<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 05 Aug 2026 08:26:06 +0530</lastBuildDate>
        <atom:link href="https://kannada.asianetnews.com/rss/dakshina-kannada" rel="self" type="application/rss+xml"/>
        <item>
            <title><![CDATA[ಮಂಗಳೂರು-ಬೆಂಗಳೂರು ರೈಲು: ಕೊನೆಗೂ ಹಳಿಗೆ ಮರಳಿದ ಸಂಚಾರ, ತಾತ್ಕಾಲಿಕ ವೇಗದ ನಿರ್ಬಂಧ]]></title>
            <link>https://kannada.asianetnews.com/karnataka-districts/mangaluru-bengaluru-rail-route-traffic-resumes-temporary-speed-restriction-of-10-kmph-mrq/articleshow-1eeruv0</link>
            <guid isPermaLink="true">https://kannada.asianetnews.com/karnataka-districts/mangaluru-bengaluru-rail-route-traffic-resumes-temporary-speed-restriction-of-10-kmph-mrq/articleshow-1eeruv0</guid>
            <pubDate>Tue, 04 Aug 2026 07:44:33 +0530</pubDate>
            <description><![CDATA[ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಸಿರಿಬಾಗಿಲು ನಡುವೆ ಮಣ್ಣು ಕುಸಿತದಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರವು, ತೆರವು ಕಾರ್ಯಾಚರಣೆ ಪೂರ್ಣಗೊಂಡ ನಂತರ ಪುನರಾರಂಭಗೊಂಡಿದೆ. ಸುರಕ್ಷತೆಗಾಗಿ ತಾತ್ಕಾಲಿಕ ವೇಗ ನಿರ್ಬಂಧ ವಿಧಿಸಲಾಗಿದೆ. ಇದೇ ವೇಳೆ, ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz58c67rr3hw34442hrz0fw4,imgname-indian-railways-1785809213688.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಮಂಗಳೂರು - ಬೆಂಗಳೂರು ರೈಲು ಮಾರ್ಗದ ಎಡಕುಮೇರಿ - ಸಿರಿಬಾಗಿಲು ನಡುವೆ ರೈಲು ಮಾರ್ಗಕ್ಕೆ ಮಣ್ಣು ಕುಸಿತ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಸೋಮವಾರ ರಾತ್ರಿ ಬಳಿಕ ರೈಲು ಸಂಚಾರ ಮರು ಆರಂಭಗೊಂಡಿದೆ.&lt;/p&gt;&lt;h2&gt;&lt;strong&gt;ಗಂಟೆಗೆ 10 ಕಿ.ಮೀ. ತಾತ್ಕಾಲಿಕ ವೇಗದ ನಿರ್ಬಂಧ&lt;/strong&gt;&lt;/h2&gt;&lt;p&gt;ದುರಸ್ತಿ ಕಾರ್ಯಾಚರಣೆ ಬಳಿಕ ರೈಲು ಮಾರ್ಗವನ್ನು ಸೋಮವಾರ ರಾತ್ರಿ ಸಂಚಾರಕ್ಕೆ ಸೂಕ್ತವಾಗಿದೆ ಎಂದು ಪ್ರಮಾಣೀಕರಿಸಲಾಯಿತು. ಘಟನಾ ಸ್ಥಳದಲ್ಲಿ ಸುರಕ್ಷತಾ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗಂಟೆಗೆ 10 ಕಿ.ಮೀ. ತಾತ್ಕಾಲಿಕ ವೇಗದ ನಿರ್ಬಂಧ ಜಾರಿಯಲ್ಲಿದೆ.&lt;/p&gt;&lt;p&gt;ರೈಲು ಸಂಚಾರದ ಸಾಮಾನ್ಯ ವೇಳಾಪಟ್ಟಿಗಳನ್ನು ಹಂತಹಂತವಾಗಿ ಮರು ಹೊಂದಿಸಲಾಗುತ್ತದೆ, ಕೆಲ ವಿಳಂಬಗಳು ಮುಂದುವರಿದು ಬಳಿಕ ಎಂದಿನಂತೆ ರೈಲು ಸೇವೆ ಮುಂದುವರಿಯಲಿದೆ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಪರೀಕ್ಷಾರ್ಥ ಎಂಜಿನ್ ಚಾಲನೆ&lt;/strong&gt;&lt;/h3&gt;&lt;p&gt;ದುರಸ್ತಿ ಕಾರ್ಯಾಚರಣೆ ಸ್ಥಳಕ್ಕೆ ಡಿಆರ್&zwnj;ಎಂ ಮುದಿತ್ ಮಿತ್ತಲ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿ ನಿರ್ದೇಶನಗಳನ್ನು ನೀಡಿದರು. ಕಾರ್ಯಾಚರಣೆ ಪೂರ್ಣವಾದ ಬಳಿಕ ಪರೀಕ್ಷಾರ್ಥ ಎಂಜಿನ್ ಓಡಿಸಲಾಯಿತು.&lt;/p&gt;&lt;h3&gt;&lt;strong&gt;ಇಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ&lt;/strong&gt;&lt;/h3&gt;&lt;p&gt;ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮಂಗಳವಾರ ದ.ಕ. ಹಾಗೂ ಉಡುಪಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ದ.ಕ. ಜಿಲ್ಲೆಯ ಮಂಗಳೂರು ಉಪ ವಿಭಾಗ ವ್ಯಾಪ್ತಿಯ ಮಂಗಳೂರು, ಬಂಟ್ವಾಳ, ಮೂಲ್ಕಿ, ಉಳ್ಳಾಲ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ (10ನೇ ತರಗತಿವರೆಗೆ) ಹಾಗೂ ಪುತ್ತೂರು ಉಪ ವಿಭಾಗ ವ್ಯಾಪ್ತಿಯ ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ (ದ್ವಿತೀಯ ಪಿಯುಸಿ ವರೆಗೆ) ಕಾಲೇಜಿಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ರಜೆ ಘೋಷಿಸಿದ್ದಾರೆ. ಈ ಆದೇಶ ಉಲ್ಲಂಘಿಸಿ ತರಗತಿ ನಡೆಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.&lt;/p&gt;&lt;p&gt;&lt;strong&gt;ಉಡುಪಿ ಜಿಲ್ಲೆಯಾದ್ಯಂತ ಮಳೆ&lt;/strong&gt;&lt;/p&gt;&lt;p&gt;ಉಡುಪಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು. ಇದೇ ಹವಾಮಾನ ಪರಿಸ್ಥಿತಿಯ ಮುಂದುವರಿಯುವ ಸೂಚನೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ ಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಎಲ್ಲಾ ಪದವಿ ಪೂರ್ವ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೊತ್ತರ ಪದವಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿರುವುದಿಲ್ಲ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mangaluru-bengaluru-rail-route-traffic-resumes-temporary-speed-restriction-of-10-kmph-mrq/articleshow-1eeruv0"/>
        </item>
        <item>
            <title><![CDATA[ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ, ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಜಿಲ್ಲಾಧಿಕಾರಿ]]></title>
            <link>https://kannada.asianetnews.com/karnataka-districts/dakshina-kannada-declares-school-college-holiday-tomorrow-due-to-heavy-rain/articleshow-2bg6y7i</link>
            <guid isPermaLink="true">https://kannada.asianetnews.com/karnataka-districts/dakshina-kannada-declares-school-college-holiday-tomorrow-due-to-heavy-rain/articleshow-2bg6y7i</guid>
            <pubDate>Fri, 24 Jul 2026 22:00:18 +0530</pubDate>
            <description><![CDATA[&lt;p&gt;ದಕ್ಷಿಣ ಕನ್ನಡದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಪರಿಣಾಮ ಕೆಲ ದಿನಗಳಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗುತ್ತಿದೆ. ಇದೀಗ ನಾಳೆಯೂ ಭಾರಿ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktgqqedqgydnprvbnmr8vpkv,imgname-karnataka-rain-red-alert--3--1780825700791.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಜು.24) &lt;/strong&gt;ಕರ್ನಾಟಕದಲ್ಲಿ ಈ ವರ್ಷ ಮಳೆ ಕೊರತೆ ತೀವ್ರ ಆತಂಕ ಸೃಷ್ಟಿಸಿದೆ. ಇದರ ನಡುವೆ ಅತೀ ಹೆಚ್ಚು ಮಳೆಯಾದ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಮುಂಚೂಣಿಯಲ್ಲಿದೆ. ಕಳೆದ ಕೆಲ ದಿನಗಳಿಂದ ದಕ್ಷಿಣ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿದೆ. ನಾಳೆಯೂ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ನಾಳೆ (ಜು.25) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ದಕ್ಷಿಣ ಕನ್ನಡದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡದ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ ಮಾಡಿ ದ.ಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಆದೇಶ ನೀಡಿದ್ದಾರೆ.&lt;/p&gt;&lt;h2&gt;ನಾಳೆಯೂ ಭಾರಿ ಮಳೆ ಅಲರ್ಟ್&lt;/h2&gt;&lt;p&gt;ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇತ್ತೀಚೆಗೆ ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಮರಬಿದ್ದು 6 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿತ್ತು. ಶಾಲಾ ತರಗತಿ ಮುಗಿಸಿ ವಿದ್ಯಾರ್ಥಿಗಳನ್ನು ಮನೆಗಳಿಗೆ ಕರೆದೊಯ್ಯುತ್ತಿದ್ದ ವೇಳೆ ಶಾಲಾ ಬಸ್ ಮೇಲೆ ಮರ ಬಿದ್ದಿತ್ತು. ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ಘಟನೆ ನಡೆದಿತ್ತು. ಗಾಯಾಳು ಮಕ್ಕಳನ್ನು ಸ್ಥಳೀಯರ ನೆರವಿನಿಂದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂತಹ ದುರ್ಘಟನೆಗಳು ನಡೆಯದಂತೆ ತಡೆಯಲು ಹಲವು ಸೂಚನೆಗಳನ್ನು ನೀಡಲಾಗಿದೆ. ಕೆಲೆವೆಡೆ ಭೂಕುಸಿತ ಆತಂಕಗಳು ನಿರ್ಮಾಣವಾಗಿದೆ. ಮಳೆಯಿಂದ ಮರಗಳು ಧರೆಗುರುಳುತ್ತಿದೆ.&lt;/p&gt;&lt;h2&gt;ಉಡುಪಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ&lt;/h2&gt;&lt;p&gt;ಉಡುಪಿಯಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ. ನಾಳೆಯೂ ಭಾರಿ ಮಳೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ (ಜುಲೈ 25) ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಯಿಂದ ಪಿಯುಸಿ ವರೆಗೆ ರಜೆ ಘೋಷಿಸಲಾಗಿದೆ. ಇದೇ ವೇಳೆ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>dakshina-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/dakshina-kannada-declares-school-college-holiday-tomorrow-due-to-heavy-rain/articleshow-2bg6y7i"/>
        </item>
        <item>
            <title><![CDATA[58 ವಿದ್ಯಾರ್ಥಿಗಳಿಗೆ 5 ಲಕ್ಷ ರು. ಸ್ಕಾಲರ್‌ಶಿಪ್ ವಿತರಣೆ; ಮಕ್ಕಳ ಕನಸಿಗೆ ಸಿಕ್ತು ಬಲ]]></title>
            <link>https://kannada.asianetnews.com/karnataka-districts/bantwal-rs-5-lakh-scholarships-for-58-students-in-bantwal-rotary-club-save-life-charitable-trust-bhadra-gas-agency-mrq/articleshow-2gmvuxf</link>
            <guid isPermaLink="true">https://kannada.asianetnews.com/karnataka-districts/bantwal-rs-5-lakh-scholarships-for-58-students-in-bantwal-rotary-club-save-life-charitable-trust-bhadra-gas-agency-mrq/articleshow-2gmvuxf</guid>
            <pubDate>Mon, 27 Jul 2026 20:36:13 +0530</pubDate>
            <description><![CDATA[&lt;p&gt;ರೋಟರಿ ಕ್ಲಬ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮತ್ತು ಭದ್ರಾ ಗ್ಯಾಸ್ ಏಜೆನ್ಸಿ ಸಹಯೋಗದಲ್ಲಿ 58 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ರೋಟರಿ ಕ್ಲಬ್&zwnj;ನ 58ನೇ ಹಾಗೂ ಭದ್ರಾ ಗ್ಯಾಸ್ ಏಜೆನ್ಸಿಯ 40ನೇ ವರ್ಷದ ಅಂಗವಾಗಿ ಒಟ್ಟು 5 ಲಕ್ಷ ರೂಪಾಯಿ ಮೊತ್ತದ ಸ್ಕಾಲರ್&zwnj;ಶಿಪ್ ನೀಡಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyj1dg0emvnd54wsbra5ev64,imgname-bantwal--1785164382222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಭದ್ರಾ ಗ್ಯಾಸ್ ಏಜೆನ್ಸಿ ಬಂಟ್ವಾಳ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಆಯ್ದ 58 ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್&zwnj;ಶಿಪ್ ವಿತರಣೆ ಕಾರ್ಯಕ್ರಮ ಭಾನುವಾರ ರೋಟರಿ ಸಭಾಂಗಣದಲ್ಲಿ ನಡೆಯಿತು.&lt;/p&gt;&lt;p&gt;ರೋಟರಿ ಕ್ಲಬ್ ಬಂಟ್ವಾಳದ 58ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಹಾಗೂ ಭದ್ರಾ ಗ್ಯಾಸ್ ಏಜೆನ್ಸಿ ಮಾಲೀಕ ಮಂಜುನಾಥ ಆಚಾರ್ಯ ಸಹಯೋಗ ನೀಡಿದರು. ಈ ಬಗ್ಗೆ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಮಾಹಿತಿ ನೀಡಿದರು.&lt;/p&gt;&lt;h2&gt;&lt;strong&gt;ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ&lt;/strong&gt;&lt;/h2&gt;&lt;p&gt;ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ವಿದ್ಯಾರ್ಥಿಗಳು ಹಿರಿಯರು, ಶಿಕ್ಷಕರು ಹಾಗೂ ಸೈನಿಕರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಭವಿಷ್ಯದಲ್ಲಿ ತಾವು ಪಡೆದ ಸಹಾಯಕ್ಕಿಂತ ಹತ್ತು ಪಟ್ಟು ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಂಫರ್ಟ್ ಝೋನ್&zwnj;ನಿಂದ ಹೊರಬಂದು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಜೀವನದ ಪ್ರತಿ ಕ್ಷಣವನ್ನು ಕಲಿಕೆಗೆ ಮೀಸಲಿಟ್ಟು ಗುರಿ ಸಾಧನೆಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಕ್ಕಳ ಅಡ್ಮೀಷನ್&zwnj; ಕ್ಯಾನ್ಸಲ್&zwnj; ಮಾಡಿದ ತಾಯಿಗೆ ರೀಫಂಡ್&zwnj; ನೀಡದ ಸ್ಕೂಲ್&zwnj;, ಭಾರೀ ದಂಡ ವಿಧಿಸಿದ ಕೋರ್ಟ್&zwnj;&lt;/strong&gt;&lt;/p&gt;&lt;h3&gt;&lt;strong&gt;5 ಲಕ್ಷ ರು. ಮೊತ್ತದ ಸ್ಕಾಲರ್&zwnj;ಶಿಪ್ ವಿತರಣೆ&lt;/strong&gt;&lt;/h3&gt;&lt;p&gt;ಭದ್ರಾ ಗ್ಯಾಸ್ ಏಜೆನ್ಸಿ ಮಾಲೀಕ ಹಾಗೂ ರೋಟರಿ ಕ್ಲಬ್&zwnj;ನ ಪೂರ್ವಾಧ್ಯಕ್ಷ ಮಂಜುನಾಥ ಆಚಾರ್ಯ ಮಾತನಾಡಿ, ಭದ್ರಾ ಗ್ಯಾಸ್ ಏಜೆನ್ಸಿಯ 40ನೇ ವರ್ಷದ ಅಂಗವಾಗಿ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಇಂಟರ್&zwj;ಯಾಕ್ಟ್ ಶಾಲೆಗಳ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಒಟ್ಟು 5 ಲಕ್ಷ ರು. ಮೊತ್ತದ ಸ್ಕಾಲರ್&zwnj;ಶಿಪ್ ವಿತರಿಸಲಾಗಿದೆ ಎಂದು ಹೇಳಿದರು.&lt;/p&gt;&lt;p&gt;ಮಧ್ವ ಆಚಾರ್ಯ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಕೃಷ್ಣ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್&zwnj;ನ ಭಾಗ್ಯಶ್ರೀ ಭಂಡಾರ್ಕರ್, ರೋಟರಿ ಕ್ಲಬ್ ಬಂಟ್ವಾಳ ಕಾರ್ಯದರ್ಶಿ ರವಿರಾಜ ಶೆಟ್ಟಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಐತಪ್ಪ ಪೂಜಾರಿ ವಂದಿಸಿದರು. ಸದಸ್ಯ ಅಹಮದ್ ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪರೀಕ್ಷಾ ಸುಧಾರಣೆಗೆ ಮೋದಿ ರಚಿಸಿದ ನೀಲೆಕಿಣಿ ನೇತೃತ್ವದ ಟಾಸ್ಕ್ ಫೋರ್ಸ್&zwnj;ನಲ್ಲಿ ಯಾರಿದ್ದಾರೆ?&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bantwal-rs-5-lakh-scholarships-for-58-students-in-bantwal-rotary-club-save-life-charitable-trust-bhadra-gas-agency-mrq/articleshow-2gmvuxf"/>
