<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Jul 2026 21:58:47 +0530</lastBuildDate>
        <atom:link href="https://kannada.asianetnews.com/rss/dakshina-kannada" rel="self" type="application/rss+xml"/>
        <item>
            <title><![CDATA[ಹಗ್ಗವೇ ಸೇತುವೆ: ಐನೆಕಿದು ಗ್ರಾಮದ ಬಾಣೂರಿನ BLO ಕರ್ತವ್ಯನಿಷ್ಠೆ; ಮೂರು ಮನೆಗಾಗಿ ಸಾಹಸ]]></title>
            <link>https://kannada.asianetnews.com/karnataka-districts/blo-officials-crossed-the-stream-using-ropes-to-reach-three-houses-without-road-connectivity-mrq/articleshow-07y24q7</link>
            <guid isPermaLink="true">https://kannada.asianetnews.com/karnataka-districts/blo-officials-crossed-the-stream-using-ropes-to-reach-three-houses-without-road-connectivity-mrq/articleshow-07y24q7</guid>
            <pubDate>Thu, 16 Jul 2026 08:40:27 +0530</pubDate>
            <description><![CDATA[ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಬಾಣೂರು ಪ್ರದೇಶದಲ್ಲಿ, ಮತಗಟ್ಟೆ ಮಟ್ಟದ ಅಧಿಕಾರಿಗಳು ರಸ್ತೆ ಸಂಪರ್ಕವಿಲ್ಲದ ಮೂರು ಮನೆಗಳನ್ನು ತಲುಪಲು ಹಗ್ಗದ ಮೂಲಕ ಹೊಳೆ ದಾಟಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕಾಗಿ, ಅನಾರೋಗ್ಯಪೀಡಿತ ಮತದಾರರೂ ಸೇರಿದಂತೆ ಎಲ್ಲರ ವಿವರಗಳನ್ನು ಖಚಿತಪಡಿಸಿಕೊಳ್ಳಲು ಅವರು ಈ ಸಾಹಸಮಯ ಕರ್ತವ್ಯವನ್ನು ನಿರ್ವಹಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kxmecqydy678crfkn9sc2c92,imgname-blo-1784171356109.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ:&lt;/strong&gt; ಮತದಾರರ ಪಟ್ಟಿ ಉದ್ದೇಶದಿಂದ ನಿಖರಗೊಳಿಸುವ ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್&zwnj;ಐಆರ್) ಕಾರ್ಯದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್&zwnj;ಒ) ಕರ್ತವ್ಯನಿಷ್ಠೆಗೆ ಸಾಕ್ಷಿಯಾಗುವ ಘಟನೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಬಾಣೂರು ಪ್ರದೇಶದಲ್ಲಿ ಸಂಭವಿಸಿದೆ.&lt;/p&gt;&lt;p&gt;ಬಾಣೂರು ಸಮೀಪ ಹೊಳೆಯ ಆಚೆ ಕೇವಲ ಮೂರು ಮನೆಗಳಿದ್ದು, ಅಲ್ಲಿಗೆ ನೇರ ರಸ್ತೆ ಸಂಪರ್ಕವಿಲ್ಲ. ರಸ್ತೆ ಮಾರ್ಗವಾಗಿ ತೆರಳಬೇಕಾದರೆ ಬಾಳುಗೋಡು ಮಾರ್ಗವಾಗಿ ಬಹುದೂರ ಸುತ್ತಿಹೋಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಳಿನೆಲೆಬೈಲು ಸರ್ಕಾರಿ ಶಾಲೆಯ ಶಿಕ್ಷಕರೂ ಆಗಿರುವ ಬಿಎಲ್&zwnj; ಒ ಲೋಹಿತ್ ಹಾಗೂ ಬಿಎಲ್&zwnj;ಎ ಗುಣವರ್ಧನ ಸ್ಥಳೀಯರು ಬಳಸುವ ಹಗ್ಗದ ಮೂಲಕವೇ ಹೊಳೆ ದಾಟಿ ಮತದಾರರನ್ನು ಭೇಟಿ ಮಾಡಿದರು.&lt;/p&gt;&lt;h2&gt;&lt;strong&gt;ಎಸ್&zwnj;ಐಆರ್ ಪ್ರಕ್ರಿಯೆ ಪೂರ್ಣ&lt;/strong&gt;&lt;/h2&gt;&lt;p&gt;ಅಗತ್ಯ ದಾಖಲೆಗಳು ಹಾಗೂ ಪರಿಕರಗಳನ್ನು ಹೊತ್ತುಕೊಂಡು ಹಗ್ಗದ ಮೇಲೆ ಅಳವಡಿಸಿದ ಪರಿಕರದ ಮೂಲಕ ದಾಟಿದ ಅವರು, ಮೂರು ಮನೆಗಳಲ್ಲಿರುವ ಮತದಾರರ ವಿವರಗಳನ್ನು ಪರಿಶೀಲಿಸಿ ಎಸ್&zwnj;ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.&lt;/p&gt;&lt;p&gt;ಈ ಮೂರು ಮನೆಗಳಲ್ಲಿ ಒಬ್ಬ ಮತದಾರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಹೊಳೆ ದಾಟಿ ಹೊರಬರುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಿಎಲ್&zwnj;ಒ ಅವರೇ ಮನೆಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; BDA: ಕಾರಂತ ಬಡಾವಣೆಯಲ್ಲಿ ಸೈಟ್&zwnj; ಬೇಕಿದ್ದರೆ ಜುಲೈ ಒಳಗೆಯೇ ಅರ್ಜಿ ಹಾಕಿ, ಬೆಲೆ ಎಷ್ಟು?&lt;/strong&gt;&lt;/p&gt;&lt;p&gt;ಬಾಣೂರು ಭಾಗದಲ್ಲಿ ಶಾಶ್ವತ ಸೇತುವೆ ಇಲ್ಲದ ಕಾರಣ ಸ್ಥಳೀಯರು ದೈನಂದಿನ ಸಂಚಾರಕ್ಕೂ ಇದೇ ಹಗ್ಗದ ಮಾರ್ಗವನ್ನು ಬಳಸುತ್ತಾರೆ. ಮಳೆ ಕಡಿಮೆಯಿದ್ದರಿಂದ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿರಲಿಲ್ಲ. ಇದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಂಡು ಹೊಳೆ ದಾಟಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು.&lt;/p&gt;&lt;p&gt;ಬಿಳಿನೆಲೆಬೈಲು ಸರಕಾರಿ ಶಾಲೆಯ ಶಿಕ್ಷಕರೂ ಆಗಿರುವ ಲೋಹಿತ್ ಅವರ ವ್ಯಾಪ್ತಿಯಲ್ಲಿ ಸುಮಾರು 793 ಮತದಾರರು ಹಾಗೂ 200ಕ್ಕೂ ಅಧಿಕ ಮನೆಗಳಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇಂಗ್ಲೆಂಡ್&zwnj;ನಲ್ಲಿ 2ನೇ ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾದ ಕೋಂಡೇನಹಳ್ಳಿಯ ಸುರೇಶ್ ಗಟ್ಟಾಪುರ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/blo-officials-crossed-the-stream-using-ropes-to-reach-three-houses-without-road-connectivity-mrq/articleshow-07y24q7"/>
        </item>
        <item>
            <title><![CDATA[ಕಳಪೆ ಕಾಮಗಾರಿ, ಬರದ ನಡುವೆ ಎತ್ತಿನಹೊಳೆ ಪೈಪ್‌ಲೈನ್‌ ಒಡೆದು 8 ಕೋಟಿ ಲೀಟರ್‌ ನೀರು ಪೋಲು!]]></title>
            <link>https://kannada.asianetnews.com/gallery/hassan/yettinahole-pipeline-leakage-sakleshpur-8-crore-liters-water-wasted-vjnl-san-0ixkpc5</link>
            <guid isPermaLink="true">https://kannada.asianetnews.com/gallery/hassan/yettinahole-pipeline-leakage-sakleshpur-8-crore-liters-water-wasted-vjnl-san-0ixkpc5</guid>
            <pubDate>Tue, 14 Jul 2026 17:13:41 +0530</pubDate>
            <description><![CDATA[ಸಕಲೇಶಪುರ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್&zwnj;ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವೆಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxg6sy3f1x8d0e0etxaf2v19,imgname-yettinahole-pipeline-burst--5--1784029182063.jpg" type="image/jpeg" height="390" width="690"/>
            <content:encoded><![CDATA[ಸಕಲೇಶಪುರ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್&zwnj;ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವೆಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.&lt;img&gt;&lt;p&gt;ಬಯಲು ಸೀಮೆಯಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಣಭೂಮಿಗೆ ಕುಡಿಯುವ ನೀರು ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ &lsquo;ಎತ್ತಿನಹೊಳೆ ಯೋಜನೆ&rsquo;ಯ ಬೃಹತ್ ಪೈಪ್&zwnj;ಲೈನ್ ಸಕಲೇಶಪುರ ತಾಲೂಕಿನಲ್ಲಿ ಒಡೆದು ಭಾರಿ ಪ್ರಮಾಣದ ನೀರು ಪೋಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೀರು ಪೋಲಾದ ಹಿನ್ನೆಲೆಯಲ್ಲಿ ಸದ್ಯ ಯೋಜನೆ ಅಡಿ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.&lt;/p&gt;&lt;img&gt;&lt;p&gt;ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಬಳಿ ಭಾನುವಾರ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್&zwnj;ಲೈನ್ ಇದ್ದಕ್ಕಿದ್ದಂತೆ ಒಡೆದುಹೋಗಿದೆ. ಪೈಪ್&zwnj;ಲೈನ್ ನಿರ್ಮಾಣದ ವೇಳೆ ನಡೆದ ಕಳಪೆ ವೆಲ್ಡಿಂಗ್ ಹಾಗೂ ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಪೈಪ್ ಒಡೆದ ರಭಸಕ್ಕೆ ನೀರು ಸುಮಾರು 15 ಗಂಟೆಗಳಿಗೂ ಹೆಚ್ಚು ಕಾಲ ಬೃಹತ್ ಕಾರಂಜಿಯಂತೆ ಆಕಾಶಕ್ಕೆ ಚಿಮ್ಮಿದ್ದು, ಇಡೀ ಪ್ರದೇಶ ಜಲಾವೃತಗೊಂಡಿತ್ತು.&lt;/p&gt;&lt;img&gt;&lt;p&gt;ಹಲಸುಲಿಗೆ ಗ್ರಾಮದ ಸುತ್ತಮುತ್ತಲ ಕೃಷಿ ಭೂಮಿಗಳಿಗೆ ನಿರಂತರವಾಗಿ ಹರಿದ ನೀರು, ಅಲ್ಲಿನ ಬೆಳೆಗಳನ್ನು ಜಲಾವೃತಗೊಳಿಸಿದೆ. ಅತ್ಯಂತ ಒತ್ತಡದಲ್ಲಿ ಭಾರಿ ಪ್ರಮಾಣದ ನೀರು ಗದ್ದೆಗಳಿಗೆ ನುಗ್ಗಿದ್ದರಿಂದ ಮಣ್ಣಿನ ಸವಕಳಿಯಾಗಿದ್ದು, ರೈತರ ಬೆಳೆ ಹಾನಿಯಾಗಿದೆ. ಪೈಪ್&zwnj;ಲೈನ್ ಯೋಜನೆ ಜಾರಿಯಾದಾಗಿನಿಂದಲೂ ಸಕಲೇಶಪುರ ತಾಲೂಕಿನಲ್ಲಿ ನಿರಂತರವಾಗಿ ಇಂತಹ ಘಟನೆಗಳು ಜರುಗುತ್ತಿದ್ದು, ಇದು ಸ್ಥಳೀಯ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದೆ ಎಂದು ಪರಿಸರವಾದಿಗಳು ಹಾಗೂ ಗ್ರಾಮಸ್ಥರು ದೂರಿದ್ದಾರೆ.&lt;/p&gt;&lt;img&gt;&lt;p&gt;ಭಾನುವಾರ ಸಂಭವಿಸಿದ ಈ ಪೈಪ್&zwnj;ಲೈನ್ ಬಿರುಕಿನಿಂದಾಗಿ ಸುಮಾರು 8 ಕೋಟಿ ಲೀಟರ್&zwnj;ನಷ್ಟು ನೀರು ನದಿ ಅಥವಾ ಜನರಿಗೂ ಸೇರದೆ, ರೈತರ ಜಮೀನುಗಳ ಮೂಲಕ ಹರಿದು ಪೋಲಾಗಿದೆ. ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರದ ಜನತೆ ಒಂದು ಹನಿ ನೀರಿಗೂ ಪರದಾಡುತ್ತಿರುವ ಇಂತಹ ಪರಿಸ್ಥಿತಿಯಲ್ಲಿ, ಇಷ್ಟೊಂದು ಬೃಹತ್ ಪ್ರಮಾಣದ ನೀರು ಕಳಪೆ ಕಾಮಗಾರಿಯಿಂದಾಗಿ ವ್ಯರ್ಥವಾಗಿ ಹರಿದು ಹೋಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಪೈಪ್&zwnj;ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಎತ್ತಿನಹೊಳೆ ಯೋಜನೆ ಅಡಿ ನೀರು ಹರಿಸುವುದನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ (AEE) ಪ್ರಮೋದ್ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಪೈಪ್ ಒಡೆದ ಜಾಗದಲ್ಲಿ ನೀರು ಸಂಪೂರ್ಣವಾಗಿ ಸೋರಿಕೆಯಾಗುವುದನ್ನು ನಿಲ್ಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಈಗಾಗಲೇ ಪರಿಣಿತ ವೆಲ್ಡಿಂಗ್ ತಜ್ಞರ ತಂಡವನ್ನು ರವಾನಿಸಲಾಗಿದೆ. ಪೈಪ್&zwnj;ಲೈನ್&zwnj;ನಿಂದ ನೀರು ಸೋರಿಕೆಯಾಗುವುದು ಸಂಪೂರ್ಣವಾಗಿ ನಿಂತ ತಕ್ಷಣವೇ, ಅಂದರೆ ಬುಧವಾರದಿಂದ (ನಾಳೆ) ಸಮರೋಪಾದಿಯಲ್ಲಿ ದುರಸ್ತಿ ಕಾಮಗಾರಿ ಆರಂಭವಾಗಲಿದ್ದು, ಆದಷ್ಟು ಬೇಗ ನೀರು ಪೂರೈಕೆಯನ್ನು ಮರುಸ್ಥಾಪಿಸಲಾಗುವುದು ಎಂದು ಎಇಇ ಪ್ರಮೋದ್ ತಿಳಿಸಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/hassan/yettinahole-pipeline-leakage-sakleshpur-8-crore-liters-water-wasted-vjnl-san-0ixkpc5"/>
        </item>
        <item>
            <title><![CDATA[ಉಡುಪಿ:ಹೌಸ್ ಕೀಪಿಂಗ್ ಮಗಳು, ಕನ್ನಡ ಶಾಲೆಯ ಹಳ್ಳಿ ಪ್ರತಿಭೆ ಸ್ಪೂರ್ತಿ ಶೆಟ್ಟಿ'ಮಿಸ್ ಯೂನಿವರ್ಸ್ ಇಂಡಿಯಾ' ಫೈನಲಿಸ್ಟ್!]]></title>
            <link>https://kannada.asianetnews.com/gallery/karnataka-districts/house-keeping-staff-daughter-udupi-spoorthi-shetty-kannada-medium-school-to-miss-universe-india-grand-finale-stage-gdp-1u0qbwg</link>
            <guid isPermaLink="true">https://kannada.asianetnews.com/gallery/karnataka-districts/house-keeping-staff-daughter-udupi-spoorthi-shetty-kannada-medium-school-to-miss-universe-india-grand-finale-stage-gdp-1u0qbwg</guid>
            <pubDate>Thu, 16 Jul 2026 15:54:06 +0530</pubDate>
            <description><![CDATA[&lt;p&gt;ಉಡುಪಿಯ ಸಾಮಾನ್ಯ ಕುಟುಂಬದ ಸ್ಪೂರ್ತಿ ಶೆಟ್ಟಿ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಸುತ್ತಿನಲ್ಲಿ ಸೋತರೂ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿರುವ ಇವರ ಯಶೋಗಾಥೆ ಹಲವರಿಗೆ ಸ್ಪೂರ್ತಿದಾಯಕವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxn67nng7gegp1x7vcxtdnh4,imgname-spoorthi-shetty-miss-universe-india-finalist--4--1784196355760.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಡುಪಿಯ ಸಾಮಾನ್ಯ ಕುಟುಂಬದ ಸ್ಪೂರ್ತಿ ಶೆಟ್ಟಿ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಸುತ್ತಿನಲ್ಲಿ ಸೋತರೂ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿರುವ ಇವರ ಯಶೋಗಾಥೆ ಹಲವರಿಗೆ ಸ್ಪೂರ್ತಿದಾಯಕವಾಗಿದೆ.&lt;/p&gt;&lt;img&gt;&lt;p&gt;ಉಡುಪಿ: ಕರಾವಳಿಯ ಪ್ರತಿಭೆಗಳು ಕೇವಲ ಶಿಕ್ಷಣ, ಕ್ರೀಡೆಯಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೂ ತಮ್ಮ ಛಾಪು ಮೂಡಿಸಬಲ್ಲರು ಎಂಬುದನ್ನು ಉಡುಪಿಯ ಬೆಡಗಿ ಸ್ಪೂರ್ತಿ ಶೆಟ್ಟಿ ಸಾಬೀತುಪಡಿಸಿದ್ದಾರೆ. ಉಡುಪಿಯಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಕುಟುಂಬದ ಹೆಣ್ಣುಮಗಳು ಸ್ಪೂರ್ತಿ ಶೆಟ್ಟಿ, ಇದೀಗ ಪ್ರತಿಷ್ಠಿತ 'ಮಿಸ್ ಯೂನಿವರ್ಸ್ ಇಂಡಿಯಾ' (Miss Universe India) ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗುವ ಮೂಲಕ ಇಡೀ ಜಿಲ್ಲೆ ಮತ್ತು ರಾಜ್ಯವೇ ಹೆಮ್ಮೆಪಡುವಂತೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಸ್ಪೂರ್ತಿ ಶೆಟ್ಟಿ ಅವರ ಈ ಸಾಧನೆಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅತ್ಯಂತ ಸಾಮಾನ್ಯ ಮತ್ತು ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಚೆಲುವೆ ಇವರು. ಇವರ ತಾಯಿ ಮಣಿಪಾಲ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ (ಸ್ವಚ್ಛತಾ ಸಿಬ್ಬಂದಿ) ಆಗಿ ಕೆಲಸ ಮಾಡುತ್ತಾ ಮಗಳ ಕನಸುಗಳಿಗೆ ಆಸರೆಯಾಗಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದ ಸ್ಪೂರ್ತಿ, ಉಡುಪಿಯಲ್ಲೇ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬಳಿಕ ಉನ್ನತ ವ್ಯಾಸಂಗದಲ್ಲಿ ಎಂಬಿಎ (MBA) ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪೂರ್ಣಕಾಲಿಕ ಉದ್ಯೋಗ ಮಾಡುತ್ತಿರುವ ಇವರು, ತಮ್ಮ ಕೆಲಸದ ಜೊತೆಜೊತೆಗೇ ಮಾಡಲಿಂಗ್ ಕ್ಷೇತ್ರವನ್ನು ಹವ್ಯಾಸವಾಗಿ ಆರಂಭಿಸಿದ್ದರು.