<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 27 Apr 2026 17:32:48 +0530</lastBuildDate>
        <atom:link href="https://kannada.asianetnews.com/rss/dakshina-kannada" rel="self" type="application/rss+xml"/>
        <item>
            <title><![CDATA[ದೈವದ ಭಂಡಾರ ಸಾಗುವ ವೇಳೆ ಕಾಲುಸಂಕ ಕುಸಿದು 8 ಜನರಿಗೆ ಗಂಭೀರ ಗಾಯ]]></title>
            <link>https://kannada.asianetnews.com/state/8-people-seriously-injured-after-a-footbridge-collapses-during-the-procession-of-divine/articleshow-0p7gmf8</link>
            <guid isPermaLink="true">https://kannada.asianetnews.com/state/8-people-seriously-injured-after-a-footbridge-collapses-during-the-procession-of-divine/articleshow-0p7gmf8</guid>
            <pubDate>Sun, 26 Apr 2026 11:44:59 +0530</pubDate>
            <description><![CDATA[ಮೂಡಬಿದಿರೆಯ ಪುಚ್ಚೆಮೊಗರು ಗ್ರಾಮದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಸಾಗಿಸುವಾಗ ಕಾಲು ಸಂಕ ಕುಸಿದು 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದೈವದ ಪಲ್ಲಕ್ಕಿ ಸಮೇತ ಪೂಜಾರಿಗಳು ಕೆಳಗೆ ಬಿದ್ದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq46kyh4ttd58r7d3v930dk8,imgname-bridge-collapse-1777183881764.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಭಂಡಾರ ಸಾಗುವ ವೇಳೆ ಕುಸಿದ ಕಾಲು ಸಂಕ&lt;/strong&gt;&lt;/h2&gt;&lt;p&gt;ಮಂಗಳೂರು: ದೈವದ ಭಂಡಾರ ಸಾಗುವ ವೇಳೆ ಸಣ್ಣ ಕಾಲು ಸಂಕ ಕುಸಿದು ಬಿದ್ದ ಪರಿಣಾಮ 8 ಜನ ಗಂಭೀರ ಗಾಯಗೊಂಡಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಎಂಬ ಗ್ರಾಮದಲ್ಲಿ ನಡೆದಿದೆ. ದೈವದ ಪೂಜಾರಿಗಳು ಸಂಪ್ರದಾಯದಂತೆ ದೊಂದಿ, ಕೊಡೆ, ಪಲ್ಲಕ್ಕಿ ಮುಂತಾದವುಗಳೊಂದಿಗೆ ಭಂಡಾರ ಹೊತ್ತುಕೊಂಡು ಹೋಗುತ್ತಿದ್ದಾಗ ಈ ಸಣ್ಣ ಕಾಲು ಸೇತುವೆ ಕುಸಿದು ಬಿದ್ದಿದ್ದು, ದೈವದ ಪೂಜಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.&lt;/p&gt;&lt;h3&gt;&lt;strong&gt;8 ಜನರಿಗೆ ಗಾಯ&lt;/strong&gt;&lt;/h3&gt;&lt;p&gt;ಪುಚ್ಚೆಮೊಗರುವಿನ ಶ್ರೀ ಕೊಡಮಣಿತ್ತಾಯ ದೈವದ ಜಾತ್ರೋತ್ಸವ ಅಂಗವಾಗಿ ಮೆರವಣಿಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪಲ್ಲಕ್ಕಿ ಸಮೇತ ದೈವದ ಪೂಜಾರಿಕೆ ಮಾಡುತ್ತಿದ್ದವರು ಕೆಳಗೆ ಬಿದ್ದಿದ್ದು, ಇದರಿಂದ ಭಕ್ತರಲ್ಲಿ ಆತಂಕ ಮೂಡಿದೆ. ಪುಚ್ಚೆಮೊಗರುವಿನ ಬಾವದಬೈಲು ನಿಲಯದಿಂದ ಭಂಡಾರ ಹೊತ್ತುಕೊಂಡು ತಾಕೋಡೆ ಬರ್ಕೆ ಧರ್ಮನೇಮೋತ್ಸಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಹಳ್ಳವೊಂದರ ಮೇಲೆ ನಿರ್ಮಿಸಿದ್ದ ಹಳೆಯ ಸೇತುವೆಯೊಂದು ಇದಕ್ಕಿದ್ದಂತೆ ಕುಸಿದು ಬಿದ್ದು, ಕಲ್ಲುಗಳು ಭಂಡಾ ಹೊತ್ತವರ ಮೇಲೆಯೇ ಬಿದ್ದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ. ಮಾರೂರಿನ ಸುನಿಲ್ ಶೆಟ್ಟಿ ಮುಕಾಲ್ದಿ, ಲೋಕೇಶ್ ಭಂಡಾರಿ ಸೇರಿದಂತೆ ಒಟ್ಟು ಎಂಟು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.&lt;/p&gt;&lt;p&gt;ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವಘಡದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೈವದ ಪಲ್ಲಕ್ಕಿ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಮೊಗಮೂರ್ತಿ ಮತ್ತು ಇತರ ಪವಿತ್ರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗೋವಾದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಬಗ್ಗೆ ಅವಹೇಳನಕಾರಿ ಮಾತು: ಬಲಪಂಥೀಯ ವಾಗ್ಮಿ ಗೌತಮ್ ಬಂಧನ&lt;/strong&gt;&lt;strong&gt;&amp;nbsp;&lt;/strong&gt;&lt;/p&gt;&lt;p&gt;&lt;/p&gt;]]></content:encoded>
            <category>dakshina-kannada</category>
            <dc:creator>Anusha Kb</dc:creator>
            <atom:link href="https://kannada.asianetnews.com/state/8-people-seriously-injured-after-a-footbridge-collapses-during-the-procession-of-divine/articleshow-0p7gmf8"/>
        </item>
        <item>
            <title><![CDATA[ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್; ಇತ್ತ ಮುಂಡಗೋಡ-ಪಣಜಿ ಬಸ್ ಸೇವೆ ಆರಂಭ]]></title>
            <link>https://kannada.asianetnews.com/travel/mangaluru-to-mantralaya-ksrtc-pallakki-non-ac-sleeper-mundagoda-to-panaji-bus-bus-launched-mrq/articleshow-2f01uzs</link>
            <guid isPermaLink="true">https://kannada.asianetnews.com/travel/mangaluru-to-mantralaya-ksrtc-pallakki-non-ac-sleeper-mundagoda-to-panaji-bus-bus-launched-mrq/articleshow-2f01uzs</guid>
            <pubDate>Sat, 18 Apr 2026 17:34:59 +0530</pubDate>
            <description><![CDATA[&lt;p&gt;KSRTC Pallakki AC Bus Mangaluru To Mantralaya ಭಕ್ತರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು-ಮಂತ್ರಾಲಯ ಮಾರ್ಗದ ನಡುವೆ ನೂತನ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಕಾರ್ಯಾಚರಣೆ ಆರಂಭವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpg76b2pcy7gyy7rahjwtct0,imgname-ksrtc-pallakki-ac-bus-1776513395798.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು - ಮಂತ್ರಾಲಯ ಮಾರ್ಗದ ನಡುವೆ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಮೇಲ್ದರ್ಜೆಗೇರಿಸಿ ನೂತನ ಪಲ್ಲಕ್ಕಿ ನಾನ್ ಎ.ಸಿ. ಸ್ಲೀಪರ್ ಸಾರಿಗೆಗೆ ಶುಕ್ರವಾರ ಮಂಗಳೂರು ಕೆ.ಎಸ್&zwnj;.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.&lt;/p&gt;&lt;p&gt;ಶಾಸಕ ವೇದವ್ಯಾಸ ಕಾಮತ್ ನೂತನ ಸಾರಿಗೆ ಬಸ್&zwnj;ಗೆ ಚಾಲನೆ ನೀಡಿದರು. ಕೆಎಸ್&zwnj;ಆರ್&zwnj;ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಸಂಚಾರ ನಿಯಂತ್ರಣಾಧಿಕಾರಿ ಕಮಲ್ ಕುಮಾರ್ ಮತ್ತಿತರರು ಇದ್ದರು.&lt;/p&gt;&lt;p&gt;&lt;/p&gt;&lt;h2&gt;&lt;strong&gt;ಮುಂಡಗೋಡ-ಪಣಜಿ ಬಸ್&zwnj;&lt;/strong&gt;&lt;/h2&gt;&lt;p&gt;ಮುಂಡಗೋಡ ಘಟಕದಿಂದ ಗೋವಾ ರಾಜಧಾನಿ ಪಣಜಿಗೆ ನೂತನ ಬಸ್ ಸೇವೆ ಆರಂಭಿಸಲಾಗಿದೆ. ಮುಂಡಗೋಡ-ಪಣಜಿ ಬಸ್&zwnj;ಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ ಚಾಲನೆ ನೀಡಿದರು. ಈ ಸಂದರ್ಭ ಗ್ಯಾರಂಟಿ ಯೋಜನೆಯ ಸದಸ್ಯ ಧರ್ಮರಾಜ ನಡಿಗೇರ, ಡಿಪೋ ಮ್ಯಾನೇಜರ್ ಕುರ್ತಕೋಟಿ, ಚಾಲಕರು, ನಿರ್ವಾಹಕರು, ಸಾರ್ವಜನಿಕರು ಉಪಸ್ಥಿತರಿದ್ದರು.&lt;/p&gt;&lt;p&gt;ಈ ನೂತನ ಬಸ್ ಬೆಳಗ್ಗೆ 8.15ಕ್ಕೆ ಮುಂಡಗೋಡನಿಂದ ಹೊರಟು ಬಂಕಾಪುರ, ಹಾನಗಲ್, ಶಿರಸಿ, ಅಂಕೋಲಾ, ಕಾರವಾರ ಮಾರ್ಗವಾಗಿ ಪಣಜಿ ತಲುಪಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; NWKRTC: ಹುಬ್ಬಳ್ಳಿ-ಗದಗ ನಡುವೆ ತಡೆ ರಹಿತ ರಾಜಹಂಸ ಬಸ್ ಸಂಚಾರ; ವೇಳಾ ಪಟ್ಟಿ ಹೀಗಿದೆ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಾವೇರಿ ಪ್ರಯಾಣಿಕರಿಗೆ ಸಿಹಿಸುದ್ದಿ: ಬೆಂಗಳೂರು, ಪಣಜಿ, ಹುಬ್ಬಳಿಗೆ ಹೊಸ ಬಸ್ ಸಂಚಾರ ಆರಂ&lt;/strong&gt;&lt;strong&gt;ಭ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/travel/mangaluru-to-mantralaya-ksrtc-pallakki-non-ac-sleeper-mundagoda-to-panaji-bus-bus-launched-mrq/articleshow-2f01uzs"/>
        </item>
        <item>
            <title><![CDATA[ಯಕ್ಷಗಾನ ಕಲಾವಿದರ ಬಗ್ಗೆ ನಾಲಿಗೆ ಹರಿಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ; ಆಡಿಯೋ ಆಧರಿಸಿ ಮಹಿಳಾ ಠಾಣೆಯಲ್ಲಿ ಎಫ್‌ಐಆರ್!]]></title>
            <link>https://kannada.asianetnews.com/karnataka-districts/mahesh-shetty-thimarodi-fir-puttur-womens-police-station-yakshagana-artist-mother-abuse-sat/articleshow-2id4r1i</link>
            <guid isPermaLink="true">https://kannada.asianetnews.com/karnataka-districts/mahesh-shetty-thimarodi-fir-puttur-womens-police-station-yakshagana-artist-mother-abuse-sat/articleshow-2id4r1i</guid>
            <pubDate>Fri, 17 Apr 2026 14:30:01 +0530</pubDate>
            <description><![CDATA[&lt;p&gt;ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಯಕ್ಷಗಾನ ಕಲಾವಿದರೊಬ್ಬರ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ. ವೈರಲ್ ಆದ ಆಡಿಯೋ ಸಂಭಾಷಣೆಯನ್ನು ಆಧರಿಸಿ 73 ವರ್ಷದ ವೃದ್ಧೆ ದೂರು ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k38987d1fzx0myr0f5chrfx6,imgname-vdvbfd-1755846024609.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ (ಏ.17): ಸಾ&lt;/strong&gt;ಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾದಂತಿದೆ. ಯಕ್ಷಗಾನ ಕಲಾವಿದರೊಬ್ಬರ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಈಗ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲೂ ತಿಮರೋಡಿ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ. ಈ ಬೆಳವಣಿಗೆಯಿಂದಾಗಿ ತಿಮರೋಡಿ ಅವರಿಗೆ ಮತ್ತೊಂದು ಸುತ್ತಿನ ಸಂಕಷ್ಟ ಎದುರಾಗಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಬಂಟ್ವಾಳ ನಿವಾಸಿ, 73 ವರ್ಷದ ವೃದ್ಧೆ ಲೀಲಾವತಿ ಎಂಬುವವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಲೀಲಾವತಿ ಅವರು ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಅವರ ತಾಯಿ. ಇತ್ತೀಚೆಗೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಮತ್ತೊಬ್ಬ ಯಕ್ಷಗಾನ ಕಲಾವಿದ ಪ್ರಜ್ವಲ್ ಎಂಬುವವರಿಗೆ ಕರೆ ಮಾಡಿ ಮಾತನಾಡಿದ್ದರು ಎನ್ನಲಾದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಸಂಭಾಷಣೆಯ ವೇಳೆ ತಿಮರೋಡಿ ಅವರು ದಿನೇಶ್ ಶೆಟ್ಟಿಗಾರ್ ಹಾಗೂ ಅವರ ತಾಯಿ ಲೀಲಾವತಿ ಅವರ ಬಗ್ಗೆ ಅತ್ಯಂತ ಕೆಟ್ಟದಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ತೇಜೋವಧೆ ಮಾಡಿದ್ದಾರೆ ಎಂಬುದು ದೂರಿನ ಮುಖ್ಯ ಅಂಶವಾಗಿದೆ.&lt;/p&gt;&lt;h2&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್:&lt;/strong&gt;&lt;/h2&gt;&lt;p&gt;ತಿಮರೋಡಿ ಅವರು ಪ್ರಜ್ವಲ್ ಅವರೊಂದಿಗೆ ಮಾತನಾಡುತ್ತಾ ಕಲಾವಿದರ ಕುಟುಂಬದ ವಿರುದ್ಧ ಹರಿಹಾಯ್ದಿದ್ದರು. ಈ ಫೋನ್ ಕರೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಯಕ್ಷಗಾನ ಅಭಿಮಾನಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಒಬ್ಬ ಹಿರಿಯ ಮಹಿಳೆಯ ಬಗ್ಗೆ ಈ ರೀತಿ ಅವಮಾನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಲೀಲಾವತಿ ಅವರು ಪುತ್ತೂರು ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾರೆ.&lt;/p&gt;&lt;h3&gt;&lt;strong&gt;ದಾಖಲಾದ ಸೆಕ್ಷನ್&zwnj;ಗಳು ಯಾವುವು?&lt;/strong&gt;&lt;/h3&gt;&lt;p&gt;ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿಮರೋಡಿ ವಿರುದ್ಧ ಬಿಎನ್ಎಸ್ ಸೆಕ್ಷನ್ 196(1) (ಧರ್ಮ, ಜಾತಿ, ಜನ್ಮಸ್ಥಳದ ಆಧಾರದ ಮೇಲೆ ದ್ವೇಷ ಪ್ರಚೋದನೆ), 352 (ಶಾಂತಿ ಭಂಗ ತರುವ ಉದ್ದೇಶದ ಅವಮಾನ), 351(2) (ಅಪರಾಧಿಕ ಬೆದರಿಕೆ) ಹಾಗೂ ಸೆಕ್ಷನ್ 79 (ಮಹಿಳೆಯ ಘನತೆಗೆ ಧಕ್ಕೆ ತರುವ ಪದಗಳ ಬಳಕೆ ಅಥವಾ ಸನ್ನೆ) ಅಡಿಯಲ್ಲಿ ಎಫ್&zwnj;ಐಆರ್ ದಾಖಲಿಸಲಾಗಿದೆ.&lt;/p&gt;&lt;h3&gt;&lt;strong&gt;ಸರಣಿ ಎಫ್&zwnj;ಐಆರ್ ದಾಖಲು:&lt;/strong&gt;&lt;/h3&gt;&lt;p&gt;ಕೇವಲ ಮಹಿಳಾ ಠಾಣೆ ಮಾತ್ರವಲ್ಲದೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಇದೇ ವಿಚಾರವಾಗಿ ಮತ್ತೊಂದು ಪ್ರಕರಣ ದಾಖಲಾಗಿದೆ. ಯಕ್ಷಗಾನ ಕಲಾವಿದ ಸುಂದರ್ ರೈ ಮಂದಾರ ಅವರು ನೀಡಿದ ದೂರಿನ ಅನ್ವಯ ಅಲ್ಲಿಯೂ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mahesh-shetty-thimarodi-fir-puttur-womens-police-station-yakshagana-artist-mother-abuse-sat/articleshow-2id4r1i"/>
