<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 02 Aug 2026 08:44:54 +0530</lastBuildDate>
        <atom:link href="https://kannada.asianetnews.com/rss/davanagere" rel="self" type="application/rss+xml"/>
        <item>
            <title><![CDATA[Harihara: ಹಿಂದೂಗಳ ಆರಾಧ್ಯ ದೈವ ಅಯೋಧ್ಯಾ ರಾಮಮಂದಿರ ಸ್ಫೋಟಕ್ಕೆ ಸಂಚು! ಶಂಕಿತ ಉಗ್ರನ ಬಗ್ಗೆ ಪೊಲೀಸರಿಂದ ಸ್ಫೋಟಕ ಮಾಹಿತಿ]]></title>
            <link>https://kannada.asianetnews.com/karnataka-districts/davanagere-suspected-terrorist-arrested-in-harihar-ayodhya-blast-mystery-revealed-rav/articleshow-0b9wlq8</link>
            <guid isPermaLink="true">https://kannada.asianetnews.com/karnataka-districts/davanagere-suspected-terrorist-arrested-in-harihar-ayodhya-blast-mystery-revealed-rav/articleshow-0b9wlq8</guid>
            <pubDate>Thu, 25 Jun 2026 06:17:52 +0530</pubDate>
            <description><![CDATA[&lt;p&gt;ಹರಿಹರ(Harihara)ದ ಬನ್ನಿಕೋಡಿನಲ್ಲಿ ಮಂಗಳವಾರ ಬಂಧಿಸಲಾದ ಉತ್ತರ ಪ್ರದೇಶ(Uttarapradesh) ಮೂಲದ ಶಂಕಿತ ಉಗ್ರ ಸೋಹೆಲ್&zwnj;(Suspected terrorist Sohail) (20) ವಿಚಾರಣೆ ವೇಳೆ ದೇಶವನ್ನೇ ಬೆಚ್ಚಿ ಬೀಳಿಸುವಂತಹ ಸ್ಫೋಟಕ ಮಾಹಿತಿ ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvy3k3fz1zxbjw1a6mmsx9xk,imgname-----------------------2026-06-25t060937.321-1782348090879.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಹರಿಹರದ ಬನ್ನಿಕೋಡಿನಲ್ಲಿ ಮಂಗಳವಾರ ಉತ್ತರಪ್ರದೇಶದ ಸೋಹೆಲ್&zwnj; (20) ಎಂಬಾತನ ಬಂಧನ&lt;/li&gt; &lt;li&gt;ಈತನ ಮೊಬೈಲ್&zwnj;ನಲ್ಲಿ ಹಿಂದಿ-ಉರ್ದು ಮಿಶ್ರಿತ ಆಡಿಯೋ, ಮೆಸೇಜ್&zwnj;ಗಳು, ಉಗ್ರರ ಚಿತ್ರಗಳು ಪತ್ತೆ&lt;/li&gt; &lt;li&gt;ಪಾಕಿಸ್ತಾನದ ರಾಣಾ ಎಂಬಾತನ ಜತೆ ಸಂವಹನ. ಅಯೋಧ್ಯೆ ಮಂದಿರ ಸ್ಫೋಟಿಸುವ ಇಂಗಿತ&lt;/li&gt; &lt;li&gt;ಪಾಕಿಸ್ತಾನದ ಹಲವು ಉಗ್ರಗಾಮಿ ಸಂಘಟನೆಗಳ ವಾಟ್ಸಾಪ್&zwnj; ಗ್ರೂಪ್&zwnj;ನಲ್ಲಿ ಸಕ್ರಿಯನಾಗಿದ್ದ ಈತ&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ದಾವಣಗೆರೆ (ಜೂ.25): &lt;/strong&gt;ಹರಿಹರ(Harihara)ದ ಬನ್ನಿಕೋಡಿನಲ್ಲಿ ಮಂಗಳವಾರ ಬಂಧಿಸಲಾದ ಉತ್ತರ ಪ್ರದೇಶ(Uttarapradesh) ಮೂಲದ ಶಂಕಿತ ಉಗ್ರ ಸೋಹೆಲ್&zwnj;(Suspected terrorist Sohail) (20) ವಿಚಾರಣೆ ವೇಳೆ ದೇಶವನ್ನೇ ಬೆಚ್ಚಿ ಬೀಳಿಸುವಂತಹ ಸ್ಫೋಟಕ ಮಾಹಿತಿ ಬಯಲಾಗಿದೆ. &lsquo;ಕೋಟ್ಯಂತರ ಹಿಂದುಗಳ ಆರಾಧ್ಯ ದೈವದ ನೆಲೆಯಾದ ಅಯೋಧ್ಯೆಯ ರಾಮಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ನಾನು ಬಯಸಿದ್ದೆ&rsquo; ಎಂದು ಈತ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.&lt;/p&gt;&lt;h2&gt;ಸುಳಿವು ನೀಡಿದ ಉಗ್ರನ ಮೊಬೈಲ್!&lt;/h2&gt;&lt;p&gt;ಉತ್ತರ ಪ್ರದೇಶದ ಸಹರಾನ್&zwnj;ಪುರ ಜಿಲ್ಲೆಯ ಲಖ್ನೋತಿ ಗ್ರಾಮದವನಾದ ಈತನ ಮೊಬೈಲ್ ಜಾಡು ಹಿಡಿದು ಹೋದ ತನಿಖಾಧಿಕಾರಿಗಳಿಗೆ ಆಘಾತಕಾರಿ ಸಂಗತಿಗಳು ದೊರೆತಿವೆ. ಹಿಂದಿ-ಉರ್ದು ಮಿಶ್ರಿತ ಆಡಿಯೋಗಳು, ಮೆಸೇಜ್&zwnj;ಗಳು, ಕೈಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದ ಫೋಟೋಗಳು, ಉಗ್ರರನ್ನು ಹೋಲುವ ಚಿತ್ರಗಳು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಿಸುವ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ, ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸುವಂತಹ ವಿಚಾರ ಹೊಂದಿದ್ದ ಬಗ್ಗೆ ಆತನ ಮೊಬೈಲ್ ಸುಳಿವು ನೀಡಿದೆ.&lt;/p&gt;&lt;h3&gt;ಪಾಕಿಸ್ತಾನದ ರಾಣಾ ಎಂಬುವವನ ಸಂಪರ್ಕದಲ್ಲಿದ್ದ ಉಗ್ರ&lt;/h3&gt;&lt;p&gt;ಪಾಕಿಸ್ತಾನ ಮೂಲದ ರಾಣಾ ಎಂಬ ವ್ಯಕ್ತಿ ಜೊತೆ ಈತ ಉರ್ದುಮಿಶ್ರಿತ ಉತ್ತರ ಪ್ರದೇಶ ಶೈಲಿಯ ಹಿಂದಿಯಲ್ಲಿ ಮಾತನಾಡಿದ್ದು, &lsquo;ನಾನು ಅಯೋಧ್ಯೆಯ ರಾಮಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ಬಯಸಿದ್ದು, ಇದಕ್ಕಾಗಿ ಸ್ಕೆಚ್&zwnj; ಹಾಕುತ್ತಿದ್ದೇನೆ&rsquo; ಎಂದು ತಿಳಿಸಿದ್ದ. ಅಲ್ಲದೆ, ದೇಶದ ರಕ್ಷಣೆ, ಭದ್ರತೆಗೆ ಧಕ್ಕೆ ತರುವಂತಹ ಹಲವು ಸಂದೇಶಗಳನ್ನು ರಾಣಾಗೆ ಕಳಿಸಿದ್ದ. ರಾಣಾ ಜೀ ಎಂಬ ಹೆಸರಿನಲ್ಲಿ ಆತನ ನಂಬರನ್ನು ಸೇವ್ ಮಾಡಿಕೊಂಡಿದ್ದ.&lt;/p&gt;&lt;p&gt;ಜೊತೆಗೆ, ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿರುವುದು ಸಹ ಮೊಬೈಲ್&zwnj;ನಲ್ಲಿ ದಾಖಲಾಗಿದೆ. ಪಾಕ್ ಮೂಲದ ಹಲವು ಉಗ್ರ ಸಂಘಟನೆಗಳ ವಾಟ್ಸಪ್&zwnj; ಗ್ರೂಪ್&zwnj;ಗಳಲ್ಲಿ ಈತ ಸಕ್ರಿಯನಾಗಿದ್ದ. ಮೆಮೊನ್&zwnj; ಆ್ಯಂಡ್ ಜುಟ್ಟೂ 333, ರಾಣಾ ಬಾಯಿ ಗ್ರೂಪ್ 333...., ವಿಐಪಿ ಪಬ್ಲಿಕ್&zwnj; ಚಾನಲ್&zwnj;ಗಳಿಗೆ ಸಬ್&zwnj;ಸ್ಕ್ರೈಬ್&zwnj; ಆಗಿದ್ದಾನೆ. ಅಲ್ಲದೆ, ಮೊಬೈಲ್&zwnj;ನಲ್ಲಿ ಹಲವಾರು ಅಪ್ಲಿಕೇಷನ್&zwnj; ಹೊಂದಿದ್ದು, ಇವುಗಳಲ್ಲಿ ಪಾಕಿಸ್ತಾನ ಮೂಲದ ಮೊಬೈಲ್ ನಂಬರ್&zwnj;ಗಳ ಜೊತೆ ಚಾಟ್&zwnj; ಮಾಡಿರುವುದು ಪತ್ತೆಯಾಗಿದೆ.&lt;/p&gt;&lt;h3&gt;ಸೋಹೆಲ್&zwnj;ಗೆ ನ್ಯಾಯಾಂಗ ಬಂಧನ:&lt;/h3&gt;&lt;p&gt;ಪೇಂಟರ್ ಕೆಲಸಗಾರನ ಹೆಸರಲ್ಲಿ ಕಳೆದ 15-20 ದಿನಗಳಿಂದ ಬನ್ನಿಕೋಡು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಈತನನ್ನು ಮಂಗಳವಾರ ಬೆಳಗಿನ ಜಾವ ಬಂಧಿಸಲಾಗಿತ್ತು. ಬುಧವಾರ ಈತನನ್ನು ತುಮಕೂರಿಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಇತ್ತೀಚೆಗಷ್ಟೇ ತುಮಕೂರಿನಲ್ಲಿ ಅಲ್ಲಾಭಕ್ಷಿ ಎಂಬಾತನನ್ನು ಬಂಧಿಸಲಾಗಿದ್ದು, ಈತನ ಪ್ರಕರಣಕ್ಕೂ, ಆತನ ಬಂಧನಕ್ಕೂ ಸಾಮ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈತನನ್ನು ತುಮಕೂರಿಗೆ ಕರೆದೊಯ್ಯಲಾಗಿತ್ತು. ಬಳಿಕ, ಹರಿಹರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ ಒಂದು ದಿನದ ನ್ಯಾಯಾಂಗ ಬಂಧ&zwnj;ನ ವಿಧಿಸಿದೆ. ಗುರುವಾರ ಮತ್ತೆ ಈತನನ್ನು ಕೋರ್ಟ್&zwnj;ಗೆ ಹಾಜರುಪಡಿಸಲಾಗುವುದು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-suspected-terrorist-arrested-in-harihar-ayodhya-blast-mystery-revealed-rav/articleshow-0b9wlq8"/>
        </item>
        <item>
            <title><![CDATA[ಬಟ್ಟೆ ಎಳೆದಾಡಿ "ಬೇಬಿ ಡಾರ್ಲಿಂಗ್ ನನ್ನ ಇಷ್ಟಪಡ್ತೀಯಾ?, ವಿದ್ಯಾರ್ಥಿನಿಯರಿಗೆ ದಾವಣಗೆರೆ ಉಪನ್ಯಾಸಕನ ಕಾಟ!]]></title>
            <link>https://kannada.asianetnews.com/karnataka-districts/davanagere-college-lecturer-suspended-booked-under-pocso-female-students-gdp/articleshow-0kinytn</link>
            <guid isPermaLink="true">https://kannada.asianetnews.com/karnataka-districts/davanagere-college-lecturer-suspended-booked-under-pocso-female-students-gdp/articleshow-0kinytn</guid>
            <pubDate>Wed, 15 Jul 2026 15:42:37 +0530</pubDate>
            <description><![CDATA[ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಅನ್ವಯ, ಆರೋಪಿ ಉಪನ್ಯಾಸಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಜಿಲ್ಲಾಧಿಕಾರಿಗಳು ಆತನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxjm0gyqm02kkq7tx5nww41p,imgname-davangere-college-lecturer-1784110138327.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ಜಿಲ್ಲೆಯ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಪನ್ಯಾಸಕನೊಬ್ಬ ಕಾಲೇಜು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿ, ಲೈಂಗಿK ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿ ಉಪನ್ಯಾಸಕ ಮಲ್ಲಿಕಾರ್ಜುನ ವಿರುದ್ಧ ವಿದ್ಯಾರ್ಥಿನಿಯರ ಪೋಷಕರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಉಪನ್ಯಾಸಕ ಮಲ್ಲಿಕಾರ್ಜುನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಎಫ್&zwnj;ಐಆರ್ (FIR) ದಾಖಲಾಗಿದೆ.&lt;/p&gt;&lt;p&gt;ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು, ಇಲಾಖಾ ವಿಚಾರಣೆ ಮುಗಿಯುವವರೆಗೆ ಉಪನ್ಯಾಸಕ ಮಲ್ಲಿಕಾರ್ಜುನನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.&lt;/p&gt;&lt;h2&gt;ಬೇಬಿ, ಡಾರ್ಲಿಂಗ್ ನನ್ನ ಇಷ್ಟಪಡ್ತೀಯಾ?&lt;/h2&gt;&lt;p&gt;ಸಂತ್ರಸ್ತ ಬಾಲಕಿ ತಾಯಿ ನೀಡಿದ ದೂರಿನಲ್ಲಿ ತಮ್ಮ ಮಗಳೊಂದಿಗೆ ಉಪನ್ಯಾಸಕ ನಡೆದುಕೊಂಡ ಕೆಟ್ಟ ವರ್ತನೆಯನ್ನು ಉಲ್ಲೇಖಿಸಿದ್ದಾರೆ. ಉಪನ್ಯಾಸಕ ಮಲ್ಲಿಕಾರ್ಜುನ ಕಾಲೇಜಿನ ಬಾಲಕಿಯರ ಜೊತೆ ನಿರಂತರವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ವಿಷಯವನ್ನು ನನ್ನ ಮಗಳು ನನ್ನ ಬಳಿ ತಿಳಿಸಿದ್ದಳು. ಪಾಠ ಮಾಡುವ ನೆಪದಲ್ಲಿ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡುತ್ತಿದ್ದಲ್ಲದೆ, ಬಟ್ಟೆ ಹಿಡಿದು ಎಳೆದಾಡಿ &quot;ಬೇಬಿ, ಡಾರ್ಲಿಂಗ್ ನನ್ನ ಇಷ್ಟಪಡ್ತೀಯಾ?&quot; ಎಂದು ಲೈಂಗಿಕವಾಗಿ ಪೀಡಿಸುತ್ತಿದ್ದ.&lt;/p&gt;&lt;p&gt;ಕಾಲೇಜಿನಲ್ಲಿ ಎಲ್ಲರೂ ಹೋದ ನಂತರ &quot;ನೀನು ಒಬ್ಬಳೇ ರೂಮ್&zwnj;ನಲ್ಲಿ ಇರು&quot; ಎಂದು ಬಾಲಕಿಗೆ ಒತ್ತಾಯಿಸುತ್ತಿದ್ದ. ಇದೇ ರೀತಿ ಕಾಲೇಜಿನ ಇತರ ಬಾಲಕಿಯರ ಮೇಲೂ ಆತ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದ್ಯಾರ್ಥಿನಿಯರ ಭವಿಷ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಉಪನ್ಯಾಸಕ ಮಲ್ಲಿಕಾರ್ಜುನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಯಿ ದೂರಿನಲ್ಲಿ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/davanagere-college-lecturer-suspended-booked-under-pocso-female-students-gdp/articleshow-0kinytn"/>
        </item>
        <item>
            <title><![CDATA[ದಾವಣಗೆರೆ ದುರ್ಗಾಂಬಿಕಾ ದೇವಿ ಆಭರಣ ಕದ್ದು ಮಾರಿದ ಪೂಜಾರಿ; ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಾರ್ನಿಂಗ್!]]></title>
            <link>https://kannada.asianetnews.com/karnataka-districts/davanagere-temple-pujari-steals-goddess-durgambika-gold-ss-mallikarjun-issues-strict-warning/articleshow-102d7d9</link>
            <guid isPermaLink="true">https://kannada.asianetnews.com/karnataka-districts/davanagere-temple-pujari-steals-goddess-durgambika-gold-ss-mallikarjun-issues-strict-warning/articleshow-102d7d9</guid>
            <pubDate>Mon, 27 Jul 2026 08:33:50 +0530</pubDate>
            <description><![CDATA[&lt;p&gt;ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಪೂಜಾರಿ ಆಕಾಶ್, ದೇವಿಯ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ಕರಗಿಸಿ ಮಾರಾಟ ಮಾಡಿದ್ದಾನೆ. ಈ ವಂಚನೆ ಬೆಳಕಿಗೆ ಬಂದ ನಂತರ, ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದ ದೇವಸ್ಥಾನ ಟ್ರಸ್ಟ್, ಕಳುವಾದ ಸಂಪೂರ್ಣ ಚಿನ್ನವನ್ನು ವಾಪಸ್ ನೀಡುವಂತೆ ಆರೋಪಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಸದ್ಯ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kygr1rzbfzd67j6awn0rf3fa,imgname-davanagere-durgambika-temple-gold-theft-by-pujari-1785121006571.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜು.27): ದಾ&lt;/strong&gt;ವಣಗೆರೆ ನಗರದ ಗ್ರಾಮ ದೇವತೆ, ಭಕ್ತರ ಆರಾಧ್ಯ ದೈವ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಮಹಾ ವಂಚನೆಯೊಂದು ಬೆಳಕಿಗೆ ಬಂದಿದ್ದು, ದೇವಿಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೇವಸ್ಥಾನದ ಪೂಜಾರಿಯೇ ಕದ್ದು ಮಾರಾಟ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.&lt;/p&gt;&lt;p&gt;ದೇವಸ್ಥಾನದ ಅರ್ಚಕರಲ್ಲಿ ಒಬ್ಬನಾದ ಆಕಾಶ್ ಎಂಬಾತ ದೇವಿಯ ಮೈಮೇಲಿದ್ದ ಹಾಗೂ ಭಕ್ತರು ನೀಡಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ಅವುಗಳನ್ನು ಕರಗಿಸಿ ಚಿನ್ನದ ಗಟ್ಟಿಯನ್ನಾಗಿ ಮಾಡಿ ಮಾರಾಟ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ದೇವಸ್ಥಾನದಲ್ಲಿದ್ದ ದೇವಿಯ ಒಡವೆಗಳು ನಾಪತ್ತೆಯಾಗಿರುವ ಸುದ್ದಿ ನಗರದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಆಕ್ರೋಶಗೊಂಡ ಸಾವಿರಾರು ಭಕ್ತರು ದೇವಸ್ಥಾನದ ಆವರಣದಲ್ಲಿ ಜಮಾಯಿಸಿದರು.&lt;/p&gt;&lt;h2&gt;&lt;strong&gt;ದೇವಸ್ಥಾನ ಟ್ರಸ್ಟ್&zwnj;ನಿಂದ ತುರ್ತು ಸಭೆ:&lt;/strong&gt;&lt;/h2&gt;&lt;p&gt;ಸ್ಥಿತಿ ಗಂಭೀರಗೊಳ್ಳುತ್ತಿದ್ದಂತೆಯೇ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲೇ ತುರ್ತು ಸಭೆ ನಡೆಸಲಾಯಿತು. ಕಳ್ಳತನ ಎಸಗಿದ್ದ ಪೂಜಾರಿ ಆಕಾಶ್ ಹಾಗೂ ಆತನಿಂದ ಅಕ್ರಮವಾಗಿ ಚಿನ್ನಾಭರಣಗಳನ್ನು ಖರೀದಿಸಿದ್ದ ಸ್ಥಳೀಯ ವ್ಯಾಪಾರಿಯನ್ನು ಆಡಳಿತ ಮಂಡಳಿಯು ಸ್ಥಳಕ್ಕೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡಿತು.&lt;/p&gt;&lt;h2&gt;&lt;strong&gt;ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಖಡಕ್ ವಾರ್ನಿಂಗ್:&lt;/strong&gt;&lt;/h2&gt;&lt;p&gt;ಸಭೆಯಲ್ಲಿ ಮಾತನಾಡಿದ ಎಸ್.ಎಸ್. ಮಲ್ಲಿಕಾರ್ಜುನ್, &quot;ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ ಪ್ರತಿಯೊಂದು ಚಿನ್ನಾಭರಣದ ನಿಖರವಾದ ಲೆಕ್ಕ ನಮ್ಮಲ್ಲಿದೆ. ಎಷ್ಟು ಪ್ರಮಾಣದ ಚಿನ್ನಾಭರಣ ಇತ್ತು ಮತ್ತು ಅದರಲ್ಲಿ ಎಷ್ಟು ನಾಪತ್ತೆಯಾಗಿದೆ ಎಂಬ ಸಂಪೂರ್ಣ ವಿವರ ನಮ್ಮಲ್ಲಿದ್ದು, ಪ್ರತಿಯೊಂದು ಗ್ರಾಮ್ ಚಿನ್ನವೂ ವಾಪಸ್ ಬರಲೇಬೇಕು&quot; ಎಂದು ಕಳವಿನ ಕೃತ್ಯ ಎಸಗಿದ ಪೂಜಾರಿ ಹಾಗೂ ಅದನ್ನು ಖರೀದಿಸಿದ ವ್ಯಾಪಾರಿಗೆ ನೇರವಾಗಿ ಎಚ್ಚರಿಕೆ ನೀಡಿದರು.&lt;/p&gt;&lt;p&gt;ಇಷ್ಟೆಲ್ಲಾ ಹೈಡ್ರಾಮಾ ನಡೆದರೂ, ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ಪ್ರಕರಣ (FIR) ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ದೇವಸ್ಥಾನದ ಆವರಣದಲ್ಲಿ ಬಿಗುವಿನ ವಾತಾವರಣ ನೆಲೆಸಿದ್ದು, ಭಕ್ತರು ಕಳುವಾದ ಆಭರಣಗಳ ಶೀಘ್ರ ಮರುಪಡೆಯುವಿಕೆಗೆ ಆಗ್ರಹಿಸುತ್ತಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/davanagere-temple-pujari-steals-goddess-durgambika-gold-ss-mallikarjun-issues-strict-warning/articleshow-102d7d9"/>