&lt;/p&gt;&lt;img&gt;&lt;p&gt;ಮಿಸ್ ಯೂನಿವರ್ಸ್ ವೇದಿಕೆ ತಲುಪುವ ಮುನ್ನ ಸ್ಪೂರ್ತಿ ಆರಂಭದಲ್ಲಿ ತೀವ್ರ ನಿರಾಶೆ ಎದುರಿಸಬೇಕಾಗಿ ಬಂದಿತ್ತು. ಮಿಸ್ ಯೂನಿವರ್ಸ್ ಸ್ಪರ್ಧೆಯ ಕರ್ನಾಟಕ ವಿಭಾಗದ ಪ್ರಾದೇಶಿಕ ಸುತ್ತಿನಲ್ಲಿ ಸ್ಪರ್ಧಿಸಿದ್ದ ಇವರು ಜಯಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಅವರಲ್ಲಿದ್ದ ಪ್ರತಿಭೆ, ಸೌಂದರ್ಯ ಮತ್ತು ಆತ್ಮವಿಶ್ವಾಸವನ್ನು ಗುರುತಿಸಿದ ತೀರ್ಪುಗಾರರು ಇವರಿಗೆ 'ವೈಲ್ಡ್ ಕಾರ್ಡ್ ಎಂಟ್ರಿ' (Wild Card Entry) ನೀಡಿದ್ದಾರೆ. ಈ ಮೂಲಕ ಸೋಲನ್ನು ಮೆಟ್ಟಿ ನಿಂತು ನೇರವಾಗಿ ರಾಷ್ಟ್ರೀಯ ಮಟ್ಟದ ಅಂತಿಮ ಸುತ್ತಿಗೆ ಲಗ್ಗೆ ಇಡುವಲ್ಲಿ ಸ್ಪೂರ್ತಿ ಯಶಸ್ವಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಆಗಸ್ಟ್ 23ರಂದು ನವದೆಹಲಿಯಲ್ಲಿ ಮಹಾ ಫೈನಲ್ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿ ಬಂದಿರುವ ಅತ್ಯಂತ ಪ್ರತಿಭಾವಂತ 50 ಸುಂದರಿಯರೊಂದಿಗೆ ಉಡುಪಿಯ ಸ್ಪೂರ್ತಿ ಶೆಟ್ಟಿ ಅಂತಿಮ ಸುತ್ತಿನಲ್ಲಿ ಪೈಪೋಟಿ ನಡೆಸಲಿದ್ದಾರೆ. ಈ ಬಹುನಿರೀಕ್ಷಿತ 'ಮಿಸ್ ಯೂನಿವರ್ಸ್ ಇಂಡಿಯಾ'ದ ಗ್ರ್ಯಾಂಡ್ ಫಿನಾಲೆ (Grand Finale) ಇದೇ ಆಗಸ್ಟ್ 23ರಂದು ನವದೆಹಲಿಯಲ್ಲಿ ಅದ್ಧೂರಿಯಾಗಿ ಜರುಗಲಿದೆ.&lt;/p&gt;&lt;img&gt;&lt;p&gt;ಕನ್ನಡ ಮಾಧ್ಯಮದಲ್ಲಿ ಓದಿ, ಕಷ್ಟದ ಪರಿಸ್ಥಿತಿಯಲ್ಲೂ ಕಾರ್ಪೊರೇಟ್ ಉದ್ಯೋಗದ ಜೊತೆಗೆ ಗ್ಲಾಮರ್ ಲೋಕದಲ್ಲೂ ಸಾಧನೆ ಮಾಡಿರುವ ಸ್ಪೂರ್ತಿ ಶೆಟ್ಟಿ ಅವರ ಈ ಯಶೋಗಾಥೆ ಇಂದು ಸಹಸ್ರಾರು ಗ್ರಾಮೀಣ ಭಾಗದ ಯುವತಿಯರಿಗೆ ದೊಡ್ಡ ಪ್ರೇರಣೆಯಾಗಿದೆ. ನವದೆಹಲಿಯ ಅಂತಿಮ ಜಿದ್ದಾಜಿದ್ದಿನಲ್ಲಿ ಗೆದ್ದು ಉಡುಪಿಯ ಈ ಮಗಳು ವಿಶ್ವ ಸುಂದರಿ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವಂತಾಗಲಿ ಎಂಬುದು ಕನ್ನಡಿಗರ ಆಶಯವಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/house-keeping-staff-daughter-udupi-spoorthi-shetty-kannada-medium-school-to-miss-universe-india-grand-finale-stage-gdp-1u0qbwg"/>
        </item>
        <item>
            <title><![CDATA[ದಕ್ಷಿಣ ಕನ್ನಡ, ಬೆಳಗಾವಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳು!]]></title>
            <link>https://kannada.asianetnews.com/karnataka-districts/karnataka-state-heavy-rain-alert-dakshina-kannada-and-belagavi-districts-schools-holiday-declare/articleshow-2cnl3ny</link>
            <guid isPermaLink="true">https://kannada.asianetnews.com/karnataka-districts/karnataka-state-heavy-rain-alert-dakshina-kannada-and-belagavi-districts-schools-holiday-declare/articleshow-2cnl3ny</guid>
            <pubDate>Tue, 07 Jul 2026 21:12:40 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಭಾರಿ ಮಳೆಯ ಮುನ್ಸೂಚನೆಯಿಂದಾಗಿ ದಕ್ಷಿಣ ಕನ್ನಡ, ಕೊಡಗು ಮತ್ತು ಬೆಳಗಾವಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯು ದಕ್ಷಿಣ ಕನ್ನಡದಲ್ಲಿ 'ರೆಡ್ ಅಲರ್ಟ್' ಘೋಷಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyksvc1vzsqmdx8s8d0hke6,imgname-karnataka-rain-school-holiday--1--1783438830977.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಭಾರಿ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಆಯ್ದ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ರೆಡ್ ಅಲರ್ಟ್' - ಜಿಲ್ಲೆಯಾದ್ಯಂತ ರಜೆ:&lt;/p&gt;&lt;p&gt;ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹವಾಮಾನ ಇಲಾಖೆಯು 'ರೆಡ್ ಅಲರ್ಟ್' ಘೋಷಿಸಿದೆ. ಭಾರಿ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ (PUC) ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿದ್ದಾರೆ. ದಕ್ಷಿಣ ಕನ್ನಡದ ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಹಾಗೂ ಮಂಗಳೂರು ಸೇರಿದಂತೆ ಎಲ್ಲಾ ತಾಲೂಕುಗಳಿಗೂ ಈ ಆದೇಶ ಅನ್ವಯಿಸಲಿದೆ.&lt;/p&gt;&lt;h2&gt;&lt;strong&gt;ಬೆಳಗಾವಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ರಜೆ:&lt;/strong&gt;&lt;/h2&gt;&lt;p&gt;ಇತ್ತ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲೂ ಮಳೆಯ ಆರ್ಭಟ ಮುಂದುವರಿದಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಮೂರು ಪ್ರಮುಖ ತಾಲೂಕುಗಳಾದ ಬೆಳಗಾವಿ, ಖಾನಾಪುರ ಮತ್ತು ನಿಪ್ಪಾಣಿ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದಾರೆ. ಈ ಮೂರು ತಾಲೂಕುಗಳ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಲೆನಾಡು ಭಾಗವಾಗಿರುವ ಖಾನಾಪುರದಲ್ಲಿ ಮಳೆ ಹೆಚ್ಚಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸೂಚನೆ:&lt;/strong&gt;&lt;/h2&gt;&lt;p&gt;ಮಳೆ ಹೆಚ್ಚಾಗಿರುವುದರಿಂದ ನದಿ ತೀರ, ಸಮುದ್ರ ತೀರ ಹಾಗೂ ವಿದ್ಯುತ್ ಕಂಬಗಳ ಹತ್ತಿರ ಹೋಗದಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತಗಳು ಎಚ್ಚರಿಕೆ ನೀಡಿವೆ. ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತದ ಕಂಟ್ರೋಲ್ ರೂಂಗೆ ಕರೆ ಮಾಡಲು ಸೂಚಿಸಲಾಗಿದೆ. ಪದವಿ ಮತ್ತು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳ ಬಗ್ಗೆ ಆಯಾ ಸಂಸ್ಥೆಗಳ ಮುಖ್ಯಸ್ಥರು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-state-heavy-rain-alert-dakshina-kannada-and-belagavi-districts-schools-holiday-declare/articleshow-2cnl3ny"/>
        </item>
        <item>
            <title><![CDATA[ಸೌಜನ್ಯ ಪ್ರಕರಣ; ಮಹೇಶ್ ಶೆಟ್ಟಿ ತಿಮರೋಡಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ, ಗಡೀಪಾರು ಪ್ರಶ್ನಿಸಿದ್ದ ಅರ್ಜಿ ವಜಾ]]></title>
            <link>https://kannada.asianetnews.com/karnataka-districts/supreme-court-rejects-mahesh-shetty-timarodi-petition-challenging-extradition/articleshow-2f7r19m</link>
            <guid isPermaLink="true">https://kannada.asianetnews.com/karnataka-districts/supreme-court-rejects-mahesh-shetty-timarodi-petition-challenging-extradition/articleshow-2f7r19m</guid>
            <pubDate>Mon, 13 Jul 2026 15:28:17 +0530</pubDate>
            <description><![CDATA[&lt;p&gt;ಸೌಜನ್ಯ ಪ್ರಕರಣ ಬಳಸಿ ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನ ನಡೆಸಿದ ಮಹೇಶೆ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ತಮ್ಮ ಗಡೀಪಾರು ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdegn8vnhcjnar9zcd67dbd,imgname-mahesh-shetty-timarodi-case-1783936603419.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.13) &lt;/strong&gt;ಕರ್ನಾಟಕದಲ್ಲಿ ಭಾರಿ ಕೋಲಾಹಲ ಮೂಡಿಸಿದ ಸೌಜನ್ಯ ಪ್ರಕರಣ ಹಾಗೂ ಈ ಪ್ರಕರಣ ಹಿಡಿದು ಮಾಡಿದ ಹೋರಾಟ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಅಂಶವನ್ನು ಉಲ್ಲೇಖಿಸಿದೆ. ಸೌಜನ್ಯ ಪ್ರಕರಣವನ್ನು ಬಳಸಿಕೊಂಡು ಧರ್ಮಸ್ಥಳ ವಿರುದ್ಧ ಭಾರಿ ಪ್ರತಿಭಟನೆ, ಗಂಭೀರ ಆರೋಪಗಳನ್ನು ಮಾಡಿದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸೌಜನ್ಯ ಪ್ರಕರಣವನ್ನು ಬಳಸಿಕೊಂಡು ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನವನ್ನು ಮಹೇಶ್ ಶೆಟ್ಟಿ ತಿಮರೋಡಿ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಗಡೀಪಾರು ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.&lt;/p&gt;&lt;h2&gt;ಮಹೇಶ್ ಶೆಟ್ಟಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ&lt;/h2&gt;&lt;p&gt;ಸೌಜನ್ಯ ಪ್ರಕರಣ, ಬುರುಡೆ ಪ್ರಕರಣಗಳಲ್ಲಿ ಬುರುಡೆ ಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕೆಲ ಪ್ರಕರಣಗಳು ದಾಖಲಾಗಿದೆ. ಇದೇ ವೇಳೆ ಮಹೇಶ್ ಶೆಟ್ಟಿ ಗಡೀಪಾರಿಗೆ ಆದೇಶ ನೀಡಲಾಗಿತ್ತು. ಈ ಆದೇಶ ಪ್ರಶ್ನಿಸಿ ತಿಮರೋಡಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆದರೆ ತಿಮರೋಡಿ ಸಲ್ಲಿಸಿದ್ದ ಅರ್ಜಿ ಪ್ರಶ್ನಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಕಾನೂನು ಪ್ರಕಾರ ಸೂಕ್ತ ಸಕ್ಷಮ ಪ್ರಾಧಿಕಾರವನ್ನೇ ಸಂಪರ್ಕಿಸುವಂತೆ ನಿರ್ದೇಶಿಸಿದೆ. ಮಹೇಶ್ ಶೆಟ್ಟಿ ಗಡೀಪಾರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಲಭ್ಯವಿರುವ ಶಾಸನಬದ್ಧ ಪರಿಹಾರಗಳನ್ನು ಬಳಸಿಕೊಳ್ಳುವ ಬದಲು ನೇರವಾಗಿ ಸುಪ್ರೀಂ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿರುವುದರ ಕುರಿತು ನ್ಯಾಯಪೀಠವು ಪ್ರಶ್ನಿಸಿದೆ.&lt;/p&gt;&lt;h2&gt;ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ&lt;/h2&gt;&lt;p&gt;ಮಹೇಶ್ ಶೆಟ್ಟಿ ವಕೀಲರು ಸುಪ್ರೀಂ ಕೋರ್ಟ್&zwnj;ನಲ್ಲಿ ವಿಚಿತ್ರ ವಾದ ಮಂಡಿಸಿದ್ದರು. ಮಹೇಶ್ ಶೆಟ್ಟಿ ಗಡೀಪಾರು ಪ್ರಕರಣ ಹಾಗೂ ಸೌಜನ್ಯ ಪ್ರಕರಣ ಜೋಡಿಸಿ ವಾದ ಮಂಡಿಸಿದ್ದರು. ಇಷ್ಟೇ ಅಲ್ಲ ಸ್ಥಳೀಯ ದೇವಸ್ಥಾನದ ಪ್ರಮುಖರು ತಮ್ಮನ್ನು ಗುರಿಯಾಗಿಸಿದ್ದಾರೆ. ಹೀಗಾಗಿ ತಮ್ಮ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಾದ ಮಂಡಿಸಿದ್ದರು. ಈ ವಾದ ಕೇಳಿ ಗರಂ ಆದ ಸುಪ್ರೀಂ ಕೋರ್ಟ್, ಅಸಂಬಂಧಿತ ವಿಷಯಗಳನ್ನು ಬಳಸಿ ಸಾರ್ವಜನಿಕ ಭಾವನೆಗಳನ್ನು ಕೆರಳಿಸುವುದು ಅಥವಾ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ತರಾಟೆ ತೆಗೆದುಕೊಂಡಿತು.&lt;/p&gt;&lt;p&gt;ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ ಪರಿಹಾರ ನೀಡಲೂ ನಿರಾಕರಿಸಿದೆ. ಊಹಾತ್ಮಕ ವಾದ ಮಂಡಿಸಿದ ವಕೀಲರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ನ್ಯಾಯಾಲಯದಲ್ಲಿ ಜೂಜಾಟ ಬೇಡ. ಇಲ್ಲಿ ಅವಕಾಶಗಳಿಲ್ಲ. ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸಂಜಯ್ ಕುಮಾರ್ ಹಾಗೂ ನ್ಯಾಯಮೂರ್ತಿ ಶ್ರೀ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್&zwnj;ನ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು.&lt;/p&gt;&lt;p&gt;&lt;/p&gt;]]></content:encoded>
            <category>dakshina-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/supreme-court-rejects-mahesh-shetty-timarodi-petition-challenging-extradition/articleshow-2f7r19m"/>
        </item>
        <item>
            <title><![CDATA[ಚಾರ್ಮಾಡಿ ಘಾಟಿಯಲ್ಲಿ ಲಘು ಭೂಕುಸಿತ, ದಟ್ಟ ಮಂಜಿನಲ್ಲಿ ರಸ್ತೆ ಸರಿಯಾಗಿ ಕಾಣಿಸದೆ ಪಲ್ಟಿಯಾದ ಕಾರು!]]></title>
            <link>https://kannada.asianetnews.com/gallery/karnataka-districts/charmadi-ghat-travel-advisory-landslides-heavy-rain-alert-gdp-4x64grd</link>
            <guid isPermaLink="true">https://kannada.asianetnews.com/gallery/karnataka-districts/charmadi-ghat-travel-advisory-landslides-heavy-rain-alert-gdp-4x64grd</guid>
            <pubDate>Wed, 08 Jul 2026 10:19:56 +0530</pubDate>
