<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 27 Aug 2026 06:23:15 +0530</lastBuildDate>
        <atom:link href="https://kannada.asianetnews.com/rss/dakshina-kannada" rel="self" type="application/rss+xml"/>
        <item>
            <title><![CDATA[37 ವರ್ಷದ ಹಿಂದೆ ಕೊಟ್ಟ ಮಾತಿನಂತೆ ಸಂಸ್ಕೃತಮಯವಾದ ಕುಟುಂಬ;  ಮಾತಿಗೆ ಬದ್ಧರಾದ  ವಸಂತ ಮಾಧವ]]></title>
            <link>https://kannada.asianetnews.com/karnataka-districts/bantwal-kalladka-vasantha-madhav-savitri-have-made-sanskrit-language-of-conversation-in-their-home-for-past-37-years-mrq/articleshow-1d0mfuh</link>
            <guid isPermaLink="true">https://kannada.asianetnews.com/karnataka-districts/bantwal-kalladka-vasantha-madhav-savitri-have-made-sanskrit-language-of-conversation-in-their-home-for-past-37-years-mrq/articleshow-1d0mfuh</guid>
            <pubDate>Sat, 22 Aug 2026 10:28:12 +0530</pubDate>
            <description><![CDATA[ಕಲ್ಲಡ್ಕ ಸಮೀಪದ ಮುಲಾರಿನಲ್ಲಿ ವಸಂತ ಮಾಧವ ಮತ್ತು ಸಾವಿತ್ರಿ ದಂಪತಿ ಕಳೆದ 37 ವರ್ಷಗಳಿಂದ ತಮ್ಮ ಮನೆಯಲ್ಲಿ ಸಂಸ್ಕೃತವನ್ನೇ ಸಂಭಾಷಣೆಯ ಭಾಷೆಯನ್ನಾಗಿಸಿಕೊಂಡಿದ್ದಾರೆ. ವಿವಾಹದ ಸಂದರ್ಭದಲ್ಲಿ ಸಾವಿತ್ರಿಯವರು ಇಟ್ಟ ಬೇಡಿಕೆಯಂತೆ ಆರಂಭವಾದ ಈ ಸಂಸ್ಕೃತಮಯ ಜೀವನ, ಇದೀಗ ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗೂ ಮುಂದುವರಿದು, ಅವರ ಮನೆಯನ್ನು ಒಂದು ಆದರ್ಶ 'ಸಂಸ್ಕೃತ ಗೃಹಂ' ಆಗಿ ರೂಪಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0j2mdq8mye45kx4f615rm83,imgname-sanskrit-1787313141480.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೌನೇಶ ವಿಶ್ವಕರ್ಮ&lt;/strong&gt;&lt;/p&gt;&lt;p&gt;&lt;strong&gt;ಬಂಟ್ವಾಳ: &lt;/strong&gt;ಮನೆಯೊಳಗೆ ಕಾಲಿಟ್ಟರೆ ಕೇಳಿಸುವುದು ಸಂಸ್ಕೃತದ ಮಾತು. ಬೆಳಗಿನ ಶುಭಾಶಯದಿಂದ ಹಿಡಿದು ಊಟದ ಸಮಯದ ಮಾತುಕತೆ, ಮಕ್ಕಳೊಂದಿಗೆ ಸಂಭಾಷಣೆ, ಮನೆಯ ನಿತ್ಯದ ವಿಚಾರಗಳು ಎಲ್ಲವೂ ಸಂಸ್ಕೃತದಲ್ಲೇ. ಕಳೆದ ಸುಮಾರು 37 ವರ್ಷಗಳಿಂದ ಸಂಸ್ಕೃತವನ್ನೇ ತಮ್ಮ ಮನೆಯ ಸಂಭಾಷಣೆಯ ಭಾಷೆಯನ್ನಾಗಿ ಮಾಡಿಕೊಂಡಿರುವ ಅಪರೂಪದ ಕುಟುಂಬವೊಂದು ಕಲ್ಲಡ್ಕ ಸಮೀಪದ ಮುಲಾರು ದ್ವಾರಕಾ ನಗರ ಎಂಬಲ್ಲಿದೆ.&lt;/p&gt;&lt;p&gt;ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಹಾಗೂ ಅವರ ಪತ್ನಿ ಸಾವಿತ್ರಿ ಅವರ ಮನೆಯೇ ಈ ವಿಶಿಷ್ಟ ಸಂಸ್ಕೃತ ಗೃಹಂನ ಶಕ್ತಿಗಳು.&lt;/p&gt;&lt;h2&gt;&lt;strong&gt;ಸಂಸ್ಕೃತಮಯ ಬದುಕು&lt;/strong&gt;&lt;/h2&gt;&lt;p&gt;ಇವರ ಸಂಸ್ಕೃತಮಯ ಬದುಕಿನ ಹಿಂದೆ ಒಂದು ವಿಶೇಷವಾದ ಕಥೆಯಿದೆ. ಕುಮಟಾ ನಿವಾಸಿಯಾಗಿರುವ ಸಾವಿತ್ರಿ ಕುಂದಾಪುರದ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಕೃತ ಭಾರತಿ ಸೇವಾದ್ರತಿಯಾಗಿ ಸಂಸ್ಕೃತ ಸೇವೆಯಲ್ಲಿ ತೊಡಗಿಸಿಕೊಂಡವರು. ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಾ, ನಿರಂತರವಾಗಿ ಸಂಸ್ಕೃತದಲ್ಲಿ ಮಾತನಾಡುತ್ತಿದ್ದ ಅವರಿಗೆ, ತಮ್ಮ ವೈವಾಹಿಕ ಜೀವನವೂ ಸಂಸ್ಕೃತದ ವಾತಾವರಣದಲ್ಲಿರಬೇಕು ಎಂಬ ಬಯಕೆಯಿತ್ತು.&lt;/p&gt;&lt;h3&gt;&lt;strong&gt;ಅಪರೂಪದ ಬೇಡಿಕೆಗೆ ಒಪ್ಪಿದ್ರು ವಸಂತ ಮಾಧವ&lt;/strong&gt;&lt;/h3&gt;&lt;p&gt;ವಸಂತ ಮಾಧವ ವಧು ಪರೀಕ್ಷೆಗೆಂದು ನೋಡಲು ಬಂದ ಸಂದರ್ಭದಲ್ಲಿ ಸಾವಿತ್ರಿ ತಮ್ಮ ಮುಂದೆ ಒಂದು ಬೇಡಿಕೆ ಇಟ್ಟಿದ್ದರು. ಮನೆ ಸಂಸ್ಕೃತ ಗೃಹವಾಗಬೇಕು. ಮನೆಯಲ್ಲಿ ಸಂಸ್ಕೃತವನ್ನೇ ಮಾತನಾಡಬೇಕು. ಎಂಬುದು ಆ ಬೇಡಿಕೆ. ಸಾವಿತ್ರಿಯವರ ಈ ಅಪರೂಪದ ಬೇಡಿಕೆಗೆ ವಸಂತ ಮಾಧವರು ಒಪ್ಪಿಗೆ ಸೂಚಿಸಿದರು. ಆದರೆ ಅದಕ್ಕಾಗಿ ಅವರೂ ಸಂಸ್ಕೃತ ಕಲಿಯಬೇಕಿತ್ತು.&lt;/p&gt;&lt;p&gt;ಆಗ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗಣಿತ ಮತ್ತು ವಿಜ್ಞಾನ ಅಧ್ಯಾಪಕರಾಗಿದ್ದ ವಸಂತ ಮಾಧವ ಅವರು ಸಂಸ್ಕೃತ ಅಧ್ಯಯನಕ್ಕೆ ಮುಂದಾದರು. ಸಂಸ್ಕೃತ ಸಂಭಾಷಣಾ ಶಿಬಿರಗಳಲ್ಲಿ ಭಾಗವಹಿಸಿ, ಭಾಷೆಯನ್ನು ಕಲಿತು, ಪತ್ನಿಯೊಂದಿಗೆ ನಿರಂತರವಾಗಿ ಸಂಸ್ಕೃತದಲ್ಲಿ ಮಾತನಾಡುವ ಅಭ್ಯಾಸ ಬೆಳೆಸಿಕೊಂಡರು. ಹೀಗೆ ವಿವಾಹದ ಸಂದರ್ಭದ ಒಂದು ಬೇಡಿಕೆ, ಮುಂದೆ ಇಡೀ ಕುಟುಂಬದ ಜೀವನಶೈಲಿಯನ್ನೇ ಬದಲಿಸಿತು.&lt;/p&gt;&lt;p&gt;ಪ್ರತೀ ಮಾತುಕತೆಯೂ ಸಂಸ್ಕೃತದಲ್ಲೇ ಸುಪ್ರಭಾತಮ್! ಕಥಮಸ್ತಿ ಭವತೀ? ಎಂದು ವಸಂತ ಮಾಧವರು ಕೇಳಿದರೆ, ಸುಪ್ರಭಾತಮ್. ಅಹಂ ಕುಶಲಾ ಅಸ್ಮಿ. ಭವಾನ್ ಕಥಮಸ್ತಿ? ಎಂಬ ಉತ್ತರ ಸಾವಿತ್ರಿಯವರಿಂದ ಬರುತ್ತದೆ. ಊಟದ ಸಂದರ್ಭದಲ್ಲೂ ಸಂಸ್ಕೃತದ ಮಾತುಗಳೇ. ಭೋಜನಂ ಸಿದ್ಧಮಸ್ತಿ ವಾ?, &ldquo;ಆಮ್, ಭೋಜನಂ ಸಿದ್ಧಮಸ್ತಿ. ಆಗಚ್ಛತು, ಭೋಜನಂ ಕುರ್ಮಃ. ಅಂದರೆ, &ldquo;ಊಟ ಸಿದ್ಧವಾಗಿದೆಯೇ?, &ldquo;ಹೌದು, ಊಟ ಸಿದ್ಧವಾಗಿದೆ. ಬನ್ನಿ, ಊಟ ಮಾಡೋಣ&rdquo; ಎಂಬ ಸಾಮಾನ್ಯ ಸಂಭಾಷಣೆಯೂ ಸಂಸ್ಕೃತದಲ್ಲೇ. ಉಳಿದಂತೆ ಆಗಚ್ಛಂತು (ಬನ್ನಿ), ಉಪವಿಶಂತು (ಕುಳಿತುಕೊಳ್ಳಿ), ಜಲಮ್ ಇಚ್ಛತಿ ವಾ? (ನೀರು ಬೇಕಾ?), ಜಲಮ್ ಇಚ್ಛಾಮಿ (ನೀರು ಬೇಕು), ಅಂತಃ ಆಗಚ್ಛಂತು ( ಒಳಗೆ ಬನ್ನಿ ) , ಗತ್ವಾ ಆಗಚ್ಛಂತು (ಹೋಗಿ ಬನ್ನಿ), ಭೋಜನಂ ಕೃತವಂತಃ ವಾ? (ಊಟ ಆಯಿತಾ?), ಏನು ಮಾಡುತ್ತಿದ್ದೀರಿ? (ಕಿಂ ಕರೋತಿ ಭವಾನ್?) ಮೊದಲಾದ ಸಂಭಾಷಣೆಯ ಸಾಲುಗಳು ಇಲ್ಲಿ ಕೇಳುತ್ತಲೇ ಇರುತ್ತದೆ.&lt;/p&gt;&lt;h3&gt;&lt;strong&gt;ಸಂಸ್ಕೃತದಲ್ಲೇ ಮಾತು ಆರಂಭಿಸಿದ ಮಗ&lt;/strong&gt;&lt;/h3&gt;&lt;p&gt;ಈ ದಂಪತಿಯ ಪ್ರಥಮ ಪುತ್ರ ಶಿವಕುಮಾರ ಬಾಲ್ಯದಲ್ಲಿ ಮಾತು ಆರಂಭಿಸಿದ್ದೇ, ಸಂಸ್ಕೃತದಲ್ಲಿ. ಇದಕ್ಕಾಗಿ ಇಡೀ ಮನೆಯ ವಾತಾವರಣವನ್ನೂ ಸಂಸ್ಕೃತಮಯವನ್ನಾಗಿಸಿದ್ದರು. ಪರಿಣಾಮವಾಗಿ ಮಕ್ಕಳು ಕೂಡ ಸಂಸ್ಕೃತದಲ್ಲಿ ಮಾತನಾಡುವುದನ್ನು ಸಹಜವಾಗಿ ಕಲಿತರು. ಮಗ ಶಿವಕುಮಾರ ಹಾಗೂ ಮಗಳು ಚೈತ್ರಾ ಭಾಮತಿ ಸಂಸ್ಕೃತ ಸಂಭಾಷಣೆಯ ಪರಂಪರೆಯಲ್ಲಿ ಬೆಳೆದು ದೊಡ್ಡವರಾದವರು. ಮಗಳು ಚೈತ್ರಾ ವಿವಾಹವಾಗಿ ಹೋದ ಗುರುರಂಜನ್&zwnj; ಮನೆಯಲ್ಲೂ ಸಂಸ್ಕೃತದ ವಾತಾವರಣ ಮುಂದುವರಿದಿದೆ. ಇತ್ತ ಮಗ, ಸೊಸೆ ನಾಗಶ್ರೀ ಹಾಗೂ ಇದೀಗ ಮೊಮ್ಮಗಳೂ ಶ್ರೀಹೃದ್ಯಾ ಕೂಡಾ ಸಂಸ್ಕೃತ ಕಲಿಯುತ್ತಾ ಬೆಳೆಯುತ್ತಿದ್ದಾರೆ.&lt;/p&gt;&lt;p&gt;ಮನೆಯ ಇಬ್ಬರು ಮಕ್ಕಳು ಚಿಕ್ಕವರಿದ್ದಾಗ ಸಂಸ್ಕೃತದಲ್ಲಿಯೇ ಜಗಳವಾಡುತ್ತಿದ್ದರು ಎಂಬುದು ಮತ್ತೊಂದು ವಿಶೇಷ&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bantwal-kalladka-vasantha-madhav-savitri-have-made-sanskrit-language-of-conversation-in-their-home-for-past-37-years-mrq/articleshow-1d0mfuh"/>
        </item>
        <item>
            <title><![CDATA[ಕರಾವಳಿ ರೈಲ್ವೆ ಬೇಡಿಕೆಗಳು: ಗೋಮಟೇಶ್ವರ  ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ ವರೆಗೆ ವಿಸ್ತರಿಸಲು ಮನವಿ]]></title>
            <link>https://kannada.asianetnews.com/karnataka-districts/west-coast-committee-urges-palakkad-drm-to-extend-gomateshwara-express-to-mangaluru-central-railway-station-gdp/articleshow-3mdgt95</link>
            <guid isPermaLink="true">https://kannada.asianetnews.com/karnataka-districts/west-coast-committee-urges-palakkad-drm-to-extend-gomateshwara-express-to-mangaluru-central-railway-station-gdp/articleshow-3mdgt95</guid>
            <pubDate>Tue, 18 Aug 2026 22:04:20 +0530</pubDate>
            <description><![CDATA[ಮಂಗಳೂರು ಭಾಗದ ಹಲವು ವರ್ಷಗಳ ರೈಲ್ವೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿಯು ಪಾಲಕಾಡು ವಿಭಾಗದ ಪ್ರಬಂಧಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಗೋಮಟೇಶ್ವರ ಎಕ್ಸ್&zwnj;ಪ್ರೆಸ್&zwnj; ವಿಸ್ತರಣೆ, ಹೊಸ ರೈಲುಗಳ ಆರಂಭ, ನಿಲ್ದಾಣ ನವೀಕರಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಇವುಗಳನ್ನು ಆದ್ಯತೆಯ ಮೇಲೆ ಪರಿಗಣಿಸುವುದಾಗಿ ಡಿ.ಆರ್.ಎಂ. ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpx4g5b0mkk3amr4tfx009s4,imgname-mangaluru-central-railway--1--1776946779488.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಕಳೆದ ಹಲವು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಮಂಗಳೂರು ಭಾಗದ ವಿವಿಧ ರೈಲ್ವೆ ಬೇಡಿಕೆಗಳ ಶೀಘ್ರ ಈಡೇರಿಕೆಗಾಗಿ ರೈಲ್ವೇಗೆ ಮನವಿ ನೀಡಲಾಗಿದೆ. ಪಾಲಕಾಡು ವಿಭಾಗ ರೈಲ್ವೇ ಸಲಹಾ ಸಮಿತಿಯ ಮಾಜಿ ಸದಸ್ಯ ಹನುಮಂತ ಕಾಮತ್ ಮಾರ್ಗದರ್ಶನದಲ್ಲಿ, ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿ ಸದಸ್ಯರು ಪಾಲಕಾಡು ರೈಲ್ವೆ ವಿಭಾಗ ಕಚೇರಿಗೆ ಭೇಟಿ ನೀಡಿ, ರೈಲ್ವೇ ವಿಭಾಗ ಪ್ರಬಂಧಕರನ್ನು (ಡಿ.ಆರ್.ಎಂ.) ಭೇಟಿ ಮಾಡಿ, ಈ ಭಾಗದ ಜನತೆಯ ಬಹುಕಾಲದ ಬೇಡಿಕೆಗಳ ಶೀಘ್ರ ಈಡೇರಿಕೆ ಬಗ್ಗೆ ಚರ್ಚಿಸಿದರು.&lt;/p&gt;&lt;p&gt;ಮಂಗಳೂರಿನಿಂದ ಬೆಂಗಳೂರಿಗೆ ಅತ್ಯಂತ ಕಡಿಮೆ ಪ್ರಯಾಣ ವೆಚ್ಚದಲ್ಲಿ ಸಂಪರ್ಕ ಕಲ್ಪಿಸುವ ಹಗಲು ರೈಲನ್ನು (ಗೋಮಟೇಶ್ವರ ಎಕ್ಸ್&zwnj;ಪ್ರೆಸ್&zwnj;) ಮಂಗಳೂರು ಸೆಂಟ್ರಲ್&zwnj;ವರೆಗೆ ವಿಸ್ತರಿಸುವ ಬೇಡಿಕೆ ಈವರೆಗೂ ಈಡೇರಿಸಲಿಲ್ಲ. ಮಂಗಳೂರು ಸೆಂಟ್ರಲ್&zwnj;ನಲ್ಲಿ 4 ಮತ್ತು 5 ಪ್ಲಾಟ್ ಫಾರಂ ಅದ ಬಳಿಕ, ಈ ರೈಲನ್ನು ಕೇಂದ್ರ ನಿಲ್ದಾಣಕ್ಕೆ ವಿಸ್ತರಿಸಲಾಗುವುದು ಎಂದು ಈ ಭಾಗದ ಜನಪ್ರತಿನಿಧಿಗಳಿಗೆ, ರೈಲ್ವೆ ಸಲಹಾ ಸಮಿತಿ ಸದಸ್ಯರಿಗೆ ರೈಲ್ವೆ ಅಧಿಕಾರಿಗಳು ಈ ಹಿಂದೆ ಭರವಸೆ&lt;/p&gt;&lt;p&gt;ನೀಡಿದ್ದರು. ಮಂಗಳೂರು ಸೆಂಟ್ರಲ್&zwnj;ನಲ್ಲಿ ಹೆಚ್ಚುವರಿ ಪ್ಲಾಟ್ ಫಾರಂ ಆದ ಬಳಿಕವೂ ಬೇಡಿಕೆ ಈಡೇರಿಲ್ಲ. ಆದುದರಿಂದ ಈ ರೈಲನ್ನು ಶೀಘ್ರ ಮಂಗಳೂರು ಸೆಂಟ್ರಲ್&zwnj;ವರೆಗೆ ವಿಸ್ತರಣೆ ಮಾಡುವಂತೆ ಅಥಾವ ಒಂದು ವೇಳೆ ಇದು ಸದ್ಯಕ್ಕೆ ಅಸಾಧ್ಯವಾದರೇ, ವಾರಕ್ಕೆ ಒಮ್ಮೆ ಸಂಚರಿಸುವ 16539/40 ಯಶವಂತಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಯಿತು.&lt;/p&gt;&lt;p&gt;ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಹಳಿ ಡಬ್ಲಿಂಗ್, ಮಂಗಳೂರಿನಿಂದ ಬೆಂಗಳೂರು ಹಾಗೂ ಮುಂಬಯಿ ಭಾಗಕ್ಕೆ ರಜಾ ಕಾಲದ ವಿಶೇಷ ರೈಲು ವ್ಯವಸ್ಥೆ, ಮಂಗಳೂರು - ಸುಬ್ರಹ್ಮಣ್ಯಕ್ಕೆ ಮೆಮು (MEMU) ರೈಲು, ಮಂಗಳೂರು ಸೆಂಟ್ರಲ್ ನಿಲ್ದಾಣ ನವೀಕರಣ, ವಾರಕ್ಕೊಮ್ಮೆ ಸಂಚರಿಸುವ ರಾಮೇಶ್ವರ ರೈಲಿನ ಭೋಗಿಗಳನ್ನು ಬಳಸಿ ಮುಂಬೈ ಅಥಾವ ಭಾವ ನಗರಕ್ಕೆ ಹೊಸ ರೈಲಿನ ಆರಂಭ ಇತ್ಯಾದಿ ಬೇಡಿಕೆಗಳನ್ನು ಸಲ್ಲಿಸಲಾಯಿತು.&lt;/p&gt;&lt;p&gt;ಮನವಿ ಸ್ವೀಕರಿಸಿದ ಡಿ.ಆರ್.ಎಂ. ಅವರು ಬೇಡಿಕೆಗಳನ್ನು ಪರಿಶೀಲಿಸಿ ಆದ್ಯತೆಯ ಮೇಲೆ ಪರಿಗಣಿಸಲಾಗುವುದು ಎಂಬ ಭರವಸೆ ನೀಡಿದರು. ಮಂಗಳೂರು ಸೆಂಟ್ರಲ್&zwnj;ನಲ್ಲಿ ಇನ್ನೂ ಹೆಚ್ಚುವರಿಯಾಗಿ ಎರಡು ಪ್ಲಾಟ್ ಫಾರಂಗಳ ನಿರ್ಮಾಣಕ್ಕೆ ಅನುಮತಿ ದೊರಕಿದ್ದು, ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎ೦ಬ ಮಾಹಿತಿ ನೀಡಿದರು.&lt;/p&gt;&lt;p&gt;ಮಂಗಳೂರು ರೈಲ್ವೆ ನಿಲ್ದಾಣ ಸಲಹಾ ಸಮಿತಿ ಮಾಜಿ ಸದಸ್ಯ ಹಾಗೂ ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿ ಸದಸ್ಯ ಅನಿಲ್ ಹೆಗ್ಡೆ ಮತ್ತು ಇತರರು ಇದ್ದರು.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/west-coast-committee-urges-palakkad-drm-to-extend-gomateshwara-express-to-mangaluru-central-railway-station-gdp/articleshow-3mdgt95"/>
        </item>
        <item>
            <title><![CDATA[ಆಗಸ್ಟ್ 23, 24ರಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪೂಜಾ ಸೇವೆಯಲ್ಲಿ ಕೆಲ ಬದಲಾವಣೆ]]></title>
            <link>https://kannada.asianetnews.com/karnataka-districts/kukke-subrahmanya-temple-suspends-major-sevas-on-august-23-and-24-due-to-ekadashi-gdp/articleshow-ci9rfib</link>
            <guid isPermaLink="true">https://kannada.asianetnews.com/karnataka-districts/kukke-subrahmanya-temple-suspends-major-sevas-on-august-23-and-24-due-to-ekadashi-gdp/articleshow-ci9rfib</guid>
            <pubDate>Sat, 22 Aug 2026 10:41:43 +0530</pubDate>
