<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 07 Apr 2026 14:43:02 +0530</lastBuildDate>
        <atom:link href="https://kannada.asianetnews.com/rss/davanagere" rel="self" type="application/rss+xml"/>
        <item>
            <title><![CDATA[Davanagere Bypoll: ಕಾಂಗ್ರೆಸ್ ಗೆಲುವಿಗೆ ಡಿಸಿಎಂ ತಡರಾತ್ರಿ ಸಭೆ! ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ರಣತಂತ್ರ ಹೆಣೆದ ಡಿಕೆಶಿ]]></title>
            <link>https://kannada.asianetnews.com/politics/davanagere-bypoll-dcm-dk-shivakumar-holds-late-night-strategy-meet-with-booth-workers-rav/articleshow-3ugwtpw</link>
            <guid isPermaLink="true">https://kannada.asianetnews.com/politics/davanagere-bypoll-dcm-dk-shivakumar-holds-late-night-strategy-meet-with-booth-workers-rav/articleshow-3ugwtpw</guid>
            <pubDate>Sat, 04 Apr 2026 11:38:17 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಡರಾತ್ರಿವರೆಗೆ ಕಾಂಗ್ರೆಸ್ ನಾಯಕರು ಮತ್ತು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಗೆಲುವಿಗೆ ರಣತಂತ್ರ ಹೆಣೆದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knbhjanxn4nvd3kpk7kk85nz,imgname----------------------57--1775282760381.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.4): &lt;/strong&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಕಾವೇರುತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್&zwnj; ಗುರುವಾರ ತಡರಾತ್ರಿವರೆಗೆ ಕಾಂಗ್ರೆಸ್ ನಾಯಕರು, ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸುದೀರ್ಘ ಸಭೆ ನಡೆಸಿದರು. ಇದರೊಂದಿಗೆ ಪಕ್ಷದ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಗೆಲುವಿಗೆ ರಣತಂತ್ರ ಹೆಣೆಯುತ್ತಿದ್ದಾರೆ.&lt;/p&gt;&lt;p&gt;ನಗರದಲ್ಲಿ ಗುರುವಾರ ದಿನವಿಡೀ ಪ್ರಚಾರ, ಸಭೆಯಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಡಿಕೆಶಿ, ಚುನಾವಣಾ ಕೆಲಸದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಮಾತುಗಳನ್ನಾಡಿದರು.&lt;/p&gt;&lt;p&gt;ಚುನಾವಣೆಗಾಗಿ ನಮ್ಮೆಲ್ಲಾ ಕಾರ್ಯಕರ್ತರು ಕಿಂಚಿತ್ತೂ ಧಣಿಯದೇ, ಅತ್ಯಂತ ಉತ್ಸಾಹದಿಂದ ಪಕ್ಷದ ಕಾರ್ಯದಲ್ಲಿ ತೊಡಗಿರುವ ಬದ್ದತೆಯು ಹೆಮ್ಮೆ ಮೂಡಿಸುತ್ತಿದೆ. ಬೂತ್ ಗೆದ್ದರೆ ರಾಜ್ಯವನ್ನೇ ಗೆದ್ದಂತೆ ಎಂಬ ಮಾತಿಗೆ ಪೂರಕವಾಗಿ ನೀವೆಲ್ಲರೂ ಕೆಲಸ ಮಾಡುತ್ತಿರುವ ನಮ್ಮ ಕೈಪಡೆಯ ಶ್ರಮವೇ ಅಭ್ಯರ್ಥಿ ಸಮರ್ಥನ ಗೆಲುವಿಗೆ ಶ್ರೀರಕ್ಷೆ ಎಂಬುದಾಗಿ ಉತ್ಸಾಹ ಮೂಡಿಸಿದರು.&lt;/p&gt;&lt;p&gt;ನಮ್ಮೆಲ್ಲಾ ಕಾರ್ಯಕರ್ತರ ಒಗ್ಗಟ್ಟು ಮತ್ತು ಸಂಘಟನಾ ಸಕ್ತಿ ವಿಜಯದ ಸಂಕೇತವಾಗಿದೆ ಎಂಬುದಾಗಿ ಡಿ.ಕೆ.ಶಿವಕುಮಾರ ಹೇಳಿದರು. ಗುರುವಾರ ಮಧ್ಯರಾತ್ರಿವರೆಗೆ ನಡೆದ ಪಕ್ಷದ ಸಭೆಯ ಬಗ್ಗೆ ಟ್ವೀಟರ್&zwnj;ನಲ್ಲಿ ಫೋಟೋ ಸಮೇತ ಹಾಕಿ, ಕಾರ್ಯಕರ್ತರ ಉತ್ಸಾಹ ಹೆಚ್ಚಿಸುವ ಕೆಲಸವನ್ನೂ ಡಿ.ಕೆ.ಶಿವಕುಮಾರ ಮಾಡಿದ್ದಾರೆ.&lt;/p&gt;&lt;h2&gt;ಎಸ್ಸೆಸ್ ಗಣೇಶ ನಿವಾಸಕ್ಕೆ ಡಿಕೆ:&lt;/h2&gt;&lt;p&gt;ದಿವಂಗತ ಶಾಮನೂರು ಶಿವಶಂಕರಪ್ಪನವರ ದ್ವಿತೀಯ ಪುತ್ರ, ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್.ಗಣೇಶ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;, ಹ್ಯಾರೀಸ್&zwnj;, ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಸೇರಿದಂತೆ ಕಾಂಗ್ರೆಸ್ ನಾಯಕರು ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ, ಸುಮಾರು ಹೊತ್ತು ಚರ್ಚಿಸಿದರು. ನಂತರ ಎಸ್ಸೆಸ್ ಗಣೇಶ, ರೇಖಾ ಗಣೇಶ, ಪುತ್ರ ಅಭಿಜಿತ್ ಜಿ.ಶಾಮನೂರು ಇತರರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಸನ್ಮಾನಿಸಿ ಗೌರವಿಸಿದರು. ಮಾತುಕತೆ ವಿವರಗಳು ಬಹಿರಂಗವಾಗಿಲ್ಲವಾದರೂ, ಪಕ್ಷದ ಪ್ರಚಾರ, ಕಾಂಗ್ರೆಸ್ ಚಟುವಟಿಕೆಗಳಲ್ಲಿ ತೊಡಗುವಂತೆ ಗಣೇಶರಿಗೆ ಡಿಕೆಶಿ ಹೇಳಿದ್ದಾರೆನ್ನಲಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/davanagere-bypoll-dcm-dk-shivakumar-holds-late-night-strategy-meet-with-booth-workers-rav/articleshow-3ugwtpw"/>
        </item>
        <item>
            <title><![CDATA[ದಾವಣಗೆರೆ ಅಹಿಂದ ಅಭ್ಯರ್ಥಿಗೆ ಯಾಕೆ ಸೋಲಿಸಬೇಕಪ್ಪಾ? ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ]]></title>
            <link>https://kannada.asianetnews.com/politics/hd-kumaraswamy-attack-on-siddaramaiah-ahinda-politics-gvd/articleshow-3vrtlbr</link>
            <guid isPermaLink="true">https://kannada.asianetnews.com/politics/hd-kumaraswamy-attack-on-siddaramaiah-ahinda-politics-gvd/articleshow-3vrtlbr</guid>
            <pubDate>Mon, 06 Apr 2026 21:47:20 +0530</pubDate>
            <description><![CDATA[&lt;p&gt;ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಡಿ ಎನ್ನುವ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ಸಮಾಜದ ವ್ಯಕ್ತಿಯೇ ನಿಂತಿದ್ದರೂ ಯಾಕಪ್ಪಾ ಸೋಲಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjh4e3cpb1nh2cfx2c6c52gr,imgname-hd-kumaraswamy-1772249091477.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.06):&lt;/strong&gt; ಅಹಿಂದ ನಾಯಕನೆಂದು ಹೇಳಿಕೊಳ್ಳುವ ನೀನೇ ಮುಸ್ಲಿಂ ಅಭ್ಯರ್ಥಿಗಳಿಗೆ ಮತ ಹಾಕಬೇಡಿ, ಕಡೆ ಅಹಿಂದ ವರ್ಗದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಡಿ ಎನ್ನುವ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ಸಮಾಜದ ವ್ಯಕ್ತಿಯೇ ನಿಂತಿದ್ದರೂ ಯಾಕಪ್ಪಾ ಸೋಲಿಸಬೇಕು ಎಂದು ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.&lt;/p&gt;&lt;p&gt;ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಬದಲಾವಣೆಯನ್ನು ರಾಜ್ಯಕ್ಕೆ ತಂದು ಕೊಡಿ. ಈ ಚುನಾವಣೆಯಿಂದ ನಮ್ಮ ಸರ್ಕಾರವೇನೂ ಹೋಗುವುದಿಲ್ಲ. ಜನರ ತೆರಿಗೆ ಹಣ ಲೂಟಿ ಮಾಡುತ್ತಿರುವ ನಿಮಗೆ ಜ್ಞಾನೋದಯ ಆಗಬೇಕು. ಸರಿಯಾದ ಮಾರ್ಗದಲ್ಲಿ ಸರ್ಕಾರ ಹೋಗುವ ಭಯ, ಭಕ್ತಿ ಬರಲು ಇಲ್ಲಿ ಅಹಿಂದ ಅಭ್ಯರ್ಥಿ, ಬಿಜೆಪಿಯೇ ಗೆಲ್ಲಬೇಕು ಎಂದರು.&lt;/p&gt;&lt;p&gt;ಬಿಜೆಪಿ ಹಿಂದುತ್ವದ ಜೊತೆ ಹೋಗುವ, ಸಿದ್ಧಾಂತವಿಲ್ಲದ ಪಕ್ಷವೆನ್ನುತ್ತೀರಿ. ಅದೇ ಬಿಜೆಪಿ ಇಲ್ಲಿ ಹಿಂದುಳಿದವರನ್ನು ಮೇಲೆತ್ತುವ ಕೆಲಸ ಮಾಡಿದೆ. ಅಹಿಂದ ವರ್ಗದ ಶ್ರೀನಿವಾಸ ಟಿ.ದಾಸಕರಿಪ್ಪಗೆ ಟಿಕೆಟ್ ನೀಡಿದೆ. ಬಿಜೆಪಿ ಅಭ್ಯರ್ಥಿ ಸೋಲಿಸುವಂತೆ ಕರೆ ನೀಡುವ, ಮಾತನಾಡುವ ನೈತಿಕತೆ ನಿಮಗಿಲ್ಲ. ನಿಮ್ಮ ಅಭ್ಯರ್ಥಿಗಳನ್ನು ಗ್ಯಾರಂಟಿ ಯೋಜನೆಗಳು ರಕ್ಷಣೆ ಮಾಡುತ್ತಿವೆಯೆಂದರೆ ಇಲ್ಲಿ ಐದೈದು ದಿನ ಕ್ಯಾಂಪ್ ಮಾಡಬೇಕಾ ಎಂದು ಅವರು ಸಿಎಂ ವಿರುದ್ಧ ಹರಿಹಾಯ್ದರು.&lt;/p&gt;&lt;p&gt;ಮೊದಲು ನಿಮ್ಮ ಬೂಟಾಟಿಕೆ ನಿಲ್ಲಿಸಿ. ಎಲ್ಲದಕ್ಕೂ ಕೇಂದ್ರದತ್ತ ಮೊಟ್ಟು ಮಾಡಿ, ಅಂತೀರಲ್ಲ ನೀವೆಷ್ಟು ಸಲ ನಮ್ಮನ್ನು ಭೇಟಿಯಾಗಿದ್ದೀರಿ? ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವ್ಹೀಲ್ ಚೇರ್&zwnj;ನಲ್ಲಿ ಹೋಗಿ ಬೇಡಿಕೊಂಡಿದ್ದರಿಂದ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ತೀರ್ಮಾನ ನಡೆಯುತ್ತಿದೆ. ಎತ್ತಿನಹೊಳೆ ವಿಚಾರದಲ್ಲಿ ರಾಜ್ಯಕ್ಕೆ ಮುಖಭಂಗವಾಗಿತ್ತು. ಅದನ್ನೂ ಸರಿಪಡಿಸಲು ದೇವೇಗೌಡರು ಪ್ರಯತ್ನಿಸುತ್ತಿದ್ದಾರೆ. ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಎಷ್ಟು ಸಲ ಕರ್ನಾಟಕದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ? ರಾಜ್ಯದ ಸಮಸ್ಯೆ ಬಗ್ಗೆ ಎಷ್ಟು ಚರ್ಚೆ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.&lt;/p&gt;&lt;h2&gt;&lt;strong&gt;ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳಲು ಸಿದ್ಧರಿಲ್ಲ&lt;/strong&gt;&lt;/h2&gt;&lt;p&gt;ಪ್ರತಿ ನಿತ್ಯ ಕೇಂದ್ರದ ಜೊತೆ ಸಂಘರ್ಷ ಮಾಡಿದರೆ ಏನು ತರಲು ಸಾಧ್ಯ? ಸರ್ಕಾರ ನಡೆಸುವ ನೀವ್ಯಾರೂ ರಾಜ್ಯದ ಸಮಸ್ಯೆ ಹೇಳಿಲ್ಲ. ರಾಜ್ಯದ ರೈತರು ನಮಗೆ ಬಂದು ನೇರವಾಗಿ ಅರ್ಜಿ ಕೊಡುತ್ತಾರೆ. ಮೊದಲು ಇದನ್ನು ಸರಿಪಡಿಸಿಕೊಳ್ಳಿ, ಆಂಧ್ರದಲ್ಲಿ ಯಾವ ರೀತಿ ಕೆಲಸ ನಡೀತಿದೆ ನೋಡಿ. ಆಂಧ್ರದ ವಿಶಾಖಪಟ್ಟಣಂನ ಕಾರ್ಖಾನೆ ಪ್ರಾರಂಭ ಮಾಡಿಸಿದ್ದೇವೆ. ನೀವು ಕೇಂದ್ರದ ಜೊತೆ ಸೌಹಾರ್ದತೆ ಇಟ್ಟುಕೊಂಡು ಯಾವ ರೀತಿ ಕೆಲಸ ಮಾಡುತ್ತಿದ್ದೀರಿ ಯೋಚಿಸಿ. ರಾಜ್ಯದಲ್ಲಿ ಅಭಿವೃದ್ಧಿ ನಾವು ಮಾಡೋಕೆ ತಯಾರಿದ್ರೂ ನೀವೇ ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ದೂರಿದರು.&lt;/p&gt;&lt;p&gt;ಕೇಂದ್ರ ಸರ್ಕಾರ ಏನೂ ಮಧ್ಯ ಪ್ರವೇಶಿಸಿಲ್ಲ. ತಮಿಳುನಾಡು ನಿಮ್ಮ ಪಾರ್ಟ್ನರ್ಸ್ ಚುನಾವಣಾ ಮಾಡ್ತಿದ್ದೀರಲ್ಲಾ ಈಗ ಅವರ ಜೊತೆ ಈ ಬಗ್ಗೆ ಚೆಕ್ ಮಾಡಿಕೊಳ್ಳಿ. ಅಪ್ಪರ್ ಭದ್ರಾ, ಎತ್ತಿನ ಹೊಳೆ ತೀರ್ಮಾನ ಕೈಗೊಳ್ಳಲು ದೇವೇಗೌಡರು ಕಾರಣ. ದಾಖಲೆ ತೆಗೆದುಕೊಂಡು ಹೋಗಿ ಮನವಿ ಮಾಡಬೇಕು. ನಾವು ಕೈಗಾರಿಕೆ ತರಬೇಕು ಅಂದ್ರೆ ರಾಜಕೀಯ ಮಾಡ್ತಾರೆ ಎಂದು ಎಚ್&zwnj;.ಡಿ.ಕುಮಾರಸ್ವಾಮಿ ಹೇಳಿದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/hd-kumaraswamy-attack-on-siddaramaiah-ahinda-politics-gvd/articleshow-3vrtlbr"/>
        </item>
        <item>
            <title><![CDATA[ಬೈಎಲೆಕ್ಷನ್‌ ಫಲಿತಾಂಶ ರಾಜ್ಯ ರಾಜಕೀಯ ದಿಕ್ಕು ಬದಲಿಸಲಿದೆ: ಬಿ.ವೈ.ವಿಜಯೇಂದ್ರ ಭವಿಷ್ಯ]]></title>
            <link>https://kannada.asianetnews.com/karnataka-districts/by-vijayendra-bjp-bagalkot-davanagere-bypoll-prediction-gvd/articleshow-51t3nhw</link>
            <guid isPermaLink="true">https://kannada.asianetnews.com/karnataka-districts/by-vijayendra-bjp-bagalkot-davanagere-bypoll-prediction-gvd/articleshow-51t3nhw</guid>
            <pubDate>Mon, 30 Mar 2026 23:24:09 +0530</pubDate>
