<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 27 Jun 2026 14:44:20 +0530</lastBuildDate>
        <atom:link href="https://kannada.asianetnews.com/rss/dakshina-kannada" rel="self" type="application/rss+xml"/>
        <item>
            <title><![CDATA[ಕರಾವಳಿ ರೈಲು: ಮಂಗಳೂರು-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಗಳೂರು-ಬಾಂದ್ರಾ ಟರ್ಮಿನಸ್ ಹೊಸ ರೈಲು ಸೇವೆ ಶೀಘ್ರ!]]></title>
            <link>https://kannada.asianetnews.com/karnataka-districts/mumbai-to-mangaluru-new-direct-train-service-via-konkan-railway-on-the-cards-gdp/articleshow-0i1h85g</link>
            <guid isPermaLink="true">https://kannada.asianetnews.com/karnataka-districts/mumbai-to-mangaluru-new-direct-train-service-via-konkan-railway-on-the-cards-gdp/articleshow-0i1h85g</guid>
            <pubDate>Sat, 27 Jun 2026 10:35:27 +0530</pubDate>
            <description><![CDATA[ಮಂಗಳೂರಿನಿಂದ ಬಾಂದ್ರಾ ಟರ್ಮಿನಸ್&zwnj;ಗೆ ಹೊಸ ರೈಲು ಸೇವೆ ಆರಂಭಿಸುವ ಪ್ರಸ್ತಾವನೆ ಸಕಾರಾತ್ಮಕ ಹಂತದಲ್ಲಿದೆ. ಪ್ರಸ್ತುತ ಮಂಗಳೂರಿನಲ್ಲಿ ಐದು ದಿನಗಳ ಕಾಲ ನಿಲ್ಲುವ ರಾಮೇಶ್ವರಂ ರೈಲಿನ ರೇಕ್ ಅನ್ನು ಈ ಸೇವೆಗೆ ಬಳಸಿಕೊಳ್ಳುವ ಯೋಜನೆ ಇದಾಗಿದ್ದು, ಕರಾವಳಿ ಭಾಗದ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf6fzpfrh03j5ft3q01br2z,imgname-konkan-railways--1--1781847817935.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮಂಗಳೂರಿನಿಂದ ವಸಾಯ್ ರೋಡ್ ಮೂಲಕವಾಗಿ ಬಾಂದ್ರಾ ಟರ್ಮಿನಸ್&zwnj;ಗೆ ನೇರ ರೈಲು ಸೇವೆ ಆರಂಭವಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಸಂಬಂಧ ರೈಲ್ವೆ ಇಲಾಖೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿರುವುದಾಗಿ ವರದಿ ತಿಳಿಸಿದೆ. ಪ್ರಸ್ತುತ ಮಂಗಳೂರು ಸೆಂಟ್ರಲ್&zwnj;ನಿಂದ ರೈಲು ಸಂಖ್ಯೆ 16622 ಸಾಪ್ತಾಹಿಕವಾಗಿ ಪ್ರತಿ ಶನಿವಾರ ರಾಮೇಶ್ವರಂಗೆ ತೆರಳಿ, ಸೋಮವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಮರಳುತ್ತದೆ. ಸೋಮವಾರದಿಂದ ಶನಿವಾರ ವರೆಗೆ ಸುಮಾರು ಐದು ದಿನಗಳ ಕಾಲ ಜರ್ಮನ್ ತಂತ್ರಜ್ಞಾನದ ಎಲ್&zwnj;ಎಚ್&zwnj;ಬಿ (LHB) ಬೋಗಿಗಳನ್ನು ಒಳಗೊಂಡ ಸಂಪೂರ್ಣ ರೇಕ್ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲೇ ಖಾಲಿಯಾಗಿ ನಿಲ್ಲುತ್ತದೆ. ಈ ರೇಕಲ್ಲಿ 4 ಸಾಮಾನ್ಯ ಬೋಗಿ, 2 ಹವಾನಿಯಂತ್ರಿತ ಟು ಟಯರ್, 6 ತ್ರೀ ಟಯರ್, 6 ಸ್ಲೀಪರ್ ಹಾಗೂ 2 ಎಕಾನಮಿ ಬೋಗಿಗಳು ಸೇರಿವೆ.&lt;/p&gt;&lt;p&gt;ಈ ರೇಕ್ ಅನ್ನು ಉಪಯೋಗಿಸಿ ಮಂಗಳೂರು ಸೆಂಟ್ರಲ್&zwnj;ನಿಂದ ಕೊಂಕಣ ರೈಲ್ವೆ ಮಾರ್ಗವಾಗಿ ವಸಾಯ್ ರೋಡ್ ಮೂಲಕ ಬಾಂದ್ರಾ ಟರ್ಮಿನಸ್ ತನಕ ರೈಲು ಸೇವೆ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೇ ರೇಕ್ ಬಾಂದ್ರಾ ಟರ್ಮಿನಸ್&zwnj;ನಿಂದ ವಾಪಸ್ ವಸಾಯ್ ರೋಡ್ ಮುಖಾಂತರ ಮಂಗಳೂರು ಸೆಂಟ್ರಲ್&zwnj;ಗೆ ಸಂಚರಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ ಎಂದು ವರದಿ ತಿಳಿಸಿವೆ.&lt;/p&gt;&lt;h2&gt;ನಾಲ್ಕು ದಿನಗಳ ರೈಲು ಮಾರ್ಗ ಲಭ್ಯ:&lt;/h2&gt;&lt;p&gt;ಮಂಗಳೂರು ಸೆಂಟ್ರಲ್ ಮತ್ತು ವಸಾಯ್ ರೋಡ್ ನಡುವಿನ ಈ ಹೊಸ ರೈಲು ಸೇವೆಗೆ ಅಗತ್ಯವಾದ ರೈಲು ಮಾರ್ಗ (ರಹದಾರಿ) ಲಭ್ಯವಿರುವುದು ಯೋಜನೆಗೆ ಮತ್ತಷ್ಟು ಬಲ ನೀಡಿದೆ. ಇತ್ತೀಚೆಗೆ ಸೂರತ್-ಮಂಗಳೂರು ಸಾಪ್ತಾಹಿಕ ರೈಲು ಸೇವೆ ಆರಂಭವಾದ ಬಳಿಕ ವಾರದಲ್ಲಿ 4 ದಿನಗಳ ಕಾಲ ಈ ರೈಲು ಮಾರ್ಗದಲ್ಲಿ ಅವಕಾಶವಿರುವುದಾಗಿ ಹೇಳಲಾಗಿದೆ.&lt;/p&gt;&lt;p&gt;ಈ ಲಭ್ಯವಿರುವ ಮಾರ್ಗವನ್ನು ಬಳಸಿಕೊಂಡು, ಪ್ರಸ್ತುತ ರಾಮೇಶ್ವರಂ-ಮಂಗಳೂರು ನಡುವೆ ಸಂಚರಿಸುತ್ತಿರುವ ರೈಲಿನ ರೇಕ್&zwnj;ನ್ನೇ ಮಂಗಳೂರು-ವಸಾಯ್ ರೋಡ್-ಬಾಂದ್ರಾ ಟರ್ಮಿನಸ್ ಸೇವೆಗೆ ಬಳಸಬಹುದಾಗಿದೆ ಎಂದು ಮುಂಬೈ ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ ಸೋಜಾ ತಿಳಿಸಿದ್ದಾರೆ.&lt;/p&gt;&lt;h2&gt;ಸಂಸದರ ಮನವಿ, ಮುಂಬೈ ಭಾಗದಿಂದಲೂ ಒತ್ತಾಯ:&lt;/h2&gt;&lt;p&gt;ಈ ಕುರಿತು ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಕ್ಷೇತ್ರಗಳ ಸಂಸದರು ರೈಲ್ವೆ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಇದರ ಜೊತೆಗೆ ಮುಂಬೈ ಭಾಗದಿಂದಲೂ ಈ ಯೋಜನೆಗೆ ಬೆಂಬಲ ವ್ಯಕ್ತವಾಗಿದ್ದು, ಪಿಯೂಷ್ ಗೋಯಲ್ ಹಾಗೂ ಮಾಜಿ ಸಂಸದ ಗೋಪಾಲ ಶೆಟ್ಟಿ ಅವರು ವಿಶೇಷ ಮುತುವರ್ಜಿ ವಹಿಸಿ ರಾಮೇಶ್ವರಂ-ಮಂಗಳೂರು ರೈಲಿನ ರೇಕ್ ಅನ್ನು ಮಂಗಳೂರು ಸೆಂಟ್ರಲ್-ಬಾಂದ್ರಾ ಟರ್ಮಿನಸ್ ಸೇವೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಕರಾವಳಿ-ಮುಂಬೈ ಪ್ರಯಾಣಿಕರಿಗೆ ಅನುಕೂಲ&lt;/h2&gt;&lt;p&gt;ಈ ಯೋಜನೆ ಅನುಷ್ಠಾನಗೊಂಡರೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾವಿರಾರು ಪ್ರಯಾಣಿಕರಿಗೆ ಮುಂಬೈ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಹೆಚ್ಚುವರಿ ಪ್ರಯಾಣ ಸೌಲಭ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ರೈಲ್ವೆ ಸಚಿವಾಲಯ ಮತ್ತು ಸಂಬಂಧಿತ ಜನಪ್ರತಿನಿಧಿಗಳ ಮುಂದಿನ ಕ್ರಮಗಳತ್ತ ಪ್ರಯಾಣಿಕರು ಕಾತರದಿಂದ ಎದುರು ನೋಡುತ್ತಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mumbai-to-mangaluru-new-direct-train-service-via-konkan-railway-on-the-cards-gdp/articleshow-0i1h85g"/>
        </item>
        <item>
            <title><![CDATA[ಪ್ರೀತಿಯ ಹೆಸರಿನಲ್ಲಿ ಮೋಸ... ಅಪ್ರಾಪ್ತೆಯ ಬದುಕು ದುರಂತ ಅಂತ್ಯ: ಕರಾವಳಿಯನ್ನು ಬೆಚ್ಚಿಬೀಳಿಸಿದ ಡೆತ್ ನೋಟ್ ರಹಸ್ಯ]]></title>
            <link>https://kannada.asianetnews.com/crime/surathkal-minor-girl-su-icide-note-pocso-case-aneesh-poojary-mangaluru-gvd/articleshow-11o3wzl</link>
            <guid isPermaLink="true">https://kannada.asianetnews.com/crime/surathkal-minor-girl-su-icide-note-pocso-case-aneesh-poojary-mangaluru-gvd/articleshow-11o3wzl</guid>
            <pubDate>Wed, 24 Jun 2026 20:36:03 +0530</pubDate>
            <description><![CDATA[&lt;p&gt;Love Cheating Allegation: ಪ್ರೀತಿಯ ಹೆಸರಿನಲ್ಲಿ ನಡೆದಿತ್ತಾ ವಂಚನೆ? ಅಪ್ರಾಪ್ತೆಯ ಡೆತ್ ನೋಟ್&zwnj;ನಲ್ಲಿ ಬಹಿರಂಗವಾದ ಆರೋಪಗಳೇನು? ಕರಾವಳಿಯನ್ನು ಬೆಚ್ಚಿಬೀಳಿಸಿರುವ ಈ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvx2m58z4smjs3kxh49dzan8,imgname-nln-1782313522463.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಜೂ.24): &lt;/strong&gt;ಇಲ್ಲಿನ ಹೊರವಲಯದ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಟಿಪಳ್ಳದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾಳೆ. ಆತ್ಮ*ಹ*ತ್ಯೆಗೆ ಮುನ್ನ ತುಳು ಭಾಷೆಯಲ್ಲಿ ಡೆತ್ ನೋಟ್ ಬರೆದಿಟ್ಟಿರುವ ಬಾಲಕಿ, ತನ್ನ ಸಾವಿಗೆ ಕಾರಣವಾದ ನೋವು ಮತ್ತು ವಂಚನೆಯ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. &quot;ಅಮ್ಮಾ, ನಾನು ತಪ್ಪು ಮಾಡಿದ್ದೇನೆ... ನನ್ನನ್ನು ಕ್ಷಮಿಸು. ಇನ್ನು ಬದುಕಲು ಸಾಧ್ಯವಿಲ್ಲ&quot; ಎಂದು ಬರೆದಿರುವ ಆಕೆ, ತನ್ನನ್ನು ಪ್ರೀತಿಯ ಹೆಸರಿನಲ್ಲಿ ವಂಚಿಸಲಾಗಿದೆ ಎಂದು ಆರೋಪಿಸಿದ್ದಾಳೆ.&lt;/p&gt;&lt;p&gt;ಬಂಟ್ವಾಳ ಮೂಲದ ಅನೀಶ್ ಪೂಜಾರಿ ಎಂಬ ಯುವಕನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿ ನಂತರ ಕೈಬಿಟ್ಟಿದ್ದಾನೆ ಎಂದು ಡೆತ್ ನೋಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಇನ್ನೂ ಆತಂಕಕಾರಿ ಸಂಗತಿ ಎಂದರೆ, &quot;ನನಗೆ ಹಿಂದೂ ಸಂಘಟನೆಯವರು ಸಹಾಯ ಮಾಡಲಿಲ್ಲ. ನನಗೆ ಮೋಸ ಮಾಡಿದವನು ಆರಾಮವಾಗಿದ್ದಾನೆ&quot; ಎಂಬ ಸಾಲುಗಳು ಕೂಡ ಡೆತ್ ನೋಟ್&zwnj;ನಲ್ಲಿ ಕಂಡುಬಂದಿವೆ.&lt;/p&gt;&lt;p&gt;&quot;ನನ್ನ ರೀತಿಯಲ್ಲಿ ಮತ್ತೊಬ್ಬ ಹುಡುಗಿಯ ಜೀವನ ಹಾಳಾಗಬಾರದು&quot; ಎಂಬ ನೋವಿನ ಮಾತುಗಳನ್ನೂ ಬಾಲಕಿ ಬರೆದಿಟ್ಟಿದ್ದಾಳೆ. ಕಾಲೇಜಿನಿಂದ ಮನೆಗೆ ಬಂದ ಬಳಿಕ ಈ ದುರ್ಘಟನೆ ನಡೆದಿದ್ದು, ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಮೃತ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅನೀಶ್ ಪೂಜಾರಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಕರಾವಳಿಯಲ್ಲಿ ತೀವ್ರ ಚರ್ಚೆ&lt;/strong&gt;&lt;/h2&gt;&lt;p&gt;ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ನಡುವೆ ಆರೋಪಿ ಅನೀಶ್ ಪೂಜಾರಿ ಕೆಲ ಹಿಂದೂ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದಾನೆ ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ. ಒಬ್ಬ ಅಪ್ರಾಪ್ತೆಯ ಬದುಕನ್ನು ಕತ್ತಲೆಗೆ ತಳ್ಳಿದ ಈ ಪ್ರಕರಣ ಈಗ ಕರಾವಳಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿಯ ಹೆಸರಿನಲ್ಲಿ ನಡೆದಿತ್ತಾ ವಂಚನೆ? ಅಥವಾ ಇನ್ನೇನಾದರೂ ಕಾರಣ ಇದೆಯಾ? ಡೆತ್ ನೋಟ್&zwnj;ನಲ್ಲಿ ಬರೆದಿರುವ ಆರೋಪಗಳಿಗೆ ತನಿಖೆ ಯಾವ ತಿರುವು ನೀಡಲಿದೆ ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಬೇಕಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/surathkal-minor-girl-su-icide-note-pocso-case-aneesh-poojary-mangaluru-gvd/articleshow-11o3wzl"/>
        </item>
        <item>
            <title><![CDATA[Mangaluru: ಕಾಣೆಯಾದ ಚಿನ್ನು 3 ವಾರದ ಬಳಿಕ ಪತ್ತೆ, ಮನೆ ಮಗು ಹುಡುಕಿ ಕೊಟ್ಟವನಿಗೆ ಮಾಲೀಕನಿಂದ 50ಸಾವಿರ ನಗದು ಬಹುಮಾನ]]></title>
            <link>https://kannada.asianetnews.com/karnataka-districts/mangaluru-news-putturu-man-ganesh-kera-pays-rs50k-cash-reward-to-local-who-found-his-missing-pet-dog-chinnu-gdp/articleshow-2swcw6g</link>
            <guid isPermaLink="true">https://kannada.asianetnews.com/karnataka-districts/mangaluru-news-putturu-man-ganesh-kera-pays-rs50k-cash-reward-to-local-who-found-his-missing-pet-dog-chinnu-gdp/articleshow-2swcw6g</guid>
            <pubDate>Tue, 23 Jun 2026 17:23:13 +0530</pubDate>
            <description><![CDATA[ಪುತ್ತೂರಿನ ಶ್ವಾನ ಪ್ರೇಮಿ ಗಣೇಶ್ ಕೇರಾ ಅವರ ಕಾಣೆಯಾಗಿದ್ದ 'ಚಿನ್ನು' ಎಂಬ ಸಾಕುನಾಯಿ ಮೂರು ವಾರಗಳ ನಂತರ ಪತ್ತೆಯಾಗಿದೆ. ನಾಯಿಯನ್ನು ಹುಡುಕಿಕೊಟ್ಟವರಿಗೆ ₹50,000 ಬಹುಮಾನ ಘೋಷಿಸಿದ್ದ ಗಣೇಶ್, ಅದನ್ನು ಪತ್ತೆಹಚ್ಚಿದ ಸ್ಥಳೀಯ ನಿವಾಸಿ ಪುರಂದರ ಅವರಿಗೆ ವಾಗ್ದಾನದಂತೆ ನಗದು ಬಹುಮಾನವನ್ನು ಹಸ್ತಾಂತರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvt55c5gcdq18f3qeqryp736,imgname-puttur-missing-dog-chinnu-found-1782215520432.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುತ್ತೂರು: &lt;/strong&gt;ಸಾಕುಪ್ರಾಣಿಗಳ ಮೇಲಿನ ಪ್ರೀತಿ ಕೇವಲ ಮಾತಿಗೆ ಸೀಮಿತವಲ್ಲ ಎಂಬುದನ್ನು ಪುತ್ತೂರಿನ ಶ್ವಾನ ಪ್ರೇಮಿಯೊಬ್ಬರು ಸಾಬೀತುಪಡಿಸಿದ್ದಾರೆ. ತಾಲೂಕಿನ ಕಬಕ ಬಳಿಯ ಪೋಲ್ಯ ನಿವಾಸಿ ಗಣೇಶ್ ಕೇರಾ ಅವರ ಮನೆಯಿಂದ ಕಳೆದ ಮೂರು ವಾರಗಳ ಹಿಂದೆ ಕಾಣೆಯಾಗಿದ್ದ &quot;ಚಿನ್ನು&quot; ಎಂಬ ಹೆಸರಿನ ದೇಶಿಯ (ದೇಸಿ) ತಳಿಯ ಸಾಕುನಾಯಿ ಕೊನೆಗೂ ಪತ್ತೆಯಾಗಿದ್ದು, ತಾವು ಘೋಷಣೆ ಮಾಡಿದಂತೆ ಶ್ವಾನವನ್ನು ಹುಡುಕಿಕೊಟ್ಟ ಸ್ಥಳೀಯ ನಿವಾಸಿಗೆ ಭರವಸೆಯಿಟ್ಟಿದ್ದ ಭಾರಿ ಮೊತ್ತದ ನಗದು ಬಹುಮಾನವನ್ನು ಹಸ್ತಾಂತರಿಸಲಾಗಿದೆ.&lt;/p&gt;&lt;h2&gt;ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ 'ಚಿನ್ನು'&lt;/h2&gt;&lt;p&gt;ಗಣೇಶ್ ಕೇರಾ ಅವರು ಪ್ರಾಣಿ ದಯೆ ಹೊಂದಿರುವ ಅಪ್ಪಟ ಶ್ವಾನ ಪ್ರೇಮಿಯಾಗಿದ್ದು, ತಮ್ಮ ಮನೆಯಲ್ಲಿ ವಿವಿಧ ತಳಿಗಳಿಗೆ ಸೇರಿದ ಸುಮಾರು 30 ಕ್ಕೂ ಹೆಚ್ಚು ನಾಯಿಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹುತ್ತಿದ್ದಾರೆ. ಇವುಗಳ ಪೈಕಿ ದೇಸಿ ತಳಿಯ 'ಚಿನ್ನು' ಎನ್ನುವ ಶ್ವಾನ ಇತ್ತೀಚೆಗೆ 'ಫಿಟ್ಸ್' (ಮೂರ್ಛೆ ರೋಗ) ಕಾಯಿಲೆಗೆ ಒಳಗಾಗಿತ್ತು. ಈ ಕಾಯಿಲೆಯ ತೀವ್ರತೆಯಿಂದಾಗಿ ಚಿನ್ನು ತನ್ನ ಕಾಲುಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಓಡಾಡಲು ಕಷ್ಟಪಡುತ್ತಿತ್ತು. ಇಂತಹ ಪರಿಸ್ಥಿತಿಯಲ್ಲೇ ಸುಮಾರು ಮೂರು ವಾರಗಳ ಹಿಂದೆ ಅದು ಮನೆಯ ಆವರಣದಿಂದ ದಿಢೀರನೆ ನಾಪತ್ತೆಯಾಗಿತ್ತು.&lt;/p&gt;&lt;h2&gt;ನಗರದಾದ್ಯಂತ ಬ್ಯಾನರ್, ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ!&lt;/h2&gt;&lt;p&gt;ತಮ್ಮ ನೆಚ್ಚಿನ ಮೂಕಜೀವ ಕಾಣೆಯಾಗಿದ್ದರಿಂದ ತೀವ್ರ ಆತಂಕಕ್ಕೊಳಗಾದ ಗಣೇಶ್ ಕೇರಾ, ಅದನ್ನು ಹುಡುಕಲು ವ್ಯವಸ್ಥಿತ ಮತ್ತು ಸಂಘಟಿತ ಶೋಧ ಕಾರ್ಯವನ್ನು ಆರಂಭಿಸಿದರು. ಚಿನ್ನುವಿನ ಫೋಟೋ ಮತ್ತು ವಿವರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಾರ್ವಜನಿಕರ ಸಹಾಯ ಕೋರಿದರು. ಅಷ್ಟಕ್ಕೇ ನಿಲ್ಲದೆ, ಪುತ್ತೂರು ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ವಿವಿಧ ಭಾಗಗಳಲ್ಲಿ ನಾಯಿಯ ಮಾಹಿತಿ ಇರುವ ದೊಡ್ಡ ದೊಡ್ಡ ಬ್ಯಾನರ್&zwnj;ಗಳನ್ನು ಅಳವಡಿಸಿದರು.&lt;/p&gt;&lt;p&gt;ಯಾರಾದರೂ ಈ ನಾಯಿಯನ್ನು ಪತ್ತೆಹಚ್ಚಿ ತಂದುಕೊಟ್ಟರೆ ಅಥವಾ ಅದರ ಇರುವಿಕೆಯ ಬಗ್ಗೆ ನಿಖರ ಸುಳಿವು ನೀಡಿದರೆ ₹50,000 ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಸಾಕುನಾಯಿಗಾಗಿ ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ಘೋಷಿಸಿದ್ದು ಜಿಲ್ಲಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.&lt;/p&gt;&lt;h2&gt;ಬಂಪರ್ ಬಹುಮಾನ ಗೆದ್ದ ಪುರಂದರ!&lt;/h2&gt;&lt;p&gt;ಕಳೆದ ಮೂರು ವಾರಗಳಿಂದ ಎಲ್ಲೂ ಸಿಗದೆ ನಿರಾಸೆ ಮೂಡಿಸಿದ್ದ ಚಿನ್ನು, ಕೊನೆಗೂ ಪೋಲ್ಯ ಪ್ರದೇಶದ ನಿವಾಸಿಯಾದ ಪುರಂದರ ಅವರ ಕಣ್ಣಿಗೆ ಬಿದ್ದಿದೆ. ಬ್ಯಾನರ್ ಹಾಗೂ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿದ್ದ ಪುರಂದರ ಅವರು ತಕ್ಷಣವೇ ಆ ನಾಯಿಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು, ಮಾಲೀಕ ಗಣೇಶ್ ಕೇರಾ ಅವರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಚಿನ್ನು ಮರಳಿ ಸಿಕ್ಕ ತಕ್ಷಣ ಗಣೇಶ್ ಕೇರಾ ಅವರ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ತಮ್ಮ ಮಾತಿಗೆ ಬದ್ಧರಾದ ಗಣೇಶ್, ನಾಯಿಯನ್ನು ಸುರಕ್ಷಿತವಾಗಿ ತಲುಪಿಸಿದ ಪುರಂದರ ಅವರಿಗೆ ತಕ್ಷಣವೇ ಘೋಷಿತ ಬಹುಮಾನದ ಮೊತ್ತ ₹50,000 ನಗದನ್ನು ಹಸ್ತಾಂತರಿಸಿ ಕೃತಜ್ಞತೆ ಸಲ್ಲಿಸಿದರು.&lt;/p&gt;&lt;p&gt;ತಮ್ಮ ಸಂತೋಷವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಗಣೇಶ್ ಕೇರಾ, &quot;ನಮ್ಮ ಪ್ರೀತಿಯ ಚಿನ್ನು ಸುರಕ್ಷಿತವಾಗಿ ಮನೆಗೆ ಮರಳಿದ್ದಾನೆ. ಆತನನ್ನು ಪತ್ತೆಹಚ್ಚಿ ತಂದುಕೊಟ್ಟ ಪೋಲ್ಯದ ಪುರಂದರ ಅವರಿಗೆ ಭರವಸೆ ನೀಡಿದಂತೆ 50 ಸಾವಿರ ರೂಪಾಯಿ ಬಹುಮಾನವನ್ನು ನೀಡಿದ್ದೇವೆ. ಪ್ರಾರ್ಥಿಸಿದ ಮತ್ತು ಹುಡುಕಾಟಕ್ಕೆ ನೆರವಾದ ಎಲ್ಲರಿಗೂ ಧನ್ಯವಾದಗಳು&quot; ಎಂದು ಬರೆದುಕೊಂಡಿದ್ದಾರೆ. ಮೂಕಜೀವದ ಮೇಲಿನ ಈ ಅಪಾರ ಕಾಳಜಿ ಹಾಗೂ ಕೊಟ್ಟ ಮಾತಿನಂತೆ ಭಾರಿ ಬಹುಮಾನ ನೀಡಿದ ಗಣೇಶ್ ಕೇರಾ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-news-putturu-man-ganesh-kera-pays-rs50k-cash-reward-to-local-who-found-his-missing-pet-dog-chinnu-gdp/articleshow-2swcw6g"/>