        </item>
        <item>
            <title><![CDATA[ಬಹಳ ಒಳ್ಳೇವ್ರು ಕುಂದಾಪುರದ ಈ ಮಿಸ್ಸು; ಹೊಡೆಯಲ್ಲ, ಶಿಕ್ಷೆ ಕೊಡಲ್ಲ, ರಜೆ ಹಾಕಲ್ಲ: ಎಲ್ಲದಕ್ಕೂ ಎಸ್ಸೆಸ್ಸು]]></title>
            <link>https://kannada.asianetnews.com/education/kundapura-vandse-school-introducing-first-ai-robot-lady-teacher-suc/articleshow-4c8pyhx</link>
            <guid isPermaLink="true">https://kannada.asianetnews.com/education/kundapura-vandse-school-introducing-first-ai-robot-lady-teacher-suc/articleshow-4c8pyhx</guid>
            <pubDate>Thu, 16 Apr 2026 12:57:06 +0530</pubDate>
            <description><![CDATA[ಕುಂದಾಪುರದ ವಂಡ್ಸೆ ಸರ್ಕಾರಿ ಶಾಲೆಯು 'ಐರಿಸ್' ಎಂಬ ಕೃತಕ ಬುದ್ಧಿಮತ್ತೆಯ ರೋಬೋಟ್ ಶಿಕ್ಷಕಿಯನ್ನು ಪರಿಚಯಿಸಿದೆ. 'ಅಟಲ್ ಟಿಂಕರಿಂಗ್ ಲ್ಯಾಬ್' ಯೋಜನೆಯಡಿ ನಿರ್ಮಿಸಲಾದ ಈ ರೋಬೋಟ್, 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಹನ ನಡೆಸಬಲ್ಲದು ಮತ್ತು ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಶಿಕ್ಷಣದಲ್ಲಿ ಕ್ರಾಂತಿ ಮೂಡಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpajxwr21nm90a3xt7b3e97y,imgname-ai-teacher-1776324375298.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಹಳ ಒಳ್ಳೇವ್ರು ನಮ್​ ಮಿಸ್ಸು, ಎಲ್ಲಾದಕ್ಕೂ ಎಸ್​ಎಸ್ಸು ಎನ್ನೋ ಫೇಮಸ್ ಹಾಡಿದೆ. ಆದರೆ ಇಂದು ಶಾಲೆಯ ಮಿಸ್ಸು ಎಂದರೆ ಹೆದರಿಕೊಳ್ಳುವ ಮಕ್ಕಳು ಸಾಕಷ್ಟು ಮಂದಿ ಇದ್ದಾರೆ. ಹೋಂವರ್ಕ್​ ಮಾಡದಿದ್ದರೆ, ಸರಿಯಾಗಿ ಮಾರ್ಕ್ಸ್​ ತೆಗೆಯದಿದ್ದರೆ, ಶಾಲೆಯಲ್ಲಿ ತರ್ಲೆ ಮಾಡಿದರೆ, ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಿಗೆ ಪ್ರಶ್ನೆ ಕೇಳಿದರೆ... ಹೀಗೆ ಯಾವ್ಯಾವುದಕ್ಕೋ ಪನಿಷ್​ಮೆಂಟ್​ ಕೊಡೋ ಮಿಸ್ಸುಗಳು ಬಹಳಷ್ಟು ಇದ್ದಾರೆ. ಇದು ಮಿಸ್ಸುಗಳು ಮಾತ್ರವಲ್ಲ, ಬಹುತೇಕ ಎಲ್ಲಾ ಶಿಕ್ಷಕರೂ ಹೀಗೆಯೇ ಮಾಡ್ತಾರೆ. ಆದರೆ ಕುಂದಾಪುರದ ಸರ್ಕಾರಿ ಶಾಲೆಯಲ್ಲಿನ ಈ ಮಿಸ್ಸು ಮಾತ್ರ ಎಲ್ಲದಕ್ಕೂ ವಿರುದ್ಧ. ಮೇಲಾಗಿ ರಜೆಯಂತೂ ಹಾಕೋದೇ ಇಲ್ಲ. ಕೇಳೋ ಪ್ರಶ್ನೆಗಳಿಗೆಲ್ಲವೂ ಈಕೆಯ ಬಳಿ ಉತ್ತರ ಇದೆ.&lt;/p&gt;&lt;h2&gt;&lt;strong&gt;ಐರಿಸ್​ ಮಿಸ್ಸು&lt;/strong&gt;&lt;/h2&gt;&lt;p&gt;ಈ ಮಿಸ್ಸು ಬೇರೆ ಯಾರೂ ಅಲ್ಲ, ಬದಲಿಗೆ ಎಐ ರೋಬೋಟ್ ಮಿಸ್ಸು ಈಕೆ. ಹೆಸರು ಐರಿಸ್​. ಇದಾಗಲೇ ಎಐ ಎಲ್ಲಾ ಕ್ಷೇತ್ರಗಳಲ್ಲಿಯೂ ಕ್ರಾಂತಿ ಉಂಟು ಮಾಡುತ್ತಿದೆ. ಇದಾಗಲೇ ಹಲವಾರು ಕಂಪೆನಿಗಳಲ್ಲಿ ಎಐದ್ದೇ ಪಾರುಪತ್ಯ. ಹಲವರು ಇದೇ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದಾರೆ. ಸಾಫ್ಟ್​ವೇರ್​ ಕ್ಷೇತ್ರದಲ್ಲಂತೂ ದಿಗ್ಗಜ ಐಟಿ ಕಂಪೆನಿಗಳಿಗೆ ಒಂದೇ ಸಲಕ್ಕೆ ಹತ್ತಾರು ಸಾವಿರದಷ್ಟು ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಲೇ ಇದೆ. ಇದೀಗ ಈ ಎಐ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇಲ್ಲಿಯೂ ಕ್ರಾಂತಿ ಮಾಡುತ್ತಿದೆ. ಕುಂದಾಪುರ ತಾಲೂಕಿನ &lsquo;ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ&rsquo; ರಾಜ್ಯದಲ್ಲೇ ಮೊದಲ ಬಾರಿಗೆ 'ಐರಿಸ್' (Iris) ಎಂಬ ಕೃತಕ ಬುದ್ಧಿಮತ್ತೆ ಹೊಂದಿರುವ ಶಿಕ್ಷಕಿ ಪರಿಚಯವಾಗಿದೆ. ಸರ್ಕಾರಿ ಶಾಲೆಯಾಗಿರುವ ಈ ಶಾಲೆಗೆ ಹೋದರೆ ನಿಮಗೆ ಅಲ್ಲಿ ಸ್ವಾಗತಿಸುವುದೇ ಈ ಶಿಕ್ಷಕಿ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಯಾರೀ ಐರಿಸ್​?&lt;/strong&gt;&lt;/h3&gt;&lt;p&gt;&lsquo;ನೀತಿ ಆಯೋಗ&rsquo;ದ &lsquo;'ಅಟಲ್ ಟಿಂಕರಿಂಗ್ ಲ್ಯಾಬ್' (Atal Tinkering Lab) ಯೋಜನೆಯಡಿ ಈ ರೋಬೋ ನಿರ್ಮಿಸಲಾಗಿದೆ. &lsquo;ಮೇಕರ್ ಲ್ಯಾಬ್ಸ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್&zwnj;&rsquo;ನ ತಾಂತ್ರಿಕ ಸಹಯೋಗದೊಂದಿಗೆ ಇದನ್ನು ರೂಪಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿಯೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಬೇಕು, ಮಕ್ಕಳಿಗೆ ಎಲ್ಲಾ ರೀತಿಯ ತಿಳಿವಳಿಕೆ ಸಿಗಬೇಕು. ಮಕ್ಕಳು ಮುಂದೆ ಬರಬೇಕು ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರಿಗೆ ಮಾದರಿಯಾಗಬೇಕು ಎನ್ನುವ ನಿಟ್ಟಿನಲ್ಲಿ, ಸಾಂಪ್ರದಾಯಿಕ ಬೋಧನಾ ವಿಧಾನಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಮತ್ತು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಜಾಗತಿಕ ಮಟ್ಟಕ್ಕೇರಿಸುವ ಗುರಿಯನ್ನು ಹೊಂದಿರುವ ನಿಟ್ಟಿನಲ್ಲಿ ಈ ಶಿಕ್ಷಕಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;20 ಭಾಷೆಗಳಲ್ಲಿ ಸಂವಹನ&lt;/strong&gt;&lt;/h3&gt;&lt;p&gt;ಇದಾಗಲೇ ಕೇರಳದ ತಿರುವನಂತಪುರಂನಲ್ಲಿರುವ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊದಲು ಯಶಸ್ವಿಯಾಗಿ ಅನಾವರಣಗೊಂಡಿದ್ದ ಈ ತಂತ್ರಜ್ಞಾನ, ಇದೀಗ ಕರ್ನಾಟಕಕ್ಕೆ ಬಂದಿದೆ. ಅಂದಹಾಗೆ ಈ ಶಿಕ್ಷಕಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡ್ತಾಳೆ. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳೂ ಈಕೆಗೆ ಗೊತ್ತು. ಸಾಮಾನ್ಯವಾಗಿ ಕೆಲವೊಮ್ಮೆ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದಾಗ, ಶಿಕ್ಷಕರಿಗೆ ಉತ್ತರ ಗೊತ್ತಿಲ್ಲದಿದ್ದರೆ, ಹೆಚ್ಚಿನ ಮಂದಿ ಗದರುವುದೇ ಹೆಚ್ಚು, ಪ್ರಶ್ನೇ ಕೇಳುವುದೇ ತಪ್ಪು ಎಂಬಂತೆ ಮಾಡುತ್ತಾರೆ, ತಮಗೆ ಉತ್ತರ ಗೊತ್ತಿಲ್ಲ ಎಂದು ಹೇಳಿದರೆ ಮಕ್ಕಳ ಎದುರು ಮರ್ಯಾದೆ ಹೋಗುತ್ತದೆ ಎಂದು ಪ್ರಶ್ನೆಕೇಳುವ ಮಕ್ಕಳ ಗುಣಗಳನ್ನೇ ದಮನ ಮಾಡುವವರು ಇದ್ದಾರೆ. ಆದರೆ ಈ ಮಿಸ್ಸು ಹಾಗಲ್ಲ. ವಿದ್ಯಾರ್ಥಿಗಳು ಕೇಳುವ ಪಠ್ಯಕ್ಕೆ ಸಂಬಂಧಿಸಿದ ಯಾವುದೇ ಕಠಿಣ ಪ್ರಶ್ನೆಗಳಿಗೂ ಉತ್ತರಿಸುತ್ತಾಳೆ.&lt;/p&gt;&lt;h3&gt;&lt;strong&gt;ಮಕ್ಕಳಿಗೆ ಆಪ್ತ&lt;/strong&gt;&lt;/h3&gt;&lt;p&gt;ತರಗತಿಗೆ ಬಂದ ತಕ್ಷಣ ಮಕ್ಕಳೊಂದಿಗೆ ಶೇಕ್​ ಹ್ಯಾಂಡ್​ ಮಾಡಿ ಮಕ್ಕಳ ಕಲಿಕಾ ಅನುಭವವನ್ನು ಆಪ್ತವಾಗಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಸುಮಾರು 3.50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ರೋಬೋಟ್ ಸಿದ್ಧಗೊಂಡಿದ್ದು, ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಕಾರ ನೀಡಿದ್ದಾರೆ. ಇದು ಪೂರ್ಣ ವಿದ್ಯುತ್&zwnj; ಚಾಲಿತವಾಗಿದ್ದು ಶಾಲೆಯಲ್ಲಿ ಸೋಲಾರ್&zwnj; ಇರುವ ಕಾರಣ ಸಮಸ್ಯೆ ಇಲ್ಲ ಅಂತಾರೆ ನಿರ್ವಾಹಕರು, ಇನ್ನು ಒಂದು ಡಿವೈಸ್&zwnj; ಅನ್ನು ಕೈಯಲ್ಲಿ ಹಿಡಿದು ಮಕ್ಕಳು ಪ್ರಶ್ನೆ ಕೇಳಬೇಕಾಗುತ್ತದೆ. ಅದಕ್ಕೆ ರೋಬೋ ಉತ್ತರಿಸುತ್ತದೆ. ಒಂದು ಸಮಯಕ್ಕೆ ಒಬ್ಬರೇ ಪ್ರಶ್ನಿಸಬೇಕು, ಮಕ್ಕಳು ಕೇಳಿದ ಪ್ರಶ್ನೆಗೆ ಉತ್ತರಗಳು ಇಮೀಡಿಯಟ್&zwnj; ಆಗಿ ಸ್ಮಾರ್ಟ್&zwnj; ಬೋರ್ಡ್&zwnj; ಮೇಲೆ ಡಿಸ್ಪ್ಲೈ ಆಗೋದು ಮತ್ತೊಂದು ವಿಶೇಷ.&lt;/p&gt;]]></content:encoded>
            <category>dakshina-kannada</category>
            <dc:creator>Suchethana D</dc:creator>
            <atom:link href="https://kannada.asianetnews.com/education/kundapura-vandse-school-introducing-first-ai-robot-lady-teacher-suc/articleshow-4c8pyhx"/>
        </item>
        <item>
            <title><![CDATA[ಚಾರ್ಮಾಡಿ ಘಾಟ್‌ನಲ್ಲಿ ಮದುವೆ ದಿಬ್ಬಣದ ಬಸ್ ಪಲ್ಟಿ; ತುಮಕೂರಿನ 20ಕ್ಕೂ ಹೆಚ್ಚು ಮಂದಿಗೆ ಗಾಯ!]]></title>
            <link>https://kannada.asianetnews.com/gallery/karnataka-districts/charmadi-ghat-bus-accident-pavagada-passengers-injured-wedding-bus-overturns-sat-5nqufta</link>
            <guid isPermaLink="true">https://kannada.asianetnews.com/gallery/karnataka-districts/charmadi-ghat-bus-accident-pavagada-passengers-injured-wedding-bus-overturns-sat-5nqufta</guid>
            <pubDate>Sun, 26 Apr 2026 16:29:07 +0530</pubDate>
            <description><![CDATA[&lt;p&gt;ಧರ್ಮಸ್ಥಳದಲ್ಲಿ ಮದುವೆ ಮುಗಿಸಿ ಪಾವಗಡಕ್ಕೆ ಹಿಂತಿರುಗುತ್ತಿದ್ದ ಖಾಸಗಿ ಬಸ್ಸೊಂದು ಚಾರ್ಮಾಡಿ ಘಾಟ್&zwnj;ನ ನಾಲ್ಕನೇ ತಿರುವಿನಲ್ಲಿ ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq4pkv90fh741xv4f79my8aj,imgname-mudigere-passenger-bus-overturn-1777200655648.jpg" type="image/jpeg" height="390" width="690"/>
            <content:encoded><![CDATA[&lt;p&gt;ಧರ್ಮಸ್ಥಳದಲ್ಲಿ ಮದುವೆ ಮುಗಿಸಿ ಪಾವಗಡಕ್ಕೆ ಹಿಂತಿರುಗುತ್ತಿದ್ದ ಖಾಸಗಿ ಬಸ್ಸೊಂದು ಚಾರ್ಮಾಡಿ ಘಾಟ್&zwnj;ನ ನಾಲ್ಕನೇ ತಿರುವಿನಲ್ಲಿ ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು/ಮೂಡಿಗೆರೆ (ಏ.26): ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಚಾರ್ಮಾಡಿ ಘಾಟ್&zwnj;ನಲ್ಲಿ ಇಂದು ಭೀಕರ ಬಸ್ ಅಪಘಾತ ಸಂಭವಿಸಿದೆ. ಘಾಟಿಯ ನಾಲ್ಕನೇ ತಿರುವಿನಲ್ಲಿ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಪರಿಣಾಮವಾಗಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಖಾಸಗಿ ಬಸ್ಸು ತುಮಕೂರು ಜಿಲ್ಲೆಯ ಪಾವಗಡ ಮೂಲದ ಪ್ರಯಾಣಿಕರನ್ನು ಹೊತ್ತು ಧರ್ಮಸ್ಥಳದಿಂದ ವಾಪಸ್ಸಾಗುತ್ತಿತ್ತು. ಪಾವಗಡದ ಒಂದು ಕುಟುಂಬ ಮತ್ತು ಸಂಬಂಧಿಕರು ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ತಮ್ಮ ಊರಿಗೆ ತೆರಳುತ್ತಿದ್ದರು. ಆದರೆ, ಚಾರ್ಮಾಡಿ ಘಾಟಿಯ ಅಪಾಯಕಾರಿ ತಿರುವುಗಳಲ್ಲಿ ಒಂದಾದ ನಾಲ್ಕನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯಲ್ಲೇ ಉರುಳಿಬಿದ್ದಿದೆ.&lt;/p&gt;&lt;img&gt;&lt;p&gt;ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಹಾಗೂ ಆ ಮಾರ್ಗವಾಗಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರು ತಕ್ಷಣವೇ ಧಾವಿಸಿ ಬಂದಿದ್ದಾರೆ. ಬಸ್ಸಿನ ಒಳಗಿದ್ದ ಗಾಯಾಳುಗಳನ್ನು ಕಿಟಕಿ ಮತ್ತು ಬಾಗಿಲುಗಳ ಮೂಲಕ ಹೊರತೆಗೆದು ರಕ್ಷಣೆ ಮಾಡಲಾಗಿದೆ. ಈ ವೇಳೆ ಸ್ಥಳದಲ್ಲಿ ಅಳಲು-ಚೀರಾಟ ಮನೆಮಾಡಿತ್ತು.&lt;/p&gt;&lt;p&gt;&lt;strong&gt;ಆಸ್ಪತ್ರೆಗೆ ರವಾನೆ ಮತ್ತು ಗಂಭೀರ ಸ್ಥಿತಿ:&lt;/strong&gt;&lt;/p&gt;&lt;p&gt;ಘಟನೆಯ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆಯೇ ಸುಮಾರು 5 ರಿಂದ 6 ಆಂಬುಲೆನ್ಸ್&zwnj;ಗಳು ಸ್ಥಳಕ್ಕೆ ಧಾವಿಸಿದವು. ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಹಾಗೂ ಕಕ್ಕಿಂಜೆಯ ಕೃಷ್ಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;img&gt;&lt;p&gt;ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಪೊಲೀಸರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಕ್ರೇನ್ ಮೂಲಕ ಬಸ್ಸನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.&lt;/p&gt;&lt;p&gt;ಚಾರ್ಮಾಡಿ ಘಾಟ್&zwnj;ನ ಕಡಿದಾದ ತಿರುವುಗಳಲ್ಲಿ ವಾಹನ ಚಾಲನೆ ಮಾಡುವಾಗ ಅತೀ ವೇಗ ಮತ್ತು ನಿರ್ಲಕ್ಷ್ಯ ಈ ರೀತಿಯ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಪಾವಗಡ ಮೂಲದ ಈ ಪ್ರಯಾಣಿಕರ ಕುಟುಂಬದಲ್ಲಿ ಮದುವೆಯ ಸಂಭ್ರಮದ ನಡುವೆಯೇ ಈ ದುರ್ಘಟನೆ ನಡೆದಿರುವುದು ವಿಷಾದನೀಯ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/charmadi-ghat-bus-accident-pavagada-passengers-injured-wedding-bus-overturns-sat-5nqufta"/>
