<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 18 May 2026 13:25:45 +0530</lastBuildDate>
        <atom:link href="https://kannada.asianetnews.com/rss/dakshina-kannada" rel="self" type="application/rss+xml"/>
        <item>
            <title><![CDATA[Karnataka News Live: ಭೂಮಿಯ ಮೇಲಿನ ಮೊದಲ ಗಿಡ ಇದು.. ಇಡೀ ಗ್ರಹವನ್ನೇ ಬದಲಿಸಿದ ಆ ಕಥೆ ಗೊತ್ತಾ?]]></title>
            <link>https://kannada.asianetnews.com/state/karnataka-news-live-13-may-2026-dharmasthala-case-allegations-wages-jcb-rental-have-not-been-paid-to-workers-yet-mrq/liveblog-updates-3wf5zz3</link>
            <guid isPermaLink="true">https://kannada.asianetnews.com/state/karnataka-news-live-13-may-2026-dharmasthala-case-allegations-wages-jcb-rental-have-not-been-paid-to-workers-yet-mrq/liveblog-updates-3wf5zz3</guid>
            <pubDate>Wed, 13 May 2026 21:31:51 +0530</pubDate>
            <description><![CDATA[&lt;p&gt;&lt;strong&gt;ಬೆಳ್ತಂಗಡಿ: &lt;/strong&gt;ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಎಸ್&zwnj;ಐಟಿ ರಚಿಸಿ ನಡೆಸಿದ ತನಿಖೆ ಸಂದರ್ಭ ದುಡಿದ ಕಾರ್ಮಿಕರಿಗೆ ವೇತನ, ಜೆಸಿಬಿ ಬಾಡಿಗೆ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.&lt;/p&gt;&lt;p&gt;ಎಸ್&zwnj;ಐಟಿ ತನಿಖೆ ಶುರುವಾಗಿ ಮಾಸ್ಕ್&zwnj;ಮ್ಯಾನ್ ಚಿನ್ನಯ್ಯನನ್ನು ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡು ಬಂದು, ಸ್ಥಳ ಗುರುತು ಮಾಡಿ ಒಟ್ಟು 17 ಕಡೆಗಳಲ್ಲಿ ಹೊಂಡಗಳನ್ನು ತೋಡಿ ಶೋಧ ನಡೆಸಲಾಗಿತ್ತು. ಒಟ್ಟು ಹತ್ತು ದಿನ ಜೆಸಿಬಿಯಿಂದ ಕೆಲಸ ಮಾಡಲಾಗಿತ್ತು. ಒಟ್ಟು ₹71,500 ಬಿಲ್ ಮಾಡಿ ಕೊಟ್ಟಿದ್ದರು. ಆದರೆ, ಜೆಸಿಬಿ ಬಾಡಿಗೆ ಇನ್ನೂ ಬಂದಿಲ್ಲ.&lt;/p&gt;&lt;p&gt;ದಿನ ನಿತ್ಯ 10-12 ಕಾರ್ಮಿಕರು ಎಸ್&zwnj;ಐಟಿ ತಂಡಕ್ಕೆ ಸಹಾಯವಾಗಿ ದುಡಿಯುತ್ತಿದ್ದರು. ಆದರೆ, ಕಾರ್ಮಿಕರ ಕೂಲಿ ಕೊಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಕಾರ್ಮಿಕರದ್ದು ಒಟ್ಟು ₹80 ಸಾವಿರಕ್ಕೂ ಅಧಿಕ ಹಣ ಕೊಡುವುದು ಬಾಕಿ ಇದೆ. ಇದೀಗ ಕಾರ್ಮಿಕರು ದುಡಿದ ಹಣಕ್ಕಾಗಿ ಅಲೆದಾಡುವಂತಾಗಿದೆ.&lt;/p&gt;&lt;p&gt;ಎಸ್&zwnj;ಐಟಿ ತಂಡಕ್ಕೆ ಕುಳಿತುಕೊಳ್ಳಲು ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಇದರ ಬಿಲ್ ಕೂಡ ಬಾಕಿ ಇದೆ. ಹಾರೆ, ಪಿಕಾಸು, ನೀರಿನ ಬಾಟಲಿ, ಕೂಲಿಯಾಳುಗಳನ್ನು ಕರೆ ತಂದ ವಾಹನ ಬಾಡಿಗೆ ಹೀಗೆ ಒಟ್ಟು ₹2 ಲಕ್ಷಕ್ಕೂ ಅಧಿಕ ಬಿಲ್ ಕೊಡಲು ಬಾಕಿ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krh0mxdd8tsa7kywzmr9npbt,imgname-whatsapp-image-2026-05-13-at-9.21.50-pm-1778687571373.jpeg" type="image/jpeg" height="390" width="690"/>
            <category>dakshina-kannada</category>
            <dc:creator>Asianet News</dc:creator>
            <atom:link href="https://kannada.asianetnews.com/state/karnataka-news-live-13-may-2026-dharmasthala-case-allegations-wages-jcb-rental-have-not-been-paid-to-workers-yet-mrq/liveblog-updates-3wf5zz3"/>
        </item>
        <item>
            <title><![CDATA[Karnataka Rains: ಕರಾವಳಿಯಲ್ಲಿ ನಾಳೆಯಿಂದ ಭಾರೀ ಮಳೆ ಮುನ್ಸೂಚನೆ; ಹವಾಮಾನ ಇಲಾಖೆ ನೀಡಿದ ವಾರ್ನಿಂಗ್ ಏನು?]]></title>
            <link>https://kannada.asianetnews.com/karnataka-districts/heavy-rainfall-alert-for-coastal-karnataka-from-tomorrow-what-is-the-imd-warning-rav/articleshow-540zhi3</link>
            <guid isPermaLink="true">https://kannada.asianetnews.com/karnataka-districts/heavy-rainfall-alert-for-coastal-karnataka-from-tomorrow-what-is-the-imd-warning-rav/articleshow-540zhi3</guid>
            <pubDate>Tue, 12 May 2026 13:39:32 +0530</pubDate>
            <description><![CDATA[ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಸಾಧ್ಯತೆಯಿದ್ದು, ಮೇ 13ರಿಂದ ಕರ್ನಾಟಕದ ಕರಾವಳಿ, ಕೇರಳ ಹಾಗೂ ತಮಿಳುನಾಡಿನಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮುಂಗಾರು ಚಟುವಟಿಕೆಗಳು ಚುರುಕುಗೊಂಡಿದ್ದು, ಮೀನುಗಾರರು ಹಾಗೂ ಸಮುದ್ರ ತೀರದ ನಿವಾಸಿಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krdkgzd9gb7yfyheerjth10h,imgname-----------------------2026-05-12t133522.848-1778573147561.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಬೆಂಗಳೂರು&lt;/strong&gt;: ಕರಾವಳಿ ಭಾಗಗಳಲ್ಲಿ ಮುಂಗಾರು ಪೂರ್ವ ಚಟುವಟಿಕೆಗಳು ವೇಗ ಪಡೆಯುತ್ತಿದ್ದು, ಮೇ 12ರ ಸುಮಾರಿಗೆ ತಮಿಳುನಾಡು ಕರಾವಳಿ ಸಮೀಪ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.&amp;nbsp;&lt;/p&gt;&lt;p&gt;ಪರಿಣಾಮ ಮೇ 13ರಿಂದ ಕರ್ನಾಟಕದ ಕರಾವಳಿ, ಕೇರಳ ಹಾಗೂ ತಮಿಳುನಾಡಿನ ಹಲವೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಲಕ್ಷಣಗಳಿವೆ. ಮೇ 15ರಿಂದ ಹಿಂದೂ ಮಹಾಸಾಗರ ಹಾಗೂ ಅರಬ್ಬಿ ಸಮುದ್ರದಲ್ಲಿ ದಕ್ಷಿಣ ಪಶ್ಚಿಮ ಮುಂಗಾರು ಮಾರುತಗಳ ಚಲನೆ ಚುರುಕುಗೊಳ್ಳಲಿದ್ದು, ಕರಾವಳಿಗೆ ಮುಂಗಾರು ಪೂರ್ವ ಮಳೆಯ ಪ್ರವೇಶ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಹಲವೆಡೆ ಮುಂದಿನ ನಾಲ್ಕೈದು ದಿನಗಳ ಕಾಲ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.&lt;/p&gt;&lt;p&gt;ಕೆಲವೆಡೆ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಮೀನುಗಾರರು ಹಾಗೂ ಸಮುದ್ರ ತೀರ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮುಂಗಾರು ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಿರುವುದರಿಂದ ಈ ಬಾರಿ ಮುಂಗಾರು ಸ್ವಲ್ಪ ಮುಂಚಿತವಾಗಿ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆ.&lt;/p&gt;&lt;p&gt;ಈ ಮಧ್ಯೆ, ಚಿಕ್ಕಮಗಳೂರು ಜಿಲ್ಲೆ ಕಳಸ-ಕೊಪ್ಪ ಸುತ್ತಮುತ್ತ, ಹಾವೇರಿಯಲ್ಲಿ ಸೋಮವಾರ ಸಂಜೆಯ ವೇಳೆ ಧಾರಾಕಾರ ಮಳೆ ಸುರಿದಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/heavy-rainfall-alert-for-coastal-karnataka-from-tomorrow-what-is-the-imd-warning-rav/articleshow-540zhi3"/>
        </item>
        <item>
            <title><![CDATA[ಇಂಗ್ಲೆಂಡ್‌ ಫ್ಲೀಟ್ ನಗರಸಭೆ ಚುನಾವಣೆ: ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನಮಠ ಹ್ಯಾಟ್ರಿಕ್ ಜಯ]]></title>
            <link>https://kannada.asianetnews.com/state/nri-kannadiga-kumar-kuntikanamata-wins-consecutive-election-in-england-fleet-town-council-gdp/articleshow-5rat1cw</link>
            <guid isPermaLink="true">https://kannada.asianetnews.com/state/nri-kannadiga-kumar-kuntikanamata-wins-consecutive-election-in-england-fleet-town-council-gdp/articleshow-5rat1cw</guid>
            <pubDate>Tue, 12 May 2026 21:31:49 +0530</pubDate>
            <description><![CDATA[ಇಂಗ್ಲೆಂಡ್&zwnj;ನ ಫ್ಲೀಟ್ ನಗರಸಭೆ ಚುನಾವಣೆಯಲ್ಲಿ ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನಮಠ ಸತತ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದಾರೆ. ಮೂಲತಃ ಕಾಸರಗೋಡಿನವರಾದ ಅವರು, ಫಾರ್ಮಾ ಸಂಶೋಧನೆ, ಭಾರತ-ಯುಕೆ ವಾಣಿಜ್ಯ ಸಂಬಂಧ ಹಾಗೂ ಕನ್ನಡ ಸಂಸ್ಕೃತಿ ಪ್ರಸಾರದಲ್ಲಿಯೂ ಸಕ್ರಿಯರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kreehzn3yvmvkrt9aqgd2eg0,imgname-nri-kannadiga-kumar-kuntikanamata-1778601492131.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಇಂಗ್ಲೆಂಡ್&zwnj;ನ ಹ್ಯಾಂಪ್&zwnj;ಶೈರ್ ಕೌಂಟಿಯ ಫ್ಲೀಟ್ ನಗರಸಭೆ ಚುನಾವಣೆಯಲ್ಲಿ ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನಮಠ ಸತತ ಮೂರನೇ ಬಾರಿ ಭರ್ಜರಿ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಅವರು ಸ್ಥಳೀಯ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಬಲಿಷ್ಠ ಸ್ಥಾನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.&lt;/p&gt;&lt;h2&gt;ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಅನುಭವ&lt;/h2&gt;&lt;p&gt;ಅವರು ಜಾಗತಿಕ ಫಾರ್ಮಾಸ್ಯೂಟಿಕಲ್ ಮತ್ತು ಕ್ಲಿನಿಕಲ್ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಯುನೈಟೆಡ್ ಕಿಂಗ್&zwnj;ಡಮ್, ಭಾರತ, ಮಧ್ಯಪ್ರಾಚ್ಯ ಮತ್ತು ಅಮೆರಿಕಾದಲ್ಲಿ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಬ್ರಿಟನ್&zwnj;ನ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. 2001ರಲ್ಲೇ ಯೋಗ ಮತ್ತು ಆಯುರ್ವೇದ ಕುರಿತ ಕ್ಲಿನಿಕಲ್ ಸಂಶೋಧನೆ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅಡಕೆಯ ಕ್ಯಾನ್ಸರ್ ಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮಹತ್ವದ ಅಧ್ಯಯನಗಳನ್ನು ಕೈಗೊಂಡಿದ್ದಾರೆ.&lt;/p&gt;&lt;p&gt;ಬ್ರಿಟಿಷ್ ಸಂಸತ್ತಿನಲ್ಲಿ ಭಾರತ-ಯುಕೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕುಮಾರ್ ಅವರು ಸಕ್ರಿಯ ಪಾತ್ರವಹಿಸಿದ್ದಾರೆ. ಸೌತ್&zwnj;ಹಾಲ್&zwnj;ನ ಮಾಜಿ ಸಂಸದ ವೀರೇಂದ್ರ ಶರ್ಮಾ ಸೇರಿದಂತೆ ಗಣ್ಯರೊಂದಿಗೆ &lsquo;ಬ್ರಿಟಿಷ್ ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮರ್ಸ್&rsquo; ಸಂಸ್ಥೆಯನ್ನು ಸ್ಥಾಪಿಸಿದ್ದು, ಸಂಸತ್ತಿನ ಆವರಣದಲ್ಲಿ ಆಯೋಜಿಸಿದ ಉದ್ಯಮ ಸಭೆಗಳಲ್ಲಿ ಮಾಜಿ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ನಾಯಕರು ಮತ್ತು ಜಾಗತಿಕ ಹೂಡಿಕೆದಾರರು ಭಾಗವಹಿಸಿದ್ದಾರೆ.&lt;/p&gt;&lt;h2&gt;ಕಾಸರಗೋಡಿನ ಕುಂಟಿಕಾನಮಠದವರು&lt;/h2&gt;&lt;p&gt;ಮೂಲತಃ ಕಾಸರಗೋಡಿನ ಕುಂಟಿಕಾನಮಠದ ಕುಮಾರ್ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಮೈಸೂರಿನ ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನಲ್ಲಿ ಬಿ.ಫಾರ್ಮಾ ಪದವಿ ಪಡೆದು, ನಂತರ ಲಂಡನ್&zwnj;ನಲ್ಲಿ ಎಂ.ಬಿ.ಎ ಪೂರ್ಣಗೊಳಿಸಿದ್ದಾರೆ. ಯುಕೆಯ ಅರಸ್ ಮಾರ್ಕೆಟಿಂಗ್ ಲಿಮಿಟೆಡ್ ಹಾಗೂ ಅಮೆರಿಕದ ಅರಸ್ ಮಾರ್ಕೆಟಿಂಗ್ ಎಲ್&zwnj;ಎಲ್&zwnj;ಸಿ&rsquo; ಸಂಸ್ಥೆಗಳ ನಿರ್ದೇಶಕರಾಗಿದ್ದು, &lsquo;Ondudo&rsquo; ಎಂಬ ಎಡ್-ಟೆಕ್ ವೇದಿಕೆಯ ಹಾಗೂ ಸೌತ್&zwnj;ಹಾಲ್&zwnj;ನ ಮಾಜಿ ಸಂಸದ ವೀರೇಂದ್ರ ಶರ್ಮಾ ಸೇರಿದಂತೆ ಗಣ್ಯರೊಂದಿಗೆ &lsquo;ಬ್ರಿಟಿಷ್ ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮರ್ಸ್&rsquo; ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.&lt;/p&gt;&lt;p&gt;ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್ ಅವರ ಪುತ್ರರಾಗಿರುವ ಅವರು, 500 ವರ್ಷಗಳ ಇತಿಹಾಸವಿರುವ ಕುಂಟಿಕಾನಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಆರಾಧನೆ, ಜೀರ್ಣೋದ್ಧಾರ, ಆಡಳಿತದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಆರ್ಯಭಟ ಸಾಂಸ್ಕೃತಿಕ ಪ್ರಶಸ್ತಿ ಹಾಗೂ ಮಂತ್ರಾಲಯ ಪರಿಮಳ ಪ್ರಶಸ್ತಿ ದೊರೆತಿವೆ. ಜೊತೆಗೆ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು, ಯೂರೋಪಿನಾದ್ಯಂತ ಕನ್ನಡ ಸಂಸ್ಕೃತಿಯನ್ನು ಹರಡುತ್ತಿದ್ದಾರೆ.&lt;/p&gt;&lt;p&gt;ಫಾರ್ಮಾ ಉದ್ಯಮ, ವ್ಯವಸ್ಥಾಪನಾ ಶಾಸ್ತ್ರ ಮತ್ತು ಭೌಗೋಳಿಕ ರಾಜಕೀಯ ವಿಷಯಗಳ ಕುರಿತು &lsquo;ಕನ್ನಡಪ್ರಭ&rsquo; ಪತ್ರಿಕೆಯಲ್ಲಿ 70ಕ್ಕೂ ಹೆಚ್ಚು ಲೇಖನಗಳನ್ನು ಬರೆದು ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಫಾರ್ಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವಿಶ್ವ ಫಾರ್ಮಾಸಿಸ್ಟ್ ದಿನದಂದು ಮೈಸೂರಿನ ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನಲ್ಲಿ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಸೋಸಿಯೇಷನ್ ವತಿಯಿಂದ ಕುಮಾರ್ ಕುಂಟಿಕಾನಮಠ ಅವರನ್ನು ಗೌರವಿಸಲಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/state/nri-kannadiga-kumar-kuntikanamata-wins-consecutive-election-in-england-fleet-town-council-gdp/articleshow-5rat1cw"/>