        </item>
        <item>
            <title><![CDATA[UT Khader: ಪ್ರವಾಸೋದ್ಯಮ ರಾಯಭಾರಿಯಾಗಿ ರಿಷಬ್ ಶೆಟ್ಟಿ ನೇಮಕಕ್ಕೆ ಕರಾವಳಿ  ಕಾಂಗ್ರೆಸ್ಸಿಗರ ವಿರೋಧ; ಸಚಿವ ಖಾದರ್ ಖಡಕ್ ತಿರುಗೇಟು!]]></title>
            <link>https://kannada.asianetnews.com/gallery/politics/health-minister-ut-khader-reacts-rishab-shetty-s-ambassador-to-coastal-tourism-at-mangaluru-66gbcwk</link>
            <guid isPermaLink="true">https://kannada.asianetnews.com/gallery/politics/health-minister-ut-khader-reacts-rishab-shetty-s-ambassador-to-coastal-tourism-at-mangaluru-66gbcwk</guid>
            <pubDate>Tue, 23 Jun 2026 10:54:44 +0530</pubDate>
            <description><![CDATA[&lt;p&gt;ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರನ್ನು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಕಾಂಗ್ರೆಸ್&zwnj;ನಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ. ಖಾದರ್, ಬಿಡದಿ ಟೌನ್&zwnj;ಶಿಪ್ ವಿವಾದ ಮತ್ತು ಮುಸ್ಲಿಂ ಸಚಿವ ಸ್ಥಾನದ ಬೇಡಿಕೆ ಕುರಿತು ಏನು ಹೇಳಿದ್ರು?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvse8evh17qp44nhqdsnkx9m,imgname----------------------61--1782191504240.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರನ್ನು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಕಾಂಗ್ರೆಸ್&zwnj;ನಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ. ಖಾದರ್, ಬಿಡದಿ ಟೌನ್&zwnj;ಶಿಪ್ ವಿವಾದ ಮತ್ತು ಮುಸ್ಲಿಂ ಸಚಿವ ಸ್ಥಾನದ ಬೇಡಿಕೆ ಕುರಿತು ಏನು ಹೇಳಿದ್ರು?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮದ ರಾಯಭಾರಿಯಾಗಿ ಕಾಂತಾರಾ ಖ್ಯಾತಿಯ ನಟ, ರಿಷಬ್ ಶೆಟ್ಟಿ(Rishab shetty) ಅವರನ್ನು ನೇಮಕ ಮಾಡುವ ಸರ್ಕಾರದ ತೀರ್ಮಾನದ ಕುರಿತು ಇದೀಗ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;ರಿಷಬ್ ರಾಯಭಾರಿಯಾಗಿ ಆಯ್ಕೆ ಮಾಡಿರುವ ವಿಚಾರವಾಗಿ ಕರಾವಳಿ ಕಾಂಗ್ರೆಸ್ಸಿಗರು ಸಾಮಾಜಿ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಈ ವಿಚಾರವಾಗಿ ಆರೋಗ್ಯ ಸಚಿವ ಯುಟಿ ಖಾದರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬರೆಯೋರಿಗೆಲ್ಲ ಉತ್ತರ ಕೊಡೋಕೆ ಆಗುತ್ತಾ? ಕರಾವಳಿ ಪ್ರವಾಸೋದ್ಯಮ ರಾಯಭಾರಿ ಯಾರು ಆಗಬೇಕು ಅನ್ನೋದು ಸಿಎಂ ನೋಡಿಕೊಳ್ಳುತ್ತಾರೆ. ಬೆಂಗಳೂರಿನ ಹೊರಗೆ ಸಂಪುಟ ಸಭೆ ನಡೆದ್ರೆ ಅದು ಮಂಗಳೂರಿನಲ್ಲಿ ಆಗ್ತದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲದಕ್ಕೂ ವಿರೋಧ ಆಗ್ತದೆ ಅದಕ್ಕೆ ಉತ್ತರ ಕೊಡೋಕೆ ಆಗೋಲ್ಲ ಎಂದರು.&lt;/p&gt;&lt;img&gt;&lt;p&gt;ಕರಾವಳಿ ಪ್ರವಾಸೋದ್ಯಮ ರಾಯಭಾರಿ(Coastal Tourism Ambassador) ಯಾರು ಆಗಬೇಕು ಅನ್ನೋದು ಸಿಎಂ ನೋಡಿಕೊಳ್ಳುತ್ತಾರೆ. ಬೆಂಗಳೂರಿನ ಹೊರಗೆ ಸಂಪುಟ ಸಭೆ ನಡೆದ್ರೆ ಅದು ಮಂಗಳೂರಿನಲ್ಲಿ ಆಗ್ತದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲದಕ್ಕೂ ವಿರೋಧ ಆಗ್ತದೆ ಅದಕ್ಕೆ ಉತ್ತರ ಕೊಡೋಕೆ ಆಗೋಲ್ಲ ಎಂದರು.&lt;/p&gt;&lt;img&gt;&lt;p&gt;ಇನ್ನು ಬಿಡದಿ ಟೌನ್&zwnj;ಶಿಪ್(Bidadi township) ವಿಚಾರದಲ್ಲಿ ಸಿಎಂ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ವಾಕ್ಸರ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅದೆಲ್ಲ ಮಾರ್ಗ ಮಧ್ಯೆ ಚರ್ಚೆ ಮಾಡೋಕೆ ಆಗುತ್ತಾ? ರಾಜ್ಯದ ಜನರ ಬಗ್ಗೆ ಚರ್ಚೆ ಮಾಡೋಕೆ ಅಂತಾನೆ ವಿಧಾನಸೌಧ ಇದೆ. ಅಲ್ಲಿ ಚರ್ಚೆ ಆಗಬೇಕು. ಮೊದಲು ಈ ಬಿಡದಿ ಟೌನ್&zwnj;ಶಿಪ್ ನೋಟಿಫಿಕೇಶನ್ ಮಾಡಿದ್ದು ಯಾರು ಅನ್ನೋದು ಜನರಿಗೆ ತಿಳಿಸಲಿ. ಅದು ಮಾಡಿದ್ದೇ ಇವರು(ಕುಮಾರಸ್ವಾಮಿ), ಆ ಸತ್ಯ ಜನರಿಗೆ ಗೊತ್ತಾಗಲಿ ಎಂದರು.&lt;/p&gt;&lt;img&gt;&lt;p&gt;ಕಾಂಗ್ರೆಸ್ ಪಕ್ಷ ಯಾವತ್ತೂ ರೈತರ ಪರವಾಗಿದೆ. ಈ ದೇಶದ ರೈತರು ವಿಶ್ವಕ್ಕೆ ಮಾದರಿ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದ್ದು ನೆಹರೂ ಅವರ 'ಹಸಿರು ಕ್ರಾಂತಿ' ಯೋಜನೆ. ಈ ದೇಶದ ರೈತರೊಂದಿಗೆ ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಇದೆ, ಮುಂದೆಯೂ ರೈತರ ಬಗ್ಗೆಯೇ ಆಲೋಚನೆ ಮಾಡುತ್ತೆ. ರೈತರಿಗೆ ತೊಂದರೆ ಆಗುವ ಯಾವ ಯೋಜನೆಯೂ ಸರ್ಕಾರ ಮಾಡಲ್ಲ ಅಂತಾ ಸಿಎಂ ಕೂಡ ಹೇಳಿದ್ದಾರೆ. ಬಿಡದಿ ಟೌನ್&zwnj;ಶಿಪ್ ರೈತರಿಗೆ, ಅವರ ಕುಟುಂಬಕ್ಕೆ ಈ ಯೋಜನೆ ಸಹಾಯವಾಗಲಿದೆ. ಆದರೆ ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ಬಿಟ್ಟು ಹೊರಗೆ ಬನ್ನಿ ಎಂದು ತಿರುಗೇಟು ನೀಡಿದರು.&lt;/p&gt;&lt;img&gt;&lt;p&gt;ಇನ್ನು ಮುಸ್ಲಿಮರಿಗೆ ಸಚಿವ ಸ್ಥಾನ ನೀಡಲು ಮಂಗಳೂರಿನಲ್ಲಿ ಮುಸ್ಲಿಂ ನಾಯಕರ ಸುದ್ಧಿಗೋಷ್ಠಿ ನಡೆಸಿದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಸಮಾನ ಮನಸ್ಕ ಮುಸ್ಲಿಂ ಮುಖಂಡರ ವಿರುದ್ಧವೇ ಸಚಿವರು ಗರಂ ಆದರು. ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್&zwnj;ಗಾಗಿ ಕೆಲಸ ಮಾಡಿದವರು ಪಕ್ಷದ ಬಗ್ಗೆ ಮಾತನಾಡೋದು ಬೇಡ. ಪಕ್ಷಕ್ಕೆ ವೋಟು ಹಾಕಿದವರು, ಪಕ್ಷಕ್ಕೆ ದುಡಿಯುವವರು ಮಾತ್ರ ಪಕ್ಷದ ಬಗ್ಗೆ ಮಾತನಾಡಲಿ. ಬೇರೆ ಬೇರೆ ಹೆಸರು ಇಟ್ಕೊಂಡು, ಸಮಾನ ಮನಸ್ಕರು ಅಂತಾ ಹೇಳಿಕೊಂಡು ಬರೋದು ಬೇಡ. ಕಾಂಗ್ರೆಸ್&zwnj;ಗೆ ಇವರು ಬುದ್ಧಿವಾದ ಹೇಳುವ ಅವಶ್ಯಕತೆ ಇಲ್ಲ. ಇವರ ಬುದ್ಧಿವಾದ ಪಕ್ಷ ತಗೊಳ್ಳಲ್ಲ. ಪಕ್ಷವನ್ನು ವಿರೋಧಿಸುವವರೆ ಇವತ್ತು ಕೂತು ಪಕ್ಷಕ್ಕೆ ನಿರ್ದೇಶನ ಕೋಡೋ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.&amp;nbsp;&lt;/p&gt;&lt;p&gt;ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಅಪಾರ ಕೊಡುಗೆ ನೀಡಿದೆ. ಕೇವಲ ಸಚಿವ ಸ್ಥಾನ ಮಾತ್ರವಲ್ಲದೇ ಎಲ್ಲವನ್ನೂ ಅಲ್ಪಸಂಖ್ಯಾತರಿಗೆ ಕೊಟ್ಟಿದೆ. ಜಮೀರ್ ಅಹ್ಮದ್, ನಾವು ಹಾಗೂ ಎಲ್ಲ ಮುಸ್ಲಿಮರು ಒಟ್ಟಿಗೆ ಇದ್ದರೆ ಪಕ್ಷದ ಅಧ್ಯಕ್ಷರು, ಸಿಎಂ ಎಲ್ಲರೂ ಸೇರಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಡ್ತಾರೆ. ಆದರೆ ರಾಜಕೀಯವಾಗಿ ಇದನ್ನು ಇನ್ನಷ್ಟು ಬಿಗಡಾಯಿಸಲು ಯತ್ನಿಸುವವರು, ಮತ ಹಾಕದವರ ಮಾತು ಕಾಂಗ್ರೆಸ್ ಪಕ್ಷ ಗಣನೆಗೆ ತೆಗೆದುಕೊಳ್ಳಲ್ಲ ಎಂದರು.&lt;/p&gt;]]></content:encoded>
            <category>dakshina-kannada</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/politics/health-minister-ut-khader-reacts-rishab-shetty-s-ambassador-to-coastal-tourism-at-mangaluru-66gbcwk"/>
        </item>
        <item>
            <title><![CDATA[ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶೇಷ ಪೂಜೆ ಸಲ್ಲಿಕೆ!]]></title>
            <link>https://kannada.asianetnews.com/karnataka-districts/bjp-karnataka-chief-by-vijayendra-dharmasthala-visit-sparks-political-debate/articleshow-c7qd7an</link>
            <guid isPermaLink="true">https://kannada.asianetnews.com/karnataka-districts/bjp-karnataka-chief-by-vijayendra-dharmasthala-visit-sparks-political-debate/articleshow-c7qd7an</guid>
            <pubDate>Fri, 26 Jun 2026 20:47:33 +0530</pubDate>
            <description><![CDATA[&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದೆಹಲಿ ಹೈಕಮಾಂಡ್ ಭೇಟಿಯ ನಂತರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಾಡಿನಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ ಅವರು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw0ye314gvr137zw13shf02y,imgname-by-vijayendra-seeks-blessings-at-dharmasthala-1782443346980.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧರ್ಮಸ್ಥಳ (ಜೂ.26)&lt;/strong&gt; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಶ್ರೀ ಕ್ಷೇತ್ರ ಧರ್ಮಸ್ಥಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ. ಇದೇ ವೇಳೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.&amp;nbsp;&lt;/p&gt;&lt;p&gt;ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾದ ವಿಜಯೇಂದ್ರ ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ವಿಜಯೇಂದ್ರ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಯಶ್ ಪಾಲ್ ಸುವರ್ಣ ಭಾಗಿಯಾಗಿದ್ದಾರೆ.&lt;/p&gt;&lt;h2&gt;ಆಣೆ ಪ್ರಮಾಣ ಕೈಬಿಟ್ಟು ವಿಜಯೇಂದ್ರ ಧರ್ಮಸ್ಥಳ ಭೇಟಿ&lt;/h2&gt;&lt;p&gt;ಬೆಳಗ್ಗೆ 8 ಗಂಟೆಗೆ ಧರ್ಮಸ್ಥಳಕ್ಕೆ ಆಗಮಿಸಿದ ವಿಜಯೇಂದ್ರ ಮಂಜುನಾಥನ ದರ್ಶನ ಪಡೆದಿದ್ದಾರೆ. &amp;nbsp;ಈ ಬಗ್ಗೆ ಟ್ವೀಟ್ ಪೋಸ್ಟ್ ಹಂಚಿಕೊಂಡಿರುವ ಅವರು, ನಾಡಿನ ಸುಪ್ರಸಿದ್ಧ ಪುಣ್ಯಕ್ಷೇತ್ರ, ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಇಂದು ಶ್ರೀ ಮಂಜುನಾಥ ಸ್ವಾಮಿ ಹಾಗೂ ಪರಿವಾರ ದೇವರುಗಳ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಬರಗಾಲದ ಕರಿಛಾಯೆ ಆವರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ನಾಡಿನಲ್ಲಿ ಉತ್ತಮ ಮಳೆಯಾಗಲಿ, ಬೆಳೆ ಬೆಳೆದು ಸಮೃದ್ಧಿಯೊಂದಿಗೆ ಅನ್ನದಾತ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು. ನಂತರ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು' ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಇನ್ನು ವಿಪಕ್ಷ ನಾಯಕ ಆರ್. ಅಶೋಕ್ ರಾಜಕೀಯವಾಗಿ ಧರ್ಮಸ್ಥಳ ವಿಚಾರ ಎಳೆದು ತರುವುದು ಬೇಡ ಎಂದು ಸಲಹೆ ನೀಡಿದ್ದರು. ಕೆಲವರು ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ, ವಂಚನೆ ಬಗೆದಿರುವುದು ನಿಜ. ಯಾವ ಶಾಸಕ ದ್ರೋಹ ಮಾಡಿದ್ದಾರೆ ಗೊತ್ತಿಲ್ಲ, ಆ ಕಾರಣಕ್ಕೆ ಅಧ್ಯಕ್ಷರ ಜೊತೆಗೆ ಮಾತನಾಡುತ್ತೇನೆ. 2019 ರಲ್ಲಿ ಕಾಂಗ್ರೆಸ್ &zwnj;ಶಾಸಕರು ಮುಂಬೈಗೆ ಹೋದಾಗ ಇದೇ ಕಾಂಗ್ರೆಸ್ ನಾಯಕರು ಕುದುರೆ ವ್ಯಾಪಾರ ಎಂದಿದ್ದರು. ನಮ್ಮ ಜೊತೆಗೆ ಕಾಂಗ್ರೆಸ್ ಶಾಸಕರು ಬಂದಾಗ ಆಪರೇಷನ್ ಕಮಲ ಎಂದು ಹೇಳಿದ್ದರು. ಆಗ ನಮಗೆ ಬುದ್ಧಿ ಹೇಳ್ತಿರಾ? ಈಗ ನೀವು ಮಾಡಿದ್ದೇನು, ನಾಚಿಕೆ ಆಗಲ್ವಾ? ಎಂದು ಆರ್ ಅಶೋಕ್ ಪ್ರಶ್ನಿಸಿದ್ದರು.&lt;/p&gt;]]></content:encoded>
            <category>dakshina-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/bjp-karnataka-chief-by-vijayendra-dharmasthala-visit-sparks-political-debate/articleshow-c7qd7an"/>
        </item>
        <item>
            <title><![CDATA[ಧರ್ಮಸ್ಥಳ ಪ್ರಕರಣ, ಬುರುಡೆ ಗ್ಯಾಂಗ್‌ನಲ್ಲಿದ್ದ ಸೌಜನ್ಯ ಮಾವ ವಿಠಲ ಗೌಡ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ]]></title>
            <link>https://kannada.asianetnews.com/karnataka-districts/dharmasthala-case-arrest-warrant-issued-against-vittal-gowda-over-contempt-of-court/articleshow-dkgqioe</link>
            <guid isPermaLink="true">https://kannada.asianetnews.com/karnataka-districts/dharmasthala-case-arrest-warrant-issued-against-vittal-gowda-over-contempt-of-court/articleshow-dkgqioe</guid>
            <pubDate>Sat, 27 Jun 2026 14:44:15 +0530</pubDate>