            <description><![CDATA[&lt;p&gt;ಮುಂಗಾರು ಮಳೆಗೆ ಚಾರ್ಮಾಡಿ ಘಾಟಿಯು ಹಸಿರಿನಿಂದ ಕಂಗೊಳಿಸುತ್ತಿದ್ದು, ಮೈದುಂಬಿ ಹರಿಯುವ ಜಲಪಾತಗಳು ಮತ್ತು ದಟ್ಟ ಮಂಜು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಅಲ್ಲಲ್ಲಿ ಸಂಭವಿಸುತ್ತಿರುವ ಲಘು ಗುಡ್ಡ ಕುಸಿತ ಈ ಮಾರ್ಗದಲ್ಲಿ ಸಂಚರಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwzznbkmcg21pgg0sncxttpc,imgname-charmadi-ghat--7--1783484821108.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಗಾರು ಮಳೆಗೆ ಚಾರ್ಮಾಡಿ ಘಾಟಿಯು ಹಸಿರಿನಿಂದ ಕಂಗೊಳಿಸುತ್ತಿದ್ದು, ಮೈದುಂಬಿ ಹರಿಯುವ ಜಲಪಾತಗಳು ಮತ್ತು ದಟ್ಟ ಮಂಜು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಅಲ್ಲಲ್ಲಿ ಸಂಭವಿಸುತ್ತಿರುವ ಲಘು ಗುಡ್ಡ ಕುಸಿತ ಈ ಮಾರ್ಗದಲ್ಲಿ ಸಂಚರಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.&lt;/p&gt;&lt;img&gt;&lt;p&gt;ಬೆಳ್ತಂಗಡಿ/ಮೂಡಿಗೆರೆ: ಕರಾವಳಿ ಮತ್ತು ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ಕೊಂಡಿ, ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಮುಂಗಾರು ಮಳೆ ಭಾರಿ ಚುರುಕಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಡೀ ಘಾಟಿ ಪ್ರದೇಶ ಹಸಿರು ಹೊದ್ದು ನಳನಳಿಸುತ್ತಿದ್ದು, ಪ್ರಕೃತಿ ಪ್ರೇಮಿಗಳ ಕಣ್ಮನ ಸೆಳೆಯುತ್ತಿದೆ. ಕಡಿದಾದ 11 ಹೇರ್&zwnj;ಪಿನ್ ತಿರುವುಗಳನ್ನು ಹೊಂದಿರುವ ಈ 25 ಕಿಲೋಮೀಟರ್ ಉದ್ದದ ವನ್ಯ ಪರಿಸರದಲ್ಲಿ ಇದೀಗ ಮಳೆಗಾಲದ ಸೌಂದರ್ಯ ವರ್ಣನಾತೀತವಾಗಿದೆ.&lt;/p&gt;&lt;img&gt;&lt;p&gt;ಈ ಬಾರಿ ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಅಬ್ಬರ ಕಡಿಮೆಯಿದ್ದ ಕಾರಣ ಘಾಟಿಯಾದ್ಯಂತ ಹಸಿರು ಕಂಗೊಳಿಸುತ್ತಿದೆ. ವರ್ಷವಿಡೀ ಸುಂದರವಾಗಿರುವ ಚಾರ್ಮಾಡಿ, ಮಳೆಗಾಲದಲ್ಲಿ ಮತ್ತಷ್ಟು ಆಕರ್ಷಕ ರೂಪ ತಳೆದಿದೆ. ಸದ್ಯ ಘಾಟಿ ವ್ಯಾಪ್ತಿಯಲ್ಲಿ 2 ಬೃಹತ್ ಜಲಪಾತಗಳು, 10 ಸಾಮಾನ್ಯ ಗಾತ್ರದ ಜಲಪಾತಗಳು ಹಾಗೂ 15ಕ್ಕೂ ಹೆಚ್ಚು ಪುಟ್ಟ ಪುಟ್ಟ ಹಳ್ಳ-ತೊರೆಗಳು ಮೈದುಂಬಿ ಧುಮ್ಮಿಕ್ಕುತ್ತಿವೆ. ಒಂದನೇ ತಿರುವಿನಿಂದ ಆರಂಭವಾಗಿ ಮೇಲೆ ಹೋದಂತೆಲ್ಲಾ ದಟ್ಟವಾಗಿ ಆವರಿಸುವ ಮಂಜು, ಸದಾ ಸುರಿಯುವ ಜಿಟಿಜಿಟಿ ಮಳೆ ಹಾಗೂ ಸುತ್ತಲಿನ ಕಣಿವೆಗಳ ದೃಶ್ಯ ಪ್ರಯಾಣಿಕರಿಗೆ ಸ್ವರ್ಗದ ಅನುಭೂತಿ ನೀಡುತ್ತಿದೆ.&lt;/p&gt;&lt;img&gt;&lt;p&gt;ಭಾರಿ ಮಳೆಯಿಂದಾಗಿ ಘಾಟಿಯ ಮೇಲ್ಭಾಗದ ನೀರು ರಭಸವಾಗಿ ಹರಿದು ಬರುತ್ತಿದ್ದು, ಗುಡ್ಡದ ಮಣ್ಣು ಸಡಿಲಗೊಂಡು ಚಿಕ್ಕಮಗಳೂರು ವಿಭಾಗದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗುತ್ತಿದೆ. ಬಿದಿರುತಳ ಸೇರಿದಂತೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮಣ್ಣಿನೊಂದಿಗೆ ಮರ-ಗಿಡಗಳು ರಸ್ತೆಗೆ ಉರುಳಿ ಬಿದ್ದ ಘಟನೆಗಳು ನಡೆದಿವೆ. ಅದೃಷ್ಟವಶಾತ್, ಮಣ್ಣು ರಸ್ತೆಯ ಮುಖ್ಯ ಭಾಗಕ್ಕೆ ಕುಸಿಯದ ಕಾರಣ ಸಂಚಾರಕ್ಕೆ ದೊಡ್ಡ ಮಟ್ಟದ ಅಡಚಣೆಯಾಗಿಲ್ಲ. ಆದರೆ, ಘಾಟಿ ರಸ್ತೆಯ ಚರಂಡಿಗಳಲ್ಲಿ ಮಣ್ಣು ತುಂಬಿಕೊಳ್ಳುತ್ತಿದೆ.&lt;/p&gt;&lt;p&gt;ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಗುಡ್ಡ ಕುಸಿತ ಹಾಗೂ ಮರಗಳು ಧರೆಗುರುಳುವ ಸಾಧ್ಯತೆ ಹೆಚ್ಚಿರುವುದರಿಂದ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಮಾಜಸೇವಕರು ಕಟ್ಟೆಚ್ಚರ ವಹಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಎರಡೂ ವಿಭಾಗಗಳಿಂದ ರಸ್ತೆ ಸಂಚಾರ ಸುಗಮಗೊಳಿಸಲು ಜೆಸಿಬಿ ಯಂತ್ರಗಳು ಹಾಗೂ ಅಗತ್ಯ ಕಾರ್ಮಿಕರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಹಿಂದೆಂದಿಗಿಂತ ರಸ್ತೆ ಅಗಲಗೊಂಡಿರುವುದು ಹಾಗೂ ತಡೆಗೋಡೆಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದು ಸದ್ಯದ ದೊಡ್ಡ ಸಮಾಧಾನವಾಗಿದೆ.&lt;/p&gt;&lt;img&gt;&lt;p&gt;ಘಾಟಿಯುದ್ದಕ್ಕೂ ಸದಾ ದಟ್ಟವಾದ ಮಂಜು ಕವಿದ ವಾತಾವರಣ ಇರುವುದರಿಂದ ವಾಹನ ಸವಾರರಿಗೆ ಮುಂದಿರುವ ರಸ್ತೆ ಸರಿಯಾಗಿ ಕಾಣಿಸುತ್ತಿಲ್ಲ. ಚಾರ್ಮಾಡಿ ಘಾಟ್&zwnj;ನ ಪ್ರಸಿದ್ಧ &lsquo;ಮಲೆಯ ಮಾರುತ&rsquo; ಪ್ರವಾಸಿ ಮಂದಿರದ ಬಳಿ ರಸ್ತೆ ಸರಿಯಾಗಿ ಕಾಣಿಸದೆ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ವೈದ್ಯಕೀಯ, ಧಾರ್ಮಿಕ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ, ಚಾಲಕರು ಮುಂಜಾಗ್ರತೆ ವಹಿಸಿ ಅತ್ಯಂತ ನಿಧಾನವಾಗಿ ವಾಹನ ಚಾಲನೆ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.&lt;/p&gt;&lt;h2&gt;ಪ್ರವಾಸಿಗರ ಬೇಜವಾಬ್ದಾರಿತನ&lt;/h2&gt;&lt;p&gt;ತುಂಬಿ ಹರಿಯುತ್ತಿರುವ ಜಲಪಾತಗಳನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಚಾರ್ಮಾಡಿಯತ್ತ ಲಗ್ಗೆ ಇಡುತ್ತಿದ್ದಾರೆ. ಆದರೆ, ಕೆಲವರ ಬೇಜವಾಬ್ದಾರಿಯುತ ವರ್ತನೆ ಇತರ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.&lt;/p&gt;&lt;img&gt;&lt;p&gt;ಕಿರಿದಾದ ರಸ್ತೆಯ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಿ ನೃತ್ಯ ಮಾಡುವುದು, ರೀಲ್ಸ್ ಮಾಡುವುದು. ಧೂಮಪಾನ ಹಾಗೂ ಮದ್ಯಪಾನದಂತಹ ಅನಗತ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಹೆಚ್ಚಾಗಿದೆ. ರಸ್ತೆ ಬದಿಯ ಅಪಾಯಕಾರಿ ಕಲ್ಲು ಬಂಡೆಗಳನ್ನು ಏರುವುದು ಹಾಗೂ ಪ್ರಪಾತದ ತಡೆಗೋಡೆಗಳ ಮೇಲೆ ನಿಂತು ಸೆಲ್ಫಿ ತಗೆದುಕೊಳ್ಳುವ ಸಾಹಸಕ್ಕೆ ಪ್ರವಾಸಿಗರು ಕೈಹಾಕುತ್ತಿದ್ದಾರೆ. ಘಾಟಿ ಪ್ರದೇಶದಲ್ಲಿ ಪೊಲೀಸರ ಗಸ್ತು ನಿರಂತರವಾಗಿದ್ದರೂ, ಪ್ರವಾಸಿಗರ ಈ ಆಟಾಟೋಪಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅನಪೇಕ್ಷಿತ ಚಟುವಟಿಕೆಗಳು ಕಂಡುಬಂದಲ್ಲಿ ದಂಡ ವಿಧಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಘಾಟಿಯ ಸೌಂದರ್ಯವನ್ನು ಚಲಿಸುವ ವಾಹನದಲ್ಲೇ ವೀಕ್ಷಿಸುವುದು ಕ್ಷೇಮ. ಅದನ್ನು ಬಿಟ್ಟು ಹಠ ಹಿಡಿದು ವಾಹನ ನಿಲ್ಲಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಪ್ರಸ್ತುತ ಹವಾಮಾನದ ಹಿನ್ನೆಲೆಯಲ್ಲಿ ಪ್ರಯಾಣಿಕರು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸುವುದು ಕಡ್ಡಾಯ:&lt;/p&gt;&lt;ul&gt; &lt;li&gt;ಘಾಟಿಯ ಯಾವುದೇ ತಿರುವುಗಳಲ್ಲಿ, ಜಲಪಾತಗಳ ಬಳಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದಕ್ಕೆ ಕಟ್ಟುನಿಟ್ಟಿನ ನಿಷೇಧವಿದೆ.&lt;/li&gt; &lt;li&gt;ಮೇಲ್ಭಾಗದಲ್ಲಿ ಹಠಾತ್ ಮಳೆ ಹೆಚ್ಚಾದರೆ ಹಳ್ಳಗಳಲ್ಲಿ ನೀರಿನ ಹರಿವು ಕ್ಷಣಾರ್ಧದಲ್ಲಿ ಹೆಚ್ಚಾಗುವುದರಿಂದ ಪ್ರವಾಸಿಗರು ನೀರಿಗೆ ಇಳಿಯಬಾರದು.&lt;/li&gt; &lt;li&gt;ಇಡೀ ಘಾಟಿ ಪರಿಸರದಲ್ಲಿ ಯಾವುದೇ ಮೊಬೈಲ್ ನೆಟ್&zwnj;ವರ್ಕ್ ಲಭ್ಯವಿರುವುದಿಲ್ಲ. ಆದ್ದರಿಂದ ತುರ್ತು ಸಂದರ್ಭದಲ್ಲಿ ತಕ್ಷಣದ ಸಂಪರ್ಕ ಸಾಧ್ಯವಿರುವುದಿಲ್ಲ, ಜಾಗ್ರತೆ ಇರಲಿ.&lt;/li&gt; &lt;li&gt;ಘಾಟಿಯಲ್ಲಿ ಮಧ್ಯೆ ಯಾವುದೇ ಅಂಗಡಿಗಳಿಲ್ಲದ ಕಾರಣ, ಪ್ರಯಾಣದ ಸಮಯದಲ್ಲಿ ಅಗತ್ಯವಿರುವ ಆಹಾರ ಮತ್ತು ಕುಡಿಯುವ ನೀರನ್ನು ಜೊತೆಯಲ್ಲೇ ಇಟ್ಟುಕೊಳ್ಳುವುದು ಉತ್ತಮ.&lt;/li&gt; &lt;li&gt;ಮಂಜು ಮತ್ತು ಗುಡ್ಡ ಕುಸಿತದ ಭೀತಿ ಇರುವುದರಿಂದ ಆದಷ್ಟು ರಾತ್ರಿಯ ವೇಳೆಯ ಪ್ರಯಾಣವನ್ನು ಸಂಪೂರ್ಣವಾಗಿ ಅವಲಂಬಿಸದಿರುವುದು ಕ್ಷೇಮ. ಅಲ್ಲದೆ ಈ ಕಾಡುಗಳಲ್ಲಿ ಕಾಡಾನೆ, ಚಿರತೆ ಸೇರಿದಂತೆ ವನ್ಯಜೀವಿಗಳ ತಿರುಗಾಟವಿರುವುದರಿಂದ ರಾತ್ರಿ ಸಂಚಾರ ಅಪಾಯಕಾರಿ.&lt;/li&gt;&lt;/ul&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/charmadi-ghat-travel-advisory-landslides-heavy-rain-alert-gdp-4x64grd"/>
        </item>
        <item>
            <title><![CDATA[ಮಂಗಳೂರು: ಉಪ್ಪಿನಂಗಡಿಯಲ್ಲಿ ಖೋಟಾನೋಟು ದಂಧೆ ಪತ್ತೆ, ಪ್ರಿಂಟಿಂಗ್ ಮೆಷಿನ್, RBI ಸೀಲ್ ಸಹಿತ 7 ಮಂದಿ ಅರೆಸ್ಟ್!]]></title>
            <link>https://kannada.asianetnews.com/karnataka-districts/massive-counterfeit-fake-currency-printing-racket-busted-in-uppinangady-at-mangaluru-rbi-security-threads-seized-gdp/articleshow-5m5nfg3</link>
            <guid isPermaLink="true">https://kannada.asianetnews.com/karnataka-districts/massive-counterfeit-fake-currency-printing-racket-busted-in-uppinangady-at-mangaluru-rbi-security-threads-seized-gdp/articleshow-5m5nfg3</guid>
            <pubDate>Thu, 16 Jul 2026 16:18:20 +0530</pubDate>
            <description><![CDATA[ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ನಕಲಿ ನೋಟುಗಳು ಹಾಗೂ ಮುದ್ರಣ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktwwjysta4mckjcpbbangtmf,imgname-do-you-know-where-the-units-that-print-currency-notes-and-coins-are-located-in-our-country-1781233449786.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಭಾರಿ ಪ್ರಮಾಣದ ಖೋಟಾನೋಟು (ನಕಲಿ ನೋಟು) ಮುದ್ರಣ ಮತ್ತು ಚಲಾವಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು, ಖೋಟಾನೋಟು ತಯಾರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿ.ಬಿ. ರಿಸ್ವಾಂತ್ ಅವರು ಈ ಯಶಸ್ವಿ ಕಾರ್ಯಾಚರಣೆಯ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;&lt;h2&gt;ಖಚಿತ ಮಾಹಿತಿ ಮೇರೆಗೆ ಪೋಲಿಸ್ ದಾಳಿ&lt;/h2&gt;&lt;p&gt;ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಉಪ್ಪಿನಂಗಡಿ ಪೊಲೀಸ್ ಇನ್ಸ್&zwnj;ಪೆಕ್ಟರ್ ಮತ್ತು ತಂಡದವರು ದಂಧೆ ನಡೆಯುತ್ತಿದ್ದ ಅಡಗುದಾಣದ ಮೇಲೆ ಮಿಂಚಿನ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ನಕಲಿ ನೋಟುಗಳನ್ನು ಸಿದ್ಧಪಡಿಸುತ್ತಿದ್ದ 7 ಮಂದಿ ಆರೋಪಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ, ಈ ಅಕ್ರಮ ದಂಧೆಗೆ ಬಾಡಿಗೆ ಕಟ್ಟಡ ಒದಗಿಸಿಕೊಟ್ಟಿದ್ದ ಸ್ಥಳೀಯ ವ್ಯಕ್ತಿಯನ್ನೂ ಸಹ ಪೊಲೀಸರು ವಶಕ್ಕೆ ಪಡೆದು ತನಿಖೆಗೊಳಪಡಿಸಿದ್ದಾರೆ.&lt;/p&gt;&lt;h2&gt;ಮುದ್ರಣಕ್ಕೆ ಬಳಸುತ್ತಿದ್ದ ತಾಂತ್ರಿಕ ಉಪಕರಣಗಳು ಜಪ್ತಿ&lt;/h2&gt;&lt;p&gt;ಆರೋಪಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಸಲಿ ನೋಟುಗಳನ್ನೇ ಹೋಲುವಂತೆ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾಳಿಯ ಸಂದರ್ಭದಲ್ಲಿ ಪೊಲೀಸರು ಭಾರಿ ಪ್ರಮಾಣದ ಖೋಟಾನೋಟುಗಳು ಹಾಗೂ ಅವುಗಳ ಮುದ್ರಣಕ್ಕೆ ಬಳಸುತ್ತಿದ್ದ ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಪ್ರಮುಖ ವಸ್ತುಗಳ ವಿವರ ಹೀಗಿದೆ.&lt;/p&gt;&lt;ul&gt; &lt;li&gt;ಬೃಹತ್ ಪ್ರಮಾಣದ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಬಂಡಲ್&zwnj;ಗಳು.&lt;/li&gt; &lt;li&gt;ಖೋಟಾನೋಟು ಮುದ್ರಣಕ್ಕೆ ಬಳಸುತ್ತಿದ್ದ ಹೈಟೆಕ್ ಪ್ರಿಂಟಿಂಗ್ ಮೆಷಿನ್&zwnj;ಗಳು ಮತ್ತು ಕಂಪ್ಯೂಟರ್ ಮಾನಿಟರ್&zwnj;ಗಳು.&lt;/li&gt; &lt;li&gt;ಅಸಲಿ ನೋಟಿನಂತೆ ಬಿಂಬಿಸಲು ಬಳಸುತ್ತಿದ್ದ ಆರ್ಬಿಐ ಸೀಲ್ ಥ್ರೆಡ್ (RBI Seal Thread).&lt;/li&gt; &lt;li&gt;ನೋಟಿನ ಮೇಲೆ ಮುದ್ರಿಸಲು ಬಳಸುತ್ತಿದ್ದ ಮಹಾತ್ಮಾ ಗಾಂಧೀಜಿ ಭಾವಚಿತ್ರವಿರುವ ಸೀಲ್&zwnj;ಗಳು.&lt;/li&gt; &lt;li&gt;ಮುದ್ರಣಕ್ಕಾಗಿ ತಂದಿಟ್ಟುಕೊಂಡಿದ್ದ ನೂರಾರು ಎ4 (A4) ಗಾತ್ರದ ಪೇಪರ್ ಶೀಟ್&zwnj;ಗಳು.&lt;/li&gt;&lt;/ul&gt;&lt;h2&gt;ತನಿಖೆ ತೀವ್ರಗೊಳಿಸಿದ ಪೊಲೀಸರು&lt;/h2&gt;&lt;p&gt;ಪ್ರಸ್ತುತ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ತೀವ್ರ ವಿಚಾರಣೆ ಮುಂದುವರಿದಿದೆ. ಈ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿಗಳು ಇದ್ದಾರೆಯೇ? ಈಗಾಗಲೇ ಎಷ್ಟು ಪ್ರಮಾಣದ ಖೋಟಾನೋಟುಗಳನ್ನು ಮಾರುಕಟ್ಟೆಗೆ ಚಲಾವಣೆ ಮಾಡಲಾಗಿದೆ? ಮತ್ತು ಇವರಿಗೆ ತಾಂತ್ರಿಕ ಸಹಾಯ ಒದಗಿಸಿದ್ದು ಯಾರು ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸಾರ್ವಜನಿಕರು ಹಣದ ವಹಿವಾಟು ನಡೆಸುವಾಗ ಜಾಗರೂಕರಾಗಿರಬೇಕು ಮತ್ತು ಅನುಮಾನಾಸ್ಪದ ನೋಟುಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/massive-counterfeit-fake-currency-printing-racket-busted-in-uppinangady-at-mangaluru-rbi-security-threads-seized-gdp/articleshow-5m5nfg3"/>
        </item>
        <item>
            <title><![CDATA[ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI]]></title>
            <link>https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd</link>
            <guid isPermaLink="true">https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd</guid>
            <pubDate>Fri, 10 Jul 2026 19:25:34 +0530</pubDate>
