<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 16 Sep 2026 08:18:18 +0530</lastBuildDate>
        <atom:link href="https://kannada.asianetnews.com/rss/dakshina-kannada" rel="self" type="application/rss+xml"/>
        <item>
            <title><![CDATA[ಮಂಗಳೂರು-ಕುವೈತ್ ನೇರ ವಿಮಾನ ಸೇವೆ 6 ತಿಂಗಳು ಸ್ಥಗಿತ, ಕರಾವಳಿ ಭಾಗದ ಪ್ರಯಾಣಿಕರಿಗೆ ಮುಗಿಯದ ಗೋಳು!]]></title>
            <link>https://kannada.asianetnews.com/dakshina-kannada/mangaluru-kuwait-direct-flights-still-suspended-coastal-karnataka-passengers-face-hardships-gdp/articleshow-0d4lt01</link>
            <guid isPermaLink="true">https://kannada.asianetnews.com/dakshina-kannada/mangaluru-kuwait-direct-flights-still-suspended-coastal-karnataka-passengers-face-hardships-gdp/articleshow-0d4lt01</guid>
            <pubDate>Thu, 10 Sep 2026 11:50:42 +0530</pubDate>
            <description><![CDATA[ಮಂಗಳೂರು ಮತ್ತು ಕುವೈತ್ ನಡುವಿನ ನೇರ ವಿಮಾನ ಸೇವೆ ಆರು ತಿಂಗಳಿಂದ ಸ್ಥಗಿತಗೊಂಡಿದ್ದು, ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ದುಬಾರಿ ಮತ್ತು ದೀರ್ಘಾವಧಿಯ ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸೇವೆಯನ್ನು ಪುನರಾರಂಭಿಸಬೇಕು ಅಥವಾ ಇತರ ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ನೀಡಬೇಕೆಂದು ಬಲವಾದ ಬೇಡಿಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m22qnjbfxtn2jg7vp6p90pmc,imgname-fotojet--17--1788945811823.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮಂಗಳೂರು ಮತ್ತು ಕುವೈತ್ ನಡುವಿನ ನೇರ ವಿಮಾನ ಸೇವೆಗಳು ನಿಂತು ಆರು ತಿಂಗಳು ಕಳೆದರೂ, ಈ ಭಾಗದಿಂದ ಸಂಚರಿಸುವ ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರು ಪಡುತ್ತಿರುವ ಪಾಡಿಗೆ ಇನ್ನೂ ತೆರೆಬಿದ್ದಿಲ್ಲ. ಪ್ರತಿವರ್ಷ ಲಕ್ಷಾಂತರ ಮಂದಿ ವಲಸಿಗರು ಮತ್ತು ಪ್ರವಾಸಿಗರು ಅವಲಂಬಿಸಿರುವ ಈ ವಿಮಾನ ಮಾರ್ಗವು ಅನಿವಾರ್ಯ ಕಾರಣಗಳಿಂದಾಗಿ ಇನ್ನೂ ಪುನರಾರಂಭಗೊಳ್ಳದಿರುವುದು ಸಾರ್ವಜನಿಕರಲ್ಲಿ ತೀವ್ರ ನಿರಾಶೆಯನ್ನು ಮೂಡಿಸಿದೆ.&lt;/p&gt;&lt;h2&gt;ವಿಮಾನ ಸೇವೆ ರದ್ದಾಗಲು ಅಸಲಿ ಕಾರಣವೇನು?&lt;/h2&gt;&lt;p&gt;ಕಳೆದ ಫೆಬ್ರವರಿ 28ರಂದು ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧದಿಂದಾಗಿ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಹಲವಾರು ಗಲ್ಫ್ ರಾಷ್ಟ್ರಗಳ ವಾಯು ಮಾರ್ಗಗಳು ಅಸ್ತವ್ಯಸ್ತಗೊಂಡಿದ್ದವು. ಆದರೆ, ಕಾಲಕ್ರಮೇಣ ಸಂಘರ್ಷದ ತೀವ್ರತೆ ತಗ್ಗಿ, ಜಾಗತಿಕ ಮಟ್ಟದಲ್ಲಿ ಹೆಚ್ಚಿನೆಲ್ಲಾ ದೇಶಗಳಿಗೆ ವಿಮಾನ ಹಾರಾಟಗಳು ಯಶಸ್ವಿಯಾಗಿ ಪುನರಾರಂಭಗೊಂಡವು. ದುರದೃಷ್ಟವಶಾತ್, ಮಂಗಳೂರು-ಕುವೈತ್ ನಡುವಿನ ವಿಮಾನ ಸೇವೆ ಮಾತ್ರ ಇಲ್ಲಿಯವರೆಗೆ ಆರಂಭವಾಗಿಲ್ಲ.&lt;/p&gt;&lt;p&gt;ಈ ಬಿಕ್ಕಟ್ಟು ಎದುರಾಗುವುದಕ್ಕೂ ಮುನ್ನ 'ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್' ಸಂಸ್ಥೆಯು ಮಂಗಳೂರು ಮತ್ತು ಕುವೈತ್ ನಡುವೆ ವಾರಕ್ಕೆ ಮೂರು ದಿನಗಳ ಕಾಲ ನಿಯಮಿತವಾಗಿ ನೇರ ವಿಮಾನಗಳನ್ನು ಕಾರ್ಯಾಚರಣೆಗೊಳಿಸುತ್ತಿತ್ತು.&lt;/p&gt;&lt;h2&gt;ಪ್ರಯಾಣಿಕರ ಪರದಾಟ ಮತ್ತು ಅಧಿಕ ವೆಚ್ಚದ ಹೊರೆ:&lt;/h2&gt;&lt;p&gt;ನೇರ ವಿಮಾನಗಳಿಲ್ಲದೆ ಪರದಾಡುತ್ತಿರುವ ಕರಾವಳಿ ಭಾಗದ ಪ್ರಯಾಣಿಕರು, ಪ್ರಸ್ತುತ ಕುವೈತ್ ತಲುಪಲು ಬೆಂಗಳೂರು, ಮುಂಬೈ ಅಥವಾ ಕೋಝಿಕ್ಕೋಡ್ (ಕ್ಯಾಲಿಕಟ್) ಮುಂತಾದ ನಗರಗಳನ್ನು ಮೊದಲು ಸುತ್ತಿ ಆಮೇಲೆ ಪ್ರಯಾಣ ಮುಂದುವರೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕನೆಕ್ಟಿಂಗ್ ವಿಮಾನಗಳ ಪ್ರಯಾಣವು ಸುದೀರ್ಘ ಸಮಯವನ್ನು ತೆಗೆದುಕೊಳ್ಳುತ್ತಿರುವುದಲ್ಲದೆ, ಸಾಮಾನ್ಯ ಜನರ ಜೇಬಿಗೆ ಗಣನೀಯವಾದ ಕತ್ತರಿ ಬೀಳುವಂತೆ ಮಾಡಿದೆ.&lt;/p&gt;&lt;h2&gt;ಕರಾವಳಿಗರ ಬೃಹತ್ ಬೇಡಿಕೆ:&lt;/h2&gt;&lt;p&gt;ಉತ್ತರ ಕನ್ನಡದ ಭಟ್ಕಳದಿಂದ ಹಿಡಿದು ದಕ್ಷಿಣದ ಕಾಸರಗೋಡಿನವರೆಗಿನ ಕರಾವಳಿ ಪಟ್ಟಿಯ ಸುಮಾರು 40,000ಕ್ಕೂ ಅಧಿಕ ಕನ್ನಡಿಗರು ಕುವೈತ್&zwnj;ನಲ್ಲಿ ಉದ್ಯೋಗ ಹಾಗೂ ವ್ಯವಹಾರದಲ್ಲಿದ್ದಾರೆ. ಮಂಗಳೂರಿನಿಂದ ನೇರ ವಿಮಾನಗಳಿಲ್ಲದಿರುವುದು ಈ ಅನಿವಾಸಿ ಭಾರತೀಯರ ಕುಟುಂಬಗಳಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ.&lt;/p&gt;&lt;p&gt;ಬೆಂಗಳೂರು ಹಾಗೂ ಮುಂಬೈನಂತಹ ಮಹಾನಗರಗಳಿಂದ ಕುವೈತ್&zwnj;ಗೆ ಎಂದಿನಂತೆ ವಿಮಾನಗಳು ಹಾರಾಡುತ್ತಿರುವಾಗ, ಕೇವಲ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾತ್ರ ಈ ಸೌಲಭ್ಯ ದೊರೆಯದಿರುವುದು ತಾರತಮ್ಯದಂತಿದೆ. ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸಂಸ್ಥೆಯು ತನ್ನ ಸೇವೆಯನ್ನು ಮರುಪ್ರಾರಂಭಿಸಲು ಮುಂದಾಗದಿದ್ದಲ್ಲಿ, ನಾಗರಿಕ ವಿಮಾನಯಾನ ಪ್ರಾಧಿಕಾರವು ಇತರ ಜಾಗತಿಕ ವಿಮಾನಯಾನ ಸಂಸ್ಥೆಗಳಿಗೆ ಮಂಗಳೂರು-ಕುವೈತ್ ನಡುವೆ ವಿಮಾನಗಳನ್ನು ಹಾರಿಸಲು ಅನುಮತಿ ನೀಡಬೇಕು ಎಂದು ಪ್ರಮುಖ ಅನಿವಾಸಿ ಭಾರತೀಯರಾದ ಮೋಹನದಾಸ್ ಕಾಮತ್ ಅವರು ಬಲವಾಗಿ ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಇತರ ಗಲ್ಫ್ ಮಾರ್ಗಗಳ ಸ್ಥಿತಿಗತಿ:&lt;/h2&gt;&lt;p&gt;ಕುವೈತ್ ಹೊರತಾಗಿ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿ, ಬಹ್ರೇನ್, ದಮ್ಮಾಮ್, ದುಬೈ, ದೋಹಾ, ಜೆಡ್ಡಾ ಮತ್ತು ಮಸ್ಕತ್ ಸೇರಿದಂತೆ ಪ್ರಮುಖ ಗಲ್ಫ್ ರಾಷ್ಟ್ರಗಳ ಇತರ ನಗರಗಳಿಗೆ ಎಂದಿನಂತೆ ನೇರ ವಿಮಾನ ಸೇವೆಗಳು ಸುಗಮವಾಗಿ ಮುಂದುವರಿದಿವೆ. ಕುವೈತ್ ವಿಮಾನಯಾನ ಕೂಡ ಆದಷ್ಟು ಬೇಗ ಪುನರಾರಂಭಗೊಂಡು ಪ್ರಯಾಣಿಕರ ಕಷ್ಟಗಳಿಗೆ ಶಾಶ್ವತ ಮುಕ್ತಿ ಸಿಗಲಿ ಎಂಬುದು ಕರಾವಳಿಗರ ಮನವಿಯಾಗಿದೆ&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/mangaluru-kuwait-direct-flights-still-suspended-coastal-karnataka-passengers-face-hardships-gdp/articleshow-0d4lt01"/>
        </item>
        <item>
            <title><![CDATA[ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆ ಸ್ಥಾನಮಾನ, ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ]]></title>
            <link>https://kannada.asianetnews.com/karnataka-districts/tulu-language-second-official-language-karnataka-shivaraj-tangadagi-post-san/articleshow-0duo9by</link>
            <guid isPermaLink="true">https://kannada.asianetnews.com/karnataka-districts/tulu-language-second-official-language-karnataka-shivaraj-tangadagi-post-san/articleshow-0duo9by</guid>
            <pubDate>Tue, 15 Sep 2026 20:31:02 +0530</pubDate>
            <description><![CDATA[&lt;p&gt;ಕರಾವಳಿಯ ದಶಕಗಳ ಕನಸಾದ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಕರ್ನಾಟಕ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ತಜ್ಞರ ಸಮಿತಿ ವರದಿ ಹಾಗೂ ಆಂಧ್ರಪ್ರದೇಶದ ಮಾದರಿ ಅಧ್ಯಯನದ ನಂತರ, ಕಾನೂನು ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳುವುದಾಗಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2js54tws1e09n4g1bytb32t,imgname-shivaraj-tangadagi--on-tulu-1789484241756.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.15):&lt;/strong&gt; ಕರಾವಳಿ ಕರ್ನಾಟಕದ ಕೋಟಿಗೂ ಅಧಿಕ ಜನರ ದಶಕಗಳ ಕನಸಾದ 'ತುಳು' ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಯತ್ನಗಳು ಭರದಿಂದ ಸಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಮಹತ್ವದ ಪೋಸ್ಟ್ ಹಂಚಿಕೊಂಡಿರುವ ಸಚಿವರು, ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಒದಗಿಸುವಲ್ಲಿ ಸರ್ಕಾರ ಕೈಗೊಂಡಿರುವ ಸರಣಿ ಕ್ರಮಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ತಜ್ಞರ ಸಮಿತಿ ವರದಿ ಮತ್ತು ಅಧ್ಯಯನ&lt;/strong&gt;&lt;/h2&gt;&lt;p&gt;ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯ, ಕರಾವಳಿಯ ಸಂಸ್ಕೃತಿ ಮತ್ತು ತುಳು ಶಾಸನಗಳ ಕುರಿತು ಈಗಾಗಲೇ ಸಮಗ್ರ ಅಧ್ಯಯನ ನಡೆಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯು 2023 ರ ಫೆಬ್ರವರಿ 14 ರಂದೇ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು.&lt;/p&gt;&lt;h2&gt;&lt;strong&gt;ಆಂಧ್ರಪ್ರದೇಶ ಮಾದರಿ ಅಧ್ಯಯನ ನಡೆಸಿದ ವಿಶೇಷ ತಂಡ&lt;/strong&gt;&lt;/h2&gt;&lt;p&gt;ಡಾ. ಆಳ್ವ ಸಮಿತಿಯ ವರದಿಯ ಮುಂದುವರಿದ ಭಾಗವಾಗಿ, ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಅಥವಾ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಕಾನೂನು ಮಾದರಿಗಳನ್ನು ಅಧ್ಯಯನ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಉದ್ದೇಶಕ್ಕಾಗಿ 2025 ರ ಜುಲೈ 30 ರಂದು ವಿಶೇಷ ಅಧ್ಯಯನ ತಂಡವನ್ನು ರಚಿಸಲಾಗಿತ್ತು. ಈ ತಂಡವು 2026 ರ ಜನವರಿ 19 ಮತ್ತು 20 ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಅಧಿಕೃತ ಭಾಷಾ ವ್ಯವಸ್ಥೆ, ಅನುಷ್ಠಾನಗೊಳಿಸಿದ ಕಾನೂನು ಚೌಕಟ್ಟು ಹಾಗೂ ಆಡಳಿತಾತ್ಮಕ ಮಾದರಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದೆ. ಪರಿಶೀಲನೆಯ ನಂತರ ಅಧ್ಯಯನ ತಂಡವು 2026 ರ ಮಾರ್ಚ್&zwnj;ನಲ್ಲಿ ಸರ್ಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.&lt;/p&gt;&lt;h2&gt;&lt;strong&gt;ತುಳು ನಮ್ಮ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ&lt;/strong&gt;&lt;/h2&gt;&lt;p&gt;ತುಳು ಭಾಷೆಯ ಮಹತ್ವವನ್ನು ಒತ್ತಿ ಹೇಳಿರುವ ಸಚಿವ ಶಿವರಾಜ್ ತಂಗಡಗಿ, &quot;ತುಳು ಕೇವಲ ನಮ್ಮ ಕರಾವಳಿ ಭಾಗದ ಭಾಷೆಯಷ್ಟೇ ಅಲ್ಲ. ಅದು ಕರ್ನಾಟಕದ ಶ್ರೀಮಂತ ಭಾಷಾ-ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ತುಳು ಭಾಷೆಯ ಗೌರವ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಸೂಕ್ತ ಕಾನೂನು ಚೌಕಟ್ಟಿನೊಳಗೆ ಶೀಘ್ರದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು&quot; ಎಂದು ಭರವಸೆ ನೀಡಿದ್ದಾರೆ.&lt;/p&gt;&lt;p&gt;ತಮ್ಮ ಪೋಸ್ಟ್&zwnj;ನ ಕೊನೆಯಲ್ಲಿ ತುಳು ಭಾಷೆಯಲ್ಲೇ &ldquo;ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪು&rdquo; (ನಾನು ಯಾವಾಗಲೂ ಜನರ ಭಾವನೆಗಳೊಂದಿಗೆ ಇರುತ್ತೇನೆ) ಎಂದು ಬರೆಯುವ ಮೂಲಕ ಕರಾವಳಿಗರ ಭಾವನೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಸಚಿವರ ಈ ಪೋಸ್ಟ್ ತುಳು ಅಭಿಮಾನಿಗಳಲ್ಲಿ ಹೊಸ ಆಶಾವಾದ ಮೂಡಿಸಿದೆ.&lt;/p&gt;&lt;p&gt;ತುಳು ಭಾಷೆಗೆ ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಯತ್ನಗಳನ್ನು ನಡೆಸುತ್ತಿದೆ.&amp;nbsp;ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ&hellip;&lt;/p&gt;&lt;p&gt;&mdash; Shivaraj S Tangadagi (@sstangadagi) September 15, 2026&lt;/p&gt;&lt;p&gt;&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/tulu-language-second-official-language-karnataka-shivaraj-tangadagi-post-san/articleshow-0duo9by"/>
        </item>
        <item>
            <title><![CDATA[ಏರ್‌ಪೋರ್ಟ್‌ ಸಮೀಪದ 8 ಕೋಟಿ ಮೌಲ್ಯದ 1.80 ಎಕ್ರೆ ಭೂಮಿಯನ್ನು ದಾನ ಮಾಡಿದ ಅಲಿ ಕುಟುಂಬ]]></title>
            <link>https://kannada.asianetnews.com/karnataka-districts/dakshina-kannada-mulki-inayat-ali-family-donates-1-point-80-acres-of-land-worth-rs-8-crore-near-bajpe-airport-mrq/articleshow-0u5wuv4</link>
            <guid isPermaLink="true">https://kannada.asianetnews.com/karnataka-districts/dakshina-kannada-mulki-inayat-ali-family-donates-1-point-80-acres-of-land-worth-rs-8-crore-near-bajpe-airport-mrq/articleshow-0u5wuv4</guid>
            <pubDate>Wed, 16 Sep 2026 08:18:13 +0530</pubDate>
            <description><![CDATA[&lt;p&gt;ವಿಮಾನ ನಿಲ್ದಾಣದ ಸಮೀಪವಿರುವ ಸುಮಾರು 8 ಕೋಟಿ ರೂ. ಮೌಲ್ಯದ 1.80 ಎಕರೆ ಜಮೀನನ್ನು ಇನಾಯತ್ ಅಲಿ ಮೂಲ್ಕಿ ಕುಟುಂಬದವರು ಹಜ್ ಭವನ ನಿರ್ಮಾಣಕ್ಕಾಗಿ ದಾನ ಮಾಡಿದ್ದಾರೆ. ಅಗತ್ಯವಿದ್ದರೆ ಇನ್ನಷ್ಟು ಜಾಗ ನೀಡಲು ಸಿದ್ಧರಿರುವುದಾಗಿ ಅವರು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2m1j1c8mhv23tw6cgmm7ts2,imgname-inayat-ali-1789526607240.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ:&lt;/strong&gt; ಬಜ್ಪೆ ಸಮೀಪ, ವಿಮಾನ ನಿಲ್ದಾಣಕ್ಕೆ ಅತಿ ಹತ್ತಿರದಲ್ಲಿ, ಇಂದಿನ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 8 ಕೋಟಿ ರುಪಾಯಿ ಬೆಲೆಬಾಳುವ 1.80 ಎಕರೆ ಜಮೀನನ್ನು ಪವಿತ್ರ ಹಜ್ ಭವನ ನಿರ್ಮಾಣಕ್ಕಾಗಿ ದಾನವಾಗಿ ನೀಡುವ ಮೂಲಕ ಜನಾಬ್ ಇನಾಯತ್ ಅಲಿ ಮೂಲ್ಕಿ ಮತ್ತು ಅವರ ಕುಟುಂಬದವರು ತ್ಯಾಗ ಮೆರೆದಿದ್ದಾರೆ.&lt;/p&gt;&lt;p&gt;ಬಜ್ಪೆ ಮುಖ್ಯ ರಸ್ತೆ ಬಳಿ ಅವರ ಕುಟುಂಬಕ್ಕೆ ಸೇರಿದ 1.80 ಎಕರೆ ಜಮೀನನ್ನು ಹಜ್ ಕಮಿಟಿಗೆ ದಾನವಾಗಿ ನೀಡಿದ್ದು, ಒಂದು ವೇಳೆ ಇನ್ನೂ ಹೆಚ್ಚಿನ ಜಾಗದ ಅವಶ್ಯಕತೆ ಇದ್ದರೆ, ಅದನ್ನೂ ನೀಡಲು ತಯಾರಿದ್ದೇವೆ ಎಂದು ಇನಾಯತ್&zwnj; ಆಲಿಯವರು ರಾಜ್ಯ ಹಜ್ ಕಮಿಟಿಗೆ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಾವಿರಾರು ಹಜ್ ಯಾತ್ರಿಕರಿಗಾಗಿ ಭೂಮಿ ದಾನ&lt;/strong&gt;&lt;/h2&gt;&lt;p&gt;ಇದು ಕೇವಲ ಜಾಗದ ದಾನವಲ್ಲ. ಮುಂದಿನ ತಲೆಮಾರುಗಳವರೆಗೆ ಸಾವಿರಾರು ಹಜ್ ಯಾತ್ರಿಕರಿಗೆ ಅನುಕೂಲವಾಗುವ, ಅವರ ಪ್ರಯಾಣಕ್ಕೆ, ವಸತಿಗೆ, ಮಾರ್ಗದರ್ಶನಕ್ಕೆ ನೆರವಾಗುವ ಪುಣ್ಯದ ಕೇಂದ್ರಕ್ಕೆ ಭದ್ರ ಬುನಾದಿ. ಹಜ್ ಯಾತ್ರೆಗೆ ಹೊರಡುವ ಹಿರಿಯರು, ತಾಯಂದಿರು, ಬಡ ಯಾತ್ರಿಕರು ಈ ಭವನದಲ್ಲಿ ವಿಶ್ರಮಿಸಿ, ದುಆ ಮಾಡುವಾಗಲೆಲ್ಲಾ ಅದರ ಪ್ರತಿಫಲ ದಾನಿಗಳಿಗೆ ತಲುಪುತ್ತಲೇ ಇರುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;'ನನಗೆ ಮುಸ್ಲಿಮರೇ ಮೊದಲು', ವಿವಾದಕ್ಕೆ ಕಾರಣವಾಯ್ತು ತುಳು ಹಾಸ್ಯನಟ ಅರವಿಂದ್ ಬೋಳಾರ್ ಹೇಳಿಕೆ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆ ಸ್ಥಾನಮಾನ, ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-mulki-inayat-ali-family-donates-1-point-80-acres-of-land-worth-rs-8-crore-near-bajpe-airport-mrq/articleshow-0u5wuv4"/>
        </item>
        <item>
