<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 02 Apr 2026 15:10:34 +0530</lastBuildDate>
        <atom:link href="https://kannada.asianetnews.com/rss/dakshina-kannada" rel="self" type="application/rss+xml"/>
        <item>
            <title><![CDATA[ಪದ್ಮಶ್ರೀ ಹರೇಕಳ ಹಾಜಬ್ಬ ಸೇರಿ ಮೂರು ಕ್ಷೇತ್ರದ, ಮೂವರು ದಿಗ್ಗಜರಿಗೆ  ಮಂಗಳೂರು ವಿವಿ ಗೌರವ ಡಾಕ್ಟರೇಟ್]]></title>
            <link>https://kannada.asianetnews.com/education/padma-shri-harekala-hajabba-among-3-to-receive-honorary-doctorate-from-mangalore-university-gdp/articleshow-1xmzhaf</link>
            <guid isPermaLink="true">https://kannada.asianetnews.com/education/padma-shri-harekala-hajabba-among-3-to-receive-honorary-doctorate-from-mangalore-university-gdp/articleshow-1xmzhaf</guid>
            <pubDate>Fri, 27 Mar 2026 14:01:45 +0530</pubDate>
            <description><![CDATA[&lt;p&gt;ಮಂಗಳೂರು ವಿಶ್ವವಿದ್ಯಾಲಯವು ತನ್ನ 44ನೇ ಘಟಿಕೋತ್ಸವದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ಶಿಕ್ಷಣ ಸೇವೆಗಾಗಿ ಪದ್ಮಶ್ರೀ ಹರೇಕಳ ಹಾಜಬ್ಬ, ಯಕ್ಷಗಾನ ಕ್ಷೇತ್ರಕ್ಕೆ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಮತ್ತು ದೈವ ನರ್ತನ ,ಶಿಕ್ಷಣಕ್ಕಾಗಿ ಡಾ. ರವೀಶ್ ಪಡುಮಲೆ ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧಕರನ್ನು ಗೌರವಿಸುವ ಮೂಲಕ ವಿವಿಯು ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಮಹತ್ವವನ್ನು ಎತ್ತಿ ಹಿಡಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmq6krh7889qz9hh4nz99fpp,imgname-mangalore-university-honorary-doctorate-1774600184359.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಮಂಗಳೂರು ವಿಶ್ವವಿದ್ಯಾಲಯವು ತನ್ನ 44ನೇ ಘಟಿಕೋತ್ಸವದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಮೂವರು ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುವುದಾಗಿ ಘೋಷಿಸಿದೆ. ಈ ಗೌರವಕ್ಕೆ ಅಕ್ಷರಸಂತ ಹರೇಕಳ ಹಾಜಬ್ಬ ಸೇರಿದಂತೆ ಯಕ್ಷಗಾನ ಕ್ಷೇತ್ರದ ದಿಗ್ಗಜ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಮತ್ತು ದೈವ ನರ್ತಕ ಡಾ. ರವೀಶ್ ಪಡುಮಲೆ ಆಯ್ಕೆಯಾಗಿದ್ದಾರೆ.&lt;/p&gt;&lt;p&gt;ಈ ಕುರಿತು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧಿಕೃತ ಪ್ರಕಟಣೆ ನೀಡಿದ್ದು, ನಾಳೆ ನಡೆಯಲಿರುವ 44ನೇ ಘಟಿಕೋತ್ಸವ ಸಮಾರಂಭದಲ್ಲಿ ಈ ಗೌರವ ಡಾಕ್ಟರೇಟ್&zwnj;ಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಹರೇಕಳ ಹಾಜಬ್ಬ &ndash; ಶಿಕ್ಷಣ ಸೇವೆಗೆ ಗೌರವ&lt;/h2&gt;&lt;p&gt;ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಈ ಗೌರವ ಡಾಕ್ಟರೇಟ್ ಲಭಿಸಿದೆ. ಕಿತ್ತಳೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹಾಜಬ್ಬ, ತಮ್ಮ ಗ್ರಾಮವಾದ ಮಂಗಳೂರಿನ ಹರೇಕಳ-ನ್ಯೂಪಡ್ಡು ಪ್ರದೇಶದಲ್ಲಿ ಶಾಲೆ ನಿರ್ಮಿಸಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣದ ದಾರಿ ತೆರೆದವರು.&lt;/p&gt;&lt;p&gt;ಅವರ ಈ ಅಪೂರ್ವ ಸಾಧನೆಗೆ ಮಾನ್ಯತೆ ನೀಡಿ ಭಾರತ ಸರ್ಕಾರವು 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ ಮಂಗಳೂರು ವಿಶ್ವವಿದ್ಯಾಲಯವೂ ಅವರ ಸೇವೆಯನ್ನು ಕೊಂಡಾಡಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸುತ್ತಿದೆ.&lt;/p&gt;&lt;h2&gt;ಯಕ್ಷಗಾನ ದಿಗ್ಗಜ ಸೂರಿಕುಮೇರು ಗೋವಿಂದ ಭಟ್&zwnj;ಗೆ ಮರಣೋತ್ತರ ಗೌರವ&lt;/h2&gt;&lt;p&gt;ಇತ್ತೀಚೆಗೆ ನಿಧನರಾದ ಯಕ್ಷಗಾನ ಕ್ಷೇತ್ರದ ಮೇರು ಸಾಧಕ ಸೂರಿಕುಮೇರು ಗೋವಿಂದ ಭಟ್ (1938&ndash;2026) ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ತೆಂಕುತಿಟ್ಟು ಯಕ್ಷಗಾನ ಶೈಲಿಯಲ್ಲಿ ಅಪಾರ ಸಾಧನೆ ಮಾಡಿದ ಅವರು ಸುಮಾರು ಏಳು ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿದ್ದರು.&lt;/p&gt;&lt;p&gt;ಧರ್ಮಸ್ಥಳ ಮೇಳದಲ್ಲಿ ಐವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಗೋವಿಂದ ಭಟ್ ಅವರು ರಕ್ತಬೀಜ, ಕೌರವ ಮತ್ತು ಭೀಷ್ಮ ಪಾತ್ರಗಳ ಮೂಲಕ ಖ್ಯಾತಿ ಗಳಿಸಿದ್ದರು. ಇವರಿಗೆ 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿದ್ದವು.&lt;/p&gt;&lt;h2&gt;ದೈವ ನರ್ತಕ ಡಾ. ರವೀಶ್ ಪಡುಮಲೆಗೂ ಗೌರವ&lt;/h2&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೈವ ನರ್ತಕ ಡಾ. ರವೀಶ್ ಪಡುಮಲೆ ಅವರಿಗೆ ಕೂಡ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಅವರು ಕೇವಲ ದೈವ ನರ್ತಕರಾಗಿಯೇ ಅಲ್ಲದೆ ಚಿಂತಕರು, ವಾಗ್ಮಿಗಳು ಹಾಗೂ ಶಿಕ್ಷಣ ತಜ್ಞರಾಗಿಯೂ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ಉಜಿರೆಯ ಎಸ್&zwnj;ಡಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.&lt;/p&gt;&lt;p&gt;ಮಂಗಳೂರು ವಿಶ್ವವಿದ್ಯಾಲಯವು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಈ ಮೂವರು ಸಾಧಕರನ್ನು ಗೌರವಿಸುವ ಮೂಲಕ ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಮಹತ್ವವನ್ನು ಮತ್ತೆ ಒತ್ತಿ ಹೇಳಿದೆ. ಈ ಗೌರವವು ಸಾಧಕರಿಗೆ ಮಾತ್ರವಲ್ಲದೆ, ಸಮಾಜಕ್ಕೂ ಪ್ರೇರಣೆಯಾಗಲಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/education/padma-shri-harekala-hajabba-among-3-to-receive-honorary-doctorate-from-mangalore-university-gdp/articleshow-1xmzhaf"/>
        </item>
        <item>
            <title><![CDATA[ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ, ತಪ್ಪೊಪ್ಪಿಕೊಂಡ ಮೊಹಮ್ಮದ್ ಶಾರೀಕ್‌, ಏ.10ಕ್ಕೆ ಶಿಕ್ಷೆ ಪ್ರಕಟ, ಏನಿದು ಪ್ರಕರಣ?]]></title>
            <link>https://kannada.asianetnews.com/state/mangaluru-mangaluru-cooker-blast-main-accused-mohammed-shariq-pleads-guilty-rav/articleshow-3gqeag7</link>
            <guid isPermaLink="true">https://kannada.asianetnews.com/state/mangaluru-mangaluru-cooker-blast-main-accused-mohammed-shariq-pleads-guilty-rav/articleshow-3gqeag7</guid>
            <pubDate>Sun, 29 Mar 2026 13:49:44 +0530</pubDate>
            <description><![CDATA[&lt;p&gt;ಮಂಗಳೂರು ಕುಕ್ಕರ್&zwnj; ಬಾಂಬ್&zwnj; ಸ್ಫೋಟದ ಪ್ರಮುಖ ಆರೋಪಿ ಮೊಹಮ್ಮದ್&zwnj; ಶಾರೀಕ್&zwnj;, ತಾನು ಕೃತ್ಯ ಎಸಗಿದ್ದಾಗಿ ಎನ್&zwnj;ಐಎ ವಿಶೇಷ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ನ್ಯಾಯಾಲಯವು ಆತನ ಅರ್ಜಿಯನ್ನು ಮಾನ್ಯ ಮಾಡಿದ್ದು, ಏಪ್ರಿಲ್ 10 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmwamw5pcye3t8mxefd5za7p,imgname----------------------2--1774772187318.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮಾ.29): &lt;/strong&gt;ಮಂಗಳೂರು ಕುಕ್ಕರ್&zwnj; ಬಾಂಬ್&zwnj; ಸ್ಫೋಟದ(ಐಇಡಿ) ಪ್ರಮುಖ ಆರೋಪಿ ಮೊಹಮ್ಮದ್&zwnj; ಶಾರೀಕ್&zwnj;ನ ತಪ್ಪೊಪ್ಪಿಗೆ ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್&zwnj;ಐಎ) ವಿಶೇಷ ನ್ಯಾಯಾಲಯ ಮಾನ್ಯ ಮಾಡಿದ್ದು, ಬರುವ ಏ.10ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.&lt;/p&gt;&lt;p&gt;ಮೂರು ತಿಂಗಳ ಹಿಂದೆಯೇ ಆರೋಪಿ ಶಾರೀಕ್&zwnj; ತಾನು ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡು ಎನ್&zwnj;ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಇದೀಗ ನ್ಯಾಯಾಲಯ ಪುರಸ್ಕರಿಸಿದೆ. ಈ ಕುಕ್ಕರ್&zwnj; ಬಾಂಬ್&zwnj; ಸ್ಫೋಟ ಪ್ರಕರಣ ಸಂಬಂಧ ಎನ್&zwnj;ಐಎ ಅಧಿಕಾರಿಗಳು ತನಿಖೆ ನಡೆಸಿ 2024ರಲ್ಲಿ ಆರೋಪಿಗಳಾದ ಶಾರೀಕ್&zwnj; ಮತ್ತು ಸೈಯದ್&zwnj; ಯಾಸೀನ್&zwnj; ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು.&lt;/p&gt;&lt;p&gt;ವಿಚಾರಣೆ ವೇಳೆ ಆರೋಪಿ ಶಾರೀಕ್&zwnj; ತಾನು ನಿರಾಪರಾಧಿ. ಯಾವುದೇ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ವಾದಿಸಿದ್ದ. ಆದರೆ, ಕಳೆದ ಡಿಸೆಂಬರ್&zwnj;ನಲ್ಲಿ ತನ್ನ ವಕೀಲರ ಮುಖಾಂತರ ಎನ್&zwnj;ಐಎ ವಿಶೇಷ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ಬಳಿಕ ನ್ಯಾಯಾಲಯ ಮೂರು ತಿಂಗಳ ಕಾಲ ವಿಚಾರಣೆ ನಡೆಸಿದ್ದು, ನ್ಯಾಯಾಲಯದಲ್ಲಿಯೂ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ತಪ್ಪೊಪ್ಪಿಗೆ ಅರ್ಜಿಯನ್ನು ಮಾನ್ಯ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಮಂಗಳೂರಿನ ಕಂಕನಾಡಿ ಪೊಲೀಸ್&zwnj; ಠಾಣೆ ವ್ಯಾಪ್ತಿಯಲ್ಲಿ 2022ರ ನ.19ರಂದು ಸಂಜೆ 4.40 ಸುಮಾರಿಗೆ ಶಾರೀಕ್&zwnj; ಆಟೋದಲ್ಲಿ ತೆರಳುವಾಗ ಕುಕ್ಕರ್ ಸ್ಫೋಟಗೊಂಡಿತ್ತು.&lt;/p&gt;&lt;h3&gt;ಪ್ರಕರಣದ ಹಿನ್ನೆಲೆ:&lt;/h3&gt;&lt;p&gt;ಸ್ಫೋಟದ ರಭಸಕ್ಕೆ ಶಾರೀಕ್&zwnj; ಹಾಗೂ ಆಟೋ ಚಾಲಕ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಪೊಲೀಸರು, ಶಾರೀಕ್&zwnj;ನನ್ನು ಬಂಧಿಸಿದ್ದರು.&lt;/p&gt;&lt;p&gt;ಈ ಕೃತ್ಯದ ಹಿಂದೆ ಐಸಿಸ್ ಉಗ್ರ ಸಂಘಟನೆ ನಂಟು ಕಂಡು ಬಂದ ಹಿನ್ನೆಲೆಯಲ್ಲಿ ಎನ್&zwnj;ಐಎ ತನಿಖಾ ಅಖಾಡಕ್ಕೆ ಇಳಿದಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿತ್ತು.&lt;/p&gt;&lt;h2&gt;90ರ ಬದಲು 9 ನಿಮಿಷಕ್ಕೆ ಟೈಮ್&zwnj; ಫಿಕ್ಸ್&zwnj;!:&lt;/h2&gt;&lt;p&gt;ಆರೋಪಿ ಮೊಹಮ್ಮದ್&zwnj; ಶಾರೀಕ್&zwnj; ರಾಜ್ಯದ ಧರ್ಮಸ್ಥಳ, ಕದ್ರಿ ಮಂಜುನಾಥ ದೇವಾಲಯ, ತಮಿಳುನಾಡಿನ ವೇಲೂರಿನ ದೇವಾಲಯ, ಕನ್ಯಾಕುಮಾರಿ ಸೇರಿ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ. ಕದ್ರಿ ಮಂಜುನಾಥಸ್ವಾಮಿ ದೇವಾಲಯದ ಬಳಿ ಕುಕ್ಕರ್ ಬಾಂಬ್&zwnj; ಸ್ಫೋಟಿಸಲು ಆಟೋದಲ್ಲಿ ಹೊರಟಿದ್ದ. ಈ ಕುಕ್ಕರ್&zwnj; ಬಾಂಬ್&zwnj;ಗೆ 90 ನಿಮಿಷ ಟೈಮ್&zwnj; ಫಿಕ್ಸ್ ಮಾಡುವ ಬದಲು 9 ನಿಮಿಷಕ್ಕೆ ತಪ್ಪಾಗಿ ಟೈಮ್&zwnj; ಫಿಕ್ಸ್&zwnj; ಮಾಡಿದ್ದ. ಹೀಗಾಗಿ ಆ ಕುಕ್ಕರ್&zwnj; ಬಾಂಬ್&zwnj; ಮಾರ್ಗ ಮಧ್ಯೆಯೇ ಆಟೋದಲ್ಲಿ ಸ್ಫೋಟಗೊಂಡಿತ್ತು ಎಂಬ ಅಂಶವನ್ನು ಎನ್&zwnj;ಐಎ ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು.&lt;/p&gt;&lt;p&gt;ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಶಾರೀಕ್, ಐಸಿಎಸ್ ಹಾಗೂ ಸಿಮಿ ಉಗ್ರ ಸಂಘಟನೆಗಳಿಂದ ಪ್ರೇರಿತನಾಗಿದ್ದ. ಶಿವಮೊಗ್ಗ ಐಸಿಸ್ ಮಾಡ್ಯುಲ್ ಸದಸ್ಯನಾಗಿದ್ದ. ಈತ 2020ರಲ್ಲಿ ಮಂಗಳೂರಿನ ಗೋಡೆ ಬರಹ ಹಾಗೂ ಶಿವಮೊಗ್ಗ ತುಂಗಾ ನದಿ ತೀರದಲ್ಲಿ ನಡೆಸಿದ್ದ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯಾಗಿದ್ದಾನೆ. ಇದೀಗ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾತ್ರ ತಪ್ಪೊಪ್ಪಿಕೊಂಡಿದ್ದಾನೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/mangaluru-mangaluru-cooker-blast-main-accused-mohammed-shariq-pleads-guilty-rav/articleshow-3gqeag7"/>
        </item>
        <item>
            <title><![CDATA[ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಮತ್ತೊಂದು ಕಾಮಕಾಂಡ,  ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ ಕೇಸ್ ಬೆಳಕಿಗೆ]]></title>
            <link>https://kannada.asianetnews.com/dakshina-kannada/new-controversy-hits-moodabidri-inspector-fir-registered-after-teacher-files-complaint/articleshow-4c5fbkx</link>
            <guid isPermaLink="true">https://kannada.asianetnews.com/dakshina-kannada/new-controversy-hits-moodabidri-inspector-fir-registered-after-teacher-files-complaint/articleshow-4c5fbkx</guid>
            <pubDate>Sun, 22 Mar 2026 09:19:06 +0530</pubDate>
