲುವುದೂ ಕಷ್ಟವಾದೀತು. ಮುಸ್ಲಿಂ ಸಮುದಾಯವೇ ಕಾಂಗ್ರೆಸ್ಸಿನಿಂದ ದೂರವಾಗುತ್ತದೆ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುಭಾನ್ ಖಾನ್ ಎಚ್ಚರಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆ.ಅಬ್ದುಲ್ ಜಬ್ಬಾರ್&zwnj;, ದಕ್ಷಿಣ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹಮ್ಮದ್&zwnj;ಗೆ ತಲೆದಂಡ ಮಾಡಿದ ಕಾಂಗ್ರೆಸ್&zwnj; ಪಾಠ ಕಲಿಯದಿದ್ದರೆ, ಮುಸ್ಲಿಂ ಸಮುದಾಯ ಪಾಠ ಕಲಿಸುವ ಕೆಲಸ ಮಾಡುತ್ತದೆ ಎಂದರು.&lt;/p&gt;&lt;p&gt;ಮುಸ್ಲಿಂ ನಾಯಕರಿಗೆ ತೊಂದರೆ ನೀಡಿದರೆ ಕಾಂಗ್ರೆಸ್ಸಿಂದ ದೂರ ಸರಿದು, ಪ್ರಾದೇಶಿಕ ಪಕ್ಷ ಹುಟ್ಟು ಹಾಕುತ್ತೇವೆ. ಮುಸ್ಲಿಂ ಸೇರಿದಂತೆ ಅಹಿಂದ ವರ್ಗ ಸೇರಿದಂತೆ ಎಲ್ಲ ಜಾತಿ, ಸಮುದಾಯ ಒಳಗೊಂಡಂತೆ ಕಾಂಗ್ರೆಸ್&zwnj;- ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು, ಜೆಡಿಎಸ್&zwnj;ನಂತಹ ಪ್ರಾದೇಶಿಕ ಪಕ್ಷಕ್ಕೆ ಪರ್ಯಾಯ ಶಕ್ತಿಯ ಉದಯವಾಗಲಿದೆ. ವಿಶ್ವ ಮುಸ್ಲಿಂ ಪರಿಷತ್ ರಾಜಕೀಯ ಪಕ್ಷವಾಗಿ ಮಾಡುತ್ತೇವೆ. ಜಮೀರ್ ಅಹ್ಮದ್&zwnj; ಅವರನ್ನೇ ಕರೆಸಿ ಲಕ್ಷಾಂತರ ಜನರ ಸೇರಿಸಿ, ಸಮಾವೇಶ ಮಾಡುತ್ತೇವೆ. ಜಮೀರ್&zwnj; ಅವರನ್ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಡುತ್ತೇವೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಕಾಂಗ್ರೆಸ್&zwnj;ನಲ್ಲಿ ಜಮೀರ್ ಅಹಮ್ಮದ್ ತಲೆದಂಡವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದೆ. ಕೆ.ಅಬ್ದುಲ್ ಜಬ್ಬಾರ್&zwnj; ಅವರಿಗೆ ಏನಾದರೂ ತೊಂದರೆಯಾದರೆ ಕಾಂಗ್ರೆಸ್ ದಾವಣಗೆರೆ ನಗರ, ಜಿಲ್ಲೆಯಲ್ಲಷ್ಟೇ ಅಲ್ಲ, ಎಲ್ಲ ಕಡೆ ಸರ್ವನಾಶವಾಗುತ್ತದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ವಿರುದ್ಧ ಅಬ್ದುಲ್ ಜಬ್ಬಾರ್ ಪಕ್ಷವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ತೆಗೆದು ಹಾಕಿದ್ದು ಖಂಡನೀಯ ಎಂದು ಅವರು ತಿಳಿಸಿದರು.&lt;/p&gt;&lt;p&gt;ನಸೀರ್ ಅಹಮ್ಮದ್&zwnj; ಅವರಿಂದ ಬಲವಂತದಿಂದ ರಾಜೀನಾಮೆ ಪಡೆಯಲಾಗಿದೆ. ಇದೀಗ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮ್ಮದ್ ತಲೆದಂಡ ಮಾಡಿದರೆ ಕರ್ನಾಟಕ, ತೆಲಂಗಾಣದಲ್ಲಿ ಇರುವಂತಹ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಲಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ, ರಾಜಕೀಯವಾಗಿ ಮುಗಿಸಲು ಹೊರಟರೆ ಅದೇ ಕಾಂಗ್ರೆಸ್ ಕೈಕಟ್ಟಿಕೊಂಡು ಕೂಡುವ ಸ್ಥಿತಿ ತಂದುಕೊಳ್ಳುತ್ತದೆ. ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಸೋಲನುಭವಿಸಲಿದೆ ಎಂದು ಸುಭಾನ್ ಖಾನ್ ಹೇಳಿದರು.&lt;/p&gt;&lt;p&gt;ಈ ಸಂದರ್ಭ ಪರಿಷತ್&zwnj; ಮುಖಂಡರಾದ ಪರ್ವೇಜ್, ಮಂಜುನಾಥ, ಅಲ್ಲಾಭಕ್ಷಿ ಇದ್ದರು&lt;/p&gt;&lt;p&gt;&lt;strong&gt;*ಸಾದಿಕ್ ನಾಮಪತ್ರ ಹಾಕಿಸಿದ್ದೇ ನಾನು: ಸುಭಾನ್&lt;/strong&gt;&lt;/p&gt;&lt;p&gt;- ಇದರಲ್ಲಿ ಜಮೀರ್&zwnj;, ಜಬ್ಬಾರ್, ನಸೀರ್&zwnj;ರ ಯಾವುದೇ ಪಾತ್ರವೂ ಇಲ್ಲ: ಸ್ಪಷ್ಟನೆ&lt;/p&gt;&lt;p&gt;ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನನ್ನ 40 ವರ್ಷದ ಸ್ನೇಹಿತ ಸಾದಿಕ್ ಪೈಲ್ವಾನ್ ನಾಮಪತ್ರ ತುಂಬಿ, ಹಾಕಿಸಿದ್ದೇ ನಾನು. ಸಾದಿಕ್&zwnj;ಗೆ ನಾಮಪತ್ರ ಸಲ್ಲಿಸಲು ಕೆ.ಅಬ್ದುಲ್ ಜಬ್ಬಾರ್, ನಸೀರ್ ಅಹಮ್ಮದ್, ಜಮೀರ್ ಅಹಮ್ಮದ್ ಯಾರೂ ಹೇಳಿಲ್ಲ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುಭಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಫಲಿತಾಂಶ ಇನ್ನೂ ಬಂದೇ ಇಲ್ಲ. ಆದರೂ, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರನ್ನು ಗುರಿಯಾಗಿಸಿಕೊಂಡು, ಕ್ರಮ ಕೈಗೊಳ್ಳಲಾಗುತ್ತಿದೆ. ಸಚಿವ ಎಸ್&zwnj;.ಎಸ್&zwnj;. ಮಲ್ಲಿಕಾರ್ಜುನ ಅವರ ಶಿಫಾರಸಿನಿಂದ ಹೀಗೆ ಕಾಂಗ್ರೆಸ್ ವರಿಷ್ಠರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.&lt;/p&gt;&lt;p&gt;ನನ್ನ ಗೆಳೆಯ ಸಾದಿಕ್ ಪೈಲ್ವಾನ್ ಕಾಂಗ್ರೆಸ್ಸಿನಲ್ಲಿ ದುಡಿದರೂ ತನ್ನನ್ನು ಗುರುತಿಸಲಿಲ್ಲವೆಂದು ಬೇಸರ ತೋಡಿಕೊಂಡಿದ್ದ. ನಾನೂ ಉಪ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಸಾದಿಕ್&zwnj;ಗೂ ನಾಮಪತ್ರ ಸಲ್ಲಿಸಲು ಹೇಳಿ, ನಾನೇ ನಾಮಪತ್ರ ತುಂಬಿ, ನನ್ನದೇ ಹಣದಲ್ಲಿ ಠೇವಣಿ ಕಟ್ಟಿದ್ದೆ. ಆದರೆ, ಸೆಡ್ಡು ಹೊಡೆದಿದ್ದ ಆತ ಇದ್ದಕ್ಕಿದ್ದಂತೆ ಯು ಟರ್ನ್ ಆಗುತ್ತಾನೆಂದು ನಾನಂತೂ ಅಂದುಕೊಂಡಿರಲಿಲ್ಲ ಎಂದು ಅವರು ತಿಳಿಸಿದರು.&lt;/p&gt;&lt;p&gt;ಚುನಾವಣಾ ಕಣದಲ್ಲಿ ಉಳಿಯುವುದು, ಬಿಡುವುದು ಅವನ ಇಷ್ಟ. ಸಾದಿಕ್&zwnj; ಪೈಲ್ವಾನ್&zwnj;ಗೆ ನಾಮಪತ್ರ ಸಲ್ಲಿಸಲು, ಹಿಂದಕ್ಕೆ ಪಡೆಯದಂತೆ ಹೇಳಿದ್ದು ನಾನೇ ಹೊರತು ಅಬ್ದುಲ್ ಜಬ್ಬಾರ್&zwnj;, ಜಮೀರ್ ಅಹಮ್ಮದ್, ನಸೀರ್ ಅಹಮ್ಮದ್ ಆಗಲಿ ಅಲ್ಲ. ಉಪ ಚುನಾವಣೆಗೆ ಇಡೀ ಕ್ಯಾಬಿನೆಟ್&zwnj; ದಾವಣಗೆರೆಗೆ ಬಂದು, ಠಿಕಾಣಿ ಹೂಡಿತ್ತು. ಇಲ್ಲಿಯೇ ಇದ್ದವರು ಒಂದು ಸಲ ಅಬ್ದುಲ್&zwnj; ಜಬ್ಬಾರ್ ಮನೆಗೆ ಭೇಟಿ ನೀಡಬೇಕಿತ್ತು. ಜಬ್ಬಾರ್ ಅಲ್ಪಸಂಖ್ಯಾತರ ನಾಯಕ. ಸಾದಿಕ್ ಮನೆ ಕೂಗಳತೆ ದೂರದಲ್ಲಿದ್ದರೂ ಸಾದಿಕ್&zwnj; ಮನೆಯಲ್ಲಿ ಊಟ ಮಾಡಿದ ಸಿಎಂ ಸಿದ್ದರಾಮಯ್ಯ, ಜಬ್ಬಾರ್ ಮನೆಗೆ ಹೋಗಲಿಲ್ಲ ಎಂದು ಅವರು ದೂರಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/if-zameer-resign-congress-wont-win-even-20-seats-muslim-leader-warns-of-forming-a-new-party-rav/articleshow-g2gxmnq"/>
        </item>
        <item>
            <title><![CDATA[ಪತಿಯ ಅಕ್ರಮ ಸಂಬಂಧ ಪತ್ತೆ ಮಾಡಿದ್ದ ಪತ್ನಿ ನಿಗೂಢ ಸಾವು: ಪೋಷಕರಿಂದ ಕೊಲೆ ಆರೋಪ]]></title>
            <link>https://kannada.asianetnews.com/gallery/relationship/davangere-housewife-mysteriously-death-parents-accuses-husband-killed-her-ggq9qpd</link>
            <guid isPermaLink="true">https://kannada.asianetnews.com/gallery/relationship/davangere-housewife-mysteriously-death-parents-accuses-husband-killed-her-ggq9qpd</guid>
            <pubDate>Sun, 19 Apr 2026 15:20:11 +0530</pubDate>
            <description><![CDATA[ದಾವಣಗೆರೆಯಲ್ಲಿ ಇತ್ತೀಚೆಗೆ ಮದುವೆಯಾಗಿದ್ದ ಕಾವ್ಯ ಎಂಬ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪತಿಯ ಅಕ್ರಮ ಸಂಬಂಧದ ಸಾಕ್ಷ್ಯ ಸಂಗ್ರಹಿಸಿದ್ದ ಆಕೆಯನ್ನು, ಪತಿಯೇ ಹಣಕ್ಕಾಗಿ ಪೀಡಿಸಿ ಕೊಲೆ ಮಾಡಿದ್ದಾನೆ ಎಂದು ಮೃತರ ಪೋಷಕರು ಆರೋಪಿಸಿ, ದೂರು ದಾಖಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpjj2vwcsmnqckhq6p1yn87d,imgname-davangere-suspicious-death-1776591925132.jpg" type="image/jpeg" height="390" width="690"/>
            <content:encoded><![CDATA[ದಾವಣಗೆರೆಯಲ್ಲಿ ಇತ್ತೀಚೆಗೆ ಮದುವೆಯಾಗಿದ್ದ ಕಾವ್ಯ ಎಂಬ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪತಿಯ ಅಕ್ರಮ ಸಂಬಂಧದ ಸಾಕ್ಷ್ಯ ಸಂಗ್ರಹಿಸಿದ್ದ ಆಕೆಯನ್ನು, ಪತಿಯೇ ಹಣಕ್ಕಾಗಿ ಪೀಡಿಸಿ ಕೊಲೆ ಮಾಡಿದ್ದಾನೆ ಎಂದು ಮೃತರ ಪೋಷಕರು ಆರೋಪಿಸಿ, ದೂರು ದಾಖಲಿಸಿದ್ದಾರೆ.&lt;img&gt;&lt;p&gt;ದಾವಣಗೆರೆ: ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪತಿ ವಿರುದ್ಧ ಗೃಹಿಣಿ ಪೋಷಕರು ಕೊಲೆ ಆರೋಪ ಮಾಡಿದ್ದು, ಪತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.. ಮಂಡಲೂರು ಗ್ರಾಮದ 26 ವರ್ಷದ ಕಾವ್ಯ ಮೃತಪಟ್ಟ ಗೃಹಿಣಿ.&lt;/p&gt;&lt;img&gt;&lt;p&gt;ಎರಡು ವರ್ಷದ ಹಿಂದೆ ಕಾವ್ಯ ಮದುವೆ ಹೊದಿಗೆರೆ ನಿವಾಸಿ ರವಿ ಎಂಬಾತನ ಜೊತೆ ನಡೆದಿತ್ತು. ಆದರೆ ಕಾವ್ಯ ಪತಿ ಮನುವಿಗೆ ಬೇರೆ ಯುವತಿ ಜೊತೆ ಅಕ್ರಮ ಸಂಬಂಧವಿತ್ತು ಎಂದು ಕಾವ್ಯ ಮನೆಯವರು ಆರೋಪಿಸಿದ್ದಾರೆ. ಅಲ್ಲದೇ ಮನು ಕಾವ್ಯಾಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ಈಗ ಆತನೇ ಆಕೆಯನ್ನು ಹೊಡೆದು ಕೊಂದಿದ್ದಾನೆ ಎಂದು ಕಾವ್ಯಾ ಮನೆಯವರು ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಪತಿ ಮನುವಿಗೆ ಬೇರೆ ಯುವತಿ ಜೊತೆ ಅಕ್ರಮ ಸಂಬಂಧ ಇರುವ ಬಗ್ಗೆ ಕಾವ್ಯ ದಾಖಲೆ ಸಂಗ್ರಹ ಮಾಡಿದ್ದಳು. ಅನ್ಯ ಯುವತಿ ಜೊತೆ ಆತ ಚಾಟ್ ಮಾಡಿದ್ದ ಸ್ಕ್ರೀನ್ ಶಾಟ್ ಅನ್ನು ಕಾವ್ಯ ಸಂಗ್ರಹಿಸಿದ್ದಳು. ಇದನ್ನು ಪೆನ್&zwnj;ಡ್ರೈವ್&zwnj;ನಲ್ಲಿ ಸೇವ್ ಮಾಡಿದ್ದ ಕಾವ್ಯ ತವರು ಮನೆಯಲ್ಲಿ ತನ್ನ ತಮ್ಮನ ಬ್ಯಾಗ್&zwnj;ನಲ್ಲಿ ಇರಿಸಿದ್ದಳು ಎಂದು ಪೋಷಕರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಆದರೆ ಈಗ ಮಗಳು ದಾವಣಗೆರೆಯ ಅಂಚೆ ಇಲಾಖೆ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದು, ಗಂಡ ಮನುವೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಕಾವ್ಯಾಳ ಪೋಷಕರು ದಾವಣಗೆರೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ಕಾವ್ಯಾಳನ್ನು ಆಕೆಯ ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆದರೆ ಈ ಬಗ್ಗೆ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದು ಕಾವ್ಯ ಪೋಷಕರು ಆರೋಪಿಸಿದ್ದಾರೆ. ಆತನಿಗಿರುವ ಅಕ್ರಮ ಸಂಬಂಧದ ಬಗ್ಗೆ ಕಾವ್ಯ ಸಂಗ್ರಹಿಸಿದ ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ನೀಡುತ್ತೇವೆ ಪೊಲೀಸರಿಗೆ ನೀಡುವುದಿಲ್ಲ ಎಂದು ಕಾವ್ಯ ಪೋಷಕರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮನು ಜೊತೆ 2 ವರ್ಷಗಳ ಹಿಂದೆ ಕಾವ್ಯಳ ಮದುವೆಯನ್ನು ಬಹಳ ಅದ್ದೂರಿಯಾಗಿ ಪೋಷಕರು ಮಾಡಿದ್ದರು. ಮದುವೆಗೂ ಮುನ್ನ ಅದ್ಧೂರಿ ಫೋಟೋಶೂಟ್ ಮಾಡಿಸಲಾಗಿತ್ತು.&lt;/p&gt;&lt;img&gt;&lt;p&gt;. ಲಕ್ಷಾಂತರ ಸಾಲ ಮಾಡಿ ಮಗಳ ಮದುವೆ ಮಾಡಲಾಗಿತ್ತು. ಆದರೆ ಕೇವಲ ಎರಡೇ ವರ್ಷಕ್ಕೆ ಮಗಳು ಹೀಗೆ ಪ್ರಾಣ ಕಳೆದುಕೊಂಡಿದ್ದು, ಕಾವ್ಯಳ ಪೋಷಕರು ಕಣ್ಣೀರಿಟ್ಟಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/relationship/davangere-housewife-mysteriously-death-parents-accuses-husband-killed-her-ggq9qpd"/>