            <description><![CDATA[&lt;p&gt;ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಇಡೀ ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸಲಿದೆ. ಎರಡೂ ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಶಕ್ತಿ ತುಂಬಲಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4wp2b5v03z6v8krfh3yrqaf,imgname-gnghmn-1757604293819.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮಾ.30): &lt;/strong&gt;ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಇಡೀ ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸಲಿದೆ. ಎರಡೂ ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಶಕ್ತಿ ತುಂಬಲಿದೆ ಎಂದು ಸ್ವತಃ ರಾಜ್ಯದ ಜನತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬದಲಾವಣೆ ಬಯಸಿರುವ ಜನತೆ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಐತಿಹಾಸಿಕ ಗೆಲುವನ್ನು ತಂದು ಕೊಡಲಿದ್ದಾರೆ ಎಂದರು.&lt;/p&gt;&lt;p&gt;ಉಭಯ ಕ್ಷೇತ್ರಗಳ ಫಲಿತಾಂಶ ಇಡೀ ರಾಜ್ಯದ ಜನತೆಗೆ ನೂತನ ಸಂದೇಶ ನೀಡಲಿದೆ. ಕಾಂಗ್ರೆಸ್&zwnj; ಈವರೆಗೆ ಅಲ್ಪಸಂಖ್ಯಾತರನ್ನು ಕೇವಲ ಮತದಾರರನ್ನಾಗಿ ಬಳಕೆ ಮಾಡಿಕೊಳ್ಳುತ್ತಿತ್ತು. ಈಗ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಏನೆಂಬ ಸತ್ಯದ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರೂ ಸೇರಿ ಎಲ್ಲ ವರ್ಗಗಳ ಜನರು ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.&lt;/p&gt;&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ, ಬಲ ಮತ್ತಷ್ಟು ಹೆಚ್ಚಾಗಿದೆ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು.&lt;/p&gt;&lt;p&gt;&lt;strong&gt;ಹೈಕಮಾಂಡ್ ಹೇಳಿದಂತೆ ಕೇಳುವ ಸ್ಥಿತಿಗೆ ಸಿಎಂ: &lt;/strong&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಹೈಕಮಾಂಡ್ ಹೇಳಿದಂತೆ ಕೇಳುವ ಪರಿಸ್ಥಿತಿ ಬಂದಿದೆ. ಸ್ವಂತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಅವರು ಕಳೆದುಕೊಂಡಿದ್ದಾರೆ. ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಮಾಡಿದ ಭಾಷಣ, ಹೇಳಿಕೆಗಳನ್ನು ಗಮನಿಸಿದರೆ, ಹೈಕಮಾಂಡ್ ಹೇಳಿದಂತೆ ಕೇಳುವ ಪರಿಸ್ಥಿತಿಗೆ ಅವರು ಬಂದಿದ್ದಾರೆಂಬುದು ಸ್ಪಷ್ಟವಾಗುತ್ತದೆ ಎಂದರು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಮುಸ್ಲಿಮರಿಗೆ ಸಾಕಷ್ಟು ಅನುದಾನ ನೀಡಿದ್ದರು. ದಾವಣಗೆರೆಯಲ್ಲಿ ಹಿಂದಿನ ಬಿಜೆಪಿ ಆಡಳಿತದಲ್ಲಿ ಆಗಿದ್ದ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟರೆ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಅವರು ದೂರಿದರು.&lt;/p&gt;&lt;p&gt;&lt;strong&gt;ಕೊಂಕು ಮಾತಿಗೆ ಕೊರಗುವುದೇಕೆ?: &lt;/strong&gt;ಪಕ್ಷದ ರಾಜ್ಯಾಧ್ಯಕ್ಷನಾಗಿ ನನಗೆ ಸಾಕಷ್ಟು ಕೆಲಸಗಳು ಇವೆ. ಯಾರದೋ ಕೊಂಕು ಮಾತಿಗೆ ಕೊರಗುವುದೇಕೆ ಎಂಬ ಮಾತನ್ನು ನಂಬಿದವನು ನಾನು. ಯಾರ ಮಾತಿಗೂ ಉತ್ತರ ಕೊಡುವ ಅವಶ್ಯಕತೆ ನನಗೆ ಇಲ್ಲ. ಯಾವುದೇ ಬೇಜವಾಬ್ದಾರಿ ಹೇಳಿಕೆಗಳಿಗೆ ನಾನು ಉತ್ತರ ನೀಡುವುದೂ ಇಲ್ಲ. ದಾವಣಗೆರೆ ದಕ್ಷಿಣದಲ್ಲಿ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಭಾರೀ ಮತಗಳ ಅಂತರದಲ್ಲಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು. ಆ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೊಂದಾಣಿಕೆಯಿಂದ ದಾವಣಗೆರೆಗೆ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ ಎಂಬ ಯತ್ನಾಳ ಆರೋಪಕ್ಕೆ ಪರೋಕ್ಷ ಪ್ರತಿಕ್ರಿಯೆ ನೀಡಿದರು.&lt;/p&gt;&lt;h2&gt;&lt;strong&gt;ದಾವಣಗೆರೆಯಲ್ಲಿ ಪ್ರಚಾರಕ್ಕೆ ಜಮೀರ್&zwnj;ಗೆ ಸ್ವಾಭಿಮಾನ ಅಡ್ಡಿ?&lt;/strong&gt;&lt;/h2&gt;&lt;p&gt;ದಾವಣಗೆರೆಗೆ ಬಾರದಂತೆ ಗಣಿ ಸಚಿವ ಸಚಿವ ಎಸ್&zwnj;.ಎಸ್&zwnj;.ಮಲ್ಲಿಕಾರ್ಜುನ ಅವರೇ ಹೇಳಿರುವ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಸತಿ ಸಚಿವ ಜಮೀರ್&zwnj; ಅಹ್ಮದ್&zwnj; ಖಾನ್&zwnj; ಅವರು ರಾಜ್ಯ ಕಾಂಗ್ರೆಸ್&zwnj; ಉಸ್ತುವಾರಿ ಕೆ.ಸಿ.ವೇಣುಗೋಪಾಲ್&zwnj; ಅವರೊಂದಿಗೆ ಚರ್ಚಿಸಲಿದ್ದು, ಪಕ್ಷದ ಸೂಚನೆಯಂತೆ ನಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಕೇರಳ ಚುನಾವಣಾ ಪ್ರಚಾರದಲ್ಲಿರುವ ಜಮೀರ್&zwnj; ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಅಭಿಪ್ರಾಯ ಕೇಳಿದ್ದಾರೆ. ಎಸ್&zwnj;.ಎಸ್&zwnj;.ಮಲ್ಲಿಕಾರ್ಜುನ ಅವರೇ ನಾನು ಬರಬಾರದು ಎಂದಿರುವ ಹಿನ್ನೆಲೆಯಲ್ಲಿ ನನಗೆ ಸ್ವಾಭಿಮಾನ ಅಡ್ಡ ಬರುತ್ತಿದೆ ಏನು ಮಾಡಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಜಮೀರ್&zwnj; ಅಹಮದ್&zwnj; ಕೇರಳದಲ್ಲಿದ್ದು ಏ.4ರವರೆಗೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇರಲಿದ್ದಾರೆ. ಬಳಿಕ ದಾವಣಗೆರೆಯಲ್ಲಿ ಪ್ರಚಾರ ಮಾಡುವ ಕುರಿತು ವೇಣುಗೋಪಾಲ್&zwnj; ಅವರೊಂದಿಗೆ ಚರ್ಚಿಸಲಿದ್ದು, ಪಕ್ಷ ಸೂಚಿಸಿದಂತೆ ನಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/by-vijayendra-bjp-bagalkot-davanagere-bypoll-prediction-gvd/articleshow-51t3nhw"/>
        </item>
        <item>
            <title><![CDATA[ಮೇ ತಿಂಗಳಲ್ಲಿ ಮತ್ತೆ ಕುರ್ಚಿಗೆ ಜಂಗಿ ನಿಕಾಲಿ ಕುಸ್ತಿ: ಕಾಂಗ್ರೆಸ್ ಕಾಲೆಳೆದ ಸಂಸದ ಬೊಮ್ಮಾಯಿ]]></title>
            <link>https://kannada.asianetnews.com/politics/basavaraj-bommai-slams-congress-karnataka-chair-fight-election-gvd/articleshow-cco7wi4</link>
            <guid isPermaLink="true">https://kannada.asianetnews.com/politics/basavaraj-bommai-slams-congress-karnataka-chair-fight-election-gvd/articleshow-cco7wi4</guid>
            <pubDate>Thu, 02 Apr 2026 00:25:30 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಕುರ್ಚಿ ಕದನಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಮೇ ತಿಂಗಳಲ್ಲಿ ಸಿಎಂ ಕುರ್ಚಿಗಾಗಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ ಶುರುವಾಗಲಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಕಾಲೆಳೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h09h6p8d77a57yjcyxg0k1ff,imgname-Who-is-Basavaraj-Bommai-1683947215117.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.02): &lt;/strong&gt;ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಕಾರಣಕ್ಕೆ ರಾಜ್ಯದಲ್ಲಿ ಕುರ್ಚಿ ಕದನಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಮೇ ತಿಂಗಳಲ್ಲಿ ಸಿಎಂ ಕುರ್ಚಿಗಾಗಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ ಶುರುವಾಗಲಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಕಾಲೆಳೆದಿದ್ದಾರೆ. ನಗರದ ಡಿಸಿಎಂ ಲೇಔಟ್&zwnj;ನ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆರ್ಯವೈಶ್ಯ ಸಮಾಜದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಮೇ ತಿಂಗಳಿನಲ್ಲಿ ಮತ್ತೆ ರಾಜ್ಯದಲ್ಲಿ ಕುರ್ಚಿಗಾಗಿ ಜಂಗಿ ನಿಖಾಲಿ ಕುಸ್ತಿ ಶುರುವಾಗಲಿದೆ. ಸದ್ಯಕ್ಕೆ ಕುರ್ಚಿ ಕುಸ್ತಿಗೆ ಉಪ ಚುನಾವಣೆ ಕಾರಣಕ್ಕೆ ವಿರಾಮ ಸಿಕ್ಕಿದೆಯಷ್ಟೇ ಎಂದರು.&lt;/p&gt;&lt;p&gt;ಒಂದು ಶಿಸ್ತಿನ ಸಮಾಜವಾದ, ಎಲ್ಲರನ್ನೂ ಪರ್ಫೆಕ್ಟ್ ಆಗಿ ಲೆಕ್ಕಾಚಾರ ಮಾಡಿ, ತೀರ್ಮಾನಿಸುವ ಸಮಾಜವೆಂದರೆ ಅದು ಆರ್ಯವೈಶ್ಯ ಸಮಾಜ. ಆರ್ಯವೈಶ್ಯ ಸಮಾಜ ಲೆಕ್ಕಚಾರ ಹಾಕಿ, ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಬೇಕಿದೆ. ಇಲ್ಲಿ ಬಿಜೆಪಿಯು 3 ದಶಕದಿಂದ ಜಯಭೇರಿ ಭಾರಿಸಿಲ್ಲ. ಈ ಉಪ ಚುನಾವಣೆಯಲ್ಲಿ ನಿಮ್ಮ ಲೆಕ್ಕಾಚಾರದಿಂದ ಜಯ ಸಿಗಲಿದೆ. ಜನಪರವಾದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬಿಜೆಪಿಗೆ ಮತ ನೀಡಿ ಎಂದು ಅವರು ಮನವಿ ಮಾಡಿದರು.&lt;/p&gt;&lt;p&gt;&lt;strong&gt;ದುಡಿಮೆಯೇ ದೊಡ್ಡಪ್ಪ: &lt;/strong&gt;ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ ದಾಸಕರಿಯಪ್ಪಗೆ ಕಣಕ್ಕಿಳಿಸಿದ್ದೇವೆ. ಶ್ರೀನಿವಾಸ ಪರವಾಗಿ ನಿಮ್ಮಲ್ಲಿ ಬಿಜೆಪಿಗೆ ಮತಯಾಚನೆ ಮಾಡುತ್ತಿದ್ದೇನೆ. ನಿಮ್ಮ ಲೆಕ್ಕ ನೀವೇ ಬರೆದು, ಕಠಿಣ ಪರಿಶ್ರಮದಿಂದ ಬದುಕನ್ನು ರೂಪಿಸಿಕೊಳ್ಳುವವರು ನೀವು. ಮೊದಲು ದುಡ್ಡೇ ದೊಡ್ಡಪ್ಪ ಅನ್ನೋ ಕಾಲ ಇತ್ತು. ಆದರೆ, ಶ್ರೀನಿವಾಸನನ್ನು ಪೂಜಿಸುವವರು ನೀವು. ನೀವು ದುಡಿಮೆಯೇ ದೊಡ್ಡಪ್ಪ ಅಂತಾ ನಂಬಿ, ಸ್ವಾಭಿಮಾನದಿಂದ ದುಡಿಯುತ್ತಿದ್ದೀರಿ. ನಿಮ್ಮ ದುಡಿಮೆಯಲ್ಲಿ ಬೇರೆಯವರಿಗೆ ಕೊಡುವುದು ಸ್ವಾಭಿಮಾನ. ನಿಮ್ಮ ಆರಾಧ್ಯದೈವ ಶ್ರೀನಿವಾಸನ ಹೆಸರಿನ ಶ್ರೀನಿವಾಸನೇ ನಮ್ಮ ಅಭ್ಯರ್ಥಿ. ನಿಮ್ಮ ಮತ ಶ್ರೀನಿವಾಸನಿಗೆ ನೀಡಿ ಎಂದು ಅವರು ತಿಳಿಸಿದರು.&lt;/p&gt;&lt;p&gt;ರಾಜ್ಯದ ಹಣೆಬರದ ಬದಲಿಸುವ ಚುನಾವಣೆ ಇದು. ಕಾಂಗ್ರೆಸ್ ಅಧಿಕಾರದ ಅಹಂಕಾರದಲ್ಲೇ ತೇಲಾಡುತ್ತಿದೆ. ಸದ್ಯ ಕಾಂಗ್ರೆಸ್&zwnj;ಗೆ ಯಾರೂ ಕಣ್ಣಿಗೆ ಕಾಣಿಸುತ್ತಿಲ್ಲ. ಯಾವ ಸಮಾಜದ ಬಗ್ಗೆಯೂ ಗೌರವವಿಲ್ಲ. ಅಹಿಂದ ಸಮಾಜಕ್ಕೆ ಅವಮಾನಿಸಿದ ಕಾಂಗ್ರೆಸ್ ಪಕ್ಷವು ಕಳೆದ ವರ್ಷ ₹410 ಕೋಟಿ ಹಿಂದುಳಿದ ವರ್ಗಗಳ ಸಮಾಜದ ಅಭಿವೃದ್ಧಿಗೆ ಇಟ್ಟಿತ್ತು. ಆ ಹಣವನ್ನು ಜಾತಿಗಣತಿಗೆ ನೀಡಿ, ಹಿಂದುಳಿದ ವರ್ಗಗಳ ನಿಗಮಗಳಿಗೆ ಸೊನ್ನೆ ಕೊಟ್ಟಿದೆ ಎಂದು ಅವರು ಹೇಳಿದರು.&lt;/p&gt;&lt;h2&gt;&lt;strong&gt;ಆಳುವ ಪಕ್ಷಕ್ಕೆ ಪಾಠ ಕಲಿಸಿ&lt;/strong&gt;&lt;/h2&gt;&lt;p&gt;ಜಾತಿಗಣತಿ ಕೇವಲ ಹಿಂದುಳಿದವರಿಗೆ ಇದೆಯಾ? ಬೇರೆ ಜಾತಿಗಣತಿ ಮಾಡಿಲ್ವಾ? ಹಿಂದುಳಿದ ವರ್ಗಕ್ಕೆ ಶೂನ್ಯ ಕೊಟ್ಟ ಸಿಎಂ ಸಿದ್ದರಾಮಯ್ಯ ಚುನಾವಣೆ ಬಂದಾಗ ಅಹಿಂದ ವರ್ಗ ನೀವು ಮುಂದೆ ಬನ್ನಿ ಎನ್ನುತ್ತಾರೆ. ಅಧಿಕಾರಕ್ಕೆ ಬಂದಾಗ ನೀವು ಹಿಂದುಳಿದವರು ಹಿಂದೆಯೇ ಉಳಿಯಿರಿ. ನಾವು ಮುಂದೆ ಹೋಗುತ್ತೇವೆ ಎನ್ನುತ್ತಾರೆ. ಇಂತಹ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನತೆ ಜಾಗೃತರಾಗಬೇಕು. ಉಪ ಚುನಾವಣೆಗಳು ಆಳುವ ಪಕ್ಷಕ್ಕೆ ಪಾಠ ಕಲಿಸುವ ಸುವರ್ಣಾವಕಾಶವಾಗಿದ್ದು, ಉಭಯ ಕ್ಷೇತ್ರಗಳ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ, ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.&lt;/p&gt;&lt;p&gt;ಆರ್ಯವೈಶ್ಯ ನಿಗಮಕ್ಕೆ ನಮ್ಮ ಸರ್ಕಾರ ಅನುದಾನ ನೀಡಿದಾಗ ಎಂಎಲ್&zwnj;ಸಿ ಅರುಣ ಅದನ್ನು ಸರಿಯಾಗಿ ಬಳಸಿ, ಶೇ.95ರಷ್ಟು ರಿಕವರಿ ಮಾಡಿ, ಯಶಸ್ವಿಯಾಗಿ ನಡೆಸಿದರು. ಕಾಂಗ್ರೆಸ್ ಸರ್ಕಾರ 2 ವರ್ಷದಲ್ಲಿ ಹಣ ನೀಡಿಲ್ಲ. ಎಸ್&zwnj;ಸಿಪಿ-ಟಿಎಸ್&zwnj;ಪಿ ಹಣ ₹40 ಸಾವಿರ ಕೋಟಿಯನ್ನು ಗ್ಯಾರಂಟಿಗೆ ನೀಡಿದೆ. ಎಲ್ಲ ಕಡೆ ಭ್ರಷ್ಟಾಚಾರವಿದೆ. ಸಿಎಂ ಮೂಗಿನಡಿಯೇ ಭ್ರಷ್ಟಾಚರ ನಡೆದಿದೆ. ಯಾರು ಲೂಟಿ ಹೆಚ್ಚು ಮಾಡುತ್ತಾರೆಂಬ ಪೈಪೋಟಿ ಕಾಂಗ್ರೆಸ್ಸಿಗರಲ್ಲಿ ನಡೆಯುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.&lt;/p&gt;&lt;p&gt;ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಸಿ.ಸಿ. ಪಾಟೀಲ, ವಿದ ಸದಸ್ಯ ಡಿ.ಎಸ್. ಅರುಣ, ಭಾರತಿ ಶೆಟ್ಟಿ, ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಯಶವಂತ ರಾವ್ ಜಾಧವ್, ಬಿ.ಜಿ.ಅಜಯಕುಮಾರ, ಡಾ.ನಾಗಪ್ರಕಾಶ ಸೇರಿದಂತೆ ಅನೇಕರು ಇದ್ದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/basavaraj-bommai-slams-congress-karnataka-chair-fight-election-gvd/articleshow-cco7wi4"/>
        </item>
        <item>
            <title><![CDATA[ಸಾಲ ಮಾಡೋದ್ರಲ್ಲಿ ದಾಖಲೆ ವೀರ ಸಿದ್ದರಾಮಯ್ಯ: ಬಸವರಾಜ ಬೊಮ್ಮಾಯಿ ವಾಗ್ದಾಳಿ]]></title>
            <link>https://kannada.asianetnews.com/politics/the-battle-for-the-cm-s-seat-will-begin-in-may-bommai-prediction-challenge-to-cm-rav/articleshow-diow7gl</link>
            <guid isPermaLink="true">https://kannada.asianetnews.com/politics/the-battle-for-the-cm-s-seat-will-begin-in-may-bommai-prediction-challenge-to-cm-rav/articleshow-diow7gl</guid>
            <pubDate>Thu, 02 Apr 2026 10:01:42 +0530</pubDate>