        </item>
        <item>
            <title><![CDATA[ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಪ್ರಕರಣ, ಆರೋಪಿ ತಂದೆ ಮಗುವಿನ ಆರೈಕೆ ಮಾಡೋದು ಕರ್ತವ್ಯ:ಹೈಕೋರ್ಟ್]]></title>
            <link>https://kannada.asianetnews.com/karnataka-districts/puttur-love-marriage-promise-case-karnataka-high-court-questions-accused-krishna-j-rao-gdp/articleshow-6nrrrcs</link>
            <guid isPermaLink="true">https://kannada.asianetnews.com/karnataka-districts/puttur-love-marriage-promise-case-karnataka-high-court-questions-accused-krishna-j-rao-gdp/articleshow-6nrrrcs</guid>
            <pubDate>Wed, 22 Apr 2026 21:51:51 +0530</pubDate>
            <description><![CDATA[ಪುತ್ತೂರಿನ ಬಿಜೆಪಿ ಮುಖಂಡರ ಪುತ್ರ ಕೃಷ್ಣ ಜೆ. ರಾವ್, ಯುವತಿಯೊಬ್ಬಳಿಗೆ ಮದುವೆ ಆಮಿಷವೊಡ್ಡಿ, ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಏಳು ವರ್ಷಗಳ ಸಂಬಂಧದ ಬಳಿಕ ಮಗುವಿಗೆ ಜನ್ಮ ನೀಡಿದ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ ಆರೋಪ ಎದುರಿಸುತ್ತಿದ್ದು, ಡಿಎನ್&zwnj;ಎ ಪರೀಕ್ಷೆಯಲ್ಲಿ ಮಗುವಿನ ತಂದೆ ತಾನೇ ಎಂದು ಸಾಬೀತಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kdpwmgcd0j1fnavzw64fwag1,imgname-krishna-j-rao-1767073530253.jpg" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ಪ್ರೀತಿ, ದೈಹಿಕ ಸಂಬಂಧ ಹಾಗೂ ಮದುವೆಯ ಭರವಸೆ ನೀಡಿ ಯುವತಿಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೊಸ ಬೆಳವಣಿಗೆಗಳು ಕಂಡುಬಂದಿವೆ. ಮದುವೆಯ ಆಮಿಷವೊಡ್ಡಿ ಯುವತಿಯೊಂದಿಗೆ ದೀರ್ಘಕಾಲ ಸಂಬಂಧ ಬೆಳೆಸಿ, ಬಳಿಕ ಗರ್ಭಿಣಿಯಾಗಿಸಿದ ನಂತರ ಮದುವೆ ನಿರಾಕರಿಸಿ ವಂಚನೆ ಮಾಡಿದ ಆರೋಪದ ಮೇಲೆ ಕೃಷ್ಣ ಜೆ. ರಾವ್ ವಿರುದ್ಧ ಪ್ರಕರಣ ದಾಖಲಾಗಿತ್ತು.&lt;/p&gt;&lt;h2&gt;7 ವರ್ಷಗಳ ಪ್ರೀತಿ, ಬಳಿಕ ವಂಚನೆ&lt;/h2&gt;&lt;p&gt;ಆರೋಪದ ಪ್ರಕಾರ, ಕೃಷ್ಣ ಜೆ. ರಾವ್ ಮತ್ತು ಯುವತಿಯ ನಡುವೆ ಸುಮಾರು ಏಳು ವರ್ಷಗಳ ಕಾಲ ಪ್ರೀತಿಯ ಸಂಬಂಧವಿತ್ತು. ಈ ಅವಧಿಯಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ನಂತರ ಯುವತಿ ಗರ್ಭಿಣಿಯಾಗಿದ್ದು, ಮಗುವಿಗೆ ಜನ್ಮ ನೀಡಿದ ಬಳಿಕ ಆರೋಪಿಯು ಮದುವೆಯಾಗಲು ನಿರಾಕರಿಸಿದ್ದಾನೆ ಎಂಬುದು ಪ್ರಕರಣದ ಮುಖ್ಯ ಅಂಶವಾಗಿದೆ.&lt;/p&gt;&lt;h2&gt;ಹೈಕೋರ್ಟ್&zwnj;ಗೆ ಅರ್ಜಿ&lt;/h2&gt;&lt;p&gt;ಇದೀಗ ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಕೃಷ್ಣ ಜೆ. ರಾವ್ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾನೆ. ಆರೋಪಿಯ ಪರ ವಕೀಲರಾದ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಇದು ಪರಸ್ಪರ ಒಪ್ಪಿಗೆಯ ಸಂಬಂಧವಾಗಿದ್ದು, ಇಬ್ಬರ ನಡುವೆ ಹಲವು ವರ್ಷಗಳಿಂದ ಪ್ರೀತಿ ಇತ್ತು. ರಾಜಕೀಯ ಕಾರಣಗಳಿಂದಾಗಿ ಈ ಪ್ರಕರಣವನ್ನು ಹೆಚ್ಚಾಗಿ ತೋರಿಸಲಾಗುತ್ತಿದೆ. ಆರೋಪಿಯ ತಂದೆಯ ತೇಜೋವಧೆ ಮಾಡಲು ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.&lt;/p&gt;&lt;h2&gt;ಹೈಕೋರ್ಟ್&zwnj;ನ ಪ್ರಶ್ನೆಗಳು&lt;/h2&gt;&lt;p&gt;ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಹಲವು ಪ್ರಮುಖ ಪ್ರಶ್ನೆಗಳನ್ನು ಕೇಳಿದೆ. ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ. ಯುವತಿ, ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿ ಕರ್ತವ್ಯ. ಯುವತಿಗೆ ಮಾಸಿಕ 10 ಸಾವಿರ ಜೀವನಾಂಶ ನೀಡಲು ಸಿದ್ದರಿದ್ದಾರಾ ? ಎಂದು ಆರೋಪಿ ಪರ ವಕೀಲರಿಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಪ್ರಶ್ನೆ ಮಾಡಿದೆ.&lt;/p&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿರುವ ಹೈಕೋರ್ಟ್, ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ. ಈ ಪ್ರಕರಣವು ಸಾಮಾಜಿಕ ಹಾಗೂ ಕಾನೂನು ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಮಹತ್ವದ ತೀರ್ಮಾನ ನಿರೀಕ್ಷಿಸಲಾಗಿದೆ.&lt;/p&gt;&lt;h2&gt;ಡಿಎನ್&zwnj;ಎ ಪರೀಕ್ಷೆಯಲ್ಲಿ ದೃಢೀಕರಣ&lt;/h2&gt;&lt;p&gt;ಪ್ರಕರಣದಲ್ಲಿ ಮಹತ್ವದ ಸಾಕ್ಷಿಯಾಗಿ ಡಿಎನ್&zwnj;ಎ ಪರೀಕ್ಷೆಯ ವರದಿ ಹೊರಬಂದಿತ್ತು. ಯುವತಿ ಹೆತ್ತ ಮಗುವಿನ ತಂದೆ ಕೃಷ್ಣ ಜೆ. ರಾವ್ ಎಂಬುದು ದೃಢಪಟ್ಟಿತ್ತು. 2025ರ ಸೆಪ್ಟೆಂಬರ್&zwnj;ನಲ್ಲಿ ಬಂದ ಈ ವರದಿ ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು. ಈ ಹಿಂದೆ ಮೈಸೂರಿನಲ್ಲಿ ಬಂಧನಕ್ಕೊಳಗಾದ ಕೃಷ್ಣ ಜೆ. ರಾವ್, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಈಗ ಹೊರಗಡೆ ಇದ್ದಾನೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/puttur-love-marriage-promise-case-karnataka-high-court-questions-accused-krishna-j-rao-gdp/articleshow-6nrrrcs"/>
        </item>
        <item>
            <title><![CDATA[ಉಳ್ಳಾಲ, ಮಂಗಳೂರಲ್ಲಿ ಭೂಗತ ಕೇಬಲ್‌ ಕಾಮಗಾರಿ ಶೀಘ್ರ: ಸ್ಪೀಕರ್‌ ಯು.ಟಿ.ಖಾದರ್‌]]></title>
            <link>https://kannada.asianetnews.com/karnataka-districts/mangaluru-underground-electric-cable-project-ut-khader-update-gvd/articleshow-6of9ddz</link>
            <guid isPermaLink="true">https://kannada.asianetnews.com/karnataka-districts/mangaluru-underground-electric-cable-project-ut-khader-update-gvd/articleshow-6of9ddz</guid>
            <pubDate>Thu, 16 Apr 2026 23:51:45 +0530</pubDate>
            <description><![CDATA[&lt;p&gt;ಪುರಸಭೆಯ ಹಲವು ಪ್ರದೇಶಗಳಲ್ಲಿ 186.45 ಕೋಟಿ ರು. ವೆಚ್ಚದಲ್ಲಿ ಭೂಗತ ವಿದ್ಯುತ್ ಕೇಬಲ್&zwnj; ಅಳವಡಿಸುವ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ವಿಧಾನಸಭೆ ಸ್ಪೀಕರ್&zwnj; ಯು.ಟಿ.ಖಾದರ್&zwnj; ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h5xk1er728j97aq7whwc3ekr,imgname-khader.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಏ.16): &lt;/strong&gt;ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ನಗರಸಭೆಯ ಸಂಪೂರ್ಣ ವ್ಯಾಪ್ತಿ ಹಾಗೂ ಸೋಮೇಶ್ವರ ಪುರಸಭೆಯ ಹಲವು ಪ್ರದೇಶಗಳಲ್ಲಿ 186.45 ಕೋಟಿ ರು. ವೆಚ್ಚದಲ್ಲಿ ಭೂಗತ ವಿದ್ಯುತ್ ಕೇಬಲ್&zwnj; ಅಳವಡಿಸುವ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ವಿಧಾನಸಭೆ ಸ್ಪೀಕರ್&zwnj; ಯು.ಟಿ.ಖಾದರ್&zwnj; ತಿಳಿಸಿದ್ದಾರೆ.&lt;/p&gt;&lt;p&gt;ನಗರದ ಮೆಸ್ಕಾಂ ಭವನದಲ್ಲಿ ಈ ಕುರಿತು ಅಧಿಕಾರಿಗಳೊಂದಿಗೆ ಮಹತ್ವದ ಸಮನ್ವಯ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪೆರಿಬೈಲ್, ಕುಂಪಲ, ಮೂರುಕಟ್ಟೆ, ಕೊಲ್ಯ, ಬಗಂಬಿಲ, ಉಚ್ಚಿಲದಲ್ಲಿ ಭೂಗತ ಕೇಬಲ್&zwnj; ಅಳವಡಿಸಲು ನಿರ್ಧರಿಸಲಾಗಿದೆ ಎಂದರು.&lt;/p&gt;&lt;p&gt;&lt;strong&gt;ಮಂಗಳೂರು ನಗರದಲ್ಲೂ ಕೇಬಲ್&zwnj;: &lt;/strong&gt;ಉಳ್ಳಾಲ ಮಾತ್ರವಲ್ಲದೆ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕುದ್ರೋಳಿ- ಬಿಜೈ- ಕೆಎಸ್ಸಾರ್ಟಿಸಿ- ಉರ್ವ ಸ್ಟೋರ್&zwnj; ಭಾಗದಲ್ಲಿ 67 ಕೋಟಿ ರು. ವೆಚ್ಚದಲ್ಲಿ ಹಾಗೂ ವಿಮಾನ ನಿಲ್ದಾಣಕ್ಕೆ ಸಾಗುವ ಲೈನ್&zwnj;ನಲ್ಲಿ 51 ಕೋಟಿ ರು. ವೆಚ್ಚದಲ್ಲಿ ಭೂಗತ ಕೇಬಲ್&zwnj; ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಇದೇ ಸಂದರ್ಭ ಖಾದರ್&zwnj; ಹೇಳಿದರು.&lt;/p&gt;&lt;p&gt;ಉಳ್ಳಾಲದಲ್ಲಿ 144.16 ಕಿ.ಮೀ. ಎಚ್&zwnj;ಟಿ ಲೈನ್, 223.48 ಕಿ.ಮೀ ಎಲ್&zwnj;ಟಿ ಲೈನ್, ಮಣ್ಣಗುಡ್ಡೆ ಉಪವಿಭಾಗದಲ್ಲಿ 62.83 ಕಿಮೀ ಎಚ್&zwnj;ಟಿ ಲೈನ್, 45.70 ಕಿ.ಮೀ ಎಲ್&zwnj;ಟಿ ಲೈನ್, ಕಾವೂರು ಉಪವಿಭಾಗದಲ್ಲಿ 47.40 ಕಿಮೀ ಎಚ್&zwnj;ಟಿ ಲೈನ್, 48.75 ಕಿಮೀ ಎಲ್&zwnj;ಟಿ ಲೈನ್ ಭೂಗತ ಕೇಬಲ್ ಆಗಿ ಪರಿವರ್ತನೆಗೊಳ್ಳಲಿದೆ. ಉಳ್ಳಾಲದ ಪ್ರವಾಹ ಪೀಡಿತ ಪ್ರದೇಶದ 12 ಕಿ.ಮೀ ವ್ಯಾಪ್ತಿಯಲ್ಲಿ ಎಬಿ ಕೇಬಲ್ ಅಳವಡಿಸಲಾಗುವುದು ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;24 ತಿಂಗಳಲ್ಲಿ ಕಾಮಗಾರಿ ಸಂಪೂರ್ಣ: &lt;/strong&gt;ಇವೆಲ್ಲ ಕಾಮಗಾರಿ ಪೂರ್ಣವಾಗಲು 24 ತಿಂಗಳ ಅವಧಿ ನಿಗದಿಪಡಿಸಲಾಗಿದೆ. ಭೂಗತ ಕೇಬಲ್ ಅಳವಡಿಸಲು ದುಪ್ಪಟ್ಟು ಖರ್ಚು ತಗುಲಿದರೂ, ಇದರಿಂದ ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ, ಅವಘಡಗಳು ಉಂಟಾಗುವುದು ತಪ್ಪಲಿದೆ. ನಗರಗಳ ಸೌಂದರ್ಯ ವೃದ್ಧಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾಗಲಿದೆ. ಹಾಗಾಗಿ ಕಾಮಗಾರಿ ವೇಳೆ ಕೊಂಚ ತೊಂದರೆ ಉಂಟಾದರೂ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಮಾತನಾಡಿ, ಮೆಸ್ಕಾಂ ವ್ಯಾಪ್ತಿಯಲ್ಲಿ ಈಗಾಗಲೇ ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು ನಗರ ವ್ಯಾಪ್ತಿಯ ಕೆಲವೆಡೆ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಈವರೆಗೆ 1,055 ಕಿ.ಮೀ. ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸಲಾಗಿದೆ. ನೆಲದಡಿ 1.50 ಮೀಟರ್ ಆಳ ಮತ್ತು ಅರ್ಧ ಮೀಟರ್ ಅಗಲದಲ್ಲಿ ಈ ಕೇಬಲ್ ಅಳವಡಿಸಲಾಗುವುದು ಎಂದು ತಿಳಿಸಿದರು. ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಇದ್ದರು.&lt;/p&gt;&lt;h2&gt;&lt;strong&gt;ಕಡಲ್ಕೊರೆತ ತಡೆಗೆ ಯೋಜನೆ&lt;/strong&gt;&lt;/h2&gt;&lt;p&gt;ಅವಿಭಜಿತ ದ.ಕ., ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸಲು ಎನ್&zwnj;ಐಟಿಕೆ ತಜ್ಞರು ವಿನ್ಯಾಸ ತಯಾರಿಸಿದ್ದರು. ಅದನ್ನು ಕಂದಾಯ ಇಲಾಖೆಯವರು ಪರಿಶೀಲನೆ ಮಾಡುತ್ತಿದ್ದಾರೆ. ಅಗತ್ಯ ಕಾಲಾವಕಾಶ ಪಡೆದು ವ್ಯವಸ್ಥಿತವಾದ ಶಾಶ್ವತ ಯೋಜನೆ ರೂಪಿಸಲು ಸೂಚಿಸಲಾಗಿದೆ. ಕಡಲ್ಕೊರೆತದ ಅಪಾಯದ ಸ್ಥಳಗಳಲ್ಲಿ ಈಗಾಗಲೇ ತಡೆಗೋಡೆ ರಚಿಸಲಾಗಿದ್ದು ಅಲ್ಲಿ ಈ ಬಾರಿ ಸಮಸ್ಯೆ ಉಂಟಾಗದು ಎಂದು ಸ್ಪೀಕರ್ ಯು.ಟಿ. ಖಾದರ್&zwnj; ತಿಳಿಸಿದರು.&lt;/p&gt;]]></content:encoded>
            <category>dakshina-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mangaluru-underground-electric-cable-project-ut-khader-update-gvd/articleshow-6of9ddz"/>
        </item>
        <item>
            <title><![CDATA[ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಪ್ರಕರಣ, ಆರೋಪಿ ತಿಂಗಳಿಗೆ 75,000 ರೂ ಪರಿಹಾರ ನೀಡಲು ಹೈಕೋರ್ಟ್ ಆದೇಶ]]></title>
            <link>https://kannada.asianetnews.com/state/puttur-krishna-j-rao-love-pregnancy-case-karnataka-hc-directs-75k-monthly-aid-refuses-to-quash-fir-gdp/articleshow-6vt6sb8</link>