        </item>
        <item>
            <title><![CDATA[ಹೊನ್ನಾಳಿ-ದಾವಣಗೆರೆಗೆ ಬಸವಾಪಟ್ಟಣ ಮೂಲಕ ಹೊಸ ಬಸ್ ಆರಂಭ; ಮಾರ್ಗ, ಸಮಯ ಈ ರೀತಿಯಾಗಿದೆ]]></title>
            <link>https://kannada.asianetnews.com/karnataka-districts/new-bus-service-starts-from-honnali-to-davanagere-via-basavapattana-timing-details-mrq/articleshow-6ikw7gm</link>
            <guid isPermaLink="true">https://kannada.asianetnews.com/karnataka-districts/new-bus-service-starts-from-honnali-to-davanagere-via-basavapattana-timing-details-mrq/articleshow-6ikw7gm</guid>
            <pubDate>Tue, 23 Jun 2026 07:12:45 +0530</pubDate>
            <description><![CDATA[&lt;p&gt;ಶಾಸಕ ಡಿ.ಜಿ. ಶಾಂತನಗೌಡಅವರು ಹೊನ್ನಾಳಿಯಿಂದ ದಾವಣಗೆರೆಗೆ ಬಸವಾಪಟ್ಟಣ ಮಾರ್ಗವಾಗಿ ನೂತನ ಕೆಎಸ್&zwnj;ಆರ್&zwnj;ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ಹೊಸ ಸೇವೆಯು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಹೊನ್ನಾಳಿಯ ಜನತೆಗೆ ಅನುಕೂಲವಾಗಲಿದ್ದು, ಇದರ ಸದುಪಯೋಗ ಪಡೆಯುವಂತೆ ಜನತೆಗೆ ಕರೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs205n0ng9jb07z9wag9rcw,imgname-honnali-bus-1782178649760.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ದೇಶದಲ್ಲಿಯೇ ಕರ್ನಾಟಕ ಸರ್ಕಾರ ಬಡವರಿಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಆ ಮೂಲಕ ದೇಶದಲ್ಲಿನ ಇತರೆ ರಾಜ್ಯಗಳಿಗೂ ಕೂಡ ಮಾದರಿಯಾಗಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿದ್ದು ಸಂತಸದ ಸಂಗತಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.&lt;/p&gt;&lt;p&gt;ಸೋಮವಾರ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಲಾದ ಹೊನ್ನಾಳಿ- ಬೆನಕನಹಳ್ಳಿ- ಕೈಮರ- ದಾಗಿನಕಟ್ಟೆ- ಕತ್ತಲಗೆರೆ ಬಸವಾಪಟ್ಟಣ ಮಾರ್ಗ ಮೂಲಕ ದಾವಣಗೆರೆಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.&lt;/p&gt;&lt;h2&gt;&lt;strong&gt;ಬಸ್ ಸಮಯ ಈ ರೀತಿಯಾಗಿದೆ&lt;/strong&gt;&lt;/h2&gt;&lt;p&gt;ಬೆಳಗ್ಗೆ ಹೊನ್ನಾಳಿಯಿಂದ ಈ ಮಾರ್ಗವಾಗಿ ದಾವಣಗೆರೆಗೆ 4 ಸಿಂಗಲ್ ಟ್ರಿಪ್ ಮಾಡಿ ನಂತರ ಸಂಜೆ 6 ಗಂಟೆಗೆ ಹೊನ್ನಾಳಿಯಿಂದ ಶಿವಮೊಗ್ಗ ತಲುಪಿ, ಸಂಜೆ 7 ಗಂಟೆಗೆ ಶಿವಮೊಗ್ಗದಿಂದ ಹೊನ್ನಾಳಿಗೆ ರಾತ್ರಿ 8 ಗಂಟೆಗೆ ಬಂದು ತಲುಪಲಿದೆ. ಜನತೆ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇ&zwj;ಳಿದರು.&lt;/p&gt;&lt;p&gt;ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ಹೊನ್ನಾಳಿ ಅತ್ಯಂತ ಆಯಕಟ್ಟಿನ ಭೌಗೋಳಿಕ ಪ್ರದೇಶದಲ್ಲಿದೆ. ಇದು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸಂಪರ್ಕ ಕೊಂಡಿಯಂತಿದೆ. ಪ್ರತಿ ದಿನ 250ಕ್ಕೂ ಹೆಚ್ಚು ಬಸ್&zwnj;ಗಳನ್ನು ಹೊನ್ನಾಳಿ ಮಾರ್ಗದ ಮೂಲಕ ಹಾದುಹೋಗುತ್ತಿವೆ. ಪ್ರಸ್ತುತ ಹೊನ್ನಾಳಿ ಡಿಪೋದಲ್ಲಿ ಸುಮಾರು 62 ಬಸ್&zwnj;ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದರು.&lt;/p&gt;&lt;p&gt;ಈ ಸಂದರ್ಭ ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಕಾಂಗ್ರೆಸ್ ಹೊನ್ನಾಳಿ ಬ್ಲಾಕ್ ಅಧಕ್ಷ್ಯ ಸಣ್ಣಕ್ಕಿ ಬಸವನಗೌಡ, ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷ ಆರ್.ನಾಗಪ್ಪ, ಕೆಎಸ್&zwnj;ಆರ್&zwnj;ಟಿಸಿ ಡಿಪೋ ವ್ವವಸ್ಥಾಪಕ ರಾಮಚಂದ್ರಪ್ಪ, ಮೇಲ್ವಿಚಾರಕ ಮಂಜುನಾಥ ಸೇರಿದಂತೆ ಕೆಎಸ್&zwnj;ಆರ್&zwnj;ಟಿಸಿ ಸಿಬ್ಬಂದಿ ಇದ್ದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/new-bus-service-starts-from-honnali-to-davanagere-via-basavapattana-timing-details-mrq/articleshow-6ikw7gm"/>
        </item>
        <item>
            <title><![CDATA[50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ: ಜನರಿಗೆ ಕೈಗೆಟುಕುವ ಬೆಲೆಗೆ ನಿವೇಶನ]]></title>
            <link>https://kannada.asianetnews.com/karnataka-districts/davanagere-harihara-new-development-on-more-than-50-acres-of-land-says-minister-yathindra-siddaramaiah-mrq/articleshow-7y4b4uh</link>
            <guid isPermaLink="true">https://kannada.asianetnews.com/karnataka-districts/davanagere-harihara-new-development-on-more-than-50-acres-of-land-says-minister-yathindra-siddaramaiah-mrq/articleshow-7y4b4uh</guid>
            <pubDate>Sat, 04 Jul 2026 07:55:19 +0530</pubDate>
            <description><![CDATA[ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸಿ, ಜನರಿಗೆ ಕೈಗೆಟುಕುವ ದರದಲ್ಲಿ ನಿವೇಶನ ನೀಡಲು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ, ಪೌರಕಾರ್ಮಿಕರ ನೇಮಕಾತಿ, ಪಾರ್ಕ್ ಅಭಿವೃದ್ಧಿ ಮತ್ತು ಇ-ಖಾತಾ ಪ್ರಕ್ರಿಯೆ ಸರಳೀಕರಣಗೊಳಿಸುವಂತೆಯೂ ಅವರು ಸೂಚನೆ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kwnf0mhhx1jcd3ac78v8y1v6,imgname-davanagere-harihara-1783131820593.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ:&lt;/strong&gt; ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಸ್ಟರ್ ಪ್ಲಾನ್&zwnj; ಪರಿಷ್ಕರಣೆಗೆ ಅನುಮೋದನೆ ನೀಡಿ, ಜನರಿಗೆ ಕೈಗೆಟುಕುವ ದರದಲ್ಲಿ ನಿವೇಶನ ಹಂಚಿಕೆ ಮಾಡಲು 50 ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸುವುದಾಗಿ ನಗರಾಭಿ&zwj;ವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.&lt;/p&gt;&lt;p&gt;ನಗರದ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಗರ ಪಾಲಿಕೆ ಹಾಗೂ ದೂಡಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೂಡಾದ ಮಾಸ್ಟರ್ ಪ್ಲಾನ್ ಪರಿಷ್ಕರಣೆಗೆ ಅನುಮೋದನೆ ನೀಡಿ, ಪ್ರಾಧಿಕಾರದಿಂದ ಕೈಗೆಟುಕುವ ದರದಲ್ಲಿ ಜನರಿಗೆ ನಿವೇಶನ ಹಂಚಿಕೆಗೆ 50 ಎಕರೆಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸಲಾಗುವುದು ಎಂದರು.&lt;/p&gt;&lt;h2&gt;&lt;strong&gt;ಪ್ರಾಧಿಕಾರದಿಂದ ಬಡಾವಣೆಗಳ ಅಭಿವೃದ್ಧಿ&lt;/strong&gt;&lt;/h2&gt;&lt;p&gt;ಕುಂದುವಾಡ ಸರ್ವೆ ನಂಬರಲ್ಲಿ ಪ್ರಾಧಿಕಾರದಿಂದ ನಿವೇಶನ ರಚಿಸಲು ಸ್ವಾಧೀನ ಮಾಡಿದ್ದ ಜಮೀನು ವಾಪಸ್ ನೀಡುವಂತೆ ರೈತರ ಒತ್ತಾಯವಿದೆ. ಯಾರು ಜಮೀನು ನೀಡಲು ಒಪ್ಪಿ ಬರುತ್ತಾರೋ ಅಂತಹ ರೈತರ ಜಮೀನು ಮಾತ್ರ ಪಡೆಯಬೇಕು. ಇಲ್ಲವಾದರೆ ನೇರ ಖರೀದಿ ಮೂಲಕ ಎಲ್ಲೆಲ್ಲಿ ಜಮೀನು ಸಿಗುತ್ತದೆ ಅಂತಹ ಕಡೆಗಳಲ್ಲಿ ಪ್ರಾಧಿಕಾರದಿಂದ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ, ನಿವೇಶನಗಳನ್ನಾಗಿ ಪರಿವರ್ತಿಸಬೇಕು ಎಂದು ಅವರು ಹೇಳಿದರು.&lt;/p&gt;&lt;p&gt;ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕಾತಿಗೆ ಬಾಕಿ ಇರುವ ಪೌರ ಕಾರ್ಮಿಕರ ನೇಮಕಾತಿಯನ್ನು ಕಾಲಮಿತಿಯೊಳಗೆ ಮುಗಿಸಬೇಕು. ಎಸ್&zwnj;ಸಿಪಿ ಮತ್ತು ಟಿಎಸ್&zwj;ಪಿ ಅನುದಾನವನ್ನು ಪೌರಕಾರ್ಮಿಕರ ಆರೋಗ್ಯ, ಅಂತಹವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲುಬಳಸಬೇಕು ಎಂದು ಸೂಚಿಸಿದರು.&lt;/p&gt;&lt;p&gt;ದಾವಣಗೆರೆ, ಹರಿಹರ ನಗರದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಹಾಗೂ ಪ್ರಸ್ತುತ ಇರುವ ಪಾರ್ಕ್&zwj;ಗಳಲ್ಲಿ ಸಾರ್ವಜನಿಕರಿಗೆ, ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿಶೇಷ ಚೇತನರಿಗೆ ಆಸನ ಸೌಲಭ್ಯ ಮಾಡಬೇಕು, ಬೀದಿದೀಪ, ಶೌಚಾಲಯ, ಕ್ರೀಡಾ ಸಾಮಗ್ರಿಗಳು ಅಲ್ಲಿರಬೇಕು. ಮಕ್ಕಳಿಗೆ ಅಪಾಯಕಾರಿ ಆಗುವಂತಹ ಯಾವುದೇ ಕ್ರೀಡಾ ವಸ್ತುಗಳನ್ನು ಅಳವಡಿಸಬೇಡಿ ಎಂದು ಹೇಳಿದರು.&lt;/p&gt;&lt;p&gt;ಇ-ಖಾತಾ ಜನರಿಗೆ ಸುಲಭವಾಗಿ ಸಿಗುವಂತಾಗಬೇಕು. ಇದನ್ನು ಅಭಿಯಾನದ ರೀತಿ ಕೈಗೊಂಡು ಸರಳವಾಗಿ ಜನರಿಗೆ ಇ-ಖಾತಾ ದಾಖಲೆ ಸಿಗುವಂತೆ ನೋಡಿಕೊಳ್ಳಿ ಎಂದು ಸಚಿವ ಯತೀಂದ್ರ ಸೂಚನೆ ನೀಡಿದರು. ಆಗ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಪಾಲಿಕೆ ಸಿಬ್ಬಂದಿ ಇ-ಖಾತಾ ನೀಡುವ ವಿಷಯದಲ್ಲಿ ವಿಳಂಬ ಮಾಡುತ್ತಿದ್ದರು. ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿದಾಗ ಎಲ್ಲರೂ ಎಚ್ಚರವಹಿಸಿ, ಚುರುಕಾದರು ಎಂದು ಸಚಿವರ ಗಮನಕ್ಕೆ ತಂದರು.&lt;/p&gt;&lt;h3&gt;&lt;strong&gt;2ನೇ ಹಂತದ ನಗರಗಳಲ್ಲಿ ನಗರೀಕರಣ ವೇಗ&lt;/strong&gt;&lt;/h3&gt;&lt;p&gt;ರಾಜ್ಯದಲ್ಲಿ ದಾವಣಗೆರೆ ಸೇರಿದಂತೆ 2ನೇ ಹಂತದ ನಗರಗಳಲ್ಲಿ ನಗರೀಕರಣ ವೇಗದಲ್ಲಿ ಸಾಗುತ್ತಿದೆ. ಹೈರೈಸ್ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿವೆ. ಜಿ+2 ಹಾಗೂ ಜಿ+3 ಮಾದರಿ ವಸತಿ ಕಟ್ಟಡಗಳ ನಿರ್ಮಾಣ, 21 ಮೀಟರ್ ಎತ್ತರದವರೆಗೆ ಕಟ್ಟಡಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ಚಿಂತನೆ ನಡೆಯುಲಿ ಎಂದು ಹೇಳಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-harihara-new-development-on-more-than-50-acres-of-land-says-minister-yathindra-siddaramaiah-mrq/articleshow-7y4b4uh"/>
        </item>
        <item>
            <title><![CDATA[ಆರ್‌ಎಸ್‌ಎಸ್‌ನ ಲೆಕ್ಕ ಕೇಳಿದ ಬೆನ್ನಲ್ಲೇ ಖರ್ಗೆ ಕುಟುಂಬದ ಆಸ್ತಿ ಕೆದಕಿದ ಎಂಪಿ ರೇಣುಕಾಚಾರ್ಯ!]]></title>
            <link>https://kannada.asianetnews.com/politics/rss-registration-row-mp-renukacharya-attacks-priyank-kharge-rav/articleshow-binwl9u</link>
            <guid isPermaLink="true">https://kannada.asianetnews.com/politics/rss-registration-row-mp-renukacharya-attacks-priyank-kharge-rav/articleshow-binwl9u</guid>
            <pubDate>Thu, 18 Jun 2026 07:23:58 +0530</pubDate>
            <description><![CDATA[ಆರೆಸ್ಸೆಸ್ ಟೀಕಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಭದ್ರಾ ಡ್ಯಾಂ ಬಳಿ ಜಿಲೆಟಿನ್ ಬಳಸಿ ಏಕಶಿಲೆ ಸ್ಫೋಟಿಸುತ್ತಿರುವುದು ಡ್ಯಾಂನ ಸುರಕ್ಷತೆಗೆ ಅಪಾಯ ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvc6rz8xhezxqw0zjmj0c9qf,imgname-----------------------2026-06-18t071616.959-1781747449117.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರೆಸ್ಸೆಸ್&zwnj; ಟೀಕಿಸುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ&lt;/p&gt;&lt;p&gt;ಆರೆಸ್ಸೆಸ್&zwnj;ಗೆ ನೂರಾರು ವರ್ಷಗಳ ಇತಿಹಾಸವಿದೆ.&lt;/p&gt;&lt;p&gt;&lt;strong&gt;ದಾವಣಗೆರೆ (ಜೂ.18): &lt;/strong&gt;ಆರೆಸ್ಸೆಸ್ ನೋಂದಣಿ(RSS Registration) ಮಾಡಿಸುವಂತೆ ಮೋಹನ ಭಾಗವತ್&zwnj;(Mohan Bhagwath) ಅವರಿಗೆ ಪತ್ರ ಬರೆದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank kharge)ಗೆ ಅಧಿಕಾರದ ಮದ ಹೆಚ್ಚಾದಂತೆ ಕಾಣುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ(MP Renukacharya) ಹರಿಹಾಯ್ದಿದ್ದಾರೆ.&lt;/p&gt;&lt;p&gt;ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President Mallikarjun kharge)ಯವರ ಮಗ ಎಂಬುದನ್ನು ಬಿಟ್ಟರೆ ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಐಡೆಂಟಿಟಿ ಸಹ ಇಲ್ಲ. ಇಂತಹ ವ್ಯಕ್ತಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಆರೆಸ್ಸೆಸ್(RSS) ಬಗ್ಗೆ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಂಘವನ್ನು ನೋಂದಣಿ ಮಾಡಿಸುವಂತೆ ಪತ್ರ ಬರೆಯಲು ಪ್ರಿಯಾಂಕ್ ಖರ್ಗೆ ಯಾರು? ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲೇ ಆರೆಸ್ಸೆಸ್ ಅಸ್ತಿತ್ವಕ್ಕೆ ಬಂದಿದೆ. ಈ ವಿಚಾರವನ್ನು ಪ್ರಿಯಾಂಕ ಖರ್ಗೆ ಅರಿಯಲಿ ಎಂದರು.