            <description><![CDATA[&lt;p&gt;ಮೂಡಬಿದ್ರೆ ಇನ್ಸ್&zwnj;ಪೆಕ್ಟರ್ ಸಂದೇಶ್ ಮತ್ತೊಂದು ಕಾಮಕಾಂಡ, ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ ಕೇಸ್ ಬೆಳಕಿಗೆ ಬಂದಿದೆ. 2018 ರಿಂದ 2023ರ ವರೆಗೆ ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ ಎಸಗಿದ್ದಾರೆ ಎಂದು ಸ್ವತಃ ಶಿಕ್ಷಕಿ ದೂರು ದಾಖಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km9tg579xqg64daacy03bpxt,imgname-moodabidri-inspector-sandesh-fir-1774151275752.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವೇಣೂರು (ಮಾ.22)&lt;/strong&gt; ಮೂಡುಬಿದಿರೆ ಇನ್ಸ್&zwnj;ಪೆಕ್ಟರ್ ಸಂದೇಶ್ ಕಾಮಕಾಂಡ ಪ್ರಕರಣ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ತನ್ನ ವ್ಯಾಪ್ತಿಯಲ್ಲಿ ಹಲವು ಕುಟಂಬಗಳ ಗಂಡನ ಮೇಲೆ ಕೇಸ್ ಹಾಕಿ ಅವರ ಹೆಂಡತಿಯರನ್ನು ಮಂಚಕ್ಕೆ ಕರೆಯುವ ಗಂಭೀರ ಆರೋಪ ಇನ್ಸ್&zwnj;ಪೆಕ್ಟರ್ ಸಂದೇಶ್ ಮೇಲೆ ಕೇಳಿಬಂದಿತ್ತು. ಈ ಕುರಿತು ಕೆಲ ಆಡಿಯೋಗಳು, ವಿಡಿಯೋಗಳು ಭಾರಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಸಂದೇಶ್ ಅಮಾನತುಗೊಂಡಿದ್ದರು. ಇದೀಗ ಸಂದೇಶ್ ಮತ್ತೊಂದು ಕಾಮಕಾಂಡ ಬೆಳಕಿಗೆ ಬಂದಿದೆ. ಈ ಬಾರಿ ಶಿಕ್ಷಕಿಯೊಬ್ಬರು ಇನ್ಸ್&zwnj;ಪೆಕ್ಟರ್ ಸಂದೇಶ್ ವಿರುದ್ಧ ದೂರು ನೀಡಿದ್ದಾರೆ. ಶಿಕ್ಷಕಿ ಮೇಲೆ ನಿರಂತರ ಅತ್ಯಾ*ರ ಎಸಗಿದ ಆರೋಪ ಕೇಳಿಬಂದಿದೆ. ಇದೀಗ ಸಂದೇಶ್ ವಿರುದ್ದ ಹೊಸ ಎಫ್ಐಆರ್ ದಾಖಲಾಗಿದೆ.&lt;/p&gt;&lt;h2&gt;2018 ರಿಂದ 2023 ರವರೆಗೆ ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ&lt;/h2&gt;&lt;p&gt;ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಅತ್ಯಾ*ರ ದೂರು ದಾಖಲಾಗಿದೆ. ಇನ್ಸ್&zwnj;ಪೆಕ್ಟರ್ ಸಂದೇಶ್ ವಿರುದ್ಧ ಸಂತ್ರಸ್ತೆ ಶಿಕ್ಷಕಿ ದೂರು ನೀಡಿದ್ದಾರೆ. ಸದ್ಯ ಮೂಡುಬಿದಿರೆ ಇನ್ಸ್&zwnj;ಪೆಕ್ಟರ್ ಸಂದೇಶ್ ಇದಕ್ಕೂ ಮೊದಲು ಬೆಳ್ತಂಗಡಿ ತಾಲೂಕಿನಲ್ಲಿ ಸರ್ಕಲ್ ಇನ್ಸ್&zwnj;ಪೆಕ್ಟರ್ ಆಗಿದ್ದರು. ಈ ವೇಳೆ 2018 ರಿಂದ 2023ರ ವರೆಗೆ ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ ಮಾಡಿರುವುದಾಗಿ ಸ್ವತಃ ಶಿಕ್ಷಕಿ ದೂರು ನೀಡಿದ್ದಾರೆ. ಬೆಳ್ತಗಂಡಿ ಸರ್ಕಲ್ ವ್ಯಾಪ್ತಿಯಲ್ಲಿ ಬರುವ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;&lt;p&gt;ಹಲವು ಕಾರಣಗಳನ್ನು ಹಿಡಿದು, ಕೆಲ ಪ್ರಕರಣಗಳ ಕುರಿತು ಬೆದರಿಸಿ ನಿರಂತರವಾಗಿ ಅತ್ಯಾ*ರ ಮಾಡಿದ್ದಾರೆ. 2018 ರಿಂದ 2023ರವರೆಗೆ ಸತತ 5 ವರ್ಷಗಳ ಕಾಲ ಅತ್ಯಾ*ರ ಎಸಗಿದ್ದಾರೆ. ಜೀವ ಭಯ, ಮಾನ, ಕುಟುಂಬಸ್ಥರ ವಿರುದ್ಧವೂ ಬೆದರಿಕೆ ಹಾಕಿದ್ದ ಕಾರಣ ಮೌನವಾಗಿದ್ದೆ ಎಂದು ಶಿಕ್ಷಕಿ ದೂರಿನಲ್ಲಿ ಹೇಳಿದ್ದಾರೆ. 5 ವರ್ಷ ಬೆದರಿಸಿ ಬಲವಂತವಾಗಿ ನಿರಂತರ ಅತ್ಯಾ*ರ ಮಾಡಿದ್ದಾರೆ ಎಂದು ಶಿಕ್ಷಕಿ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಸಂದೇಶ್ ವಿರದ್ದ ಎಫ್ಐಆರ್ ದಾಖಲು&lt;/h2&gt;&lt;p&gt;ಮೂಡಿಬಿದಿರೆ ಇನ್ಸ್&zwnj;ಪೆಕ್ಟರ್ ವಿರುದ್ದ ಇದೀಗ ಬಿಎನ್ ಎಸ್ 376(2)(A)(1), 376(2)(n), 384, 506 ಅಡಿ ಎಫ್ಐಆರ್ ದಾಖಲಾಗಿದೆ. ಈಗಾಗಲೇ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪ ಸಂದೇಶ್ ಮೇಲಿದೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಮಾಡಿದ್ದ ಆರೋಪ ಬಾರಿ ಚರ್ಚೆಯಾಗಿತ್ತು. ಆದರೆ ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಇದು ಪ್ರಚೋದಿತ ಹಾಗೂ ಸುಳ್ಳು ಆರೋಪ ಎಂದು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಶಿಕ್ಷಕಿಯೊಬ್ಬರು ದೂರು ನೀಡಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.&lt;/p&gt;&lt;p&gt;ಇಬ್ಬರು ಮಹಿಳೆಯರ ಇನ್ಸ್&zwnj;ಪೆಕ್ಟರ್ ಸಂದೇಶ್ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪೂರಕವಾಗಿ ಆಡಿಯೋ ಹಾಗೂ ವಿಡಿಯೋ ವೈರಲ್ ಆಗಿತ್ತು. ಆಡಿಯೋದಲ್ಲಿ ಅರೆಸ್ಟ್ ಆಗಿರುವ ಗಂಡನ ಬಿಡುಗಡೆ ಮಾಡಲು 25 ಲಕ್ಷ ರೂಪಾಯಿ ನೀಡುವಂತೆ ಬೆದರಿಸಿದ್ದಾರೆ. ಇಲ್ಲದಿದ್ದರೆ ತನ್ನ ಜೊತೆ ಮಲಗುವಂತೆ ಬೆದರಿಸಿದ ಆಡಿಯೋ ಭಾರಿ ಕೋಲಾಹಲ ಸೃಷ್ಟಿಸಿತ್ತು. ಆದರೆ ಈ ಪ್ರಕರಣ ಸಂಬಂಧ ಪೊಲೀಸ್ ಪ್ರಾಥಮಿಕ ತನಿಖೆಗಳು ಹೊಸ ವರದಿ ನೀಡಿತ್ತು. ಮಹಿಳೆಯ ಆರೋಪದಲ್ಲಿ ಹುರುಳಿಲ್ಲ ಎಂದಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dakshina-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/dakshina-kannada/new-controversy-hits-moodabidri-inspector-fir-registered-after-teacher-files-complaint/articleshow-4c5fbkx"/>
        </item>
        <item>
            <title><![CDATA[ಟೀಚಿಂಗ್ ಬಿಟ್ಟು ಮೀನು ಮಾರಾಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್, ದುಪ್ಪಟ್ಟು ಆದಾಯ]]></title>
            <link>https://kannada.asianetnews.com/dakshina-kannada/teaching-to-trading-economics-lecturer-turns-successful-fish-seller-in-puttur-karnataka/articleshow-6wes9by</link>
            <guid isPermaLink="true">https://kannada.asianetnews.com/dakshina-kannada/teaching-to-trading-economics-lecturer-turns-successful-fish-seller-in-puttur-karnataka/articleshow-6wes9by</guid>
            <pubDate>Wed, 25 Mar 2026 12:17:13 +0530</pubDate>
            <description><![CDATA[&lt;p&gt;ಟೀಚಿಂಗ್ ಬಿಟ್ಟು ಮೀನು ಮಾರಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್, ದುಪ್ಪಟ್ಟು ಆದಾಯ, ಟೀಚಿಂಗ್ ಪರೀಕ್ಷೆಗಳಲ್ಲಿ ಪಾಸ್ ಆಗಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ ಪ್ರೇಮಾ ಇದೀಗ ಯಶಸ್ವಿ ಮೀನು ಉದ್ಯಮಿಯಾಗಿ ಬೆಳೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmhvxjf4661vwcdh9ge7e5g6,imgname-lecture-turns-to-fish-seller-1774421199324.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುತ್ತೂರು (ಮಾ.25) &lt;/strong&gt;ಸಿಇಟಿ, ಟಿಇಟಿ ಸೇರಿ ಉಪನ್ಯಾಸ ಮಾಡಲು ಇರಬೇಕಾದ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಪಾಸ್ ಆದ ದಕ್ಷಿಣ ಕನ್ನಡದ ಪುತ್ತೂರಿನ ಪ್ರೇಮಾ ಕುಂದರ್ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ್ದರು. ವಿದ್ಯಾರ್ಥಿಗಳಿಗೆ ಪಾಠ ಮಾಡಿ ಬದುಕು ಕಟ್ಟಿಕೊಳ್ಳುವ ಮಹತ್ತರ ಕನಸಿನೊಂದಿಗೆ ಹೆಜ್ಜೆ ಇಟ್ಟಿದ್ದರು. ಆದರೆ ತನ್ನ ವೃತ್ತಿ ತೃಪ್ತಿ ನೀಡಿದ್ದರೂ ಆದಾಯ ತೃಪ್ತಿಯಾಗರಿಲ್ಲ. ಅವಶ್ಯಕತೆ, ಜವಾಬ್ದಾರಿಗಳ ನಿರ್ವಹಣೆಗೆ ಸ್ಯಾಲರಿ ಸಾಲದಾಯಿತು. ಹೀಗಾಗಿ ಅನಿವಾರ್ಯವಾಗಿ ಉಪನ್ಯಾಸಕ ವೃತ್ತಿಯಿಂದ ಹೊರಬಂದ ಪ್ರೇಮಾ ಕುಂದರ್, ಆಯ್ಕೆ ಮಾಡಿಕೊಂಡಿದ್ದು ಮೀನು ಮಾರಾಟ ಬ್ಯೂಸಿನೆಸ್. ಶಿಸ್ತು, ಶ್ರದ್ಧೆ,ಸತತ ಪ್ರಯತ್ನಗಳ ಮೂಲಕ ಇದೀಗ ಪ್ರೇಮಾ ಕುಂದರ್ ಉದ್ಯಮಿಯಾಗಿ ಬೆಳೆದಿದ್ದಾರೆ. ಉಪನ್ಯಾಸಕ ವೃತ್ತಿಯಲ್ಲಿ ಪಡೆಯುತ್ತಿದ್ದ ಸ್ಯಾಲರಿಗಿಂತ ದುಪ್ಪಟ್ಟು ಆದಾಯವನ್ನು ಪ್ರೇಮಾ ಕುಂದರ್ ಪಡೆಯುತ್ತಿದ್ದಾರೆ. ಪ್ರೇಮಾ ಕುಂದರ್ ಬದುಕಿನ ಪಣಯ ಹಲವರಿಗೆ ಸ್ಪೂರ್ತಿಯಾಗಿದೆ.&lt;/p&gt;&lt;h2&gt;ಗಟ್ಟಿ ನಿರ್ಧರ ಮಾಡಿದ್ದ ಪ್ರೇಮಾ ಕುಂದರ್&lt;/h2&gt;&lt;p&gt;ಮಾಸ್ಟರ್ ಡಿಗ್ರಿ ಬಳಿ ಉಪನ್ಯಾಸ ವೃತ್ತಿಗೆ ಬೇಕಾದ ಪರೀಕ್ಷೆ ಪಾಸ್ ಮಾಡಿದ ಪ್ರೇಮಾ ಕುಂದರ್ ಕೆಲವೇ ಕೆಲವು ಅಂಕದಲ್ಲಿ ಸರ್ಕಾರಿ ಉಪನ್ಯಾಸಕ ಉದ್ಯೋಗ ಕೈಗೆಟುಕದಾಯಿತು. ಹೀಗಾಗಿ ಅತಿಥಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ್ದರು. ಒಂದೆಡೆ ಸರ್ಕಾರಿ ಉದ್ಯೋಗ ಸಿಗಲಿಲ್ಲ ಅನ್ನೋ ಕೊರಗಾದರೆ, ಮತ್ತೊಂದೆಡೆ ಸಿಗುವ ಸಂಬಳ ಯಾವುದಕ್ಕೂ ಸಾಲುತ್ತಿಲ್ಲ ಅನ್ನೋ ಚಿಂತೆ.ಕೊನೆಗೆ ಗಟ್ಟಿ ನಿರ್ಧಾರ ಮಾಡಿ ಉಪನ್ಯಾಸ ವೃತ್ತಿಯನ್ನು ತೊರೆಯಲು ನಿರ್ಧರಿಸಿದ್ದಾರೆ.&lt;/p&gt;&lt;h2&gt;ಪತಿಯ ಬೆಂಬಲ&lt;/h2&gt;&lt;p&gt;ಉಪನ್ಯಾಸಕ ವೃತ್ತಿ ತೊರೆದ ಪ್ರೇಮಾ ಕುಂದರ್ ಫಿಶ್ ಸ್ಟಾಲ್ ತೆರೆಯಲು ಯೋಜನೆ ರೂಪಿಸಿದ್ದಾಳೆ. ಇದಕ್ಕಾಗಿ ಪತಿಯ ಬಳಿ ಸಹಾಯ ಕೇಳಿದ್ದಾಳೆ. ಪತಿ ಕೂಡ ಪ್ರೇಮಾ ಕುಂದರ್&zwnj;ಗೆ ನೆರವು ನೀಡಿದ್ದಾನೆ. ಹೀಗೆ ಸಣ್ಣದಾಗಿ ಮೀನು ಮಾರಾಟ ಆರಂಭಿಸಿದ ಪ್ರೇಮಾ ಕುಂದರ್&zwnj;ಗೆ ಮನೆ, ಉದ್ಯಮ ನಿರ್ವಹಣೆ ಭಾರಿ ಸವಾಲಾಗಿ ಪರಿಣಮಿಸಿತ್ತು. ಆದರೆ ಸತತ ಪ್ರಯತ್ನ, ಶಿಸ್ತಿನಿಂದ ಮೀನು ಮಾರಾಟದಲ್ಲಿ ಪ್ರೇಮಾ ಕುಂದರ್ ಯಶಸ್ಸು ಸಾಧಿಸಿದ್ದಾರೆ. ಕರಾವಳಿ ಭಾಗವಾಗಿರುವ ಕಾರಣ ಮೀನು ಲಭ್ಯತೆ ಹಾಗೂ ಬಳಕೆ ಹೆಚ್ಚು. ತಾಜಾ ಮೀನುಗಳನ್ನು ತರಿಸಿ ಮಾರಾಟ ಮಾಡುವ ಮೂಲಕ ಅತೀ ಬೇಗನೆ ಫಿಶ್ ಮಾರಾಟದಲ್ಲಿ ಯಶಸ್ಸು ಸಾಧಿಸಿದ್ದಾರೆ.&lt;/p&gt;&lt;h2&gt;ದುಪ್ಪಟ್ಟ ಆದಾಯ ಎಂದ ಪ್ರೇಮಾ ಕುಂದರ್&lt;/h2&gt;&lt;p&gt;ಅತಿಥಿ ಉಪನ್ಯಾಸಕಿಯಾಗಿ ತಿಂಗಳ ಸಂಬಳಕ್ಕಿಂತ ಇದೀಗ ಉತ್ತಮ ಆದಾಯ ಸಿಗುತ್ತಿದೆ. ಪ್ರತಿ ದಿನ 1,500 ರೂಪಾಯಿಯಿಂದ 2000 ರೂಪಾಯಿ ಸರಾಸರಿ ಆದಾಯ ಸಿಗುತ್ತಿದೆ. ತಿಂಗಳಲ್ಲಿ ಖರ್ಚು ವೆಚ್ಚಗಳು ಕಳೆದರೂ ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dakshina-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/dakshina-kannada/teaching-to-trading-economics-lecturer-turns-successful-fish-seller-in-puttur-karnataka/articleshow-6wes9by"/>
        </item>
        <item>
            <title><![CDATA[ಮಂಗಳೂರಿಂದ IRCTC ವಿಶೇಷ ಟೂರ್ ಪ್ಯಾಕೇಜ್: ದ್ವಾರಕಾ, ಸೋಮನಾಥಕ್ಕೆ ರೈಲು,  ಶಿರಡಿಗೆ ವಿಮಾನ, ಯಾತ್ರೆ, ಟಿಕೆಟ್ ಬುಕಿಂಗ್ ವಿವರ ಇಲ್ಲಿದೆ]]></title>
            <link>https://kannada.asianetnews.com/karnataka-districts/irctc-special-tour-packages-from-mangaluru-train-to-dwarka-somnath-flight-to-shirdi-rav/articleshow-82q56xr</link>
            <guid isPermaLink="true">https://kannada.asianetnews.com/karnataka-districts/irctc-special-tour-packages-from-mangaluru-train-to-dwarka-somnath-flight-to-shirdi-rav/articleshow-82q56xr</guid>
            <pubDate>Sat, 28 Mar 2026 08:00:10 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಮಂಗಳೂರಿನಿಂದ ಎರಡು ವಿಶೇಷ ಯಾತ್ರಾ ಪ್ಯಾಕೇಜ್&zwnj;ಗಳನ್ನು ಘೋಷಿಸಿದೆ. ಮೇ 10 ರಿಂದ 'ದಿವ್ಯ ದ್ವಾರಕಾ ಸೋಮನಾಥ ಯಾತ್ರೆ' ಎಂಬ ವಿಶೇಷ ರೈಲು ಹಾಗೂ ಏಪ್ರಿಲ್ 22 ರಿಂದ ಶಿರಡಿಗೆ ವಿಶೇಷ ವಿಮಾನ ಪ್ಯಾಕೇಜ್ ಲಭ್ಯವಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k49pnrq7gp5wmwdkag7czj96,imgname-4-1756967396071.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಮಾ.28): &lt;/strong&gt;ಭಾರತೀಯ ರೈಲ್ವೇ ಕ್ಯಾಟರಿಂಗ್&zwnj; ಆ್ಯಂಡ್&zwnj; ಟೂರಿಸಂ ಕಾರ್ಪೊರೇಶನ್&zwnj; ಲಿಮಿಟೆಡ್&zwnj; (ಐಆರ್&zwnj;ಸಿಟಿಸಿ) ವತಿಯಿಂದ ದಿವ್ಯ ದ್ವಾರಕಾ ಸೋಮನಾಥ ಯಾತ್ರೆ ಎಂಬ ವಿಶೇಷ ಪ್ರವಾಸಿ ರೈಲು ಯಾತ್ರೆ ಹಾಗೂ ಶಿರಡಿಗೆ ವಿಶೇಷ ವಿಮಾನ ಯಾತ್ರೆಯನ್ನು ಆಯೋಜಿಸಲಾಗಿದೆ.&lt;/p&gt;&lt;p&gt;ನಗರದ ಪ್ರೆಸ್&zwnj;ಕ್ಲಬ್&zwnj;ನಲ್ಲಿ ಶುಕ್ರವಾರ ಐಆರ್&zwnj;ಸಿಟಿಸಿಯ ಜಂಟಿ ಜನರಲ್&zwnj; ಮ್ಯಾನೇಜರ್&zwnj; ಸ್ಯಾಮ್&zwnj; ಜೋಸೆಫ್&zwnj; ಪಿ. ಮಾತನಾಡಿ, ವಿಶೇಷ ರೈಲು ಯಾತ್ರೆಯು ಮೇ 10ರಂದು ಮಂಗಳೂರು ಮೂಲಕ ಹೊರಡಲಿದೆ ಎಂದರು.&lt;/p&gt;&lt;p&gt;10 ದಿನಗಳ ತೀರ್ಥ ಯಾತ್ರೆಯಲ್ಲಿ ಗುಜರಾತ್&zwnj;ನ ಪ್ರಮುಖ ಆಧ್ಯಾತ್ಮಿಕ ಸ್ಥಳಗಳು ಹಾಗೂ ಗೋವಾದ ಸುಂದರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲಾಗುವುದು. ದ್ವಾರಕಾದಲ್ಲಿ ಜ್ಯೋತಿರ್ಲಿಂಗ, ಬೆಟ್&zwnj; ದ್ವಾರಕಾ, ದ್ವಾರಕಾಧೀಶ ದೇವಾಲಯ ಮತ್ತು ರುಕ್ಮಿಣಿ ದೇವಾಲಯಗಳಿಗೆ ಭೇಟಿ, ಸೋಮನಾಥ ಜ್ಯೋತಿರ್ಲಿಂಗ ಮತ್ತು ಭಲ್ಕಾ ತೀರ್ಥ, ನಿಷ್ಕಳಂಕ ಮಹಾದೇವ ದೇವಾಲಯ ಮತ್ತು ಗಾಂಧಿ ಸ್ಮೃತಿ, ಗೋವಾದಲ್ಲಿ ಐತಿಹಾಸಿಕ ಅಗುವಾಡಾ ಕೋಟೆ, ಬೊಮ್&zwnj; ಜೀಸಸ್&zwnj; ಬೆಸಿಲಿಕಾ ಮತ್ತು ಕಲಾಂಗುಟೆ ಮತ್ತು ಕೋಲ್ವಾ ಬೀಚ್&zwnj;ಗಳಿಗೆ ಭೇಟಿ ವ್ಯವಸ್ಥೆ ಇದೆ. ಪ್ರಯಾಣಿಕರು ಮಂಗಳೂರು ಮತ್ತು ಉಡುಪಿ ಮೂಲಕ ರೈಲಿಗೆ ಏರಬಹುದು.&lt;/p&gt;&lt;p&gt;ಬುಕ್ಕಿಂಗ್&zwnj;ಗೆ ಐಆರ್&zwnj;ಸಿಟಿಸಿ ಯ ಅಧಿಕೃತ ಪೋರ್ಟಲ್&zwnj;ನ್ನು ಸಂಪರ್ಕಿಸಬಹುದು. ಪ್ರಯಾಣಿಕರಿಗೆ ತಲಾ 28,760 ರು. ಪ್ಯಾಕೇಜ್&zwnj; ದರವಿದ್ದು, 3 ಎಸಿ ರೈಲು ಪ್ರಯಾಣ, ಎಸಿ ಹೊಟೇಲ್&zwnj; ವಸತಿ, ಎಸಿ ರಸ್ತೆ ಸಾರಿಗೆ, ದಿನಕ್ಕೆ ಮೂರು ಸಸ್ಯಾಹಾರಿ ಊಟ, ವೃತ್ತಿಪರ ಟೂರ್&zwnj; ಎಸ್ಕಾರ್ಟ್&zwnj;ಗಳು, ಸುರಕ್ಷತಾ ಸಿಬ್ಬಂದಿ ಹಾಗೂ ಪ್ರಯಾಣ ವಿಮೆ ಒಳಗೊಂಡಿದೆ ಎಂದು ಅವರು ಹೇಳಿದರು.&lt;/p&gt;&lt;h2&gt;ಶಿರಡಿ ಟೂರ್&zwnj; ಪ್ಯಾಕೇಜ್&zwnj;:&lt;/h2&gt;&lt;p&gt;ಇದೇ ವೇಳೆ ಶಿರಡಿ ವಿಮಾನ ಪ್ಯಾಕೇಜ್&zwnj;ನಡಿ ಶನಿ ಶಿಂಗಣಾಪುರ ದೇವಾಲಯ, ಗೃಷ್ಣೇಶ್ವರ ಜ್ಯೋತಿರ್ಲಿಂಗ ದೇವಾಲಯ, ತ್ರ್ಯಂಬಕೇಶ್ವರ ಶಿವ ದೇವಾಲಯ, ಪಂಚವಟಿ ಮತ್ತು ಎಲ್ಲೋರಾ ಗುಹೆಗಳನ್ನು ಒಳಗೊಂಡ ಯಾತ್ರೆ ಇರಲಿದೆ. ಏ. 22ರಿಂದ ಏ. 26ರ ವರೆಗಿನ ಪ್ಯಾಕೇಜ್&zwnj; ಬೆಲೆ ತಲಾ ಒಬ್ಬರಿಗೆ 28,050 ರು. ಆಗುತ್ತದೆ. ಪ್ಯಾಕೇಜ್&zwnj;ನಲ್ಲಿ ವಿಮಾನ ಟಿಕೆಟ್&zwnj;, ಊಟ ಸಹಿತ ವಸತಿ, ಸ್ಥಳೀಯ ಸಾರಿಗೆ, ಟೂರ್&zwnj; ಕೋ ಅರ್ಡಿನೇಟರ್&zwnj; ಸೇವೆ ಮತ್ತು ಪ್ರಯಾಣ ವಿಮೆ ಒಳಗೊಂಡಿರುತ್ತದೆ ಎಂದು ಅವರು ವಿವರ ನೀಡಿದರು.&lt;/p&gt;&lt;p&gt;ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್&zwnj; ನಾಯರ್&zwnj; ಇದ್ದರು.&lt;/p&gt;&lt;p&gt;------------&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/irctc-special-tour-packages-from-mangaluru-train-to-dwarka-somnath-flight-to-shirdi-rav/articleshow-82q56xr"/>
        </item>
        <item>
            <title><![CDATA[ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ ಕೊಲೆ : ಮಾರಕಾಸ್ತ್ರಗಳಿಂದ ಕಡಿದು ಟಾಬ್ಲೆಟ್ ಆರಿಫ್ ಹತ್ಯೆ]]></title>
            <link>https://kannada.asianetnews.com/crime/early-morning-rowdysheeter-murdered-in-tokkottu-fly-over-bridge-in-mangalore/articleshow-a6mgcqx</link>
            <guid isPermaLink="true">https://kannada.asianetnews.com/crime/early-morning-rowdysheeter-murdered-in-tokkottu-fly-over-bridge-in-mangalore/articleshow-a6mgcqx</guid>