            <description><![CDATA[ಪುರಾಣ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಮತ್ತು 24 ರಂದು ಏಕಾದಶಿ ಪ್ರಯುಕ್ತ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಮತ್ತು ನಾಗಪ್ರತಿಷ್ಠೆ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಆದರೆ, ಭಕ್ತರು ಶ್ರೀ ದೇವರ ದರ್ಶನ ಪಡೆಯಬಹುದು ಮತ್ತು ಇತರೆ ನಿತ್ಯ ಪೂಜೆಗಳು ಎಂದಿನಂತೆ ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01js19eqb1jdrqe1qdvn5t4gp1,imgname-kukke.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸುಬ್ರಹ್ಮಣ್ಯ&lt;/strong&gt;: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಸರ್ಪಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಮತ್ತು 24ರಂದು ಕೆಲವು ಪ್ರಮುಖ ಧಾರ್ಮಿಕ ಸೇವೆಗಳು ನಡೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;h2&gt;ಸೇವೆಗಳು ರದ್ದಾಗಲು ಕಾರಣವೇನು?&lt;/h2&gt;&lt;p&gt;ಆಗಸ್ಟ್ 23ರಂದು ಏಕಾದಶಿ ಹಾಗೂ ಆಗಸ್ಟ್ 24ರಂದು ಅತಿರಿಕ್ತ ಏಕಾದಶಿ ಇರುವುದರಿಂದ, ಈ ವಿಶೇಷ ಧಾರ್ಮಿಕ ದಿನಗಳ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ನಡೆಯುವ ಪ್ರಮುಖ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಈ ಮೂರು ಪ್ರಮುಖ ಸೇವೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.&lt;/p&gt;&lt;p&gt;ದೇವರ ದರ್ಶನ ಮತ್ತು ನಿತ್ಯ ಪೂಜೆಗಳು ಎಂದಿನಂತೆದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ಮಂಗಳಾರತಿ, ಅರ್ಚನೆ, ಮಹಾಪೂಜೆ ಸೇರಿದಂತೆ ಇತರ ನಿತ್ಯ ಪೂಜೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳು ಎಂದಿನಂತೆ ನೆರವೇರಲಿವೆ.ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು, ನಿಗದಿತ ನಿತ್ಯ ಪೂಜೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದು ದೇವಸ್ಥಾನದ ಪ್ರಕಟಣೆ ಸ್ಪಷ್ಟಪಡಿಸಿದೆ. ಆದ್ದರಿಂದ ಭಕ್ತಾದಿಗಳು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರಕ್ಕೆ ಆಗಮಿಸಬೇಕಾಗಿ ವಿನಂತಿಸಲಾಗಿದೆ.&lt;/p&gt;&lt;h2&gt;ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ನಕಲಿ ವೀಡಿಯೋ: ಪೊಲೀಸ್ ದೂರು&lt;/h2&gt;&lt;p&gt;ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರನ್ನು ವಂಚಿಸಲು ಯತ್ನಿಸುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದೆ.&lt;/p&gt;&lt;p&gt;ನಾಗರ ಪಂಚಮಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ₹750 ಮುಂಗಡ ಹಣ ಪಾವತಿಸಿದರೆ ದೇವಸ್ಥಾನದ ಸೇವೆಗಳನ್ನು ನೆರವೇರಿಸಿ ಪ್ರಸಾದವನ್ನು ಕಳುಹಿಸಿಕೊಡಲಾಗುವುದು ಎಂಬ ಸಂದೇಶವನ್ನು ವಿಡಿಯೋದಲ್ಲಿ ನೀಡಲಾಗಿದೆ. ಇದರಿಂದ ಭಕ್ತರು ಮೋಸ ಹೋಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.&lt;/p&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.&lt;/p&gt;&lt;p&gt;ದೇವಸ್ಥಾನದ ಅಧಿಕೃತ ಸೇವೆಗಳು ಹಾಗೂ ಪ್ರಸಾದಕ್ಕೆ ಸಂಬಂಧಿಸಿದ ಹಣ ಪಾವತಿ ಮಾಡುವ ಮುನ್ನ ಭಕ್ತರು ಯಾವುದೇ ಅಪರಿಚಿತ ವ್ಯಕ್ತಿಗಳ ಸಾಮಾಜಿಕ ಜಾಲತಾಣದ ಲಿಂಕ್, ಮೊಬೈಲ್ ಸಂಖ್ಯೆ ಅಥವಾ ಖಾತೆಗೆ ಹಣ ವರ್ಗಾಯಿಸದೆ, ದೇವಸ್ಥಾನದ ಅಧಿಕೃತ ಮೂಲಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kukke-subrahmanya-temple-suspends-major-sevas-on-august-23-and-24-due-to-ekadashi-gdp/articleshow-ci9rfib"/>
        </item>
        <item>
            <title><![CDATA[ಮಂಗಳೂರು ರೈಲ್ವೆಗಾಗಿ  ಕೇರಳ ಬೀದಿ ಹೋರಾಟ; ಹಿಂಸಾ ರೂಪ ಪಡೆದ ಪ್ರತಿಭಟನೆ, ಪ್ರಧಾನಿಗೆ ಪತ್ರ]]></title>
            <link>https://kannada.asianetnews.com/india-news/proposal-to-merge-the-mangalore-railway-division-with-the-mysore-division-has-led-to-strong-protests-in-kerala-mrq/articleshow-cykvzut</link>
            <guid isPermaLink="true">https://kannada.asianetnews.com/india-news/proposal-to-merge-the-mangalore-railway-division-with-the-mysore-division-has-led-to-strong-protests-in-kerala-mrq/articleshow-cykvzut</guid>
            <pubDate>Tue, 25 Aug 2026 08:30:15 +0530</pubDate>
            <description><![CDATA[ಮಂಗಳೂರು ರೈಲ್ವೆ ವಿಭಾಗವನ್ನು ಮೈಸೂರು ವಿಭಾಗಕ್ಕೆ ಸೇರಿಸುವ ಕೇಂದ್ರದ ಪ್ರಸ್ತಾಪವು ಕೇರಳದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಆದಾಯ ನಷ್ಟದ ಕಾರಣ ನೀಡಿ ಕೇರಳ ಸರ್ಕಾರ ಈ ನಿರ್ಧಾರವನ್ನು ವಿರೋಧಿಸಿದರೆ, ಇದು ಕರ್ನಾಟಕದ 23 ವರ್ಷಗಳ ಹೋರಾಟದ ನ್ಯಾಯಯುತ ಹಕ್ಕು ಎಂದು ಕೇಂದ್ರ ಸಚಿವರು ಮತ್ತು ರಾಜ್ಯ ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0vdr55re3gqqb0fngawc4nr,imgname-mangaluru-1787626788024.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಾಲಕ್ಕಾಡ್&zwnj;:&lt;/strong&gt; ಕೇರಳಂನ ಪಾಲಕ್ಕಾಡ್&zwnj; ರೈಲ್ವೆ ವಿಭಾಗದ ಭಾಗವಾದ ಮಂಗಳೂರನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿಸುವ ರೈಲ್ವೆ ಸಚಿವಾಲಯದ ಪ್ರಸ್ತಾಪ ವಿರೋಧಿಸಿ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದ್ದು, ಅದು ಹಿಂಸಾ ರೂಪ ಪಡೆದಿದೆ.&lt;/p&gt;&lt;p&gt;ಸಿಪಿಎಂನ ಯುವ ಘಟಕವಾದ ಡೆಮಾಕ್ರೆಟಿಕ್&zwnj; ಯೂಥ್&zwnj; ಫೆಡರೇಷನ್&zwnj; ಆಫ್&zwnj; ಇಂಡಿಯಾ (ಡಿವೈಎಫ್&zwnj;ಐ) ಕಾರ್ಯಕರ್ತರು ಸೋಮವಾರ ಬೆಳಗ್ಗೆ 8ಕ್ಕೆ ಇಲ್ಲಿನ ವಿಭಾಗೀಯ ರೈಲ್ವೆ ವ್ವವಸ್ಥಾಪಕರ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ಮಾಡಿದರು. ಈ ವೇಳೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ಅವರನ್ನು ತಡೆಗಟ್ಟುವ ಯತ್ನ ಮಾಡಿದರಾದರೂ, ಕಾರ್ಯಕರ್ತರು ಬ್ಯಾರಿಕೇಡ್&zwnj; ಹಾರಿ ಕಚೇರಿಯ ಕಾಂಪೌಂಡ್&zwnj; ನುಗ್ಗಿ ಕಚೇರಿ ಎದುರು ಧರಣಿ ಕುಳಿತು ಘೋಷಣೆ ಕೂಗಿ, ನಿರ್ಧಾರ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.&lt;/p&gt;&lt;p&gt;ಬಳಿಕ ಯುವ ಕಾಂಗ್ರೆಸ್&zwnj; ಕೂಡಾ ಇದೇ ರೀತಿಯ ಪ್ರತಿಭಟನೆ ಹಮ್ಮಿಕೊಂಡು, ರೈಲ್ವೆ ಕಚೇರಿಯತ್ತ ತೆರಳುವ ಯತ್ನ ಮಾಡಿತಾದರೂ ಪೊಲೀಸರು ಅವರನ್ನು ಮಾರ್ಗ ಮಧ್ಯದಲ್ಲೇ ತಡೆಗಟ್ಟಿ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಈ ನಡುವೆ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್&zwnj; ಸಂಸದರು ಓಣಂ ಹಬ್ಬದ ದಿನದಂದು ಉಪವಾಸ ಸತ್ಯಾಗ್ರಹ ನಡೆಸುವ ಘೋಷಣೆ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಬಿಜೆಪಿ ಸಮರ್ಥನೆ&lt;/strong&gt;&lt;/h2&gt;&lt;p&gt;ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದರಿಂದ ರಾಜ್ಯಕ್ಕೆ ಯಾವುದೇ ಅನ್ಯಾಯ ಆಗದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಕೇರಳ ವಿರೋಧ ಏಕೆ&lt;/strong&gt;&lt;/h3&gt;&lt;p&gt;ಮಂಗಳೂರು ಬಂದರಿನ ಮೂಲಕ ಆಗಮಿಸುವ ಸರಕು ಮಂಗಳರಿನಿಂದ ದೇಶದ ವಿವಿಧ ಭಾಗಗಳಿಗೆ ಸಾಗಾಟ ಆಗುತ್ತದೆ. ಪಾಲಕ್ಕಾಡ್&zwnj; ವಲಯಕ್ಕೆ ಹೆಚ್ಚಿನ ಆದಾಯ ಬರುವುದೇ ಮಂಗಳೂರು ವಿಭಾಗದಿಂದ. ಹೀಗಾಗಿ ಮಂಗಳೂರು ಕೈತಪ್ಪಿದರೆ ಪಾಲಕ್ಕಾಡ್&zwnj; ವಲಯಕ್ಕೆ ಭಾರೀ ಆದಾಯ ನಷ್ಟವಾಗುತ್ತದೆ ಎಂಬುದು ಕೇರಳಂನ ವಾದ.=&lt;/p&gt;&lt;h3&gt;&lt;strong&gt;23 ವರ್ಷದ ಹೋರಾಟದ ಬಳಿಕ ನಮ್ಮ ಹಕ್ಕು ನಮಗೆ&lt;/strong&gt;&lt;/h3&gt;&lt;p&gt;ಕರ್ನಾಟಕದ 23 ವರ್ಷದ ಹೋರಾಟಕ್ಕೆ ಸಿಕ್ಕ ಜಯ. ನಮ್ಮ ಹಕ್ಕನ್ನು ನಾವು ಪಡೆದುಕೊಂಡಿದ್ದೇವೆ. ಇದರಲ್ಲಿ ಕೇರಳಕ್ಕೆ ಅನ್ಯಾಯ ಎಲ್ಲಿಂದ ಬಂತು. ಯಾವ ರಾಜ್ಯಕ್ಕೂ ನಾವು ಅನ್ಯಾಯ ಮಾಡಿಲ್ಲ&zwnj;. ಕರ್ನಾಟಕ ನಿರಂತರ ಹೋರಾಟದ ಮೂಲಕ ತನ್ನ ಹಕ್ಕು ಪಡೆದುಕೊಂಡಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ವಿಜಭಜನೆ ತಡೆ ಕೋರಿ ಮೋದಿಗೆ ಕೇರಳ ಸಿಎಂ&lt;/strong&gt;&lt;/h3&gt;&lt;p&gt;ತಿರುವನಂತಪುರಂ: ಮಂಗಳೂರು ರೈಲ್ವೆಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಸದ್ಯಕ್ಕೆ ತಡೆಹಿಡಿಯುವಂತೆ ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪತ್ರ ಬರೆದು ಆಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಕಾಂಗ್ರೆಸ್&zwnj;ಗೇನು ಕಷ್ಟ?: ಆರ್&zwnj;ಸಿ&lt;/strong&gt;&lt;/h3&gt;&lt;p&gt;ಇದು ಆಡಳಿತಾತ್ಮಕ ಬದಲಾವಣೆ. ಕರ್ನಾಟಕದ ಮೈಸೂರಿಗೆ ಮಂಗಳೂರು ಸೇರಿದರೆ ಕಾಂಗ್ರೆಸ್&zwnj;ಗೇನು ಕಷ್ಟ. ಇದರಿಂದ ಕೇರಳಂಗೆ ಯಾವುದೇ ನಷ್ಟವಾಗದು. ಆಡಳಿತದ ವೈಫಲ್ಯ ಮುಚ್ಚಿಡಲು ಕಾಂಗ್ರೆಸ್&zwnj; ವಿವಾದ ಸೃಷ್ಟಿಸಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್&zwnj; ಚಂದ್ರಶೇಖರ್&zwnj; ಆರೋಪಿಸಿದ್ದಾರೆ.&lt;/p&gt;&lt;p&gt;&lt;strong&gt;ನೈಋತ್ಯ ರೈಲ್ವೆಗೆ ಮಂಗಳೂರು ಸೇರ್ಪಡೆಗೆ ತಡೆ ಕೋರಿ ಪ್ರಧಾನಿ ಮೋದಿಗೆ ಕೇರಳಂ ಸಿಎಂ ಪತ್ರ&lt;/strong&gt;&lt;/p&gt;&lt;p&gt;ಮಂಗಳೂರು ರೈಲ್ವೆಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಸದ್ಯಕ್ಕೆ ತಡೆಹಿಡಿಯುವಂತೆ ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ. ಈ ಕುರಿತು ಮೋದಿಯವರಿಗೆ ಪತ್ರ ಬರೆದಿರುವ ಅವರು, ಈ ವಿಷಯದಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.&lt;/p&gt;&lt;p&gt;&lsquo;ಭಾರತೀಯ ರೈಲ್ವೆಯ ಕಾರ್ಯನಿರ್ವಹಣೆಯಲ್ಲಿ ಆಡಳಿತಾತ್ಮಕ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಅಗತ್ಯವನ್ನು ಕೇರಳ ಸಂಪೂರ್ಣವಾಗಿ ಗೌರವಿಸುತ್ತದೆ. ಆದರೆ, ಯಾವುದೇ ಆಡಳಿತಾತ್ಮಕ ರ್ನಿರ್ಧಾರ ಕೈಗೊಳ್ಳುವ ಮೊದಲು, ಸಂಬಂಧಪಟ್ಟ ಎಲ್ಲಾ ಪ್ರದೇಶಗಳ ಮೇಲೆ ಅದರ ಪರಿಣಾಮಗಳನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಬೇಕು. ಇದರಿಂದ ಯಾವುದೇ ರಾಜ್ಯ ಅಥವಾ ಪ್ರದೇಶದ ರೈಲ್ವೆ ಮೂಲಸೌಕರ್ಯ ಹಾಗೂ ಅಭಿವೃದ್ಧಿಯ ಅವಕಾಶಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ&rsquo; ಎಂದು ಪತ್ರದಲ್ಲಿ ವಿವರಿಸಿದ್ದಾರೆ.&lt;/p&gt;&lt;p&gt;ಮಂಗಳೂರು ರೈಲ್ವೆಯನ್ನು ನೈಋತ್ಯ ವಿಭಾಗಕ್ಕೆ ಸೇರಿಸುವ ಈ ನಿರ್ಧಾರವನ್ನು ತಕ್ಷಣವೇ ತಡೆಹಿಡಿಯಬೇಕು. ಈ ವಿಚಾರದಲ್ಲಿ ಪ್ರಧಾನಿಗಳು ಮಧ್ಯಪ್ರವೇಶಿಸಬೇಕು. ಕೇರಳ ಸರ್ಕಾರ ಹಾಗೂ ಸಂಬಂಧಪಟ್ಟ ಇತರೆ ಪಾಲುದಾರರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳುವಂತೆ ರೈಲ್ವೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು&rsquo; ಎಂದು ಕೋರಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/proposal-to-merge-the-mangalore-railway-division-with-the-mysore-division-has-led-to-strong-protests-in-kerala-mrq/articleshow-cykvzut"/>
        </item>
        <item>
            <title><![CDATA[ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್‌ಗೆ ಬಿಗ್‌ ಶಾಕ್;  2110 ಕೋಟಿ ರಹಸ್ಯ]]></title>
            <link>https://kannada.asianetnews.com/gallery/dakshina-kannada/shivam-associates-fraud-case-enforcement-directorate-has-taken-into-custody-owner-of-company-shivananda-neelannavar-mrq-db67rgn</link>
            <guid isPermaLink="true">https://kannada.asianetnews.com/gallery/dakshina-kannada/shivam-associates-fraud-case-enforcement-directorate-has-taken-into-custody-owner-of-company-shivananda-neelannavar-mrq-db67rgn</guid>
            <pubDate>Sat, 15 Aug 2026 08:55:48 +0530</pubDate>
            <description><![CDATA[&lt;p&gt;ಶಿವಂ ಅಸೋಸಿಯೇಟ್ ಕಂಪೆನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್&zwnj;ನನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ. ಸಾರ್ವಜನಿಕರಿಂದ ಅಸಾಮಾನ್ಯ ಆದಾಯದ ಭರವಸೆ ನೀಡಿ ಸುಮಾರು 2,110.97 ಕೋಟಿ ರೂ. ಸಂಗ್ರಹಿಸಿದ ಆರೋಪದ ಮೇಲೆ ಈ ಬಂಧನ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzvgexpt4bdd8gcn5zk079s,imgname-shivanand-neelannavar-1779185499030.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಂ ಅಸೋಸಿಯೇಟ್ ಕಂಪೆನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್&zwnj;ನನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ. ಸಾರ್ವಜನಿಕರಿಂದ ಅಸಾಮಾನ್ಯ ಆದಾಯದ ಭರವಸೆ ನೀಡಿ ಸುಮಾರು 2,110.97 ಕೋಟಿ ರೂ. ಸಂಗ್ರಹಿಸಿದ ಆರೋಪದ ಮೇಲೆ ಈ ಬಂಧನ ನಡೆದಿದೆ.&lt;/p&gt;&lt;img&gt;&lt;p&gt;ಶಿವಂ ಅಸೋಸಿಯೇಟ್ ಕಂಪೆನಿಯ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್&zwnj;ನನ್ನು ಜಾರಿ ನಿರ್ದೇಶನಾಲಯ(ಇಡಿ) ವಶಕ್ಕೆ ಪಡೆದುಕೊಂಡಿದ್ದು, ಮಂಗಳೂರಿನ ಜೆಎಂಎಫ್&zwnj;ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.&lt;/p&gt;&lt;img&gt;&lt;p&gt;ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಆ.24ರ ವರೆಗೆ ಅಂದರೆ 12 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿದೆ. ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ 2002ರ ಕಲಂ 19ರ ಅಡಿಯಲ್ಲಿ ಆ.13ರಂದು ಬಂಧಿಸಲಾಗಿದೆ.&lt;/p&gt;&lt;img&gt;&lt;p&gt;ಬೆಳಗಾವಿ ನಗರದ ಮಲಮಾರುತಿ ಪೊಲೀಸ್ ಠಾಣೆಯಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019 ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ-2004ರ ಅಡಿಯಲ್ಲಿ ದಾಖಲಾಗಿದ್ದ ಎಫ್&zwnj;ಐಆರ್ ಆಧರಿಸಿ ಇ.ಡಿ ತನಿಖೆ ಆರಂಭಿಸಿತ್ತು. ಸಾರ್ವಜನಿಕರಿಗೆ ಅಸಾಮಾನ್ಯ ಪ್ರಮಾಣದ ಹಾಗೂ ಖಾತರಿಪಡಿಸಿದ ಆದಾಯದ ಭರವಸೆ ನೀಡಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗಿತ್ತು ಎಂಬ ಆರೋಪ ಎಫ್&zwnj;ಐಆರ್&zwnj;ನಲ್ಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಖರ್ಗೆ ಕುಟುಂಬದ ಟ್ರಸ್ಟ್&zwnj;ಗೆ ಬಿಡಿಎ ನಿವೇಶನ ವಿವಾದಕ್ಕೆ ಬಿಗ್ ಟ್ವಿಸ್ಟ್: ಲೋಕಾಯುಕ್ತಕ್ಕೆ ಹೈಕೋರ್ಟ್ ನೋಟಿಸ್!&lt;/strong&gt;&lt;/p&gt;&lt;img&gt;&lt;p&gt;ತನಿಖೆಯಲ್ಲಿ &lsquo;ಶಿವಂ ಅಸೋಸಿಯೇಟ್ಸ್&rsquo; ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಛತ್ತೀಸ್&zwnj;ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯವಸ್ಥಿತ ಜಾಲದ ಮೂಲಕ ಸಾರ್ವಜನಿಕರಿಂದ 2,110.97 ಕೋಟಿ ರು. ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ ಎಂದು ಇ.ಡಿ ತಿಳಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಶಿವಾನಂದ ನೀಲಣ್ಣನವರ್ 5 ಕೋಟಿ ಮೌಲ್ಯದ ನಾಲ್ಕು ಐಷಾರಾಮಿ ಕಾರು ಸೀಜ್, ಬೆಳಗಾವಿ ವಂಚನೆ ಕೇಸ್&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/dakshina-kannada/shivam-associates-fraud-case-enforcement-directorate-has-taken-into-custody-owner-of-company-shivananda-neelannavar-mrq-db67rgn"/>