&lt;/p&gt;&lt;p&gt;ಆರ್&zwnj;ಡಿಪಿಆರ್&zwnj;, ಐಟಿ ಬಿಟಿ ಸಚಿವರಾಗಿ ಹಿಂದೆ ಇದೇ ಪ್ರಿಯಾಂಕ್ ಖರ್ಗೆ ಮಾಡಿದ ಸಾಧನೆ ಏನು? ರಾಜ್ಯದಲ್ಲಿ ಮಟ್ಕಾ, ಇಸ್ಪೀಟ್&zwnj; ಜೂಜಾಟ ಕೇಂದ್ರಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಇನ್ನೂ ಅನೇಕ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಐಜಿಪಿ, ಎಸ್ಪಿ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಮೊದಲು ಅಂತಹವುಗಳಿಗೆ ಪ್ರಿಯಾಂಕ್ ಖರ್ಗೆ ಕಡಿವಾಣ ಹಾಕಲಿ ಎಂದರು.&lt;/p&gt;&lt;h2&gt;ಆರೆಸ್ಸೆಸ್ ಟೀಕಿಸೋದು ಮೊದಲು ನಿಲ್ಲಿಸಿ:&lt;/h2&gt;&lt;p&gt;ಪ್ರಿಯಾಂಕ್ ಖರ್ಗೆ ನಿಮ್ಮ ಹಾಗೂ ನಿಮ್ಮ ತಂದೆಯ ಆಸ್ತಿ ಹಿಂದೆ ಎಷ್ಟು ಇತ್ತು? ಈಗ ಎಷ್ಟಾಗಿದೆ ಎಂಬುದನ್ನು, ಆಸ್ತಿಯ ಮೂಲ ಏನೆಂಬುದನ್ನು ಮೊದಲು ಬಹಿರಂಗಪಡಿಸಿ. ಪಿಎಫ್ಐ, ಎಸ್&zwnj;ಡಿಪಿಐ ಸಂಘಟನೆಗಳು ನೋಂದಣಿ ಆಗಿದೆಯಾ? ಮೊದಲು ದೇಶದ್ರೋಹಿ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಿ. ದೇಶಭಕ್ತ ಸಂಘಟನೆ ಆರೆಸ್ಸೆಸ್ ಬಗ್ಗೆ ಟೀಕಿಸುವುದನ್ನು ಮೊದಲು ನಿಲ್ಲಿಸಿ ಎಂದು ತಾಕೀತು ಮಾಡಿದರು.&lt;/p&gt;&lt;h3&gt;ಏನು ಕ್ರಮ ಕೈಗೊಂಡಿದ್ದೀರಿ?:&lt;/h3&gt;&lt;p&gt;ಅನಗತ್ಯವಾಗಿ ಹಿಂದುಗಳನ್ನು, ಸಂಘ ಪರಿವಾರವನ್ನು ಕೆಣಕಬೇಡಿ. ಇದೇ ರೀತಿ ನೀವು ಆಟವಾಡುತ್ತಿದ್ದರೆ ಮುಂಬರುವ 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನೆಲಕಚ್ಚುತ್ತದೆ. ವಿಧಾನಸೌಧದ 3ನೇ ಮಹಡಿಯಲ್ಲಿ ಪಾಕ್ ಪರ ಜೈಕಾರ ಹಾಕಿದ್ದ ನಿಮ್ಮ ಪಕ್ಷದ ಮುಖಂಡನ ವಿರುದ್ಧ ಎಫ್ಎಸ್&zwnj;ಎಲ್&zwnj; ವರದಿ ಬಂದಿದೆ. ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಸಂಘವನ್ನು ಕೆಣಕಿದರೆ ಸರ್ವನಾಶವಾಗುತ್ತೀರಿ ಎಂದ ರೇಣುಕಾಚಾರ್ಯ, ಸಂಘವನ್ನು ಟೀಕಿಸಿದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತನಗೆ ಸಿಎಂ ಮಾಡುತ್ತಾರೆಂದು ಪ್ರಿಯಾಂಕ್ ಖರ್ಗೆ ಅವರು ಅಂದುಕೊಂಡಿರಬಹುದು ಎಂದು ಕುಟುಕಿದರು.&lt;/p&gt;&lt;h3&gt;&amp;nbsp;ಭದ್ರಾ ಡ್ಯಾಂ ಬಳಿ ಜಿಲೆಟಿನ್ ಬಳಸಿ ಏಕಶಿಲೆ ಸ್ಫೋಟ: ಆರೋಪ&lt;/h3&gt;&lt;p&gt;ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಡ್ಯಾಂ ಬಲ ನಾಲೆಯಿಂದ ಕೇವಲ 800 ಮೀಟರ್ ದೂರದಲ್ಲಿ ಏಕಶಿಲೆಯನ್ನು ಜಿಲೆಟಿನ್&zwnj; ಕಡ್ಡಿಗಳನ್ನು ಇಟ್ಟು ಸ್ಫೋಟಿಸಿದ್ದು, ಇನ್ನೂ ನಾಲ್ಕೈದು ಸಲ ಸ್ಫೋಟಿಸುವ ಮಾಹಿತಿ ಇದೆ. ಇದು ಡ್ಯಾಂಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.18ರ ಮಧ್ಯಾಹ್ನ 2 ಗಂಟೆಗೆ ಜಿಲ್ಲೆಯ ರೈತರ ಒಕ್ಕೂಟದ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ರೈತ ಮುಖಂಡರು, ಅಚ್ಚುಕಟ್ಟು ರೈತರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಲಿದ್ದೇವೆ ಎಂದರು.&lt;/p&gt;&lt;p&gt;ಜಿಲೆಟಿನ್ ಇಟ್ಟು ಏಕಶಿಲೆ ಸ್ಫೋಟಿಸಿದರೆ ಭದ್ರಾ ಡ್ಯಾಂಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಜಾಕ್ ವೆಲ್ ನಿರ್ಮಿಸಲು ಏಕಶಿಲೆ ಸ್ಫೋಟಿಸುವ ಕೆಲಸವಾಗುತ್ತಿದೆ. ಜಾಕ್&zwnj;ವೆಲ್&zwnj; ಹೆಸರಲ್ಲಿ ಭದ್ರಾ ಡ್ಯಾಂ ಭದ್ರಗೊಳಿಸುವ ಕೆಲಸ ಆಗಬಾರದು. ಕುಡಿಯುವ ನೀರು ಪೂರೈಸಲು ನಮ್ಮ ವಿರೋಧವಿಲ್ಲ. ಆದರೆ, ಅಚ್ಚುಕಟ್ಟು ರೈತರು, ಭದ್ರಾ ಡ್ಯಾಂಗೆ ಸಂಕಷ್ಟ ತಂದೊಡ್ಡುವುದಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಚಪಡಿಸಿದರು.&lt;/p&gt;&lt;p&gt;ಭದ್ರಾ ಡ್ಯಾಂ ನೀರನ್ನೇ ನೆಚ್ಚಿಕೊಂಡು ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದಲೂ ಜಿಲೆಟಿನ್ ಬಳಸಿ, ಏಕಶಿಲೆ ಸ್ಫೋಟಿಸುತ್ತಿದ್ದಾರೆ. ಜೂ.18ರಂದು ಸ್ಥಳ ಪರಿಶೀಲಿಸಿದ ನಂತರ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ, ಭದ್ರಾ ಡ್ಯಾಂ ಅಭದ್ರಗೊಳಿಸದಂತೆ ಒತ್ತಾಯಿಸಲಿದ್ದೇವೆ. ಒಂದುವೇಳೆ ಭದ್ರಾ ಡ್ಯಾಂಗೆ ಅಪಾಯವಾದರೆ ಲಕ್ಷಾಂತರ ಹೆಕ್ಟೇರ್&zwnj; ಭೂಮಿಯನ್ನು, ಭದ್ರಾ ಡ್ಯಾಂ ನೀರನ್ನೇ ಅವಲಂಭಿಸಿದ ರೈತರ ಪಾಡೇನು ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.&lt;/p&gt;&lt;p&gt;ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಬಿಜೆಪಿ ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳ್, ಎನ್.ಎಚ್.ಹಾಲೇಶ ನಾಯ್ಕ, ಜಯರುದ್ರಪ್ಪ ಇತರರು ಇದ್ದರು.&lt;/p&gt;&lt;p&gt;ಕಾಂಗ್ರೆಸ್ಸಿಗೆ ಹೊನ್ನಾಳಿ, ದಾವಣಗೆರೆಯಷ್ಟೇ ಅಲ್ಲ, ಇಡೀ ರಾಜ್ಯದಲ್ಲೇ ನರ ನಾಡಿ ಇಲ್ಲದಂತಾಗಿದೆ. ಅಭಿವೃದ್ಧಿ ಕಾಮಗಾರಿ ಮರೀಚಿಕೆಯಾಗಿವೆ. ಬಿಡದಿ ರೈತ ಭೂಮಿಯನ್ನು ಕಬಳಿಸಲು ಹೊರಟಿರುವುದು ಸರಿಯಲ್ಲ. ಈ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮಾತನಾಡುತ್ತಾರೆ. ನಿಮ್ಮ ಟೌನ್ ಶಿಪ್ ಯೋಜನೆ, ಕೈಗಾರಿಕಾ ಕಾರಿಡಾರನ್ನು ಬಂಜರು ಭೂಮಿಯಲ್ಲಿ ಮಾಡಿ. ಸಮೃದ್ಧವಾಗಿರುವ ಬಿಡದಿ ಕೃಷಿ ಭೂಮಿಯಲ್ಲಲ್ಲ.&lt;/p&gt;&lt;p&gt;&lt;strong&gt;- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.&lt;/strong&gt;&lt;/p&gt;&lt;p&gt;-&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/rss-registration-row-mp-renukacharya-attacks-priyank-kharge-rav/articleshow-binwl9u"/>
        </item>
        <item>
            <title><![CDATA[ದಾವಣಗೆರೆ: ದೇವರ ದರ್ಶನಕ್ಕೆ ಹೋದ ದಲಿತರ ಮೇಲೆ ಗ್ರಾಮಸ್ಥರಿಂದ ಹಲ್ಲೆ, ಬೆಳಲಗೆರೆಯಲ್ಲಿ ನಡೆದಿದ್ದೇನು?]]></title>
            <link>https://kannada.asianetnews.com/karnataka-districts/belalagere-villagers-assault-dalits-who-visited-a-temple-incident-reported-in-davanagere-rav/articleshow-d43rx8l</link>
            <guid isPermaLink="true">https://kannada.asianetnews.com/karnataka-districts/belalagere-villagers-assault-dalits-who-visited-a-temple-incident-reported-in-davanagere-rav/articleshow-d43rx8l</guid>
            <pubDate>Sun, 02 Aug 2026 08:44:50 +0530</pubDate>
            <description><![CDATA[&lt;p&gt;ದಾವಣಗೆರೆ ಜಿಲ್ಲೆಯ ಬೆಳಲಗೆರೆ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ದಲಿತ ಸಮುದಾಯದ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹಾಕದಂತೆ ಎಚ್ಚರಿಕೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz06tyyqe8hfas04t439ymyq,imgname-----------------------2026-08-02t083152.555-1785639828439.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಆ.2):&lt;/strong&gt; ದೇವಸ್ಥಾನ ಪ್ರವೇಶ ಮಾಡಿದರು ಎಂಬ ಕಾರಣಕ್ಕೆ ದಲಿತ ಸಮುದಾಯದವರ ಮೇಲೆ ಹಲ್ಲೆ ಮಾಡಿದ್ದರಿಂದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಬೆಳಲಗೆರೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;h2&gt;ದೇವರ ದರ್ಶನ ಮಾಡಿ ಹೊರಬರುತ್ತಿದ್ದಂತೆ ಹಲ್ಲೆ&lt;/h2&gt;&lt;p&gt;ಬೆಳಲಗೆರೆಯಲ್ಲಿ ಶುಕ್ರವಾರ ಊರ ಹೊರಗೆ ಎಡೆ ಇಟ್ಟು ಬರುವಾಗ ದಲಿತ ಸಮುದಾಯದ ಐದಾರು ಯುವಕರು ಗ್ರಾಮದ ದೊಡ್ಡಯ್ಯ ದೇವಸ್ಥಾನ(Doddaiah Temple)ಕ್ಕೆ ಹೋಗಿ, ದೇವರ ದರ್ಶನ ಮಾಡಿ, ಕೈಮುಗಿದು ಹೊರ ಬರುತ್ತಿದ್ದರು. ಈ ವೇಳೆ ಮತ್ತೊಂದು ಜಾತಿಯ ಜನರು ಅದಕ್ಕೆ ಆಕ್ಷೇಪಿಸಿದ್ದಾರೆ. ಘಟನೆಯಲ್ಲಿ ದಲಿತ ಯುವಕರನ್ನು ಹಗ್ಗಗಳಿಂದ ಕಟ್ಟಿ ಹಾಕಿ, ಹಲ್ಲೆ ಮಾಡಿದ್ದಾರೆಂದು ಗ್ರಾಮದ ದಲಿತರು ಆರೋಪಿಸಿದ್ದಾರೆ.&lt;/p&gt;&lt;p&gt;ಅಜ್ಜಿ ಹಬ್ಬ ಆಚರಿಸಿ, ಸಿಹಿ ಅಡುಗೆ ಮಾಡಿ, ಎಡೆ ಸಹಿತವಾಗಿ ಅಮ್ಮನನ್ನು ಹರಿಜನ ಕಾಲನಿಯ ಎಲ್ಲರೂ ಒಂದೇ ಕಡೆ ಅಮ್ಮನನ್ನು (ಕೇಲು) ತಂದಿಟ್ಟು, ಪೂಜಿಸುತ್ತಾರೆ. ನಂತರ ಅವುಗ&zwj;ಳನ್ನು ಒಟ್ಟಿಗೆ ಭಜನೆ, ಮೆರವಣಿಗೆಯಲ್ಲಿ ಕೊಂಡೊಯ್ದು ಗ್ರಾಮದ ಗಡಿಭಾಗಕ್ಕೆ ಇಟ್ಟು ಬರುವ ಪದ್ಧತಿಯಂತೆ ಶುಕ್ರವಾರವೂ ಆಚರಿಸಲಾಯಿತು.&lt;/p&gt;&lt;h3&gt;ಬಸವಾಪಟ್ಟಣ ಪೊಲೀಸರು ಬರುತ್ತಿದ್ದಂತೆ ಹಗ್ಗ ಬಿಚ್ಚಿದ ಗ್ರಾಮಸ್ಥರು&lt;/h3&gt;&lt;p&gt;ಈ ವೇಳೆ ಬಸವಾಪಟ್ಟಣ ಪೊಲೀಸರು ವಾಹನ ಬರುತ್ತಿರುವುದನ್ನು ಗಮನಿಸಿ, ಹಗ್ಗ ಬಿಚ್ಚಿದ್ದಾರೆ. ನಂತರ ಹಲ್ಲೆಗೆ ಒಗೊಳಗಾದ ಯುವಕರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣಕ್ಕೂ ಕಾರಣವಾಯಿತು.&lt;/p&gt;&lt;p&gt;ಶನಿವಾರ ಬೆಳಲಗೆರೆ ಗ್ರಾಮಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿದರು. ಇನ್ನು ಮುಂದೆ ಗ್ರಾಮದ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹಾಕಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಅಧಿಕಾರಿಗಳು ನೀಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸದ್ಯಕ್ಕೆ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belalagere-villagers-assault-dalits-who-visited-a-temple-incident-reported-in-davanagere-rav/articleshow-d43rx8l"/>
        </item>
        <item>
            <title><![CDATA[ದಾವಣಗೆರೆ ಜಿಲ್ಲಾಸ್ಪತ್ರೆ  OTಯಲ್ಲಿ ಭಾರೀ ಸ್ಫೋಟ, ರೋಗಿಗಳನ್ನು ಸ್ಟ್ರೆಚರ್ ನಲ್ಲಿ ಹೊರತಂದು ಪ್ರಾಣ ಉಳಿಸಿದ ಸಿಬ್ಬಂದಿ!]]></title>
            <link>https://kannada.asianetnews.com/karnataka-districts/davanagere-hospital-blast-anaesthesia-cylinder-explosion-destroys-two-ots-at-chigateri-district-hospital-gdp/articleshow-de9anvo</link>
            <guid isPermaLink="true">https://kannada.asianetnews.com/karnataka-districts/davanagere-hospital-blast-anaesthesia-cylinder-explosion-destroys-two-ots-at-chigateri-district-hospital-gdp/articleshow-de9anvo</guid>
            <pubDate>Tue, 30 Jun 2026 13:32:20 +0530</pubDate>
            <description><![CDATA[ದಾವಣಗೆರೆಯ ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್&zwnj;ನಲ್ಲಿ ಅನೆಸ್ತೇಶಿಯಾ ಸಿಲಿಂಡರ್ ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ನಾಶವಾಗಿದ್ದರೂ, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kwbradpvzs85h920d0zbc4w5,imgname-davanagere-hospital-blast-1782806034138.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ಇಲ್ಲಿನ ಪ್ರತಿಷ್ಠಿತ ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಕೊಠಡಿಯ (Operation Theater) ಅನೆಸ್ತೇಶಿಯಾ ವರ್ಕ್ ಸ್ಟೇಷನ್&zwnj;ನಲ್ಲಿ (Anaesthesia Workstation) ಅನಿಲ ಸಿಲಿಂಡರ್ ಸ್ಫೋಟಗೊಂಡು ಭೀಕರ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಎರಡು ಆಪರೇಷನ್ ಥಿಯೇಟರ್&zwnj;ಗಳಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಸುಟ್ಟು ಭಸ್ಮವಾಗಿದ್ದರೂ, ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸದೆ ಇಡೀ ಆಸ್ಪತ್ರೆ ನಿಟ್ಟುಸಿರು ಬಿಟ್ಟಿದೆ.&lt;/p&gt;&lt;h2&gt;ಬೆಳಗ್ಗೆ 8.30ಕ್ಕೆ ಸಂಭವಿಸಿದ ದುರಂತ&lt;/h2&gt;&lt;p&gt;ಇಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ಚಿಗಟೇರಿ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್ ಸಂಖ್ಯೆ 5 ಮತ್ತು 6 ರಲ್ಲಿ ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರತರಾಗಿದ್ದರು. ಈ &amp;nbsp;ವೇಳೆ ಅನೆಸ್ತೇಶಿಯಾ ವರ್ಕಿಂಗ್ ಸ್ಟೇಷನ್&zwnj;ನಲ್ಲಿ &amp;nbsp;ಇದ್ದಕ್ಕಿದ್ದಂತೆಯೇ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಕಿಡಿ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದ ನೈಟ್ರಸ್ ಆಕ್ಸೈಡ್ (Nitrous Oxide) ಸಿಲಿಂಡರ್ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸಾಮಾನ್ಯವಾಗಿ ಅನೆಸ್ತೇಶಿಯಾ ವರ್ಕ್ ಸ್ಟೇಷನ್&zwnj;ನಲ್ಲಿ ನೈಟ್ರಸ್ ಆಕ್ಸೈಡ್ ಮತ್ತು ಆಕ್ಸಿಜನ್ (Oxygen) ಎಂಬ ಎರಡು ಸಿಲಿಂಡರ್&zwnj;ಗಳಿರುತ್ತವೆ. ಇದರಲ್ಲಿ ನೈಟ್ರಸ್ ಆಕ್ಸೈಡ್ ಅತ್ಯಂತ ದಹನಕಾರಿ (Inflammable) ಅನಿಲವಾಗಿದ್ದರಿಂದ, ಬೆಂಕಿ ತಗುಲಿದ ತಕ್ಷಣ ಇಡೀ ಕೊಠಡಿ ತುಂಬಾ ಜ್ವಾಲೆ ವ್ಯಾಪಿಸಿದೆ.&lt;/p&gt;&lt;h2&gt;ಸಿಬ್ಬಂದಿಯ ಸಮಯಪ್ರಜ್ಞೆ: ಪ್ರಾಣ ಉಳಿಸಿಕೊಂಡ ಜನ&lt;/h2&gt;&lt;p&gt;ಸ್ಫೋಟ ಸಂಭವಿಸಿದಾಗ ಕೊಠಡಿಯ ಒಳಗೆ ಹತ್ತಕ್ಕೂ ಹೆಚ್ಚು ಜನ ವೈದ್ಯಕೀಯ ಸಿಬ್ಬಂದಿ ಇದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಒಳಗೆ ಸಿಲುಕಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು. ಆಸ್ಪತ್ರೆಯ 'ಡಿ ಗ್ರೂಪ್' (D-Group) ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಆಪರೇಷನ್ ಥಿಯೇಟರ್ ಒಳಗೆ ಸಿಲುಕಿದ್ದ ಸಹೋದ್ಯೋಗಿಗಳನ್ನು ರಕ್ಷಿಸಿ ಹೊರತಂದಿದ್ದಾರೆ. ಡಿ ಗ್ರೂಪ್ ಸಿಬ್ಬಂದಿಯ ಈ ಧೈರ್ಯ ಮತ್ತು ಅದ್ಭುತ ಕಾರ್ಯವನ್ನು ನೆನೆದು ಅಲ್ಲಿದ್ದ ಹಿರಿಯ ನರ್ಸ್ ಒಬ್ಬರು ಭಾವುಕರಾದರು.&lt;/p&gt;&lt;h2&gt;ರೋಗಿಗಳಲ್ಲಿ ಹೆಚ್ಚಿದ ಆತಂಕ: ಧೈರ್ಯ ತುಂಬಿದ ವೈದ್ಯರು&lt;/h2&gt;&lt;p&gt;ಆಪರೇಷನ್ ಥಿಯೇಟರ್&zwnj;ನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಸುತ್ತಿದ್ದಂತೆಯೇ ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಶಸ್ತ್ರಚಿಕಿತ್ಸಾ ಕೊಠಡಿಯ ಅಕ್ಕಪಕ್ಕದ ವಾರ್ಡ್&zwnj;ಗಳಲ್ಲಿದ್ದ ರೋಗಿಗಳು ಭಯದಿಂದ ತಕ್ಷಣವೇ ಕಟ್ಟಡದಿಂದ ಕೆಳಗೆ ಓಡಿ ಬಂದರು. ಇನ್ನು ಕೆಲವರನ್ನು ಸ್ಟ್ರೆಚರ್&zwnj; ನಲ್ಲಿ ಕೆಳಗೆ ತರಲಾಯ್ತು. ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಆಸ್ಪತ್ರೆಯ ವೈದ್ಯರು ಮತ್ತು ಹಿರಿಯ ಅಧಿಕಾರಿಗಳು, ರೋಗಿಗಳಿಗೆ ಧೈರ್ಯ ತುಂಬಿ ಸುರಕ್ಷಿತವಾಗಿ ಮರಳಿ ವಾರ್ಡ್&zwnj;ಗಳಿಗೆ ಕಳುಹಿಸಿಕೊಟ್ಟರು.&lt;/p&gt;&lt;h2&gt;ಸುಟ್ಟು ಭಸ್ಮವಾದ ಯಂತ್ರೋಪಕರಣಗಳು&lt;/h2&gt;&lt;p&gt;ಸ್ಫೋಟದ ತೀವ್ರತೆಗೆ ಆಪರೇಷನ್ ಥಿಯೇಟರ್ 5 ಮತ್ತು 6 ರಲ್ಲಿದ್ದ ಬೆಡ್&zwnj;ಗಳು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಫೋಟದ ನಂತರ ಇಡೀ ಶಸ್ತ್ರಚಿಕಿತ್ಸಾ ಬ್ಲಾಕ್&zwnj;ನಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿ, ಕಾರಿಡಾರ್&zwnj;ನಲ್ಲಿ ತುಂಬಿದ್ದ ಹೊಗೆಯನ್ನು ನಿಯಂತ್ರಣಕ್ಕೆ ತಂದರು.&lt;/p&gt;&lt;h2&gt;ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಭೇಟಿ&lt;/h2&gt;&lt;p&gt;ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ದಾವಣಗೆರೆ ಜಿಲ್ಲಾಧಿಕಾರಿ (DC) ಜಿ.ಎಂ. ಗಂಗಾಧರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, &quot;ಅನೆಸ್ತೇಶಿಯಾ ವರ್ಕ್ ಸ್ಟೇಷನ್&zwnj;ನಲ್ಲಿ ಸ್ಫೋಟ ಸಂಭವಿಸಿದ್ದು, ಹಲವು ಯಂತ್ರೋಪಕರಣಗಳು ಹಾನಿಗೊಳಗಾಗಿವೆ. ಅದೃಷ್ಟವಶಾತ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಿಲ್ಲಾ ಸರ್ಜನ್ ಹಾಗೂ ಡಿಹೆಚ್&zwnj;ಒ (DHO) ಅವರಿಗೆ ಸ್ಥಳದಲ್ಲೇ ಇದ್ದು ಪರಿಸ್ಥಿತಿಯನ್ನು ಅವಲೋಕಿಸಲು ಸೂಚಿಸಿದ್ದೇನೆ. ಆಸ್ಪತ್ರೆಗೆ ಆಪರೇಷನ್ ಥಿಯೇಟರ್ ಅತ್ಯಗತ್ಯವಾಗಿರುವುದರಿಂದ, ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಮತ್ತು ಅಗ್ನಿಶಾಮಕ ಅಧಿಕಾರಿಗಳ ತಂಡದಿಂದ ಜಂಟಿ ಪರಿಶೀಲನೆ ನಡೆಸಿ ಒಂದು ವಾರದೊಳಗೆ ಇದನ್ನು ಸರಿಪಡಿಸಿಕೊಡಲಾಗುವುದು. ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ತಾಂತ್ರಿಕ ದೋಷದಿಂದ ಆಗಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ&quot; ಎಂದರು.&lt;/p&gt;&lt;h2&gt;ಆಂತರಿಕ ತನಿಖೆಗೆ ಆದೇಶಿಸಿದ ಜಿಲ್ಲಾ ಸರ್ಜನ್&lt;/h2&gt;&lt;p&gt;ಘಟನೆಗೆ ನಿಖರವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಆಸ್ಪತ್ರೆಯ ವತಿಯಿಂದ ಸಮಗ್ರ ಆಂತರಿಕ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಸರ್ಜನ್ ಡಾ. ಎಂ.ಬಿ. ನಾಗೇಂದ್ರಪ್ಪ ತಿಳಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು, ಆಸ್ಪತ್ರೆಯ ಇತರೆ ವಿಭಾಗ ಎಂದಿನಂತೆ ನಡೆಯುತ್ತಿದೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/davanagere-hospital-blast-anaesthesia-cylinder-explosion-destroys-two-ots-at-chigateri-district-hospital-gdp/articleshow-de9anvo"/>
        </item>
        <item>
            <title><![CDATA[ಕರಾಳ ರಹಸ್ಯ ಬಯಲು; ಜಿಮ್-ಫಿಟ್ನೆಸ್ ಅನ್ನೋ ಹೆಣ್ಮಕ್ಕಳೇ ಇನ್ನಾದ್ರೂ ಎಚ್ಚೆತ್ತುಕೊಳ್ಳಿ!]]></title>
            <link>https://kannada.asianetnews.com/karnataka-districts/davanagere-gym-owner-trainer-blackmailed-young-women-housewives-who-came-for-training-extorted-lakhs-of-rupees-mrq/articleshow-dnn4q4g</link>
            <guid isPermaLink="true">https://kannada.asianetnews.com/karnataka-districts/davanagere-gym-owner-trainer-blackmailed-young-women-housewives-who-came-for-training-extorted-lakhs-of-rupees-mrq/articleshow-dnn4q4g</guid>
            <pubDate>Sat, 11 Jul 2026 07:10:13 +0530</pubDate>
            <description><![CDATA[&lt;p&gt;ಜಿಮ್ ಮಾಲೀಕ ಮತ್ತು ತರಬೇತುದಾರನೊಬ್ಬ, ತರಬೇತಿಗೆ ಬರುತ್ತಿದ್ದ ಯುವತಿಯರು ಮತ್ತು ಗೃಹಿಣಿಯರಿಗೆ ಬ್ಲ್ಯಾಕ್&zwnj;ಮೇಲ್ ಮಾಡಿ, ಲಕ್ಷಗಟ್ಟಲೆ ಹಣ ವಸೂಲಿ ಮಾಡುತ್ತಿದ್ದ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ತನ್ನ ನಿಜವಾದ ಗುರುತು ಮುಚ್ಚಿಟ್ಟು, ಸಿಸಿ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಹಿಡಿದು ಹೆಣ್ಣುಮಕ್ಕಳ ಜೀವನದೊಂದಿಗೆ ಆಟವಾಡುತ್ತಿದ್ದ ಈ ಘಟನೆಯು, ಜಿಮ್&zwnj;ಗಳಿಗೆ ಮಹಿಳೆಯರನ್ನು ಕಳುಹಿಸುವಾಗ ಎಚ್ಚರಿಕೆ ವಹಿಸುವಂತೆ ಒತ್ತಿ ಹೇಳುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt8x9h412x1pya4y43by91ep,imgname-kerala-islam-friendly-gym-palakkad-controversy-owner-clarifies-social-backlash-fitness-center---22-1780563100801.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &amp;nbsp;&lt;/strong&gt;ಜಿಮ್&zwnj; ಮತ್ತು ಫಿಟ್ನೆಸ್&zwnj; ಸೆಂಟರ್&zwnj;ಗೆ ಹೋಗುತ್ತಿದ್ದೇನೆಂದು ಹೇಳುತ್ತಿದ್ದ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಇನ್ನು ಜೀವನದಲ್ಲೇ ಅದರ ಹೆಸರು ಎತ್ತದಂತಹ ಘಟನೆಗಳು ದಾವಣಗೆರೆಯಲ್ಲಿ ಬೆಳಕಿಗೆ ಬರುತ್ತಿರುವುದು ಜಿಮ್ ಮತ್ತು ಫಿಟ್ನೆಸ್ ಮಾಲೀಕರಿಗೂ ಅಂತಿಮ ಎಚ್ಚರಿಕೆಯ ಗಂಟೆಯಾಗಿದೆ!&lt;/p&gt;&lt;p&gt;ಹೌದು, ಇಲ್ಲಿನ ಕೆಟಿಜೆ ನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಜಿಮ್&zwnj;ವೊಂದರ ಮಾಲೀಕ ಕಂ ತರಬೇತುದಾರ ಮಾಡಿರುವ ಪೈಶಾಚಿಕ ಕೃತ್ಯದಿಂದಾಗಿ ಜಿಮ್ ಮತ್ತು ಫಿಟ್ನೆಸ್ ಅಂತೆಲ್ಲಾ ಹೋಗುತ್ತಿದ್ದ ಅದೆಷ್ಟೋ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಹೀಗೆ ಫಿಟ್ನೆಸ್ ಅಂತೆಲ್ಲಾ ಯೋಚಿಸಲು ಹಿಂದೇಟು ಹಾಕುವಂತಾಗಿದೆ. ಕೇವಲ ಇದೊಂದೇ ಜಿಮ್&zwnj;, ಫಿಟ್ನೆಸ್ ಸೆಂಟರ್ ಕಥೆಯಲ್ಲ. ಬಗೆಯುತ್ತಾ ಹೋದಂತೆ ಭಿನ್ನವಾಗೇನೂ ಇಲ್ಲವೆಂಬುದನ್ನೂ ಜನ ಒಪ್ಪುತ್ತಾರೆ.&lt;/p&gt;&lt;p&gt;ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಾದಿತ ಜಿಮ್ ಮಾಲೀಕ ಅಲ್ಲಿಗೆ ಬರುತ್ತಿದ್ದ ಕೆಲ ಯುವತಿಯರು, ಗೃಹಿಣಿಯರ ಜೊತೆಗೆ ದುರ್ವ್ಯವಹಾರ ಮಾಡಿದ್ದಲ್ಲೇ ಆ ಹೆಣ್ಣುಮಕ್ಕಳಿಗೆ ಬ್ಲ್ಯಾಕ್ ಮೇಲ್ ಮಾಡಿ, ಲಕ್ಷಗಟ್ಟಲೇ ದುಡ್ಡು ವಸೂಲು ಮಾಡಿದ್ದಾನೆ. ಅಲ್ಲದೇ, ತಾನು ಕರೆದಾಗಲೆಲ್ಲಾ ಬರಬೇಕೆಂಬುದಾಗಿ ಬೆದರಿಕೆ ಸಹ ಹಾಕುತ್ತಿದ್ದ ಎಂಬುದಾಗಿ ಹಿಂದೂ ಪರ ಸಂಘಟನೆಗಳ ಮುಖಂಡರು ಆರೋಪಿಸಿರುವುದೇ ಜಿಮ್ ಮತ್ತು ಫಿಟ್ನೆಸ್ ಸೆಂಟರ್&zwnj;ಗಳ ಕರಾಳ ಮುಖಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈಗ ಕೆಲವರು ರಾತ್ರೋರಾತ್ರಿ ಊರು ಬಿಟ್ಟಿದ್ದರೆ, ಮತ್ತೆ ಕೆಲ ಸಂಸಾರಗಳಿಗೂ ಬೀದಿಗೆ ಬೀಳುವಂತಾಗಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;h2&gt;&lt;strong&gt;ಸೆಂಟರ್ ಸಿಸಿ ಕ್ಯಾಮೆರಾಗಳೇ ಸಾಕ್ಷಿ:&lt;/strong&gt;&lt;/h2&gt;&lt;p&gt;ವಿವಾದಿತ ಜಿಮ್&zwnj;ನ ಮಾಲೀಕ ಕಂ ಟ್ರೈನರ್ ಹಿಂದೆ ಕೆಲಸ ಮಾಡುತ್ತಿದ್ದ ಕಡೆಯೂ ಹೀಗೆಯೇ ಮಾಡಿ, ತಾನೇ ಸ್ವಂತವಾಗಿ ಸೆಂಟರ್ ಆರಂಭಿಸಿದ್ದ ಎನ್ನಲಾಗಿದೆ. ತರಬೇತಿ ಹೆಸರಿನಲ್ಲಿ ತಮ್ಮ ಸೆಂಟರ್&zwnj;ಗೆ ಬಂದ ಹೆಣ್ಣುಮಕ್ಕಳು, ಯುವತಿಯರೊಂದಿಗೆ ತನ್ನ ನೈಜ ಹೆಸರನ್ನು, ಧರ್ಮವನ್ನು, ತನಗೆ ಮದುವೆಯಾಗಿ, ಮೂವರು ಮಕ್ಕಳಿರುವುದು, ತನ್ನ ಪತ್ನಿ ಗರ್ಭಿಣಿ ಆಗಿರುವುದನ್ನೂ ಬಚ್ಚಿಟ್ಟು, ತನ್ನ ಫಿಟ್ನೆಸ್ ಸೆಂಟರ್&zwnj;ಗೆ ಬಂದ ಹೆಣ್ಣುಮಕ್ಕಳಿಗೆ ಗಾಳ ಹಾಕುತ್ತಿದ್ದ. ಹೀಗೆ ಗಾಳ ಹಾಕಿದ ಹೆಣ್ಣುಮಕ್ಕಳನ್ನು ಹರಿದು ಮುಕ್ಕುತ್ತಿದ್ದ ಎಂಬ ಆರೋಪ ಕೇಳಿಬರುತ್ತಿದೆ. ಅದನ್ನು ಆತನ ಸೆಂಟರ್ ಸಿಸಿ ಕ್ಯಾಮೆರಾಗಳೇ ಪುಷ್ಟೀಕರಿಸುತ್ತಿವೆ.&lt;/p&gt;&lt;p&gt;ಪರ್ಸನಲ್ ಟ್ರೈನರ್ ಆಗಿ, ವಿಶೇಷವಾಗಿ ಹೇಳಿಕೊಡುವುದಾಗಿ ವಿದ್ಯಾರ್ಥಿನಿಯರು, ಯುವತಿಯರನ್ನು, ಗೃಹಿಣಿಯರನ್ನು ಬಲೆಗೆ ಬೀಳಿಸಿಕೊಂಡು, ಅವರೊಂದಿಗೆ ಸಲುಗೆ ಬೆಳೆಸಿಕೊಂಡ ದುಷ್ಕರ್ಮಿರು ಆ ಹೆಣ್ಣು ಮಕ್ಕಳ ಜೀವನದೊಂದಿಗೆ ಆಟವಾಡಿರುವುದು ಆತನದೇ ಫಿಟ್ನೆಸ್ ಸೆಂಟರ್&zwnj;ನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಆತನ ಮೊಬೈಲ್&zwnj;ಗಳಲ್ಲೂ ಅದನ್ನೆಲ್ಲಾ ಇಟ್ಟುಕೊಂಡು, ಹಣಕ್ಕಾಗಿ ಪೀಡಿಸುವುದು, ತಾನು ಕರೆದಾಗಲೆಲ್ಲಾ ಬರಬೇಕೆಂಬುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದನ್ನು ನೋಡಿದರೆ ಜಿಮ್ ಮತ್ತು ಫಿಟ್ನೆಸ್ ಸೆಂಟರ್&zwnj;ಗಳಿಗೆ ಹೆಣ್ಣುಮಕ್ಕಳನ್ನು ಕಳಿಸುವ ಮುನ್ನ ನೂರು ಸಲ ಹೆತ್ತವರು, ಕುಟುಂಬದವರು ಆಲೋಚಿಸುವಂತಾಗಿದೆ. ಇನ್ನು ಇನ್ಸ್ಟಾಗ್ರಾಂನಲ್ಲೂ ಕೆಲ ಹೆಣ್ಣುಮಕ್ಕಳ ಜೊತೆಗಿರುವ ವೀಡಿಯೋಗಳನ್ನು ಒಪ್ಪಿಗೆಯೇ ಇಲ್ಲದೇ ಆತ ಹಾಕಿದ್ದಾನೆಂಬ ಮಾತು ಕೇಳಿಬರುತ್ತಿವೆ.&lt;/p&gt;&lt;p&gt;ಜಿಮ್&zwnj; ಮತ್ತು ಫಿಟ್ನೆಸ್ ಸೆಂಟರ್&zwnj;ಗಳಲ್ಲಿ ಏನೆಲ್ಲಾ ಆಗುತ್ತಿದೆಯೆಂಬುದು ಯಾವುದೂ ರಹಸ್ಯವಾಗಿಯೇನೂ ಇಲ್ಲ. ಆದರೆ, ಹೆಣ್ಣು ಮಕ್ಕಳ ಬದುಕು, ಗೌರವ, ಕುಟುಂಬದ ಮರ್ಯಾದೆಗೆ ಅಂಜಿ ಯಾರೂ ಕೇಸ್ ದಾಖಲಿಸಲು ಮುಂದಾಗುವುದಿಲ್ಲ. ಅಲ್ಲದೇ. ಇಂತಹ ಜಿಮ್-ಫಿಟ್ನೆಸ್ ಸೆಂಟರ್&zwnj;ಗಳ ಕೆಲ ಮಾಲೀಕರು, ತರಬೇತುದಾರರು, ಪರ್ಸನಲ್ ಟ್ರೈನರ್&zwnj; (ಪಿಟಿ)ಗಳ ಕುಕೃತ್ಯದಿಂದ ಅದೆಷ್ಟೋ ಸಂಸಾರಗಳು ಬೀದಿಪಾಲಾಗುವಂತಾಗಿದೆ. ಇಂತಹವರಿಗೆ ಪ್ರತಿಷ್ಟಿತ ಕುಟುಂಬದ ಹೆಣ್ಣುಮಕ್ಕಳು, ಉದ್ಯಮಿಗಳು, ದೊಡ್ಡ ಹುದ್ದೆಯಲ್ಲಿದ್ದವರು, ಪ್ರಭಾವಿ ರಾಜಕಾರಣಿಗಳ ಕುಟುಂಬದ ಹೆಣ್ಣುಮಕ್ಕಳೇ ಟಾರ್ಗೆಟ್ ಅಂತೇನೂ ಬೇರೆಯಾಗಿ ಹೇಳಬೇಕಿಲ್ಲ.&lt;/p&gt;&lt;p&gt;ತಡರಾತ್ರಿ 12.03ರ ವೇಳೆ ಜಿಮ್ ಮತ್ತು ಫಿಟ್ನೆಸ್ ಸೆಂಟರ್&zwnj;ಗೆ ಹೆಣ್ಣು ಮಕ್ಕಳಿಗೆ ಬ್ಲ್ಯಾಕ್ ಮೇಲ್ ಮಾಡಿ, ಕರೆಸಿಕೊಂಡು ಸಿಸಿ ಕ್ಯಾಮೆರಾ ಆಫ್ ಮಾಡಲಾಗಿದೆಯೆಂದು ನಂಬಿಸಿ, ಅಂತಹವರ ಜೊತೆಗೆ ಸೇರುವ ದೃಶ್ಯಗಳನ್ನು ಅದೇ ಸಿಸಿ ಕ್ಯಾಮೆರಾದಲ್ಲಿ ಸೆರೆಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿರುವ ಇಂತಹ ದುಷ್ಕರ್ಮಿಗಳಿಗೆ ಮನೆಯಲ್ಲಿ ತಾಯಿ, ಅಕ್ಕ, ತಂಗಿಯರು, ಹೆಣ್ಣುಮಕ್ಕಳು ಇಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. ಮತ್ತೊಬ್ಬರ ಮನೆಯ ಹೆಣ್ಣುಮಕ್ಕಳ ಜೊತೆಗೆ ಹೀಗೆ ವರ್ತಿಸುವ ದುಷ್ಕರ್ಮಿಗಳ ಮನೆಯಲ್ಲೂ ಹೆಣ್ಣುಮಕ್ಕಳಿರುತ್ತಾರೆ. ಅಂತಹವರ ಜೊತೆಗೆ ಬೇರೆ ಯಾರಾದರೂ ಹೀಗೆ ವರ್ತಿಸಿದರೆ, ಬ್ಲ್ಯಾಕ್ ಮೇಲ್ ಮಾಡಿದರೆ, ತಡರಾತ್ರಿ ಬರುವಂತೆ ಹೇಳಿದರೆ ತನಗೆ ಏನನಿಸುತ್ತದೆಂಬ ಅರಿವು ಇಲ್ಲವೇ ಎಂಬುದು ಹೆಸರು ಹೇಳಲಿಚ್ಛಿಸದ ಮಹಿಳೆಯರ ಪ್ರಶ್ನೆಯಾಗಿದೆ.&lt;/p&gt;&lt;h3&gt;&lt;strong&gt;ಪೊಲೀಸ್&zwnj; ಕೈಯಲ್ಲೇ ದೃಶ್ಯ, ಸುಮೋಟೋ ಕೇಸ್ ಯಾಕಿಲ್ಲ?!&lt;/strong&gt;&lt;/h3&gt;&lt;p&gt;ಮೊಬೈಲ್&zwnj;ನಲ್ಲಿ ಫೋಟೋ, ಸಿಸಿ ಕ್ಯಾಮೆರಾ ದೃಶ್ಯ, ಹಿಡನ್ ಕ್ಯಾಮೆರಾ ದೃಶ್ಯಗಳು ಪೊಲೀಸರ ಕೈಯಲ್ಲೇ ಇವೆ. ಆದರೆ, ಸಂತ್ರಸ್ಥರು, ಕುಟುಂಬದವರು ದೂರು ನೀಡುವವರೆಗೂ ಕಾಯುತ್ತ ನೊಂದವರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಇಲಾಖೆಯೇ ಕೈಚೆಲ್ಲುತ್ತಿರುವುದು ಜನರ ಬೇಸರಕ್ಕೂ ಕಾರಣವಾಗುತ್ತಿದೆ.&lt;/p&gt;&lt;p&gt;ಜಿಲ್ಲಾ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸುವ ಅವಶ್ಯಕತೆ ಇದೆ. ಹಿಂದೂ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡುವ ಲವ್ ಜಿಹಾದ್ ಪ್ರಕರಣ ಇದೆಂಬ ಆರೋಪ ಕೇಳಿಬರುತ್ತಿವೆ. ವಾಸ್ತವದಲ್ಲೂ ಹೀಗೆ ಜಿಮ್&zwnj; ಮತ್ತು ಫಿಟ್ನೆಸ್ ಸೆಂಟರ್&zwnj;ಗಳಿಗೆಂದು ಹೋಗುವವರು ಒಂದು ಸಮುದಾಯದವರೆಂಬುದೂ ಅಷ್ಟೇ ಸತ್ಯ. ಅನ್ಯ ಕೋಮಿನವರು ಹೀಗೆಲ್ಲಾ ದಾವಣಗೆರೆಯಲ್ಲಿ ಬರುವುದೇ ವಿರಳ ಎನ್ನಲಾಗುತ್ತಿದೆ.&lt;/p&gt;&lt;p&gt;ಆಕಸ್ಮಾತ್ ಹೋದರೂ 3-4 ದಿನಕ್ಕೆ ಆ ಸಮುದಾಯದವರೇ ಹೋಗದಂತೆ ಮುಲಾಜಿಲ್ಲದೇ ಹೇಳಿ ತಡೆಯುತ್ತಾರೆಂದರೆ ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಹೆಸರಿನಲ್ಲಿ ಏನೆಲ್ಲಾ ಆಗುತ್ತದೆಂಬುದು ನಿರ್ದಿಷ್ಟ ಸಮುದಾಯದವರಿಗೆ ಗೊತ್ತಿದೆಯೆಂದೇ ಅರ್ಥವಲ್ಲವೇ? ಇನ್ನಾದರೂ ಜಿಮ್&zwnj; ಮತ್ತು ಫಿಟ್ನೆಸ್ ಅಂತೆಲ್ಲಾ ಹೋಗುವ ನಿಮ್ಮ ನಿಮ್ಮ ಮನೆಯ ಹೆಣ್ಣುಮಕ್ಕಳ ಗೌರವ, ಜೀವ, ಜೀವನಕ್ಕೆ ಅಪಾಯವಾಗದಂತೆ ಆಯಾ ಮನೆಯವರು, ಹೆತ್ತವರು, ಕುಟುಂಬ ಸದಸ್ಯರು ಗಮನಹರಿಸುವಂತೆ ಕೆಲ ಸಂಘಟನೆ ಮುಖಂಡರು ಸಲಹೆ ನೀಡುತ್ತಾರೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-gym-owner-trainer-blackmailed-young-women-housewives-who-came-for-training-extorted-lakhs-of-rupees-mrq/articleshow-dnn4q4g"/>
        </item>
        <item>
            <title><![CDATA[Harihara: ಪಾಕ್ ಉಗ್ರರ ಜೊತೆ ನಂಟು ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಅರೆಸ್ಟ್!]]></title>
            <link>https://kannada.asianetnews.com/karnataka-districts/uttara-pradesh-sohail-arrested-in-davanagere-connection-with-pakistani-terrorists-rav/articleshow-fgg2wp9</link>
            <guid isPermaLink="true">https://kannada.asianetnews.com/karnataka-districts/uttara-pradesh-sohail-arrested-in-davanagere-connection-with-pakistani-terrorists-rav/articleshow-fgg2wp9</guid>
            <pubDate>Wed, 24 Jun 2026 05:55:56 +0530</pubDate>