            <pubDate>Fri, 27 Mar 2026 07:59:06 +0530</pubDate>
            <description><![CDATA[&lt;p&gt;&lt;strong&gt;Tablet Arif murder case: &lt;/strong&gt;ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈಓವರ್&zwnj;ನಲ್ಲಿ ರೌಡಿಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್&zwnj;ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೈಕ್&zwnj;ನಲ್ಲಿ ಹೋಗುತ್ತಿದ್ದ ಆರಿಫ್&zwnj;ಗೆ ಕಾರ್&zwnj;ನಿಂದ ಡಿಕ್ಕಿ ಹೊಡೆದು, ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmphm74aj79n5ft5fxqxxzvz,imgname-rowdy-sheeter-arif-murder-1774578179210.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮಂಗಳೂರಿನಲ್ಲಿ ಮತ್ತೆ ಝಳಪಿಸಿದ ಲಾಂಗ್ ಮಚ್ಚು&lt;/strong&gt;&lt;/h2&gt;&lt;p&gt;ಮಂಗಳೂರು: ಕರಾವಳಿಯಲ್ಲಿ ಮತ್ತೆ ಲಾಂಗ್ ಮಚ್ಚುಗಳು ಝಳಪಿಸಿದ್ದು ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಮಂಗಳೂರು ಹೊರವಲಯದ&zwnj; ತೊಕ್ಕೊಟ್ಟು ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ರೌಡಿ ಶೀಟರ್&zwnj; ಒಬ್ಬನನ್ನು ಕೊಲೆ ಮಾಡಿದ್ದಾರೆ. 46 ವರ್ಷದ ರೌಡಿಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್ ಕೊಲೆಯಾದ ವ್ಯಕ್ತಿ.&lt;/p&gt;&lt;h3&gt;&lt;strong&gt;ತೊಕ್ಕೊಟ್ಟು ಫ್ಲೈ ಓವರ್ ಬ್ರಿಜ್ ಮೇಲೆಯೇ ರೌಡಿಶೀಟರ್ ಬರ್ಬರ ಹತ್ಯೆ&lt;/strong&gt;&lt;/h3&gt;&lt;p&gt;ಆರಿಫ್ ಯಾನೆ ಟಾಬ್ಲೆಟ್ ಆರಿಫ್, ಮುಳ್ಳುಗುಡ್ಡೆ ಹೌಸ್ ತಲಪಾಡಿ ನಿವಾಸಿಯಾಗಿದ್ದಾನೆ. ಈತ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ. ತೊಕ್ಕೊಟ್ಟು ಫ್ಲೈ ಓವರ್ ಬ್ರಿಜ್ ಮೇಲೆಯೇ ಈ ಭಯಾನಕ ಕೊಲೆ ನಡೆದಿದೆ. ಬೈಕ್&zwnj;ನಲ್ಲಿ ತೆರಳುತ್ತಿದ್ದ ಆರಿಫ್&zwnj;ಗೆ ದುಷ್ಕರ್ಮಿಗಳ ತಂಡ ಹಿಂಬದಿಂದ ಕಾರ್ ಡಿಕ್ಕಿ ಹೊಡಿಸಿ ಕೆಳಗೆ ಬೀಳಿಸಿದ್ದಾರೆ. ರಸ್ತೆಗೆ ಬಿದ್ದ ಆರಿಫ್&zwnj;ನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಬಳಿಕ ಕಾರ್&zwnj;ನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.&lt;/p&gt;&lt;p&gt;&lt;strong&gt;ಈ ಹಿಂದೆಯೂ ನಡೆದಿತ್ತು ಕೊಲೆಗೆ ಸಂಚು&lt;/strong&gt;&lt;/p&gt;&lt;p&gt;ಈ ಘಟನೆಗೆ ಗ್ಯಾಂಗ್ ವಾರ್ ಕಾರಣ ಎಂಬ ಶಂಕೆ ಮೂಡಿದೆ. ಕಳೆದ 2022ರ ಮೇ ತಿಂಗಳಲ್ಲಿಯೂ ಇದೇ ರೀತಿ ಆರೀಫ್ ಕೊಲೆಗೆ ಯತ್ನ ನಡೆದಿತ್ತು. ಬೆಳಗ್ಗೆ ಬೈಕಲ್ಲಿ ಧಕ್ಕೆಗೆ ತೆರಳುತ್ತಿದ್ದ ವೇಳೆ ಬಜಾಲಿನ ಟೊಪ್ಪಿ ನೌಫಾಲ್ ಮತ್ತು ತಂಡವು ದಾಳಿ ನಡೆಸಿ ಚೂರಿ ಇರಿದು ಕೊಲೆಗೆ ಯತ್ನಿಸಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇವ ಗೋವಾದ ಪ್ರಜ್ವಲ್ ರೇವಣ್ಣ: 30ಕ್ಕೂ ಹೆಚ್ಚು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ&lt;/strong&gt;&lt;/p&gt;&lt;p&gt;&lt;strong&gt;ಪತ್ನಿ ನಾಲ್ವರು ಮಕ್ಕಳನ್ನು ಹೊಂದಿರುವ ಆರೀಫ್&lt;/strong&gt;&lt;/p&gt;&lt;p&gt;ವಿವಾಹಿತನಾಗಿರುವ ಆರೀಫ್&zwnj; ಪತ್ನಿ ಹಾಗೂ ಮೂರು ಗಂಡು, ಒಂದು ಹೆಣ್ಣು ಒಟ್ಟು ನಾಲ್ವರು ಮಕ್ಕಳನ್ನು ಅಗಲಿದ್ದಾನೆ. ಮೂಲತಃ ಕುದ್ರೋಳಿ ನಿವಾಸಿಯಾಗಿದ್ದು ಕಳೆದ ಆರೇಳು ವರುಷದಿಂದ ಕುಟುಂಬ ಸಮೇತ ಅಜ್ಜಿನಡ್ಕ ಬಳಿಯ ಮುಳ್ಳುಗುಡ್ಡೆ ಎಂಬಲ್ಲಿ ಮನೆ ಮಾಡಿ ವಾಸವಿದ್ದ. ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪತ್ನಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ: ತಿಂಗಳ ಬಳಿಕ ಲವರ್ ಜೊತೆ ಸಿಕ್ಕ ಹೆಂಡ್ತಿ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Anusha Kb</dc:creator>
            <atom:link href="https://kannada.asianetnews.com/crime/early-morning-rowdysheeter-murdered-in-tokkottu-fly-over-bridge-in-mangalore/articleshow-a6mgcqx"/>
        </item>
        <item>
            <title><![CDATA[ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್‌ ಎಕ್ಸ್‌ಪ್ರೆಸ್‌ ರೈಲು ಸಮಯ ಬದಲಾವಣೆಗೆ ಪಟ್ಟುಹಿಡಿದ ರೈಲ್ವೆ ಇಲಾಖೆ! ವ್ಯಾಪಕ ವಿರೋಧ]]></title>
            <link>https://kannada.asianetnews.com/gallery/karnataka-districts/railway-row-opposition-grows-over-proposal-to-delay-bengaluru-mangaluru-kozhikode-express-gdp-acqggr3</link>
            <guid isPermaLink="true">https://kannada.asianetnews.com/gallery/karnataka-districts/railway-row-opposition-grows-over-proposal-to-delay-bengaluru-mangaluru-kozhikode-express-gdp-acqggr3</guid>
            <pubDate>Thu, 02 Apr 2026 13:29:30 +0530</pubDate>
            <description><![CDATA[&lt;p&gt;ವರದಿ: ಆತ್ಮಭೂಷಣ್&zwnj;&lt;/p&gt;&lt;p&gt;ನೈಋತ್ಯ ರೈಲ್ವೆಯು ಬೆಂಗಳೂರು-ಕೋಯಿಕ್ಕೋಡ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ ಸಮಯವನ್ನು ವಿಳಂಬಗೊಳಿಸಲು ಪ್ರಸ್ತಾಪಿಸಿದೆ, ಇದು ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಈ ಬದಲಾವಣೆಗೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈಲಿನ ಸಮಯ ಬದಲಾಯಿಸುವುದೇ ಸೂಕ್ತ &amp;nbsp;ಎಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjahh9kxjarta3ta7zt9a5vx,imgname-panchaganga-express-1772027946621.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಆತ್ಮಭೂಷಣ್&zwnj;&lt;/p&gt;&lt;p&gt;ನೈಋತ್ಯ ರೈಲ್ವೆಯು ಬೆಂಗಳೂರು-ಕೋಯಿಕ್ಕೋಡ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ ಸಮಯವನ್ನು ವಿಳಂಬಗೊಳಿಸಲು ಪ್ರಸ್ತಾಪಿಸಿದೆ, ಇದು ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಈ ಬದಲಾವಣೆಗೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈಲಿನ ಸಮಯ ಬದಲಾಯಿಸುವುದೇ ಸೂಕ್ತ &amp;nbsp;ಎಂದಿದೆ.&lt;/p&gt;&lt;img&gt;&lt;p&gt;ಮಂಗಳೂರು: ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ(16511) ಸಮಯವನ್ನು ವಿಳಂಬಿಸಲು ಹೊರಟಿರುವ ನೈಋತ್ಯ ರೈಲ್ವೆ ಪ್ರಸ್ತಾಪಕ್ಕೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ವಿರುದ್ಧ ಜಾಲತಾಣಗಳಲ್ಲಿ ಅಭಿಯಾನವನ್ನೇ ನಡೆಸುತ್ತಿವೆ.&lt;/p&gt;&lt;p&gt;ಪ್ರಸಕ್ತ ಬೆಂಗಳೂರು-ಕೋಯಿಕ್ಕೋಡ್&zwnj; ರೈಲು ಬೆಳಗ್ಗೆ 7.15ಕ್ಕೆ ಮಂಗಳೂರು ಸೆಂಟ್ರಲ್&zwnj; ತಲುಪುತ್ತಿದೆ. ಇದರ ಸಮಯ ಬದಲಾಯಿಸಿದರೆ ಮಂಗಳೂರು ತಲುಪುವ ಸಮಯ 8 ಗಂಟೆ ಆಗಲಿದೆ. ಮಾತ್ರವಲ್ಲ ಬೆಂಗಳೂರು-ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ರೈಲು ಕೂಡ ವಿಳಂಬವಾಗಿಯೇ ಮಂಗಳೂರಿಗೆ ಆಗಮಿಸಬೇಕಾಗುತ್ತದೆ. ಇದರಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವವರು ಬೇಗನೆ ಮನೆಗೆ ತಲುಪಿ ಉದ್ಯೋಗಕ್ಕೆ ತೆರಳಲು ಅನಾನುಕೂಲವಾಗಲಿದೆ ಎಂಬುದು ರೈಲ್ವೆ ಸಂಘಟನೆಗಳ ಅಭಿಪ್ರಾಯ.&lt;/p&gt;&lt;img&gt;&lt;p&gt;ಕಳೆದ ಎರಡು ತಿಂಗಳಿಂದ ಬೆಂಗಳೂರು-ಮಂಗಳೂರು ನಡುವಿನ ರಾತ್ರಿ ರೈಲುಗಳು ಗಮ್ಯ ಸ್ಥಾನ ತಲುಪುವಾಗ ನಿತ್ಯವೂ ವಿಳಂಬವಾಗುತ್ತಿದೆ. ಈ ಬಗ್ಗೆ ರೈಲ್ವೆ ಇಲಾಖೆ, ಸಂಸದರ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ಕ್ರಾಸಿಂಗ್&zwnj; ವಿಚಾರದಲ್ಲಿ ದಿನಪ್ರಂತಿ 30 ನಿಮಿಷದಿಂದ 1 ಗಂಟೆಗಳ ಕಾಲ ವಿಳಂಬವಾಗಿ ತಲುಪುವುದನ್ನು ಪ್ರಯಾಣಿಕರು ಅನಿವಾರ್ಯವಾಗಿ ಸಹಿಸಲೇ ಬೇಕಾಗಿದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರರು.&lt;/p&gt;&lt;img&gt;&lt;p&gt;ಬೆಂಗಳೂರು-ಕಾರವಾರ ನಡುವಿನ ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj; ರೈಲಿಗೆ ಈ ಹಿಂದೆ 14 ಕೋಚ್&zwnj; ಇತ್ತು. ಆಗ ಸಿರಿಬಾಗಿಲಿನಲ್ಲಿ ಮಧ್ಯರಾತ್ರಿ ಕ್ರಾಸಿಂಗ್&zwnj;ಗೆ ನಿಲ್ಲಿಸಲಾಗುತ್ತಿತ್ತು. ಪ್ರಸಕ್ತ ಈ ರೈಲು 19 ಕೋಚ್&zwnj;ಗಳಲ್ಲಿ ಸಂಚರಿಸುತ್ತಿದೆ. 14ಕ್ಕಿಂತ ಜಾಸ್ತಿ ಕೋಚ್&zwnj; ಇದ್ದರೆ ಸಿರಿಬಾಗಿಲಿನಲ್ಲಿ ಕ್ರಾಸಿಂಗ್&zwnj;ಗೆ ಅವಕಾಶ ಇಲ್ಲ, ಬದಲು ಸುಬ್ರಹ್ಮಣ್ಯ ಮಾರ್ಗದಲ್ಲಿ ಕ್ರಾಸಿಂಗ್&zwnj;ಗೆ ನಿಲ್ಲಿಸಲಾಗುತ್ತಿದೆ. ಹೀಗಾಗಿ ಉಳಿದ ರೈಲುಗಳು ವಿಳಂಬವಾಗಿ ಸಂಚರಿಸುವಂತಾಗಿದೆ. ಇದೇ ಕಾರಣ ಮುಂದಿಟ್ಟುಕೊಂಡು ರೈಲ್ವೆ ಇಲಾಖೆ ಉಳಿದ ರೈಲುಗಳ ಸಂಚಾರವನ್ನು ತುಸು ವಿಳಂಬಿಸಲು ಮುಂದಾಗಿದೆ. ಕೋಯಿಕ್ಕೋಡ್&zwnj; ರೈಲಿನ ವೇಳಾಪಟ್ಟಿ ಬದಲಾಯಿಸುವಂತೆ ದಕ್ಷಿಣ ರೈಲ್ವೆಗೆ ನೈಋತ್ಯ ರೈಲ್ವೆ ಪ್ರಸ್ತಾವನೆ ಕಳುಹಿಸಿದೆ. ಇದಕ್ಕೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ&lt;/p&gt;&lt;img&gt;&lt;p&gt;ಆದರೆ ರೈಲ್ವೆ ಸಂಘಟನೆಗಳು, ತಾಂತ್ರಿಕ ಸಲಹೆಗಾರರು ಕೋಯಿಕ್ಕೋಡ್&zwnj; ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಬದಲಾವಣೆಯನ್ನು ಒಪ್ಪುವುದಿಲ್ಲ. ಈ ರೀತಿ ಕೋಯಿಕ್ಕೋಡ್&zwnj; ರೈಲಿನ ಸಮಯ ಬದಲಾಯಿಸಿದರೆ ನಂತರದ ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ರೈಲಿನ ಸಮಯವನ್ನೂ ಬದಲಾಯಿಸಬೇಕಾಗುತ್ತದೆ. ಆಗ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ಎಲ್ಲ ರೈಲುಗಳ ಸಮಯವನ್ನೂ ಬದಲಾಯಿಸಬೇಕಾಗುತ್ತದೆ. ಹಾಗಾಗಿ ರೈಲು ಇದ್ದರೂ ಪ್ರಯಾಣಿಕ ಸ್ನೇಹಿಯಾಗಿರುವುದಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್&zwnj;.&lt;/p&gt;&lt;p&gt;ಬೇರೆ ರೈಲುಗಳ ಸಮಯ ಬದಲಾಯಿಸುವ ಬದಲು ಸಂಜೆ ಬೆಂಗಳೂರಿನಿಂದ ಹೊರಡುವ ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj; ರೈಲನ್ನು ಸಂಜೆ 6.50ರ ಬದಲು 6.35ಕ್ಕೆ ಅಂದರೆ 15 ನಿಮಿಷ ಮುಂಚಿತವಾಗಿ ಹೊರಡುವಂತೆ ಮಾಡಿದರೆ ಬೇರೆ ಯಾವ ರೈಲುಗಳ ಸಮಯವನ್ನು ಬದಲಾಯಿಸುವ ಅಗತ್ಯ ಇರುವುದಿಲ್ಲ. ಈ ವಿಚಾರವನ್ನು ಸಂಸದರು ಹಾಗೂ ರೈಲ್ವೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ಸೂಕ್ತ ಸ್ಪಂದನ ಸಿಗುತ್ತಿಲ್ಲ ಎನ್ನುವುದು ರೈಲ್ವೆ ಸಂಘಟನೆಗಳ ಮುಖಂಡರ ಅಸಮಾಧಾನ.&lt;/p&gt;&lt;img&gt;&lt;p&gt;ರೈಲು ಸಂಚಾರದಲ್ಲಿ ವಿಚಾರದಲ್ಲಿ ಗಂಟೆಗಟ್ಟಲೆ ವಿಳಂಬಕ್ಕೆ ಪ್ರಮುಖ ಕಾರಣವಾಗುತ್ತಿರುವುದು ಕ್ರಾಸಿಂಗ್&zwnj;. ಇದೇ ಸಮಸ್ಯೆ ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್&zwnj; ರೈಲು ಸಂಚಾರದಲ್ಲೂ ಆಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ನೈಋತ್ಯ ರೈಲ್ವೆ ಸೂಕ್ತ ಗಮನ ಹರಿಸುತ್ತಿಲ್ಲ ಎಂಬುದು ರೈಲ್ವೆ ಸಂಘಟನೆಗಳ ಆರೋಪ.&lt;/p&gt;&lt;img&gt;&lt;p&gt;ಹಾಸನ-ಮಂಗಳೂರು ರೈಲು ಮಾರ್ಗ ಸಿಂಗಲ್&zwnj; ಲೈನ್&zwnj;. ಹಾಸನ, ಸಕಲೇಶಪುರ ಬಳಿಕ ದೋಣಿಗಲ್&zwnj;, ಸಿರಿಬಾಗಿಲುಗಳಲ್ಲಿ ಕ್ರಾಸಿಂಗ್&zwnj;ಗೆ ಅವಕಾಶ ಇದೆ. ನಂತರ ಸುಬ್ರಹ್ಮಣ್ಯ ಮಾರ್ಗದಲ್ಲಿ. ಈ ಘಾಟ್&zwnj; ಪ್ರದೇಶದಲ್ಲಿ ಹಳಿ ಹಾಗೂ ಕ್ರಾಸಿಂಗ್&zwnj; ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎನ್ನುವುದು ರೈಲ್ವೆ ಅಧಿಕಾರಿಗಳ ಅಂಬೋಣ. ಅರೆಬೆಟ್ಟದಲ್ಲಿ ಕ್ರಾಸಿಂಗ್&zwnj; ರಚನೆಯ ಪ್ರಸ್ತಾಪ ಇದ್ದರೂ ಕಾರ್ಯಗತಗೊಂಡಿಲ್ಲ. ಹಾಗಾಗಿ ಈ ಮಾರ್ಗದಲ್ಲಿ ಹಳಿ ಹಾಕಿ 40 ವರ್ಷ ಕಳೆದರೂ ಕ್ರಾಸಿಂಗ್ ಸಮಸ್ಯೆಗೆ ಇನ್ನೂ ಮುಕ್ತಿ ಸಿಗುತ್ತಿಲ್ಲ ಎನ್ನುವುದು ರೈಲ್ವೆ ಸಂಘಟನೆಗಳ ಕೊರಗು.&lt;/p&gt;&lt;img&gt;&lt;p&gt;ಬೆಂಗಳೂರು-ಕೋಯಿಕ್ಕೋಡ್&zwnj; ರೈಲಿನ ಸಮಯ ಬದಲಾವಣೆ ಮಾಡಿದರೆ ಪ್ರಯಾಣಿಕರಿಗೆ ತೊಂದರೆ ಆಗುವುದು ಬಿಟ್ಟರೆ ಬೇರೆ ರೈಲುಗಳ ಸಂಚಾರವೂ ವಿಳಂಬವಾಗಲಿದೆ. ಅದರ ಬದಲು ಪಂಚಗಂಗಾ ರೈಲು ಬೆಂಗಳೂರನಿಂದ ಹೊರಡುವ ಸಮಯವನ್ನು ತುಸು ಮುಂಚಿತವಾಗಿ ಬದಲಾವಣೆ ಮಾಡಿದರೆ ಈ ಎಲ್ಲ ಸಮಸ್ಯೆಗೂ ಸುಲಭದಲ್ಲಿ ಪರಿಹಾರ ಸಾಧ್ಯವಿದೆ. ಈ ವಿಚಾರವನ್ನು ಸಂಸದರು ಹಾಗೂ ರೈಲ್ವೆ ಇಲಾಖೆಯ ಗಮನಕ್ಕೂ ತರಲಾಗಿದೆ.&lt;/p&gt;&lt;p&gt;-ಅನಿಲ್&zwnj; ಹೆಗ್ಡೆ, ತಾಂತ್ರಿಕ ಸಲಹೆಗಾರರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/railway-row-opposition-grows-over-proposal-to-delay-bengaluru-mangaluru-kozhikode-express-gdp-acqggr3"/>
        </item>
        <item>
            <title><![CDATA[ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ ಕೇಸ್‌ಗೆ ಬಿಗ್ ಟ್ವಿಸ್ಟ್: ಪೊಲೀಸ್‌ ವರದಿ ಕೇಳಿ ಬೆಚ್ಚಿಬಿದ್ದ ಸಂತ್ರಸ್ಥೆಯರು!]]></title>
            <link>https://kannada.asianetnews.com/state/moodabidri-pi-sandesh-case-twist-police-report-mangaluru-commissioner-investigation-san/articleshow-dh4f46t</link>
            <guid isPermaLink="true">https://kannada.asianetnews.com/state/moodabidri-pi-sandesh-case-twist-police-report-mangaluru-commissioner-investigation-san/articleshow-dh4f46t</guid>
            <pubDate>Sat, 21 Mar 2026 17:43:19 +0530</pubDate>