            <description><![CDATA[&lt;p&gt;ದಾವಣಗೆರೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮೇ ತಿಂಗಳಲ್ಲಿ ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಮತ್ತೆ ಜಂಗಿ ಕುಸ್ತಿ ಶುರುವಾಗಲಿದೆ ಎಂದು ಭವಿಷ್ಯ ನುಡಿದರು. ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ದಾಖಲೆ ವೀರ, ತಮ್ಮ ಹಾಗೂ ಸಿದ್ದರಾಮಯ್ಯ ಕಾಲದ ಸಾಲದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkwn7fcbr42yhmfjrcwvt4y9,imgname-siddaramaiah-1773709540747.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.2):&lt;/strong&gt; ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಕಾರಣಕ್ಕೆ ರಾಜ್ಯದಲ್ಲಿ ಕುರ್ಚಿ ಕದನಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಮೇ ತಿಂಗಳಲ್ಲಿ ಸಿಎಂ ಕುರ್ಚಿಗಾಗಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ ಶುರುವಾಗಲಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಕಾಲೆಳೆದಿದ್ದಾರೆ.&amp;nbsp;&lt;/p&gt;&lt;p&gt;ನಗರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ಮೇ ತಿಂಗಳಿನಲ್ಲಿ ಮತ್ತೆ ರಾಜ್ಯದಲ್ಲಿ ಕುರ್ಚಿಗಾಗಿ ಜಂಗಿ ನಿಖಾಲಿ ಕುಸ್ತಿ ಶುರುವಾಗಲಿದೆ. ಸದ್ಯಕ್ಕೆ ಕುರ್ಚಿ ಕುಸ್ತಿಗೆ ಉಪ ಚುನಾವಣೆ ಕಾರಣಕ್ಕೆ ವಿರಾಮ ಸಿಕ್ಕಿದೆಯಷ್ಟೇ ಎಂದರು. ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಿದ್ದೇವೆ. ನಿಮ್ಮ ಆರಾಧ್ಯದೈವ ಶ್ರೀನಿವಾಸನ ಹೆಸರಿನ ಶ್ರೀನಿವಾಸನೇ ನಮ್ಮ ಅಭ್ಯರ್ಥಿ. ನಿಮ್ಮ ಮತವನ್ನು ಶ್ರೀನಿವಾಸನಿಗೆ ನೀಡಿ ಎಂದು ಅವರು ತಿಳಿಸಿದರು.&lt;/p&gt;&lt;h2&gt;ಸಾಲ ಮಾಡುವುದರಲ್ಲಿ ದಾಖಲೆ ವೀರ ಸಿದ್ದರಾಮಯ್ಯ:&lt;/h2&gt;&lt;p&gt;ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಸಾಲ ಮಾಡುವುದರಲ್ಲಿ ದಾಖಲೆಯ ವೀರನಾದ ಸಿದ್ದರಾಮಯ್ಯ, ಯಾರ ಅವಧಿಯಲ್ಲಿ ಎಷ್ಟು ಸಾಲ ಮಾಡಲಾಗಿದೆಯೆಂಬ ಬಗ್ಗೆ ಎಲ್ಲ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.&lt;/p&gt;&lt;p&gt;ವಾಸ್ತವಾಂಶಗಳನ್ನು ಮರೆಮಾಚಿ, ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು. ನಮ್ಮ ಕಾಲದಲ್ಲಿ ಎಷ್ಟು ಸಾಲ ಮಾಡಿದ್ದೆವು, ಸಿದ್ದರಾಮಯ್ಯ ಕಾಲದಲ್ಲಿ ಎಷ್ಟು ಸಾಲ ಮಾಡಿದ್ದಾರೆಂಬ ಬಗ್ಗೆ ದಾಖಲೆಗಳನ್ನು ಬಹಿರಂಗ ಮಾಡಲಿ. ನಮ್ಮ ಕಾಲದಲ್ಲಿ ₹50 ಸಾವಿರ ಕೋಟಿ ಸಾಲ ಮಾಡಿದ್ದರೆ, ಸಿದ್ದರಾಮಯ್ಯ ಅವಧಿಯಲ್ಲಿ ₹1.40 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸ್ವತಃ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸಿದ್ದಾರೆ ಎಂದು ಅವರು ಟೀಕಿಸಿದರು.&lt;/p&gt;&lt;p&gt;ಉಪ ಚುನಾವಣೆಗಳು ನಡೆಯುತ್ತಿವೆಯೆಂಬ ಕಾರಣಕ್ಕೆ ಈಗ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು. ವಾಸ್ತವಾಂಶಗಳನ್ನು ಮರೆಮಾಚಿ, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಸ್ಥಿತಿಗೆ ಸಿದ್ದರಾಮಯ್ಯ ತಲುಪಿದ್ದಾರೆ. ವಾಸ್ತವಾಂಶ ಏನಿದೆ ಎಂಬುದರ ಮೇಲೆ ಮಾತನಾಡಬೇಕು ಎಂದು ಸಿಎಂಗೆ ಸಲಹೆ ನೀಡಿದರು.&lt;/p&gt;&lt;p&gt;ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಸಿದ್ದರಾಮಯ್ಯ ಉತ್ತರ ಕೊಟ್ಟಿದ್ದಾರೆ. ಆರ್ಥಿಕವಾಗಿ ಸುಭದ್ರವಾಗಿದ್ದರೆ ₹15 ಸಾವಿರ ಕೋಟಿಯನ್ನು ಯಾಕೆ ಖರ್ಚು ಮಾಡಿಲ್ಲ?. ಸುಳ್ಳುಗಳನ್ನೇ ನೂರು ಸಲ ಹೇಳಿ, ಅದನ್ನು ಸತ್ಯ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/the-battle-for-the-cm-s-seat-will-begin-in-may-bommai-prediction-challenge-to-cm-rav/articleshow-diow7gl"/>
        </item>
        <item>
            <title><![CDATA[Davanagere Bypolls: ಸವಾಲು ಸ್ವೀಕರಿಸಿ ದಾವಣಗೆರೆಗೆ ಬಂದ ಪ್ರದೀಪ್ ಈಶ್ವರ್; ಬಿಜೆಪಿ ವಿರುದ್ಧ ವಾಗ್ದಾಳಿ]]></title>
            <link>https://kannada.asianetnews.com/politics/congress-mla-pradeep-eshwar-accepts-challenge-chikkaballapur-mla-campaigns-in-davanagere-against-bjp-rav/articleshow-gggs5dn</link>
            <guid isPermaLink="true">https://kannada.asianetnews.com/politics/congress-mla-pradeep-eshwar-accepts-challenge-chikkaballapur-mla-campaigns-in-davanagere-against-bjp-rav/articleshow-gggs5dn</guid>
            <pubDate>Sun, 29 Mar 2026 08:36:34 +0530</pubDate>
            <description><![CDATA[ಬಿಜೆಪಿ ಮುಖಂಡರ ಸವಾಲು ಸ್ವೀಕರಿಸಿ ದಾವಣಗೆರೆಗೆ ಆಗಮಿಸಿದ ಶಾಸಕ ಪ್ರದೀಪ್ ಈಶ್ವರ್, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊರಕೆ, ಚಪ್ಪಲಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಎರಡೂ ಪಕ್ಷಗಳ ನಡುವೆ ಘೋಷಣೆಗಳ ಸಮರ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kmvrstg49jbsw4kdsbmqfyq1,imgname----------------------80--1774753475076.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮಾ.29): &lt;/strong&gt;ತಾಕತ್ತಿದ್ದರೆ ದಾವಣಗೆರೆಗೆ ಬಾ ಎಂಬ ಬಿಜೆಪಿ ಮುಖಂಡ ಬಿ.ಜಿ.ಅಜಯಕುಮಾರ್&zwnj; ಸವಾಲನ್ನು ಸ್ವೀಕರಿಸಿ ಶನಿವಾರ ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ್&zwnj; ಅವರು ತಮ್ಮ ಪಕ್ಷದ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ಪ್ರಚಾರ ಮಾಡಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಶಾಸಕರ ವಿರುದ್ಧ ಕಿಡಿಕಾರಿದ್ದು, ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.&lt;/p&gt;&lt;h2&gt;ಪೊರಕೆ ಹಿಡಿದು ಚಪ್ಪಲಿ ತೋರಿಸಿದ ಬಿಜೆಪಿ&lt;/h2&gt;&lt;p&gt;ನಗರದ ಕೆ.ಬಿ.ಬಡಾವಣೆಯಲ್ಲಿ ಶನಿವಾರ ಬಿಎಂಡಬ್ಲ್ಯು ಕಾರಿನ ಮೇಲೆ ನಿಂತ ಪ್ರದೀಪ ಈಶ್ವರ ಕಾಂಗ್ರೆಸ್ ಬಾವುಟ ಹಿಡಿದು, ತೊಡೆತಟ್ಟುತ್ತಾ, ತಲೆಗೂದಲನ್ನು ಸವರಿಕೊಂಡು ಬಿಜೆಪಿಗರನ್ನು ಕೆಣಕಿದರು. ಈ ವೇಳೆ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಕೈಯಲ್ಲಿ ಪೊರಕೆ ಹಿಡಿದು ತೋರಿಸಿ ಆಕ್ರೋಶ ಹೊರಹಾಕಿದರು.&lt;/p&gt;&lt;h3&gt;ಬಿಜೆಪಿ-ಕಾಂಗ್ರೆಸ್ ಮುಖಾಮುಖಿ:ರಣರಂಗ&lt;/h3&gt;&lt;p&gt;ಬಡಾವಣೆಯ ಬಿಜೆಪಿ ಕಚೇರಿ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಗುಂಪುಗಳು ಮುಖಾಮುಖಿಯಾಗಿ, ಪರಸ್ಪರ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಕಾರಿನ ಮೇಲೆ ನಿಂತಿದ್ದ ಶಾಸಕನಿಗೆ ಬಿಜೆಪಿಯವರು ನಿಂದಿಸಿದರು. ಎರಡೂ ಕಡೆಯವರು ಪರಸ್ಪರರ ಕೈ-ಕೈ ಮಿಲಾಯಿಸುವಂತೆ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಹರಸಾಹಸ ಸಮಾಧಾನ ಪಡಿಸಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/congress-mla-pradeep-eshwar-accepts-challenge-chikkaballapur-mla-campaigns-in-davanagere-against-bjp-rav/articleshow-gggs5dn"/>
        </item>
        <item>
            <title><![CDATA[ಗ್ಯಾರಂಟಿ ನಿಲ್ಲಿಸಿದ್ರೆ ಸಿದ್ದರಾಮಯ್ಯನವರೇ ನಿಲ್ಲಿಸಬೇಕು: ಮಾಜಿ ಸಚಿವ ಬಿ.ಶ್ರೀರಾಮುಲು]]></title>
            <link>https://kannada.asianetnews.com/politics/sriramulu-slams-siddaramaiah-guarantee-politics-bypoll-gvd/articleshow-h7noeed</link>
            <guid isPermaLink="true">https://kannada.asianetnews.com/politics/sriramulu-slams-siddaramaiah-guarantee-politics-bypoll-gvd/articleshow-h7noeed</guid>
            <pubDate>Thu, 02 Apr 2026 23:48:41 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದು ಕಾಂಗ್ರೆಸ್ಸೇ ಹೊರತು ಬಿಜೆಪಿ ಸರ್ಕಾರವಲ್ಲ. ಗ್ಯಾರಂಟಿಗಳನ್ನು ನಿಲ್ಲಿಸಿದರೆ ಸಿದ್ದರಾಮಯ್ಯನವರೇ ನಿಲ್ಲಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k79trzrtmne3aemcfth8n1va,imgname-fefe-1760192921369.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.02): &lt;/strong&gt;ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಗ್ಯಾರಂಟಿ ನಿಲ್ಲಿಸುತ್ತಾರೆಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದು ಕಾಂಗ್ರೆಸ್ಸೇ ಹೊರತು ಬಿಜೆಪಿ ಸರ್ಕಾರವಲ್ಲ. ಗ್ಯಾರಂಟಿಗಳನ್ನು ನಿಲ್ಲಿಸಿದರೆ ಸಿದ್ದರಾಮಯ್ಯನವರೇ ನಿಲ್ಲಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ಸಿಗೆ ಸೋಲಿನ ಭೀತಿ ಮತ್ತು ಭಯ ಆರಂಭವಾಗಿದೆ.&lt;/p&gt;&lt;p&gt;ಸಿದ್ದರಾಮಯ್ಯನವರ ಸರ್ಕಾರ ಹುಟ್ಟಿದ್ದೇ ಸುಳ್ಳಿನಿಂತ. ಅದಕ್ಕೆ ಈಗಲೂ ಸಿದ್ದರಾಮಯ್ಯ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದರು. ಕಾಂಗ್ರೆಸ್ಸಿನವರು ಮೊದಲಿನಿಂದಲೇ ಜನರು ದಡ್ಡರು ಅಂತಾ ತಿಳಿದಿದ್ದಾರೆ. ಆದರೆ, ಈಗ ಎರಡೂ ಕಡೆ ಸೋಲುತ್ತೇವೆ ಎಂಬುದನ್ನು ಸ್ವತಃ ಕಾಂಗ್ರೆಸ್ಸಿಗರೇ ಮನವರಿಕೆ ಮಾಡಿಕೊಂಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಪರವಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಒಂದಾಗಿರುವುದೂ ಕಾಂಗ್ರೆಸ್ಸಿಗರಲ್ಲಿ ಸೋಲಿನ ಭೀತಿಯನ್ನು ಹುಟ್ಟುಹಾಕಿದೆ ಎಂದು ಟೀಕಿಸಿದರು.&lt;/p&gt;&lt;p&gt;ಬಜೆಟ್ ಆದ ನಂತರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರಗೆ ಕಂಡರೂ ಭಯ ಶುರುವಾಗಿದೆ. ಉಪ ಚುನಾವಣೆ ಘೋಷಣೆಯಾದ ನಂತರ ಬಿಜೆಪಿ ಕಂಡರೂ ಭಯಪಡುತ್ತಿದ್ದಾರೆ. 2018ರ ಚುನಾವಣೆ ವೇಳೆ ದಲಿತ ನಾಯಕ ಡಾ. ಜಿ.ಪರಮೇಶ್ವರರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಚರ್ಚೆಯಾಗಿತ್ತು. ಆಗ ಸಿದ್ದರಾಮಯ್ಯನವರು ಡಾ.ಪರಮೇಶ್ವರರನ್ನು ಚುನಾವಣೆಯಲ್ಲಿ ಸೋಲಿಸಿದರು. ಈಗ ಕಾಲ ಬದಲಾಗಿದ್ದು, ಅಹಿಂದ ಹೆಸರು ಹೇಳಿಕೊಂಡು ತಮ್ಮ ಬೇಳೆಯನ್ನು ಸಿದ್ದರಾಮಯ್ಯ ಬೇಯಿಸಿಕೊಳ್ಳುತ್ತಿದ್ದಾರೆ. ಅಧಿಕಾರ ಹಂಚಿಕೆ ಮಾಡುವಾಗಲಂತೂ ಅಹಿಂದ ವರ್ಗ ನೆನಪಾಗಲಿಲ್ಲ. ಆಗ ತಮಗೆ ಬೇಕಾದವರಿಗೆ ಮಾತ್ರ ಅಧಿಕಾರ ನೀಡಿದರು ಎಂದು ಅವರು ಕುಟುಕಿದರು.&lt;/p&gt;&lt;p&gt;ಬಿಜೆಪಿಯನ್ನು ಸಿದ್ದರಾಮಯ್ಯ ಕಳ್ಳ ಎತ್ತುಗಳಿಗೆ ಹೋಲಿಕೆ ಮಾಡಿದ್ದಾರೆ. ಗೋಮಾತೆಗೆ ಹೋಲಿಸಿದ್ದಕ್ಕೆ ಸಿಎಂಗೆ ಧನ್ಯವಾದಗಳನ್ನು ಹೇಳುತ್ತೇನೆ. ದನಕರುಗಳು ಮೇವು ಸಿಕ್ಕರೆ ಎಷ್ಟು ಬೇಕೋ ಅಷ್ಟನ್ನೇ ಮಾತ್ರ ತಿಂದು, ಮರಳಿ ಮನೆಯ ಕೊಟ್ಟಿಗೆಗೆ ಹೋಗುತ್ತವೆ. ಆದರೆ, ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳು ರಾಜ್ಯದ ಖಜಾನೆಯನ್ನೇ ಲೂಟಿ ಮಾಡುತ್ತಿದ್ದಾರೆ. ಇನ್ನೂ 5ರಿಂದ 10 ತಲೆಮಾರಿಗಾಗುವಷ್ಟು ಹಣ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಬೊಕ್ಕಸವನ್ನೇ ಕಾಂಗ್ರೆಸ್ಸಿಗರು ಖಾಲಿ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಪರಿಶಿಷ್ಟರ ಅಭಿವೃದ್ಧಿ ನಿಗಮ ಹೀಗೆ ಎಲ್ಲಾ ಕಡೆ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಹೀಗೆ ಲೂಟಿ ಮಾಡಿದ ಹಣವನ್ನು ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಗೆ ಬಳಸಿದರು ಎಂದು ಅವರು ಆರೋಪಿಸಿದರು.&lt;/p&gt;&lt;h2&gt;&lt;strong&gt;ಹೆಗ್ಗಣಗಳೇ ಇವೆ&lt;/strong&gt;&lt;/h2&gt;&lt;p&gt;ನಾವು ಬಿಜೆಪಿಯವರು ಎತ್ತುಗಳಾದರೆ, ಕಾಂಗ್ರೆಸ್ಸಿನವರು ಹೆಗ್ಗಣಗಳಿದ್ದಂತೆ. ಸಿದ್ದರಾಮಯ್ಯು ಮತ್ತವರ ಸುತ್ತಲೂ ದೊಡ್ಡ ದೊಡ್ಡ ಹೆಗ್ಗಣಗಳೇ ಇವೆ. ಇಂತಹವರು ಈಗಾಗಲೇ ಜನರ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಬೈಯ್ಯುವುದನ್ನು ಬಿಟ್ಟರೆ, ಬೇರೇನೂ ಗೊತ್ತಿಲ್ಲ. ಯಾವುದೇ ಹೊಸ ವಿಚಾರವೂ ಇಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರ ಏನೂ ಮಾಡಿಲ್ಲವೆಂಬುದು ರಾಜ್ಯದ ಪ್ರತಿಯೊಬ್ಬರಿಗೂ ಗೊತ್ತಿದೆ.&lt;/p&gt;&lt;p&gt;ಸದ್ಯ ಕಾಂಗ್ರೆಸ್ ಸರ್ಕಾರ ಐ.ಸಿ.ಯು.ನಲ್ಲಿದೆ. ಸುಳ್ಳಿನ ವೆಂಟಿಲೇಟರ್ ಮೇಲೆ ಈ ಸರ್ಕಾರದ ಜೀವ ನಿಂತಿದೆ. ಸುಳ್ಳಿನ ವೆಂಟಿಲೇಟರ್ ತೆಗೆದರೆ, ಕಾಂಗ್ರೆಸ್ ಸರ್ಕಾರದ ಕತೆ ಮುಗಿದಂತೆ ಎಂದು ಶ್ರೀರಾಮುಲು ಭವಿಷ್ಯ ನುಡಿದರು. ಹರಿಹರ ಶಾಸಕ ಬಿ.ಪಿ.ಹರೀಶ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಂ.ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ಆರ್.ಎಲ್.ಶಿವಪ್ರಕಾಶ, ಶಿವರಾಜ ಪಾಟೀಲ, ಬಿ.ಎಸ್. ಜಗದೀಶ, ಎಚ್.ಪಿ. ವಿಶ್ವಾಸ ಇತರರು ಇದ್ದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/sriramulu-slams-siddaramaiah-guarantee-politics-bypoll-gvd/articleshow-h7noeed"/>