        </item>
        <item>
            <title><![CDATA[ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದರಿಂದಲೇ ರಾಜ್ಯ ಅಭಿವೃದ್ಧಿಗೆ ವೇಗ: ಎಂ.ಪಿ.ರೇಣುಕಾಚಾರ್ಯ]]></title>
            <link>https://kannada.asianetnews.com/karnataka-districts/bs-yediyurappa-50-years-politics-mp-renukacharya-development-karnataka-gvd/articleshow-gx5gqau</link>
            <guid isPermaLink="true">https://kannada.asianetnews.com/karnataka-districts/bs-yediyurappa-50-years-politics-mp-renukacharya-development-karnataka-gvd/articleshow-gx5gqau</guid>
            <pubDate>Sun, 26 Apr 2026 23:52:46 +0530</pubDate>
            <description><![CDATA[&lt;p&gt;ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆಯೇ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದ್ದು, ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ನೋಡಿದ್ದೇ ಅವರ ಅಧಿಕಾರಾವಧಿಯಲ್ಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hmy2cm0g93qz5p6ker93qjcq,imgname-dvdfb.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊನ್ನಾಳಿ (ಏ.26): &lt;/strong&gt;ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆಯೇ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದ್ದು, ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ನೋಡಿದ್ದೇ ಅವರ ಅಧಿಕಾರಾವಧಿಯಲ್ಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.&lt;/p&gt;&lt;p&gt;ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನೆಲೆ ಚಿತ್ರದುರ್ಗದಲ್ಲಿ ಮೇ 9ರಂದು ನಡೆಯುವ ಬಿ.ಎಸ್&zwnj;.ವೈ. ಅಭಿಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಹೊನ್ನಾಳಿ ಪಟ್ಟಣದಲ್ಲಿ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.&lt;/p&gt;&lt;p&gt;ಆಡಳಿತ ಪಕ್ಷ ಅಥವಾ ವಿಪಕ್ಷ ಎನ್ನದೇ ಎಲ್ಲರಿಗೂ ಅಭಿವೃದ್ಧಿಗೆ ಹಣ ನೀಡಿ ರಾಜ್ಯದ ಅಭಿವೃದ್ಧಿಗೆ ಸಾಥ್ ನೀಡಿದ ಏಕೈಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಇಂತಹ ಮುಖ್ಯಮಂತ್ರಿ ಜತೆ ಸಹ ಮಂತ್ರಿಯಾಗಿ ಕೆಲಸ ಮಾಡಿದ್ದು ನನ್ನ ಸೌಭಾಗ್ಯ. ಅವರ ಸ್ವಕ್ಷೇತ್ರ ಶಿಕಾರಿಪುರಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರೋ, ನಮ್ಮ ಕ್ಷೇತ್ರ ಹೊನ್ನಾಳಿ ಕ್ಷೇತ್ರ ಅಭಿವೃದ್ಧಿಗೂ ಅಷ್ಟೇ ಅನುದಾನ ನೀಡಿದ್ದಾರೆ ಎಂದು ಶ್ಲಾಘಿಸಿದರು.&lt;/p&gt;&lt;p&gt;ಶಿಕಾರಿಪುರದಲ್ಲಿ ತಮ್ಮ ರಾಜಕೀಯ ಚಟುವಟಿಕೆ ಆರಂಭಿಸಿದ ಬಿಎಸ್&zwnj;ವೈ ಅವರು ಪ್ರಾರಂಭದಲ್ಲಿ ಆರ್&zwnj;ಎಸ್&zwnj;ಎಸ್&zwnj;ನ ತಾಲೂಕು ಕಾರ್ಯವಾಹರಾಗಿ, ನಂತರ ಪುರಸಭೆ ಅಧ್ಯಕ್ಷ, ಶಾಸಕ, ವಿಪಕ್ಷ ನಾಯಕ, ಸಂಸದರಾಗಿ ದುಡಿದಿದ್ದಾರೆ. ಅದಕ್ಕೂ ಪೂರ್ವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಸಾಲ ಮನ್ನಾ, ಬಗರ್&zwnj;ಹುಕುಂ ಹೋರಾಟ ಹಾಗೂ ಪಾದಯಾತ್ರೆಗಳು ಇವರ ನೇತೃತ್ವದಲ್ಲಿ ಸಾಮಾನ್ಯವಾಗಿತ್ತು. ವಿಧಾನಸೌಧದಲ್ಲಿ ರೈತರ ಪರವಾಗಿ ಮಾತನಾಡಲು ಎದ್ದು ನಿಂತರೆ ಸಾಕು ವಿಧಾನಸೌಧವೇ ನಡುಗುತಿತ್ತು ಎಂದು ಇಂದಿಗೂ ವಿಪಕ್ಷದವರೇ ಮಾತನಾಡುತ್ತಾರೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;10 ಲಕ್ಷ ಅಭಿಮಾನಿಗಳು ಬರುವ ನಿರೀಕ್ಷೆ&lt;/strong&gt;&lt;/h2&gt;&lt;p&gt;ಮೇ 9ರಂದು ಚಿತ್ರದುರ್ಗದಲ್ಲಿ ನಡೆಯುವ ಬಿಎಸ್&zwnj;ವೈ ಅಭಿಮಾನೋತ್ಸವಕ್ಕೆ ಇಡೀ ರಾಜ್ಯದಿಂದ 10 ಲಕ್ಷಕ್ಕೂ ಹೆಚ್ಚು ಜನ ಆಗಮಿಸಲಿದ್ದಾರೆ. ಹೊನ್ನಾಳಿ, ನ್ಯಾಮತಿ ತಾಲೂಕಿನಿಂದಲೇ 10 ಸಾವಿರ ಕಾರ್ಯಕರ್ತರು ಚಿತ್ರದುರ್ಗದಲ್ಲಿ ನಡೆಯುವ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bs-yediyurappa-50-years-politics-mp-renukacharya-development-karnataka-gvd/articleshow-gx5gqau"/>
        </item>
        <item>
            <title><![CDATA[ದಾವಣಗೆರೆ ಕ್ಷೇತ್ರದ ಜನಪ್ರಿಯ ಕಾಂಗ್ರೆಸ್ ನಾಯಕ ಸೈಯದ್ ಸೈಫುಲ್ಲಾ ಸಾಬ್ ನಿಧನ]]></title>
            <link>https://kannada.asianetnews.com/karnataka-districts/popular-congress-leader-from-davanagere-constituency-syed-saifullah-saab-passes-away-mrq/articleshow-i9g6ev5</link>
            <guid isPermaLink="true">https://kannada.asianetnews.com/karnataka-districts/popular-congress-leader-from-davanagere-constituency-syed-saifullah-saab-passes-away-mrq/articleshow-i9g6ev5</guid>
            <pubDate>Sat, 18 Apr 2026 19:40:55 +0530</pubDate>
            <description><![CDATA[&lt;p&gt;ದಾವಣಗೆರೆಯ ಹಿರಿಯ ಕಾಂಗ್ರೆಸ್ ನಾಯಕ, ಶಿಕ್ಷಣ ತಜ್ಞ ಹಾಗೂ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರಾದ ಸೈಯದ್ ಸೈಫುಲ್ಲಾ ಸಾಬ್ (79) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpgeny39ckge1xwpyaw16z67,imgname-saiyad-death-1776521246825.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ&lt;/strong&gt;: ದಾವಣಗೆರೆಯ ಕಾಂಗ್ರೆಸ್ ನಾಯಕ ಸೈಯದ್ ಕೆರೆಕಟ್ಟೆ ಸೈಫುಲ್ಲ ಸಾಬ್ ನಿಧನರಾಗಿದ್ದಾರೆ. 79 ವರ್ಷದ ಸೈಯದ್ ಸೈಫುಲ್ಲ ಸಾಬ್ ಈ ಬಾರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಬ್ದುಲ್ ಜಬ್ಬಾರ್ ಜೊತೆಗೆ ಸೈಯದ್ ಸೈಫುಲ್ಲಾ ಅವರ ಹೆಸರು ಸಹ ಬಲವಾಗಿ ಕೇಳಿ ಬಂದಿತ್ತು. ಹಿಂದೆ ತಮ್ಮ ಹೆಸರಿಗೆ ಕಾಂಗ್ರೆಸ್ ಬಿ ಫಾರಂ ಬಂದಿದ್ದರೂ ಅದನ್ನು ತಿದ್ದಿದ ಕಾರಣಕ್ಕೆ ಸ್ಪರ್ಧೆಯಿಂದ ಸೈಯದ್ ಸೈಫುಲ್ಲಾ ವಂಚಿತರಾಗಿದ್ರು ಎಂಬ ಮಾತುಗಳು ಕೇಳಿಬಂದಿತ್ತು.&lt;/p&gt;&lt;p&gt;79 ವರ್ಷದ ಸೈಯದ್ ಸೈಫುಲ್ಲ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಿಕಾರಿಯಾಗದೇ ಸೈಯದ್ ಸೈಫುಲ್ಲಾ ನಿಧನರಾಗಿದ್ದಾರೆ. ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರಾಗಿಯೂ ಸೈಫುಲ್ಲಾ ಸೇವೆ ಸಲ್ಲಿಸಿದ್ದರು.&lt;/p&gt;&lt;h2&gt;&lt;strong&gt;ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ನಾಯಕ&lt;/strong&gt;&lt;/h2&gt;&lt;p&gt;ಸೈಯದ್ ಸೈಫುಲ್ಲ ಅವರು ಮಿಲ್ಲತ್ ವಿದ್ಯಾಸಂಸ್ಥೆಗಳ ಸ್ಥಾಪಕರಾಗಿದ್ದು, ಶಿಕ್ಷಣ ಸುಧಾಕರಾಗಿಯೂ ಗುರುತಿಸಿಕೊಂಡಿದ್ದರು. ಕಳೆದ 45 ವರ್ಷಗಳಿಂದ ಶಿಕ್ಷಣ, ರಾಜಕೀಯ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೈಯದ್ ಸೈಫುಲ್ಲಾ ಸಕ್ರಿಯರಾಗಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Davanagere By-Election 2026: ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯವಲ್ಲ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡ!&lt;/strong&gt;&lt;/p&gt;&lt;p&gt;ಸೈಯದ್ ಸೈಫುಲ್ಲಾ ಅವರ ಪತ್ನಿ, ಐವರು ಹೆಣ್ಣು ಮಕ್ಕಳು, ಪುತ್ರ ಸೈಯದ್ ಖಾಲಿದ್ ಅಹ್ಮದ್ ಮತ್ತು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸೈಯದ್ ಸೈಫುಲ್ಲಾ ನಿವಾಸದತ್ತ ಜನರು ಆಗಮಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಾಂಗ್ರೆಸ್&zwnj; ವಿರುದ್ಧ ಮುಸ್ಲಿಂ ಸಂಘಟನೆಗಳ ಆಕ್ರೋಶ, ಜಂಟಿ ಹೇಳಿಕೆಯಲ್ಲಿ 'ಕೈ'ಗೆ ಎಚ್ಚರಿಕೆ, ಮುಂದಿನ ನಡೆ ಏನು?&lt;/strong&gt;&lt;/p&gt;]]></content:encoded>
            <category>davanagere</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/popular-congress-leader-from-davanagere-constituency-syed-saifullah-saab-passes-away-mrq/articleshow-i9g6ev5"/>
        </item>
        <item>
            <title><![CDATA[Vachanananda Swamiji child abuse case: ವಚನ ಶ್ರೀ ವಿರುದ್ಧ 3 ಮಕ್ಕಳಿಂದ ಮಕ್ಕಳ ಕಲ್ಯಾಣ ಸಮಿತಿಗೆ ದೂರು]]></title>