            <description><![CDATA[&lt;p&gt;ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx64pz5xwr12fyahv2jpms8d,imgname-sardine-fish-cmfri-warning--2--1783691443389.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ.&amp;nbsp;&lt;/p&gt;&lt;img&gt;&lt;p&gt;ಮೀನು ಪ್ರಿಯರ ಸಾರ್ವಕಾಲಿಕ ನೆಚ್ಚಿನ ಹಾಗೂ ಅಗ್ಗದ ದರದ ಮೀನು ಎನಿಸಿಕೊಂಡಿರುವ ಭೂತಾಯಿ (ಕೆಲವು ಕಡೆ ಮತ್ತಿ, ಬೈಗೆ ಎಂದೂ ಹೇಳುತ್ತಾರೆ) ಲಭ್ಯತೆ ಮುಂದಿನ ವರ್ಷ ಗಣನೀಯವಾಗಿ ಕುಸಿಯಲಿದೆ ಎಂಬ ಆತಂಕಕಾರಿ ಮುನ್ಸೂಚನೆಯನ್ನು ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆ (CMFRI) ನೀಡಿದೆ. ಸಮುದ್ರದಲ್ಲಿ ಬಿಸಿಹವೆಗೆ ಕಾರಣವಾಗುವ ಜಾಗತಿಕ ಹವಾಮಾನ ವಿದ್ಯಮಾನವಾದ 'ಎಲ್ ನಿನೊ' (El Nino) ಪ್ರಭಾವದಿಂದಾಗಿ ಕಡಲಿನಲ್ಲಿ ಮೀನುಗಳ ಲಭ್ಯತೆ ತಗ್ಗಲಿದ್ದು, ದೇಶಾದ್ಯಂತ ಕಡಲ ಮತ್ಸ್ಯೋದ್ಯಮದ ಮೇಲೆ ಇದು ಭಾರಿ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಸಂಸ್ಥೆ ಎಚ್ಚರಿಸಿದೆ.&lt;/p&gt;&lt;img&gt;&lt;p&gt;ಮುಂದಿನ ದಿನಗಳು ಮತ್ಸ್ಯಪ್ರಿಯರಿಗೆ ಅಷ್ಟೊಂದು ಆಶಾದಾಯಕವಾಗಿ ಇರುವುದಿಲ್ಲ. ಪ್ರಸ್ತುತ ವರ್ಷದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ತೀವ್ರಗೊಳ್ಳಲಿರುವ 'ಎಲ್ ನಿನೊ' ವಿದ್ಯಮಾನದ ನೇರ ಪ್ರಭಾವವು ಮುಂದಿನ ವರ್ಷದ (2027) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಪ್ರಕಟವಾಗಲಿದೆ ಎಂದು ಸಿಎಂಎಫ್&zwnj;ಆರ್&zwnj;ಐ ಮುನ್ಸೂಚನೆ ನೀಡಿದೆ. ಹವಾಮಾನ ತಜ್ಞರು ಊಹಿಸಿದಂತೆ ಈ ಜಾಗತಿಕ ತಾಪಮಾನ ವೈಪರೀತ್ಯ ಸಂಭವಿಸಿದರೆ, ಮಾರುಕಟ್ಟೆಯಲ್ಲಿ ಭೂತಾಯಿ ಮೀನಿನ ಲಭ್ಯತೆ ತೀವ್ರವಾಗಿ ಕುಸಿಯಲಿದ್ದು, ಅದರ ಬೆಲೆ ಸಾಮಾನ್ಯ ಜನರಿಗೆ ಸಿಗದಂತೆ ಗಗನಕ್ಕೇರಲಿದೆ.&lt;/p&gt;&lt;img&gt;&lt;p&gt;ಕಡಲಿನಲ್ಲಿ ಉಂಟಾಗುವ ಉಷ್ಣ ತರಂಗಗಳು ಮತ್ತು ಹಠಾತ್ ತಾಪಮಾನ ವೈಪರೀತ್ಯಗಳು ಸಮುದ್ರದ ಮೇಲ್ಮೈ ಭಾಗದಲ್ಲಿ ವಾಸಿಸುವ ಭೂತಾಯಿ ಸೇರಿದಂತೆ ಇತರ ಸಣ್ಣ ಪ್ರಭೇದದ ಮೀನುಗಳ ಪಾಲಿಗೆ ವಿಷಕಾರಿಯಾಗಿದೆ. ಇದರ ಜೊತೆಗೆ ನಿರಂತರವಾಗಿ ಸಮುದ್ರದ ನೀರು ಕಾಯುವುದರಿಂದ ಸಮುದ್ರದೊಳಗಿನ ಜೀವವೈವಿಧ್ಯದ ಆಧಾರವಾಗಿರುವ ಹವಳದ ದಿಬ್ಬಗಳು (Coral Reefs) ನಾಶವಾಗಲಿವೆ. ಇದು ಹವಳದ ದಿಬ್ಬಗಳನ್ನೇ ಆಶ್ರಯಿಸಿ ಬದುಕುವ 'ಶಂಕರ' (Red Snapper) ರೀತಿಯ ಮೌಲ್ಯಯುತ ಮೀನುಗಳ ನೈಸರ್ಗಿಕ ಸಂತಾನೋತ್ಪತ್ತಿ ಮತ್ತು ಲಭ್ಯತೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಸಿಎಂಎಫ್&zwnj;ಆರ್&zwnj;ಐ ಅಧ್ಯಯನ ವರದಿ ತಿಳಿಸಿದೆ.&lt;/p&gt;&lt;img&gt;&lt;p&gt;ಎಲ್ ನಿನೊ ಭೀತಿಯ ಹಿನ್ನೆಲೆಯಲ್ಲಿ ಮೀನುಗಾರರು ಹಾಗೂ ಕರಾವಳಿ ಭಾಗದ ಮತ್ಸ್ಯ ಕೃತಕ ಕೃಷಿಕರಿಗೆ (Fish Farmers) ಈ ವರ್ಷವೇ ಸಿಎಂಎಫ್&zwnj;ಆರ್&zwnj;ಐ ವಿಶೇಷ ಜಾಗೃತಿ ಮಾರ್ಗಸೂಚಿಯನ್ನು ಹೊರಡಿಸಲಿದೆ. ಹವಾಮಾನ ವೈಪರೀತ್ಯದ ಈ ಅವಧಿಯಲ್ಲಿ ಕಡಲು ಹಾಗೂ ಕರಾವಳಿ ಜಲಮೂಲಗಳ ರಕ್ಷಣೆ ಮತ್ತು ನಿರ್ವಹಣೆಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.&lt;/p&gt;&lt;img&gt;&lt;p&gt;ತೀವ್ರವಾದ ಬೇಸಿಗೆಯ ಬಿಸಿಲು ಹಾಗೂ ನೀರಿನಲ್ಲಿ ಲವಣಾಂಶ (Salinity) ಹೆಚ್ಚಾದ ಬೆನ್ನಲ್ಲೇ ಹಠಾತ್ ಮಳೆ ಸುರಿದರೆ ಕರಾವಳಿ ಮತ್ತು ಹಿನ್ನೀರು ಪ್ರದೇಶಗಳಲ್ಲಿನ ನೀರಿನ ಲವಣಾಂಶದ ಮಟ್ಟವು ದಿಢೀರನೆ ಏರುಪೇರಾಗುತ್ತದೆ. ಈ ರಾಸಾಯನಿಕ ಬದಲಾವಣೆಯು ಕೃತಕವಾಗಿ ಕೊಳಗಳಲ್ಲಿ ಅಥವಾ ಹಿನ್ನೀರಿನಲ್ಲಿ ಮಾಡುವ ಮತ್ಸ್ಯಕೃಷಿಯ (Aquaculture) ಮೇಲೆ ಭಾರಿ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮೀನುಗಳು ಸಾಯುವ ಸಾಧ್ಯತೆ ಇರುವುದರಿಂದ ಕರಾವಳಿ ಭಾಗದ ಮೀನು ಕೃಷಿಕರು ಮುಂಚಿತವಾಗಿಯೇ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸ್ಥೆ ಸೂಚಿಸಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ಜಾಗತಿಕ ತಾಪಮಾನ ಏರಿಕೆಯು ಕೇವಲ ಮೀನಿನ ಲಭ್ಯತೆಯನ್ನು ಕುಗ್ಗಿಸುವುದಲ್ಲದೆ, ಸಮುದ್ರದ ಸಂಪೂರ್ಣ ಜೈವಿಕ ಸರಪಳಿಯನ್ನೇ ಏರುಪೇರು ಮಾಡುತ್ತದೆ. ದೇಶದಾದ್ಯಂತ ಕಡಲ ಮೀನುಗಾರಿಕೆಯ ಒಟ್ಟು ಉತ್ಪಾದನೆಯಲ್ಲಿ ಇಳಿಕೆಯಾಗುವ ಮುನ್ಸೂಚನೆ ಇರುವುದರಿಂದ, ಮೀನುಗಾರಿಕೆಯನ್ನು ನಂಬಿ ಬದುಕುವ ಲಕ್ಷಾಂತರ ಕುಟುಂಬಗಳ ಆರ್ಥಿಕತೆಯ ಮೇಲೆ ಇದು ನೇರ ಹೊಡೆತ ನೀಡಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd"/>
        </item>
        <item>
            <title><![CDATA[ಇದು ರಾಜ್ಯದಲ್ಲೇ ಮೊದಲು! ಬಂಟ್ವಾಳದ ಈ ಶಾಲೇಲಿ ಮಕ್ಕಳ ಸುರಕ್ಷತೆಗೆ RFID ಟ್ಯಾಗ್‌! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?]]></title>
            <link>https://kannada.asianetnews.com/education/rfid-tag-for-the-safety-of-school-children-in-bantwala-dakshinakannada-rav/articleshow-fumyuzw</link>
            <guid isPermaLink="true">https://kannada.asianetnews.com/education/rfid-tag-for-the-safety-of-school-children-in-bantwala-dakshinakannada-rav/articleshow-fumyuzw</guid>
            <pubDate>Tue, 07 Jul 2026 10:17:03 +0530</pubDate>
            <description><![CDATA[&lt;p&gt;ಬಂಟ್ವಾಳದ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು ರಾಜ್ಯದಲ್ಲೇ ಮೊದಲ ಬಾರಿಗೆ ಆರ್&zwnj;ಎಫ್&zwnj;ಐಡಿ ಆಧಾರಿತ ಡಿಜಿಟಲ್ ವಿದ್ಯಾರ್ಥಿ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯಡಿ, ವಿದ್ಯಾರ್ಥಿಗಳು ಶಾಲೆಗೆ ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಪೋಷಕರಿಗೆ ಎಸ್&zwnj;ಎಂಎಸ್ ರವಾನೆಯಾಗುತ್ತೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxeb5p315mgxtpewtm58jh7,imgname-----------------------2026-07-07t101524.515-1783399552707.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೌನೇಶ್ ವಿಶ್ವಕರ್ಮ&lt;/strong&gt;&lt;/p&gt;&lt;p&gt;&lt;strong&gt;ಬಂಟ್ವಾಳ (ಜು.7): &lt;/strong&gt;ಬಂಟ್ವಾಳ ತಾಲೂಕು ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ರಾಜ್ಯದಲ್ಲೇ ಮೊದಲ ಬಾರಿಗೆ ಸಮಗ್ರ ಆರ್&zwnj;ಎಫ್&zwnj;ಐಡಿ (Radio Frequency Identification) ಆಧಾರಿತ ಡಿಜಿಟಲ್ ವಿದ್ಯಾರ್ಥಿ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸಿದೆ.&lt;/p&gt;&lt;p&gt;ಶಾಲೆಯ ಪ್ರತಿ ವಿದ್ಯಾರ್ಥಿಗೂ ಡಿಜಿಟಲ್ ಆರ್&zwnj;ಎಫ್ಐಡಿ ಗುರುತು ಚೀಟಿ ನೀಡಲಾಗಿದ್ದು, ವಿದ್ಯಾರ್ಥಿಗಳು ಶಾಲಾ ಪ್ರವೇಶದ್ವಾರದಲ್ಲಿರುವ ಆರ್&zwnj;ಎಫ್&zwnj;ಐಡಿ ಟರ್ನ್&zwnj;ಸ್ಟೈಲ್ ಗೇಟ್ ಮೂಲಕ ಒಳಪ್ರವೇಶಿಸುವಾಗ ಹಾಗೂ ಸಂಜೆ ಹೊರಬರುವಾಗ ತಮ್ಮ ಕಾರ್ಡ್ ಸ್ಕ್ಯಾನ್ ಮಾಡಬೇಕಾಗುತ್ತದೆ. ಸ್ಕ್ಯಾನ್ ಆದ ಕ್ಷಣದಲ್ಲೇ ಸಂಬಂಧಿಸಿದ ಪೋಷಕರ ಮೊಬೈಲ್&zwnj;ಗೆ ಎಸ್&zwnj;ಎಂಎಸ್ ಮತ್ತು ನೋಟಿಫಿಕೇಶನ್ ತಲುಪುತ್ತದೆ. ಇದರಿಂದ ತಮ್ಮ ಮಗು ಸುರಕ್ಷಿತವಾಗಿ ಶಾಲೆಗೆ ತಲುಪಿರುವುದು ಹಾಗೂ ನಿರ್ಗಮಿಸಿರುವುದು ಕ್ಷಣಾರ್ಧದಲ್ಲೇ ತಿಳಿಯುತ್ತದೆ.&lt;/p&gt;&lt;h2&gt;ಬಸ್ಸಿನಲ್ಲಿಯೂ ಡಿಜಿಟಲ್ ವ್ಯವಸ್ಥೆ:&amp;nbsp;&lt;/h2&gt;&lt;p&gt;ಶಾಲಾ ಸಾರಿಗೆ ವ್ಯವಸ್ಥೆಯನ್ನೂ ಸಂಪೂರ್ಣ ಡಿಜಿಟಲ್ ಮಾದರಿಗೆ ಪರಿವರ್ತಿಸಲಾಗಿದೆ. ವಿದ್ಯಾರ್ಥಿಗಳು ಶಾಲಾ ಬಸ್ ಏರುವಾಗ ಮತ್ತು ಇಳಿಯುವಾಗ ಬಸ್&zwnj;ನಲ್ಲಿರುವ ಆರ್&zwnj;ಎಫ್&zwnj;ಐಡಿ ರೀಡರ್&zwnj;ನಲ್ಲಿ ಕಾರ್ಡ್ ಸ್ಕ್ಯಾನ್ ಕಡ್ಡಾಯ. ಇದರಿಂದ ಯಾವ ವಿದ್ಯಾರ್ಥಿ ಯಾವ ಸಮಯದಲ್ಲಿ ಯಾವ ಬಸ್&zwnj;ನಲ್ಲಿ ಪ್ರಯಾಣಿಸಿದ್ದಾನೆ ಎಂಬ ಮಾಹಿತಿ ಸ್ವಯಂಚಾಲಿತವಾಗಿ ದಾಖಲಾಗುತ್ತದೆ.&lt;/p&gt;&lt;p&gt;ಶಾಲೆಯಲ್ಲಿ 11 ನಿಯಮಿತ ಬಸ್&zwnj;ಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಬಸ್&zwnj;ನಲ್ಲಿ ತಾಂತ್ರಿಕ ದೋಷ ಉಂಟಾದರೆ ಒಂದು ಹೆಚ್ಚುವರಿ (ಬ್ಯಾಕ್&zwnj;ಅಪ್) ಬಸ್ ಸದಾ ಸನ್ನದ್ಧವಾಗಿರಿಸಲಾಗಿದೆ. ಪ್ರತಿಯೊಂದು ಶಾಲಾ ಬಸ್&zwnj;ನಲ್ಲಿ ಸಿಸಿ ಕ್ಯಾಮೆರಾ, ಲೈವ್ ಜಿಪಿಎಸ್&zwnj; ಟ್ರ್ಯಾಕಿಂಗ್, ಸ್ಪೀಡ್ ಗವರ್ನರ್ ವ್ಯವಸ್ಥೆ ಕಡ್ಡಾಯ. ಪೋಷಕರು ವಿಶೇಷ ಮೊಬೈಲ್ ಆ್ಯಪ್ ಮೂಲಕ ಬಸ್&zwnj;ನ ನೈಜ ಸ್ಥಳ ವೀಕ್ಷಿಸಿ, ಬಸ್ ಯಾವ ಸ್ಥಳದಲ್ಲಿದೆ ಹಾಗೂ ಎಷ್ಟು ಹೊತ್ತಿಗೆ ತಲುಪಲಿದೆ ಎಂಬ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.&lt;/p&gt;&lt;p&gt;ಇಷ್ಟೆಲ್ಲ ವ್ಯವಸ್ಥೆಗಳನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಹ್ಲಾದ ಜೆ ಶೆಟ್ಟಿ ಮಾರ್ಗದರ್ಶನದಲ್ಲಿ, ಆಡಳಿತ ಮಂಡಳಿ ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ ಪರಿಕಲ್ಪನೆ ಮತ್ತು ಮುತುವರ್ಜಿಯಲ್ಲಿ ಜಾರಿಗೊಳಿಸಲಾಗಿದೆ.&lt;/p&gt;&lt;p&gt;ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ತಲುಪುವವರೆಗೂ ಅವರ ಸುರಕ್ಷತೆಯ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯ ಮೇಲಿದೆ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು ಈ ರೀತಿಯ ಸಮಗ್ರ ಡಿಜಿಟಲ್ ಸುರಕ್ಷತಾ ವ್ಯವಸ್ಥೆ ಮೊದಲೇ ಅಳವಡಿಸಿಕೊಂಡಿರುವುದು ಅದರ ದೂರದೃಷ್ಟಿಯ ಆಡಳಿತವನ್ನು ಪ್ರತಿಬಿಂಬಿಸುತ್ತದೆ.&lt;/p&gt;&lt;p&gt;ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆಡಳಿತ ಮಂಡಳಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ. ನಮ್ಮ ಈ ವ್ಯವಸ್ಥೆ ಬಗ್ಗೆ ಪೋಷಕರಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;-ಸುದೀಪ್ ಕುಮಾರ್ ಶೆಟ್ಟಿ, ಅಧ್ಯಕ್ಷರು ಶಾಲೆಯ ಶಿಕ್ಷಕ-ರಕ್ಷಕ ಸಂಘ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/rfid-tag-for-the-safety-of-school-children-in-bantwala-dakshinakannada-rav/articleshow-fumyuzw"/>
        </item>
        <item>
            <title><![CDATA[ಇವಿ ಸ್ಕೂಟರ್‌ನಲ್ಲಿ 12,111 ಕಿ.ಮೀ. ಕ್ರಮಿಸಿ ಡಬ್ಬಲ್‌ ದಾಖಲೆ ಬರೆದ ಕುಡ್ಲದ ಕುವರ!]]></title>
            <link>https://kannada.asianetnews.com/karnataka-districts/mangaluru-youth-girish-shet-sets-double-record-by-covering-12111-km-on-ev-scooter-mrq/articleshow-g6465w8</link>
            <guid isPermaLink="true">https://kannada.asianetnews.com/karnataka-districts/mangaluru-youth-girish-shet-sets-double-record-by-covering-12111-km-on-ev-scooter-mrq/articleshow-g6465w8</guid>
            <pubDate>Sat, 11 Jul 2026 08:45:33 +0530</pubDate>
            <description><![CDATA[ಮಂಗಳೂರಿನ ಆಟೋಮೊಬೈಲ್ ಪತ್ರಕರ್ತ ಗಿರೀಶ್ ಶೇಟ್, ಇವಿ ಸ್ಕೂಟರ್&zwnj;ನಲ್ಲಿ 12,111 ಕಿ.ಮೀ. ಕ್ರಮಿಸಿ ಎರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. 16 ರಾಜ್ಯಗಳಾದ್ಯಂತ 53 ದಿನಗಳ ಕಾಲ ಸಾಗಿದ ಈ ಪ್ರಯಾಣವು ಇವಿ ವಾಹನಗಳ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡಿದ್ದು, ಅವರಿಗೆ 'ಇಂಡಿಯಾ' ಮತ್ತು 'ಏಷ್ಯಾ' ಬುಕ್ ಆಫ್ ರೆಕಾರ್ಡ್ಸ್&zwnj;ನಲ್ಲಿ ಸ್ಥಾನ ತಂದುಕೊಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx7jqweb2966fhpz07xm2mxz,imgname-electric-scooter-1783739707851.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಇವಿ(ಎಲೆಕ್ಟ್ರಿಕ್&zwnj; ವೆಹಿಕಲ್) ಸ್ಕೂಟರ್ ಕೇವಲ ನಗರ ಸಂಚಾರಕ್ಕೆ ಮಾತ್ರ, ಬ್ಯಾಟರಿ ಸಮಸ್ಯೆ ತಪ್ಪುವುದಿಲ್ಲ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಆದರೆ ಈ ಎಲ್ಲ ತಪ್ಪು ಕಲ್ಪನೆಯನ್ನು ಕುಡ್ಲದ ಈ ಕುವರ ಮುರಿದಿದ್ದಾರೆ&zwnj;. &lsquo;ಇಂಡಿಯಾ ಬುಕ್ ಆಫ್ ರೆಕಾರ್ಡ್&rsquo; ಮಾತ್ರವಲ್ಲ &lsquo;ಏಷ್ಯಾ ಬುಕ್&zwnj; ಆಫ್&zwnj; ರೆಕಾರ್ಡ್&zwnj;ನಲ್ಲಿ ದಾಖಲೆ ಬರೆದಿದ್ದಾರೆ.&lt;/p&gt;&lt;p&gt;ಮಂಗಳೂರಿನ ಬಿಜೈ ನಿವಾಸಿ, ಆಟೋಮೊಬೈಲ್ ಜರ್ನಲಿಸ್ಟ್ ಗಿರೀಶ್ ಶೇಟ್ ಈ ಅಪರೂಪದ ದಾಖಲೆ ಮಾಡಿದವರು.&lt;/p&gt;&lt;h2&gt;&lt;strong&gt;53 ದಿನಗಳ ಇವಿ ಸ್ಕೂಟರ್ ರೈಡ್&lt;/strong&gt;&lt;/h2&gt;&lt;p&gt;ಭಾರತದ 16 ರಾಜ್ಯಗಳನ್ನು ಇವಿ ಸ್ಕೂಟರ್&zwnj;ನಲ್ಲೇ ಇವರು ಕ್ರಮಿಸಿದ್ದಾರೆ. ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ ಇವರು ಚೆನ್ನೈಗೆ ಹೋಗಿದ್ದಾರೆ. ಅಲ್ಲಿಂದ ಕೋಲ್ಕತ್ತಾ, ಕೋಲ್ಕತ್ತಾ ಟು ಲಕ್ನೋ, ಲಕ್ನೋ ಟು ಹೈದರಾಬಾದ್, ಹೈದರಾಬಾದ್&zwnj;ನಿಂದ ದೆಹಲಿ. ಅಲ್ಲಿಂದ ಮತ್ತೆ ಕೋಲ್ಕತ್ತಾ, ಕೋಲ್ಕತ್ತಾದಿಂದ ಅಹಮದಾಬಾದ್, ಅಲ್ಲಿಂದ ಮತ್ತೆ ದೆಹಲಿಗೆ ಹೋಗಿ ತಮ್ಮ 53 ದಿನಗಳ ಇವಿ ಸ್ಕೂಟರ್ ರೈಡ್ ಅನ್ನು ಪೂರೈಸಿದ್ದಾರೆ.&lt;/p&gt;&lt;p&gt;ಏ.12 ರಂದು ಸುಡು ಬೇಸಿಗೆಯಲ್ಲಿ ಪ್ರಯಾಣ ಆರಂಭಿಸಿದ ಅವರು ಜೂ.15 ರಂದು ಸಾಧನೆ ಪೂರೈಸಿದ್ದಾರೆ.&lt;/p&gt;&lt;p&gt;ಏಪ್ರಿಲ್&zwnj;ನ ಬಿರುಬಿಸಿಲ 45 ಡಿ.ಸೆ. ಸೆಕೆಯ ಧಗೆಯನ್ನು ತಡೆದುಕೊಳ್ಳಬೇಕಾಯಿತು ಬಿಟ್ಟರೆ, ನನಗೆ ಇವಿ ಸ್ಕೂಟರ್ ಬ್ಯಾಟರಿ ಎಲ್ಲೂ ಕೈಕೊಡಲಿಲ್ಲ. ಒಂದು ಕಡೆ ನಡೆದ ಆ್ಯಕ್ಸಿಡೆಂಟ್ ಸ್ವಲ್ಪ ಹೊತ್ತು ಆಸ್ಪತ್ರೆಗೆ ದಾಖಲಾಗಿದ್ದು ಬಿಟ್ಟರೆ ಇವಿ ಸ್ಕೂಟರ್ ಪ್ರಯಾಣ ತನಗೆ ತ್ರಾಸ ಎನಿಸಲೇ ಇಲ್ಲ ಎಂಬುದು ಗಿರೀಶ್ ಶೇಟ್ ಅನುಭವ.&lt;/p&gt;&lt;h3&gt;&lt;strong&gt;ಒಂದು ಚಾರ್ಜ್&zwnj;ನಲ್ಲಿ 100 ಕಿ.ಮೀ. ಪ್ರಯಾಣ&lt;/strong&gt;&lt;/h3&gt;&lt;p&gt;ಹೀರೋ ವೀಡಾ ವಿಎಕ್ಸ್ 2 ಇವಿ ಸ್ಕೂಟರ್ ಅನ್ನು ಈ ಜರ್ನಿಗೆ ಅವರು ಬಳಸಿಕೊಂಡಿದ್ದಾರೆ. ಇದು ಒಂದು ಚಾರ್ಜ್&zwnj;ನಲ್ಲಿ 100 ಕಿ.ಮೀ.ಗೂ ಅಧಿಕ ಓಡುತ್ತಿತ್ತು. ಹಾಗಾಗಿ ಎಲ್ಲಾದರೂ ಚಾರ್ಜಿಂಗ್ ಸೌಲಭ್ಯ ಇರುವಲ್ಲಿ ನಿಲ್ಲಿಸುತ್ತಿದ್ದೆ. ಮೊದಲೇ ಪ್ಲಾನಿಂಗ್ ಮಾಡಿಕೊಂಡು ಫಾಸ್ಟ್&zwnj;ಚಾರ್ಜ್ ಇರುವಲ್ಲಿ ಒಂದೂವರೆ ಗಂಟೆಯಲ್ಲಿ ಚಾರ್ಜ್ ಆಗುತ್ತಿತ್ತು, ಇಲ್ಲದ ಕಡೆ ಚಾರ್ಜಿಂಗ್ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ ಎನ್ನುತ್ತಾರೆ ಗಿರೀಶ್ ಶೇಟ್.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪೆಟ್ರೋಲ್&zwnj;ನಲ್ಲಿ ಎಥೆನಾಲ್&zwnj; ಮಿಶ್ರಣ ಏಕೆ ಅಗತ್ಯ? ಕೇಂದ್ರದಿಂದ 6 ಅಂಶಗಳ ಸ್ಪಷ್ಟನೆ&lt;/strong&gt;&lt;/p&gt;&lt;p&gt;ಕ್ರಿಕೆಟ್ ಪ್ರೇಮಿ ಗಿರೀಶ್ ಶೇಟ್, ಐಪಿಎಲ್&zwnj;ನ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್&zwnj;) ತಂಡದ ಅಧಿಕೃತ ಸ್ಪಾನ್ಸರ್ ಹೀರೋ ವೀಡಾ ಸಂಸ್ಥೆಯ ಬೆಂಬಲದಿಂದ ಈ ರೈಡ್ ನಡೆಸಿದ್ದರು. ಇವರ ಸಾಧನೆಯನ್ನು ಗೌರವಿಸಿ ಕೆಕೆಆರ್&zwnj; ತಂಡ ಭಾರತಾದ್ಯಂತ ಮ್ಯಾಚ್ ವೀಕ್ಷಿಸಲು ಇವರಿಗೆ &lsquo;ಗೋಲ್ಡನ್ ಟಿಕೆಟ್&rsquo; ನೀಡಿತ್ತು. ಆದ್ದರಿಂದ ಇಡೀ ಪ್ರಯಾಣದಲ್ಲಿ ಒಟ್ಟು 10 ಕೆಕೆಆರ್ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದರು. ಜೊತೆಗೆ ಈ ವಿಶಿಷ್ಟ ಸಾಧನೆಯಿಂದ &lsquo;ಇಂಡಿಯಾ&rsquo; ಹಾಗೂ &lsquo;ಏಷ್ಯಾ&rsquo; ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇ20 ಪೆಟ್ರೋಲಿಂದ ಮೈಲೇಜ್&zwnj; ಕುಸಿತ ನಿಜ, ಆದ್ರೆ ಎಥನಾಲ್&zwnj; ರಹಿತ ಪೆಟ್ರೋಲ್&zwnj; ಕೊಡಲ್ಲ: ಕೇಂದ್ರ ಸರ್ಕಾರ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mangaluru-youth-girish-shet-sets-double-record-by-covering-12111-km-on-ev-scooter-mrq/articleshow-g6465w8"/>