        </item>
        <item>
            <title><![CDATA[ಸ್ಪೀಕರ್ ಖಾದರ್‌ಗೆ ಘೇರಾವ್ ಕೇಸ್: 11 ಮಂದಿ ವಿರುದ್ಧ ಎಫ್‌ಐಆರ್, ಏನಿದು ಪ್ರಕರಣ?]]></title>
            <link>https://kannada.asianetnews.com/karnataka-districts/speaker-ut-khader-gherao-case-fir-against-11-people-what-is-the-incident-ullala-rav/articleshow-9d8r29f</link>
            <guid isPermaLink="true">https://kannada.asianetnews.com/karnataka-districts/speaker-ut-khader-gherao-case-fir-against-11-people-what-is-the-incident-ullala-rav/articleshow-9d8r29f</guid>
            <pubDate>Thu, 14 May 2026 07:44:25 +0530</pubDate>
            <description><![CDATA[&lt;p&gt;ಮಂಗಳೂರಿನ ಕುತ್ತಾರು ಜಂಕ್ಷನ್&zwnj;ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಘೇರಾವ್ ಹಾಕಿದ ಆರೋಪದ ಮೇಲೆ 11 ಮಂದಿ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ. ಖಾದರ್ ಅವರ ಅಂಗರಕ್ಷಕರು ನೀಡಿದ ದೂರಿನ ಅನ್ವಯ ಕ್ರಮ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krj45es1ztyfwmnykns19x7w,imgname-----------------------2026-05-14t074221.241-1778724813601.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಳ್ಳಾಲ (ಮೇ.14):&lt;/strong&gt; ಮಂಗಳೂರು ಸಮೀಪದ ಕುತ್ತಾರು ಜಂಕ್ಷನ್&zwnj;ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಘೇರಾವ್ ಹಾಕಿದ ಆರೋಪದಲ್ಲಿ ಮದನಿ ನಗರದ ಜುನೈದ್ ಹಾಗೂ ಹತ್ತು ಮಂದಿ ಸಹಚರರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;h2&gt;ಖಾದರ್ ಅಂಗರಕ್ಷಕ ಸಿಬ್ಬಂದಿ ದೂರು; 11 ಮಂದಿ ವಿರುದ್ಧ ಕೇಸ್&lt;/h2&gt;&lt;p&gt;ಖಾದರ್ ಅವರ ಅಂಗರಕ್ಷಕ ಹಾಗೂ ಸಿಎಸ್&zwnj;ಆರ್ ಘಟಕದ ಸಿಬ್ಬಂದಿ ಮೊಹಮ್ಮದ್ ಯಾಸೀನ್&zwnj; ನೀಡಿದ ದೂರಿನ ಆಧಾರದ ಮೇಲೆ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೇ 7ರಂದು ರಾತ್ರಿ ಉಳ್ಳಾಲ ಮಾಸ್ತಿಕಟ್ಟೆಯ ರೆಸಾರ್ಟ್&zwnj;ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ಜುನೈದ್ ಹಾಗೂ ಇತರರು ಸ್ಪೀಕರ್ ಅವರನ್ನು ಭೇಟಿಯಾಗಲು ಮುಂದಾಗಿದ್ದರು. ಈ ವೇಳೆ, ಭದ್ರತಾ ಸಿಬ್ಬಂದಿ ಭೇಟಿಗೆ ಅವಕಾಶ ನಿರಾಕರಿಸಿದ್ದರು. ಆದರೆ, ಆರೋಪಿಗಳು ಅಂಗರಕ್ಷಕನನ್ನು ತಳ್ಳಿ ಮುಂದೆ ನುಗ್ಗಿ, ಖಾದರ್ ಅವರಿಗೆ ಘೇರಾವ್ ಹಾಕಿದ್ದರು.&lt;/p&gt;&lt;p&gt;ಕಿ ಕುತ್ತಾರು ಕೊರಗಜ್ಜನ ವೃತ್ತದ ವಿಚಾರವಾಗಿ ಏರುಧ್ವನಿಯಲ್ಲಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಘಟನೆಯ ವಿಡಿಯೋವನ್ನು ಆಕ್ಷೇಪಾರ್ಹ ಬರಹಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಮೇಲಾಧಿಕಾರಿಗಳ ಸೂಚನೆಯಂತೆ ಮೇ 9ರಂದು ಉಳ್ಳಾಲ ಠಾಣೆಗೆ ದೂರು ನೀಡಲಾಗಿದೆ.&lt;/p&gt;&lt;h2&gt;ಕೊರಗಜ್ಜ ವೃತ್ತ ವಿವಾದ ಹಿನ್ನೆಲೆ:&lt;/h2&gt;&lt;p&gt;ಕುತ್ತಾರು ಕೊರಗಜ್ಜ ಆದಿಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಹಲವು ವರ್ಷಗಳ ಹಿಂದೆ ಸ್ಥಳೀಯ ಬಜರಂಗದಳ ಸಂಘಟನೆ ಕುತ್ತಾರು ಜಂಕ್ಷನ್&zwnj;ನಲ್ಲಿ ಕೊರಗಜ್ಜನ ಮುಟ್ಟಾಳೆ ಹಾಗೂ ದಂಟೆಯ ಪ್ರತಿಕೃತಿಯುಳ್ಳ ಸಣ್ಣ ವೃತ್ತ ನಿರ್ಮಿಸಿತ್ತು. ಇದೀಗ ಆ ವೃತ್ತ ತೆರವುಗೊಳಿಸಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದಿಂದ ನೂತನ ವೃತ್ತ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ನಡುವೆ &lsquo;ಕೊರಗಜ್ಜನ ಹೆಸರಿನಲ್ಲಿ ವೃತ್ತ ನಿರ್ಮಾಣವಾಗಬಾರದು&rsquo; ಎಂದು ಯುವಕರ ಗುಂಪು ಆಕ್ಷೇಪ ವ್ಯಕ್ತಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಪೀಕರ್ ಖಾದರ್ ಅವರನ್ನು ಘೇರಾವ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;- ಕುತ್ತಾರು ಜಂಕ್ಷನ್&zwnj;ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ್ಕೆ ಆಕ್ಷೇಪ ಆರೋಪ&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/speaker-ut-khader-gherao-case-fir-against-11-people-what-is-the-incident-ullala-rav/articleshow-9d8r29f"/>
        </item>
        <item>
            <title><![CDATA[ಶಿವಮೊಗ್ಗ, ಮಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಅಬ್ಬರಿಸಿದ ಮಳೆರಾಯ: ವಿಮಾನ ಲ್ಯಾಂಡಿಂಗ್ ಸಮಸ್ಯೆ, ಮನೆಗಳು ವಿನಾಶ!]]></title>
            <link>https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn</link>
            <guid isPermaLink="true">https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn</guid>
            <pubDate>Thu, 14 May 2026 21:03:29 +0530</pubDate>
            <description><![CDATA[&lt;p&gt;ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮುಂಗಾರು ಪೂರ್ವ ಮಳೆಯು ಹಾನಿ ಮಾಡಿದೆ. ಮಂಗಳೂರಿನಲ್ಲಿ ವಿಮಾನ ಸಂಚಾರ ವ್ಯತ್ಯಯ, ಯಾದಗಿರಿಯಲ್ಲಿ ಮನೆಗಳಿಗೆ ಹಾನಿ ಹಾಗೂ ಹಲವೆಡೆ ವಿದ್ಯುತ್ ಕಡಿತದಂತಹ ಅವಾಂತರ ಸೃಷ್ಟಿಸಿದೆ. ಎಲ್ಲಿ ಏನೇನು ಹಾನಿಯಾಗಿದೆ ತಿಳಿಯಲು ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krkhh7vdmgmzcqbvbwd34hj9,imgname-karnataka-rain-update-1778772385645.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮುಂಗಾರು ಪೂರ್ವ ಮಳೆಯು ಹಾನಿ ಮಾಡಿದೆ. ಮಂಗಳೂರಿನಲ್ಲಿ ವಿಮಾನ ಸಂಚಾರ ವ್ಯತ್ಯಯ, ಯಾದಗಿರಿಯಲ್ಲಿ ಮನೆಗಳಿಗೆ ಹಾನಿ ಹಾಗೂ ಹಲವೆಡೆ ವಿದ್ಯುತ್ ಕಡಿತದಂತಹ ಅವಾಂತರ ಸೃಷ್ಟಿಸಿದೆ. ಎಲ್ಲಿ ಏನೇನು ಹಾನಿಯಾಗಿದೆ ತಿಳಿಯಲು ಓದಿ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು/ಮಂಗಳೂರು: &lt;/strong&gt;ಕಳೆದ ಕೆಲವು ದಿನಗಳಿಂದ ಸುಡುತ್ತಿರುವ ಬಿಸಿಲಿನಿಂದ ಬೆಂದು ಹೋಗಿದ್ದ ಕರ್ನಾಟಕದ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಆದರೆ, ರಾಜ್ಯದ ಹಲವೆಡೆ ಮಳೆರಾಯನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಒಂದೆಡೆ ಮಳೆ ಖುಷಿ ನೀಡಿದರೆ, ಮತ್ತೊಂದೆಡೆ ಅಪಾರ ಹಾನಿ ಉಂಟುಮಾಡಿದೆ. ವಿಶೇಷವಾಗಿ ಮಂಗಳೂರು, ಯಾದಗಿರಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ರೌದ್ರಾವತಾರ ಕಂಡುಬಂದಿದೆ.&lt;/p&gt;&lt;img&gt;&lt;p&gt;ಕರಾವಳಿ ನಗರಿ ಮಂಗಳೂರಿನಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ರನ್ ವೇ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ಎರಡು ವಿಮಾನಗಳು ಇಳಿಯಲಾಗದೆ ವಿಟ್ಲ ಸಮೀಪದ ಆಕಾಶದಲ್ಲಿ ಸುದೀರ್ಘ ಕಾಲ ಸುತ್ತಾಡುತ್ತಿವೆ. ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.&lt;/p&gt;&lt;img&gt;&lt;p&gt;ಯಾದಗಿರಿ ಜಿಲ್ಲೆಯಾದ್ಯಂತ ಭಾರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ. ಯಾದಗಿರಿ ನಗರ, ಶಹಾಪುರ ಮತ್ತು ಸುರಪುರ ತಾಲೂಕುಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಗಳ ಮೇಲ್ಛಾವಣಿಯ ತಗಡುಗಳು ನೂರಾರು ಅಡಿ ದೂರಕ್ಕೆ ಹಾರಿ ಹೋಗಿವೆ.&amp;nbsp;&lt;/p&gt;&lt;img&gt;&lt;p&gt;ಯಾದಗಿರಿ ಜಿಲ್ಲೆಯಾದ್ಯಂತ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ಮಳೆ ತಂಪು ನೀಡಿದೆಯಾದರೂ, ಬಡ ಕುಟುಂಬಗಳ ಆಸ್ತಿಪಾಸ್ತಿಗೆ ಹಾನಿಯಾಗಿರುವುದು ನೋವು ತಂದಿದೆ.&lt;/p&gt;&lt;img&gt;&lt;p&gt;ಶಿವಮೊಗ್ಗದಲ್ಲಿ ಹಲವು ದಿನಗಳ ಸುದೀರ್ಘ ಕಾಯುವಿಕೆಯ ನಂತರ ಮಳೆರಾಯ ಧರೆಗಿಳಿದಿದ್ದಾನೆ. ಸಂಜೆ 6 ಗಂಟೆಯ ಸುಮಾರಿಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇಳೆ ತಂಪಾಗಿದೆ. ಆದರೆ, ದಿಢೀರ್ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಯಿತು.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗುಡುಗು ಮತ್ತು ಮಿಂಚಿನ ಸಹಿತ ಭಾರಿ ಮಳೆಯಾಗುತ್ತಿದೆ. ಸಂಜೆ 7 ಗಂಟೆಯಿಂದಲೇ ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿಯ ಜನರಿಗೆ ಸೆಕೆಯಿಂದ ಮುಕ್ತಿ ಸಿಕ್ಕಿದೆ. ಜಿಲ್ಲೆಯ ಹೊನ್ನಾವರ ಮತ್ತು ಕುಮಟಾ ತಾಲೂಕುಗಳಲ್ಲೂ ಮೋಡಕವಿದ ವಾತಾವರಣವಿದ್ದು, ರಾತ್ರಿಯ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಗುಡುಗು ಸಿಡಿಲಿನ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn"/>
        </item>
        <item>
            <title><![CDATA[ಮಾಲೇಮಾರ್, ಕಾವೂರು, ಕೊಟ್ಟಾರ, ಅಬ್ಬಕ್ಕ ನಗರ, ಕುಂಟಿಕಾನ, ಬಾರೆಬೈಗೆ ಕೃತಕ ನೆರೆ ಭೀತಿ]]></title>
            <link>https://kannada.asianetnews.com/karnataka-districts/mangaluru-bridge-construction-dambel-area-under-threat-of-artificial-flooding-due-to-dam-built-on-river-mrq/articleshow-c1u3c34</link>
            <guid isPermaLink="true">https://kannada.asianetnews.com/karnataka-districts/mangaluru-bridge-construction-dambel-area-under-threat-of-artificial-flooding-due-to-dam-built-on-river-mrq/articleshow-c1u3c34</guid>
            <pubDate>Sat, 16 May 2026 07:51:25 +0530</pubDate>