        </item>
        <item>
            <title><![CDATA[ಶಾಲಾ-ಕಾಲೇಜುಗಳು ಸೇರಿ ಉಡುಪಿ ಜಿಲ್ಲೆಗೆ ನಾಳೆ ಸಾರ್ವತ್ರಿಕ ರಜೆ ಘೋಷಣೆ..!]]></title>
            <link>https://kannada.asianetnews.com/udupi/general-holiday-declared-for-udupi-district-tomorrow-including-schools-and-colleges-gkn/articleshow-dd3adnm</link>
            <guid isPermaLink="true">https://kannada.asianetnews.com/udupi/general-holiday-declared-for-udupi-district-tomorrow-including-schools-and-colleges-gkn/articleshow-dd3adnm</guid>
            <pubDate>Sun, 16 Aug 2026 22:49:38 +0530</pubDate>
            <description><![CDATA[&lt;p&gt;ನಾಗರಪಂಚಮಿ ಹಬ್ಬದ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ನಾಳೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05s6kymnv4qfhqdm3w2pze9,imgname-general-holiday-has-been-declared-for-all-schools--colleges-1786900598740.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಉಡುಪಿ: &lt;/strong&gt;ಕರಾವಳಿ ಜನರ ಪಾಲಿನ ಅತ್ಯಂತ ಪವಿತ್ರ ಹಾಗೂ ಶ್ರದ್ಧಾಭಕ್ತಿಯ ಹಬ್ಬವಾದ 'ನಾಗರಪಂಚಮಿ'ಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ನಾಳೆ (ಶನಿವಾರ) ಸಾರ್ವತ್ರಿಕ ರಜೆ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಜಿಲ್ಲಾಧಿಕಾರಿಗಳ ಆದೇಶ&lt;/strong&gt;&lt;/h2&gt;&lt;p&gt;ನಾಗರಪಂಚಮಿ ಹಬ್ಬದ ದಿನದಂದು ಜಿಲ್ಲೆಯಾದ್ಯಂತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಗಬನ ಹಾಗೂ ದೇವಾಲಯಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ (ಪ್ರಭಾರ ಡಿಸಿ ದರ್ಶನ್ ಎಚ್.ವಿ ಅವರ ಮೂಲಕ) ಸಾರ್ವತ್ರಿಕ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಈ ರಜೆಯು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ಕರಾವಳಿಯ ನಾಗಾರಾಧನೆಯ ವೈಶಿಷ್ಟ್ಯ&lt;/strong&gt;&lt;/h2&gt;&lt;p&gt;ಕರಾವಳಿ ಭಾಗದಲ್ಲಿ ಅಥವಾ 'ಪರಶುರಾಮ ಸೃಷ್ಟಿ'ಯಲ್ಲಿ ನಾಗರಪಂಚಮಿಗೆ ವಿಶಿಷ್ಟ ಸ್ಥಾನವಿದೆ. ಇಲ್ಲಿ ನಾಗಾರಾಧನೆಯು ಕೇವಲ ಒಂದು ಹಬ್ಬವಲ್ಲ, ಅದು ಒಂದು ಜೀವನ ಪದ್ಧತಿಯಾಗಿದೆ. ಕರಾವಳಿ ಜನರಿಗೆ ನಾಗದೇವತೆಯ ಮೇಲೆ ಅಪಾರ ಭಯ ಮತ್ತು ಭಕ್ತಿ ಎರಡೂ ಇದೆ. ಪ್ರತಿಯೊಂದು ಕುಟುಂಬಕ್ಕೂ ತನ್ನದೇ ಆದ 'ನಾಗಬನ' (ಪವಿತ್ರ ಹಸಿರು ವನ) ಇರುತ್ತದೆ. ಹಬ್ಬದ ದಿನದಂದು ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರಿ ನಾಗಬನದಲ್ಲಿ ನಾಗದೇವತೆಗೆ ತಂಬಿಲ, ಅಭಿಷೇಕ ಮಾಡುವುದು ಇಲ್ಲಿನ ಪರಂಪರೆ.&lt;/p&gt;&lt;p&gt;ನಾಗದೇವನಿಗೆ ಹಾಲು, ಜೇನುತುಪ್ಪ, ಎಳನೀರು ಹಾಗೂ ಅರಿಶಿನದಿಂದ ಅಭಿಷೇಕ ಮಾಡಲಾಗುತ್ತದೆ. ಅಲ್ಲದೆ, ನಾಗದೇವನಿಗೆ ಅತ್ಯಂತ ಪ್ರಿಯವಾದ 'ಕೇದಗೆ' ಹೂವು ಹಾಗೂ 'ಪಿಂಗಾರ' (ಅಡಿಕೆ ಹೂವು) ಅರ್ಪಿಸಲಾಗುತ್ತದೆ. ಹಬ್ಬದ ಪ್ರಯುಕ್ತ ಮನೆಮನೆಗಳಲ್ಲಿ ಅರಿಶಿನ ಎಲೆಯ ಕಡುಬು (ಅರಿಶಿನ ಎಲೆ ಅಡ್ಡೆ) ವಿಶೇಷವಾಗಿ ತಯಾರಿಸಲಾಗುತ್ತದೆ. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಸ್ಥಾನ, ಉಡುಪಿಯ ಅನಂತೇಶ್ವರ ದೇವಸ್ಥಾನಗಳಲ್ಲಿ ನಾಗರಪಂಚಮಿಯಂದು ಭಕ್ತರ ಸಾಗರವೇ ಹರಿದುಬರುತ್ತದೆ. ಸರ್ಪದೋಷ ನಿವಾರಣೆಗಾಗಿ ಸಾವಿರಾರು ಭಕ್ತರು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಹಾಗೂ ತಂಬಿಲ ಸೇವೆಗಳನ್ನು ಸಲ್ಲಿಸುತ್ತಾರೆ.&lt;/p&gt;&lt;h2&gt;&lt;strong&gt;ನಾಗರಪಂಚಮಿ ಮತ್ತು ಪರಿಸರ&lt;/strong&gt;&lt;/h2&gt;&lt;p&gt;ಕರಾವಳಿಯಲ್ಲಿ ನಾಗಾರಾಧನೆಯು ಪರಿಸರ ಸಂರಕ್ಷಣೆಯ ಸಂಕೇತವೂ ಹೌದು. ನಾಗಬನಗಳ ಹೆಸರಿನಲ್ಲಿ ಕಾಡುಗಳನ್ನು ಉಳಿಸಿಕೊಳ್ಳುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ಈ ಹಬ್ಬವು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಸಾರುತ್ತದೆ. ಒಟ್ಟಾರೆಯಾಗಿ ಕರಾವಳಿಯ ಜಿಲ್ಲೆಗಳಲ್ಲಿ ನಾಗರಪಂಚಮಿಯ ಸಡಗರ ಮನೆಮಾಡಿದ್ದು, ಭಕ್ತರು ಭಕ್ತಿಯಿಂದ ನಾಗದೇವನನ್ನು ಪೂಜಿಸಲು ಸಜ್ಜಾಗಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/udupi/general-holiday-declared-for-udupi-district-tomorrow-including-schools-and-colleges-gkn/articleshow-dd3adnm"/>
        </item>
        <item>
            <title><![CDATA[ಕಸ ಗುಡಿಸಲು ಫಾರ್ಚೂನರ್ ಕಾರಲ್ಲಿ ಬರ್ತಾನೆ ಪೌರ ಕಾರ್ಮಿಕ! ಆಳಾಗಿ ದುಡಿದು ಅರಸನಂತೆ ಮೆರೆತಿರೋ ಈ ಸೇಸಪ್ಪಣ್ಣ ಯಾರು?]]></title>
            <link>https://kannada.asianetnews.com/karnataka-districts/who-is-this-sesappanna-from-bantwal-a-civil-servant-who-comes-in-a-fortuner-car-rav/articleshow-g4qgyrk</link>
            <guid isPermaLink="true">https://kannada.asianetnews.com/karnataka-districts/who-is-this-sesappanna-from-bantwal-a-civil-servant-who-comes-in-a-fortuner-car-rav/articleshow-g4qgyrk</guid>
            <pubDate>Sun, 23 Aug 2026 05:48:45 +0530</pubDate>
            <description><![CDATA[&lt;p&gt;ಬಂಟ್ವಾಳದ ಪೌರ ಕಾರ್ಮಿಕರಾದ ಸೇಸಪ್ಪಣ್ಣ, ಪ್ರತಿದಿನ ತಮ್ಮ 35 ಲಕ್ಷ ಮೌಲ್ಯದ ಫಾರ್ಚೂನರ್&zwnj; ಕಾರಿನಲ್ಲಿ ಕೆಲಸಕ್ಕೆ ಬರುತ್ತಾರೆ. ₹50 ದಿನಗೂಲಿಯಿಂದ ಜೀವನ ಆರಂಭಿಸಿ, ಕುಡಿತದ ಚಟದಿಂದ ಹೊರಬಂದು, ಕಠಿಣ ಪರಿಶ್ರಮ, ಹೈನುಗಾರಿಕೆ ಮತ್ತು ಪ್ರಾಮಾಣಿಕ ದುಡಿಮೆಯಿಂದ ಈ ಹಂತಕ್ಕೆ ತಲುಪಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0nzp109yzkep82sx7g64c7d,imgname-----------------------2026-08-23t054006.920-1787444265992.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೌನೇಶ ವಿಶ್ವಕರ್ಮ&lt;/strong&gt;&lt;/p&gt;&lt;p&gt;&lt;strong&gt;ಬಂಟ್ವಾಳ (ಆ.23):&lt;/strong&gt;&lt;/p&gt;&lt;p&gt;ಇವರೊಬ್ಬ ಪೌರ ಕಾರ್ಮಿಕ. ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೂ ರಸ್ತೆ ಬದಿ ಕಸ ಗುಡಿಸುತ್ತಾರೆ. ಅದರಲ್ಲೇನು ವಿಶೇಷ ಅಂತೀರಾ? ಈ ಪೌರ ಕಾರ್ಮಿಕ ಕಸ ಗುಡಿಸುವ ಸ್ಥಳಕ್ಕೆ ಬರುವುದು ತನ್ನದೇ ಐಷಾರಾಮಿ ಫಾರ್ಚೂನರ್&zwnj; ಕಾರಿನಲ್ಲಿ!&lt;/p&gt;&lt;p&gt;ನಂಬಲು ಆಗುತ್ತಿಲ್ಲ ಎಂದಾದರೆ, ನೀವು ಬಂಟ್ವಾಳದ ಬಿ.ಸಿ. ರೋಡ್&zwnj;ಗೆ ಬಂದರೆ ಕಣ್ಣಾರೆ ನೋಡಬಹುದು.&lt;/p&gt;&lt;p&gt;ಬಂಟ್ವಾಳದ ಸೇಸಪಣ್ಣ ಎಂಬ ಪೌರ ಕಾರ್ಮಿಕ ಪ್ರತಿನಿತ್ಯ ಕೆಲಸದ ಸ್ಥಳಕ್ಕೆ ತಮ್ಮದೇ ಫಾರ್ಚೂನರ್&zwnj; ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ಬರುತ್ತಾರೆ. ಒಂದು ಜಾಗದಲ್ಲಿ ಅದನ್ನು ನಿಲ್ಲಿಸಿ ಬೆಳಗ್ಗೆ 5ಕ್ಕೇ ಪೊರಕೆ ಹಿಡಿದು ತಮ್ಮ ಕೆಲಸ ಆರಂಭಿಸುತ್ತಾರೆ. 50 ರು. ದಿನಗೂಲಿಯಿಂದ ಆರಂಭವಾದ ಅವರ ಬದುಕು ಈಗ 35 ಲಕ್ಷ ರು. ಮೌಲ್ಯದ ಕಾರಿನಲ್ಲಿ ಓಡಾಡುವ ಹಂತಕ್ಕೆ ಬಂದಿದೆ. ಸ್ವಂತ ಮನೆಯನ್ನೂ ಹೊಂದಿದ್ದಾರೆ.&lt;/p&gt;&lt;h2&gt;ಹೇಗೆ ಈ ಬದಲಾವಣೆ?:&lt;/h2&gt;&lt;p&gt;1996ರಲ್ಲಿ ಕೇವಲ ₹50 ದಿನಗೂಲಿಗೆ ಪೌರಕಾರ್ಮಿಕರಾಗಿ ಕೆಲಸ ಕೆಲಸ ಆರಂಭಿಸಿದ ಸೇಸಪ್ಪಣ್ಣ, ದಿನ ಕಳೆದಂತೆ ಕಾಯಂ ನೌಕರರಾದರು. 3ನೇ ತರಗತಿಯ ವಿದ್ಯಾಭ್ಯಾಸ ಹೊಂದಿದ್ದರೂ, ಬದುಕಿನ ಪಾಠಗಳನ್ನು ಅವರು ಅನುಭವದಿಂದ ಕಲಿತರು. ಜೀವನದ ಒಂದು ಹಂತದಲ್ಲಿ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು. ಆದರೆ ಅದನ್ನು ತಮ್ಮ ಬದುಕಿನ ಅಂತಿಮ ಅಧ್ಯಾಯವಾಗಲು ಅವರು ಬಿಡಲಿಲ್ಲ.&lt;/p&gt;&lt;p&gt;2005ರ ಬಳಿಕ ಬದುಕನ್ನು ಬದಲಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರು. ಆಗ ಎಸ್&zwnj;ಐ ಆಗಿದ್ದ ಬೆಳ್ಳಿಯಪ್ಪ ಅವರ ಮಾತು ಅವರಿಗೆ ಪ್ರೇರಣೆಯಾಯಿತು. ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿ, ದುಡಿಮೆಯ ದಾರಿಯಲ್ಲಿ ಹೊಸ ಬದುಕು ಆರಂಭಿಸಿದರು. ಅಲ್ಲಿಂದ ಸೇಸಪ್ಪಣ್ಣ ಜೀವನದ ದಿಕ್ಕೇ ಬದಲಾಯಿತು. ದುಡಿಮೆ ಜತೆಗೆ ಕಾರು ಖರೀದಿಸುವ ಕ್ರೇಜ್ ಶುರುವಾಯಿತು. ಒಂದೊಂದು ಕಾರಿನಿಂದ ಬಡ್ತಿ ಪಡೆದು ಈಗ ಫಾರ್ಚೂನರ್&zwnj; ಮಟ್ಟಕ್ಕೆ ಬೆಳೆದಿದ್ದಾರೆ.&lt;/p&gt;&lt;h3&gt;5 ಗಂಟೆಗೆ ಸರಿಯಾಗಿ ಕೆಲಸಕ್ಕೆ ಹಾಜರ್&zwnj;:&lt;/h3&gt;&lt;p&gt;ಪ್ರತಿದಿನ ಬೆಳಗ್ಗೆ 5 ಗಂಟೆಗೆ ಬಂಟ್ವಾಳದ ಬಿ.ಸಿ. ರೋಡಿಗೆ ಆಗಮಿಸುವ ಸೇಸಪ್ಪಣ್ಣ ಅವರು, ಮಧ್ಯಾಹ್ನ 12 ಗಂಟೆಯವರೆಗೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಾರೆ. ರಸ್ತೆ ಗುಡಿಸುವುದರಿಂದ ಹಿಡಿದು ತಮಗೆ ವಹಿಸಿದ ವಿವಿಧ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ನಿರ್ವಹಿಸುತ್ತಾರೆ. ಅಗತ್ಯವಿದ್ದಾಗ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಕೆಲಸ ಯಾವುದು ಎನ್ನುವುದಕ್ಕಿಂತ, ಅದನ್ನು ಎಷ್ಟು ಪ್ರಾಮಾಣಿಕವಾಗಿ ಮಾಡುತ್ತೇವೆ ಎನ್ನುವುದೇ ಮುಖ್ಯ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸುತ್ತಿದ್ದಾರೆ.&lt;/p&gt;&lt;p&gt;ಸೇಸಪ್ಪಣ್ಣ ಅವರು ಪೌರ ಕಾರ್ಮಿಕ ಕೆಲಸ ಮಗಿಸಿ, ಮಧ್ಯಾಹ್ನದ ಬಳಿಕ ಹೈನುಗಾರಿಕೆ ಹಾಗೂ ಕೂಲಿ ಕೆಲಸಕ್ಕೂ ತೆರಳುತ್ತಾರೆ. ಹೈನುಗಾರಿಕೆಯಿಂದ ಮಾಸಿಕ 39 ಸಾವಿರ ರು.ನಷ್ಟು ಮೊತ್ತ ಅವರ ಕೈಗೆ ಸಿಗುತ್ತದೆ. ಪೌರಕಾರ್ಮಿಕ ವೃತ್ತಿಯಿಂದ ಸಿಗುವ ಸಂಬಳ ಹಾಗೂ ಹೈನುಗಾರಿಕೆಯ ವರಮಾನ ಮತ್ತು ಕೂಲಿ ಕೆಲಸದಿಂದ ಈ ಹಂತಕ್ಕೆ ಬಂದಿದ್ದಾರೆ.&lt;/p&gt;&lt;h3&gt;ತಂದೆ ಅಂತ್ಯ ಸಂಸ್ಕಾರಕ್ಕೂ ಹಣ ಇರಲಿಲ್ಲ:&lt;/h3&gt;&lt;p&gt;ಸೇಸಪ್ಪಣ್ಣ ಬದುಕಿನಲ್ಲಿ ಮರೆಯಲಾಗದ ನೋವುಗಳೂ ಇವೆ. ತಂದೆ ನಿಧನರಾದಾಗ ಅಂತ್ಯಸಂಸ್ಕಾರ ನಡೆಸಲು ಕೈಯಲ್ಲಿ ಹಣವಿರಲಿಲ್ಲ. ನೆರವಿಗೆ ಜನರೂ ಇರಲಿಲ್ಲ. ಕೊನೆಗೆ ತಂದೆಯ ಮೃತದೇಹವನ್ನು ತಾವೇ ಹೊತ್ತು ನೇತ್ರಾವತಿ ನದಿ ತೀರಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಅವರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.&lt;/p&gt;&lt;h3&gt;ಪೌರ ಕಾರ್ಮಿಕ ಎಂಬ ಹೆಮ್ಮೆ ಇರಲಿ:&lt;/h3&gt;&lt;p&gt;ಸೇಸಪ್ಪಣ್ಣನ ಕಥೆಯಲ್ಲಿ ವಿಶೇಷವಾಗಿ ಗಮನಿಸಬೇಕಾದದ್ದು ಅವರ ವೃತ್ತಿಯ ಬಗ್ಗೆ ಇರುವ ಗೌರವ. ಫಾರ್ಚೂನರ್&zwnj;ನಲ್ಲಿ ಕೆಲಸಕ್ಕೆ ಬಂದರೂ ಕೈಯಲ್ಲಿ ಪೊರಕೆ ಹಿಡಿಯಲು ಅವರು ಹಿಂಜರಿಯುವುದಿಲ್ಲ. ಇದೇ ಅವರ ಬದುಕಿನ ದೊಡ್ಡ ಸಂದೇಶ.&lt;/p&gt;&lt;h3&gt;ಇವರಿಗಿದೆ ಹೆಚ್ಚು ಕಾರಿನ ಕ್ರೇಜ್&zwnj;:&lt;/h3&gt;&lt;p&gt;ಆರಂಭದಲ್ಲಿ ಸಣ್ಣ ಕಾರೊಂದನ್ನು ಖರೀದಿಸಿದ್ದ ಅವರು, ಬಳಿಕ ಆಲ್ಟೋ, ನಂತರ ಸ್ಕಾರ್ಪಿಯೋ ಕಾರನ್ನು ಹೊಂದಿದ್ದರು. ಪ್ರತಿಬಾರಿಯೂ ತಮ್ಮಲ್ಲಿದ್ದ ಹಳೆಯ ಕಾರನ್ನು ಬದಲಾಯಿಸಿ, ಅಗತ್ಯವಿದ್ದಷ್ಟು ಸಾಲ, ಲೋನ್ ಪಡೆದು ಹೊಸ ಕಾರನ್ನು ಖರೀದಿಸುತ್ತಾ ಬಂದಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ತಮ್ಮಲ್ಲಿದ್ದ ಆಲ್ಟೋ ಮತ್ತು ಸ್ಕಾರ್ಪಿಯೋ 2 ಕಾರುಗಳನ್ನು ನೀಡಿ, ಅದರ ಜತೆಗೆ ಸಾಲ ಪಡೆದು ಫಾರ್ಚೂನರ್ ಕಾರನ್ನು ಖರೀದಿಸಿದ್ದಾರೆ.&lt;/p&gt;&lt;p&gt;&lt;strong&gt;ಗೌರವದ ಬದುಕು ಕಾಣುವ ಹಂಬಲ&lt;/strong&gt;&lt;/p&gt;&lt;p&gt;ಬದುಕಿನಲ್ಲಿ ನಾನಾ ಕಷ್ಟಗಳನ್ನು ಎದುರಿಸಿದ್ದೇನೆ. ನನ್ನ ವೃತ್ತಿಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ. ಜೊತೆಗೆ ನಾನು ಎಲ್ಲರ ಹಾಗೆ ಗೌರವಯುತವಾದ ಬದುಕು ಕಾಣುವ ಹಂಬಲದೊಂದಿಗೆ ಬೆಳೆಯುತ್ತಿದ್ದೇನೆ, ನನ್ನ ಮಕ್ಕಳನ್ನು ಬೆಳೆಸಿದ್ದೇನೆ.&lt;/p&gt;&lt;p&gt;&lt;strong&gt;ಸೇಸಪ್ಪಣ್ಣ, ಪೌರಕಾರ್ಮಿಕ&amp;nbsp;&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/who-is-this-sesappanna-from-bantwal-a-civil-servant-who-comes-in-a-fortuner-car-rav/articleshow-g4qgyrk"/>
        </item>
        <item>
            <title><![CDATA[ನೈಋತ್ಯ ರೈಲ್ವೇ ವ್ಯಾಪ್ತಿಗೆ ಮಂಗಳೂರು ಸೇರಿದ್ಯಾಕೆ? ಇಲಾಖೆಯಿಂದಲೇ ಬಂತು ಸ್ಪಷ್ಟನೆ]]></title>
            <link>https://kannada.asianetnews.com/state/why-was-mangalore-railway-transferred-from-palakkad-division-to-mysore-division-of-south-western-railway-mrq/articleshow-gbe72zn</link>
            <guid isPermaLink="true">https://kannada.asianetnews.com/state/why-was-mangalore-railway-transferred-from-palakkad-division-to-mysore-division-of-south-western-railway-mrq/articleshow-gbe72zn</guid>
            <pubDate>Tue, 25 Aug 2026 09:11:59 +0530</pubDate>