            <guid isPermaLink="true">https://kannada.asianetnews.com/state/puttur-krishna-j-rao-love-pregnancy-case-karnataka-hc-directs-75k-monthly-aid-refuses-to-quash-fir-gdp/articleshow-6vt6sb8</guid>
            <pubDate>Fri, 24 Apr 2026 17:02:56 +0530</pubDate>
            <description><![CDATA[ಪುತ್ತೂರಿನಲ್ಲಿ ಯುವತಿಯನ್ನು ಪ್ರೀತಿಸಿ ವಂಚಿಸಿದ ಪ್ರಕರಣದಲ್ಲಿ, ಕರ್ನಾಟಕ ಹೈಕೋರ್ಟ್ ಆರೋಪಿ ಕೃಷ್ಣ ಜೆ. ರಾವ್&zwnj;ಗೆ ತಿಂಗಳಿಗೆ 75 ಸಾವಿರ ರೂಪಾಯಿ ಮಾಸಿಕ ಪರಿಹಾರ ಪಾವತಿಸಲು ಆದೇಶಿಸಿದೆ. ನ್ಯಾಯಾಲಯವು ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರಾಕರಿಸಿದ್ದು, ಸಂತ್ರಸ್ತೆ ಮತ್ತು ಮಗುವಿನ ಹಿತದೃಷ್ಟಿಯಿಂದ ಷರತ್ತುಬದ್ಧ ಮಧ್ಯಂತರ ತಡೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kdpwmgcd0j1fnavzw64fwag1,imgname-krishna-j-rao-1767073530253.jpg" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿರುವ ಪ್ರೀತಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ತಿಂಗಳಿಗೆ 75 ಸಾವಿರ ಮಾಸಿಕವಾಗಿ ಪಾವತಿಸಲು ಆದೇಶ ನೀಡಿದೆ.&lt;/p&gt;&lt;p&gt;ಈ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದ್ದು, ಪ್ರಕರಣಕ್ಕೆ ಸಂಪೂರ್ಣ ತಡೆ ನೀಡಲು ನಿರಾಕರಿಸಿದೆ. ಆದರೆ, ಕೆಲವು ಷರತ್ತುಗಳ ಮೇರೆಗೆ ಪ್ರಕರಣದ ಮುಂದಿನ ಕ್ರಮಗಳಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.&lt;/p&gt;&lt;h2&gt;ಮಗುವಿಗೆ ಈಗ 10 ತಿಂಗಳು&lt;/h2&gt;&lt;p&gt;ಸಹಪಾಠಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ. ಸಂತೃಸ್ತೆ ಈಗ ಸುಮಾರು 10 ತಿಂಗಳ ಮಗುವಿಗೂ ಜನ್ಮ ನೀಡಿದ್ದು, ಡಿಎನ್&zwnj;ಎ ಪರೀಕ್ಷೆಯಲ್ಲಿ ಕೃಷ್ಣ ಜೆ. ರಾವ್ ಮಗುವೆಂದು ದೃಢಪಟ್ಟಿದೆ . ಈ ಹಿನ್ನೆಲೆಯಲ್ಲಿ ಯುವತಿ ಮತ್ತು ಆಕೆಯ ಮಗುವಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಮಧ್ಯಂತರ ಪರಿಹಾರ ಕ್ರಮಗಳನ್ನು ಕೈಗೊಂಡಿದೆ.&lt;/p&gt;&lt;p&gt;ನ್ಯಾಯಾಲಯವು ಅರ್ಜಿದಾರ ಕೃಷ್ಣ ಜೆ. ರಾವ್ &amp;nbsp;ಸಂತ್ರಸ್ತೆ ಯುವತಿ ಹಾಗೂ ಮಗುವಿಗೆ ಪ್ರತಿ ತಿಂಗಳು ಒಟ್ಟು 75 ಸಾವಿರ ರೂಪಾಯಿ ಪಾವತಿಸಲು ಸೂಚಿಸಿದೆ. ಈ ಹಣವನ್ನು ಮುಂದಿನ ಆದೇಶ ಬರುವವರೆಗೂ ನಿಯಮಿತವಾಗಿ ಪಾವತಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. 10 ತಿಂಗಳ ಮಗು ಹಾಗೂ ತಾಯಿಯನ್ನು ಅನಾಥರನ್ನಾಗಿಸುವಂತಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ.&lt;/p&gt;&lt;h2&gt;ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದಂತೆ ನ್ಯಾಯಾಲಯ ಸೂಚನೆ&lt;/h2&gt;&lt;p&gt;ಇದರ ಜೊತೆಗೆ, ಪ್ರಕರಣದ ಬಗ್ಗೆ ಸಂತ್ರಸ್ತೆ ಯುವತಿ ಅಥವಾ ಆಕೆಯ ಸಂಬಂಧಿಕರು ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು ಎಂಬುದಾಗಿ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ನಿಯಂತ್ರಣ ವಿಧಿಸಲಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಪ್ರಕರಣವನ್ನು ಸಂಪೂರ್ಣವಾಗಿ ರದ್ದುಪಡಿಸುವ ಬೇಡಿಕೆಯನ್ನು ನ್ಯಾಯಾಲಯ ತಳ್ಳಿಹಾಕಿದರೂ, ಸಂತ್ರಸ್ತೆಯ ಹಿತಾಸಕ್ತಿಯನ್ನು ಕಾಪಾಡುವ ದೃಷ್ಠಿಯಿಂದ ಷರತ್ತಿನ ಮೇರೆಗೆ ಮಧ್ಯಂತರ ತಡೆ ನೀಡಿರುವುದು ಗಮನಾರ್ಹವಾಗಿದೆ.&amp;nbsp;&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/state/puttur-krishna-j-rao-love-pregnancy-case-karnataka-hc-directs-75k-monthly-aid-refuses-to-quash-fir-gdp/articleshow-6vt6sb8"/>
        </item>
        <item>
            <title><![CDATA[ಅಂಗನವಾಡಿ ಸಿಬ್ಬಂದಿಗಳಿಂದ ಯೋಜನೆಗಳು ಜನರನ್ನು ತಲುಪುತ್ತಿದೆ: ಸ್ಪೀಕರ್‌ ಯು.ಟಿ.ಖಾದರ್]]></title>
            <link>https://kannada.asianetnews.com/karnataka-districts/ut-khader-angnawadi-workers-icds-50-years-mangalore-event-gvd/articleshow-a8dywg7</link>
            <guid isPermaLink="true">https://kannada.asianetnews.com/karnataka-districts/ut-khader-angnawadi-workers-icds-50-years-mangalore-event-gvd/articleshow-a8dywg7</guid>
            <pubDate>Tue, 21 Apr 2026 17:56:05 +0530</pubDate>
            <description><![CDATA[&lt;p&gt;ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಅವಿರತ ಸೇವೆಯಿಂದ ಸರಕಾರದ ಯೋಜನೆಗಳು ಜನರಿಗೆ ತಲುಪುತ್ತಿದೆ. ನಿಮ್ಮ ಕೆಲಸವನ್ನು ಅಭಿನಂದಿಸುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h5xk1er728j97aq7whwc3ekr,imgname-khader.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಏ.21): &lt;/strong&gt;ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಅವಿರತ ಸೇವೆಯಿಂದ ಸರಕಾರದ ಯೋಜನೆಗಳು ಜನರಿಗೆ ತಲುಪುತ್ತಿದೆ. ನಿಮ್ಮ ಕೆಲಸವನ್ನು ಅಭಿನಂದಿಸುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಮಂಗಳೂರಿನ ಪುರಭವನದಲ್ಲಿ ನಡೆದ ಐ.ಸಿ.ಡಿ.ಎಸ್. 50ರ ಸುವರ್ಣ ಸಂಭ್ರಮ ಮತ್ತು ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.&lt;/p&gt;&lt;p&gt;ಸ್ವಸ್ಥ ಸಮಾಜ, ಬಲಿಷ್ಠ ದೇಶ ಕಟ್ಟುವಲ್ಲಿ ಅಂಗವಾಡಿಗಳು ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಇಂದು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಕಾಣದೇ ಇರಲು ಅಂಗನವಾಡಿ ಸಿಬ್ಬಂದಿಗಳು ಕಾರಣ. ಆರೋಗ್ಯವಂತ ತಾಯಿ, ಮಗು ನಿಮ್ಮ ಗುರಿಯಾಗಿದ್ದು, ಅಂಗನವಾಡಿಯವರು ಊರಿನ ಮನೆಗಳ ಸಹೋದರಿಯರಂತೆ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಸೇವೆಯಿಂದ ಕ್ರಾಂತಿಕಾರಿ ಬದಲಾವಣೆ ಆಗಿದೆ. ನೀವು ನಿರ್ವಹಿಸುವ ಕೆಲಸವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ ಎಂದರು.&lt;/p&gt;&lt;p&gt;&lt;strong&gt;ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮ: &lt;/strong&gt;ದಿನ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಬರಬೇಕಿತ್ತು. ಅನಿವಾರ್ಯ ಕಾರಣದಿಂದ ಅವರು ಬಂದಿಲ್ಲ. ಅಂಗನವಾಡಿ ಸಿಬ್ಬಂದಿಗಳ ಸಮಸ್ಯೆಗಳನ್ನು ಕೂತು ಚರ್ಚಿಸುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ನಿಮ್ಮನ್ನೆಲ್ಲ ಸೇರಿಸಿಕೊಂಡು ಅದ್ಧೂರಿ ಕಾರ್ಯಕ್ರಮ ಆಯೋಜಿಸುವ ಬಗ್ಗೆಯೂ ನನ್ನಲ್ಲಿ ತಿಳಿಸಿದ್ದಾರೆ ಎಂದು ಖಾದರ್ ಪ್ರಸ್ತಾಪಿಸಿದರು.&lt;/p&gt;&lt;h2&gt;&lt;strong&gt;ನಿಮ್ಮ ಬೇಡಿಕೆಗೆ ನನ್ನ ಸಹಕಾರ&lt;/strong&gt;&lt;/h2&gt;&lt;p&gt;ಅಂಗನವಾಡಿ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವಂತೆ, 2023ರ ಮೊದಲು ನಿವೃತ್ತಿಯಾದ ಕಾರ್ಯಕರ್ತೆ ಮತ್ತು ಸಹಾಯಕಿರಿಗೆ ಗ್ರಾಚುಟಿ ಒದಗಿಸುವಂತೆ ಸಂಘದ ವತಿಯಿಂದ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು. ನಿಮ್ಮೆಲ್ಲ ಬೇಡಿಕೆಗಳಿಗ ನನ್ನ ಸಹಕಾರ ಇದೆ ಎಂದು ಯು.ಟಿ.ಖಾದರ್ ತಿಳಿಸಿದರು.&lt;/p&gt;]]></content:encoded>
            <category>dakshina-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ut-khader-angnawadi-workers-icds-50-years-mangalore-event-gvd/articleshow-a8dywg7"/>
        </item>
        <item>
            <title><![CDATA[ಮಂಗಳೂರು-ಸುಬ್ರಹ್ಮಣ್ಯ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ರದ್ದಾಗಿದ್ದ ಪ್ಯಾಸೆಂಜರ್‌ ರೈಲು  ಮತ್ತೆ ಆರಂಭ]]></title>
            <link>https://kannada.asianetnews.com/karnataka-districts/mangaluru-subrahmanya-road-passenger-train-services-restored-revised-schedule-announced-gdp/articleshow-aglc24b</link>
            <guid isPermaLink="true">https://kannada.asianetnews.com/karnataka-districts/mangaluru-subrahmanya-road-passenger-train-services-restored-revised-schedule-announced-gdp/articleshow-aglc24b</guid>
            <pubDate>Thu, 16 Apr 2026 20:03:16 +0530</pubDate>
            <description><![CDATA[ನಿರ್ವಹಣಾ ಕಾಮಗಾರಿ ಹಿನ್ನೆಲೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಇದೀಗ ಮರುಸ್ಥಾಪಿಸಲಾಗಿದೆ. ರೈಲ್ವೆ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಕೆಲವು ರೈಲುಗಳ ವಿಳಂಬದ ಅವಧಿಯನ್ನು ಕಡಿಮೆ ಮಾಡಿದೆ ಮತ್ತು ಇತರ ರೈಲುಗಳ ಸಂಚಾರಕ್ಕೆ ಹೊಸ ದಿನಾಂಕಗಳನ್ನು ನಿಗದಿಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km4xsq1xkfvyypbsnr1ny7hr,imgname-mangaluru-subrahmanya-passenger-trains-1773986962493.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಸುಬ್ರಹ್ಮಣ್ಯ ರೋಡ್&zwnj;, ಎಡಮಂಗಲ ಮತ್ತು ನರಿಮೊಗರು ರೈಲು ಮಾರ್ಗಗಳ ನಡುವೆ ಹಳಿ ಹಾಗೂ ವಿದ್ಯುತ್ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಹಾಗೂ ಮರುನಿಗದಿಗೊಳಿಸಲಾಗಿದ್ದ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಇದೀಗ ಮರುಸ್ಥಾಪಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.&lt;/p&gt;&lt;p&gt;ಈ ಕುರಿತು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ ನೀಡಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ವೇಳಾಪಟ್ಟಿಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಯಾವ ರೈಲು?&lt;/h2&gt;&lt;p&gt;ಮೊದಲು ಜೂನ್&zwnj; 10ರಿಂದ 21ರವರೆಗೆ ರದ್ದುಪಡಿಸಲಾಗಿದ್ದ ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್&ndash;ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ಹಾಗೂ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್&ndash;ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲುಗಳು ಈಗ ಮರುಸ್ಥಾಪನೆಯಾಗಿದ್ದು, ನಿಗದಿತ ಮಾರ್ಗ ಮತ್ತು ಸಮಯದಂತೆ ಸಂಚರಿಸಲಿವೆ.&lt;/p&gt;&lt;p&gt;ಇನ್ನು ರೈಲು ಸಂಖ್ಯೆ 56229 ಮಂಗಳೂರು ಸೆಂಟ್ರಲ್&ndash;ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲಿಗೆ ಮೊದಲು ಏಪ್ರಿಲ್&zwnj; 21ರಿಂದ ಜೂನ್&zwnj; 9ರವರೆಗೆ 55 ನಿಮಿಷಗಳ ವಿಳಂಬ ಇರಲಿದೆ ಎಂದು ತಿಳಿಸಲಾಗಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್&zwnj; 16ರಿಂದ ಜೂನ್&zwnj; 4ರವರೆಗೆ ಆರಂಭವಾಗುವ ಪ್ರಯಾಣಗಳಲ್ಲಿ ಈ ರೈಲು ಕೇವಲ 35 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ. ಜೂನ್&zwnj; 5ರಿಂದ 9ರವರೆಗೆ ಉಳಿದ ದಿನಗಳಲ್ಲಿ ರೈಲು ತನ್ನ ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸುವುದಾಗಿ ತಿಳಿಸಲಾಗಿದೆ.&lt;/p&gt;&lt;h2&gt;ಮರುನಿಗದಿ ದಿನಾಂಕಗಳಲ್ಲಿಯೂ ಬದಲಾವಣೆ&lt;/h2&gt;&lt;p&gt;ಅದೇ ರೀತಿ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್&ndash;ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಮರುನಿಗದಿ ದಿನಾಂಕಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಏಪ್ರಿಲ್&zwnj; 16, 18, 21, 23, 25, 28, 30 ಹಾಗೂ ಮೇ 2, 5, 7, 9, 12, 14, 16, 19, 21, 23, 26, 28, 30 ಮತ್ತು ಜೂನ್&zwnj; 2 ಹಾಗೂ 4ರಂದು ಈ ರೈಲು 15 ನಿಮಿಷ ತಡವಾಗಿ ಸಂಚರಿಸಲಿದೆ. ಹಿಂದೆ ಸೂಚಿಸಲಾಗಿದ್ದಂತೆ ಜೂನ್&zwnj; 6 ಮತ್ತು 9ರಂದು ಈ ರೈಲುಗಳು ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾಗಿದ್ದ ಅಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಈ ಪರಿಷ್ಕರಣೆಗಳನ್ನು ಮಾಡಿದ್ದು, ಈಗ ಬಹುತೇಕ ಸೇವೆಗಳು ಮರುಸ್ಥಾಪನೆಯಾಗಿರುವುದರಿಂದ ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಲಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-subrahmanya-road-passenger-train-services-restored-revised-schedule-announced-gdp/articleshow-aglc24b"/>