            <description><![CDATA[ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸೇತುವೆ ನಿರ್ಮಾಣಕ್ಕಾಗಿ ನದಿಗೆ ಹಾಕಲಾದ ಒಡ್ಡಿನಿಂದಾಗಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಭೀತಿ ಎದುರಾಗಿದೆ. ಈ ಕಾಮಗಾರಿಯಿಂದಾಗಿ ದಂಬೆಲ್&zwnj;, ಮಾಲೇಮಾರ್, ಕಾವೂರು ಸೇರಿದಂತೆ ಹಲವು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆಯಿದ್ದು, ಸುಮಾರು 2.5 ಲಕ್ಷ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪರಿಸರ ಸಂರಕ್ಷಣಾ ಒಕ್ಕೂಟ ಎಚ್ಚರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krq95psv6aswa40y4b38k191,imgname-mangaluru-1778897836859.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ನಗರದ ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದೇ ವೇಳೆ ನದಿಗೆ ಹಾಕಲಾದ ನೀರಿನ ಒಡ್ಡಿನ ಪರಿಣಾಮ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಸಮುದ್ರ ಸೇರದೆ ಕೃತಕ ನೆರೆಯ ಭೀತಿ ಎದುರಾಗಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಎನ್&zwnj;ಇಸಿಎಫ್) ಗೌರವ ಕಾರ್ಯದರ್ಶಿ ಎಚ್.&zwnj; ಶಶಿಧರ ಶೆಟ್ಟಿ ಹೇಳಿದರು.&lt;/p&gt;&lt;h2&gt;&lt;strong&gt;ಮೂರರಿಂದ ನಾಲ್ಕು ಅಡಿ ಮುಳುಗಡೆ ಸಾಧ್ಯತೆ&lt;/strong&gt;&lt;/h2&gt;&lt;p&gt;ಒಕ್ಕೂಟದ ನಿಯೋಗದೊಂದಿಗೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಒಡ್ಡಿನ ಪರಿಣಾಮ ನೀರು ಸರಾಗವಾಗಿ ಹರಿಯದೆ ಒತ್ತಡದಿಂದ ಹಿಮ್ಮುಖ ಸಂಚರಿಸಿ ಸಮಸ್ಯೆ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ದಂಬೆಲ್ ಮೂಲಕ ಮಾಲೇಮಾರ್, ಕಾವೂರು, ಕೊಟ್ಟಾರ, ಅಬ್ಬಕ್ಕ ನಗರ, ಕುಂಟಿಕಾನ, ಬಾರೆಬೈಲ್ ಮುಂತಾದ ಪ್ರದೇಶಗಳು ಸುಮಾರು ಮೂರರಿಂದ ನಾಲ್ಕು ಅಡಿ ಮುಳುಗಡೆ ಆಗುವ ಸಾಧ್ಯತೆ ಇದೆ ಎಂದರು.&lt;/p&gt;&lt;h3&gt;&lt;strong&gt;ಸುಮಾರು 2.5 ಲಕ್ಷ ಮಂದಿ ಇರುವ ವಸತಿ ಪ್ರದೇಶ&lt;/strong&gt;&lt;/h3&gt;&lt;p&gt;ನದಿಗೆ ಅಡ್ಡವಾಗಿ ನಿರ್ಮಿಸಿದ ಒಡ್ಡನ್ನು ಕೂಡಲೇ ತೆರವು ಮಾಡಬೇಕು. ಇಲ್ಲದಿದ್ದರೆ ಸುಮಾರು 2.5 ಲಕ್ಷ ಮಂದಿ ಇರುವ ವಸತಿ ಪ್ರದೇಶ ಮುಳುಗಡೆಯಾಗಲಿದೆ. ಸಾಮಾನ್ಯ ಜ್ಞಾನ ಇಲ್ಲದೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ ವರ್ಷ ಇಲ್ಲಿ ಅಡೆತಡೆ ಇಲ್ಲದೆಯೇ ಕೊಟ್ಟಾರಚೌಕಿ ಸುತ್ತಲಿನ ಪ್ರದೇಶ ಮುಳುಗಡೆಯಾಗಿತ್ತು. ಕೂಡಲೇ ಈ ಮಣ್ಣು ತೆರವು ಮಾಡಬೇಕು. ಇಲ್ಲದಿದ್ದರೆ ಮುಂದಿನ ಗಂಡಾಂತರಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಹೇಳಿದರು.&lt;/p&gt;&lt;p&gt;ಈ ಸಂದರ್ಭ ಎನ್&zwnj;ಇಸಿಎಫ್ ಅಧ್ಯಕ್ಷ ಜಾನಸ್&zwnj;, ಉಪ ಕಾರ್ಯದರ್ಶಿ ಇಯಾನ್&zwnj;, ಸದಸ್ಯರಾದ ಸರಿತಾ ಶೆಟ್ಟಿ, ಸುರೇಶ್&zwnj; ಉಡುಪ ಮತ್ತಿತರರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಂಗಳೂರು ಕದ್ರಿಯಲ್ಲಿ ಮತ್ತೊಂದು ಉದ್ಯಾನವನಕ್ಕೆ ಸಿದ್ಧತೆ! 3.50ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಇಲ್ಲಿ ಏನೇನಿರಲಿದೆ?&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಮಂಗಳೂರು: ಬಂಟ್ವಾಳ, ವಿಟ್ಲ ಆಗಸದಲ್ಲಿ ಭೂಮಿಗೆ ಅತ್ಯಂತ ಸಮೀಪ 8 ಸುತ್ತು ಗಿರಕಿ ಹೊಡೆದ ಏರ್&zwnj;ಇಂಡಿಯಾ, ಗಾಬರಿಬಿದ್ದ ಜನ!&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mangaluru-bridge-construction-dambel-area-under-threat-of-artificial-flooding-due-to-dam-built-on-river-mrq/articleshow-c1u3c34"/>
        </item>
        <item>
            <title><![CDATA[ಮಂಗಳೂರು ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಹಿಡಿದ ರೈಲ್ವೆ ಪೊಲೀಸರೇ ಶಾಕ್ ಆದ್ರು!]]></title>
            <link>https://kannada.asianetnews.com/karnataka-districts/notorious-robbery-accused-arrested-at-mangaluru-central-railway-station-with-gold-worth-rs13-lakh-gdp/articleshow-ffd21yi</link>
            <guid isPermaLink="true">https://kannada.asianetnews.com/karnataka-districts/notorious-robbery-accused-arrested-at-mangaluru-central-railway-station-with-gold-worth-rs13-lakh-gdp/articleshow-ffd21yi</guid>
            <pubDate>Sun, 10 May 2026 16:36:29 +0530</pubDate>
            <description><![CDATA[ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವಕನನ್ನು ರೈಲ್ವೆ ಪೊಲೀಸರು ವಿಚಾರಿಸಿದಾಗ, ಆತ ಕೇರಳದ ಕುಖ್ಯಾತ ದರೋಡೆಕೋರ ಎಂದು ತಿಳಿದುಬಂದಿದೆ. ಬಂಧಿತ ಕಾಸರಗೋಡು ಮೂಲದ ಆಶಿಫ್&zwnj;ನಿಂದ ಸುಮಾರು ₹13.06 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕೇರಳದ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.]]></description>
            <media:content url="https://static.asianetnews.com/images/w-1280,h-720,format-jpg,imgid-01kr8rzsf2fsa7ab7bnx3mz8nh,imgname----1778411103714.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಯುವಕನ ವಿಚಾರಣೆ ನಡೆಸಿದ ರೈಲ್ವೆ ಪೊಲೀಸರಿಗೆ ಶಾಕ್ ಆಗಿದ್ದು, ವಿಚಾರಣೆ ವೇಳೆ ಆತ ಕುಖ್ಯಾತ ದರೋಡೆಕೋರನಾಗಿದ್ದು, ಇದೀಗ ಆತನನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು13.06 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;h2&gt;ಶಂಕಾಸ್ಪದ ತಿರುಗಾಡುತ್ತಿದ್ದ ಕುಖ್ಯಾತ ದರೋಡೆ ಆರೋಪಿ&lt;/h2&gt;&lt;p&gt;ಕಾಸರಗೋಡು ಮೂಲದ ಆಶಿಫ್ ಪಿ.ಎಚ್. (25) ಬಂಧಿತ ಆರೋಪಿ. ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಈತನ ಬ್ಯಾಗ್ ತಪಾಸಣೆ ನಡೆಸಿದಾಗ ಯಾವುದೇ ದಾಖಲೆಗಳಿಲ್ಲದ 93.5 ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿವೆ. ಇದರಲ್ಲಿ 4 ಬಳೆಗಳು, 3 ಹಾರಗಳು, 4 ಉಂಗುರಗಳು, ಚೈನ್, ಬ್ರೇಸ್&zwnj;ಲೆಟ್ ಹಾಗೂ ಸ್ಟಡ್&zwnj;ಗಳು ಸೇರಿವೆ.&lt;/p&gt;&lt;h2&gt;ಕೇರಳದಲ್ಲಿ ದೊಡ್ಡ ಕಳ್ಳ&lt;/h2&gt;&lt;p&gt;ವಿಚಾರಣೆ ವೇಳೆ ಈತ ಕೇರಳದ ತ್ರಿಶೂರ್ ಜಿಲ್ಲೆಯ ಪಾವರಟ್ಟಿ ಎಂಬಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಪಾವರಟ್ಟಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಎರ್ನಾಕುಳಂ ಮತ್ತು ಕಾಸರಗೋಡು ವ್ಯಾಪ್ತಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯ ವಿರುದ್ಧ ಹಲವು ಬಾಕಿ ವಾರಂಟ್&zwnj;ಗಳಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/notorious-robbery-accused-arrested-at-mangaluru-central-railway-station-with-gold-worth-rs13-lakh-gdp/articleshow-ffd21yi"/>
        </item>
        <item>
            <title><![CDATA[ಮಣಿಪಾಲದ ಎಂಐಟಿಗೆ ವಿಶ್ವ ಗರಿ, CFA ಮಾನ್ಯತೆ ಪಡೆದ ದೇಶದ ಮೊದಲ ಎಂಜಿನಿಯರಿಂಗ್ ಸಂಸ್ಥೆ! ಇನ್ಮುಂದೆ ಜಾಗತಿಕ ಶಿಕ್ಷಣ]]></title>
            <link>https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp</link>
            <guid isPermaLink="true">https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp</guid>
            <pubDate>Sun, 10 May 2026 18:06:20 +0530</pubDate>
            <description><![CDATA[ಮಣಿಪಾಲದ ಎಂಐಟಿಯು ಪ್ರತಿಷ್ಠಿತ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನಿಂದ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆಯಾಗಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸಲಿದೆ. ಸಂಸ್ಥೆಯು 2023ರಿಂದ ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿಯಲ್ಲಿ ಬಿಟೆಕ್ ಕೋರ್ಸ್ ಅನ್ನು ಸಹ ಆರಂಭಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8xykemzxs2053j4vh0t6hw,imgname-mit-manipal--1--1778416307667.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಣಿಪಾಲ: &lt;/strong&gt;ಮಣಿಪಾಲ್ ಅಕಾಡೆಮಿ ಆಫ್&zwnj; ಹೈಯರ್&zwnj; ಎಜುಕೇಶನ್&zwnj; (ಮಾಹೆ) ವಿವಿಯ ಅಂಗ ಸಂಸ್ಥೆ ಮಣಿಪಾಲ್ ಇನ್&zwnj;ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂಐಟಿ)ಗೆ ಪ್ರತಿಷ್ಠಿತ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್ ವಿಶ್ವವಿದ್ಯಾಲಯದಿಂದ ಮಾನ್ಯತೆ ಸಿಕ್ಕಿದ್ದು, ಎಂಐಟಿಯು ಈ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ಮೇ 6ರಂದು ಮಣಿಪಾಲದಲ್ಲಿ ನಡೆದ ಕಾರ್&zwj;ಯಕ್ರಮದಲ್ಲಿ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನ ಪ್ರತಿನಿಧಿಗಳಾದ ಸೈಮ್ ಫಕಿಹ್ ಮತ್ತು ಕುಮಾರಿ ಅಂಜನಾ ನಹರ್ ಅವರು ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರಿಗೆ ಈ ಮಾನ್ಯತೆ ಪ್ರಮಾಣಪತ್ರ ಅಧಿಕೃತವಾಗಿ ಹಸ್ತಾಂತರಿಸಿದರು.&lt;/p&gt;&lt;p&gt;ಎಂಐಟಿ ನಿರ್ದೇಶಕರಾದ ಕಮಾಂಡರ್ (ಡಾ) ಅನಿಲ್ ರಾಣಾ ಮತ್ತು ಡಾ. ಕುಂಚಂ ಶ್ಯಾಮ್ ಪ್ರಸಾದ್, ಎಂಐಟಿ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, ಹ್ಯುಮಾನಿಟೀಸ್ ಅಂಡ್ ಮ್ಯಾನೇಜ್&zwnj;ಮೆಂಟ್&zwnj;ನ ಸಹ ಡೀನ್ ಡಾ. ಯೋಗೇಶ್ ಪೈ ಪಿ. ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.&lt;/p&gt;&lt;h2&gt;ಜಾಗತಿಕ ಮಟ್ಟದ ಶಿಕ್ಷಣ&lt;/h2&gt;&lt;p&gt;ಈ ಮಾನ್ಯತೆಯಿಂದ ಎಂಐಟಿ ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ದೊರೆಯಲಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವುದಲ್ಲದೆ, ಉದ್ಯಮದ ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಮತ್ತು ವಿವಿಧ ವಿದ್ಯಾರ್ಥಿವೇತನಗಳನ್ನು ಪಡೆಯಲು ದಾರಿಯಾಗಲಿದೆ.&lt;/p&gt;&lt;p&gt;ಜಾಗತಿಕ ಮಟ್ಟದಲ್ಲಿ ಹಣಕಾಸು ಮತ್ತು ಹೂಡಿಕೆ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನೊಂದಿಗೆ ಕೈಜೋಡಿಸಿರುವುದು ಎಂಐಟಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಜತೆಗೆ ಹಣಕಾಸು ಕ್ಷೇತ್ರದ ಜಾಗತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.&lt;/p&gt;&lt;h2&gt;ಬಿಟೆಕ್ ನೂತನ ಕೋರ್ಸ್ ಆರಂಭ&lt;/h2&gt;&lt;p&gt;ಸಿಎಸ್&zwnj;-ಎಫ್&zwnj;ಟಿ ಕೋರ್ಸ್ ಎಂಐಟಿಯ 2023ರಿಂದ ಬಿಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿ) ಎಂಬ ವಿನೂತನ ಕೋರ್ಸನ್ನು ಆರಂಭಿಸಿದೆ. ಕಂಪ್ಯೂಟರ್ ಸೈನ್ಸ್ ಜತೆಗೆ ಹಣಕಾಸು, ಅನಲಿಟಿಕ್ಸ್&zwnj;, ತಂತ್ರಜ್ಞಾನಗಳನ್ನು ಒಳಗೊಂಡ ಅಂತರಶಿಸ್ತೀಯ ಕೋರ್ಸ್&zwnj; ಪರಿಚಯಿಸಿದ ದೇಶದ ಮೊದಲ ಮತ್ತು ಏಕೈಕ ಸಂಸ್ಥೆ ಎಂಬ ಕೀರ್ತಿಗೆ ಎಂಐಟಿ ಪಾತ್ರವಾಗಿದೆ. ಇಂದಿನ ಆಧುನಿಕ ಉದ್ಯೋಗ ಮಾರುಕಟ್ಟೆಗೆ ಪೂರಕವಾದ ಪರಿಣಿತರನ್ನು ಸಿದ್ಧಪಡಿಸುವಲ್ಲಿ ಎಂಐಟಿ ಮಹತ್ವದ ಪಾತ್ರ ವಹಿಸುತ್ತಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp"/>
        </item>
        <item>
            <title><![CDATA[ಮಂಗಳೂರು: ಬಂಟ್ವಾಳ, ವಿಟ್ಲ ಆಗಸದಲ್ಲಿ ಭೂಮಿಗೆ ಅತ್ಯಂತ ಸಮೀಪ 8 ಸುತ್ತು ಗಿರಕಿ ಹೊಡೆದ ಏರ್‌ಇಂಡಿಯಾ, ಗಾಬರಿಬಿದ್ದ ಜನ!]]></title>
            <link>https://kannada.asianetnews.com/karnataka-districts/air-india-express-flight-circles-over-mangaluru-skies-causes-panic-lands-safely-gdp/articleshow-fhakv28</link>
            <guid isPermaLink="true">https://kannada.asianetnews.com/karnataka-districts/air-india-express-flight-circles-over-mangaluru-skies-causes-panic-lands-safely-gdp/articleshow-fhakv28</guid>
            <pubDate>Fri, 15 May 2026 22:11:28 +0530</pubDate>