        </item>
        <item>
            <title><![CDATA[ಭಾರೀ ಮಳೆ ಮುನ್ಸೂಚನೆ: ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ!]]></title>
            <link>https://kannada.asianetnews.com/karnataka-districts/dakshina-kannada-heavy-rain-school-college-holiday-august-4-san/articleshow-3px7yr6</link>
            <guid isPermaLink="true">https://kannada.asianetnews.com/karnataka-districts/dakshina-kannada-heavy-rain-school-college-holiday-august-4-san/articleshow-3px7yr6</guid>
            <pubDate>Mon, 03 Aug 2026 21:51:57 +0530</pubDate>
            <description><![CDATA[&lt;p&gt;ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 4 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvhwrse23v1n9479bcp3xbjf,imgname-rains-1781938283970.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಆ.3): &lt;/strong&gt;ದಕ್ಷಿಣ ಕನ್ನಡ &amp;nbsp;ಹಾಗೂ ಉಡುಪಿ ಜಿಲ್ಲೆಯಾದ್ಯಂತ ನಾಳೆ (ಆಗಸ್ಟ್ 4) ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತಾಲೂಕುವಾರು ರಜೆಯನ್ನು ಹಂಚಿಕೆ ಮಾಡಲಾಗಿದ್ದು, ಮಂಗಳೂರು ಮತ್ತು ಪುತ್ತೂರು ಉಪವಿಭಾಗಗಳಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗಲಿವೆ.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ಎಷ್ಟು ರಜೆ? ಸಂಪೂರ್ಣ ವಿವರ ಇಲ್ಲಿದೆ&lt;/strong&gt;&lt;/h2&gt;&lt;p&gt;ಮಂಗಳೂರು ಉಪವಿಭಾಗ: ಮಂಗಳೂರು, ಉಳ್ಳಾಲ, ಮೂಡಬಿದಿರೆ, ಬಂಟ್ವಾಳ ಹಾಗೂ ಮುಲ್ಕಿ ತಾಲೂಕುಗಳಲ್ಲಿ ಅಂಗನವಾಡಿಯಿಂದ ಪ್ರೌಢಶಾಲೆ (ಹೈಸ್ಕೂಲ್) ವರೆಗೆ ಮಾತ್ರ ರಜೆ ನೀಡಲಾಗಿದೆ. (ಪದವಿಪೂರ್ವ ಕಾಲೇಜುಗಳಿಗೆ ರಜೆ ಇರುವುದಿಲ್ಲ).&lt;/p&gt;&lt;p&gt;ಪುತ್ತೂರು ಉಪವಿಭಾಗ: ಪುತ್ತೂರು, ಬೆಳ್ತಂಗಡಿ, ಕಡಬ ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಮಳೆಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಂಗನವಾಡಿಯಿಂದ ಹಿಡಿದು ಪಿಯುಸಿವರೆಗೂ ಸಂಪೂರ್ಣ ರಜೆ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಡಿಸಿ ದರ್ಶನ್ ಎಚ್.ವಿ. ಆದೇಶ&lt;/strong&gt;&lt;/h2&gt;&lt;p&gt;ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ಯಾವುದೇ ಅಪಾಯವಾಗದಂತೆ ತಡೆಯಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ನದಿ, ತೊರೆ ಹಾಗೂ ತಗ್ಗು ಪ್ರದೇಶಗಳಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.&lt;/p&gt;&lt;h2&gt;&lt;strong&gt;ಉಡುಪಿ ಜಿಲ್ಲೆಯ ಶಾಲೆಗಳಿಗೆ ರಜೆ&lt;/strong&gt;&lt;/h2&gt;&lt;p&gt;ಮಂಗಳವಾರ ವ್ಯಾಪಕ ಮಳೆ ಸಾಧ್ಯತೆ ಇರುವ ಹಿನ್ನಲೆಯಲ್ಲಿ, &amp;nbsp;ಉಡುಪಿ ಜಿಲ್ಲೆಯ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/dakshina-kannada-heavy-rain-school-college-holiday-august-4-san/articleshow-3px7yr6"/>
        </item>
        <item>
            <title><![CDATA[ಮಂಗಳೂರು-ಬೆಂಗಳೂರು ರೈಲ್ವೆ ಸಂಚಾರ ರದ್ದು, ಪೊಲೀಸ್‌ ಪರೀಕ್ಷೆ ತಪ್ಪಿಸಿಕೊಂಡ ಅಭ್ಯರ್ಥಿಗಳು, ಮತ್ತೆ ರೈಲು ಆರಂಭ ಯಾವಾಗ?]]></title>
            <link>https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu</link>
            <guid isPermaLink="true">https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu</guid>
            <pubDate>Mon, 03 Aug 2026 11:05:23 +0530</pubDate>
            <description><![CDATA[&lt;p&gt;ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಕಲೇಶಪುರ ಸಮೀಪದ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿ, ಬದಲಿ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ರೈಲ್ವೆ ಇಲಾಖೆ ಹಳಿ ದುರಸ್ತಿ ಕಾರ್ಯ ಕೈಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz31cs273a27mdbahsh3pqps,imgname-mangaluru-bengaluru-trains--1--1785734784068.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಬೆಟ್ಟಗಳ ಇಳಿಜಾರು ಭಾಗಗಳಲ್ಲಿ ಮಣ್ಣು ಸಡಿಲಗೊಂಡ ಪರಿಣಾಮ ಈ ಭೂಕುಸಿತ ಸಂಭವಿಸುತ್ತಿದೆ. ಸಕಲೇಶಪುರ ಸಮೀಪ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಸಿರಿಬಾಗಿಲು ನಡುವೆ ಶನಿವಾರ ರಾತ್ರಿ ರಾತ್ರಿ 9 ಗಂಟೆಗೆ ಮಣ್ಣು ಕುಸಿದಿದ್ದು, ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾಝಿಕ್ಕೋಡ್&zwnj;- ಬೆಂಗಳೂರು ರೈಲನ್ನು ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದಿಂದ ವಾಪಸ್&zwnj; ಕಳುಹಿಸಲಾದರೆ, ಮಂಗಳೂರಿಗೆ ತೆರಳುತ್ತಿದ್ದ ಕಾರವಾರ ಎಕ್ಸ್&zwnj;ಪ್ರೆಸ್&zwnj; ರೈಲನ್ನು ಹಾಸನ ರೈಲ್ವೆ ನಿಲ್ದಾಣದಿಂದ ಬದಲಿ ಮಾರ್ಗದಲ್ಲಿ ಕಳುಹಿಸಿಕೊಡಲಾಯಿತು. ಭೂಕುಸಿತದಿಂದ ಈ ಮಾರ್ಗದಲ್ಲಿ ಸಂಚರಿಸುವ ಏಳು ರೈಲುಗಳ ಸಂಚಾರವನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಇಲಾಖೆ ಅಧಿಕಾರಿಗಳು ಮೈಸೂರಿನಿಂದ ಇನ್ನೂರಕ್ಕೂ ಅಧಿಕ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿ ಮಧ್ಯರಾತ್ರಿಯಿಂದಲೆ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ ಘಟನಾ ಪ್ರದೇಶದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಸಮರೋಪಾಧಿ ಕಾರ್ಯಚರಣೆಗೆ ಅಡ್ಡಿಯಾಗಿದೆ.&lt;/p&gt;&lt;h2&gt;ಸಂಚಾರ ಪುನರಾರಂಭಕ್ಕೆ ಸಮಯ ಬೇಕು:&lt;/h2&gt;&lt;p&gt;ಹಳಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಾಂತ್ರಿಕ ತಂಡ ದೃಢಪಡಿಸಿದ ಬಳಿಕವೇ ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸಲು ಉದ್ದೇಶಿಸಿರುವ ಪ್ರಯಾಣಿಕರು ರೈಲುಗಳ ಸ್ಥಿತಿಗತಿ ಕುರಿತು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿಕೊಂಡು ಪ್ರಯಾಣ ಕೈಗೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಮಲೆನಾಡಿನಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆ ಪಶ್ಚಿಮ ಘಟ್ಟ ಪ್ರದೇಶದ ರೈಲ್ವೆ ಮಾರ್ಗಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.&lt;/p&gt;&lt;h2&gt;ತಪ್ಪಿದ ಬಾರೀ ಅನಾಹುತ&lt;/h2&gt;&lt;p&gt;ರೈಲು ಸಂಚಾರ ಆರಂಭಕ್ಕೂ ಮುನ್ನವೇ ಹಳಿ ಮೇಲೆ ಮಣ್ಣು ಕುಸಿದಿರುವುದು ಪತ್ತೆಯಾಗಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸುರಕ್ಷತಾ ದೃಷ್ಟಿಯಿಂದ ರೈಲ್ವೆ ಅಧಿಕಾರಿಗಳು ತಕ್ಷಣವೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ತಡೆದು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿದರು. ಭೂಕುಸಿತದ ಪರಿಣಾಮ ಬೆಂಗಳೂರು- ಮುರುಡೇಶ್ವರ, ಬೆಂಗಳೂರು- ಕೋಝಿಕೋಡ್ ಹಾಗೂ ವಿಜಯಪುರ- ಮಂಗಳೂರು ರೈಲುಗಳನ್ನು ಹಾಸನ ರೈಲು ನಿಲ್ದಾಣದಲ್ಲೇ ನಿಲ್ಲಿಸಲಾಯಿತು. ಬೆಂಗಳೂರು- ಕಾರವಾರ ಎಕ್ಸ್&zwnj;ಪ್ರೆಸ್ ರೈಲು ಸಕಲೇಶಪುರದಲ್ಲಿ ಸ್ಥಗಿತಗೊಂಡರೆ, ಮುರುಡೇಶ್ವರ- ಬೆಂಗಳೂರು ಹಾಗೂ ಮಂಗಳೂರು- ವಿಜಯಪುರ ರೈಲುಗಳನ್ನು ಸುಬ್ರಹ್ಮಣ್ಯ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಕೋಝಿಕೋಡ್- ಬೆಂಗಳೂರು ರೈಲು ಪುತ್ತೂರು ನಿಲ್ದಾಣದಲ್ಲಿ ನಿಂತಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರೆ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.&lt;/p&gt;&lt;h2&gt;ಪೊಲೀಸ್&zwnj; ಕಾನ್&zwnj;ಸ್ಟೇಬಲ್&zwnj; ನೇಮಕಾತಿ ಪರೀಕ್ಷೆಗೆ ಹೊರಟಿದ್ದವರಿಗೆ ಶಾಕ್&lt;/h2&gt;&lt;p&gt;ರಾಜ್ಯದಲ್ಲಿ ಭಾನುವಾರ ನಡೆದ ಸಿವಿಲ್&zwnj; ಪೊಲೀಸ್&zwnj; ಕಾನ್&zwnj;ಸ್ಟೇಬಲ್&zwnj; ನೇಮಕಾತಿ ಪರೀಕ್ಷೆಯಲ್ಲಿ ಕರಾವಳಿ ಸೇರಿ ಪಶ್ಚಿಮ ಘಟ್ಟದ ಭಾಗಗಳಿಂದ ಪರೀಕ್ಷೆ ಬರೆಯಲು ಬರಬೇಕಿದ್ದ ಹಲವು ಮಂದಿ ಬರಲಾಗದೆ ನಿರಾಸೆಗೊಂಡರು. ಕಾರಣ ರೈಲು ಸಂಚಾರ ಸಡನ್ ಸ್ಥಗಿತಗೊಂಡಿತು. ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದ ಅಭ್ಯರ್ಥಿಗಳ ರೈಲು ಸುಬ್ರಹ್ಮಣ್ಯ ರೋಡ್&zwnj;ನಲ್ಲಿ ರದ್ದುಗೊಂಡಿದ್ದು, ಅವರಿಗೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ. ಮಾನವೀಯ ನೆಲೆಯಲ್ಲಿ ರೈಲು ರದ್ದತಿಯಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಎಲ್ಲ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್&zwnj; ವೈರಲ್&zwnj; ಆಗಿದೆ.&lt;/p&gt;&lt;h2&gt;ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ:&lt;/h2&gt;&lt;p&gt;ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಹಾಗೂ ಪುತ್ತೂರು ರೈಲು ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ರಾತ್ರಿ ಪೂರ್ತಿ ಸಿಲುಕಿಕೊಂಡರು. ಹಲವರು ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದರೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸಿದರು. ನಡುರಾತ್ರಿ ವೇಳೆಯಲ್ಲೇ ಪ್ರಯಾಣ ಮುಂದುವರಿಸಲು ಟಿಕೆಟ್ ಹಣ ವಾಪಸ್ ಪಡೆದು ಬಸ್ ಸೇರಿದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಹುಡುಕುತ್ತಾ ಪ್ರಯಾಣಿಕರು ಲಗೇಜ್ ಹೊತ್ತು ಬಸ್ ನಿಲ್ದಾಣಗಳತ್ತ ತೆರಳಿದ ದೃಶ್ಯಗಳು ಕಂಡುಬಂದವು.&lt;/p&gt;&lt;h2&gt;ಪರ್ಯಾಯ ವ್ಯವಸ್ಥೆ ಬಗ್ಗೆ ಅಸಮಾಧಾನ&lt;/h2&gt;&lt;p&gt;ರೈಲುಗಳ ರದ್ದತಿ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿದರೂ, ತಕ್ಷಣದ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸದ ಹಿನ್ನೆಲೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ರೈಲು ನಿಲ್ದಾಣದಲ್ಲಿ ಟಿಕೆಟ್ ಹಣ ಮರುಪಾವತಿಗಾಗಿ ಉದ್ದ ಸಾಲುಗಳು ಕಂಡುಬಂದವು. ಹಲವು ಮಂದಿ ತಮ್ಮ ಪ್ರಯಾಣವನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವರು ಖಾಸಗಿ ವಾಹನ ಹಾಗೂ ಬಸ್&zwnj;ಗಳ ಮೊರೆ ಹೋಗಬೇಕಾಯಿತು. ಪ್ರಯಾಣಿಕರ ಅನುಕೂಲ್ಕಕಾಗಿ ಹಾಸನ, ಸುಬ್ರಹ್ಮಣ್ಯ ರೋಡ್&zwnj; ಮತ್ತು ಬಂಟ್ವಾಳ ರೈಲು ನಿಲ್ದಾಣಗಳಲ್ಲಿ ಅಡುಗೆ ವ್ಯವಸ್ಥೆ ಮಾಡಲಾಯಿತು. ಭೂಕುಸಿತ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ವಿಜಯಪುರ ಎಕ್ಸ್&zwnj;ಪ್ರೆಸ್&zwnj; ಪ್ರಯಾಣಿಕರಿಗೆ ಉಪಹಾರಗಳನ್ನು ಸರಬರಾಜು ಮಾಡಲಾಯಿತು.&lt;/p&gt;&lt;h2&gt;ಭಾನುವಾರ ರದ್ದಾದ ರೈಲು ಮತ್ತು ಬದಲಿ ಮಾರ್ಗ&lt;/h2&gt;&lt;ul&gt; &lt;li&gt;ಭಾನುವಾರದ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್&zwnj;ಪ್ರೆಸ್ ಪ್ರಯಾಣ, ರೈಲು ಸಂಖ್ಯೆ 16575 ಯಶವಂತಪುರ - ಮಂಗಳೂರು ಜಂಕ್ಷನ್ ಎಕ್ಸ್&zwnj;ಪ್ರೆಸ್ ಪ್ರಯಾಣ ರದ್ದುಗೊಳಿಸಲಾಯಿತು.&lt;/li&gt; &lt;li&gt;ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಎಸ್&zwnj;ಎಸ್&zwnj;ಎಸ್&zwnj; ಹುಬ್ಬಳ್ಳಿ - ಲೋಂಡಾ - ಕ್ಯಾಸಲ್ ರಾಕ್ - ಮಡಗಾಂವ್ - ಕಾರವಾರ - ತೋಕೂರು ಮೂಲಕ ಮಂಗಳೂರು ಜಂಕ್ಷನ್&zwnj;ಗೆ ಸಂಚಾರಕ್ಕೆ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್&zwnj;ಪ್ರೆಸ್&zwnj;ನ್ನು ಮಂಗಳೂರು ಜಂಕ್ಷನ್ - ತೋಕೂರು - ಕಾರವಾರ - ಮಡಗಾಂವ್ - ಕ್ಯಾಸಲ್ ರಾಕ್ - ಲೋಂಡಾ - ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ಮೂಲಕ ಸಂಚಾರಕ್ಕೆ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16586 ಮುರ್ಡೇಶ್ವರ - ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಮುರ್ಡೇಶ್ವರ - ತೋಕೂರು - ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೋದನೂರು - ಜೋಲಾರ್&zwnj;ಪೆಟ್ಟೈ - ಎಸ್&zwnj;ಎಂವಿಟಿ ಬೆಂಗಳೂರಿಗೆ ಸಂಚಾರ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16512 ಕೋಝಿಕ್ಕೋಡ್ - ಕೆಎಸ್ಆರ್ ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೊದನೂರು - ಜೋಲಾರ್ಪೆಟ್ಟೈ - ಎಸ್&zwnj;ಎಂವಿಟಿ ಬೆಂಗಳೂರಿಗೆ ಸಂಚಾರಕ್ಕೆ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ. 16511 ಕೆಎಸ್&zwnj;ಆರ್&zwnj; ಬೆಂಗಳೂರು - ಕೋಝಿಕೋಡ್ ಎಕ್ಸ್&zwnj;ಪ್ರೆಸ್&zwnj;ನ್ನು ಬೆಂಗಳೂರು ಎಸ್&zwnj;ಎಂವಿಬಿನಲ್ಲಿ ಪ್ರಯಾಣ ಆರಂಭಿಸಿ ಎಸ್&zwnj;ಎಂವಿಟಿ ಬೆಂಗಳೂರು ಜೋಲಾರ್&zwnj;ಪೇಟ್ಟೈ ಜಂಕ್ಷನ್ - ಪೊದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕೋಝಿಕ್ಕೋಡ್ - ಮಂಗಳೂರು ಸೆಂಟ್ರಲ್&zwnj;ಗೆ ಸಂಚಾರ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16585 ಎಸ್&zwnj;ಎಂವಿಟಿ ಬೆಂಗಳೂರು - ಮುರ್ಡೇಶ್ವರ ಎಕ್ಸ್&zwnj;ಪ್ರೆಸ್&zwnj;ನ್ನು ಎಸ್&zwnj;ಎಂವಿಟಿ ಬೆಂಗಳೂರು - ಓಮಲೂರು ಜಂಕ್ಷನ್ - ಪೋದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕಣ್ಣೂರು - ತೋಕೂರು - ಮುರ್ಡೇಶ್ವರಕ್ಕೆ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.&lt;/li&gt;&lt;/ul&gt;&lt;h2&gt;ಶನಿವಾರ ರದ್ದಾದ ರೈಲುಗಳು&lt;/h2&gt;&lt;ul&gt; &lt;li&gt;ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್&zwnj;- ವಿಜಯಪುರ ಎಕ್ಸ್&zwnj;ಪ್ರೆಸ್ ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ.&lt;/li&gt; &lt;li&gt;ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್&zwnj;ಎಂವಿಟಿ ಬೆಂಗಳುರು ಎಕ್ಸ್&zwnj;ಪ್ರೆಸ್&zwnj; ನ್ನು ರಾತ್ರಿ ಸಿರಿಬಾಗಿಲು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16512 ಕೋಝಿಕ್ಕೋಡ್&zwnj;-ಕೆಎಸ್&zwnj;ಆರ್&zwnj; ಬೆಂಗಳೂರು ಕಬಕ ಪುತ್ತೂರಿನಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ&lt;/li&gt; &lt;li&gt;ರೈಲು ಸಂಖ್ಯೆ 16596 ಕಾರವಾರ-ಕೆಎಸ್&zwnj;ಆರ್&zwnj; ಬೆಂಗಳೂರಿಗೆ ರಾತ್ರಿ ಬಾರ್ಕೂರಿನಿಂದ ಹೊರಟು ಸಂಚಾರ ವ್ಯತ್ಯಯವಾಯಿತು. ಅದನ್ನು ಮಂಗಳೂರು ಜಂಕ್ಷನ್&zwnj;, ಶೊರನೂರು ಜಂಕ್ಷನ್&zwnj;, ಪಾಲಕ್ಕಾಡ್&zwnj; ಜಂಕ್ಷನ್&zwnj;, ಇರೊಡೆ ಜಂಕ್ಷನ್&zwnj; ಮೂಲಕ ಕೆಎಸ್&zwnj;ಆರ್&zwnj; ಬೆಂಗಳೂರಿಗೆ ಮಾರ್ಗ ಬದಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16595 ಕೆಎಸ್&zwnj;ಆರ್&zwnj; ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj;ನ್ನು ಹಾಸನ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16585 ಎಸ್&zwnj;ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಹಾಸನ ತಲುಪಿದ್ದು, ಹಾಸನ-ಮುರುಡೇಶ್ವರ ಪ್ರಯಾಣ ಭಾಗಶಃ ರದ್ದು ಮಾಡಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16511 ಕೆಎಸ್&zwnj;ಆರ್&zwnj; ಬೆಂಗಳೂರು-ಕೋಝಿಕೋ ಎಕ್ಸ್&zwnj;ಪ್ರೆಸ್ ರೈಲು ಕೆಎಸ್&zwnj;ಆರ್ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ್ದು, ಹಾಸನದಲ್ಲಿ ಅಲ್ಪಾವಧಿಗೆ ಸಂಚಾರ ಕೊನೆಗೊಂಡಿತು.&lt;/li&gt; &lt;li&gt;ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್&zwnj;ಪ್ರೆಸ್ ಸಂಚಾರ ಹಾಸನದಲ್ಲಿ ಮುಕ್ತಾಯಗೊಂಡಿದೆ.&lt;/li&gt; &lt;li&gt;ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್ ಸುಬ್ರಹ್ಮಣ್ಯ ರೋಡ್&zwnj; ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ.&lt;/li&gt;&lt;/ul&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu"/>
        </item>
        <item>
            <title><![CDATA[ಹೈಕಮಾಂಡ್ ಸೂಚನೆ: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯಿಷಾ ಪಿ. ನೇಮಕ!]]></title>
            <link>https://kannada.asianetnews.com/karnataka-districts/mangaluru-ayesha-p-appointed-dakshina-kannada-district-youth-congress-secretary/articleshow-86wqar6</link>
            <guid isPermaLink="true">https://kannada.asianetnews.com/karnataka-districts/mangaluru-ayesha-p-appointed-dakshina-kannada-district-youth-congress-secretary/articleshow-86wqar6</guid>
            <pubDate>Mon, 27 Jul 2026 09:43:06 +0530</pubDate>
            <description><![CDATA[ಲೇಖಕಿ ಹಾಗೂ ಹೆಲ್ತ್ ಇನ್ಸ್&zwnj;ಪೆಕ್ಟರ್ ಆಗಿರುವ ಆಯಿಷಾ ಪಿ. ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್&zwnj;ನ ನೂತನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕೆಪಿವೈಸಿಸಿ ಅಧ್ಯಕ್ಷ ಮಂಜುನಾಥ್ ಎಚ್.ಎಸ್. ಅವರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದು, ಆಯಿಷಾ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಜವಾಬ್ದಾರಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kygw6etqck60gk8md8hp7bmm,imgname-ayesha-p-appointed-dakshina-kannada-congress-secretary-1785125354327.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಜು.27): ದ&lt;/strong&gt;ಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾಗಿ ಆಯಿಷಾ ಪಿ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.&lt;/p&gt;&lt;p&gt;ವೃತ್ತಿಯಲ್ಲಿ ಹೆಲ್ತ್ ಇನ್ಸ್&zwnj;ಪೆಕ್ಟರ್ ಹಾಗೂ ಲೇಖಕಿಯಾಗಿ ಗುರುತಿಸಿಕೊಂಡಿರುವ ಆಯಿಷಾ ಪಿ. ಅವರು, ಪತ್ರಕರ್ತ ಮತ್ತು ಟಿವಿ ನಿರೂಪಕ ಶಂಶೀರ್ ಬುಡೋಳಿ ಅವರ ಪತ್ನಿಯಾಗಿದ್ದಾರೆ. ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರ ಸೇವೆಯನ್ನು ಗುರುತಿಸಿ ಯುವ ಕಾಂಗ್ರೆಸ್&zwnj;ನಲ್ಲಿ ಪ್ರಮುಖ ಜವಾಬ್ದಾರಿಯನ್ನು ನೀಡಲಾಗಿದೆ.&lt;/p&gt;&lt;h2&gt;&lt;strong&gt;ಹೈಕಮಾಂಡ್ ಸೂಚನೆ&lt;/strong&gt;&lt;/h2&gt;&lt;p&gt;ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಇವರ ನಿರ್ದೇಶನದ ಮೇರೆಗೆ ಹಾಗೂ ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ನಿಗಮ್ ಭಂಡಾರಿ ಅವರ ಅನುಮೋದನೆಯೊಂದಿಗೆ, ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಕಮಿಟಿಯ (KPYCC) ಅಧ್ಯಕ್ಷ ಮಂಜುನಾಥ್ ಎಚ್.ಎಸ್. ಅವರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ.&lt;/p&gt;&lt;p&gt;ಆಯಿಷಾ ಅವರ ನೇಮಕಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಶುಭ ಹಾರೈಸಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mangaluru-ayesha-p-appointed-dakshina-kannada-district-youth-congress-secretary/articleshow-86wqar6"/>
        </item>
        <item>
            <title><![CDATA[ಬುರುಡೆ ಪ್ರಕರಣ: ಕೋಟಿಗೆ ಎಷ್ಟು ಸೊನ್ನೆ ಇದೆ ಎಂದೇ ಗೊತ್ತಿಲ್ಲ, ನನ್ನ ವಿರುದ್ಧದ ಷಡ್ಯಂತ್ರ ಬಯಲಾಗಿದೆ: ರಮಾ ನಾಗರಾಜ್!]]></title>
            <link>https://kannada.asianetnews.com/karnataka-districts/activist-rama-nagaraj-addressing-the-press-conference-in-chitradurga-regarding-the-saujanya-case-legal-victory-gdp/articleshow-8uggyha</link>
            <guid isPermaLink="true">https://kannada.asianetnews.com/karnataka-districts/activist-rama-nagaraj-addressing-the-press-conference-in-chitradurga-regarding-the-saujanya-case-legal-victory-gdp/articleshow-8uggyha</guid>
            <pubDate>Sat, 01 Aug 2026 15:53:47 +0530</pubDate>
            <description><![CDATA[ಸೌಜನ್ಯ ಪ್ರಕರಣದಲ್ಲಿ ವಿದೇಶಿ ಫಂಡಿಂಗ್ ಪಡೆದ ಸುಳ್ಳು ಆರೋಪ ಎದುರಿಸುತ್ತಿದ್ದ ಸಾಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್&zwnj; ಅವರಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಗ್ರಾಮಾಭಿವೃದ್ಧಿ ಸಂಘಗಳ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಈ ಆರೋಪ ಮಾಡಲಾಗಿತ್ತು ಎಂದ ಅವರು, ಸತ್ಯಕ್ಕಾಗಿ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyyd8kn2j50657jtfqpmc47d,imgname-activist-rama-nagaraj-1785579458210.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ: &lt;/strong&gt;ನಾವು ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವವರು. ನಾವು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ. ಸತ್ಯದ ಹಾದಿಯಲ್ಲಿ ನಡೆಯುವ ನಮಗೆ ಕಾನೂನಿನ ಮೇಲೆ ಅಪಾರ ಗೌರವವಿದ್ದು, ನ್ಯಾಯಾಲಯ ನಮಗೆ ಸೂಕ್ತ ನ್ಯಾಯ ಒದಗಿಸಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್&zwnj; ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿರೋಧಿಗಳ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ತಮ್ಮ ಮೇಲಾಗಿದ್ದ ಸುಳ್ಳು ದೂರುಗಳು ಹಾಗೂ ಕಾನೂನು ಹೋರಾಟದ ಹಾದಿಯನ್ನು ಸುದೀರ್ಘವಾಗಿ ಹಂಚಿಕೊಂಡರು.&lt;/p&gt;&lt;h2&gt;ಸುಖಾಸುಮ್ಮನೆ ಕೋಟಿಗಟ್ಟಲೆ ಫಂಡಿಂಗ್ ಆರೋಪ!&lt;/h2&gt;&lt;p&gt;ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಎಂಬಾತ ತಾನಾಗಿಯೇ ಬಂದು ಶರಣಾಗಿದ್ದ. ಆ ಬಳಿಕ ಆತ ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣವರ್ ಹಾಗೂ ನನ್ನನ್ನೂ ಒಳಗೊಂಡಂತೆ ಐದು ಜನರ ಮೇಲೆ ಕೋಟಿಗಟ್ಟಲೆ ವಿದೇಶಿ ಫಂಡಿಂಗ್ ಪಡೆಯುತ್ತಿದ್ದೇವೆ ಎಂದು ಸುಖಾಸುಮ್ಮನೆ ಸುಳ್ಳು ಆರೋಪ ಹೊರಿಸಿದ್ದ. ಅಷ್ಟೇ ಅಲ್ಲದೆ, ನನ್ನ ಬ್ಯಾಂಕ್ ಖಾತೆಯಿಂದ ಆತನ ಪತ್ನಿಯ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದೂ ಸುಳ್ಳು ಹೇಳಿದ್ದ. ಕೋಟಿಗೆ ಎಷ್ಟು ಸೊನ್ನೆ ಇರುತ್ತದೆ ಎಂಬುದೇ ನನಗೆ ಗೊತ್ತಿಲ್ಲ. ಅಂತಹದರಲ್ಲಿ ಈ ರೀತಿ ಆಧಾರರಹಿತ ಆರೋಪ ಮಾಡಿದಾಗ, ನಾನು ನ್ಯಾಯಾಲಯದಲ್ಲೇ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ ಎಂದು ಸವಾಲು ಹಾಕಿದ್ದೆ. ನಾನು ಯಾವುದೇ ತಪ್ಪು ಮಾಡದೇ ಇರುವುದರಿಂದ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ರಮಾ ನಾಗರಾಜ್ ಗುಡುಗಿದರು.&lt;/p&gt;&lt;h2&gt;ಗ್ರಾಮಾಭಿವೃದ್ಧಿ ಸಂಘಗಳ ದೌರ್ಜನ್ಯದ ವಿರುದ್ಧ ಧ್ವನಿ&lt;/h2&gt;&lt;p&gt;ಹಳ್ಳಿಗಳಲ್ಲಿ ನಡೆಯುತ್ತಿರುವ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದೇ ಈ ಎಲ್ಲಾ ಆರೋಪಗಳಿಗೆ ಕಾರಣ ಎಂದು ವಿವರಿಸಿದ ಅವರು, ಇಂದು ಹಳ್ಳಿ ಹಳ್ಳಿಗಳಲ್ಲಿ ಗ್ರಾಮಾಭಿವೃದ್ಧಿ ಸಂಘಗಳ ಹೆಸರಿನಲ್ಲಿ ಹೆಣ್ಣುಮಕ್ಕಳು ಬೀದಿಗೆ ಬರುವಂತಾಗಿದೆ. ಮಹಿಳೆಯರು ಕೇಳದಿದ್ದರೂ ಇವರೇ ಮನೆ ಬಾಗಿಲಿಗೆ ಹೋಗಿ ಸಾಲ ಕೊಟ್ಟು, ನಂತರ ಅದನ್ನು ವಸೂಲಿ ಮಾಡುವಾಗ ಅತಿಯಾದ ಮಾನಸಿಕ ಕಿರುಕುಳ (ಟಾರ್ಚರ್) ನೀಡುತ್ತಾರೆ. ಹೆಣ್ಣುಮಕ್ಕಳು ಇದುವರೆಗೆ ಕಟ್ಟಿರುವ ಉಳಿತಾಯದ ಹಣ ಎಷ್ಟು ಎಂಬುದನ್ನು ಕೇಳುವುದೇ ತಪ್ಪಾ? ಈ ದೌರ್ಜನ್ಯವನ್ನು ಪ್ರಶ್ನಿಸಿ, ಸಂತ್ರಸ್ತರ ಪರವಾಗಿ ನಾನು ಪೊಲೀಸ್ ದೂರು ಕೊಡಿಸಿದ್ದಕ್ಕೆ ಸುಮಾರು ೫೦ ಜನ ನನ್ನ ಮೇಲೆಯೇ ದಾಳಿ ಮಾಡಲು ಬಂದಿದ್ದರು ಎಂದು ಘಟನೆಯನ್ನು ನೆನಪಿಸಿಕೊಂಡರು.&lt;/p&gt;&lt;p&gt;&quot;ನಾವು ಕಾನೂನುಬದ್ಧವಾಗಿ ಹೋರಾಟಕ್ಕೆ ಇಳಿದಾಗ, ತಡೆದುಕೊಳ್ಳಲಾರದ ಸಂಘಟನೆಯ ಪ್ರಮುಖರು ಚಿನ್ನಯ್ಯನ ಹೆಗಲ ಮೇಲೆ ಬಂದೂಕಿಟ್ಟು ನಮ್ಮ ವಿರುದ್ಧ ಈ ರೀತಿಯ ಸುಳ್ಳು ಹೇಳಿಕೆಗಳನ್ನು ಕೊಡಿಸಿದರು. ಏಕಾಏಕಿ ಈ ಪ್ರಕರಣದಲ್ಲಿ ನನ್ನ ಹೆಸರನ್ನು ಮುನ್ನೆಲೆಗೆ ತರಲಾಯಿತು.&quot;&lt;/p&gt;&lt;h2&gt;ಸುಪ್ರೀಂ ಕೋರ್ಟ್&zwnj;ನಲ್ಲಿ ಜಯ; ಕಾನೂನಿಗೆ ಗೌರವ&lt;/h2&gt;&lt;p&gt;ಸುಳ್ಳು ಆರೋಪಗಳ ವಿರುದ್ಧ ಸುದೀರ್ಘ ಕಾನೂನು ಹೋರಾಟ ನಡೆಸಿದ ರಮಾ ನಾಗರಾಜ್ ಅವರಿಗೆ ನ್ಯಾಯಾಲಯದಲ್ಲಿ ದೊಡ್ಡ ಜಯ ಸಿಕ್ಕಿದೆ. ಈ ಬಗ್ಗೆ ಸಂತಸ ಹಂಚಿಕೊಂಡ ಅವರು, ನಮ್ಮ ನಿರಂತರ ಹೋರಾಟಕ್ಕೆ ನ್ಯಾಯ ಸಿಕ್ಕಿದ್ದು, ನಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ನ್ಯಾಯಾಲಯ ನಮ್ಮನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ. ನನ್ನ ತಂದೆಯೂ ಒಬ್ಬ ನ್ಯಾಯಾಧೀಶರಾಗಿದ್ದರು. ಅವರ ಮಗಳಾಗಿ ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸದಾ ಪರಮ ಗೌರವವಿದೆ. ಸುಪ್ರೀಂ ಕೋರ್ಟ್&zwnj;ನಲ್ಲಿ ನನ್ನ ಪರವಾಗಿ ಹಿರಿಯ ವಕೀಲರಾದ ಬಾಲನ್ ಅವರು ಹಾಗೂ ಬೃಂದಾ ಅವರ ತಂಡ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿತ್ತು. ಇವರೆಲ್ಲರ ಅವಿರತ ಶ್ರಮದಿಂದ ನಮಗೆ ಇಂದು ಜಯ ಸಿಕ್ಕಿದೆ. ತಪ್ಪು ಮಾಡದವರಿಗೆ ಎಂದಿಗೂ ಕೆಟ್ಟದ್ದಾಗುವುದಿಲ್ಲ ಎಂಬುದಕ್ಕೆ ಈ ತೀರ್ಪೇ ಸಾಕ್ಷಿ ಎಂದರು.&lt;/p&gt;&lt;h2&gt;ಹೆಣ್ಣುಮಕ್ಕಳು ಹೋರಾಟಕ್ಕೆ ಇಳಿದರೆ ಹಿಂದೆ ಸರಿಯಲ್ಲ!&lt;/h2&gt;&lt;p&gt;ಕೊನೆಯದಾಗಿ ಎಚ್ಚರಿಕೆಯ ಸಂದೇಶ ನೀಡಿದ ಅವರು, ಯಾರಾದರೂ ನನ್ನ ತಂಟೆಗೆ ಬಂದರೆ ಅಥವಾ ಸತ್ಯದ ಹಾದಿಯನ್ನು ಕೆಡಿಸಲು ಬಂದರೆ ನಾನು ಮಾತ್ರ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಒಮ್ಮೆ ಹೆಣ್ಣುಮಕ್ಕಳು ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದರೆ, ಸಾವು ಬರುವವರೆಗೂ ಹೋರಾಡಲು ಸಿದ್ಧರಿರುತ್ತಾರೆ ಎಂಬುದನ್ನು ವಿರೋಧಿಗಳು ನೆನಪಿನಲ್ಲಿಡಬೇಕು ಎಂದು ರಮಾ ನಾಗರಾಜ್&zwnj; ಎಚ್ಚರಿಸಿದರು.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/activist-rama-nagaraj-addressing-the-press-conference-in-chitradurga-regarding-the-saujanya-case-legal-victory-gdp/articleshow-8uggyha"/>
        </item>
        <item>
            <title><![CDATA[ಧರ್ಮಸ್ಥಳ ಬುರುಡೆ ಪ್ರಕರಣ: ಬಂಗ್ಲೆಗುಡ್ಡೆಯಲ್ಲಿ ಸಿಕ್ಕ 3 ಅಸ್ಥಿಪಂಜದ ಡಿಎನ್‌ಎ ದೃಢ; ನಾಪತ್ತೆಯಾದವರ ಗುರುತು ಪತ್ತೆ!]]></title>
            <link>https://kannada.asianetnews.com/karnataka-districts/dharmasthala-burude-case-dna-test-identifies-3-skeletons-exhumed-by-sit-in-belthangady-gdp/articleshow-9a88osk</link>
            <guid isPermaLink="true">https://kannada.asianetnews.com/karnataka-districts/dharmasthala-burude-case-dna-test-identifies-3-skeletons-exhumed-by-sit-in-belthangady-gdp/articleshow-9a88osk</guid>
            <pubDate>Fri, 31 Jul 2026 10:54:39 +0530</pubDate>