            <title><![CDATA[ಮಡಿಯಾಲದಲ್ಲಿ ಶೀಘ್ರದಲ್ಲೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉನ್ನತ ಶಿಕ್ಷಣ ಕೇಂದ್ರ ಕಾರ್ಯಾರಂಭ]]></title>
            <link>https://kannada.asianetnews.com/karnataka-districts/artificial-intelligence-higher-education-centre-to-begin-operations-soon-in-madiyala/articleshow-3nw4hf0</link>
            <guid isPermaLink="true">https://kannada.asianetnews.com/karnataka-districts/artificial-intelligence-higher-education-centre-to-begin-operations-soon-in-madiyala/articleshow-3nw4hf0</guid>
            <pubDate>Sat, 12 Sep 2026 21:45:13 +0530</pubDate>
            <description><![CDATA[&lt;p&gt;ಕೃತಕ ಬುದ್ಧಿಮತ್ತೆ ಉನ್ನತ ಶಿಕ್ಷಣ ಕೇಂದ್ರ ಶೀಘ್ರದಲ್ಲೇ ಮಡಿಯಾಲದಲ್ಲಿ ಕಾರ್ಯಾರಂಭಗೊಳ್ಳಲಿದೆ. ಜೂನ್ 2027ರಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ನಡೆಯಲಿದೆ. ಈ ಕುರಿತು ಸದ್ಗುರು ಮಧುಸೂದನ ಸಾಯಿ ಮಹತ್ವದ ಘೋಷಣೆ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2b6da3e0hpxw8vrtye305td,imgname-madiayala-ai-higher-education-centre-1789229705325.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಸೆ.12&lt;/strong&gt;) ಲೋಕಸೇವಾ ವೃಂದದ ಸಂಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ಟರ ಹುಟ್ಟೂರಾದ ಮಡಿಯಾಲ ಗ್ರಾಮದಲ್ಲಿ ಇದೇ ನವೆಂಬರ್&zwnj;ನಲ್ಲಿ ಕೃತಕ ಬುದ್ಧಿಮತ್ತೆ ಉನ್ನತ ಶಿಕ್ಷಣ ಕೇಂದ್ರ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್&zwnj; - ಎಐ) ಕಾರ್ಯಾರಂಭ ಮಾಡಲಿದೆ. ಜೂನ್ 2027 ರಿಂದ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇರಲಿದೆ ಎಂದು &quot;ಒನ್&zwnj; ವರ್ಲ್ಡ್&zwnj; ಒನ್ ಫ್ಯಾಮಿಲಿ ಮಿಷನ್&quot; ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಘೋಷಿಸಿದರು.&lt;/p&gt;&lt;h2&gt;ಮಶಿನ್ ಲರ್ನಿಂಗ್, ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು&lt;/h2&gt;&lt;p&gt;ನಗರದಲ್ಲಿ ಶನಿವಾರ (ಸೆ 12) ನಡೆದ &quot;ದಿವ್ಯ ಸಂಜೆ&quot; ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಉಲ್ಲಾಸ್ ಕಾಮತ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಲೋಕಸೇವಾ ವೃಂದದ ಮೂಲಕ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ಕೊಡಲು ಪ್ರಯತ್ನಿಸಿದ ಮಡಿಯಾಲ ನಾರಾಯಣ ಭಟ್ಟರ ಜನ್ಮಶತಮಾನೋತ್ಸವ ವರ್ಷದಲ್ಲಿ ಅವರ ಸ್ಮರಣಾರ್ಥ ಬಂಟ್ವಾಳ ತಾಲೂಕಿನ ಅವರ ಹುಟ್ಟೂರಿನಲ್ಲಿ ಈ ಮಹತ್ವದ ಉಪಕ್ರಮ ಆರಂಭಿಸಲಾಗಿದೆ ಎಂದು ವಿವರಿಸಿದರು. ಮಂಗಳೂರು ನಗರದಲ್ಲಿ ಎಲ್ಲ ಬಗೆಯ ಶಿಕ್ಷಣ ಕೋರ್ಸ್&zwnj;ಗಳೂ ಲಭ್ಯವಿವೆ. ಇದಕ್ಕೆ ಮತ್ತಷ್ಟು ಮೆರಗು ನೀಡಬೇಕು ಎಂದು ಯೋಚಿಸಿ ಇಲ್ಲಿ ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ಕೊಡುವ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಕೇಂದ್ರ ಆರಂಭಿಸುತ್ತಿದ್ದೇವೆ ಎಂದರು&lt;/p&gt;&lt;p&gt;ಮಡಿಯಾಲ ಗ್ರಾಮದಲ್ಲಿ ನಾವು ಸ್ಥಾಪಿಸುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಕಂಟ್ಯೂಟರ್ ಸೈನ್ಸ್&zwnj; ಅಧ್ಯಯನ ಕೇಂದ್ರಗಳು ಸಹ ಭಾರತದ ಸನಾತನ ಜ್ಞಾನ ಪರಂಪರೆಯ ಭಾಗವೇ ಆಗುತ್ತವೆ. ಅಧ್ಯಾತ್ಮವನ್ನು ತನ್ನ ಕಾರ್ಯಚಟುವಟಿಕೆಗಳ ತಳಹದಿಯಾಗಿ ಹೊಂದಿರುವ ಸಂಸ್ಥೆಯೊಂದು ಇಂಥ ಕೇಂದ್ರಗಳನ್ನು ಆರಂಭಿಸುತ್ತಿರುವುದು ಹಲವು ದೃಷ್ಟಿಗಳಿಂದ ಮಹತ್ವದ ವಿಚಾರ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.&lt;/p&gt;&lt;h2&gt;ತಾಯಿ ಸರಸ್ವತಿ ಜ್ಞಾನದಲ್ಲಿ ಭೇದ ಮಾಡುವುದಿಲ್ಲ&lt;/h2&gt;&lt;p&gt;ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎಐ) ಅಥವಾ ಯಾವುದೇ ಅತ್ಯಾಧುನಿಕ ತಂತ್ರಜ್ಞಾನವು ಸನಾತನ ಧರ್ಮಕ್ಕೆ ಹೊರತಾದುದು ಅಲ್ಲ. ಅಧ್ಯಾತ್ಮದಲ್ಲಿ ಮಹತ್ವದ ಸಾಧನೆ ಮಾಡಿ ಎತ್ತರಕ್ಕೆ ಏರಿದ್ದ ನಮ್ಮ ಋಷಿಗಳು ಏಕಕಾಲಕ್ಕೆ ವಿಜ್ಞಾನಿಗಳೂ ಆಗಿದ್ದರು. ತಾಯಿ ಸರಸ್ವತಿ ಜ್ಞಾನದಲ್ಲಿ ಭೇದ ಮಾಡುವುದಿಲ್ಲ ಎಂದು ವಿವರಿಸಿದರು.&lt;/p&gt;&lt;p&gt;ಸನಾತನ ಧರ್ಮವು ಪುರಾತನ ಮೌಲ್ಯವಷ್ಟೇ ಅಲ್ಲ; ನಿತ್ಯ ನೂತನವೂ ಆಗಿದೆ. ಸನಾತನ ಧರ್ಮವು ಎಲ್ಲವನ್ನೂ ಒಪ್ಪಿಕೊಳ್ಳುತ್ತದೆ. ನಾನೂ ಸಹ ವಿಶ್ವದಾದ್ಯಂತ ಏನಾಗುತ್ತಿದೆ ಅಂತ ತಿಳಿದುಕೊಳ್ಳುತ್ತೇನೆ. ಮುಂದೇನು ಬರಬಹುದು? ನಾನು ಹೇಗೆ ಸ್ಪಂದಿಸಬಹುದು ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಅತ್ಯಾಧುನಿಕ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗಬಾರದು ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ಮಂಗಳೂರಿಗೆ ಬರಲು ಏಕಿಷ್ಟು ತಡವಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನವರಿಗೆ ಕೊಡಲು ನನ್ನ ಬಳಿ ಏನಿದೆ ಎಂದು ಕೇಳಿಕೊಳ್ಳುತ್ತಿದ್ದೆ. ಈಗ ಮಡಿಯಾಲದಲ್ಲಿ ಪೂಜ್ಯ ಮಡಿಯಾಲ ನಾರಾಯಣ ಭಟ್ಟರ ಸ್ಮರಣಾರ್ಥ ಉನ್ನತ ಶಿಕ್ಷಣ ಆರಂಭವಾಗುತ್ತಿದೆ. ಈ ಕೊಡುಗೆ ಕೊಡುವ ಅವಕಾಶದೊಂದಿಗೆ ಮಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದರು. ಸಿಎಸ್&zwnj;ಆರ್&zwnj; ಫಂಡ್&zwnj;ಗಳ ಸಮರ್ಪಕ ಬಳಕೆ ಆಗಬೇಕು ಎಂದು ಅಭಿಪ್ರಾಯಪಟ್ಟ ಅವರು, ಸರ್ಕಾರಕ್ಕೆ ತೆರಿಗೆಯ ಮೇಲೆ, ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭದ ಮೇಲೆ ಹಕ್ಕು ಇರುವಂತೆ ಸೇವಾ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳಿಗೆ ಸಿಎಸ್&zwnj;ಆರ್&zwnj; ನಿಧಿಯ ಮೇಲೆ ಹಕ್ಕು ಇರಬೇಕು. ಈ ಹಕ್ಕನ್ನು ಯಾರೂ ನಿರಾಕರಿಸಬಾರದು ಎಂದು ಕಿವಿಮಾತು ಹೇಳಿದರು.&lt;/p&gt;&lt;h2&gt;ಮಂಗಳೂರಿನಲ್ಲಿ ಶೀಘ್ರ ಉಚಿತ ಆಸ್ಪತ್ರೆ ಆರಂಭ&lt;/h2&gt;&lt;p&gt;ಮಂಗಳೂರು ನಗರದಲ್ಲಿ ಶೀಘ್ರ 50 ಹಾಸಿಗೆ ಸಾಮರ್ಥ್ಯದ ಉಚಿತ ಆಸ್ಪತ್ರೆಯನ್ನು ಆರಂಭಿಸಲಾಗುವುದು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಇಂಥ ಆಸ್ಪತ್ರೆಗಳನ್ನು ಆರಂಭಿಸಲಾಗುವುದು. ಆಸ್ಪತ್ರೆಯ ರೂಪುರೇಷೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ವಿವರ ನೀಡಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು. ಪ್ರಸ್ತುತ ಕರ್ನಾಟಕದಲ್ಲಿ 15 ಜಿಲ್ಲೆಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಿವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗುವುದು. ಸಾಯಿಶ್ಯೂರ್&zwnj; ಮೂಲಕ ಪ್ರಸ್ತುತ ಒಂದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳ ಐದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.&lt;/p&gt;&lt;h2&gt;ಮೋಹನ್ ಆಳ್ವಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ&lt;/h2&gt;&lt;p&gt;ಮೂಡುಬಿದರೆಯ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ ಎಂ.ಮೋಹನ್ ಆಳ್ವ ಅವರಿಗೆ &quot;ಒನ್&zwnj; ವರ್ಲ್ಡ್&zwnj; ಒನ್ ಫ್ಯಾಮಿಲಿ ಮಿಷನ್&quot; ವತಿಯಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕರ್ನಾಟಕ ಪರಿವರ್ತಕ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಡಾ ಎಂ.ಮೋಹನ್ ಆಳ್ವ, ಮುಂದಿನ ಆಳ್ವಾಸ್&zwnj; ವಿರಾಸತ್ ಜನವರಿ 7 ರಿಂದ 10 ರವರೆಗೆ ನಡೆಯಲಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರನ್ನು ಮುಂದಿನ ವಿರಾಸತ್ ಉದ್ಘಾಟನೆಗೆ ಆಹ್ವಾನಿಸುತ್ತಿದ್ದೇನೆ ಎಂದು ಆಮಂತ್ರಿಸಿದರು.&lt;/p&gt;&lt;p&gt;ಮುದ್ದೇನಹಳ್ಳಿಗೆ ನಾನು ಸ್ವತಃ ಭೇಟಿ ನೀಡಿ ಅಲ್ಲಿ ನಡೆದಿರುವ ಕೆಲಸಗಳನ್ನು ಗಮನಿಸಿದ್ದೇನೆ. ಅದೊಂದು ಪವಾಡದಂತೆ ಭಾಸವಾಗುತ್ತದೆ. ಅಲ್ಲಿರುವಂಥ ಗೋಶಾಲೆ ಬೇರೆಲ್ಲಿಯೂ ಇಲ್ಲ. ಅಲ್ಲಿನ ಸಾಯಿಶ್ಯೂರ್ ಕಾರ್ಖಾನೆ ಕೋಟ್ಯಂತರ ಮಕ್ಕಳಿಗೆ ಮುಂಜಾನೆ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಅಲ್ಲಿನ ಆಸ್ಪತ್ರೆಯ ಸಿಬ್ಬಂದಿ ಪ್ರೇಮಪೂರ್ವಕ ಕಾಳಜಿಯ ವೈಖರಿ ಎಲ್ಲದಕ್ಕೂ ನಾನು ಸಾಕ್ಷಿಯಾಗಿದ್ದೇನೆ ಎಂದು ಭಾವುಕರಾಗಿ ವಿವರಿಸಿದರು.&lt;/p&gt;&lt;p&gt;ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಮೋಹನ್ ಆಳ್ವ, ಆರ್&zwnj;ಎಸ್&zwnj;ಎಸ್&zwnj; ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಭಟ್, ಕ್ಯಾಂಪ್ಕೋ ಅಧ್ಯಕ್ಷ ಸತೀಶ್&zwnj; ಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.&lt;/p&gt;&lt;p&gt;ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವೈದಿಕ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಿಂದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಎಂಬಿಬಿಎಸ್ ವಿದ್ಯಾರ್ಥಿನಿ ಗೌತಮಿ ಪೈ ತಮ್ಮ ಅನುಭವ ಹಂಚಿಕೊಂಡರು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷರಾದ ಡಾ ಬಿ.ಎನ್.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಗೌಡ ಬಿರಾದಾರ್ ನಿರೂಪಿಸಿದರು.&lt;/p&gt;]]></content:encoded>
            <category>dakshina-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/artificial-intelligence-higher-education-centre-to-begin-operations-soon-in-madiyala/articleshow-3nw4hf0"/>
        </item>
        <item>
            <title><![CDATA[ಬೆಂಗಳೂರು–ಮಂಗಳೂರು ವಂದೇ ಭಾರತ್‌:  2ನೇ ಸಂಚಾರ, ಪುತ್ತೂರಿನಲ್ಲೂ ಸ್ಟಾಪ್! ನಿಮ್ಮ ನಿಲ್ದಾಣಕ್ಕೆ ಎಷ್ಟು ಗಂಟೆಗೆ ರೀಚ್?]]></title>
            <link>https://kannada.asianetnews.com/dakshina-kannada/yashwantpur-mangaluru-vande-bharat-express-2nd-trial-run-begins-with-kabaka-puttur-halt-route-and-trial-run-details-gdp/articleshow-47c73rn</link>
            <guid isPermaLink="true">https://kannada.asianetnews.com/dakshina-kannada/yashwantpur-mangaluru-vande-bharat-express-2nd-trial-run-begins-with-kabaka-puttur-halt-route-and-trial-run-details-gdp/articleshow-47c73rn</guid>
            <pubDate>Thu, 10 Sep 2026 08:58:10 +0530</pubDate>
            <description><![CDATA[ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್&zwnj;ಪ್ರೆಸ್&zwnj;ನ ಎರಡನೇ ಪ್ರಾಯೋಗಿಕ ಸಂಚಾರ ಇಂದು ನಡೆಯಲಿದೆ. ಈ ಬಾರಿ ಕಬಕ&ndash;ಪುತ್ತೂರು ನಿಲ್ದಾಣದಲ್ಲಿಯೂ ನಿಲುಗಡೆ ನೀಡಲಾಗಿದ್ದು, ಶಿರಾಡಿ ಘಾಟ್ ವಿಭಾಗದಲ್ಲಿ ರೈಲಿನ ವೇಗ ಮತ್ತು ಸುರಕ್ಷತೆಯನ್ನು ತಾಂತ್ರಿಕ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kztcgw9rpvaxbtnt7d54hkbt,imgname-vande-bharat-express-sakaleshpur-1786518204728.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಶೀಘ್ರದಲ್ಲೇ ಆರಂಭವಾಗಲಿರುವ ಬಹುನಿರೀಕ್ಷಿತ 'ವಂದೇ ಭಾರತ್ ಎಕ್ಸ್&zwnj;ಪ್ರೆಸ್' ರೈಲಿನ 16 ಬೋಗಿಗಳ ಎರಡನೇ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಇಂದು (ಗುರುವಾರ) ನಡೆಯಲಿದೆ.&lt;/p&gt;&lt;p&gt;ರೈಲ್ವೆ ಮಂಡಳಿಯು ಸೆಪ್ಟೆಂಬರ್ 2ರಂದು ನೀಡಿದ್ದ ನಿರ್ದೇಶನದಂತೆ, ಯಶವಂತಪುರದಿಂದ ಮಂಗಳೂರು ಜಂಕ್ಷನ್&zwnj;ವರೆಗೆ ಹಾಗೂ ಅಲ್ಲಿಂದ ಮರಳಿ ಯಶವಂತಪುರಕ್ಕೆ ಖಾಲಿ ವಂದೇ ಭಾರತ್ ರೈಲನ್ನು (ರೇಕ್ ಸಂಖ್ಯೆ: IC2015) ಓಡಿಸಿ, ಒಟ್ಟು ಸಂಚಾರ ಸಮಯವನ್ನು ಪರಿಶೀಲಿಸಲಾಗುತ್ತಿದೆ. ವಿಶೇ&zwj;ಷವೆಂದರೆ, ಈ ಬಾರಿಯ ಪ್ರಾಯೋಗಿಕ ಸಂಚಾರದಲ್ಲಿ ಕಬಕ&ndash;ಪುತ್ತೂರು ನಿಲ್ದಾಣಕ್ಕೂ ನಿಲುಗಡೆ ನೀಡಲಾಗಿದೆ.&lt;/p&gt;&lt;h2&gt;ರೈಲಿನ ಪ್ರಾಯೋಗಿಕ ವೇಳಾಪಟ್ಟಿ:&lt;/h2&gt;&lt;p&gt;ಯಶವಂತಪುರದಿಂದ ಮಂಗಳೂರು ಜಂಕ್ಷನ್&zwnj;ಗೆ:&lt;/p&gt;&lt;p&gt;ಯಶವಂತಪುರ: ಬೆಳಿಗ್ಗೆ 6.50ಕ್ಕೆ ನಿರ್ಗಮನ&lt;/p&gt;&lt;p&gt;ಹಾಸನ: ಬೆಳಿಗ್ಗೆ 9.33ಕ್ಕೆ ಆಗಮನ | 9.35ಕ್ಕೆ ನಿರ್ಗಮನ&lt;/p&gt;&lt;p&gt;ಸಕಲೇಶಪುರ: ಬೆಳಿಗ್ಗೆ 10.25ಕ್ಕೆ ಆಗಮನ | 10.30ಕ್ಕೆ ನಿರ್ಗಮನ&lt;/p&gt;&lt;p&gt;ಸುಬ್ರಹ್ಮಣ್ಯ ರೋಡ್: ಮಧ್ಯಾಹ್ನ 12.50ಕ್ಕೆ ಆಗಮನ | 12.55ಕ್ಕೆ ನಿರ್ಗಮನ&lt;/p&gt;&lt;p&gt;ಕಬಕ&ndash;ಪುತ್ತೂರು: ಮಧ್ಯಾಹ್ನ 2.34ಕ್ಕೆ ಆಗಮನ | 2.36ಕ್ಕೆ ನಿರ್ಗಮನ&lt;/p&gt;&lt;p&gt;ಪಡೀಲ್: ಮಧ್ಯಾಹ್ನ 2.40&lt;/p&gt;&lt;p&gt;ಮಂಗಳೂರು ಜಂಕ್ಷನ್: ಮಧ್ಯಾಹ್ನ 2.50ಕ್ಕೆ ತಲುಪಲಿದೆ.&lt;/p&gt;&lt;h2&gt;ಮಂಗಳೂರು ಜಂಕ್ಷನ್&zwnj;ನಿಂದ ಯಶವಂತಪುರಕ್ಕೆ (ಮರಳಿ ಸಂಚಾರ):&lt;/h2&gt;&lt;p&gt;ಮಂಗಳೂರು ಜಂಕ್ಷನ್: ಮಧ್ಯಾಹ್ನ 3.10ಕ್ಕೆ ನಿರ್ಗಮನ&lt;/p&gt;&lt;p&gt;ಪಡೀಲ್: ಮಧ್ಯಾಹ್ನ 3.20&lt;/p&gt;&lt;p&gt;ಕಬಕ&ndash;ಪುತ್ತೂರು: ಮಧ್ಯಾಹ್ನ 3.38ಕ್ಕೆ ಆಗಮನ | 3.40ಕ್ಕೆ ನಿರ್ಗಮನ&lt;/p&gt;&lt;p&gt;ಸುಬ್ರಹ್ಮಣ್ಯ ರೋಡ್: ಸಂಜೆ 4.35ಕ್ಕೆ ಆಗಮನ | 4.40ಕ್ಕೆ ನಿರ್ಗಮನ&lt;/p&gt;&lt;p&gt;ಸಕಲೇಶಪುರ: ಸಂಜೆ 6.50ಕ್ಕೆ ಆಗಮನ | 6.55ಕ್ಕೆ ನಿರ್ಗಮನ&lt;/p&gt;&lt;p&gt;ಹಾಸನ: ರಾತ್ರಿ 7.45ಕ್ಕೆ ಆಗಮನ | 7.47ಕ್ಕೆ ನಿರ್ಗಮನ&lt;/p&gt;&lt;p&gt;ಯಶವಂತಪುರ: ರಾತ್ರಿ 10.30ಕ್ಕೆ ತಲುಪುವ ನಿರೀಕ್ಷೆಯಿದೆ.&lt;/p&gt;&lt;p&gt;&lt;strong&gt;ತಾಂತ್ರಿಕ ಪರಿಶೀಲನೆ ಮತ್ತು ಸುರಕ್ಷತೆ:&lt;/strong&gt; ಈ ಪ್ರಾಯೋಗಿಕ ಸಂಚಾರದ ಸಮಯದಲ್ಲಿ ರೈಲಿನ ಮೂಲ ಹಾಗೂ ಅಂತಿಮ ನಿಲ್ದಾಣಗಳ ಸಮಯ, ವಿವಿಧ ವಿಭಾಗಗಳ ನಡುವಿನ ಇಂಟರ್&zwnj;ಚೇಂಜ್&zwnj;ಗಳು ಮತ್ತು ನಿಲುಗಡೆ ಅವಧಿಯನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ. ವಿಶೇಷವಾಗಿ ಕಠಿಣವಾದ ಶಿರಾಡಿ ಘಾಟ್ ವಿಭಾಗದಲ್ಲಿ ರೈಲಿನ ವೇಗ ಮತ್ತು ಸಂಚಾರ ವ್ಯವಸ್ಥೆಯನ್ನು ತಾಂತ್ರಿಕ ಅಧಿಕಾರಿಗಳು ಹತ್ತಿರದಿಂದ ನಿಗಾವಹಿಸಲಿದ್ದಾರೆ.&lt;/p&gt;&lt;p&gt;ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ಹಿರಿಯ ವಿಭಾಗೀಯ ಅಧಿಕಾರಿಗಳು, ಟೈಮ್&zwnj;ಟೇಬಲ್ ನಿಯಂತ್ರಕರು, ವಿದ್ಯುತ್, ಎಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ವಿಭಾಗಗಳ ಜಂಟಿ ಸಿಬ್ಬಂದಿ ಈ ಪ್ರಾಯೋಗಿಕ ಸಂಚಾರದಲ್ಲಿ ಭಾಗವಹಿಸಿ ಸಂಪೂರ್ಣ ವರದಿ ಸಿದ್ಧಪಡಿಸಲಿದ್ದಾರೆ. ಪ್ರಯಾಣಿಕರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ಸಂಚಾರ ಸಮಯವನ್ನು ಆದಷ್ಟು ಕಡಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/yashwantpur-mangaluru-vande-bharat-express-2nd-trial-run-begins-with-kabaka-puttur-halt-route-and-trial-run-details-gdp/articleshow-47c73rn"/>
        </item>
        <item>
            <title><![CDATA[Election: ಸರ್ಕಾರಿ ಆದೇಶಕ್ಕೆ ಕ್ಯಾರೇ ಎನ್ನದ ವಿವಿ; ಕಾಲೇಜು ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ! ಗೆದ್ದು ಬೀಗಿದ ABVP!]]></title>