            <description><![CDATA[ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ವಿಮಾನವು ಬಂಟ್ವಾಳದ ವಿಟ್ಲ, ಕಲ್ಲಡ್ಕ ಭಾಗದಲ್ಲಿ ಹಲವು ಸುತ್ತು ಹೊಡೆದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಇದು ತಾಂತ್ರಿಕ ದೋಷವಲ್ಲ, ಬದಲಿಗೆ ಹವಾಮಾನ ವೈಪರೀತ್ಯದಿಂದಾಗಿ ಪೈಲಟ್&zwnj;ಗಳು ಅನುಸರಿಸಿದ 'ಹೋಲ್ಡಿಂಗ್ ಪ್ಯಾಟರ್ನ್' ಎಂಬ ಸುರಕ್ಷತಾ ಕ್ರಮವಾಗಿತ್ತು. ಅಂತಿಮವಾಗಿ ವಿಮಾನವು ಸುರಕ್ಷಿತವಾಗಿ ಇಳಿಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01krp821nqy9mpd091gc6zh765,imgname-air-india-express-flight-mangaluru-1778863113911.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಂಟ್ವಾಳ: &lt;/strong&gt;ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ವಿಮಾನವೊಂದು ವಿಟ್ಲ, ಕಲ್ಲಡ್ಕ ಪರಿಸರದ ಆಕಾಶದಲ್ಲಿ ಸುಮಾರು ಎಂಟಕ್ಕೂ ಹೆಚ್ಚು ಸುತ್ತುಗಳನ್ನು ಹೊಡೆದ ಘಟನೆ ಗುರುವಾರ ಸಂಜೆ ನಡೆದಿದ್ದು, ಸ್ಥಳೀಯ ಜನರಲ್ಲಿ ಕೆಲ ಕಾಲ ಭೀತಿ ಮತ್ತು ಆತಂಕ ಮೂಡಿಸಿತು.&lt;/p&gt;&lt;h2&gt;ತಾಂತ್ರಿಕ ದೋಷವೆಂದು ಗಾಬರಿಗೊಂಡ ಜನ&lt;/h2&gt;&lt;p&gt;ಬೆಂಗಳೂರಿನಿಂದ ಹೊರಟಿದ್ದ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸಂಸ್ಥೆಯ IX2924 (ಬೋಯಿಂಗ್ 737 MAX 8) ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ವಿಟ್ಲ ಆಕಾಶ ಭಾಗಕ್ಕೆ ಬರುತ್ತಿದ್ದಂತೆ ವಿಮಾನವು ಅತ್ಯಂತ ಕೆಳ ಮಟ್ಟದಲ್ಲಿ (ಸುಮಾರು 2,650 ಅಡಿ ಎತ್ತರದಲ್ಲಿ) ವೃತ್ತಾಕಾರದಲ್ಲಿ ನಿರಂತರ ಸುತ್ತು ಹೊಡೆಯಲಾರಂಭಿಸಿತು. ಇದನ್ನು ಗಮನಿಸಿದ ಸಾರ್ವಜನಿಕರು ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರಬಹುದು ಎಂದು ಭಾವಿಸಿ ತೀವ್ರ ಆತಂಕ ವ್ಯಕ್ತಪಡಿಸಿದರು. ಫ್ಲೈಟ್&zwnj; ರಾಡಾರ್ ಅಪ್ಲಿಕೇಶನ್&zwnj;ನಲ್ಲೂ ವಿಮಾನವು ಒಂದೇ ಕಡೆ ಸುತ್ತುತ್ತಿರುವುದು ದಾಖಲಾಗಿದೆ.&lt;/p&gt;&lt;h2&gt;ಇದು ಸಾಮಾನ್ಯ ವಾಯುಯಾನ ಪ್ರಕ್ರಿಯೆ:&lt;/h2&gt;&lt;p&gt;ಸಾಮಾನ್ಯವಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ಹಠಾತ್ ಗಾಳಿ, ಭಾರಿ ಮಳೆ ಅಥವಾ ದಟ್ಟವಾದ ಮೋಡಗಳಿದ್ದಾಗ ರನ್&zwnj;ವೇ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಮಂಗಳೂರು ಕರಾವಳಿ ಭಾಗದಲ್ಲಿ ಸದ್ಯ ಹವಾಮಾನ ವೈಪರೀತ್ಯ ಹಾಗೂ ಮಳೆಯ ವಾತಾವರಣ ಇರುವುದರಿಂದ ಸುರಕ್ಷತೆ ದೃಷ್ಟಿಯಿಂದ ಪೈಲಟ್&zwnj;ಗಳು ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳ ಸೂಚನೆಯಂತೆ ಹವಾಮಾನ ತಿಳಿಯಾಗುವವರೆಗೆ ಆಕಾಶದಲ್ಲೇ ಕಾಯುತ್ತಾರೆ. ಇದನ್ನು ವಾಯುಯಾನದ ಭಾಷೆಯಲ್ಲಿ &lsquo;ಹೋಲ್ಡಿಂಗ್ ಪ್ಯಾಟರ್ನ್&rsquo; (Holding Pattern) ಎನ್ನಲಾಗುತ್ತದೆ. ಎರಡು ವಿಮಾನಗಳು &lsquo;ಹೋಲ್ಡಿಂಗ್ ಪ್ಯಾಟರ್ನ್&rsquo; ಮುಗಿಸಿ ಸುರಕ್ಷಿತವಾಗಿ ಇಳಿದಿವೆ.&lt;/p&gt;&lt;p&gt;ಯಾವುದೇ ತಾಂತ್ರಿಕ ದೋಷ ಅಥವಾ ತುರ್ತು ಪರಿಸ್ಥಿತಿ ಇರಲಿಲ್ಲ. ವಿಟ್ಲ ಪರಿಸರದಲ್ಲಿ ಸುತ್ತುಗಳನ್ನು ಮುಗಿಸಿದ ವಿಮಾನವು ಬಳಿಕ ಮೂಡಬಿದಿರೆ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣದತ್ತ ಸಾಗಿದ್ದು, ಸುರಕ್ಷಿತವಾಗಿ ಇಳಿದಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಆತಂಕ ಪಡಬಾರದು ಎಂದು ವಾಯುಯಾನದ ತಜ್ಞರು ತಿಳಿಸಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/air-india-express-flight-circles-over-mangaluru-skies-causes-panic-lands-safely-gdp/articleshow-fhakv28"/>
        </item>
        <item>
            <title><![CDATA[ಮಳೆರಾಯನ ಕೃಪೆ: ಬೇಸಿಗೆಯ ತಾಪಕ್ಕೆ ಬತ್ತಿ ಹೋಗಿದ್ದ ನೇತ್ರಾವತಿ ನದಿಗೆ ಮರಳಿದ ಜೀವಕಳೆ]]></title>
            <link>https://kannada.asianetnews.com/karnataka-districts/dakshina-kannada-netravati-river-is-overflowing-again-due-to-the-heavy-rains-over-the-past-few-days-mrq/articleshow-g36t35e</link>
            <guid isPermaLink="true">https://kannada.asianetnews.com/karnataka-districts/dakshina-kannada-netravati-river-is-overflowing-again-due-to-the-heavy-rains-over-the-past-few-days-mrq/articleshow-g36t35e</guid>
            <pubDate>Sun, 17 May 2026 09:17:19 +0530</pubDate>
            <description><![CDATA[ಬೇಸಿಗೆಯ ತಾಪಕ್ಕೆ ಬತ್ತಿಹೋಗಿ ಆತಂಕ ಸೃಷ್ಟಿಸಿದ್ದ ದಕ್ಷಿಣ ಕನ್ನಡದ ಜೀವನಾಡಿ ನೇತ್ರಾವತಿ ನದಿಯು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ತುಂಬಿ ಹರಿಯುತ್ತಿದೆ. ಇದರಿಂದಾಗಿ ಬಂಟ್ವಾಳ ಮತ್ತು ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಬಗೆಹರಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krt0kqx9h157zzsspxjkn7jv,imgname-netravati-1778989522857.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಂಟ್ವಾಳ: &lt;/strong&gt;ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ನೇತ್ರಾವತಿ ನದಿಯಲ್ಲಿ ಕೆಲವು ವಾರಗಳ ಹಿಂದೆ ನೀರಿನ ಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು ಆತಂಕಕ್ಕೆ ಕಾರಣವಾಗಿತ್ತು. ಬಿಸಿಲಿನ ತಾಪದಿಂದ ಬಂಟ್ವಾಳದ ಜಕ್ರಿಬೆಟ್ಟು ಡ್ಯಾಂನ ಕೆಳ ಭಾಗದಿಂದ ಪಾಣೆಮಂಗಳೂರು ನೂತನ ಸೇತುವೆವರೆಗೆ ನದಿಯ ಹಲವೆಡೆ ನೀರು ಬತ್ತಿ ಹೋಗಿ ಮರಳು ಹಾಗೂ ಕಲ್ಲುಬಂಡೆಗಳು ಎದ್ದು ಕಾಣಿಸುತ್ತಿದ್ದವು.&lt;/p&gt;&lt;p&gt;ನದಿಗೆ ಒಳ ಹರಿವು ಸಹ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಬಂಟ್ವಾಳ ಮಾತ್ರವಲ್ಲದೆ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ವ್ಯಕ್ತವಾಗಿತ್ತು. ಈ ಹಿನ್ನೆಲೆ ಕುಡಿಯುವ ನೀರಿನ ಪೂರೈಕೆ ಹಾಗೂ ಬಳಕೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ಜಾಗ್ರತೆ ವಹಿಸುವಂತೆ ಬಂಟ್ವಾಳ ಶಾಸಕ ರಾಜೇಶ್&zwnj; ನಾಯ್ಕ್&zwnj; ಉಳಿಪ್ಪಾಡಿಗುತ್ತು ಸೂಚನೆ ನೀಡಿದ್ದರು.&lt;/p&gt;&lt;p&gt;ಮಂಗಳೂರು ನಗರಕ್ಕೆ ನೀರಿನ ಕೊರತೆ ಉಂಟಾಗದಂತೆ ಜಿಲ್ಲಾಧಿಕಾರಿಗಳ ಕಚೇರಿಯೂ ಮಹತ್ವದ ಆದೇಶ ಹೊರಡಿಸಿತ್ತು. ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರದಂತೆ ಎಎಂಆರ್ ಡ್ಯಾಂನಿಂದ ತುಂಬೆ ಡ್ಯಾಂಗೆ 6 ಮೀಟರ್&zwnj;ವರೆಗೆ ನೀರನ್ನು ಬಿಡುಗಡೆಗೊಳಿಸುವಂತೆ ಸೂಚಿಸಲಾಗಿತ್ತು. ಜೊತೆಗೆ ಎಎಂಆರ್ ಅಣೆಕಟ್ಟಿನಲ್ಲಿ ಉಳಿದಿರುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸದೆ ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಲಾಗಿತ್ತು.&lt;/p&gt;&lt;p&gt;ಮಂಗಳೂರು ನಗರಕ್ಕೆ ನೇತ್ರಾವತಿ ನದಿಯ ತುಂಬೆ ಕಿಂಡಿ ಅಣೆಕಟ್ಟಿನಿಂದ ನೀರು ಪೂರೈಕೆಯಾಗುತ್ತಿದ್ದು, ಅದರ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 10.41 ಎಂಸಿಎಂ ಆಗಿದೆ. 21-04-2026ರ ಮಾಹಿತಿಯಂತೆ ತುಂಬೆ ಡ್ಯಾಂನಲ್ಲಿ 4.71 ಮೀಟರ್ ಹಾಗೂ ಎಎಂಆರ್ ಡ್ಯಾಂನಲ್ಲಿ 18.62 ಮೀಟರ್ ನೀರಿನ ಮಟ್ಟ ದಾಖಲಾಗಿದ್ದು, ಇದು ನಗರದ ಸುಮಾರು 22 ದಿನಗಳ ಅವಶ್ಯಕತೆಗೆ ಸಾಕಾಗುವಷ್ಟು ನೀರಿನ ಲಭ್ಯತೆಯಾಗಿದೆ ಎಂದು ತಿಳಿಸಲಾಗಿತ್ತು.&lt;/p&gt;&lt;h2&gt;&lt;strong&gt;ಮಳೆರಾಯನ ಕೃಪೆ&lt;/strong&gt;&lt;/h2&gt;&lt;p&gt;ಇದೀಗ ಕಳೆದ ಮೂರು-ನಾಲ್ಕು ದಿನಗಳಿಂದ ಘಟ್ಟ ಪ್ರದೇಶ ಹಾಗೂ ತಪ್ಪಲು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ನದಿಗೆ ಒಳಹರಿವು ಹೆಚ್ಚಿದೆ. ಜಿಲ್ಲಾಧಿಕಾರಿ ಆದೇಶದಂತೆ ಶಂಭೂರು ಎಎಂಆರ್ ಡ್ಯಾಂನಿಂದ ನೀರು ಬಿಡುಗಡೆಗೊಳಿಸಿರುವುದರಿಂದ ನೇತ್ರಾವತಿ ನದಿ ಮತ್ತೆ ತುಂಬಿ ಹರಿಯಲು ಆರಂಭಿಸಿದೆ.&lt;/p&gt;&lt;p&gt;ಜಕ್ರಿಬೆಟ್ಟು ಡ್ಯಾಂ ಕೂಡ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕೆಳ ಭಾಗಕ್ಕೆ ಹರಿಯಬಿಡಲಾಗಿದೆ. ಇದೀಗ ತುಂಬೆ ಡ್ಯಾಂ ಸಹ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ಹಸಿರಾಗಿ ಕಂಗೊಳಿಸುತ್ತಿದೆ. ಬಿಸಿಲಿನ ತಾಪಕ್ಕೆ ಬತ್ತಿ ಹೋಗಿ ಕಲ್ಲುಬಂಡೆಗಳು ಕಾಣಿಸುತ್ತಿದ್ದ ನದಿಯು ಈಗ ಜಲಾವೃತಗೊಂಡು ಜೀವ ಕಳೆ ಮರಳಿ ಪಡೆದಂತಾಗಿದೆ.&lt;/p&gt;&lt;h3&gt;&lt;strong&gt;ಕುಡಿಯುವ ನೀರಿನ ಅಭಾವ ಕ್ಷೀಣ&lt;/strong&gt;&lt;/h3&gt;&lt;p&gt;ಸದ್ಯ ತುಂಬೆಯವರೆಗೆ ನದಿಯಲ್ಲಿ ಸಮರ್ಪಕ ಪ್ರಮಾಣದ ನೀರು ಲಭ್ಯವಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆಯಾಗಿದೆ. ಇನ್ನೂ ಕೆಲವು ದಿನಗಳು ಇದೇ ರೀತಿ ಮಳೆಯಾದರೆ ಮುಂಗಾರು ವಿಳಂಬವಾದರೂ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-netravati-river-is-overflowing-again-due-to-the-heavy-rains-over-the-past-few-days-mrq/articleshow-g36t35e"/>
        </item>
        <item>
            <title><![CDATA[ಅದಾನಿ ಏರ್‌ಪೋರ್ಟ್‌ಗಳಲ್ಲಿ ಐಷಾರಾಮಿ ಕ್ರಾಂತಿ: ನಮ್ಮ ಮಂಗಳೂರಿಗೂ ಬರಲಿದೆ  ಕಿಂಪ್ಟನ್‌]]></title>
            <link>https://kannada.asianetnews.com/karnataka-districts/adani-airport-holdings-and-ihg-hotels-sign-agreement-to-build-five-hotels-in-india-kimpton-is-coming-to-mangaluru-mrq/articleshow-hg2dub5</link>
            <guid isPermaLink="true">https://kannada.asianetnews.com/karnataka-districts/adani-airport-holdings-and-ihg-hotels-sign-agreement-to-build-five-hotels-in-india-kimpton-is-coming-to-mangaluru-mrq/articleshow-hg2dub5</guid>
            <pubDate>Sat, 16 May 2026 07:40:51 +0530</pubDate>
            <description><![CDATA[ಅದಾನಿ ಏರ್&zwnj;ಪೋರ್ಟ್&zwnj; ಹೋಲ್ಡಿಂಗ್ಸ್&zwnj; ಮತ್ತು ಐಎಚ್&zwnj;ಜಿ ಹೊಟೇಲ್ಸ್ ಭಾರತದಲ್ಲಿ ಐದು ಹೊಸ ಹೋಟೆಲ್&zwnj;ಗಳನ್ನು ನಿರ್ಮಿಸಲು ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆಯಡಿ, ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಮುಂಬೈನಲ್ಲಿ ಕಿಂಪ್ಟನ್&zwnj;, ಹಾಲಿಡೇ ಇನ್&zwnj; ಬ್ರ್ಯಾಂಡ್&zwnj;ಗಳ ಹೋಟೆಲ್&zwnj;ಗಳು ತಲೆ ಎತ್ತಲಿವೆ. ಇದು ವಿಮಾನ ನಿಲ್ದಾಣ ಆಧಾರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krq8p2fx98n1htr3qnjt766k,imgname-adani-1778897324540.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: ಅದಾನಿ ಏರ್&zwnj;ಪೋರ್ಟ್&zwnj; ಹೋಲ್ಡಿಂಗ್ಸ್&zwnj; ಲಿಮಿಟೆಡ್&zwnj; ಹಾಗೂ ಐಎಚ್&zwnj;ಜಿ ಹೊಟೇಲ್ಸ್ ಅಂಡ್&zwnj; ರೆಸಾರ್ಟ್ಸ್&zwnj; ಭಾರತದಲ್ಲಿ ಐದು ಹೊಸ ಹೋಟೆಲ್&zwnj;ಗಳನ್ನು ಅಭಿವೃದ್ಧಿಪಡಿಸಲು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಯೋಜನೆಯಡಿ ಸುಮಾರು 1,500 ಕೊಠಡಿಗಳಿರುವ ಹೋಟೆಲ್&zwnj;ಗಳು ನಿರ್ಮಾಣವಾಗಲಿವೆ.&lt;/p&gt;&lt;h2&gt;&lt;strong&gt;ಪ್ರವಾಸೋದ್ಯಮ ವಲಯಕ್ಕೆ ಹೊಸ ಉತ್ತೇಜನ&lt;/strong&gt;&lt;/h2&gt;&lt;p&gt;ಈ ಒಪ್ಪಂದದ ಮೂಲಕ ಜೈಪುರದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಕಿಂಪ್ಟನ್ಸ್&zwnj; ಹೊಟೇಲ್&zwnj; ಅಂಡ್&zwnj; ರೆಸ್ಟೋರೆಂಟ್&zwnj; ಬ್ರ್ಯಾಂಡ್ ಪ್ರವೇಶಿಸಲಿದೆ. ಜೊತೆಗೆ ಹಾಲಿಡೇ ಇನ್&zwnj; ಹಾಗೂ ಹಾಲಿಡೇ ಇನ್&zwnj; ಎಕ್ಸ್&zwnj;ಪ್ರೆಸ್&zwnj; ಹೋಟೆಲ್&zwnj;ಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ಈ ಹೋಟೆಲ್&zwnj;ಗಳು ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ನಿರ್ಮಾಣವಾಗಲಿವೆ. ವಿಮಾನ ನಿಲ್ದಾಣ ಆಧಾರಿತ ನಗರಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ವಲಯಕ್ಕೆ ಈ ಯೋಜನೆ ಹೊಸ ಉತ್ತೇಜನ ನೀಡಲಿದೆ.&lt;/p&gt;&lt;p&gt;ಅದಾನಿ ಎಂಟರ್&zwnj;ಪ್ರೈಸಸ್ ನಿರ್ದೇಶಕ ಪ್ರಣವ್&zwnj; ಅದಾನಿ ಮಾತನಾಡಿ, ಭಾರತದ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರಕ್ಕೆ ಅನುಗುಣವಾಗಿ ವಿಶ್ವಮಟ್ಟದ ಪ್ರವಾಸ ಮತ್ತು ವಸತಿ ಅನುಭವವನ್ನು ರೂಪಿಸುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಐಎಚ್&zwnj;ಜಿ ದಕ್ಷಿಣ ಪಶ್ಚಿಮ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಸುದೀಪ್&zwnj; ಜೈನ್&zwnj;, ಭಾರತದಲ್ಲಿ ಲಕ್ಸುರಿ ಮತ್ತು ಬಿಸಿನೆಸ್ ಹೋಟೆಲ್&zwnj;ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಈ ಸಹಭಾಗಿತ್ವ ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/adani-airport-holdings-and-ihg-hotels-sign-agreement-to-build-five-hotels-in-india-kimpton-is-coming-to-mangaluru-mrq/articleshow-hg2dub5"/>