        </item>
        <item>
            <title><![CDATA[ಮಂಗಳೂರಿನ ಹೋಟೆಲ್‌ಗೂ ಬಂತು ರೋಬೋ ವೈಟರ್: ಪಾಕಶಾಲದಲ್ಲಿ ಗ್ರಾಹಕರಿಗೆ ಹೊಸ ಅನುಭವ]]></title>
            <link>https://kannada.asianetnews.com/state/mangalore-robot-waiter-hotel-pakashala-ks-rao-road-gvd/articleshow-dlt1hw7</link>
            <guid isPermaLink="true">https://kannada.asianetnews.com/state/mangalore-robot-waiter-hotel-pakashala-ks-rao-road-gvd/articleshow-dlt1hw7</guid>
            <pubDate>Tue, 21 Apr 2026 17:46:42 +0530</pubDate>
            <description><![CDATA[&lt;p&gt;ಕರಾವಳಿ ಕರ್ನಾಟಕದ ಮೊದಲ ರೋಬೋ ವೈಟರ್ ಆಗಿದ್ದು, ಗ್ರಾಹಕರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮೂರು ಲಕ್ಷ ರು. ವೆಚ್ಚದ ಜಪಾನ್ ಮೂಲದ ರೋಟೋ ವೈಟರ್ ಸೆನ್ಸಾರ್ ಆಧಾರಿತವಾಗಿ ಕಾರ್ಯಾಚರಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpqzh00m95cch1da67hdkeba,imgname-jvk-1776773791764.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಏ.21): &lt;/strong&gt;ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಆಧಾರಿತ ಬದಲಾವಣೆಗಳ ಅನುಷ್ಠಾನ ಶೀಘ್ರಗತಿಯಲ್ಲಿ ಆಗುತ್ತಿದೆ. ಅದರಂತೆ ಕರಾವಳಿ ಕರ್ನಾಟಕದಲ್ಲೇ ಮೊದಲು ಎಂಬಂತೆ ಮಂಗಳೂರಿನ ಹೊಟೇಲೊಂದರಲ್ಲಿ ರೋಬೋ ವೈಟರ್ ಕಾರ್ಯಾಚರಿಸುತ್ತಿದೆ. ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯ &lsquo;ಪಾಕಶಾಲ&rsquo; ಹೆಸರಿನ ಹೋಟೆಲ್&zwnj;ನಲ್ಲಿ ರೋಬೋ ವೈಟರ್ (ಸಪ್ಲಯರ್) ಸೇವೆ ಪರಿಚಯಿಸಲಾಗಿದೆ.&lt;/p&gt;&lt;p&gt;ಇದು ಕರಾವಳಿ ಕರ್ನಾಟಕದ ಮೊದಲ ರೋಬೋ ವೈಟರ್ ಆಗಿದ್ದು, ಗ್ರಾಹಕರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮೂರು ಲಕ್ಷ ರು. ವೆಚ್ಚದ ಜಪಾನ್ ಮೂಲದ ರೋಟೋ ವೈಟರ್ ಸೆನ್ಸಾರ್ ಆಧಾರಿತವಾಗಿ ಕಾರ್ಯಾಚರಿಸುತ್ತದೆ. ಇದರಲ್ಲಿ ನಾಲ್ಕುರ್&zwj;ಯಾಕ್&zwnj; ಗಳಿದ್ದು, ಕಿರಿದಾದ ಚಕ್ರಗಳ ಸಹಾಯದಿಂದ ಚಲಿಸುತ್ತದೆ. ರೋಬೋ ಮುಂಭಾಗದಲ್ಲಿ ಸ್ಕ್ರೀನ್ ಇದ್ದು, ಅದರಲ್ಲಿ ಟೇಬಲ್ ವಿವರ ಇರುತ್ತದೆ. ಹೋಟೆಲ್&zwnj;ನಲ್ಲಿನ 35 ಟೇಬಲ್&zwnj;ಗಳಿಗೆ ರೂಟ್&zwnj; ಮಾರ್ಕ್, ಟೇಬಲ್&zwnj; ಮಾರ್ಕ್ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಏಕ ಕಾಲದಲ್ಲಿ ಗ್ರಾಹಕರಿಗೆ ಸಪ್ಲೈ&lt;/strong&gt;&lt;/h2&gt;&lt;p&gt;ಅದರಂತೆ ಯಾವ ಟೇಬಲ್&zwnj;ಗೆ ಆಹಾರ ಪದಾರ್ಥ ರವಾನೆಯಾಗಬೇಕು ಎಂಬುದನ್ನು ರೋಬೋಗೆ ಕ್ಲಿಕ್ಕಿಸಿದಲ್ಲಿ (ಸಂಖ್ಯೆ ಒತ್ತಿದರೆ) ಆ ಟೇಬಲ್&zwnj;ಗೆ ರೋಬೋ ತಿನಿಸನ್ನು ತಲುಪಿಸುತ್ತದೆ. ಇದರಲ್ಲಿ 15ರಿಂದ 20 ಊಟ/ತಿನಿಸುಗಳನ್ನು ಏಕ ಕಾಲದಲ್ಲಿ ಸಾಗಿಸಬಹುದು. ಗ್ರಾಹಕರಿಗೆ ಸಪ್ಲೈ ಮಾಡುವ ಆಹಾರವನ್ನು ರೋಬೋದ ರ್&zwj;ಯಾಕ್&zwnj;ನಲ್ಲಿ ಇಟ್ಟು, ಫುಡ್ ಮೋಡ್ ಅಥವಾ ಸೂಪ್ ಮೋಡ್&zwnj;ನಲ್ಲಿ ಕ್ಲಿಕ್ಕಿಸಿ ರವಾನಿಸಲಾಗುತ್ತದೆ.&lt;/p&gt;&lt;p&gt;ಸೂಪ್&zwnj; (ದ್ರವ ಪದಾರ್ಥ) ಮೋಡ್&zwnj;ನಲ್ಲಿ ರೋಬೋ ದ್ರವ ಪದಾರ್ಥ (ಜ್ಯೂಸ್) ಚೆಲ್ಲದಂತೆ ನಿಧಾನವಾಗಿ ಚಲಿಸುತ್ತದೆ. ಫುಡ್&zwnj; ಮೋಡ್&zwnj;ನಲ್ಲಿ ಸ್ವಲ್ಪ ವೇಗವಾಗಿ ಚಲಿಸುತ್ತದೆ. ಚಾಲನೆ ವೇಳೆ ಯಾರಾದರೂ ಅಡ್ಡ ಬಂದಲ್ಲಿ ಸ್ವಯಂ ಆಗಿ ಅದು ನಿಲ್ಲುತ್ತದೆ. 3 ಅಡಿ ಅಂತರ ಇದ್ದಲ್ಲಿ ಮಾತ್ರ ಚಾಲನಾ ಪ್ರಕ್ರಿಯೆಯಲ್ಲಿರುತ್ತದೆ. ಗ್ರಾಹಕರಿಗೆ ಆಹಾರ ಸಪ್ಲೈ ಮಾಡಿದ ಬಳಿಕ ನಿಗದಿತ ಜಾಗದಲ್ಲಿ ರೋಬೋ ಬಂದು ನಿಲ್ಲುತ್ತದೆ. ಇದರಲ್ಲಿ ಆಹಾರ ಇರಿಸಲು, ತೆಗೆಯಲು ಜನರ ಅಗತ್ಯ ಇರುತ್ತದೆ.&lt;/p&gt;&lt;p&gt;ದಿನಕ್ಕೆ ನಾಲ್ಕು ಗಂಟೆ ಚಾರ್ಜ್ ಮಾಡಿದರೆ. 10ರಿಂದ 12 ಗಂಟೆ ಕೆಲಸ ಮಾಡುತ್ತದೆ. ಇಲ್ಲಿ ಕಳೆದ ಮೂರು ತಿಂಗಳಿನಿಂದ ರೋಬೋ ವೈಟರ್ ಕಾರ್ಯಾಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಕ್ಲಿನಿಂಗ್ ವ್ಯವಸ್ಥೆಗೂ ರೋಬೋ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೋಟೆಲ್&zwnj;ನ ಮೆನೇಜರ್&zwnj; ಪ್ರವೀಣ್&zwnj; ತಿಳಿಸಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/state/mangalore-robot-waiter-hotel-pakashala-ks-rao-road-gvd/articleshow-dlt1hw7"/>
        </item>
        <item>
            <title><![CDATA[ಮಂಗಳೂರು ಕುಕ್ಕರ್ ಬ್ಲಾಸ್ಟ್: ಉಗ್ರ ಮೊಹಮ್ಮದ್ ಶಾರೀಖ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ, 94 ಸಾವಿರ ದಂಡ!]]></title>
            <link>https://kannada.asianetnews.com/state/mangaluru-cooker-blast-mohammed-shariq-sentenced-10-years-jail-nia-court-sat/articleshow-dy5g9zq</link>
            <guid isPermaLink="true">https://kannada.asianetnews.com/state/mangaluru-cooker-blast-mohammed-shariq-sentenced-10-years-jail-nia-court-sat/articleshow-dy5g9zq</guid>
            <pubDate>Mon, 27 Apr 2026 17:32:41 +0530</pubDate>
            <description><![CDATA[ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಖ್&zwnj;ಗೆ ಎನ್&zwnj;ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ ಶಾರೀಖ್, ಜೈಲು ಬದಲಾವಣೆಗೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq7d2zke4ctcpr84eg39p8qr,imgname-mangaluru-cooker-bomb-blast-1777291329134.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.27): ಇ&lt;/strong&gt;ಡೀ ರಾಜ್ಯವನ್ನೇ ನಡುಗಿಸಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಖ್&zwnj;ಗೆ ಎನ್ಐಎ (NIA) ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 94 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ವಿಶೇಷವೆಂದರೆ, ವಿಚಾರಣೆ ವೇಳೆ ಆರೋಪಿ ಮೊಹಮ್ಮದ್ ಶಾರೀಖ್ ತನ್ನ ಮೇಲಿನ ತಪ್ಪುಗಳನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದನು.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ತನಿಖೆಯ ವೇಳೆ ಉಗ್ರ ಶಾರೀಖ್ ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನವನ್ನು ಗುರಿಯಾಗಿಸಿಕೊಂಡು ಬಾಂಬ್ ಇಡಲು ಹೋಗುತ್ತಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಆದರೆ, ವಿಧಿಯಾಟ ಎಂಬಂತೆ ದೇವಸ್ಥಾನ ತಲುಪುವ ಮೊದಲೇ ಮಾರ್ಗಮಧ್ಯೆ ಆಟೋದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಇದರಿಂದ ದೊಡ್ಡ ಮಟ್ಟದ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿತ್ತು.&lt;/p&gt;&lt;h2&gt;&lt;strong&gt;ಗಾಯಗೊಂಡಿದ್ದ ಆಟೋ ಚಾಲಕ:&lt;/strong&gt;&lt;/h2&gt;&lt;p&gt;ಈ ಸ್ಫೋಟದಲ್ಲಿ ಆರೋಪಿ ಶಾರೀಖ್ ಸ್ವತಃ ಗಾಯಗೊಂಡಿದ್ದಲ್ಲದೆ, ಮುಗ್ಧ ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ಅವರು ತೀವ್ರವಾಗಿ ಗಾಯಗೊಂಡಿದ್ದರು. ಸುಮಾರು 3 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಶಾರೀಖ್&zwnj;ನನ್ನು ಎನ್ಐಎ ವಶಕ್ಕೆ ಪಡೆದಿತ್ತು. ಸುದೀರ್ಘ ತನಿಖೆ ನಡೆಸಿದ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.&lt;/p&gt;&lt;h3&gt;&lt;strong&gt;ಜೈಲು ಶಿಫ್ಟ್ ಮನವಿ ತಿರಸ್ಕರಿಸಿದ ನ್ಯಾಯಾಧೀಶರು:&lt;/strong&gt;&lt;/h3&gt;&lt;p&gt;ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಶಾರೀಖ್ ನ್ಯಾಯಾಧೀಶರ ಮುಂದೆ ವಿಚಿತ್ರ ಮನವಿಯೊಂದನ್ನು ಸಲ್ಲಿಸಿದ್ದನು. 'ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದೇನೆ, ಆರೋಗ್ಯ ಸರಿ ಇಲ್ಲದ ಕಾರಣ ಔಷಧಿಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತಿದೆ. ದಯವಿಟ್ಟು ನನ್ನನ್ನು ಬೆಂಗಳೂರಿನಿಂದ ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಿ' ಎಂದು ಕೋರಿದ್ದನು.&lt;/p&gt;&lt;p&gt;ಆದರೆ ಈ ಮನವಿಯನ್ನು ಕಡಾಖಂಡಿತವಾಗಿ ತಿರಸ್ಕರಿಸಿದ ನ್ಯಾಯಾಧೀಶರು, 'ಬೆಂಗಳೂರಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳು ಲಭ್ಯವಿವೆ. ಶಿವಮೊಗ್ಗಕ್ಕಿಂತ ಇಲ್ಲಿಯೇ ಚಿಕಿತ್ಸೆ ಉತ್ತಮವಾಗಿದೆ' ಎಂದು ಕಿವಿಮಾತು ಹೇಳಿ ಮನವಿಯನ್ನು ವಜಾಗೊಳಿಸಿದರು. ಶಾರೀಖ್ ವಿರುದ್ಧ ಕೇವಲ ಈ ಪ್ರಕರಣ ಮಾತ್ರವಲ್ಲದೆ, ಶಿವಮೊಗ್ಗದ ತುಂಗಾ ತೀರದಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್ ಪ್ರಕರಣದ ವಿಚಾರಣೆಯೂ ಬಾಕಿ ಇದೆ. ಸದ್ಯ ಎನ್ಐಎ ನ್ಯಾಯಾಲಯ ನೀಡಿರುವ ಈ ತೀರ್ಪು ಉಗ್ರ ಚಟುವಟಿಕೆಗಳಲ್ಲಿ ತೊಡಗುವವರಿಗೆ ಕಠಿಣ ಸಂದೇಶ ರವಾನಿಸಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/mangaluru-cooker-blast-mohammed-shariq-sentenced-10-years-jail-nia-court-sat/articleshow-dy5g9zq"/>
        </item>
        <item>
            <title><![CDATA[Mangaluru: ಪ್ರಯಾಣದ ವೇಳೆ ಹೆರಿಗೆ ನೋವು: ರೈಲಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ]]></title>
            <link>https://kannada.asianetnews.com/karnataka-districts/mangaluru-labor-pains-during-travel-woman-gives-birth-to-baby-boy-on-indian-railways-mrq/articleshow-e9pkg4p</link>
            <guid isPermaLink="true">https://kannada.asianetnews.com/karnataka-districts/mangaluru-labor-pains-during-travel-woman-gives-birth-to-baby-boy-on-indian-railways-mrq/articleshow-e9pkg4p</guid>
            <pubDate>Mon, 27 Apr 2026 05:35:51 +0530</pubDate>