            <description><![CDATA[&lt;p&gt;ದಾವಣಗೆರೆಯ ಬನ್ನಿಕೋಡು ಗ್ರಾಮದಲ್ಲಿ ಪೇಂಟರ್ ಸೋಗಿನಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸೊಹೇಲ್&zwnj;ನನ್ನು ಬಂಧಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ, ಪಾಕಿಸ್ತಾನಿ ಉಗ್ರರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಈತನನ್ನು ವಶಕ್ಕೆ ಪಡೆಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvvfykwke1a1zzngayc2sjqb,imgname----------------------80--1782260387731.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾವಣಗೆರೆ (ಜೂ.24): ಪೇಂಟಿಂಗ್ ಕೆಲಸ ಮಾಡುವ ನೆಪದಲ್ಲಿ ಹರಿಹರ ತಾಲೂಕು ಬನ್ನಿಕೋಡು ಗ್ರಾಮದಲ್ಲಿ ಕಳೆದ 20-25 ದಿನಗಳಿಂದ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನನ್ನು ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ ನೇತೃತ್ವದಲ್ಲಿ ಮಂಗಳವಾರ ಬೆಳಗಿನ ಜಾವ ವಶಕ್ಕೆ ಪಡೆಯಲಾಗಿದೆ.&lt;/p&gt;&lt;h2&gt;ಪೇಂಟಿಂಗ್ ಮಾಡುವ ನೆಪದಲ್ಲಿ ಅಡಗಿದ್ದ ಶಂಕಿತ&lt;/h2&gt;&lt;p&gt;ಉತ್ತರ ಪ್ರದೇಶದ ಸಹರಾನ್&zwnj;ಪುರ ಜಿಲ್ಲೆಯ ಲಖ್ನೋತಿ ಗ್ರಾಮ ಮೂಲದ ಸೊಹೇಲ್&zwnj; (22) ಬಂಧಿತ ಶಂಕಿತ ಉಗ್ರ. ಬೆಳ್ಳೂಡಿಯ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಉತ್ತರ ಪ್ರದೇಶದ ಏಳೆಂಟು ಕೆಲಸಗಾರರು ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ರೆಡ್ ಆಕ್ಸೈಡ್&zwnj; ಪೇಂಟಿಂಗ್&zwnj; ಕೆಲಸ ಮಾಡುತ್ತಿದ್ದ ಈ ಕಾರ್ಮಿಕರ ಪೈಕಿ ಓರ್ವನ ಸಹೋದರನೇ ಸೊಹೇಲ್. ಉತ್ತರ ಪ್ರದೇಶದಿಂದ ತನ್ನ ಸಹೋದರ ಕೆಲಸ ಮಾಡುತ್ತಿದ್ದ ಬನ್ನಿಕೋಡು ಗ್ರಾಮಕ್ಕೆ ಬಂದು, ಇಲ್ಲೇ ವಾಸವಿದ್ದ. ಇಲ್ಲಿ ಏನೂ ಅರಿಯದವನಂತಿದ್ದ ಸೊಹೇಲ್&zwnj;ನ ಜನ್ಮ ಜಾಲಾಡಿದ್ದ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಬಂಧಿಸಿದ್ದಾರೆ.&lt;/p&gt;&lt;h3&gt;ಸೋಷಿಯಲ್ ಮೀಡಿಯಾ ಮೂಲಕ ಪಾಕ್ ನಂಟು&lt;/h3&gt;&lt;p&gt;ಇನ್&zwnj;ಸ್ಟಾಗ್ರಾಂನಲ್ಲಿ ಪಾಕಿಸ್ತಾನ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಹಾಗೂ ಕರೆ ಮಾಡಿ ಮಾತನಾಡುತ್ತಿದ್ದ, ಪಾಕ್&zwnj; ಮೂಲದ ಭಾರತ ವಿರೋಧಿ ವಾಟ್ಸಪ್ ಗ್ರೂಪ್ ಆದ ರಾಣಾದಲ್ಲಿ ಸೊಹೇಲ್ ಸಕ್ರಿಯನಾಗಿದ್ದ. ತಿಂಗಳ ಹಿಂದಷ್ಟೇ ತುಮಕೂರು ಮೂಲಕ ಅಲ್ಲಾಭಕ್ಷಿ ಹಾಗೂ ದಾವಣಗೆರೆಯ ಜಮೀರ್ ಖಾನ್ ಎಂಬ ಶಂಕಿತ ಉಗ್ರರನ್ನು ತುಮಕೂರು ಪೊಲೀಸರು ಬಂಧಿಸಿದ್ದರು.&amp;nbsp;&lt;/p&gt;&lt;p&gt;ಕೇಂದ್ರ ಗುಪ್ತಚರ ಇಲಾಖೆ ನಸುಕಿನಲ್ಲಿ ಬನ್ನಿಕೋಡು ಗ್ರಾಮದಲ್ಲಿದ್ದ ಈಗ ಮತ್ತೊಬ್ಬನನ್ನು ಬಂಧಿಸಿ, ತುಮಕೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸೊಹೇಲ್ ವಾಸಿಸುತ್ತಿದ್ದ ಮನೆ ಮೇಲೆ ದಾಳಿ ಮಾಡಿ, 8 ಆರೋಪಿಗಳನ್ನು ವಶಕ್ಕೆ ಪಡೆದರು. ಉಳಿದವರನ್ನು ಬಿಟ್ಟು, ಸೊಹೇಲ್&zwnj;ನನ್ನು ಬಂಧಿಸಿ, ತುಮಕೂರು ಪೊಲೀಸರ ವಶಕ್ಕೆ ನೀಡಲಾಗಿದೆ. ಸೊಹೇಲ್&zwnj;ನನ್ನು ಎನ್ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-pradesh-sohail-arrested-in-davanagere-connection-with-pakistani-terrorists-rav/articleshow-fgg2wp9"/>
        </item>
        <item>
            <title><![CDATA[ದಾವಣಗೆರೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ 19ರ ಹರೆಯದ ನವ ವಿವಾಹಿತೆ ಮೃತದೇಹ ಪತ್ತೆ]]></title>
            <link>https://kannada.asianetnews.com/karnataka-districts/newly-married-woman-found-dead-under-suspicious-circumstances-in-davanagere/articleshow-ghx2rd3</link>
            <guid isPermaLink="true">https://kannada.asianetnews.com/karnataka-districts/newly-married-woman-found-dead-under-suspicious-circumstances-in-davanagere/articleshow-ghx2rd3</guid>
            <pubDate>Sun, 21 Jun 2026 15:51:36 +0530</pubDate>
            <description><![CDATA[&lt;p&gt;19ರ ಹರೆಯದ ಅಮೂಲ್ಯ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಘಟನೆ ಬಳಿಕ ಪತಿ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಅಮೂಲ್ಯ ಬಾಳಲ್ಲಿ ಏನಾಯಿತು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmv2at3w4vhpcjjqtjxj2xk,imgname-death-of-newly-married-teen-1782037162818.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.21) &lt;/strong&gt;ಅನುಮಾನಸ್ಪದ ರೀತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾದ ಘಟನೆ ದಾವಣಗೆರೆ ನಗರದ ರಾಮನಗರದಲ್ಲಿ ನಡೆದಿದೆ. ದಾವಣಗೆರೆ ತಾಲೂಕು ಕೈದಾಳೆ ಗ್ರಾಮದ ನಿವಾಸಿ 19ರ ಹರೆಯದ ಅಮೂಲ್ಯ ಶವವಾಗಿ ಪತ್ತೆಯಾಗಿದ್ದಾಳೆ. ಬಾಡಿಗೆ ಮನೆಯಲ್ಲಿ ಅಮೂಲ್ಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಬೆನ್ನಲ್ಲೇ ಅಮೂಲ್ಯ ಪತಿ ಧನುಷ್ ಹಾಗೂ ಆತನ ಪೋಷಕರು ನಾಪತ್ತೆಯಾಗಿದ್ದಾರೆ. ದಾವಣೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ಪ್ರೀತಿಸಿ ಮದುವೆಯಾಗಿದ್ದ ಅಮೂಲ್ಯ&lt;/h2&gt;&lt;p&gt;ಅಮೂಲ್ಯ ಹಾಗೂ ಧನುಷ್ ಪ್ರೀತಿಯಲ್ಲಿ ಬಿದ್ದಿದ್ದರು. ಅಪ್ರಾಪ್ತ ವಯಸ್ಸಿನಲ್ಲಿ ಧನುಷ್ ಪ್ರೀತಿಯ ಬಲೆಗೆ ಬಿದ್ದಿದ್ದ ಅಮೂಲ್ಯ 18 ತುಂಬಿದ ಬೆನ್ನಲ್ಲೇ ಮದುವೆಯಾಗಿದ್ದರು. ಅಮೂಲ್ಯ ಮದುವೆಯಾಗಿ ಒಂದು ವರ್ಷ ಉರುಳಿದೆ. ಅಷ್ಟರಲ್ಲೇ ಸಂಸಾರದಲ್ಲಿ ಸಮಸ್ಯೆಗಳು ತೀವ್ರಗೊಂಡಿದೆ ಎನ್ನಲಾಗುತ್ತಿದೆ. ರಾಮನಗರ ಬಾಡಿಗೆ ಮನೆಯಲ್ಲಿ ಧನುಷ್ ಹಾಗೂ ಅಮೂಲ್ಯ ಜೋಡಿ ವಾಸವಿತ್ತು. ಮೃತ ಅಮೂಲ್ಯ ಪತಿ ಧನುಷ್ ದಾವಣಗೆರೆಯ ಹೂವಿನ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ.&lt;/p&gt;&lt;p&gt;ಜೂನ್ 20ರ ರಾತ್ರಿ ಅಮೂಲ್ಯ ಮೃತದೇಹ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ. ಮಗಳ ಸಾವಿನ ಸುದ್ದಿ ಕೇಳಿ ಪೋಷಕರು ಕಂಗಾಲಾಗಿದ್ದಾರೆ. ಅಮೂಲ್ಯ ಪತಿ ಧನುಷ್ ಹಾಗೂ ಆತನ ಪೋಷಕರ ವಿರುದ್ದ ಆರೋಪಗಳು ಕೇಳಿಬಂದಿದೆ. ಇತ್ತ ಪೋಷಕರು ದಾವಣೆಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;h2&gt;ಧನುಷ್ ಹಾಗೂ ಪೋಷಕರು ನಾಪತ್ತೆ&lt;/h2&gt;&lt;p&gt;ಅಮೂಲ್ಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಇತ್ತ ಪತಿ ಧನುಷ್ ಹಾಗೂ ಆತನ ಪೋಷಕರು ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಧನುಷ್ ಹಾಗೂ ಆತನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>davanagere</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/newly-married-woman-found-dead-under-suspicious-circumstances-in-davanagere/articleshow-ghx2rd3"/>
        </item>
        <item>
            <title><![CDATA[ಪಾಕಿಸ್ತಾನಕ್ಕೆ ನಂಬರ್ ಹೇಗೆ ಸಿಕ್ಕಿತೋ ಗೊತ್ತಿಲ್ಲ, ಏನಾಗಿದೆ ಗೊತ್ತಿಲ್ಲ, ಶಂಕಿತ ಉಗ್ರ ಸುಹೇಲ್ ಸಹೋದರ]]></title>
            <link>https://kannada.asianetnews.com/karnataka-districts/davanagere-suhail-held-in-terror-probe-brother-denies-knowledge-of-pakistan-connection/articleshow-gv65yp3</link>
            <guid isPermaLink="true">https://kannada.asianetnews.com/karnataka-districts/davanagere-suhail-held-in-terror-probe-brother-denies-knowledge-of-pakistan-connection/articleshow-gv65yp3</guid>
            <pubDate>Thu, 25 Jun 2026 10:10:27 +0530</pubDate>
            <description><![CDATA[&lt;p&gt;ದಾವಣೆಗೆರೆಯಲ್ಲಿ ಶಂಕಿತ ಉಗ್ರ ಸುಹೇಲ್ ಬಂಧನ ಜನರಲ್ಲಿ ಆತಂಕ ಹೆಚ್ಚಿಸಿದೆ. ದಾವಣಗೆರೆಯಲ್ಲಿ ಕುಳಿತು ಪಾಕಿಸ್ತಾನ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಆರೋಪದಡಿ ಸುಹೇಲ್ ಬಂಧನವಾಗಿದೆ. ಇದರ ಬೆನ್ನಲ್ಲೇ ಆತನ ನಂಬರ್ ಪಾಕಿಸ್ತಾನದ ಗ್ರೂಪ್&zwnj;ಗಳಲ್ಲಿ ಹೇಗೆ ಬಂತೋ ಗೊತ್ತಿಲ್ಲ ಎಂದ ಸಹೋದರ ಹೇಳಿದ್ದಾನೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvy3k3fz1zxbjw1a6mmsx9xk,imgname-----------------------2026-06-25t060937.321-1782348090879.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣೆಗೆರ (ಜೂ.25) &lt;/strong&gt;ಆಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಪಾಕಿಸ್ತಾನ ಉಗ್ರರ ಜೊತೆ ಸಂಚು ರೂಪಿಸಿ ದಾವಣೆಗೆರೆಯಲ್ಲಿ ಅರೆಸ್ಟ್ ಆಗಿರುವ ಶಂಕಿತ ಉಗ್ರ ಸೊಹೆಲ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಶಂಕಿತ ಉಗ್ರ ಸೊಹೇಲ್ ಬಂಧನ ಪ್ರಕರಣ ಕುರಿತು ಸಹೋದರ ಶೋಯೆಬ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾನೆ. ಎರಡು ತಿಂಗಳ ಹಿಂದೆ ಸುಹೇಲ್&zwnj;ಗೆ ಮೊಬೈಲ್ ಕೊಡಿಸಿದ್ದೆ. ಆದರೆ ಪಾಕಿಸ್ತಾನ ಮೂಲದ ಗ್ರೂಪ್&zwnj;ಗಳಿಗೆ ಈತನ ನಂಬರ್ ಹೇಗೆ ಆ್ಯಡ್ ಆಯ್ತು ಗೊತ್ತಿಲ್ಲ ಎಂದು ಶೋಯೆಬ್ ಹೇಳಿದ್ದಾರೆ. ನಾವು ಉತ್ತರಪ್ರದೇಶದ ಸಹರಾನ್&zwnj;ಪುರ ಜಿಲ್ಲೆಯವರು. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲಾಗಿದೆ. ನನ್ನ ಐಡಿ ಬಳಸಿ ಆತನಿಗೆ ಸಿಮ್ ಕೊಡಿಸಲಾಗಿದೆ ಎಂದು ಶೋಯೆಬ್ ಹೇಳಿದ್ದಾನೆ.&lt;/p&gt;&lt;h2&gt;ಏನಾಯ್ತೋ ಗೊತ್ತಿಲ್ಲ, ಹೇಗಾಯ್ತೋ ಗೊತ್ತಿಲ್ಲ, ಏನಿದೆಯೋ ಗೊತ್ತಿಲ್ಲ&lt;/h2&gt;&lt;p&gt;ನಮ್ಮ ತಂದೆ ತಾಯಿಗೆ ಒಟ್ಟು ಹತ್ತು ಜನ ಮಕ್ಕಳು. ಆರು ಸಹೋದರಿಯರು ಹಾಗೂ ನಾಲ್ವರು ಸಹೋದರರು. ಸುಹೇಲ್ ಕೊನೆಯವನು, ಆತನ ವಯಸ್ಸು ಕಡಿಮೆ ಇದೆ. ಹೀಗಾಗಿ ನನ್ನ ಆಧಾರ್ ಕಾರ್ಡ್ ಬಳಸಿ ಸಿಮ್ ಕೊಡಿಸಿದ್ದೆ. ಆತನ ಆಧಾರ್ ಕಾರ್ಡ್ ಸೇರಿದಂತೆ ಎಲ್ಲರ ಆಧಾರ್ ಕಾರ್ಡ್ ವಿಳಾಸ ಅಪ್&zwnj;ಡೇಟ್ ಮಾಡಿದ್ದೇವೆ. ಈ ಹಿಂದೆ ದೆಹಲಿ, ನೋಯ್ಡಾ ಸೇರಿ ಹಲವೆಡೆ ಕೆಲಸ ಮಾಡಿದ್ದೇವೆ. ಪಾಕಿಸ್ತಾನದ ಗ್ರೂಪ್&zwnj;ಗಳಲ್ಲಿ ಯಾರು ಆತನ ಆ್ಯಡ್ ಮಾಡಿದ್ದಾರೆ ಗೊತ್ತಿಲ್ಲ. ಅದರಲ್ಲಿ ಏನು ಮಾತುಕತೆ ಆಗಿದೆ ಗೊತ್ತಿಲ್ಲ. ಪೊಲೀಸರು ಆಗಮಿಸಿ ನಮ್ಮ 8 ಜನರನ್ನು ಕರೆದುಕೊಂಡು ಹೋಗಿದ್ರು. ಬಳಿಕ ಆತನ ಮೊಬೈಲ್&zwnj;ನಲ್ಲಿ&zwnj; ಏನು ಪತ್ತೆಯಾಗಿದೆಯೋ ಗೊತ್ತಿಲ್ಲ. ತಮ್ಮನ ಅರೆಸ್ಟ್ ಮಾಡಿ ಕೋರ್ಟ್&zwnj;ಗೆ ಹಾಜರು ಪಡಿಸಿ ಜೈಲಿಗೆ ಕಳಿಸಿದರು ಎಂದು ಶೋಯೆಬ್ ಹೇಳಿದ್ದಾನೆ.&lt;/p&gt;&lt;p&gt;ನಮ್ಮ ತಂದೆ ತಾಯಿಗೆ ವಿಷಯ ತಿಳಿಸಿದ್ದೇವೆ. ಉತ್ತರ ಪ್ರದೇಶದಲ್ಲಿರುವ ಅವರು ನಾಳೆ ಅಥವಾ ನಾಡಿದ್ದು ಬರಬಹುದು ಎಂದು ಸುಹೇಲ್ ಸಹೋದರ ಶೋಯೆಬ್&zwnj; ಹೇಳಿದ್ದಾನೆ. ಇತ್ತ ಸುಹೇಲ್ ಜೊತೆ ದಾವಣೆಗೆರೆ ಕೆಲಸಕ್ಕೆ ಸೇರಿದ ಜಹೇದ್ ಅರೆಸ್ಟ್ ಕುರಿತು ಪ್ರತಕ್ರಿಯಿಸಿದ್ದಾನೆ.&lt;/p&gt;&lt;h2&gt;ನಾವು ಕಾರ್ಮಿಕರು ನಮಗೇನು ಗೊತ್ತಿಲ್ಲ&lt;/h2&gt;&lt;p&gt;ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಶಂಕಿತ ಉಗ್ರ ಸುಹೇಲ್ ಬಂಧನ ಪ್ರಕರಣ ಸಂಬಂಧ ಸುಹೇಲ್ ಜೊತೆ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಬಹುತೇಕ ಎಲ್ಲಾ ಉದ್ಯೋಗಿಗಳು ಒಕ್ಕೊರಲಿನಿಂದ ನಮಗೇನು ಗೊತ್ತಿಲ್ಲ, ನಾವು ಕಾರ್ಮಿಕರು ಎಂದಿದ್ದಾರೆ. ನಾವು ಹತ್ತು ಹದಿನೈದು ದಿನಗಳ ಹಿಂದೆ ಕೆಲಸಕ್ಕೆ ಆಗಮಿಸಿದ್ದೇವೆ. ಅವರು ಇಬ್ಬರು ಸಹೋದರರು ಇದ್ದರು. ಇಬ್ಬರು ಈಗ ಇಲ್ಲಿಂದ ಹೋಗಿದ್ದಾರೆ . ಹೆಚ್ಚಿನ ಮಾಹಿತಿ ನಮಗೆ ಗೊತ್ತಿಲ್ಲ ಎಂದು ಸಹೋದ್ಯೋಗಿ ಜಹೇದ್ ಹೇಳಿದ್ದಾನೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>davanagere</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/davanagere-suhail-held-in-terror-probe-brother-denies-knowledge-of-pakistan-connection/articleshow-gv65yp3"/>
        </item>
        <item>
            <title><![CDATA[ಪೊಲೀಸರ ಮೇಲೆ ಅನುಮಾನ.. 3 ತಿಂಗಳ ಹಿಂದೆ ಹೂತಿಟ್ಟಿದ್ದ ಅಮ್ಮನ ಶವ ತೆಗೆದು ಆಸ್ಪತ್ರೆಗೆ ಬಂದ ಅಣ್ಣ, ತಮ್ಮ!]]></title>
            <link>https://kannada.asianetnews.com/gallery/davanagere/shocking-in-davangere-brothers-exhume-mothers-body-3-months-after-burial-bring-it-to-hospital-gkn-h5q674f</link>
            <guid isPermaLink="true">https://kannada.asianetnews.com/gallery/davanagere/shocking-in-davangere-brothers-exhume-mothers-body-3-months-after-burial-bring-it-to-hospital-gkn-h5q674f</guid>
            <pubDate>Sun, 19 Jul 2026 14:12:30 +0530</pubDate>
            <description><![CDATA[&lt;p&gt;ತಾಯಿಯ ಸಾವಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಆಕ್ರೋಶ.. ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂಬ ಸಂಶಯ.. ಕೊನೆಗೆ ನ್ಯಾಯಕ್ಕಾಗಿ ಹಂಬಲಿಸಿದ ಮಕ್ಕಳು ಇಡೀ ದಾವಣಗೆರೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದಾರೆ. ಏನದು ಸ್ಟೋರಿ? ಓದಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwnsy8vepzjs7h22c8wbayn,imgname-india-s-cultural-heritage-youtube-thumbnail-1784447564059.png" type="image/jpeg" height="390" width="690"/>