        </item>
        <item>
            <title><![CDATA[Karnataka News Live: ವಿಜಯಪುರ - ತಿಕೋಟಾದಲ್ಲಿ ಕ್ಯಾಲಿಫೋರ್ನಿಯಾದ  ಪ್ರಸಿದ್ಧ ದ್ರಾಕ್ಷಿ ತಳಿ ಔರಾ-36 ಯಶಸ್ವಿ ಕೃಷಿ!]]></title>
            <link>https://kannada.asianetnews.com/state/karnataka-news-live-11-may-2026-subrahmanya-temple-collects-annual-income-of-rs-167-crore-no-1-position-in-muzrai-mrq/liveblog-updates-i6on5xy</link>
            <guid isPermaLink="true">https://kannada.asianetnews.com/state/karnataka-news-live-11-may-2026-subrahmanya-temple-collects-annual-income-of-rs-167-crore-no-1-position-in-muzrai-mrq/liveblog-updates-i6on5xy</guid>
            <pubDate>Mon, 11 May 2026 23:58:08 +0530</pubDate>
            <description><![CDATA[&lt;p&gt;&lt;strong&gt;ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):&lt;/strong&gt; ರಾಜ್ಯದ ಮುಜರಾಯಿ ಇಲಾಖೆ ಆಧೀನದ ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹167 ಕೋಟಿ ಆದಾಯ ಗಳಿಸಿದೆ. 2025ರ ಏ.1ರಿಂದ 2026ರ ಮಾ.31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಇದರಲ್ಲಿ ಒಟ್ಟು ₹85.20 ಕೋಟಿ ಖರ್ಚಾಗಿದೆ. 2024-2025ನೇ ಸಾಲಿನಲ್ಲಿ ₹155 ಕೋಟಿ ಆದಾಯ ಗಳಿಸಿತ್ತು. ಈ ಬಾರಿ ₹167 ಕೋಟಿ ಆದಾಯ ಗಳಿಸುವ ಮೂಲಕ ಈ ಆರ್ಥಿಕ ವರ್ಷದಲ್ಲಿ ಕಳೆದ ಆರ್ಥಿಕ ವರ್ಷದಿಂದ ಸುಮಾರು ₹12 ಕೋಟಿ ಅಧಿಕ ಆದಾಯ ಗಳಿಸಿದೆ. ಈ ಮೂಲಕ ಸತತ 15ನೇ ವರ್ಷ ಆದಾಯ ಗಳಿಕೆಯಲ್ಲಿ ನಂ.1 ಮುಜರಾಯಿ ದೇವಸ್ಥಾನವಾಗಿ ಹೊರಹೊಮ್ಮಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krc40acpd43r5676027z5jd8,imgname-california-grapes-in-karnataka-1778523318678.jpg" type="image/jpeg" height="390" width="690"/>
            <category>dakshina-kannada</category>
            <dc:creator>Asianet News</dc:creator>
            <atom:link href="https://kannada.asianetnews.com/state/karnataka-news-live-11-may-2026-subrahmanya-temple-collects-annual-income-of-rs-167-crore-no-1-position-in-muzrai-mrq/liveblog-updates-i6on5xy"/>
        </item>
        <item>
            <title><![CDATA['ಸ್ವಚ್ಛ ಪುತ್ತೂರು' ಪರಿಕಲ್ಪನೆಯಲ್ಲಿ ಮೂಡಿ ಬಂತು ಬಯೋ ಸಿಎನ್‌ಜಿ ಘಟಕ 'ಕಸದಿಂದ ರಸ']]></title>
            <link>https://kannada.asianetnews.com/karnataka-districts/bio-cng-unit-built-on-the-concept-of-clean-puttur-mrq/articleshow-ilcfygs</link>
            <guid isPermaLink="true">https://kannada.asianetnews.com/karnataka-districts/bio-cng-unit-built-on-the-concept-of-clean-puttur-mrq/articleshow-ilcfygs</guid>
            <pubDate>Sat, 16 May 2026 08:32:43 +0530</pubDate>
            <description><![CDATA[&lt;p&gt;ಪುತ್ತೂರಿನ ಬನ್ನೂರು ನೆಕ್ಕಿಲ ಡಂಪಿಂಗ್ ಯಾರ್ಡ್&zwnj;ನಲ್ಲಿ ಹಸಿ ತ್ಯಾಜ್ಯದಿಂದ ಬಯೋ-ಸಿಎನ್&zwnj;ಜಿ ಇಂಧನ ಉತ್ಪಾದಿಸುವ ನೂತನ ಘಟಕ ಆರಂಭವಾಗಿದೆ. ಉದ್ಯಮಿ ಕೃಷ್ಣನಾರಾಯಣ ಮುಳಿಯ ಅವರ ನೇತೃತ್ವದ ಈ ಯೋಜನೆ, ತ್ಯಾಜ್ಯ ಸಮಸ್ಯೆಗೆ ಪರಿಹಾರ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqbnteycyews8qk6w8a8y1m,imgname-puttur-1778900462046.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಶುದ್ಧೀನ್ ಸಂಪ್ಯ&lt;/strong&gt;&lt;/p&gt;&lt;p&gt;&lt;strong&gt;ಪುತ್ತೂರು: &lt;/strong&gt;ಕೊಲ್ಲಿ ಯುದ್ಧದ ಕಾರಣದಿಂದಾಗಿ ನಮ್ಮಲ್ಲಿ ಇಂಧನ ಸಮಸ್ಯೆಗಳು ಸಾಕಷ್ಟು ಕಾಡುತ್ತಿದೆ. ಇಂಧನ ಸಮಸ್ಯೆ ಬಹುತೇಕ ಅಟೋ ಇನ್ನಿತರ ವಾಹನ ಚಾಲಕರ ಬದುಕಿಗೆ ಹೊಡೆತ ನೀಡುತ್ತಿದೆ. ಅಂತಹ ಸನ್ನಿವೇಶದಲ್ಲಿ ಪುತ್ತೂರಿನಲ್ಲಿ ಆರಂಭಗೊಂಡಿರುವ ಬಯೋ ಸಿಎನ್&zwnj;ಜಿ ಇಂಧನವು ಜನರ ಸಮಸ್ಯೆಗೆ ಪರಿಹಾರವನ್ನು ನೀಡಲಿದೆ. ಇಂತಹ ದೂರಾಲೋಚನೆಯ ಚಿಂತನೆ ಪ್ರಥಮವಾಗಿ ಉದ್ಯಮಿಯಾದ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಎಲ್&zwnj;ಎಲ್&zwnj;ಪಿ ಸಂಸ್ಥೆಯ ರೂವಾರಿ ಕೃಷ್ಣನಾರಾಯಣ ಮುಳಿಯ ಹಾಗೂ ಈ ಯೋಜನೆಯ ಪ್ರಾಜೆಕ್ಟ್ ಡೈರೆಕ್ಟರ್ ಡಾ. ರಾಜೇಶ್ ಬೆಜ್ಜಂಗಳ ಅವರ ತಂಡಕ್ಕೆ ಮೂಡಿದ್ದು, ಅದಕ್ಕೆ ಮೂರ್ತ ರೂಪ ಕೊಡುವ ಕೆಲಸ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರದ ಬನ್ನೂರು ನೆಕ್ಕಿಲದಲ್ಲಿರುವ ಡಂಪಿಂಗ್ ಯಾರ್ಡ್ ನಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ. ನಗರ ಮತ್ತು ಗ್ರಾಮೀಣ ಆಡಳಿತದಲ್ಲಿ ಪ್ರಥಮ ಯೋಜನೆ ಇದಾಗಿದ್ದು, ಈ ಮಾದರಿಯನ್ನು ಅಧ್ಯಯನ ಮಾಡಿದ ಇತರ ನಗರ ಆಡಳಿತಗಳು, ತಮ್ಮಲ್ಲಿ ಅನುಷ್ಠಾನ ಮಾಡಲು ಮುಂದಡಿಯಿಟ್ಟಿದೆ.&lt;/p&gt;&lt;p&gt;ಸಿ ಎನ್ ಜಿ ಘಟಕದಿಂದ ಹಸಿ ತ್ಯಾಜ್ಯದ ಸಮಸ್ಯೆಗೆ ಪರಿಹಾರವಲ್ಲದೆ, ಪರಿಸರ ಸ್ವಚ್ಛತೆ, ಅಂತರ್ಜಲ ಮಲಿನತೆ ತಡೆಗಟ್ಟುವಿಕೆ, ಪಳೆಯುಳಿಕೆ ಇಂಧನದ ಅವಲಂಬನೆ ಕಡಿತ, ವಿದೇಶಿ ವಿನಿಮಯದ ಕಡಿತ, ಓಝೋನ್ ಪದರದ ಚದುರುವಿಕೆ ನಿಯಂತ್ರಣ, ಸಾವಯವ ಗೊಬ್ಬರದ ಉತ್ಪಾದನೆ, ಇತ್ಯಾದಿ ಹಲವಾರು ಲಾಭದಾಯಕ ಅಂಶಗಳಿವೆ. ಪ್ರಸ್ತುತ ಸಿ ಎನ್ ಜಿ ದಿಂದ ಚಲಿಸುವ ಎರಡು ಕಸ ಸಂಗ್ರಹದ ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಸ ಸಂಗ್ರಹದ ಎಲ್ಲಾ ವಾಹನಗಳು ಸಿ ಎನ್ ಜಿ ಆಗಲಿದೆ.&lt;/p&gt;&lt;p&gt;ಈ ಬಗ್ಗೆ ಕೃಷ್ಣನಾರಾಯಣ ಮುಳಿಯ ಅವರೊಂದಿಗೆ ಕನ್ನಡಪ್ರಭ ನಡೆಸಿದ ಚಿಟ್&zwnj;ಚಾಟ್ ಹೀಗಿದೆ.&amp;nbsp;&lt;/p&gt;&lt;h2&gt;&lt;strong&gt;1. ಈ ಯೋಜನೆ ರೂಪಿಸಲು ಪ್ರೇರಣೆಯೇನು? ಎಷ್ಟು ವರ್ಷಗಳ ಕನಸಿದು?&lt;/strong&gt;&lt;/h2&gt;&lt;p&gt;ನಾವು ಮಾಡುವ ಯಾವುದೇ ಕೆಲಸಗಳು ನಮಗೆ ತೃಪ್ತಿ ಕೊಡಬೇಕು. ನನ್ನ ಹುಟ್ಟೂರಾದ ಪುತ್ತೂರಿಗೆ ಏನಾದರೂ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಈ ಕನಸು 12 ವರ್ಷಗಳ ಬಳಿಕ ಇದೀಗ ನನಸಾಗಿದೆ. ವೇಸ್ಟ್&zwnj;ಗಳನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ಯಾವುದೂ ವೇಸ್ಟಲ್ಲ ಅದರಲ್ಲಿ ನಾವು ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳಬಹುದು ಎಂಬುದಕ್ಕೆ ನಾವು ನಿರ್ಮಿಸಿದ ಸಿಎನ್&zwnj;ಜಿ ಘಟಕ ಸಾಕ್ಷಿಯಾಗಿದೆ. ಕಸದಿಂದ ರಸ ಎಂಬ ಮಾತು ನಿಜವಾಗಿದೆ. 2014ರಲ್ಲಿ ಸ್ವಚ್ಛ ಪುತ್ತೂರು ಎಂಬ ಪರಿಕಲ್ಪನೆ ಮುಂದಿಟ್ಟುಕೊಂಡು ಹಸಿಕಸದಿಂದ ಸಿಎನ್&zwnj;ಜಿ ಅನಿಲ ಉತ್ಪಾದನೆ ಯೋಜನೆ ಆರಂಭಿಸಲಾಯಿತು. ಹಿಡಿದ ಗುರಿಯನ್ನು ತುದಿ ಮುಟ್ಟಿಸಲು ಅಂದಿನಿಂದ ನಿರಂತರ ಶ್ರಮ ಹಾಗೂ ಯೋಜಿತ ಕಾರ್ಯಗಳ ಮೂಲಕ ಆ ಕನಸು ನನಸಾಗಿ ಲೋಕಾರ್ಪಣೆಗೊಂಡಿದೆ.&lt;/p&gt;&lt;h3&gt;&lt;strong&gt;2. ಸಿಎನ್&zwnj;ಜಿ ಘಟಕಕ್ಕೆ ಆಗಿರುವ ವೆಚ್ಚವೆಷ್ಟು: ಹೇಗೆ ಭರಿಸಿಕೊಂಡಿರಿ?&lt;/strong&gt;&lt;/h3&gt;&lt;p&gt;ಈ ಘಟಕದಿಂದ ಮಿಥೇನ್ ಗ್ಯಾಸ್ ಮತ್ತು ಸ್ಲರಿ ಎರಡೂ ಲಭ್ಯವಾಗುತ್ತದೆ. ಗ್ಯಾಸ್&zwnj;ಗಳು ವಾಹನಗಳಿಗೆ ಬಳಕೆಯಾದರೆ. ಸ್ಲರಿಗಳು ಉತ್ತಮ ಗೊಬ್ಬರವಾಗಿ ಕೃಷಿಗಳಿಗೆ ಬಳಸಬಹುದಾಗಿದೆ. ಈ ಯೋಜನೆಗೆ ನಮಗೆ ಹಲವಾರು ಮಂದಿಗೆ ಸಲಹೆ ಮತ್ತು ಸಹಕಾರವಿದೆ. ಪುತ್ತೂರು ನಗರ ವ್ಯಾಪ್ತಿಯಲ್ಲಿ ಪ್ರತಿದಿನ ಲಭ್ಯವಾಗುವ ಹಸಿ ತ್ಯಾಜ್ಯವನ್ನು ಬಳಸಿ ಈ ಸಿಎನ್&zwnj;ಜಿ ಘಟಕ ಕಾರ್ಯನಿರ್ವಹಿಸುತ್ತಿದೆ. ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಎಲ್ ಎಲ್ ಪಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸ್ವಚ್ಚ ಭಾರತ್ ಟ್ರಸ್ಟ್, ಮತ್ತು ತಾಂತ್ರಿಕವಾಗಿ ರಿ ಟಾಪ್ ಸೊಲ್ಯೂಷನ್ ಸಂಸ್ಥೆ ಸೇರಿಕೊಂಡು ಈ ಯೋಜನೆ ಅನುಷ್ಟಾನ ಗೊಳಿಸಲಾಗಿದೆ. ಇದಕ್ಕೆ ಒಟ್ಟು 3 ಕೋಟಿ ರುಪಾಯಿ ಖರ್ಚಾಗಿದೆ. ಈ ಪೈಕಿ ರು. 2 ಕೋಟಿ ಬ್ಯಾಂಕ್ ಸಾಲದ ರೂಪದಲ್ಲಿ ಪಡೆದುಕೊಳ್ಳಲಾಗಿದೆ. ಉಳಿದಂತೆ ರು. 1 ಕೋಟಿ ರಿ ಟಾಪ್ ಸೊಲ್ಯೂಷನ್ ಸಂಸ್ಥೆ ಒದಗಿಸಿಕೊಟ್ಟಿದೆ. ಸರಕಾರದಿಂದ ಯಾವುದೇ ಅನುದಾನ ಅಥವಾ ಯೋಜನಾ ವೆಚ್ಚ ಇರುವುದಿಲ್ಲ. ನಗರ ಸಭೆಯವರು ಹಸಿ ತ್ಯಾಜ್ಯವನ್ನು ನೀಡುತ್ತಿದ್ದಾರೆ. ಉತ್ಪಾದಿಸಲ್ಪಟ್ಟ ಸಿಎನ್&zwnj;ಜಿಗೆ ಕಿಲೋ ಒಂದಕ್ಕೆ ರು. 1ರಂತೆ ನಗರ ಸಭೆಗೆ ನೀಡಲಾಗುತ್ತಿದೆ.&lt;/p&gt;&lt;p&gt;&lt;strong&gt;3. ಘಟಕದಲ್ಲಿ ನಿರ್ವಹಣೆಗೆ ಬೇಕಾದಷ್ಟು ಹಸಿ ಕಸ ಲಭ್ಯವಿದೆಯೇ?&lt;/strong&gt;&lt;/p&gt;&lt;p&gt;ಪ್ರಸ್ತುತ ಘಟಕದಲ್ಲಿ ಪ್ರತಿದಿನ 8 ಟನ್ ಹಸಿತ್ಯಾಜ್ವವನ್ನು ಬಳಸಿ 350 ಕಿಲೋ ಗ್ರಾಂ ನಷ್ಟು ಸಿ ಎನ್ ಜಿ ಉತ್ಪಾದಿಸಲು ಅವಕಾಶವಿದೆ. ಆದರೆ ನಗರಸಭೆಯಿಂದ ಪ್ರತಿದಿನ 3 ಟನ್ ಹಸಿಕಸ ಬರುತ್ತಿದೆ. ಉಳಿದಂತೆ ಗ್ರಾಮೀಣ ಪ್ರದೇಶಗಳಿಂದ ಬರಬೇಕಾಗಿದೆ. ಈ ಬಗ್ಗೆ ಈಗಾಗಲೇ ವಿಟ್ಲ, ಉಪ್ಪಿನಂಗಡಿ, ಬೆಳ್ಳಾರೆ ಅಂತಹ ದೊಡ್ಡ ಗ್ರಾಮ ಪಂಚಾಯತ್&zwnj;ಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅದನ್ನು ವ್ಯವಸ್ಥೆಗೊಳಿಸಲು ನಗರಸಭೆಯು ಮುಂದಾಗಿದೆ. ಈಗ ಘಟಕಕ್ಕೆ ನಿರೀಕ್ಷಿತ ಆದಾಯ ಬರುತ್ತಿಲ್ಲ. ಮುಂದೆ ಎಲ್ಲವೂ ಸರಿಯಾದಲ್ಲಿ ಹಾಗೂ ಬೇಕಾದಷ್ಟು ಹಸಿಕಸಗಳು ಲಭ್ಯವಾದಲ್ಲಿ ಆದಾಯವನ್ನು ನಿರೀಕ್ಷಿಸಬಹುದು. ಈಗ ಮುಳಿಯದ ಕಡೆಯಿಂದ ಸಾರ್ವಜನಿಕ ಸೇವೆಯ ನೆಲೆಯಲ್ಲಿ ಯೋಜನೆಯನ್ನು ಮುನ್ನಡೆಸಲಾಗುತ್ತಿದೆ.&lt;/p&gt;&lt;p&gt;&lt;strong&gt;4. ಕಸ ವಿಂಗಡಣೆ ಬಹಳ ಅಗತ್ಯ&lt;/strong&gt;&lt;/p&gt;&lt;p&gt;ಸಿಎನ್&zwnj;ಜಿಗೆ ಹಸಿ ಕಸಗಳು ಮಾತ್ರ ಬಳಕೆಯಾಗುತ್ತದೆ. ಎಲ್ಲಿಯಾದರೂ ಇದರೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ಬೆರೆತುಕೊಂಡಲ್ಲಿ ಅದರಿಂದ ಸಮಸ್ಯೆಗಳು ಬಹಳ. ಕೃಷ್ಣನಾರಾಯಣ ಮುಳಿಯರು ಹೇಳುವಂತೆ ಸಿಎನ್&zwnj;ಜಿಗೆ ಬಳಸುವ ಹಸಿಕಸದಲ್ಲಿ ಸಣ್ಣ ಪ್ಲಾಸ್ಟಿಕ್ ತುಂಡುಗಳು ಸೇರಿಕೊಂಡರೂ ಅದರಿಂದ ತೊಂದರೆಯಾಗುತ್ತದೆ. ಮನೆಗೆ ತರುವ ಹಾಲಿನ, ಎಣ್ಣೆಯ ಪ್ಯಾಕೇಟ್&zwnj;ಗಳ ತುದಿಯನ್ನು ತುಂಡು ಮಾಡಿ ಉಪಯೋಗಿಸುತ್ತಾರೆ. ತುಂಡಾದ ತುದಿಯನ್ನು ಹಸಿಕಸದಲ್ಲಿ ಬೆರೆತು ಹೋದಲ್ಲಿ ಅದು ಯಂತ್ರದಲ್ಲಿ ಸಿಕ್ಕಿಹಾಕಿ ಕೊಳ್ಳುತ್ತದೆ. ಅದನ್ನು ಮತ್ತೆ ಅಲ್ಲಿಂದ ಹೆಕ್ಕಿ ತೆಗೆಯಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಜನರು ಕಸ ವಿಂಗಡಣೆ ಮಾಡುವ ಸಂದರ್ಭದಲ್ಲಿ ಇಂತಹ ತುಂಡುಗಳು ಹಸಿಕಸದಲ್ಲಿ ಸೇರಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿದೆ. ನಾವು ಪೇಟೆಗಳಿಂದ ಸಾಮಾಗ್ರಿ ತರುವಾಗ ಬೇಳೆ, ಅಕ್ಕಿ, ಎಣ್ಣೆ, ಸಕ್ಕರೆ, ಚಾಹುಡಿ, ಸಾಸಿವೆಗಳನ್ನು ಬೇರೆ ಬೇರೆಯಾಗಿ ತರುತ್ತೇವೆ. ಅದನ್ನು ಬಳಸಿ ಮತ್ತೆ ವಿಲೇವಾರಿ ಮಾಡುವಾಗಲೂ ಬೇರೆ ಬೇರೆಯಾಗಿ ಮಾಡುವ ಮನೋಭಾವ ನಮ್ಮಲ್ಲಿ ಬೆಳೆಯಬೇಕಾಗಿದೆ.&lt;/p&gt;&lt;p&gt;&lt;strong&gt;5- ಪುತ್ತೂರಿನ ಈ ಘಟಕವನ್ನು ಅಧ್ಯಯನ ಮಾಡಲು ಬರುತ್ತಿದ್ದಾರೆಯೇ?&lt;/strong&gt;&lt;/p&gt;&lt;p&gt;ನಾವು ಕಳೆದ 12 ವರ್ಷಗಳಿಂದ ಈ ಬಗ್ಗೆ ಸಾಕಷ್ಟು ಯೋಜನೆ, ಯೋಚನೆಗಳನ್ನು ನಡೆಸಿಕೊಂಡು ಮುನ್ನಡೆದಿದ್ದೇವೆ. ಆದರೆ ಆಗ ಸಮರ್ಪಕ ಅಧ್ಯಯನ ನಡೆಸಲು ನಮಗೆ ಸಾಧ್ಯವಾಗಿಲ್ಲ. ಆದರೆ ಈಗ ಯಾರಾದರೂ ಅಧ್ಯಯನ ನಡೆಸಲು ಆಸಕ್ತಿ ವಹಿಸಿದಲ್ಲಿ ನಮ್ಮಲ್ಲಿಗೆ ಬಂದು ನೋಡಲು ಅವಕಾಶವಿದೆ. ಮೈಸೂರಿನ ತರಬೇತಿ ಸಂಸ್ಥೆಯೊಂದರ ಪರಿಸರ ಇಂಜಿನಿಯರ್&zwnj;ಗಳು ಎರಡು ಮೂರು ಸಲ ಇಲ್ಲಿಗೆ ಆಗಮಿಸಿ ಅಧ್ಯಯನ ನಡೆಸಿದ್ದಾರೆ.&lt;/p&gt;&lt;p&gt;&lt;strong&gt;ಕೃಷ್ಣನಾರಾಯಣ ಮುಳಿಯ ಪರಿಚಯ&lt;/strong&gt;&lt;/p&gt;&lt;p&gt;ವೃತ್ತಿಯಲ್ಲಿ ಸ್ವರ್ಣೋಧ್ಯಮಿ ಆಗಿರುವ 48 ವರ್ಷಗಳ ವಯಸ್ಸಿನ ಕೃಷ್ಣನಾರಾಯಣ ಮುಳಿಯ ಅವರು ಪ್ರವೃತ್ತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಜೆಸಿಐ, ರೋಟರಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷತೆ ಸೇರಿದಂತೆ ಹಲವು ಹುದ್ದೆಗಳಲ್ಲಿ ಸಕ್ರಿಯರಾಗಿದ್ದಾರೆ. ಪತ್ನಿ ಅಶ್ವಿನಿ ಕೃಷ್ಣ, ಪುತ್ರ ಮುಕುಂದ ಶ್ಯಾಮ ಮತ್ತು ಪುತ್ರಿ ಇಶಾ ಸುಲೋಚನಾ. ಬೈಕ್ ರೈಡಿಂಗ್ ಮತ್ತು ಕಾರು ಡ್ರೈವಿಂಗ್ ಇವರ ಪ್ಯಾಷನ್.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bio-cng-unit-built-on-the-concept-of-clean-puttur-mrq/articleshow-ilcfygs"/>