        </item>
        <item>
            <title><![CDATA[ಕರಾವಳಿಯ ಕಂಬಳಕ್ಕೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ: 23 ಕೂಟಗಳಿಗೆ ಬಂಪರ್‌ ಅನುದಾನ ಘೋಷಣೆ]]></title>
            <link>https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a</link>
            <guid isPermaLink="true">https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a</guid>
            <pubDate>Thu, 16 Jul 2026 16:32:15 +0530</pubDate>
            <description><![CDATA[ರಾಜ್ಯ ಸರ್ಕಾರವು ಕರಾವಳಿಯ 23 ಕಂಬಳ ಕೂಟಗಳಿಗೆ ತಲಾ 5 ಲಕ್ಷದಂತೆ ಒಟ್ಟು 1.15 ಕೋಟಿ ರೂಪಾಯಿ ಅನುದಾನ ಘೋಷಿಸಿದೆ. ಈ ನಿರ್ಧಾರವನ್ನು ಕಂಬಳ ಸಮಿತಿ ಸ್ವಾಗತಿಸಿದ್ದು, ಇದೇ ವೇಳೆ ಮೈಸೂರು ಕಂಬಳ ಆಯೋಜನೆಗೆ ಸಂಬಂಧಿಸಿದ ವಿವಾದದ ಬಗ್ಗೆ ಸಮಿತಿ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxn9by9k33bg6yjwx6kxp0pr,imgname-kambala-grant-1784199641395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಜು.16):&lt;/strong&gt; ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆಯೋಜಕರಿಗೆ ಬಿಗ್ ಸಿಹಿ ಸುದ್ದಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಕಂಬಳದ ಸುತ್ತ ಹಲವು ವಿವಾದಗಳು ಸೃಷ್ಟಿಯಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಕಂಬಳ ಕೂಟಗಳ ಸುಗಮ ಆಯೋಜನೆಗಾಗಿ ಭಾರಿ ಮೊತ್ತದ ಅನುದಾನವನ್ನು ಪ್ರಕಟಿಸಿದೆ. 2025-26ನೇ ಸಾಲಿನ ಕಂಬಳ ಋತುವಿಗಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಒಟ್ಟು 1 ಕೋಟಿ 15 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ಕಂಬಳ ಆಯೋಜಕರು ಹಾಗೂ ಅಭಿಮಾನಿಗಳು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿ ಕಂಬಳಕ್ಕೂ 5 ಲಕ್ಷ ರೂಪಾಯಿ ನೆರವು&lt;/strong&gt;&lt;/h2&gt;&lt;p&gt;ಈ ಬಾರಿ ಕರಾವಳಿ ಅವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಧಿಕೃತವಾಗಿ ನಡೆಯುವ ಒಟ್ಟು 23 ಕಂಬಳ ಕೂಟಗಳನ್ನು ಈ ಯೋಜನೆಯಡಿ ಗುರುತಿಸಲಾಗಿದೆ. ಸರ್ಕಾರದ ಆದೇಶದನ್ವಯ, ಆಯ್ಕೆಯಾಗಿರುವ ಪ್ರತಿಯೊಂದು ಕಂಬಳ ಕೂಟದ ಆಯೋಜನೆಗೂ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಹರಿದುಬರಲಿದೆ. ಪ್ರಸ್ತುತ ದಿನಗಳಲ್ಲಿ ಕಂಬಳ ಆಯೋಜನೆ ಮಾಡುವುದು ಆಯೋಜಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ಸರ್ಕಾರದ ಈ ಸಕಾಲಿಕ ನೆರವು ತುಳುನಾಡಿನ ಕೀರ್ತಿ ಹಾಗೂ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯಲು ದೊಡ್ಡ ಬಲ ನೀಡಿದಂತಾಗಿದೆ.&lt;/p&gt;&lt;h2&gt;&lt;strong&gt;'ಸರ್ಕಾರ ನುಡಿದಂತೆ ನಡೆದಿದೆ' - ಡಾ. ದೇವಿಪ್ರಸಾದ್ ಶೆಟ್ಟಿ ಹರ್ಷ&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಂಬಳ ಆಯೋಜಕರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡು ಸಿಹಿ ಸುದ್ದಿ ನೀಡಿದ್ದಾರೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಪ್ರವಾಸೋದ್ಯಮ ಹಾಗೂ ಕ್ರೀಡಾ ಇಲಾಖೆಯಿಂದ ಕಂಬಳಕ್ಕೆ ಅನುದಾನ ಸಿಕ್ಕಿತ್ತು. ಅದಕ್ಕೂ ಮುನ್ನ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಂಬಳಕ್ಕೆ 1 ಕೋಟಿ ರೂಪಾಯಿ ನೀಡಿದ್ದರು. ರಾಜಕೀಯ ಭೇದಭಾವವಿಲ್ಲದೆ ಎಲ್ಲಾ ಸರ್ಕಾರಗಳು ಕಂಬಳವನ್ನು ಪೋಷಿಸಿಕೊಂಡು ಬಂದಿವೆ. ಇದು ಕ್ರೀಡೆಗೆ ಸಿಕ್ಕ ಗೌರವ ಎಂದು ಮೆಚ್ಚಿಕೊಂಡಿದ್ದಾರೆ. ಇದೇ ವೇಳೆ, ಮುಂದಿನ ರಾಜ್ಯ ಬಜೆಟ್&zwnj;ನಲ್ಲಿ ಕಂಬಳ ಕ್ರೀಡೆಗಾಗಿಯೇ ಪ್ರತ್ಯೇಕವಾಗಿ 5 ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಸಾಂಪ್ರದಾಯಿಕ ಹಾಗೂ ಒಂಟಿ ಕರೆ ಕಂಬಳಗಳಿಗೂ ಮಾನ್ಯತೆ&lt;/strong&gt;&lt;/h2&gt;&lt;p&gt;ಸಾಂಪ್ರದಾಯಿಕ ಕಂಬಳಗಳ ಕುರಿತು ಮಾತನಾಡಿದ ಸಮಿತಿ ಅಧ್ಯಕ್ಷರು, ಜೋಡುಕರೆಯಲ್ಲಿ ಸದ್ಯ ಎಂಟು ಸಾಂಪ್ರದಾಯಿಕ ಕಂಬಳಗಳಿದ್ದು, ಅವುಗಳಿಗೂ ಈ ಅನುದಾನ ಲಭ್ಯವಾಗಲಿದೆ. ಇದರೊಂದಿಗೆ ಬೈಂದೂರು ಹಾಗೂ ಕುಂದಾಪುರ ಭಾಗಗಳಲ್ಲಿ ಸುದೀರ್ಘ ಕಾಲದಿಂದ ನಡೆಸಿಕೊಂಡು ಬರುತ್ತಿರುವ 'ಒಂಟಿ ಕರೆ' ಕಂಬಳಗಳ ಆಯೋಜಕರನ್ನೂ ಸಹ ರಾಜ್ಯ ಕಂಬಳ ಅಸೋಸಿಯೇಷನ್&zwnj;ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ಸಾಂಪ್ರದಾಯಿಕ ಒಂಟಿ ಕರೆ ಕಂಬಳಗಳಿಗೂ ಸರ್ಕಾರದಿಂದ ಆರ್ಥಿಕ ಅನುದಾನ ದೊರಕಿಸಿಕೊಡುವಂತೆ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದರು.&lt;/p&gt;&lt;h2&gt;&lt;strong&gt;ಮೈಸೂರು ಕಂಬಳ ವಿವಾದ: ಕರಾವಳಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ!&lt;/strong&gt;&lt;/h2&gt;&lt;p&gt;ಇದೇ ಸಂದರ್ಭದಲ್ಲಿ ಮೈಸೂರು ಕಂಬಳ ಆಯೋಜನೆಗೆ ವ್ಯಕ್ತವಾಗುತ್ತಿರುವ ವಿರೋಧದ ಕುರಿತು ಡಾ. ದೇವಿಪ್ರಸಾದ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಂಬಳ ಎಂಬುದು ರಾಜಕೀಯ ಮತ್ತು ಧರ್ಮವನ್ನು ಮೀರಿದ ಒಂದು ಸಾಂಸ್ಕೃತಿಕ ಕ್ರೀಡೆ. ಇಲ್ಲಿ ಎಲ್ಲಾ ಪಕ್ಷದವರೂ ಒಟ್ಟಾಗಿ ಕಂಬಳ ನಡೆಸುತ್ತಾರೆ. ಮೈಸೂರು ಸಂಸದರು ಇದನ್ನು ವಿರೋಧಿಸುತ್ತಾರೆ ಎಂಬ ಒಂದೇ ಕಾರಣಕ್ಕೆ, ಅವರದ್ದೇ ಪಕ್ಷದ (ಬಿಜೆಪಿ) ಕರಾವಳಿಯ ಶಾಸಕರು ಮತ್ತು ಜನಪ್ರತಿನಿಧಿಗಳು ಮೈಸೂರು ಕಂಬಳವನ್ನು ವಿರೋಧಿಸುತ್ತಿರುವುದು ಸರಿಯಲ್ಲ. ನೀವು ಕಂಬಳಕ್ಕೆ ಗೌರವ ತಂದಿಲ್ಲ, ಬದಲಿಗೆ ಕಂಬಳವೇ ನಿಮಗೆ ಸಮಾಜದಲ್ಲಿ ಗೌರವ ಕೊಟ್ಟಿದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;&quot;ಕಂಬಳ ಕೇವಲ ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವೇ? ಮೈಸೂರಿನಲ್ಲಿ ಕಂಬಳ ಯಾಕೆ ನಡೆಯಬಾರದು? ಅಲ್ಲಿ ಕಂಬಳದ ಬಗ್ಗೆ ಅನಗತ್ಯ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಕೆಳವರ್ಗದವರ ಮೇಲಿನ ದಬ್ಬಾಳಿಕೆ ಎಂಬಂತೆ ಬಿಂಬಿಸಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ ನಾವು ಹಿಂದುಳಿದ ವರ್ಗದ ಆರಾಧ್ಯ ದೈವಗಳಾದ ಕೋಟಿ-ಚೆನ್ನಯ್ಯ, ಕಾಂತಬಾರೆ-ಬೂದಬಾರೆ ಹಾಗೂ ಸೂರ್ಯ-ಚಂದ್ರರ ಹೆಸರಿನಲ್ಲಿ ಕಂಬಳ ಮಾಡುತ್ತೇವೆ. ಇದು ಇಡೀ ದೇಶಕ್ಕೇ ಮಾದರಿಯಾದ ವ್ಯವಸ್ಥೆ. ಕರಾವಳಿಯ ಜನಪ್ರತಿನಿಧಿಗಳು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಗಳಂತೆ ವರ್ತಿಸದೆ, ಕಂಬಳದ ವೈಭವವನ್ನು ರಾಜ್ಯಾದ್ಯಂತ ಪಸರಿಸಲು ಧೈರ್ಯದಿಂದ ಕೆಲಸ ಮಾಡಬೇಕು ಎಂದು ಕರಾವಳಿಯ ಬಿಜೆಪಿ ಜನಪ್ರತಿನಿಧಿಗಳಿಗೆ ದೇವಿಪ್ರಸಾದ್ ಶೆಟ್ಟಿ ನೇರ ಮನವಿ ಹಾಗೂ ಒತ್ತಾಯ ಮಾಡಿದರು.&lt;/p&gt;&lt;p&gt;&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a"/>
        </item>
        <item>
            <title><![CDATA[ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ: ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ, 'ಆರೆಂಜ್ ಅಲರ್ಟ್' ಜಾರಿ!]]></title>
            <link>https://kannada.asianetnews.com/karnataka-districts/dakshina-kannada-district-rain-holiday-schools-colleges-closed-tomorrow-july-18-due-to-orange-alert/articleshow-hxc2zvb</link>
            <guid isPermaLink="true">https://kannada.asianetnews.com/karnataka-districts/dakshina-kannada-district-rain-holiday-schools-colleges-closed-tomorrow-july-18-due-to-orange-alert/articleshow-hxc2zvb</guid>
            <pubDate>Fri, 17 Jul 2026 21:58:42 +0530</pubDate>
            <description><![CDATA[ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ಆರೆಂಜ್ ಅಲರ್ಟ್' ಘೋಷಿಸಿದೆ. ಈ ಕಾರಣದಿಂದ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಜಿಲ್ಲಾಧಿಕಾರಿಗಳು ಜುಲೈ 18 ರಂದು ಅಂಗನವಾಡಿಯಿಂದ ಪಿಯುಸಿವರೆಗಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwyksvc1vzsqmdx8s8d0hke6,imgname-karnataka-rain-school-holiday--1--1783438830977.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ (ಜು.17): ಕ&lt;/strong&gt;ರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ (ಜುಲೈ 18, 2026) ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ 'ಆರೆಂಜ್ ಅಲರ್ಟ್' ಘೋಷಿಸಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಈ ಆದೇಶ ಹೊರಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಅಂಗನವಾಡಿಯಿಂದ ಪಿಯುಸಿವರೆಗೆ ರಜೆ:&lt;/strong&gt;&lt;/h2&gt;&lt;p&gt;ಜಿಲ್ಲಾಧಿಕಾರಿಗಳ ಆದೇಶದನ್ವಯ, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮತ್ತು ಪದವಿಪೂರ್ವ (ಪಿಯುಸಿ) ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜುಲೈ 17 ಮತ್ತು 18ರಂದು ಕರಾವಳಿಯಾದ್ಯಂತ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಹವಾಮಾನ ಇಲಾಖೆಯ ವರದಿ ಏನು ಹೇಳುತ್ತದೆ?&lt;/strong&gt;&lt;/h2&gt;&lt;p&gt;ಬೆಂಗಳೂರಿನ ಹವಾಮಾನ ಕೇಂದ್ರದ ವರದಿಯ ಪ್ರಕಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದ ಕರಾವಳಿ ಮತ್ತು ಒಳನಾಡಿನಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಜುಲೈ 17ರಂದು ಕರಾವಳಿ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಭಾರಿ ಮಳೆಯಾಗಲಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 30 ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಭೂಕುಸಿತದ ಎಚ್ಚರಿಕೆ (Landslide Warning):&lt;/strong&gt;&lt;/h2&gt;&lt;p&gt;ಮಳೆಯ ಜೊತೆಗೆ ಕರಾವಳಿ ಮತ್ತು ಘಟ್ಟ ಪ್ರದೇಶದ ಜಿಲ್ಲೆಗಳಲ್ಲಿ ಜುಲೈ 17 ಮತ್ತು 18ರಂದು ಭೂಕುಸಿತ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಆದ್ದರಿಂದ ಘಟ್ಟ ಪ್ರದೇಶದ ರಸ್ತೆಗಳಲ್ಲಿ ಸಂಚರಿಸುವಾಗ ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕೆಂದು ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;ರಾಜ್ಯದ ಇತರ ಜಿಲ್ಲೆಗಳ ಸ್ಥಿತಿ:&lt;/strong&gt;&lt;/h2&gt;&lt;p&gt;ಕರಾವಳಿ ಮಾತ್ರವಲ್ಲದೆ, ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಜುಲೈ 17ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹಾಸನ ಮತ್ತು ಕೊಡಗು ಜಿಲ್ಲೆಗಳಿಗೂ ಮಳೆಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ 40 ರಿಂದ 50 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;p&gt;ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ.&lt;/p&gt;&lt;p&gt;ಸಾರ್ವಜನಿಕರಿಗೆ ಜಿಲ್ಲಾಡಳಿತದ ಸೂಚನೆಗಳು:&lt;/p&gt;&lt;p&gt;ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.&lt;/p&gt;&lt;p&gt;ನದಿ ತೀರ, ಸಮುದ್ರ ತೀರ ಹಾಗೂ ಹಳ್ಳಕೊಳ್ಳಗಳ ಹತ್ತಿರ ಸಾರ್ವಜನಿಕರು ಮತ್ತು ಪ್ರವಾಸಿಗರು ತೆರಳದಂತೆ ನಿರ್ಬಂಧ ವಿಧಿಸಲಾಗಿದೆ.&lt;/p&gt;&lt;p&gt;ಗಾಳಿಯ ವೇಗ ಹೆಚ್ಚಿರುವುದರಿಂದ ದುರ್ಬಲ ಕಟ್ಟಡಗಳು ಅಥವಾ ಹಳೆಯ ಮರಗಳ ಕೆಳಗೆ ನಿಲ್ಲದಂತೆ ಎಚ್ಚರಿಕೆ ನೀಡಲಾಗಿದೆ.&lt;/p&gt;&lt;p&gt;ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.&lt;/p&gt;&lt;p&gt;ಯಾವುದೇ ತುರ್ತು ಪರಿಸ್ಥಿತಿ ಎದುರಾದಲ್ಲಿ ಸಾರ್ವಜನಿಕರು ಕೂಡಲೇ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಸಹಾಯವಾಣಿಯನ್ನು ಸಂಪರ್ಕಿಸಲು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/dakshina-kannada-district-rain-holiday-schools-colleges-closed-tomorrow-july-18-due-to-orange-alert/articleshow-hxc2zvb"/>
        </item>
        <item>
            <title><![CDATA[ರಾ.ಹೆ. 275ರ ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ 49.22 ಕೋಟಿ ರು. ಕೇಂದ್ರ ವಿಶೇಷ ಅನುದಾನ]]></title>