            <link>https://kannada.asianetnews.com/karnataka-districts/3-children-file-complaint-with-child-welfare-committee-against-vachana-sri-rav/articleshow-m03u0gt</link>
            <guid isPermaLink="true">https://kannada.asianetnews.com/karnataka-districts/3-children-file-complaint-with-child-welfare-committee-against-vachana-sri-rav/articleshow-m03u0gt</guid>
            <pubDate>Sat, 18 Apr 2026 04:49:37 +0530</pubDate>
            <description><![CDATA[ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ವಿರುದ್ಧ ಮೂವರು ಮಕ್ಕಳು ದೌರ್ಜನ್ಯದ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳ ಕೌನ್ಸೆಲಿಂಗ್ ಹಾಗೂ ಮಠದ ಸ್ಥಳ ಪರಿಶೀಲನೆ ನಡೆಸಿ, ಸ್ವಾಮೀಜಿಯ ಹೇಳಿಕೆ ದಾಖಲಿಸಿಕೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k17t6mv26k84fvbs47qkz0q9,imgname-cewfe-1753682760546.png" type="image/jpeg" height="390" width="690"/>
            <content:encoded><![CDATA[&lt;h2&gt;ದೂರುದಾರ ಮಕ್ಕಳ ಕೌನ್ಸೆಲಿಂಗ್, ಸ್ಥಳ ಪರಿಶೀಲನೆ&lt;/h2&gt;&lt;p&gt;&lt;strong&gt;ದಾವಣಗೆರೆ (ಏ.18): &lt;/strong&gt;ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ದಾವಣಗೆರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮೂವರು ಮಕ್ಕಳು ದೂರು ದಾಖಲಿಸಿ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;ನಗರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ದೂರು ನೀಡಿದ 3 ಮಕ್ಕಳನ್ನು ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸಿದ್ದಾರೆ. ಇನ್ನೂ ಮೂರು ಬಾರಿ ಮಕ್ಕಳ ಕೌನ್ಸೆಲಿಂಗ್ ನಡೆಸುವ ಸಾಧ್ಯತೆ ಇದ್ದು, ಈ ವೇಳೆ ಮಕ್ಕಳು ದೃಢವಾಗಿ ಹೇಳಿಕೆ ನೀಡಿದರೆ ವಚನಾನಂದ ಶ್ರೀಗೆ ಸಂಕಷ್ಟ ಹೆಚ್ಚಾಗಲಿದೆ ಎನ್ನಲಾಗಿದೆ. ಮಠದಲ್ಲಿದ್ದ ಮಕ್ಕಳ ಮೇಲೆ ಸ್ವಾಮೀಜಿ ಹಲ್ಲೆಗೈದು, ದೌರ್ಜನ್ಯ ನಡೆಸುತ್ತಾರೆಂದು ಮಕ್ಕಳು ಹಾಗೂ ಪೋಷಕರು ಆರೋಪಿಸಿ ನೀಡಿದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅಲ್ಲದೇ, ಕೆಲ ದೃಶ್ಯಗಳನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಯುವ ಘಟಕ ಪದಾಧಿಕಾರಿಗಳು ಬಿಡುಗಡೆ ಮಾಡಿದ್ದರು.&lt;/p&gt;&lt;p&gt;ಮಕ್ಕಳ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಜುಳಾ ನೇತೃತ್ವದ ತಂಡ ಹರಿಹರ ತಾಲೂಕಿನ ಹನಗವಾಡಿ ಸಮೀಪದ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.&lt;/p&gt;&lt;p&gt;, ದೂರುದಾರ ಮೂವರೂ ಮಕ್ಕಳು ಮಠದಲ್ಲಿ ಮಲಗುವ ಜಾಗ, ಓದುತ್ತಿದ್ದ ಸ್ಥಳ, ಕೊಠಡಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ನಂತರ ಸಮಿತಿಯ ಸದಸ್ಯರು, ವಚನಾನಂದ ಸ್ವಾಮೀಜಿಯನ್ನು ದೂರಿನಲ್ಲಿರುವ ಆರೋಪದ ಕುರಿತು ಸುಮಾರು ಹೊತ್ತು ವಿಚಾರಣೆ ಮಾಡಿದ್ದಾರೆ.&lt;/p&gt;&lt;h2&gt;ವರದಿ ಬಳಿಕ ಪೊಲೀಸ್ ವಿಚಾರಣೆ&lt;/h2&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷೆ ಮಂಜುಳಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿದೆ ಮೂವರು ಮಕ್ಕಳು ಲಿಖಿತ ದೂರು ನೀಡಿದ್ದರು. ಮಕ್ಕಳ ಕೌನ್ಸೆಲಿಂಗ್ ನಡೆಯುತ್ತಿದ್ದು, ವಚನಾನಂದ ಸ್ವಾಮೀಜಿ ಹೇಳಿಕೆ ದಾಖಲಿಸಿದ್ದೇವೆ. ಕೌನ್ಸೆಲಿಂಗ್ ವರದಿ ಬಂದ ನಂತರ ಪೊಲೀಸರಿಗೆ ಅದನ್ನು ನೀಡುತ್ತೇವೆ. ನಂತರ ಪೊಲೀಸರು ವಿಚಾರಣೆ ಕೈಗೊಳ್ಳುತ್ತಾರೆ ಎಂದರು.&lt;/p&gt;&lt;p&gt;ಹರಿಹರದ ಪಂಚಮಸಾಲಿ ಪೀಠದ ಬಾಲಕರ ಹಾಸ್ಟೆಲ್&zwnj;ನಲ್ಲಿ ರಿಜಿಸ್ಟರ್ ಇಲ್ಲದಿರುವುದು ಗೊತ್ತಾಗಿದ್ದು, ಈ ಬಗ್ಗೆ ವಚನಾನಂದ ಸ್ವಾಮೀಜಿಗೆ ಕೇಳಿದರೆ, ಅದನ್ನೆಲ್ಲಾ ಧರ್ಮದರ್ಶಿಗಳು ನೋಡಿಕೊಳ್ಳುತ್ತಿದ್ದರು ಎಂದಿದ್ದಾರೆ ಎಂದು ವಿವರಿಸಿದರು.&lt;/p&gt;&lt;h3&gt;ಸೂಕ್ತ ಸಮಯದಲ್ಲಿ ಉತ್ತರಿಸುವೆ: ಶ್ರೀಗಳು&lt;/h3&gt;&lt;p&gt;ಮೂವರು ಮಕ್ಕಳು ನೀಡಿದ ದೂರಿನ ಸಂಬಂಧ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಇದು ಕಾನೂನು ವ್ಯಾಪ್ತಿಗೆ ಬರಲಿದ್ದು, ಸೂಕ್ಷ್ಮ ವಿಷಯವಾಗಿದೆ. ಈ ಬಗ್ಗೆ ನಾವು ಹೇಳಿಕೆ ಕೊಡುವುದಕ್ಕೆ ಆಗುವುದಿಲ್ಲ. ಈ ಕುರಿತು ಸೂಕ್ತ ಸಮಯ, ಸಂದರ್ಭದಲ್ಲಿ ಉತ್ತರ ನೀಡುತ್ತೇವೆ. ನಾವು ದೇವರಲ್ಲ, ದೇವರ ದಾರಿಯಲ್ಲಿ ನಡೆಯುವ ಸಾಧಕರು ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ಮಠ ಖಾಲಿ ಮಾಡಲು ಗಡುವು ನೀಡಿದ ಕುರಿತು ಪ್ರತಿಕ್ರಿಯಿಸಿ, ಬಾರದು ಬಪ್ಪದು, ಬಪ್ಪದು ತಪ್ಪದು. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.&lt;/p&gt;&lt;p&gt;ಕೂಡಲಸಂಗಮ ಪಂಚಮಸಾಲಿ ಪೀಠದ ಉಚ್ಚಾಟಿತ ಜಯಮೃತ್ಯುಂಜಯ ಸ್ವಾಮೀಜಿಯನ್ನು ಹರಿಹರ ಪೀಠಕ್ಕೆ ತರುವ ಬಗ್ಗೆ ಪ್ರತಿಕ್ರಿಯಿಸಿ, ನಾವೆಲ್ಲಾ ಒಂದೇ ಸ್ವಾಮೀಜಿಗಳು. ನಮ್ಮಲ್ಲಿ ಭೇದಭಾವವಿಲ್ಲ. ನಮ್ಮದು 8 ವರ್ಷ, ಅವರದ್ದು 18 ವರ್ಷ ಸೇವೆ. ಅವರಿಗೆ ಅವರದ್ದೇ ಆದ ವ್ಯಕ್ತಿತ್ವವಿದೆ ಎಂದು ಹೇಳಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/3-children-file-complaint-with-child-welfare-committee-against-vachana-sri-rav/articleshow-m03u0gt"/>
        </item>
        <item>
            <title><![CDATA[ಕಾಂಗ್ರೆಸ್‌ ವಿರುದ್ಧ ಮುಸ್ಲಿಂ ಸಂಘಟನೆಗಳ ಆಕ್ರೋಶ, ಜಂಟಿ ಹೇಳಿಕೆಯಲ್ಲಿ 'ಕೈ'ಗೆ ಎಚ್ಚರಿಕೆ, ಮುಂದಿನ ನಡೆ ಏನು?]]></title>
            <link>https://kannada.asianetnews.com/politics/muslim-organizations-express-anger-against-congress-joint-statement-released-bengaluru/articleshow-m3flrgy</link>
            <guid isPermaLink="true">https://kannada.asianetnews.com/politics/muslim-organizations-express-anger-against-congress-joint-statement-released-bengaluru/articleshow-m3flrgy</guid>
            <pubDate>Sat, 18 Apr 2026 14:24:10 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬೆಂಬಲಿಸಿದ ಮುಸ್ಲಿಂ ಸಮುದಾಯಕ್ಕೆ ಇದೀಗ ರಾಜಕೀಯ ಪ್ರಾತಿನಿಧ್ಯ ನೀಡದೆ ಅವಮಾನಿಸಲಾಗುತ್ತಿದೆ ಎಂದು ರಾಜ್ಯದ ವಿವಿಧ ಮುಸ್ಲಿಂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ತಾರತಮ್ಯ ನೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ರಾಜಕೀಯ ಹಿನ್ನಡೆಯಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzhdmkgbd5a6zgrtse7mevx,imgname-----------------------2026-04-12t055752.365-1775953695344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18)&lt;/strong&gt; ಕರ್ನಾಟಕದ ಮುಸ್ಲಿಂ ಸಮುದಾಯ ಮತ್ತು ಅದರ ನಾಯಕರನ್ನು ಕಾಂಗ್ರೆಸ್ ಪಕ್ಷವು ನಡೆಸಿಕೊಳ್ಳುತ್ತಿರುವ ರೀತಿಯನ್ನು ರಾಜ್ಯದ ವಿವಿಧ ಮುಸ್ಲಿಂ ಸಂಘಟನೆಗಳು, ಒಕ್ಕೂಟಗಳು ಮತ್ತು ಪ್ರಮುಖ ಪ್ರತಿನಿಧಿಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರಮುಖ ಮುಖಂಡರು ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.&lt;/p&gt;&lt;p&gt;ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಒಗ್ಗಟ್ಟಿನ ಬೆಂಬಲವೇ ಪ್ರಮುಖ ಕಾರಣ. ಆದರೆ ಅಧಿಕಾರಕ್ಕೆ ಬಂದ ಮೇಲೆ ಸಮುದಾಯಕ್ಕೆ ರಾಜಕೀಯ ನೇಮಕಾತಿ ಹಾಗೂ ಅಧಿಕಾರಶಾಹಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದೆ ಅವಮಾನಿಸಲಾಗುತ್ತಿದೆ ಎಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ.&lt;/p&gt;&lt;h2&gt;ಪ್ರಕಟಣೆಯಲ್ಲಿ ತಿಳಿಸಿದ್ದೇನು?&lt;/h2&gt;&lt;p&gt;ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಬರಲು ಇಲ್ಲಿನ ಮುಸ್ಲಿಮರು ಅದಕ್ಕೆ ನೀಡಿರುವ ಒಗ್ಗಟ್ಟಿನ ಬೆಂಬಲ ಪ್ರಮುಖ ಕಾರಣ. ಆದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ಸರಕಾರ ಮುಸ್ಲಿಮರನ್ನು ಘನತೆಯೊಂದಿಗೆ ನಡೆಸಿಕೊಳ್ಳುತ್ತಿಲ್ಲ ಎಂಬುದು ಅದರ ಇತ್ತೀಚಿನ ನಡೆಗಳಿಂದ ಸ್ಪಷ್ಟವಾಗಿದೆ. ತನ್ನನ್ನು ಬೆಂಬಲಿಸಿ ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಕೊಡುಗೆ ನೀಡಿರುವ ಮುಸ್ಲಿಮ್ ಸಮುದಾಯಕ್ಕೆ ರಾಜಕೀಯ ನೇಮಕಾತಿಗಳಲ್ಲಿ ಹಾಗೂ ಅಧಿಕಾರ ಶಾಹಿಯ ಪ್ರಮುಖ ಹುದ್ದೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ನೀಡದ ಕಾಂಗ್ರೆಸ್ ಈಗ ಮುಸ್ಲಿಮ್ ಸಮುದಾಯವನ್ನು ಮತ್ತೆ ಮತ್ತೆ ಅವಮಾನಿಸುತ್ತಿದೆ ಎಂಬ ನೋವಿನ ಭಾವನೆ ಸಮುದಾಯದಲ್ಲಿ ತೀವ್ರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.&lt;/p&gt;&lt;h3&gt;ದಾವಣಗೆರೆ ಬೆಳವಣಿಗೆಯಿಂದ ಅಸಮಾಧಾನ:*&lt;/h3&gt;&lt;p&gt;ದಾವಣಗೆರೆ ಉಪ ಚುನಾವಣೆ ಹಾಗೂ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಒಂದು ಸ್ಪಷ್ಟ ಸಂದೇಶ ನೀಡಿದಂತಿದೆ. ಅದೇನೆಂದರೆ, 'ವು ನಮಗೆ ಒಂದು ವೋಟ್ ಬ್ಯಾಂಕ್ ಮಾತ್ರ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕುವುದು ಮಾತ್ರ ನಿಮ್ಮ ಕೆಲಸ. ಕ್ಷದಲ್ಲಿ ಹುದ್ದೆ, ಸ್ಥಾನಮಾನ, ಪ್ರಾತಿನಿಧ್ಯ, ಅವಕಾಶ ನಾವು ನೀಡುವ ಭಿಕ್ಷೆ. ಒಂದೊಮ್ಮೆ ನಿಮ್ಮ ಹಕ್ಕು ಅಥವಾ ನಿಮಗಾದ ಅನ್ಯಾಯದ ಕುರಿತು ಪ್ರಶ್ನೆ ಕೇಳಿದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂಬುದು ಈ ಪಕ್ಷಪಾತಿ ಧೋರಣೆಯನ್ನು ಕರ್ನಾಟಕದ ಮುಸ್ಲಿಮ್ ಸಮುದಾಯ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಎಚ್ಚರಿಸಿದೆ.