            <description><![CDATA[&lt;p&gt;ಮಂಗಳೂರು ರೈಲ್ವೆ ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇದು ಸಂಪೂರ್ಣ ಆಡಳಿತಾತ್ಮಕ ಬದಲಾವಣೆಯಾಗಿದ್ದು, ಇದರಿಂದ ಕೇರಳ ಯಾವುದೇ ನಿಲ್ದಾಣಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0vg4th9wqjjea0gwvbt1s7r,imgname-mangaluru-1-1787629300265.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: ರೈಲ್ವೆಯ ಪಾಲಕ್ಕಾಡ್&zwnj; ವಿಭಾಗದಿಂದ ಮಂಗಳೂರು ಕರ್ನಾಟಕದ ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ತಂದಿರುವುದರಿಂದ ಕೇರಳವು ತನ್ನ ಯಾವುದೇ ನಿಲ್ದಾಣಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;&lt;p&gt;ಈ ಬದಲಾವಣೆ ಸಂಪೂರ್ಣವಾಗಿ ಆಡಳಿತಾತ್ಮಕ ಸ್ವರೂಪದ್ದಾಗಿದ್ದು, ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಇದರಿಂದ ಮಂಗಳೂರು ಹಾಗೂ ಕರಾವಳಿ ಘಟ್ಟ ಪ್ರದೇಶಕ್ಕೆ ಒಂದೇ ಕೇಂದ್ರದಿಂದ ಕಾರ್ಯಾಚರಣಾ ನಿಯಂತ್ರಣ ದೊರೆಯಲಿದೆ. ಮಂಗಳೂರು ನಗರವು ಕರ್ನಾಟಕದಲ್ಲಿರುವುದರಿಂದ ಕೇರಳವು ಯಾವುದೇ ನಿಲ್ದಾಣವನ್ನು ಕಳೆದುಕೊಳ್ಳುವುದಿಲ್ಲ. ಪಾಲಕ್ಕಾಡ್ ವಿಭಾಗವು ಕೇರಳದ ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್ ಮತ್ತು ತಿರುಸ್ಸುರ್ ಜಿಲ್ಲೆಗಳಲ್ಲಿರುವ ತನ್ನ ಸಂಪೂರ್ಣ ರೈಲ್ವೆ ಪ್ರದೇಶವನ್ನು ಮುಂದುವರಿಸಿಕೊಂಡಿರುತ್ತದೆ.&lt;/p&gt;&lt;h2&gt;&lt;strong&gt;ಹೂಡಿಕೆ ಹೇಗೆ ಮಾಡಲಾಗುತ್ತೆ?&lt;/strong&gt;&lt;/h2&gt;&lt;p&gt;ರೈಲ್ವೆಯ ಯಾವುದೇ ವಿಭಾಗ ಅಥವಾ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಾಡುವ ಹೂಡಿಕೆಯು ಆ ವಿಭಾಗ ಅಥವಾ ವಲಯದ ಆದಾಯವನ್ನು ಆಧರಿಸಿರುವುದಿಲ್ಲ. ಬದಲಾಗಿ, ರೈಲ್ವೆ ಜಾಲದ ಅಗತ್ಯತೆ ಮತ್ತು ಕಾರ್ಯಾಚರಣಾ ಅವಶ್ಯಕತೆಗಳ ಆಧಾರದ ಮೇಲೆ ಹೂಡಿಕೆ ಮಾಡಲಾಗುತ್ತದೆ.&lt;/p&gt;&lt;h3&gt;&lt;strong&gt;372 ರಿಂದ 3795 ಕೋಟಿಗೆ ಏರಿಕೆ&lt;/strong&gt;&lt;/h3&gt;&lt;p&gt;ಕಳೆದ ಒಂದು ದಶಕದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇರಳದ ರೈಲ್ವೆ ಜಾಲಕ್ಕೆ ನೀಡಲಾಗುತ್ತಿರುವ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕೇರಳದಲ್ಲಿ ರೈಲ್ವೆ ಜಾಲದ ಅಭಿವೃದ್ಧಿಗೆ ಸ್ಪಷ್ಟವಾದ ಕಾರ್ಯ ಯೋಜನೆಯೂ ರೂಪಿಸಲಾಗಿದೆ. ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗಾಗಿ ಕೇರಳಕ್ಕೆ ನೀಡಲಾಗುವ ವಾರ್ಷಿಕ ಸರಾಸರಿ ಅನುದಾನವು ಯುಪಿಎ ಅವಧಿಯ 372 ಕೋಟಿ ರು.ಯಿಂದ 2026-27ನೇ ಸಾಲಿನಲ್ಲಿ 3,795 ಕೋಟಿ ರು.ಗೆ ಏರಿಕೆಯಾಗಿದೆ. ಅಂದರೆ, ಈ ಅನುದಾನವು ಸುಮಾರು ಹತ್ತು ಪಟ್ಟು ಹೆಚ್ಚಾಗಿದೆ.&lt;/p&gt;&lt;p&gt;ಕಳೆದ 12 ವರ್ಷಗಳಲ್ಲಿ ಈ ಹೂಡಿಕೆಯು ಕೇರಳದಲ್ಲಿ ಗಣನೀಯ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಕಾರಣವಾಗಿದೆ. ಇದರಲ್ಲಿ ಆರು ದ್ವಿ ಜೋಡಿಮಾರ್ಗ/ಗೇಜ್ ಪರಿವರ್ತನಾ ಯೋಜನೆಗಳ ಪೂರ್ಣಗೊಳಿಸುವಿಕೆ, 131 ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ನಿರ್ಮಾಣ, ರೈಲ್ವೆ ಜಾಲದ ಶೇ.100ರಷ್ಟು ವಿದ್ಯುದೀಕರಣ ಹಾಗೂ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 16 ನಿಲ್ದಾಣಗಳ ಪುನರ್&zwnj;ಅಭಿವೃದ್ಧಿ ಸೇರಿವೆ.&lt;/p&gt;&lt;p&gt;ಕೇರಳದ ಜನತೆ ಈ ನಿರ್ಧಾರವನ್ನು ರೈಲು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವ ಮತ್ತು ರೈಲು ಸೇವೆಗಳನ್ನು ಇನ್ನಷ್ಟು ಸುಗಮಗೊಳಿಸುವ ದೃಷ್ಟಿಕೋನದಿಂದ ಪರಿಗಣಿಸಬೇಕೆಂದು ವಿನಂತಿಸುತ್ತೇವೆ ಎಂದು ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/why-was-mangalore-railway-transferred-from-palakkad-division-to-mysore-division-of-south-western-railway-mrq/articleshow-gbe72zn"/>
        </item>
        <item>
            <title><![CDATA[Brave MESCOM staff: ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಜೀವ ಪಣಕ್ಕಿಟ್ಟು ವಿದ್ಯುತ್ ತಂತಿ ಜೋಡಿಸಿದ ಮೆಸ್ಕಾಂ ಸಿಬ್ಬಂದಿ! ವೈರಲ್]]></title>
            <link>https://kannada.asianetnews.com/karnataka-districts/puttur-mescom-staff-connecting-electric-wires-in-a-swollen-river-goes-viral-rav/articleshow-h541wg5</link>
            <guid isPermaLink="true">https://kannada.asianetnews.com/karnataka-districts/puttur-mescom-staff-connecting-electric-wires-in-a-swollen-river-goes-viral-rav/articleshow-h541wg5</guid>
            <pubDate>Fri, 21 Aug 2026 12:29:38 +0530</pubDate>
            <description><![CDATA[ಪುತ್ತೂರಿನ ಬೆಟ್ಟಂಪಾಡಿ ಗ್ರಾಮದಲ್ಲಿ, ಮೂವರು ಮೆಸ್ಕಾಂ ಪವರ್&zwnj;ಮ್ಯಾನ್&zwnj;ಗಳು ಉಕ್ಕಿ ಹರಿಯುತ್ತಿರುವ ಹೊಳೆಯನ್ನು ದಾಟಿ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಿದ್ದಾರೆ. ಜೀವ ಪಣಕ್ಕಿಟ್ಟು ನಡೆಸಿದ ಈ ಸಾಹಸಮಯ ಕಾರ್ಯಾಚರಣೆಯ ದೃಶ್ಯ ವೈರಲ್ ಆಗಿದ್ದು, ಅವರ ಕರ್ತವ್ಯ ನಿಷ್ಠೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0hhgwqpe7vtaqskjppmfa2d,imgname-----------------------2026-08-21t122251.027-1787295199990.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುತ್ತೂರು (ಆ.21)&lt;/strong&gt;: ವಿದ್ಯುತ್ ತಂತಿ ಮರು ಜೋಡಣೆ ಮಾಡಲು ಉಕ್ಕಿ ಹರಿಯುತ್ತಿರುವ ಹೊಳೆಯಲ್ಲಿ ವಿದ್ಯುತ್ ತಂತಿಯನ್ನು ಹಿಡಿದುಕೊಂಡೇ ಮೂವರು ಮೆಸ್ಕಾಂ ಪವರ್&zwnj;ಮ್ಯಾನ್&zwnj;ಗಳು ದಾಟುವ ಮೂಲಕ ನದಿಯ ಎರಡೂ ಭಾಗಗಳಿಗೆ ವಿದ್ಯುತ್ ಸಂಪರ್ಕ ಮರು ಜೋಡಣೆ ಮಾಡುತ್ತಿರುವ ದೃಶ್ಯ ಜಾಲತಾಣದಲ್ಲಿ ವೈರಲ್&zwnj; ಆಗಿದ್ದು, ರಿಯಲ್&zwnj; ಹೀರೋಗಳು ಎಂಬ ಮೆಚ್ಚುಗೆ ವ್ಯಕ್ತವಾಗಿದೆ. ಮೆಸ್ಕಾಂ ಇಲಾಖೆಯ ಗ್ರಾಮಾಂತರ ಪ್ರದೇಶದ ಮೂವರು ಪವರ್ ಮ್ಯಾನ್&zwnj;ಗಳಾದ ಬಂದೇ ನವಾಜ್, ಪ್ರವೀಣ್ ಮತ್ತು ಬಸವರಾಜ್ ಅವರು ಸ್ಥಳೀಯರಾದ ಜಾನು ನಾಯ್ಕ ಮತ್ತವರ ಮನೆಯವರ ಸಹಕಾರದಿಂದ ಜೀವ ಪಣಕ್ಕಿಟ್ಟು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ದೂಮಡ್ಕ ಎಂಬಲ್ಲಿ ಈ ಸಾಹಸಮಯ ಕಾರ್ಯಾಚರಣೆ ನಡೆಸಿದ್ದಾರೆ.&lt;/p&gt;&lt;p&gt;ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ದೂಮಡ್ಕ ಪ್ರದೇಶದಲ್ಲಿ ಹರಿಯುತ್ತಿರುವ ಸೀರೆ ಹೊಳೆಯು ತುಂಬಿ ಹರಿಯುತ್ತಿದೆ. ಈ ಹೊಳೆಯ ಬದಿಯಲ್ಲಿ ಸುಮಾರು ೧೨ ಮನೆಗಳಿದ್ದು, ಅವರಿಗೆ ಹೊಳೆಯ ಇನ್ನೊಂದು ಬದಿಯಿಂದ ಎಲ್.ಟಿ. ಲೈನ್ ಎಳೆದು ವಿದ್ಯುತ್ ನೀಡಲಾಗಿದೆ. ಸೋಮವಾರ ಹೊಳೆ ದಡದಲ್ಲಿ ಇರುವ ಈಚಲು ಮರವೊಂದು ಮುರಿದು ವಿದ್ಯುತ್ ಲೈನ್&zwnj;ಗೆ ಬಿದ್ದ ಕಾರಣ ೪ ತಂತಿಗಳ ಪೈಕಿ ೨ ತುಂಡಾಗಿ ನದಿಗೆ ಬಿದ್ದಿತ್ತು. ಇದನ್ನು ಗಮನಿಸಿದ ಜಾನು ನಾಯ್ಕ, ಅವರ ಪುತ್ರ ಹಾಗೂ ಸ್ಥಳೀಯರು ಸೇರಿಕೊಂಡು ತುಂಡಾದ ತಂತಿಗಳು ನೀರಿನಲ್ಲಿ ಕೊಚ್ಚಿ ಹೋಗದಂತೆ ತಡೆದು ಪಕ್ಕದಲ್ಲಿರುವ ಮರಕ್ಕೆ ಕಟ್ಟಿದ್ದರು.&lt;/p&gt;&lt;p&gt;ಮಂಗಳವಾರ ತುಂಬಿ ಹರಿಯುತ್ತಿರುವ ಹೊಳೆಯ ಮೇಲ್ಭಾಗದಲ್ಲಿ ತಂತಿ ಮರು ಜೋಡಣೆಗೆ ಮುಂದಾದ ಮೂವರು ಪವರ್ ಮ್ಯಾನ್&zwnj;ಗಳು ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದರು.&lt;/p&gt;&lt;p&gt;ಮೆಸ್ಕಾಂ ಬೆಟ್ಟಂಪಾಡಿ ಶಾಖೆಯ ಕಿರಿಯ ಎಂಜಿನಿಯರ್ ಪುತ್ತು ಜೆ. ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡಿದ್ದರು. ಉಕ್ಕಿ ಹರಿಯುತ್ತಿರುವ ಹೊಳೆಯಲ್ಲಿ ನೀರಿನ ಸುಳಿಯನ್ನೂ ಲೆಕ್ಕಿಸದೆ ಕರ್ತವ್ಯ ಪ್ರಜ್ಞೆ ಮೆರೆದಿರುವ ಪವರ್&zwnj;ಮ್ಯಾನ್&zwnj;ಗಳ ಈ ಪವರ್&zwnj;ನ ದೃಶ್ಯವು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.&lt;/p&gt;&lt;p&gt;ಇದೊಂದು ಕರ್ತವ್ಯ ನಿಷ್ಠೆಯ ಪರಮೋಚ್ಚ ನಿದರ್ಶನ. ನಮ್ಮ ತಂಡದ ಸದಸ್ಯರ ಕಾರ್ಯಾಚರಣೆ ನಮಗೆ ಹೆಮ್ಮೆ ತಂದಿದೆ ಎಂದು ಮೆಸ್ಕಾಂ ಪುತ್ತೂರು ಗ್ರಾಮಾಂತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್ ಅಭಿನಂದಿಸಿದ್ದಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/puttur-mescom-staff-connecting-electric-wires-in-a-swollen-river-goes-viral-rav/articleshow-h541wg5"/>
        </item>
        <item>
            <title><![CDATA[ಕರಾವಳಿ ಕರ್ನಾಟಕದ ಬಹುದಿನದ ಬೇಡಿಕೆ ನನಸು: ಕೇರಳ ವಶದಲ್ಲಿದ್ದ ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆ!]]></title>
            <link>https://kannada.asianetnews.com/karnataka-districts/mangalore-railway-area-transferred-to-mysuru-division-south-western-railway-san/articleshow-ikyyaeu</link>
            <guid isPermaLink="true">https://kannada.asianetnews.com/karnataka-districts/mangalore-railway-area-transferred-to-mysuru-division-south-western-railway-san/articleshow-ikyyaeu</guid>
            <pubDate>Fri, 21 Aug 2026 20:03:23 +0530</pubDate>
            <description><![CDATA[&lt;p&gt;ದಶಕಗಳ ಬೇಡಿಕೆಯಂತೆ, ಮಂಗಳೂರು ರೈಲ್ವೇ ಪ್ರದೇಶವನ್ನು ಕೇರಳದ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಿ ಕೇಂದ್ರ ರೈಲ್ವೇ ಮಂಡಳಿ ಆದೇಶಿಸಿದೆ. 2026ರ ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ನಿರ್ಧಾರದಿಂದ ಕರಾವಳಿ ಭಾಗದಲ್ಲಿ ರೈಲ್ವೇ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0jbqmb8nwkgcpxvc71e1jz1,imgname-mangalore-railway-1787322683752.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಮೈಸೂರು (ಆ.21): &lt;/strong&gt;ಕರಾವಳಿ ಕರ್ನಾಟಕದ ಸಾರ್ವಜನಿಕರ ಹಾಗೂ ರೈಲು ಪ್ರಯಾಣಿಕರ ದಶಕಗಳ ಸುದೀರ್ಘ ಬೇಡಿಕೆಗೆ ಕೊನೆಗೂ ಕೇಂದ್ರ ರೈಲ್ವೇ ಸಚಿವಾಲಯ ಅಸ್ತು ಎಂದಿದೆ. ಇದುವರೆಗೆ ಕೇರಳದ ಪಾಲಕ್ಕಾಡ್ ವಿಭಾಗದ ಆಡಳಿತ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೇ ಪ್ರದೇಶವನ್ನು, ಇದೀಗ ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ವರ್ಗಾಯಿಸಿ ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇಡೀ ಕರಾವಳಿ ಭಾಗದಲ್ಲಿ ಆಡಳಿತಾತ್ಮಕ ಗೊಂದಲಗಳಿಗೆ ತೆರೆಬಿದ್ದಿದ್ದು, ರೈಲ್ವೇ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.&lt;/p&gt;&lt;h2&gt;&lt;strong&gt;ಅಕ್ಟೋಬರ್ 1, 2026 ರಿಂದ ನೂತನ ವ್ಯವಸ್ಥೆ ಜಾರಿ&lt;/strong&gt;&lt;/h2&gt;&lt;p&gt;ರೈಲ್ವೇ ಮಂಡಳಿಯ ಅಧಿಸೂಚನೆಯಂತೆ ಈ ಹೊಸ ಆಡಳಿತಾತ್ಮಕ ಬದಲಾವಣೆಯು 2026ರ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದೆ. ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಸೇರಿದಂತೆ ಉಳ್ಳಾಲ ರೈಲ್ವೇ ನಿಲ್ದಾಣದವರೆಗಿನ ಸಂಪೂರ್ಣ ಪ್ರದೇಶವು ಮೈಸೂರು ವಿಭಾಗಕ್ಕೆ ಹಸ್ತಾಂತರಗೊಳ್ಳಲಿದೆ. ಪ್ರಸ್ತುತ ಪಾಲಕ್ಕಾಡ್ ಮತ್ತು ಮೈಸೂರು ವಿಭಾಗಗಳ ನಡುವೆ 'ಪಡೀಲ್' ರೈಲ್ವೇ ನಿಲ್ದಾಣವು ಗಡಿಯಾಗಿತ್ತು (ಇಂಟರ್&zwnj;ಚೇಂಜ್ ಪಾಯಿಂಟ್). ಇನ್ನು ಮುಂದೆ 'ಉಳ್ಳಾಲ' ರೈಲ್ವೇ ನಿಲ್ದಾಣವು ನೂತನ ಇಂಟರ್&zwnj;ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ. ನೂತನ ವ್ಯವಸ್ಥೆಯಡಿ ವಿಭಾಗೀಯ ಪ್ರಧಾನ ಕಚೇರಿ (Divisional HQ) ಮೈಸೂರಿನಲ್ಲಿದ್ದರೆ, ವಲಯ ಪ್ರಧಾನ ಕಚೇರಿ (Zonal HQ) ಹುಬ್ಬಳ್ಳಿಯಲ್ಲಿ ಇರಲಿದೆ.&lt;/p&gt;&lt;h2&gt;&lt;strong&gt;ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಯತ್ನಕ್ಕೆ ಒಲಿದ ಜಯ&lt;/strong&gt;&lt;/h2&gt;&lt;p&gt;ಮಂಗಳೂರು ಪ್ರದೇಶವನ್ನು ಕರ್ನಾಟಕದ ವಲಯಕ್ಕೇ ಸೇರ್ಪಡೆಗೊಳಿಸಲು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್&zwnj; ಚೌಟ ಅವರು ನಿರಂತರವಾಗಿ ಶ್ರಮಿಸಿದ್ದರು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ವಿಷಯ ತಂದಿದ್ದಲ್ಲದೆ, ಜುಲೈ 2024 ರಲ್ಲಿ ರೈಲ್ವೇ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಪ್ರತ್ಯೇಕ ಸಭೆ ನಡೆಸಿ ಸತತ ಒತ್ತಡ ಹೇರಿದ್ದರು. ಇದೀಗ ಅವರ ಶ್ರಮಕ್ಕೆ ಬಹುದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಿದ್ಧಪಡಿಸಲಾದ ಈ ಪ್ರಸ್ತಾವನೆಗೆ ತಕ್ಷಣವೇ ಅನುಮೋದನೆ ನೀಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸಂಸದ ಚೌಟ ಧನ್ಯವಾದ ಅರ್ಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಯಾಣಿಕರಿಗೆ ಸಿಗಲಿದೆ ಭಾರಿ ಅನುಕೂಲ&lt;/strong&gt;&lt;/h2&gt;&lt;p&gt;ಮಂಗಳೂರು ರೈಲ್ವೇ ಪಾಲಕ್ಕಾಡ್ ವಿಭಾಗದಲ್ಲಿದ್ದ ಕಾರಣ ಹೊಸ ರೈಲುಗಳ ಚಾಲನೆ, ವೇಳಾಪಟ್ಟಿ ಬದಲಾವಣೆ ಹಾಗೂ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಯಂತಹ ಸಂದರ್ಭಗಳಲ್ಲಿ ಇಷ್ಟು ದಿನ ನಾನಾ ರೀತಿಯ ಆಡಳಿತಾತ್ಮಕ ತೊಡಕುಗಳು ಎದುರಾಗುತ್ತಿದ್ದವು. ಇದೀಗ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗಿರುವುದರಿಂದ ಸಾರ್ವಜನಿಕರ ಕುಂದುಕೊರತೆಗಳಿಗೆ ಶೀಘ್ರ ಪರಿಹಾರ ಸಿಗಲಿದೆ. ಕರಾವಳಿ ಭಾಗದಿಂದ ಬೆಂಗಳೂರು, ಮೈಸೂರು ಹಾಗೂ ಉತ್ತರ ಕರ್ನಾಟಕಕ್ಕೆ ಹೊಸ ರೈಲುಗಳ ಸಂಪರ್ಕ ಕಲ್ಪಿಸಲು ಹಾದಿ ಸುಗಮವಾಗಲಿದೆ. ಕರಾವಳಿ ರೈಲ್ವೇ ಮೂಲಸೌಕರ್ಯ ಯೋಜನೆಯ ಕಾಮಗಾರಿಗಳಿಗೆ ಭಾರಿ ವೇಗ ದೊರೆಯಲಿದೆ.ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಮಂಗಳೂರು ಹಾಗೂ ಕರಾವಳಿ ಭಾಗದ ರೈಲು ಪ್ರಯಾಣಿಕರು ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಹರ್ಷ ವ್ಯಕ್ತವಾಗಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/mangalore-railway-area-transferred-to-mysuru-division-south-western-railway-san/articleshow-ikyyaeu"/>
        </item>
        <item>
            <title><![CDATA[ರಸ್ತೆಯ ಕೆಸರು ನೀರಿನಲ್ಲಿಯೇ ಶುಂಠಿ ತೊಳೆದು ವ್ಯಾಪಾರಕ್ಕಿಟ್ಟ ವ್ಯಾಪಾರಿ; ಸಾರ್ವಜನಿಕರಿಂದ ಆಕ್ರೋಶ]]></title>
            <link>https://kannada.asianetnews.com/karnataka-districts/mangaluru-merchant-washed-ginger-in-muddy-water-on-the-road-and-sold-it-mrq/articleshow-ix53vfx</link>