        </item>
        <item>
            <title><![CDATA[ನಾನು ಸಾಲರಾಮಯ್ಯ ಅಲ್ಲ, ನಾನು ಅನ್ನದ ರಾಮಯ್ಯ; ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು]]></title>
            <link>https://kannada.asianetnews.com/politics/cm-siddaramaiah-hits-back-at-bjp-over-salaramayya-jibe-i-provide-food-not-just-debt-rav/articleshow-igsyc07</link>
            <guid isPermaLink="true">https://kannada.asianetnews.com/politics/cm-siddaramaiah-hits-back-at-bjp-over-salaramayya-jibe-i-provide-food-not-just-debt-rav/articleshow-igsyc07</guid>
            <pubDate>Thu, 02 Apr 2026 06:38:39 +0530</pubDate>
            <description><![CDATA[&lt;p&gt;ದಾವಣಗೆರೆಯಲ್ಲಿ ನಡೆದ ರೋಡ್ ಶೋನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು 'ಸಾಲದ ರಾಮಯ್ಯ' ಎಂದು ಕರೆಯುವ ಬಿಜೆಪಿಗೆ 'ಅನ್ನದ ರಾಮಯ್ಯ' ಎಂದು ತಿರುಗೇಟು ನೀಡಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಮತ್ತು ಗ್ಯಾರಂಟಿ ಯೋಜನೆಗಳು ಬಡವರ ಪರವಾಗಿವೆ ಎಂದು ಸಮರ್ಥಿಸಿಕೊಂಡರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn5vcb0edp44wcbj3db1fvsm,imgname----------------------34--1775091723277.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.2): &lt;/strong&gt;&lsquo;ನಾನು ಸಾಲದ ರಾಮಯ್ಯ ಅಲ್ಲ. ಅನ್ನದ ರಾಮಯ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ, ಬಿ.ವೈ.ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ.&lt;/p&gt;&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ರೋಡ್ ಶೋ ನಡೆಸಿ ಅವರು ಮಾತನಾಡಿದರು. ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆಯೇ ಇಲ್ಲ. ನಾವು ಬಡವರ ಪರ ಇರುವವರು. ಎಲ್ಲ ವರ್ಗದ ಜನರ ಪರ ನಿಲ್ಲುವವರು ಎಂದರು.&lt;/p&gt;&lt;p&gt;ನಾನು ಅನ್ನದ ರಾಮಯ್ಯನೇ ಹೊರತು, ಸಾಲದ ರಾಮಯ್ಯ ಅಲ್ಲ. ಬಿಜೆಪಿ ಸರ್ಕಾರ ಮಾರ್ಚ್ 2023ರವರೆಗೆ ₹5,30,000 ಕೋಟಿಗೂ ಅಧಿಕ ಸಾಲ ಮಾಡಿದ್ದರೆ, ನಮ್ಮ ಸರ್ಕಾರ 4 ವರ್ಷದಲ್ಲಿ ₹2.56 ಲಕ್ಷ ಕೋಟಿ ಸಾಲ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ 12 ವರ್ಷಗಳ ಅಧಿಕಾರದ ಅವಧಿಯಲ್ಲಿ ₹165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ದೇಶದ ಮೇಲೆ ₹53.11 ಲಕ್ಷ ಕೋಟಿ ಸಾಲ ಇತ್ತು. ಈಗ ₹218 ಲಕ್ಷ ಕೋಟಿಯಷ್ಟು ಸಾಲ ಇದೆ ಎಂದರು.&lt;/p&gt;&lt;p&gt;ಮೋದಿ ಆಳ್ವಿಕೆಯಲ್ಲಿನ ರುಪಾಯಿ ಮೌಲ್ಯ ಕುಸಿತದ ಬಗ್ಗೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ. ಚುನಾವಣೆ ಪೂರ್ವದಲ್ಲಿ ನರೇಂದ್ರ ಮೋದಿ ಹೇಳಿದ್ದ ಅಚ್ಛೇ ದಿನಗಳು ಇಂದಿಗೂ ಬರಲೇ ಇಲ್ಲ. ರೈತರ ಆದಾಯ ದ್ವಿಗುಣ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಖಾತೆಗೆ ₹15 ಲಕ್ಷ ಹಣ ಅಂತೆಲ್ಲಾ ಭರವಸೆಗಳನ್ನು ನೀಡಿದ್ದರು. ಆದರೆ, ಅಂತಹ ಭರವಸೆಗಳನ್ನು ಇಂದಿಗೂ ಮೋದಿ ಸರ್ಕಾರ ಈಡೇರಿಸಿಲ್ಲ. ಆದರೆ, ಇದನ್ನು ಬಿಜೆಪಿ ನಾಯಕರು ಹೇಳುವುದಿಲ್ಲ. ರಾಜ್ಯದ ಬಿಜೆಪಿ ನಾಯಕರು ಮೋದಿ ಮುಂದೆ ನಿಲ್ಲಲು ಹೆದರುತ್ತಾರೆ. ಮೋದಿ ಮುಂದೆ ಇವರೆಲ್ಲಾ ಗಡಗಡ ಅಂತಾ ನಡುಗುತ್ತಾರೆ. ಬಿಜೆಪಿಯವರು ಸದನದ ಒಳಗಡೆ ಮಾತನಾಡುವುದಿಲ್ಲ. ಹೊರಗಡೆ ಮಾತನಾಡುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.&lt;/p&gt;&lt;p&gt;ಅನ್ಯ ರಾಜ್ಯಗಳ ಬೆಲೆ ಏರಿಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಗಣನೀಯವಾಗಿ ಬೆಲೆಗಳು ಕಡಿಮೆ ಇವೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಹಣಕಾಸಿನ ಸ್ಥಿತಿ ಸುಭದ್ರವಾಗಿದೆ. ದೇಶದ ಜಿಡಿಪಿ 7.14ರಷ್ಟು ಇದ್ದರೆ, ರಾಜ್ಯದ ಜಿಡಿಪಿ 8.1ರಷ್ಟು ಇದೆ. ನಮ್ಮ ಬಜೆಟ್ ಗಾತ್ರ ಕಳೆದ ವರ್ಷಕ್ಕಿಂತ ಈ ಸಲ 9.4ರಷ್ಟು ಹೆಚ್ಚಾಗಿದೆ. ಕೇಂದ್ರದ ಬಜೆಟ್&zwnj;ಗಿಂತ ಕರ್ನಾಟಕ ಬಜೆಟ್ ಉತ್ತಮವಾಗಿದೆ. ರಾಜ್ಯವು ಜಿಎಸ್&zwnj;ಟಿ ಸಂಗ್ರಹಣೆಯಲ್ಲಿ ದೇಶಕ್ಕೆ 2ನೇ ಸ್ಥಾನದಲ್ಲಿದೆ. ಬಂಡವಾಳ ಹೂಡಿಕೆಯಲ್ಲೂ ನಮ್ಮ ರಾಜ್ಯ 2ನೇ ಸ್ಥಾನದಲ್ಲಿದೆ. ಹೀಗಿದ್ದರೂ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಬಿಜೆಪಿಯವರು ಕೇವಲ ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಟುಕಿದರು.&lt;/p&gt;&lt;p&gt;ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಮತ್ತು ದೇವೇಗೌಡರ ಕುಟುಂಬಗಳು ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಯಡಿಯೂರಪ್ಪ, ದೇವೇಗೌಡರ ಕುಟುಂಬ ವರ್ಗದವರು ರಾಜಕೀಯದಲ್ಲಿ ಸಕ್ರಿಯವಾಗಿ ಇರುವುದನ್ನು ಕಾಣಬಹುದು ಎಂದರು.&lt;/p&gt;&lt;h2&gt;ಎರಡು ಕ್ಷೇತ್ರದಲ್ಲೂಕಾಂಗ್ರೆಸ್ ಗೆಲುವು&lt;/h2&gt;&lt;p&gt;ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುವ ಸಂಪೂರ್ಣ ವಿಶ್ವಾಸವಿದೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ಸಿನ ನೆರವಿಗೆ ಬಂದಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.&lt;/p&gt;&lt;p&gt;ಬಿಜೆಪಿಯವರು ಬಡವರ ಯೋಜನೆಗಳಾದ ಗ್ಯಾರಂಟಿಗಳನ್ನು ವಿರೋಧಿಸುತ್ತಾರೆ. ಒಟ್ಟು ಗ್ಯಾರಂಟಿಗೆ ಸುಮಾರು 1,31,000 ಕೋಟಿ ರು.ಗಳನ್ನು ನಾವು ವ್ಯಯ ಮಾಡಿ ಜನ ಸಾಮಾನ್ಯರ ಬದುಕಿಗೆ ಅರ್ಪಿಸಿದ್ದೇವೆ ಎಂದು ಅವರು ಹೇಳಿದರು.&lt;/p&gt;&lt;p&gt;ಗ್ಯಾರಂಟಿಗಳ ಮೂಲಕ ಸಮಾಜದ ವಿವಿಧ ಜಾತಿ, ಧರ್ಮ, ಭಾಷೆಗಳ ಬಡವರಿಗೆ, ಮಧ್ಯವರ್ತಿಗಳ ಹಾವಳಿಯಿಲ್ಲದೇ, ನೇರವಾಗಿ ಅವರ ಖಾತೆಗೆ ಆರ್ಥಿಕ ಲಾಭ ನೀಡಲಾಗುತ್ತಿದೆ. ಬಿಜೆಪಿಯವರು ಗ್ಯಾರಂಟಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತದೆ, ಖಜಾನೆ ಖಾಲಿ ಆಗುತ್ತದೆಂದು ಟೀಕಿಸುತ್ತಾರೆ. ಆದರೆ, ಜನರ ಖಾತೆಗೆ ನೇರ ಹಣ ತಲುಪುದರಿಂದ ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲ ಎಂದು ಅವರು ಹೇಳಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/cm-siddaramaiah-hits-back-at-bjp-over-salaramayya-jibe-i-provide-food-not-just-debt-rav/articleshow-igsyc07"/>
        </item>
        <item>
            <title><![CDATA[ಅಲ್ಪಸಂಖ್ಯಾತರ ಬಗ್ಗೆ ವಿಜಯೇಂದ್ರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಸೋಜಿಗ: ಬಿ.ಕೆ.ಹರಿಪ್ರಸಾದ್]]></title>
            <link>https://kannada.asianetnews.com/politics/bk-hariprasad-slams-bjp-davanagere-congress-development-karnataka-gvd/articleshow-iwk532r</link>
            <guid isPermaLink="true">https://kannada.asianetnews.com/politics/bk-hariprasad-slams-bjp-davanagere-congress-development-karnataka-gvd/articleshow-iwk532r</guid>
            <pubDate>Tue, 07 Apr 2026 13:04:20 +0530</pubDate>
            <description><![CDATA[&lt;p&gt;ವಿಜಯೇಂದ್ರ ಅವರು ಇಲ್ಲಿ ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಸೋಜಿಗ. ಇವರ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಟ್ಟಿದ್ದಾರೆ ಎನ್ನುವುದು ಯಾರಾದರೂ ಮರೆಯಲು ಸಾಧ್ಯವೇ? ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jt0hfkf92dmeyzr2xkmjh5vm,imgname-bk-hariprasad-1745922543081.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.07):&lt;/strong&gt; ಸಮಾಜವಾದಿ&zwnj; ಮತ್ತು ಕಮ್ಯೂನಿಸ್ಟ್&zwnj; ಪಕ್ಷಗಳು ಇಲ್ಲಿ ಕಾಂಗ್ರೆಸ್ ಅನ್ನು ಬೆಳೆಸಿವೆ. ಕಾಂಗ್ರೆಸ್ ಅಂತೂ ಈ&zwnj; ನಗರವನ್ನು ಅದ್ಭುತವಾಗಿ ಬೆಳೆಸಿದೆ. ಇಲ್ಲಿನ&zwnj; ಕಾಂಕ್ರೀಟ್ ರಸ್ತೆಗಳಂತೂ ಬೆಂಗಳೂರಿನಲ್ಲೂ ಇಲ್ಲ. ಆದರೆ ಭಾರತೀಯ ಜನತಾ ಪಾರ್ಟಿಯವರು ಇಲ್ಲಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.&lt;/p&gt;&lt;p&gt;ಕಾಂಗ್ರೆಸ್ ಕ್ಯಾಂಪ್ ಆಫೀಸ್&zwnj;ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಲ್ಲಿ ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಸೋಜಿಗ. ಇವರ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಟ್ಟಿದ್ದಾರೆ ಎನ್ನುವುದು ಯಾರಾದರೂ ಮರೆಯಲು ಸಾಧ್ಯವೇ? ದೇಶದಲ್ಲಿರುವ ಇಂಧನ ಸಮಸ್ಯೆ, ವಾಣಿಜ್ಯ ಅನಿಲ ಸಮಸ್ಯೆಗಳು, ಬೆಲೆ ಏರಿಕೆಯ ಬಗ್ಗೆ ಮಾತಾಡೋದು ಬಿಟ್ಟು&zwnj; ನಮ್ಮ ಪ್ರಧಾನಿಯವರು ಚಲನಚಿತ್ರಗಳ ಬಗ್ಗೆ ವಿಮರ್ಶೆ ಮಾಡ್ತಾ ಕೂತಿದ್ದಾರೆ. ಇಂತಹ ದುರ್ಗತಿ ಪ್ರಧಾನಿಯವರಿಗೆ ಬರಬಾರದಿತ್ತು. ಜನರ ಕಷ್ಟಗಳಿಗೆ ಪರಿಹಾರವೇನು ಎಂಬ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ ಕಾಳಜಿಯಿಲ್ಲ ಎಂದರು.&lt;/p&gt;&lt;p&gt;ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ರಾಜ್ಯವು ಶಾಂತಿ ಸುಭಿಕ್ಷೆಯಿಂದ ಕೂಡಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ತಂದು ದೇಶದ ಜನರ ಹಸಿವು ತಣಿಸಿದ್ದು ಕಾಂಗ್ರೆಸ್ ಸರ್ಕಾರ. ಆದರೆ, ಭಾಜಪದ ಮಾಸ್ಟರ್ ಸ್ಟ್ರೋಕ್ ಏನು? ಜನರನ್ನು ಸರತಿಯ ಸಾಲಿನಲ್ಲಿ ನಿಲ್ಲಿಸಿ ಅವರನ್ನು ಹೈರಾಣಾಗಿಸುವುದೇ? ನಾವು ಮಾಡಿರುವ ಯೋಜನೆಗಳ ಹೆಸರು ಬದಲಾಯಿಸಿದ್ದು ಮಾತ್ರ ಇವರ ಸಾಧನೆ ಯಾಗಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಡೋಲಾಯಮಾನ ಸ್ಥಿತಿ&lt;/strong&gt;&lt;/h2&gt;&lt;p&gt;ಭಾರತದ ವಿದೇಶಾಂಗ ನೀತಿಯಂತೂ ಭಾ.ಜ.ಪ ಕಾಲದಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ನಮ್ಮ&zwnj; ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಅಲಿಪ್ತ ನೀತಿಯನ್ನು ರೂಪಿಸಿದ ಪ್ರಧಾನ&zwnj; ವ್ಯಕ್ತಿಯಾಗಿದ್ದರು. ಆದರೆ ಪ್ರಸಕ್ತ ವಿದೇಶಾಂಗ ನೀತಿ ಡೋಲಾಯಮಾನ ಸ್ಥಿತಿಯಲ್ಲಿದೆ. ನಮ್ಮ ತೆರಿಗೆ ಹಣದ ಬಗ್ಗೆ ಕೂಡಾ ಬಿಜೆಪಿಯರಿಗೆ ಕಾಳಜಿ ಇಲ್ಲ. ನಿರ್ಮಲಾ ಸೀತಾರಾಮ ನ್ ಅವರಂತೂ ನೀರುಳ್ಳಿ ಬೆಲೆ ಏರಿಕೆ ಬಗ್ಗೆ ಮಾತಾಡಿದರೆ ನಾನು ನೀರುಳ್ಳಿ ತಿನ್ನಲ್ಲ ಎನ್ನುವಂತಹಾ ಬುದ್ಧಿವಂತೆ. ಇಂತಹವರ ಬಗ್ಗೆ ಏನು ಹೇಳಲು ಸಾಧ್ಯ ಎಂದರು.&lt;/p&gt;&lt;p&gt;ಉದ್ಯೋಗದ ಬಗ್ಗೆ ಕೇಳಿದರೆ ಮಿಲೆನಿಯಮ್ ಜನತೆ ಸ್ವಯಂ ಉದ್ಯೋಗದ ಕಡೆ ಆಕರ್ಷಿತರಾಗಿದ್ದಾರೆ ಅಂತ ಹೇಳ್ತಾರೆ. 26 ಸಾರ್ವಜನಿಕ ಜನರನ್ನು ಸಾರ್ವಜನಿಕ&zwnj; ಉದ್ದಿಮೆಗಳನ್ನು ಮಾರಾಟ ಮಾಡಿದ ಕೀರ್ತಿ ಅವರದು. ಇಂತಹವರಿಂದ ಯಾವ ರೀತಿಯ ಬೆಳವಣಿಗೆ ಸಾಧ್ಯ ಎಂದು ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಪತ್ರಿಕಾಗೋಷ್ಠಿಯಲ್ಲಿ ಪೌರಾಡಳಿತ ಮತ್ತು ನಗರ ಅಭಿವೃದ್ಧಿ ಸಚಿವ ರಹೀಮ್ ಖಾನ್, ಬಿ.ಎಂ.ಟಿ.ಸಿ. ಅಧ್ಯಕ್ಷರಾದ ವಿ.ಎಸ್. ಆರಾಧ್ಯ, ದಾವಣಗೆರೆ ಜಿಲ್ಲಾಧ್ಯಕ್ಷ ಎಚ್&zwnj;.ಬಿ. ಮಂಜಪ್ಪ, ವಿಧಾನ&zwnj; ಪರಿಷತ್ ಸದಸ್ಯ ನಾಗರಾಜ್ ಯಾದವ್, ಹಿರಿಯ ವಕ್ತಾರ ರಾಮಚಂದ್ರಪ್ಪ, ಮಾಧ್ಯಮ ಸಂಯೋಜಕ ಡಿ.ಬಸವರಾಜ್, ಮಾಧ್ಯಮ ಉಸ್ತುವಾರಿಗಳಾದ ಸ್ವಾತಿ ಚಂದ್ರಶೇಖರ್ ಮತ್ತು ಯು.ಟಿ.ಫರ್ಝಾನ ಹಾಗೂ ಇತರ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/bk-hariprasad-slams-bjp-davanagere-congress-development-karnataka-gvd/articleshow-iwk532r"/>
        </item>
        <item>
            <title><![CDATA[ವಿಶ್ವಾಸದ್ರೋಹಕ್ಕೆ ಮತ್ತೊಂದು ಹೆಸ್ರೇ ಸಿದ್ದು: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಎಸ್‌ವೈ ವಾಗ್ದಾಳಿ]]></title>
            <link>https://kannada.asianetnews.com/politics/bs-yediyurappa-attack-congress-government-development-issue-gvd/articleshow-lc7poot</link>