            <link>https://kannada.asianetnews.com/karnataka-districts/mangalore-university-student-union-election-abvp-victory-congress-government-order-direct-indirect-election-bmk/articleshow-5wb42qs</link>
            <guid isPermaLink="true">https://kannada.asianetnews.com/karnataka-districts/mangalore-university-student-union-election-abvp-victory-congress-government-order-direct-indirect-election-bmk/articleshow-5wb42qs</guid>
            <pubDate>Fri, 11 Sep 2026 16:28:22 +0530</pubDate>
            <description><![CDATA[&lt;p&gt;ಕಾಲೇಜು ಚುನಾವಣೆಯಲ್ಲಿ, ಕೊನೆ ಕ್ಷಣದಲ್ಲಿ ಸರ್ಕಾರ ಹೊರಡಿಸಿದ ನೇರ ಚುನಾವಣೆ ಆದೇಶವನ್ನು ವಿಶ್ವವಿದ್ಯಾಲಯ ತಿರಸ್ಕರಿಸಿತು. ನಿಗದಿಯಂತೆ ನಡೆದ ಪರೋಕ್ಷ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m281w08xbb7r692emjj5kyh2,imgname-abvp-1789124280605.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಕರಾವಳಿಯ ಶೈಕ್ಷಣಿಕ ಕೇಂದ್ರ ಮಂಗಳೂರಿನಲ್ಲಿ ನಡೆದ ವಿವಿ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಈಗ ರಾಜ್ಯ ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟುಮಾಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬೆಂಬಲಿತ ಅಭ್ಯರ್ಥಿಗಳು, ಸರ್ಕಾರದ ಆದೇಶಕ್ಕೆ ನೇರ ಠಕ್ಕರ್ ನೀಡಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರದ ಮಾಸ್ಟರ್ ಪ್ಲಾನ್ ಮತ್ತು ಕೊನೇ ಕ್ಷಣದ ಆದೇಶ!&lt;/strong&gt;&lt;/h2&gt;&lt;p&gt;ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಐತಿಹಾಸಿಕ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಿಗದಿಯಾಗಿತ್ತು. ಅಲ್ಲಿಯವರೆಗೆ ಚಾಲ್ತಿಯಲ್ಲಿದ್ದ ನಿಯಮದಂತೆ, ತರಗತಿ ಪ್ರತಿನಿಧಿಗಳು ಮತದಾನ ಮಾಡುವ &lsquo;ಪರೋಕ್ಷ ಮತದಾನ&rsquo; (Indirect Election) ಪದ್ಧತಿಯಲ್ಲಿ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ, ಪರೋಕ್ಷ ಚುನಾವಣೆ ನಡೆದರೆ ಎಬಿವಿಪಿ ಬೆಂಬಲಿತರೇ ಗೆದ್ದು ಬೀಗಲಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ, ಆಡಳಿತಾರೂಢ ಸರ್ಕಾರ ಮತ್ತು ಸಚಿವರಿಂದ ಚುನಾವಣೆ ತಡೆಯಲು ಅಥವಾ ಮುಂದೂಡಲು ವಿಶ್ವವಿದ್ಯಾಲಯದ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಸರ್ಕಾರಕ್ಕೆ ಠಕ್ಕರ್!&lt;/strong&gt;&lt;/h3&gt;&lt;p&gt;ಈ ಚುನಾವಣೆಯನ್ನು ಹೇಗಾದರೂ ಮಾಡಿ ತಡೆಯಲು ತರಾತುರಿಯಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದ ಸರ್ಕಾರ, ನಿನ್ನೆ ರಾತ್ರೋರಾತ್ರಿ ರಾಜ್ಯಾದ್ಯಂತ ಕಾಲೇಜು ಚುನಾವಣೆ&zwnj;ಗೆ ಹೊಸ ನಿಯಮ ಜಾರಿಗೆ ತಂದು ಆದೇಶ ಹೊರಡಿಸಿತು. ಇನ್ಮುಂದೆ ಪರೋಕ್ಷ ಚುನಾವಣೆ ಬೇಡ, ಎಲ್ಲಾ ವಿದ್ಯಾರ್ಥಿಗಳು ನೇರವಾಗಿ ಮತ ಚಲಾಯಿಸುವ &lsquo;ನೇರ ಚುನಾವಣೆ&rsquo; ನಡೆಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಆದೇಶ ಹೊರಡಿಸಲಾಯಿತು. ಈ ಮೂಲಕ ಇಂದಿನ ಚುನಾವಣೆಯನ್ನು ಮುಂದೂಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು.&lt;/p&gt;&lt;h3&gt;&lt;strong&gt;ಸರಕಾರಿ ಆದೇಶಕ್ಕೆ ಬೆಲೆ ಕೊಡದ ವಿವಿ: ಕಾನೂನುಬದ್ಧ ವಾದ!&lt;/strong&gt;&lt;/h3&gt;&lt;p&gt;ಆದರೆ, ಸರ್ಕಾರದ ಈ ತರಾತುರಿಯ ಆದೇಶಕ್ಕೂ ಮತ್ತು ಸಚಿವರ ರಾಜಕೀಯ ಒತ್ತಡಕ್ಕೂ ಮಂಗಳೂರು ವಿಶ್ವವಿದ್ಯಾಲಯ ಮಣಿಯಲಿಲ್ಲ. ಸೆಪ್ಟೆಂಬರ್ 10 ರಂದು ಸರ್ಕಾರಿ ಆದೇಶ ಬರುವುದಕ್ಕಿಂತ ಮುಂಚಿತವಾಗಿಯೇ ಮಂಗಳೂರು ವಿವಿ ಕಾಲೇಜಿನ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿತ್ತು. ನಿಯಮಾವಳಿಗಳ ಪ್ರಕಾರ ಒಮ್ಮೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಮೇಲೆ ಮಧ್ಯದಲ್ಲಿ ಬಂದ ಹೊಸ ಆದೇಶಗಳನ್ನು ಅನ್ವಯಿಸಲು ಬರುವುದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿ ನಾಯಕರು ಪ್ರಬಲವಾಗಿ ವಾದಿಸಿದರು. ಸರ್ಕಾರದ ಕಡೆಯಿಂದ ಎಷ್ಟೇ ಒತ್ತಡ ಬಂದರೂ, ವಿಶ್ವವಿದ್ಯಾಲಯವು ನಿಗದಿತ ವೇಳಾಪಟ್ಟಿಯಂತೆಯೇ ಪರೋಕ್ಷ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತು.&lt;/p&gt;&lt;h3&gt;&lt;strong&gt;ಎಬಿವಿಪಿ ಭರ್ಜರಿ ಜಯಭೇರಿ ಹಾಗೂ ವಿಜಯೋತ್ಸವ!&lt;/strong&gt;&lt;/h3&gt;&lt;p&gt;ಪರೋಕ್ಷ ಮತದಾನದ ಮೂಲಕ ನಡೆದ ಈ ರೋಚಕ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿ ಬೀಗಿದ್ದಾರೆ. ಸರ್ಕಾರದ ಹಸ್ತಕ್ಷೇಪ ಮತ್ತು ಕಟ್ಟುನಿಟ್ಟಿನ ಆದೇಶದ ನಡುವೆಯೂ ಎಬಿವಿಪಿ ತನ್ನ ಪದಾಧಿಕಾರಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.&lt;/p&gt;&lt;h3&gt;&lt;strong&gt;ಎಬಿವಿಪಿಯಿಂದ ಸಂಭ್ರಮ!&lt;/strong&gt;&lt;/h3&gt;&lt;p&gt;ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮಂಗಳೂರಿನ ಹಂಪನಕಟ್ಟೆಯ ಕಾಲೇಜು ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ವಿಜಯೋತ್ಸವ ಆಚರಿಸಿದರು. ಭಗವಾ ಧ್ವಜ ಹಿಡಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ವಿಜಯದ ಸಂಭ್ರಮ ಆಚರಿಸಿದರು. ತರಾತುರಿಯಲ್ಲಿ ಆದೇಶ ಹೊರಡಿಸಿ ಕಾಲೇಜು ಚುನಾವಣೆಯಲ್ಲಿ ರಾಜಕೀಯ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯಾರ್ಥಿ ಶಕ್ತಿ ತಕ್ಕ ಉತ್ತರ ನೀಡಿದೆ ಎಂದು ಎಬಿವಿಪಿ ನಾಯಕರು ಹರಿಹಾಯ್ದಿದ್ದಾರೆ. ಒಟ್ಟಿನಲ್ಲಿ, ಮಂಗಳೂರು ವಿವಿ ಕಾಲೇಜು ಚುನಾವಣೆ ಈಗ ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ತಂದಿಟ್ಟಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/mangalore-university-student-union-election-abvp-victory-congress-government-order-direct-indirect-election-bmk/articleshow-5wb42qs"/>
        </item>
        <item>
            <title><![CDATA[Coastal Karnataka: ಕರಾವಳಿಗೆ 'ಐದು ಸಾವಿರ ಕೋಟಿ' ರಹಸ್ಯ, ಕೇಸರಿ ಕೋಟೆ ಛಿದ್ರಕ್ಕೆ ಸಿಎಂ ಡಿಕೆ ಶಿವಕುಮಾರ್ ಪ್ಲ್ಯಾನ್!]]></title>
            <link>https://kannada.asianetnews.com/karnataka-districts/five-thousand-crore-for-coastal-karnataka-secret-of-cm-dk-shivakumar-s-plan-to-fracture-bjp-lead-sns/articleshow-6zaycq0</link>
            <guid isPermaLink="true">https://kannada.asianetnews.com/karnataka-districts/five-thousand-crore-for-coastal-karnataka-secret-of-cm-dk-shivakumar-s-plan-to-fracture-bjp-lead-sns/articleshow-6zaycq0</guid>
            <pubDate>Mon, 14 Sep 2026 11:42:55 +0530</pubDate>
            <description><![CDATA[ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯು ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಶಕ್ತಿ ವೃದ್ಧಿಸುವ ತಂತ್ರವಾಗಿದೆ. ಅಭಿವೃದ್ಧಿ ಯೋಜನೆಗಳ ಮೂಲಕ ಮತದಾರರ ಮನಗೆಲ್ಲುವ ಗುರಿಯೊಂದಿಗೆ, ವಿಶೇಷ ಆರ್ಥಿಕ ಪ್ಯಾಕೇಜ್, ಪ್ರವಾಸೋದ್ಯಮ ಅಭಿವೃದ್ಧಿ, ಮತ್ತು ತುಳು ಭಾಷೆಗೆ ಮಾನ್ಯತೆಯಂತಹ ನಿರೀಕ್ಷೆಗಳು ಗರಿಗೆದರಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2f7ftbs1g09fft3sp12ce1f,imgname-dk-shivakumar--1789365053817.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಶಕ್ತಿ ವೃದ್ಧಿಸಲು ಅಭಿವೃದ್ಧಿಯ ಅಸ್ತ್ರವನ್ನು ಪ್ರಯೋಗಿಸಲು ರಾಜ್ಯ ಸರ್ಕಾರ ಮುಂದಾಗಿದೆಯೇ ಎಂಬ ಕುತೂಹಲ ಮೂಡಿದ್ದು, ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯತ್ತ ಇಡೀ ರಾಜ್ಯದ ಚಿತ್ತ ನೆಟ್ಟಿದೆ.&lt;/p&gt;&lt;h2&gt;ಕರಾವಳಿ ರಾಜಕೀಯ: ಮಂಗಳೂರು ಸಭೆಯ ಹಿಂದಿನ ರಹಸ್ಯವೇನು?&lt;/h2&gt;&lt;p&gt;ಕರಾವಳಿಯಲ್ಲಿ ಕಾಂಗ್ರೆಸ್&zwnj;ಗೆ ಹಲವು ವರ್ಷಗಳಿಂದ ನಿರೀಕ್ಷಿತ ರಾಜಕೀಯ ಯಶಸ್ಸು ಸಿಗುತ್ತಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಸಾಧಿಸಿದರೂ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ 2028ರ ವಿಧಾನಸಭಾ ಚುನಾವಣೆಗೆ ಮುನ್ನ ಕರಾವಳಿಯಲ್ಲಿ ಪಕ್ಷದ ನೆಲೆಯನ್ನು ಬಲಪಡಿಸುವ ತಂತ್ರಗಾರಿಕೆಯ ಭಾಗವಾಗಿಯೇ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ ಎಂಬ ರಾಜಕೀಯ ಚರ್ಚೆ ಆರಂಭವಾಗಿದೆ.&lt;/p&gt;&lt;p&gt;2013ರ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಮಟ್ಟದ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 2018ರ ನಂತರದ ಚುನಾವಣೆಗಳಲ್ಲೂ ಪಕ್ಷಕ್ಕೆ ಹಿನ್ನಡೆ ಮುಂದುವರಿದಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆ ಕಂಡುಬಂದ ಸಂದರ್ಭಗಳಲ್ಲಿಯೂ ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ಹಿಡಿತವನ್ನು ಉಳಿಸಿಕೊಂಡಿರುವುದು ಕಾಂಗ್ರೆಸ್&zwnj;ಗೆ ದೊಡ್ಡ ಸವಾಲಾಗಿದೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ ಕರಾವಳಿಯ ರಾಜಕೀಯ ಸಮೀಕರಣದಲ್ಲಿ ಕಾಂಗ್ರೆಸ್&zwnj;ಗೆ ನಿರೀಕ್ಷಿತ ಬದಲಾವಣೆ ಕಂಡುಬಂದಿಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ಮುನ್ನ ಅಭಿವೃದ್ಧಿ ಯೋಜನೆಗಳ ಮೂಲಕ ಕರಾವಳಿಯ ಮತದಾರರ ಮನಗೆಲ್ಲುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.&lt;/p&gt;&lt;h2&gt;ಡಿಕೆಶಿ ಟಾರ್ಗೆಟ್ ಕರಾವಳಿ?&lt;/h2&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ತಂತ್ರಗಾರಿಕೆಯಲ್ಲಿ ಕರಾವಳಿ ಭಾಗಕ್ಕೆ ವಿಶೇಷ ಸ್ಥಾನ ಸಿಕ್ಕಿರುವುದು ಈಗ ಚರ್ಚೆಯ ವಿಷಯವಾಗಿದೆ. ಅಭಿವೃದ್ಧಿ, ಪ್ರವಾಸೋದ್ಯಮ, ಬಂಡವಾಳ ಹೂಡಿಕೆ ಹಾಗೂ ಮೂಲಸೌಕರ್ಯ ಯೋಜನೆಗಳ ಮೂಲಕ ಕರಾವಳಿಯ ಆರ್ಥಿಕ ಚಿತ್ರಣವನ್ನೇ ಬದಲಿಸುವ ಉದ್ದೇಶ ಸರ್ಕಾರಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಮಂಗಳೂರನ್ನು &lsquo;ಡೆಡ್ ಸಿಟಿ&rsquo; ಎಂದು ಡಿ.ಕೆ. ಶಿವಕುಮಾರ್ ಉಲ್ಲೇಖಿಸಿದ್ದ ಹಿನ್ನೆಲೆಯಲ್ಲಿ, ಮಂಗಳೂರು ಸೇರಿದಂತೆ ಇಡೀ ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದ ಒತ್ತು ಮತ್ತಷ್ಟು ಕುತೂಹಲ ಮೂಡಿಸಿದೆ.&lt;/p&gt;&lt;p&gt;ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುಮಾರು ಐದು ಸಾವಿರ ಕೋಟಿ ಮೊತ್ತದ ಬೃಹತ್ ಪ್ರಸ್ತಾವನೆ ಸಿದ್ಧವಾಗಿರುವುದು ಗಮನ ಸೆಳೆಯುತ್ತಿದೆ. ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡುವ ಉದ್ದೇಶ ಇದರಲ್ಲಿದೆ ಎನ್ನಲಾಗಿದೆ. ಬೀಚ್&zwnj;ಗಳು, ನದಿಗಳು ಹಾಗೂ ಕರಾವಳಿಯ ನೈಸರ್ಗಿಕ ಸಂಪನ್ಮೂಲಗಳನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸುವ ಯೋಜನೆಗಳಿಗೂ ಒತ್ತು ನೀಡಲಾಗುತ್ತಿದೆ.&lt;/p&gt;&lt;p&gt;ಕರ್ನಾಟಕ ಜಲಸಾರಿಗೆ ಮಂಡಳಿ ಮೂಲಕ ಜಲಸಾರಿಗೆ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯೂ ಇದೆ. ಇದರ ಜತೆಗೆ ಸುಮಾರು ಸಾವಿರ ಕೋಟಿ ರೂ. ಮೊತ್ತದ ಆರು ಪ್ರಮುಖ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಅನುಷ್ಠಾನಗೊಳಿಸುವ ಚಿಂತನೆಯೂ ಸರ್ಕಾರದ ಮುಂದಿದೆ ಎನ್ನಲಾಗಿದೆ. ಕರಾವಳಿ ಭಾಗದಲ್ಲಿ ಬಿಜೆಪಿ ಹಲವು ವರ್ಷಗಳಿಂದ ತನ್ನ ಪ್ರಬಲ ರಾಜಕೀಯ ನೆಲೆಯನ್ನು ನಿರ್ಮಿಸಿಕೊಂಡಿದೆ. ಹೀಗಾಗಿ ಕಾಂಗ್ರೆಸ್&zwnj;ಗೆ ಇಲ್ಲಿ ಕೇವಲ ಚುನಾವಣಾ ಪ್ರಚಾರ ಅಥವಾ ಗ್ಯಾರಂಟಿ ಯೋಜನೆಗಳ ಮೂಲಕವೇ ರಾಜಕೀಯ ಸಮೀಕರಣ ಬದಲಿಸುವುದು ಸುಲಭವಲ್ಲ.&lt;/p&gt;&lt;p&gt;ಇದೀಗ ಅಭಿವೃದ್ಧಿ ಯೋಜನೆಗಳ ಮೂಲಕ ಉದ್ಯೋಗ, ಪ್ರವಾಸೋದ್ಯಮ, ಹೂಡಿಕೆ ಹಾಗೂ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವುದರಿಂದ ಕರಾವಳಿಯ ಯುವಜನತೆ ಮತ್ತು ಉದ್ಯಮ ವಲಯವನ್ನು ಸೆಳೆಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್&zwnj;ನಲ್ಲಿದೆ. ವಿಶೇಷವಾಗಿ ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರಿಂದ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು. ಇದರ ರಾಜಕೀಯ ಲಾಭವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಡೆಯುವುದು ಸರ್ಕಾರದ ತಂತ್ರವಾಗಿರಬಹುದು ಎಂಬ ವಿಶ್ಲೇಷಣೆಯೂ ಇದೆ.&lt;/p&gt;&lt;h2&gt;ಸೆ.18ರ ಸಂಪುಟ ಸಭೆಯಲ್ಲಿ ಏನೇನು ಘೋಷಣೆ ಮತ್ತು ನಿರೀಕ್ಷೆ?&lt;/h2&gt;&lt;p&gt;ಕರಾವಳಿಯ ಪ್ರಮುಖ ನಿರೀಕ್ಷೆಗಳಲ್ಲಿ ಮೊದಲನೆಯದು ವಿಶೇಷ ಆರ್ಥಿಕ ಪ್ಯಾಕೇಜ್. ಕರಾವಳಿ ಕರ್ನಾಟಕಕ್ಕೆ ಸುಮಾರು ಐದು ಸಾವಿರ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡಬೇಕು ಎಂಬ ಬೇಡಿಕೆ ಈಗಾಗಲೇ ಸರ್ಕಾರದ ಮುಂದಿದೆ. ಮೂಲಸೌಕರ್ಯ, ಪ್ರವಾಸೋದ್ಯಮ, ಮೀನುಗಾರಿಕೆ, ಕೈಗಾರಿಕೆ, ಉದ್ಯೋಗ ಸೃಷ್ಟಿ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಈ ಹಣವನ್ನು ಬಳಸಬೇಕು ಎಂಬುದು ಬೇಡಿಕೆಯ ಹಿಂದಿನ ಉದ್ದೇಶ.&lt;/p&gt;&lt;p&gt;ಕರಾವಳಿಯ ಜನರ ಭಾವನೆಗೆ ಸಂಬಂಧಿಸಿದ ಮತ್ತೊಂದು ಪ್ರಮುಖ ವಿಚಾರ ತುಳು ಭಾಷೆ. ತುಳುವನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಮಂಗಳೂರಿನಲ್ಲೇ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ನೂ ಮಂಗಳೂರಿನ ಬಹುಕಾಲದ ಮತ್ತೊಂದು ಕನಸು ಐಟಿ ಕ್ಷೇತ್ರದ ದೊಡ್ಡ ಬೆಳವಣಿಗೆ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಮಂಗಳೂರು ತನ್ನದೇ ಆದ ಸಾಮರ್ಥ್ಯ ಹೊಂದಿದ್ದರೂ, ಬೆಂಗಳೂರಿನ ಮಟ್ಟಿಗೆ IT ಉದ್ಯೋಗಾವಕಾಶಗಳು ಇಲ್ಲಿ ಬೆಳೆಯಲು ಸಾಧ್ಯವಾಗಿಲ್ಲ.&lt;/p&gt;&lt;p&gt;ಮಂಗಳೂರಿನಲ್ಲಿ ದೊಡ್ಡ ಮಟ್ಟದ IT Park ಅಥವಾ IT ಹಬ್ ಸ್ಥಾಪನೆಯಾದರೆ ಕರಾವಳಿಯ ಯುವಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬಹುದು. ಮಂಗಳೂರಿನಲ್ಲಿ ಕೈಗಾರಿಕೆಗಳಿಗೆ ಅಗತ್ಯವಿರುವ ಭೂಮಿ ಮತ್ತು ಮೂಲಸೌಕರ್ಯದ ಕೊರತೆ ಹಲವು ವರ್ಷಗಳಿಂದ ಸಮಸ್ಯೆಯಾಗಿದೆ. ಬೈಕಂಪಾಡಿ ಸೇರಿದಂತೆ ಅಸ್ತಿತ್ವದಲ್ಲಿರುವ ಕೈಗಾರಿಕಾ ಪ್ರದೇಶಗಳ ರಸ್ತೆಗಳು ಮತ್ತು ಮೂಲಸೌಕರ್ಯವನ್ನು ಸುಧಾರಿಸುವುದು, ಹೊಸ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು, ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದು ಮುಂತಾದ ಬೇಡಿಕೆಗಳು ಸರ್ಕಾರದ ಮುಂದಿವೆ. ಸಮುದ್ರ ಸಂಪನ್ಮೂಲ, ಜಲಕೃಷಿ, ಮೀನು ಸಂಸ್ಕರಣೆ, ಸಾಗರ ವಿಜ್ಞಾನ ಹಾಗೂ ಸಮುದ್ರ ಆಧಾರಿತ ಆರ್ಥಿಕ ಚಟುವಟಿಕೆಗಳಲ್ಲಿ ಸಂಶೋಧನೆ ಮತ್ತು ಶಿಕ್ಷಣಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ದೊಡ್ಡ ಉತ್ತೇಜನ ನೀಡಬಹುದು. ಇಂತಹ ಸಂಸ್ಥೆ ಸ್ಥಾಪನೆಯಾದರೆ ಕರಾವಳಿಯಲ್ಲೇ ಸಮುದ್ರ ಆಧಾರಿತ ಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ದೊಡ್ಡ ಶಿಕ್ಷಣ ಕೇಂದ್ರ ರೂಪುಗೊಳ್ಳುವ ಸಾಧ್ಯತೆ ಇದೆ.&lt;/p&gt;&lt;h2&gt;ಟೆಂಪಲ್ ಟೂರಿಸಂನತ್ತ ಸರ್ಕಾರದ ಚಿತ್ತ!&lt;/h2&gt;&lt;p&gt;ಕರಾವಳಿಯ ಧಾರ್ಮಿಕ ಪ್ರವಾಸೋದ್ಯಮಕ್ಕೂ ದೊಡ್ಡ ಅವಕಾಶವಿದೆ. ಗೋಕರ್ಣ, ಮುರುಡೇಶ್ವರ, ಕೊಲ್ಲೂರು, ಉಡುಪಿ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತು ಮಂಗಳೂರು ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಟೆಂಪಲ್ ಟೂರಿಸಂ ಸರ್ಕ್ಯೂಟ್ ರೂಪಿಸುವ ಬೇಡಿಕೆ ಇದೆ. ಇಂತಹ ಪ್ರವಾಸೋದ್ಯಮ ಕಾರಿಡಾರ್ ನಿರ್ಮಾಣವಾದರೆ ಪ್ರವಾಸಿಗರು ಒಂದು ಸ್ಥಳಕ್ಕೆ ಭೇಟಿ ನೀಡಿ ಹಿಂದಿರುಗುವುದಕ್ಕಿಂತ ಹಲವು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡಿನಲ್ಲಿ ಪ್ರವಾಸ ಮಾಡುವ ಸಾಧ್ಯತೆ ಹೆಚ್ಚುತ್ತದೆ.&lt;/p&gt;&lt;p&gt;ಇದರ ಪರಿಣಾಮವಾಗಿ ಹೋಟೆಲ್, ಸಾರಿಗೆ, ಸ್ಥಳೀಯ ಆಹಾರ, ಹಸ್ತಕಲೆ ಮತ್ತು ಸಣ್ಣ ವ್ಯಾಪಾರಗಳಿಗೂ ಆರ್ಥಿಕ ಲಾಭ ದೊರೆಯಬಹುದು. ಜೊತೆಗೆ ಮಂಗಳೂರು&ndash;ಗೋವಾ ಕ್ರೂಸ್ ಸೇವೆಯ ನಿರೀಕ್ಷೆಯೂ ಗಮನ ಸೆಳೆಯುತ್ತಿದೆ. ಮಂಗಳೂರು ಬಂದರನ್ನು ಪ್ರವಾಸೋದ್ಯಮದೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸಂಪರ್ಕಿಸಿ, ಸಮುದ್ರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಪ್ರಯತ್ನಗಳು ನಡೆದರೆ ಮಂಗಳೂರು ಕೇವಲ ವಾಣಿಜ್ಯ ಬಂದರು ನಗರವಾಗಿರದೆ ಕ್ರೂಸ್ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗುವ ಅವಕಾಶ ಹೊಂದಿದೆ.&lt;/p&gt;&lt;p&gt;ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲೂ ಕರಾವಳಿಗೆ ಹೊಸ ಅವಕಾಶಗಳಿವೆ. ಮಂಗಳೂರು ಈಗಾಗಲೇ ದಕ್ಷಿಣ ಭಾರತದ ಪ್ರಮುಖ ವೈದ್ಯಕೀಯ ಕೇಂದ್ರಗಳಲ್ಲಿ ಒಂದಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದಲೂ ಚಿಕಿತ್ಸೆಗಾಗಿ ಜನರು ಮಂಗಳೂರಿಗೆ ಬರುತ್ತಾರೆ.&lt;strong&gt; (ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು)&amp;nbsp;&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/five-thousand-crore-for-coastal-karnataka-secret-of-cm-dk-shivakumar-s-plan-to-fracture-bjp-lead-sns/articleshow-6zaycq0"/>