            <description><![CDATA[&lt;p&gt;ಮೂಡಬಿದ್ರೆ ಇನ್ಸ್&zwnj;ಪೆಕ್ಟರ್ ಸಂದೇಶ್ ಪಿ.ಜಿ. ಮೇಲಿನ ಲೈಂಗಿಕ ಕಿರುಕುಳ ಆರೋಪವು ಸುಳ್ಳು ಮತ್ತು ಪ್ರಚೋದಿತ ಎಂದು ಪೊಲೀಸ್ ಪ್ರಾಥಮಿಕ ತನಿಖೆ ಹೇಳಿದೆ. ಆದರೆ, ಈ ವರದಿಯನ್ನು ತಿರಸ್ಕರಿಸಿರುವ ದೂರುದಾರ ಮಹಿಳೆ, ಇದು ಹಿರಿಯ ಅಧಿಕಾರಿಗಳ ಶಾಮೀಲಿನಿಂದ ಕೂಡಿದ ವರದಿ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkx98wa2w7fpn47epthvv1q2,imgname-moodbidri-police-inspector-sandesh-1773730558274.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಮಾ.21): &lt;/strong&gt;ಮೂಡಬಿದ್ರೆ ಪೊಲೀಸ್ ಇನ್ಸ್&zwnj;ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಆರೋಪದ ತನಿಖೆಯಲ್ಲಿ ಸ್ಫೋಟಕ ಸತ್ಯಾಂಶವೊಂದು ಹೊರಬಿದ್ದಿದೆ. ಮಹಿಳೆಯರು ಮಾಡಿದ್ದ ಆರೋಪಗಳು ಸುಳ್ಳು ಮತ್ತು ಪ್ರಚೋದಿತ ಎಂದು ಪೊಲೀಸ್ ಇಲಾಖೆಯ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದು, ಇನ್ಸ್&zwnj;ಪೆಕ್ಟರ್ ಸಂದೇಶ್ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ ಎಂದಿದ್ದಾರೆ. ದೂರು ನೀಡಿದ್ದ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಅವರು ಯಾರೋ ಒಬ್ಬರ ಪ್ರಚೋದನೆಗೆ ಒಳಗಾಗಿ ಈ ಸುಳ್ಳು ಆರೋಪ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ.&lt;/p&gt;&lt;p&gt;ವೈರಲ್ ಆಗಿದ್ದ ಆಡಿಯೋ ಮತ್ತು ವಿಡಿಯೋಗಳಲ್ಲಿರುವ ಮಹಿಳೆಯರು ಅದು ತಮ್ಮದೇ ಎಂದು ಒಪ್ಪಿಕೊಂಡಿದ್ದಾರಾದರೂ, ದೂರು ನೀಡಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ನಡೆದ ಈ ತನಿಖೆಯ ವರದಿಯನ್ವಯ, ಹಲ್ಲೆ ಅಥವಾ ಲೈಂಗಿಕ ಕಿರುಕುಳ ನಡೆದಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ.&lt;/p&gt;&lt;h2&gt;&lt;strong&gt;ವರದಿಯಲ್ಲಿದೆ ಅಸಭ್ಯ ವರ್ತನೆಯ ಉಲ್ಲೇಖ&lt;/strong&gt;&lt;/h2&gt;&lt;p&gt;ಆರೋಪಗಳು ಸುಳ್ಳು ಎಂದು ವರದಿ ಹೇಳಿದರೂ, ವೈರಲ್ ಆದ ಆಡಿಯೋ ಮತ್ತು ವಿಡಿಯೋಗಳು ಹಳೆಯದಾಗಿದ್ದು, ಅದರಲ್ಲಿ ಇನ್ಸ್&zwnj;ಪೆಕ್ಟರ್ ಸಂದೇಶ್ ಅವರ ವರ್ತನೆ ಅಸಭ್ಯವಾಗಿರುವುದು ಸ್ಪಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕೆ ಅವರನ್ನು ಅಮಾನತುಗೊಳಿಸಿ ತನಿಖೆ ನಡೆಸಲಾಗಿತ್ತು. ಆದರೆ, ದೂರುದಾರ ಮಹಿಳೆಯರು ಕಾನೂನುಬದ್ಧವಾಗಿ ದೂರು ನೀಡಲು ನಿರಾಕರಿಸುತ್ತಿರುವುದು ಪ್ರಕರಣದ ದಿಕ್ಕನ್ನೇ ಬದಲಿಸಿದೆ.&lt;/p&gt;&lt;h2&gt;&lt;strong&gt;ತನಿಖೆ ನಂಬಲ್ಲ; ಉನ್ನತ ಮಟ್ಟದ ತನಿಖೆಗೆ ಆಗ್ರಹ&lt;/strong&gt;&lt;/h2&gt;&lt;p&gt;ಇತ್ತ ಪೊಲೀಸ್ ವರದಿಯನ್ನು ದೂರುದಾರೆ ಸುಮತಿ ನಾಯಕ್ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ತನಿಖೆ ನಡೆಸಿದ ಎಸಿಪಿ ಶ್ರೀಕಾಂತ್ ಅವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. &quot;ಎಸಿಪಿ ಶ್ರೀಕಾಂತ್ ಮತ್ತು ಕಮಿಷನರ್ ಸುಧೀರ್ ಕುಮಾರ್ ಅವರ ನಡುವೆ ಚೈನ್ ಲಿಂಕ್ ಇದೆ. ಎಸಿಪಿ ಶ್ರೀಕಾಂತ್ ಅವರನ್ನು ಮೊದಲು ಸಸ್ಪೆಂಡ್ ಮಾಡಬೇಕು. ಮಂಗಳೂರು ಅಧಿಕಾರಿಗಳ ಮೇಲೆ ನಮಗೆ ನಂಬಿಕೆ ಇಲ್ಲ. ಬೆಂಗಳೂರು ಮಟ್ಟದ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿದರೆ ಮಾತ್ರ ಇನ್ಸ್&zwnj;ಪೆಕ್ಟರ್ ಸಂದೇಶ್ ಅವರ ಕಾಮಕಾಂಡದ ಅಸಲಿ ಸತ್ಯ ಹೊರಬರಲು ಸಾಧ್ಯ,&quot; ಎಂದು ಸುಮತಿ ನಾಯಕ್ ಒತ್ತಾಯಿಸಿದ್ದಾರೆ. ಸದ್ಯ ಈ ಪ್ರಕರಣವು ಪೊಲೀಸ್ ಇಲಾಖೆಯ ವರದಿ ಮತ್ತು ದೂರುದಾರ ಮಹಿಳೆಯರ ಹಠದ ನಡುವೆ ದೊಡ್ಡ ಮಟ್ಟದ ತಿಕ್ಕಾಟಕ್ಕೆ ಕಾರಣವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/state/moodabidri-pi-sandesh-case-twist-police-report-mangaluru-commissioner-investigation-san/articleshow-dh4f46t"/>
        </item>
        <item>
            <title><![CDATA[ಮಂಗಳೂರು ರೌಡಿಶೀಟರ್ ಹತ್ಯೆ ಪ್ರಕರಣ, ಹಂತಕರಿಗೆ ಅರ್ಧದಾರಿಯಲ್ಲಿ ಕೈಕೊಟ್ಟ ಕಾರು, ರಿಕ್ಷಾ ಹತ್ತಿ ಬೆಂಗಳೂರಿಗೆ ಪರಾರಿ!]]></title>
            <link>https://kannada.asianetnews.com/karnataka-districts/rowdy-sheeter-fish-trader-areef-hussain-hacked-to-death-on-nh-66-flyover-in-ullal-mangaluru-gdp/articleshow-gqiwbeu</link>
            <guid isPermaLink="true">https://kannada.asianetnews.com/karnataka-districts/rowdy-sheeter-fish-trader-areef-hussain-hacked-to-death-on-nh-66-flyover-in-ullal-mangaluru-gdp/articleshow-gqiwbeu</guid>
            <pubDate>Sat, 28 Mar 2026 11:26:04 +0530</pubDate>
            <description><![CDATA[ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ 66ರ ಫ್ಲೈಓವರ್&zwnj;ನಲ್ಲಿ ರೌಡಿಶೀಟರ್ ಆಗಿದ್ದ ಮೀನು ವ್ಯಾಪಾರಿ ಆರೀಫ್ ಹುಸೇನ್&zwnj;ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬುಲೆಟ್ ಬೈಕ್&zwnj;ನಲ್ಲಿ ತೆರಳುತ್ತಿದ್ದಾಗ ಇನೋವಾ ಕಾರಿನಿಂದ ಡಿಕ್ಕಿ ಹೊಡೆದು, ಬಳಿಕ ತಲವಾರಿನಿಂದ ಕೊಚ್ಚಿ ಕೊಲೆಗೈಯಲಾಗಿದೆ. ಈ ಕೃತ್ಯವು 2022ರಲ್ಲಿ ನಡೆದಿದ್ದ ಕೊಲೆ ಯತ್ನದ ಮುಂದುವರಿದ ಭಾಗವಾಗಿರಬಹುದು ಎಂದು ಶಂಕಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmsg6wg68rn3sdxbh5zk1fks,imgname-mangaluru-rowdy-sheeter-areef-hussain-murder-1774677357062.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಳ್ಳಾಲ: &lt;/strong&gt;ರೌಡಿಶೀಟರ್&zwnj; ಆಗಿದ್ದ ಮೀನಿನ ವ್ಯಾಪಾರಿಯನ್ನು ತಲವಾರಿನಿಂದ ಬರ್ಬರವಾಗಿ ಕಡಿದು ಹತ್ಯೆ ನಡೆಸಿರುವ ಘಟನೆ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯ 66ರ ಫ್ಲೈಓವರ್&zwnj; ನಲ್ಲಿ ಮಾರ್ಚ್ 27 ನಸುಕಿನ ಜಾವ ಸಂಭವಿಸಿದೆ.&lt;/p&gt;&lt;p&gt;ಬಂದರು ಪೊಲೀಸ್&zwnj; ಠಾಣೆಯಲ್ಲಿ ರೌಡಿಶೀಟರ್&zwnj; ಆಗಿದ್ದ, ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್&zwnj; ಹುಸೇನ್&zwnj; (42) ಹತ್ಯೆಯಾದವರು. ಶುಕ್ರವಾರ ನಸುಕಿನ 4.30 ರ ಸುಮಾರಿಗೆ ತನ್ನ ಬುಲೆಟ್&zwnj; ಬೈಕಿನಲ್ಲಿ ಉಚ್ಚಿಲದಿಂದ ಮಂಗಳೂರು ಧಕ್ಕೆಗೆ ತೆರಳುತ್ತಿದ್ದ ಸಂದರ್ಭ ಫ್ಲೈಓವರ್&zwnj; ಮೇಲೆ ಇನೋವಾ ಕಾರಿನಿಂದ ಹಿಂಬದಿಯಿಂದ ಡಿಕ್ಕಿ ಹೊಡೆದ ದುಷ್ಕರ್ಮಿಗಳ ತಂಡ ಬಳಿಕ ತಲವಾರಿನಿಂದ ಕೊಚ್ಚಿ ಹತ್ಯೆ ನಡೆಸಿದೆ. ನಸುಕಿನ ಜಾವ ಆಗಿದ್ದರಿಂದಾಗಿ ದುಷ್ಕರ್ಮಿಗಳ ಕೃತ್ಯವನ್ನು ಯಾರೂ ಗಮನಿಸಿರಲಿಲ್ಲ.&amp;nbsp;&lt;/p&gt;&lt;p&gt;ಆರಂಭದಲ್ಲಿ ಅಪಘಾತ ಪ್ರಕರಣ ಎಂದು ವಾಹನ ಸವಾರರು ಪೊಲೀಸರಿಗೆ ದೂರವಾಣಿ ಮೂಲಕ ತಿಳಿಸಿದರೂ, ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಗುರುತು ಪತ್ತೆ ನಂತರ ಕೊಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ, ಎಸಿಪಿ ಸಹಿತ ಹಿರಿಯ ಪೊಲೀಸ್&zwnj; ಅಧಿಕಾರಿಗಳು ಭೇಟಿ ನೀಡಿದ್ದು, ಶ್ವಾನದಳ, ಸೋಕೋ ತಂಡ ಸ್ಥಳದಿಂದ ಮಾಹಿತಿ ಪಡೆದುಕೊಂಡಿದೆ. ಉಳ್ಳಾಲ ಪೊಲೀಸ್&zwnj; ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ನಿಗೂಢ ಸ್ಪಾಟ್&zwnj; ಫ್ಲೈಓವರ್&zwnj;:&lt;/h2&gt;&lt;p&gt;ರಾತ್ರಿ ಹೊತ್ತಿನಲ್ಲಿ ದಾರಿದೀಪಗಳಿಂದ ಫ್ಲೈಓವರ್&zwnj; ಕಂಗೊಳಿಸಿದರೂ, ನಸುಕಿನ ಜಾವ ವಾಹನಗಳಿಲ್ಲದೇ ಬಿಕೋ ಎನ್ನುತ್ತಿರುತ್ತದೆ. ಇದೇ ಲೊಕೇಷನನ್ನು ಗುರುತಿಸಿ ಪೂರ್ವನಿಯೋಜಿತವಾಗಿ ಕೃತ್ಯವನ್ನು ಎಸಗಿರುವ ಶಂಕೆಯಿದೆ. ಕೊಲೆ ನಡೆದ ಸ್ಥಳದ ಫ್ಲೈಓವರ್&zwnj;ನ ಎರಡು ಬದಿಗಳಲ್ಲೂ ತಡೆಗೋಡೆ ಇರುವುದರಿಂದಾಗಿ, ಎಲ್ಲಿಯೂ ಸಿಸಿಟಿಯೂ ಇಲ್ಲದೇ ಇರುವುದು ಕೃತ್ಯಕ್ಕೆ ಹಾಟ್&zwnj; ಸ್ಪಾಟ್&zwnj; ನಂತಿದೆ.&lt;/p&gt;&lt;h2&gt;ಕೊಲೆಯತ್ನ ನಡೆದಿತ್ತು !&lt;/h2&gt;&lt;p&gt;2022ರ ಮೇ,24 ರಂದು ಉಚ್ಚಿಲ ಮುಳ್ಳುಗುಡ್ಡೆಯಲ್ಲಿ ಆರೀಫ್&zwnj; ಮೇಲೆ ನೌಫಾಲ್&zwnj; ಸೇರಿದಂತೆ ನಾಲ್ವರ ತಂಡ ತಲವಾರು ದಾಳಿ ನಡೆಸಿ ಕೊಲೆ ಯತ್ನ ನಡೆಸಿತ್ತು. ಅಂದು ಆರಿಫ್ ಬೆಳಿಗ್ಗೆ ಬಂದರಿಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕೃತ್ಯ ಎಸಗಲಾಗಿತ್ತು. ಮುಳ್ಳುಗುಡ್ಡೆ ಸಮೀಪ ಕಾರಿನೊಳಗೆ ಅಡಗಿ ಕುಳಿತಿದ್ದ ನಾಲ್ವರು ಆರೋಪಿಗಳು, ಬೈಕ್&zwnj;ನಲ್ಲಿ ಬಂದ ಆರಿಫ್ ಕಾರಿನ ಸಮೀಪ ತಲುಪುತ್ತಿದ್ದಂತೆಯೇ ಹೊರಬಂದು ಕತ್ತಿಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಈ ವಿಚಾರವಾಗಿ ನೌಫಾಲ್ ತಂಡ ಮತ್ತು ಆರಿಫ್ ಹಾಗೂ ಕರೀಂ ನಡುವೆ ವಾಗ್ವಾದ ನಡೆದಿತ್ತು. ಇದೇ ವೈಷಮ್ಯದಿಂದಾಗಿ ನೌಫಾಲ್, ಸಾಧಿಕ್ ಸೇರಿದಂತೆ ಇನ್ನು ಇಬ್ಬರು ಸೇರಿ ಕೆಲಸಕ್ಕೆ ತೆರಳುತ್ತಿದ್ದ ಆರಿಫ್ ಮೇಲೆ ದಾಳಿ ನಡೆಸಿ ಕೊಲೆ ಯತ್ನ ನಡೆಸಿತ್ತು.&lt;/p&gt;&lt;h2&gt;ರಿಕ್ಷಾದಲ್ಲಿ ತೆರಳಿದರೇ ?&lt;/h2&gt;&lt;p&gt;ಹಂತಕರ ಇನೋವಾ ಕಾರು ವಿಟ್ಲ ಠಾಣಾ ವ್ಯಾಪ್ತಿಯ ಬುಡೋಳಿಯಲ್ಲಿ ಬೆಳಿಗ್ಗೆ 8ರ ವೇಳೆ ಪತ್ತೆಯಾಗಿದೆ. ಹಂತಕರು ಕಾರಿನಲ್ಲಿ ಸಮಸ್ಯೆ ಕಾಣಿಸಿದ್ದರಿಂದಾಗಿ ಬುಡೋಳಿಯಲ್ಲಿ ನಿಲ್ಲಿಸಿ ರಿಕ್ಷಾದಲ್ಲಿ ತೆರಳಿರುವ ಮಾಹಿತಿಯಿದೆ. ಅಲ್ಲಿಂದ ಬೆಂಗಳೂರು ಕಡೆಗೆ ಪ್ರಯಾಣಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ, ಆರೋಪಿಗಳ ಪತ್ತೆಗಾಗಿ ಬೆಂಗಳೂರಿಗೆ ಪೊಲೀಸರು ತೆರಳಿರುವ ಮಾಹಿತಿಯಿದೆ.&lt;/p&gt;&lt;h2&gt;9 ಪ್ರಕರಣಗಳಿದ್ದವು:&lt;/h2&gt;&lt;p&gt;ಆರೀಫ್&zwnj; ವಿರುದ್ಧ 1998 ರಿಂದ 2021 ರ ವರೆಗೆ 9 ಹಲ್ಲೆ, ಹಲ್ಲೆಯತ್ನ ಪ್ರಕರಣಗಳಿವೆ. ಬರ್ಕೆ, ಬಂದರು 2021 ರಲ್ಲಿ ಪಾಂಡೇಶ್ವರ ಪೊಲೀಸ್&zwnj; ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಕುದ್ರೋಳಿ ನಿವಾಸಿಯಾಗಿದ್ದ ಆರೀಫ್&zwnj; ನಿರಂತರ ಪ್ರಕರಣಗಳು ದಾಖಲಾಗುತ್ತಿದ್ದಂತೆ, ಇಡೀ ಕುಟುಂಬವನ್ನು ಕೆ.ಸಿ.ರೋಡಿನತ್ತ ಸ್ಥಳಾಂತರಿಸಿದ್ದರು. ಬಳಿಕ ಆರೀಫ್&zwnj; ವಿರುದ್ಧ ದಾಖಲಾದ ಪ್ರಕರಣಗಳು ಇರಲಿಲ್ಲ. ಈ ನಡುವೆ 2022ರಲ್ಲಿ ಕೊಲೆ ಯತ್ನ ನಡೆದಿತ್ತು.&lt;/p&gt;&lt;h2&gt;ಬಾಡಿಗೆ ಪಡೆದಿದ್ದ ಇನೋವಾ ಕಾರು:&lt;/h2&gt;&lt;p&gt;ಆರೋಪಿಗಳಲ್ಲಿ ಪ್ರಮುಖ ವ್ಯಕ್ತಿ ಉಳ್ಳಾಲ ಮೂಲದವನು ಎಂದು ಹೇಳಲಾಗುತ್ತಿದ್ದು, ಆತ ಪರಿಚಿತನಿಂದಲೇ ಎರಡು ದಿನಗಳ ಹಿಂದೆ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಕಾರು ಮಾಲೀಕ ಮೂಲತಃ ಕೇರಳದವನಾಗಿದ್ದರೂ, ಉಳ್ಳಾದಲ್ಲಿದ್ದು, ವಿಟ್ಲದಲ್ಲಿ ಕಾರು ಪತ್ತೆಯಾಗುತ್ತಿದ್ದಂತೆ ಪೊಲೀಸರು ಕಾರು ಮಾಲೀಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 2022 ರಲ್ಲಿ ಬಜಾಲ್&zwnj; ನಿವಾಸಿ ರೌಡಿಶೀಟರ್ ನೌಫಾಲ್&zwnj; ಮತ್ತು ತಂಡ&zwnj;, ಆರೀಫ್&zwnj; ಕೊಲೆಗೆ ಯತ್ನಿಸಿದ್ದು, ಸಹೋದರ ಕರೀಮ್&zwnj; ಹಣದ ವಿಚಾರವಾಗಿ ಕೃತ್ಯ ನಡೆದಿತ್ತು ಎಂಬುದು ಅಂದು ಪೊಲೀಸ್&zwnj; ತನಿಖೆಯಿಂದ ತಿಳಿದುಬಂದಿತ್ತು.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rowdy-sheeter-fish-trader-areef-hussain-hacked-to-death-on-nh-66-flyover-in-ullal-mangaluru-gdp/articleshow-gqiwbeu"/>
        </item>
        <item>
            <title><![CDATA[ಮಂಗಳೂರು ಮೀನುಗಾರಿಕೆ ವೇಳೆ ದೋಣಿ ಮಗುಚಿ ಇಬ್ಬರು ಯುವಕರು ನೀರುಪಾಲು]]></title>
            <link>https://kannada.asianetnews.com/state/two-youths-drown-after-boat-capsizes-while-fishing-in-phalguni-river-mangalore/articleshow-hw4hqs2</link>
            <guid isPermaLink="true">https://kannada.asianetnews.com/state/two-youths-drown-after-boat-capsizes-while-fishing-in-phalguni-river-mangalore/articleshow-hw4hqs2</guid>
            <pubDate>Wed, 01 Apr 2026 20:36:44 +0530</pubDate>
            <description><![CDATA[&lt;p&gt;ಮಂಗಳೂರಿನ ಫಲ್ಗುಣಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೂವರು ಯುವಕರಿದ್ದ ದೋಣಿ ಮಗುಚಿದ್ದು, ಇಬ್ಬರು ನೀರುಪಾಲಾಗಿದ್ದಾರೆ.. ಈ ದುರಂತದಲ್ಲಿ ಓರ್ವ ಈಜಿ ದಡ ಸೇರಿದ್ದು, ಇನ್ನೊಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn4rseav6mz17y00p46vrder,imgname-two-youths-drowned-in-phalguni-river-1775055452506.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಫಲ್ಗುಣಿ ನದಿಯಲ್ಲಿ ಮೀನುಗಾರಿಕಾ ಬೋಟ್ ಮಗುಚಿ ಇಬ್ಬರು ಯುವಕರು ನೀರುಪಾಲು&lt;/strong&gt;&lt;/h2&gt;&lt;p&gt;ಮಂಗಳೂರು: ಮಂಗಳೂರಿನ ಫಲ್ಗುಣಿ ನದಿಯಲ್ಲಿ ಮೀನುಗಾರಿಕಾ ಬೋಟ್ ಮಗುಚಿ ಇಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದೆ. ಮಂಗಳೂರಿನ ಫಲ್ಗುಣಿ ನದಿಯಲ್ಲಿ ಮೀನುಗಾರಿಕೆ ವೇಳೆ ದೋಣಿ ಮುಗುಚಿ ಇಬ್ಬರು ನೀರು ಪಾಲಾಗಿದ್ದಾರೆ. ಅವರಲ್ಲೊಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತರಾದವರನ್ನು ಕುಂಜತ್&zwnj;ಬೈಲ್ ನಿವಾಸಿ 28 ವರ್ಷದ ಗಣೇಶ್ ಎಂದು ಗುರುತಿಸಲಾಗಿದೆ ಹಾಗೂ ನೀರು ಪಾಲಾದ ಮತ್ತೊಬ್ಬ ಯುವಕನನ್ನು 24 ವರ್ಷದ ರಾಯಲ್ ಎಂದು ಗುರುತಿಸಲಾಗಿದೆ. ರಾಯಲ್&zwnj;ಗಾಗಿ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ನದಿಯ ಮಧ್ಯಭಾಗ ತಲುಪಿದಾಗ ದೋಣಿ ಹಠಾತ್ತನೆ ಮಗುಚಿ ಬಿದ್ದು ದುರಂತ&lt;/strong&gt;&lt;/h3&gt;&lt;p&gt;ಒಟ್ಟು ಮೂರು ಜನ ಮೀನು ಹಿಡಿಯುವುದಕ್ಕೆ ಹೋಗಿದ್ದರು ಅವರಲ್ಲಿ 29 ವರ್ಷದ ನಿತೇಶ್ ಅವರು ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಣೇಶ್, ರಾಯಲ್ ಮತ್ತು ನಿತೇಶ್ ಎಂಬ ಮೂವರು ಯುವಕರ ತಂಡ ಬುಧವಾರ ಮುಂಜಾನೆ ಸುಮಾರು 1:30 ರ ಸುಮಾರಿಗೆ ಸಣ್ಣ ನಾಡದೋಣಿಯಲ್ಲಿ ಮೀನುಗಾರಿಕೆಗಾಗಿ ನದಿಗೆ ತೆರಳಿದ್ದರು. ನದಿಯ ಮಧ್ಯಭಾಗ ತಲುಪಿದಾಗ ದೋಣಿ ಹಠಾತ್ತನೆ ಮಗುಚಿ ಬಿದ್ದು ಮೂವರೂ ನೀರಿಗೆ ಬಿದ್ದಿದ್ದಾರೆ. ಈ ಪೈಕಿ ನಿತೇಶ್ ಅವರು ಈಜಿ ದಡ ಸೇರಿದ್ದಾರೆ. ಗಣೇಶ್ ಮತ್ತು ರಾಯಲ್ ಅವರಿಗೆ ಈಜಲು ಬಾರದೆ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತನ್ನಂತೆ ಇರುವವನ ಕರೆಸಿ ಸ್ನೇಹಿತನಿಗೆ ಏಪ್ರಿಲ್ ಫೂಲ್ ಮಾಡಿದ ಸಚಿನ್ ತೆಂಡೂಲ್ಕರ್&lt;/strong&gt;&lt;/p&gt;&lt;p&gt;ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಶೋಧ ಕಾರ್ಯ ಆರಂಭಿಸಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಗಣೇಶ್ ಅವರ ಮೃತದೇಹ ಪತ್ತೆಯಾಗಿದ್ದು, ರಾಯಲ್ ಅವರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಸ್ವಲ್ಪ ರೆಕಾರ್ಡ್ ಮಾಡಿ ಅಂತ ಫೋನ್ ಕೊಟ್ಟು ಹೈಕೋರ್ಟ್ ಮುಂದೆಯೇ ವಾಹನಗಳಿಗೆ ಬೆಂಕಿ ಹಚ್ಚಿದ ಮಹಿಳೆ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dakshina-kannada</category>