            <description><![CDATA[&lt;p&gt;ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಪೊನ್ನಮ್ಮ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಬಿ.ಸಿ.ರೋಡ್ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ವೈದ್ಯರ ಸಹಾಯದಿಂದ ಬೋಗಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq6437r906z855scwkez518q,imgname-bantwal-1777248345865.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &amp;nbsp;&lt;/strong&gt;ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬಳಿಗೆ ಹೆರಿಗೆಯಾದ ಘಟನೆ ಬಿ.ಸಿ.ರೋಡಿನಲ್ಲಿ ಭಾನುವಾರ ರಾತ್ರಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡು ಬಳಿಕ ಬಿ.ಸಿ.ರೋಡಿನ ರೈಲು ನಿಲ್ದಾಣದಲ್ಲಿ ಬೋಗಿಯೊಳಗೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮೈಸೂರು ನಿವಾಸಿ ಪೊನ್ನಮ್ಮ ಮಗುವಿಗೆ ಜನ್ಮ ನೀಡಿದ ಮಹಿಳೆ.&amp;nbsp;&lt;/p&gt;&lt;h2&gt;&lt;strong&gt;ವೆನ್ಲಾಕ್ ಆಸ್ಪತ್ರೆಗೆ ದಾಖಲು&lt;/strong&gt;&lt;/h2&gt;&lt;p&gt;ಮಂಗಳೂರಿನಲ್ಲಿ ರೈಲು ಹತ್ತಿದ್ದ ಅವರಿಗೆ ಸ್ವಲ್ಪ ಹೊತ್ತಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಸಹ ಪ್ರಯಾಣಿಕರು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಇಲಾಖೆ ಬಿ.ಸಿ.ರೋಡಿನ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ಸ್ಥಳೀಯ ಸೋಮಯಾಜಿ ಆಸ್ಪತ್ರೆಯ ವೈದ್ಯರ ತಂಡವನ್ನು ಕರೆಸಿಕೊಂಡು ಬೋಗಿಯೊಳಗೆ ಹೆರಿಗೆಗೆ ವ್ಯವಸ್ಥೆ ಮಾಡಿಕೊಟ್ಟಿತು. ಹೆರಿಗೆ ಬಳಿಕ ತಾಯಿ, ಮಗುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು.&lt;/p&gt;&lt;p&gt;ಮಗು ಹಾಗೂ ತಾಯಿ ಆರೋಗ್ಯದಿಂದ ಇದ್ದರೂ ಕೂಡ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.&lt;/p&gt;&lt;p&gt;ಬಿಸಿರೋಡಿಗೆ 7.20ಕ್ಕೆ ಬಂದಿದ್ದ ರೈಲು ಸುಮಾರು ಒಂದು ತಾಸುಗಳ ಕಾಲ ಬಿಸಿರೋಡಿನ ನಿಲ್ದಾಣದಲ್ಲಿ ನಿಂತು, ಹೆರಿಗೆಯಾದ ಬಳಿಕ ಅಂದರೆ 8.20 ಕ್ಕೆ ಬಿಸಿರೋಡಿನಿಂದ ತೆರಳಿದೆ.&lt;/p&gt;&lt;h3&gt;&lt;strong&gt;ಸಮಯಕ್ಕೆ ಸರಿಯಾಗಿ ಬಂದ ವೈದ್ಯಕೀಯ ತಂಡ&lt;/strong&gt;&lt;/h3&gt;&lt;p&gt;ಬಸುರಿಯೋರ್ವಳ ಹೆರಿಗೆಗಾಗಿ ರೈಲು ನಿಲ್ದಾಣಕ್ಕೆ ವೈದ್ಯರ ತಂಡವನ್ನು ಕರೆದುಕೊಂಡು ಬರುವಂತೆ ಕಲ್ಲಡ್ಕ ದ ಸುಜ್ಞಾನ ಅಂಬ್ಯುಲೆನ್ಸ್ ವಾಹನದ ಚಾಲಕ ಲೋಕೇಶ್ ಅವರಿಗೆ ಪೋನ್ ಬಂದ ತಕ್ಷಣವೇ ಕೇವಲ ಮೂರು ನಿಮಿಷದಲ್ಲಿ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಯಿಂದ ವೈದ್ಯರನ್ನು ಕರೆಸಿಕೊಂಡು ರೈಲು ನಿಲ್ದಾಣಕ್ಕೆ ಬಂದಿದ್ದಾರೆ.&lt;/p&gt;&lt;p&gt;ವೈದ್ಯರು ಹೆರಿಗೆ ಮಾಡಿಸಿದ ಕೂಡಲೇ ಮಗುವನ್ನು ಸೋಮಯಾಜಿ ಆಸ್ಪತ್ರೆಗೆ ಸುಜ್ಞಾನ ಆಂಬ್ಯುಲೆನ್ಸ್ ವಾಹನದಲ್ಲಿ ಹಾಗೂ ತಾಯಿಯನ್ನು ಸೋಮಯಾಜಿ ಆಸ್ಪತ್ರೆಯ ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.&lt;/p&gt;&lt;p&gt;ಕೈಕಂಬದ ಸಮಾದ್ , ಬಂಟ್ವಾಳ ನಗರ ಠಾಣೆ ಪೊಲೀಸರು ಹಾಗೂ ಸಾರ್ವಜನಿಕರು ಮಹಿಳೆಯ ಹೆರಿಗಾಗಿ ಸಕಲ ವ್ಯವಸ್ಥೆಯನ್ನು ಮಾಡಿದ್ದಾರೆ. ಮಂಗಳೂರು ರೈಲ್ವೆ ಇಲಾಖೆಯ ಪೊಲೀಸರ ತಂಡ ಕೂಡ ಆಗಮಿಸಿದ್ದು, ಮಾಹಿತಿ ಸಂಗ್ರಹಿಸುತ್ತಿದೆ. ಪೊನ್ನಮ್ಮ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿ ಎಂದು ಹೇಳಲಾಗುತ್ತಿದ್ದರೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mangaluru-labor-pains-during-travel-woman-gives-birth-to-baby-boy-on-indian-railways-mrq/articleshow-e9pkg4p"/>
        </item>
        <item>
            <title><![CDATA[ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಸಮಗ್ರ ಅಭಿವೃದ್ಧಿ ಯೋಜನೆ: 340 ಕೋಟಿ ರೂ ಬದಲು 95 ಕೋಟಿ ರೂಗೆ ಇಳಿಕೆ!]]></title>
            <link>https://kannada.asianetnews.com/karnataka-districts/mangaluru-central-railway-station-redevelopment-cost-cut-to-rs-95-crore-from-rs-340-crore-gdp/articleshow-eih70oc</link>
            <guid isPermaLink="true">https://kannada.asianetnews.com/karnataka-districts/mangaluru-central-railway-station-redevelopment-cost-cut-to-rs-95-crore-from-rs-340-crore-gdp/articleshow-eih70oc</guid>
            <pubDate>Thu, 23 Apr 2026 17:56:38 +0530</pubDate>
            <description><![CDATA[ಮಂಗಳೂರು ಸೆಂಟ್ರಲ್&zwnj; ರೈಲು ನಿಲ್ದಾಣದ ಸಮಗ್ರ ಅಭಿವೃದ್ಧಿ ಯೋಜನೆಯ ವೆಚ್ಚವನ್ನು 340 ಕೋಟಿಯಿಂದ 95 ಕೋಟಿ ರೂಪಾಯಿಗಳಿಗೆ ಕಡಿತಗೊಳಿಸಲಾಗಿದೆ. ಈ ಹೊಸ ಯೋಜನೆಯಡಿ ಲಿಫ್ಟ್&zwnj;, ಎಸ್ಕಲೇಟರ್&zwnj; ಹಾಗೂ ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಲ್ಲದೆ, ನಗರದ ಇತರ ರೈಲ್ವೆ ಕಾಮಗಾರಿಗಳು ಮತ್ತು ಅಮೃತ್ ಭಾರತ್ ಯೋಜನೆಯಡಿ ಮಂಗಳೂರು ಜಂಕ್ಷನ್ ಅಭಿವೃದ್ಧಿ ಕೂಡ ಪೂರ್ಣಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpx4g5b0mkk3amr4tfx009s4,imgname-mangaluru-central-railway--1--1776946779488.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು ಸೆಂಟ್ರಲ್&zwnj; ರೈಲು ನಿಲ್ದಾಣದ ಸಮಗ್ರ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ಹೊರಬಿದ್ದಿದೆ. ಆರಂಭದಲ್ಲಿ 340 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ರೂಪಿಸಲಾದ ಅಭಿವೃದ್ಧಿ ಪ್ರಸ್ತಾವನೆಯನ್ನು ಈಗ 95 ಕೋಟಿ ರೂಪಾಯಿಗಳಿಗೆ ಸೀಮಿತಗೊಳಿಸಿ ಹೊಸ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;&lt;p&gt;ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್&zwnj;ನ ನೇತ್ರಾವತಿ ಸಭಾಂಗಣದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಪಾಲಕ್ಕಾಡ್ ವಿಭಾಗದ ರೈಲ್ವೆ ಅಧಿಕಾರಿಗಳು, ಈ ಹಿಂದೆ ರೂಪಿಸಿದ್ದ ಮಹತ್ವಾಕಾಂಕ್ಷಿ ಯೋಜನೆಯನ್ನು ರೈಲ್ವೆ ಮಂಡಳಿ ಮರುಪರಿಶೀಲನೆ ನಡೆಸಿ ವೆಚ್ಚವನ್ನು 100 ಕೋಟಿ ರೂಪಾಯಿಗಳೊಳಗೆ ಕಡಿತಗೊಳಿಸಿರುವುದಾಗಿ ತಿಳಿಸಿದರು. ಅಂತಿಮವಾಗಿ 95 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ದೊರೆತಿದೆ.&lt;/p&gt;&lt;h2&gt;ಹೊಸ ರೈಲು ನಿಲ್ದಾಣ ಸ್ಥಾಪನೆಯ ಸಾಧ್ಯತೆಗಳ ಕುರಿತು ಅಧ್ಯಯನ&lt;/h2&gt;&lt;p&gt;ಪ್ರಸ್ತುತ ಈ ಯೋಜನೆ ವಲಯ ಪ್ರಧಾನ ಕಚೇರಿಯಲ್ಲಿ ಅಂತಿಮ ಪರಿಶೀಲನೆಯಲ್ಲಿದ್ದು, ಎಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ (EPC) ಮಾದರಿಯಲ್ಲಿ ಕಾಮಗಾರಿಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಪುನರ್ ಅಭಿವೃದ್ಧಿ ಯೋಜನೆಯಡಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಲಿಫ್ಟ್&zwnj;ಗಳು, ಎಸ್ಕಲೇಟರ್&zwnj;ಗಳು, ಸುಧಾರಿತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಇತರ ಮೂಲಸೌಕರ್ಯಗಳನ್ನು ಒದಗಿಸುವ ಯೋಜನೆ ರೂಪಿಸಲಾಗಿದೆ.&lt;/p&gt;&lt;p&gt;ಇದಲ್ಲದೆ, ಪಡೀಲ್ ಮತ್ತು ಮಂಗಳೂರು ವಿಮಾನ ನಿಲ್ದಾಣದ ಸಮೀಪ ಹೊಸ ರೈಲು ನಿಲ್ದಾಣ ಸ್ಥಾಪನೆಯ ಸಾಧ್ಯತೆಗಳ ಕುರಿತು ಅಧ್ಯಯನ ನಡೆಯುತ್ತಿದೆ. ಈ ವಿಷಯವು ಡಿಎಂಆರ್ ಮತ್ತು ರೈಲ್ವೆ ಮಂಡಳಿ ನಡುವಿನ ಚರ್ಚೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.&lt;/p&gt;&lt;h2&gt;23 ಕೋಟಿ ರೂಪಾಯಿಗಳ ವೆಚ್ಚದ ಕೆಲವು ಕಾಮಗಾರಿಗಳಿಗೆ ಅನುಮೋದನೆ&lt;/h2&gt;&lt;p&gt;ಮಂಗಳೂರು ಸೆಂಟ್ರಲ್&zwnj; ರೈಲು ನಿಲ್ದಾಣದಲ್ಲಿ ಈಗಾಗಲೇ 23 ಕೋಟಿ ರೂಪಾಯಿಗಳ ವೆಚ್ಚದ ಕೆಲವು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಫ್ಲಾಟ್&zwnj;ಫಾರ್ಮ್ ಸಾಮರ್ಥ್ಯವನ್ನು 22 ಬೋಗಿಗಳಿಂದ 24 ಬೋಗಿಗಳವರೆಗೆ ವಿಸ್ತರಿಸುವ ಕೆಲಸ ಪ್ರಗತಿಯಲ್ಲಿದ್ದು, ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.&lt;/p&gt;&lt;p&gt;ನಗರದ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಪ್ರದೇಶದಲ್ಲಿ ರಸ್ತೆ ಅಗಲಿಕೆ ಕಾಮಗಾರಿಗೂ ಚುರುಕು ನೀಡಲಾಗಿದ್ದು, 2 ಪಥಗಳ ರಸ್ತೆಯನ್ನು 4 ಪಥಗಳಾಗಿ ವಿಸ್ತರಿಸಲು ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.&lt;/p&gt;&lt;p&gt;ಇನ್ನೊಂದೆಡೆ, ಮಂಗಳೂರು ರೈಲ್ವೆ ಜಂಕ್ಷನ್&zwnj;ನಲ್ಲಿ ಅಮೃತ್ ಭಾರತ್ ಸ್ಟೇಷನ್ ಅಭಿವೃದ್ಧಿ ಯೋಜನೆಯಡಿ 20 ಕೋಟಿ ರೂಪಾಯಿಗಳ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಫ್ಲಾಟ್&zwnj;ಫಾರ್ಮ್ ಶೆಲ್ಟರ್, ಪಾರ್ಕಿಂಗ್ ಪ್ರದೇಶ, ನವೀಕರಿಸಿದ ಸ್ಟೇಷನ್ ಕಟ್ಟಡ ಸೇರಿದಂತೆ ಹಲವು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ವಿವರಿಸಿದರು.&lt;/p&gt;&lt;p&gt;ಒಟ್ಟಾರೆ, ಮಂಗಳೂರು ನಗರದ ರೈಲು ಮೂಲಸೌಕರ್ಯವನ್ನು ಹಂತ ಹಂತವಾಗಿ ಸುಧಾರಿಸುವತ್ತ ಕ್ರಮಗಳು ಕೈಗೊಳ್ಳಲಾಗುತ್ತಿದ್ದು, ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಯೋಜನೆಗಳನ್ನು ರೂಪಿಸಲಾಗಿದೆ&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-central-railway-station-redevelopment-cost-cut-to-rs-95-crore-from-rs-340-crore-gdp/articleshow-eih70oc"/>
        </item>
        <item>
            <title><![CDATA[ರಾಜ್ಯದ 12 ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್': ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಸಾಧ್ಯತೆ!]]></title>
            <link>https://kannada.asianetnews.com/karnataka-districts/karnataka-weather-update-yellow-alert-12-districts-hailstorm-warning-imd-san/articleshow-eoax3kv</link>
            <guid isPermaLink="true">https://kannada.asianetnews.com/karnataka-districts/karnataka-weather-update-yellow-alert-12-districts-hailstorm-warning-imd-san/articleshow-eoax3kv</guid>
            <pubDate>Thu, 16 Apr 2026 19:23:32 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು (IMD) ಕರ್ನಾಟಕದ 12 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ 'ಎಲ್ಲೋ ಅಲರ್ಟ್' ಘೋಷಿಸಿದೆ. ಈ ಅವಧಿಯಲ್ಲಿ ಗುಡುಗು, ಮಿಂಚು, ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knds8w34zxderfy8e77w0egc,imgname-delhi-ncr-weather-alert-rain-hailstorm-thunderstorm-western-disturbance-imd-warning-wind-speed-storm-india-4-1775357948004.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.16): &lt;/strong&gt;ರಾಜ್ಯದ ಹಲವೆಡೆ ಮಳೆಯ ಅಬ್ಬರ ಜೋರಾಗಲಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಮೂರು ಗಂಟೆಗಳ ಕಾಲ 12 ಜಿಲ್ಲೆಗಳಲ್ಲಿ 'ಎಲ್ಲೋ ಅಲರ್ಟ್' ಘೋಷಿಸಿದೆ. ವಾತಾವರಣದಲ್ಲಿನ ದಿಢೀರ್ ಬದಲಾವಣೆಯಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ಅಲರ್ಟ್ ಘೋಷಿಸಲಾಗಿದೆ?&lt;/strong&gt;&lt;/h2&gt;&lt;p&gt;ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದಕ್ಷಿಣ ಕನ್ನಡ, ಬಾಗಲಕೋಟೆ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಈ ಎಚ್ಚರಿಕೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ಆಲಿಕಲ್ಲು ಮಳೆಯ ಮುನ್ನೆಚ್ಚರಿಕೆ&lt;/strong&gt;&lt;/h2&gt;&lt;p&gt;ಕೇವಲ ಸಾಧಾರಣ ಮಳೆಯಲ್ಲದೆ, ಗಾಳಿಯ ವೇಗ ಹೆಚ್ಚಿರಲಿದ್ದು ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆ ಸಂಭವಿಸುವ ಸಾಧ್ಯತೆಯಿದೆ. ಇದರಿಂದ ಕೃಷಿ ಭೂಮಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ. ಗುಡುಗು ಸಹಿತ ಮಳೆ ಬರುವಾಗ ಸಾರ್ವಜನಿಕರು ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಲಾಗಿದೆ. ಬಿರುಗಾಳಿಯ ತೀವ್ರತೆಗೆ ಹಳೆಯ ಕಟ್ಟಡಗಳು ಹಾಗೂ ದುರ್ಬಲ ಮರಗಳು ಉರುಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಲು ಜಿಲ್ಲಾಡಳಿತಗಳು ಸೂಚಿಸಿವೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-weather-update-yellow-alert-12-districts-hailstorm-warning-imd-san/articleshow-eoax3kv"/>
        </item>
        <item>
            <title><![CDATA['ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ]]></title>
            <link>https://kannada.asianetnews.com/education/alvas-education-revolution-in-costal-karnataka-founder-mohan-alvas-next-goal-videoshow-h0mcuo7</link>
            <guid isPermaLink="true">https://kannada.asianetnews.com/education/alvas-education-revolution-in-costal-karnataka-founder-mohan-alvas-next-goal-videoshow-h0mcuo7</guid>
            <pubDate>Sun, 19 Apr 2026 09:40:00 +0530</pubDate>