            <guid isPermaLink="true">https://kannada.asianetnews.com/politics/bs-yediyurappa-attack-congress-government-development-issue-gvd/articleshow-lc7poot</guid>
            <pubDate>Wed, 01 Apr 2026 22:25:08 +0530</pubDate>
            <description><![CDATA[&lt;p&gt;ಇಡೀ ರಾಜ್ಯದಲ್ಲಿ ಅಭಿವೃದ್ಧಿಯೇ ಸ್ಥಗಿತಗೊಂಡಿದೆ. ಭ್ರಷ್ಟಾಚಾರ ಮಿತಿ ಮೀರಿರುವುದೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h9s9wyc1sprab7qnfr1rddhk,imgname-bs.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.01): &lt;/strong&gt;ನಂಬಿಕೆ ದ್ರೋಹ, ವಿಶ್ವಾಸದ್ರೋಹಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಸಿದ್ದು-ಡಿಕೆಶಿ ನಡುವಿನ ಕುರ್ಚಿ ಕಿತ್ತಾಟ, ಗ್ಯಾರಂಟಿಗಳ ನೆಪದಲ್ಲಿ ಇಡೀ ರಾಜ್ಯದಲ್ಲಿ ಅಭಿವೃದ್ಧಿಯೇ ಸ್ಥಗಿತಗೊಂಡಿದೆ. ಭ್ರಷ್ಟಾಚಾರ ಮಿತಿ ಮೀರಿರುವುದೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದರು. ನಗರದ ಹೊರವಲಯದ ಅಪೂರ್ವ ರೆಸಾರ್ಟ್&zwnj;ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್&zwnj; ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳಿಂದಾಗಿ ಇಡೀ ರಾಜ್ಯವನ್ನೇ ದಿವಾಳಿ ಮಾಡಿದ್ದು, 1 ಕಿ.ಮೀ. ರಸ್ತೆ ಕಾಮಗಾರಿ ಸಹ ಸಿದ್ದರಾಮಯ್ಯ ಸರ್ಕಾರದಿಂದ ಮಾಡಲು ಆಗುತ್ತಿಲ್ಲ ಎಂದರು. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ರೈತರಿಗೆ ನೀಡುತ್ತಿದ್ದ ₹3000 ಕೋಟಿ ಮೊತ್ತದ ಕಿಸಾನ್ ಸಮ್ಮಾನ್ ಯೋಜನೆಯನ್ನು ಕಿತ್ತುಕೊಂಡಿದ್ದೇ ಕಾಂಗ್ರೆಸ್ಸಿನ ದೊಡ್ಡ ಸಾಧನೆ. ಜನರ ಜೇಬಿಗೆ ₹2000 ಹಾಕಿ, ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ, ಜನರಿಗೆ ಕಿರುಕು&zwj;ಳ ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಅವರು ದೂರಿದರು.&lt;/p&gt;&lt;p&gt;ಬಿಜೆಪಿ ಅವಧಿಯಲ್ಲಿ ವಿದ್ಯಾನಿಧಿ ಯೋಜನೆ, ದಲಿತ ಮತ್ತು ಆದಿವಾಸಿಗಳಿಗೆ ಸಾಮಾಜಿಕ ನ್ಯಾಯ, ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳದ ಐತಿಹಾಸಿಕ ತೀರ್ಮಾನಗಳಾಗಿದ್ದವು. ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಜಿಲ್ಲೆಗೆ ₹1,000 ಕೋಟಿ ಅನುದಾನ ನೀಡಿದ್ದು, ಇದರಲ್ಲಿ ₹600 ಕೋಟಿಗಳನ್ನು ದಕ್ಷಿಣ ಕ್ಷೇತ್ರಕ್ಕೆ ನೀಡಲಾಗಿತ್ತು. ಇದೀಗ ಬಿಜೆಪಿ ಗೆಲ್ಲುವುದರೊಂದಿಗೆ ಕಾಂಗ್ರೆಸ್&zwnj; ಸರ್ಕಾರದ ಪತನ ದಾವಣಗೆರೆ ದಕ್ಷಿಣದಿಂದಲೇ ಆರಂಭವಾಗಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.&lt;/p&gt;&lt;h2&gt;&lt;strong&gt;ಎರಡೂ ಕಡೆ ಬಿಜೆಪಿ ಗೆಲುವು ನಿಶ್ಚಿತ&lt;/strong&gt;&lt;/h2&gt;&lt;p&gt;ಎದುರಾಳಿಗಳ ಬಳಿ ಹಣ ಬಲ ಇರಬಹುದು. ಆದರೆ, ಜನಬಲ ಹಾಗೂ ಸಂಘಟನೆಯ ಬಲದೊಂದಿಗೆ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಈ ಚುನಾವಣೆ ಕೇವಲ ಶಾಸಕರ ಆಯ್ಕೆ ಮಾತ್ರವಲ್ಲ, ಭ್ರಷ್ಟ ಸರ್ಕಾರಕ್ಕೆ ಪಾಠ ಕಲಿಸಲು ಜನರಿಗೆ ಸಿಕ್ಕಿರುವ ಅವಕಾಶ. ಎರಡೂ ಕ್ಷೇತ್ರಗಳ ಫಲಿತಾಂಶ 2028ರ ವಿಧಾನಸಭಾ ಚುನಾವಣೆಗೆ ಮುನ್ನುಡಿಯಾಗಲಿದೆ.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/bs-yediyurappa-attack-congress-government-development-issue-gvd/articleshow-lc7poot"/>
        </item>
        <item>
            <title><![CDATA[R Ashoka Mocks CM Siddaramaiah: ಅನ್ನಭಾಗ್ಯಕ್ಕೆ ಅಕ್ಕಿ ಕೇಂದ್ರದ್ದು, ಚೀಲಮಾತ್ರ ಸಿದ್ದರಾಮಯ್ಯರದು: ಅಶೋಕ್‌ ವ್ಯಂಗ್ಯ]]></title>
            <link>https://kannada.asianetnews.com/politics/r-ashoka-mocks-cm-siddaramaiah-centre-provides-the-rice-you-just-provide-the-bag-rav/articleshow-o60r2gg</link>
            <guid isPermaLink="true">https://kannada.asianetnews.com/politics/r-ashoka-mocks-cm-siddaramaiah-centre-provides-the-rice-you-just-provide-the-bag-rav/articleshow-o60r2gg</guid>
            <pubDate>Sat, 04 Apr 2026 04:23:57 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿಗೆ ಹಣ ನೀಡದೆ, ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೊಳಿಸದೆ ಆರ್ಥಿಕ ಶಿಸ್ತಿನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ಅನ್ನರಾಮಯ್ಯ ಅಲ್ಲ, ಬದಲಿಗೆ ಸುಳ್ಳುರಾಮಯ್ಯ ಎಂದು ಅವರು ದಾವಣಗೆರೆಯಲ್ಲಿ ವಾಗ್ದಾಳಿ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbypf5t5wxq2ycv4cpmf34g1,imgname-whatsapp-image-2025-12-08-at-1.27.16-pm--1--1765188015941.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.4):&lt;/strong&gt; ದಾಖಲೆಯ 16 ಬಜೆಟ್ ಮಂಡಿಸಿದ್ದಾಗಿ ಬೀಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣ್ಕಟ್ಟು ವಿದ್ಯೆ ಕಲಿತು, ಅಭಿವೃದ್ಧಿಗೆ ಹಣ ಕೊಡದೆ, ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಟಾನಗೊಳಿಸದೇ, ಆರ್ಥಿಕ ಶಿಸ್ತು ಪಾಲನೆ ಮಾಡುತ್ತಿರುವುದಾಗಿ ಸುಳ್ಳು ಹೇಳಿ, ಅದೇ ಸುಳ್ಳಿನ ಪುಂಗಿ ಊದುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್&zwnj; ಟೀಕಿಸಿದ್ದಾರೆ.&amp;nbsp;&lt;/p&gt;&lt;h2&gt;ಅನ್ನರಾಮಯ್ಯ ಅಲ್ಲ; ಸುಳ್ಳುರಾಮಯ್ಯ:&lt;/h2&gt;&lt;p&gt;ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನೂ ಕೈಗೊಳ್ಳದ ಸಿದ್ದರಾಮಯ್ಯಗೆ ಸುಳ್ಳುರಾಮಯ್ಯನೆಂಬ ಬಿರುದು ಕೊಡಬೇಕಷ್ಟೇ ಎಂದರು. ಇಂದಿರಾ ಕಿಟ್ ಕೊಡುತ್ತೇವೆಂದರು? ಕಿಟ್ ಎಲ್ಲಿ ಕೊಟ್ಟಿದ್ದಾರೆ? ಸಿದ್ದರಾಮಯ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊಡುತ್ತಿರುವುದೇ ಕೇಂದ್ರ ಸರ್ಕಾರ. ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದು ಎಂದು ವ್ಯಂಗ್ಯವಾಡಿದರು.&lt;/p&gt;&lt;h3&gt;ತಮ್ಮನ್ನ ತಾವೇ ಹೊಗಳಿಕೊಳ್ತಾರೆ:&lt;/h3&gt;&lt;p&gt;ಗ್ಯಾರಂಟಿಗಳ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ಸುಳ್ಳಿನ ಪುಂಗಿ ಊದುತ್ತಲೇ ಇದ್ದಾರೆ. ಅಷ್ಟು ಸಾಲದ್ದಕ್ಕೆ ತಾವು ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ ಅಂತಾ ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನದು ಇನ್ನೇನಿದೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/r-ashoka-mocks-cm-siddaramaiah-centre-provides-the-rice-you-just-provide-the-bag-rav/articleshow-o60r2gg"/>
        </item>
        <item>
            <title><![CDATA[ದಾವಣಗೆರೆ ಇತಿಹಾಸ ಪ್ರಸಿದ್ಧ ಕಡಕ್ ಚಮನ್ ಶಹಾವಲಿ ದರ್ಗಾಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ; ಚಾದರ್ ಹೊದಿಸಿ ಪ್ರಾರ್ಥನೆ!]]></title>
            <link>https://kannada.asianetnews.com/karnataka-districts/cm-siddaramaiah-visits-davanagere-hazrat-syed-kadak-chaman-shahwali-dargah-sat/articleshow-pftuz6t</link>
            <guid isPermaLink="true">https://kannada.asianetnews.com/karnataka-districts/cm-siddaramaiah-visits-davanagere-hazrat-syed-kadak-chaman-shahwali-dargah-sat/articleshow-pftuz6t</guid>
            <pubDate>Thu, 02 Apr 2026 16:04:21 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಜರತ್ ಸೈಯದ್ ಕಡಕ್ ಚಮನ್ ಶಹಾವಲಿ ದರ್ಗಾಕ್ಕೆ ಭೇಟಿ ನೀಡಿದರು. ಅವರು ದರ್ಗಾದಲ್ಲಿ ಚಾದರ್ ಹೊದಿಸಿ, ನಾಡಿನ ಏಳಿಗೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6vztqe5ghtgt6aprymwy55,imgname-siddaramaiah-visit-davanagere-darga-1775125916398.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣೆಗೆರೆ (ಏ.02): ದಾ&lt;/strong&gt;ವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ದಿವಂಗತ ಶ್ಯಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಮಲ್ಲಿಕಾರ್ಜುನ್ ಶ್ಯಾಮನೂರು ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ದಾವಣಗೆರೆಯ ಹಳೆಪೇಟೆಯಲ್ಲಿರುವ ಇತಿಹಾಸ ಪ್ರಸಿದ್ಧ ಹಜರತ್ ಸೈಯದ್ ಕಡಕ್ ಚಮನ್ ಶಹಾವಲಿ ದರ್ಗಾಕ್ಕೆ ಭೇಟಿ ನೀಡಿ, ಚಾದರ್ ಹೊದಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.&lt;/p&gt;&lt;p&gt;ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಸಿಎಂ, ದರ್ಗಾಕ್ಕೆ ಭೇಟಿ ನೀಡಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಿದರು. ದರ್ಗಾಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ದರ್ಗಾದ ಧರ್ಮಗುರುಗಳು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಮುಖ್ಯಮಂತ್ರಿಗಳು ದರ್ಗಾದಲ್ಲಿ ಪವಿತ್ರ 'ಚಾದರ್' ಹೊದಿಸಿ, ನಾಡಿನ ಏಳಿಗೆಗಾಗಿ, ಜನರ ಸುಖ-ಸಮೃದ್ಧಿಗಾಗಿ ವಿಶೇಷ ದುವಾ (ಪ್ರಾರ್ಥನೆ) ಸಲ್ಲಿಸಿದರು. ಈ ಸಂದರ್ಭದಲ್ಲಿ ದರ್ಗಾದ ಪಾವಿತ್ರ್ಯತೆ ಹಾಗೂ ಅಲ್ಲಿನ ಇತಿಹಾಸದ ಬಗ್ಗೆ ಧರ್ಮಗುರುಗಳು ಸಿಎಂ ಅವರಿಗೆ ಮಾಹಿತಿ ನೀಡಿದರು.&lt;/p&gt;&lt;h2&gt;&lt;strong&gt;ಸಚಿವ ಮಲ್ಲಿಕಾರ್ಜುನ ಸಾಥ್:&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿಗಳ ಈ ಭೇಟಿಯ ವೇಳೆ ರಾಜ್ಯದ ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಸಾಥ್ ನೀಡಿದರು. ಸ್ಥಳೀಯ ನಾಯಕರಾಗಿರುವ ಮಲ್ಲಿಕಾರ್ಜುನ ಅವರು ಕ್ಷೇತ್ರದ ಅಭಿವೃದ್ಧಿ ಹಾಗೂ ಸಮುದಾಯಗಳ ನಡುವಿನ ಸೌಹಾರ್ದತೆಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರು. ದರ್ಗಾ ಭೇಟಿಯ ವೇಳೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.&lt;/p&gt;&lt;h3&gt;&lt;strong&gt;ರಾಜಕೀಯ ಮಹತ್ವ:&lt;/strong&gt;&lt;/h3&gt;&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಉಪಚುನಾವಣೆಯ ಕಣ ರಂಗೇರಿರುವ ಬೆನ್ನಲ್ಲೇ ಮುಖ್ಯಮಂತ್ರಿಗಳ ಈ ದರ್ಗಾ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರ ಸಂಖ್ಯೆ ಗಣನೀಯವಾಗಿದ್ದು, ಈ ಭೇಟಿಯು ಸಮುದಾಯದ ಮತದಾರರ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯ ಅವರು ಸದಾ &quot;ಸರ್ವಜನಾಂಗದ ಶಾಂತಿಯ ತೋಟ&quot; ಎಂಬ ತತ್ವಕ್ಕೆ ಒತ್ತು ನೀಡುತ್ತಾ ಬಂದಿದ್ದು, ಇಂದಿನ ದರ್ಗಾ ಭೇಟಿಯು ಅದಕ್ಕೆ ಸಾಕ್ಷಿಯಾಯಿತು.&lt;/p&gt;]]></content:encoded>
            <category>davanagere</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/cm-siddaramaiah-visits-davanagere-hazrat-syed-kadak-chaman-shahwali-dargah-sat/articleshow-pftuz6t"/>
        </item>
        <item>
            <title><![CDATA[ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಜನರ ದಂಗೆ ಎದ್ದಿದ್ದೇಕೆ?: ಬಿ.ವೈ.ವಿಜಯೇಂದ್ರ ಹೇಳಿದ್ದೇನು?]]></title>
            <link>https://kannada.asianetnews.com/politics/by-vijayendra-davanagere-south-byelection-bjp-confidence-win-gvd/articleshow-s979z7q</link>
            <guid isPermaLink="true">https://kannada.asianetnews.com/politics/by-vijayendra-davanagere-south-byelection-bjp-confidence-win-gvd/articleshow-s979z7q</guid>
            <pubDate>Mon, 06 Apr 2026 19:55:35 +0530</pubDate>