            <description><![CDATA[ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಪತ್ತೆಯಾಗಿದ್ದ ಏಳು ಅಸ್ಥಿಪಂಜರಗಳ ಪೈಕಿ ಮೂರರ ಗುರುತನ್ನು ಡಿಎನ್&zwnj;ಎ ಪರೀಕ್ಷೆಯಿಂದ ಅಧಿಕೃತವಾಗಿ ದೃಢಪಡಿಸಲಾಗಿದೆ. ಹಲವು ವರ್ಷಗಳ ಹಿಂದೆ ಕೊಡಗು, ತುಮಕೂರು ಮತ್ತು ಕೋಲಾರದಿಂದ ನಾಪತ್ತೆಯಾಗಿದ್ದ ವ್ಯಕ್ತಿಗಳಿವು ಎಂದು ಎಸ್&zwnj;ಐಟಿ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಎಸ್&zwnj;ಐಟಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k47xpm9et8fwbkffrj7qypma,imgname-gtgtgt-1756907655470.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳ್ತಂಗಡಿ (ದಕ್ಷಿಣ ಕನ್ನಡ): &lt;/strong&gt;ಇಡೀ ರಾಜ್ಯಾದ್ಯಂತ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಗ್ರಾಮದ ಭೀಕರ 'ಬುರುಡೆ ಪ್ರಕರಣ'ಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ತಿರುವು ಸಿಕ್ಕಿದೆ. ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳು ಯಾರಿಗೆ ಸೇರಿದ್ದು ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ (FSL) ಡಿಎನ್&zwnj;ಎ (DNA) ಪರೀಕ್ಷೆಯಿಂದ ಅಧಿಕೃತವಾಗಿ ದೃಢಪಟ್ಟಿದೆ. ಎಸ್ಐಟಿ (SIT) ಅಧಿಕಾರಿಗಳು ನಡೆಸಿದ ಸುದೀರ್ಘ ತನಿಖೆ ಹಾಗೂ ವೈಜ್ಞಾನಿಕ ವಿಶ್ಲೇಷಣೆಯಿಂದಾಗಿ, ಹಲವು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮೂವರು ವ್ಯಕ್ತಿಗಳ ಗುರುತು ಈಗ ಪತ್ತೆಯಾದಂತಾಗಿದೆ.&lt;/p&gt;&lt;p&gt;ಪ್ರಕರಣದ ಹಿನ್ನೆಲೆ ಮತ್ತು ಎಸ್&zwnj;ಐಟಿ ಶೋಧ ಕಾರ್ಯಾಚರಣೆ ಸೌಜನ್ಯಳ ಮಾವ ವಿಠಲ ಗೌಡ ಅವರು ನೀಡಿದ ಸುಳಿವಿನ ಆಧಾರದ ಮೇಲೆ, ವಿಶೇಷ ತನಿಖಾ ದಳದ (SIT) ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಂಗ್ಲೆಗುಡ್ಡೆ ಎಂಬ ಪ್ರದೇಶದಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಕಳೆದ ಸೆಪ್ಟೆಂಬರ್ 17 ಮತ್ತು 18ರಂದು ನಡೆದ ಈ ಜಂಟಿ ಕಾರ್ಯಾಚರಣೆಯ ವೇಳೆ ಒಟ್ಟು ಏಳು ಅಸ್ಥಿಪಂಜರಗಳು ಪತ್ತೆಯಾಗಿ ಇಡೀ ರಾಜ್ಯ ಬೆಚ್ಚಿಬೀಳುವಂತೆ ಮಾಡಿತ್ತು.&lt;/p&gt;&lt;p&gt;ಅಸ್ಥಿಪಂಜರಗಳು ಸಿಕ್ಕ ಜಾಗದಲ್ಲೇ ಕೆಲವು ಗುರುತಿನ ಚೀಟಿಗಳು (ID Cards) ಸಹ ಲಭ್ಯವಾಗಿದ್ದವು. ಈ ನಿರ್ಣಾಯಕ ಆಧಾರದ ಮೇಲೆ ಎಸ್&zwnj;ಐಟಿ ಅಧಿಕಾರಿಗಳು ನಾಪತ್ತೆಯಾದವರ ಕುಟುಂಬಸ್ಥರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ತದನಂತರ ಬೆಳ್ತಂಗಡಿ ನ್ಯಾಯಾಲಯದ ಅನುಮತಿಯೊಂದಿಗೆ ಆಯಾ ಕುಟುಂಬದ ಸದಸ್ಯರ ರಕ್ತದ ಮಾದರಿಯನ್ನು ಪಡೆದು, ಡಿಎನ್&zwnj;ಎ ಪರೀಕ್ಷೆಗಾಗಿ ಬೆಂಗಳೂರಿನ ಎಫ್&zwnj;ಎಸ್&zwnj;ಎಲ್ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದೀಗ ಬಂದಿರುವ ವೈಜ್ಞಾನಿಕ ವರದಿಯಲ್ಲಿ ಮೂರು ಕುಟುಂಬಗಳ ಡಿಎನ್&zwnj;ಎ, ಪತ್ತೆಯಾದ ಅಸ್ಥಿಪಂಜರಗಳೊಂದಿಗೆ ಶೇ. 100 ರಷ್ಟು ತಾಳೆಯಾಗಿದೆ.&lt;/p&gt;&lt;p&gt;ಗುರುತು ಪತ್ತೆಯಾದ ಆ ಮೂವರು ಯಾರು? ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ, ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನಾಪತ್ತೆಯಾಗಿದ್ದ ಈ ಕೆಳಗಿನ ವ್ಯಕ್ತಿಗಳಿಗೆ ಸೇರಿದ್ದಾಗಿವೆ:&lt;/p&gt;&lt;p&gt;ಯು. ಬಿ. ಅಯ್ಯಪ್ಪ (70 ವರ್ಷ): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ನಿವಾಸಿ.&lt;/p&gt;&lt;p&gt;ಆದಿಶೇಷ ನಾರಾಯಣ (27 ವರ್ಷ): ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ಗ್ರಾಮದ ನಿವಾಸಿ.&lt;/p&gt;&lt;p&gt;ಕೃಷ್ಣಪ್ಪ (85 ವರ್ಷ): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ನಿವಾಸಿ.&lt;/p&gt;&lt;p&gt;ನಾಪತ್ತೆಯಾಗಿದ್ದ ಇತಿಹಾಸವೇನು? ಡಿಎನ್&zwnj;ಎ ಮೂಲಕ ಗುರುತು ಪತ್ತೆಯಾಗಿರುವ ಈ ಮೂವರೂ ವ್ಯಕ್ತಿಗಳು ಹಲವು ವರ್ಷಗಳ ಹಿಂದೆಯೇ ತಮ್ಮ ತಮ್ಮ ಊರುಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರ ಹಿನ್ನೆಲೆ ಹೀಗಿದೆ:&lt;/p&gt;&lt;p&gt;&lt;strong&gt;ಕೊಡಗಿನ ಅಯ್ಯಪ್ಪ:&lt;/strong&gt; ಇವರು 2017ರ ಜೂನ್ 25ರಂದು ಮೈಸೂರಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ತೆರಳಿದ್ದರು. ಆದರೆ ಆಸ್ಪತ್ರೆಗೆ ಹೋದವರು ಮತ್ತೆ ಎಂದಿಗೂ ಮನೆಗೆ ಮರಳಲೇ ಇಲ್ಲ. ಈ ಸಂಬಂಧ ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ (Missing Case) ದಾಖಲಾಗಿತ್ತು.&lt;/p&gt;&lt;p&gt;&lt;strong&gt;ತುಮಕೂರಿನ ಆದಿಶೇಷ ನಾರಾಯಣ: &lt;/strong&gt;ಈತ ಬೆಂಗಳೂರಿನ ಬಾರ್&zwnj; ಒಂದರಲ್ಲಿ ಕೆಲಸ ಮಾಡುತ್ತಿದ್ದ. 2013ರ ಅಕ್ಟೋಬರ್ 2ರಂದು ಮನೆಗೆ ಬಂದಿದ್ದ ಆತ, ತನ್ನ ಮೊಬೈಲ್ ಫೋನನ್ನು ಮನೆಯಲ್ಲೇ ಇಟ್ಟು ಏಕಾಏಕಿ ನಾಪತ್ತೆಯಾಗಿದ್ದ. ಈತ ಈ ಹಿಂದೆಯೂ ಹಲವು ಬಾರಿ ಮನೆಯಿಂದ ಹೇಳದೆ ಕೇಳದೆ ಹೋಗಿ ಮತ್ತೆ ವಾಪಸ್ ಬರುತ್ತಿದ್ದ ಕಾರಣ, ಈ ಬಾರಿಯೂ ಬರುತ್ತಾನೆಂದು ನಂಬಿದ ಕುಟುಂಬಸ್ಥರು ಯಾವುದೇ ಪೊಲೀಸ್ ದೂರನ್ನು ನೀಡಿರಲಿಲ್ಲ.&lt;/p&gt;&lt;p&gt;&lt;strong&gt;ಕೋಲಾರದ ಕೃಷ್ಣಪ್ಪ:&lt;/strong&gt; 85 ವರ್ಷದ ವೃದ್ಧ ಕೃಷ್ಣಪ್ಪ ಅವರು ಕಳೆದ ಅಕ್ಟೋಬರ್ 22ರಂದು ದಿಢೀರನೆ ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದಿದ್ದಾಗ ಕುಟುಂಬದವರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.&lt;/p&gt;&lt;h2&gt;ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ&lt;/h2&gt;&lt;p&gt;ಅವಶೇಷ ಹಸ್ತಾಂತರಕ್ಕೆ ಅವಕಾಶ ವಿಶೇಷ ತನಿಖಾ ದಳದ (SIT) ಅಧಿಕಾರಿಗಳು ಜುಲೈ 15ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು (Final Report) ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಮೂವರ ಡಿಎನ್&zwnj;ಎ ದೃಢಪಟ್ಟಿರುವ ಮಹತ್ವದ ಅಂಶವನ್ನು ಅಧಿಕೃತವಾಗಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ಕಾನೂನು ಪ್ರಕ್ರಿಯೆಗಳ ಪ್ರಕಾರ, ಡಿಎನ್&zwnj;ಎ ವರದಿಯ ಆಧಾರದ ಮೇಲೆ ಗುರುತು ಸಿಕ್ಕಿರುವ ಈ ಮೂರು ಕುಟುಂಬಗಳ ಸದಸ್ಯರು ತಮ್ಮ ಆತ್ಮೀಯರ ಅಸ್ಥಿಪಂಜರ ಅಥವಾ ಚಿತಾಭಸ್ಮವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಕುಟುಂಬಸ್ಥರು ಎಸ್&zwnj;ಐಟಿ ಅಧಿಕಾರಿಗಳಿಗೆ ಅಧಿಕೃತವಾಗಿ ಮನವಿ ಸಲ್ಲಿಸಬೇಕಾಗುತ್ತದೆ. ಇಷ್ಟು ವರ್ಷಗಳ ಕಾಲ ಕತ್ತಲೆಯಲ್ಲಿದ್ದ ಈ ನಿಗೂಢ ಸಾವಿನ ರಹಸ್ಯಗಳು ಈಗ ವಿಜ್ಞಾನದ ಸಹಾಯದಿಂದ ಒಂದೊಂದಾಗಿ ಹೊರಬರುತ್ತಿದ್ದು, ಉಳಿದ ನಾಲ್ಕು ಅಸ್ಥಿಪಂಜರಗಳ ತನಿಖೆಯೂ ಚುರುಕಾಗಿ ಸಾಗುತ್ತಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/dharmasthala-burude-case-dna-test-identifies-3-skeletons-exhumed-by-sit-in-belthangady-gdp/articleshow-9a88osk"/>
        </item>
        <item>
            <title><![CDATA[UT Khader: ಅಮೆರಿಕದ ಸಂಸತ್‌ ಇತಿಹಾಸದಲ್ಲಿ ಸಚಿವ ಯು.ಟಿ. ಖಾದರ್‌ ಹೆಸರು ದಾಖಲು]]></title>
            <link>https://kannada.asianetnews.com/state/karnataka-health-minister-u-t-khader-s-name-recorded-in-the-history-of-the-us-parliament-mrq/articleshow-9ephf9q</link>
            <guid isPermaLink="true">https://kannada.asianetnews.com/state/karnataka-health-minister-u-t-khader-s-name-recorded-in-the-history-of-the-us-parliament-mrq/articleshow-9ephf9q</guid>
            <pubDate>Thu, 30 Jul 2026 07:26:56 +0530</pubDate>
            <description><![CDATA[ಕರ್ನಾಟಕದ ಆರೋಗ್ಯ ಸಚಿವ ಯು. ಟಿ. ಖಾದರ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವವನ್ನು ಗುರುತಿಸಿ ಅಮೆರಿಕದ ಸಂಸತ್ ಗೌರವಿಸಿದೆ. ಈ ಗೌರವ 'ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್' ಆಗಿ ಅಧಿಕೃತವಾಗಿ ದಾಖಲಾಗಿದ್ದು, ಅವರಿಗೆ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ನು ಸಹ ಪ್ರದಾನ ಮಾಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrbqn69s8s93tq384wkt2cn,imgname-ut-khader-1785376527561.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ್&zwj;ಯಾಂಕಿಂಗ್&zwnj; ಸದಸ್ಯ, ನಾಯಕ ಜೊನಾಥನ್ ಜಾಕ್ಸನ್ ಅವರು, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಸಾಧನೆಗಳನ್ನು ಗುರುತಿಸಿ ಪ್ರತಿಷ್ಠಿತ &lsquo;ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್&rsquo; ದಾಖಲೆಯನ್ನು ಪ್ರದಾನ ಮಾಡಿದರು.&lt;/p&gt;&lt;h2&gt;&lt;strong&gt;ಪ್ರತಿಷ್ಠಿತ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿ&lt;/strong&gt;&lt;/h2&gt;&lt;p&gt;ಈ ದಾಖಲೆ ಅಮೆರಿಕದ ಸಂಸತ್ತಿನ ಆರ್ಚಿವರ್ಸ್&zwnj;ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಅಮೆರಿಕದ ಸಂಸತ್ತಿನ ಗ್ರಂಥಾಲಯದಲ್ಲಿ ಶಾಶ್ವತವಾಗಿ ಸಂರಕ್ಷಿಸಲ್ಪಡಲಿದೆ. ಜೊತೆಗೆ ಅಮೆರಿಕದ ಕ್ಯಾಪಿಟಲ್ ಹಿಲ್&zwnj;ನ ಸೆಂಟ್ರಲ್ ರೋಟುಂಡಾದಲ್ಲಿ ಪ್ರದಾನಗೊಳ್ಳುವ ಪ್ರತಿಷ್ಠಿತ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ನು ಮಂಗಳವಾರ ವಾಷಿಂಗ್ಟನ್ ಡಿ.ಸಿ.ಯಲ್ಲಿ ಡಾ. ಯು. ಟಿ. ಖಾದರ್ ಫರೀದ್ ಅವರಿಗೆ ಗೌರವಪೂರ್ವಕವಾಗಿ ಪ್ರದಾನಿಸಲಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಸ್ಪತ್ರೆ, ಶಾಲಾ ಆವರಣ ಕ್ಯಾಂಟೀನ್&zwnj;ಗಳಲ್ಲಿ ಜಂಕ್&zwnj; ಫುಡ್&zwnj; ನಿಷೇಧ: ಆರೋಗ್ಯ ಸಚಿವ ಯುಟಿ ಖಾದರ್ ಮತ್ತೊಂದು ಖಡಕ್ ನಿರ್ಧಾರ&lt;/strong&gt;&lt;/p&gt;&lt;p&gt;ಅಮೆರಿಕದ ಸಂಸತ್ತಿನ ಸದಸ್ಯ ಜೊನಾಥನ್ ಜಾಕ್ಸನ್ ಅವರ ಹಿರಿಯ ಸಲಹೆಗಾರ ಡಾ. ವಿಜಯ್ ಜಿ. ಪ್ರಭಾಕರ್ ಹಾಗೂ ಎಎಂಇಸಿ ಯುಎಸ್&zwnj;ಎ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ನವೀನ್&zwnj;ಚಂದ್ರ ಕರ್ಣ ಸಾಕ್ಷಿಯಾದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bike Ambulance: ಟ್ರಾಫಿಕ್ ನಡುವೆ ಜೀವ ರಕ್ಷಕ; ಬೈಕ್ ಆಂಬುಲೆನ್ಸ್&zwnj;ಗೆ ಮರುಜೀವ ನೀಡಿದ ಸರ್ಕಾರ!&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-health-minister-u-t-khader-s-name-recorded-in-the-history-of-the-us-parliament-mrq/articleshow-9ephf9q"/>
        </item>
        <item>
            <title><![CDATA[Ujire: ಉಜಿರೆಯಲ್ಲಿ ರಾಷ್ಟ್ರಪತಿಗಳ ಹೆಸರಲ್ಲಿದೆ 6.20 ಎಕ್ರೆ ಜಮೀನು!]]></title>
            <link>https://kannada.asianetnews.com/karnataka-districts/ujire-6-20-acres-land-registered-dishaank-app-name-of-the-president-rav/articleshow-ayk53dg</link>
            <guid isPermaLink="true">https://kannada.asianetnews.com/karnataka-districts/ujire-6-20-acres-land-registered-dishaank-app-name-of-the-president-rav/articleshow-ayk53dg</guid>
            <pubDate>Sat, 01 Aug 2026 06:15:20 +0530</pubDate>
            <description><![CDATA[&lt;p&gt;ದಕ್ಷಿಣ ಕನ್ನಡದ ಉಜಿರೆಯಲ್ಲಿ 6.20 ಎಕ್ರೆ ಜಮೀನು ರಾಷ್ಟ್ರಪತಿಗಳ ಹೆಸರಿನಲ್ಲಿರುವುದು ಸರ್ಕಾರದ ದಿಶಾಂಕ್ ಆ್ಯಪ್ ಮೂಲಕ ಬೆಳಕಿಗೆ ಬಂದಿದೆ. ಸರ್ವೇ ನಂಬರ್ 208ರ ಈ ಭೂಮಿಯ ಮಾಲೀಕತ್ವದ ಕುರಿತು ಗೊಂದಲ ಸೃಷ್ಟಿ ಈ ಬಗ್ಗೆ ಕಂದಾಯ ಇಲಾಖೆ ಸ್ಪಷ್ಟನೆ ನೀಡಬೇಕೆಂದು ಎಂಜಿನಿಯರ್ ಜಗದೀಶ್ ಪ್ರಸಾದ್ ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyxc7gq986mnv6j0r3wfbk6f,imgname-----------------------2026-08-01t060724.214-1785544819433.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳ್ತಂಗಡಿ (ಆ.೧)&lt;/strong&gt;: ದಕ್ಷಿಣ ಕನ್ನಡ(Dakshina kannada) ಜಿಲ್ಲೆಯಲ್ಲೇ ಅತಿ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಉಜಿರೆ(Ujire)ಯಲ್ಲಿ ರಾಷ್ಟ್ರಪತಿ(President of India)ಗಳ ಹೆಸರಿನಲ್ಲಿ ಸುಮಾರು 6.20 ಎಕ್ರೆ ಜಮೀನಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.&amp;nbsp;&lt;/p&gt;&lt;h2&gt;ದಿಶಾಂಕ್ ಆ್ಯಪ್&zwnj;ನಲ್ಲಿ ರಾಷ್ಟ್ರಪತಿಗಳ ಹೆಸರಲ್ಲಿ ಜಮೀನು!&lt;/h2&gt;&lt;p&gt;ಸರ್ಕಾರದಿಂದ ಅಧಿಕೃತವಾಗಿ ಬಿಡುಗಡೆಯಾಗಿರುವ ದಿಶಾಂಕ್ ಆ್ಯಪ್&zwnj;ನಲ್ಲಿ ಉಜಿರೆಯ 208 ಸರ್ವೇ ನಂಬರ್ ನಲ್ಲಿ 6.20 ಎಕ್ರೆ ಜಮೀನು &lsquo;ರಾಷ್ಟ್ರಪತಿ, ಕೇಂದ್ರ ಸರ್ಕಾರ&rsquo;ದ ಹೆಸರಿನಲ್ಲಿದೆ. ಇದು ಉಜಿರೆ ಸರ್ಕಲ್, ರಸ್ತೆ ಸೇರಿ ಎಚ್.ಪಿ.ಪೆಟ್ರೋಲ್ ಪಂಪ್ ನಿಂದ ಬೆಳಾಲು ಕ್ರಾಸ್ ತನಕ ಎಲ್ ಆಕೃತಿಯಲ್ಲಿದೆ. ಜೊತೆಗೆ ಅದೇ ಸರ್ವೇ ನಂಬರ್&zwnj;ನಲ್ಲಿ ಬೇರೆಯವರ ಹೆಸರಲ್ಲೂ ಜಮೀನು ಇದೆ. ಅಸೋಸಿಯೇಶನ್&zwnj; ಆಫ್&zwnj; ಕನ್ಸಲ್ಟಿಂಗ್&zwnj; ಸಿವಿಲ್&zwnj; ಎಂಜಿನಿಯರ್ಸ್&zwnj; ಇಂಡಿಯಾ (ಎಸಿಸಿಇಐ) ಮಾಜಿ ಅಧ್ಯಕ್ಷ, ಎಂಜಿನಿಯರ್ ಜಗದೀಶ ಪ್ರಸಾದ್&zwnj; ಅವರು ದಿಶಾಂಕ್ ಆ್ಯಪ್&zwnj; ಪರಿಶೀಲಿಸಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.&lt;/p&gt;&lt;p&gt;ಪಡುವೆಟ್ನಾಯ ಮತ್ತು ಅವರ ಪುತ್ರನ ಹೆಸರಿನಲ್ಲಿ 6 ಸೆಂಟ್ಸ್ ಮತ್ತು 2 ಸೆಂಟ್ಸ್, ಹೇಮಂತ್ ಶೆಟ್ಟಿ ಎಂಬುವರ ಹೆಸರಿನಲ್ಲಿ 6 ಸೆಂಟ್ಸ್&zwnj; ಹಾಗೂ ಸದಾಶಿವ ಶೆಟ್ಟಿ ಎಂಬುವರ ಹೆಸರಿನಲ್ಲಿ 6 ಸೆಂಟ್ಸ್ ಭೂಮಿ ಕಂಡು ಬಂದಿದೆ.&lt;/p&gt;&lt;h3&gt;ಕಂದಾಯ ಇಲಾಖೆ ಸ್ಪಷ್ಟಪಡಿಸಲಿ:&lt;/h3&gt;&lt;p&gt;ಸರ್ಕಾರದಿಂದ ಅಧಿಕೃತವಾಗಿ ಬಿಡುಗಡೆಗೊಂಡ ದಿಶಾಂಕ್ ಆ್ಯಪ್&zwnj;ನಲ್ಲಿ ಉಜಿರೆಯಲ್ಲಿ 208 ಸರ್ವೇ ನಂಬರ್ ನಲ್ಲಿ 6.20 ಎಕ್ರೆ ಜಮೀನು ರಾಷ್ಟ್ರಪತಿಗಳ ಹೆಸರಿನಲ್ಲಿ ದಾಖಲಾಗಿರುವುದು ಕಂಡು ಬಂದಿದೆ. ಇದು ತಪ್ಪು ಎಂದಾದರೆ ಕಂದಾಯ ಇಲಾಖೆಯವರು ಸರ್ವೇ ಮಾಡಿ, ರಾಷ್ಟ್ರಪತಿ ಭೂಮಿ ಅಲ್ಲ, ಇದು ತಮ್ಮದು ಎಂದು ಹೇಳಬೇಕು.&lt;/p&gt;&lt;p&gt;&lt;strong&gt;- ಜಗದೀಶ್ ಪ್ರಸಾದ್, ಮಾಜಿ ಅಧ್ಯಕ್ಷರು, ಎಸಿಸಿಇಐ.&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ujire-6-20-acres-land-registered-dishaank-app-name-of-the-president-rav/articleshow-ayk53dg"/>