            <guid isPermaLink="true">https://kannada.asianetnews.com/karnataka-districts/mangaluru-merchant-washed-ginger-in-muddy-water-on-the-road-and-sold-it-mrq/articleshow-ix53vfx</guid>
            <pubDate>Wed, 19 Aug 2026 09:25:49 +0530</pubDate>
            <description><![CDATA[&lt;p&gt;ರಸ್ತೆಯಲ್ಲಿ ವ್ಯಾಪಾರಿಯೊಬ್ಬರು ರಸ್ತೆಬದಿಯ ಕೆಸರು ನೀರಿನಲ್ಲಿ ಶುಂಠಿ ತೊಳೆದು ಮಾರಾಟಕ್ಕಿಟ್ಟಿದ್ದಾರೆ. ಈ ಕಲುಷಿತ ನೀರಿನ ಬಳಕೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಇಂತಹ ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0c2g4hczhe0w03debym279q,imgname-18-sunti-cleaning-436-1787111674412.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಬಿಕರ್ನಕಟ್ಟೆ-ಕೈಕಂಬ ರಸ್ತೆಯ ಬದಿಯಲ್ಲಿ ಶುಂಠಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ರಸ್ತೆ ಬದಿಯ ಹೊಂಡದಲ್ಲಿ ಸಂಗ್ರಹವಾಗಿದ್ದ ಕೆಸರು ನೀರಿನಲ್ಲಿ ಶುಂಠಿಯನ್ನು ತೊಳೆದು ಸ್ವಚ್ಚಗೊಳಿಸಿದ ಘಟನೆ ನಡೆದಿದೆ.&lt;/p&gt;&lt;p&gt;ವ್ಯಾಪಾರಿ ರಸ್ತೆ ಬದಿಯ ಹೊಂಡದಲ್ಲಿ ನಿಂತಿದ್ದ ಕಲುಷಿತ ಹಾಗೂ ನಿಂತ ನೀರನ್ನು ಬಳಸಿ ಶುಂಠಿಯನ್ನು ತೊಳೆದು ಬಳಿಕ ಮಾರಾಟಕ್ಕೆ ಇಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ವಾಹನ ಸವಾರರು ಹಾಗೂ ಪಾದಾಚಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯಲ್ಲಿ ನಿಂತಿರುವ ನೀರಿನಲ್ಲಿ ಆಹಾರ ಪದಾರ್ಥಗಳನ್ನು ತೊಳೆಯುವುದರಿಂದ ಅವುಗಳಿಗೆ ಮಣ್ಣು, ಬ್ಯಾಕ್ಟೀರಿಯಾ ಹಾಗೂ ಇತರ ಮಾಲಿನ್ಯಕಾರಕಗಳು ಅಂಟಿಕೊಳ್ಳುವ ಸಾಧ್ಯತೆಯಿದ್ದು, ಅನಾರೋಗ್ಯಕ್ಕೆ ಕಾರಣವಾಗಲಿದ್ದು, ಇಂತಹದಕ್ಕೆ ಕಡಿವಾಣ ಹಾಕಬೇಕಾಗಿದ್ದು, ಅಂತಹವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.&lt;/p&gt;&lt;h2&gt;&lt;strong&gt;ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಭಾಭವನ ಕಾಮಗಾರಿ ಪ್ರಗತಿ ಪರಿಶೀಲನೆ&lt;/strong&gt;&lt;/h2&gt;&lt;p&gt;ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನಿರ್ಮಾಣ ಹಂತದಲ್ಲಿರುವ ಹವಾ ನಿಯಂತ್ರಿತ ಸಭಾ ಭವನದ ಕಾಮಗಾರಿ ಬಗ್ಗೆ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯಲ್ಲಿ ಸಭೆ ಜರಗಿತು.ಸಭಾಭವನದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಸಭಾಭವನದ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಎಲ್ಲರ ಸಹಕಾರ ಬೇಕೆಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.&lt;/p&gt;&lt;p&gt;ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಸಂಚಾಲಕ ಕೊಲ್ಲಾಡಿ ಬಾಲಕೃಷ್ಣ ರೈ, ಆರ್ಕಿಟೆಕ್ಟ್ ಗೋಪಾಲ್ ಭಟ್ ಎ ಜಿ ಅಸೋಸಿಯೇಟ್ ಉಡುಪಿ ತಾರಾನಾಥ್ ಶೆಟ್ಟಿ ಮುಂಬೈ, ಸಹಾಯಕ ಇಂಜಿನಿಯರ್ ಧೀರಜ್ ಉಡುಪಿ ,ನಿರ್ಮಾಣ ಕಾಮಗಾರಿಯ ಕಂಟ್ರಾಕ್ಟರ್ ಶಿವಪ್ರಸಾದ್ ರೈ, ರವಿ ರಾಜ್ ಶೆಟ್ಟಿ ಜತ್ತಬೆಟ್ಟು, ಹಾಗೂ ಹವಾ ನಿಯಂತ್ರಣ ಸರಬರಾಜುದಾರ ಎಲೆಕ್ಟ್ರಿಕಲ್ ಕಾಮಗಾರಿಯ ಮುಖ್ಯಸ್ಥರು ಹಾಗೂ ಕನ್ಸಲ್ಟೆಂಟ್ ಫಾಲ್ಸ್ ಸೀಲಿಂಗ್, ಸೌಂಡ್ ಸಿಸ್ಟಮ್, ಅಕೋಸ್ಟಿಕ್ ಅಳವಡಿಕೆದಾರರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತುಂಗಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಮೂವರು ನಾಪತ್ತೆ, ಓರ್ವನ ಶವ ಪತ್ತೆ, ಇಬ್ಬರಿಗಾಗಿ SDRF ಶೋಧ!&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mangaluru-merchant-washed-ginger-in-muddy-water-on-the-road-and-sold-it-mrq/articleshow-ix53vfx"/>
        </item>
        <item>
            <title><![CDATA[ಎಡಕುಮೇರಿ ಘಾಟ್‌ನಲ್ಲಿ ವಂದೇ ಭಾರತ್‌; ಸೋಮೇಶ್ವರ ರೈಲ್ವೇ ಗೇಟ್‌ ಬಂದ್‌, ಬದಲಿ ಮಾರ್ಗ]]></title>
            <link>https://kannada.asianetnews.com/karnataka-districts/dakshina-kannada-vande-bharat-trial-run-at-edakumeri-ghat-someshwar-railway-gate-bandh-alternate-route-details-mrq/articleshow-q4picgc</link>
            <guid isPermaLink="true">https://kannada.asianetnews.com/karnataka-districts/dakshina-kannada-vande-bharat-trial-run-at-edakumeri-ghat-someshwar-railway-gate-bandh-alternate-route-details-mrq/articleshow-q4picgc</guid>
            <pubDate>Tue, 18 Aug 2026 07:25:00 +0530</pubDate>
            <description><![CDATA[ಮಂಗಳೂರು-ಬೆಂಗಳೂರು ನಡುವಿನ ಎಡಕುಮೇರಿ ಘಾಟ್ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಇದರೊಂದಿಗೆ, ಸೋಮೇಶ್ವರ ರೈಲ್ವೆ ಗೇಟ್ ಬಂದ್, ದ.ಕ. ಜಿಲ್ಲೆಯ ಮಳೆ ಹಾಗೂ ಕುದ್ರೋಳಿ ಕ್ಷೇತ್ರದ ನಾಗರಪಂಚಮಿ ವಿಶೇಷ ಪೂಜೆಯ ಕುರಿತು ವರದಿ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09978jv9eczx2g87b8518nr,imgname-vande-bharat-1787018060379.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಮಂಗಳೂರು-ಬೆಂಗಳೂರು ನಡುವೆ ಎಡಕುಮೇರಿ ಮಾರ್ಗದಲ್ಲಿ ವಂದೇ ಭಾರತ್&zwnj; ಎಕ್ಸ್&zwnj;ಪ್ರೆಸ್&zwnj; ರೈಲು ಸಂಚಾರದ ಪೂರ್ವಭಾವಿಯಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಪುರ-ಸುಬ್ರಹ್ಮಣ್ಯ ರೋಡ್&zwnj;ನ ಘಾಟ್&zwnj; ಮಾರ್ಗದಲ್ಲಿ ವಂದೇ ಭಾರತ್&zwnj; ರೈಲಿನ ಪ್ರಾಯೋಗಿಕ ಸಂಚಾರ ಆರಂಭಗೊಂಡಿದ್ದು, ಸೋಮವಾರವೂ ಪ್ರಾಯೋಗಿಕ ಸಂಚಾರ ನಡೆದಿದೆ.&lt;/p&gt;&lt;p&gt;ಆ.12ರಂದು ಸಕಲೇಶಪುರ-ಸುಬ್ರಹ್ಮಣ್ಯ ರೋಡ್&zwnj; ನಡುವೆ ಮೊದಲ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಸಂಚರಿಸಿದೆ. ಆ ಬಳಿಕ ಆ.13ರಂದು ಪ್ರಾಯೋಗಿಕ ಸಂಚಾರ ನಡೆದಿದೆ. ಇದೀಗ ಆ.17ರ ಸೋಮವಾರವೂ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಆ.18, 19 ಹಾಗೂ 20ರ ವರೆಗೆ ಪ್ರಾಯೋಗಿಕ ಸಂಚಾರ ಮುಂದುವರಿಯಲಿದೆ. ಬೆಳಗ್ಗೆ ಗಂಟೆಯ ವೇಳೆಗೆ ಸಕಲೇಶಪುರದಿಂದ ಪ್ರಾಯೋಗಿಕ ಸಂಚಾರ ಹೊರಡುವ ರೈಲು 11.55ರ ವೇಳೆ ಸುಬ್ರಹ್ಮಣ್ಯ ರೋಡ್&zwnj; ತಲುಪಿದ್ದು, 12.15ಕ್ಕೆ ಸುಬ್ರಹ್ಮಣ್ಯದಿಂದ ಸಕಲೇಶಪುದತ್ತ ಸಂಚಾರ ಆರಂಭಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಸೋಮೇಶ್ವರ ರೈಲ್ವೇ ಗೇಟ್&zwnj; ಬಂದ್&zwnj;: ಬದಲಿ ಮಾರ್ಗ ಬಳಕೆಗೆ ಸೂಚನೆ&lt;/strong&gt;&lt;/h2&gt;&lt;p&gt;ಮಂಗಳೂರು: ಉಳ್ಳಾಲ ಮತ್ತು ನೇತ್ರಾವತಿ ರೈಲು ನಿಲ್ದಾಣಗಳ ನಡುವೆ ಲೆವೆಲ್ ಕ್ರಾಸಿಂಗ್ /ಗೇಟ್ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವ ಸಲುವಾಗಿ 877/200-300ನೇ ಕಿಲೋ ಮೀಟರ್&zwnj;ನಲ್ಲಿರುವ ಲೆವೆಲ್ ಕ್ರಾಸಿಂಗ್ ಸಂಖ್ಯೆ 293 (ಸೋಮೇಶ್ವರ ರೈಲ್ವೆ ಗೇಟ್) ಅನ್ನು ಆ.17ರಿಂದ ಬೆಳಗ್ಗೆ 10ರಿಂದ ಆ.25ರ ಸಂಜೆ 5 ಗಂಟೆವರೆಗೆ ರಸ್ತೆ ಸಂಚಾರ ಮುಚ್ಚಲಾಗುತ್ತದೆ. ವಾಹನ ಸವಾರರು ಬೀರಿ - ಸಂಗೋಲಿಗೇ - ಉಚ್ಚಿಲ ಲೆವೆಲ್ ಕ್ರಾಸಿಂಗ್- ಬೀಚ್ ರಸ್ತೆ - ಸೋಮೇಶ್ವರ ಅಥವಾ ಕೋಟೇಕಾರ್- ಕೋಲ್ಯ-ತೊಕ್ಕೊಟ್ಟು-ಓಲಾಪೇಟೆ ರಸ್ತೆ -ಸೋಮೇಶ್ವರ ಪರ್ಯಾಯ ಬದಲಿ ರಸ್ತೆ ಬಳಸುವಂತೆ ಸೂಚಿಸಲಾಗಿದೆ.&lt;/p&gt;&lt;h3&gt;&lt;strong&gt;ದ.ಕ. ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆ&lt;/strong&gt;&lt;/h3&gt;&lt;p&gt;ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದಿದ್ದು, ನಗರದಲ್ಲಿ ಕೆಲಕಾಲ ಮಳೆಯಾಗಿದೆ. ಬಳಿಕ ಸಂಜೆವರೆಗೆ ಬಿಸಿಲ ವಾತಾವರಣ ಇದ್ದರೂ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಿತ್ತು. ಗ್ರಾಮೀಣ ಭಾಗದ ಹಲವೆಡೆ ಆಗಾಗ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ವರೆಗೆ 24 ಗಂಟೆಯಲ್ಲಿ 13 ಮಿ.ಮೀ. ಮಳೆಯಾಗಿದೆ.&lt;/p&gt;&lt;h3&gt;&lt;strong&gt;ಕುದ್ರೋಳಿ: ಸುಬ್ರಹ್ಮಣ್ಯ ದೇವರಿಗೆ ಅಭಿಷೇಕ&lt;/strong&gt;&lt;/h3&gt;&lt;p&gt;ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಾಗರಪಂಚಮಿ ಪ್ರಯುಕ್ತ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಪಿ.ಕೆ.ಗೌರವಿ ರಾಜಶೇಖರ್, ಶ್ರೀ ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್, ಕ್ಷೇತ್ರದ ಭಕ್ತರು ಇದ್ದರು. ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಚಿಕಿತ್ಸೆ ಸಿಗದೆ ಗರ್ಭಿಣಿ ಪತ್ನಿ ಸಾವು: ಗ್ರಾಮಕ್ಕೆ ರಸ್ತೆ ನಿರ್ಮಿಸಿದ ಪತಿ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-vande-bharat-trial-run-at-edakumeri-ghat-someshwar-railway-gate-bandh-alternate-route-details-mrq/articleshow-q4picgc"/>
        </item>
        <item>
            <title><![CDATA[ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ: ಹಲವು ಟ್ರೈನ್‌ ವ್ಯಾಪ್ತಿ ಬದಲಾವಣೆ, ಇಲ್ಲಿದೆ ರೈಲುಗಳ ಪಟ್ಟಿ]]></title>
            <link>https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s</link>
            <guid isPermaLink="true">https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s</guid>
            <pubDate>Mon, 24 Aug 2026 12:07:57 +0530</pubDate>
            <description><![CDATA[ಅಕ್ಟೋಬರ್ 1 ರಿಂದ ಮಂಗಳೂರು ರೈಲ್ವೆ ಪ್ರದೇಶವು ಕೇರಳದ ಪಾಲಕ್ಕಾಡ್ ವಿಭಾಗದಿಂದ ಬೇರ್ಪಟ್ಟು ನೈಋತ್ಯ ರೈಲ್ವೆಯ ಮೈಸೂರು ವಿಭಾಗದೊಂದಿಗೆ ವಿಲೀನಗೊಳ್ಳಲಿದೆ. ಈ ಬದಲಾವಣೆಯಿಂದಾಗಿ ವಂದೇ ಭಾರತ್ ಸೇರಿದಂತೆ 12ಕ್ಕೂ ಹೆಚ್ಚು ಪ್ರಮುಖ ರೈಲುಗಳು ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿದ್ದು, ಇದು ಕರಾವಳಿ ಕರ್ನಾಟಕದ ರೈಲ್ವೆ ಸುಧಾರಣೆಗೆ ಮಹತ್ವದ ಹೆಜ್ಜೆ ಎನ್ನಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0s7qsr6n5jzhp6e5j4qs5xx,imgname-railway--1--1787553376005.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಮಂಗಳೂರು ನೈಋತ್ಯ ರೈಲ್ವೆ ವಲಯದ ಜೊತೆ ವಿಲೀನಗೊಂಡ ಬಳಿಕ ಅ.1 ರಿಂದ ಕೇರಳ ಪಾಲಕ್ಕಡ್ ವಿಭಾಗದ ಬದಲು ಮೈಸೂರು ವಿಭಾಗದ ವ್ಯಾಪ್ತಿಗೆ 12ಕ್ಕೂ ಅಧಿಕ ಪ್ರಮುಖ ರೈಲುಗಳು ಒಳಪಡಲಿವೆ. ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದಿಂದ ಉಳ್ಳಾಲ ವರೆಗಿನ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಿದ ಬಳಿಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಸಂಚರಿಸುವ ಹಾಗೂ ಅದರ ನಿರ್ವಹಣಾ ಸೌಲಭ್ಯಗಳಿಗೆ ಸಂಬಂಧಿಸಿದ ಹಲವು ರೈಲುಗಳು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿವೆ.&lt;/p&gt;&lt;h2&gt;ಪ್ರಮುಖ ರೈಲುಗಳು:&lt;/h2&gt;&lt;p&gt;12619/12620-ಮಂಗಳೂರು ಸೆಂಟ್ರಲ್-ಎಲ್&zwnj;ಟಿಟಿ ಮುಂಬೈ ಮತ್ಸ್ಯಗಂಧ ಎಕ್ಸ್&zwnj;ಪ್ರೆಸ್, 20645/20646- ಮಂಗಳೂರು ಸೆಂಟ್ರಲ್&ndash;ಮಡಗಾಂವ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್, 20631/20632-ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್, 16649/16650-ಕನ್ಯಾಕುಮಾರಿ-ಮಂಗಳೂರು ಸೆಂಟ್ರಲ್ ಪರಶುರಾಮ್ ಎಕ್ಸ್&zwnj;ಪ್ರೆಸ್, 16605/16606-ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಎರ್ನಾಡ್ ಎಕ್ಸ್&zwnj;ಪ್ರೆಸ್, 16603/16604- ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್&zwnj;ಪ್ರೆಸ್, 16629/16630- ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್&zwnj;ಪ್ರೆಸ್, 16323/16324-ಮಂಗಳೂರು ಸೆಂಟ್ರಲ್-ಕೊಯಮತ್ತೂರು ಎಕ್ಸ್&zwnj;ಪ್ರೆಸ್, 22609/22610- ಮಂಗಳೂರು ಸೆಂಟ್ರಲ್-ಕೊಯಮತ್ತೂರು ಇಂಟರ್&zwnj;ಸಿಟಿ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್, 12601/12602-ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್&zwnj;ಫಾಸ್ಟ್ ಮೇಲ್ ಎಕ್ಸ್&zwnj;ಪ್ರೆಸ್, 16621/16622- ಮಂಗಳೂರು ಸೆಂಟ್ರಲ್-ರಾಮೇಶ್ವರಂ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್, 22637/22638-ಮಂಗಳೂರು ಸೆಂಟ್ರಲ್-ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ ರೈಲುಗಳು ಮೈಸೂರು ವಿಭಾಗಕ್ಕೆ ಒಳಪಡಲಿದೆ.&lt;/p&gt;&lt;h2&gt;ಪ್ಯಾಸೆಂಜರ್ ರೈಲುಗಳು:&lt;/h2&gt;&lt;p&gt;56625/56626 -ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56627/56628- ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56629/56630-ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್, 56615/56616- ಮಂಗಳೂರು ಸೆಂಟ್ರಲ್-ಮಡಗಾಂವ್ ಪ್ಯಾಸೆಂಜರ್ ಮತ್ತು ಮಂಗಳೂರು ಸೆಂಟ್ರಲ್ ಹಾಗೂ ಅದರ ನಿರ್ವಹಣಾ ಸೌಲಭ್ಯಗಳಿಗೆ ಸಂಬಂಧಿಸಿದ ಇತರೆ ರೈಲುಗಳು ಒಳಗೊಳ್ಳಲಿವೆ.&lt;/p&gt;&lt;h2&gt;ಇಂಟರ್&zwnj; ಚೇಂಜ್&zwnj; ಪಾಯಿಂಟ್&zwnj;:&lt;/h2&gt;&lt;p&gt;ಅ. 1 ರಿಂದ ಪ್ರಮುಖ ಇಂಟರ್&zwnj;ಚೇಂಜ್ ಪಾಯಿಂಟ್&zwnj;ಗಳು (ರೈಲ್ವೆ ವಲಯ ಬದಲಾವಣೆ ಕೇಂದ್ರಗಳು)ಕೂಡ ಬದಲಾಗಲಿವೆ. ಈವರೆಗೆ ಪಡೀಲ್ ಬದಲಿಗೆ &lsquo;ಉಳ್ಳಾಲ&rsquo; ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್&zwnj;ಚೇಂಜ್ ಪಾಯಿಂಟ್ ಆಗಿರಲಿದೆ. ತೋಕೂರು ಕೊಂಕಣ ರೈಲ್ವೆಯ ಅಡಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್&zwnj;ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.