&lt;/p&gt;&lt;h3&gt;ಶಿಸ್ತುಕ್ರಮದ ನೆಪದಲ್ಲಿ ತಾರತಮ್ಯ&lt;/h3&gt;&lt;p&gt;ಮುಸ್ಲಿಮ್ ಸಮುದಾಯದ ಕೆಲ ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆಯ ಕಟಕಟೆಯಲ್ಲಿ ನಿಲ್ಲಿಸಿ, ಶಿಸ್ತಿನ ಪಾಠ ಹೇಳುತ್ತಿರುವ ಕಾಂಗ್ರೆಸ್ ಪಕ್ಷ, ಈ ಹಿಂದೆ ಇದೇ ರೀತಿಯ ಸಂದರ್ಭಗಳಲ್ಲಿ ಪಕ್ಷದಿಂದ ತಗೆದುಕೊಳ್ಳಲಾದ ಶಿಸ್ತು ಕ್ರಮಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದಲ್ಲಿ , ಪಕ್ಷದ ಶಿಸ್ತು ನಿಯಮಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಅನ್ವಯವಾಗುತ್ತಿವೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸುತ್ತದೆ. ಇದು ಕೇವಲ ಕೆಲವು ವ್ಯಕ್ತಿಗಳ ವಿಚಾರವಲ್ಲ. ಇಡೀ ಮುಸ್ಲಿಮ್ ಸಮುದಾಯದ ಘನತೆಯ ವಿಷಯವಾಗಿದೆ. ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಕೇವಲ ರಾಜಕೀಯ ನಿರ್ಧಾರವೆಂದು ಸಮರ್ಥಿಸಲು ಸಾಧ್ಯವಿಲ್ಲ ಎಂದಿರುವ ಸಂಘಟನೆಗಳು.&lt;/p&gt;&lt;p&gt;&lt;strong&gt;ಸ್ವಾರ್ಥಿ ಮುಸ್ಲಿಂ ನಾಯಕರಿಗೂ ಎಚ್ಚರಿಕೆ&lt;/strong&gt;&lt;/p&gt;&lt;p&gt;ಮುಸ್ಲಿಮರು ಪ್ರಾತಿನಿಧ್ಯ ಕೇಳಿದ್ದೇ ತಪ್ಪು ಎಂಬಂತೆ ಕಾಂಗ್ರೆಸ್ ನಲ್ಲಿ ಬಿಂಬಿಸಲಾಗುತ್ತಿದೆ. ನ್ಯಾಯಯುತವಾಗಿ ನೀಡಲೇಬೇಕಿದ್ದ ಟಿಕೆಟ್ ನೀಡದೆ ಪಕ್ಷದ ಪರವಾಗಿ ಪ್ರಚಾರ ಮಾಡಲು ಹೇಳಿ, ನಂತರ ಕ್ಷುಲ್ಲಕ ಕಾರಣಗಳನ್ನು ನೀಡಿ ಶಿಸ್ತು ಕ್ರಮ ಕೈಗೊಳ್ಳುವುದು ನ್ಯಾಯಸಮ್ಮತವಲ್ಲ. 'ನೀವು ನಾವು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು' ಎಂಬ ಕಾಂಗ್ರೆಸ್ ಪಕ್ಷದ ಈ ಧೋರಣೆ ತೀವ್ರ ಖಂಡನೀಯವಾಗಿದೆ. ಸಾಲದ್ದಕ್ಕೆ ಪಕ್ಷದಲ್ಲಿರುವ ಸಮುದಾಯದ ನಾಯಕರನ್ನೇ ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮಾಡುತ್ತಿದ್ದಾರೆ ಎಂಬ ಅನುಮಾನವೂ ಸಮುದಾಯವನ್ನು ಕಾಡುತ್ತಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಕೆಲವು ಮುಖಂಡರೂ ತಮ್ಮ ಸಮುದಾಯದ ಜೊತೆಗಿನ ಪಕ್ಷದ ತಾರತಮ್ಯ ನೀತಿಯನ್ನು ವಿರೋಧಿಸದೆ, ಸಮುದಾಯದ ಪರವಾಗಿ ಪಕ್ಷದ ವೇದಿಕೆಯಲ್ಲಿ ಧ್ವನಿ ಎತ್ತಿದ ನಾಯಕರ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲದೆ ತಮ್ಮ ಸ್ವಾರ್ಥ ಸಾಧನೆಗೆ ಮುಂದಾಗುವಂತಹ ನಡೆ ಅನುಸರಿಸಿರುವುದು ಖಂಡಿಸುತ್ತೇವೆ ಎಂದಿರುವ ಸಂಘಟನೆಗಳು.&lt;/p&gt;&lt;p&gt;ಕೆಲವು ಸಮುದಾಯಗಳ ನಾಯಕರು ಎಷ್ಟು ದೊಡ್ಡ ಪ್ರಮಾದ ಮಾಡಿದರೂ ಯಾವುದೇ ಕ್ರಮವಿಲ್ಲ, ನೇರವಾಗಿ ಪಕ್ಷ ವಿರೋಧಿ ಹೇಳಿಕೆ ಕೊಟ್ಟರೂ ಅವರಿಗೆ ಶಿಸ್ತು ಕ್ರಮದ ಬದಲಿಗೆ ಬಹುಮಾನ, ಇನ್ನಷ್ಟು ಗೌರವ, ಆದರೆ ಒಂದು ನಿರ್ದಿಷ್ಟ ಸಮುದಾಯದ ನಾಯಕರು ಪಕ್ಷದ ಫರ್ಮಾನು ಪಾಲಿಸುವಲ್ಲಿ ಒಂದಿಷ್ಟು ಹೆಚ್ಚು ಕಡಿಮೆಯಾದರೂ ಅವರ ತಲೆದಂಡ - ಇದು ನ್ಯಾಯವಲ್ಲ, ಇದು ಸ್ವೀಕಾರಾರ್ಹವಲ್ಲ. ಈ ರೀತಿಯ ತಾರತಮ್ಯದ ನಡೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾನಿಕಾರಿಯಾಗಲಿದೆ.&amp;nbsp;&lt;/p&gt;&lt;p&gt;ಇದೇ ಧೋರಣೆ ಮುಂದುವರಿದರೆ ಮುಂದಾಗುವ ತೀವ್ರ ರಾಜಕೀಯ ಹಿನ್ನಡೆಗೆ ಪಕ್ಷದ ಈ ರೀತಿಯ ನಿರ್ಧಾರಗಳೇ ಕಾರಣವಾಗಬಹುದು. ರಾಜ್ಯದಲ್ಲಿ ಸಂವಿಧಾನದ ಮೌಲ್ಯಗಳ ಪ್ರಕಾರ ನಡೆಯುವ ಜಾತ್ಯತೀತ ಸರಕಾರ ಬರಬೇಕು, ಜನರನ್ನು ವಿಭಜಿಸುವ ಕೋಮುವಾದಿಗಳಿಗೆ ಅಧಿಕಾರ ಸಿಗಬಾರದು ಎಂಬ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಮುಸ್ಲಿಮರು ಒಗ್ಗಟ್ಟಾಗಿ ಬೆಂಬಲಿಸಿ ಮತ ನೀಡಿದ್ದಾರೆ. ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಹಾಗು ಅವುಗಳನ್ನು ಬಲಪಡಿಸಲು ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಆದರೆ ಅದನ್ನೇ ಮುಸ್ಲಿಮರ ದೌರ್ಬಲ್ಯ, ಅವರಿಗೆ ಬೇರೆ ಆಯ್ಕೆಗಳೇ ಇಲ್ಲ ಎಂದು ಕಾಂಗ್ರೆಸ್ ತಿಳಿದುಕೊಂಡರೆ ಅದು ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ರಾಜಕೀಯವಾಗಿ ಬಹಳ ದುಬಾರಿಯಾಗಲಿದೆ ಎಂದು ಎಚ್ಚರಿಕೆ ನೀಡಿವೆ.&lt;/p&gt;&lt;p&gt;ರಾಜಕೀಯ ಲೆಕ್ಕಾಚಾರದ ಹೆಸರಿನಲ್ಲಿ ಒಂದು ಸಮುದಾಯ ಮತ್ತು ಅದರ ನಾಯಕರನ್ನು ಈ ರೀತಿ ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮುಂದೆ ಇಂತಹ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳದಂತೆ ಹಾಗೂ ಈಗಿನ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾವು ಆಗ್ರಹಿಸುತ್ತೇವೆ.&lt;/p&gt;&lt;p&gt;&lt;strong&gt;ಪ್ರಮುಖ ಸಹಿದಾರರು&lt;/strong&gt;:&lt;/p&gt;&lt;p&gt;ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ, ಅಧ್ಯಕ್ಷರು, ಮುಸ್ಲಿಮ್ ಮುತ್ತಹಿದಾ ಕೌನ್ಸಿಲ್, ವಿಜಯಪುರ.&lt;/p&gt;&lt;p&gt;ಅಬ್ದುಲ್ ಖದೀರ್ ಸಾಹೇಬ್, ಅಧ್ಯಕ್ಷರು, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳು, ಬೀದರ್.&lt;/p&gt;&lt;p&gt;ಮೌಲಾನಾ ಶಬ್ಬೀರ್ ಅಹ್ಮದ್ ನದ್ವಿ, ಅಧ್ಯಕ್ಷರು, ವೆಲ್ಫೇರ್ ಆಫ್ ಹ್ಯುಮಾನಿಟಿ ಫೌಂಡೇಶನ್, ಬೆಂಗಳೂರು.&lt;/p&gt;&lt;p&gt;ಕೆ ಎಸ್ ಮೊಹಮ್ಮದ್ ಮಸೂದ್, ಅಧ್ಯಕ್ಷರು, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ, ಮಾಜಿ ಅಧ್ಯಕ್ಷರು, ರಾಜ್ಯ ಅಲ್ಪಸಂಖ್ಯಾತ ಆಯೋಗ, ಮಾಜಿ ಮುಖ್ಯ ಸಚೇತಕರು, ವಿಧಾನ ಪರಿಷತ್.&lt;/p&gt;&lt;p&gt;ಹಾಜಿ ಮೊಹಮ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿ, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ.&lt;/p&gt;&lt;p&gt;ಮುಹಮ್ಮದ್ ಮೌಲಾ, ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ.&lt;/p&gt;&lt;p&gt;ಯಾಸೀನ್ ಮಲ್ಪೆ, ನಿಕಟಪೂರ್ವ ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ.&lt;/p&gt;&lt;p&gt;ಮೌಲಾನಾ ಅಬ್ದುರ್ರಕೀಬ್ ನದ್ವಿ, ಪ್ರಧಾನ ಕಾರ್ಯದರ್ಶಿ, ಮಜ್ಲಿಸ್ ಎ ಇಸ್ಲಾಹ್ ವ ತಂಝೀಮ್, ಭಟ್ಕಳ.&lt;/p&gt;&lt;p&gt;ಅಶ್ರಫ್ ಅಲಿ ಬಶೀರ್, ಸಂಚಾಲಕರು, ಮುಸ್ಲಿಮ್ ವಾಯ್ಸ್ ಆಫ್ ಕರ್ನಾಟಕ. ಹುಬ್ಬಳ್ಳಿ.&lt;/p&gt;&lt;p&gt;ಡಾ. ಅಬ್ದುಲ್ ಕರೀಂ, ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ. ಹುಬ್ಬಳ್ಳಿ.&lt;/p&gt;&lt;p&gt;ಕೆ. ಅಶ್ರಫ್ ಅಧ್ಯಕ್ಷರು, ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ..&lt;/p&gt;&lt;p&gt;ಮುಹಮ್ಮದ್ ಹನೀಫ್, ಕಾರ್ಯದರ್ಶಿ, ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.&lt;/p&gt;&lt;p&gt;ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ.&lt;/p&gt;&lt;p&gt;ಮುಖಂಡರು, ಸುನ್ನಿ ಯುವಜನ ಸಂಘ ಕರ್ನಾಟಕ.&lt;/p&gt;&lt;p&gt;ಹಾಜಿ ಅಬೂಬಕರ್ ನೇಜಾರ್.ಜಿಲ್ಲಾಧ್ಯಕ್ಷರು,ಸುನ್ನಿ ಸಂಯುಕ್ತ ಜಮಾತ್,ಉಡುಪಿ ಜಿಲ್ಲೆ.&lt;/p&gt;&lt;p&gt;ಮೊಹಮ್ಮದ್ ರಫೀಕ್ಜಿ ಜಿಲ್ಲಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾತ್ಉ &amp;nbsp;ಡುಪಿ ಜಿಲ್ಲೆ&lt;/p&gt;&lt;p&gt;ರಫಿವುದ್ದೀನ್ ಕುದ್ರೋಳಿ, ಅಧ್ಯಕ್ಷರು, ಯುನಿವೆಫ್ ಮಂಗಳೂರು.&lt;/p&gt;&lt;p&gt;ಕಾಸಿಮ್ ಶುಐಬುರ್ರಹ್ಮಾನ್ ಖುರೇಷಿ, ಅಧ್ಯಕ್ಷರು, ಅಖಿಲ ಭಾರತ ಜಮೀಯತುಲ್ ಖುರೇಷಿ, ಕರ್ನಾಟಕ.&lt;/p&gt;&lt;p&gt;ಅಫ್ಝಲ ಮಹ್ಮೂದ್, ಕಾರ್ಯದರ್ಶಿ, ಕರ್ನಾಟಕ ಮುಸ್ಲಿಮ್ ಪೊಲಿಟಿಕಲ್ ಫೋರಮ್. ಗುಲ್ಬರ್ಗ.&lt;/p&gt;&lt;p&gt;ಜಬ್ಬಾರ್ ಕಲಬುರ್ಗಿ, ಅಧ್ಯಕ್ಷರು, ಕರ್ನಾಟಕ ಮುಸ್ಲಿಂ ಯುನಿಟಿ. ಬಾಗಲಕೋಟೆ.&lt;/p&gt;&lt;p&gt;ನಿಸಾರ್ ಅಹಮದ್, ರಾಜ್ಯ ಸಂಯೋಜಕರು, ಎದ್ದೇಳು ಕರ್ನಾಟಕ. ಮಂಗಳೂರು.&lt;/p&gt;&lt;p&gt;ನಕ್ವಾ ಯಾಹ್ಯ ಮಲ್ಪೆ ಅಧ್ಯಕ್ಷರು, ನಮ್ಮ ನಾಡ ಒಕ್ಕೂಟ, ಉಡುಪಿ ಜಿಲ್ಲೆ.&lt;/p&gt;&lt;p&gt;ಅಫ್ಸರ್, ಅಧ್ಯಕ್ಷರು, ಕರ್ನಾಟಕ ಸೌಹಾರ್ದ ಒಕ್ಕೂಟ. ರಿ. ಮಂಡ್ಯ.&lt;/p&gt;&lt;p&gt;ಅಡ್ವೋಕೇಟ್ ಅಬ್ದುಲ್ ಜಬ್ಬಾರ್ ಗೋಲ, ಉಪಾಧ್ಯಕ್ಷರು, ಜೋಯ್ಂಟ್ ಆಕ್ಷನ್ ಕಮಿಟಿ, ಗುಲ್ಬರ್ಗ..&lt;/p&gt;&lt;p&gt;ಅಡ್ವೋಕೇಟ್ ಅನ್ ಷಾದ್ ಪಾಳ್ಯ, ರಾಜ್ಯ ಸಮಿತಿ ಸದಸ್ಯರು, ಅಖಿಲ ಭಾರತ ವಕೀಲರ ಒಕ್ಕೂಟ, ಕರ್ನಾಟಕ. ಹಾಗೂ ಮುಖಂಡರು ಹಾಸನ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ.&lt;/p&gt;&lt;p&gt;ಹಾಜಿ ಸುಲೇಮಾನ್ ಸಾಹೇಬ್ ಅಧ್ಯಕ್ಷರು. ತೀರ್ಥಹಳ್ಳಿ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟ.&lt;/p&gt;&lt;p&gt;ಮುಜಾಹಿದ್ ಪಾಷ, ಅಲ್ ಜಮಾತುಲ್ ಖುರೈಷ್ ಟ್ರಸ್ಟ್, ಬಸವಕಲ್ಯಾಣ.&lt;/p&gt;]]></content:encoded>
            <category>davanagere</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/muslim-organizations-express-anger-against-congress-joint-statement-released-bengaluru/articleshow-m3flrgy"/>
        </item>
        <item>
            <title><![CDATA[ಪೀಠ ಬಿಡದಿದ್ದರೆ ಧರಧರನೆ ಎಳೆದು ಹೊರ ಹಾಕ್ತೀವಿ: ವಚನಾನಂದ ಶ್ರೀ ವಿರುದ್ಧ ಆಕ್ರೋಶ]]></title>
            <link>https://kannada.asianetnews.com/karnataka-districts/harihara-panchamasali-peetha-row-youth-wing-warning-to-vachanananda-swamiji-rav/articleshow-q3khbl0</link>