            <dc:creator>Anusha Kb</dc:creator>
            <atom:link href="https://kannada.asianetnews.com/state/two-youths-drown-after-boat-capsizes-while-fishing-in-phalguni-river-mangalore/articleshow-hw4hqs2"/>
        </item>
        <item>
            <title><![CDATA[ರಾಜ್ಯದಲ್ಲಿ ಕೆಂಡದಂತಹ ಬಿಸಿಲು ಹವಾಮಾನ ಇಲಾಖೆಯ ಎಚ್ಚರಿಕೆ ಗಂಟೆ, 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲು!]]></title>
            <link>https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v</link>
            <guid isPermaLink="true">https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v</guid>
            <pubDate>Thu, 02 Apr 2026 11:26:01 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಬಿಸಿಲಿನ ತೀವ್ರತೆ ಹೆಚ್ಚಿರುವ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjptv959tj7p1s6exffvkc02,imgname-heatwave-1772440364201.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿಯೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಕೆಂಡದಂತಹ ಬಿಸಿಲು ದಾಖಲಾಗುವ ಸಾಧ್ಯತೆ ಇದ್ದು, ಜನಜೀವನದ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ ಒಣ ಹವಾಮಾನ&lt;/h2&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಒಣ ಹವೆ ಮುಂದುವರಿಯಲಿದ್ದು, ಗರಿಷ್ಠ ಉಷ್ಣಾಂಶವು ಸುಮಾರು 35&deg;C ರಿಂದ 37&deg;C ನಡುವೆಯೇ ಇರಲಿದೆ ಎಂದು ಅಂದಾಜಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಸ್ವಲ್ಪ ತಂಪಾದ ವಾತಾವರಣ ಕಂಡುಬಂದರೂ, ಮಧ್ಯಾಹ್ನ ವೇಳೆಗೆ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.&lt;/p&gt;&lt;h2&gt;ಉತ್ತರ ಕರ್ನಾಟಕದಲ್ಲಿ ಬಿಸಿಲ ಧಗೆ ತೀವ್ರ&lt;/h2&gt;&lt;p&gt;ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ 42&deg;C ತನಕ ಏರಿಕೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಬಿಸಿಗಾಳಿ (Heat Wave) ಉಂಟಾಗುವ ಸಾಧ್ಯತೆಯೂ ಹೆಚ್ಚಿದ್ದು, ಜನರು ಹೆಚ್ಚಿನ ಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಬಿಸಿಗಾಳಿಯ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಲಿದೆ. ಈ ಅವಧಿಯಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಹಿರಿಯ ನಾಗರಿಕರು, ಮಕ್ಕಳು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆಯಿಂದಿರಬೇಕು.&lt;/p&gt;&lt;h2&gt;ಕರಾವಳಿ ಜಿಲ್ಲೆಗಳಲ್ಲಿ ಸೆಕೆ&ndash;ಹಬೆ ಹೆಚ್ಚಳ&lt;/h2&gt;&lt;p&gt;ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ತೇವಾಂಶ ಹೆಚ್ಚಿರುವ ಕಾರಣ ಸೆಕೆ ಮತ್ತು ಹಬೆ (humidity) ಹೆಚ್ಚಾಗಲಿದೆ. ಇದರಿಂದ ಜನರಿಗೆ ತೀವ್ರ ಬೆವರಿನ ಜೊತೆಗೆ ಬಿಸಿಲಿನ ಅನುಭವವಾಗುವ ಸಾಧ್ಯತೆ ಇದೆ. ಸಮುದ್ರ ತೀರ ಪ್ರದೇಶಗಳಲ್ಲಿ ಉಷ್ಣಾಂಶ ಅಷ್ಟಾಗಿ ಏರಿಕೆಯಾಗದಿದ್ದರೂ, ಹವಾಮಾನ ಉರಿಯುತ್ತಿರುವ ಅನುಭವವಾಗಲಿದೆ&lt;/p&gt;&lt;h2&gt;ಮಲೆನಾಡಿನಲ್ಲಿ ತುಂತುರು ಮಳೆ ಸಾಧ್ಯತೆ&lt;/h2&gt;&lt;p&gt;ಮಲೆನಾಡು ಭಾಗಗಳಲ್ಲಿ, ವಿಶೇಷವಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದ್ದು, ಅಲ್ಲಲ್ಲಿ ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಕನಿಷ್ಠ ಉಷ್ಣಾಂಶವು 20&deg;C ರಿಂದ 22&deg;C ನಡುವೆಯೇ ಇರಲಿದೆ.&lt;/p&gt;&lt;h2&gt;ಜನರಿಗೆ ಎಚ್ಚರಿಕೆ ಮತ್ತು ಸಲಹೆಗಳು&lt;/h2&gt;&lt;p&gt;ಹವಾಮಾನ ಇಲಾಖೆಯು ಉತ್ತರ ಕರ್ನಾಟಕದ ಜನರಿಗೆ ವಿಶೇಷ ಎಚ್ಚರಿಕೆ ನೀಡಿದ್ದು, ಬಿಸಿಲಿನ ತೀವ್ರತೆ ಹೆಚ್ಚಿರುವ ಸಮಯದಲ್ಲಿ ಮನೆಯೊಳಗೇ ಇರುವಂತೆ ಸಲಹೆ ನೀಡಿದೆ. ಮಧ್ಯಾಹ್ನ 12ರಿಂದ 4ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ, ಹೆಚ್ಚು ನೀರು ಕುಡಿಯಿರಿ, ಹಗುರವಾದ ಬಟ್ಟೆ ಧರಿಸಿ . ನೇರ ಬಿಸಿಲಿನಿಂದ ದೂರವಿರಿ ಎಂದು ಸಲಹೆ ನೀಡಲಾಗಿದೆ.&lt;/p&gt;&lt;h2&gt;9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಕೆಲಸದ ಸಮಯ ಬದಲು&lt;/h2&gt;&lt;p&gt;ವಿಪರೀತ ಬಿಸಿಲಿನ ಹಿನ್ನೆಲೆಯಲ್ಲಿ ಕಲಬುರಗಿ ಕಂದಾಯ ವಿಭಾಗದ ಕಲಬುರಗಿ, ಬೀದರ್&zwnj;, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳು, ಬೆಳಗಾವಿ ಕಂದಾಯ ವಿಭಾಗದ ವಿಜಯನಗರ, ಬಾಗಲಕೋಟೆ 2 ಜಿಲ್ಲೆಗಳು ಸೇರಿದಂತೆ 9 ಜಿಲ್ಲೆಗಳಲ್ಲಿನ ಸರ್ಕಾರದ ಕಚೇರಿಗಳ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗಿನ 8 ರಿಂದ ಮಧ್ಯಾಹ್ನ 1.30ರವರೆಗೆ ಸಮಯ ಬದಲಿಸಿ ಏ.1ರಿಂದಲೇ ಜಾರಿಗೆ ಬರುವಂತೆ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.&lt;/p&gt;&lt;p&gt;ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಹೆಚ್ಚಿನ ಬಿಸಿಲು ಇರುವ ಕಾರಣ ಈ ಬದಲಾವಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿನ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ಎಂದಿನಂತೆ ಯಾವುದೇ ಲೋಷ/ ಅಡೆತಡೆಯಿಲ್ಲದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು/ಜಿಪಂ ಸಿಇಒ ತುರ್ತು ಸಂದರ್ಭಗಳಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಸಮಯದ ಮಿತಿಯಿಲ್ಲದೆ ಕೆಲಸ ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಒಟ್ಟಾರೆ, ರಾಜ್ಯದ ವಿವಿಧ ಭಾಗಗಳಲ್ಲಿ ವಿಭಿನ್ನ ಹವಾಮಾನ ಸ್ಥಿತಿಗಳು ಕಂಡುಬರುತ್ತಿದ್ದರೂ, ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆ ಹೆಚ್ಚು ಇರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v"/>
        </item>
        <item>
            <title><![CDATA[ಕಬಕ-ಪುತ್ತೂರು ರೈಲು ನಿಲ್ದಾಣದಲ್ಲಿ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರು. ಮಂಜೂರು]]></title>
            <link>https://kannada.asianetnews.com/karnataka-districts/kabaka-puttur-railway-station-gets-2-91-crore-upgrade-for-passenger-facilities-gdp/articleshow-lgbpfv1</link>
            <guid isPermaLink="true">https://kannada.asianetnews.com/karnataka-districts/kabaka-puttur-railway-station-gets-2-91-crore-upgrade-for-passenger-facilities-gdp/articleshow-lgbpfv1</guid>
            <pubDate>Thu, 02 Apr 2026 07:56:18 +0530</pubDate>
            <description><![CDATA[ದಕ್ಷಿಣ ಕನ್ನಡದ ಕಬಕ&ndash;ಪುತ್ತೂರು ರೈಲು ನಿಲ್ದಾಣದ ಅಭಿವೃದ್ಧಿಗೆ ₹2.91 ಕೋಟಿ ಅನುದಾನ ಮಂಜೂರಾಗಿದೆ. ಈ ಯೋಜನೆಯಡಿ, ಪ್ರಯಾಣಿಕರ ಅನುಕೂಲಕ್ಕಾಗಿ ಬೃಹತ್ ಶೆಲ್ಟರ್ ನಿರ್ಮಾಣವಾಗಲಿದ್ದು, ಎರಡು ಲಿಫ್ಟ್&zwnj;ಗಳನ್ನು ಅಳವಡಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ. ಸಂಸದ ಬ್ರಿಜೇಶ್ ಚೌಟ ಅವರ ಪ್ರಯತ್ನದಿಂದ ಈ ಯೋಜನೆಗೆ ಚಾಲನೆ ದೊರೆತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn4hzbdwsw0b24fzt2chtj45,imgname-kabaka-puttur-1775048306108.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ದಕ್ಷಿಣ ಕನ್ನಡ ಜಿಲ್ಲೆಯ ಕಬಕ&ndash;ಪುತ್ತೂರು ರೈಲು ನಿಲ್ದಾಣದ ಅಭಿವೃದ್ಧಿಗೆ ಮಹತ್ವದ ಉತ್ತೇಜನ ಸಿಕ್ಕಿದ್ದು, ಪ್ರಯಾಣಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ₹2.91 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗೆ ಅನುಮೋದನೆ ದೊರೆತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.&lt;/p&gt;&lt;p&gt;ಈ ಯೋಜನೆಯಡಿ ಕಬಕ&ndash;ಪುತ್ತೂರು ರೈಲು ನಿಲ್ದಾಣದ ಪ್ಲಾಟ್&zwnj;ಫಾರ್ಮ್ ಸಂಖ್ಯೆ 1ರಲ್ಲಿ ವಿಶಾಲವಾದ ಮತ್ತು ಆಧುನಿಕ ಶೆಲ್ಟರ್ ನಿರ್ಮಾಣವಾಗಲಿದೆ. ಪ್ರಸ್ತುತ ನಿಲ್ದಾಣದಲ್ಲಿ ಕೇವಲ 531 ಚದರ ಮೀಟರ್ ವಿಸ್ತೀರ್ಣದ ಶೆಲ್ಟರ್ ಮಾತ್ರ ಲಭ್ಯವಿದ್ದು, ಇದು ಪ್ರಯಾಣಿಕರ ಅಗತ್ಯಗಳಿಗೆ ತೀರಾ ಸಹಾಯಕವಾಗಲಿದೆ. ಆದರೆ, ಹೊಸ ಯೋಜನೆಯಡಿ 3,392 ಚದರ ಮೀಟರ್ ವಿಸ್ತೀರ್ಣದ ಬೃಹತ್ ಶೆಲ್ಟರ್ ನಿರ್ಮಾಣವಾಗಲಿದ್ದು, ಇದು ಪ್ರಯಾಣಿಕರಿಗೆ ಮಳೆಗಾಲ ಮತ್ತು ಬೇಸಿಗೆಯಂತಹ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ದೊಡ್ಡ ಮಟ್ಟದ ಅನುಕೂಲ ಒದಗಿಸಲಿದೆ.&lt;/p&gt;&lt;p&gt;ಶೆಲ್ಟರ್ ನಿರ್ಮಾಣಕ್ಕಾಗಿ ಅಗತ್ಯ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದರು ತಿಳಿಸಿದ್ದಾರೆ. ಈ ಯೋಜನೆ ಪೂರ್ಣಗೊಂಡ ನಂತರ ನಿಲ್ದಾಣದಲ್ಲಿ ಪ್ರಯಾಣಿಕರ ಅನುಭವವು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ.&lt;/p&gt;&lt;h2&gt;ಎರಡು ಲಿಫ್ಟ್&zwnj;ಗಳ ಅಳವಡಿಕೆ&lt;/h2&gt;&lt;p&gt;ಇದಕ್ಕೂ ಮೀರಾಗಿ, ನಿಲ್ದಾಣದಲ್ಲಿ ಸಂಚಾರ ಸುಗಮಗೊಳಿಸಲು ಮತ್ತೊಂದು ಮಹತ್ವದ ಯೋಜನೆಯೂ ರೂಪುಗೊಂಡಿದೆ. ಪ್ಲಾಟ್&zwnj;ಫಾರ್ಮ್ ಸಂಖ್ಯೆ 1 ಮತ್ತು 2 ಅನ್ನು ಸಂಪರ್ಕಿಸುವ ಮೇಲ್ಸೇತುವೆ (FOB) ಬಳಿ ಎರಡು ಲಿಫ್ಟ್&zwnj;ಗಳನ್ನು ಅಳವಡಿಸುವ ಪ್ರಸ್ತಾವನೆ ಇದೆ. ಈ ಯೋಜನೆಗೆ ಅಂದಾಜು ₹1.33 ಕೋಟಿ ವೆಚ್ಚವಾಗಲಿದ್ದು, ಪ್ರಸ್ತುತ ಇದು ರೈಲ್ವೆ ಕೇಂದ್ರ ಕಚೇರಿಯಲ್ಲಿ ಪರಿಶೀಲನಾ ಹಂತದಲ್ಲಿದೆ.&lt;/p&gt;&lt;p&gt;ಈ ಅಭಿವೃದ್ಧಿ ಕಾರ್ಯಗಳ ಹಿಂದೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರಯತ್ನವೂ ಪ್ರಮುಖವಾಗಿದೆ. 2024ರ ನವೆಂಬರ್ ತಿಂಗಳಲ್ಲಿ ಅವರು ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅವರಿಗೆ ಪತ್ರ ಬರೆದು, ನಿಲ್ದಾಣದಲ್ಲಿ ಶೆಲ್ಟರ್ ವಿಸ್ತರಣೆ ಮತ್ತು ಮೂಲಸೌಕರ್ಯ ಸುಧಾರಣೆಯ ಅಗತ್ಯವನ್ನು ಒತ್ತಿಹೇಳಿದ್ದರು. ವಿಶೇಷವಾಗಿ, ಬೇಸಿಗೆಯ ಉಷ್ಣತೆ ಮತ್ತು ಮಳೆಯ ಸಮಯದಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ತೊಂದರೆಗಳನ್ನು ಅವರು ಪ್ರಸ್ತಾಪಿಸಿದ್ದರು.&lt;/p&gt;&lt;h2&gt;ಗಂಭೀರವಾಗಿ ಪರಿಗಣಿಸಿದ ರೈಲ್ವೆ ಇಲಾಖೆ&lt;/h2&gt;&lt;p&gt;ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಇಲಾಖೆ, ಅಗತ್ಯ ಅನುದಾನ ಮಂಜೂರು ಮಾಡುವ ಮೂಲಕ ಯೋಜನೆಗೆ ಹಸಿರು ನಿಶಾನೆ ತೋರಿದೆ. ಇದರ ಹಿನ್ನೆಲೆಯಲ್ಲಿ, ಸಂಸದರು ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಯೋಜನೆ ಕಬಕ&ndash;ಪುತ್ತೂರು ರೈಲು ನಿಲ್ದಾಣವನ್ನು ಆಧುನಿಕ ಮತ್ತು ಪ್ರಯಾಣಿಕ ಸ್ನೇಹಿ ಕೇಂದ್ರವನ್ನಾಗಿ ರೂಪಿಸುವತ್ತ ಮಹತ್ವದ ಹೆಜ್ಜೆಯಾಗಿದ್ದು, ಸ್ಥಳೀಯ ಪ್ರಯಾಣಿಕರು ಮತ್ತು ರೈಲ್ವೆ ಬಳಕೆದಾರರಿಗೆ ದೀರ್ಘಕಾಲಿಕ ಲಾಭವನ್ನು ನೀಡಲಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kabaka-puttur-railway-station-gets-2-91-crore-upgrade-for-passenger-facilities-gdp/articleshow-lgbpfv1"/>
        </item>
        <item>
            <title><![CDATA[ರಾಜ್ಯದ ಜನತೆಗೆ ಅಲರ್ಟ್: ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ!]]></title>
            <link>https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc</link>
            <guid isPermaLink="true">https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc</guid>
            <pubDate>Tue, 24 Mar 2026 20:43:56 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmc4fptfwz060wyzsnqeqzh5,imgname-rain-1774228855631.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.&lt;img&gt;&lt;p&gt;ಕರ್ನಾಟಕದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದೆ.&lt;/p&gt;&lt;img&gt;&lt;p&gt;ರಾಜ್ಯದ ಆರು ಪ್ರಮುಖ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು 'ಯೆಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕರಾವಳಿ ಮತ್ತು ಮಲೆನಾಡು ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಿರಲಿದೆ.&lt;/p&gt;&lt;img&gt;&lt;p&gt;ಈ ಜಿಲ್ಲೆಗಳಲ್ಲಿ ಕೇವಲ ಮಳೆ ಮಾತ್ರವಲ್ಲದೆ, ಜೋರಾದ ಗಾಳಿಯೊಂದಿಗೆ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಮಳೆಯ ಸಮಯದಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಓಡಾಡಬಾರದು. ವಿಶೇಷವಾಗಿ ಮಿಂಚಿನ ಸಂದರ್ಭದಲ್ಲಿ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಮತ್ತು ವಿದ್ಯುತ್ ಕಂಬಗಳು ಅಥವಾ ತಂತಿಗಳ ಬಳಿ ಹೋಗಬಾರದು ಎಂದು ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಹವಾಮಾನ ಬದಲಾವಣೆಯ ಈ ಸಂದರ್ಭದಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;p&gt;&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc"/>