        </item>
        <item>
            <title><![CDATA[ಬರದ ಮಧ್ಯೆಯೂ ರಾಜ್ಯದ ಹಲವೆಡೆ ಭಾರೀ ಮಳೆ: ಕಣ್ಮನ ಸೆಳೆದ ಹೊಗೇನಲ್‌ ಜಲಪಾತ!]]></title>
            <link>https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n</link>
            <guid isPermaLink="true">https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n</guid>
            <pubDate>Wed, 05 Aug 2026 05:29:20 +0530</pubDate>
            <description><![CDATA[&lt;p&gt;ರಾಜ್ಯದ ಹಲವೆಡೆ ಬರಗಾಲದ ಮಧ್ಯೆಯೂ ಕೆಲವಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಮಂಗಳವಾರ ಉಡುಪಿಯಲ್ಲಿ ಹೆಚ್ಚು ಮಳೆ ಸುರಿದಿದೆ. ದಾವಣಗೆರೆಯಲ್ಲಿ ಮಳೆಗೆ 2 ಮನೆಗಳಿಗೆ ಹಾನಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಧ್ಯೆ ಕಬಿನಿ ಜಲಾಶಯದಿಂದ 27 ಸಾವಿರ ಕ್ಯುಸೆಕ್&zwnj; ನೀರು ಬಿಡುಗಡೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz7k3sxapnx47sc2vamewk44,imgname-----------------------2026-08-05t051946.874-1785887582122.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.5)&lt;/strong&gt;: ರಾಜ್ಯದ ಹಲವೆಡೆ ಬರಗಾಲದ ಮಧ್ಯೆಯೂ ಕೆಲವಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಮಂಗಳವಾರ ಉಡುಪಿಯಲ್ಲಿ ಹೆಚ್ಚು ಮಳೆ ಸುರಿದಿದೆ. ದಾವಣಗೆರೆಯಲ್ಲಿ ಮಳೆಗೆ 2 ಮನೆಗಳಿಗೆ ಹಾನಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಧ್ಯೆ ಕಬಿನಿ ಜಲಾಶಯದಿಂದ 27 ಸಾವಿರ ಕ್ಯುಸೆಕ್&zwnj; ನೀರು ಬಿಡುಗಡೆ ಮಾಡಲಾಗಿದೆ.&lt;/p&gt;&lt;p&gt;ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಆರ್ಭಟ ಮುಂದುವರಿದಿದ್ದು, ಕುಂದಾಪುರ ಮತ್ತು ಹೆಬ್ರಿ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಕೊರ್ಗಿ ಗ್ರಾಮದ ಮನೆವೊಂದಕ್ಕೆ ಹಾನಿಯಾಗಿ ₹80,000 ನಷ್ಟ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 104.40 ಮಿ.ಮೀ. ಮಳೆ ದಾಖಲಾಗಿದೆ.&lt;/p&gt;&lt;p&gt;ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸಣ್ಣದಾಗಿ ಬರುತ್ತಿದ್ದ ಮಳೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ಭರ್ಜರಿಯಾಗಿ ಸುರಿದಿದೆ. ಚನ್ನಗಿರಿ ತಾಲೂಕಿನ ಹೊಸಕೆರೆ ಮತ್ತು ಕೊರಟಿಕೆರೆ ಗ್ರಾಮದಲ್ಲಿ ತಲಾ ಒಂದೊಂದು ಮನೆಗಳು ನೆಲಸಮವಾಗಿವೆ.&lt;/p&gt;&lt;h2&gt;ಕಣ್ಮನ ಸೆಳೆದ ಹೊಗೇನಲ್&zwnj; ಜಲಪಾತ:&lt;/h2&gt;&lt;p&gt;ಕಬಿನಿ ಜಲಾಶಯದಿಂದ ಮಂಗಳವಾರ 25,000 ಕ್ಯುಸೆಕ್&zwnj; ನೀರು ಕಾವೇರಿ ನದಿಗೆ ಬಿಡುಗಡೆಗೊಳಿಸಲಾಯಿತು. ಇದರ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಜಲಪಾತವು ರುದ್ರ ರಮಣೀಯವಾಗಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕರ್ನಾಟಕದ ನಯಾಗರ ಎಂದೇ ಕರೆಯಲ್ಪಡುವ ಈ ಜಲಪಾತವು ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆಯಿಂದಾಗಿ ಬತ್ತಿ ಹೋಗುವ ಹಂತಕ್ಕೆ ತಲುಪಿತ್ತು.&lt;/p&gt;&lt;p&gt;ಇದೀಗ ಮತ್ತೆ ತನ್ನ ಮೂಲ ಸೌಂದರ್ಯವನ್ನು ಪಡೆದುಕೊಂಡಿದ್ದು, ದೋಣಿ ವಿಹಾರ, ಜಲಪಾತದ ಸಮೀಪದಲ್ಲಿ ಸ್ನಾನ, ಫೋಟೋ ಶೂಟ್&zwnj; ಮತ್ತು ಪ್ರಕೃತಿ ಸೊಬಗನ್ನು ಸವಿಯಲು ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ.&lt;/p&gt;&lt;p&gt;ರೈತರಿಗೆ ಬಿತ್ತನೆಗೆ ಇದು ಅನುಕೂಲವಾಗಿದ್ದು, ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆ ಬೆಳೆಯಲು ಮಳೆ ಪೂರಕವಾಗಿದೆ. ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಶಾಲೆ-ಕಾಲೇಜು, ಕಚೇರಿಗಳು ಬಿಡುವ ವೇಳೆಯಲ್ಲಿ ಮಳೆ ಬರುತ್ತಿದ್ದ ಕಾರಣ ಮನೆಗೆ ತೆರಳಲು ಜನರು ಪರದಾಡಿದರು. ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತ್ತಿದ್ದರಿಂದ ವಾಹನ ಸವಾರರಿಗೆ ದಾರಿ ಕಾಣದಂತಾಗಿತ್ತು. ಮಳೆಯಿಂದಾಗಿ ಬೀದಿಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು.&lt;/p&gt;&lt;h3&gt;ಸಂಚಾರ ಸ್ಥಗಿತ:&lt;/h3&gt;&lt;p&gt;ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದ್ದು, ಮಡಿಕೇರಿ ರಸ್ತೆಗೆ ಅಡ್ಡಲಾಗಿ ಮರಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಮಾಡಿದರು. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಸರಾಸರಿ 8.90 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ 7147 ಕ್ಯುಸೆಕ್ ನೀರಿನ ಒಳಹರಿವು ಇದ್ದು, 6291 ಕ್ಯುಸೆಕ್ ಹೊರ ಹರಿವು ಕಂಡುಬಂತು.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n"/>
        </item>
        <item>
            <title><![CDATA[School Holiday Declare: ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಆದೇಶ ಹೊರಡಿಸಿದ 4 ಜಿಲ್ಲೆಗಳ ಜಿಲ್ಲಾಧಿಕಾರಿಗಳು!]]></title>
            <link>https://kannada.asianetnews.com/karnataka-districts/karnataka-heavy-rain-shivamogga-mangaluru-chikkamagaluru-uttara-kannada-school-holiday-declare/articleshow-p0ex22g</link>
            <guid isPermaLink="true">https://kannada.asianetnews.com/karnataka-districts/karnataka-heavy-rain-shivamogga-mangaluru-chikkamagaluru-uttara-kannada-school-holiday-declare/articleshow-p0ex22g</guid>
            <pubDate>Sun, 02 Aug 2026 23:10:40 +0530</pubDate>
            <description><![CDATA[ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಲವು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮತ್ತು ಉತ್ತರ ಕನ್ನಡ ಜಿಲ್ಲೆಗಳ ಆಯ್ದ ತಾಲೂಕುಗಳ ಶಾಲೆ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz1rv26za6zwc62ygmsz1c1j,imgname-school-holiday-declare-1785692260575.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ (Karnataka) ಕರಾವಳಿ (Coastal Karnataka) ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆ (Heavy Rain) ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ (Dakshina Kannada) ಮತ್ತು ಚಿಕ್ಕಮಗಳೂರು (Chikkamagaluru) ಶಿವಮೊಗ್ಗ, ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಕೆಲವು ಪ್ರದೇಶಗಳಲ್ಲಿ ಪಿಯುಸಿ (PUC) ಕಾಲೇಜುಗಳಿಗೆ ರಜೆ (School Holiday) ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ರಜೆ&lt;/strong&gt;&lt;/h2&gt;&lt;p&gt;ಭಾರತೀಯ ಹವಾಮಾನ ಇಲಾಖೆ (IMD) ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (Deputy Commissioner) ದರ್ಶನ್ ಎಚ್.ವಿ. (Darshan H.V.) ಅವರು ಆದೇಶ ಹೊರಡಿಸಿದ್ದಾರೆ. ಮಂಗಳೂರು (Mangaluru) ಉಪವಿಭಾಗದ ಮಂಗಳೂರು, ಉಳ್ಳಾಲ (Ullal), ಮೂಡಬಿದಿರೆ (Moodbidri), ಬಂಟ್ವಾಳ (Bantwal) ಹಾಗೂ ಮುಲ್ಕಿ (Mulki) ತಾಲೂಕುಗಳಲ್ಲಿ ಅಂಗನವಾಡಿಯಿಂದ ಹೈಸ್ಕೂಲ್ (High School) ವರೆಗೆ ರಜೆ ಘೋಷಿಸಲಾಗಿದೆ.&lt;/p&gt;&lt;p&gt;ಇನ್ನೊಂದೆಡೆ ಪುತ್ತೂರು (Puttur) ಉಪವಿಭಾಗದ ಪುತ್ತೂರು, ಬೆಳ್ತಂಗಡಿ (Belthangady), ಕಡಬ (Kadaba) ಹಾಗೂ ಸುಳ್ಯ (Sulya) ತಾಲೂಕುಗಳಲ್ಲಿ ಅಂಗನವಾಡಿಯಿಂದ ಪದವಿ ಪೂರ್ವ ಕಾಲೇಜು (PUC) ವರೆಗೆ ರಜೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ಚಿಕ್ಕಮಗಳೂರಿನ ಕೊಪ್ಪ, ಶೃಂಗೇರಿಯಲ್ಲೂ ರಜೆ&lt;/strong&gt;&lt;/h2&gt;&lt;p&gt;ಕಾಫಿನಾಡು (Coffee Land) ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪ (Koppa) ಹಾಗೂ ಶೃಂಗೇರಿ (Sringeri) ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ (Primary School) ಮತ್ತು ಪ್ರೌಢಶಾಲೆಗಳಿಗೆ (High School) ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ (Deputy Commissioner) ಭನ್ವರ್ ಸಿಂಗ್ ಮೀನಾ (Bhanwar Singh Meena) ಆದೇಶ ಹೊರಡಿಸಿದ್ದಾರೆ.&lt;/p&gt;&lt;h3&gt;&lt;strong&gt;ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿವು&lt;/strong&gt;&lt;/h3&gt;&lt;p&gt;ನಿರಂತರ ಮಳೆಯ ಪರಿಣಾಮ ತುಂಗಾ ನದಿ (Tunga River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು (Public) ಹಾಗೂ ಪ್ರವಾಸಿಗರು (Tourists) ನದಿ ತೀರಗಳಿಗೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆಯ (Weather Department) ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಸಾಗರ ತಾಲೂಕಿನ ಶಾಲೆ-ಕಾಲೇಜುಗಳಿಗೆ ರಜೆ&lt;/strong&gt;&lt;/h2&gt;&lt;p&gt;ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagar) ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ, ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ತಾಲೂಕು ಆಡಳಿತವು ರಜೆ ಘೋಷಿಸಿದೆ.&lt;/p&gt;&lt;p&gt;ಸಾಗರ ತಹಶೀಲ್ದಾರ್ (Tahsildar) ಡಾ. ಪ್ರತಿಭಾ (Dr. Prathibha) ಅವರು ಹೊರಡಿಸಿರುವ ಆದೇಶದಂತೆ ಎಲ್ಲಾ ಅಂಗನವಾಡಿ ಕೇಂದ್ರಗಳು (Anganwadi Centres), ಪ್ರಾಥಮಿಕ ಶಾಲೆಗಳು (Primary Schools), ಪ್ರೌಢಶಾಲೆಗಳು (High Schools), ಪದವಿ ಪೂರ್ವ ಕಾಲೇಜುಗಳು (PU Colleges), ಡಿಪ್ಲೊಮಾ ಕಾಲೇಜುಗಳು (Diploma Colleges) ಹಾಗೂ ಐಟಿಐ (ITI) ಕಾಲೇಜುಗಳಿಗೆ ಆಗಸ್ಟ್ 3ರಂದು ರಜೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ಉತ್ತರ ಕನ್ನಡ ಜಿಲ್ಲೆಯ ಎರಡು ತಾಲೂಕುಗಳಿಗೂ ರಜೆ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲೂ ಸುರಿಯುತ್ತಿರುವ ಭಾರೀ ಮಳೆ (Heavy Rain) ಹಿನ್ನೆಲೆ ಜಿಲ್ಲಾಡಳಿತ (District Administration) ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ (Deputy Commissioner) ಲಕ್ಷ್ಮೀ ಪ್ರಿಯಾ (Lakshmi Priya) ಅವರು ಹೊರಡಿಸಿರುವ ಆದೇಶದಂತೆ ದಾಂಡೇಲಿ (Dandeli) ಹಾಗೂ ಜೋಯಿಡಾ (Joida) ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು (Anganwadi Centres), ಪ್ರಾಥಮಿಕ ಶಾಲೆಗಳು (Primary Schools) ಮತ್ತು ಪ್ರೌಢಶಾಲೆಗಳಿಗೆ (High Schools) ಆಗಸ್ಟ್ 3ರಂದು ರಜೆ ಘೋಷಿಸಲಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-heavy-rain-shivamogga-mangaluru-chikkamagaluru-uttara-kannada-school-holiday-declare/articleshow-p0ex22g"/>
        </item>
        <item>
            <title><![CDATA[Bantwal School bus tragedy: ಬೀಳುತ್ತಿದ್ದ ವಿದ್ಯುತ್‌ ಕಂಬ ನೋಡಿ ಬಾಲಕನ ಎಳೆದು ಜೀವ ಉಳಿಸಿದಳು!]]></title>
            <link>https://kannada.asianetnews.com/karnataka-districts/bantwal-school-bus-tragedy-youg-girl-shreya-saved-a-student-rav/articleshow-qxf2gt7</link>
            <guid isPermaLink="true">https://kannada.asianetnews.com/karnataka-districts/bantwal-school-bus-tragedy-youg-girl-shreya-saved-a-student-rav/articleshow-qxf2gt7</guid>
            <pubDate>Fri, 24 Jul 2026 05:50:17 +0530</pubDate>
            <description><![CDATA[&lt;p&gt;ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದ ದುರಂತದ ಬೆನ್ನಲ್ಲೇ, 9ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ &amp;nbsp;ಸಮಯಪ್ರಜ್ಞೆಯಿಂದ ಮತ್ತೊಂದು ಅನಾಹುತವನ್ನು ತಪ್ಪಿಸಿದ್ದಾಳೆ. ಅಪಾಯಕಾರಿಯಾಗಿ ಅಲುಗಾಡುತ್ತಿದ್ದ ವಿದ್ಯುತ್ ಕಂಬದ ಕೆಳಗೆ ನಿಂತಿದ್ದ ಲಿಖಿತ್ ಎಂಬ ಬಾಲಕನನ್ನು ಕ್ಷಣಾರ್ಧದಲ್ಲಿ ಎಳೆದು ರಕ್ಷಿಸಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky8qhbarzwkt47v15nxhq3zx,imgname-----------------------2026-07-24t053909.602-1784852032856.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಂಟ್ವಾಳ (ದಕ್ಷಿಣ ಕನ್ನಡ) (ಜು.24)&lt;/strong&gt;: ಶಾಲಾ ವಾಹನದ ಮೇಲೆ ಬುಧವಾರ ಮರ ಬಿದ್ದು ಪುಟ್ಟ ಬಾಲಕಿ ಮೃತಪಟ್ಟ ದುರ್ಘಟನೆಯ ಕೆಲ ಸಮಯದ ಹಿಂದೆಯೇ ಮತ್ತೊಂದು ಅನಾಹುತ ಆಗುವುದನ್ನು ಅದೇ ಬಸ್&zwnj;ನಲ್ಲಿದ್ದ ವಿದ್ಯಾರ್ಥಿನಿ ತಪ್ಪಿಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ಬರಿಮಾರ್&zwnj; ಸಮೀಪ ಕಲ್ಲೆಟ್ಟಿ ದೈವಸ್ಥಾನದ ಬಳಿ ಬುಧವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 9ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ತನ್ನ ಅಕ್ಕಪಕ್ಕದ ಮಕ್ಕಳೊಂದಿಗೆ ಮರ ಬಿದ್ದ ಅದೇ ಶಾಲಾ ಬಸ್&zwnj;ನಿಂದ ಘಟನೆ ಆಗುವ ಮುಂಚೆಯೆ ಇಳಿದಿದ್ದಳು.&lt;/p&gt;&lt;h2&gt;ಶಾಲಾ ಬಸ್ ದುರಂತಕ್ಕೆ ಮುನ್ನ ನಡೆದಿದ್ದೇನು?&lt;/h2&gt;&lt;p&gt;&amp;nbsp;ಶ್ರೇಯಾ ಜೊತೆಗೆ ಇಳಿದಿದ್ದ ಲಿಖಿತ್ ತನ್ನ ಶಾಲಾ ಬ್ಯಾಗನ್ನು ಅಣ್ಣನಿಗೆ ನೀಡಿ ಮನೆಯತ್ತ ಓಡಲು ಮುಂದಾಗಿದ್ದ. ಅಷ್ಟರಲ್ಲಿ ಭಾರೀ ಶಬ್ದ ಕೇಳಿಬಂದಿದ್ದು, ಸಮೀಪದ ವಿದ್ಯುತ್ ಕಂಬ ಅಪಾಯಕಾರಿಯಾಗಿ ಅಲುಗಾಡುತ್ತಿರುವುದನ್ನು ಗಮನಿಸಿದ ಶ್ರೇಯಾ ಕ್ಷಣಾರ್ಧದಲ್ಲಿ ಓಡಿ ಹೋಗಿ ಲಿಖಿತ್&zwnj;ನ ಕೈ ಹಿಡಿದು ಹಿಂದೆ ಎಳೆದಿದ್ದಾಳೆ. ಲಿಖಿತ್ ನಿಂತಿದ್ದ ಅದೇ ಸ್ಥಳಕ್ಕೆ ವಿದ್ಯುತ್ ಕಂಬ ಧರೆಗುರುಳಿದೆ. ಶ್ರೇಯಾಳ ಸಮಯಪ್ರಜ್ಞೆಯಿಂದ ಮತ್ತೊಂದು ಜೀವಹಾನಿ ತಪ್ಪಿದೆ ಎಂದಸ್ಥಳೀಯರು, ತನ್ನ ಮಗನ ಪ್ರಾಣ ಉಳಿಸಿದ ಲಿಖಿತ್&zwnj;ನ ತಂದೆ ಕರುಣಾಕರ ಬಾಲಕಿಗೆ ಕೃತಜ್ಞತೆ ಸಲ್ಲಿಸಿದ್ದು, ಸಾರ್ವಜನಿಕರಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;ಕಂಬ ಅಲುಗಾಡುವುದನ್ನು ನೋಡಿದೆ. ತಕ್ಷಣ ಆ ಕಡೆ ಓಡಿ ಹೋಗುತ್ತಿದ್ದ ಲಿಖಿತ್&zwnj;ನ ಕೈ ಹಿಡಿದು ಎಳೆದೆ. ಕ್ಷಣಮಾತ್ರದಲ್ಲೇ ಅವನು ನಿಂತಿದ್ದ ಸ್ಥಳಕ್ಕೆ ವಿದ್ಯುತ್ ಕಂಬ ಬಿತ್ತು.&lt;/p&gt;&lt;p&gt;&lt;strong&gt;-ಶ್ರೇಯಾ, ಸಮಯಪ್ರಜ್ಞೆ ಮೆರೆದ ಬಾಲಕಿ.&lt;/strong&gt;&lt;/p&gt;&lt;p&gt;-ಬಂಟ್ವಾಳ ಸಮೀಪ ಘಟನೆ । ವಿದ್ಯಾರ್ಥಿನಿ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bantwal-school-bus-tragedy-youg-girl-shreya-saved-a-student-rav/articleshow-qxf2gt7"/>