            <guid isPermaLink="true">https://kannada.asianetnews.com/karnataka-districts/harihara-panchamasali-peetha-row-youth-wing-warning-to-vachanananda-swamiji-rav/articleshow-q3khbl0</guid>
            <pubDate>Thu, 16 Apr 2026 04:28:11 +0530</pubDate>
            <description><![CDATA[&lt;p&gt;ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ತಕ್ಷಣವೇ ಮಠ ಖಾಲಿ ಮಾಡಬೇಕೆಂದು ವೀರಶೈವ ಲಿಂಗಾಯತ ಪಂಚಮಸಾಲಿ ಯುವ ಘಟಕ ಆಗ್ರಹ. ಸ್ವಾಮೀಜಿ ಮಕ್ಕಳಿಂದ ಮಸಾಜ್ ಮಾಡಿಸಿಕೊಂಡು ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿದ ಯುವ ಘಟಕ, ಪೀಠ ತೊರೆಯದಿದ್ದರೆ ಧರಧರನೆ ಎಳೆದು ಹೊರಹಾಕ್ತೀವಿ ಎಂದು ಎಚ್ಚರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k17t6mv26k84fvbs47qkz0q9,imgname-cewfe-1753682760546.png" type="image/jpeg" height="390" width="690"/>
            <content:encoded><![CDATA[&lt;p&gt;ದಾವಣಗೆರೆ: ಹರಿಹರ ಪಂಚಮಸಾಲಿ ಪೀಠಕ್ಕೆ ಲಾಬಿ ಮಾಡಿ, ಶಿಫಾರಸ್ಸಿನ ಮೇಲೆ ಬಂದಿದ್ದ ಉಚ್ಚಾಟಿತ ವಚನಾನಂದ ಸ್ವಾಮೀಜಿ ತಕ್ಷಣವೇ ಮಠ ಖಾಲಿ ಮಾಡದಿದ್ದರೆ ವೀರಶೈವ ಲಿಂಗಾಯತ ಪಂಚಮಸಾಲಿ ಯುವ ಘಟಕದವರು &lsquo;ಧರಧರನೆ ಎಳೆದು ಹೊರ ಹಾಕಬೇಕಾಗುತ್ತದೆ&rsquo; ಎಂದು ಯುವ ಘಟಕದ ರಾಜ್ಯಾಧ್ಯಕ್ಷ ಕಿಚಡಿ ಕೊಟ್ರೇಶ, ಕಾರ್ಯದರ್ಶಿ ಬಿ.ಆರ್&zwnj;.ಕರಿಬಸಪ್ಪ ಎಚ್ಚರಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಬುಧ&zwj;ವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪಂಚಮಸಾಲಿ ಹಿರಿಯರು, ಮುಖಂಡರ ದಶಕಗಳ ಪ್ರಯತ್ನದ ಫಲವಾಗಿ ಹರಿಹರ ಪಂಚಮಸಾಲಿ ಪೀಠ ಸ್ಥಾಪನೆಯಾಗಿದ್ದು, ಸಂಸ್ಕೃತಿ, ಸಂಸ್ಕಾರವಿದ್ದರೆ ವಚನನಾನಂದ ಸ್ವಾಮೀಜಿ ತಕ್ಷಣವೇ ಪೀಠವನ್ನು ತೊರೆಯಬೇಕು. ಇಲ್ಲವಾದರೆ ಮಠದಿಂದ ಧರಧರನೆ ಹೊರ ಹಾಕುವ ಕೆಲಸವನ್ನು ಯುವ ಘಟಕವೇ ಮಾಡುತ್ತದೆ ಎಂದರು.&lt;/p&gt;&lt;p&gt;ಪೀಠದ ಹಿಂದಿನ ಶ್ರೀ ಸಿದ್ಧಲಿಂಗ ಸ್ವಾಮಿಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಕಟ್ಟಿದ ಮಠದಲ್ಲಿ ಹೊಕ್ಕಿರುವ ವಚನಾನಂದ ಸ್ವಾಮೀಜಿ ನಿಜಬಣ್ಣ ಈಗ ಬಯಲಾಗಿದೆ. ಚಿಕ್ಕ ಮಕ್ಕಳಿಂದ ಮಸಾಜ್ ಮಾಡಿಸಿಕೊಂಡು ವಿಕೃತಿ ಮೆರೆದಿದ್ದಲ್ಲದೇ, ಅಪ್ರಾಪ್ತ ಮಗುವೊಂದು ಚಳಿ ಜ್ವರದಿಂದ ಬಳಲುತ್ತಿದ್ದರೆ ಆ ಮಗುವಿನ ಮೇಲೆ ತಣ್ಣೀರೆರಚಿ ಅಮಾನವೀಯ ವರ್ತನೆ ತೋರಿದ್ದಾರೆ. ಹಾಗಾಗಿ ಸ್ವಾಮೀಜಿ ಪೀಠದಲ್ಲಿ ಮುಂದುವರಿಯುವ ನೈತಿಕತೆಯೇ ಇಲ್ಲ. ತಕ್ಷಣವೇ ಪೀಠ ತೊರೆಯಲಿ ಎಂದು ತಾಕೀತು ಮಾಡಿದರು.&lt;/p&gt;&lt;p&gt;ಮಠದ ಟ್ರಸ್ಟಿಗಳು, ಸಮಾಜದ ಮುಖಂಡರ ವಿರುದ್ಧ ಎತ್ತಿ ಕಟ್ಟುವ ಮೂಲಕ ಇಡೀ ಸಮಾಜವನ್ನು ಒಡೆದು ಆಳುವ ನೀತಿಯನ್ನು ವಚನಾನಂದ ಸ್ವಾಮೀಜಿ ಅನುಸರಿಸಿದ್ದಾರೆ. ಹಿಂದೆ ಸಿದ್ಧಲಿಂಗ ಸ್ವಾಮೀಜಿಗೆ ವಚನಾನಂದ ಶ್ರೀ ಕರೆ ಮಾಡಿ, ನಿಮ್ಮನ್ನು ಉಚ್ಛಾಟಿಸಿದ್ದು, ಮಠ ಬಿಟ್ಟು ಹೋಗಿ ಅಂತ ತಿಳಿಸಿದ್ದರು. ಈಗ ತಾವೇ ಉಚ್ಛಾಟನೆಯಾಗಿದ್ದರಿಂದ ಮಠ ತೊರೆಯಬೇಕಲ್ಲವೇ ಎಂದರು.&lt;/p&gt;&lt;h2&gt;ಲೆಕ್ಕ ಕೇಳಲೂ ನಾವು ಬರುತ್ತೇವೆ:&lt;/h2&gt;&lt;p&gt;ಲೆಕ್ಕ ಕೊಡಿ ಹೋರಾಟ ಸಮಿತಿ ಮುಖಂಡರಿಗೂ ನಾವು ಮನವಿ ಮಾಡುತ್ತೇವೆ. ಮೊದಲು ವಚನಾನಂದ ಸ್ವಾಮೀಜಿ ಪೀಠದಿಂದ ಹೊರ ಹೋಗಲಿ, ನಿಮ್ಮ ಜೊತೆಗೆ ನಾವೂ ಲೆಕ್ಕ ಕೊಡಿ ಅಂತ ಟ್ರಸ್ಟನ್ನು ಕೇಳುತ್ತೇವೆ. ಸ್ವಾಮಿತ್ವಕ್ಕೆ ಬೆಲೆ ಕೊಡದ, ಕೀಚಕ ಮನಸ್ಸಿನ ಇಂತಹ ಸ್ವಾಮೀಜಿ ನಮ್ಮ ಸಮಾಜಕ್ಕೆ, ಪೀಠಕ್ಕೆ ಬೇಕೆ? ಎಂಬ ಬಗ್ಗೆ ಲೆಕ್ಕ ಕೊಡಿ ಹೋರಾಟ ಸಮಿತಿ ಮುಖಂಡರು ಆಲೋಚಿಸಲಿ. ಮೊದಲು ಸಮುದಾಯದ ಜನರು, ರಾಜಕಾರಣಿಗಳು ಕೊಟ್ಟ ಕಾಣಿಕೆಯ ಲೆಕ್ಕವನ್ನು ಸ್ವಾಮೀಜಿಯೂ ನೀಡಲಿ ಎಂದು ಕಿಚಡಿ ಕೊಟ್ರೇಶ ಒತ್ತಾಯಿಸಿದ್ದಾರೆ.&lt;/p&gt;&lt;h3&gt;ಹಿಂಜಾವೇ ಬಗ್ಗೆ ತುಚ್ಛ ಪದ ಬಳಕೆ:&lt;/h3&gt;&lt;p&gt;ಈ ಹಿಂದೆ ಪಂಚಮಸಾಲಿ ಯುವತಿ ಲವ್ ಜಿಹಾದ್&zwnj;ಗೆ ತುತ್ತಾದಾಗ ಹಿಂದೂ ಜಾಗರಣಾ ವೇದಿಕೆಯವರು ಧ್ವನಿ ಎತ್ತಿದ್ದರು. ಈ ವೇಳೆ ವಚನಾನಂದ ಸ್ವಾಮೀಜಿಯನ್ನು ಹೋರಾಟಕ್ಕೆ ಕರೆದಾಗ ಹಿಂಜಾವೇ ಮುಖಂಡರು, ಕಾರ್ಯಕರ್ತರ ಬಗ್ಗೆ ತುಚ್ಛ ಪದಗಳಿಂದ ನಿಂದನೆ ಮಾಡಿದ್ದರು ಎಂದು ಬಿ.ಆರ್.ಕರಿಬಸಪ್ಪ ಆರೋಪಿಸಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/harihara-panchamasali-peetha-row-youth-wing-warning-to-vachanananda-swamiji-rav/articleshow-q3khbl0"/>
        </item>
        <item>
            <title><![CDATA[ಏ.27ಕ್ಕೆ ಲೆಕ್ಕ ಕೊಡುತ್ತೇವೆ ಬನ್ನಿ:ವಚನಶ್ರೀಗೆ ಮಠದ ಟ್ರಸ್ಟ್‌ ಆಹ್ವಾನ!]]></title>
            <link>https://kannada.asianetnews.com/karnataka-districts/panchamasali-harihara-peetha-controversy-we-will-provide-accounts-on-april-27-come-math-trust-invites-vachanashree-rav/articleshow-qfmmylu</link>
            <guid isPermaLink="true">https://kannada.asianetnews.com/karnataka-districts/panchamasali-harihara-peetha-controversy-we-will-provide-accounts-on-april-27-come-math-trust-invites-vachanashree-rav/articleshow-qfmmylu</guid>
            <pubDate>Fri, 24 Apr 2026 09:36:48 +0530</pubDate>
            <description><![CDATA[&lt;p&gt;ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠವು ಏಪ್ರಿಲ್ 27 ರಂದು 2008 ರಿಂದ 2025 ರವರೆಗಿನ ಎಲ್ಲಾ ಲೆಕ್ಕಪತ್ರಗಳನ್ನು ಬಹಿರಂಗಪಡಿಸುವುದಾಗಿ ಘೋಷಿಸಿದೆ. ಉಚ್ಚಾಟಿತ ವಚನಾನಂದ ಸ್ವಾಮೀಜಿ ಮತ್ತು ಲೆಕ್ಕ ಕೇಳಿದವರು ಹಾಜರಿರಬೇಕೆಂದು ತಿಳಿಸಿರುವ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ggkmqbrt0h3t77css819ytft,imgname-vachana.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ದಾವಣಗೆರೆ (ಏ.24): &lt;/strong&gt;ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯಾದ 2008ರಿಂದ 2025ರವರೆಗಿನ ಎಲ್ಲಾ ಲೆಕ್ಕವನ್ನು ಏ.27ರಂದು ಪೀಠದಲ್ಲಿ ನೀಡಲಿದ್ದು, ಉಚ್ಚಾಟಿತ ವಚನಾನಂದ ಸ್ವಾಮೀಜಿ ಹಾಗೂ ಲೆಕ್ಕ ಕೇಳಿದವರೂ ಹಾಜರಿರಬೇಕು ಎಂದು ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ತಿಳಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಉಚ್ಚಾಟಿತ ಸ್ವಾಮೀಜಿ ಹಾಗೂ ಲೆಕ್ಕ ಕೊಡಿ ಅಂದವರಿಗೆ ಸೋಮವಾರ ಬೆಳಗ್ಗೆ 11ಕ್ಕೆ ನಾವು ಲೆಕ್ಕವನ್ನೂ ನೀಡುತ್ತೇವೆ. ನಮ್ಮದು ಟ್ರಸ್ಟ್ ಆಗಿದ್ದು, ಸಾರ್ವಜನಿಕವಾಗಿ ಲೆಕ್ಕ ಕೊಡುವಂತಿಲ್ಲ. ಆದರೂ, ಸಾರ್ವಜನಿಕವಾಗಿ ಸಮಾಜದ ಮುಂದೆ ಲೆಕ್ಕ ನೀಡುತ್ತೇವೆ. ವಚನಾನಂದ ಸ್ವಾಮೀಜಿ ತಮ್ಮ ಆಚಾರ, ವಿಚಾರ ತಿದ್ದಿಕೊಳ್ಳಲೆಂದು ನಾವೂ ಸಾಕಷ್ಟು ಪ್ರಯತ್ನಿಸಿದೆವು. ಆದರೆ, ಎಲ್ಲವನ್ನೂ ದಿಕ್ಕು ತಪ್ಪಿಸಲು ಲೆಕ್ಕ ಕೊಡುವ ಚಳವಳಿಯನ್ನು ಆರಂಭಿಸಿದರು. ನಾವು ಟ್ರಸ್ಟ್&zwnj;ನಿಂದ ಲೆಕ್ಕ ನೀಡುವ ವೇಳೆ ಸ್ವಾಮೀಜಿ ಹಾಗೂ ಲೆಕ್ಕ ಕೇಳಿದವರೂ ಹಾಜರಿರಬೇಕು. ಈಗಾಗಲೇ ವಚನಾನಂದ ಸ್ವಾಮೀಜಿ ಪೀಠದಿಂದ ಉಚ್ಛಾಟಿತರಾಗಿದ್ದು, ಗೌರವಯುತವಾಗಿ ಪೀಠದಿಂದ ಹೊರ ಹೋಗಬೇಕು ಎಂದರು.&lt;/p&gt;&lt;p&gt;ಪೀಠದಿಂದ ಉಚ್ಚಾಟಿಸಿದ ನಂತರವೂ ಹಿರಿಯ ಟ್ರಸ್ಟಿಗಳು ಸ್ವಾಮೀಜಿ ಭೇಟಿ ಮಾಡಿ, ತಿದ್ದುವ ಪ್ರಯತ್ನ ಮಾಡಿದೆವು. ಆದರೆ, ನಮ್ಮನ್ನು ಸ್ವಾಮೀಜಿ ಭೇಟಿ ಮಾಡಲಿಲ್ಲ. ಶ್ರೀಪೀಠಕ್ಕೆ ನೇಮಿಸುವ ಮುನ್ನವೇ ಶ್ವಾಸಪೀಠ ತ್ಯಜಿಸುವಂತೆ ಷರತ್ತು ಇಟ್ಟಿದ್ದೆವು. ಮಠದಲ್ಲಿದ್ದುಕೊಂಡೇ ಪಂಚಮಸಾಲಿ ಸಮಾಜ ಸಂಘಟನೆ ಮಾಡುವ ಉದ್ದೇಶದಿಂದ ಸ್ವಾಮೀಜಿಯನ್ನು ಕರೆ ತರಲಾಗಿತ್ತು. ಆದರೆ, ಸ್ವಾಮೀಜಿ ಅದೆಲ್ಲವನ್ನೂ ಜವಾಬ್ದಾರಿಯಿಂದ ಮಾಡಲಿಲ್ಲ. ಆಚಾರ, ವಿಚಾರಗಳಲ್ಲೂ ತಿದ್ದಿಕೊಳ್ಳದ ಕಾರಣ ಪೀಠದಿಂದ ಉಚ್ಛಾಟಿಸುವ ನಿರ್ಧಾರ ಕೈಗೊಳ್ಳಲಾಯಿತು. ಈಗ ಶ್ರೀಪೀಠದಿಂದ ವಚನಾನಂದ ಸ್ವಾಮೀಜಿ ಗೌರವಯುತವಾಗಿ ಹೊರ ಹೋಗಬೇಕು ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಮಾ.10ರ ಟ್ರಸ್ಟ್ ಸಭೆಯಲ್ಲಿ ಶ್ರೀಪೀಠದಲ್ಲಿ ಶ್ರೀಗಳ ಆಚಾರ-ವಿಚಾರ ಎಂಬ ಅಂಶ ಸೇರಿಸಲಾಗಿತ್ತು. ಅದಕ್ಕೆ ಒಪ್ಪದ ಸ್ವಾಮೀಜಿ ಆಚಾರ ವಿಚಾರದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸದಂತೆ ಹೇಳಿ ಸಭೆಗೆ ಸ್ವಾಮೀಜಿ ಬರಲೇ ಇಲ್ಲ. ಹರ ಜಾತ್ರೆಯನ್ನು ಟ್ರಸ್ಟ್ ಮಾಡುವುದಿಲ್ಲವೆಂದರೂ ತಾವೇ ಹಣ ಹಾಕಿ, ಅಧ್ಯಕ್ಷರನ್ನು ಮಾಡಿ ಜಾತ್ರೆ ಮಾಡಿದರು. ಶ್ರೀಪೀಠದಲ್ಲಿ ಈವರೆಗೆ ಬಸವೇಶ್ವರರ ಜಯಂತಿ ಮಾಡಿಲ್ಲ. ಈಗ ಏ.24ರಂದು ದಿಢೀರನೇ ಬಸವೇಶ್ವರೋತ್ಸವದ ಪ್ರಕಟಣೆ ಹೊರಟಿಸಿದ್ದಾರೆ. ಶ್ರೀಮಠದ ಆಡಳಿತಾಧಿಕಾರಿ ಡಾ.ರಾಜಕುಮಾರ, ದಾಸೋಹ ಸಮಿತಿ ಅಧ್ಯಕ್ಷ ಸ್ಥಾನದಿಂದ ಪ್ರಕಾಶ ಪಾಟೀಲರನ್ನು ಕೈಬಿಟ್ಟು ಟ್ರಸ್ಟ್ ನಿರ್ಣಯ ಕೈಗೊಂಡಿದೆ. ಏ.24ರ ಸ್ವಾಮೀಜಿ ನೇತೃತ್ವದ ಸಭೆ, ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.&lt;/p&gt;&lt;h2&gt;ಯಾವುದೇ ವೈಷಮ್ಯವಿಲ್ಲ:&lt;/h2&gt;&lt;p&gt;ಸ್ವಾಮೀಜಿ ಹಾಗೂ ನಮ್ಮ ಮಧ್ಯೆ ಯಾವುದೇ ದ್ವೇಷ, ವೈಷಮ್ಯವಿಲ್ಲ. ನಿಮ್ಮ ಜವಾಬ್ಧಾರಿಯನ್ನು ನೀವು ನಿರ್ವಹಿಸಿಲ್ಲವೆಂಬುದನ್ನು ಅರ್ಥ ಮಾಡಿಕೊಳ್ಳಿ. ಒಂದು ಹೆಣ್ಣು ತರುವಾಗಲೂ ಸಹ ಜಾತಕ, ಗುಣಗಳನ್ನು ನೋಡಿ ತರುತ್ತಾರೆ. 32 ಗುಣ ಸೇರಿದ ಹೆಣ್ಣನ್ನೇ ತಂದರೂ ಆಕೆ ಮನೆ ಬೇರೆ ಮಾಡಬಹುದು ಅಥವಾ ಆಕೆಯ ಪತಿಯೇ ಸಾವನ್ನಪ್ಪಬಹುದು. ಹಾಗೆಯೇ ನಾವು ಸಹ ಸ್ವಾಮೀಜಿ ಮೇಲೆ ಸಾಕಷ್ಟು ನಿರೀಕ್ಷೆಯಿಂದ ಪೀಠಕ್ಕೆ ಕರೆ ತಂದೆವು. ಈಗ ತಾವೇ ಉಚ್ಚಾಟನೆಗೊಳ್ಳುವ ಸ್ಥಿತಿ ತಂದುಕೊಂಡಿದ್ದಾರೆ. ಗೌರವಯುತವಾಗಿ ಮನವಿ ಮಾಡುತ್ತಿದ್ದೇವೆ. ಸ್ವಾಮೀಜಿ ಮಠ ತೊರೆಯಬೇಕು. ನಮ್ಮದು ಪುರಾತನ ಮಠವಲ್ಲ. 2008ರಲ್ಲಿ ಸ್ಥಾಪಿತ ಮಠ ಎಂದು ಬಿ.ಸಿ.ಉಮಾಪತಿ ಹೇಳಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/panchamasali-harihara-peetha-controversy-we-will-provide-accounts-on-april-27-come-math-trust-invites-vachanashree-rav/articleshow-qfmmylu"/>