        </item>
        <item>
            <title><![CDATA[ಮಂಗಳೂರಿನ ಸುರತ್ಕಲ್‌ನಲ್ಲಿ ಅತ್ಯಾಧುನಿಕ Gen Z ಅಂಚೆ ಕಚೇರಿ ಉದ್ಘಾಟನೆ; ಏನಿದರ ವಿಶೇಷತೆ?]]></title>
            <link>https://kannada.asianetnews.com/karnataka-districts/gen-z-post-office-inaugurated-at-national-institute-of-technology-karnataka-campus-suratkal-mangaluru-mrq/articleshow-msmnt17</link>
            <guid isPermaLink="true">https://kannada.asianetnews.com/karnataka-districts/gen-z-post-office-inaugurated-at-national-institute-of-technology-karnataka-campus-suratkal-mangaluru-mrq/articleshow-msmnt17</guid>
            <pubDate>Tue, 31 Mar 2026 10:23:38 +0530</pubDate>
            <description><![CDATA[ಕರಾವಳಿ ಕರ್ನಾಟಕದ ಮೊದಲ ಅತ್ಯಾಧುನಿಕ ನ್ಯೂಜೆನ್ ಅಂಚೆ ಕಚೇರಿಯು ಮಂಗಳೂರಿನ ಸುರತ್ಕಲ್ ಎನ್&zwnj;ಐಟಿಕೆ ಕ್ಯಾಂಪಸ್&zwnj;ನಲ್ಲಿ ಉದ್ಘಾಟನೆಗೊಂಡಿದೆ. ಈ ಕಚೇರಿಯು ಹೈಸ್ಪೀಡ್ ವೈಫೈ, ಸ್ವಯಂ ಬುಕಿಂಗ್ ಕಿಯೋಸ್ಕ್, ಗೇಮ್ ಝೋನ್ ಮತ್ತು ಸೆಲ್ಫಿ ಪಾಯಿಂಟ್&zwnj;ನಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn1354bsvcts0wsz4amf15wt,imgname-mangaluru-post-office-1774932103545.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: &amp;nbsp;ಮಂಗಳೂರು ಅಂಚೆ ವಿಭಾಗವು ಕರಾವಳಿ ಕರ್ನಾಟಕದ ಮೊದಲ ಅತ್ಯಾಧುನಿಕ ನ್ಯೂಜೆನ್ (ಎನ್- ಜೆನ್) ಅಂಚೆ ಕಚೇರಿಯನ್ನು ಸುರತ್ಕಲ್ ಎನ್&zwnj;ಐಟಿಕೆ ಕ್ಯಾಂಪಸ್&zwnj;ನಲ್ಲಿ ಸಿದ್ಧಗೊಳಿಸಿದ್ದು, ಸೋಮವಾರ ಉದ್ಘಾಟನೆಗೊಂಡಿತು.&lt;/p&gt;&lt;h2&gt;&lt;strong&gt;ಎನ್&zwnj;-ಜೆನ್&zwnj; ಕಚೇರಿ ಸುರತ್ಕಲ್&zwnj;ನಲ್ಲಿ ಕಾರ್ಯಾರಂಭ&lt;/strong&gt;&lt;/h2&gt;&lt;p&gt;ಬೆಂಗಳೂರಿನ ಆಚಾರ್ಯ ಇನ್&zwnj;ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೀತಂ ವಿಶ್ವವಿದ್ಯಾನಿಲಯ ಮತ್ತು ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಎನ್- ಜೆನ್ ಅಂಚೆ ಕಚೇರಿ ಸ್ಥಾಪನೆಯ ಬಳಿಕ ನಾಲ್ಕನೇ ಎನ್&zwnj;-ಜೆನ್&zwnj; ಕಚೇರಿ ಸುರತ್ಕಲ್&zwnj;ನಲ್ಲಿ ಕಾರ್ಯಾರಂಭ ಮಾಡಿದೆ.&lt;/p&gt;&lt;h3&gt;&lt;strong&gt;ಏನೆಲ್ಲಾ ಸೌಲಭ್ಯಗಳು ಇರಲಿವೆ?&lt;/strong&gt;&lt;/h3&gt;&lt;p&gt;ಈ ಕಚೇರಿಯು ಉಚಿತ ಹೈಸ್ಪೀಡ್ ವೈಫೈ ಮತ್ತು ಸ್ವಯಂ ಬುಕಿಂಗ್ ಕಿಯೋತ್ಸ್&zwnj;, ಆಧುನಿಕವಾಗಿ ಬರೆಯುವ ಸ್ಥಳ, ವಿಶ್ರಾಂತಿಗಾಗಿ ಲಾಬಿ ಹಾಗೂ ಸ್ಫೂರ್ತಿದಾಯಕ ಪುಸ್ತಗಳನ್ನು ಒಳಗೊಂಡಿರುವ ಗ್ರಂಥಾಲಯವನ್ನು ಹೊಂದಿದೆ. ಜತೆಗೆ ಪ್ರತ್ಯೇಕ ಗೇಮ್ ಝೋನ್, ಸಾಂಪ್ರದಾಯಿಕ ಅಂಚೆ ಪೆಟ್ಟಿಗೆ ಹಾಗೂ ಜೆನ್&zwnj;-ಝಡ್&zwnj; ವಿದ್ಯಾರ್ಥಿಯ ವಿಶೇಷ ಚಿತ್ರವಿರುವ ಸೆಲ್ಫಿ ಪಾಯಿಂಟ್ ಇರಲಿದೆ.&lt;/p&gt;&lt;p&gt;ಇಂಡಿಯಾ ಪೋಸ್ಟ್&zwnj;ನ ಜನರಲ್&zwnj; ಮ್ಯಾನೆಜರ್&zwnj; (ಪೋಸ್ಟಲ್&zwnj; ಅಕೌಂಟ್ಸ್&zwnj; ಆಂಡ್&zwnj; ಫೈನಾನ್ಸ್&zwnj;) ಜ್ಯೂಲಿಯಾ ಮೊಹಪಾತ್ರ ಈ ನೂತನ ಕಚೇರಿಯನ್ನು ಉದ್ಘಾಟಿಸಿದರು. ಎನ್&zwnj;ಐಟಿಕೆ ಡೆಪ್ಯುಟಿ ಡೈರೆಕ್ಟರ್&zwnj; ಪ್ರೊ.ಸುಭಾಶ್&zwnj; ಸಿ. ಯರಗಲ್&zwnj;, ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ ಡೈರೆಕ್ಟರ್&zwnj; (ಪೋಸ್ಟಲ್&zwnj; ಸರ್ವಿಸಸ್&zwnj;) ಶ್ರೀಹರ್ಷ, ಮಂಗಳೂರು ವಿಭಾಗದ ಸೀನಿಯರ್&zwnj; ಸುಪರಿಂಟೆಂಡೆಂಟ್&zwnj; ದಿನೇಶ ಪಿ. ಮತ್ತಿತರರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಖಾಸಗಿ ಕೊರಿಯರ್&zwnj;ಗಳಿಗೆ ಸೆಡ್ಡು: ಅಂಚೆ ಇಲಾಖೆಯ ಹೊಸ ಅಸ್ತ್ರ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಈ ಸೇವೆ!&lt;/strong&gt;&lt;/p&gt;&lt;p&gt;ಇದೇ ಸಂದರ್ಭ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ವಿಜೇತರಾದ ಪುಣ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಅಕ್ಷತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ದಿನೇಶ ಪಿ. ಸ್ವಾಗತಿಸಿದರು. ಲೋಕನಾಥ ಎಂ. ವಂದಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;PPFಗಿಂತ ಹೆಚ್ಚಿನ ಬಡ್ಡಿ ನೀಡುವ ಅಂಚೆ ಕಚೇರಿಯ 6 ಉಳಿತಾಯ ಯೋಜನೆಗಳಿವು&lt;/strong&gt;&lt;/p&gt;&lt;p&gt;--------------&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gen-z-post-office-inaugurated-at-national-institute-of-technology-karnataka-campus-suratkal-mangaluru-mrq/articleshow-msmnt17"/>
        </item>
        <item>
            <title><![CDATA[ಬೆಳ್ತಂಗಡಿ ದುರಂತ! ಚಲಿಸ್ತಿದ್ದ KSRTC ಬಸ್​ ಡೋರ್​ ಓಪನ್​: ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು- CCTVಯಲ್ಲಿ ಸೆರೆ]]></title>
            <link>https://kannada.asianetnews.com/karnataka-districts/moving-ksrtc-bus-door-open-girls-fell-on-the-road-caught-on-cctv-suc/articleshow-o9wadao</link>
            <guid isPermaLink="true">https://kannada.asianetnews.com/karnataka-districts/moving-ksrtc-bus-door-open-girls-fell-on-the-road-caught-on-cctv-suc/articleshow-o9wadao</guid>
            <pubDate>Tue, 31 Mar 2026 17:57:55 +0530</pubDate>
            <description><![CDATA[ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ, ಚಲಿಸುತ್ತಿದ್ದ ಕೆಎಸ್&zwnj;ಆರ್&zwnj;ಟಿಸಿ ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಕ್ಕ-ತಂಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಭಯಾನಕ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn1xsqedwh579zbqm3n0ppqh,imgname-ksrtc-1774960041421.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕೆಎಸ್&zwnj;ಆರ್&zwnj;ಟಿಸಿ (KSRTC) ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡಿದ್ದು, ಇಬ್ಬರು ವಿದ್ಯಾರ್ಥಿನಿಯರು ಬಸ್​ನಿಂದ ಕೆಳಕ್ಕೆ ಬಿದ್ದಿರುವ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಇದರ ಭಯಾನಕ ದೃಶ್ಯಗಳು ಸೆರೆಯಾಗಿವೆ. ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯವಾಗಲಿಲ್ಲ. ಹಿಂದಿನಿಂದ ಬೇರೆ ಬಸ್​ ಅಥವಾ ಇನ್ನಾವುದೇ ವಾಹನ ಬರುತ್ತಿದ್ದರೆ ಮಾತ್ರ ಪ್ರಕರಣದ ಭೀಕರತೆ ಊಹಿಸಲೂ ಕಷ್ಟವಾಗಿತ್ತು.&lt;/p&gt;&lt;h2&gt;&lt;strong&gt;ಘಟನೆ ವಿವರ&lt;/strong&gt;&lt;/h2&gt;&lt;p&gt;ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಕೆಎಸ್&zwnj;ಆರ್&zwnj;ಟಿಸಿ ಬಸ್ಸಿಗೆ ಗೇರುಕಟ್ಟೆ ಸ್ಟಾಪ್​ನಲ್ಲಿ ಅಕ್ಕ-ತಂಗಿ ಹತ್ತಿದ್ದರು. ಬಸ್ ಕಳಿಯ ಗ್ರಾಮದ ರೇಷ್ಮೆರೋಡ್ ಎಂಬಲ್ಲಿನ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ, ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡಿದೆ. ಈ ವೇಳೆ ಬಾಗಿಲ ಬಳಿಯೇ ನಿಂತಿದ್ದ ಅಕ್ಕ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಹೋದ ತಂಗಿ ಕೂಡ ಬಿದ್ದಿದ್ದಾರೆ. ವೇಗದಲ್ಲಿ ಬಸ್​ ಇದ್ದುದರಿಂದ ಅವರು ಉರುಳಿ ಉರುಳಿ ರಸ್ತೆಯ ಮೇಲೆ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.&lt;/p&gt;&lt;h3&gt;&lt;strong&gt;ಸಿಸಿಟಿವಿಯಲ್ಲಿ ಸೆರೆ&lt;/strong&gt;&lt;/h3&gt;&lt;p&gt;ಈ ಇಡೀ ದೃಶ್ಯವು ರಸ್ತೆಯ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಕ್ಕ- ತಂಗಿ ಬೀಳುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ನೆರವಿಗೆ ಬಂದಿದ್ದರಿಂದ ಇನ್ನಷ್ಟು ಅನಾಹುತ ತಪ್ಪಿದೆ. ತಂಗಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹೋಗುತ್ತಿರುವುದಾಗಿ ಹೇಳಲಾಗುತ್ತಿದ್ದು, ಅಕ್ಕ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಾಳೆ. ಅಕ್ಕ-ತಂಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನ ನಿರ್ವಹಣೆ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಬಸ್​ನ ಬಾಗಿಲಿನ ಬಳಿ ನಿಂತುಕೊಳ್ಳುವವರಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ. ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಾಗರಾಜ ಹಾಗೂ ರೂಪ ದಂಪತಿ ಮಕ್ಕಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dakshina-kannada</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/moving-ksrtc-bus-door-open-girls-fell-on-the-road-caught-on-cctv-suc/articleshow-o9wadao"/>
        </item>
        <item>
            <title><![CDATA[ಉದ್ಯಮಿ ಸುದೀಪ್ ಶೆಟ್ಟಿ ಕೇಸಲ್ಲಿ ಬಿಗ್ ಟ್ವಿಸ್ಟ್: ಅತ್ತೆ-ಮಾವ ಹಾಗೂ ವೇಣು ರಹಸ್ಯ ಬಿಚ್ಚಿಟ್ಟ ನಟಿ ಸೌಮ್ಯಾ ಶೆಟ್ಟಿ!]]></title>
            <link>https://kannada.asianetnews.com/gallery/karnataka-districts/mangaluru-businessman-sudeep-shetty-death-case-soumya-shetty-denies-allegations-their-family-members-sat-rd05t96</link>
            <guid isPermaLink="true">https://kannada.asianetnews.com/gallery/karnataka-districts/mangaluru-businessman-sudeep-shetty-death-case-soumya-shetty-denies-allegations-their-family-members-sat-rd05t96</guid>
            <pubDate>Thu, 02 Apr 2026 15:09:40 +0530</pubDate>
            <description><![CDATA[&lt;p&gt;ನೆಲ್ಯಾಡಿಯ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಯ ಸಾವಿಗೆ ತಾನೇ ಕಾರಣ ಎಂಬ ಆರೋಪವನ್ನು ಪತ್ನಿ, ನಟಿ ಸೌಮ್ಯ ಶೆಟ್ಟಿ ನಿರಾಕರಿಸಿದ್ದು, ಬದಲಾಗಿ ಪತಿಯ ಸಾಲದ ಸಮಸ್ಯೆ ಮತ್ತು ಅವರ ಮನೆಯವರ ಕಿರುಕುಳದ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6rdmgxzbpx9ppm3eqvpjxn,imgname-sudeep-shetty-case-actress-sowmya-shetty-1775122174493.jpg" type="image/jpeg" height="390" width="690"/>
            <content:encoded><![CDATA[&lt;p&gt;ನೆಲ್ಯಾಡಿಯ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಯ ಸಾವಿಗೆ ತಾನೇ ಕಾರಣ ಎಂಬ ಆರೋಪವನ್ನು ಪತ್ನಿ, ನಟಿ ಸೌಮ್ಯ ಶೆಟ್ಟಿ ನಿರಾಕರಿಸಿದ್ದು, ಬದಲಾಗಿ ಪತಿಯ ಸಾಲದ ಸಮಸ್ಯೆ ಮತ್ತು ಅವರ ಮನೆಯವರ ಕಿರುಕುಳದ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಉಡುಪಿ (ಏ.02): ದ&lt;/strong&gt;ಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ರಿಯಲ್ ಎಸ್ಟೇಟ್ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸುದೀಪ್ ಸಾವಿಗೆ ಅವರ ಪತ್ನಿ, ನಟಿ ಸೌಮ್ಯ ಶೆಟ್ಟಿ ಅವರೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದರು. ಆದರೆ, ಈಗ ಈ ಎಲ್ಲಾ ಆರೋಪಗಳಿಗೆ ನಟಿ ಸೌಮ್ಯ ಶೆಟ್ಟಿ ಖಡಕ್ ಪ್ರತಿಕ್ರಿಯೆ ನೀಡಿದ್ದು, ಪತಿ ಸಾವಿನ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಮಾತ್ರವಲ್ಲದೆ, ಸುದೀಪ್ ಸಾವಿಗೆ ಅವರ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ಸುದೀಪ್ ಸಾವಿಗೂ ಮುನ್ನ ಸೌಮ್ಯ ಶೆಟ್ಟಿ ನೆಲ್ಯಾಡಿಗೆ ಬಂದು ರಂಪಾಟ ಮಾಡಿದ್ದರು ಎಂಬ ಅತ್ತೆ ಪುಷ್ಪಲತಾ ಶೆಟ್ಟಿ ಅವರ ಆರೋಪಕ್ಕೆ ಸೌಮ್ಯ ಉತ್ತರಿಸಿದ್ದಾರೆ. 'ಸುದೀಪ್ ಅವರ ಮೊಬೈಲ್ ಸ್ವಿಚ್ ಆಫ್ ಇದ್ದ ಕಾರಣ ನಾನು ಆತಂಕಗೊಂಡು ನೆಲ್ಯಾಡಿಗೆ ಹೋಗಿದ್ದೆ. ಅಲ್ಲಿ ಅವರ ಮನೆಯವರು ನನಗೆ ಅಸಭ್ಯ ಭಾಷೆಯಲ್ಲಿ ಬೈದರು. ಹೆಂಡತಿಯಾಗಿ ನಾನು ಅಲ್ಲಿ ಧ್ವನಿ ಎತ್ತಿದ್ದು ನಿಜ, ಆದರೆ ಅದು ರಂಪಾಟವಲ್ಲ. ನಾನು ವಿಷ ಹಾಕಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು, ಬೇಕಿದ್ದರೆ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಿ' ಎಂದು ಸವಾಲು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಸುದೀಪ್ ಶೆಟ್ಟಿ ಅವರ ಸಾವಿಗೆ ಸಾಲದ ಸಮಸ್ಯೆ ಮತ್ತು ಕುಟುಂಬದ ಒತ್ತಡವೇ ಕಾರಣ ಎಂದು ಸೌಮ್ಯ ಶೆಟ್ಟಿ ಹೇಳಿದ್ದಾರೆ. 'ಸುದೀಪ್ ಅವರಿಗೆ ಕಳೆದ 8-9 ವರ್ಷಗಳಿಂದ ಸಾಲ ಇತ್ತು. ಆದರೆ ಮಾರ್ಚ್ 16ರಂದು ಅವರು ನೆಲ್ಯಾಡಿಯ ತಮ್ಮ ತಂದೆಯ ಮನೆಗೆ ಹೋದ ನಂತರವೇ ಪರಿಸ್ಥಿತಿ ಬದಲಾಗಿದೆ.&lt;/p&gt;&lt;img&gt;&lt;p&gt;ನಮ್ಮ ಮದುವೆಗೆ ಅವರ ಮನೆಯವರು ಒಪ್ಪುತ್ತಿಲ್ಲ ಎಂಬ ಬೇಸರ ಅವರಿಗಿತ್ತು. ತಂದೆಯ ಮನೆಗೆ ಹೋಗಿ ಬಂದ ನಂತರ ಅವರು ಆತ್ಮ*ಹತ್ಯೆಯ ನಿರ್ಧಾರ ಮಾಡಿದ್ದಾರೆ ಎಂದರೆ, ಅಲ್ಲಿ ಅವರಿಗೆ ಮಾನಸಿಕ ಕಿರುಕುಳ ನೀಡಿ ಪ್ರಚೋದಿಸಿರುವ ಸಂಶಯ ನನಗಿದೆ' ಎಂದು ಸೌಮ್ಯ ಗಂಭೀರವಾಗಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt; ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ&lt;/p&gt;&lt;img&gt;&lt;p&gt;ಈ ಪ್ರಕರಣದಲ್ಲಿ ಸೌಮ್ಯಳ ಹಳೆ ಪ್ರೇಮಿ ಎಂದು ಹೇಳಿಕೊಂಡು ಆರೋಪ ಮಾಡಿದ್ದ ವೇಣು ಶೆಟ್ಟಿ ವಿರುದ್ಧವೂ ಸೌಮ್ಯ ಶೆಟ್ಟಿ ಕಿಡಿಕಾರಿದ್ದಾರೆ. 'ವೇಣು ಶೆಟ್ಟಿ ಒಬ್ಬ ನಾಟಕ ಕಲಾವಿದ, ಆತನ ಕ್ಯಾರೆಕ್ಟರ್ ಸರಿ ಇಲ್ಲ. ಹಲವು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದ ಆತನ ಬಗ್ಗೆ ತಿಳಿಯುತ್ತಿದ್ದಂತೆಯೇ ನಾನು ದೂರವಾಗಿದ್ದೆ. ಆದರೆ ಆತ ಸುದೀಪ್ ಅವರ ತಂದೆಯ ತಲೆ ಕೆಡಿಸಿ ಈ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದ್ದಾನೆ. ಆತನ ಬಗ್ಗೆ ಇರುವ ಎಲ್ಲಾ ದಾಖಲೆಗಳನ್ನು ನಾನು ಪೊಲೀಸರಿಗೆ ನೀಡುತ್ತೇನೆ' ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಈಗಾಗಲೇ ಸೌಮ್ಯ ಶೆಟ್ಟಿ ಅವರು ಸುದೀಪ್ ಮನೆಯವರು ಹಾಗೂ ವೇಣು ಶೆಟ್ಟಿ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉದ್ಯಮಿಯ ಸಾವಿನ ಸುತ್ತಲಿನ ಈ ಆರೋಪ-ಪ್ರತ್ಯಾರೋಪಗಳು ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿವೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/mangaluru-businessman-sudeep-shetty-death-case-soumya-shetty-denies-allegations-their-family-members-sat-rd05t96"/>