        </item>
        <item>
            <title><![CDATA[ಬಿಳಿನೆಲೆಯಲ್ಲಿ ಅಪರೂಪದ ಮೈಂದಪುಳಿ ಕೃಷಿ ವಿಸ್ಮಯ;  ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಹೆಮ್ಮೆ]]></title>
            <link>https://kannada.asianetnews.com/karnataka-districts/dakshina-kananda-bilinele-cultivation-of-mayndapuli-or-koli-juttu-hannu-a-rare-wild-fruit-of-western-ghats-nrq/articleshow-qyk56ld</link>
            <guid isPermaLink="true">https://kannada.asianetnews.com/karnataka-districts/dakshina-kananda-bilinele-cultivation-of-mayndapuli-or-koli-juttu-hannu-a-rare-wild-fruit-of-western-ghats-nrq/articleshow-qyk56ld</guid>
            <pubDate>Tue, 28 Jul 2026 08:58:46 +0530</pubDate>
            <description><![CDATA[ದಕ್ಷಿಣ ಕನ್ನಡದ ಬಿಳಿನೆಲೆಯಲ್ಲಿ ವಾಸ್ತು ತಜ್ಞ ಎಸ್. ಪ್ರಸಾದ್ ಮುನಿಯಂಗಳ ಅವರು ಪಶ್ಚಿಮ ಘಟ್ಟದ ಅಪರೂಪದ ಕಾಡು ಹಣ್ಣಾದ ಮೈಂದಪುಳಿ (ಕೋಳಿ ಕುಕ್ಕೆ)ಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ಮೂರು ವರ್ಷಗಳ ಹಿಂದೆ ನೆಟ್ಟ ಗಿಡಗಳು ಈಗ ಕಾಂಡದ ಮೇಲೆ ಗೊಂಚಲು ಗೊಂಚಲಾಗಿ ಹಣ್ಣು ಬಿಟ್ಟಿದ್ದು, ಈ ಹಣ್ಣು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಅಳಿವಿನಂಚಿನಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kykc5mxwxpe7tz5aspmmezq4,imgname-mayndapuli-1785209213884.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ಪಶ್ಚಿಮ ಘಟ್ಟಗಳ ಅಪರೂಪದ ಕಾಡು ಹಣ್ಣಾದ ಹುಳಿ ಹಣ್ಣನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪ ಬಿಳಿ ನೆಲೆಯ ವಾಸ್ತು ತಜ್ಞ ಎಸ್ ಪ್ರಸಾದ್ ಮುನಿಯಂಗಳ ಅವರು ಬೆಳೆಸಿದ್ದು, ಇದೀಗ ಗಿಡಗಳಲ್ಲಿ ಹಣ್ಣು ಬಿಟ್ಟಿದೆ.&lt;/p&gt;&lt;p&gt;ಮುನಿಯಂಗಳ ಅವರು ಮೂರು ವರ್ಷಗಳ ಹಿಂದೆ ನೂರಕ್ಕೂ ಮಿಕ್ಕಿ ಹಣ್ಣಿನ ಗಿಡಗಳನ್ನು ನರ್ಸರಿಯಿಂದ ತಂದು ಗಿಡದಿಂದ ಗಿಡಕ್ಕೆ ಹತ್ತು ಅಡಿ ಅಂತರದಲ್ಲಿ ನಾಟಿ ಮಾಡಿದ್ದರು. ಹೆಚ್ಚಿನ ಆರೈಕೆ ಬೇಡದೆ, ಚೆನ್ನಾಗಿ ಜೂನ್ ಜುಲೈ ತಿಂಗಳಲ್ಲಿ ಫಲ ಭರಿತ ಹಣ್ಣುಗಳು ಕಾಣಿಸಿಕೊಂಡಿದೆ. ಒಂದು ಗೊಂಚಲಿನಲ್ಲಿ 25 ರಿಂದ 50 ಹಣ್ಣುಗಳನ್ನು ಹೊಂದಿದ್ದು ಅತ್ಯಾಕರ್ಷಕ ಬಣ್ಣವೂ ಇದೆ.&lt;/p&gt;&lt;h2&gt;&lt;strong&gt;ಆರೋಗ್ಯಕ್ಕೆ ಹಿತ&lt;/strong&gt;&lt;/h2&gt;&lt;p&gt;ಹುಳಿ ಹಣ್ಣಿನಲ್ಲಿ ಸಿ - ವಿಟಮಿನ್ ಹೇರಳವಾಗಿದ್ದು ಕಣ್ಣಿನ ದೃಷ್ಟಿಗೆ ಉತ್ತಮವಾಗಿದ್ದು, ಫೈಬರ್ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಬೀಮ್ ಪುರುಳಿ ಅಂಜೂರ ಅತ್ತಿ ಹಣ್ಣುಗಳಂತೆ ಕಾಡು ಹಣ್ಣು, ಕಡಿಮೆ ಕ್ಯಾಲರಿ ಹೊಂದಿದ್ದು ತೂಕವನ್ನು ಇಳಿಸಲು ಸಹಾಯವಾಗುತ್ತದೆ ಅಲ್ಲದೆ ಸಾರು, ಉಪ್ಪಿನಕಾಯಿ ಮುಂತಾದ ಆಹಾರಗಳನ್ನು ತಯಾರಿಸಲಾಗುತ್ತಿದ್ದು ಪೊಟ್ಯಾಶಿಯಂ ಚೆನ್ನಾಗಿ ಕೊಟ್ಟಾಗ ಇನ್ನಷ್ಟು ಸಿಹಿ ಗುಣವನ್ನು ಹೊಂದುತ್ತದೆ.&lt;/p&gt;&lt;h3&gt;&lt;strong&gt;ವಿವಿಧ ಹೆಸರು&lt;/strong&gt;&lt;/h3&gt;&lt;p&gt;ಈ ಅಪರೂಪದ ಕಾಡು ಹಣ್ಣನ್ನು ಕನ್ನಡದಲ್ಲಿ ಕೋಳಿಜುಟ್ಟು ಹಣ್ಣು (Koli juttu hannu), ಕೋಳಿ ಕುಕ್ಕೆ (Koli Kukke) ಅಥವಾ ಮೈಂದಪುಳಿ (Mayndapuli) ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು Baccaurea courtallensis. ಮಲಯಾಳಂನಲ್ಲಿ ಇದನ್ನು ಮೂಟ್ಟಿಪಳಂ (Mootipazham) ಅಥವಾ ಮೂಟ್ಟಿಪುಳಿ ಎಂದು ಕರೆಯಲಾಗುತ್ತದೆ.&lt;/p&gt;&lt;p&gt;&lt;strong&gt;ಕಾಂಡದಲ್ಲಿ ಹಣ್ಣು&lt;/strong&gt;&lt;/p&gt;&lt;p&gt;ಕೋಳಿ ಕುಕ್ಕೆ ಮರದ ಹಣ್ಣುಗಳು ಕೊಂಬೆಗಳಲ್ಲಲ್ಲದೆ ನೇರವಾಗಿ ಮರದ ಪ್ರಮುಖ ಕಾಂಡದ ಮೇಲೆಯೇ ಬಿಡುತ್ತವೆ. ಮಧ್ಯಮ ಗಾತ್ರದಲ್ಲಿ ಅಂದರೆ ಸುಮಾರು ೧೦ ರಿಂದ ೧೮ ಮೀಟರ್&zwnj;ಗಳಷ್ಟು ಎತ್ತರಕ್ಕೆ ಬೆಳೆಯುವ ಈ ಮರದ ಬೂದು ಬಣ್ಣದ ತೊಗಟೆಯ ಮೇಲೆ ಸಣ್ಣ ಸಣ್ಣ ಗಂಟುಗಳಂತಹ ರಚನೆಗಳಿರುತ್ತವೆ. ಆಗಸ್ಟ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಈ ಮರಗಳು ಹೂ ಬಿಡಲು ಆರಂಭಿಸುತ್ತವೆ. ಮೊದಲು ರಕ್ತಗೆಂಪು ಬಣ್ಣದ ಗಂಡು ಮತ್ತು ಹೆಣ್ಣು ಹೂವುಗಳು ಪ್ರತ್ಯೇಕವಾಗಿ ಕಾಂಡದಿಂದ ಹೊರಬರುತ್ತವೆ. ಗಂಡು ಹೂಗೊಂಚಲುಗಳು ಇಡೀ ಕಾಂಡದಾದ್ಯಂತ ಹರಡಿಕೊಂಡಿದ್ದರೆ, ಹೆಣ್ಣು ಹೂಗೊಂಚಲುಗಳು ಹೆಚ್ಚಾಗಿ ಕಾಂಡದ ಬುಡಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ನಂತರ ಇವು ದಟ್ಟವಾದ ಕ್ರಿಮ್ಸನ್ (ಗಾಢ ಕೆಂಪು) ಬಣ್ಣದ ದೊಡ್ಡ ಹಣ್ಣಿನ ಗೊಂಚಲುಗಳಾಗಿ ಬದಲಾಗಿ, ಇಡೀ ಮರದ ಬುಡವನ್ನು ಕೆಂಪು ಹಾಸಿನಂತೆ ಕಂಗೊಳಿಸುವಂತೆ ಮಾಡುತ್ತವೆ.&lt;/p&gt;&lt;p&gt;&lt;strong&gt;ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಹೆಮ್ಮೆ&lt;/strong&gt;&lt;/p&gt;&lt;p&gt;ಕೋಳಿ ಕುಕ್ಕೆ ಮರವು ಕೇವಲ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಮಳೆಕಾಡುಗಳಿಗೆ ಮಾತ್ರ ಸೀಮಿತವಾದ (Endemic) ಅಪರೂಪದ ತಳಿಯಾಗಿದೆ. ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಹಿಡಿದು ಕೇರಳ ಮತ್ತು ತಮಿಳುನಾಡಿನ ಕನ್ಯಾಕುಮಾರಿಯವರೆಗಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಇವು ನೈಸರ್ಗಿಕವಾಗಿ ಬೆಳೆಯುತ್ತವೆ. ಸೀಮಿತ ಪರಿಸರ ಮತ್ತು ಅರಣ್ಯ ನಾಶದ ಕಾರಣದಿಂದಾಗಿ, ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘ (IUCN) ತನ್ನ ಕೆಂಪು ಪಟ್ಟಿಯಲ್ಲಿ ಇದನ್ನು ''ಅಳಿವಿನಂಚಿನಲ್ಲಿರುವ ತಳಿ'' (Near Threatened) ಎಂದು ವರ್ಗೀಕರಿಸಿದೆ.&lt;/p&gt;&lt;p&gt;&lt;strong&gt;5 ವರ್ಷ ಬೇಕು&lt;/strong&gt;&lt;/p&gt;&lt;p&gt;ಬೀಜದಿಂದ ಅಥವಾ ಕಸಿ (Grafting) ಮಾಡಿದ ಗಿಡಗಳನ್ನು ನೆಟ್ಟರೆ, ಅವು ಕಾಂಡದ ಮೇಲೆ ಹಣ್ಣು ಬಿಡಲು ಸುಮಾರು ೪ ರಿಂದ ೬ ವರ್ಷಗಳು ಬೇಕಾಗುತ್ತವೆ. ಪಶ್ಚಿಮ ಘಟ್ಟದ ಇಂತಹ ಅಪರೂಪದ ಸಸ್ಯಸಂಕುಲದ ರಕ್ಷಣೆ ಅಗತ್ಯವಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kananda-bilinele-cultivation-of-mayndapuli-or-koli-juttu-hannu-a-rare-wild-fruit-of-western-ghats-nrq/articleshow-qyk56ld"/>
        </item>
        <item>
            <title><![CDATA[ಇನ್ನೂ ಎಷ್ಟು ದಿನ ಮಳೆ ಸುರಿಯುತ್ತೆ..? ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?]]></title>
            <link>https://kannada.asianetnews.com/shivamogga/rain-alert-in-malenadu-and-karavali-reason-udupi-mangaluru-and-uttar-kannada-gkn/articleshow-rgg1vbn</link>
            <guid isPermaLink="true">https://kannada.asianetnews.com/shivamogga/rain-alert-in-malenadu-and-karavali-reason-udupi-mangaluru-and-uttar-kannada-gkn/articleshow-rgg1vbn</guid>
            <pubDate>Mon, 03 Aug 2026 10:52:13 +0530</pubDate>
            <description><![CDATA[&lt;p&gt;ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರೀ ಮಳೆಯಿಂದಾಗಿ ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತಗೊಂಡಿದ್ದು, ಬಂಟ್ವಾಳದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಾಗೂ ಕಾರ್ಕಳದಲ್ಲಿ ಕಿರು ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz313w30f1gdqv7pkgfgntfd,imgname-rain--1--1785734492255.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಕಾರವಾರ: &lt;/strong&gt;ಕಳೆದ ಕೆಲವು ದಿನಗಳಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇಂದೂ ಕೂಡ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಪ್ರಮುಖ ಜಿಲ್ಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಇಂದು ಆರೆಂಜ್ ಅಲರ್ಟ್, ನಾಳೆ ಎಲ್ಲೋ ಅಲರ್ಟ್&lt;/strong&gt;&lt;/h2&gt;&lt;p&gt;ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ, ಮಲೆನಾಡಿನ ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ನಾಳೆಯಿಂದ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗುವ ಮುನ್ಸೂಚನೆ ಇದೆ.&lt;/p&gt;&lt;h2&gt;&lt;strong&gt;ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಳೆದ ಎರಡು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನಗರದ ಕೋಟೆ ಕೆರೆ ತುಂಬಿ ಹರಿಯುತ್ತಿದ್ದು, ನೀರು ರಸ್ತೆಗೆ ನುಗ್ಗಿದೆ. ಹಲವು ಬಡಾವಣೆಗಳು ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಇತ್ತ ದಾಂಡೇಲಿಯಲ್ಲಿ ಕಳೆದ 48 ಗಂಟೆಗಳಿಂದ ಸುರಿಯುತ್ತಿರುವ ಮಳೆಗೆ ಮಸಿದಿಗಲ್ಲಿಯ ಯುಸೂಫ್ ಶೇಖ್ ಎಂಬುವವರ ಮನೆ ಕುಸಿದಿದೆ. ಮನೆಯಲ್ಲಿದ್ದ ಇಬ್ಬರು ವೃದ್ಧರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;h2&gt;&lt;strong&gt;ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು&lt;/strong&gt;&lt;/h2&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಆರ್ಭಟ ಜೋರಾಗಿದೆ. ಎಎಂಆರ್ (AMR) ಡ್ಯಾಂನಿಂದ ನೀರನ್ನು ಹೊರಬಿಡಲಾಗುತ್ತಿದ್ದು, ನೇತ್ರಾವತಿ ನದಿ ತೀರದ ಜನರಲ್ಲಿ ಆತಂಕ ಶುರುವಾಗಿದೆ. ಬಂಟ್ವಾಳದ ಅಲಡ್ಕ, ಬೋಗೋಡಿ, ನಂದಾವರ, ಗೂಡಿನಬಳಿ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.&lt;/p&gt;&lt;h2&gt;&lt;strong&gt;ಸಂಪರ್ಕ ಕಡಿತಗೊಳಿಸಿದ ಕಿರು ಸೇತುವೆ&lt;/strong&gt;&lt;/h2&gt;&lt;p&gt;ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿವೆ. ನೀರಿನ ಮಟ್ಟ ಹೆಚ್ಚಾದ ಕಾರಣ ಇಲ್ಲಿನ ಕಿರು ಸೇತುವೆಯೊಂದು ಮುಳುಗಡೆಯಾಗಿದ್ದು, ಸ್ಥಳೀಯ ಗ್ರಾಮಸ್ಥರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಹೊಳೆ-ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸದ್ಯ ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ ಅಬ್ಬರ ಜೋರಾಗಿರುವುದರಿಂದ ನದಿ ಪಾತ್ರದ ಜನರು ಹಾಗೂ ಗುಡ್ಡಗಾಡು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸೂಚಿಸಿವೆ.&lt;/p&gt;]]></content:encoded>
            <category>dakshina-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/shivamogga/rain-alert-in-malenadu-and-karavali-reason-udupi-mangaluru-and-uttar-kannada-gkn/articleshow-rgg1vbn"/>
        </item>
        <item>
            <title><![CDATA[ಆರೋಗ್ಯ ಸಚಿವರ ತವರಲ್ಲಿ ಮಾದಕ ಆತಂಕ: ವಿದ್ಯಾರ್ಥಿಗಳಿಗೆ ಆಂಬುಲೆನ್ಸ್ ಮೂಲಕವೇ ಡ್ರಗ್ಸ್ ಮಾರಾಟ!]]></title>
            <link>https://kannada.asianetnews.com/gallery/karnataka-districts/mangaluru-ambulance-used-to-store-and-sell-drugs-to-students-mdma-drug-racket-busted-driver-absconding-tdh21zn</link>
            <guid isPermaLink="true">https://kannada.asianetnews.com/gallery/karnataka-districts/mangaluru-ambulance-used-to-store-and-sell-drugs-to-students-mdma-drug-racket-busted-driver-absconding-tdh21zn</guid>
            <pubDate>Mon, 27 Jul 2026 06:44:52 +0530</pubDate>