            <description><![CDATA[&lt;p&gt;ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವಹೇಳನ ಹೇಳಿಕೆ ಹಿನ್ನಲೆಯಲ್ಲಿ ಸೌಜನ್ಯ ಮಾವ ವಿಠಲ ಗೌಡಗೆ ಬಂಧನ ವಾರೆಂಟ್ ಜಾರಿಯಾಗಿದೆ.ಆದರೆ ವಿಠಲ ಗೌಡ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw45q55081g7zbgvyhpmmqcx,imgname-vittal-gowda-dharmasthala-1782551647391.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧರ್ಮಸ್ಥಳ (ಜೂ.27)&lt;/strong&gt; ರಾಜ್ಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ ಧರ್ಮಸ್ಥಳ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಯಾಗಿದೆ. ಆರಂಭದಲ್ಲಿ ಧರ್ಮಸ್ಥಳ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿರುದ್ದ ಗಂಭೀರ ಆರೋಪ ಮಾಡಿದ್ದ ಬುರುಡೆ ಗ್ಯಾಂಗ್ ತನಿಖೆ ನಡೆಸುತ್ತಿದ್ದಂತೆ ಅಸಲಿಯತ್ತು ಬಹಿರಂಗವಾಗಿ ಚದುರಿಕೊಂಡಿದೆ. ಇದೇ ಇತ್ತ ಧರ್ಮಸ್ಥಳ ವಿರುದ್ದ ಕಳೆದ ಒಂದೊಂದು ದಶಕದಿಂದ ಗಂಭೀರ ಆರೋಪ ಮಾಡುತ್ತಿರುವ ಸೌಜನ್ಯ ಮಾವ ವಿಠಲ ಗೌಡಗೆ ನ್ಯಾಯಲಯ ಬಂಧನ ವಾರೆಂಟ್ ಜಾರಿ ಮಾಡಿದೆ.&lt;/p&gt;&lt;h2&gt;ನ್ಯಾಯಾಂಗ ನಿಂದನೆ ಕೇಸ್&zwnj;ನಲ್ಲಿ ಬಂಧನ ವಾರೆಂಟ್&lt;/h2&gt;&lt;p&gt;ಬೆಂಗಳೂರು VI ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ವಾರೆಂಟ್ ಜಾರಿ ಮಾಡಿದೆ. ಧರ್ಮಸ್ಥಳ ಹಾಗೂ ವಿರೇಂದ್ರ ಹೆಗ್ಗಡೆ ವಿರುದ್ದ ಅವಹೇಳನ ಮಾಡದಂತೆ ನ್ಯಾಲಯ ತಡೆಯಾಜ್ಞೆ ನೀಡಿತ್ತು. ಆದೇಶ ವಿಠಲ ಗೌಡ ಆದೇಶ ಉಲ್ಲಂಘಿಸಿ ಹೇಳಿಕೆ ನೀಡಿದ್ದರು. ಪರಿಣಾಮ ಇದೀಗ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.&lt;/p&gt;&lt;h2&gt;ವಿಠಲ ಗೌಡ ಪರಾರಿ, ಎಲ್ಲಾ ಕಡೆ ಹುಡುಕಾಟ&lt;/h2&gt;&lt;p&gt;ಬೆಂಗಳೂರು ನ್ಯಾಯಲ ಹೊರಡಿಸಿದ ಬಂಧನ ವಾರೆಂಟ್ ಹಿಡಿದು ಬೆಳ್ತಂಗಡಿ ತಾಲೂಕಿಗೆ ಆಗಮಿಸಿದ ಕೋರ್ಟ್ ಅಧಿಕಾರಿಗಳು ವಿಠಲಗೌಡನಿಗಾಗಿ ಹುಡುಕಾಡಿದ್ದಾರೆ. ಆದರೆ ಅರೆಸ್ಟ್ ವಾರೆಂಟ್ ಕುರಿತು ಅರಿತಿದ್ದ ವಿಠಲಗೌಡ ಸದ್ಯ ಪರಾರಿಯಾಗಿದ್ದಾನೆ. ಹಗದಾಗಿ ಕೋರ್ಟ್ ಅಧಿಕಾರಿಗಳು ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.&lt;/p&gt;&lt;p&gt;ವಿಠಲ ಗೌಡ ಮನೆ, ಸಹೋದರಿ ಕುಸುಮಾವತಿ ಮನೆ ಹಾಗೂ ಹೋರಾಟಗಾರ ಮಹೇಶ್ ತಿಮರೋಡಿ ನಿವಾಸದಲ್ಲಿ ಹುಡುಕಾಟ ನಡೆಸಲಾಗಿದೆ. ಜೂ.8ರಂದು ಬಂಧನ ವಾರೆಂಟ್ ಜಾರಿಯಾಗಿದ್ದು, ಜೂ.30ರೊಳಗೆ ಕೋರ್ಟ್ ಗೆ ಹಾಜರುಪಡಿಸಲು ಸೂಚನೆ ನೀಡಿದೆ. ಆದರೆ ವಿಠಲ ಗೌಡ ಸುಳಿವು ಪತ್ತೆಯಾಗದ ಕಾರಣ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.&lt;/p&gt;&lt;h2&gt;ಸ್ಫೋಟಕ ಆರೋಪ ಮಾಡಿದ್ದ ಚಿನ್ನಯ್ಯ&lt;/h2&gt;&lt;p&gt;ಧರ್ಮಸ್ಥಳ ಬುರುಡೆ ಪ್ರಕರಣದ ಆರಂಭ ಚಿನ್ನಯ್ಯನ ಸ್ಫೋಟಕ ಆರೋಪದಿಂದ ಆರಂಭಗೊಂಡಿತ್ತು. ಧರ್ಮಸ್ಥಳಲ್ಲಿ ನೂರಾರು ಮಹಿಳೆಯರ ಶವಗಳನ್ನು ಹೂತಿದ್ದೇನೆ ಎಂಬ ಆರೋಪದಿಂದ ಎಸ್&zwnj;ಐಟಿ ರಚನೆಯಾಗಿತ್ತು. ಚಿನ್ನಯ್ಯ ಹೇಳಿದ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳು ಜೆಸಿಬಿ ಸೇರಿದಂತೆ ಹಲವು ಕಾರ್ಮಿಕರ ನೆರವಿನಿಂದ ಉತ್ಖನನ ಕಾರ್ಯಾಚರಣೆ ನಡೆಸಿತ್ತು. ಭಾರಿ ಮಳೆಯಲ್ಲಿ ಉತ್ಖನನ ನಡೆಸಲಾಗಿತ್ತು. ಆದರೆ ಚಿನ್ನಯ್ಯ ಆರೋಪಿಸಿದಂತೆ ಕಳೇಬರಹ ಸಿಗಲಿಲ್ಲ. ಬಳಿಕ ಎಸ್&zwnj;ಐಟಿ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಅಸಲಿ ವಿಚಾರಗಳು ಹೊರಬಂದಿತ್ತು. ಚಿನ್ನಯ್ಯನ ಅರೆಸ್ಟ್ ಮಾಡಿದ ಪೊಲೀಸರು ತನಿಖೆ ನಡೆಸಿದ್ದರು. ಚಿನ್ನಯ್ಯ ತನಗೆ ಹಣದ ಆಮಿಷ ನೀಡಿ ಈ ರೀತಿ ಹೇಳಿಕೆ ಕೊಡಿಸಲಾಗಿದೆ. ತನಗೆ ಜೀವಬೆದರಿಕೆ ಇದೆ ಎಂದು ಎಸ್ಐಟಿ ಮುಂದೆ ಹೇಳಿಕೊಂಡಿದ್ದ. ಇತ್ತ ಬುರುಡೆ ಗ್ಯಾಂಗ್&zwnj;ನಲ್ಲಿ ಕಾಣಿಸಿಕೊಂಡ ಸುಜಾತಾ ಭಟ್ ತನ್ನ ಮಗಳು ಧರ್ಮಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆಯ ಶವ ಕೂಡ ಸಿಕ್ಕಿಲ್ಲ ಎಂದು ಆರೋಪಿಸಿದ್ದ ಸುಜಾತ್ ಭಟ್ ಕೊನೆಗೆ ತಾನು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಂಡಿದ್ದರು. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸದ್ಯ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಗಡೀಪಾರಿನ ಆದೇಶದ ಹಿನ್ನಲೆಯಲ್ಲಿ ತಲೆಮರೆಸಿಕೊಂಡಿದ್ದಾರೆ. ಇದೀಗ ವಿಠಲ ಗೌಡ ಕೂಡ ಬಂಧನ ವಾರೆಂಟ್&zwnj;ನಿಂದ ಪರಾರಿಯಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dakshina-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/dharmasthala-case-arrest-warrant-issued-against-vittal-gowda-over-contempt-of-court/articleshow-dkgqioe"/>
        </item>
        <item>
            <title><![CDATA[ಪುತ್ತೂರಿನ ಕೂಲಿ ಕಾರ್ಮಿಕ ಪುರಂದರ್‌ಗೆ ಅದೃಷ್ಟ ತಂದು ಕೊಟ್ಟ ದೇಸಿ ನಾಯಿ ‘ಚಿನ್ನು’]]></title>
            <link>https://kannada.asianetnews.com/karnataka-districts/dakshina-kannada-rs-50-thousand-reward-for-laborer-who-found-missing-desi-dog-chinnu-in-puttur-mrq/articleshow-ga5g6ft</link>
            <guid isPermaLink="true">https://kannada.asianetnews.com/karnataka-districts/dakshina-kannada-rs-50-thousand-reward-for-laborer-who-found-missing-desi-dog-chinnu-in-puttur-mrq/articleshow-ga5g6ft</guid>
            <pubDate>Wed, 24 Jun 2026 07:49:04 +0530</pubDate>
            <description><![CDATA[&lt;p&gt;ಪುತ್ತೂರಿನಲ್ಲಿ ಕಾಣೆಯಾಗಿದ್ದ 'ಚಿನ್ನು' ಎಂಬ ದೇಸಿ ನಾಯಿಯನ್ನು ಪತ್ತೆ ಹಚ್ಚಿಕೊಟ್ಟ ಕೂಲಿ ಕಾರ್ಮಿಕ ಪುರಂದರ ಅವರಿಗೆ, ಶ್ವಾನಪ್ರೇಮಿ ಮಾಲೀಕ ಗಣೇಶ್ ಭಟ್ ಕೇರ ಅವರು 50 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ. ಫಿಟ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ನಾಯಿಯ ಹುಡುಕಾಟಕ್ಕಾಗಿ ಮಾಲೀಕರು ಬಹುಮಾನ ಘೋಷಿಸಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvvphs8xg9rwbknjbwhhhmqj,imgname-puttur-dog-1782267307293.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: ನಾಪತ್ತೆಯಾದ ದೇಸಿ ತಳಿಯ ನಾಯಿಯನ್ನು ಪತ್ತೆ ಮಾಡಿ ತಂದುಕೊಟ್ಟ ವ್ಯಕ್ತಿಗೆ ಶ್ವಾನಪ್ರೇಮಿ ಮಾಲೀಕರೊಬ್ಬರು ಸೋಮವಾರ 50 ಸಾವಿರ ರು. ಬಹುಮಾನ ನೀಡಿದ್ದಾರೆ.&lt;/p&gt;&lt;p&gt;ಕಳೆದ ಕೆಲ ದಿನಗಳ ಹಿಂದೆ ಫಿಟ್ಸ್ ಸಮಸ್ಯೆಯಿಂದ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ಈ ದೇಸಿ ನಾಯಿ &lsquo;ಚಿನ್ನು&rsquo; ತಪ್ಪಿಸಿಕೊಂಡಿತ್ತು. ಇದನ್ನು ಪತ್ತೆಮಾಡಿ ತಂದುಕೊಟ್ಟವರಿಗೆ 50 ಸಾವಿರ ರು. ಬಹುಮಾನ ಕೊಡುವುದಾಗಿ ನಾಯಿಯ ಮಾಲೀಕ ಗಣೇಶ್ ಭಟ್&zwnj; ಕೇರ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.&lt;/p&gt;&lt;h2&gt;&lt;strong&gt;ಮನೆ ಸೇರಿದ ಚಿನ್ನು&lt;/strong&gt;&lt;/h2&gt;&lt;p&gt;ನಾಪತ್ತೆಯಾದ ಈ ನಾಯಿಯನ್ನು ಪೋಳ್ಯ ನಿವಾಸಿ ಕೂಲಿ ಕೆಲಸ ಮಾಡುತ್ತಿರುವ ಪುರಂದರ ಎಂಬವರು ಪತ್ತೆ ಮಾಡಿ ತಂದುಕೊಟ್ಟಿದ್ದರು. ಕೊಟ್ಟ ಮಾತಿನಂತೆ ಕೂಲಿ ಕಾರ್ಮಿಕರಾದ ಪುರಂದರ ಅವರಿಗೆ 50 ಸಾವಿರ ಚೆಕ್ ನೀಡಿದ ಗಣೇಶ್ ಭಟ್ ಕೇರ ಅವರು ಚಿನ್ನು ನಮ್ಮ ಮನೆ ಸೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಶ್ವಾನ ಪ್ರೇಮಿ ಗಣೇಶ್ ಕೇರ ಪೋಳ್ಯದ ತಮ್ಮ ಮನೆಯಲ್ಲಿ ವಿವಿಧ ತಳಿಯ 30 ನಾಯಿಗಳನ್ನು ಸಾಕುತ್ತಿದ್ದಾರೆ. ಇದರಲ್ಲಿ ಎರಡು ಗಂಡು ಹಾಗೂ 28 ಹೆಣ್ಣು ನಾಯಿಗಳು ಇವೆ. ಇದರಲ್ಲಿ ಕಾಲು ಸ್ವಾಧೀನ ಕಳೆದುಕೊಂಡ ಚಿನ್ನು ನಾಯಿಯೂ ಒಂದಾಗಿತ್ತು. ಬಹಳ ಮುದ್ದಿನಿಂದ ಈ ನಾಯಿಗಳನ್ನು ಸಾಕುತ್ತಿರುವ ಅವರಿಗೆ ಚಿನ್ನುವನ್ನು ಕಳೆದುಕೊಂಡಿರುವುದು ಅಪಾರ ನೋವು ಉಂಟಾಗಿತ್ತು. ಇದರಿಂದ ನಾಯಿಯನ್ನು ಪತ್ತೆ ಮಾಡಿಕೊಟ್ಟವರು ಅಥವಾ ನಾಯಿಯ ಬಗ್ಗೆ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದ್ದರು.&amp;nbsp;&lt;/p&gt;&lt;h3&gt;&lt;strong&gt;ಪೋಳ್ಯದ ಸಮೀಪ ಪತ್ತೆಯಾಯ್ತು ಚಿನ್ನು ಹೆಸರಿನ ನಾಯಿ&lt;/strong&gt;&lt;/h3&gt;&lt;p&gt;ಈ ಬಗ್ಗೆ ಹಲವು ಬ್ಯಾನರ್ ಗಳನ್ನು ಮಾಡಿ ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೋವನ್ನು ಗಮನಿಸಿದ ಪುರಂದರ ಅವರು ಪೋಳ್ಯದ ಸಮೀಪ ಚಿನ್ನುವನ್ನು ಪತ್ತೆ ಮಾಡಿ ಪುರಂದರ ಭಟ್ ಅವರಿಗೆ ತಲುಪಿಸಿದ್ದರು.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-rs-50-thousand-reward-for-laborer-who-found-missing-desi-dog-chinnu-in-puttur-mrq/articleshow-ga5g6ft"/>
        </item>
        <item>
            <title><![CDATA[ಮಂಗಳೂರಿಂದ ಹೊರಡುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಹಲವು ಟ್ರೈನ್ ಸಂಚಾರ ಭಾಗಶಃ ರದ್ದು, ಮರು ವೇಳಾಪಟ್ಟಿ ಪ್ರಕಟ!]]></title>
            <link>https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk</link>
            <guid isPermaLink="true">https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk</guid>
            <pubDate>Tue, 23 Jun 2026 16:33:34 +0530</pubDate>
            <description><![CDATA[ಕೊಂಕಣ ರೈಲ್ವೆ ಮಾರ್ಗದಲ್ಲಿ ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಜೂನ್ 23 ರಿಂದ 28ರವರೆಗೆ ಹಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಮಯವನ್ನು ಮರುನಿಗದಿಪಡಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ವೇಳಾಪಟ್ಟಿಯನ್ನು ಪರಿಶೀಲಿಸಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf6fzpgk0wjxhndqarech1m,imgname-konkan-railways--4--1781847817936.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಕೊಂಕಣ ರೈಲ್ವೆ ಮಾರ್ಗದಲ್ಲಿ ಅತ್ಯಗತ್ಯವಾಗಿ ನಡೆಯಬೇಕಿರುವ ಹಳಿ ನಿರ್ವಹಣಾ ಕಾಮಗಾರಿಗಳ (Track Maintenance) ಕಾರಣದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ವಿವಿಧ ರೈಲು ಸೇವೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಜೂನ್ 23 ರಿಂದ ಜೂನ್ 28 ರವರೆಗಿನ ವಿವಿಧ ದಿನಾಂಕಗಳಲ್ಲಿ ಕೆಲವು ರೈಲುಗಳ ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದರೆ, ಇನ್ನು ಕೆಲವು ರೈಲುಗಳ ಸಂಚಾರದ ಸಮಯವನ್ನು ಮರುನಿಗದಿಪಡಿಸಲಾಗಿದೆ.&lt;/p&gt;&lt;h2&gt;ರೈಲುಗಳ ಭಾಗಶಃ ರದ್ದತಿ (Partial Cancellation)&lt;/h2&gt;&lt;p&gt;ಜೂನ್ 25, 2026 ರಂದು ಮಂಗಳೂರು ಸೆಂಟ್ರಲ್&zwnj;ನಿಂದ ಹೊರಡಬೇಕಿದ್ದ ರೈಲು ಸೇವೆಗಳಲ್ಲಿ ಭಾಗಶಃ ಕಡಿತ ಮಾಡಲಾಗಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56616 (ಮಂಗಳೂರು ಸೆಂಟ್ರಲ್ - ಮಡ್ಗಾಂವ್ ಜಂಕ್ಷನ್ ಪ್ಯಾಸೆಂಜರ್): &lt;/strong&gt;ಜೂನ್ 25 ರಂದು ಮಂಗಳೂರಿನಿಂದ ಹೊರಡುವ ಈ ರೈಲನ್ನು ಕಾರವಾರ ನಿಲ್ದಾಣದಲ್ಲೇ ಅಲ್ಪಾವಧಿಗೆ ಸ್ಥಗಿತಗೊಳಿಸಲಾಗುವುದು. ಹೀಗಾಗಿ, ಅಂದು ಕಾರವಾರ ಮತ್ತು ಮಡ್ಗಾಂವ್ ಜಂಕ್ಷನ್ ನಿಲ್ದಾಣಗಳ ನಡುವೆ ಈ ರೈಲಿನ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56615 (ಮಡ್ಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್):&lt;/strong&gt; ಜೂನ್ 25 ರಂದು ಮಧ್ಯಾಹ್ನ 2:15 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಬೇಕಿದ್ದ ಈ ರೈಲು, ಅಂದು ಮಡ್ಗಾಂವ್ ಬದಲಿಗೆ ಮಧ್ಯಾಹ್ನ 3:24 ಕ್ಕೆ ಕಾರವಾರ ನಿಲ್ದಾಣದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಪರಿಣಾಮವಾಗಿ, ಮಡ್ಗಾಂವ್ ಜಂಕ್ಷನ್ ಮತ್ತು ಕಾರವಾರ ನಡುವಿನ ರೈಲು ಸಂಚಾರ ರದ್ದಾಗಲಿದೆ.&lt;/p&gt;&lt;h2&gt;ಮರುನಿಗದಿತ ರೈಲು ಸೇವೆಗಳು (Rescheduled Services)&lt;/h2&gt;&lt;p&gt;ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಈ ಕೆಳಗಿನ ಪ್ರಮುಖ ರೈಲುಗಳ ಸಮಯವನ್ನು ಬದಲಾಯಿಸಲಾಗಿದ್ದು, ಇವು ತಡವಾಗಿ ಸಂಚರಿಸಲಿವೆ:&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56615 (ಮಡ್ಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್): &lt;/strong&gt;* ಜೂನ್ 23 ರಂದು: ಈ ರೈಲು ಮಧ್ಯಾಹ್ನ 2:15 ರ ನಿಗದಿತ ಸಮಯದ ಬದಲಾಗಿ ಸಂಜೆ 4:55 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಲಿದ್ದು, ಒಟ್ಟು 2 ಗಂಟೆ 40 ನಿಮಿಷ ವಿಳಂಬವಾಗಲಿದೆ.&lt;/p&gt;&lt;p&gt;ಜೂನ್ 26 ಮತ್ತು ಜೂನ್ 28 ರಂದು: ಇದೇ ರೈಲು ಮಧ್ಯಾಹ್ನ 2:15 ರ ಬದಲಿಗೆ ಮಧ್ಯಾಹ್ನ 3:45 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಲಿದ್ದು, 1 ಗಂಟೆ 30 ನಿಮಿಷ ತಡವಾಗಿ ಸಂಚರಿಸಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 22149 (ಎರ್ನಾಕುಲಂ ಜಂಕ್ಷನ್ - ಪುಣೆ ದ್ವೈವಾರ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್):&lt;/strong&gt; ಜೂನ್ 26 ರಂದು ಮುಂಜಾನೆ 2:15 ಕ್ಕೆ ಎರ್ನಾಕುಲಂನಿಂದ ಹೊರಡಬೇಕಿದ್ದ ಈ ರೈಲು, ಒಂದು ಗಂಟೆ ತಡವಾಗಿ ಅಂದರೆ ಮುಂಜಾನೆ 3:15 ಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 11097 (ಪುಣೆ ಜಂಕ್ಷನ್ - ಎರ್ನಾಕುಲಂ ಜಂಕ್ಷನ್ ಪೂರ್ಣ ಎಕ್ಸ್&zwnj;ಪ್ರೆಸ್): &lt;/strong&gt;ಜೂನ್ 28 ರಂದು ರಾತ್ರಿ 10:50 ಕ್ಕೆ ಪುಣೆಯಿಂದ ಹೊರಡಬೇಕಿದ್ದ ಈ ರೈಲು, 1 ಗಂಟೆ ವಿಳಂಬವಾಗಿ ರಾತ್ರಿ 11:50 ಕ್ಕೆ ಜರ್ನಿ ಆರಂಭಿಸಲಿದೆ.&lt;/p&gt;&lt;h2&gt;ರೈಲು ಸಂಚಾರ ನಿಯಂತ್ರಣ (Regulation of Train)&lt;/h2&gt;&lt;p&gt;&lt;strong&gt;ರೈಲು ಸಂಖ್ಯೆ 09057 (ಸೂರತ್ - ಮಂಗಳೂರು ಜಂಕ್ಷನ್ ದ್ವೈವಾರ ವಿಶೇಷ ಎಕ್ಸ್&zwnj;ಪ್ರೆಸ್): &lt;/strong&gt;ಜೂನ್ 24 ರಂದು ಸೂರತ್&zwnj;ನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುವ ಈ ವಿಶೇಷ ರೈಲನ್ನು, ಕೊಂಕಣ ಮಾರ್ಗದಲ್ಲಿ ನಡೆಯುವ ಕಾಮಗಾರಿಗಳ ಕಾರಣದಿಂದಾಗಿ ಮಾರ್ಗ ಮಧ್ಯೆ ಸುಮಾರು 25 ನಿಮಿಷಗಳ ಕಾಲ ನಿಯಂತ್ರಿಸಿ (ತಡೆಹಿಡಿದು) ಚಲಾಯಿಸಲು ತೀರ್ಮಾನಿಸಲಾಗಿದೆ.&lt;/p&gt;&lt;h2&gt;ರೈಲ್ವೆ ಇಲಾಖೆಯ ಪ್ರಮುಖ ಸೂಚನೆ&lt;/h2&gt;&lt;p&gt;ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಸಲು ಯೋಜಿಸಿರುವ ಸಾರ್ವಜನಿಕರು ಮತ್ತು ಪ್ರಯಾಣಿಕರು ತಮ್ಮ ನಿಲ್ದಾಣಗಳಿಗೆ ಹೊರಡುವ ಮುನ್ನ ಅಧಿಕೃತ ವೆಬ್&zwnj;ಸೈಟ್ ಅಥವಾ ಸಹಾಯವಾಣಿ ಮೂಲಕ ಇತ್ತೀಚಿನ ರೈಲು ವೇಳಾಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು. ಈ ತಾತ್ಕಾಲಿಕ ಬದಲಾವಣೆಗಳಿಗೆ ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಅಧಿಕಾರಿಗಳು ಕೋರಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk"/>
        </item>
        <item>
            <title><![CDATA[ಚಿಕ್ಕ ಹುಡುಗ ಬೇಡಿಕೊಂಡರೂ ರೂಲ್ಸ್ ನೆಪದಲ್ಲಿ ನಿರ್ಜನ ಪ್ರದೇಶದಲ್ಲಿ ಇಳಿಸಿದ ಬಸ್! ಕಂಡಕ್ಟರ್ ಅಮಾನತಿಗೆ ಶಾಸಕ ಅಶೋಕ್ ರೈ ಆದೇಶ]]></title>
            <link>https://kannada.asianetnews.com/karnataka-districts/mangaluru-news-puttur-mla-ashok-kumar-rai-directs-ksrtc-conductor-suspended-for-dropping-schoolboy-miles-away-gdp/articleshow-n6wizi1</link>
            <guid isPermaLink="true">https://kannada.asianetnews.com/karnataka-districts/mangaluru-news-puttur-mla-ashok-kumar-rai-directs-ksrtc-conductor-suspended-for-dropping-schoolboy-miles-away-gdp/articleshow-n6wizi1</guid>
            <pubDate>Tue, 23 Jun 2026 18:07:34 +0530</pubDate>