        </item>
        <item>
            <title><![CDATA[ಯುದ್ಧದ ಬಳಿಕ ಮಂಗಳೂರಿಗೆ ಬಂತು ಪ್ರಥಮ ಎಲ್‌ಪಿಜಿ ಹಡಗು]]></title>
            <link>https://kannada.asianetnews.com/state/first-liquefied-petroleum-gas-tanker-reaches-mangaluru-after-war-disruptions/articleshow-sgg9x57</link>
            <guid isPermaLink="true">https://kannada.asianetnews.com/state/first-liquefied-petroleum-gas-tanker-reaches-mangaluru-after-war-disruptions/articleshow-sgg9x57</guid>
            <pubDate>Mon, 23 Mar 2026 06:14:46 +0530</pubDate>
            <description><![CDATA[&lt;p&gt;ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ಶನಿವಾರ ಕಚ್ಚಾತೈಲ ಹಡಗು ಮಂಗಳೂರು ಬಂದರಿಗೆ ಆಗಮಿಸಿದ ಬೆನ್ನಲ್ಲೇ ಭಾನುವಾರ ಎಲ್&zwnj;ಪಿಜಿ ಹೊತ್ತ ಮತ್ತೊಂದು ಸರಕು ಹಡಗು ಬಂದು ತಲುಪಿದೆ. ಪಿಕ್ಸಿಸ್ ಪಯನೀರ್ ಹೆಸರಿನ ಈ ಸರಕು ಹಡಗು 16 ಸಾವಿರ ಮೆಟ್ರಿಕ್&zwnj; ಟನ್&zwnj; ಎಲ್&zwnj;ಪಿಜಿ ಹೊತ್ತು ತಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km08y4vxjefcj6vj906x6da0,imgname-lpg--3--1773830869884.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು &lt;/strong&gt;: ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ಶನಿವಾರ ಕಚ್ಚಾತೈಲ ಹಡಗು ಮಂಗಳೂರು ಬಂದರಿಗೆ ಆಗಮಿಸಿದ ಬೆನ್ನಲ್ಲೇ ಭಾನುವಾರ ಎಲ್&zwnj;ಪಿಜಿ ಹೊತ್ತ ಮತ್ತೊಂದು ಸರಕು ಹಡಗು ಬಂದು ತಲುಪಿದೆ. ಪಿಕ್ಸಿಸ್ ಪಯನೀರ್ ಹೆಸರಿನ ಈ ಸರಕು ಹಡಗು ಅಮೆರಿಕದ ಟೆಕ್ಸಾಸ್&zwnj;ನಿಂದ ಸುಮಾರು 16 ಸಾವಿರ ಮೆಟ್ರಿಕ್&zwnj; ಟನ್&zwnj; ಎಲ್&zwnj;ಪಿಜಿ ಹೊತ್ತು ತಂದಿದೆ. ಯುದ್ಧ ಆರಂಭವಾದ ಬಳಿಕ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸಿದ ಮೊದಲ ಎಲ್&zwnj;ಪಿಜಿ ಹಡಗು ಇದು.&lt;/p&gt;&lt;h2&gt;&lt;strong&gt;ಮಾ.14ರಂದು ಅಮೆರಿಕದಿಂದ ಹೊರಟಿದ್ದ ಈ ಪಿಕ್ಸಿಸ್ ಪಯನೀರ್&lt;/strong&gt;&lt;/h2&gt;&lt;p&gt;ಮಾ.14ರಂದು ಅಮೆರಿಕದಿಂದ ಹೊರಟಿದ್ದ ಈ ಪಿಕ್ಸಿಸ್ ಪಯನೀರ್ ಹಡಗು ಯಶಸ್ವಿಯಾಗಿ ಮಂಗಳೂರು ತಲುಪಿದ್ದು, ಅನ್&zwnj;ಲೋಡಿಂಗ್&zwnj; ಕಾರ್ಯ ಕೂಡ ಆರಂಭವಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;h3&gt;ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಅಕ್ವಾ ಟೈಟಾನ್&zwnj;&lt;/h3&gt;&lt;p&gt;ಇದಕ್ಕೂ ಮೊದಲು ಶನಿವಾರ, ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಅಕ್ವಾ ಟೈಟಾನ್&zwnj; ಹೆಸರಿನ ಕಚ್ಛಾ ತೈಲ ಹೊತ್ತ ಬೃಹತ್&zwnj; ಹಡಗು ಮಂಗಳೂರು ತಲುಪಿದ್ದು, ಪೈಪ್&zwnj;ಲೈನ್&zwnj; ಮೂಲಕ ಎಂಆರ್&zwnj;ಪಿಎಲ್&zwnj; ಸಂಸ್ಕರಣಾ ಘಟಕಕ್ಕೆ ತೈಲ ಇಳಿಸುವ ಭಾನುವಾರವೂ ಮುಂದುವರಿದಿದೆ. ಈ ಎರಡು ಹಡಗುಗಳ ಆಗಮನದಿಂದಾಗಿ ತೈಲ ಮತ್ತು ಅನಿಲ ಭೀತಿಯಲ್ಲಿದ್ದ ರಾಜ್ಯದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಎಲ್ಲೆಡೆ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್&zwnj;ಗಳ ಅಭಾವ ತಲೆದೋರಿದ್ದು, ಹೊಟೇಲ್&zwnj;, ಕ್ಯಾಂಟಿನ್&zwnj;ಗಳು ಮುಚ್ಚುವ ಸ್ಥಿತಿಗೆ ತಲುಪಿದ್ದವು. ಇದೀಗ ಅನಿಲ ಹೊತ್ತ ನೌಕೆ ಆಗಮಿಸಿರುವುದು ವ್ಯಾಪಾರಿಗಳಲ್ಲಿ ಹರ್ಷ ತಂದಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/first-liquefied-petroleum-gas-tanker-reaches-mangaluru-after-war-disruptions/articleshow-sgg9x57"/>
        </item>
        <item>
            <title><![CDATA[ಮಂಗಳೂರಿಗರ ನಿದ್ದೆಗೆಡಿಸಿದ ರಸ್ತೆ ಮೇಲಿನ ವಿಚಿತ್ರ ಆಕೃತಿ: ದೆವ್ವದ ರಹಸ್ಯ ಭೇದಿಸಿದ ಸ್ಥಳೀಯರು]]></title>
            <link>https://kannada.asianetnews.com/karnataka-districts/ghost-near-mangalore-manjalpades-road-secret-reveled-suc/articleshow-v6pup5d</link>
            <guid isPermaLink="true">https://kannada.asianetnews.com/karnataka-districts/ghost-near-mangalore-manjalpades-road-secret-reveled-suc/articleshow-v6pup5d</guid>
            <pubDate>Tue, 24 Mar 2026 17:48:33 +0530</pubDate>
            <description><![CDATA[ಮಂಗಳೂರಿನ ಮಂಜಲ್ಪಾದೆ ರಸ್ತೆಯಲ್ಲಿ ಮಧ್ಯರಾತ್ರಿ ಕಂಡ ಬಿಳಿ ಬಟ್ಟೆಯ ನಿಗೂಢ ಆಕೃತಿಯೊಂದು ಯುವಕನನ್ನು ಬೆಚ್ಚಿಬೀಳಿಸಿತ್ತು. ಈ ಘಟನೆಗೆ ಭಯಾನಕ ಆಡಿಯೋವೊಂದು ಸೇರಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು, ಆದರೆ ಇದರ ಹಿಂದಿನ ಸತ್ಯಾಸತ್ಯತೆ ಬಯಲಾದಾಗ ಎಲ್ಲರೂ ಅಚ್ಚರಿಗೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kmfwf6tsge1arw157fw0xq7w,imgname-representational-image-1774354668377.jpg" type="image/jpeg" height="390" width="690"/>
            <content:encoded><![CDATA[&lt;p&gt;ಭೂತ, ಪಿಶಾಚಿ, ದೆವ್ವ, ಆತ್ಮ ಇದೆಯೋ ಇಲ್ಲವೋ ಬಲ್ಲವರು ಯಾರೂ ಇಲ್ಲ. ಕೆಲವರು ತಾವು ಇದನ್ನು ನೋಡಿರುವುದಾಗಿ ಹೇಳಿದರೆ, ಮತ್ತೆ ಕೆಲವರು ಇವೆಲ್ಲಾ ಮನಸ್ಸಿನ ಭ್ರಮೆ, ಯಾವುದೂ ಇಲ್ಲ. ಎಲ್ಲವೂ ಸುಳ್ಳು ಎನ್ನುತ್ತಾರೆ. ಮತ್ತೆ ಕೆಲವರು ತಮಗೆ ಆಗಿರುವ ಭಯಾನಕ ಘಟನೆಗಳ ಬಗ್ಗೆ ವಿವರಿಸುತ್ತಾರೆ. ತಮ್ಮ ಪರಿಚಯದವರು ಸತ್ತಿರುವ ವಿಷಯ ಗೊತ್ತೇ ಇಲ್ಲದಿದ್ದರೂ, ಅಚಾನಕ್ ಆಗಿ ಅವರ ಜೊತೆ ಮಾತನಾಡಿದ ಬಳಿಕ ಆತ ಸತ್ತಿರುವ ವಿಷಯ ತಿಳಿದು ಶಾಕ್​ ಆದವರೂ ತಮ್ಮ ಅನುಭವ ಹಂಚಿಕೊಂಡಿದ್ದು ಉಂಟು. ಒಟ್ಟಿನಲ್ಲಿ ಇದೊಂದು ಸದಾ ವಿವಾದಾತ್ಮಕ ವಿಷಯವೇ ಆಗಿದೆ.&lt;/p&gt;&lt;h2&gt;&lt;strong&gt;ಮಂಗಳೂರಿನಲ್ಲಿ ದೆವ್ವ&lt;/strong&gt;&lt;/h2&gt;&lt;p&gt;ಆದರೆ ಇದೀಗ, ನಿಗೂಢ ಆಕೃತಿಯೊಂದು ಮಂಗಳೂರಿನ ಮಂಜಲ್ಪಾದೆಯ ಸಮೀಪ ಕಂಡಿದ್ದು ವಾಹನ ಸವಾರರನ್ನು ಬೆಚ್ಚಿ ಬೀಳಿಸಿತ್ತು. ಈ ದೆವ್ವ ಕಾಣಿಸಿಕೊಂಡಿದ್ದು ಯುವಕನೊಬ್ಬನಿಗೆ. ಮಧ್ಯರಾತ್ರಿ ಪಾಂಡೇಶ್ವರದ ಫಾರಂಮಾಲ್&zwnj;ನಿಂದ ಆ ಯುವಕ ಬರುತ್ತಿದ್ದ ಸಂದರ್ಭದಲ್ಲಿ ಮಂಜಲ್ಪಾದೆ ರಸ್ತೆಯ ಬದಿಯಲ್ಲಿ ಬಿಳಿ ಬಟ್ಟೆ ಧರಿಸಿದ, ಉದ್ದನೆಯ ಬೆರಳುಗಳ ವಿಚಿತ್ರ ಆಕೃತಿ ಕಾಣಿಸಿಕೊಂಡಿದೆ. ಇದನ್ನು ನೋಡಿ ಆತ ಥರ ಥರ ನಡುಗಿ ಹೋಗಿದ್ದಾನೆ. ಭಯದಿಂದ ಆತ ಸ್ಕೂಟರ್&zwnj;ನಿಂದ ಬಿದ್ದೇ ಬಿಟ್ಟಿದ್ದಾನೆ. ಈ ವಿಷಯ ಶರವೇಗದಲ್ಲಿ ಸುತ್ತಲಿನ ಜನರಿಗೆ ಪ್ರಸಾರ ಆಯಿತು. ಈ ಸ್ಟೋರಿ ಜೊತೆಗೆ, ಅಂತೆ, ಕಂತೆಗಳೆಲ್ಲಾ ಸೇರಿ ಆತನ ಮೈಮೇಲೆ ದೆವ್ವಗಳ ಬೆರಳುಗಳು ಮೂಡಿವೆ ಎಂದೆಲ್ಲಾ ಸುದ್ದಿಯಾಯಿತು.&lt;/p&gt;&lt;h3&gt;&lt;strong&gt;ಭಯಾನಕ ಆಡಿಯೋ&lt;/strong&gt;&lt;/h3&gt;&lt;p&gt;ಈ ಹಿನ್ನೆಲೆಯಲ್ಲಿ ಸ್ಥಳೀಯರು ಬೆಚ್ಚಿಬಿದ್ದರು. ಆ ಯುವಕ ಬೇರೆ ಆ ಆಕೃತಿ ನೋಡಿ ಭಯಭೀತನಾಗಿ ಹೋಗಿದ್ದ. ಆ ರಸ್ತೆಯಲ್ಲಿ ಪ್ರಯಾಣ ಮಾಡಲು ಎಲ್ಲರೂ ಹೆದರುವ ಸ್ಥಿತಿ ಉಂಟಾಯಿತು. ಸಾಲದು ಎನ್ನುವುದಕ್ಕೆ ಆ ಘಟನೆ ಸಂಭವಿಸಿದ ಸಂದರ್ಭದಲ್ಲಿ ಯುವಕನ ಫೋನ್​ಗೆ ಒಂದು ಭಯಾನಕ ದನಿಯ ಆಡಿಯೋ ರೆಕಾರ್ಡ್​ ಕೂಡ ಬಂದಿತ್ತು. ಅದರಲ್ಲಿ, ತುಳುವಿನಲ್ಲಿ, ಲೇಯ್, ಆ ಕಡೆ ಬರಬೇಡ, ಬಿಳಿ ಆಕೃತಿ ಓಡಾಡ್ತಿದೆ, ಯಾರಿಗೋ ಹೊಡೆತ ಬಿದ್ದಿದೆ ಎಂದು ಹೇಳಲಾಗಿತ್ತು. ಈ ಆಡಿಯೋ ಕೂಡ ಸೋಷಿಯಲ್&zwnj; ಮೀಡಿಯಾದಲ್ಲಿ ಹರಿದಾಡಿ ಇನ್ನೂ ಹೆಚ್ಚಿನ ಆತಂಕ ಸೃಷ್ಟಿಸಿತ್ತು.&lt;/p&gt;&lt;h3&gt;&lt;strong&gt;ನಿಜಕ್ಕೂ ಆಗಿದ್ದೇನು?&lt;/strong&gt;&lt;/h3&gt;&lt;p&gt;ಕೊನೆಗೆ ನಿಜಕ್ಕೂ ಏನಿದು, ದೆವ್ವ ಇರುವುದು ನಿಜನಾ ಎಂದೆಲ್ಲಾ ಪರಿಶೀಲಿಸಿದಾಗ ಅಲ್ಲಿ ಆಗಿದ್ದೇ ಬೇರೆ. ಆ ಆಡಿಯೋ ಕಳಿಸಿರುವವರ ಬೆನ್ನತ್ತಿದಾಗ ವಿಷಯ ತಿಳಿದಿದೆ. ಅದೇನೆಂದರೆ, ಅಸಲಿಗೆ ಆ ಆಡಿಯೋ ಕಳಿಸಿದ್ದು, ಅದೇ ಯುವಕನ ಸ್ನೇಹಿತ. ಆತ ಪದೇ ಪದೇ ಮಧ್ಯರಾತ್ರಿ ಮನೆಗೆ ಬರುತ್ತಿದ್ದ. ಆತನ ಮನೆಯವರು ಎಷ್ಟೇ ಹೇಳಿದರೂ ಆತ ಮಾತು ಕೇಳುತ್ತಿರಲಿಲ್ಲ. ಆದ್ದರಿಂದ ಈ ಸ್ನೇಹಿತ ದೆವ್ವದ ಪ್ಲ್ಯಾನ್​ ಮಾಡಿ, ದನಿಯನ್ನು ಆ್ಯಪ್​ ಮೂಲಕ ಬದಲಿಸಿ ಭಯಾನಕ ದನಿ ಮಾಡಿ ಅದನ್ನು ಸ್ನೇಹಿತನಿಗೆ ಕಳುಹಿಸಿದ್ದ, ಅಲ್ಲಿ ಬಿಳಿ ಬಣ್ಣದ ಡ್ರೆಸ್​ ಹಾಕಿಕೊಂಡು ಒಬ್ಬರನ್ನು ನಿಲ್ಲಿಸುವ ವ್ಯವಸ್ಥೆಯನ್ನೂ ಮಾಡಿದ್ದ. ಆದರೆ ಅದು ಸ್ನೇಹಿತನೊಬ್ಬನನ್ನೇ ಹೆದರಿಸದೇ ಸ್ಥಳೀಯರನ್ನು ಬೆಚ್ಚಿಬೀಳಿಸಿ ಆವಾಂತರ ಸೃಷ್ಟಿಸಿತ್ತು!&lt;/p&gt;]]></content:encoded>
            <category>dakshina-kannada</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/ghost-near-mangalore-manjalpades-road-secret-reveled-suc/articleshow-v6pup5d"/>
        </item>
        <item>
            <title><![CDATA[ಆಡಳಿತಾಧಿಕಾರಿಯ ಬಜೆಟ್‌ ಮಂಡನೆಗೆ ಸಾಕ್ಷಿಯಾದ ಪಾಲಿಕೆ!]]></title>
            <link>https://kannada.asianetnews.com/karnataka-districts/municipal-corporation-witnesses-budget-presentation-by-administrator/articleshow-w9eutpu</link>
            <guid isPermaLink="true">https://kannada.asianetnews.com/karnataka-districts/municipal-corporation-witnesses-budget-presentation-by-administrator/articleshow-w9eutpu</guid>
            <pubDate>Sat, 28 Mar 2026 03:03:02 +0530</pubDate>
            <description><![CDATA[&lt;p&gt;ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸುಮಾರು ಒಂದು ವರ್ಷ ಕಳೆದಿರುವ ಮಂಗಳೂರು ಮಹಾನಗರ ಪಾಲಿಕೆ ಗುರುವಾರ ಆಡಳಿತಾಧಿಕಾರಿಗಳಿಂದ 2026-27ನೇ ಸಾಲಿನ ಬಜೆಟ್&zwnj; ಮಂಡನೆಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmrk3qy2mt7fzb5yhkhw12d1,imgname-greater-bengaluru-1774646845378.avif" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸುಮಾರು ಒಂದು ವರ್ಷ ಕಳೆದಿರುವ ಮಂಗಳೂರು ಮಹಾನಗರ ಪಾಲಿಕೆ ಗುರುವಾರ ಆಡಳಿತಾಧಿಕಾರಿಗಳಿಂದ 2026-27ನೇ ಸಾಲಿನ ಬಜೆಟ್&zwnj; ಮಂಡನೆಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.&lt;/p&gt;&lt;p&gt;ಸಾಮಾನ್ಯವಾಗಿ ಬಜೆಟ್&zwnj; ಅಧಿವೇಶನ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರಿಂದ ಪರ ವಿರೋಧ ಚರ್ಚೆ, ವಾದ ಪ್ರತಿವಾದಕ್ಕೆ ಆಸ್ಪದವಾಗುತ್ತಿತ್ತು. ಆದರೆ ಆಡಳಿತಾಧಿಕಾರಿಗಳಿಂದ ನಿರ್ವಹಿಸಲ್ಪಡುತ್ತಿರುವ ಪಾಲಿಕೆಯಲ್ಲಿ ಮಂಡಿಸಲಾದ ಬಜೆಟ್&zwnj;, ಬಳಿಕ ಪತ್ರಕರ್ತರ ಕೆಲವೊಂದು ಪ್ರಶ್ನೆಗಳಿಗೆ ಆಡಳಿತಾಧಿಕಾರಿಯ ಉತ್ತರದೊಂದಿಗೆ ಕೊನೆಗೊಂಡಿತು.ಪಾಲಿಕೆಯ ಆಡಳಿತಾಧಿಕಾರಿ ಹಾಗೂ ದ.ಕ. ಜಿಲ್ಲಾಧಿಕಾರಿಯೂ ಆಗಿರುವ ದರ್ಶನ್&zwnj; ಎಚ್&zwnj;.ವಿ. ಅವರು ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ 156.17 ಕೋಟಿ ರು.ಗಳ ಮಿಗತೆ ಬಜೆಟ್&zwnj; ಮಂಡಿಸಿದರು.&lt;/p&gt;&lt;p&gt;2026-27ನೇ ಸಾಲಿನ ಬಜೆಟ್&zwnj; ಅಂದಾಜು (ಆರಂಭಿಕ ಶುಲ್ಕ ಸೇರಿದಂತೆ) ಮೊತ್ತ 93,768.94 ಲಕ್ಷ ರು. (937.69 ಕೋಟಿ ರು.) ಇದರಲ್ಲಿ ಅಂದಾಜು 781.51 ಕೋಟಿ ರು. ವೆಚ್ಚ ತೋರಿಸಲಾಗಿದೆ.2025-26ನೇ ಸಾಲಿನ ಬಜೆಟ್&zwnj;ನಲ್ಲಿ ಒಟ್ಟು 644.64 ಕೋಟಿ ರು. ಜಮೆ ನಿರೀಕ್ಷಿಸಲಾಗಿದ್ದು, ಡಿಸೆಂಬರ್&zwnj; 2025ರ ಅಂತ್ಯಕ್ಕೆ 342.25 ಕೋಟಿ ರು. ಜಮೆ ಸ್ವೀಕರಿಸಲಾಗಿದೆ. ಇದೇ ವೇಳೆ ಕಳೆದ ಸಾಲಿನಲ್ಲಿ 789.72 ಕೋಟಿ ರು. ಪಾವತಿಗಳಲ್ಲಿ ಪಾಲಿಕೆಯ ಸ್ವಯಂ ಸಂಪನ್ಮೂಲ ಕ್ರೋಢೀಕರಣ ಹಾಗೂ ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳ ಆಧಾರದಲ್ಲಿ ಡಿಸೆಂಬರ್&zwnj; ಅಂತ್ಯಕ್ಕೆ 393.47 ಕೋಟಿ ರು. ಪಾವತಿಸಿರುವುದಾಗಿ ತಿಳಿಸಿದರು.2026-27ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 90 ಕೋಟಿ ರು., ನೀರು ಸರಬರಾಜು ಶುಲ್ಕವಾಗಿ 55 ಕೋಟಿ ರು., ಘನತ್ಯಾಜ್ಯ ನಿರ್ವಹಣಾ ಕರ 26 ಕೋಟಿ ರು., ಇತರ ಆದಾಯವಾಗಿ 26.48 ಕೋಟಿ ರು. ಕಟ್ಟಡ ಪರವಾನಿಗೆ- ಪ್ರೀಮಿಯಂ ಎಫ್&zwnj;ಎಆರ್&zwnj;ನಿಂದ 26 ಕೋಟಿ ರು., ಮಾರುಕಟ್ಟೆ ಸಾಲ7.31 ಕೋಟಿ ರು., ಬ್ಯಾಂಕ್&zwnj; ಬಡ್ಡಿ 15 ಕೋಟಿ ರು., ಮಾರುಕಟ್ಟೆ, ಇತರ ಬಾಡಿಗೆಯಾಗಿ 5.47 ಕೋಟಿ ರು., ರಸ್ತೆ ಕಡಿತ, ಪುನರ್&zwnj; ನಿರ್ಮಾಣ ಶುಲ್ಕದಿಂದ 3 ಕೋಟಿ ರು. ಸೇರಿದಂತೆ ಒಟ್ಟು 337.25 ಕೋಟಿ ರು.