        </item>
        <item>
            <title><![CDATA[ಬಲಿಷ್ಠ ಶಿಕ್ಷಣ ಸಂಸ್ಥೆ ಉದ್ದೇಶದಿಂದ ಅಜ್ಜಂದಿರು ಕಾಲೇಜು ಕಟ್ಟಿದರು: ನಟಿ ಮಲೈಕಾ ವಸುಪಾಲ್]]></title>
            <link>https://kannada.asianetnews.com/karnataka-districts/davangere-ubdt-college-ethnic-day-2026-malaika-vasupal-gvd/articleshow-qk1ncmc</link>
            <guid isPermaLink="true">https://kannada.asianetnews.com/karnataka-districts/davangere-ubdt-college-ethnic-day-2026-malaika-vasupal-gvd/articleshow-qk1ncmc</guid>
            <pubDate>Mon, 27 Apr 2026 16:53:21 +0530</pubDate>
            <description><![CDATA[&lt;p&gt;ನಾನು ಈ ಬಿಡಿಟಿ ಕಾಲೇಜಿನ ಸಂಸ್ಥಾಪಕರಾದ ಬ್ರಹ್ಮಪ್ಪ ದೇವಪ್ಪ ತವನಪ್ಪನವರ ಮರಿಮೊಮ್ಮಗಳು. ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೂ ಇದುವರೆಗೂ ಎಲ್ಲಿಯೂ ನನ್ನ ಕುಟುಂಬದ ಹೆಸರನ್ನು ಬಳಸಿಕೊಂಡಿಲ್ಲ ಎಂದು ನಟಿ ಮಲೈಕಾ ವಸುಪಾಲ್ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq7afc5f2c1akyrrxz04kk60,imgname-kk-1777288589487.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.27): &lt;/strong&gt;ನಾನು ಈ ಬಿಡಿಟಿ ಕಾಲೇಜಿನ ಸಂಸ್ಥಾಪಕರಾದ ಬ್ರಹ್ಮಪ್ಪ ದೇವಪ್ಪ ತವನಪ್ಪನವರ ಮರಿಮೊಮ್ಮಗಳು. ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರೂ ಇದುವರೆಗೂ ಎಲ್ಲಿಯೂ ನನ್ನ ಕುಟುಂಬದ ಹೆಸರನ್ನು ಬಳಸಿಕೊಂಡಿಲ್ಲ ಎಂದು ದಾವಣಗೆರೆಯ ಸ್ಯಾಂಡಲ್&zwnj;ವುಡ್ ನಟಿ ಮಲೈಕಾ ವಸುಪಾಲ್ ತಿಳಿಸಿದರು. ನಗರದ ನಗರದ ಯು.ಬಿ.ಡಿ.ಟಿ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 'ಎಥ್ನಿಕ್ ಡೇ' ಹಾಗೂ 'ಚೈತ್ರ-2026' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.&lt;/p&gt;&lt;p&gt;ದಾವಣಗೆರೆಯಲ್ಲಿ ತಾಂತ್ರಿಕವಾಗಿ ಬಲಿಷ್ಠವಾದ ಶಿಕ್ಷಣ ಸಂಸ್ಥೆಯಿರಲಿ ಎಂಬ ಉದ್ದೇಶದಿಂದ ನಮ್ಮ ಅಜ್ಜಂದಿರು ಈ ಕಾಲೇಜನ್ನು ಪ್ರಾರಂಭಿಸಿದರು. ತಮ್ಮ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯಿಂದ ಬೆಳೆಯಬೇಕೆಂಬ ಹಂಬಲದಿಂದ ನನ್ನ ಕುಟುಂಬದ ಹಿನ್ನೆಲೆಯನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಈ ಕಾಲೇಜಿನ ಕಾರ್ಯಕ್ರಮದಲ್ಲಿ ಅದನ್ನು ಹೇಳಲೇಬೇಕಾದ ಅನಿವಾರ್ಯತೆ ಇತ್ತು ಎಂದರು. ನಾನು ಕೂಡ ಎಂಜಿನಿಯರ್ ಆಗಿದ್ದು, ಇದೇ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದೇನೆ. ಕಾಲೇಜು ದಿನಗಳು ಕೇವಲ ಪಾಠಕ್ಕೆ ಸೀಮಿತವಾಗದೇ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಾನು ಕೂಡ ಪಾಲ್ಗೊಳ್ಳುತ್ತಿದ್ದೆ ಎಂದರು.&lt;/p&gt;&lt;h2&gt;&lt;strong&gt;ಯತ್ನಿಕ್ ಡೇ- ಸಾಂಸ್ಕೃತಿಕ ಕಲರವ&lt;/strong&gt;&lt;/h2&gt;&lt;p&gt;ಸಮಾರಂಭದ ಹಿನ್ನೆಲೆ ಕಾಲೇಜಿನ ವಾತಾವರಣ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಲರವದಿಂದ ಕಂಗೊಳಿಸುತ್ತಿತ್ತು. ಕಾಲೇಜು ದಿನಗಳು ಅಂದ್ರೇನೇ ಕಲರ್ ಫುಲ್. ಈ ನೆನಪುಗಳು ಸದಾ ಹಚ್ಚ ಹಸಿರು. ಇನ್ನು ಎಥ್ನಿಕ್ ಡೇ ಎಂದರೆ ಕೇಳಬೇಕೇ? ಕಲರ್ ಫುಲ್ ಬಟ್ಟೆ, ಹಾಡು, ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಬಗೆ ಬಗೆಯ ನೆನಪುಗಳು ಇರುತ್ತವೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಸೇರಿದ ವಿವಿಧ ರಾಜ್ಯಗಳ ಸಾಂಸ್ಕೃತಿಕ ವೇಷಭೂಷಣ, ಸಂಪ್ರದಾಯಗಳನ್ನು ಅನಾವರಣಗೊಳಿಸಿದರು.&lt;/p&gt;&lt;p&gt;ಗ್ರಾಮೀಣ ಸೊಗಡು, ಯಕ್ಷಗಾನ, ಸೇರಿದಂತೆ ಹಲವು ಸಾಂಪ್ರಾದಾಯಿಕ ಉಡುಗೆಯಲ್ಲಿ ಯುವಕ-ಯುವತಿಯರು ರಾರಾಜಿಸುತ್ತಿದ್ದರು. ಸೀರೆ, ಸಾಂಪ್ರದಾಯಿಕ ಉಡುಗೆಗಳ ಕಾರಬಾರು ಜೋರಾಗಿತ್ತು. ಗುಜರಾತಿ, ಕೊಡಗು, ಉತ್ತರ ಕರ್ನಾಟಕ ಪೇಟಾ, ಲಂಬಾಣಿ ನೃತ್ಯ, ಯಕ್ಷಗಾನ ಕಣ್ಮನ ಸೆಳೆದವು. ಕಾಲೇಜಿನ ಉಪನ್ಯಾಸಕರು ಬಿಳಿ ಶರ್ಟ್, ಬಿಳಿ ಪಚ್ಚೆ ಕಟ್ಟಿಕೊಂಡು, ತಲೆಯ ಮೇಲೆ ಕೇಸರಿ ಪೇಟ ಧರಿಸಿ ಸಂಭ್ರಮಿಸಿದರು. ಸ್ನೇಹಿತರ ಜೊತೆ ಸೆಲ್ಫಿ ತೆಗೆದುಕೊಂಡು ವಿದ್ಯಾರ್ಥಿನಿಯರು ಎಂಜಾಯ್ ಮಾಡಿದರು. ನಿತ್ಯ ಪಾಠದ ಟೆನ್ಷನ್ ಮರೆತು ಕುಣಿದು ಕುಪ್ಪಳಿಸಿದರು.&lt;/p&gt;&lt;p&gt;ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಕೇರಳ ಸಂಸ್ಕೃತಿಯನ್ನು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಸಂಸ್ಕೃತಿಗಳಾದ ತಿರುಪತಿ ದೇವಸ್ಥಾನ ಕಲಾಕೃತಿ, ಕುಚಿಪುಡಿ ಡ್ಯಾನ್ಸ್, ಶ್ರೀನಿವಾಸ ಕಲ್ಯಾಣ, ಪೌರಾಣಿಕ ಪಾತ್ರಗಳು, ರೋಬೋಟಿಕ್ಸ್ ವಿಭಾಗದ ವಿದ್ಯಾರ್ಥಿಗಳು ಉತ್ತರ ಪ್ರದೇಶ ಅಯೋಧ್ಯೆ ದೇವಸ್ಥಾನ ಕಲಾಕೃತಿ, ರಾಮಾಯಣ ನಾಟಕ, ಇ ಅಂಡ್ ಐ ವಿಭಾಗದ ವಿದ್ಯಾರ್ಥಿಗಳು ಎಲ್ಲಮ್ಮ ದೇವಿ ನಾಟಕ ಪ್ರಸ್ತುತಪಡಿಸಿದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/davangere-ubdt-college-ethnic-day-2026-malaika-vasupal-gvd/articleshow-qk1ncmc"/>
        </item>
        <item>
            <title><![CDATA[ದಾವಣಗೆರೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಕ್ಕೆ ಸಲೀಂ, ರಿಜ್ವಾನ್ ಕಾರಣ: ಅಲ್ಪಸಂಖ್ಯಾತ ಮುಖಂಡರ ಆಕ್ರೋಶ]]></title>
            <link>https://kannada.asianetnews.com/politics/saleem-ahemd-and-rizwan-are-responsible-for-the-davangere-congress-controversy-says-jagruthi-vedike-rav/articleshow-t8yq5sf</link>
            <guid isPermaLink="true">https://kannada.asianetnews.com/politics/saleem-ahemd-and-rizwan-are-responsible-for-the-davangere-congress-controversy-says-jagruthi-vedike-rav/articleshow-t8yq5sf</guid>
            <pubDate>Sun, 19 Apr 2026 09:31:30 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಗೊಂದಲಕ್ಕೆ ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅರ್ಷದ್ ಅವರೇ ಕಾರಣ ಎಂದು ಆರೋಪಿಸಿರುವ ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು, ಪಕ್ಷಕ್ಕಾಗಿ ದುಡಿದ ಕೆ. ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹಮ್ಮದ್ ವಿರುದ್ಧದ ಕ್ರಮವನ್ನು ಖಂಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb0wxfrjag39ja474wh2e5f,imgname-davanagere-muslim-leaders-meeting-1776339023351.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ದಾವಣಗೆರೆ (ಏ.19) &lt;/strong&gt;ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆ ಗೊಂದಲಗಳಿಗೆ ಸಲೀಂ ಅಹ್ಮದ್&zwnj;, ರಿಜ್ವಾನ್ ಅರ್ಷದ್&zwnj; ಅವರೇ ಮುಖ್ಯ ಕಾರಣರಾಗಿದ್ದಾರೆ. ಪಕ್ಷಕ್ಕಾಗಿ ದುಡಿದ ಎಂಎಲ್&zwnj;ಸಿ ಕೆ.ಅಬ್ದುಲ್ ಜಬ್ಬಾರ್&zwnj;, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ನಸೀರ್ ಅಹಮ್ಮದ್ ವಿರುದ್ಧದ ಕ್ರಮವನ್ನು ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ನೇತೃತ್ವದಲ್ಲಿ ವಿವಿಧ ಮಸೀದಿಗಳ ಅಧ್ಯಕ್ಷರು, ಮುಸ್ಲಿಂ ಮುಖಂಡರು, ಕ್ರೈಸ್ತ ಮುಖಂಡರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಅಬ್ದುಲ್ ಘನಿ ತಾಹೀರ್&zwnj;, ರಾಜ್ಯದಲ್ಲಿ 135ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಲ್ಲಿ ಅಬ್ದುಲ್ ಜಬ್ಬಾರ್, ಜಮೀರ್ ಅಹ್ಮದ್, ನಸೀರ್ ಅಹ್ಮದ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. 8 ವರ್ಷದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಜಬ್ಬಾರ್ ರಾಜ್ಯಾದ್ಯಂತ ಸುತ್ತಾಡಿ ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಕಡೆ ಸೆಳೆಯವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಬ್ಬಾರ್, ನಸೀರ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡೆಗೆ ರಾಜ್ಯವ್ಯಾಪಿ ಮುಸ್ಲಿಂ ಸಮುದಾಯ ದುಃಖದಲ್ಲಿದೆ. ಉಲ್ಮಾ (ಮುಸ್ಲಿಂ ಧರ್ಮಗುರು)ಗಳು ಕಾಂಗ್ರೆಸ್ಸಿನ ಕ್ರಮವನ್ನು ಖಂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಬಹುತೇಕ ಎಲ್ಲ ಮಸೀದಿಗಳ ಅಧ್ಯಕ್ಷರು, ಕ್ರೈಸ್ತ ಮುಖಂಡರು ಒಂದಾಗಿ ಕಾಂಗ್ರೆಸ್ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.