            <content:encoded><![CDATA[&lt;p&gt;ತಾಯಿಯ ಸಾವಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಆಕ್ರೋಶ.. ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂಬ ಸಂಶಯ.. ಕೊನೆಗೆ ನ್ಯಾಯಕ್ಕಾಗಿ ಹಂಬಲಿಸಿದ ಮಕ್ಕಳು ಇಡೀ ದಾವಣಗೆರೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದಾರೆ. ಏನದು ಸ್ಟೋರಿ? ಓದಿ..&lt;/p&gt;&lt;img&gt;&lt;p&gt;&lt;strong&gt;ದಾವಣಗೆರೆ: &lt;/strong&gt;ತಾಯಿಯ ಸಾವಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಆಕ್ರೋಶ.. ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ ಎಂಬ ಸಂಶಯ.. ಕೊನೆಗೆ ನ್ಯಾಯಕ್ಕಾಗಿ ಹಂಬಲಿಸಿದ ಮಕ್ಕಳು ಇಡೀ ದಾವಣಗೆರೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದಾರೆ. 3 ತಿಂಗಳ ಹಿಂದೆ ಅಂತ್ಯಕ್ರಿಯೆ ಮಾಡಿದ್ದ ತಾಯಿಯ ಶವವನ್ನು ಸಮಾಧಿಯಿಂದ ಹೊರತೆಗೆದು ಬೈಕ್&zwnj;ನಲ್ಲಿ ಹೊತ್ತುಕೊಂಡು ಜಿಲ್ಲಾಸ್ಪತ್ರೆಗೆ ಬಂದಿರುವ ಘೋರ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಆದಾಪುರ ಗ್ರಾಮದ ಈರಮ್ಮ ಎಂಬುವವರು ಏಪ್ರಿಲ್ 29ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ತಾಯಿಯ ಸಾವಿಗೆ ಅಕ್ಕಪಕ್ಕದ ಮನೆಯವರೇ ಕಾರಣ ಎಂದು ಮಗ ಮಂಜುನಾಥ್ ಆರೋಪಿಸಿದ್ದರು. ಈ ಸಂಬಂಧ 11 ಜನರ ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಲೆಬೆನ್ನೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು.&lt;/p&gt;&lt;img&gt;&lt;p&gt;ತಾಯಿಯ ಕೊಲೆ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬುದು ಮಕ್ಕಳಾದ ಮಂಜುನಾಥ್ ಮತ್ತು ವೆಂಕಟೇಶ್ ಅವರ ಗಂಭೀರ ಆರೋಪ. ನಮ್ಮ ತಾಯಿಯನ್ನು ಕೊಲೆ ಮಾಡಲಾಗಿದೆ, ಆದರೆ ಸರಿಯಾದ ತನಿಖೆ ನಡೆಯುತ್ತಿಲ್ಲ. ನಮಗೆ ಮೊದಲ ಮರಣೋತ್ತರ ಪರೀಕ್ಷೆಯ ಮೇಲೆ ನಂಬಿಕೆಯಿಲ್ಲ ಎಂದು ಪಟ್ಟು ಹಿಡಿದಿದ್ದರು. ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದಿದ್ದಾಗ ಮಕ್ಕಳೇ ಸಾಹಸಕ್ಕೆ ಕೈಹಾಕಿದ್ದಾರೆ.&lt;/p&gt;&lt;img&gt;&lt;p&gt;ನಿನ್ನೆ ಮಧ್ಯರಾತ್ರಿ ಹರಿಹರ ತಾಲೂಕಿನ ಆದಾಪುರ ಗ್ರಾಮದ ಸ್ಮಶಾನಕ್ಕೆ ಹೋದ ಅಣ್ಣ-ತಮ್ಮ, ತಾಯಿಯ ಸಮಾಧಿಯನ್ನು ಅಗೆದಿದ್ದಾರೆ. ಹೂತಿಟ್ಟಿದ್ದ ಶವವನ್ನು ಹೊರತೆಗೆದು ಬೆಡ್&zwnj;ಶೀಟ್&zwnj;ನಲ್ಲಿ ಸವಾರಿ ಮಾಡಿಕೊಂಡು ಬೈಕ್ ಮೇಲೆ ಕುರಿಸಿಕೊಂಡು ದಾವಣಗೆರೆ ಜಿಲ್ಲಾಸ್ಪತ್ರೆಗೆ ಹೊರಟಿದ್ದಾರೆ. 3 ತಿಂಗಳ ಹಿಂದಿನ ಶವವನ್ನು ಬೈಕ್&zwnj;ನಲ್ಲಿ ಹೊತ್ತು ಸಾಗುತ್ತಿದ್ದ ದೃಶ್ಯ ಮೈ ಜುಂ ಎನ್ನುವಂತಿತ್ತು.&lt;/p&gt;&lt;img&gt;&lt;p&gt;ಶವವನ್ನು ಹೊತ್ತು ದಾವಣಗೆರೆ ಹೊರವಲಯದಲ್ಲಿ ಬರುತ್ತಿದ್ದಾಗ ಆಕಸ್ಮಿಕವಾಗಿ ಬೈಕ್ ಅಪಘಾತಕ್ಕೀಡಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಬೆಡ್&zwnj;ಶೀಟ್&zwnj;ನಲ್ಲಿ ಸುತ್ತಿಟ್ಟಿದ್ದ ಶವವನ್ನು ಕಂಡು ಗಾಬರಿಯಾಗಿದ್ದಾರೆ. ಕೂಡಲೇ ಶವವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ತಾಯಿಯ ಮೃತದೇಹ ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿದ್ದು, ನಮ್ಮ ತಾಯಿಗೆ ನ್ಯಾಯ ಸಿಗಬೇಕು, ಹಿರಿಯ ವೈದ್ಯರಿಂದ ಮರು ಮರಣೋತ್ತರ ಪರೀಕ್ಷೆ ನಡೆಯಬೇಕು ಎಂದು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/davanagere/shocking-in-davangere-brothers-exhume-mothers-body-3-months-after-burial-bring-it-to-hospital-gkn-h5q674f"/>
        </item>
        <item>
            <title><![CDATA[ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಯುವಕರಿಗೆ ಹಿಗ್ಗಾಮುಗ್ಗಾ ಹಲ್ಲೆ ಆರೋಪ -ದಾವಣಗೆರೆಯಲ್ಲಿ ಇವತ್ತು ಏನಾಯ್ತು?]]></title>
            <link>https://kannada.asianetnews.com/davanagere/dalit-youths-assaulted-in-davangere-after-entering-temple-gkn/articleshow-letfihp</link>
            <guid isPermaLink="true">https://kannada.asianetnews.com/davanagere/dalit-youths-assaulted-in-davangere-after-entering-temple-gkn/articleshow-letfihp</guid>
            <pubDate>Sat, 01 Aug 2026 20:33:52 +0530</pubDate>
            <description><![CDATA[ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ 'ಅಜ್ಜಿ ಹಬ್ಬ'ದ ವೇಳೆ ದೇವಸ್ಥಾನ ಪ್ರವೇಶಿಸಿದ ದಲಿತ ಯುವಕರ ಮೇಲೆ ಹಲ್ಲೆ ನಡೆದಿದೆ. ಘಟನೆಯ ನಂತರ ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ದಲಿತರಿಗೆ ದೇವಸ್ಥಾನ ಪ್ರವೇಶ ಕಲ್ಪಿಸಿದ್ದು, 42 ಜನರ ವಿರುದ್ಧ ಪ್ರಕರಣ ದಾಖಲಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyyxjajn4adxv5nj5ha8mnkd,imgname-davanagere-dalita-temple-1785596553811.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ದೇವಸ್ಥಾನ ಪ್ರವೇಶದ ಹಿನ್ನೆಲೆಯಲ್ಲಿ ದಲಿತ ಯುವಕರ ಮೇಲೆ ಹಲ್ಲೆ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಖಡಕ್ ಕ್ರಮಕ್ಕೆ ಮುಂದಾಗಿದೆ. 40ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.&lt;/p&gt;&lt;p&gt;ಹೌದು ದಾವಣಗೆರೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಲಗೆರೆ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಅಹಿತಕರ ಘಟನೆ ನಡೆದಿದೆ. ಗ್ರಾಮದಲ್ಲಿ 'ಅಜ್ಜಿ ಹಬ್ಬ'ದ ಸಂಭ್ರಮ ಮನೆ ಮಾಡಿತ್ತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ತೆರಳಿದ್ದ ದಲಿತ ಯುವಕರ ಮೇಲೆ ಗ್ರಾಮದ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಮುಂಭಾಗ ನಡೆದ ಈ ಗಲಾಟೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಜಿಲ್ಲಾಡಳಿತದ ನಡೆ&lt;/strong&gt;&lt;/h2&gt;&lt;p&gt;ಘಟನೆ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹಾಗೂ ಎಸ್&zwnj;ಪಿ ಶೇಖರ್ ಹೆಚ್.ಟಿ ಅವರು ಇಂದು ಖುದ್ದಾಗಿ ಬೆಳಲಗೆರೆ ಗ್ರಾಮಕ್ಕೆ ಭೇಟಿ ನೀಡಿದರು. ಪರಿಸ್ಥಿತಿಯನ್ನು ಪರಿಶೀಲಿಸಿದ ಅಧಿಕಾರಿಗಳು, ಎರಡೂ ಸಮುದಾಯದ ಮುಖಂಡರನ್ನು ಕರೆಸಿ ಶಾಂತಿ ಸಭೆ ನಡೆಸಿದರು.&lt;/p&gt;&lt;h2&gt;&lt;strong&gt;ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದ ದಲಿತರು&lt;/strong&gt;&lt;/h2&gt;&lt;p&gt;ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ದಲಿತ ಸಮುದಾಯದ ಮಹಿಳೆಯರು ಮತ್ತು ಯುವಕರಿಗೆ ದೇವಸ್ಥಾನದ ಒಳಗೆ ಹೋಗಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತು. ಎಲ್ಲರೂ ಒಟ್ಟಾಗಿ ದೇವಸ್ಥಾನಕ್ಕೆ ಪ್ರವೇಶಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ಗ್ರಾಮದಲ್ಲಿನ ಅಸಮಾನತೆಯ ಗೋಡೆಯನ್ನು ಒಡೆಯುವ ಪ್ರಯತ್ನ ಮಾಡಲಾಯಿತು.&lt;/p&gt;&lt;h2&gt;&lt;strong&gt;42 ಜನರ ವಿರುದ್ಧ FIR&lt;/strong&gt;&lt;/h2&gt;&lt;p&gt;ಇನ್ನು ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಸವಾಪಟ್ಟಣ ಪೊಲೀಸರು, ಒಟ್ಟು 42 ಜನರ ವಿರುದ್ಧ ಎಫ್&zwnj;ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಮುಂದೆ ಈ ರೀತಿಯ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಗ್ರಾಮದ ಮುಖಂಡರಿಗೆ ಜಿಲ್ಲಾಧಿಕಾರಿಗಳು ಮತ್ತು ಎಸ್&zwnj;ಪಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಪಡೆ ನಿಯೋಜಿಸಲಾಗಿದೆ. ಅಧಿಕಾರಿಗಳು ಗ್ರಾಮಸ್ಥರಿಗೆ ಸೌಹಾರ್ದತೆಯಿಂದ ಬಾಳುವಂತೆ ಕಿವಿಮಾತು ಹೇಳಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/davanagere/dalit-youths-assaulted-in-davangere-after-entering-temple-gkn/articleshow-letfihp"/>
        </item>
        <item>
            <title><![CDATA[ನನ್ನದು ಒಂದೇ ಒಂದು ಆಸೆ...... ಭಾವನಾತ್ಮಕ ಪತ್ರ ಬರೆದು ತುಮಕೂರಿನಲ್ಲಿ ದಾವಣಗೆರೆ ಮೂಲದ ವಿದ್ಯಾರ್ಥಿ ಸಾವು!]]></title>
            <link>https://kannada.asianetnews.com/karnataka-districts/karnataka-news-tumakuru-shocker-sit-engineering-student-from-davanagere-self-death-in-hostel-gdp/articleshow-lfgrgq8</link>
            <guid isPermaLink="true">https://kannada.asianetnews.com/karnataka-districts/karnataka-news-tumakuru-shocker-sit-engineering-student-from-davanagere-self-death-in-hostel-gdp/articleshow-lfgrgq8</guid>
            <pubDate>Mon, 22 Jun 2026 16:28:49 +0530</pubDate>
            <description><![CDATA[ತುಮಕೂರಿನ ಎಸ್&zwnj;ಐಟಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ವೆಂಕಟೇಶ್, ಬಿಸಿಎಂ ಹಾಸ್ಟೆಲ್&zwnj;ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್&zwnj;ನಲ್ಲಿ, ತನ್ನ ಕುಟುಂಬದ ಐದು ಮಂದಿ ಸದಾ ಒಟ್ಟಾಗಿರಬೇಕೆಂಬ ಕೊನೆಯಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುಟುಂಬ ಕಲಹದ ಶಂಕೆಯನ್ನು ಹುಟ್ಟುಹಾಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvqf7vp6ncxxcexkq6806njw,imgname-davanagere-1782125424326.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ವಿದ್ಯಾ ನಗರಿ ತುಮಕೂರಿನಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ನಗರದ ಪ್ರಸಿದ್ಧ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹಿಂದುಳಿದ ವರ್ಗಗಳ (BCM) ವಸತಿ ನಿಲಯದಲ್ಲಿ ಸಾವಿಗೆ ಶರಣಾಗಿದ್ದಾನೆ. ಅದಕ್ಕೂ ಮುನ್ನ ಆತ ಪೋಷಕರಿಗೆ ಬರೆದಿಟ್ಟಿರುವ ಡೆತ್ ನೋಟ್ ಮಾತ್ರ ಎಂತವರನ್ನೂ ಕಣೀರಲ್ಲಿ ಮುಳುಗುವಂತೆ ಮಾಡಬಹುದು.&lt;/p&gt;&lt;h2&gt;ಕೊಠಡಿಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣು&lt;/h2&gt;&lt;p&gt;ಮೃತರನ್ನು ಮೂಲತಃ ದಾವಣಗೆರೆ ಜಿಲ್ಲೆಯ ದೊಣ್ಣೆಹಳ್ಳಿ ಗ್ರಾಮದ ಜಿ. ಇ ವೆಂಕಟೇಶ್ (25) ಎಂದು ಗುರುತಿಸಲಾಗಿದೆ. ವೆಂಕಟೇಶ್ ತುಮಕೂರು ನಗರದ ಪ್ರಖ್ಯಾತ ಎಸ್&zwnj;ಐಟಿ (SIT) ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ನಗರದ ಉಪ್ಪಾರಹಳ್ಳಿಯಲ್ಲಿರುವ ಬಿಸಿಎಂ (BCM) ಹಾಸ್ಟೆಲ್&zwnj;ನಲ್ಲಿ ಉಳಿದುಕೊಂಡಿದ್ದ ಅವರು, ಕೊಠಡಿಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ನೇಣು ಬಿಗಿದುಕೊಂಡಿದ್ದಾನೆ. ಇಂದು (ಸೋಮವಾರ) ಬೆಳಿಗ್ಗೆ ಸಹಪಾಠಿಗಳು ಕೊಠಡಿಗೆ ಬಂದು ನೋಡಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h2&gt;ನೀವು ಐದು ಜನ ಒಟ್ಟಿಗೆ ಇರಬೇಕು, ಮನ ಕಲಕುವ ಕೊನೆಯ ಆಸೆ!&lt;/h2&gt;&lt;p&gt;ವಿದ್ಯಾರ್ಥಿ ವೆಂಕಟೇಶ್ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ಸಾವಿಗೂ ಮುನ್ನ ಅವರು ತಮ್ಮ ಹೆತ್ತ ಪೋಷಕರು ಹಾಗೂ ಕುಟುಂಬಸ್ಥರನ್ನು ಉದ್ದೇಶಿಸಿ ಭಾವನಾತ್ಮಕ ಡೆತ್ ನೋಟ್ (Death Note) ಒಂದನ್ನು ಬರೆದಿಟ್ಟಿದ್ದಾರೆ.&lt;/p&gt;&lt;h2&gt;ಡೆತ್ ನೋಟ್&zwnj;ನಲ್ಲಿ ಏನಿದೆ?&lt;/h2&gt;&lt;p&gt;ನನ್ನದು ಒಂದೇ ಒಂದು ಆಸೆ. ನೀವು ಐದು ಜನ ಯಾವಾಗಲೂ ಒಟ್ಟಿಗೆ ಇರಬೇಕೆಂಬುದೇ ನನ್ನ ಕೊನೆಯ ಆಸೆ. ಒಬ್ಬರನ್ನೊಬ್ಬರು ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡಿ, ಯಾರೂ ಬೇರೆಯಾಗಬೇಡಿ. ಸದಾ ಹೀಗೆಯೇ ಒಗ್ಗಟ್ಟಿನಿಂದ ಇರಬೇಕು ಎನ್ನುವುದೇ ನನ್ನ ಕೊನೆಯ ಹಾರೈಕೆ... ಇಂತಿ ನಿಮ್ಮ ಪ್ರೀತಿಯ ಮಗ.&lt;/p&gt;&lt;p&gt;&mdash; ಮೃತ ವಿದ್ಯಾರ್ಥಿ ವೆಂಕಟೇಶ್ ಬರೆದಿರುವ ನೋಟ್&lt;/p&gt;&lt;p&gt;ಕುಟುಂಬದಲ್ಲಿ ಎಲ್ಲರೂ ಒಟ್ಟಾಗಿ ಇರಬೇಕೆಂದು ಮಗ ಕೊನೆಯದಾಗಿ ಕೇಳಿಕೊಂಡಿರುವ ಈ ಮಾತುಗಳು ಇಡೀ ಕುಟುಂಬವನ್ನು ಕಣ್ಣೀರಿನ ಕಡಲಲ್ಲಿ ಮುಳುಗಿಸಿದೆ. ಕುಟುಂಬದ ಆಂತರಿಕ ಕಲಹ ಅಥವಾ ಮತ್ಯಾವುದೋ ಗೊಂದಲಗಳು ವಿದ್ಯಾರ್ಥಿಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದ್ದವೇ ಎಂಬ ಅನುಮಾನಗಳು ಈ ಡೆತ್ ನೋಟ್&zwnj;ನಿಂದ ಮೂಡುತ್ತಿವೆ.&lt;/p&gt;&lt;h2&gt;ಸ್ಥಳಕ್ಕೆ ಜಯನಗರ ಪೊಲೀಸರ ಭೇಟಿ&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಿಗುತ್ತಿದ್ದಂತೆಯೇ ತುಮಕೂರಿನ ಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ದಾವಣಗೆರೆಯಲ್ಲಿರುವ ಮೃತನ ಪೋಷಕರಿಗೆ ಅಧಿಕೃತ ಮಾಹಿತಿ ನೀಡಿದ್ದು, ಕಣ್ಣೀರು ಹಾಕುತ್ತಲೇ ಪೋಷಕರು ತುಮಕೂರಿನತ್ತ ಧಾವಿಸುತ್ತಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯ ಸಾವಿನ ಹಿಂದಿರುವ ನೈಜ ಕಾರಣವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-news-tumakuru-shocker-sit-engineering-student-from-davanagere-self-death-in-hostel-gdp/articleshow-lfgrgq8"/>
        </item>
        <item>
            <title><![CDATA[ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್: ಪ್ರಯಾಣಕ್ಕೆ ಲಕ್ಷುರಿ ಕೋಚ್‌ ರೆಡಿ, ಒಳಾಂಗಣ ವಿನ್ಯಾಸದ ವಿಡಿಯೋ ವೈರಲ್]]></title>
            <link>https://kannada.asianetnews.com/gallery/state/bengaluru-mumbai-vande-bharat-express-sleeper-first-ac-coach-inside-photos-gdp-nh56vbs</link>
            <guid isPermaLink="true">https://kannada.asianetnews.com/gallery/state/bengaluru-mumbai-vande-bharat-express-sleeper-first-ac-coach-inside-photos-gdp-nh56vbs</guid>