ಗಳ ಆದಾಯ ನಿರೀಕ್ಷಿಸಲಾಗಿದೆ. ರಾಜ್ಯ ಸರ್ಕಾರದಿಂದ ವೇತನ, ಎಸ್&zwnj;ಎಫ್&zwnj;ಸಿ ಮುಕ್ತ ನಿಧಿ, ಪೌರ ಕಾರ್ಮಿಕರ ನೇರ ಪಾವತಿ ವೇತನ, ಸ್ಟ್ಯಾಂಪ್&zwnj; ಶುಲ್ಕದ ಸರ್&zwnj;ಚಾರ್ಜ್&zwnj; ಸೇರಿದಂತೆ ವಿವಿಧ ಯೋಜನೆಗಳಿಗೆ ಒಟ್ಟು 199.23 ಕೋಟಿ ರು. ಅನುದಾನವನ್ನು ನಿರೀಕ್ಷಿಸಲಾಗಿದೆ. ಕೇಂದ್ರದಿಂದ ಅಮೃತ್&zwnj; 2.0 ಜಲ್&zwnj; ಹಿ ಅಮೃತ್&zwnj;, ನಲ್ಮ್&zwnj;, ಸ್ವಚ್ಛ ಭಾರತ ಮಿಷನ್&zwnj;, 15ನೇ ಹಣಕಾಸು ಮುಕ್ತ ಅನುದಾನ, 16ನೇ ಹಣಕಾಸು, ಎನ್&zwnj;ಜಿಟಿ ಸೇರಿದಂತೆ ಒಟ್ಟು 93.36 ಕೋಟಿ ರು. ಗಳನ್ನು ನಿರೀಕ್ಷಿಸಲಾಗಿದೆ.&lt;/p&gt;&lt;h2&gt;&lt;strong&gt;ಬಜೆಟ್&zwnj;ನಲ್ಲಿ ಹೊಸ ಯೋಜನೆಗಳುಮಡಿಲು ಯೋಜನೆ ವಿಸ್ತರಣೆ:&lt;/strong&gt;&lt;/h2&gt;&lt;p&gt;ಪಾಲಿಕೆ ಕಚೇರಿಯಲ್ಲಿ ಆರಂಭಿಸಿರುವ &lsquo;ಮಡಿಲು&rsquo; ಶಿಶುಪಾಲನಾ ಕೇಂದ್ರವನ್ನು ವಲಯ ಕಚೇರಿಗಳಾದ ಸುರತ್ಕಲ್&zwnj; ಹಾಗೂ ಕದ್ರಿಯಲ್ಲಿಯೂ ತೆರೆಯಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಮಾದರಿಯಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವ ಮೂಲಕ ಅಲ್ಲಿ ಸರ್ಕಾರಿ ಕಚೇರಿ ಸಿಬ್ಬಂದಿ, ಅಧಿಕಾರಿಗಳ ಮಕ್ಕಳ ಜತೆ ಸೀಮಿತ ಅವಧಿಗೆ ಸಾರ್ವಜನಿಕರ ಮಕ್ಕಳಿಗೂ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ. ಈ ಉದ್ದೇಶಕ್ಕೆ 50 ಲಕ್ಷ ರು. ಕಾಯ್ದಿರಿಸಲಾಗಿದೆ.&lt;/p&gt;&lt;h3&gt;&lt;strong&gt;ಆಸರೆ- ಹೆಣ್ಣು ಮಕ್ಕಳ ಭರವಸೆಯ ಮಡಿಲು:&lt;/strong&gt;&lt;/h3&gt;&lt;p&gt;ಪಾಲಿಕೆ ವ್ಯಾಪ್ತಿಯಲ್ಲಿ 14 ವರ್ಷದೊಳಗಿನ ಹೆಣ್ಣು ಮಕ್ಕಳು ವಿವಿಧ ರೀತಿಯ ದೌರ್ಜನ್ಯ, ಶೋಷಣೆಗೆ ಒಳಗಾದ, ಪೋಷಕರು- ಸಂಬಂಧಿಕರನ್ನು ಕಳೆದುಕೊಂಡು ಅನಾಥವಾಗಿರುವ, ರಸ್ತೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡರುವ ಹೆಣ್ಣು ಮಕ್ಕಳ ಪೋಷಣೆ, ರಕ್ಷಣೆ, ಶಿಕ್ಷಣ ಹಾಗೂ ಭವಿಷ್ಯದ ಮೇಲ್ವಿಚಾರಣೆ, ಜವಾಬ್ದಾರಿ ವಹಿಸುವ ಸಂಸ್ಥೆಗಳಿಗೆ ತಲಾ 15 ಲಕ್ಷ ರು.ನಂತೆ 30 ಲಕ್ಷ ರು.ಗಳ ಪ್ರೋತ್ಸಾಹ ಧನ.&lt;/p&gt;&lt;p&gt;ನಮ್ಮ ಯೋಧ ಯೋಜನೆ: ದೇಶಕ್ಕಾಗಿ ಹೋರಾಡಿ ಮೃತಪಟ್ಟವೀರ ಯೋಧರ ಕುಟುಂಬಕ್ಕೆ ಸ್ಪಂದಿಸವ ನಿಟ್ಟಿನಲ್ಲಿ ಭೂಸೇನೆ, ವಾಯುಪಡೆ, ನೌಕಾಪಡೆಗಳ ಜತೆಗೆ ಅರೆ ಸೈನಿಕ ಪಡೆಗಳ (ಬಿಎಸ್&zwnj;ಎಫ್&zwnj;, ಸಿಆರ್&zwnj;ಪಿಎಫ್&zwnj;, ಸಿಐಎಸ್&zwnj;ಎಫ್&zwnj;, ಅಸ್ಸಾಂ ರೈಫಲ್ಸ್&zwnj;, ಎಸ್&zwnj;ಎಸ್&zwnj;ಬಿ ಮತ್ತು ಎನ್&zwnj;ಎಸ್&zwnj;ಜಿ) ವೀರ ಮರಣ ಹೊಂದಿದ ಯೋಧರ ಆಸರೆಗಾಗಿ ತಲಾ 5 ಲಕ್ಷ ರು.ನಂತೆ ಧನ ಸಹಾಯ ನೀಡಲು 20 ಲಕ್ಷ ರು. ಮೀಸಲಿಡಲಾಗಿದೆ.&lt;/p&gt;&lt;p&gt;ಕಂಬಳದ ಹೆಜ್ಜೆಗೆ ಸಂಸ್ಕೃತಿಯ ಸ್ಪಂದನ: ಕಂಬಳವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಂಗಳೂರು ನಗರದಲ್ಲಿ ನಡೆಯುವ ಮೂರು ಕಂಬಗಳಿಗೆ ತಲಾ 3 ಲಕ್ಷ ರು.ನಂತೆ ಅನುದಾನ ನೀಡಲು 9 ಲಕ್ಷ ರು. ಮೀಸಲಿರಿಸಲಾಗಿದೆ.ಯಕ್ಷಗಾನಕ್ಕೆ ಪ್ರೋತ್ಸಾಹ: ಯಕ್ಷಗಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 10 ಲಕ್ಷ ರು. ಗಳ ಅನುದಾನ ನಿಗದಿ.&lt;/p&gt;&lt;p&gt;ತುಳು ಭಾಷೆಯ ಸಂಸ್ಕೃತಿ, ಕಲಾರೂಪಗಳಿಗೆ ಉತ್ತೇಜನ: ತುಳು ಭಾಷೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತುಳು ಯುವ ಕವಿಗಳು, ಕಲಾಕೃತಿಗಳು ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ ನಾಟಕಗಳಿಗೆ ಗೌರವ ನೀಡುವ ಉದ್ದೇಶದಿಂದ 50 ಲಕ್ಷ ರು. ಅನುದಾನ ಕಾಯ್ದಿರಿಸಲಾಗಿದೆ.ಪೌರ ಕಾರ್ಮಿಕರಿಗೆ ಕಲ್ಯಾಣ ನಿಧಿ: ಪೌರ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ದೃಢಪಡಿಸುವ ಉದ್ದೇಶದಿಂದ 2026-27ನೇ ಸಾಲಿಗೆ 50 ಲಕ್ಷ ರು.ಗಳ ಗುಂಪು ಜೀವ ವಿಮಾ ಯೋಜನೆಯನ್ನು ಮೀಸಲಿರಿಸಲಾಗಿದೆ. ಪ್ರತಿ ಕಾರ್ಮಿಕರಿಗೆ ತಗಲುವ ವಾರ್ಷಿಕ ಪ್ರೀಮಿಯಂನ್ನು ಪಾಲಿಕೆಯಿಂದಲೇ ಭರಿಸಲಾಗುತ್ತದೆ.&lt;/p&gt;&lt;p&gt;ಸಖಿ ಶೌಚಾಲಯ: ಪಾಲಿಕೆ ವ್ಯಾಪ್ತಿಯ ಜನಸಂದಣಿ ಇರುವ ಸ್ಥಳಗಳಲ್ಲಿ ವಿಶೇಷವಾಗಿ ಬಸ್&zwnj; ನಿಲ್ದಾಣ, ಮಾರುಕಟ್ಟೆ, ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸುಸಜ್ಜಿತ ಶೌಚಾಲಯ ನಿರ್ಮಾಣ ಹಾಗೂ ಹಾಲಿ ಇರುವ ಸಾರ್ವಜನಿಕ ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲು 1 ಕೋಟಿ ರು. ಕಾಯ್ದಿರಿಸಲಾಗಿದೆ.&lt;/p&gt;&lt;p&gt;ಬೀದಿ ನಾಯಿಗಳ ಪುನರ್ವಸತಿ ಕೇಂದ್ರ: ಬೀದಿ ನಾಯಿಗಳ ಹಾವಳಿ ತಡೆಗಟ್ಟಿ ಅವುಗಳಿಗೆ ಸೂಕ್ತ ಆಶ್ರಯ ಒದಗಿಸಲು ಈಗಾಗಲೇ ಮಂಗಳೂರು ತಾಲೂಕಿನ ಬೊಂಡಂತಿಲ ಗ್ರಾಮದಲ್ಲಿ 5 ಎಕರೆ ಜಾಗವನ್ನು ಗುರುತಿಸಲಾಗಿದೆ. ಅಲ್ಲಿ ವ್ಯವಸ್ಥೆ ಕಲ್ಪಿಸಲು 2 ಕೋಟಿ ರು. ಕಾಯ್ದಿರಿಸಲಾಗಿದ್ದು, ಆಸಕ್ತ ಸರ್ಕಾರೇತರ ಸಂಸ್ಥೆ ಅಥವಾ ಖಾಸಗಿ ಸಂಸ್ಥೆಗಳ ಮೂಲಕ ನಿರ್ವಹಣೆಗೆ ಯೋಜನೆ.&lt;/p&gt;&lt;p&gt;ವಿನೂತನಾ ನಿಧಿ: ಪಚ್ಚನಾಡಿ ಪ್ರದೇಶದ ಡಂಪಿಂಗ್&zwnj; ಯಾರ್ಡ್&zwnj;ನಿಂದ ಸ್ಥಳೀಯರಿಗೆ ಆಗುತ್ತಿರುವ ದುರ್ವಾಸನೆಯನ್ನು ತಡೆಗಟ್ಟಲು ಆಧುನಿಕ ತಂತ್ರಜ್ಞಾನ ಬಳಸಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಸೂಕ್ತ ಪರಿಹಾರ ನೀಡುವ ವ್ಯಕ್ತಿ ಅಥವಾ ಸಂಸ್ಥಗಳಿಗೆ ಉತ್ತೇಜನ ಹಾಗೂ ನಗರ ವ್ಯಾಪ್ತಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ವಿನೂತನ ವಿಧಾನಗಳಿಗೆ 50 ಲಕ್ಷ ರು. ಕಾಯ್ದಿರಿಸಲಾಗಿದೆ.&lt;/p&gt;&lt;p&gt;ರಾಷ್ಟ್ರ ಧ್ವಜಗಳ ನಿರ್ವಹಣೆ: ಕದ್ರಿಯಲ್ಲಿ ನಿರ್ಮಾಣವಾಗಿರುವ ಹಾಗೂ ಟಾಗೋರ್&zwnj; ಪಾರ್ಕ್ನಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್&zwnj; ಗಾತ್ರದ ರಾಷ್ಟ್ರ ಧ್ವಜಗಳ ವಾರ್ಷಿಕ ನಿರ್ವಹಣೆಯನ್ನು ಪಾಲಿಕೆಯಿಂದ ಮಾಡಲಾಗುವುದು. ಪ್ರತಿ ತಿಂಗಳು ರಾಷ್ಟ್ರ ಧ್ವಜ ಬದಲಾವಣೆಯೊಂದಿಗೆ ಸಮರ್ಪಕ ನಿರ್ವಹಣೆಗಾಗಿ 12 ಲಕ್ಷ ರು. ಕಾಯ್ದಿರಿಸಲಾಗಿದೆ.&lt;/p&gt;&lt;p&gt;ವಿಷನ್&zwnj; 2032: ಮಂಗಳೂರು ನಗರವನ್ನು 2032ರ ವೇಳೆಗೆ ಸುಸಜ್ಜಿತ ಹಾಗೂ ನವೀನ ಮಾದರಿಯ ಸೌಕರ್ಯಗಳನ್ನು ಹೊಂದಿದ ಪ್ರಥಮ ಮಾದರಿ ನಗರವನ್ನಾಗಿಸಲು ಸ್ವಚ್ಛ ಮಂಗಳೂರು ಪರಿಕಲ್ಪನೆಯಡಿ ಸರ್ವತೋಮುಖ ಅಭಿವೃದ್ಧಿಗಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್&zwnj;) ತಯಾರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 30 ಲಕ್ಷ ರು. ಮೀಸಲಿಡಲಾಗಿದೆ.&lt;/p&gt;&lt;p&gt;&lt;strong&gt;ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್&zwnj;, ಕಂದಾಯ ಅಧಿಕಾರಿ (ಆಡಳಿತ) ಅಕ್ಷತಾ ಇದ್ದರು.&lt;/strong&gt;&lt;/p&gt;&lt;p&gt;&lsquo;ಸ್ವಚ್ಛ ವಾಹಿನಿ&rsquo; ವಿಶೇಷ ಕಾರ್ಯಪಡೆ: ನಗರದ ಸ್ವಚ್ಛತೆಯನ್ನು ಖಾತರಿಪಡಿಸುವುದು ಹಾಗೂ ತ್ಯಾಜ್ಯ ಸುರಿಯುವ ಸ್ಥಳಗಳಲ್ಲಿ ಜಿಪಿಎಸ್&zwnj; ಮತ್ತು ಸಮಯ ಮುದ್ರಿತ ಛಾಯಾಚಿತ್ರದೊಂದಿಗೆ ಸಾರ್ವಜನಿಕರು ತಮ್ಮ ದೂರನ್ನು ಪಾಲಿಕೆಯ ಅಧಿಕೃತ ವಾಟ್ಸಾಪ್&zwnj; ಸಂಖ್ಯೆಗೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ಅವಧಿಯಲ್ಲಿ ದೂರು ನೀಡಿದರೆ, ದೂರು ನೀಡಿದ 6 ಗಂಟೆಯೊಳಗೆ ತೆರವುಗೊಳಿಸಲು &lsquo;ಸ್ವಚ್ಛವಾಹಿನಿ&rsquo; ಎಂಬ ವಿಶೇಷ ಕಾರ್ಯಪಡೆಯನ್ನು ರಚಿಸಲಾಗುತ್ತದೆ.&lt;/p&gt;&lt;p&gt;ಇದಕ್ಕಾಗಿ ಪ್ರತ್ಯೇಕ ವಾಟ್ಸಾಪ್&zwnj; ಸಂಖ್ಯೆಯನ್ನು ಶೀಘ್ರವೇ ಪ್ರಕಟಿಸಲಾಗುವುದು. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲೂ ಎಲ್ಲೆಂದರಲ್ಲಿ ಕಸ ಸುರಿಯುವವರ ವಿರುದ್ಧ ದಂಡವನ್ನು ಹೆಚ್ಚಿಸಿ ಎಚ್ಚರಿಕೆ ಮೂಡಿಸುವ ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಡಳಿತಾಧಿಕಾರಿ ದರ್ಶನ್&zwnj; ಎಚ್&zwnj;.ವಿ. ತಿಳಿಸಿದರು.&lt;/p&gt;&lt;p&gt;22 ಕಿ.ಮೀ. ಕಡಲ ತೀರ ರಸ್ತೆಗೆ ಡಿಪಿಆರ್&zwnj;: ಕರಾವಳಿಯ ಮೂರು ಜಿಲ್ಲೆಗಳನ್ನು ಒಳಗೊಂಡು ಈಗಾಗಲೇ ತಲಪಾಡಿಯಿಂದ ಕಾರವಾರದವರೆಗಿನ ಕರಾವಳಿ ತೀರದ ರಸ್ತೆಯನ್ನು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ 22 ಕಿ.ಮೀ. ಉದ್ದದ ಕಡಲ ತೀರವನ್ನು ಅತ್ಯಾಧುನಿಕ ಮಾದರಿಯ ರಸ್ತೆಯನ್ನಾಗಿಸಲು ಪ್ರಥಮ ಹಂತದ ವಿಸ್ತೃತಾ ಯೋಜನಾ ವರದಿ (ಡಿಪಿಆರ್&zwnj;) ತಯಾರಿಸಲು ನಿರ್ಧರಿಸಲಾಗಿದೆ ಎಂದು ದರ್ಶನ್&zwnj; ಎಚ್&zwnj;.ವಿ. ತಿಳಿಸಿದರು.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/municipal-corporation-witnesses-budget-presentation-by-administrator/articleshow-w9eutpu"/>
        </item>
        <item>
            <title><![CDATA[ಕರಾವಳಿಯಿಂದ ಬೆಂಗಳೂರಿಗೆ ಮಾ. 22 ರಂದು ವಿಶೇಷ ರೈಲು ಘೋಷಣೆ, ಮಡ್ಗಾಂವ್‌ನಿಂದ  ಮಂಗಳೂರು  ಆಗಿ ರಾಜಧಾನಿಗೆ ಪಯಣ]]></title>
            <link>https://kannada.asianetnews.com/karnataka-districts/indian-railways-runs-special-train-from-madgaon-to-bengaluru-via-coastal-karnataka-on-march-22-gdp/articleshow-zkuprlo</link>
            <guid isPermaLink="true">https://kannada.asianetnews.com/karnataka-districts/indian-railways-runs-special-train-from-madgaon-to-bengaluru-via-coastal-karnataka-on-march-22-gdp/articleshow-zkuprlo</guid>
            <pubDate>Sat, 21 Mar 2026 22:49:39 +0530</pubDate>
            <description><![CDATA[ಯುಗಾದಿ ಮತ್ತು ರಂಜಾನ್ ಹಬ್ಬದ ನಂತರ ತಮ್ಮ ಊರುಗಳಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಈ ರೈಲು ಮಡ್ಗಾಂವ್&zwnj;ನಿಂದ ಹೊರಟು ಕಾರವಾರ, ಉಡುಪಿ ಮತ್ತು ಮಂಗಳೂರು ಮಾರ್ಗವಾಗಿ ಬೆಂಗಳೂರು ತಲುಪಲಿದ್ದು, ಹಬ್ಬದ ಸೀಟುಗಳ ಕೊರತೆಯನ್ನು ನೀಗಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khp601b9hctbmkhxep8fe8wz,imgname-indian-railway--2--1771344758121.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದ ಪ್ರಯಾಣಿಕರು ಮತ್ತೆ ಬೆಂಗಳೂರಿಗೆ ಸುಗಮವಾಗಿ ಮರಳಲು ಅನುಕೂಲವಾಗುವಂತೆ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಮಡ್ಗಾಂವ್&zwnj;ನಿಂದ ಹೊರಡಲಿರುವ ಈ ವಿಶೇಷ ರೈಲು ಕಾರವಾರ, ಉಡುಪಿ ಮತ್ತು ಮಂಗಳೂರು ಮೂಲಕ ಬೆಂಗಳೂರು ನಗರ ತಲುಪಲಿದೆ.&lt;/p&gt;&lt;p&gt;ಈ ಕುರಿತು ಉಡುಪಿ&ndash;ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಯುಗಾದಿ ಹಬ್ಬದ ವೇಳೆ ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ತೆರಳಿದ್ದ ಅನೇಕ ಪ್ರಯಾಣಿಕರು ವಾಪಸ್ಸು ಬರಲು ರೈಲು ಸೀಟುಗಳ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಜನರ ಬೇಡಿಕೆಗೆ ಸ್ಪಂದಿಸಿ ಈ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ವಿಶೇಷ ರೈಲು ಮಾರ್ಗ ಮತ್ತು ದಿನಾಂಕ&lt;/h2&gt;&lt;p&gt;ಈ ವಿಶೇಷ ರೈಲು ಮಾರ್ಚ್ 22 ರಂದು ಮಡ್ಗಾಂವ್&zwnj;ನಿಂದ ಹೊರಟು ಕಾರವಾರ&ndash;ಉಡುಪಿ&ndash;ಮಂಗಳೂರು ಮಾರ್ಗವಾಗಿ ಬೆಂಗಳೂರು ನಗರಕ್ಕೆ ಸಂಚಾರ ನಡೆಸಲಿದೆ. ಕರಾವಳಿ ಭಾಗದ ಪ್ರಯಾಣಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.&lt;/p&gt;&lt;h2&gt;ಸಮಯಪಟ್ಟಿ ವಿವರಗಳು&lt;/h2&gt;&lt;p&gt;ಈ ವಿಶೇಷ ರೈಲು ಮಡ್ಗಾಂವ್&zwnj;ನಿಂದ ಬೆಳಿಗ್ಗೆ 11:00 ಗಂಟೆಗೆ ಹೊರಡಲಿದೆ. ಬಳಿಕ ವಿವಿಧ ನಿಲ್ದಾಣಗಳಲ್ಲಿ ತಲುಪುವ ಸಮಯಗಳು ಹೀಗಿವೆ:&lt;/p&gt;&lt;ul&gt; &lt;li&gt;ಕಾರವಾರ &ndash; ಬೆಳಿಗ್ಗೆ 11:28&lt;/li&gt; &lt;li&gt;ಗೋಕರ್ಣ &ndash; ಮಧ್ಯಾಹ್ನ 12:30&lt;/li&gt; &lt;li&gt;ಮುರ್ಡೇಶ್ವರ &ndash; ಮಧ್ಯಾಹ್ನ 1:40&lt;/li&gt; &lt;li&gt;ಬೈಂದೂರು &ndash; ಮಧ್ಯಾಹ್ನ 2:12&lt;/li&gt; &lt;li&gt;ಕುಂದಾಪುರ &ndash; ಮಧ್ಯಾಹ್ನ 2:40&lt;/li&gt; &lt;li&gt;ಬಾರ್ಕೂರು &ndash; ಮಧ್ಯಾಹ್ನ 2:55&lt;/li&gt; &lt;li&gt;ಉಡುಪಿ &ndash; ಮಧ್ಯಾಹ್ನ 3:30&lt;/li&gt; &lt;li&gt;ಮೂಲ್ಕಿ &ndash; ಮಧ್ಯಾಹ್ನ 3:58&lt;/li&gt; &lt;li&gt;ಸುರತ್ಕಲ್ &ndash; ಮಧ್ಯಾಹ್ನ 4:14&lt;/li&gt;&lt;/ul&gt;&lt;p&gt;ಇದರ ನಂತರ ರೈಲು ಬಂಟ್ವಾಳ ಸಂಜೆ 6:00, ಕಬಕ&ndash;ಪುತ್ತೂರು ಸಂಜೆ 6:28, ಸುಬ್ರಹ್ಮಣ್ಯ ಸಂಜೆ 7:50ಕ್ಕೆ ತಲುಪಲಿದೆ. ಕೊನೆಗೆ ಬೆಂಗಳೂರು ನಗರದ ಕ್ಯಾಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಮುಂದಿನ ದಿನ ಬೆಳಿಗ್ಗೆ 5:00ಕ್ಕೆ ತಲುಪಲಿದೆ.&lt;/p&gt;&lt;h2&gt;ಪ್ರಯಾಣಿಕರಿಗೆ ಮಹತ್ವದ ಅನುಕೂಲ&lt;/h2&gt;&lt;p&gt;ಹಬ್ಬದ ಸಂದರ್ಭದಲ್ಲಿ ಕರಾವಳಿ ಭಾಗಕ್ಕೆ ತೆರಳಿದ ಪ್ರಯಾಣಿಕರಿಗೆ ಹಿಂದಿರುಗುವ ವೇಳೆ ಎದುರಾಗುತ್ತಿರುವ ಭಾರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ. ಇದರ ಮೂಲಕ ಪ್ರಯಾಣಿಕರು ಸುಲಭವಾಗಿ ಮತ್ತು ಸಮಯಕ್ಕೆ ಸರಿಯಾಗಿ ಬೆಂಗಳೂರಿಗೆ ತಲುಪಿ, ಸೋಮವಾರದಂದು ತಮ್ಮ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ.&lt;/p&gt;&lt;h2&gt;ಹಿಂದಿನ ಸೇವೆಗೆ ಉತ್ತಮ ಸ್ಪಂದನೆ&lt;/h2&gt;&lt;p&gt;ಯುಗಾದಿ ಹಬ್ಬದ ಪ್ರಯುಕ್ತ ಇದೇ ಮಾರ್ಗದಲ್ಲಿ ಹಿಂದೆಯೂ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು. ಆ ರೈಲು ಮಧ್ಯಾಹ್ನ ಹೊರಟಿದ್ದರೂ 700ಕ್ಕೂ ಹೆಚ್ಚು ಸೀಟುಗಳು ತುಂಬಿ, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ಈ ಬಾರಿ ಕೂಡ ಹೆಚ್ಚಿನ ಪ್ರಯಾಣಿಕರು ಈ ಸೇವೆಯನ್ನು ಬಳಸುವ ನಿರೀಕ್ಷೆ ಇದೆ.&lt;/p&gt;&lt;p&gt;ಒಟ್ಟಿನಲ್ಲಿ, ಕರಾವಳಿ ಪ್ರದೇಶದ ಜನರಿಗೆ ಹಬ್ಬದ ನಂತರ ಬೆಂಗಳೂರಿಗೆ ವಾಪಸ್ಸಾಗಲು ಈ ವಿಶೇಷ ರೈಲು ಸೇವೆ ಅತ್ಯಂತ ಉಪಯುಕ್ತವಾಗಿದ್ದು, ಪ್ರಯಾಣಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/indian-railways-runs-special-train-from-madgaon-to-bengaluru-via-coastal-karnataka-on-march-22-gdp/articleshow-zkuprlo"/>
        </item>
    </channel>
</rss>