&lt;/p&gt;&lt;p&gt;ಎಐಸಿಸಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಈಗ ಇಲ್ಲಿ ಪಕ್ಷಪಾತಿ ಧೋರಣೆ ತೋರಿಸುತ್ತಿದ್ದಾರೆ. ಚಿಕ್ಕಮಗಳೂರಿನಿಂದ ಬೀದರ್&zwnj;ವರೆಗೂ ಜಬ್ಬಾರ್ ಹೆಸರನ್ನು ಅಲ್ಪಸಂಖ್ಯಾತರು ಹೇಳುತ್ತಾರೆ. ಆದರೆ, ನಮ್ಮ ಜಿಲ್ಲೆಯ ಕಾಂಗ್ರೆಸ್ಸಿನ ನಾಯಕರು ಎನಿಸಿಕೊಂಡವರು ನೆರೆ ಜಿಲ್ಲೆಗಳಿರಲಿ, ಪಕ್ಷದ ಕ್ಷೇತ್ರಕ್ಕೂ ಹೋಗುವುದಿಲ್ಲ ಎಂಬುದು ಸುರ್ಜೇವಾಲಾ ಅವರಿಗೆ ಅರಿವಿಲ್ಲವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಂಜೀಂ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ವೈ.ಎಂ.ಫಕೃದ್ದೀನ್ ಮಾತನಾಡಿ, ಈ ಹಿಂದೆ ಶಾಮನೂರು ಶಿವಶಂಕರಪ್ಪ ಸ್ಪರ್ಧೆಗೆ ಇದೇ ರೀತಿ ಆದಾಗ 40 ಸಾವಿರ ಮತಗಳಿಂದ ಶಾಮನೂರುಗೆ ಗೆಲ್ಲಿಸಿದ್ದೆವು. &zwj;&zwj; ಆಗ ಸಮಸ್ಯೆ ಪರಿಹರಿಸಿದ್ದು ಇದೇ ಮಲ್ಲಿಕಾರ್ಜುನ ಅವರೇ ಹೊರತು ಸಲೀಂ, ರಿಜ್ವಾನ್ ಅಲ್ಲ. ಹೀಗೆ ಹೊರಗಿನಿಂದ ಬಂದವರೇ ಇಲ್ಲಿ ಸಮಸ್ಯೆ ಮಾಡಿ ಹೋಗಿದ್ದಾರೆ. ಇಲ್ಲಿನ ಹಿರಿಯರು ಪಕ್ಷದ ಬೆನ್ನಿಗೆ ಚೂರಿ ಹಾಕಿದರು ಅಂತಿದ್ದಾರೆ. ಈ ಇಬ್ಬರು ಯಾವೊಬ್ಬ ಉಲ್ಮಾಗಳನ್ನು ಭೇಟಿ ಮಾಡಲಿಲ್ಲ ಎಂದು ತಿಳಿಸಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/saleem-ahemd-and-rizwan-are-responsible-for-the-davangere-congress-controversy-says-jagruthi-vedike-rav/articleshow-t8yq5sf"/>
        </item>
        <item>
            <title><![CDATA[ಪಂಚಮಸಾಲಿ ಮಠದ ಹರಿಹರ ಪೀಠ ವಿವಾದ ವಚನಾನಂದ ಶ್ರೀ ಮಾಜಿ ಸಚಿವ ನಿರಾಣಿಯಿಂದ 2 ಕೋಟಿ ಪಡೆದ ಆರೋಪ!]]></title>
            <link>https://kannada.asianetnews.com/gallery/karnataka-districts/davanagere-panchamasali-mutt-row-trustee-allegations-against-vachananda-swamiji-takes-2-crore-from-murugesh-nirani-gdp-vai8201</link>
            <guid isPermaLink="true">https://kannada.asianetnews.com/gallery/karnataka-districts/davanagere-panchamasali-mutt-row-trustee-allegations-against-vachananda-swamiji-takes-2-crore-from-murugesh-nirani-gdp-vai8201</guid>
            <pubDate>Thu, 16 Apr 2026 13:31:27 +0530</pubDate>
            <description><![CDATA[&lt;p&gt;ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿ ಹೆಚ್.ಎಸ್. ನಾಗರಾಜ ಅವರು, ವಚನಾನಂದ ಶ್ರೀಗಳು ಮಾಜಿ ಸಚಿವ ಮುರುಗೇಶ ನಿರಾಣಿಯಿಂದ 2 ಕೋಟಿ ರೂ. ಪಡೆದು ದುರ್ಬಳಕೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳು ಮಠದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿರುವ ಆರೋಪ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpakez1bvxwxjr0hs54tpnj4,imgname-vachananda-swamiji-murugesh-nirani-1776324934699.jpg" type="image/jpeg" height="390" width="690"/>
            <content:encoded><![CDATA[&lt;p&gt;ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿ ಹೆಚ್.ಎಸ್. ನಾಗರಾಜ ಅವರು, ವಚನಾನಂದ ಶ್ರೀಗಳು ಮಾಜಿ ಸಚಿವ ಮುರುಗೇಶ ನಿರಾಣಿಯಿಂದ 2 ಕೋಟಿ ರೂ. ಪಡೆದು ದುರ್ಬಳಕೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳು ಮಠದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿರುವ ಆರೋಪ.&lt;/p&gt;&lt;img&gt;&lt;p&gt;ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಒಳಗಿನ ವಿವಾದ ತಾರಕಕ್ಕೇರಿದ್ದು, ಟ್ರಸ್ಟಿ ಹೆಚ್&zwnj;.ಎಸ್&zwnj;. ನಾಗರಾಜ ಅವರು ವಚನಾನಂದ ಶ್ರೀ ವಿರುದ್ಧ ಗಂಭೀರ ಆರೋಪಗಳನ್ನು ಹೊರ ಹಾಕಿ ಸಂಚಲನ ಸೃಷ್ಟಿಸಿದ್ದಾರೆ. ದಾವಣಗೆರೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನಾನಂದ ಶ್ರೀ ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಂದ ಸುಮಾರು ಎರಡು ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ನಾಗರಾಜ ಆರೋಪಿಸಿದರು. ಸಮಾಜದ ಉದ್ದೇಶಕ್ಕಾಗಿ ನೀಡಲಾದ ಆ ಹಣ ಎಲ್ಲಿಗೆ ಹೋಗಿದೆ? ಅದು ನಿಮ್ಮ ಐಷಾರಾಮಿ ಜೀವನಕ್ಕೆ ಬಳಸಲ್ಪಟ್ಟಿದೆಯೇ?&rdquo; ಎಂದು ಪ್ರಶ್ನಿಸಿದರು. ಈ ಹಣವನ್ನು ಸುಮಾರು ಒಂದೂವರೆ-ಎರಡು ವರ್ಷಗಳ ಹಿಂದೆ ಪಡೆದಿದ್ದು, ಅದರ ಲೆಕ್ಕ ನೀಡಬೇಕೆಂದು ಒತ್ತಾಯಿಸಿದರು.&lt;/p&gt;&lt;img&gt;&lt;p&gt;ವಚನಾನಂದ ಶ್ರೀಗಳು ಸಮಾಜದ ಹಣವನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ನಾಗರಾಜ, &ldquo;ಮಠದಲ್ಲಿ ನಿಷ್ಠೆಯಿಂದ ಇರುವ ಬದಲು ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡಲಾಗಿದೆ. ಈಗ ಮಾತ್ರ ಭಕ್ತರ ಬಗ್ಗೆ ಮಾತನಾಡುತ್ತಿರುವುದು ಏಕೆ?&rdquo; ಎಂದು ಪ್ರಶ್ನಿಸಿದರು.&lt;/p&gt;&lt;img&gt;&lt;p&gt;ಇದಲ್ಲದೆ, ವಚನಾನಂದ ಶ್ರೀಗಳು ಹಿರಿಯ ನಾಯಕರು ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ನಡೆದ ಮಾತುಕತೆಗಳನ್ನು ರಹಸ್ಯವಾಗಿ ಆಡಿಯೋ ರೂಪದಲ್ಲಿ ದಾಖಲಿಸಿಕೊಂಡು ನಂತರ ಅವನ್ನು ಪ್ರದರ್ಶಿಸುತ್ತಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಯಾವ ನಾಯಕರು ಕೂಡ ವಚನಾನಂದ ಶ್ರೀಗಳೊಂದಿಗೆ ಫೋನ್&zwnj;ನಲ್ಲಿ ಮಾತನಾಡಬಾರದು. ಅವರು ಅಪಾಯಕಾರಿ ಸ್ವಾಮೀಜಿ ಎಂದು ಎಚ್ಚರಿಕೆ ನೀಡಿದರು.&lt;/p&gt;&lt;img&gt;&lt;p&gt;ಇತ್ತೀಚೆಗೆ ವಚನಾನಂದ ಶ್ರೀಗಳು ಒಬ್ಬರಿಗೆ ಹಣ ನೀಡುತ್ತಿರುವ ವಿಡಿಯೋ ವೈರಲ್ ಆದ ವಿಷಯಕ್ಕೂ ಪ್ರತಿಕ್ರಿಯಿಸಿದ ನಾಗರಾಜ, &ldquo;ಟ್ರಸ್ಟ್&zwnj;ನವರು ತಮ್ಮನ್ನು ಮಠದಿಂದ ಹೊರಹಾಕುವ ಸಾಧ್ಯತೆ ಇದೆ ಎಂಬುದನ್ನು ಅರಿತ ನಂತರವೇ ಇಂತಹ ಕ್ರಿಮಿನಲ್ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ. ಹಣ ನೀಡಿ ಜನರನ್ನು ಕರೆತರಿಸುವುದು ಸರಿಯಲ್ಲ,&rdquo; ಎಂದು ಆರೋಪಿಸಿದರು. ಸಿರಿಗೆರೆ ಶ್ರೀಗಳ ಹೆಸರನ್ನು ಬಳಸುವ ಯೋಗ್ಯತೆ ವಚನಾನಂದ ಶ್ರೀಗಳಿಗೆ ಇಲ್ಲ ಎಂದು ಕಿಡಿಕಾರಿದ ಅವರು, &ldquo;ಸಿರಿಗೆರೆ ಶ್ರೀಗಳು ನಮ್ಮ ಗುರುಗಳು. ಅವರ ಬಗ್ಗೆ ಮಾತನಾಡಿದರೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ,&rdquo; ಎಂದು ಎಚ್ಚರಿಸಿದರು.&lt;/p&gt;&lt;img&gt;&lt;p&gt;ವಚನಾನಂದ ಶ್ರೀಗಳು ಮಠವನ್ನು ತಕ್ಷಣ ತೊರೆಯಬೇಕು ಎಂದು ಒತ್ತಾಯಿಸಿದ ನಾಗರಾಜ, ಅವರಿಗೆ ಒಂದು ವಾರದ ಗಡುವು ನೀಡಿದರು. &ldquo;ಒಂದು ವಾರದೊಳಗೆ ಮಠವನ್ನು ಗೌರವಯುತವಾಗಿ ಬಿಟ್ಟು ಹೋಗಬೇಕು. ಇಲ್ಲದಿದ್ದರೆ ಸಾವಿರಾರು ಜನರನ್ನು ಸೇರಿಸಿ ಮಠದಿಂದ ಹೊರಹಾಕುವ ಕ್ರಮ ಕೈಗೊಳ್ಳುತ್ತೇವೆ,&rdquo; ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.&lt;/p&gt;&lt;img&gt;&lt;p&gt;ಇದೇ ವೇಳೆ, ಹರಿಹರ ಪಂಚಮಸಾಲಿ ಪೀಠದ ವಿವಾದದಲ್ಲಿ ತಮ್ಮ ಸಹೋದರ ಹಾಗೂ ಹರಿಹರದ ಮಾಜಿ ಶಾಸಕ ಹೆಚ್&zwnj;.ಎಸ್&zwnj;. ಶಿವಶಂಕರ್ ವಿರುದ್ಧವೂ ನಾಗರಾಜ ತೀವ್ರ ವಾಗ್ದಾಳಿ ನಡೆಸಿದರು. &ldquo;ಸಮಾಜವನ್ನು ಬಳಸಿಕೊಳ್ಳುವವರಾಗಿದ್ದು, ಅದರ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ,&rdquo; ಎಂದು ಆರೋಪಿಸಿದರು.&lt;/p&gt;&lt;p&gt;ಕೂಡಲಸಂಗಮ ಪೀಠ ಹಾಗೂ 2ಎ ಮೀಸಲಾತಿ ಹೋರಾಟದ ಹಣಕಾಸು ವ್ಯವಹಾರಗಳ ಕುರಿತು ಕೂಡ ಪ್ರಶ್ನೆ ಎತ್ತಿದ ನಾಗರಾಜ, &ldquo;ಎಷ್ಟು ಹಣ ಸಂಗ್ರಹಿಸಲಾಗಿದೆ? ಅದರ ಲೆಕ್ಕ ಎಲ್ಲಿದೆ?&rdquo; ಎಂದು ಪ್ರಶ್ನಿಸಿದರು. &ldquo;ಅಕ್ಕಿ ಹಾಗೂ ಇತರ ಧಾನ್ಯಗಳನ್ನೂ ಸಂಗ್ರಹಿಸಿ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಇದೆ. ಇದರ ಸಂಪೂರ್ಣ ಲೆಕ್ಕ ನೀಡಬೇಕು,&rdquo; ಎಂದು ಒತ್ತಾಯಿಸಿದರು.&lt;/p&gt;&lt;img&gt;&lt;p&gt;ಉಮಾಪತಿ ಅವರು ಸಮಾಜದ ಆಸ್ತಿ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಎಲ್ಲರಿಗೂ ಇರಬೇಕು ಎಂದು ಹೇಳಿದ ನಾಗರಾಜ, ತಮ್ಮ ವಿರುದ್ಧ ಟೀಕೆ ಮಾಡಿದವರನ್ನೇ ಈಗ ತಮ್ಮ ಮೇಲೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು. ಒಟ್ಟಾರೆ, ಹರಿಹರ ಪಂಚಮಸಾಲಿ ಪೀಠದ ಒಳಗಿನ ಈ ಸಂಘರ್ಷ ಈಗ ಬಹಿರಂಗವಾಗಿ ಹೊರಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/davanagere-panchamasali-mutt-row-trustee-allegations-against-vachananda-swamiji-takes-2-crore-from-murugesh-nirani-gdp-vai8201"/>
        </item>
        <item>
            <title><![CDATA[ಪಂಚಮಸಾಲಿ ಪೀಠದ ಸಂಘರ್ಷ: ವಚನಾನಂದಶ್ರೀಗಳ ಉಚ್ಚಾಟಿಸಿದ್ದವರೇ ಉಚ್ಚಾಟನೆ! ಟ್ರಸ್ಟಿಗಳಿಗೆ ಶಾಕ್]]></title>
            <link>https://kannada.asianetnews.com/karnataka-districts/three-trustees-of-panchamasali-mutt-have-now-been-expelled-from-the-trust-mrq/articleshow-ya8fitt</link>
            <guid isPermaLink="true">https://kannada.asianetnews.com/karnataka-districts/three-trustees-of-panchamasali-mutt-have-now-been-expelled-from-the-trust-mrq/articleshow-ya8fitt</guid>
            <pubDate>Mon, 27 Apr 2026 05:59:16 +0530</pubDate>