        </item>
        <item>
            <title><![CDATA[ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಕರಾವಳಿಗೆ ವಿಶೇಷ ರೈಲು ಸಂಚಾರ!]]></title>
            <link>https://kannada.asianetnews.com/karnataka-districts/south-western-railway-ganesh-chaturthi-special-trains-bengaluru-to-madgaon-vijayapura-and-belagavi-routes-timings-gdp/articleshow-7y6xxux</link>
            <guid isPermaLink="true">https://kannada.asianetnews.com/karnataka-districts/south-western-railway-ganesh-chaturthi-special-trains-bengaluru-to-madgaon-vijayapura-and-belagavi-routes-timings-gdp/articleshow-7y6xxux</guid>
            <pubDate>Thu, 10 Sep 2026 10:32:25 +0530</pubDate>
            <description><![CDATA[ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ, ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಹಾಗೂ ಕರಾವಳಿ-ಮಲೆನಾಡು ಭಾಗದ ಮಡಗಾಂವ್&zwnj;ಗೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಯಶವಂತಪುರ ಮತ್ತು ಎಸ್&zwnj;ಎಂವಿಟಿ ಬೆಂಗಳೂರು ನಿಲ್ದಾಣಗಳಿಂದ ಹೊರಡಲಿದ್ದು, ಅವುಗಳ ವೇಳಾಪಟ್ಟಿ ಮತ್ತು ನಿಲುಗಡೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24txkxevn7x4m86q3eyrgya,imgname-ganesh-chaturthi-special-train--1--1789016330158.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಜಯಪುರ ಹಾಗೂ ಬೆಳಗಾವಿ, ಕರಾವಳಿ ಮತ್ತು ಮಲೆನಾಡು ಭಾಗದ ನಗರಗಳಿಗೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲುಗಳ ಸೇವೆಯನ್ನು ಘೋಷಿಸಿದೆ. ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ಮಡಗಾಂವ್ ನಡುವೆ ಬಂಟ್ವಾಳ ಹಾಗೂ ಉಡುಪಿ ಮಾರ್ಗವಾಗಿ ವಿಶೇಷ ರೈಲು ಸೇವೆ ಇರಲಿದೆ. ಇನ್ನು ವಿಜಯಪುರಕ್ಕೆ ತುಮಕೂರು ಮಾರ್ಗವಾಗಿ ಬಾಗಲಕೋಟೆ ಮೂಲಕ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಇನ್ನು ಬೆಳಗಾವಿಗೆ ತುಮಕೂರು ದಾವಣಗೆರೆ ಮಾರ್ಗವಾಗಿ ಹುಬ್ಬಳ್ಳಿ ಖಾನಾಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.&lt;/p&gt;&lt;h2&gt;ರೈಲು ಸಂಖ್ಯೆ 06591 ಯಶವಂತಪುರ - ಮಡಗಾಂವ್&zwnj;&lt;/h2&gt;&lt;p&gt;ಯಶವಂತಪುರದಿಂದ ಮಡಗಾಂವ್&zwnj;ಗೆ ಸಂಚರಿಸಲಿರುವ ರೈಲು ಸಂಖ್ಯೆ 06591 ವಿಶೇಷ ರೈಲು ಸೆಪ್ಟೆಂಬರ್ 11, 2026ರ ಶುಕ್ರವಾರ ರಾತ್ರಿ 11:55ಕ್ಕೆ ಯಶವಂತಪುರದಿಂದ ಹೊರಡಲಿದೆ. ಈ ರೈಲು ಮಾರನೇ ದಿನ ಬೆಳಿಗ್ಗೆ 5:00 ಗಂಟೆಗೆ ಹಾಸನ, 5:55ಕ್ಕೆ ಸಕಲೇಶಪುರ, 8:50ಕ್ಕೆ ಸುಬ್ರಹ್ಮಣ್ಯ ರೋಡ್, 9:45ಕ್ಕೆ ಕಬಕ ಪುತ್ತೂರು, 10:15ಕ್ಕೆ ಬಂಟ್ವಾಳ, ಮಧ್ಯಾಹ್ನ 1:10ಕ್ಕೆ ಉಡುಪಿ, 1:40ಕ್ಕೆ ಕುಂದಾಪುರ, 2:08ಕ್ಕೆ ಬೈಂದೂರು, 2:38ಕ್ಕೆ ಭಟ್ಕಳ, 3:18ಕ್ಕೆ ಮುರ್ಡೇಶ್ವರ, ಸಂಜೆ 4:00 ಗಂಟೆಗೆ ಕುಮಟಾ, 4:20ಕ್ಕೆ ಗೋಕರ್ಣ ರೋಡ್, 4:32ಕ್ಕೆ ಅಂಕೋಲಾ, 4:50ಕ್ಕೆ ಕಾರವಾರ, 5:20ಕ್ಕೆ ಕಣಕೋಣ ತಲುಪಿ, ಸಂಜೆ 6:10ಕ್ಕೆ ಅಂತಿಮವಾಗಿ ಮಡಗಾಂವ್ ತಲುಪಲಿದೆ.&lt;/p&gt;&lt;h2&gt;ರೈಲು ಸಂಖ್ಯೆ 06592 ಮಡಗಾಂವ್-ಯಶವಂತಪುರ&lt;/h2&gt;&lt;p&gt;ಮರಳಿ ಪ್ರಯಾಣ ರೈಲು ಸಂಖ್ಯೆ 06592 ಮಡಗಾಂವ್-ಯಶವಂತಪುರ ವಿಶೇಷ ರೈಲು ಸೆಪ್ಟೆಂಬರ್ 14, 2026ರ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಮಡಗಾಂವ್&zwnj;ನಿಂದ ಹೊರಡಲಿದೆ. ಮಾರ್ಗಮಧ್ಯೆ ಈ ರೈಲು ಬೆಳಿಗ್ಗೆ 11:28ಕ್ಕೆ ಕಣಕೋಣ, 11:58ಕ್ಕೆ ಕಾರವಾರ, ಮಧ್ಯಾಹ್ನ 12:23ಕ್ಕೆ ಅಂಕೋಲಾ, 12:33ಕ್ಕೆ ಗೋಕರ್ಣ ರೋಡ್, 12:50ಕ್ಕೆ ಕುಮಟಾ, 1:03ಕ್ಕೆ ಹೊನ್ನಾವರ, 1:38ಕ್ಕೆ ಮುರ್ಡೇಶ್ವರ, 1:53ಕ್ಕೆ ಭಟ್ಕಳ, 2:12ಕ್ಕೆ ಬೈಂದೂರು, 2:40ಕ್ಕೆ ಕುಂದಾಪುರ, 2:55ಕ್ಕೆ ಬಾರ್ಕೂರು, 3:30ಕ್ಕೆ ಉಡುಪಿ, 3:58ಕ್ಕೆ ಮುಲ್ಕಿ, ಸಂಜೆ 4:12ಕ್ಕೆ ಸುರತ್ಕಲ್, 5:15ಕ್ಕೆ ತೋಕೂರು, 6:00 ಗಂಟೆಗೆ ಬಂಟ್ವಾಳ, 6:28ಕ್ಕೆ ಕಬಕ ಪುತ್ತೂರು, ರಾತ್ರಿ 7:45ಕ್ಕೆ ಸುಬ್ರಹ್ಮಣ್ಯ ರೋಡ್, 10:30ಕ್ಕೆ ಸಕಲೇಶಪುರ, 11:30ಕ್ಕೆ ಹಾಸನ ತಲುಪಿ, ಅಂತಿಮವಾಗಿ ಮರುದಿನ ಬೆಳಗಿನ ಜಾವ 3:00 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.&lt;/p&gt;&lt;h2&gt;1. ಯಶವಂತಪುರ &ndash; ವಿಜಯಪುರ &ndash; ಯಶವಂತಪುರ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 06561/06562)&lt;/h2&gt;&lt;p&gt;ಯಶವಂತಪುರ ಮತ್ತು ವಿಜಯಪುರ ನಡುವೆ ಓಡಾಡಲಿರುವ 'ರೈಲು ಸಂಖ್ಯೆ 06561' ವಿಶೇಷ ರೈಲು ಸೆಪ್ಟೆಂಬರ್ 11 ಮತ್ತು 13, 2026ರಂದು (ಶುಕ್ರವಾರ ಮತ್ತು ಭಾನುವಾರ) ಯಶವಂತಪುರದಿಂದ ಸಂಜೆ 6:15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5:15ಕ್ಕೆ ವಿಜಯಪುರ ತಲುಪಲಿದೆ.&lt;/p&gt;&lt;p&gt;ಮರುಮಾರ್ಗದಲ್ಲಿ 'ರೈಲು ಸಂಖ್ಯೆ 06562' ವಿಶೇಷ ರೈಲು ಸೆಪ್ಟೆಂಬರ್ 12 ಮತ್ತು 14, 2026ರಂದು (ಶನಿವಾರ ಮತ್ತು ಸೋಮವಾರ) ವಿಜಯಪುರದಿಂದ ಸಂಜೆ 5:00 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 4:45ಕ್ಕೆ ಯಶವಂತಪುರವನ್ನು ತಲುಪಲಿದೆ.&lt;/p&gt;&lt;p&gt;&lt;strong&gt;ನಿಲುಗಡೆಗಳು: &lt;/strong&gt;ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ, ಗದಗ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.&lt;/p&gt;&lt;p&gt;&lt;strong&gt;ಬೋಗಿಗಳ ವಿವರ:&lt;/strong&gt; ಈ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 1 ಎಸಿ 2-ಟೈರ್, 3 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ದಿವ್ಯಾಂಗಜನ್ ಅನುಕೂಲವುಳ್ಳ 2 ಎಸ್&zwnj;ಎಲ್&zwnj;ಆರ್&zwnj;ಡಿ ಬೋಗಿಗಳು ಸೇರಿವೆ.&lt;/p&gt;&lt;h2&gt;2. ಎಸ್&zwnj;ಎಂವಿಟಿ ಬೆಂಗಳೂರು &ndash; ಬೆಳಗಾವಿ &ndash; ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್ (ವಿಶೇಷ ರೈಲುಗಳು)&lt;/h2&gt;&lt;p&gt;ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮತ್ತು ಬೆಳಗಾವಿ ನಡುವೆ ಎರಡು ಪ್ರತ್ಯೇಕ ಟ್ರಿಪ್&zwnj;ಗಳಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.&lt;/p&gt;&lt;h3&gt;&lt;strong&gt;ಮೊದಲ ಟ್ರಿಪ್ (ರೈಲು ಸಂಖ್ಯೆ: 06563/06564):&lt;/strong&gt;&lt;/h3&gt;&lt;p&gt;'ರೈಲು ಸಂಖ್ಯೆ 06563' ಸೆಪ್ಟೆಂಬರ್ 11, 2026ರ ಶುಕ್ರವಾರ ಸಂಜೆ 7:00 ಗಂಟೆಗೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ. ಮರುಪ್ರಯಾಣದ 'ರೈಲು ಸಂಖ್ಯೆ 06564' ಸೆಪ್ಟೆಂಬರ್ 12, 2026ರ ಶನಿವಾರ ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ SMVT ಬೆಂಗಳೂರು ತಲುಪಲಿದೆ.&lt;/p&gt;&lt;h3&gt;&lt;strong&gt;ಎರಡನೇ ಟ್ರಿಪ್ (ರೈಲು ಸಂಖ್ಯೆ: 06583/06584):&lt;/strong&gt;&lt;/h3&gt;&lt;p&gt;'ರೈಲು ಸಂಖ್ಯೆ 06583' ಸೆಪ್ಟೆಂಬರ್ 13, 2026ರ ಭಾನುವಾರ ಸಂಜೆ 7:00 ಗಂಟೆಗೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ. ಮರುಪ್ರಯಾಣದ 'ರೈಲು ಸಂಖ್ಯೆ 06584' ಸೆಪ್ಟೆಂಬರ್ 14, 2026ರ ಸೋಮವಾರ ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ SMVT ಬೆಂಗಳೂರು ತಲುಪಲಿದೆ.&lt;/p&gt;&lt;p&gt;&lt;strong&gt;ನಿಲುಗಡೆಗಳು: &lt;/strong&gt;ಈ ರೈಲುಗಳು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್&zwnj;ಎಮ್&zwnj;ಎಮ್ ಹಾವೇರಿ, ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಖಾನಾಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.&lt;/p&gt;&lt;p&gt;&lt;strong&gt;ಬೋಗಿಗಳ ವಿವರ:&lt;/strong&gt; ಈ ರೈಲುಗಳು 1 ಫಸ್ಟ್ ಕ್ಲಾಸ್ ಎಸಿ, 1 ಎಸಿ 2-ಟೈರ್, 3 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್&zwnj;ಎಲ್&zwnj;ಆರ್&zwnj;ಡಿ ಸೇರಿದಂತೆ ಒಟ್ಟು 20 ಕೋಚ್&zwnj;ಗಳನ್ನು ಒಳಗೊಂಡಿರುತ್ತವೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/south-western-railway-ganesh-chaturthi-special-trains-bengaluru-to-madgaon-vijayapura-and-belagavi-routes-timings-gdp/articleshow-7y6xxux"/>
        </item>
        <item>
            <title><![CDATA[ಬೆಂಗಳೂರು-ಮಂಗಳೂರು ವಂದೇ ಭಾರತ್ 2ನೇ ಟ್ರಯಲ್ ರನ್ ಯಶಸ್ವಿ: ಪುತ್ತೂರಲ್ಲಿ ನಿಲ್ಲದೆ ನಿರಾಸೆ ಮೂಡಿಸಿದ ರೈಲು!]]></title>
            <link>https://kannada.asianetnews.com/dakshina-kannada/yeshvantpur-mangaluru-vande-bharat-express-completes-2nd-successful-trial-run-kabaka-puttur-stop-skipped-gdp/articleshow-8qof3mn</link>
            <guid isPermaLink="true">https://kannada.asianetnews.com/dakshina-kannada/yeshvantpur-mangaluru-vande-bharat-express-completes-2nd-successful-trial-run-kabaka-puttur-stop-skipped-gdp/articleshow-8qof3mn</guid>
            <pubDate>Fri, 11 Sep 2026 08:57:59 +0530</pubDate>
            <description><![CDATA[ಮಂಗಳೂರು-ಯಶವಂತಪುರ ನಡುವಿನ ವಂದೇ ಭಾರತ್ ಎಕ್ಸ್&zwnj;ಪ್ರೆಸ್&zwnj;ನ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ. ಆದರೆ, ತಾತ್ಕಾಲಿಕ ವೇಳಾಪಟ್ಟಿಯಲ್ಲಿ ನಿಲುಗಡೆ ನಿಗದಿಯಾಗಿದ್ದರೂ ಕಬಕ-ಪುತ್ತೂರು ನಿಲ್ದಾಣದಲ್ಲಿ ರೈಲು ನಿಲ್ಲದೆ ಸಾಗಿದ್ದು, ಸ್ವಾಗತಿಸಲು ಸೇರಿದ್ದ ಜನರಲ್ಲಿ ನಿರಾಸೆ ಮೂಡಿಸಿದೆ. ಈ ಘಟನೆಯ ಹಿಂದಿನ ಕಾರಣ ನಿಗೂಢವಾಗಿದ್ದು, ರೈಲ್ವೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆರೋಪಗಳು ಕೇಳಿಬಂದಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m277vbnnzp2qdrad566qbz20,imgname-vande-bharat-express-1789096996533.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು ಯಶವಂತಪುರ-ಮಂಗಳೂರು ಜಂಕ್ಷನ್ ನಡುವೆ 16 ಬೋಗಿಗಳ ವಂದೇ ಭಾರತ್ ಎಕ್ಸ್&zwnj;ಪ್ರೆಸ್&zwnj;ನ ಎರಡನೇ ಪ್ರಾಯೋಗಿಕ ಸಂಚಾರ ಗುರುವಾರ ಯಶಸ್ವಿಯಾಗಿ ನೆರವೇರಿತು. ಆದರೆ ತಾತ್ಕಾಲಿಕ ವೇಳಾಪಟ್ಟಿಯಂತೆ ಕಬಕ-ಪುತ್ತೂರು ನಿಲ್ದಾಣದಲ್ಲಿ ರೈಲು ನಿಲುಗಡೆಯಾಗದೆ ಮುಂದುವರಿದಿದೆ.&lt;/p&gt;&lt;p&gt;ಬೆಳಗ್ಗೆ 6.50ಕ್ಕೆ ಯಶವಂತಪುರದಿಂದ ಹೊರಟ ರೈಲು ಮಧ್ಯಾಹ್ನ 1.55ಕ್ಕೆ ಮಂಗಳೂರು ಜಂಕ್ಷನ್ ತಲುಪಿತು. ಸುಮಾರು 7 ಗಂಟೆ 5 ನಿಮಿಷಗಳಲ್ಲಿ ಪ್ರಯಾಣ ಪೂರ್ಣಗೊಳಿಸಿದ ರೈಲು ಪ್ರಾಯೋಗಿಕ ಸಂಚಾರದಲ್ಲಿ ಮಂಗಳೂರು ಜಂಕ್ಷನ್&zwnj;ವರೆಗೆ ಮಾತ್ರ ಸಂಚರಿಸಿತು. ಮೊದಲ ಪ್ರಾಯೋಗಿಕ ಸಂಚಾರದಲ್ಲಿ ರೈಲನ್ನು ಮಂಗಳೂರು ಸೆಂಟ್ರಲ್&zwnj; ವರೆಗೆ ಓಡಿಸಲಾಗಿತ್ತು. ಗುರುವಾರ ಮಂಗಳೂರು ಜಂಕ್ಷನ್&zwnj;ನಿಂದ ಯಶವಂತಪುರದತ್ತ ಮರು ಪ್ರಯಾಣ ಆರಂಭಿಸಿದ ವಂದೇ ಭಾರತ್ ರೈಲು ಮಧ್ಯಾಹ್ನ ಸುಮಾರು 2.25ಕ್ಕೆ ಹೊರಟು ಸಂಜೆ 3.17ರ ಸುಮಾರಿಗೆ ಕಬಕ- ಪುತ್ತೂರು ನಿಲ್ದಾಣವನ್ನು ದಾಟಿತು.&lt;/p&gt;&lt;p&gt;ಬಳಿಕ ಸಂಜೆ ಸುಮಾರು 6 ಗಂಟೆಗೆ ಸಕಲೇಶಪುರ ತಲುಪಿದ ರೈಲು 6.14ಕ್ಕೆ ಅಲ್ಲಿಂದ ಮುಂದುವರಿಯಿತು. ಸಂಜೆ 6.49ಕ್ಕೆ ಹಾಸನ ತಲುಪಿ, 6.54ಕ್ಕೆ ಯಶವಂತಪುರದತ್ತ ಪ್ರಯಾಣ ಮುಂದುವರಿಸಿತು.&lt;/p&gt;&lt;p&gt;ಪ್ರಾಯೋಗಿಕ ಸಂಚಾರದ ವೇಳೆ ರೈಲಿನ ಚಾಲನಾ ಸಮಯ, ತಾಂತ್ರಿಕ ಕಾರ್ಯಕ್ಷಮತೆ ಹಾಗೂ ಕಾರ್ಯಾಚರಣೆಯ ವಿವಿಧ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಹೀಗಾಗಿ ಪ್ರಾಯೋಗಿಕ ಸಂಚಾರದಲ್ಲಿ ಕಂಡುಬಂದ ಸಮಯ ಮತ್ತು ಮಾರ್ಗದ ನಿಲುಗಡೆಗಳನ್ನು ಕಾಯಂ ವೇಳಾಪಟ್ಟಿ ಎಂದು ಪರಿಗಣಿಸುವಂತಿಲ್ಲ ಎಂದು ರೈಲ್ವೆ ಮೂಲಗಳು ಸ್ಪಷ್ಟಪಡಿಸಿವೆ. ವಂದೇ ಭಾರತ್&zwnj; ಎಕ್ಸ್&zwnj;ಪ್ರೆಸ್&zwnj; ರೈಲು ಮೊದಲ ಬಾರಿ ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್&zwnj; ನಿಲ್ದಾಣ ವರೆಗೆ ಸಂಚರಿಸಿತ್ತು.&lt;/p&gt;&lt;h2&gt;ವೇಳಾಪಟ್ಟಿಯಲ್ಲಿದ್ದರೂ ಕಬಕ-ಪುತ್ತೂರು ನೋ ಸ್ಟಾಪ್&zwnj;!&lt;/h2&gt;&lt;p&gt;ವಂದೇ ಭಾರತ್ ರೈಲು ಕಬಕ- ಪುತ್ತೂರು ರೈಲು ನಿಲ್ದಾಣದ ಫ್ಲಾಟ್&zwnj;ಫಾರ್ಮ್&zwnj; 1ರ ಮೂಲಕ ಹಾದುಹೋದರೂ ನಿಗದಿತ ತಾತ್ಕಾಲಿಕ ವೇಳಾಪಟ್ಟಿ ಹೊರತೂ ನಿಲುಗಡೆಯಾಗದೆ ಮುಂದುವರಿಯಿತು. ವಂದೇ ಭಾರತ್&zwnj;ಗೆ ನಿಲುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈಲ್ವೆ ಹೋರಾಟಗಾರರು, ಪ್ರಯಾಣಿಕರು ಸ್ವಾಗತಿಸಲು ಸೇರಿದ್ದರು. ಆದರೆ ನಿಗದಿಯಂತೆ 2 ನಿಮಿಷವೂ ರೈಲು ನಿಲುಗಡೆಯಾಗದೆ ಹಿನ್ನೆಲೆಯಲ್ಲಿ ಸೇರಿದ್ದ ಮಂದಿ ನಿರಾಶರಾದರು. ಇದೇ ರೈಲು ಮಂಗಳೂರು ಜಂಕ್ಷನ್&zwnj;ನಿಂದ ಯಶವಂತಪುರಕ್ಕೆ ತೆರಳುವಾಗಲೂ ಕಬಕ-ಪುತ್ತೂರಿನಲ್ಲಿ ನಿಲುಗಡೆಯಾಗದೆ ನೇರವಾಗಿ ಸಂಚರಿಸಿದೆ.&lt;/p&gt;&lt;p&gt;ವೇಳಾಪಟ್ಟಿ ಹೊರತೂ ಕಬಕ-ಪುತ್ತೂರಲ್ಲಿ ವಂದೇ ಭಾರತ್&zwnj; ರೈಲು ನಿಲುಗಡೆಯಾಗದೆ ಸಂಚರಿಸಲು ಕಾರಣ ಮಾತ್ರ ನಿಗೂಢವಾಗಿದೆ. ಪುತ್ತೂರಲ್ಲಿ ವಂದೇ ಭಾರತ್&zwnj; ನಿಲುಗಡೆ ಆಗ್ರಹಿಸಿ ರೈಲ್ವೆ ಹೋರಾಟಗಾರರು, ಸಂಘಟನೆಗಳು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ರೈಲ್ವೆ ಸಚಿವರು ಹಾಗೂ ಉನ್ನತಾಧಿಕಾರಿಗಳ ಮಟ್ಟದಲ್ಲಿ ಸಾಕಷ್ಟು ಶ್ರಮಿಸಿದ್ದರು. ಕೊನೆಗೂ ಎರಡನೇ ಬಾರಿ ವಂದೇ ಭಾರತ್&zwnj; ಪ್ರಾಯೋಗಿಕ ಸಂಚಾರದ ವೇಳಾಪಟ್ಟಿಯಲ್ಲಿ ಕಬಕ-ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲಾಗಿತ್ತು. ಆದರೆ ವೇಳಾಪಟ್ಟಿಯಲ್ಲಿ ಮಾತ್ರ ನಿಲುಗಡೆ ನೀಡಿ, ಸಂಚಾರ ವೇಳೆ ನಿಲುಗಡೆ ನೀಡದೇ ಮುಂದುವರಿದಿರುವುದು ರೈಲ್ವೆ ಇಲಾಖೆ ಪ್ರಯಾಣಿಕರ ಬೇಡಿಕೆಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ರೈಲ್ವೆ ಸಂಘಟನೆಗಳು ಆರೋಪಿಸುತ್ತಿವೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/yeshvantpur-mangaluru-vande-bharat-express-completes-2nd-successful-trial-run-kabaka-puttur-stop-skipped-gdp/articleshow-8qof3mn"/>