            <link>https://kannada.asianetnews.com/karnataka-districts/rs-49-crore-central-special-grant-for-repair-of-mani-sampaje-road-on-national-highway-275-mrq/articleshow-k9w238v</link>
            <guid isPermaLink="true">https://kannada.asianetnews.com/karnataka-districts/rs-49-crore-central-special-grant-for-repair-of-mani-sampaje-road-on-national-highway-275-mrq/articleshow-k9w238v</guid>
            <pubDate>Wed, 08 Jul 2026 07:42:23 +0530</pubDate>
            <description><![CDATA[ರಾ.ಹೆ. 275ರ ಮಾಣಿ-ಸಂಪಾಜೆ ಹೆದ್ದಾರಿಯ ದುರಸ್ತಿ ಕಾಮಗಾರಿಗೆ ಕೇಂದ್ರ ಸರ್ಕಾರವು 49.22 ಕೋಟಿ ರು.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿದೆ. ಇದರೊಂದಿಗೆ, ಈ ಹೆದ್ದಾರಿಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸಂಸದ ಬ್ರಿಜೇಶ್ ಚೌಟ ಅವರು ಹೆದ್ದಾರಿ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwzqstcxxjjh9w1k1bqg75w7,imgname-mani-sampaje-road-1783476578717.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ದಕ್ಷಿಣ ಕನ್ನಡ ಹಾಗೂ ಒಳನಾಡು ಪ್ರದೇಶಗಳ ಸಂಪರ್ಕ ಕೊಂಡಿಯಾಗಿರುವ ರಾ.ಹೆ. 275ರ ಮಾಣಿ-ಸಂಪಾಜೆ ಹೆದ್ದಾರಿಯ ದುರಸ್ತಿ ಕಾಮಗಾರಿಗೆ ಕೇಂದ್ರ ಸರ್ಕಾರ 49.22 ಕೋಟಿ ರು.ಗಳ ವಿಶೇಷ ಅನುದಾನ ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಈ ಹೆದ್ದಾರಿಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ತ್ವರಿತಗೊಳಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್&zwnj; ಚೌಟ ಅವರು ಮಂಗಳವಾರ ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬಿ. ಉಮಾಶಂಕರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.&lt;/p&gt;&lt;p&gt;ದೆಹಲಿಯಲ್ಲಿ ಸಚಿವಾಲಯದ ಕಾರ್ಯದರ್ಶಿಯವನ್ನು ಖುದ್ದು ಭೇಟಿ ಮಾಡಿರುವ ಸಂಸದರು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ನಿಟ್ಟಿನಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಕರಾವಳಿ ಮತ್ತು ಒಳನಾಡು ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸಿ ವಾಹನ ಸಂಚಾರ ಸುಗಮಗೊಳಿಸುವ ಅತ್ಯಂತ ನಿರ್ಣಾಯಕ ಹಾಗೂ ದೀರ್ಘಕಾಲದಿಂದ ಬಾಕಿ ಉಳಿದಿರುವ ರಾ.ಹೆ.-275ರ ಮಾಣಿ-ಸಂಪಾಜೆ ರಸ್ತೆಯ ಮೇಲ್ದರ್ಜೀಕರಣ ಯೋಜನೆಗೆ ಶೀಘ್ರದಲ್ಲೇ ಅಲೈನ್&zwnj;ಮೆಂಟ್ ಅನುಮೋದನೆ ಮತ್ತು ಹಾಗೂ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕಾರ್ಯದರ್ಶಿ ಉಮಾಶಂಕರ್&zwnj; ಅವರನ್ನು ಒತ್ತಾಯಿಸಿದ್ದಾರೆ. ಈ ಮಾರ್ಗದಲ್ಲಿ ಸಂಚಾರ ಸುರಕ್ಷತೆ ಹೆಚ್ಚಿಸಲು ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಮೂಲಕ ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಈ ಯೋಜನೆ ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕಾದ ಅತ್ಯಗತ್ಯತೆಯಿದೆ ಎಂದು ಕ್ಯಾ. ಚೌಟ ಅವರು ಇದೇ ಸಂದರ್ಭದಲ್ಲಿ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಅಲೈನ್&zwnj;ಮೆಂಟ್ ಅಪ್ರೂವಲ್ ಕಮಿಟಿ&lt;/strong&gt;&lt;/h2&gt;&lt;p&gt;ಇದೇ ವೇಳೆ ಮಂಗಳೂರು -ಬೆಂಗಳೂರು ಎಕ್ಸ್&zwnj;ಪ್ರೆಸ್&zwnj; ವೇಗೆ ಸಂಬಂಧಿಸಿದಂತೆಯೂ ಚರ್ಚಿಸಿದ್ದು, ಈ ಯೋಜನೆಯ ಮಹತ್ವದ ಭಾಗವಾಗಿರುವ ಶಿರಾಡಿ ಘಾಟ್ ವಿಭಾಗದ ನೂತನ ರಸ್ತೆ ವಿನ್ಯಾಸಕ್ಕೆ &lsquo;ಅಲೈನ್&zwnj;ಮೆಂಟ್ ಅಪ್ರೂವಲ್ ಕಮಿಟಿ&rsquo; ಅನುಮೋದನೆಯನ್ನು ಕ್ಯಾ. ಚೌಟ ಶ್ಲಾಘಿಸಿದ್ದಾರೆ. ಪ್ರಸ್ತುತ ಈ ಯೋಜನೆಯು ಡಿಪಿಆರ್&zwnj; ತಯಾರಿ ಹಂತದಲ್ಲಿದ್ದು,&lt;/p&gt;&lt;p&gt;ಮಾಣಿ-ಸಂಪಾಜೆ ಹೆದ್ದಾರಿ ದುರಸ್ತಿಗೆ 49.22 ಕೋಟಿ ರು. ವಿಶೇಷ ನೆರವು: ದ.ಕ. ಸಂಸದರ ನಿರಂತರ ಪ್ರಯತ್ನದ ಫಲವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಣಿ-ಸಂಪಾಜೆ ವಿಭಾಗದ ಒಟ್ಟು 71.60 ಕಿ.ಮೀ. ರಸ್ತೆಯ ವಿಶೇಷ ತುರ್ತು ದುರಸ್ತಿ ಕಾಮಗಾರಿಗೆ ಇಪಿಸಿ ಮಾದರಿಯಲ್ಲಿ ಒಟ್ಟು 49.22 ಕೋಟಿ ರು. ಗಳ ವಿಶೇಷ ಅನುದಾನ ಮಂಜೂರು ಮಾಡಿದೆ.&lt;/p&gt;&lt;p&gt;ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಇಡೀ ರಸ್ತೆಗೆ 40 ಮಿ.ಮೀ ದಪ್ಪದ ಬಿಟುಮಿನಸ್, ರಸ್ತೆ ಇಕ್ಕೆಲಗಳ ನಿರ್ವಹಣೆ, ಸಂಚಾರ ಸೂಚಕ ಫಲಕಗಳು ಮತ್ತು ರೋಡ್ ಮಾರ್ಕಿಂಗ್&zwnj; ಸೇರಿದಂತೆ ಅಗತ್ಯ ಅಭಿವೃದ್ದಿ ಕಾಮಗಾರಿಗಳು ನಡೆಯುವ ಸಾಧ್ಯತೆ ಇದೆ. ಸಚಿವಾಲಯದಿಂದ ಆರ್ಥಿಕ ಮಂಜೂರಾತಿ ಮತ್ತು ಟೆಂಡರ್ ದಾಖಲೆಗಳ ಅನುಮೋದನೆ ಸಿಕ್ಕ ತಕ್ಷಣವೇ ಅತ್ಯಂತ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು.&lt;/p&gt;&lt;h3&gt;&lt;strong&gt;ಪೇವ್ಡ್ ಶೋಲ್ಡರ್ ಒಳಗೊಂಡ ಚತುಷ್ಪಥ&lt;/strong&gt;&lt;/h3&gt;&lt;p&gt;&amp;nbsp;ಇದರ ಜೊತೆಯಲ್ಲೇ, ಈ ಹೆದ್ದಾರಿಯನ್ನು ಪೇವ್ಡ್ ಶೋಲ್ಡರ್ ಒಳಗೊಂಡ ಚತುಷ್ಪಥ (4-ಲೇನ್) ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಮಹತ್ವದ ಯೋಜನೆಯನ್ನು ಈಗಾಗಲೇ 2026-27ರ ವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗಿದ್ದು, ಪ್ರಸ್ತುತ ಇದರ ವಿಸ್ತೃತ ಯೋಜನಾ ವರದಿ ಸಿದ್ಧತೆಯ ಹಂತದಲ್ಲಿದ್ದು ಶೀಘ್ರದಲ್ಲೇ ರಸ್ತೆ ವಿನ್ಯಾಸಕ್ಕೆ ಅನುಮೋದನೆ ಸಿಗುವ ನಿರೀಕ್ಷೆಯಿದೆ ಎಂದು ಸಂಸದರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/rs-49-crore-central-special-grant-for-repair-of-mani-sampaje-road-on-national-highway-275-mrq/articleshow-k9w238v"/>
        </item>
        <item>
            <title><![CDATA[ಕಳೆದ ವರ್ಷ MRPL ನಷ್ಟ, ಈ ವರ್ಷ ಮೊದಲ ತ್ರೈಮಾಸಿಕದಲ್ಲಿ ₹915 ಕೋಟಿ ನಿವ್ವಳ ಲಾಭ, ಆದಾಯ ದುಪ್ಪಟ್ಟು!]]></title>
            <link>https://kannada.asianetnews.com/business/mrpl-financial-turnaround-rs-915-cr-net-profit-in-q1-fy-2026-27-against-previous-losses-gdp/articleshow-mot5r5y</link>
            <guid isPermaLink="true">https://kannada.asianetnews.com/business/mrpl-financial-turnaround-rs-915-cr-net-profit-in-q1-fy-2026-27-against-previous-losses-gdp/articleshow-mot5r5y</guid>
            <pubDate>Fri, 17 Jul 2026 09:39:49 +0530</pubDate>
            <description><![CDATA[ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್&zwnj;ಪಿಎಲ್) 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 915 ಕೋಟಿ ರೂ. ನಿವ್ವಳ ಲಾಭ ಗಳಿಸಿ, ಕಳೆದ ವರ್ಷದ ನಷ್ಟದಿಂದ ಹೊರಬಂದಿದೆ. ಈ ಅವಧಿಯಲ್ಲಿ ಕಂಪನಿಯು ವಿಮಾನ ಇಂಧನ ಪೈಪ್&zwnj;ಲೈನ್&zwnj;ಗೆ ಅನುಮೋದನೆ ಮತ್ತು ಸುಸ್ಥಿರ ವಿಮಾನ ಇಂಧನ ಉತ್ಪಾದನೆಗೆ ಪ್ರಮಾಣೀಕರಣದಂತಹ ಮಹತ್ವದ ಸಾಧನೆಗಳನ್ನು ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kf06gabvcca1rg29dax57dak,imgname-mrpl--1--1768459610491.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ( Mangalore Refinery and Petrochemicals Limited ಎಂಆರ್&zwnj;ಪಿಎಲ್) 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅತ್ಯುತ್ತಮ ಆರ್ಥಿಕ ಸಾಧನೆ ದಾಖಲಿಸಿದ್ದು, 915 ಕೋಟಿ ರು.ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಗೆ 272 ಕೋಟಿ ರು. ನಷ್ಟವಾಗಿತ್ತು. ಬುಧವಾರ ನಡೆದ ನಿರ್ದೇಶಕರ ಮಂಡಳಿಯ 276ನೇ ಸಭೆಯಲ್ಲಿ ಮೊದಲ ತ್ರೈಮಾಸಿಕದ ಹಣಕಾಸು ಫಲಿತಾಂಶಗಳಿಗೆ ಅನುಮೋದನೆ ನೀಡಲಾಯಿತು.&lt;/p&gt;&lt;h2&gt;ಕಳೆದ ವರ್ಷದ &amp;nbsp;ನಷ್ಟ&lt;/h2&gt;&lt;p&gt;ಈ ಅವಧಿಯಲ್ಲಿ ಕಂಪನಿಯ ಕಾರ್ಯಾಚರಣೆಯ ಒಟ್ಟು ಆದಾಯ 41,609 ಕೋಟಿ ರು.ಗೆ ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯ 20,989 ಕೋಟಿ ರು.ಗೆ ಹೋಲಿಸಿದರೆ ಸುಮಾರು ದುಪ್ಪಟ್ಟಾಗಿದೆ. ತೆರಿಗೆ ಪೂರ್ವ ಲಾಭ 1,215 ಕೋಟಿ ರು. ದಾಖಲಾಗಿದ್ದು, ಕಂಪನಿಯ ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ತೆರಿಗೆಗಿಂತ ಮುನ್ನ ಲಾಭ 1,215 ಕೋಟಿ ರೂ. ಆಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 403 ಕೋಟಿ ರೂ. ನಷ್ಟ ಉಂಟಾಗಿತ್ತು.&lt;/p&gt;&lt;p&gt;ಈ ಅವಧಿಯಲ್ಲಿ ಕಂಪನಿ ಹಲವು ಪ್ರಮುಖ ಸಾಧನೆಗಳನ್ನೂ ದಾಖಲಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಎಟಿಎಫ್ ( Aviation Turbine Fuel-ವಿಮಾನ ಇಂಧನ) ಪೈಪ್&zwnj;ಲೈನ್&zwnj;ಗೆ ಪಿಎನ್&zwnj;ಜಿಆರ್&zwnj;ಬಿ (Petroleum and Natural Gas Regulatory Board ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ) ಅನುಮೋದನೆ ದೊರೆತಿದೆ. ಮಂಗಳೂರಿನ ಏಜಿಸ್ ಟರ್ಮಿನಲ್, ಆಂಧ್ರಪ್ರದೇಶದ ಹಿಂದೂಪುರ ಹಾಗೂ ತಮಿಳುನಾಡಿನ ಎನ್ನೋರ್ ಟರ್ಮಿನಲ್&zwnj;ಗಳಲ್ಲಿ ಉತ್ಪನ್ನಗಳ ಲೋಡಿಂಗ್ ಆರಂಭವಾಗಿದೆ. ನವಿ ಮುಂಬೈನ ಜೆಎನ್&zwnj;ಪಿಎ (ಜವಾಹರಲಾಲ್ ನೆಹರು ಪೋರ್ಟ್ ಅಥಾರಿಟಿ), ಕಾಕಿನಾಡ ಮತ್ತು ಕೃಷ್ಣಪಟ್ಟಣದ ಟ್ಯಾಂಕ್ ಸಂಗ್ರಹಣಾ ಸೌಲಭ್ಯಗಳಿಗೆ ಗುತ್ತಿಗೆ ಒಪ್ಪಂದಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;p&gt;&amp;nbsp;ಜೊತೆಗೆ, ಬಳಸಿದ ಅಡುಗೆ ಎಣ್ಣೆ ಸಹ-ಸಂಸ್ಕರಣೆಗೆ ಐಎಸ್&zwnj;ಸಿಸಿ ಸಿಒಆರ್&zwnj;ಎಸ್&zwnj;ಐಎ (International Sustainability and Carbon Certification - Carbon Offsetting and Reduction Scheme for International Aviation) ಪ್ರಮಾಣೀಕರಣ ಪಡೆದು ಸುಸ್ಥಿರ ವಿಮಾನ ಇಂಧನ ಉತ್ಪಾದನೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.&lt;/p&gt;&lt;p&gt;ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸ್ವಚ್ಛತಾ ಪಖ್ವಾಡಾ ಪ್ರಶಸ್ತಿ 2023ರಲ್ಲಿ &rsquo;ಬಿ&rsquo; ವಿಭಾಗದಲ್ಲಿ ದ್ವಿತೀಯ ಬಹುಮಾನ ಹಾಗೂ 2024ರ ಆವೃತ್ತಿಯಲ್ಲಿ ಸಮಾಧಾನಕರ ಪ್ರಶಸ್ತಿಯನ್ನು ಎಂಆರ್&zwnj;ಪಿಎಲ್ ಪಡೆದುಕೊಂಡಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/business/mrpl-financial-turnaround-rs-915-cr-net-profit-in-q1-fy-2026-27-against-previous-losses-gdp/articleshow-mot5r5y"/>
        </item>
        <item>
            <title><![CDATA[ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಮುಂದಿನ 3 ದಿನಗಳು ನಿರ್ಣಾಯಕ!]]></title>
            <link>https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe</link>
            <guid isPermaLink="true">https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe</guid>
            <pubDate>Wed, 08 Jul 2026 09:16:51 +0530</pubDate>
            <description><![CDATA[ರಾಜ್ಯ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಲ್ಲಿ, ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದೆ. ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಭೂಕುಸಿತದ ಆತಂಕವಿದ್ದು, ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwse2bepv93dvfq097p3dr1g,imgname-rain-alert--5--1783265045974.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ವರುಣನ ಆರ್ಭಟಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅತ್ಯಂತ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (IMD) ತೀವ್ರ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕರಾವಳಿ, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆಯ ತೀವ್ರತೆ ವಿಪರೀತವಾಗಿರಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ 24 ರಿಂದ 48 ಗಂಟೆಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ದಟ್ಟ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿ ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.&lt;/p&gt;&lt;h2&gt;ಕರಾವಳಿ-ಮಲೆನಾಡಿಗೆ 60 ಕಿ.ಮೀ ವೇಗದ ಬಿರುಗಾಳಿ ತಲ್ಲಣ!&lt;/h2&gt;&lt;p&gt;ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬೀಸಲಿರುವ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಸಮುದ್ರ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈಗಾಗಲೇ ಎಚ್ಚರಿಕೆ ರವಾನಿಸಲಾಗಿದೆ. ಮತ್ತೊಂದೆಡೆ ಮಲೆನಾಡು ಮತ್ತು ಘಟ್ಟ ಪ್ರದೇಶಗಳಾದ ಬೆಳಗಾವಿ ಘಟ್ಟ ಪ್ರದೇಶ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;ul&gt; &lt;li&gt;ಜುಲೈ 8 : ಕರಾವಳಿ ಕರ್ನಾಟಕದಾದ್ಯಂತ ಮಳೆಯ ಆರ್ಭಟ ಮುಂದುವರಿಯಲಿದ್ದು, ಭಾರೀ ಮಳೆಯಾಗಲಿದೆ. ಇದರೊಂದಿಗೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲೂ ಮುಂಜಾನೆಯಿಂದಲೇ ವರುಣನ ಅಬ್ಬರ ಜೋರಾಗಿರಲಿದೆ.