        </item>
        <item>
            <title><![CDATA[ಅದಾನಿ-ಐಎಚ್‌ಜಿ ಮೈತ್ರಿ: ಪ್ರವಾಸೋದ್ಯಮದಲ್ಲಿ ಹೊಸ ಅಧ್ಯಾಯ, ಮಂಗಳೂರು ಸೇರಿ 5 ಕಡೆಗಳಲ್ಲಿ ಕಿಂಪ್ಟನ್‌ ಹೊಟೇಲ್‌]]></title>
            <link>https://kannada.asianetnews.com/business/adani-airport-holdings-and-ihg-hotels-sign-deal-to-develop-5-new-hotels-including-mangaluru-and-across-india-gdp/articleshow-k6y5zgy</link>
            <guid isPermaLink="true">https://kannada.asianetnews.com/business/adani-airport-holdings-and-ihg-hotels-sign-deal-to-develop-5-new-hotels-including-mangaluru-and-across-india-gdp/articleshow-k6y5zgy</guid>
            <pubDate>Fri, 15 May 2026 21:45:15 +0530</pubDate>
            <description><![CDATA[ಅದಾನಿ ಏರ್&zwnj;ಪೋರ್ಟ್&zwnj; ಹೋಲ್ಡಿಂಗ್ಸ್&zwnj; ಲಿಮಿಟೆಡ್&zwnj; ಮತ್ತು ಐಎಚ್&zwnj;ಜಿ ಹೊಟೇಲ್ಸ್ ಅಂಡ್&zwnj; ರೆಸಾರ್ಟ್ಸ್&zwnj;, ಭಾರತದ ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಮುಂಬೈನಲ್ಲಿ ಐದು ಹೊಸ ಹೋಟೆಲ್&zwnj;ಗಳನ್ನು ನಿರ್ಮಿಸಲು ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆಯಡಿ ಸುಮಾರು 1,500 ಕೊಠಡಿಗಳು ನಿರ್ಮಾಣವಾಗಲಿದ್ದು, ಇದು ವಿಮಾನ ನಿಲ್ದಾಣ ಆಧಾರಿತ ನಗರಾಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k8fvmjxm8ecs3fg35y2qeswj,imgname-mangaluru-airport-1761468894132.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಅದಾನಿ ಏರ್&zwnj;ಪೋರ್ಟ್&zwnj; ಹೋಲ್ಡಿಂಗ್ಸ್&zwnj; ಲಿಮಿಟೆಡ್&zwnj; ಹಾಗೂ ಐಎಚ್&zwnj;ಜಿ ಹೊಟೇಲ್ಸ್ ಅಂಡ್&zwnj; ರೆಸಾರ್ಟ್ಸ್&zwnj; ಭಾರತದಲ್ಲಿ ಐದು ಹೊಸ ಹೋಟೆಲ್&zwnj;ಗಳನ್ನು ಅಭಿವೃದ್ಧಿಪಡಿಸಲು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಯೋಜನೆಯಡಿ ಸುಮಾರು 1,500 ಕೊಠಡಿಗಳಿರುವ ಹೋಟೆಲ್&zwnj;ಗಳು ನಿರ್ಮಾಣವಾಗಲಿವೆ.&lt;/p&gt;&lt;p&gt;ಈ ಒಪ್ಪಂದದ ಮೂಲಕ ಜೈಪುರದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಕಿಂಪ್ಟನ್ಸ್&zwnj; ಹೊಟೇಲ್&zwnj; ಅಂಡ್&zwnj; ರೆಸ್ಟೋರೆಂಟ್&zwnj; ಬ್ರ್ಯಾಂಡ್ ಪ್ರವೇಶಿಸಲಿದೆ. ಜೊತೆಗೆ ಹಾಲಿಡೇ ಇನ್&zwnj; ಹಾಗೂ ಹಾಲಿಡೇ ಇನ್&zwnj; ಎಕ್ಸ್&zwnj;ಪ್ರೆಸ್&zwnj; ಹೋಟೆಲ್&zwnj;ಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ.&lt;/p&gt;&lt;h2&gt;ಯಾವ ನಗರದಲ್ಲಿ ಈ ಯೋಜನೆ&lt;/h2&gt;&lt;p&gt;ಈ ಹೋಟೆಲ್&zwnj;ಗಳು ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ನಿರ್ಮಾಣವಾಗಲಿವೆ. ವಿಮಾನ ನಿಲ್ದಾಣ ಆಧಾರಿತ ನಗರಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ವಲಯಕ್ಕೆ ಈ ಯೋಜನೆ ಹೊಸ ಉತ್ತೇಜನ ನೀಡಲಿದೆ.&lt;/p&gt;&lt;h2&gt;ಪ್ರಣವ್&zwnj; ಅದಾನಿ ಹೇಳಿದ್ದೇನು?&lt;/h2&gt;&lt;p&gt;ಅದಾನಿ ಎಂಟರ್&zwnj;ಪ್ರೈಸಸ್ ನಿರ್ದೇಶಕ ಪ್ರಣವ್&zwnj; ಅದಾನಿ ಮಾತನಾಡಿ, ಭಾರತದ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರಕ್ಕೆ ಅನುಗುಣವಾಗಿ ವಿಶ್ವಮಟ್ಟದ ಪ್ರವಾಸ ಮತ್ತು ವಸತಿ ಅನುಭವವನ್ನು ರೂಪಿಸುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಐಎಚ್&zwnj;ಜಿ ದಕ್ಷಿಣ ಪಶ್ಚಿಮ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಸುದೀಪ್&zwnj; ಜೈನ್&zwnj;, ಭಾರತದಲ್ಲಿ ಲಕ್ಸುರಿ ಮತ್ತು ಬಿಸಿನೆಸ್ ಹೋಟೆಲ್&zwnj;ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಈ ಸಹಭಾಗಿತ್ವ ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/business/adani-airport-holdings-and-ihg-hotels-sign-deal-to-develop-5-new-hotels-including-mangaluru-and-across-india-gdp/articleshow-k6y5zgy"/>
        </item>
        <item>
            <title><![CDATA[ಮೂಲ್ಕಿ ವಿದ್ಯಾರ್ಥಿನಿ ಬ್ಯಾಗ್‌ನಲ್ಲಿತ್ತು 35 ಲಕ್ಷ ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೊವಿಡ ಗಾಂಜಾ!]]></title>
            <link>https://kannada.asianetnews.com/karnataka-districts/1-kg-42-grams-of-hydrovide-cannabis-worth-35-lakhs-was-found-in-the-bag-of-a-mulki-student-mrq/articleshow-kuzwea5</link>
            <guid isPermaLink="true">https://kannada.asianetnews.com/karnataka-districts/1-kg-42-grams-of-hydrovide-cannabis-worth-35-lakhs-was-found-in-the-bag-of-a-mulki-student-mrq/articleshow-kuzwea5</guid>
            <pubDate>Thu, 14 May 2026 07:46:38 +0530</pubDate>
            <description><![CDATA[ಮೂಲ್ಕಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ, 35 ಲಕ್ಷ ರೂಪಾಯಿ ಮೌಲ್ಯದ ಹೈಡ್ರೊವಿಡ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ಸುಹಾನಾ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಯು ಈ ಮಾದಕ ವಸ್ತುವನ್ನು ಚೆನ್ನೈನಿಂದ ತರಿಸಿರುವುದಾಗಿ ತಿಳಿದುಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krj4am9wf02qsr9vgma4rcv9,imgname-mulki-student-1-1778724983100.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೂಲ್ಕಿ:&lt;/strong&gt; ಪಣಂಬೂರು ಎಸಿಪಿ ತಂಡ ಹಾಗೂ ಮೂಲ್ಕಿ ಠಾಣೆಯ ತಂಡದಿಂದ ನಡೆದ ಕಾರ್ಯಾಚರಣೆಯಲ್ಲಿ ಠಾಣಾ ವ್ಯಾಪ್ತಿಯ ಮೂಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಂಗಳವಾರ ಹೈಡ್ರೊವಿಡ ಗಾಂಜಾ ಮಾದಕ ದ್ರವ್ಯ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.&lt;/p&gt;&lt;p&gt;ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರಬನ ನಿವಾಸಿ ದಿ.ಮೊಹಮ್ಮದ್&zwnj; ಗೌಸ್&zwnj; ಪುತ್ರಿ ,ಕುಂದಾಪುರ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ಸುಹಾನಾ (21) ಅವರನ್ನು ವಶಕ್ಕೆ ಪಡೆಯಲಾಯಿತು. ಅವರ ಬಳಿ ಇದ್ದ ಸುಮಾರು 35, 00, 000 ರು. ಮೌಲ್ಯದ ಸುಮಾರು 1 ಕೆಜಿ 42 ಗ್ರಾಮ್ ಹೈಡ್ರೊವಿಡ ಗಾಂಜಾ ಎಂಬ ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಮತ್ತು ಇತರ ಸೊತ್ತು ವಶಪಡಿಸಿಕೊಳ್ಳಲಾಯಿತು.&lt;/p&gt;&lt;p&gt;ಮಾದಕ ವಸ್ತುವನ್ನು ಆರೋಪಿತೆಯು ಚೆನ್ನೈ ನಿಂದ ತರಿಸಿಕೊಂಡು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶದಿಂದ ತಂದಿರುವುದಾಗಿ ತಿಳಿದು ಬಂದಿರುತ್ತದೆ.&lt;/p&gt;&lt;h2&gt;&lt;strong&gt;ಗಾಂಜಾ ಮಾರುತ್ತಿದ್ದ ಇಬ್ಬರ ಸೆರೆ: 1.25 ಲಕ್ಷದ ಡ್ರಗ್ಸ್ ವಶ&lt;/strong&gt;&lt;/h2&gt;&lt;p&gt;ಕೆಜಿಎಫ್&zwnj;: ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿ ಸುಮಾರು ಎರಡೂವರೆ ಕೆಜಿ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ಬಂಧಿತರನ್ನು ಬೆಂಗಳೂರು ನಗರದ ವಾಸಿಗಳಾದ ಸುರೇಶ್ ಕುಮಾರ್, ಎನ್. ಬಿನ್. ನಂಜುಂಡಸ್ವಾಮಿ ಎಂದು ಗುರುತಿಸಲಾಗಿದೆ. ಅವರಿಂದ ೧,೨೫,೦೦೦ ರು. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ರಾಬರ್ಟ್ಸನ್&zwnj;ಪೇಟೆ ವ್ಯಾಪ್ತಿಯ ಸ್ವಾಮಿನಾಥಪುರಂ ರಸ್ತೆಯಿಂದ ವಿನಾಯಕ ಕಾಲೇಜು ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ರಾಬರ್ಟ್ಸನ್&zwnj;ಪೇಟೆ ಠಾಣೆ ಸಬ್ ಇನ್&zwnj;ಸ್ಪೆಕ್ಟರ್ ಮಹೇಶ್ ಮಾಳಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.&lt;/p&gt;&lt;h3&gt;&lt;strong&gt;ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ&lt;/strong&gt;&lt;/h3&gt;&lt;p&gt;ಬೆಳಗಾವಿ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಕಾಕತಿ ಠಾಣೆ ಪೊಲೀಸರು,₹ 3 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಮಹಾರಾಷ್ಟ್ರ ಮೂಲದ ಸೈಯದನಿಸಾರ್ ಇಸಾಕ್ (40) ಬಂಧಿತ ಆರೋಪಿ. ಕಾಕತಿ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಆರೋಪಿಯಿಂದ ₹ 3.5 ಲಕ್ಷ ಮೌಲ್ಯದ 6 ಕೆಜಿ 145 ಗ್ರಾಂ ಗಾಂಜಾ, ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru: ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಸುಳ್ಳು ವಂಚನೆಯ ಕಥೆ ಕಟ್ಟಿದ ಕಿಲಾಡಿ ಪತಿ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರಲ್ಲಿ ಖಾಕಿ ಭರ್ಜರಿ ಶಿಕಾರಿ: ಮನೆಗಳ್ಳರು, ಡ್ರಗ್ ಪೆಡ್ಲರ್ಸ್ ಸೇರಿ 10 ಮಂದಿಯ ಬಂಧನ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/1-kg-42-grams-of-hydrovide-cannabis-worth-35-lakhs-was-found-in-the-bag-of-a-mulki-student-mrq/articleshow-kuzwea5"/>
        </item>
        <item>
            <title><![CDATA[ಧರ್ಮಸ್ಥಳ ಶವ ಶೋಧ ಪ್ರಕರಣ: 17 ಕಡೆ ಗುಂಡಿ ಅಗೆದಿದ್ದಷ್ಟೇ ಬಂತು, ಜೆಸಿಬಿ ಮಾಲೀಕರಿಗೆ ಹಣ ಬರಲೇ ಇಲ್ಲ!]]></title>
            <link>https://kannada.asianetnews.com/karnataka-districts/dharmasthala-body-retrieval-case-jcb-driver-who-dug-the-pit-has-not-received-payment-yet/articleshow-mv1sp39</link>
            <guid isPermaLink="true">https://kannada.asianetnews.com/karnataka-districts/dharmasthala-body-retrieval-case-jcb-driver-who-dug-the-pit-has-not-received-payment-yet/articleshow-mv1sp39</guid>
            <pubDate>Wed, 13 May 2026 06:38:33 +0530</pubDate>
            <description><![CDATA[&lt;p&gt;ಧರ್ಮಸ್ಥಳದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಎಸ್&zwnj;ಐಟಿ ನಡೆಸಿದ ತನಿಖಾ ಕಾರ್ಯಾಚರಣೆಯಲ್ಲಿ ದುಡಿದ ಕಾರ್ಮಿಕರು ಮತ್ತು ಜೆಸಿಬಿ ಮಾಲೀಕರಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಕಾರ್ಮಿಕರ ಕೂಲಿ, ಜೆಸಿಬಿ ಬಾಡಿಗೆ ಸೇರಿದಂತೆ ಒಟ್ಟು ₹2 ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಉಳಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krfdz0m0t9sh5v7xhcywpmw3,imgname-----------------------2026-05-13t063642.244-1778634424960.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳ್ತಂಗಡಿ (ಮೇ.13): &lt;/strong&gt;ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಎಸ್&zwnj;ಐಟಿ ರಚಿಸಿ ನಡೆಸಿದ ತನಿಖೆ ಸಂದರ್ಭ ದುಡಿದ ಕಾರ್ಮಿಕರಿಗೆ ವೇತನ, ಜೆಸಿಬಿ ಬಾಡಿಗೆ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.&lt;/p&gt;&lt;p&gt;ಎಸ್&zwnj;ಐಟಿ ತನಿಖೆ ಶುರುವಾಗಿ ಮಾಸ್ಕ್&zwnj;ಮ್ಯಾನ್ ಚಿನ್ನಯ್ಯನನ್ನು ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡು ಬಂದು, ಸ್ಥಳ ಗುರುತು ಮಾಡಿ ಒಟ್ಟು 17 ಕಡೆಗಳಲ್ಲಿ ಹೊಂಡಗಳನ್ನು ತೋಡಿ ಶೋಧ ನಡೆಸಲಾಗಿತ್ತು. ಒಟ್ಟು ಹತ್ತು ದಿನ ಜೆಸಿಬಿಯಿಂದ ಕೆಲಸ ಮಾಡಲಾಗಿತ್ತು. ಒಟ್ಟು ₹71,500 ಬಿಲ್ ಮಾಡಿ ಕೊಟ್ಟಿದ್ದರು. ಆದರೆ, ಜೆಸಿಬಿ ಬಾಡಿಗೆ ಇನ್ನೂ ಬಂದಿಲ್ಲ.&lt;/p&gt;&lt;p&gt;ದಿನ ನಿತ್ಯ 10-12 ಕಾರ್ಮಿಕರು ಎಸ್&zwnj;ಐಟಿ ತಂಡಕ್ಕೆ ಸಹಾಯವಾಗಿ ದುಡಿಯುತ್ತಿದ್ದರು. ಆದರೆ, ಕಾರ್ಮಿಕರ ಕೂಲಿ ಕೊಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಕಾರ್ಮಿಕರದ್ದು ಒಟ್ಟು ₹80 ಸಾವಿರಕ್ಕೂ ಅಧಿಕ ಹಣ ಕೊಡುವುದು ಬಾಕಿ ಇದೆ. ಇದೀಗ ಕಾರ್ಮಿಕರು ದುಡಿದ ಹಣಕ್ಕಾಗಿ ಅಲೆದಾಡುವಂತಾಗಿದೆ.&lt;/p&gt;&lt;p&gt;ಎಸ್&zwnj;ಐಟಿ ತಂಡಕ್ಕೆ ಕುಳಿತುಕೊಳ್ಳಲು ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಇದರ ಬಿಲ್ ಕೂಡ ಬಾಕಿ ಇದೆ. ಹಾರೆ, ಪಿಕಾಸು, ನೀರಿನ ಬಾಟಲಿ, ಕೂಲಿಯಾಳುಗಳನ್ನು ಕರೆ ತಂದ ವಾಹನ ಬಾಡಿಗೆ ಹೀಗೆ ಒಟ್ಟು ₹2 ಲಕ್ಷಕ್ಕೂ ಅಧಿಕ ಬಿಲ್ ಕೊಡಲು ಬಾಕಿ ಇದೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharmasthala-body-retrieval-case-jcb-driver-who-dug-the-pit-has-not-received-payment-yet/articleshow-mv1sp39"/>