        </item>
        <item>
            <title><![CDATA[ಉಪ್ಪಿನಂಗಡಿ ಪಂಚಾಯಿತಿಯಲ್ಲಿ ‘ಚಪ್ಪಲಿ’ ವಿವಾದ: ಇದು PDO ಅಧಿಕಾರಿಯ ಮದ ಎಂದು ಖಂಡನೆ]]></title>
            <link>https://kannada.asianetnews.com/karnataka-districts/dakshina-kannada-controversial-notice-board-at-uppinangady-gram-panchayat-pdo-office-take-off-your-shoes-and-enter-mrq/articleshow-bcmq3uq</link>
            <guid isPermaLink="true">https://kannada.asianetnews.com/karnataka-districts/dakshina-kannada-controversial-notice-board-at-uppinangady-gram-panchayat-pdo-office-take-off-your-shoes-and-enter-mrq/articleshow-bcmq3uq</guid>
            <pubDate>Wed, 09 Sep 2026 10:28:14 +0530</pubDate>
            <description><![CDATA[&lt;p&gt;ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪಿಡಿಒ ಕಚೇರಿಗೆ ಪಾದರಕ್ಷೆ ತೆಗೆದು ಪ್ರವೇಶಿಸಲು ಸೂಚನಾ ಫಲಕ ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಕಾರ್ಯಕರ್ತರು ಇದನ್ನು ಅಧಿಕಾರ ಮದ ಎಂದು ಖಂಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2284bccat3hnej7928yghcc,imgname-uppinangady-1788929518988.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪಿಡಿಒ ಕಚೇರಿಗೆ ಪ್ರವೇಶಿಸಲು ಪಾದರಕ್ಷೆ ತೆಗೆದು ಪ್ರವೇಶಿಸಬೇಕೆಂದು ಸೂಚನಾ ಫಲಕ ಹಾಕಿರುವುದು ಅಧಿಕಾರ ಮದದ ಪರಕಾಷ್ಟೆ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಮಹೇಂದ್ರವರ್ಮ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ನೆಲೆಯಲ್ಲಿ ದೇವಾಲಯ, ಬಸದಿ, ಮಸೀದಿಯಂತಹ ಧಾರ್ಮಿಕ ಸ್ಥಳಗಳಲ್ಲಿ ಪಾದರಕ್ಷೆ ಹೊರಗಿಟ್ಟು ಪ್ರವೇಶಿಸುವ ನಿಯಮವಿದೆ. ಆದರೆ ಉಪ್ಪಿನಂಗಡಿ ಪಂಚಾಯಿತಿ ಕಚೇರಿಯಲ್ಲಿ ಪಿಡಿಒ ಕಚೇರಿಯನ್ನು ಪ್ರವೇಶಿಸಲು ನಾಗರಿಕರಿಗೆ ಪಾದರಕ್ಷೆಯನ್ನು ಕಳಚಿಟ್ಟು ಪ್ರವೇಶಿಸಲು ಸೂಚಿಸುವ ಫಲಕ ಅಳವಡಿಸಿದ್ದು, ಗ್ರಾಮದ ಗ್ರಾಮಸ್ಥರನ್ನು ಕೀಳಾಗಿ ಕಾಣುವ ನಡೆಯಾಗಿದೆ. ಪಂಚಾಯಿತಿ ಕಚೇರಿ ಗ್ರಾಮಸ್ಥರ ಆಸ್ತಿ. ಅಲ್ಲಿ ಗ್ರಾಮಸ್ಥರನ್ನೇ ಕೀಳಾಗಿ ನೋಡುವುದನ್ನು ಸಹಿಸಲಾಗದು. ಈ ತಾರತಮ್ಯವನ್ನು ಹೋಗಲಾಡಿಸದಿದ್ದರೆ ಹೋರಾಟ ಅನಿವಾರ್ಯವೆಂದು ಎಚ್ಚರಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿನಂತಿಪೂರ್ವಕ ಸೂಚನೆ&lt;/strong&gt;&lt;/h2&gt;&lt;p&gt;ಈ ಬಗ್ಗೆ ಪಂಚಾಯಿತಿ ಪಿಡಿಒ ವಿಲ್ಫ್ರೆಡ್&zwnj; ಲಾರೆನ್ಸ್ ರೋಡ್ರಿಗಸ್ ಅವರನ್ನು ಸಂಪರ್ಕಿಸಿದಾಗ ಮಳೆಗಾಲದಲ್ಲಿ ಚಪ್ಪಲಿಯೊಂದಿಗೆ ಕೆಸರು ಕಚೇರಿಯೊಳಗೆ ಬರುವ ಕಾರಣಕ್ಕೆ ವಿನಂತಿ ಪೂರ್ವಕ ಸೂಚನೆ ಅಳವಡಿಸಲಾಗಿತ್ತು. ಇದು ಕಡ್ಡಾಯವೆಂದು ಅಲ್ಲ. ಮುಂದಕ್ಕೆ ಈ ಕಚೇರಿಯು ಅಧ್ಯಕ್ಷ, ಉಪಾಧ್ಯಕ್ಷರ ಕಚೇರಿಯಾಗಿ ಬಳಕೆಯಾಗಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರೈಲ್ವೆ ಕ್ರಾಂತಿ: ವಂದೇ ಭಾರತ್ ಸ್ಲೀಪರ್&zwnj;ನ ಹೊಸ ಪರ್ವ! ಬರೋಬ್ಬರಿ 260 ಹೊಸ ರೈಲಿಗೆ ಬೇಡಿಕೆ, ಯಾರಿಗೆಷ್ಟು ಗುತ್ತಿಗೆ?&lt;/strong&gt;&lt;/p&gt;&lt;h3&gt;&lt;strong&gt;ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು&lt;/strong&gt;&lt;/h3&gt;&lt;p&gt;ಉಪ್ಪಿನಂಗಡಿ ಪಂಚಾಯಿತಿ ಕಚೇರಿಯ ಪಿಡಿಒ ಕಚೇರಿಗೆ ಪ್ರವೇಶಿಸಲು ಚಪ್ಪಲಿ ತೆಗೆದು ಪ್ರವೇಶಿಸುವ ಸೂಚನಾ ಫಲಕ ಅಳವಡಿಸಿರುವ ಬಗ್ಗೆ ದ.ಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಸಂಪರ್ಕಿಸಿದಾಗ ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬರೋಬ್ಬರಿ 70 ಕಡೆ ರಂಧ್ರ ಕೊರೆದು ಕಾಲುವೆ ನೀರು ಕಳ್ಳತನ; ಮುಳವಾಡ ಏತ ನೀರಾವರಿ ಯೋಜನೆ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-controversial-notice-board-at-uppinangady-gram-panchayat-pdo-office-take-off-your-shoes-and-enter-mrq/articleshow-bcmq3uq"/>
        </item>
        <item>
            <title><![CDATA[ಜರ್ಮನಿಯ ಗಣೇಶನಿಗೆ ಪುತ್ತೂರಿನಲ್ಲಿ ತಯಾರಾಯ್ತು ರಜತ ಕಿರೀಟ; ಏನಿದರ ವಿಶೇಷತೆ?]]></title>
            <link>https://kannada.asianetnews.com/karnataka-districts/dakshina-kannada-silver-crown-crafted-in-puttur-for-germany-s-ganesha-what-makes-it-special-mrq/articleshow-d3anzko</link>
            <guid isPermaLink="true">https://kannada.asianetnews.com/karnataka-districts/dakshina-kannada-silver-crown-crafted-in-puttur-for-germany-s-ganesha-what-makes-it-special-mrq/articleshow-d3anzko</guid>
            <pubDate>Sun, 13 Sep 2026 07:55:24 +0530</pubDate>
            <description><![CDATA[ಜರ್ಮನಿಯ ಬರ್ಲಿನ್&zwnj;ನಲ್ಲಿರುವ ಶ್ರೀ ಗಣೇಶ ಹಿಂದೂ ದೇವಸ್ಥಾನದ ಗಣಪತಿ ವಿಗ್ರಹಕ್ಕಾಗಿ ಪುತ್ತೂರಿನ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;ನಲ್ಲಿ ವಿಶೇಷ ರಜತ ಕಿರೀಟವನ್ನು ತಯಾರಿಸಲಾಗಿದೆ. ಶ್ಯಾಮಲಾ ನಾಯಕ್ ಪುಣಚ ಕುಟುಂಬದವರ ಸೇವೆಯಾಗಿ, ಆರು ತಿಂಗಳ ಪರಿಶ್ರಮದಿಂದ ಸಿದ್ಧವಾದ ಈ ಕಿರೀಟವು ಪುತ್ತೂರಿನ ಕರಕುಶಲ ಪರಂಪರೆ ಮತ್ತು ಭಕ್ತಿಯ ಪ್ರತೀಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c93gnr4y901ba4j8gmsbp8,imgname-puttur-1789266084528.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ಜರ್ಮನಿಯ ಬರ್ಲಿನ್&zwnj;ನಲ್ಲಿರುವ ಶ್ರೀ ಗಣೇಶ ಹಿಂದೂ ಟೆಂಪಲ್&zwnj;ನ ಗಣೇಶನ ಮೂರ್ತಿಗೆ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;ನಲ್ಲಿ ರಜತ ಕಿರೀಟ ತಯಾರಿಸಲಾಗಿದೆ.&lt;/p&gt;&lt;p&gt;ಶ್ಯಾಮಲಾ ನಾಯಕ್ ಪುಣಚ ಹಾಗೂ ಕುಟುಂಬದವರ ಸೇವಾರ್ಥವಾಗಿ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;ನ ಕರಕುಶಲ ಕರ್ಮಿಗಳು ವಿಶೇಷ ವಿನ್ಯಾಸದ ಈ ಬೆಳ್ಳಿ ಕಿರೀಟವನ್ನು ತಯಾರಿಸಿದ್ದಾರೆ.&lt;/p&gt;&lt;p&gt;ಸಿದ್ಧ ವಿನ್ಯಾಸವನ್ನು ಕೈಬಿಟ್ಟು, ಭಕ್ತರ ಭಕ್ತಿ-ಆರಾಧನೆಗೆ ಅನುಗುಣವಾಗಿ ಕಿರೀಟಕ್ಕೆ ರೂಪ ನೀಡಲಾಗಿದೆ. ಆರು ತಿಂಗಳ ಪರಿಶ್ರಮದ ಫಲವೇ ಈ ರಜತ ಕಿರೀಟ. ಬೆಳ್ಳಿಯ ಕರಕುಶಲತೆ, ಸೂಕ್ಷ್ಮ ಅಲಂಕಾರಿಕ ವಿವರಗಳು ಹಾಗೂ ಅಂತಿಮ ರೂಪದವರೆಗೆ ಪ್ರತಿಯೊಂದು ಹಂತದಲ್ಲೂ ತಾಳ್ಮೆ ನಿಖರತೆ ಮತ್ತು ಅನುಭವ ಮೇಳೈಸಿದೆ.&lt;/p&gt;&lt;p&gt;ಹೀಗಾಗಿ ಇದು ಕೇವಲ ಬೆಳ್ಳಿ ಕಿರೀಟವಲ್ಲ. ಪುತ್ತೂರಿನ ಕರಕುಶಲ ಪರಂಪರೆ, ಭಕ್ತಿಭಾವ, ವೈಯಕ್ತಿಕ ಕಲ್ಪನೆ ಮತ್ತು ಮೂರು ತಲೆಮಾರುಗಳಿಂದ ಬೆಳೆದು ಬಂದ ಗ್ರಾಹಕರ ವಿಶ್ವಾಸ ಇವೆಲ್ಲವೂ ಒಂದೇ ಕಲಾಕೃತಿಯಲ್ಲಿ ಒಂದಾಗಿರುವ ಪ್ರತೀಕ.&lt;/p&gt;&lt;h2&gt;&lt;strong&gt;ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;&lt;/strong&gt;&lt;/h2&gt;&lt;p&gt;2027ರಲ್ಲಿ ಶತಮಾನೋತ್ಸವ ಆಚರಿಸಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj; ಪುತ್ತೂರಿನ ಚಿನ್ನ ಮತ್ತು ಬೆಳ್ಳಿ ಆಭರಣಗಳ ವ್ಯಾಪಾರ ಹಾಗೂ ಕರಕುಶಲ ಪರಂಪರೆಯೊಂದಿಗೆ ಬೆಳೆದುಬಂದಿದೆ. ಡಿ. ಶಿವ ಭಟ್ ಅವರ ನಂತರ ಸಂಸ್ಥೆಯ ಜವಾಬ್ದಾರಿಯನ್ನು ಅವರ ಪುತ್ರ ಗೋವಿಂದ ಭಟ್ ವಹಿಸಿಕೊಂಡರು. ಮೂಲ ಮೌಲ್ಯವಾದ ಗ್ರಾಹಕರ ವಿಶ್ವಾಸ ನಿರಂತರವಾಗಿ ಮುಂದುವರಿಯಿತು. ಇಂದು ಮೂರನೇ ತಲೆಮಾರಿನ ಈಶ್ವರ ಮುರಳಿ ಅವರ ನೇತೃತ್ವದಲ್ಲಿ ಸಂಸ್ಥೆ ಹೊಸ ಕಾಲದ ಅಗತ್ಯಗಳು ಮತ್ತು ಗ್ರಾಹಕರ ಬದಲಾಗುತ್ತಿರುವ ನಿರೀಕ್ಷೆಗಳಿಗೆ ಹೊಂದಿಕೊಳ್ಳುತ್ತಾ ಪರಂಪರೆಯನ್ನು ಜೀವಂತವಾಗಿದೆ.&lt;/p&gt;&lt;p&gt;ಜರ್ಮನಿಯ ಬರ್ಲಿನ್&zwnj;ನ ಶ್ರೀ ಗಣೇಶ ಹಿಂದೂ ಟೆಂಪಲ್&zwnj;ಗಾಗಿ ಶ್ಯಾಮಲಾ ನಾಯಕ್ ಪುಣಚ ಮತ್ತು ಕುಟುಂಬ ನೀಡಿದ ಗಣಪತಿ ಕಿರೀಟದ ಆರ್ಡರ್ ವೈಯಕ್ತಿಕ ಕಲ್ಪನೆ ಮತ್ತು ಭಕ್ತಿಯ ಫಲ. ಗಣಪತಿ ಆರಾಧನೆಯೊಂದಿಗೆ ಬೆಸೆದುಕೊಂಡಿರುವ ಭಕ್ತಿಭಾವವನ್ನು ಗಮನದಲ್ಲಿಟ್ಟುಕೊಂಡು ಕಿರೀಟದ ವಿನ್ಯಾಸ, ಅಲಂಕಾರಿಕ ವಿವರಗಳು ಮತ್ತು ಬೆಳ್ಳಿಯ ಕರಕುಶಲತೆಯನ್ನು ಸಮನ್ವಯಗೊಳಿಸಲಾಗಿದೆ. ಕಣ್ಣಿಗೆ ಕಾಣುವ ಅಂತಿಮ ಕಲಾಕೃತಿಯ ಹಿಂದೆ ಹಲವು ಹಂತಗಳ ಪರಿಶ್ರಮ, ತಾಳ್ಮೆ ಮತ್ತು ನಿಖರತೆ ಅಡಗಿದೆ. ಇಂದು ಆಭರಣಗಳ ವಿನ್ಯಾಸ ಬದಲಾಗಿದೆ, ಗ್ರಾಹಕರ ಅಭಿರುಚಿ ಬದಲಾಗಿದೆ, ತಂತ್ರಜ್ಞಾನ ಬದಲಾಗಿದೆ. ಆದರೆ ಗ್ರಾಹಕರ ಮಾತನ್ನು ಆಲಿಸಿ, ಅವರ ಭಾವನೆ ಮತ್ತು ಅಗತ್ಯಕ್ಕೆ ತಕ್ಕಂತೆ ಆಭರಣವನ್ನು ರೂಪಿಸುವ ಮೂಲ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.&lt;/p&gt;&lt;p&gt;। ಈಶ್ವರ ಮುರಳಿ, ಮಾಲಕರು, ಡಿ. ಶಿವ ಭಟ್ ಜ್ಯುವೆಲ್ಲರ್ಸ್, ಪುತ್ತೂರು&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-silver-crown-crafted-in-puttur-for-germany-s-ganesha-what-makes-it-special-mrq/articleshow-d3anzko"/>
        </item>
        <item>
            <title><![CDATA['ನನಗೆ ಮುಸ್ಲಿಮರೇ ಮೊದಲು', ವಿವಾದಕ್ಕೆ ಕಾರಣವಾಯ್ತು ತುಳು ಹಾಸ್ಯನಟ ಅರವಿಂದ್ ಬೋಳಾರ್ ಹೇಳಿಕೆ]]></title>
            <link>https://kannada.asianetnews.com/karnataka-districts/tulu-comedian-aravind-bolar-sparks-controversy-with-statement-for-me-muslims-come-first-sns/articleshow-fuz4pit</link>
            <guid isPermaLink="true">https://kannada.asianetnews.com/karnataka-districts/tulu-comedian-aravind-bolar-sparks-controversy-with-statement-for-me-muslims-come-first-sns/articleshow-fuz4pit</guid>
            <pubDate>Tue, 15 Sep 2026 15:50:29 +0530</pubDate>
            <description><![CDATA[ತುಳು ಹಾಸ್ಯ ಕಲಾವಿದ ಅರವಿಂದ ಬೋಳಾರ್ ಅವರ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಿದೆ. 'ನನ್ನ ಹಾಸ್ಯಕ್ಕೆ ಮುಸ್ಲಿಮರೇ ಮೊದಲು' ಎಂಬ ಅವರ ಹೇಳಿಕೆಗೆ ತುಳುನಾಡಿನಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದು, ಕಲಾವಿದರೊಬ್ಬರ ಈ ಮಾತು ಸೌಹಾರ್ದತೆಗೆ ಧಕ್ಕೆ ತರುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2j924w47dxrw18bdqfd0f5v,imgname-tulu-actor---1--1789467366276.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ತುಳು ನಾಟಕ ಮತ್ತು ಚಿತ್ರರಂಗದ ಮಟ್ಟಿಗೆ ನಂಬರ್ ವನ್ ಹಾಸ್ಯ ಕಲಾವಿದ ಅಂತಾನೇ ಫೇಮಸ್ ಆಗಿರೋ ಅರವಿಂದ ಬೋಳಾರ್ ಅವರ ಭಾಷಣದ ತುಣುಕೊಂದು ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ವಿವಾದ ಎಬ್ಬಿಸಿದ್ದು, ತುಳುನಾಡಿನಲ್ಲಿ ಅವರ ಹೇಳಿಕೆ ಬಗ್ಗೆ ಪರ-ವಿರೋಧ ಚರ್ಚೆ ಆರಂಭವಾಗಿದೆ.&lt;/p&gt;&lt;h2&gt;ಬೋಳಾರ್ ಒಂದು ಮಾತು: ತುಳುನಾಡಲ್ಲಿ ವಿವಾದದ ಕಿಡಿ!&lt;/h2&gt;&lt;p&gt;ಖಾಸಗಿ ಕಾರ್ಯಕ್ರಮವೊಂದರಲ್ಲಿ ಅರವಿಂದ ಬೋಳಾರ್ ಮಾತನಾಡಿರೋ ಕೆಲವೇ ಸೆಕೆಂಡ್ ಗಳ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ತುಳು ಭಾಷೆಯಲ್ಲಿ ಮಾಡಿರೋ ಈ ಭಾಷಣ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ವೈರಲ್ ಆಗಿರೋ ಭಾಷಣದಲ್ಲಿ ಅರವಿಂದ್ ಬೋಳಾರ್, ನನ್ನ ಹಾಸ್ಯ ಏನಿದ್ದರೂ ನನಗೆ ಮುಸ್ಲಿಮರೇ ಮೊದಲು ಎಂದಿರೋ ಬಗ್ಗೆ ಹಲವರು ಆಕ್ಷೇಪ ಎತ್ತಿದ್ದಾರೆ.&lt;/p&gt;&lt;p&gt;ಕಲಾವಿದರೊಬ್ಬರನ್ನ ಬೆಳೆಸಲು ಸರ್ವ ಧರ್ಮದ ಅಭಿಮಾನಿ ವರ್ಗ ಕಾರಣ. ಹೀಗಿರೋವಾಗ ಅರವಿಂದ್ ಬೋಳಾರ್ ಒಂದು ಸಮುದಾಯದ ಓಲೈಕೆಗಾಗಿ ಭಾಷಣ ಮಾಡಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಆಕ್ಷೇಪ ಎತ್ತಲಾಗಿದೆ. ಅಲ್ಲದೇ ಕೆಲವರು ಅರವಿಂದ್ ಬೋಳಾರ್ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದು, ಈ ಹೇಳಿಕೆ ಸರಿಯೇ ಎಂದು ಪ್ರಶ್ನಿಸಿ ಅಸಮಾಧಾನ ಹೊರ ಹಾಕಿದ್ದಾರೆ. ಸದ್ಯ ಭಾಷಣದ ಸಣ್ಣ ತುಣುಕು ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ವೇದಿಕೆಯಾಗಿದೆ. ಕೆಲವರು ಅರವಿಂದ್ ಬೋಳಾರ್ ಅವರ ಸೌಹಾರ್ದ ಭಾಷಣ ಎಂದು ನಟನ ಪರವಾಗಿ ಬ್ಯಾಟ್ ಬೀಸಿದ್ರೆ ಮತ್ತೆ ಕೆಲವರು ತೀವ್ರ ಅಸಮಾಧಾನ ತೋರಿದ್ದಾರೆ.&lt;/p&gt;&lt;h2&gt;ಅಷ್ಟಕ್ಕೂ ಅರವಿಂದ್ ಬೋಳಾರ್ ಹೇಳಿದ್ದೇನು?&lt;/h2&gt;&lt;p&gt;ಖಾಸಗಿ ಕಾರ್ಯಕ್ರಮದ ಅರವಿಂದ್ ಬೋಳಾರ್ ಅವರ ಭಾಷಣದ ಸಣ್ಣ ತುಣುಕು ಮಾತ್ರ ವೈರಲ್ ಆಗಿದ್ದು, ಅದರಲ್ಲಿ ಅವರು ತುಳುವಿನಲ್ಲೇ ಭಾಷಣ ಮಾಡಿದ್ದಾರೆ. ನನ್ನ ಸಿನಿಮಾಗಳಲ್ಲಿ ಹಲವು ಬಾರಿ ಮುಸ್ಲಿಮರ ಪಾತ್ರ ಮಾಡಿಸಿದ್ದಾರೆ&zwnj;. ನನ್ನ ಹಾಸ್ಯ ಏನಿದ್ದರೂ ನನಗೆ ಮುಸ್ಲಿಮರೇ ಮೊದಲು. ನನ್ನನ್ನ ಹೆಚ್ಚು ಇಷ್ಟ ಪಟ್ಟಿದ್ದೇ ಮುಸ್ಲಿಮರು. ನಾನು ಯಾವ ವೇದಿಕೆಯಲ್ಲಿ ಕೇಳಿದ್ರೂ ಅದನ್ನೇ ಹೇಳಿದ್ದೇನೆ ಎಂದು ಭಾಷಣದಲ್ಲಿ ಹೇಳಿದ್ದಾರೆ.&lt;/p&gt;&lt;h2&gt;ನಟನಿಗೆ ತರಾಟೆ ತೆಗೆದುಕೊಂಡ ಅಭಿಮಾನಿ, ವೈರಲ್ ಆಡಿಯೋದಲ್ಲಿ ಏನಿದೆ?&lt;/h2&gt;&lt;p&gt;&lt;strong&gt;ಅಭಿಮಾನಿ: &lt;/strong&gt;ಇದು ಅರವಿಂದ್ ಬೋಳಾರ್ ಅವರ ನಂಬರ್ ಅಲ್ವಾ? ಅವರೇ ಮಾತನಾಡೋದಾ?&lt;/p&gt;&lt;p&gt;&lt;strong&gt;ಅರವಿಂದ್ ಬೋಳಾರ್: &lt;/strong&gt;ಹಾ ಹೌದು, ನಾನೇ ಮಾತನಾಡೋದು ಹೇಳಿ&lt;/p&gt;&lt;p&gt;&lt;strong&gt;ಅಭಿಮಾನಿ: &lt;/strong&gt;ನಾನು ಕುಂಬ್ಲೆಯಿಂದ ಮಾತನಾಡ್ತಾ ಇದೀನಿ, ನಾನು ನಿಮ್ಮ ದೊಡ್ಡ ಅಭಿಮಾನಿ, ನೀವು ಒಳ್ಳೆಯ ಕಲಾವಿದ ಅಂತ ನನ್ನ ಮನಸ್ಸಿನಲ್ಲಿ ಇತ್ತು. ಆದರೆ ಯಾವುದೋ ವೇದಿಕೆಯಲ್ಲಿ ಮುಸ್ಲಿಮರ ಓಲೈಕೆ ಮಾಡಲು ಹೋಗಿ ನನಗೆ ಮುಸ್ಲಿಮರೇ ಮೊದಲು ಅಂತ ಹೇಳ್ತೀರಿ. ಆ ವಿಡಿಯೋ ವೈರಲ್ ಆಗ್ತಾ ಇದೆ. ಅದನ್ನ ನಿಮಗೆ ವಾಟ್ಸಪ್ ಮಾಡಿದ್ದೇನೆ. ಆದರೆ ಯಾಕೆ ನೀವು ಹಾಗೆ ಹೇಳಿದ್ದು, ಒಬ್ಬ ಕಲಾವಿದನಾಗಿ ಎಲ್ಲಾ ಧರ್ಮ ನನಗೆ ಒಂದೇ ಎಂದು ಹೇಳಿದ್ದರೆ ಚೆನ್ನಾಗಿತ್ತು.&lt;/p&gt;&lt;p&gt;&lt;strong&gt;ಅರವಿಂದ್ ಬೋಳಾರ್: &lt;/strong&gt;ಅವರು ಸಿನಿಮಾಗಾಗಿ ನನ್ನತ್ರ ಹೇಳಿಸೋದು.&zwnj; ಅದು ಸಿನಿಮಾ ಗಾಗಿ ಮಾತ್ರ, ರಂಗಭೂಮಿಗಲ್ಲ. ಸಿನಿಮಾ ನೋಡೋದು ಹೆಚ್ಚು ಅವರೇ.&lt;/p&gt;&lt;p&gt;&lt;strong&gt;ಅಭಿಮಾನಿ:&lt;/strong&gt; ಅಣ್ಣಾ ನಿಮ್ಮ ಸಮರ್ಥನೆ ಸರಿ, ಆದರೆ ಕಲಾವಿದರಿಗೆ ಎಲ್ಲಾ ಧರ್ಮದವರೂ ಸಮಾನವಲ್ವಾ? ವೇದಿಕೆಯಲ್ಲಿ ನೀವು ಹಾಗೆ ಹೇಳಿ ನಮಗೆ ಹಿಂದೂಗಳಿಗೆ ಠಕ್ಕರ್ ಕೊಡೋದಾ?