            <description><![CDATA[&lt;p&gt;ಅವ್ಯವಹಾರ, ಅಧರ್ಮ, ಅಪನಂಬಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಮೂವರು ಟ್ರಸ್ಟಿಗಳನ್ನು ಟ್ರಸ್ಟ್&zwnj;ನಿಂದ ಉಚ್ಚಾಟಿಸಲಾಗಿದೆ. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ಈ ಕಠಿಣ ಕ್ರಮ ಕೈಗೊಂಡಿದ್ದು, ಸಂಘವೇ ಟ್ರಸ್ಟ್&zwnj;ಗಿಂತ ಸುಪ್ರೀಂ ಎಂದು ಪ್ರತಿಪಾದಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpakez1ae3hkvgqgrfs6adhz,imgname-vachananda-swamiji--9--1776324934698.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀಗಳನ್ನು ಉಚ್ಚಾಟಿಸಿದ್ದ ಮೂವರು ಟ್ರಸ್ಟಿಗಳನ್ನೇ ಈಗ ಟ್ರಸ್ಟ್&zwnj;ನಿಂದ ಉಚ್ಚಾಟಿಸಲಾಗಿದೆ.&lt;/p&gt;&lt;p&gt;ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್&zwnj;ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಟ್ರಸ್ಟಿಗಳಾದ ಚಂದ್ರಶೇಖರ ಪೂಜಾರ, ಜ್ಯೋತಿಪ್ರಕಾಶ ಈ ಮೂವರನ್ನೂ ಏ.13ರಿಂದಲೇ ಪೂರ್ವಾನ್ವಯವಾಗುವಂತೆ ಟ್ರಸ್ಟ್&zwnj;ನಿಂದ ಉಚ್ಚಾಟಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಎಂ.ಪಾಟೀಲ ತಿಳಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವ್ಯವಹಾರ, ಅಧರ್ಮ, ಅಪನಂಬಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಟ್ರಸ್ಟ್&zwnj;ನಲ್ಲಿದ್ದ ಮೂವರು ಪ್ರಮುಖರಾದ ಬಿ.ಸಿ.ಉಮಾಪತಿ, ಚಂದ್ರಶೇಖರ ಪೂಜಾರ, ಜ್ಯೋತಿಪ್ರಕಾಶ ಅವರನ್ನು ಟ್ರಸ್ಟ್&zwnj;ನಿಂದ ಉಚ್ಚಾಟಿಸುವಂತಹ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಮೂವರೂ ಧರ್ಮದರ್ಶಿಗಳನ್ನು ಟ್ರಸ್ಟ್&zwnj;ನಿಂದ ಉಚ್ಚಾಟನೆ&lt;/strong&gt;&lt;/h2&gt;&lt;p&gt;ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಲ್ಲಿ 13,600 ಸದಸ್ಯರಿದ್ದೇವೆ. ಆದರೆ, ಟ್ರಸ್ಟ್&zwnj;ನಲ್ಲಿ ಅಂತಹ ಯಾವುದೇ ಸದಸ್ಯತ್ವ ವ್ಯವಸ್ಥೆ ಇಲ್ಲ. ಹಾಗಾಗಿ, ಸಂಘವೇ ಸುಪ್ರೀಂ ಆಗಿದ್ದು, ಧರ್ಮದರ್ಶಿಗಳು ಮಠದ ವ್ಯವಹಾರದಲ್ಲಿ ಅಕ್ರಮ ಎಸಗಿದರೆ, ಅಧರ್ಮವಾಗಿ ನಡೆದುಕೊಂಡರೆ ಅಂತಹ ಟ್ರಸ್ಟಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರವು ಸಂಘಕ್ಕೆ ಇರುವ ಬಗ್ಗೆ ಬೈಲಾದಲ್ಲಿ ಸ್ಪಷ್ಟ ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ ಮೂವರೂ ಧರ್ಮದರ್ಶಿಗಳನ್ನು ಟ್ರಸ್ಟ್&zwnj;ನಿಂದ ಉಚ್ಚಾಟಿಸಲಾಗಿದೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಉಚ್ಚಾಟಿತ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಧರ್ಮದರ್ಶಿಗಳಾದ ಚಂದ್ರಶೇಖರ ಪೂಜಾರ, ಜ್ಯೋತಿಪ್ರಕಾಶ ಅವರು ಇಂದಿನಿಂದಲೇ ಅನ್ವಯವಾಗುವಂತೆ ಯಾವುದೇ ಲೆಕ್ಕಪತ್ರ ನಿರ್ವಹಣೆ, ಬ್ಯಾಂಕ್ ವ್ಯವಹಾರ ಅಥವಾ ಸಂಘಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;&lt;p&gt;ಮಾ.23ರಂದು ಕೊಪ್ಪಳದಲ್ಲಿ ನಡೆದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಟ್ರಸ್ಟಿಗಳ ಅ&zwj;ವಧಿ ಕೇವಲ 5 ವರ್ಷಕ್ಕೆ ಸೀಮಿತವಾಗಿರಬೇಕು. ಪ್ರತಿ ಜಿಲ್ಲೆಯ ಒಬ್ಬರಿಗೆ ಟ್ರಸ್ಟ್&zwnj;ನಲ್ಲಿ ಅವಕಾಶ ನೀಡಬೇಕು. ಟ್ರಸ್ಟಿಗಳ ನೇಮಕಾತಿ ಜಿಲ್ಲಾ, ತಾಲೂಕು ಅಧ್ಯಕ್ಷರ ಮುಖಾಂತರವೇ ನಡೆಯಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಇಲ್ಲಿನ ಧರ್ಮದರ್ಶಿಗಳು ಆ ನಿರ್ಣಯಕ್ಕೆ ಒಪ್ಪಿರಲಿಲ್ಲ. ಅಂದಿನ ಸಭೆಯ ನಿರ್ಣಯಕ್ಕೆ ವಿರುದ್ಧವಾಗಿ ಸದ್ಯ ಕೆಲ ಜಿಲ್ಲೆಗಳಿಂದ 3-4 ಜನ ಟ್ರಸ್ಟಿಗಳು ಟ್ರಸ್ಟ್&zwnj;ನಲ್ಲಿದ್ದಾರೆ ಎಂದು ಅವರು ದೂರಿದರು.&lt;/p&gt;&lt;p&gt;ಮುಂದಿನ ದಿನಗಳಲ್ಲಿ ಸಂಘದ ರಾಜ್ಯ ಮುಖಂಡರು ರಾಜ್ಯಾದ್ಯಂತ ಪ್ರವಾಸ ಮಾಡಿ, 2008ರಿಂದ ಮಠಕ್ಕೆ ಅಥವಾ ಸಂಘಕ್ಕೆ ಕಾಣಿಕೆ ನೀಡಿದವರೆಲ್ಲರ ಪಟ್ಟಿ ಸಿದ್ಧಪಡಿಸಿ, ಹಣದ ಬಳಕೆ ಬಗ್ಗೆ ಸಂಪೂರ್ಣ ವಿವರವನ್ನು ಸಾರ್ವಜನಿಕವಾಗಿ ಸಮಾಜದ ಮುಂದಿಡಲಿದ್ದಾರೆ ಎಂದು ಅವರು ತಿಳಿಸಿದರು.&lt;/p&gt;&lt;h3&gt;&lt;strong&gt;ಏಕೆ ಇಂತಹ ಧೋರಣೆ ಅನುಸರಿಸುತ್ತಿದ್ದಾರೆ?&lt;/strong&gt;&lt;/h3&gt;&lt;p&gt;ಹರಿಹರದ ಪಂಚಮಸಾಲಿ ಮಠವು 80 ಲಕ್ಷ ಪಂಚಮಸಾಲಿ ಬಾಂಧವರ ಆಸ್ತಿಯಾಗಿದೆ. ಇಲ್ಲಿ ಪಾರದರ್ಶಕತೆ ಇರಲೇಬೇಕು. ಬಿ.ಸಿ.ಉಮಾಪತಿಯವರು ಲಿಖಿತ ರೂಪದಲ್ಲಿ ಲೆಕ್ಕ ನೀಡಲು ನಿರಾಕರಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಸಮಾಜ ಮತ್ತು ಮಠದ ಆಸ್ತಿ ಬಗ್ಗೆ ಲೆಕ್ಕ ಕೊಡುವುದಕ್ಕೆ ಅವರು ಏಕೆ ಇಂತಹ ಧೋರಣೆ ಅನುಸರಿಸುತ್ತಿದ್ದಾರೆ?&lt;/p&gt;&lt;p&gt;&lt;strong&gt;- ಸೋಮನಗೌಡ ಎಂ.ಪಾಟೀಲ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ.&lt;/strong&gt;&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/three-trustees-of-panchamasali-mutt-have-now-been-expelled-from-the-trust-mrq/articleshow-ya8fitt"/>
        </item>
        <item>
            <title><![CDATA[ದಾವಣಗೆರೆ: ನಸೀರ್‌ ವಿರುದ್ಧ ಕಾಂಗ್ರೆಸ್ ಕ್ರಮ ಸಮರ್ಥಿಸಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ,]]></title>
            <link>https://kannada.asianetnews.com/politics/davanagere-mp-prabha-mallikarjuna-supports-congress-action-against-naseer-ahmed-rav/articleshow-zhw8yph</link>
            <guid isPermaLink="true">https://kannada.asianetnews.com/politics/davanagere-mp-prabha-mallikarjuna-supports-congress-action-against-naseer-ahmed-rav/articleshow-zhw8yph</guid>
            <pubDate>Wed, 22 Apr 2026 11:23:34 +0530</pubDate>
            <description><![CDATA[&lt;p&gt;ಕಾಂಗ್ರೆಸ್ ಪಕ್ಷವು ಶಿಸ್ತುಬದ್ಧವಾಗಿದ್ದು, ಕೂಲಂಕುಷವಾಗಿ ಪರಿಶೀಲಿಸಿಯೇ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್&zwnj; ಪಕ್ಷದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಶಾಮನೂರು ಶಿವಶಂಕರಪ್ಪನವರ ಹೇಳಿಕೆಗೂ ಸ್ಪಷ್ಟನೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9w6z5160aem7gm6r1vmpash,imgname-----------------------2025-11-12t193149.597-1762957169702.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.22):&lt;/strong&gt; ಕಾಂಗ್ರೆಸ್ ಪಕ್ಷವೆಂದರೆ ಶಿಸ್ತುಬದ್ಧ ಪಕ್ಷವಾಗಿದ್ದು, ಪಕ್ಷದಲ್ಲಿ ಒಂದು ಸಿದ್ಧಾಂತ, ನೈತಿಕತೆ ಇರುತ್ತದೆ. ಪಕ್ಷವು ಒಂದು ನಿರ್ಧಾರ ಕೈಗೊಂಡರೆ ಅದಕ್ಕೊಂದು ಕಾರಣ ಇದ್ದೇ ಇರುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್&zwnj; ಎಂಎಲ್&zwnj;ಸಿ ಕೆ.ಅಬ್ದುಲ್ ಜಬ್ಬಾರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ವಿರುದ್ಧ ಕಾಂಗ್ರೆಸ್ ಪಕ್ಷವು ಕ್ರಮ ಕೈಗೊಂಡ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಗಳ ಬಗ್ಗೆ ಕೆಪಿಸಿಸಿ, ಎಐಸಿಸಿ ಮಟ್ಟದಲ್ಲಿ ಎಲ್ಲಾ ರೀತಿ ಫೀಡ್ ಬ್ಯಾಕ್&zwnj; ಪಡೆದು, ಚುನಾವಣೆಯಲ್ಲಿ ಯಾರು ಕೆಲಸ ಮಾಡಿದ್ದಾರೆ, ಇಷ್ಟು ವರ್ಷ ಏನೇನಾಗಿದೆ, ರಾಜಕಾರಣದಲ್ಲಿ ಅದನ್ನೆಲ್ಲಾ ಕೂಲಂಕುಷವಾಗಿ ನೋಡಿಯೇ ಒಂದು ನಿರ್ಧಾರ ಕೈಗೊಳ್ಳಲಾಗುತ್ತದೆ. ಹಾಗಾದಾಗಲೇ ಒಂದು ಶಿಸ್ತುಬದ್ಧವಾದ ಪಕ್ಷ ಕಾಂಗ್ರೆಸ್ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದರು.&lt;/p&gt;&lt;p&gt;ಶಿವಮೊಗ್ಗದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಪಾಲ್ಗೊಂಡಿದ್ದರು. ಸಭೆಯಲ್ಲಿ ಅಲ್ಲಿನ ಸಂಸದ ಬಿ.ವೈ.ರಾಘವೇಂದ್ರ ಸಹ ಉಪಸ್ಥಿತರಿದ್ದರು. ರಾಘವೇಂದ್ರ ಒಳ್ಳೆಯ ಕೆಲಸ ಮಾಡಿದ್ದಾರೆಂದಷ್ಟೇ ಅಪ್ಪಾಜಿ (ಶಾಮನೂರು ಶಿವಶಂಕರಪ್ಪ) ಹೇಳಿದ್ದಾರೆ. ಅಪ್ಪಾಜಿ, ನಾನು ಮಾತನಾಡಿರಬಹುದಾದ ಎಲ್ಲವನ್ನೂ ನೋಡಿಯೇ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ ಎಂದು ರಾಘವೇಂದ್ರಗೆ ಗೆಲ್ಲಿಸುವಂತೆ ಕರೆ ನೀಡಿದ್ದ ಶಾಮನೂರು ವಿರುದ್ಧ ಕ್ರಮ ಕೈಗೊಳ್ಳಲಿಲ್ಲ, ಮುಸ್ಲಿಮರಿಗೆ ಟಿಕೆಟ್ ಕೇಳಿದ್ದಕ್ಕೆ ನಮ್ಮ ಮೇಲೆ ಕ್ರಮ ಏಕೆ ಎಂಬ ಮುಸ್ಲಿಂ ನಾಯಕರ ಪ್ರಶ್ನೆಗೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದರು.&lt;/p&gt;&lt;h2&gt;ಸಮರ್ಥ ಶಾಮನೂರು ಗೆಲುವು ನಿಶ್ಚಿತ:&lt;/h2&gt;&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಮೆ ಬಗ್ಗೆ ನಮಗೆ ಯಾವುದೇ ಟೆನ್ಷನ್ ಇಲ್ಲ. ಜನರು ಯಾವತ್ತೂ ಕಾಂಗ್ರೆಸ್ ಪಕ್ಷದ ಪರವಾಗಿಯೇ ಇದ್ದಾರೆ. ಒಳ್ಳೆಯ ಬಹುಮತದಿಂದ ಸಮರ್ಥ ಶಾಮನೂರು ಜಯ ಸಾಧಿಸಲಿದ್ದಾರೆ. 8 ಸಾವಿರ, 15 ಸಾವಿರ, 30 ಸಾವಿರ ಮತಗಳ ಅಂತರದಲ್ಲಿ ಸಮರ್ಥ ಗೆಲ್ಲುತ್ತಾರೆಂದು ಕ್ಷೇತ್ರದ ಜನರೆ ಹೇಳುತ್ತಿದ್ದಾರೆ. ಮೇ.4ರಂದು ಗೊತ್ತಾಗುತ್ತದೆ. ಸಮರ್ಥ ಗೆದ್ದೇ ಗೆಲುತ್ತಾರೆಂಬ ಸಂಪೂರ್ಣ ವಿಶ್ವಾಸ, ನಂಬಿಕೆ ನಮಗಿದೆ ಎಂದು ಪ್ರಭಾ ಮಲ್ಲಿಕಾರ್ಜುನ್&zwnj; ಹೇಳಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/davanagere-mp-prabha-mallikarjuna-supports-congress-action-against-naseer-ahmed-rav/articleshow-zhw8yph"/>
        </item>
    </channel>
</rss>