            <description><![CDATA[&lt;p&gt;ಡಾ. ಎಂ. ಮೋಹನ್ ಆಳ್ವರಿಂದ ಸ್ಥಾಪಿತವಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ರಾಂತಿಯನ್ನುಂಟುಮಾಡಿದೆ. 'ನುಡಿಸಿರಿ' ಮತ್ತು 'ವಿರಾಸತ್' ನಂತಹ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿರುವ ಈ ಸಂಸ್ಥೆಯ &amp;nbsp;ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ&lt;/p&gt;]]></description>
            <media:content url="https://geo.dailymotion.com/player/x1tbu.html?video=xa5x5h6" medium="video" height="768" width="1024"/>
            <content:encoded><![CDATA[&lt;p&gt;ಕರಾವಳಿ ಭಾಗದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಹೆಸರಾಗಿರುವ ಸಂಸ್ಥೆ ಮೋಹನ್ ಆಳ್ವಾ ಅವರ ಆಳ್ವಾಸ್ ಶಿಕ್ಷಣ ಸಂಸ್ಥೆ. ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಮಹತ್ವ ನೀಡುತ್ತಿರುವ ಸಂಸ್ಥೆಯೂ &amp;nbsp;ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಮುಂತಾದ ಕಾರ್ಯಕ್ರಮಗಳ ಮೂಲಕ ದೇಶದೆಲ್ಲೆಡೆ ಪ್ರಸಿದ್ಧಿ ಪಡೆದಿರುವುದು ಗೊತ್ತೇ ಇದೆ. ಈಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಆಳ್ವಾಸ್ ಸಂಸ್ಥೆ ಪ್ರಖ್ಯಾತಿ ಪಡೆದಿದೆ. &amp;nbsp;ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದು, ಈ ಶಿಕ್ಷಣ ಸಂಸ್ಥೆ ಅತ್ಯಾಧುನಿಕ ಸೌಲಭ್ಯ.. ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆಯನ್ನು ಹೊಂದಿದೆ. ಕಲೆ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್, ವೈದ್ಯಕೀಯ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, &amp;nbsp;ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಕರುನಾಡಿನ ಹೆಮ್ಮೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಡಾ. ಎಂ. ಮೋಹನ್ ಆಳ್ವಾರ ಮುಂದಿನ ಗುರಿ ಏನು? ಈ ವೀಡಿಯೋ ನೋಡಿ..&lt;/p&gt;]]></content:encoded>
            <category>dakshina-kannada</category>
            <dc:creator>Anusha Kb</dc:creator>
            <atom:link href="https://kannada.asianetnews.com/education/alvas-education-revolution-in-costal-karnataka-founder-mohan-alvas-next-goal-videoshow-h0mcuo7"/>
        </item>
        <item>
            <title><![CDATA[ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ 14 ಸಾವಿರ ದಾಟಿದ ವಿದ್ಯಾರ್ಥಿಗಳ ಸಂಖ್ಯೆ! ಈ ಬಾರಿ ಹೊಸ ದಾಖಲೆ]]></title>
            <link>https://kannada.asianetnews.com/education/karnataka-music-and-dance-exams-2026-14400-students-to-participate-across-30-centres-gdp/articleshow-h8fc8bq</link>
            <guid isPermaLink="true">https://kannada.asianetnews.com/education/karnataka-music-and-dance-exams-2026-14400-students-to-participate-across-30-centres-gdp/articleshow-h8fc8bq</guid>
            <pubDate>Mon, 20 Apr 2026 19:03:37 +0530</pubDate>
            <description><![CDATA[ಡಾ.ಗಂಗೂಬಾಯಿ ಹಾನಗಲ್&zwnj; ವಿಶ್ವವಿದ್ಯಾಲಯವು ಈ ಬಾರಿ 14,400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ, ಮತ್ತು ತಾಳವಾದ್ಯ ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ಮೇ 10 ರಿಂದ 25ರ ವರೆಗೆ ರಾಜ್ಯದ 30 ಕೇಂದ್ರಗಳಲ್ಲಿ ಈ ಪರೀಕ್ಷೆಗಳು ನಡೆಯಲಿದ್ದು, ಇದು ಕಳೆದ ವರ್ಷಕ್ಕಿಂತ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯನ್ನು ಕಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpnh2cbgvy5sqkhft6htgq2p,imgname-karnataka-music-and-dance-1776691523952.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಆತ್ಮಭೂಷಣ್&zwnj;&lt;/p&gt;&lt;p&gt;ಮಂಗಳೂರು: ರಾಜ್ಯದ ಏಕೈಕ ಸಂಗೀತ, ನೃತ್ಯ, ಪ್ರದರ್ಶಕ ಕಲೆಗಳ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್&zwnj; ವಿಶ್ವವಿದ್ಯಾಲಯದಲ್ಲಿ ಈ ಬಾರಿ ಸಂಗೀತ, ನೃತ್ಯ, ತಾಳವಾದ್ಯ ವಾರ್ಷಿಕ ವಿಶೇಷ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 14 ಸಾವಿರ ದಾಟಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಈ ವಿವಿಗೆ ಹಸ್ತಾಂತರಗೊಂಡ ಬಳಿಕ ಇದು ಮೂರನೇ ವರ್ಷ ನಡೆಯುವ ಪರೀಕ್ಷೆಯಾಗಿದೆ.&lt;/p&gt;&lt;p&gt;ಈ ಬಾರಿ ಮೇ 10ರಿಂದ 25ರ ವರೆಗೆ ರಾಜ್ಯಾದ್ಯಂತ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳು ನಡೆಯಲಿದೆ. ರಾಜ್ಯದ 30 ಕೇಂದ್ರಗಳಲ್ಲಿ 14,400ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿರುವುದು ಗಮನಾರ್ಹ. ಅಂದರೆ ಕಳೆದ ಬಾರಿ 22 ಕೇಂದ್ರಗಳಲ್ಲಿ 12,500 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.&lt;/p&gt;&lt;h2&gt;ಬೆಂಗಳೂರಲ್ಲಿ ಗರಿಷ್ಠ ಸಂಖ್ಯೆ:&lt;/h2&gt;&lt;p&gt;ಬೆಂಗಳೂರು ವಿಭಾಗದಲ್ಲೇ ಗರಿಷ್ಠ 6,500 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅಲ್ಲಿ 8-10 ದಿನಗಳ ಕಾಲ ಪರೀಕ್ಷೆ ನಡೆಯಲಿದೆ. ಬಳಿಕ ಮೈಸೂರು ಹಾಗೂ ಮಂಗಳೂರು ವಿಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಮೈಸೂರಿನಲ್ಲಿ ಮಾತ್ರ ಮೇ 20 ರಿಂದ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಮೇ 10 ರಂದು ಏಕಕಾಲದಲ್ಲಿ ಸಂಗೀತ, ನೃತ್ಯ, ತಾಳವಾದ್ಯಗಳ ಪೈಕಿ ಜೂನಿಯರ್&zwnj;, ಸೀನಿಯರ್&zwnj;, ವಿದ್ವತ್&zwnj; ಪೂರ್ವ ಹಾಗೂ ವಿದ್ವತ್&zwnj; ಅಂತಿಮ ಥಿಯರಿ ಪರೀಕ್ಷೆಗಳು ರಾಜ್ಯಾದ್ಯಂತ ಒಂದೇ ದಿನ ನಡೆಯಲಿದೆ.&lt;/p&gt;&lt;h2&gt;ತಕ್ಷಣ ಮೌಲ್ಯಮಾಪನ:&lt;/h2&gt;&lt;p&gt;ಪ್ರಾಕ್ಟಿಕಲ್&zwnj; ಪರೀಕ್ಷೆಯ ಮೌಲ್ಯಮಾಪನ ಅಂದೇ ನಡೆಯಲಿದ್ದು, ಪರೀಕ್ಷೆ ಮುಗಿದಾಕ್ಷಣ ಅಂಕಗಳನ್ನು ಅಪ್&zwnj;ಲೋಡ್&zwnj; ಮಾಡಲಾಗುತ್ತದೆ. ಥಿಯರಿ ಪರೀಕ್ಷೆಗಳ ಮೌಲ್ಯಮಾಪನ ಆನ್&zwnj;ಲೈನ್&zwnj;ನಲ್ಲಿ ನಡೆಯಲಿದೆ. ಈ ಬಾರಿ 12 ಸಾವಿರ ವಿದ್ಯಾರ್ಥಿಗಳು ಜೂನಿಯರ್&zwnj; ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಜೂನಿಯರ್&zwnj; ಮತ್ತು ಸೀನಿಯರ್&zwnj; ವಿದ್ಯಾರ್ಥಿಗಳ ಥಿಯರಿ ಪರೀಕ್ಷೆಗಳ ಮೌಲ್ಯಮಾಪನ ಆನ್&zwnj;ಲೈನ್&zwnj; ಮೂಲಕ ನಡೆಯಲಿದೆ. ವಿದ್ವತ್&zwnj; ಪೂರ್ವ ಮತ್ತು ವಿದ್ವತ್ ಅಂತಿಮ ಥಿಯರಿ ಪರೀಕ್ಷೆಗಳ ಮೌಲ್ಯಮಾಪನ ಮೈಸೂರಿನಲ್ಲೇ ನಡೆಯಲಿದೆ. ಜೂನ್&zwnj; ಅಥವಾ ಜುಲೈ ಪ್ರಥಮ ವಾರದಲ್ಲಿ ಪರೀಕ್ಷಾ ಫಲಿತಾಂಶ ಹೊರಬೀಳುವ ನಿರೀಕ್ಷೆ ಹೊಂದಲಾಗಿದೆ.&lt;/p&gt;&lt;h2&gt;ಮುಂದಿನ ವರ್ಷ ಪಠ್ಯ ಸಿದ್ಧ:&lt;/h2&gt;&lt;p&gt;ನೃತ್ಯ ವಿಭಾಗದಲ್ಲಿ ಜೂನಿಯರ್&zwnj;, ಸೀನಿಯರ್&zwnj;, ವಿದ್ವತ್&zwnj; ಪೂರ್ವ ಮತ್ತು ವಿದ್ವತ್&zwnj; ಅಂತಿಮ ತರಗತಿಗಳ ಸಿಲೆಬಸ್&zwnj; ಈ ಹಿಂದೆಯೇ ಸಿದ್ಧಗೊಂಡಿದೆ. ಅದರ ಆಧಾರದಲ್ಲೇ ಪರೀಕ್ಷೆಗಳು ನಡೆಯುತ್ತಿವೆ. ಆದರೆ ಭರತನಾಟ್ಯ ಜೂನಿಯರ್&zwnj; ವಿಭಾಗಕ್ಕೆ ಸಂಬಂಧಿಸಿ ಪಠ್ಯ ಪುಸ್ತಕವನ್ನು ವಿವಿಯೇ ಹೊರತರಲಿದೆ. ಇದು ಮುಂದಿನ ವರ್ಷ ವಿದ್ಯಾರ್ಥಿ ಹಾಗೂ ಶಿಕ್ಷಕರ ಕೈ ಸೇರಲಿದೆ ಎಂದು ವಿವಿ ಮೂಲಗಳು ತಿಳಿಸಿವೆ.&lt;/p&gt;&lt;h2&gt;ಮಾನ್ಯತೆಯ ವಿವಿ ಅಂಕ ಪಟ್ಟಿ, ಉದ್ಯೋಗಕ್ಕೂ ಅನುಕೂಲ&lt;/h2&gt;&lt;p&gt;ಡಾ.ಗಂಗೂಬಾಯಿ ಹಾನಗಲ್&zwnj; ಸಂಗೀತ, ನೃತ್ಯ, ಪ್ರದರ್ಶಕ ಕಲೆಗಳ ವಿವಿ ಕಳೆದ ಎರಡು ವರ್ಷಗಳಿಂದ ಸಂಗೀತ, ನೃತ್ಯ, ತಾಳ ವಾದ್ಯಗಳ ವಿಶೇಷ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಕ್ಲಪ್ತ ಸಮಯದಲ್ಲಿ ಫಲಿತಾಂಶವನ್ನೂ ಪ್ರಕಟಿಸಿ ಎಲ್ಲರ ಮೆಚ್ಚುಗೆ ಪಡೆದಿದೆ. ಇದೇ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.&lt;/p&gt;&lt;p&gt;ಇದು ಸರ್ಕಾರದ ಅಂಗೀಕೃತ ವಿವಿ ಆಗಿರುವುದರಿಂದ ಇಲ್ಲಿ ನಡೆಸುವ ಪ್ರತಿಯೊಂದು ಪರೀಕ್ಷೆಯ ಅಂಕ ಪಟ್ಟಿಗೂ ಮಾನ್ಯತೆ ಇದೆ. ಇದು ವಿದ್ಯಾರ್ಥಿಗಳ ಉದ್ಯೋಗಕ್ಕೂ ಉಪಯುಕ್ತವಾಗಲಿದೆ. ಈ ನಡುವೆ ಕೆಲವು ಖಾಸಗಿ ಸಂಸ್ಥೆಗಳು ಕೂಡ ಈ ಹೆಸರಿನಲ್ಲಿ ಪರೀಕ್ಷೆಗಳನ್ನು ಸಂಘಟಿಸುತ್ತಿದ್ದು, ಅಂತಹ ಸಂಸ್ಥೆಗಳ ಮಾನ್ಯತೆಯನ್ನು ಪರಿಶೀಲಿಸದೆ ವಿದ್ಯಾರ್ಥಿಗಳು, ಪೋಷಕರು ಹಾಗೂ ನೃತ್ಯ ಶಿಕ್ಷಕರು ಮೋಸ ಹೋಗಬಾರದು ಎನ್ನುತ್ತವೆ ವಿವಿ ಮೂಲಗಳು.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-music-and-dance-exams-2026-14400-students-to-participate-across-30-centres-gdp/articleshow-h8fc8bq"/>
        </item>
        <item>
            <title><![CDATA[ಜಮೀರ್  ನಮಗ್ಯಾಕೆ ಫಂಡಿಂಗ್ ಮಾಡ್ತಾನೆ?: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್ ಪ್ರಶ್ನೆ]]></title>
            <link>https://kannada.asianetnews.com/politics/why-would-zameer-ahmed-fund-us-sdpi-state-president-abdul-majeed-questions-allegations-rav/articleshow-tfnzkq9</link>
            <guid isPermaLink="true">https://kannada.asianetnews.com/politics/why-would-zameer-ahmed-fund-us-sdpi-state-president-abdul-majeed-questions-allegations-rav/articleshow-tfnzkq9</guid>
            <pubDate>Wed, 15 Apr 2026 08:46:08 +0530</pubDate>
            <description><![CDATA[&lt;p&gt;ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಪಕ್ಷಕ್ಕೆ ಫಂಡಿಂಗ್ ಮಾಡಿದ್ದಾರೆ ಎಂಬ ಆರೋಪವನ್ನು ಎಸ್&zwnj;ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್&zwnj; ಮಜೀದ್ ತಳ್ಳಿಹಾಕಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಕಾರಣ ಜನರು ಎಸ್&zwnj;ಡಿಪಿಐಗೆ ಮತ ಹಾಕಿದ್ದಾರೆ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp7hykg53xt8s3begjdy4qg1,imgname-----------------------2026-04-15t084105.413-1776222686724.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಏ.15):&lt;/strong&gt; ಸಚಿವ ಜಮೀರ್&zwnj; ಅಹ್ಮದ್&zwnj; ಖಾನ್&zwnj; ಒಂದು ರಾಜಕೀಯ ಪಕ್ಷದ ಮಂತ್ರಿ ಆಗಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಯಾಕೆ ಫಂಡಿಂಗ್&zwnj; ಮಾಡುತ್ತಾರೆ ಎಂದು ಎಸ್&zwnj;ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್&zwnj; ಮಜೀದ್&zwnj; ಪ್ರಶ್ನಿಸಿದ್ದಾರೆ.&amp;nbsp;&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಜೀದ್&zwnj;ಗೆ ಪತ್ರಕರ್ತರು ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಎಸ್&zwnj;ಡಿಪಿಐಗೆ ಸಚಿವ ಜಮೀರ್ ಫಂಡಿಂಗ್ ಮಾಡಿದ ಆರೋಪ&zwnj;ದ ಕುರಿತ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಕ್ರೌಡ್ ಫಂಡಿಂಗ್ ಮೂಲಕ ಚುನಾವಣೆ ಎದುರಿಸೋದು. ಜನ ನಮಗೆ ನೋಟು ಕೊಟ್ಟಿದ್ದಾರೆ, ಓಟು ಕೊಟ್ಟಿದ್ದಾರೆ. ವ್ಯಕ್ತಿಯೊಬ್ಬರಿಂದ ಫಂಡಿಂಗ್ ತೆಗೆದುಕೊಳ್ಳುವ ವ್ಯವಸ್ಥೆ ನಮ್ಮಲ್ಲಿಲ್ಲ&zwnj; ಎಂದರು.&lt;/p&gt;&lt;p&gt;ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ.38ರಷ್ಟು ಮುಸ್ಲಿಮ್&zwnj; ಜನಸಂಖ್ಯೆ ಇದ್ದು, ಮುಸ್ಲಿಮರಿಗೆ ಟಿಕೆಟ್&zwnj; ನೀಡುವ ಒತ್ತಾಯ ಕೇಳಿ ಬಂದಿದ್ದರೂ ಇತರ ಪಕ್ಷಗಳು ಅಲ್ಪಸಂಖ್ಯಾತರಿಗೆ ಟಿಕೆಟ್&zwnj; ನೀಡಿಲ್ಲ. ಆ ಕಾರಣಕ್ಕೆ ಕಾಂಗ್ರೆಸ್&zwnj; ವಿರುದ್ಧ, ಎಸ್&zwnj;ಡಿಪಿಐ ಪರವಾಗಿ ಜನರು ಮತ ಹಾಕಿದ್ದಾರೆ. ಕಾಂಗ್ರೆಸ್&zwnj;ಗೆ ಸೋಲಿನ ಭೀತಿ ಆವರಿಸಿದೆ ಎಂದು ಹೇಳಿದರು.&lt;/p&gt;&lt;p&gt;ರಾಜ್ಯ ಸರ್ಕಾರ ತಕ್ಷಣ ತಾಪಂ, ಜಿಪಂ ಚುನಾವಣೆ ನಡೆಸಬೇಕು. ಕೇಂದ್ರ ಸರ್ಕಾರ ಈ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ಅನುದಾನ ತರಲು ಸಾಧ್ಯವಾಗದ 28 ಸಂಸದರು ರಾಜ್ಯದ ಜನರ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/why-would-zameer-ahmed-fund-us-sdpi-state-president-abdul-majeed-questions-allegations-rav/articleshow-tfnzkq9"/>