&lt;/p&gt;&lt;p&gt;&lt;strong&gt;ಅರವಿಂದ್ ಬೋಳಾರ್: &lt;/strong&gt;ಒಕೆ ಅಣ್ಣಾ...ನೀವು ಹೇಳಿದ್ದು ಅರ್ಥ ಆಯ್ತು...&lt;/p&gt;&lt;p&gt;&lt;strong&gt;ಅಭಿಮಾನಿ: &lt;/strong&gt;ನೀವು ಹೇಳಿದ್ದು ಸರಿ ಅಂತ ಸಮರ್ಥನೆ ಮಾಡ್ತೀರಾ?&lt;/p&gt;&lt;p&gt;&lt;strong&gt;ಅರವಿಂದ್ ಬೋಳಾರ್: &lt;/strong&gt;ಇಲ್ಲಪ್ಪ, ನಾನು ಸರಿ ಅಂತ ಹೇಳಿದ್ನಾ?&lt;/p&gt;&lt;p&gt;&lt;strong&gt;ಅಭಿಮಾನಿ: &lt;/strong&gt;ಸರಿ ಎನ್ನಬೇಡಿ. ನೀವು ಕಲಾವಿದ, ನಿಮ್ಮನ್ನ ಹೃದಯದಲ್ಲಿ ಇಡ್ತೀವಿ. ಆ ಮಾತು ಕೇಳಿ ಹಿಂದೂವಾಗಿ ನನಗೆ ನೋವಾಗಿದೆ. ನೀವೊಬ್ಬ ಗೌರವಾನ್ವಿತ ಕಲಾವಿದ. ನಾನು ಮಾಡಿದ್ರೆ ಅದು ಅಪಮಾನ ಅಲ್ವಾ? ನೀವು ಕ್ಷಮೆ ಕೇಳಿ, ನಾನು ಅಭಿಮಾನದಿಂದ ನಿಮಗೆ ಹೇಳ್ತಾ ಇದೀನಿ&zwnj;. ಇನ್ನು ನನಗೆ ಅಭಿಮಾನ ಇಲ್ಲ.&lt;/p&gt;&lt;h2&gt;'ಸರ್ವ ಧರ್ಮದ ಕಲಾಭಿಮಾನಿ ಬಂಧುಗಳು' ಎನ್ನುತ್ತಾರೆ ತುಳು ಕಲಾವಿದರು!&lt;/h2&gt;&lt;p&gt;ಕಲಾಸೇವೆಗೆ ಜಾತಿ, ಧರ್ಮದ ಹಂಗಿಲ್ಲ. ಹಾಗಾಗಿಯೇ ಕಲಾವಿದರು ರಾಜಕೀಯ ನಾಯಕರಂತೆ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದೂ ಇಲ್ಲ. ಇದೇ ಕಾರಣಕ್ಕೆ ತುಳುನಾಡಿನ ಕಲಾವಿದರು ತಮ್ಮ ಪ್ರತೀ ಭಾಷಣಗಳಲ್ಲೂ ಸರ್ವ ಧರ್ಮದ ಕಲಾಭಿಮಾನಿ ಬಂಧುಗಳೇ ಎಂದೇ ಭಾಷಣ ಆರಂಭಿಸುತ್ತಾರೆ. ಈ ಭಾಗದಲ್ಲಿ ಇತ್ತೀಚೆಗೆ ತುಳು ಚಿತ್ರರಂಗ ಒಂದು ಹಂತಕ್ಕೆ ಎದ್ದು ನಿಂತಿದ್ದರೂ ಹಲವು ವರ್ಷಗಳಿಂದ ಈ ಭಾಗದ ಅತೀ ದೊಡ್ಡ ಮನೋರಂಜನೆ ತುಳು ನಾಟಕಗಳು. ದೇವದಾಸ್ ಕಾಪಿಕಾಡ್, ನವೀನ್ .ಡಿ.ಪಡೀಲ್, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರು ಸೇರಿ ಹಲವು ದಿಗ್ಗಜ ಕಲಾವಿದರು ತುಳು ನಾಟಕಗಳ ಮೂಲಕವೇ ಮನೆ ಮಾತಾದವರು.&lt;/p&gt;&lt;p&gt;ಇಂದು ಸಿನಿಮಾಗಳ ಮೂಲಕವೂ ಮತ್ತಷ್ಟು ಮನೆ ಮನಗಳನ್ನ ತಲುಪಿದವರು. ಕರಾವಳಿಯ ಕೋಮುವಾದ ಈ ಭಾಗದಲ್ಲಿ ಜನರ ಮನಸ್ಸುಗಳನ್ನು ಒಡೆದಾಗಲೂ ತುಳು ನಾಟಕಗಳು ಅವುಗಳನ್ನು ಜೋಡಿಸುವ ಪ್ರಯತ್ನಗಳನ್ನ ಮಾಡಿವೆ ಮತ್ತು ಮಾಡುತ್ತಲೇ ಇವೆ. ಇನ್ನು ಈ ಭಾಗದ ಕಲಾವಿದರೂ ಅಷ್ಟೇ, ಕಲಾಸೇವೆಯಲ್ಲಿ ಈವರೆಗೆ ಜಾತಿ, ಧರ್ಮ ಹಾಗೂ ರಾಜಕೀಯ ನಂಟನ್ನು ಸೇರಿಸೋ ಕೆಲಸ ಮಾಡಿಲ್ಲ. ಹಾಗಾಗಿಯೇ ಈ ಭಾಗದ ತುಳು ಕಲಾವಿದರಿಗೆ ಸಿಗುವ ಗೌರವ, ವೇದಿಕೆಗಳಿಗೆ ಕೋಮುವಾದ ಸ್ಪರ್ಶಿಸಿಲ್ಲ.&lt;/p&gt;&lt;p&gt;ಬ್ಯಾರಿ, ಕ್ರಿಶ್ಚಿಯನ್, ಹಿಂದೂ ಎನ್ನದೇ ಎಲ್ಲಾ ಧರ್ಮ, ಭಾಷೆಗಳ ಮಧ್ಯೆ ಗೌರವಯುತ ಸ್ಥಾನ ಪಡೆದವರು ಈ ಭಾಗದ ಕಲಾವಿದರು ಮಾತ್ರ. ಯಾವುದೇ ವೇದಿಕೆಗಳಲ್ಲಿ ಸರ್ವ ಧರ್ಮದ ಕಲಾಭಿಮಾನಿ ಬಂಧುಗಳೇ ಎನ್ನುವುದೇ ಇವರುಗಳ ಗೌರವಪೂರ್ಣಕ ಮಾತು. ಆದರೆ ಸದ್ಯ ಅರವಿಂದ್ ಬೋಳಾರ್ ಆಡಿರುವ ಮಾತು ಹಲವು ಕಾರಣಗಳಿಗೆ ವಿವಾದದ ಜೊತೆಗೆ ಪರ ವಿರೋಧದ ವೇದಿಕೆ ಸೃಷ್ಟಿಸಿದೆ. ಸೀಮಿತ ಮಾರುಕಟ್ಟೆ ಮತ್ತು ಭಾಷೆಯ ಜನರಿರುವ ತುಳುವಿನ ಸಿನಿಮಾ ಮತ್ತು ನಾಟಕಗಳಿಗೆ ಸರ್ವಧರ್ಮದ ವೀಕ್ಷಕರಿದ್ದಾರೆ.&lt;/p&gt;&lt;p&gt;ಕಲಾವಿದರ ಜಾತಿ, ಧರ್ಮಗಳ ಮೇಲೆ ಇಲ್ಲಿ ಅಭಿಮಾನಿಗಳು ಹುಟ್ಟಿಲ್ಲ. ಆತನ ಕಲೆ ಮತ್ತು ಪ್ರತಿಭೆಗೆ ಸಿಕ್ಕ ಅತ್ಯಮೂಲ್ಯ ಉಡುಗೊರೆಗಳಾಗಿ ಇಲ್ಲಿ ಅಭಿಮಾನಿಗಳಿದ್ದಾರೆ. ಅದನ್ನ ಈ ಭಾಗದ ಕಲಾವಿದರೂ ಅತ್ಯಂತ ಸೂಕ್ಷ್ಮವಾಗಿ ಉಳಿಸಿಕೊಂಡು ಬಂದಿದ್ದಾರೆ. ಮುಂದೆಯೂ ಉಳಿಸಿಕೊಂಡು ಹೋಗಲಿದ್ದಾರೆ ಎನ್ನುತ್ತಾರೆ ವಿವಾದಗಳಿಂದ ದೂರವಿರುವ ಅಭಿಮಾನಿಗಳು. &zwnj;ಆದರೆ ಸದ್ದಿಲ್ಲದೇ ಏಳುವ ಇಂಥಹ ಕೆಲವೊಂದು ವಿವಾದಗಳು ಅನಗತ್ಯ ಚರ್ಚೆಗಳ ಜೊತೆ ಕಲಾಸೇವೆಯಲ್ಲಿ ಮತ್ತೊಂದು ಆಯಾಮದ ಗದ್ದಲ ಹುಟ್ಟಿ ಹಾಕುತ್ತವೆ ಎನ್ನುವುದು ವಾಸ್ತವ. &lt;strong&gt;(ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು)&amp;nbsp;&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/tulu-comedian-aravind-bolar-sparks-controversy-with-statement-for-me-muslims-come-first-sns/articleshow-fuz4pit"/>
        </item>
        <item>
            <title><![CDATA[ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಲಿದ ಅವಳಿ ಚಿನ್ನದ ಗರಿ, ಗಮನಾರ್ಹ ಸಾಧನೆ]]></title>
            <link>https://kannada.asianetnews.com/dakshina-kannada/mangaluru-international-airport-wins-2-gold-medals-at-qcfi-chapter-convention-2026-gdp/articleshow-gizdy83</link>
            <guid isPermaLink="true">https://kannada.asianetnews.com/dakshina-kannada/mangaluru-international-airport-wins-2-gold-medals-at-qcfi-chapter-convention-2026-gdp/articleshow-gizdy83</guid>
            <pubDate>Tue, 08 Sep 2026 12:47:53 +0530</pubDate>
            <description><![CDATA[ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು, ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ (QCFI) ಆಯೋಜಿಸಿದ್ದ 'ಗುಣಮಟ್ಟ ಪರಿಕಲ್ಪನೆಗಳ ಅಧ್ಯಾಯ ಸಮ್ಮೇಳನ-2026'ರಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. ತಾಂತ್ರಿಕ ನಾವೀನ್ಯತೆ ಮತ್ತು ಸುರಕ್ಷತಾ ಕ್ರಮಗಳಲ್ಲಿನ ಅತ್ಯುತ್ತಮ ನಿರ್ವಹಣೆಗಾಗಿ 'ಟೀಮ್ ಮಾರ್ಗದೀಪ್' ಮತ್ತು 'ಟೀಮ್ ಸೇಫ್ ಎಡ್ಜ್' ತಂಡಗಳಿಗೆ ಈ ಗೌರವ ಲಭಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1zy1dgxh680xevfewp24an4,imgname-mangalore-airport-1788851828253.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾದ (QCFI) ಬೆಂಗಳೂರು ಅಧ್ಯಾಯವು ಇತ್ತೀಚೆಗೆ ಆಯೋಜಿಸಿದ್ದ 'ಗುಣಮಟ್ಟ ಪರಿಕಲ್ಪನೆಗಳ ಅಧ್ಯಾಯ ಸಮ್ಮೇಳನ-2026'ರಲ್ಲಿ (CCQC-2026) ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಎರಡು ಚಿನ್ನದ ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದೆ. ಕಾರ್ಯಾಚರಣೆಯ ಮಾನದಂಡಗಳು, ತಾಂತ್ರಿಕ ನಾವೀನ್ಯತೆ ಹಾಗೂ ಸುರಕ್ಷತಾ ಕ್ರಮಗಳಲ್ಲಿ ತೋರಿದ ಅತ್ಯುತ್ತಮ ನಿರ್ವಹಣೆಗೆ ವಿಮಾನ ನಿಲ್ದಾಣದ ತಾಂತ್ರಿಕ ತಂಡಗಳಿಗೆ ಈ ಗೌರವ ಲಭಿಸಿದೆ. ವಿಮಾನ ನಿಲ್ದಾಣದ ಎರಡು ಪ್ರತ್ಯೇಕ ವಿಭಾಗಗಳ ಪ್ರತಿನಿಧಿಗಳು ತಲಾ ಒಂದೊಂದು ಚಿನ್ನದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ&lt;/p&gt;&lt;h2&gt;&lsquo;ಟೀಮ್ ಮಾರ್ಗದೀಪ್&rsquo;ಗೆ ಚಿನ್ನದ ಮೆರಗು:&lt;/h2&gt;&lt;p&gt;ಕೃಷ್ಣದಾಸ್ ಎಂ.ಎಸ್. ಮತ್ತು ಇಪ್ಸಿತಾ ಚೌಧರಿ ಅವರನ್ನೊಳಗೊಂಡ &lsquo;ಟೀಮ್ ಮಾರ್ಗದೀಪ್&rsquo; ಸಹಯೋಗಿ ಪರಿಕಲ್ಪನೆ (Allied Concept) ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದೆ. ಇವರು ವಿಮಾನ ನಿಲ್ದಾಣದ 'ನಿಖರ ಮಾರ್ಗಸೂಚಿ ಬೆಳಕು ವ್ಯವಸ್ಥೆ - ವರ್ಗ 1' (Precision Approach Lighting System - Cat 1) ಯೋಜನೆಗೆ ಸಂಬಂಧಿಸಿದಂತೆ ಕೈಗೊಂಡ ಸುಧಾರಣೆಗಳಿಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಕ್ಸ್ ಸಿಗ್ಮಾ ಗುಣಮಟ್ಟ ವಿಧಾನ, ಸಮಗ್ರ ನಿರ್ವಹಣಾ ನಿಯಂತ್ರಣ (TMC) ಹಾಗೂ ಲೀನ್ ಸುರಕ್ಷತಾ ವಲಯ ವಿಧಾನಗಳನ್ನು (Lean Safety Circle Protocols) ಸಮರ್ಥವಾಗಿ ಸಂಯೋಜಿಸಿ ಈ ಯೋಜನೆಯನ್ನು ರೂಪಿಸಲಾಗಿತ್ತು.&lt;/p&gt;&lt;h2&gt;&lsquo;ಟೀಮ್ ಸೇಫ್ ಎಡ್ಜ್&rsquo;ಗೆ &lsquo;ಕೈಝೆನ್&rsquo; ವಿಭಾಗದ ಪ್ರಶಸ್ತಿ:&lt;/h2&gt;&lt;p&gt;ಪ್ರಣಯ್ ಆಗಸ್ಟಿನ್ ಫ್ರಾನ್ಸಿಸ್ ಮತ್ತು ಪ್ರಜೇಶ್ ಪ್ರಕಾಶ್ ಅವರನ್ನೊಳಗೊಂಡ &lsquo;ಟೀಮ್ ಸೇಫ್ ಎಡ್ಜ್&rsquo; ಸಹಯೋಗಿ ಕೈಝೆನ್ ಪರಿಕಲ್ಪನೆ [Allied (Kaizen) Concept] ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದೆ. ಈ ತಂಡವು ಕೃತಕ ಬುದ್ಧಿಮತ್ತೆ (AI) ಆಧಾರಿತ 'ವಾಹನದೊಳಗಿನ ಮೇಲ್ವಿಚಾರಣಾ ವ್ಯವಸ್ಥೆ'ಯನ್ನು (In-Vehicle Monitoring System) ಅಭಿವೃದ್ಧಿಪಡಿಸಿದೆ. ಇದರಲ್ಲಿ ಮುಂದುವರಿದ ಚಾಲಕ ಸಹಾಯ ವ್ಯವಸ್ಥೆ (ADAS) ಹಾಗೂ ಚಾಲಕ ಮೇಲ್ವಿಚಾರಣಾ ವ್ಯವಸ್ಥೆ (DMS) ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು, ನೆಲದ ಮೇಲಿನ ಕಾರ್ಯಾಚರಣೆಗಳಲ್ಲಿ ನೈಜ-ಸಮಯದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗಲಿದೆ.&lt;/p&gt;&lt;p&gt;ಈ ಪ್ರಶಸ್ತಿಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷತೆ, ನವೀನ ತಾಂತ್ರಿಕ ಏಕೀಕರಣ ಹಾಗೂ ನಿರಂತರ ಸುಧಾರಣೆಗೆ (Continuous Improvement) ಇರುವ ಬದ್ಧತೆಯನ್ನು ಎತ್ತಿಹಿಡಿದಿವೆ ಎಂದು ವಿಮಾನ ನಿಲ್ದಾಣದ ನಿರ್ವಹಣಾ ಮಂಡಳಿ ಹರ್ಷ ವ್ಯಕ್ತಪಡಿಸಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/mangaluru-international-airport-wins-2-gold-medals-at-qcfi-chapter-convention-2026-gdp/articleshow-gizdy83"/>
        </item>
        <item>
            <title><![CDATA[ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಸಮಯ ಬದಲಾಗುತ್ತಾ? ಪ್ರಯಾಣಿಕರ ಬೇಡಿಕೆಯೇನು?]]></title>
            <link>https://kannada.asianetnews.com/karnataka-districts/mangalore-bengaluru-vande-bharat-coastal-groups-demand-morning-departure-from-mangalore-gvd/articleshow-gzvgwbk</link>
            <guid isPermaLink="true">https://kannada.asianetnews.com/karnataka-districts/mangalore-bengaluru-vande-bharat-coastal-groups-demand-morning-departure-from-mangalore-gvd/articleshow-gzvgwbk</guid>
            <pubDate>Mon, 14 Sep 2026 08:30:07 +0530</pubDate>
            <description><![CDATA[&lt;p&gt;ಮಂಗಳೂರು-ಬೆಂಗಳೂರು ನಡುವೆ ಪ್ರಸ್ತಾವಿತ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಕರಾವಳಿ ಕರ್ನಾಟಕದ ರೈಲು ಪ್ರಯಾಣಿಕರ ಸಂಘಟನೆಗಳು ಹಾಗೂ ವಾಣಿಜ್ಯ ವಲಯ ಬದಲಾಯಿಸುವಂತೆ ಒತ್ತಾಯಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2dpje3zemqng1g7as2xan36,imgname-bjb-1789313759359.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಸೆ.14): &lt;/strong&gt;ಯಶವಂತಪುರ-ಮಂಗಳೂರು ಜಂಕ್ಷನ್ ನಡುವೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್&zwnj;ನ ಪ್ರಾಯೋಗಿಕ ಸಂಚಾರದ ವೇಳಾಪಟ್ಟಿಯೇ ಪ್ರಸ್ತಾವಿತ ಕಾಯಂ ಸಂಚಾರದ ವೇಳಾಪಟ್ಟಿ ಆಗಬಾರದು. ಈ ವಂದೇ ಭಾರತ್&zwnj; ಎಕ್ಸ್&zwnj;ಪ್ರೆಸ್&zwnj; ರೈಲನ್ನು ಪ್ರತಿದಿನ ಬೆಳಗ್ಗೆ ಮಂಗಳೂರಿನಿಂದಲೇ ಹೊರಡುವಂತೆ ವೇಳಾಪಟ್ಟಿ ರೂಪಿಸಬೇಕು ಎಂದು ಕರಾವಳಿ ಕರ್ನಾಟಕದ ರೈಲು ಪ್ರಯಾಣಿಕರ ಸಂಘಟನೆಗಳು ಹಾಗೂ ವಾಣಿಜ್ಯ ವಲಯ ಒತ್ತಾಯಿಸಿದೆ.&lt;/p&gt;&lt;p&gt;ಪ್ರಸ್ತಾವಿತ ವಂದೇ ಭಾರತ್ ರೈಲು ಬೆಳಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಿ, ರಾತ್ರಿ ಮಂಗಳೂರಿಗೆ ಮರಳುವಂತೆ ವೇಳಾಪಟ್ಟಿ ರೂಪಿಸಬೇಕು ಎಂದು ಪಶ್ಚಿಮ ಕರಾವಳಿ ರೈಲು ಯಾತ್ರಿ ಅಭಿವೃದ್ದಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಆಗ್ರಹಿಸಿದ್ದಾರೆ.&lt;/p&gt;&lt;p&gt;ಬೆಂಗಳೂರಿನಲ್ಲಿ ಅಧಿಕೃತ ಹಾಗೂ ವ್ಯವಹಾರಿಕ ಕೆಲಸಗಳನ್ನು ಹೊಂದಿರುವ ನೂರಾರು ಕರಾವಳಿ ಜನರಿಗೆ ಬೆಳಗಿನ ರೈಲು ಅತ್ಯಂತ ಅನುಕೂಲವಾಗಲಿದೆ. ರೈಲು ಬೆಂಗಳೂರಿಗೆ ರಾತ್ರಿ ತಡವಾಗಿ ತಲುಪಿದರೆ ಅದರ ಪ್ರಯೋಜನ ಕರಾವಳಿ ಭಾಗದ ಜನರಿಗೆ ಸೀಮಿತವಾಗಲಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಕೆನಾರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಿಂದ ಬೆಳಗ್ಗೆ ರೈಲು ಹೊರಟರೆ ಬೆಂಗಳೂರಿಗೆ ತೆರಳುವವರು ಮಧ್ಯಾಹ್ನದ ವೇಳೆಗೆ ತಮ್ಮ ವ್ಯವಹಾರ ಅಥವಾ ಅಧಿಕೃತ ಕೆಲಸಗಳನ್ನು ಪೂರ್ಣಗೊಳಿಸಿ ರಾತ್ರಿ ರೈಲಿನಲ್ಲಿ ವಾಪಸ್ ಬರಲು ಸಾಧ್ಯವಾಗುತ್ತದೆ. ಇದರಿಂದ ಒಂದು ದಿನವಿಡೀ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ತಪ್ಪಲಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಾಯೋಗಿಕ ಸಂಚಾರ&lt;/strong&gt;&lt;/h2&gt;&lt;p&gt;ಸೆ.10ರಂದು ನಡೆದ ಪ್ರಾಯೋಗಿಕ ಸಂಚಾರದಲ್ಲಿ 16 ಬೋಗಿಗಳ ವಂದೇ ಭಾರತ್ ರೈಲು ಯಶವಂತಪುರದಿಂದ ಮಂಗಳೂರು ಜಂಕ್ಷನ್&zwnj;ಗೆ 7 ಗಂಟೆ 5 ನಿಮಿಷಗಳಲ್ಲಿ, ಮಂಗಳೂರು ಜಂಕ್ಷನ್&zwnj;ನಿಂದ ಯಶವಂತಪುರಕ್ಕೆ 6 ಗಂಟೆ 49 ನಿಮಿಷಗಳಲ್ಲಿ ಸಂಚರಿಸಿತ್ತು. ಎರಡೂ ದಿಕ್ಕಿನ ಪ್ರಯಾಣವನ್ನು ಆರು ಗಂಟೆಯೊಳಗೆ ಪೂರ್ಣಗೊಳಿಸುವ ಗುರಿ ರೈಲ್ವೆಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>dakshina-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mangalore-bengaluru-vande-bharat-coastal-groups-demand-morning-departure-from-mangalore-gvd/articleshow-gzvgwbk"/>
        </item>
        <item>
            <title><![CDATA[50ನೇ ವರ್ಷದ ಗಣೇಶೋತ್ಸವಕ್ಕೆ ಬಡ ವೃದ್ಧೆಗೆ ಸೂರು ನಿರ್ಮಿಸಿಕೊಟ್ಟ ಸಮಿತಿ! ಭಾಗಿ ಅಮ್ಮ ಈಗ ಸೇಫ್!]]></title>
            <link>https://kannada.asianetnews.com/karnataka-districts/uppinangady-ganeshotsava-samiti-builds-rcc-house-for-poor-woman-kajekkar-bhagi-amma-golden-jubilee-sat/articleshow-kvag44t</link>
            <guid isPermaLink="true">https://kannada.asianetnews.com/karnataka-districts/uppinangady-ganeshotsava-samiti-builds-rcc-house-for-poor-woman-kajekkar-bhagi-amma-golden-jubilee-sat/articleshow-kvag44t</guid>
            <pubDate>Thu, 10 Sep 2026 08:22:12 +0530</pubDate>