            <description><![CDATA[&lt;p&gt;ಮಂಗಳೂರು ಸಿಸಿಬಿ ಪೊಲೀಸರು ಆ್ಯಂಬುಲೆನ್ಸ್&zwnj;ನಲ್ಲಿಯೇ ಡ್ರಗ್ಸ್&zwnj; ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ಜಾಲವನ್ನು ಬಯಲಿಗೆಳೆದಿದ್ದಾರೆ. ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ನೀಡಿದ ಮಾಹಿತಿಯಂತೆ, ಪ್ರಮುಖ ಆರೋಪಿ ಆ್ಯಂಬುಲೆನ್ಸ್ ಚಾಲಕ ಜಲೀಲ್ ಬಾಬಾ ತಲೆಮರೆಸಿಕೊಂಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyghwdhwdr5fpnmgf5hz3fg5,imgname-mangaluru-drugs-supply-in-ambulance-1785114539579.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು ಸಿಸಿಬಿ ಪೊಲೀಸರು ಆ್ಯಂಬುಲೆನ್ಸ್&zwnj;ನಲ್ಲಿಯೇ ಡ್ರಗ್ಸ್&zwnj; ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ಜಾಲವನ್ನು ಬಯಲಿಗೆಳೆದಿದ್ದಾರೆ. ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ನೀಡಿದ ಮಾಹಿತಿಯಂತೆ, ಪ್ರಮುಖ ಆರೋಪಿ ಆ್ಯಂಬುಲೆನ್ಸ್ ಚಾಲಕ ಜಲೀಲ್ ಬಾಬಾ ತಲೆಮರೆಸಿಕೊಂಡಿದ್ದಾನೆ.&lt;/p&gt;&lt;img&gt;&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಮಂಗಳೂರು&lt;/strong&gt;&lt;/p&gt;&lt;p&gt;ತುರ್ತು ಚಿಕಿತ್ಸೆ ಅಗತ್ಯವಿರುವರ ಜೀವ ಕಾಪಾಡಲು ಬಳಸುವ ಆ್ಯಂಬುಲೆನ್ಸ್&zwnj;ನಲ್ಲಿಯೇ ಡ್ರಗ್ಸ್&zwnj; ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ಪ್ರಕರಣವೊಂದನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಲೇ ಆರೋಪಿ, ಆ್ಯಂಬುಲೆನ್ಸ್&zwnj; ಚಾಲಕ ಬೆಳ್ತಂಗಡಿಯ ಜಲೀಲ್&zwnj; ಬಾಬಾ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಪ್ರಕರಣ ಬೆಳಕಿಗೆ:&lt;/strong&gt;&lt;/p&gt;&lt;p&gt;ಸಿಸಿಬಿ ಪೊಲೀಸರು ಜೂ.25ರಂದು ಸುರತ್ಕಲ್&zwnj; ಸಮೀಪದ ಕುಳಾಯಿಗುಡ್ಡೆ ಸಮೀಪ ಬಾಡಿಗೆ ಮನೆಯೊಂದರ ದಾಳಿ ನಡೆಸಿ ಅಣ್ಣಪ್ಪ ಸ್ವಾಮಿ ಎಂಬಾತನನ್ನು ಬಂಧಿಸಿ ಆತನಿಂದ ₹1.50 ಲಕ್ಷ ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ದೆಹಲಿಯಿಂದ ಎಂಡಿಎಂಎ ಖರೀದಿಸಿಕೊಂಡು ಬೆಂಗಳೂರಿಗೆ ಸಾಗಿಸುತ್ತಿದ್ದ ಜಾಲದ ಬಗ್ಗೆ ಸುಳಿವು ಪಡೆದಿದ್ದರು.&lt;/p&gt;&lt;img&gt;&lt;p&gt;ಇದರ ಆಧಾರದಲ್ಲಿ ಜು.15ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಾಡ್ಜ್ ಮೇಲೆ ದಾಳಿ ನಡೆಸಿ ಮತ್ತೆ ಮೊಹಮ್ಮದ್ ಅಲ್ತಾಫ್, ಉಜಿರೆ ಹಳೆಪೇಟೆಯ ಮೊಹಮ್ಮದ್ ಮುಸ್ತಫಾರನ್ನು ಬಂಧಿಸಿದ್ದರು. ಅವರಿಂದ ಅಂದಾಜು ₹5.5 ಕೋಟಿ ಮೌಲ್ಯದ ಒಟ್ಟು 5 ಕೆ.ಜಿ ಎಂಡಿಎಂಎ, ಕಾರು, ಬ್ಯಾಗ್ ಮತ್ತು ಮೊಬೈಲ್ ಫೋನ್&zwnj; ವಶಪಡಿಸಿಕೊಳ್ಳಲಾಗಿತ್ತು.&lt;/p&gt;&lt;img&gt;&lt;p&gt;ಈ ಜಾಲದಲ್ಲಿ ಇನ್ನೂ ಹಲವರು ಭಾಗಿ ಆಗಿರುವ ಶಂಕೆಯಲ್ಲಿ, ತನಿಖೆ ಮುಂದುವರಿದಿತ್ತು. ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ಜಲೀಲ್ ಬಾಬಾನ ಬಗ್ಗೆ ಮಾಹಿತಿ ನೀಡಿದ್ದಾರೆ. ಈತ ತನ್ನ ಖಾಸಗಿ ಆ್ಯಂಬುಲೆನ್ಸ್&zwnj;ನಲ್ಲಿಯೇ ಡ್ರಗ್ಸ್&zwnj; ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಡ್ರಗ್ಸ್&zwnj; ಖರೀದಿಗೆ ಹೋಗಿದ್ದ ಮೂವರು ಆರೋಪಿಗಳ ಜೊತೆ ನೇರ ನಂಟು ಹೊಂದಿದ್ದ. ತಂದ ಮಾಲನ್ನು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾರಾಟ ಮಾಡುತ್ತಿದ್ದುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಆರೋಪಿಸಲಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/mangaluru-ambulance-used-to-store-and-sell-drugs-to-students-mdma-drug-racket-busted-driver-absconding-tdh21zn"/>
        </item>
        <item>
            <title><![CDATA[Mangaluru: ಪ್ರೇಯಸಿ ಕೋಪ, ಚರಂಡಿ ಸೇರಿದ ಕಾರಿನ ಕೀ!  ಬರ್ತಡೇ ವಿಶ್ ಮಾಡಲು ಬಂದು ಕಡಬದಲ್ಲಿ ಯುವಕ ಪಟ್ಟ ಫಜೀತಿ!]]></title>
            <link>https://kannada.asianetnews.com/viral/mnagaluru-news-love-anger-girlfriend-throws-boyfriend-car-key-into-drain-in-viral-kadaba-taluk-incident-gdp/articleshow-u61srsi</link>
            <guid isPermaLink="true">https://kannada.asianetnews.com/viral/mnagaluru-news-love-anger-girlfriend-throws-boyfriend-car-key-into-drain-in-viral-kadaba-taluk-incident-gdp/articleshow-u61srsi</guid>
            <pubDate>Sat, 25 Jul 2026 13:13:30 +0530</pubDate>
            <description><![CDATA[ಕಡಬದಲ್ಲಿ ತನ್ನ ಪ್ರೇಯಸಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಬಂದ ಯುವಕನಿಗೆ ಮುನಿಸಿನಿಂದಾಗಿ ಸಂಕಷ್ಟ ಎದುರಾಯಿತು. ಮಾತಿನ ಚಕಮಕಿಯ ಬಳಿಕ ಯುವತಿ ಕಾರಿನ ಕೀಯನ್ನು ಚರಂಡಿಗೆ ಎಸೆದಿದ್ದು, ಸ್ಥಳೀಯರ ಸಹಾಯದೊಂದಿಗೆ 5 ಗಂಟೆಗಳ ಕಾಲ ಹುಡುಕಾಡಿದರೂ ಕೀ ಸಿಗದೆ ಯುವಕ ಪರದಾಡಿದನು.]]></description>
            <media:content url="https://static.asianetnews.com/images/w-1280,h-720,format-jpg,imgid-01kyc3ccsxm4cy850njtsyyw3y,imgname-girlfriend-throws-car-key-1784965116733.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಕೆಲವೊಮ್ಮೆ ಪ್ರೀತಿಯಲ್ಲಿ ಅತಿಯಾದ ಮುನಿಸು ಮತ್ತು ಕೋಪ ಯಾವ ಮಟ್ಟದ ಪೇಚಿಗೆ ಸಿಲುಕಿಸುತ್ತದೆ ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದ ಈ ಸ್ವಾರಸ್ಯಕರ ಘಟನೆಯೇ ಸಾಕ್ಷಿ. ಸಣ್ಣದೊಂದು ವಾಗ್ವಾದ ಇಡೀ ದಿನ ಯುವಕನೊಬ್ಬನನ್ನು ಚರಂಡಿಯ ಕೊಳಚೆ ನೀರಿನಲ್ಲಿ ಕೈಹಾಕಿ ಪರದಾಡುವಂತೆ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ! ಜುಲೈ 24 ರಂದು ಕಡಬದ ಸಂತೆಕಟ್ಟೆ ಬಳಿ ನಡೆದ ಈ ಹೈಡ್ರಾಮಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;ಹುಟ್ಟುಹಬ್ಬದ ಸಂಭ್ರಮಕ್ಕೆ ಬಂದವನಿಗೆ ಕಾದಿತ್ತು ಶಾಕ್&lt;/h2&gt;&lt;p&gt;ವರದಿ ಪ್ರಕಾರ, ಈಶ್ವರಮಂಗಲ ಮೂಲದ ಯುವಕನೊಬ್ಬ ಕಡಬದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪ್ರೇಯಸಿ ಎನ್ನಲಾದ ಪರಿಚಯದ ಯುವತಿಗೆ ಜನ್ಮದಿನದ ಶುಭಾಶಯ ಕೋರಲು ಅತ್ಯಂತ ಸಂಭ್ರಮದಿಂದ ಬಂದಿದ್ದ. ಇದಕ್ಕಾಗಿ ಆತ ತನ್ನ ಸ್ನೇಹಿತನ ಬಳಿ ಸ್ವಿಫ್ಟ್ ಕಾರನ್ನು ಕೇಳಿ ಪಡೆದುಕೊಂಡು, ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಕಡಬಕ್ಕೆ ತಲುಪಿದ್ದ. ಸಂತೆಕಟ್ಟೆ ಬಳಿ ಕಾರನ್ನು ನಿಲ್ಲಿಸಿ, ಆಕೆ ಕೆಲಸ ಮಾಡುತ್ತಿದ್ದ ಕಚೇರಿಯೊಂದರ ಮೊದಲ ಮಹಡಿಯಲ್ಲಿ ಇಬ್ಬರೂ ಭೇಟಿಯಾಗಿದ್ದಾರೆ. ಇಬ್ಬರ ನಡುವೆ ಮಾತುಕತೆ ಚೆನ್ನಾಗಿಯೇ ಆರಂಭವಾಗಿತ್ತು. ಆದರೆ ಮಾತುಕತೆ ಮುಂದಕ್ಕೆ ಹೋದಂತೆ ಸಣ್ಣ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ.&lt;/p&gt;&lt;h2&gt;ಮಾತಿಗೆ ಮಾತು ಬೆಳೆದು ಚರಂಡಿ ಸೇರಿದ ಕೀ&lt;/h2&gt;&lt;p&gt;ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆ ಜೋರಾಗಿದೆ. ಕೋಪ ತಡೆದುಕೊಳ್ಳಲಾಗದ ಯುವತಿ ಏಕಾಏಕಿ ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಬಲವಂತವಾಗಿ ಕಸಿದುಕೊಂಡಿದ್ದಾಳೆ. ಅಷ್ಟಕ್ಕೇ ನಿಲ್ಲದ ಆಕೆ, ತನ್ನ ಕೋಪ ತೀರಿಸಿಕೊಳ್ಳಲು ಪಕ್ಕದಲ್ಲೇ ಇದ್ದ, ಗಿಡಗಂಟಿ ಹಾಗೂ ಕೊಳಚೆ ನೀರು, ಹೂಳಿನಿಂದ ತುಂಬಿದ್ದ ಆಳವಾದ ಚರಂಡಿಯ ಕಡೆಗೆ ಕೀಯನ್ನು ಜೋರಾಗಿ ಎಸೆದುಬಿಟ್ಟಿದ್ದಾಳೆ!&lt;/p&gt;&lt;p&gt;ಕಣ್ಣೆದುರೇ ಕಾರಿನ ಕೀ ಕೊಳಚೆ ನೀರಿನೊಳಗೆ ಮುಳುಗಡೆಯಾಗಿದ್ದನ್ನು ಕಂಡು ಯುವಕ ಒಮ್ಮೆಲೇ ಗಲಿಬಿಲಿಗೊಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ಇತ್ತ ಕೋಪ ತೀರಿಸಿಕೊಂಡ ಯುವತಿ ಅಲ್ಲಿಂದ ಹೊರಟುಹೋಗಿದ್ದಾಳೆ. ಕೀ ಇಲ್ಲದೆ ಕಾರನ್ನು ಅಲ್ಲಿಂದ ಕದಲಿಸಲೂ ಆಗದೆ, ಏನು ಮಾಡಬೇಕೆಂದು ತೋಚದೆ ಯುವಕ ಅಸಹಾಯಕನಾಗಿ ಚರಂಡಿಯತ್ತ ಓಡಿದ್ದಾನೆ.&lt;/p&gt;&lt;h2&gt;ಕೀಗಾಗಿ ಶುರುವಾಯ್ತು ಮಹಾ ಹುಡುಕಾಟ: ಸ್ಥಳೀಯರ ಸಾಥ್&lt;/h2&gt;&lt;p&gt;ಮಧ್ಯಾಹ್ನ 2:30 ರ ಸುಮಾರಿಗೆ ಚರಂಡಿಯ ಕೆಸರು ನೀರಿನಲ್ಲಿ ಯುವಕ ಒಬ್ಬನೇ ಕೈಹಾಕಿ ಕೀ ಹುಡುಕಲು ಆರಂಭಿಸಿದ್ದ. ಆತನ ಒದ್ದಾಟವನ್ನು ಕಂಡ ಸ್ಥಳೀಯರು ಮತ್ತು ಸಾರ್ವಜನಿಕರು ಸಹಾಯಕ್ಕೆ ಧಾವಿಸಿದರು. ಸಂತೆಕಟ್ಟೆಯಂತಹ ಜನನಿಬಿಡ ಪ್ರದೇಶದಲ್ಲಿ ಚರಂಡಿಯೊಳಗೆ ಏನನ್ನೋ ಹುಡುಕುತ್ತಿರುವುದನ್ನು ಕಂಡು ನೂರಾರು ಜನರು ಕುತೂಹಲದಿಂದ ಸ್ಥಳದಲ್ಲಿ ಜಮಾಯಿಸಿದರು. ಸ್ಥಳೀಯರು ಕೀ ಪತ್ತೆಹಚ್ಚಲು ಚರಂಡಿ ಸುತ್ತಮುತ್ತ ಬೆಳೆದಿದ್ದ ದಟ್ಟವಾದ ಗಿಡಗಂಟಿಗಳನ್ನು ಕತ್ತರಿಸಿ ಹಾಕಿದರು. ಕೊಳಚೆ ನೀರು, ಹೂಳು ಎನ್ನದೆ ಎಲ್ಲರೂ ಸತತ ಪ್ರಯತ್ನ ನಡೆಸಿದರು. ಆದರೆ ದುರಾದೃಷ್ಟವಶಾತ್ ಕೀ ಮಾತ್ರ ಪತ್ತೆಯಾಗಲಿಲ್ಲ.&lt;/p&gt;&lt;h2&gt;5 ಗಂಟೆಗಳ ಹುಡುಕಿದರೂ ಸಿಗದ ಕೀ, ರಿಕ್ಷಾದಲ್ಲಿ ಮನೆ ಸೇರಿದ ಯುವಕ!&lt;/h2&gt;&lt;p&gt;ಮಧ್ಯಾಹ್ನ 2:30 ಕ್ಕೆ ಆರಂಭವಾದ ಈ &lsquo;ಕಿಂಗ್ ಆಪರೇಷನ್&rsquo; ಸಂಜೆ ಕತ್ತಲಾಗುವವರೆಗೂ ಅಂದರೆ ರಾತ್ರಿ 7:30 ರ ತನಕ ಸತತ ಐದು ಗಂಟೆಗಳ ಕಾಲ ನಡೆಯಿತು. ಆದರೂ ಕೀ ಮಾತ್ರ ಸಿಗಲಿಲ್ಲ. ಅಷ್ಟರಲ್ಲಾಗಲೇ ಯುವಕ ತೀವ್ರ ಸುಸ್ತಾಗಿದ್ದ. ಇತ್ತ ಜನರೆಲ್ಲಾ ಸೇರಿ ನೋಡುತ್ತಿದ್ದ ದೃಶ್ಯಗಳನ್ನು ಕೆಲವರು ಮೊಬೈಲ್&zwnj;ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ವೀಡಿಯೋಗಳು ವೈರಲ್ ಆಗತೊಡಗಿದವು.&lt;/p&gt;&lt;p&gt;ಕೊನೆಗೆ ಬೇರೆ ದಾರಿ ಕಾಣದೆ, ರಾತ್ರಿ 7:30 ರ ವೇಳೆಗೆ ಕೀ ಹುಡುಕಾಟವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಯಿತು. ಸ್ನೇಹಿತನ ಕಾರನ್ನು ಕಡಬದಲ್ಲೇ ಬಿಟ್ಟು, ಯುವಕ ಅನಿವಾರ್ಯವಾಗಿ ಆಟೋ ರಿಕ್ಷಾ ಮಾಡಿಕೊಂಡು ತನ್ನ ಊರಿಗೆ ವಾಪಸ್ ತೆರಳಿದ್ದಾನೆ. ಸ್ನೇಹಿತೆಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಬಂದು, ಕೀ ಕಳೆದುಕೊಂಡು ಯುವಕ ಪಟ್ಟ ಫಜೀತಿ ಮಾತ್ರ ಕಡಬದ ಜನರಿಗೆ ಸದ್ಯದ ಸ್ವಾರಸ್ಯಕರ ಹರಟೆಯ ವಿಷಯವಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/viral/mnagaluru-news-love-anger-girlfriend-throws-boyfriend-car-key-into-drain-in-viral-kadaba-taluk-incident-gdp/articleshow-u61srsi"/>
        </item>
        <item>
            <title><![CDATA[ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ ಮಣ್ಣು ಕುಸಿತ: ತಡೆಗೋಡೆ ನಡೆಸದೇ ಅವೈಜ್ಞಾನಿಕ ಕಾಮಗಾರಿ?]]></title>
            <link>https://kannada.asianetnews.com/karnataka-districts/bikarnakatte-sanoor-highway-169-landslide-allegations-of-unscientific-work-without-construction-of-retaining-walls-mrq/articleshow-xvqw5n1</link>
            <guid isPermaLink="true">https://kannada.asianetnews.com/karnataka-districts/bikarnakatte-sanoor-highway-169-landslide-allegations-of-unscientific-work-without-construction-of-retaining-walls-mrq/articleshow-xvqw5n1</guid>
            <pubDate>Sun, 02 Aug 2026 08:21:16 +0530</pubDate>
            <description><![CDATA[ಮಂಗಳೂರಿನ ಎಡಪದವು ಬಳಿ ರಾಷ್ಟ್ರೀಯ ಹೆದ್ದಾರಿ 169ರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಣ್ಣು ಕುಸಿದಿದೆ. ತಡೆಗೋಡೆ ನಿರ್ಮಿಸದ ಕಾರಣ, ಮಳೆನೀರು ಕೃಷಿ ಭೂಮಿಗೆ ನುಗ್ಗಿ ಅಪಾರ ಹಾನಿಯಾಗಿದ್ದು, ಭಾರೀ ದುರಂತದ ಭೀತಿ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz0608cm5gc90d7sjxatgpwb,imgname-bikarnakatte-sanoor-highway-1785638953364.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಯಾನಂದ ಕಲ್ನಾರ್&zwnj;&lt;/strong&gt;&lt;/p&gt;&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಮಂಗಳೂರು: &lt;/strong&gt;ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿಯ ಮಣ್ಣು ತೀವ್ರ ಪ್ರಮಾಣದಲ್ಲಿ ಕುಸಿತಗೊಂಡು ಭಾರೀ ದುರಂತದ ಸಂಭವಿಸುವ ಭೀತಿ ಮಂಗಳೂರಿನ ಎಡಪದವು ಬಳಿ ಎದುರಾಗಿದೆ.&lt;/p&gt;&lt;p&gt;ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಹೆದ್ದಾರಿಯ ಮೂಡುಬಿದಿರೆ-ಗಂಜಿಮಠ ನಡುವಿನ ಎಡಪದವು ಬಳಿಯ ಶಿಬ್ರಕೆರೆ ಎಂಬಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ಹಾಕಿ ಹೆದ್ದಾರಿ ನಿರ್ಮಿಸಲಾಗುತ್ತಿದ್ದು, ಇದೀಗ ಇಲ್ಲಿ ನಿರಂತರ ಮಳೆಗೆ ಹೆದ್ದಾರಿ ಮಣ್ಣು ಕುಸಿತಗೊಂಡು ಅಕ್ಕಪಕ್ಕದ ಪ್ರದೇಶಗಳಿಗೆ ಭಾರೀ ಪ್ರಮಾಣದ ಹಾನಿ ಸಂಭವಿಸುವ ಆತಂಕ ಎದುರಾಗಿದೆ. ಅಲ್ಲದೆ ಹೆದ್ದಾರಿ ಸಂಪರ್ಕವನ್ನೂ ನಿರ್ಬಂಧಿಸಲಾಗಿದೆ.&lt;/p&gt;&lt;h2&gt;&lt;strong&gt;ಅವೈಜ್ಞಾನಿಕ ಕಾಮಗಾರಿಯಿಂದ ಕುಸಿತ&lt;/strong&gt;&lt;/h2&gt;&lt;p&gt;ಈ ಹೆದ್ದಾರಿಯ ಗಂಜಿಮಠ - ಮೂಡುಬಿದಿರೆ ಸಂಪರ್ಕ ಎಡಪದವು ಮೂಲಕ ಸಾಗುತ್ತದೆ. ಹೆದ್ದಾರಿ ಅಭಿವೃದ್ಧಿ ಯೋಜನೆಗಾಗಿ ಗಂಜಿಮಠ-ಮೂಡುಬಿದಿರೆ ನಡುವೆ ಎಡಪದವು ಪೇಟೆಯ ಮೂಲಕ ಸಾಗದೇ ಶಿಬ್ರಕೆರೆ ಮೂಲಕ ಹೊಸದಾಗಿ ರಸ್ತೆ ನಿರ್ಮಿಸಲಾಗುತ್ತಿದೆ. ಹೊಸ ರಸ್ತೆ ಕಾಮಗಾರಿ ನಡೆಯುವಲ್ಲಿಗೆ 50-60 ಅಡಿ ಎತ್ತರದವರೆಗೆ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿದ್ದು, ಆದರೆ ಎರಡೂ ಕಡೆ ತಡೆಗೋಡೆ ನಿರ್ಮಿಸದೇ, ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದೇ, ಕೃಷಿ ಭೂಮಿಗೆ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಕಾಮಗಾರಿ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆದ್ದಾರಿಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನೀರು ಹರಿದುಹೋಗಲು ಸಣ್ಣ ಮಟ್ಟಿನ ವ್ಯವಸ್ಥೆ ಮಾಡಲಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ನಿರಂತರ ಮಳೆಗೆ ಹೆದ್ದಾರಿಯಲ್ಲಿ ಬಿರುಕು ಬಿಟ್ಟು ಹೆದ್ದಾರಿಯ ಮಣ್ಣು ಈಗಾಗಲೇ ಒಂದು ಭಾಗದ ತೋಟದ ಭಾಗಕ್ಕೆ ಕುಸಿದಿದೆ.&lt;/p&gt;&lt;h3&gt;&lt;strong&gt;ಅಡಕೆ ತೋಟ ಜಲಾವೃತ&lt;/strong&gt;&lt;/h3&gt;&lt;p&gt;ಹೆದ್ದಾರಿ ಮಣ್ಣು ತೋಟಕ್ಕೆ ಕುಸಿದಿದ್ದರಿಂದ ತೋಟದ ಭಾಗದಿಂದ ಹರಿದು ಹೋಗುವ ನೀರಿಗೆ ತಡೆಯಾಗಿದ್ದು, ಪರಿಣಾಮ ನೀರು ತೋಟ ತುಂಬೆಲ್ಲ ಸಂಗ್ರಹಗೊಂಡು ಸುಮಾರು 10-13 ಎಕರೆಗೂ ಅಧಿಕ ಪ್ರದೇಶ ಜಲಾವೃತಗೊಂಡಿದೆ. ಅಲ್ಲದೇ ಪಕ್ಕದ ಭತ್ತದ ಗದ್ದೆಗೂ ಮಳೆ ನೀರು ನೀರು ನುಗ್ಗಿದೆ. ಇನ್ನೊಂದು ಭಾಗ ಗದ್ದೆ, ತೋಟ, ಮನೆಯವರೆಗೂ ನೀರು ನುಗ್ಗಿ ಸಮಸ್ಯೆಯಾಗಿದೆ. ತೋಟದಲ್ಲಿ ನೀರು ಸಂಗ್ರಹಗೊಂಡಿರುವುದರಿಂದ ಅಡಕೆಗೆ ರೋಗ ಭೀತಿ, ಫಸಲು ನಷ್ಟ ಆತಂಕವನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಭಾರಿ ದುರಂತ ಭೀತಿ !