            <description><![CDATA[ತಪ್ಪು ಬಸ್ ಹತ್ತಿದ ಆರನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಕೆಎಸ್&zwnj;ಆರ್&zwnj;ಟಿಸಿ ನಿರ್ವಾಹಕನು ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಬಾಲಕನ ವಿನಂತಿಯನ್ನು ತಿರಸ್ಕರಿಸಿ, ಆತನನ್ನು ದೂರದ ಅಪರಿಚಿತ ಸ್ಥಳದಲ್ಲಿ ಇಳಿಸಿ ಹೋಗಿದ್ದಾನೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ನಿರ್ವಾಹಕನನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvt7j6w8zv4wvfy3v2gde5s4,imgname-ashok-kumar-rai--1--1782218038152.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುತ್ತೂರು: &lt;/strong&gt;ನಿಯಮಗಳ ಪಾಲನೆಯ ನೆಪದಲ್ಲಿ ಪುಟ್ಟ ಬಾಲಕನೊಬ್ಬನಿಗೆ ತೊಂದರೆ ನೀಡಿ, ಅಮಾನವೀಯವಾಗಿ ನಡೆದುಕೊಂಡ ಕೆಎಸ್&zwnj;ಆರ್&zwnj;ಟಿಸಿ (KSRTC) ಬಸ್ ನಿರ್ವಾಹಕನೊಬ್ಬನ ವಿರುದ್ಧ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಾದ ಮಾರ್ಗದ ಬಸ್ ಹತ್ತಿದ್ದ ಆರನೇ ತರಗತಿಯ ಶಾಲಾ ವಿದ್ಯಾರ್ಥಿ ವಿನಂತಿಸಿಕೊಂಡರೂ ಬಸ್ ನಿಲ್ಲಿಸದೆ, ಆತನನ್ನು ನಿಗದಿತ ಸ್ಥಳಕ್ಕಿಂತ ಮೈಲುಗಳಷ್ಟು ದೂರ ಕರೆದೊಯ್ದು ಇಳಿಸಿದ ನಿರ್ವಾಹಕನನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸುವಂತೆ (Suspend) ಕೆಎಸ್&zwnj;ಆರ್&zwnj;ಟಿಸಿ ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿದ್ದಾರೆ.&lt;/p&gt;&lt;h2&gt;ತಪ್ಪು ಬಸ್ ಹತ್ತಿದ್ದ ಬಾಲಕ, ನಡೆದಿದ್ದೇನು?&lt;/h2&gt;&lt;p&gt;ವಿಟ್ಲ ಸಮೀಪದ ಕಂಬಳಬೆಟ್ಟು ಮಾಮೇಶ್ವರ ನಿವಾಸಿಯಾಗಿರುವ ಬಾಲಕನೊಬ್ಬ ವಿಟ್ಲದ ಶಾಲೆಯೊಂದರಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಪ್ರತಿದಿನದಂತೆ ಶಾಲೆ ಮುಗಿಸಿ ಮನೆಗೆ ಮರಳುವ ಅವಸರದಲ್ಲಿದ್ದ ಈ ಮಗು, ಪುತ್ತೂರಿಗೆ ತೆರಳುವ ಸಾಮಾನ್ಯ ಬಸ್ ಎಂದು ಭಾವಿಸಿ ವಿಟ್ಲ ನಿಲ್ದಾಣದಲ್ಲಿ ಕಾಸರಗೋಡು-ಧರ್ಮಸ್ಥಳ ಮಾರ್ಗದ ಎಕ್ಸ್&zwnj;ಪ್ರೆಸ್ (Express) ಬಸ್ ಹತ್ತಿದ್ದಾನೆ. ಬಸ್ ಹತ್ತಿದ ಬಳಿಕವಷ್ಟೇ ಅದು ಎಕ್ಸ್&zwnj;ಪ್ರೆಸ್ ಬಸ್ ಹಾಗೂ ತಾನು ಇಳಿಯಬೇಕಾದ ಕಂಬಳಬೆಟ್ಟು ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂಬ ವಿಷಯ ಮಗುವಿಗೆ ತಿಳಿದಿದೆ. ಇದರಿಂದ ಗಾಬರಿಗೊಂಡ ಬಾಲಕ, ತಕ್ಷಣವೇ ನಿರ್ವಾಹಕನ ಬಳಿ ಹೋಗಿ ತಾನು ತಪ್ಪು ಬಸ್ ಹತ್ತಿರುವುದಾಗಿ ತಿಳಿಸಿ, ಕಂಬಳಬೆಟ್ಟು ತಲುಪುತ್ತಿದ್ದಂತೆಯೇ ಬಸ್ ನಿಲ್ಲಿಸಿ ಇಳಿಸುವಂತೆ ಅತ್ಯಂತ ವಿನಮ್ರವಾಗಿ ವಿನಂತಿಸಿದ್ದಾನೆ.&lt;/p&gt;&lt;h2&gt;ರೂಲ್ಸ್ ನೆಪದಲ್ಲಿ ಮೆರೆದ ಅಮಾನವೀಯತೆ!&lt;/h2&gt;&lt;p&gt;ಬಸ್ ಕಂಬಳಬೆಟ್ಟು ನಿಲ್ದಾಣದ ಹತ್ತಿರ ಬರುತ್ತಿದ್ದಂತೆಯೇ ಬಾಲಕ ಮತ್ತೊಮ್ಮೆ ಬಸ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾನೆ. ಆದಾಗ್ಯೂ, ನಿರ್ವಾಹಕ ಮಾತ್ರ ಮಾನವೀಯತೆಯನ್ನು ಮರೆತು, ಇದು ಎಕ್ಸ್&zwnj;ಪ್ರೆಸ್ ಬಸ್ ಆಗಿರುವುದರಿಂದ ಇಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದಾನೆ. ಚಾಲಕನಿಗೆ ಬಸ್ ನಿಲ್ಲಿಸಲು ಸಿಗ್ನಲ್ ನೀಡದ ನಿರ್ವಾಹಕ, ಆ ಪುಟ್ಟ ಬಾಲಕನನ್ನು ಅಲ್ಲಿಂದ ಸುಮಾರು ದೂರವಿರುವ ಕಬಕ ಜಂಕ್ಷನ್ ತನಕ ಕರೆದೊಯ್ದು, ಅಲ್ಲಿ ಬಸ್&zwnj;ನಿಂದ ಕೆಳಗೆ ಇಳಿಸಿದ್ದಾನೆ. ಅಪರಿಚಿತ ಜಾಗದಲ್ಲಿ ಒಂಟಿಯಾಗಿ ಇಳಿದು ಕಂಗಾಲಾದ ಬಾಲಕ, ಹೇಗೋ ಮಾಡಿ ತಕ್ಷಣವೇ ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಕಬಕ ಜಂಕ್ಷನ್&zwnj;ಗೆ ಧಾವಿಸಿ, ರಸ್ತೆಯ ಬದಿಯಲ್ಲಿ ಅಸಹಾಯಕನಾಗಿ ನಿಂತಿದ್ದ ಮಗುವನ್ನು ಮನೆಗೆ ಕರೆದೊಯ್ದಿದ್ದಾರೆ.&lt;/p&gt;&lt;h2&gt;ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ, ಶಾಸಕರಿಂದ ಕಠಿಣ ಕ್ರಮ&lt;/h2&gt;&lt;p&gt;ಕೆಎಸ್&zwnj;ಆರ್&zwnj;ಟಿಸಿ ಸಿಬ್ಬಂದಿಯ ಈ ಬೇಜವಾಬ್ದಾರಿಯುತ ಹಾಗೂ ಕ್ರೂರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. &quot;ಅದು ಎಕ್ಸ್&zwnj;ಪ್ರೆಸ್ ಬಸ್ ಆಗಿದ್ದರೂ, ತಪ್ಪು ಹತ್ತಿರುವುದು ಒಬ್ಬ ಪುಟ್ಟ ಶಾಲಾ ಬಾಲಕ ಎಂಬ ಕನಿಷ್ಠ ಜ್ಞಾನ ನಿರ್ವಾಹಕನಿಗೆ ಇರಬೇಕಿತ್ತು. ಮಾನವೀಯತೆಯ ನೆಲೆಯಲ್ಲಾದರೂ ಬಸ್ ನಿಲ್ಲಿಸಿ ಮಗುವನ್ನು ಸುರಕ್ಷಿತವಾಗಿ ಇಳಿಸಬಹುದಿತ್ತು. ಒಂದು ವೇಳೆ ಮಗುವಿಗೆ ಏನಾದರೂ ಅನಾಹುತವಾಗಿದ್ದರೆ ಯಾರು ಹೊಣೆ? ಎಂದು ನೆಟ್ಟಿಗರು ಕಠಿಣವಾಗಿ ಖಂಡಿಸಿದ್ದರು.&lt;/p&gt;&lt;p&gt;ಈ ಗಂಭೀರ ವಿಷಯ ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ಬರುತ್ತಿದ್ದಂತೆಯೇ, ಅವರು ತಕ್ಷಣವೇ ಪುತ್ತೂರು ಕೆಎಸ್&zwnj;ಆರ್&zwnj;ಟಿಸಿ ಡಿಪೋ ಮ್ಯಾನೇಜರ್ (Depot Manager) ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿರುವ ಶಾಸಕರು, ಅಮಾನವೀಯತೆ ಮೆರೆದ ಆ ನಿರ್ವಾಹಕನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಒಳಪಡಿಸಬೇಕು ಎಂದು ಖಡಕ್ ಆದೇಶ ನೀಡಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-news-puttur-mla-ashok-kumar-rai-directs-ksrtc-conductor-suspended-for-dropping-schoolboy-miles-away-gdp/articleshow-n6wizi1"/>
        </item>
        <item>
            <title><![CDATA[Sullia: ಆಟವಾಡುತ್ತಿದ್ದ ಅವಳಿ ಮಕ್ಕಳ ಮೇಲೆ ಯಮನ ಕಣ್ಣು: ಕೆರೆಗೆ ಬಿದ್ದು ಇಬ್ಬರು ಸಾವು!]]></title>
            <link>https://kannada.asianetnews.com/crime/sullia-twin-children-drown-in-pond-murulya-kadira-tragedy-gvd/articleshow-oif86ug</link>
            <guid isPermaLink="true">https://kannada.asianetnews.com/crime/sullia-twin-children-drown-in-pond-murulya-kadira-tragedy-gvd/articleshow-oif86ug</guid>
            <pubDate>Sat, 20 Jun 2026 22:22:01 +0530</pubDate>
            <description><![CDATA[&lt;p&gt;Dakshina Kannada News: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದ ಅವಳಿ ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯದ ಕಡೀರದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvjy5d4d4a37d89t5g2tsed1,imgname-vj-1781973300365.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸುಳ್ಯ (ಜೂ.20): &lt;/strong&gt;ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದ ಅವಳಿ ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯದ ಕಡೀರದಲ್ಲಿ ನಡೆದಿದೆ. ಮೃತ ಮಕ್ಕಳನ್ನು ಕಡೀರ ನಿವಾಸಿ ವಸಂತ ಅವರ ಐದೂವರೆ ವರ್ಷದ ಅವಳಿ ಮಕ್ಕಳಾದ ಜಶ್ವಿನ್ ಮತ್ತು ಜಸ್ವಿತ್ ಎಂದು ಗುರುತಿಸಲಾಗಿದೆ. ಇಬ್ಬರೂ ಮುರುಳ್ಯ ಶಾಂತಿನಗರ ಶಾಲೆಯ ಯುಕೆಜಿ ವಿದ್ಯಾರ್ಥಿಗಳಾಗಿದ್ದರು.&lt;/p&gt;&lt;p&gt;ಸಂಜೆ ವೇಳೆ ವಸಂತ ಹಾಗೂ ಅವರ ಪತ್ನಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ತೋಟದ ಕೆಲಸಕ್ಕೆ ತೆರಳಿದ್ದರು. ಬಳಿಕ ಕೆಲಸ ಮುಗಿಸಿ ತಾಯಿ ಮನೆಗೆ ವಾಪಸ್ಸಾದಾಗ ಮಕ್ಕಳು ಮನೆಯಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ಈ ವೇಳೆ ಮನೆ ಸಮೀಪದ ಕೆರೆಯಲ್ಲಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.&lt;/p&gt;&lt;h2&gt;&lt;strong&gt;ಶೋಕದ ವಾತಾವರಣ&lt;/strong&gt;&lt;/h2&gt;&lt;p&gt;ಮಾಹಿತಿ ತಿಳಿಯುತ್ತಿದ್ದಂತೆ ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕೆರೆಯಿಂದ ಮಕ್ಕಳ ಮೃತದೇಹಗಳನ್ನು ಮೇಲಕ್ಕೆತ್ತಿದರು. ಘಟನೆಯಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/sullia-twin-children-drown-in-pond-murulya-kadira-tragedy-gvd/articleshow-oif86ug"/>
        </item>
        <item>
            <title><![CDATA[Indian Railway: ಓಣಂ ವಿಶೇಷ, Bharat Gaurav ರೈಲಿನಲ್ಲಿ ಇಡೀ ದೇಶ ಸುತ್ತುವ ಸುವರ್ಣಾವಕಾಶ, ಶೇ.33 ರಿಯಾಯಿತಿ]]></title>
            <link>https://kannada.asianetnews.com/karnataka-districts/bharat-gaurav-scheme-special-onam-tourist-train-announced-with-33percent-subsidy-gdp/articleshow-owl99l5</link>
            <guid isPermaLink="true">https://kannada.asianetnews.com/karnataka-districts/bharat-gaurav-scheme-special-onam-tourist-train-announced-with-33percent-subsidy-gdp/articleshow-owl99l5</guid>
            <pubDate>Sat, 27 Jun 2026 11:20:42 +0530</pubDate>
            <description><![CDATA[ಮುಂಬರುವ ಓಣಂ ಹಬ್ಬದ ರಜೆಗಾಗಿ ಭಾರತೀಯ ರೈಲ್ವೆಯು 'ಭಾರತ್ ಗೌರವ್ ರೈಲು' ಯೋಜನೆಯಡಿ 11 ದಿನಗಳ ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಿಸಿದೆ. ಸೌತ್ ಸ್ಟಾರ್ ರೈಲ್ ಸಹಯೋಗದ ಈ ಪ್ರವಾಸವು ದೆಹಲಿ, ಆಗ್ರಾ, ಏಕತಾ ಪ್ರತಿಮೆ ಮತ್ತು ಗೋವಾದಂತಹ ಪ್ರಮುಖ ತಾಣಗಳನ್ನು ಒಳಗೊಂಡಿದ್ದು, ಶೇ. 33ರಷ್ಟು ಭಾರಿ ಸಬ್ಸಿಡಿ ಸೌಲಭ್ಯವನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01grjfhhrcknx1wkz8zgjfkaeb,imgname-train-1675657529099.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಕೊಚ್ಚಿ: &lt;/strong&gt;ಮುಂಬರುವ ಓಣಂ ಹಬ್ಬದ ಸಾಲು ಸಾಲು ರಜೆಗಳ ಸಂದರ್ಭದಲ್ಲಿ ದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಭಾರತ್ ಗೌರವ್ ರೈಲು' ಯೋಜನೆಯಡಿ, ಖಾಸಗಿ ವಲಯದ ಪ್ರವರ್ತಕ ನಿರ್ವಾಹಕರಾದ ಸೌತ್ ಸ್ಟಾರ್ ರೈಲ್ ಹಾಗೂ ಪ್ರವಾಸೋದ್ಯಮ ಸಚಿವಾಲಯದ ಅಧಿಕೃತ ಪ್ರವಾಸ ಸಂಸ್ಥೆಯಾದ ಟೂರ್ ಟೈಮ್ಸ್ ಸಹಯೋಗದೊಂದಿಗೆ 11 ದಿನಗಳ ವಿಶೇಷ ಓಣಂ ರಜಾ ಪ್ರವಾಸ ಪ್ಯಾಕೇಜ್ ಅನ್ನು ಪ್ರಕಟಿಸಲಾಗಿದೆ. ಈ ವಿಶೇಷ ಪ್ರವಾಸಿ ರೈಲಿಗೆ ಭಾರತೀಯ ರೈಲ್ವೆಯಿಂದ ಶೇಕಡಾ 33 ರಷ್ಟು ಭಾರಿ ಸಹಾಯಧನ (Subsidy) ಲಭ್ಯವಿರುವುದು ಈ ಯೋಜನೆಯ ಪ್ರಮುಖ ಆಕರ್ಷಣೆಯಾಗಿದೆ.&lt;/p&gt;&lt;h2&gt;ಆಗಸ್ಟ್ 20 ರಿಂದ 11 ದಿನಗಳ ಮಹಾ ಪ್ರವಾಸ ಆರಂಭ&lt;/h2&gt;&lt;p&gt;ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಈ 11 ದಿನಗಳ ಸುದೀರ್ಘ ಪ್ಯಾಕೇಜ್ ಪ್ರವಾಸವು ಮುಂಬರುವ ಆಗಸ್ಟ್ 20 ರಂದು ಪ್ರಯಾಣ ಆರಂಭಿಸಲಿದೆ. ಈ ಅವಧಿಯಲ್ಲಿ ದೇಶದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಹೆಗ್ಗುರುತುಗಳಾದ ದೆಹಲಿ, ಆಗ್ರಾ, ಜೈಪುರ, ಅಮೃತಸರ, ಗುಜರಾತ್&zwnj;ನಲ್ಲಿರುವ ವಿಶ್ವದ ಅತಿ ಎತ್ತರದ 'ಏಕತಾ ಪ್ರತಿಮೆ' (Statue of Unity) ಮತ್ತು ಗೋವಾದ ಸುಂದರ ಕಡಲತೀರಗಳು ಸೇರಿದಂತೆ ಪ್ರಮುಖ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡುವ ಸಮಗ್ರ ಪ್ರವಾಸ ಯೋಜನೆಯನ್ನು ರೂಪಿಸಲಾಗಿದೆ.&lt;/p&gt;&lt;h2&gt;ಕೇರಳದ ಪ್ರಮುಖ ನಿಲ್ದಾಣಗಳಲ್ಲಿ ಬೋರ್ಡಿಂಗ್ ಸೌಲಭ್ಯ&lt;/h2&gt;&lt;p&gt;ಸ್ಥಳೀಯ ಪ್ರಯಾಣಿಕರಿಗೆ ಮತ್ತು ಕರಾವಳಿ ಭಾಗದ ಜನರಿಗೆ ಗರಿಷ್ಠ ಅನುಕೂಲವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ರೈಲಿಗೆ ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ಸ್ಟಾಪೇಜ್ ನೀಡಲಾಗಿದೆ. ಪ್ರಯಾಣಿಕರು ತಿರುವನಂತಪುರಂ, ಕೊಲ್ಲಂ, ಕಾಯಂಕುಲಂ, ಕೊಟ್ಟಾಯಂ, ಎರ್ನಾಕುಲಂ ಟೌನ್, ತ್ರಿಶೂರ್, ಒಟ್ಟಪಾಲಂ ಮತ್ತು ಪಾಲಕ್ಕಾಡ್ ಜಂಕ್ಷನ್&zwnj; ಸೇರಿದಂತೆ ವಿವಿಧ ಪ್ರಮುಖ ನಿಲ್ದಾಣಗಳ ಮೂಲಕ ರೈಲನ್ನು ಏರಲು (Boarding) ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;h2&gt;ಐಷಾರಾಮಿ ಸೌಕರ್ಯ ಮತ್ತು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ&lt;/h2&gt;&lt;p&gt;ಬಜೆಟ್ ಸ್ನೇಹಿ ದರದಲ್ಲಿ ಅತ್ಯುತ್ತಮ ಸೌಕರ್ಯ ಒದಗಿಸುವುದು ಈ ಪ್ರವಾಸದ ಮುಖ್ಯ ಉದ್ದೇಶವಾಗಿದೆ. ರೈಲಿನಲ್ಲಿ ಪ್ರಯಾಣಿಕರ ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಈ ಕೆಳಗಿನ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.&lt;/p&gt;&lt;ul&gt; &lt;li&gt;ಪ್ರವಾಸದ ಅಪ್&zwnj;ಡೇಟ್&zwnj;ಗಳು ಮತ್ತು ಪ್ರಕಟಣೆಗಳಿಗಾಗಿ ರೈಲಿನೊಳಗೆ ಮೀಸಲಾದ ಸಾರ್ವಜನಿಕ ವಿಳಾಸ ವ್ಯವಸ್ಥೆ ಪಿಎ ಸಿಸ್ಟಮ್ (PA System) ಇರಲಿದೆ.&lt;/li&gt; &lt;li&gt;ಪ್ರತಿಯೊಂದು ಕೋಚ್&zwnj;ಗಳ ಭದ್ರತೆಗಾಗಿ ರೈಲಿನಲ್ಲಿ ವಿಶೇಷ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.&lt;/li&gt; &lt;li&gt;ಪ್ರತಿ ಗಮ್ಯಸ್ಥಾನದಲ್ಲಿ ಪ್ರಯಾಣಿಕರಿಗೆ ನೆರವಾಗಲು ಅನುಭವಿ ಟೂರ್ ಮ್ಯಾನೇಜರ್&zwnj;ಗಳು ಜೊತೆಯಲ್ಲಿರಲಿದ್ದಾರೆ.&lt;/li&gt; &lt;li&gt;ರೈಲಿನ ಒಳಗೂ ಮತ್ತು ಹೊರಗೂ ಪ್ರವಾಸಿಗರಿಗೆ ಗುಣಮಟ್ಟದ ಅನಿಯಮಿತ ಆಹಾರದ ವ್ಯವಸ್ಥೆ ಇರಲಿದೆ.&lt;/li&gt; &lt;li&gt;ಪ್ಯಾಕೇಜ್&zwnj;ನಲ್ಲಿ ಪ್ರಯಾಣ ವಿಮೆ, ಹೋಟೆಲ್ ವಸತಿ ಸೌಕರ್ಯ, ಸ್ಥಳ ದರ್ಶನ (Sightseeing) ಮತ್ತು ವರ್ಗಾವಣೆ (Transfer) ಸೌಲಭ್ಯಗಳು ಸೇರಿವೆ.&lt;/li&gt; &lt;li&gt;ಅರ್ಹ ಸರ್ಕಾರಿ ಮತ್ತು ಕಾರ್ಪೊರೇಟ್ ಉದ್ಯೋಗಿಗಳು ಈ ಪ್ರವಾಸಕ್ಕೆ ರಜೆ ಪ್ರಯಾಣ ರಿಯಾಯಿತಿ (LTC) ಹಾಗೂ ರಜೆ ಪ್ರಯಾಣ ಸೌಲಭ್ಯ (LFC) ಪ್ರಯೋಜನಗಳನ್ನು ಸಹ ಪಡೆಯಬಹುದು.&lt;/li&gt;&lt;/ul&gt;&lt;h2&gt;ವಿವಿಧ ದರ್ಜೆಯ ಶ್ರೇಣೀಕೃತ ದರಗಳ ವಿವರ&lt;/h2&gt;&lt;p&gt;ಪ್ರಯಾಣಿಕರ ಬಜೆಟ್&zwnj;ಗೆ ಅನುಗುಣವಾಗಿ ನಾಲ್ಕು ವಿಭಿನ್ನ ಸೌಕರ್ಯ ಶ್ರೇಣಿಗಳಲ್ಲಿ ಟಿಕೆಟ್ ದರಗಳನ್ನು ನಿಗದಿಪಡಿಸಲಾಗಿದೆ (ಎಲ್ಲಾ ಸೇವೆಗಳು ಒಳಗೊಂಡಂತೆ):&lt;/p&gt;&lt;ul&gt; &lt;li&gt;ಸ್ಲೀಪರ್ ಕ್ಲಾಸ್ (Sleeper Class): ₹28,750&lt;/li&gt; &lt;li&gt;ತೃತೀಯ ಎಸಿ (3AC): ₹39,950&lt;/li&gt; &lt;li&gt;ದ್ವಿತೀಯ ಎಸಿ (2AC): ₹49,950&lt;/li&gt; &lt;li&gt;ಪ್ರಥಮ ಎಸಿ (1AC): ₹58,950&lt;/li&gt;&lt;/ul&gt;&lt;p&gt;&quot;ಈ ಪ್ರವಾಸಿ ಉಪಕ್ರಮವು ಬಜೆಟ್ ಸ್ನೇಹಿ ಪ್ರಯಾಣ ಮತ್ತು ಅತ್ಯುತ್ತಮ ಸೌಕರ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಈ ಹಬ್ಬದ ಋತುವಿನಲ್ಲಿ ಕುಟುಂಬ ಸಮೇತರಾಗಿ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಯಾವುದೇ ಗೊಂದಲವಿಲ್ಲದೆ ಮನಬಂದಂತೆ ಅನುಭವಿಸಲು ಇದು ಉತ್ತಮ ಅವಕಾಶ&quot; ಎಂದು ಸೌತ್ ಸ್ಟಾರ್ ರೈಲ್&zwnj;ನ ಯೋಜನಾ ವ್ಯವಸ್ಥಾಪಕರಾದ ವಿಸ್ಟ್ರೇಶ್ ತಿಳಿಸಿದ್ದಾರೆ.&lt;/p&gt;&lt;h2&gt;ಯಶಸ್ವಿ ಇತಿಹಾಸ ಹೊಂದಿರುವ ಸಂಸ್ಥೆಗಳು&lt;/h2&gt;&lt;p&gt;ಸೌತ್ ಸ್ಟಾರ್ ರೈಲ್ ಮತ್ತು ಟೂರ್ ಟೈಮ್ಸ್ ಸಂಸ್ಥೆಗಳು ಈ ಹಿಂದೆ ಒಟ್ಟು 53 ಪ್ರವಾಸಿ ಪ್ರಯಾಣಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿವೆ. ಈ ಯೋಜನೆಗಳ ಅಡಿಯಲ್ಲಿ ಸುಮಾರು 3,02,850 ಕಿಲೋಮೀಟರ್&zwj;ಗಳಷ್ಟು ದೂರವನ್ನು ಕ್ರಮಿಸಲಾಗಿದ್ದು, ಒಟ್ಟು 25,070 ಕ್ಕೂ ಹೆಚ್ಚು ಯಾತ್ರಿಕರು ಹಾಗೂ ಪ್ರವಾಸಿಗರು ಸುರಕ್ಷಿತ ಮತ್ತು ಸುಖಮಯ ಪ್ರವಾಸದ ಅನುಭವ ಪಡೆದುಕೊಂಡಿದ್ದಾರೆ.&lt;/p&gt;&lt;h2&gt;ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:&lt;/h2&gt;&lt;p&gt;ಈ ವಿಶೇಷ ಓಣಂ ಪ್ರವಾಸಿ ರೈಲಿನ ಬುಕ್ಕಿಂಗ್&zwnj;ಗಳು ಈಗಾಗಲೇ ಅಧಿಕೃತವಾಗಿ ಆರಂಭಗೊಂಡಿವೆ. ಸೀಟುಗಳು ಸೀಮಿತವಾಗಿದ್ದು, ಆಸಕ್ತ ಪ್ರಯಾಣಿಕರು ತಡಮಾಡದೆ ತಮ್ಮ ಟಿಕೆಟ್&zwnj;ಗಳನ್ನು ಕಾಯ್ದಿರಿಸಬಹುದಾಗಿದೆ.&lt;/p&gt;&lt;p&gt;ಮೊಬೈಲ್ ಸಂಖ್ಯೆ: 7305858585&lt;/p&gt;&lt;p&gt;ಅಧಿಕೃತ ವೆಬ್&zwnj;ಸೈಟ್: www.tourtimes.in ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು ಹಾಗೂ ಟಿಕೆಟ್ ಬುಕ್ ಮಾಡಬಹುದು.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bharat-gaurav-scheme-special-onam-tourist-train-announced-with-33percent-subsidy-gdp/articleshow-owl99l5"/>