            <description><![CDATA[&lt;p&gt;ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ, ಟಾರ್ಪಾಲು ಗುಡಿಸಲಿನಲ್ಲಿ ವಾಸಿಸುತ್ತಿದ್ದ ನಿರ್ಗತಿಕ ಮಹಿಳೆ ಭಾಗಿಯವರಿಗೆ ಹೊಸ ಮನೆಯನ್ನು ನಿರ್ಮಿಸಿಕೊಟ್ಟಿದೆ. ಹಲವಾರು ದಾನಿಗಳ ಸಹಕಾರದಿಂದ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಮನೆಯನ್ನು ಅವರಿಗೆ ಹಸ್ತಾಂತರಿಸಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m24kjq4tmpa47nknsarr8m2r,imgname-uppinangady-ganeshotsava-samiti-build-house-1789008632986.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ (ಸೆ.10): ಟಾ&lt;/strong&gt;ರ್ಪಾಲು ಹೊದಿಕೆಯ ಗುಡಿಸಿಲನಲ್ಲಿ ಆಶ್ರಯ ಪಡೆದಿದ್ದ ಮಹಿಳೆಗೆ ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ತನ್ನ ಸುವರ್ಣ ಮಹೋತ್ಸವದ ನೂತನ ಮನೆ ನಿರ್ಮಿಸಿ ಮಾದರಿಯಾಗಿದೆ.&lt;/p&gt;&lt;p&gt;ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರ್ ಎಂಬಲ್ಲಿನ ನಿವಾಸಿ ಭಾಗಿ ಎಂಬವರು ತೀರಾ ಬಡವರಾಗಿದ್ದು, ಒಂಟಿಯಾಗಿ ಟರ್ಪಾಲಿನ ಜೋಪಡಿಯೊಂದರಲ್ಲಿ ವಾಸಿಸುತ್ತಿದ್ದರು. ಈ ಪರಿಸರದಲ್ಲಿ ಆರ್ ಎಸ್ ಎಸ್ ಪ್ರಾಯೋಜಿತ ತುಡರ್ ಕಾರ್ಯಕ್ರಮ, ಕಾಳಿಕಾಂಬಾ ಭಜನಾ ಮಂಡಳಿ ಪ್ರಾಯೋಜಿತ ಮನೆಯಂಗಳದ ಭಜನೆ ಮೊದಲಾದ ಕಾರ್ಯಕ್ರಮದ ನಡೆದ ವೇಳೆ ಮಹಿಳೆಯ ಸಮಸ್ಯೆ ಸಮಾಜದ ಅರಿವಿಗೆ ಬಂದಿತ್ತು.&lt;/p&gt;&lt;p&gt;ಇದೇ ಸಮಯದಲ್ಲಿ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ 50 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಮನೆಯೊಂದನ್ನು ನಿರ್ಮಿಸಿಕೊಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಸಮಿತಿಯ ಆಶಯಕ್ಕೆ ಸ್ಪಂದಿಸಿದ ಟೀಮ್ ದಕ್ಷಿಣ ಕಾಶಿ, ಟೀಮ್ ಅಘೋರಾ, ಉದ್ಯಮಿಗಳಾದ ಸುಜೀರ್ ಗಣಪತಿ ನಾಯಕ್, ಡಾ.ಎಂ. ಆರ್ ಶೆಣೈ, ಚಂದಪ್ಪ ಮೂಲ್ಯ, ಮೋಹನ್ ಕುಮಾರ್ ಉಜಿರೆ, ಯು ಜಿ ರಾಧಾ, ಹರೀಶ್ ಶೆಟ್ಟಿ ಗಾಂಧೀಪಾರ್ಕ್, ಸಿಎ ಬ್ಯಾಂಕ್ ಉಪ್ಪಿನಂಗಡಿ, ಕರಾಯ ಶ್ರೀಮತಿ ಎಂ ನಾಯಕ್, ಶಶಿಧರ್ ನಟ್ಟಿಬೈಲ್, ವೇಣುಗೋಪಾಲ ನೋಂಡಾ, ಪ್ರಸನ್ನ ದರ್ಬೆ, ಕೆ ರಾಧಾಕೃಷ್ಣ ನಾಯಕ್&zwnj;, ಗುಣಕರ ಅಗ್ನಾಡಿ, ಪಟ್ಲ ಪೌಂಡೇಶನ್, ಕಾಳಿಕಾಂಬಾ ಭಜನಾ ಮಂಡಳಿ ಸದಸ್ಯರ ಸಹಕಾರದಿಂದ ಹೊಸ ಮನೆ ನಿರ್ಮಾಣವಾಯಿತು. 2026ರ ಜನವರಿಯಲ್ಲಿ ಶಿಲಾನ್ಯಾಸ ನಡೆದು ಇದೀಗ ಪೂರ್ಣತೆಯ ಹಂತ ತಲುಪಿದೆ. ಸುವ್ಯವಸ್ಥಿತ ಮನೆಯನ್ನು ಸೆ.10ರಂದು (ಇಂದು) ಭಾಗಿಯವರಿಗೆ ಹಸ್ತಾಂತರಿಸುವ ಮೂಲಕ ಅವರ ಬದುಕಿನಲ್ಲಿ ನೆಮ್ಮದಿಯ ಭಾವನೆ ಮೂಡಿಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ಗುಡಿಸಲಿನಿಂದ ಆರ್&zwnj;ಸಿಸಿ ಮನೆಗೆ&lt;/strong&gt;&lt;/h2&gt;&lt;p&gt;ಗಣೇಶೋತ್ಸವ ಸಮಿತಿಯು ನಿರ್ಮಿಸಿ ಕೊಟ್ಟ ಮನೆಯು ಆರ್&zwnj;ಸಿಸಿಯ ಮನೆ ಆಗಿದ್ದು, ಇದಕ್ಕೆ ಸುಮಾರು 10 ಲಕ್ಷ ದಷ್ಟು ರು. ವೆಚ್ಚ ತಗುಲಿದೆ. ಹಾಲ್, ಒಂದು ಊಟದ ಹಾಲ್, ಬೆಡ್ ರೂಂ, ಅಡುಗೆ ಕೋಣೆ ಹಾಗೂ ಮನೆಗೆ ತಾಗಿಕೊಂಡೇ ಸ್ನಾನಗೃಹ ಮತ್ತು ಶೌಚಾಲಯದ ನಿರ್ಮಾಣವಾಗಿದೆ. ಇದರೊಂದಿಗೆ ಸ್ನಾನ ಗೃಹಕ್ಕೆ ನೀರಿನ ಸ್ಟೀಲ್ ಅಂಡೆಯನ್ನು ಕೂಡಾ ಸಮಿತಿಯೇ ಅಳವಡಿಸಿದೆ. ಎಲ್ಲ ಕೋಣೆಗಳಿಗೆ ಕಿಟಕಿ ಬಾಗಿಲುಗಳ ಜೋಡಣೆಯೂ ಆಗಿದ್ದು, ವಯರಿಂಗ್, ಪ್ಲಂಬಿಂಗ್&zwnj; ಕೆಲಸವನ್ನೂ ಮನೆಯ ಸುತ್ತಲೂ ಇಂಟರ್&zwnj;ಲಾಕ್ ಅಳವಡಿಸಲಾಗಿದೆ.&lt;/p&gt;&lt;p&gt;ಸುಮಾರು 8 ರಿಂದ 10 ಲಕ್ಷ ರು. ವೆಚ್ಚದ ಸುಂದರವಾದ ಮನೆಯನ್ನು ನಿರ್ಮಿಸಲಾಗಿದೆ. ೧೦ರಂದು ಹಸ್ತಾಂತರ ಕಾರ್ಯ ನಡೆಯಲಿದ್ದು, ಬೆಳಗ್ಗೆ ಗಣಹೋಮ ನಡೆಯಲಿದೆ. ಸಂಜೆ ಮನೆ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರನ್ನೂ ಕರೆದು ದೀಪ ಬೆಳಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.&lt;/p&gt;&lt;p&gt;&lt;strong&gt;-ಕೆ ಸುಧಾಕರ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷರು&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/uppinangady-ganeshotsava-samiti-builds-rcc-house-for-poor-woman-kajekkar-bhagi-amma-golden-jubilee-sat/articleshow-kvag44t"/>
        </item>
        <item>
            <title><![CDATA[ಅ.1ರಿಂದ ಮಂಗಳೂರು ರೈಲ್ವೆ ಪ್ರದೇಶ ಬದಲಾವಣೆ; ಪಾಲಕ್ಕಾಡ್-ಮೈಸೂರು ಸಭೆಯಲ್ಲೇನಾಯ್ತು?]]></title>
            <link>https://kannada.asianetnews.com/karnataka-districts/mangaluru-railway-zone-reorganization-from-oct-1-coordination-meeting-between-palakkad-and-mysuru-divisions-mrq/articleshow-l7msrmv</link>
            <guid isPermaLink="true">https://kannada.asianetnews.com/karnataka-districts/mangaluru-railway-zone-reorganization-from-oct-1-coordination-meeting-between-palakkad-and-mysuru-divisions-mrq/articleshow-l7msrmv</guid>
            <pubDate>Sat, 12 Sep 2026 08:45:02 +0530</pubDate>
            <description><![CDATA[ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಕುರಿತು ಎರಡೂ ವಿಭಾಗಗಳ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಅಕ್ಟೋಬರ್ 1 ರಿಂದ ಈ ಬದಲಾವಣೆ ಜಾರಿಯಾಗಲಿದ್ದು, ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಸುಗಮ ವರ್ಗಾವಣೆಗೆ ಸಿದ್ಧತೆ ನಡೆಸಲಾಗಿದೆ. ಸಿಬ್ಬಂದಿಗೆ ತಮ್ಮ ಆಯ್ಕೆಯ ವಿಭಾಗದಲ್ಲಿ ಮುಂದುವರಿಯುವ ಅವಕಾಶ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29sk74pjxfjy7wqmr9ktd22,imgname-palakkad-mysuru-1789182712982.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಹಿನ್ನೆಲೆಯಲ್ಲಿ ಎರಡೂ ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್&zwnj;ಎಂ) ಹಾಗೂ ಹಿರಿಯ ಅಧಿಕಾರಿಗಳ ಸಮನ್ವಯ ಸಭೆ ಶುಕ್ರವಾರ ಮಂಗಳೂರಿನಲ್ಲಿ ನಡೆಯಿತು.&lt;/p&gt;&lt;p&gt;ಮಂಗಳೂರು ವ್ಯಾಪ್ತಿಯ ಆಡಳಿತಾತ್ಮಕ ಬದಲಾವಣೆಗೆ ಅಗತ್ಯವಿರುವ ಸಿದ್ಧತೆಗಳು ಹಾಗೂ ಸುಗಮ ವರ್ಗಾವಣೆಯ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಸಭೆ ಸೌಹಾರ್ದಯುತ ಹಾಗೂ ರಚನಾತ್ಮಕ ವಾತಾವರಣದಲ್ಲಿ ನಡೆದಿದ್ದು, ವ್ಯಾಪ್ತಿ ಬದಲಾವಣೆಯಿಂದ ರೈಲು ಸಂಚಾರ ಮತ್ತು ಪ್ರಯಾಣಿಕರ ಸೇವೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಎರಡೂ ವಿಭಾಗಗಳು ಒಮ್ಮತ ವ್ಯಕ್ತಪಡಿಸಿದವು.&lt;/p&gt;&lt;h2&gt;&lt;strong&gt;ರೈಲು ಸೇವೆಗಳು ಹಾಗೂ ಕಾರ್ಯಾಚರಣೆ&lt;/strong&gt;&lt;/h2&gt;&lt;p&gt;ಅಕ್ಟೋಬರ್&zwnj; 1 ರಿಂದ ಹೊಸ ರೈಲ್ವೆ ವ್ಯಾಪ್ತಿ ಜಾರಿಗೆ ಬರಲಿದ್ದು, ಅಂದಿನಿಂದಲೂ ರೈಲು ಸೇವೆಗಳು ಹಾಗೂ ಕಾರ್ಯಾಚರಣೆಗಳು ಸಹಜವಾಗಿ ಮುಂದುವರಿಯುವಂತೆ ಅಗತ್ಯ ಸಿದ್ಧತೆಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಲು ನಿರ್ಧರಿಸಲಾಯಿತು.&lt;/p&gt;&lt;p&gt;ಕಾರ್ಯಾಚರಣೆಯ ಸಮನ್ವಯ, ಆಸ್ತಿಗಳು, ದಾಖಲೆಗಳು, ನಿಯಂತ್ರಣ ವ್ಯವಸ್ಥೆ, ಸಿಬ್ಬಂದಿ ಸೇರಿದಂತೆ ವ್ಯಾಪ್ತಿ ಬದಲಾವಣೆಯಿಂದ ಎದುರಾಗುವ ವಿವಿಧ ಆಡಳಿತಾತ್ಮಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿಗಳು ಚರ್ಚಿಸಿದರು.&lt;/p&gt;&lt;h3&gt;&lt;strong&gt;ಸಿಬ್ಬಂದಿಗೆ ಆಯ್ಕೆ ಅವಕಾಶ:&lt;/strong&gt;&lt;/h3&gt;&lt;p&gt;ಮಂಗಳೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲೇ ಮುಂದುವರಿಯಲು ಅಥವಾ ನೈಋತ್ಯ ರೈಲ್ವೆಗೆ ಸೇರ್ಪಡೆಯಾಗಲು ನಿಯಮಾನುಸಾರ ಆಯ್ಕೆ ನೀಡಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು. ರೈಲ್ವೆ ಮಂಡಳಿ ನಿರ್ದೇಶನದಂತೆ ಗಜೆಟೆಡ್ ಅಲ್ಲದ ಸಿಬ್ಬಂದಿಯನ್ನು &lsquo;ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ&rsquo; ವರ್ಗಾಯಿಸುವ ವ್ಯವಸ್ಥೆ ಇದ್ದರೂ, ದಕ್ಷಿಣ ರೈಲ್ವೆಯಲ್ಲಿ ಮುಂದುವರಿಯುವ ಅಥವಾ ನೈಋತ್ಯ ರೈಲ್ವೆಗೆ ಸೇರುವ ಆಯ್ಕೆಯನ್ನು ಸಿಬ್ಬಂದಿಗೆ ನೀಡಲಾಗುತ್ತದೆ. ಇತರ ವರ್ಗಗಳ ಸಿಬ್ಬಂದಿಗೆ ಅನ್ವಯವಾಗುವ ನಿಯಮಾನುಸಾರ ಪ್ರಕ್ರಿಯೆ ಮುಂದುವರಿಯಲಿದೆ.&lt;/p&gt;&lt;p&gt;ಪಾಲಕ್ಕಾಡ್ ಹಾಗೂ ಮೈಸೂರು ವಿಭಾಗಗಳ ನಡುವಿನ ನಿರಂತರ ಸಮನ್ವಯದ ಮೂಲಕ ವ್ಯಾಪ್ತಿ ಬದಲಾವಣೆಯನ್ನು ಸುಗಮವಾಗಿ ಪೂರ್ಣಗೊಳಿಸುವ ವಿಶ್ವಾಸವನ್ನು ಎರಡೂ ವಿಭಾಗಗಳ ಅಧಿಕಾರಿಗಳು ವ್ಯಕ್ತಪಡಿಸಿದರು. ಪ್ರಯಾಣಿಕರ ಸೇವೆ ಹಾಗೂ ರೈಲು ಕಾರ್ಯಾಚರಣೆಯ ನಿರಂತರತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಯಿತು.&lt;/p&gt;&lt;p&gt;ರೈಲ್ವೆ ಮಂಡಳಿಯ ಅಧಿಸೂಚನೆಯಂತೆ 2026ರ ಅಕ್ಟೋಬರ್ 1ರಿಂದ ಮಂಗಳೂರು ರೈಲ್ವೆ ವ್ಯಾಪ್ತಿಯ ಬದಲಾವಣೆ ಅಧಿಕೃತವಾಗಿ ಜಾರಿಗೆ ಬರಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದಾವಣಗೆರೆ ಹೊರವಲಯದ 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧಾರ: ಎಲ್ಲಿ?&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mangaluru-railway-zone-reorganization-from-oct-1-coordination-meeting-between-palakkad-and-mysuru-divisions-mrq/articleshow-l7msrmv"/>
        </item>
        <item>
            <title><![CDATA[ಗಣೇಶ ಹಬ್ಬಕ್ಕೆ ಬೆಂಗಳೂರು-ಮಂಗಳೂರಿಗೆ ವಿಶೇಷ ರೈಲು ಇಲ್ಲ: ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ]]></title>
            <link>https://kannada.asianetnews.com/karnataka-districts/bengaluru-mangaluru-special-train-missing-during-festival-passengers-question-railways-gvd/articleshow-p1bkt8z</link>
            <guid isPermaLink="true">https://kannada.asianetnews.com/karnataka-districts/bengaluru-mangaluru-special-train-missing-during-festival-passengers-question-railways-gvd/articleshow-p1bkt8z</guid>
            <pubDate>Mon, 14 Sep 2026 07:00:56 +0530</pubDate>
            <description><![CDATA[&lt;p&gt;ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕಾರವಾರ-ಮಡಗಾಂವ್&zwnj;ಗೆ ವಿಶೇಷ ರೈಲು ನೀಡಿದರೂ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಘೋಷಿಸದಿರುವುದು ಕರಾವಳಿ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2drfw9zhmfh52cwwe71rv4d,imgname-vjvb-1789315772735.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಸೆ.14): &lt;/strong&gt;ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವುದು ಸಹಜ. ಈ ವಿಚಾರ ಗೊತ್ತಿದ್ದೇ ರೈಲ್ವೆ ಇಲಾಖೆ ಪ್ರತಿ ಬಾರಿ ಬೆಂಗಳೂರು-ಮಂಗಳೂರು ನಡುವೆ ಇದುವರೆಗೆ ವಿಶೇಷ ರೈಲನ್ನು ಓಡಿಸುತ್ತಿತ್ತು. ಆದರೆ ಈ ಬಾರಿ ಮಾತ್ರ ರೈಲ್ವೆ ಇಲಾಖೆಗೆ ದಕ್ಷಿಣ ಕನ್ನಡದಲ್ಲಿ ಕೂಡ ಹಬ್ಬ ಆಚರಿಸುತ್ತಾರೆ ಎನ್ನುವುದು ಮರೆತೇ ಹೋಗಿದಂತೆ ವರ್ತಿಸಿದೆ. ಬೆಂಗಳೂರಿನಿಂದ ಮಂಗಳೂರನ್ನು ಮರೆತು ಕೇವಲ ಕಾರವಾರಕ್ಕೆ ಮಾತ್ರ ವಿಶೇಷ ರೈಲು ಸಂಚಾರ ಏರ್ಪಡಿಸಿ ಕೈತೊಳೆದುಕೊಂಡಿದೆ.&lt;/p&gt;&lt;p&gt;ಗಣೇಶ ಚತುರ್ಥಿ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಈ ನಡೆ ಇದೀಗ ದಕ್ಷಿಣ ಕನ್ನಡದ ರೈಲು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕಾರವಾರ ಮಾರ್ಗವಾಗಿ ಮಡಗಾಂವ್&zwnj;ಗೆ ವಿಶೇಷ ರೈಲು ಓಡಿಸುತ್ತಿದೆ. ಆದರೆ ಇದೇ ವೇಳೆ ಮಂಗಳೂರಿಗೆ ಮಾತ್ರ ವಿಶೇಷ ರೈಲು ನೀಡದೆ ಇರುವುದರಿಂದ ಮಂಗಳೂರಿನ ಪ್ರಯಾಣಿಕರ ಮೇಲೆ ಮತ್ತೊಮ್ಮೆ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಯಶವಂತಪುರ-ಮಡಗಾಂವ್ ವಿಶೇಷ ರೈಲು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಶನಿವಾರ ಮಡಗಾಂವ್ ತಲುಪಿದೆ. ಸೋಮವಾರ ಮಡಗಾಂವ್&zwnj;ನಿಂದ ಹೊರಟು ಮಂಗಳವಾರ ನಸುಕಿನ ಜಾವ ಬೆಂಗಳೂರಿಗೆ ಮರಳುವ ಈ ರೈಲು ಮಂಗಳೂರು ನಗರ ಪ್ರವೇಶಿಸದೆ ಪಡೀಲ್ ಬೈಪಾಸ್ ಮೂಲಕ ಸಂಚರಿಸುತ್ತದೆ. ಹೀಗಾಗಿ ಹಬ್ಬಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಬರಬೇಕಿದ್ದ ಸಾವಿರಾರು ಪ್ರಯಾಣಿಕರಿಗೆ ಈ ರೈಲಿನಿಂದ ಯಾವುದೇ ಪ್ರಯೋಜನ ಇಲ್ಲ.&lt;/p&gt;&lt;p&gt;&lt;strong&gt;ಮಂಗಳೂರು ಮರೆವು?&lt;/strong&gt;&lt;/p&gt;&lt;p&gt;ಪ್ರಮುಖ ಹಬ್ಬಗಳ ಸಂದರ್ಭ ಬೆಂಗಳೂರಿನಿಂದ ಕರಾವಳಿಯತ್ತ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ವಿಶೇಷ ರೈಲುಗಳಿಲ್ಲದ ಕಾರಣ ಪ್ರಯಾಣಿಕರು ದುಬಾರಿ ಬಸ್ ಹಾಗೂ ಇತರ ಸಾರಿಗೆ ವ್ಯವಸ್ಥೆ ಅವಲಂಬಿಸಬೇಕಾಗುತ್ತದೆ. ಒಂದು ಕಡೆ ಮಂಗಳೂರು ವಿಭಾಗದಿಂದ ರೈಲ್ವೆಗೆ ಕೋಟ್ಯಂತರ ರುಪಾಯಿ ಆದಾಯ ಬರುತ್ತಿದೆ, ಮತ್ತೊಂದೆಡೆ ಹಬ್ಬದ ಸಂದರ್ಭದಲ್ಲಿ ಕನಿಷ್ಠ ವಿಶೇಷ ರೈಲು ನೀಡುವ ಬೇಡಿಕೆಯೂ ಈಡೇರುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.&lt;/p&gt;&lt;p&gt;ಗಣೇಶ ಚತುರ್ಥಿ ಮುಗಿಯುತ್ತಾ ಬಂತು. ಆದರೆ ನವರಾತ್ರಿ ಮತ್ತು ದೀಪಾವಳಿ ಇನ್ನೂ ಮುಂದಿವೆ. ಕನಿಷ್ಠ ಮುಂದಿನ ಹಬ್ಬಗಳ ಸಂದರ್ಭದಲ್ಲಾದರೂ ಬೆಂಗಳೂರು-ಮಂಗಳೂರು ನಡುವೆ ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್&zwnj;ಗೆ ನೇರವಾಗಿ ಬಂದು, ಅಲ್ಲಿಂದಲೇ ಹಿಂದಿರುಗುವ ವಿಶೇಷ ರೈಲುಗಳನ್ನು ಘೋಷಿಸಬೇಕು. ಇಲ್ಲವಾದರೆ ಕರಾವಳಿಯ ರೈಲು ಪ್ರಯಾಣಿಕರನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ರೈಲ್ವೆ ಇಲಾಖೆ ತಾನೇ ಉತ್ತರಿಸಬೇಕಾಗುತ್ತದೆ.&lt;/p&gt;&lt;h2&gt;&lt;strong&gt;ಸಂಸದರ ಮನವಿಗೂ ಬೆಲೆ ಇಲ್ಲ!&lt;/strong&gt;&lt;/h2&gt;&lt;p&gt;ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಜುಲೈ 18ರಂದೇ ರೈಲ್ವೆ ಇಲಾಖೆ ಸಚಿವರಿಗೆ ಪತ್ರ ಬರೆದು ಬೆಂಗಳೂರು-ಮಂಗಳೂರು ನಡುವೆ ಹಬ್ಬದ ವಿಶೇಷ ರೈಲು ಓಡಿಸುವಂತೆ ಮನವಿ ಮಾಡಿದ್ದರು. ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್&zwnj;ಗೆ ರೈಲು ಆಗಮಿಸಿ, ಇಲ್ಲಿ ನಿಲುಗಡೆ ಪಡೆದು, ಇಲ್ಲಿಂದಲೇ ಹಿಂದಿರುಗುವಂತೆ ವಿಶೇಷ ರೈಲು ವ್ಯವಸ್ಥೆ ಮಾಡಬೇಕೆಂದು ಸಂಸದರು ಒತ್ತಾಯಿಸಿದ್ದರು. ಆದರೂ ಈ ಮನವಿಗೆ ರೈಲ್ವೆಯಿಂದ ಸ್ಪಂದನೆ ಸಿಕ್ಕಿಲ್ಲ.&lt;/p&gt;&lt;p&gt;ಪಡೀಲ್ ಬೈಪಾಸ್ ಮೂಲಕ ಉಡುಪಿ-ಕಾರವಾರ ಭಾಗಕ್ಕೆ ರೈಲು ಓಡಿಸುವುದಕ್ಕೆ ಪ್ರಯಾಣಿಕರ ಆಕ್ಷೇಪವಿಲ್ಲ. ಆದರೆ ಮಂಗಳೂರಿಗೆ ಪ್ರತ್ಯೇಕ ವಿಶೇಷ ರೈಲು ನೀಡಬಹುದಿತ್ತು. ಹಬ್ಬದ ಬೇಡಿಕೆ ಮೊದಲೇ ತಿಳಿದಿದ್ದರೂ ರೈಲ್ವೆ ಇಲಾಖೆ ಮಂಗಳೂರನ್ನು ಕಡೆಗಣಿಸಿರುವುದು ಏಕೆ ಎಂಬುದಕ್ಕೆ ಸ್ಪಷ್ಟನೆ ನೀಡಬೇಕಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bengaluru-mangaluru-special-train-missing-during-festival-passengers-question-railways-gvd/articleshow-p1bkt8z"/>
        </item>
        <item>
            <title><![CDATA[Belthangady: 105ರ ತಾಯಿ-85ರ ಮಗಳ ಅಪರೂಪದ ಭೇಟಿ: ದುರ್ಗಮ ರಸ್ತೆಯಲ್ಲಿ ಪುತ್ರಿಯ ಪಯಣ]]></title>
            <link>https://kannada.asianetnews.com/karnataka-districts/dakshina-kannada-belthangady-105-year-old-mother-seetamma-and-85-year-old-daughter-sushila-met-after-20-years-mrq/articleshow-ugk6tt4</link>
            <guid isPermaLink="true">https://kannada.asianetnews.com/karnataka-districts/dakshina-kannada-belthangady-105-year-old-mother-seetamma-and-85-year-old-daughter-sushila-met-after-20-years-mrq/articleshow-ugk6tt4</guid>
            <pubDate>Sat, 12 Sep 2026 09:06:37 +0530</pubDate>