&lt;/p&gt;&lt;h2&gt;ಈಡೇರಿಸಬೇಕಾದ ಬೇಡಿಕೆ:&lt;/h2&gt;&lt;p&gt;ಮಂಗಳೂರು ಸೆಂಟ್ರಲ್- ಜಂಕ್ಷನ್ ಹಳಿ ಡಬ್ಲಿಂಗ್ ( ನೈಋತ್ಯ ರೈಲ್ವೆ), ತೋಕೂರು- ಸುರತ್ಕಲ್ 4 ಕಿ.ಮೀ. ಡಬ್ಲಿಂಗ್ (ಕೊಂಕಣ ರೈಲ್ವೆ), ಸಕಲೇಶಪುರ- ಹಾಸನ- ಬೆಂಗಳೂರು ಮತ್ತು ಸುಬ್ರಹ್ಮಣ್ಯ- ಪಡೀಲ್ ನಡುವಿನ ಹಳಿಯ ವೇಗಧಾರಣ ಸಾಮರ್ಥ್ಯ ಹೆಚ್ಚಳ. (ಘಾಟ್ ಪ್ರದೇಶದ ಅನಿವಾರ್ಯ ವಿಳಂಬ ನಿವಾರಣೆಗಾಗಿ) ಹಾಗೂ ಮಂಗಳೂರು ಸೆಂಟ್ರಲ್&zwnj;ನಲ್ಲಿ ಫ್ಲಾಟ್ ಫಾರಂ ಹೆಚ್ಚಳ ಬೇಡಿಕೆ ಈಡೇರಿಸುವ ಅಗತ್ಯವನ್ನು ರೈಲ್ವೆ ಸಂಘಟನೆಗಳು ಹೇಳುತ್ತಿವೆ.&lt;/p&gt;&lt;h2&gt;ಕೊಂಕಣ ರೈಲ್ವೆ ವಿಲೀನಕ್ಕೆ ಮುನ್ನುಡಿ&lt;/h2&gt;&lt;p&gt;ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುತ್ತಿರುವಂತೆಯೇ ಕೊಂಕಣ ರೈಲ್ವೆ ಜಾಲ ಕೂಡ ಭಾರತೀಯ ರೈಲ್ವೆ ಜೊತೆ ವಿಲೀನಕ್ಕೆ ಮುನ್ನುಡಿ ಬರೆದಂತಾಗಿದೆ. ಕರಾವಳಿ ಕರ್ನಾಟಕದಲ್ಲಿ ರೈಲ್ವೆ ವಿಳಂಬ ಪ್ರಯಾಣ ನಿವಾರಣೆಗೆ ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಯತ್ನ ಕರಾವಳಿಯ ಸಂಸದರಿಂದ ನಡೆಯುತ್ತಿದೆ.&lt;/p&gt;&lt;p&gt;ಕೊಂಕಣ ರೈಲ್ವೆಯು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳ್ಳುವುದಕ್ಕೆ ಗೋವಾ ಯಾವುದೇ ಶರತ್ತು ಇಲ್ಲದೆ ಒಪ್ಪಿಗೆ ನೀಡಿದೆ, ಆದರೆ ಕರ್ನಾಟಕ, ಕೇರಳ, ಮಹಾರಾಷ್ಟ್ರ ನಿರ್ಧಾರ ಬಾಕಿಯಿದೆ. ಆದರೆ ಮಂಗಳೂರು ಪ್ರದೇಶ ಮೈಸೂರು ವಿಭಾಗದಲ್ಲಿ ವಿಲೀನಕ್ಕೆ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.&lt;/p&gt;&lt;p&gt;ಆಡಳಿತಾತ್ಮಕ ಮತ್ತು ಕಾರ್ಯಾಚರಣೆ ಸುಗಮಕ್ಕಾಗಿ ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದು ಕರಾವಳಿ ಕರ್ನಾಟಕದ ರೈಲ್ವೆ ಸುಧಾರಣೆಗೆ ಅತ್ಯಂತ ಮಹತ್ವದ ಐತಿಹಾಸಿಕ ಹೆಜ್ಜೆಯಾಗಿದೆ. ಇದರಿಂದ ಮಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಆಡಳಿತಾತ್ಮಕ, ಕಾರ್ಯಾಚರಣೆಗಳಿಗೆ ಬಹಳ ಅನುಕೂಲವಾಗಲು ಕೇಂದ್ರ ರೈಲ್ವೆ ಸಚಿವಾಲಯ ಈ ತೀರ್ಮಾನ ಕೈಗೊಂಡಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-rail-network-shift-more-than-12-trains-handed-over-to-south-western-railway-mysuru-division-from-palakkad-gdp/articleshow-qax5a4s"/>
        </item>
        <item>
            <title><![CDATA[ಮಂಗಳೂರು ನಿಲ್ದಾಣ ಮತ್ತೆ ಪಾಲಕ್ಕಾಡ್‌ಗೆ? ಕೇರಳ ಆಕ್ರೋಶ ತಣಿಸಲು ರೈಲ್ವೆ ಹೊಸ ಉಪಾಯ]]></title>
            <link>https://kannada.asianetnews.com/india-news/mangalore-station-to-be-shifted-back-to-palakkad-indian-railways-new-idea-to-quell-kerala-anger-mrq/articleshow-rdnxafe</link>
            <guid isPermaLink="true">https://kannada.asianetnews.com/india-news/mangalore-station-to-be-shifted-back-to-palakkad-indian-railways-new-idea-to-quell-kerala-anger-mrq/articleshow-rdnxafe</guid>
            <pubDate>Thu, 27 Aug 2026 06:23:09 +0530</pubDate>
            <description><![CDATA[ಮಂಗಳೂರು ವ್ಯಾಪ್ತಿಯ ರೈಲ್ವೆ ನಿಲ್ದಾಣಗಳನ್ನು ಮೈಸೂರು ವಲಯಕ್ಕೆ ಸೇರಿಸುವ ನಿರ್ಧಾರಕ್ಕೆ ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಕೇರಳೀಯರ ಆಕ್ರೋಶ ತಣಿಸಲು ಮಂಗಳೂರು ಕೇಂದ್ರ ನಿಲ್ದಾಣವನ್ನು ಪಾಲಕ್ಕಾಡ್ ವಲಯದಲ್ಲೇ ಉಳಿಸಿಕೊಂಡು, ಉಳಿದ ನಿಲ್ದಾಣಗಳನ್ನು ಮೈಸೂರಿಗೆ ವರ್ಗಾಯಿಸುವ ಹೊಸ ಪ್ರಸ್ತಾವವೊಂದು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0z9xzn8wzgbrb4r9r8fx145,imgname-palakkad-mangaluru-1787757002408.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಾಲಕ್ಕಾಡ್&zwnj;:&lt;/strong&gt; ಪಾಲಕ್ಕಾಡ್&zwnj; ರೈಲ್ವೆ ವಲಯದ ವ್ಯಾಪ್ತಿಯಿಂದ ಮಂಗಳೂರು ಮತ್ತು ಅದರ ವ್ಯಾಪ್ತಿಯ ಇತರೆ ನಿಲ್ದಾಣಗಳನ್ನು ಮೈಸೂರಿನಲ್ಲಿರುವ ನೈಋತ್ಯ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡುವ ರೈಲ್ವೆ ಮಂಡಳಿಯ ನಿರ್ಧಾರ ಕೇರಳದಲ್ಲಿ ಭಾರೀ ವಿರೋಧಕ್ಕೆ ಕಾರಣವಾದ ಬೆನ್ನಲ್ಲೇ, ಕೇರಳೀಯರ ಆಕ್ರೋಶ ತಣಿಸಲು ಅಧಿಕಾರಿಗಳ ಮಟ್ಟದಲ್ಲಿ ಹೊಸದೊಂದು ವಿಷಯ ಚರ್ಚೆಗೆ ಬಂದಿದೆ. ಅದೇನೆಂದರೆ ಮಂಗಳೂರು ಕೇಂದ್ರ ನಿಲ್ದಾಣವನ್ನು ಮರಳಿ ಪಾಲಕ್ಕಾಡ್&zwnj; ವಲಯಕ್ಕೆ ಸೇರಿಸುವುದು, ಅದನ್ನು ಬಿಟ್ಟು ಉಳಿದೆಲ್ಲಾ ನಿಲ್ದಾಣ ಮತ್ತು ಆಸ್ತಿಗಳನ್ನು ಮೈಸೂರಿಗೆ ಬಿಟ್ಟುಕೊಡುವುದಾಗಿದೆ.&lt;/p&gt;&lt;h2&gt;&lt;strong&gt;ಕೇರಳಿಯರ ಆಕ್ರೋಶ&lt;/strong&gt;&lt;/h2&gt;&lt;p&gt;ಇದರ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲವಾದರೂ, ಇಂಥದ್ದೊಂದು ಹೊಂದಾಣಿಕೆ ತಂತ್ರ ಪಾಲಕ್ಕಾಡ್&zwnj; ರೈಲ್ವೆ ವಲಯಕ್ಕೆ ಎದುರಾಗಬಹುದಾದ ಹೊಸ ಸಮಸ್ಯೆ ನೀಗುವುದರ ಜೊತೆಗೆ ಕೇರಳಿಯರ ಆಕ್ರೋಶವನ್ನೂ ಬಹುಮಟ್ಟಿಗೆ ತಣ್ಣಗೆ ಮಾಡಬಹುದು ಎಂಬ ಲೆಕ್ಕಾಚಾರ ಅಧಿಕಾರ ವರ್ಗದ್ದಾಗಿದೆ.&lt;/p&gt;&lt;h3&gt;&lt;strong&gt;ಹೊಸ ಪ್ರಸ್ತಾವ ಏಕೆ?:&lt;/strong&gt;&lt;/h3&gt;&lt;p&gt;ಪಾಲಕ್ಕಾಡ್&zwnj; ರೈಲ್ವೆ ವಲಯಕ್ಕೆ ಮಂಗಳೂರು ಕೇಂದ್ರ ನಿಲ್ದಾಣ ಅತ್ಯಂತ ಮಹತ್ವದ್ದು. ಕಾರಣ, ಮುಖ್ಯವಾದ ಕೋಚಿಂಗ್&zwnj; ಮತ್ತು ಇತರೆ ನಿರ್ವಹಣಾ ವ್ಯವಸ್ಥೆಗಳು ಮಂಗಳೂರು ಕೇಂದ್ರ ನಿಲ್ದಾಣದ ವ್ಯಾಪ್ತಿಯಲ್ಲೇ ಇದೆ. ಮಂಗಳೂರು ಕೇಂದ್ರ ನಿಲ್ದಾಣ ಪಾಲಕ್ಕಾಡ್&zwnj; ವಲಯದ ರೈಲ್ವೆಗೆ ಈಗಲೂ ಅತ್ಯಂತ ಮಹತ್ವವಾದ ನಿರ್ವಹಣಾ ನೆಲೆಯಾಗಿದೆ. ಹೀಗಾಗಿ ಈ ನಿಲ್ದಾಣ ಪಾಲಕ್ಕಾಡ್&zwnj;ನಲ್ಲೇ ಉಳಿದರೆ ಅದರ ರೈಲಿನ ನಿರ್ವಹಣೆ ಸುಗಮವಾಗಲಿದೆ. ಒಂದು ವೇಳೆ ಕೈತಪ್ಪಿದರೆ ಮತ್ತೆ ಪಾಲಕ್ಕಾಡ್&zwnj; ವಲಯವು ಎಲ್ಲಾ ವ್ಯವಸ್ಥೆಗಳನ್ನು ಹೊಸದಾಗಿ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಇಂಥದ್ದೊಂದು ಪ್ರಸ್ತಾಪದ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಆದರೆ ಇದರಲ್ಲೂ ಹಲವು ನಿರ್ವಹಣಾ ಮತ್ತು ಆಡಳಿತಾತ್ಮಕ ವಿಷಯಗಳ ಕಗ್ಗಂಟಿದೆ. ಮುಖ್ಯವಾಗಿ ವ್ಯಾಪ್ತಿ, ರೈಲ್ವೆ ಆಸ್ತಿ, ನಿರ್ವಹಣಾ ಮೂಲಸೌಕರ್ಯ, ಸಿಬ್ಬಂದಿ ನಿಯೋಜನೆ, ಪಾಲಕ್ಕಾಡ್&zwnj; ಮತ್ತು ಮೈಸೂರು ವಲಯದ ನಡುವೆ ಸಮನ್ವಯತೆ ಸೇರಿದಂತೆ ಹಲವು ಸಮಸ್ಯೆಗಳು ಇದ್ದೇ ಇವೆ. ಆದರೆ ಇಂಥದ್ದೊಂದು ಸಣ್ಣ ಬದಲಾವಣೆ ಪಾಲಕ್ಕಾಡ್&zwnj; ರೈಲ್ವೆ ವಲಯದ ನಿರ್ಹವಣಾ ಸಮಸ್ಯೆ ಇತ್ಯರ್ಥದ ಜೊತೆಗೆ ಕೇರಳದ ರಾಜಕೀಯ ಪಕ್ಷಗಳ ಆಕ್ರೋಶವನ್ನು ಒಂದು ಹಂತದವರೆಗೆ ತಣ್ಣಗೆ ಮಾಡಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.&lt;/p&gt;&lt;p&gt;&lt;strong&gt;ಪಾಲಕ್ಕಾಡ್&zwnj; ಕೈತಪ್ಪಿಲಿರುವ ರೈಲ್ವೆ ನಿಲ್ದಾಣಗಳು:&lt;/strong&gt;&lt;/p&gt;&lt;p&gt;ಸದ್ಯದ ರೈಲ್ವೆ ಮಂಡಳಿ ಪ್ರಸ್ತಾವದ ಅನ್ವಯ ಅ.1ರಿಂದ ದಕ್ಷಿಣ ರೈಲ್ವೆಯ ಪಾಲಕ್ಕಾಡ್&zwnj; ವಲಯದ ವ್ಯಾಪ್ತಿಯಿಂದ ಕರ್ನಾಟಕದ ಮಂಳೂರು ಕೇಂದ್ರ, ಮಂಗಳೂರು ಜಂಕ್ಷನ್, ಪಣಂಬೂರು (ನವ ಮಂಗಳೂರು ಬಂದರು ಯಾರ್ಡ್&zwnj;) ಮತ್ತು ಉಳ್ಳಾಲ ಕೇಂದ್ರಗಳು, ಮೈಸೂರಿನ ನೈಋತ್ಯ ರೈಲ್ವೆ ವಲಯಕ್ಕೆ ಒಳಪಡಲಿವೆ.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/mangalore-station-to-be-shifted-back-to-palakkad-indian-railways-new-idea-to-quell-kerala-anger-mrq/articleshow-rdnxafe"/>
        </item>
        <item>
            <title><![CDATA[ಹಿಂದು ಧರ್ಮೀಯ ನಿಧನಕ್ಕೆ ಮಸೀದಿಯಲ್ಲಿ ಈದ್‌ ನಿಲ್ಲಿಸಿ ಗೌರವ; ಕಾರ್ಯಕ್ರಮ ಮುಂದೂಡಿಕೆ]]></title>
            <link>https://kannada.asianetnews.com/karnataka-districts/dakshina-kannada-uppinangady-eid-prayers-held-at-mosque-to-pay-respect-to-hindu-death-mrq/articleshow-slh9hnd</link>
            <guid isPermaLink="true">https://kannada.asianetnews.com/karnataka-districts/dakshina-kannada-uppinangady-eid-prayers-held-at-mosque-to-pay-respect-to-hindu-death-mrq/articleshow-slh9hnd</guid>
            <pubDate>Mon, 24 Aug 2026 06:40:14 +0530</pubDate>
            <description><![CDATA[ದಕ್ಷಿಣ ಕನ್ನಡ ಜಿಲ್ಲೆಯ ಕೊಯಿಲ ಗ್ರಾಮದಲ್ಲಿ, ಹಿಂದು ಧರ್ಮೀಯ ಗುರುಪ್ರಸಾದ್ ಅವರ ನಿಧನಕ್ಕೆ ಗೌರವ ಸೂಚಕವಾಗಿ ಕುದುಲೂರು ಮಸೀದಿಯು ಈದ್ ಮಿಲಾದ್ ಕಾರ್ಯಕ್ರಮವನ್ನು ಮುಂದೂಡಿದೆ. ಗುರುಪ್ರಸಾದ್ ಅವರ ಮನೆಯ ಸಮೀಪದಲ್ಲೇ ಇದ್ದ ಮಸೀದಿಯ ಆಡಳಿತ ಮಂಡಳಿಯು, ಸೂತಕದ ಸಮಯದಲ್ಲಿ ಸಂಭ್ರಮಾಚರಣೆ ಸೂಕ್ತವಲ್ಲವೆಂದು ಈ ಸೌಹಾರ್ದಯುತ ನಿರ್ಧಾರ ಕೈಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rn16f5mqqtsd6nxqk22t5t,imgname-mosque-1787533760997.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಪ್ಪಿನಂಗಡಿ&lt;/strong&gt;: ಹಿಂದು ಧರ್ಮದ ವ್ಯಕ್ತಿಯೋರ್ವರು ನಿಧನರಾದ ಕಾರಣಕ್ಕೆ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮವನ್ನು ಮುಂದೂಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ನಡೆದಿದೆ. ಕುದುಲೂರು ನಿವಾಸಿ, ಆಟೋರಿಕ್ಷಾ ಚಾಲಕ ಗುರುಪ್ರಸಾದ್ (35) ಹೃದಯಾಘಾತದಿಂದ ಶನಿವಾರ ನಿಧನರಾದರು.&lt;/p&gt;&lt;p&gt;ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ, ಬಾಡಿಗೆ ವಾಹನ ಹೊಂದಿದ್ದ ಇವರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೃ ತ ಗುರುಪ್ರಸಾದ್ ಮನೆ ಬಳಿ ಇರುವ ಕುದುಲೂರು ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬದ ಪೂರ್ವಭಾವಿಯಾಗಿ ಮಕ್ಕಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗುರುಪ್ರಸಾದ್ ನಿಧನದ ಸೂತಕದ ವಾತಾವರಣದಲ್ಲಿ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ತೀರ್ಮಾನಿಸಿದ ಮಸೀದಿಯ ಆಡಳಿತ ಮಂಡಳಿ, ಕಾರ್ಯಕ್ರಮವನ್ನು ಮುಂದೂಡಿ ಗುರುಪ್ರಸಾದ್ ಕುಟುಂಬದ ದುಃಖದಲ್ಲಿ ಭಾಗಿಯಾಯಿತು.&lt;/p&gt;&lt;h2&gt;&lt;strong&gt;ಶಾಂತಿಯುತ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಸಹಕಾರ: ಜಾನ್ಸನ್ ಡಿಸೋಜ&lt;/strong&gt;&lt;/h2&gt;&lt;p&gt;ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ, ಅಶಾಂತಿ ಸೃಷ್ಟಿಯಾಗದಂತೆ, ಜಾತಿ-ಮತ ಭೇದವಿಲ್ಲದೆ ಈದ್ ಮಿಲಾದ್ ಹಬ್ಬದ ಆಚರಣೆ ನಡೆಸ ಬೇಕಿದ್ದು, ಶಾಂತಿಯುತ ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಪುತ್ತೂರು ನಗರ ಪೊಲೀಸ್ ಇನ್&zwnj;ಸ್ಪೆಕ್ಟರ್&zwnj; ಜಾನ್ಸನ್ ಡಿಸೋಜ ಹೇಳಿದರು.ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಗಳ ಅಧ್ಯಕ್ಷರು- ಪದಾಧಿಕಾರಿಗಳೊಂದಿಗೆ ಶಾಂತಿಸಭೆ ನಡೆಸಿದರು.&lt;/p&gt;&lt;p&gt;ನಗರ ಠಾಣಾ ವ್ಯಾಪ್ತಿಯ 33 ಮಸೀದಿಗಳಲ್ಲಿ ಹಬ್ಬದ ಆಚರಣೆಯ ಭಾಗವಾಗಿ ನಡೆಯುವ ಮೆರವಣಿಗೆ, ರ್ಯಾಲಿಯ ವಿವರಗಳನ್ನು ಪಡೆದುಕೊಂಡರು. ನಿಮ್ಮ ಮೆರವಣಿಗೆಗಳು ಯಾವ ರೀತಿ ಇರುತ್ತದೆ ಎಂಬುದರ ವಿವರ ನೀಡಿ, ಕಾನೂನು ಚೌಕಟಿನಲ್ಲಿ ಅನುಮತಿ ನೀಡಿ ಬಂದೋಬಸ್ತ್ ಒದಗಿಸುತ್ತೇವೆ. ಎಲ್ಲಿಯೂ ಕೂಡ ಬೈಕ್ ರ್ಯಾಲಿಗೆ ಅವಕಾಶ ಇರುವುದಿಲ್ಲ, ಬೈಕಿಗೆ ಅವಕಾಶ ನೀಡಿದರೆ ಯುವಕರು ತಮ್ಮ ಚೇಷ್ಠೆಯ ಮೂಲಕ ಒಂದಷ್ಟು ಗೊಂದಲ ಸೃಷ್ಟಿಸುತ್ತಾರೆ. ಹೀಗಾಗಿ ಕೇವಲ ಕಾಲ್ನಡಿಗೆಯ ಜಾಥಾಗಳಿಗೆ ಮಾತ್ರ ಅವಕಾಶವಿರುತ್ತದೆ. ಅದರ ಸೀಮಿತ ಸಂಖ್ಯೆಯ ವಾಹನಗಳಿಗೆ ಅವಕಾಶ ಇರುತ್ತದೆ ಎಂದರು.&lt;/p&gt;&lt;p&gt;&lt;strong&gt;ಅಪ್ರಾಪ್ತರಿಗೆ ವಾಹನ ನೀಡಬೇಡಿ: &lt;/strong&gt;ಮೆರವಣಿಗೆಯ ಸಂದರ್ಭದಲ್ಲಿ ಮಕ್ಕಳು ಮನೆಯವರು, ಸಂಘಟಕರಿಗೆ ತಿಳಿಯದ ರೀತಿಯಲ್ಲಿ ಯಾವುದೇ ಸಂಚಾರ ನಿಯಮಗಳನ್ನು ಪಾಲಿಸದೆ ಬೈಕಿನಲ್ಲಿ ಬರುವ ಘಟನೆಗಳು ನಡೆಯುತ್ತದೆ. ಹೀಗಾಗಿ ಅದಕ್ಕೆ ಯಾವುದೇ ರೀತಿಯ ಅವಕಾಶ ನೀಡಬಾರದು, ಜತೆಗೆ ಕಾರು, ಇತರ ವಾಹನಗಳನ್ನೂ ಮಕ್ಕಳಿಗೆ ನೀಡಬಾರದು ಎಂದು ನಗರ ಠಾಣಾ ಪಿಎಸ್&zwnj;ಐ ಸೇಸಮ್ಮ ತಿಳಿಸಿದರು.&lt;/p&gt;&lt;p&gt;&lt;strong&gt;ಕಬಕ ದಿಂದ ಮಂಜಲ್ಪಡ್ಪು ತನಕ ಮೆರವಣಿಗೆ: &lt;/strong&gt;ಕಬಕದಿಂದ ಮಂಜಲ್ಪಡ್ಪು ತನಕ ನಡೆಯುವ ಅಲಂಕೃತ ವಾಹನಗಳ ಮೆರವಣಿಗೆ, ಪೇರಮಜಲು- ಸತ್ತಿಕಲ್ಲು ಭಾಗದ ಮೆರವಣಿಗೆಯ ಕುರಿತು ಆಯಾ ಭಾಗದ ಮುಖಂಡರು ಸಭೆಗೆ ವಿವರ ನೀಡಿದರು. ಜತೆಗೆ ಪ್ರತಿ ಮಸೀದಿಗಳಲ್ಲಿ ನಡೆಯುವ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಪಿಎಸ್&zwnj;ಐ ಸುಹಾಸ್ ಆರ್. ಉಪಸ್ಥಿತರಿದ್ದರು.&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-uppinangady-eid-prayers-held-at-mosque-to-pay-respect-to-hindu-death-mrq/articleshow-slh9hnd"/>
        </item>
        <item>
            <title><![CDATA[ದಕ್ಷಿಣ ಕನ್ನಡ, ಉಡುಪಿಯಲ್ಲಿ ನಾಳೆ ಶಾಲಾ ಕಾಲೇಜು ಸೇರಿ ಸರ್ಕಾರಿ ಕಚೇರಿಗಳಿಗೆ ರಜೆ, ಜಿಲ್ಲಾಧಿಕಾರಿ ಆದೇಶ]]></title>
            <link>https://kannada.asianetnews.com/karnataka-districts/naga-panchami-holiday-in-dakshina-kannada-tomorrow-schools-colleges-government-offices-closed/articleshow-wbe17c6</link>
            <guid isPermaLink="true">https://kannada.asianetnews.com/karnataka-districts/naga-panchami-holiday-in-dakshina-kannada-tomorrow-schools-colleges-government-offices-closed/articleshow-wbe17c6</guid>
            <pubDate>Sun, 16 Aug 2026 22:01:34 +0530</pubDate>