        </item>
        <item>
            <title><![CDATA[ಕುಕ್ಕೆ ಸುಬ್ರಹ್ಮಣ್ಯ ದೇಗುಲದ ದಾಖಲೆ, ವಾರ್ಷಿಕ ಆದಾಯ ₹167 ಕೋಟಿ ಮುಜರಾಯಿಯಲ್ಲೇ ನಂ.1 ಸ್ಥಾನ!]]></title>
            <link>https://kannada.asianetnews.com/gallery/state/kukke-subrahmanya-temple-revenue-crosses-rs-167-crore-in-2025-26-remains-karnataka-s-no-1-gdp-nzvizyk</link>
            <guid isPermaLink="true">https://kannada.asianetnews.com/gallery/state/kukke-subrahmanya-temple-revenue-crosses-rs-167-crore-in-2025-26-remains-karnataka-s-no-1-gdp-nzvizyk</guid>
            <pubDate>Mon, 11 May 2026 17:46:09 +0530</pubDate>
            <description><![CDATA[&lt;p&gt;ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಹಣಕಾಸು ವರ್ಷದಲ್ಲಿ ₹167.89 ಕೋಟಿ ದಾಖಲೆಯ ಆದಾಯ ಗಳಿಸಿದೆ. ಈ ಮೂಲಕ ಸತತ 15ನೇ ವರ್ಷವೂ ರಾಜ್ಯದ ನಂ.1 ಮುಜರಾಯಿ ದೇವಾಲಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಹರಕೆ, ಕಾಣಿಕೆ ಹುಂಡಿ, &amp;nbsp;ಹೂಡಿಕೆಗಳಿಂದ ಬರುವ ಬಡ್ಡಿ ಆದಾಯದ ಪ್ರಮುಖ ಮೂಲಗಳಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jqb1m319q6c55acwytvj9w23,imgname-kukke-subramanya--5-.jpg" type="image/jpeg" height="390" width="690"/>
            <content:encoded><![CDATA[&lt;p&gt;ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಹಣಕಾಸು ವರ್ಷದಲ್ಲಿ ₹167.89 ಕೋಟಿ ದಾಖಲೆಯ ಆದಾಯ ಗಳಿಸಿದೆ. ಈ ಮೂಲಕ ಸತತ 15ನೇ ವರ್ಷವೂ ರಾಜ್ಯದ ನಂ.1 ಮುಜರಾಯಿ ದೇವಾಲಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಹರಕೆ, ಕಾಣಿಕೆ ಹುಂಡಿ, &amp;nbsp;ಹೂಡಿಕೆಗಳಿಂದ ಬರುವ ಬಡ್ಡಿ ಆದಾಯದ ಪ್ರಮುಖ ಮೂಲಗಳಾಗಿವೆ.&lt;/p&gt;&lt;img&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನೆಲೆಗೊಂಡಿರುವ ರಾಜ್ಯದ ಮುಜರಾಯಿ ಇಲಾಖೆ ಆಧೀನದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ 2025-26ನೇ ಹಣಕಾಸು ವರ್ಷದಲ್ಲಿ ಭಾರೀ ಆದಾಯ ಗಳಿಸಿ ಮತ್ತೊಮ್ಮೆ ಗಮನ ಸೆಳೆದಿದೆ. 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ದೇವಾಲಯವು ಒಟ್ಟು ₹167.89 ಕೋಟಿ ಆದಾಯ ಗಳಿಸಿದ್ದು, ಇದರಲ್ಲಿ ₹85.20 ಕೋಟಿ ವೆಚ್ಚ ಮಾಡಲಾಗಿದೆ. ಈ ಮೂಲಕ ಕಳೆದ 2024-25ನೇ ಸಾಲಿನ ₹155 ಕೋಟಿ ಆದಾಯವನ್ನು ಮೀರಿ ಸುಮಾರು ₹12 ಕೋಟಿ ಹೆಚ್ಚುವರಿ ಆದಾಯ ದಾಖಲಿಸಿದೆ. ಸತತ 15ನೇ ವರ್ಷವೂ ರಾಜ್ಯದ ಮುಜರಾಯಿ ದೇವಾಲಯಗಳ ಪೈಕಿ ಅತ್ಯಧಿಕ ಆದಾಯ ಗಳಿಸುವ ನಂ.1 ಸ್ಥಾನವನ್ನು ಈ ದೇವಾಲಯ ಕಾಯ್ದುಕೊಂಡಿದೆ.&lt;/p&gt;&lt;img&gt;&lt;p&gt;ಈ ವರ್ಷ ದೇವಾಲಯವು ಪ್ರಪ್ರಥಮ ಬಾರಿಗೆ ₹167 ಕೋಟಿಗೂ ಅಧಿಕ ಆದಾಯ ದಾಖಲಿಸಿರುವುದು ವಿಶೇಷವಾಗಿದೆ. ದೇವಾಲಯದ ಪ್ರಮುಖ ಆದಾಯ ಮೂಲಗಳಲ್ಲಿ ಹರಕೆ ಸೇವೆಗಳು, ಕಾಣಿಕೆ ಹುಂಡಿ, ಇ-ಹುಂಡಿ, ಕಟ್ಟಡ ಮತ್ತು ಅಂಗಡಿಗಳ ಬಾಡಿಗೆ, ಛತ್ರಗಳ ಬಾಡಿಗೆ, ಕೃಷಿ ತೋಟಗಳಿಂದ ಲಭಿಸುವ ಆದಾಯ ಹಾಗೂ ವಿವಿಧ ಹೂಡಿಕೆಗಳಿಂದ ಬರುವ ಬಡ್ಡಿ ಸೇರಿವೆ.&lt;/p&gt;&lt;img&gt;&lt;ul&gt; &lt;li&gt;ಹರಕೆ ಸೇವೆಗಳಿಂದ ₹64.08 ಕೋಟಿ&lt;/li&gt; &lt;li&gt;ಕಾಣಿಕೆ ಹುಂಡಿಯಿಂದ ₹24.69 ಕೋಟಿ&lt;/li&gt; &lt;li&gt;ಕಾಣಿಕೆ (ನೇರ) ₹5.47 ಕೋಟಿ&lt;/li&gt; &lt;li&gt;ಇ-ಹುಂಡಿ ₹38.01 ಲಕ್ಷ&lt;/li&gt; &lt;li&gt;ಹೂಡಿಕೆ ಬಡ್ಡಿಯಿಂದ ₹49.11 ಕೋಟಿ&lt;/li&gt; &lt;li&gt;ಛತ್ರ ಸಂರಕ್ಷಣಾ ನಿಧಿಯಿಂದ ₹6.93 ಕೋಟಿ&lt;/li&gt; &lt;li&gt;ಅನ್ನಸಂತರ್ಪಣೆ ನಿಧಿಯಿಂದ ₹9.14 ಕೋಟಿ&lt;/li&gt; &lt;li&gt;ಗುತ್ತಿಗೆಗಳಿಂದ ₹2.53 ಕೋಟಿ&lt;/li&gt; &lt;li&gt;ಕಟ್ಟಡ/ಅಂಗಡಿಗಳ ಬಾಡಿಗೆಯಿಂದ ₹94.46 ಲಕ್ಷ&lt;/li&gt; &lt;li&gt;ಕೃಷಿ ತೋಟ ಮತ್ತು ಧಾನ್ಯದಿಂದ ₹10.50 ಲಕ್ಷ&lt;/li&gt; &lt;li&gt;ಇತರೆ ಮೂಲಗಳಿಂದ ₹3.20 ಕೋಟಿ ಸೇರಿದಂತೆ&amp;nbsp;&lt;/li&gt;&lt;/ul&gt;&lt;p&gt;ಒಟ್ಟು ₹167.89 ಕೋಟಿ ಆದಾಯ ಬಂದಿದೆ.&lt;/p&gt;&lt;p&gt;ಈ ಸಾಧನೆ ದೇವಾಲಯದ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗಿದ್ದು, ಭಕ್ತರ ವಿಶ್ವಾಸ ಮತ್ತು ದೇವಾಲಯದ ವ್ಯವಸ್ಥಾಪನಾ ದಕ್ಷತೆಯನ್ನು ಪ್ರತಿಬಿಂಬಿಸುತ್ತದೆ.&lt;/p&gt;&lt;img&gt;&lt;p&gt;ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು ಕಳೆದ ಎರಡು ದಶಕಗಳಿಂದ ನಿರಂತರ ಆದಾಯ ವೃದ್ಧಿಯನ್ನು ಸಾಧಿಸುತ್ತಿದೆ. 2006-07ರಲ್ಲಿ ಕೇವಲ ₹19.76 ಕೋಟಿ ಆದಾಯ ಹೊಂದಿದ್ದ ದೇವಾಲಯ, 2007-08ರಲ್ಲಿ ₹24.44 ಕೋಟಿಗೆ ಏರಿಕೆ ಕಂಡು ರಾಜ್ಯದ ಪ್ರಮುಖ ದೇವಾಲಯಗಳ ಪಟ್ಟಿಗೆ ಸೇರಿತು.&lt;/p&gt;&lt;img&gt;&lt;ul&gt; &lt;li&gt;2008-09: ₹31 ಕೋಟಿ&lt;/li&gt; &lt;li&gt;2009-10: ₹38.51 ಕೋಟಿ&lt;/li&gt; &lt;li&gt;2011-12: ₹56.24 ಕೋಟಿ&lt;/li&gt; &lt;li&gt;2012-13: ₹66.76 ಕೋಟಿ&lt;/li&gt; &lt;li&gt;2014-15: ₹77.60 ಕೋಟಿ&lt;/li&gt; &lt;li&gt;2015-16: ₹88.83 ಕೋಟಿ&lt;/li&gt; &lt;li&gt;2017-18: ₹95.92 ಕೋಟಿ&lt;/li&gt; &lt;li&gt;2019-20: ₹98.92 ಕೋಟಿ&lt;/li&gt; &lt;li&gt;ಕೋವಿಡ್ ಅವಧಿಯಲ್ಲಿ 2020-21: ₹68.94 ಕೋಟಿ&lt;/li&gt; &lt;li&gt;2022-23: ₹123.64 ಕೋಟಿ&lt;/li&gt; &lt;li&gt;2023-24: ₹146 ಕೋಟಿ&lt;/li&gt; &lt;li&gt;2024-25: ₹155 ಕೋಟಿ&lt;/li&gt;&lt;/ul&gt;&lt;p&gt;ಹೀಗೆ ನಿರಂತರ ಏರಿಕೆಯನ್ನು ಸಾಧಿಸುತ್ತಾ ಬಂದ ದೇವಾಲಯವು ಇದೀಗ 2025-26ರಲ್ಲಿ ₹167 ಕೋಟಿಗೂ ಅಧಿಕ ಆದಾಯ ದಾಖಲಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.&lt;/p&gt;&lt;img&gt;&lt;p&gt;ಕಳೆದ 14 ವರ್ಷಗಳಿಂದ ರಾಜ್ಯದ ಅತಿ ಹೆಚ್ಚು ಆದಾಯ ಗಳಿಸುವ ಮುಜರಾಯಿ ದೇವಾಲಯವಾಗಿ ಹೊರಹೊಮ್ಮಿದ್ದ ಈ ಪವಿತ್ರ ಕ್ಷೇತ್ರವು, ಈ ವರ್ಷವೂ ತನ್ನ ಆ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಸತತ 15ನೇ ವರ್ಷವೂ ನಂ.1 ಸ್ಥಾನವನ್ನು ಉಳಿಸಿಕೊಂಡಿರುವುದು ದೇವಾಲಯದ ನಿರ್ವಹಣಾ ವ್ಯವಸ್ಥೆ, ಭಕ್ತರ ಹೆಚ್ಚುತ್ತಿರುವ ಸಂಖ್ಯೆ ಹಾಗೂ ಧಾರ್ಮಿಕ ನಂಬಿಕೆಗಳ ಬಲವನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ತನ್ನ ಆರ್ಥಿಕ ಸ್ಥಿರತೆ, ಭಕ್ತರ ಅಪಾರ ಬೆಂಬಲ ಮತ್ತು ಸುಧಾರಿತ ಆಡಳಿತ ಕ್ರಮಗಳ ಮೂಲಕ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಮತ್ತೊಮ್ಮೆ ತನ್ನ ಮಹತ್ವವನ್ನು ಸಾಬೀತುಪಡಿಸಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಆದಾಯದಲ್ಲಿ ಹೆಚ್ಚಳ ಸಾಧಿಸುವ ನಿರೀಕ್ಷೆ ಇದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/kukke-subrahmanya-temple-revenue-crosses-rs-167-crore-in-2025-26-remains-karnataka-s-no-1-gdp-nzvizyk"/>
        </item>
        <item>
            <title><![CDATA[ಕರಾವಳಿ, ಮಲೆನಾಡನ್ನೂ ಮೀರಿಸಿದ ಗದಗ ಮಳೆ ಅಬ್ಬರ: ಭಾನುವಾರ ಜಿಲ್ಲಾವಾರು ಎಷ್ಟು ಮಳೆಯಾಗಿದೆ ವಿವರ ನೋಡಿ!]]></title>
            <link>https://kannada.asianetnews.com/gallery/state/karnataka-weather-update-heavy-rain-in-gadag-dharwad-mangalore-imd-report-sat-xfa43ha</link>
            <guid isPermaLink="true">https://kannada.asianetnews.com/gallery/state/karnataka-weather-update-heavy-rain-in-gadag-dharwad-mangalore-imd-report-sat-xfa43ha</guid>
            <pubDate>Mon, 18 May 2026 13:25:38 +0530</pubDate>
            <description><![CDATA[ಕಳೆದ 24 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಉತ್ತಮ ಮಳೆಯಾಗಿದ್ದು, ಗದಗ ಜಿಲ್ಲೆಯಲ್ಲಿ ಮೇಘಸ್ಫೋಟದ ಮಾದರಿಯಲ್ಲಿ 82.4 ಮಿಮೀ ದಾಖಲೆ ಮಳೆಯಾಗಿದೆ. ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡಿನಲ್ಲೂ ವರುಣನ ಸಿಂಚನವಾಗಿದ್ದು, ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krv6wag915g31p9ppzq2qzgx,imgname-screenshot-2026-05-17-195924-1779029649929.png" type="image/jpeg" height="390" width="690"/>
            <content:encoded><![CDATA[ಕಳೆದ 24 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಉತ್ತಮ ಮಳೆಯಾಗಿದ್ದು, ಗದಗ ಜಿಲ್ಲೆಯಲ್ಲಿ ಮೇಘಸ್ಫೋಟದ ಮಾದರಿಯಲ್ಲಿ 82.4 ಮಿಮೀ ದಾಖಲೆ ಮಳೆಯಾಗಿದೆ. ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡಿನಲ್ಲೂ ವರುಣನ ಸಿಂಚನವಾಗಿದ್ದು, ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.&lt;img&gt;&lt;p&gt;&lt;strong&gt;ಬೆಂಗಳೂರು (ಮೇ 18): ರಾ&lt;/strong&gt;ಜ್ಯದಲ್ಲಿ ಬಿಸಿಲಿನ ಬೇಗೆಯ ನಡುವೆಯೇ ವರುಣ ದೇವ ತಂಪೆರೆದಿದ್ದಾನೆ. ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಒಳನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರುವ ಬಗ್ಗೆ ಬೆಂಗಳೂರು ಹವಾಮಾನ ಕೇಂದ್ರ (IMD) ಮಾಹಿತಿ ನೀಡಿದೆ. ವಿಶೇಷವಾಗಿ ಗದಗ ಜಿಲ್ಲೆಯಲ್ಲಿ ಮೇಘಸ್ಫೋಟದ ಮಾದರಿಯಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.&lt;/p&gt;&lt;img&gt;&lt;p&gt;ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಉತ್ತರ ಒಳನಾಡಿನ ಗದಗ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಗದಗ ವೀಕ್ಷಣಾಲಯದಲ್ಲಿ ಬರೊಬ್ಬರಿ 82.4 ಮಿಮೀ ಮಳೆ ದಾಖಲಾಗಿದ್ದರೆ, ಜಿಲ್ಲೆಯ ಹುಲಿಕೋಟೆ ಕೆವಿಕೆ ಕೇಂದ್ರದಲ್ಲಿ 18.0 ಮಿಮೀ ಮಳೆಯಾಗಿದೆ. ಗುಡುಗು ಮತ್ತು ಮಿಂಚಿನ ಸಹಿತ ಸುರಿದ ಈ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.&lt;/p&gt;&lt;p&gt;ಉತ್ತರ ಒಳನಾಡಿನ ಧಾರವಾಡದಲ್ಲಿ 20.0 ಮಿಮೀ&lt;/p&gt;&lt;p&gt;ಕೊಪ್ಪಳದ ಯಲಬುರ್ಗಾದಲ್ಲಿ 19.0 ಮಿಮೀ ಮಳೆಯಾಗುವ ಮೂಲಕ ವರುಣನ ಅಬ್ಬರ ಕಂಡುಬಂದಿದೆ.&lt;/p&gt;&lt;img&gt;&lt;p&gt;ಕರಾವಳಿ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿದ್ದು, ಮಂಗಳೂರು ವಿಮಾನ ನಿಲ್ದಾಣದ ಬಳಿ 13.8 ಮಿಮೀ ಮಳೆಯಾಗಿದೆ.&amp;nbsp;&lt;/p&gt;&lt;p&gt;ಮಲೆನಾಡು ಭಾಗದ ಶಿವಮೊಗ್ಗದ ನವುಲೆಯಲ್ಲಿ 19.5 ಮಿಮೀ ಹಾಗೂ ಇರುವಾಕಿಯಲ್ಲಿ 19.5 ಮಿಮೀ ಮಳೆಯಾಗಿದೆ.&amp;nbsp;&lt;/p&gt;&lt;p&gt;ಚಿಕ್ಕಮಗಳೂರಿನ ಮುಡಿಗೆರೆಯಲ್ಲಿ 3.0 ಮಿಮೀ ಮತ್ತು ಬಾಳೆಹೊನ್ನೂರಿನಲ್ಲಿ ಸಾಧಾರಣ ಮಳೆಯಾಗಿದೆ.&amp;nbsp;&lt;/p&gt;&lt;p&gt;ಶಿರಸಿಯಲ್ಲಿ 10.5 ಮಿಮೀ ಮಳೆಯಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆರಾಯ ತಂಪೆರೆದಿದ್ದಾನೆ.&lt;/p&gt;&lt;img&gt;&lt;p&gt;ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೇಳಿಕೊಳ್ಳುವಂತಹ ಭಾರಿ ಮಳೆಯಾಗದಿದ್ದರೂ, ಎಚ್&zwnj;ಎಎಲ್ (HAL) ವಿಮಾನ ನಿಲ್ದಾಣದ ಸುತ್ತಮುತ್ತ 1.4 ಮಿಮೀ ಸಾಧಾರಣ ಮಳೆಯಾಗಿದೆ. ನಗರದ ಹಲವೆಡೆ ಕ್ಯುಮುಲೋನಿಂಬಸ್ (CB) ಮೋಡಗಳು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ.&lt;/p&gt;&lt;img&gt;&lt;p&gt;ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ (TSRA) ಸಂಭವಿಸಿದ್ದು, ಹವಾಮಾನ ಕೇಂದ್ರದ ರೇಡಾರ್&zwnj;ಗಳಲ್ಲಿ ಕ್ಯುಮುಲೋನಿಂಬಸ್ ಮೋಡಗಳ ತೀವ್ರತೆ ಕಂಡುಬಂದಿದೆ. ಕಲಬುರಗಿ, ಬೆಳಗಾವಿ, ಚಿತ್ರದುರ್ಗ ಮತ್ತು ವಿದ್ಯಾ ನಗರದ ಭಾಗಗಳಲ್ಲಿ ಮೋಡಗಳು ಕವಿದಿದ್ದು, ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆಯಿದೆ. ರೈತರಿಗೆ ಈ ಮಳೆ ಮಿಶ್ರಫಲ ನೀಡಿದ್ದು, ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಕೃಷಿಕರಲ್ಲಿ ಹರ್ಷ ಮೂಡಿಸಿದೆ. ಆದರೆ ಅಕಾಲಿಕ ಗುಡುಗು ಮಿಂಚಿನ ಬಗ್ಗೆ ಜನರು ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಸೂಚಿಸಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-update-heavy-rain-in-gadag-dharwad-mangalore-imd-report-sat-xfa43ha"/>