            <description><![CDATA[ಬೆಳ್ತಂಗಡಿಯ ಮಲವಂತಿಕೆ ಗ್ರಾಮದಲ್ಲಿ, 105 ವರ್ಷದ ತಾಯಿ ಸೀತಮ್ಮ ಮತ್ತು 85 ವರ್ಷದ ಮಗಳು ಸುಶೀಲಾ ಅವರು 20 ವರ್ಷಗಳ ನಂತರ ಭೇಟಿಯಾದರು. ದುರ್ಗಮ ದಾರಿಯ ಕಾರಣದಿಂದಾಗಿ ದೂರವಾಗಿದ್ದ ಇವರನ್ನು, ಮೊಮ್ಮಕ್ಕಳು ಕಷ್ಟಪಟ್ಟು ಒಂದಾಗಿಸಿ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m29ty91dnrsx5fdd3w9c97k0,imgname-belthangady-1789184123949.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ತಾಯಿಗೆ 105 ವರ್ಷ, ಆಕೆಯ ಮಗಳಿಗೆ 85 ವರ್ಷ. ಇಬ್ಬರದ್ದೂ ಇಳಿ ವಯಸ್ಸು. ಮಗಳಿಗೆ ತಾಯಿಯನ್ನು ನೋಡಬೇಕೆಂಬ ಆಸೆಯಿದ್ದರೂ ವಯಸ್ಸು, ದುರ್ಗಮ ದಾರಿಯ ಕಾರಣದಿಂದ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ ಮೊಮ್ಮಕ್ಕಳು ತಾಯಿ ಮಗಳ ಆಸೆಯನ್ನು ಪೂರೈಸಿದ್ದಾರೆ. ಇಂತಹ ಅದ್ಭುತ ಕ್ಷಣ ಕಾಣಸಿಕ್ಕಿದ್ದು, ಬೆಳ್ತಂಗಡಿ ತಾಲೂಕಿನ ಮಲವಂತಿಕೆ ಗ್ರಾಮದ ಮಕ್ಕಿ ಎಂಬಲ್ಲಿ&lt;/p&gt;&lt;p&gt;ಮಕ್ಕಿಯಲ್ಲಿ ಮಕ್ಕಳ ಜೊತೆ ವಾಸ ಇರುವ 105 ವರ್ಷದ ಸೀತಮ್ಮ ಅವರಿಗೆ 11 ಮಂದಿ ಮಕ್ಕಳು. ಅವರಲ್ಲಿ ಮೊದಲನೆಯವರು ಸುಶೀಲಾ. ಅವರಿಗೀಗ 85 ವಯಸ್ಸು. ಸೀತಮ್ಮ ಅವರ ಮನೆಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಜೀಪಿನಲ್ಲಿ ದುರ್ಗಮ ಕಾಡಿನಲ್ಲಿ ಸಾಗಿ ಬಳಿಕ ಒಂದೂವರೆ ಕಿಲೋ ಮೀಟರ್ ಬೆಟ್ಟ ಇಳಿದು, ಹೊಳೆ ದಾಟಿ ಸಾಗಬೇಕು. ಸುಶೀಲಾ ಅವರು ಮಕ್ಕಳ ಜೊತೆ ಮಿತ್ತಬಾಗಿಲು ಗ್ರಾಮದ ಫಗರೆ ಎಂಬಲ್ಲಿ ವಾಸವಾಗಿದ್ದಾರೆ. ದೂರ ದೂರ ಇರುವ ತಾಯಿ&ndash;ಮಗಳು ಒಂದಾಗಿ ಸುಮಾರು 20 ವರ್ಷ ಸಂದಿತ್ತು. ಹಿಂದಿನ ನೆನಪು ಮಾತ್ರ ಮನಸ್ಸಲ್ಲಿ ಉಳಿದಿತ್ತು.&lt;/p&gt;&lt;h2&gt;&lt;strong&gt;ಅಜ್ಜಿ ಆಸೆ ಪೂರೈಸಲು ಮುಂದಾದ ಮೊಮ್ಮಕಳು&lt;/strong&gt;&lt;/h2&gt;&lt;p&gt;ಮುತ್ತಜ್ಜಿ ಸೀತಮ್ಮ ಅವರಿಗೆ ವಯಸ್ಸಿನ ಕಾರಣ ಮಗಳ ಬಳಿ ಬರಲು ಸಾಧ್ಯರಲಿಲ್ಲ. ಮಗಳು ಸುಶೀಲಾ ಅವರಿಗೆ ಅನಾರೋಗ್ಯದ ಕಾರಣದಿಂದ ತಾಯಿ ಬಳಿ ಹೋಗಲು ಸಾಧ್ಯವಾಗದೆ ಹಲವು ವರ್ಷವಾಗಿತ್ತು. ಆದರೆ ಮೊಮ್ಮಕ್ಕಳು ಅಜ್ಜಿ ಆಸೆ ಪೂರೈಸಲು ಸುಶೀಲಾ ಅವರನ್ನು ಕರೆದುಕೊಂಡು ದಟ್ಟ ಕಾಡಿನ ಕಚ್ಛಾ ರಸ್ತೆಯ ಮೂಲಕ ಜೀಪಿನಲ್ಲಿ ಪ್ರಯಾಣಿಸಿದ್ದಾರೆ. ಜೀಪಿನಲ್ಲಿ ಅಜ್ಜಿಯನ್ನು ಕರೆದುಕೊಂಡು ಸಾಗಿದರೂ ಮುತ್ತಜ್ಜಿ ಮನೆಯವರೆಗೂ ವಾಹನ ಸಾಗಲು ಸಾಧ್ಯವಿಲ್ಲ. ಹೀಗಾಗಿ ಅಜ್ಜಿಯನ್ನು ಕಾಡುದಾರಿಯಲ್ಲಿ ನಿಧಾನವಾಗಿ ನಡೆಸಿಕೊಂಡು ಮನೆ ತಲುಪಿದ್ದಾರೆ.&lt;/p&gt;&lt;p&gt;&lt;strong&gt;ರಸ್ತೆಯಿಲ್ಲದ ಮನೆಯಲ್ಲಿದ್ದ ಮುತ್ತಜ್ಜಿ&lt;/strong&gt;&lt;/p&gt;&lt;p&gt;ಅಜ್ಜಿಯನ್ನು ಕರೆದುಕೊಂಡು ಮುತ್ತಜ್ಜಿ ಮನೆಗೆ ತೆರಳಬೇಕು ಎನ್ನುವುದು ಮೊಮ್ಮಕ್ಕಳಾದ ನಮ್ಮ ಆಸೆಯಾಗಿತ್ತು. ಆದರೆ ಅಜ್ಜಿಗೆ ವಯಸ್ಸಾದ ಕಾರಣ, ಮುತ್ತಜ್ಜಿ ಮನೆಗೆ ಸರಿಯಾದ ರಸ್ತೆ ಇಲ್ಲದ ಕಾರಣ ಅದು ಸಾಧ್ಯವಾಗುತ್ತಿರಲಿಲ್ಲ. ಇದೀಗ ಅದು ಸಾಧ್ಯವಾಗಿದೆ ಎಂದು ಮೊಮ್ಮಗ ಕೇಶವ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯುವಕರಿಗೂ ಕಷ್ಟವಾಗಿದ್ದ 40 ಅಡಿ ಜಾರುಕಂಬ ಸರಸರನೆ ಏರಿದ 7ನೇ ತರಗತಿಯ ಬಾತೀಶ್&zwnj;: ಹೇಗೆ ಅಂತೀರಾ?&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-belthangady-105-year-old-mother-seetamma-and-85-year-old-daughter-sushila-met-after-20-years-mrq/articleshow-ugk6tt4"/>
        </item>
        <item>
            <title><![CDATA[ಉದ್ಘಾಟನೆಗೂ ಮುನ್ನವೇ ಮಂಗಳೂರು ಕೋಟೇಕಾರ್ ಇಂದಿರಾ ಕ್ಯಾಂಟೀನ್ ಜಾಗ ಖಾಲಿ ಮಾಡುವ ಭೀತಿ!]]></title>
            <link>https://kannada.asianetnews.com/dakshina-kannada/dakshina-kannada-unopened-kotekar-indira-canteen-faces-demolition-for-nh-66-service-road-gdp/articleshow-umb7h5e</link>
            <guid isPermaLink="true">https://kannada.asianetnews.com/dakshina-kannada/dakshina-kannada-unopened-kotekar-indira-canteen-faces-demolition-for-nh-66-service-road-gdp/articleshow-umb7h5e</guid>
            <pubDate>Tue, 15 Sep 2026 12:16:57 +0530</pubDate>
            <description><![CDATA[&lt;p&gt;ಮಂಗಳೂರಿನ ಕೋಟೇಕಾರ್&zwnj;ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆಗಾಗಿ 2 ವರ್ಷಗಳಿಂದ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ತೆರವುಗೊಳಿಸುವ ಸಾಧ್ಯತೆಯಿದೆ. ಸರ್ವಿಸ್ ರಸ್ತೆ ನಿರ್ಮಾಣದ ಅಗತ್ಯತೆ ಮತ್ತು ಸ್ಥಳೀಯರ ಒತ್ತಾಯದ ಹಿನ್ನೆಲೆಯಲ್ಲಿ, ಪಟ್ಟಣ ಪಂಚಾಯತ್ ಪರ್ಯಾಯ ಜಾಗದ ಹುಡುಕಾಟದಲ್ಲಿದೆ. ಈ ಕ್ಯಾಂಟೀನ್ ಅನ್ನು ಆಸ್ಪತ್ರೆಗಳ ಬಳಿ ನಿರ್ಮಿಸಿದ್ದರೆ ಹೆಚ್ಚು ಪ್ರಯೋಜನವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx1xmzrfh5bs2txgp5yfvcr5,imgname-----------------------2025-06-06t113733.369-1749190082319.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ದಕ್ಷಿಣ ಕನ್ನಡ ಜಿಲ್ಲೆಯ ಕೋಟೇಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಇದೀಗ ತೆರವು ಭೀತಿ ಎದುರಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೊಲ್ಯ-ಕೋಟೇಕಾರ್ ಮಾರ್ಗದಲ್ಲಿ ನೂತನ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುವುದೇ ಇದಕ್ಕೆ ಪ್ರಮುಖ ಕಾರಣ.&lt;/p&gt;&lt;h2&gt;ಕಟ್ಟಡ ನಿರ್ಮಾಣವಾಗಿ 2 ವರ್ಷವಾದರೂ ಆಗದ ಉದ್ಘಾಟನೆ&lt;/h2&gt;&lt;p&gt;ಕೋಟೇಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಎಸ್. ಶೆಟ್ಟಿ ಮಾತನಾಡಿ, &quot;ಪ್ರಸ್ತುತ ಪಟ್ಟಣ ಪಂಚಾಯತ್ ಆಡಳಿತ ಅಧಿಕಾರಕ್ಕೆ ಬರುವ ಮುನ್ನವೇ, ಸುಮಾರು ಎರಡು ವರ್ಷಗಳ ಹಿಂದೆ ಈ ಇಂದಿರಾ ಕ್ಯಾಂಟೀನ್ ಕಟ್ಟಡ ಪೂರ್ಣಗೊಂಡಿತ್ತು. ಆದರೆ, ದುರಾದೃಷ್ಟವಶಾತ್ ಇದು ಇನ್ನೂ ಉದ್ಘಾಟನೆಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ&quot; ಎಂದು ತಿಳಿಸಿದರು.&lt;/p&gt;&lt;p&gt;ಕ್ಯಾಂಟಿನ್ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸಲು ಪಟ್ಟಣ ಪಂಚಾಯತ್ ಹಣ ಮೀಸಲಿಟ್ಟಿತ್ತು. ಆದರೆ, ಇದೀಗ ರಸ್ತೆ ವಿಸ್ತರಣೆಗೆ ಕಟ್ಟಡವನ್ನು ಸ್ಥಳಾಂತರಿಸಬೇಕಾದ ಪರಿಸ್ಥಿತಿ ಬಂದಿರುವುದರಿಂದ ಅನುದಾನವನ್ನು ಅನಗತ್ಯವಾಗಿ ವೆಚ್ಚ ಮಾಡದಿರಲು ನಿರ್ಧರಿಸಲಾಗಿದೆ. NHAI ನಿಂದ ಅಧಿಕೃತ ನೋಟಿಸ್ ಬಂದ ತಕ್ಷಣ ಕೌನ್ಸಿಲ್ ಸಭೆಯಲ್ಲಿ ಸ್ಥಳಾಂತರದ ಕುರಿತು ನಿರ್ಣಯ ಅಂಗೀಕರಿಸಿ, ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.&lt;/p&gt;&lt;h2&gt;ಆಸ್ಪತ್ರೆಗಳ ಬಳಿ ನಿರ್ಮಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು&lt;/h2&gt;&lt;p&gt;ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಿರ್ಮಿಸುವ ಬದಲು, ದಕ್ಷಿಣ ಕನ್ನಡ ಹಾಗೂ ನೆರೆಯ ಜಿಲ್ಲೆಗಳಿಂದ ನಿತ್ಯ ನೂರಾರು ರೋಗಿಗಳು ಬರುವ ದೇರಳಕಟ್ಟೆಯ ಪ್ರಮುಖ ಆಸ್ಪತ್ರೆಗಳ ಸಮೀಪ ಈ ಕ್ಯಾಂಟೀನ್ ನಿರ್ಮಿಸಿದ್ದರೆ ಬಡಜನರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರು ಹೇಳಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ನಡೆದ 'ದಿಶಾ' (DISHA) ಸಮಿತಿ ಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಕ್ಯಾಂಟೀನ್ ಸ್ಥಳಾಂತರಕ್ಕೆ ಸೂಕ್ತ ಪರ್ಯಾಯ ಜಾಗ ಗುರುತಿಸಿ ನಿರ್ಣಯ ಕೈಗೊಳ್ಳುವಂತೆ ಕೋಟೇಕಾರ್ ಪಟ್ಟಣ ಪಂಚಾಯತ್&zwnj;ಗೆ ಸೂಚನೆ ನೀಡಿದ್ದರು. ಈ ಕುರಿತು ಸಭೆಯಲ್ಲಿ ಮಾಹಿತಿ ನೀಡಿದ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಮಾಲಿನಿ, ಸುಮಾರು ಎರಡು ವರ್ಷಗಳ ಹಿಂದೆ ಸ್ಪೀಕರ್ ಯು.ಟಿ. ಖಾದರ್ ಅವರೊಂದಿಗೆ ಸಮಾಲೋಚಿಸಿ ಈ ಸ್ಥಳವನ್ನು ಅಂತಿಮಗೊಳಿಸಲಾಗಿತ್ತು. ಆ ಸಮಯದಲ್ಲಿ NH-66 ರ ಪಕ್ಕದಲ್ಲಿ ಬೇರೆ ಸರ್ಕಾರಿ ಜಾಗ ಲಭ್ಯವಿರಲಿಲ್ಲ ಎಂದು ಮಾಹಿತಿ ನೀಡಿದರು.&lt;/p&gt;&lt;h2&gt;ಸರ್ವಿಸ್ ರಸ್ತೆ ನಿರ್ಮಾಣವೇಕೆ ಅಗತ್ಯ?&lt;/h2&gt;&lt;p&gt;ರಾಷ್ಟ್ರೀಯ ಹೆದ್ದಾರಿ 66 ರ 12+000 ಕಿ.ಮೀ ನಿಂದ 12+700 ಕಿ.ಮೀ ವರೆಗಿನ 700 ಮೀಟರ್ ವ್ಯಾಪ್ತಿಯಲ್ಲಿ NHAI ಸರ್ವಿಸ್ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಸಿದ್ಧತೆ ನಡೆಸುತ್ತಿದೆ. ಈ ಭಾಗವು ಅಪಘಾತ ವಲಯ ಎಂದು ಗುರುತಿಸಲ್ಪಟ್ಟಿದ್ದು, ಜೀವಹಾನಿ ತಡೆಯುವ ಉದ್ದೇಶದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.&lt;/p&gt;&lt;p&gt;ಸರ್ವಿಸ್ ರಸ್ತೆ ಇಲ್ಲದೆ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದು, ವಿಧಿ ಇಲ್ಲದೆ ಹಲವು ವಾಹನ ಸವಾರರು ಒನ್&zwnj;ವೇ ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿದ್ದಾರೆ. ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;ಇಂದಿರಾ ಕ್ಯಾಂಟೀನ್ ಯೋಜನೆಯ ಹಿನ್ನೆಲೆ:&lt;/h2&gt;&lt;p&gt;ಬಡವರು ಮತ್ತು ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಪೌಷ್ಟಿಕ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು 2017 ರಲ್ಲಿ ರಾಜ್ಯದಲ್ಲಿ ಜಾರಿಗೆ ತರಲಾಯಿತು. 2018 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ವಿಸ್ತರಿಸಲ್ಪಟ್ಟ ಈ ಯೋಜನೆಯಡಿ, ಪ್ರಸ್ತುತ ಜಿಲ್ಲೆಯಾದ್ಯಂತ 13 ಇಂದಿರಾ ಕ್ಯಾಂಟೀನ್&zwnj;ಗಳು ಸಕ್ರಿಯವಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/dakshina-kannada-unopened-kotekar-indira-canteen-faces-demolition-for-nh-66-service-road-gdp/articleshow-umb7h5e"/>
        </item>
        <item>
            <title><![CDATA[ಮಂಗಳೂರು ರೈಲ್ವೆ ಶೀಘ್ರವೇ ಮೈಸೂರು ವಿಭಾಗ:  ಸೆ.11ಕ್ಕೆ DRMಗಳ ಜಂಟಿ ಸಭೆ, ಕುಡ್ಲ ವಲಯದ ರೈಲ್ವೆ ಆಸ್ತಿ ಎಷ್ಟಿದೆ?]]></title>
            <link>https://kannada.asianetnews.com/dakshina-kannada/mangaluru-railway-zone-merges-with-swr-mysuru-division-handover-starts-sept-11-key-details-and-route-map-gdp/articleshow-v7lcb9z</link>
            <guid isPermaLink="true">https://kannada.asianetnews.com/dakshina-kannada/mangaluru-railway-zone-merges-with-swr-mysuru-division-handover-starts-sept-11-key-details-and-route-map-gdp/articleshow-v7lcb9z</guid>
            <pubDate>Thu, 10 Sep 2026 09:32:08 +0530</pubDate>
            <description><![CDATA[ಅಕ್ಟೋಬರ್ 1 ರಿಂದ ಮಂಗಳೂರು ರೈಲ್ವೆ ವಲಯವು ಅಧಿಕೃತವಾಗಿ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಟ್ಟು, ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳಲಿದೆ. ಈ ಆಡಳಿತಾತ್ಮಕ ಬದಲಾವಣೆಯ ಭಾಗವಾಗಿ ಆಸ್ತಿ, ಸಿಬ್ಬಂದಿ ಹಾಗೂ ಕಾರ್ಯಾಚರಣೆಗಳ ಹಸ್ತಾಂತರ ಪ್ರಕ್ರಿಯೆ ಅಂತಿಮಗೊಳ್ಳಲಿದ್ದು, ಉಳ್ಳಾಲ ಮತ್ತು ತೋಕೂರು ಹೊಸ ಗಡಿಗಳಾಗಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24qhnerrvhg4x2t7mkjjwy3,imgname-mangaluru-railway-1789012792788.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ವಲಯವು ಅಕ್ಟೋಬರ್ 1ರಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ. ಈ ಮಹತ್ವದ ಆಡಳಿತಾತ್ಮಕ ಬದಲಾವಣೆಯ ಹಸ್ತಾಂತರ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಉಭಯ ವಿಭಾಗಗಳ ಹಿರಿಯ ಅಧಿಕಾರಿಗಳು ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (DRM) ಶುಕ್ರವಾರ ಅಂದರೆ ಸೆಪ್ಟೆಂಬರ್ 11 ರಂದು ಮಂಗಳೂರಿನಲ್ಲಿ ಜಂಟಿ ಸಭೆ ನಡೆಸಲಿದ್ದಾರೆ.&lt;/p&gt;&lt;p&gt;ಆಗಸ್ಟ್ 21ರಂದು ರೈಲ್ವೆ ಸಚಿವಾಲಯ ಹೊರಡಿಸಿದ ಆದೇಶದಂತೆ, ರೈಲುಗಳ ಸುಗಮ ಕಾರ್ಯಾಚರಣೆ ಹಾಗೂ ಆಡಳಿತಾತ್ಮಕ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಆಸ್ತಿ-ಪಾಸ್ತಿ, ಕಾರ್ಯನಿರ್ವಹಿಸುತ್ತಿರುವ ಸುಮಾರು 2,000 ಸಿಬ್ಬಂದಿಯ ಜವಾಬ್ದಾರಿ ಹಾಗೂ ದೈನಂದಿನ ಕಾರ್ಯಾಚರಣೆಗಳ ಹಸ್ತಾಂತರದ ಕುರಿತು ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು.&lt;/p&gt;&lt;h2&gt;ಗಡಿ ಬದಲಾವಣೆ ಮತ್ತು ವ್ಯಾಪ್ತಿ:&lt;/h2&gt;&lt;p&gt;&lt;strong&gt;ಹೊಸ ಗಡಿ: &lt;/strong&gt;ದಕ್ಷಿಣದ ಕಡೆಗೆ ಪಾಲಕ್ಕಾಡ್ ವಿಭಾಗದ ಗಡಿಯು ಉಳ್ಳಾಲ ನಿಲ್ದಾಣದ ಮೊದಲು ಕೊನೆಗೊಳ್ಳಲಿದ್ದು, ಹಾಲಿ ಪಡೀಲ್&zwnj;ನಲ್ಲಿದ್ದ ಗಡಿಯು ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.&lt;/p&gt;&lt;p&gt;&lt;strong&gt;ಉತ್ತರದ ಗಡಿ: &lt;/strong&gt;ಕೊಂಕಣ ರೈಲ್ವೆ ನಿಗಮಕ್ಕೆ ಸೇರುವ ತೋಕೂರು ನಿಲ್ದಾಣದವರೆಗೆ ನೈಋತ್ಯ ರೈಲ್ವೆಯ ವ್ಯಾಪ್ತಿ ಇರಲಿದೆ.&lt;/p&gt;&lt;p&gt;&lt;strong&gt;ಒಟ್ಟು ಮಾರ್ಗ&lt;/strong&gt;: ಮಂಗಳೂರು ರೈಲ್ವೆ ಪ್ರದೇಶದ ಒಟ್ಟು 39 ಕಿ.ಮೀ. ಪೈಕಿ ಸುಮಾರು 30 ಕಿ.ಮೀ. ಭಾಗವು ಇನ್ಮುಂದೆ ಮೈಸೂರು ವಿಭಾಗದ ಆಡಳಿತಕ್ಕೆ ಒಳಪಡಲಿದೆ.&lt;/p&gt;&lt;h2&gt;ಸಿಬ್ಬಂದಿ ಮತ್ತು ಕಾರ್ಯಾಚರಣೆಯಲ್ಲಿ ಯಥಾಸ್ಥಿತಿ:&lt;/h2&gt;&lt;p&gt;ಹಸ್ತಾಂತರದ ಆರಂಭಿಕ ಹಂತದಲ್ಲಿ ರೈಲು ಸಂಚಾರ ಮತ್ತು ಸಿಬ್ಬಂದಿ ವ್ಯವಸ್ಥೆಯಲ್ಲಿ ಯಾವುದೇ ತಕ್ಷಣದ ದೊಡ್ಡ ಬದಲಾವಣೆಗಳಿರುವುದಿಲ್ಲ. ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ತಕ್ಷಣಕ್ಕೆ ವರ್ಗಾವಣೆ ಅಥವಾ ಸ್ಥಳಾಂತರ ಮಾಡದೆ ಹಾಲಿ ವ್ಯವಸ್ಥೆಯನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ.&lt;/p&gt;&lt;h2&gt;ಮಂಗಳೂರು ವಲಯದ ಪ್ರಮುಖ ರೈಲ್ವೆ ಆಸ್ತಿಗಳು ಹಾಗೂ ಸೌಲಭ್ಯಗಳು:&lt;/h2&gt;&lt;p&gt;&lt;strong&gt;ಮಂಗಳೂರು ಸೆಂಟ್ರಲ್&lt;/strong&gt;: 6 ಪ್ಲಾಟ್&zwnj;ಫಾರ್ಮ್&zwnj;ಗಳು ಹಾಗೂ 1 ಬೇ ಪ್ಲಾಟ್&zwnj;ಫಾರ್ಮ್. 3 ಪಿಟ್&zwnj;ಲೈನ್&zwnj;ಗಳು (24 ಕೋಚ್&zwnj;ಗಳ ಸಾಮರ್ಥ್ಯ, ಹೈ-ಪ್ರೆಶರ್ ಜೆಟ್ ಸೌಲಭ್ಯ) ಮತ್ತು 1 ಸಿಕ್&zwnj;ಲೈನ್. ಪಾಲಕ್ಕಾಡ್ ವಿಭಾಗದ ಪ್ರಮುಖ ಕೋಚಿಂಗ್ ಡಿಪೋ ಹೊಂದಿದ್ದು, 17 ಜೋಡಿ ರೈಲುಗಳ (450 ಕೋಚ್&zwnj;ಗಳು) ಪ್ರಾಥಮಿಕ ನಿರ್ವಹಣೆ ಇಲ್ಲೇ ನಡೆಯುತ್ತದೆ. ದಿನಕ್ಕೆ ಸರಾಸರಿ 30 ರೈಲುಗಳ ಸಂಚಾರ ಹಾಗೂ 63 ಹಾಸಿಗೆಗಳುಳ್ಳ (ಮಹಿಳಾ ಸಿಬ್ಬಂದಿಗೆ 4) ರನ್ನಿಂಗ್ ರೂಂ ಸೌಲಭ್ಯ ಇದೆ.&lt;/p&gt;&lt;p&gt;&lt;strong&gt;ಮಂಗಳೂರು ಜಂಕ್ಷನ್: &lt;/strong&gt;3 ಪ್ಲಾಟ್&zwnj;ಫಾರ್ಮ್ ಹಾಗೂ 7 ರೈಲು ಮಾರ್ಗಗಳು (4 ಪ್ರಯಾಣಿಕ ರೈಲುಗಳಿಗೆ, 2 ಸರಕು ರೈಲುಗಳಿಗೆ, 1 ಸಿಕ್&zwnj;ಲೈನ್&zwnj;ಗೆ). ಪ್ರಮುಖ ವ್ಯಾಗನ್ ತಪಾಸಣಾ ಡಿಪೋ ಮತ್ತು ಡೀಸೆಲ್ ಲೋಕೋಮೋಟಿವ್ ಇಂಧನ ಪೂರೈಕೆ ಕೇಂದ್ರ. ಪ್ರತಿದಿನ 70 ನಿಲುಗಡೆ ರೈಲುಗಳು ಹಾಗೂ 10 ಆರಂಭಿಕ/ಅಂತಿಮ ರೈಲುಗಳ ನಿರ್ವಹಣೆ. ಕಾರ್ಯಾಚರಣೆ ಸಿಬ್ಬಂದಿಗೆ 64 ಹಾಸಿಗೆಗಳ ರನ್ನಿಂಗ್ ರೂಂ ಸೌಲಭ್ಯ ಇದೆ.&lt;/p&gt;&lt;h2&gt;ಕಾಸರಗೋಡು ಪ್ರಯಾಣಿಕರ ಬೇಡಿಕೆ:&lt;/h2&gt;&lt;p&gt;ಈ ಆಡಳಿತಾತ್ಮಕ ಗಡಿ ಬದಲಾವಣೆಯಿಂದ ಪಾಲಕ್ಕಾಡ್ ವಿಭಾಗದ ಆದಾಯ ಮತ್ತು ಕಾರ್ಯಾಚರಣೆ ಸಾಮರ್ಥ್ಯಕ್ಕೆ ಧಕ್ಕೆಯಾಗಲಿದೆ ಎಂದು ಸ್ಥಳೀಯ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಮಂಜೇಶ್ವರ ಹಾಗೂ ಕುಂಬ್ಳ ರೈಲು ನಿಲ್ದಾಣಗಳು ದಕ್ಷಿಣ ರೈಲ್ವೆಯ ಕೊನೆಯ ನಿಲ್ದಾಣಗಳಾಗುವುದರಿಂದ, ಅಲ್ಲಿ ಸೂಕ್ತ ಕೋಚಿಂಗ್ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಕಾಸರಗೋಡಿನ ರೈಲು ಬಳಕೆದಾರರ ವೇದಿಕೆಗಳು ಒತ್ತಾಯಿಸಿವೆ. ಒಟ್ಟಿನಲ್ಲಿ ಮಂಗಳೂರು ವಿಭಾಗವು ಮೈಸೂರು ಡಿವಿಜನ್ ಸೇರುವುದು ಪಕ್ಕಾ ಆಗಿದ್ದು, ದಾಖಲೆಗಳ ಹಸ್ತಾಂತರ ನಡೆಯಲಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/mangaluru-railway-zone-merges-with-swr-mysuru-division-handover-starts-sept-11-key-details-and-route-map-gdp/articleshow-v7lcb9z"/>
        </item>
    </channel>
</rss>