            <description><![CDATA[&lt;p&gt;ಉಪ ಕ್ಷೇತ್ರಗಳ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಲ್ಲಿ ಗೆಲ್ಲಲೇಬೇಕೆಂಬ ರಣೋತ್ಸಾಹ ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರಲ್ಲಿ ಕಂಡುಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4wp2b5v03z6v8krfh3yrqaf,imgname-gnghmn-1757604293819.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.06):&lt;/strong&gt; ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಕ್ಷೇತ್ರಗಳ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಲ್ಲಿ ಗೆಲ್ಲಲೇಬೇಕೆಂಬ ರಣೋತ್ಸಾಹ ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರಲ್ಲಿ ಕಂಡುಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ದಿನವಿಡೀ ಸರಣಿ ಸಭೆಗಳು, ಬೂತ್ ಮಟ್ಟದ ಕಾರ್ಯಕರ್ತರು, ಮುಖಂಡರೊಂದಿಗೆ ನಡೆಸಿದ ಚರ್ಚೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.&lt;/p&gt;&lt;p&gt;ಪ್ರತಿ ಬೂತ್&zwnj;ನಲ್ಲಿ ನಮ್ಮ ಅಭ್ಯರ್ಥಿ ಪರವಾಗಿ ಪರಿಸ್ಥಿತಿ, ವಾತಾವರಣ ಹೇಗಿದೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ನಮ್ಮ ಬೂತಿನ ಪ್ರಮುಖರ ಆತ್ಮವಿಶ್ವಾಸ ನೋಡಿದರೆ, ಅತಿ ಹೆಚ್ಚು ಲೀಡ್ ಪಡೆಯುವ ಮಾತನಾಡುತ್ತಿದ್ದಾರೆ. ಇದೆಲ್ಲಾ ನೋಡಿದಾಗ ದಾವಣಗೆರೆ ದಕ್ಷಿಣದಲ್ಲಿ ಐತಿಹಾಸಿಕ ಗೆಲುವು ಬಿಜೆಪಿ ಅಭ್ಯರ್ಥಿಯದ್ದಾಗಲಿದೆ. ಅಲ್ಪಸಂಖ್ಯಾತರು, ಹಿಂದೂಗಳು ಸೇರಿ ಮತದಾರರು ಕಾಂಗ್ರೆಸ್ಸಿನ ವಿರುದ್ಧ ಆಕ್ರೋಶಿತರಾಗಿದ್ದಾರೆ. ಯಾರಿಗೂ ಕಾಂಗ್ರೆಸ್ ಪರ ಮತಯಾಚನೆ ಮಾಡುವ ಧೈರ್ಯ ಬರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.&lt;/p&gt;&lt;h2&gt;&lt;strong&gt;ಮತ್ತಷ್ಟು ಹುರುಪು&lt;/strong&gt;&lt;/h2&gt;&lt;p&gt;ಕೇಂದ್ರ ಸಚಿವರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದಾವಣಗೆರೆಗೆ ಬಂದು, ಬೆಂಬಲ ನೀಡಿರುವುದು ಮತ್ತಷ್ಟು ಹುರುಪು ತಂದಿದೆ. ನಮ್ಮ ಮಿತ್ರ ಪಕ್ಷ ಜೆಡಿಎಸ್ ಮುಖಂಡರು, ಮಾಜಿ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರೂ ಪ್ರಚಾರದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿಗಳಾದಿಯಾಗಿ ಇಡೀ ಸಚಿವ ಸಂಪುಟವೇ ವಿಧಾನಸೌಧದ ಮೂರನೇ ಮಹಡಿಯನ್ನು ಮರೆತು, ಉಭಯ ಕ್ಷೇತ್ರಗಳಲ್ಲಿ ಬಂದು ಕೂತಿದ್ದಾರೆಂದರೆ ಅದೆಷ್ಟರಮಟ್ಟಿಗೆ ಹತಾಶರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.&lt;/p&gt;&lt;p&gt;ಉಪ ಚುನಾವಣೆ ಹಿನ್ನೆಲೆ ಕೆಲವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದ ಹತಾಶೆ ಏನೆಂಬುದು ಸ್ಪಷ್ಟಗೊಂಡಿದೆ. ಡಾ.ಪರಮೇಶ್ವರ್ ಆದಿಯಾಗಿ ಜಗತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ವಾಸ್ತವಿಕತೆಯನ್ನು ಮರೆತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಕುಟುಕಿದರು. ಮಾಜಿ ಸಚಿವ ಆರಗ ಜ್ಞಾನೇಂದ್ರ, ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪಿ.ಸಿ. ಶ್ರೀನಿವಾಸ ಭಟ್, ಬಿ.ಎಸ್. ಜಗದೀಶ, ಆರ್.ಎಲ್. ಶಿವಪ್ರಕಾಶ, ಧನಂಜಯ ಕಡ್ಲೇಬಾಳು, ಅಣಜಿ ಅಣ್ಣೇಶ, ಮುಕುಂದ, ಎಚ್.ಪಿ.ವಿಶ್ವಾಸ, ಡಿ.ಎಸ್.ಶಿವಶಂಕರ ಇತರರು ಇದ್ದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/by-vijayendra-davanagere-south-byelection-bjp-confidence-win-gvd/articleshow-s979z7q"/>
        </item>
        <item>
            <title><![CDATA[ಉಪಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಖಚಿತ: ಬಿ.ವೈ. ವಿಜಯೇಂದ್ರ ಭವಿಷ್ಯ]]></title>
            <link>https://kannada.asianetnews.com/politics/by-vijayendra-predicts-siddaramaiah-resignation-bypoll-results-gvd/articleshow-srg20z3</link>
            <guid isPermaLink="true">https://kannada.asianetnews.com/politics/by-vijayendra-predicts-siddaramaiah-resignation-bypoll-results-gvd/articleshow-srg20z3</guid>
            <pubDate>Tue, 07 Apr 2026 11:39:13 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಶತಃಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hyt6eawf2px0wgtjpzxham2v,imgname-1.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.07): &lt;/strong&gt;ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಶತಃಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆ ಕಾಂಗ್ರೆಸ್&zwnj;ಗೆ ಕಬ್ಬಿಣದ ಕಡಲೆ ಆಗಿದೆ. ಕಾಂಗ್ರೆಸ್&zwnj;ನ ನಾಗಾಲೋಟಕ್ಕೆ ಕಡಿವಾಣ ಬೀಳಲಿದೆ. ಫಲಿತಾಂಶ ಏನೇ ಇದ್ದರೂ, ಚುನಾವಣೆ ಬಳಿಕ ಸಿದ್ದರಾಮಯ್ಯ ರಾಜೀನಾಮೆ ಖಚಿತ ಎಂದರು.&lt;/p&gt;&lt;p&gt;ಉಪ ಚುನಾವಣಾ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್&zwnj;ನಲ್ಲಿ ಯಾವ ರೀತಿ ಭೂಕಂಪ ಆಗಲಿದೆ ಎಂಬುದನ್ನು ನಾನು ಈಗಲೇ ಹೇಳಲ್ಲ. ಅದು &zwj;&zwj;ಆ ಪಕ್ಷದ ಆಂತರಿಕ ವಿಚಾರ. ಆದರೆ, ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಬಾಗಲಕೋಟೆಯಲ್ಲಿ ಚರಂತಿಮಠ ಗೆಲುವು ಸಾಧಿಸುತ್ತಾರೆ. ಇದಂತೂ ಸತ್ಯ ಎಂದರು.&lt;/p&gt;&lt;p&gt;ಎರಡು ಕ್ಷೇತ್ರಗಳಲ್ಲೂ ಆಡಳಿತ ವಿರೋಧಿ ಅಲೆಯನ್ನು ನೋಡುತ್ತಿದ್ದೇವೆ. ಮತದಾರರು &lsquo;ಕಾಂಗ್ರೆಸ್&zwnj; ನೋಟು, ಬಿಜೆಪಿಗೆ ಓಟು&rsquo; ಎಂಬ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಿಗೆ ಆಕ್ರೋಶ&zwj;ವಿದೆ. &lsquo;ಸಾಕಪ್ಪಾ, ಸಾಕು ಕಾಂಗ್ರೆಸ್ ಸಹವಾಸ&rsquo; ಎನ್ನುವಷ್ಟರ ಮಟ್ಟಿಗೆ ಜನ ರೋಸಿಹೋಗಿದ್ದಾರೆ. ಹೆಲಿಕಾಪ್ಟರ್ ಬಿಟ್ಟು ನಡೆದುಕೊಂಡು ಬರುವಂತಹ ಅಭ್ಯರ್ಥಿ, ಶಾಸಕ ನಮಗೆ ಬೇಕೆನ್ನುತ್ತಿದ್ದಾರೆ ಎಂದರು.&lt;/p&gt;&lt;p&gt;ನಮ್ಮ ಮುಖಂಡರೆಲ್ಲಾ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ದಾವಣಗೆರೆ ದಕ್ಷಿಣದ ಫಲಿತಾಂಶ ಬಂದ ನಂತರ ನಾನು ಮಾತನಾಡುತ್ತೇನೆ. ಈ ಸಲ ದಾವಣಗೆರೆಯಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಅಲ್ಲ, ತೆಲಂಗಾಣ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳೇ ಬಂದು ಪ್ರಚಾರ ನಡೆಸಿದರೂ ಬಿಜೆಪಿ ಎದುರು ಗೆಲ್ಲುವುದಕ್ಕೆ ಆಗುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.&lt;/p&gt;&lt;h2&gt;&lt;strong&gt;ನಾನು ಯಡಿಯೂರಪ್ಪನ ಮಗ, ಪಕ್ಷದ್ರೋಹ ಮಾಡೋನಲ್ಲ&lt;/strong&gt;&lt;/h2&gt;&lt;p&gt;ವಿಜಯೇಂದ್ರ ಅವರು ದಾವಣಗೆರೆ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಪರ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಪಕ್ಷದ ವಿಚಾರ ಬಂದಾಗ ಯಡಿಯೂರಪ್ಪ ಯಾವತ್ತೂ ಪಕ್ಷಕ್ಕೆ ದ್ರೋಹ ಮಾಡಿಲ್ಲ, ಮಾಡುವುದೂ ಇಲ್ಲ. ನಾನು ಅದೇ ಯಡಿಯೂರಪ್ಪನವರ ಮಗ. ಯಾರು ಏನು ಬೇಕಾದರೂ ಹೇಳಲಿ, ಪಕ್ಷಕ್ಕೆ ದ್ರೋಹ ಬಗೆಯಲಾರೆ ಎಂದರು. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ &lsquo;ಕಬಾಬ್&zwnj; ಮೇ ಹಡ್ಡಿ&rsquo; ಎಂಬ ಅರಿವಾಗಿದೆ. ಕಾಂಗ್ರೆಸ್&zwnj;ನವರ ಬೂಟ್ ಪಾಲಿಶ್ ಮಾಡೋಕೆ ಮುಸಲ್ಮಾನರಿರೋದಾ ಅಂತ ಅದೇ ಜನ ಆಕ್ರೋಶಗೊಂಡಿದ್ದಾರೆ. ಈ ಬಾರಿ ಅಲ್ಪಸಂಖ್ಯಾತರು ಅದ್ಯಾವ ಪ್ರಮಾಣದಲ್ಲಿ ಕಾಂಗ್ರೆಸ್&zwnj;ಗೆ ಓಟು ಮಾಡುತ್ತಾರೆ ಎಂಬುದು ಮತ ಎಣಿಕೆ ಮುಗಿದ ನಂತರ ಗೊತ್ತಾಗಲಿದೆ ಎಂದು ಹೇಳಿದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/by-vijayendra-predicts-siddaramaiah-resignation-bypoll-results-gvd/articleshow-srg20z3"/>
        </item>
        <item>
            <title><![CDATA[ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್]]></title>
            <link>https://kannada.asianetnews.com/politics/dk-shivakumar-election-campaign-minority-leaders-davanagere-gvd/articleshow-tqdgy7c</link>
            <guid isPermaLink="true">https://kannada.asianetnews.com/politics/dk-shivakumar-election-campaign-minority-leaders-davanagere-gvd/articleshow-tqdgy7c</guid>
            <pubDate>Wed, 01 Apr 2026 23:26:41 +0530</pubDate>
            <description><![CDATA[&lt;p&gt;ಚುನಾವಣೆ ಪ್ರಚಾರದ ಜವಾಬ್ದಾರಿಯನ್ನು ಸಚಿವ ಜಮೀರ್ ಅಹಮ್ಮದ್&zwnj; ಅವರಿಗೆ ಪಕ್ಷವು ನೀಡಿದ್ದು, ಅದನ್ನು ಅವರು ಮುಗಿಸಿಕೊಳ್ಳುತ್ತಾರೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke4e92kg74w41s7hkcx6tsvt,imgname-----------------------2026-01-04t173327.258-1767528237680.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.01): &lt;/strong&gt;ಚುನಾವಣೆ ಪ್ರಚಾರದ ಜವಾಬ್ದಾರಿಯನ್ನು ಸಚಿವ ಜಮೀರ್ ಅಹಮ್ಮದ್&zwnj; ಅವರಿಗೆ ಪಕ್ಷವು ನೀಡಿದ್ದು, ಅದನ್ನು ಅವರು ಮುಗಿಸಿಕೊಳ್ಳುತ್ತಾರೆ. ಇನ್ನುಳಿದ ಅಲ್ಪಸಂಖ್ಯಾತ ನಾಯಕರಿಗೂ ನಾವು ಚುನಾವಣಾ ಪ್ರಚಾರದ ಜವಾಬ್ದಾರಿ ನೀಡಿದ್ದೇವೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದ ಬಾಪೂಜಿ ಎಂಬಿಎ ಕಾಲೇಜು ಹೆಲಿಪ್ಯಾಡ್&zwnj;ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಮೇಲೆ ಪಕ್ಷ ನಡೆಯುವುದಿಲ್ಲ. ಡಿ.ಕೆ.ಶಿವಕುಮಾರ್ ಮೇಲೂ ನಡೆಯುವುದಿಲ್ಲ.&lt;/p&gt;&lt;p&gt;ಸಿದ್ದರಾಮಯ್ಯ ಮೇಲೂ ನಡೆಯುವುದಿಲ್ಲ. ಜಮೀರ್ ಮೇಲೂ ನಡೆಯುವುದಿಲ್ಲ ಎಂದರು. ಪಕ್ಷವು ಸಿದ್ಧಾಂತ ಹಾಗೂ ಕಾರ್ಯಕರ್ತರ ಮೇಲೆ ನಡೆಯುತ್ತದೆ. ಚುನಾವಣೆಯಲ್ಲಿ ನಾವು ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದಿದ್ದೇವೆ. ಅಲ್ಪಸಂಖ್ಯಾತರಿಗೆ ನಾವು ಕೊಟ್ಟಿರುವ ಕೊಡುಗೆಯನ್ನು ಬಿಜೆಪಿಯವರು ಮುಸ್ಲಿಮರ ಓಲೈಕೆಯೆಂದು ಟೀಕಿಸುತ್ತಿದೆ. ಇದು ಮುಸ್ಲಿಮರ ಪಕ್ಷವೆಂದು ಟೀಕಿಸುತ್ತಾರೆ. ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಅಲ್ಪಸಂಖ್ಯಾತರಿಗೆ ರಕ್ಷಣೆ ಮಾಡಿಕೊಂಡು, ಅಧಿಕಾರವನ್ನೂ ನೀಡುತ್ತಾ ಬಂದಿದ್ದೇವೆ. ಈ ದೃಷ್ಟಿಯಿಂದಲೇ ನಾವು ಇದೇ ಭಾಗದ ಅಬ್ದುಲ್&zwnj; ಜಬ್ಬಾರ್&zwnj; ಅವರಿಗೆ ವಿಧಾನ ಪರಿಷತ್ತು ಸದಸ್ಯ ಸ್ಥಾನ ನೀಡಿದ್ದೇವೆ. ಶಿಗ್ಗಾವಿ ಕ್ಷೇತ್ರದವರಿಗೂ ಸ್ಥಾನ ನೀಡಲಾಗಿದೆ. 16 ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ ಎಂದು ಡಿಕೆಶಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.&lt;/p&gt;&lt;h2&gt;&lt;strong&gt;ಸಾದಿಕ್ ಪೈಲ್ವಾನ್ ನಿವಾಸಕ್ಕೆ ಡಿಕೆಶಿ ಭೇಟಿ&lt;/strong&gt;&lt;/h2&gt;&lt;p&gt;ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದು, ರಣರಂಗದ ಮೈದಾನಕ್ಕೆ ಇಳಿದಿದ್ದೇನೆ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಬಂಡಾಯ ಸಾರಿದ್ದ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಸಾದಿಕ್ ಪೈಲ್ವಾನ್ ನಿವಾಸಕ್ಕೆ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು. ಈ ವೇಳೆ ಡಿ.ಕೆ.ಶಿವಕುಮಾರ ಜೊತೆಗೆ ಹ್ಯಾರಿಸ್, ಸಲೀಂ ಅಹಮ್ಮದ್, ಮಹಮ್ಮದ್ ನಲಪಾಡ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.&lt;/p&gt;&lt;p&gt;ಇದೇ ವೇಳೆ ಡಿಕೆಶಿ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ಸಾದಿಕ್ ಪೈಲ್ವಾನರ ನಿವಾಸದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ನಂತರ ಸಾದಿಕ್ ಪೈಲ್ವಾನರ ಜೊತೆಗೆ ಚರ್ಚಿಸಿದ ಡಿ.ಕೆ.ಶಿವಕುಮಾರ, ಕ್ಷೇತ್ರಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಪರ ಪ್ರಚಾರ ಕೈಗೊಳ್ಳುವಂತೆ, ಭಾರೀ ಮತಗಳ ಅಂತರದಿಂದ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ಸನ್ನು ಗೆಲ್ಲಿಸಲು ಎಲ್ಲರೂ ಸೇರಿ, ಕೆಲಸ ಮಾಡೋಣ ಎಂದು ಕರೆ ನೀಡಿದರು. ಸಾದಿಕ್ ಪೈಲ್ವಾನ ಕುಟುಂಬ ಸದಸ್ಯರು, ಮುಸ್ಲಿಂ ಮುಖಂಡರು, ಸಮಾಜ ಬಾಂಧವರು ಇದ್ದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/dk-shivakumar-election-campaign-minority-leaders-davanagere-gvd/articleshow-tqdgy7c"/>