            <pubDate>Thu, 18 Jun 2026 12:23:36 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆಯು ಮುಂಬೈ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ 'ವಂದೇ ಭಾರತ್ ಸ್ಲೀಪರ್' ರೈಲನ್ನು ಆರಂಭಿಸಲಿದೆ. ಈ ಪ್ರೀಮಿಯಂ ರೈಲು, ಪ್ರಸ್ತುತ ರೈಲುಗಳಿಗಿಂತ ವೇಗವಾಗಿರಲಿದ್ದು, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಆಧುನಿಕ ಸೌಕರ್ಯಗಳಾದ ಖಾಸಗಿ ಕ್ಯಾಬಿನ್&zwnj;ಗಳು ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcq8pmmdze2dnzk112k8558,imgname-vande-bharat-bengaluru-mumbai--5--1781764741780.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರೈಲ್ವೆಯು ಮುಂಬೈ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ 'ವಂದೇ ಭಾರತ್ ಸ್ಲೀಪರ್' ರೈಲನ್ನು ಆರಂಭಿಸಲಿದೆ. ಈ ಪ್ರೀಮಿಯಂ ರೈಲು, ಪ್ರಸ್ತುತ ರೈಲುಗಳಿಗಿಂತ ವೇಗವಾಗಿರಲಿದ್ದು, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಆಧುನಿಕ ಸೌಕರ್ಯಗಳಾದ ಖಾಸಗಿ ಕ್ಯಾಬಿನ್&zwnj;ಗಳು ಇದೆ.&lt;/p&gt;&lt;img&gt;&lt;p&gt;ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷಿ 'ವಂದೇ ಭಾರತ್' ಕ್ರಾಂತಿ ಈಗ ಹೊಸ ಹಂತಕ್ಕೆ ಕಾಲಿಡುತ್ತಿದೆ. ದೇಶದ ಎರಡು ಪ್ರಮುಖ ಆರ್ಥಿಕ ರಾಜಧಾನಿಗಳಾದ ಮುಂಬೈ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ ಮುಂಬರುವ 'ವಂದೇ ಭಾರತ್ ಸ್ಲೀಪರ್' ರೈಲು ಸಂಚಾರ ಆರಂಭಿಸಲಿದೆ. ಸಾಂಪ್ರದಾಯಿಕ ರಾತ್ರಿ ಪ್ರಯಾಣದ ರೈಲುಗಳಿಗೆ ಹೋಲಿಸಿದರೆ, ಇದು ಅತ್ಯಂತ ವೇಗದ ಮತ್ತು ಹೆಚ್ಚು ಆರಾಮದಾಯಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಿದೆ. ಮುಂದಿನ ಪೀಳಿಗೆಯ ಸುದೀರ್ಘ ಪ್ರಯಾಣದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಈ ಪ್ರೀಮಿಯಂ ರೈಲು ಸೇವೆಗೆ ಹಸಿರು ನಿಶಾನೆ ನೀಡಿದೆ.ರಾತ್ರಿ ಪ್ರಯಾಣಕ್ಕೆ ಹೊಸ ಮೆರುಗು&lt;/p&gt;&lt;img&gt;&lt;p&gt;ಪ್ರಸ್ತುತ ಚಾಲ್ತಿಯಲ್ಲಿರುವ ವಂದೇ ಭಾರತ್ ಚೇರ್ ಕಾರ್ (ಕುಳಿತುಕೊಳ್ಳುವ ವ್ಯವಸ್ಥೆ) ರೈಲುಗಳಿಗಿಂತ ಈ ಸ್ಲೀಪರ್ ಆವೃತ್ತಿಯು ಸಂಪೂರ್ಣ ಭಿನ್ನವಾಗಿದೆ. ಇದನ್ನು ವಿಶೇಷವಾಗಿ ರಾತ್ರಿ ವೇಳೆ ಪ್ರಯಾಣಿಸುವ ಜನರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ವೇಗ ಮತ್ತು ಪ್ರಯಾಣಿಕರ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ.&lt;/p&gt;&lt;p&gt;&lt;strong&gt;ಆಧುನಿಕ ಫಸ್ಟ್ ಎಸಿ ಕೋಚ್: &lt;/strong&gt;ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ರೈಲಿನ ಮೊದಲ ಎಸಿ ಕೋಚ್&zwnj;ನ ದೃಶ್ಯಗಳು ಎಲ್ಲರ ಗಮನ ಸೆಳೆಯುತ್ತಿವೆ.&lt;/p&gt;&lt;p&gt;&lt;strong&gt;ಸುರಕ್ಷಿತ ಮೆಟ್ಟಿಲುಗಳ ವಿನ್ಯಾಸ: &lt;/strong&gt;ಹಳೆಯ ರೈಲುಗಳಲ್ಲಿ ಮೇಲಿನ ಬರ್ತ್&zwnj;ಗಳನ್ನು ಹತ್ತಲು ಕಡಿದಾದ ಕಷ್ಟಕರ ಏಣಿಗಳಿರುತ್ತಿದ್ದವು. ಆದರೆ, ವಂದೇ ಭಾರತ್ ಸ್ಲೀಪರ್&zwnj;ನಲ್ಲಿ ಮೇಲಿನ ಬರ್ತ್&zwnj;ಗಳನ್ನು ಸುಲಭವಾಗಿ ಹತ್ತಲು ಪ್ರತ್ಯೇಕ ಮತ್ತು ಸುರಕ್ಷಿತ ಮೆಟ್ಟಿಲುಗಳನ್ನು ಒದಗಿಸಲಾಗಿದೆ. ಈ ರೈಲಿನ ಫಸ್ಟ್ ಎಸಿ ಕೋಚ್ ಸಂಪೂರ್ಣ ಖಾಸಗಿ ಕ್ಯಾಬಿನ್&zwnj;ಗಳು (Private Cabins), ಮೇಲಿನ ಬರ್ತ್&zwnj;ಗಳಿಗೆ ಸುಲಭವಾಗಿ ಹತ್ತಲು ಆಧುನಿಕ ಮೆಟ್ಟಿಲುಗಳು, ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಅತ್ಯಾಧುನಿಕ ಪ್ರೀಮಿಯಂ ಒಳಾಂಗಣ ವಿನ್ಯಾಸವನ್ನು ಒಳಗೊಂಡಿರಲಿದೆ.&lt;/p&gt;&lt;p&gt;&lt;strong&gt;ಪ್ರೀಮಿಯಂ ಒಳಾಂಗಣ&lt;/strong&gt;: ಈ ಬೋಗಿಗಳಲ್ಲಿ ಸ್ಲೈಡಿಂಗ್ ಕಂಪಾರ್ಟ್&zwnj;ಮೆಂಟ್ ಬಾಗಿಲುಗಳು, ಅತ್ಯಾಧುನಿಕ ಬೆಳಕಿನ ವ್ಯವಸ್ಥೆ (Modern Lighting) ಮತ್ತು ಕಣ್ಣಿಗೆ ತಂಪು ನೀಡುವ ಸುಂದರ ಒಳಾಂಗಣ ವಿನ್ಯಾಸವಿದೆ.&lt;/p&gt;&lt;p&gt;&lt;strong&gt;ಸೌಕರ್ಯಗಳು:&lt;/strong&gt; ಆರಾಮದಾಯಕವಾದ ಮಲಗುವ ಸೀಟುಗಳು, ನವೀಕರಿಸಿದ ಫಿಟ್ಟಿಂಗ್&zwnj;ಗಳು ಮತ್ತು ಪ್ರಯಾಣಿಕ ಸ್ನೇಹಿ ವಿನ್ಯಾಸಗಳು ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಪ್ರಯಾಣದ ಅನುಭವ ನೀಡಲಿವೆ.&lt;/p&gt;&lt;img&gt;&lt;p&gt;ಪ್ರಸ್ತುತ ಈ ಮಾರ್ಗದಲ್ಲಿ ಚಲಿಸುವ ಸಾಮಾನ್ಯ ರೈಲುಗಳು ಮುಂಬೈನಿಂದ ಬೆಂಗಳೂರನ್ನು ತಲುಪಲು ಸುಮಾರು 20 ಗಂಟೆಗಳಿಗಿಂತಲೂ ಅಧಿಕ ಸಮಯ ತೆಗೆದುಕೊಳ್ಳುತ್ತವೆ. ಆದರೆ, ಹೊಸ ವಂದೇ ಭಾರತ್ ಸ್ಲೀಪರ್ ರೈಲು ಈ ಪ್ರಯಾಣದ ಸಮಯವನ್ನು ಕೇವಲ 14 ರಿಂದ 16 ಗಂಟೆಗಳಿಗೆ ಕಡಿತಗೊಳಿಸುವ ಸಾಧ್ಯತೆಯಿದೆ. ಅಂದರೆ ಪ್ರಯಾಣಿಕರಿಗೆ ಸರಿಸುಮಾರು 4 ರಿಂದ 5 ಗಂಟೆಗಳ ಸಮಯ ಉಳಿತಾಯವಾಗಲಿದೆ. ರೈಲಿನ ಸರಾಸರಿ ವೇಗವನ್ನು ಕಾಯ್ದುಕೊಳ್ಳುವ ಸಲುವಾಗಿ, ಇದಕ್ಕೆ ಅತ್ಯಂತ ಸೀಮಿತ ನಿಲುಗಡೆಗಳನ್ನು (Stoppages) ಮಾತ್ರ ನೀಡಲಾಗುವುದು ಎನ್ನಲಾಗಿದೆ. ಆದರೆ, ಭಾರತೀಯ ರೈಲ್ವೆ ಇಲಾಖೆಯು ಅಂತಿಮ ವೇಳಾಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಯಾಣಿಕರ ಸಾಮರ್ಥ್ಯ: &lt;/strong&gt;ಈ ಸ್ಲೀಪರ್ ರೈಲು ಒಟ್ಟು 16 ಸಂಪೂರ್ಣ ಹವಾನಿಯಂತ್ರಿತ (AC) ಬೋಗಿಗಳನ್ನು ಹೊಂದಿರಲಿದ್ದು, ಒಂದೇ ಬಾರಿಗೆ 823 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.&lt;/p&gt;&lt;p&gt;&lt;strong&gt;ಸುಧಾರಿತ ತಂತ್ರಜ್ಞಾನ: &lt;/strong&gt;ರಾತ್ರಿ ವೇಳೆಯ ಪ್ರಯಾಣದಲ್ಲಿ ಯಾವುದೇ ಗದ್ದಲವಿಲ್ಲದೆ ಸುಗಮ ಸವಾರಿಯನ್ನು ಖಚಿತಪಡಿಸಿಕೊಳ್ಳಲು ಇದರಲ್ಲಿ ಸುಧಾರಿತ 'ಸಸ್ಪೆನ್ಷನ್ ತಂತ್ರಜ್ಞಾನ'ವನ್ನು ಬಳಸಲಾಗಿದೆ.&lt;/p&gt;&lt;p&gt;&lt;strong&gt;ಸ್ವಯಂಚಾಲಿತ ಬಾಗಿಲುಗಳು ಮತ್ತು ನೈರ್ಮಲ್ಯ: &lt;/strong&gt;ರೈಲಿನಲ್ಲಿ ಆಟೋಮ್ಯಾಟಿಕ್ ಬಾಗಿಲುಗಳು, ಬಯೋ-ವ್ಯಾಕ್ಯೂಮ್ ಶೌಚಾಲಯಗಳು ಮತ್ತು ಅತ್ಯಾಧುನಿಕ ಸುರಕ್ಷತಾ ಫೀಚರ್&zwnj;ಗಳು ಲಭ್ಯವಿರಲಿವೆ.&lt;/p&gt;&lt;p&gt;&lt;strong&gt;ರೈಲಿನ ಮಾರ್ಗ ಯಾವುದು?&lt;/strong&gt;&lt;/p&gt;&lt;p&gt;ವಿವಿಧ ಮಾರ್ಗಗಳ ಜೋಡಣೆಯ ಬಗ್ಗೆ ಸದ್ಯ ಚರ್ಚೆಗಳು ನಡೆಯುತ್ತಿವೆಯಾದರೂ, ರೈಲ್ವೆ ಮಂಡಳಿಯು ಅಧಿಕೃತ ಮಾರ್ಗಸೂಚಿಯನ್ನು ಇನ್ನು ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಪ್ರಾಥಮಿಕ ವರದಿಗಳ ಪ್ರಕಾರ ಈ ರೈಲು ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ಕೈಗಾರಿಕಾ ಹಾಗೂ ಸಾಂಸ್ಕೃತಿಕ ಕೇಂದ್ರಗಳನ್ನು ಸಂಪರ್ಕಿಸಲಿದೆ. ಲೋಕಾರ್ಪಣೆ ದಿನಾಂಕ ಹತ್ತಿರ ಬಂದಾಗ ನಿಖರವಾದ ನಿಲುಗಡೆಗಳ ಮಾಹಿತಿ ಸಿಗಲಿದೆ. ಈ ರೈಲು ಕರ್ನಾಟಕದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರಗಳ ಪ್ರಮುಖ ಮಾರ್ಗದ ಮೂಲಕ ಮುಂಬೈ ತಲುಪುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದರೂ, ರೈಲ್ವೆ ಇಲಾಖೆಯು ಇದರ ಉದ್ಘಾಟನಾ ದಿನಾಂಕ, ದರ ಪಟ್ಟಿ ಅಥವಾ ಟಿಕೆಟ್ ಕಾಯ್ದಿರಿಸುವಿಕೆಯ ವೇಳಾಪಟ್ಟಿಯನ್ನು ಇನ್ನು ಪ್ರಕಟಿಸಿಲ್ಲ. ಆದ್ದರಿಂದ, ಪ್ರಸ್ತುತ ಐಆರ್&zwnj;ಸಿಟಿಸಿ (IRCTC) ಆಪ್ ಅಥವಾ ಕೌಂಟರ್&zwnj;ಗಳಲ್ಲಿ ಬುಕಿಂಗ್ ಲಭ್ಯವಿರುವುದಿಲ್ಲ. ರೇಕ್ (Rake) ಹಂಚಿಕೆ ಮತ್ತು ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ನಂತರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.&lt;/p&gt;&lt;img&gt;&lt;p&gt;ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು, ಭಾರತದ ಪ್ರಮುಖ ನಗರಗಳ ನಡುವೆ ವಿಶ್ವದರ್ಜೆಯ ಪ್ರೀಮಿಯಂ ರಾತ್ರಿ ಸಂಪರ್ಕವನ್ನು ಕಲ್ಪಿಸುವ ಭಾರತೀಯ ರೈಲ್ವೆಯ ಬೃಹತ್ ದೃಷ್ಟಿಕೋನದ ಒಂದು ಭಾಗವಾಗಿದೆ. ಈಗಾಗಲೇ ಚೇರ್ ಕಾರ್ ಮೂಲಕ ದೇಶಾದ್ಯಂತ ಕ್ರಾಂತಿ ಸೃಷ್ಟಿಸಿರುವ ವಂದೇ ಭಾರತ್, ಇದೀಗ ಸ್ಲೀಪರ್ ಕೋಚ್&zwnj;ಗಳ ಮೂಲಕ ರಾತ್ರಿ ಪ್ರಯಾಣದ ವ್ಯಾಖ್ಯಾನವನ್ನೇ ಬದಲಾಯಿಸಲು ಸಜ್ಜಾಗಿದೆ. ಈ ಮಾರ್ಗವು ದೇಶದಲ್ಲೇ ಸ್ಲೀಪರ್ ರೈಲು ಪಡೆಯಲಿರುವ ಎರಡನೇ ಅತ್ಯಂತ ನಿರೀಕ್ಷಿತ ಮಾರ್ಗವಾಗಿದೆ.&lt;/p&gt;]]></content:encoded>
            <category>davanagere</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/bengaluru-mumbai-vande-bharat-express-sleeper-first-ac-coach-inside-photos-gdp-nh56vbs"/>
        </item>
        <item>
            <title><![CDATA[CPI ದ್ವೇಷಕ್ಕೆ 40-50 ಜನರ ವಿರುದ್ದ ಸುಳ್ಳು ರೇ*ಪ್ ಕೇಸ್..!  ಪೊಲೀಸ್ ಅಧಿಕಾರಿಯ ಮೇಲೆ ಗಂಭೀರ ಆರೋಪ]]></title>
            <link>https://kannada.asianetnews.com/karnataka-districts/channagiri-villagers-accuse-police-officer-of-false-cases-seek-justice-kvn/articleshow-r8og92f</link>
            <guid isPermaLink="true">https://kannada.asianetnews.com/karnataka-districts/channagiri-villagers-accuse-police-officer-of-false-cases-seek-justice-kvn/articleshow-r8og92f</guid>
            <pubDate>Wed, 24 Jun 2026 10:46:51 +0530</pubDate>
            <description><![CDATA[&lt;p&gt;ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವೈಯಕ್ತಿಕ ದ್ವೇಷದಿಂದ ಸುಮಾರು 50 ಜನರ ಮೇಲೆ ಸುಳ್ಳು ಅ*ತ್ಯಾ*ಚಾ*ರ ಮತ್ತು ಪ್ರಾಣ ಬೆದರಿಕೆ ಕೇಸ್ ದಾಖಲಿಸಿದ್ದಾರೆ ಎಂದು ಹೊನ್ನೆಮರದಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ನಮ್ಮೆಲ್ಲರನ್ನೂ ಸಾಮೂಹಿಕವಾಗಿ ಎನ್&zwnj;ಕೌಂಟರ್&zwnj; ಮಾಡಿ ಅಥವಾ ಇಚ್ಛಾಮರಣಕ್ಕೆ ಅನುಮತಿ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfn5e8vsnjzannk5wac0x5pk,imgname-delhi-honeytrap-sex-extortion-gang-minor-pocso-fake-rape-investigation-02-1769163137913.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾವಣಗೆರೆ: ವೈಯಕ್ತಿಕ ದ್ವೇಷದಿಂದ ಸುಮಾರು 40-50 ಜನರ ಮೇಲೆ ಅಮಾಯಕ ಮಹಿಳೆಯಿಂದ ಅ*ತ್ಯಾ*ಚಾ*ರ, ಪ್ರಾಣ ಬೆದರಿಕೆ ಕೇಸ್ ದಾಖಲಿಸಿದ ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವಿರುದ್ಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗೆ ಸುಳ್ಳು ಕೇಸ್ ಹಾಕುವ ಬದಲು, ನಮ್ಮೆಲ್ಲರನ್ನೂ ಸಾಮೂಹಿಕವಾಗಿ ಎನ್&zwnj;ಕೌಂಟರ್&zwnj; ಮಾಡಿ ಎಂದು ಚನ್ನಗಿರಿ ತಾಲೂಕು ಹೊನ್ನೆಮರದಹಳ್ಳಿ ಗ್ರಾಮಸ್ಥರು ಒಕ್ಕೊರಲಿನಿಂದ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಮಂಗ&zwj;ಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಬಿ.ಆರ್.ರಘು, ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ರವೀಶ್ ಗ್ರಾಮದ ಸುಮಾರು 40-50 ಜನರ ವಿರುದ್ಧ ಅ*ತ್ಯಾ*ಚಾ*ರ, ಕೊಲೆ ಬೆದರಿಕೆಯಂತಹ ಸುಳ್ಳು ಕೇಸ್&zwnj;ಗಳನ್ನು ಗ್ರಾಮದ ಅಮಾಯಕ ಮಹಿಳೆ ಮುಖಾಂತರ ಕೊಡಿಸಿದ್ದಾರೆ. ಅದೇ ಮಹಿಳೆ ತಮ್ಮಿಂದ ಹೀಗೆ ಸುಳ್ಳು ಕೇಸ್ ಮಾಡಿಸಿದ್ದಾರೆಂಬುದಾಗಿ ಗ್ರಾಮಸ್ಥರ ಸಮ್ಮುಖದಲ್ಲೇ ಹೇಳುತ್ತಿದ್ದಾರೆ. ಜವಾಬ್ದಾರಿಯುತ ಅಧಿಕಾರಿ ಈ ಮಟ್ಟಕ್ಕೆ ದ್ವೇಷ ಸಾಧಿಸುವುದು ಯಾವ ಕಾರಣಕ್ಕೆ ಎಂದರು.&lt;/p&gt;&lt;p&gt;ಸದರಿ ಕೇಸ್&zwnj;ಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ, ತನಿಖೆ ಎದುರಿಸಲು ತಾವು ಸಿದ್ಧರಿದ್ದೇವೆ. ಸಿಪಿಐ ರವೀಶ ಹಾಗೂ ಅಧಿಕಾರಿ, ಸಿಬ್ಬಂದಿ ದೌರ್ಜನ್ಯ ಎಸಗದೇ, ಕಾನೂನು ಕ್ರಮ ಕೈಗೊಳ್ಳಲಿ. ತಮ್ಮಗಳ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದರೂ ನಮಗ್ಯಾರಿಗೂ ನೋಟೀಸ್ ನೀಡಿಲ್ಲ. ಯಾವುದೇ ಸಮನ್ಸ್&zwnj; ಅಥ&zwj;ವಾ ನೋಟೀಸ್ ನೀಡದೇ ಜಾಮೀನು ರಹಿತ ವಾರೆಂಟ್ ಹೊರಟಿಸಿರುವ ವಿಚಾರ ನಿಷ್ಟಾವಂತ, ಪ್ರಾಮಾಣಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೂಲಕ ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಕೇಸ್&zwnj;ಗೆ ಸಂಬಂಧಿಸಿದಂತೆ ನ್ಯಾಯಾಲಯ ಅಥವಾ ಪೊಲೀಸರಿಂದ ಕರೆ ಬಂದರೆ ಸ್ವಯಂಪ್ರೇರಿತರಾಗಿ ಸುಳ್ಳು ಕೇಸ್&zwnj;ನಲ್ಲಿ ಹೆಸರಿಸಲಾದ ಎಲ್ಲರೂ ವಿಚಾರಣೆಗೆ ಹಾಜರಾಗುತ್ತೇವೆ. ನಾವು ಕಾನೂನನ್ನು ಗೌರವಿಸುವವರು. ಎಲ್ಲಿಯೂ ಓಡಿ ಹೋಗುವವರಲ್ಲ. ಕಾನೂನು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ, ಬಂಧನ ಅಥವಾ ವಿಚಾರಣೆಯ ಸಂದರ್ಭದಲ್ಲಿ ನಮ್ಮ ಕಾನೂನುಬದ್ಧ ಹಕ್ಕುಗಳನ್ನೂ ಗೌರವಿಸಬೇಕು. ನಮ್ಮಗಳ ಪೈಕಿ ಯಾರೊಬ್ಬರ ಮೇಲಾದರೂ ಅಕ್ರಮವಾಗಿ ಒತ್ತಡ ಹೇರುವುದು, ದೌರ್ಜನ್ಯ ಎಸಗುವುದು, ಕಾನೂನುಬಾಹಿರ ಕ್ರಮ ಕೈಗೊಂಡರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನೇರ ಹೊಣೆ ಎಂದು ಅವರು ಎಚ್ಚರಿಸಿದರು.&lt;/p&gt;&lt;p&gt;ನಮ್ಮ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯಾದರೆ ಅದಕ್ಕೆ ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ರವೀಶ್ ನೇರ ಕಾರಣ. ವೃತ್ತ ನಿರೀಕ್ಷಕ ರವೀಶ್&zwnj;ರಿಂದ ಆಗುತ್ತಿರುವ ನಿರಂತರ ದೌರ್ಜನ್ಯ, ಸುಳ್ಳು ಕೇಸ್&zwnj;ಗಳು, ಜೀವ ಬೆದರಿಕೆ ವಿರುದ್ಧ ನ್ಯಾಯಕ್ಕಾಗಿ ನಾವು ಹೋರಾಟ ನಡೆಸಿದ್ದೇವೆ. ನಮಗೆ ನ್ಯಾಯ ಸಿಗದಿದ್ದರೆ ಇಡೀ ಗ್ರಾಮಸ್ಥರು ಸಾಮೂಹಿಕವಾಗಿ ನೇಣಿಗೆ ಶರಣಾಗಲು ಸಿದ್ಧರಿದ್ದೇವೆ. ಇಚ್ಛಾಮರಣಕ್ಕೆ ನ್ಯಾಯಾಲಯ ಅನುಮತಿ ನೀಡಬೇಕು. ವೃತ್ತ ನಿರೀಕ್ಷಕ ರವೀಶರಿಂದ ನಮಗೆ ಅನ್ಯಾಯ, ತೊಂದರೆಯಾಗುತ್ತಿದೆ. ನಮಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಸಾರ್ವಜನಿಕವಾಗಿ ನಮ್ಮ ಧ್ವನಿ ಎತ್ತುತ್ತಿದ್ದೇವೆ ಎಂದು ಅವರು ಹೇಳಿದರು.&lt;/p&gt;&lt;p&gt;ಹೊನ್ನೇಮರದಹಳ್ಳಿ ಗ್ರಾಮದ ಮಹಿಳೆಯರು, ಗ್ರಾಮಸ್ಥರ ಮೇಲೆ ಚನ್ನಗಿರಿ ಪೊಲೀಸ್ ಇನ್ಸ್&zwnj;ಪೆಕ್ಟರ್ ರವೀಶ್ ಈಚೆಗೆ ನಡೆಸಿದ ದೌರ್ಜನ್ಯ ಖಂಡಿಸಿ ಈವರೆಗೆ ನೀಡಿದ ದೂರುಗಳ ಮೇಲೆ ಯಾವುದೇ ಕ್ರಮವಾಗಿಲ್ಲ. ಗ್ರಾಮಸ್ಥರು ಆರ್&zwnj;ಟಿಐ ಮೂಲಕ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿದಾಗ, ಗ್ರಾಮಸ್ಥರ ಮೇಲೆಯೇ ಅ*ತ್ಯಾ*ಚಾ*ರ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲು ಮಾಡಿಸಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;ಕಳೆದ ಏಳೆಂಟು ತಿಂಗಳಿನಿಂದ ಸಿಪಿಐ ರವೀಶ ತಮ್ಮ ಅಧಿಕಾರವನ್ನು ನಿರಂತರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಿಪಿಐ ರವೀಶ್ ಆರೋಪ ಮಾಡಿರುವ 25 ಜನರಲ್ಲಿ ಒಂದೇ ಕುಟುಂಬದ ಅಪ್ಪ, ಮಕ್ಕಳು ಇದ್ದಾರೆ. 60-70 ವರ್ಷದ ವಯಸ್ಸಿನವರೂ ಇದ್ದಾರೆ. ಮದುವೆ ನಿಶ್ಚಯವಾದ ಯುವಕರಿದ್ದಾರೆ. 40-45 ವರ್ಷದ ಮಹಿಳೆಯರೂ ಸೇರಿದ್ದಾರೆ. ಮುಗ್ದರ ಮೇಲಿನ ದೌರ್ಜನ್ಯಕ್ಕೆ ಕ್ರಾಂತಿಯೊಂದೇ ಮಾರ್ಗವಾಗಿದೆ. ವ್ಯವಸ್ಥೆ ಬದಲಾಗಬೇಕೆಂದರೆ ಬಲಿದಾನ ಅನಿವಾರ್ಯವೆಂದು ನಾವು ಭಾವಿಸಿದ್ದೇವೆ. ಹಾಗಾಗಿ, ನಾವು ನ್ಯಾಯಾಲಯದಿಂದ ಯಾವುದೇ ಜಾಮೀನು ಪಡೆಯಬಾರದೆಂದು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.&lt;/p&gt;&lt;p&gt;ಹೊನ್ನೇಮರದಹಳ್ಳಿ ವಾಸಿಗಳಾದ ಎಸ್.ಆರ್. ಶಾಂತವೀರಪ್ಪ, ಎಲ್.ಎಸ್.ಚಂದ್ರಪ್ಪ, ಜಿ.ಬಿ.ರುದ್ರೇಶ, ಬಿ.ಜೆ.ಶಿವರಾಜ, ಬಿ.ಆರ್. ವೀರಭದ್ರಪ್ಪ, ಜಿ.ಎಸ್. ರವಿ, ಬಿ.ಟಿ.ಮಧು, ಎನ್.ಕೆ. ಮಹೇಂದ್ರ, ಜೆ.ಆರ್.ಚೇತನ್, ಎಚ್.ವಿ.ರಂಗನಾಥ, ಎಲ್.ಎಸ್.ಸಿದ್ದೇಶ, ಖಾದರ್, ಆರ್.ಎಂ.ಸಂಜು, ಎ.ಸಿ.ಸಾಗರ್, ಸಂಜಯ್ ಇತರರು ಇದ್ದರು.&lt;/p&gt;&lt;h2&gt;&lt;strong&gt;ನಾವೆಲ್ಲರೂ ಅನುಮತಿ ಪಡೆದು ಸಾವಿಗೆ ಶರಣಾಗ್ತೇವೆ&lt;/strong&gt;&lt;/h2&gt;&lt;p&gt;ರಾಷ್ಟ್ರಪತಿ, ರಾಜ್ಯಪಾಲರು, ಸುಪ್ರೀಂ ಕೋರ್ಟ್&zwnj;, ಹೈಕೋರ್ಟ್, ಜಿಲ್ಲಾ, ತಾಲೂಕು ನ್ಯಾಯಮೂರ್ತಿಗಳು, ಪ್ರಧಾನಿ, ಸಿಎಂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಸಂಬಂಧಿಸಿದ ಇತರೆ ಇಲಾಖೆಗೆ ಪತ್ರ ಬರೆಯುತ್ತಿದ್ದೇವೆ. ನಮ್ಮ ಪ್ರಕರಣದ ಕಾನೂನಾತ್ಮಕ ಪ್ರಕ್ರಿಯೆಗೆ ಸಾರ್ವಜನಿಕ ಹಣ ವ್ಯಯಿಸುವುದು ಬೇಡ, ನ್ಯಾಯಾಲಯದ ಸಮಯ ಹಾಳು ಮಾಡುವುದೂ ಬೇಡ. ಸುಳ್ಳು ಕೇಸಿನಿಂದಾಗಿ ನಮ್ಮನ್ನು ಜೈಲಿನಲ್ಲಿಟ್ಟು ಊಟ ಹಾಕುವುದೂ ಬೇಡ. ಬದಲಿಗೆ ಈ ಹಣವನ್ನು ದೌರ್ಜನ್ಯಕ್ಕೆ ಒಳಗಾಗುವ ಹೆಣ್ಣುಮಕ್ಕಳ ಭವಿಷ್ಯಕ್ಕೆ ಬಳಸಲಿ. ನಮ್ಮ ಆಸ್ತಿಗಳನ್ನೂ ಸರ್ಕಾರದ ಹೆಸರಿಗೆ ಬರೆದು, ನಾವೆಲ್ಲರೂ ಅನುಮತಿ ಪಡೆದು ಸಾವಿಗೆ ಶರಣಾಗಲು ನಿರ್ಧರಿಸಿದ್ದೇವೆ ಎಂದು ಯುವಕ ಬಿ.ಆರ್.ರಘು ಹೇಳಿದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/channagiri-villagers-accuse-police-officer-of-false-cases-seek-justice-kvn/articleshow-r8og92f"/>