&lt;/li&gt; &lt;li&gt;ಜುಲೈ 9: ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.&lt;/li&gt; &lt;li&gt;ಜುಲೈ 10: ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರವರೆಗೂ ಯಾವುದೇ ಬಿಡುಗಿಲ್ಲದೆ ನಿರಂತರವಾಗಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.&lt;/li&gt;&lt;/ul&gt;&lt;h2&gt;ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಮಳೆ&lt;/h2&gt;&lt;p&gt;ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣದಿಂದ ಮಧ್ಯಮ ಗಾತ್ರದ ಮಳೆಯಾಗಲಿದೆ. ಆದರೆ, ಈ ಭಾಗಗಳಲ್ಲೂ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಹಳೆಯ ಕಟ್ಟಡಗಳು ಹಾಗೂ ಮರಗಳ ಕೆಳಗೆ ವಾಹನ ನಿಲ್ಲಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.&lt;/p&gt;&lt;h2&gt;ಭೂಕುಸಿತದ (Landslide) ಭೀತಿ, ಘಟ್ಟ ಪ್ರದೇಶಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ&lt;/h2&gt;&lt;p&gt;ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಘಟ್ಟ ರಸ್ತೆಗಳಲ್ಲಿ ಜುಲೈ 11ರವರೆಗೆ ಭೂಕುಸಿತ (Landslide) ಸಂಭವಿಸುವ ತೀವ್ರ ಆತಂಕವಿದೆ. ಹೀಗಾಗಿ, ಸಾರ್ವಜನಿಕರು ತುರ್ತು ಕೆಲಸಗಳಿಲ್ಲದೆ ಘಟ್ಟ ರಸ್ತೆಗಳಲ್ಲಿ ಪ್ರಯಾಣಿಸುವುದನ್ನು ಆರು ದಿನಗಳ ಕಾಲ ಮುಂದೂಡುವುದು ಒಳಿತು. ಸಾರ್ವಜನಿಕರ ಸುರಕ್ಷತೆಗಾಗಿ ಈ ಕೆಳಗಿನ ಪ್ರಮುಖ ಸೂಚನೆಗಳನ್ನು ಅಧಿಕಾರಿಗಳು ಹೊರಡಿಸಿದ್ದಾರೆ.&lt;/p&gt;&lt;p&gt;ನದಿಗಳು ಮತ್ತು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ಅಥವಾ ವೀಕ್ಷಿಸಲು ನದಿ ತೀರಕ್ಕೆ ಹೋಗಬಾರದು.&lt;/p&gt;&lt;p&gt;ಮಳೆ ನೀರು ನುಗ್ಗುವ ಸಾಧ್ಯತೆ ಇರುವ ತಗ್ಗು ಪ್ರದೇಶಗಳ ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.&lt;/p&gt;&lt;p&gt;ಬಿರುಗಾಳಿ ಹಾಗೂ ಸಿಡಿಲು ಸಹಿತ ಮಳೆಯಾಗುತ್ತಿರುವುದರಿಂದ ರೈತರು ತಮ್ಮ ಜಾನುವಾರುಗಳನ್ನು ವಿದ್ಯುತ್ ಕಂಬ ಹಾಗೂ ಮರಗಳ ಕೆಳಗೆ ಕಟ್ಟಬಾರದು.&lt;/p&gt;&lt;p&gt;ರಾಜ್ಯಾದ್ಯಂತ ಎನ್&zwnj;ಡಿಆರ್&zwnj;ಎಫ್ (NDRF) ಹಾಗೂ ಎಸ್&zwnj;ಡಿಆರ್&zwnj;ಎಫ್ (SDRF) ಸಿಬ್ಬಂದಿಗಳು ತರ್ತು ಸಂದರ್ಭಕ್ಕೆ , ಯಾವುದೇ ತುರ್ತು ಪರಿಸ್ಥಿತಿಗೆ ಜಿಲ್ಲಾಡಳಿತಗಳು ಕಂಟ್ರೋಲ್ ರೂಮ್&zwnj;ಗಳನ್ನು ತೆರೆದಿವೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe"/>
        </item>
        <item>
            <title><![CDATA[Mangaluru: ಸೇಂಟ್ ಅಲೋಶಿಯಸ್ ಶಾಲೆಗೆ 1983ರ ಬ್ಯಾಚ್‌ನಿಂದ ರೂ. 65 ಲಕ್ಷದ ವಿದ್ಯಾರ್ಥಿವೇತನ ದತ್ತಿ ಕೊಡುಗೆ!]]></title>
            <link>https://kannada.asianetnews.com/dakshina-kannada/st-aloysius-high-school-1983-batch-65-lakh-scholarship-endowment-mangalore-san/articleshow-pbcotdp</link>
            <guid isPermaLink="true">https://kannada.asianetnews.com/dakshina-kannada/st-aloysius-high-school-1983-batch-65-lakh-scholarship-endowment-mangalore-san/articleshow-pbcotdp</guid>
            <pubDate>Tue, 14 Jul 2026 18:34:31 +0530</pubDate>
            <description><![CDATA[&lt;p&gt;ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ 1983ರ ಬ್ಯಾಚ್&zwnj;ನ ಹಳೆಯ ವಿದ್ಯಾರ್ಥಿಗಳು 43 ವರ್ಷಗಳ ನಂತರ ಒಂದೆಡೆ ಸೇರಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು 65 ಲಕ್ಷ ರೂಪಾಯಿಗಳ ಬೃಹತ್ ವಿದ್ಯಾರ್ಥಿವೇತನ ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxgbk07j20q055d7pvh80dv9,imgname-st-aloysius-class-of-1983-1784034197745.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು (ಜು.154): ಸೇಂಟ್ ಅಲೋಶಿಯಸ್ ಪ್ರೌಢಶಾಲೆಯಿಂದ ಉತ್ತೀರ್ಣರಾಗಿ ಸುಮಾರು 43 ವರ್ಷಗಳ ನಂತರ ಒಂದೆಡೆ ಸೇರಿದ 1983ರ ಬ್ಯಾಚ್&zwnj;ನ ಹಳೆಯ ವಿದ್ಯಾರ್ಥಿಗಳು, ಮುಂದಿನ ತಲೆಮಾರುಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಬರೋಬ್ಬರಿ 65 ಲಕ್ಷ ರೂಪಾಯಿಗಳ ಬೃಹತ್ ವಿದ್ಯಾರ್ಥಿವೇತನ ದತ್ತಿ ನಿಧಿಯನ್ನು (Scholarship Endowment) ಸಂಸ್ಥೆಗೆ ಕೊಡುಗೆಯಾಗಿ ನೀಡಿದ್ದಾರೆ. ಸೇಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಯ 146 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಹಳೆಯ ವಿದ್ಯಾರ್ಥಿಗಳ ನಿರ್ದಿಷ್ಟ ಬ್ಯಾಚ್&zwnj;ವೊಂದರಿಂದ ಸ್ಥಾಪನೆಯಾದ ಮೊದಲ ಸ್ವಾವಲಂಬಿ ದತ್ತಿ ನಿಧಿ ಇದಾಗಿದೆ ಎಂದು ಅಂದಾಜಿಸಲಾಗಿದೆ. ಈ ನಿಧಿಯು ಕಾಲಾನಂತರದಲ್ಲಿ ಮತ್ತಷ್ಟು ಬೆಳೆಯಲಿದ್ದು, ಅರ್ಹ ವಿದ್ಯಾರ್ಥಿಗಳಿಗೆ ನಿರಂತರ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿದೆ.&lt;/p&gt;&lt;p&gt;ಮೊದಲ ವರ್ಷದ ವಿದ್ಯಾರ್ಥಿವೇತನ ವಿತರಣೆ&lt;/p&gt;&lt;p&gt;ಅಲೋಶಿಯಸ್ ಗೊನ್ಜಾಗಾ ಅವರ ವಾರ್ಷಿಕ ಹಬ್ಬದ ಆಚರಣೆಯ ಸಂದರ್ಭದಲ್ಲಿ ಚೊಚ್ಚಲ 'ಸೇಂಟ್ ಅಲೋಶಿಯಸ್ ಕ್ಲಾಸ್ ಆಫ್ 1983 ವಿದ್ಯಾರ್ಥಿವೇತನ' ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ವರ್ಷ ಅಶ್ವಿನ್ ಶೆಟ್ಟಿಗಾರ್, ಎಂ.ಎ. ಅಬ್ದುಲ್ ಅಜಾಜ್ ಶಯಾನ್ ಮತ್ತು ಶರೋನ್ ಡಿಕೋಸ್ಟಾ ಅವರು ಈ ವಿದ್ಯಾರ್ಥಿವೇತನವನ್ನು ಸ್ವೀಕರಿಸಿದರು. ಮತ್ತೊಬ್ಬ ಅರ್ಹ ವಿದ್ಯಾರ್ಥಿ ಸ್ನಿಥಿಕ್ ಚೂರಿಯಾ ಅವರಿಗೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ಕಚೇರಿಯಲ್ಲಿ ನಂತರ ಈ ವಿದ್ಯಾರ್ಥಿವೇತನವನ್ನು ಹಸ್ತಾಂತರಿಸಲಾಯಿತು.&lt;/p&gt;&lt;p&gt;ವಾಟ್ಸಾಪ್ ಗ್ರೂಪ್&zwnj;ನಿಂದ ಆರಂಭವಾದ ಕನಸು&lt;/p&gt;&lt;p&gt;ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪರಸ್ಪರ ಸಂಪರ್ಕ ಕಳೆದುಕೊಂಡಿದ್ದ ಈ ಬ್ಯಾಚ್&zwnj;ನ ಭಾರತ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಸುಮಾರು 70 ಕ್ಕೂ ಹೆಚ್ಚು ಸಹಪಾಠಿಗಳು 2024 ರಲ್ಲಿ ಸೋಶಿಯಲ್&zwnj; ಮೀಡಿಯಾ ಮೂಲಕ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಕೇವಲ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಪುನರ್ಮಿಲನ ಕೂಟವಾಗಿ ಆರಂಭವಾದ ಇವರ ಒಡನಾಟ, ಕೊನೆಗೆ ಸಮಾಜಮುಖಿ ಕಾರ್ಯವೊಂದಕ್ಕೆ ನಾಂದಿ ಹಾಡಿತು. ಅಂದಿನ ರೆಕ್ಟರ್ ಆಗಿದ್ದ ದಿವಂಗತ ಫಾದರ್ ಮೆಲ್ವಿನ್ ಪಿಂಟೋ ಅವರ ಮಾರ್ಗದರ್ಶನದೊಂದಿಗೆ, 2025 ರ ಏಪ್ರಿಲ್&zwnj;ನಲ್ಲಿ ಈ ದತ್ತಿ ನಿಧಿಯನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು.&lt;/p&gt;&lt;p&gt;ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ&lt;/p&gt;&lt;p&gt;ಈ 65 ಲಕ್ಷ ರೂಪಾಯಿಗಳ ಬೃಹತ್ ನಿಧಿಯನ್ನು ಹಣಕಾಸು ವಲಯದಲ್ಲಿ ಕೆಲಸ ಮಾಡುತ್ತಿರುವ ಈ ಬ್ಯಾಚ್&zwnj;ನ ಹಳೆಯ ವಿದ್ಯಾರ್ಥಿಗಳ ಮಾರ್ಗದರ್ಶನದೊಂದಿಗೆ ಆಯ್ದ ಸುರಕ್ಷಿತ ಹಣಕಾಸು ಮಾರುಕಟ್ಟೆ ಸಾಧನಗಳಲ್ಲಿ (Financial Market Instruments) ಹೂಡಿಕೆ ಮಾಡಲಾಗಿದೆ.&lt;/p&gt;&lt;p&gt;ಮೂಲ ನಿಧಿಗೆ ಯಾವುದೇ ಧಕ್ಕೆ ಬರದಂತೆ ಕೇವಲ ಈ ಹೂಡಿಕೆಯಿಂದ ಬರುವ ವಾರ್ಷಿಕ ಬಡ್ಡಿಯನ್ನು ಮಾತ್ರ ವಿದ್ಯಾರ್ಥಿವೇತನಕ್ಕಾಗಿ ಬಳಸಲಾಗುತ್ತದೆ. ಮೂಲ ನಿಧಿಯು ಭವಿಷ್ಯದಲ್ಲಿ ಬರಲಿರುವ ದೇಣಿಗೆಗಳು ಮತ್ತು ಹೂಡಿಕೆಯ ಆದಾಯದೊಂದಿಗೆ ನಿರಂತರವಾಗಿ ಬೆಳೆಯುತ್ತಾ ಸಾಗುತ್ತದೆ. 10 ನೇ ತರಗತಿಯಿಂದ ಹಿಡಿದು ದ್ವಿತೀಯ ಪಿಯುಸಿವರೆಗಿನ ಒಟ್ಟು 12 ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಿರಂತರವಾಗಿ ನೆರವು ನೀಡುವುದು ಈ ಯೋಜನೆಯ ದೀರ್ಘಾವಧಿಯ ಗುರಿಯಾಗಿದೆ.&lt;/p&gt;&lt;p&gt;ಗುರುಗಳಿಗೆ ಗೌರವ ಸಮರ್ಪಣೆ&lt;/p&gt;&lt;p&gt;ಇದೇ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮಾಜಿ ಸಹಾಯಕ ಮುಖ್ಯೋಪಾಧ್ಯಾಯರಾದ ಶಂಭು ಶೆಟ್ಟಿ ಮತ್ತು ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿಯರಾದ ಲಿಡ್ವಿನ್ ಡಿಸೋಜಾ ಹಾಗೂ ಸೆಲಿನ್ ರೇಗೋ ಅವರನ್ನು ಹಳೆಯ ವಿದ್ಯಾರ್ಥಿಗಳು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಶಂಭು ಶೆಟ್ಟಿ ಅವರು ಕಿರಿಯ ಪೀಳಿಗೆಯು ಈ ಸತ್ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. &quot;ಒಂದು ಬೀಜವನ್ನು ಬಿತ್ತುವುದು ತುಂಬಾ ಸುಲಭ. ಆದರೆ ಅದನ್ನು ಪೋಷಿಸಿ, ಮರವಾಗಿಸಿ ಬೆಳೆಸುವುದೇ ನಿಜವಾದ ಸವಾಲು&quot; ಎಂದರು.&lt;/p&gt;&lt;p&gt;&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/dakshina-kannada/st-aloysius-high-school-1983-batch-65-lakh-scholarship-endowment-mangalore-san/articleshow-pbcotdp"/>
        </item>
        <item>
            <title><![CDATA[ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?]]></title>
            <link>https://kannada.asianetnews.com/state/mysuru-dasara-kambala-row-mp-yaduveer-wadiyar-opposes-event-gdp-videoshow-tsh744a</link>
            <guid isPermaLink="true">https://kannada.asianetnews.com/state/mysuru-dasara-kambala-row-mp-yaduveer-wadiyar-opposes-event-gdp-videoshow-tsh744a</guid>
            <pubDate>Tue, 07 Jul 2026 13:09:42 +0530</pubDate>
            <description><![CDATA[ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸಲು ಸಿದ್ಧತೆ ನಡೆದಿದ್ದು, ಇದಕ್ಕೆ 5 ಕೋಟಿ ರೂ. ವೆಚ್ಚದ ಅಂದಾಜಿದೆ. ಆದರೆ, ಇದು ಸಾಂಸ್ಕೃತಿಕವಾಗಿ ಸೂಕ್ತವಲ್ಲ, ದುಂದುವೆಚ್ಚ ಮತ್ತು ಬರಗಾಲದ ಸಮಯದಲ್ಲಿ ಅನಗತ್ಯ ಎಂದು ಸಂಸದ ಯದುವೀರ ಒಡೆಯರ್ ಸೇರಿದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xamd3pa" medium="video" height="768" width="1024"/>
            <content:encoded><![CDATA[&lt;p&gt;ಮೈಸೂರು ದಸರಾದಲ್ಲಿ ಕಂಬಳ ಬೇಕಾ ಬೇಡವಾ..? ದಸರಾ ಕಂಬಳ ವಿಚಾರದಲ್ಲಿ ಶುರುವಾಗಿದೆ ಹಗ್ಗ ಜಗ್ಗಾಟ. ದಸರಾದಲ್ಲಿ ಕಂಬಳ ಬೇಡ ಅಂತಿದ್ದಾರೆ ಮೈಸೂರಿಗರು. ಮಾಡ್ತೇವೆ ಎನ್ನುತ್ತಿದ್ದಾರೆ ಆಯೋಜಕರು. ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿ ಕಂಬಳಕ್ಕೆ ಸಿದ್ಧತೆ. 120 ಜೋಡಿ ಕೋಣಗಳು ಮೈಸೂರಿಗೆ ಆಗಮಿಸುವ ನಿರೀಕ್ಷೆ. ಆಯೋಜನೆಗೆ 5 ಕೋಟಿ ರೂ. ವೆಚ್ಚದ ಲೆಕ್ಕಾಚಾರ. 2 ದಿನಗಳ ಕಾಲ ಕಂಬಳ ನಡೆಸಲು ಸಮಾಲೋಚನೆ. 2 ಸಮಾನಾಂತರ ಸ್ಥಳದಲ್ಲಿ 16 ಸುತ್ತುಗಳಲ್ಲಿ ಆಯೋಜನೆಗೆ ಚಿಂತನೆ. 48 ಗಂಟೆ ನಿರಂತರವಾಗಿ ಬೆಳಕಿನ ವ್ಯವಸ್ಥೆಯಡಿ ಕಂಬಳ.&lt;/p&gt;&lt;p&gt;ಕಂಬಳಕ್ಕಾಗಿ ಎರಡು ಸ್ಥಳಗಳ ಪರಿಶೀಲನೆ. ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್&zwnj; ಬಂಕ್&zwnj; ಬಳಿ 15 ಎಕರೆ ಜಾಗ. ಸಾತಗಳ್ಳಿಯ VTU ಸಮೀಪದ 23 ಎಕರೆ ಜಾಗ ಅಂತಿಮ ಪಟ್ಟಿಗೆ. ದಸರಾದಲ್ಲಿ ಕಂಬಳ ಆಯೋಜನೆಗೆ ಮೈಸೂರು ಸಂಸದರಿಂದಲೇ ವಿರೋಧ. ಕಂಬಳಕ್ಕೆ ತನ್ನದೇ ಆದ ಸಂಪ್ರದಾಯ, ಗೌರವ ಇದೆ. ಕಂಬಳ ಮೈಸೂರು ದಸರಾಗೆ ಬೇಡ ಎಂದ ಯದುವೀರ ಒಡೆಯರ್ . ದಸರಾ ಧಾರ್ಮಿಕವಾದ ಆಚರಣೆ. ಅಲ್ಲಿನ ಸಂಸ್ಕೃತಿಗಳು ಅಲ್ಲಲ್ಲಿಯೇ ಆಚರಣೆ ಆಗಬೇಕು. ಇಲ್ಲಿಗೆ ಕಂಬಳವನ್ನು ಹೇರುವುದು ಬೇಡ ಎಂದ ಒಡೆಯರ್ .&lt;/p&gt;&lt;p&gt;ಕಂಬಳದಂತ ಜನಪದ ಕಲೆ ಆಯಾ ಪ್ರದೇಶಕ್ಕೆ ಸೀಮಿತವಾಗಿರಬೇಕು. ಅದನ್ನು ಬೇರೆಡೆಗೆ ತರುವಾಗ ಯೋಚನೆ ಮಾಡಬೇಕು. 5 -8 ಕೋಟಿ ಖರ್ಚು ಮಾಡಿ ದಸರಾದಲ್ಲಿ ಕಂಬಳ ಬೇಡ. ಕಂಬಳವನ್ನು ಅಲ್ಲೇ ಮಾಡಲಿ, ಇಲ್ಲಿ ಮಾಡಿದರೆ ದುಂದುವೆಚ್ಚ. ಕಂಬಳಕ್ಕಾಗಿ ಪ್ರತ್ಯೇಕ ಮೈದಾನ ಸಿದ್ಧ ಮಾಡಬೇಕು. ಕೋಟಿಗಟ್ಟಲೆ ಹಣ ಖರ್ಚು, ಮರಗಳನ್ನು ಕಡಿಯಬೇಕು. ಅಪಾರ ಪ್ರಮಾಣದ ನೀರನ್ನು ಬಳಸಿ ಕೆಸರು ಗದ್ದೆ ನಿರ್ಮಿಸಬೇಕು. ಬರಗಾಲದ ಸಂದರ್ಭದಲ್ಲಿ ಮೈಸೂರಲ್ಲಿ ಕಂಬಳ ಬೇಡ ಎಂದು ವಿರೋಧ&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/state/mysuru-dasara-kambala-row-mp-yaduveer-wadiyar-opposes-event-gdp-videoshow-tsh744a"/>
        </item>
        <item>
            <title><![CDATA[ವರ್ಷಗಳಿಂದ ಪುತ್ತೂರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಆರೋಪಿ 41 ಅರೆಸ್ಟ್‌ ವಾರಂಟ್‌ಗಳ ಬಳಿಕ ಬಂಧನ!]]></title>
            <link>https://kannada.asianetnews.com/dakshina-kannada/puttur-police-arrest-kerala-robber-nelson-41-warrants-bns-case-san/articleshow-v7io7cr</link>
            <guid isPermaLink="true">https://kannada.asianetnews.com/dakshina-kannada/puttur-police-arrest-kerala-robber-nelson-41-warrants-bns-case-san/articleshow-v7io7cr</guid>
            <pubDate>Fri, 10 Jul 2026 20:33:57 +0530</pubDate>