        </item>
        <item>
            <title><![CDATA[ಎಸ್ಸೆಸ್ಸೆಲ್ಸಿ ಫಲಿತಾಂಶ:  ಕರಾವಳಿ ಜಿಲ್ಲೆಗಳ ಕಮಾಲ್, ಕಲಬುರಗಿ ಕೊನೆ ಸ್ಥಾನ, ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs</link>
            <guid isPermaLink="true">https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs</guid>
            <pubDate>Thu, 23 Apr 2026 13:06:30 +0530</pubDate>
            <description><![CDATA[2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 94.1ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಕಲಬುರಗಿ ಜಿಲ್ಲೆಯು ಸತತವಾಗಿ ಕಳಪೆ ಪ್ರದರ್ಶನ ನೀಡಿ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hxfab2pjfxnzca3pghha8m3x,imgname-tn-sslc-results.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ನೇ ಸಾಲಿನ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಒಟ್ಟಾರೆ ಉತ್ತೀರ್ಣ ಪ್ರಮಾಣವು ಶೇಕಡಾ 94.1 ಆಗಿದ್ದು, ಕಳೆದ ವರ್ಷಗಳಿಗಿಂತ ಉತ್ತಮ ಸಾಧನೆ ದಾಖಲಾಗಿದೆ. ವಿದ್ಯಾರ್ಥಿಗಳ ಸಾಧನೆ, ಜಿಲ್ಲಾವಾರು ಫಲಿತಾಂಶ ಮತ್ತು ಗ್ರಾಮೀಣ ಪ್ರದೇಶಗಳ ಮೇಲುಗೈ&mdash;allವು ಈ ಬಾರಿ ವಿಶೇಷ ಚರ್ಚೆಗೆ ಕಾರಣವಾಗಿವೆ.&lt;/p&gt;&lt;h2&gt;ಯಾರು ಲಾಸ್ಟ್? ಯಾರು ಫಸ್ಟ್?&lt;/h2&gt;&lt;p&gt;ಜಿಲ್ಲಾವಾರು ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಮತ್ತೆ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 98.40 ಉತ್ತೀರ್ಣತೆಯೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಲಬುರಗಿ ಕೊನೆಯ ಸ್ಥಾನ ಪಡೆದಿದೆ. ಕಳೆದ ಬಾರಿಯೂ ಕಲಬುರಗಿ ಕಲಬುರಗಿ ಕೊನೆಯ ಸ್ಥಾನ ಪಡೆದಿತ್ತು. 2025ರಲ್ಲಿ 56.89 ಬಂದಿತ್ತು. &amp;nbsp;ಈ ಬಾರಿ 28.17 ಶೇಕಡ ಏರಿಕೆಯನ್ನೂ ದಾಖಲಿಸಿದರೂ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಫಲಿತಾಂಶವನ್ನು ಉತ್ತಮಗೊಳಿಸುವ ಮಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ ಮಹತ್ವದ ಕಾರ್ಯಗಳನ್ನು ಮಾಡಿತ್ತು.&lt;/p&gt;&lt;h2&gt;ಇಳಿಕೆಯತ್ತಲೇ ಸಾಗಿದ ಕಲಬುರಗಿ, ಏರಿಕೆ ಯಾವಾಗ?&lt;/h2&gt;&lt;p&gt;ಕಳೆದ ಬಾರಿಗಿಂತ ಈ ಬಾರಿ 28.17 ಶೇಕಡ ಏರಿಕೆಯನ್ನೂ ದಾಖಲಿಸಿದರೂ ಕೊನೆಯ ಸ್ಥಾನದಲ್ಲಿ ಇರುವ ಕಲಬುರಗಿ 2023 ನೇ ಸಾಲಿನಿಂದಲೇ &amp;nbsp;ಇಳಿಕೆಯತ್ತ ಫಲಿತಾಂಶವನ್ನು ದಾಖಲಿಸುತ್ತಲೇ ಬಂದಿದೆ. &amp;nbsp;2023ರಲ್ಲಿ 29ನೇ ಸ್ಥಾನದಲ್ಲಿತ್ತು, 2024ರಲ್ಲಿ 34ನೇ ಸ್ಥಾನ ಗಳಿಸಿತ್ತು. 2025ರಲ್ಲಿ 35ನೇ ಸ್ಥಾನ &amp;nbsp;ಪಡೆದು ಕೊನೆಯ ಸ್ಥಾನ ಪಡೆದಿತ್ತು. ಇದೀಗ ಈ ಸಾಲಿನಲ್ಲೂ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.&lt;/p&gt;&lt;h2&gt;ಜಿಲ್ಲಾವಾರು ಫಲಿತಾಂಶ ಹೀಗಿದೆ&lt;/h2&gt;&lt;p&gt;ದಕ್ಷಿಣ ಕನ್ನಡ 98.40&lt;/p&gt;&lt;p&gt;ಉಡುಪಿ 98.18&lt;/p&gt;&lt;p&gt;ಉತ್ತರ ಕನ್ನಡ 98.09&lt;/p&gt;&lt;p&gt;ಹಾಸನ 97.51&lt;/p&gt;&lt;p&gt;ಮಂಡ್ಯ 97.45&lt;/p&gt;&lt;p&gt;ಸಿರ್ಸಿ 97.21&lt;/p&gt;&lt;p&gt;ಹಾವೇರಿ 96.87&lt;/p&gt;&lt;p&gt;ಕೊಡಗು 96.70&lt;/p&gt;&lt;p&gt;ಶಿವಮೊಗ್ಗ 96.56&lt;/p&gt;&lt;p&gt;ವಿಜಯನಗರ 96.39&lt;/p&gt;&lt;p&gt;ಬೆಂಗಳೂರು ಗ್ರಾಮಾಂತರ 95.84&lt;/p&gt;&lt;p&gt;ಧಾರವಾಡ 95.59&lt;/p&gt;&lt;p&gt;ಕೋಲಾರ 95.50&lt;/p&gt;&lt;p&gt;ಬಾಗಲಕೋಟೆ 95.42&lt;/p&gt;&lt;p&gt;ಬೆಂಗಳೂರು ಉತ್ತರ 95.34&lt;/p&gt;&lt;p&gt;ಗದಗ 95.24&lt;/p&gt;&lt;p&gt;ಚಿಕ್ಕಮಗಳೂರು 94.99&lt;/p&gt;&lt;p&gt;ಬೆಳಗಾವಿ 94.75&lt;/p&gt;&lt;p&gt;ದಾವಣಗೆರೆ 94.64&lt;/p&gt;&lt;p&gt;ಮೈಸೂರು 94.50&lt;/p&gt;&lt;p&gt;ರಾಯಚೂರು 94.41&lt;/p&gt;&lt;p&gt;ವಿಜಯಪುರ 94.17&lt;/p&gt;&lt;p&gt;ಚಿಕ್ಕೋಡಿ 94.09&lt;/p&gt;&lt;p&gt;ಬಳ್ಳಾರಿ 93.36&lt;/p&gt;&lt;p&gt;ಕೊಪ್ಪಳ 93.10&lt;/p&gt;&lt;p&gt;ರಾಮನಗರ 92.83&lt;/p&gt;&lt;p&gt;ಚಿತ್ರದುರ್ಗ 92.25&lt;/p&gt;&lt;p&gt;ಬೀದರ 92.18&lt;/p&gt;&lt;p&gt;ತುಮಕೂರು 92.04&lt;/p&gt;&lt;p&gt;ಚಾಮರಾಜನಗರ 91.89&lt;/p&gt;&lt;p&gt;ಯಾದಗಿರಿ 91.89&lt;/p&gt;&lt;p&gt;ಬೆಂಗಳೂರು ದಕ್ಷಿಣ 91.65&lt;/p&gt;&lt;p&gt;ಚಿಕ್ಕಬಳ್ಳಾಪುರ 90.88&lt;/p&gt;&lt;p&gt;ಮಧುಗಿರಿ 90.26&lt;/p&gt;&lt;p&gt;ಕಲಬುರಗಿ 85.06&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs"/>
        </item>
        <item>
            <title><![CDATA[ಪುತ್ತೂರು ಮಹಾಲಿಂಗೇಶ್ವರ ಜಾತ್ರೆ: ಇಂದು, ನಾಳೆ ಮದ್ಯ ಮಾರಾಟ ನಿಷೇಧ, ಸಂಚಾರ ಬದಲಾವಣೆ]]></title>
            <link>https://kannada.asianetnews.com/karnataka-districts/puttur-mahalingeshwar-jatre-liquor-sale-ban-today-tomorrow-traffic-changes-parking-details-mrq/articleshow-voto5cb</link>
            <guid isPermaLink="true">https://kannada.asianetnews.com/karnataka-districts/puttur-mahalingeshwar-jatre-liquor-sale-ban-today-tomorrow-traffic-changes-parking-details-mrq/articleshow-voto5cb</guid>
            <pubDate>Thu, 16 Apr 2026 08:52:57 +0530</pubDate>
            <description><![CDATA[&lt;p&gt;ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ, ಶಾಂತಿ ಸುವ್ಯವಸ್ಥೆ ಕಾಪಾಡಲು ಏ.17 ಮತ್ತು 18ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಏ.16 ಮತ್ತು 17ರಂದು ನಗರದಲ್ಲಿ ವಾಹನ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpa4t5vq08nm6q2gag9cp187,imgname-puttur-jatre-1776309573495.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪುತ್ತೂರು ನಗರ ಠಾಣೆ ವ್ಯಾಪ್ತಿಯಲ್ಲಿನ ಬಾರ್ ಮತ್ತು ವೈನ್ ಶಾಪ್&zwj;ಗಳನ್ನು ಏ.17ರಂದು ಬೆಳಗ್ಗೆ 6ರಿಂದ ಏ.18ರಂದು ಬೆಳಗ್ಗೆ 6 ಗಂಟೆವರೆಗೆ ಮುಚ್ಚಲು ಹಾಗೂ ಈ ಸಮಯದಲ್ಲಿ ಎಲ್ಲ ರೀತಿಯ ಅಮಲು ಪದಾರ್ಥಗಳ ಮಾರಾಟ ಮಾಡದಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿಸಿದ್ದಾರೆ.&lt;/p&gt;&lt;p&gt;ಏ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರದ ಆಗಮನದ ದಿನ ಮತ್ತು ಏ.17ರಂದು ಬ್ರಹ್ಮರಥೋತ್ಸವ ನಡೆಯಲಿರುವುದರಿಂದ ಪುತ್ತೂರು ನಗರ ವ್ಯಾಪ್ತಿಯಲಿ ಸಂಜೆ 4 ಗಂಟೆಯ ನಂತರ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿಸಿದ್ದಾರೆ.ಏ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳು ಮಾಮೂಲು ಪ್ರಕಾರ ಕಿರುವಾಳು ಬಪ್ಪಳಿಗೆಯಲ್ಲಿ ಬರುವಾಗ ಸಂಪ್ಯ ಕಡೆಯಿಂದ ಮಂಗಳೂರು- ಕಬಕ ಕಡೆಗೆ ಹೋಗುವ ವಾಹನಗಳು ಅಶ್ವಿನಿ ಜಂಕ್ಷನ್- ದರ್ಬೆ ಜಂಕ್ಷನ್-ಬೆದ್ರಾಳ- ಸಾಲ್ಮರ- ಪಡೀಲ್ ಮೂಲಕ ಸಂಚರಿಸಬೇಕು. ಮಂಗಳೂರು- ವಿಟ್ಲ- ಕಬಕ ಕಡೆಯಿಂದ ಬರುವ ವಾಹನಗಳು ಲಿನೆಟ್ ಜಂಕ್ಷನ್- ಬೊಳುವಾರು ಜಂಕ್ಷನ್- ಪಡೀಲ್- ಕೊಟೇಚಾ ಹಾಲ್ ಕ್ರಾಸ್- ಸಾಲ್ಮರ- ಎಪಿಎಂಸಿ- ದರ್ಬೆ- ಅಶ್ವಿನಿ ಜಂಕ್ಷನ್ ಮೂಲಕ ಸಂಚರಿಸಬೇಕು.&lt;/p&gt;&lt;h2&gt;&lt;strong&gt;ಬಸ್ ಮಾರ್ಗ ಬದಲಾವಣೆ:&lt;/strong&gt;&lt;/h2&gt;&lt;p&gt;ಬಸ್ ನಿಲ್ದಾಣದಿಂದ ಹೊರಡುವ ಎಲ್ಲ ಸಾರಿಗೆ ಬಸ್&zwj;ಗಳು ಎಂ.ಟಿ. ರಸ್ತೆಯ ಮೂಲಕ ತೆರಳಿ, ಮುಂದೆ ಎಡಕ್ಕೆ ತಿರುಗಿ, ಪರ್ಲಡ್ಕ ಬೈಪಾಸ್ ಮೂಲಕ ತೆರಳಬೇಕು. ಕಬಕ- ಮಂಗಳೂರು ಕಡೆಯಿಂದ ಬರುವ ಎಲ್ಲ ಸಾರಿಗೆ ಬಸ್&zwj;ಗಳು ಲಿನೆಟ್- ಬೊಳುವಾರು- ಪಡೀಲ್- ಕೊಟೆಚಾ ಹಾಲ್ ಕ್ರಾಸ್- ಸಾಲ್ಮರ- ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು. ಉಪ್ಪಿನಂಗಡಿ ಕಡೆಯಿಂದ ಬರುವ ಎಲ್ಲ ಸಾರಿಗೆ ಬಸ್&zwj;ಗಳು ಪಡೀಲ್- ಕೊಟೆಚಾ ಹಾಲ್ ಕ್ರಾಸ್- ಸಾಲ್ಮರ- ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು. ಸುಳ್ಯ- ಸಂಪ್ಯ- ಮಡಿಕೇರಿ ಕಡೆಯಿಂದ ಬರುವ ಎಲ್ಲ ಸಾರಿಗೆ ಬಸ್&zwj;ಗಳು ಅಶ್ವಿನಿ ಜಂಕ್ಷನ್- ದರ್ಬೆ- ಅರುಣಾ ಥಿಯೇಟರ್ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು.&lt;/p&gt;&lt;h3&gt;&lt;strong&gt;ಆಟೋ ಸಂಚರಿಸುವ ಮಾರ್ಗ:&lt;/strong&gt;&lt;/h3&gt;&lt;p&gt;ನೆಹರೂ ನಗರ- ಬೊಳುವಾರು ಕಡೆಯಿಂದ ಬರುವ ಆಟೋಗಳು ಮಯೂರ ಇನ್ ಲ್ಯಾಂಡ್ ಬಳಿ ಪ್ರಯಾಣಿಕರನ್ನು ಇಳಿಸಿ, ಉರ್ಲಾಂಡಿ ಕ್ರಾಸ್ ಮೂಲಕ ವಾಪಸ್&zwnj; ಸಂಚರಿಸಬೇಕು. ದರ್ಬೆ ಕಡೆಯಿಂದ ಬರುವ ಆಟೋರಿಕ್ಷಾಗಳು ಎಪಿಎಂಸಿ ರಸ್ತೆಯ ಮುಖಾಂತರ ನೆಲ್ಲಿಕಟ್ಟೆ ಕೆಎಸ್ಆರ್&zwnj;ಟಿಸಿ ಬಸ್ ನಿಲ್ದಾಣದ ಮುಂಭಾಗದಿಂದ ಗಾಂಧಿಕಟ್ಟೆ ಕಡೆಗೆ ಬಂದು ಪ್ರಯಾಣಿಕರನ್ನು ಇಳಿಸಿ, ವಾಪಸ್&zwnj; ಮುಖ್ಯ ರಸ್ತೆಯಾಗಿ ದರ್ಬೆ ಕಡೆಗೆ ಸಂಚರಿಸಬೇಕು. ಪರ್ಲಡ್ಕ- ಬಪ್ಪಳಿಗೆ ಕಡೆಯಿಂದ ಬರುವ ಆಟೋರಿಕ್ಷಾಗಳು ಕಿಲ್ಲೆ ಮೈದಾನದ ಬಳಿ ಪ್ರಯಾಣಿಕರನ್ನು ಇಳಿಸಿ ವಾಪಸ್&zwnj; ಸಂಚರಿಸಬೇಕು.&lt;/p&gt;&lt;h3&gt;&lt;strong&gt;ಭಕ್ತಾದಿಗಳ ವಾಹನಗಳ ಪಾರ್ಕಿಂಗ್:&lt;/strong&gt;&lt;/h3&gt;&lt;p&gt;ಉಪ್ಪಿನಂಗಡಿ, ಕೋಡಿಂಬಾಡಿ, ಬನ್ನೂರು ಮಾರ್ಗದಿಂದ ಬರುವ ವಾಹನಗಳನ್ನು ಎಪಿಎಂಸಿ ಆವರಣ, ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ ಮೈದಾನ, ಬಂಟರ ಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರೈಲು ಪ್ರಯಾಣಿಕರ ಗಮನಕ್ಕೆ, ಬರೋಬ್ಬರಿ 35 ದಿನಗಳ ಕಾಲ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ರದ್ದು!&lt;/strong&gt;&lt;/p&gt;&lt;p&gt;ಸಂಪ್ಯ, ಸುಳ್ಯ, ಬೆಟ್ಟಂಪಾಡಿ, ಪಾಣಾಜೆ, ಪರ್ಲಡ್ಡ, ಪುರುಷರಕಟ್ಟೆ ಮಾರ್ಗದಿಂದ ಬರುವ ವಾಹನಗಳನ್ನು ತೆಂಕಿಲ ಗೌಡ ಸಮುದಾಯ ಭವನ, ತೆಂಕಿಲ ವಿವೇಕಾನಂದ ಶಾಲಾ ಮೈದಾನ, ಕಿಲ್ಲೆ ಮೈದಾನ, ತೆಂಕಿಲ ಗೌಡ ಸಮುದಾಯ ಭವನದ ಎದುರುಗಡೆ ಇರುವ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು.&lt;/p&gt;&lt;p&gt;ವಿಟ್ಲ, ಕಬಕ, ನೆಹರೂ ನಗರ ಮಾರ್ಗದಿಂದ ಬರುವ ವಾಹನಗಳನ್ನು ಜೈನ ಭವನದ ಪಾರ್ಕಿಂಗ್ ಜಾಗ, ಅಸ್ಮಿ ಲಾಡ್ಜ್ ಬಳಿ ಇರುವ ಖಾಲಿ ಜಾಗ, ತೆಂಕಿಲ ದರ್ಶನ್ ಹಾಲ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಟೀಚಿಂಗ್ ಬಿಟ್ಟು ಮೀನು ಮಾರಾಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್, ದುಪ್ಪಟ್ಟು ಆದಾಯ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;19 ವರ್ಷದ ಭೂಮಿಕಾ ಎಂಬ ಯುವತಿ ನೇಣಿಗೆ ಶರಣಾಗಿದ್ದಾಳೆ. ಅನ್ಯಕೋಮಿನ ಯುವಕನ ಕಿರುಕುಳವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಹಿಂದೂ ಸಂಘಟನೆಗಳು ಇದನ್ನು ಲವ್ ಜಿಹಾದ್ ಎಂದು ಕರೆದಿವೆ#Bagalkote #Love #LoveJihad #Relationship https://t.co/VppfrXPevI&lt;/p&gt;&lt;p&gt;&mdash; Asianet Suvarna News (@AsianetNewsSN) April 16, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/puttur-mahalingeshwar-jatre-liquor-sale-ban-today-tomorrow-traffic-changes-parking-details-mrq/articleshow-voto5cb"/>
        </item>
    </channel>
</rss>