        </item>
        <item>
            <title><![CDATA[ಪಿಂಚಣಿ, ಮನೆ ಮಾರಾಟ ಮಾಡಿ ಭಾರತೀಯ ಯೋಧರ ಕಲ್ಯಾಣಕ್ಕಾಗಿ ₹10 ಲಕ್ಷ ರೂಪಾಯಿ ದೇಣಿಗೆ ! ಈ ನಿವೃತ್ತ ಶಿಕ್ಷಕಿ, ಹೋರಾಟಗಾರ್ತಿ ಯಾರು ಗೊತ್ತಾ?]]></title>
            <link>https://kannada.asianetnews.com/karnataka-districts/davanagere-retired-teacher-karibasamma-donated-rs-10-lakh-for-the-welfare-of-indian-soldiers-rav/articleshow-tpol3yn</link>
            <guid isPermaLink="true">https://kannada.asianetnews.com/karnataka-districts/davanagere-retired-teacher-karibasamma-donated-rs-10-lakh-for-the-welfare-of-indian-soldiers-rav/articleshow-tpol3yn</guid>
            <pubDate>Tue, 23 Jun 2026 04:47:15 +0530</pubDate>
            <description><![CDATA[ದಯಾಮರಣಕ್ಕಾಗಿ ಹೋರಾಟ ನಡೆಸುತ್ತಿರುವ ದಾವಣಗೆರೆಯ ನಿವೃತ್ತ ಶಿಕ್ಷಕಿ ಕರಿಬಸಮ್ಮ ಅವರು, ತಮ್ಮ ಪಿಂಚಣಿ ಹಾಗೂ ಮನೆ ಮಾರಾಟದ ಹಣದಿಂದ ₹10 ಲಕ್ಷವನ್ನು ಭಾರತೀಯ ಸೇನೆಯ ಯೋಧರ ಕಲ್ಯಾಣಕ್ಕಾಗಿ ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಜಿಲ್ಲಾಧಿಕಾರಿಗಳ ಮೂಲಕ 'ಭಾರತ್ ಕೆ ವೀರ್' ನಿಧಿಗೆ ತಲುಪಿಸಲಾಗುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kvrsrmzbprg6ep81yx02g35p,imgname----------------------52--1782170014698.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜೂ.22): &lt;/strong&gt;ದಯಾ ಮರಣಕ್ಕಾಗಿ ಹೋರಾಟ ನಡೆಸಿರುವ ದಾವಣಗೆರೆಯ ವಯೋವೃದ್ಧ, ನಿವೃತ್ತ ಶಿಕ್ಷಕಿ ಕರಿಬಸಮ್ಮ(Davanagere karibasamma) ಅವರು ಭಾರತೀಯ ಸೇನೆ(Indian army)ಯ ಯೋಧರ ಕಲ್ಯಾಣಕ್ಕಾಗಿ ₹10 ಲಕ್ಷ ದೇಣಿಯನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ನೀಡಿದರು. ಕರಿಬಸಮ್ಮ ಅವರ ಹಳೆಯ ವಿದ್ಯಾರ್ಥಿ, ವಿಧಾನ ಪರಿಷತ್&zwnj; ಮಾಜಿ ಮುಖ್ಯ ಸಚೇತಕ ಡಾ। ಎ.ಎಚ್.ಶಿವಯೋಗಿಸ್ವಾಮಿ ಇದ್ದರು&lt;/p&gt;&lt;h2&gt;ಯಾರು ಕರಿಬಸಮ್ಮ? ಹಿನ್ನೆಲೆ ಏನು?&lt;/h2&gt;&lt;p&gt;ದಯಾಮರಣಕ್ಕೆ ಹೋರಾಟ ನಡೆಸುವ ಮೂಲಕ ದಯಾಮರಣ ಹೋರಾಟಗಾರ್ತಿ ಅಂತಲೇ ನಿವೃತ್ತ ಶಿಕ್ಷಕಿ ಕರಿಬಸಮ್ಮ ಹೆಸರಾಗಿದ್ದಾರೆ. ತಮ್ಮ ನಿವೃತ್ತಿ ವೇತನದ (ಪಿಂಚಣಿ) ಹಣ ಹಾಗೂ ಸ್ವಂತ ಮನೆಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ₹10 ಲಕ್ಷವನ್ನು ವೀರಯೋಧರ ಕಲ್ಯಾಣಕ್ಕಾಗಿ ನೀಡಿರುವುದು ಇತರರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದೆ.&lt;/p&gt;&lt;h3&gt;ಭಾರತ್&zwnj; ಕೆ ವೀರ್&zwnj;ಗೆ ತಲುಪಿಸುವ ಭರವಸೆ&lt;/h3&gt;&lt;p&gt;ಈ ಮೊತ್ತವನ್ನು ಕೇಂದ್ರ ಸರ್ಕಾರದ ಅಧಿಕೃತ ನಿಧಿಯಾದ &lsquo;ಭಾರತ್ ಕೆ ವೀರ್&rsquo; ಗೆ ತಲುಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ವೇಳೆ ಕರಿಬಸಮ್ಮ ಅವರ ಹಳೆಯ ವಿದ್ಯಾರ್ಥಿ, ವಿಧಾನ ಪರಿಷತ್&zwnj; ಮಾಜಿ ಮುಖ್ಯ ಸಚೇತಕ ಡಾ। ಎ.ಎಚ್.ಶಿವಯೋಗಿಸ್ವಾಮಿ ಇದ್ದರು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-retired-teacher-karibasamma-donated-rs-10-lakh-for-the-welfare-of-indian-soldiers-rav/articleshow-tpol3yn"/>
        </item>
        <item>
            <title><![CDATA[ದಾವಣಗೆರೆ ಟು ಶಿವಮೊಗ್ಗ:  ಝೀರೋ ಟ್ರಾಫಿಕಲ್ಲಿ ಸಾಗಿಸಿದರೂ ಬದುಕದ 3 ತಿಂಗಳ ಹಸೂಗೂಸು!]]></title>
            <link>https://kannada.asianetnews.com/karnataka-districts/davanagere-to-shivamogga-3-monthold-infant-could-not-be-saved-despite-transported-zerotraffic-conditions-rav/articleshow-vaaph9w</link>
            <guid isPermaLink="true">https://kannada.asianetnews.com/karnataka-districts/davanagere-to-shivamogga-3-monthold-infant-could-not-be-saved-despite-transported-zerotraffic-conditions-rav/articleshow-vaaph9w</guid>
            <pubDate>Fri, 31 Jul 2026 06:16:13 +0530</pubDate>
            <description><![CDATA[ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ 3 ತಿಂಗಳ ಕೂಸನ್ನು ದಾವಣಗೆರೆಯಿಂದ ಮಣಿಪಾಲಕ್ಕೆ ಝೀರೋ ಟ್ರಾಫಿಕ್&zwnj;ನಲ್ಲಿ ಸಾಗಿಸುವಾಗ ಆ್ಯಂಬುಲೆನ್ಸ್ ಟೈರ್ ಪಂಕ್ಚರ್ ಆಗಿದೆ. ತಕ್ಷಣ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kytspzgd2zedkb31qk1sj606,imgname-----------------------2026-07-31t060128.830-1785458294285.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾವಣಗೆರೆ (ಜು.31): ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ 3 ತಿಂಗಳ ಕೂಸನ್ನು ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್&zwnj;ನಲ್ಲಿ ಝೀರೋ ಟ್ರಾಫಿಕ್&zwnj;ನಲ್ಲಿ ಸಾಗಿಸುವ ಪ್ರಯತ್ನ ಅರ್ಧದಲ್ಲಿಯೇ ವ್ಯರ್ಥವಾಗಿದೆ. ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಉಡುಪಿಯ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ಗುರುವಾರ ರಾತ್ರಿ ಕಳುಹಿಸಿ ಕೊಡಲಾಯಿತಾದರೂ ಮಗು ಬದುಕುಳಿಯಲಿಲ್ಲ.&lt;/p&gt;&lt;h2&gt;ಆ್ಯಂಬುಲೆನ್ಸ್&zwnj; ಟೈರ್&zwnj; ಪಂಕ್ಚರ್&lt;/h2&gt;&lt;p&gt;ದಾವಣಗೆರೆ ಜಿಲ್ಲೆ ಹರಿಹರದ ಮೂಲದ ಪಲ್ಲವಿ ಅವರನ್ನು ಕೊಪ್ಪಳದ ಹನುಮೇಶ್ವ&zwnj;ರ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಯ 3 ತಿಂಗಳು 26 ದಿನದ ಅನ್ವಿಕಾಳಿಗೆ ವಿಪರೀತ ಜ್ವರ ಬಂದ ಹಿನ್ನೆಲೆಯಲ್ಲಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕು ಪತ್ತೆ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದರು. ಅದಕ್ಕಾಗಿ ಮಗುವನ್ನು ಆ್ಯಂಬುಲೆನ್ಸ್&zwnj;ನಲ್ಲಿ ಝೀರೋ ಟ್ರಾಫಿಕ್&zwnj;ನಲ್ಲಿ ಕಳುಹಿಸಲು ನಿರ್ಧರಿಸಿ ದಾವಣಗೆರೆ, ಶಿವಮೊಗ್ಗ, ಉಡುಪಿ ಪೊಲೀಸರು ಟೊಂಕ ಕಟ್ಟಿ ವ್ಯವಸ್ಥೆ ಕೈಗೊಂಡಿದ್ದರು. ಅದರಂತೆ ವೈದ್ಯರ ತಂಡದೊಂದಿಗೆ ಹೋಗುವಾಗ ದಾವಣಗೆರೆಯ ಹೊನ್ನಾಳಿ ತಾಲೂಕಿನ ಚಿ.ಕಡದಕಟ್ಟೆ ಬಳಿ ಆ್ಯಂಬುಲೆನ್ಸ್&zwnj; ಟೈರ್&zwnj; ಪಂಕ್ಚರ್ ಆಯಿತು. ತಕ್ಷಣವೇ ಜೊತೆಯಲ್ಲಿದ್ದ ಪೊಲೀಸರು ಟಯರ್&zwnj; ಬದಲಿಸಿದರು. ಈ ವೇಳೆ ಮಗುವಿನ ಪಲ್ಸ್ ರೇಟ್ ಕಡಿಮೆ ಆಗುತ್ತಿತ್ತು. ಇದನ್ನು ಗಮನಿಸಿದ ವೈದ್ಯರ ತಂಡ ಅತಿ ತುರ್ತು ಚಿಕ್ಸಿತ್ಸೆಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಯಿತು.&lt;/p&gt;&lt;h3&gt;ವಿಶೇಷ ಆ್ಯಂಬುಲೆನ್ಸ್&zwnj;ನಲ್ಲೇ ಪುನಃ ಮಗುವಿನ ಶವ ಹರಿಹರಕ್ಕೆ&lt;/h3&gt;&lt;p&gt;ಆದರೆ ಸರ್ಜಿ ಆಸ್ಪತ್ರೆಯಲ್ಲಿ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತಾದರೂ ಮಗು ಬದುಕಲೇ ಇಲ್ಲ. ಮಗು ಕಳೆದುಕೊಂಡ ಹೆತ್ತೊಡಲು ಆಕ್ರಂದನ ಮುಗಿಲು ಮುಟ್ಟಿತ್ತು. ಮಗುವ ಪ್ರಾಣ ರಕ್ಷಣೆ ಮಾಡಲು ಹೊರಟಿದ್ದ ವಿಶೇಷ ಆ್ಯಂಬುಲೆನ್ಸ್&zwnj;ನಲ್ಲೇ ಪುನಃ ಮಗುವಿನ ಶವವನ್ನು ಹರಿಹರಕ್ಕೆ ಸಾಗಿಸಲಾಯಿತು.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-to-shivamogga-3-monthold-infant-could-not-be-saved-despite-transported-zerotraffic-conditions-rav/articleshow-vaaph9w"/>
        </item>
        <item>
            <title><![CDATA[Davanagere shocking: ಬೊಲೆರೋದಲ್ಲಿ ಬಂದು ದೇವರಿಗೆ ಬಿಟ್ಟಿದ್ದ ಗೂಳಿ ಕದ್ದೊಯ್ದ ಖದೀಮರು!]]></title>
            <link>https://kannada.asianetnews.com/karnataka-districts/davanagere-bull-theft-miscreants-in-bolero-steal-sacred-bull-dedicated-to-deity-rav/articleshow-yi1hncz</link>
            <guid isPermaLink="true">https://kannada.asianetnews.com/karnataka-districts/davanagere-bull-theft-miscreants-in-bolero-steal-sacred-bull-dedicated-to-deity-rav/articleshow-yi1hncz</guid>
            <pubDate>Thu, 02 Jul 2026 07:53:14 +0530</pubDate>
            <description><![CDATA[&lt;p&gt;ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ್ದ 'ಕರಿಬಸವ' ಎಂಬ ಪವಿತ್ರ ಗೂಳಿಯನ್ನು ದುಷ್ಕರ್ಮಿಗಳು ಬೊಲೆರೋ ವಾಹನದಲ್ಲಿ ಕದ್ದೊಯ್ದಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಗೂಳಿ ರಕ್ಷಿಸುವಂತೆ ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwg9fzvccd50gfbrfrztbrz9,imgname----------------------87--1782958260076.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಜು.2): &lt;/strong&gt;ಊರ ಜನರಿಗೆ ನಡೆದಾಡುವ ನಂದಿಯೇ ಆಗಿದ್ದ ದೇವರಿಗೆ ಬಿಟ್ಟಿದ್ದ ಗೂಳಿಯನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ, ಹೋರಿಯ ಕೊರಳಿಗೆ ಹಗ್ಗ ಕಟ್ಟಿ, ಬೊಲೆರೋ ವಾಹನದಲ್ಲಿ ಕದ್ದೊಯ್ದ ಘಟನೆ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.&lt;/p&gt;&lt;h2&gt;ಬೊಲೆರೋ ವಾಹನದಲ್ಲಿ ಗೂಳಿ ಹತ್ತಿಸಿದ ಖದೀಮರು!&lt;/h2&gt;&lt;p&gt;ಚನ್ನಗಿರಿ ತಾ. ಸಂಗಾಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಿಟ್ಟಿದ್ದ ಕರಿಬಸವ ಹೆಸರಿನ ಗೂಳಿಯನ್ನು ಬಿಳಿಬಣ್ಣದ ಸರಕು ಸಾಗಣೆಯ ಬೊಲೆರೋ ವಾಹನದಲ್ಲಿ ಬಂದ ಮೂವರು ಮುಸುಕುಧಾರಿ ದುಷ್ಕರ್ಮಿಗಳ ಪೈಕಿ ಇಬ್ಬರು ದೇವಸ್ಥಾನಕ್ಕೆ ನುಗ್ಗಿ, ನಂದಿಯ ಕೊರಳಿಗೆ ಹಗ್ಗ ಕಟ್ಟಿ, ತಾಡಪಾಲು ಮುಚ್ಚಿದ್ದ ಬೊಲೆರೋ ವಾಹನದಲ್ಲಿ ಹತ್ತಿಸಿಕೊಂಡು ಕದ್ದೊಯ್ದಿದ್ದಾರೆ. ಈಗ ಈ ಘಟನೆ ಇಡೀ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ&zwj;ವಾಗಿದೆ.&lt;/p&gt;&lt;h3&gt;ಕರಿಬಸವ ಹೆಸರಿನ ಗೂಳಿಯನ್ನ ಗ್ರಾಮಸ್ಥರು ಪೂಜಿಸುತ್ತಿದ್ದರು!&lt;/h3&gt;&lt;p&gt;ಕರಿಬಸವ ಹೆಸರಿನ ಗೂಳಿಗೆ ಗ್ರಾಮಸ್ಥರು, ನೆರೆಹೊರೆಯ ಗ್ರಾಮಸ್ಥರು ಪೂಜಿಸುತ್ತಿದ್ದರು. ನಂದಿಯು ದೇವಸ್ಥಾನ, ಗ್ರಾಮದ ಬೀದಿಗಳು, ಗ್ರಾಮಸ್ಥರ ಮನೆ ಬಾಗಿಲಿಗೆ ಹೋಗಿ ಎಲ್ಲರಿಗೂ ದರ್ಶನ ನೀಡುತ್ತಿತ್ತು. ಮಕ್ಕಳಾದಿಯಾಗಿ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದ ಕರಿಬಸವ ಹೆಸರಿನ ಗೂಳಿಯನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.&lt;/p&gt;&lt;h3&gt;ಕದ್ದೊಯ್ದವರಿಗೆ ದೇವರು ಒಳ್ಳೇದು ಮಾಡೋಲ್ಲ:&lt;/h3&gt;&lt;p&gt;ಕರಿಬಸವ ಗೂಳಿಯ ಕೊರಳಲ್ಲೊಂದು ದೊಡ್ಡ ಗಂಟೆ ಹಾಗೂ ಸರಪಳಿ ಇತ್ತು. ಇಬ್ಬರು ಮುಸುಕುಧಾರಿ ಜಾನುವಾರುಗಳ್ಳರು ಗೂಳಿ ಕೊರಳಿಗೆ ಹಗ್ಗ ಕಟ್ಟಿ, ಎಳೆದುಕೊಂಡು ಬರುವುದು, ವಾಹನದಲ್ಲಿ ಅದನ್ನು ಹತ್ತಿಸಿಕೊಂಡು, ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ನೋಡಿರುವ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಇಡೀ ಊರಿನ ಜನರು ಭಕ್ತಿಯಿಂದ ಪೂಜಿಸುತ್ತಿದ್ದ ನಮ್ಮೂರಿನ ನಡೆದಾಡುವ ದೇವರನ್ನು ಕದ್ದೊಯ್ದವರಿಗೆ ಒಳ್ಳೆಯದನ್ನಂತೂ ದೇವರು ಮಾಡುವುದಿಲ್ಲ. ಊರಿನ ಬಸವೇಶ್ವರ ದೇವರಿಗೆ ಬಿಟ್ಟಿದ್ದ ಗೂಳಿಯನ್ನು ಯಾರೇ ಕದ್ದೊಯ್ದಿದ್ದರೂ ಪೊಲೀಸರು ಗೂಳಿ ಪತ್ತೆ ಮಾಡಬೇಕು. ಗೂಳಿ ಕಳ್ಳರನ್ನು ಪತ್ತೆ ಮಾಡಿ, ನಮ್ಮ ಕೈಗೆ ಒಪ್ಪಿಸಬೇಕು ಎಂದು ಗ್ರಾಮದ ದೇವಸ್ಥಾನ ಸಮಿತಿ, ಭಕ್ತರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವರ ನಂದಿಯನ್ನು ಕದ್ದೊಯ್ದ ದುಷ್ಕರ್ಮಿಗಳು ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನದ ಶೋಧಕ್ಕೆ ಮುಂದಾಗಿದ್ದಾರೆ.&lt;/p&gt;]]></content:encoded>
            <category>davanagere</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-bull-theft-miscreants-in-bolero-steal-sacred-bull-dedicated-to-deity-rav/articleshow-yi1hncz"/>
        </item>
    </channel>
</rss>