        </item>
        <item>
            <title><![CDATA[ಪುತ್ತೂರು-ಸುಬ್ರಹ್ಮಣ್ಯ 3 ಹೊಸ ರೈಲ್ವೆ ಓವರ್‌ಬ್ರಿಜ್ ಗೆ ₹18 ಕೋಟಿ, ದ.ಕನ್ನಡ ರಸ್ತೆ ಅಭಿವೃದ್ಧಿಗೆ 57 ಕೋಟಿ ಅನುದಾನ!]]></title>
            <link>https://kannada.asianetnews.com/karnataka-districts/dakshina-kannada-railways-mp-brijesh-chowta-announces-rs18-crore-new-overbridges-and-rs57-crore-for-road-projects-gdp/articleshow-p93z451</link>
            <guid isPermaLink="true">https://kannada.asianetnews.com/karnataka-districts/dakshina-kannada-railways-mp-brijesh-chowta-announces-rs18-crore-new-overbridges-and-rs57-crore-for-road-projects-gdp/articleshow-p93z451</guid>
            <pubDate>Sat, 20 Jun 2026 14:39:55 +0530</pubDate>
            <description><![CDATA[ಪುತ್ತೂರು-ಸುಬ್ರಹ್ಮಣ್ಯ ರೈಲು ಮಾರ್ಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹18 ಕೋಟಿ ಅನುದಾನದಲ್ಲಿ ಮೂರು ಹೊಸ ರೈಲ್ವೇ ಮೇಲ್ಸೇತುವೆಗಳನ್ನು ಮಂಜೂರು ಮಾಡಿದೆ. ಇದರೊಂದಿಗೆ, ಕಬಕ ಪುತ್ತೂರು ನಿಲ್ದಾಣದಲ್ಲಿ ವಿಸ್ತರಿತ ಶೆಲ್ಟರ್ ಮತ್ತು ಸುಬ್ರಹ್ಮಣ್ಯ ನಿಲ್ದಾಣದಲ್ಲಿ 'ಕೋಚ್ ವಾಟರಿಂಗ್' ವ್ಯವಸ್ಥೆ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv7z26y09sqwvy8xay9yk85c,imgname-4-1781605145536.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುತ್ತೂರು: &lt;/strong&gt;ಕರಾವಳಿಯ ಪ್ರಮುಖ ಸಂಪರ್ಕ ಕೊಂಡಿಯಾದ ಪುತ್ತೂರು ಮತ್ತು ಸುಬ್ರಹ್ಮಣ್ಯ ರೈಲು ಮಾರ್ಗದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ ಸಿಕ್ಕಿದೆ. ಈ ವ್ಯಾಪ್ತಿಯಲ್ಲಿ ಹೊಸದಾಗಿ 3 ರೈಲ್ವೇ ಓವರ್&zwnj;ಬ್ರಿಜ್ (ಮೇಲ್ಸೇತುವೆ) ನಿರ್ಮಾಣ ಮಾಡಲು ಬರೋಬ್ಬರಿ 18 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರಕಟಿಸಿದ್ದಾರೆ. ಗುರುವಾರದಂದು ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ವಿಸ್ತರಿತ ಶೆಲ್ಟರ್ ನಿರ್ಮಾಣ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.&lt;/p&gt;&lt;h2&gt;ಎಲ್ಲೆಲ್ಲಿ ನಿರ್ಮಾಣವಾಗಲಿವೆ ಹೊಸ ರೈಲ್ವೇ ಓವರ್&zwnj;ಬ್ರಿಜ್&zwnj;ಗಳು?&lt;/h2&gt;&lt;p&gt;ರೈಲ್ವೆ ಹಳಿ ದಾಟುವಾಗ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಎದುರಾಗುತ್ತಿದ್ದ ತೊಂದರೆಗಳನ್ನು ನಿವಾರಿಸಲು ಈ ಕೆಳಗಿನ ಮೂರು ಪ್ರಮುಖ ಲೆವೆಲ್ ಕ್ರಾಸಿಂಗ್&zwnj;ಗಳಲ್ಲಿ ಹೊಸ ಮೇಲ್ಸೇತುವೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ:&lt;/p&gt;&lt;ul&gt; &lt;li&gt;ಮುಕ್ವೆ ಲೆವೆಲ್ ಕ್ರಾಸಿಂಗ್&lt;/li&gt; &lt;li&gt;ಪುತ್ತೂರು ಕ್ಲಬ್ ಲೆವೆಲ್ ಕ್ರಾಸಿಂಗ್&lt;/li&gt; &lt;li&gt;ಪುತ್ತೂರು ಗೇಟ್ ಲೆವೆಲ್ ಕ್ರಾಸಿಂಗ್&lt;/li&gt;&lt;/ul&gt;&lt;p&gt;ಈ ಮೂರು ಓವರ್&zwnj;ಬ್ರಿಜ್&zwnj;ಗಳ ನಿರ್ಮಾಣದಿಂದ ಈ ಭಾಗದ ಸಂಚಾರ ದಟ್ಟಣೆ ಸಂಪೂರ್ಣ ನಿವಾರಣೆಯಾಗಲಿದ್ದು, ಅಪಘಾತಗಳ ಭಯವಿಲ್ಲದೆ ಸಾರ್ವಜನಿಕರು ನಿರಾಳವಾಗಿ ಸಂಚರಿಸಬಹುದಾಗಿದೆ.&lt;/p&gt;&lt;h2&gt;ಕಬಕ ಪುತ್ತೂರು ಹಾಗೂ ಸುಬ್ರಹ್ಮಣ್ಯ ನಿಲ್ದಾಣಗಳ ಮೇಲ್ದರ್ಜೆ&lt;/h2&gt;&lt;p&gt;ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ₹4.4 ಕೋಟಿ ವೆಚ್ಚದಲ್ಲಿ ವಿಸ್ತರಿತ ಶೆಲ್ಟರ್ ಹಾಗೂ ಸುಸಜ್ಜಿತ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಈ ಹಿಂದೆ ಮೀಟರ್&zwnj;ಗೇಜ್ ಹಳಿಯು ಬ್ರಾಡ್&zwnj;ಗೇಜ್ ಆಗಿ ಬದಲಾದ ನಂತರ ಪುತ್ತೂರು ನಿಲ್ದಾಣದಿಂದ ನಿತ್ಯ ಪ್ರಯಾಣಿಸುವ ನೂರಾರು ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಹೀಗಾಗಿ, ನಿಲ್ದಾಣದಲ್ಲಿ ವಿಸ್ತರಿತ ಶೆಲ್ಟರ್ ನಿರ್ಮಾಣ ಮಾಡುವುದು ಅನಿವಾರ್ಯವಾಗಿತ್ತು.&lt;/p&gt;&lt;p&gt;ಇದಲ್ಲದೆ, ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ರೈಲುಗಳಿಗೆ ನೀರು ತುಂಬಿಸುವ ಆಧುನಿಕ 'ಕೋಚ್ ವಾಟರಿಂಗ್' ವ್ಯವಸ್ಥೆಯನ್ನು ₹5.29 ಕೋಟಿ ವೆಚ್ಚದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಸಂಸದರು ವಿವರಿಸಿದರು. ಈ ಭಾಗದ ರೈಲ್ವೆ ನಿಲ್ದಾಣಗಳ ಒಟ್ಟಾರೆ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಶೀಘ್ರದಲ್ಲೇ ಮೈಸೂರು ರೈಲ್ವೆ ವಿಭಾಗದ ಡಿಆರ್&zwnj;ಎಂ (DRM) ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.&lt;/p&gt;&lt;h2&gt;ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ₹57 ಕೋಟಿ ಕೇಂದ್ರ ನಿಧಿ&lt;/h2&gt;&lt;p&gt;ಇದೇ ಸಂದರ್ಭದಲ್ಲಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಕುರಿತು ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ, &quot;ಕೇಂದ್ರ ರಸ್ತೆ ನಿಧಿಯಿಂದ (Central Road Fund) ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಮುಖ ರಸ್ತೆಗಳ ಬಲವರ್ಧನೆ ಹಾಗೂ ಅಭಿವೃದ್ಧಿಗಾಗಿ ಒಟ್ಟು ₹57 ಕೋಟಿ ಹಣ ಬಿಡುಗಡೆಯಾಗಿದೆ. ಈ ಯೋಜನೆಯಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ಹಾಗೂ ನಗರ ಭಾಗದ ಪ್ರಮುಖ ರಸ್ತೆಗಳು ಸೇರಿವೆ,&quot; ಎಂದರು.&lt;/p&gt;&lt;p&gt;&quot;ನಾವು ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ. ಭಾರತೀಯ ಜನತಾ ಪಾರ್ಟಿ (BJP) ಕೇವಲ ವಿಕಾಸವಾದ ಮತ್ತು ಸರ್ವತೋಮುಖ ಪ್ರಗತಿಯಲ್ಲಿ ಮಾತ್ರ ನಂಬಿಕೆ ಇಟ್ಟುಕೊಂಡಿದೆ. ಅದಕ್ಕೆ ತಕ್ಕಂತೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.&quot;&lt;/p&gt;&lt;p&gt;&mdash; ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು&lt;/p&gt;&lt;h2&gt;ಗಣ್ಯರ ಉಪಸ್ಥಿತಿ ಮತ್ತು ನಿಲ್ದಾಣ ಪರಿಶೀಲನೆ&lt;/h2&gt;&lt;p&gt;ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಪುತ್ತೂರು ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಹಿರಿಯ ಡಿವಿಶನಲ್ ಎಂಜಿನಿಯರ್ ರೋಹನ್ ಡೋಂಗ್ರೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೈಲ್ವೆ ಎಂಜಿನಿಯರ್ ಹರ್ಷವರ್ಧನ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಸಂಸದರು ಅಧಿಕಾರಿಗಳೊಂದಿಗೆ ಕಬಕ ಪುತ್ತೂರು ನಿಲ್ದಾಣದ ಒಳಾಂಗಣ ಹಾಗೂ ರೈಲ್ವೆ ಹಳಿಗಳ ಸುರಕ್ಷತೆಯನ್ನು ಖುದ್ದಾಗಿ ಪರಿಶೀಲಿಸಿದರು.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/dakshina-kannada-railways-mp-brijesh-chowta-announces-rs18-crore-new-overbridges-and-rs57-crore-for-road-projects-gdp/articleshow-p93z451"/>
        </item>
        <item>
            <title><![CDATA[ಕರಾವಳಿಯಲ್ಲಿ ಶೇ.54ರಷ್ಟು ಭಾರೀ ಕುಸಿದ ಮುಂಗಾರು, ಮಳೆಗಾಲದಲ್ಲೂ ಮುಂದುವರಿದ ಬೇಸಿಗೆ ಹವೆ, ಬತ್ತಿದ ನೇತ್ರಾವತಿ!]]></title>
            <link>https://kannada.asianetnews.com/gallery/karnataka-districts/costal-karnataka-dakshina-kannada-monsoon-deficit-2026-faces-54-percent-rain-deficit-nethravathi-river-drying-up-gdp-rffbe4k</link>
            <guid isPermaLink="true">https://kannada.asianetnews.com/gallery/karnataka-districts/costal-karnataka-dakshina-kannada-monsoon-deficit-2026-faces-54-percent-rain-deficit-nethravathi-river-drying-up-gdp-rffbe4k</guid>
            <pubDate>Sat, 20 Jun 2026 16:21:21 +0530</pubDate>
            <description><![CDATA[&lt;p&gt;ಈ ವರ್ಷ &amp;nbsp;ಮುಂಗಾರು ದುರ್ಬಲಗೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣದಲ್ಲಿ ಶೇ.54ರಷ್ಟು ಭಾರೀ ಕುಸಿತ ಕಂಡಿದೆ. ಇದರಿಂದಾಗಿ ನದಿಗಳು ಬತ್ತುತ್ತಿದ್ದು, ಡ್ಯಾಂ ಗೇಟ್ ತೆರೆದ ನಂತರ ನೀರಿನ ಸಮಸ್ಯೆ ಉಂಟಾಗಿದೆ ಹಾಗೂ ಭತ್ತದ ಕೃಷಿಕರು ನಾಟಿ ಮಾಡಲು ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvj95x31k7he9ak1bma3vk37,imgname-nethravathi-river--2--1781951296608.jpg" type="image/jpeg" height="390" width="690"/>
            <content:encoded><![CDATA[&lt;p&gt;ಈ ವರ್ಷ &amp;nbsp;ಮುಂಗಾರು ದುರ್ಬಲಗೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣದಲ್ಲಿ ಶೇ.54ರಷ್ಟು ಭಾರೀ ಕುಸಿತ ಕಂಡಿದೆ. ಇದರಿಂದಾಗಿ ನದಿಗಳು ಬತ್ತುತ್ತಿದ್ದು, ಡ್ಯಾಂ ಗೇಟ್ ತೆರೆದ ನಂತರ ನೀರಿನ ಸಮಸ್ಯೆ ಉಂಟಾಗಿದೆ ಹಾಗೂ ಭತ್ತದ ಕೃಷಿಕರು ನಾಟಿ ಮಾಡಲು ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;&lt;img&gt;&lt;p&gt;ವರದಿ: ದಯಾನಂದ ಕಲ್ನಾರ್&zwnj;&lt;/p&gt;&lt;p&gt;ಮಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ದುರ್ಬಲಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಬಾರಿ ಮಳೆ ದೂರವಾಗಿದೆ. ದ.ಕ. ಜಿಲ್ಲೆಯಲ್ಲಿ ಜೂನ್&zwnj; ತಿಂಗಳ ಮಳೆ ಹಂಗಾಮಿನಲ್ಲೂ ಬೇಸಿಗೆ ವಾತಾವರಣ ಕಂಡುಬರುತ್ತಿದೆ. ಒಟ್ಟು ಮಳೆಯಲ್ಲಿ ಕಳೆದ ವರ್ಷ ಶೇ.8ರಷ್ಟು ಹೆಚ್ಚು ಮಳೆಯಾಗಿದ್ದರೆ, ಈ ವರ್ಷ ಒಟ್ಟು ಮಳೆಯಲ್ಲಿ ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ.&lt;/p&gt;&lt;p&gt;ಈ ಬಾರಿಗೆ ಮೇ 29ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿತ್ತಾದರೂ, ಜೂ.4ಕ್ಕೆ ಅಧಿಕೃತವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಬಳಿಕದಲ್ಲಿ ಕರಾವಳಿ ಕರ್ನಾಟದ ಮೂಲಕ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಆದರೆ ಮಳೆಗಾಲ ಆರಂಭದಲ್ಲೇ ಮುಂಗಾರು ದುರ್ಬಲಗೊಂಡಿತ್ತು.&lt;/p&gt;&lt;img&gt;&lt;p&gt;ದ.ಕ. ಜಿಲ್ಲೆಯಲ್ಲಿ 2025ರ ಜೂ.1ರಿಂದ ಜೂ.19ರ ವರೆಗೆ 998.8 ಮಿಲಿ ಮೀಟರ್&zwnj; ಮಳೆಯಾಗಿದ್ದರೆ, 2026ರ ಜೂ.1ರಿಂದ ಜೂ.19ರ ವರೆಗೆ ಕೇವಲ 229.1 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ. ಈ ವರ್ಷ 502 ಮಿ.ಮೀ. ಸಾಮಾನ್ಯ ಮಳೆಯೂ ಆಗಿಲ್ಲ.&lt;/p&gt;&lt;img&gt;&lt;p&gt;2025ರ ಜೂ.1ರಿಂದ 19ರ ವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ 1121.1 ಮಿ.ಮೀ., ಬಂಟ್ವಾಳದಲ್ಲಿ 1034.9 ಮಿ.ಮೀ., ಮಂಗಳೂರಿನಲ್ಲಿ 880.4 ಮಿ.ಮೀ., ಪುತ್ತೂರಿನಲ್ಲಿ 881.2 ಮಿ.ಮೀ., ಸುಳ್ಯದಲ್ಲಿ 869.5 ಮಿ.ಮೀ., ಮೂಡುಬಿದಿರೆಯಲ್ಲಿ 1144.4 ಮಿ.ಮೀ., ಕಡಬದಲ್ಲಿ 981.2 ಮಿ.ಮೀ., ಮೂಲ್ಕಿಯಲ್ಲಿ 930.5 ಮಿ.ಮೀ., ಉಳ್ಳಾಲದಲ್ಲಿ 799.9 ಮಿ.ಮೀ.ಮಳೆಯಾಗಿತ್ತು. ಆದರೆ ಈ ವರ್ಷ ಬೆಳ್ತಂಗಡಿಯಲ್ಲಿ 210.5 ಮಿ.ಮೀ., ಬಂಟ್ವಾಳದಲ್ಲಿ 218 ಮಿ.ಮೀ., ಮಂಗಳೂರಿನಲ್ಲಿ 307.2 ಮಿ.ಮೀ., ಪುತ್ತೂರಿನಲ್ಲಿ 168.9 ಮಿ.ಮೀ., ಸುಳ್ಯದಲ್ಲಿ 203 ಮಿ.ಮೀ., ಮೂಡುಬಿದಿರೆಯಲ್ಲಿ 227.2 ಮಿ.ಮೀ., ಕಡಬದಲ್ಲಿ 264.8 ಮಿ.ಮೀ., ಮೂಲ್ಕಿಯಲ್ಲಿ 288.4 ಮಿ.ಮೀ., ಉಳ್ಳಾಲದಲ್ಲಿ 327.9 ಮಿ.ಮೀ.ಮಾತ್ರವೇ ಮಳೆಯಾಗಿದೆ. ಕಳೆದ ವರ್ಷವೂ ಮಂಗಳೂರು (ಶೇ.-14), ಪುತ್ತೂರು (ಶೇ.-9), ಮುಲ್ಕಿ (ಶೇ.-14), ಉಳ್ಳಾಲ (ಶೇ.-22) ತಾಲೂಕುಗಳಲ್ಲೂ ಸಾಮಾನ್ಯ ಮಳೆಗಿಂತ ಕಡಿಮೆ ಮಳೆಯಾಗಿತ್ತು. ಆದರೆ ಒಟ್ಟು ಮಳೆಯಲ್ಲಿ ಕಳೆದ ವರ್ಷ ಶೇ.8ರಷ್ಟು ಹೆಚ್ಚು ಮಳೆಯಾಗಿದ್ದರೆ, ಈ ವರ್ಷ ಒಟ್ಟು ಮಳೆಯಲ್ಲಿ ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ.&lt;/p&gt;&lt;img&gt;&lt;p&gt;ಜೂನ್&zwnj; ಆರಂಭದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ನದಿಗೆ ನಿರ್ಮಿಸಲಾದ ಡ್ಯಾಂಗಳ ಗೇಟ್&zwnj; ತೆರೆಯಲಾಗಿದೆ. ಅದರಂತೆ ಉಪ್ಪಿನಂಗಡಿ ಸಮೀಪದ ಬಿಳಿಯೂರು ಡ್ಯಾಂ ಗೇಟ್&zwnj; ತೆರವು ಮಾಡಲಾಗಿತ್ತು. ಸಮೃದ್ಧ ನೀರಿನಿಂದ ಕಂಗೊಳಿಸುತ್ತಿದ್ದ ಉಪ್ಪಿನಂಗಡಿಯ ನೇತ್ರಾವತಿ ನದಿ ಡ್ಯಾಂ ಗೇಟ್&zwnj; ತೆರವು ಬಳಿಕ ನೀರಿಲ್ಲದೇ ಬರಿದಾದಂತೆ ಕಾಣುತ್ತಿದೆ.&lt;/p&gt;&lt;p&gt;ಸುಳ್ಯದ ಪಯಸ್ವಿನಿ ನದಿಯ ಡ್ಯಾಂನ ಗೇಟ್&zwnj; ತೆರವು ಮಾಡಲಾಗಿತ್ತು. ಆದರೆ ಮಳೆಯಾಗದೆ ನದಿ ಸಂಪೂರ್ಣ ಬರಿದು ಸ್ಥಿತಿಯಲ್ಲಿ ಇದೀಗ ಕಾಣುತ್ತಿದೆ. ಸುಳ್ಯದಲ್ಲಿ ಡ್ಯಾಂ ಗೇಟ್&zwnj; ತೆರೆದ ಬಳಿಕ ಮಳೆಯಾಗದೇ ನದಿಯಲ್ಲೂ ನೀರಿನ ಮಟ್ಟ ಕುಸಿದು ಕುಡಿಯಲು ನೀರಿನ ಸಮಸ್ಯೆ ಉಂಟಾಗಿತ್ತು. ಬಳಿಕ ನದಿಯ ಹೂಳು ತೆಗೆದು ಜಾಕ್&zwnj;ವೆಲ್&zwnj;ಗೆ ನೀರು ಹರಿಸಲು ವ್ಯವಸ್ಥೆ ಮಾಡಲಾಗಿ ನೀರಿನ ಸಮಸ್ಯೆಗೆ ಪರಿಹಾರ ಕ್ರಮ ವಹಿಸಲಾಗಿತ್ತು.&lt;/p&gt;&lt;p&gt;ಜೂನ್&zwnj; ಆರಂಭದಲ್ಲಿ ಮಳೆಯಾಗಿದ್ದರಿಂದ ಸಣ್ಣ-ಪುಟ್ಟ ತೋಡು, ಹಳ್ಳಗಳಲ್ಲಿ ನೀರಿನ ಒರತೆ ಉಂಟಾಗಿ ನೀರು ಹರಿವು ಆರಂಭಗೊಂಡಿತ್ತು. ಇದೀಗ ಮಳೆಯಿಲ್ಲದೇ ಮತ್ತೆ ತೋಡು, ಹಳ್ಳಗಳು ನೀರಿಲ್ಲದೇ ಬತ್ತುತ್ತಿದೆ.&lt;/p&gt;&lt;img&gt;&lt;p&gt;ಈ ಬಾರಿ ಮಳೆ ಇಲ್ಲದೇ ಗದ್ದೆ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗದ್ದೆ ಬೇಸಾಯ ಕೃಷಿಕರು ನೇಜಿ ಹಾಕಿ ನಾಟಿ ಮಾಡಲು ಮಳೆ ಇಲ್ಲದೇ ಅಡ್ಡಿಯಾಗಿದ್ದು, ಎರಡು, ಮೂರನೇ ಹಂತದ ನೇಜಿ ನಾಟಿಗೆ ಮಳೆ ಕೊರತೆ ಅಡ್ಡಿಯಾಗಲಿದೆ. ಈ ಬಾರಿ ಒಂದೇ ಹಂತದ ನೇಜಿ ಮಾಡಲು ಮಾತ್ರವೇ ಸಾಧ್ಯವಾಗುವ ಪರಿಸ್ಥಿತಿ ಕೃಷಿಕರಲ್ಲಿದೆ.ಮಳೆ ದೂರವಾಗಿರುವುದರಿಂದ ಅಡಕೆ ಕೃಷಿಕರಿಗೆ ಕೊಳರೋಗ ಭೀತಿ ಕೊಂಚ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ತೋಟಕ್ಕೆ ಔಷಧಿ ಸಿಂಪಡಿಸಲು ಅನುಕೂಲಕರವಾಗಿದೆ.&lt;/p&gt;&lt;h2&gt;&lt;strong&gt;ಬತ್ತಿದ ಸ್ಥಿತಿಯಲ್ಲಿ ನೇತ್ರಾವತಿ&lt;/strong&gt;&lt;/h2&gt;&lt;p&gt;2025ರ ಜೂ. 19 ರಂದು ಉಪ್ಪಿನಂಗಡಿಯ ನೇತ್ರಾವತಿ ನದಿ ಮೈತುಂಬಿ ಹರಿಯುತ್ತಿತ್ತು, 2026ರ ಜೂ .19ರಂದು ನದಿ ನೀರಿನ ಹರಿವು ಇಲ್ಲದ ದೃಶ್ಯ ಕಂಡುಬಂದಿದೆ. ಉಪ್ಪಿನಂಗಡಿ ಪ್ರವಾಹ ರಕ್ಷಣಾ ತಂಡದ ಲೀಡರ್ ದಿನೇಶ್ ಬಿ. ಅವರು ಕಳೆದ ವರ್ಷ ಹಾಗೂ ಈ ವರ್ಷದ ನದಿಯ ನೀರಿನ ಮಟ್ಟದ ಸ್ಥಿತಿ ಪೋಟೋಗಳನ್ನು ಒದಗಿಸಿದ್ದಾರೆ.&lt;/p&gt;&lt;p&gt;ಈ ಬಾರಿ ಮುಂಗಾರು ದುರ್ಬಲಗೊಂಡಿರುವುದು ಕಂಡುಬಂದಿದೆ. ಜೂನ್&zwnj; ಕೊನೆವರೆಗೂ ಮಳೆಯಾಗದೇ ಇದ್ದಲ್ಲಿ ಭತ್ತ ಕೃಷಿಕರಿಗೆ ತೊಂದರೆಯಾಗಲಿದೆ. ಈಗ ಭತ್ತ ನರ್ಸರಿ ಪ್ರಕ್ರಿಯೆಯಲ್ಲಿದ್ದು, ಜುಲೈನಲ್ಲಿ ನಾಟಿ ಸಂದರ್ಭದ ಮೊದಲು ಮಳೆ ಆಗದೇ ಇದ್ದಲ್ಲಿ ತೊಂದರೆ ಆಗಲಿದೆ. ಪರ್ಯಾಯ ಕ್ರಮದ ಬಗ್ಗೆಯೂ ಕ್ರಮ ವಹಿಸಲಾಗುವುದು.&lt;/p&gt;&lt;p&gt;-ಹೊನ್ನಪ್ಪ ಗೌಡ, ಜಂಟಿ ನಿರ್ದೇಶಕರು ಕೃಷಿ ಇಲಾಖೆ ಮಂಗಳೂರು&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/costal-karnataka-dakshina-kannada-monsoon-deficit-2026-faces-54-percent-rain-deficit-nethravathi-river-drying-up-gdp-rffbe4k"/>