&lt;/strong&gt;&lt;/h3&gt;&lt;p&gt;ಹೆದ್ದಾರಿಯ ಮಣ್ಣು ಕುಸಿತಗೊಂಡಿದ್ದರೂ ಪರಿಹಾರ ಕಾಮಗಾರಿ ಕೈಗೊಳ್ಳಬೇಕಾಗಿರುವ ಕಾಮಗಾರಿ ನಿರ್ವಹಣಾ ಸಂಸ್ಥೆ ರಸ್ತೆಯ ಮಣ್ಣನ್ನು ಬದಿಗೆ ಸರಿಸುವ ಕಾಮಗಾರಿಯನ್ನು ಮಾತ್ರವೇ ಮಾಡುತ್ತಿದ್ದು, ಪರಿಹಾರ ಕಾಮಗಾರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಹೆದ್ದಾರಿಯ ಒಂದು ಭಾಗದ ತೋಟದಲ್ಲಿ ಎಕರೆಗಟ್ಟಲೆ ವ್ಯಾಪ್ತಿಯಲ್ಲಿ ನೀರು ಕೆರೆಯಂತೆ ತುಂಬಿದ್ದು, ಜೋರು ಮಳೆ ಮುಂದುವರಿದಲ್ಲಿ ಸಂಗ್ರಹಗೊಂಡ ನೀರಿನ ಸಾಮರ್ಥ್ಯ ತಡೆಯಲಾರದೇ ಹೆದ್ದಾರಿಯ ಮಣ್ಣು ಇನ್ನಷ್ಟು ಕುಸಿತವಾಗುವ ಭೀತಿಯೂ ಇದೆ. ಪರಿಣಾಮ ಇನ್ನೊಂದು ಭಾಗಕ್ಕೆ ಮಣ್ಣು ನುಗ್ಗಿ ಅಪಾಯ ಸಂಭವಿಸುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೆದ್ದಾರಿಯಲ್ಲಿ ಕುಸಿತವಾಗುವಂತೆ ಬಿರುಕುಗಳು ಗೋಚರಿಸುತ್ತಿವೆ.&lt;/p&gt;&lt;p&gt;ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ನಮ್ಮ ಬೆಂಬಲ ಇದೆ. ಕೃಷಿ ಭೂಮಿ, ಜನ ವಾಸಕ್ಕೆ ತೊಂದರೆ ಆಗದಂತೆ ಕಾಮಗಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಬೇಕು. ಜನರಿಗೆ ತೊಂದರೆ ಆಗುವಂತೆ ಕಾಮಗಾರಿ ನಡೆಸಬಾರದು ಎಂಬುದು ನಮ್ಮ ಆಗ್ರಹ.&lt;/p&gt;&lt;p&gt;&lt;strong&gt;ಅಶ್ವಿನಿ ನಾಯಕ್&zwnj;, ಎಡಪದವು ಸ್ಥಳೀಯರು&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಿಳಿನೆಲೆಯಲ್ಲಿ ಅಪರೂಪದ ಮೈಂದಪುಳಿ ಕೃಷಿ ವಿಸ್ಮಯ; ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಹೆಮ್ಮೆ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bikarnakatte-sanoor-highway-169-landslide-allegations-of-unscientific-work-without-construction-of-retaining-walls-mrq/articleshow-xvqw5n1"/>
        </item>
        <item>
            <title><![CDATA[ಬಹುನಿರೀಕ್ಷಿತ ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ-169 ಅಭಿವೃದ್ಧಿ: ಹಲವೆಡೆ ಭೂಕುಸಿತ!]]></title>
            <link>https://kannada.asianetnews.com/karnataka-districts/the-much-awaited-bikarnakatte-sanoor-highway-169-development-landslides-in-many-places-mrq/articleshow-y9n6985</link>
            <guid isPermaLink="true">https://kannada.asianetnews.com/karnataka-districts/the-much-awaited-bikarnakatte-sanoor-highway-169-development-landslides-in-many-places-mrq/articleshow-y9n6985</guid>
            <pubDate>Wed, 05 Aug 2026 08:26:01 +0530</pubDate>
            <description><![CDATA[ಬಹುನಿರೀಕ್ಷಿತ ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯ ಹಲವೆಡೆ ಮಣ್ಣು ಕುಸಿತದ ಆತಂಕ ಎದುರಾಗಿದ್ದು, ಮಳೆಗಾಲದಲ್ಲಿ ಇದು ಮತ್ತಷ್ಟು ಹೆಚ್ಚುತ್ತಿದೆ. ಇದರಿಂದಾಗಿ ಸ್ಥಳೀಯರು ಶಾಶ್ವತ ಪರಿಹಾರ ಮತ್ತು ಹಾನಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz7xg4w2xjrd7kqmvdv086r0,imgname-bikarnakatte-sanoor-highway-1785898472322.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಯಾನಂದ ಕಲ್ನಾರ್&zwnj;&lt;/strong&gt;&lt;/p&gt;&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಮಂಗಳೂರು: &lt;/strong&gt;ಬಹುನಿರೀಕ್ಷಿತ ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಲವು ಅಡೆ-ತಡೆಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದು, ನಿರೀಕ್ಷಿತ ವೇಗ ಪಡೆದಿಲ್ಲ. ಹೆದ್ದಾರಿ ಸಾಗುವ ಹಲವೆಡೆ ಮಣ್ಣು ಕುಸಿತದ್ದೇ ಆತಂಕ ಸ್ಥಿತಿ ಮಳೆಗಾಲದಲ್ಲಿದೆ.&lt;/p&gt;&lt;p&gt;ಮಂಗಳೂರಿನಿಂದ ಉಡುಪಿಯ ಕಾರ್ಕಳ ಸಂಪರ್ಕಿಸುವ ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2022ರ ಅಕ್ಟೋಬರ್&zwnj;ನಲ್ಲಿ ಕಾರ್ಯಾದೇಶ ಮಾಡಿತ್ತು. ಸುಮಾರು 45 ಕಿ.ಮೀ.ನ ಈ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಭಾರತ್&zwnj;ಮಾಲಾ ಪರಿಯೋಜನೆ ಪ್ಯಾಕೇಜ್&zwnj; 3ರ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.&lt;/p&gt;&lt;h2&gt;&lt;strong&gt;ಮಣ್ಣು ಕುಸಿತದ್ದೇ ಆತಂಕ:&lt;/strong&gt;&lt;/h2&gt;&lt;p&gt;ಈ ಹೆದ್ದಾರಿಯ ಎಡಪದವು ಬಳಿಯ ಶಿಬ್ರಕೆರೆ ಎಂಬಲ್ಲಿ ಹೆದ್ದಾರಿಯ ಬದಿ ನೀರು ಹರಿವಿಗೆ ಸಮರ್ಪಕ ವ್ಯವಸ್ಥೆ ಇಲ್ಲದೇ ಎಕರೆಗಟ್ಟಲೇ ತೋಟ ಕಳೆದ 40 ದಿನಗಳಿಂದ ನೀರಲ್ಲಿ ಮುಳುಗಿದ್ದು, ಕೆಲ ದಿನಗಳ ಹಿಂದೆ ತೋಟದ ಭಾಗದಲ್ಲಿ ಹೆದ್ದಾರಿ ಮಣ್ಣು ಕೂಡ ಕುಸಿತವಾಗಿತ್ತು. ಅವೈಜ್ಞಾನಿಕ ಕಾಮಗಾರಿಯಿಂದ ಮಣ್ಣು ಕುಸಿತ ಆಗುತ್ತಿದೆ ಎನ್ನುವುದು ಸ್ಥಳೀಯರ ಆರೋಪ. ಇಲ್ಲಿ ಮಾತ್ರವಲ್ಲದೇ ಗಂಜಿಮಠ ಪೇಟೆ ಸಮೀಪ, ವಾಮಂಜೂರು ಸಮೀಪದ ಕೆತ್ತಿಕಲ್&zwnj; ಭಾಗದಲ್ಲೂ ಹೆದ್ದಾರಿ ಬದಿಯಲ್ಲಿ ಹಾಗೂ ಇನ್ನೂ ಕೆಲವೆಡೆ ಮಣ್ಣು ಕುಸಿತ ಆತಂಕ ಸ್ಥಿತಿ ಕಳೆದ ಕೆಲವು ವರ್ಷಗಳಿಂದ ಜೀವಂತವಾಗಿದೆ. ಮಳೆಗಾಲದಲ್ಲಿ ಆತಂಕದ ಸ್ಥಿತಿ ಇಲ್ಲಿರುತ್ತದೆ.&lt;/p&gt;&lt;h3&gt;&lt;strong&gt;ಹಾನಿಗೆ ಪರಿಹಾರಕ್ಕೆ ಆಗ್ರಹ:&lt;/strong&gt;&lt;/h3&gt;&lt;p&gt;ಮಣ್ಣು ಕುಸಿತ ಕಡೆಗಳಲ್ಲಿ ಮಳೆಗಾಲ ಆರಂಭವಾಗುವ ಕೆಲವು ಸಮಯದ ಮೊದಲು ಪರಿಹಾರ ಕಾಮಗಾರಿ ಆರಂಭಿಸಿ ಬಳಿಕ ಕಾಮಗಾರಿ ವೇಗ ಕಳೆದುಕೊಳ್ಳುತ್ತದೆ. ಮಣ್ಣು ಕುಸಿತದ ವೇಳೆ ಮತ್ತೆ ಕೆಲವು ಕಾಲ ದುರಸ್ತಿ ನೆಪದ ಕಾಮಗಾರಿ ನಡೆಸಲಾಗುತ್ತದೆ. ಶಾಶ್ವತ ಪರಿಹಾರ ಕಾಮಗಾರಿ ವೇಗ ಪಡೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.&lt;/p&gt;&lt;p&gt;ಈ ಹೆದ್ದಾರಿಯ ಪ್ರಮುಖ ಪೇಟೆಗಳಲ್ಲಿ ಹಾಗೂ ಪ್ರಮುಖ ಕಡೆಗಳಲ್ಲಿ ಸರ್ವೀಸ್&zwnj; ರಸ್ತೆಗಳ ನಿರ್ಮಾಣ, ಸರ್ವೀಸ್&zwnj; ರಸ್ತೆಗಳ ದುರಸ್ತಿ, ಕಾಮಗಾರಿ ವೇಳೆ ಸಮರ್ಪಕ ಸೂಚನಾ ಫಲಕ, ಸುರಕ್ಷತೆಗೆ ಆದ್ಯತೆ ಮೊದಲಾದ ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕು ಎನ್ನುತ್ತಾರೆ ಸ್ಥಳೀಯರು. ಮಣ್ಣು ಕುಸಿತದ ಪ್ರದೇಶಗಳಲ್ಲಿ ಮಣ್ಣು ಕುಸಿತ ತಡೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆ ನೆಲೆಯಲ್ಲಿ ಪೂರ್ಣಗೊಳಿಸಬೇಕು. ಹೆದ್ದಾರಿ ಕಾಮಗಾರಿಯಿಂದ ಆಗುವ ಕೃಷಿ ಹಾಗೂ ಇತರೆ ಹಾನಿಗೆ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;1,137 ಕೋಟಿ ರು. ವೆಚ್ಚದ ಯೋಜನೆ&lt;/strong&gt;&lt;/p&gt;&lt;p&gt;ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ ಅಭಿವೃದ್ಧಿಯಲ್ಲಿ ಭೂಸ್ವಾಧೀನ ವೆಚ್ಚ ಹೊರತುಪಡಿಸಿ ಸುಮಾರು 1,137 ಕೋಟಿ ರು. ವೆಚದ್ದಲ್ಲಿ ಕಾಮಗಾರಿ ನಡೆಯುತ್ತಿದೆ. ಬೋಪಾಲ್&zwnj;ನ ಮೇ.ದಿಲೀಪ್&zwnj; ಬಿಲ್ಡಿಕಾನ್&zwnj; ಲಿ. ಸಂಸ್ಥೆ ಕಾಮಗಾರಿಯ ಗುತ್ತಿಗೆ ಪಡೆದಿದೆ. ಚತುಷ್ಪತ ನಿರ್ಮಾಣ ಪೂರ್ವದ ಭೂಸ್ವಾಧೀನ ಪ್ರಕ್ರಿಯೆಯಂತೆ ಸಲ್ಲಿಕೆಯಾದ1,534 ಅರ್ಜಿಗೆ 585 ಕೋಟಿ ರು. ಪರಿಹಾರ ವಿತರಣೆ ಆಗಿದೆ. ಯೋಜನೆಗೆ ಒಟ್ಟು 222.11 ಹೆಕ್ಟೆರ್&zwnj; ಭೂಮಿ ಅಗತ್ಯವಾಗಿತ್ತು, 85.6 ಹೆಕ್ಟೆರ್&zwnj; ಸರ್ಕಾರಿ ಹಾಗೂ 29 ಹೆಕ್ಟೇರ್&zwnj; ಹಿಂದೆ ಇದ್ದ ಹೆದ್ದಾರಿ ಜಮೀನು ಬಳಕೆ ಮಾಡಲಾಗಿದೆ. ಉಳಿದ ಜಮೀನು ಖಾಸಗಿಯಿಂದ ಸ್ವಾಧೀನ ಮಾಡಲಾಗಿದೆ.&lt;/p&gt;&lt;p&gt;ಸಾಣೂರು-ಬಿಕರ್ಣಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಗಾಲದಲ್ಲಿ ಕಾಮಗಾರಿ ನಡೆಸಲು ಸ್ವಲ್ಪ ಸಮಸ್ಯೆಗಳಾಗುತ್ತದೆ. ಒಟ್ಟು ಕಾಮಗಾರಿ ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ. ಸ್ಥಳೀಯರ ಬೇಡಿಕೆ ಆಲಿಸಲಾಗುತ್ತಿದೆ. ಈಗಾಗಲೇ ಶೇ.75ರಷ್ಟು ಕಾಮಗಾರಿ ಪ್ರಗತಿಯಾಗಿದೆ. ಹೆದ್ದಾರಿಯ ಮಣ್ಣು ಕುಸಿತ ಪ್ರದೇಶಗಳಲ್ಲಿ ತಡೆಗೋಡೆ ಹಾಗೂ ಕುಸಿತ ತಡೆಗೆ ಪರಿಹಾರ ಕಾಮಗಾರಿಗಳು ನಡೆಸಲಾಗುತ್ತಿದೆ.&lt;/p&gt;&lt;p&gt;&lt;strong&gt;ಅಬ್ದುಲ್&zwnj; ಜಾವೇದ್&zwnj; ಅಜ್ಮಿ, ಪಿಡಿ-ಎನ್&zwnj;ಎಚ್&zwnj;ಎಐ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/the-much-awaited-bikarnakatte-sanoor-highway-169-development-landslides-in-many-places-mrq/articleshow-y9n6985"/>
        </item>
        <item>
            <title><![CDATA[Annabrahma Chaturmasya: ಅನ್ನಬ್ರಹ್ಮ ಚಾತುರ್ಮಾಸ್ಯ, ಧರ್ಮಸಭೆಯಲ್ಲಿ ನಿದ್ದೆ-ಊಟದ ಮಹತ್ವ ಹೇಳಿದ ಭಾರತೀ ಶ್ರೀಗಳು]]></title>
            <link>https://kannada.asianetnews.com/karnataka-districts/annabrahma-chaturmasya-raghaveshwara-shripadaru-speaks-on-the-importance-of-sleep-rav/articleshow-yottc5c</link>
            <guid isPermaLink="true">https://kannada.asianetnews.com/karnataka-districts/annabrahma-chaturmasya-raghaveshwara-shripadaru-speaks-on-the-importance-of-sleep-rav/articleshow-yottc5c</guid>
            <pubDate>Mon, 03 Aug 2026 08:44:06 +0530</pubDate>
            <description><![CDATA[&lt;p&gt;ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು, ಆಹಾರ ಮತ್ತು ನಿದ್ದೆಯ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದ್ದಾರೆ. ನಿದ್ದೆಯು ಮಾತೃಸ್ವರೂಪಿಣಿಯಾಗಿದ್ದು, ಶರೀರ ಮತ್ತು ಮನಸ್ಸಿಗೆ ಚೈತನ್ಯ ನೀಡುತ್ತದೆ ಹಾಗೂ ಸರಿಯಾದ ನಿದ್ದೆ ಸಮಾಧಿ ಸ್ಥಿತಿಗೆ ಸಮಾನ ಎಂದು ಅವರು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz2ss5mncet3qqy6rr9twewx,imgname-----------------------2026-08-03t083349.053-1785726801557.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಶೋಕೆ (ಆ.2):&lt;/strong&gt; ಆಹಾರ ಹಾಗೂ ನಿದ್ದೆ ಪರಸ್ಪರ ಸಂಬಂಧಿತವಾಗಿದೆ. ನಿದ್ದೆ ಚನ್ನಾಗಿ ಬರಲು ಹಸಿವು ಅಗತ್ಯ ಹಾಗೂ ಆಹಾರ ಸರಿಯಾಗಿದ್ದರೆ ಸರಿಯಾದ ನಿದ್ರೆ ಪ್ರಾಪ್ತವಾಗುತ್ತದೆ. ದೇಹಕ್ಕೆ ಸಂಬಂಧಿಸಿದ ಮೂರು ಉಪಾಂಗಗಳಲ್ಲಿ ನಿದ್ದೆ ಹಾಗೂ ಆಹಾರ ಪ್ರಮುಖವಾಗಿವೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.&lt;/p&gt;&lt;h2&gt;ನಿದ್ರೆ ಮಾತೃಸ್ವರೂಪಿಣಿ ದೇವಿ:&lt;/h2&gt;&lt;p&gt;ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ &lsquo;ಅನ್ನಬ್ರಹ್ಮ ಚಾತುರ್ಮಾಸ್ಯ&rsquo;ದ ಧರ್ಮಸಭೆಯಲ್ಲಿ ಭಾನುವಾರ &lsquo;ಅನ್ನಂ ಬ್ರಹ್ಮ&rsquo; ಪ್ರವಚನ ಸರಣಿಯಲ್ಲಿ ನಿದ್ದೆಯೆಂಬ ಪೂಜೆ ವಿಚಾರವಾಗಿ ಆಶೀರ್ವಚನ ನೀಡಿ, ನಿದ್ರೆ ಕೇವಲ ಒಂದು ಅವಸ್ಥೆಯಲ್ಲ. ಅದು ಮಾತೃಸ್ವರೂಪಿಣಿ ದೇವಿಯೇ ಆಗಿದ್ದು, ಶ್ರಮವನ್ನು ಕಳೆಯಲು, ಶರೀರ ಹಾಗೂ ಮನಸ್ಸಿಗೆ ಆದ ಹಾನಿಯನ್ನು ಸರಿಪಡಿಸಲು, ಶಕ್ತಿತುಂಬಲು ಹಾಗೂ ಹೊಸ ಚೈತನ್ಯವನ್ನು ತುಂಬಲು ನಿದ್ದೆ ಸಹಕಾರಿ. ಸಕಾಲದಲ್ಲಿ ಬರುವ ನಿದ್ರೆ ಸುಖ, ಆರೋಗ್ಯ ಹಾಗೂ ಹಲವಾರು ಸಿದ್ಧಿಗಳನ್ನು ನೀಡುತ್ತದೆ ಎಂದು ತಿಳಿಸಿದರು.&lt;/p&gt;&lt;h3&gt;ನಿದ್ದೆ ಸರಿಯಾಗಿ ಬಂದಾಗ ಅದು ಸಮಾಧಿಸ್ಥಿತಿ&lt;/h3&gt;&lt;p&gt;ನಿದ್ರೆ ಸರಿಯಾಗಿ ಬಂದಾಗ ಅದು ಸಮಾಧಿಸ್ಥಿತಿ ಎಂದು ಶಂಕರಾಚಾರ್ಯರು ಉಲ್ಲೇಖಿಸಿದ್ದು, ರಾತ್ರಿ ಹಾಗೂ ಬೆಳಗ್ಗೆಯ ನಡುವಿನ ಎರಡು ಯಾಮಗಳು ನಿದ್ದೆಗೆ ಸೂಕ್ತ ಎಂದು ಶಾಸ್ತ್ರಗಳು ಹೇಳಿವೆ. ಮಧ್ಯರಾತ್ರಿ ಸಮಾನವಾಗಿ ಬರುವಂತೆ ನಿದ್ದೆ ಮಾಡಿದಾಗ ಅದು ಬರಿಯ ನಿದ್ದೆಯಲ್ಲ, ಯೋಗ ಸಮಾಧಿ ಎಂದು ಕರೆಸಿಕೊಳ್ಳುತ್ತದೆ ಎಂದರು.&lt;/p&gt;&lt;p&gt;ಡಿನ್ನರ್ ನಮ್ಮ ಸಂಸ್ಕೃತಿಯಲ್ಲ: ಸಂಜೆ ಸೂರ್ಯಾಸ್ತವಾಗಿ ಸುಮಾರು ಒಂದು ಗಂಟೆಗೆ ಆಹಾರವನ್ನು ಸ್ವೀಕರಿಸುವುದು ಉತ್ತಮ. ಸಂಜೆಯ ಆಹಾರ ಕಡಿಮೆ ಪ್ರಮಾಣದಲ್ಲಿ ಹಾಗೂ ಜೀರ್ಣಕ್ಕೆ ಸುಲಭವಾಗುವಂತಹದ್ದು ಇರಬೇಕು. ಭೂರಿ ಭೋಜನ ರಾತ್ರಿಯ ಊಟಕ್ಕೆ ನಿಷಿದ್ಧ. ಆದರೆ ಅಂಧಾನುಕರಣೆಗೆ ಒಳಗಾಗಿರುವ ನಾವು ಡಿನ್ನರ್ ಹೆಸರಿನಲ್ಲಿ ರಾತ್ರಿ ಭೋಜನ ಕೂಟವನ್ನು ನಡೆಸುತ್ತಿರುವುದು ಆರೋಗ್ಯಕ್ಕೆ ಹಾನಿ ಎಂದು ಪ್ರತಿಪಾದಿಸಿದರು.&lt;/p&gt;&lt;p&gt;ಗುರಿಕಾರರ ದಿನ: ಗುರಿಕಾರರ ದಿನದ ಅಂಗವಾಗಿ ರಾಜ್ಯ - ಹೊರರಾಜ್ಯಗಳಿಂದ ಆಗಮಿಸಿದ್ದ ಶ್ರೀಮಠದ ಪ್ರತಿನಿಧಿಗಳಾದ ಗುರಿಕಾರರನ್ನು ಆಶೀರ್ವದಿಸಿದ ಶ್ರೀಗಳು, ಗುರಿಕಾರರೆಂದರೆ ಶ್ರೀಮಠದ ಆಂಜನೇಯರಿದ್ದಂತೆ. ಸಮಾಜದ ಮಧ್ಯದಲ್ಲಿ ಶ್ರೀಮಠದ ಕಾರ್ಯಗಳನ್ನು ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಬೇಕು ಎಂದರು 11 ಮಂಡಲಗಳಿಂದ ಚಾತುರ್ಮಾಸ್ಯಕ್ಕೆ ಸಂಗ್ರಹವಾದ ನಗದು ಕಾಣಿಕೆಯನ್ನು ಸಾಂಕೇತಿಕವಾಗಿ ಶ್ರೀಗಳಿಗೆ ಸಮರ್ಪಿಸಲಾಯಿತು.&lt;/p&gt;&lt;p&gt;ಸಮಸ್ತ ಗುರಿಕಾರರ ಪರವಾಗಿ ಸತ್ಯನಾರಾಯಣ ಮೊಗ್ರ ದಂಪತಿ ಗುರುಭಿಕ್ಷಾ ಸೇವೆ ನೆರವೇರಿಸಿದರು. ಸಮಾಜದ ಮಧ್ಯದಲ್ಲಿ ಶ್ರೀಗಳ ಪ್ರತಿನಿಧಿಗಳಾಗಿ ಇರುವ ಗುರಿಕಾರರ ಕ್ಷೇಮಕ್ಕಾಗಿ 1008 ನವಗ್ರಹ ಶಾಂತಿ ನಡೆಸಲಾಯಿತು.&lt;/p&gt;&lt;p&gt;ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷರಾದ ಜಿ.ಜಿ ಹೆಗಡೆ, ಶಿವಶಂಕರ ಭಟ್ಟ ಭೋನಂತಾಯ, ಗಣಪತಿ ಸುಬ್ರಾಯ ಹೆಗಡೆ, ಶಾಂತರಾಮ ಹಿರೇಮನೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ದಿನಪ್ರಧಾನರಾಗಿ ಈಶ್ವರ ಕೇಶವ ಹೆಗಡೆ ಮುಂತಾದವರು ಇದ್ದರು.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/annabrahma-chaturmasya-raghaveshwara-shripadaru-speaks-on-the-importance-of-sleep-rav/articleshow-yottc5c"/>
        </item>
    </channel>
</rss>