            <description><![CDATA[&lt;p&gt;ದಕ್ಷಿಣ ಕನ್ನಡದಲ್ಲಿ ನಾಳೆ (ಆ.17) ಒಂದು ದಿನದ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ದರ್ಶನ್ ಆದೇಶ ಹೊರಡಿಸಿದ್ದಾರೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jrdbv4rh0cq08x6bd6yjckhk,imgname-public-holiday--1744205353745.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಆ.16) &lt;/strong&gt;ದಕ್ಷಿಣ ಕನ್ನಡದಲ್ಲಿ ನಾಳೆ (ಆಗಸ್ಟ್ 17) ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ನಾಗರ ಪಂಚಮಿ ಹಬ್ಬದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್&zwnj;ವಿ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳಿಗೂ ಒಂದು ದಿನದ ರಜೆ ಘೋಷಿಸಲಾಗಿದೆ. ಸೋಮವಾರ ನಾಗರಪಂಚಮಿ ಹಬ್ಬ ಆಚರಣೆ ಹಿನ್ನಲೆಯಲ್ಲಿ ಈ ನಿರ್ಧಾರ ಘೋಷಣೆಯಾಗಿದೆ.&lt;/p&gt;&lt;h2&gt;ಉಡುಪಿಯಲ್ಲೂ ನಾಳೆ ಸಾರ್ವತ್ರಿಕ ರಜೆ&lt;/h2&gt;&lt;p&gt;ನಾಗರ ಪಂಚಮಿ ಹಿನ್ನೆಲೆ ಉಡುಪಿ ಜಿಲ್ಲೆಗೆ ನಾಳೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಆಗಸ್ಟ್ 17 ರಂದು ಒಂದು ದಿನದ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ನೀಡಿದ್ದಾರೆ.&lt;/p&gt;&lt;h2&gt;ದಕ್ಷಿಣ ಕನ್ನಡದಲ್ಲಿ ನಾಗರಪಂಚಮಿಗೆ ಅತ್ಯಂತ ಪವಿತ್ರ ಸ್ಥಾನ&lt;/h2&gt;&lt;p&gt;ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ತುಳು ಭಾಗದಲ್ಲಿ ನಾಗರ ಪಂಚಮಿ ಅತ್ಯಂತ ಪವಿತ್ರ ಹಾಗೂ ವಿಶೇಷ ಸ್ಥಾನವಿದೆ. ಪರಶುರಾಮ ಸೃಷ್ಟಿಯ ನಾಡು ಎಂದೇ ಗುರುತಿಸಿಕೊಂಡಿರುವ ಈ ಭಾಗದಲ್ಲಿ ನಾಗಾರಾಧನೆಗೆ ಪ್ರಮುಖ ಸ್ಥಾನವಿದೆ. ಪ್ರಕೃತಿ ಹಾಗೂ ದೈವಿಕ ಶಕ್ತಿಯ ಸಂಕಲ್ಪವಾಗಿ ನಾಗರಪಂಚಮಿಯನ್ನು ತುಳುನಾಡಿನಲ್ಲಿ ಆಚರಿಸಲಾಗುತ್ತಿದೆ. ಪ್ರಮುಖ ಆಚರಣೆಯಾಗಿರುವ ಕಾರಣ ನಾಳೆ (ಆ.17) ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.&lt;/p&gt;&lt;p&gt;ತುಳು ಭಾಗದಲ್ಲಿ ನಾಗರಾಧಾನೆ, ನಾಗ ದೈವ ಕುಟುಂಬದ ರಕ್ಷಕ ಹಾಗೂ ಮೂಲ ದೈವ ಎಂದೇ ನಂಬುತ್ತಾರೆ. ನಾಗರಪಂಚಮಿಯಂದು ನಾಗ ದೇವನಿಗೆ ಪೂಜೆ ಸಲ್ಲಿಸುವುದು ಸರ್ಪದೋಷ, ಆರೋಗ್ಯ ವೃದ್ಧಿ, ಸಂಕಷ್ಟಗಳ ಪರಿಹಾರ, ಸಂತಾನ ಭಾಗ್ಯ ಸೇರಿದಂತೆ ನೆಮ್ಮದಿಯ ಜೀವನ ಸಿಗಲಿದೆ ಎಂಬ ನಂಬಿಕೆ ಈ ಭಾಗದಲ್ಲಿದೆ. ಹೀಗಾಗಿ ತುಳು ಭಾಗದಲ್ಲಿರುವ ನಾಗಬನಗಳು, ನಾಗ ಮೂಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ . ಹಾಲು, ಏಳನೀರು, ತುಪ್ಪ, ಗಂಧ, ಹೂವುಗಳ ಅಭಿಷೇಕ ಮಾಡಲಾಗುತ್ತದೆ.&lt;/p&gt;&lt;h2&gt;ಕುಕ್ಕೆ ಸುಬ್ರಹ್ಮಣ್ಯ ಸೇರಿ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ&lt;/h2&gt;&lt;p&gt;ಭಾರತದಲ್ಲೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರಸಿದ್ಧಿಯಾಗಿದೆ. ದೇಶ ವಿದೇಶಗಳಿಂದ ಇಲ್ಲಿಗೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ನಾಗರಪಂಚಮಿ ದಿನ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತ ಕೆಲ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಸ್ಥಾನ, ಮಂಜೇಶ್ವರದ ಶ್ರೀಮದ್ ಅನಂತೇಶ್ವರ, ಕಾಳಾವರದ ನಾಗಕ್ಷೇತ್ರಗಳಲ್ಲಿ ನಾಗರ ಪಂಚಮಿ ದಿನ ವಿಶೇಷ ಪೂಜೆ ಸಲ್ಲಿಸುತ್ತಾರೆ.&lt;/p&gt;]]></content:encoded>
            <category>dakshina-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/naga-panchami-holiday-in-dakshina-kannada-tomorrow-schools-colleges-government-offices-closed/articleshow-wbe17c6"/>
        </item>
        <item>
            <title><![CDATA[ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರ ಆರಂಭ, ಕಬಕ ಪುತ್ತೂರು ನಿಲುಗಡೆಗೆ ಡಿಜಿಟಲ್ ಸಮರ]]></title>
            <link>https://kannada.asianetnews.com/karnataka-districts/demand-for-kabaka-puttur-stoppage-on-bengaluru-mangaluru-vande-bharat-express-triggers-online-campaign-gdp/articleshow-y3mq854</link>
            <guid isPermaLink="true">https://kannada.asianetnews.com/karnataka-districts/demand-for-kabaka-puttur-stoppage-on-bengaluru-mangaluru-vande-bharat-express-triggers-online-campaign-gdp/articleshow-y3mq854</guid>
            <pubDate>Sat, 22 Aug 2026 09:56:44 +0530</pubDate>
            <description><![CDATA[ಬೆಂಗಳೂರು-ಮಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿಗೆ ಕಬಕ-ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಒತ್ತಾಯಿಸಿ ರೈಲು ಬಳಕೆದಾರರ ಸಮಿತಿಗಳು ಆನ್&zwnj;ಲೈನ್ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿವೆ. ಪ್ರಸ್ತಾವಿತ ತಾತ್ಕಾಲಿಕ ನಿಲುಗಡೆ ಪಟ್ಟಿಯಲ್ಲಿ ಪುತ್ತೂರನ್ನು ಸೇರಿಸದಿರುವುದು ಈ ಅಭಿಯಾನಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0kvadr3w9r9dqew21heaanv,imgname-kabaka-puttur-1787372582659.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: ವಂದೇ ಭಾರತ್ ರೇಕ್ (ರೈಲು ಬೋಗಿಗಳು) ಮಂಗಳೂರಿಗೆ ಯಶಸ್ವಿಯಾಗಿ ತಲುಪಿದ ನಂತರ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್&zwnj;ಪ್ರೆಸ್ ಶೀಘ್ರದಲ್ಲೇ ಸಂಚಾರ ಆರಂಭಿಸುವ ನಿರೀಕ್ಷೆಯಿದೆ. ಆದರೆ ಪ್ರಸ್ತುತ ಪ್ರಸ್ತಾಪಿಸಲಾದ ನಿಲುಗಡೆ ತಾತ್ಕಾಲಿಕ ಪಟ್ಟಿಯಲ್ಲಿ ಕಬಕ- ಪುತ್ತೂರು ರೈಲು ನಿಲ್ದಾಣವನ್ನು ಸೇರಿಸಲಾಗಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಜಾಲತಾಣದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಶುಕ್ರವಾರ ಮಧ್ಯಾಹ್ನ 1.30 ರಿಂದ ಆರಂಭಿಸಿ ಆ. 24ರ ರಾತ್ರಿ 12 ಗಂಟೆ ವರೆಗೆ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ.&lt;/p&gt;&lt;p&gt;&lsquo;ಪುತ್ತೂರು, ಸುಳ್ಯ, ಉಪ್ಪಿನಂಗಡಿ, ವಿಟ್ಲ, ಬೆಳ್ಳಾರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ನಿತ್ಯ ರೈಲು ಪ್ರಯಾಣಿಕರ ಹಿತದೃಷ್ಟಿಯಿಂದ ಕಬಕ- ಪುತ್ತೂರಿನಲ್ಲಿ ಪ್ರಸ್ತಾವಿತ ವಂದೇ ಭಾರತ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿಗೆ ನಿಲುಗಡೆ ನೀಡಬೇಕು ಎಂದು ಒತ್ತಾಯಿಸಿ ನಾವು ಸಹಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ&rsquo; ಎಂದು https://www.change.org/KabakaPutturVandeBharat ಹ್ಯಾಷ್&zwnj;ಟ್ಯಾಗ್&zwnj; ಮೂಲಕ ವಿನಂತಿಸಲಾಗಿದೆ.&lt;/p&gt;&lt;h2&gt;ಅರಸೀಕೆರೆಯಲ್ಲಿ ವಂದೇ ಭಾರತ್ ನಿಲುಗಡೆಗೆ ಆಗ್ರಹ&lt;/h2&gt;&lt;p&gt;ಅರಸೀಕೆರೆ: ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರಕ್ಕೆ ರೈಲ್ವೆ ಸಂಪರ್ಕದ ಮತ್ತಷ್ಟು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಂದೇ ಭಾರತ್ ರೈಲಿಗೆ ನಗರದ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಹಾಗೂ ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರುದ್ರಾಕ್ಷ ಫೌಂಡೇಶನ್ ಆಶ್ರಯದ ಸಮರ್ಪಣಾ ಮತ್ತು ಸಂಕಲ್ಪ ಸಂಸ್ಥೆಗಳ ಪದಾಧಿಕಾರಿಗಳು ರೈಲು ನಿಲ್ದಾಣದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.&lt;/p&gt;&lt;p&gt;ರುದ್ರಾಕ್ಷ ಫೌಂಡೇಶನ್ ಅಧ್ಯಕ್ಷ ಜಯಪ್ರಕಾಶ್ ಗುರೂಜಿ ಮಾತನಾಡಿ, ಅರಸೀಕೆರೆಯಿಂದ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ವಿವಿಧೆಡೆಗೆ ಪ್ರಯಾಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಂದೇ ಭಾರತ್ ರೈಲಿಗೆ ಇಲ್ಲಿ ನಿಲುಗಡೆ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ಹೇಳಿದರು.&lt;/p&gt;&lt;p&gt;ನಿಲುಗಡೆ ಕಲ್ಪಿಸುವ ಕುರಿತು ರೈಲ್ವೆ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ನಿಲುಗಡೆ ದೊರೆತಲ್ಲಿ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವಿವಿಧ ಕಾರ್ಯಗಳಿಗಾಗಿ ರಾಜ್ಯದ ಬೇರೆ ಬೇರೆ ನಗರಗಳಿಗೆ ತೆರಳುವ ಪ್ರಯಾಣಿಕರಿಗೆ ಸಮಯ ಉಳಿತಾಯವಾಗಲಿದೆ ಎಂದು ಮನವಿ ಮಾಡಿದರು.&lt;/p&gt;&lt;p&gt;ನಗರದ ರೈಲು ನಿಲ್ದಾಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲಕ್ಕೆ ಆದ್ಯತೆ ನೀಡಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಈ ಕುರಿತು ರೈಲ್ವೆ ಸ್ಟೇಷನ್ ಮ್ಯಾನೇಜರ್ ಮೂಲಕ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಸಮರ್ಪಣಾ ಸಂಸ್ಥೆ ಅಧ್ಯಕ್ಷೆ ವನಜಾಕ್ಷಿ ವಿಜಯಕುಮಾರ್, ಸಂಕಲ್ಪ ಸಂಸ್ಥೆ ಸಂಚಾಲಕಿ ಸರೋಜಮ್ಮ, ಶಾಂತಮ್ಮ ರಾಮಚಂದ್ರು, ರಾಜಣ್ಣ ಪುಟ್ಟಸ್ವಾಮಿ, ಆಶಾ, ಶಾಂತಮ್ಮ, ಮೀನಾಕ್ಷಮ್ಮ ಸೇರಿದಂತೆ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>dakshina-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/demand-for-kabaka-puttur-stoppage-on-bengaluru-mangaluru-vande-bharat-express-triggers-online-campaign-gdp/articleshow-y3mq854"/>
        </item>
        <item>
            <title><![CDATA[55 km ವೇಗದಲ್ಲಿ ಸಂಚರಿಸುವ ರೈಲಿಗೆ ಸೂಪರ್‌ಫಾಸ್ಟ್ ಹೆಸರ‍್ಯಾಕೆ? ವಂದೇ ಭಾರತ್‌ ಪ್ರಾಯೋಗಿಕ ಸಂಚಾರ]]></title>
            <link>https://kannada.asianetnews.com/karnataka-districts/indian-railways-accused-of-charging-exorbitant-fares-by-naming-trains-that-run-at-55-kmph-as-superfast-mrq/articleshow-y4qqis3</link>
            <guid isPermaLink="true">https://kannada.asianetnews.com/karnataka-districts/indian-railways-accused-of-charging-exorbitant-fares-by-naming-trains-that-run-at-55-kmph-as-superfast-mrq/articleshow-y4qqis3</guid>
            <pubDate>Wed, 19 Aug 2026 09:55:29 +0530</pubDate>
            <description><![CDATA[ಪ್ರಸ್ತುತ ಗಂಟೆಗೆ 55 ಕಿ.ಮೀ. ವೇಗದಲ್ಲಿ ಸಂಚರಿಸುವ ರೈಲುಗಳಿಗೂ 'ಸೂಪರ್&zwnj;ಫಾಸ್ಟ್' ಎಂದು ಹೆಸರಿಟ್ಟು ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಈ ವ್ಯಾಖ್ಯಾನವನ್ನು ಪರಿಷ್ಕರಿಸಬೇಕೆಂದು ರೈಲ್ವೆ ಇಲಾಖೆಗೆ ಆಗ್ರಹಿಸಲಾಗಿದೆ. ಇದೇ ವೇಳೆ, ಸಕಲೇಶಪುರ-ಸುಬ್ರಹ್ಮಣ್ಯ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಪರಿಶೀಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0c44qqswhwge6wwavast7d6,imgname-mangaluru-1787113398009.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ಪ್ರಸ್ತುತ ರೈಲು ಜಾಲಗಳಲ್ಲಿ ಸಂಚರಿಸುವ ರೈಲುಗಳು &lsquo;ಸೂಪರ್&zwnj; ಫಾಸ್ಟ್&zwnj;&rsquo; ಎಂದು ಫಲಕ ಹಾಕಿಕೊಂಡು ಕೇವಲ ಗಂಟೆಗೆ 55 ಕಿ.ಮೀ. ವೇಗದಲ್ಲಿ ಅಷ್ಟೇ ಸಂಚರಿಸುವ ಮೂಲಕ ಪ್ರಯಾಣಿಕರಿಂದ ದುಬಾರಿ ಮೊತ್ತದ ವಸೂಲಿಗೆ ಕಾರಣವಾಗುತ್ತಿವೆ. ಆದ್ದರಿಂದ &lsquo;ಸೂಪರ್&zwnj; ಫಾಸ್ಟ್&zwnj;&rsquo; ಹೆಸರಿನ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಎಂದು ಮುಂಬೈ ರೈಲು ಯಾತ್ರಿ ಸಂಘ ಬೊರಿವಿಲಿಯ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಒಲಿವರ್ ಡಿಸೋಜಾ ರೈಲ್ವೆ ಇಲಾಖೆಯನ್ನು ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಆಟೋ ರಿಕ್ಷಾದ ವೇಗಕ್ಕೆ ಸಮಾನವಾದ 55 ಕಿ.ಮೀ. ವೇಗ&lt;/strong&gt;&lt;/h2&gt;&lt;p&gt;ಈ ಕುರಿತು ರೈಲ್ವೆ ಇಲಾಖೆಗೆ ಬರೆದ ಪತ್ರದಲ್ಲಿ ಅವರು, ಇಂದಿನ ವೇಗದ ಜಗತ್ತಿನಲ್ಲಿ &lsquo;ಸೂಪರ್&zwnj;ಫಾಸ್ಟ್&rsquo; ಎಂದರೆ ಭಾರತೀಯ ರೈಲ್ವೆ ವ್ಯಾಖ್ಯಾನದ ಪ್ರಕಾರ, ಗಂಟೆಗೆ ಕೇವಲ 55 ಕಿ.ಮೀ. ಸರಾಸರಿ ವೇಗವಿದ್ದರೆ ಸಾಕು! ಇದು ನಿಜಕ್ಕೂ ಹಾಸ್ಯಾಸ್ಪದ. ಚೀನಾದ ಮ್ಯಾಗ್ಲೆವ್, ಜರ್ಮನಿಯ ಇಂಟರ್&zwnj;ಸಿಟಿ ಎಕ್ಸ್&zwnj;ಪ್ರೆಸ್, ಜಪಾನ್&zwnj;ನ ಶಿಂಕಾನ್ಸೆನ್ ಮತ್ತು ಫ್ರಾನ್ಸ್&zwnj;ನ ಜಿಟಿವಿ ರೈಲುಗಳು ಗಂಟೆಗೆ 350 ಕಿ.ಮೀ.ಗೂ ಅಧಿಕ ವೇಗದಲ್ಲಿ ಓಡುವ ಕಾಲದಲ್ಲಿ, ನಮ್ಮಲ್ಲಿ ರೈಲು ಆಟೋ ರಿಕ್ಷಾದ ವೇಗಕ್ಕೆ ಸಮಾನವಾದ 55 ಕಿ.ಮೀ. ವೇಗದಲ್ಲಿ ಸಂಚರಿಸುವುದಕ್ಕೆ &lsquo;ಸೂಪರ್&zwnj;ಫಾಸ್ಟ್&rsquo; ಎಂದು ಮುದ್ರೆ ಹಾಕಲಾಗುತ್ತಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಹೆಚ್ಚುವರಿ ಶುಲ್ಕ&lt;/strong&gt;&lt;/h3&gt;&lt;p&gt;&lsquo;ಸೂಪರ್&zwnj;ಫಾಸ್ಟ್&rsquo; ವರ್ಗೀಕರಿಸಿದ ತಕ್ಷಣ ಟಿಕೆಟ್ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಬಹುದು. ಇದೇ ತಂತ್ರದಿಂದ ಇಂದು ದೇಶದಲ್ಲಿ 1,000ಕ್ಕೂ ಹೆಚ್ಚು ರೈಲುಗಳು &lsquo;ಸೂಪರ್&zwnj;ಫಾಸ್ಟ್&rsquo; ಪಟ್ಟಿಗೆ ಸೇರಿವೆ. ಇತ್ತೀಚೆಗೆ ಸಿಎಜಿ ವರದಿಯೂ ನಿಧಾನಗತಿಯ ರೈಲುಗಳಿಂದಲೂ ಸೂಪರ್&zwnj;ಫಾಸ್ಟ್ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಎತ್ತಿ ತೋರಿಸಿದೆ ಎಂದು ಅವರು ಬೊಟ್ಟು ಮಾಡಿದ್ದಾರೆ. ರೈಲ್ವೆ ಇಲಾಖೆ ಈಗಿನ ತಂತ್ರಜ್ಞಾನ ಮತ್ತು ಪ್ರಯಾಣಿಕರ ನಿರೀಕ್ಷೆಗೆ ತಕ್ಕಂತೆ &lsquo;ಸೂಪರ್&zwnj;ಫಾಸ್ಟ್&rsquo;ನ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.&lt;/p&gt;&lt;h3&gt;&lt;strong&gt;ವಂದೇ ಭಾರತ್&zwnj; ಪ್ರಾಯೋಗಿಕ ಸಂಚಾರ ಪರಿಶೀಲನೆ&lt;/strong&gt;&lt;/h3&gt;&lt;p&gt;ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ.ಅನಂತ್ ಅವರು ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಪರಿಶೀಲಿಸಿ, ವಿಭಾಗದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸೌಲಭ್ಯಗಳ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿದರು.&lt;/p&gt;&lt;p&gt;ಪರಿಶೀಲನೆಯ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ ಅನಂತ್&zwnj; ಅವರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಂಬಂಧಿಸಿದ ಕಾರ್ಯಾಚರಣೆ ಮತ್ತು ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದರು ಹಾಗೂ ವಿಭಾಗದಲ್ಲಿನ ರೈಲ್ವೆ ಮೂಲಸೌಕರ್ಯದ ಸಿದ್ಧತೆಯನ್ನು ಅವಲೋಕಿಸಿದರು.&lt;/p&gt;&lt;p&gt;&lt;strong&gt;ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳ ಪ್ರಗತಿ&lt;/strong&gt;&lt;/p&gt;&lt;p&gt;ಅವರು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಿಲ್ದಾಣಗಳಲ್ಲಿ &lsquo;ಅಮೃತ ಭಾರತ ನಿಲ್ದಾಣ ಯೋಜನೆ&rsquo; ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿ ಪರಿಶೀಲಿಸಿದರು. ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳ ಪ್ರಗತಿ, ಪ್ರಯಾಣಿಕರ ಸೌಲಭ್ಯಗಳು, ಪ್ಲಾಟ್&zwnj;ಫಾರ್ಮ್ ಸೌಲಭ್ಯಗಳು, ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಹಾಗೂ ಇತರ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದಾವಣಗೆರೆ ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು&lt;/strong&gt;&lt;/p&gt;&lt;p&gt;ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ವಿಭಾಗೀಯ ಅಧಿಕಾರಿಗಳು ಪರಿಶೀಲನೆಯ ಸಂದರ್ಭದಲ್ಲಿ ಇದ್ದರು. ಅಧಿಕಾರಿಗಳು ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ವಿಭಾಗದ ಕಾರ್ಯಾಚರಣೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಅಗತ್ಯತೆಗಳ ಕುರಿತು ಪ್ರಧಾನ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರಸ್ತೆಯ ಕೆಸರು ನೀರಿನಲ್ಲಿಯೇ ಶುಂಠಿ ತೊಳೆದು ವ್ಯಾಪಾರಕ್ಕಿಟ್ಟ ವ್ಯಾಪಾರಿ; ಸಾರ್ವಜನಿಕರಿಂದ ಆಕ್ರೋಶ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indian-railways-accused-of-charging-exorbitant-fares-by-naming-trains-that-run-at-55-kmph-as-superfast-mrq/articleshow-y4qqis3"/>