        </item>
        <item>
            <title><![CDATA[VB-G RAM G Logo: ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಗೆ ಪುತ್ತೂರಿನ ಕಲಾವಿದ  ರಚಿಸಿದ ಲೋಗೋ ಆಯ್ಕೆ!]]></title>
            <link>https://kannada.asianetnews.com/karnataka-districts/young-artist-ram-prasad-from-puttur-selected-for-g-ram-g-logo-rav/articleshow-s29sxdc</link>
            <guid isPermaLink="true">https://kannada.asianetnews.com/karnataka-districts/young-artist-ram-prasad-from-puttur-selected-for-g-ram-g-logo-rav/articleshow-s29sxdc</guid>
            <pubDate>Sat, 27 Jun 2026 05:18:58 +0530</pubDate>
            <description><![CDATA[ಪುತ್ತೂರಿನ ಕಲಾವಿದ ಕೆ. ರಾಮ್ ಪ್ರಸಾದ್ ಅವರು ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಗಾಗಿ ರಚಿಸಿದ ಲೋಗೋ ಆಯ್ಕೆಯಾಗಿದೆ. ದೇಶದಾದ್ಯಂತ ಬಂದ 7 ಸಾವಿರಕ್ಕೂ ಅಧಿಕ ವಿನ್ಯಾಸಗಳಲ್ಲಿ ಇವರ ಲೋಗೋ ಆಯ್ಕೆಯಾಗಿದ್ದು, ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kw353ezhm4d54rpj0b9bg6r7,imgname----------------------13--1782517447665.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುತ್ತೂರು (ಜೂ.27): &lt;/strong&gt;ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಗೆ ಕನ್ನಡಿಗ ಕಲಾವಿದ ರಚಿಸಿದ ಲೋಗೋ(Logo) ವಿನ್ಯಾಸವನ್ನು ಆಯ್ಕೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಲಾವಿದ ಕೆ.ರಾಮ್ ಪ್ರಸಾದ್&zwnj;(K Ram prasad) ಅವರು ಲೋಗೋ ರಚಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಈ ಲೋಗೋ ವಿನ್ಯಾಸವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದು, ಜೂ.29ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಿದೆ. ಇದೇ ವೇಳೆ ರಾಮ್&zwnj; ಪ್ರಸಾದ್&zwnj; ಅವರನ್ನು ಸನ್ಮಾನಿಸಿ, ₹50 ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನಿಸಲಿದೆ.&lt;/p&gt;&lt;h2&gt;ಲೋಗೊ ವಿನ್ಯಾಸ ಸ್ಪರ್ಧೆ&lt;/h2&gt;&lt;p&gt;ವಿಬಿ ಜಿ ರಾಂ ಜಿ ಯೋಜನೆ(VBG Ramji Yojana)ಗೆ ಲೋಗೋ ವಿನ್ಯಾಸ ಮಾಡುವಂತೆ ದೇಶದಾಂತ್ಯಂತ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ವಿನ್ಯಾಸಕ್ಕೆ ದೇಶದ ಹಲವು ಕಡೆಗಳಿಂದ ಸುಮಾರು ೭ ಸಾವಿರಕ್ಕೂ ಅಧಿಕ ಕಲಾವಿದರು ವಿನ್ಯಾಸಗೊಳಿಸಿದ ಲೋಗೋ ಕಳುಹಿಸಿಕೊಟ್ಟಿದ್ದರು. ಪುತ್ತೂರು ನಗರ ನಿವಾಸಿಗಳಾದ ಮಲ್ಲೇಶ್ ಆಚಾರ್ಯ- ಅನುರಾಧಾ ಕೆ. ದಂಪತಿ ಪುತ್ರ ರಾಮ್&zwnj;ಪ್ರಸಾದ್ ಅವರು ಲೋಗೋ ವಿನ್ಯಾಸಗೊಳಿಸಿ ಕಳುಹಿಸಿದ್ದರು. ಇದಾದ ಒಂದೂವರೆ ತಿಂಗಳ ಬಳಿಕ ಅವರು ಕಳುಹಿಸಿದ ಲೋಗೋ ವಿಬಿಜಿ ರಾಮ್ ಜಿ ಯೋಜನೆಗೆ ಆಯ್ಕೆಯಾಗಿದೆ.ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹೊಸ ರೂಪವಾಗಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಗೆ ಮುಂದಿನ ದಿನಗಳಲ್ಲಿ ಬಳಸಲಾಗುವ ಲೋಗೊವನ್ನು ಒದಗಿಸಿದ ಕೀರ್ತಿ ಪುತ್ತೂರಿನ ರಾಮ್ ಪ್ರಸಾದ್ ಪಾಲಿಗೆ ಲಭಿಸಿದೆ.&lt;/p&gt;&lt;h3&gt;ಆಯ್ಕೆಯಾಗುವ ನಿರೀಕ್ಷೆ ಇರಲಿಲ್ಲ..!&lt;/h3&gt;&lt;p&gt;ಲೋಗೋ ಕೊಡಲು ಕೇಂದ್ರ ಸರ್ಕಾರ ಎಲ್ಲರಿಗೂ ಮುಕ್ತ ಅವಕಾಶ ನೀಡಿತ್ತು. ಇಂಟರ್ನೆಟ್&zwnj;ನಲ್ಲಿ ಈ ವಿಷಯ ನೋಡಿದೆ. ಮಾರ್ಚ್ ೩೦ ಕೊನೆಯ ದಿನವಾಗಿತ್ತು. ಕೊನೆಯ ಒಂದು ವಾರದಲ್ಲಿ ಸ್ಪರ್ಧೆಗಾಗಿ ಲೋಗೋ ಬಿಡಿಸಲು ತೊಡಗಿದೆ. ಮೊದಲು ವಿ.ಬಿ.ಜಿ. ರಾಮ್ ಜಿ ಯೋಜನೆಯ ಉದ್ದೇಶ, ಸ್ವರೂಪಗಳ ಬಗ್ಗೆ ತಿಳಿದುಕೊಂಡೆ. ಅದಕ್ಕೆ ತಕ್ಕದಾದ ಲೋಗೋ ಬರೆದೆ. ಆದರೆ ಸುಮಾರು ೨೦ ಲೋಗೋ ರಚಿಸಿದರೂ ನನಗೆ ತೃಪ್ತಿಯಾಗಲಿಲ್ಲ. ಆಗಲೇ ಡೆಡ್&zwnj;ಲೈನ್ ಮುಗಿದಿತ್ತು. ಮಾರ್ಚ್ ೩೦ರಂದು ೫ ಸಾವಿರ ನೋಂದಣಿ ಕಾಣುತ್ತಿತ್ತು. ಇನ್ನಾಗದು ಎಂದು ಕೈಬಿಟ್ಟೆ. ಏ.೧ರಂದು ನೋಡಿದಾಗ ೪ ದಿನ ವಿಸ್ತರಣೆ ಮಾಡಿದ್ದು ಗೊತ್ತಾಯಿತು. ಮತ್ತೆ ಉತ್ಸಾಹ ಚಿಗುರಿತು. ಮತ್ತೆ ಗೀಚತೊಡಗಿದೆ. ಹಲವಾರು ಲೋಗೋ ಬರೆದ ಬಳಿಕ ಒಂದು ಲೋಗೋ ನನಗೆ ಇಷ್ಟವಾಯಿತು. ಏ.೪ರಂದು ಕೊನೆಯ ಕ್ಷಣದಲ್ಲಿ ಅದನ್ನು ಕಳಿಸಿದೆ. ಆಯ್ಕೆಯಾಗುವ ಯಾವ ನಿರೀಕ್ಷೆಯೂ ಇರಲಿಲ್ಲ ಎಂದು ರಾಮ್ ಪ್ರಸಾದ್ ತಿಳಿಸಿದರು.&lt;/p&gt;&lt;p&gt;&lt;strong&gt;ಲೋಗೊ ರಚಿಸುವ ಮುನ್ನ ಏನು ಮಾಡಬೇಕು?&lt;/strong&gt;&lt;/p&gt;&lt;p&gt;--------------------------ಯಾವುದೇ ಲೋಗೋ ರಚಿಸಬೇಕಾದರೂ ಮೊದಲು ಕಾನ್ಸೆಪ್ಟ್ ಬಿಲ್ಡ್ ಮಾಡಬೇಕು. ಅದಕ್ಕೆ ತಕ್ಕಂತೆ ಇಲಸ್ಟ್ರೇಶನ್ ಬರೆಯಬೇಕು. ಕೆಲವೊಮ್ಮೆ ೨೦ಕ್ಕಿಂತಲೂ ಅಧಿಕ ಡಿಸೈನ್ ಬರೆಯಬೇಕಾಗುತ್ತದೆ. ಬಳಿಕ ಅದನ್ನು ಸರಳಗೊಳಿಸಿ ಅಂತಿಮಗೊಳಿಸಬೇಕು. ಕೆಲವೊಮ್ಮೆ ಮೊದಲು ಬರೆದ ಎಲ್ಲ ಇಲಸ್ಟ್ರೇಶನ್&zwnj;ಗಳನ್ನು ಬದಿಗೆ ತಳ್ಳಿ ಕೊನೆ ಕ್ಷಣಣದಲ್ಲಿ ಹೊಳೆದ ಸಣ್ಣದೊಂದು ಐಡಿಯಾದ ಕಿಡಿ ಅದ್ಭುತ ರೂಪ ಕೊಡುತ್ತದೆ. ಇಂಥ ಅನೇಕ ಅನುಭವ ನನಗಾಗಿದೆ. ಇಲ್ಲೂ ಆಗಿದ್ದು ಅದೇ ಆಗಿದೆ.&lt;/p&gt;&lt;p&gt;-ಕೆ.ರಾಮ್&zwnj;ಪ್ರಸಾದ್, ಲೋಗೋ ರಚಿಸಿದ ಯುವ ಕಲಾವಿದ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/young-artist-ram-prasad-from-puttur-selected-for-g-ram-g-logo-rav/articleshow-s29sxdc"/>
        </item>
        <item>
            <title><![CDATA[Suhas shetty case:  ಸುಹಾಸ್ ಶೆಟ್ಟಿ ಪ್ರಕರಣ: ಒಂದು ವರ್ಷದ ಬಳಿಕ ದಿಢೀರ್ ಬಜಪೆಗೆ ಬಂದಿಳಿದ ಎನ್‌ಐಎ ತಂಡ!]]></title>
            <link>https://kannada.asianetnews.com/gallery/karnataka-districts/suhas-shetty-case-nia-team-landed-at-mangalore-bajape-police-station-rav-tb6ggov</link>
            <guid isPermaLink="true">https://kannada.asianetnews.com/gallery/karnataka-districts/suhas-shetty-case-nia-team-landed-at-mangalore-bajape-police-station-rav-tb6ggov</guid>
            <pubDate>Wed, 24 Jun 2026 04:53:19 +0530</pubDate>
            <description><![CDATA[&lt;p&gt;Suhashetty case: &amp;nbsp;ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ರಾಷ್ಟ್ರೀಯ ತನಿಖಾ ಏಜೆನ್ಸಿ(NIA) ಅಧಿಕಾರಿಗಳು ದಿಢೀರ್ ಆಗಿ ಮತ್ತೆ ಬಜಪೆ ಠಾಣೆಗೆ ಆಗಮಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvvbtpr0478415jn568dny22,imgname----------------------77--1782256065280.jpg" type="image/jpeg" height="390" width="690"/>
            <content:encoded><![CDATA[&lt;p&gt;Suhashetty case: &amp;nbsp;ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ರಾಷ್ಟ್ರೀಯ ತನಿಖಾ ಏಜೆನ್ಸಿ(NIA) ಅಧಿಕಾರಿಗಳು ದಿಢೀರ್ ಆಗಿ ಮತ್ತೆ ಬಜಪೆ ಠಾಣೆಗೆ ಆಗಮಿಸಿದ್ದಾರೆ.&lt;/p&gt;&lt;img&gt;&lt;p&gt;ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ರಾಷ್ಟ್ರೀಯ ತನಿಖಾ ಏಜೆನ್ಸಿ(NIA) ಅಧಿಕಾರಿಗಳು ದಿಢೀರ್ ಆಗಿ ಮತ್ತೆ ಬಜಪೆ ಠಾಣೆಗೆ ಆಗಮಿಸಿದ್ದಾರೆ.&lt;/p&gt;&lt;img&gt;&lt;p&gt;ಡಿವೈಎಸ್ಪಿ ರಾಜವ್ ಸಿಂಗ್, ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ್ ಸೇರಿದಂತೆ ಐವರು ಅಧಿಕಾರಿಗಳ ತಂಡ ಮಂಗಳವಾರ ಬಜಪೆಗೆ ಆಗಮಿಸಿದೆ. ಕೆಲವರಿಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದೆ. ಅಧಿಕಾರಿಗಳು ಠಾಣೆಯಲ್ಲಿ ಬೀಡು ಬಿಟ್ಟಿದ್ದು, ಕೆಲವು ದಾಖಲಾತಿಗಳನ್ನು ಮುಂದಿಟ್ಟು ಶಂಕಿತರ ಮೇಲೆ ನಿಗಾ ಇರಿಸಿದ್ದಾರೆ.&lt;/p&gt;&lt;img&gt;&lt;p&gt;2025ರ ಆಗಸ್ಟ್ 2ರಂದು ಮಂಗಳೂರು ಹೊರವಲಯದ ಸುರತ್ಕಲ್ ಮತ್ತು ಬಜಪೆ ಠಾಣೆ ವ್ಯಾಪ್ತಿಯ 14 ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಎನ್&zwnj;ಐಎ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಒಯ್ದಿದ್ದರು. ಇದೀಗ ಒಂದು ವರ್ಷದ ಬಳಿಕ ತಂಡ ಮರಳಿದ್ದು, ನಿಷೇಧಿತ ಪಿಎಫ್&zwnj;ಐ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಕೆಲವರನ್ನು ವಿಚಾರಣೆಗೆ ಕರೆಸಿದೆ.&lt;/p&gt;&lt;img&gt;&lt;p&gt;2025 ರ ಮೇ 1ರಂದು ಬಜಪೆ ಬಳಿಯ ಕಿನ್ನಿಪದವು ಎಂಬಲ್ಲಿ ರಾತ್ರಿ ಎಂಟು ಗಂಟೆ ವೇಳೆಗೆ ಸುಹಾಸ್ ಶೆಟ್ಟಿ ಬರ್ಬರ ಹತ್ಯೆಯಾಗಿತ್ತು. ಪ್ರಕರಣದಲ್ಲಿ ಪಿಎಫ್&zwnj;ಐ ಕಾರ್ಯಕರ್ತರು ಸೇರಿ 12 ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ವಿದೇಶದಿಂದ ಫಂಡಿಂಗ್ ಆಗಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಎನ್&zwnj;ಐಎ ತನಿಖೆಗೆ ವಹಿಸಲಾಗಿತ್ತು.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/suhas-shetty-case-nia-team-landed-at-mangalore-bajape-police-station-rav-tb6ggov"/>
        </item>
        <item>
            <title><![CDATA[ಎಂಆರ್‌ಜಿ ಗ್ರೂಪ್ ಮಾಲೀಕ, ಮಂಗಳೂರು ಮೂಲದ ಉದ್ಯಮಿ ಪ್ರಕಾಶ್ ಶೆಟ್ಟಿಯಿಂದ ಐಷಾರಾಮಿ ಖಾಸಗಿ ಜೆಟ್ ಖರೀದಿ!]]></title>
            <link>https://kannada.asianetnews.com/gallery/business/mangalaluru-entrepreneur-dr-k-prakash-shetty-adds-embraer-legacy-650jet-to-mrg-group-fleet-expands-global-business-gdp-v4qzmly</link>
            <guid isPermaLink="true">https://kannada.asianetnews.com/gallery/business/mangalaluru-entrepreneur-dr-k-prakash-shetty-adds-embraer-legacy-650jet-to-mrg-group-fleet-expands-global-business-gdp-v4qzmly</guid>
            <pubDate>Fri, 19 Jun 2026 21:02:13 +0530</pubDate>
            <description><![CDATA[&lt;p&gt;ಮಂಗಳೂರು ಮೂಲದ ಉದ್ಯಮಿ ,ಎಂಆರ್&zwnj;ಜಿ ಗ್ರೂಪ್&zwnj;ನ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ &amp;nbsp;'ಎಂಬ್ರೇಯರ್ ಲೆಗಸಿ 650' ಬಿಸಿನೆಸ್ ಜೆಟ್ ಅನ್ನು ಖರೀದಿಸಿದ್ದಾರೆ. ಈ ಅತ್ಯಾಧುನಿಕ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಸ್ವಾಗತಿಸಲಾಯಿತು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvg7ct8sd65grgzkqrjb5yep,imgname-mrg-group-prakash-shetty--5--1781882317081.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು ಮೂಲದ ಉದ್ಯಮಿ ,ಎಂಆರ್&zwnj;ಜಿ ಗ್ರೂಪ್&zwnj;ನ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ &amp;nbsp;'ಎಂಬ್ರೇಯರ್ ಲೆಗಸಿ 650' ಬಿಸಿನೆಸ್ ಜೆಟ್ ಅನ್ನು ಖರೀದಿಸಿದ್ದಾರೆ. ಈ ಅತ್ಯಾಧುನಿಕ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಸ್ವಾಗತಿಸಲಾಯಿತು.&amp;nbsp;&lt;/p&gt;&lt;img&gt;&lt;p&gt;ಮಂಗಳೂರು ಮೂಲದ ಖ್ಯಾತ ಉದ್ಯಮಿ, ಎಂಆರ್&zwnj;ಜಿ ಗ್ರೂಪ್&zwnj;ನ (MRG Group) ಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ತಮ್ಮ ಹೆಮ್ಮೆಯ ಉದ್ಯಮ ಸಾಮ್ರಾಜ್ಯದ ಮುಕುಟಕ್ಕೆ ಮತ್ತೊಂದು ಐಷಾರಾಮಿ ಗರಿಯನ್ನು ನೆಟ್ಟಿದ್ದಾರೆ . ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸುವ ಹಾಗೂ ಸಂಪರ್ಕ ಜಾಲವನ್ನು ಬಲಪಡಿಸುವ ದೂರದೃಷ್ಟಿಯೊಂದಿಗೆ, ಅವರು ಬರೋಬ್ಬರಿ 14 ಆಸನಗಳ ಸಾಮರ್ಥ್ಯದ ಅತ್ಯಾಧುನಿಕ 'ಎಂಬ್ರೇಯರ್ ಲೆಗಸಿ 650' (Embraer Legacy 650) ಬಿಸಿನೆಸ್ ಜೆಟ್ ವಿಮಾನವನ್ನು ಖರೀದಿಸಿ ತಮ್ಮ ಎಂಆರ್&zwnj;ಜಿ ಕುಟುಂಬಕ್ಕೆ ಸೇರ್ಪಡೆಗೊಳಿಸಿದ್ದಾರೆ. ಅಮೆರಿಕದಿಂದ ಅತ್ಯಂತ ವಿಶೇಷವಾಗಿ ಸ್ವಾಧೀನಪಡಿಸಿಕೊಂಡ ಈ ಖಾಸಗಿ ವಿಮಾನವು ಉದ್ಯಮ ರಂಗದಲ್ಲಿ ಅವರ ಯಶಸ್ಸಿನ ಉತ್ತುಂಗಕ್ಕೆ ಮತ್ತೊಂದು ಸಾಕ್ಷಿಯಾಗಿದೆ.&lt;/p&gt;&lt;img&gt;&lt;p&gt;ಅಮೆರಿಕದಿಂದ ಆಗಮಿಸಿದ ಈ ಅತ್ಯಾಧುನಿಕ ವಿಮಾನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (MIA) ಅತ್ಯಂತ ಸಾಂಪ್ರದಾಯಿಕ ಹಾಗೂ ಭವ್ಯ ಆಚರಣೆಗಳೊಂದಿಗೆ ಸ್ವಾಗತಿಸಲಾಯಿತು. ಭಾರತೀಯ ಸಂಸ್ಕೃತಿಯ ಪರಂಪರೆಯಂತೆ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ವಿಮಾನಕ್ಕೆ ವಿಶೇಷ ಪೂಜೆ ಹಾಗೂ ಮಂತ್ರಘೋಷಗಳ ಮೂಲಕ ಆಶೀರ್ವಾದವನ್ನು ಕೋರಲಾಯಿತು. ಆಧ್ಯಾತ್ಮಿಕ ಮತ್ತು ಆಧುನಿಕತೆಯ ಈ ಅಪೂರ್ವ ಸಂಗಮದ ಕ್ಷಣದಲ್ಲಿ ಡಾ. ಪ್ರಕಾಶ್ ಶೆಟ್ಟಿ ಅವರ ಕುಟುಂಬ ಸದಸ್ಯರು, ಆಪ್ತರು, ಸ್ನೇಹಿತರು ಹಾಗೂ ಅನೇಕ ಹಿತೈಷಿಗಳು ಉಪಸ್ಥಿತರಿದ್ದು ಸಂಭ್ರಮಿಸಿದರು.&lt;/p&gt;&lt;img&gt;&lt;p&gt;ದೇಶದ ಮುಂಚೂಣಿ ಹೋಟೆಲ್ ಉದ್ಯಮಿ ಮತ್ತು ಯಶಸ್ವಿ ದಿಕ್ಸೂಚಿಯಾಗಿರುವ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಶೂನ್ಯದಿಂದ ಆರಂಭಿಸಿ ಇಂದು ಎಂಆರ್&zwnj;ಜಿ ಗ್ರೂಪ್ ಅನ್ನು ದೇಶದ ಪ್ರಮುಖ ಉದ್ಯಮ ಸಂಸ್ಥೆಯಾಗಿ ಬೆಳೆಸಿದ್ದಾರೆ. ಕೇವಲ ಕಠಿಣ ಪರಿಶ್ರಮ, ವಿನಯ ಮತ್ತು ಅಪ್ರತಿಮ ದೂರದೃಷ್ಟಿಯ ಬಲದಿಂದ ಆತಿಥ್ಯ (Hospitality), ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯ (Infrastructure) ಕ್ಷೇತ್ರಗಳನ್ನು ಒಳಗೊಂಡ ವೈವಿಧ್ಯಮಯ ಉದ್ಯಮ ಪರಿಸರ ವ್ಯವಸ್ಥೆಯನ್ನು ಅವರು ನಿರ್ಮಿಸಿದ್ದಾರೆ. ದೇಶಾದ್ಯಂತ ಅತ್ಯುನ್ನತ ಗುಣಮಟ್ಟದ ಹೋಟೆಲ್&zwnj;ಗಳು ಮತ್ತು ರೆಸಾರ್ಟ್&zwnj;ಗಳನ್ನು ಸ್ಥಾಪಿಸಿ ಸಹಸ್ರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಕೇವಲ ವ್ಯಾಪಾರ ಕುಶಾಗ್ರಮತಿಯಷ್ಟೇ ಅಲ್ಲದೆ, ತಮ್ಮ ಉದಾರ ಲೋಕೋಪಕಾರಿ ಗುಣ, ದಾನ ಧರ್ಮಗಳು ಹಾಗೂ ಸಮಾಜಮುಖಿ ಚಿಂತನೆಗಳ ಮೂಲಕ ಸಮಾಜದಲ್ಲಿ ಅಪಾರ ಗೌರವ ಮತ್ತು ಮನ್ನಣೆಯನ್ನು ಗಳಿಸಿದ್ದಾರೆ.