        </item>
        <item>
            <title><![CDATA[ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗ: ಪ್ರಯಾಣಿಕರಿಗೆ ಮಹತ್ವದ ಸುದ್ದಿ, ರೈಲು ಸೇವೆಗಳ ಪರಿಷ್ಕರಣೆ]]></title>
            <link>https://kannada.asianetnews.com/karnataka-districts/mangaluru-subrahmanya-road-train-services-restored-revised-schedule-announced-gdp/articleshow-zeupcpr</link>
            <guid isPermaLink="true">https://kannada.asianetnews.com/karnataka-districts/mangaluru-subrahmanya-road-train-services-restored-revised-schedule-announced-gdp/articleshow-zeupcpr</guid>
            <pubDate>Mon, 11 May 2026 20:00:20 +0530</pubDate>
            <description><![CDATA[ಮಂಗಳೂರು&ndash;ಸುಬ್ರಹ್ಮಣ್ಯ ರಸ್ತೆ ರೈಲು ಮಾರ್ಗದಲ್ಲಿ ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಈ ಹಿಂದೆ ಘೋಷಿಸಲಾಗಿದ್ದ ರೈಲು ಸೇವೆಗಳ ವಿಳಂಬವನ್ನು ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 56629 ಮತ್ತು 56630 ಈಗ ನಿಗದಿತ ದಿನಾಂಕಗಳಿಂದ ತಮ್ಮ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knzr06zeea1hqff78krd0yts,imgname-indian-railways-2026-reforms-vande-bharat-sleeper-hydrogen-train-ticket-refund-cancellation-board-change-policy-2-1775960595438.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು&ndash;ಸುಬ್ರಹ್ಮಣ್ಯ ರಸ್ತೆ ರೈಲು ಮಾರ್ಗದ ಸುಬ್ರಹ್ಮಣ್ಯ ರಸ್ತೆ&ndash;ಎಡಮಂಗಲ ವಿಭಾಗಗಳ ನಡುವೆ ನಡೆಯುತ್ತಿರುವ ಹಳಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಮೊದಲು ನಿಯಂತ್ರಣಕ್ಕೆ ಒಳಪಡಿಸಿ ಮರುನಿಗದಿಪಡಿಸಲಾಗಿದ್ದ ರೈಲು ಸೇವೆಗಳಲ್ಲಿ ಇದೀಗ ಮಹತ್ವದ ಪರಿಷ್ಕರಣೆ ಮಾಡಿ ಮರುಸ್ಥಾಪನೆ ಮಾಡಲಾಗಿದೆ.&lt;/p&gt;&lt;h2&gt;ಈ ಹಿಂದಿನ ವೇಳಾಪಟ್ಟಿ ಕ್ಯಾನ್ಸಲ್&lt;/h2&gt;&lt;p&gt;ಈ ಮೊದಲು ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್&ndash;ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು ಏಪ್ರಿಲ್ 15ರಿಂದ ಜೂನ್ 4ರವರೆಗೆ ಪ್ರತಿದಿನ 35 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಇದೀಗ ಈ ನಿರ್ಧಾರವನ್ನು ಪರಿಷ್ಕರಿಸಲಾಗಿದ್ದು, ಮೇ 11ರಿಂದ ಜೂನ್ 4ರವರೆಗೆ ಈ ರೈಲು ತನ್ನ ನಿಯಮಿತ ವೇಳಾಪಟ್ಟಿಯಂತೆ ಹಾಗೂ ನಿಗದಿತ ಮಾರ್ಗದಲ್ಲೇ ಯಾವುದೇ ಹೆಚ್ಚುವರಿ ವಿಳಂಬವಿಲ್ಲದೆ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಅದೇ ರೀತಿ, ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರಸ್ತೆ&ndash;ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಮರುನಿಗದಿಪಡಿಸುವಿಕೆಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಮೊದಲಿನ ಅಧಿಸೂಚನೆಯ ಪ್ರಕಾರ ಏಪ್ರಿಲ್ 16, 18, 21, 23, 25, 28 ಮತ್ತು 30 ಹಾಗೂ ಮೇ 2, 5, 7, 9, 12, 14, 16, 19, 21, 23, 26, 28 ಮತ್ತು 30, ಜೊತೆಗೆ ಜೂನ್ 2 ಮತ್ತು 4ರಂದು ಸಂಚರಿಸುವ ರೈಲುಗಳಿಗೆ 15 ನಿಮಿಷಗಳ ವಿಳಂಬ ವಿಧಿಸಲಾಗಿತ್ತು.&lt;/p&gt;&lt;h2&gt;ವಿಳಂಬವಿಲ್ಲದೆ ತನ್ನ ನಿಯಮಿತ ವೇಳಾಪಟ್ಟಿಯಂತೆ ಸಂಚಾರ&lt;/h2&gt;&lt;p&gt;ಇದೀಗ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಮೇ 12, 14, 16, 19, 21, 23, 26, 28 ಮತ್ತು 30 ಹಾಗೂ ಜೂನ್ 2 ಮತ್ತು 4ರಂದು ಸಂಚರಿಸುವ ರೈಲು ಸಂಖ್ಯೆ 56630 ಮರುಸ್ಥಾಪನೆಯಾಗಿದ್ದು, ಈ ದಿನಗಳಲ್ಲಿ ರೈಲು ಯಾವುದೇ ವಿಳಂಬವಿಲ್ಲದೆ ತನ್ನ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಹಳಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ರೂಪಿಸಲಾದ ತಾತ್ಕಾಲಿಕ ನಿಯಂತ್ರಣ ಕ್ರಮಗಳಲ್ಲಿ ಸಡಿಲಿಕೆ ನೀಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲು ಸೇವೆಗಳನ್ನು ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ಮರಳಿಸಲಾಗಿದೆ. ಪ್ರಯಾಣಿಕರು ಪರಿಷ್ಕೃತ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-subrahmanya-road-train-services-restored-revised-schedule-announced-gdp/articleshow-zeupcpr"/>
        </item>
        <item>
            <title><![CDATA[ಮಂಗಳೂರು ಕದ್ರಿಯಲ್ಲಿ ಮತ್ತೊಂದು ಉದ್ಯಾನವನಕ್ಕೆ ಸಿದ್ಧತೆ! 3.50ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಇಲ್ಲಿ ಏನೇನಿರಲಿದೆ?]]></title>
            <link>https://kannada.asianetnews.com/karnataka-districts/new-3-5-acre-park-planned-opposite-kadri-park-in-mangaluru-under-amrut-scheme-gdp/articleshow-zxggkku</link>
            <guid isPermaLink="true">https://kannada.asianetnews.com/karnataka-districts/new-3-5-acre-park-planned-opposite-kadri-park-in-mangaluru-under-amrut-scheme-gdp/articleshow-zxggkku</guid>
            <pubDate>Sun, 10 May 2026 17:38:39 +0530</pubDate>
            <description><![CDATA[ಮಂಗಳೂರಿನ ಕದ್ರಿಯಲ್ಲಿ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 3.50 ಕೋಟಿ ರೂ. ವೆಚ್ಚದಲ್ಲಿ ಹೊಸ ಉದ್ಯಾನವನ ನಿರ್ಮಾಣವಾಗಲಿದೆ. ಹಾಲಿ ಉದ್ಯಾನವನದ ಎದುರು ನಿರ್ಮಾಣವಾಗಲಿರುವ ಈ ಪಾರ್ಕ್&zwnj;ನಲ್ಲಿ ವಾಕಿಂಗ್ ಪಥ, ಸಣ್ಣ ವೇದಿಕೆ ಹಾಗೂ ಪಾರ್ಕಿಂಗ್ ಸೌಲಭ್ಯಗಳಿರಲಿವೆ. ಅಲ್ಲದೆ, ಹಳೆಯ ಪಾರ್ಕ್&zwnj;ನ ನೀರಿನ ಕೊರತೆ ನೀಗಿಸಲು ಎಸ್&zwnj;ಟಿಪಿ ನೀರು ಮರುಬಳಕೆ ಯೋಜನೆ ರೂಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8wfdqwf33qphz0s3p3n5cq,imgname-new-park-in-kadri-mangaluru-1778414761724.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ಮಂಗಳೂರಿಗೆ ಶಿಖರಪ್ರಾಯವಾಗಿರುವ ಕದ್ರಿಯ ಹಾಲಿ ಉದ್ಯಾನವನದ ಎದುರು ಭಾಗದಲ್ಲೇ ಶೀಘ್ರವೇ ಇನ್ನೊಂದು ದೊಡ್ಡ ಉದ್ಯಾನವನ ನಿರ್ಮಾಣವಾಗಲಿದೆ. ಸುಮಾರು 3.50 ಎಕರೆ ಜಾಗದಲ್ಲಿ ಕೇಂದ್ರ ಸರ್ಕಾರದ ಅಮೃತ್&zwnj; ಯೋಜನೆಯಡಿ 3.50 ಕೋಟಿ ರು. ವೆಚ್ಚದಲ್ಲಿ ಈ ಉದ್ಯಾನವನ ನಿರ್ಮಾಣವಾಗಲಿದೆ. ಕದ್ರಿ ಉದ್ಯಾನವನ ಹೊರತುಪಡಿಸಿದರೆ, ಬೇರೆ ದೊಡ್ಡ ಉದ್ಯಾನವನ ಮಂಗಳೂರಲ್ಲಿ ಇಲ್ಲ. ಉಳಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10ಕ್ಕೂ ಅಧಿಕ ಸಣ್ಣ ಪಾರ್ಕ್&zwnj;ಗಳು ಇವೆ.&lt;/p&gt;&lt;p&gt;ಕದ್ರಿಯಲ್ಲಿರುವ ಹಾಲಿ ಪಾರ್ಕ್&zwnj;ನ್ನು ತೋಟಗಾರಿಕಾ ಇಲಾಖೆ ನಿರ್ವಹಿಸುತ್ತಿದೆ. ಒಟ್ಟು 17 ಎಕರೆ ಪೈಕಿ 13 ಎಕರೆ ಪಾರ್ಕ್&zwnj; ಹಾಗೂ 4 ಎಕರೆ ಜಿಂಕೆ ಉದ್ಯಾನವಿದೆ. ಹೆಸರಿಗೆ ಪಾರ್ಕ್&zwnj; ಆದರೂ ಬೇಸಗೆಯಲ್ಲಿ ನಳನಳಿಸುವ ಸಸ್ಯಗಳು ವಿರಳ. ಯಾಕೆಂದರೆ, ಈ ಪಾರ್ಕ್&zwnj;ನಲ್ಲಿ ನೀರಿನ ಕೊರತೆ ಇದೆ. ಇದರಿಂದಾಗಿ ಪಾರ್ಕ್&zwnj; ಬಿಸಿಲಿಗೆ ಬಣಗುಡುತ್ತಿರುವಂತೆ ಕಂಡುಬರುತ್ತಿದೆ. ಪಾರ್ಕಿಂಗ್&zwnj; ಕೊರತೆಯಿಂದ ಕದ್ರಿ ಉದ್ಯಾನವನ ರಸ್ತೆಯ ಇಕ್ಕೆಲಗಳಲ್ಲೇ ಪಾರ್ಕ್&zwnj; ಮಾಡಬೇಕಾಗಿದೆ. ಕದ್ರಿ ಪಾರ್ಕ್&zwnj;ನಲ್ಲಿ ಬಯಲು ರಂಗ ಮಂದಿರ ಇದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವಗಳು ನಡೆಯುತ್ತಿರುತ್ತವೆ.&lt;/p&gt;&lt;h2&gt;2ನೇ ಪಾರ್ಕ್&zwnj; ನವೋದ್ಯಾನ:&lt;/h2&gt;&lt;p&gt;ಪ್ರಸ್ತಾವಿತ 2ನೇ ಪಾರ್ಕ್&zwnj;ನಲ್ಲಿ ಹಾಲಿ ಕದ್ರಿ ಪಾರ್ಕ್&zwnj;ನಲ್ಲಿ ಇಲ್ಲದ ಅನೇಕ ಸಂಗತಿಗಳು ಇರಲಿವೆ. ಹೊಸ ಪಾರ್ಕ್&zwnj;ನಲ್ಲಿ ಸಣ್ಣ ವೇದಿಕೆ, ಗಾರ್ಡನ್&zwnj;, ವಾಕಿಂಗ್&zwnj; ಪಥ ನಿರ್ಮಾಣವಾಗಲಿದೆ. ಅಲ್ಲದೆ ಪಾರ್ಕ್&zwnj;ನ ಪ್ರವೇಶ ದ್ವಾರದ ಎರಡೂ ಕಡೆಗಳಲ್ಲಿ ಗರಿಷ್ಠ ವಾಹನಗಳ ನಿಲುಗಡೆಗೆ ಉದ್ದೇಶಿಸಲಾಗಿದೆ.&lt;/p&gt;&lt;p&gt;ಜಿಲ್ಲಾಧಿಕಾರಿ ದರ್ಶನ್&zwnj;, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್&zwnj;, ಮೂಡಾ ಕಮಿಷನರ್&zwnj; ಮೊಹಮ್ಮದ್&zwnj; ನಝೀರ್&zwnj; ಹಾಗೂ ಪಾಲಿಕೆ ಉಪ ಆಯುಕ್ತ ನರೇಶ್&zwnj; ಶೆಣೈ ಮತ್ತಿತರರು ಪ್ರಸ್ತಾವಿತ ಹೊಸ ಪಾರ್ಕ್&zwnj; ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;ಕದ್ರಿ ಪಾರ್ಕ್&zwnj;ಗೆ ಎಸ್&zwnj;ಟಿಪಿ ನೀರು ಮರು ಬಳಕೆಗೆ ಯೋಜನೆ&lt;/h2&gt;&lt;p&gt;ಕದ್ರಿಯ ಹಾಲಿ ಉದ್ಯಾನವನ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದನ್ನು ನಿವಾರಿಸಲು ಕದ್ರಿ ಉದ್ಯಾನ ಸಮಿತಿ ಬೆಂದೂರ್&zwnj;ವೆಲ್&zwnj; ಎಸ್&zwnj;ಟಿಪಿ ನೀರನ್ನು ಮರು ಬಳಕೆ ಮಾಡಲು ಯೋಜನೆ ರೂಪಿಸಿದೆ. ಅಲ್ಲಿಂದ ಶೇ.30ರಷ್ಟು ಮರು ಬಳಕೆಯ ನೀರನ್ನು ಪಂಪ್&zwnj; ಮಾಡಿ ಕದ್ರಿ ಪಾರ್ಕ್&zwnj; ಬಳಿಯ ದೊಡ್ಡ ಟ್ಯಾಂಕ್&zwnj;ನಲ್ಲಿ ಸಂಗ್ರಹಿಸುವುದು. 70 ಲಕ್ಷ ಲೀಟರ್&zwnj; ಸಾಮರ್ಥ್ಯದ ಈ ಟ್ಯಾಂಕ್&zwnj;ನಿಂದ ಇಡೀ ಕದ್ರಿ ಪಾರ್ಕ್&zwnj;ಗೆ ನೀರುಣಿಸಲು ಬಳಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಪಾರ್ಕ್&zwnj;ಗೆ ನೀರಿನ ಕೊರತೆ ದೂರವಾಗಲಿದೆ.&lt;/p&gt;&lt;p&gt;ಕದ್ರಿ ಪಾರ್ಕ್&zwnj;ನ ಎದುರು ಭಾಗದಲ್ಲಿ ಈ ಹಿಂದೆ ಪಾರ್ಕ್&zwnj; ಆಗಿ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲಿ ಸ್ಕೇಟಿಂಗ್&zwnj; ಜಾಗದ ಬಳಿ ಇನ್ನೊಂದು ಪಾರ್ಕ್&zwnj;ನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಹೊಸ ಪಾರ್ಕ್&zwnj;ನಲ್ಲಿ ಏನೇನು ಇರಬೇಕು ಎಂಬ ಬಗ್ಗೆ ರೂಪುರೇಷೆ ಹಾಕಿಕೊಳ್ಳಲಾಗಿದೆ. ಈ ಕುರಿತ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ.&lt;/p&gt;&lt;p&gt;-ಜಗನ್ನಾಥ ಗಂಭೀರ್&zwnj;, ಸದಸ್ಯರು, ಕದ್ರಿ ಉದ್ಯಾನ ಸಮಿತಿ ಕಾರ್ಯಕಾರಿ ಸಮಿತಿ&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/new-3-5-acre-park-planned-opposite-kadri-park-in-mangaluru-under-amrut-scheme-gdp/articleshow-zxggkku"/>
        </item>
    </channel>
</rss>