        </item>
        <item>
            <title><![CDATA[ಕಾಂಗ್ರೆಸ್ಸಿಗೆ ಚುನಾವಣೆ ಖಚಿತ, ಸೋಲು ನಿಶ್ಚಿತ: ಛಲವಾದಿ ನಾರಾಯಣಸ್ವಾಮಿ ಭವಿಷ್ಯ]]></title>
            <link>https://kannada.asianetnews.com/politics/chalavadi-narayanaswamy-congress-defeat-claim-bypoll-election-gvd/articleshow-wglwq0x</link>
            <guid isPermaLink="true">https://kannada.asianetnews.com/politics/chalavadi-narayanaswamy-congress-defeat-claim-bypoll-election-gvd/articleshow-wglwq0x</guid>
            <pubDate>Tue, 07 Apr 2026 14:42:55 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತಿದ್ದು, ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jys744hbksbz6vnjh0se6zz4,imgname-ssvfv-1751045509674.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.07):&lt;/strong&gt; ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತಿದ್ದು, ತಾವೇ ಗೆಲ್ಲಲು ಉಚಿತ, ಖಚಿತ, ನಿಶ್ಚಿತ ಎನ್ನುತ್ತಿದ್ದವರಿಗೆ ಚುನಾವಣೆ ಹತ್ತಿರ ಬಂದಂತೆ ಚುನಾವಣೆ ಖಚಿತ, ಸೋಲು ನಿಶ್ಚಿತ ಎಂಬ ಅರಿವಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ.&lt;/p&gt;&lt;p&gt;ಅಹಿಂದ ಜಪ ಮಾಡುವ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣದಲ್ಲಿ ಅಹಿಂದ ವರ್ಗದ ಅಭ್ಯರ್ಥಿಗೆ ಮತ ಹಾಕಬೇಡಿ, ಮುಸ್ಲಿಮರಿಗೆ ಮತ ಹಾಕಬೇಡಿ ಎನ್ನುತ್ತಾರೆ. ಬಾಗಲಕೋಟೆಯಲ್ಲಿ ಅಹಿಂದಗೆ ಮತ ಹಾಕಿ ಎನ್ನುತ್ತಾರೆ ಎಂದರು. ಮುಸಲ್ಮಾನರಿಂದಲೇ ಸರ್ಕಾರ ಮಾಡಿದ್ದೇವೆನ್ನುವ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಮುಸ್ಲಿಮರಿಗೆ ದೋಖಾ ಆಗಿದೆ. ಹಿಂದೂಗಳಿಗೆ ಓಟಿಗೆ ₹5ರಿಂದ ₹7 ಸಾವಿರ, ಮುಸ್ಲಿಮರಿಗೆ ಓಟಿಗೆ ₹10 ಸಾವಿರಗಳನ್ನು ಕಾಂಗ್ರೆಸ್ಸಿನವರು ನೀಡುತ್ತಿದ್ದಾರಂತೆ.&lt;/p&gt;&lt;p&gt;ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಸಂಪತ್ತಿಗೆ ಸವಾಲು ಹಾಕಿದ್ದಾರೆ ಎಂದು ತಿಳಿಸಿದರು. ನಿಮ್ಮ ಸಂಪತ್ತು ದಕ್ಷಿಣ ಕ್ಷೇತ್ರದಲ್ಲಿ ಏನೂ ಕೆಲಸ ಮಾಡುವುದಿಲ್ಲ. ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪನೇ ಇಲ್ಲಿ ಗೆಲ್ಲುವುದು ನಿಶ್ಚಿತ. ದಲಿತರ ಓಟುಗಳಂತೂ ಕಾಂಗ್ರೆಸ್ಸಿಗೆ ಇಲ್ಲ. ಒಳಮೀಸಲಾತಿ ವಿಚಾರದಲ್ಲಿ ದಲಿತರಿಗೆ ಕಾಂಗ್ರೆಸ್ ಸರ್ಕಾರ ದೋಖಾ ಮಾಡಿದೆ. ನಾವು ಮುಸಲ್ಮಾನರ ವಿರೋಧಿಗಳಲ್ಲ ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;&lt;p&gt;ಸಿದ್ದರಾಮಯ್ಯ ಬಹಿರಂಗ ಸಭೆಗೆ ಹಣ ಕೊಟ್ಟು, ಜನರನ್ನು ಸೇರಿಸಿ, ಭಾಷಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಏ.7ರಂದು ಸಂಜೆ 5 ಗಂಟೆ ಒಳಗಾಗಿ ಕ್ಷೇತ್ರದಿಂದ ಹೊರಗೆ ಹೋಗಬೇಕು. ಸಿಎಂ ಸಿದ್ದರಾಮಯ್ಯ ವಾಮಮಾರ್ಗ ಹಿಡಿದಿದ್ದಾರೆ. ಇದು ಸಿದ್ದರಾಮಯ್ಯ ರಾಜಕೀಯ ಜೀವನದ ಅಂತ್ಯದ ದಿನಗಳಾಗಿವೆ. ಇನ್ನು ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ದಾವಣಗೆರೆಗೆ ಬರುವುದಿಲ್ಲ ಎಂದು ಅವರು ಭವಿಷ್ಯ ನುಡಿದರು. ಕಾಂಗ್ರೆಸ್ಸಿನ ನಾಯಕರು ಜಮೀರ್ ಅಹಮ್ಮದ್ ಕಾಲು ಹಿಡಿದು, ಭಾನುವಾರ ದಾವಣಗೆರೆಗೆ ಕರೆದುಕೊಂಡು ಬಂದಿದ್ದಾರೆ.&lt;/p&gt;&lt;h2&gt;&lt;strong&gt;ಬಿಜೆಪಿ ಜಯ ಸಾಧಿಸಲಿದೆ&lt;/strong&gt;&lt;/h2&gt;&lt;p&gt;ಓಟಿಗಾಗಿ ಕಬಾಬು ತಿನ್ನಿಸುವ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷವು ತಲುಪಿದೆ. ಕಾಂಗ್ರೆಸ್ಸಿನ ನಾಯಕರು ಏನೇ ಮಾಡಿದರೂ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಪವಾಡ ಆಗುವುದಿಲ್ಲ. ಎರಡೂ ಕ್ಷೇತ್ರದಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎಂದು ತಿಳಿಸಿದರು. ಒಳ ಮೀಸಲಾತಿ ಮೂಲೆಗುಂಪು ಮಾಡಿ, ಗೊಂದಲವನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದೆ. ಒಳ ಮೀಸಲಾತಿ ವಿಚಾರದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅಜ್ಞಾನದಿಂದ ಮಾತನಾಡಿದ್ದಾರೆ. ಇದಕ್ಕೆಲ್ಲಾ ಮಿನಿಸ್ಟರ್&zwnj; ಡಾ. ಎಚ್.ಸಿ.ಮಹದೇವಪ್ಪ ಕಾರಣ. ಇದರಲ್ಲಿ ಬಿಜೆಪಿ ಹಸ್ತಕ್ಷೇಪ ಇಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/chalavadi-narayanaswamy-congress-defeat-claim-bypoll-election-gvd/articleshow-wglwq0x"/>
        </item>
        <item>
            <title><![CDATA[ದಾವಣಗೆರೆ ವೀರಭದ್ರೇಶ್ವರ ಜಾತ್ರೆ: ಪುತ್ರನ ಗೆಲುವಿಗಾಗಿ ಕೆಂಡ ಹಾಯ್ದ ಸಚಿವ ಮಲ್ಲಿಕಾರ್ಜುನ]]></title>
            <link>https://kannada.asianetnews.com/state/minister-ss-mallikarjun-walks-on-hot-coals-in-davanagere-veerabhadreshwar-jatre-for-son-s-victory-rav/articleshow-xvo3n4f</link>
            <guid isPermaLink="true">https://kannada.asianetnews.com/state/minister-ss-mallikarjun-walks-on-hot-coals-in-davanagere-veerabhadreshwar-jatre-for-son-s-victory-rav/articleshow-xvo3n4f</guid>
            <pubDate>Thu, 02 Apr 2026 05:20:47 +0530</pubDate>
            <description><![CDATA[&lt;p&gt;ದಾವಣಗೆರೆಯ ಹಳೆಪೇಟೆ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಮತ್ತು ಶ್ರೇಷ್ಠ ಎಂ.ಶಾಮನೂರು ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದರು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn5prtg4z6n5w3nt51r0j26p,imgname----------------------30--1775086889476.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.2): &lt;/strong&gt;ದಕ್ಷಿಣ ಕ್ಷೇತ್ರದ ಚುನಾವಣೆ ಪ್ರಚಾರ, ಸರಣಿ ಸಭೆಗಳ ಮಧ್ಯೆಯೂ ದಾವಣಗೆರೆಯ ಹಳೆಪೇಟೆ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು, ಶ್ರೇಷ್ಠ ಎಂ.ಶಾಮನೂರು ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದರು.&lt;/p&gt;&lt;p&gt;ನಗರದ ಹಳೆಪೇಟೆ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷ ಶಾಮನೂರು ಕುಟುಂಬದ ಸದಸ್ಯರು ಕೆಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸುತ್ತಾ ಬಂದಿದ್ದಾರೆ. ಅದೇ ರೀತಿ ಬುಧವಾರ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗಾಗಿ, ತಮ್ಮ ಪುತ್ರನ ಗೆಲುವಿನ ಹರಕೆ ಹೊತ್ತ ಎಸ್&zwnj;.ಎಸ್&zwnj;. ಮಲ್ಲಿಕಾರ್ಜುನ ಕೆಂಡ ತುಳಿದರು. ಪುತ್ರಿ ಡಾ.ಶ್ರೇಷ್ಠ ಸಹ ಸಹೋದರ ಸಮರ್ಥನ ಗೆಲುವಿಗಾಗಿ ಕೆಂಡ ತುಳಿದರು.&lt;/p&gt;&lt;p&gt;ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್&zwnj;.ಎಸ್&zwnj;. ಮಲ್ಲಿಕಾರ್ಜುನ, ಜಾತ್ರೆ ಅಂಗವಾಗಿ ಪ್ರತಿ ವರ್ಷ ತಾವು, ತಮ್ಮ ಕುಟುಂಬ ಸದಸ್ಯರು ಚಿಕ್ಕಂದಿನಿಂದಲೂ ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದೇವೆ. ಇದರಲ್ಲಿ ವಿಶೇಷವೇನೂ ಇಲ್ಲ. ಎಲ್ಲ ಭಕ್ತರಂತೆ ವೀರಭದ್ರೇಶ್ವರ ಸ್ವಾಮಿ ದರ್ಶನವನ್ನೂ ಪಡೆದಿದ್ದೇವೆ ಎಂದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/minister-ss-mallikarjun-walks-on-hot-coals-in-davanagere-veerabhadreshwar-jatre-for-son-s-victory-rav/articleshow-xvo3n4f"/>
        </item>
        <item>
            <title><![CDATA[Karnataka By-election 2026: ಉಪಸ ಮರದ ಬಹಿರಂಗ ಪ್ರಚಾರಕ್ಕೆ ಇಂದು ತೆರೆ;  ನಾಳೆ ಮನೆಮನೆ ಪ್ರಚಾರ, ಗುರುವಾರ ಮತದಾನ]]></title>
            <link>https://kannada.asianetnews.com/politics/karnataka-bypolls-2026-public-campaigning-ends-today-door-to-door-meet-tomorrow-rav/articleshow-zlclzgc</link>
            <guid isPermaLink="true">https://kannada.asianetnews.com/politics/karnataka-bypolls-2026-public-campaigning-ends-today-door-to-door-meet-tomorrow-rav/articleshow-zlclzgc</guid>
            <pubDate>Tue, 07 Apr 2026 06:45:28 +0530</pubDate>
            <description><![CDATA[ಏ.9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಎರಡೂ ಪಕ್ಷಗಳ ನಾಯಕರು ಮತದಾರರ ಮನವೊಲಿಸಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmej063qpwbgkmg6yk2eprfq,imgname-by-election-1774310135927.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ದಾವಣಗೆರೆ/ಬಾಗಲಕೋಟೆ&lt;/strong&gt;: ಏ.9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಮಂಗಳವಾರ 5 ಗಂಟೆಗೆ ಅಂತ್ಯಗೊಳ್ಳಲಿದ್ದು, ಮತದಾರರ ಮನವೊಲಿಕೆಗೆ ರಾಜಕೀಯ ಪಕ್ಷಗಳ ನಾಯಕರು ಅಂತಿಮ ಹಂತದ ಕಸರತ್ತು ನಡೆಸಿದ್ದಾರೆ. ಬುಧವಾರ ಸಂಜೆಯವರೆಗೂ ಮನೆಮನೆ ಪ್ರಚಾರಕ್ಕೆ ಅವಕಾಶ ಇದ್ದು ಎರಡೂ ಕ್ಷೇತ್ರಗಳಲ್ಲಿ ಏ.9ರಂದು ಮತದಾನ ನಡೆಯಲಿದೆ.&lt;/p&gt;&lt;h2&gt;ಕಾಂಗ್ರೆಸ್&zwnj;-ಬಿಜೆಪಿ ನಡುವೆ ಫೈಟ್&zwnj;:&lt;/h2&gt;&lt;p&gt;ಎರಡೂ ಕಡೆ ಕಾಂಗ್ರೆಸ್&zwnj;-ಬಿಜೆಪಿ ನಡುವೆ ನೇರಾನೇರ ಪೈಪೋಟಿಯಿದ್ದು, ಸೋಮವಾರ ಎರಡೂ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಂಪುಟದ ಸದಸ್ಯರು ಕಾಂಗ್ರೆಸ್&zwnj; ಪರ ಭರ್ಜರಿ ಪ್ರಚಾರ ನಡೆಸಿದರು. ಸಚಿವ ಜಮೀರ್&zwnj; ಅವರು ಇದೇ ಮೊದಲ ಬಾರಿಗೆ ಬಾಗಲಕೋಟೆಗೆ ಆಗಮಿಸಿ, ಅಲ್ಪಸಂಖ್ಯಾತ ಬಾಹುಳ್ಯದ ಪ್ರದೇಶಗಳಲ್ಲಿ ಪ್ರಚಾರ ನಡೆಸಿದರು. ಇದೇ ವೇಳೆ, ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್&zwnj; ಜೋಶಿ, ಬಾಗಲಕೋಟೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿಯವರು ಬೃಹತ್ ರೋಡ್&zwnj; ಶೋ ಮೂಲಕ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.&lt;/p&gt;&lt;p&gt;ಕಾಂಗ್ರೆಸ್&zwnj;ನ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ದಾವಣಗೆರೆ ದಕ್ಷಿಣಕ್ಕೆ, ಎಚ್&zwnj;.ವೈ.ಮೇಟಿಯವರ ನಿಧನದಿಂದ ಬಾಗಲಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳು ಆಡಳಿತಾರೂಢ ಕಾಂಗ್ರೆಸ್&zwnj;ನಿಂದ ತೆರವಾಗಿವೆ. ಹೀಗಾಗಿ, ಎರಡೂ ಕ್ಷೇತ್ರಗಳನ್ನು ಪುನಃ ಗೆದ್ದು ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳುವುದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್&zwnj; ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ.&lt;/p&gt;&lt;p&gt;ಇದೇ ವೇಳೆ, ರಾಜ್ಯಾಧ್ಯಕ್ಷರಾದ ಮೇಲೆ ವಿಜಯೇಂದ್ರ ಎದುರಿಸುತ್ತಿರುವ ಬಹುದೊಡ್ಡ ಸವಾಲು ಇದಾಗಿದೆ. ಹೀಗಾಗಿ, ಈ ಚುನಾವಣೆ ಅವರಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡಲು ಹರಸಾಹಸ ನಡೆಸುತ್ತಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್ಸಿನಲ್ಲಿ ಈ ಉಪಚುನಾವಣೆ ಕೊಂಚ ಗೊಂದಲಕ್ಕೆ ಕಾರಣವಾಗಿದ್ದುದು ಟಿಕೆಟ್ ಹಂಚಿಕೆಯ ವಿಚಾರದಲ್ಲಿ. ಬಾಗಲಕೋಟೆಯಲ್ಲಿ ಮೇಟಿ ಅವರ ಮಕ್ಕಳೇ, ಟಿಕೆಟ್&rsquo;ಗಾಗಿ ಫೈಟ್ ಮಾಡುತ್ತಿದ್ದರು. ಇನ್ನೊಂದು ಕಡೆ, ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ದೊಡ್ಡ ಡ್ರಾಮಾವೇ ನಡೆದು ಹೋಯಿತು. ಕೊನೆಗೆ, ಎರಡೂ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ, ಆಯಾಯ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಯಿತು.&lt;/p&gt;&lt;p&gt;ಈ ಮಧ್ಯೆ, ಜಮೀರ್&zwnj; ಪ್ರಚಾರಕ್ಕೆ ಆಗಮಿಸಿರುವುದು, ಸಿದ್ದು-ಡಿಕೆಶಿ ಜಂಟಿ ಪ್ರಚಾರ, ಇಡೀ ಸಂಪುಟದ ಸದಸ್ಯರು ಪ್ರಚಾರಕ್ಕೆ ಧುಮುಕಿರುವುದು, ಸರ್ಕಾರದ ಗ್ಯಾರಂಟಿ ಯೋಜನೆಗಳು, ಆಡಳಿತ ಪಕ್ಷಕ್ಕಿರುವ ಲಾಭಗಳು ಕಾಂಗ್ರೆಸ್ ಜಯಕ್ಕೆ ಕಾರಣವಾಗಲಿವೆ ಎಂಬುದು ಕಾಂಗ್ರೆಸ್&zwnj; ನಾಯಕರ ಆಶಯ.&lt;/p&gt;&lt;p&gt;ಜೆಡಿಎಸ್&zwnj; ನಾಯಕ, ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿ ಪ್ರಚಾರಕ್ಕೆ ಆಗಮಿಸಿರುವುದು, ಬಾಗಲಕೋಟೆಯಲ್ಲಿ ಅಭ್ಯರ್ಥಿ ಚರಂತಿಮಠ, ಪಿ.ಎಚ್&zwnj;.ಪೂಜಾರ ಮುನಿಸು ಮರೆತು ಒಂದಾಗಿರುವುದು, ಚರಂತಿಮಠ ಪರ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ ಪ್ರಚಾರ ನಡೆಸಿರುವುದು, ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್&zwnj; ವಿರುದ್ಧ ಮುನಿಸಿಕೊಂಡಿರುವುದು ಗೆಲುವಿಗೆ ಸಹಕಾರಿ ಎಂಬುದು ಬಿಜೆಪಿ ನಾಯಕರ ಆಶಯ.&lt;/p&gt;&lt;h3&gt;ಕೇರಳ, ಪುದುಚೇರಿ, ಅಸ್ಸಾಂನಲ್ಲೂ ಇಂದು ಪ್ರಚಾರ ಕಾರ್ಯ ಅಂತ್ಯ&lt;/h3&gt;&lt;p&gt;ನವದೆಹಲಿ: ಏ.9 ರಂದು ಚುನಾವಣೆ ಎದುರಿಸಲಿರುವ ನೆರೆ ರಾಜ್ಯ ಕೇರಳ, ಅಸ್ಸಾಂ, ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮಂಗಳವಾರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್&zwnj; ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಘಟಾನುಘಟಿ ನಾಯಕರು ಕೊನೆಯ ದಿನ ಮತದಾರರ ಮನ ಗೆಲ್ಲಲು ಬಿರುಸಿನ ಪ್ರಚಾರ ನಡೆಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-bypolls-2026-public-campaigning-ends-today-door-to-door-meet-tomorrow-rav/articleshow-zlclzgc"/>
        </item>
        <item>
            <title><![CDATA[Davanagere ByPoll Rich vs Poor Battle: ದಾವಣಗೆರೆಯಲ್ಲಿ ಶ್ರೀಮಂತ ವರ್ಸಸ್‌ ಬಡವ: ಶ್ರೀನಿವಾಸ್ - ನಾನು ಹಮಾಲಿ ಮಾಡುವವರ ಮಗ: ಬಿಜೆಪಿಗ]]></title>
            <link>https://kannada.asianetnews.com/politics/davanagere-bypolls-i-am-a-porters-son-bjp-candidate-srinivas-pits-rich-vs-poor-battle-rav/articleshow-zpkpogx</link>
            <guid isPermaLink="true">https://kannada.asianetnews.com/politics/davanagere-bypolls-i-am-a-porters-son-bjp-candidate-srinivas-pits-rich-vs-poor-battle-rav/articleshow-zpkpogx</guid>
            <pubDate>Sun, 29 Mar 2026 08:02:25 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಈ ಬಾರಿಯ ಚುನಾವಣೆಯನ್ನು ಶ್ರೀಮಂತರು ಮತ್ತು ಬಡವರ ನಡುವಿನ ಹೋರಾಟ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಶ್ರೀಮಂತ ಹಿನ್ನೆಲೆಯನ್ನು ಟೀಕಿಸಿರುವ ಅವರು, ಹಮಾಲಿ ಮಾಡುವವರ ಮಗನಾದ ನನಗೆ ಜನ ಬೆಂಬಲ ಇದೆ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmvpbfv40xv0pzzzf32xapbp,imgname----------------------78--1774750908260.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಮಾ.29) &lt;/strong&gt;ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈಗ ನಡೆಯುತ್ತಿರುವುದು ಶ್ರೀಮಂತರು ವರ್ಸಸ್&zwnj; ಬಡವರ ಚುನಾವಣೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಟಾಂಗ್ ನೀಡಿದ್ದಾರೆ.&lt;/p&gt;&lt;p&gt;ದಕ್ಷಿಣ ಕ್ಷೇತ್ರದಲ್ಲಿ ಶನಿವಾರ ಮನೆ ಮನೆಗೆ ಭೇಟಿ ನೀಡುವ ಮೂಲಕ ಮತಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿಯನ್ನು ಗೆಲ್ಲಿಸುವುದಾಗಿ ಜನ ಹೇಳುತ್ತಿದ್ದಾರೆ. ಮುಸ್ಲಿಂ ಬಾಂಧವರು ಸಹ ತಮ್ಮ ಮನೆಗೆ ಕರೆಸಿಕೊಂಡು, ನೀವೇ ಗೆಲ್ಲುತ್ತೀರಿ ಎಂಬುದಾಗಿ ಹೇಳಿದ್ದು, ನಮ್ಮಲ್ಲಿ ಮತ್ತಷ್ಟು ಉತ್ಸಾಹ ಮೂಡಿಸುತ್ತಿದ್ದಾರೆ ಎಂದರು.&lt;/p&gt;&lt;p&gt;ಕ್ಷೇತ್ರದಲ್ಲಿ ಒಟ್ಟು 2.32 ಲಕ್ಷ ಮತದಾರರಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಪಕ್ಷದ ಶ್ರೀಮಂತನ ವಿರುದ್ಧ ದಾವಣಗೆರೆಯ ಹಮಾಲಿ ಮಾಡುವವರ ಮಗ ನಿಂತಿದ್ದಾನೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಮನೆಯಲ್ಲೇ ಮಂತ್ರಿಗಳು, ಸಂಸದರು ಇದ್ದಾರೆ. ಯುವಕರು ಅಂದರೆ ಅಭ್ಯರ್ಥಿಯ ಮನೆಯವರಷ್ಟೇ ರಾಜಕಾರಣಕ್ಕೆ ಬರಬೇಕಾ? ಇಲ್ಲಿ ನಡೆಯುತ್ತಿರುವುದು ಶ್ರೀಮಂತರು ವರ್ಸಸ್&zwnj; ಬಡವರ ಚುನಾವಣೆ ಎಂದು ತಿಳಿಸಿದರು.&lt;/p&gt;&lt;p&gt;ಬಿಜೆಪಿ ಹಿರಿಯ ಮುಖಂಡ ಮಾತನಾಡಿ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಆಸ್ತಿಯನ್ನೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಹೆಸರಿಗೆ ಬರೆದುಕೊಡೋಣ. ಕಾಂಗ್ರೆಸ್ ಅಭ್ಯರ್ಥಿಯ ಎಲ್ಲಾ ಆಸ್ತಿಯನ್ನು ಬಿಜೆಪಿ ಅಭ್ಯರ್ಥಿ ಶ್ರೀನಿವಾಸಗೆ ಬರೆದುಕೊಡಲಿ ನೋಡೋಣ. ಆಗ ಗೊತ್ತಾಗುತ್ತದೆ ಕಾಂಗ್ರೆಸ್ ಅಭ್ಯರ್ಥಿಯ ಆಸ್ತಿ ಎಷ್ಟಿದೆಯೆಂಬುದು ಎಂದು ಸವಾಲು ಹಾಕಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/davanagere-bypolls-i-am-a-porters-son-bjp-candidate-srinivas-pits-rich-vs-poor-battle-rav/articleshow-zpkpogx"/>
        </item>
        <item>
            <title><![CDATA[ಮೋದಿ ಪೂರೈಸಿದ ಅಕ್ಕಿ ಜನರಿಗೆ ಕೊಟ್ಟಿದ್ದನ್ನು ಬಿಟ್ಟರೆ ಕಾಂಗ್ರೆಸ್ ಏನೂ ಕೊಟ್ಟಿಲ್ಲ: ಛಲವಾದಿ ನಾರಾಯಣಸ್ವಾಮಿ]]></title>
            <link>https://kannada.asianetnews.com/politics/chalavadi-narayanaswamy-slams-cm-siddaramaiah-davanagere-gvd/articleshow-zt80wsk</link>
            <guid isPermaLink="true">https://kannada.asianetnews.com/politics/chalavadi-narayanaswamy-slams-cm-siddaramaiah-davanagere-gvd/articleshow-zt80wsk</guid>
            <pubDate>Mon, 06 Apr 2026 21:38:19 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನ ರಾಮಯ್ಯನಲ್ಲ. ಅವರೊಬ್ಬ ಡೋಂಗಿ ರಾಜಕಾರಣಿ, ಎಲ್ಲದಕ್ಕೂ ಕನ್ನ ಹಾಕುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250521064131,imgname-image-01954b52-75e1-423b-956a-ef9882fbe96a.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.06): &lt;/strong&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನ ರಾಮಯ್ಯನಲ್ಲ. ಅವರೊಬ್ಬ ಡೋಂಗಿ ರಾಜಕಾರಣಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪೂರೈಸಿದ ಅಕ್ಕಿ ಕೊಟ್ಟಿದ್ದನ್ನು ಬಿಟ್ಟರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಏನನ್ನೂ ಕೊಟ್ಟಿಲ್ಲ. ಈ ಸಿದ್ದರಾಮಯ್ಯ ಕನ್ನ ರಾಮಯ್ಯ. ಎಲ್ಲದಕ್ಕೂ ಕನ್ನ ಹಾಕುತ್ತಿದ್ದಾರೆ ಎಂದರು. ದಲಿತರ ಹಣ ಕೊಳ್ಳೆ ಹೊಡೆದರು. ಸಿದ್ದರಾಮಯ್ಯ ಹೇಳುವುದೇ ಒಂದು, ಮಾಡುವುದೇ ಇನ್ನೊಂದು.&lt;/p&gt;&lt;p&gt;ಒಂದು ಕಡೆ ಘೋಷಣೆ, ಮತ್ತೊಂದು ಕಡೆ ಶೋಷಣೆಯೇ ಸಿದ್ದರಾಮಯ್ಯ ನೀತಿ. ಇಂತಹ ಡಬಲ್ ಸ್ಟ್ಯಾಂಡರ್ಡ್&zwj;ನಿಂದಾಗಿಯೇ ರಾಜ್ಯದ ಜನ ತಿರಸ್ಕರಿಸಿದರು ಎಂದು ಹೇಳಿದರು. ದಲಿತರಿಗೆ ₹42 ಸಾವಿರ ಕೋಟಿ ಇಟ್ಟಿದ್ದೇನೆನ್ನುತ್ತಾರೆ. ಆ ಹಣವನ್ನು ಗ್ಯಾರಂಟಿಗೆ ಬಳಸಿದರು. ಎಲ್ಲ ಕಡೆ ಸುಳ್ಳು ಹೇಳಿದರು. ಇಷ್ಟೊಂದು ಹಣ ದಲಿತರಿಗೆ ಕೊಡ್ತಾರೆಂದು ಜನ ಅಂದುಕೊಂಡಿದ್ದರು. ಆದರೆ, ಆ ಹಣ ಬೇರೆ ಕಡೆ ಬಳಸಿ, ದಲಿತರಿಗೆ ಮೋಸ ಮಾಡಿದರು. 56432 ಸಾವಿರ ಖಾಲಿ ಹುದ್ದೆ ತುಂಬುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ 4 ಲಕ್ಷ ಹುದ್ದೆ ಖಾಲಿ ಇವೆ. ಅವನ್ನು ಯಾಕೆ ತುಂಬಿಲ್ಲ.&lt;/p&gt;&lt;p&gt;ಅದಕ್ಕೆ ಯಾರ ಅನುಮತಿ ಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅನುಮತಿ ಬೇಕಾ ಎಂದು ಪ್ರಶ್ನಿಸಿದರು. ಬಾಗಲಕೋಟೆಯಲ್ಲಿ ರಸ್ತೆಗಳಿಗೆ ಕೆಂಪು ಮಣ್ಣು ಹಾಕಿ ಮುಚ್ಚಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಜನರು ಕೆಂಪುಮಣ್ಣು ಹಾಕಿ ಮುಚ್ಚುತ್ತಾರೆ. ಜನ ಕಾಂಗ್ರೆಸ್ ಆಡಳಿತದಿಂದ ಕೋಪಗೊಂಡಿದ್ದಾರೆ. ಎರಡು ಕ್ಷೇತ್ರ ಮಾತ್ರವಲ್ಲ, 2028ರ ಸಾರ್ವತ್ರಿಕ ಚುನಾವಣೆಯಲ್ಲೂ ಕಾಂಗ್ರೆಸ್ ಸ್ಥಿತಿ ಗಂಭೀರ ಆಗುತ್ತದೆನ್ನುವುದು ಸಿದ್ದರಾಮಯ್ಯಗೆ ಮನದಟ್ಟಾಗಿದೆ. ಅಷ್ಟೊಂದು ಕೆಟ್ಟ ಸ್ಥಿತಿಗೆ ಸರ್ಕಾರವನ್ನು ತಂದಿಟ್ಟಿದ್ದಾರೆ ಎಂದು ಅವರು ದೂರಿದರು.&lt;/p&gt;&lt;p&gt;ಚುನಾವಣೆ ಫಲಿತಾಂಶ ಏನೇ ಬರಬಹುದು. ಆದರೆ, ಸಿಎಂ ಮಾತ್ರ ಊಟ, ತಿಂಡಿ ಬಿಟ್ಟಿದ್ದಾರೆ. ರಾಜ್ಯದಲ್ಲಿ ನಾವು ನಡೆದುಕೊಂಡ ರೀತಿ ಸರಿಯಾಗಿಲ್ಲ ಎಂಬುದು ಮನದಟ್ಟಾಗಿದೆ. ಹಳ್ಳಿಗೆ ಹೋಗುವ ಮೊದಲು ದೇವಸ್ಥಾನದ ಮುಂದೆ ಒತ್ತಾಯದ ಮೇರೆಗೆ ಜನರನ್ನು ಸೇರಿಸಿ ಭಾಷಣ ಮಾಡುವುದು. ಹಳ್ಳಿಗೆ ₹10 ಲಕ್ಷ ಹಣ ಕೊಡುವುದು ಇದೇ ಸಿದ್ದರಾಮಯ್ಯನವರ ಕೆಲಸ ಎಂದು ಅವರು ಟೀಕಿಸಿದರು.&lt;/p&gt;&lt;p&gt;ಒಳ ಮೀಸಲಾತಿ ಹಾಳು ಮಾಡಿ ಎಲ್ಲ ಪರಿಶಿಷ್ಟ ಜಾತಿಯವರನ್ನು ಬೀದಿಯಲ್ಲಿ ನಿಲ್ಲಿಸಿದ್ದಾರೆ. ಅಂತಹ ಕಾಂಗ್ರೆಸ್ಸಿಗೆ ದಲಿತರು ಯಾಕೆ ಓಟು ಹಾಕಬೇಕು? ದಲಿತರ ಓಟು ಕೇಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಬಸವರಾಜ ಬೊಮ್ಮಾಯಿ ಎಸ್&zwj;ಟಿ ಮತ್ತು ಎಸ್&zwj;ಸಿಗಳಿಗೆ ಸೂಕ್ತ ಮೀಸಲಾತಿ ಹೆಚ್ಚಿಸಿದ್ದರು. ಅದನ್ನೂ ಸರಿಯಾಗಿ ಕಾಂಗ್ರೆಸ್ ಸರ್ಕಾರ ಪಾಲಿಸಲಿಲ್ಲ. ನ್ಯಾಯಾಲಯಕ್ಕೆ ಹೇಳಲು ಕಾಂಗ್ರೆಸ್ಸಿನವರಲ್ಲಿ ಬುದ್ಧಿ ಇಲ್ಲ. ಪರಿಶಿಷ್ಟ ವರ್ಗಕ್ಕೆ ಜಾತಿ ಆಧಾರಿತ ಮೀಸಲಾತಿ ಕೊಡಬೇಕೆಂಬುದಿದೆ. ಈ ಬಗ್ಗೆ ಪರಿಜ್ಞಾನವೇ ಕಾಂಗ್ರೆಸ್&zwj;ಗೆ ಇಲ್ಲ ಎಂದು ಅವರು ಕುಟುಕಿದರು.&lt;/p&gt;&lt;p&gt;ದಕ್ಷಿಣ ಕ್ಷೇತ್ರದ ಮುಸ್ಲಿಮರ ಸ್ಥಿತಿ ಕೇಳುವಂತಿಲ್ಲ. ಕಾಂಗ್ರೆಸ್ಸನ್ನು ಸಂಪೂರ್ಣ ನಂಬಿದ್ದರು. ಬಿಜೆಪಿ ಬಂದರೆ ಹಾಗೆ ಮಾಡ್ತಾರೆ ಹೀಗೆ ಮಾಡ್ತಾರೆ ಅಂತೆಲ್ಲಾ ಕಾಂಗ್ರೆಸ್&zwj;ನವರು ಸುಳ್ಳು ಹೇಳಿದ್ದರು. ಕಳೆದ 12 ವರ್ಷದಿಂದ ನರೇಂದ್ರ ಮೋದಿ ದೇಶ ನಡೆಸುತ್ತಿದ್ದಾರೆ. ಸಂವಿಧಾನ ಎಲ್ಲರಿಗೂ ಒಂದೇ. ಸಮಾನ ಹಕ್ಕು ಕರ್ತವ್ಯ ನೀಡಿದೆ. ಬಿಜೆಪಿ ಸರ್ಕಾರ ಯಾರಿಗೂ ಅನ್ಯಾಯ ಮಾಡಲ್ಲ. ದಲಿತರನ್ನು ಕೂಡಿಸುವ, ಶಕ್ತಿ ತುಂಬಿಸುವ ಕೆಲಸ ಬಿಜೆಪಿ ಮಾಡಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ ಎಂದು ಅವರು ತಿಳಿಸಿದರು. ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಮುರುಗೇಶ ನಿರಾಣಿ ಇತರರು ಇದ್ದರು.&lt;/p&gt;&lt;h2&gt;&lt;strong&gt;ಬದುಕೋಕೆ ಸಿದ್ದು ಸುಳ್ಳು ಹೇಳಲೇಬೇಕಿದೆ&lt;/strong&gt;&lt;/h2&gt;&lt;p&gt;ದಾವಣಗೆರೆ ಮುಸ್ಲಿಮರಿಗೆ ಈ ಚುನಾವಣೆಯಲ್ಲಿ ಸ್ವಾಭಿಮಾನದ ಪ್ರಶ್ನೆ ಬಂದಿದೆ. ಆ ಸ್ವಾಭಿಮಾನ ಅವರೇ ಕಾಪಾಡಿಕೊಳ್ಳಬೇಕು. ಕಾಂಗ್ರೆಸ್ ಸೋತರೆ ಮಾತ್ರ ಮುಸ್ಲಿಮರ ಸ್ವಾಭಿಮಾನ ಗೆಲ್ಲುತ್ತೆ. ಅದನ್ನು ಮುಸ್ಲಿಮರು ಅರಿಯಬೇಕು. ಈ ಬಾರಿ ಕಾಂಗ್ರೆಸ್ಸನ್ನು ಸೋಲಿಸುತ್ತೇವೆಂದು ಮುಸ್ಲಿಮರೇ ಎಲ್ಲಾ ಕಡೆ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜಾವಾದಿ. ಸಿದ್ದರಾಮಯ್ಯ ಕಾಂಗ್ರೆಸ್ ಬಾಗಿಲು ತುಳಿಯುವವರೆಗೂ ನಾನೂ ಅವರ ಅಭಿಮಾನಿಯಾಗಿದ್ದೆ. ಜನತಾದಳದಲ್ಲಿದ್ದಾಗ ಚೆನ್ನಾಗಿದ್ದರು. ಅನಂತರ ಬದಲಾದರು. ಅಪ್ಪಟ ಕಾಂಗ್ರೆಸ್ಸಿಗರಿಗಿಂತ ಹೆಚ್ಚು ಸುಳ್ಳನ್ನು ಸಿದ್ದರಾಮಯ್ಯ ಹೇಳ್ತಾರೆ. ಏಕೆಂದರೆ ಅವರು ಬದುಕಬೇಕು. ಸುಳ್ಳು ಹೇಳದಿದ್ದರೆ ಹಾಗೂ ವಂಚನೆ ಮಾಡದಿದ್ರೆ ಕಾಂಗ್ರೆಸ್&zwj;ನಲ್ಲಿ ಬದುಕಲು ಆಗಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದರು.&lt;/p&gt;]]></content:encoded>
            <category>davanagere</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/chalavadi-narayanaswamy-slams-cm-siddaramaiah-davanagere-gvd/articleshow-zt80wsk"/>
        </item>
    </channel>
</rss>