            <description><![CDATA[&lt;p&gt;ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, 41 ಬಂಧನ ವಾರೆಂಟ್&zwnj;ಗಳನ್ನು ಹೊಂದಿದ್ದ ಕೇರಳ ಮೂಲದ ಕುಖ್ಯಾತ ಆರೋಪಿ ನೆಲ್ಸನ್ ಸಿ.ವಿ.ಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx68tg9sdsmh3gzbqdt3ghxd,imgname-puttur-police-station-1783695753529.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಜು.10)&lt;/strong&gt;: ಬರೋಬ್ಬರಿ 41 ಬಂಧನ ವಾರೆಂಟ್&zwnj;ಗಳು ಜಾರಿಯಾಗಿದ್ದರೂ ಹಲವು ವರ್ಷಗಳಿಂದ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಕೇರಳ ಮೂಲದ 38 ವರ್ಷದ ಕುಖ್ಯಾತ ಆರೋಪಿಯನ್ನು ಪುತ್ತೂರು ನಗರಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿಯಾದ ನೆಲ್ಸನ್ ಸಿ.ವಿ. ಬಂಧಿತ ಆರೋಪಿಯಾಗಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, 2017ರ ಡಿಸೆಂಬರ್ 22 ರಂದು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ಮೂವರು ಅಪರಿಚಿತ ದರೋಡೆಕೋರರು, ಮನೆಯಲ್ಲಿದ್ದವರಿಗೆ ಪಿಸ್ತೂಲ್ ಹಾಗೂ ಚಾಕು ತೋರಿಸಿ ಜೀವಬೆದರಿಕೆ ಒಡ್ಡಿದ್ದರು. ಬಳಿಕ ಮನೆಯಿಂದ ಸುಮಾರು 2.9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 60,000 ರೂ. ನಗದನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.&lt;/p&gt;&lt;h2&gt;&lt;strong&gt;41 ವಾರೆಂಟ್ ಜಾರಿ&lt;/strong&gt;&lt;/h2&gt;&lt;p&gt;ಈ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ ಆರೋಪಿ ನೆಲ್ಸನ್, ಬಳಿಕ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದ. ಆದರೆ, 2021ರ ಆಗಸ್ಟ್ 27 ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆತ ನಿರಂತರವಾಗಿ ತಲೆಮರೆಸಿಕೊಂಡಿದ್ದ. ಕೋರ್ಟ್ ಆದೇಶವನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ನ್ಯಾಯಾಲಯವು ಬರೋಬ್ಬರಿ 41 ಪ್ರತ್ಯೇಕ ಬಂಧನ ವಾರೆಂಟ್&zwnj;ಗಳನ್ನು (Arrest Warrants) ಜಾರಿಗೊಳಿಸಿತ್ತು.&lt;/p&gt;&lt;h2&gt;&lt;strong&gt;ಕೇರಳದಲ್ಲಿ ನಡೆದ ಖೆಡ್ಡಾ ಆಪರೇಷನ್&lt;/strong&gt;&lt;/h2&gt;&lt;p&gt;ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಪುತ್ತೂರು ಪೊಲೀಸರು ವಿಶೇಷ ಕಾರ್ಯಾಚರಣೆ ತಂಡವನ್ನು ರಚಿಸಿದ್ದರು. ಹೆಡ್ ಕಾನ್&zwnj;ಸ್ಟೆಬಲ್ ಸಂತೋಷ್ ಎ., ಪೊಲೀಸ್ ಕಾನ್&zwnj;ಸ್ಟೆಬಲ್&zwnj;ಗಳಾದ ವಿನಾಯಕ ಮತ್ತು ಶಿವರಾಜ್ ಅವರನ್ನೊಳಗೊಂಡ ಪೊಲೀಸ್ ತಂಡವು ಆರೋಪಿಯ ಸುಳಿವು ಬೆನ್ನಟ್ಟಿ ಕೇರಳದ ತ್ರಿಶೂರ್ ಜಿಲ್ಲೆಯ ಮಿಯೂರ್&zwnj;ಗೆ ತೆರಳಿತ್ತು. ಅಲ್ಲಿ ಅಡಗಿದ್ದ ನೆಲ್ಸನ್&zwnj;ನನ್ನು ಬುಧವಾರದಂದು ಯಶಸ್ವಿಯಾಗಿ ವಶಕ್ಕೆ ಪಡೆದ ಪೊಲೀಸರು, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯು ಈ ಹಿಂದೆ ನ್ಯಾಯಾಲಯ ವಿಧಿಸಿದ್ದ ಜಾಮೀನು ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ವಿಚಾರಣೆಗೆ ಹಾಜರಾಗದೆ ವಂಚಿಸಿರುವುದರಿಂದ, ಆತನ ವಿರುದ್ಧ ಈಗ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 269 ರ ಅಡಿಯಲ್ಲಿ ಮತ್ತೊಂದು ಹೊಸ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/dakshina-kannada/puttur-police-arrest-kerala-robber-nelson-41-warrants-bns-case-san/articleshow-v7io7cr"/>
        </item>
        <item>
            <title><![CDATA[ಮಂಗಳೂರು: ಲಾವಣ್ಯ ನೆತ್ತರು ಹರಿಸಿದ ಹುಚ್ಚು ಪ್ರೇಮಿ ಕೊನೆಗೂ ಅರೆಸ್ಟ್, ಇಲಿಪಾಷಾಣ ಸೇವಿಸಿ ಅಸ್ವಸ್ಥನಾಗಿದ್ದವನ ಬಂಧನ]]></title>
            <link>https://kannada.asianetnews.com/karnataka-districts/bantwal-one-sided-love-tragedy-lavanya-case-mangaluru-police-arrest-chethan-gdp/articleshow-wflnauf</link>
            <guid isPermaLink="true">https://kannada.asianetnews.com/karnataka-districts/bantwal-one-sided-love-tragedy-lavanya-case-mangaluru-police-arrest-chethan-gdp/articleshow-wflnauf</guid>
            <pubDate>Fri, 17 Jul 2026 12:55:06 +0530</pubDate>
            <description><![CDATA[ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಸ್ ನಿಲ್ದಾಣದಲ್ಲಿ, ಏಕಪಕ್ಷೀಯ ಪ್ರೀತಿಯ ಕಾರಣಕ್ಕೆ ಚೇತನ್ ಎಂಬ ಯುವಕ ಲಾವಣ್ಯ ಎಂಬ ಯುವತಿಯನ್ನು ತಲವಾರಿನಿಂದ ಕಡಿದು ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxqf8pxx93yp91wavtv0m6dj,imgname-bantwal-one-sided-love-tragedy-lavanya-case-1784272935869.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಹಾಡಹಗಲೇ ಪಾಗಲ್ ಪ್ರೇಮಿವೊಬ್ಬ ತಲವಾರಿನಿಂದ ಮಾರಕ ಹಲ್ಲೆ ನಡೆಸಿ ಯುವತಿಯನ್ನು ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕೆಎಸ್&zwnj;ಆರ್&zwnj;ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿತ್ತು. ಇದೀಗ ಆರೋಪಿ ಚೇತನನ್ನು ಬಂಧಿಸಲಾಗಿದೆ. ಮಂಗಳೂರು ಹೊರವಲಯದ ವಾಮಂಜೂರಿನ ಪಚ್ಚನಾಡಿಯಲ್ಲಿ ತನ್ನ ಕಾರು ನಿಲ್ಲಿಸಿ ಇಲಿಪಾಷಾಣ ಸೇವಿಸಿ ಅಸ್ವಸ್ಥನಾಗಿದ್ದ ಆತನನ್ನು ಪೊಲೀಸರು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಾವಣ್ಯನನ್ನು ಕೊಂದ ಬಳಿಕ ಆಕೆಯ ತಂದೆಗೆ ಕರೆ ಮಾಡಿ ವಿಷಯ ತಿಳಿಸಿ ನಾನೂ ಸಾವಿಗೆ ಶರಣಾಗುತ್ತೇನೆ ಎಂದು ಹೇಳಿದ್ದ.&lt;/p&gt;&lt;p&gt;ಚೇತನ್ ಬಂಧನದ ಬಗ್ಗೆ ದ.ಕ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಮಾಹಿತಿ ನೀಡಿದ್ದು, ಆರೋಪಿ ಚೇತನ್ ಮೃತ ಲಾವಣ್ಯಗೆ ದೂರದ ಸಂಬಂಧಿಯಾಗಿದ್ದಾನೆ. ಆತ ಏಕಪಕ್ಷೀಯವಾಗಿ ಪ್ರೀತಿ ಮಾಡುತ್ತಿದ್ದ, ಲವ್ ಒಪ್ಪದ ಕಾರಣ ತಲ್ವಾರ್ ನಲ್ಲಿ ಕಡಿದು ಕೊಂದಿದ್ದಾನೆ. ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಇಂದು ಬೆಳಗ್ಗೆ ಮಂಗಳೂರಿನಲ್ಲಿ ವಶ ಪಡಿಸಲಾಗಿದೆ. ವಿಚಾರಣೆ ವೇಳೆ ಆತ ಇಲಿಪಾಷಾಣ ಸೇವಿಸಿರುವ ಬಗ್ಗೆ ಹೇಳಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;ಘಟನೆ ಹಿನ್ನೆಲೆ&lt;/h2&gt;&lt;p&gt;ತಾಲೂಕಿನ ಕಕ್ಯಪದವು ನಿವಾಸಿ ಲಾವಣ್ಯ (22) ಮೃತ ದುರ್ದೈವಿ. ಈಕೆಯ ದೂರದ ಸಂಬಂಧಿ ಚೇತನ್ ಕೊಲೆ ಆರೋಪಿ. ಪ್ರಾಥಮಿಕ ತನಿಖೆ ಪ್ರಕಾರ, ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್&zwnj;ನಲ್ಲಿ ಉದ್ಯೋಗಿಯಾಗಿದ್ದ ಲಾವಣ್ಯಳನ್ನು ಚೇತನ್ ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ. ಲಾವಣ್ಯ ಗುರುವಾರ ಸಂಜೆ ಕಕ್ಯಪದವು ಕಡೆಗೆ ತೆರಳಲು ಕೆಎಸ್&zwnj;ಆರ್&zwnj;ಟಿಸಿ ಬಸ್&zwnj;ನಲ್ಲಿ ಕುಳಿತಿದ್ದರು. ಈ ವೇಳೆ ತಮ್ಮ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, ನನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ ಎಂದು ತಿಳಿಸಿದ್ದರು. ಬಳಿಕ ಕರೆ ಕಡಿತಗೊಂಡಿದೆ. ಬಸ್&zwnj;ನಿಂದ ಕೆಳಗಿಳಿದ ಬಳಿಕ ಯುವಕ ಆಕೆಯನ್ನು ಬೆನ್ನಟ್ಟಿದ್ದು, ತನ್ನ ಬ್ಯಾಗ್&zwnj;ನಿಂದ ತಲವಾರು ಹೊರತೆಗೆದು ದಾಳಿ ನಡೆಸಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ವೇಳೆ ಯುವತಿಯ ಮೇಲೆ ತಲವಾರಿನಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರ ಮೊಬೈಲ್&zwnj; ಫೋನ್&zwnj;ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್&zwnj; ಆಗಿದೆ.&lt;/p&gt;&lt;h2&gt;ಮರುಕಳಿಸಿದ ಪ್ರಕರಣ:&lt;/h2&gt;&lt;p&gt;ಕೆಲ ದಿನಗಳ ಹಿಂದೆಯಷ್ಟೇ ತಾಲೂಕಿನ ಮಂಚಿಯಲ್ಲಿ ಬಸ್&zwnj;ಗೆ ಕಾಯುತ್ತಿದ್ದ ಅಪ್ರಾಪ್ತೆಗೆ ಯುವಕನೋರ್ವ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ್ದ ಘಟನೆ ನಡೆದಿತ್ತು.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bantwal-one-sided-love-tragedy-lavanya-case-mangaluru-police-arrest-chethan-gdp/articleshow-wflnauf"/>
        </item>
        <item>
            <title><![CDATA[Onam Special Trains: ಓಣಂ ಪ್ರಯಾಣಿಕರಿಗೆ ಸಿಹಿಸುದ್ದಿ! ಮಂಗಳೂರು-ಚೆನ್ನೈ ನಡುವೆ ವಿಶೇಷ ರೈಲು ಘೋಷಣೆ]]></title>
            <link>https://kannada.asianetnews.com/india-news/indian-southern-railway-announces-onam-special-trains-between-mangaluru-and-chennai/articleshow-zowyk6r</link>
            <guid isPermaLink="true">https://kannada.asianetnews.com/india-news/indian-southern-railway-announces-onam-special-trains-between-mangaluru-and-chennai/articleshow-zowyk6r</guid>
            <pubDate>Wed, 08 Jul 2026 22:41:19 +0530</pubDate>
            <description><![CDATA[&lt;p&gt;ಓಣಂ ಹಬ್ಬದ ಪ್ರಯಾಣಿಕರ ದಟ್ಟಣೆ ನಿವಾರಿಸಲು, ದಕ್ಷಿಣ ರೈಲ್ವೆ ಮಂಗಳೂರು ಮತ್ತು ಚೆನ್ನೈ ನಡುವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಈ ರೈಲುಗಳು ಹಬ್ಬದ ಸಮಯದಲ್ಲಿ ಹೆಚ್ಚುವರಿ ಬೇಡಿಕೆ ಪೂರೈಸುವ ಗುರಿ ಹೊಂದಿದ್ದು, ಪ್ರಯಾಣಿಕರು ದಿನಾಂಕ ಮತ್ತು ನಿಲುಗಡೆಗಳ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx1ba8eyqchk39arwwmp788h,imgname-onam-special-train-mangaluru-1783530594782.jpg" type="image/jpeg" height="390" width="690"/>
            <content:encoded><![CDATA[&lt;p&gt;ಓಣಂ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ದಕ್ಷಿಣ ರೈಲ್ವೆ ಮುಂದಾಗಿದ್ದು, ಕೇರಳಕ್ಕೆ ತೆರಳುವವರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸೇವೆಗಳನ್ನು ಪ್ರಕಟಿಸಲು ಆರಂಭಿಸಿದೆ. ಇದರ ಮೊದಲ ಭಾಗವಾಗಿ, ಮಂಗಳೂರು ಮತ್ತು ಚೆನ್ನೈ ನಡುವೆ ವಿಶೇಷ ರೈಲು ಓಡಿಸುವುದಾಗಿ ಬುಧವಾರ ಘೋಷಿಸಿದೆ. ಇದು ಹಬ್ಬದ ಸಮಯದಲ್ಲಿ ಪ್ರಯಾಣಿಸುವ ಸಾವಿರಾರು ಜನರಿಗೆ ನೆಮ್ಮದಿ ತಂದಿದೆ.&lt;/p&gt;&lt;h2&gt;&lt;strong&gt;ಮಂಗಳೂರು-ಚೆನ್ನೈ ಮಾರ್ಗದ ರೈಲುಗಳ ವಿವರ&lt;/strong&gt;&lt;/h2&gt;&lt;p&gt;ದಕ್ಷಿಣ ರೈಲ್ವೆ ಹೊರಡಿಸಿದ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 06126 ಮಂಗಳೂರು ಸೆಂಟ್ರಲ್&zwnj;ನಿಂದ ಚೆನ್ನೈ ಎಗ್ಮೋರ್&zwnj;ಗೆ ಸಂಚರಿಸಲಿದೆ. ಇದರ ಜೊತೆಗೆ, ರೈಲು ಸಂಖ್ಯೆ 06125 ಚೆನ್ನೈ ಎಗ್ಮೋರ್&zwnj;ನಿಂದ ಹೊರಟು ಮಂಗಳೂರು ಸೆಂಟ್ರಲ್&zwnj;ಗೆ ಹಿಂತಿರುಗಲಿದೆ. ಈ ಎರಡೂ ರೈಲುಗಳು ಹಬ್ಬದ ಸಂದರ್ಭದಲ್ಲಿನ ಹೆಚ್ಚುವರಿ ಬೇಡಿಕೆಯನ್ನು ಪೂರೈಸುವ ಗುರಿ ಹೊಂದಿವೆ. ಓಣಂ ಕೇರಳದ ಪ್ರಮುಖ ಹಬ್ಬವಾದ ಕಾರಣ, ಈ ಸಮಯದಲ್ಲಿ ಬೆಂಗಳೂರು, ಚೆನ್ನೈ, ಮಂಗಳೂರಿನಂತಹ ನಗರಗಳಿಂದ ಲಕ್ಷಾಂತರ ಮಂದಿ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಈ ಕಾರಣದಿಂದ ಸಾಮಾನ್ಯ ರೈಲುಗಳಲ್ಲಿ ಟಿಕೆಟ್ ಸಿಗುವುದು ದುಸ್ತರವಾಗಿರುತ್ತದೆ. ಇಂತಹ ವಿಶೇಷ ರೈಲುಗಳ ಘೋಷಣೆಯು ಪ್ರಯಾಣಿಕರ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.&lt;/p&gt;&lt;h2&gt;&lt;strong&gt;ದಿನಾಂಕ, ನಿಲುಗಡೆ ಮಾಹಿತಿ ನಿರೀಕ್ಷೆಯಲ್ಲಿ ಪ್ರಯಾಣಿಕರು&lt;/strong&gt;&lt;/h2&gt;&lt;p&gt;ಈ ವಿಶೇಷ ರೈಲು ಸೇವೆ ಯಾವಾಗ ಆರಂಭವಾಗಲಿದೆ ಮತ್ತು ಯಾವೆಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ ಎಂಬ ಬಗ್ಗೆ ರೈಲ್ವೆ ಇಲಾಖೆ ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ. ಮೂಲ ವರದಿಯ ಶೀರ್ಷಿಕೆಯಲ್ಲಿ ಸೇವೆಯು 13ನೇ ತಾರೀಕಿನಿಂದ ಆರಂಭವಾಗಲಿದೆ ಎಂದು ಉಲ್ಲೇಖಿಸಲಾಗಿದ್ದರೂ, ರೈಲ್ವೆಯ ಅಧಿಕೃತ ಪ್ರಕಟಣೆಯಲ್ಲಿ ಈ ಕುರಿತು ವಿವರಗಳು ಲಭ್ಯವಾಗಿಲ್ಲ. ಇದು ಸ್ವಲ್ಪ ಗೊಂದಲಕ್ಕೆ ಕಾರಣವಾಗಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;Onam is calling home! Onam Special Trains are here &mdash; connecting Mangaluru Central &amp;amp; Chennai Egmore this festive season. 06126 Mangaluru&ndash;Chennai | Dep 16:00 hrs 06125 Chennai&ndash;Mangaluru | Dep 14:00 hrs8 services each way | July&ndash;Sept 2026#SouthernRailway pic.twitter.com/zw145QMvZl&lt;/p&gt;&lt;p&gt;&mdash; Southern Railway (@GMSRailway) July 8, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಇದು ಓಣಂ ವಿಶೇಷ ರೈಲುಗಳ ಸರಣಿಯಲ್ಲಿ ಮೊದಲ ಘೋಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ಕೇರಳದ ಇತರ ಭಾಗಗಳಿಗೆ ಹಾಗೂ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಇನ್ನಷ್ಟು ರೈಲುಗಳ ಬಗ್ಗೆ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ. ಪ್ರಯಾಣಿಕರು ಹೆಚ್ಚಿನ ಮತ್ತು ನಿಖರವಾದ ವಿವರಗಳಿಗಾಗಿ ದಕ್ಷಿಣ ರೈಲ್ವೆಯ ಅಧಿಕೃತ ಪ್ರಕಟಣೆಗಳನ್ನು ಗಮನಿಸುವುದು ಸೂಕ್ತವಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/indian-southern-railway-announces-onam-special-trains-between-mangaluru-and-chennai/articleshow-zowyk6r"/>
        </item>
    </channel>
</rss>