&lt;/p&gt;&lt;img&gt;&lt;p&gt;ದೀರ್ಘ ದೂರದ ಪ್ರಯಾಣ ಸಾಮರ್ಥ್ಯ (Long-range capabilities) ಮತ್ತು ಅತ್ಯುನ್ನತ ದರ್ಜೆಯ ಪ್ರೀಮಿಯಂ ಸೌಕರ್ಯಗಳಿಗೆ ಜಾಗತಿಕವಾಗಿ ಹೆಸರಾಗಿರುವ ಎಂಬ್ರೇಯರ್ ಲೆಗಸಿ 650 ಬಿಸಿನೆಸ್ ಜೆಟ್, ಎಂಆರ್&zwnj;ಜಿ ಸಮೂಹದ ವ್ಯಾಪಾರ ಚಟುವಟಿಕೆಗಳಿಗೆ ಅಭೂತಪೂರ್ವ ವೇಗವನ್ನು ನೀಡಲಿದೆ. ದೇಶದ ವಿವಿಧ ಮೂಲೆಗಳಲ್ಲಿ ಹರಡಿರುವ ಸಂಸ್ಥೆಯ ಉದ್ಯಮಗಳ ಉಸ್ತುವಾರಿ ಹಾಗೂ ತ್ವರಿತ ನಿರ್ಧಾರಗಳಿಗೆ ಈ ಖಾಸಗಿ ವಿಮಾನವು ಅತ್ಯುತ್ತಮ ಸಂಪರ್ಕ ಸೇತುವೆಯಾಗಲಿದೆ. ಪರಂಪರೆ, ನೈತಿಕ ಮೌಲ್ಯಗಳು ಹಾಗೂ ಆಧುನಿಕ ದೃಷ್ಟಿಕೋನವನ್ನು ಸಮನ್ವಯಗೊಳಿಸಿಕೊಂಡು ಯಶಸ್ಸಿನ ಶಿಖರ ಏರುತ್ತಿರುವ ಡಾ. ಕೆ. ಪ್ರಕಾಶ್ ಶೆಟ್ಟಿ ಅವರ ಸುದೀರ್ಘ ಸಾಧನೆಯ ಪಯಣದಲ್ಲಿ ಈ ಐಷಾರಾಮಿ ವಿಮಾನದ ಸೇರ್ಪಡೆಯು ನಿಜಕ್ಕೂ ಒಂದು ಸ್ಮರಣೀಯ ಹಾಗೂ ಐತಿಹಾಸಿಕ ಅಧ್ಯಾಯವಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಗ್ರೂಪ್ ಗೋಲ್ಡ್&zwnj;ಫಿಂಚ್ ಹೋಟೆಲ್&zwnj;ಗಳು ಮತ್ತು ಮ್ಯಾರಿಯಟ್ ಮತ್ತು ಹಿಲ್ಟನ್&zwnj;ನಂತಹ ಅಂತರರಾಷ್ಟ್ರೀಯ ಫ್ರಾಂಚೈಸಿಗಳು ಉತ್ತಮ ಭೋಜನ ಮತ್ತು ಶಿಕ್ಷಣ ಸೇರಿದಂತೆ ಬಹು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಬೆಂಗಳೂರು, ಮಂಗಳೂರು, ಮುಂಬೈ, ಗೋವಾ ಮತ್ತು ದೆಹಲಿಯಾದ್ಯಂತ ಆಸ್ತಿಗಳನ್ನು ಹೊಂದಿರುವ ಗೋಲ್ಡ್&zwnj;ಫಿಂಚ್ ಬೂಟೀಕ್ ಹೋಟೆಲ್ ಸರಪಳಿಯ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಎಂಆರ್&zwnj;ಜಿ ಗ್ರೂಪ್&zwnj; ಹೊಂದಿದೆ. ಜೊತೆಗೆ ಸನಾ-ಡಿ-ಗೆ (ಕರಾವಳಿ ಪಾಕಪದ್ಧತಿ), ಕಬಾಬ್ ಸ್ಟುಡಿಯೋ ಮತ್ತು ಲೆಗಸಿ ಆಫ್ ಪಂಜಾಬ್&zwnj;ನಂತಹ ಉನ್ನತ ದರ್ಜೆಯ ರೆಸ್ಟೋರೆಂಟ್ ಬ್ರಾಂಡ್&zwnj;ಗಳನ್ನು ಸಹ ಹೊಂದಿದೆ. ಇದರ ಜೊತೆಗೆ ಐಟಿ ಪಾರ್ಕ್&zwnj;ಗಳು, ಐಷಾರಾಮಿ ಅಪಾರ್ಟ್&zwnj;ಮೆಂಟ್&zwnj;, ಉದಾಹರಣೆಗೆ ಆಹಿಕಾ ಮತ್ತು ಪಾರ್ಕ್ ಡ್ರೈವ್ ಭಾರತದಾದ್ಯಂತ ರಿಯಲ್ ಎಸ್ಟೇಟ್ ಉದ್ಯಮ ಹೊಂದಿದೆ. ಈ ಗುಂಪು ಕೃಷಿ-ಉದ್ಯಮ, ಹಣಕಾಸು ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ದೇಶ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/mangalaluru-entrepreneur-dr-k-prakash-shetty-adds-embraer-legacy-650jet-to-mrg-group-fleet-expands-global-business-gdp-v4qzmly"/>
        </item>
        <item>
            <title><![CDATA[Vande Bharat Success: ದಕ್ಷಿಣ ರೈಲ್ವೆಯಲ್ಲೇ ನಂ.1! ತಿರುವನಂತಪುರಂ–ಮಂಗಳೂರು ವಂದೇ ಭಾರತ್ ಆದಾಯದಲ್ಲಿ ದಾಖಲೆ]]></title>
            <link>https://kannada.asianetnews.com/gallery/karnataka-districts/thiruvananthapuram-mangaluru-vande-bharat-sets-revenue-record-rav-vdoefz1</link>
            <guid isPermaLink="true">https://kannada.asianetnews.com/gallery/karnataka-districts/thiruvananthapuram-mangaluru-vande-bharat-sets-revenue-record-rav-vdoefz1</guid>
            <pubDate>Tue, 23 Jun 2026 11:50:54 +0530</pubDate>
            <description><![CDATA[&lt;p&gt;:2025 ರ ಆಗಸ್ಟ್ ನಿಂದ ಅಕ್ಟೋಬರ್ ಅವಧಿಯಲ್ಲ 73.35 ಲಕ್ಷ ರೂ. ಆದಾಯ ಗಳಿಸಿರುವ 20632 ತಿರುವನಂತಪುರಂ-ಮಂಗಳೂರು ವಂದೇ ಭಾರತ್ (ವಿಬಿ) ಎಕ್ಸ್&zwnj;ಪ್ರೆಸ್ ದಕ್ಷಿಣ ರೈಲ್ವೆ ನಡೆಸುತ್ತಿರುವ ವಂದೇ ಭಾರತ್ ಸೇವೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಯಾಣಿಕರು ಹೆಚ್ಚಳ ಮತ್ತು ಆದಾಯ ಗಳಿಕೆಯಲ್ಲೂ ಮುಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsh8rz6dsezd8bgagcrkc9y,imgname----------------------66--1782194660326.jpg" type="image/jpeg" height="390" width="690"/>
            <content:encoded><![CDATA[&lt;p&gt;:2025 ರ ಆಗಸ್ಟ್ ನಿಂದ ಅಕ್ಟೋಬರ್ ಅವಧಿಯಲ್ಲ 73.35 ಲಕ್ಷ ರೂ. ಆದಾಯ ಗಳಿಸಿರುವ 20632 ತಿರುವನಂತಪುರಂ-ಮಂಗಳೂರು ವಂದೇ ಭಾರತ್ (ವಿಬಿ) ಎಕ್ಸ್&zwnj;ಪ್ರೆಸ್ ದಕ್ಷಿಣ ರೈಲ್ವೆ ನಡೆಸುತ್ತಿರುವ ವಂದೇ ಭಾರತ್ ಸೇವೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಯಾಣಿಕರು ಹೆಚ್ಚಳ ಮತ್ತು ಆದಾಯ ಗಳಿಕೆಯಲ್ಲೂ ಮುಂದಿದೆ.&lt;/p&gt;&lt;img&gt;&lt;p&gt;ಕೊಚ್ಚಿ: 2025 ರ ಆಗಸ್ಟ್ ನಿಂದ ಅಕ್ಟೋಬರ್ ಅವಧಿಯಲ್ಲಿ ಅಂದರೆ ಕೇವಲ ಎರಡು ತಿಂಗಳಲ್ಲಿ 73.35 ಲಕ್ಷ ರೂ. ಆದಾಯ ಗಳಿಸಿರುವ 20632 ತಿರುವನಂತಪುರಂ-ಮಂಗಳೂರು ವಂದೇ ಭಾರತ್ (VB) ಎಕ್ಸ್&zwnj;ಪ್ರೆಸ್(Thiruvananthapuram-Mangaluru VB) ದಕ್ಷಿಣ ರೈಲ್ವೆ ನಡೆಸುತ್ತಿರುವ ವಂದೇ ಭಾರತ್ ಸೇವೆಗಳಲ್ಲಿ ಅಗ್ರಸ್ಥಾನದಲ್ಲಿದೆ.&lt;/p&gt;&lt;p&gt;ದಕ್ಷಿಣ ರೈಲ್ವೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ ಪ್ರಮುಖ ನಗರಗಳನ್ನು ಸಂಪರ್ಕಿಸುವ 24 ವಂದೇ ಭಾರತ್ ಸೇವೆಗಳಲ್ಲಿ ಆದಾಯ ಗಳಿಕೆಯಲ್ಲಿ ಮುಂದು.&lt;/p&gt;&lt;img&gt;&lt;p&gt;20627 ಚೆನ್ನೈ ಎಗ್ಮೋರ್-ನಾಗರ್&zwnj;ಕೋಯಿಲ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್&zwnj;ನಲ್ಲಿ 2,832 ಮತ್ತು 20642 ಕೊಯಮತ್ತೂರು ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್&zwnj;ನ 835 ಬುಕಿಂಗ್&zwnj;ಗಳಿಗೆ ಹೋಲಿಸಿದರೆ, ರೈಲು ಸೇವೆಗೆ 11,896 ಬುಕಿಂಗ್&zwnj;ಗಳ ಸಂಖ್ಯೆಯೂ ಅತಿ ಹೆಚ್ಚು ಎಂದು ಅಂಕಿ-ಅಂಶಗಳು ಬಹಿರಂಗಪಡಿಸಿವೆ.&lt;/p&gt;&lt;p&gt;2025-26ರ ವೇಳೆಗೆ, ದಕ್ಷಿಣ ರೈಲ್ವೆಯ ವಂದೇ ಭಾರತ್ ಸೇವೆಗಳು ಒಟ್ಟಾಗಿ 77.38 ಲಕ್ಷ ಪ್ರಯಾಣಿಕರನ್ನು ಸಾಗಿಸಿದ್ದು, 803.86 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. 2024-25ರಲ್ಲಿ 54.12 ಲಕ್ಷ ಪ್ರಯಾಣಿಕರು ಮತ್ತು 540.65 ಕೋಟಿ ರೂ.ಗಳ ಆದಾಯವಿತ್ತು.&lt;/p&gt;&lt;img&gt;&lt;p&gt;ಮಂಗಳೂರು-ತಿರುವನಂತಪುರಂ, ಚೆನ್ನೈ ಎಗ್ಮೋರ್-ನಾಗರ್&zwnj;ಕೋಯಿಲ್ ಮತ್ತು ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ಸೇವೆಗಳು ಸೇರಿದಂತೆ ಹಲವಾರು ರೈಲುಗಳು ನಿರಂತರವಾಗಿ ಶೇ. 100 ಕ್ಕಿಂತ ಹೆಚ್ಚಿನ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತವೆ. ಇದು ಪ್ರಯಾಣಿಕರಲ್ಲಿ ಅವುಗಳ ಜನಪ್ರಿಯತೆಯನ್ನು ತೋರಿಸುತ್ತದೆ. 2026-27ರ ಮೊದಲ ಎರಡು ತಿಂಗಳಲ್ಲಿ (ಏಪ್ರಿಲ್-ಮೇ 2026) ಈ ರೈಲುಗಳು 15.21 ಲಕ್ಷ ಪ್ರಯಾಣಿಕರನ್ನು ಸಾಗಿಸುವ ಮೂಲಕ 162.96 ಕೋಟಿ ರೂ.ಗಳನ್ನು ಆದಾಯ ಗಳಿಸಿ ಹೊಸ ದಾಖಲೆ ಸೃಷ್ಟಿಸಿತು., ಪ್ರಯಾಣಿಕರು ಹೆಚ್ಚು ಪ್ರಯಾಣ ಬೆಳೆಸಲು ಇಷ್ಟಪಡುವ ಟ್ರೈನ್ ಇದು. ಇದರ ಮೂಲಕವೇ ಬಯಸುವುದರಿಂದಲೇ ಯಾವಾಗಲೂ ಬೇಡಿಕೆ. ಯಾವುದೇ ಅಡ್ಡಿ ಆತಂಕವಿಲ್ಲದೆ ಆದಾಯ ಗಳಿಕೆಯಲ್ಲಿ ಮುಂದುವರಿದಿರುವುದು ಮಾತ್ರವಲ್ಲ, ದಿನೇದಿನೆ ಹೆಚ್ಚುತ್ತಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಸಂಖ್ಯೆ ದಿನೇದಿನೆ ಹೆಚ್ಚಿದ್ದರೂ, ಪ್ರಯಾಣಿಕರಿಗೆ ರೈಲು ಹೊರಡುವ 15 ನಿಮಿಷಗಳ ಮೊದಲು ಮೂಲ ನಿಲ್ದಾಣಗಳು ಮತ್ತು ಮಾರ್ಗಮಧ್ಯದಲ್ಲಿರುವ ಎಲ್ಲಾ ನಿಲ್ದಾಣಗಳಲ್ಲಿ ಖಾಲಿ ವಸತಿ ಸೌಕರ್ಯಗಳನ್ನು ಕಾಯ್ದಿರಿಸಲು, ಬಳಸಲು ದಕ್ಷಿಣ ರೈಲ್ವೆ ಅವಕಾಶ ಮಾಡಿಕೊಟ್ಟಿದೆ. ಎಂಟು ಪೈಲಟ್ ರೈಲುಗಳಿಗೆ ಅನುಷ್ಠಾನದ ನಂತರದ ಅವಧಿಯನ್ನು (ಆಗಸ್ಟ್-ಅಕ್ಟೋಬರ್ 2025) ಹೋಲಿಸಿದಾಗ, ಬಹುತೇಕ ಪ್ರತಿಯೊಂದು ಮಾರ್ಗದಲ್ಲೂ ಬುಕಿಂಗ್ ಮಾಡುವ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯ ಎರಡರಲ್ಲೂ ಗಮನಾರ್ಹ ಹೆಚ್ಚಳ ಕಂಡುಬಂದಿದೆ.&lt;/p&gt;&lt;img&gt;&lt;p&gt;ದಕ್ಷಿಣ ರೈಲ್ವೆಯ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲುಗಳ ಸಮೂಹವು ಪ್ರಯಾಣಿಕರಿಂದ ಅಗಾಧ ಪ್ರಮಾಣದ ಪ್ರೋತ್ಸಾಹವನ್ನು ಪಡೆಯುತ್ತಲೇ ಇದೆ, ಪ್ರಯಾಣಿಕರ ಸಂಖ್ಯೆ ಮತ್ತು ಗಳಿಕೆ ಎರಡೂ ವರ್ಷದಿಂದ ವರ್ಷಕ್ಕೆ ನಿರಂತರ ಬೆಳವಣಿಗೆಯನ್ನು ದಾಖಲಿಸುತ್ತಿವೆ.&lt;/p&gt;]]></content:encoded>
            <category>dakshina-kannada</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/thiruvananthapuram-mangaluru-vande-bharat-sets-revenue-record-rav-vdoefz1"/>
        </item>
        <item>
            <title><![CDATA[ಪವಿತ್ರ ಕ್ಷೇತ್ರದಲ್ಲಿ ಹೇಳುತ್ತಿದ್ದೇನೆ, ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ]]></title>
            <link>https://kannada.asianetnews.com/karnataka-districts/by-vijayendra-breaks-silence-on-dk-shivakumar-relationship-allegations-at-dharmasthala/articleshow-vt91geb</link>
            <guid isPermaLink="true">https://kannada.asianetnews.com/karnataka-districts/by-vijayendra-breaks-silence-on-dk-shivakumar-relationship-allegations-at-dharmasthala/articleshow-vt91geb</guid>
            <pubDate>Fri, 26 Jun 2026 10:06:15 +0530</pubDate>
            <description><![CDATA[&lt;p&gt;ಈ ಪವಿತ್ರ ಕ್ಷೇತ್ರದಲ್ಲಿ ನಿಂತು ಮಾತನಾಡುತ್ತಿದ್ದೇನೆ. ಅಡ್ಡಮತದಾನ ಬಳಿಕ ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw13d1ve6fcv2j9gbrxc3czc,imgname-by-vijayendra-rejects-allegations-1782448555885.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧರ್ಮಸ್ಥಳ (ಜೂ.26) &lt;/strong&gt;ಅಡ್ಡಮತದಾನ, ಧರ್ಮಸ್ಥಳ ಆಣೆ ಪ್ರಮಾಣಗಳಿಂದ ಸೃಷ್ಟಿಯಾಗಿದ್ದ ವಿವಾದಕ್ಕೆ ತೆರೆ ಎಳೆಯು ಪ್ರಯತ್ವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಡಿದ್ದಾರೆ. ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದ ವಿಜಯೇಂದ್ರ, ಹಿಂದೂಗಳ ರಕ್ಷಣೆ, ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಬರಲು ಪ್ರಾರ್ಥನೆ ಮಾಡಿದ್ದೇನೆ ಎಂದಿದ್ದಾರೆ. ಇದೇ ವೇಳೆ ಸಿಎಂ ಡಿಕೆ ಶಿವಕುಮಾರ್ ಜೊತೆ ಆತ್ಮೀಯತೆ ಇದೆ ಅನ್ನೋ ಆರೋಪಗಳಿಗೆ ಬಿವೈ ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;ಡಿಕೆ ಶಿವಕುಮಾರ್ ಜೊತೆ ನನಗೆ ಯಾವುದೇ ವ್ಯವಹಾರಿಕ ಅಥವಾ ಆತ್ಮೀಯತೆ ಇಲ್ಲ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಸಹಜ ಗೌರವ ಕೊಟ್ಡಿದ್ದೇನೆ. ಅಪಪ್ರಚಾರ ಮಾಡಿದವರಿಗೆ ಭಗವಂತ ಒಳ್ಳೆದು ಮಾಡಲಿ ಎಂಬ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ವಿಜಯೇಂದ್ರ ಹೇಳಿದ್ದಾರೆ. ಅಡ್ಡಮತದಾನದ ಬೆನ್ನಲ್ಲೇ ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ಆತ್ಮೀಯತೆ ಕುರಿತು ಹಲವು ಆರೋಪಗಳು ಕೇಳಿಬಂದಿತ್ತು. ಈ ಕುರಿತು ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಸಾಕಷ್ಟು ಅಪಪ್ರಚಾರ ಅವತ್ತು ಮತ್ತು ಇವತ್ತು ಆಗುತ್ತಿದೆ ಎಂದಿದ್ದಾರೆ.&lt;/p&gt;&lt;h2&gt;ಧರ್ಮಸ್ಥಳ ಮಂಜುನಾಥನ ಬಳಿ ವಿಜಯೇಂದ್ರ ಪ್ರಾರ್ಥನೆ&lt;/h2&gt;&lt;p&gt;ಧರ್ಮಸ್ಥಳದ ಸನ್ನಿಧಿ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ , ಕಳೆದ ಮೂರ್ನಾಲ್ಕು ದಿನಗಳ ಕಾಲ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರ ಭೇಟಿ ಮಾಡಿದ್ದೇನೆ. ದೆಹಲಿಯಿಂದ ನೇರವಾಗಿ ಧರ್ಮಸ್ಥಳ ಬಂದು ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದೇನೆ. ಮಂಜುನಾಥೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲದ ಸನ್ನಿವೇಶ ಇದೆ, ಅದು ಸರಿಯಾಗಬೇಕು. ರೈತ ಬೆಳೆದ ಬೆಳೆಗೆ ಒಳ್ಳೆಯ ದಿನಗಳು ಬರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಅದರ ಜೊತೆಗೆ ಕರ್ನಾಟಕದಲ್ಲಿ ಮತ್ತೊಮ್ಮೆ ಜನಪರ ಒಳ್ಳೆಯ ಸರ್ಕಾರ ಬರಲಿ ಎಂದು ಪ್ರಾರ್ಥಿಸಿದ್ದೇನೆ.&lt;/p&gt;&lt;h2&gt;ಮನಸ್ಸಿಗೆ ತೋಚಿದ್ದನ್ನು ಹೇಳಿದ್ದೆ&lt;/h2&gt;&lt;p&gt;ಅತ್ಯಂತ ಹಿರಿಯ ಹಾಗೂ ಪಕ್ಷಕ್ಕೆ ದುಡಿದವರನ್ನ ಅಭ್ಯರ್ಥಿ ಮಾಡಿದ್ದೆವು. ಆದರೆ ಚುನಾವಣೆ ವೇಳೆ ನಡೆದ ಅಡ್ಡಮತದಾನ ನನ್ನನ್ನೂ ಸೇರಿ ಕಾರ್ಯಕರ್ತರಿಗೆ ನೋವು ತಂದಿದೆ. ಬಿಜೆಪಿಯ ಶಾಸಕ ರಿಂದಲೇ ಆದ ಅಡ್ಡ ಮತದಾನ ಬೇರೆ ಬೇರೆ ಚರ್ಚೆ ಹುಟ್ಟು ಹಾಕಿತ್ತು. ಹಾಗಾಗಿ ನನ್ನ ಮನಸ್ಸಿನ ನೋವಿನಿಂದ ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ಆಗಬೇಕು ಅಂದಿದ್ದೆ. ನಾನೊಬ್ಬ ಭಾವನಾತ್ಮಕ ವ್ಯಕ್ತಿ, ನನ್ನ ಮನಸ್ಸಿಗೆ ತೋಚಿದ್ದನ್ನ ಹೇಳಿದ್ದೆ. ಪಕ್ಷದ ಹಿರಿಯ ನಾಯಕರು ಅಲ್ಲಿಯ ತನಕ ಬೇಡ, ವರಿಷ್ಠರ ಗಮನಕ್ಕೆ ತರೋಣ ಅಂದರು. ನಾನು ಅವರ ಮಾತಿಗೆ ಗೌರವ ಕೊಟ್ಟು ಮಂಜುನಾಥನ ದರ್ಶನ ಪಡೆಯಲು ಇಲ್ಲಿಗೆ ಬಂದೆ ಎಂದು ವಿಜಯೇಂದ್ರ ಹೇಳಿದ್ದಾರೆ.&lt;/p&gt;&lt;p&gt;ರಾಜ್ಯದ ಲಕ್ಷಾಂತರ ಕಾರ್ಯಕರ್ತರ ಮೇಲೆ ನನಗೆ ವಿಶ್ವಾಸ ಇದೆ. ಜನ ವಿರೋಧಿ ಕಾಂಗ್ರೆಸ್ ಸರ್ಕಾರವನ್ನ ಬುಡ ಸಮೇತ ಕಿತ್ತು ಹಾಕುವ ಕೆಲಸ ಆಗಲಿದೆ. ಸಾಕಷ್ಟು ಜನ ನನಗೆ ಕರೆ ಮಾಡಿದ್ದಾರೆ. ಆವತ್ತು 17 ಜನ ಶಾಸಕರು ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ಬಿಜೆಪಿಗೆ ಬಂದರು. ಅದರಲ್ಲಿ 15 ಜನ ಗೆದ್ದು ಬಂದು ಮತ್ತೆ ಶಾಸಕರಾಗಿದ್ದಾರೆ. ಆದರೆ ಈಶ್ವರಪ್ಪನವರ ಹೇಳಿಕೆ ಬಗ್ಗೆ ಬಹಳ ಬೇಸರ ಆಗಿದೆ. ಹಿಂದೂ ಕಾರ್ಯಕರ್ತರ ಹತ್ಯೆ, ಮೊಕದ್ದಮೆಗಳ ಬಗ್ಗೆ ಈಶ್ವರಪ್ಪರಿಗೆ ನೆನಪಿರಬೇಕು. ಅಂತಹ ಸಂಧರ್ಭದಲ್ಲಿ ಆ 17 ಜನ ಶಾಸಕರು ಕೈ ಜೋಡಿಸಿದ ಪರಿಣಾಮ ಬಿಜೆಪಿ ಒಳ್ಳೆಯ ಸರ್ಕಾರ ಕೊಟ್ಟಿದೆ ಎಂದಿದ್ದಾರೆ.&lt;/p&gt;&lt;p&gt;ಅಡ್ಡಮತದಾನದಲ್ಲಿ ನಮ್ಮ ಶಾಸಕರ ಬಗ್ಗೆ ಅನುಮಾನ ಪಡುವಂತಾಗಿದೆ. ಇವತ್ತು ಪಕ್ಷಕ್ಕೆ ದ್ರೋಹ ಬಗೆದವನ್ನ ವರಿಷ್ಠರು ಗಮನಿಸ್ತಾರೆ, ಸತ್ಯ&zwnj; ಇಂದಲ್ಲ ನಾಳೆ ಹೊರಬರುತ್ತೆ. ವಿಜಯೇಂದ್ರ ಕಾಂಗ್ರೆಸ್ ಜೊತೆ ಸೇರಿ ಅಡ್ಡ ಮತದಾನಕ್ಕೆ ಸಹಕರಿಸಿದ್ದಾರೆ ಅನ್ನೋದು ಸತ್ಯಕ್ಕೆ ದೂರ. ಇವತ್ತಿಗೆ ಈ ವಿವಾದಕ್ಕೆ ಇತೀಶ್ರೀ ಹಾಡಿ, ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ. ಈಗಿನ ಮುಖ್ಯಮಂತ್ರಿ ಎಷ್ಟೇ ಬಲಿಷ್ಠ ಹಾಗೂ ಆರ್ಭಟ ಇದ್ದರೂ ನಮ್ಮ ಸರ್ಕಾರ ತರುತ್ತೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dakshina-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/by-vijayendra-breaks-silence-on-dk-shivakumar-relationship-allegations-at-dharmasthala/articleshow-vt91geb"/>
        </item>
        <item>
            <title><![CDATA[Konkan Railway ನೂತನ ಫುಟ್‌ ಓವರ್ ಬ್ರಿಡ್ಜ್‌ಗೆ ಟೆಂಡರ್‌, ಬದಲಾಗಲಿದೆ ಮೂಲ್ಕಿ ರೈಲು ನಿಲ್ದಾಣದ ಚಿತ್ರಣ!]]></title>
            <link>https://kannada.asianetnews.com/karnataka-districts/mangaluru-news-konkan-railway-major-upgrade-for-mulki-railway-station-tender-invited-for-new-foot-over-bridge-gdp/articleshow-w8xa5fg</link>