        </item>
        <item>
            <title><![CDATA[ಸೋನಿಯಾ ಗಾಂಧಿ ವಿರುದ್ಧ ಮಂಗಳೂರಲ್ಲಿ ಕೇಸ್! FIR ದಾಖಲಿಸದಿದ್ದರೆ ಹೈಕೋರ್ಟ್‌ಗೆ ಹೋಗುವ ಎಚ್ಚರಿಕೆ]]></title>
            <link>https://kannada.asianetnews.com/politics/vande-mataram-insult-row-complaint-lodged-against-sonia-gandhi-in-mangaluru-gkn/articleshow-ydast3m</link>
            <guid isPermaLink="true">https://kannada.asianetnews.com/politics/vande-mataram-insult-row-complaint-lodged-against-sonia-gandhi-in-mangaluru-gkn/articleshow-ydast3m</guid>
            <pubDate>Sun, 16 Aug 2026 19:46:33 +0530</pubDate>
            <description><![CDATA[&lt;p&gt;ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಆರೋಪದ ಮೇಲೆ ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನ ಉರ್ವ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಎಫ್&zwnj;ಐಆರ್ ದಾಖಲಿಸದಿದ್ದರೆ ಹೈಕೋರ್ಟ್ ಮೂಲಕ ಕಾನೂನು ಹೋರಾಟ ನಡೆಸುವುದಾಗಿ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke99295r4atms994wksztk0f,imgname-sonia-gandhi-assets-india-1767690544311.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ 'ವಂದೇ ಮಾತರಂ'ಗೆ ಅಪಮಾನ ಮಾಡಲಾಗಿದೆ ಎಂಬ ಆರೋಪವನ್ನು ಬಿಜೆಪಿ ಮಾಡಿದೆ. ಈ ಸಂಬಂಧ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು ದಾಖಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಆಗಸ್ಟ್ 15ರಂದು ದೆಹಲಿಯ ಎಐಸಿಸಿ (AICC) ಕಚೇರಿಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ವಂದೇ ಮಾತರಂ ಗೀತೆಯನ್ನು ಹಾಡಲಾಗುತ್ತಿತ್ತು. ಈ ವೇಳೆ ಸೋನಿಯಾ ಗಾಂಧಿ ಅವರು ಗೀತೆಯನ್ನು ಅರ್ಧಕ್ಕೆ ನಿಲ್ಲಿಸುವಂತೆ ಸನ್ನೆ ಮಾಡಿದ್ದರು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ರಾಷ್ಟ್ರಗೀತೆಗೆ ಮಾಡಿದ ಅಪಮಾನ ಎಂದು ಬಿಜೆಪಿ ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರು ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಲಿಖಿತ ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 195 ಮತ್ತು 352 ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿಕಾಸ್ ಪುತ್ತೂರು ನೀಡಿದ ಎಚ್ಚರಿಕೆ&lt;/strong&gt;&lt;/h2&gt;&lt;p&gt;ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಕಾಸ್ ಪುತ್ತೂರು, ವಂದೇ ಮಾತರಂ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಗೀತೆ. ಇದನ್ನು ಪೂರ್ಣವಾಗಿ ಹಾಡಲು ಬಿಡದೆ ಅರ್ಧಕ್ಕೆ ನಿಲ್ಲಿಸುವುದು 140 ಕೋಟಿ ಭಾರತೀಯರಿಗೆ ಮಾಡಿದ ಅಪಮಾನ. ಒಂದು ವೇಳೆ ಪೊಲೀಸರು ಪ್ರಭಾವಕ್ಕೆ ಒಳಗಾಗಿ ಎಫ್&zwnj;ಐಆರ್ ದಾಖಲಿಸದಿದ್ದರೆ, ನಾವು ಹೈಕೋರ್ಟ್ ಮೊರೆ ಹೋಗುತ್ತೇವೆ ಅಥವಾ ಖಾಸಗಿ ದೂರನ್ನು ದಾಖಲಿಸಿ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;ವಂದೇ ಮಾತರಂಗೆ 'ಜನಗಣಮನ'ದಷ್ಟೇ ಗೌರವವಿದೆ. ರಾಷ್ಟ್ರೀಯ ಗೌರವಕ್ಕೆ ಚ್ಯುತಿ ಬರುವಂತೆ ವರ್ತಿಸುವುದು ಶಿಕ್ಷಾರ್ಹ ಅಪರಾಧ. ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ವಂದೇ ಮಾತರಂ ಬಗ್ಗೆ ವಿರೋಧವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ರಾಷ್ಟ್ರದ ಸ್ವಾತಂತ್ರ್ಯದ ಅಮೃತ ಕಾಲದ ಈ ಸಂಭ್ರಮದಲ್ಲಿ ಇಂತಹ ಘಟನೆ ನಡೆದಿರುವುದು ದುರಾದೃಷ್ಟಕರ ಎಂದು ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಈಗ ಪೊಲೀಸರು ಈ ದೂರಿನ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>dakshina-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/vande-mataram-insult-row-complaint-lodged-against-sonia-gandhi-in-mangaluru-gkn/articleshow-ydast3m"/>
        </item>
        <item>
            <title><![CDATA[ಮಂಗಳೂರು KFC ಮಳಿಗೆ, ಮೈಸೂರಿನ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ! ಕೊಳೆತ ಮಾಂಸ ಪತ್ತೆ]]></title>
            <link>https://kannada.asianetnews.com/dakshina-kannada/food-safety-officials-raid-mangaluru-kfc-and-mysuru-hotels-rotten-meat-found-godown-seized-gkn/articleshow-z9q92pk</link>
            <guid isPermaLink="true">https://kannada.asianetnews.com/dakshina-kannada/food-safety-officials-raid-mangaluru-kfc-and-mysuru-hotels-rotten-meat-found-godown-seized-gkn/articleshow-z9q92pk</guid>
            <pubDate>Mon, 17 Aug 2026 21:53:59 +0530</pubDate>
            <description><![CDATA[&lt;p&gt;ಮಂಗಳೂರು ಮತ್ತು ಮೈಸೂರಿನ ಕೆಎಫ್&zwnj;ಸಿ ಹಾಗೂ ಪ್ರತಿಷ್ಠಿತ ಹೋಟೆಲ್&zwnj;ಗಳ ಮೇಲೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು, ದೊಡ್ಡ ಪ್ರಮಾಣದ ಕೊಳೆತ ಮತ್ತು ಅವಧಿ ಮುಗಿದ ಮಾಂಸವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಳಿಗೆಗಳ ಗೋಡೌನ್ ಸೀಜ್ ಮಾಡಲಾಗಿದ್ದು, ಆಹಾರದ ಮಾದರಿಗಳನ್ನು ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m037zrjrd87sqypwhsevghmn,imgname-raid-on-mangaluru-kfc-1786815439448.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಮೈಸೂರು:&lt;/strong&gt; ರಾಜ್ಯದ ಪ್ರಮುಖ ನಗರಗಳಾದ ಮಂಗಳೂರು ಮತ್ತು ಮೈಸೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ (FSSAI) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕೆಎಫ್&zwnj;ಸಿ (KFC) ಮಳಿಗೆ ಹಾಗೂ ಮೈಸೂರಿನ ಐಷಾರಾಮಿ ಹೋಟೆಲ್&zwnj;ಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಅಧಿಕಾರಿಗಳು, ಕೊಳೆತ ಹಾಗೂ ಅವಧಿ ಮುಗಿದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸಿಟಿ ಸೆಂಟರ್ KFC ಮೇಲೆ ದಾಳಿ&lt;/strong&gt;&lt;/h2&gt;&lt;p&gt;ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್&zwnj;ನಲ್ಲಿರುವ ಕೆಎಫ್&zwnj;ಸಿ ರೆಸ್ಟೋರೆಂಟ್ ಮೇಲೆ ಗ್ರಾಹಕರೊಬ್ಬರ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗ್ರಾಹಕರೊಬ್ಬರು ಆನ್&zwnj;ಲೈನ್&zwnj;ನಲ್ಲಿ ಆರ್ಡರ್ ಮಾಡಿದ್ದ ಚಿಕನ್ ಕೊಳೆತು ಹೋಗಿದ್ದು, ತೀವ್ರವಾಗಿ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಅಧಿಕಾರಿಗಳು ಕೆಎಫ್&zwnj;ಸಿ ಮಳಿಗೆಗೆ ಭೇಟಿ ನೀಡಿ ತಪಾಸಣೆ ನಡೆಸಿದಾಗ ಮೇಲ್ನೋಟಕ್ಕೆ ಕೊಳೆತ ಚಿಕನ್ ಪೀಸ್&zwnj;ಗಳು ಪತ್ತೆಯಾಗಿವೆ.&lt;/p&gt;&lt;h2&gt;&lt;strong&gt;ಹಳೆಯ ಮಾಂಸ ಜಪ್ತಿ&lt;/strong&gt;&lt;/h2&gt;&lt;p&gt;ತಪಾಸಣೆಯ ವೇಳೆ ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಹಳೆಯ ಕೋಳಿ ಮಾಂಸ ಪತ್ತೆಯಾಗಿದೆ. ಫ್ರೋಜನ್ ಚಿಕನ್ (Frozen Chicken) ತಿಂಗಳುಗಟ್ಟಲೆ ಬಳಕೆಗೆ ಯೋಗ್ಯವಾಗಿರುತ್ತದೆ ಎಂದು ಕೆಎಫ್&zwnj;ಸಿ ಸಿಬ್ಬಂದಿ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಅಧಿಕಾರಿಗಳು ಕೆಎಫ್&zwnj;ಸಿ ಮಳಿಗೆಯ ಗೋಡೌನ್ ಸೀಜ್ ಮಾಡಿದ್ದು, ಚಿಕನ್ ಹಾಗೂ ಬಳಸುತ್ತಿದ್ದ ಎಣ್ಣೆಯ ಮಾದರಿಗಳನ್ನು (Samples) ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ.ತಿಮ್ಮಯ್ಯ ಅವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಳಿಗೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು ಲ್ಯಾಬ್ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಐಷಾರಾಮಿ ಹೋಟೆಲ್&zwnj;ಗಳ ಮೇಲೂ ರೇಡ್!&lt;/strong&gt;&lt;/h2&gt;&lt;p&gt;ಇತ್ತ ಮೈಸೂರಿನಲ್ಲೂ ಆಹಾರ ಸುರಕ್ಷತಾ ಅಧಿಕಾರಿಗಳು ವಿವಿಧ ಹೋಟೆಲ್&zwnj;ಗಳ ಮೇಲೆ ದಾಳಿ ನಡೆಸಿದ್ದು, ಅವಧಿ ಮುಗಿದ ಮಾಂಸ ಪತ್ತೆಯಾಗಿದೆ.&lt;/p&gt;&lt;ul&gt; &lt;li&gt;&lt;strong&gt;ಗ್ರ್ಯಾಂಡ್ ಮರ್ಕ್ಯೂರ್ (Grand Mercure) ಹೋಟೆಲ್:&lt;/strong&gt; ಈ ಪ್ರತಿಷ್ಠಿತ ಹೋಟೆಲ್&zwnj;ನಲ್ಲಿ ಅವಧಿ ಮುಗಿದ ಸುಮಾರು 68 ಕೆಜಿ ಮಾಂಸವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.&lt;/li&gt; &lt;li&gt;&lt;strong&gt;ಕ್ಯೂ ಸ್ಟಾರ್ (Q Star) ಹೋಟೆಲ್:&lt;/strong&gt; ಇಲ್ಲಿಂದ 4 ಕೆಜಿ ಹಳೆಯ ಅಣಬೆಯನ್ನು (Mushrooms) ಜಪ್ತಿ ಮಾಡಲಾಗಿದೆ.&lt;/li&gt;&lt;/ul&gt;&lt;p&gt;ಇದಲ್ಲದೆ, ಮೈಸೂರಿನ ಮತ್ತೊಂದು ಹೋಟೆಲ್&zwnj;ನಿಂದ 9 ಕೆಜಿ ಹಳೆಯ ಕೋಳಿ ಮಾಂಸವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್&zwnj;ಗಳು ಮತ್ತು ತಾರಾ ಹೋಟೆಲ್&zwnj;ಗಳಲ್ಲೇ ಇಂತಹ ಗುಣಮಟ್ಟವಿಲ್ಲದ ಹಾಗೂ ಹಳೆಯ ಆಹಾರ ಪೂರೈಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಇನ್ನು ದಾಳಿ ಬೆನ್ನಲ್ಲೇ ಕೆಎಫ್&zwnj;ಸಿ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದೆ.&lt;/p&gt;&lt;h2&gt;&lt;strong&gt;ಕೆಎಫ್&zwnj;ಸಿ ಸ್ಪಷ್ಟನೆ&lt;/strong&gt;&lt;/h2&gt;&lt;p&gt;&lt;strong&gt;ಜವಾಬ್ದಾರಿಯುತ ಬ್ರ್ಯಾಂಡ್ ಆಗಿ, ಕೆಎಫ್&zwnj;ಸಿ (KFC) ಉನ್ನತ ಮಟ್ಟದ ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ನೈರ್ಮಲ್ಯವನ್ನು ಒದಗಿಸಲು ದೃಢವಾಗಿ ಬದ್ಧವಾಗಿದೆ. ಪ್ರಸ್ತುತ ಹರಿದಾಡುತ್ತಿರುವ ಮಾಹಿತಿಯು ನೈಜ ಸತ್ಯಗಳನ್ನು ಬಿಂಬಿಸುವುದಿಲ್ಲ. ನಮ್ಮ ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ಬಡಿಸುವ ನಿಟ್ಟಿನಲ್ಲಿ, ನಾವು ದೇಶದಾದ್ಯಂತ ಇರುವ ಪ್ರತಿಷ್ಠಿತ ಪೂರೈಕೆದಾರರಿಂದ ಉತ್ತಮ ಗುಣಮಟ್ಟದ ಚಿಕನ್ ಅನ್ನು ಪಡೆಯುತ್ತೇವೆ ಮತ್ತು FSSAI ಮಾರ್ಗಸೂಚಿಗಳ ಜೊತೆಗೆ ಕೆಲವು ಜಾಗತಿಕ ಗುಣಮಟ್ಟದ ಮಾನದಂಡಗಳನ್ನು ಸಕ್ರಿಯವಾಗಿ ಪಾಲಿಸುತ್ತೇವೆ.&lt;/strong&gt;&lt;/p&gt;&lt;p&gt;&lt;strong&gt;ನಾವು ಬಡಿಸುವ ಮತ್ತು ಸಂಗ್ರಹಿಸುವ ಚಿಕನ್ ನಿಯಮಾವಳಿಗಳ ಪ್ರಕಾರವೇ ಇರುತ್ತದೆ ಮತ್ತು ಅದನ್ನು ಪ್ರತಿದಿನ ಸ್ಟೋರ್&zwnj;ನಲ್ಲಿಯೇ ತಯಾರಿಸಲಾಗುತ್ತದೆ. ಪೂರೈಕೆದಾರರ ಫಾರ್ಮ್&zwnj;ನಿಂದ (ಕೋಳಿ ಸಾಕಾಣಿಕಾ ಕೇಂದ್ರದಿಂದ) ಗ್ರಾಹಕರ ತಟ್ಟೆಯನ್ನು ತಲುಪುವವರೆಗೆ, ಪ್ರತಿಯೊಂದು ತುಂಡು ಕೂಡ ಹಲವಾರು ಕಟ್ಟುನಿಟ್ಟಾದ ಗುಣಮಟ್ಟ ಮತ್ತು ಸುರಕ್ಷತಾ ತಪಾಸಣೆಗಳಿಗೆ ಒಳಪಡುತ್ತದೆ.&lt;/strong&gt;&lt;/p&gt;&lt;p&gt;&lt;strong&gt;ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಮತ್ತು ಅನ್ವಯವಾಗುವ ಕಾನೂನು ಹಾಗೂ ನಿಯಂತ್ರಣ ನಿಯಮಾವಳಿಗಳಿಗೆ ಅನುಗುಣವಾಗಿ ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. KFCಯ ಕಟ್ಟುನಿಟ್ಟಾದ ಅಡುಗೆಮನೆಯ ಕಾರ್ಯವಿಧಾನಗಳು ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಚ್ಛಿಸುವ ಯಾವುದೇ ಗ್ರಾಹಕರು ಕಿಚನ್ ಟೂರ್ (ಅಡುಗೆಮನೆಯ ವೀಕ್ಷಣೆ) ಗಾಗಿ ರೆಸ್ಟೋರೆಂಟ್ ಮ್ಯಾನೇಜರ್ ಅವರನ್ನು ಸಂಪರ್ಕಿಸಬಹುದು.&lt;/strong&gt;&lt;/p&gt;&lt;p&gt;&lt;strong&gt;ತಂಡದ ಪಿಆರ್ (PR), ಕೆಎಫ್&zwnj;ಸಿ ಇಂಡಿಯಾ&lt;/strong&gt;&lt;/p&gt;]]></content:encoded>
            <category>dakshina-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/dakshina-kannada/food-safety-officials-raid-mangaluru-kfc-and-mysuru-hotels-rotten-meat-found-godown-seized-gkn/articleshow-z9q92pk"/>
        </item>
    </channel>
</rss>