            <guid isPermaLink="true">https://kannada.asianetnews.com/karnataka-districts/mangaluru-news-konkan-railway-major-upgrade-for-mulki-railway-station-tender-invited-for-new-foot-over-bridge-gdp/articleshow-w8xa5fg</guid>
            <pubDate>Fri, 26 Jun 2026 19:24:41 +0530</pubDate>
            <description><![CDATA[ಮೂಲ್ಕಿ ರೈಲು ನಿಲ್ದಾಣವನ್ನು 5 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಹೊಸ ಪ್ಲಾಟ್&zwnj;ಫಾರ್ಮ್, ಫುಟ್ ಓವರ್ ಬ್ರಿಡ್ಜ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಸೇರಿದ್ದು, ಸಂಸದ ಬ್ರಿಜೇಶ್ ಚೌಟ ಈ ಕುರಿತು ಮಾಹಿತಿ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw2361vbp8w3hq4zc38fk79e,imgname-mulki-railway-station-development-1782481880928.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೂಲ್ಕಿ:&lt;/strong&gt; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಡುವಿನ ಅತ್ಯಂತ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ಮೂಲ್ಕಿ ರೈಲು ನಿಲ್ದಾಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತಗೊಳಿಸಲು ಬರೋಬ್ಬರಿ 5 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಎರಡು ಪ್ಲಾಟ್&zwnj;ಫಾರ್ಮ್&zwnj;ಗಳನ್ನು ಸಂಪರ್ಕಿಸುವ ನೂತನ ಫುಟ್ ಓವರ್ ಬ್ರಿಡ್ಜ್ (ಪಾದಚಾರಿ ಮೇಲ್ಸೇತುವೆ) ನಿರ್ಮಾಣಕ್ಕಾಗಿ 2.45 ಕೋಟಿ ರೂಪಾಯಿ ವೆಚ್ಚದ ಟೆಂಡರ್ ಕರೆಯಲಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.&lt;/p&gt;&lt;p&gt;ಮೂಲ್ಕಿ ರೈಲು ನಿಲ್ದಾಣಕ್ಕೆ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರೊಂದಿಗೆ ಜಂಟಿಯಾಗಿ ಭೇಟಿ ನೀಡಿದ ಸಂಸದರು, ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ಲಾಟ್&zwnj;ಫಾರ್ಮ್ ಸೇರಿದಂತೆ ವಿವಿಧ ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.&lt;/p&gt;&lt;h2&gt;5 ಕೋಟಿ ರೂ. ವೆಚ್ಚದ ಪ್ರಮುಖ ಕಾಮಗಾರಿಗಳ ವಿವರಗಳು:&lt;/h2&gt;&lt;p&gt;ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಲ್ಕಿ ರೈಲು ನಿಲ್ದಾಣವು ಈ ಭಾಗದ ಪ್ರಯಾಣಿಕರಿಗೆ ಅತ್ಯಂತ ಪ್ರಮುಖವಾಗಿದ್ದು, ಅದರ ಹಂತ-ಹಂತದ ಆಧುನೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಪ್ರಸ್ತುತ ನಡೆಯುತ್ತಿರುವ ಒಟ್ಟು 5 ಕೋಟಿ ರೂ. ವೆಚ್ಚದ ಕಾಮಗಾರಿಗಳ ವಿವರ &amp;nbsp;ಇಲ್ಲಿದೆ.&lt;/p&gt;&lt;p&gt;&lt;strong&gt;ಪ್ಲಾಟ್&zwnj;ಫಾರ್ಮ್-1 ಮತ್ತು ಶೆಲ್ಟರ್ ಅಭಿವೃದ್ಧಿ: &lt;/strong&gt;ಒಂದನೇ ಪ್ಲಾಟ್&zwnj;ಫಾರ್ಮ್&zwnj;ನ ನವೀಕರಣ ಹಾಗೂ ಪ್ರಯಾಣಿಕರ ನೆರಳಿನ ವ್ಯವಸ್ಥೆಗಾಗಿ (ಶೆಲ್ಟರ್) 2.05 ಕೋಟಿ ರೂ. ವಿನಿಯೋಗಿಸಲಾಗಿದೆ.&lt;/p&gt;&lt;p&gt;&lt;strong&gt;ನೂತನ ಪ್ಲಾಟ್&zwnj;ಫಾರ್ಮ್-2 ನಿರ್ಮಾಣ:&lt;/strong&gt; ಪ್ರಯಾಣಿಕರ ದಟ್ಟಣೆ ನಿರ್ವಹಣೆಗಾಗಿ ಸುಸಜ್ಜಿತವಾದ ಎರಡನೇ ಪ್ಲಾಟ್&zwnj;ಫಾರ್ಮ್ ಅನ್ನು 2.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.&lt;/p&gt;&lt;p&gt;&lt;strong&gt;ನಿಲ್ದಾಣದ ರಸ್ತೆ ಅಭಿವೃದ್ಧಿ&lt;/strong&gt;: ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು 19 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.&lt;/p&gt;&lt;p&gt;ಫುಟ್ ಓವರ್ ಬ್ರಿಡ್ಜ್ (Foot Over Bridge): ಎರಡು ಪ್ಲಾಟ್&zwnj;ಫಾರ್ಮ್&zwnj;ಗಳ ನಡುವೆ ಪ್ರಯಾಣಿಕರು ಸುಲಭವಾಗಿ ಓಡಾಡಲು ಅನುವಾಗುವಂತೆ 2.45 ಕೋಟಿ ರೂ. ವೆಚ್ಚದಲ್ಲಿ ನೂತನ ಮೇಲ್ಸೇತುವೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.&lt;/p&gt;&lt;h2&gt;ಭವಿಷ್ಯದ ಯೋಜನೆಗಳು ಮತ್ತು ರೈಲುಗಳ ನಿಲುಗಡೆ:&lt;/h2&gt;&lt;p&gt;ಮೂಲ್ಕಿ ನಿಲ್ದಾಣದಲ್ಲಿ ಹೆಚ್ಚಿನ ರೈಲುಗಳ ನಿಲುಗಡೆಗೆ ಸಾರ್ವಜನಿಕರಿಂದ ಕೇಳಿಬರುತ್ತಿರುವ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿದ ಸಂಸದರು, &quot;ಈ ಭಾಗದ ಭವಿಷ್ಯದ ಹಿತದೃಷ್ಟಿಯಿಂದ ರೈಲು ಹಳಿಗಳ ದ್ವಿಪಥ (Doubling of Railway Tracks) ಅತ್ಯಂತ ಪ್ರಮುಖವಾಗಿದೆ. ದ್ವಿಪಥ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಮೂಲ್ಕಿ ನಿಲ್ದಾಣದಲ್ಲಿ ಹೆಚ್ಚುವರಿ ರೈಲುಗಳ ನಿಲುಗಡೆ (Stoppage) ನೀಡುವ ಕುರಿತು ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಪರಿಶೀಲನೆ ನಡೆಸಲಾಗುವುದು,&quot; ಎಂದು ಭರವಸೆ ನೀಡಿದರು.&lt;/p&gt;&lt;h2&gt;ಸಂಸದರಿಗೆ ಮನವಿ ಸಲ್ಲಿಕೆ:&lt;/h2&gt;&lt;p&gt;ಇದೇ ಸಂದರ್ಭದಲ್ಲಿ ಕೆ.ಎಸ್. ರಾವ್ ನಗರದ ಸಾರ್ವಜನಿಕರು ಹಾಗೂ ರೈಲು ನಿಲ್ದಾಣದ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಸಂಸದರನ್ನು ಭೇಟಿಯಾಗಿ ಮನವಿ ಪತ್ರವೊಂದನ್ನು ಸಲ್ಲಿಸಿದರು. ರೈಲು ನಿಲ್ದಾಣಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಕೆಂಚನಕೆರೆ ಹಾಗೂ ಕೆ.ಎಸ್. ರಾವ್ ನಗರದ ರಸ್ತೆಗಳು ಸದ್ಯ ಅತ್ಯಂತ ಕ crappy ಯಾಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಈ ರಸ್ತೆಗಳನ್ನು ತಕ್ಷಣವೇ ದುರಸ್ತಿ ಮಾಡಿಕೊಡಬೇಕು ಎಂದು ಅವರು ಈ ವೇಳೆ ಒತ್ತಾಯಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್&zwnj; ಆಳ್ವ, ಮೂಲ್ಕಿ-ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್&zwnj; ಪುತ್ರನ್&zwnj;, ಬಿಜೆಪಿ ನಾಯಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಭುವನಾಭಿರಾಮ ಉಡುಪ, ಈಶ್ವರ ಕಟೀಲು, ಸತೀಶ್ ಅಂಚನ್&zwnj;, ರಂಗನಾಥ ಶೆಟ್ಟಿ, ನವೀನ್ ರಾಜ್, ಜೀವನ್ ಶೆಟ್ಟಿ ಅಂಗರಗುಡ್ಡೆ, ಶೈಲೇಶ್ ಕುಮಾರ್, ವಿಠಲ್ ಎನ್&zwnj;.ಎಂ., ಕೊಂಕಣ ರೈಲ್ವೆ ಅಧಿಕಾರಿಗಳಾದ ಗಜಾನನ ಬಂಟ್&zwnj;, ಗೋಪಾಲಕೃಷ್ಣ, ಬಿ.ಎಂ. ವೆಂಕಟೇಶ, ಕಮರ್ಷಿಯಲ್ ಸೂಪರ್ ವೈಸರ್ ಸತೀಶ್ ಹೆಗ್ಡೆ, ಮೂಲ್ಕಿ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಬೀ&zwnj;ರ್ , ರೈಲ್ವೆ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-news-konkan-railway-major-upgrade-for-mulki-railway-station-tender-invited-for-new-foot-over-bridge-gdp/articleshow-w8xa5fg"/>
        </item>
        <item>
            <title><![CDATA[ಮಂಗಳೂರು to ಬೆಂಗಳೂರು 5 ಗಂಟೆ ಜರ್ನಿ, ಶಿರಾಡಿ ಘಾಟ್ ಸುರಂಗ ಮಾರ್ಗ  ರಸ್ತೆ-ರೈಲು ಜಂಟಿ ಯೋಜನೆಗೆ ಹಿನ್ನಡೆ!]]></title>
            <link>https://kannada.asianetnews.com/gallery/karnataka-districts/bengaluru-to-mangaluru-in-5-hours-shiradi-ghat-joint-tunnel-project-hits-massive-roadblock-as-railways-may-pull-out-gdp-zmpzm6d</link>
            <guid isPermaLink="true">https://kannada.asianetnews.com/gallery/karnataka-districts/bengaluru-to-mangaluru-in-5-hours-shiradi-ghat-joint-tunnel-project-hits-massive-roadblock-as-railways-may-pull-out-gdp-zmpzm6d</guid>
            <pubDate>Sat, 20 Jun 2026 12:27:45 +0530</pubDate>
            <description><![CDATA[&lt;p&gt;ಬೆಂಗಳೂರು-ಮಂಗಳೂರು ಪ್ರಯಾಣದ ಅವಧಿ ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ &amp;nbsp; ಅಡ್ಡಿ ಎದುರಾಗಿದೆ. ರಸ್ತೆ- ರೈಲು ಮಾರ್ಗಗಳ ಸುರಕ್ಷತಾ ಮಾನದಂಡಗಳಲ್ಲಿನ ವ್ಯತ್ಯಾಸದಿಂದಾಗಿ, ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ &amp;nbsp;ಪ್ರತ್ಯೇಕ ಸಮೀಕ್ಷೆ ನಡೆಸಲು ನಿರ್ಧರಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvhwczpdz1xmsrz11qhtnhv6,imgname-shiradi-ghat-tunnel-project-1781937897165.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು-ಮಂಗಳೂರು ಪ್ರಯಾಣದ ಅವಧಿ ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ &amp;nbsp; ಅಡ್ಡಿ ಎದುರಾಗಿದೆ. ರಸ್ತೆ- ರೈಲು ಮಾರ್ಗಗಳ ಸುರಕ್ಷತಾ ಮಾನದಂಡಗಳಲ್ಲಿನ ವ್ಯತ್ಯಾಸದಿಂದಾಗಿ, ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ &amp;nbsp;ಪ್ರತ್ಯೇಕ ಸಮೀಕ್ಷೆ ನಡೆಸಲು ನಿರ್ಧರಿಸಿವೆ.&lt;/p&gt;&lt;img&gt;&lt;p&gt;ಮಂಗಳೂರು: ಬೆಂಗಳೂರು ಮತ್ತು ಕರಾವಳಿಯ ಪ್ರಮುಖ ನಗರವಾದ ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ಕೇವಲ 5 ಗಂಟೆಗಳಿಗೆ ಇಳಿಸುವ ಮಹತ್ವಾಕಾಂಕ್ಷೆಯ &quot;ಶಿರಾಡಿ ಘಾಟ್ ಸುರಂಗ ಮಾರ್ಗ&quot; ಯೋಜನೆಗೆ ಈಗ ದೊಡ್ಡ ತಾಂತ್ರಿಕ ಅಡೆತಡೆ ಎದುರಾಗಿದೆ. ರಸ್ತೆ ಮತ್ತು ರೈಲು ಮಾರ್ಗ ಎರಡನ್ನೂ ಒಂದೇ ಸುರಂಗದಲ್ಲಿ ನಿರ್ಮಿಸುವ ಬೃಹತ್ ಪ್ರಸ್ತಾವನೆಗೆ ಭೌಗೋಳಿಕ ಏರಿಳಿತಗಳು ಸವಾಲಾಗಿ ಪರಿಣಮಿಸಿದ್ದು, ತಾಂತ್ರಿಕ ಕಾರಣಗಳಿಂದಾಗಿ ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ ಹಿಂದೆ ಸರಿಯುವ ಮುನ್ಸೂಚನೆ ನೀಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲು ನಿರ್ಧರಿಸಿವೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾಹಿತಿ ನೀಡಿದ್ದಾರೆ&lt;/p&gt;&lt;img&gt;&lt;p&gt;ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವ್ಯಾಪ್ತಿಯ ಸುಮಾರು 42 ಕಿಲೋಮೀಟರ್ ಉದ್ದದ ಅಪಾಯಕಾರಿ ಹಾಗೂ ತಿರುವುಗಳಿಂದ ಕೂಡಿದ ಮಾರ್ಗವನ್ನು ಸುರಂಗದ ಮೂಲಕ ನೇರವಾಗಿಸಲು ಇತ್ತೀಚೆಗೆ ಜಂಟಿ ಸರ್ವೆ ನಡೆಸಲಾಗಿತ್ತು. ಆದರೆ, ರಸ್ತೆ ಸಾರಿಗೆ ಮತ್ತು ರೈಲ್ವೆ ಇಲಾಖೆಗಳ ಸುರಕ್ಷತಾ ಮಾನದಂಡ ಹಾಗೂ ಇಳಿಜಾರು (Gradient) ನಿಯಮಗಳಲ್ಲಿ ಭಾರಿ ವ್ಯತ್ಯಾಸವಿರುವುದು ಈ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;img&gt;&lt;p&gt;ರಸ್ತೆ ಸಾರಿಗೆ ನಿಯಮ: ಹೆದ್ದಾರಿ ಇಲಾಖೆಯ ಮಾನದಂಡಗಳ ಪ್ರಕಾರ ಸುರಂಗ ರಸ್ತೆಗೆ 1:50 ಗ್ರೇಡಿಯಂಟ್ ಸಾಕಾಗುತ್ತದೆ. ಇದರ ಆಧಾರದ ಮೇಲೆ ಕೇವಲ 38 ಕಿಲೋಮೀಟರ್ ವ್ಯಾಪ್ತಿಯಲ್ಲೇ ಅತ್ಯಂತ ಯಶಸ್ವಿಯಾಗಿ ರಸ್ತೆ ಸುರಂಗವನ್ನು ನಿರ್ಮಿಸಬಹುದಾಗಿದೆ. ರಸ್ತೆ ಜೋಡಣೆಗೆ ಯಾವುದೇ ಪ್ರಮುಖ ತಾಂತ್ರಿಕ ಸಮಸ್ಯೆಗಳಿಲ್ಲ.&lt;/p&gt;&lt;p&gt;ರೈಲ್ವೆ ಇಲಾಖೆ ನಿಯಮ: ರೈಲ್ವೆಯ ಕಟ್ಟುನಿಟ್ಟಿನ ಸುರಕ್ಷತಾ ಮಾನದಂಡಗಳ ಪ್ರಕಾರ ಘಾಟ್ ವಿಭಾಗದಲ್ಲಿ ಭವಿಷ್ಯದ ದೃಷ್ಟಿಯಿಂದ 1:150 ಗ್ರೇಡಿಯಂಟ್ ಕಡ್ಡಾಯವಾಗಿದೆ (ಪ್ರಸ್ತುತ ಇದು 1:50 ರಷ್ಟಿದೆ). ಈ ಅಪೇಕ್ಷಿತ ಇಳಿಜಾರನ್ನು ಸಾಧಿಸಲು ರೈಲ್ವೆ ಇಲಾಖೆಗೆ ಬರೋಬ್ಬರಿ 88 ಕಿಲೋಮೀಟರ್ ಉದ್ದದ ಸುರಂಗ ಮಾರ್ಗದ ಅಗತ್ಯವಿದೆ.&lt;/p&gt;&lt;p&gt;ಒಂದೇ ಯೋಜನೆಯಡಿ 38 ಕಿ.ಮೀ ರಸ್ತೆ ಸುರಂಗ ಮತ್ತು 88 ಕಿ.ಮೀ ರೈಲು ಸುರಂಗವನ್ನು ಪರಸ್ಪರ ಜೋಡಿಸುವುದು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಅಸಾಧ್ಯ ಎಂಬ ತೀರ್ಮಾನಕ್ಕೆ ರೈಲ್ವೆ ಅಧಿಕಾರಿಗಳು ಬಂದಿದ್ದಾರೆ. ಹೀಗಾಗಿ ಎರಡೂ ಇಲಾಖೆಗಳು ಪ್ರತ್ಯೇಕವಾಗಿ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸುತ್ತಿವೆ ಎನ್ನಲಾಗಿದೆ&lt;/p&gt;&lt;img&gt;&lt;p&gt;ಹೆದ್ದಾರಿ ಇಲಾಖೆಗೆ ಯಾವುದೇ ದೊಡ್ಡ ತಾಂತ್ರಿಕ ಅಡೆತಡೆಗಳಿಲ್ಲದ ಕಾರಣ, ರಸ್ತೆ ಸುರಂಗ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ಸಿದ್ಧತೆಗಳು ನಡೆದಿವೆ. ಪ್ರಸ್ತುತ ಜೋಡಣೆ (Alignment) ಕಾರ್ಯಗಳು ನಡೆಯುತ್ತಿದ್ದು, ಏರಿಳಿತದ ಅಂತಿಮ ನಕ್ಷೆ ಸಿದ್ಧವಾದ ತಕ್ಷಣವೇ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.&lt;/p&gt;&lt;p&gt;ಆದರೆ, ರೈಲ್ವೆ ಇಲಾಖೆಯು ಸುರಕ್ಷತೆಯ ವಿಚಾರದಲ್ಲಿ ಕಟ್ಟುನಿಟ್ಟಿನ ನಿಲುವು ಹೊಂದಿರುವುದರಿಂದ ಕರಾವಳಿ ಭಾಗದ ರೈಲು ಸುರಂಗ ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಈ ಕಗ್ಗಂಟನ್ನು ಬಗೆಹರಿಸಲು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳೆ ರೈಲ್ವೆ ಹಾಗೂ ರಸ್ತೆ ಸಾರಿಗೆ ಸಚಿವರನ್ನು ಮತ್ತು ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸುವುದಾಗಿ ಸಂಸದ ಬ್ರಿಜೇಶ್ ಚೌಟ ಭರವಸೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮಂಗಳೂರು ಮತ್ತು ಬೆಂಗಳೂರು ನಡುವೆ ಪ್ರಸ್ತುತ ಕೇವಲ ಒಂದೇ ರೈಲು ಮಾರ್ಗ (Single Line) ಇರುವುದನ್ನು ಸಂಸದರು ಗಮನ ಸೆಳೆದಿದ್ದಾರೆ. &quot;ರೈಲ್ವೆ ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸದೆ, ಕೇವಲ ಹೊಸ ರೈಲುಗಳನ್ನು ಓಡಿಸಬೇಕೆಂಬ ಸಾರ್ವಜನಿಕರ ಬೇಡಿಕೆಗಳು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಘಾಟ್ ವಿಭಾಗದಲ್ಲಿನ ಇಳಿಜಾರು ಸಂಬಂಧಿತ ಸವಾಲುಗಳನ್ನು ಶಾಶ್ವತವಾಗಿ ಪರಿಹರಿಸಬೇಕಾದರೆ ದೀರ್ಘಾವಧಿಯ ಯೋಜನೆಯ ಅಗತ್ಯವಿದೆ,&quot; ಎಂದು ಅವರು ಪ್ರತಿಪಾದಿಸಿದರು.&lt;/p&gt;&lt;p&gt;ಈ ನಿಟ್ಟಿನಲ್ಲಿ ಪ್ರಮುಖವಾಗಿ ಎರಡು ಸುಧಾರಣೆಗಳಾಗಬೇಕಿದೆ ಎಂದು ಒತ್ತಿಹೇಳಿದ್ದಾರೆ. ಅವೆಂದರೆ ರಸ್ತುತ ಇರುವ ಹಾಸನ-ಮಂಗಳೂರು ರೈಲ್ವೆ ನಿಗಮವನ್ನು (HMRDC) ಸಂಪೂರ್ಣವಾಗಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಗಳೂರು ಮತ್ತು ಮಂಗಳೂರು ನಡುವೆ ತುರ್ತಾಗಿ ದ್ವಿಪಥ ರೈಲು ಮಾರ್ಗವನ್ನು (Double Line) ಅಭಿವೃದ್ಧಿಪಡಿಸಬೇಕು.&lt;/p&gt;&lt;img&gt;&lt;p&gt;ಕರಾವಳಿ ಜನತೆಯ ಬಹುದಿನಗಳ ಕನಸಾದ ಬೆಂಗಳೂರು-ಮಂಗಳೂರು ನಡುವಿನ ವಂದೇ ಭಾರತ್ ರೈಲು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಸ್ತುತ ಹಲವು ತಾಂತ್ರಿಕ ಮೌಲ್ಯಮಾಪನಗಳನ್ನು ನಡೆಸುತ್ತಿದ್ದಾರೆ. ಈ ಹೈ-ಸ್ಪೀಡ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗುವ ವಿಶ್ವಾಸವಿದೆ ಎಂದು ಚೌಟ ಆಶಾವಾದ ವ್ಯಕ್ತಪಡಿಸಿದರು. ಒಮ್ಮೆ ವಂದೇ ಭಾರತ್ ರೈಲಿನ ವೇಳಾಪಟ್ಟಿ ಅಂತಿಮಗೊಂಡ ನಂತರ, ಪುತ್ತೂರು ರೈಲು ನಿಲ್ದಾಣದಲ್ಲಿ ಅದಕ್ಕೆ ಕಡ್ಡಾಯ ನಿಲುಗಡೆ (Stoppage) ನೀಡಬೇಕೆಂಬ ಸಾರ್ವಜನಿಕರ ಪ್ರಬಲ ಬೇಡಿಕೆಯನ್ನು ರೈಲ್ವೆ ಮಂಡಳಿಯ ಗಮನಕ್ಕೆ ತರಲಾಗುವುದು ಎಂದರು. ಇದೇ ವೇಳೆ, ಪುತ್ತೂರು ಎಪಿಎಂಸಿ ರೈಲ್ವೆ ಮೇಲ್ಸೇತುವೆ ಬಳಿ ಪ್ರಸ್ತಾವಿತ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಸಂಸದರು ಪತ್ರಕರ್ತರಿಗೆ ತಿಳಿಸಿದರು.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bengaluru-to-mangaluru-in-5-hours-shiradi-ghat-joint-tunnel-project-hits-massive-roadblock-as-railways-may-pull-out-gdp-zmpzm6d"/>
        </item>
    </channel>
</rss>
